27.12.20    Avyakt Bapdada     Kannada Murli    31.12.86     Om Shanti     Madhuban


ಪಾಸ್ಟ್, ಪ್ರೆಸೆಂಟ್ ಹಾಗೂ ಫ್ಯೂಚರ್ನ್ನು ಶ್ರೇಷ್ಠವನ್ನಾಗಿ ಮಾಡಿಕೊಳ್ಳುವ ವಿಧಿ


ಇಂದು ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ ಹಾಗೂ ಗಾಡ್-ಫಾದರ್ ತನ್ನ ಹೃದಯದಿಂದ ಅತಿ ಮಧುರವಾದ, ಅತಿ ಪ್ರಿಯವಾದ ಮಕ್ಕಳಿಗೆ ಆಶೀರ್ವಾದಗಳ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಬಾಪ್ದಾದಾರವರು ಒಂದೊಂದು ಅಗಲಿ ಮರಳಿ ಸಿಕ್ಕಿರುವ ಮಗುವು ಎಷ್ಟು ಶ್ರೇಷ್ಠ, ಮಹಾನ್ ಆತ್ಮನಾಗಿದ್ದಾರೆಂಬುದನ್ನು ತಿಳಿದಿದ್ದಾರೆ! ಪ್ರತಿಯೊಂದು ಮಕ್ಕಳ ಮಹಾನತೆ-ಪವಿತ್ರತೆಯು ನಂಬರ್ವಾರ್ ಆಗಿ ತಂದೆಯ ಬಳಿಯಲ್ಲಿ ತಲುಪುತ್ತಿರುತ್ತದೆ. ಇಂದು ವಿಶೇಷವಾಗಿ ಎಲ್ಲರೂ ಹೊಸ ವರ್ಷವನ್ನು ಆಚರಿಸುವ ಉಮ್ಮಂಗ-ಉತ್ಸಾಹದಿಂದ ಬಂದಿದ್ದಾರೆ. ಹೊಸ ವರ್ಷವನ್ನು ಆಚರಿಸಲು ಪ್ರಪಂಚದವರು ನಂದಿ ಹೋದ ಹಣತೆ ಅಥವಾ ಮೇಣದ ಬತ್ತಿಯನ್ನು ಬೆಳಗಿಸುತ್ತಾರೆ. ಅದನ್ನೂ ಜಾಗೃತವಾಗಿದ್ದು ಆಚರಿಸುತ್ತಾರೆ ಮತ್ತು ಬಾಪ್ದಾದಾರವರು ಅನೇಕ ಲೆಕ್ಕವಿಲ್ಲದಷ್ಟು ಬೆಳಗಿರುವ ಆತ್ಮಿಕ ಜ್ಯೋತಿಗಳ ಜೊತೆಯಲ್ಲಿ ಹೊಸ ವರ್ಷವನ್ನು ಆಚರಿಸುತ್ತಿದ್ದಾರೆ. ನಂದಿ ಹೋಗಿರುವವರನ್ನು ಜಾಗೃತಗೊಳಿಸುವುದಿಲ್ಲ ಮತ್ತು ಬೆಳಗಿರುವುದನ್ನು ನಂದಿಸುವುದಿಲ್ಲ, ಈ ರೀತಿ ಬೆಳಗಿರುವ ಲಕ್ಷಾಂತರ ಆತ್ಮಿಕ ಜ್ಯೋತಿಗಳ ಸಂಘಟನೆಯಲ್ಲಿ ಹೊಸ ವರ್ಷವನ್ನು ಆಚರಿಸುವುದು - ಇದಂತು ತಂದೆ ಹಾಗೂ ತಾವು ಮಕ್ಕಳಲ್ಲದೆ ಮತ್ತ್ಯಾರೂ ಆಚರಿಸಲು ಸಾಧ್ಯವಿಲ್ಲ. ಇದೆಷ್ಟು ಸುಂದರವಾಗಿ ಬೆಳಗುತ್ತಿರುವ ಆತ್ಮಿಕ ಜ್ಯೋತಿಗಳ ಸಂಘಟನೆಯ ದೃಶ್ಯವಾಗಿದೆ! ಎಲ್ಲರ ಆತ್ಮಿಕ ಜ್ಯೋತಿಯು ಒಂದೇ ರೀತಿ ಏಕರಸವಾಗಿ ಬೆಳಗುತ್ತಿದೆ. ಎಲ್ಲರ ಮನದಲ್ಲಿ `ಒಬ್ಬ ತಂದೆ'ಯದೇ ಲಗನ್ ಆತ್ಮಿಕ ಜ್ಯೋತಿಗಳನ್ನು ಬೆಳಗಿಸುತ್ತಿದೆ. ಒಂದೇ ಪ್ರಪಂಚ, ಒಂದೇ ಸಂಕಲ್ಪ, ಏಕರಸ ಸ್ಥಿತಿಯಿದೆ - ಇದನ್ನೇ ಆಚರಿಸಬೇಕು, ಈ ರೀತಿಯಾಗಿ ಅನ್ಯರನ್ನೂ ಮಾಡಬೇಕಾಗಿದೆ. ಈ ಸಮಯವು ವಿದಾಯಿ ಹಾಗೂ ಬದಾಯಿ (ಬೀಳ್ಕೊಡುಗೆ ಹಾಗೂ ಶುಭಾಷಯ)ಯ ಸಂಗಮವಾಗಿದೆ. ಹಳೆಯದಕ್ಕೆ ವಿದಾಯಿ ಹಾಗೂ ಹೊಸ ವರ್ಷಕ್ಕಾಗಿ ಶುಭಾಷಯಗಳಿದೆ, ಅಂದಾಗ ಇದಕ್ಕಾಗಿಯೇ ತಾವೆಲ್ಲರೂ ಈ ಸಂಗಮದ ಸಮಯದಲ್ಲಿ ತಲುಪಿದ್ದೀರಿ. ಅಂದಮೇಲೆ ಹಳೆಯ ಸಂಕಲ್ಪ ಹಾಗೂ ಸಂಸ್ಕಾರದ ವಿದಾಯಿಯ ಶುಭಾಷಯಗಳು ಹಾಗೂ ಹೊಸ ಉಮ್ಮಂಗ-ಉತ್ಸಾಹದಿಂದ ಹಾರುವುದಕ್ಕಾಗಿಯೂ ಶುಭಾಷಯಗಳಿದೆ.

