12/12/20 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ - ತಮ್ಮ ಅದೃಷ್ಟವನ್ನು ಶ್ರೇಷ್ಠ ಮಾಡಿಕೊಳ್ಳಬೇಕೆಂದರೆ ಯಾರೊಂದಿಗೇ ಮಾತನಾಡುತ್ತಿದ್ದರೂ ಸಹ ಬುದ್ಧಿಯೋಗವು ಒಬ್ಬ ತಂದೆಯೊಂದಿಗೆ ಜೋಡಿಸಿ"

ಪ್ರಶ್ನೆ:

ಹೊಸ ಪ್ರಪಂಚದ ಸ್ಥಾಪನೆಗೆ ನಿಮಿತ್ತರಾಗುವ ಮಕ್ಕಳಿಗೆ ತಂದೆಯ ಯಾವ ಆದೇಶವು ಸಿಕ್ಕಿದೆ?

ಉತ್ತರ:

ಮಕ್ಕಳೇ, ಈ ಹಳೆಯ ಪ್ರಪಂಚದೊಂದಿಗೆ ನಿಮಗೆ ಯಾವುದೇ ಸಂಬಂಧವಿಲ್ಲ, ಈ ಪ್ರಪಂಚದೊಂದಿಗೆ ಯಾವುದೇ ಮನಸ್ಸನ್ನಿಡಬೇಡಿ, ಪರಿಶೀಲನೆ ಮಾಡಿಕೊಳ್ಳಿ - ನಾನು ಶ್ರೀಮತಕ್ಕೆ ತದ್ವಿರುದ್ಧವಾದ ಕರ್ಮವನ್ನಂತೂ ಮಾಡುತ್ತಿಲ್ಲವೆ? ಆತ್ಮಿಕ ಸೇವೆಗೆ ನಿಮಿತ್ತನಾಗುತ್ತೇನೆಯೇ?

ಗೀತೆ:

ಭೋಲಾನಾಥನಿಗಿಂತ ಭಿನ್ನ.........

