20.12.20 Avyakt Bapdada
Kannada
Murli 20.03.87 Om Shanti Madhuban
ಸ್ನೇಹ ಮತ್ತು ಸತ್ಯತೆಯ
ಅಥಾರಿಟಿಯ ಬ್ಯಾಲೆನ್ಸ್
ಇಂದು ಸತ್ಯ ತಂದೆ, ಸತ್ಯ
ಶಿಕ್ಷಕ, ಸದ್ಗುರುವು ತನ್ನ ಸತ್ಯತೆಯ ಶಕ್ತಿಶಾಲಿಯುಳ್ಳ ಸತ್ಯ ಮಕ್ಕಳೊಂದಿಗೆ ಮಿಲನ ಮಾಡಲು
ಬಂದಿದ್ದಾರೆ. ಸತ್ಯತೆಯೇ ಅತ್ಯಂತ ಶ್ರೇಷ್ಠಾತಿ ಶ್ರೇಷ್ಠ ಶಕ್ತಿ ಅಥವಾ ಅಥಾರಿಟಿಯಾಗಿದೆ. ಸತ್ಯದ
ಅರ್ಥವನ್ನು ಎರಡು ಅರ್ಥಗಳಿಂದ ಹೇಳಲಾಗುತ್ತದೆ. ಒಂದು - ಸತ್ಯ ಅರ್ಥಾತ್ ಸತ್ಯ. ಇನ್ನೊಂದು - ಸತ್ಯ
ಅರ್ಥಾತ್ ಅವಿನಾಶಿ ಎಂದು. ಇವೆರಡೂ ಅರ್ಥಗಳಿಂದ ಸತ್ಯತೆಯ ಶಕ್ತಿಯು ಅತಿ ಶ್ರೇಷ್ಠವಾದುದು ಆಗಿದೆ.
ತಂದೆಯನ್ನು(ಪರಮಾತ್ಮ) ಸತ್ಯ ತಂದೆ ಎಂದು ಹೇಳಲಾಗುತ್ತದೆ, ತಂದೆಯರಂತು ಅನೇಕರಿದ್ದಾರೆ. ಆದರೆ
ಸತ್ಯ ತಂದೆಯು ಒಬ್ಬರಾಗಿದ್ದಾರೆ. ಸತ್ಯ ಶಿಕ್ಷಕ, ಸದ್ಗುರುವೂ ಒಬ್ಬರೇ ಇದ್ದಾರೆ. ಸತ್ಯವನ್ನೇ
ಪರಮಾತ್ಮನೆಂದು ಹೇಳುತ್ತಾರೆ ಅರ್ಥಾತ್ ಪರಮ ಆತ್ಮನ ವಿಶೇಷತೆಯು ಸತ್ಯತೆಯಾಗಿದೆ. ಸತ್ಯವೇ ಶಿವನು....
ಎಂಬ ತಮ್ಮ ಹಾಡಿದೆಯಲ್ಲವೆ. ಪ್ರಪಂಚದವರೂ ಸಹ ಸತ್ಯಂ ಶಿವಂ ಸುಂದರಂ ಎಂದು ಹೇಳುತ್ತಾರೆ, ಜೊತೆ
ಜೊತೆಗೆ ಪರಮಾತ್ಮ ತಂದೆಗಾಗಿ ಸತ್-ಚಿತ್-ಆನಂದ ಸ್ವರೂಪನೆಂದೂ ಹೇಳುತ್ತಾರೆ. ತಾವಾತ್ಮರನ್ನೂ
ಸತ್-ಚಿತ್-ಆನಂದನೆಂದು ಹೇಳಲಾಗುತ್ತದೆ ಅಂದಮೇಲೆ `ಸತ್' ಶಬ್ಧದ ಬಹಳಷ್ಟು ಮಹಿಮೆಯು ಗಾಯನವಾಗಿದೆ
ಮತ್ತು ಯಾವಾಗ ಯಾವುದೇ ಕಾರ್ಯದಲ್ಲಿ ಅಥಾರಿಟಿಯಿಂದಲೂ ಇದನ್ನೇ ಹೇಳುತ್ತಾರೆ - ನಾನು
ಸತ್ಯವಾಗಿದ್ದೇನೆ ಆದ್ದರಿಂದ ಅಥಾರಿಟಿಯಿಂದ ಹೇಳುತ್ತೇನೆ. ಸತ್ಯಕ್ಕಾಗಿ ಗಾಯನವಿದೆ - ಸತ್ಯದ
ದೋಣಿಯು ಅಲುಗಾಡುತ್ತದೆ ಆದರೆ ಮುಳುಗಿ ಬಿಡುವುದಿಲ್ಲ. ತಾವುಗಳೂ ಸಹ ಹೇಳುತ್ತೀರಿ -
ಸತ್ಯವಾಗಿರುವವರು ನರ್ತಿಸುತ್ತಿರುತ್ತಾರೆ. ಸತ್ಯ ಅರ್ಥಾತ್ ಸತ್ಯತೆಯ ಶಕ್ತಿಯಿರುವವರು ಸದಾ
ಖುಷಿಯಲ್ಲಿ ನರ್ತಿಸುತ್ತಾ ಇರುತ್ತಾರೆ, ಎಂದಿಗೂ ಸಹ ಬೇಸರವಾಗುವುದಿಲ್ಲ. ಅಂದರೆ ಮುಖವು
ಮುದುಡುವುದಿಲ್ಲ, ಗೊಂದಲವಾಗುವುದಿಲ್ಲ, ಗಾಬರಿಯಾಗುವುದಿಲ್ಲ, ಬಲಹೀನರೂ ಆಗುವುದಿಲ್ಲ. ಸತ್ಯತೆಯ
ಶಕ್ತಿಯಿರುವವರು ಶಕ್ತಿಶಾಲಿ ಆಗಿರುತ್ತಾರೆ, ಧೈರ್ಯ ಶಕ್ತಿ ಇರುತ್ತದೆ, ಆದ್ದರಿಂದ
ಗಾಬರಿಯಾಗುವುದಿಲ್ಲ. ಸತ್ಯತೆಯನ್ನು ಚಿನ್ನದ ಸಮಾನ ಎಂದು ಹೇಳಲಾಗುತ್ತದೆ, ಅಸತ್ಯವನ್ನು ಮಣ್ಣಿನ
ಸಮಾನ ಎಂದು ಹೇಳುತ್ತಾರೆ. ಭಕ್ತಿಯಲ್ಲಿಯೂ ಸಹ ಪರಮಾತ್ಮನಲ್ಲಿ ಲಗನ್ ಜೋಡಿಸುವವರಿಗೆ ಸತ್ಸಂಗಿ ಎಂದು
ಹೇಳುತ್ತಾರೆ, ಸತ್ಯನ ಸಂಗ ಮಾಡುವವರಾಗಿದ್ದಾರೆ ಎಂದು ಹೇಳುತ್ತಾರೆ, ಮತ್ತು ಅಂತ್ಯದಲ್ಲಿ ಯಾವಾಗ
ಆತ್ಮವು ಶರೀರವನ್ನು ಬಿಡುತ್ತದೆಯೋ, ಆಗಲೂ ಏನು ಹೇಳುವರು - ಸತ್ ನಾಮ್ ಸಂಗ್ ಹೈ (ಸತ್ಯ ತಂದೆಯ
ಸಂಗವಿದ್ದೇವೆ). ಅಂದಮೇಲೆ ಸತ್ ಎಂದರೆ ಅವಿನಾಶಿ, ಸತ್ ಸತ್ಯವಾಗಿದೆ, ಸತ್ಯತೆಯ ಶಕ್ತಿಯು ಮಹಾನ್
ಶಕ್ತಿಯಾಗಿದೆ. ವರ್ತಮಾನದಲ್ಲಿ ತಮ್ಮೆಲ್ಲರನ್ನೂ ನೋಡುತ್ತಾ ಮೆಜಾರಿಟಿ ಜನರು ಇದನ್ನೇ ಹೇಳುತ್ತಾರೆ
- ಇವರಲ್ಲಿ ಸತ್ಯತೆಯ ಶಕ್ತಿಯಿದೆ ಆದ್ದರಿಂದ ಇಷ್ಟು ಸಮಯದಿಂದ ವೃದ್ಧಿ ಹೊಂದುತ್ತಿದ್ದಾರೆ.
ಸತ್ಯತೆಯೆಂದಿಗೂ ಅಲುಗಾಡುವುದಿಲ್ಲ, ಅಚಲವಾಗಿರುತ್ತದೆ, ಸತ್ಯತೆಯು ವೃದ್ಧಿಯನ್ನು ಪ್ರಾಪ್ತಿ
ಮಾಡಿಸುವ ವಿಧಿಯಾಗಿದೆ. ಸತ್ಯತೆಯ ಶಕ್ತಿಯಿಂದ ಸತ್ಯಯುಗವನ್ನು ತಯಾರು ಮಾಡುತ್ತೀರಿ, ಸ್ವಯಂ ಸಹ
ಸತ್ಯ ನಾರಾಯಣ, ಸತ್ಯ ಲಕ್ಷ್ಮಿ ಆಗುತ್ತೀರಿ. ಇದು ಸತ್ಯವಾದ ಜ್ಞಾನವಾಗಿದೆ, ಸತ್ಯ ತಂದೆಯ
ಜ್ಞಾನವಾಗಿದೆ. ಆದ್ದರಿಂದ ಪ್ರಪಂಚದ ಸರ್ವ ಜ್ಞಾನಗಳಿಗಿಂತ ಭಿನ್ನ ಹಾಗೂ ಪ್ರಿಯವಾದ ಜ್ಞಾವಾಗಿದೆ.
