22.12.20 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ಈಗ
ನಿಮಗೆ ತಂದೆಯ ಮೂಲಕ ದಿವ್ಯ ದೃಷ್ಟಿ ಸಿಕ್ಕಿದೆ, ಆ ದಿವ್ಯ ದೃಷ್ಟಿಯಿಂದಲೇ ಆತ್ಮ ಮತ್ತು
ಪರಮಾತ್ಮನನ್ನು ನೋಡುತ್ತೀರಿ"
ಪ್ರಶ್ನೆ:
ಡ್ರಾಮಾದ ಯಾವ
ರಹಸ್ಯವನ್ನು ತಿಳಿದುಕೊಂಡಿರುವವರು ಯಾವ ಸಲಹೆಯನ್ನು ಯಾರಿಗೂ ಕೊಡುವುದಿಲ್ಲ?
ಉತ್ತರ:
ಡ್ರಾಮಾದಲ್ಲಿ ಏನೆಲ್ಲವೂ ಕಳೆದು ಹೋಯಿತು ಅದು ಪುನಃ ಚಾಚೂ ತಪ್ಪದೆ ಪುನರಾವರ್ತನೆಯಾಗುವುದು ಎಂದು
ತಿಳಿದುಕೊಳ್ಳುವವರು ಎಂದೂ ಯಾರಿಗೂ ಭಕ್ತಿಯನ್ನು ಬಿಡುವ ಸಲಹೆಯನ್ನು ಕೊಡುವುದಿಲ್ಲ. ಯಾವಾಗ ಅವರ
ಬುದ್ದಿಯಲ್ಲಿ ಜ್ಞಾನವು ಚೆನ್ನಾಗಿ ಕುಳಿತುಕೊಳ್ಳುವುದು, ನಾವಾತ್ಮರಾಗಿದ್ದೇವೆ, ನಾವು ಬೇಹದ್ದಿನ
ತಂದೆಯಿಂದ ಆಸ್ತಿಯನ್ನು ಪಡೆಯಬೇಕೆಂದು ಯಾವಾಗ ಬೇಹದ್ದಿನ ತಂದೆಯ ಪರಿಚಯ ಸಿಗುವುದೋ ಆಗ ಹದ್ದಿನ
ಮಾತುಗಳು ಸ್ವತಹ ಸಮಾಪ್ತಿಯಾಗುತ್ತವೆ.
ಓಂ ಶಾಂತಿ.
ತಮ್ಮ ಆತ್ಮದ ಸ್ವಧರ್ಮದಲ್ಲಿ ಕುಳಿತಿದ್ದೀರಾ? ಆತ್ಮಿಕ ತಂದೆಯು ಆತ್ಮಿಕ ಮಕ್ಕಳೊಂದಿಗೆ ಕೇಳುತ್ತಾರೆ
ಏಕೆಂದರೆ ಇದಂತೂ ಮಕ್ಕಳಿಗೆ ತಿಳಿದಿದೆ - ಒಬ್ಬರೇ ಬೇಹದ್ದಿನ ತಂದೆಯಾಗಿದ್ದಾರೆ, ಅವರಿಗೆ
ಆತ್ಮನೆಂದು ಹೇಳಲಾಗುತ್ತದೆ ಆದರೆ ಕೇವಲ ಅವರಿಗೆ ಪರಮ ಆತ್ಮ ಎಂದು ಹೇಳಲಾಗುತ್ತದೆ. ಪರಮಾತ್ಮನು
ಖಂಡಿತ ಇದ್ದಾರೆ. ಪರಮಾತ್ಮನೇ ಇಲ್ಲವೆಂದು ಹೇಳುವುದಿಲ್ಲ. ಪರಮ ಆತ್ಮ ಎಂದರೆ ಪರಮಾತ್ಮ. ಇದನ್ನೂ
ಸಹ ತಿಳಿಸಲಾಗಿದೆ, ತಬ್ಬಿಬ್ಬಾಗಬಾರದು ಏಕೆಂದರೆ 5000 ವರ್ಷಗಳ ಮೊದಲೂ ಸಹ ಈ ಜ್ಞಾನವನ್ನು ನೀವು
ಕೇಳಿದ್ದಿರಿ, ಆತ್ಮವೇ ಕೇಳಿಸಿಕೊಳ್ಳುತ್ತದೆಯಲ್ಲವೆ. ಆತ್ಮವೇ ಅತಿ ಚಿಕ್ಕದು, ಸೂಕ್ಷ್ಮವಾಗಿದೆ.
ಅದನ್ನು ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಆತ್ಮನನ್ನು ಈ ಕಣ್ಣುಗಳಿಂದ ನೋಡಿರುವಂತಹ ಮನುಷ್ಯರು
ಯಾರೂ ಇಲ್ಲ. ಕಾಣುತ್ತದೆ ಆದರೆ ದಿವ್ಯ ದೃಷ್ಟಿಯಿಂದ ಮಾತ್ರ ಅದೂ ಡ್ರಾಮಾಪ್ಲಾನ್ ಅನುಸಾರ.
ತಿಳಿದುಕೊಳ್ಳಿ, ಯಾರಿಗಾದರೂ ಆತ್ಮನ ಸಾಕ್ಷಾತ್ಕಾರವಾಗುತ್ತದೆ, ಹೇಗೆ ಬೇರೆಯ ವಸ್ತು ಕಾಣುತ್ತದೆ.
ಭಕ್ತಿಮಾರ್ಗದಲ್ಲಿಯೂ ಸಾಕ್ಷಾತ್ಕಾರವಾಗುತ್ತದೆಯಲ್ಲವೆ. ಅದು ಈ ಕಣ್ಣುಗಳಿಂದಲೇ ಆ ದಿವ್ಯದೃಷ್ಟಿಯು
ಸಿಗುತ್ತದೆ ಅದರಿಂದ ಚೈತನ್ಯದಲ್ಲಿ ನೋಡುತ್ತಾರೆ. ಆತ್ಮಕ್ಕೆ ಜ್ಞಾನದ ಚಕ್ಷು ಸಿಗುತ್ತದೆ, ಇದರ
ಆಧಾರದಿಂದ ನೋಡುತ್ತಾರೆ ಆದರೆ ಧ್ಯಾನದಲ್ಲಿ ಮಾತ್ರ. ಭಕ್ತಿಮಾರ್ಗದಲ್ಲಿ ಬಹಳ ಭಕ್ತಿ ಮಾಡುತ್ತಾರೆ
ಆಗ ಸಾಕ್ಷಾತ್ಕಾರವಾಗುತ್ತದೆ. ಹೇಗೆ ಮೀರಾಳಿಗೆ ಸಾಕ್ಷಾತ್ಕಾರವಾಯಿತು, ನರ್ತನ ಮಾಡುತ್ತಿದ್ದರು,
ವೈಕುಂಠವಂತೂ ಇರಲಿಲ್ಲ. 5-6 ನೂರು ವರ್ಷಗಳಾಗಿರಬೇಕು. ಆ ಸಮಯದಲ್ಲಿ ವೈಕುಂಠವೇನೂ ಇರಲಿಲ್ಲ.
ಯಾವುದು ಕಳೆದು ಹೋಗಿದೆಯೋ ಅದನ್ನು ದಿವ್ಯ ದೃಷ್ಟಿಯಿಂದ ನೋಡಲಾಗುತ್ತದೆ. ಯಾವಾಗ ಬಹಳ ಭಕ್ತಿ
ಮಾಡುತ್ತಾ-ಮಾಡುತ್ತಾ ಒಮ್ಮೆಲೆ ಭಕ್ತಿಮಯವಾಗಿ ಬಿಡುವುದು. ಆಗ ಸಾಕ್ಷಾತ್ಕಾರವಾಗುತ್ತದೆ ಆದರೆ
ಅದರಿಂದ ಮುಕ್ತಿ ಸಿಗುವುದಿಲ್ಲ. ಮುಕ್ತಿ-ಜೀವನ್ಮುಕ್ತಿಯ ಮಾರ್ಗವು ಭಕ್ತಿಗಿಂತ ಬಹಳ ಭಿನ್ನವಾಗಿದೆ.
ಭಾರತದಲ್ಲಿ ಎಷ್ಟೊಂದು ಮಂದಿರಗಳಿವೆ, ಶಿವಲಿಂಗವನ್ನಿಡುತ್ತಾರೆ. ದೊಡ್ಡ ಲಿಂಗವನ್ನು ಇಡುತ್ತಾರೆ,
ಚಿಕ್ಕದನ್ನೂ ಇಡುತ್ತಾರೆ. ಈಗ ಇದಂತೂ ಮಕ್ಕಳಿಗೆ ತಿಳಿದಿದೆ - ಹೇಗೆ ಆತ್ಮವಿದೆಯೋ ಅದೇರೀತಿ
ಪರಮಪಿತ ಪರಮಾತ್ಮನಿದ್ದಾರೆ. ಎಲ್ಲರ ಗಾತ್ರವು ಒಂದೇ ಆಗಿದೆ, ತಂದೆಯಂತೆ ಮಕ್ಕಳು. ಆತ್ಮಗಳೆಲ್ಲರೂ
ಸಹೋದರ-ಸಹೋದರರಾಗಿದ್ದೀರಿ. ಈ ಶರೀರದಲ್ಲಿ ಪಾತ್ರವನ್ನಭಿನಯಿಸಲು ಬರುತ್ತೀರಿ, ಇವು
ತಿಳಿದುಕೊಳ್ಳುವ ಮಾತುಗಳಾಗಿವೆ. ಇವು ಭಕ್ತಿಮಾರ್ಗದ ದಂತ ಕಥೆಗಳಲ್ಲ, ಜ್ಞಾನ ಮಾರ್ಗದ ಮಾತುಗಳನ್ನು
ಕೇವಲ ಒಬ್ಬ ತಂದೆಯೇ ತಿಳಿಸುತ್ತಾರೆ. ಮೊಟ್ಟ ಮೊದಲು ತಿಳಿಸುವವರು ಬೇಹದ್ದಿನ ತಂದೆ, ನಿರಾಕಾರನೇ
ಆಗಿದ್ದಾರೆ. ಅವರನ್ನು ಪೂರ್ಣ ರೀತಿಯಿಂದ ಯಾರೂ ಅರಿತುಕೊಳ್ಳುವುದಿಲ್ಲ. ಅವರು
ಸರ್ವವ್ಯಾಪಿಯಾಗಿದ್ದಾರೆಂದು ಹೇಳುತ್ತಾರೆ ಆದರೆ ಇದು ಸರಿಯಲ್ಲ. ತಂದೆಯನ್ನು ಕೂಗುತ್ತಾರೆ, ಬಹಳ
ಪ್ರೀತಿಯಿಂದ ಕರೆಯುತ್ತಾರೆ. ಬಾಬಾ, ತಾವು ಬಂದರೆ ನಾವು ನಿಮಗೆ ಬಲಿಹಾರಿಯಾಗುತ್ತೇವೆ. ನೀವೇ
ನನ್ನವರು, ನನಗೆ ಬೇರೆ ಯಾರೂ ಇಲ್ಲವೆಂದಮೇಲೆ ಅವಶ್ಯವಾಗಿ ಅವರನ್ನೇ ನೆನಪು ಮಾಡಬೇಕಾಗಿದೆ. ಅವರೇ
ಸ್ವಯಂ ಹೇಳುತ್ತಾರೆ - ಹೇ ಮಕ್ಕಳೇ ಎಂದು. ತಂದೆಯು ಆತ್ಮಗಳೊಂದಿಗೇ ಮಾತನಾಡುತ್ತಾರೆ. ಇದಕ್ಕೆ
ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ಗಾಯನವೂ ಇದೆ - ಆತ್ಮಗಳು ಮತ್ತು ಪರಮಾತ್ಮನು ಬಹಳ ಕಾಲ ಅಗಲಿ
ಹೋಗಿದ್ದರು...... ಇದೂ ಲೆಕ್ಕವನ್ನು ತಿಳಿಸಲಾಗಿದೆ. ಬಹಳ ಕಾಲದಿಂದ ನೀವಾತ್ಮರು ಅಗಲಿರುತ್ತೀರಿ.
