06.12.20    Avyakt Bapdada     Kannada Murli    20.02.87     Om Shanti     Madhuban


ನೆನಪು, ಪವಿತ್ರತೆ ಹಾಗೂ ಸತ್ಯ ಸೇವಾಧಾರಿಯ ಮೂರು ರೇಖೆಗಳು


ಇಂದು ಸರ್ವ ಸ್ನೇಹಿ, ವಿಶ್ವ ಸೇವಾಧಾರಿ ತಂದೆಯು ತನ್ನ ಸದಾ ಸೇವಾಧಾರಿಯಾದ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ಸೇವಾಧಾರಿ ಬಾಪ್ದಾದಾರವರಿಗೆ ಸದಾ ತನ್ನ ಸಮಾನ ಸೇವಾಧಾರಿ ಮಕ್ಕಳೇ ಪ್ರಿಯರಾಗುತ್ತಾರೆ. ಇಂದು ವಿಶೇಷವಾಗಿ, ಸರ್ವ ಸೇವಾಧಾರಿ ಮಕ್ಕಳ ಮಸ್ತಕದಲ್ಲಿ ಹೊಳೆಯುತ್ತಿರುವಂತಹ ಮೂರು ರೇಖೆಗಳನ್ನು ವಿಶೇಷವಾಗಿ ನೋಡುತ್ತಿದ್ದೇವೆ. ಪ್ರತಿಯೊಬ್ಬರ ಮಸ್ತಕದಲ್ಲಿ ತ್ರಿಮೂರ್ತಿ ತಿಲಕದಂತೆ ಹೊಳೆಯುತ್ತಿದೆ. ಈ ಮೂರು ರೇಖೆಗಳು ಯಾವುದರ ಚಿಹ್ನೆಯಾಗಿದೆ? ಈ ಮೂರು ಪ್ರಕಾರದ ತಿಲಕದ ಮೂಲಕ ವರ್ತಮಾನದಲ್ಲಿನ ಪ್ರತಿಯೊಂದು ಮಕ್ಕಳ ಫಲಿತಾಂಶವನ್ನು ನೋಡುತ್ತಿದ್ದೇವೆ. ಒಂದಾಗಿದೆ - ಸಂಪೂರ್ಣ ಯೋಗಿ ಜೀವನದ ರೇಖೆ. ಇನ್ನೊಂದು - ಪವಿತ್ರತೆಯ ರೇಖೆ ಹಾಗೂ ಮೂರನೆಯದು - ಸತ್ಯ ಸೇವಾಧಾರಿಯ ರೇಖೆ. ಪ್ರತಿಯೊಂದು ಮಕ್ಕಳಲ್ಲಿ ಈ ಮೂರು ರೇಖೆಗಳಲ್ಲಿನ ಫಲಿತಾಂಶವನ್ನು ನೋಡುತ್ತಿದ್ದೇವೆ. ನೆನಪಿನ ರೇಖೆಯಂತು ಎಲ್ಲರಲ್ಲಿಯೂ ಹೊಳೆಯುತ್ತಿದೆ ಆದರೆ ನಂಬರ್ವಾರ್ ಆಗಿದೆ. ಕೆಲವರ ರೇಖೆಯು ಆದಿಯಿಂದ ಈಗಿನವರೆಗೂ ಅವ್ಯಭಿಚಾರಿಯಾಗಿದೆ ಅರ್ಥಾತ್ ಸದಾ ಒಬ್ಬ ತಂದೆಯ ಲಗನ್ನಿನಲ್ಲಿ ಮಗ್ನರಾಗಿರುವವರು ಆಗಿದ್ದಾರೆ. ಇನ್ನೊಂದು ಮಾತು - ಸದಾ ಅಟೂಟವಾಗಿದೆಯೇ? ಸದಾ ನೇರವಾದ ರೇಖೆ ಅಂದರೆ ಸದಾಕಾಲ ಒಬ್ಬ ತಂದೆಯೊಂದಿಗೆ ಡೈರೆಕ್ಟ್ ಸರ್ವ ಸಂಬಂಧದ ಲಗನ್ನಿನಲ್ಲಿ ಮಗ್ನರಾಗಿರುವವರು ಆಗಿದ್ದೀರಾ ಅಥವಾ ನಿಮಿತ್ತವಾದ ಆತ್ಮರ ಮೂಲಕ ತಂದೆಯೊಂದಿಗೆ ಸಂಬಂಧ ಜೋಡಿಸುವ ಅನುಭವಿ ಆಗಿದ್ದೀರಾ? ಡೈರೆಕ್ಟ್ ತಂದೆಯ ಆಶ್ರಯದಲ್ಲಿದ್ದೀರಾ ಅಥವಾ ಯಾವುದಾದರೂ ಆತ್ಮನ ಆಶ್ರಯದ ಮೂಲಕ ತಂದೆಯ ಆಶ್ರಯವಿದೆಯೇ? ಒಂದಿದೆ - ನೇರವಾದ ರೇಖೆಯಿರುವವರು, ಇನ್ನೊಬ್ಬರು - ಮಧ್ಯ-ಮಧ್ಯದಲ್ಲಿ ಸ್ವಲ್ಪ ಅಂಕು-ಡೊಂಕಾದ ರೇಖೆಯಿರುವವರು - ಇದಾಗಿದೆ ನೆನಪಿನ ರೇಖೆಯುಳ್ಳವರ ವಿಶೇಷತೆಗಳು.

