16.12.20 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ -
ಪಾಪಗಳಿಂದ ಹಗುರರಾಗಲು ಆಜ್ಞಾಕಾರಿಗಳು, ಪ್ರಾಮಾಣಿಕರಾಗಿ, ತಮ್ಮ ಕರ್ಮದ ಕಥೆಯನ್ನು ತಂದೆಗೆ ಬರೆದು
ಕೊಡಿ ಆಗ ಕ್ಷಮೆ ಸಿಗುವುದು"
ಪ್ರಶ್ನೆ:
ಸಂಗಮಯುಗದಲ್ಲಿ
ನೀವು ಮಕ್ಕಳು ಯಾವ ಬೀಜವನ್ನು ಬಿತ್ತುವಂತಿಲ್ಲ?
ಉತ್ತರ:
ದೇಹಾಭಿಮಾನದ ಬೀಜ. ಈ ಬೀಜದಿಂದ ಎಲ್ಲಾ ವಿಕಾರಗಳ ವೃಕ್ಷವು ಬೆಳೆಯುತ್ತದೆ. ಈ ಸಮಯದಲ್ಲಿ ಇಡೀ
ಪ್ರಪಂಚದಲ್ಲಿ ಪಂಚ ವಿಕಾರಗಳ ವೃಕ್ಷಗಳೇ ಬೆಳೆದು ನಿಂತಿದೆ. ಎಲ್ಲರೂ ಕಾಮ-ಕ್ರೋಧದ ಬೀಜವನ್ನು
ಬಿತ್ತುತ್ತಿರುತ್ತಾರೆ. ನಿಮಗೆ ತಂದೆಯ ಸಂದೇಶವಾಗಿದೆ - ಮಕ್ಕಳೇ, ಯೋಗಬಲದಿಂದ ಪಾವನರಾಗಿರಿ, ಈ
ದೇಹಾಭಿಮಾನದ ಬೀಜ ಬಿತ್ತುವುದನ್ನು ನಿಲ್ಲಿಸಿ.
ಗೀತೆ:
ನಿಮ್ಮನ್ನು
ಪಡೆದ ನಾನು ಇಡೀ ಜಗತ್ತನ್ನೇ ಪಡೆದೆನು..............
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಈಗಂತೂ ಕೆಲವರೇ ಇದ್ದೀರಿ, ಸಮಯ ಕಳೆದಂತೆ
ಅನೇಕ ಮಂದಿ ಮಕ್ಕಳು ಬರತೊಡಗುತ್ತಾರೆ. ಈ ಸಮಯದಲ್ಲಿ ಪ್ರಾಕ್ಟಿಕಲ್ನಲ್ಲಿ ಕೆಲವರೇ ಆಗಿದ್ದೀರಿ ಆದರೂ
ಸಹ ಪ್ರಜಾಪಿತ ಬ್ರಹ್ಮನನ್ನು ಎಲ್ಲರೂ ಅರಿತಿದ್ದಾರಲ್ಲವೆ. ಹೆಸರೇ ಆಗಿದೆ - ಪ್ರಜಾಪಿತ ಬ್ರಹ್ಮಾ.
ಎಷ್ಟೊಂದು ಮಂದಿ ಪ್ರಜೆಗಳಿದ್ದಾರೆ. ಎಲ್ಲಾ ಧರ್ಮದವರು ಇವರನ್ನು ಅವಶ್ಯವಾಗಿ ಒಪ್ಪುತ್ತಾರೆ ಅವರ
ಮೂಲಕವೇ ಮನುಷ್ಯ ಮಾತ್ರರ ರಚನೆಯಾಯಿತಲ್ಲವೆ. ತಂದೆಯು ತಿಳಿಸುತ್ತಾರೆ – ಲೌಕಿಕ ತಂದೆಯೂ ಸಹ
ಹದ್ದಿನ ಬ್ರಹ್ಮನಾಗಿದ್ದಾರೆ ಏಕೆಂದರೆ ಅವರದು ವಂಶಾವಳಿ ವೃದ್ಧಿಯಾಗುತ್ತದೆಯಲ್ಲವೆ. ಉಪನಾಮದಿಂದ ಆ
ಮನೆತನವು ನಡೆಯುತ್ತದೆ. ಅವರು ಹದ್ದಿನ ತಂದೆಯಾಗಿರುತ್ತಾರೆ, ಇವರು ಬೇಹದ್ದಿನ ತಂದೆಯಾಗಿದ್ದಾರೆ.
ಇವರ ಹೆಸರೇ ಆಗಿದೆ - ಪ್ರಜಾಪಿತ. ಆ ಲೌಕಿಕ ತಂದೆಯಂತೂ ಒಂದು ಪರಿಮಿತ ಪ್ರಜೆಗಳನ್ನು ರಚಿಸುತ್ತಾರೆ,
ಕೆಲವರು ರಚಿಸುವುದೇ ಇಲ್ಲ. ಇವರಂತೂ ಅವಶ್ಯವಾಗಿ ರಚಿಸುತ್ತಾರೆ. ಪ್ರಜಾಪಿತ ಬ್ರಹ್ಮನಿಗೆ
ಸಂತಾನರಿಲ್ಲವೆಂದು ಕೆಲವರು ಹೇಳುತ್ತಾರೆ. ಇಡೀ ಪ್ರಪಂಚವೇ ಇವರ ಸಂತಾನವಾಗಿದೆ. ಮೊಟ್ಟ ಮೊದಲಿಗರು
ಪ್ರಜಾಪಿತ ಬ್ರಹ್ಮನಾಗಿದ್ದಾರೆ. ಮುಸಲ್ಮಾನರೂ ಸಹ ಆದಂ ಬೀಬಿ ಎಂದು ಹೇಳುತ್ತಾರೆ ಅಂದಮೇಲೆ
ಅವಶ್ಯವಾಗಿ ಯಾರಿಗಾದರೂ ಹೇಳುತ್ತಿರಬೇಕಲ್ಲವೆ. ಆಡಂ ಈವ್, ಆದಿ ದೇವ - ಆದಿ ದೇವಿ - ಇವೆಲ್ಲಾ
ಹೆಸರುಗಳನ್ನು ಈ ಪ್ರಜಾಪಿತ ಬ್ರಹ್ಮಾರವರಿಗೇ ಹೇಳುತ್ತಾರೆ. ಎಲ್ಲಾ ಧರ್ಮದವರು ಇವರನ್ನು
ಒಪ್ಪುತ್ತಾರೆ. ಅವಶ್ಯವಾಗಿ ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆಯಿದ್ದಾರೆ. ಈ
ಪಾರಲೌಕಿಕ ತಂದೆಯು ಬೇಹದ್ದಿನ ಸುಖ ಕೊಡುವವರಾಗಿದ್ದಾರೆ. ನೀವು ಪುರುಷಾರ್ಥವನ್ನೂ ಸಹ ಬೇಹದ್ದಿನ
ಸ್ವರ್ಗದ ಸುಖಕ್ಕಾಗಿಯೇ ಮಾಡುತ್ತೀರಿ. ಇಲ್ಲಿ ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು
ಪಡೆಯಲು ಬಂದಿದ್ದೀರಿ. ಸ್ವರ್ಗದಲ್ಲಿ ಬೇಹದ್ದಿನ ಸುಖ, ನರಕದಲ್ಲಿ ಬೇಹದ್ದಿನ ದುಃಖವೆಂದೂ ಹೇಳಬಹುದು.
