18/04/21 ಪ್ರಾತಃಮುರುಳಿ ಓಂಶಾಂತಿ "ಅವ್ಯಕ್ತ-ಬಾಪ್ದಾದಾ" ರಿವೈಜ್: 14/12/87


ಸಂಗಮಯುಗೀ ಬ್ರಾಹ್ಮಣ ಜೀವನದ ಮೂರು ವಿಶೇಷತೆಗಳು

ಇಂದು ಬಾಪ್ದಾದಾರವರು ತನ್ನ ಸರ್ವ ಮಕ್ಕಳು, ಸದಾ ಜೊತೆಯಿರುವಂತಹ, ಸದಾ ಸಹಯೋಗಿಗಳಾಗಿ ಸೇವೆಯ ಜೊತೆಗಾರರಾಗಿ ಸೇವೆ ಮಾಡುವಂತಹ ಮತ್ತು ಜೊತೆ ನಡೆಯುವಂತಹ ಶ್ರೇಷ್ಠ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಜೊತೆಯಿರುವವರು ಎಂದರೆ ಸಹಜ ಸ್ವಾಭಾವಿಕ ಯೋಗಿ ಆತ್ಮಗಳು. ಸದಾ ಸೇವೆಯಲ್ಲಿ ಸಹಯೋಗಿ ಜೊತೆಗಾರರಾಗಿ ನಡೆಯುವವರು ಎಂದರೆ ಜ್ಞಾನಿ ಆತ್ಮಗಳು, ಸತ್ಯ ಸೇವಾಧಾರಿಗಳು. ಜೊತೆ ನಡೆಯುವವರು ಎಂದರೆ ಸಮಾನ ಮತ್ತು ಸಂಪನ್ನ, ಕರ್ಮಾತೀತ ಆತ್ಮಗಳು. ಬಾಪ್ದಾದಾ ಎಲ್ಲಾ ಮಕ್ಕಳಲ್ಲಿ ಈ ಮೂರು ವಿಶೇಷತೆಗಳನ್ನು ನೋಡುತ್ತಿದ್ದಾರೆ - ಮೂರು ಮಾತುಗಳಲ್ಲಿ ಎಲ್ಲಿಯವರೆಗೆ ಸಂಪೂರ್ಣರಾಗಿದ್ದಾರೆ? ಸಂಗಮಯುಗದ ಶ್ರೇಷ್ಠ ಬ್ರಾಹ್ಮಣ ಜೀವನದ ಈ ಮೂರೂ ವಿಶೇಷತೆಗಳು ಅವಶ್ಯಕವಾಗಿವೆ. ಯೋಗಿ ಆತ್ಮ, ಜ್ಞಾನಿ ಆತ್ಮ ಮತ್ತು ತಂದೆಯ ಸಮಾನ ಕರ್ಮಾತೀತ ಆತ್ಮ - ಈ ಮೂರರಲ್ಲಿ ಒಂದುವೇಳೆ ಒಂದು ವಿಶೇಷತೆಯು ಕಡಿಮೆಯಿದ್ದರೂ ಸಹ ಬ್ರಾಹ್ಮಣ ಜೀವನದ ವಿಶೇಷತೆಗಳ ಅನುಭವಿಗಳಾಗದೇ ಇರುವುದು ಅರ್ಥಾತ್ ಸಂಪೂರ್ಣ ಬ್ರಾಹ್ಮಣ ಜೀವನದ ಸುಖ ಹಾಗೂ ಪ್ರಾಪ್ತಿಗಳಿಂದ ವಂಚಿತರಾಗಿರುವುದಾಗಿದೆ ಏಕೆಂದರೆ ಬಾಪ್ದಾದಾ ಮಕ್ಕಳಿಗೆ ಸಂಪೂರ್ಣ ಜ್ಞಾನವನ್ನು ಕೊಡುತ್ತಾರೆ. ಯಥಾಶಕ್ತಿ ಯೋಗಿ ಭವ, ಯಥಾ ಶಕ್ತಿ ಜ್ಞಾನಿ ಆತ್ಮಾ ಭವ ಎಂಬ ವರದಾನವನ್ನು ಕೊಡುವುದಿಲ್ಲ. ಸಂಪೂರ್ಣ ವರದಾನವನ್ನು ಕೊಡುತ್ತಾರೆ ಜೊತೆ ಜೊತೆಗೆ ಸಂಗಮಯುಗ, ಇದು ಇಡೀ ಕಲ್ಪದಲ್ಲಿಯೇ ವಿಶೇಷ ಯುಗವಾಗಿದೆ. ಈ ಯುಗ ಅರ್ಥಾತ್ ಈ ಸಮಯಕ್ಕೂ ವರದಾನೀ ಸಮಯವೆಂದು ಹೇಳಲಾಗುತ್ತದೆ ಏಕೆಂದರೆ ಈ ಸಮಯದಲ್ಲಿಯೇ ವರದಾತಾ ತಂದೆಯು ವರದಾನವನ್ನು ಹಂಚುವುದಕ್ಕಾಗಿ ಬರುತ್ತಾರೆ. ವರದಾತನು ಬರುವ ಕಾರಣ ಸಮಯವೂ ವರದಾನಿಯಾಗಿದೆ, ಈ ಸಮಯಕ್ಕೆ ವರದಾನವಿದೆ - ಸರ್ವ ಪ್ರಾಪ್ತಿಗಳಲ್ಲಿಯೂ ಸಂಪೂರ್ಣ ಪ್ರಾಪ್ತಿಗಳ ಸಮಯವೂ ಇದೇ ಆಗಿದೆ. ಸಂಪೂರ್ಣ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕೂ ಇದೇ ವರದಾನೀ ಸಮಯವಾಗಿದೆ. ಇಡೀ ಕಲ್ಪದಲ್ಲಿ ಕರ್ಮದನುಸಾರ ಪ್ರಾಲಬ್ಧವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ ಮತ್ತು ಎಂತಹ ಕರ್ಮವೋ ಅಂತಹ ಫಲವು ಸ್ವತಹವಾಗಿ ಪ್ರಾಪ್ತಿಯಾಗುತ್ತಾ ಇರುತ್ತದೆ. ಆದರೆ ಈ ವರದಾನಿ ಸಮಯದಲ್ಲಿ ತಮ್ಮ ಒಂದು ಹೆಜ್ಜೆಯ ಕರ್ಮಕ್ಕೆ ಪದುಮದಷ್ಟು ತಂದೆಯ ಮೂಲಕ ಸಹಯೋಗದ ರೂಪದಲ್ಲಿ ಸಹಜವಾಗಿ ಪ್ರಾಪ್ತಿಯಾಗುತ್ತದೆ. ಸತ್ಯಯುಗದಲ್ಲಿಯೂ ಸಹ ಒಂದಕ್ಕೆ ಪದುಮದಷ್ಟು ಪ್ರಾಪ್ತಿಯಾಗುವುದಿಲ್ಲ ಆದರೆ ಈಗ ಪ್ರಾಪ್ತಿಯಾಗಿರುವುದನ್ನು ಪ್ರಾಲಬ್ಧದ ರೂಪದಲ್ಲಿ ಭೋಗಿಸಲು ಅಧಿಕಾರಿಗಳಾಗುತ್ತೀರಿ. ಕೇವಲ ಜಮಾ ಮಾಡಿಕೊಂಡಿರುವುದನ್ನು ತಿನ್ನುತ್ತಾ ಕೆಳಗಿಳಿಯುತ್ತೀರಿ. ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಒಂದು ಯುಗವು ಕಳೆದರೆ 16 ಕಲೆಗಳಿಂದ 14 ಕಲೆಗಳಾಗಿ ಬಿಡುತ್ತವೆಯಲ್ಲವೆ ಆದರೆ ಸಂಪೂರ್ಣ ಪ್ರಾಪ್ತಿ ಯಾವ ಸಮಯದಲ್ಲಿ ಮಾಡಿಕೊಂಡಿರುವ ಕಾರಣ 16 ಕಲಾ ಸಂಪೂರ್ಣರಾದರು? ಆ ಪ್ರಾಪ್ತಿಯ ಸಮಯವು ಇದೇ ಸಂಗಮಯುಗವಾಗಿದೆ. ಈ ಸಮಯದಲ್ಲಿ ತಂದೆಯು ತೆರೆದ ಹೃದಯದಿಂದ ಸರ್ವ ಪ್ರಾಪ್ತಿಗಳ ಭಂಡಾರವನ್ನು ವರದಾನದ ರೂಪದಲ್ಲಿ, ಆಸ್ತಿಯ ರೂಪದಲ್ಲಿ ಮತ್ತು ವಿದ್ಯೆಯ ಫಲ ಸ್ವರೂಪ ಪ್ರಾಪ್ತಿಯ ರೂಪದಲ್ಲಿ ಮೂರೂ ಸಂಬಂಧಗಳಿಂದ, ಮೂರೂ ರೂಪಗಳಲ್ಲಿ ವಿಶೇಷವಾಗಿ ತೆರೆದ ಭಂಡಾರ, ಸಂಪನ್ನ ಭಂಡಾರವನ್ನು ಮಕ್ಕಳ ಮುಂದಿಡುತ್ತಾರೆ. ಇಷ್ಟು ಮಾಡಿದರೆ ಇಷ್ಟೇ ಎಂಬ ಲೆಕ್ಕವನ್ನಿಡುವುದಿಲ್ಲ. ಒಂದಕ್ಕೆ ಪದುಮದಷ್ಟು ಕೊಡುತ್ತಾರೆ, ಕೇವಲ ತಮ್ಮ ಪುರುಷಾರ್ಥ ಮಾಡಿದಿರಿ ಮತ್ತು ಪ್ರಾಲಬ್ಧವನ್ನು ಪಡೆದಿರಿ ಎಂದು ಹೇಳುವುದಿಲ್ಲ ಆದರೆ ದಯಾಸಾಗರನಾಗಿ ದಾತನಾಗಿ, ವಿದಾತನಾಗಿ, ಸರ್ವ ಸಂಬಂಧಿಯಾಗಿ ಸ್ವಯಂ ಪ್ರತೀ ಕ್ಷಣ ಮಕ್ಕಳಿಗೆ ಸಹಯೋಗಿಯಾಗುತ್ತಾರೆ. ಒಂದು ಸೆಕೆಂಡಿನ ಸಾಹಸ ಮತ್ತು ಅನೇಕ ವರ್ಷಗಳಿಗೆ ಸಮಾನ ಪರಿಶ್ರಮದ ಸಹಯೋಗದ ರೂಪದಲ್ಲಿ ಸದಾ ಸಹಯೋಗಿಯಾಗುತ್ತಾರೆ ಏಕೆಂದರೆ ತಂದೆಗೆ ಗೊತ್ತಿದೆ, ನೀವು ಅನೇಕ ಜನ್ಮಗಳಿಂದ ಅಲೆದಾಡಿರುವ ನಿರ್ಬಲ ಆತ್ಮಗಳಾಗಿದ್ದೀರಿ, ದಣಿದಿದ್ದೀರಿ ಆದ್ದರಿಂದ ಇಷ್ಟು ಸಹಯೋಗಿಯಾಗುತ್ತಾರೆ, ಸಹಯೋಗ ನೀಡುತ್ತಾರೆ. ಸರ್ವ ಪ್ರಕಾರದ ಹೊರೆಯನ್ನು ತಂದೆಗೆ ಕೊಟ್ಟು ಬಿಡಿ ಎಂದು ತಾವೇ ಬಂದು ಅವಕಾಶ ನೀಡುತ್ತಾರೆ. ಮಕ್ಕಳ ಹೊರೆಯನ್ನು ತಾನು ಹೊತ್ತುಕೊಳ್ಳುತ್ತೇನೆಂದು ಹೇಳುತ್ತಾರೆ. ಭಾಗ್ಯವಿದಾತನಾಗಿ ಜ್ಞಾನಪೂರ್ಣರನ್ನಾಗಿ ಶ್ರೇಷ್ಠ ಕರ್ಮಗಳ ಜ್ಞಾನವನ್ನು ಸ್ಪಷ್ಟವಾಗಿ ತಿಳಿಸಿ, ಭಾಗ್ಯದ ರೇಖೆಯನ್ನು ಎಳೆದುಕೊಳ್ಳುವ ಲೇಖನಿಯನ್ನು ತಮ್ಮ ಕೈಯಲ್ಲಿ ಕೊಡುತ್ತಾರೆ. ಭಾಗ್ಯದ ರೇಖೆಯನ್ನು ಎಷ್ಟು ಉದ್ದವಾಗಿ ಎಳೆದುಕೊಳ್ಳಬೇಕು, ಅಷ್ಟೂ ಎಳೆದುಕೊಳ್ಳಿ. ಸರ್ವ ತೆರೆದ ಖಜಾನೆಗಳ ಬೀಗದ ಕೈಯನ್ನು ತಮ್ಮ ಕೈಯಲ್ಲಿ ಕೊಟ್ಟಿದ್ದಾರೆ ಮತ್ತು ಈ ಬೀಗದಕೈ ಎಷ್ಟು ಸಹಜವಾಗಿದೆ. ಒಂದುವೇಳೆ ಮಾಯೆಯ ಬಿರುಗಾಳಿಗಳು ಬಂದರೂ ಸಹ ಛತ್ರಛಾಯೆಯಾಗಿ ಸದಾ ಮಕ್ಕಳನ್ನು ಸುರಕ್ಷಿತವಾಗಿಡುತ್ತಾರೆ. ಎಲ್ಲಿ ಛತ್ರಛಾಯೆಯಿದೆಯೋ ಅಲ್ಲಿ ಬಿರುಗಾಳಿಯೇನು ಮಾಡುವುದು! ಸೇವಾಧಾರಿಗಳನ್ನಾಗಿ ಮಾಡುತ್ತಾರೆ ಆದರೆ ಜೊತೆ-ಜೊತೆಗೆ ಬುದ್ಧಿವಂತರಿಗೂ ಬುದ್ಧಿವಂತನಾಗಿ ಆತ್ಮಗಳಿಗೆ ಪ್ರೇರಣೆ ಕೊಡಿಸುತ್ತಾರೆ. ಇದರಿಂದ ಹೆಸರು ಮಕ್ಕಳದು, ಕೆಲಸ ತಂದೆಯದು ಸಹಜವಾಗಿ ಆಗಿ ಬಿಡುತ್ತದೆ. ಇಷ್ಟು ಪ್ರೀತಿ ಮತ್ತು ಮುದ್ದಾಗಿ ಪಾಲನೆ ಮಾಡುತ್ತಾರೆ, ಯಾರು ಸದಾ ಅನೇಕ ಉಯ್ಯಾಲೆಗಳಲ್ಲಿ ಮಕ್ಕಳನ್ನು ತೂಗುತ್ತಿರುತ್ತಾರೆ! ಕಾಲನ್ನು ಕೆಳಗಿಡುವುದಕ್ಕೇ ಬಿಡುವುದಿಲ್ಲ. ಕೆಲವೊಮ್ಮೆ ಖುಷಿಯ ಉಯ್ಯಾಲೆ, ಕೆಲವೊಮ್ಮೆ ಸುಖದ ಉಯ್ಯಾಲೆ, ಇನ್ನೂ ಕೆಲವೊಮ್ಮೆ ತಂದೆಯ ಮಡಿಲಿನ ಉಯ್ಯಾಲೆಯಲ್ಲಿ, ಆನಂದ-ಪ್ರೇಮ-ಶಾಂತಿಯ ಉಯ್ಯಾಲೆಯಲ್ಲಿ ತೂಗುತ್ತಾ ಇರಿ. ತೂಗುವುದು ಅರ್ಥಾತ್ ಮೋಜನ್ನಾಚರಿಸುವುದು. ಈ ಸರ್ವ ಪ್ರಾಪ್ತಿಗಳು ಈ ವರದಾನೀ ಸಮಯದ ವಿಶೇಷತೆಯಾಗಿದೆ. ಈ ಸಂಗಮಯುಗದ ಸಮಯ ವರದಾತ-ವಿದಾತನಾಗಿರುವ ಕಾರಣ ತಂದೆ ಮತ್ತು ಸರ್ವ ಸಂಬಂಧವನ್ನೂ ನಿಭಾಯಿಸುವ ಕಾರಣ ತಂದೆಯು ದಯಾಹೃದಯಿಯಾಗಿದ್ದಾರೆ. ಒಂದಕ್ಕೆ ಪದುಮದಷ್ಟು ಕೊಡುವ ವಿಧಿಯು ಈ ಸಮಯಕ್ಕಿದೆ. ಅಂತಿಮದಲ್ಲಿ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಕೊಳ್ಳುವವರು ತಮ್ಮ ಜೊತೆಗಾರರಿಂದ ಕೆಲಸ ತೆಗೆದುಕೊಳ್ಳುತ್ತಾರೆ. ಜೊತೆಗಾರರು ಯಾರು? ತಿಳಿದುಕೊಂಡಿದ್ದೀರಲ್ಲವೆ? ನಂತರ ಈ ಒಂದಕ್ಕೆ ಪದುಮದಷ್ಟು ಲೆಕ್ಕವು ಸಮಾಪ್ತಿಯಾಗಿ ಬಿಡುವುದು. ಈ ತಂದೆಯು ದಯಾ ಸಾಗರನಾಗಿದ್ದಾರೆ ಆದರೆ ಕೊನೆಯಲ್ಲಿ ಲೆಕ್ಕಕ್ಕೆ ಲೆಕ್ಕವು ಆರಂಭವಾಗುವುದು. ಈ ಸಮಯದಲ್ಲಾದರೆ ತಂದೆಯು ಕ್ಷಮೆ ಮಾಡುತ್ತಾರೆ, ಕಠಿಣವಾದ ತಪ್ಪನ್ನು ಕ್ಷಮೆ ಮಾಡಿ, ಇನ್ನೂ ಸಹಯೋಗಿಯಾಗಿ, ಮುಂದೆ ಹಾರಿಸುತ್ತಾರೆ. ಕೇವಲ ಈಗ ಹೃದಯದಿಂದ ರಿಯಲೈಜ್ ಮಾಡುವ ಅರ್ಥಾತ್ ಕ್ಷಮೆ ಯಾಚಿಸಬೇಕು. ಹೇಗೆ ಪ್ರಪಂಚದವರು ಕ್ಷಮೆ ಕೇಳುತ್ತಾರೆ, ಇಲ್ಲಿ ಆ ರೀತಿಯಿಂದ ಕೇವಲ ತಪ್ಪಾಯಿತು ಎಂದು ಹೇಳುವುದಲ್ಲ. ಅದನ್ನು ರಿಯಲೈಜ್ ವಿಧಿಯೇ ಕ್ಷಮೆಯಾಗಿದೆ ಅಂದಾಗ ಹೃದಯದಿಂದ ಅನುಭೂತಿ ಮಾಡಬೇಕು. ಕೇವಲ ಹಾಗೆಯೇ ಕ್ಷಮಿಸಿ ಎಂದು ಹೇಳುವುದರಿಂದ ಇಲ್ಲವೆ ಸಮಯದಲ್ಲಿ ಕಾರ್ಯವನ್ನು ಗೆಲ್ಲುವ ಲಕ್ಷ್ಯದಿಂದ ಕ್ಷಮೆ ಯಾಚಿಸಿದರೆ ಈ ಕ್ಷಮೆಯು ಮಂಜೂರಾಗುವುದಿಲ್ಲ. ಕೆಲವು ಮಕ್ಕಳು ಚತುರರಾಗಿರುತ್ತಾರೆ, ವಾತಾವರಣವನ್ನು ನೋಡಿ - ಈಗಂತೂ ರಿಯಲೈಜ್ ಮಾಡಿಕೋ, ಕ್ಷಮೆಯಾಚು ಮುಂದೆ ನೋಡೋಣ ಎಂದು ಹೇಳುತ್ತಾರೆ. ತಂದೆಯೂ ಸಹ ಜ್ಞಾನಪೂರ್ಣನಾಗಿದ್ದಾರೆ. ತಂದೆಗೆ ಗೊತ್ತಿದೆ ಆದ್ದರಿಂದ ಮುಗುಳ್ನಗುತ್ತಾ ಬಿಟ್ಟು ಬಿಡುತ್ತಾರೆ ಆದರೆ ಈ ಕ್ಷಮೆಯನ್ನು ಮಂಜೂರು ಮಾಡುವುದಿಲ್ಲ. ವಿಧಿಯಿಲ್ಲದೆ ಸಿದ್ಧಿಯು ಸಿಗುವುದಿಲ್ಲ ಅಲ್ಲವೆ. ಒಂದು ಹೆಜ್ಜೆಯ ವಿಧಿಗೆ ಪದುಮದಷ್ಟು ಹೆಜ್ಜೆಗಳ ಸಿದ್ಧಿಯಾಗುವುದು ಆದರೆ ಆ ಒಂದು ಹೆಜ್ಜೆಯ ವಿಧಿಯಂತೂ ಯಥಾರ್ಥವಾಗಿರಬೇಕಲ್ಲವೆ ಅಂದಾಗ ಈ ಸಮಯದ ವಿಶೇಷತೆ ಎಷ್ಟೊಂದಿದೆ! ಹಾಗೂ ಸಮಯವು ಹೇಗೆ ವರದಾನಿಯಾಗಿದೆ ಎಂಬುದನ್ನು ತಿಳಿಸಿದೆವು.

