31.12.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನಿಮ್ಮದು ಇದು ಈಶ್ವರೀಯ ಮಿಷನರಿ ಆಗಿದೆ, ನೀವು ಎಲ್ಲರನ್ನು ತಂದೆಯವರನ್ನಾಗಿ ಮಾಡಿ ಅವರಿಂದ ಬೇಹದ್ದಿನ ಆಸ್ತಿಯನ್ನು ಕೊಡಿಸುತ್ತೀರಿ.

ಪ್ರಶ್ನೆ:
ಕರ್ಮೇಂದ್ರಿಯಗಳ ಚಂಚಲತೆಯು ಯಾವಾಗ ಸಮಾಪ್ತಿಯಾಗುವುದು?

ಉತ್ತರ:
ಯಾವಾಗ ನಿಮ್ಮ ಸ್ಥಿತಿಯು ಸತೋದವರೆಗೆ ತಲುಪುವುದೋ ಅರ್ಥಾತ್ ಯಾವಾಗ ಆತ್ಮವು ತ್ರೇತಾದ ಸತೋ ಸ್ಥಿತಿಯವರೆಗೆ ತಲುಪುವುದೋ ಆಗ ಕರ್ಮೇಂದ್ರಿಯಗಳ ಚಂಚಲತೆಯು ನಿಂತು ಹೋಗುವುದು. ಈಗ ನಿಮ್ಮದು ರಿಟರ್ನ್ ಜರ್ನಿಯಾಗಿದೆ ಆದ್ದರಿಂದ ಕರ್ಮೇಂದ್ರಿಯಗಳನ್ನೂ ವಶದಲ್ಲಿಟ್ಟುಕೊಳ್ಳಬೇಕಾಗಿದೆ. ಆತ್ಮವು ಪತಿತವಾಗುವಂತಹ ಯಾವುದೇ ಕರ್ಮವನ್ನು ಮುಚ್ಚಿಟ್ಟುಕೊಂಡು ಮಾಡಬಾರದು. ಅವಿನಾಶಿ ಸರ್ಜನ್ ನಿಮಗೆ ಯಾವ ಪತ್ಯವನ್ನು ತಿಳಿಸುತ್ತಿದ್ದಾರೆಯೋ ಅದರಂತೆಯೇ ನಡೆಯುತ್ತಾ ಇರಿ.

ಗೀತೆ:
ಮುಖವನ್ನು ನೋಡಿಕೋ ಪ್ರಾಣಿ…......

ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಿದ್ದಾರೆ. ಕೇವಲ ನೀವು ಮಕ್ಕಳಿಗಷ್ಟೇ ಅಲ್ಲ ಯಾರೆಲ್ಲಾ ಆತ್ಮಿಕ ಮಕ್ಕಳು ಪ್ರಜಾಪಿತ ಬ್ರಹ್ಮಾ ಮುಖ ವಂಶಾವಳಿಯಾಗಿದ್ದಾರೆಯೋ ಅವರೆಲ್ಲರೂ ತಿಳಿದುಕೊಂಡಿದ್ದಾರೆ. ನಾವು ಬ್ರಾಹ್ಮಣರಿಗೇ ತಂದೆಯು ತಿಳಿಸುತ್ತಾರೆ ಎಂದು. ಮೊದಲು ನೀವು ಶೂದ್ರರಾಗಿದ್ದಿರಿ ನಂತರ ಬಂದು ಬ್ರಾಹ್ಮಣರಾಗಿದ್ದೀರಿ. ತಂದೆಯು ವರ್ಣಗಳ ಲೆಕ್ಕವನ್ನೂ ತಿಳಿಸಿದ್ದಾರೆ. ಪ್ರಪಂಚದಲ್ಲಿ ವರ್ಣಗಳನ್ನೂ ಸಹ ತಿಳಿದುಕೊಂಡಿಲ್ಲ ಕೇವಲ ಗಾಯನವಿದೆ. ನೀವೀಗ ಬ್ರಾಹ್ಮಣ ವರ್ಣದವರಾಗಿದ್ದೀರಿ ನಂತರ ದೇವತಾ ವರ್ಣದವರಾಗುತ್ತೀರಿ. ವಿಚಾರ ಮಾಡಿ – ಈ ಮಾತು ಸರಿಯೇ? ಜಡ್ಜ್ ಯುವರ್ ಸೆಲ್ಫ್ (ನಿಮ್ಮನ್ನು ನೀವು ಕೇಳಿಕೊಳ್ಳಿ) ನನ್ನ ಮಾತನ್ನು ಕೇಳಿ ಮತ್ತು ಪರಿಶೀಲನೆ ಮಾಡಿಕೊಳ್ಳಿ. ಜನ್ಮ-ಜನ್ಮಾಂತರದಿಂದ ಯಾವ ಶಾಸ್ತ್ರಗಳನ್ನು ಕೇಳಿದ್ದೀರಿ ಮತ್ತು ಜ್ಞಾನ ಸಾಗರ ತಂದೆಯು ಏನನ್ನು ತಿಳಿಸಿದ್ದಾರೆಯೋ ಅದರ ಹೋಲಿಕೆ ಮಾಡಿ – ಯಾವುದು ಸರಿಯಾಗಿದೆ? ಬ್ರಾಹ್ಮಣ ಧರ್ಮ ಅಥವಾ ಕುಲವನ್ನು ಸಂಪೂರ್ಣ ಮರೆತು ಹೋಗಿದ್ದಾರೆ. ನಿಮ್ಮ ಬಳಿ ವಿರಾಟ ರೂಪದ ಚಿತ್ರವು ಸರಿಯಾಗಿ ಮಾಡಲ್ಪಟ್ಟಿದೆ – ಇದರ ಬಗ್ಗೆ ತಿಳಿಸಲಾಗುತ್ತದೆ. ಬಾಕಿ ಇಷ್ಟೊಂದು ಭುಜಗಳ ಯಾವ ಚಿತ್ರವನ್ನು ಮಾಡಿದ್ದಾರೆ ಮತ್ತು ದೇವಿಯರಿಗೆ ಆಯುಧ ಇತ್ಯಾದಿಗಳನ್ನು ತೋರಿಸಿದ್ದಾರೆಯೋ ಇದೆಲ್ಲವೂ ತಪ್ಪಾಗಿದೆ. ಇವು ಭಕ್ತಿಮಾರ್ಗದ ಚಿತ್ರಗಳಾಗಿವೆ. ಈ ಕಣ್ಣುಗಳಿಂದ ಎಲ್ಲರೂ ನೋಡುತ್ತಾರೆ ಆದರೆ ತಿಳಿದುಕೊಳ್ಳುವುದಿಲ್ಲ. ಯಾರ ಬಗ್ಗೆಯೂ ಗೊತ್ತಿಲ್ಲ. ಈಗ ನೀವು ಮಕ್ಕಳಿಗೆ ತಮ್ಮ ಆತ್ಮದ ಬಗ್ಗೆ ತಿಳಿದಿದೆ ಮತ್ತು 84 ಜನ್ಮಗಳ ಬಗ್ಗೆಯೂ ಅರ್ಥವಾಗಿದೆ. ಹೇಗೆ ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆಯೋ ಹಾಗೆಯೇ ನೀವು ಅನ್ಯರಿಗೂ ತಿಳಿಸಬೇಕಾಗಿದೆ. ಶಿವ ತಂದೆಯಂತೂ ಎಲ್ಲರ ಬಳಿಯೂ ಹೋಗುವುದಿಲ್ಲ ಅಂದಾಗ ಅವಶ್ಯವಾಗಿ ತಂದೆಗೆ ಸಹಯೋಗಿಗಳು ಬೇಕಲ್ಲವೆ ಆದ್ದರಿಂದ ನಿಮ್ಮದು ಈಶ್ವರೀಯ ಮೆಷಿನ್ ಆಗಿದೆ. ನೀವು ಎಲ್ಲರನ್ನು ಈಶ್ವರ ತಂದೆಯವರನ್ನಾಗಿ ಮಾಡುತ್ತೀರಿ. ತಿಳಿಸುತ್ತೀರಿ – ಅವರು ನಾವಾತ್ಮರ ಬೇಹದ್ದಿನ ತಂದೆಯಾಗಿದ್ದಾರೆ, ಅವರಿಂದ ಬೇಹದ್ದಿನ ಆಸ್ತಿಯು ಸಿಗುವುದು. ಹೇಗೆ ಲೌಕಿಕ ತಂದೆಯನ್ನು ನೆನಪು ಮಾಡಲಾಗುತ್ತದೆ, ಆದರೆ ಅವರಿಗಿಂತಲೂ ಹೆಚ್ಚು ಪಾರಲೌಕಿಕ ತಂದೆಯನ್ನು ನೆನಪು ಮಾಡಬೇಕಾಗುತ್ತದೆ. ಲೌಕಿಕ ತಂದೆಯಂತೂ ಅಲ್ಪಕಾಲಕ್ಕಾಗಿ ಸುಖ ಕೊಡುತ್ತಾರೆ, ಬೇಹದ್ದಿನ ತಂದೆಯು ಬೇಹದ್ದಿನ ಸುಖ ಕೊಡುತ್ತಾರೆ. ಈಗ ನೀವಾತ್ಮರಿಗೆ ಈ ಜ್ಞಾನ ಸಿಗುತ್ತದೆ. ಈಗ ನೀವು ತಿಳಿದುಕೊಂಡಿದ್ದೀರಿ – ಮೂವರು ತಂದೆಯರಿದ್ದಾರೆ, ಲೌಕಿಕ, ಪಾರಲೌಕಿಕ, ಅಲೌಕಿಕ. ಪಾರಲೌಕಿಕ ತಂದೆಯು ಅಲೌಕಿಕ ತಂದೆಯ ಮೂಲಕ ನಿಮಗೆ ತಿಳಿಸುತ್ತಿದ್ದಾರೆ. ಈ ತಂದೆಯನ್ನು ಯಾರೂ ಅರಿತುಕೊಂಡಿಲ್ಲ. ಬ್ರಹ್ಮನ ಚರಿತ್ರೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ಅವರ ಕರ್ತವ್ಯವನ್ನೂ ಅರಿತುಕೊಂಡಿಲ್ಲವೆ. ಕೃಷ್ಣ ಮತ್ತು ಶಿವನ ಮಹಿಮೆಯನ್ನು ಹಾಡುತ್ತಾರೆ ಆದರೆ ಬ್ರಹ್ಮನ ಮಹಿಮೆಯೆಲ್ಲಿದೆ? ನಿರಾಕಾರ ತಂದೆಗೆ ಅಮೃತವನ್ನು ಕೊಡಲು ಅವಶ್ಯವಾಗಿ ಮುಖವಂತೂ ಬೇಕಲ್ಲವೆ. ಭಕ್ತಿಮಾರ್ಗದಲ್ಲಿ ತಂದೆಯನ್ನು ಎಂದೂ ಯಥಾರ್ಥ ರೀತಿಯಿಂದ ನೆನಪು ಮಾಡುವುದಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ, ಇದು ಶಿವ ತಂದೆಯ ರಥವಾಗಿದೆ. ರಥಕ್ಕೂ ಶೃಂಗಾರ ಮಾಡುತ್ತಾರಲ್ಲವೆ. ಹೇಗೆ ಮಹಮ್ಮದರ ಕುದುರೆಯನ್ನು ಶೃಂಗರಿಸುತ್ತಾರೆ. ನೀವು ಮಕ್ಕಳು ಎಷ್ಟು ಚೆನ್ನಾಗಿ ಮನುಷ್ಯರಿಗೆ ತಿಳಿಸುತ್ತೀರಿ, ನೀವು ಎಲ್ಲರ ಮಹಿಮೆ ಮಾಡುತ್ತೀರಿ. ಹೇಳುತ್ತೀರಿ - ನೀವು ಈ ದೇವತೆಗಳಾಗಿದ್ದಿರಿ ನಂತರ 84 ಜನ್ಮಗಳನ್ನು ತೆಗೆದುಕೊಂಡು ತಮೋಪ್ರಧಾನರಾಗಿದ್ದೀರಿ. ಈಗ ಮತ್ತೆ ಸತೋಪ್ರಧಾನರಾಗಬೇಕಾಗಿದೆ, ಅದಕ್ಕಾಗಿ ಯೋಗವು ಬೇಕು ಆದರೆ ಅದನ್ನು ಕೆಲವರು ಬಹಳ ಕಷ್ಟವೆಂದು ತಿಳಿಯುತ್ತಾರೆ. ಇದು ಅರ್ಥವಾಗಿ ಬಿಟ್ಟರೆ ಬಹಳ ಖುಷಿಯ ನಶೆಯೇರುವುದು. ತಿಳಿಸಿ ಕೊಡುವವರಿಗೆ ಇನ್ನೂ ಹೆಚ್ಚು ನಶೆಯೇರುವುದು. ಬೇಹದ್ದಿನ ತಂದೆಯ ಪರಿಚಯ ಕೊಡುವುದು ಕಡಿಮೆ ಮಾತೇನು! ಆದರೆ ಮನುಷ್ಯರು ತಿಳಿದುಕೊಳ್ಳುವುದಿಲ್ಲ. ಬೇಹದ್ದಿನ ತಂದೆಯ ಜೀವನ ಕಥೆಯನ್ನು ತಿಳಿಸಲು ಹೇಗೆ ಸಾಧ್ಯವೆಂದು ಹೇಳುತ್ತಾರೆ.