ಪುನಃ ನೀವೇ ಈ ಸಮಯದಲ್ಲಿಯೇ ತಂದೆಯ ಬಳಿ ಪುನಃ ತಮ್ಮ ರಾಜಯೋಗವನ್ನು ಬಂದಿದ್ದೀರಿ. ಈ ಶಿಕ್ಷಕರು
ಸೇವಕನಾಗಿದ್ದಾರೆ. ಶಿಕ್ಷಕರು ಯಾವಾಗಲೂ ವಿಧೇಯ ಸೇವಕನಾಗಿರುತ್ತಾರೆ. ಇಲ್ಲಿ ತಂದೆಯೂ ಸಹ
ಹೇಳುತ್ತಾರೆ - ನಾನು ಎಲ್ಲಾ ಮಕ್ಕಳ ಸೇವಕನಾಗಿದ್ದೇನೆ. ನೀವು ಎಷ್ಟೊಂದು ಗೌರವದಿಂದ ಕರೆಯುತ್ತೀರಿ
- ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡು. ಎಲ್ಲರೂ ಭಕ್ತಿನಿಯರಾಗಿದ್ದಾರೆ. ಹೇ ಭಗವಂತ ಬನ್ನಿ,
ನಮ್ಮನ್ನು ಪುನಃ ಪಾವನರನ್ನಾಗಿ ಮಾಡಿ ಎಂದು ಹೇಳುತ್ತಾರೆ. ಸ್ವರ್ಗಕ್ಕೆ ಪಾವನ ಪ್ರಪಂಚವೆಂತಲೂ,
ನರಕಕ್ಕೆ ಪತಿತ ಪ್ರಪಂಚ ಎಂತಲೂ ಹೇಳಲಾಗುತ್ತದೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಇದು
ಕಾಲೇಜು ಅಥವಾ ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ಮನುಷ್ಯರಿಂದ ದೇವತೆಗಳಾಗುವುದು ಇದರ
ಗುರಿ-ಧ್ಯೇಯವಾಗಿದೆ. ನಾವು ಈ ರೀತಿಯಾಗಬೇಕೆಂದು ಮಕ್ಕಳು ನಿಶ್ಚಯ ಮಾಡಿಕೊಳ್ಳುತ್ತೀರಿ. ಯಾರಿಗೆ
ನಿಶ್ಚಯವೇ ಇರುವುದಿಲ್ಲವೋ ಅವರು ಶಾಲೆಯಲ್ಲಿ ಕುಳಿತುಕೊಳ್ಳುವರೇ? ಗುರಿ-ಧ್ಯೇಯವಂತು
ಬುದ್ಧಿಯಲ್ಲಿದೆ. ನಾವು ಬ್ಯಾರಿಸ್ಟರ್ ಅಥವಾ ಡಾಕ್ಟರ್ ಆಗುತ್ತೇವೆಂದು, ಆದ್ದರಿಂದ ಓದುತ್ತಾರಲ್ಲವೆ.
ನಿಶ್ಚಯವೇ ಇಲ್ಲವೆಂದರೆ ಅವರು ಬರುವುದೇ ಇಲ್ಲ. ನಾವು ಮನುಷ್ಯರಿಂದ ದೇವತೆ, ನರನಿಂದ
ನಾರಾಯಣನಾಗುತ್ತೇವೆಂದು ನಿಮಗೆ ನಿಶ್ಚಯವಿದೆ. ಇದು ಸತ್ಯ-ಸತ್ಯವಾದ ಸತ್ಯ ನರನಿಂದ ನಾರಾಯಣನಾಗುವ
ಕಥೆಯಾಗಿದೆ. ವಾಸ್ತವದಲ್ಲಿ ಇದು ವಿದ್ಯೆಯಾಗಿದೆ ಆದರೆ ಇದಕ್ಕೆ ಕಥೆಯೆಂದು ಏಕೆ ಹೇಳುತ್ತಾರೆ?
ಏಕೆಂದರೆ 5000 ವರ್ಷಗಳ ಮೊದಲೂ ಸಹ ಕೇಳಿದ್ದಿರಿ. ಅದು ಕಳೆದು ಹೋಗಿದೆ. ಕಳೆದು ಹೋದುದಕ್ಕೆ
ಕಥೆಯೆಂದು ಹೇಳಲಾಗುತ್ತದೆ, ಇದು ನರನಿಂದ ನಾರಾಯಣನಾಗುವ ಶಿಕ್ಷಣವಾಗಿದೆ. ಮಕ್ಕಳೇ, ಹೃದಯದಿಂದ
ತಿಳಿದುಕೊಳ್ಳುತ್ತೀರಿ – ಹೊಸ ಪ್ರಪಂಚದಲ್ಲಿ ದೇವತೆಗಳು, ಹಳೆಯ ಪ್ರಪಂಚದಲ್ಲಿ ಮನುಷ್ಯರಿರುತ್ತಾರೆ.
ದೇವತೆಗಳಲ್ಲಿ ಯಾವ ಗುಣವಿದೆಯೋ ಅವು ಮನುಷ್ಯರಲ್ಲಿಲ್ಲ ಆದ್ದರಿಂದ ಅವರಿಗೆ ದೇವತೆಗಳೆಂದೇ
ಹೇಳಲಾಗುತ್ತದೆ. ಮನುಷ್ಯರು ದೇವತೆಗಳ ಮುಂದೆ ಹೋಗಿ ನಮನ ಮಾಡುತ್ತಾರೆ - ತಾವು ಸರ್ವಗುಣ
ಸಂಪನ್ನರಾಗಿದ್ದೀರಿ..... ಮತ್ತು ತಮಗೆ ನಾವು ನೀಚರು ಪಾಪಿಗಳಾಗಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ.
