13.12.20 Avyakt Bapdada
Kannada
Murli 18.03.87 Om Shanti Madhuban
ಸತ್ಯ ಆತ್ಮಿಕ
ಪ್ರಿಯತಮೆಯ ಲಕ್ಷಣಗಳು
ಇಂದು ಆತ್ಮಿಕ ಪ್ರಿಯಕರನು
ತನ್ನ ಆತ್ಮಿಕ ಪ್ರಿಯತಮೆ ಆತ್ಮರೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ಇಡೀ ಕಲ್ಪದ ಈ ಸಮಯದಲ್ಲಿಯೇ
ಆತ್ಮಿಕ ಪ್ರಿಯಕರ ಹಾಗೂ ಪ್ರಿಯತಮೆಯರ ಮಿಲನವಾಗುತ್ತದೆ. ಇದೆಂತಹ ಆತ್ಮಿಕ ಆಕರ್ಷಣೆಯಿಂದ
ಆಕರ್ಷಿತನಾಗುತ್ತಾ, ತನ್ನ ಸತ್ಯ ಪ್ರಿಯಕರನನ್ನು ತಿಳಿದುಕೊಂಡರು, ಪಡೆದುಕೊಂಡರು ಎಂದು
ಬಾಪ್ದಾದಾರವರು ತನ್ನ ಪ್ರಿಯತಮೆಯರಾದ ಆತ್ಮರಲ್ಲಿ ಪ್ರತಿಯೊಬ್ಬರನ್ನೂ ನೋಡುತ್ತಾ
ಹರ್ಷಿತವಾಗುತ್ತಿದೆ. ಪ್ರಿಯಕರನಿಗೂ ಕಳೆದುಕೊಂಡಿರುವ ಪ್ರಿಯತಮೆಯರನ್ನು ನೋಡುತ್ತಾ ಖುಷಿಯಾಗುತ್ತದೆ
- ಇವರು ಮತ್ತೆ ತಮ್ಮ ಯಥಾರ್ಥ ಮನೆಗೆ ತಲುಪಿದರು ಎಂದು. ಮತ್ತೆ ಯಾರೂ ಇಂತಹ ಸರ್ವ ಪ್ರಾಪ್ತಿಗಳನ್ನು
ರೂಪಿಸುವಂತಹ ಪ್ರಿಯಕರನು ಸಿಗಲು ಸಾಧ್ಯವಿಲ್ಲ. ಆತ್ಮಿಕ ಪ್ರಿಯಕರನು ಸದಾ ತನ್ನ ಪ್ರಿಯತಮೆಯರೊಂದಿಗೆ
ಮಿಲನ ಆಗುವುದಕ್ಕಾಗಿ ಎಲ್ಲಿಗೆ ಬರುತ್ತಾರೆ? ಶ್ರೇಷ್ಠ ಪ್ರಿಯಕರ ಹಾಗೂ ಪ್ರಿಯತಮೆಯು ಹೇಗಿದ್ದಾರೆಯೋ,
ಅಂತಹ ಶ್ರೇಷ್ಠ ಸ್ಥಾನದಲ್ಲಿಯೇ ಮಿಲನವಾಗಲು ಬರುತ್ತಾರೆ. ಇದೆಂತಹ ಸ್ಥಾನವಾಗಿದೆ, ಎಲ್ಲಿ
ಮಿಲನವನ್ನು ಆಚರಿಸುತ್ತಿದ್ದೀರಿ? ಇದೇ ಸ್ಥಾನಕ್ಕೆ ಸರ್ವ ಹೆಸರುಗಳನ್ನು ಕೊಡಬಹುದು. ಮಿಲನವಾಗುವ
ಸ್ಥಾನವು ಅತಿ ಪ್ರಿಯವೆನಿಸುತ್ತದೆ, ಅದು ಯಾವುದು? ಮಿಲನವು ಹೂಗಳ ಉದ್ಯಾನವನದಲ್ಲಿ ಆಗುತ್ತದೆ ಅಥವಾ
ಸಾಗರದ ದಡದಲ್ಲಿ ಮಿಲನವಾಗುತ್ತದೆ, ಅದನ್ನು ತಮ್ಮೆಲ್ಲರ ಮಧ್ಯೆ (ಸಾಗರದ ದಡ) ಎಂದು ಹೇಳುತ್ತೀರಿ.
ಅಂದಾಗ ಈಗ ತಾವುಗಳೆಲ್ಲಿ ಕುಳಿತಿದ್ದೀರಿ? ಜ್ಞಾನ ಸಾಗರನ ದಡ ಆತ್ಮಿಕ ಮಿಲನದ ಸ್ಥಾನದಲ್ಲಿ
ಕುಳಿತಿದ್ದೀರಿ. ಆತ್ಮಿಕ ಅಥವಾ ಅಲ್ಲಾಹ್ನ ಉದ್ಯಾನವನವಾಗಿದೆ. ಇನ್ನೂ ಅನೇಕ ಪ್ರಕಾರದ
ಉದ್ಯಾನವನಗಳನ್ನು ನೋಡಿದ್ದೇವೆ. ಆದರೆ ಎಲ್ಲಿ ಒಂದಕ್ಕಿಂತ ಇನ್ನೊಂದು ಅರಳಿರುವ ಹೂಗಳಿವೆ, ಒಂದೊಂದು
ಶ್ರೇಷ್ಠ ಸುಂದರತೆಯಿಂದ ತನ್ನ ಸುಗಂಧವನ್ನು ಹರಡುತ್ತಿದೆ - ಇದು ಇಂತಹ ಉದ್ಯಾನವನವಾಗಿದೆ. ಈ
ಉದ್ಯಾನವನದಲ್ಲಿಯೇ ಬಾಪ್ದಾದಾ ಅಥವಾ ಪ್ರಿಯಕರನು ಮಿಲನವಾಗಲು ಬರುತ್ತಾರೆ. ಅನೇಕ ಪ್ರಕಾರದ
ಬೀಚ್(ಸಮುದ್ರದ ದಂಡೆ)ಗಳನ್ನು ನೋಡಿದ್ದೀರಿ. ಆದರೆ ಇಂತಹ ಬೀಚ್ನ್ನು ಎಂದಾದರೂ ನೋಡಿದ್ದೀರಾ, ಎಲ್ಲಿ
ಜ್ಞಾನ ಸಾಗರನ ಸ್ನೇಹದ ಅಲೆಗಳು, ಶಕ್ತಿಯ ಅಲೆಗಳು, ಆ ಭಿನ್ನ-ಭಿನ್ನ ಪ್ರಕಾರದ ಅಲೆಗಳು ಅಲೆಯುತ್ತಾ
ತಮ್ಮನ್ನು ಸದಾ ಕಾಲಕ್ಕಾಗಿ ರಿಫ್ರೆಷ್ ಮಾಡಿ ಬಿಡುತ್ತದೆ? ಈ ಸ್ಥಾನವು ಪ್ರಿಯವಾಗಿದೆಯಲ್ಲವೆ?
ಇಲ್ಲಿ ಸ್ವಚ್ಛತೆಯೂ ಇದೆ ಮತ್ತು ರಮಣೀಕತೆಯೂ ಇದೆ, ಸುಂದರತೆಯೂ ಇದೆ, ಇಷ್ಟೊಂದು ಪ್ರಾಪ್ತಿಗಳೂ ಇವೆ.
ತಾವು ಪ್ರಿಯತಮೆಯರಿಗಾಗಿ ಪ್ರಿಯಕರನು ಇಂತಹ ವಿಶೇಷ ಸ್ಥಾನವನ್ನು ತಯಾರು ಮಾಡಿದ್ದಾರೆ, ಅಲ್ಲಿ
ಬರುವುದರಿಂದ ಪ್ರೀತಿಯ ರೇಖೆಯೊಳಗೆ ತಲುಪುತ್ತಿದ್ದಂತೆಯೇ ಅನೇಕ ಪ್ರಕಾರದ ಪರಿಶ್ರಮಗಳಿಂದ
ಮುಕ್ತರಾಗಿ ಬಿಡುತ್ತೀರಿ. ಅತಿ ದೊಡ್ಡ ಪರಿಶ್ರಮವಾಗಿದೆ - ಸ್ವಾಭಾವಿಕ ನೆನಪಿನಲ್ಲಿರುವುದು,
ಅದನ್ನಿಲ್ಲಿ ಸಹಜ ಅನುಭವ ಮಾಡುತ್ತೀರಿ ಹಾಗೂ ಎಂತಹ ಪರಿಶ್ರಮದಿಂದ ಮುಕ್ತರಾಗುತ್ತೀರಿ? ಲೌಕಿಕ
ನೌಕರಿಯಿಂದಲೂ ಮುಕ್ತರಾಗುತ್ತೀರಿ, ಭೋಜನವನ್ನು ತಯಾರು ಮಾಡುವುದರಿಂದಲೂ ಮುಕ್ತರಾಗುತ್ತೀರಿ. ಇಲ್ಲಿ
ಎಲ್ಲವೂ ತಯಾರಾಗಿರುವುದೇ ಸಿಗುತ್ತದೆಯಲ್ಲವೆ. ನೆನಪೂ ಸಹ ಸ್ವತಹವಾಗಿಯೇ ಅನುಭವವಾಗುತ್ತದೆ.
ಜ್ಞಾನರತ್ನಗಳ ಜೋಳಿಗೆಯೂ ತುಂಬುತ್ತಿರುತ್ತದೆ, ಇಂತಹ ಸ್ಥಾನದಲ್ಲಿ ಪರಿಶ್ರಮದಿಂದಲೂ
ಮುಕ್ತರಾಗುತ್ತೀರಿ ಹಾಗೂ ಪ್ರೀತಿಯಲ್ಲಿಯೂ ತಲ್ಲೀನರಾಗಿ ಹೋಗುತ್ತೀರಿ.
ಹಾಗೆ ನೋಡಿದಾಗ ಸ್ನೇಹದ ಸಂಕೇತದಲ್ಲಿ ವಿಶೇಷವಾಗಿ ಇದೇ ಗಾಯನವಾಗಿದೆ - ಸ್ನೇಹದಲ್ಲಿ ಇಬ್ಬರು
ಇಬ್ಬರಾಗಿರಬಾರದು ಆದರೆ ಇಬ್ಬರು ಒಂದಾಗಿರುವುದು, ಇದಕ್ಕೇ ಸಮಾವೇಶವಾಗುವುದು ಎಂದೂ ಸಹ
ಹೇಳಲಾಗುತ್ತದೆ. ಇದೇ ಸ್ನೇಹದ ಸ್ಥಿತಿಯನ್ನೇ ಭಕ್ತರು ಸಮಾವೇಶವಾಗುವುದು ಅಥವಾ ಲೀನವಾಗುವುದೆಂದು
ಹೇಳಿ ಬಿಟ್ಟಿದ್ದಾರೆ. ಅವರುಗಳು ಲೀನವಾಗುವುದರ ಅರ್ಥವನ್ನೇ ತಿಳಿದುಕೊಂಡಿಲ್ಲ, ಲವ್ನಲ್ಲಿ
ಲೀನವಾಗುವುದು - ಇದು ಸ್ಥಿತಿಯಾಗಿದೆ ಆದರೆ ಅವರುಗಳು ಇದನ್ನು ಸ್ಥಿತಿಯ ಬದಲಾಗಿ ಆತ್ಮನ
ಅಸ್ತಿತ್ವವನ್ನೇ ಸದಾಕಾಲಕ್ಕಾಗಿ ಸಮಾಪ್ತಿ ಮಾಡುವುದೆಂದು ತಿಳಿದುಕೊಂಡಿದ್ದಾರೆ. ಸಮಾವೇಶವಾಗುವುದು
ಅರ್ಥಾತ್ ಸಮಾನರಾಗಿ ಬಿಡುವುದು. ಯಾವಾಗ ತಂದೆಯ ಅಥವಾ ಆತ್ಮಿಕ ಪ್ರಿಯಕರನ ಮಿಲನದಲ್ಲಿ
ಮಗ್ನರಾಗುತ್ತೀರಿ, ಆಗ ತಂದೆಯ ಸಮಾನರಾಗುವ ಅಥವಾ ಸಮಾವೇಶವಾಗುವ ಅನುಭವವನ್ನು ಮಾಡುತ್ತೀರಿ. ಈ
ಸ್ಥಿತಿಯನ್ನೇ ಭಕ್ತರು ಸಮಾವೇಶವಾಗಿ ಬಿಡುವುದು ಎಂದು ಹೇಳಿದ್ದಾರೆ. ಲೀನವೂ ಆಗುತ್ತೀರಿ, ಸಮಾವೇಶವೂ
ಆಗುತ್ತೀರಿ ಆದರೆ ಇದು ಮಿಲನದ ಪ್ರೀತಿಯ ಸ್ಥಿತಿಯ ಅನುಭೂತಿಯಾಗಿದೆ ತಿಳಿಯಿತೆ! ಆದ್ದರಿಂತ
ಬಾಪ್ದಾದಾರವರು ತನ್ನ ಪ್ರಿಯತಮೆಯರನ್ನು ನೋಡುತ್ತಿದ್ದಾರೆ.
ಸತ್ಯ ಪ್ರಿಯತಮೆ ಅರ್ಥಾತ್ ಸದಾಕಾಲದ ಪ್ರಿಯತಮೆ, ಸ್ವಾಭಾವಿಕ (ಸ್ವತಃ) ಪ್ರಿಯತಮೆ. ಸತ್ಯ
ಪ್ರಿಯತಮೆಯ ವಿಶೇಷತೆಗಳನ್ನೂ ತಿಳಿದುಕೊಂಡಿರುತ್ತೀರಿ. ಆದರೂ ಅವರ ಮುಖ್ಯವಾದ ಲಕ್ಷಣಗಳಾಗಿವೆ:-
ಮೊದಲ ಲಕ್ಷಣ -
ಸಮಯದನುಸಾರ ಒಬ್ಬ ಪ್ರಿಯಕರನೊಂದಿಗೇ ಸರ್ವ ಸಂಬಂಧಗಳ ಅನುಭೂತಿ ಮಾಡುವುದು. ಪ್ರಿಯಕರನು
ಒಬ್ಬನಿದ್ದಾನೆ ಆದರೆ ಒಬ್ಬನ ಜೊತೆ ಸರ್ವ ಸಂಬಂಧಗಳೂ ಇವೆ, ಯಾವ ಸಂಬಂಧವನ್ನು ಬಯಸುತ್ತೀರಿ ಮತ್ತು
ಯಾವ ಸಮಯದಲ್ಲಿ ಯಾವ ಸಂಬಂಧದ ಅವಶ್ಯಕತೆಯಿದೆಯೋ ಆ ಸಮಯದಲ್ಲಿ ಅದೇ ಸಂಬಂಧದಿಂದ, ಪ್ರೀತಿಯ ರೀತಿಯ
ಮೂಲಕ ಅನುಭವ ಮಾಡಬಹುದು. ಅಂದಮೇಲೆ ಮೊದಲ ಲಕ್ಷಣವಾಗಿದೆ - ಸರ್ವ ಸಂಬಂಧಗಳ ಅನುಭೂತಿ. ಕೇವಲ
ಸಂಬಂಧವಲ್ಲ, `ಸರ್ವ' ಎನ್ನುವ ಶಬ್ಧವನ್ನು ಅಂಡರ್ ಲೈನ್ ಮಾಡಿಕೊಳ್ಳಿರಿ. ಪ್ರಿಯತಮೆಯರಲ್ಲಿ ಅಂತಹ
ತುಂಟಾಟ ಮಾಡುವವವರೂ ಇದ್ದಾರೆ, ಅವರು ತಿಳಿಯುತ್ತಾರೆ - ಸಂಬಂಧವಂತು ಜೋಡಿಸಿದೆವು. ಆದರೆ ಸರ್ವ
ಸಂಬಂಧವನ್ನು ಜೋಡಣೆ ಮಾಡಿದ್ದೀರಾ? ಇನ್ನೊಂದು ಮಾತು - ಸಮಯದಲ್ಲಿ ಸಂಬಂಧದ ಅನುಭೂತಿ ಆಗುತ್ತದೆಯೇ?
