05.12.20 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ಈಗ
ಮನೆಗೆ ಹೋಗಬೇಕಾಗಿದೆ ಆದ್ದರಿಂದ ದೇಹೀ-ಅಭಿಮಾನಿಯಾಗಿ, ಒಬ್ಬ ತಂದೆಯನ್ನು ನೆನಪು ಮಾಡಿ ಆಗ ಅಂತಮತಿ
ಸೋ ಗತಿಯಾಗುವುದು"
ಪ್ರಶ್ನೆ:
ವಂಡರ್ಫುಲ್
ತಂದೆಯು ನಿಮಗೆ ಯಾವ ಒಂದು ವಂಡರ್ಫುಲ್ ರಹಸ್ಯವನ್ನು ತಿಳಿಸಿದ್ದಾರೆ?
ಉತ್ತರ:
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಅನಾದಿ-ಅವಿನಾಶಿ ನಾಟಕವು ಮಾಡಲ್ಪಟ್ಟಿದೆ. ಇದರಲ್ಲಿ
ಪ್ರತಿಯೊಬ್ಬರ ಪಾತ್ರವು ನಿಗಧಿಯಾಗಿದೆ. ಏನೇ ಆದರೂ ಸಹ ಇದು ಹೊಸದೇನಲ್ಲ. ಮಕ್ಕಳೇ, ಇದರಲ್ಲಿ
ನನ್ನದೂ ಸಹ ಯಾವುದೇ ಹೆಗ್ಗಳಿಕೆಯಿಲ್ಲ. ನಾನೂ ಸಹ ಡ್ರಾಮಾದ ಬಂಧನದಲ್ಲಿ ಬಂಧಿತನಾಗಿದ್ದೇನೆ. ಈ
ಅದ್ಭುತ ರಹಸ್ಯವನ್ನು ತಿಳಿಸಿ ತಂದೆಯು ಹೇಗೆ ತನ್ನ ಪಾತ್ರದ ಮಹತ್ವಿಕೆಯನ್ನು ಕಡಿಮೆ
ಮಾಡಿಕೊಂಡಿದ್ದಾರೆ.
ಗೀತೆ:
ಕೊನೆಗೂ ಆ ದಿನ
ಬಂದಿತು..........
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಹಾಡುತ್ತಿದ್ದೀರಿ. ಮಕ್ಕಳಿಗೆ ತಿಳಿದಿದೆ – ಕಲ್ಪದ
ನಂತರ ಪುನಃ ನಮ್ಮನ್ನು ಧನವಂತರು, ಆರೋಗ್ಯ ಮತ್ತು ಐಶ್ವರ್ಯವಂತರನ್ನಾಗಿ ಮಾಡಲು ಸುಖ-ಶಾಂತಿ,
ಪವಿತ್ರತೆಯ ಆಸ್ತಿಯನ್ನು ಕೊಡಲು ತಂದೆಯು ಬರುತ್ತಾರೆ. ಬ್ರಾಹ್ಮಣರೂ ಸಹ ಆಯುಷ್ಯವಾನ್ ಭವ, ಧನವಾನ್
ಭವ, ಪುತ್ರವಾನ್ ಭವ ಎಂದು ಆಶೀರ್ವಾದ ಕೊಡುತ್ತಾರಲ್ಲವೆ. ನೀವು ಮಕ್ಕಳಿಗಂತೂ ಆಸ್ತಿಯು ಸಿಗುತ್ತಿದೆ,
ಆಶೀರ್ವಾದದ ಯಾವುದೇ ಮಾತಿಲ್ಲ. ಮಕ್ಕಳು ಓದುತ್ತಿದ್ದೀರಿ. ನಿಮಗೆ ತಿಳಿದಿದೆ - 5000 ವರ್ಷಗಳ
ಮೊದಲೂ ಸಹ ತಂದೆಯು ಬಂದು ನಮಗೆ ಮನುಷ್ಯರಿಂದ ದೇವತೆ, ನರನಿಂದ ನಾರಾಯಣರಾಗುವ ಶಿಕ್ಷಣ ಕೊಟ್ಟಿದ್ದರು.
ಯಾವ ಮಕ್ಕಳು ಓದುವರೋ ಅವರಿಗೆ ನಾವು ಏನನ್ನು ಓದುತ್ತಿದ್ದೇವೆ, ಓದಿಸುವವರು ಯಾರಾಗಿದ್ದಾರೆ ಎಂಬುದು
ಅರ್ಥವಾಗಿದೆ. ಅದರಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದಾರೆ. ಇದನ್ನಂತೂ
ಖಂಡಿತ ಹೇಳುತ್ತಾರೆ - ನಾವು ಮಕ್ಕಳಿಗೆ ತಿಳಿದಿದೆ, ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಅಥವಾ
ದೈವೀ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಮೊದಲು ಶೂದ್ರರಾಗಿದ್ದಿರಿ ನಂತರ ಬ್ರಾಹ್ಮಣರಾದಿರಿ ಈಗ
ಮತ್ತೆ ದೇವತೆಗಳಾಗಬೇಕಾಗಿದೆ. ಪ್ರಪಂಚದಲ್ಲಿ ಯಾರಿಗೂ ಸಹ ನಾವೀಗ ಶೂದ್ರ ವರ್ಣದವರಾಗಿದ್ದೇವೆಂಬುದು
ತಿಳಿದಿಲ್ಲ. ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ - ಇದಂತೂ ಸತ್ಯ ಮಾತಾಗಿದೆ. ತಂದೆಯು ಸತ್ಯವನ್ನು
ತಿಳಿಸಿ ಸತ್ಯ ಖಂಡದ ಸ್ಥಾಪನೆ ಮಾಡುತ್ತಿದ್ದಾರೆ. ಸತ್ಯಯುಗದಲ್ಲಿ ಸುಳ್ಳು, ಪಾಪ ಇತ್ಯಾದಿಗಳೇನೂ
