09.12.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಯಾವ ಸಂಕಲ್ಪವು ಈಶ್ವರೀಯ ಸೇವಾರ್ಥವಾಗಿ ನಡೆಯುತ್ತದೆಯೋ ಅದಕ್ಕೆ ಶುದ್ಧ ಸಂಕಲ್ಪ ಅಥವಾ ನಿಸ್ಸಂಕಲ್ಪವೆಂದೇ ಹೇಳಲಾಗುತ್ತದೆ, ವ್ಯರ್ಥವಲ್ಲ"

ಪ್ರಶ್ನೆ:
ವಿಕರ್ಮಗಳಿಂದ ಮುಕ್ತರಾಗಲು ಯಾವ ಕರ್ತವ್ಯವನ್ನು ಪಾಲನೆ ಮಾಡುತ್ತಲೂ ಅನಾಸಕ್ತರಾಗಿರಬೇಕು?

ಉತ್ತರ:
ಮಿತ್ರ ಸಂಬಂಧಿಗಳ ಸರ್ವೀಸ್ ಭಲೆ ಮಾಡಿ, ಆದರೆ ಅಲೌಕಿಕ ಈಶ್ವರೀಯ ದೃಷ್ಟಿಯನ್ನಿಟ್ಟುಕೊಂಡು ಮಾಡಿ, ಅವರಲ್ಲಿ ಮೋಹದ ಸೆಳೆತವು ಇರಬಾರದು. ಒಂದುವೇಳೆ ಯಾವುದೇ ವಿಕಾರಿ ಸಂಬಂಧದಿಂದ ಸಂಕಲ್ಪವು ನಡೆದರೂ ಸಹ ಅದು ವಿಕರ್ಮವಾಗಿ ಬಿಡುತ್ತದೆ. ಆದ್ದರಿಂದ ಅನಾಸಕ್ತರಾಗಿ ಕರ್ತವ್ಯ ಪಾಲನೆ ಮಾಡಿ. ಎಷ್ಟು ಸಾಧ್ಯವೋ ಆತ್ಮಾಭಿಮಾನಿಯಾಗಿರುವ ಪುರುಷಾರ್ಥ ಮಾಡಿ.

ಓಂ ಶಾಂತಿ.
ಇಂದು ನೀವು ಮಕ್ಕಳಿಗೆ ಸಂಕಲ್ಪ, ವಿಕಲ್ಪ, ನಿಸ್ಸಂಕಲ್ಪ ಅಥವಾ ಕರ್ಮ-ಅಕರ್ಮ-ವಿಕರ್ಮದ ಬಗ್ಗೆ ತಿಳಿಸಿಕೊಡಲಾಗುತ್ತದೆ. ಎಲ್ಲಿಯವರೆಗೆ ನೀವು ಇಲ್ಲಿರುತ್ತೀರೋ ಅಲ್ಲಿಯವರೆಗೆ ನಿಮಗೆ ಸಂಕಲ್ಪಗಳು ಅವಶ್ಯವಾಗಿ ನಡೆಯುತ್ತವೆ. ಸಂಕಲ್ಪ ಧಾರಣೆ ಮಾಡದ ವಿನಃ ಯಾವುದೇ ಮನುಷ್ಯರು ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಈ ಸಂಕಲ್ಪಗಳು ಇಲ್ಲಿಯೂ ನಡೆಯುತ್ತವೆ, ಸತ್ಯಯುಗದಲ್ಲಿಯೂ ನಡೆಯುತ್ತವೆ ಮತ್ತು ಅಜ್ಞಾನ ಕಾಲದಲ್ಲಿಯೂ ನಡೆಯುತ್ತವೆ. ಆದರೆ ಜ್ಞಾನದಲ್ಲಿ ಬರುವುದರಿಂದ ಸಂಕಲ್ಪವು ಸಂಕಲ್ಪವಲ್ಲ ಏಕೆಂದರೆ ನೀವು ಪರಮಾತ್ಮನ ಸೇವಾರ್ಥವಾಗಿ ನಿಮಿತ್ತರಾಗಿದ್ದೀರಿ. ಆದ್ದರಿಂದ ಯಾವುದು ಯಜ್ಞಾರ್ಥವಾಗಿ ಸಂಕಲ್ಪ ನಡೆಯುತ್ತದೆಯೋ ಆ ಸಂಕಲ್ಪವು ಸಂಕಲ್ಪವಲ್ಲ, ಅದು ನಿಸ್ಸಂಕಲ್ಪವಾಗಿದೆ. ಬಾಕಿ ಯಾವ ವ್ಯರ್ಥ ಸಂಕಲ್ಪಗಳು ನಡೆಯುತ್ತವೆಯೋ ಅರ್ಥಾತ್ ಕಲಿಯುಗೀ ಸಂಸಾರ ಮತ್ತು ಕಲಿಯುಗೀ ಮಿತ್ರ ಸಂಬಂಧಿಗಳ ಪ್ರತಿ ನಡೆಯುತ್ತವೆಯೋ ಅವಕ್ಕೆ ವಿಕಲ್ಪವೆಂದು ಹೇಳಲಾಗುತ್ತದೆ. ಇದರಿಂದಲೇ ವಿಕರ್ಮವಾಗುತ್ತದೆ ಮತ್ತು ವಿಕರ್ಮಗಳಿಂದ ದುಃಖವು ಪ್ರಾಪ್ತಿಯಾಗುತ್ತದೆ. ಆದರೆ ಯಾವುದು ಯಜ್ಞದ ಪ್ರತಿ ಅಥವಾ ಈಶ್ವರೀಯ ಸೇವೆಯ ಪ್ರತಿ ಸಂಕಲ್ಪವು ನಡೆಯುತ್ತದೆಯೋ ಅದು ನಿಸ್ಸಂಕಲ್ಪವಾಯಿತು. ಸರ್ವೀಸಿನ ಪ್ರತಿ ಶುದ್ಧ ಸಂಕಲ್ಪ ಭಲೆ ನಡೆಯಲಿ. ನೋಡಿ, ತಂದೆಯು ನೀವು ಮಕ್ಕಳನ್ನು ಸಂಭಾಲನೆ ಮಾಡುವ ಅರ್ಥವಾಗಿ ಕುಳಿತಿದ್ದಾರೆ. ಸರ್ವೀಸ್ ಮಾಡುವ ಅರ್ಥವಾಗಿ ಮಾತಾಪಿತರ ಸಂಕಲ್ಪವು ಅವಶ್ಯವಾಗಿ ನಡೆಯುತ್ತದೆ. ಆದರೆ ಈ ಸಂಕಲ್ಪವು ಸಂಕಲ್ಪವಲ್ಲ, ಇದರಿಂದ ವಿಕರ್ಮವಾಗುವುದಿಲ್ಲ. ಆದರೆ ಒಂದುವೇಳೆ ಯಾರದೇ ವಿಕಾರೀ ಸಂಬಂಧದ ಪ್ರತಿ ಸಂಕಲ್ಪ ನಡೆಯುತ್ತದೆಯೆಂದರೆ ಅದರ ವಿಕರ್ಮವು ಖಂಡಿತ ಆಗುತ್ತದೆ.

ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ – ಮಿತ್ರ ಸಂಬಂಧಿಗಳ ಸರ್ವೀಸ್ ಭಲೆ ಮಾಡಿ ಆದರೆ ಅಲೌಕಿಕ ಈಶ್ವರೀಯ ದೃಷ್ಟಿಯನ್ನಿಟ್ಟುಕೊಂಡು ಮಾಡಿ ಅದರಲ್ಲಿ ಮೋಹದ ಸೆಳೆತವಿರಬಾರದು. ಅನಾಸಕ್ತರಾಗಿ ತಮ್ಮ ಕರ್ತವ್ಯ ಪರಿಪಾಲನೆ ಮಾಡಬೇಕು. ಆದರೆ ಯಾರು ಇಲ್ಲಿದ್ದರೂ ಸಹ ಕರ್ಮ ಸಂಬಂಧದಲ್ಲಿರುತ್ತಾ ಅದನ್ನು ಕತ್ತರಿಸಲು ಸಾಧ್ಯವಾಗದಿದ್ದರೂ ಸಹ ಅವರು ಪರಮಾತ್ಮನನ್ನಂತೂ ಬಿಡಬಾರದು. ಒಂದುವೇಳೆ ಪರಮಾತ್ಮನ ಕೈ ಹಿಡಿದುಕೊಂಡಿದ್ದರೆ ಒಂದಲ್ಲ ಒಂದು ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುವರು. ಈಗ ಪ್ರತಿಯೊಬ್ಬರೂ ತಮ್ಮನ್ನು ನನ್ನಲ್ಲಿ ಯಾವ ವಿಕಾರವಿದೆ ಎಂಬುದನ್ನು ತಿಳಿದುಕೊಂಡಿರುತ್ತೀರಿ. ಒಂದುವೇಳೆ ಯಾರಲ್ಲಿ ಒಂದು ವಿಕಾರವಿದ್ದರೂ ಸಹ ಅವರು ಖಂಡಿತ ದೇಹಾಭಿಮಾನಿಯಾದರು. ಯಾರಲ್ಲಿ ವಿಕಾರವಿಲ್ಲವೋ ಅವರು ದೇಹೀ-ಅಭಿಮಾನಿಯಾಗಿದ್ದಾರೆ. ಯಾರಲ್ಲಿ ಯಾವುದೇ ವಿಕಾರವಿದ್ದರೆ ಅವರು ಖಂಡಿತ ಶಿಕ್ಷೆಯನ್ನನುಭವಿಸುತ್ತಾರೆ ಮತ್ತು ಯಾರು ವಿಕಾರಗಳಿಂದ ರಹಿತರಾಗಿದ್ದಾರೆಯೋ ಅವರು ಶಿಕ್ಷೆಗಳಿಂದ ಮುಕ್ತರಾಗಿ ಬಿಡುತ್ತಾರೆ. ಹೇಗೆ ನೋಡಿ ಕೆಲಕೆಲವು ಮಕ್ಕಳಿದ್ದಾರೆ, ಅವರಲ್ಲಿ ಕಾಮವಾಗಲಿ, ಕ್ರೋಧವಾಗಲಿ, ಲೋಭ-ಮೋಹವಾಗಲಿ ಇಲ್ಲ. ಅಂತಹವರು ಬಹಳ ಚೆನ್ನಾಗಿ ಸೇವೆ ಮಾಡಬಲ್ಲರು. ಈಗ ಅವರ ಸ್ಥಿತಿಯು ಬಹಳ ಜ್ಞಾನ-ವಿಜ್ಞಾನಮಯವಾಗಿದೆ. ಅದನ್ನಂತೂ ನೀವೆಲ್ಲರೂ ಮತ (ಓಟು) ಕೊಡುತ್ತೀರಿ. ಈಗ ಇದಂತೂ ಹೇಗೆ ನಾನು ತಿಳಿದುಕೊಂಡಿದ್ದೇನೆಯೋ ಹಾಗೆಯೇ ನೀವೂ ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ. ಒಳ್ಳೆಯವರಿಗೆ ಎಲ್ಲರೂ ಒಳ್ಳೆಯವರೆಂದು ಹೇಳುತ್ತಾರೆ, ಯಾರಲ್ಲಿ ಕೊರತೆಗಳಿರುವುದೋ ಅವರಿಗೆ ಎಲ್ಲರೂ ಅದೇ ಓಟನ್ನು ಕೊಡುತ್ತಾರೆ. ಈಗ ಇದನ್ನು ನಿಶ್ಚಯ ಮಾಡಿಕೊಳ್ಳಿ - ಯಾರಲ್ಲಿ ಯಾವುದೇ ವಿಕಾರವಿದ್ದರೆ ಅವರು ಸರ್ವೀಸ್ ಮಾಡಲು ಸಾಧ್ಯವಿಲ್ಲ. ಯಾರು ವಿಕಾರಗಳಿಂದ ರಹಿತರಾಗಿದ್ದಾರೆಯೋ ಅವರು ಸರ್ವೀಸ್ ಮಾಡಿ ಅನ್ಯರನ್ನೂ ತಮ್ಮ ಸಮಾನ ಮಾಡಿಕೊಳ್ಳುವರು ಆದ್ದರಿಂದ ವಿಕಾರಗಳಿಂದ ಪೂರ್ಣ ವಿಜಯ ಬೇಕು. ವಿಕಲ್ಪಗಳ ಮೇಲೆ ವಿಜಯ ಬೇಕಾಗಿದೆ. ಈಶ್ವರಾರ್ಥ ಸಂಕಲ್ಪಕ್ಕೆ ನಿಸ್ಸಂಕಲ್ಪವೆನ್ನಲಾಗುವುದು.

ವಾಸ್ತವದಲ್ಲಿ ಯಾವ ಸಂಕಲ್ಪ ನಡೆಯಲೇ ಇಲ್ಲವೋ, ಸುಖ-ದುಃಖದಿಂದ ಭಿನ್ನರಾಗಿ ಬಿಡುವರೋ ಅದಕ್ಕೆ ನಿಸ್ಸಂಕಲ್ಪತೆಯೆಂದು ಹೇಳಲಾಗುವುದು. ಇದಂತೂ ಅಂತ್ಯದಲ್ಲಿ ಯಾವಾಗ ನೀವು ಲೆಕ್ಕಾಚಾರಗಳನ್ನು ಮುಗಿಸಿ ಹೋಗಿ ಬಿಡುತ್ತೀರೋ ಅಲ್ಲಿ ದುಃಖ-ಸುಖದಿಂದ ಭಿನ್ನ ಸ್ಥಿತಿಯಲ್ಲಿ ಹೋಗುತ್ತೀರಿ. ಆಗ ಯಾವುದೇ ಸಂಕಲ್ಪವು ನಡೆಯುವುದಿಲ್ಲ. ಆ ಸಮಯದಲ್ಲಿ ಕರ್ಮ-ಅಕರ್ಮ ಎರಡರಿಂದಲೂ ದೂರ ಅಕರ್ಮೀ ಸ್ಥಿತಿಯಲ್ಲಿರುತ್ತೀರಿ.

ಇಲ್ಲಿ ನಿಮಗೆ ಸಂಕಲ್ಪಗಳು ಅವಶ್ಯವಾಗಿ ನಡೆಯುವುದು ಏಕೆಂದರೆ ನೀವು ಇಡೀ ಪ್ರಪಂಚವನ್ನು ಶುದ್ಧ ಮಾಡುವ ಅರ್ಥವಾಗಿ ನಿಮಿತ್ತರಾಗಿದ್ದೀರಿ ಅದಕ್ಕಾಗಿ ನಿಮಗೆ ಶುದ್ಧ ಸಂಕಲ್ಪಗಳು ಅವಶ್ಯವಾಗಿ ನಡೆಯುತ್ತವೆ. ಸತ್ಯಯುಗದಲ್ಲಿ ಶುದ್ಧಸಂಕಲ್ಪವು ನಡೆಯುವಕಾರಣ ಸಂಕಲ್ಪವು ಸಂಕಲ್ಪವಲ್ಲ. ಕರ್ಮ ಮಾಡುತ್ತಲೂ ಕರ್ಮಬಂಧನವಾಗುವುದಿಲ್ಲ. ತಿಳಿಯಿತೆ! ಈಗ ಕರ್ಮ-ಅಕರ್ಮ ಮತ್ತು ವಿಕರ್ಮದ ಗತಿಯನ್ನು ಪರಮಾತ್ಮನೇ ತಿಳಿಸಬಲ್ಲರು. ಅವರೇ ವಿಕರ್ಮಗಳಿಂದ ಬಿಡಿಸುವವರಾಗಿದ್ದಾರೆ, ಈ ಸಂಗಮದಲ್ಲಿ ನಿಮಗೆ ಓದಿಸುತ್ತಿದ್ದಾರೆ. ಆದ್ದರಿಂದ ಮಕ್ಕಳೇ ತಮ್ಮ ಮೇಲೆ ಬಹಳ ಎಚ್ಚರಿಕೆಯನ್ನಿಡಿ. ತನ್ನ ಲೆಕ್ಕಾಚಾರವನ್ನೂ ಸಹ ನೋಡುತ್ತಾ ಇರಿ. ಲೆಕ್ಕಾಚಾರಗಳನ್ನು ಮುಗಿಸುವುದಕ್ಕಾಗಿಯೇ ನೀವಿಲ್ಲಿಗೆ ಬಂದಿದ್ದೀರಿ ಅಂದಮೇಲೆ ಇಲ್ಲಿ ಬಂದ ಮೇಲೂ ಸಹ ಲೆಕ್ಕಾಚಾರಗಳನ್ನು ಮಾಡಿಕೊಳ್ಳುತ್ತಾ ಅದರಿಂದ ಶಿಕ್ಷೆಯನ್ನನುಭವಿಸುವಂತಾಗಬಾರದು. ಈ ಗರ್ಭ ಜೈಲಿನ ಶಿಕ್ಷೆಯೇನೂ ಕಡಿಮೆಯಲ್ಲ. ಈ ಕಾರಣವೇ ಬಹಳ ಪುರುಷಾರ್ಥ ಮಾಡಬೇಕಾಗಿದೆ. ಈ ಗುರಿಯು ಬಹಳ ದೊಡ್ಡದಾಗಿದೆ ಆದ್ದರಿಂದ ಎಚ್ಚರಿಕೆಯಿಂದ ನಡೆಯಬೇಕಾಗಿದೆ. ವಿಕಲ್ಪಗಳ ಮೇಲೆ ಖಂಡಿತ ವಿಜಯ ಗಳಿಸಬೇಕಾಗಿದೆ. ಈಗ ಎಲ್ಲಿಯ ತನಕ ನೀವು ವಿಕಲ್ಪಗಳ ಮೇಲೆ ಜಯ ಗಳಿಸಿದ್ದೀರಿ? ಎಲ್ಲಿಯವರೆಗೆ ಈ ನಿಸ್ಸಂಕಲ್ಪ ಅರ್ಥಾತ್ ಸುಖ-ದುಃಖದಿಂದ ಭಿನ್ನ ಸ್ಥಿತಿಯಲ್ಲಿರುತ್ತೀರಿ ಎಂಬುದನ್ನು ನೀವು ತಮಗೆ ತಾವು ತಿಳಿದುಕೊಳ್ಳುತ್ತಾ ಇರಿ. ಯಾರು ಸ್ವಯಂನ ಬಗ್ಗೆ ಅರಿತುಕೊಳ್ಳಲು ಸಾಧ್ಯವಿಲ್ಲವೋ ಅವರು ಮಮ್ಮಾ-ಬಾಬಾರವರೊಂದಿಗೆ ಕೇಳಬಹುದು ಏಕೆಂದರೆ ನೀವಂತೂ ಅವರ ವಾರಸುಧಾರರಾಗಿದ್ದೀರಿ ಆದ್ದರಿಂದ ಅವರು ಎಲ್ಲವನ್ನೂ ತಿಳಿಸಬಲ್ಲರು.

ನಿಸ್ಸಂಕಲ್ಪ ಸ್ಥಿತಿಯಲ್ಲಿರುವುದರಿಂದ ನೀವು ತಮ್ಮದಷ್ಟೇ ಅಲ್ಲ, ಯಾವುದೇ ವಿಕಾರಿಯ ವಿಕರ್ಮಗಳನ್ನೂ ಸಹ ನೀವು ಅದುಮಿಡಬಲ್ಲಿರಿ. ಯಾವುದೇ ಕಾಮಿ ಪುರುಷನು ನಿಮ್ಮ ಮುಂದೆ ಬಂದರೂ ಸಹ ಆಗ ಅವರಿಗೆ ವಿಕಾರಿ ಸಂಕಲ್ಪವು ನಡೆಯುವುದಿಲ್ಲ. ಹೇಗೆ ಯಾವುದೇ ದೇವತೆಗಳ ಬಳಿ ಹೋದಾಗ ಅವರ ಮುಂದೆ ಎಂತಹ ವ್ಯಕ್ತಿಗಳೂ ಸಹ ಶಾಂತವಾಗಿ ಬಿಡುತ್ತಾರೆ ಹಾಗೆಯೇ ನೀವೂ ಸಹ ಗುಪ್ತ ರೂಪದಲ್ಲಿ ದೇವತೆಗಳಾಗಿದ್ದೀರಿ. ನಿಮ್ಮ ಮುಂದೆಯೂ ಯಾರದೇ ವಿಕಾರಿ ಸಂಕಲ್ಪವು ನಡೆಯಲು ಸಾಧ್ಯವಿಲ್ಲ. ಆದರೆ ಇಂತಹ ಅನೇಕ ಕಾಮಿ ಪುರುಷರಿರುತ್ತಾರೆ ಯಾರದು ಒಂದುವೇಳೆ ಕೆಲವು ಸಂಕಲ್ಪಗಳು ನಡೆದರೂ ಸಹ ಅದು ನಿಮ್ಮ ಮೇಲೆ ಪ್ರಭಾವ ಬೀರುವುದಿಲ್ಲ ನೀವು ಯೋಗಯುಕ್ತರಾಗಿ ನಿಂತಿದ್ದಾಗ ಮಾತ್ರ.

