10.12.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಅವಿನಾಶಿ ಜ್ಞಾನ ರತ್ನಗಳ ದಾನವೇ ಮಹಾದಾನವಾಗಿದೆ, ಈ ದಾನದಿಂದಲೇ ರಾಜ್ಯ ಪದವಿಯು ಪ್ರಾಪ್ತಿಯಾಗುತ್ತದೆ, ಆದ್ದರಿಂದ ಮಹಾದಾನಿಗಳಾಗಿ.

ಪ್ರಶ್ನೆ:
ಯಾವ ಮಕ್ಕಳಿಗೆ ಸರ್ವೀಸಿನ ಆಸಕ್ತಿಯಿರುವುದು, ಅವರ ಮುಖ್ಯ ಚಿಹ್ನೆಗಳೇನು?

ಉತ್ತರ:
1. ಅವರಿಗೆ ಹಳೆಯ ಪ್ರಪಂಚದ ವಾತಾವರಣವು ಸ್ಪಲ್ಪವೂ ಇಷ್ಟವಾಗುವುದೇ ಇಲ್ಲ. 2. ಅವರಿಗೆ ಅನೇಕರ ಸೇವೆ ಮಾಡಿ ತಮ್ಮ ಸಮಾನ ಮಾಡಿಕೊಳ್ಳುವುದರಲ್ಲಿಯೇ ಖುಷಿಯಿರುವುದು. 3. ಅವರಿಗೆ ಓದುವ ಮತ್ತು ಓದಿಸುವುದರಲ್ಲಿಯೇ ವಿಶ್ರಾಂತಿಯೆನಿಸುವುದು. 4. ತಿಳಿಸುತ್ತಾ-ತಿಳಿಸುತ್ತಾ ಗಂಟಲು ಕಟ್ಟಿದರೂ ಸಹ ಖುಷಿಯಲ್ಲಿರುತ್ತಾರೆ. 5. ಅವರಿಗೆ ಯಾರದೇ ಸಂಪತ್ತು ಬೇಕಿಲ್ಲ. ಅವರು ಯಾರದೇ ಸಂಪತ್ತಿನ ಹಿಂದೆ ತಮ್ಮ ಸಮಯವನ್ನು ಕಳೆಯುವುದಿಲ್ಲ. 6. ಅವರಿಗೆ ಎಲ್ಲಾ ಕಡೆಯಿಂದ ಮಮತೆಯು ಕಳೆದಿರುತ್ತದೆ. 7. ಅವರು ತಂದೆಯ ಸಮಾನ ಉದಾರಚಿತ್ತರಾಗಿರುತ್ತಾರೆ. ಅವರಿಗೆ ಸೇವೆಯ ವಿನಃ ಮತ್ತೇನೂ ಮಧುರವೆನಿಸುವುದಿಲ್ಲ.

ಗೀತೆ:
ಓಂ ನಮಃ ಶಿವಾಯ....

ಓಂ ಶಾಂತಿ.
ಆತ್ಮಿಕ ತಂದೆ ಯಾರ ಮಹಿಮೆಯನ್ನು ಕೇಳಿದಿರಿ, ಅವರೇ ಕುಳಿತು ಮಕ್ಕಳಿಗೆ ಪಾಠವನ್ನು ಓದಿಸುತ್ತಾರೆ, ಇದು ಪಾಠಶಾಲೆಯಲ್ಲವೆ. ನೀವೆಲ್ಲರೂ ಇಲ್ಲಿ ಶಿಕ್ಷಕರಿಂದ ಪಾಠವನ್ನು ಓದುತ್ತಿದ್ದೀರಿ. ಇವರು ಸುಪ್ರೀಂ ಶಿಕ್ಷಕನಾಗಿದ್ದಾರೆ, ಅವರಿಗೆ ಪರಮಪಿತನೆಂತಲೂ ಹೇಳಲಾಗುತ್ತದೆ. ಆತ್ಮಿಕ ತಂದೆಗೆ ಪರಮಪಿತನೆಂದು ಹೇಳಲಾಗುತ್ತದೆ. ಲೌಕಿಕ ತಂದೆಗೆಂದೂ ಪರಮಪಿತನೆಂದು ಹೇಳುವುದಿಲ್ಲ. ನಾವೀಗ ಪಾರಲೌಕಿಕ ತಂದೆಯ ಬಳಿ ಕುಳಿತಿದ್ದೇವೆಂದು ನೀವು ಹೇಳುತ್ತೀರಿ. ಕೆಲವರು ಕುಳಿತಿದ್ದೀರಿ, ಕೆಲವರು ಅತಿಥಿಗಳಾಗಿ ಬರುತ್ತಾರೆ. ನೀವು ತಿಳಿದುಕೊಳ್ಳುತ್ತೀರಿ, ನಾವು ಆಸ್ತಿಯನ್ನು ತೆಗೆದುಕೊಳ್ಳಲು ಬೇಹದ್ದಿನ ತಂದೆಯ ಬಳಿ ಕುಳಿತಿದ್ದೇವೆ ಅಂದಮೇಲೆ ಆಂತರಿಕವಾಗಿ ಎಷ್ಟೊಂದು ಖುಷಿಯಿರಬೇಕು! ಪಾಪ ಮನುಷ್ಯರಂತೂ ಚೀರಾಡುತ್ತಿರುತ್ತಾರೆ. ಈ ಸಮಯದ ಪ್ರಪಂಚದಲ್ಲಿ ವಿಶ್ವ ಶಾಂತಿ ಬೇಕೆಂದು ಎಲ್ಲರೂ ಹೇಳುತ್ತಾರೆ ಆದರೆ ಶಾಂತಿಯೆಂದರೇನು? ಜ್ಞಾನ ಸಾಗರ, ಶಾಂತಿಯ ಸಾಗರ ತಂದೆಯು ಶಾಂತಿ ಸ್ಥಾಪನೆ ಮಾಡುವವರೆಂದು ಪಾಪ ಅವರಿಗೆ ಗೊತ್ತಿಲ್ಲ. ನಿರಾಕಾರಿ ಪ್ರಪಂಚದಲ್ಲಂತೂ ಶಾಂತಿಯೇ ಶಾಂತಿಯಿರುತ್ತದೆ. ವಿಶ್ವದಲ್ಲಿ ಶಾಂತಿಯು ಹೇಗೆ ಸ್ಥಾಪನೆಯಾಗುವುದೆಂದು ಇಲ್ಲಿ ಮನುಷ್ಯರು ಚೀರಾಡುತ್ತಾರೆ. ಹೊಸ ಪ್ರಪಂಚ ಸತ್ಯಯುಗದಲ್ಲಂತೂ ಶಾಂತಿಯಿತ್ತು. ಹೊಸ ಪ್ರಪಂಚಕ್ಕೆ ಸ್ವರ್ಗ, ದೇವತೆಗಳ ಪ್ರಪಂಚವೆಂದು ಹೇಳುತ್ತಾರೆ. ಶಾಸ್ತ್ರಗಳಲ್ಲಿ ಎಲ್ಲಿ ನೋಡಿದರಲ್ಲಿ ಅಶಾಂತಿಯ ಮಾತುಗಳನ್ನು ಬರೆದು ಬಿಟ್ಟಿದ್ದಾರೆ. ಮತ್ತೆ ದ್ವಾಪರದಲ್ಲಿ ಕಂಸನಿದ್ದನು ಎಂದು ತೋರಿಸುತ್ತಾರೆ. ಮತ್ತೆ ಹಿರಣ್ಯ ಕಶ್ಯಪನನ್ನು ಸತ್ಯಯುಗದಲ್ಲಿ ತೋರಿಸುತ್ತಾರೆ, ತ್ರೇತಾಯುಗದಲ್ಲಿ ರಾವಣನ ಏರುಪೇರು.... ಎಲ್ಲಾ ಜಾಗಗಳಲ್ಲಿ ಅಶಾಂತಿಯನ್ನೇ ತೋರಿಸಿ ಬಿಟ್ಟಿದ್ದಾರೆ. ಪಾಪ! ಮನುಷ್ಯರು ಎಷ್ಟು ಘೋರ ಅಂಧಕಾರದಲ್ಲಿದ್ದಾರೆ, ಬೇಹದ್ದಿನ ತಂದೆಯನ್ನೇ ಕರೆಯುತ್ತಾರೆ. ಯಾವಾಗ ಪರಮಪಿತ ಪರಮಾತ್ಮನು ಬರುವರೋ ಆಗ ಅವರೇ ಶಾಂತಿಯನ್ನು ಸ್ಥಾಪನೆ ಮಾಡುವರು. ಪರಮಾತ್ಮನನ್ನು ಯಾರೂ ತಿಳಿದುಕೊಂಡಿಲ್ಲ. ಶಾಂತಿಯಿರುವುದೇ ಹೊಸ ಪ್ರಪಂಚದಲ್ಲಿ, ಹಳೆಯ ಪ್ರಪಂಚದಲ್ಲಲ್ಲ. ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವವರು ತಂದೆಯೇ ಆಗಿದ್ದಾರೆ, ಬಂದು ಶಾಂತಿಯನ್ನು ಸ್ಥಾಪನೆ ಮಾಡಿ ಎಂದು ಅವರನ್ನೇ ಕರೆಯುತ್ತಾರೆ. ಆರ್ಯ ಸಮಾಜಿಗಳು ಶಾಂತಿ ದೇವ ಎಂದು ಹಾಡುತ್ತಾರೆ.

ತಂದೆಯು ತಿಳಿಸುತ್ತಾರೆ - ಮೊದಲು ಪವಿತ್ರತೆಯಾಗಿದೆ, ನೀವೀಗ ಪವಿತ್ರರಾಗುತ್ತಿದ್ದೀರಿ. ಸತ್ಯಯುಗದಲ್ಲಿ ಪವಿತ್ರತೆಯೂ ಇರುತ್ತದೆ, ಶಾಂತಿಯೂ ಇರುತ್ತದೆ. ಆರೋಗ್ಯ, ಭಾಗ್ಯವೆಲ್ಲವೂ ಇರುತ್ತದೆ. ಹಣವಿಲ್ಲವೆಂದರೆ ಮನುಷ್ಯರು ಬೇಸರವಾಗಿ ಬಿಡುತ್ತಾರೆ. ನೀವಿಲ್ಲಿ ಈ ಲಕ್ಷ್ಮೀ-ನಾರಾಯಣರಂತೆ ಧನವಂತರಾಗಲು ಬರುತ್ತೀರಿ. ಇವರು ವಿಶ್ವದ ಮಾಲೀಕರಾಗಿದ್ದರಲ್ಲವೆ. ನೀವು ವಿಶ್ವದ ಮಾಲೀಕರಾಗಲು ಬಂದಿದ್ದೀರಿ, ಆದರೆ ಇದು ಎಲ್ಲರ ಬುದ್ಧಿಯಲ್ಲಿ ನಂಬರ್ವಾರ್ ಇದೆ. ತಂದೆಯೇ ಹೇಳಿದ್ದರು - ಯಾವಾಗ ಶಾಂತಿ ಯಾತ್ರೆ ಮಾಡುತ್ತೀರೋ ಆಗ ಜೊತೆಯಲ್ಲಿ ಲಕ್ಷ್ಮಿ-ನಾರಾಯಣರ ಚಿತ್ರವನ್ನು ಅವಶ್ಯವಾಗಿ ಇಟ್ಟುಕೊಳ್ಳಿ. ಇಂತಹ ಯುಕ್ತಿ ರಚಿಸಿ, ಈಗ ಮಕ್ಕಳ ಬುದ್ಧಿಯು ಪಾರಸ ಬುದ್ಧಿಯಾಗಬೇಕಿದೆ. ಈ ಸಮಯದಲ್ಲಿ ಇನ್ನೂ ತಮೋಪ್ರಧಾನದಿಂದ ರಜೋದವರೆಗೂ ಬಂದಿದ್ದೀರಿ, ಈಗ ಸತೋ-ಸತೋಪ್ರಧಾನತೆಯವರೆಗೆ ಹೋಗಬೇಕಾಗಿದೆ. ಆ ಶಕ್ತಿಯು ಈಗಿನ್ನೂ ಇಲ್ಲ. ನೆನಪಿನಲ್ಲಿರುವುದಿಲ್ಲ, ಯೋಗಬಲವು ಕಡಿಮೆಯಿದೆ. ಕೂಡಲೇ ಸತೋಪ್ರಧಾನರಾಗಿ ಬಿಡಲು ಸಾಧ್ಯವಿಲ್ಲ, ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ. ಅದಂತೂ ಸರಿಯಾಗಿದೆ. ನೀವು ಬ್ರಾಹ್ಮಣರಾಗಿದ್ದೀರಿ ಅಂದಮೇಲೆ ಜೀವನ್ಮುಕ್ತರೇ ಆಗಿ ಬಿಟ್ಟಿರಿ. ಮತ್ತೆ ಜೀವನ್ಮುಕ್ತಿಯಲ್ಲಿಯೂ ಸರ್ವೋತ್ತಮ, ಮಧ್ಯಮ, ಕನಿಷ್ಠ - ಈ ಮೂರು ಸ್ಥಿತಿಗಳಿರುತ್ತವೆ. ಯಾರು ತಂದೆಯ ಮಕ್ಕಳಾಗುವರೋ ಅವರಿಗೆ ಜೀವನ್ಮುಕ್ತಿಯು ಖಂಡಿತ ಸಿಗುತ್ತದೆ. ಭಲೆ ತಂದೆಯವರಾಗಿ ಮತ್ತೆ ತಂದೆಯನ್ನು ಬಿಟ್ಟು ಬಿಡುವವರಿಗೂ ಜೀವನ್ಮುಕ್ತಿಯು ಖಂಡಿತ ಸಿಗುತ್ತದೆ. ಅಂತಹವರು ಸ್ವರ್ಗದಲ್ಲಿ ಕಸ ಗುಡಿಸುವವರಾಗುತ್ತಾರೆ. ಸ್ವರ್ಗದಲ್ಲಂತೂ ಹೋಗುತ್ತಾರೆ ಆದರೆ ಕಡಿಮೆ ಪದವಿ ಸಿಗುತ್ತದೆ. ತಂದೆಯು ಅವಿನಾಶಿ ಜ್ಞಾನವನ್ನು ಕೊಡುತ್ತಾರೆ. ಅದರ ವಿನಾಶವೆಂದೂ ಆಗುವುದಿಲ್ಲ. ಮಕ್ಕಳ ಆಂತರ್ಯದಲ್ಲಿ ಈಗ ಖುಷಿಯ ವಾದ್ಯಗಳು ಮೊಳಗಬೇಕು. ಈ ಹಾಯ್, ಹಾಯ್ ನ ನಂತರ ವಾಹ್! ವಾಹ್! ಆಗುವುದು.

ನೀವೀಗ ಈಶ್ವರೀಯ ಸಂತಾನರಾಗಿದ್ದೀರಿ ನಂತರ ದೈವೀ ಸಂತಾನರಾಗುತ್ತೀರಿ. ಈ ಸಮಯದಲ್ಲಿ ನಿಮ್ಮ ಈ ಜೀವನವು ವಜ್ರ ಸಮಾನವಾಗಿದೆ. ನೀವು ಭಾರತದ ಸರ್ವೀಸ್ ಮಾಡಿ, ಭಾರತವನ್ನು ಶಾಂತಿಯುತವನ್ನಾಗಿ ಮಾಡುತ್ತೀರಿ, ಅಲ್ಲಿ ಸುಖ, ಶಾಂತಿ, ಪವಿತ್ರತೆ ಎಲ್ಲವೂ ಇರುತ್ತದೆ. ಈ ನಿಮ್ಮ ಜೀವನವು ದೇವತೆಗಳಿಗಿಂತಲೂ ಶ್ರೇಷ್ಠವಾಗಿದೆ. ನೀವೀಗ ರಚಯಿತ ತಂದೆಯನ್ನು ಮತ್ತು ಸೃಷ್ಟಿಚಕ್ರವನ್ನು ಅರಿತುಕೊಂಡಿದ್ದೀರಿ. ಈ ಹಬ್ಬಗಳೆಲ್ಲವೂ ಪರಂಪರೆಯಿಂದ ನಡೆದು ಬರುತ್ತಿವೆಯೆಂದು ಮನುಷ್ಯರು ಹೇಳುತ್ತಾರೆ. ಆದರೆ ಯಾವಾಗಿನಿಂದ? ಇದನ್ನು ಯಾರೂ ತಿಳಿದುಕೊಂಡಿಲ್ಲ. ಯಾವಾಗಿನಿಂದ ಸೃಷ್ಟಿಯು ಆರಂಭವಾಯಿತೋ ಆಗಿನಿಂದಲೇ ರಾವಣನನ್ನು ಸುಡುವುದು ಇತ್ಯಾದಿಗಳು ಪರಂಪರೆಯಿಂದ ಬಂದಿದೆ ಎಂದು ತಿಳಿಯುತ್ತಾರೆ. ಆದರೆ ಸತ್ಯಯುಗದಲ್ಲಂತೂ ರಾವಣನಿರುವುದಿಲ್ಲ. ಅಲ್ಲಿ ಯಾರೂ ದುಃಖಿಗಳಿರುವುದಿಲ್ಲ ಆದ್ದರಿಂದ ಪರಮಾತ್ಮನನ್ನು ನೆನಪು ಮಾಡುವುದಿಲ್ಲ, ಇಲ್ಲಿ ಎಲ್ಲರೂ ನೆನಪು ಮಾಡುತ್ತಿರುತ್ತಾರೆ. ಪರಮಾತ್ಮನೇ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುತ್ತಾರೆಂದು ತಿಳಿಯುತ್ತಾರೆ. ಆದ್ದರಿಂದ ದಯೆ ತೋರಿಸಿ ನಮ್ಮನ್ನು ದುಃಖದಿಂದ ಮುಕ್ತಗೊಳಿಸಿ ಎಂದು ಹೇಳುತ್ತಾರೆ. ಮಕ್ಕಳೇ ತಂದೆಯನ್ನು ಕರೆಯುತ್ತಾರೆ ಏಕೆಂದರೆ ಮಕ್ಕಳೇ ಸುಖವನ್ನು ನೋಡುತ್ತೀರಿ. ನಿಮ್ಮನ್ನು ಪವಿತ್ರರನ್ನಾಗಿ ಮಾಡಿ ಜೊತೆ ಕರೆದುಕೊಂಡು ಹೋಗುತ್ತೇನೆ. ಯಾರು ಪವಿತ್ರರಾಗುವುದಿಲ್ಲ, ಅವರು ಶಿಕ್ಷೆಯನ್ನನುಭವಿಸುವರು. ಇದರಲ್ಲಿ ಮನಸ್ಸಾ, ವಾಚಾ, ಕರ್ಮಣಾ ಪವಿತ್ರರಾಗಿರಬೇಕಾಗಿದೆ. ಮನಸ್ಸು ಬಹಳ ಶುದ್ಧವಾಗಿರಬೇಕು. ಅಂತಿಮದಲ್ಲಿ ಮನಸ್ಸಿನಲ್ಲಿಯೂ ಸಹ ಯಾವುದೇ ವ್ಯರ್ಥ ಸಂಕಲ್ಪಗಳು ಬರಬಾರದು. ಒಬ್ಬ ತಂದೆಯ ವಿನಃ ಮತ್ತ್ಯಾರ ನೆನಪೂ ಬರಬಾರದು, ಇಷ್ಟು ಪರಿಶ್ರಮ ಪಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಈಗ ಮನಸ್ಸಿನಲ್ಲಂತೂ ಬಂದೇ ಬರುತ್ತದೆ. ಇನ್ನೂ ಕರ್ಮಾತೀತ ಸ್ಥಿತಿಯಾಗಿಲ್ಲ., ಆದರೆ ಈಗ ಹನುಮಂತನ ತರಹ ಅಡೋಲರಾಗಿ ಅದರಲ್ಲಿಯೇ ಪರಿಶ್ರಮ ಬೇಕು. ಯಾರು ಆಜ್ಞಾಕಾರಿಗಳು, ಪ್ರಾಮಾಣಿಕರು, ಸುಪುತ್ರರಾಗಿರುವರೋ ಅವರ ಮೇಲೆ ತಂದೆಗೆ ಹೆಚ್ಚಿನ ಪ್ರೀತಿಯಿರುತ್ತದೆ. ಪಂಚ ವಿಕಾರಗಳ ಮೇಲೆ ಜಯ ಗಳಿಸದೇ ಇರುವವರು ಅಷ್ಟು ಪ್ರಿಯರಾಗಲು ಸಾಧ್ಯವಿಲ್ಲ. ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಕಲ್ಪ-ಕಲ್ಪವೂ ತಂದೆಯಿಂದ ಈ ಆಸ್ತಿಯನ್ನು ಪಡೆಯುತ್ತೇವೆ ಅಂದಮೇಲೆ ಎಷ್ಟು ಖುಷಿಯ ನಶೆಯಿರಬೇಕು! ಇದೂ ಸಹ ನಿಮಗೆ ತಿಳಿದಿದೆ – ಸ್ಥಾಪನಾ ಕಾರ್ಯವು ಖಂಡಿತ ಆಗುವುದು. ಈ ಹಳೆಯ ಪ್ರಪಂಚವು ಅವಶ್ಯವಾಗಿ ಸ್ಮಶಾನವಾಗುವುದು. ನಾವು ಸ್ವರ್ಗದಲ್ಲಿ ಹೋಗಲು ಕಲ್ಪದ ಹಿಂದಿನ ತರಹ ಪುರುಷಾರ್ಥ ಮಾಡುತ್ತಿರುತ್ತೇವೆ. ಇದಂತೂ ಸ್ಮಶಾನವಲ್ಲವೆ. ಏಣಿಯ ಚಿತ್ರದಲ್ಲಿ ಹಳೆಯ ಪ್ರಪಂಚ ಮತ್ತು ಹೊಸ ಪ್ರಪಂಚದ ತಿಳುವಳಿಕೆಯು ಬಹಳ ಚೆನ್ನಾಗಿದೆ. ಆದರೂ ಸಹ ಇದನ್ನು ಮನುಷ್ಯರು ತಿಳಿದುಕೊಳ್ಳುವುದಿಲ್ಲ. ಇಲ್ಲಿ ಸಾಗರದ ತೀರದಲ್ಲಿರುವವರೂ ಸಹ ಪೂರ್ಣ ಅರಿತುಕೊಳ್ಳುವುದಿಲ್ಲ. ನೀವು ಜ್ಞಾನ ಧನದ ದಾನವನ್ನಂತೂ ಖಂಡಿತ ಮಾಡಬೇಕಾಗಿದೆ. ಧನ ದಾನ ಮಾಡಿದರೆ ಅದೆಂದೂ ಖಾಲಿಯಾಗುವುದಿಲ್ಲ. ದಾನಿ, ಮಹಾದಾನಿಗಳೆಂದು ಹೇಳುತ್ತಾರಲ್ಲವೆ. ಯಾರು ಆಸ್ಪತ್ರೆ, ಧರ್ಮಶಾಲೆ ಇತ್ಯಾದಿಗಳನ್ನು ಕಟ್ಟಿಸುವರೋ ಅವರಿಗೆ ಮಹಾದಾನಿಗಳೆಂದು ಹೇಳುತ್ತಾರೆ. ಅದಕ್ಕೆ ಪ್ರತಿಫಲವು ಇನ್ನೊಂದು ಜನ್ಮದಲ್ಲಿ ಅಲ್ಪಕಾಲಕ್ಕಾಗಿ ಸಿಗುತ್ತದೆ. ತಿಳಿದುಕೊಳ್ಳಿ, ಯಾರಾದರೂ ಧರ್ಮಶಾಲೆ ಕಟ್ಟಿಸಿದರೆ ನಂತರದ ಜನ್ಮದಲ್ಲಿ ಮನೆಯ ಸುಖ ಸಿಗುವುದು. ಕೆಲವರು ಬಹಳ ಧನ ದಾನ ಮಾಡಿದರೆ ರಾಜನ ಮನೆಯಲ್ಲಿ ಅಥವಾ ಸಾಹುಕಾರರ ಮನೆಯಲ್ಲಿ ಜನ್ಮ ಪಡೆಯುತ್ತಾರೆ. ಅವರು ದಾನದಿಂದ ಆಗುತ್ತಾರೆ. ನೀವು ವಿದ್ಯೆಯಿಂದ ರಾಜ್ಯ ಪದವಿಯನ್ನು ಪಡೆಯುತ್ತೀರಿ. ವಿದ್ಯೆಯು ಈಗ ದಾನವೂ ಇದೆ, ಇಲ್ಲಿ ಡೈರೆಕ್ಟ್ ಆಗಿದೆ. ಭಕ್ತಿಮಾರ್ಗದಲ್ಲಿ ಇನ್ಡೈರೆಕ್ಟ್ ಆಗಿದೆ. ಶಿವ ತಂದೆಯು ವಿದ್ಯೆಯಿಂದ ನಿಮ್ಮನ್ನು ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಶಿವ ತಂದೆಯ ಬಳಿ ಅವಿನಾಶಿ ಜ್ಞಾನ ರತ್ನಗಳಿವೆ. ಒಂದೊಂದು ರತ್ನವೂ ಲಕ್ಷಾಂತರ ರೂಪಾಯಿಗಳಷ್ಟು ಅಮೂಲ್ಯವಾಗಿದೆ. ಭಕ್ತಿಗೆ ಈ ರೀತಿ ಹೇಳಲಾಗುವುದಿಲ್ಲ. ಇದಕ್ಕೇ ಜ್ಞಾನವೆಂದು ಹೇಳಲಾಗುತ್ತದೆ. ಶಾಸ್ತ್ರಗಳಲ್ಲಿ ಭಕ್ತಿಯ ಜ್ಞಾನವಿದೆ, ಹೇಗೆ ಭಕ್ತಿ ಮಾಡಬೇಕೆಂದು ಶಿಕ್ಷಣ ಸಿಗುತ್ತದೆ. ನೀವು ಮಕ್ಕಳಿಗೆ ಜ್ಞಾನದ ಅಪಾರ ನಶೆಯಿದೆ, ನಿಮಗೆ ಭಕ್ತಿಯ ನಂತರ ಜ್ಞಾನ ಸಿಗುತ್ತದೆ. ಜ್ಞಾನದಿಂದ ವಿಶ್ವದ ರಾಜ್ಯಭಾಗ್ಯದ ಅಪಾರ ನಶೆಯಿರುತ್ತದೆ. ಯಾರು ಹೆಚ್ಚು ಸರ್ವೀಸ್ ಮಾಡುವರೋ ಅವರಿಗೆ ನಶೆಯೇರುವುದು. ಪ್ರದರ್ಶನಿ, ಮ್ಯೂಸಿಯಂಗಳಲ್ಲಿಯೂ ಚೆನ್ನಾಗಿ ಭಾಷಣ ಮಾಡುವವರನ್ನೇ ಕರೆಸುತ್ತಾರಲ್ಲವೆ. ಅಲ್ಲಿಯೂ ಸಹ ಅವಶ್ಯವಾಗಿ ನಂಬರ್ವಾರ್ ಇರುತ್ತಾರೆ. ಮಹಾರಥಿ, ಕುದುರೆ ಸವಾರ, ಕಾಲಾಳುಗಳಿರುತ್ತಾರೆ. ದಿಲ್ವಾಡಾ ಮಂದಿರದಲ್ಲಿಯೂ ನೆನಪಾರ್ಥ ಮಾಡಲ್ಪಟ್ಟಿದೆ. ಇದು ಚೈತನ್ಯ ದಿಲ್ವಾಡಾ ಮಂದಿರ, ಇದು ಜಡ ಮಂದಿರವಾಗಿದೆ ಎಂದು ನೀವು ಹೇಳುತ್ತೀರಿ. ನೀವು ಗುಪ್ತವಾಗಿದ್ದೀರಿ, ಆದ್ದರಿಂದ ನಿಮ್ಮನ್ನು ತಿಳಿದುಕೊಂಡಿಲ್ಲ.

ನೀವು ರಾಜ ಋಷಿಗಳು, ಅವರು ಹಠಯೋಗ ಋಷಿಗಳಾಗಿದ್ದಾರೆ. ನೀವು ಜ್ಞಾನ ಜ್ಞಾನೇಶ್ವರಿಯಾಗಿದ್ದೀರಿ, ಜ್ಞಾನ ಸಾಗರನು ನಿಮಗೆ ಜ್ಞಾನವನ್ನು ಕೊಡುತ್ತಾರೆ. ನೀವು ಅವಿನಾಶಿ ಸರ್ಜನ್ನ ಮಕ್ಕಳಾಗಿದ್ದೀರಿ. ತಜ್ಞರೇ ಮಾಡಿ ನೋಡುವರು. ಯಾರು ತಮ್ಮನ್ನು ನಾಡಿಯನ್ನೇ ಅರಿತುಕೊಳ್ಳುವುದಿಲ್ಲವೋ ಅವರು ಅನ್ಯರನ್ನು ಹೇಗೆ ಅರಿತುಕೊಳ್ಳುವರು! ನೀವು ಅವಿನಾಶಿ ಸರ್ಜನ್ನ ಮಕ್ಕಳಾಗಿದ್ದೀರಿ. ಜ್ಞಾನ ಅಂಜನವನ್ನು ಸದ್ಗುರು ಕೊಟ್ಟರು...... ಇದು ಜ್ಞಾನದ ಇಂಜೆಕ್ಷನ್ ಆಗಿದೆಯಲ್ಲವೆ. ಆತ್ಮಕ್ಕೆ ಈ ಇಂಜೆಕ್ಷನ್ ಹಾಕಲ್ಪಡುತ್ತದೆ. ಈ ಮಹಿಮೆಯೂ ಈಗಿನದಾಗಿದೆ. ಸದ್ಗುರುವಿನದೇ ಮಹಿಮೆಯಾಗಿದೆ. ಗುರುಗಳಿಗೂ ಜ್ಞಾನದ ಇಂಜೆಕ್ಷನ್ನ್ನು ಸದ್ಗುರುವೇ ಕೊಟ್ಟಿದ್ದಾರೆ. ನೀವು ಅವಿನಾಶಿ ಸರ್ಜನ್ನ ಮಕ್ಕಳಾಗಿದ್ದೀರಿ, ಅಂದಮೇಲೆ ನಿಮ್ಮ ಕರ್ತವ್ಯವೇ ಆಗಿದೆ - ಜ್ಞಾನದ ಇಂಜೆಕ್ಷನ್ ಕೊಡುವುದು. ವೈದ್ಯರಲ್ಲಿಯೂ ಕೆಲವರು ತಿಂಗಳಿಗೆ ಲಕ್ಷ ರೂಪಾಯಿಗಳನ್ನು, ಕೆಲವರು ಕೇವಲ 500 ರೂಪಾಯಿಗಳನ್ನು ಸಂಪಾದಿಸುತ್ತಾರೆ. ನಂಬರ್ವಾರ್ ಒಬ್ಬರು ಇನ್ನೊಬ್ಬರ ಬಳಿ ಹೋಗುತ್ತಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲಿ ಇಂತಹವರನ್ನು ಗಲ್ಲಿಗೇರಿಸಬೇಕೆಂದು ನಿರ್ಣಯವಾಗುತ್ತದೆ ಮತ್ತೆ ಅದನ್ನು ರಾಷ್ಟ್ರಪತಿಯ ಬಳಿ ಅಪೀಲು ಮಾಡುತ್ತಾರೆ. ಆಗ ಅವರು ಕ್ಷಮಿಸಿ ಬಿಡುತ್ತಾರೆ.

