23.12.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ಪತಿತ ಪ್ರಪಂಚವು ಒಂದು ಹಳೆಯ ಹಳ್ಳಿಯಾಗಿದೆ, ನೀವಿರಲು ಇದು ಯೋಗ್ಯವಲ್ಲ, ನೀವೀಗ ಹೊಸ ಪಾವನ ಪ್ರಪಂಚದಲ್ಲಿ ಹೋಗಬೇಕಾಗಿದೆ”

ಪ್ರಶ್ನೆ:
ತಂದೆಯು ತಾವು ಮಕ್ಕಳಿಗೆ ಉನ್ನತಿಯ ಯಾವ ಒಂದು ಯುಕ್ತಿಯನ್ನು ತಿಳಿಸುತ್ತಾರೆ?

ಉತ್ತರ:
ಮಕ್ಕಳೇ, ನೀವು ಆಜ್ಞಾಕಾರಿಗಳಾಗಿ ಬಾಪ್ದಾದಾರವರ ಮತದಂತೆ ನಡೆಯುತ್ತಾ ಇರಿ. ಬಾಪ್ದಾದಾ ಇಬ್ಬರೂ ಒಟ್ಟಿಗೆ ಇದ್ದಾರೆ. ಆದ್ದರಿಂದ ಒಂದುವೇಳೆ ಇವರ (ಬ್ರಹ್ಮಾ) ಸಲಹೆಯಿಂದ ಏನಾದರೂ ನಷ್ಟವಾದರೂ ಸಹ ಅದಕ್ಕೆ ತಂದೆಯು ಜವಾಬ್ದಾರನಾಗಿದ್ದಾರೆ, ಎಲ್ಲವನ್ನೂ ಸರಿಪಡಿಸುತ್ತಾರೆ. ನೀವು ನಿಮ್ಮ ಮತವನ್ನು ನಡೆಸಬೇಡಿ, ಶಿವ ತಂದೆಯ ಮತವೆಂದು ತಿಳಿಯುತ್ತಾ ನಡೆಯಿರಿ ಆಗ ಬಹಳ ಉನ್ನತಿಯಾಗುವುದು.

ಓಂ ಶಾಂತಿ.
ಮೊಟ್ಟ ಮೊದಲು ಮುಖ್ಯ ಮಾತನ್ನು ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಂಡು ಕುಳಿತುಕೊಳ್ಳಿ ಮತ್ತು ತಂದೆಯನ್ನು ನೆನಪು ಮಾಡಿ ಆಗ ನಿಮ್ಮ ಎಲ್ಲಾ ದುಃಖಗಳು ದೂರವಾಗುತ್ತವೆ. ಹೇಗೆ ಆ ಮನುಷ್ಯರು ಆಶೀರ್ವಾದ ಮಾಡುತ್ತಾರಲ್ಲವೆ! ಈ ತಂದೆಯೂ ಸಹ ತಿಳಿಸುತ್ತಾರೆ - ಮಕ್ಕಳೇ, ನಿಮ್ಮ ಎಲ್ಲಾ ದುಃಖಗಳು ದೂರವಾಗುತ್ತವೆ, ಕೇವಲ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದಂತೂ ಬಹಳ ಸಹಜವಾಗಿದೆ. ಇದು ಭಾರತದ ಪ್ರಾಚೀನ ಸಹಜ ರಾಜಯೋಗ ಆಗಿದೆ. ಪ್ರಾಚೀನ ಎಂಬುದಕ್ಕೂ ಒಂದು ಕಾಲಾವಧಿ ಬೇಕಲ್ಲವೆ. ಬಹಳ-ಬಹಳ ಹಿಂದೆ ಎಂದರೆ ಎಷ್ಟು ಸಮಯದ ಹಿಂದೆ? ತಂದೆಯು ತಿಳಿಸುತ್ತಾರೆ - ಪೂರ್ಣ 5000 ವರ್ಷಗಳ ಮೊದಲು ಈ ರಾಜಯೋಗವನ್ನು ಕಲಿಸಿದ್ದೆನು, ಇದನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ ಮತ್ತು ನೀವು ಮಕ್ಕಳ ವಿನಃ ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆತ್ಮಗಳು ಅಂದರೆ ಮಕ್ಕಳು ಮತ್ತು ಪರಮಾತ್ಮ ತಂದೆಯು ಬಹಳ ಕಾಲ ಅಗಲಿ ಹೋಗಿದ್ದರು.... ಎಂದು ಗಾಯನವೂ ಇದೆ. ತಂದೆಯೇ ತಿಳಿಸುತ್ತಾರೆ - ನೀವು ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ಪತಿತರಾಗಿ ಬಿಟ್ಟಿದ್ದೀರಿ. ಈಗ ಸ್ಮೃತಿ ಬಂದಿತು. ಹೇ ಪತಿತ-ಪಾವನ ಎಂದು ಎಲ್ಲರೂ ಚೀರಾಡುತ್ತಾರೆ. ಕಲಿಯುಗದಲ್ಲಿ ಪತಿತರೇ ಇರುತ್ತಾರೆ, ಸತ್ಯಯುಗದಲ್ಲಿ ಪಾವನರಿರುತ್ತಾರೆ. ಅದು ಪಾವನ ಪ್ರಪಂಚವಾಗಿದೆ. ಈ ಹಳೆಯ ಪ್ರಪಂಚವು ನೀವಿರಲು ಯೋಗ್ಯವಿಲ್ಲ ಆದರೆ ಮಾಯೆಯ ಪ್ರಭಾವವೂ ಕಡಿಮೆಯಿಲ್ಲ. ಇಲ್ಲಿ ನೋಡಿ, 100-125 ಅಂತಸ್ತುಗಳ ದೊಡ್ಡ-ದೊಡ್ಡ ಮಹಲುಗಳನ್ನು ಕಟ್ಟಿಸುತ್ತಾರೆ, ಇದಕ್ಕೆ ಮಾಯೆಯ ಆಡಂಬರವೆಂದು ಹೇಳಲಾಗುತ್ತದೆ. ಮಾಯೆಯ ಶೌರ್ಯ ಹೀಗಿದೆ, ನೀವು ಸ್ವರ್ಗಕ್ಕೆ ನಡೆಯಿರಿ ಎಂದು ಹೇಳಿದರೆ ನಮಗಾಗಿ ಸ್ವರ್ಗವು ಇಲ್ಲಿಯೇ ಇದೆ ಎಂದು ಹೇಳುತ್ತಾರೆ. ಇದಕ್ಕೆ ಮಾಯೆಯ ಶೌರ್ಯವೆಂದು ಹೇಳಲಾಗುತ್ತದೆ. ಆದರೆ ನೀವು ಮಕ್ಕಳಿಗೆ ತಿಳಿದಿದೆ - ಇದು ಹಳೆಯ ಹಳ್ಳಿಯಾಗಿದೆ, ಇದಕ್ಕೆ ನರಕ ಹಳೆಯ ಪ್ರಪಂಚ ಅದರಲ್ಲಿಯೂ ರೌರವ ನರಕವೆಂದು ಹೇಳಲಾಗುತ್ತದೆ. ಸತ್ಯಯುಗಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಈ ಶಬ್ಧವಂತೂ ಇದೆಯಲ್ಲವೆ. ಇದಕ್ಕೆ ಎಲ್ಲರೂ ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ನಿರ್ವಿಕಾರಿ ಪ್ರಪಂಚವಂತೂ ಸ್ವರ್ಗವಾಗಿತ್ತು, ಸ್ವರ್ಗಕ್ಕೆ ನಿರ್ವಿಕಾರಿ ಪ್ರಪಂಚವೆಂತಲೂ, ನರಕಕ್ಕೆ ವಿಕಾರಿ ಪ್ರಪಂಚವೆಂತಲೂ ಹೇಳಲಾಗುತ್ತದೆ. ಇಷ್ಟು ಸಹಜ ಮಾತುಗಳೂ ಸಹ ಏಕೆ ಮನುಷ್ಯರ ಬುದ್ಧಿಯಲ್ಲಿ ಬರುವುದಿಲ್ಲ! ಮನುಷ್ಯರು ಎಷ್ಟು ದುಃಖಿಯಾಗಿದ್ದಾರೆ! ಎಷ್ಟೊಂದು ಜಗಳ-ಕಲಹಗಳಾಗುತ್ತವೆ. ದಿನ-ಪ್ರತಿದಿನ ಬಾಂಬು ಇತ್ಯಾದಿಗಳೂ ಸಹ ಈ ರೀತಿ ಮಾಡುತ್ತಿರುತ್ತಾರೆ, ಅದು ಬಿದ್ದ ಕೂಡಲೇ ಮನುಷ್ಯರು ಸಮಾಪ್ತಿಯಾಗಿ ಬಿಡುವರು ಆದರೆ ತುಚ್ಛ ಬುದ್ಧಿ ಮನುಷ್ಯರು ಏನಾಗುವುದಿದೆ ಎಂಬುದನ್ನು ತಿಳಿದುಕೊಳ್ಳುವುದೇ ಇಲ್ಲ. ಈ ಮಾತುಗಳನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಈಗ ಏನಾಗುವುದಿದೆ? ಹಳೆಯ ಪ್ರಪಂಚದ ವಿನಾಶವಾಗಲಿದೆ ಮತ್ತು ಹೊಸ ಪ್ರಪಂಚದ ಸ್ಥಾಪನೆಯೂ ಗುಪ್ತ ರೂಪದಲ್ಲಿ ಆಗುತ್ತಿದೆ. ನೀವು ಮಕ್ಕಳಿಗೆ ಗುಪ್ತ ಯೋಧರೆಂದು ಹೇಳಲಾಗುತ್ತದೆ. ನೀವು ಯುದ್ಧ ಮಾಡುತ್ತಿದ್ದೀರೆಂದು ನಿಮಗೆ ಯಾರಾದರೂ ಹೇಳಿದ್ದಾರೆಯೇ! ಪಂಚ ವಿಕಾರಗಳೊಂದಿಗೆ ನಿಮ್ಮ ಯುದ್ಧವಿದೆ. ನೀವು ಎಲ್ಲರಿಗೆ ಹೇಳುತ್ತೀರಿ - ಪವಿತ್ರರಾಗಿ, ಒಬ್ಬ ತಂದೆಯ ಮಕ್ಕಳಲ್ಲವೆ. ಪ್ರಜಾಪಿತ ಬ್ರಹ್ಮನ ಮಕ್ಕಳೆಲ್ಲರೂ ಸಹೋದರ-ಸಹೋದರಿಯರಾದರು. ತಿಳಿಸುವುದಕ್ಕೂ ಬಹಳ ಯುಕ್ತಿಗಳು ಬೇಕು. ಪ್ರಜಾಪಿತ ಬ್ರಹ್ಮನಿಗಂತೂ ಅನೇಕ ಮಕ್ಕಳಿದ್ದಾರೆ, ಕೇವಲ ಒಬ್ಬರಲ್ಲ. ಹೆಸರೇ ಆಗಿದೆ - ಪ್ರಜಾಪಿತ. ಲೌಕಿಕ ತಂದೆಗೆ ಎಂದೂ ಸಹ ಪ್ರಜಾಪಿತನೆಂದು ಹೇಳುವುದಿಲ್ಲ. ಪ್ರಜಾಪಿತ ಬ್ರಹ್ಮನೆಂದರೆ ಅವರ ಮಕ್ಕಳೆಲ್ಲರೂ ಪರಸ್ಪರ ಸಹೋದರ-ಸಹೋದರಿಯರು, ಬ್ರಹ್ಮಾಕುಮಾರ-ಕುಮಾರಿಯರಾದರಲ್ಲವೆ ಆದರೆ ಮನುಷ್ಯರು ತಿಳಿದುಕೊಳ್ಳುವುದಿಲ್ಲ. ಕಲ್ಲು