ನೋಡಿ ಮಕ್ಕಳೇ, ನೀವಿಲ್ಲಿ ಪರಮಾತ್ಮನಿಗೆ ವಿಕಾರಗಳ ಆಹುತಿಯನ್ನು ಕೊಡಲು ಬಂದಿದ್ದೀರಿ. ಆದರೆ ಕೆಲಕೆಲವರು ನಿಯಮಾನುಸಾರವಾಗಿ ಇನ್ನೂ ಆಹುತಿಯನ್ನು ನೀಡಿಲ್ಲ. ಅವರ ಯೋಗವು ಪರಮಪಿತನೊಂದಿಗೆ ಜೋಡಣೆಯಾಗಿಲ್ಲ. ಇಡೀ ದಿನ ಬುದ್ಧಿಯೋಗವು ಅಲೆಯುತ್ತಿರುತ್ತದೆ ಅರ್ಥಾತ್ ದೇಹೀ-ಅಭಿಮಾನಿಗಳಾಗಿಲ್ಲ. ದೇಹಾಭಿಮಾನದಲ್ಲಿರುವುದರಿಂದ ಅನ್ಯರ ಸ್ವಭಾವದಲ್ಲಿ ಬಂದು ಬಿಡುತ್ತಾರೆ. ಈ ಕಾರಣದಿಂದ ಪರಮಾತ್ಮನೊಂದಿಗೆ ಪ್ರೀತಿಯನ್ನು ನಿಭಾಯಿಸಲು ಸಾಧ್ಯವಿಲ್ಲ ಅರ್ಥಾತ್ ಪರಮಾತ್ಮನ ಅರ್ಥವಾಗಿ ಸರ್ವೀಸ್ ಮಾಡುವ ಅಧಿಕಾರಿಗಳಾಗಲು ಸಾಧ್ಯವಿಲ್ಲ ಅಂದಾಗ ಯಾರು ಪರಮಾತ್ಮನಿಂದ ಸರ್ವೀಸ್ ತೆಗೆದುಕೊಂಡು ಮತ್ತೆ ಸರ್ವೀಸ್ ಮಾಡುತ್ತಿದ್ದಾರೆಯೋ ಅರ್ಥಾತ್ ಪತಿತರನ್ನು ಪಾವನ ಮಾಡುತ್ತಿದ್ದಾರೆಯೋ ಅವರೇ ನನ್ನ ಸತ್ಯವಾದ ಪಕ್ಕಾ ಮಕ್ಕಳಾಗಿದ್ದಾರೆ. ಅವರಿಗೆ ಬಹಳ ದೊಡ್ಡ ಪದವಿ ಸಿಗುತ್ತದೆ.

ಈಗ ಸ್ವಯಂ ಪರಮಾತ್ಮನೇ ಬಂದು ನಿಮ್ಮ ತಂದೆಯಾಗಿದ್ದಾರೆ. ಆ ತಂದೆಯನ್ನು ಸಾಧಾರಣ ರೂಪದಲ್ಲಿ ಅರಿತುಕೊಳ್ಳದೆ ಯಾವುದೇ ಪ್ರಕಾರದ ಸಂಕಲ್ಪವನ್ನು ಉತ್ಪನ್ನ ಮಾಡುವುದೂ ಸಹ ವಿನಾಶವನ್ನು ಪ್ರಾಪ್ತಿ ಮಾಡಿಕೊಳ್ಳುವುದಾಗಿದೆ. ಈಗ ಅಂತಹ ಸಮಯವು ಬರುವುದು ಯಾವಾಗ 108 ಮಂದಿ ಜ್ಞಾನ ಗಂಗೆಯರು ಪೂರ್ಣ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳುವರು. ಉಳಿದಂತೆ ಯಾರು ಓದಿಲ್ಲವೋ ಅವರು ತಮ್ಮದೇ ನಷ್ಟವನ್ನು ಮಾಡಿಕೊಳ್ಳುತ್ತಾರೆ.

ಈ ನಿಶ್ಚಯವನ್ನು ಅರಿತುಕೊಳ್ಳಿ - ಯಾರು ಈ ಈಶ್ವರೀಯ ಯಜ್ಞದಲ್ಲಿ ಬಚ್ಚಿಟ್ಟುಕೊಂಡು ಕೆಲಸ ಮಾಡುತ್ತಾರೆಂದರೆ ಅವರನ್ನು ಸರ್ವಜ್ಞನಾದ ತಂದೆಯು ನೋಡುತ್ತಾರೆ. ಅವರು ಮತ್ತೆ ತನ್ನ ಸಾಕಾರ ಸ್ವರೂಪ ತಂದೆಗೆ ಸಾವಧಾನವನ್ನು ಕೊಡುವ ಅರ್ಥವಾಗಿ ಟಚ್ ಕೊಡುತ್ತಾರೆ. ಆದ್ದರಿಂದ ಯಾವುದೇ ಮಾತನ್ನು ಮುಚ್ಚಿಡಬಾರದು. ಭಲೆ ತಪ್ಪುಗಳಾಗುತ್ತವೆ ಆದರೆ ಅವನ್ನು ತಿಳಿಸಿದಾಗಲೇ ಮುಂದೆ ನೀವು ಅದರಿಂದ ಮುಕ್ತರಾಗುತ್ತೀರಿ. ಆದ್ದರಿಂದ ಮಕ್ಕಳೇ, ಎಚ್ಚರಿಕೆಯಿಂದಿರಿ.

ಮಕ್ಕಳು ಮೊದಲು ತಮ್ಮನ್ನು ನಾನು ಯಾರು? ವ್ಹಾಟ್ ಆಮ್ ಐ? ಎಂಬುದನ್ನು ತಿಳಿದುಕೊಳ್ಳಬೇಕು. "ನಾನು" ಎಂದು ಶರೀರಕ್ಕೆ ಹೇಳುವುದಿಲ್ಲ, ಆತ್ಮಕ್ಕೇ ನಾನು ಎಂದು ಹೇಳುತ್ತಾರೆ. ನಾನಾತ್ಮ ಎಲ್ಲಿಂದ ಬಂದಿದ್ದೇನೆ? ಯಾರ ಸಂತಾನನಾಗಿದ್ದೇನೆ? ನಾನಾತ್ಮನು ಪರಮಪಿತ ಪರಮಾತ್ಮನ ಸಂತಾನನಾಗಿದ್ದೇನೆಂದು ಯಾವಾಗ ಅರ್ಥವಾಗಿ ಬಿಡುವುದೋ ಆಗ ತನ್ನ ತಂದೆಯನ್ನು ನೆನಪು ಮಾಡುವುದರಿಂದ ಖುಷಿಯು ಬಂದು ಬಿಡುವುದು. ಮಕ್ಕಳಿಗೆ ಯಾವಾಗ ತನ್ನ ತಂದೆಯ ಬಗ್ಗೆ ಅರಿತುಕೊಳ್ಳುವರೋ ಆಗ ಖುಷಿಯಾಗುತ್ತದೆ. ಎಲ್ಲಿಯವರೆಗೆ ಚಿಕ್ಕವರಾಗಿರುವರೋ, ತಂದೆಯ ಬಗ್ಗೆ ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇಷ್ಟು ಖುಷಿಯಿರುವುದಿಲ್ಲ. ಹೇಗೆ ದೊಡ್ಡವರಾಗುತ್ತಾ ಹೋದಂತೆ ತಂದೆಯ ಬಗ್ಗೆ ಪೂರ್ಣ ಅರ್ಥವಾಗುತ್ತಾ ಹೋದಾಗ ಆ ನಶೆ, ಆ ಖುಷಿಯು ಏರುತ್ತಾ ಹೋಗುತ್ತದೆ ಅಂದಾಗ ಮೊದಲು ಅವರ ಪರಿಚಯವನ್ನು ತಿಳಿದುಕೊಳ್ಳಬೇಕಾಗಿದೆ - ನಮ್ಮ ತಂದೆಯು ಯಾರು? ಅವರು ಎಲ್ಲಿರುತ್ತಾರೆ? ಒಂದುವೇಳೆ ಆತ್ಮವು ಪರಮಾತ್ಮನಲ್ಲಿ ಲೀನವಾಗಿ ಬಿಡುತ್ತದೆಯೆಂದು ಹೇಳುವುದಾದರೆ ಆತ್ಮವು ವಿನಾಶಿಯಾಗಿ ಬಿಡುವುದು, ಅಂದಮೇಲೆ ಖುಷಿಯು ಯಾರಿಗೆ ಆಗುವುದು?