ಇನ್ನೂ ಬಹಳಷ್ಟು ದುಃಖವು ಬರಲಿದೆ, ಅಯ್ಯೊ, ಅಯ್ಯೊ ಎನ್ನುತ್ತಿರುತ್ತಾರೆ. ತಂದೆಯು ನಿಮಗೆ ಇಡೀ
ವಿಶ್ವದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಿದ್ದಾರೆ. ನೀವು ಮಕ್ಕಳು ಸನ್ಮುಖದಲ್ಲಿ
ಕುಳಿತಿದ್ದೀರಿ ಮತ್ತು ಪುರುಷಾರ್ಥವನ್ನೂ ಮಾಡುತ್ತೀರಿ. ಇವರು ಮಾತಾಪಿತಾ ಇಬ್ಬರೂ ಆದರಲ್ಲವೆ.
ಎಷ್ಟೊಂದು ಮಂದಿ ಮಕ್ಕಳಿದ್ದೀರಿ, ಬೇಹದ್ದಿನ ಮಾತಾಪಿತರೊಂದಿಗೆ ಎಂದೂ ಯಾವುದೇ ಶತೃತ್ವವನ್ನು
ಇಟ್ಟುಕೊಳ್ಳುವುದಿಲ್ಲ. ಮಾತಾಪಿತರಿಂದ ಎಷ್ಟೊಂದು ಸುಖ ಸಿಗುತ್ತದೆ! ಆದ್ದರಿಂದಲೇ ನೀವು ಮಾತಾಪಿತಾ
ಬಂಧುಶ್ಚ ಸಖ..... ಎಂದು ಹಾಡುತ್ತಾರೆ, ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಅನ್ಯ
ಧರ್ಮದವರೆಲ್ಲರೂ ತಂದೆಯೆಂದೇ ಕರೆಯುತ್ತಾರೆ, ಮಾತಾಪಿತರೆಂದು ಹೇಳುವುದಿಲ್ಲ. ಕೇವಲ ಇಲ್ಲಷ್ಟೇ ನೀವು
ಮಾತಾಪಿತ ನಾನು ನಿಮ್ಮ ಬಾಲಕ... ಎಂದು ಹಾಡುತ್ತಾರೆ. ನಾವು ಓದಿ ಮನುಷ್ಯರಿಂದ ದೇವತೆ,
ಮುಳ್ಳುಗಳಿಂದ ಹೂಗಳಾಗುತ್ತಿದ್ದೇವೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ತಂದೆಯು ಅಂಬಿಗನೂ
ಆಗಿದ್ದಾರೆ, ಹೂದೋಟದ ಮಾಲೀಕನೂ ಆಗಿದ್ದಾರೆ. ಉಳಿದಂತೆ ನೀವು ಬ್ರಾಹ್ಮಣರೆಲ್ಲರೂ ಅನೇಕ ಪ್ರಕಾರದ
ಮಾಲಿಗಳಾಗಿದ್ದೀರಿ. ಮೊಗಲ್ ಗಾರ್ಡನ್ನ ಮಾಲಿಯೂ ಇರುತ್ತಾರಲ್ಲವೆ. ಅವರ ಸಂಬಳವೂ ಅಷ್ಟೇ
ಚೆನ್ನಾಗಿರುತ್ತದೆ. ಮಾಲಿಗಳಲ್ಲಿಯೂ ನಂಬರ್ವಾರ್ ಇರುತ್ತಾರೆ. ಕೆಲವರು ಎಷ್ಟು ಒಳ್ಳೊಳ್ಳೆಯ
ಹೂಗಳನ್ನು ಬೆಳೆಸುತ್ತಾರೆ! ಹೂಗಳಲ್ಲಿ ರಾಜಾ ಹೂ ಸಹ ಇರುತ್ತದೆ. ಸತ್ಯಯುಗದಲ್ಲಿ ರಾಜಾ-ರಾಣಿ ಹೂಗಳು
ಇರುತ್ತವೆಯಲ್ಲವೆ. ಇಲ್ಲಿ ಭಲೆ ಮಹಾರಾಜ-ಮಹಾರಾಣಿ ಇದ್ದಾರೆ ಆದರೆ ಹೂಗಳಾಗಿಲ್ಲ.