ಮನುಷ್ಯರೇ ಹೇಳುತ್ತಾರೆ, ದೇವತೆಗಳು ಸತ್ಯಯುಗದಲ್ಲಿದ್ದರು ಕಲಿಯುಗದಲ್ಲಿರಲು ಸಾಧ್ಯವಿಲ್ಲ. ಆದರೆ
ಇತ್ತೀಚೆಗೆ ಎಲ್ಲರೂ ಶ್ರೀ ಶ್ರೀ ಎಂದು ಹೇಳಿಕೊಳ್ಳುತ್ತಾರೆ. ಶ್ರೀ ಎಂದರೆ ಶ್ರೇಷ್ಠ, ಭಗವಂತನೇ
ಸರ್ವಶ್ರೇಷ್ಠರನ್ನಾಗಿ ಮಾಡಲು ಸಾಧ್ಯ. ಶ್ರೇಷ್ಠ ದೇವತೆಗಳು ಸತ್ಯಯುಗದಲ್ಲಿದ್ದರು, ಈ ಸಮಯದಲ್ಲಿ
ಯಾವ ಮನುಷ್ಯರೂ ಶ್ರೇಷ್ಠರಿಲ್ಲ. ನೀವು ಮಕ್ಕಳು ಈಗ ಬೇಹದ್ದಿನ ಸನ್ಯಾಸ ಮಾಡುತ್ತೀರಿ, ನಿಮಗೆ
ತಿಳಿದಿದೆ - ಈ ಹಳೆಯ ಪ್ರಪಂಚವು ಸಮಾಪ್ತಿಯಾಗುವುದಿದೆ ಆದ್ದರಿಂದ ಇದೆಲ್ಲದರಿಂದ ವೈರಾಗ್ಯವಿದೆ.
ಅವರಂತೂ ಹಠಯೋಗಿ ಸನ್ಯಾಸಿಗಳಾಗಿದ್ದಾರೆ. ಮನೆ-ಮಠವನ್ನು ಬಿಟ್ಟು ಹೊರಟು ಹೋಗಿ ಮತ್ತೆ ಬಂದು
ಮಹಲುಗಳಲ್ಲಿ ಕುಳಿತಿದ್ದಾರೆ. ಇಲ್ಲವಾದರೆ ಕುಟೀರಗಳಿಗೆ ಯಾವುದೇ ಖರ್ಚು ಆಗುವುದಿಲ್ಲ.
ಏಕಾಂತಕ್ಕಾಗಿ ಕುಟೀರಗಳಲ್ಲಿ ಕುಳಿತುಕೊಳ್ಳಲಾಗುವುದಕ್ಕಾಗುತ್ತದೆಯೇ ಹೊರತು ಮಹಲುಗಳಲ್ಲ.
ತಂದೆಗಾಗಿಯೂ ಈ ಕುಟೀರವು ಮಾಡಲ್ಪಟ್ಟಿದೆ. ಕುಟೀರದಲ್ಲಿ ಎಲ್ಲಾ ಸುಖವಿದೆ. ಈಗ ನೀವು ಮಕ್ಕಳು
ಪುರುಷಾರ್ಥ ಮಾಡಿ ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ನಿಮಗೆ ತಿಳಿದಿದೆ - ಡ್ರಾಮಾದಲ್ಲಿ
ಏನೆಲ್ಲವೂ ಕಳೆದುಹೋಯಿತೋ ಅದು ಪುನಃ ಚಾಚೂತಪ್ಪದೆ ಪುನರಾವರ್ತನೆಯಾಗುವುದು. ಆದ್ದರಿಂದ ಯಾರಿಗೂ ಸಹ
ಭಕ್ತಿಯನ್ನು ಬಿಡಿ ಎಂದು ಸಲಹೆ ಕೊಡಬಾರದು. ಯಾವಾಗ ಜ್ಞಾನವು ಬುದ್ಧಿಯಲ್ಲಿ ಬಂದುಬಿಡುವುದೋ
ನಾವಾತ್ಮರಾಗಿದ್ದೇವೆ, ನಾವೀಗ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ ಎಂದು ಬೇಹದ್ದಿನ
ತಂದೆಯ ಯಥಾರ್ಥ ಪರಿಚಯವಾಗುವುದೋ ಆಗ ಹದ್ದಿನ ಮಾತುಗಳು ಸಮಾಪ್ತಿಯಾಗುತ್ತವೆ. ತಂದೆಯು
ತಿಳಿಸುತ್ತಾರೆ – ಗೃಹಸ್ಥ ವ್ಯವಹಾರದಲ್ಲಿರುತ್ತಾ ಕೇವಲ ಬುದ್ಧಿಯೋಗವನ್ನು ತಂದೆಯೊಂದಿಗೆ
ಇಡಬೇಕಾಗಿದೆ. ಶರೀರ ನಿರ್ವಹಣೆಗಾಗಿ ಕರ್ಮವನ್ನೂ ಮಾಡಬೇಕಾಗಿದೆ. ಹೇಗೆ ಭಕ್ತಿಯಲ್ಲಿಯೂ ಕೆಲವರು
ಬಹಳ ನೌಧಾಭಕ್ತಿ ಮಾಡುತ್ತಾರೆ, ನಿಯಮದಿಂದ ಪ್ರತಿನಿತ್ಯವೂ ಹೋಗಿ ದರ್ಶನ ಮಾಡುತ್ತಾರೆ. ದೇಹಧಾರಿಗಳ
ಬಳಿ ಹೋಗುವುದೆಲ್ಲವೂ ದೈಹಿಕ ಯಾತ್ರೆಯಾಗಿದೆ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಅಲೆದಾಡಬೇಕಾಗುತ್ತದೆ!
ಇಲ್ಲಿ ಅದೇನನ್ನೂ ಮಾಡುವಂತಿಲ್ಲ. ನೀವು ಬರುತ್ತೀರೆಂದರೂ ಸಹ ತಿಳಿಸಿಕೊಡುವುದಕ್ಕಾಗಿಯೇ ಇಲ್ಲಿ
ಕೂರಿಸಲಾಗುತ್ತದೆ. ಬಾಕಿ ನೆನಪಿಗಾಗಿ ಯಾವುದೇ ಒಂದು ಸ್ಥಳದಲ್ಲಿ ಕುಳಿತು ಬಿಡುವಂತಿಲ್ಲ.