ಈಗ ವರ್ತಮಾನದಲ್ಲಿ ಏನಿದೆಯೋ, ಸ್ವಲ್ಪ ಸಮಯದ ನಂತರ ಭೂತಕಾಲವಾಗಿ ಬಿಡುತ್ತದೆ. ಯಾವ ವರ್ಷವು ನಡೆಯುತ್ತಿದೆಯೋ, ಅದು 12.00 ಗಂಟೆಯ ನಂತರ ಪಾಸ್ಟ್(ಭೂತ ಕಾಲ) ಆಗಿ ಬಿಡುತ್ತದೆ. ಈಗಿರುವ ಸಮಯವನ್ನು ವರ್ತಮಾನವೆಂದು ಹೇಳುತ್ತೇವೆ ಮತ್ತು ನಾಳೆಯನ್ನು ಫ್ಯೂಚರ್(ಭವಿಷ್ಯ)ವೆಂದು ಹೇಳುತ್ತೇವೆ. ಪಾಸ್ಟ್, ಪ್ರೆಸೆಂಟ್ ಹಾಗೂ ಫ್ಯೂಚರ್ - ಈ ಮೂರರದೇ ಆಟವು ನಡೆಯುತ್ತಿರುತ್ತದೆ. ಈ ಮೂರು ಶಬ್ಧಗಳನ್ನು ಈ ಹೊಸ ವರ್ಷದಲ್ಲಿ ಹೊಸ ವಿಧಿಯಿಂದ ಪ್ರಯೋಗ ಮಾಡಿರಿ. ಅದು ಹೇಗೆ? ಪಾಸ್ಟ್ನ್ನು ಸದಾ ಪಾಸ್-ವಿತ್-ಆನರ್ ಆಗಿರುತ್ತಾ ಪಾಸ್ ಮಾಡಿ, ``ಪಾಸ್ಟ್ ಈಸ್ ಪಾಸ್ಟ್'' ಹೀಗಂತು ಆಗಲೇಬೇಕು ಆದರೆ ಅದನ್ನು ಹೇಗೆ ಪಾಸ್ ಮಾಡಬೇಕು? ಸಮಯ ಕಳೆದು ಹೋಯಿತು, ಆ ದೃಶ್ಯವೂ ಪಾಸ್ ಆಯಿತೆಂದು ಹೇಳುತ್ತೀರಲ್ಲವೆ. ಆದರೆ ಪಾಸ್-ವಿತ್-ಆನರ್ ಆಗಿದ್ದು ಪಾಸ್ ಮಾಡಿದಿರೆ? ಕಳೆದದ್ದನ್ನು ಕಳೆದಿರಿ (ಪಾಸ್ಟ್ ಈಸ್ ಪಾಸ್ಟ್) ಮಾಡಿದಿರಿ. ಆದರೆ ಶ್ರೇಷ್ಠ ವಿಧಿಯಿಂದ ಕಳೆದಿರಾ, ಯಾವುದು ಕಳೆಯಿತೋ ಅದನ್ನು ಸ್ಮೃತಿಯಲ್ಲಿ ತಂದು ಕೊಳ್ಳುತ್ತಾ ಹೃದಯದಿಂದ `ವಾಹ್! ವಾಹ್!'ನ ನುಡಿಗಳೇ ಬರುತ್ತದೆಯೇ? ಕಳೆದುದನ್ನು ಈ ರೀತಿ ಪಾಸ್ ಮಾಡಿದಿರಾ, ತಮ್ಮ ಚರಿತ್ರೆಯು ನೆನಪಾರ್ಥವಾಗಿ ಬಿಡಲಿ, ಕೀರ್ತನೆ ಅರ್ಥಾತ್ ಕೀರ್ತಿಗಾನ ಮಾಡುತ್ತಿರುವಂತೆ, ಈಗಿನವರೆಗೂ ತಮ್ಮ ಕರ್ಮದ ಕೀರ್ತನೆಯಿಂದ ಅನೇಕ ಆತ್ಮರುಗಳ ಶರೀರ ನಿರ್ವಹಣೆ ಆಗುತ್ತಿದೆ ಎನ್ನುವಂತಾಗಬೇಕು, ತಮ್ಮ ಆ ಕಥೆಯಿಂದ ಅನ್ಯರೂ ಸಹ ಪಾಠ ಓದುವರೆ? ಈ ಹೊಸ ವರ್ಷದಲ್ಲಿ ಪ್ರತಿಯೊಂದು ಪಾಸ್ಟ್ ಸಂಕಲ್ಪ ಅಥವಾ ಪಾಸ್ಟ್ ಸಮಯವನ್ನು ಅಂತಹ ವಿಧಿಯಿಂದ ಪಾಸ್ ಮಾಡಬೇಕು. ಏನು ಮಾಡಬೇಕಾಗಿದೆ ಎಂದು ತಿಳಿಯಿತೆ?

ಈಗ ವರ್ತಮಾನ(ಪ್ರೆಸೆಂಟ್)ದಲ್ಲಿ ಬನ್ನಿರಿ. ತಾವು ವಿಶೇಷ ಆತ್ಮರುಗಳ ಮೂಲಕ ವರ್ತಮಾನದ ಪ್ರತಿ ಗಳಿಗೆ ಅಥವಾ ಪ್ರತಿ ಸಂಕಲ್ಪದಿಂದ ಒಂದಲ್ಲ ಒಂದು ಪ್ರೆಸೆಂಟ್(ಕೊಡುಗೆ) ಪ್ರಾಪ್ತಿಯಾಗಬೇಕು, ಪ್ರೆಸೆಂಟ್(ವರ್ತಮಾನ)ನ್ನು ಈ ರೀತಿಯಾಗಿ ಪ್ರಾಕ್ಟಿಕಲ್ನಲ್ಲಿ ತರಬೇಕು. ಯಾವ ಸಮಯದಲ್ಲಿ ಬಹಳ ಹೆಚ್ಚಿನ ಖುಷಿಯಾಗುವುದು? ಯಾವಾಗ ಯಾರಿಂದಲಾದರೂ ಪ್ರೆಸೆಂಟ್(ಕೊಡುಗೆ) ಸಿಗುತ್ತದೆ. ಯಾರು ಹೇಗಾದರೂ ಅಶಾಂತವಾಗಲಿ, ದುಃಖಿಯಾಗಿರಲಿ ಅಥವಾ ಬೇಸರವಾಗಿರಲಿ, ಆದರೆ ಯಾವಾಗ ಯಾರಾದರೂ ಪ್ರೀತಿಯಿಂದ ಪ್ರೆಸೆಂಟ್ ಕೊಡುತ್ತಾರೆಂದರೆ, ಆ ಗಳಿಗೆಯಲ್ಲಿಯೇ ಖುಷಿಯ ಪ್ರಕಂಪನಗಳು ಬಂದು ಬಿಡುತ್ತದೆ. ಆ ಪ್ರೆಸೆಂಟ್(ಕೊಡುಗೆ) ತೋರ್ಪಡಿಕೆಯದಲ್ಲ, ತುಂಬು ಹೃದಯದಿಂದ ಕೊಡಬೇಕು. ಪ್ರೆಸೆಂಟ್ನ್ನು ಸದಾಕಾಲ ಎಲ್ಲರೂ ಸ್ನೇಹದ ಸಂಕೇತವೆಂದು ಭಾವಿಸುತ್ತಾರೆ. ಕೊಡುಗೆಯಾಗಿ ಕೊಟ್ಟಿರುವ ವಸ್ತುವಿನಲ್ಲಿ `ಸ್ನೇಹದ' ಮೌಲ್ಯವಿರುತ್ತದೆ, ಅದಕ್ಕೆ `ವಸ್ತು'ವಿನ ಮೌಲ್ಯವಿರುವುದಿಲ್ಲ. ಅಂದಮೇಲೆ ಪ್ರೆಸೆಂಟ್ ಕೊಡುವ ವಿಧಿಯಿಂದ ವೃದ್ಧಿ ಪಡೆಯುತ್ತಿರಬೇಕು. ತಿಳಿಯಿತೆ? ಇದು ಸಹಜವೇ ಅಥವಾ ಕಷ್ಟವೆನಿಸುತ್ತದೆಯೇ? ಭಂಡಾರವು ಸಂಪನ್ನವಾಗಿದೆಯಲ್ಲವೆ ಅಥವಾ ಪ್ರೆಸೆಂಟ್(ಕೊಡುಗೆ) ಕೊಡುತ್ತಾ-ಕೊಡುತ್ತಾ ಭಂಡಾರದಲ್ಲಿ ಕಡಿಮೆಯಾಗಿ ಬಿಡುತ್ತದೆಯೇ? ಸ್ಟಾಕ್ ಜಮಾ ಇದೆಯಲ್ಲವೆ? ಕೇವಲ ಒಂದು ಸೆಕೆಂಡಿನ ಸ್ನೇಹದ ದೃಷ್ಟಿ, ಸ್ನೇಹದ ಸಹಯೋಗ, ಸ್ನೇಹದ ಭಾವನೆ, ಮಧುರ ನುಡಿ, ಹೃದಯದ ಶ್ರೇಷ್ಠ ಸಂಕಲ್ಪದ ಸಂಗ - ಇವುಗಳೇ ಬಹಳಷ್ಟು ಪ್ರೆಸೆಂಟ್ಗಳಾದವು. ಇತ್ತೀಚೆಗೆ ಭಲೆ ಪರಸ್ಪರದಲ್ಲಿ ಬ್ರಾಹ್ಮಣ ಆತ್ಮರಿರಬಹುದು, ಅಥವಾ ತಮ್ಮ ಭಕ್ತಾತ್ಮರು ಇರಬಹುದು, ಭಲೆ ತಮ್ಮ ಸಂಬಂಧ-ಸಂಪರ್ಕದ ಆತ್ಮರಿರಬಹುದು, ಅಥವಾ ಬೇಸರವಾಗಿರುವ ಆತ್ಮರಿರಬಹುದು - ಇವರೆಲ್ಲರಿಗೂ ಈ ಪ್ರೆಸೆಂಟ್ಗಳ ಅವಶ್ಯಕತೆಯಿದೆ, ಮತ್ತ್ಯಾವುದೋ ಕೊಡುಗೆಯ ಅವಶ್ಯಕತೆಯಿಲ್ಲ. ಇದರ ಸ್ಟಾಕ್ ಇದೆಯಲ್ಲವೆ? ಅಂದಮೇಲೆ ಪ್ರೆಸೆಂಟ್(ವರ್ತಮಾನ)ನ ಪ್ರತೀ ಗಳಿಗೆಯಲ್ಲಿಯೂ ತಾವು ದಾತನಾಗಿದ್ದು ಪ್ರೆಸೆಂಟ್ನ್ನು ಪಾಸ್ಟ್ನಲ್ಲಿ ಬದಲಾಯಿಸಿರಿ, ಇದರಿಂದ ಸರ್ವ ಪ್ರಕಾರದ ಆತ್ಮರೂ ತನ್ನ ಹೃದಯದಿಂದ ತಾವುಗಳ ಕೀರ್ತನೆಯನ್ನು ಹಾಡುತ್ತಿರುತ್ತಾರೆ. ಒಳ್ಳೆಯದು.