ಪತಿತರಾಗುವುದರಿಂದ ಮುಳ್ಳುಗಳಂತಾಗಿ ಬಿಡುತ್ತಾರೆ. ಮಾರ್ಗದಲ್ಲಿ ನಡೆಯುತ್ತಾ-ನಡೆಯುತ್ತಾ
ಮುಳ್ಳನ್ನು ಚುಚ್ಚಿ ಓಡಿ ಹೋಗುತ್ತಾರೆ. ಅಜಾಮೀಳರೆಂದೂ ಅವರಿಗೇ ಹೇಳಲಾಗುತ್ತದೆ. ಎಲ್ಲರಿಗಿಂತ
ಹೆಚ್ಚು ಭಕ್ತಿಯನ್ನೂ ಸಹ ನೀವು ಮಾಡುತ್ತೀರಿ. ವಾಮಮಾರ್ಗದಲ್ಲಿ ಇಳಿಯುವ ಚಿತ್ರಗಳನ್ನು ನೋಡಿ,
ಎಷ್ಟು ಕೆಟ್ಟದಾಗಿ ತೋರಿಸಿದ್ದಾರೆ! ದೇವತೆಗಳ ಚಿತ್ರವನ್ನೇ ತೋರಿಸಿದ್ದಾರೆ. ಈಗ ಅವು ವಾಮಮಾರ್ಗದ
ಚಿತ್ರಗಳಾಗಿವೆ. ಈಗ ನೀವು ಮಕ್ಕಳು ಇವೆಲ್ಲಾ ಮಾತುಗಳನ್ನು ತಿಳಿದುಕೊಂಡಿದ್ದೀರಿ. ನೀವೀಗ
ಬ್ರಾಹ್ಮಣರಾಗಿದ್ದೀರಿ. ವಿಕಾರಗಳಿಂದ ಬಹಳ ದೂರ-ದೂರ ಹೋಗುತ್ತೀರಿ. ಬ್ರಾಹ್ಮಣರಲ್ಲಿ
ಸಹೋದರ-ಸಹೋದರಿಯರ ಜೊತೆ ವಿಕಾರದಲ್ಲಿ ಹೋಗುವುದು ಬಹಳ ದೊಡ್ಡ ವಿಕಾರೀ ದೃಷ್ಟಿ ಆಗಿ ಬಿಡುವುದು.
ಹೆಸರೇ ಹಾಳಾಗಿ ಬಿಡುತ್ತದೆ. ಆದ್ದರಿಂದ ಬಾಲ್ಯದಿಂದಲೇ ಏನಾದರೂ ಕೆಟ್ಟ ಕೆಲಸಗಳನ್ನು ಮಾಡಿದ್ದರೆ
ಅದನ್ನು ತಂದೆಗೆ ತಿಳಿಸಿರಿ ಆಗ ಅರ್ಧ ಪಾಪವು ಕಡಿಮೆಯಾಗುತ್ತದೆ. ನೆನಪಂತೂ ಇರುತ್ತದೆಯಲ್ಲವೆ -
ಇಂತಹ ಸಮಯದಲ್ಲಿ ನಾವು ಇಂತಹ ಕೆಟ್ಟ ಕೆಲಸವನ್ನು ಮಾಡಿದ್ದೆವು ಎಂದು. ತಂದೆಗೆ ಬರೆದು ಕೊಡುತ್ತಾರೆ.
ಯಾರು ಬಹಳ ಆಜ್ಞಾಕಾರಿಗಳು, ಪ್ರಾಮಾಣಿಕರಾಗಿರುವರೋ ಅವರು ಬಾಬಾ, ನಾವು ಇಂತಿಂತಹ ಕೆಟ್ಟ
ಕೆಲಸಗಳನ್ನು ಮಾಡಿದೆವು, ಕ್ಷಮೆ ಮಾಡಿ ಎಂದು ತಂದೆಗೆ ಬರೆದು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ
- ಕ್ಷಮೆಯಂತೂ ಸಿಗುವುದಿಲ್ಲ ಆದರೆ ಸತ್ಯವಾಗಿ ತಿಳಿಸುತ್ತೀರೆಂದರೆ ಅದು ಹಗುರವಾಗಿ ಬಿಡುವುದು.
ಹಾಗೆಂದು ಮರೆತು ಹೋಗುತ್ತದೆ ಎಂದಲ್ಲ, ಮರೆಯಲು ಸಾಧ್ಯವಿಲ್ಲ. ಮುಂದೆ ಇಂತಹ ಯಾವುದೇ ಕರ್ಮವಾಗಬಾರದು
ಅದಕ್ಕಾಗಿ ಎಚ್ಚರಿಕೆ ನೀಡುತ್ತೇನೆ. ಬಾಕಿ ಮನಸ್ಸಂತೂ ಅವಶ್ಯವಾಗಿ ತಿನ್ನುತ್ತದೆ. ಬಾಬಾ, ನಾವಂತೂ
ಅಜಾಮೀಳರಾಗಿದ್ದೆವು ಎಂದು ಹೇಳುತ್ತಾರೆ, ಇದೇ ಜನ್ಮದ ಮಾತಾಗಿದೆ. ಇದನ್ನೂ ಸಹ ಈಗ ನೀವು
ತಿಳಿದುಕೊಂಡಿದ್ದೀರಿ. ಯಾವಾಗಿನಿಂದ ವಾಮಮಾರ್ಗದಲ್ಲಿ ಬಂದು ಪಾಪಾತ್ಮರಾಗಿದ್ದೀರಿ? ಈಗ ತಂದೆಯು
ಪುನಃ ನಮ್ಮನ್ನು ಪುಣ್ಯಾತ್ಮರನ್ನಾಗಿ ಮಾಡುತ್ತಾರೆ. ಪುಣ್ಯಾತ್ಮರ ಪ್ರಪಂಚವೇ ಬೇರೆಯಾಗಿದೆ. ಭಲೆ
ಪ್ರಪಂಚವು ಒಂದೇ ಆಗಿದೆ ಆದರೆ ಈಗ ನಿಮಗೆ ಅರ್ಥವಾಗಿದೆ - ಇದರಲ್ಲಿ ಎರಡು ಭಾಗಗಳಿವೆ. ಒಂದು