ಎರಡನೇ ಪ್ರಕಾರ - ಸಂಪೂರ್ಣವಾಗಿರುವವರ ಪವಿತ್ರತೆಯ ರೇಖೆಯಲ್ಲಿಯೂ ನಂಬರ್ವಾರ್ ಇದ್ದಾರೆ. ಒಂದಿದೆ - ಬ್ರಾಹ್ಮಣ ಜೀವನವಾಗುತ್ತಿದ್ದಂತೆಯೇ ಬ್ರಾಹ್ಮಣ ಜೀವನದ ವರದಾನವು ತಂದೆಯವರ ಮೂಲಕ ವಿಶೇಷವಾಗಿ ಪ್ರಾಪ್ತಿ ಮಾಡಿಕೊಂಡು, ಈ ವರದಾನವನ್ನು ಸದಾ ಹಾಗೂ ಸಹಜವಾಗಿಯೇ ಜೀವನದಲ್ಲಿ ಅನುಭವ ಮಾಡುವವರು. ಅಂತಹವರ ರೇಖೆಯು ಆದಿಯಿಂದ ಈಗಿನವರೆಗೂ ನೇರವಾಗಿಯೇ ಇದೆ. ಇನ್ನೊಂದು - ಬ್ರಾಹ್ಮಣ ಜೀವನದ ಈ ವರದಾನವನ್ನು, ಅಧಿಕಾರದ ರೂಪದಲ್ಲಿ ಅನುಭವ ಮಾಡುವುದಿಲ್ಲ. ಕೆಲವೊಮ್ಮೆ ಸಹಜ ಕೆಲವೊಮ್ಮೆ ಪರಿಶ್ರಮದಿಂದ, ಬಹಳ ಪುರುಷಾರ್ಥದಿಂದ ವರದಾನವನ್ನು ತನ್ನದನ್ನಾಗಿ ಮಾಡಿಕೊಳ್ಳುವವರೂ ಇದ್ದಾರೆ. ಅಂತಹವರ ರೇಖೆಯು ಸದಾ ನೇರ ಹಾಗೂ ಹೊಳೆಯುತ್ತಿರುವಂತೆ ಇರುವುದಿಲ್ಲ. ವಾಸ್ತವದಲ್ಲಿ ನೆನಪು ಅಥವಾ ಸೇವೆಯು ಸಫಲತೆಯ ಆಧಾರವಾಗಿರುವುದು ಪವಿತ್ರತೆಯಾಗಿದೆ. ಕೇವಲ ಬ್ರಹ್ಮಚಾರಿ ಆಗಿರುವುದು ಪವಿತ್ರತೆಯಲ್ಲ ಆದರೆ ಪವಿತ್ರತೆಯ ಸಂಪೂರ್ಣ ರೂಪವಾಗಿದೆ - ಬ್ರಹ್ಮಚಾರಿಯಾಗುವುದರ ಜೊತೆ ಜೊತೆಗೆ ಬ್ರಹ್ಮಾಚಾರಿಯೂ ಆಗಿರಬೇಕು. ಬ್ರಹ್ಮಾಚಾರಿ ಅಂದರೆ ಬ್ರಹ್ಮಾರವರ ಆಚರಣೆಯ ಅನುಸಾರ ನಡೆಯುವವರು, ಅದಕ್ಕೇ ಫಾಲೋ ಫಾದರ್ ಎಂದು ಹೇಳಲಾಗುತ್ತದೆ ಏಕೆಂದರೆ ಬ್ರಹ್ಮಾ ತಂದೆಯನ್ನು ಫಾಲೋ ಮಾಡಬೇಕಾಗಿದೆ. ಸ್ಥಿತಿಯಲ್ಲಿ ಶಿವ ತಂದೆಯ ಸಮಾನರಾಗಬೇಕಾಗಿದೆ ಆದರೆ ಆಚರಣೆ ಅಥವಾ ಕರ್ಮದಲ್ಲಿ ಬ್ರಹ್ಮಾ ತಂದೆಯನ್ನು ಫಾಲೋ ಮಾಡಬೇಕಾಗಿದೆ. ಪ್ರತೀ ಹೆಜ್ಜೆಯಲ್ಲಿ ಬ್ರಹ್ಮಾಚಾರಿ, ಬ್ರಹ್ಮಚರ್ಯದ ವ್ರತವು ಸದಾ ಸಂಕಲ್ಪ ಹಾಗೂ ಸ್ವಪ್ನದವರೆಗೂ ಇರಲಿ. ಪವಿತ್ರತೆಯ ಅರ್ಥವಾಗಿದೆ - ಸದಾ ತಂದೆಯನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳುವುದು ಹಾಗೂ ಸದಾ ತಂದೆಯ ಸಂಗದಲ್ಲಿಯೇ ಇರುವುದು. ಸಂಗಾತಿಯನ್ನಾಗಿ ಮಾಡಿಕೊಂಡಿದ್ದೀರಾ? `ಮೇರಾ ಬಾಬಾ' - ಇದೂ ಸಹ ಅವಶ್ಯಕವಿದೆ ಆದರೆ ಪ್ರತೀ ಸಮಯದಲ್ಲಿ ತಂದೆಯ ಸಂಗದಲ್ಲಿಯೇ ಇರುವುದಕ್ಕೇ ಸಂಪೂರ್ಣ ಪವಿತ್ರತೆ ಎಂದು ಹೇಳಲಾಗುವುದು. ಸಂಘಟನೆಯ ಸಂಗ, ಪರಿವಾರದ ಸ್ನೇಹದ ಮರ್ಯಾದೆಯು ಬೇರೆ ಮಾತಾಗಿದೆ ಹಾಗೂ ಅದೂ ಅವಶ್ಯಕವಿದೆ. ಆದರೆ ಈ ಸಂಘಟನೆಯಲ್ಲಿ ತಂದೆಯ ಕಾರಣವೇ ಸ್ನೇಹದ ಸಂಗವಿದೆ ಎನ್ನುವುದನ್ನು ಮರೆಯಬಾರದು. ಇಲ್ಲಿ ಪರಿವಾರದ ಪ್ರೀತಿಯಿದೆ ಆದರೆ ಈ ಪರಿವಾರವು ಯಾರದು? ತಂದೆಯದು. ತಂದೆಯೇ ಇಲ್ಲದಿದ್ದರೆ ಪರಿವಾರವೆಲ್ಲಿಂದ ಬರುತ್ತದೆ? ಪರಿವಾರದ ಪ್ರೀತಿ, ಪರಿವಾರದ ಸಂಘಟನೆಯು ಬಹಳ ಚೆನ್ನಾಗಿದೆ ಆದರೆ ಪರಿವಾರದ ಬೀಜವನ್ನು ಮರೆಯಬಾರದು. ತಂದೆಯನ್ನು(ಬೀಜ) ಮರೆತು ಪರಿವಾರವನ್ನೇ ಸಂಗವನ್ನಾಗಿ ಮಾಡಿಕೊಂಡು ಬಿಡುತ್ತಾರೆ. ಮಧ್ಯ-ಮಧ್ಯದಲ್ಲಿ ತಂದೆಯನ್ನು ಬಿಟ್ಟರೆ ಖಾಲಿ ಜಾಗ ಆಗಿ ಬಿಟ್ಟಿತು, ಆ ಜಾಗದಲ್ಲಿ ಮಾಯೆಯು ಬಂದು ಬಿಡುತ್ತದೆ. ಆದ್ದರಿಂದ ಸ್ನೇಹದಲ್ಲಿರುತ್ತಾ, ಸ್ನೇಹವನ್ನು ಕೊಡುತ್ತಾ-ಕೊಡುತ್ತಾ ಸಮೂಹವನ್ನು ಮರೆಯಬಾರದು. ಇದಕ್ಕೇ ಪವಿತ್ರತೆ ಎಂದು ಹೇಳಲಾಗುತ್ತದೆ, ಇದನ್ನು ತಿಳಿದುಕೊಳ್ಳುವುದರಲ್ಲಿ ಬುದ್ಧಿವಂತರು ಆಗಿದ್ದೀರಲ್ಲವೆ.