ಫ್ಯೂಚರ್(ಭವಿಷ್ಯ)ವನ್ನೇನು ಮಾಡುವಿರಿ? ಕೊನೆಗೂ ಭವಿಷ್ಯವೇನಾಗಿದೆ ಎಂದು ತಮ್ಮೊಂದಿಗೆ ಎಲ್ಲರೂ ಕೇಳುವರಲ್ಲವೆ? ಫ್ಯೂಚರ್ನ್ನು ತಮ್ಮ ಫೀಚರ್(ಗುಣಲಕ್ಷಣ)ನಿಂದ ಪ್ರತ್ಯಕ್ಷಗೊಳಿಸಿರಿ. ತಮ್ಮ ಫೀಚರ್ಸ್ ಫ್ಯೂಚರ್ನ್ನು ಪ್ರಕಟ ಮಾಡಲಿ - ಫ್ಯೂಚರ್ ಏನಾಗುವುದು, ಫ್ಯೂಚರ್ನ ಚಹರೆಯು ಏನಾಗಿರುತ್ತದೆ, ಫ್ಯೂಚರ್ನ ಮುಗುಳ್ನಗೆ ಹೇಗಿರುತ್ತದೆ, ಫ್ಯೂಚರ್ನ ಸಂಬಂಧವು ಏನಾಗಿರುತ್ತದೆ, ಫ್ಯೂಚರ್ನ ಜೀವನವೇನಾಗಿರುತ್ತದೆ - ತಮ್ಮ ಫೀಚರ್ಸ್ ಇವೆಲ್ಲಾ ಮಾತುಗಳ ಸಾಕ್ಷಾತ್ಕಾರ ಮಾಡಿಸಲಿ. ದೃಷ್ಟಿಯು ಫ್ಯೂಚರ್ನ ಸೃಷ್ಟಿಯನ್ನು ಸ್ಪಷ್ಟಗೊಳಿಸಲಿ. `ಏನಾಗುವುದು' ಎಂಬ ಪ್ರಶ್ನೆಯು ಸಮಾಪ್ತಿಯಾಗಿ `ಹೀಗಾಗುವುದು' ಎನ್ನುವುದರಲ್ಲಿ ಬದಲಾಗಿ ಬಿಡಲಿ. ಫ್ಯೂಚರ್ನಲ್ಲಿರುವುದೇ ದೇವತಾ, ದೈವತ್ವದ ಸಂಸ್ಕಾರ ಅರ್ಥಾತ್ ದಾತನಾಗುವ ಸಂಸ್ಕಾರ, ಕಿರೀಟಧಾರಿ-ಸಿಂಹಾಸನಾಧಾರಿ ಆಗುವ ಸಂಸ್ಕಾರವಾಗಿದೆ. ತಮ್ಮನ್ನು ಯಾರೇ ನೋಡುವರೆಂದರೆ ಅವರಿಗೆ ತಮ್ಮ ಕಿರೀಟ ಮತ್ತು ಸಿಂಹಾಸನದ ಅನುಭವವಾಗಲಿ. ಯಾವ ಕಿರೀಟ? ಸದಾ ಲೈಟ್ (ಹಗುರ) ಆಗಿರುವ ಪ್ರಕಾಶತೆಯ ಕಿರೀಟ ಮತ್ತು ಸದಾ ತಮ್ಮ ಕರ್ಮದಿಂದ, ನುಡಿಗಳಿಂದ ಆತ್ಮಿಕ ನಶೆ ಹಾಗೂ ನಿಶ್ಚಿಂತತೆಯ ಚಿಹ್ನೆಯ ಅನುಭವವಾಗಲಿ. ಕಿರೀಟಧಾರಿಗಳ ಚಿಹ್ನೆಯೇ `ನಿಶ್ಚಿಂತತೆ' ಮತ್ತು `ನಶೆ' ಇರುವುದಾಗಿದೆ. ನಿಶ್ಚಿತ ವಿಜಯಿಯ ನಶೆ ಹಾಗೂ ನಿಶ್ಚಿಂತ ಸ್ಥಿತಿ - ಇದು ತಂದೆಯ ಹೃದಯ ಸಿಂಹಾಸನಾಧಿಕಾರಿ ಆತ್ಮನ ಚಿಹ್ನೆಯೂ ಆಗಿದೆ. ಯಾರೇ ಬರುತ್ತಾರೆಂದರೆ, ಅವರು ಈ ಸಿಂಹಾಸನಾಧಿಕಾರಿ ಹಾಗೂ ಕಿರೀಟಧಾರಿ ಸ್ಥಿತಿಯ ಅನುಭವ ಮಾಡಲಿ - ಇದಾಗಿದೆ ಫ್ಯೂಚರ್ನ್ನು ಫೀಚರ್ಸ್ನ ಮೂಲಕ ಪ್ರತ್ಯಕ್ಷ ಮಾಡುವುದು. ಈ ರೀತಿಯಲ್ಲಿ ಹೊಸ ವರ್ಷವನ್ನು ಆಚರಿಸಿರಿ ಅರ್ಥಾತ್ ಈ ರೀತಿಯಾಗಿದ್ದು ಅನ್ಯರನ್ನೂ ಮಾಡಿರಿ. ಏನು ಮಾಡಬೇಕೆಂದು ತಿಳಿಯಿತೆ? ಮೂರು ಶಬ್ಧಗಳಿಂದ ಮಾಸ್ಟರ್ ತ್ರಿಮೂರ್ತಿ, ಮಾಸ್ಟರ್ ತ್ರಿಕಾಲದರ್ಶಿ ಮತ್ತು ತ್ರಿಲೋಕಿನಾಥನಾಗಿ ಹೊರಡಬೇಕು. ಈಗ ಏನು ಮಾಡಬೇಕು? ಎನ್ನುವುದನ್ನೇ ಎಲ್ಲರೂ ಯೋಚಿಸುತ್ತೀರಿ. ಪ್ರತೀ ಹೆಜ್ಜೆಯಿಂದ - ಅಂದರೆ ಭಲೆ ನೆನಪಿನಿನಲ್ಲಿ, ಭಲೆ ಸೇವೆಯ ಪ್ರತೀ ಹೆಜ್ಜೆಯಲ್ಲಿಯೂ ಈ ಮೂರೂ ವಿಧಿಗಳಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿರಬೇಕು.

