17.12.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನಿಮ್ಮ ಶ್ರೇಷ್ಠ ಅದೃಷ್ಟವನ್ನು ರೂಪಿಸಲು ಸದ್ಗುರು ಬಂದಿದ್ದಾರೆ ಅಂದಾಗ ನಿಮ್ಮ ಚಲನೆಯು ಬಹಳ-ಬಹಳ ರಾಯಲ್ ಆಗಿರಬೇಕು"

ಪ್ರಶ್ನೆ:
ಡ್ರಾಮಾದ ಯಾವ ಪ್ಲಾನ್ ಮಾಡಲ್ಪಟ್ಟಿದೆ, ಆದ್ದರಿಂದ ಯಾರಿಗೂ ದೋಷ ಹೊರಿಸುವಂತಿಲ್ಲ?

ಉತ್ತರ:
ಡ್ರಾಮಾದಲ್ಲಿ ಈ ಹಳೆಯ ಪ್ರಪಂಚ ವಿನಾಶದ ಪ್ಲಾನ್ ಮಾಡಲ್ಪಟ್ಟಿದೆ. ಇದರಲ್ಲಿ ಯಾರದೂ ದೋಷವಿಲ್ಲ. ಈ ಸಮಯದಲ್ಲಿ ಇದರ ವಿನಾಶಕ್ಕಾಗಿ ಪ್ರಕೃತಿಗೆ ಬಹಳ ಕೋಪ ಬಂದಿದೆ. ನಾಲ್ಕೂ ಕಡೆ ಭೂಕಂಪವಾಗುವುದು. ಕಟ್ಟಡಗಳು ಬೀಳುವವು, ಪ್ರವಾಹ ಬರುವುದು, ಬರಗಾಲವಾಗುವುದು. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಈ ಹಳೆಯ ಪ್ರಪಂಚದಿಂದ ನೀವು ತಮ್ಮ ಬುದ್ಧಿಯೋಗವನ್ನು ತೆಗೆದು ಹಾಕಿ, ಸದ್ಗುರುವಿನ ಶ್ರೀಮತದಂತೆ ನಡೆಯಿರಿ. ಜೀವಿಸಿದ್ದಂತೆಯೇ ದೇಹಭಾನವನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವ ಪುರುಷಾರ್ಥ ಮಾಡುತ್ತಾ ಇರಿ.

ಗೀತೆ:
ನಾವು ಆ ಮಾರ್ಗದಂತೆ ನಡೆಯಬೇಕು....

ಓಂ ಶಾಂತಿ.
ಯಾವ ಮಾರ್ಗದಂತೆ ನಡೆಯಬೇಕು? ಗುರುವಿನ ಮಾರ್ಗದಂತೆ ನಡೆಯಬೇಕಾಗಿದೆ. ಇವರು ಯಾವ ಗುರುವಾಗಿದ್ದಾರೆ? ಏಳುತ್ತಾ-ಕುಳಿತುಕೊಳ್ಳುತ್ತಾ ಮನುಷ್ಯರ ಬಾಯಿಂದ ವಾಹ್ ಗುರು! ಎಂದು ಹೊರ ಬರುತ್ತದೆ. ಈ ಗುರುಗಳಂತೂ ಅನೇಕರಿದ್ದಾರೆ ಅಂದಮೇಲೆ ವಾಹ್ ಗುರು! ಎಂದು ಯಾರಿಗೆ ಹೇಳುತ್ತೀರಿ? ಯಾರ ಮಹಿಮೆ ಮಾಡುತ್ತೀರಿ? ಸದ್ಗುರು ಒಬ್ಬರೇ ತಂದೆಯಾಗಿದ್ದಾರೆ, ಭಕ್ತಿಮಾರ್ಗದ ಗುರುಗಳಂತೂ ಅನೇಕರಿದ್ದಾರೆ. ಕೆಲಕೆಲವರಂತೂ ಕೆಲಕೆಲವರ ಮಹಿಮೆ ಮಾಡುತ್ತಾರೆ. ಮಕ್ಕಳ ಬುದ್ಧಿಯಲ್ಲಿದೆ - ಸತ್ಯವಾದ ಸದ್ಗುರುವಂತೂ ಅವರೊಬ್ಬರೇ ಆಗಿದ್ದಾರೆ. ಅವರಿಗೇ ವಾಹ್! ವಾಹ್! ಎನ್ನಲಾಗುವುದು. ಸತ್ಯ ಸದ್ಗುರು ಇದ್ದಾರೆಂದ ಮೇಲೆ ಅವಶ್ಯವಾಗಿ ಅಸತ್ಯ ಗುರುಗಳೂ ಇರುವರು. ಸತ್ಯ ಸದ್ಗುರುವು ಸಂಗಮದಲ್ಲಿಯೇ ಇರುತ್ತಾರೆ. ಭಕ್ತಿಮಾರ್ಗದಲ್ಲಿಯೂ ಸತ್ಯದ ಮಹಿಮೆ ಮಾಡುತ್ತಾರೆ. ಸರ್ವಶ್ರೇಷ್ಠ ತಂದೆಯೇ ಸತ್ಯವಂತನಾಗಿದ್ದಾರೆ, ಅವರೇ ಮುಕ್ತಿದಾತ, ಮಾರ್ಗದರ್ಶಕನೂ ಆಗುತ್ತಾರೆ. ಇತ್ತೀಚಿನ ಗುರುಗಳಂತೂ ಗಂಗಾಸ್ನಾನ ಅಥವಾ ತೀರ್ಥ ಯಾತ್ರೆಗಳಿಗೆ ಕರೆದುಕೊಂಡು ಹೋಗಲು ಮಾರ್ಗದರ್ಶಕರಾಗುತ್ತಾರೆ. ಆದರೆ ಈ ಸದ್ಗುರುವು ಆ ರೀತಿ ಅಲ್ಲ. ಇವರನ್ನು ಹೇ ಪತಿತ-ಪಾವನ ಬನ್ನಿ ಎಂದು ಎಲ್ಲರೂ ನೆನಪು ಮಾಡುತ್ತಾರೆ. ಸದ್ಗುರುವಿಗೇ ಪತಿತ-ಪಾವನನೆಂದು ಹೇಳಲಾಗುತ್ತದೆ. ಅವರೇ ಪಾವನರನ್ನಾಗಿ ಮಾಡಬಲ್ಲರು. ಆ ಗುರುಗಳಂತೂ ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಅವರು ಯಾರೂ ಹೇಳುವುದಿಲ್ಲ. ಭಲೆ ಗೀತೆಯನ್ನು ಓದುತ್ತಾರೆ ಆದರೆ ಅದರ ಅರ್ಥವು ತಿಳಿದಿಲ್ಲ. ಒಂದುವೇಳೆ ಸದ್ಗುರು ಒಬ್ಬರೇ ಆಗಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದೇ ಆದರೆ ತಮ್ಮನ್ನು ಗುರುಗಳೆಂದು ಕರೆಸಿಕೊಳ್ಳುತ್ತಿರಲಿಲ್ಲ. ಡ್ರಾಮಾನುಸಾರ ಭಕ್ತಿಮಾರ್ಗದ ವಿಭಾಗವೇ ಬೇರೆಯಾಗಿದೆ. ಅದರಲ್ಲಿ ಅನೇಕ ಗುರುಗಳು, ಅನೇಕ ಭಕ್ತರಿದ್ದಾರೆ. ಇವರಂತೂ ಒಬ್ಬರೇ ಆಗಿದ್ದಾರೆ ನಂತರ ಈ ದೇವಿ-ದೇವತೆಗಳು ಮೊದಲ ನಂಬರಿನಲ್ಲಿ ಬರುತ್ತಾರೆ, ಈಗ ಕೊನೆಯಲ್ಲಿದ್ದಾರೆ. ತಂದೆಯು ಬಂದು ಇವರಿಗೆ ಸತ್ಯಯುಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ ಅಂದಾಗ ಮತ್ತೆಲ್ಲರೂ ಹಿಂತಿರುಗಿ ಹೋಗಲೇಬೇಕಾಗಿದೆ. ಆದ್ದರಿಂದ ಸರ್ವರ ಸದ್ಗತಿದಾತನೂ ಒಬ್ಬರೇ ಎಂದು ಹೇಳಲಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ಕಲ್ಪ-ಕಲ್ಪವೂ ಸಂಗಮಯುಗದಲ್ಲಿಯೇ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ, ನೀವು ಪುರುಷೋತ್ತಮರಾಗುತ್ತೀರಿ. ಉಳಿದಂತೆ ಮತ್ತ್ಯಾರೂ ಕೆಲಸ ಮಾಡುವುದಿಲ್ಲ. ಗತಿ-ಸದ್ಗತಿದಾತನು ಒಬ್ಬರೇ ಎಂದು ಗಾಯನವಿದೆ. ಇದು ತಂದೆಯದೇ ಮಹಿಮೆಯಾಗಿದೆ. ಗತಿ-ಸದ್ಗತಿಯು ಸಂಗಮದಲ್ಲಿಯೇ ಸಿಗುತ್ತದೆ, ಸತ್ಯಯುಗದಲ್ಲಂತೂ ಒಂದು ಧರ್ಮವಿರುತ್ತದೆ. ಇದೂ ಸಹ ತಿಳುವಳಿಕೆಯ ಮಾತಲ್ಲವೆ ಆದರೆ ಈ ಬುದ್ಧಿಯನ್ನು ಯಾರು ಕೊಡುವರು? ನಿಮಗೆ ತಿಳಿದಿದೆ - ತಂದೆಯೇ ಬಂದು ಯುಕ್ತಿಯನ್ನು ತಿಳಿಸುತ್ತಾರೆ, ಶ್ರೀಮತವನ್ನು ಕೊಡುತ್ತಾರೆ, ಯಾರಿಗೆ? ಆತ್ಮರಿಗೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ, ಜ್ಞಾನವನ್ನು ಕಲಿಸುತ್ತಾರಲ್ಲವೆ. ಉಳಿದೆಲ್ಲಾ ಗುರುಗಳು ಭಕ್ತಿಯನ್ನೇ ಕಲಿಸುತ್ತಾರೆ. ತಂದೆಯ ಜ್ಞಾನದಿಂದ ನಿಮ್ಮ ಸದ್ಗತಿಯಾಗುತ್ತದೆ ನಂತರ ಈ ಹಳೆಯ ಪ್ರಪಂಚದಿಂದ ಹೊರಟು ಹೋಗುತ್ತೀರಿ. ನಿಮ್ಮದು ಈ ಹಳೆಯ ಪ್ರಪಂಚದಿಂದ ಬೇಹದ್ದಿನ ಸನ್ಯಾಸವೂ ಇದೆ. ತಂದೆಯು ತಿಳಿಸಿದ್ದಾರೆ - ಈಗ ನಿಮ್ಮ 84 ಜನ್ಮಗಳು ಪೂರ್ಣವಾಯಿತು, ಈಗ ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ಹೇಗೆ ಯಾರಾದರೂ ಬಹಳ ರೋಗಿಯಾದರೆ ಇವರಂತೂ ಇನ್ನು ಹೊರಟು ಹೋಗುವರು. ಅವರನ್ನೇನು ನೆನಪು ಮಾಡಿಕೊಳ್ಳುತ್ತೀರಿ ಎಂದು ಹೇಳುತ್ತಾರೆ. ಶರೀರವು ಸಮಾಪ್ತಿಯಾಗಿ ಬಿಡುತ್ತದೆ ಬಾಕಿ ಆತ್ಮವು ಹೋಗಿ ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತದೆ. ಭರವಸೆಯೇ ಹೊರಟು ಹೋಗುತ್ತದೆ. ಬಂಗಾಳದಲ್ಲಿ ಯಾವಾಗ ಯಾರಾದರೂ ಉಳಿಯುವುದಿಲ್ಲ ಎಂದು ತಿಳಿದ ತಕ್ಷಣ ಗಂಗೆಯಲ್ಲಿ ಹೋಗಿ ಅವರ ಪ್ರಾಣ ಹೊರಟು ಹೋಗಲಿ ಎಂದು ಮುಳುಗಿಸುತ್ತಾರೆ. ಮೂರ್ತಿಗಳಿಗೂ ಸಹ ಪೂಜೆ ಮಾಡಿ ನಂತರ ಹೋಗಿ ಮುಳುಗಿ ಹೋಗು-ಮುಳುಗಿ ಹೋಗು ಎಂದು...... ನೀವೀಗ ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚವೇ ಮುಳುಗಿ ಹೋಗಲಿದೆ. ಪ್ರವಾಹಗಳು ಬರುತ್ತವೆ, ಬೆಂಕಿ ಬೀಳುತ್ತದೆ, ಮನುಷ್ಯರು ಹಸಿವಿನಿಂದ ಸಾಯುತ್ತಾರೆ - ಇವೆಲ್ಲಾ ಪರಿಸ್ಥಿತಿಗಳು ಬರಲಿವೆ. ಭೂಕಂಪದಲ್ಲಿ ಮನೆಗಳೆಲ್ಲವೂ ಬೀಳುತ್ತದೆ. ಈ ಸಮಯದಲ್ಲಿ ಪ್ರಕೃತಿಗೆ ಕೋಪ ಬರುತ್ತದೆ ಆದ್ದರಿಂದ ಎಲ್ಲರನ್ನೂ ಸಮಾಪ್ತಿ ಮಾಡಿ ಬಿಡುತ್ತದೆ. ಇಡೀ ಪ್ರಪಂಚಕ್ಕಾಗಿ ಇವೆಲ್ಲಾ ಪರಿಸ್ಥಿತಿಗಳು ಬರಲಿವೆ. ಅನೇಕ ಪ್ರಕಾರದ ಮೃತ್ಯುವಾಗುತ್ತದೆ, ಬಾಂಬುಗಳಲ್ಲಿಯೂ ವಿಷ ತುಂಬಲ್ಪಟ್ಟಿದೆ. ಸ್ವಲ್ಪ ಅದರ ವಾಸನೆ ಬಂದರೆ ಸಾಕು, ಮೂರ್ಛಿತರಾಗಿ ಬಿಡುತ್ತಾರೆ. ಮುಂದೆ ಏನೇನಾಗುವುದಿದೆ, ಇದೆಲ್ಲವನ್ನೂ ಯಾರು ಮಾಡಿಸುತ್ತಾರೆ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ತಂದೆಯಂತು ಮಾಡಿಸುವುದಿಲ್ಲ, ಇದೆಲ್ಲವೂ ಡ್ರಾಮಾದಲ್ಲಿ ನಿಶ್ಚಿತವಾಗಿದೆ. ಯಾರ ಮೇಲೂ ದೋಷ ಹೊರಿಸುವಂತಿಲ್ಲ. ಡ್ರಾಮಾದ ಪ್ಲಾನ್ ಮಾಡಲ್ಪಟ್ಟಿದೆ. ಹಳೆಯ ಪ್ರಪಂಚದಿಂದ ಮತ್ತೆ ಅವಶ್ಯವಾಗಿ ಹೊಸದಾಗುವುದು. ಪ್ರಾಕೃತಿಕ ವಿಕೋಪಗಳೂ ಬರುವವು, ವಿನಾಶವಾಗಲೇಬೇಕಾಗಿದೆ. ಈ ಹಳೆಯ ಪ್ರಪಂಚದಿಂದ ಬುದ್ಧಿಯೋಗವನ್ನು ತೆಗೆಯುವುದಕ್ಕೇ ಬೇಹದ್ದಿನ ಸನ್ಯಾಸವೆಂದು ಹೇಳಲಾಗುತ್ತದೆ.

ಈಗ ವಾಹ್ ಸದ್ಗುರು ವಾಹ್! ನೀವು ನಮಗೆ ಈ ಮಾರ್ಗವನ್ನು ತಿಳಿಸಿದಿರಿ ಎಂದು ಹೇಳುತ್ತೀರಿ. ತಂದೆಯು ಮಕ್ಕಳಿಗೂ ತಿಳಿಸುತ್ತಾರೆ - ಮಕ್ಕಳೇ, ನಿಂದನೆಯಾಗುವಂತಹ ಚಲನೆಯಲ್ಲಿ ನಡೆಯಬೇಡಿ. ನೀವಿಲ್ಲಿ ಜೀವಿಸಿದ್ದಂತೆಯೇ ಸಾಯುತ್ತೀರಿ. ದೇಹವನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯುತ್ತೀರಿ. ದೇಹದಿಂದ ಭಿನ್ನ ಆತ್ಮನಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ವಾಹ್ ಸದ್ಗುರು ವಾಹ್! ಎಂದು ಇದನ್ನು ಬಹಳ ಚೆನ್ನಾಗಿ ಹೇಳುತ್ತಾರೆ. ಪಾರಲೌಕಿಕ ಸದ್ಗುರುವಿನದೇ ವಾಹ್ ವಾಹ್! ಆಗುತ್ತದೆ. ಲೌಕಿಕ ಗುರುಗಳಂತು ಅನೇಕರಿದ್ದಾರೆ ಆದರೆ ಸತ್ಯ-ಸತ್ಯವಾದ ಸದ್ಗುರುವು ಒಬ್ಬರೇ ಆಗಿದ್ದಾರೆ. ಭಕ್ತಿಮಾರ್ಗದಲ್ಲಿಯೂ ಅವರ ಹೆಸರು ನಡೆದು ಬರುತ್ತದೆ. ಇಡೀ ಸೃಷ್ಟಿಯ ತಂದೆಯು ಒಬ್ಬರೇ ಆಗಿದ್ದಾರೆ. ಹೊಸ ಸೃಷ್ಟಿಯ ಸ್ಥಾಪನೆ ಹೇಗಾಗುತ್ತದೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಪ್ರಳಯವಾಯಿತು ನಂತರ ಶ್ರೀಕೃಷ್ಣ ಆಲದ ಎಲೆಯ ಮೇಲೆ ತೇಲಿ ಬಂದನು ಎಂದು ಶಾಸ್ತ್ರಗಳಲ್ಲಿ ತೋರಿಸುತ್ತಾರೆ ಆದರೆ ಈಗ ನೀವು ತಿಳಿದುಕೊಂಡಿದ್ದೀರಿ – ಆಲದ ಎಲೆಯ ಮೇಲೆ ಹೇಗೆ ಬರುವನು! ಕೃಷ್ಣನ ಮಹಿಮೆ ಮಾಡುವುದರಿಂದ ಏನೂ ಲಾಭವಿಲ್ಲ. ಈಗ ನಿಮ್ಮನ್ನು ಏರುವ ಕಲೆಯಲ್ಲಿ ಕರೆದುಕೊಂಡು ಹೋಗಲು ಸದ್ಗುರುವು ಸಿಕ್ಕಿದ್ದಾರೆ. ಏರುವ ಕಲೆಯಿಂದ ಸರ್ವರ ಉದ್ಧಾರವೆಂದು ಹೇಳುತ್ತಾರಲ್ಲವೆ. ಅಂದಾಗ ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಆತ್ಮನೇ 84 ಜನ್ಮಗಳನ್ನು ತೆಗೆದುಕೊಂಡಿದೆ, ಪ್ರತಿಯೊಂದು ಜನ್ಮದಲ್ಲಿ ನಾಮ-ರೂಪವು ಬದಲಾಗುತ್ತದೆ. ಇಂತಹವರು 84 ಜನ್ಮಗಳನ್ನು ತೆಗೆದುಕೊಂಡರು ಎಂದು ಹೇಳುವುದಿಲ್ಲ, ಆತ್ಮವು 84 ಜನ್ಮಗಳನ್ನು ತೆಗೆದುಕೊಂಡಿತು. ಶರೀರವಂತೂ ಬದಲಾಗುತ್ತಾ ಹೋಗುತ್ತದೆ, ಇವೆಲ್ಲಾ ಮಾತುಗಳು ನಿಮ್ಮ ಬುದ್ಧಿಯಲ್ಲಿದೆ. ಇಡೀ ಜ್ಞಾನವು ಬುದ್ಧಿಯಲ್ಲಿರಬೇಕು. ಯಾರೇ ಬಂದರೂ ಸಹ ಅವರಿಗೆ ತಿಳಿಸಿ, ಆದಿಯಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು ನಂತರ ಮಧ್ಯದಲ್ಲಿ ರಾವಣರಾಜ್ಯವಾಯಿತು. ಏಣಿಯನ್ನು ಇಳಿಯುತ್ತಾ ಬಂದಿರಿ. ಸತ್ಯಯುಗದಲ್ಲಿ ಸತೋಪ್ರಧಾನರೆಂದು ಹೇಳಲಾಗುತ್ತದೆ ನಂತರ ಸತೋ, ರಜೋ, ತಮೋದಲ್ಲಿ ಇಳಿಯುತ್ತೀರಿ, ಚಕ್ರವು ಸುತ್ತುತ್ತಿರುತ್ತದೆ. ತಂದೆಗೆ ಏನಾಗಿತ್ತು, ನಮ್ಮನ್ನು 84 ಜನ್ಮಗಳ ಚಕ್ರದಲ್ಲಿ ಏಕೆ ತಂದರು ಎಂದು ಕೆಲವರು ಹೇಳುತ್ತಾರೆ, ಆದರೆ ಈ ಅನಾದಿ ಸೃಷ್ಟಿಚಕ್ರವು ಮಾಡಲ್ಪಟ್ಟಿದೆ. ಇದರ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳಬೇಕಾಗಿದೆ. ಮನುಷ್ಯರಾಗಿಯೂ ಒಂದುವೇಳೆ ತಿಳಿದುಕೊಂಡಿಲ್ಲವೆಂದರೆ ಅವರು ನಾಸ್ತಿಕರಾಗಿದ್ದಾರೆ. ಅರಿತುಕೊಳ್ಳುವುದರಿಂದ ನಿಮಗೆ ಎಷ್ಟು ಶ್ರೇಷ್ಠ ಪದವಿ ಸಿಗುತ್ತದೆ! ಈ ವಿದ್ಯೆಯು ಬಹಳ ಉನ್ನತವಾಗಿದೆ. ಹೇಗೆ ದೊಡ್ಡ ಪರೀಕ್ಷೆಯನ್ನೇ ತೇರ್ಗಡೆ ಮಾಡುವವರ ಮನಸ್ಸಿನಲ್ಲಿ ನಾವು ಅತಿ ದೊಡ್ಡ ಪದವಿಯನ್ನು ಪಡೆಯುತ್ತೇವೆಂದು ಖುಷಿಯಿರುತ್ತದೆಯಲ್ಲವೆ. ಹಾಗೆಯೇ ನಿಮಗೆ ಗೊತ್ತಿದೆ - ಈ ಲಕ್ಷ್ಮೀ-ನಾರಾಯಣರು ತಮ್ಮ ಪೂರ್ವ ಜನ್ಮದಲ್ಲಿ ಕಲಿತು ನಂತರ ಮನುಷ್ಯರಿಂದ ದೇವತೆಗಳಾದರು.

