07.12.20 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನೀವು
ಬಹಳ ಸಮಯದ ನಂತರ ಪುನಃ ತಂದೆಯೊಂದಿಗೆ ಮಿಲನ ಮಾಡಿದ್ದೀರಿ, ಆದ್ದರಿಂದ ನೀವು ಬಹಳ ಬಹಳ ಕಾಲ ಅಗಲಿ
ಹೋಗಿ ಸಿಕ್ಕಿರುವ ಮುದ್ದು ಮಕ್ಕಳಾಗಿದ್ದೀರಿ"
ಪ್ರಶ್ನೆ:
ತಮ್ಮ
ಸ್ಥಿತಿಯನ್ನು ಏಕರಸ ಮಾಡಿಕೊಳ್ಳುವ ಸಾಧನವೇನಾಗಿದೆ?
ಉತ್ತರ:
ಸದಾ ನೆನಪಿಡಿ - ಯಾವ ಕ್ಷಣವು ಕಳೆದು ಹೋಯಿತು ಅದು ಡ್ರಾಮಾ. ಕಲ್ಪದ ಹಿಂದೆಯೂ ಇದೇ ರೀತಿಯಾಗಿತ್ತು,
ಈಗಂತೂ ಸ್ತುತಿ-ನಿಂದೆ, ಮಾನ-ಅಪಮಾನ ಎಲ್ಲವೂ ಮುಂದೆ ಬರುವುದು. ಆದ್ದರಿಂದ ತಮ್ಮ ಸ್ಥಿತಿಯನ್ನು
ಏಕರಸ ಮಾಡಿಕೊಳ್ಳಬೇಕೆಂದರೆ ಕಳೆದು ಹೋದುದರ ಚಿಂತನೆ ಮಾಡಬೇಡಿ.
ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ. ಆತ್ಮಿಕ ತಂದೆಯ ಹೆಸರು ಏನು? ಶಿವ ಬಾಬಾ.
ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಎಲ್ಲಾ ಆತ್ಮಿಕ ಮಕ್ಕಳ ಹೆಸರೇನು? ಆತ್ಮ. ಶರೀರಕ್ಕೆ
ಹೆಸರು ಬರುತ್ತದೆ ಆದರೆ ಆತ್ಮಕ್ಕೆ ಅದೇ ಹೆಸರು ಇರುತ್ತದೆ. ಇದನ್ನೂ ಸಹ ಮಕ್ಕಳು
ತಿಳಿದುಕೊಂಡಿದ್ದೀರಿ. ಅನೇಕ ಸತ್ಸಂಗಗಳಿವೆ, ಇದು ಸತ್ಯ-ಸತ್ಯವಾದ ಸತ್ಸಂಗವಾಗಿದೆ. ಇದರಲ್ಲಿ ಸತ್ಯ
ತಂದೆಯೇ ರಾಜಯೋಗವನ್ನು ಕಲಿಸಿ ನಮ್ಮನ್ನು ಸತ್ಯಯುಗದಲ್ಲಿ ಕರೆದುಕೊಂಡು ಹೋಗುತ್ತಾರೆ. ಇಂತಹ
ಸತ್ಸಂಗ ಅಥವಾ ಪಾಠಶಾಲೆ ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ.
ಇಡೀ ಸೃಷ್ಟಿಚಕ್ರವು ನಿಮ್ಮ ಬುದ್ಧಿಯಲ್ಲಿದೆ, ನೀವು ಮಕ್ಕಳೇ ಸ್ವದರ್ಶನ ಚಕ್ರಧಾರಿಯಾಗಿದ್ದೀರಿ, ಈ
ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ತಂದೆಯು ತಿಳಿಸುತ್ತಾರೆ. ಯಾರಿಗಾದರೂ ತಿಳಿಸುವಾಗ
ಅವರನ್ನು ಸೃಷ್ಟಿಚಕ್ರದ ಚಿತ್ರದ ಮುಂದೆ ನಿಲ್ಲಿಸಿ. ನೀವೀಗ ಇತ್ತ ಕಡೆ ಹೋಗುತ್ತೀರಿ ಎಂದು ತಿಳಿಸಿ.
ತಂದೆಯು ಜೀವಾತ್ಮರಿಗೆ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ, ಇದು ಹೊಸಮಾತಲ್ಲ.
ಕಲ್ಪ-ಕಲ್ಪವೂ ಇದನ್ನು ಕೇಳುತ್ತೇವೆ, ಈಗ ಪುನಃ ಕೇಳುತ್ತಿದ್ದೇವೆಂದು ನಿಮಗೆ ತಿಳಿದಿದೆ. ನಿಮ್ಮ
ಬುದ್ಧಿಯಲ್ಲಿ ಯಾವುದೇ ದೇಹಧಾರಿ ತಂದೆ, ಶಿಕ್ಷಕ, ಗುರುಗಳಿಲ್ಲ ಏಕೆಂದರೆ ನಿಮಗೆ ಗೊತ್ತಿದೆ -
ವಿದೇಹೀ ಶಿವ ತಂದೆಯು ನಮ್ಮ ಶಿಕ್ಷಕ, ಗುರುವಾಗಿದ್ದಾರೆ. ಮತ್ತ್ಯಾವುದೇ ಸತ್ಸಂಗದಲ್ಲಿ ಈ ರೀತಿ
ಮಾತನಾಡುತ್ತಿಲ್ಲ. ಮಧುಬನವಂತೂ ಇದೊಂದೇ ಆಗಿದೆ. ಮನುಷ್ಯರು ಒಂದು ಮಧುಬನವನ್ನು ಬೃಂದಾವನದಲ್ಲಿ
ತೋರಿಸುತ್ತಾರೆ. ಅದನ್ನು ಭಕ್ತಿಮಾರ್ಗದಲ್ಲಿ ಮನುಷ್ಯರು ಮಾಡಿದ್ದಾರೆ. ಆದರೆ ನಿಜವಾದ ಮಧುಬನವು
ಇದಾಗಿದೆ. ನಾವು ಸತ್ಯ, ತ್ರೇತಾಯುಗದಿಂದ ಹಿಡಿದು ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಪುರುಷೋತ್ತಮರಾಗಲು ಸಂಗಮಯುಗದಲ್ಲಿ ಬಂದು
ನಿಂತಿದ್ದೇವೆಂದು ನಿಮ್ಮ ಬುದ್ಧಿಯಲ್ಲಿದೆ. ತಂದೆಯು ಬಂದು ನಮಗೆ ಸ್ಮೃತಿ ತರಿಸಿದ್ದಾರೆ. 84
ಜನ್ಮಗಳನ್ನು ಯಾರು ಮತ್ತು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ.
ಮನುಷ್ಯರಂತೂ ಕೇವಲ ಹೇಳಿ ಬಿಡುತ್ತಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ. ತಂದೆಯು ಬಹಳ ಚೆನ್ನಾಗಿ
ತಿಳಿಸಿಕೊಡುತ್ತಾರೆ, ಸತ್ಯಯುಗದಲ್ಲಿ ಸತೋಪ್ರಧಾನ ಆತ್ಮಗಳಾಗಿದ್ದೀರಿ, ಶರೀರವೂ
ಸತೋಪ್ರಧಾನವಾಗಿತ್ತು, ಈ ಸಮಯದಲ್ಲಿ ಸತ್ಯಯುಗವೂ ಇಲ್ಲ, ಇದು ಕಲಿಯುಗವಾಗಿದೆ. ನಾವು
ಸತ್ಯಯುಗದಲ್ಲಿದ್ದೆವು ಮತ್ತೆ ಚಕ್ರವನ್ನು ಸುತ್ತುತ್ತಾ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಈಗ
ಕಲಿಯುಗದಲ್ಲಿ ಬಂದು ಬಿಟ್ಟಿದ್ದೇವೆ. ಪುನಃ ಚಕ್ರವನ್ನು ಅವಶ್ಯವಾಗಿ ಸುತ್ತಬೇಕಾಗಿದೆ. ಈಗ ತಮ್ಮ
ಮನೆಗೆ ಹೋಗಬೇಕಾಗಿದೆ. ನೀವು ಮುದ್ದು ಮಕ್ಕಳಾಗಿದ್ದೀರಲ್ಲವೆ. ಯಾರು ಅಗಲಿ ಹೋಗಿ ಬಹಳ ಸಮಯದ ನಂತರ
ಮಿಲನ ಮಾಡುವರೋ ಅವರಿಗೇ ಮುದ್ದು ಮಕ್ಕಳೆಂದು ಹೇಳಲಾಗುತ್ತದೆ. ನೀವು 5000 ವರ್ಷಗಳ ನಂತರ ಬಂದು
ಮಿಲನ ಮಾಡಿದ್ದೀರಿ. ಯಾವ ತಂದೆಯು 5000 ವರ್ಷಗಳ ಮೊದಲು ಈ ಸೃಷ್ಟಿಚಕ್ರದ ಜ್ಞಾನವನ್ನು ನಮಗೆ
ತಿಳಿಸಿದ್ದರೋ, ಸ್ವದರ್ಶನ ಚಕ್ರಧಾರಿಯನ್ನಾಗಿ ಮಾಡಿದ್ದರೋ ಅದೇ ತಂದೆಯು ಈಗ ನಮಗೆ ಸಿಕ್ಕಿದ್ದಾರೆ
ಎಂಬುದನ್ನು ನೀವೇ ತಿಳಿದುಕೊಂಡಿದ್ದೀರಿ. ಈಗ ಪುನಃ ತಮ್ಮ ಜನ್ಮಸಿದ್ಧ ಅಧಿಕಾರವನ್ನು
ತೆಗೆದುಕೊಳ್ಳಲು ತಂದೆಯೊಂದಿಗೆ ಮಿಲನ ಮಾಡಿದ್ದೀರಿ. ಇಲ್ಲಿ ತಂದೆಯು ಅರಿವು ಮೂಡಿಸುತ್ತಾರೆ,
ಇದರಲ್ಲಿ ಆತ್ಮನ 84 ಜನ್ಮಗಳ ಅರಿವು ಬಂದು ಬಿಡುತ್ತದೆ. ಇದೆಲ್ಲವನ್ನೂ ತಂದೆಯು ಹೇಗೆ
ತಿಳಿಸುತ್ತಾರೆ. ಹೇಗೆ 5000 ವರ್ಷಗಳ ಮೊದಲೂ ಸಹ ಮನುಷ್ಯರನ್ನು ದೇವತೆ ಅಥವಾ ಕಂಗಾಲರನ್ನು
ಕಿರೀಟಧಾರಿಗಳನ್ನಾಗಿ ಮಾಡಲು ಜ್ಞಾನವನ್ನು ತಿಳಿಸಿದ್ದರು. ನಾವು 84 ಪುನರ್ಜನ್ಮಗಳನ್ನು
ತೆಗೆದುಕೊಂಡಿದ್ದೇವೆ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಯಾರು ತೆಗೆದುಕೊಂಡಿಲ್ಲವೋ ಅವರು
ಇಲ್ಲಿ ಕಲಿಯುವುದಕ್ಕಾಗಿ ಬರುವುದೂ ಇಲ್ಲ. ಕೆಲವರು ಸ್ವಲ್ಪ ತಿಳಿದುಕೊಳ್ಳುತ್ತಾರೆ. ನಂಬರ್ವಾರಂತೂ
ಇರುತ್ತಾರಲ್ಲವೆ. ತಮ್ಮ-ತಮ್ಮ ಮನೆ ಗೃಹಸ್ಥದಲ್ಲಿಯೇ ಇರಬೇಕಾಗಿದೆ. ಎಲ್ಲರೂ ಬಂದು ಇಲ್ಲಿ
ಕುಳಿತುಬಿಡಲು ಸಾಧ್ಯವಿಲ್ಲ. ಯಾರು ಬಹಳ ಒಳ್ಳೆಯ ಪದವಿಯನ್ನು ಪಡೆಯಬೇಕಾಗಿದೆಯೋ ಅವರು ರಿಫ್ರೆಷ್
ಆಗಲು ಬರುತ್ತಾರೆ. ಕಡಿಮೆ ಪದವಿಯವರು ಹೆಚ್ಚು ಪುರುಷಾರ್ಥ ಮಾಡುವುದಿಲ್ಲ. ಇದು ಇಂತಹ ಜ್ಞಾನವಾಗಿದೆ
