25.12.20 Morning Kannada Murli Om Shanti
BapDada Madhuban
ಮಧುರ ಮಕ್ಕಳೇ -
ಎಲ್ಲಿಯವರೆಗೆ ಜೀವಿಸಿರಬೇಕಾಗಿದೆಯೋ ಅಲ್ಲಿಯವರೆಗೆ ತಂದೆಯನ್ನು ನೆನಪು ಮಾಡಬೇಕಾಗಿದೆ,
ನೆನಪಿನಿಂದಲೇ ಆಯಸ್ಸು ವೃದ್ಧಿಯಾಗುವುದು, ವಿದ್ಯೆಯ ಸಾರವೇ ಆಗಿದೆ – ನೆನಪು.
ಪ್ರಶ್ನೆ:
ನೀವು ಮಕ್ಕಳ
ಅತೀಂದ್ರಿಯ ಸುಖದ ಗಾಯನವಿದೆ - ಏಕೆ?
ಉತ್ತರ:
ಏಕೆಂದರೆ ನೀವು ಸದಾ ತಂದೆಯ ನೆನಪಿನಲ್ಲಿ ಖುಷಿಯನ್ನಾಚರಿಸುತ್ತೀರಿ. ಈಗ ನಿಮಗೆ ಸದಾ ಕ್ರಿಸ್ಮಸ್
ಆಗಿದೆ. ನಿಮಗೆ ಭಗವಂತನು ಓದಿಸುತ್ತಾರೆ. ಇದಕ್ಕಿಂತ ಹೆಚ್ಚಿನ ಖುಷಿಯು ಮತ್ತ್ಯಾವುದಿದೆ? ಇದು
ನಿತ್ಯದ ಖುಷಿಯಾಗಿದೆ, ಆದ್ದರಿಂದ ನಿಮ್ಮದೇ ಅತೀಂದ್ರಿಯ ಸುಖದ ಗಾಯನವಿದೆ.
ಗೀತೆ:
ನಯನ ಹೀನನಿಗೆ
ದಾರಿ ತೋರಿಸು ಪ್ರಭು....
ಓಂ ಶಾಂತಿ.
ಜ್ಞಾನದ ಮೂರನೇ ನೇತ್ರವನ್ನು ಕೊಡುವಂತಹ ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ.
ಜ್ಞಾನದ ಮೂರನೇ ನೇತ್ರವನ್ನು ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ ಅಂದಾಗ ಈಗ ಮಕ್ಕಳಿಗೆ
ಜ್ಞಾನದ ನೇತ್ರ ಸಿಕ್ಕಿದೆ. ತಂದೆಯು ತಿಳಿಸಿದ್ದಾರೆ - ಭಕ್ತಿಮಾರ್ಗವೇ ಅಂಧಕಾರದ ಮಾರ್ಗವಾಗಿದೆ.
ಹೇಗೆ ರಾತ್ರಿಯಲ್ಲಿ ಬೆಳಕು ಇಲ್ಲವೆಂದರೆ ಮನುಷ್ಯರು ಹುಡುಕಾಡುತ್ತಾರೆ. ಗಾಯನವೂ ಇದೆ – ಬ್ರಹ್ಮನ
ರಾತ್ರಿ ಮತ್ತು ಬ್ರಹ್ಮನ ಹಗಲು. ಸತ್ಯಯುಗದಲ್ಲಿ ನಮಗೆ ಮಾರ್ಗವನ್ನು ತಿಳಿಸಿ ಎಂಬ ಮಾತನ್ನು
ಹೇಳುವುದಿಲ್ಲ ಏಕೆಂದರೆ ಈಗ ನಿಮಗೆ ಮಾರ್ಗವು ಸಿಗುತ್ತಿದೆ. ತಂದೆಯು ಬಂದು ಮುಕ್ತಿಧಾಮ,
ಜೀವನ್ಮುಕ್ತಿಧಾಮದ ಮಾರ್ಗವನ್ನು ತಿಳಿಸುತ್ತಿದ್ದಾರೆ, ನೀವೀಗ ಪುರುಷಾರ್ಥ ಮಾಡುತ್ತಿದ್ದೀರಿ.
ನಿಮಗೆ ತಿಳಿದಿದೆ - ಇನ್ನು ಸ್ವಲ್ಪವೇ ಸಮಯವಿದೆ. ಪ್ರಪಂಚವು ಬದಲಾಗಲಿದೆ. ಪ್ರಪಂಚವು
ಬದಲಾಗುವುದೆಂದು ಗೀತೆಯೂ ಮಾಡಲ್ಪಟ್ಟಿದೆ ಆದರೆ ಮನುಷ್ಯರು ಪ್ರಪಂಚವು ಯಾವಾಗ ಬದಲಾಗುವುದು, ಹೇಗೆ
ಬದಲಾಗುವುದು, ಯಾರು ಬದಲಾವಣೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ ಏಕೆಂದರೆ ಜ್ಞಾನದ ಮೂರನೇ
ನೇತ್ರವಂತೂ ಇಲ್ಲ. ಈಗ ನೀವು ಮಕ್ಕಳಿಗೆ ಮೂರನೇ ನೇತ್ರವು ಸಿಕ್ಕಿದೆ. ಇದರಿಂದ ನೀವು ಸೃಷ್ಟಿಚಕ್ರದ
ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ ಮತ್ತು ಇದೇ ನಿಮ್ಮ ಬುದ್ಧಿಯಲ್ಲಿ ಜ್ಞಾನದ
ಸ್ಯಾಕ್ರೀನ್ ಆಗಿದೆ. ಹೇಗೆ ಸ್ವಲ್ಪವೇ ಸ್ಯಾಕ್ರೀನ್ ಬಹಳ ಮಧುರವಾಗಿರುತ್ತದೆಯೋ ಹಾಗೆಯೇ ಈ ಜ್ಞಾನದ
ಎರಡು ಶಬ್ಧಗಳು "ಮನ್ಮನಾಭವ" ಇದೇ ಎಲ್ಲದಕ್ಕಿಂತ ಮಧುರ ವಸ್ತುವಾಗಿದೆ, ಕೇವಲ ತಂದೆಯನ್ನು ನೆನಪು
ಮಾಡಿ.
