08.12.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಂದೆಯು ಯಾರಾಗಿದ್ದಾರೆ, ಹೇಗಿದ್ದಾರೆ ಅವರನ್ನು ಅದೇರೀತಿ ಯಥಾರ್ಥವಾಗಿ ಅರಿತುಕೊಂಡು ನೆನಪು ಮಾಡಿ, ಇದಕ್ಕಾಗಿ ತಮ್ಮ ಬುದ್ಧಿಯನ್ನು ವಿಶಾಲ ಮಾಡಿಕೊಳ್ಳಿ"

ಪ್ರಶ್ನೆ:
ತಂದೆಗೆ ಬಡವರ ಬಂಧು ಎಂದು ಏಕೆ ಹೇಳಲಾಗಿದೆ?

ಉತ್ತರ:
ಏಕೆಂದರೆ ಈ ಸಮಯದಲ್ಲಿ ಇಡೀ ಪ್ರಪಂಚವು ದಲಿತ ಅರ್ಥಾತ್ ದುಃಖಿಯಾಗಿ ಬಿಟ್ಟಿದೆ. ಆದ್ದರಿಂದ ಎಲ್ಲರನ್ನು ದುಃಖದಿಂದ ಬಿಡಿಸಲು ತಂದೆಯು ಬಂದಿದ್ದಾರೆ. ಬಾಕಿ ಯಾರ ಮೇಲೂ ದಯೆ ಬಂದು ವಸ್ತ್ರಗಳನ್ನು ಕೊಡುವುದು, ಹಣ ಇತ್ಯಾದಿಗಳನ್ನು ಕೊಟ್ಟು ಬಿಡುವುದು ಚಮತ್ಕಾರದ ಮಾತೇನಲ್ಲ. ಇದರಿಂದ ಯಾರೂ ಸಾಹುಕಾರರಾಗಿ ಬಿಡುವುದಿಲ್ಲ. ನಾನು ಕಾಡು ಜನರಿಗೆ ಹಣವನ್ನು ಕೊಟ್ಟು ಬಡವರ ಬಂಧು ಎಂದು ಕರೆಸಿಕೊಳ್ಳುತ್ತೇನೆ ಎಂದಲ್ಲ. ನಾನು ಬಡವರು ಅರ್ಥಾತ್ ಪತಿತರಿಗೆ ಯಾರಲ್ಲಿ ಜ್ಞಾನವಿಲ್ಲವೋ ಅವರಿಗೆ ಜ್ಞಾನವನ್ನು ಕೊಟ್ಟು ಪಾವನರನ್ನಾಗಿ ಮಾಡುತ್ತೇನೆ.

ಗೀತೆ:
ಪ್ರಪಂಚವನ್ನು ಮರೆಯಲು ಇದೇ ಸಮಯವಾಗಿದೆ........

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಗೀತೆಯನ್ನು ಕೇಳಿದಿರಿ. ಮಕ್ಕಳಿಗೆ ತಿಳಿದಿದೆ - ಗೀತೆ (ಹಾಡು) ಗಳನ್ನು ಪ್ರಪಂಚದ ಮನುಷ್ಯರು ಹಾಡಿದ್ದಾರೆ. ಶಬ್ಧಗಳು ಬಹಳ ಚೆನ್ನಾಗಿವೆ, ಈ ಹಳೆಯ ಪ್ರಪಂಚವನ್ನು ಮರೆಯಬೇಕಾಗಿದೆ. ಮೊದಲು ಹೀಗೆ ತಿಳಿದುಕೊಳ್ಳುತ್ತಿರಲಿಲ್ಲ, ಈಗ ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ. ಆದ್ದರಿಂದ ಅವಶ್ಯವಾಗಿ ಹಳೆಯ ಪ್ರಪಂಚವನ್ನು ಮರೆಯಬೇಕಾಗುವುದು ಎಂಬ ಮಾತು ಕಲಿಯುಗೀ ಮನುಷ್ಯರಿಗೂ ಸಹ ಅರ್ಥವಾಗುವುದಿಲ್ಲ. ಕೇವಲ ಹಳೆಯ ಪ್ರಪಂಚವನ್ನು ಬಿಡಬೇಕಾಗಿದೆ ಎಂಬುದನ್ನಷ್ಟೇ ತಿಳಿದುಕೊಳ್ಳುತ್ತಾರೆ. ಆದರೆ ಇನ್ನೂ ಈ ಪ್ರಪಂಚದಲ್ಲಿ ಬಹಳಷ್ಟು ವರ್ಷಗಳು ಉಳಿದಿವೆಯೆಂದು ತಿಳಿದುಕೊಳ್ಳುತ್ತಾರೆ. ಹೊಸದರಿಂದ ಹಳೆಯದಾಗುವುದು ಎಂಬುದು ಅವರಿಗೆ ತಿಳಿದಿದೆ ಆದರೆ ಸೃಷ್ಟಿಯ ಕಾಲಾವಧಿಯನ್ನು ಬಹಳ ಉದ್ದವಾಗಿ ಬರೆದಿರುವ ಕಾರಣ ಮರೆತು ಹೋಗಿದ್ದಾರೆ. ಈಗ ಹೊಸ ಪ್ರಪಂಚವು ಸ್ಥಾಪನೆಯಾಗುತ್ತದೆ. ಆದ್ದರಿಂದ ಹಳೆಯ ಪ್ರಪಂಚವನ್ನು ಮರೆಯಬೇಕಾಗಿದೆ ಎಂದು ನಿಮಗೆ ಈಗ ಸ್ಮೃತಿ ತರಿಸಲಾಗುತ್ತಿದೆ. ಮರೆಯುವುದರಿಂದ ಏನಾಗುವುದು? ನಾವು ಈ ಶರೀರವನ್ನು ಬಿಟ್ಟು ಹೊಸ ಪ್ರಪಂಚದಲ್ಲಿ ಹೋಗುತ್ತೇವೆ ಆದರೆ ಅಜ್ಞಾನ ಕಾಲದಲ್ಲಿ ಇಂತಹ ಮಾತುಗಳ ಅರ್ಥದ ಮೇಲೆ ಯಾರಿಗೂ ಗಮನ ಹರಿಯುವುದಿಲ್ಲ. ತಂದೆಯು ಯಾವ ಪ್ರಕಾರವಾಗಿ ತಿಳಿಸುತ್ತಾರೆಯೋ ಅದೇರೀತಿಯಲ್ಲಿ ಯಾರೂ ತಿಳಿಸುವವರಿಲ್ಲ. ನೀವು ಇದರ ಅರ್ಥವನ್ನು ತಿಳಿದುಕೊಳ್ಳಬಹುದು. ಇದೂ ಸಹ ಮಕ್ಕಳಿಗೆ ತಿಳಿದಿದೆ - ಮಕ್ಕಳು ಬಹಳ ಸಾಧಾರಣವಾಗಿದ್ದಾರೆ, ಅನನ್ಯ ಒಳ್ಳೊಳ್ಳೆಯ ಮಕ್ಕಳೂ ಸಹ ಪೂರ್ಣ ರೀತಿಯಿಂದ ಅರಿತುಕೊಳ್ಳುವುದಿಲ್ಲ. ಇವರಲ್ಲಿ ಶಿವ ತಂದೆಯು ಬರುತ್ತಾರೆ ಎಂಬುದನ್ನೇ ಮರೆತು ಬಿಡುತ್ತಾರೆ. ಯಾವುದೇ ಆದೇಶ ನೀಡಿದರೆ ಇದು ಶಿವ ತಂದೆಯ ಆದೇಶವೆಂಬುದನ್ನು ತಿಳಿದುಕೊಳ್ಳುವುದಿಲ್ಲ. ಶಿವ ತಂದೆಯು ಇಡೀ ದಿನ ಮರೆತು ಹೋಗುತ್ತಾರೆ. ಪೂರ್ಣ ರೀತಿಯಲ್ಲಿ ಅರಿತುಕೊಳ್ಳದ ಕಾರಣ ಆ ಕೆಲಸವನ್ನು ಮಾಡುವುದಿಲ್ಲ, ಮಾಯೆಯು ನೆನಪು ಮಾಡಲು ಬಿಡುವುದಿಲ್ಲ. ಆ ಸ್ಥಿರವಾದ ನೆನಪು ನಿಲ್ಲುವುದೇ ಇಲ್ಲ. ಪರಿಶ್ರಮ ಪಡುತ್ತಾ-ಪಡುತ್ತಾ ಅಂತಿಮದಲ್ಲಿ ಕೊನೆಗೂ ಆ ಸ್ಥಿತಿಯು ಅವಶ್ಯವಾಗಿ ಆಗುವುದು. ಈ ಸಮಯದಲ್ಲಿಯೇ ಕರ್ಮಾತೀತ ಸ್ಥಿತಿಯನ್ನು ಪಡೆಯುವವರು ಯಾರೂ ಇಲ್ಲ. ತಂದೆಯು ಯಾರಾಗಿದ್ದಾರೆ, ಹೇಗಿದ್ದಾರೆ ಎಂಬುದನ್ನು ಅರಿತುಕೊಳ್ಳಲು ವಿಶಾಲ ಬುದ್ಧಿಯು ಬೇಕು.

ಬಾಪ್ದಾದಾ ಬೆಚ್ಚನೆಯ ವಸ್ತ್ರಗಳನ್ನು ಧರಿಸುತ್ತಾರೆಯೇ ಎಂದು ನಿಮ್ಮೊಂದಿಗೆ ಕೆಲವರು ಕೇಳುತ್ತಾರೆ. ಹೌದು ಇಬ್ಬರಿಗೂ ಇವೆ ಎಂದು ಮಕ್ಕಳು ಹೇಳುತ್ತಾರೆ ಆದರೆ ಶಿವ ತಂದೆಯು ಹೇಳುತ್ತಾರೆ - ಬೆಚ್ಚನೆಯ ವಸ್ತ್ರಗಳನ್ನು ನಾನೇಕೆ ಧರಿಸಲಿ? ನನಗೇನು ಚಳಿಯಾಗುವುದೇ? ಹಾ ಯಾರಲ್ಲಿ ನಾನು ಪ್ರವೇಶ ಮಾಡಿದ್ದೇನೆಯೋ ಅವರಿಗೆ ಚಳಿಯಾಗುವುದು, ನನಗೆ ಹಸಿವಾಗಲಿ, ಬಾಯಾರಿಕೆಯಾಗಲಿ ಏನೂ ಇಲ್ಲ. ನಾನು ನಿರ್ಲೇಪವಾಗಿದ್ದೇನೆ. ಸೇವೆ ಮಾಡುತ್ತಿದ್ದರೂ ಇವೆಲ್ಲಾ ಮಾತುಗಳಿಂದ ಭಿನ್ನನಾಗಿದ್ದೇನೆ. ನಾನು ತಿನ್ನುವುದಾಗಲಿ, ಕುಡಿಯುವುದಾಗಲಿ ಇಲ್ಲ. ಹೇಗೆ ಒಬ್ಬ ಸಾಧುವೂ ಸಹ ನಾನು ಏನನ್ನೂ ತಿನ್ನುವುದಿಲ್ಲ, ಕುಡಿಯುವುದಿಲ್ಲವೆಂದು ಹೇಳುತ್ತಿದ್ದರು. ಅವರಾದರೆ ಕೃತಕ ವೇಷವನ್ನು ಧಾರಣೆ ಮಾಡಿದ್ದಾರೆ, ಅನೇಕರು ದೇವತೆಗಳ ಹೆಸರನ್ನೂ ಇಟ್ಟುಕೊಂಡಿದ್ದಾರೆ. ಮತ್ತ್ಯಾವುದೇ ಧರ್ಮದಲ್ಲಿ ದೇವತೆಗಳಾಗುವುದಿಲ್ಲ, ಇಲ್ಲಿ ಎಷ್ಟೊಂದು ಮಂದಿರಗಳಿವೆ. ಹೊರಗಡೆಯಂತೂ ಒಬ್ಬ ಶಿವ ತಂದೆಯನ್ನೇ ಒಪ್ಪುತ್ತಾರೆ. ಬುದ್ಧಿಯೂ ಸಹ ಹೇಳುತ್ತದೆ - ತಂದೆಯು ಒಬ್ಬರೇ ಆಗಿರುವರು. ಅವರಿಂದಲೇ ಆಸ್ತಿಯು ಸಿಗುತ್ತದೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ - ಕಲ್ಪದ ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ತಂದೆಯಿಂದ ಆಸ್ತಿಯು ಸಿಗುತ್ತದೆ. ಯಾವಾಗ ನಾವು ಸುಖಧಾಮಕ್ಕೆ ಹೋಗುತ್ತೇವೆಯೋ ಆಗ ಉಳಿದೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ನಿಮ್ಮಲ್ಲಿಯೂ ಸಹ ಈ ತಿಳುವಳಿಕೆಯು ನಂಬರ್ವಾರ್ ಇದೆ. ಒಂದುವೇಳೆ ಜ್ಞಾನದ ವಿಚಾರಗಳಲ್ಲಿ ಇರುವುದೇ ಆದರೆ ಅವರ ಮಾತುಗಳೂ ಸಹ ಜ್ಞಾನಯುಕ್ತವಾಗಿರುತ್ತವೆ, ತಂದೆಯ ಮೂಲಕ ನೀವು ರೂಪ ಭಸಂತರಾಗುತ್ತಿದ್ದೀರಿ. ನೀವು ರೂಪವೂ ಆಗಿದ್ದೀರಿ ಮತ್ತು ಭಸಂತರೂ ಆಗಿದ್ದೀರಿ. ಪ್ರಪಂಚದಲ್ಲಿ ನಾವು ರೂಪ ಭಸಂತರಾಗುತ್ತಿದ್ದೇವೆ ಎಂಬ ಮಾತನ್ನು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ನೀವೀಗ ಓದುತ್ತಿದ್ದೀರಿ. ಅಂತಿಮ ಸಮಯದೊಳಗೆ ನಂಬರ್ವಾರ್ ಪುರುಷಾರ್ಥದನುಸಾರ ಖಂಡಿತ ಓದುವಿರಿ. ಶಿವ ತಂದೆಯು ನಾವಾತ್ಮಗಳ ತಂದೆಯಲ್ಲವೆ. ಇದೂ ಸಹ ಹೃದಯಪೂರ್ವಕವಾಗಿ ಹೇಳುತ್ತೀರಲ್ಲವೆ! ಭಕ್ತಿಮಾರ್ಗದಲ್ಲಿ ಹೃದಯಕ್ಕೆ ನಾಟುವುದಿಲ್ಲ. ಆದರೆ ಇಲ್ಲಿ ತಂದೆಯು ನಮ್ಮವರೆಂದು ಹೃದಯಕ್ಕೆ ನಾಟುತ್ತದೆ. ನೀವಿಲ್ಲಿ ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ - ತಂದೆಯು ಪುನಃ ಇದೇ ಸಮಯದಲ್ಲಿ ಬರುತ್ತಾರೆ, ಮತ್ತ್ಯಾವುದೇ ಸಮಯದಲ್ಲಿ ತಂದೆಯು ಬರುವ ಅವಶ್ಯಕತೆಯೇ ಇಲ್ಲ. ಸತ್ಯಯುಗದಿಂದ ಹಿಡಿದು ತ್ರೇತಾದವರೆಗೆ ಬರುವುದೇ ಇಲ್ಲ ಮತ್ತು ದ್ವಾಪರದಿಂದ ಕಲಿಯುಗದವರೆಗೂ ಸಹ ಅವರು ಬರುವುದೇ ಇಲ್ಲ. ಕಲ್ಪದ ಸಂಗಮಯುಗದಲ್ಲಿಯೇ ಬರುತ್ತಾರೆ. ತಂದೆಯು ಬಡವರ ಬಂಧುವಾಗಿದ್ದಾರೆ ಅರ್ಥಾತ್ ಇಡೀ ಪ್ರಪಂಚದವರು ಯಾರು ದುಃಖಿ ಬಡವರಾಗಿ ಬಿಡುತ್ತಾರೆಯೋ ಅವರ ತಂದೆಯಾಗಿದ್ದಾರೆ. ಅವರ ಹೃದಯದಲ್ಲಿ ಏನಿರಬಹುದು? ನಾನು ಬಡವರ ಬಂಧುವಾಗಿದ್ದೇನೆ, ಎಲ್ಲರ ದುಃಖ ಅಥವಾ ಬಡತನವು ಕಳೆಯಲಿ ಆದರೆ ಅದು ಜ್ಞಾನವನ್ನು ಬಿಟ್ಟರೆ ಮತ್ತ್ಯಾವುದರಿಂದಲೂ ಕಡಿಮೆಯಾಗಲು ಸಾಧ್ಯವಿಲ್ಲ. ವಸ್ತ್ರ ಇತ್ಯಾದಿಗಳನ್ನು ಕೊಡುವುದರಿಂದ ಯಾರೂ ಸಾಹುಕಾರರಾಗಿ ಬಿಡುವುದಿಲ್ಲ. ಭಲೆ ಬಡವರನ್ನು ನೋಡಿದಾಗ ಇವರಿಗೆ ವಸ್ತ್ರಗಳನ್ನು ಕೊಡೋಣವೆಂದು ಮನಸ್ಸಾಗಬಹುದು. ಏಕೆಂದರೆ ನಾನು ಬಡವರ ಬಂಧುವಾಗಿದ್ದೇನೆ ಎಂಬುದು ನೆನಪಿರುತ್ತದೆಯಲ್ಲವೆ. ಜೊತೆ ಜೊತೆಗೆ ನಾನು ಕೇವಲ ಈ ಕಾಡು ಜನರಿಗಾಗಿ ಬಡವರ ಬಂಧುವಲ್ಲ. ಯಾರು ಸಂಪೂರ್ಣ ಪತಿತರಾಗಿದ್ದಾರೆಯೋ ಅವರಿಗೆ ನಾನು ಬಡವರ ಬಂಧುವಾಗಿದ್ದೇನೆ ಅಂದರೆ ಅವರನ್ನು ಪಾವನರನ್ನಾಗಿ ಮಾಡುತ್ತೇನೆ. ನಾನು