ಸ್ವಲ್ಪ ಪುರುಷಾರ್ಥ ಮಾಡಿದರೂ ಅದು ವ್ಯರ್ಥವಾಗಿ ಹೋಗುವುದಿಲ್ಲ. ಶಿಕ್ಷೆಗಳನ್ನುನುಭವಿಸಿ ಬಂದು
ಬಿಡುತ್ತಾರೆ. ಚೆನ್ನಾಗಿ ಪುರುಷಾರ್ಥ ಮಾಡಿದರೆ ಶಿಕ್ಷೆಯೂ ಕಡಿಮೆಯಾಗುವುದು. ನೆನಪಿನ
ಯಾತ್ರೆಯಿಲ್ಲದೆ ವಿಕರ್ಮವು ವಿನಾಶವಾಗುವುದಿಲ್ಲ. ಇದನ್ನು ತಮಗೆ ತಾವು ಪದೇ-ಪದೇ ನೆನಪು
ತರಿಸಿಕೊಳ್ಳಿ. ಯಾವುದೇ ಮನುಷ್ಯರು ಸಿಕ್ಕಿದರೆ ಮೊದಲು ಅವರಿಗೆ ಇದನ್ನು ತಿಳಿಸಿ - ತಮ್ಮನ್ನು
ಆತ್ಮನೆಂದು ತಿಳಿಯಿರಿ. ಈ ಶರೀರದ ಹೆಸರುಗಳಂತೂ ನಂತರದಲ್ಲಿ ಸಿಕ್ಕಿವೆ. ಯಾರನ್ನಾದರೂ ಶರೀರನ
ಹೆಸರಿನ ಮೇಲೆಯೇ ಕರೆಯುತ್ತಾರೆ. ಈ ಸಂಗಮದಲ್ಲಿಯೇ ಬೇಹದ್ದಿನ ತಂದೆಯು ಆತ್ಮಿಕ ಮಕ್ಕಳನ್ನು
ಕರೆಯುತ್ತಾರೆ. ಆತ್ಮಿಕ ತಂದೆಯು ಬಂದಿದ್ದಾರೆಂದು ನೀವು ಹೇಳುತ್ತೀರಿ. ಆತ್ಮಿಕ ಮಕ್ಕಳೇ ಎಂದು
ತಂದೆಯೇ ಹೇಳುತ್ತಾರೆ. ಮೊದಲು ಆತ್ಮ, ನಂತರ ಮಕ್ಕಳ ಹೆಸರನ್ನು ತೆಗೆದುಕೊಳ್ಳುತ್ತಾರೆ. ಆತ್ಮಿಕ
ಮಕ್ಕಳೇ, ನೀವು ತಿಳಿದುಕೊಂಡಿದ್ದೀರಿ - ಆತ್ಮಿಕ ತಂದೆಯು ಏನನ್ನು ತಿಳಿಸುತ್ತಾರೆ, ನಿಮ್ಮ
ಬುದ್ಧಿಯಲ್ಲಿದೆ – ಶಿವ ತಂದೆಯು ಈ ಭಗೀರಥನಲ್ಲಿ ವಿರಾಜಮಾನವಾಗಿದ್ದಾರೆ. ನಮಗೆ ಅವರೇ ಸಹಜ
ರಾಜಯೋಗವನ್ನು ಕಲಿಸುತ್ತಿದ್ದಾರೆ. ಮತ್ತ್ಯಾವುದೇ ಮನುಷ್ಯಮಾತ್ರರಲ್ಲಿ ತಂದೆಯು ಬಂದು ರಾಜಯೋಗವನ್ನು
ಕಲಿಸುವುದಿಲ್ಲ. ತಂದೆಯು ಪುರುಷೋತ್ತಮ ಸಂಗಮಯುಗದಲ್ಲಿಯೇ ಬರುತ್ತಾರೆ, ಮತ್ತ್ಯಾವುದೇ ಮನುಷ್ಯರು
ಎಂದೂ ಈ ರೀತಿ ಹೇಳಲು ಸಾಧ್ಯವಿಲ್ಲ, ತಿಳಿಸುವುದಕ್ಕೂ ಸಾಧ್ಯವಿಲ್ಲ. ಇದನ್ನೂ ಸಹ ನೀವೂ
ತಿಳಿದುಕೊಂಡಿದ್ದೀರಿ - ಈ ಶಿಕ್ಷಣವು ಈ ಬ್ರಹ್ಮಾ ತಂದೆಯದಲ್ಲ, ಕಲಿಯುಗವು ಸಮಾಪ್ತಿಯಾಗಿ
ಸತ್ಯಯುಗವು ಬರಲಿದೆ ಎಂಬುದು ಇವರಿಗೂ ಸಹ ತಿಳಿದಿರಲಿಲ್ಲ. ಇವರಿಗೆ ಈಗ ಯಾವುದೇ ದೇಹಧಾರಿ
ಗುರುಗಳಿಲ್ಲ. ಅನ್ಯ ಎಲ್ಲಾ ಮನುಷ್ಯ ಮಾತ್ರರೂ ನಮಗೆ ಇಂತಹ ಗುರುಗಳಿದ್ದಾರೆ, ಇಂತಹವರು
ಜ್ಯೋತಿಯಲ್ಲಿ ಸಮಾವೇಶವಾದರು ಎಂದು ಹೇಳುತ್ತಾರೆ. ಎಲ್ಲರಿಗೆ ದೇಹಧಾರಿ ಗುರುಗಳಿರುತ್ತಾರೆ. ಧರ್ಮ
ಸ್ಥಾಪಕರೂ ದೇಹಧಾರಿಗಳಾಗಿದ್ದಾರೆ. ಈ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು? ಪರಮಪಿತ ಪರಮಾತ್ಮ
ತ್ರಿಮೂರ್ತಿ ಶಿವ ತಂದೆಯು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡಿದ್ದಾರೆ. ಇವರ ಶರೀರದ ಹೆಸರು ಬ್ರಹ್ಮಾ
ಎಂದಾಗಿದೆ. ಕ್ರಿಶ್ಚಿಯನ್ನರೂ ಸಹ ಕ್ರಿಸ್ತನು ಈ ಧರ್ಮವನ್ನು ಸ್ಥಾಪನೆ ಮಾಡಿದರೆಂದು ಹೇಳುತ್ತಾರೆ.
ಅವರಂತೂ ದೇಹಧಾರಿಯಾಗಿದ್ದಾರೆ, ಚಿತ್ರವೂ ಇದೆ. ಈ ನಮ್ಮ ಧರ್ಮ ಸ್ಥಾಪಕರ ಚಿತ್ರವನ್ನೇನು
ತೋರಿಸುತ್ತೀರಿ? ಶಿವನನ್ನೇ ತೋರಿಸುತ್ತೀರಿ, ಶಿವನ ಚಿತ್ರವನ್ನೂ ಸಹ ಕೆಲವರು ಚಿಕ್ಕದಾಗಿ, ಕೆಲವರು
ದೊಡ್ಡದಾಗಿ ಮಾಡಿಸುತ್ತಾರೆ. ಆದರೆ ಅವರು ಬಿಂದುವಾಗಿದ್ದಾರೆ, ನಾಮ-ರೂಪವೂ ಇದೆ ಆದರೆ
ಅವ್ಯಕ್ತನಾಗಿದ್ದಾರೆ. ಈ ಸ್ಥೂಲ ನೇತ್ರಗಳಿಂದ ನೋಡಲು ಸಾಧ್ಯವಿಲ್ಲ. ಶಿವ ತಂದೆಯು ನೀವು ಮಕ್ಕಳಿಗೆ
ರಾಜ್ಯಭಾಗ್ಯವನ್ನು ಕೊಟ್ಟು ಹೋಗಿದ್ದಾರೆ. ಆದ್ದರಿಂದಲೇ ನೆನಪು ಮಾಡುತ್ತೀರಲ್ಲವೆ! ಶಿವ ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಮನ್ಮಾನಭವ, ತಂದೆಯಾದ ನನ್ನೊಬ್ಬನನ್ನೇ ನೆನಪು ಮಾಡಿ ಮತ್ತ್ಯಾರದೇ
ಸ್ತುತಿ ಮಾಡುವಂತಿಲ್ಲ. ಆತ್ಮನ ಬುದ್ಧಿಯಲ್ಲಿ ಯಾವುದೇ ದೇಹವು ನೆನಪಿಗೆ ಬರಬಾರದು, ಇದು ಚೆನ್ನಾಗಿ
ತಿಳಿದುಕೊಳ್ಳುವ ಮಾತಾಗಿದೆ. ನಮಗೆ ಶಿವ ತಂದೆಯು ಓದಿಸುತ್ತಾರೆ ಎಂಬುದನ್ನು ಇಡೀ ದಿನ ಸ್ಮರಣೆ
ಮಾಡಿಕೊಳ್ಳುತ್ತಾ ಇರಿ. ಶಿವ ಭಗವಾನುವಾಚ – ಮೊಟ್ಟ ಮೊದಲು ಪರಮಾತ್ಮನ ಬಗ್ಗೆ
ತಿಳಿದುಕೊಳ್ಳಬೇಕಾಗಿದೆ. ಇದನ್ನು ಪಕ್ಕಾ ಮಾಡಿಕೊಳ್ಳದೆ ಆಸ್ತಿಯ ಬಗ್ಗೆ ತಿಳಿಸಿದರೆ ಅವರಿಗೆ ಏನೂ
ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನಿಮ್ಮ ಮಾತಂತೂ ಸರಿಯಾಗಿದೆ ಎಂದು ಕೆಲವರು ಹೇಳುತ್ತಾರೆ.
ಇನ್ನೂ ಕೆಲವರು ಇದನ್ನು ತಿಳಿದುಕೊಳ್ಳುವುದರಲ್ಲಿ ಸಮಯ ಬೇಕೆಂದು ಹೇಳುತ್ತಾರೆ, ಕೆಲವರು ವಿಚಾರ
ಮಾಡುತ್ತೇವೆಂದು ಹೇಳುತ್ತಾರೆ. ಹೀಗೆ ಭಿನ್ನ-ಭಿನ್ನ ಪ್ರಕಾರದವರು ಬರುತ್ತಾರೆ. ಇದು ಹೊಸ ಮಾತಾಗಿದೆ.
ಪರಮಪಿತ ಪರಮಾತ್ಮ ಶಿವನು ಆತ್ಮಗಳಿಗೆ ಕುಳಿತು ಓದಿಸುತ್ತಾರೆ. ವಿಚಾರ ನಡೆಯುತ್ತದೆ - ಮನುಷ್ಯರಿಗೆ
ಇದು ಅರ್ಥವಾಗಬೇಕಾದರೆ ಏನು ಮಾಡಬೇಕು! ಶಿವನೇ ಜ್ಞಾನಸಾಗರನಾಗಿದ್ದಾರೆ. ಆತ್ಮಕ್ಕೆ ಜ್ಞಾನ
ಸಾಗರನೆಂದು ಹೇಗೆ ಹೇಳುತ್ತಾರೆ? ಅವರಿಗೆ ಶರೀರವೇ ಇಲ್ಲ. ಜ್ಞಾನಸಾಗರನೆಂದ ಮೇಲೆ ಅವಶ್ಯವಾಗಿ ಅವರು
ಯಾವಾಗಲೋ ಜ್ಞಾನವನ್ನು ತಿಳಿಸಿದ್ದಾರೆ. ಆದ್ದರಿಂದಲೇ ಅವರಿಗೆ ಜ್ಞಾನ ಸಾಗರನೆಂದು ಹೇಳುತ್ತಾರೆ.
ಸುಮ್ಮನೆ ಏಕೆ ಹೇಳುವರು! ಯಾರಾದರೂ ಚೆನ್ನಾಗಿ ಓದುತ್ತಾರೆಂದರೆ ಇವರು ಬಹಳ ಬೇಗ ಶಾಸ್ತ್ರಗಳನ್ನು
ಓದಿದ್ದಾರೆಂದು ಹೇಳಲಾಗುತ್ತದೆ ಮತ್ತು ಅವರಿಗೆ ಶಾಸ್ತ್ರಿ ಅಥವಾ ವಿದ್ವಾಂಸರೆಂದು ಹೇಳುತ್ತಾರೆ.