ನಿಮ್ಮಬಳಿ ಹೊಸ ಜಿಜ್ಞಾಸುಗಳು ಬಂದರೆ ಅವರನ್ನು ಪ್ರಶ್ನೆ ಮಾಡಿ - ನೀವಿಲ್ಲಿ ಏನನ್ನು ಓದುತ್ತೀರಿ? ಇದರಿಂದ ನಿಮಗೆ ಯಾವ ಪದವಿ ಸಿಗುತ್ತದೆ? ಆ ಕಾಲೇಜುಗಳಲ್ಲಿ ಓದುವವರಂತೂ ನಾವು ಡಾಕ್ಟರ್ ಆಗುತ್ತಿದ್ದೇವೆ, ಇಂಜಿನಿಯರ್ ಆಗುತ್ತಿದ್ದೇವೆ...... ಎಂದು ಹೇಳುತ್ತಾರೆ. ಆಗ ಇವರು ಖಂಡಿತ ಓದುತ್ತಿದ್ದಾರೆಂದು ಅವರ ಮೇಲೆ ವಿಶ್ವಾಸವನ್ನಿಡುತ್ತಾರಲ್ಲವೆ. ಇಲ್ಲಿಯೂ ಸಹ ವಿದ್ಯಾರ್ಥಿಗಳು ಹೇಳುತ್ತೀರಿ - ಇದು ದುಃಖದ ಪ್ರಪಂಚವಾಗಿದೆ ಯಾವುದಕ್ಕೆ ನರಕ, ಹೆಲ್ ಅಥವಾ ಭೂತಗಳ ಪ್ರಪಂಚವೆಂದು ಹೇಳುತ್ತಾರೆ ಅದಕ್ಕೆ ವಿರುದ್ಧವಾಗಿ ಹೆವೆನ್ ಅಥವಾ ದೈವೀ ಪ್ರಪಂಚವಿದೆ ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಇದನ್ನಂತೂ ಎಲ್ಲರೂ ತಿಳಿದುಕೊಂಡಿದ್ದೀರಿ ಅಥವಾ ತಿಳಿದುಕೊಳ್ಳಲೂಬಹುದು - ಈಗ ಆ ಸ್ವರ್ಗವಿಲ್ಲ. ಇದು ನರಕವಾಗಿದೆ ಅಥವಾ ದುಃಖದ ಪ್ರಪಂಚವಾಗಿದೆ, ಪಾಪಾತ್ಮರ ಪ್ರಪಂಚವಾಗಿದೆ ಆದ್ದರಿಂದ ನಮ್ಮನ್ನು ಪುಣ್ಯದ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದು ಪರಮಾತ್ಮನನ್ನು ಕರೆಯುತ್ತಾರೆ ಅಂದಾಗ ಯಾವ ಮಕ್ಕಳು ಇಲ್ಲಿ ಓದುತ್ತಿದ್ದೀರೋ ಅವರಿಗೆ ತಿಳಿದಿದೆ - ನಮ್ಮನ್ನು ತಂದೆಯು ಆ ಪುಣ್ಯದ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಅಂದಾಗ ಯಾರು ಹೊಸ ವಿದ್ಯಾರ್ಥಿಗಳು ಬರುವರೋ ಅವರು ಮಕ್ಕಳಿಂದ ಕೇಳಬೇಕು, ಮಕ್ಕಳಿಂದ ಓದಬೇಕು, ಅವರು ತಮ್ಮ ಶಿಕ್ಷಕರ ಅಥವಾ ತಂದೆಯ ಪರಿಚಯವನ್ನು ತಿಳಿಸಬಲ್ಲರು. ತಂದೆಯು ತಾವೇ ತಮ್ಮ ಮಹಿಮೆಯನ್ನು ಕುಳಿತು ಮಾಡುವುದಿಲ್ಲ. ಶಿಕ್ಷಕರು ತಮ್ಮ ಮಹಿಮೆಯನ್ನು ತಾವೇ ತಿಳಿಸುವರೇ! ಇವರು ಇಂತಹ ಶಿಕ್ಷಕನಾಗಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳು ತಿಳಿಸುತ್ತಾರೆ. ಆದ್ದರಿಂದಲೇ ವಿದ್ಯಾರ್ಥಿಯು ಶಿಕ್ಷಕರನ್ನು ಪ್ರತ್ಯಕ್ಷ ಮಾಡುವರೆಂದು ಹೇಳುತ್ತಾರೆ. ನೀವು ಮಕ್ಕಳು ಯಾರು ಇಷ್ಟೊಂದು ಕೋರ್ಸನ್ನು ಓದಿ ಬಂದಿದ್ದೀರೋ ನಿಮ್ಮೆಲ್ಲರ ಕರ್ತವ್ಯವಾಗಿದೆ - ಹೊಸಬರಿಗೆ ತಿಳಿಸುವುದು. ಬಾಕಿ ಯಾವ ಶಿಕ್ಷಕರು ಬಿ.ಎ., ಎಂ.ಎ., ಓದಿಸುತ್ತಿದ್ದಾರೆಯೋ ಅವರೇ ಕುಳಿತು ಹೊಸ ವಿದ್ಯಾರ್ಥಿಗಳಿಗೆ ಎ, ಬಿ, ಸಿ, ಡಿ., ಕಲಿಸಿ ಕೊಡುತ್ತಾರೆಯೇ! ಕೆಲ ಕೆಲವರು ವಿದ್ಯಾರ್ಥಿಗಳು ಬಹಳ ಬುದ್ಧಿವಂತರಾಗಿದ್ದರೆ ಅವರು ಅನ್ಯರಿಗೂ ಓದಿಸುತ್ತಾರೆ ಅದರಲ್ಲಿಯೂ ತಾಯಿ ಗುರು ಬಹಳ ಪ್ರಸಿದ್ಧವಾಗಿದ್ದಾರೆ. ಇವರು ದೇವತಾ ಧರ್ಮದ ಮೊದಲ ತಾಯಿಯಾಗಿದ್ದಾರೆ, ಇವರಿಗೆ ಜಗದಂಬೆಯೆಂದು ಹೇಳುತ್ತಾರೆ. ತಾಯಿಯ ಮಹಿಮೆ ಬಹಳಷ್ಟಿದೆ. ಬಂಗಾಳದಲ್ಲಿ ಕಾಳಿ, ದುರ್ಗಾ, ಸರಸ್ವತಿ ಮತ್ತು ಲಕ್ಷ್ಮೀ-ಈ ನಾಲ್ಕು ದೇವಿಯರ ಬಹಳ ಪೂಜೆ ಮಾಡುತ್ತಾರೆ ಅಂದಾಗ ಆ ನಾಲ್ಕು ಮಂದಿಯ ಪರಿಚಯವಂತೂ ತಿಳಿದಿರಬೇಕು. ಹೇಗೆ ಲಕ್ಷ್ಮಿಯು ಧನ ದೇವಿಯಾಗಿದ್ದಾರೆ, ಅವರು ಇಲ್ಲಿಯೇ ರಾಜ್ಯಭಾರ ಮಾಡಿ ಹೋಗಿದ್ದಾರೆ. ಬಾಕಿ ಕಾಳಿ, ದುರ್ಗಾ ಇತ್ಯಾದಿ ಎಲ್ಲಾ ಹೆಸರುಗಳು ಇವರಿಗೇ ಬಂದಿವೆ. ಒಂದುವೇಳೆ ನಾಲ್ಕು ಮಂದಿ ಬೇರೆ-ಬೇರೆ ಮಾತೆಯರಾಗಿದ್ದರೆ ಅವರಿಗೆ ನಾಲ್ಕು ಮಂದಿ ಪತಿಯರೂ ಇರಬೇಕಾಗಿತ್ತು. ಈಗ ಲಕ್ಷ್ಮಿಯ ಪತಿಯಂತೂ ನಾರಾಯಣನೆಂದು ಪ್ರಸಿದ್ಧವಾಗಿದೆ. ಕಾಳಿಯ ಪತಿ ಯಾರು? (ಶಂಕರ) ಆದರೆ ಶಂಕರನು ಪಾರ್ವತಿಯ ಪತಿಯೆಂದು ಹೇಳುತ್ತಾರೆ. ಪಾರ್ವತಿಯು ಕಾಳಿಯಲ್ಲ, ಅನೇಕರು ಕಾಳಿಯನ್ನು ಪೂಜಿಸುತ್ತಾರೆ. ಮಾತೆಯನ್ನು ನೆನಪು ಮಾಡುತ್ತಾರೆ ಆದರೆ ಪಿತನ ಬಗ್ಗೆ ಗೊತ್ತಿಲ್ಲ. ಕಾಳಿಗೆ ಪತಿಯಿರಬೇಕು ಅಥವಾ ಪಿತನಿರಬೇಕು ಆದರೆ ಇದು ಯಾರಿಗೂ ತಿಳಿದಿಲ್ಲ.