ಪತಿತ-ಪಾವನನಾಗಿದ್ದೇನೆ ಆದ್ದರಿಂದ ನಾನು ಬಡವರ ಬಂಧುವಾಗಿದ್ದೇನೆಂದು ವಿಚಾರ ನಡೆಯುತ್ತದೆ ಆದರೆ ಹಣ ಇತ್ಯಾದಿಗಳನ್ನು ಹೇಗೆ ಕೊಡಲಿ! ಹಣ ಕೊಡುವವರಂತೂ ಪ್ರಪಂಚದಲ್ಲಿ ಅನೇಕರಿದ್ದಾರೆ. ಬಹಳಷ್ಟು ಹಣವನ್ನು ತೆಗೆದು ಅದನ್ನು ಅನಾಥಾಶ್ರಮಗಳಿಗೆ ಕಳುಹಿಸುತ್ತಾರೆ, ಏಕೆಂದರೆ ಅನಾಥರಿರುತ್ತಾರೆ ಅರ್ಥಾತ್ ಅವರಿಗೆ ಯಾರೂ ಗತಿಯಿಲ್ಲ ಎಂಬುದು ತಿಳಿದಿರುತ್ತದೆ. ಅನಾಥರೆಂದರೆ ಬಡವರು. ನಿಮಗೂ ಸಹ ನಾಥನಿರಲಿಲ್ಲ ಅರ್ಥಾತ್ ತಂದೆಯು ಇರಲಿಲ್ಲ. ನೀವು ಬಡವರಾಗಿದ್ದಿರಿ, ಈ ಜ್ಞಾನವಿರಲಿಲ್ಲ. ಯಾರು ರೂಪ ಭಸಂತ (ಆತ್ಮ ಸ್ಮೃತಿಯಲ್ಲಿದ್ದು ಜ್ಞಾನದ ಮಳೆ ಸುರಿಸುವವರು) ರಲ್ಲವೋ ಅವರು ಬಡವರು, ಅನಾಥರಾಗಿದ್ದಾರೆ. ಯಾರು ರೂಪ ಭಸಂತರಾಗಿದ್ದಾರೆಯೋ ಅವರಿಗೆ ಸನಾಥರೆಂದು ಹೇಳಲಾಗುತ್ತದೆ. ಸಾಹುಕಾರರಿಗೆ ಸನಾಥರೆಂತಲೂ, ಬಡವರಿಗೆ ಅನಾಥರೆಂತಲೂ ಹೇಳಲಾಗುವುದು. ನಿಮ್ಮ ಬುದ್ಧಿಯಲ್ಲಿದೆ - ಎಲ್ಲರೂ ಬಡವರಾಗಿದ್ದಾರೆ, ಅವರಿಗೆ ಏನಾದರೂ ಕೊಡಬೇಕಾಗಿದೆ. ತಂದೆಯು ಬಡವರ ಬಂಧುವಾಗಿದ್ದಾರೆ. ಆದ್ದರಿಂದ ಹೇಳುತ್ತಾರೆ - ಯಾವುದಾದರೊಂದು ಇಂತಹ ವಸ್ತುವನ್ನು ಕೊಡಬೇಕು ಅದರಿಂದ ಸದಾಕಾಲಕ್ಕಾಗಿ ಸಾಹುಕಾರರಾಗಿ ಬಿಡಬೇಕು. ಬಾಕಿ ಈ ವಸ್ತ್ರ ಇತ್ಯಾದಿಗಳನ್ನು ಕೊಡುವುದು ಸಾಮಾನ್ಯ ಮಾತಾಗಿದೆ. ಅದರಲ್ಲೂ ನಾವೇಕೆ ಬೀಳಬೇಕು? ನಾವಂತೂ ಅವರನ್ನು ಅನಾಥರಿಂದ ಸನಾಥರನ್ನಾಗಿ ಮಾಡಬೇಕು. ಭಲೆ ಯಾರೆಷ್ಟಾದರೂ ಪದಮಾಪತಿಯಾಗಿರಬಹುದು ಆದರೆ ಅದೆಲ್ಲವೂ ಅಲ್ಪಕಾಲಕ್ಕಾಗಿ ಇದೆ. ಈ ಪ್ರಪಂಚವೇ ಅನಾಥರ ಪ್ರಪಂಚವಾಗಿದೆ. ಭಲೆ ಧನವಂತರಿದ್ದಾರೆ ಅದೂ ಅಲ್ಪಕಾಲಕ್ಕಾಗಿ. ಸತ್ಯಯುಗದಲ್ಲಿ ಸದಾ ಸನಾಥರಾಗಿರುತ್ತಾರೆ. ಅಲ್ಲಿ ಹೀಗೆ ಕರ್ಮವು ಕುಟುಕುವುದಿಲ್ಲ. ಇಲ್ಲಿ ಎಷ್ಟೊಂದು ಬಡವರಿದ್ದಾರೆ! ಯಾರಿಗೆ ಹಣವಿದೆಯೋ ಅವರಿಗಂತೂ ನಾವು ಸ್ವರ್ಗದಲ್ಲಿದ್ದೇವೆಂದು ತಮ್ಮ ನಶೆಯೇರಿರುತ್ತದೆ ಆದರೆ ಇಲ್ಲ. ಇದನ್ನು ನೀವು ತಿಳಿದುಕೊಂಡಿದ್ದೀರಿ - ಈ ಸಮಯದಲ್ಲಿ ಮನುಷ್ಯರ್ಯಾರೂ ಸನಾಥರಿಲ್ಲ, ಎಲ್ಲರೂ ಅನಾಥರಾಗಿದ್ದಾರೆ. ಇಲ್ಲಿನ ಹಣ ಇತ್ಯಾದಿಗಳೆಲ್ಲವೂ ಮಣ್ಣು ಪಾಲಾಗಲಿದೆ. ನಮ್ಮ ಬಳಿ ಇಷ್ಟು ಹಣವಿದೆ ಅದನ್ನು ನಮ್ಮ ಮಕ್ಕಳು, ಮೊಮ್ಮಕ್ಕಳು ತಿನ್ನುತ್ತಾ ಇರುತ್ತಾರೆ. ಪರಂಪರೆಯವರೆಗೆ ನಡೆಯುತ್ತದೆ ಎಂದು ಮನುಷ್ಯರು ತಿಳಿಯುತ್ತಾರೆ ಆದರೆ ಇದು ನಡೆಯುವುದಿಲ್ಲ. ಇದೆಲ್ಲವೂ ವಿನಾಶವಾಗಿ ಬಿಡುವುದು. ಆದ್ದರಿಂದ ನಿಮಗೆ ಈ ಇಡೀ ಹಳೆಯ ಪ್ರಪಂಚದೊಂದಿಗೆ ವೈರಾಗ್ಯವಿದೆ.