ಆದರೆ ತಂದೆಗೆ ಜ್ಞಾನ ಸಾಗರ ಅಥಾರಿಟಿ ಎಂದು ಹೇಳಲಾಗುತ್ತದೆ. ಅವಶ್ಯವಾಗಿ ಅವರು ಬಂದು ಹೋಗಿದ್ದಾರೆ
ಆದ್ದರಿಂದ ಮೊದಲು ಇದನ್ನು ಕೇಳಿರಿ - ಈಗ ಕಲಿಯುಗವೋ ಅಥವಾ ಸತ್ಯಯುಗವೋ? ಹೊಸ ಪ್ರಪಂಚವೋ ಅಥವಾ
ಹಳೆಯ ಪ್ರಪಂಚವೋ? ಗುರಿ-ಧ್ಯೇಯವಂತೂ ನಿಮ್ಮ ಸನ್ಮುಖದಲ್ಲಿದೆ. ಒಂದುವೇಳೆ ಈ ಲಕ್ಷ್ಮೀ-ನಾರಾಯಣರು
ಇದ್ದಿದ್ದರೆ ಅವರ ರಾಜ್ಯವೂ ಇರುತ್ತಿತ್ತು. ಇದು ಹಳೆಯ ಪ್ರಪಂಚ ಕಂಗಾಲಾಗುತ್ತಲೇ ಇರಲಿಲ್ಲ. ಈಗಂತೂ
ಕೇವಲ ಅವರ ಚಿತ್ರಗಳಿವೆ, ಮಂದಿರಗಳಲ್ಲಿ ಮಾದರಿ ಚಿತ್ರಗಳನ್ನು ತೋರಿಸುತ್ತಾರೆ. ವಾಸ್ತವದಲ್ಲಿ ಅವರ
ಮಹಲುಗಳು ಉದ್ಯಾನವನದಲ್ಲಿ ಎಷ್ಟು ದೊಡ್ಡ-ದೊಡ್ಡದಾಗಿರುತ್ತವೆ! ಕೇವಲ ಮಂದಿರಗಳಲ್ಲಿಯೇ ಅವರು
ಇರುವುದಿಲ್ಲ, ಅವರ ಮಾದರಿಯನ್ನು ಚಿಕ್ಕ ರೂಪದಲ್ಲಿ ತೋರಿಸುತ್ತಾರೆ. ಹೇಗೆ ಪ್ರಧಾನಮಂತ್ರಿಯ ಮನೆಯು
ಎಷ್ಟು ದೊಡ್ಡದಾಗಿರುತ್ತದೆ! ಹಾಗೆಯೇ ದೇವಿ-ದೇವತೆಗಳೂ ಸಹ ದೊಡ್ಡ-ದೊಡ್ಡ ಮಹಲುಗಳಲ್ಲಿರುತ್ತಾರೆ.
ಬಹಳಷ್ಟು ಜಾಗವಿರುತ್ತದೆ. ಅಲ್ಲಿ ಹೆದರುವ ಮಾತೇ ಇರುವುದಿಲ್ಲ. ಸದಾ ಹೂದೋಟವೇ ಇರುತ್ತದೆ,
ಮುಳ್ಳುಗಳಿರುವುದಿಲ್ಲ. ಅದು ಉದ್ಯಾನವನವಾಗಿದೆ. ಅಲ್ಲಂತೂ ಸೌದೆ ಇತ್ಯಾದಿಗಳನ್ನೂ ಸುಡುವುದಿಲ್ಲ
ಏಕೆಂದರೆ ಸೌದೆಗಳನ್ನು ಸುಟ್ಟಾಗ ಅದರಿಂದ ಬರುವ ಹೊಗೆಯಿಂದ ದುಃಖದ ಅನುಭವವಾಗುತ್ತದೆ.
ಸತ್ಯಯುಗದಲ್ಲಿ ನಾವು ಬಹಳ ಕಡಿಮೆ ಜಾಗದಲ್ಲಿ ಇರುತ್ತೇವೆ ನಂತರ ವೃದ್ಧಿಯಾಗತೊಡಗುತ್ತದೆ. ಬಹಳ
ಒಳ್ಳೊಳ್ಳೆಯ ಉದ್ಯಾನವನಗಳಿರುತ್ತವೆ, ಸುವಾಸನೆಯೂ ಬರುತ್ತಿರುತ್ತದೆ. ಅರಣ್ಯವಿರುವುದೇ ಇಲ್ಲ.
ಈಗಂತೂ ಕೇವಲ ಅದರ ಅನುಭವವಾಗುತ್ತದೆ, ನೋಡುವುದಂತೂ ಇಲ್ಲ. ನೀವು ಧ್ಯಾನದಲ್ಲಿ ದೊಡ್ಡ-ದೊಡ್ಡ
ಮಹಲುಗಳನ್ನು ನೋಡಿಕೊಂಡು ಬರುತ್ತೀರಿ, ಆದರೆ ಅವನ್ನು ಇಲ್ಲಿ ಮಾಡಿಸಲು ಸಾಧ್ಯವಿಲ್ಲ.
ಸಾಕ್ಷಾತ್ಕಾರವಾಗಿ ಮತ್ತೆ ಮಾಯಾವಾಗಿ ಬಿಡುತ್ತದೆ. ರಾಜರು, ರಾಜಕುಮಾರ-ರಾಜಕುಮಾರಿಯರುತ್ತಾರೆ.
ಸ್ವರ್ಗವು ಬಹಳ ರಮಣೀಕವಾಗಿರುತ್ತದೆ. ಹೇಗೆ ಇಲ್ಲಿ ಮೈಸೂರು ಇತ್ಯಾದಿಗಳು ರಮಣೀಕವಾಗಿರುತ್ತವೆ
ಹಾಗೆಯೇ ಅಲ್ಲಿ ಬಹಳ ಒಳ್ಳೊಳ್ಳೆಯ ತಂಪಾದ ಗಾಳಿಯು ಬೀಸುತ್ತಿರುತ್ತದೆ. ನೀರಿನ ಝರಿಗಳು
ಹರಿಯುತ್ತಿರುತ್ತವೆ. ನಾವು ಒಳ್ಳೊಳ್ಳೆಯ ವಸ್ತುಗಳನ್ನು ತಯಾರಿಸಬೇಕೆಂದು ಆತ್ಮವು ತಿಳಿಯುತ್ತದೆ.
ಆತ್ಮಕ್ಕೆ ಸ್ವರ್ಗವಂತೂ ನೆನಪಿಗೆ ಬರುತ್ತದೆಯಲ್ಲವೆ.
ನೀವು ಮಕ್ಕಳಿಗೆ ಈಗ ರಿಯಲೈಜ್ ಆಗುತ್ತದೆ - ನಾವು ಎಲ್ಲಿ ಇರುತ್ತೇವೆ? ಏನೇನಾಗುತ್ತದೆ? ಈ
ಸಮಯದಲ್ಲಿ ಈ ಸ್ಮೃತಿಯಿರುತ್ತದೆ. ಚಿತ್ರಗಳನ್ನು ನೋಡಿ, ನೀವು ಎಷ್ಟು ಅದೃಷ್ಟವಂತರಾಗಿದ್ದೀರಿ!
ಅಲ್ಲಿ ದುಃಖದ ಯಾವುದೇ ಮಾತಿರುವುದಿಲ್ಲ. ನಾವಂತೂ ಸ್ವರ್ಗದಲ್ಲಿದ್ದೆವು ನಂತರ ಕೆಳಗಿಳಿದೆವು. ಈಗ
ಪುನಃ ಸ್ವರ್ಗದಲ್ಲಿ ಹೋಗಬೇಕಾಗಿದೆ ಅಂದಮೇಲೆ ಹೇಗೆ ಸ್ವರ್ಗದಲ್ಲಿ ಹೋಗುವುದು? ಹಗ್ಗವನ್ನಿಡಿದು
ಹೋಗುತ್ತೀರಾ? ನಾವಾತ್ಮಗಳು ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ನೀವೀಗ ಪುನಃ
ದೇವತೆಗಳಾಗುತ್ತಿದ್ದೀರಿ ಮತ್ತು ಅನ್ಯರನ್ನೂ ಮಾಡುತ್ತಿದ್ದೀರೆಂದು ತಂದೆಯು ಸ್ಮೃತಿ ತರಿಸಿದ್ದಾರೆ.