ಪುಣ್ಯಾತ್ಮರ ಪ್ರಪಂಚ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ, ಇನ್ನೊಂದು ಪಾಪಾತ್ಮರ ಪ್ರಪಂಚ
ಯಾವುದಕ್ಕೆ ನರಕ, ದುಃಖಧಾಮವೆಂದು ಹೇಳಲಾಗುತ್ತದೆ. ಸುಖದ ಪ್ರಪಂಚ ಮತ್ತು ಸುಖದ ಪ್ರಪಂಚ. ದುಃಖದ
ಪ್ರಪಂಚದಲ್ಲಿ ಎಲ್ಲರೂ ಸಹ ನಮ್ಮನ್ನು ಮುಕ್ತಗೊಳಿಸಿ, ಮನೆಗೆ ಕರೆದುಕೊಂಡು ಹೋಗಿ ಎಂದು
ಚೀರಾಡುತ್ತಿರುತ್ತಾರೆ. ಇದನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ - ಮನೆ (ಪರಮಧಾಮ) ಯಲ್ಲಿ ಹೋಗಿ
ಕುಳಿತು ಬಿಡುವಂತಿಲ್ಲ, ಮತ್ತೆ ಪಾತ್ರವನ್ನಭಿನಯಿಸಲು ಬರಬೇಕಾಗಿದೆ. ಈ ಸಮಯದಲ್ಲಿ ಇಡೀ ಪ್ರಪಂಚವೇ
ಪತಿತನಾಗಿದೆ, ಈಗ ತಂದೆಯ ಮೂಲಕ ನೀವು ಪಾವನರಾಗುತ್ತಿದ್ದೀರಿ. ಲಕ್ಷ್ಯವೂ ಸನ್ಮುಖದಲ್ಲಿದೆ,
ಮತ್ತ್ಯಾರೂ ಸಹ ನಾವು ಈ ರೀತಿಯಾಗುತ್ತಿದ್ದೇವೆಂದು ಗುರಿ-ಧ್ಯೇಯವನ್ನು ತೋರಿಸುವುದಿಲ್ಲ. ತಂದೆಯು
ತಿಳಿಸುತ್ತಾರೆ - ಮಕ್ಕಳೇ, ನೀವೇ ಇಷ್ಟು ಶ್ರೇಷ್ಠರಾಗಿದ್ದಿರಿ, ಈಗ ಇಲ್ಲ. ಪೂಜ್ಯರಾಗಿದ್ದಿರಿ ಈಗ
ಪೂಜಾರಿಗಳಾಗಿ ಬಿಟ್ಟಿದ್ದೀರಿ. ಈಗ ಪುನಃ ಪೂಜ್ಯರಾಗಲು ಪುರುಷಾರ್ಥ ಮಾಡಬೇಕು. ತಂದೆಯು ಎಷ್ಟು
ಚೆನ್ನಾಗಿ ಪುರುಷಾರ್ಥ ಮಾಡಿಸುತ್ತಾರೆ. ನಾನು ರಾಜಕುಮಾರನಾಗುತ್ತೇನೆ ಎಂದು ಈ ಬ್ರಹ್ಮಾ ತಂದೆಯು
ತಿಳಿದುಕೊಳ್ಳುತ್ತಾರಲ್ಲವೆ. ಇವರು ಮೊಟ್ಟ ಮೊದಲಿಗನಾಗಿದ್ದಾರೆ ಆದರೂ ಸಹ ಪ್ರತೀ ಸಮಯ ನೆನಪು
ಇರುವುದಿಲ್ಲ, ಮರೆತು ಹೋಗುತ್ತಾರೆ. ಯಾರೆಷ್ಟಾದರೂ ಪರಿಶ್ರಮ ಪಡಲಿ ಆದರೆ ಇನ್ನೂ ಆ ಸ್ಥಿತಿಯು
ಬರುವುದಿಲ್ಲ. ಯಾವಾಗ ಯುದ್ಧದ ಸಮಯವು ಬರುವುದೋ ಆಗ ಕರ್ಮಾತೀತ ಸ್ಥಿತಿಯಾಗುವುದು.
ಪುರುಷಾರ್ಥವನ್ನಂತೂ ಎಲ್ಲರೂ ಮಾಡಬೇಕಲ್ಲವೆ. ಇವರೂ (ಬ್ರಹ್ಮಾ) ಮಾಡಬೇಕಾಗಿದೆ. ನೀವು
ತಿಳಿಸುತ್ತೀರಿ - ಚಿತ್ರದಲ್ಲಿ ನೋಡಿ, ತಂದೆಯ ಚಿತ್ರವು ಎಲ್ಲಿದೆ? ಒಮ್ಮೆಲೆ ವೃಕ್ಷದ ಕೊನೆಯಲ್ಲಿ
ನಿಂತಿದ್ದಾರೆ ಪತಿತ ಪ್ರಪಂಚದಲ್ಲಿ, ಮತ್ತು ಕೆಳಗೆ ತಪಸ್ಸು ಮಾಡುತ್ತಿದ್ದಾರೆ. ಎಷ್ಟು ಸಹಜವಾಗಿ
ತಿಳಿಸಿಕೊಡಬಹುದಾಗಿದೆ. ಇವೆಲ್ಲಾ ಮಾತುಗಳನ್ನು ತಂದೆಯೇ ತಿಳಿಸಿದ್ದಾರೆ. ಇವರಿಗೂ ತಿಳಿದಿರಲಿಲ್ಲ,
ಶಿವ ತಂದೆಯೇ ಜ್ಞಾನಪೂರ್ಣನಾಗಿದ್ದಾರೆ, ಅವರನ್ನೇ ಹೇ ಪರಮಪಿತ ಪರಮಾತ್ಮನೇ ಬಂದು ನಮ್ಮ ದುಃಖವನ್ನು
ದೂರ ಮಾಡು ಎಂದು ಎಲ್ಲರೂ ನೆನಪು ಮಾಡುತ್ತಾರೆ. ಬ್ರಹ್ಮಾ, ವಿಷ್ಣು, ಶಂಕರರು ದೇವತೆಗಳಾಗಿದ್ದಾರೆ.