ತಂದೆಯು ತಿಳಿಸುತ್ತಾರೆ – ಮಕ್ಕಳೇ, ಪಾವನರಾಗಿ. ಹೇ ಪತಿತ-ಪಾವನ ಬನ್ನಿ ಎಂದು ನೀವು ಕರೆಯುತ್ತಿದ್ದಿರಲ್ಲವೆ. ಗೀತೆಯಲ್ಲಿಯೂ ಮನ್ಮನಾಭವ ಶಬ್ಧವಿದೆ ಆದರೆ ಅದರ ತಿಳುವಳಿಕೆಯು ಯಾರ ಬಳಿಯೂ ಇಲ್ಲ. ತಂದೆಯು ಆತ್ಮದ ಜ್ಞಾನವನ್ನು ಎಷ್ಟು ಸ್ಪಷ್ಟ ಮಾಡಿ ತಿಳಿಸುತ್ತಾರೆ. ಯಾವುದೇ ಶಾಸ್ತ್ರಗಳಲ್ಲಿ ಈ ಮಾತುಗಳಿಲ್ಲ. ಭಲೆ ಆತ್ಮವು ಬಿಂದುವಾಗಿ, ಭೃಕುಟಿಯ ಮಧ್ಯದಲ್ಲಿ ನಕ್ಷತ್ರ ಸಮಾನವಾಗಿದೆ ಎಂದು ಹೇಳುತ್ತಾರೆ ಆದರೆ ಯಥಾರ್ಥ ರೀತಿಯಿಂದ ಯಾರ ಬುದ್ಧಿಯಲ್ಲಿಯೂ ಇಲ್ಲ. ಅದನ್ನು ಅರಿತುಕೊಳ್ಳಬೇಕಾಗಿದೆ. ಕಲಿಯುಗದಲ್ಲಿ ಎಲ್ಲರೂ ಅಸತ್ಯ ಮನುಷ್ಯರಿದ್ದಾರೆ, ಸತ್ಯಯುಗದಲ್ಲಿ ಸತ್ಯವಂತರಾಗಿರುತ್ತಾರೆ. ಭಕ್ತಿಮಾರ್ಗದಲ್ಲಿ ಮನುಷ್ಯರು ಇವೆಲ್ಲವೂ ಈಶ್ವರನನ್ನು ಮಿಲನ ಮಾಡುವ ಮಾರ್ಗವಾಗಿದೆ ಎಂದು ತಿಳಿಯುತ್ತಾರೆ. ಆದ್ದರಿಂದ ನೀವು ಮೊದಲು ಇಲ್ಲಿಗೆ ಏಕೆ ಬಂದಿದ್ದೀರಿ? ಎಂದು ಫಾರ್ಮನ್ನು ತುಂಬಿಸಿ. ಇದಕ್ಕಿಂತಲೂ ನೀವು ಬೇಹದ್ದಿನ ತಂದೆಯ ಪರಿಚಯ ಕೊಡಬೇಕಾಗಿದೆ. ಆತ್ಮದ ತಂದೆ ಯಾರು? ಎಂದು ನೀವು ಕೇಳುತ್ತೀರಿ. ಸರ್ವವ್ಯಾಪಿ ಎಂದು ಹೇಳುವುದರಿಂದ ಯಾವುದೇ ಅರ್ಥವೇ ಬರುವುದಿಲ್ಲ. ಎಲ್ಲರ ತಂದೆ ಯಾರು? ಇದು ಮುಖ್ಯ ಮಾತಾಗಿದೆ. ತಮ್ಮ-ತಮ್ಮ ಮನೆಯಲ್ಲಿಯೂ ನೀವು ತಿಳಿಸಬಲ್ಲಿರಿ. ಏಣಿ, ತ್ರಿಮೂತ್ರಿ, ಕಲ್ಪವೃಕ್ಷ – ಈ ಒಂದೆರಡು ಮುಖ್ಯ ಚಿತ್ರಗಳು ಬಹಳ ಅತ್ಯವಶ್ಯಕವಾಗಿದೆ. ಕಲ್ಪವೃಕ್ಷದ ಚಿತ್ರದಿಂದ ಎಲ್ಲಾ ಧರ್ಮದವರೂ ಸಹ ಅರಿತುಕೊಳ್ಳುತ್ತಾರೆ - ನಮ್ಮ ಧರ್ಮವು ಯಾವಾಗ ಆರಂಭವಾಯಿತು? ನಾವು ಈ ಲೆಕ್ಕದಿಂದ ಸ್ವರ್ಗದಲ್ಲಿ ಹೋಗಲು ಸಾಧ್ಯವೆ? ಎಂದು. ಯಾರು ಕೊನೆಯಲ್ಲಿ ಬರುವರೋ ಅವರು ಸ್ವರ್ಗದಲ್ಲಿ ಹೋಗಲು ಸಾಧ್ಯವಿಲ್ಲ ಬಾಕಿ ಶಾಂತಿಧಾಮದಲ್ಲಿ ಹೋಗುತ್ತಾರೆ. ವೃಕ್ಷದ ಚಿತ್ರದಿಂದಲೂ ಬಹಳ ಸ್ಪಷ್ಟವಾಗುತ್ತದೆ. ಯಾವ-ಯಾವ ಧರ್ಮಗಳು ಕೊನೆಯಲ್ಲಿ ಬಂದಿವೆಯೋ ಆ ಧರ್ಮದ ಆತ್ಮಗಳು ಅವಶ್ಯವಾಗಿ ಮೇಲೆ ಹೋಗಿ ವಿರಾಜಮಾನವಾಗುತ್ತಾರೆ. ನಿಮ್ಮ ಬುದ್ಧಿಯಲ್ಲಿ ಇಡೀ ತಳಹದಿಯನ್ನು ಹಾಕಲಾಗುತ್ತದೆ. ತಂದೆಯು ತಿಳಿಸುತ್ತಾರೆ – ಆದಿ ಸನಾತನ ದೇವಿ-ದೇವತಾ ಧರ್ಮದ ಸಸಿಯಂತೂ ನಾಟಿಯಾಯಿತು ಆದರೆ ವೃಕ್ಷದ ಎಲೆಗಳನ್ನೂ ಸಹ ನೀವು ತಯಾರು ಮಾಡಬೇಕಾಗಿದೆ. ಎಲೆಗಳಿಲ್ಲದೆ ವೃಕ್ಷವಿರುವುದಿಲ್ಲ. ಆದ್ದರಿಂದ ತಂದೆಯು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳಲು ಪುರುಷಾರ್ಥ ಮಾಡಿಸುತ್ತಿರುತ್ತಾರೆ. ಅನ್ಯ ಧರ್ಮದವರಿಗೆ ಎಲೆಗಳನ್ನು ತಯಾರು ಮಾಡಬೇಕಾಗಿಲ್ಲ. ಅವರಂತೂ ಆ ಧರ್ಮಪಿತರ ಹಿಂದೆ ಮೇಲಿಂದ ಬರುತ್ತಾರೆ, ತಳಹದಿಯನ್ನು ಹಾಕುತ್ತಾರೆ ಮತ್ತೆ ಎಲೆಗಳು ಅವರ ಹಿಂದೆ ಮೇಲಿನಿಂದ ಬರತೊಡಗುತ್ತಾರೆ. ಆದರೆ ನೀವು ವೃಕ್ಷದ ವೃದ್ಧಿಗಾಗಿ ಈ ಪ್ರದರ್ಶನಿ ಮುಂತಾದುವುಗಳನ್ನು ಮಾಡುತ್ತೀರಿ. ಇದರಿಂದ ಎಲೆಗಳು ಹೊರಡುತ್ತವೆ ಮತ್ತೆ ಬಿರುಗಾಳಿ ಬಂದರೆ ಬಿದ್ದು ಹೋಗುತ್ತವೆ, ಬಾಡಿ ಹೋಗುತ್ತವೆ. ಈ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ, ಇದರಲ್ಲಿ ಯುದ್ಧದ ಯಾವುದೇ ಮಾತಿಲ್ಲ. ಕೇವಲ ತಂದೆಯನ್ನು ನೆನಪು ಮಾಡಬೇಕು ಮತ್ತು ಮಾಡಿಸಬೇಕಾಗಿದೆ. ನೀವು ಎಲ್ಲರಿಗೆ ಹೇಳುತ್ತೀರಿ – ಮತ್ತ್ಯಾವುದೆಲ್ಲಾ ರಚನೆಯಿದೆಯೋ ಅದೆಲ್ಲವನ್ನೂ ಬಿಡಿ. ರಚನೆಯಿಂದ ಎಂದೂ ಆಸ್ತಿಯು ಸಿಗಲು ಸಾಧ್ಯವಿಲ್ಲ. ರಚಯಿತ ತಂದೆಯನ್ನೇ ನೆನಪು ಮಾಡಬೇಕಾಗಿದೆ, ಮತ್ತ್ಯಾರ ನೆನಪೂ ಬರಬಾರದು. ತಂದೆಯ ಮಕ್ಕಳಾಗಿ ಜ್ಞಾನದಲ್ಲಿ ಬಂದು ಮತ್ತೆ ಒಂದುವೇಳೆ ಇಂತಹ ಯಾವುದೇ ಕರ್ಮ ಮಾಡುತ್ತಾರೆಂದರೆ ಅದರ ಹೊರೆಯು ತಲೆಯ ಮೇಲೆರುತ್ತದೆ. ತಂದೆಯು ಪಾವನರನ್ನಾಗಿ ಮಾಡಲು ಬರುತ್ತಾರೆ ಮತ್ತೆ ಒಂದುವೇಳೆ ಅಂತಹ ಕೆಲಸವನ್ನು ಮಾಡಿದರೆ ಇನ್ನೂ ಪತಿತರಾಗಿ ಬಿಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಮಕ್ಕಳೇ, ತಮಗೆ ನಷ್ಟವಾಗುವಂತಹ ಯಾವುದೇ ಕೆಲಸವನ್ನು ಮಾಡಬೇಡಿ. ತಂದೆಯ ನಿಂದನೆಯಾಗುತ್ತದೆಯಲ್ಲವೆ. ವಿಕರ್ಮಗಳು ಹೆಚ್ಚಾಗುವಂತಹ ಕರ್ಮವನ್ನು ಮಾಡಬೇಡಿ. ಪತ್ಯವನ್ನೂ ಇಡಬೇಕಾಗಿದೆ. ಔಷಧಿಯನ್ನು ಕೊಡುವಾಗಲು ಪತ್ಯವನ್ನಿಡಲಾಗುತ್ತದೆ. ಈ ಹುಳಿ ಇತ್ಯಾದಿಯನ್ನು ತಿನ್ನಬಾರದೆಂದು ವೈದ್ಯರು ಹೇಳಿದರೆ ಅದನ್ನು ಪಾಲಿಸಬೇಕು. ಕರ್ಮೇಂದ್ರಿಯಗಳನ್ನು ವಶ ಮಾಡಿಕೊಳ್ಳಬೇಕಾಗಿದೆ. ಒಂದುವೇಳೆ ಮುಚ್ಚಿಟ್ಟುಕೊಂಡು ತಿನ್ನುತ್ತಿದ್ದರೆ ಮತ್ತೆ ಆ ಔಷಧಿಯ ಪ್ರಭಾವ ಬೀರುವುದಿಲ್ಲ. ಅದಕ್ಕೇ ಆಸಕ್ತರೆಂದು ಹೇಳಿದ್ದಾರೆ. ತಂದೆಯು ಮಕ್ಕಳೇ, ಇದನ್ನು ಮಾಡಬೇಡಿ ಎಂದು ಶಿಕ್ಷಣ ಕೊಡುತ್ತಾರೆ. ಸರ್ಜನ್ ಅಲ್ಲವೆ. ಬಾಬಾ, ಮನಸ್ಸಿನಲ್ಲಿ ಬಹಳ ಸಂಕಲ್ಪಗಳು ಬರುತ್ತವೆಯೆಂದು ಬರೆಯುತ್ತಾರೆ. ಮಕ್ಕಳೇ, ಎಚ್ಚರಿಕೆಯಿಂದಿರಬೇಕಾಗಿದೆ. ಕೆಟ್ಟ ಸ್ವಪ್ನಗಳು ಮನಸ್ಸಿನಲ್ಲಿ ಸಂಕಲ್ಪ ಇತ್ಯಾದಿಗಳು ಬಹಳ ಬರುತ್ತವೆ, ಇದಕ್ಕೆ ಹೆದರಬಾರದು. ಸತ್ಯ-ತ್ರೇತಾಯುಗದಲ್ಲಿ ಈ ಮಾತುಗಳು ಬರುವುದಿಲ್ಲ. ನೀವು ಎಷ್ಟು ಸಮೀಪವಾಗತೊಡಗುವಿರೋ, ಸತೋ ಸ್ಥಿತಿಯವರೆಗೆ ತಲುಪುವಿರೋ ಆಗ ಕರ್ಮೇಂದ್ರಿಯಗಳ ಚಂಚಲತೆಯು ನಿಂತು ಹೋಗುವುದು. ಕರ್ಮೇಂದ್ರಿಯಗಳು ವಶವಾಗುತ್ತವೆ. ಸತ್ಯ-ತ್ರೇತಾಯುಗದಲ್ಲಿ ವಶದಲ್ಲಿತ್ತಲ್ಲವೆ. ಯಾವಾಗ ಆ ತ್ರೇತಾದ ಸ್ಥಿತಿಯನ್ನು ತಲುಪುವಿರೋ ಆಗ ವಶವಾಗುತ್ತದೆ. ಮತ್ತೆ ಸತ್ಯಯುಗದ ಸ್ಥಿತಿಯಲ್ಲಿ ಬಂದಾಗ ಸತೋಪ್ರಧಾನರಾಗಿ ಬಿಡುತ್ತೀರಿ. ಆಗ ಎಲ್ಲಾ ಕರ್ಮೇಂದ್ರಿಯಗಳು ಪೂರ್ಣ ವಶವಾಗುತ್ತವೆ. ಕರ್ಮೇಂದ್ರಿಯಗಳು ವಶದಲ್ಲಿತ್ತಲ್ಲವೆ. ಇದೇನೂ ಹೊಸ ಮಾತಲ್ಲ. ಇಂದು ಕರ್ಮೇಂದ್ರಿಯಗಳಿಗೆ ವಶವಾಗಿದ್ದೀರಿ, ನಾಳೆ ಮತ್ತೆ ಪುರುಷಾರ್ಥ ಮಾಡಿ ಕರ್ಮೇಂದ್ರಿಯಗಳನ್ನು ವಶ ಪಡಿಸಿಕೊಳ್ಳುತ್ತೀರಿ. 84 ಜನ್ಮಗಳಲ್ಲಿ ಇಳಿಯುತ್ತಾ ಬಂದಿದ್ದೀರಿ, ಈಗ ಹಿಂತಿರುಗಬೇಕಾಗಿದೆ. ಎಲ್ಲರೂ ಸತೋಪ್ರಧಾನ ಸ್ಥಿತಿಯಲ್ಲಿ ಹೋಗಬೇಕಾಗಿದೆ, ನಾವು ಎಷ್ಟು ಪಾಪ, ಎಷ್ಟು ಪುಣ್ಯ ಮಾಡಿದ್ದೇವೆಂದು ತಮ್ಮ ಚಾರ್ಟನ್ನು ನೋಡಿಕೊಳ್ಳಿ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ತಮೋಪ್ರಧಾನ ಸ್ಥಿತಿಯಿಂದ ಸತೋ ಸ್ಥಿತಿಯವರೆಗೆ ತಲುಪಿದಾಗ ಕರ್ಮೇಂದ್ರಿಯಗಳು ವಶವಾಗುತ್ತವೆ. ಆಗ ನಿಮಗೆ ಇನ್ನು ಯಾವುದೇ ಬಿರುಗಾಳಿಗಳು ಬರುವುದಿಲ್ಲವೆಂಬುದು ಅನುಭವವಾಗುವುದು. ಆ ಸ್ಥಿತಿಯೂ ಬರುವುದು ಮತ್ತೆ ಸತೋಪ್ರಧಾನತೆಯಲ್ಲಿ ಹೊರಟು ಹೋಗುವಿರಿ. ಪರಿಶ್ರಮ ಪಟ್ಟು ಪಾವನವಾಗುವುದರಿಂದ ಖುಷಿಯ ನಶೆಯೂ ಏರುವುದು. ಯಾರೇ ಬಂದರೂ ಸಹ ಅವರಿಗೆ ತಿಳಿಸಬೇಕು - ಹೇಗೆ ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ? ಯಾರು 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರೇ ತಿಳಿದುಕೊಳ್ಳುತ್ತಾರೆ ಮತ್ತೆ ಹೇಳುತ್ತಾರೆ - ನಾವೀಗ ತಂದೆಯನ್ನು ನೆನಪು ಮಾಡಿ ಮಾಲೀಕರಾಗಬೇಕಾಗಿದೆ. 