ಭಕ್ತಿಮಾರ್ಗದಲ್ಲಿ ಯಾರಾದರೂ ಕೃಷ್ಣನ ಭಕ್ತನಾಗಿದ್ದರೆ ಅವರು ನಡೆಯುತ್ತಾ-ತಿರುಗಾಡುತ್ತಾ
ಕೃಷ್ಣನನ್ನು ನೆನಪು ಮಾಡಲು ಸಾಧ್ಯವಿಲ್ಲವೆಂದಲ್ಲ. ಆದ್ದರಿಂದ ಯಾರು ವಿದ್ಯಾವಂತ ಮನುಷ್ಯರಿರುವರೋ
ಅವರು ಹೇಳುತ್ತಾರೆ - ಕೃಷ್ಣನ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಂಡಿದ್ದೀರಿ ಅಂದಮೇಲೆ ಮತ್ತೆ ನೀವು
ಮಂದಿರಗಳಿಗೆ ಏಕೆ ಹೋಗುತ್ತೀರಿ? ಕೃಷ್ಣನ ಚಿತ್ರಗಳ ಪೂಜೆಯನ್ನು ನೀವು ಎಲ್ಲಿಯಾದರೂ ಮಾಡಬಹುದು.
ಒಳ್ಳೆಯದು - ಚಿತ್ರಗಳನ್ನು ಇಡಲೇಬೇಡಿ ಆದರೆ ನೆನಪು ಮಾಡುತ್ತಾ ಇರಿ. ವಸ್ತುವನ್ನು ಒಂದು ಬಾರಿ
ನೋಡಿದರೆ ಅದು ನೆನಪಿರುತ್ತದೆ. ನಿಮಗೂ ಸಹ ಅದನ್ನೇ ಹೇಳುತ್ತಾರೆ – ಶಿವ ತಂದೆಯನ್ನು ನೀವು
ಮನೆಯಲ್ಲಿ ಕುಳಿತಿದ್ದಂತೆಯೇ ನೆನಪು ಮಾಡಲು ಸಾಧ್ಯವಿಲ್ಲವೆ? ಇದಂತೂ ಹೊಸ ಮಾತಾಗಿದೆ. ಶಿವ
ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ. ನಾಮ-ರೂಪ, ದೇಶ-ಕಾಲವನ್ನು ತಿಳಿದುಕೊಂಡಿಲ್ಲ.
ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಆತ್ಮಕ್ಕೆ ಪರಮಾತ್ಮನೆಂದು ಹೇಳಲಾಗುವುದಿಲ್ಲ. ಆತ್ಮಕ್ಕೆ
ತಂದೆಯ ನೆನಪು ಬರುತ್ತದೆ ಆದರೆ ತಂದೆಯನ್ನು ಅರಿತುಕೊಂಡಿಲ್ಲವೆಂದರೂ 7 ದಿನಗಳ ಕಾಲ
ತಿಳಿಸಲಾಗುತ್ತದೆ. ತಂದೆಯು ಜ್ಞಾನ ಸಾಗರನಲ್ಲವೆ. ಎಷ್ಟೊಂದು ಸಮಯದಿಂದ ಕೇಳುತ್ತಾ ಬಂದಿದ್ದೀರಿ
ಏಕೆಂದರೆ ಜ್ಞಾನವಿದೆಯಲ್ಲವೆ. ನಿಮಗೆ ತಿಳಿದಿದೆ - ಮನುಷ್ಯರಿಂದ ದೇವತೆಗಳಾಗುವ ಜ್ಞಾನವು ನಮಗೆ
ಸಿಗುತ್ತಿದೆ ಮತ್ತು ತಂದೆಯು ತಿಳಿಸುತ್ತಾರೆ - ನಾನೇ ನಿಮಗೆ ಹೊಸ-ಹೊಸ ಗುಹ್ಯ ಮಾತುಗಳನ್ನು
ತಿಳಿಸುತ್ತೇನೆ. ನಿಮಗೆ ಮುರುಳಿ ಸಿಗಲಿಲ್ಲವೆಂದರೆ ನಿಮಗೆ ಎಷ್ಟೊಂದು ಚಡಪಡಿಸುತ್ತೀರಿ! ತಂದೆಯು
ತಿಳಿಸುತ್ತಾರೆ - ನೀವು ತಂದೆಯನ್ನಂತೂ ನೀವು ನೆನಪು ಮಾಡಬಹುದು. ಮುರುಳಿಯನ್ನು ಓದುತ್ತೀರಿ ಆದರೂ
ಮರೆತು ಹೋಗುತ್ತೀರಿ. ಮೊಟ್ಟ ಮೊದಲು ಇದನ್ನು ನೆನಪು ಮಾಡಬೇಕಾಗಿದೆ - ನಾನಾತ್ಮ ಆಗಿದ್ದೇನೆ, ಅತಿ
ಚಿಕ್ಕ ಬಿಂದುವಾಗಿದ್ದೇನೆ. ಆತ್ಮವನ್ನು ಅರಿತುಕೊಳ್ಳಬೇಕಾಗಿದೆ. ಇವರ ಆತ್ಮವು ಬಂದು
ಇನ್ನೊಬ್ಬರಲ್ಲಿ ಪ್ರವೇಶ ಮಾಡಿತು ಎಂದು ಹೇಳುತ್ತಾರೆ. ನಾವಾತ್ಮಗಳು ಜನ್ಮವನ್ನು
ಪಡೆಯುತ್ತಾ-ಪಡೆಯುತ್ತಾ ಈಗ ಪತಿತ, ಅಪವಿತ್ರರಾಗಿದ್ದೇವೆ. ಮೊದಲು ನೀವು ಪವಿತ್ರ, ಗೃಹಸ್ಥ
ಧರ್ಮದವರಾಗಿದ್ದಿರಿ, ಲಕ್ಷ್ಮೀ-ನಾರಾಯಣರಿಬ್ಬರೂ ಪವಿತ್ರರಾಗಿದ್ದರು ನಂತರ ಇಬ್ಬರೂ ಅಪವಿತ್ರರಾದರು.