ನೀವು ತಿಳಿದುಕೊಂಡಿದ್ದೀರಿ – ಹೊಸ ಪ್ರಪಂಚಕ್ಕೆ ಸ್ವರ್ಗವೆಂದು, ಹಳೆಯ ಪ್ರಪಂಚಕ್ಕೆ ನರಕವೆಂದು ಹೇಳಲಾಗುತ್ತದೆ. ತಂದೆಯು ನಮ್ಮನ್ನು ಹೊಸ ಪ್ರಪಂಚಕ್ಕಾಗಿ ಸಾಹುಕಾರರನ್ನಾಗಿ ಮಾಡುತ್ತಿದ್ದಾರೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ತಂದೆಯು ಎಷ್ಟು ಸಾಹುಕಾರರನ್ನಾಗಿ ಮಾಡುತ್ತಾರೆ! ಈ ಲಕ್ಷ್ಮೀ-ನಾರಾಯಣರು ಹೇಗೆ ಸಾಹುಕಾರರಾದರು? ಯಾವುದೇ ಸಾಹುಕಾರನಿಂದ ಆಸ್ತಿಯು ಸಿಕ್ಕಿತೆ? ಅಥವಾ ಯುದ್ಧ ಮಾಡಿದರೆ? ಹೇಗೆ ಅನ್ಯರು ರಾಜ ಸಿಂಹಾಸನವನ್ನು ಪಡೆಯುತ್ತಾರೆಯೋ ಹಾಗೆಯೇ ಇವರೂ ರಾಜ್ಯ ಸಿಂಹಾಸನವನ್ನು ಪಡೆದರೆ? ಅಥವಾ ಕರ್ಮಗಳನುಸಾರ ಈ ಧನವು ಸಿಕ್ಕಿತೆ? ತಂದೆಯ ಕರ್ಮ ಕಲಿಸುವ ವಿಧಿಯು ಬಹಳವೇ ಭಿನ್ನವಾಗಿದೆ. ಕರ್ಮ-ಅಕರ್ಮ-ವಿಕರ್ಮದ ಶಬ್ಧವೂ ಸಹ ಸ್ಪಷ್ಟವಾಗಿದೆಯಲ್ಲವೆ. ಶಾಸ್ತ್ರಗಳಲ್ಲಿ ಕೆಲವು ಶಬ್ಧಗಳಿವೆ, ಹಿಟ್ಟಿನಲ್ಲಿ ಉಪ್ಪಿನಷ್ಟು ಉಳಿದುಕೊಳ್ಳುತ್ತಾರೆ. ಇಷ್ಟು ಕೋಟ್ಯಾಂತರ ಮನುಷ್ಯರಲ್ಲಿ, ಇವರಲ್ಲಿ ಕೇವಲ 9 ಲಕ್ಷ ಮಾತ್ರವೇ ಉಳಿಯುತ್ತಾರೆ ಅಂದಾಗ ಕಾಲು ಭಾಗವೂ ಆಗಲಿಲ್ಲ. ಇದಕ್ಕೆ ಹಿಟ್ಟಿನಲ್ಲಿ ಉಪ್ಪಿನಷ್ಟು ಎಂದು ಹೇಳಲಾಗುತ್ತದೆ. ಪ್ರಪಂಚವೆಲ್ಲವೂ ವಿನಾಶವಾಗಿ ಬಿಡುತ್ತದೆ. ಸಂಗಮಯುಗದಲ್ಲಿ ಬಹಳ ಕೆಲವರೇ ಇರುತ್ತಾರೆ. ಕೆಲವರು ಮೊದಲೇ ಶರೀರವನ್ನು ಬಿಟ್ಟು ಹೋಗುತ್ತಾರೆ. ಅವರು ಮತ್ತೆ ಆಹ್ವಾನ ಮಾಡುತ್ತಾರೆ. ಹೇಗೆ ಮೊಗಲರ ಕನ್ಯೆಯಿದ್ದರು, ಬಹಳ ಒಳ್ಳೆಯವರಾಗಿದ್ದರು ಅಂದಮೇಲೆ ಅವರು ಒಳ್ಳೆಯ ಮನೆಯಲ್ಲಿಯೇ ಜನ್ಮ ಪಡೆದಿರಬೇಕು! ನಂಬರ್ವಾರ್ ಸುಖದಲ್ಲಿ ಜನ್ಮ ಪಡೆಯುತ್ತಾರೆ. ಅವರು ಸುಖವನ್ನು ನೋಡಬೇಕಾಗಿದೆ, ಸ್ವಲ್ಪ ದುಃಖವನ್ನೂ ನೋಡಬೇಕಾಗಿದೆ. ಯಾರದೂ ಕರ್ಮಾತೀತ ಸ್ಥಿತಿಯಾಗಿಲ್ಲ. ಬಹಳ ಸುಖೀ ಮನೆಯಲ್ಲಿ ಹೋಗಿ ಜನ್ಮ ಪಡೆಯುತ್ತಾರೆ. ಇಲ್ಲಿ ಯಾವುದೂ ಸುಖಿ ಮನೆಯಿಲ್ಲವೆಂದು ತಿಳಿದುಕೊಳ್ಳಬೇಡಿ. ಬಹಳ ಪರಿವಾರಗಳು ಒಳ್ಳೆಯ ಪರಿವಾರಗಳಿರುತ್ತವೆ. ತಂದೆಯು (ಬ್ರಹ್ಮಾ) ನೋಡಿದ್ದಾರೆ - ಒಂದೇ ಮನೆಯಲ್ಲಿ ಸೊಸೆಯಂದಿರು ಪರಸ್ಪರ ಶಾಂತಿಯಲ್ಲಿ ಅನ್ಯೂನ್ಯವಾಗಿ ಇರುತ್ತಾರೆ. ಎಲ್ಲರೂ ಜೊತೆಯಲ್ಲಿ ಭಕ್ತಿ ಮಾಡುತ್ತಾರೆ, ಗೀತೆಯನ್ನು ಓದುತ್ತಾರೆ...... ತಂದೆಯು ಅವರೊಂದಿಗೆ ಕೇಳಿದರು - ಇಷ್ಟೊಂದು ಮಂದಿ ಒಟ್ಟಿಗೆ ಇರುತ್ತೀರಿ, ನಿಮ್ಮಲ್ಲಿ ಜಗಳವಾಗುವುದಿಲ್ಲವೆ! ಅವರು ಹೇಳಿದರು - ಇಲ್ಲ, ನಮ್ಮ ಬಳಿಯಂತೂ ಸ್ವರ್ಗವಿದೆ. ನಾವೆಲ್ಲರೂ ಒಟ್ಟಿಗೆ ಇರುತ್ತೇವೆ, ಎಂದೂ ಜಗಳ-ಕಲಹವಾಗುವುದಿಲ್ಲ, ಶಾಂತಿಯಲ್ಲಿರುತ್ತೇವೆ. ಇಲ್ಲಂತೂ ಸ್ವರ್ಗದಂತಿದೆ ಎಂದು ಮನುಷ್ಯರು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಸ್ವರ್ಗವು