03.12.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಮನಸ್ಸಾ-ವಾಚಾ-ಕರ್ಮ ಬಹಳ-ಬಹಳ ಖುಷಿಯಲ್ಲಿರಬೇಕಾಗಿದೆ, ಎಲ್ಲರನ್ನೂ ಖುಷಿ ಪಡಿಸಬೇಕು, ಯಾರಿಗೂ ದುಃಖವನ್ನು ಕೊಡಬಾರದು”

ಪ್ರಶ್ನೆ:
ಡಬಲ್ ಅಹಿಂಸಕರಾಗುವ ಮಕ್ಕಳು ಯಾವ ಗಮನವನ್ನಿಡಬೇಕು?

ಉತ್ತರ:
1. ಗಮನವನ್ನಿಡಿ – ಯಾರಿಗಾದರೂ ದುಃಖವಾಗುವಂತಹ ಮಾತು ಬಾಯಿಂದ ಬರಬಾರದು ಏಕೆಂದರೆ ಮಾತಿನ ಮೂಲಕ ದುಃಖ ಕೊಡುವುದೂ ಸಹ ಹಿಂಸೆಯಾಗಿದೆ. 2. ನಾವು ದೇವತೆಗಳಾಗುವವರಿದ್ದೇವೆ ಆದ್ದರಿಂದ ಚಲನೆಯು ಬಹಳ ರಾಯಲ್ ಆಗಿರಲಿ. ಆಹಾರ-ಪಾನೀಯಗಳು ಬಹಳ ಮ ಮಟ್ಟದ್ದೂ ಅಲ್ಲ, ಕನಿಷ್ಟವೂ ಅಲ್ಲ, ಮಧ್ಯಮ ಸ್ಥಿತಿಯಲ್ಲಿರಲಿ.

ಗೀತೆ:
ನಿರ್ಬಲನೊಂದಿಗೆ ಬಲಶಾಲಿಯ ಯುದ್ಧ…...

ಓಂ ಶಾಂತಿ.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಿಗೆ ತಂದೆಯು ಪ್ರತಿನಿತ್ಯವೂ ಮೊಟ್ಟ ಮೊದಲಿಗೆ ತಿಳಿಸುತ್ತಾರೆ – ತಮ್ಮನ್ನು ಆತ್ಮನೆಂದು ತಿಳಿದು ಕುಳಿತುಕೊಳ್ಳಿ ಮತ್ತು ತಂದೆಯನ್ನು ನೆನಪು ಮಾಡಿ. ಅಟೆನ್ಷನ್ ಪ್ಲೀಸ್ ಎಂದು ಹೇಳುತ್ತಾರಲ್ಲವೆ ಅಂದಾಗ ತಂದೆಯು ತಿಳಿಸುತ್ತಾರೆ – ಮೊದಲನೆಯದಾಗಿ ತಂದೆಯ ಕಡೆ ಗಮನ ಕೊಡಿ. ತಂದೆಯು ಎಷ್ಟು ಮಧುರವಾಗಿದ್ದಾರೆ, ಅವರಿಗೆ ಪ್ರೀತಿಯ ಸಾಗರ, ಜ್ಞಾನ ಸಾಗರನೆಂದು ಹೇಳಲಾಗುತ್ತದೆ ಅಂದಮೇಲೆ ನೀವೂ ಪ್ರಿಯರಾಗಬೇಕು. ಮನಸ್ಸಾ-ವಾಚಾ-ಕರ್ಮಣಾ ಪ್ರತಿಯೊಂದು ಮಾತಿನಲ್ಲಿಯೂ ನಿಮಗೆ ಖುಷಿಯಿರಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬಾರದು. ತಂದೆಯೂ ಸಹ ಯಾರಿಗೂ ದುಃಖ ಕೊಡುವುದಿಲ್ಲ. ತಂದೆಯು ಬಂದಿರುವುದೇ ಸುಖಿಯನ್ನಾಗಿ ಮಾಡಲು, ಆದ್ದರಿಂದ ನೀವೂ ಸಹ ಯಾರಿಗೂ ಯಾವುದೇ ಪ್ರಕಾರದ ದುಃಖ ಕೊಡಬಾರದು. ಯಾವುದೇ ಅಂತಹ ಕರ್ಮ ಮಾಡಬಾರದು, ಮನಸ್ಸಿನಲ್ಲಿಯೂ ಬರಬಾರದು ಆದರೆ ಆ ಸ್ಥಿತಿಯು ಅಂತಿಮದಲ್ಲಿ ಬರುವುದು. ಅಲ್ಲಿಯವರೆಗೆ ಕವ್ರ್ಮೇಂದ್ರಿಯಗಳಿಂದ ಯಾವುದಾದರೊಂದು ತಪ್ಪುಗಳಾಗುತ್ತವೆ. ತಮ್ಮನ್ನು ಆತ್ಮನೆಂದು ತಿಳಿದು ಅನ್ಯರನ್ನು ಸಹೋದರ ಆತ್ಮನೆಂದು ನೋಡಿದಾಗ ಯಾರಿಗೂ ದುಃಖ ಕೊಡುವುದಿಲ್ಲ. ಶರೀರವನ್ನೇ ನೋಡದಿದ್ದರೆ ದುಃಖವನ್ನು ಹೇಗೆ ಕೊಡುತ್ತೀರಿ! ಇದರಲ್ಲಿ ಗುಪ್ತ ಪರಿಶ್ರಮವಿದೆ. ಇದೆಲ್ಲವೂ ಬುದ್ಧಿಯ ಕೆಲಸವಾಗಿದೆ. ನೀವೀಗ ಪಾರಸ ಬುದ್ಧಿಯವರಾಗುತ್ತಿದ್ದೀರಿ. ಯಾವಾಗ ಪಾರಸ ಬುದ್ಧಿಯವರಾಗಿದ್ದಿರೋ ಆಗ ಬಹಳ ಸುಖವನ್ನು ನೋಡಿದಿರಿ. ನೀವೇ ಸುಖಧಾಮದ ಮಾಲೀಕನಾಗಿದ್ದಿರಲ್ಲವೆ. ಇದು ದುಃಖಧಾಮವಾಗಿದೆ. ಇದು ಬಹಳ ಸಹಜವಾದ ಮಾತಾಗಿದೆ. ಆ ಶಾಂತಿಧಾಮವು ನಮ್ಮ ಮಧುರ ಮನೆಯಾಗಿರುವುದು. ನಾವು ಅಲ್ಲಿಂದ ಪಾತ್ರವನ್ನಭಿನಯಿಸಲು