ಜ್ಞಾನದ ಆಧಾರದ ಮೇಲೆ ಸಂಬಂಧವಿದೆಯೇ ಅಥವಾ ಹೃದಯದ ಅನುಭೂತಿಯಿಂದ ಸಂಬಂಧವಿದೆಯೇ? ಬಾಪ್ದಾದಾರವರು
ಸತ್ಯ ಹೃದಯದವರಿಂದ ಖುಷಿಯಾಗುತ್ತಾರೆ (ರಾಜಿಯಾಗುತ್ತಾರೆ), ಕೇವಲ ತೀಕ್ಷ್ಣ ಬುದ್ಧಿಯುಳ್ಳವರಿಂದ
ಖುಷಿಯಾಗುವುದಿಲ್ಲ. ಆದರೆ ಹೃದಯರಾಮನು ಹೃದಯದ (ಸತ್ಯ ಹೃದಯ) ಕಾರಣ ರಾಜಿಯಾಗಿದ್ದಾರೆ. ಆದ್ದರಿಂದ
ಹೃದಯದ ಅನುಭವವು ಹೃದಯಕ್ಕೆ ಗೊತ್ತಿರುತ್ತದೆ, ಹೃದಯರಾಮನಿಗೆ ತಿಳಿದಿರುತ್ತದೆ. ಸಮಾವೇಶ
ಮಾಡಿಕೊಳ್ಳುವ ಸ್ಥಾನವು ಹೃದಯವೆಂದು ಹೇಳಲಾಗುತ್ತದೆ, ಬುದ್ಧಿಗಲ್ಲ. ಜ್ಞಾನವನ್ನು ಸಮಾವೇಶ
ಮಾಡಿಕೊಳ್ಳುವ ಸ್ಥಾನವು ಬುದ್ಧಿಯಾಗಿದೆ ಆದರೆ ಪ್ರಿಯಕರನನ್ನು ಸಮಾವೇಶ ಮಾಡಿಕೊಳ್ಳುವ ಸ್ಥಾನವು
ಹೃದಯವಾಗಿದೆ. ಪ್ರಿಯಕರನು ಪ್ರಿಯತಮೆಯರ ಮಾತುಗಳನ್ನೇ ತಿಳಿಸುವರಲ್ಲವೆ. ಕೆಲಕೆಲವು ಪ್ರಿಯತಮೆಯರು
ಬಹಳ ಹೆಚ್ಚಾಗಿ ಬುದ್ಧಿಯನ್ನು ಉಪಯೋಗಿಸುತ್ತಾರೆ ಆದರೆ ಹೃದಯಕ್ಕಿಂತ ಬುದ್ಧಿಯ ಪರಿಶ್ರಮವು
ಅರ್ಧವಾಗಿ ಬಿಡುತ್ತದೆ. ಯಾರು ತುಂಬು ಹೃದಯದಿಂದ ಸೇವೆಯನ್ನು ಮಾಡುತ್ತಾರೆ ಅಥವಾ ನೆನಪು
ಮಾಡುತ್ತಾರೆಯೋ, ಅವರ ಪರಿಶ್ರಮವು ಕಡಿಮೆ ಮತ್ತು ಹೆಚ್ಚು ಸಂತುಷ್ಟತೆ ಉಂಟಾಗುತ್ತದೆ. ಯಾರು ಹೃದಯದ
ಸ್ನೇಹದಿಂದ ನೆನಪು ಮಾಡುವುದಿಲ್ಲ, ಕೇವಲ ಜ್ಞಾನದ ಆಧಾರದಿಂದ, ಬುದ್ಧಿಯಿಂದ ನೆನಪು ಮಾಡುತ್ತಾರೆ
ಅಥವಾ ಸೇವೆಯನ್ನು ಮಾಡುತ್ತಾರೆ, ಅವರು ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ, ಸಂತುಷ್ಟತೆಯು ಕಡಿಮೆ
ಸಿಗುತ್ತದೆ. ಭಲೆ ಸಫಲರಾಗಬಹುದು ಆದರೂ ಸಹ ಹೃದಯದ ಸಂತುಷ್ಟತೆಯಲ್ಲಿ ಕಡಿಮೆಯಾಗುತ್ತದೆ. ಅವರು
ಇದನ್ನೇ ಯೋಚಿಸುತ್ತಾ ಇರುತ್ತಾರೆ - ಆಗಿದ್ದಂತು ಒಳ್ಳೆಯದಾಯಿತು. ಆದರೆ ಆದರೂ..... ಆದರೂ...
ಎನ್ನುತ್ತಿರುತ್ತಾರೆ ಮತ್ತು ಹೃದಯದಿಂದ ಮಾಡಿರುವವರು ಸದಾ ಸಂತುಷ್ಟತೆಯ ಹಾಡನ್ನಾಡುತ್ತಾ
ಇರುತ್ತಾರೆ. ಹೃದಯದ ಸಂತುಷ್ಟತೆಯ ಹಾಡು, ಮುಖದ ಸಂತುಷ್ಟತೆಯ ಹಾಡಲ್ಲ. ಸತ್ಯ ಪ್ರಿಯತಮೆಯರು ಸಮಯ
ಪ್ರಮಾಣ ಹೃದಯದಿಂದ ಸರ್ವ ಸಂಬಂಧಗಳ ಅನುಭೂತಿ ಮಾಡುತ್ತಾರೆ.
