21/12/20 ಪ್ರಾತಃಮುರುಳಿ     ಓಂಶಾಂತಿ      ಬಾಪ್ದಾದಾ     ಮಧುಬನ


ಮಧುರ ಮಕ್ಕಳೇ -
ನೀವೀಗ ಪವಿತ್ರತೆಯ ಸಾಗರ ತಂದೆಯ ಮಡಿಲಿಗೆ ಬಂದಿದ್ದೀರಿ, ನೀವು ಮನಸ್ಸಿನಲ್ಲಿಯೂ ಪವಿತ್ರರಾಗಬೇಕಾಗಿದೆ.

ಪ್ರಶ್ನೆ:
ಸಂಪೂರ್ಣ ಪವಿತ್ರ ಮಕ್ಕಳ ನಶೆ ಹಾಗೂ ಚಿಹ್ನೆಗಳೇನು?

ಉತ್ತರ:
ಅವರಿಗೆ ನಶೆಯಿರುವುದು - ನಾವು ಪವಿತ್ರತೆಯ ಸಾಗರ ತಂದೆಯ ಮಡಿಲನ್ನು ತೆಗೆದುಕೊಳ್ಳುತ್ತೇವೆ. ನಾವು ಪವಿತ್ರ ದೇವಿ-ದೇವತೆಗಳಾಗುತ್ತೇವೆ. ಪವಿತ್ರ ಮಕ್ಕಳ ಮನಸ್ಸಿನಲ್ಲಿಯೂ ಕೆಟ್ಟ ಸಂಕಲ್ಪಗಳು ಬರಲು ಸಾಧ್ಯವಿಲ್ಲ. ಅವರು ಸುಗಂಧ ಭರಿತ ಹೂಗಳಾಗಿರುತ್ತಾರೆ, ಅವರಿಂದ ಯಾವುದೇ ಉಲ್ಟಾ ಕರ್ಮವಾಗಲು ಸಾಧ್ಯವಿಲ್ಲ. ಅವರು ಅಂತರ್ಮುಖಿಯಾಗಿ ತನ್ನ ಪರಿಶೀಲನೆ ಮಾಡಿಕೊಳ್ಳುತ್ತಾರೆ - ನಮ್ಮಿಂದ ಎಲ್ಲರಿಗೆ ಪವಿತ್ರತೆಯ ಸುವಾಸನೆಯು ಬರುತ್ತದೆಯೇ? ನನ್ನ ಕಣ್ಣುಗಳು ಯಾರಲ್ಲಿಯೂ ಮುಳ್ಳುಗುತ್ತಿಲ್ಲವೆ?

ಗೀತೆ:
ಸತ್ತರೂ ನಿನ್ನ ಮಡಿಲಿನಲ್ಲಿಯೇ, ಬದುಕಿದರೂ ನಿನ್ನ ಮಡಿಲಿನಲ್ಲಿಯೇ

ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ ಮತ್ತೆ ಅದರ ಅರ್ಥವನ್ನೂ ಸಹ ಆಂತರ್ಯದಲ್ಲಿ ವಿಚಾರ ಸಾಗರ ಮಂಥನ ಮಾಡಿ ತೆಗೆಯಬೇಕು. ಸತ್ತರೂ ನಿನ್ನ ಮಡಿಲಲ್ಲಿಯೇ ಎಂದು ಯಾರು ಹೇಳಿದರು? ಆತ್ಮವು ಹೇಳಿತು ಏಕೆಂದರೆ ಆತ್ಮವೇ ಪತಿತನಾಗಿದೆ. ಪಾವನ ಆತ್ಮನೆಂದು ಅಂತ್ಯದಲ್ಲಿಯೇ ಹೇಳಲಾಗುವುದು ಅಥವಾ ಯಾವಾಗ ಶರೀರವು ಪಾವನವಾದದ್ದು ಸಿಗುವುದೋ ಆಗಲೇ ಪಾವನರೆಂದು ಹೇಳಲಾಗುವುದು. ಈಗಂತೂ ಪುರುಷಾರ್ಥಿಗಳಾಗಿದ್ದೀರಿ, ಇದೂ ಸಹ ನಿಮಗೆ ತಿಳಿದಿದೆ - ತಂದೆಯ ಬಳಿ ಬಂದು ಜೀವಿಸಿದ್ದಂತೆಯೇ ಸಾಯುತ್ತೀರಿ. ಒಬ್ಬ ತಂದೆಯನ್ನು ಬಿಟ್ಟು ಇನ್ನೊಬ್ಬ ತಂದೆಯ ಬಳಿ ಬರುವುದು ಎಂದರೆ ಒಂದು ಕಡೆಯಿಂದ ಸತ್ತು ಇನ್ನೊಂದು ಕಡೆ ಬಂದು ಬದುಕುವುದಾಗಿದೆ. ಹೇಗೆ ಲೌಕಿಕ ತಂದೆಯ ಮಗುವು ಶರೀರ ಬಿಟ್ಟರೆ ಮತ್ತೊಬ್ಬ ತಂದೆಯ ಬಳಿ ಹೋಗಿ ಜನ್ಮ ಪಡೆಯುತ್ತಾರೆ. ಇಲ್ಲಿಯೂ ಹಾಗೆಯೇ. ಕಲಿಯುಗದಿಂದ ಸತ್ತು ಅತಿ ಪವಿತ್ರ ತಂದೆಯ ಮಡಿಲಿನಲ್ಲಿ ಹೋಗುತ್ತೀರಿ. ಪವಿತ್ರತೆಯ ಸಾಗರನು ಯಾರು? (ತಂದೆ) ಮತ್ತು ಪವಿತ್ರರು ಯಾರು? (ಸನ್ಯಾಸಿಗಳು). ಹಾ! ಈ ಸನ್ಯಾಸಿಗಳು ಮೊದಲಾದವರಿಗೂ ಪವಿತ್ರರೆಂದು ಹೇಳಲಾಗುತ್ತದೆ. ನಿಮಗೂ ಹಾಗೂ ಸನ್ಯಾಸಿಗಳಲ್ಲಿ ಅಂತರವಿದೆ. ಅವರು ಪವಿತ್ರರಾಗುತ್ತಾರೆ ಆದರೆ ಜನ್ಮವನ್ನಂತೂ ಮತ್ತೆ ಪತಿತರಿಂದಲೇ ತೆಗೆದುಕೊಳ್ಳುತ್ತಾರಲ್ಲವೆ. ನೀವು ಅತಿ ಪವಿತ್ರರಾಗುತ್ತೀರಿ. ನಿಮ್ಮನ್ನು ಪವಿತ್ರರನ್ನಾಗಿ ಮಾಡುವವರು ಪವಿತ್ರತೆಯ ಸಾಗರ ತಂದೆಯಾಗಿದ್ದಾರೆ. ಅವರಂತೂ ಮನೆ-ಮಠವನ್ನು ಬಿಟ್ಟು ಪವಿತ್ರರಾಗುತ್ತಾರೆ. ಆತ್ಮವು ಪವಿತ್ರವಾಗುತ್ತದೆಯಲ್ಲವೆ. ನೀವು ಸ್ವರ್ಗದಲ್ಲಿ ದೇವಿ-ದೇವತೆಗಳಾಗಿದ್ದಾಗ ನೀವು ಬಹಳ ಪವಿತ್ರರಾಗಿರುತ್ತೀರಿ. ನಿಮ್ಮದು ಬೇಹದ್ದಿನ ಸನ್ಯಾಸವಾಗಿದೆ. ಅವರದು ಹದ್ದಿನ ಸನ್ಯಾಸವಾಗಿದೆ. ಅವರು ಕೇವಲ ಪವಿತ್ರರಾಗಿದ್ದಾರೆ, ನೀವು ಅತಿ ಪವಿತ್ರರಾಗುತ್ತೀರಿ. ನಾವು ಹೊಸ ಪ್ರಪಂಚದಲ್ಲಿ ಹೋಗುತ್ತೇವೆ ಬುದ್ಧಿಯೂ ಹೇಳುತ್ತದೆ. ಆ ಸನ್ಯಾಸಿಗಳಂತು ರಜೋದಲ್ಲಿ ಬರುತ್ತಾರೆ ಅಂದಮೇಲೆ ಅಂತರವಾಯಿತಲ್ಲವೆ. ರಜೋ ಎಲ್ಲಿ, ಸತೋಪ್ರಧಾನರೆಲ್ಲಿ! ನೀವು ಪರಮ ಪವಿತ್ರ ತಂದೆಯ ಮೂಲಕ ಅತಿ ಪವಿತ್ರರಾಗುತ್ತೀರಿ. ಅವರು ಜ್ಞಾನ ಸಾಗರನೂ ಆಗಿದ್ದಾರೆ, ಪ್ರೇಮ ಸಾಗರನೂ ಆಗಿದ್ದಾರೆ. ಆಂಗ್ಲ ಭಾಷೆಯಲ್ಲಿ ಓಷನ್ ಆಫ್ ನಾಲೆಡ್ಜ್, ಓಷನ್ ಆಫ್ ಲವ್ ಎಂದು ಹೇಳುತ್ತಾರೆ. ನಿಮ್ಮನ್ನು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ! ಇಂತಹ ಸರ್ವ ಶ್ರೇಷ್ಠ ಪರಮ ಪವಿತ್ರ ತಂದೆಯನ್ನೇ ಕರೆಯುತ್ತಾರೆ - ಬಂದು ನಾವು ಪತಿತರನ್ನು ಪಾವನ ಮಾಡಿ, ಪತಿತ ಪ್ರಪಂಚದಲ್ಲಿ ಬಂದು ನಮ್ಮನ್ನು ಅತಿ ಪವಿತ್ರರನ್ನಾಗಿ ಮಾಡಿ ಎಂದು. ಅಂದಾಗ ಮಕ್ಕಳಿಗೆ ಇಷ್ಟೊಂದು ನಶೆಯಿರಬೇಕು - ನಮಗೆ ಯಾರು ಓದಿಸುತ್ತಾರೆ, ನಾವು ಏನಾಗುತ್ತೇವೆ? ದೈವೀ ಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ಬಾಬಾ, ನಮಗೆ ಮಾಯೆಯು ಬಹಳಷ್ಟು ಬಿರುಗಾಳಿಗಳನ್ನು ತರುತ್ತದೆ, ನಮ್ಮನ್ನು ಮನಸ್ಸಿನಿಂದ ಶುದ್ಧರಾಗಲು ಬಿಡುವುದಿಲ್ಲ. ನಾವು ಈಗ ಅತಿ ಪವಿತ್ರರಾಗಬೇಕು ಅಂದಮೇಲೆ ಇಂತಹ ಕೆಟ್ಟ ಸಂಕಲ್ಪಗಳು ಏಕೆ ಬರುತ್ತವೆ ಎಂದು ಕೆಲವು ಮಕ್ಕಳು ಬರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನೀವೀಗ ಸಂಪೂರ್ಣ ಅಪವಿತ್ರರಾಗಿ ಬಿಟ್ಟಿದ್ದೀರಿ. ಬಹಳ ಜನ್ಮಗಳ ಅಂತಿಮದಲ್ಲಿ ಈಗ ತಂದೆಯು ಬಂದು ನಿಮಗೆ ಜೋರಾಗಿ ಓದಿಸುತ್ತಾರೆ ಅಂದಮೇಲೆ ಮಕ್ಕಳ ಬುದ್ಧಿಯಲ್ಲಿ ಈ ನಶೆಯಿರಬೇಕು - ನಾವು ಏನಾಗುತ್ತಿದ್ದೇವೆ! ಈ ಲಕ್ಷ್ಮೀ-ನಾರಾಯಣರನ್ನು ಈ ರೀತಿಯಾಗಿ ಯಾರು ಮಾಡಿದರು? ಭಾರತವು ಸ್ವರ್ಗವಾಗಿತ್ತಲ್ಲವೆ. ಈ ಸಮಯದ ಭಾರತವು ತಮೋಪ್ರಧಾನ, ಭ್ರಷ್ಟಾಚಾರಿಯಾಗಿದೆ. ಪುನಃ ನಾನು ಇದನ್ನು ಪವಿತ್ರ ಭಾರತವನ್ನಾಗಿ ಮಾಡುತ್ತೇನೆ. ಮಾಡುವವರಂತೂ ಅವಶ್ಯವಾಗಿ ಬೇಕಲ್ಲವೆ. ತಮ್ಮಲ್ಲಿಯೂ ಆ ನಶೆ ಬರಬೇಕು - ನಾವು ದೇವತೆಗಳಾಗಬೇಕಾಗಿದೆ, ಅದಕ್ಕಾಗಿ ಗುಣಗಳೂ ಅದೇ ರೀತಿ ಇರಬೇಕು. ಒಮ್ಮೆಲೆ ಕೆಳಗಿನಿಂದ ಮೇಲೇರಿದ್ದೀರಿ. ಏಣಿಯ ಚಿತ್ರದಲ್ಲಿಯೂ ಉತ್ಥಾನ ಮತ್ತು ಪಥನವೆಂದು ಬರೆಯಲ್ಪಟ್ಟಿದೆಯಲ್ಲವೆ. ಯಾರು ಕೆಳಗೆ ಬಿದ್ದಿದ್ದಾರೆಯೋ ಅವರು ತಮ್ಮನ್ನು ಅತಿ ಪವಿತ್ರರೆಂದು ಹೇಗೆ ಕರೆಸಿಕೊಳ್ಳುವರು? ಪರಮ ಪವಿತ್ರ ತಂದೆಯೇ ಬಂದು ಮಕ್ಕಳನ್ನು ಪವಿತ್ರರನ್ನಾಗಿ ಮಾಡುತ್ತಾರೆ. ನೀವಿಲ್ಲಿ ವಿಶ್ವದ ಮಾಲೀಕರು, ಅತಿ ಪವಿತ್ರರಾಗಲು ಬಂದಿದ್ದೀರಿ ಅಂದಾಗ ಎಷ್ಟೊಂದು ನಶೆಯಿರಬೇಕು! ತಂದೆಯು ನಮ್ಮನ್ನು ಎಷ್ಟು ಶ್ರೇಷ್ಠರನ್ನಾಗಿ ಮಾಡಲು ಬಂದಿದ್ದಾರೆ! ಮನಸ್ಸಾ-ವಾಚಾ-ಕರ್ಮಣಾ ಪವಿತ್ರರಾಗಬೇಕು. ಸುಗಂಧ ಭರಿತ ಹೂಗಳಾಗಬೇಕಾಗಿದೆ. ಸತ್ಯಯುಗಕ್ಕೆ ಹೂದೋಟವೆಂದು ಕರೆಯಲಾಗುತ್ತದೆ ಅಂದಮೇಲೆ ನಿಮ್ಮಲ್ಲಿ ಯಾವುದೇ ದುರ್ಗಂಧವಿರಬಾರದು. ದೇಹಾಭಿಮಾನಕ್ಕೆ ದುರ್ಗಂಧವೆಂದು ಹೇಳಲಾಗುತ್ತದೆ. ಯಾರಲ್ಲಿಯೂ ಕುದೃಷ್ಟಿಯು ಹೋಗಬಾರದು. ಮನಸ್ಸು ತಿನ್ನುವಂತಹ ಮತ್ತು ಅದು ಖಾತೆಯಾಗುವಂತಹ ಉಲ್ಟಾ ಕರ್ಮವನ್ನು ಮಾಡಬಾರದು. ನೀವು 21 ಜನ್ಮಗಳಿಗಾಗಿ ಹಣ ಸಂಪಾದಿಸುತ್ತೀರಿ. ನಿಮಗೆ ತಿಳಿದಿದೆ - ನಾವು ಬಹಳ ಸಂಪತ್ತಿವಂತರಾಗುತ್ತಿದ್ದೇವೆ. ನಾವು ದೈವೀ ಗುಣಗಳಿಂದ ಸಂಪನ್ನರಾಗಿದ್ದೇವೆಯೇ ಎಂದು ತಮ್ಮನ್ನು ನೋಡಿಕೊಳ್ಳಿ. ಹೇಗೆ ತಂದೆಯು ಹೇಳುತ್ತಾರೆಯೋ ಹಾಗೆ ನಾವು ಪುರುಷಾರ್ಥ ಮಾಡುತ್ತೇವೆಯೇ? ನಿಮ್ಮ ಗುರಿ-ಧ್ಯೇಯವು ನೋಡಿ, ಹೇಗಿದೆ! ನೀವೆಲ್ಲಿ ಸನ್ಯಾಸಿಗಳೆಲ್ಲಿ!