ನೀವು ಮಕ್ಕಳಿಗಂತೂ ನಶೆಯಿರಬೇಕು, ಉದಾರಚಿತ್ತರಾಗಬೇಕು. ಈ ಭಗೀರಥನಲ್ಲಿ ತಂದೆಯು ಪ್ರವೇಶವಾದರು ಆಗ ಇವರನ್ನು ಉದಾರ ಚಿತ್ತರನ್ನಾಗಿ ಮಾಡಿದರಲ್ಲವೆ. ತಾವಂತೂ ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅವರು ಬಂದು ಇವರಲ್ಲಿ ಬಂದು ಮಾಲೀಕನಾಗಿ ಕುಳಿತು ಬಿಟ್ಟರು. ಇದೆಲ್ಲವನ್ನೂ ಭಾರತದ ಕಲ್ಯಾಣಕ್ಕಾಗಿ ತೊಡಗಿಸಬೇಕೆಂದು ಹೇಳಿದರು. ನೀವು ಭಾರತದ ಕಲ್ಯಾಣಾರ್ಥವಾಗಿಯೇ ಹಣವನ್ನು ತೊಡಗಿಸುತ್ತೀರಿ. ನೀವು ಹಣವನ್ನು ಎಲ್ಲಿಂದ ತರುತ್ತೀರಿ ಎಂದು ಯಾರಾದರೂ ಕೇಳಿದರೆ ತಿಳಿಸಿ - ನಾವು ನಮ್ಮದೇ ತನು-ಮನ-ಧನದಿಂದ ಸರ್ವೀಸ್ ಮಾಡುತ್ತೇವೆ. ನಾವು ರಾಜ್ಯಭಾರ ಮಾಡುತ್ತೇವೆ ಅಂದಮೇಲೆ ಹಣವನ್ನೂ ನಾವೇ ತೊಡಗಿಸುತ್ತೇವೆ. ನಾವು ನಮ್ಮ ಹಣವನ್ನೇ ಖರ್ಚು ಮಾಡುತ್ತೇವೆ. ನಾವು ಬ್ರಾಹ್ಮಣರು ಶ್ರೀಮತದಂತೆ ರಾಜ್ಯ ಸ್ಥಾಪನೆ ಮಾಡುತ್ತೇವೆ. ಯಾರು ಬ್ರಾಹ್ಮಣರಾಗುವರೋ ಅವರೇ ಖರ್ಚು ಮಾಡುತ್ತಾರೆ, ಶೂದ್ರರಿಂದ ಬ್ರಾಹ್ಮಣರಾಗಿ ನಂತರ ದೇವತೆಗಳಾಗಬೇಕಾಗಿದೆ. ತಂದೆಯು ಹೇಳುತ್ತಾರೆ - ಎಲ್ಲಾ ಚಿತ್ರಗಳನ್ನು ಟ್ರಾನ್ಸ್ಲೇಟ್ನಿಂದ ಮಾಡಿಸಿ ಆಗ ಮನುಷ್ಯರಿಗೆ ಆಕರ್ಷಣೆಯಾಗುವುದು. ನೋಡಿದವರೆಗೆ ಕೂಡಲೇ ಬಾಣವು ನಾಟಲಿ. ಕೆಲವರು ಜಾದುವೆಂದು ತಿಳಿದು ಹೆದರಿ ಬರುವುದೇ ಇಲ್ಲ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವುದು - ಇದು ಜಾದುವಲ್ಲವೆ. ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ, ಹಠಯೋಗಿಗಳೆಂದೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಈ ಮಾತುಗಳನ್ನು ಈಗ ನೀವು ತಿಳಿದುಕೊಳ್ಳುತ್ತೀರಿ. ನೀವು ಮಂದಿರ ಯೋಗ್ಯರಾಗುತ್ತಿದ್ದೀರಿ. ಈ ಸಮಯದಲ್ಲಿ ಇಡೀ ವಿಶ್ವವೇ ಬೇಹದ್ದಿನ ಲಂಕೆಯಾಗಿದೆ. ಇಡೀ ವಿಶ್ವದಲ್ಲಿ ರಾವಣ ರಾಜ್ಯವಿದೆ ಆದರೆ ಸತ್ಯ-ತ್ರೇತಾಯುಗದಲ್ಲಿ ರಾವಣ ಮೊದಲಾದವರಿರಲು ಹೇಗೆ ಸಾಧ್ಯ!