ಮೂಲವತನದಲ್ಲಿರುವ ಆತ್ಮಗಳಿಗೆ ದೇವತೆಗಳೆಂದು ಹೇಳಲಾಗುವುದಿಲ್ಲ. ಬ್ರಹ್ಮಾ-ವಿಷ್ಣು-ಶಂಕರನ
ರಹಸ್ಯವನ್ನೂ ಸಹ ತಂದೆಯು ತಿಳಿಸಿದ್ದಾರೆ. ಬ್ರಹ್ಮಾ, ಲಕ್ಷ್ಮೀ-ನಾರಾಯಣ - ಇವರೆಲ್ಲರೂ ಇಲ್ಲಿಯೇ
ಇರುವರಲ್ಲವೆ. ಕೇವಲ ನೀವು ಮಕ್ಕಳಿಗೆ ಈ ಸಮಯದಲ್ಲಿಯೇ ಸೂಕ್ಷ್ಮವತನದ ಸಾಕ್ಷಾತ್ಕಾರವಾಗುತ್ತದೆ. ಈ
ಬ್ರಹ್ಮಾರವರೂ ಸಹ ಫರಿಶ್ತೆಯಾಗಿದ್ದಾರೆ. ಇದನ್ನು ಮಕ್ಕಳೂ ತಿಳಿದುಕೊಂಡಿದ್ದೀರಿ - ಯಾರು ಏಣಿಯ
ಚಿತ್ರದಲ್ಲಿ ಮೇಲೆ ನಿಂತಿದ್ದಾರೆಯೋ ಅವರೇ ಮತ್ತೆ ಕೆಳಗೆ ತಪಸ್ಸು ಮಾಡುತ್ತಿದ್ದಾರೆ. ಚಿತ್ರದಲ್ಲಿ
ಬಹಳ ಸ್ಪಷ್ಟವಾಗಿ ತೋರಿಸಲಾಗಿದೆ ಅಂದಮೇಲೆ ಇವರು (ಬ್ರಹ್ಮಾ) ತಮ್ಮನ್ನು ಭಗವಂತನೆಂದು ಎಲ್ಲಿ
ಕರೆಸಿಕೊಳ್ಳುತ್ತಾರೆ? ಇವರೂ ಸಹ ಹೇಳುತ್ತಾರೆ - ನಾನು ಬಹಳ ಕನಿಷ್ಠನಾಗಿದ್ದೆನು, ತತ್ತ್ವಂ
ಅರ್ಥಾತ್ ಪುನಃ ಶ್ರೇಷ್ಠನಾಗುತ್ತಿದ್ದೇನೆ. ನೀವೂ ಸಹ ಶ್ರೇಷ್ಠರಾಗುತ್ತಿದ್ದೀರಿ, ತತ್ತ್ವಂ. ಎಷ್ಟು
ಸಹಜ ತಿಳಿದುಕೊಳ್ಳುವ ಮಾತುಗಳಾಗಿವೆ. ಎಂದಾದರೂ ಯಾರಾದರೂ ಕೇಳಿದರೆ ಹೇಳಿ, ನೋಡಿ ಇವರು ಕಲಿಯುಗದ
ಅಂತ್ಯದಲ್ಲಿ ನಿಂತಿದ್ದಾರಲ್ಲವೆ. ತಂದೆಯು ತಿಳಿಸುತ್ತಾರೆ - ಯಾವಾಗ ಜಡಜಡೀಭೂತ ಸ್ಥಿತಿ,
ವಾನಪ್ರಸ್ಥ ಸ್ಥಿತಿಯಾಗುವುದೋ ಆಗ ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ. ಈಗ ರಾಜಯೋಗದ ತಪಸ್ಸು
ಮಾಡುತ್ತಿದ್ದಾರೆ. ತಪಸ್ಸು ಮಾಡುವವರಿಗೆ ದೇವತೆಗಳೆಂದು ಹೇಗೆ ಹೇಳುತ್ತೀರಿ? ರಾಜಯೋಗವನ್ನು ಕಲಿತು
ನಂತರ ದೇವತೆಗಳಾಗುತ್ತಾರೆ. ನೀವು ಮಕ್ಕಳನ್ನೂ ಸಹ ಇಂತಹ ಕಿರೀಟಧಾರಿಗಳನ್ನಾಗಿ ಮಾಡುತ್ತಾರಲ್ಲವೆ.
ಇವರೇ ದೇವತೆಯಾಗಿದ್ದಾರೆ. ಹೇಗೆ 10-20 ಮಂದಿಯ ಚಿತ್ರವನ್ನು ಇಡಬಹುದು. ಇವರು ಈ ರೀತಿ ಆಗುತ್ತಾರೆ
ಎಂಬುದನ್ನು ಇದರ ಮೂಲಕ ತೋರಿಸಬಹುದಾಗಿದೆ. ಮೊದಲು ಹೀಗೆ ಎಲ್ಲರ ಭಾವಚಿತ್ರಗಳು ತೆಗೆಯಲ್ಪಟ್ಟಿದೆ,
ಇದು ತಿಳಿಸುವ ಮಾತಲ್ಲವೆ. ಒಂದು ಕಡೆ ಸಾಧಾರಣ ಇನ್ನೊಂದು ಕಡೆ ಡಬಲ್ ಕಿರೀಟಧಾರಿಗಳು. ನಾವೇ ಈ
ರೀತಿಯಾಗುತ್ತಿದ್ದೇವೆ ಎಂದು ನೀವು ತಿಳಿದುಕೊಳ್ಳುತ್ತೀರಿ. ಯಾರ ಬುದ್ಧಿಯೋಗವು ಸ್ಪಷ್ಟವಾಗಿರುವುದೋ
ಅವರೇ ಅಷ್ಟು ಶ್ರೇಷ್ಠರಾಗುವರು ಮತ್ತು ಬಹಳ ಮಧುರರೂ ಆಗಬೇಕಾಗಿದೆ. ಈ ಸಮಯದ ಮನುಷ್ಯರಲ್ಲಿ ಕಾಮ,
ಕ್ರೋಧದ ಬೀಜವು ಎಷ್ಟೊಂದಾಗಿ ಬಿಟ್ಟಿದೆ. ಎಲ್ಲರಲ್ಲಿ ಪಂಚ ವಿಕಾರರೂಪಿ ಬೀಜದ ವೃಕ್ಷವೇ ಬೆಳೆದು
ಬಿಟ್ಟಿದೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇಂತಹ ಬೀಜವನ್ನು ಬಿತ್ತಬಾರದು. ಸಂಗಮಯುಗದಲ್ಲಿ
ನೀವು ದೇಹಾಭಿಮಾನದ ಬೀಜವನ್ನು ಬಿತ್ತುವಂತಿಲ್ಲ, ಕಾಮದ ಬೀಜವನ್ನೂ ಬಿತ್ತುವಂತಿಲ್ಲ.