ಹೊಸ ವರ್ಷದ ಉಮ್ಮಂಗ-ಉತ್ಸಾಹವಂತು ಬಹಳಷ್ಟಿದೆ ಅಲ್ಲವೆ. ಡಬಲ್ ವಿದೇಶಿಗಳಲ್ಲಿ ಡಬಲ್ ಉಮ್ಮಂಗವಿದೆ ಅಲ್ಲವೆ. ಹೊಸ ವರ್ಷ ಆಚರಿಸುವುದರಲ್ಲಿ ಎಷ್ಟು ಸಾಧನಗಳನ್ನು ಉಪಯೋಗಿಸುತ್ತೀರಿ? ಅವರುಗಳಂತು (ಪ್ರಪಂಚದ ಜನರು) ವಿನಾಶಿ ಸಾಧನಗಳನ್ನೇ ಉಪಯೋಗಿಸುತ್ತಾರೆ ಮತ್ತು ಮನೋರಂಜನೆಯೂ ಅಲ್ಪಕಾಲದ್ದನ್ನೇ ಮಾಡುತ್ತಾರೆ. ಅದೂ ಸಹ ಈಗೀಗ ಸುಡುತ್ತಾರೆ, ಈಗೀಗ ನಂದಿ ಹೋಗುವಂತಹ ಸಾಧನಗಳು. ಆದರೆ ಬಾಪ್ದಾದಾರವರು ಅವಿನಾಶಿ ವಿಧಿಯಿಂದ ಅವಿನಾಶಿ ಸಿದ್ಧಿಯನ್ನು ಪ್ರಾಪ್ತಿ ಮಾಡಿಸುವ ಮಕ್ಕಳೊಂದಿಗೆ ಆಚರಿಸುತ್ತಿದ್ದಾರೆ. ತಾವುಗಳೂ ಸಹ ಏನು ಮಾಡುವಿರಿ? ಕೇಕ್ ಕಟ್ ಮಾಡುವಿರಿ, ಜ್ಯೋತಿ ಬೆಳಗಿಸುವಿರಿ, ಹಾಡನ್ನಾಡುವಿರಿ, ಚಪ್ಪಾಳೆ ಹಾಕುವಿರಿ, ಇದನ್ನೂ ಭಲೆ ಮಾಡಿರಿ ಆದರೆ ಬಾಪ್ದಾದಾರವರು ಅವಿನಾಶಿ ಮಕ್ಕಳಿಗೆ ಸದಾ ಅವಿನಾಶಿ ಶುಭಾಷಯಗಳನ್ನು ಕೊಡುವರು ಮತ್ತು ಅವಿನಾಶಿಯಾಗುವ ವಿಧಿಯನ್ನೇ ತಿಳಿಸುತ್ತಾರೆ. ಸಾಕಾರ ಪ್ರಪಂಚದಲ್ಲಿ ಸಾಕಾರಿ ಸುಂದರತೆಯನ್ನು ನೋಡುತ್ತಾ ಬಾಪ್ದಾದಾರವರಿಗೂ ಖುಷಿಯಾಗುತ್ತದೆ ಏಕೆಂದರೆ ಇಂತಹ ಸುಂದರವಾದ ಪರಿವಾರವಾಗಿದೆ, ಅದರಲ್ಲಿಯೂ ಇಡೀ ಪರಿವಾರವೇ ಕಿರೀಟಧಾರಿ, ಸಿಂಹಾಸನಾಧಾರಿ ಆಗಿದ್ದಾರೆ ಮತ್ತು ಇಷ್ಟು ಲಕ್ಷಾಂತರ ಸಂಖ್ಯೆಯಲ್ಲಿದ್ದರೂ ಒಂದೇ ಪರಿವಾರವಾಗಿದೆ. ಇಂತಹ ಪರಿವಾರವಂತು ಇಡೀ ಕಲ್ಪದಲ್ಲಿಯೂ ಇದೊಂದೇ ಬಾರಿ ಸಿಗುತ್ತದೆ ಆದ್ದರಿಂದ ಬಹಳ ಚೆನ್ನಾಗಿ ನರ್ತಿಸಿ, ಹಾಡಿರಿ, ಸಿಹಿಯನ್ನು ತಿನ್ನಿಸಿರಿ. ತಂದೆಯವರಂತು ಮಕ್ಕಳನ್ನು ನೋಡುತ್ತಾ, ಅದರ ಭಾಸನೆಯನ್ನು ತೆಗೆದುಕೊಳ್ಳುತ್ತಾ ಖುಷಿಯಾಗುವರು. ಈಗ ಎಲ್ಲರ ಮನಸ್ಸಿನಲ್ಲಿ ಯಾವ ಹಾಡು ಮೊಳಗುತ್ತಿದೆ? ಖುಷಿಯ ಹಾಡು ಮೊಳಗುತ್ತಿದೆ. ಸದಾ `ವಾಹ್! ವಾಹ್! ವಾಹ್ ಬಾಬಾ! ವಾಹ್ ಭಾಗ್ಯವೇ! ವಾಹ್ ಮಧುರ ಪರಿವಾರವೇ! ವಾಹ್ ಶ್ರೇಷ್ಠ ಸಂಗಮದ ಸೌಭಾಗ್ಯದ ಸಮಯವೇ! ಇದೇ ಹಾಡನ್ನು ಹಾಡಿರಿ. ಪ್ರತೀ ಕರ್ಮದಲ್ಲಿಯೂ ವಾಹ್! ವಾಹ್! ಎನ್ನುವುದೇ ಇದೆ. ಇಂದು ಬಾಪ್ದಾದಾರವರು ಮುಗುಳ್ನಗುತ್ತಿದ್ದರು - ಏಕೆಂದರೆ, ಕೆಲವು ಮಕ್ಕಳು ವಾಹ್!ವಾಹ್!ನ ಹಾಡಿನ ಬದಲು ಮತ್ತ್ಯಾವುದೋ ಹಾಡನ್ನು ಹಾಡಿ ಬಿಡುತ್ತಿದ್ದರು. ಆ ಹಾಡೂ ಸಹ ಎರಡು ಶಬ್ಧಗಳ ಹಾಡಾಗಿದೆ, ಅದು ಯಾವುದೆಂದು ತಿಳಿಯಿತೆ? ಈ ವರ್ಷದಲ್ಲಿ ಆ ಎರಡು ಶಬ್ಧಗಳ ಹಾಡನ್ನು ಹಾಡಬಾರದು. ಅವರೆಡು ಶಬ್ಧಗಳಾಗಿವೆ - `ವೈ' ಮತ್ತು `ಐ' (ಏಕೆ ಮತ್ತು ನಾನು). ಬಾಪ್ದಾದಾರವರು ಯಾವಾಗ ಮಕ್ಕಳ ಟಿ.ವಿ.ಯನ್ನು ನೋಡುತ್ತಾರೆ, ಆಗ ಬಹಳಷ್ಟು ಮಟ್ಟಿಗೆ ಮಕ್ಕಳು ವಾಹ್-ವಾಹ್ನ ಬದಲು ಬಹಳ `ವೈ-ವೈ' ಎನ್ನುತ್ತಿರುತ್ತಾರೆ. ಅಂದಾಗ `ವೈ'ನ ಬದಲು `ವಾಹ್-ವಾಹ್!' ಎಂದು ಹೇಳಿರಿ ಮತ್ತು `ಐ'ಗೆ ಬದಲು `ಬಾಬಾ-ಬಾಬಾ' ಎನ್ನುತ್ತಿರಿ. ತಿಳಿಯಿತೆ?

ಯಾರು ಹೇಗಾದರೂ ಇರಲಿ, ಬಾಪ್ದಾದಾರವರಿಗೆ ಪ್ರಿಯರಾಗಿದ್ದೀರಿ. ಆದ್ದರಿಂದ ಎಲ್ಲರೂ ಪ್ರೀತಿಯಿಂದ ಮಿಲನ ಮಾಡಲು ಓಡಿ ಬರುತ್ತೀರಿ. ಅಮೃತ ವೇಳೆಯಲ್ಲಿ ಎಲ್ಲಾ ಮಕ್ಕಳು ಸದಾ ಇದೇ ಹಾಡನ್ನಾಡುತ್ತಾರೆ - `ಪ್ಯಾರಾ ಬಾಬಾ, ಮೀಠಾ ಬಾಬಾ' ಮತ್ತು ಬಾಪ್ದಾದಾರವರು ಅದರ ರಿಟರ್ನ್ನಲ್ಲಿ ಸದಾ `ಪ್ಯಾರೆ ಬಚ್ಚೆ, ಪ್ಯಾರೆ ಬಚ್ಚೆ'ಯ ಹಾಡನ್ನಾಡುವರು. ಈ ವರ್ಷದಲ್ಲಂತು ಭಿನ್ನ ಹಾಗೂ ಪ್ರಿಯವಾದ ಪಾಠವಿದೆ, ಮಕ್ಕಳ ಸ್ನೇಹದ ಆಹ್ವಾನವು ತಂದೆಯನ್ನೂ ಸಹ ಭಿನ್ನವಾದ (ನಿರಾಕಾರಿ) ಪ್ರಪಂಚದಿಂದ ಪ್ರಿಯವಾದ ಪ್ರಪಂಚದಲ್ಲಿ ಕರೆದುಕೊಂಡು ಬರುತ್ತದೆ. ಆಕಾರಿ ವಿಧಿಯಲ್ಲಂತು ಇವೆಲ್ಲವನ್ನೂ ನೋಡುವ ಅವಶ್ಯಕತೆಯಿಲ್ಲ. ಆಕಾರಿ ಮಿಲನದ ವಿಧಿಯಲ್ಲಿ, ಒಂದೇ ಸಮಯದಲ್ಲಿ ಬೇಹದ್ದಿನಲ್ಲಿ ಅನೇಕ ಮಕ್ಕಳಿಗೆ ಮಿಲನದ ಅನುಭೂತಿ ಮಾಡಿಸುತ್ತಾರೆ. ಸಾಕಾರಿ ವಿಧಿಯಲ್ಲಾದರೂ ಸ್ವಲ್ಪ ಸಂಖ್ಯೆಯಲ್ಲಿಯೇ ಬರಬೇಕಾಗುತ್ತದೆ. ಮಕ್ಕಳಿಗೇನು ಬೇಕಾಗಿರುವುದಾದರೂ ಏನು - ಮುರುಳಿ ಮತ್ತು ದೃಷ್ಟಿ. ಮುರುಳಿಯಲ್ಲಿಯೂ ಮಿಲನವಂತು ಆಗುತ್ತದೆ. ಭಲೆ ಮುರುಳಿಯನ್ನು ಎಲ್ಲಿಯಾದರೂ ಹೇಳಲಿ, ಇರುವುದಂತು ಅದೇ ಮಾತು. ಸಂಘಟನೆಯಲ್ಲಿ ಏನು ನುಡಿಸುವರೋ, ಅದನ್ನೇ ಕ್ಲಾಸಿನಲ್ಲಿಯೂ ನುಡಿಸಲಾಗುತ್ತದೆ. ಆದರೂ ನೋಡಿ - ಮೊದಲ ಅವಕಾಶವು ಡಬಲ್ ವಿದೇಶಿಗಳಿಗೆ ಸಿಕ್ಕಿದೆ. ಭಾರತದಲ್ಲಿರುವ ಮಕ್ಕಳು 18 ಜನವರಿಗಾಗಿ ನಿರೀಕ್ಷಿಸುತ್ತಿದ್ದಾರೆ ಮತ್ತು ತಾವುಗಳಿಗೆ ಮೊದಲ ಚಾನ್ಸ್ ತೆಗೆದುಕೊಳ್ಳುತ್ತಿದ್ದೀರಿ. ಒಳ್ಳೆಯದು - 35-36 ದೇಶಗಳಿಂದ ಬಂದಿದ್ದೀರಿ, ಇದೂ ಸಹ 36 ಪ್ರಕಾರದ ಭೋಗವಾಯಿತು. 36 ರ ಗಾಯನವಿದೆಯಲ್ಲವೆ, ಅಂದಾಗ 36 ಪ್ರಕಾರವಾಯಿತು.