ಇದ್ದು ಹೋಗಿದೆ. ಆದ್ದರಿಂದಲೇ ಇಲ್ಲಿ ಹೇಗೆ ಸ್ವರ್ಗದಂತಿದೆ ಎಂಬ ಶಬ್ಧವು ಮನುಷ್ಯರ ಬಾಯಿಂದ ಬರುತ್ತದೆಯಲ್ಲವೆ. ಆದರೆ ಇಲ್ಲಂತೂ ಅನೇಕರ ಸ್ವಭಾವವು ಸ್ವರ್ಗವಾಸಿಗಳಾಗುವಂತೆ ಕಾಣುವುದಿಲ್ಲ. ದಾಸ-ದಾಸಿಯರೂ ಆಗಬೇಕಲ್ಲವೆ! ಈ ರಾಜಧಾನಿಯು ಸ್ಥಾಪನೆಯಾಗುತ್ತದೆ. ಬಾಕಿ ಯಾರು ಬ್ರಾಹ್ಮಣರಾಗುವರೋ ಅವರು ದೈವೀ ಮನೆತನದಲ್ಲಿ ಬರುವವರಾಗಿದ್ದಾರೆ, ಆದರೆ ನಂಬರ್ವಾರ್ ಇದ್ದಾರೆ. ಕೆಲವರು ಬಹಳ ಮಧುರರಾಗಿರುತ್ತಾರೆ. ಎಲ್ಲರಿಗೆ ಪ್ರೀತಿ ಕೊಡುತ್ತಿರುತ್ತಾರೆ, ಎಂದೂ ಯಾರ ಪ್ರತಿಯೂ ಕೋಪಿಸಿಕೊಳ್ಳುವುದಿಲ್ಲ. ಕ್ರೋಧ ಮಾಡುವುದರಿಂದ ದುಃಖವಾಗುತ್ತದೆ. ಯಾರು ಮನಸ್ಸಾ-ವಾಚಾ-ಕರ್ಮಣಾ ಅನ್ಯರಿಗೆ ದುಃಖವನ್ನೇ ಕೊಡುತ್ತಿರುವರೋ ಅವರಿಗೆ ದುಃಖಿ ಆತ್ಮಗಳೆಂದು ಕರೆಯಲಾಗುತ್ತದೆ. ಹೇಗೆ ಪುಣ್ಯಾತ್ಮ, ಪಾಪಾತ್ಮನೆಂದು ಹೇಳುತ್ತಾರಲ್ಲವೆ. ಶರೀರದ ಹೆಸರನ್ನು ತೆಗೆದುಕೊಳ್ಳುವರೇ? ವಾಸ್ತವದಲ್ಲಿ ಪುಣ್ಯಾತ್ಮ, ಪಾಪಾತ್ಮನು ಆತ್ಮವೇ ಆಗುತ್ತದೆ, ಎಲ್ಲಾ ಪಾಪಾತ್ಮರೂ ಒಂದೇ ರೀತಿಯಾಗಿರುವುದಿಲ್ಲ ಹಾಗೆಯೇ ಪುಣ್ಯಾತ್ಮರೆಲ್ಲರೂ ಒಂದೇ ರೀತಿಯಿರುವುದಿಲ್ಲ, ನಂಬರ್ವಾರ್ ಪುರುಷಾರ್ಥದನುಸಾರ ಇರುತ್ತಾರೆ. ವಿದ್ಯಾರ್ಥಿಗಳಿಗೆ ಸ್ವಯಂನ ಬಗ್ಗೆ ತಿಳಿಯುತ್ತದೆಯಲ್ಲವೆ - ನನ್ನ ನಡವಳಿಕೆ, ಸ್ಥಿತಿ ಹೇಗಿದೆ? ನಾನು ಹೇಗೆ ನಡೆಯುತ್ತೇನೆ? ಎಲ್ಲರೊಂದಿಗೆ ಮಧುರವಾಗಿ ಮಾತನಾಡುತ್ತೇನೆಯೇ? ಯಾರಾದರೂ ಏನಾದರೂ ಹೇಳಿದರೆ ನಾನು ಉಲ್ಟಾ-ಸುಲ್ಟಾ ಉತ್ತರವನ್ನಂತೂ ಕೊಡುವುದಿಲ್ಲವೆ? ಬಾಬಾ, ಮಕ್ಕಳ ಮೇಲೆ ಕೋಪ ಬಂದು ಬಿಡುತ್ತದೆಯೆಂದು ಕೆಲವರು ತಂದೆಗೆ ಹೇಳುತ್ತಾರೆ ಅದಕ್ಕೆ ತಂದೆಯು ತಿಳಿಸುತ್ತಾರೆ, ಮಕ್ಕಳೇ ಎಷ್ಟು ಸಾಧ್ಯವೋ ಅಷ್ಟು ಪ್ರೀತಿಯಿಂದ ಕೆಲಸ ತೆಗೆದುಕೊಳ್ಳಿ, ಚಿಕ್ಕ ಮಕ್ಕಳನ್ನು ಸುಧಾರಣೆ ಮಾಡಲು ಕಿವಿ ಹಿಡಿದುಕೊಳ್ಳುತ್ತಾರೆ. ಕೃಷ್ಣನನ್ನು ತೋರಿಸುತ್ತಾರಲ್ಲವೆ - ಅವನನ್ನು ಹಗ್ಗದಿಂದ ಕಟ್ಟಿ ಹಾಕಿದರು. ಇದೂ ಸಹ ಇಲ್ಲಿಯ ಮಾತಾಗಿದೆ. ಚಿಕ್ಕ ಮಕ್ಕಳು ಚಂಚಲವಾಗಿದ್ದರೆ ವೃಕ್ಷಕ್ಕೆ ಅಥವಾ ಮಂಚಕ್ಕೆ ಕಟ್ಟಿ ಹಾಕಿರಿ ಆದರೆ ಪೆಟ್ಟು ಕೊಡಬೇಡಿ. ಇಲ್ಲವೆಂದರೆ ಅವರೂ ಸಹ ಅದನ್ನೇ ಕಲಿತು ಬಿಡುತ್ತಾರೆ. ಆದ್ದರಿಂದ ಅವರನ್ನು ಕಟ್ಟಿ ಹಾಕುವುದು ಸರಿಯಾಗಿದೆ. ಮಕ್ಕಳೂ ಸಹ ದೊಡ್ಡವರಾದ ಮೇಲೆ ತಂದೆ-ತಾಯಿಯನ್ನು ಕಟ್ಟಿ ಹಾಕುತ್ತಾರೆಂದಲ್ಲ, ಇದು ಕೇವಲ ಮಕ್ಕಳಿಗೆ ಶಿಕ್ಷಣ ಕೊಡುವುದಾಗಿದೆ. ಬಹಳ ತೊಂದರೆ ಕೊಟ್ಟರೆ ಕಿವಿಯನ್ನು ಹಿಡಿದುಕೊಳ್ಳಿ. ಕೆಲವು ಮಕ್ಕಳು ಒಮ್ಮೆಲೆ ಉಸಿರು ಕಟ್ಟಿಸಿ ಬಿಡುತ್ತಾರೆ, ನಿರ್ಮೋಹಿಗಳೂ ಸಹ ಆಗಬೇಕಾಗಿದೆ.