ಹಲವು ಮಕ್ಕಳಿಗೆ ಸಂಪೂರ್ಣ ಪವಿತ್ರತೆಯ ಸ್ಥಿತಿಯಲ್ಲಿ ಅಭಿವೃದ್ಧಿ ಹೊಂದುವುದರಲ್ಲಿ ಪರಿಶ್ರಮವೆನಿಸುತ್ತದೆ. ಆದ್ದರಿಂದ ಮಧ್ಯ-ಮಧ್ಯದಲ್ಲಿ ಯಾರನ್ನಾದರೂ ಸಂಗಾತಿಯನ್ನಾಗಿ ಮಾಡಿಕೊಳ್ಳುವ ಸಂಕಲ್ಪವೂ ಬರುತ್ತದೆ ಮತ್ತು ಸಂಗವೂ ಅವಶ್ಯಕವಿದೆಯೆಂಬ ಸಂಕಲ್ಪವೂ ಬರುತ್ತದೆ. ನಾವು ಸನ್ಯಾಸಿಗಳಂತು ಆಗಬಾರದು ಆದರೆ ಆತ್ಮರುಗಳ ಸಂಗದಲ್ಲಿರುತ್ತಾ ತಂದೆಯ ಸಂಗವನ್ನು ಮರೆತು ಬಿಡಬಾರದು. ಇಲ್ಲದಿದ್ದರೆ ಸಮಯದಲ್ಲಿ ಆ ಆತ್ಮನ ಸಂಗದ ನೆನಪು ಬರುತ್ತದೆ ಮತ್ತು ತಂದೆಯ ನೆನಪು ಮರೆತು ಹೋಗುತ್ತದೆ, ಅಂದಮೇಲೆ ಸಮಯದಲ್ಲಿ ಮೋಸಕ್ಕೊಳಗಾಗುವ ಸಂಭವವಿದೆ. ಏಕೆಂದರೆ ಸಾಕಾರ ದೇಹಧಾರಿಯ ಆಶ್ರಯದ ಹವ್ಯಾಸ ಇರುತ್ತದೆಯೆಂದರೆ, ಅವ್ಯಕ್ತ ಬಾಬಾ ಹಾಗೂ ನಿರಾಕಾರ ಬಾಬಾರವರ ನೆನಪು ನಂತರದಲ್ಲಿ ಬರುತ್ತದೆ, ಆದರೆ ಮೊದಲು ದೇಹಧಾರಿಯ ನೆನಪು ಬರುತ್ತದೆ. ಒಂದು ವೇಳೆ ಯಾವುದೇ ಸಮಯದಲ್ಲಿ ಮೊದಲು ಸಾಕಾರನ ಆಶ್ರಯವು ನೆನಪಿಗೆ ಬಂದಿತೆಂದರೆ ಅವರು ನಂಬರ್ ವನ್ ಆಗಿ ಬಿಟ್ಟರು, ತಂದೆಯು ನಂಬರ್ ಟು ಆಗಿ ಬಿಟ್ಟರು. ಯಾರು ತಂದೆಯನ್ನು ಎರಡನೇ ನಂಬರಿನಲ್ಲಿ ಇಡುತ್ತಾರೆಯೋ ಅವರಿಗೆ ಪದವಿಯೇನು ಸಿಗುತ್ತದೆ? ನಂಬರ್ ವನ್ ಅಥವಾ ಟು? ಕೇವಲ ಸಹಯೋಗ ತೆಗೆದುಕೊಳ್ಳುವುದು, ಸ್ನೇಹಿ ಆಗಿರುವುದು ಬೇರೆ ಮಾತು, ಆದರೆ ಆಶ್ರಯವನ್ನಾಗಿ ಮಾಡಿಕೊಳ್ಳುವುದೇ ಬೇರೆ ಮಾತಾಗಿದೆ, ಇದು ಬಹಳ ಗುಹ್ಯ ಮಾತಾಗಿದೆ ಮತ್ತು ಇದನ್ನು ಯಥಾರ್ಥ ರೀತಿಯಿಂದ ತಿಳಿಯ ಬೇಕಾಗುತ್ತದೆ. ಕೆಲಕೆಲವರು ಸಂಘಟನೆಯಲ್ಲಿ ಸ್ನೇಹಿ ಆಗುವುದರ ಬದಲು ಭಿನ್ನರಾಗಿ ಬಿಡುತ್ತಾರೆ. ನಾವೆಲ್ಲಾದರೂ ಸಿಲುಕುತ್ತೇವೆ ಏನೋ ಗೊತ್ತಿಲ್ಲ, ಇದರಿಂದ ದೂರವಾಗಿ ಇರುವುದು ಸರಿ ಎಂದು ಭಯ ಪಡುತ್ತಾರೆ ಆದರೆ ಹೀಗಿರಬಾರದು. 21 ಜನ್ಮಗಳೂ ಸಹ ಪ್ರವೃತ್ತಿಯಲ್ಲಿ, ಪರಿವಾರದಲ್ಲಿ ಇರಬೇಕಲ್ಲವೆ. ಅಂದಮೇಲೆ ಭಯದ ಕಾರಣ ದೂರವಾಗುತ್ತೀರಿ, ಭಿನ್ನವಾಗಿ ಬಿಡುತ್ತೀರೆಂದರೆ, ಅದು ಕರ್ಮ ಸನ್ಯಾಸಿಯ ಸಂಸ್ಕಾರವಾಗಿ ಬಿಡುತ್ತದೆ. ಕರ್ಮಯೋಗಿ ಆಗಬೇಕಾಗಿದೆ, ಕರ್ಮ ಸನ್ಯಾಸಿಯಲ್ಲ. ಸಂಘಟನೆಯಲ್ಲಿ ಇರಬೆಕು, ಸ್ನೇಹಿಯಾಗಬೇಕು ಆದರೆ ಸದಾ ಬುದ್ಧಿಯ ಆಶ್ರಯವು ಒಬ್ಬ ತಂದೆಯಾಗಿರಲಿ, ಮತ್ತ್ಯಾರೂ ಆಗಿರಬಾರದು. ಬುದ್ಧಿಯನ್ನು ಯಾವುದೋ ಆತ್ಮದ ಜೊತೆ ಅಥವಾ ಗುಣ ಅಥವಾ ಯಾವುದಾದರೂ ವಿಶೇಷತೆಯೂ ಆಕರ್ಷಿಸಬಾರದು - ಇದಕ್ಕೇ ಪವಿತ್ರತೆ ಎಂದು ಹೇಳಲಾಗುತ್ತದೆ.

ಪವಿತ್ರತೆಯಲ್ಲಿ ಪರಿಶ್ರಮವೆನಿಸುತ್ತದೆ - ಇದರಿಂದ ಸಿದ್ಧವಾಗುತ್ತದೆ, ವರದಾತಾ ತಂದೆಯಿಂದ ಜನ್ಮದ ವರದಾನವನ್ನು ಪಡೆದಿಲ್ಲ. ವರದಾನದಲ್ಲಿ ಪರಿಶ್ರಮವು ಆಗುವುದಿಲ್ಲ. ಪ್ರತಿಯೊಬ್ಬ ಬ್ರಾಹ್ಮಣ ಆತ್ಮನಿಗೂ ಬ್ರಾಹ್ಮಣ ಜನ್ಮದ ಮೊದಲ ವರದಾನ - `ಪವಿತ್ರ ಭವ, ಯೋಗಿ ಭವ'ದ ವರದಾನವು ಸಿಕ್ಕಿರುತ್ತದೆ. ಅಂದಮೇಲೆ ತಮ್ಮೊಂದಿಗೆ ತಾವು ಕೇಳಿಕೊಳ್ಳಿ - ಪವಿತ್ರತೆಯ ವರದಾನಿ ಆಗಿದ್ದೇನೆಯೇ ಅಥವಾ ಪರಿಶ್ರಮ ಪಟ್ಟು ಪವಿತ್ರತೆಯನ್ನು ಧಾರಣೆ ಮಾಡಿದ್ದೇನೆಯೇ? ನಮ್ಮದು ಬ್ರಾಹ್ಮಣ ಜನ್ಮವಾಗಿದೆ ಎನ್ನುವುದು ನೆನಪಿಟ್ಟುಕೊಳ್ಳಿರಿ. ಕೇವಲ ಜೀವನ ಪರಿವರ್ತನೆಯಲ್ಲ ಆದರೆ ಬ್ರಾಹ್ಮಣ ಜನ್ಮದ ಆಧಾರದ ಮೇಲೆ ಜೀವನದ ಪರಿವರ್ತನೆಯಾಗಿದೆ. ಜನ್ಮದ ಸಂಸ್ಕಾರವು ಬಹಳ ಸಹಜ ಮತ್ತು ಸ್ವತಹವಾಗಿ ಇರುತ್ತದೆ. ತಾವುಗಳು ಪರಸ್ಪರದಲ್ಲಿ ಹೇಳುತ್ತೀರಲ್ಲವೆ - ಜನ್ಮವಾದಾಗಿನಿಂದಲೂ ಇದೇ ಸಂಸ್ಕಾರವಿದೆ. ಬ್ರಾಹ್ಮಣ ಜನ್ಮದ ಸಂಸ್ಕಾರವೇ ಆಗಿದೆ - `ಯೋಗಿ ಭವ, ಪವಿತ್ರ ಭವ'. ಇದು ವರದಾನವೂ ಆಗಿದೆ, ಸತ್ಯ ಸಂಸ್ಕಾರವೂ ಆಗಿದೆ. ಒಂದು – ಸಂಗಾತಿ, ಇನ್ನೊಂದು – ಸಂಗ. ಜೀವನದಲ್ಲಿ ಇವೆರಡು ವಸ್ತುಗಳೇ ಅವಶ್ಯಕವಿದೆ. ಆದ್ದರಿಂದ ಎಲ್ಲರ ಅವಶ್ಯಕತೆಯನ್ನು ತ್ರಿಕಾಲದರ್ಶಿ ತಂದೆಯು ತಿಳಿದುಕೊಂಡು ಶ್ರೇಷ್ಠ ಸಂಗಾತಿ ಹಾಗೂ ಶ್ರೇಷ್ಠ ಸಂಗವನ್ನೂ ಕೊಡುತ್ತಾರೆ. ವಿಶೇಷವಾಗಿ ಡಬಲ್ ವಿದೇಶಿ ಮಕ್ಕಳಿಗೆ ಇವೆರಡೂ ಸಿಕ್ಕಿವೆಯಲ್ಲವೆ? ಸಂಗಾತಿಯೂ ಸಿಕ್ಕಿದರೇ ಅಥವಾ ಹುಡುಕಾಟದಲ್ಲಿ ಇದ್ದೀರಾ? ಅಂದಮೇಲೆ ಪವಿತ್ರತೆಯನ್ನು ಸತ್ಯ ಸಂಸ್ಕಾರದ ರೂಪದಲ್ಲಿ ಅನುಭವ ಮಾಡುವುದಕ್ಕೇ ಹೇಳಲಾಗುತ್ತದೆ - ಶ್ರೇಷ್ಠ ಭಾಗ್ಯ ಅಥವಾ ಶ್ರೇಷ್ಠ ರೇಖೆಯುಳ್ಳವರು. ಫೌಂಡೇಷನ್ ಪರಿಪಕ್ವವಾಗಿದೆ ಅಲ್ಲವೇ?