ತಂದೆಯು ಬರುತ್ತಾರೆ ಮತ್ತು ಬಂದು ಮಾರ್ಗವನ್ನು ತಿಳಿಸುತ್ತಾರೆ. ಎಲ್ಲಿಯ ಮಾರ್ಗವನ್ನು
ತಿಳಿಸುತ್ತಾರೆ? ಶಾಂತಿಧಾಮ ಮತ್ತು ಸುಖಧಾಮದ ಮಾರ್ಗ, ಆದ್ದರಿಂದ ಮಕ್ಕಳಿಗೆ ಖುಷಿಯಾಗುತ್ತದೆ.
ಯಾವಾಗ ಖುಷಿಯನ್ನಾಚರಿಸಲಾಗುತ್ತದೆ ಎಂಬುದು ಪ್ರಪಂಚದವರಿಗೆ ತಿಳಿದಿಲ್ಲ. ಹೊಸ ಪ್ರಪಂಚದಲ್ಲಿಯೇ
ಖುಷಿಯನ್ನು ಆಚರಿಸಲಾಗುತ್ತದೆಯಲ್ಲವೆ. ಇದಂತೂ ಸಾಮಾನ್ಯ ಮಾತಾಗಿದೆ - ಹಳೆಯ ಪ್ರಪಂಚದಲ್ಲಿ
ಖುಷಿಯೆಲ್ಲಿಂದ ಬರುವುದು! ಹಳೆಯ ಪ್ರಪಂಚದಲ್ಲಿ ಮನುಷ್ಯರು ತ್ರಾಹಿ-ತ್ರಾಹಿ ಎನ್ನುತ್ತಿದ್ದಾರೆ
ಏಕೆಂದರೆ ತಮೋಪ್ರಧಾನರಾಗಿದ್ದಾರೆ. ತಮೋಪ್ರಧಾನ ಪ್ರಪಂಚದಲ್ಲಿ ಖುಷಿಯೆಲ್ಲಿಂದ ಬರುವುದು?
ಸತ್ಯಯುಗದ ಜ್ಞಾನವಂತೂ ಯಾರಲ್ಲಿಯೂ ಇಲ್ಲ, ಆದ್ದರಿಂದ ಪಾಪ! ಮನುಷ್ಯರು ಇಲ್ಲಿ
ಖುಷಿಯನ್ನಾಚರಿಸುತ್ತಿರುತ್ತಾರೆ. ಕ್ರಿಸ್ಮಸ್ನ ಖುಷಿಯನ್ನು ಎಷ್ಟೊಂದು ಆಚರಿಸುತ್ತಾರೆ ಆದರೆ
ತಂದೆಯು ತಿಳಿಸುತ್ತಾರೆ - ಒಂದುವೇಳೆ ಖುಷಿಯ ಮಾತನ್ನು ಕೇಳಬೇಕೆಂದರೆ ಗೋಪ-ಗೋಪಿಕೆಯರಿಂದ (ನನ್ನ
ಮಕ್ಕಳಿಂದ) ಕೇಳಿರಿ ಏಕೆಂದರೆ ತಂದೆಯು ಬಹಳ ಸಹಜ ಮಾರ್ಗವನ್ನು ತಿಳಿಸುತ್ತಿದ್ದಾರೆ. ಗೃಹಸ್ಥ
ವ್ಯವಹಾರದಲ್ಲಿರುತ್ತಾ ತಮ್ಮ ಉದ್ಯೋಗ-ವ್ಯವಹಾರಗಳ ಕರ್ತವ್ಯ ಮಾಡುತ್ತಾ ಕಮಲ ಪುಷ್ಫದ ಸಮಾನ ಇರಿ
ಮತ್ತು ನನ್ನನ್ನು ನೆನಪು ಮಾಡಿ. ಹೇಗೆ ಪ್ರಿಯತಮ-ಪ್ರಿಯತಮೆಯರು ಉದ್ಯೋಗ-ವ್ಯವಹಾರಗಳನ್ನು
ಮಾಡುತ್ತಲೂ ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಾ ಇರುತ್ತಾರೆ. ಅವರಿಗೆ ಸಾಕ್ಷಾತ್ಕಾರವೂ
ಆಗುತ್ತದೆ. ಹೇಗೆ ಲೈಲಾ-ಮಜನು, ಹೀರಾ-ರಾಂಜಾ ಮೊದಲಾದವರಿದ್ದಾರೆ. ಅವರು ವಿಕಾರಕ್ಕಾಗಿ
ಪ್ರೀತಿಸುವುದಿಲ್ಲ. ಅವರ ಪ್ರೀತಿಯ ಗಾಯನವಿದೆ. ಅವರಲ್ಲಿ ಒಬ್ಬರು ಇನ್ನೊಬ್ಬರನ್ನು
ಪ್ರೀತಿಸುತ್ತಾರೆ ಆದರೆ ಇಲ್ಲಿ ಆ ಮಾತಿಲ್ಲ. ಇಲ್ಲಂತೂ ನೀವು ಜನ್ಮ-ಜನ್ಮಾಂತರದಿಂದ ಆ ಪ್ರಿಯತಮನಿಗೇ
ಪ್ರಿಯತಮೆಯರಾಗಿದ್ದಿರಿ. ಆ ಪ್ರಿಯತಮನೇ ತಾನಾಗಿ ಬರಲಿಲ್ಲ. ನೀವು ಅವರನ್ನು ಇಲ್ಲಿ ಬರುವುದಕ್ಕಾಗಿ
ಕರೆಯುತ್ತೀರಿ. ಹೇ ಭಗವಂತ ನಯನಹೀನನಿಗೆ ಬಂದು ಮಾರ್ಗ ತೋರಿಸು ಎಂದು ಅರ್ಧಕಲ್ಪದಿಂದ ಕರೆದಿದ್ದೀರಿ.
ಯಾವಾಗ ದುಃಖವು ಹೆಚ್ಚಾಗುವುದೋ ಆಗ ಹೆಚ್ಚು ಕರೆಯುತ್ತಾರೆ. ಹೆಚ್ಚಿನ ದುಃಖದಲ್ಲಿ ಹೆಚ್ಚು ಸ್ಮರಣೆ
ಮಾಡುವವರೂ ಇರುತ್ತಾರೆ. ನೋಡಿ, ಈಗ ಎಷ್ಟೊಂದು ನೆನಪು ಮಾಡುವವರು ಅನೇಕಾನೇಕರಿದ್ದಾರೆ. ಗಾಯನವೂ
ಇದೆಯಲ್ಲವೆ - ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ಮಾಡುವುದಿಲ್ಲ......
ಎಷ್ಟು ತಡವಾಗುತ್ತಾ ಹೋಗುವುದೋ ಅಷ್ಟು ಇನ್ನೂ ಹೆಚ್ಚು ತಮೋಪ್ರಧಾನರಾಗುತ್ತಾ ಹೋಗುವರು ಅಂದಾಗ ನೀವು
ಏರುತ್ತಿದ್ದೀರಿ, ಅವರು ಇನ್ನೂ ಇಳಿಯುತ್ತಿದ್ದಾರೆ ಏಕೆಂದರೆ ಎಲ್ಲಿಯವರೆಗೆ ವಿನಾಶವಾಗುವುದಿಲ್ಲವೋ
ಅಲ್ಲಿಯವರೆಗೆ ತಮೋಪ್ರಧಾನತೆಯು ವೃದ್ಧಿಯಾಗುತ್ತಾ ಇರುತ್ತದೆ. ದಿನ-ಪ್ರತಿದಿನ ಮಾಯೆಯೂ ಸಹ
ತಮೋಪ್ರಧಾನತೆಯು ವೃದ್ಧಿಯನ್ನು ಹೊಂದುತ್ತಾ ಹೋಗುತ್ತದೆ. ಈ ಸಮಯದಲ್ಲಿ ತಂದೆಯೂ
ಸರ್ವಶಕ್ತಿವಂತನಾಗಿದ್ದಾರೆ ಮತ್ತು ಮಾಯೆಯೂ ಸಹ ಈ ಸಮಯದಲ್ಲಿ ಸರ್ವಶಕ್ತಿವಂತನಾಗಿದೆ. ಅದೂ
ಶಕ್ತಿಶಾಲಿಯಾಗಿದೆ.
ನೀವು ಮಕ್ಕಳು ಈ ಸಮಯದಲ್ಲಿ ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣ ಕುಲಭೂಷಣರಾಗಿದ್ದೀರಿ. ನಿಮ್ಮದು
ಸರ್ವೋತ್ತಮ ಕುಲವಾಗಿದೆ. ಇದಕ್ಕೆ ಶ್ರೇಷ್ಠಾತಿ ಶ್ರೇಷ್ಠ ಕುಲವೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ
ಈ ನಿಮ್ಮ ಜೀವನವು ಅಮೂಲ್ಯವಾಗಿದೆ. ಆದ್ದರಿಂದ ಈ ಜೀವನದ ಸಂಭಾಲನೆಯನ್ನೇ ಮಾಡಬೇಕು ಏಕೆಂದರೆ ಪಂಚ
ವಿಕಾರಗಳ ಕಾರಣ ಶರೀರದ ಆಯಸ್ಸೂ ಸಹ ಕಡಿಮೆಯಾಗುತ್ತಾ ಹೋಗುತ್ತದೆಯಲ್ಲವೆ. ಆದ್ದರಿಂದ ತಂದೆಯು
ತಿಳಿಸುತ್ತಾರೆ - ಈ ಸಮಯದಲ್ಲಿ ಪಂಚ ವಿಕಾರಗಳನ್ನು ಬಿಟ್ಟು ಯೋಗದಲ್ಲಿರಿ ಆಗ ಆಯಸ್ಸು ಹೆಚ್ಚುತ್ತಾ
ಇರುವುದು. ಆಯಸ್ಸು ಹೆಚ್ಚುತ್ತಾ-ಹೆಚ್ಚುತ್ತಾ ಭವಿಷ್ಯದಲ್ಲಿ ನಿಮ್ಮದು 150 ವರ್ಷ ಆಯಸ್ಸಿರುವುದು.
ಈಗ ಇಲ್ಲ ಆದ್ದರಿಂದ ತಂದೆಯು ಹೇಳುತ್ತಾರೆ - ಈ ಶರೀರವನ್ನೂ ಸಹ ಬಹಳ ಸಂಭಾಲನೆ ಮಾಡಬೇಕು.