ಇಂದು ಬಾಪ್ದಾದಾರವರು ಎಲ್ಲಾ ಮಕ್ಕಳಲ್ಲಿ ಇದನ್ನು ನೋಡುತ್ತಿದಾರೆ - ಸತ್ಯ ಜ್ಞಾನದ ಸತ್ಯತೆಯ
ಅಥಾರಿಟಿಯ ಧಾರಣೆ ಎಷ್ಟಾಗಿದೆ? ಸತ್ಯತೆಯು ಪ್ರತಿಯೊಂದು ಆತ್ಮನನ್ನೂ ಆಕರ್ಷಿಸುತ್ತದೆ. ಭಲೆ
ಇವತ್ತಿನ ಪ್ರಪಂಚವು ಅಸತ್ಯ ಖಂಡವಾಗಿದೆ, ಎಲ್ಲರೂ ಅಸತ್ಯದಲ್ಲಿದ್ದಾರೆ ಅರ್ಥಾತ್ ಎಲ್ಲದರಲ್ಲಿಯೂ
ಅಸತ್ಯವನ್ನೇ ಸೇರ್ಪಡೆ ಮಾಡಿದ್ದಾರೆ, ಇಷ್ಟಾದರೂ ಸತ್ಯತೆಯ ಶಕ್ತಿಯಿರುವವರು ವಿಜಯಿಯಾಗುತ್ತಾರೆ.
ಸತ್ಯತೆಯ ಪ್ರಾಪ್ತಿಯು ಖುಷಿ ಹಾಗೂ ನಿರ್ಭಯತೆಯಾಗಿದೆ. ಸತ್ಯವನ್ನು ಹೇಳುವವರು ಸದಾ
ನಿರ್ಭಯರಾಗಿರುತ್ತಾರೆ, ಅವರಿಗೆಂದಿಗೂ ಭಯವಾಗುವುದಿಲ್ಲ. ಯಾರು ಸತ್ಯವಾಗಿರುವುದಿಲ್ಲವೋ ಅವರಲ್ಲಿ
ಅವಶ್ಯವಾಗಿ ಭಯವಿರುತ್ತದೆ. ಹಾಗಾದರೆ ತಾವೆಲ್ಲರೂ ಸತ್ಯತೆಯ ಶಕ್ತಿಶಾಲಿ ಶ್ರೇಷ್ಠ ಆತ್ಮರಾಗಿದ್ದೀರಿ.
ಸತ್ಯ ಜ್ಞಾನ, ಸತ್ಯ ತಂದೆ, ಸತ್ಯ ಪ್ರಾಪ್ತಿ, ಸತ್ಯ ನೆನಪು, ಸತ್ಯ ಗುಣ, ಸತ್ಯ ಶಕ್ತಿಗಳು, ಸರ್ವ
ಪ್ರಾಪ್ತಿಗಳಿವೆ ಎಂದರೆ ಇಷ್ಟೂ ಅಥಾರಿಟಿಯಿದೆ ಎಂಬ ನಶೆಯಿರುತ್ತದೆಯೇ? ಅಥಾರಿಟಿಯ ಅರ್ಥ
ಅಭಿಮಾನವೆಂದಲ್ಲ, ಎಷ್ಟು ಶ್ರೇಷ್ಠಾತಿ ಶ್ರೇಷ್ಠ ಅಥಾರಿಟಿಯಾಗಿರುತ್ತಾರೆಯೋ ಅಷ್ಟು ಅವರ
ವೃತ್ತಿಯಲ್ಲಿಯೂ ಆತ್ಮಿಕ ಅಥಾರಿಟಿಯಿರುತ್ತದೆ. ವಾಣಿಯಲ್ಲಿ ಸ್ನೇಹ ಹಾಗೂ ನಮ್ರತೆಯಿರುತ್ತದೆ - ಇದು
ಅಥಾರಿಟಿಯದೇ ಚಿಹ್ನೆಯಾಗಿದೆ. ತಾವುಗಳು ಹೇಗೆ ವೃಕ್ಷದ ಉದಾಹರಣೆಯನ್ನು ಕೊಡುತ್ತೀರಿ - ವೃಕ್ಷದಲ್ಲಿ
ಯಾವಾಗ ಸಂಪೂರ್ಣ ಫಲದ ಅಥಾರಿಟಿಯು ಬರುತ್ತದೆಯೋ, ಆಗ ವೃಕ್ಷವು ತಾನಾಗಿಯೇ ಬಾಗುತ್ತದೆ ಅರ್ಥಾತ್
ನಿರಹಂಕಾರಿ ಆಗುವ ಸೇವೆಯನ್ನು ಮಾಡುತ್ತದೆ. ಅದೇರೀತಿ ಆತ್ಮಿಕ ಅಥಾರಿಟಿಯಿರುವ ಮಕ್ಕಳೂ ಸಹ ಎಷ್ಟು
ಶ್ರೇಷ್ಠವಾದ ಅಥಾರಿಟಿಯವರೋ ಅಷ್ಟೇ ನಿರಹಂಕಾರಿ ಹಾಗೂ ಸರ್ವರ ಸ್ನೇಹಿಯಾಗುವರು. ಆದರೆ ಸತ್ಯತೆಯ
ಅಥಾರಿಟಿಯವರು ನಿರಹಂಕಾರಿಯಾಗಿ ಇರುತ್ತಾರೆ. ಅಂದಮೇಲೆ ತಮ್ಮಲ್ಲಿ ಅಥಾರಿಟಿಯೂ ಇರಲಿ, ನಶೆಯೂ ಇರಲಿ
ಹಾಗೂ ನಿರಹಂಕಾರಿಯೂ ಆಗಿರುವದಕ್ಕೇ ಸತ್ಯ ಜ್ಞಾನದ ಪ್ರತ್ಯಕ್ಷ ಸ್ವರೂಪವೆಂದು ಹೇಳಲಾಗುತ್ತದೆ.
ಹೇಗೆ ಈ ಅಸತ್ಯ ಖಂಡದಲ್ಲಿ ಬ್ರಹ್ಮಾ ತಂದೆಯು ಸತ್ಯ ಅಥಾರಿಟಿಯ ಪ್ರತ್ಯಕ್ಷ ಸಾಕಾರ ಸ್ವರೂಪವನ್ನು
ನೋಡಿದಿರಲ್ಲವೆ. ಅವರ ಅಥಾರಿಟಿಯ ಮಾತುಗಳೆಂದಿಗೂ ಸಹ ಅಹಂಕಾರದ ಅನುಭವ ಮಾಡಿಸುವುದಿಲ್ಲ.