ಇದನ್ನಂತೂ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಲಕ್ಷ್ಮೀ-ನಾರಾಯಣರಾಗಬೇಕಾಗಿದೆ, ಗುರಿ-ಧ್ಯೇಯವು ನಿಮ್ಮ ಸನ್ಮುಖದಲ್ಲಿದೆ. ಇದು ಎಷ್ಟು ಶ್ರೇಷ್ಠ ಗುರಿ-ಧ್ಯೇಯವಾಗಿದೆ! ಓದಿಸುವವರೂ ಸಹ ಶ್ರೇಷ್ಠರಲ್ಲವೆ. ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ...... ಎಂದು ಎಷ್ಟೊಂದು ಶ್ರೀಕೃಷ್ಣನ ಮಹಿಮೆ ಮಾಡುತ್ತಾರೆ. ಆದರೆ ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವಂತೂ ಆ ರೀತಿಯಾಗುತ್ತಿದ್ದೇವೆ. ಅಂತಹ ಶ್ರೇಷ್ಠರಾಗುವುದಕ್ಕಾಗಿಯೇ ನೀವು ಇಲ್ಲಿ ಬಂದಿದ್ದೀರಿ. ನಿಮ್ಮದು ಇದು ನರನಿಂದ ನಾರಾಯಣನಾಗುವ ಸತ್ಯ ನಾರಾಯಣನ ಕಥೆಯಾಗಿದೆ. ಅಮರ ಪುರಿಗೆ ಹೋಗುವ ಅಮರ ಕಥೆಯಾಗಿದೆ. ಆದರೆ ಈ ಮಾತುಗಳನ್ನು ಸನ್ಯಾಸಿ ಮೊದಲಾದವರು ತಿಳಿದುಕೊಳ್ಳುವುದಿಲ್ಲ, ಯಾವುದೇ ಮನುಷ್ಯ ಮಾತ್ರರಿಗೆ ಜ್ಞಾನ ಸಾಗರ ಅಥವಾ ಪತಿತ-ಪಾವನನೆಂದು ಹೇಳುವುದಿಲ್ಲ. ಇಡೀ ಸೃಷ್ಟಿಯೇ ಪತಿತವಾಗಿದೆ ಅಂದಮೇಲೆ ನಾವು ಪತಿತ-ಪಾವನರೆಂದು ಯಾರಿಗೆ ಹೇಳುವುದು? ಇಲ್ಲಿ ಯಾರೊಬ್ಬರೂ ಪುಣ್ಯಾತ್ಮರಿಲ್ಲ. ಇದು ಪತಿತ ಪ್ರಪಂಚವಾಗಿದೆ. ಶ್ರೀಕೃಷ್ಣನು ಮೊಟ್ಟ ಮೊದಲಿಗನಾಗಿದ್ದಾನೆ, ಆದರೆ ಕೃಷ್ಣನಿಗೂ ಸಹ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಜನನ-ಮರಣ ರಹಿತನು ಒಬ್ಬರೇ ನಿರಾಕಾರ ತಂದೆಯಾಗಿದ್ದಾರೆ. ಗಾಯನವೂ ಇದೆ – ಶಿವ ಪರಮಾತ್ಮಾಯ ನಮಃ, ಬ್ರಹ್ಮಾ-ವಿಷ್ಣು-ಶಂಕರನಿಗೆ ದೇವತೆಗಳೆಂದು ಹೇಳಿ ಮತ್ತೆ ಶಿವನಿಗೆ ಪರಮಾತ್ಮನೆಂದು ಹೇಳುತ್ತಾರೆ ಅಂದಮೇಲೆ ಶಿವನು ಎಲ್ಲರಿಗಿಂತ ಹಿರಿಯರಾದರಲ್ಲವೆ. ಅವರು ಎಲ್ಲರ ತಂದೆಯಾಗಿದ್ದಾರೆ, ಆಸ್ತಿಯು ಅವರಿಂದಲೇ ಸಿಗಬೇಕಾಗಿದೆ. ಆದರೆ ಸರ್ವವ್ಯಾಪಿಯೆಂದು ಹೇಳಿದಾಗ ಅಲ್ಲಿ ಆಸ್ತಿ ಸಿಗುವುದಿಲ್ಲ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆಂದ ಮೇಲೆ ಅವಶ್ಯವಾಗಿ ಸ್ವರ್ಗದ ಆಸ್ತಿಯನ್ನೇ ಕೊಡುತ್ತಾರೆ. ಈ ಲಕ್ಷ್ಮೀ-ನಾರಾಯಣರು ನಂಬರ್ವನ್ ಆಗಿದ್ದಾರೆ. ವಿದ್ಯೆಯಿಂದಲೇ ಈ ಪದವಿಯನ್ನು ಪಡೆದರು ಅಂದಮೇಲೆ ಭಾರತದ ಪ್ರಾಚೀನ ಯೋಗವು ಏಕೆ ಪ್ರಸಿದ್ಧವಾಗಬಾರದು! ಇದರಿಂದ ಮನುಷ್ಯರು ವಿಶ್ವದ ಮಾಲೀಕರಾಗುತ್ತಾರೆ. ಆದ್ದರಿಂದ ಇದಕ್ಕೆ ಸಹಜ ಯೋಗ, ಸಹಜ ಜ್ಞಾನವೆಂದು ಹೇಳುತ್ತಾರೆ. ವಾಸ್ತವದಲ್ಲಿ ಇದು ಬಹಳ ಸಹಜವಾಗಿದೆ. ಒಂದೇ ಜನ್ಮದ ಪುರುಷಾರ್ಥದಿಂದ ಎಷ್ಟೊಂದು ಪ್ರಾಪ್ತಿಯಾಗಿ ಬಿಡುತ್ತದೆ! ಭಕ್ತಿಮಾರ್ಗದಲ್ಲಂತೂ ಪ್ರತೀ ಜನ್ಮದಲ್ಲಿ ಅಲೆದಾಡುತ್ತಾ, ಪೆಟ್ಟು ತಿನ್ನುತ್ತಾ ಬಂದಿರಿ ಆದರೆ ಏನೂ ಸಿಗಲಿಲ್ಲ. ಇಲ್ಲಿ ಒಂದೇ ಜನ್ಮದಲ್ಲಿ ಪ್ರಾಪ್ತಿಯಾಗಿ ಬಿಡುತ್ತದೆ. ಆದ್ದರಿಂದ ಸಹಜವೆಂದು ಹೇಳಲಾಗುವುದು. ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ. ಇತ್ತೀಚೆಗೆ ನೋಡಿ, ಎಂತೆಂತಹ ಸಂಶೋಧನೆಗಳನ್ನು ಮಾಡುತ್ತಿರುತ್ತಾರೆ! ವಿಜ್ಞಾನವೂ ಸಹ ಅದ್ಭುತವಾಗಿದೆ ಮತ್ತು ಶಾಂತಿಯ ಅದ್ಭುತವೂ ಸಹ ನೋಡಿ ಹೇಗಿದೆ! ಅದೆಲ್ಲವೂ ಸ್ಥೂಲವಾಗಿ ಕಾಣುತ್ತದೆ ಆದರೆ ಇಲ್ಲಿ ಏನೂ ಇಲ್ಲ. ನೀವು ಶಾಂತಿಯಲ್ಲಿ ಕುಳಿತಿದ್ದೀರಿ. ನೌಕರಿ ಇತ್ಯಾದಿಗಳನ್ನೂ ಮಾಡುತ್ತೀರಿ, ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯೋಗವು ತಂದೆಯೊಂದಿಗಿರಲಿ..... ಅಂದರೆ ಆತ್ಮದ ಮನಸ್ಸು ಪ್ರಿಯತಮನ ಜೊತೆಯಿರಲಿ. ಪ್ರಿಯತಮ-ಪ್ರಿಯತಮೆಯರ ಗಾಯನವಿದೆಯಲ್ಲವೆ. ಅವರು ಒಬ್ಬರು ಇನ್ನೊಬ್ಬರ ರೂಪವನ್ನು ನೋಡಿ ಪ್ರೀತಿ ಮಾಡುತ್ತಾರೆ, ಅಲ್ಲಿ ವಿಕಾರದ ಮಾತಿರುವುದಿಲ್ಲ. ಎಲ್ಲಿ ಕುಳಿತಿದ್ದರೂ ಸಹ ಅವರ ನೆನಪು ಬಂದು ಬಿಡುತ್ತದೆ. ಊಟ ಮಾಡುತ್ತಿರುವಾಗಲೂ ಸನ್ಮುಖದಲ್ಲಿ ಬುದ್ಧಿಯಿಂದ ಅವರನ್ನೇ ನೋಡುತ್ತಿರುತ್ತಾರೆ. ಅಂತಿಮದಲ್ಲಿ ನಿಮ್ಮದೂ ಸಹ ಈ ಸ್ಥಿತಿಯಾಗುವುದು. ಕೇವಲ ತಂದೆಯನ್ನೇ ನೆನಪು ಮಾಡುತ್ತಾ ಇರುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ರೂಪ ಭಸಂತರಾಗಿ ಮುಖದಿಂದ ಸದಾ ಸುಖದಾಯಕ ಮಾತುಗಳನ್ನು ಮಾತನಾಡಬೇಕಾಗಿದೆ, ದುಃಖದಾಯಿಗಳಾಗಬಾರದು. ಜ್ಞಾನದ ವಿಚಾರಗಳಲ್ಲಿರಬೇಕಾಗಿದೆ, ಬಾಯಿಂದ ಜ್ಞಾನ ರತ್ನಗಳೇ ಹೊರಬರಬೇಕಾಗಿದೆ.

2. ನಿರ್ಮೋಹಿಗಳಾಗಬೇಕು, ಪ್ರತಿಯೊಬ್ಬರಿಂದ ಪ್ರೀತಿಯಿಂದ ಕೆಲಸ ತೆಗೆದುಕೊಳ್ಳಬೇಕು, ಕೋಪಿಸಿಕೊಳ್ಳಬಾರದು. ಅನಾಥರನ್ನು ಸನಾಥರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.

ವರದಾನ:
ಅಪವಿತ್ರತೆಯ ಹೆಸರು ಗುರುತನ್ನೂ ಸಹ ಸಮಾಪ್ತಿ ಮಾಡಿ “ಹಿಸ್ಹೋಲಿನೆಸ್”ನ ಟೈಟಲ್ ಪ್ರಾಪ್ತಿ ಮಾಡಿಕೊಳ್ಳುವಂತಹ ಹೋಲಿ ಹಂಸ ಭವ.

ಹೇಗೆ ಹಂಸವು ಎಂದೂ ಸಹ ಕಲ್ಲನ್ನು ಎತ್ತಿಕೊಳ್ಳುವುದಿಲ್ಲ, ರತ್ನವನ್ನು ಧಾರಣೆ ಮಾಡುತ್ತದೆ. ಇಂತಹ ಹೋಲಿ ಹಂಸ ಯಾರದೇ ಅವಗುಣ ಅರ್ಥಾತ್ ಕಲ್ಲನ್ನು ಧಾರಣೆ ಮಾಡಲು ಸಾಧ್ಯವಿಲ್ಲ. ಅವರು ವ್ಯರ್ಥ ಮತ್ತು ಸಮರ್ಥವನ್ನು ಬೇರೆ ಮಾಡಿ ವ್ಯರ್ಥವನ್ನು ಬಿಟ್ಟು ಬಿಡುತ್ತಾರೆ, ಸಮರ್ಥವನ್ನು ತನ್ನದನ್ನಾಗಿಸಿಕೊಳ್ಳುತ್ತಾರೆ. ಇಂತಹ ಹೋಲಿ ಹಂಸಗಳೇ ಪವಿತ್ರ ಶುದ್ಧ ಆತ್ಮಗಳಾಗಿದ್ದಾರೆ, ಅವರ ಆಹಾರ, ವ್ಯವಹಾರ ಎಲ್ಲವೂ ಶುದ್ಧವಾಗಿರುತ್ತದೆ. ಯಾವಾಗ ಅಶುದ್ಧ ಅರ್ಥಾತ್ ಅಪವಿತ್ರತೆಯ ಹೆಸರು ಗುರುತೂ ಸಹ ಸಮಾಪ್ತಿಯಾಯಿತೆಂದರೆ ಆಗ ಭವಿಷ್ಯದಲ್ಲಿ “ಹಿಸ್ಹೋಲಿನೆಸ್” ಎಂಬ ಟೈಟಲ್ ಪ್ರಾಪ್ತಿಯಾಗುತ್ತದೆ. ಆದ್ದರಿಂದ ತಪ್ಪಾಗಿಯೂ ಎಂದೂ ಯಾರದೇ ಅವಗುಣ ಧಾರಣೆ ಮಾಡಬಾರದು.

ಸ್ಲೋಗನ್:
ಯಾರು ಹಳೆಯ ಸ್ವಭಾವ ಸಂಸ್ಕಾರದ ವಂಶವನ್ನೂ ಸಹ ತ್ಯಾಗ ಮಾಡಿರುತ್ತಾರೆ ಅವರೇ ಸರ್ವಂಶ ತ್ಯಾಗಿ ಆಗಿದ್ದಾರೆ.