ನೀವು ತಿಳಿಸಬೇಕಾಗಿದೆ - ಪ್ರಪಂಚವು ಇದೊಂದೇ ಆಗಿದೆ, ಇದೇ ಪ್ರಪಂಚವು ಕೆಲವು ಸಮಯದಲ್ಲಿ ದುಃಖದ ಪ್ರಪಂಚ ಅಥವಾ ನರಕವಾಗುತ್ತದೆ. ಅದೇ ಮತ್ತೆ ಸತ್ಯಯುಗದಲ್ಲಿ ಸ್ವರ್ಗವಾಗಿ ಬಿಡುತ್ತದೆ. ಲಕ್ಷ್ಮೀ-ನಾರಾಯಣರೂ ಸಹ ಇದೇ ಸೃಷ್ಟಿಯಲ್ಲಿ, ಸತ್ಯಯುಗದ ಸಮಯದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಬಾಕಿ ಸೂಕ್ಷ್ಮದಲ್ಲಂತೂ ಯಾವುದೇ ವೈಕುಂಠವಿಲ್ಲ. ಅಲ್ಲಿ ಸೂಕ್ಷ್ಮ ಲಕ್ಷ್ಮೀ-ನಾರಾಯಣರಿಲ್ಲ. ಅವರ ಚಿತ್ರಗಳು ಇಲ್ಲಿಯೇ ಇವೆ ಅಂದಮೇಲೆ ಅವಶ್ಯವಾಗಿ ಇಲ್ಲಿಯೇ ರಾಜ್ಯಭಾರ ಮಾಡಿ ಹೋಗಿದ್ದಾರೆ. ಆಟವೆಲ್ಲವೂ ಈ ಸಾಕಾರ ಪ್ರಪಂಚದಲ್ಲಿಯೇ ನಡೆಯುತ್ತದೆ. ಇತಿಹಾಸ-ಭೂಗೋಳವೂ ಸಹ ಈ ಸಾಕಾರ ಪ್ರಪಂಚದ್ದಾಗಿದೆ. ಸೂಕ್ಷ್ಮವತನದ ಯಾವುದೇ ಇತಿಹಾಸ-ಭೂಗೋಳವಿಲ್ಲ ಆದರೆ ಎಲ್ಲಾ ಮಾತುಗಳನ್ನು ಬಿಟ್ಟು ನೀವು ಯಾರಾದರೂ ಹೊಸ ಜಿಜ್ಞಾಸುಗಳು ಬಂದರೆ ಅವರಿಗೆ ಮೊದಲು ತಂದೆಯ ಬಗ್ಗೆ ಕಲಿಸಬೇಕು ನಂತರ ಆಸ್ತಿಯನ್ನು ಕುರಿತು ತಿಳಿಸಿಕೊಡಬೇಕಾಗಿದೆ. ತಂದೆಯು ಪರಮಾತ್ಮನಾಗಿದ್ದಾರೆ ಅರ್ಥಾತ್ ಪರಮಪಿತನಾಗಿದ್ದಾರೆ. ಎಲ್ಲಿಯವರೆಗೆ ಇದನ್ನು ಪೂರ್ಣ ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಪರಮಪಿತನ ಪ್ರತಿ ಅಷ್ಟು ಪ್ರೀತಿಯು ಜಾಗೃತವಾಗುವುದಿಲ್ಲ, ಆ ಖುಷಿಯೂ ಬರುವುದಿಲ್ಲ ಏಕೆಂದರೆ ಯಾವಾಗ ತಂದೆಯನ್ನು ಅರಿತುಕೊಳ್ಳುವರೋ ಆಗ ಅವರ ಕರ್ತವ್ಯವನ್ನೂ ಸಹ ಅರಿತು ಖುಷಿಯಲ್ಲಿ ಬರುವರು ಅಂದಾಗ ಈ ಮೊಟ್ಟ ಮೊದಲ ಮಾತನ್ನು ತಿಳಿದುಕೊಳ್ಳುವುದರಲ್ಲಿಯೇ ಖುಷಿಯಿದೆ. ಪರಮಾತ್ಮನಂತೂ ಎವರ್ಹ್ಯಾಪಿ, ಆನಂದ ಸ್ವರೂಪನಾಗಿದ್ದಾರೆ. ನಾವು ಅವರ ಮಕ್ಕಳಾಗಿದ್ದೇವೆ ಅಂದಮೇಲೆ ಆ ಖುಷಿಯು ಏಕೆ ಬರಬಾರದು! ಏಕೆ ಆ ಉಮ್ಮಂಗ ಇರುವುದಿಲ್ಲ! ಐ ಆಮ್ ಸನ್ ಆಫ್ ಗಾಡ್, ಐ ಆಮ್ ಎವರ್ಹ್ಯಾಪಿ ಮಾ|| ಗಾಡ್ (ನಾನು ಪರಮಾತ್ಮನ ಸಂತಾನ, ನಾನು ಮಾ|| ಆನಂದಸಾಗರನಾಗಿದ್ದೇನೆ) ಈ ಖುಷಿಯು ಬರುವುದಿಲ್ಲವೆಂದರೆ ತನ್ನನ್ನು ಪರಮಾತ್ಮನ ಸಂತಾನನೆಂದು ತಿಳಿದುಕೊಂಡಿಲ್ಲವೆಂಬುದು ಸಿದ್ಧವಾಗುತ್ತದೆ. ಗಾಡ್ ಈಜ್ ಎವರ್ಹ್ಯಾಪಿ ಬಟ್ ಐ ಆಮ್ ನಾಟ್ ಹ್ಯಾಪಿ [ಪರಮಾತ್ಮನು ಆನಂದಸಾಗರ ಆದರೆ ನಾನು ಮಾತ್ರ ಆನಂದವಾಗಿಲ್ಲ (ಖುಷಿಯಾಗಿಲ್ಲ)] ಏಕೆಂದರೆ ಆ ತಂದೆಯನ್ನು ಅರಿತುಕೊಂಡಿಲ್ಲ. ಮಾತಂತು ಸಹಜವಾಗಿದೆ.