ಬುದ್ಧಿಯವರಾಗಿರುವ ಕಾರಣ ತಿಳಿದುಕೊಳ್ಳುವುದಕ್ಕೂ ಪ್ರಯತ್ನ ಪಡುವುದಿಲ್ಲ. ಪ್ರಜಾಪಿತ ಬ್ರಹ್ಮನ ಮಕ್ಕಳು ಸಹೋದರ-ಸಹೋದರಿಯರಾದಿರಿ ಅಂದಮೇಲೆ ವಿಕಾರದಲ್ಲಿ ಹೋಗಲು ಸಾಧ್ಯವಿಲ್ಲ. ನೀವು ಬೋರ್ಡಿನ ಮೇಲೂ ಸಹ ಪ್ರಜಾಪಿತ ಶಬ್ಧವನ್ನು ಬರೆಯುವುದು ಬಹಳ ಅವಶ್ಯಕವಾಗಿದೆ. ಕೇವಲ ಬ್ರಹ್ಮಾ ಎಂದು ಬರೆಯುವುದರಿಂದ ಅಷ್ಟೊಂದು ಪ್ರಭಾವಶಾಲಿಯಾಗಿರುವುದಿಲ್ಲ. ಆದ್ದರಿಂದ ಬೋರ್ಡಿನ ಮೇಲೂ ಸಹ ಸರಿಯಾದ ಶಬ್ಧವನ್ನು ಬರೆದು ಸುಧಾರಣೆ ಮಾಡಬೇಕಾಗುತ್ತದೆ. ಇದು ಬಹಳ ಅವಶ್ಯಕ ಶಬ್ಧವಾಗಿದೆ. ಬ್ರಹ್ಮಾ ಎಂಬ ಹೆಸರಂತೂ ಸ್ತ್ರೀಯರಿಗೂ ಇರುತ್ತದೆ. ಸ್ತ್ರೀಯರ ಹೆಸರನ್ನು ಪುರುಷರಿಗೆ, ಪುರುಷರ ಹೆಸರನ್ನು ಸ್ತ್ರೀಯರಿಗೆ ಇಟ್ಟು ಬಿಡುತ್ತಾರೆ. ಇಷ್ಟೊಂದು ಹೆಸರುಗಳನ್ನು ಎಲ್ಲಿಂದ ತರುವುದು? ಎಲ್ಲವೂ ಡ್ರಾಮಾ ಪ್ಲಾನನುಸಾರ ಆಗುತ್ತಿದೆ. ತಂದೆಗೆ ಆಜ್ಞಾಕಾರಿಗಳು, ಪ್ರಾಮಾಣಿಕರಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಬಾಪ್-ದಾದಾ ಇಬ್ಬರೂ ಒಟ್ಟಿಗೆ ಇದ್ದಾರಲ್ಲವೆ. ಇವರು ಯಾರು ಎಂಬುದನ್ನು ತಿಳಿದುಕೊಳ್ಳುವುದಿಲ್ಲ ಆದ್ದರಿಂದಲೇ ಶಿವ ತಂದೆಯು ತಿಳಿಸುತ್ತಾರೆ, ನನ್ನ ಆಜ್ಞೆಯನ್ನೂ ಸಹ ಮನುಷ್ಯರು ಅರ್ಥ ಮಾಡಿಕೊಳ್ಳುವುದಿಲ್ಲ. ಉಲ್ಟಾ ಹೇಳಲಿ, ಸುಲ್ಟಾ ಹೇಳಲಿ ಆದರೆ ನಮಗೆ ಶಿವ ತಂದೆಯು ತಿಳಿಸುತ್ತಿದ್ದಾರೆಂದು ತಿಳಿಯಿರಿ ಆಗ ನಾನು ಜವಾಬ್ದಾರನಾಗುವೆನು. ಇವರ ಸಲಹೆಯಿಂದ ಏನೇ ನಷ್ಟವಾದರೂ ಸಹ ಜವಾಬ್ದಾರನು ನಾನಾಗಿರುವುದರಿಂದ ಎಲ್ಲವನ್ನೂ ಸರಿಪಡಿಸುವೆನು. ಆದ್ದರಿಂದ ಎಲ್ಲವೂ ಶಿವ ತಂದೆಯ ಸಲಹೆಯೆಂದು ತಿಳಿದುಕೊಳ್ಳುತ್ತಾ ಇರಿ. ಆಗ ನಿಮ್ಮದು ಬಹಳ ಉನ್ನತಿಯಾಗುವುದು, ಆದರೆ ಈ ರೀತಿ ಕೆಲವರೇ ತಿಳಿದುಕೊಳ್ಳುತ್ತಾರೆ. ಕೆಲವರಂತೂ ತಮ್ಮ ಮತವನ್ನು ನಡೆಸುತ್ತಿರುತ್ತಾರೆ. ತಂದೆಯು ನೀವು ಮಕ್ಕಳಿಗೆ ಆದೇಶ ನೀಡಲು ತಿಳಿಸಿಕೊಡಲು ಎಷ್ಟು ದೂರದಿಂದ ಬರುತ್ತಾರೆ! ಮತ್ತ್ಯಾರ ಬಳಿಯೂ ಈ ಆತ್ಮಿಕ ಜ್ಞಾನವಿಲ್ಲ. ಇಡೀ ದಿನ ಇದೇ ಚಿಂತನೆಯು ನಡೆಯಬೇಕು - ಮನುಷ್ಯರಿಗೆ ಅರ್ಥವಾಗಬೇಕಾದರೆ ಹೇಗೆ ಬರೆಯಬೇಕು? ಎಂದು. ಇಂತಿಂತಹ ನೇರ ಶಬ್ಧಗಳನ್ನು ಬರೆಯಬೇಕು - ಮನುಷ್ಯರ ದೃಷ್ಟಿಯು ಅದರ ಮೇಲೆ ಬೀಳಲಿ. ಯಾರೇ ಆದರೂ ಪ್ರಶ್ನೆ ಕೇಳುವ ಅವಶ್ಯಕತೆಯೇ ಇರಬಾರದು, ಆ ರೀತಿ ನೀವು ತಿಳಿಸಿಕೊಡಿ - ತಂದೆಯು ತಿಳಿಸುತ್ತಾರೆ, ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿದರೆ ಎಲ್ಲಾ ದುಃಖಗಳು ದೂರವಾಗುತ್ತವೆ. ಯಾರು ಚೆನ್ನಾಗಿ ನೆನಪಿನಲ್ಲಿರುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಇದಂತೂ ಸೆಕೆಂಡಿನ ಮಾತಾಗಿದೆ. ಮನುಷ್ಯರು ಏನೇನನ್ನೋ ಕೇಳುತ್ತಿರುತ್ತಾರೆ ಅದಕ್ಕೆ ನೀವು ಏನನ್ನೂ ಹೇಳಬೇಡಿ. ಇಷ್ಟನ್ನೇ ತಿಳಿಸಿ - ಹೆಚ್ಚಿಗೆ ಕೇಳಬೇಡಿ, ಮೊದಲು ಒಂದು ಮಾತನ್ನು ನಿಶ್ಚಯ ಮಾಡಿಕೊಳ್ಳಿ. ಪ್ರಶ್ನೆಗಳ ಕಾಡಿನಲ್ಲಿ ಸಿಕ್ಕಿ ಹಾಕಿಕೊಂಡರೆ ಮತ್ತೆ ಅದರಿಂದ ಹೊರ ಬರುವ ಮಾರ್ಗವೇ ಸಿಗುವುದಿಲ್ಲ. ಹೇಗೆ ಹಿಮದಲ್ಲಿ ಮನುಷ್ಯರು ಸಿಕ್ಕಿ ಹಾಕಿಕೊಂಡರೆ ಹೊರ ಬರಲು ಕಷ್ಟವಾಗುತ್ತದೆ. ಇದೂ ಹಾಗೆಯೇ. ಮನುಷ್ಯರು ಎಲ್ಲಿಂದ ಎಲ್ಲಿಗೋ ಮಾಯೆಯ ಕಡೆ ಹೊರಟು ಹೋಗುತ್ತಾರೆ. ಆದ್ದರಿಂದ ಮೊದಲು ಎಲ್ಲರಿಗೂ ಒಂದೇ ಮಾತನ್ನು ತಿಳಿಸಿ - ನೀವು ಅವಿನಾಶಿ ಆತ್ಮನಾಗಿದ್ದೀರಿ. ತಂದೆಯೂ ಸಹ ಅವಿನಾಶಿ ಪತಿತ-ಪಾವನನಾಗಿದ್ದಾರೆ, ನೀವು ಪತಿತರಾಗಿದ್ದೀರಿ. ಈಗ ಮನೆಗೆ ಹೋಗಬೇಕು ಇಲ್ಲವೆ ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ. ಹಳೆಯ ಪ್ರಪಂಚದಲ್ಲಿ ಅಂತಿಮದವರೆಗೂ ಬರುತ್ತಿರುತ್ತಾರೆ. ಯಾರು ಪೂರ್ಣ ಓದುವುದಿಲ್ಲವೋ ಅವರು ಅವಶ್ಯವಾಗಿ ಕೊನೆಯಲ್ಲಿ ಬರುತ್ತಾರೆ. ಎಷ್ಟೊಂದು ಲೆಕ್ಕವಿದೆ ಮತ್ತು ಮೊದಲು ಯಾರು ಹೋಗುವರು ಎಂದು ವಿದ್ಯೆಯಿಂದಲೂ ತಿಳಿದುಕೊಳ್ಳಲಾಗುತ್ತದೆ. ಶಾಲೆಯಲ್ಲಿಯೂ ಗುರಿಯನ್ನು ತೋರಿಸುತ್ತಾರಲ್ಲವೆ. ಓಡಿ ಹೋಗಿ ಗುರಿಯನ್ನು ಮುಟ್ಟಿ ಹಿಂತಿರುಗಿ ಬನ್ನಿ ಎಂದು ಹೇಳುತ್ತಾರೆ. ಮೊದಲ ನಂಬರಿನವರಿಗೆ ಬಹುಮಾನ ಸಿಗುತ್ತದೆ. ಇದು ಬೇಹದ್ದಿನ ಮಾತಾಗಿದೆ, ಇಲ್ಲಿ ಬೇಹದ್ದಿನ ಬಹುಮಾನ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ನೆನಪಿನ ಯಾತ್ರೆಯಲ್ಲಿರಿ, ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಇಲ್ಲಿಯೇ ಸರ್ವಗುಣ ಸಂಪನ್ನರಾಗಬೇಕಾಗಿದೆ ಆದ್ದರಿಂದ ತಂದೆಯು ಹೇಳುತ್ತಾರೆ - ಮಕ್ಕಳೇ, ಚಾರ್ಟ್ ಇಡಿ. ನೆನಪಿನ ಯಾತ್ರೆಯ ಚಾರ್ಟ್ ಇಟ್ಟುಕೊಂಡಾಗ ನಾವು ಲಾಭದಲ್ಲಿದ್ದೇವೆಯೇ ಅಥವಾ ನಷ್ಟದಲ್ಲಿದ್ದೇವೆಯೇ ಎಂಬುದು ಅರ್ಥವಾಗುತ್ತದೆ ಆದರೆ ಮಕ್ಕಳು ಬರೆಯುವುದೇ ಇಲ್ಲ. ತಂದೆಯು ಹೇಳುತ್ತಾರೆ ಆದರೆ ಮಕ್ಕಳು ಮಾಡುವುದಿಲ್ಲ. ಬಹಳ ಕೆಲವರೇ ಮಾಡುತ್ತಾರೆ ಆದ್ದರಿಂದ ಮಾಲೆಯು ಕೆಲವರದು ಮಾಡಲ್ಪಟ್ಟಿದೆ. 8 ಮಣಿಗಳು ಮಾತ್ರವೇ ಸ್ಕಾಲರ್ಶಿಪ್ ತೆಗೆದುಕೊಳ್ಳುತ್ತಾರೆ ನಂತರ 108 ಮಣಿಗಳು ಪ್ಲಸ್ (+) ನಲ್ಲಿರುತ್ತಾರೆ. ಪ್ಲಸ್ನಲ್ಲಿ ಯಾರು ಹೋಗುತ್ತಾರೆ? ರಾಜ ಮತ್ತು ರಾಣಿ. ಬಹಳ ಸ್ವಲ್ಪವೇ ವ್ಯತ್ಯಾಸವಿರುತ್ತದೆ.

ತಂದೆಯು ತಿಳಿಸುತ್ತಾರೆ - ಮೊದಲು ತಮ್ಮನ್ನು ಆತ್ಮನೆಂದು ತಿಳಿಯಿರಿ ಮತ್ತು ತಂದೆಯನ್ನು ನೆನಪು ಮಾಡಿ. ಇದೇ ನೆನಪಿನ ಯಾತ್ರೆಯಾಗಿದೆ. ಕೇವಲ ಇದೇ ತಂದೆಯ ಸಂದೇಶವನ್ನು ಕೊಡಬೇಕಾಗಿದೆ, ಹೆಚ್ಚು ವರ್ಣನೆಯನ್ನು ಮಾಡುವ ಅವಶ್ಯಕತೆಯಿಲ್ಲ. ಮನ್ಮನಾಭವ. ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ಹಳೆಯ ಪ್ರಪಂಚದಲ್ಲಿ ಎಲ್ಲವನ್ನೂ ಬುದ್ಧಿಯಿಂದ ತ್ಯಾಗ ಮಾಡಬೇಕಾಗಿದೆ ಏಕೆಂದರೆ ಈಗ ಹಿಂತಿರುಗಿ ಹೋಗಬೇಕಾಗಿದೆ. ಅಶರೀರಿಯಾಗಬೇಕಾಗಿದೆ. ಎಲ್ಲಿ ತಂದೆಯು ನೆನಪು ತರಿಸುತ್ತಾರೆ ಮತ್ತು ಇಡೀ ದಿನದಲ್ಲಿ ಮಕ್ಕಳು ನೆನಪೇ ಮಾಡುವುದಿಲ್ಲ. ಶ್ರೀಮತದಂತೆ ನಡೆಯುವುದಿಲ್ಲ, ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಹೊಸ ಪ್ರಪಂಚದಲ್ಲಿ ಹೋಗಬೇಕೆಂದರೆ ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ತಂದೆಯು ನಮಗೆ ರಾಜ್ಯಭಾಗ್ಯವನ್ನು ಕೊಟ್ಟರು ಮತ್ತು ನಾವು ಹೀಗೆ ಕಳೆದುಕೊಂಡೆವು, 84 ಜನ್ಮಗಳನ್ನು ತೆಗೆದುಕೊಂಡೆವು, ಲಕ್ಷಾಂತರ ವರ್ಷಗಳ ಮಾತಿಲ್ಲ. ಬಹಳ ಮಂದಿ ತಂದೆಯನ್ನು ಅರಿತುಕೊಳ್ಳದ ಕಾರಣ ಅನೇಕ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ - ಮೊದಲು ನನ್ನೊಬ್ಬನನ್ನೇ ನೆನಪು ಮಾಡಿ ಆಗ ಪಾಪಗಳು ಕಳೆಯುತ್ತವೆ ಮತ್ತು ದೈವೀ ಗುಣಗಳನ್ನು ಧಾರಣೆ ಮಾಡಿದರೆ ದೇವತೆಗಳಾಗುವಿರಿ. ಮತ್ತೇನನ್ನೂ ಕೇಳುವ ಅವಶ್ಯಕತೆಯಿಲ್ಲ. ತಂದೆಯನ್ನು ಅರಿತುಕೊಳ್ಳದೆ ಆಸ್ತಿಯ ಬಗ್ಗೆ ವರ್ಣನೆ ಮಾಡುವುದರಿಂದ ತಾವೂ ತಬ್ಬಿಬ್ಬಾಗುತ್ತಾರೆ ಮತ್ತು ಬೇಸರವಾಗಿ ಬಿಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮೊದಲು ತಂದೆಯ ಪರಿಚಯವನ್ನು ಅರಿತುಕೊಂಡರೆ ಮತ್ತೆಲ್ಲವನ್ನೂ ಅರಿತುಕೊಳ್ಳುತ್ತಾರೆ. ನನ್ನ ಮೂಲಕ ನನ್ನನ್ನು ಅರಿತುಕೊಳ್ಳುವುದರಿಂದ ನೀವು ಮತ್ತೆಲ್ಲವನ್ನೂ ಅರಿತುಕೊಳ್ಳುವಿರಿ. ಇನ್ನೇನನ್ನೂ ತಿಳಿದುಕೊಳ್ಳುವ ಅವಶ್ಯಕತೆಯಿರುವುದಿಲ್ಲ ಆದ್ದರಿಂದ 7 ದಿನಗಳನ್ನು ಇಡಲಾಗುತ್ತದೆ. 7 ದಿನಗಳಲ್ಲಿ ಬಹಳಷ್ಟು ತಿಳಿದುಕೊಳ್ಳಬಹುದಾಗಿದೆ ಆದರೆ ನಂಬರ್ವಾರ್ ತಿಳಿದುಕೊಳ್ಳುವವರಿರುತ್ತಾರೆ. ಕೆಲವರಂತೂ ಏನನ್ನೂ ತಿಳಿದುಕೊಳ್ಳುವುದಿಲ್ಲ. ಅವರೇನು ರಾಜ-ರಾಣಿಯಾಗುತ್ತಾರೆ! ಕೇವಲ ಒಬ್ಬರ ಮೇಲೆ ರಾಜ್ಯಭಾರ ಮಾಡುವರೇ? ಪ್ರತಿಯೊಬ್ಬರೂ ತಮ್ಮ ಪ್ರಜೆಗಳನ್ನು ಮಾಡಿಕೊಳ್ಳಬೇಕಾಗಿದೆ. ಕೆಲವರು ಬಹಳ ಸಮಯ ವ್ಯರ್ಥ ಮಾಡುತ್ತಾರೆ, ಅಂತಹವರಿಗೆ ತಂದೆಯು ಅಯ್ಯೊ ಪಾಪ! ಎಂದು