ಅರ್ಧಕಲ್ಪಕ್ಕಾಗಿ ಮತ್ತೆ ರಾವಣನೇ ಇರುವುದಿಲ್ಲ. ಪ್ರತಿಯೊಂದು ಮಾತನ್ನು ತಂದೆಯು ಮಕ್ಕಳಿಗೆ
ತಿಳಿಸಿಕೊಡುತ್ತಾರೆ. ಮುಖ್ಯವಾದುದು ಒಂದೇ ಆಗಿದೆ - ಮನ್ಮನಾಭವ. ನನ್ನನ್ನು ನೆನಪು ಮಾಡಿ ಎಂದು
ತಂದೆಯು ತಿಳಿಸುತ್ತಾರೆ. ಎಲ್ಲರಿಗಿಂತ ಕೊನೆಯಲ್ಲಿ ಇವರು ಇದ್ದಾರೆ ಮತ್ತೆ ಎಲ್ಲರಿಗಿಂತ ಮೊಟ್ಟ
ಮೊದಲಿಗನೂ ಇವರೇ ಆಗುತ್ತಾರೆ. ಯೋಗಬಲದಿಂದ ಎಷ್ಟು ಪಾವನರಾಗುತ್ತೀರಿ. ಆರಂಭದಲ್ಲಂತೂ ಮಕ್ಕಳಿಗೆ
ಬಹಳ ಸಾಕ್ಷಾತ್ಕಾರವಾಗುತ್ತಿತ್ತು. ಭಕ್ತಿಮಾರ್ಗದಲ್ಲಿ ಯಾವಾಗ ನೌಧಾಭಕ್ತಿ ಮಾಡುವರೋ ಆಗ
ಸಾಕ್ಷಾತ್ಕಾರವಾಗುತ್ತದೆ. ಇಲ್ಲಂತೂ ಕುಳಿತು-ಕುಳಿತಿದ್ದಂತೆಯೇ ಧ್ಯಾನದಲ್ಲಿ ಹೊರಟು
ಹೋಗುತ್ತಿದ್ದರು ಇದಕ್ಕೆ ಮನುಷ್ಯರು ಜಾದು ಎಂದು ತಿಳಿಯುತ್ತಿದ್ದರು. ಇದಂತೂ ಫಸ್ಟ್ಕ್ಲಾಸ್
ಜಾದುವಾಗಿದೆ. ಭಕ್ತೆ ಮೀರಾ ಬಹಳ ತಪಸ್ಸು ಮಾಡಿದಳು, ಸಾಧು-ಸಂತರ ಸಂಗ ಮಾಡಿದಳು ಆದರೆ ಇಲ್ಲಿ
ಯಾವುದೇ ಸಂತ-ಸಂತರಿಲ್ಲ. ಇವರು ನಮ್ಮೆಲ್ಲರ ತಂದೆಯಾಗಿದ್ದಾರೆ. ಎಲ್ಲರ ತಂದೆಯು ಶಿವ
ತಂದೆಯಾಗಿದ್ದಾರೆ. ನಾವು ಗುರೂಜಿಯೊಂದಿಗೆ ಮಿಲನ ಮಾಡಿದೆವು ಎಂದು ಕೆಲವರು ಹೇಳುತ್ತಾರೆ ಆದರೆ
ಇಲ್ಲಿ ಗುರುಗಳು ಯಾರೂ ಇಲ್ಲ. ಶಿವ ತಂದೆಯು ನಿರಾಕಾರನಾಗಿದ್ದಾರೆ. ಅಂದಮೇಲೆ ಯಾರೊಂದಿಗೆ ಮಿಲನ
ಮಾಡಲು ಬಯಸುತ್ತೀರಿ? ಆ ಗುರುಗಳ ಬಳಿಯಂತೂ ಹೋಗಿ ಕಾಣಿಕೆಯನ್ನಿಡುತ್ತಾರೆ. ಇಲ್ಲಂತೂ ತಂದೆಯು
ಬೇಹದ್ದಿನ ಮಾಲೀಕನಾಗಿದ್ದಾರೆ, ಇಲ್ಲಿ ಯಾವುದೇ ಕಾಣಿಕೆಯನ್ನು ಕೊಡುವ ಮಾತಿಲ್ಲ. ಅವರು
ತೆಗೆದುಕೊಂಡು ಈ ಹಣವನ್ನೇನು ಮಾಡುತ್ತಾರೆ? ನಾನು ವಿಶ್ವದ ಮಾಲೀಕನಾಗುತ್ತೇನೆಂದು ಈ ಬ್ರಹ್ಮಾರವರೂ
ಸಹ ತಿಳಿದುಕೊಳ್ಳುತ್ತಾರೆ. ಮಕ್ಕಳು ಏನೆಲ್ಲಾ ಹಣ ಇತ್ಯಾದಿಗಳನ್ನು ಕೊಡುವರೋ ಅದರಿಂದ ಅವರಿಗಾಗಿಯೇ
ಮನೆ ಇತ್ಯಾದಿಗಳನ್ನು ಕಟ್ಟಿಸುತ್ತಾರೆ. ಹಣವಂತೂ ಈ ಶಿವ ತಂದೆಗಾಗಲಿ, ಬ್ರಹ್ಮಾ ತಂದೆಗಾಗಲಿ
ಬೇಕಾಗಿಲ್ಲ. ಈ ಮನೆಗಳನ್ನೂ ಸಹ ಮಕ್ಕಳಿಗಾಗಿಯೇ ಕಟ್ಟಿಸಲಾಗುತ್ತದೆ. ಮಕ್ಕಳೇ, ಬಂದು ಇರುತ್ತೀರಿ,
ಕೆಲವರು ಬಡವರಿರುತ್ತಾರೆ, ಕೆಲವರು ಸಾಹುಕಾರರಿರುತ್ತಾರೆ. ಬಾಬಾ, ನಮ್ಮ ಈ ಹಣದಿಂದ ಒಂದು
ಇಟ್ಟಿಗೆಯನ್ನಾದರೂ ಹಾಕಿರಿ ಎಂದು ಕೆಲವರು ಎರಡು ರೂಪಾಯಿಗಳನ್ನೂ ಕಳುಹಿಸುತ್ತಾರೆ, ಕೆಲವರು ಸಾವಿರ
ರೂಪಾಯಿಗಳನ್ನೂ ಕಳುಹಿಸುತ್ತಾರೆ. ಭಾವನೆಯಂತೂ ಇಬ್ಬರದೂ ಒಂದೇ ಆಗಿದೆಯಲ್ಲವೆ. ಆದ್ದರಿಂದ ಇಬ್ಬರ
ಪುಣ್ಯವು ಸಮಾನವಾಗಿ ಬಿಡುತ್ತದೆ. ಮತ್ತೆ ಮಕ್ಕಳು ಬಂದಾಗ ಎಲ್ಲಿ ಬೇಕೋ ಅಲ್ಲಿ ಇರುವರು. ಯಾರು
ಮನೆಯನ್ನು ಕಟ್ಟಿಸಿದ್ದಾರೆಯೋ ಅವರು ಒಂದುವೇಳೆ ಬಂದರೆ ಅವರನ್ನು ಬಹಳ ಚೆನ್ನಾಗಿ
ನೋಡಿಕೊಳ್ಳಬೇಕಾಗುತ್ತದೆ. ಇದರಿಂದ ಕೆಲವರು ತಂದೆಯೂ ಸಹ ಒಬ್ಬೊಬ್ಬರನ್ನೂ ನೋಡಿ ಕಾತರಿ
ಮಾಡುತ್ತಾರೆಂದು ಹೇಳಿ ಬಿಡುತ್ತಾರೆ. ಅರೆ! ಅವಶ್ಯವಾಗಿ ಆ ರೀತಿ ಮಾಡಲೇಬೇಕಾಗುತ್ತದೆಯಲ್ಲವೆ.