84 ಜನ್ಮಗಳನ್ನು ಅರಿತುಕೊಳ್ಳದೇ ಇದ್ದರೆ ಬಹುಷಃ ಅವರು ರಾಜಧಾನಿಗೆ ಮಾಲೀಕರಾಗಿರುವುದಿಲ್ಲ. ನಾವಂತೂ ಧೈರ್ಯ ತರಿಸುತ್ತೇವೆ, ಒಳ್ಳೆಯ ಮಾತನ್ನು ತಿಳಿಸುತ್ತೇವೆ. ನೀವು ಕೆಳಗಿಳಿಯುತ್ತೀರಿ, ಯಾರು 84 ಜನ್ಮಗಳನ್ನು ತೆಗೆದುಕೊಂಡಿರುವರೋ ಅವರಿಗೆ ಬಹಳ ಬೇಗನೆ ಸ್ಮೃತಿಗೆ ಬರುವುದು. ತಂದೆಯು ತಿಳಿಸುತ್ತಾರೆ - ನೀವು ಶಾಂತಿಧಾಮದಲ್ಲಿ ಪವಿತ್ರರಾಗಿದ್ದಿರಲ್ಲವೆ. ಈಗ ಮತ್ತೆ ನಿಮಗೆ ಶಾಂತಿಧಾಮ, ಸುಖಧಾಮದಲ್ಲಿ ಹೋಗುವ ಮಾರ್ಗವನ್ನು ತಿಳಿಸುತ್ತೇನೆ. ಮತ್ತ್ಯಾರೂ ಮಾರ್ಗವನ್ನು ತಿಳಿಸಲು ಸಾಧ್ಯವಿಲ್ಲ. ಶಾಂತಿಧಾಮಕ್ಕೂ ಸಹ ಪಾವನ ಆತ್ಮರೇ ಹೋಗಲು ಸಾಧ್ಯ. ಎಷ್ಟು ತುಕ್ಕು ಕಳೆಯುತ್ತಾ ಹೋಗುವುದೋ ಅಷ್ಟು ಶ್ರೇಷ್ಠ ಪದವಿ ಸಿಗುವುದು, ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟು ಪ್ರತಿಯೊಬ್ಬರ ಪುರುಷಾರ್ಥವನ್ನಂತೂ ನೀವು ನೋಡುತ್ತಿದ್ದೀರಿ. ತಂದೆಯೂ ಸಹ ಬಹಳ ಒಳ್ಳೆಯ ಸಹಯೋಗವನ್ನು ನೀಡುತ್ತಾರೆ. ಇವರಂತೂ ಹಳೆಯ ಮಗುವಾಗಿದ್ದಾರೆ ಎಂದು ನೀವು ಪ್ರತಿಯೊಬ್ಬರ ನಾಡಿಯನ್ನು ನೋಡಿ ತಿಳಿದುಕೊಳ್ಳುತ್ತೀರಲ್ಲವೆ. ಯಾರು ಬುದ್ಧಿವಂತರಾಗಿರುವರೋ ಅವರು ಕೂಡಲೇ ತಿಳಿದುಕೊಳ್ಳುತ್ತಾರೆ. ಬೇಹದ್ದಿನ ತಂದೆಯಾಗಿದ್ದಾರೆ, ಅವರಿಂದ ಅವಶ್ಯವಾಗಿ ಸ್ವರ್ಗದ ಆಸ್ತಿಯು ಸಿಗಬೇಕು. ಅದು ಸಿಕ್ಕಿತ್ತು, ಈಗ ಇಲ್ಲ ಪುನಃ ಸಿಗುತ್ತಿದೆ. ಗುರಿ-ಧ್ಯೇಯವೂ ಸಹ ಸನ್ಮುಖದಲ್ಲಿದೆ. ತಂದೆಯು ಯಾವಾಗ ಸ್ವರ್ಗದ ಸ್ಥಾಪನೆ ಮಾಡಿದ್ದರೋ ಆಗ ನೀವು ಸ್ವರ್ಗದ ಮಾಲೀಕರಾಗಿದ್ದಿರಿ. ಮತ್ತೆ 84 ಜನ್ಮಗಳನ್ನು ತೆಗೆದುಕೊಂಡು ಕೆಳಗಿಳಿಯುತ್ತಾ ಬಂದಿದ್ದೀರಿ. ಈಗ ನಿಮ್ಮದು ಇದು ಅಂತಿಮ ಜನ್ಮವಾಗಿದೆ. ಇತಿಹಾಸವು ಅವಶ್ಯವಾಗಿ ಪುನರಾವರ್ತನೆಯಾಗುವುದಲ್ಲವೆ. ನೀವು ಇಡೀ 84 ಜನ್ಮಗಳ ಲೆಕ್ಕವನ್ನು ತಿಳಿಸುತ್ತೀರಿ. ಎಷ್ಟು ತಿಳಿದುಕೊಳ್ಳುವರೋ ಅಷ್ಟು ಎಲೆಗಳು ತಯಾರಾಗುತ್ತಾ ಹೋಗುತ್ತಾರೆ. ನೀವೂ ಸಹ ಅನೇಕರನ್ನು ತಮ್ಮ ಸಮಾನ ಮಾಡಿಕೊಳ್ಳುತ್ತಾ ಹೋಗುತ್ತೀರಲ್ಲವೆ. ನೀವು ಹೇಳುತ್ತೀರಿ - ನಾವು ಇಡೀ ವಿಶ್ವವನ್ನು ಮಾಯೆಯ ಬಂಧನದಿಂದ ಬಿಡಿಸಲು ಬಂದಿದ್ದೇವೆ. ತಂದೆಯೂ ತಿಳಿಸುತ್ತಾರೆ - ನಾನು ಎಲ್ಲರನ್ನು ರಾವಣನಿಂದ ಬಿಡಿಸಲು ಬರುತ್ತೇನೆ. ನೀವು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ – ತಂದೆಯು ಜ್ಞಾನ ಸಾಗರನಾಗಿದ್ದಾರೆ, ನೀವೂ ಸಹ ಜ್ಞಾನವನ್ನು ಪ್ರಾಪ್ತಿ ಮಾಡಿಕೊಂಡು ಮಾ|| ಜ್ಞಾನ ಸಾಗರರಾಗುತ್ತೀರಿ. ಜ್ಞಾನವೇ ಬೇರೆ, ಭಕ್ತಿಯೇ ಬೇರೆಯಾಗಿದೆ. ನೀವು ತಿಳಿದುಕೊಂಡಿದ್ದೀರಿ - ಭಾರತದ ಪ್ರಾಚೀನ ರಾಜಯೋಗವನ್ನು ತಂದೆಯೇ ಕಲಿಸಿಕೊಡುತ್ತಾರೆ. ಯಾವುದೇ ಮನುಷ್ಯರು