ಓಂ ಶಾಂತಿ. ಈಗ ಗೀತೆಯನ್ನು ಕೇಳುವ ಯಾವುದೇ ಅವಶ್ಯಕತೆಯಿರುವುದಿಲ್ಲ. ಬಹಳ ಮಟ್ಟಿಗೆ ಗೀತೆಯನ್ನು ಭಕ್ತರೇ ಹಾಡುತ್ತಾರೆ ಮತ್ತು ಕೇಳುತ್ತಾರೆ. ನೀವಂತೂ ವಿದ್ಯೆಯನ್ನು ಓದುತ್ತೀರಿ. ಈ ಗೀತೆಗಳೂ ಸಹ ವಿಶೇಷವಾಗಿ ಮಕ್ಕಳಿಗಾಗಿಯೇ ಇವೆ. ಮಕ್ಕಳಿಗೆ ತಿಳಿದಿದೆ - ತಂದೆಯು ನಮ್ಮ ಶ್ರೇಷ್ಠ ಅದೃಷ್ಟವನ್ನು ರೂಪಿಸುತ್ತಿದ್ದಾರೆ. ನಾವೀಗ ತಂದೆಯನ್ನೇ ನೆನಪು ಮಾಡಬೇಕು ಮತ್ತು ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಜಮಾ ಆಗುತ್ತಿದೆಯೇ ಅಥವಾ ನಷ್ಟವಾಗುತ್ತಿದೆಯೇ ಎಂದು ತಮ್ಮ ಲೆಕ್ಕ ಪತ್ರವನ್ನು ನೋಡಿಕೊಳ್ಳಬೇಕಾಗಿದೆ. ನನ್ನಲ್ಲಿ ಯಾವುದೇ ಕೊರತೆಯಿಲ್ಲವೆ? ಒಂದುವೇಳೆ ನನ್ನಲ್ಲಿ ಕೊರತೆಯಿದ್ದರೆ ಅದರಿಂದ ನನ್ನ ಅದೃಷ್ಟದಲ್ಲಿ ನಷ್ಟವುಂಟಾಗುವುದು. ಆದ್ದರಿಂದ ಅದನ್ನು ತೆಗೆದು ಹಾಕಬೇಕು. ಈ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳಬೇಕಾಗಿದೆ. ನಾವು ಈ ಲಕ್ಷ್ಮೀ-ನಾರಾಯಣರಾಗುತ್ತೇವೆಂದು ತಿಳಿಸಿರಿ. ಆದರೆ ಒಬ್ಬ ತಂದೆಯ ವಿನಃ ಮತ್ತ್ಯಾರನ್ನೂ ನೆನಪು ಮಾಡದಿದ್ದಾಗ ಮಾತ್ರ ಇದು ಸಾಧ್ಯ. ಯಾರೊಂದಿಗೇ ಮಾತನಾಡುತ್ತಾ, ನೋಡುತ್ತಲೂ ಸಹ ಬುದ್ಧಿಯೋಗವು ಅಲ್ಲಿ ಒಬ್ಬ ತಂದೆಯೊಂದಿಗೆ ಜೋಡಣೆಯಾಗಿರಲಿ. ನಾವಾತ್ಮಗಳು ತಂದೆಯನ್ನೇ ನೆನಪು ಮಾಡಬೇಕಾಗಿದೆ. ತಂದೆಯ ಆದೇಶ ಸಿಕ್ಕಿದೆ - ಮಕ್ಕಳೇ, ನನ್ನ ವಿನಃ ಮತ್ತ್ಯಾರೊಂದಿಗೂ ಮನಸ್ಸನ್ನಿಡಬೇಡಿ ಮತ್ತು ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಿ. ಈಗ ನಿಮ್ಮ 84 ಜನ್ಮಗಳು ಪೂರ್ಣವಾಯಿತು. ಪುನಃ ನೀವು ಹೋಗಿ ರಾಜಧಾನಿಯಲ್ಲಿ ಮೊದಲ ನಂಬರನ್ನು ಪಡೆದುಕೊಳ್ಳಿ. ರಾಜ್ಯ ಪದವಿಯನ್ನು ಬಿಟ್ಟು ಪ್ರಜೆಗಳಲ್ಲಿ ಬರುವಂತಾಗಬಾರದು ಅಥವಾ ಪ್ರಜೆಗಳಲ್ಲಿಯೂ ಕೆಳಗೆ ಇಳಿಯುವಂತಾಗಬಾರದು. ತಮ್ಮನ್ನು ಪರಿಶೀಲನೆ ಮಾಡಿಕೊಳ್ಳುತ್ತಾ ಇರಿ - ತಂದೆಯ ವಿನಃ ಮತ್ತ್ಯಾರೂ ಈ ತಿಳುವಳಿಕೆಯನ್ನು ಕೊಡಲು ಸಾಧ್ಯವಿಲ್ಲ. ತಂದೆ ಮತ್ತು ಶಿಕ್ಷಕರನ್ನು ನೆನಪು ಮಾಡುವುದರಿಂದ ಭಯವಿರುವುದು. ನಮಗೆ ಶಿಕ್ಷೆ ಸಿಗುವಂತಾಗಬಾರದು. ಪಾಪ ಮಾಡಿದರೆ ನಾವು ಶಿಕ್ಷೆಗೆ ಗುರಿಯಾಗುತ್ತೇವೆಂದು ಭಕ್ತಿಯಲ್ಲಿಯೂ ಸಹ ತಿಳಿದುಕೊಳ್ಳುತ್ತಾರೆ. ಇಲ್ಲಂತೂ ದೊಡ್ಡ ತಂದೆಯ ಆದೇಶವು ಈಗಲೇ ಸಿಗುತ್ತದೆ, ಇದಕ್ಕೆ ಶ್ರೀಮತವೆಂದು ಹೇಳುತ್ತಾರೆ. ನಾವು ಶ್ರೀಮತದಿಂದ ಶ್ರೇಷ್ಠರಾಗುತ್ತೇವೆಂದು ಮಕ್ಕಳಿಗೆ ತಿಳಿದಿದೆ ಅಂದಮೇಲೆ ತಮ್ಮ ಪರಿಶೀಲನೆ ಮಾಡಿಕೊಳ್ಳಿ - ನಾವು ಎಲ್ಲಿಯೂ ಶ್ರೀಮತಕ್ಕೆ ವಿರುದ್ಧವಾಗಿ ಏನನ್ನೂ ಮಾಡುತ್ತಿಲ್ಲವೇ? ಯಾವ ಮಾತು ಒಳ್ಳೆಯದೆನಿಸುವುದಿಲ್ಲವೋ ಅದನ್ನು ಮಾಡಬಾರದು. ಒಳ್ಳೆಯದು-ಕೆಟ್ಟದು ಎಂಬುದನ್ನಂತೂ ಈಗ ತಿಳಿದುಕೊಂಡಿದ್ದೀರಿ. ಮೊದಲು ತಿಳಿದಿರಲಿಲ್ಲ. ನೀವೀಗ ಇಂತಹ ಕರ್ಮವನ್ನು ಕಲಿಯುತ್ತೀರಿ ಇದರಿಂದ ಮತ್ತೆ ಜನ್ಮ-ಜನ್ಮಾಂತರದವರೆಗೆ ನಿಮ್ಮ ಕರ್ಮಗಳು ಅಕರ್ಮಗಳಾಗಿ ಬಿಡುತ್ತವೆ. ಈ ಸಮಯದಲ್ಲಿ ಎಲ್ಲರಲ್ಲಿ 5 ಭೂತಗಳು ಪ್ರವೇಶವಾಗಿವೆ. ಈಗ ಚೆನ್ನಾಗಿ ಪುರುಷಾರ್ಥ ಮಾಡಿ ಕರ್ಮಾತೀತರಾಗಬೇಕಾಗಿದೆ. ದೈವೀಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ಸಮಯವು ನಾಜೂಕಾಗುತ್ತಾ ಹೋಗುತ್ತಿದೆ, ಪ್ರಪಂಚವು ಕೆಡುತ್ತಾ ಹೋಗುತ್ತದೆ. ದಿನ ಕಳೆದಂತೆ ಇನ್ನೂ ಕೆಡುತ್ತಲೇ ಹೋಗುವುದು. ಈ ಪ್ರಪಂಚದೊಂದಿಗೆ ನಿಮಗೆ ಸಂಬಂಧವೇ ಇಲ್ಲ. ನಿಮ್ಮ ಸಂಬಂಧವು ಹೊಸ ಪ್ರಪಂಚದೊಂದಿಗೆ ಇದೆ, ಅದು ಈಗ ಸ್ಥಾಪನೆಯಾಗುತ್ತಿದೆ. ನಾವು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ನಿಮಿತ್ತರಾಗುತ್ತೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ ಅಂದಮೇಲೆ ಯಾವ ಗುರಿ-ಧ್ಯೇಯವು ಸನ್ಮುಖದಲ್ಲಿದೆಯೋ ಅವರ ಸಮಾನರಾಗಬೇಕಾಗಿದೆ. ಒಳಗೆ ಯಾವುದೇ ಆಸುರೀ ಗುಣವಿರಬಾರದು. ಆತ್ಮಿಕ ಸೇವೆಯಲ್ಲಿ ತೊಡಗಿರುವುದರಿಂದ ಬಹಳ ಉನ್ನತಿಯಾಗುತ್ತದೆ. ಪ್ರದರ್ಶನಿ, ಮ್ಯೂಸಿಯಂ ಇತ್ಯಾದಿಗಳನ್ನು ಮಾಡಿಸುತ್ತಾರೆ. ಇದರಿಂದ ಅನೇಕರು ಬರುವರು, ಅವರಿಗೆ ತಂದೆಯ ಪರಿಚಯ ಕೊಡುತ್ತೇವೆಂದು ತಿಳಿಯುತ್ತಾರೆ ಮತ್ತೆ ಅವರೂ ಸಹ ತಂದೆಯನ್ನು ನೆನಪು ಮಾಡತೊಡಗುತ್ತಾರೆ. ಇಡೀ ದಿನ ಇದೇ ಚಿಂತನೆ ನಡೆಯುತ್ತಿರಲಿ. ಸೇವಾಕೇಂದ್ರವನ್ನು ತೆರೆದು ಸೇವೆಯನ್ನು ವೃದ್ಧಿಮಾಡಬೇಕು, ಈ ರತ್ನಗಳೆಲ್ಲವೂ ನಿಮ್ಮ ಬಳಿಯಿವೆ. ತಂದೆಯು ದೈವೀ ಗುಣಗಳನ್ನು ಧಾರಣೆ ಮಾಡಿಸುತ್ತಾರೆ ಮತ್ತು ಖಜಾನೆಯನ್ನು ಕೊಡುತ್ತಾರೆ. ನೀವಿಲ್ಲಿ ಕುಳಿತಿದ್ದೀರಿ, ನಿಮ್ಮ ಬುದ್ಧಿಯಲ್ಲಿದೆ - ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇವೆ. ಪವಿತ್ರರಾಗಿಯೂ ಇರುತ್ತೇವೆ ಅಂದಾಗ ಮನಸ್ಸಾ-ವಾಚಾ-ಕರ್ಮಣಾ ಯಾವುದೇ ಕೆಟ್ಟ ಕರ್ಮ ಆಗಬಾರದು. ಅದಕ್ಕಾಗಿ ಪೂರ್ಣ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. ತಂದೆಯು ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ಬಂದಿದ್ದಾರೆ. ಅದಕ್ಕಾಗಿ ಯುಕ್ತಿಗಳನ್ನೂ ತಿಳಿಸುತ್ತಿರುತ್ತಾರೆ. ಅದರಲ್ಲಿ ಚಿಂತನೆ ಮಾಡುತ್ತಾ ಇರಬೇಕಾಗಿದೆ. ಸೇವಾಕೇಂದ್ರವನ್ನು ತೆರೆದು ಅನೇಕರಿಗೆ ನಿಮಂತ್ರಣ ಕೊಡಬೇಕು, ಪ್ರೀತಿಯಿಂದ ಕುಳಿತು ತಿಳಿಸಿಕೊಡಬೇಕಾಗಿದೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ಮೊದಲು ಹೊಸ ಪ್ರಪಂಚದ ಸ್ಥಾಪನೆಯು ಬಹಳ ಅವಶ್ಯವಾಗಿದೆ. ಸಂಗಮದಲ್ಲಿಯೇ ಸ್ಥಾಪನೆಯಾಗುತ್ತದೆ. ಈಗ ಸಂಗಮಯುಗವೆಂಬುದೂ ಸಹ ಮನುಷ್ಯರಿಗೆ ತಿಳಿದಿಲ್ಲ. ಇದನ್ನೂ ಸಹ ತಿಳಿಸಬೇಕು – ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶ, ಈಗ ಅದರ ಸಂಗಮವಾಗಿದೆ. ಹೊಸ ಪ್ರಪಂಚದ ಸ್ಥಾಪನೆಯು ಶ್ರೀಮತದನುಸಾರ ಆಗುತ್ತಿದೆ. ತಂದೆಯ ವಿನಃ ಮತ್ತ್ಯಾರೂ ಹೊಸ ಪ್ರಪಂಚದ ಸ್ಥಾಪನೆಯ ಮತವನ್ನು ಕೊಡುವುದಿಲ್ಲ. ತಂದೆಯೇ ಬಂದು ನೀವು ಮಕ್ಕಳಿಂದ ಹೊಸ ಪ್ರಪಂಚದ ಉದ್ಘಾಟನೆ ಮಾಡಿಸುತ್ತಾರೆ. ಅವರೊಬ್ಬರೇ ಮಾಡುವುದಿಲ್ಲ. ಎಲ್ಲಾ ಮಕ್ಕಳ ಸಹಯೋಗವನ್ನು ತೆಗೆದುಕೊಳ್ಳುತ್ತಾರೆ. ಆ ಮನುಷ್ಯರಂತೂ ಉದ್ಘಾಟನೆ ಮಾಡಲು ಸಹಯೋಗ ತೆಗೆದುಕೊಳ್ಳುವುದಿಲ್ಲ. ಬಂದು ಕತ್ತರಿಯಿಂದ ರಿಬ್ಬನ್ ಕತ್ತರಿಸಿ ಬಿಡುತ್ತಾರೆ ಆದರೆ ಇಲ್ಲಿ ಆ ಮಾತಿಲ್ಲ. ಇಲ್ಲಿ ನೀವು ಬ್ರಾಹ್ಮಣ ಕುಲಭೂಷಣರು ಸಹಯೋಗಿಗಳಾಗುತ್ತೀರಿ. ಎಲ್ಲಾ ಮನುಷ್ಯ ಮಾತ್ರರು ಮಾರ್ಗವನ್ನು ಮರೆತು ಬಿಟ್ಟಿದ್ದಾರೆ. ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡುವುದು ತಂದೆಯ ಕರ್ತವ್ಯವೇ ಆಗಿದೆ. ತಂದೆಯೇ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಾರೆ, ಇದಕ್ಕಾಗಿ ಆತ್ಮಿಕ ಜ್ಞಾನವನ್ನು ಕೊಡುತ್ತಾರೆ. ನಿಮಗೆ ತಿಳಿದಿದೆ, ತಂದೆಯು ಬಂದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವ ಯುಕ್ತಿಯಿದೆ. ಭಕ್ತಿಮಾರ್ಗದಲ್ಲಿ ಹೇ ಪತಿತ-ಪಾವನ ಬನ್ನಿ ಎಂದು ಅವರನ್ನು ಕರೆಯುತ್ತಾರಲ್ಲವೆ. ಭಲೆ ಶಿವನ ಪೂಜೆಯನ್ನು ಮಾಡುತ್ತಿರುತ್ತಾರೆ ಆದರೆ ಪತಿತ-ಪಾವನ ಯಾರೆಂಬುದನ್ನು ತಿಳಿದುಕೊಂಡಿಲ್ಲ. ಹೇ ಭಗವಂತ, ಹೇ ರಾಮ ಎಂದು ದುಃಖದಲ್ಲಿ ನೆನಪಂತೂ ಮಾಡುತ್ತಾರೆ. ವಾಸ್ತವದಲ್ಲಿ ನಿರಾಕಾರನಿಗೇ ರಾಮನೆಂದು ಹೇಳಲಾಗುತ್ತದೆ. ನಿರಾಕಾರನಿಗೇ ಶ್ರೇಷ್ಠ ಭಗವಂತನೆಂದು ಹೇಳುತ್ತಾರೆ ಆದರೆ ಮನುಷ್ಯರು ಈ ಮಾತಿನಲ್ಲಿ ಬಹಳ ಗೊಂದಲಕ್ಕೊಳಗಾಗಿದ್ದಾರೆ. ತಂದೆಯು ಬಂದು ಹೊರ ತೆಗೆದಿದ್ದಾರೆ. ಹೇಗೆ ಹಿಮದಲ್ಲಿ ಮನುಷ್ಯರು ಮಾರ್ಗವನ್ನು ತಿಳಿಯದೆ ತಬ್ಬಿಬ್ಬಾಗುತ್ತಾರಲ್ಲವೆ! ಇದಂತೂ ಬೇಹದ್ದಿನ ಮಾತಾಗಿದೆ. ಬಹಳ ದೊಡ್ಡ ಕಾಡಿನಲ್ಲಿ ಬಂದು ಬಿದ್ದಿದ್ದಾರೆ. ನಿಮಗೂ ಸಹ ತಂದೆಯು ಅನುಭವ ಮಾಡಿಸಿದ್ದಾರೆ - ನಾವು ಯಾವ ಕಾಡಿನಲ್ಲಿ ಬಿದ್ದಿದ್ದೆವೆಂದು! ಇದು ಹಳೆಯ ಪ್ರಪಂಚವಾಗಿದೆ, ಅದರಲ್ಲಿಯೂ ಅಂತಿಮಸಮಯವಾಗಿದೆ ಎಂಬುದು ನಿಮಗೆ ಈಗ ಅರ್ಥವಾಗಿದೆ. ಮನುಷ್ಯರಂತೂ ಮಾರ್ಗವನ್ನು ತಿಳಿದುಕೊಂಡೇ ಇಲ್ಲ. ತಂದೆಯನ್ನು ಕರೆಯುತ್ತಿರುತ್ತಾರೆ. ನೀವೀಗ ಕರೆಯುವುದಿಲ್ಲ. ಏಕೆಂದರೆ ನೀವು ಮಕ್ಕಳು ನಂಬರ್ವಾರ್ ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಯಾರು ತಿಳಿದುಕೊಂಡಿದ್ದಾರೆಯೋ ಅವರು ಬಹಳ ಖುಷಿಯಲ್ಲಿರುತ್ತಾರೆ. ಅನ್ಯರಿಗೂ ಮಾರ್ಗ ತಿಳಿಸುವುದರಲ್ಲಿ ತತ್ಫರರಾಗಿರುತ್ತಾರೆ. ತಂದೆಯು ಹೇಳುತ್ತಾರೆ - ಮಕ್ಕಳೇ, ದೊಡ್ಡ-ದೊಡ್ಡ ಸೇವಾಕೇಂದ್ರಗಳನ್ನು ತೆರೆಯಿರಿ. ದೊಡ್ಡ-ದೊಡ್ಡ ಚಿತ್ರಗಳಿದ್ದರೆ ಮನುಷ್ಯರು ಸಹಜವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಮಕ್ಕಳಿಗಾಗಿ ಚಿತ್ರ (ನಕ್ಷೆ) ಗಳು ಅವಶ್ಯವಾಗಿ ಬೇಕು. ಇವುಗಳ ಮೂಲಕ ತಿಳಿಸಿ, ಇದೂ ಸಹ ಶಾಲೆಯಾಗಿದೆ. ಇವು ಇಲ್ಲಿನ ಅದ್ಭುತವಾದ ನಕ್ಷೆಗಳಾಗಿವೆ. ಆ ಶಾಲೆಗಳ ನಕ್ಷೆಯಲ್ಲಂತೂ ಹದ್ದಿನ ಮಾತುಗಳಿರುತ್ತವೆ. ಇವು ಬೇಹದ್ದಿನ ಮಾತುಗಳಾಗಿವೆ. ಇದೂ ಸಹ ಪಾಠಶಾಲೆಯಾಗಿದೆ, ಇದರಲ್ಲಿ ತಂದೆಯು ನಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಿ ಯೋಗ್ಯರನ್ನಾಗಿ ಮಾಡುತ್ತಾರೆ. ಇದು ಮನುಷ್ಯರಿಂದ ದೇವತೆಗಳಾಗುವ ಪಾಠಶಾಲೆಯಾಗಿದೆ. ಈಶ್ವರೀಯ ವಿಶ್ವ ವಿದ್ಯಾಲಯವೆಂದು ಬರೆಯಲ್ಪಟ್ಟಿದೆ. ಇದು ಆತ್ಮಿಕ ಪಾಠಶಾಲೆಯಾಗಿದೆ. ಕೇವಲ ಈಶ್ವರೀಯ ವಿಶ್ವ ವಿದ್ಯಾಲಯ ಎಂದು ಬರೆಯುವುದರಿಂದಲೂ ಮನುಷ್ಯರು ತಿಳಿದುಕೊಳ್ಳುವುದಿಲ್ಲ. ಯುನಿವರ್ಸಿಟಿ ಎಂಬುದನ್ನು ಬರೆಯಬೇಕು. ಇಂತಹ ಈಶ್ವರೀಯ ವಿಶ್ವ ವಿದ್ಯಾಲಯವು ಯಾವುದೂ ಇರುವುದಿಲ್ಲ. ತಂದೆಯು ಪತ್ರಗಳನ್ನು ನೋಡಿದ್ದರು, ಕೆಲವೊಂದು ಶಬ್ಧಗಳು ಮರೆತು ಹೋಗಿತ್ತು, ತಂದೆಯು ಎಷ್ಟು ಬಾರಿ ಹೇಳಿದ್ದಾರೆ! ಮಕ್ಕಳೇ, ಪ್ರಜಾಪಿತ ಶಬ್ಧವನ್ನು ಅವಶ್ಯವಾಗಿ ಹಾಕಿರಿ ಎಂದು, ಆದರೂ ಸಹ ಮಕ್ಕಳು ಮರೆತು ಹೋಗುತ್ತಾರೆ. ಪೂರ್ಣ ಬರವಣಿಗೆಯಿರಲಿ, ಅದರಿಂದ ಮನುಷ್ಯರಿಗೆ ಇದು ಈಶ್ವರೀಯ ದೊಡ್ಡ ಕಾಲೇಜು ಆಗಿದೆ ಎಂದು ಅರ್ಥವಾಗುವಂತಿರಲಿ. ಯಾವ ಮಕ್ಕಳು ಸೇವೆಯಲ್ಲಿ ಉಪಸ್ಥಿತರಿದ್ದಾರೆಯೋ, ಯಾರು ಒಳ್ಳೆಯ ಸೇವಾಧಾರಿಗಳಾಗಿದ್ದಾರೆಯೋ ಅವರಿಗೂ ಸಹ ನಾವು ಹೋಗಿ ಇಂತಹ ಸೇವಾಕೇಂದ್ರವು ಹಾಗೆಯೇ ಉಳಿದುಕೊಂಡಿದೆ, ಅವರನ್ನು ಜಾಗೃತಗೊಳಿಸಬೇಕು, ವೃದ್ಧಿ ಮಾಡಬೇಕೆಂದು ಸಂಕಲ್ಪವಿರುತ್ತದೆ. ಏಕೆಂದರೆ ಮಾಯೆಯು ಹೀಗಿದೆ, ಅದು ಮತ್ತೆ-ಮತ್ತೆ ಮಲಗಿಸಿ ಬಿಡುತ್ತದೆ. ನಾನು ಸ್ವದರ್ಶನ ಚಕ್ರಧಾರಿಯಾಗಿದ್ದೇನೆಂಬುದನ್ನೂ ಸಹ ಮರೆತು ಹೋಗಿದ್ದಾರೆ. ಮಾಯೆಯು ಬಹಳ ವಿರೋಧ ಮಾಡುತ್ತದೆ. ನೀವು ಯುದ್ಧದ ಮೈದಾನದಲ್ಲಿದ್ದೀರಿ ಅಂದಾಗ ಮಾಯೆಯು ತಲೆಯನ್ನು ತಿರುಗಿಸಿ ಮತ್ತೆ ಹಿಂದಕ್ಕೆ ಕರೆದುಕೊಂಡು ಹೋಗುವಂತಾಗಬಾರದು, ಆದ್ದರಿಂದ ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಮಾಯೆಯ ಬಿರುಗಾಳಿಯಂತೂ ಎಲ್ಲರಿಗೆ ಬಹಳ ಬರುತ್ತವೆ, ಚಿಕ್ಕವರು ಅಥವಾ ದೊಡ್ಡವರೆಲ್ಲರೂ ಸಹ ಯುದ್ಧದ ಮೈದಾನದಲ್ಲಿದ್ದೀರಿ, ಶಕ್ತಿಶಾಲಿಗಳನ್ನು ಮಾಯೆಯ ಬಿರುಗಾಳಿಯು ಅಲುಗಾಡಿಸಲು ಸಾಧ್ಯವಿಲ್ಲ. ಆ ಸ್ಥಿತಿಯೂ ಸಹ ಬರುವುದಿದೆ.

ತಂದೆಯು ತಿಳಿಸುತ್ತಾರೆ - ಸಮಯವು ಬಹಳ ಕೆಟ್ಟು ಹೋಗಿದೆ, ಸ್ಥಿತಿಯು ಹದಗೆಡುತ್ತಾ ಹೋಗುತ್ತಿದೆ. ಇಡೀ ಪ್ರಪಂಚವೆಲ್ಲವೂ ಸಮಾಪ್ತಿಯಾಗಲಿದೆ. ಎಲ್ಲರನ್ನು ಪದಚ್ಯುತಗೊಳಿಸಿ ಬಿಡುತ್ತಾರೆ ಮತ್ತೆ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವು ಇಡೀ ಪ್ರಪಂಚದಲ್ಲಿ ಆಗಿ ಬಿಡುವುದು. ನೀವು ತಮ್ಮ ಹೊಸ ರಾಜ್ಯವನ್ನು ಸ್ಥಾಪನೆ ಮಾಡುತ್ತೀರಿ ಆಗ ಈ ರಾಜಧಾನಿಯ ಹೆಸರೂ ಸಹ ಸಮಾಪ್ತಿಯಾಗಿ ಬಿಡುವುದು, ಪಂಚಾಯಿತಿ ರಾಜ್ಯವಾಗಿ ಬಿಡುತ್ತದೆ. ಯಾವಾಗ ಪ್ರಜೆಗಳ ರಾಜ್ಯವಾಗುವುದೋ ಆಗ ಪರಸ್ಪರ ಹೊಡೆದಾಡುವರು, ಜಗಳವಾಡುವರು. ಸ್ವರಾಜ್ಯ ಅಥವಾ ರಾಮ ರಾಜ್ಯವಂತೂ ವಾಸ್ತವದಲ್ಲಿ ಇಲ್ಲವೇ ಇಲ್ಲ. ಆದ್ದರಿಂದ ಇಡೀ ಪ್ರಪಂಚದಲ್ಲಿ ಜಗಳಗಳೇ ಆಗುತ್ತಿರುತ್ತವೆ. ಇತ್ತೀಚೆಗೆ ಎಲ್ಲಾ ಕಡೆಯೂ ಹೊಡೆದಾಟಗಳಿವೆ. ನಿಮಗೆ ತಿಳಿದಿದೆ - ನಾವು ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ನೀವು ಎಲ್ಲರಿಗೆ ಮಾರ್ಗವನ್ನು ತಿಳಿಸುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ತಂದೆಯ ನೆನಪಿನಲ್ಲಿದ್ದು ಅನ್ಯರಿಗೂ ಇದನ್ನು ತಿಳಿಸಿ - ಆತ್ಮಾಭಿಮಾನಿಯಾಗಿ, ದೇಹಾಭಿಮಾನವನ್ನು ಬಿಡಿ ಎಂದು. ನಿಮ್ಮಲ್ಲಿ ಎಲ್ಲರೂ ಆತ್ಮಾಭಿಮಾನಿಯಾಗಿದ್ದಾರೆ ಎಂದಲ್ಲ, ಇನ್ನೂ ಆಗುತ್ತಿದ್ದಾರೆ. ನೀವು ಪುರುಷಾರ್ಥ ಮಾಡುತ್ತೀರಿ, ಅನ್ಯರಿಂದಲೂ ಮಾಡಿಸುತ್ತೀರಿ. ನೆನಪು ಮಾಡುವ ಪ್ರಯತ್ನ ಪಡುತ್ತಾರೆ ಮತ್ತೆ ಮರೆತು ಹೋಗುತ್ತಾರೆ ಅಂದಾಗ ಇದೇ ಪುರುಷಾರ್ಥ ಮಾಡಬೇಕಾಗಿದೆ. ಮೂಲ ಮಾತು ತಂದೆಯನ್ನು ನೆನಪು ಮಾಡಬೇಕಾಗಿದೆ. ಮಕ್ಕಳಿಗೆ ಎಷ್ಟೊಂದು ತಿಳಿಸಿಕೊಡುತ್ತೇನೆ, ಜ್ಞಾನವು ಬಹಳ ಚೆನ್ನಾಗಿ ಸಿಗುತ್ತಿದೆ, ಮೂಲ ಮಾತು ಪವಿತ್ರರಾಗಿರುವುದಾಗಿದೆ. ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆ ಅಂದಮೇಲೆ ಮತ್ತೆ ಪತಿತರಾಗಬಾರದು. ನೆನಪಿನಿಂದಲೇ ನೀವು ಸತೋಪ್ರಧಾನರಾಗಿ ಬಿಡುತ್ತೀರಿ, ಇದನ್ನು ಮರೆಯಬೇಡಿ. ಮಾಯೆಯು ಇದರಲ್ಲಿಯೇ ವಿಘ್ನಗಳನ್ನು ಹಾಕಿ ಮರೆಸಿ ಬಿಡುತ್ತದೆ. ಹಗಲು-ರಾತ್ರಿ ಇದೇ ಚಿಂತೆಯಿರಲಿ - ನಾವು ತಂದೆಯನ್ನು ನೆನಪು ಮಾಡಿ ಸತೋಪ್ರಧಾನರಾಗಬೇಕು. ನೆನಪು ಇಷ್ಟು ಶಕ್ತಿಶಾಲಿಯಾಗಿರಲಿ ಅಂತಿಮದಲ್ಲಿ ಒಬ್ಬ ತಂದೆಯ ವಿನಃ ಮತ್ತ್ಯಾರೂ ನೆನಪಿಗೆ ಬರಬಾರದು. ಪ್ರದರ್ಶನಿಯಲ್ಲಿಯೂ ಮೊಟ್ಟ ಮೊದಲಿಗೆ ಇದನ್ನು ತಿಳಿಸಬೇಕಾಗಿದೆ - ಇವರು ಎಲ್ಲರ ತಂದೆ, ಸರ್ವಶ್ರೇಷ್ಠ ಭಗವಂತನಾಗಿದ್ದಾರೆ. ಪತಿತ-ಪಾವನ, ಸದ್ಗತಿದಾತನು ಇವರಾಗಿದ್ದಾರೆ. ಇವರೇ ಸ್ವರ್ಗದ ರಚಯಿತನಾಗಿದ್ದಾರೆ.

ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ, ತಂದೆಯೇ ರಾಜಯೋಗವನ್ನು ಕಲಿಸುತ್ತಾರೆ. ಒಬ್ಬ ತಂದೆಯ ವಿನಃ ಮತ್ತ್ಯಾರೂ ಪತಿತ-ಪಾವನರಾಗಲು ಸಾಧ್ಯವಿಲ್ಲ. ಮೊಟ್ಟ ಮೊದಲಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಒಬ್ಬೊಬ್ಬರಿಗೂ ಹೀಗೆ ಒಂದು ಚಿತ್ರದ ಬಗ್ಗೆ ತಿಳಿಸುತ್ತಾ ಇದ್ದರೆ ಇಷ್ಟೊಂದು ಮಂದಿಗೆ ಹೇಗೆ ತಿಳಿಸುವಿರಿ! ಆದರೆ ಮೊಟ್ಟ ಮೊದಲು ತಂದೆಯ ಚಿತ್ರದಲ್ಲಿ ತಿಳಿಸುವುದು ಮುಖ್ಯವಾಗಿದೆ, ಇದನ್ನು ತಿಳಿಸಿ - ಭಕ್ತಿಯು ಬಹಳಷ್ಟಿದೆ, ಜ್ಞಾನವು ಒಂದೇ ಆಗಿದೆ. ತಂದೆಯು ಮಕ್ಕಳಿಗೆ ಇಷ್ಟೊಂದು ಯುಕ್ತಿಗಳನ್ನು ತಿಳಿಸುತ್ತಿರುತ್ತಾರೆ. ಪತಿತ-ಪಾವನನು ಒಬ್ಬರೇ ಆಗಿದ್ದಾರೆ, ಮಾರ್ಗವನ್ನೂ ತಿಳಿಸುತ್ತಾರೆ. ಗೀತೆಯನ್ನು ಯಾವಾಗ ತಿಳಿಸಿದರು? ಇದೂ ಸಹ ಯಾರಿಗೂ ತಿಳಿದಿಲ್ಲ. ದ್ವಾಪರಯುಗಕ್ಕೆ ಸಂಗಮಯುಗವೆಂದು ಹೇಳಲಾಗುವುದಿಲ್ಲ. ತಂದೆಯು ಯುಗ-ಯುಗದಲ್ಲಿ ಬರುವುದಿಲ್ಲ. ಮನುಷ್ಯರು ಸಂಪೂರ್ಣ ಗೊಂದಲಕ್ಕೊಳಗಾಗಿದ್ದಾರೆ. ಇಡೀ ದಿನ ಹೇಗೇಗೆ ತಿಳಿಸಿಕೊಡಬೇಕೆಂಬ ಚಿಂತನೆಯೇ ನಡೆಯುತ್ತಿರುತ್ತದೆ ಏಕೆಂದರೆ ತಂದೆಯು ಮಕ್ಕಳಿಗೆ ಸಲಹೆ ಕೊಡಬೇಕಾಗುತ್ತದೆ. ಕ್ಯಾಸೆಟ್ನ ಮೂಲಕವೂ ಸಹ ನೀವು ಇಡೀ ಮುರುಳಿಯನ್ನು ಕೇಳಬಹುದಾಗಿದೆ. ಕೆಲವರು ಹೇಳುತ್ತಾರೆ - ಬಾಬಾ ನಾವು ಕ್ಯಾಸೆಟ್ನ ಮೂಲಕ ಮುರುಳಿಯನ್ನು ಕೇಳುತ್ತಿದ್ದೇವೆ ಅಂದಮೇಲೆ ಏಕೆ ಡೈರೆಕ್ಟ್ ಹೋಗಿ ಕೇಳಬಾರದು ಆದ್ದರಿಂದ ಇಲ್ಲಿ ಸನ್ಮುಖದಲ್ಲಿ ಬರುತ್ತಾರೆ. ಮಕ್ಕಳು ಬಹಳ ಸರ್ವೀಸ್ ಮಾಡಬೇಕಾಗಿದೆ, ಮಾರ್ಗವನ್ನು ತಿಳಿಸಬೇಕಾಗಿದೆ. ಪ್ರದರ್ಶನಿಯಲ್ಲಿ ಅನೇಕರು ಬರುತ್ತಾರೆ, ಬಹಳ ಚೆನ್ನಾಗಿದೆ, ಚೆನ್ನಾಗಿದೆ ಎಂತಲೂ ಹೇಳುತ್ತಾರೆ ಮತ್ತೆ ಹೊರಗಡೆ ಹೋದ ಕೂಡಲೇ ಮಾಯೆಯ ವಾಯುಮಂಡಲದಲ್ಲಿ ಎಲ್ಲವೂ ಹಾರಿ ಹೋಗುತ್ತದೆ. ಸ್ಮರಣೆಯನ್ನೇ ಮಾಡುವುದಿಲ್ಲ. ಹೊರಗಡೆ ಹೋಗುತ್ತಿದ್ದಂತೆಯೇ ಮಾಯೆಯು ಸೆಳೆಯುತ್ತದೆ. ಉದ್ಯೋಗ-ವ್ಯವಹಾರಗಳ ಜಂಜಾಟದಲ್ಲಿ ತೊಡಗಿಬಿಡುತ್ತಾರೆ ಆದ್ದರಿಂದಲೇ ಮಧುಬನದ ಗಾಯನವಿದೆ. ಈಗ ನಿಮಗೆ ತಿಳುವಳಿಕೆ ಸಿಕ್ಕಿದೆ, ನೀವು ಅಲ್ಲಿಯೂ ಹೋಗಿ ತಿಳಿಸಿ, ಗೀತೆಯ ಭಗವಂತ ಯಾರು? ಮೊದಲು ನೀವೂ ಸಹ ಇದೇರೀತಿ ಹೋಗಿ ತಲೆ ಬಾಗುತ್ತಿದ್ದಿರಿ, ನೀವೀಗ ಸಂಪೂರ್ಣ ಬದಲಾಗಿ ಬಿಟ್ಟಿದ್ದೀರಿ, ಭಕ್ತಿಯನ್ನು ಬಿಟ್ಟಿದ್ದೀರಿ. ನೀವೀಗ ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ, ಬುದ್ಧಿಯಲ್ಲಿ ಪೂರ್ಣ ಜ್ಞಾನವಿದೆ, ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ಯಾರೆಂಬುದು ಮತ್ತ್ಯಾರಿಗೆ ತಿಳಿದಿದೆ! ನೀವು ತಿಳಿಸುತ್ತೀರಿ, ವಾಸ್ತವದಲ್ಲಿ ನೀವೆಲ್ಲರೂ ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಈ ಸಮಯದಲ್ಲಿಯೇ ಬ್ರಹ್ಮನ ಮೂಲಕ ಸ್ಥಾಪನೆಯಾಗುತ್ತೀರಿ, ಬ್ರಾಹ್ಮಣ ಕುಲವೂ ಅವಶ್ಯವಾಗಿ ಬೇಕಲ್ಲವೆ. ಬ್ರಾಹ್ಮಣ ಕುಲವು ಸಂಗಮದಲ್ಲಿಯೇ ಇರುತ್ತದೆ. ಮೊದಲು ಬ್ರಾಹ್ಮಣರ ಶಿಖೆಯು ಹೆಸರುವಾಸಿಯಾಗಿತ್ತು, ಶಿಖೆಯಿಂದ ಅಥವಾ ಜನಿವಾರದಿಂದ ಇವರು ಹಿಂದೂಗಳೆಂಬುದನ್ನು ಗುರುತಿಸುತ್ತಿದ್ದರು. ಈಗಂತೂ ಆ ಚಿಹ್ನೆಗಳೂ ಸಹ ಹೊರಟು ಹೋಗಿವೆ. ನೀವೀಗ ತಿಳಿದುಕೊಂಡಿದ್ದೀರಿ, ನಾವು ಬ್ರಾಹ್ಮಣರಾಗಿದ್ದೇವೆ. ಬ್ರಾಹ್ಮಣರಾದ ನಂತರ ಮತ್ತೆ ದೇವತೆಗಳಾಗುತ್ತೇವೆ. ಬ್ರಾಹ್ಮಣರೇ ಹೊಸ ಪ್ರಪಂಚದ ಸ್ಥಾಪನೆ ಮಾಡಿದ್ದೀರಿ. ಯೋಗಬಲದಿಂದ ಸತೋಪ್ರಧಾನರಾಗುತ್ತಿದ್ದೀರಿ ಅಂದಾಗ ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. ಯಾವುದೇ ಆಸುರೀ ಗುಣವಿರಬಾರದು. ಜೊತೆಗೆ ಪರಸ್ಪರ ಉಪ್ಪು ನೀರಾಗಿ ವರ್ತಿಸಬಾರದು. ಇದು ಯಜ್ಞವಲ್ಲವೆ. ಯಜ್ಞದಿಂದ ಎಲ್ಲರ ಸಂಭಾಲನೆಯಾಗುತ್ತಿರುತ್ತದೆ. ಯಜ್ಞದಲ್ಲಿ ಸಂಭಾಲನೆ ಮಾಡುವಂತಹ ಟ್ರಸ್ಟಿಗಳೂ ಇರುತ್ತಾರೆ. ಯಜ್ಞದ ಮಾಲೀಕರಂತೂ ಶಿವ ತಂದೆಯಾಗಿದ್ದಾರೆ, ಈ ಬ್ರಹ್ಮಾರವರೂ ಟ್ರಸ್ಟಿಯಾಗಿದ್ದಾರೆ. ಯಜ್ಞದ ಸಂಭಾಲನೆ ಮಾಡಬೇಕಾಗುತ್ತದೆ. ನೀವು ಮಕ್ಕಳಿಗೆ ಏನೂ ಬೇಕೋ ಯಜ್ಞದಿಂದ ತೆಗೆದುಕೊಳ್ಳಬೇಕು, ಮತ್ತ್ಯಾರಿಂದಲಾದರೂ ತೆಗೆದುಕೊಂಡು ಧರಿಸುತ್ತೀರೆಂದರೆ ಅವರ ನೆನಪೇ ಬರುತ್ತಿರುವುದು. ಇದರಲ್ಲಿ ಬುದ್ಧಿಯೋಗವು ಬಹಳ ಸ್ಪಷ್ಟವಾಗಿರಬೇಕು. ಈಗಂತೂ ಹಿಂತಿರುಗಿ ಹೋಗಬೇಕಾಗಿದೆ, ಬಹಳ ಕಡಿಮೆ ಸಮಯವಿದೆ. ಆದ್ದರಿಂದ ನೆನಪಿನ ಯಾತ್ರೆಯು ಪಕ್ಕಾ ಇರಲಿ - ಇದೇ ಪುರುಷಾರ್ಥ ಮಾಡಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ತಮ್ಮ ಉನ್ನತಿಗಾಗಿ ಆತ್ಮಿಕ ಸೇವೆಯಲ್ಲಿ ತತ್ಪರರಾಗಿರಬೇಕಾಗಿದೆ. ಏನೆಲ್ಲಾ ಜ್ಞಾನರತ್ನಗಳು ಸಿಕ್ಕಿವೆಯೋ ಅವನ್ನು ಧಾರಣೆ ಮಾಡಿಕೊಂಡು ಅನ್ಯರಿಗೂ ಮಾಡಿಸಬೇಕಾಗಿದೆ.