ಈ ವಿದ್ಯೆಯಿಂದ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ವಿದ್ಯೆಯಿಂದ ಎಷ್ಟು ಶ್ರೇಷ್ಠ ಪದವಿ ಸಿಗುತ್ತದೆ! ಆಶ್ಚರ್ಯವಲ್ಲವೆ. ಇಷ್ಟು ದೊಡ್ಡ-ದೊಡ್ಡ ಮಂದಿರಗಳನ್ನು ಯಾರು ಕಟ್ಟಿಸುತ್ತಾರೆ ಅಥವಾ ಯಾರು ದೊಡ್ಡ-ದೊಡ್ಡ ವಿದ್ವಾಂಸರಿದ್ದಾರೆ, ಅವರನ್ನು ಕೇಳಿರಿ - ಸತ್ಯಯುಗದಲ್ಲಿ ಇವರು ಹೇಗೆ ಜನ್ಮ ತೆಗೆದುಕೊಂಡರು ಎಂದು. ಅದಕ್ಕೆ ಅವರು ತಿಳಿಸಲು ಸಾಧ್ಯವಿಲ್ಲ. ನಿಮಗೆ ತಿಳಿದಿದೆ - ಇದು ಭಗವದ್ಗೀತೆಯಲ್ಲಿ ತಿಳಿಸಿರುವ ರಾಜಯೋಗವಾಗಿದೆ. ಗೀತೆಯನ್ನು ಓದುತ್ತಾ ಬಂದಿದ್ದಾರೆ ಅದರಿಂದ ಲಾಭವೇನೂ ಇಲ್ಲ. ಈಗ ನಿಮಗೆ ತಂದೆಯೇ ಕುಳಿತು ತಿಳಿಸುತ್ತಾರೆ - ಬಾಬಾ, ನಾವು 5000 ವರ್ಷಗಳ ಮೊದಲೂ ಸಹ ತಮ್ಮೊಂದಿಗೆ ಮಿಲನ ಮಾಡಿದ್ದೆವು ಎಂದು ನೀವು ಹೇಳುತ್ತೀರಿ. ಏಕೆ ಮಿಲನ ಮಾಡಿದ್ದಿರಿ? ಸ್ವರ್ಗದ ಆಸ್ತಿಯನ್ನು ಪಡೆಯಲು, ಲಕ್ಷ್ಮೀ-ನಾರಾಯಣರಾಗಲು. ಯಾರೇ ಚಿಕ್ಕವರು-ದೊಡ್ಡವರು, ವೃದ್ಧರು, ಮೊದಲಾದವರು ಬರುತ್ತಾರೆಂದರೆ ಈ ಮಾತನ್ನು ಅವಶ್ಯವಾಗಿ ಕಲಿತುಕೊಂಡು ಬರುತ್ತಾರೆ ಏಕೆಂದರೆ ಗುರಿ-ಧ್ಯೇಯವೇ ಇದಾಗಿದೆ. ಸತ್ಯ ನಾರಾಯಣನ ಸತ್ಯ ಕಥೆಯಲ್ಲವೆ. ಇದೂ ಸಹ ನಿಮಗೆ ತಿಳಿದಿದೆ - ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಯಾರು ಇದನ್ನು ಚೆನ್ನಾಗಿ ಅರಿತುಕೊಳ್ಳುವರೋ ಅವರಿಗೆ ಆಂತರಿಕ ಖುಷಿಯಿರುತ್ತದೆ. ರಾಜ್ಯ ಭಾಗ್ಯವನ್ನು ಪಡೆಯುವ ಧೈರ್ಯವಿದೆಯೇ ಎಂದು ತಂದೆಯು ಕೇಳುತ್ತಾರೆ. ಆಗ ಹೌದು ಬಾಬಾ, ಏಕಿಲ್ಲ? ನಾವು ನರನಿಂದ ನಾರಾಯಣನಾಗುವುದಕ್ಕಾಗಿಯೇ ಓದುತ್ತೇವೆ ಎಂದು ಹೇಳುತ್ತಾರೆ. ಇಷ್ಟು ಸಮಯ ನಾವು ನಮ್ಮನ್ನು ದೇಹವೆಂದು ತಿಳಿದು ಕುಳಿತಿದ್ದೆವು, ಈಗ ತಂದೆಯು ನಮಗೆ ಸತ್ಯ ಮಾರ್ಗವನ್ನು ತಿಳಿಸಿದ್ದಾರೆ. ದೇಹೀ-ಅಭಿಮಾನಿಗಳಾಗುವುದರಲ್ಲಿ ಪರಿಶ್ರಮವಾಗುತ್ತದೆ. ಪದೇ-ಪದೇ ತಮ್ಮ ನಾಮ-ರೂಪದಲ್ಲಿ ಸಿಲುಕುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ನಾಮ-ರೂಪದಿಂದ ಭಿನ್ನರಾಗಬೇಕಾಗಿದೆ. ಈಗ ಆತ್ಮ ಎಂಬ ಹೆಸರಂತೂ ಇದೆಯಲ್ಲವೆ. ತಂದೆಯು ಸುಪ್ರೀಂ, ಪರಮಪಿತನಾಗಿದ್ದಾರೆ. ಲೌಕಿಕ ತಂದೆಗೆ ಪರಮಪಿತನೆಂದು ಹೇಳುವುದಿಲ್ಲ. ಪರಮ ಎಂಬ ಶಬ್ಧವನ್ನು ತಂದೆಯೊಬ್ಬರಿಗೇ ಕೊಡಲಾಗಿದೆ. ವಾಹ್ ಗುರು! ಎಂದೂ ಸಹ ಇವರಿಗೇ ಹೇಳಲಾಗುತ್ತದೆ. ನೀವು ಇದನ್ನು ಸಿಖ್ಖರಿಗೂ ಸಹ ತಿಳಿಸಬಹುದು. ಗ್ರಂಥ ಸಾಹೇಬನಿಗೆ ಸಂಪೂರ್ಣ ವರ್ಣನೆಯಿದೆ, ಮತ್ತ್ಯಾವುದೇ ಶಾಸ್ತ್ರದಲ್ಲಿ ಇಷ್ಟು ಈ ಗ್ರಂಥದಲ್ಲಿರುವಷ್ಟು ವರ್ಣನೆಯಿಲ್ಲ. ಜಪ ಸಾಹೇಬ ಸುಖ ಮನಿಯಲ್ಲಿದೆ. ದೊಡ್ಡ ಅಕ್ಷರಗಳು ಇವೆರಡಾಗಿವೆ. ತಂದೆಯು ತಿಳಿಸುತ್ತಾರೆ - ಸಾಹೇಬನನ್ನು ನೆನಪು ಮಾಡಿದರೆ ನಿಮಗೆ 21 ಜನ್ಮಗಳಿಗಾಗಿ ಸುಖ ಸಿಗುವುದು. ಇದರಲ್ಲಿ ತಬ್ಬಿಬ್ಬಾಗುವ ಮಾತೇ ಇಲ್ಲ. ತಂದೆಯು ಬಹಳ ಸಹಜ ಮಾಡಿ ತಿಳಿಸುತ್ತಾರೆ. ಎಷ್ಟೊಂದು ಮಂದಿ ಮತಾಂತರಗೊಂಡು ಹೋಗಿ ಸಿಖ್ಖರಾಗಿದ್ದಾರೆ.