ಕಲಿಸಲು ಸಾಧ್ಯವಿಲ್ಲ. ಆದರೆ ಈ ಮಾತನ್ನು ಎಲ್ಲರಿಗೆ ತಿಳಿಸುವುದು ಹೇಗೆ? ಇಲ್ಲಂತೂ ಅಸುರರ ವಿಘ್ನಗಳು ಬಹಳ ಬರುತ್ತವೆ. ಬಹುಷಃ ಯಜ್ಞದಲ್ಲಿ ಕೆಸರನ್ನು ಹಾಕುತ್ತಾರೇನೋ ಎಂದು ಮೊದಲು ತಿಳಿದುಕೊಳ್ಳುತ್ತಿದ್ದಿರಿ, ಆದರೆ ಈ ವಿಘ್ನಗಳನ್ನು ಹೇಗೆ ಹಾಕುತ್ತಾರೆಂದು ಈಗ ನಿಮಗೆ ಅರ್ಥವಾಗಿದೆ. ನತಿಂಗ್ ನ್ಯೂ. ಕಲ್ಪದ ಮೊದಲೂ ಸಹ ಇದು ಆಗಿತ್ತು, ನಿಮ್ಮ ಬುದ್ಧಿಯಲ್ಲಿ ಇಡೀ ಚಕ್ರವು ಸುತ್ತುತ್ತಿರುತ್ತದೆ. ತಂದೆಯು ನಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಿದ್ದಾರೆ. ತಂದೆಯು ನಮಗೆ ಲೈಟ್ಹೌಸ್ನ ಬಿರುದನ್ನು ಕೊಡುತ್ತಾರೆ. ಒಂದು ಕಣ್ಣಿನಲ್ಲಿ ಮುಕ್ತಿಧಾಮ, ಇನ್ನೊಂದು ಕಣ್ಣಿನಲ್ಲಿ ಜೀವನ್ಮುಕ್ತಿಧಾಮ. ನೀವು ಶಾಂತಿಧಾಮಕ್ಕೆ ಹೋಗಿ ಮತ್ತೆ ಸುಖಧಾಮದಲ್ಲಿ ಬರಬೇಕಾಗಿದೆ. ಇದು ದುಃಖಧಾಮವಾಗಿದೆ. ತಂದೆಯು ತಿಳಿಸುತ್ತಾರೆ – ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಅದೆಲ್ಲವನ್ನೂ ಮರೆಯಿರಿ. ತಮ್ಮ ಶಾಂತಿಧಾಮವನ್ನು ನೆನಪು ಮಾಡಿ. ಆತ್ಮವು ತನ್ನ ತಂದೆಯನ್ನು ನೆನಪು ಮಾಡಬೇಕಾಗಿದೆ. ಇದಕ್ಕೆ ಅವ್ಯಭಿಚಾರಿ ಯೋಗವೆಂದು ಹೇಳಲಾಗುತ್ತದೆ. ಜ್ಞಾನವನ್ನೂ ಸಹ ಒಬ್ಬರಿಂದಲೇ ಕೇಳಬೇಕಾಗಿದೆ. ಇದು ಅವ್ಯಭಿಚಾರಿ ಜ್ಞಾನವಾಗಿದೆ. ನೆನಪೂ ಸಹ ಒಬ್ಬರನ್ನೇ ಮಾಡಿ ನನ್ನವರು ಒಬ್ಬ ತಂದೆಯ ವಿನಃ ಬೇರೆ ಯಾರೂ ಇಲ್ಲ. ಎಲ್ಲಿಯವರೆಗೆ ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಒಬ್ಬರ ನೆನಪು ಬರುವುದಿಲ್ಲ. ಆತ್ಮವು ಹೇಳುತ್ತದೆ - ನಾನಂತೂ ಒಬ್ಬ ತಂದೆಯವನೇ ಆಗುತ್ತೇನೆ. ನಾನು ತಂದೆಯ ಬಳಿ ಹೋಗಬೇಕಾಗಿದೆ. ಈ ಶರೀರವಂತೂ ಹಳೆಯದು, ಜಡಜಡೀಭೂತವಾಗಿದೆ. ಇದರಲ್ಲಿಯೂ ಮಮತೆಯನ್ನಿಟ್ಟುಕೊಳ್ಳಬಾರದು. ಇದು ಜ್ಞಾನದ ಮಾತಾಗಿದೆ ಅಂದರೆ ಶರೀರದ ಸಂಭಾಲನೆ ಮಾಡಬಾರದೆಂದಲ್ಲ. ಆಂತರ್ಯದಲ್ಲಿ ಇದು ಸ್ಮೃತಿಯಿರಲಿ - ಇದು ಹಳೆಯ ಪೋರೆಯಾಗಿದೆ. ಇದನ್ನಂತೂ ಈಗ ಬಿಡಬೇಕಾಗಿದೆ. ನಿಮ್ಮದು ಬೇಹದ್ದಿನ ಸನ್ಯಾಸವಾಗಿದೆ. ಅವರಂತೂ ಕಾಡಿಗೆ ಹೊರಟು ಹೋಗುತ್ತಾರೆ ಆದರೆ ನೀವು ಮನೆಯಲ್ಲಿರುತ್ತಾ ನೆನಪಿನಲ್ಲಿರಬೇಕಾಗಿದೆ. ನೆನಪಿನಲ್ಲಿರುತ್ತಾ-ಇರುತ್ತಾ ನೀವೂ ಸಹ ಶರೀರವನ್ನು ಬಿಟ್ಟು ಬಿಡುತ್ತೀರಿ. ಎಲ್ಲಿಯಾದರೂ ಇರಿ ನೀವು ತಂದೆಯನ್ನು ನೆನಪು ಮಾಡುತ್ತಾ ಇರಿ. ನೆನಪಿನಲ್ಲಿರುತ್ತೀರಿ, ಸ್ವದರ್ಶನ ಚಕ್ರಧಾರಿಯಾಗುತ್ತೀರೆಂದರೆ ಎಲ್ಲಿಯೇ ಇರುತ್ತೀರೆಂದರೂ ಸಹ ನೀವು ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಸ್ವಯಂ ಎಷ್ಟು ಪರಿಶ್ರಮ ಪಡುತ್ತೀರೋ ಅಷ್ಟು ಪದವಿ ಪಡೆಯುತ್ತೀರಿ. ಮನೆಯಲ್ಲಿದ್ದರೂ ಸಹ ನೆನಪಿನ ಯಾತ್ರೆಯಲ್ಲಿರಬೇಕು. ಈಗ ಅಂತಿಮ ಫಲಿತಾಂಶದಲ್ಲಿ ಸ್ವಲ್ಪವೆ ಸಮಯವಿದೆ. ಮತ್ತೆ ಹೊಸ ಪ್ರಪಂಚವು ತಯಾರಾಗಬೇಕಲ್ಲವೆ. ಈಗ ಕರ್ಮಾತೀತ ಸ್ಥಿತಿಯಾಗಿ ಬಿಟ್ಟರೆ ಸೂಕ್ಷ್ಮವತನದಲ್ಲಿರಬೇಕಾಗುತ್ತದೆ. ಸೂಕ್ಷ್ಮವತನದಲ್ಲಿದ್ದು ಮತ್ತೆ ಜನ್ಮ ತೆಗೆದುಕೊಳ್ಳಬೇಕಾಗುತ್ತದೆ. ಮುಂದೆ ಹೋದಂತೆ ನಿಮಗೆ ಎಲ್ಲವೂ ಸಾಕ್ಷಾತ್ಕಾರವಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ತಂದೆಯಿಂದಲೇ ಕೇಳಬೇಕಾಗಿದೆ. ಒಬ್ಬರ ಅವ್ಯಭಿಚಾರಿ ನೆನಪಿನಲ್ಲಿರಬೇಕಾಗಿದೆ. ಈ ಶರೀರದ ಸಂಭಾಲನೆ ಮಾಡಬೇಕು ಆದರೆ ಮಮತೆಯನ್ನಿಟ್ಟುಕೊಳ್ಳಬಾರದು.

2. ತಂದೆಯು ಯಾವ ಪತ್ಯವನ್ನು ತಿಳಿಸಿದ್ದಾರೆಯೋ ಅದನ್ನು ಪೂರ್ಣ ರೀತಿಯಲ್ಲಿ ಪಾಲನೆ ಮಾಡಬೇಕಾಗಿದೆ. ತಂದೆಯ ನಿಂದನೆಯಾಗುವಂತಹ, ಪಾಪದ ಖಾತೆಯು ಬೆಳೆಯುವಂತಹ ಯಾವುದೇ ಇಂತಹ ಕರ್ಮ ಮಾಡಬಾರದು. ತಮ್ಮನ್ನು ಮೋಸದಲ್ಲಿ ಸಿಲುಕಿಸಿಕೊಳ್ಳಬಾರದು.

ವರದಾನ:
ತಮ್ಮ ವಿಶಾಲ ಬುದ್ಧಿರೂಪಿ ತಿಜೋರಿಯ ಮುಖಾಂತರ ಜ್ಞಾನ ರತ್ನಗಳನ್ನು ದಾನ ಮಾಡುವಂತಹ ಮಹಾದಾನಿ ಭವ.

ಬುದ್ಧಿ ಎಲ್ಲಾ ಕರ್ಮೇಂದ್ರಿಯಗಳ ಶಿರೋಮಣಿ ಎಂದು ಕರೆಯಲಾಗಿದೆ. ಯಾರಿಗೆ ವಿಶಾಲ ಬುದ್ಧಿಯಿದೆ ಅರ್ಥಾತ್ ಯಾರ ಬುದ್ಧಿ ಸುಶೀಲವಾಗಿದೆ, ಅವರ ಮಸ್ತಕ ಸದಾ ಹೊಳೆಯುತ್ತಿರುತ್ತದೆ ಏಕೆಂದರೆ ಬುದ್ಧಿರೂಪಿ ತಿಜೋರಿಯಲ್ಲಿ ಇಡೀ ಜ್ಞಾನ ತುಂಬಿರುತ್ತದೆ. ಅವರು ತಮ್ಮ ಬುದ್ಧಿರೂಪಿ ತಿಜೋರಿಯಿಂದ ಜ್ಞಾನರತ್ನದ ದಾನ ಮಾಡಿ ಮಹಾದಾನಿಯಾಗಿ ಬಿಡುತ್ತಾರೆ. ನೀವು ಬುದ್ಧಿಗೆ ಸದಾ ಜ್ಞಾನದ ಭೋಜನ ಕೊಡುತ್ತಿರಿ, ಬುದ್ಧಿ ಒಂದುವೇಳೆ ಜ್ಞಾನ ಬಲದಿಂದ ಭರ್ಪೂರ್ ಇದ್ದಾಗ ಪ್ರಕೃತಿಯನ್ನೂ ಸಹ ಯೋಗ ಬಲದಿಂದ ಸರಿ ಮಾಡಿ ಬಿಡುತ್ತಾರೆ. ಸರ್ವೋತ್ತಮ ಬುದ್ಧಿವುಳ್ಳವರು ಸಂಪೂರ್ಣ ಜ್ಞಾನದಿಂದ ಸರ್ವೋತ್ತಮ ಸಂಪಾದನೆ ಮಾಡಿ ವೈಕುಂಠದ ಬಾದ್ಷಾಹಿ ಪ್ರಾಪ್ತಿ ಮಾಡಿಕೊಳ್ಳುತ್ತಾರೆ.

ಸ್ಲೋಗನ್:
ಶಕ್ತಿ ಸ್ವರೂಪ ಸ್ಥಿತಿಯ ಅನುಭವ ಮಾಡಬೇಕಾದರೆ ಸಂಕಲ್ಪಗಳ ಗತಿಯನ್ನು ಶಾಂತವಾಗಿ ಮಾಡಿಕೊಳ್ಳಿ.