2. ತಮ್ಮ ಪರಿಶೀಲನೆ ಮಾಡಿಕೊಳ್ಳಿ - ನನ್ನಲ್ಲಿ ಯಾವುದೇ ಆಸುರೀ ಗುಣವಂತೂ ಇಲ್ಲವೆ? ನಾನು ನಿಮಿತ್ತನಾಗಿ ಇರುತ್ತೇನೆಯೇ? ಎಂದೂ ಉಪ್ಪು ನೀರಾಗಿ ವರ್ತಿಸುವುದಿಲ್ಲವೇ? ಬುದ್ಧಿಯೋಗವು ಸ್ಪಷ್ಟವಾಗಿದೆಯೇ?

ವರದಾನ:

ಹೇಳುವುದು, ಯೋಚಿಸುವುದು ಮತ್ತು ಮಾಡುವುದು - ಈ ಮೂರನ್ನೂ ಸಮಾನವಾಗಿ ಮಾಡುವಂತಹ ಜ್ಞಾನಿತ್ವ ಆತ್ಮ ಭವ.

ಈಗ ವಾನಪ್ರಸ್ಥ ಅವಸ್ಥೆಯಲ್ಲಿ ಹೋಗುವ ಸಮಯ ಸಮೀಪ ಬರುತ್ತಿದೆ - ಆದ್ದರಿಂದ ಬಲಹೀನತೆಗಳೆಂಬ ನನ್ನತನವನ್ನು ಅಥವಾ ವ್ಯರ್ಥದ ಆಟವನ್ನು ಸಮಾಪ್ತಿ ಮಾಡಿ ಹೇಳುವುದು, ಯೋಚಿಸುವುದು ಮತ್ತು ಮಾಡುವುದು ಸಮಾನವಾಗಿ ಮಾಡಿಕೊಳ್ಳಿ. ಆಗ ಹೇಳಲಾಗುವುದು ಜ್ಞಾನ ಸ್ವರೂಪ. ಯಾರು ಹೀಗೆ ಜ್ಞಾನ ಸ್ವರೂಪ ಜ್ಞಾನಿತ್ವ ಆತ್ಮರುಗಳಿದ್ದಾರೆ ಅವರ ಪ್ರತಿಯೊಂದು ಕರ್ಮ, ಸಂಸ್ಕಾರ, ಗುಣ ಮತ್ತು ಕರ್ತವ್ಯ ಸಮರ್ಥ ತಂದೆಯ ಸಮಾನವಿರುತ್ತದೆ. ಅವರು ಎಂದೂ ವ್ಯರ್ಥದ ವಿಚಿತ್ರ ಆಟ ಆಡಲು ಸಾಧ್ಯವಿಲ್ಲ. ಸದಾ ಪರಮಾತ್ಮನ ಮಿಲನದ ಆಟದಲ್ಲಿ ವ್ಯಸ್ಥವಾಗಿರುತ್ತಾರೆ. ಒಬ್ಬ ತಂದೆಯ ಜೊತೆ ಮಿಲನ ಆಚರಿಸುತ್ತಾರೆ ಮತ್ತು ಬೇರೆಯವರನ್ನೂ ಸಹ ತಂದೆಯ ಸಮಾನ ಮಾಡುತ್ತಾರೆ.

ಸ್ಲೋಗನ್:

ಸೇವೆಯಲ್ಲಿ ಉಲ್ಲಾಸ ಸಣ್ಣ-ಸಣ್ಣ ಖಾಯಿಲೆಗಳನ್ನು ಮರ್ಜ್ ಮಾಡಿ ಬಿಡುತ್ತದೆ, ಆದ್ದರಿಂದ ಸೇವೆಯಲ್ಲಿ ಸದಾ ವ್ಯಸ್ಥವಾಗಿರಿ.