ಬಾಪ್ದಾದಾರವರು ಎಲ್ಲಾ ಮಕ್ಕಳ ಸೇವೆಯ ಉಮ್ಮಂಗ-ಉತ್ಸಾಹವನ್ನು ನೋಡಿ ಖುಷಿಯಾಗುತ್ತಾರೆ. ಯಾರೆಲ್ಲರೂ ಸೇವೆಯಲ್ಲಿ ತನು, ಮನ, ಧನ, ಸಮಯ, ಸ್ನೇಹ ಹಾಗೂ ಸಾಹಸದಿಂದ ಉಪಯೋಗಿಸಿದರು, ಅವರೆಲ್ಲರಿಗೂ ಬಾಪ್ದಾದಾರವರು ಪದಮದಷ್ಟು ಶುಭಾಷಯಗಳನ್ನು ಕೊಡುತ್ತಿದ್ದಾರೆ. ಭಲೆ ಈ ಸಮಯದಲ್ಲಿ ಸನ್ಮುಖದಲ್ಲಿ ಇರಬಹುದು, ಅಥವಾ ಆಕಾರ ರೂಪದಲ್ಲಿ ಸನ್ಮುಖದಲ್ಲಿರಬಹುದು ಆದರೆ ಎಲ್ಲಾ ಮಕ್ಕಳಿಗೂ ಸೇವೆಯಲ್ಲಿ ಲಗನ್ನಿಂದ ಮಗ್ನರಾಗಿರುವ ಶುಭಾಷಯಗಳನ್ನು ಕೊಡುತ್ತಿದ್ದಾರೆ - ಮಕ್ಕಳೇ ಸಹಯೋಗಿ ಆಗಿದ್ದೀರಿ, ಅನ್ಯರನ್ನೂ ಸಹಯೋಗಿಯನ್ನಾಗಿ ಮಾಡಿದ್ದೀರಿ. ಅಂದಮೇಲೆ ಸಹಯೋಗಿಯಾಗುವ ಹಾಗೂ ಸಹಯೋಗಿಯನ್ನಾಗಿ ಮಾಡಿರುವುದಕ್ಕಾಗಿಯೂ ಡಬಲ್ ಶುಭಾಷಯಗಳು. ಕೆಲವು ಮಕ್ಕಳು ಸೇವೆಯ ಉಮ್ಮಂಗ-ಉತ್ಸಾಹದ ಸಮಾಚಾರ ಹಾಗೂ ಜೊತೆ ಜೊತೆಗೆ ಬಾಪ್ದಾದಾರವರ ಕೊರಳಿಗೆ ಹೊಸ ವರ್ಷದ ಉಮ್ಮಂಗ-ಉತ್ಸಾಹದ ಕಾರ್ಡುಗಳ ಮಾಲೆಯನ್ನು ಹಾಕಿದರು. ಯಾರೆಲ್ಲರೂ ಕಾರ್ಡುಗಳನ್ನು ಕಳುಹಿಸಿದ್ದೀರಿ, ಅದರ ರಿಟರ್ನ್ನಲ್ಲಿ ಬಾಪ್ದಾದಾರವರು ರಿಗಾರ್ಡ್ ಹಾಗೂ ಲವ್ ಎರಡನ್ನೂ ಕೊಡುತ್ತಾರೆ. ಮಕ್ಕಳ ಸಮಾಚಾರವನ್ನು ಕೇಳುತ್ತಾ ಹರ್ಷಿತವಾಗುತ್ತದೆ, ಭಲೆ ಗುಪ್ತ ರೂಪದಲ್ಲಿಯೇ ಸೇವೆ ಮಾಡಿರಬಹುದು, ಅಥವಾ ಪ್ರತ್ಯಕ್ಷ ರೂಪದಲ್ಲಿ ಸೇವೆಯನ್ನು ಮಾಡಿರಬಹುದು ಆದರೆ ತಂದೆಯನ್ನು ಪ್ರತ್ಯಕ್ಷಗೊಳಿಸುವ ಸೇವೆಯಲ್ಲಂತು ಸದಾ ಸಫಲರಾಗಿಯೇ ಇದ್ದೀರಿ. ಸ್ನೇಹದಿಂದ ಸೇವೆಯ ಫಲಿತಾಂಶವೆಂದರೆ - ಸಹಯೋಗಿ ಆತ್ಮರಾಗಿರುವುದು ಮತ್ತು ತಂದೆಯ ಕಾರ್ಯದಲ್ಲಿ ಸಮೀಪಕ್ಕೆ ಬರುವುದೇ ಸಫಲತೆಯ ಚಿಹ್ನೆಯಾಗಿದೆ. ಸಹಯೋಗಿಗಳು ಇಂದಿಗೂ ಸಹಯೋಗಿಯಾಗಿದ್ದಾರೆ, ನಾಳೆ ಯೋಗಿಗಳೂ ಆಗಿ ಬಿಡುವರು. ಅಂದಮೇಲೆ ಸಹಯೋಗಿಯನ್ನಾಗಿ ಮಾಡುವಂತಹ ವಿಶೇಷ ಸೇವೆಯನ್ನು ನಾಲ್ಕೂ ಕಡೆಯಲ್ಲಿರುವ ಮಕ್ಕಳೆಲ್ಲರೂ ಮಾಡಿದ್ದಾರೆ, ಅದಕ್ಕಾಗಿ ಬಾಪ್ದಾದಾರವರು `ಅವಿನಾಶಿ ಸಫಲತಾ ಸ್ವರೂಪ ಭವ'ದ ವರದಾನವನ್ನು ಕೊಡುತ್ತಿದ್ದಾರೆ. ಒಳ್ಳೆಯದು.

ಯಾವಾಗ ತಮ್ಮ ಪ್ರಜೆ, ತಮ್ಮ ಸಹಯೋಗಿ, ತಮ್ಮ ಸಂಬಂಧಿಗಳು ವೃದ್ಧಿ ಹೊಂದುವರೋ, ಆಗ ವಿಧಿಯನ್ನೂ ಬದಲಾಯಿಸಬೇಕಾಗುತ್ತದೆ. ಭಲೆ ವೃದ್ಧಿಯಾಗಲಿ ಎಂದು ಖುಷಿಯಾಗುತ್ತದೆ ಅಲ್ಲವೆ. ಒಳ್ಳೆಯದು.

ಸರ್ವ ಸದಾ ಸ್ನೇಹಿ, ಸದಾ ಸಹಯೋಗಿಯಾಗಿರುತ್ತಾ ಸಹಯೋಗಿಯನ್ನಾಗಿ ಮಾಡುವ ಮಕ್ಕಳಿಗೆ, ಸದಾ ಶುಭಾಷಯಗಳನ್ನು ಪ್ರಾಪ್ತಿ ಮಾಡಿಕೊಳ್ಳುವ ಮಕ್ಕಳಿಗೆ, ಸದಾ ಪ್ರತೀ ಸೆಕೆಂಡ್, ಪ್ರತೀ ಸಂಕಲ್ಪವನ್ನು ಸರ್ವ ಶ್ರೇಷ್ಠ, ಗಾಯನ-ಯೋಗ್ಯವನ್ನಾಗಿ ಮಾಡುವಂತಹ, ಸದಾ ದಾತನಾಗಿರುತ್ತಾ ಸರ್ವರಿಗೂ ಸ್ನೇಹ ಹಾಗೂ ಸಹಯೋಗವನ್ನು ಕೊಡುವಂತಹ ಶ್ರೇಷ್ಠ ಮಹಾನ್ ಭಾಗ್ಯಶಾಲಿ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸಂಗಮದ ಗುಡ್ನೈಟ್ ಮತ್ತು ಗುಡ್ಮಾರ್ನಿಂಗ್.