ಇರುವುದಿಲ್ಲ. ಕಲಿಯುಗದಲ್ಲಿಯೇ ಅಜಾಮೀಳ ಪಾಪಾತ್ಮರಾಗುತ್ತಾರೆ. ಈ ಸಮಯದಲ್ಲಿ ಸಂಪೂರ್ಣ ರೌರವ
ನರಕವಾಗಿದೆ. ದಿನ-ಪ್ರತಿದಿನ ಇನ್ನೂ ರೌರವ ನರಕವು ಕಾಣುತ್ತಾ ಹೋಗುವುದು. ಮನುಷ್ಯರು ಇಂತಿಂತಹ
ಕರ್ತವ್ಯಗಳನ್ನು ಮಾಡುತ್ತಿರುತ್ತಾರೆ ಅದರಿಂದ ಅರ್ಥವಾಗುತ್ತದೆ - ಪ್ರಪಂಚವು ಇನ್ನೂ
ತಮೋಪ್ರಧಾನವಾಗುತ್ತಾ ಹೋಗುತ್ತಿದೆ. ಇದರಲ್ಲಿಯೂ ಕಾಮ ಮಹಾಶತ್ರುವಾಗಿದೆ. ಕೆಲವರೇ ವಿರಳ ಪವಿತ್ರ
ಶುದ್ಧವಾಗಿರುತ್ತಾರೆ. ಮೊದಲು ಜಂಗಮರು ಹೇಳುತ್ತಿದ್ದರು - ಇಂತಹ ಕಲಿಯುಗ ಬರುವುದು 12-13 ವರ್ಷದ
ಕುಮಾರಿಯರು ಮಕ್ಕಳಿಗೆ ಜನ್ಮ ಕೊಡುತ್ತಾರೆ. ಈಗ ಆ ಸಮಯವಾಗಿದೆ. ಕುಮಾರ-ಕುಮಾರಿಯರೆಲ್ಲರೂ ಬಹಳ
ಕೊಳಕು ಕೆಲಸಗಳನ್ನು ಮಾಡುತ್ತಿರುತ್ತಾರೆ. ಯಾವಾಗ ಸಂಪೂರ್ಣ ತಮೋಪ್ರಧಾನರಾಗಿ ಬಿಡುವರೋ ಆಗ ತಂದೆಯು
ಹೇಳುತ್ತಾರೆ - ನಾನು ಬರುತ್ತೇನೆ, ಡ್ರಾಮಾದಲ್ಲಿ ನನ್ನದೂ ಪಾತ್ರವಿದೆ. ನಾನೂ ಸಹ ಡ್ರಾಮಾದ
ಬಂಧನದಲ್ಲಿ ಬಂಧಿತನಾಗಿದ್ದೇನೆ, ನೀವು ಮಕ್ಕಳಿಗಾಗಿ ಯಾವುದೇ ಹೊಸ ಮಾತಿಲ್ಲ, ತಂದೆಯು ತಿಳಿಸುವುದೇ
ಹೀಗೆ. ಚಕ್ರವನ್ನು ಸುತ್ತಿದಿರಿ, ನಾಟಕವು ಪೂರ್ಣವಾಗುತ್ತದೆ. ಈಗ ತಂದೆಯನ್ನು ನೆನಪು ಮಾಡಿ ಆಗ
ನೀವು ಸತೋಪ್ರಧಾನರಾಗಿ, ಸತೋಪ್ರಧಾನ ಪ್ರಪಂಚದ ಮಾಲೀಕರಾಗಿ ಬಿಡುತ್ತೀರಿ. ತಂದೆಯು ಎಷ್ಟು ಸಾಧಾರಣ
ರೀತಿಯಿಂದ ತಿಳಿಸುತ್ತಾರೆ! ತಂದೆಯು ತಮ್ಮ ಪಾತ್ರಕ್ಕೆ ಅಷ್ಟೊಂದು ಮಹತ್ವಿಕೆ ಕೊಡುವುದಿಲ್ಲ.
ಹೇಳುತ್ತಾರೆ - ಇದಂತೂ ನನ್ನ ಪಾತ್ರವಾಗಿದೆ, ಹೊಸ ಮಾತಿಲ್ಲ. ಪ್ರತೀ 5000 ವರ್ಷಗಳ ನಂತರ ನಾನು
ಬರಬೇಕಾಗುತ್ತದೆ. ಡ್ರಾಮಾದಲ್ಲಿ ನಾನು ಬಂಧಿತನಾಗಿದ್ದೇನೆ, ಬಂದು ನೀವು ಮಕ್ಕಳಿಗೆ ಬಹಳ ಸಹಜ
ನೆನಪಿನ ಯಾತ್ರೆಯನ್ನು ತಿಳಿಸುತ್ತೇನೆ. ಅಂತ್ಯಮತಿ ಸೋ ಗತಿ ಅದೂ ಈ ಸಮಯಕ್ಕಾಗಿಯೇ ಹೇಳಲಾಗುತ್ತದೆ.
ಇದು ಅಂತ್ಯಕಾಲವಲ್ಲವೆ. ತಂದೆಯು ಯುಕ್ತಿಯನ್ನು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ
ಸತೋಪ್ರಧಾನರಾಗಿ ಬಿಡುತ್ತೀರಿ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ - ನಾವು ಹೊಸ ಪ್ರಪಂಚದ
ಮಾಲೀಕರಾಗುತ್ತೇವೆ. ತಂದೆಯು ಪದೇ-ಪದೇ ಹೇಳುತ್ತಾರೆ - ನತಿಂಗ್ ನ್ಯೂ. ಒಬ್ಬ ಜಿನ್ಹ್ನ ಕಥೆಯನ್ನು
ಹೇಳುತ್ತಾರಲ್ಲವೆ - ನನಗೆ ಕೆಲಸ ಕೊಡಿ ಇಲ್ಲದಿದ್ದರೆ ನಿಮ್ಮನ್ನೇ ತಿಂದು ಬಿಡುವೆನೆಂದು ಜಿನ್ಹ್ನು
ಹೇಳಿದನು. ಅದಕ್ಕೆ ಏಣಿಯನ್ನು ಹತ್ತು ಮತ್ತು ಇಳಿ ಎಂದು ಕೆಲಸ ಕೊಡಲಾಯಿತು. ತಂದೆಯೂ ಸಹ
ಹೇಳುತ್ತಾರೆ - ಈ ಆಟವೂ ಕೂಡ ಇಳಿಯುವ ಮತ್ತು ಹತ್ತುವುದಾಗಿದೆ. ಪತಿತರಿಂದ ಪಾವನ, ಪಾವನರಿಂದ
ಪತಿತರಾಗಬೇಕಾಗಿದೆ. ಇದೇನೂ ಕಷ್ಟದ ಮಾತಿಲ್ಲ ಬಹಳ ಸಹಜ ಮಾತಾಗಿದೆ. ಆದರೆ ಯಾವ ಯುದ್ಧವಾಗಿದೆ
ಎಂಬುದನ್ನು ತಿಳಿದುಕೊಳ್ಳದ ಕಾರಣ ಶಾಸ್ತ್ರಗಳಲ್ಲಿ ಯುದ್ಧದ ಮಾತನ್ನು ಬರೆದು ಬಿಟ್ಟಿದ್ದಾರೆ.