ಇಲ್ಲವಾದರೆ ಹೇಳುತ್ತಾರೆ - ಈ ಶರೀರವು ಏನೂ ಕೆಲಸಕ್ಕೆ ಬರುವುದಿಲ್ಲ, ಮಣ್ಣಿನ ಗೊಂಬೆಯಾಗಿದೆ. ಈಗ
ನೀವು ಮಕ್ಕಳಿಗೆ ತಿಳುವಳಿಕೆ ಸಿಗುತ್ತಿದೆ - ಜೀವಿಸಿರುವವರೆಗೂ ತಂದೆಯನ್ನು ನೆನಪು ಮಾಡಬೇಕಾಗಿದೆ.
ಆತ್ಮವು ತಂದೆಯನ್ನು ನೆನಪು ಮಾಡುತ್ತದೆ - ಏಕೆ? ಆಸ್ತಿಗಾಗಿ. ತಂದೆಯು ತಿಳಿಸುತ್ತಾರೆ - ನೀವು
ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಮತ್ತು ದೈವೀ ಗುಣಗಳನ್ನು ಧಾರಣೆ ಮಾಡಿ
ಆಗ ನೀವು ಈ ರೀತಿಯಾಗಿ ಬಿಡುತ್ತೀರಿ. ಅಂದಾಗ ನೀವು ಮಕ್ಕಳು ವಿದ್ಯೆಯನ್ನು ಚೆನ್ನಾಗಿ ಓದಬೇಕು.
ವಿದ್ಯೆಯಲ್ಲಿ ಆಲಸ್ಯ ಬರಬಾರದು ಇಲ್ಲವಾದರೆ ಅನುತ್ತೀರ್ಣರಾಗಿ ಬಿಡುವಿರಿ, ಪದವಿಯೂ ಕಡಿಮೆಯಾಗುವುದು.
ವಿದ್ಯೆಯಲ್ಲಿಯೂ ಮುಖ್ಯ ಮಾತು ಇದಾಗಿದೆ ಯಾವುದಕ್ಕೆ ವಿದ್ಯೆಯ ಸಾರವೆಂದು ಹೇಳಲಾಗುತ್ತದೆ.
ತಂದೆಯನ್ನು ನೆನಪು ಮಾಡಿ. ಪ್ರದರ್ಶನಿ ಅಥವಾ ಸೇವಾಕೇಂದ್ರಕ್ಕೆ ಯಾರಾದರೂ ಬಂದರೆ ಅವರಿಗೆ ಮೊಟ್ಟ
ಮೊದಲು ಇದನ್ನು ತಿಳಿಸಿ - ತಂದೆಯನ್ನು ನೆನಪು ಮಾಡಿ ಏಕೆಂದರೆ ಅವರು ಶ್ರೇಷ್ಠಾತಿ
ಶ್ರೇಷ್ಠನಾಗಿದ್ದಾರೆ ಅಂದಮೇಲೆ ಶ್ರೇಷ್ಠಾತಿ ಶ್ರೇಷ್ಠರನ್ನೇ ನೆನಪು ಮಾಡಬೇಕು. ಅವರಿಗಿಂತ
ಕೆಳಗಿನವರನ್ನು ಏಕೆ ನೆನಪು ಮಾಡುವುದು! ಸರ್ವಶ್ರೇಷ್ಠ ಭಗವಂತನೆಂದು ಹೇಳುತ್ತಾರೆ. ಭಗವಂತನೇ ಹೊಸ
ಪ್ರಪಂಚದ ಸ್ಥಾಪನೆ ಮಾಡುವವರಾಗಿದ್ದಾರೆ. ನೋಡಿ, ತಂದೆಯೂ ಹೇಳುತ್ತಾರೆ - ನಾನು ಹೊಸ ಪ್ರಪಂಚದ
ಸ್ಥಾಪನೆ ಮಾಡುತ್ತೇನೆ ಆದ್ದರಿಂದ ನೀವು ನನ್ನನ್ನು ನೆನಪು ಮಾಡಿ ಆಗ ನಿಮ್ಮ ಪಾಪಗಳು ಕಳೆಯುವವು
ಅಂದಾಗ ಇದನ್ನು ಪಕ್ಕಾ ನೆನಪಿಟ್ಟುಕೊಳ್ಳಿ ಏಕೆಂದರೆ ತಂದೆಯು ಪತಿತ-ಪಾವನನಲ್ಲವೆ. ಅವರು ಇದನ್ನೇ
ಹೇಳುತ್ತಾರೆ - ಯಾವಾಗ ನೀವು ನನ್ನನ್ನು ಪತಿತ-ಪಾವನನೆಂದು ಹೇಳುತ್ತೀರಿ ಅಂದಮೇಲೆ ನೀವು
ತಮೋಪ್ರಧಾನರಾಗಿದ್ದೀರಿ, ಬಹಳ ಪತಿತರಾಗಿದ್ದೀರಿ ಆದ್ದರಿಂದ ನೀವೀಗ ಪಾವನರಾಗಿದೆ.
ತಂದೆಯು ಬಂದು ಮಕ್ಕಳಿಗೆ ತಿಳಿಸುತ್ತಾರೆ - ಈಗ ನಿಮ್ಮ ಸುಖದ ದಿನಗಳು ಬರಲಿವೆ. ದುಃಖದ ದಿನಗಳು
ಕಳೆದು ಹೋಯಿತು. ಹೇ ದುಃಖಹರ್ತ-ಸುಖಕರ್ತ ಎಂದು ಕರೆಯುತ್ತೀರಿ ಅಂದಮೇಲೆ ಅರಿತುಕೊಂಡಿದ್ದೀರಲ್ಲವೆ.