ವಿದೇಶದ ಸೇವೆಯಲ್ಲಿ ಉಪಸ್ಥಿತರಾಗಿರುವ ನಿಮಿತ್ತ ಸಹೋದರಿಯರ ಪ್ರತಿ - ಅವ್ಯಕ್ತ ಮಹಾವಾಕ್ಯಗಳು:
ಬಾಪ್ದಾದಾರವರು ನಿಮಿತ್ತ ಸೇವಾಧಾರಿ ಮಕ್ಕಳಿಗೆ `ಸಮಾನ ಭವ'ದ ವರದಾನದಿಂದ ಮುಂದುವರೆಸುತ್ತಾ ಇರುತ್ತಾರೆ. ಪಾಂಡವರಿರಬಹುದು ಅಥವಾ ಶಕ್ತಿಯರು, ಯಾರೆಲ್ಲರೂ ಸೇವೆಗಾಗಿ ನಿಮಿತ್ತರಾಗಿದ್ದಾರೆಯೋ, ಅವರೆಲ್ಲರಿಗೂ ವಿಶೇಷವಾಗಿ ಪದಮಾಪದಮ ಭಾಗ್ಯಶಾಲಿ ಶ್ರೇಷ್ಠಾತ್ಮರೆಂದು ತಿಳಿಯುವರು. ಸೇವೆಯ ಪ್ರತ್ಯಕ್ಷ ಫಲ ಖುಷಿ ಹಾಗೂ ಶಕ್ತಿಯಾಗಿದೆ, ವಿಶೇಷವಾಗಿ ಈ ಅನುಭವವನ್ನಂತು ಮಾಡುತ್ತಿರುತ್ತೀರಿ. ಈಗ ಸ್ವಯಂ ತಾವೆಷ್ಟು ಶಕ್ತಿಶಾಲಿ ಲೈಟ್ಹೌಸ್, ಮೈಟ್ಹೌಸ್ ಆಗಿರುತ್ತಾ ಸೇವೆಯನ್ನು ಮಾಡುವಿರಿ, ನಾಲ್ಕೂ ಕಡೆಗಳಲ್ಲಿಯೂ ಅಷ್ಟುಬೇಗನೆ ಪ್ರತ್ಯಕ್ಷತೆಯ ಧ್ವಜಾರೋಹಣ ಮಾಡುವಿರಿ. ಸೇವೆಯ ಸಫಲತೆಗಾಗಿ ನಿಮಿತ್ತನಾಗಿರುವ ಪ್ರತಿಯೊಬ್ಬ ಸೇವಾಧಾರಿಯೂ ವಿಶೇಷವಾಗಿ ಎರಡು ಮಾತುಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗಿದೆ - 1. ಸದಾ ಸಂಸ್ಕಾರಗಳ ಮಿಲನ ಮಾಡಿಸುವುದರಲ್ಲಿ ಯುನಿಟಿಯ (ಏಕತೆ) ಮಾತು. ಪ್ರತಿಯೊಂದು ಸ್ಥಾನದಿಂದಲೂ ಈ ವಿಶೇಷತೆಯು ಕಾಣಿಸಲಿ. 2. ನಿಮಿತ್ತವಾಗಿರುವ ಪ್ರತಿಯೊಬ್ಬ ಸೇವಾಧಾರಿಗಳೂ ಸಹ ಮೊದಲು ಸ್ವಯಂಗೆ ಇವೆರಡು ಸರ್ಟಿಫಿಕೇಟ್ಗಳನ್ನು ಸದಾ ಕೊಡಬೇಕಾಗಿದೆ - ಒಂದು. `ಏಕತೆ', ಇನ್ನೊಂದು `ಸಂತುಷ್ಟತೆ'. ವಿಭಿನ್ನ ಸಂಸ್ಕಾರಗಳಿದ್ದೇ ಇರುತ್ತವೆ ಮತ್ತು ಆಗುತ್ತವೆ ಆದರೆ ಸಂಸ್ಕಾರಗಳ ಘರ್ಷಣೆಯಾಗುವ ಅಥವಾ ಸಂಸ್ಕಾರಗಳನ್ನು ದೂರಗೊಳಿಸುತ್ತಾ ತಮ್ಮನ್ನು ಸುರಕ್ಷಿತವಾಗಿಡುವುದು ತಮ್ಮ ಮೇಲೆ ಆಧಾರಿತವಾಗಿದೆ. ಯಾರಲ್ಲಿ ಯಾವುದೇ ಅಂತಹ ಸಂಸ್ಕಾರವಿರುತ್ತದೆ ಎಂದು ತಿಳಿದುಕೊಳ್ಳಿರಿ, ಆಗ ಇನ್ನೊಬ್ಬರು ಚಪ್ಪಾಳೆ (ಜೊತೆ) ಹಾಕಬಾರದು. ಭಲೆ ಅವರು ಬದಲಾಗುವರೋ ಅಥವಾ ಇಲ್ಲವೋ, ಆದರೆ ತಾವಂತು ಬದಲಾಗಲು ಸಾಧ್ಯವಿದೆ. ಅಲ್ಲವೆ! ಒಂದುವೇಳೆ ಈ ಮಾತಿನಲ್ಲಿ ಪ್ರತಿಯೊಬ್ಬರೂ ತನ್ನ ಪರಿವರ್ತನೆ ಮಾಡಿಕೊಳ್ಳುವರು, ಸಮಾವೇಶ ಮಾಡಿಕೊಳ್ಳುವ ಶಕ್ತಿಯನ್ನು ಧಾರಣೆ ಮಾಡಿಕೊಳ್ಳುತ್ತಾರೆಂದರೆ ಅವಶ್ಯವಾಗಿ ಇನ್ನೊಬ್ಬರ ಸಂಸ್ಕಾರವು ಶೀತಲವಾಗಿ ಬಿಡುತ್ತದೆ. ಅಂದಮೇಲೆ ಸದಾ ಪರಸ್ಪರದಲ್ಲಿ ಸ್ನೇಹದ ಭಾವನೆಯಿಂದ, ಶ್ರೇಷ್ಠತೆಯ ಭಾವನೆಯಿಂದ ಸಂಪರ್ಕದಲ್ಲಿ ಬನ್ನಿ. ಏಕೆಂದರೆ ನಿಮಿತ್ತ ಸೇವಾಧಾರಿಗಳು ತಂದೆಯ ಚಹರೆಯ (ಮೂರ್ತಿ) ದರ್ಪಣವಾಗಿದ್ದೀರಿ. ತಮ್ಮ ಪ್ರತ್ಯಕ್ಷ ಜೀವನವೇನಿದೆಯೋ, ಅದೇ ತಂದೆಯ ಚಹರೆಯ ದರ್ಪಣವಾಗುತ್ತದೆ ಆದ್ದರಿಂದ ಸದಾ ಜೀವನವೆಂಬ ದರ್ಪಣವಾಗಲಿ, ಅದರಲ್ಲಿ ತಂದೆಯು ಯಾರು, ಹೇಗಿದ್ದಾರೆಯೋ ಅದೇ ಕಾಣಿಸಲಿ. ಬಾಕಿ ಬಹಳ ಒಳ್ಳೆಯ ರೀತಿಯಲ್ಲಿ ಪರಿಶ್ರಮ (ಪುರುಷಾರ್ಥ) ಮಾಡುತ್ತಿದ್ದೀರಿ, ಒಳ್ಳೆಯ ಸಾಹಸವೂ ಇದೆ. ಸೇವೆಯ ವೃದ್ಧಿಯ ಉಮ್ಮಂಗವೂ ಬಹಳ ಚೆನ್ನಾಗಿದೆ ಆದ್ದರಿಂದ ವಿಸ್ತಾರವನ್ನು ಪ್ರಾಪ್ತಿ ಮಾಡುತ್ತಿದ್ದಿರಿ. ಸೇವೆಯಂತು ಚೆನ್ನಾಗಿದೆ, ಕೇವಲ ತಂದೆಯನ್ನೀಗ ಪ್ರತ್ಯಕ್ಷಗೊಳಿಸುವುದಕ್ಕಾಗಿ ಸದಾ ಪ್ರತ್ಯಕ್ಷ ಜೀವನದ ಪ್ರಮಾಣವನ್ನು ತೋರಿಸಿರಿ. ಯಾವಾಗ ಎಲ್ಲರೂ ಒಂದೇ ಧ್ವನಿಯಿಂದ ಹೇಳುವರು - ಅದೇನೆಂದರೆ, ಇವರು ಜ್ಞಾನದ ಧಾರಣೆಗಳಲ್ಲಂತು ಒಂದೇ ಆಗಿದ್ದಾರೆ. ಆದರೆ ಸಂಸ್ಕಾರ ಮಿಲನ ಮಾಡಿಸುವುದರಲ್ಲಿಯೂ ನಂಬರ್ವನ್ ಆಗಿದ್ದಾರೆ. ಅದು ಈ ರೀತಿಯಾಗಿಯೂ ಅಲ್ಲ - ಇಂಡಿಯಾದ ಟೀಚರ್ ಬೇರೆ, ಫಾರೆನ್ನ ಟೀಚರ್ ಬೇರೆ ರೀತಿಯಿದ್ದಾರೆ, ಎಲ್ಲರೂ ಒಂದೇ ರೀತಿ ಇದ್ದಾರೆ ಎನ್ನುವುದಾಗಬೇಕು. ಇವರಂತು ಕೇವಲ ಸೇವೆಗಾಗಿ ನಿಮಿತ್ತರಾಗಿದ್ದಾರೆ, ಸ್ಥಾಪನೆಯಲ್ಲಿ ಸಹಯೋಗಿಯಾಗಿದ್ದಾರೆ ಮತ್ತು ಈಗಲೂ ಸಹಯೋಗ ಕೊಡುತ್ತಿದ್ದಾರೆ ಆದ್ದರಿಂದ ಎಲ್ಲದರಲ್ಲಿಯೂ ಸ್ವತಹವಾಗಿಯೇ ವಿಶೇಷ ಪಾತ್ರವನ್ನಭಿನಯಿಸಬೇಕಾಗುತ್ತದೆ. ಹಾಗೆ ನೋಡಿದರೆ ಬಾಪ್ದಾದಾ ಹಾಗೂ ನಿಮಿತ್ತ ಆತ್ಮರ ಬಳಿ ವಿದೇಶಿ ಅಥವಾ ದೇಶಿಯೆನ್ನುವುದರಲ್ಲಿ ಯಾವುದೇ ಅಂತರವಿಲ್ಲ. ಯಾರೇ ಆಗಿರಬಹುದು, ಎಲ್ಲಿ ಯಾರ ಸೇವೆಯ ವಿಶೇಷತೆಯಿದೆಯೋ ಅಲ್ಲಿ ಅವರ ವಿಶೇಷತೆಯಿಂದ ಲಾಭವನ್ನು ತೆಗೆದುಕೊಳ್ಳಲಾಗುತ್ತದೆ. ಒಬ್ಬರಿನ್ನೊಬ್ಬರಿಗೆ ಗೌರವ ಕೊಡುವುದಂತು ಬ್ರಾಹ್ಮಣ ಕುಲದ ಮರ್ಯಾದೆಯಾಗಿದೆ, ಸ್ನೇಹವನ್ನು ತೆಗೆದುಕೊಳ್ಳಬೇಕು ಮತ್ತು ಗೌರವ ಕೊಡಬೇಕಾಗಿದೆ. ವಿಶೇಷತೆಗೆ ಮಹತ್ವವನ್ನು ಕೊಡಲಾಗುತ್ತದೆಯೇ ಹೊರತು ವ್ಯಕ್ತಿಗಲ್ಲ. ಒಳ್ಳೆಯದು.