ವರದಾನ:

ವರದಾನಿ ಸಮಯದಲ್ಲಿಯೇ ವರದಾನವನ್ನು ತೆಗೆದುಕೊಳ್ಳಲಿಲ್ಲವೆಂದರೆ ಮತ್ತ್ಯಾವ ಸಮಯದಲ್ಲಿ ತೆಗೆದುಕೊಳ್ಳುವಿರಿ? ಸಮಯವು ಸಮಾಪ್ತಿಯಾಯಿತೆಂದರೆ ಸಮಯ ಪ್ರಮಾಣ ಈ ಸಮಯದ ವಿಶೇಷತೆಯೆಲ್ಲವೂ ಸಮಾಪ್ತಿಯಾಗುತ್ತವೆ. ಆದ್ದರಿಂದ ಏನು ಮಾಡಬೇಕೋ, ಏನನ್ನು ತೆಗೆದುಕೊಳ್ಳಬೇಕೋ, ಯಾವುದನ್ನು ಮಾಡಿಕೊಳ್ಳಬೇಕೋ ಅದನ್ನು ಈಗ ವರದಾನದ ರೂಪದಲ್ಲಿ ತಂದೆಯ ಸಹಯೋಗದ ಸಮಯದಲ್ಲಿ ಮಾಡಿಬಿಡಿ. ಮತ್ತೆಂದೂ ಈ ಸುವರ್ಣಾವಕಾಶವು ಸಿಗಲು ಸಾಧ್ಯವಿಲ್ಲ. ಸಮಯದ ವಿಶೇಷತೆಗಳನ್ನಂತೂ ಕೇಳಿದಿರಿ. ಸಮಯದ ವಿಶೇಷತೆಯ ಆಧಾರದ ಮೇಲೆ ಬ್ರಾಹ್ಮಣ ಜೀವನದ ಯಾವ ಮೂರು ವಿಶೇಷತೆಗಳನ್ನು ತಿಳಿಸಿದೆವೋ ಆ ಮೂರರಲ್ಲಿ ಸಂಪೂರ್ಣರಾಗಿ. ತಾವೆಲ್ಲರ ವಿಶೇಷ ಘೋಷಣಾ ವಾಕ್ಯವೂ ಇದೇ ಆಗಿದೆ – "ಯೋಗಿಗಳಾಗಿ, ಪವಿತ್ರರಾಗಿ. ಜ್ಞಾನಿಗಳಾಗಿ ಕರ್ಮಾತೀತರಾಗಿ” ಯಾವಾಗ ಜೊತೆ ನಡೆಯಲೇಬೇಕಾಗಿದೆ ಅಂದಮೇಲೆ ಸದಾ ಜೊತೆಯಿರುವವರು ಜೊತೆಯಲ್ಲಿ ಹೋಗುವರು. ಯಾರು ಜೊತೆಯಿರುವುದಿಲ್ಲವೋ ಅವರು ಹೇಗೆ ಜೊತೆ ನಡೆಯುತ್ತಾರೆ! ಸಮಯದಲ್ಲಿ ಜೊತೆ ಹೋಗುವುದರಲ್ಲಿ ತಯಾರಾಗಿರುವುದೇ ಇಲ್ಲ ಏಕೆಂದರೆ ತಂದೆಯ ಸಮಾನರಾಗುವುದು ಅರ್ಥಾತ್ ತಯಾರಾಗುದಾಗಿದೆ. ಸಮಾನತೆಯೇ ಕೈ ಮತ್ತು ಜೊತೆಯಾಗಿದೆ. ಇಲ್ಲದಿದ್ದರೆ ಏನಾಗುವುದು? ಮುಂದಿರುವುದನ್ನು ನೋಡುತ್ತಾ ಹಿಂದೆ-ಹಿಂದೆ ಬರುತ್ತಿದ್ದರೆ ಜೊತೆಗಾರರಾಗಲಿಲ್ಲ. ಜೊತೆಗಾರರಂತೂ ಜೊತೆ ನಡೆಯುವರು. ಬಹಳ ಕಾಲದಿಂದ ಜೊತೆಯಿರುವುದು, ಜೊತೆಗಾರರಾಗಿ ಸಹಯೋಗಿಗಳಾಗುವುದು - ಈ ಬಹಳ ಕಾಲದ ಸಂಸ್ಕಾರವೇ ಜೊತೆಗಾರರನ್ನಾಗಿ ಮಾಡಿ ಜೊತೆ ಕರೆದುಕೊಂಡು ಹೋಗುವುದು. ಈಗಲೂ ಸಹ ಜೊತೆಯಿರುವುದಿಲ್ಲವೆಂದರೆ ಇದರಿಂದ ಅವರು ದೂರವಿರುತ್ತಾರೆ ಎಂದು ಸಿದ್ಧವಾಗುತ್ತದೆ. ಅಂದಾಗ ದೂರವಿರುವ ಸಂಸ್ಕಾರವು ಜೊತೆ ನಡೆಯುವ ಸಮಯದಲ್ಲಿಯೂ ದೂರದ ಅನುಭವವನ್ನೇ ಮಾಡಿಸುತ್ತದೆ. ಆದ್ದರಿಂದ ಈಗಿನಿಂದಲೂ ಮೂರು ವಿಶೇಷತೆಗಳ ಪರಿಶೀಲನೆ ಮಾಡಿಕೊಳ್ಳಿ. ಸದಾ ಜೊತೆಯಿರಿ, ಸದಾ ತಂದೆಯ ಜೊತೆಗಾರರಾಗಿ ಸೇವೆ ಮಾಡಿ. ತಂದೆಯು ಮಾಡಿಸುವವರಾಗಿದ್ದಾರೆ, ನಿಮಿತ್ತನಾಗಿ ಮಾಡುವವನು ನಾನಾಗಿದ್ದೇನೆ ಇದರಿಂದ ಎಂದೂ ಸೇವೆಯು ಏರುಪೇರಿನಲ್ಲಿ ತರುವುದಿಲ್ಲ. ಎಲ್ಲಿ ಒಂಟಿಯಾಗುತ್ತೀರಿ ಮತ್ತು ನಾನು ಎಂಬುದರಲ್ಲಿ ಬಂದು ಬಿಡುತ್ತೀರೋ ಆಗ ಮಾಯಾ ಬೆಕ್ಕೂ ಸಹ ಮ್ಯಾವ್ ಮ್ಯಾವ್ (ನಾನು ಬರಲೆ) ಎನ್ನುತ್ತದೆ. ತಾವು "ಮೈ ಮೈ” (ನಾನು-ನಾನು) ಎನ್ನುತ್ತೀರಿ ಮತ್ತು ಮಾಯೆಯು ಮ್ಯಾವ್-ಮ್ಯಾವ್ (ನಾನು ಬರಲೆ) ಎನ್ನುತ್ತದೆ. ಮಾಯೆಗೆ ಬೆಕ್ಕು ಎಂದೇ ಹೇಳುತ್ತೀರಲ್ಲವೆ ಅಂದಾಗ ಜೊತೆಗಾರರಾಗಿದ್ದು ಸೇವೆ ಮಾಡಿ. ಕರ್ಮಾತೀತರಾಗುವ ಪರಿಭಾಷೆಯು ಬಹಳ ಗುಹ್ಯವಾಗಿದೆ, ಅದನ್ನು ಮತ್ತೆಂದಾದರೂ ತಿಳಿಸುತ್ತೇವೆ.