ಅವಶ್ಯವಾಗಿ ಸತ್ಯಯುಗದಲ್ಲಿ ಎಲ್ಲರೂ ಸುಖಿಯೇ ಸುಖಿಯಾಗಿರುತ್ತೀರಿ ಅಂದಮೇಲೆ ತಂದೆಯು ಮಕ್ಕಳಿಗೆ
ತಿಳಿಸುತ್ತಾರೆ - ಮಕ್ಕಳೇ, ಎಲ್ಲರೂ ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡುತ್ತಾ ಇರಿ. ಇದು
ಸಂಗಮಯುಗವಾಗಿದೆ ಅಂಬಿಗನು ನಿಮ್ಮನ್ನು ಪಾರು ಮಾಡುತ್ತಾರೆ. ಬಾಕಿ ಇದರಲ್ಲಿ ಯಾವುದೇ ಸ್ಥೂಲ
ಅಂಬಿಗನ ಮಾತಿಲ್ಲ. ನನ್ನ ಜೀವನದ ದೋಣಿಯನ್ನು ಪಾರು ಮಾಡು ಎಂದು ಮಹಿಮೆ ಮಾಡುತ್ತಾರೆ. ಈಗ ಕೇವಲ
ಒಬ್ಬರ ದೋಣಿಯಷ್ಟೇ ಪಾರಾಗುವುದಿಲ್ಲವಲ್ಲವೆ. ಇಡೀ ಪ್ರಪಂಚದ ದೋಣಿಯನ್ನು ಪಾರು ಮಾಡಬೇಕಾಗಿದೆ. ಇಡೀ
ಪ್ರಪಂಚವೇ ಒಂದು ಬಹಳ ದೊಡ್ಡ ಹಡಗು ಆಗಿದೆ. ಇದನ್ನು ತಂದೆಯು ಪಾರು ಮಾಡುತ್ತಾರೆ ಅಂದಮೇಲೆ ನೀವು
ಮಕ್ಕಳು ಬಹಳ ಖುಷಿಯನ್ನಾಚರಿಸಬೇಕು ಏಕೆಂದರೆ ನಿಮಗಾಗಿ ಸದಾ ಖುಷಿಯಿದೆ. ಸದಾ ಕ್ರಿಸ್ಮಸ್ ಆಗಿದೆ.
ಯಾವಾಗಿನಿಂದ ನಿಮಗೆ ತಂದೆಯು ಸಿಕ್ಕಿದ್ದಾರೆಯೋ ಆಗಿನಿಂದಲೂ ನಿಮ್ಮದು ಸದಾ ಕ್ರಿಸ್ಮಸ್ ಆಗಿದೆ.
ಆದ್ದರಿಂದ ಅತೀಂದ್ರಿಯ ಸುಖದ ಗಾಯನವಿದೆ. ನೋಡಿ, ಇವರು ಸದಾ ಖುಷಿಯಲ್ಲಿರುತ್ತಾರೆ - ಏಕೆ? ಅರೆ!
ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ಅವರು ನಮಗೆ ಓದಿಸುತ್ತಿದ್ದಾರೆ ಅಂದಮೇಲೆ ಇದು ನಿತ್ಯದ
ಖುಷಿಯಾಗಿರಬೇಕಲ್ಲವೆ. ಬೇಹದ್ದಿನ ತಂದೆಯು ಓದಿಸುತ್ತಿದ್ದಾರೆ - ವಾಹ್! ಇದನ್ನು ಯಾರಾದರೂ ಎಂದಾದರೂ
ಕೇಳಿದ್ದೀರಾ? ಗೀತೆಯಲ್ಲಿಯೂ ಭಗವಾನುವಾಚವಿದೆ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ಹೇಗೆ
ಅಲ್ಲಿ ಬ್ಯಾರಿಸ್ಟರಿ ಯೋಗ, ಸರ್ಜನರಿ ಯೋಗವನ್ನು ಕಲಿಸುತ್ತಾರೆ ಹಾಗೆಯೇ ನಾನು ನೀವು ಆತ್ಮಿಕ
ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತೇನೆ. ನೀವಿಲ್ಲಿ ರಾಜಯೋಗವನ್ನು ಕಲಿಯಲು ಬರುತ್ತೀರಲ್ಲವೆ.
ಇದರಲ್ಲಿ ತಬ್ಬಿಬ್ಬಾಗುವ ಮಾತೇ ಇಲ್ಲ ಅಂದಮೇಲೆ ರಾಜಯೋಗವನ್ನು ಕಲಿತು ಪೂರ್ಣ ಮಾಡಬೇಕಲ್ಲವೆ.
ಬಿಟ್ಟು ಹೊರಟು ಹೋಗಬಾರದು. ಓದಲೂಬೇಕು ಮತ್ತು ಚೆನ್ನಾಗಿ ಧಾರಣೆಯನ್ನೂ ಮಾಡಿಕೊಳ್ಳಬೇಕಾಗಿದೆ.
ಶಿಕ್ಷಕರು ಧಾರಣೆ ಮಾಡಿಸುವುದಕ್ಕಾಗಿಯೇ ಓದಿಸುತ್ತಾರೆ.