ಮುರುಳಿಯನ್ನು ಕೇಳಿಸಿಕೊಳ್ಳುತ್ತೀರಿ ಎಂದರೆ ಎಷ್ಟೊಂದು ಅಥಾರಿಟಿಯ ವಾಕ್ಯಗಳಾಗಿವೆ! ಆದರೆ ಅದರಲ್ಲಿ
ಅಭಿಮಾನವಿಲ್ಲ. ಅಥಾರಿಟಿಯ ನುಡಿಗಳಲ್ಲಿ ಸ್ನೇಹವೇ ಸಮಾವೇಶವಾಗಿದೆ, ಅದರಲ್ಲಿ ನಿರ್ಮಾಣತೆಯಿದೆ,
ನಿರಹಂಕಾರವಿದೆ. ಆದ್ದರಿಂದ ಅಥಾರಿಟಿಯ ನುಡಿಗಳು ಬಹಳ ಭಿನ್ನ(ವಿಶೇಷ)ವಾಗಿದೆ ಎಂದೆನಿಸುತ್ತದೆ. ಅದು
ಕೇವಲ ಪ್ರಿಯವಾಗಿರುವುದಲ್ಲ ಆದರೆ ಪ್ರಭಾವಶಾಲಿ ಆಗಿರುತ್ತದೆ. ಸೇವೆಯಲ್ಲಿ ಅಥವಾ ಕರ್ಮದಲ್ಲಿ
ಬ್ರಹ್ಮಾ ತಂದೆಯನ್ನು ಅನುಸರಿಸಬೇಕು ಏಕೆಂದರೆ ಸಾಕಾರಿ ಪ್ರಪಂಚದಲ್ಲಿ ಸಾಕಾರನು `ಉದಾಹರಣೆ'
ಆಗಿದ್ದಾರೆ, ಸ್ಯಾಂಪಲ್ ಆಗಿದ್ದಾರೆ. ಅಂದಮೇಲೆ ಬ್ರಹ್ಮಾ ತಂದೆಯ ಕರ್ಮದಲ್ಲಿ, ಸೇವೆಯಲ್ಲಿ,
ಚಹರೆಯಲ್ಲಿ, ಪ್ರತೀ ಚಲನೆಯಲ್ಲಿ, ನಡೆಯುತ್ತಾ-ಸುತ್ತಾಡುತ್ತಿರುವಾಗಲೂ ಹೇಗೆ ಅಥಾರಿಟಿಯ
ಸ್ವರೂಪವನ್ನು ನೋಡಿದಿರಿ, ಹಾಗೆಯೇ ಫಾಲೋ ಫಾದರ್ ಮಾಡುವುದರಲ್ಲಿಯೂ ಸ್ನೇಹ ಮತ್ತು ಅಥಾರಿಟಿ,
ನಿರ್ಮಾಣತೆ ಹಾಗೂ ಮಹಾನತೆ - ಎರಡೂ ಒಟ್ಟೊಟ್ಟಿಗೆ ಕಾಣಿಸಲಿ. ಕೇವಲ ಸ್ನೇಹವಷ್ಟೆ ಕಾಣಿಸುತ್ತಿದೆ
ಮತ್ತು ಅಥಾರಿಟಿಯು ಮಾಯವಾಗಿ ಬಿಟ್ಟಿದೆ ಎನ್ನುವಂತೆ ಆಗಬಾರದು ಅಥವಾ ಅಥಾರಿಟಿಯು ಕಾಣಿಸುತ್ತಿದೆ
ಮತ್ತು ಸ್ನೇಹವು ಕಾಣಿಸುತ್ತಿಲ್ಲ ಎನ್ನುವಂತೆ ಆಗಬಾರದು, ಎರಡೂ ಒಟ್ಟೊಟ್ಟಿಗೆ ಇರಲಿ. ಬ್ರಹ್ಮಾ
ತಂದೆಯನ್ನು ನೋಡಿದಿರಿ ಅಥವಾ ಈಗಲೂ ಮುರುಳಿಯನ್ನು ಕೇಳಿಸಿಕೊಳ್ಳುತ್ತೀರಿ, ಇದು ಪ್ರತ್ಯಕ್ಷ
ಪ್ರಮಾಣವಾಗಿದೆ - ಮಕ್ಕಳೇ ಮಕ್ಕಳೇ ಎನ್ನುತ್ತಾ ಮುರುಳಿ ನುಡಿಸುತ್ತಾರೆ ಆದರೆ ಅಥಾರಿಟಿ
ಇರುವುದನ್ನೂ ತೋರಿಸುತ್ತಾರೆ. ಸ್ನೇಹದಿಂದ ಮಕ್ಕಳೇ ಎನ್ನುತ್ತಿರುತ್ತಾರೆ ಮತ್ತು ಅಥಾರಿಟಿಯಿಂದ
ಶಿಕ್ಷಣವನ್ನೂ ಕೊಡುವರು. ಸತ್ಯ ಜ್ಞಾನವನ್ನೂ ಪ್ರತ್ಯಕ್ಷ ಮಾಡುತ್ತಾರೆ ಆದರೆ ಮಕ್ಕಳೆ-ಮಕ್ಕಳೇ
ಎನ್ನುತ್ತಾ ಹೊಸ ಜ್ಞಾನದ ಸಂಪೂರ್ಣ ಸ್ಪಷ್ಟತೆಯನ್ನೂ ನೀಡುತ್ತಾರೆ. ಇದಕ್ಕೇ ಸ್ನೇಹ ಹಾಗೂ ಸತ್ಯತೆಯ
ಅಥಾರಿಟಿಯ ಬ್ಯಾಲೆನ್ಸ್ ಎಂದು ಹೇಳಲಾಗುತ್ತದೆ. ಅಂದಾಗ ವರ್ತಮಾನದಲ್ಲಿ ಸೇವೆಯಲ್ಲಿಯೂ ಈ
ಬ್ಯಾಲೆನ್ಸ್ ಇಡುವುದರಲ್ಲಿ ಅಂಡರ್ಲೈನ್ ಮಾಡಿಕೊಳ್ಳಿರಿ.
ಧರಣಿ ತಯಾರಿ ಮಾಡುವುದಕ್ಕಾಗಿ ಸ್ಥಾಪನೆಯ ಸಮಯದಿಂದ ಈಗಿನವರೆಗೂ 50 ವರ್ಷಗಳು ಪೂರ್ಣಗೊಂಡಿತು. ಈಗ
ಬಹಳಷ್ಟು ವಿದೇಶದ ಧರಣಿಯೂ ಸಹ ತಯಾರಾಗಿದೆ. ಭಲೆ 50 ವರ್ಷಗಳಾಗಿಲ್ಲ, ಆದರೆ ತಯಾರಾಗಿರುವ ಸಾಧನಗಳ
ಸಮಯದಲ್ಲಿ ಬಂದಿದ್ದೀರಿ. ಆದ್ದರಿಂದ ಆರಂಭದ 50 ವರ್ಷಗಳು ಹಾಗೂ ಈಗಿನ 5 ವರ್ಷಗಳಿಗೆ ಸಮಾನವಾಗಿದೆ.
ಡಬಲ್ ವಿದೇಶಿಗಳೆಲ್ಲರೂ ಹೇಳುತ್ತಾರೆ - ನಾವುಗಳು ಲಾಸ್ಟ್ ಸೋ ಫಾಸ್ಟ್ ಸೋ ಫಸ್ಟ್ ಆಗಿದ್ದೇವೆ.
ಅಂದಮೇಲೆ ಸಮಯದಲ್ಲಿಯೂ ಫಾಸ್ಟ್ ಸೋ ಫಸ್ಟ್ ಆಗುವಿರಲ್ಲವೆ. ಇದರಲ್ಲಿ ಅವಶ್ಯವಾಗಿ ನಿರ್ಭಯತೆಯ
ಅಥಾರಿಟಿಯನ್ನು ಇಟ್ಟುಕೊಳ್ಳಿರಿ. ಒಬ್ಬರೇ ತಂದೆಯ ಹೊಸ ಜ್ಞಾನವು ಸತ್ಯ ಜ್ಞಾನವಾಗಿದೆ ಮತ್ತು ಹೊಸ
ಜ್ಞಾನದಿಂದ ಹೊಸ ಪ್ರಪಂಚದ ಸ್ಥಾಪನೆಯಾಗುತ್ತದೆ - ಈ ಅಥಾರಿಟಿ ಮತ್ತು ನಶೆಯು ಸ್ವರೂಪದಲ್ಲಿ ಇಮರ್ಜ್
ಆಗಿರಲಿ. 50 ವರ್ಷಗಳಲ್ಲಂತು ಮರ್ಜ್ ಆಗಿ ಇಡಲಾಗಿತ್ತು, ಆದರೆ ಇದರ ಅರ್ಥ ಇದೂ ಅಲ್ಲ - ಯಾರೇ
ಬರುತ್ತಾರೆಂದರೆ ಅವರಿಗೆ ಹೊಸ ಜ್ಞಾನದ ಹೊಸ ಮಾತುಗಳನ್ನು ತಿಳಿಸುತ್ತಾ ಗೊಂದಲ ಮಾಡಿ ಬಿಡಿ ಎಂದಲ್ಲ,
ಈ ಭಾವವಿರಬಾರದು. ಬರುವವರ ಧರಣಿ, ನಾಡಿ, ಸಮಯ, ಇವೆಲ್ಲವನ್ನೂ ನೋಡುತ್ತಾ ಜ್ಞಾನವನ್ನು ಕೊಡುವುದೇ
ಜ್ಞಾನ ಪೂರ್ಣನ ಚಿಹ್ನೆಯಾಗಿದೆ. ಆತ್ಮನ ಇಚ್ಛೆಯೇನಿದೆ ಎನ್ನುವುದನ್ನು ನೋಡಿ, ನಾಡಿ ನೋಡಿ, ಧರಣಿ
ತಯಾರು ಮಾಡಿ ಆದರೆ ಆಂತರ್ಯದಲ್ಲಿ ಅವಶ್ಯವಾಗಿ ಸತ್ಯತೆಯ ನಿರ್ಭಯತೆಯ ಶಕ್ತಿಯಿರಲಿ. ಇದನ್ನು ಕೇಳಿ
ಜನರು ಏನು ತಿಳಿಯುವರೋ ಎನ್ನುವ ಭಯವೂ ಇರಬಾರದು. ನಿರ್ಭಯರಾಗಿದ್ದು ಭಲೆ ಧರಣಿಯನ್ನು ತಯಾರು ಮಾಡಿ.