ನೀವು ಮಕ್ಕಳಿಗೆ ನಶೆಯಿರಬೇಕು - ನಾವು ಯಾರ ಮಡಿಲಿಗೆ ಬಂದಿದ್ದೇವೆ! ನಮ್ಮನ್ನು ಎಂತಹವರನ್ನಾಗಿ ಮಾಡುತ್ತಾರೆ? ಅಂತರ್ಮುಖಿಯಾಗಿ ನೋಡಿಕೊಳ್ಳಿ - ನಾವು ಎಲ್ಲಿಯವರೆಗೆ ಯೋಗ್ಯರಾಗಿದ್ದೇವೆ? ನಾವು ಎಷ್ಟು ಪವಿತ್ರರಾಗಬೇಕು, ನಮ್ಮಿಂದ ಎಲ್ಲರಿಗೆ ಜ್ಞಾನದ ಸುಗಂಧವು ಬರಬೇಕು. ನೀವು ಅನೇಕರಿಗೆ ಸುಗಂಧ ಬೀರುತ್ತೀರಲ್ಲವೆ. ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತೀರಿ. ಮೊದಲಿಗೆ ನಶೆಯಿರಬೇಕು - ನಮಗೆ ಓದಿಸುವವರು ಯಾರು? ಅವರಂತೂ ಎಲ್ಲರೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ. ಜ್ಞಾನ ಮಾರ್ಗದ ಗುರುಗಳು ಒಬ್ಬ ಪರಮಪಿತ ಪರಮಾತ್ಮನ ಹೊರತು ಮತ್ತ್ಯಾರೂ ಆಗಲು ಸಾಧ್ಯವಿಲ್ಲ. ಉಳಿದೆಲ್ಲರೂ ಭಕ್ತಿಮಾರ್ಗದವರಾಗಿದ್ದಾರೆ. ಭಕ್ತಿಯಿರುವುದೇ ಕಲಿಯುಗದಲ್ಲಿ ಏಕೆಂದರೆ ರಾವಣನ ಪ್ರವೇಶತೆಯಾಗುತ್ತದೆ. ಇದೂ ಸಹ ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಈಗ ನಿಮಗೆ ತಿಳಿದಿದೆ - ಸತ್ಯಯುಗದಲ್ಲಿ ನಾವು 16 ಕಲಾ ಸಂಪೂರ್ಣರಾಗಿದ್ದಿರಿ. ಮತ್ತೆ ಒಂದು ದಿನವು ಕಳೆದರೂ ಸಹ ಅದಕ್ಕೆ ಪೂರ್ಣ ಹುಣ್ಣಿಮೆಯೆಂದು ಹೇಳುವುದಿಲ್ಲ. ಇದೂ ಸಹ ಹಾಗೆಯೇ. ಸ್ವಲ್ಪ-ಸ್ವಲ್ಪವಾಗಿಯೇ ಹೇನಿಯ ತರಹ ಚಕ್ರವು ಸುತ್ತುತ್ತಿರುತ್ತದೆ. ನೀವೀಗ 16 ಕಲಾ ಸಂಪೂರ್ಣರಾಗಬೇಕಾಗಿದೆ ಅದೂ ಅರ್ಧಕಲ್ಪಕ್ಕಾಗಿ. ನಂತರ ಕಲೆಗಳು ಕಡಿಮೆಯಾಗುತ್ತವೆ. ಈ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ ಅಂದಾಗ ಮಕ್ಕಳಿಗೆ ಎಷ್ಟೊಂದು ನಶೆಯಿರಬೇಕು. ಆದರೆ ನಮಗೆ ಓದಿಸುವವರು ಯಾರು ಎಂಬುದೂ ಸಹ ಅನೇಕ ಮಕ್ಕಳ ಬುದ್ಧಿಯಲ್ಲಿ ಬರುವುದೇ ಇಲ್ಲ. ಜ್ಞಾನ ಸಾಗರ ತಂದೆಯು ನಿಮಗೆ ಓದಿಸುತ್ತಾರೆ. ಮಕ್ಕಳೇ, ನಮಸ್ತೆ ಎಂದು ಹೇಳುತ್ತಾರೆ. ನೀವು ಬ್ರಹ್ಮಾಂಡದ ಮಾಲೀಕರಾಗುತ್ತೀರಿ. ಮತ್ತೆ ನೀವು ವಿಶ್ವದ ಮಾಲೀಕರೂ ಆಗುತ್ತೀರಿ, ನಿಮ್ಮ ಉಮ್ಮಂಗವನ್ನು ಹೆಚ್ಚಿಸಲು ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ನನಗಿಂತಲೂ ಶ್ರೇಷ್ಠರಾಗುತ್ತೀರಿ. ನಾನು ವಿಶ್ವದ ಮಾಲೀಕನಾಗುವುದಿಲ್ಲ. ನಿಮ್ಮನ್ನು ನನಗಿಂತಲೂ ಹೆಚ್ಚು ಮಹಿಮಾ ಯೋಗ್ಯರನ್ನಾಗಿ ಮಾಡುತ್ತೇನೆ. ಮಕ್ಕಳು ತಂದೆಗಿಂತ ಉನ್ನತ ಪದವಿಯನ್ನು ಪಡೆಯುತ್ತಾರೆಂದರೆ ಇವರು ಓದಿ ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆಂದು ತಂದೆಯು ತಿಳಿದುಕೊಳ್ಳುತ್ತಾರಲ್ಲವೆ. ಹಾಗೆಯೇ ತಂದೆಯೂ ಸಹ ಹೇಳುತ್ತಾರೆ - ನಾನು ನಿಮಗೆ ಓದಿಸುತ್ತೇನೆ, ಈಗ ಎಷ್ಟು ತಮ್ಮ ಪದವಿಯನ್ನು ಹೆಚ್ಚಿಸಿಕೊಳ್ಳಬೇಕೋ ಅಷ್ಟು ಪುರುಷಾರ್ಥ ಮಾಡಿ. ತಂದೆಯು ನಮಗೆ ಓದಿಸುತ್ತಾರೆಂದು ಮೊದಲು ನಶೆಯಿರಬೇಕು. ತಂದೆಯಂತೂ ಎಂದಿಗೂ ಬಂದು ಮಾತನಾಡುವುದಿಲ್ಲ. ಅವರು ಇವರಲ್ಲಿ (ಬ್ರಹ್ಮಾ) ಇದ್ದೇ ಇರುತ್ತಾರೆ. ನೀವು ಅವರ ಮಕ್ಕಳಾಗಿದ್ದೀರಲ್ಲವೆ. ಈ ರಥವು ಅವರದಾಗಿದೆ ಅಂದಾಗ ಪರಮ ಪವಿತ್ರ ತಂದೆಯು ಬಂದಿದ್ದಾರೆ. ನಿಮ್ಮನ್ನು ಪಾವನರನ್ನಾಗಿ ಮಾಡುತ್ತಾರೆ. ಮತ್ತೆ ನೀವು ಅನ್ಯರನ್ನೂ ಪಾವನರನ್ನಾಗಿ ಮಾಡಿ ನಾನು ನಿವೃತ್ತನಾಗುತ್ತೇನೆ. ಯಾವಾಗ ನೀವು ಬಹಳ ಪವಿತ್ರರಾಗುತ್ತೀರೋ ಆಗ ಇಲ್ಲಿಗೆ ಯಾರೂ ಅಪವಿತ್ರರು ಬರಲು ಸಾಧ್ಯವಿಲ್ಲ. ಇದು ಪರಮ ಪವಿತ್ರ ತಂದೆಯ ಚರ್ಚ್ ಆಗಿದೆ. ಆ ಚರ್ಚ್ನಲ್ಲಂತೂ ವಿಕಾರಿಗಳೆಲ್ಲರೂ ಹೋಗುತ್ತಾರೆ. ಎಲ್ಲರೂ ಪತಿತ, ಅಪವಿತ್ರರಾಗಿದ್ದಾರೆ ಆದರೆ ಇದು ಬಹಳ ದೊಡ್ಡ ಪವಿತ್ರವಾದ ಚರ್ಚ್ ಆಗಿದೆ. ಇಲ್ಲಿ ಪತಿತರು ಯಾರೂ ಹೆಜ್ಜೆಯನ್ನಿಡುವುದಕ್ಕೂ ಸಾಧ್ಯವಿಲ್ಲ ಆದರೆ ಈಗಿನ್ನೂ ಆ ರೀತಿ ಮಾಡಲು ಸಾಧ್ಯವಿಲ್ಲ. ಯಾವಾಗ ಮಕ್ಕಳೂ ಸಹ ಅಷ್ಟು ಪವಿತ್ರರಾಗಿ ಬಿಡುವರೋ ಆಗ ಇಂತಹ ಕಾಯಿದೆಗಳು ಹೊರ ಬರುತ್ತವೆ. ಇಲ್ಲಿ ಯಾರೂ ಒಳ ಪ್ರವೇಶಿಸಲು ಸಾಧ್ಯವಿಲ್ಲ. ನಾವು ಬಂದು ಸಭೆಯಲ್ಲಿ ಕುಳಿತುಕೊಳ್ಳಬಹುದೇ ಎಂದು ಕೇಳುತ್ತಾರಲ್ಲವೆ. ತಂದೆಯು ತಿಳಿಸುತ್ತಾರೆ - ಅಧಿಕಾರಿ ಮೊದಲಾದವರೊಂದಿಗೆ ಕೆಲಸವಿರುತ್ತದೆ ಆದ್ದರಿಂದ ಅವರನ್ನು ಕೂರಿಸಬೇಕಾಗುತ್ತದೆ. ಯಾವಾಗ ನಿಮ್ಮ ಹೆಸರು ಪ್ರಸಿದ್ಧವಾಗುವುದು ಆಗ ನಿಮಗೆ ಯಾವುದೇ ಚಿಂತೆಯಿರುವುದಿಲ್ಲ. ಈಗಿನ್ನೂ ಪವಿತ್ರರೂ ಸಹ ಚಿಂತೆ ಮಾಡುತ್ತಿರುತ್ತಾರೆ. ಬರುವವರಿಗೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಯಾವಾಗ ಪ್ರಭಾವವು ಹೆಚ್ಚುವುದೋ ಆಗ ಮನುಷ್ಯರ ವಿರೋಧವೂ ಸಹ ಕಡಿಮೆಯಾಗುವುದು. ನೀವು ತಿಳಿಸುತ್ತೀರಿ - ನಾವು ಬ್ರಾಹ್ಮಣರಿಗೆ ರಾಜಯೋಗವನ್ನು ಕಲಿಸುವವರು ಪರಮ ಪವಿತ್ರ ತಂದೆಯಾಗಿದ್ದಾರೆ. ಸನ್ಯಾಸಿಗಳಿಗೆ ಪರಮ ಪವಿತ್ರರೆಂದು ತಿಳಿಯುವುದಿಲ್ಲ. ಅವರು ರಜೋ ಗುಣದಲ್ಲಿ ಬರುತ್ತಾರೆ. ಅವರು ವಿಶ್ವದ ಮಾಲೀಕರಾಗಲು ಸಾಧ್ಯವೆ? ನೀವಿನ್ನು ಪುರುಷಾರ್ಥಿಗಳಾಗಿದ್ದೀರಿ, ಕೆಲವೊಮ್ಮೆ ಚಲನೆಯು ಬಹಳ ಚೆನ್ನಾಗಿರುತ್ತದೆ, ಇನ್ನೂ ಕೆಲವೊಮ್ಮೆ ಇಂತಹ ಚಲನೆಯಾಗಿ ಬಿಡುತ್ತದೆ ಅವರು ಕೆಟ್ಟ ಹೆಸರು ತರುತ್ತಾರೆ. ಬಹಳ ಸೇವಾಕೇಂದ್ರಗಳಲ್ಲಿ ಇಂತಹವರು ಬರುತ್ತಾರೆ ಯಾರು ಏನನ್ನೂ ತಿಳಿದುಕೊಂಡಿರುವುದಿಲ್ಲ. ನೀವು ತಮ್ಮನ್ನೂ ಸಹ ಮರೆತು ಹೋಗುತ್ತೀರಿ - ನಾವು ಏನಾಗುತ್ತೇವೆ ಎಂದು. ತಂದೆಯೂ ಸಹ ಇವರು ಏನಾಗುತ್ತಾರೆ ಎಂಬುದನ್ನು ಚಲನೆಯಿಂದಲೇ ತಿಳಿದುಕೊಳ್ಳುತ್ತಾರೆ. ಭಾಗ್ಯದಲ್ಲಿ ಶ್ರೇಷ್ಠ ಪದವಿಯಿದ್ದರೆ ಚಲನೆಯು ಬಹಳ ಘನತೆಯಿಂದ ಕೂಡಿರುತ್ತದೆ. ಕೇವಲ ನಮಗೆ ಓದಿಸುವವರು ಯಾರು ಎಂದು ನೆನಪಿದ್ದರೂ ಸಹ ಅಪಾರ ಖುಷಿಯಿರುವುದು. ನಾವು ಈಶ್ವರೀಯ ವಿದ್ಯಾರ್ಥಿಗಳಾಗಿದ್ದೇವೆ ಅಂದಾಗ ಎಷ್ಟೊಂದು ಗೌರವವಿರುವುದು. ನೀವಿನ್ನೂ ಕಲಿಯುತ್ತಿದ್ದೀರಿ, ಇನ್ನೂ ಸಮಯ ಹಿಡಿಸುತ್ತದೆಯೆಂದು ತಂದೆಯು ತಿಳಿದುಕೊಳ್ಳುತ್ತಾರೆ. ಪ್ರತಿಯೊಂದು ಮಾತಿನಲ್ಲಿ ನಂಬರ್ವಾರ್ ಇದ್ದೇ ಇರುತ್ತಾರೆ. ಮನೆಯೂ ಸಹ ಮೊದಲು ಸತೋಪ್ರಧಾನವಾಗಿರುತ್ತದೆ ನಂತರ ಸತೋ, ರಜೋ, ತಮೋ ಆಗುತ್ತದೆ. ನೀವೀಗ ಸತೋಪ್ರಧಾನರು, 16 ಕಲಾ ಸಂಪೂರ್ಣರಾಗುವವರಿದ್ದೀರಿ. ನೀವೆಲ್ಲರೂ ಸೇರಿ ಸ್ವರ್ಗದ ಗೋಪುರವನ್ನು ಕಟ್ಟುತ್ತಿದ್ದೀರಿ. ಇದೂ ಸಹ ನಿಮಗೆ ಬಹಳ ಖುಷಿಯಿರಬೇಕು. ಭಾರತವು ಯಾವುದು ಇಷ್ಟು ಅಪವಿತ್ರವಾಗಿ ಬಿಟ್ಟಿದೆಯೋ ಅದನ್ನು ನಾವು ಪವಿತ್ರ ಭಾರತವನ್ನಾಗಿ ಮಾಡುತ್ತೇವೆ ಅಂದಮೇಲೆ ತಮ್ಮ ಮೇಲೆ ಎಷ್ಟೊಂದು ಎಚ್ಚರಿಕೆಯಿರಬೇಕು! ನಮ್ಮ ಪದವಿಯೇ ಭ್ರಷ್ಟವಾಗುವಂತಹ ದೃಷ್ಟಿಯು ನಮ್ಮದಿರಬಾರದು. ತಂದೆಗೆ ಬರೆದರೆ - ತಂದೆಯು ಏನು ಹೇಳುವರೋ ಎಂದು ಮುಚ್ಚಿಡುವುದಲ್ಲ. ಎಲ್ಲರೂ ಇನ್ನೂ ಪುರುಷಾರ್ಥ ಮಾಡುತ್ತಿದ್ದಾರೆ. ಅವರಿಗೂ ಈಗ ಅತಿಪವಿತ್ರರೆಂದು ಹೇಳುವುದಿಲ್ಲ. ಯಾವಾಗ ಪವಿತ್ರರಾಗಿ ಬಿಡುವರೋ ಆಗ ಈ ಶರೀರವೇ ಇರುವುದಿಲ್ಲ. ನೀವು ಅತಿ ಪವಿತ್ರರಾಗುತ್ತೀರಿ ಬಾಕಿ ಇದರಲ್ಲಿ ಬಹಳಷ್ಟು ಪದವಿಗಳಿವೆ. ಅದಕ್ಕಾಗಿ ಪುರುಷಾರ್ಥ ಮಾಡಬೇಕು ಮತ್ತು ಮಾಡಿಸಬೇಕು. ತಂದೆಯು ಬಹಳಷ್ಟು ವಿಚಾರಗಳನ್ನು ತಿಳಿಸುತ್ತಿರುತ್ತಾರೆ. ಯಾರಾದರೂ ಬಂದರೆ ಅವರಿಗೆ ಕಾಣಿಕೆಯಾಗಿ ಕೊಟ್ಟು ತೋರಿಸಿ. ಈ ಅತಿ ಪವಿತ್ರರೆಲ್ಲಿ, ಕೇವಲ ಪವಿತ್ರರೆಲ್ಲಿ. ಲಕ್ಷ್ಮೀ-ನಾರಾಯಣರ ಜನ್ಮವು ಸತ್ಯಯುಗದಲ್ಲಿಯೇ ಆಗುತ್ತದೆ. ಸನ್ಯಾಸಿಗಳಂತು ನಂತರದಲ್ಲಿ ಬರುತ್ತಾರೆ ಅಂದಾಗ ಎಷ್ಟೊಂದು ಅಂತರವಿದೆ. ಶಿವ ತಂದೆಯು ನಮ್ಮನ್ನು ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆಂದು ಮಕ್ಕಳು ತಿಳಿದುಕೊಳ್ಳುತ್ತೀರಿ. ಆದ್ದರಿಂದ ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ತಮ್ಮನ್ನು ಅಶರೀರಿ ಆತ್ಮನೆಂದು ತಿಳಿಯಿರಿ. ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆಯು ಓದಿಸಿ ಶ್ರೇಷ್ಠಾತಿ ಶ್ರೇಷ್ಠರನ್ನಾಗಿ ಮಾಡುತ್ತಾರೆ. ಬ್ರಹ್ಮಾರವರ ಮೂಲಕ ನಾವು ಇದನ್ನು ಓದುತ್ತೇವೆ, ಬ್ರಹ್ಮನಿಂದ ವಿಷ್ಣುವಾಗುತ್ತಾರೆ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ, ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಈಗ ಇಡೀ ಸೃಷ್ಟಿಯಲ್ಲಿ ರಾವಣ ರಾಜ್ಯವಿದೆ. ನೀವು ರಾಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೀರಿ, ಇದನ್ನು ನೀವೇ ತಿಳಿದುಕೊಂಡಿದ್ದೀರಿ. ಡ್ರಾಮಾನುಸಾರ ನಾವು ಸ್ವರ್ಗದ ಸ್ಥಾಪನೆ ಮಾಡಲು ಯೋಗ್ಯರಾಗುತ್ತಿದ್ದೇವೆ. ಈಗ ತಂದೆಯು ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ತಂದೆಯ ವಿನಃ ಮತ್ತ್ಯಾರೂ ಶಾಂತಿಧಾಮ, ಸುಖಧಾಮಕ್ಕೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಇಂತಹವರು ಸ್ವರ್ಗಕ್ಕೆ ಹೋದರು, ಮುಕ್ತಿಧಾಮಕ್ಕೆ ಹೋದರೆಂದು ಸುಳ್ಳು ಹೇಳುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ - ಈ ವಿಕಾರಿ ಪತಿತ ಆತ್ಮರು ಶಾಂತಿಧಾಮಕ್ಕೆ ಹೇಗೆ ಹೋಗುವರು? ನೀವು ಈ ರೀತಿ ಹೇಳಬಹುದು ಅದರಿಂದ ಇವರಿಗೆ ಎಷ್ಟೊಂದು ನಶೆಯಿದೆ! ಎಂದು ಅವರು ತಿಳಿಯಲಿ. ಹೀಗೆ ವಿಚಾರ ಸಾಗರ ಮಂಥನ ಮಾಡಿ. ನಡೆಯುತ್ತಾ-ತಿರುಗಾಡುತ್ತಾ ಆಂತರ್ಯದಲ್ಲಿ ವಿಚಾರ ನಡೆಯಬೇಕು. ತಾಳ್ಮೆಯನ್ನು ವಹಿಸಬೇಕು - ನಾವು ಯೋಗ್ಯರಾಗಬೇಕಲ್ಲವೆ. ಭಾರತವಾಸಿಗಳೇ ಪೂರ್ಣ ಯೋಗ್ಯರು ಮತ್ತು ಪೂರ್ಣ ಅಯೋಗ್ಯರಾಗಿದ್ದೀರಿ ಮತ್ತ್ಯಾರೂ ಅಲ್ಲ. ಈಗ ತಂದೆಯು ನಿಮ್ಮನ್ನು ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ಇದು ಬಹಳ ಮಜವಾದ ಜ್ಞಾನವಾಗಿದೆ. ನಾವು ಈ ಭಾರತವನ್ನೇ ಪವಿತ್ರವನ್ನಾಗಿ ಮಾಡುತ್ತೇವೆಂದು ಅಂತರಾಳದಲ್ಲಿ ಪಕ್ಕಾ ಖುಷಿಯಿರುತ್ತದೆ ಅಂದಾಗ ಚಲನೆಯು ಬಹಳ ಘನತೆಯಿಂದ ಕೂಡಿರಬೇಕು. ಆಹಾರ-ಪಾನೀಯ, ಚಲನೆಯಿಂದಲೇ ಎಲ್ಲವೂ ಅರ್ಥವಾಗುತ್ತದೆ. ಶಿವ ತಂದೆಯು ನಿಮ್ಮನ್ನು ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ. ನೀವು ಅವರ ಮಕ್ಕಳಾಗಿದ್ದೀರಿ ಅಂದಮೇಲೆ ಹೆಸರನ್ನು ಪ್ರಸಿದ್ಧಗೊಳಿಸಬೇಕು. ಇವರಂತೂ ಪರಮ ಪವಿತ್ರ ತಂದೆಯ ಮಕ್ಕಳಾಗಿದ್ದಾರೆ ಎಂದು ಹೇಳುವಂತಹ ಚಲನೆಯು ನಿಮ್ಮದಾಗಿರಬೇಕು. ನೀವು ನಿಧಾನ-ನಿಧಾನವಾಗಿ ಆಗುತ್ತಾ ಹೋಗುತ್ತೀರಿ, ಮಹಿಮೆಯೂ ಆಗುತ್ತಾ ಹೋಗುವುದು ಮತ್ತೆ ಕಾನೂನುಗಳೆಲ್ಲವೂ ಹೊರ ಬರುತ್ತಾ ಹೋಗುತ್ತವೆ. ಆಗ ಪತಿತರು ಯಾರೂ ಒಳ ಪ್ರವೇಶಿಸಲು ಸಾಧ್ಯವಿಲ್ಲ. ತಂದೆಯು ಇದನ್ನು ತಿಳಿದುಕೊಳ್ಳಬಲ್ಲರು, ಇನ್ನೂ ಸಮಯ ಬೇಕಾಗಿದೆ. ಮಕ್ಕಳೇ, ಬಹಳ ಪುರುಷಾರ್ಥ ಮಾಡಬೇಕಾಗಿದೆ ಏಕೆಂದರೆ ತಮ್ಮ ರಾಜಧಾನಿಯು ತಯಾರಾಗಬೇಕು ನಂತರ ಮಾಡುವುದರಲ್ಲಿ ಯಾವುದೇ ಕಷ್ಟವಿಲ್ಲ. ಆಗ ಇಲ್ಲಿಂದ ಅಬು ರೋಡಿನವರೆಗೂ ಕ್ಯೂ ನಿಲ್ಲುವುದು. ಇನ್ನು ಸ್ವಲ್ಪ ಮುಂದೆ ಹೋದಂತೆ ನೋಡುವಿರಿ. ತಂದೆಯು ನಿಮ್ಮ ಭಾಗ್ಯವನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ಪದಮಾಪದಮ ಭಾಗ್ಯಶಾಲಿಗಳೆಂದು ನಿಯಮಾನುಸಾರವಾಗಿ ಹೇಳುತ್ತಾರಲ್ಲವೆ. ಕಾಲುಗಳಲ್ಲಿ ಪದುಮವನ್ನು ತೋರಿಸುತ್ತಾರೆ. ಇದೆಲ್ಲವೂ ನೀವು ಮಕ್ಕಳ ಮಹಿಮೆಯಾಗಿದೆ. ತಂದೆಯು ಪುನಃ ನೆನಪಿಗೆ ತರಿಸುತ್ತಾರೆ - ಮನ್ಮನಾಭವ, ತಂದೆಯನ್ನು ನೆನಪು ಮಾಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.