ಬಂದಿದ್ದೇವೆ. ದುಃಖದ ಪಾತ್ರವನ್ನೂ ಸಹ ಬಹಳ ಸಮಯ ಅಭಿನಯಿಸಿದ್ದೇವೆ. ಈಗ ಸುಖಧಾಮಕ್ಕೆ ಹೋಗಬೇಕಾಗಿದೆ ಆದ್ದರಿಂದ ಪರಸ್ಪರ ಸಹೋದರ-ಸಹೋದರರೆಂದು ತಿಳಿಯಬೇಕಾಗಿದೆ. ಆತ್ಮವು ಆತ್ಮಕ್ಕೆ ದುಃಖ ಕೊಡಲು ಸಾಧ್ಯವಿಲ್ಲ. ತನ್ನನ್ನು ಆತ್ಮನೆಂದು ತಿಳಿದು ಆತ್ಮನೊಂದಿಗೆ ಮಾತನಾಡುತ್ತಿದ್ದೇವೆ. ಆತ್ಮವೇ ಸಿಂಹಾಸನದ ಮೇಲೆ ವಿರಾಜಮಾನವಾಗಿದೆ. ಇದೂ ಸಹ ಶಿವ ತಂದೆಯ ರಥವಲ್ಲವೆ. ಮಕ್ಕಳು ಹೇಳುತ್ತಾರೆ - ನಾವು ಶಿವ ತಂದೆಯ ರಥವನ್ನು ಶೃಂಗರಿಸುತ್ತೇವೆ. ಶಿವ ತಂದೆಯ ರಥಕ್ಕೆ ತಿನ್ನಿಸುತ್ತೇವೆ ಆಗ ಶಿವ ತಂದೆಯ ನೆನಪೇ ಇರುತ್ತದೆ. ಅವರು ಕಲ್ಯಾಣಕಾರಿ ತಂದೆಯಾಗಿದ್ದಾರೆ. ತಂದೆಯು ಹೇಳುತ್ತಾರೆ - ನಾನು ಪಂಚ ತತ್ವಗಳ ಕಲ್ಯಾಣವನ್ನೂ ಮಾಡುತ್ತೇನೆ, ಅಲ್ಲಿ ಯಾವುದೇ ವಸ್ತು ಎಂದೂ ತೊಂದರೆ ಕೊಡುವುದಿಲ್ಲ. ಇಲ್ಲಾದರೆ ಕೆಲವೊಮ್ಮೆ ಬಿರುಗಾಳಿ, ಕೆಲವೊಮ್ಮೆ ಚಳಿ ಹೇಗೇಗೋ ಬದಲಾಗುತ್ತಿರುತ್ತದೆ ಆದರೆ ಸತ್ಯಯುಗದಲ್ಲಿ ಸದಾ ವಸಂತ ಋತುವಿರುತ್ತದೆ. ದುಃಖದ ಹೆಸರಿರುವುದಿಲ್ಲ. ಅದು ಸ್ವರ್ಗವಾಗಿದೆ. ತಂದೆಯು ನಿಮ್ಮನ್ನು ಅಂತಹ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ. ಸರ್ವ ಶ್ರೇಷ್ಠ ಭಗವಂತನಾಗಿದ್ದಾರೆ. ಸರ್ವ ಶ್ರೇಷ್ಠ ತಂದೆಯು ಸರ್ವ ಶ್ರೇಷ್ಠ ಶಿಕ್ಷಕನೂ ಆಗಿದ್ದಾರೆ ಅಂದಮೇಲೆ ಅವಶ್ಯವಾಗಿ ಅವರು ಶ್ರೇಷ್ಠಾತಿ ಶ್ರೇಷ್ಠರನ್ನಾಗಿಯೇ ಮಾಡುತ್ತಾರಲ್ಲವೆ. ನೀವು ಈ ಲಕ್ಷ್ಮೀ-ನಾರಾಯಣರಾಗಿದ್ದಿರಿ, ಇವೆಲ್ಲಾ ಮಾತುಗಳನ್ನು ಮರೆತು ಹೋಗಿದ್ದೀರಿ. ಇವನ್ನು ತಂದೆಯೇ ಬಂದು ತಿಳಿಸುತ್ತಾರೆ. ಋಷಿ-ಮುನಿ ಮೊದಲಾದವರೊಂದಿಗೆ ತಾವು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿದ್ದೀರಾ ಎಂದು ಕೇಳಿದಾಗ ನಮಗೆ ಗೊತ್ತಿಲ್ಲ, ಗೊತ್ತಿಲ್ಲ ಎಂದು ಹೇಳುತ್ತಿದ್ದರು. ಅವರ ಬಳಿಯೇ ಜ್ಞಾನವಿರಲಿಲ್ಲವೆಂದಾಗ ಮತ್ತೆ ಇದು ಪರಂಪರೆಯಿಂದ ನಡೆದು ಬರಲು ಹೇಗೆ ಸಾಧ್ಯ? ತಂದೆಯು ತಿಳಿಸುತ್ತಾರೆ - ನಾನು ಜ್ಞಾನವನ್ನು ಈಗಲೇ ಕೊಡುತ್ತೇನೆ. ಇದರಿಂದ ನಿಮ್ಮ ಸದ್ಗತಿಯಾಗುತ್ತದೆಯೆಂದರೆ ಮತ್ತೆ ಜ್ಞಾನದ ಅವಶ್ಯಕತೆಯಿಲ್ಲ. ದುರ್ಗತಿಯಾಗುವುದೇ ಇಲ್ಲ. ಸತ್ಯಯುಗಕ್ಕೆ ಸದ್ಗತಿಯೆಂದು ಹೇಳಲಾಗುತ್ತದೆ. ಇಲ್ಲಿ ದುರ್ಗತಿಯಿದೆ ಆದರೆ ನಾವು ದುರ್ಗತಿಯಲ್ಲಿದ್ದೇವೆಂದು ಯಾರಿಗೂ ತಿಳಿದಿಲ್ಲ. ತಂದೆಗೆ ಮಾರ್ಗದರ್ಶಕ, ಮುಕ್ತಿದಾತ, ಅಂಬಿಗನೆಂದು ಗಾಯನ ಮಾಡಲಾಗುತ್ತದೆ. ವಿಷಯ ಸಾಗರದಿಂದ ಎಲ್ಲರ ದೋಣಿಗಳನ್ನು ಪಾರು ಮಾಡುತ್ತಾರೆ. ಅದಕ್ಕೆ ಕ್ಷೀರ ಸಾಗರವೆಂದು ಹೇಳಲಾಗುತ್ತದೆ. ವಿಷ್ಣುವನ್ನು ಕ್ಷೀರ ಸಾಗರದಲ್ಲಿ ತೋರಿಸುತ್ತಾರೆ, ಇದೆಲ್ಲವೂ ಭಕ್ತಿಮಾರ್ಗದ ಗಾಯನವಾಗಿದೆ. ದೊಡ್ಡ-ದೊಡ್ಡ ಸರೋವರಗಳನ್ನು ಮಾಡಿ ಅದರಲ್ಲಿ ವಿಷ್ಣುವಿನ ದೊಡ್ಡ ಚಿತ್ರವನ್ನು ತೋರಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನೀವೇ ಇಡೀ ವಿಶ್ವದ ಮೇಲೆ ರಾಜ್ಯಭಾರ ಮಾಡಿದ್ದೀರಿ, ಅನೇಕ ಬಾರಿ ಸೋಲನ್ನನುಭವಿಸಿದಿರಿ ಮತ್ತು ಜಯ ಗಳಿಸಿದ್ದೀರಿ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಕಾಮ ಮಹಾಶತ್ರುವಾಗಿದೆ, ಅದರ ಮೇಲೆ ಜಯ ಗಳಿಸಿದರೆ ನೀವು ಜಗಜ್ಜೀತರಾಗುವಿರಿ ಅಂದಮೇಲೆ ಖುಷಿಯಿಂದ ಆಗಬೇಕಲ್ಲವೆ. ಭಲೆ ಗೃಹಸ್ಥ ವ್ಯವಹಾರದಲ್ಲಿ ಪ್ರವೃತ್ತಿ ಮಾರ್ಗದಲ್ಲಿಯೇ ಇರಿ. ಆದರೆ ಕಮಲ ಪುಷ್ಫ ಸಮಾನ ಪವಿತ್ರರಾಗಿರಿ. ನೀವೀಗ ಮುಳ್ಳುಗಳಿಂದ ಹೂಗಳಾಗುತ್ತಿದ್ದೀರಿ. ನಿಮಗೆ ಅರ್ಥವಾಗುತ್ತಿದೆ – ಇದು ಮುಳ್ಳುಗಳ ಕಾಡಾಗಿದೆ. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಎಷ್ಟು ತೊಂದರೆ ಕೊಡುತ್ತಾರೆ, ಹೊಡೆಯುತ್ತಾರೆ. ಆದ್ದರಿಂದ ತಂದೆಯು ಮಧುರಾತಿ ಮಧುರ ಮಕ್ಕಳಿಗೆ ತಿಳಿಸುತ್ತಾರೆ – ಮಕ್ಕಳೇ, ಈಗ ನಿಮ್ಮೆಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ಹಿರಿಯರಿರಲಿ, ಕಿರಿಯರಿರಲಿ ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ನೀವು ವಾಣಿಯಿಂದ ದೂರ ಹೋಗುವುದಕ್ಕಾಗಿ ಓದುತ್ತೀರಿ. ಈಗ ನಿಮಗೆ ಸದ್ಗುರು ಸಿಕ್ಕಿದ್ದಾರೆ. ಅವರು ನಿಮ್ಮನ್ನೇ ವಾನಪ್ರಸ್ಥದಲ್ಲಿ ಕರೆದುಕೊಂಡು ಹೋಗುತ್ತಾರೆ. ಇದು ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ಭಗವಾನುವಾಚವಿದೆಯಲ್ಲವೆ - ನಾನು ನಿಮಗೆ ರಾಜಯೋಗವನ್ನು ಕಲಿಸಿ ರಾಜಾಧಿ ರಾಜರನ್ನಾಗಿ ಮಾಡುತ್ತೇನೆ. ಯಾರು ಪೂಜ್ಯ ರಾಜರಾಗಿದ್ದರೋ ಅವರೇ ನಂತರ ಪೂಜಾರಿ ರಾಜರಾಗುತ್ತಾರೆ. ಆದ್ದರಿಂದ ಮಕ್ಕಳೇ, ಚೆನ್ನಾಗಿ ಪುರುಷಾರ್ಥ ಮಾಡಿ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಿ. ಭಲೆ ತಿನ್ನಿರಿ, ಕುಡಿಯಿರಿ, ಶ್ರೀನಾಥ ದ್ವಾರದಲ್ಲಿ ಹೋಗಿ ಅಲ್ಲಿ ಬಹಳಷ್ಟು ತುಪ್ಪದ ಪದಾರ್ಥಗಳನ್ನು ಕಾಣಬಹುದು. ತುಪ್ಪದ ಬಾವಿಗಳೇ ಮಾಡಲ್ಪಟ್ಟಿರುತ್ತವೆ. ಅದನ್ನು ಯಾರು ತಿನ್ನುತ್ತಾರೆ? ಪೂಜಾರಿಗಳು. ಶ್ರೀನಾಥ ಮತ್ತು ಜಗನ್ನಾಥ ಇಬ್ಬರನ್ನೂ ಕಪ್ಪಾಗಿ ತೋರಿಸಿದ್ದಾರೆ. ಜಗನ್ನಾಥ ಮಂದಿರದಲ್ಲಿ ದೇವತೆಗಳ ಕೊಳಕು ಚಿತ್ರಗಳಿವೆ. ಅಲ್ಲಿ ಅನ್ನದ ಭೋಗವನ್ನು ತಯಾರಿಸುತ್ತಾರೆ. ಅದು ಬೆಂದ ನಂತರ ಪಾತ್ರೆಯಲ್ಲಿ ನಾಲ್ಕು ಭಾಗಗಳಾಗಿ ಬಿಡುತ್ತವೆ. ಕೇವಲ ಅನ್ನದ ಭೋಗವನ್ನೇ ಇಡುತ್ತಾರೆ ಏಕೆಂದರೆ ಈಗ ಇವರು (ಬ್ರಹ್ಮಾ) ಸಾಧಾರಣರಲ್ಲವೆ. ಒಂದು ಕಡೆ ಬಡವರು ಮತ್ತು ಇನ್ನೊಂದು