ಕೆಲವರನ್ನು ಎಲ್ಲಿ ಕೂರಿಸಿದರೂ ಕುಳಿತುಕೊಳ್ಳುತ್ತಾರೆ, ಇನ್ನೂ ಕೆಲವರು ಬಹಳ ನಾಜೂಕಾಗಿರುತ್ತಾರೆ.
ವಿದೇಶದಲ್ಲಿರುವವರು ಬಹಳ ದೊಡ್ಡ-ದೊಡ್ಡ ಮಹಲುಗಳಲ್ಲಿರುತ್ತಾರೆ. ಒಂದೊಂದು ದೇಶದಿಂದಲೂ
ದೊಡ್ಡ-ದೊಡ್ಡ ಸಾಹುಕಾರರು ಒಂದುವೇಳೆ ನಿಶ್ಚಯ ಬುದ್ಧಿಯವರಾದರೆ ಮನೆಗಳನ್ನೂ ಅದೇರೀತಿ
ಕಟ್ಟಿಸುತ್ತಾರೆ. ಇಲ್ಲಿ ನೋಡಿ, ಎಷ್ಟೊಂದು ಮಂದಿ ಮಕ್ಕಳು ಬರುತ್ತಾರೆ! ಮತ್ತ್ಯಾವ ತಂದೆಗೂ ಇಂತಹ
ವಿಚಾರಗಳಿರುವುದಿಲ್ಲ. ಭಲೆ ಅವರಿಗೆ 10-12 ಅಥವಾ 20 ಮಂದಿ ಮಕ್ಕಳು-ಮೊಮ್ಮಕ್ಕಳಿರಬಹುದು.
ಕೆಲವರಿಗೆ 200-500 ಮಂದಿಯೂ ಇರಬಹುದು ಆದರೆ ಇದಕ್ಕಿಂತಲೂ ಹೆಚ್ಚು ಇರಲು ಸಾಧ್ಯವಿಲ್ಲ. ಇಲ್ಲಿ
ತಂದೆಯ ಪರಿವಾರವನ್ನು ನೋಡಿ ಎಷ್ಟು ದೊಡ್ಡದಾಗಿದೆ! ಇನ್ನೂ ಹೆಚ್ಚು ವೃದ್ಧಿಯಾಗುವುದು. ಇಲ್ಲಿ
ರಾಜಧಾನಿಯು ಸ್ಥಾಪನೆಯಾಗುತ್ತಿದೆ. ತಂದೆಯ ಪರಿವಾರವು ಎಷ್ಟೊಂದಾಗುವುದು. ಮತ್ತೆ ಪ್ರಜಾಪಿತ
ಬ್ರಹ್ಮನ ಪರಿವಾರವು ಎಷ್ಟೊಂದಾಯಿತು. ಕಲ್ಪ-ಕಲ್ಪವೂ ಯಾವಾಗ ತಂದೆಯು ಬರುವರು ಆಗಲೇ ಅದ್ಭುತ
ಮಾತುಗಳು ನಿಮ್ಮ ಕಿವಿಗಳಲ್ಲಿ ಬೀಳುತ್ತವೆ. ಹೇ ಪ್ರಭು, ನಿನ್ನ ಗತಿ-ಮತವು ಎಲ್ಲರಿಗಿಂತ
ಭಿನ್ನವಾಗಿದೆ ಎಂದು ಆ ತಂದೆಗಾಗಿಯೇ ನೀವು ಹೇಳುತ್ತೀರಿ. ಭಕ್ತಿ ಮತ್ತು ಜ್ಞಾನದಲ್ಲಿ ನೋಡಿ
ಎಷ್ಟೊಂದು ಅಂತರವಿದೆ.
ತಂದೆಯು ನಿಮಗೆ ತಿಳಿಸುತ್ತಾರೆ - ಸ್ವರ್ಗದಲ್ಲಿ ಹೋಗಬೇಕೆಂದರೆ ದೈವೀ ಗುಣಗಳನ್ನೂ ಧಾರಣೆ
ಮಾಡಿಕೊಳ್ಳಿ, ಈಗಂತೂ ಮನುಷ್ಯರು ಮುಳ್ಳುಗಳಾಗಿದ್ದಾರಲ್ಲವೆ. ನಾನು ನಿರ್ಗುಣನಲ್ಲಿ ಯಾವುದೇ
ಗುಣವಿಲ್ಲವೆಂದು ಹಾಡುತ್ತಿರುತ್ತಾರೆ. ಬಾಕಿ 5 ವಿಕಾರಗಳ ಅವಗುಣಗಳು ಎಲ್ಲರಲ್ಲಿಯೂ ಇದೆ,
ರಾವಣರಾಜ್ಯವಾಗಿದೆ. ಈಗ ನಿಮಗೆ ಎಷ್ಟು ಒಳ್ಳೆಯ ಜ್ಞಾನವು ಸಿಗುತ್ತದೆ. ಈ ಜ್ಞಾನವು ಎಷ್ಟು ಖುಷಿ
ಕೊಡುವುದೋ ಅಷ್ಟು ಬೇರೆ ಯಾವ ಜ್ಞಾನವೂ ಕೊಡುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ನಾವಾತ್ಮಗಳು
ಮೇಲೆ ಮೂಲವತನದ ನಿವಾಸಿಗಳಾಗಿದ್ದೇವೆ. ಸೂಕ್ಷ್ಮವತನದಲ್ಲಿ ಬ್ರಹ್ಮಾ, ವಿಷ್ಣು, ಶಂಕರ, ಅದು ಕೇವಲ
ಸಾಕ್ಷಾತ್ಕಾರವಾಗುತ್ತದೆ. ಬ್ರಹ್ಮಾ, ಲಕ್ಷ್ಮೀ-ನಾರಾಯಣ ಎಲ್ಲರೂ ಇಲ್ಲಿನವರಾಗಿದ್ದಾರೆ.