ಕೆಲ ಮಕ್ಕಳು ತಿಳಿಯುತ್ತಾರೆ - ಈ ಜ್ಞಾನವಂತು ಹೊಸದಾಗಿದೆ, ಕೆಲಮಕ್ಕಳು ತಿಳಿದುಕೊಳ್ಳುವುದಕ್ಕೇ
ಸಾಧ್ಯವಾಗುವುದಿಲ್ಲ. ಆದರೆ ಬುದ್ಧಿಹೀನರಿಗೇ ಈ ಜ್ಞಾನವನ್ನು ತಿಳಿಸಬೇಕಾಗಿದೆ, ವ್ಯಕ್ತಿಯು
ಹೇಗಿರುತ್ತಾನೆಯೋ ಅಂತಹ ರೂಪ ರೇಖೆಗಳನ್ನು ತಯಾರು ಮಾಡಬೇಕಾಗುತ್ತದೆ. ಆದರೆ ತಾವು ವ್ಯಕ್ತಿಯ
ಪ್ರಭಾವದಲ್ಲಿ ಬರಬಾರದು. ತಮ್ಮ ಸತ್ಯ ಜ್ಞಾನದ ಅಥಾರಿಟಿಯಿಂದ ವ್ಯಕ್ತಿಯನ್ನು ಪರಿವರ್ತನೆ
ಮಾಡಲೇಬೇಕು - ಈ ಲಕ್ಷ್ಯವನ್ನು ಮರೆಯಬಾರದು.
ಈಗಿನವರೆಗೂ ಏನು ಮಾಡಲಾಯಿತು ಅದು ಸರಿಯಾಗಿತ್ತು. ಮಾಡಲೇಬೇಕಿತ್ತು, ಅದು ಅವಶ್ಯಕತೆಯಿತ್ತು
ಏಕೆಂದರೆ ಧರಣಿಯನ್ನು ತಯಾರು ಮಾಡಬೇಕಾಗಿತ್ತು. ಆದರೆ ತಾವು ಎಲ್ಲಿಯವರೆಗೆ ಧರಣಿಯನ್ನೇ ತಯಾರು
ಮಾಡುವಿರಿ? ಇನ್ನೆಷ್ಟು ಸಮಯ ಬೇಕಾಗಿದೆ? ಯಾರಿಗೇ ಔಷಧಿಯನ್ನು ಕೊಡಲಾಗುತ್ತದೆ ಎಂದರೆ, ಮೊದಲು
ಹೆಚ್ಚು ಡೋಸೇಜ್ ಕೊಡಲಾಗುವುದಿಲ್ಲ, ಕಡಿಮೆ ಡೋಸೇಜ್ ಕೊಡಲಾಗುತ್ತದೆ ಆದರೆ ಹೆಚ್ಚು ಡೋಸೇಜ್
ಕೊಡಲೇಬಾರದು, ಸರಳವಾಗಿಯೇ ನಡೆಸುತ್ತಾ ಹೋಗೋಣ ಎನ್ನುವಂತೆಯೂ ಮಾಡಬಾರದು. ಬಲಹೀನರಾಗಿರುವವರಿಗೆ
ಹೆಚ್ಚು ಡೋಸೇಜ್ ಇರುವ ಔಷಧಿಯನ್ನು ಕೊಟ್ಟರೂ ತಪ್ಪಾಗುತ್ತದೆ, ಇದರಲ್ಲಿ ಪರಿಶೀಲಿಸುವ
ಶಕ್ತಿಯಿರಬೇಕು. ಆದರೆ ತಮ್ಮಲ್ಲಿ ಅವಶ್ಯವಾಗಿ ಹೊಸ ಸತ್ಯ ಜ್ಞಾನದ ಅಥಾರಿಟಿಯಿರಬೇಕು. ತಮ್ಮ
ಸೂಕ್ಷ್ಮಅಥಾರಿಟಿಯ ವೃತ್ತಿಯೇ ಅವರ ವೃತ್ತಿಗಳನ್ನು ಬದಲಿಸುತ್ತದೆ, ಇದರಿಂದಲೇ ಧರಣಿಯೂ
ತಯಾರಾಗುತ್ತದೆ ಮತ್ತು ವಿಶೇಷವಾಗಿ ಯಾವಾಗ ಮಧುಬನದಲ್ಲಿ ಸೇವೆಗಾಗಿ ತಲುಪುತ್ತೀರಿ, ಆಗ ಕೊನೆ ಪಕ್ಷ
ಇದು ಅವಶ್ಯವಾಗಿ ತಿಳಿದಿರಬೇಕು. ಈ ಧರಣಿಯಲ್ಲಿ ಅವರ ಧರಣಿಯೂ ತಯಾರಾಗಿ ಬಿಡುತ್ತದೆ. ಬಂಜರು
ಭೂಮಿಯಂತೆಯೂ ಇರಬಹುದು, ಯಾವುದೇ ಧರ್ಮದವರು ಆಗಿರಬಹುದು, ಯಾವುದೇ ಸ್ಥಾನದಲ್ಲಿರುವವರೇ ಆಗಿರಬಹುದು
ಆದರೆ ಈ ಧರಣಿಯಲ್ಲಿ ಅವರೂ ಸಹ ಕೋಮಲರಾಗಿ ಬಿಡುತ್ತಾರೆ ಮತ್ತು ಕೋಮಲ ಧರಣಿಯಾಗುವ ಕಾರಣದಿಂದ,
ಅದರಲ್ಲಿ ಯಾವುದೇ ಬೀಜವನ್ನು ಹಾಕುತ್ತೀರಿ, ಅದರಿಂದ ಸಹಜವಾಗಿಯೇ ಫಲ ಬರುತ್ತದೆ. ಇದರಲ್ಲಿ ಕೇವಲ
ಭಯ ಪಡಬಾರದು, ಅವಶ್ಯವಾಗಿ ನಿರ್ಭಯರಾಗಿರಬೇಕು. ಯುಕ್ತಿಯಿಂದ ಕೊಡಿ, ಆದರೆ ಇಂತಹ ಧರಣಿಯಲ್ಲಿ ನಾನು
ತಲುಪಿದೆ ಆದರೆ ಪರಮಾತ್ಮ-ಜ್ಞಾನ ಏನು? ಎಂಬುದು ಗೊತ್ತಾಗಲೇ ಇಲ್ಲ ಎಂದು ದೂರು ಕೊಡಬಾರದು.
ಅವಶ್ಯವಾಗಿ ಪರಮಾತ್ಮನ ಧರಣಿಯಲ್ಲಿ ಪರಮ-ಆತ್ಮನ ಪ್ರತ್ಯಕ್ಷತೆಯ ಸಂದೇಶವನ್ನು ತೆಗೆದುಕೊಂಡು ಹೋಗಲಿ.
ಇದರಲ್ಲಿ ಲಕ್ಷ್ಯವಂತು ಅಥಾರಿಟಿಯದಾಗಿರಬೇಕು.
ವರ್ತಮಾನ ಸಮಯದ ಲೆಕ್ಕದಿಂದಲೂ ನವೀನತೆಯ ಮಹತ್ವಿಕೆಯಿದೆ. ಭಲೆ ಯಾರೇ ಉಲ್ಟಾ ಹೊಸ ಫ್ಯಾಶನ್ ತಯಾರು
ಮಾಡುತ್ತಾರೆಂದರೂ ಫಾಲೋ ಮಾಡುತ್ತಾರೆ. ಹಿಂದಿನ ಜಮಾನದ ಕಲೆಯೆಷ್ಟು ಶ್ರೇಷ್ಠವಾಗಿತ್ತು! ವರ್ತಮಾನದ
ಕಲೆಯಂತು ಅದರ ಮುಂದೆ ಗೆರೆಯನಿಸುತ್ತದೆ. ಆದರೆ ಮೊಡರ್ನ್ ಆರ್ಟ್ನ್ನು ಇಷ್ಟ ಪಡುತ್ತಾರೆ.