ಮೂರನೇ ರೇಖೆಯಾಗಿದೆ - ಸತ್ಯ ಸೇವಾಧಾರಿಯಾಗಿರುವ ರೇಖೆ. ಸೇವಾಧಾರಿಯ ರೇಖೆಯು ಎಲ್ಲರ ಮಸ್ತಕದಲ್ಲಿದೆ, ಸೇವೆಯಿಲ್ಲದೆ ಇರುವುದಕ್ಕೆ ಆಗುವುದಿಲ್ಲ. ಸೇವೆಯು ಬ್ರಾಹ್ಮಣ ಜೀವನವನ್ನು ಸದಾ ನಿರ್ವಿಘ್ನವನ್ನಾಗಿ ಮಾಡುವ ಸಾಧನವೂ ಆಗಿದೆ ಮತ್ತು ಅದರಲ್ಲಿಯೇ ವಿಘ್ನಗಳ ಪರೀಕ್ಷೆಯೂ ಸಹ ಹೆಚ್ಚಾಗಿ ಬರುತ್ತದೆ. ನಿರ್ವಿಘ್ನ ಸೇವಾಧಾರಿಯನ್ನೇ ಸತ್ಯ ಸೇವಾಧಾರಿ ಎಂದು ಹೇಳಲಾಗುತ್ತದೆ. ವಿಘ್ನವು ಬರುವುದೂ ಸಹ ಡ್ರಾಮಾದಲ್ಲಿ ನೊಂದಣಿಯಾಗಿದೆ, ವಿಘ್ನವು ಬರಲೇ ಬೇಕು ಮತ್ತು ಬರುತ್ತಲೇ ಇರುತ್ತದೆ ಏಕೆಂದರೆ ಈ ವಿಘ್ನ ಅಥವಾ ಪರೀಕ್ಷೆಯೂ ಸಹ ತಮ್ಮನ್ನು ಅನುಭವಿಯನ್ನಾಗಿ ಮಾಡುತ್ತದೆ. ಇದನ್ನು ವಿಘ್ನವೆಂದು ತಿಳಿದುಕೊಳ್ಳದೆ ಅನುಭವದ ಉನ್ನತಿಯಾಗುತ್ತಿದೆ ಎಂಬ ಭಾವದಿಂದ ನೋಡುತ್ತೀರೆಂದರೆ, ಉನ್ನತಿಯ ಏಣಿಯನ್ನು ಹತ್ತುತ್ತಿರುವಂತೆ ಅನುಭವವಾಗುತ್ತದೆ. ಇದಕ್ಕಿಂತಲೂ ಉನ್ನತಿಯಲ್ಲಿ ಹೋಗಬೇಕಾಗಿದೆ ಏಕೆಂದರೆ ಸೇವೆ ಅಂದರೆ ಸಂಘಟನೆಯ, ಸರ್ವ ಆತ್ಮರುಗಳ ಆಶೀರ್ವಾದದ ಅನುಭವ ಮಾಡುವುದು ಎಂದರ್ಥ. ಸೇವಾ ಕಾರ್ಯದಲ್ಲಿ ಸರ್ವರ ಆಶೀರ್ವಾದಗಳು ಸಿಗುವ ಸಾಧನವಾಗಿದೆ, ಈ ವಿಧಿಯಿಂದ, ಈ ವೃತ್ತಿಯಿಂದ ನೋಡುತ್ತೀರೆಂದರೆ ಸದಾ ಇಂತಹ ಅನುಭವ ಮಾಡುವಿರಿ - ಅನುಭವದ ಅಥಾರಿಟಿ ಅನುಭವವಾಗುತ್ತದೆ ಹಾಗೂ ಪ್ರಗತಿಯಾಗುತ್ತಿರುವ ಅನುಭವವಾಗುತ್ತದೆ. ವಿಘ್ನವನ್ನು ವಿಘ್ನವೆಂದು ತಿಳಿಯಬಾರದು ಮತ್ತು ವಿಘ್ನದ ಅರ್ಥವೇ ಆಗಿದೆ - ನಿಮಿತ್ತರಾಗಿರುವ ಆತ್ಮರು ವಿಘ್ನಕಾರಿ ಆತ್ಮರೆಂದು ತಿಳಿಯಬಾರದು, ಅನುಭವನ್ನಾಗಿ ಮಾಡುವ ಶಿಕ್ಷಕನೆಂದು ತಿಳಿಯಿರಿ. ಯಾವಾಗ ತಾವೇ ಹೇಳುತ್ತೀರಿ - ನಿಂದನೆ ಮಾಡುವವರನ್ನು ಮಿತ್ರರೆಂದು ತಿಳಿಯಿರಿ. ಅಂದಮೇಲೆ ವಿಘ್ನಗಳನ್ನು ಪಾರು ಮಾಡಿಸುತ್ತಾ ಅನುಭವಿಯನ್ನಾಗಿ ಮಾಡಿಸುವ ಶಿಕ್ಷಕವಾಯಿತಲ್ಲವೆ, ಪಾಠ ಓದಿಸಿತಲ್ಲವೆ. ವರ್ತಮಾನದಲ್ಲಿ ರೋಗಗಳನ್ನು ಸಮಾಪ್ತಿಗೊಳಿಸುವ ವೈದ್ಯರುಗಳು ವ್ಯಾಯಾಮ ಮಾಡಿಸುತ್ತಾರೆ. ವ್ಯಾಯಾಮ ಮಾಡುವಾಗ ಮೊದಲು ನೋವಾಗುತ್ತದೆ ಆದರೆ ಆ ನೋವು ಸದಾಕಾಲಕ್ಕಾಗಿ ನೋವನ್ನು ಶಮನಗೊಳಿಸಲು ನಿಮಿತ್ತವಾಗುತ್ತದೆ. ಇದು ಯಾರಿಗೆ ಅರ್ಥವಾಗುವುದಿಲ್ಲವೋ ಅವರು ಚೀರಾಡುತ್ತಾರೆ ಹೇಳುತ್ತಾರೆ - ಇವರಂತು ನಮ್ಮ ನೋವನ್ನು ಇನ್ನೂ ಹೆಚ್ಚಿಸಿ ಬಿಟ್ಟರು. ಆದರೆ ಈ ನೋವಿನಲ್ಲಿ ಗುಪ್ತವಾಗಿರುವ ಔಷಧಿಯಿದೆ. ಇದೇ ರೀತಿಯಲ್ಲಿ ರೂಪವು ಭಲೆ ವಿಘ್ನದ್ದಾಗಿದೆ, ತಮಗೆ ವಿಘ್ನಕಾರಿ ಆತ್ಮನೆಂದು ಕಾಣಿಸುತ್ತದೆ. ಆದರೆ ಅದೇ ವಿಘ್ನವು ಸದಾಕಾಲದ ವಿಘ್ನಗಳಿಂದ ಪಾರು ಮಾಡಿಸಲು, ಅಚಲನನ್ನಾಗಿ ಮಾಡಿಸಲು ನಿಮಿತ್ತನಾಗುತ್ತದೆ. ಆದ್ದರಿಂದ ಸದಾ ನಿರ್ವಿಘ್ನ ಸೇವಾಧಾರಿಗೆ ಸತ್ಯ ಸೇವಾಧಾರಿ ಎಂದು ಹೇಳಲಾಗುತ್ತದೆ. ಇಂತಹ ಶ್ರೇಷ್ಠ ರೇಖೆಯುಳ್ಳವರನ್ನು ಸತ್ಯ ಸೇವಾಧಾರಿಯೆಂದು ಕರೆಯಲಾಗುತ್ತದೆ.