ವಾಸ್ತವದಲ್ಲಿ ಮಾಯಾ ರಾವಣನ ಮೇಲೆ ಜಯ ಗಳಿಸುವುದೇ ಬಹಳ ದೊಡ್ಡ ಯುದ್ಧವಾಗಿದೆ. ಮಕ್ಕಳು ನೋಡುತ್ತೀರಿ
- ನಾವು ಪದೇ-ಪದೇ ತಂದೆಯನ್ನು ನೆನಪು ಮಾಡುತ್ತೇವೆ ಮತ್ತೆ ನೆನಪು ತುಂಡಾಗುತ್ತದೆ. ಮಾಯೆಯು
ದೀಪವನ್ನೇ ನಂದಿಸಿ ಬಿಡುತ್ತದೆ. ಇದರ ಮೇಲೆ ಗುಲಾಬ್ ಕಾವಲಿಯ ಕಥೆಯೂ ಇದೆ. ಮಕ್ಕಳು ಜಯ
ಗಳಿಸುತ್ತೀರಿ. ಬಹಳ ಚೆನ್ನಾಗಿ ನಡೆಯುತ್ತಾರೆ ಮತ್ತೆ ಮಾಯೆಯು ಬಂದು ದೀಪವನ್ನು ಆರಿಸಿ ಬಿಡುತ್ತದೆ.
ಬಾಬಾ, ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆಯೆಂದು ಮಕ್ಕಳೂ ಸಹ ಹೇಳುತ್ತಾರೆ. ಅನೇಕ ಪ್ರಕಾರದ
ಬಿರುಗಾಳಿಗಳು ಮಕ್ಕಳ ಬಳಿ ಬರುತ್ತವೆ. ಕೆಲಕೆಲವೊಮ್ಮೆ ಬಿರುಗಾಳಿಯು ಇಷ್ಟು ಜೋರಾಗಿ ಬರುತ್ತದೆ
ಅದರಿಂದ 8-10 ವರ್ಷಗಳಿಂದಿರುವ ಹಳೆಯ ಒಳ್ಳೊಳ್ಳೆಯ ವೃಕ್ಷಗಳೂ ಸಹ ಬಿದ್ದು ಹೋಗುತ್ತವೆ. ಮಕ್ಕಳಿಗೆ
ಗೊತ್ತಿದೆ - ವರ್ಣನೆಯನ್ನೂ ಮಾಡುತ್ತಾರೆ. ಒಳ್ಳೊಳ್ಳೆಯ ಮಾಲೆಯ ಮಣಿಗಳಾಗಿದ್ದರು ಆದರೆ ಇಂದು ಅವರು
ಇಲ್ಲ. ಇದೂ ಸಹ ಒಂದು ಉದಾಹರಣೆಯಿದೆ - ಗಜವನ್ನು ಗ್ರಾಹವು ತಿಂದಿತು. ಇದು ಮಾಯೆಯ ಬಿರುಗಾಳಿಯಾಗಿದೆ.
ತಂದೆಯು ಹೇಳುತ್ತಾರೆ - ಮಕ್ಕಳೇ, ಈ ಪಂಚ ವಿಕಾರಗಳಿಂದ ತಮ್ಮನ್ನು ಸಂಭಾಲನೆ ಮಾಡಿಕೊಳ್ಳುತ್ತಾ ಇರಿ.
ನೆನಪಿನಲ್ಲಿದ್ದಾಗ ಶಕ್ತಿಶಾಲಿಗಳಾಗಿ ಬಿಡುತ್ತೀರಿ. ಆತ್ಮಾಭಿಮಾನಿಯಾಗಿ - ತಂದೆಯ ಈ ಶಿಕ್ಷಣವು
ಒಂದೇ ಬಾರಿ ಸಿಗುತ್ತದೆ. ನೀವು ಆತ್ಮಾಭಿಮಾನಿಯಾಗಿ ಎಂಬ ಮಾತನ್ನು ಎಂದೂ ಯಾರೂ ಹೇಳುವುದಿಲ್ಲ.
ಸತ್ಯಯುಗದಲ್ಲಿಯೂ ಸಹ ಈ ರೀತಿ ಹೇಳುವುದಿಲ್ಲ. ನಾಮ-ರೂಪ, ದೇಶ-ಕಾಲ ಎಲ್ಲವೂ ನೆನಪಿರುತ್ತದೆ. ಈ
ಸಮಯದಲ್ಲಿ ನಿಮಗೆ ತಿಳಿಸುತ್ತೇನೆ - ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ನೀವು ಮೊದಲು
ಸತೋಪ್ರಧಾನರಾಗಿದ್ದಿರಿ, ಸತೋ, ರಜೋ, ತಮೋದಲ್ಲಿ ನೀವು 84 ಜನ್ಮಗಳನ್ನು ತೆಗೆದುಕೊಂಡಿರಿ.