ಪ್ರತಿಯೊಂದು ಮಾತಿನಲ್ಲಿ ಮಾನವನ ಇಚ್ಛೆಯು ನವೀನತೆಯದಾಗಿದೆ ಮತ್ತು ನವೀನತೆಯು ಸ್ವತಃವಾಗಿಯೇ ತನ್ನ
ಕಡೆಗೆ ಆಕರ್ಷಿಸುತ್ತದೆ. ಆದ್ದರಿಂದ ನವೀನತೆ, ಸತ್ಯತೆ, ಮಹಾನತೆಯ ನಶೆಯನ್ನು ಅವಶ್ಯವಾಗಿ
ಇಟ್ಟುಕೊಳ್ಳಿ. ನಂತರ ಸಮಯ ಹಾಗೂ ವ್ಯಕ್ತಿಯನ್ನು ನೋಡಿ ಸೇವೆ ಮಾಡಿರಿ. ಈ ಲಕ್ಷ್ಯವನ್ನಂತು
ಅವಶ್ಯವಾಗಿ ಇಟ್ಟುಕೊಳ್ಳಬೇಕು - ಈಗಂತು ಸ್ನೇಹ ಹಾಗೂ ಶಾಂತಿಯ ಪ್ರತ್ಯಕ್ಷತೆಯಾಗಿದೆ, ಈಗ ಹೊಸ
ಪ್ರಪಂಚದ ಹೊಸ ಜ್ಞಾನವನ್ನು ಅವಶ್ಯವಾಗಿ ಪ್ರತ್ಯಕ್ಷಗೊಳಿಸಬೇಕು. ತಂದೆಯು ಪ್ರೀತಿಯ ಸಾಗರನ ಸ್ವರೂಪ,
ಶಾಂತಿಯ ಸಾಗರನ ಸ್ವರೂಪವನ್ನು ಪ್ರತ್ಯಕ್ಷ ಮಾಡಲಾಯಿತು. ಆದರೆ ಜ್ಞಾನ ಸ್ವರೂಪ ಆತ್ಮ ಮತ್ತು ಜ್ಞಾನ
ಸಾಗರನು ತಂದೆಯಾಗಿದ್ದಾರೆ, ಈ ಹೊಸ ಜ್ಞಾನವನ್ನು ಯಾವ ವಿಧಿಯಿಂದ ಕೊಡುವುದು, ಅದಕ್ಕೀಗ ಯೋಜನೆಗಳು
ಕಡಿಮೆ ಮಾಡಿದ್ದೀರಿ. ಆ ಸಮಯವೂ ಬರುತ್ತದೆ, ಆಗ ಎಲ್ಲರ ಬಾಯಿಂದ ಈ ಶಬ್ಧವು ಬರುತ್ತದೆ - ಹೊಸ
ಪ್ರಪಂಚದ ಹೊಸ ಜ್ಞಾನವು ಇದೇ ಆಗಿದೆ. ಈಗಂತು ಚೆನ್ನಾಗಿದೆ ಎಂದಷ್ಟೇ ಹೇಳುತ್ತಾರೆ, ಹೊಸದು
ಎನ್ನುವುದಿಲ್ಲ. ನೆನಪಿನ ವಿಷಯವನ್ನು ಬಹಳ ಚೆನ್ನಾಗಿ ಪ್ರತ್ಯಕ್ಷ ಮಾಡಲಾಗಿದೆ ಆದ್ದರಿಂದ ಧರಣಿಯು
ಚೆನ್ನಾಗಿ ತಯಾರಾಗಿದೆ ಮತ್ತು ಧರಣಿಯನ್ನು ತಯಾರು ಮಾಡುವುದೂ ಸಹ ಮೊದಲ ಅವಶ್ಯಕ ಕಾರ್ಯವಾಗಿದೆ. ಏನು
ಮಾಡಲಾಯಿತು ಅದೂ ಬಹಳ ಒಳ್ಳೆಯದು ಮತ್ತು ಬಹಳ ಮಾಡಲಾಗಿದೆ, ತನು-ಮನ-ಧನವನ್ನು ಉಪಯೋಗ ಮಾಡಲಾಗಿದೆ.
ಇದಕ್ಕಾಗಿ ಬಾಪ್ದಾದಾರವರು ಶುಭಾಷಯಗಳನ್ನೂ (ಬೇಷ್) ಕೊಡುತ್ತಾರೆ.
ವಿದೇಶದ ಸೇವೆಯ ಆರಂಭದಲ್ಲಿ ಹೋಗಿದ್ದಾಗ ತ್ರಿಮೂರ್ತಿ ಚಿತ್ರದ ಬಗ್ಗೆ ತಿಳಿಸುವುದಂತು ಬಹಳ
ಕಷ್ಟವೆಂದು ತಿಳಿಯುತ್ತಿದ್ದಿರಿ! ಈಗ ಇದೇ ಚಿತ್ರದಲ್ಲಿಯೇ ಆಕರ್ಷಣೆಯಾಗುತ್ತಿದೆ. ಏಣಿ ಚಿತ್ರವನ್ನು
ಭಾರತದ ಕಥೆಯೆಂದು ತಿಳಿಯುತ್ತಿದ್ದರು ಆದರೆ ಈ ಚಿತ್ರದಿಂದಲೇ ವಿದೇಶದಲ್ಲಿ ಎಲ್ಲರೂ ಆಕರ್ಷಣೆ
ಆಗುತ್ತಾರೆ. ಈ ಹೊಸ ಮಾತನ್ನು ಯಾವ ವಿಧಿಯಿಂದ ತಿಳಿಸುವುದೆಂದು ಯೋಜನೆ ಮಾಡಲಾಯಿತೋ, ಹಾಗೆಯೇ ಈಗಲೂ
ಅನ್ವೇಷಣೆ ಮಾಡಿರಿ. ಇದಂತು ಮಾಡಲೇ ಬೇಕಾಗುತ್ತದೆ ಎಂದು ಯೋಚಿಸಬಾರದು. ಬಾಪ್ದಾದಾರವರಲ್ಲಿ ಕೇವಲ ಈ
ಲಕ್ಷ್ಯವಿದೆ - ನವೀನತೆಯ ಮಹಾನತೆಯ ಶಕ್ತಿಯನ್ನು ಧಾರಣೆ ಮಾಡಿಕೊಳ್ಳಬೇಕು, ಪ್ರಪಂಚದವರಿಗೆ
ತಿಳಿಸಬೇಕು ಆದರೆ ಪ್ರಪಂಚದ ಮಾತುಗಳಿಂದ ಗಾಬರಿಯಾಗ ಬಾರದೆನ್ನುವ ಮಾತನ್ನು ಮರೆಯಬಾರದು. ತಮ್ಮ
ವಿಧಿಯನ್ನು ಅನ್ವೇಷಣೆ ಮಾಡಿರಿ ಏಕೆಂದರೆ ತಾವು ಮಕ್ಕಳೇ ಅನ್ವೇಷಕರಾಗಿದ್ದೀರಿ, ಸೇವಾ ಯೋಜನೆಗಳನ್ನು
ಮಕ್ಕಳೇ ತಿಳಿದುಕೊಂಡಿದ್ದಾರೆ. ಲಕ್ಷ್ಯದಂತೆ ಯೋಜನೆಯೂ ಸಹ ಬಹಳ ಒಳ್ಳೆಯ ಯೋಜನೆಯಾಗಿ ಬಿಡುತ್ತದೆ
ಮತ್ತು ಸಫಲತೆಯಂತು ತಮ್ಮ ಜನ್ಮ ಸಿದ್ಧ ಅಧಿಕಾರವಂತು ಇದ್ದೇ ಇದೆ. ಆದ್ದರಿಂದ ನವೀನತೆಯನ್ನು
ಪ್ರತ್ಯಕ್ಷಗೊಳಿಸಿರಿ. ಯಾವುದೆಲ್ಲಾ ಜ್ಞಾನದ ಗುಹ್ಯ ಮಾತುಗಳಿವೆಯೋ, ತಮ್ಮ ಬಳಿ ಸ್ಪಷ್ಟಗೊಳಿಸುವ
ಬಹಳ ಒಳ್ಳೆಯ ವಿಧಿಯೂ ಇದೆ ಮತ್ತು ಸ್ಪಷ್ಟೀಕರಣವಿದೆ. ಒಂದೊಂದು ಪಾಯಿಂಟ್ನ್ನು ಲಾಜಿಕಲಿ (ಅರ್ಥವಾಗುವಂತೆ)
ಸ್ಪಷ್ಟಗೊಳಿಸಬಹುದು. ಇದಂತು ಕಲ್ಪನೆಯ ಮಾತುಗಳಲ್ಲ, ಯಥಾರ್ಥವಾದ ಮಾತುಗಳಾಗಿದೆ, ಇದರ ಅನುಭವವಿದೆ.
ಅನುಭವದ ಅಥಾರಿಟಿ, ಜ್ಞಾನದ ಅಥಾರಿಟಿ, ಸತ್ಯತೆಯ ಅಥಾರಿಟಿ..... ಎಷ್ಟೊಂದು ಅಥಾರಿಟಿಗಳಿವೆ!
ಅಂದಮೇಲೆ ಅಥಾರಿಟಿ ಹಾಗೂ ಸ್ನೇಹವೆರಡೂ ಒಟ್ಟೊಟ್ಟಿಗೆ ಕಾರ್ಯದಲ್ಲಿ ಉಪಯೋಗ ಮಾಡಿರಿ.