ಪ್ರತಿಯೊಬ್ಬರದೂ ತಮ್ಮ-ತಮ್ಮದೇ ಆದ ಬುದ್ಧಿಯಿರುತ್ತದೆ. ಕೆಲವರದು ಉತ್ತಮ, ಕೆಲವರದು ಮಧ್ಯಮ, ಇನ್ನೂ
ಕೆಲವರದು ಕನಿಷ್ಟ ಅಂದಾಗ ತಮ್ಮೊಂದಿಗೆ ಕೇಳಿಕೊಳ್ಳಿ - ನಾನು ಉತ್ತಮನಾಗಿದ್ದೇನೆಯೇ,
ಮಧ್ಯಮನಾಗಿದ್ದೇನೆಯೇ ಅಥವಾ ಕನಿಷ್ಟನಾಗಿದ್ದೇನೆಯೇ? ತಮ್ಮನ್ನು ತಾವೇ ಗುರುತಿಸಿಕೊಳ್ಳಿ - ನಾನು ಈ
ಶ್ರೇಷ್ಠಾತಿ ಶ್ರೇಷ್ಠ ಪರೀಕ್ಷೆಯನ್ನು ತೇರ್ಗಡೆ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಲು
ಯೋಗ್ಯನಾಗಿದ್ದೇನೆಯೇ? ನಾನು ಸರ್ವೀಸ್ ಮಾಡುತ್ತೇನೆಯೇ? ತಂದೆಯು ತಿಳಿಸುತ್ತಾರೆ - ಮಕ್ಕಳೇ,
ಸೇವಾಧಾರಿಗಳಾಗಿ ತಂದೆಯನ್ನು ಅನುಕರಣೆ ಮಾಡಿ ಏಕೆಂದರೆ ನಾನೂ ಸರ್ವೀಸ್ ಮಾಡುತ್ತೇನಲ್ಲವೆ. ನಾನು
ಬಂದಿರುವುದೇ ಸರ್ವೀಸ್ ಮಾಡುವುದಕ್ಕಾಗಿ ಮತ್ತು ಪ್ರತಿನಿತ್ಯವೂ ಸರ್ವೀಸ್ ಮಾಡುತ್ತೇನೆ ಏಕೆಂದರೆ
ರಥವನ್ನು ತೆಗೆದುಕೊಂಡಿದ್ದೇನೆ ಅಲ್ಲವೆ. ರಥವು ಶಕ್ತಿಶಾಲಿಯಾಗಿದೆ, ಚೆನ್ನಾಗಿದೆ ಮತ್ತು ಸದಾ ಇವರು
ಸರ್ವೀಸ್ ಮಾಡುತ್ತಾರೆ. ಬಾಪ್ದಾದಾ ಈ ರಥದಲ್ಲಿ ಸದಾ ಇರುತ್ತಾರೆ. ಭಲೆ ಇವರ ಶರೀರವು ರೋಗಿಯಾಗಬಹುದು,
ನಾನಂತೂ ಕುಳಿತಿದ್ದೇನಲ್ಲವೆ. ನಾನು ಇವರಲ್ಲಿ ಕುಳಿತು ಬರೆಯುತ್ತೇನೆ. ಒಂದುವೇಳೆ ಇವರು ಮಾತನಾಡಲು
ಸಾಧ್ಯವಾಗದಿದ್ದರೆ ನಾನು ಇವರಲ್ಲಿ ಬಂದು ಬರೆಯುತ್ತೇನೆ. ಇದರಿಂದ ಮುರುಳಿಯನ್ನು ತಪ್ಪಿಸುವುದಿಲ್ಲ.
ಎಲ್ಲಿಯವರೆಗೆ ಬರೆಯಲು ಸಾಧ್ಯವೋ, ಕುಳಿತುಕೊಳ್ಳಲು ಸಾಧ್ಯವೋ ಅಲ್ಲಿಯವರೆಗೆ ನಾನು ಮುರುಳಿಯನ್ನೂ
ನುಡಿಸುತ್ತೇನೆ. ಮಕ್ಕಳಿಗೆ ಬರೆದು ಕಳುಹಿಸುತ್ತೇನೆ ಏಕೆಂದರೆ ನಾನು ಸೇವಾಧಾರಿಯಲ್ಲವೆ. ಅಂದಾಗ
ತಂದೆಯು ಬಂದು ತಿಳಿಸುತ್ತಾರೆ - ನೀವು ತಮ್ಮನ್ನು ಆತ್ಮನೆಂದು ತಿಳಿದು ನಿಶ್ಚಯ ಬುದ್ಧಿಯವರಾಗಿ
ಸೇವೆಯಲ್ಲಿ ತೊಡಗಿರಿ. ತಂದೆಯ ಸೇವೆ ಈಶ್ವರೀಯ ಸೇವೆಯಾಗಿದೆ. ಹೇಗೆ ಆ ರಾಜರು ಆನ್ ಹಿಸ್ ಮೆಜೆಸ್ಟಿ
ಸರ್ವೀಸ್ ಎಂದು ಬರೆಯುತ್ತಾರೆ. ನೀವೇನು ಹೇಳುತ್ತೀರಿ? ಇದು ಮೆಜಿಸ್ಟಿಗಿಂತಲೂ ಉತ್ತಮ ಸೇವೆಯಾಗಿದೆ
ಏಕೆಂದರೆ ತಂದೆಯು ಮೆಜೆಸ್ಟಿ (ಮಹಾರಾಜ) ಯನ್ನಾಗಿ ಮಾಡುತ್ತಾರೆ. ಇದನ್ನೂ ಸಹ ನೀವು
ತಿಳಿದುಕೊಳ್ಳುತ್ತೀರಿ - ಅವಶ್ಯವಾಗಿ ನಾವು ವಿಶ್ವದ ಮಾಲೀಕರಾಗುತ್ತೇವೆ.