ಪುನಃ ಇಬ್ಬರೂ ಪವಿತ್ರರಾಗುತ್ತಾರೆ ಅಂದಮೇಲೆ ಅಪವಿತ್ರರಿಂದ ಪವಿತ್ರರಾದರೇ? ಅಥವಾ ಪವಿತ್ರ
ಜನ್ಮವನ್ನು ಪಡೆದರೇ? ತಂದೆಯು ತಿಳಿಸುತ್ತಾರೆ, ಹೇಗೆ ನೀವು ಪವಿತ್ರರಾಗಿದ್ದಿರಿ ಮತ್ತೆ
ವಾಮಮಾರ್ಗದಲ್ಲಿ ಹೋಗುವ ಕಾರಣ ಅಪವಿತ್ರರಾಗಿದ್ದೀರಿ. ಪೂಜಾರಿಗಳಿಗೆ ಅಪವಿತ್ರರು, ಪೂಜ್ಯರಿಗೆ
ಪವಿತ್ರರೆಂದು ಹೇಳುತ್ತಾರೆ. ಇಡೀ ವಿಶ್ವದ ಇತಿಹಾಸ-ಭೂಗೋಳವು ನಿಮ್ಮ ಬುದ್ಧಿಯಲ್ಲಿದೆ. ಯಾರು-ಯಾರು
ರಾಜ್ಯ ಮಾಡುತ್ತಿದ್ದರು? ಅವರಿಗೆ ಹೇಗೆ ರಾಜ್ಯವು ಸಿಕ್ಕಿತು ಎಂಬುದನ್ನು ನೀವು
ತಿಳಿದುಕೊಂಡಿದ್ದೀರಿ. ಮತ್ತ್ಯಾರೂ ತಿಳಿದುಕೊಂಡಿಲ್ಲ. ನಿಮ್ಮ ಬಳಿಯೂ ಮೊದಲು ರಚಯಿತ ಮತು ರಚನೆಯ
ಆದಿ-ಮಧ್ಯ-ಅಂತ್ಯದ ಜ್ಞಾನವು ಇರಲಿಲ್ಲ ಅಂದರೆ ನಾಸ್ತಿಕರಾಗಿದ್ದಿರಿ, ತಿಳಿದುಕೊಂಡಿರಲಿಲ್ಲ.
ನಾಸ್ತಿಕರಾಗುವುದರಿಂದ ಎಷ್ಟೊಂದು ದುಃಖಿಯಾಗಿ ಬಿಡುತ್ತೀರಿ. ನೀವೀಗ ಈ ದೇವತೆಗಳಾಗಲು ಇಲ್ಲಿಗೆ
ಬಂದಿದ್ದೀರಿ. ಅಲ್ಲಿ ಎಷ್ಟೊಂದು ಸುಖವಿರುತ್ತದೆ! ದೈವೀ ಗುಣಗಳನ್ನೂ ಇಲ್ಲಿ ಧಾರಣೆ
ಮಾಡಿಕೊಳ್ಳಬೇಕಾಗಿದೆ. ಪ್ರಜಾಪಿತ ಬ್ರಹ್ಮನ ಸಂತಾನರು ಸಹೋದರ-ಸಹೋದರಿಯರಾದರಲ್ಲವೆ. ಅಂದಮೇಲೆ
ಕುದೃಷ್ಟಿಯು ಇರಬಾರದು, ಇದರಲ್ಲಿಯೇ ಪರಿಶ್ರಮವಿದೆ. ಕಣ್ಣುಗಳು ಬಹಳ ಮೋಸಗಾರನಾಗಿವೆ. ಎಲ್ಲಾ
ಅಂಗಗಳಿಗಿಂತಲೂ ಈ ಕಣ್ಣುಗಳೇ ಮೋಸಗಾರನಾಗಿವೆ. ಅರ್ಧಕಲ್ಪ ನಿರ್ವಿಕಾರಿ, ಅರ್ಧಕಲ್ಪ
ವಿಕಾರಿಯಾಗಿರುತ್ತೀರಿ. ಸತ್ಯಯುಗದಲ್ಲಿ ವಿಕಾರಿಯಾಗಿರುವುದಿಲ್ಲ. ಕಣ್ಣುಗಳು ವಿಕಾರಿಯಾದಾಗ
ಅಸುರರೆಂದು ಕರೆಸಿಕೊಳ್ಳುತ್ತಾರೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ಪತಿತ ಪ್ರಪಂಚದಲ್ಲಿ
ಬರುತ್ತೇನೆ, ಯಾರು ಪತಿತರಾಗಿದ್ದಾರೆಯೋ ಅವರೇ ಪಾವನರಾಗಬೇಕಾಗಿದೆ. ಇವರು ತಮ್ಮನ್ನು ಭಗವಂತನೆಂದು
ಕರೆಸಿಕೊಳ್ಳುತ್ತಾರೆಂದು ಮನುಷ್ಯರು ಹೇಳುತ್ತಾರೆ. ವೃಕ್ಷದ ಚಿತ್ರದಲ್ಲಿ ನೋಡಿ - ಒಮ್ಮೆಲೆ
ತಮೋಪ್ರಧಾನ ಪ್ರಪಂಚದ ಅಂತಿಮದಲ್ಲಿ ನಿಂತಿದ್ದಾರೆ ಮತ್ತೆ ಅವರೇ ತಪಸ್ಸು ಮಾಡುತ್ತಿದ್ದಾರೆ.