ಬಾಪ್ದಾದಾರವರು ಇದರಿಂದ ಖುಷಿಯಾಗಿದ್ದಾರೆ - ಭಲೆ ದೇಶದಲ್ಲಾಗಲಿ ಅಥವಾ ವಿದೇಶದಲ್ಲಾಗಲಿ ಪರಿಶ್ರಮ
ಪಟ್ಟು ಸೇವೆಯನ್ನು ಮಾಡುತ್ತಾ-ಮಾಡುತ್ತಾ, ಇಷ್ಟು ವೃದ್ಧಿಯನ್ನು ಪಡೆದುಕೊಂಡಿದ್ದಾರೆ ಹಾಗೂ ಇನ್ನೂ
ಮಾಡುತ್ತಿರುತ್ತಾರೆ. ದೇಶದಲ್ಲಿಯೂ ವ್ಯಕ್ತಿ ಹಾಗೂ ನಾಟಿಯನ್ನು ನೋಡಿ ಸೇವೆ ಮಾಡುವುದರಲ್ಲಿ
ಸಫಲತೆಯಿದೆ. ವಿದೇಶದಲ್ಲಿಯೂ ಸಹ ಇದೇ ವಿಧಿಯಿಂದ ಸಫಲತೆಯಾಗಿದೆ. ಮೊದಲು ಸಂಪರ್ಕದಲ್ಲಿ ತರುವ
ಸೇವೆಯು ಧರಣಿಯಾಗುತ್ತದೆ. ಸಂಪರ್ಕದಲ್ಲಿ ಬಂದ ನಂತರ ಸಂಬಂಧದಲ್ಲಿ ಕರೆ ತನ್ನಿರಿ, ಅವರನ್ನು
ಸಂಪರ್ಕದವರೆಗಷ್ಟೇ ಕರೆ ತಂದು ಬಿಡಬಾರದು. ಸಂಬಂಧದಲ್ಲಿ ಕರೆ ತಂದ ನಂತರ ಬುದ್ಧಿಯಿಂದ
ಸಮರ್ಪಿತರನ್ನಾಗಿ ಮಾಡಿಸುವುದು ಅಂತಿಮ ಸ್ಥಿತಿಯಾಗಿದೆ. ಸಂಪರ್ಕದಲ್ಲಿ ಕರೆ ತರುವುದೂ ಸಹ
ಅವಶ್ಯಕವಿದೆ, ನಂತರ ಸಂಬಂಧದಲ್ಲಿ ತರಬೇಕಾಗಿದೆ. ಸಂಬಂಧದಲ್ಲಿ ಬರುತ್ತಾ-ಬರುತ್ತಾ ಸಮರ್ಪಣಾ
ಬುದ್ಧಿಯವರಾಗಲಿ - ಬಾಬಾರವರೇನು ತಿಳಿಸಿದ್ದಾರೆ, ಅದೇ ಸತ್ಯವಾಗಿದೆ. ಇದನ್ನು ತಿಳಿದ ನಂತರ
ಪ್ರಶ್ನಿಸುವುದಿಲ್ಲ. ಇದಕ್ಕೇ ಹೇಳಲಾಗುತ್ತದೆ - ಸಮರ್ಪಣಾ ಬುದ್ಧಿ. ಇದರಲ್ಲಿ ಎಲ್ಲವೂ ಸ್ಪಷ್ಟ
ಅನುಭವವಾಗುತ್ತದೆ. ಈ ಲಕ್ಷ್ಯವನ್ನಿಡಿ - ಅವರನ್ನು ಸಮರ್ಪಣಾ ಬುದ್ಧಿಯವರೆಗೆ ಕರೆ ತರುವುದು
ಅವಶ್ಯಕವಿದೆ, ಹೀಗಾದಾಗಲೇ ಮೈಕ್ ತಯಾರಿ ಆಯಿತೆಂದು ಹೇಳಲಾಗುವುದು. ಮೈಕ್ ಧ್ವನಿಯೇನು ಮಾಡುತ್ತದೆ?
ಇವರ ಜ್ಞಾನವು ಚೆನ್ನಾಗಿದೆ ಎನ್ನುವುದಷ್ಟೇ ಅಲ್ಲ, ಇದು ಹೊಸ ಜ್ಞಾನವಾಗಿದೆ. ಇದೇ ಹೊಸ ಜ್ಞಾನವು
ಹೊಸ ಪ್ರಪಂಚವನ್ನು ತರುತ್ತದೆ ಎಂಬ ಧ್ವನಿಯುಂಟಾಗಲಿ - ಆಗಲೇ ಕುಂಭಕರ್ಣರು ಜಾಗೃತವಾಗುತ್ತಾರೆ
ಅಲ್ಲವೆ. ಇಲ್ಲದಿದ್ದರೆ ಕೇವಲ ಕಣ್ಣನ್ನು ತೆರೆಯುತ್ತಾರೆ- ಬಹಳ ಒಳ್ಳೆಯದು, ಬಹಳ ಒಳ್ಳೆಯದು ಎಂದು
ಹೇಳುತ್ತಾ, ಪುನಃ ಮಲಗಿ ಬಿಡುತ್ತಾರೆ. ಆದ್ದರಿಂದ ತಾವು ಸ್ವಯಂ ಯಾವ ರೀತಿ ಬಾಲಕರಿಂದ ಮಾಲೀಕರು
ಆಗಿದ್ದೀರಲ್ಲವೆ, ಹಾಗೆಯೇ ಅವರನ್ನೂ ತಯಾರು ಮಾಡಿರಿ. ಅವರನ್ನು ಪಾಪ! ಕೇವಲ ಸಾಧಾರಣ
ಪ್ರಜೆಗಳವರೆಗಷ್ಟೇ ಕರೆ ತರಬಾರದು, ಆದರೆ ರಾಜ್ಯಾಧಿಕಾರಿಯನ್ನಾಗಿ ಮಾಡಿರಿ. ಅದಕ್ಕಾಗಿ ಯಾವ
ವಿಧಿಯಿಂದ ಮಾಡಬೇಕು, ಯಾವುದರಿಂದ ಅವರು ಗೊಂದಲವೂ ಆಗಬಾರದು ಮತ್ತು ಸಮರ್ಪಣ ಬುದ್ಧಿಯವರೂ ಆಗಿ
ಬಿಡಬೇಕು, ಇದಕ್ಕಾಗಿ ಯೋಜನೆಯನ್ನು ತಯಾರು ಮಾಡಿರಿ. ಅದರಲ್ಲಿ ನವೀನತೆಯೆನಿಸಬೇಕು, ಗೊಂದಲದ
ಅನುಭವವನ್ನೂ ಮಾಡಬಾರದು. ಸ್ನೇಹ ಮತ್ತು ನವೀನತೆಯ ಅಥಾರಿಟಿಯ ಅನುಭವವಾಗಲಿ.
ಈಗಿನವರೆಗೂ ಯಾವ ಫಲಿತಾಂಶವಿತ್ತು, ಸೇವಾ ವಿಧಿ ಹಾಗೂ ಬ್ರಾಹ್ಮಣರ ವೃದ್ಧಿಯಿತ್ತೋ ಅದು ಬಹಳ
ಚೆನ್ನಾಗಿದೆ ಏಕೆಂದರೆ ಪ್ರಾರಂಭದಲ್ಲಿ ಬೀಜವನ್ನು ಗುಪ್ತವಾಗಿ ಇಡಲಾಗಿತ್ತು, ಅದೂ ಸಹ ಅವಶ್ಯಕವಿದೆ.