ನೀವು ಮಕ್ಕಳಲ್ಲಿ ಯಾರು ಚೆನ್ನಾಗಿ ಪುರುಷಾರ್ಥ ಮಾಡುವರೋ ಅವರಿಗೇ ಮಹಾವೀರರೆಂದು ಹೇಳಲಾಗುತ್ತದೆ
ಅಂದಾಗ ಇದನ್ನು ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ - ಯಾರು ಮಹಾವೀರರಾಗಿದ್ದಾರೆ, ತಂದೆಯ ಆದೇಶದಂತೆ
ನಡೆಯುತ್ತಾರೆ! ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿಯಿರಿ,
ಸಹೋದರ-ಸಹೋದರ ದೃಷ್ಟಿಯಿಂದ ನೋಡಿ. ತಂದೆಯು ತಮ್ಮನ್ನು ಸಹೋದರರ ತಂದೆಯೆಂದು ತಿಳಿಯುತ್ತಾರೆ ಮತ್ತು
ಸಹೋದರರನ್ನೇ ನೋಡುತ್ತಾರೆ. ಎಲ್ಲರನ್ನೂ ನೋಡುವುದಿಲ್ಲ. ಇದು ಜ್ಞಾನವಾಗಿದೆ. ಶರೀರವಿಲ್ಲದೆ ಯಾರೂ
ಕೇಳಲು ಸಾಧ್ಯವಿಲ್ಲ, ಮಾತನಾಡಲೂ ಸಾಧ್ಯವಿಲ್ಲ. ನಿಮಗೆ ತಿಳಿದಿದೆ, ನಾನೂ ಸಹ ಈ ಶರೀರದಲ್ಲಿ
ಬಂದಿದ್ದೇನೆ, ಈ ಶರೀರದ ಆಧಾರವನ್ನು ತೆಗೆದುಕೊಂಡಿದ್ದೇನೆ. ಶರೀರವಂತೂ ಎಲ್ಲರಿಗೂ ಇದೆ, ಆತ್ಮವು
ಇಲ್ಲಿ ಶರೀರದ ಜೊತೆಯಲ್ಲಿಯೇ ಓದುತ್ತಿದೆ ಅಂದಾಗ ಈಗ ಆತ್ಮಗಳು ತಿಳಿದುಕೊಳ್ಳಬೇಕು - ತಂದೆಯು ನಮಗೆ
ಓದಿಸುತ್ತಿದ್ದಾರೆ. ತಂದೆಯು ಎಲ್ಲಿ ಕುಳಿತಿದ್ದಾರೆ? ಅಕಾಲ ಸಿಂಹಾಸನದಲ್ಲಿ. ಪ್ರತಿಯೊಂದು ಆತ್ಮವು
ಅಕಾಲಮೂರ್ತಿಯಾಗಿದೆ. ಅದೆಂದೂ ವಿನಾಶವಾಗುವುದಿಲ್ಲ. ಅದು ನೀರಿನಲ್ಲಿ ಮುಳುಗುವುದಾಗಲಿ,
ಬೆಂಕಿಯಲ್ಲಿ ಸುಡುವುದಾಗಲಿ, ಆಯುಧಗಳಿಂದ ಕತ್ತರಿಸುವುದಕ್ಕಾಗಲಿ ಆಗುವುದಿಲ್ಲ ಅಥವಾ ಚಿಕ್ಕ-ದೊಡ್ಡ
ಗಾತ್ರದಲ್ಲಿರುವುದಿಲ್ಲ. ಶರೀರವು ಚಿಕ್ಕದು-ದೊಡ್ಡದಿರುತ್ತದೆ. ಅಂದಾಗ ಪ್ರಪಂಚದಲ್ಲಿ ಯಾರೆಲ್ಲಾ
ಮನುಷ್ಯ ಮಾತ್ರರಿದ್ದಾರೆಯೋ ಅವರಲ್ಲಿ ಯಾವ ಆತ್ಮಗಳಿವೆಯೋ ಅವರ ಸಿಂಹಾಸನವು ಈ ಭೃಕುಟಿಯಾಗಿದೆ.
ಶರೀರವು ಭಿನ್ನ-ಭಿನ್ನವಾಗಿದೆ. ಕೆಲವರ ಅಕಾಲ ಸಿಂಹಾಸನ ಪುರುಷನದು, ಕೆಲವರದು ಸ್ತ್ರೀಯರದು,
ಕೆಲವರದು ಮಕ್ಕಳದೂ ಆಗಿದೆ. ಯಾರೊಂದಿಗೇ ನೀವು ಮಾತನಾಡುತ್ತೀರೆಂದರೆ ಇದನ್ನೇ ತಿಳಿಯಿರಿ -
ನಾವಾತ್ಮರಾಗಿದ್ದೇವೆ. ತಮ್ಮ ಸಹೋದರರೊಂದಿಗೆ ಮಾತನಾಡುತ್ತೇವೆ. ತಂದೆಯ ಸಂದೇಶ ಕೊಡುತ್ತೀರಿ – ಶಿವ
ತಂದೆಯನ್ನು ನೆನಪು ಮಾಡಿದರೆ ಆತ್ಮದಲ್ಲಿ ಹಿಡಿದಿರುವ ತುಕ್ಕು ಬಿಟ್ಟು ಹೋಗುವುದು. ಹೇಗೆ
ಚಿನ್ನದಲ್ಲಿ ಲೋಹವು ಬೆರಕೆಯಾದರೆ ಅದರ ಬೆಲೆಯು ಕಡಿಮೆಯಾಗುತ್ತದೆ ಹಾಗೆಯೇ ನಿಮ್ಮ ಬೆಲೆಯೂ ಸಹ
ಕಡಿಮೆಯಾಗಿ ಬಿಟ್ಟಿದೆ. ಈಗ ಸಂಪೂರ್ಣ ಮೌಲ್ಯಹೀನರಾಗಿ ಬಿಟ್ಟಿದ್ದೀರಿ. ಇದಕ್ಕೆ ದಿವಾಳಿಯೆಂದೂ
ಹೇಳಲಾಗುತ್ತದೆ. ಭಾರತವು ಎಷ್ಟು ಧನವಂತನಾಗಿತ್ತು, ಈಗ ಸಾಲ ತೆಗೆದುಕೊಳ್ಳುತ್ತಾ ಇರುತ್ತಾರೆ.