ಕೆಲಕೆಲವರಿಗೆ ಈ ಜ್ಞಾನವನ್ನು ಕೇಳುವ ಬದಲು ಶಾಂತಿಯೇ ಇಷ್ಟವಾಗುತ್ತದೆ ಏಕೆಂದರೆ ಅನೇಕರು ಈ ಜ್ಞಾನವನ್ನು ತೆಗೆದುಕೊಳ್ಳುವುದಕ್ಕೂ ಸಾಧ್ಯವಿಲ್ಲ, ಅಷ್ಟು ಸಮಯವೆಲ್ಲಿದೆ? ಕೇವಲ ಪರಮಾತ್ಮನನ್ನು ಅರಿತುಕೊಂಡು ಶಾಂತಿಯಲ್ಲಿದ್ದರೂ ಸಹ ಅದೂ ಒಳ್ಳೆಯದೇ ಆಗಿದೆ. ಹೇಗೆ ಸನ್ಯಾಸಿಗಳೂ ಸಹ ಪರ್ವತಗಳ ಗುಹೆಗಳ ಹೋಗಿ ಪರಮಾತ್ಮನ ನೆನಪಿನಲ್ಲಿ ಕುಳಿತುಕೊಳ್ಳುತ್ತಾರೆ. ಹಾಗೆಯೇ ಪರಮಪಿತ ಪರಮಾತ್ಮನ ಆ ಪರಂಜ್ಯೋತಿಯ ನೆನಪಿನಲ್ಲಿರುವುದೂ ಸಹ ಒಳ್ಳೆಯದೇ ಆಗಿದೆ. ಅವರ ನೆನಪಿನಿಂದ ಸನ್ಯಾಸಿಗಳೂ ಸಹ ನಿರ್ವಿಕಾರಿಗಳಾಗುತ್ತಾರೆ ಆದರೆ ಮನೆಯಲ್ಲಿ ಕುಳಿತೇ ಅವರು ನೆನಪು ಮಾಡಲು ಸಾಧ್ಯವಿಲ್ಲ. ಅಲ್ಲಂತೂ ಮಕ್ಕಳು-ಮರಿಗಳಲ್ಲಿ ಮೋಹವು ಹೋಗುತ್ತಿರುತ್ತದೆ ಆದ್ದರಿಂದ ಸನ್ಯಾಸ ಮಾಡುತ್ತಾರೆ. ಪವಿತ್ರರಾಗಿ ಬಿಡುತ್ತಾರೆ ಅಂದಾಗ ಅದರಲ್ಲಿಯೂ ಸುಖವಿದೆಯಲ್ಲವೆ. ಸನ್ಯಾಸಿಗಳು ಎಲ್ಲರಿಗಿಂತ ಒಳ್ಳೆಯವರಾಗಿದ್ದಾರೆ. ಆದಿ ದೇವನೂ ಸನ್ಯಾಸಿಯಾದರಲ್ಲವೆ. ಇಲ್ಲಿ ಮುಂದೆ ಆದಿ ದೇವನ ಮಂದಿರವು ನಿಂತಿದೆ. ಅಲ್ಲಿ ತಪಸ್ಸು ಮಾಡುತ್ತಿದ್ದಾರೆ. ದೇಹದ ಎಲ್ಲಾ ಧರ್ಮಗಳ ಸನ್ಯಾಸ ಮಾಡಿ ಎಂದು ಗೀತೆಯಲ್ಲಿಯೂ ಹೇಳುತ್ತಾರೆ. ಅವರು ಸನ್ಯಾಸ ಮಾಡಿ ಹೋಗುತ್ತಾರೆಂದರೆ ಮಹಾತ್ಮರಾಗಿ ಬಿಡುತ್ತಾರೆ. ಗೃಹಸ್ಥಿಗಳಿಗೆ ಮಹಾತ್ಮರೆಂದು ಹೇಳುವುದು ನಿಯಮಕ್ಕೆ ವಿರುದ್ಧವಾಗಿದೆ. ನಿಮಗಂತೂ ಪರಮಾತ್ಮನೇ ಬಂದು ಸನ್ಯಾಸ ಮಾಡಿಸಿದ್ದಾರೆ. ಸನ್ಯಾಸ ಮಾಡುವುದೇ ಸುಖಕ್ಕಾಗಿ. ಮಹಾತ್ಮರೆಂದೂ ದುಃಖಿಯಾಗುವುದಿಲ್ಲ. ರಾಜರೂ ಸಹ ಸನ್ಯಾಸ ಮಾಡುತ್ತಾರೆಂದರೆ ಕಿರೀಟ ಇತ್ಯಾದಿಗಳೆಲ್ಲವನ್ನೂ ತೆಗೆದು ಎಸೆಯುತ್ತಾರೆ. ಹೇಗೆ ಗೋಪಿ ಚಂದರು ಸನ್ಯಾಸ ಮಾಡಿದರು ಅಂದಮೇಲೆ ಅವಶ್ಯವಾಗಿ ಇದರಲ್ಲಿ ಸುಖವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾವುದೇ ಉಲ್ಟಾ ಕರ್ಮವನ್ನು ಬಚ್ಚಿಟ್ಟುಕೊಂಡು ಮಾಡಬಾರದು. ಬಾಪ್ದಾದಾರವರಿಂದ ಯಾವುದೇ ಮಾತನ್ನು ಮುಚ್ಚಿಡಬಾರದು. ಬಹಳ-ಬಹಳ ಎಚ್ಚರವಾಗಿರಬೇಕಾಗಿದೆ.

2. ವಿದ್ಯಾರ್ಥಿಯು ಶಿಕ್ಷಕರನ್ನು ಪ್ರತ್ಯಕ್ಷ ಮಾಡುವರು, ಏನನ್ನು ಓದಿದ್ದೀರೋ ಅದನ್ನು ಅನ್ಯರಿಗೂ ಓದಿಸಬೇಕಾಗಿದೆ. ನಾವು ಆನಂದ ಸಾಗರ ತಂದೆಯ ಮಕ್ಕಳಾಗಿದ್ದೇವೆ - ಈ ಸ್ಮೃತಿಯಿಂದ ಅಪಾರ ಖುಷಿಯಲ್ಲಿರಬೇಕು.

ವರದಾನ:
ಎಲ್ಲಾ ಆತ್ಮರನ್ನೂ ಮೇಲೆತ್ತಬೇಕು ಎನ್ನುವ ಭಾವನೆಯಿಂದ ಗೌರವ ಕೊಡುವಂತಹ ಶುಭಚಿಂತಕ ಭವ.

ಎಲ್ಲಾ ಆತ್ಮರ ಪ್ರತಿ ಶ್ರೇಷ್ಠ ಭಾವನೆ ಅರ್ಥಾತ್ ಮೇಲೆ ಎತ್ತುವ ಅಥವಾ ಮುಂದುವರೆಸುವ ಭಾವನೆ ಇಡುವುದು ಅರ್ಥಾತ್ ಶುಭಚಿಂತಕರಾಗುವುದು. ತಮ್ಮ ಶುಭ ವೃತ್ತಿಯಿಂದ, ಶುಭ ಚಿಂತಕ ಸ್ಥಿತಿಯಿಂದ ಅನ್ಯರ ಅವಗುಣಗಳನ್ನೂ ಸಹ ಪರಿವರ್ತನೆ ಮಾಡಬೇಕು, ಯಾರದೇ ಬಲಹೀನತೆ ಅಥವಾ ಅವಗುಣವನ್ನೂ ಸಹ ತನ್ನ ಬಲಹೀನತೆ ಎಂದು ತಿಳಿದು ವರ್ಣನೆ ಮಾಡುವ ಬದಲು ಅಥವಾ ಹರಡುವ ಬದಲು ಅಳವಡಿಸಿಕೊಳ್ಳಬೇಕು ಮತ್ತು ಪರಿವರ್ತನೆ ಮಾಡಬೇಕು ಇದಾಗಿದೆ ಗೌರವ ಕೊಡುವುದು. ದೊಡ್ಡ ಮಾತನ್ನು ಚಿಕ್ಕದನ್ನಾಗಿ ಮಾಡುವುದು, ಭರವಸಾಹೀನರನ್ನು ಶಕ್ತಿಶಾಲಿಗಳನ್ನಾಗಿ ಮಾಡುವುದು, ಅವರ ಸಂಗದ ರಂಗಿನಲ್ಲಿ ಬರಬಾರದು, ಸದಾ ಅವರನ್ನೂ ಸಹ ಉಲ್ಲಾಸ ಉತ್ಸಾಹದಲ್ಲಿ ತರುವುದು-ಇದಾಗಿದೆ ಗೌರವ ಕೊಡುವುದು. ಈ ರೀತಿಯಲ್ಲಿ ಗೌರವ ಕೊಡುವವರೇ ಶುಭಚಿಂತಕರಾಗಿದ್ದಾರೆ.

ಸ್ಲೋಗನ್:
ತ್ಯಾಗದ ಭಾಗ್ಯ ಸಮಾಪ್ತಿ ಮಾಡುವುದು ಹಳೆಯ ಸ್ವಭಾವ-ಸಂಸ್ಕಾರವಾಗಿದೆ, ಆದ್ದರಿಂದ ಇದನ್ನೂ ಸಹ ತ್ಯಾಗ ಮಾಡಿ.