ತಂದೆಯು ತಿಳಿಸುತ್ತಾರೆ - ಈಗ ನಾನು ಏನನ್ನು ತಿಳಿಸುತ್ತೇನೆಯೋ ಅದನ್ನೇ ಕೇಳಿರಿ. ಈ ಕಣ್ಣುಗಳಿಂದ ಏನನ್ನೂ ನೋಡಬೇಡಿ. ಈ ಹಳೆಯ ಪ್ರಪಂಚವೇ ವಿನಾಶವಾಗಲಿದೆ, ಆದ್ದರಿಂದ ನಾವು ನಮ್ಮ ಶಾಂತಿಧಾಮ, ಸುಖಧಾಮವನ್ನೇ ನೆನಪು ಮಾಡುತ್ತೇವೆ. ನೀವೀಗ ಪೂಜಾರಿಗಳಿಂದ ಪೂಜ್ಯರಾಗುತ್ತಿದ್ದಿರಿ. ಇವರು ನಂಬರ್ವನ್ ಪೂಜ್ಯರಾಗುತ್ತಿದ್ದರು, ನಾರಾಯಣನ ಬಹಳ ಪೂಜೆ ಮಾಡುತ್ತಿದ್ದರು. ಈಗ ಪುನಃ ಪೂಜ್ಯ, ನಾರಾಯಣನಾಗುತ್ತಿದ್ದಾರೆ. ಈಗ ಪುನಃ ನೀವೂ ಸಹ ಪುರುಷಾರ್ಥ ಮಾಡಿ ಆಗಬಲ್ಲಿರಿ. ರಾಜಧಾನಿಯಂತೂ ನಡೆಯುತ್ತದೆಯಲ್ಲವೆ. ಹೇಗೆ ಕಿಂಗ್ ಎಡ್ವರ್ಡ್ ದಿ ಫಸ್ಟ್, ಸೆಕೆಂಡ್ ... ನಡೆಯುತ್ತದೆ. ತಂದೆಯು ತಿಳಿಸುತ್ತಾರೆ - ನೀವು ಸರ್ವವ್ಯಾಪಿ ಎಂದು ಹೇಳಿ ನನ್ನ ತಿರಸ್ಕಾರ ಮಾಡುತ್ತಾ ಬಂದಿದ್ದೀರಿ. ಆದರೂ ಸಹ ನಾನು ನಿಮಗೆ ಉಪಕಾರ ಮಾಡುತ್ತೇನೆ. ಈ ಆಟವೇ ವಿಚಿತ್ರವಾಗಿ ಮಾಡಲ್ಪಟ್ಟಿದೆ. ಪುರುಷಾರ್ಥವನ್ನು ಖಂಡಿತ ಮಾಡಬೇಕಾಗಿದೆ. ಕಲ್ಪದ ಹಿಂದೆ ಯಾರು ಪುರುಷಾರ್ಥ ಮಾಡಿದ್ದರೋ ಅವರೇ ಡ್ರಾಮಾನುಸಾರ ಮಾಡುತ್ತಾರೆ. ಯಾವ ಮಕ್ಕಳಿಗೆ ಸರ್ವೀಸಿನ ಆಸಕ್ತಿಯಿರುವುದೋ ಅವರಿಗೆ ಹಗಲು-ರಾತ್ರಿ ಇದೇ ಚಿಂತನೆಯಿರುತ್ತದೆ. ನೀವು ಮಕ್ಕಳಿಗೆ ತಂದೆಯಿಂದ ಮಾರ್ಗ ಸಿಕ್ಕಿದೆ ಅಂದಮೇಲೆ ನೀವು ಮಕ್ಕಳಿಗೆ ಸೇವೆಯಲ್ಲದೇ ಮತ್ತೇನೂ ಇಷ್ಟವಾಗುವುದಿಲ್ಲ. ಪ್ರಾಪಂಚಿಕ ವಾತಾವರಣವು ಇಷ್ಟವಾಗುವುದಿಲ್ಲ. ಸೇವಾಧಾರಿಗಳಿಗೆ ಸೇವೆ ಮಾಡದೆ ವಿಶ್ರಾಂತಿಯನಿಸುವುದಿಲ್ಲ. ಶಿಕ್ಷಕರಿಗೆ ಓದಿಸುವುದರಲ್ಲಿಯೇ ಮಜಾ ಬರುತ್ತದೆ. ನೀವೀಗ ಉತ್ತಮ ಶಿಕ್ಷಕರಾಗಿದ್ದೀರಿ. ನಿಮ್ಮ ಕರ್ತವ್ಯವೇ ಇದಾಗಿದೆ. ಶಿಕ್ಷಕರು ಎಷ್ಟು ಚೆನ್ನಾಗಿ ಅನೇಕರನ್ನು ತಮ್ಮ ಸಮಾನ ಮಾಡಿಕೊಳ್ಳುವರು. ಅವರಿಗೆ ಅಷ್ಟೇ ಬಹುಮಾನವು ಸಿಗುವುದು. ಅವರಿಗೆ ಓದಿಸದೇ ವಿಶ್ರಾಂತಿಯೆನಿಸುವುದಿಲ್ಲ. ಪ್ರದರ್ಶನಿ ಮೊದಲಾದುವುಗಳಲ್ಲಿ ರಾತ್ರಿ 12 ಗಂಟೆಯಾದರೂ ಸಹ ಖುಷಿಯಿರುತ್ತದೆ. ಸುಸ್ತಾಗಿರುತ್ತದೆ, ಗಂಟಲು ಕೆಟ್ಟು ಹೋದರೂ ಸಹ ಖುಷಿಯಾಗಿರುತ್ತಾರೆ. ಈಶ್ವರೀಯ ಸೇವೆಯಲ್ಲವೆ. ಇದು ಬಹಳ ಶ್ರೇಷ್ಠ ಸೇವೆಯಾಗಿದೆ. ಅವರಿಗೆ ಮತ್ತೇನೂ ಮಧುರವೆನಿಸುವುದಿಲ್ಲ. ನಾವು ಈ ಮನೆ ಇತ್ಯಾದಿಗಳನ್ನು ತೆಗೆದುಕೊಂಡು ಏನು ಮಾಡಬೇಕು, ನಾವಂತೂ ಓದಿಸಬೇಕಾಗಿದೆ, ಇದೇ ಸರ್ವೀಸ್ ಮಾಡಬೇಕಾಗಿದೆ ಎಂದು ಹೇಳುತ್ತಾರೆ. ಆಸ್ತಿಯಲ್ಲಿ ಕಿರಿ ಕಿರಿಯನ್ನು ನೋಡಿದಾಗ ಈ ಚಿನ್ನ ಇತ್ಯಾದಿಗಳು ಏತಕ್ಕೆ ಬೇಕು? ಕಿವಿಗಳನ್ನು ಕತ್ತರಿಸಿಕೊಳ್ಳಬೇಕಾಗುತ್ತದೆ ಎಂದೇ ಹೇಳುತ್ತಾರೆ. ಸೇವೆಯಿಂದಲೇ ದೋಣಿಯು ಪಾರಾಗುವುದು. ತಂದೆಯು ಹೇಳುತ್ತಾರೆ - ಮನೆಯೂ ಸಹ ಭಲೆ ಅವರ ಹೆಸರಿನಲ್ಲಿಯೇ ಇರಲಿ. ಬಿ.