ಇನ್ನೊಂದು
ಲಕ್ಷಣ - ಸತ್ಯ
ಪ್ರಿಯತಮೆಯರು ಪ್ರತಿಯೊಂದು ಪರಿಸ್ಥಿತಿಯಲ್ಲಿ, ಪ್ರತೀ ಕರ್ಮದಲ್ಲಿಯೂ ಸದಾ ಪ್ರಾಪ್ತಿಯ
ಖುಷಿಯಲ್ಲಿರುತ್ತಾರೆ. ಒಂದು - ಅನುಭೂತಿ, ಇನ್ನೊಂದಿದೆ - ಅವರಿಂದ ಪ್ರಾಪ್ತಿ. ಹಲವರು
ಅನುಭೂತಿಯನ್ನೂ ಮಾಡುತ್ತಾರೆ - ಹೌದು, ಇವರು ನನ್ನ ಬಾಬಾ ಸಹ ಆಗಿದ್ದಾರೆ, ಪ್ರಿಯಕರನೂ ಆಗಿದ್ದಾರೆ,
ಮಗನೂ ಆಗಿದ್ದಾರೆ ಎಂದು. ಆದರೆ ಪ್ರಾಪ್ತಿಯನ್ನೆಷ್ಟು ಬಯಸುತ್ತಾರೆಯೋ ಅಷ್ಟಾಗುವುದಿಲ್ಲ.
ತಂದೆಯಾಗಿದ್ದಾರೆ ಆದರೆ ಆಸ್ತಿಯ ಪ್ರಾಪ್ತಿಯ ಖುಷಿಯಿರುವುದಿಲ್ಲ. ಅನುಭೂತಿಯ ಜೊತೆಗೆ ಸರ್ವ
ಸಂಬಂಧಗಳ ಮೂಲಕ ಪ್ರಾಪ್ತಿಯ ಅನುಭವವೂ ಆಗಲಿ. ಹೇಗೆ ತಂದೆಯ ಸಂಬಂಧದ ಮೂಲಕ ಸದಾ ಆಸ್ತಿಯ ಪ್ರಾಪ್ತಿಯ
ಅನುಭೂತಿಯಾಗಬೇಕು, ಸಂಪನ್ನರಾಗಬೇಕು. ಸದ್ಗುರುವಿನ ಮೂಲಕ ಸದಾ ವರದಾನಗಳಿಂದ ಸಂಪನ್ನ ಸ್ಥಿತಿಯ ಅಥವಾ
ಸದಾ ಸಂಪನ್ನ ಸ್ವರೂಪದ ಅನುಭೂತಿಯಾಗಬೇಕು. ಹಾಗಾದರೆ ಈ ಪ್ರಾಪ್ತಿಯ ಅನುಭೂತಿಯೂ ಅವಶ್ಯಕತೆಯಿದೆ.
ಅದಾಯಿತು ಸಂಬಂಧದ ಅನುಭವ, ಇದು ಪ್ರಾಪ್ತಿಗಳ ಅನುಭವವಾಗಿದೆ. ಹಲವರಿಗೆ ಈ ಸರ್ವ ಸಂಬಂಧಗಳ ಅನುಭವವೇ
ಆಗುವುದಿಲ್ಲ, ಮಾಸ್ಟರ್ ಸರ್ವಶಕ್ತಿವಂತನಾಗಿದ್ದೇನೆ ಎಂಬ ಸ್ಥಿತಿಯಲ್ಲಿರುತ್ತಾರೆ ಆದರೆ ಸಮಯದಲ್ಲಿ
ಶಕ್ತಿಗಳ ಪ್ರಾಪ್ತಿಯಾಗುವುದಿಲ್ಲ. ಪ್ರಾಪ್ತಿಗಳ ಅನುಭೂತಿಯೇ ಆಗದಿದ್ದರೆ ಪ್ರಾಪ್ತಿಯಲ್ಲಿಯೂ
ಕೊರತೆಯಿದೆ ಅಂದಾಗ ಅನುಭೂತಿಯ ಜೊತೆಗೆ ಪ್ರಾಪ್ತಿ ಸ್ವರೂಪರೂ ಆಗಬೇಕು - ಇದಾಗಿದೆ ಸತ್ಯ
ಪ್ರಿಯತಮೆಯರ ಲಕ್ಷಣ.
ಮೂರನೇ ಲಕ್ಷಣ -
ಯಾವ ಪ್ರಿಯತಮೆಗೆ
ಅನುಭೂತಿಯೂ ಇದೆ, ಪ್ರಾಪ್ತಿಯೂ ಇದೆಯೋ ಅವರು ಸದಾ ತೃಪ್ತರಾಗಿರುತ್ತಾರೆ, ಯಾವುದೇ ಮಾತಿನಲ್ಲಿ
ಅಪ್ರಾಪ್ತ ಆತ್ಮನೆನಿಸುವುದಿಲ್ಲ. ಅಂದಾಗ `ತೃಪ್ತಿ'- ಇದು ಪ್ರಿಯತಮೆಯ ವಿಶೇಷತೆಯಾಗಿದೆ. ಎಲ್ಲಿ
ಪ್ರಾಪ್ತಿಯಿದೆ, ಅಲ್ಲಿ ಅವಶ್ಯವಾಗಿ ತೃಪ್ತಿಯಿರುತ್ತದೆ. ಒಂದುವೇಳೆ ತೃಪ್ತಿಯಿಲ್ಲದಿದ್ದರೆ
ಅವಶ್ಯವಾಗಿ ಪ್ರಾಪ್ತಿಯಲ್ಲಿ ಕೊರತೆಯಿದೆ ಎಂದರ್ಥ. ಮತ್ತು ಪ್ರಾಪ್ತಿಯಿಲ್ಲದಿದ್ದರೆ ಸರ್ವ
ಸಂಬಂಧಗಳ ಅನುಭೂತಿಯಲ್ಲಿ ಕೊರತೆಯಿದೆ. ಅಂದಾಗ ಮೂರು ಲಕ್ಷಣಗಳಿವೆ - ಅನುಭೂತಿ, ಪ್ರಾಪ್ತಿ ಹಾಗೂ
ತೃಪ್ತಿ. ಎಂತಹ ಸಮಯವೇ ಇರಲಿ, ಎಂತಹ ವಾಯುಮಂಡಲವೇ ಇರಲಿ, ಎಂತಹ ಸೇವಾ ಸಾಧನಗಳೇ ಇರಲಿ, ಸೇವೆಯ
ಸಂಘಟನೆಯ ಜೊತೆಗಾರರೂ ಹೇಗಾದರೂ ಇರಲಿ ಆದರೆ ಪ್ರತಿಯೊಂದು ಸಂದರ್ಭದಲ್ಲಿಯೂ, ಪ್ರತಿಯೊಂದು
ಚಲನೆಯಲ್ಲಿಯೂ ತೃಪ್ತನಾಗಿರುವವರು, ಇಂತಹ ಸತ್ಯ ಪ್ರಿಯತಮೆ ಆಗಿದ್ದೀರಲ್ಲವೇ? ತೃಪ್ತ ಆತ್ಮನಲ್ಲಿ
ಅಲ್ಪಕಾಲದ ಯಾವುದೇ ಇಚ್ಛೆಗಳು ಇರುವುದಿಲ್ಲ. ಅದೇ ರೀತಿಯಲ್ಲಿ ತೃಪ್ತ ಆತ್ಮ ಆಗಿರುವವರು ಬಹಳ
ಕೆಲವರೇ ಇರುತ್ತಾರೆ. ಯಾವುದಾದರು ಒಂದು ಮಾತಿನಲ್ಲಿ ಭಲೆ ಮಾನ್ಯತೆಯಿರಲಿ ಅಥವಾ ಸ್ಥಾನದ
ಇಚ್ಛೆಯಿರುತ್ತದೆ, ಇಚ್ಚೆಯುಳ್ಳವರು ಎಂದಿಗೂ ಸಹ ತೃಪ್ತರಾಗುವುದಿಲ್ಲ. ಯಾರ ಹೊಟ್ಟೆಯು ಸದಾ
ತುಂಬಿರುತ್ತದೆಯೋ ಅವರು ತೃಪ್ತರಾಗಿರುತ್ತಾರೆ. ಅಂದಮೇಲೆ ಶರೀರದ ಭೋಜನದ ಹಸಿವು ಹೇಗಿರುತ್ತದೆಯೋ
ಹಾಗೆಯೇ ಮನಸ್ಸಿನ ಹಸಿವಾಗಿದೆ - ಸ್ಥಾನ, ಮಾನ್ಯತೆ, ಪರಿಹಾರ, ಸಾಧನಗಳು ಮನಸ್ಸಿನ ಹಸಿವಾಗಿದೆ.