ಅದರಲ್ಲಿಯೂ ಮೊಟ್ಟ ಮೊದಲಿಗರು ಈ ಬ್ರಹ್ಮನಾಗಿದ್ದಾರೆ. ಅನ್ಯರದು 83 ಜನ್ಮಗಳೂ ಇರಬಹುದು, ಆದರೆ ಈ
ಬ್ರಹ್ಮಾರವರದು ಪೂರ್ಣ 84 ಜನ್ಮಗಳಿವೆ. ಇವರು ಮೊಟ್ಟ ಮೊದಲು ಶ್ರೀ ನಾರಾಯಣನಾಗಿದ್ದರು. ಇವರಿಗಾಗಿ
ಹೇಳುತ್ತಾರೆಂದರೆ ಅರ್ಥ ಅದು ಎಲ್ಲರಿಗಾಗಿ ಎಂದು ಅರ್ಥವಾಗುತ್ತದೆ. ಅನೇಕ ಜನ್ಮಗಳ ಅಂತಿಮದಲ್ಲಿ
ಜ್ಞಾನವನ್ನು ಪಡೆದುಕೊಂಡು ಮತ್ತೆ ಅವರು ನಾರಾಯಣನಾಗುತ್ತಾರೆ. ವೃಕ್ಷದಲ್ಲಿಯೂ ಸಹ
ತೋರಿಸಿದ್ದಾರಲ್ಲವೆ. ಇಲ್ಲಿ ಶ್ರೀ ನಾರಾಯಣ ಮತ್ತು ಕೊನೆಯಲ್ಲಿ ಬ್ರಹ್ಮನು ನಿಂತಿದ್ದಾರೆ. ಕೆಳಗೆ
ರಾಜಯೋಗವನ್ನು ಕಲಿಯುತ್ತಿದ್ದಾರೆ. ಪ್ರಜಾಪಿತನಿಗೆಂದೂ ಪರಮಪಿತನೆಂದು ಹೇಳುವುದಿಲ್ಲ. ಪರಮಪಿತನೆಂದು
ಒಬ್ಬರಿಗೇ ಹೇಳಲಾಗುತ್ತದೆ. ಈ ಬ್ರಹ್ಮಾರವರಿಗೆ ಪ್ರಜಾಪಿತನೆಂದು ಕರೆಯಲಾಗುತ್ತದೆ. ಇವರು ದೇಹಧಾರಿ,
ಅವರು ವಿದೇಹಿ-ವಿಚಿತ್ರ ತಂದೆಯಾಗಿದ್ದಾರೆ. ಲೌಕಿಕ ತಂದೆಗೆ ಪಿತನೆಂದು ಹೇಳುತ್ತಾರೆ. ಈ
ಬ್ರಹ್ಮಾರವರಿಗೂ ಪ್ರಜಾಪಿತನೆಂದು ಹೇಳುತ್ತಾರೆ. ಆ ಪರಮಪಿತನಂತೂ ಪರಮಧಾಮದಲ್ಲಿರುತ್ತಾರೆ.
ಪ್ರಜಾಪಿತ ಬ್ರಹ್ಮನು ಪರಮಧಾಮದಲ್ಲಿದ್ದರೆಂದು ಹೇಳುವುದಿಲ್ಲ. ಅವರಂತೂ ಇಲ್ಲಿ ಸಾಕಾರಿ
ಪ್ರಪಂಚದಲ್ಲಿದ್ದಾರೆ. ಪ್ರಜೆಗಳು ಸ್ಥೂಲ ವತನದಲ್ಲಿಯೇ ಇದ್ದಾರೆ ಅಂದಾಗ ಬ್ರಹ್ಮನೂ ಸಹ ಇದೇ
ಪ್ರಪಂಚದಲ್ಲಿ ಬೇಕಾಗಿದೆ. ಪ್ರಜಾಪಿತನಿಗೆ ಭಗವಂತನೆಂದು ಹೇಳುವುದಿಲ್ಲ. ಭಗವಂತನಿಗೆ ಯಾವುದೇ
ಶರೀರದ ಹೆಸರಿಲ್ಲ. ಮನುಷ್ಯನ ಶರೀರ ಯಾವುದಕ್ಕೆ ಹೆಸರು ಬರುತ್ತದೆಯೋ ಅದರಿಂದ ಅವರು
ಭಿನ್ನವಾಗಿದ್ದಾರೆ. ಆತ್ಮರು ಪರಮಧಾಮದಲ್ಲಿರುತ್ತೀರಿ ಆಗ ಸ್ಥೂಲ ನಾಮ-ರೂಪದಿಂದ
ಭಿನ್ನವಾಗಿರುತ್ತೀರಿ ಆದರೆ ಆತ್ಮವಂತೂ ಇದೆಯಲ್ಲವೆ. ಸಾಧು-ಸಂತ ಮೊದಲಾದವರು ಏನನ್ನೂ
ತಿಳಿದುಕೊಂಡಿಲ್ಲ. ಅವರು ಕೇವಲ ಮನೆ-ಮಠವನ್ನು ಬಿಟ್ಟು ಹೋಗಿದ್ದಾರೆ. ಬಾಕಿ ಪ್ರಪಂಚದ ವಿಕಾರಗಳಿಗೆ
ಅನುಭವಿಯಾಗಿರುತ್ತಾರಲ್ಲವೆ. ಆದರೆ ಚಿಕ್ಕ ಮಕ್ಕಳಿಗೆ ಏನು ಅರ್ಥವಾಗುವುದಿಲ್ಲ ಆದ್ದರಿಂದ ಅವರನ್ನು
ಮಹಾತ್ಮರೆಂದು ಹೇಳಲಾಗುತ್ತದೆ. 5 ವಿಕಾರಗಳ ಬಗ್ಗೆ ಅವರಿಗೆ ಗೊತ್ತಿರುವುದೇ ಇಲ್ಲ. ಚಿಕ್ಕ
ಮಕ್ಕಳಿಗೆ ಪವಿತ್ರರೆಂದು ಹೇಳಲಾಗುತ್ತದೆ. ಈ ಸಮಯದಲ್ಲಂತೂ ಯಾರೂ ಪವಿತ್ರ ಆತ್ಮರಾಗಿರಲು
ಸಾಧ್ಯವಿಲ್ಲ. ಚಿಕ್ಕವರಿಂದ ದೊಡ್ಡವರಾದರೆಂದರೂ ಸಹ ಪತಿತರೆಂದೇ ಹೇಳುತ್ತಾರಲ್ಲವೆ. ತಂದೆಯು
ತಿಳಿಸುತ್ತಾರೆ - ಎಲ್ಲರ ಭಿನ್ನ-ಭಿನ್ನ ಪಾತ್ರವು ಈ ಡ್ರಾಮಾದಲ್ಲಿ ನಿಗಧಿಯಾಗಿದೆ. ಈ ಚಿತ್ರದಲ್ಲಿ
ಎಷ್ಟೊಂದು ಶರೀರಗಳನ್ನು ಪಡೆಯುತ್ತಾರೆ, ಎಷ್ಟೊಂದು ಕರ್ಮ ಮಾಡುತ್ತಾರೆ! ಅದೆಲ್ಲವೂ ಮತ್ತೆ
ಪುನರಾವರ್ತನೆಯಾಗಬೇಕಾಗಿದೆ. ಮೊಟ್ಟ ಮೊದಲು ಆತ್ಮವನ್ನು ಅರಿಯಬೇಕಾಗಿದೆ. ಇಷ್ಟು ಚಿಕ್ಕ
ಬಿಂದುವಿನಲ್ಲಿ 84 ಜನ್ಮಗಳ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ. ಇದೇ ಎಲ್ಲದಕ್ಕಿಂತ ಅದ್ಭುತ
ಮಾತಾಗಿದೆ. ಆತ್ಮವೂ ಸಹ ಅವಿನಾಶಿಯಾಗಿದೆ. ನಾಟಕವೂ ಅವಿನಾಶಿಯಾಗಿದೆ. ಮಾಡಿ-ಮಾಡಲ್ಪಟ್ಟಿದೆ. ಇದು
ಯಾವಾಗಿನಿಂದ ಆರಂಭವಾಯಿತೆಂದು ಹೇಳುವುದಿಲ್ಲ. ಇದಕ್ಕೆ ಸೃಷ್ಟಿಯೆಂದು ಹೇಳುತ್ತಾರಲ್ಲವೆ. ಆತ್ಮವು
ಹೇಗಿದೆ, ಈ ಡ್ರಾಮಾ ಹೇಗೆ ಮಾಡಲ್ಪಟ್ಟಿದೆ, ಇದರಲ್ಲಿ ಯಾರೇನು ಮಾಡಲು ಸಾಧ್ಯವಿಲ್ಲ. ಹೇಗೆ ಸಮುದ್ರ
ಅಥವಾ ಆಕಾಶದ ಅಂತ್ಯವನ್ನು ತೆಗೆಯಲು ಸಾಧ್ಯವಿಲ್ಲವೋ ಹಾಗೆಯೇ ಇದೂ ಅವಿನಾಶಿ ನಾಟಕವಾಗಿದೆ, ಎಷ್ಟು
ಅದ್ಭುತವೆನಿಸುತ್ತದೆ! ಹೇಗೆ ತಂದೆಯು ಅದ್ಭುತವೋ ಅದೇರೀತಿ ಜ್ಞಾನವೂ ಸಹ ವಂಡರ್ಫುಲ್ ಆಗಿದೆ.