ನೀವು ಮನುಷ್ಯರಿಗೆ ಮಾರ್ಗವನ್ನು ತಿಳಿಸುವುದಕ್ಕಾಗಿ ಎಷ್ಟೊಂದು ಚಿತ್ರಗಳನ್ನು ಮಾಡಿಸುತ್ತೀರಿ! ಎಷ್ಟು ಸಹಜವಾಗಿ ತಿಳಿಸುತ್ತೀರಿ. ನೀವಾತ್ಮರಾಗಿದ್ದೀರಿ ನಂತರ ಭಿನ್ನ-ಭಿನ್ನ ಧರ್ಮಗಳಲ್ಲಿ ಬಂದಿದ್ದೀರಿ, ಇದು ವಿಭಿನ್ನ ಧರ್ಮಗಳ ವೃಕ್ಷವಾಗಿದೆ. ಕ್ರೈಸ್ಟ್ ಹೇಗೆ ಬರುತ್ತಾನೆಂದು ಮತ್ತ್ಯಾರಿಗೂ ಗೊತ್ತಿಲ್ಲ. ತಂದೆಯು ತಿಳಿಸಿದ್ದರು – ಹೊಸ ಆತ್ಮಕ್ಕೆ ಕರ್ಮ ಭೋಗವಿರಲು ಸಾಧ್ಯವಿಲ್ಲ. ಕ್ರಿಸ್ತನ ಆತ್ಮನಿಗೆ ಶಿಕ್ಷೆ ಸಿಗಲು ಅವರೇನು ವಿಕರ್ಮ ಮಾಡಲಿಲ್ಲ. ಕ್ರಿಸ್ತನ ಸತೋಪ್ರಧಾನ ಆತ್ಮವು ಬರುತ್ತದೆ. ಯಾರಲ್ಲಿ ಅವರು ಪ್ರವೇಶ ಮಾಡುವರೋ ಅವರನ್ನು ಗಲ್ಲಿಗೇರಿಸುತ್ತಾರೆ, ಕ್ರಿಸ್ತನನ್ನಲ್ಲ. ಅವರಂತೂ ಹೋಗಿ ಇನ್ನೊಂದು ಜನ್ಮವನ್ನು ತೆಗೆದುಕೊಂಡು ದೊಡ್ಡ ಪದವಿಯನ್ನು ಪಡೆಯುತ್ತಾರೆ. ಪೋಪನ ಚಿತ್ರವೂ ಇದೆ.

ಈ ಸಮಯದಲ್ಲಿ ಇಡೀ ಪ್ರಪಂಚವೇ ಬಹಳ ಕನಿಷ್ಠವಾಗಿದೆ. ನೀವೂ ಕನಿಷ್ಠರಾಗಿದ್ದಿರಿ, ಈಗ ನೀವು ಶ್ರೇಷ್ಠರಾಗುತ್ತಿದ್ದೀರಿ. ಅವರ ವಾರಸುಧಾರರು ಕೊನೆಯಲ್ಲಿ ತಿನ್ನುತ್ತಾರೆ ಎಂದಲ್ಲ. ಅದು ಸಾಧ್ಯವಿಲ್ಲ. ನೀವೀಗ ತಮ್ಮ ಕೈಯನ್ನು ತುಂಬಿಸಿಕೊಂಡು ಹೋಗುತ್ತೀರಿ. ಉಳಿದೆಲ್ಲರೂ ಬರಿ ಗೈಯಲ್ಲಿ ಹೋಗುತ್ತಾರೆ. ನೀವು ಸಂಪನ್ನರಾಗುವುದಕ್ಕಾಗಿಯೇ ಓದುತ್ತೀರಿ. ಇದೂ ಸಹ ತಿಳಿದಿದೆ - ಕಲ್ಪದ ಹಿಂದೆ ಯಾರು ಬಂದಿದ್ದರೋ ಅವರೇ ಬರುತ್ತಾರೆ. ಸ್ವಲ್ಪ ಕೇಳಿದರೂ ಸಹ ಬಂದು ಬಿಡುತ್ತಾರೆ. ಎಲ್ಲರೂ ಒಟ್ಟಿಗೆ ನೋಡಲು ಸಾಧ್ಯವಿಲ್ಲ. ನೀವು ಅನೇಕ ಪ್ರಜೆಗಳನ್ನು ಮಾಡಿಕೊಳ್ಳುತ್ತೀರಿ, ತಂದೆಯು ಎಲ್ಲರನ್ನು ನೋಡಲು ಸಾಧ್ಯವಿಲ್ಲ. ಅಲ್ಪಸ್ವಲ್ಪ ಕೇಳಿದರೂ ಸಹ ಪ್ರಜೆಗಳಾಗುತ್ತಾ ಹೋಗುತ್ತಾರೆ. ನೀವು ಎಣಿಕೆ ಮಾಡುವುದಕ್ಕೂ ಸಾಧ್ಯವಿಲ್ಲ.