ಹೇಳುತ್ತಾರೆ. ಭಲೆ ಎಷ್ಟೇ ದೊಡ್ಡ-ದೊಡ್ಡ ಪದವಿಯವರಿರಬಹುದು ಆದರೆ ತಂದೆಗೆ ಗೊತ್ತಿದೆ, ಇದೆಲ್ಲವೂ ಮಣ್ಣು ಪಾಲಾಗಲಿದೆ. ಇನ್ನು ಸ್ವಲ್ಪವೇ ಸಮಯವಿದೆ. ವಿನಾಶ ಕಾಲದಲ್ಲಿ ವಿಪರೀತ ಬುದ್ಧಿಯವರ ವಿನಾಶವಾಗಬೇಕಾಗಿದೆ. ನಾವಾತ್ಮಗಳ ಪ್ರೀತಿ ಬುದ್ಧಿಯು ಎಷ್ಟಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬಹುದು. ಒಂದೆರಡು ಗಂಟೆಗಳ ಕಾಲ ನೆನಪಿರುತ್ತದೆಯೆಂದು ಹೇಳುತ್ತಾರೆ. ಲೌಕಿಕ ತಂದೆಯೊಂದಿಗೆ ನೀವು ಒಂದೆರಡು ಗಂಟೆಗಳ ಕಾಲ ಪ್ರೀತಿಯನ್ನಿಡುತ್ತೀರಾ? ಇಡೀ ದಿನ ಬಾಬಾ, ಬಾಬಾ (ಅಪ್ಪ) ಎನ್ನುತ್ತಿರುತ್ತೀರಿ. ಇಲ್ಲಿಯೂ ಸಹ ಭಲೆ ಬಾಬಾ, ಬಾಬಾ ಎನ್ನುತ್ತಿರುತ್ತಾರೆ ಆದರೆ ಆ ಜಿಗರೀ ಪ್ರೀತಿಯಿಲ್ಲ. ಪದೇ-ಪದೇ ತಿಳಿಸುತ್ತಾರೆ – ಶಿವ ತಂದೆಯನ್ನು ನೆನಪು ಮಾಡುತ್ತಾ ಇರಿ ಎಂದು. ಇಲ್ಲಿ ಸತ್ಯ-ಸತ್ಯವಾಗಿಯೂ ನೆನಪು ಮಾಡಬೇಕಾಗಿದೆ. ಕೇವಲ ಚತುರತೆಯು ನಡೆಯುವುದಿಲ್ಲ. ಅನೇಕರು ಈ ರೀತಿ ಹೇಳುತ್ತಾರೆ - ನಾವಂತೂ ಶಿವ ತಂದೆಯನ್ನು ಬಹಳ ನೆನಪು ಮಾಡುತ್ತೇವೆ ಎಂದು. ಒಂದುವೇಳೆ ಆ ರೀತಿ ಇದ್ದಿದ್ದೇ ಆದರೆ ಅವರು ಹಾರತೊಡಗುವರು. ಬಾಬಾ, ನಾವಂತೂ ಅನೇಕರ ಕಲ್ಯಾಣ ಮಾಡಲು ಸೇವೆಗೆ ಹೋಗುತ್ತೇವೆ. ಎಷ್ಟು ಅನೇಕರಿಗೆ ಸಂದೇಶ ಕೊಡುವಿರೋ ಅಷ್ಟು ನೆನಪಿನಲ್ಲಿರುತ್ತೀರಿ. ಬಾಬಾ, ಬಂಧನವಿದೆ ಎಂದು ಅನೇಕರು ಹೇಳುತ್ತಾರೆ. ಅರೆ! ಬಂಧನವಂತೂ ಇಡೀ ಪ್ರಪಂಚಕ್ಕೇ ಇದೆ. ಬಂಧನವನ್ನು ಯುಕ್ತಿಯಿಂದ ಬಿಡಿಸಿಕೊಳ್ಳಬೇಕಾಗಿದೆ. ಬಹಳಷ್ಟು ಯುಕ್ತಿಗಳಿವೆ. ತಿಳಿದುಕೊಳ್ಳಿ - ಒಂದುವೇಳೆ ನಾಳೆ ಶರೀರ ಬಿಟ್ಟರೆ ಮಕ್ಕಳನ್ನು ಯಾರು ಸಂಭಾಲನೆ ಮಾಡುತ್ತಾರೆ? ಅವಶ್ಯವಾಗಿ ಯಾರಾದರೂ ಸಂಭಾಲನೆ ಮಾಡುವವರು ಬಂದೇ ಬರುತ್ತಾರೆ. ಅಜ್ಞಾನ ಕಾಲದಲ್ಲಂತೂ ಇನ್ನೊಂದು ವಿವಾಹ ಮಾಡಿಕೊಳ್ಳುತ್ತಾರೆ ಆದರೆ ಈ ಸಮಯದಲ್ಲಿ ವಿವಾಹವೂ ಸಹ ಕಷ್ಟದ ಮಾತಾಗಿದೆ. ಯಾರಿಗಾದರೂ ಸ್ವಲ್ಪ ಹಣವನ್ನು ಕೊಟ್ಟು ಮಕ್ಕಳನ್ನು ಸಂಭಾಲನೆ ಮಾಡಲು ಹೇಳಿರಿ. ನಿಮ್ಮದು ಇದು ಮರುಜೀವಾ ಜನ್ಮವಾಗಿದೆಯಲ್ಲವೆ. ಜೀವಿಸಿದ್ದಂತೆಯೇ ಸತ್ತು ಹೋದಿರಿ ಅಂದರೆ ಕೊನೆಯಲ್ಲಿ ಯಾರು ಸಂಭಾಲನೆ ಮಾಡುವರು? ಆದ್ದರಿಂದ ಅವಶ್ಯವಾಗಿ ನರ್ಸ್ನ್ನು ಇಟ್ಟುಕೊಳ್ಳಬೇಕಾಗುವುದು. ಹಣದಿಂದ ಏನು ತಾನೇ ಮಾಡಲು ಸಾಧ್ಯವಿಲ್ಲ! ಬಂಧನ ಮುಕ್ತರಂತೂ ಖಂಡಿತ ಆಗಬೇಕಾಗಿದೆ. ಸರ್ವೀಸಿನ ಉಮ್ಮಂಗವಿರುವವರು ತಾವಾಗಿಯೇ ಓಡಿ ಬರುತ್ತಾರೆ. ಪ್ರಪಂಚದಿಂದ ಸತ್ತು ಹೋದರಲ್ಲವೆ. ಇಲ್ಲಂತೂ ತಂದೆಯು ತಿಳಿಸುತ್ತಾರೆ – ಮಿತ್ರ ಸಂಬಂಧಿಗಳು