ಕಡೆ ಸಾಹುಕಾರನಾಗುತ್ತಾರೆ. ಈಗಂತೂ ನೋಡಿ, ಎಷ್ಟು ಬಡವರಾಗಿದ್ದಾರೆ! ತಿನ್ನುವುದಕ್ಕೆ-ಕುಡಿಯುವುದಕ್ಕೂ ಏನೂ ಸಿಗುವುದೇ ಇಲ್ಲ. ಸತ್ಯಯುಗದಲ್ಲಂತೂ ಎಲ್ಲವೂ ಇರುತ್ತದೆ ಅಂದಾಗ ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ – ಶಿವ ತಂದೆಯು ಬಹಳ ಮಧುರರಾಗಿದ್ದಾರೆ. ಅವರು ನಿರಾಕಾರನಾಗಿದ್ದಾರೆ. ಆತ್ಮವನ್ನೇ ಪ್ರೀತಿ ಮಾಡಲಾಗುತ್ತದೆಯಲ್ಲವೆ. ಆತ್ಮವನ್ನೇ ಕರೆಸುತ್ತಾರೆ, ಶರೀರವಂತೂ ಸುಟ್ಟು ಹೋಯಿತು. ಅವರ ಆತ್ಮವನ್ನು ಕರೆಸಿ ಜ್ಯೋತಿಯನ್ನು ಬೆಳಗಿಸುತ್ತಾರೆ. ಇದರಿಂದ ಆತ್ಮಕ್ಕೆ ಅಂಧಕಾರವಾಗುತ್ತದೆ ಎಂಬುದು ಸಿದ್ಧವಾಗುತ್ತದೆ ಆದರೆ ಆತ್ಮವೇ ಶರೀರ ರಹಿತವೆಂದ ಮೇಲೆ ಅಲ್ಲಿ ಅಂಧಕಾರದ ಮಾತೇ ಬರುವುದಿಲ್ಲ. ಅಲ್ಲಿ ಈ ಮಾತುಗಳಿರುವುದಿಲ್ಲ. ಇದೆಲ್ಲವೂ ಭಕ್ತಿಮಾರ್ಗವಾಗಿದೆ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ – ಜ್ಞಾನವು ಬಹಳ ಮಧುರವಾಗಿದೆ. ಇದರಲ್ಲಿ ಕಣ್ಣುಗಳನ್ನು ತೆರೆದು ಕೇಳಬೇಕಾಗಿದೆ. ತಂದೆಯನ್ನಂತೂ ನೋಡುತ್ತಾರಲ್ಲವೆ ಹಾಗೆಯೇ ನಿಮಗೆ ತಿಳಿದಿದೆ – ಶಿವ ತಂದೆಯು ಇಲ್ಲಿ ವಿರಾಜಮಾನವಾಗಿದ್ದಾರೆ ಅಂದಾಗ ಕಣ್ಣುಗಳನ್ನು ತೆರೆದು ಕುಳಿತುಕೊಳ್ಳಬೇಕಲ್ಲವೆ. ಬೇಹದ್ದಿನ ತಂದೆಯನ್ನು ನೋಡಬೇಕಲ್ಲವೆ. ಮೊದಲು ಮಕ್ಕಳು ತಂದೆಯನ್ನು ನೋಡುತ್ತಿದ್ದಂತೆಯೇ ಧ್ಯಾನದಲ್ಲಿ ಹೊರಟು ಹೋಗುತ್ತಿದ್ದರು. ಪರಸ್ಪರ ಕುಳಿತು-ಕುಳಿತಿದ್ದಂತೆಯೇ ಧ್ಯಾನದಲ್ಲಿ ಹೊರಟು ಹೋಗುತ್ತಿದ್ದರು. ಕಣ್ಣು ಮುಚ್ಚಿ ಹೊರಟು ಹೋಗುತ್ತಿದ್ದರು. ಬಹಳ ಚಮತ್ಕಾರವಾಗಿತ್ತು. ತಂದೆಯು ತಿಳಿಸುತ್ತಾರೆ – ಒಬ್ಬರು ಇನ್ನೊಬ್ಬರನ್ನು ನೋಡುತ್ತೀರೆಂದರೆ ನಾನು ನನ್ನ ಸಹೋದರನೊಂದಿಗೆ ಮಾತನಾಡುತ್ತೇನೆಂದು ತಿಳಿದುಕೊಳ್ಳಿ. ನೀವು ಬೇಹದ್ದಿನ ತಂದೆಯ ಸೂಚನೆಯನ್ನು ಪಾಲಿಸುವುದಿಲ್ಲವೆ? ನೀವು ಈ ಅಂತಿಮ ಜನ್ಮ ಪವಿತ್ರರಾಗುತ್ತೀರೆಂದರೆ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ. ತಂದೆಯು ಅನೇಕರಿಗೆ ತಿಳಿಸುತ್ತಾರೆ – ಕೆಲವರಂತೂ ಬಾಬಾ ನಾನು ಖಂಡಿತ ಪವಿತ್ರರಾಗುತ್ತೇವೆಂದು ಕೂಡಲೇ ಹೇಳುತ್ತಾರೆ. ಪವಿತ್ರವಾಗುವುದು ಒಳ್ಳೆಯದಲ್ಲವೆ. ಕುಮಾರಿಯು ಪವಿತ್ರವಾದಾಗ ಎಲ್ಲರೂ ಅವಳಿಗೆ ತಲೆ ಬಾಗುತ್ತಾರೆ ಮತ್ತೆ ವಿವಾಹವಾದರೆ ಅವಳು ಎಲ್ಲರ ಮುಂದೆ ತಲೆ ಬಾಗಬೇಕಾಗುತ್ತದೆ, ಪೂಜಾರಿಯಾಗಿ ಬಿಡುತ್ತಾಳೆ. ಆದ್ದರಿಂದ ಪವಿತ್ರತೆಯು ಒಳ್ಳೆಯದಲ್ಲವೆ. ಪವಿತ್ರತೆಯಿದ್ದಲ್ಲಿ ಸುಖ-ಶಾಂತಿಯಿರುತ್ತದೆ. ಎಲ್ಲವೂ ಪವಿತ್ರತೆಯ ಮೇಲೆ ಆಧಾರಿತವಾಗಿದೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಪಾವನ ಪ್ರಪಂಚದಲ್ಲಿ ರಾವಣನಿರುವುದೇ ಇಲ್ಲ. ಅದು ರಾಮ ರಾಜ್ಯವಾಗಿದೆ, ಎಲ್ಲರೂ ಕ್ಷೀರ ಖಂಡದಲ್ಲಿರುತ್ತದೆ. ಅದು ಧರ್ಮದ ರಾಜ್ಯವಾಗಿರುತ್ತದೆ ಮತ್ತೆ ರಾವಣನು ಎಲ್ಲಿಂದ ಬಂದನು! ರಾಮಾಯಣ ಇತ್ಯಾದಿಗಳನ್ನು ಎಷ್ಟು ಪ್ರೀತಿಯಿಂದ ಕುಳಿತು ಕೇಳುತ್ತಾರೆ, ಹೇಳುತ್ತಾರೆ – ಇದೆಲ್ಲವೂ ಭಕ್ತಿಯಾಗಿದೆ. ಮಕ್ಕಳು ಸಾಕ್ಷಾತ್ಕಾರದಲ್ಲಿ ನೃತ್ಯ ಮಾಡತೊಡಗುತ್ತಾರೆ. ಸತ್ಯದ ದೋಣಿಯ ಗಾಯನವಿದೆ - ಸತ್ಯದ ದೋಣಿಯು ಅಲುಗಾಡುವುದು ಆದರೆ ಮುಳುಗುವುದಿಲ್ಲ. ಮತ್ತ್ಯಾವುದೇ ಸತ್ಸಂಗದಲ್ಲಿ ಹೋಗಲು ಯಾರೂ ತಡೆಯುವುದಿಲ್ಲ. ಆದರೆ ಇಲ್ಲಿಗೆ ಬರಲು ಎಷ್ಟೊಂದು ತಡೆಯುತ್ತಾರೆ. ತಂದೆಯು ನಿಮಗೆ ಜ್ಞಾನವನ್ನು ಕೊಡುತ್ತಾರೆ. ನೀವು ಬಿ.ಕೆ. ಗಳಾಗುತ್ತೀರಿ. ಬ್ರಾಹ್ಮಣರಂತೂ ಅವಶ್ಯವಾಗಿ ಆಗಬೇಕಾಗಿದೆ. ತಂದೆಯು ಸ್ವರ್ಗದ ಸ್ಥಾಪನೆ ಮಾಡುವವರಾಗಿದ್ದಾರೆ ಅಂದಮೇಲೆ ನಾವೂ ಸಹ ಸ್ವರ್ಗದ ಮಾಲೀಕರಾಗಬೇಕು. ನಾವಿಲ್ಲಿ ನರಕದಲ್ಲಿ ಏಕೆ ಬಿದ್ದಿದ್ದೇವೆ! ಈಗ ಅರ್ಥವಾಗುತ್ತದೆ – ಮೊದಲು ನಾವೂ ಸಹ ಪೂಜಾರಿಗಳಾಗಿದ್ದೆವು, ಈಗ ಮತ್ತೆ 21 ಜನ್ಮಗಳಿಗಾಗಿ ಪೂಜ್ಯರಾಗುತ್ತೇವೆ. 63 ಜನ್ಮಗಳು ಪೂಜಾರಿಗಳಾದೆವು, ಈಗ ಮತ್ತೆ ನಾವು ಪೂಜ್ಯ, ಸ್ವರ್ಗದ ಮಾಲೀಕರಾಗುತ್ತೇವೆ. ಇದು ನರನಿಂದ ನಾರಾಯಣನಾಗುವ ಜ್ಞಾನವಾಗಿದೆ. ಭಗವಾನುವಾಚ - ನಾನು ನಿಮ್ಮನ್ನು ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ಪತಿತ ರಾಜರು ಪಾವನ ರಾಜರಿಗೆ ವಂದಿಸುತ್ತಾರೆ. ಪ್ರತಿಯೊಬ್ಬ ಮಹಾರಾಜನ ಮಹಲುಗಳಲ್ಲಿ ಮಂದಿರವು ಖಂಡಿತ ಇರುತ್ತದೆ. ಅದರಲ್ಲಿಯೇ ರಾಧೆ-ಕೃಷ್ಣ ಅಥವಾ ಲಕ್ಷ್ಮೀ-ನಾರಾಯಣ ಇಲ್ಲವೆ ರಾಮ-ಸೀತೆಯ ಮಂದಿರವಿರುತ್ತದೆ. ಇತ್ತೀಚೆಗಂತೂ ಗಣೇಶ, ಹನುಮಂತ ಮೊದಲಾದವರ ಮಂದಿರಗಳನ್ನು ಕಟ್ಟಿಸುತ್ತಿರುತ್ತಾರೆ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಅಂಧಶ್ರದ್ಧೆಯಿದೆ! ನೀವೀಗ ತಿಳಿದುಕೊಂಡಿದ್ದೀರಿ - ನಾವೇ ರಾಜ್ಯಭಾರ ಮಾಡಿದೆವು ನಂತರ ವಾಮಮಾರ್ಗದಲ್ಲಿ ಇಳಿದೆವು. ಈಗ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಇದು ನಿಮ್ಮದು ಅಂತಿಮ ಜನ್ಮವಾಗಿದೆ. ಮಧುರಾತಿ ಮಧುರ ಮಕ್ಕಳೇ, ಮೊದಲು ನೀವು ಸ್ವರ್ಗದಲ್ಲಿದ್ದಿರಿ ನಂತರ ಇಳಿಯುತ್ತಾ-ಇಳಿಯುತ್ತಾ ಈಗ ಬಹಳ ಕನಿಷ್ಠ ಮಟ್ಟದಲ್ಲಿದ್ದೀರಿ. ಮಕ್ಕಳೂ ಹೇಳುತ್ತೀರಿ - ನಾವು ಬಹಳ ಶ್ರೇಷ್ಠರಾಗಿದ್ದೆವು, ಈಗ ಪುನಃ ತಂದೆಯು ನಮ್ಮನ್ನು ಶ್ರೇಷ್ಠ ಮಟ್ಟಕ್ಕೆ ಏರಿಸುತ್ತಾರೆ. ನಾವು ಪ್ರತೀ 5000 ವರ್ಷಗಳ ನಂತರ ಓದುತ್ತಲೇ ಬರುತ್ತೇವೆ. ಇದಕ್ಕೆ ವಿಶ್ವದ ಇತಿಹಾಸ-ಭೂಗೋಳದ ಪುನರಾವರ್ತನೆಯೆಂದು ಹೇಳಲಾಗುತ್ತದೆ.

ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ. ಇಡೀ ವಿಶ್ವದಲ್ಲಿ ನಿಮ್ಮ ರಾಜ್ಯವಿರುವುದು. ಗೀತೆಯಲ್ಲಿಯೂ ಇದೆಯಲ್ಲವೆ - ಬಾಬಾ, ತಾವು ಇಂತಹ ರಾಜ್ಯವನ್ನು ಕೊಡುತ್ತೀರಿ ಯಾವುದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಈಗಂತೂ ಎಷ್ಟೊಂದು ಪೈಪೋಟಿಯಿದೆ. ನೀರಿಗಾಗಿ, ಜಮೀನಿಗಾಗಿ ಜಗಳವೇ ನಡೆಯುತ್ತಿರುತ್ತದೆ. ತಮ್ಮ-ತಮ್ಮ ಪ್ರಾಂತ್ಯಗಳ ಸಂಭಾಲನೆ ಮಾಡುತ್ತಿರುತ್ತಾರೆ. ಮಾಡದಿದ್ದರೆ ಹುಡುಗರು ಕಲ್ಲು ಎಸೆಯ ತೊಡಗುವರು. ಈ ನವ ಯುವಕರು ಶಕ್ತಿವಂತರಾಗಿ ಭಾರತದ ರಕ್ಷಣೆ ಮಾಡುತ್ತಾರೆಂದು ಅವರು ತಿಳಿಯುತ್ತಾರೆ. ಆದರೆ ಯುವಕರು ಈಗ ತಮ್ಮ ಶಕ್ತಿಯನ್ನು ಈ ರೂಪದಲ್ಲಿ ತೋರಿಸುತ್ತಿರುತ್ತಾರೆ. ಪ್ರಪಂಚದ ಸ್ಥಿತಿ ನೋಡಿ ಹೇಗಿದೆ! ರಾವಣ ರಾಜ್ಯವಲ್ಲವೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಇದು ಆಸುರೀ ಪ್ರಪಂಚವಾಗಿದೆ. ನೀವೀಗ ದೈವೀ ಸಂಪ್ರದಾಯದವರಾಗುತ್ತಿದ್ದೀರಿ, ದೇವತೆಗಳು ಮತ್ತು ಅಸುರರ ನಡುವೆ ಯುದ್ಧವು ಹೇಗಾಗುವುದು! ನೀವಂತೂ ಡಬಲ್ ಅಹಿಂಸಕರಾಗುತ್ತೀರಿ. ದೇವತೆಗಳು ಡಬಲ್ ಅಹಿಂಸಕರಾಗಿದ್ದಾರೆ. ಅಹಿಂಸಾ ಪರಮೋ ದೇವಿ-ದೇವತಾ ಧರ್ಮವೆಂದು ತಂದೆಯು ತಿಳಿಸಿದ್ದಾರೆ. ಅನ್ಯರಿಗೆ ಮಾತಿನ ಮೂಲಕ ದುಃಖ ಕೊಡುವುದೂ ಸಹ ಹಿಂಸೆಯಾಗಿದೆ. ನೀವು ದೇವತೆಗಳಾಗುತ್ತೀರಿ ಅಂದಮೇಲೆ ಪ್ರತೀ ಮಾತಿನಲ್ಲಿ ಘನತೆಯಿರಬೇಕು. ಆಹಾರ-ಪಾನೀಯಗಳು ಬಹಳ ಉತ್ತಮ ಮಟ್ಟವೂ ಅಲ್ಲ, ಬಹಳ ಕನಿಷ್ಟ ಮಟ್ಟದ್ದೂ ಅಲ್ಲ, ಮಧ್ಯಮ ಸ್ಥಿತಿಯದಾಗಿರಲಿ ಅರ್ಥಾತ್ ಏಕರಸವಾಗಿರಲಿ. ರಾಜರು ಬಹಳ ಕಡಿಮೆ ಮಾತನಾಡುತ್ತಾರೆ. ಪ್ರಜೆಗಳಿಗೂ ರಾಜರಲ್ಲಿ ಬಹಳ ಪ್ರೀತಿಯಿರುತ್ತದೆ. ಇಲ್ಲಂತೂ ನೋಡಿ, ಏನಾಗಿ ಬಿಟ್ಟಿದೆ! ಎಷ್ಟೊಂದು ಆಂದೋಲನಗಳಿವೆ. ತಂದೆಯು ತಿಳಿಸುತ್ತಾರೆ – ಯಾವಾಗ ಪ್ರಪಂಚದ ಸ್ಥಿತಿಯು ಈ ರೀತಿಯಾಗುವುದೋ ಆಗ ನಾನು ಬಂದು ವಿಶ್ವದಲ್ಲಿ ಶಾಂತಿ ಸ್ಥಾಪಿಸುತ್ತೇನೆ. ಎಲ್ಲರೂ ಸೇರಿ ಒಂದಾಗಲೆಂದು ಸರ್ಕಾರವು ಬಯಸುತ್ತದೆ. ಭಲೆ ಎಲ್ಲರೂ ಸಹೋದರರಾಗಿದ್ದಾರೆ ಆದರೆ ಇದಂತೂ ಆಟವಲ್ಲವೆ! ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನೀವು ಯಾವುದರ ಚಿಂತೆಯನ್ನೂ ಮಾಡಬೇಡಿ. ಈಗ ದವಸ ಧಾನ್ಯಗಳ ತೊಂದರೆಯಿದೆ. ಸತ್ಯಯುಗದಲ್ಲಂತೂ ಇದೆಲ್ಲವೂ ಯಥೇಚ್ಛವಾಗಿರುವುದು. ಹಣವಿಲ್ಲದೆ ಎಷ್ಟು ಬೇಕೋ ಅಷ್ಟು ಸಿಗುತ್ತಿರುತ್ತದೆ ಈಗ ಅಂತಹ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ನಾವು ಆರೋಗ್ಯವನ್ನೂ ಈ ರೀತಿ ಮಾಡಿ ಬಿಡುತ್ತೇವೆ. ಅಲ್ಲಿ ಎಂದೂ ಯಾರೂ ರೋಗಿಯಾಗುವುದೇ ಇಲ್ಲ. ಗ್ಯಾರಂಟಿ ಕೊಡುತ್ತೇನೆ. ನಾವು ಈ ದೇವತೆಗಳಂತಹ ನಡವಳಿಕೆಯನ್ನಾಗಿ ಮಾಡುತ್ತೇವೆ. ಎಂತೆಂತಹ ಮಂತ್ರಿಗಳೋ ಆ ರೀತಿಯಾಗಿ ಅವರಿಗೆ ತಿಳಿಸಿಕೊಡಿ, ಬಹಳ ಯುಕ್ತಿಯಿಂದ ತಿಳಿಸಿ. ಅವರ ಅಭಿಪ್ರಾಯದ ಪತ್ರದಲ್ಲಿ ಬಹಳ ಚೆನ್ನಾಗಿ ಬರೆಯುತ್ತಾರೆ ಆದರೆ ಅವರು ತಿಳಿದುಕೊಳ್ಳಬೇಕಲ್ಲವೆ. ಅದಕ್ಕಾಗಿ ನಮಗೆ ಬಿಡುವಿಲ್ಲವೆಂದು ಹೇಳುತ್ತಾರೆ. ನೀವು ಹಿರಿಯರು ಈ ಮಾತನ್ನು ಧೈರ್ಯದಿಂದ ಹೇಳಿದಾಗ ಬಡವರ ಉನ್ನತಿಯೂ ಆಗುವುದು.

ತಂದೆಯು ತಿಳಿಸುತ್ತಾರೆ – ಈಗ ಎಲ್ಲರ ತಲೆಯ ಮೇಲೆ ಮೃತ್ಯು ಕುಳಿತಿದೆ. ಇಂದು, ನಾಳೆ ಎಂದು ಹೇಳುತ್ತಾ-ಹೇಳುತ್ತಾ ಕಾಲವು ಕಬಳಿಸಿ ಬಿಡುವುದು. ನೀವು ಕುಂಭಕರ್ಣರ ತರಹ ಆಗುತ್ತಿದ್ದೀರಿ, ಹೀಗೆ ತಿಳಿಸುವುದರಲ್ಲಿ ಮಕ್ಕಳಿಗೆ ಬಹಳ ಮಜಾ ಬರುತ್ತದೆ. ತಂದೆಯೇ ಈ ಚಿತ್ರಗಳನ್ನು ಮಾಡಿಸಿದ್ದಾರೆ. ದಾದಾರವರಿಗೂ ಸಹ ಈ ಜ್ಞಾನವಿರಲಿಲ್ಲ. ನಿಮಗೆ ಲೌಕಿಕ ಮತ್ತು ಪಾರಲೌಕಿಕ ತಂದೆಯಿಂದ ಆಸ್ತಿಯು ಸಿಗುತ್ತದೆ. ಅಲೌಕಿಕ ತಂದೆಯಿಂದ ಆಸ್ತಿಯು ಸಿಗುವುದಿಲ್ಲ. ಇವರಂತೂ (ಬ್ರಹ್ಮಾ) ಮಧ್ಯದಲ್ಲಿ ದಲ್ಲಾಳಿಯಾಗಿದ್ದಾರೆ. ಇವರಿಗೆ ಯಾವುದೇ ಆಸ್ತಿಯಿಲ್ಲ ಆದ್ದರಿಂದ ಪ್ರಜಾಪಿತ ಬ್ರಹ್ಮನನ್ನು ನೆನಪು ಮಾಡಬಾರದು. ನನ್ನಿಂದ ನಿಮಗೆ ಏನೂ ಸಿಗುವುದಿಲ್ಲ. ನಾನೂ ಸಹ ನಿಮ್ಮ ಹಾಗೆ ಓದುತ್ತೇನೆ. ಒಂದನೆಯದಾಗಿ ಲೌಕಿಕ ತಂದೆಯಿಂದ, ಇನ್ನೆಂದು ಬೇಹದ್ದಿನ ತಂದೆಯಿಂದ ಆಸ್ತಿಯು ಸಿಗುತ್ತದೆ. ಪ್ರಜಾಪಿತ ಬ್ರಹ್ಮನು ಆಸ್ತಿಯನ್ನೇನು ಕೊಡುತ್ತಾರೆ! ತಂದೆಯು ತಿಳಿಸುತ್ತಾರೆ – ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ಇವರು (ಬ್ರಹ್ಮಾ) ರಥವಲ್ಲವೆ. ರಥವನ್ನು ನೆನಪು ಮಾಡಬಾರದು. ಸರ್ವ ಶ್ರೇಷ್ಠ ಭಗವಂತನೆಂದು ಹೇಳಲಾಗುತ್ತದೆ. ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ. ಆತ್ಮವೇ ಎಲ್ಲವನ್ನೂ ಮಾಡುತ್ತದೆಯಲ್ಲವೆ. ಒಂದು ಶರೀರವನ್ನು ಬಿಟ್ಟು ಇನ್ನೆಂದನ್ನು ತೆಗೆದುಕೊಳ್ಳುತ್ತದೆ. ಹೇಗೆ ಸರ್ಪದ ಉದಾಹರಣೆಯಿದೆ. ಭ್ರಮರಿಗಳೂ ಸಹ ನೀವಾಗಿದ್ದೀರಿ. ಜ್ಞಾನದ ಭೂ ಭೂ ಮಾಡಿ, ಜ್ಞಾನವನ್ನು ತಿಳಿಸುತ್ತಾ-ತಿಳಿಸುತ್ತಾ ನೀವು ಯಾರನ್ನು ಬೇಕಾದರೂ ವಿಶ್ವದ ಮಾಲೀಕರನ್ನಾಗಿ ಮಾಡಬಲ್ಲಿರಿ. ಯಾವ ತಂದೆಯು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಇಂತಹ ತಂದೆಯನ್ನು ಏಕೆ ನೆನಪು ಮಾಡುವುದಿಲ್ಲ! ಈಗ ತಂದೆಯು ಬಂದಿದ್ದಾರೆ ಅಂದಮೇಲೆ ಆಸ್ತಿಯನ್ನೇಕೆ ತೆಗೆದುಕೊಳ್ಳಬಾರದು. ನಮಗೆ ಬಿಡುವಿಲ್ಲವೆಂದು ಏಕೆ ಹೇಳುತ್ತಾರೆ! ಒಳ್ಳೊಳ್ಳೆಯ ಮಕ್ಕಳಂತೂ ಸೆಕೆಂಡಿನಲ್ಲಿ ಅರಿತುಕೊಳ್ಳುತ್ತಾರೆ. ತಂದೆಯು ತಿಳಿಸಿದ್ದಾರೆ – ಮನುಷ್ಯರು ಲಕ್ಷ್ಮಿಯ ಪ್ರಜೆಯನ್ನು ಮಾಡುತ್ತಾರೆ ಅಂದಾಗ ಲಕ್ಷ್ಮಿಯಿಂದ ಏನು ಸಿಗುತ್ತದೆ ಮತ್ತು ಜಗದಂಬೆಯಿಂದ ಏನು ಸಿಗುತ್ತದೆ. ಲಕ್ಷ್ಮಿಯಂತೂ ಸ್ವರ್ಗದ ದೇವಿಯಾಗಿದ್ದಾಳೆ, ಅವರಿಂದ ಹಣವನ್ನು ಬೇಡುತ್ತಾರೆ. ಜಗದಂಬೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಎಲ್ಲಾ ಕಾಮನೆಗಳನ್ನು ಪೂರ್ಣ ಮಾಡುತ್ತಾರೆ. ಶ್ರೀಮತದ ಮೂಲಕ ಎಲ್ಲಾ ಕಾಮನೆಗಳು ಈಡೇರುತ್ತವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಕರ್ಮೇಂದ್ರಿಯಗಳಿಂದ ಯಾವುದೇ ತಪ್ಪಾಗಬಾರದು, ಇದಕ್ಕಾಗಿ ನಾನಾತ್ಮನಾಗಿದ್ದೇವೆ, ಎಂಬ ಸ್ಮೃತಿಯನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ಶರೀರವನ್ನು ನೋಡಬಾರದು. ಒಬ್ಬ ತಂದೆಯ ಕಡೆ ಗಮನವನ್ನಿಡಬೇಕು.

2. ಈಗ ವಾನಪ್ರಸ್ಥ ಸ್ಥಿತಿಯಾಗಿದೆ ಆದ್ದರಿಂದ ವಾಣಿಯಿಂದ ದೂರ ಹೋಗುವ ಪುರುಷಾರ್ಥ ಮಾಡಬೇಕಾಗಿದೆ. ಪವಿತ್ರರು ಖಂಡಿತ ಆಗಬೇಕಾಗಿದೆ. ಬುದ್ಧಿಯಲ್ಲಿರಲಿ - ಸತ್ಯದ ದೋಣಿಯು ಅಲುಗಾಡುವುದೇ ಹೊರತು ಮುಳುಗುವುದಿಲ್ಲ….. ಆದ್ದರಿಂದ ವಿಘ್ನಗಳಿಗೆ ಹೆದರಬಾರದು.

ವರದಾನ:
ಅಹಂ(ಅಹಂಕಾರ) ಮತ್ತು ವೆಹಂ(ಭ್ರಮೆ) ಅನ್ನು ಸಮಾಪ್ತಿ ಮಾಡಿ ದಯಾ ಹೃದಯಿಗಳಾಗುವಂತಹ ವಿಶ್ವ ಕಲ್ಯಾಣಕಾರಿ ಭವ.

ಎಂತಹದೇ ಅವಗುಣವುಳ್ಳ, ಕಠಿಣ ಸಂಸ್ಕಾರವುಳ್ಳ, ಕಡಿಮೆ ಬುದ್ಧಿವುಳ್ಳ ಆತ್ಮವಿರಲಿ ಆದರೆ ಯಾರು ದಯಾಹೃದಯಿ ವಿಶ್ವ ಕಲ್ಯಾಣಕಾರಿ ಮಕ್ಕಳಿದ್ದಾರೆ ಅವರು ಸರ್ವ ಆತ್ಮಗಳ ಪ್ರತಿ ಲಾಫುಲ್ನ ಜೊತೆ ಲವ್ಫುಲ್ ಆಗಿರುತ್ತಾರೆ. ಎಂದೂ ಈ ಒಂದು ಭ್ರಮೆಯಲ್ಲಿ ಬರುವುದಿಲ್ಲ. ಇವರು ಎಂದೂ ಬದಲಾವಣೆಯೇ ಆಗುವುದಿಲ್ಲ, ಇವರು ಇರುವುದೇ ಹೀಗೆ..... ಅಥವಾ ಇವರು ಏನೂ ಮಾಡಲಾರರು, ನಾನು ಎಲ್ಲ ಆಗಿರುವೆ.... ಇವರು ಏನೂ ಇಲ್ಲ. ಈ ಪ್ರಕಾರದ ಅಹಂಕಾರ ಮತ್ತು ಭ್ರಮೆಯನ್ನು ಬಿಟ್ಟು, ಬಲಹೀನತೆ ಅಥವಾ ಕೆಟ್ಟತನವನ್ನು ತಿಳಿದಿದ್ದರೂ ಸಹ ಕ್ಷಮೆ ಮಾಡುವಂತಹ ದಯಾ ಹೃದಯಿ ಮಕ್ಕಳೇ ವಿಶ್ವ ಕಲ್ಯಾಣದ ಸೇವೆಯಲ್ಲಿ ಸಫಲರಾಗುತ್ತಾರೆ.

ಸ್ಲೋಗನ್:
ಎಲ್ಲಿ ಬ್ರಾಹ್ಮಣರ ತನು-ಮನ-ಧನದ ಸಹಯೋಗವಿದೆ ಅಲ್ಲಿ ಸಫಲತೆ ಜೊತೆಯಲ್ಲಿರುತ್ತದೆ.