ಸೇವೆಯ ಸಫಲತೆಗೆ ಸಹಜ ಆಧಾರ - ಸದಾ ಸ್ವಚ್ಛ ಬುದ್ಧಿ, ಸ್ವಚ್ಛ ವೃತ್ತಿ ಹಾಗೂ ಸ್ವಚ್ಛ ಕರ್ಮವಿರುವುದು. ಯಾವಾಗ ಯಾವುದೇ ಸೇವಾ ಕಾರ್ಯವನ್ನು ಆರಂಭಿಸುತ್ತೀರೆಂದರೆ, ಮೊದಲು ಇದನ್ನು ಪರಿಶೀಲನೆ ಮಾಡಿರಿ - ತಮ್ಮ ಬುದ್ಧಿಯಲ್ಲಿ ಯಾವುದೇ ಆತ್ಮನ ಬಗ್ಗೆ ಸ್ವಚ್ಛತೆಗೆ ಬದಲಾಗಿ, ಕಳೆದು ಹೋದ ಯಾವುದೇ ಮಾತುಗಳ ಸ್ಮೃತಿಯು ಅಂಶದಷ್ಟಿದ್ದರೂ ,ಅದೇ ದೃಷ್ಟಿ-ವೃತ್ತಿಯಿಂದ ನೋಡುವುದು ಮತ್ತು ಮಾತನಾಡುವುದು ಇದೆಯೇ. ಅಂದಾಗ ಇದರಿಂದ ಸೇವೆಯಲ್ಲಿ ಸ್ವಚ್ಛತೆಯಿಂದ ಸಂಪೂರ್ಣ ಸಫಲತೆ ಏನಾಗಬೇಕು ಅದಾಗುವುದಿಲ್ಲ. ಕಳೆದುಹೋದ ಮಾತುಗಳನ್ನು ಅಥವಾ ವೃತ್ತಿ ಮುಂತಾದವೆಲ್ಲವನ್ನೂ ಸಮಾಪ್ತಿಗೊಳಿಸುವುದೇ ಸ್ವಚ್ಛತೆಯಾಗಿದೆ. ಕಳೆದು ಹೋಗಿರುವುದರ ಬಗ್ಗೆ ಸಂಕಲ್ಪ ಮಾಡುವುದೂ ಸಹ ಸ್ವಲ್ಪ ಪರ್ಸೆಂಟೇಜಿನಲ್ಲಿ ಪಾಪವಾಗಿದೆ. ಸಂಕಲ್ಪವೂ ಸಹ ಸೃಷ್ಟಿಯನ್ನೇ ನಿರ್ಮಾಣ ಮಾಡಿಬಿಡುತ್ತದೆ, ವರ್ಣನೆ ಮಾಡುವುದಂತು ದೊಡ್ಡ ಮಾತೇ ಆಗಿದೆ. ಆದರೆ ಸಂಕಲ್ಪ ಮಾಡುವುದರಿಂದಲೂ ಹಳೆಯ ಸಂಕಲ್ಪಗಳ ಸ್ಮೃತಿಯು ಅದರಂತೆಯೇ ಸೃಷ್ಟಿ ಅಥವಾ ವಾಯುಮಂಡಲವನ್ನೂ ಮಾಡಿ ಬಿಡುತ್ತದೆ. ಅನಂತರ ಹೇಳುವುದೇನು - `ನಾನೇನು ಹೇಳಿದ್ದೆನಲ್ಲವೆ, ಅದೇ ರೀತಿ ಆಯಿತಲ್ಲವೆ' ಆದರೆ ಆಗಿದ್ದೇನು? ತಮ್ಮ ಬಲಹೀನ, ವ್ಯರ್ಥ ಸಂಕಲ್ಪಗಳ ವ್ಯರ್ಥ ವಾಯುಮಂಡಲದ ಸೃಷ್ಟಿಯಾಯಿತು. ಆದ್ದರಿಂದ ಸದಾ ಸತ್ಯ ಸೇವಾಧಾರಿಗಳು ಅರ್ಥಾತ್ ಹಳೆಯ ಪ್ರಕಂಪನಗಳನ್ನೂ ಸಮಾಪ್ತಿಗಳಿಸುವವರು. ಯಾವ ರೀತಿ ವಿಜ್ಞಾನಿಗಳು ಶಸ್ತ್ರದಿಂದ ಶಸ್ತ್ರವನ್ನು ಸಮಾಪ್ತಿ ಮಾಡಿ ಬಿಡುತ್ತಾರೆ, ಒಂದು ವಿಮಾನದಿಂದ ಇನ್ನೊಂದು ವಿಮಾನವನ್ನೇ ಬೀಳಿಸಿ ಬಿಡುತ್ತಾರೆ, ಯುದ್ಧ ಮಾಡುತ್ತಾರೆಂದರೆ ಸಮಾಪ್ತಿ ಮಾಡಿ ಬಿಡುತ್ತಾರಲ್ಲವೆ. ಅಂದಮೇಲೆ ತಮ್ಮ ಶುದ್ಧ ಪ್ರಕಂಪನಗಳು, ಶುದ್ಧ ಪ್ರಕಂಪನಗಳನ್ನು ಇಮರ್ಜ್ ಮಾಡಿಸಲು ಸಾಧ್ಯವಿದೆ ಮತ್ತು ವ್ಯರ್ಥ ಪ್ರಕಂಪನಗಳನ್ನು ಸಮಾಪ್ತಿಗೊಳಿಸಲೂ ಸಾಧ್ಯವಿದೆ. ಅಂದರೆ ಸಂಕಲ್ಪವು ಸಂಕಲ್ಪವನ್ನು ಸಮಾಪ್ತಿಗೊಳಿಸಲು ಸಾಧ್ಯವಿದೆ. ಒಂದುವೇಳೆ ತಮ್ಮಲ್ಲಿ ಶಕ್ತಿಶಾಲಿ, ಸಮರ್ಥ ಸಂಕಲ್ಪವಿದೆ ಎಂದರೆ ವ್ಯರ್ಥವನ್ನು ಅವಶ್ಯವಾಗಿ ಸಮಾಪ್ತಿ ಮಾಡುತ್ತದೆ. ತಿಳಿಯಿತೆ? ಸೇವೆಯಲ್ಲಿ ಮೊದಲು ಸ್ವಚ್ಛತೆ ಅರ್ಥಾತ್ ಪವಿತ್ರತೆಯ ಶಕ್ತಿಯಿರಬೇಕು. ಈ ಮೂರು ರೇಖೆಗಳು ಹೊಳೆಯುತ್ತಿರುವುದನ್ನು ನೋಡುತ್ತಿದ್ದೇವೆ.