ಇದನ್ನು ಎಂದೂ ಯಾರೂ ಹೇಳಲು ಸಾಧ್ಯವಿಲ್ಲ. ಇಷ್ಟೊಂದು ಮಂದಿ ಪಾತ್ರಧಾರಿಗಳು
ಪಾತ್ರವನ್ನಭಿನಯಿಸುತ್ತಲೇ ಬರುತ್ತಾರೆ. ನಾಟಕವು ಯಾವಾಗ ಆಯಿತು ಎಂಬ ಪ್ರಶ್ನೆಯೇಳಲು
ಸಾಧ್ಯತೆಯಿಲ್ಲ. ಭಗವಂತನಿಗೆ ಏನಾಗಿತ್ತು, ಈ ಸುಖ-ದುಃಖದ ಪ್ರಪಂಚವನ್ನು ರಚಿಸಿದರೆಂದು ಅನೇಕರು
ಹೇಳುತ್ತಾರೆ. ಅರೆ! ಇದು ಅನಾದಿಯಾಗಿದೆ. ಪ್ರಳಯವಾಗುವುದಿಲ್ಲ, ಮಾಡಿ-ಮಾಡಲ್ಪಟ್ಟಿದೆ. ಇದನ್ನು ಏಕೆ
ರಚಿಸಿದರೆಂದು ಹೇಳಲು ಸಾಧ್ಯವಿಲ್ಲ. ನೀವು ಬುದ್ಧಿವಂತರಾದಾಗಲೇ ಆತ್ಮದ ಜ್ಞಾನವನ್ನು ತಂದೆಯು
ತಿಳಿಸುತ್ತಾರೆ, ಇದರಿಂದ ನೀವು ದಿನ-ಪ್ರತಿದಿನ ಉನ್ನತಿಯನ್ನು ಪಡೆಯುತ್ತಾ ಇರುತ್ತೀರಿ. ಮೊಟ್ಟ
ಮೊದಲು ತಂದೆಯು ಸ್ವಲ್ಪ-ಸ್ವಲ್ಪವೇ ತಿಳಿಸುತ್ತಿದ್ದರು. ಅವು ಅದ್ಭುತ ಮಾತುಗಳಾಗಿದ್ದವು ಜೊತೆಗೆ
ಆಕರ್ಷಣೆಯೂ ಇತ್ತಲ್ಲವೆ. ಶಿವ ತಂದೆಯು ಎಲ್ಲರನ್ನೂ ಆಕರ್ಷಿಸಿದರು. ಭಕ್ತಿಯದೂ ಆಕರ್ಷಣೆಯಿತ್ತು.
ಶಾಸ್ತ್ರಗಳಲ್ಲಿ ಕೃಷ್ಣನನ್ನು ಕಂಸ ಪುರಿಯಿಂದ ಬಿಡಿಸಿ ಕರೆದುಕೊಂಡು ಹೋದರೆಂದು ತೋರಿಸಿದ್ದಾರೆ.
ನೀವೀಗ ತಿಳಿದುಕೊಂಡಿದ್ದೀರಿ - ಅಲ್ಲಿ ಕಂಸ ಮೊದಲಾದವರು ಇರುವುದೇ ಇಲ್ಲ. ಗೀತಾ ಭಾಗವತ ಮಹಾಭಾರತ
ಇವೆಲ್ಲವುಗಳ ನಡುವೆ ಪರಸ್ಪರ ಸಂಬಂಧವಿದೆ. ವಾಸ್ತವದಲ್ಲಿ ಇವೇನೂ ಇಲ್ಲ. ದಶಹರ ಮೊದಲಾದುವೆಲ್ಲವೂ
ಪರಂಪರೆಯಿಂದ ನಡೆದು ಬರುತ್ತದೆಯೆಂದು ತಿಳಿಯುತ್ತಾರೆ. ಆದರೆ ರಾವಣ ಯಾರು ಎಂಬುದನ್ನು ಯಾರೂ
ತಿಳಿದುಕೊಂಡಿಲ್ಲ. ಯಾರೆಲ್ಲಾ ದೇವಿ-ದೇವತೆಗಳಾಗಿದ್ದರೋ ಅವರು ಕೆಳಗಿಳಿಯುತ್ತಾ-ಇಳಿಯುತ್ತಾ
ಪತಿತರಾಗಿ ಬಿಡುತ್ತಾರೆ. ಯಾರು ಹೆಚ್ಚು ಪತಿತರಾಗಿದ್ದಾರೆಯೋ ಅವರೇ ಹೆಚ್ಚು ಕೂಗುತ್ತಾರೆ. ಹೇ
ಪತಿತ-ಪಾವನ ಎಂದು ಕರೆಯುತ್ತಾರೆ. ಇವೆಲ್ಲಾ ಮಾತುಗಳನ್ನು ತಂದೆಯೇ ಕುಳಿತು ತಿಳಿಸುತ್ತಾರೆ.
ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ನೀವು
ತಿಳಿದುಕೊಳ್ಳುವುದರಿಂದ ಚಕ್ರವರ್ತಿ ರಾಜರಾಗುತ್ತೀರಿ. ತ್ರಿಮೂರ್ತಿ ಚಿತ್ರದಲ್ಲಿ ಬರೆಯಲ್ಪಟ್ಟಿದೆ
- ಇದು ನಿಮ್ಮ ಜನ್ಮಸಿದ್ಧ ಅಧಿಕಾರವಾಗಿದೆ. ಬ್ರಹ್ಮನ ಮೂಲಕ ಸ್ಥಾಪನೆ, ಶಂಕರನ ಮೂಲಕ ವಿನಾಶ,
ವಿಷ್ಣುವಿನ ಮೂಲಕ ಪಾಲನೆ..... ವಿನಾಶವೂ ಸಹ ಖಂಡಿತ ಆಗಬೇಕಾಗಿದೆ. ಹೊಸ ಪ್ರಪಂಚದಲ್ಲಿ ಬಹಳ ಕಡಿಮೆ
ಜನಸಂಖ್ಯೆಯಿರುತ್ತದೆ. ಈಗಂತೂ ಅನೇಕ ಧರ್ಮಗಳಿವೆ. ಒಂದು ಆದಿ ಸನಾತನ ಧರ್ಮವಿಲ್ಲವೆಂದು
ತಿಳಿದುಕೊಳ್ಳುತ್ತಾರೆ ಮತ್ತೆ ಅವಶ್ಯವಾಗಿ ಆ ಒಂದು ಧರ್ಮವು ಬೇಕಾಗಿದೆ. ಮಹಾಭಾರತವೂ ಸಹ
ಗೀತೆಯೊಂದಿಗೆ ಸಂಬಂಧವನ್ನಿಡುತ್ತದೆ. ಈ ಚಕ್ರವು ಸುತ್ತುತ್ತಿರುತ್ತದೆ. ಒಂದು ಕ್ಷಣವೂ ನಿಂತು
ಹೋಗಲು ಸಾಧ್ಯವಿಲ್ಲ. ಯಾವುದೇ ಹೊಸ ಮಾತಿಲ್ಲ. ಅನೇಕ ಬಾರಿ ರಾಜ್ಯಭಾಗ್ಯವನ್ನು ಪಡೆದಿದ್ದೀರಿ. ಯಾರ
ಹೊಟ್ಟೆ ತುಂಬಿರುವುದೋ ಅವರು ಗಂಭೀರವಾಗಿರುತ್ತಾರೆ. ನೀವು ಆಂತರ್ಯದಲ್ಲಿ ತಿಳಿದುಕೊಳ್ಳುತ್ತೀರಿ -
ನಾವು ಎಷ್ಟು ಬಾರಿ ರಾಜ್ಯಭಾಗ್ಯವನ್ನು ಪಡೆದಿದ್ದೆವು? ಇದು ನೆನ್ನೆಯದೇ ಮಾತಾಗಿದೆ. ನೆನ್ನೆಯ ದಿನ
ನಾವು ದೇವಿ-ದೇವತೆಗಳಾಗಿದ್ದೆವು ಮತ್ತೆ ಚಕ್ರವನ್ನು ಸುತ್ತಿ ಇಂದು ಪತಿತರಾಗಿದ್ದೇವೆ. ಮತ್ತೆ ಈಗ
ಯೋಗಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೇವೆ. ತಂದೆಯು ತಿಳಿಸುತ್ತಾರೆ - ಕಲ್ಪ-ಕಲ್ಪವೂ
ನೀವೇ ರಾಜ್ಯಭಾಗ್ಯವನ್ನು ಪಡೆಯುತ್ತೀರಿ, ಸ್ವಲ್ಪವೂ ಅಂತರವಾಗಲು ಸಾಧ್ಯವಿಲ್ಲ. ರಾಜಧಾನಿಯಲ್ಲಿ
ಕೆಲವರು ಕನಿಷ್ಠ, ಕೆಲವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಇದು ಪುರುಷಾರ್ಥದಿಂದಲೇ ಆಗುತ್ತದೆ.
ನಿಮಗೆ ತಿಳಿದಿದೆ - ಮೊದಲು ನಾವು ಕೋತಿಗಿಂತಲೂ ಕೀಳಾಗಿದ್ದೆವು. ಈಗ ತಂದೆಯು ಮಂದಿರಯೋಗ್ಯರನ್ನಾಗಿ
ಮಾಡುತ್ತಿದ್ದಾರೆ. ಯಾರು ಒಳ್ಳೊಳ್ಳೆಯ ಮಕ್ಕಳಿದ್ದಾರೆಯೋ ಅವರ ಆತ್ಮವು ಅನುಭೂತಿ ಮಾಡುತ್ತದೆ -
ನಿಜವಾಗಿಯೂ ನಾವು ಯಾವುದೇ ಪ್ರಯೋಜನಕ್ಕಿರಲಿಲ್ಲ. ನಾವೀಗ ಶ್ರೇಷ್ಠರಾಗುತ್ತಿದ್ದೇವೆ. ಕಲ್ಪ-ಕಲ್ಪವೂ
ತಂದೆಯು ನಮ್ಮನ್ನು ಬೆಲೆಯುಳ್ಳವರನ್ನಾಗಿ ಮಾಡುತ್ತಾರೆ. ಕಲ್ಪದ ಹಿಂದಿನವರೇ ಈ ಮಾತುಗಳನ್ನು ಬಹಳ
ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ನೀವೂ ಸಹ ಪ್ರದರ್ಶನಿ ಇತ್ಯಾದಿಗಳನ್ನು ಮಾಡುತ್ತೀರಿ.