ವಿನಾಶದಲ್ಲಂತೂ ಎಲ್ಲರ ಹಣವು ಸಮಾಪ್ತಿಯಾಗುವುದು. ಕೊಡುವವರು - ತೆಗೆದುಕೊಳ್ಳುವವರು ಎಲ್ಲರೂ
ಸಮಾಪ್ತಿಯಾಗಿ ಬಿಡುವರು ಬಾಕಿ ಯಾರು ಅವಿನಾಶಿ ಜ್ಞಾನರತ್ನಗಳನ್ನು ತೆಗೆದುಕೊಳ್ಳುವವರಿದ್ದಾರೆಯೋ
ಅವರು ಮತ್ತೆ ಬಂದು ತಮ್ಮ ಭಾಗ್ಯವನ್ನು ಪಡೆಯುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯನ್ನು
ಅನುಸರಿಸಿ ತಂದೆಯ ಸಮಾನ ಸೇವಾಧಾರಿಗಳಾಗಬೇಕಾಗಿದೆ. ತಮ್ಮನ್ನು ತಾವೇ ಪರಿಶೀಲನೆ ಮಾಡಿಕೊಳ್ಳಬೇಕು -
ನಾನು ಉತ್ತಮ ಪರೀಕ್ಷೆಯನ್ನು ತೇರ್ಗಡೆ ಮಾಡಿ ಉತ್ತಮ ಪದವಿಯನ್ನು ಪಡೆಯಲು ಯೋಗ್ಯನಾಗಿದ್ದೇನೆಯೇ?
2. ತಂದೆಯ ಆದೇಶದಂತೆ ನಡೆದು ಮಹಾವೀರರಾಗಬೇಕಾಗಿದೆ. ಹೇಗೆ ತಂದೆಯು ಆತ್ಮಗಳನ್ನು ನೋಡುತ್ತಾರೆ,
ಆತ್ಮಗಳಿಗೆ ಓದಿಸುತ್ತಾರೆ, ಅದೇರೀತಿ ಆತ್ಮ ಸಹೋದರ-ಸಹೋದರನನ್ನು ನೋಡಿ ಮಾತನಾಡಬೇಕಾಗಿದೆ.
ವರದಾನ:
ಶರೀರದ ಆರೋಗ್ಯ,
ಮನಸ್ಸಿನ ಖುಷಿ ಮತ್ತು ಧನದ ಸಮೃದ್ಧಿಯ ಮುಖಾಂತರ ಶ್ರೇಷ್ಠ ಭಾಗ್ಯವಾನ್ ಭವ.
ಸಂಗಮಯುಗದಲ್ಲಿ ಸದಾ
ಸ್ವ-ನಲ್ಲಿ ಸ್ಥಿತರಾಗುವುದರಿಂದ ಶರೀರದ ಕರ್ಮಭೋಗ ಶೂಲದಿಂದ ಮುಳ್ಳಾಗಿ ಬಿಡುತ್ತದೆ, ಶರೀರದ ರೋಗ
ಯೋಗದಲ್ಲಿ ಪರಿವರ್ತನೆ ಮಾಡಿ ಬಿಡುವಿರಿ. ಆದ್ದರಿಂದ ಸದಾ ಆರೋಗ್ಯವಾಗಿರುವಿರಿ. ಮನ್ಮನಾಭವ ಆಗುವ
ಕಾರಣ ಖುಷಿಯ ಗಣಿಯಿಂದ ಸದಾ ಸಂಪನ್ನರಾಗಿರುವಿರಿ ಆದ್ದರಿಂದ ಮನಸ್ಸಿನ ಖುಷಿಯೂ ಸಹ
ಪ್ರಾಪ್ತಿಯಾಗುವುದು ಮತ್ತು ಜ್ಞಾನ ಧನ ಎಲ್ಲಾ ಧನಗಳಿಗಿಂತಲೂ ಶ್ರೇಷ್ಠವಾಗಿದೆ. ಜ್ಞಾನಧನ
ಉಳ್ಳವರಿಗೆ ಪ್ರಕೃತಿ ಸ್ವತಃ ದಾಸಿಯಾಗಿ ಬಿಡುತ್ತದೆ ಮತ್ತು ಸರ್ವ ಸಂಬಂಧವೂ ಸಹ ಒಬ್ಬರ ಜೊತೆ ಇದೆ,
ಸಂಪರ್ಕವೂ ಸಹ ಹೋಲಿ ಹಂಸದ ಜೊತೆ ಇದೆ..... ಆದ್ದರಿಂದ ಶ್ರೇಷ್ಠ ಭಾಗ್ಯವಾನ್ನ ವರದಾನ ಸ್ವತಃವಾಗಿ
ಪ್ರಾಪ್ತಿಯಾಗುವುದು.
ಸ್ಲೋಗನ್:
ನೆನಪು ಮತ್ತು ಸೇವೆ
ಎರಡರ ಬ್ಯಾಲೆನ್ಸ್ ಆಗಿದೆ ಡಬಲ್ ಲಾಕ್.