ಇಂದು ಕೇವಲ ಈ ಮೂರು ಮಾತುಗಳನ್ನು ಪರಿಶೀಲನೆ ಮಾಡಿಕೊಳ್ಳಿ ಮತ್ತು ಸಮಯದ ವಿಶೇಷತೆಗಳ ಲಾಭವನ್ನು ಎಲ್ಲಿಯವರೆಗೆ ಪ್ರಾಪ್ತಿ ಮಾಡಿಕೊಂಡಿದ್ದೀರಿ? ಏಕೆಂದರೆ ಸಮಯದ ಮಹತ್ವಿಕೆಯನ್ನು ಅರಿಯುವುದು ಎಂದರೆ ಮಹಾನರಾಗುವುದು, ಸ್ವಯಂನ್ನು ಅರಿತುಕೊಳ್ಳುವುದು. ತಂದೆಯನ್ನು ಅರಿತುಕೊಳ್ಳುವುದಕ್ಕೆ ಎಷ್ಟು ಮಹತ್ವಿಕೆಯಿದೆಯೋ ಹಾಗೆಯೇ ಸಮಯವನ್ನೂ ಅರಿತುಕೊಳ್ಳುವುದೂ ಸಹ ಅವಶ್ಯಕವಾಗಿದೆ ಅಂದಾಗ ಏನು ಮಾಡಬೇಕೆಂದು ತಿಳಿಯಿತೆ! ಬಾಪ್ದಾದಾರವರು ಕುಳಿತು ಫಲಿತಾಂಶವನ್ನು ತಿಳಿಸುವುದಕ್ಕೆ ಮೊದಲೇ, ತಮ್ಮ ಫಲಿತಾಂಶವನ್ನು ತಾವು ತೆಗೆಯಿರಿ ಏಕೆಂದರೆ ಬಾಪ್ದಾದಾರವರು ಫಲಿತಾಂಶವನ್ನು ಘೋಷಿಸಿದರೆ ಆ ಫಲಿತಾಂಶವನ್ನು ಕೇಳಿ ಈಗಂತೂ ಫಲಿತಾಂಶವು ಬಂದು ಬಿಟ್ಟಿತು, ಈಗ ಏನು ಮಾಡುವುದು? ನಾನು ಹೇಗಿದ್ದೇನೆಯೋ ಸರಿಯಾಗಿದ್ದೇನೆ ಎಂದು ತಿಳಿದುಕೊಳ್ಳುತ್ತೀರಿ. ಆದ್ದರಿಂದ ಪುನಃ ಬಾಪ್ದಾದಾ ಹೇಳುತ್ತಿದ್ದಾರೆ - ಇದನ್ನು ಪರಿಶೀಲನೆ ಮಾಡಿಕೊಳ್ಳಿ. ಈಗ ಪರೋಕ್ಷವಾಗಿ ಫಲಿತಾಂಶವನ್ನು ತಿಳಿಸುತ್ತಿದ್ದೇವೆ ಏಕೆಂದರೆ ಮೊದಲೇ ಹೇಳಲಾಗಿದೆ - ಫಲಿತಾಂಶವನ್ನು ತಿಳಿಸುತ್ತೇವೆ ಮತ್ತು ಸಮಯವನ್ನು ಕೊಡಲಾಗಿದೆ. ಕೆಲವೊಮ್ಮೆ ಆರು ತಿಂಗಳು, ಇನ್ನೂ ಕೆಲವೊಮ್ಮೆ ಒಂದು ವರ್ಷವನ್ನು ಕೊಟ್ಟಿದ್ದೇವೆ. ಕೆಲವರಂತೂ ಹೀಗೂ ಯೋಚಿಸುತ್ತಾರೆ - ಆರು ತಿಂಗಳಂತೂ ಮುಕ್ತಾಯವಾಯಿತು, ಏನನ್ನೂ ತಿಳಿಸಲಿಲ್ಲ. ಆದರೆ ತಿಳಿಸಿದೆವಲ್ಲವೆ - ಇನ್ನೂ ಸ್ವಲ್ಪ ಸಮಯ ದಯಾಹೃದಯಿಯ ಪಾತ್ರವಿದೆ, ವರದಾನದ ಸಮಯವಿದೆ. ಈಗಿನ್ನೂ ಚಿತ್ರ ಗುಪ್ತನು ಗುಪ್ತವಾಗಿದ್ದಾರೆ ನಂತರ ಕೊನೆಯಲ್ಲಿ ಪ್ರತ್ಯಕ್ಷವಾಗುವರು. ಆದ್ದರಿಂದ ತಂದೆಗೆ ದಯೆ ಬರುತ್ತದೆ ಮತ್ತು ಭಲೆ ಇನ್ನೊಂದು ವರ್ಷವನ್ನು ಕೊಡೋಣ, ಮಕ್ಕಳಲ್ಲವೆ ಎಂದು ತಿಳಿಯುತ್ತಾರೆ. ತಂದೆಯು ಬಯಸಿದರೆ ಏನು ತಾನೆ ಮಾಡಲು ಸಾಧ್ಯವಿಲ್ಲ? ಎಲ್ಲರ ಒಂದೊಂದು ಮಾತನ್ನು ಘೋಷಿಸಬಹುದು. ಕೆಲವರು ತಂದೆಯನ್ನು ಭೋಲಾನಾಥನೆಂದು ತಿಳಿಯುತ್ತಾರೆ ಆದುದರಿಂದ ಕೆಲವು ಮಕ್ಕಳು ತಂದೆಯನ್ನು ಇನ್ನೂ ಭೋಲಾ ಮಾಡುತ್ತಿರುತ್ತಾರೆ. ಭೋಲಾನಾಥನಂತೂ ಆಗಿದ್ದಾರೆ ಆದರೆ ಮಹಾಕಾಲನೂ ಆಗಿದ್ದಾರೆ. ಈಗ ಆ ರೂಪವನ್ನು ಮಕ್ಕಳ ಮುಂದೆ ತೋರಿಸುವುದಿಲ್ಲ ಏಕೆಂದರೆ ತೋರಿಸಿ ಬಿಟ್ಟರೆ ತಂದೆಯ ಮುಂದೆ ನಿಂತುಕೊಳ್ಳುವುದೂ ಇಲ್ಲ ಆದ್ದರಿಂದ ಎಲ್ಲವೂ ತಿಳಿದಿದ್ದರೂ ಸಹ ಭೋಲಾನಾಥನಾಗುತ್ತಾರೆ, ಏನೂ ಗೊತ್ತಿಲ್ಲದವರಾಗಿ ಬಿಡುತ್ತಾರೆ. ಆದರೆ ಏತಕ್ಕಾಗಿ? ಮಕ್ಕಳನ್ನು ಸಂಪೂರ್ಣರನ್ನಾಗಿ ಮಾಡುವುದಕ್ಕಾಗಿ. ತಿಳಿಯಿತೆ? ಬಾಪ್ದಾದಾರವರು ಇವೆಲ್ಲಾ ದೃಶ್ಯಗಳನ್ನು ನೋಡುತ್ತಾ ಮುಗುಳ್ನಗುತ್ತಿರುತ್ತೇವೆ. ಏನೇನು ಆಟವನ್ನು ಆಡುತ್ತೀರಿ? ಎಂಬುದೆಲ್ಲವನ್ನೂ ನೋಡುತ್ತೇವೆ ಆದ್ದರಿಂದ ಬ್ರಾಹ್ಮಣ ಜೀವನದ ವಿಶೇಷತೆಗಳನ್ನು ಸ್ವಯಂನಲ್ಲಿ ಪರಿಶೀಲನೆ ಮಾಡಿಕೊಳ್ಳಿ ಮತ್ತು ಸ್ವಯಂನ್ನು ಸಂಪನ್ನ ಮಾಡಿಕೊಳ್ಳಿ. ಒಳ್ಳೆಯದು.