ಸೇವೆಯ ವಿಶೇಷತೆಗಳ ಹಾಗೂ ಅನೇಕ ಮಾತುಗಳನ್ನು ಕೇಳಿದಿರಿ. ಎಲ್ಲಾ ಮಾತುಗಳ ಸಾರವಾಗಿದೆ - ನಿಸ್ವಾರ್ಥ, ನಿರ್ವಿಕಲ್ಪ ಸ್ಥಿತಿಯಿಂದ ಸೇವೆಯನ್ನು ಮಾಡುವುದು ಸಫಲತೆಯ ಆಧಾರವಾಗಿದೆ. ಇಂತಹ ಸೇವೆಯಲ್ಲಿಯೇ ಸ್ವಯಂ ತಾವೂ ಸಂತುಷ್ಟ ಹಾಗೂ ಹರ್ಷಿತವಾಗಿರುತ್ತೀರಿ ಮತ್ತು ಅನ್ಯರೂ ಸಹ ಸಂತುಷ್ಟವಾಗಿರುತ್ತಾರೆ. ಸೇವೆಯಿಲ್ಲದೆ ಸಂಘಟನೆಯಾಗುವುದಿಲ್ಲ. ಸಂಘಟನೆಯಲ್ಲಿ ಅನೇಕ ಪ್ರಕಾರದ ಮಾತುಗಳು, ಅನೇಕ ವಿಚಾರಗಳು, ಭಿನ್ನ-ಭಿನ್ನ ವಿಧಿಗಳು, ಸಾಧನಗಳು - ಇವೆಲ್ಲವೂ ಆಗಲೇಬೇಕು. ಆದರೆ ಮಾತುಗಳು ಬರುತ್ತಿದ್ದರೂ, ಭಿನ್ನ-ಭಿನ್ನ ಸಾಧನಗಳನ್ನು ಕೇಳುತ್ತಿದ್ದರೂ, ಸದಾ ತಾವು ಅನೇಕರನ್ನು ಒಬ್ಬ ತಂದೆಯ ನೆನಪಿನಲ್ಲಿ ಒಂದು ಗೂಡಿಸುವವರು, ಏಕರಸ ಸ್ಥಿತಿಯಲ್ಲಿ ಇರುವವರಾಗಿ. ಎಂದಿಗೂ ಸಹ ಈಗ ಏನು ಮಾಡುವುದು, ಬಹಳ ವಿಚಾರಗಳಾಗಿ ಬಿಟ್ಟಿದೆ, ಯಾರದನ್ನು ಒಪ್ಪುವುದು, ಯಾರದನ್ನು ಒಪ್ಪದಿರುವುದು? ಈ ಅನೇಕತೆಯಲ್ಲಿ ಗೊಂದಲರಾಗಬಾರದು. ಒಂದುವೇಳೆ ನಿಸ್ವಾರ್ಥ, ನಿರ್ವಿಕಲ್ಪ ಭಾವದಿಂದ ನಿರ್ಣಯವನ್ನು ತೆಗೆದುಕೊಳ್ಳುತ್ತೀರೆಂದರೆ, ಯಾರಲ್ಲಿಯೂ ಎಂದಿಗೂ ಸ್ವಲ್ಪ ವ್ಯರ್ಥ ಸಂಕಲ್ಪವೂ ಬರುವುದಿಲ್ಲ. ಏಕೆಂದರೆ ಯಾರೂ ಸಹ ಸೇವೆಯಿಲ್ಲದೆ ಇರಲು ಸಾಧ್ಯವಿಲ್ಲ, ನೆನಪಿನಲ್ಲಿರದೇ ಇರಲು ಸಾಧ್ಯವಿಲ್ಲ. ಆದ್ದರಿಂದ ಸೇವೆಯನ್ನೂ ವೃದ್ಧಿಗೊಳಿಸುತ್ತಾ ಸಾಗಿರಿ. ಸ್ವಯಂ ತಮ್ಮನ್ನೂ ಸಹ ಸ್ನೇಹ, ಸಹಯೋಗ ಹಾಗೂ ನಿಸ್ವಾರ್ಥ ಭಾವದಿಂದ ವೃದ್ಧಿ ಮಾಡಿರಿ. ತಿಳಿಯಿತೆ?

ಬಾಪ್ದಾದಾರವರಿಗೆ ಖುಷಿಯಿದೆ - ದೇಶ-ವಿದೇಶದ ಎಲ್ಲಾ ಹಿರಿಯ-ಕಿರಿಯರೆಲ್ಲರೂ ಉಮ್ಮಂಗ-ಉತ್ಸಾಹದಿಂದ ಸೇವೆಯ ಪ್ರಮಾಣವನ್ನು ಕೊಟ್ಟಿದ್ದಾರೆ. ವಿದೇಶದ ಸೇವೆಯಲ್ಲಿಯೂ ಸಹ ಸಫಲತೆಯಿಂದ ಕಾರ್ಯ ಸಂಪನ್ನವಾಗಿದೆ ಹಾಗೂ ದೇಶದಲ್ಲಿಯೂ ಎಲ್ಲರ ಸಹಯೋಗದಿಂದ ಸರ್ವ ಕಾರ್ಯಗಳು ಸಂಪನ್ನವಾಗಿದೆ, ಸಫಲವಾಗಿದೆ. ಬಾಪ್ದಾದಾರವರು ಮಕ್ಕಳಲ್ಲಿರುವ ಸೇವೆಯ ಲಗನ್ ನೋಡುತ್ತಾ ಹರ್ಷಿತವಾಗುತ್ತಾರೆ. ಎಲ್ಲರಲ್ಲಿ ತಂದೆಯನ್ನು ಪ್ರತ್ಯಕ್ಷಗೊಳಿಸುವ ಲಕ್ಷ್ಯವು ಬಹಳ ಚೆನ್ನಾಗಿದೆ ಮತ್ತು ತಂದೆಯ ಸ್ನೇಹದಲ್ಲಿ ಪರಿಶ್ರಮವನ್ನೂ ಪ್ರೀತಿಯಲ್ಲಿ ಪರಿವರ್ತನೆ ಮಾಡಿ, ಕಾರ್ಯದ ಪ್ರತ್ಯಕ್ಷ ಫಲವನ್ನು ತೋರಿಸಿದರು. ಎಲ್ಲಾಮಕ್ಕಳು ವಿಶೇಷವಾಗಿ ಸೇವೆಗಾಗಿಯೇ ಬಂದಿದ್ದಾರೆ, ಇದಕ್ಕಾಗಿ ಬಾಪ್ದಾದಾರವರೂ ಸಹ ವಾಹ್ ಮಕ್ಕಳೇ! ವಾಹ್! ಎಂಬ ಹಾಡನ್ನು ಹಾಡುತ್ತಾರೆ. ಕೆಲವರು ಮಾಡಿದರು ಕೆಲವರು ಮಾಡಲಿಲ್ಲ ಎನ್ನುವುದಿಲ್ಲವೇ ಇಲ್ಲ. ಎಲ್ಲರೂ ಸೇವೆಯನ್ನು ಬಹಳ ಚೆನ್ನಾಗಿ ಮಾಡಿದಿರಿ. ಸ್ಥಾನವು ಭಲೆ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಆದರೆ ಚಿಕ್ಕ ಸ್ಥಾನದವರೂ ಸಹ ಕಡಿಮೆ ಸೇವೆ ಮಾಡಲಿಲ್ಲ. ಆದ್ದರಿಂದ ಸರ್ವರ ಶ್ರೇಷ್ಠ ಭಾವನೆಗಳು ಹಾಗೂ ಶ್ರೇಷ್ಠ ಕಾಮನೆಗಳಿಂದ ಕಾರ್ಯವು ಬಹಳ ಚೆನ್ನಾಗಿ ನಡೆಯಿತು ಮತ್ತು ಸದಾ ಚೆನ್ನಾಗಿ ಆಗುತ್ತಿರುತ್ತದೆ. ಸಮಯ, ಸಂಕಲ್ಪವನ್ನೂ ಬಹಳ ಚೆನ್ನಾಗಿ ಉಪಯೋಗ ಮಾಡಿದಿರಿ, ಯೋಜನೆಯನ್ನು ಮಾಡಿದ್ದೀರೆಂದರೆ ಸಂಕಲ್ಪವನ್ನೂ ಮಾಡಿದಿರಲ್ಲವೆ. ಇದರಲ್ಲಿ ತನುವಿನ ಶಕ್ತಿಯನ್ನೂ ಉಪಯೋಗಿಸಲಾಯಿತು, ಧನದ ಶಕ್ತಿಯನ್ನೂ, ಸಂಘಟನೆಯ ಶಕ್ತಿಯನ್ನೂ ಉಪಯೋಗಿಸಲಾಯಿತು. ಎರಡೂ ಕಡೆಗಳಲ್ಲಿ(ದೇಶ ಹಾಗೂ ವಿದೇಶ) ಸರ್ವ ಶಕ್ತಿಗಳ ಆಹುತಿಗಳಿಂದ ಸೇವೆಯ ಯಜ್ಞ ಸಫಲವಾಯಿತು, ಕಾರ್ಯವು ಬಹಳ ಚೆನ್ನಾಗಿತ್ತು. ಈ ಕಾರ್ಯವು ಸರಿಯಾಗಿತ್ತೆ ಅಥವಾ ಇಲ್ಲವೇ ಎನ್ನುವ ಮಾತೇ ಇಲ್ಲ. ಸದಾ ಸರಿಯಾಗಿಯೇ ಇದೆ ಮತ್ತು ಸದಾ ಸರಿಯಾಗಿರುತ್ತದೆ. ಭಲೆ ಮಲ್ಟಿ ಮಿಲಿಯನ್ ಪೀಸ್ ಕಾರ್ಯವಾಗಿದೆ, ಭಲೆ ಗೋಲ್ಡನ್ ಜುಬಿಲಿಯ ಕಾರ್ಯವಾಗಿದೆ, ಎರಡೂ ಕಾರ್ಯಗಳೂ ಸುಂದರವಾಗಿತ್ತು. ಈ ಕಾರ್ಯವನ್ನು ಯಾವ ವಿಧಿಯಿಂದ ಮಾಡಲಾಯಿತು ಅದೂ ಸಹ ಸರಿಯಾಗಿತ್ತು. ಕೆಲವೊಂದು ಕಡೆ ಪ್ರಸಿದ್ಧ ಮಾಡುವುದಕ್ಕಾಗಿ ಅಂತಹ ವಸ್ತುವನ್ನೇ ಇಡಲಾಗುತ್ತದೆ, ಪರದೆಯು ಇನ್ನಷ್ಟು ಮೌಲ್ಯವನ್ನು ಹೆಚ್ಚಿಸುತ್ತದೆ ಮತ್ತು ಇನ್ನೂ ಹೆಚ್ಚಿನ ಉತ್ಸುಕತೆಯನ್ನು ತರಿಸುತ್ತದೆ - ಇದರಲ್ಲೇನಿದೆ, ಪರದೆಯೊಳಗೆ ಅವಶ್ಯವಾಗಿ ಏನೋ ಇರಬಹುದು ಎಂದು. ಆದರೆ ಇದೇ ಪರದೆಯು ಪ್ರತ್ಯಕ್ಷತೆಯ ಪರದೆಯಾಗಿ ಬಿಡುತ್ತದೆ. ಈಗ ಆ ಧರಣಿಯು ತಯಾರಾಗುತ್ತಿದೆ, ಹೇಗೆ ಧರಣಿಯಲ್ಲಿ ಎಂತಹ ಬೀಜವನ್ನು ಬಿತ್ತಲಾಗುತ್ತದೆಯೋ ಅದು ಒಳಗೆ ಗುಪ್ತವಾಗಿ ಬಿಡಲಾಗುತ್ತದೆ. ಬೀಜವನ್ನು ಹೊರಗೆ ಇಡುವುದಿಲ್ಲ, ಒಳಗೆ ಗುಪ್ತವಾಗಿ ಇಡಲಾಗುತ್ತದೆ (ಬಿತ್ತನೆ ಮಾಡುವಾಗ) ಮತ್ತು ಗುಪ್ತವಾಗಿರುವ ಬೀಜದ ಪ್ರತ್ಯಕ್ಷ ಸ್ವರೂಪವೇ ಫಲ ಅಥವಾ ವೃಕ್ಷವಾಗಿರುತ್ತದೆ. ಅಂದಮೇಲೆ ಈಗ ಬೀಜವನ್ನು ಬಿತ್ತಲಾಗಿದೆ, ವೃಕ್ಷವು ಸ್ವತಹವಾಗಿಯೇ ವೇದಿಕೆಯಲ್ಲಿ ಬರುತ್ತಿರುತ್ತದೆ.