ಬೀಜವನ್ನು ಗುಪ್ತವಾಗಿಡಲಾಗುತ್ತದೆ, ಹೊರಗಿಡುವುದರಿಂದ ಫಲ ಬರುವುದಿಲ್ಲ. ಬೀಜವನ್ನು ಧರಣಿಯೊಳಗೆ
ಇಡಲಾಗುತ್ತದೆ ಆದರೆ ಅದು ಧರಣಿಯೊಳಗೇ ಉಳಿದುಕೊಳ್ಳಬಾರದು. ಹೊರಗೆ ಪ್ರತ್ಯಕ್ಷವಾಗಲಿ, ಫಲ
ಸ್ವರೂಪವಾಗಬೇಕು - ನಂತರದ ಸ್ಥಿತಿಯಾಗಿದೆ. ತಿಳಿಯಿತೆ? ಹೊಸದಾಗಿ ಮಾಡಬೇಕೆಂಬ ಲಕ್ಷ್ಯವನ್ನು
ಇಟ್ಟುಕೊಳ್ಳಿ, ಅದು ಈ ವರ್ಷದಲ್ಲಿಯೇ ಆಗಿ ಬಿಡಬೇಕು ಎಂಬಂತೆಯೂ ಅಲ್ಲ. ಆದರೆ ಲಕ್ಷ್ಯವು ಬೀಜವನ್ನೂ
ಹೊರಗೆ ಪ್ರತ್ಯಕ್ಷಗೊಳಿಸುತ್ತದೆ. ಇದರ ಬಗ್ಗೆ ಕಾರ್ಯಕ್ರಮದಲ್ಲಿ ಭಾಷಣ ಮಾಡುವುದನ್ನು
ಪ್ರಾರಂಭಿಸೋಣ ಎನ್ನುವುದೂ ಅಲ್ಲ, ಮೊದಲು ಸತ್ಯತೆಯ ಶಕ್ತಿಯ ಅನುಭವ ಮಾಡಿಸುವ ಭಾಷಣವನ್ನು
ಮಾಡಬೇಕಾಗುತ್ತದೆ. `ಕೊನೆಗೂ ಆ ದಿನ ಬಂದಿತು' - ಈ ಮಾತು ಎಲ್ಲರ ಮುಖದಿಂದ ಬರಲಿ. ಡ್ರಾಮಾದಲ್ಲಿ
ತೋರಿಸುತ್ತೀರಲ್ಲವೆ - ಎಲ್ಲಾ ಧರ್ಮದವರು ಒಟ್ಟಿಗೆ ಸೇರಿ ಹೇಳುತ್ತಾರೆ - ನಾವೆಲ್ಲವೂ ಒಂದು, ಒಬ್ಬ
ತಂದೆಯ ಮಕ್ಕಳು. ಇದೇ ರೀತಿ ಈಗ ಎಲ್ಲಾ ಧರ್ಮದವರೂ ಸೇರಿ ಪ್ರತ್ಯಕ್ಷವಾಗಿರುವ ವೇದಿಕೆಯಲ್ಲಿ ಒಂದೇ
ಧ್ವನಿಯಲ್ಲಿ ಹೇಳಲಿ - ಒಬ್ಬರೇ ತಂದೆ, ಒಂದೇ ಜ್ಞಾನವಾಗಿದೆ, ಒಂದೇ ಲಕ್ಷ್ಯವಿದೆ, ಒಂದೇ ಮನೆಯಾಗಿದೆ,
ಅದು ಇದೇ ಆಗಿದೆ, ಈಗ ಈ ಧ್ವನಿಯು ಮೊಳಗಲಿ. ಇಂತಹ ದೃಶ್ಯವು ಯಾವಾಗ ಬೇಹದ್ದಿನ ವೇದಿಕೆಯಲ್ಲಿ
ಪ್ರತ್ಯಕ್ಷವಾಗುವುದೋ ಆಗಲೇ ಪ್ರತ್ಯಕ್ಷತೆಯ ಧ್ವಜಾರೋಹಣ ಆಗುತ್ತದೆ ಮತ್ತು ಈ ಧ್ವಜದ ಮುಂದೆನಿಂತು
ಎಲ್ಲರೂ ಇದೇ ಹಾಡನ್ನು ಹಾಡುತ್ತಾರೆ- ಬಾಬಾ ಹಮಾರಾ ಎಂಬ ಈ ಶಬ್ಧವು ಎಲ್ಲರ ಬಾಯಿಂದ ಬರುತ್ತದೆ. ಈ
ರೀತಿಯಾದಾಗಲೇ ಪ್ರತ್ಯಕ್ಷ ರೂಪದಲ್ಲಿ ಶಿವರಾತ್ರಿಯನ್ನು ಆಚರಿಸುವುದು ಹೇಳಲಾಗುತ್ತದೆ. ಅಂಧಕಾರವು
ಸಮಾಪ್ತಿಯಾಗಿ ಗೋಲ್ಡನ್ ಮಾರ್ನಿಂಗ್ನ ದೃಶ್ಯವು ಕಾಣಿಸಿಕೊಳ್ಳುತ್ತದೆ, ಇದಕ್ಕೇ ಇಂದು ಮತ್ತು
ನಾಳೆಯ ಆಟ, ಇಂದು ಅಂಧಕಾರವಿದೆ, ನಾಳೆ ಸ್ವರ್ಣೀಮ ಪ್ರಭಾತ - ಇದಾಗಿದೆ ಅಂತಿಮ ಪರದೆ ಎಂದು
ಹೇಳಲಾಗುತ್ತದೆ. ತಿಳಿಯಿತೆ?
ಇನ್ನುಳಿದಂತೆ ಯೋಜನೆಯನ್ನೇನು ಮಾಡಿದ್ದೀರಿ, ಅದು ಚೆನ್ನಾಗಿದೆ. ಯೋಜನೆಯನ್ನೂ ಸಹ ಪ್ರತಿಯೊಂದು
ಸ್ಥಾನದ ಧರಣಿಯ ಅನುಸಾರವಾಗಿಯೇ ಮಾಡಬೇಕಾಗುತ್ತದೆ. ಒಂದುವೇಳೆ ಧರಣಿಯನುಸಾರ ಯಾವುದೇ ವ್ಯತ್ಯಾಸ
ಮಾಡಬೇಕಾಗುತ್ತದೆ ಎಂದರೂ ಪರವಾಗಿಲ್ಲ. ವಿವಿಧ ವರ್ಗದವರು ಎಲ್ಲರನ್ನೂ ತಯಾರು ಮಾಡಿ ಅವಶ್ಯವಾಗಿ
ಅಂತ್ಯದಲ್ಲಿ ಮಧುಬನ ಧರಣಿಯಲ್ಲಿ ಸ್ಟಾಂಪ್ ಹಾಕಿಸಬೇಕಾಗುತ್ತದೆ. ಪಾಸ್ಪೋರ್ಟ್ನಲ್ಲಿಯೂ ಸೀಲ್ ಹಾಕದೆ
(ಚೆಕಿಂಗ್) ಹೋಗುವುದಕ್ಕೆ ಬಿಡುವುದಿಲ್ಲ ಅಲ್ಲವೆ. ಅಂದಮೇಲೆ ಇಲ್ಲಿ ಮಧುಬನದಲ್ಲಿಯೂ ಸ್ಟಾಂಪ್/ಸೀಲ್
ಹಾಕಲಾಗುತ್ತದೆ.
ಇವರೆಲ್ಲರೂ ಸಮರ್ಪಿತರಾಗಿದ್ದಾರೆ, ಇವರೇನಾದರೂ ಸಮರ್ಪಿತರು ಆಗಿಲ್ಲದಿದ್ದರೆ ಸೇವೆಯಲ್ಲಿ
ನಿಮಿತ್ತರು ಹೇಗಾಗುತ್ತಿದ್ದರು! ಸಮರ್ಪಿತರಾಗಿದ್ದಾರೆ. ಆದ್ದರಿಂದಲೇ ಬ್ರಹ್ಮಾಕುಮಾರ/ಬ್ರಹ್ಮಾಕುಮಾರಿಯಾಗಿದ್ದು
ಸೇವೆಗಾಗಿ ನಿಮಿತ್ತರಾಗಿದ್ದೀರಿ. ಯಾರಾದರೂ ದೇಶದಲ್ಲಿ ಅಥವಾ ವಿದೇಶದಲ್ಲಿ ಕ್ರಿಶ್ಚಿಯನ್ ಕುಮಾರಿ
ಅಥವಾ ಬೌದ್ಧ-ಕುಮಾರಿಯಾಗಿದ್ದು ಸೇವೆಯನ್ನು ಮಾಡುವುದಿಲ್ಲವೇ? ಬಿ.ಕೆ. ಆಗಿದ್ದುಕೊಂಡು ಸೇವೆಯನ್ನು
ಮಾಡುತ್ತೀರಲ್ಲವೆ. ಅಂದಮೇಲೆ ಎಲ್ಲರೂ ಸಮರ್ಪಿತ ಬ್ರಾಹ್ಮಣರ ಪಟ್ಟಿಯಲ್ಲಿದ್ದೀರಿ, ಈ ರೀತಿ ಈಗ
ಅನ್ಯರನ್ನೂ ಮಾಡಬೇಕಾಗಿದೆ. ತಾವು ಮರುಜೀವಿ ಆಗಿದ್ದೀರಿ, ಬ್ರಾಹ್ಮಣರಾಗಿದ್ದೀರಿ. ಮಕ್ಕಳು ನನ್ನ
ಬಾಬಾ ಎಂದು ಹೇಳುತ್ತಾರೆಂದರೆ ಬಾಬಾ ಹೇಳುತ್ತಾರೆ – ನಿಮ್ಮವರಾಗಿ ಬಿಟ್ಟೆವು, ಅಂದಾಗ
ಸಮರ್ಪಿತರಾಗಿದಿರಲ್ಲವೆ. ಯಾರೇ ಭಲೆ ಪ್ರವೃತ್ತಿಯಲ್ಲಿ ಇರಬಹುದು, ಸೇವಾಕೇಂದ್ರದಲ್ಲಿಯೇ ಇರಬಹುದು
ಆದರೆ ಯಾರು ಹೃದಯದಿಂದ ನನ್ನ ಬಾಬಾ ಎಂದು ಹೇಳಿದರು, ಅವರನ್ನು ಬಾಬಾರವರು ತನ್ನವರನ್ನಾಗಿ
ಮಾಡಿಕೊಂಡರು. ಇದಂತು ಹೃದಯದ ವ್ಯಾಪಾರವಾಗಿದೆ, ಮುಖದ ಸ್ಥೂಲವಾದ ವ್ಯಾಪಾರವಲ್ಲ. ಸಮರ್ಪಿತನಾಗುವುದು
ಎಂದರೆ ಶ್ರೀಮತದ ಅನುಸಾರವಾಗಿ ಇರುವವರು. ಸಭೆಯಲ್ಲಿರುವವರೆಲ್ಲರೂ ಸಮರ್ಪಿತರಲ್ಲವೆ, ಆದ್ದರಿಂದ
ಭಾವಚಿತ್ರವನ್ನೂ ತೆಗೆದುಕೊಳ್ಳಲಾಗಿದೆ ಅಲ್ಲವೆ. ಈಗ ಚಿತ್ರದಲ್ಲಂತು ಬಂದು ಬಿಟ್ಟಿರೆಂದರೆ ಬದಲಾಗಲು
ಸಾಧ್ಯವಿಲ್ಲ. ಪರಮಾತ್ಮನ ಮನೆಯಲ್ಲಿ ಚಿತ್ರವಾಗಿ ಬಿಟ್ಟಿತು, ಇದೇನೂ ಕಡಿಮೆ ಭಾಗ್ಯವಲ್ಲ. ಇದು
ಸ್ಥೂಲವಾದ ಭಾವಚಿತ್ರವೂ ಅಲ್ಲ. ಆದರೆ ತಂದೆಯ ಹೃದಯದಲ್ಲಿ ಭಾವಚಿತ್ರವಾಯಿತು. ಒಳ್ಳೆಯದು.