ವರದಾನ:  
ಪ್ರತೀ ಸೆಕೆಂಡ್ ಮತ್ತು ಸಂಕಲ್ಪವನ್ನು ಅಮೂಲ್ಯ ವಿಧಿಯಿಂದ ಉಪಯೋಗಿಸುವಂತಹ ಅಮೂಲ್ಯ ರತ್ನ ಭವ.

ಸಂಗಮಯುಗದ ಒಂದು ಸೆಕೆಂಡ್ ಸಹ ಬಹಳ ಅಮೂಲ್ಯವಾದುದು. ಯಾವ ರೀತಿ ಒಂದಕ್ಕೆ ಲಕ್ಷಪಟ್ಟು ಆಗುತ್ತದೆಯೋ ಹಾಗೆಯೇ ಒಂದು ಸೆಕೆಂಡ್ ಸಹ ವ್ಯರ್ಥವಾಗುತ್ತದೆಯೆಂದರೆ ಲಕ್ಷಪಟ್ಟು ವ್ಯರ್ಥವಾಗಿ ಬಿಡುತ್ತದೆ. ಆದ್ದರಿಂದ ಇಷ್ಟೂ ಗಮನವನ್ನಿಡುತ್ತೀರೆಂದರೆ ಹುಡುಗಾಟಿಕೆಯು ಸಮಾಪ್ತಿಯಾಗುತ್ತದೆ. ಈಗಂತು ಲೆಕ್ಕ ತೆಗೆದುಕೊಳ್ಳುವವರು ಯಾರೂ ಇಲ್ಲ ಆದರೆ ಸ್ವಲ್ಪ ಸಮಯದ ನಂತರ ಪಶ್ಚಾತ್ತಾಪವಾಗುವುದು ಏಕೆಂದರೆ ಈ ಸಮಯಕ್ಕೆ ಬಹಳ ಬೆಲೆಯಿದೆ. ಯಾರು ತನ್ನ ಪ್ರತೀ ಸೆಕೆಂಡ್, ಪ್ರತೀ ಸಂಕಲ್ಪವನ್ನು ಅಮೂಲ್ಯವಾಗಿ ಉಪಯೋಗಿಸುತ್ತಾರೆಯೋ, ಅವರೇ ಅಮೂಲ್ಯ ರತ್ನಗಳು ಆಗುವರು.

ಸ್ಲೋಗನ್:
ಯಾರು ಸದಾ ಯೋಗಯುಕ್ತರಾಗಿರುತ್ತಾರೆಯೋ ಅವರೇ ಸಹಯೋಗದ ಅನುಭವ ಮಾಡುತ್ತಾ ವಿಜಯಿಯಾಗುವರು.


ಮುರಳಿ ಪ್ರಶ್ನೆಗಳು -

1. ಮಕ್ಕಳು ತಂದೆಯ ಹತ್ತಿರ ಯಾವ ಎರಡು ಮಾತಿನ ಆಧಾರದ ಮೇಲೆ ನಂಬರ್ವಾರಾಗಿ ತಲುಪುತ್ತಾರೆ?

2. ಈ ಸಂಗಮಯುಗದಲ್ಲಿ ಯಾವುದಕ್ಕೆ ವಿದಾಯಿ ಹೇಳಬೇಕು?

3. ಭವಿಷ್ಯದ ಪ್ರತ್ಯಕ್ಷತೆ ಹೇಗಾಗುವುದು?

4. ಸೇವೆಯ ಪ್ರತಿಯೊಂದು ಹೆಜ್ಜೆಯಲ್ಲಿ ಯಾವ ವಿಧಿಯಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕು?

5. ಕೆಲವು ಮಕ್ಕಳ ಬಾಯಿಯಿಂದ ಯಾವ ಏರಡು ಶಬ್ದಗಳನ್ನು ಬರುವುದರಿಂದ ಸಮಾಪ್ತಿ ಮಾಡಲು ಬಾಬಾರವರು ತಿಳಿಸುತ್ತಾರೆ?

6. ಸ್ನೇಹದಿಂದ ಮಾಡಿರುವ ಸೇವೆಯ ಸಫಲತೆಯ ಲಕ್ಷಣಗಳೇನು?

7. ನಿಮಿತ್ತ ಸೇವಾಧಾರಿ ಮಕ್ಕಳಿಗೆ ತಂದೆಯು ಯಾವ ವರದಾನವನ್ನು ಕೊಡುತ್ತಾರೆ?

8. ಸೇವೆಯ ಪ್ರತ್ಯಕ್ಷ ಫಲವೇನು?

9. ನಿಮಿತ್ತ ಸೇವಾಧಾರಿಯು ವಿಶೇಷವಾಗಿ ಸೇವೆಯ ಸಫಲತೆಗೋಸ್ಕರ ಯಾವ ಏರಡು ಮಾತುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು?

10. ಯಾರು ಅಮೂಲ್ಯ ರತ್ನಗಳಾಗುವವರು?