ಸೂಕ್ಷ್ಮವತನದಲ್ಲಿ ಕೇವಲ ಅವರ ಸಾಕ್ಷಾತ್ಕಾರವಾಗುತ್ತದೆ. ವ್ಯಕ್ತ ಬ್ರಹ್ಮನು ಮತ್ತೆ
ಸೂಕ್ಷ್ಮವತನವಾಸಿ ಫರಿಶ್ತಾ ಬ್ರಹ್ಮ ಹೇಗಾಗುತ್ತಾರೆ ಎಂಬುದಕ್ಕೆ ಅಲ್ಲಿ ಚಿಹ್ನೆಯಿದೆ ಬಾಕಿ
ಇನ್ನೇನೂ ಇಲ್ಲ. ಈಗ ನೀವು ಮಕ್ಕಳು ಎಲ್ಲಾ ಮಾತುಗಳನ್ನು ತಿಳಿದುಕೊಳ್ಳುತ್ತಾ ಹೋಗುತ್ತೀರಿ, ಧಾರಣೆ
ಮಾಡಿಕೊಳ್ಳುತ್ತಾ ಹೋಗುತ್ತೀರಿ. ಯಾವುದೇ ಹೊಸ ಮಾತಿಲ್ಲ, ನೀವು ಅನೇಕ ಬಾರಿ ದೇವತೆಗಳಾಗಿದ್ದೀರಿ.
ದೈವೀ ರಾಜ್ಯವಿತ್ತಲ್ಲವೆ? ಈ ಚಕ್ರವು ಸುತ್ತುತ್ತಿರುತ್ತದೆ. ಹೇಗೆ ವಿನಾಶೀ ನಾಟಕವಿರುತ್ತದೆ
ಹಾಗೆಯೇ ಇದು ಅನಾದಿ, ಅವಿನಾಶಿ ನಾಟಕವಾಗಿದೆ. ಇದು ನಿಮ್ಮ ವಿನಃ ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ.
ಇದೆಲ್ಲವನ್ನೂ ತಂದೆಯು ತಿಳಿಸಿಕೊಡುತ್ತಾರೆ. ಇದು ಪರಂಪರೆಯಿಂದ ನಡೆದುಬಂದಿದೆ ಎಂದಲ್ಲ, ಈ
ಜ್ಞಾನವನ್ನು ನಿಮಗೆ ಈಗಲೇ ತಿಳಿಸುತ್ತೇನೆ ನಂತರ ಇದು ಪ್ರಾಯಲೋಪವಾಗಿ ಬಿಡುತ್ತದೆ. ನೀವು ರಾಜ್ಯ
ಪದವಿಯನ್ನು ಪ್ರಾಪ್ತಿ ಮಾಡಿಕೊಂಡ ಮೇಲೆ ಸತ್ಯಯುಗದಲ್ಲಿ ಈ ಜ್ಞಾನವಿರುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸದಾ
ಸ್ಮೃತಿಯಿರಲಿ - ನಾವೀಗ ಬ್ರಾಹ್ಮಣರಾಗಿದ್ದೇವೆ. ಆದ್ದರಿಂದ ವಿಕಾರಗಳಿಂದ ಬಹಳ-ಬಹಳ
ದೂರವಿರಬೇಕಾಗಿದೆ. ಎಂದೂ ಕುದೃಷ್ಟಿಯಾಗಬಾರದು. ತಂದೆಯೊಂದಿಗೆ ಬಹಳ-ಬಹಳ ಆಜ್ಞಾಕಾರಿ,
ಪ್ರಾಮಾಣಿಕರಾಗಿರಬೇಕಾಗಿದೆ.
2. ಡಬಲ್ ಕಿರೀಟಧಾರಿ ದೇವತೆಗಳಾಗಲು ಬಹಳ ಮಧುರರಾಗಬೇಕು, ಬುದ್ಧಿಯೋಗವು ಸ್ಪಷ್ಟವಾಗಿ ಇರಬೇಕಾಗಿದೆ.
ರಾಜಯೋಗದ ತಪಸ್ಸು ಮಾಡಬೇಕಾಗಿದೆ.
ವರದಾನ:
ಈಶ್ವರೀಯ ನಶೆಯ
ಮುಖಾಂತರ ಹಳೆಯ ಪ್ರಪಂಚವನ್ನು ಮರೆಯುವಂತಹ ಸರ್ವ ಪ್ರಾಪ್ತಿ ಸಂಪನ್ನ ಭವ.
ಯಾವ ರೀತಿ ಆ ನಶೆಯು
ಎಲ್ಲವನ್ನು ಮರೆಸಿ ಬಿಡುತ್ತದೆ, ಹಾಗೆಯೇ ಈ ಈಶ್ವರೀಯ ನಶೆ ದುಃಖದ ಪ್ರಪಂಚವನ್ನು ಸಹಜವಾಗಿ ಮರೆಸಿ
ಬಿಡುತ್ತದೆ. ಆ ನಶೆಯಲ್ಲಂತೂ ಬಹಳ ನಷ್ಟವಾಗುತ್ತದೆ, ಅಧಿಕವಾಗಿ ಕುಡಿಯುವುದರಿಂದ ನಾಶವೇ ಆಗಿ
ಬಿಡುತ್ತಾರೆ. ಆದರೆ ಈ ನಶೆ ಅವಿನಾಶಿಯನ್ನಾಗಿ ಮಾಡಿ ಬಿಡುವುದು. ಯಾರು ಸದಾ ಈಶ್ವರೀಯ ನಶೆಯಲ್ಲಿ
ಮಸ್ತಾರಾಗಿರುತ್ತಾರೆ ಅವರು ಸರ್ವ ಪ್ರಾಪ್ತಿ ಸಂಪನ್ನರಾಗಿ ಬಿಡುತ್ತಾರೆ. ಒಬ್ಬ ತಂದೆಯ ವಿನಹ ಬೇರೆ
ಯಾರೂ ಇಲ್ಲ - ಈ ಸ್ಮೃತಿಯೇ ನಶೆ ಏರಿಸುತ್ತದೆ. ಇದೇ ಸ್ಮೃತಿಯಿಂದ ಸಮರ್ಥತೆ ಬಂದು ಬಿಡುವುದು.
ಸ್ಲೋಗನ್:
ಒಬ್ಬರಿನ್ನೊಬ್ಬರನ್ನು
ಅನುಕರಿಸುವ ಬದಲು ತಂದೆಯನ್ನು ಅನುಕರಿಸಿ.