ಸತ್ಯಯುಗದಿಂದ ಲಕ್ಷ್ಮೀ-ನಾರಾಯಣರ ರಾಜಧಾನಿಯು ನಡೆಯುತ್ತದೆ. ಈ ಲಕ್ಷ್ಮೀ-ನಾರಾಯಣರಿಂದಲೇ
ಸಂವತ್ಸರವು ಆರಂಭವಾಗುವುದು. ಆದ್ದರಿಂದ ತಂದೆಯು ತಿಳಿಸುತ್ತಾರೆ - ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ
ತೋರಿಸುತ್ತೀರೆಂದರೆ ಬರೆಯಿರಿ, ಇವರ 1250 ವರ್ಷಗಳ ನಂತರ ತ್ರೇತಾಯುಗ ಬರುತ್ತದೆ. ಶಾಸ್ತ್ರಗಳಲ್ಲಿ
ಲಕ್ಷಾಂತರ ವರ್ಷಗಳೆಂದು ಬರೆದು ಬಿಟ್ಟಿದ್ದಾರೆ. ರಾತ್ರಿ-ಹಗಲಿನ ಅಂತರವಾಯಿತಲ್ಲವೆ. ಬ್ರಹ್ಮನ
ರಾತ್ರಿ ಅರ್ಧಕಲ್ಪ, ಬ್ರಹ್ಮನ ದಿನ ಅರ್ಧಕಲ್ಪ - ಈ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ಪುನಃ
ತಂದೆಯು ಹೇಳುತ್ತಾರೆ - ಮಧುರ ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿಯಿರಿ, ತಂದೆಯನ್ನು ನೆನಪು
ಮಾಡಿ. ಅವರನ್ನು ನೆನಪು ಮಾಡುತ್ತಾ-ಮಾಡುತ್ತಾ ನೀವು ಪಾವನರಾಗಿ ಬಿಡುತ್ತೀರಿ. ಅಂತಿಮ ಗತಿ ಸೋ
ಗತಿಯಾಗುವುದು. ಇಲ್ಲಿಯೇ ಕುಳಿತು ಬಿಡಿ ಎಂದು ಹೇಳುವುದಿಲ್ಲ. ಸೇವಾಧಾರಿ ಮಕ್ಕಳನ್ನು ಇಲ್ಲಿ
ಕೂರಿಸಿಕೊಳ್ಳುವುದಿಲ್ಲ. ಸೇವಾಕೇಂದ್ರ, ಮ್ಯೂಸಿಯಂ ಇತ್ಯಾದಿಗಳನ್ನು ತೆರೆಯುತ್ತಾ ಇರುತ್ತಾರೆ.
ಎಷ್ಟೊಂದು ಮಂದಿಗೆ ನಿಮಂತ್ರಣ ಪತ್ರಗಳನ್ನು ಹಂಚುತ್ತಾರೆ - ಬಂದು ಜನ್ಮ ಸಿದ್ಧ ಅಧಿಕಾರವಾದ
ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಿ. ನೀವು ತಂದೆಯ ಮಕ್ಕಳಾಗಿದ್ದೀರಿ, ತಂದೆಯು ಸ್ವರ್ಗದ
ರಚಯಿತನೆಂದ ಮೇಲೆ ನಿಮಗೂ ಸ್ವರ್ಗದ ಆಸ್ತಿಯಿರಬೇಕು. ತಂದೆಯು ತಿಳಿಸುತ್ತಾರೆ - ನಾನು ಒಂದೇ ಬಾರಿ
ಸ್ವರ್ಗದ ಸ್ಥಾಪನೆ ಮಾಡಲು ಬರುತ್ತೇನೆ. ಒಂದೇ ಪ್ರಪಂಚವಾಗಿದೆ, ಇದರ ಚಕ್ರವು ಸುತ್ತುತ್ತಿರುತ್ತದೆ.
ಮನುಷ್ಯರ ಅನೇಕ ಮತಗಳು, ಅನೇಕ ಮಾತುಗಳಿಗೆ. ಎಷ್ಟೊಂದು ಮತ-ಮತಾಂತರಗಳಿವೆ. ಇದಕ್ಕೆ ಅದ್ವೈತ
ಮತವೆಂದು ಹೇಳಲಾಗುತ್ತದೆ. ವೃಕ್ಷವು ಎಷ್ಟು ದೊಡ್ಡದಾಗಿದೆ! ಎಷ್ಟೊಂದು ರೆಂಬೆ-ಕೊಂಬೆಗಳು
ಹರಡುತ್ತಿವೆ. ಎಷ್ಟೊಂದು ಧರ್ಮಗಳು ಹರಡುತ್ತಿವೆ. ಮೊದಲಂತೂ ಒಂದು ಮತ, ಒಂದು ರಾಜ್ಯವಿತ್ತು. ಇಡೀ
ವಿಶ್ವದಲ್ಲಿ ಇವರ ರಾಜ್ಯವಿತ್ತು. ಇದೂ ಸಹ ಈಗ ನಿಮಗೆ ಅರ್ಥವಾಗಿದೆ , ನಾವೇ ಇಡೀ ವಿಶ್ವದ
ಮಾಲೀಕರಾಗಿದ್ದೆವು, ನಂತರ 84 ಜನ್ಮಗಳನ್ನು ಭೋಗಿಸಿ ಕಂಗಾಲರಾಗಿದ್ದೇವೆ. ಈಗ ನೀವು ಕಾಲದ ಮೇಲೆ ಜಯ
ಗಳಿಸುತ್ತೀರಿ. ಸತ್ಯಯುಗದಲ್ಲಿ ಅಕಾಲ ಮೃತ್ಯುವೆಂದೂ ಆಗುವುದಿಲ್ಲ. ಇಲ್ಲಂತೂ ನೋಡಿ,
ಕುಳಿತು-ಕುಳಿತಿದ್ದಂತೆಯೇ ಅಕಾಲ ಮೃತ್ಯುವಾಗುತ್ತಿರುತ್ತದೆ. ನಾಲ್ಕಾರು ಕಡೆ ಮೃತ್ಯುವೇ
ಮೃತ್ಯುವಿದೆ. ಅಲ್ಲಿ ಈ ರೀತಿಯಾಗುವುದಿಲ್ಲ. ಧೀರ್ಘಾಯಸ್ಸಿರುತ್ತದೆ. ಭಾರತದಲ್ಲಿ ಸುಖ-ಶಾಂತಿ,
ಪವಿತ್ರತೆಯಿತ್ತು, 150 ವರ್ಷಗಳು ಆಯಸ್ಸಿತ್ತು. ಈಗ ನೋಡಿ, ಆಯಸ್ಸು ಎಷ್ಟಿರುತ್ತದೆ!