ಹೊಸದೇನಿಲ್ಲ. ಇದರಿಂದಲೇ ಅಮರ ಪುರಿಯ ಸ್ಥಾಪನೆ ಮಾಡುತ್ತಿದ್ದೀರಿ. ಭಕ್ತಿಮಾರ್ಗದಲ್ಲಿ ದೇವಿಯರು
ಮೊದಲಾದವರ ಎಷ್ಟೊಂದು ಮಂದಿರಗಳಿವೆ! ಇದೆಲ್ಲವೂ ಪೂಜಾರಿತನದ ಸಾಮಗ್ರಿಯಾಗಿದೆ. ಪೂಜ್ಯತನದ
ಸಾಮಗ್ರಿಯು ಏನೂ ಇಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ದಿನ-ಪ್ರತಿದಿನ ಗುಹ್ಯ
ವಿಚಾರಗಳನ್ನು ತಿಳಿಸುತ್ತಾ ಇರುತ್ತೇನೆ. ಮೊದಲಿನ ಅನೇಕ ವಿಚಾರಗಳು ನಿಮ್ಮ ಬಳಿ ಇವೆ, ಅದನ್ನೇನು
ಮಾಡುವಿರಿ? ಹಾಗೆಯೇ ಉಳಿದಿರುತ್ತವೆ. ವರ್ತಮಾನದಲ್ಲಂತೂ ಬಾಪ್ದಾದಾ ಹೊಸ-ಹೊಸ ಮಾತುಗಳನ್ನು
ತಿಳಿಸುತ್ತಾ ಇರುತ್ತೇನೆ. ಆತ್ಮವು ಇಷ್ಟು ಸೂಕ್ಷ್ಮ ಬಿಂದುವಾಗಿದೆ, ಅದರಲ್ಲಿ ಎಷ್ಟು ದೊಡ್ಡ
ಪಾತ್ರವು ತುಂಬಲ್ಪಟ್ಟಿದೆ! ಈ ವಿಚಾರವು ಮೊದಲಿನ ಕಾಪಿಗಳಲ್ಲಿ ಇರುವುದಿಲ್ಲ. ಮತ್ತೆ ಹಳೆಯ
ವಿಚಾರಗಳನ್ನೇನು ಮಾಡುತ್ತೀರಿ? ಅಂತಿಮದ ಫಲಿತಾಂಶವೇ ತಿಳಿಸುತ್ತೇವೆ. ತಂದೆಯು ತಿಳಿಸುತ್ತಾರೆ -
ಕಲ್ಪದ ಮೊದಲೂ ಸಹ ನಿಮಗೆ ಇದೇರೀತಿ ತಿಳಿಸಿದ್ದೆನು, ನಂಬರ್ವಾರ್ ಓದುತ್ತಾ ಇರುತ್ತೀರಿ. ಯಾವುದಾದರೂ
ಸಬ್ಜೆಕ್ಟ್ನಲ್ಲಿ ಮೇಲೆ-ಕೆಳಗೆ ಆಗುತ್ತಿರುತ್ತೀರಿ. ವ್ಯಾಪಾರದಲ್ಲಿ ಗ್ರಹಚಾರ ಕುಳಿತುಕೊಳ್ಳುತ್ತದೆ
ಆದರೆ ಇದರಲ್ಲಿ ಹೃದಯಾಘಾತವಾಗಬಾರದು ಮತ್ತೆ ಎದ್ದು ಪುರುಷಾರ್ಥ ಮಾಡಬೇಕಾಗಿದೆ. ಹೇಗೆ ಮನುಷ್ಯರು
ದಿವಾಳಿಗಳಾದರೆ ಮತ್ತೆ ಉದ್ಯೋಗ-ವ್ಯವಹಾರಗಳನ್ನು ಮಾಡಿ ಬಹಳ ಧನವಂತರಾಗಿ ಬಿಡುತ್ತಾರೆ. ಇಲ್ಲಿಯೂ
ಸಹ ಯಾರಾದರೂ ವಿಕಾರದಲ್ಲಿ ಬಿದ್ದರೆ ತಂದೆಯು ತಿಳಿಸುತ್ತಾರೆ - ಮತ್ತೆ ಚೆನ್ನಾಗಿ ಪುರುಷಾರ್ಥ ಮಾಡಿ
ಶ್ರೇಷ್ಠ ಪದವಿಯನ್ನು ಪಡೆಯಿರಿ ಪುನಃ ಏರುವುದನ್ನು ಆರಂಭಿಸಬೇಕು. ಬಿದ್ದಿದ್ದೀರಿ ಮತ್ತೆ ಎದ್ದೇಳಿ
ಎಂದು ತಂದೆಯು ಹೇಳುತ್ತಾರೆ. ಹೀಗೆ ಅನೇಕರಿದ್ದಾರೆ, ಬಿದ್ದ ಮೇಲೆ ಮತ್ತೆ ಏಳುವ ಪ್ರಯತ್ನ
ಪಡುತ್ತಾರೆ. ತಂದೆಯು ಇದನ್ನು ತಡೆಯುವುದಿಲ್ಲ ಏಕೆಂದರೆ ತಂದೆಗೆ ಗೊತ್ತಿದೆ, ಹೀಗೂ ಅನೇಕರು
ಬರುತ್ತಾರೆ. ಆದ್ದರಿಂದ ಮತ್ತೆ ಪುರುಷಾರ್ಥ ಮಾಡಿ ಎಂದು ಹೇಳುತ್ತಾರೆ. ಚಿಕ್ಕ ಪುಟ್ಟ
ಸಹಯೋಗಿಗಳಾದರೂ ಆಗುತ್ತಾರಲ್ಲವೆ. ಡ್ರಾಮಾ ಪ್ಲಾನನುಸಾರವೆಂದೇ ಹೇಳಬಹುದು. ತಂದೆಯು ಹೇಳುತ್ತಾರೆ -
ಒಳ್ಳೆಯದು ಮಕ್ಕಳೇ, ಈಗ ತೃಪ್ತಿಯಾಯಿತು. ಬಹಳ ಮುಳುಗಾಡಿದಿರಿ, ಈಗ ಮತ್ತೆ ಪುರುಷಾರ್ಥ ಮಾಡಿ.
ಬೇಹದ್ದಿನ ತಂದೆಯಂತೂ ಇದೇ ಹೇಳುತ್ತಾರಲ್ಲವೆ. ತಂದೆಯ ಬಳಿ ಹೋಗಲು ಎಷ್ಟೊಂದು ಮಂದಿ ಬರುತ್ತಾರೆ!
ಬೇಹದ್ದಿನ ತಂದೆಯು ಆ ಮಾತನ್ನು ಪಾಲಿಸುವುದಿಲ್ಲ, ಪವಿತ್ರರಾಗುವುದಿಲ್ಲವೆ ಎಂದು ತಂದೆಯು
ಕೇಳುತ್ತಾರೆ. ತಂದೆಯು ಆತ್ಮವೆಂದು ತಿಳಿದು ಆತ್ಮನಿಗೇ ಹೇಳುತ್ತಾರೆ ಆದ್ದರಿಂದ ಬಾಣವು ನಾಟುತ್ತದೆ.