ಕೆ.,ಗಳಂತೂ ಸರ್ವೀಸ್ ಮಾಡಬೇಕಾಗಿದೆ. ಈ ಸೇವೆಯಲ್ಲಿ ಯಾವುದೇ ಬಂಧನವು ಇಷ್ಟವಾಗುವುದಿಲ್ಲ, ಕೆಲವರಿಗೆ ಮೋಹವು ಸೆಳೆಯುತ್ತದೆ. ಕೆಲವರಿಗೆ ಮೋಹವು ಕಳೆದಿರುತ್ತದೆ. ತಂದೆಯು ತಿಳಿಸುತ್ತಾರೆ - ಮನ್ಮನಾಭವ, ಇದರಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ, ಬಹಳ ಸಹಯೋಗ ಸಿಗುತ್ತದೆ. ಈ ಸೇವೆಯಲ್ಲಿ ತೊಡಗಿರಿ, ಇದರಲ್ಲಿ ಬಹಳ ಸಂಪಾದನೆಯಿದೆ. ಮನೆ ಇತ್ಯಾದಿಗಳ ಮಾತಿದೆ. ಮನೆಯನ್ನು ಕೊಟ್ಟು ಮತ್ತೆ ಬಂಧನ ಹಾಕುವಂತಿದ್ದರೆ ಅಂತಹವರದನ್ನು ತೆಗೆದುಕೊಳ್ಳುವುದಿಲ್ಲ. ಯಾರು ಸೇವೆಯನ್ನು ಅರಿತುಕೊಂಡಿಲ್ಲವೋ ಅವರು ಏನೂ ಪ್ರಯೋಜನಕ್ಕಿಲ್ಲ. ಶಿಕ್ಷಕರು ತಮ್ಮ ಸಮಾನ ಮಾಡಿಕೊಳ್ಳುತ್ತಾರೆ. ಆಗದಿದ್ದರೆ ಅವರೇನು ಕೆಲಸಕ್ಕೆ ಬರುವರು? ಸಹಯೋಗಿಗಳ ಬಹಳ ಅವಶ್ಯಕತೆಯಿರುತ್ತದೆಯಲ್ಲವೆ. ಇದರಲ್ಲಿಯೂ ಕನ್ಯೆಯರು, ಮಾತೆಯರ ಅವಶ್ಯಕತೆ ಹೆಚ್ಚಿನದಾಗಿರುತ್ತದೆ. ಮಕ್ಕಳು ತಿಳಿದುಕೊಳ್ಳುತ್ತಾರೆ - ತಂದೆಯು ಶಿಕ್ಷಕನಾಗಿದ್ದಾರೆ, ಅಂದಮೇಲೆ ಮಕ್ಕಳು ಶಿಕ್ಷಕರಾಗಬೇಕು. ಶಿಕ್ಷಕರು ಮತ್ತ್ಯಾವುದೇ ಕೆಲಸವನ್ನು ಮಾಡಬಾರದೆಂದಲ್ಲ. ಎಲ್ಲಾ ಕೆಲಸಗಳನ್ನು ಮಾಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ದಿನ-ರಾತ್ರಿ ಸರ್ವೀಸಿನ ಚಿಂತನೆಯಲ್ಲಿರಬೇಕಾಗಿದೆ. ಮತ್ತೆಲ್ಲಾ ಸೆಳೆತಗಳನ್ನು ಕತ್ತರಿಸಬೇಕಾಗಿದೆ. ಸೇವೆ ಮಾಡದೇ ವಿಶ್ರಾಂತಿಯೆನಿಸುವುದಿಲ್ಲ. ಆದ್ದರಿಂದ ಸೇವೆ ಮಾಡಿ ತಮ್ಮ ಸಮಾನ ಮಾಡಿಕೊಳ್ಳಬೇಕಾಗಿದೆ.

2. ತಂದೆಯ ಸಮಾನ ಉದಾರ ಚಿತ್ತರಾಗಬೇಕಾಗಿದೆ. ಎಲ್ಲರ ನಾಡಿ ನೋಡಿ ಸೇವೆ ಮಾಡಬೇಕಾಗಿದೆ. ತಮ್ಮ ತನು-ಮನ-ಧನವನ್ನು ಭಾರತದ ಕಲ್ಯಾಣದಲ್ಲಿ ತೊಡಗಿಸಬೇಕಾಗಿದೆ. ಅಚಲ-ಅಡೋಲರಾಗಲು ಆಜ್ಞಾಕಾರಿಗಳು, ಪ್ರಾಮಾಣಿಕರಾಗಬೇಕಾಗಿದೆ.

ವರದಾನ:
ಅಂತರ್ಮುಖತೆಯ ಗುಹೆಯಲ್ಲಿರುವಂತಹ ದೇಹದಿಂದ ನ್ಯಾರಾ ದೇಹೀ ಭವ.

ಪಾಂಡವರ ಗುಹೆಗಳನ್ನು ಏನು ತೋರಿಸುತ್ತಾರೆ - ಅದು ಇದೇ ಅಂತರ್ಮುಖತೆಯ ಗುಹೆಯಾಗಿದೆ, ಎಷ್ಟು-ದೇಹದಿಂದ ನ್ಯಾರ, ಆತ್ಮ ರೂಪದಲ್ಲಿ ಸ್ಥಿತರಾಗುವ ಗುಹೆಯಲ್ಲಿರುವಿರೋ ಅಷ್ಟು ಜಗತ್ತಿನ ವಾತಾವರಣದಿಂದ ದೂರ ಹೋಗಿ ಬಿಡುವಿರಿ, ವಾತಾವರಣದ ಪ್ರಭಾವದಲ್ಲಿ ಬರುವುದಿಲ್ಲ. ಹೇಗೆ ಗುಹೆಯ ಒಳಗೆ ಇರುವುದರಿಂದ ಹೊರಗಿನ ವಾತಾವರಣದಿಂದ ದೂರವಾಗಿರುತ್ತಾರೆ ಹಾಗೆಯೇ ಇಲ್ಲಿ ಅಂತರ್ಮುಖತೆಯ ಗುಹೆ ಸಹ ಎಲ್ಲದರಿಂದ ಅತೀತವಾಗಿ ತಂದೆಗೆ ಪ್ರಿಯರನ್ನಾಗಿ ಮಾಡಿ ಬಿಡುತ್ತದೆ. ನಂತರ ಯಾರು ತಂದೆಗೆ ಪ್ರಿಯರಾಗಿದ್ದಾರೆ ಅವರು ಸ್ವತಃ ಎಲ್ಲರಿಂದ ಅತೀತರಾಗಿ ಬಿಡುತ್ತಾರೆ.

ಸ್ಲೋಗನ್:
ಸಾಧನೆ ಬೀಜವಾಗಿದೆ ಮತ್ತು ಸಾಧನ ಅದರ ವಿಸ್ತಾರವಾಗಿದೆ. ವಿಸ್ತಾರದಲ್ಲಿ ಸಾಧನೆಯನ್ನು ಮುಚ್ಚಿ ಬಿಡಬಾರದು.