ಎಷ್ಟೊಂದು ಮಂದಿ ಮನೆಯಲ್ಲಿ ಕುಳಿತಿದ್ದಂತೆಯೇ ಸಾಕ್ಷಾತ್ಕಾರ ಮಾಡುತ್ತಾರೆ. ಬಂಧನದಲ್ಲಿರುವವರು
ಎಂದೂ ನೋಡಿರುವುದಿಲ್ಲ. ಆತ್ಮಕ್ಕೆ ಹೇಗೆ ಉಮ್ಮಂಗ ಬರುತ್ತದೆ! ತಮ್ಮ ಮನೆ ಸಮೀಪಿಸುತ್ತಿದ್ದಂತೆಯೇ
ಆತ್ಮಕ್ಕೆ ಖುಷಿಯಾಗುತ್ತದೆ. ತಂದೆಯು ನಮಗೆ ಜ್ಞಾನ ನೀಡಿ ಶೃಂಗರಿಸಲು ಬಂದಿದ್ದಾರೆ ಎಂದು
ತಿಳಿದುಕೊಳ್ಳುತ್ತಾರೆ. ಕೊನೆಗೊಂದು ದಿನ ಇದು ಪತ್ರಿಕೆಗಳಲ್ಲಿಯೂ ಬರುವುದು. ಈಗಂತೂ ಸ್ತುತಿ-ನಿಂದೆ,
ಮಾನ-ಅಪಮಾನ ಎಲ್ಲವೂ ಮುಂದೆ ಬರುತ್ತದೆ ಏಕೆಂದರೆ ನಿಮಗೆ ತಿಳಿದಿದೆ, ಕಲ್ಪದ ಹಿಂದೆಯೂ ಇದೇರೀತಿ
ಆಗಿತ್ತು, ಯಾವ ಕ್ಷಣವು ಕಳೆದು ಹೋಯಿತು ಅದರ ಚಿಂತೆ ಮಾಡಬಾರದು. ಪತ್ರಿಕೆಗಳಲ್ಲಿ ಕಲ್ಪದ ಮೊದಲೂ
ಇದೇರೀತಿ ಬಂದಿತ್ತು ಮತ್ತೆ ಪುರುಷಾರ್ಥ ಮಾಡಬೇಕಾಗಿದೆ. ಏನು ಏರುಪೇರುಗಳಾಯಿತೋ ಅದು ಆಗಿ ಹೋಯಿತು,
ಹೆಸರಂತೂ ಬಂದು ಬಿಟ್ಟಿತಲ್ಲವೆ? ಕೆಲವರು ಓದುತ್ತಾರೆ, ಕೆಲವರು ಓದುವುದಿಲ್ಲ, ಬಿಡುವು
ಸಿಗುವುದಿಲ್ಲ ಅನ್ಯ ಕೆಲಸಗಳಲ್ಲಿ ತೊಡಗಿ ಬಿಡುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿದೆ - ಇದು
ಬೇಹದ್ದಿನ ದೊಡ್ಡ ಡ್ರಾಮಾ ಆಗಿದೆ, ಟಿಕ್-ಟಿಕ್ ಎಂದು ನಡೆಯುತ್ತಿರುತ್ತದೆ, ಚಕ್ರವು
ಸುತ್ತುತ್ತಿರುತ್ತದೆ. ಒಂದು ಸೆಕೆಂಡಿನಲ್ಲಿ ಏನು ಕಳೆದು ಹೋಯಿತೋ ಅದು ಮತ್ತೆ 5000 ವರ್ಷಗಳ ನಂತರ
ಪುನರಾವರ್ತನೆಯಾಗುವುದು. ಏನು ಆಗಿ ಹೋಯಿತೋ ಸೆಕೆಂಡಿನ ನಂತರ ಅದು ವಿಚಾರದಲ್ಲಿ ಬರುತ್ತದೆ. ಈ
ತಪ್ಪು ಆಗಿ ಹೋಯಿತು, ಡ್ರಾಮಾದಲ್ಲಿ ನಿಗಧಿ ಆಯಿತು ಎಂದು ಆದರೆ ಕಲ್ಪದ ಹಿಂದೆಯೂ ಇದು ತಪ್ಪು
ಆಗಿತ್ತು, ಅದು ಕಳೆದು ಹೋಯಿತು. ಇನ್ನು ಮುಂದೆ ಆ ರೀತಿ ಮಾಡಬಾರದು. ಪುರುಷಾರ್ಥ ಮಾಡುತ್ತಾ ಇರಿ.
ಪದೇ-ಪದೇ ಅದೇ ತಪ್ಪು ಮಾಡುವುದು ಒಳ್ಳೆಯದಲ್ಲ. ಈ ಕರ್ಮವು ಒಳ್ಳೆಯದಲ್ಲ. ನಮ್ಮಿಂದ ಈ ಕೆಟ್ಟ
ಕೆಲಸವಾಯಿತೆಂದು ಮನಸ್ಸು ತಿನ್ನುತ್ತಿರುತ್ತದೆ. ತಂದೆಯು ತಿಳುವಳಿಕೆ ನೀಡುತ್ತಾರೆ - ಮಕ್ಕಳೇ, ಈ
ರೀತಿ ಮಾಡಬೇಡಿ, ಇದರಿಂದ ಅನ್ಯರಿಗೆ ದುಃಖವಾಗುವುದು ಎಂದು ಹೇಳಿ ತಂದೆಯು ಅದನ್ನು ನಿಷೇಧಿಸುತ್ತಾರೆ.