ಉದಾಹರಣೆಗೆ ಸ್ತ್ರೀಗೆ ಬಾಣವು ನಾಟುತ್ತದೆಯೆಂದರೆ ನಾವು ಪ್ರತಿಜ್ಞೆ ಮಾಡೋಣವೆಂದು ತಿಳಿಸುತ್ತಾರೆ.
ಅದು ಪುರುಷನಿಗೆ ಹಿಡಿಸುವುದಿಲ್ಲ. ಮತ್ತೆ ಮುಂದೆ ಹೋದಂತೆ ಅವರನ್ನು ಮೇಲೇಳಿಸುವ ಪ್ರಯತ್ನ
ಮಾಡುತ್ತಾರೆ ಮತ್ತೆ ಇಂತಹವರೂ ಅನೇಕರು ಬರುತ್ತಾರೆ. ಪುರುಷನನ್ನು ಸ್ತ್ರೀ ಜ್ಞಾನದಲ್ಲಿ ತರುತ್ತಾರೆ.
ಆಗ ಸ್ತ್ರೀ ನಮ್ಮ ಗುರುವೆಂದು ಹೇಳುತ್ತಾರೆ. ಆ ಬ್ರಾಹ್ಮಣರೂ ಸಹ ಕಂಕಣವನ್ನು ಕಟ್ಟಿಸುವ ಸಮಯದಲ್ಲಿ
ಇವರು ನಿಮ್ಮ ಗುರು-ಈಶ್ವರ ಎಲ್ಲವೂ ಆಗಿದ್ದಾರೆಂದು ಹೇಳುತ್ತಾರೆ. ಇಲ್ಲಿ ತಂದೆಯು ಹೇಳುತ್ತಾರೆ -
ನಿಮಗೆ ಒಬ್ಬರೇ ತಂದೆಯು ಸರ್ವಸ್ವವೂ ಆಗಿದ್ದಾರೆ. ನನ್ನವರು ಒಬ್ಬ ತಂದೆಯ ವಿನಃ ಅನ್ಯ ಯಾರೂ ಇಲ್ಲ.
ಎಲ್ಲರೂ ಅವರನ್ನೇ ನೆನಪು ಮಾಡುತ್ತಾರೆ, ಅವರೊಬ್ಬರೊಂದಿಗೆ ಬುದ್ಧಿಯೋಗವನ್ನಿಡಬೇಕಾಗಿದೆ. ಈ ದೇಹವೂ
ನನ್ನದಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಾವುದೇ
ಗ್ರಹಚಾರವು ಬಂದರೆ ಹೃದಯ ವಿಧೀರ್ಣರಾಗಿ ಕುಳಿತು ಬಿಡಬಾರದು ಮತ್ತೆ ಪುರುಷಾರ್ಥ ಮಾಡಿ ತಂದೆಯ
ನೆನಪಿನಲ್ಲಿದ್ದು ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ.
2. ಸ್ವಯಂನ ಸ್ಥಿತಿಯ ನೆನಪಿನಿಂದ ಈ ರೀತಿ ಶಕ್ತಿಶಾಲಿ ಮಾಡಿಕೊಳ್ಳಬೇಕು ಯಾವುದೇ ಮಾಯೆಯ
ಬಿರುಗಾಳಿಯು ಯುದ್ಧ ಮಾಡಲು ಸಾಧ್ಯವಾಗಬಾರದು. ವಿಕಾರಗಳಿಂದ ತಮ್ಮನ್ನು ಸಂಭಾಲನೆ
ಮಾಡಿಕೊಳ್ಳುತ್ತಿರಬೇಕು.
ವರದಾನ:
ತ್ರಿಕಾಲದರ್ಶಿ
ಮತ್ತು ಸಾಕ್ಷಿ ದೃಷ್ಟ ಆಗಿ ಪ್ರತಿಯೊಂದು ಕರ್ಮ ಮಾಡುತ್ತಾ ಬಂಧನ ಮುಕ್ತ ಸ್ಥಿತಿಯ ಅನುಭವದ
ಮುಖಾಂತರ ದೃಷ್ಠಾಂತ ರೂಪ ಭವ.
ಒಂದುವೇಳೆ
ತ್ರಿಕಾಲದರ್ಶಿಯ ಸ್ಟೇಜ್ ಮೇಲೆ ಸ್ಥಿತರಾಗಿದ್ದು, ಕರ್ಮದ ಆದಿ, ಮಧ್ಯ ಅಂತ್ಯವನ್ನು ತಿಳಿದುಕೊಂಡು
ಕರ್ಮ ಮಾಡಿದ್ದೇ ಆದರೆ ಯಾವುದೇ ಕರ್ಮ ವಿಕರ್ಮ ಆಗಲು ಸಾಧ್ಯವಿಲ್ಲ, ಸದಾ ಸುಕರ್ಮವಾಗುತ್ತದೆ.
ಹಾಗೆಯೇ ಸಾಕ್ಷಿದೃಷ್ಠಾ ಆಗಿ ಕರ್ಮ ಮಾಡುವುದರಿಂದ ಯಾವುದೇ ಕರ್ಮದ ಬಂಧನದಲ್ಲಿ ಕರ್ಮ ಬಂದನಿ ಆತ್ಮ
ಆಗುವುದಿಲ್ಲ. ಕರ್ಮದ ಫಲ ಶ್ರೇಷ್ಠವಾಗಿರುವ ಕಾರಣ ಸಂಬಂಧದಲ್ಲಿ ಬರುವಿರಿ, ಬಂಧನದಲ್ಲಿ
ಬರುವುದಿಲ್ಲ. ಕರ್ಮ ಮಾಡುತ್ತಾ ಭಿನ್ನ ಹಾಗೂ ಪ್ರಿಯ (ನ್ಯಾರಾ ಮತ್ತು ಪ್ಯಾರಾ) ಆಗಿದ್ದಾಗ ಅನೇಕ
ಆತ್ಮರುಗಳ ಎದುರು ದೃಷ್ಠಾಂತ ರೂಪ ಅರ್ಥಾತ್ ಉದಾಹರಣೆಯಾಗಿ ಬಿಡುವಿರಿ.
ಸ್ಲೋಗನ್:
ಯಾರು ಮನಸ್ಸಿನಿಂದ ಸದಾ
ಸಂತುಷ್ಠರಾಗಿರುತ್ತಾರೆ ಅವರೇ ಡಬಲ್ ಲೈಟ್ ಆಗಿರುತ್ತಾರೆ.