ಮೊದಲಾದವರ ಉದ್ಧಾರವನ್ನೇ ಮಾಡಿ, ಎಲ್ಲರಿಗೆ ಮನ್ಮನಾಭವದ ಸಂದೇಶವನ್ನು ಕೊಡಿ ಆಗ ಅವರೂ ಸಹ ತಮೋಪ್ರಧಾನರಿಂದ ಸತೋಪ್ರಧಾನರಾಗಲಿ. ಇದನ್ನು ತಂದೆಯೇ ಹೇಳುತ್ತಾರೆ. ಅನ್ಯರಂತೂ ಮೇಲಿಂದ ಬರುತ್ತಾರೆ, ಅವರ ಪ್ರಜೆಗಳೂ ಅವರ ಹಿಂದೆ ಬರುತ್ತಿರುತ್ತಾರೆ. ಹೇಗೆ ಕ್ರೈಸ್ಟ್ ಅವರ ಅನುಯಾಯಿಗಳನ್ನು ಕೆಳಗೆ ಕರೆದುಕೊಂಡು ಬರುತ್ತಾರೆ, ಕೆಳಗೆ ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಯಾವಾಗ ಅಶಾಂತರಾಗಿ ಬಿಡುವರೋ ಆಗ ನಮಗೆ ಶಾಂತಿ ಬೇಕು ಎಂದು ಹೇಳುತ್ತಾರೆ. ಶಾಂತಿಯಲ್ಲಿಯೇ ಕುಳಿತಿದ್ದರು ಮತ್ತೆ ಅವರ ಗುರುಗಳ ಹಿಂದೆ ಬರಬೇಕಾಗುತ್ತದೆ. ಬಂದ ನಂತರ ಮತ್ತೆ ಹೇ ಪತಿತ-ಪಾವನ ಬನ್ನಿ ಎಂದು ಕರೆಯತೊಡಗುತ್ತಾರೆ. ಈ ಆಟವು ಹೇಗೆ ಮಾಡಲ್ಪಟ್ಟಿದೆ! ಅವರಂತೂ ಕೊನೆಯಲ್ಲಿ ಬಂದು ಲಕ್ಷ್ಯವನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳೇ, ಸಾಕ್ಷಾತ್ಕಾರ ಮಾಡಿದ್ದೀರಿ, ಬಂದು ಮನ್ಮಾನಭವದ ಲಕ್ಷ್ಯವನ್ನು ತೆಗೆದುಕೊಳ್ಳುತ್ತಾರೆ. ನೀವೀಗ ಭಿಕಾರಿಗಳಿಂದ ರಾಜಕುಮಾರರಾಗುತ್ತೀರಿ, ಈ ಸಮಯದಲ್ಲಿ ಯಾರೆಲ್ಲರೂ ಸಾಹುಕಾರರಿರುವರೋ ಅವರೆಲ್ಲರೂ ಭಿಕಾರಿಗಳಾಗುವರು. ಇದು ಆಶ್ಚರ್ಯಕರವಾಗಿದೆ. ಈ ಆಟವನ್ನು ಯಾರೂ ತಿಳಿದುಕೊಂಡಿಲ್ಲ. ಇಡೀ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಕೆಲವರಂತು ಬಡವರೂ ಆಗುತ್ತಾರಲ್ಲವೆ. ಇವು ಬಹಳ ದೂರಾಂದೇಶಿ ಬುದ್ಧಿಯಿಂದ ತಿಳಿದುಕೊಳ್ಳುವ ಮಾತುಗಳಾಗಿವೆ. ನಾವು ಹೇಗೆ ಇಲ್ಲಿಂದ ವರ್ಗಾಯಿತರಾಗಿದ್ದೇವೆ ಎಂಬುದೆಲ್ಲವೂ ಅಂತಿಮದಲ್ಲಿ ಸಾಕ್ಷಾತ್ಕಾರವಾಗುವುದು. ನೀವು ಹೊಸ ಪ್ರಪಂಚಕ್ಕಾಗಿ ಓದುತ್ತಿದ್ದೀರಿ, ಈಗ ಸಂಗಮದಲ್ಲಿದ್ದೀರಿ. ಓದಿ ತೇರ್ಗಡೆಯಾದರೆ ದೈವೀ ಕುಲದಲ್ಲಿ ಹೋಗುತ್ತೀರಿ. ಈಗ ಬ್ರಾಹ್ಮಣ ಕುಲದಲ್ಲಿದ್ದೀರಿ, ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಭಗವಂತನೇ ಓದಿಸುತ್ತಾರೆಂಬುದು ಯಾರ ಬುದ್ಧಿಯಲ್ಲಿಯೂ ಸ್ವಲ್ಪವೂ ಕುಳಿತುಕೊಳ್ಳುವುದಿಲ್ಲ. ನಿರಾಕಾರ ಭಗವಂತನು ಅವಶ್ಯವಾಗಿ ಬರುವರಲ್ಲವೆ. ಈ ಡ್ರಾಮಾ ಬಹಳ ವಿಚಿತ್ರವಾಗಿ ಮಾಡಲ್ಪಟ್ಟಿದೆ. ಇದನ್ನು ನೀವು ತಿಳಿದುಕೊಂಡಿದ್ದೀರಿ ಮತ್ತು ಪಾತ್ರವನ್ನಭಿನಯಿಸುತ್ತಿದ್ದೀರಿ. ತ್ರಿಮೂರ್ತಿಯ ಚಿತ್ರದಲ್ಲಿಯೂ ಸಹ ಬ್ರಹ್ಮಾರವರ ಮೂಲಕ ಸ್ಥಾಪನೆ ಎಂಬುದನ್ನು ತಿಳಿಸಬೇಕಾಗಿದೆ. ವಿನಾಶವಂತೂ ತಾನಾಗಿಯೇ ಆಗುತ್ತದೆ. ಕೇವಲ ಶಂಕರನ ಹೆಸರನ್ನಿಟ್ಟು ಬಿಟ್ಟಿದ್ದಾರೆ. ಇದೂ ಸಹ ಡ್ರಾಮಾದಲ್ಲಿ ಮಾಡಲ್ಪಟ್ಟಿದೆ. ಮುಖ್ಯ ಮಾತೇನೆಂದರೆ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಆಗ ತುಕ್ಕು ಇಳಿದು ಹೋಗುವುದು. ಶಾಲೆಯಲ್ಲಿ ಎಷ್ಟು ಚೆನ್ನಾಗಿ ಓದುವರೋ ಅಷ್ಟು ದೊಡ್ಡ ಆದಾಯವಾಗುವುದು. ನಿಮಗೆ 21 ಜನ್ಮಗಳಿಗಾಗಿ ಆರೋಗ್ಯ, ಐಶ್ವರ್ಯ ಎಲ್ಲವೂ ಸಿಗುತ್ತದೆ. ಇದು ಕಡಿಮೆ ಮಾತೇನು! ಇಲ್ಲಿ ಭಲೆ ಐಶ್ವರ್ಯವಿದೆ ಆದರೆ ಅವರ ಮಕ್ಕಳು, ಮೊಮ್ಮಕ್ಕಳು ತಿನ್ನುವಷ್ಟು ಸಮಯವಿಲ್ಲ. ತಂದೆಯು ಎಲ್ಲವನ್ನೂ ಈ ಸೇವೆಯಲ್ಲಿ ತೊಡಗಿಸಿ ಬಿಟ್ಟೆವು ಆದ್ದರಿಂದ ಎಷ್ಟೊಂದು ಜಮಾ ಆಯಿತು. ಎಲ್ಲರದೂ ಜಮಾ ಆಗುವುದಿಲ್ಲ. ಇಷ್ಟೊಂದು ಲಕ್ಷಾಧೀಶ್ವರರಿದ್ದಾರೆ ಆದರೆ ಹಣವೇನು ಕೆಲಸಕ್ಕೆ ಬರುವುದಿಲ್ಲ. ಅವರಿಂದ ತಂದೆಯು ತೆಗೆದುಕೊಳ್ಳುವುದೇ ಇಲ್ಲ ಏಕೆಂದರೆ ತೆಗೆದುಕೊಂಡರೆ ಮತ್ತೆ ಕೊಡಬೇಕಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬಂಧನಗಳನ್ನು ಬಿಡಿಸಿಕೊಳ್ಳುವ ಯುಕ್ತಿಯನ್ನು ರಚಿಸಬೇಕಾಗಿದೆ. ತಂದೆಯೊಂದಿಗೆ ಜಿಗರೀ ಪ್ರೀತಿಯನ್ನಿಟ್ಟುಕೊಳ್ಳಬೇಕಾಗಿದೆ. ಎಲ್ಲರಿಗೆ ತಂದೆಯ ಸಂದೇಶವನ್ನು ಕೊಟ್ಟು ಎಲ್ಲರ ಕಲ್ಯಾಣ ಮಾಡಬೇಕಾಗಿದೆ.

2. ದೂರಾಂದೇಶಿ ಬುದ್ಧಿಯಿಂದ ಈ ಬೇಹದ್ದಿನ ಆಟವನ್ನು ತಿಳಿದುಕೊಳ್ಳಬೇಕಾಗಿದೆ. ಭಿಕಾರಿಯಿಂದ ರಾಜಕುಮಾರರಾಗುವ ಈ ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಬೇಕಾಗಿದೆ. ನೆನಪಿನ ಸತ್ಯ-ಸತ್ಯವಾದ ಚಾರ್ಟ್ ಇಡಬೇಕಾಗಿದೆ.

ವರದಾನ:
ಸತ್ಯತೆಯ ಆಧಾರದ ಮೇಲೆ ಒಬ್ಬ ತಂದೆಯನ್ನು ಪ್ರತ್ಯಕ್ಷ ಮಾಡುವಂತಹ, ನಿರ್ಭಯ ಅಧಿಕಾರ ಸ್ವರೂಪ ಭವ.

ಸತ್ಯತೆಯೇ ಪ್ರತ್ಯಕ್ಷತೆಯ ಆಧಾರವಾಗಿದೆ ತಂದೆಯನ್ನು ಪ್ರತ್ಯಕ್ಷ ಮಾಡುವುದಕ್ಕಾಗಿ ನಿರ್ಭಯ ಮತ್ತು ಅಧಿಕಾರಿ ಸ್ವರೂಪರಾಗಿ ಹೇಳಿ, ಸಂಕೋಚದಿಂದ ಅಲ್ಲ. ಯಾವಾಗ ಅನೇಕ ಮತವುಳ್ಳವರು ಕೇವಲ ಒಂದು ಮಾತನ್ನು ಒಪ್ಪಿಕೊಳ್ಳುತ್ತಾರೆ ನಮ್ಮೆಲ್ಲರ ತಂದೆ ಒಬ್ಬರಾಗಿದ್ದಾರೆ ಮತ್ತು ಅವರೇ ಈಗ ಕಾರ್ಯ ಮಾಡುತ್ತಿದ್ದಾರೆ, ನಾವೆಲ್ಲರೂ ಒಬ್ಬರ ಸಂತಾನರು ನಾವೆಲ್ಲಾ ಒಂದೇ ಆಗಿದ್ದೇವೆ ಮತ್ತು ಇದೊಂದೇ ಯಥಾರ್ಥವಾಗಿದೆ...... ಆದ್ದರಿಂದ ವಿಜಯದ ಬಾವುಟ ಹಾರಾಡುವುದು. ಇದೇ ಸಂಕಲ್ಪದಿಂದ ಮುಕ್ತಿಧಾಮಕ್ಕೆ ಹೋಗುವಿರಿ ಮತ್ತು ನಂತರ ಯಾವಾಗ ತಮ್ಮ-ತಮ್ಮ ಪಾತ್ರ ಅಭಿನಯಿಸಲು ಬಂದಾಗ ಮೊದಲು ಇದೇ ಸಂಸ್ಕಾರ ಇಮರ್ಜ್ ಆಗುವುದು ದೇವರು ಒಬ್ಬರೇ. ಇದೇ ಸತ್ಯಯುಗದ ಸ್ಮೃತಿಯಾಗಿದೆ.

ಸ್ಲೋಗನ್:
ಸಹನೆ ಮಾಡುವುದೇ ಸ್ವಯಂನ ಶಕ್ತಿ ರೂಪವನ್ನು ಪ್ರತ್ಯಕ್ಷ ಮಾಡುವುದಾಗಿದೆ.