ಈಶ್ವರನು ನಿಮಗೆ ಯೋಗವನ್ನು ಕಲಿಸಿದರು ಆದ್ದರಿಂದ ನಿಮಗೆ ಯೋಗೇಶ್ವರನೆಂದು ಹೇಳುತ್ತಾರೆ. ಅಲ್ಲಿ ಆ
ರೀತಿ ಹೇಳುವುದಿಲ್ಲ. ಈ ಸಮಯದಲ್ಲಿ ನೀವು ಯೋಗೇಶ್ವರರಾಗಿದ್ದೀರಿ. ನಿಮಗೆ ಈಶ್ವರನು ರಾಜಯೋಗವನ್ನು
ಕಲಿಸುತ್ತಿದ್ದಾರೆ. ನಂತರ ರಾಜ ರಾಜೇಶ್ವರರಾಗಬೇಕಾಗಿದೆ. ನೀವೀಗ ಜ್ಞಾನೇಶ್ವರರಾಗಿದ್ದೀರಿ ನಂತರ
ರಾಜೇಶ್ವರ ಅರ್ಥಾತ್ ರಾಜರಿಗೂ ರಾಜರಾಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ದೃಷ್ಟಿಯನ್ನು
ನಿರ್ವಿಕಾರಿಯನ್ನಾಗಿ ಮಾಡಿಕೊಳ್ಳುವ ಪರಿಶ್ರಮ ಪಡಬೇಕಾಗಿದೆ. ಬುದ್ಧಿಯಲ್ಲಿ ಸದಾ ಇರಲಿ - ನಾವು
ಪ್ರಜಾಪಿತ ಬ್ರಹ್ಮನ ಮಕ್ಕಳು ಸಹೋದರ-ಸಹೋದರಿಯರಾಗಿದ್ದೇವೆ, ವಿಕಾರಿ ದೃಷ್ಟಿಯನ್ನಿಡಲು
ಸಾಧ್ಯವಿಲ್ಲ.
2. ಶರೀರ ನಿರ್ವಹಣಾರ್ಥವಾಗಿ ಕರ್ಮ ಮಾಡುತ್ತಾ ಬುದ್ಧಿಯೋಗವನ್ನು ಒಬ್ಬ ತಂದೆಯೊಂದಿಗೆ
ಜೋಡಿಸಬೇಕಾಗಿದೆ, ಹದ್ದಿನ ಎಲ್ಲಾ ಮಾತುಗಳನ್ನು ಬಿಟ್ಟು ಬೇಹದ್ದಿನ ತಂದೆಯನ್ನು ನೆನಪು
ಮಾಡಬೇಕಾಗಿದೆ. ಬೇಹದ್ದಿನ ಸನ್ಯಾಸಿಗಳಾಗಬೇಕಾಗಿದೆ.
ವರದಾನ:
ಸದಾ ಅತೀಂದ್ರೀಯ
ಸುಖದ ಉಯ್ಯಾಲೆಯಲ್ಲಿ ತೂಗಾಡುವಂತಹ ಸಂಗಮಯುಗದ ಸರ್ವ ಅಲೌಕಿಕ ಪ್ರಾಪ್ತಿಗಳಿಂದ ಸಂಪನ್ನ ಭವ.
ಯಾವ ಮಕ್ಕಳು ಅಲೌಕಿಕ
ಪ್ರಾಪ್ತಿಗಳಿಂದ ಸದಾ ಸಂಪನ್ನರಾಗಿದ್ದಾರೆ ಅವರು ಅತೀಂದ್ರಿಯ ಸುಖದ ಉಯ್ಯಾಲೆಯಲ್ಲಿ
ತೂಗಾಡುತ್ತಿರುತ್ತಾರೆ. ಹೇಗೆ ಮುದ್ಧಾದ ಮಕ್ಕಳನ್ನು ಉಯ್ಯಾಲೆಯಲ್ಲಿ ತೂಗಾಡಿಸುತ್ತಾರೆ. ಅದೇ ರೀತಿ
ಸರ್ವ ಪ್ರಾಪ್ತಿ ಸಂಪನ್ನ ಬ್ರಾಹ್ಮಣರ ಉಯ್ಯಾಲೆ ಅತೀಂದ್ರಿಯ ಸುಖದ ಉಯ್ಯಾಲೆಯಾಗಿದೆ, ಈ
ಉಯ್ಯಾಲೆಯಲ್ಲಿ ಸದಾ ತೂಗಾಡುತ್ತಿರಿ. ಎಂದೂ ಸಹಾ ದೇಹಾಭಿಮಾನದಲ್ಲಿ ಬರಬೇಡಿ. ಯಾರು ಉಯ್ಯಾಲೆಯಿಂದ
ಇಳಿದು ಧರಣಿಯ ಮೇಲೆ ಕಾಲನ್ನಿಡುತ್ತಾರೆ ಅವರು ಮೈಲಿಗೆಯಾಗಿ ಬಿಡುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ
ತಂದೆಯ ಸ್ವಚ್ಛ ಮಕ್ಕಳು ಸದಾ ಅತೀಂದ್ರೀಯ ಸುಖದ ಉಯ್ಯಾಲೆಯಲ್ಲಿ ತೂಗಾಡುತ್ತಾರೆ, ಮಣ್ಣಿನಲ್ಲಿ
ಕಾಲನ್ನಿಡಲು ಸಾಧ್ಯವಿಲ್ಲ.
ಸ್ಲೋಗನ್:
“ನಾನು
ತ್ಯಾಗಿಯಾಗಿದ್ದೇನೆ” ಈ ಅಭಿಮಾನದ ತ್ಯಾಗವೇ ಸತ್ಯ ತ್ಯಾಗವಾಗಿದೆ.