ತಂದೆಯು ತಿಳಿಸಿ ಬಿಡುತ್ತಾರೆ - ಕೇಳದೇ ಯಾವುದೇ ವಸ್ತುವನ್ನು ತೆಗೆದುಕೊಳ್ಳುವುದಕ್ಕೆ ಕಳ್ಳತನ
ಎಂದು ಹೇಳಲಾಗುತ್ತದೆ. ಆದ್ದರಿಂದ ಇಂತಹ ಕೆಲಸ ಮಾಡಬೇಡಿ. ಕಟುವಾಗಿ ಮಾತನಾಡಬೇಡಿ. ಇತ್ತೀಚಿನ
ಪ್ರಪಂಚವು ನೋಡಿ ಹೇಗಿದೆ - ಯಾವುದೇ ನೌಕರನ ಮೇಲೆ ಕೋಪಿಸಿಕೊಂಡರೆ ಅವರೂ ಸಹ ಶತೃತ್ವ
ಮಾಡತೊಡಗುತ್ತಾರೆ. ಸತ್ಯಯುಗದಲ್ಲಂತೂ ಹಸು-ಹುಲಿ ಪರಸ್ಪರ ಕ್ಷೀರ ಖಂಡವಾಗಿರುತ್ತವೆ. ಸತ್ಯಯುಗದಲ್ಲಿ
ಎಲ್ಲಾ ಮನುಷ್ಯಾತ್ಮರು ಪರಸ್ಪರ ಕ್ಷೀರ ಖಂಡವಾಗಿರುತ್ತಾರೆ ಆದರೆ ಈ ರಾವಣನ ಪ್ರಪಂಚದಲ್ಲಿ ಎಲ್ಲಾ
ಮನುಷ್ಯರು ಉಪ್ಪು ನೀರಿನಂತೆ ಇದ್ದಾರೆ. ತಂದೆ-ಮಕ್ಕಳೂ ಸಹ ಉಪ್ಪು ನೀರಾಗಿ ವರ್ತಿಸುತ್ತಾರೆ. ಕಾಮ
ಮಹಾಶತ್ರುವಲ್ಲವೆ. ಕಾಮ ಕಟಾರಿಯನ್ನು ನಡೆಸಿ ಒಬ್ಬರು ಇನ್ನೊಬ್ಬರಿಗೆ ದುಃಖವನ್ನು ಕೊಡುತ್ತಾರೆ. ಈ
ಇಡೀ ಪ್ರಪಂಚವೇ ಉಪ್ಪು ನೀರಾಗಿದೆ. ಸತ್ಯಯುಗೀ ಪ್ರಪಂಚವು ಕ್ಷೀರ ಖಂಡವಾಗಿದೆ, ಈ ಮಾತುಗಳು
ಪ್ರಪಂಚದವರಿಗೇನು ಗೊತ್ತು? ಮನುಷ್ಯರಂತೂ ಸ್ವರ್ಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ.
ಆದ್ದರಿಂದ ಯಾವುದೇ ಮಾತು ಬುದ್ಧಿಯಲ್ಲಿ ಬರಲು ಸಾಧ್ಯವಿಲ್ಲ. ಯಾರು ದೇವತೆಗಳಾಗಿದ್ದರೋ ಅವರಿಗೇ
ಸ್ಮೃತಿಗೆ ಬರುತ್ತದೆ. ನೀವು ತಿಳಿದುಕೊಂಡಿದ್ದೀರಿ - ಈ ದೇವತೆಗಳು ಸತ್ಯಯುಗದಲ್ಲಿದ್ದರು, ಯಾರು
84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರೇ ಬಂದು ಪುನಃ ಓದುತ್ತಾರೆ ಮತ್ತು ಮುಳ್ಳುಗಳಿಂದ
ಹೂಗಳಾಗುತ್ತಾರೆ. ತಂದೆಯದು ಇದು ಒಂದೇ ಯುನಿವರ್ಸಿಟಿಯಾಗಿದೆ. ಇದರ ಶಾಖೆಗಳು
ಸ್ಥಾಪನೆಯಾಗುತ್ತಿರುತ್ತವೆ. ಯಾವಾಗ ಖುದನು ಬರುವರೋ ಆಗ ಅವರ ಸಹಯೋಗಿಗಳಾಗುತ್ತೀರಿ. ನಿಮ್ಮ ಮೂಲಕವೇ
ಸ್ವಯಂ ಖುದನೇ ರಾಜಧಾನಿ ಸ್ಥಾಪನೆ ಮಾಡುತ್ತಾರೆ. ನಾವು ಖುದನ ಸಹಯೋಗಿಗಳಾಗುತ್ತೇವೆಂದು ನೀವು
ತಿಳಿದುಕೊಂಡಿದ್ದೀರಿ. ಆ ಮನುಷ್ಯರಾದರೆ ಸ್ಥೂಲ ಸೇವೆ ಮಾಡುತ್ತಾರೆ, ಇದು ಆತ್ಮಿಕ ಸೇವೆಯಾಗಿದೆ.
ತಂದೆಯು ನಾವಾತ್ಮಗಳಿಗೆ ಆತ್ಮಿಕ ಸೇವೆಯನ್ನು ಕಲಿಸುತ್ತಿದ್ದಾರೆ ಏಕೆಂದರೆ ಆತ್ಮವೇ ತಮೋಪ್ರಧಾನವಾಗಿ
ಬಿಟ್ಟಿದೆ. ಪುನಃ ತಂದೆಯು ಸತೋಪ್ರಧಾನರನ್ನಾಗಿ ಮಾಡುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ -
ನನ್ನೊಬ್ಬನನ್ನೇ ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಇದು ಯೋಗಾಗ್ನಿಯಾಗಿದೆ. ಭಾರತದ
ಪ್ರಾಚೀನ ಯೋಗ ಎಂದು ಗಾಯನವಿದೆಯಲ್ಲವೆ. ಕೃತಕ ಯೋಗಗಳಂತೂ ಬಹಳಷ್ಟಾಗಿ ಬಿಟ್ಟಿವೆ. ಆದ್ದರಿಂದ
ತಂದೆಯು ತಿಳಿಸುತ್ತಾರೆ - ನೆನಪಿನ ಯಾತ್ರೆಯೆಂದು ಸರಿಯಾಗಿದೆ, ಶಿವ ತಂದೆಯನ್ನು ನೆನಪು
ಮಾಡುತ್ತಾ-ಮಾಡುತ್ತಾ ನೀವು ಶಿವ ಪುರಿಯಲ್ಲಿ ಹೊರಟು ಹೋಗುತ್ತೀರಿ. ಶಾಂತಿಧಾಮವು ಶಿವ ಪುರಿಯಾಗಿದೆ,
ಸತ್ಯಯುಗವು ವಿಷ್ಣು ಪುರಿಯಾಗಿದೆ, ಇದು ರಾವಣ ಪುರಿಯಾಗಿದೆ. ವಿಷ್ಣುಪುರಿಯ ನಂತರ
ರಾಮಪುರಿಯಾಗುವುದು, ಸೂರ್ಯವಂಶಿಯರ ನಂತರ ಚಂದ್ರವಂಶಿಯರು ಬರುವರು. ಇದು ಸಾಮಾನ್ಯ ಮಾತಾಗಿದೆ.