ಯಾವ ರೀತಿ ಶರೀರದ ತೃಪ್ತಿಯಿರುವವರು ಸದಾ ಸಂತುಷ್ಟವಾಗಿ ಇರುತ್ತಾರೆಯೋ ಹಾಗೆಯೇ ಮನಸ್ಸಿನ
ತೃಪ್ತಿಯಿರುವವರೂ ಸದಾ ಸಂತುಷ್ಟವಾಗಿರುತ್ತಾರೆ, ಸಂತುಷ್ಟೆಯು ತೃಪ್ತಿಯ ಚಿಹ್ನೆಯಾಗಿದೆ. ಒಂದು
ವೇಳೆ ಭಲೆ ಶರೀರದ ಹಸಿವು ಅಥವಾ ಮನಸ್ಸಿನ ಹಸಿವಿರುತ್ತದೆ ಎಂದರೆ, ಅವರಿಗೆ ಎಷ್ಟೇ ಸಿಗುತ್ತಿರಬಹುದು,
ಹೆಚ್ಚಾಗಿಯೇ ಸಿಗುತ್ತಿರುತ್ತದೆ. ಆದರೆ ತೃಪ್ತಾತ್ಮ ಆಗಿರದ ಕಾರಣದಿಂದ ಸದಾ ಕಾಲವೂ
ಅತೃಪ್ತರಾಗಿರುತ್ತಾರೆ, ಅಸಂತುಷ್ಟತೆಯಿರುತ್ತದೆ. ಯಾರು ರಾಯಲ್ ಆಗಿರುತ್ತಾರೆಯೋ ಅವರು
ಸ್ವಲ್ಪದರಲ್ಲಿಯೇ ತೃಪ್ತರಾಗುತ್ತಾರೆ. ರಾಯಲ್ ಆತ್ಮರ ಲಕ್ಷಣವಾಗಿದೆ - ಸದಾಕಾಲವೂ
ಸಂಪನ್ನರಾಗಿರುತ್ತಾರೆ, ಒಂದು ರೊಟ್ಟಿಯಲ್ಲಿಯೂ ತೃಪ್ತರು, ಭಲೆ 36 ಪ್ರಕಾರದ ಭೋಜನದಲ್ಲಿಯೂ
ತೃಪ್ತರಾಗಿರುತ್ತಾರೆ. ಹಾಗೆಯೇ ಯಾರು ಅತೃಪ್ತರಾಗಿ ಇರುತ್ತಾರೆಯೋ ಅವರಿಗೆ 36 ಪ್ರಕಾರದ ಭೋಜನವು
ಸಿಗುತ್ತಿದ್ದರೂ ತೃಪ್ತರಾಗಿರುವುದಿಲ್ಲ ಏಕೆಂದರೆ ಮನಸ್ಸಿನ ಹಸಿವಿದೆ. ಸತ್ಯ ಪ್ರಿಯತಮೆಯ
ಲಕ್ಷಣವಾಗಿದೆ - ಸದಾ ತೃಪ್ತ ಆತ್ಮ ಆಗಿರುವುದು. ಅಂದಮೇಲೆ ಈ ಮೂರೂ ಲಕ್ಷಣಗಳಲ್ಲಿ ಪರಿಶೀಲನೆ
ಮಾಡಿಕೊಳ್ಳಿರಿ, ಸದಾ ಇದನ್ನೇ ಯೋಚನೆ ಮಾಡಿ - `ನಾವು ಯಾರ ಪ್ರಿಯತಮೆ ಆಗಿದ್ದೇವೆ! ಯಾರು
ಸಂಪನ್ನವಾಗಿದ್ದಾರೆಯೋ ಅಂತಹ ಪ್ರಿಯಕರನ ಪ್ರಿಯತಮೆ ಆಗಿದ್ದೇವೆ!'. ಆದರೆ ಸಂತುಷ್ಟತೆಯನ್ನು ಎಂದಿಗೂ
ಬಿಡಬಾರದು. ಸೇವೆಯನ್ನು ಬಿಡಿ ಆದರೆ ಸಂತುಷ್ಟತೆಯನ್ನು ಬಿಡಬಾರದು. ಯಾವ ಸೇವೆಯು ಅಸಂತುಷ್ಟರನ್ನಾಗಿ
ಮಾಡುತ್ತದೆಯೋ ಆ ಸೇವೆಯು ಸೇವೆಯಲ್ಲ. ಸೇವೆಯೆಂದರೆ ಫಲವನ್ನು ಕೊಡುವಂತಹ ಸೇವೆಯೆಂದರ್ಥವಾಗಿದೆ.
ಅಂದಾಗ ಸತ್ಯ ಪ್ರಿಯತಮೆಯು ಸರ್ವ ಅಲ್ಪಕಾಲದ ಇಚ್ಛೆಗಳಿಂದ ದೂರವಾಗಿ, ಸದಾಕಾಲವೂ ಸಂಪನ್ನ ಮತ್ತು
ಸಮಾನರಾಗಿರುತ್ತಾರೆ.
ಇಂದು ಪ್ರಿಯತಮೆಯರ ಕಥೆಗಳನ್ನು ತಿಳಿಸುತ್ತಿದ್ದೇವೆ. ಬಹಳಷ್ಟು ತುಂಟಾಟಗಳನ್ನೂ ಮಾಡುತ್ತಾರೆ,
ಅದನ್ನು ಪ್ರಿಯಕರನು ನೋಡಿ-ನೋಡಿ ಮುಗುಳ್ನಗುತ್ತಾ ಇರುತ್ತಾರೆ. ಭಲೆ ತುಂಟಾಟ ಮಾಡಿರಿ ಆದರೆ
ತಮ್ಮನ್ನು ಪ್ರಿಯಕರನ ಪ್ರಿಯತಮೆಯೆಂದು ತಿಳಿದುಕೊಂಡು, ಅವರ ಮುಂದೆ ಮಾಡಿರಿ ಅನ್ಯರ ಮುಂದೆ ಅಲ್ಲ.
ಭಿನ್ನ-ಭಿನ್ನ ಪ್ರಕಾರ ಅಲ್ಪಕಾಲದ ಸ್ವಭಾವ-ಸಂಸ್ಕಾರಗಳ ತುಂಟಾಟಗಳನ್ನು ಮಾಡುತ್ತಾರೆ, ಎಲ್ಲಿ ನನ್ನ
ಸ್ವಭಾವ ನನ್ನಸಂಸ್ಕಾರ ಎಂಬ ಶಬ್ಧಗಳು ಬರುತ್ತವೆಯೋ ಅಲ್ಲಿಯೂ ತುಂಟಾಟಗಳು ಪ್ರಾರಂಭವಾಗುತ್ತವೆ.
ತಂದೆಯ ಸ್ವಭಾವವೇ ನನ್ನ ಸ್ವಭಾವವಾಗಬೇಕು, ನನ್ನ ಸ್ವಭಾವವು ತಂದೆಯವರ ಸ್ವಭಾವಕ್ಕಿಂತ ಭಿನ್ನವಾಗಲು
ಸಾಧ್ಯವಿಲ್ಲ, ಭಿನ್ನವಾದ ಆ ಸ್ವಭಾವವು ಮಾಯೆಯದು ಬೇರೆಯವರದಾಗಿದೆ. ಅದನ್ನು ಹೇಗೆ ನನ್ನದೆಂದು
ಹೇಳುತ್ತೇನೆ? ಮಾಯೆಯೂ ಪರ ಆಗಿದೆ, ನನ್ನದಲ್ಲ. ತಂದೆಯು ನನ್ನವರಾಗಿದ್ದಾರೆ, ನನ್ನ ಸ್ವಭಾವ
ಅರ್ಥಾತ್ ತಂದೆಯ ಸ್ವಭಾವ. ಮಾಯೆಯ ಸ್ವಭಾವವನ್ನು ನನ್ನದೆಂದು ಹೇಳುವುದೂ ಸಹ ತಪ್ಪಾಗಿದೆ, `ನನ್ನದು'
ಎಂಬ ಶಬ್ಧವೇ ಜಂಜಾಟದಲ್ಲಿ ತೆಗೆದುಕೊಂಡು ಬರುತ್ತದೆ ಅರ್ಥಾತ್ ಸಿಲುಕಿಸುತ್ತದೆ. ಇಂತಹ
ತುಂಟಾಟಗಳನ್ನೂ ಸಹ ಪ್ರಿಯತಮೆಯರು ಪ್ರಿಯಕರನ ಮುಂದೆ ತೋರಿಸುತ್ತಾರೆ - ತಂದೆಯದು ಏನಿದೆಯೋ ಅದು
ನನ್ನದು, ಭಕ್ತಿಯಲ್ಲಿಯೂ ಸಹ ಪ್ರತೀ ಮಾತಿನಲ್ಲಿ ಇದನ್ನೇ ಹೇಳುತ್ತಾರೆ - ನಿನ್ನದೆಲ್ಲವೂ ನನ್ನದು,
ಮತ್ತೇನೂ ನನ್ನದಲ್ಲ. ಆದರೆ ಯಾವುದು ನಿನ್ನದು ಅದು ನನ್ನದಾಗಿದೆ ಎಂದರೆ, ತಂದೆಯ ಸಂಕಲ್ಪವು
ಏನಿದೆಯೋ ಅದು ನನ್ನ ಸಂಕಲ್ಪವಾಗಿದೆ. ಸೇವೆಯ ಪಾತ್ರವನ್ನು ಅಭಿನಯಿಸುವ ತಂದೆಯ ಸಂಸ್ಕಾರ-ಸ್ವಭಾವವೇ
ನನ್ನ ಸಂಸ್ಕಾರ-ಸ್ವಭಾವವಾಗಿದೆ. ಇದರಿಂದ ಏನಾಗುವುದು? ಅಲ್ಪಕಾಲದ ನನ್ನದೆಲ್ಲವೂ
ನಿನ್ನದಾಗಿಬಿಡುತ್ತದೆ. ನಿನ್ನದೆಲ್ಲವೂ ನನ್ನದು, ಮತ್ತೇನೂ ನನ್ನದಿಲ್ಲ. ಬಾಬಾರವರಿಗಿಂತ
ಭಿನ್ನವಾಗಿರುವುದು ಏನಿದೆಯೋ ಅದು ನನ್ನದಲ್ಲ, ಅದು ಮಾಯೆಯ ಬಲೆಯಾಗಿದೆ. ಆದ್ದರಿಂದ ಈ ಅಲ್ಪಕಾಲದ
ತುಂಟಾಟಗಳಿಂದ ಹೊರಬಂದು, ಭಲೆ ನಾನು ನಿನ್ನವಳು, ನೀನು ನನ್ನವನು ಎಂಬ ಆತ್ಮಿಕ ಅನುಭೂತಿಯ ಆತ್ಮಿಕ
ತುಂಟಾಟಗಳನ್ನು ಮಾಡಿ ಆದರೆ ಇದನ್ನು ಮಾಡಬೇಡಿ. ಸಂಬಂಧ ನಿಭಾಯಿಸುವುದರಲ್ಲಿಯೂ ಆತ್ಮಿಕ
ತುಂಟಾಟವನ್ನು ಮಾಡಬಹುದು, ಪ್ರೀತಿಯ ತುಂಟಾಟಗಳು ಚೆನ್ನಾಗಿರುತ್ತದೆ. ಕೆಲವೊಮ್ಮೆ ಸಖನ ಸಂಬಂಧದಿಂದ
ಪ್ರೀತಿಯ ತುಂಟಾಟದ ಅನುಭವ ಮಾಡಿ, ಆದರೆ ಅದು ತುಂಟಾಟವಲ್ಲ ಭಿನ್ನವಾದ ಅನುಭವವಾಗಿದೆ. ಸ್ನೇಹದ
ತುಂಟಾಟವು ಪ್ರಿಯವಾಗುತ್ತದೆ. ಹೇಗೆ ಚಿಕ್ಕ ಮಕ್ಕಳು ಬಹಳ ಸ್ನೇಹಿ ಹಾಗೂ ಪವಿತ್ರವಾಗಿರುವ ಕಾರಣ,
ಅವರ ತುಂಟಾಟಗಳೆಲ್ಲವೂ ಪ್ರಿಯವಾಗುತ್ತದೆ. ಶುದ್ಧತೆ ಮತ್ತು ಪವಿತ್ರತೆಯು ಮಕ್ಕಳಲ್ಲಿರುತ್ತದೆ. ಅದೇ
ರೀತಿ ಹಿರಿಯರಾಗಿರುವವರು ತುಂಟಾಟ ಮಾಡಿದರೆ ಒಳ್ಳೆಯದೆನಿಸುವುದಿಲ್ಲ. ಒಂದುವೇಳೆ ತುಂಟಾಟ
ಮಾಡಲೇಬೇಕೆಂದರೆ ಬಾಬಾರವರೊಂದಿಗೆ ಭಲೆ ಭಿನ್ನ-ಭಿನ್ನ ಸಂಬಂಧದ, ಸ್ನೇಹದ, ಪವಿತ್ರತೆಯ
ತುಂಟಾಟಗಳನ್ನು ಮಾಡಿರಿ.
`ಸದಾ ಕೈ(ಸಂಗಾತಿ) ಹಾಗೂ ಜೊತೆ(ಸಂಗ)'ವೇ ಸತ್ಯ ಪ್ರಿಯತಮೆ-ಪ್ರಿಯಕರನ ಲಕ್ಷಣವಾಗಿದೆ. ಸಂಗಾತಿ
ಮತ್ತು ಸಂಗವನ್ನು ಬಿಟ್ಟು ಹೋಗಬಾರದು. ಸದಾ ಬುದ್ಧಿಯ ಸಂಗವಿರಲಿ ಮತ್ತು ತಂದೆಯ ಪ್ರತಿಯೊಂದು
ಕಾರ್ಯದಲ್ಲಿ ಸಹಯೋಗದ ಸಂಗಾತಿಯಿರಲಿ. ಒಬ್ಬರಿನ್ನೊಬ್ಬರ ಸಹಯೋಗ ಮಾಡುವ ಚಿಹ್ನೆಯಾಗಿ ಕೈಯಲ್ಲಿ
ಕೈಯನ್ನು ಸೇರಿಸುವುದನ್ನು ತೋರಿಸುತ್ತಾರೆ ಅಲ್ಲವೆ. ಅಂದಮೇಲೆ ಸದಾ ತಂದೆಯ ಸಹಯೋಗಿ ಆಗುವುದಾಯಿತು
- ಸದಾ ಕೈಯಲ್ಲಿ ಕೈ ಮತ್ತು ಸದಾ ಬುದ್ಧಿಯಿಂದ ಜೊತೆಯಿರುವುದು(ತಂದೆಯ ಸಂಗದಲ್ಲಿರುವುದು).