ಖುಷಿಯಲ್ಲಿ ನರ್ತಿಸುತ್ತಿದ್ದೀರಲ್ಲವೇ? `ವಾಹ್ ಬಾಬಾ!!' ಇದನ್ನಂತು ಹೇಳುತ್ತೀರಿ ಆದರೆ ವಾಹ್ ಸೇವಾ!! ಎಂದೂ ಸಹ ಹೇಳುತ್ತೀರಿ. ಒಳ್ಳೆಯದು - ಬಾಪ್ದಾದಾರವರು ಎಲ್ಲಾ ಸಮಾಚಾರಗಳನ್ನು ಕೇಳಿದರು, ಈ ಸೇವೆಯಲ್ಲಿ ಯಾವ ದೇಶ-ವಿದೇಶದ ಸಂಘಟನೆಯಿಂದ ವರ್ಗಗಳ ಸೇವೆ ಆಯಿತು, ನಾಲ್ಕೂ ಕಡೆಗಳಲ್ಲಿಯೂ ಒಂದೇ ಸಮಯದಲ್ಲಿ ಒಂದೇ ಧ್ವನಿಯು ಪ್ರಸಿದ್ಧವಾಗುವ ಅಥವಾ ಹರಡುವ ಸಾಧನವು ಚೆನ್ನಾಗಿದೆ. ಇನ್ನು ಮುಂದೆ ಯಾವುದೇ ಕಾರ್ಯಕ್ರಮವನ್ನು ಮಾಡಿರಿ. ಆದರೆ ಒಂದೇ ಸಮಯದಲ್ಲಿ ದೇಶ-ವಿದೇಶದ ನಾಲ್ಕೂ ಕಡೆಗಳಲ್ಲಿ ಒಂದೇ ಪ್ರಕಾರದ ಸೇವೆಯನ್ನು ಮಾಡಿ, ನಂತರ ಸೇವೆಯ ಫಲ ಸ್ವರೂಪವನ್ನು ಮಧುಬನದಲ್ಲಿ ಸಂಘಟನೆಯ ರೂಪದಲ್ಲಾಗಲಿ. ನಾಲ್ಕೂ ಕಡೆಯಲ್ಲಿ ಒಂದೇ ಪ್ರಕಾರದಲ್ಲಾಗುವ ಕಾರಣದಿಂದ ಎಲ್ಲರಲ್ಲಿಯೂ ಉಮ್ಮಂಗ-ಉತ್ಸಾಹವಿರುತ್ತದೆ ಮತ್ತು ನಾಲ್ಕೂ ಕಡೆಗಳಲ್ಲಿ ಆತ್ಮಿಕ ರೇಸ್ ಆಗುತ್ತದೆ, (ರೀಸ್ ಅಲ್ಲ) - ನಾವು ಇನ್ನೂ ಬಹಳಷ್ಟು ಸೇವೆಗಳ ಪ್ರಮಾಣವನ್ನು ಕೊಡಬೇಕು. ಈ ಉಮ್ಮಂಗದಿಂದ ನಾಲ್ಕೂ ಕಡೆಗಳಲ್ಲಿ ಹೆಸರು ಪ್ರಸಿದ್ಧವಾಗಿ ಬಿಡುತ್ತದೆ. ಆದ್ದರಿಂದ ಯಾವುದಾದರೂ ವರ್ಗಗಳನ್ನು ಮಾಡಿರಿ, ಆದರೆ ಇಡೀ ವರ್ಷ ನಾಲ್ಕೂ ಕಡೆಗಳಲ್ಲಿ ಒಂದೇ ರೂಪ ರೇಖೆಯಿರುವ ಸೇವೆಯ ಕಡೆ ಗಮನವಿರಲಿ. ಅದರಿಂದ ಆ ಆತ್ಮರಿಗೂ ನಾಲ್ಕೂ ಕಡೆಗಳಲ್ಲಿನ ಸಂಘಟನೆಯನ್ನು ನೋಡುತ್ತಾ ಉಮ್ಮಂಗ ಬರುತ್ತದೆ, ಉನ್ನತಿಯಾಗುವ ಅವಕಾಶವು ಸಿಗುತ್ತದೆ. ಈ ವಿಧಿಯಿಂದ ಯೋಜನೆಗಳನ್ನು ಮಾಡುತ್ತಾ ಮುಂದುವರೆಯುತ್ತಿರಿ. ಮೊದಲು ತಮ್ಮ-ತಮ್ಮ ಪ್ರಾಂತ್ಯಗಳಲ್ಲಿ ಆ ವರ್ಗದವರ ಸೇವೆಯನ್ನು ಮಾಡುತ್ತಾ, ಚಿಕ್ಕ-ಚಿಕ್ಕ ಸಂಘಟನೆಗಳ ರೂಪದಲ್ಲಿ ಕಾರ್ಯವನ್ನು ಮಾಡುತ್ತಿರಿ ಹಾಗೂ ಆ ಸಂಘಟನೆಗಳಲ್ಲಿ ಯಾರು ವಿಶೇಷ ಆತ್ಮರಾಗಿರುತ್ತಾರೆ, ಅವರನ್ನು ಇಂತಹ ದೊಡ್ಡ ಸಂಘಟನೆಗಳಲ್ಲಿ (ಮಧುಬನ) ಬರುವುದಕ್ಕಾಗಿ ತಯಾರು ಮಾಡಿ. ಆದರೆ ಪ್ರತಿಯೊಂದು ಸೇವಾಕೇಂದ್ರ ಅಥವಾ ಸುತ್ತಮುತ್ತಲಿರುವ ಸೇವಾಕೇಂದ್ರದವರು ಸೇರಿಕೊಂಡು ಮಾಡಿರಿ. ಏಕೆಂದರೆ ಕೆಲವರು ಇಲ್ಲಿಯವರೆಗೆ ತಲುಪುವುದಕ್ಕೆ ಸಾಧ್ಯ ಆಗುವುದಿಲ್ಲ, ಆದ್ದರಿಂದ ಅಲ್ಲಿ ಯಾವ ಕಾರ್ಯಕ್ರಮವು ಆಗುತ್ತದೆಯೋ ಅದರಿಂದ ಅವರಿಗೆ ಲಾಭವಾಗುತ್ತದೆ. ಮೊದಲು ಚಿಕ್ಕ-ಚಿಕ್ಕ `ಸ್ನೇಹ-ಮಿಲನ' ಮಾಡಿರಿ, ನಂತರ ಜೋನ್ ನವರನ್ನು ಸೇರಿಸಿ ಸಂಘಟನೆ ಮಾಡಿರಿ, ನಂತರ ಮಧುಬನದ ದೊಡ್ಡ ಸಂಘಟನೆಯಾಗಲಿ. ಯಾವುದೇ ಸೇವೆಯನ್ನು ಮಾಡುತ್ತೀರಿ ಅದು ದೇಶ-ವಿದೇಶಗಳಲ್ಲಿ ಒಂದೇ ಟಾಪಿಕ್ ಆಗಿರಲಿ ಮತ್ತು ಒಂದೇ ವರ್ಗದ್ದಾಗಿರಲಿ. ಅಂತಹ ಟಾಪಿಕ್ ಇರುತ್ತವೆ, ಯಾವುದರಲ್ಲಿ ಎರಡು-ನಾಲ್ಕು ವರ್ಗದವರನ್ನೂ ಸೇರಿಸಬಹುದು. ವಿಶಾಲವಾದ ಟಾಪಿಕ್ ಆಗಿದ್ದರೆ ಎರಡು-ಮೂರು ವರ್ಗದವರನ್ನೂ ಸೇರಿಸಬಹುದು. ಈಗ ದೇಶ-ವಿದೇಶದಲ್ಲಿ ಧರ್ಮ ಶಕ್ತಿ, ರಾಜ್ಯ ಶಕ್ತಿ ಹಾಗೂ ವಿಜ್ಞಾನ ಶಕ್ತಿ - ಮೂರರಲ್ಲಿ ಉದಾಹರಣೆ ತಯಾರು ಮಾಡಿರಿ. ಒಳ್ಳೆಯದು.

ಸರ್ವ ಪವಿತ್ರತೆಯ ವರದಾನದ ಅಧಿಕಾರಿ ಆತ್ಮರಿಗೆ, ಸದಾ ಏಕರಸ, ನಿರಂತರ ಯೋಗಿ ಜೀವನದ ಅನುಭವಿ ಆತ್ಮರಿಗೆ, ಸದಾ ಪ್ರತೀಸಂಕಲ್ಪ ಪ್ರತೀ ಸಮಯದಲ್ಲಿಯೂ ಸತ್ಯ ಸೇವಾಧಾರಿ ಆಗಿರುವ ಶ್ರೇಷ್ಠಾತ್ಮರಿಗೆ, ವಿಶ್ವ ಸ್ನೇಹಿ - ವಿಶ್ವ ಸೇವಾಧಾರಿ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ವರದಾನ:  
ಕಂಬೈಂಡ್ ಸ್ವರೂಪದ ಸ್ಮೃತಿಯ ಮೂಲಕ ಸ್ಮೃತಿ ಸ್ವರೂಪರನ್ನಾಗಿ ಮಾಡುವಂತಹ ನಿರಂತರ ಯೋಗಿ ಭವ.

ಯಾವ ಮಕ್ಕಳು ಸ್ವಯಂನ್ನು ತಂದೆಯವರ ಜೊತೆಯ ಕಂಬೈಂಡ್ ಅನುಭವವನ್ನು ಮಾಡುತ್ತಾರೆಯೋ, ಅವರಿಗೆ ಸ್ವತಃವಾಗಿಯೇ ನಿರಂತರ ಯೋಗಿ ಭವದ ವರದಾನವು ಸಿಗುತ್ತದೆ. ಏಕೆಂದರೆ ಅವರೆಲ್ಲಿಯೇ ಇರಬಹುದು, ಅವರಿಗೆ ಮಿಲನದ ಮೇಳವಾಗುತ್ತಿರುತ್ತದೆ. ಅವರನ್ನು ಮರೆಸಲು ಯಾರೆಷ್ಟಾದರೂ ಪ್ರಯತ್ನ ಪಡಬಹುದು ಆದರೆ ಅವರು ಸ್ಮೃತಿ ಸ್ವರೂಪರಾಗಿ ಇರುತ್ತಾರೆ. ಇಂತಹ ಸ್ಮೃತಿ ಸ್ವರೂಪ ಮಕ್ಕಳು ತಂದೆಯವರಿಗೆ ಅತಿ ಪ್ರಿಯರಾಗಿದ್ದಾರೆ, ಅವರೇ ನಿರಂತರ ಯೋಗಿಯಾಗಿದ್ದಾರೆ ಏಕೆಂದರೆ ಪ್ರೀತಿಯ ಸಂಕೇತವಾಗಿದೆ - ಸ್ವತಹ ನೆನಪಿನಲ್ಲಿರುವುದು. ಮಾಯೆಯು ಅವರ ಸಂಕಲ್ಪವೆಂಬ ಉಗುರನ್ನೂ ಸಹ ಅಲುಗಾಡಿಸಲು ಸಾಧ್ಯವಾಗುವುದಿಲ್ಲ.

ಸ್ಲೋಗನ್:
ಕಾರಣವನ್ನು ತಿಳಿಸುವ ಬದಲು, ಅದರ ನಿವಾರಣೆ ಮಾಡುತ್ತೀರೆಂದರೆ ಆಶೀರ್ವಾದಗಳ ಅಧಿಕಾರಿ ಆಗಿ ಬಿಡುತ್ತೀರಿ.


ಮುರಳಿ ಪ್ರಶ್ನೆಗಳು -

1. ಬಾಬಾರವರು ಮಕ್ಕಳ ಮಸ್ತಕದಲ್ಲಿ ಎಷ್ಟು ರೇಖೆಗಳನ್ನು ನೋಡುತ್ತಿದ್ದರು? ಮತ್ತು ಯಾವ ಯಾವ ರೇಖೆಗಳನ್ನು ನೋಡುತ್ತಿದ್ದರು?

2. ನೆನಪಿನ ಅಥವಾ ಸೇವೆಯ ಆಧಾರ ಏನಾಗಿದೆ?

3. ಪವಿತ್ರತೆಯ ಸಂಪೂರ್ಣ ರೂಪ ಏನಾಗಿದೆ?

4. ಪವಿತ್ರತೆ ಎಂದು ಯಾವುದಕ್ಕೆ ಹೇಳಲಾಗುತ್ತದೆ?

5. ಬ್ರಾಹ್ಮಣ ಆತ್ಮನ ಬ್ರಾಹ್ಮಣ ಜನ್ಮದ ಮೊದಲನೇ ವರದಾನ ಯಾವುದು?

6. ಜೀವನದಲ್ಲಿ ಯಾವ ಏರಡು ವಸ್ತುವಿನ ಅವಶ್ಯಕತೆಯಿದೆ?

7. ಶ್ರೇಷ್ಠ ರೇಖೆಯುಳ್ಳವರು ಎಂದು ಯಾರಿಗೆ ಹೇಳಲಾಗುತ್ತದೆ?

8. ಸೇವೆಯು ಯಾವುದರ ಸಾಧನವಾಗಿದೆ?

9. ಸೇವೆಯಲ್ಲಿ ಸಫಲತೆಯ ಸಹಜ ಆಧಾರ ಯಾವುದು?

10. ನಾವು ಸದಾ ಯಾವ ಭಾವದಿಂದ ನಿರ್ಣಯ ಮಾಡಿ ವ್ಯರ್ಥವನ್ನು ಸಮಾಪ್ತಿ ಮಾಡಬೇಕು?