ಅರ್ಧಕಲ್ಪ ಸತ್ಯ, ತ್ರೇತಾಯುಗ, ಅರ್ಧಕಲ್ಪ ದ್ವಾಪರ-ಕಲಿಯುಗ, ನೀವೀಗ ಸಂಗಮಯುಗದಲ್ಲಿದ್ದೀರಿ.
ಇದನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ. ಯಾರು ಚೆನ್ನಾಗಿ ಧಾರಣೆ ಮಾಡುವರೋ ಅವರು ಅನ್ಯರಿಗೂ
ತಿಳಿಸುತ್ತಾರೆ, ನಾವು ಪುರುಷೋತ್ತಮ ಸಂಗಮಯುಗದಲ್ಲಿದ್ದೇವೆ, ಇದು ಬುದ್ಧಿಯಲ್ಲಿ ನೆನಪಿದ್ದರೂ ಸಹ
ಇಡೀ ನಾಟಕವು ಬುದ್ಧಿಯಲ್ಲಿ ಬಂದು ಬಿಡುವುದು. ಆದರೆ ಮನುಷ್ಯರು ಕಲಿಯುಗೀ ದೇಹದ ಸಂಬಂಧಿಗಳು
ಮೊದಲಾದವರನ್ನು ನೆನಪು ಮಾಡುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು
ಒಬ್ಬತಂದೆಯನ್ನೇ ನೆನಪು ಮಾಡಬೇಕಾಗಿದೆ. ಸರ್ವರ ಸದ್ಗತಿದಾತ, ರಾಜಯೋಗವನ್ನು ಕಲಿಸುವವರು ಒಬ್ಬರೇ
ಆಗಿದ್ದಾರೆ. ಆದ್ದರಿಂದ ತಂದೆಯು ತಿಳಿಸಿದ್ದಾರೆ – ಶಿವ ತಂದೆಯ ಜಯಂತಿಯೇ ಇಡೀ ಪ್ರಪಂಚವನ್ನು
ಪರಿವರ್ತಿಸುತ್ತದೆ, ನಾವೀಗ ಪುರುಷೋತ್ತಮ ಸಂಗಮಯುಗದಲ್ಲಿದ್ದೇವೆಂದು ನೀವು ಬ್ರಾಹ್ಮಣರೇ
ತಿಳಿದುಕೊಂಡಿದ್ದೀರಿ. ಯಾರು ಬ್ರಾಹ್ಮಣರಾಗಿದ್ದೀರೋ ಅವರಿಗೇ ರಚಯಿತ ಮತ್ತು ರಚನೆಯ ಜ್ಞಾನವು
ಬುದ್ಧಿಯಲ್ಲಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಅನ್ಯರಿಗೆ
ದುಃಖವಾಗುವಂತಹ ಯಾವುದೇ ಕರ್ಮ ಮಾಡಬಾರದು. ಕಟುವಾಗಿ ಮಾತನಾಡಬಾರದು, ಬಹಳ-ಬಹಳ ಕ್ಷೀರ
ಖಂಡವಾಗಿರಬೇಕಾಗಿದೆ.
2. ಯಾವುದೇ ದೇಹಧಾರಿಯ ಮಹಿಮೆ ಮಾಡಬಾರದು. ಬುದ್ಧಿಯಲ್ಲಿರಲಿ - ನಮಗೆ ಶಿವ ತಂದೆಯು ಓದಿಸುತ್ತಾರೆ,
ಅವರೊಬ್ಬರ ಮಹಿಮೆಯನ್ನೇ ಮಾಡಬೇಕಾಗಿದೆ. ಆತ್ಮಿಕ ಸೇವಾಧಾರಿಗಳಾಗಬೇಕಾಗಿದೆ.
ವರದಾನ:
ಎಲ್ಲರ ಗುಣ
ನೋಡುತ್ತಾ ಸ್ವಯಂನಲ್ಲಿ ತಂದೆಯ ಗುಣಗಳನ್ನು ಧಾರಣೆ ಮಾಡುವಂತಹ ಗುಣಮೂರ್ತಿ ಭವ.
ಸಂಗಮಯುಗದಲ್ಲಿ ಯಾವ
ಮಕ್ಕಳು ಗುಣಗಳ ಮಾಲೆಯನ್ನು ಧಾರಣೆ ಮಾಡುತ್ತಾರೆ, ಅವರೇ ವಿಜಯ ಮಾಲೆಯಲ್ಲಿ ಬರುತ್ತಾರೆ. ಆದ್ದರಿಂದ
ಹೋಲಿ ಹಂಸಗಳಾಗಿ ಸರ್ವರಲ್ಲಿರುವ ಗುಣಗಳನ್ನು ನೋಡಿ ಮತ್ತು ಒಬ್ಬ ತಂದೆಯಲ್ಲಿರುವ ಗುಣಗಳನ್ನು
ಸ್ವಯಂನಲ್ಲಿ ಧಾರಣೆ ಮಾಡಿ, ಈ ಗುಣಮಾಲೆ ಎಲ್ಲರ ಕೊರಳಿನಲ್ಲಿ ಧರಿಸಿರಲಿ. ಯಾರು ಎಷ್ಟು ತಂದೆಯ
ಗುಣವನ್ನು ಸ್ವಯಂನಲ್ಲಿ ಧಾರಣೆ ಮಾಡುತ್ತಾರೆ ಅವರ ಕೊರಳಿನಲ್ಲಿ ಅಷ್ಟೇ ದೊಡ್ಡ ಮಾಲೆ ಇರುತ್ತದೆ.
ಗುಣಮಾಲೆಯನ್ನು ಸ್ಮರಣೆ ಮಾಡುವುದರಿಂದ ಸ್ವಯಂ ಸಹ ಗುಣಮೂರ್ತಿಯಾಗಿ ಬಿಡುವಿರಿ. ಇದರ ನೆನಪಾರ್ಥವೇ
ದೇವತೆಗಳು ಮತ್ತು ಶಕ್ತಿಯರ ಕೊರಳಿನಲ್ಲಿ ಮಾಲೆಯನ್ನು ತೋರಿಸುತ್ತಾರೆ.
ಸ್ಲೋಗನ್:
ಸಾಕ್ಷೀತನದ ಸ್ಥಿತಿಯೇ
ಯಥಾರ್ಥ ನಿರ್ಣಯದ ಸಿಂಹಾಸನವಾಗಿದೆ.