ಮನಸ್ಸಿನ ಲಗನ್, ಬುದ್ಧಿಯ ಜೊತೆ- ಈ ಸ್ಥಿತಿಯಲ್ಲಿ ಇರುವುದು ಅರ್ಥಾತ್ ಸತ್ಯ ಪ್ರಿಯತಮೆ ಹಾಗೂ
ಪ್ರಿಯಕರನ ಭಾವಚಿತ್ರದಲ್ಲಿ ಇರುವುದು. ತಿಳಿಯಿತೆ? ಸದಾ ಜೊತೆಯಿರುತ್ತೇವೆ ಎನ್ನುವ ಪ್ರತಿಜ್ಞೆಯಿದೆ.
ಕೆಲವೊಮ್ಮೆ ಜೊತೆ ನಿಭಾಯಿಸುತ್ತೇವೆ ಎನ್ನುವ ಪ್ರತಿಜ್ಞೆಯಿಲ್ಲ. ಮನಸ್ಸಿನ ಸೆಳೆತವು ಕೆಲವೊಮ್ಮೆ
ಪ್ರಿಯಕರನೊಂದಿಗೆ ಇರುವುದು ಮತ್ತೆ ಕೆಲವೊಮ್ಮೆ ಇಲ್ಲದಿರುವುದು - ಅದು ಸದಾ ಜೊತೆಯಿರುವುದು
ಎನ್ನುವಂತಾಗುವುದಿಲ್ಲ ಅಲ್ಲವೆ, ಆದ್ದರಿಂದ ಸತ್ಯ ಪ್ರಿಯತಮೆಯ ಇದೇ ಭಾವ ಚಿತ್ರದಲ್ಲಿರಿ.
ದೃಷ್ಟಿಯಲ್ಲಿಯೂ ಪ್ರಿಯಕರನಿರಲಿ, ವೃತ್ತಿಯಲ್ಲಿಯೂ ಪ್ರಿಯಕರನಿರಲಿ, ತಮ್ಮ ಪ್ರಪಂಚವೇ
ಪ್ರಿಯಕರನಾಗಿರಬೇಕು.
ಅಂದಮೇಲೆ ಇದು ಪ್ರಿಯಕರ ಹಾಗೂ ಪ್ರಿಯತಮೆಯರ ಸಭೆಯಾಗಿದೆ. ಇದು ಉದ್ಯಾನವನವೂ ಆಗಿದೆ, ಸಾಗರದ ದಡವೂ
ಆಗಿದೆ. ಇದು ಅಂತಹ ಪ್ರೈವೇಟ್ ವಂಡರ್ಫುಲ್ ಬೀಚ್ ಆಗಿದೆ, ಇದು ಸಾವಿರಾರು ಮಂದಿಯ ಮಧ್ಯದಲ್ಲಿಯೂ
ಪ್ರೆವೇಟ್ ಆಗಿದೆ. ಪ್ರತಿಯೊಬ್ಬರೂ ಅನುಭವ ಮಾಡುತ್ತಾರೆ - ನನ್ನ ಜೊತೆ ಪ್ರಿಯಕರನಿಗೆ ವೈಯಕ್ತಿಕ
ಪ್ರೀತಿಯಿದೆ. ಪ್ರತಿಯೊಬ್ಬರಿಗೂ ವೈಯಕ್ತಿಕವಾದ ಪ್ರೀತಿಯ ಅನುಭವದ ಅನುಭೂತಿಯಾಗುವುದೇ ವಂಡರ್ಫುಲ್
ಪ್ರಿಯಕರ ಹಾಗೂ ಪ್ರಿಯತಮೆಯರದಾಗಿದೆ. ಇರುವುದಂತು ಒಬ್ಬ ಪ್ರಿಯಕರ ಆದರೆ ಎಲ್ಲರ
ಪ್ರಿಯಕರನಾಗಿದ್ದಾನೆ. ಎಲ್ಲರಿಗೂ ಅತಿ ಹೆಚ್ಚಿನ ಅಧಿಕಾರವಿದೆ, ಪ್ರತಿಯೊಬ್ಬರ ಅಧಿಕಾರವಿದೆ.
ಅಧಿಕಾರದಲ್ಲಿ ನಂಬರ್ ಇಲ್ಲ, ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುವುದರಲ್ಲಿ ನಂಬರ್ ಆಗಿ
ಬಿಡುತ್ತದೆ. ಸದಾ ಇದು ಸ್ಮೃತಿಯಿರಲಿ - `ಅಲ್ಲಾಹ್ನ ಉದ್ಯಾನವನದಲ್ಲಿ ಕೈ ಹಾಗೂ ಜೊತೆ ಕೊಟ್ಟು
ನಡೆಯುತ್ತಿದ್ದೇವೆ ಅಥವಾ ಕುಳಿತಿದ್ದೇವೆ, ಆತ್ಮಿಕ ಬೀಚ್ನಲ್ಲಿ ಕೈ ಹಾಗೂ ಜೊತೆ ಕೊಡುತ್ತಾ ಮೋಜನ್ನು
ಆಚರಿಸುತ್ತಿದ್ದೇವೆ'. ಇದರಿಂದ ಸದಾಕಾಲವೂ ಮನೋರಂಜನೆಯಲ್ಲಿ ಇರುತ್ತೀರಿ, ಸದಾ ಖುಷಿಯಲ್ಲಿರುತ್ತೀರಿ,
ಸದಾ ಸಂಪನ್ನರಾಗಿರುತ್ತೀರಿ. ಒಳ್ಳೆಯದು.
ಈ ಡಬಲ್ ವಿದೇಶಿಗಳೂ ಸಹ ಡಬಲ್ ಭಾಗ್ಯಶಾಲಿಗಳಾಗಿದ್ದಾರೆ. ಈಗಿನವರೆಗೂ ಯಾರು ತಲುಪಿದ್ದಾರೆ ಬಹಳ
ಒಳ್ಳೆಯದಾಯಿತು. ಮುಂದೆ ನಡೆದಂತೆ ಯಾವ ಪರಿವರ್ತನೆ ಆಗುತ್ತದೆಯೋ ಅದಂತು ಡ್ರಾಮಾ. ಆದರೆ ಯಾರು
ಸಮಯದ ಅನುಸಾರ ತಲುಪಿದ್ದಾರೆಯೋ ಅವರು ಡಬಲ್ ಭಾಗ್ಯಶಾಲಿ ಆಗಿದ್ದಾರೆ.