ನೀವು ಮಕ್ಕಳು ಸೇವೆಯಲ್ಲಿ ತತ್ಫರರಾಗಿದ್ದೀರಿ. ತಂದೆಯೂ ಸೇವೆಯಲ್ಲಿದ್ದಾರೆ. ತಂದೆಗೆ ಸೇವೆಯಿಲ್ಲದೇ ಇರಲು ಸಾಧ್ಯವಾಗುವುದಿಲ್ಲ. ಪ್ರತಿನಿತ್ಯವೂ ಮುಂಜಾನೆ ಸರ್ವೀಸ್ ಮಾಡಲು ಬರುತ್ತಾರೆ. ಸತ್ಸಂಗಗಳನ್ನೂ ಸಹ ಮುಂಜಾನೆಯ ಸಮಯದಲ್ಲಿಯೇ ಮಾಡುತ್ತಾರೆ. ಆ ಸಮಯದಲ್ಲಿ ಎಲ್ಲರಿಗೂ ಬಿಡುವಿರುತ್ತದೆ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ಮನೆಯಿಂದ ಬಹಳ ಮುಂಜಾನೆಯಲ್ಲಿಯೂ ಬರಬಾರದು ಮತ್ತು ರಾತ್ರಿಯಲ್ಲಿಯೂ ಬರಬಾರದು ಏಕೆಂದರೆ ದಿನ-ಪ್ರತಿದಿನ ಪ್ರಪಂಚವು ಕೆಡುತ್ತಾ ಹೋಗುತ್ತಿದೆ. ಆದ್ದರಿಂದ ಗಲ್ಲಿ-ಗಲ್ಲಿಗಳಲ್ಲಿ ಸೇವಾಕೇಂದ್ರಗಳು ಇಷ್ಟು ಸಮೀಪವಿರಬೇಕು. ಮನೆಯಿಂದ ಹೊರಟು ಸೇವಾಕೇಂದ್ರಕ್ಕೆ ಬರುವುದು ಬಹಳ ಸಹಜವಾಗಬೇಕು. ನಿಮ್ಮದು ವೃದ್ಧಿಯಾಗುವುದು ಆಗ ರಾಜಧಾನಿಯು ಸ್ಥಾಪನೆಯಾಗುತ್ತದೆ. ತಂದೆಯಂತೂ ಬಹಳ ಸಹಜವಾಗಿ ತಿಳಿಸುತ್ತಾರೆ - ಈ ರಾಜಯೋಗದ ಮೂಲಕ ಸ್ಥಾಪನೆ ಮಾಡುತ್ತಿದ್ದಾರೆ. ಬಾಕಿ ಇಡೀ ಹಳೆಯ ಪ್ರಪಂಚವೇ ಇರುವುದಿಲ್ಲ. ಪ್ರಜೆಗಳಂತೂ ಬಹಳಷ್ಟು ಮಂದಿಯಾಗುತ್ತಾರೆ, ಮಾಲೆಯು ತಯಾರಾಗುತ್ತದೆ. ಮುಖ್ಯವಾಗಿ ಯಾರು ಅನೇಕರ ಸೇವೆ ಮಾಡಿ ತಮ್ಮ ಸಮಾನ ಮಾಡಿಕೊಳ್ಳುವರೋ ಅವರೇ ಮಾಲೆಯ ಮಣಿಯಾಗುತ್ತಾರೆ. ಮನುಷ್ಯರು ಮಾಲೆಯನ್ನು ಜಪಿಸುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಬಹಳ ಮಂದಿ ಗುರುಗಳು ಮಾಲೆಯನ್ನು ಜಪಿಸಲು ಹೇಳುತ್ತಾರೆ ಏಕೆಂದರೆ ಬುದ್ಧಿಯು ಇದರಲ್ಲಿಯೇ ತೊಡಗಿರಲಿ ಎಂದು. ಕಾಮ ಮಹಾಶತ್ರುವಾಗಿದೆ, ದಿನ-ಪ್ರತಿದಿನ ಬಹಳ ಕಠಿಣವಾಗುತ್ತಾ ಹೋಗುತ್ತದೆ, ತಮೋಪ್ರಧಾನರಾಗುತ್ತಾ ಹೋಗುತ್ತಾರೆ. ಇದು ಬಹಳ ಕೊಳಕು ಪ್ರಪಂಚವಾಗಿದೆ. ತಂದೆಗೆ ಬಹಳ ಮಂದಿ ಹೇಳುತ್ತಾರೆ - ಬಾಬಾ, ನಮಗಂತೂ ಬಹಳ ಬೇಸರವಾಗಿದೆ, ಬೇಗನೆ ಸತ್ಯಯುಗದಲ್ಲಿ ಕರೆದುಕೊಂಡು ಹೋಗಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಾಳ್ಮೆವಹಿಸಿ ಸ್ಥಾಪನೆಯಾಗಲೇಬೇಕಾಗಿದೆ. ಇದು ನಿಮಗಾಗಿ ಖಾತರಿಯಾಗಿದೆ. ಇದೇ ನಿಮ್ಮನ್ನು ಕರೆದುಕೊಂಡು ಹೋಗುವುದು. ಮಕ್ಕಳಿಗೆ ಇದನ್ನೂ ಸಹ ತಿಳಿಸಿದ್ದೇನೆ - ನೀವಾತ್ಮಗಳು ಪರಮಧಾಮದಿಂದ ಬಂದಿದ್ದೀರಿ. ಈಗ ಮತ್ತೆ ಅಲ್ಲಿಗೆ ಹೋಗಬೇಕಾಗಿದೆ ನಂತರ ಪಾತ್ರವನ್ನಭಿನಯಿಸಲು ಬರುತ್ತೀರಿ ಅಂದಮೇಲೆ ಪರಮಧಾಮವನ್ನೂ ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ - ಇದೇ ಸಂದೇಶವನ್ನು ಎಲ್ಲರಿಗೆ ಕೊಡಿ. ಮತ್ತ್ಯಾವ ಸಂದೇಶವಾಹಕ ಮೊದಲಾದವರಿಲ್ಲ. ಅವರಂತೂ ಮುಕ್ತಿಧಾಮದಿಂದ ಕೆಳಗೆ ಕರೆದುಕೊಂಡು ಬರುತ್ತಾರೆ ಮತ್ತೆ ಅವರು ಏಣಿಯನ್ನು ಕೆಳಗಿಳಿಯಲೇಬೇಕಾಗಿದೆ. ಯಾವಾಗ ಪೂರ್ಣ ತಮೋಪ್ರಧಾನರಾಗಿ ಬಿಡುವರೋ ಮತ್ತೆ ತಂದೆಯು ಬಂದು ಎಲ್ಲರನ್ನೂ ಸತೋಪ್ರಧಾನರನ್ನಾಗಿ ಮಾಡುತ್ತಾರೆ. ನಿಮ್ಮ ಕಾರಣದಿಂದ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ ಏಕೆಂದರೆ ನಿಮಗೆ ಹೊಸ ಪ್ರಪಂಚ ಬೇಕಲ್ಲವೆ. ಇದೂ ಸಹ ಡ್ರಾಮಾದಲ್ಲಿ ಮಾಡಲ್ಪಟ್ಟಿದೆ. ನೀವು ಮಕ್ಕಳಿಗೆ ಬಹಳ ನಶೆಯಿರಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ದೇಹದ ನಾಮ-ರೂಪದಿಂದ ಭಿನ್ನರಾಗಿ ದೇಹೀ-ಅಭಿಮಾನಿಯಾಗಬೇಕಾಗಿದೆ. ಸದ್ಗುರುವಿನ ನಿಂದನೆಯಾಗುವಂತಹ ಚಲನೆಯಲ್ಲಿ ನಡೆಯಬಾರದು.

2. ಮಾಲೆಯ ಮಣಿಯಾಗಲು ಅನೇಕರನ್ನು ತಮ್ಮ ಸಮಾನ ಮಾಡಿಕೊಳ್ಳುವ ಸೇವೆ ಮಾಡಬೇಕಾಗಿದೆ. ಆಂತರಿಕ ಖುಷಿಯಲ್ಲಿರಿ - ನಾವು ರಾಜ್ಯ ಪದವಿಯನ್ನು ಪಡೆಯುವುದಕ್ಕಾಗಿ ಓದುತ್ತಿದ್ದೇವೆ. ಈ ವಿದ್ಯೆಯೇ ನರನಿಂದ ನಾರಾಯಣನಾಗುವ ವಿದ್ಯೆಯಾಗಿದೆ.

ವರದಾನ:
ಕಲ್ಯಾಣಕಾರಿ ವೃತ್ತಿಯ ಮುಖಾಂತರ ಸೇವೆ ಮಾಡುವಂತಹ ಸರ್ವ ಆತ್ಮರುಗಳ ಆಶೀರ್ವಾದದ ಅಧಿಕಾರಿ ಭವ.

ಕಲ್ಯಾಣಕಾರಿ ವೃತ್ತಿಯ ಮುಖಾಂತರ ಸೇವೆ ಮಾಡುವುದು - ಇದೇ ಸರ್ವ ಆತ್ಮರುಗಳ ಆಶೀರ್ವಾದ ಪ್ರಾಪ್ತಿ ಮಾಡಿಕೊಳ್ಳುವ ಸಾಧನವಾಗಿದೆ. ಯಾವಾಗ ನಾನು ವಿಶ್ವ ಕಲ್ಯಾಣಕಾರಿ ಆಗಿರುವೆ ಎಂದು ಲಕ್ಷ್ಯ ಇರುತ್ತದೆ, ಆಗ ಅಕಲ್ಯಾಣದ ಕರ್ತವ್ಯವಾಗಲು ಸಾಧ್ಯವೇ ಇಲ್ಲ. ಹೇಗೆ ಕಾರ್ಯ ಆಗುತ್ತದೆ ಹಾಗೆ ನಿಮ್ಮ ಧಾರಣೆಗಳಾಗುತ್ತವೆ, ಒಂದುವೇಳೆ ಕಾರ್ಯ ನೆನಪಿನಲ್ಲಿದ್ದಾಗ ಸದಾ ದಯಾ ಹೃದಯಿ, ಸದಾ ಮಹಾದಾನಿಯಾಗಿರುವಿರಿ. ಪ್ರತಿಯೊಂದು ಹೆಜ್ಜೆಯಲ್ಲಿ ಕಲ್ಯಾಣಕಾರಿ ವೃತ್ತಿಯಿಂದ ನಡೆಯುತ್ತದೆ, ನನ್ನತನ ಬರುವುದಿಲ್ಲ, ನಿಮಿತ್ತ ಭಾವ ನೆನಪಿರುತ್ತದೆ. ಇಂತಹ ಸೇವಾಧಾರಿಗಳಿಗೆ ಸೇವೆಯ ಪ್ರತಿಫಲದಲ್ಲಿ ಸರ್ವ ಆತ್ಮರ ಆಶೀರ್ವಾದದ ಅಧಿಕಾರ ಪ್ರಾಪ್ತಿಯಾಗುವುದು.

ಸ್ಲೋಗನ್:
ಸಾಧನಗಳ ಆಕರ್ಷಣೆ ಸಾಧನೆಯನ್ನು ತುಂಡು ಮಾಡಿ ಬಿಡುತ್ತದೆ.