ಧಾರಣೆಗಾಗಿ ಮುಖ್ಯಸಾರ:

1. ಇಂತಹ ಯಾವುದೇ ಕರ್ಮವಾಗಬಾರದು ಯಾವುದು ಮನಸ್ಸನ್ನು ತಿನ್ನುತ್ತಿರುತ್ತದೆ. ಪೂರ್ಣ ಸುಗಂಧಭರಿತ ಹೂವಾಗಬೇಕಾಗಿದೆ. ದೇಹಾಭಿಮಾನದ ದುರ್ಗಂಧವನ್ನು ತೆಗೆಯಬೇಕಾಗಿದೆ.

2. ಚಲನೆಯು ಬಹಳ ಘನತೆಯಿಂದ ಕೂಡಿರಬೇಕಾಗಿದೆ. ಅತಿ ಪವಿತ್ರರಾಗುವ ಪುರುಷಾರ್ಥ ಮಾಡಬೇಕಾಗಿದೆ. ಪದವಿ ಭ್ರಷ್ಟವಾಗುವಂತಹ ದೃಷ್ಟಿಯು ಇರಬಾರದು.

ವರದಾನ:
ಪ್ರತಿ ಖಜಾನೆಯನ್ನು ಕಾರ್ಯದಲ್ಲಿ ತೊಡಗಿಸಿ ಪದಮದಷ್ಟು ಸಂಪಾದನೆ ಜಮಾ ಮಾಡುವಂತಹ ಪದಮಾ ಪದಮ ಭಾಗ್ಯಶಾಲಿ ಭವ.

ಪ್ರತಿಯೊಂದು ಸೆಕೆಂಡ್ ಪದಮದಷ್ಟು ಸಂಪಾದನೆ ಜಾಮಾ ಮಾಡಿಕೊಳ್ಳುವ ವರದಾನ ಡ್ರಾಮದಲ್ಲಿ ಸಂಗಮದ ಸಮಯಕ್ಕೆ ಸಿಕ್ಕಿದೆ. ಈ ರೀತಿಯ ವರದಾನವನ್ನು ಸ್ವಯಂ ಪ್ರತಿ ಜಮಾ ಮಾಡಿಕೊಳ್ಳಿ, ಹಾಗೆಯೇ ಸಂಕಲ್ಪದ ಖಜಾನೆಯನ್ನು, ಜ್ಞಾನದ ಖಜಾನೆಯನ್ನು, ಸ್ಥೂಲ ಧನರೂಪಿ ಖಜಾನೆಯನ್ನು ಕಾರ್ಯದಲ್ಲಿ ತೊಡಗಿಸಿ ಪದಮದಷ್ಟು ಸಂಪಾದನೆಯನ್ನು ಜಮಾ ಮಾಡಿ, ಏಕೆಂದರೆ ಈ ಸಮಯದಲ್ಲಿ ಸ್ಥೂಲ ಧನವೂ ಸಹ ಈಶ್ವರಾರ್ಥವಾಗಿ ಸಮರ್ಪಣೆ ಮಾಡುವುದರಿಂದ ಒಂದು ನಯಾ ಪೈಸೆಯೂ ರತ್ನದ ಸಮಾನ ಬೆಲೆಯುಳ್ಳದ್ದಾಗಿ ಬಿಡುತ್ತದೆ - ಆದ್ದರಿಂದ ಎಲ್ಲಾ ಖಜಾನೆಗಳನ್ನು ಸ್ವಯಂನ ಪ್ರತಿ ಅಥವಾ ಸೇವೆಯ ಪ್ರತಿ ಕಾರ್ಯದಲ್ಲಿ ತೊಡಗಿಸಿದಾಗ ಪದಮಾಪದಮ ಭಾಗ್ಯಶಾಲಿಗಳಾಗಿ ಬಿಡುವಿರಿ.

ಸ್ಲೋಗನ್:
ಎಲ್ಲಿ ಹೃದಯದ ಸ್ನೇಹ ಇದೆ ಅಲ್ಲಿ ಎಲ್ಲರ ಸಹಯೋಗ ಸಹಜವಾಗಿ ಪ್ರಾಪ್ತಿಯಗುವುದು.