ಸದಾ ಅವಿನಾಶಿ ಪ್ರಿಯತಮೆಯರಾಗಿ ಆತ್ಮಿಕ ಪ್ರಿಯಕರನೊಂದಿಗೆ ಪ್ರೀತಿಯ ರೀತಿಯನ್ನು ನಿಭಾಯಿಸುವವರು,
ಸದಾ ಸ್ವಯಂನ್ನು ಸರ್ವ ಪ್ರಾಪ್ತಿಗಳಿಂದ ಸಂಪನ್ನರೆಂಬ ಅನುಭವ ಮಾಡುವವರು, ಸದಾ ಪ್ರತಿಯೊಂದು
ಪರಿಸ್ಥಿತಿಯಲ್ಲಿಯೂ ತೃಪ್ತರಾಗಿರುವವರು, ಸದಾ ಸಂತುಷ್ಟತೆಯ ಖಜಾನೆಯಿಂದ ಸಂಪನ್ನರಾಗಿದ್ದು
ಅನ್ಯರನ್ನೂ ಸಂಪನ್ನಗೊಳಿಸುವವರು, ಸದಾ ಜೊತೆ ಹಾಗೂ ಕೈ ಸೇರಿಸುವಂತಹ ಸತ್ಯ ಪ್ರಿಯತಮೆಯರಿಗೆ,
ಆತ್ಮಿಕ ಪ್ರಿಯಕರನ ಹೃದಯದಿಂದ ನೆನಪು-ಪ್ರೀತಿ ಹಾಗೂ ನಮಸ್ತೆ.
ವರದಾನ:
ಸದಾ ಶ್ರೇಷ್ಠ ಹಾಗೂ ಹೊಸ ಪ್ರಕಾರದ ಸೇವೆಯ ಮೂಲಕ ವೃದ್ಧಿಗೊಳಿಸುವಂತಹ ಸಹಜ ಸೇವಾಧಾರಿ ಭವ.
ಸಂಕಲ್ಪಗಳ ಮೂಲಕ
ಈಶ್ವರೀಯ ಸೇವೆಯನ್ನು ಮಾಡುವುದೂ ಸಹ ಸೇವೆಯ ಶ್ರೇಷ್ಠ ಹಾಗೂ ಹೊಸವಿಧಿ ಆಗಿದೆ, ಹೇಗೆ ಅಕ್ಕಸಾಲಿಗನು
ಪ್ರತಿನಿತ್ಯ ಮುಂಜಾನೆಯಲ್ಲಿ ತನ್ನ ಪ್ರತಿಯೊಂದು ರತ್ನಗಳನ್ನು ಈ ರೀತಿ ಪರಿಶೀಲನೆ ಮಾಡುತ್ತಾನೆ -
ಇದು ಸ್ವಚ್ಛವಾಗಿದೆಯೇ, ಹೊಳಪು ಸರಿಯಾಗಿದೆಯೇ, ಸರಿಯಾದ ಜಾಗದಲ್ಲಿ ಇಡುತ್ತಿದ್ದೇನೆಯೇ.... ಈ ರೀತಿ
ಪ್ರತಿನಿತ್ಯವೂ ಅಮೃತವೇಳೆಯಲ್ಲಿ ತಮ್ಮ ಸಂಪರ್ಕದಲ್ಲಿ ಬರುವಂತಹ ಆತ್ಮರ ಬಗ್ಗೆ, ಸಂಕಲ್ಪಗಳ ಮೂಲಕ
ದೃಷ್ಟಿಯನ್ನು ಹರಿದಾಡಿಸಿ, ಅವರುಗಳಿಗೆ ಸಂಕಲ್ಪದಿಂದ ತಾವೆಷ್ಟು ನೆನಪು ಮಾಡುತ್ತೀರಿ, ಆ
ಸಂಕಲ್ಪವಷ್ಟೇ ಅವರವರೆಗೆ ತಲುಪುವುದು..... ಈ ಪ್ರಕಾರದಲ್ಲಿ ಸೇವೆಯ ಹೊಸ ವಿಧಿಯನ್ನು
ಉಪಯೋಗಿಸುತ್ತಾ ವೃದ್ಧಿಗೊಳಿಸುತ್ತಾ ಸಾಗಿರಿ. ಆತ್ಮರನ್ನು ತಮ್ಮ ಸಹಜಯೋಗದ ಸೂಕ್ಷ್ಮ ಶಕ್ತಿಗಳು
ತಮ್ಮ ಕಡೆಗೆ ಸ್ವತಃವಾಗಿ ಆಕರ್ಷಿಸುತ್ತದೆ.
ಸ್ಲೋಗನ್:
ನೆಪಗಳನ್ನು(ಕಾರಣ) ಮರ್ಜ್ ಮಾಡಿರಿ ಮತ್ತು ಬೇಹದ್ದಿನ ವೈರಾಗ್ಯ ವೃತ್ತಿಯನ್ನು ಇಮರ್ಜ್ ಮಾಡಿಕೊಳ್ಳಿ.
ಮುರಳಿ ಪ್ರಶ್ನೆಗಳು -
1. ನಾವು ಆತ್ಮಿಕ
ಪ್ರಿಯತಮೆಯರಿಗೆ ಅತ್ಮಿಕ ಪ್ರಿಯತಮ ಎಂತಹ ಮನೋರಂಜನೆಯ ವಿಶೇಷ ಸ್ಥಾನವನ್ನು ಮಾಡಿದ್ದಾರೆ?
2. ಈ ಮನೋರಂಜನೆಯ ಸ್ಥಾನದಲ್ಲಿ ಯಾವುದರಿಂದ ಮುಕ್ತರಾಗುತ್ತೇವೆ ಮತ್ತು ಯಾವುದರಲ್ಲಿ
ಲೀನವಾಗುತ್ತೇವೆ?
3. ಸ್ನೇಹದ ಗುರುತಾಗಿ ಏನೆಂದು ಗಾಯನ ಮಾಡಿದ್ದಾರೆ?
4. ಸತ್ಯ ಪ್ರಿಯತಮೆಯರಾಗಿ ಯಾವ ಶಬ್ದವನ್ನು ಅಂಡರ್ಲೈನ್ ಮಾಡಲು ಬಾಬಾ ತಿಳಿಸುತ್ತಿದ್ದಾರೆ?
5. ಸತ್ಯ ಪ್ರಿಯತಮೆಯರು ಒಬ್ಬ ಪ್ರಿಯತಮನ ಜೊತೆ ಯಾವ ಅನುಭವವನ್ನು ಮಾಡುತ್ತಾರೆ?
6. ಸತ್ಯ ಪ್ರಿಯತಮೆಯರು ಸಮಯದಲ್ಲಿ ಯಾವ ಆಧಾರದಿಂದ ಸಂಬಂಧಗಳ ಅನುಭವ ಮಾಡುತ್ತಾರೆ?
7. ಸತ್ಯ ಪ್ರಿಯತಮೆಯರು ಪ್ರತಿ ಪರಿಸ್ಥಿತಿಯಲ್ಲಿ ಹೇಗಿರುತ್ತಾರೆ?
8. ಯಾವ ಪ್ರಿಯತಮೆಯರಿಗೆ ಅನುಭೂತಿಯಾಗುತ್ತದೆ, ಪ್ರಾಪ್ತಿಯಿರುತ್ತದೆ ಅವರು ಸದಾ ಹೇಗಿರುತ್ತಾರೆ?
9. ಇವತ್ತು ಬಾಬಾರವರು ಯಾರ ಕಥೆಯನ್ನು ತಿಳಿಸುತ್ತಿದ್ದಾರೆ?
10. ಸತ್ಯ ಪ್ರಿಯತಮೆ ಮತ್ತು ಪ್ರಿಯತಮನ ಲಕ್ಷಣವೇನು?