ಸರ್ವ ಸತ್ಯತೆಯ ಅಥಾರಿಟಿಯಿರುವ ಶ್ರೇಷ್ಠಾತ್ಮರಿಗೆ, ಸರ್ವ ನವೀನತೆ ಹಾಗೂ ಮಹಾನತೆಯನ್ನು
ಪ್ರತ್ಯಕ್ಷಗೊಳಿಸುವ ಸತ್ಯ ಸೇವಾಧಾರಿ ಮಕ್ಕಳಿಗೆ ಸರ್ವ ಸ್ನೇಹ ಹಾಗೂ ಅಥಾರಿಟಿಯ ಬ್ಯಾಲೆನ್ಸ್
ಇಡುವಂತಹ ಮಕ್ಕಳಿಗೆ, ಪ್ರತೀ ಹೆಜ್ಜೆಯಲ್ಲಿ ತಂದೆಯ ಮೂಲಕ ಆಶೀರ್ವಾದಗಳನ್ನು ಪಡೆಯುವ ಅಧಿಕಾರಿ
ಶ್ರೇಷ್ಠಾತ್ಮರಿಗೆ, ಸರ್ವ ಸತ್ಯ ಅರ್ಥಾತ್ ಅವಿನಾಶಿ ರತ್ನಗಳಿಗೆ, ಅವಿನಾಶಿ ಪಾತ್ರವನ್ನು
ಅಭಿನಯಿಸುವ ಮಕ್ಕಳಿಗೆ, ಅವಿನಾಶಿ ಖಜಾನೆಯ ಬಾಲಕನಿಂದ ಮಾಲೀಕರಾಗುವವರಿಗೆ, ವಿಶ್ವ ರಚೈತ ಸತ್ಯ ತಂದೆ,
ಸತ್ಯ ಶಿಕ್ಷಕ, ಸದ್ಗುರುವಿನ ನೆನಪು-ಪ್ರೀತಿ ಹಾಗೂ ನಮಸ್ತೆ.
ವರದಾನ:
ಮನಸ್ಸಿನ ಮೌನದಿಂದ ಸೇವೆಯ ಹೊಸ ಅನ್ವೇಷಣೆಯನ್ನು ಮಾಡುವಂತಹ ಸಿದ್ಧಿ ಸ್ವರೂಪ ಭವ.
ಮೊದ ಮೊದಲು ಆರಂಭದ
ಸಮಯದಲ್ಲಿ ಯಾವ ರೀತಿ ಮೌನ ವ್ರತವನ್ನಿಟ್ಟಿದ್ದಿರಿ ಆಗೆಲ್ಲರೂ ಫ್ರೀ ಆಗಿದ್ದಿರಿ, ಸಮಯದ
ಉಳಿತಾಯವಾಗುತ್ತಿತ್ತು. ಅದೇ ರೀತಿ ಈಗಲೂ ಮನಸ್ಸಿನ ಮೌನವನ್ನಿಡಿ, ಹೀಗೆ ಮಾಡುವುದರಿಂದ
ಮನಸ್ಸಿನಲ್ಲಿ ವ್ಯರ್ಥ ಸಂಕಲ್ಪಗಳು ಬರಲೇಬಾರದು. ಹೇಗೆ ಮೌನದಲ್ಲಿ ಮುಖದಿಂದ ಧ್ವನಿಯೇ
ಹೊರಡುವುದಿಲ್ಲ, ಹಾಗೆಯೇ ವ್ಯರ್ಥ ಸಂಕಲ್ಪವೂ ಬರಬಾರದು - ಇದು ಮನಸ್ಸಿನ ಮೌನವಾಗಿದೆ. ಇದರಿಂದ ಸಮಯ
ಉಳಿತಾಯವಾಗುತ್ತದೆ. ಈ ಮನಸ್ಸಿನ ಮೌನದಿಂದ ಸೇವೆಯ ಹೊಸ ಅನ್ವೇಷಣೆಯು ಹೊರ ಬರುತ್ತದೆ, ಅದರಿಂದ
ಸಾಧನೆಯು ಕಡಿಮೆ ಮತ್ತು ಸಿದ್ಧಿಯು ಹೆಚ್ಚಿನದಾಗಿ ಪ್ರಾಪ್ತಿಯಾಗುತ್ತದೆ. ಹೇಗೆ ವಿಜ್ಞಾನದ ಸಾಧನಗಳು
ಸೆಕೆಂಡಿನಲ್ಲಿಯೇ ವಿಧಿಯನ್ನು ಪ್ರಾಪ್ತಿ ಮಾಡಿಸುತ್ತದೆಯೋ ಹಾಗೆಯೇ ಈ ಸೈಲೆನ್ಸ್ನ ಸಾಧನದ ಮೂಲಕ
ಸೆಕೆಂಡಿನಲ್ಲಿಯೇ ವಿಧಿಯು ಪ್ರಾಪ್ತಿಯಾಗುವುದು.
ಸ್ಲೋಗನ್:
ಸ್ವಯಂ ಯಾರು ಸಮರ್ಪಿತ ಸ್ಥಿತಿಯಲ್ಲಿ ಇರುತ್ತಾರೆಯೋ, ಅವರ ಮುಂದೆ ಸರ್ವರ ಸಹಯೋಗವೂ
ಸಮರ್ಪಿತವಾಗುತ್ತದೆ.
ಸೂಚನೆ:-
ಇಂದು ತಿಂಗಳಿನ ಮೂರನೇ ರವಿವಾರವಾಗಿದೆ, ರಾಜಯೋಗಿ ತಪಸ್ವಿ ಸಹೋದರ-ಸಹೋದರಿಯರೆಲ್ಲರೂ ಸಂಜೆ 6.30
ರಿಂದ 7.30 ಗಂಟೆಯವರೆಗೆ ವಿಶೇಷ ಯೋಗಾಭ್ಯಾಸದ ಸಮಯದಲ್ಲಿ, ತಮ್ಮ ಲೈಟ್ಮೈಟ್ ಸ್ವರೂಪದ
ಸ್ಥಿತಿಯಲ್ಲಿದ್ದು, ಭೃಕುಟಿಯ ಮಧ್ಯೆ ಬಾಪ್ದಾದಾರವರನ್ನು ಆಹ್ವಾನ ಮಾಡುತ್ತಾ, ಕಂಬೈಂಡ್ ಸ್ವರೂಪದ
ಅನುಭವ ಮಾಡಿರಿ ಹಾಗೂ ನಾಲ್ಕೂ ಕಡೆಯಲ್ಲಿ ಲೈಟ್ಮೈಟ್ನ ಕಿರಣಗಳನ್ನು ಹರಡಿಸುವ ಸೇವೆಯನ್ನು ಮಾಡಿರಿ.
ಮುರಳಿ ಪ್ರಶ್ನೆಗಳು -
1. ‘ಸತ್’ ಎನ್ನುವುದರ
ಎರಡು ಅರ್ಥಗಳೇನು?
2. ಸತ್ಯದ ಗಾಯನ ಏನಾಗಿದೆ?
3. ಸತ್ಯತೆಯ ಶಕ್ತಿಯುಳ್ಳವನು ಹೇಗಿರುತ್ತಾನೆ?
4. ಅಂತಿಮದಲ್ಲಿ ಶರೀರವನ್ನು ಬಿಟ್ಟಾಗ ಏನೆಂದು ಹೇಳುತ್ತಾರೆ?
5. ಸತ್ಯ ಜ್ಞಾನದ ಪ್ರತ್ಯಕ್ಷ ಸ್ವರೂಪವೆಂದು ಯಾವುದಕ್ಕೆ ಹೇಳಲಾಗುತ್ತದೆ?
6. ಫಾಲೋ ಫಾದರ ಮಾಡುವವನಲ್ಲಿ ಯಾವ ಮಾತುಗಳು ಸದಾ ಕಾಣಿಸುತ್ತದೆ?
7. ನಾಲೆಜ್ಫುಲ್ (ಜ್ಞಾನ ಪೂರ್ಣ) ಎಂದು ಯಾರಿಗೆ ಹೇಳಲಾಗುತ್ತದೆ?
8. ಯಾವ ಲಕ್ಷ್ಯವನ್ನು ನಾವು ಎಂದು ಮರೆಯಬಾರದು?
9. ಸರೆಂಡರ್ (ಸಮರ್ಪಣೆ) ಎಂದರೇನು?
10. ಅಥಾರಿಟಿ (ಅಧಿಕಾರಿ) ಯ ಮಾತುಗಳು ಏಕೆ ಪ್ರಿಯವೆನಿಸುತ್ತದೆ?