ನಾಲ್ಕಾರೂ ಕಡೆಯ ಸರ್ವ ಯೋಗಿ ಆತ್ಮ, ಜ್ಞಾನಿ ಆತ್ಮ, ತಂದೆಯ ಸಮಾನ ಕರ್ಮಾತೀತ ಶ್ರೇಷ್ಠ ಆತ್ಮರಿಗೆ, ಸದಾ ಸ್ವಯಂನ ಸಮಯದ ಮಹತ್ವಿಕೆಯನ್ನರಿತು ಮಹಾನರಾಗುವಂತಹ ಮಹಾನ್ ಆತ್ಮಗಳಿಗೆ, ಸದಾ ತಂದೆಯ ಸರ್ವ ಸಂಬಂಧಗಳ, ಪ್ರಾಪ್ತಿಗಳ ಲಾಭವನ್ನು ಪಡೆಯುವಂತಹ ಬುದ್ಧಿವಂತ ವಿಶಾಲ ಬುದ್ಧಿ, ಸ್ವಚ್ಛ ಬುದ್ಧಿ, ಸದಾ ಪಾವನ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ ವಾರ್ತಾಲಾಪ:-
ಸದಾ ತಮ್ಮನ್ನು ಸರ್ವಶಕ್ತಿಗಳಿಂದ ಸಂಪನ್ನ ಮಾಸ್ಟರ್ ಸರ್ವಶಕ್ತಿವಂತ ಆತ್ಮರೆಂದು ಅನುಭವ ಮಾಡುತ್ತೀರಾ? ತಂದೆಯವರು ಸರ್ವಶಕ್ತಿಗಳ ಖಜಾನೆಯನ್ನು ಆಸ್ತಿಯಲ್ಲಿ ಕೊಟ್ಟಿದ್ದಾರೆ ಅಂದಮೇಲೆ ಸರ್ವಶಕ್ತಿಗಳೆಲ್ಲವೂ ತಮ್ಮ ಆಸ್ತಿ ಅಂದರೆ ಖಜಾನೆ ಆಯಿತು. ತಮ್ಮ ಖಜಾನೆಯು ಜೊತೆಯಲ್ಲಿರುತ್ತದೆ ಅಲ್ಲವೆ. ತಂದೆಯವರು ಕೊಟ್ಟಿರುವುದು ಮಕ್ಕಳದಾಯಿತು ಅಂದಮೇಲೆ ಯಾವ ವಸ್ತುವು ತಮ್ಮದಾಯಿತು ಅದು ಸ್ವತಹವಾಗಿಯೇ ನೆನಪಿರುತ್ತದೆ. ಅವರುಗಳ (ಮನುಷ್ಯರ ಬಳಿ) ಯಾವುದೆಲ್ಲಾ ವಸ್ತುಗಳಿರುತ್ತವೆ, ಅದು ವಿನಾಶಿ ಆಗಿರುತ್ತದೆ ಮತ್ತು ಈ ಆಸ್ತಿ ಅಥವಾ ಶಕ್ತಿಗಳು ಅವಿನಾಶಿಯಾದುದು. ಇಂದು ಆಸ್ತಿ ಸಿಕ್ಕಿತು, ನಾಳೆ ಸಮಾಪ್ತಿ ಆಗಿ ಬಿಟ್ಟಿತು – ಈ ರೀತಿ ಆಗಬಾರದು. ಇಂದು ಖಜಾನೆಗಳಿವೆ, ನಾಳೆಯೇನಾದರೂ ಸುಟ್ಟು ಹೋಯಿತು ಅಥವಾ ಯಾರಾದರೂ ಲೂಟಿ ಮಾಡಿ ಬಿಟ್ಟರು - ಇದು ಅಂತಹ ಖಜಾನೆಯಲ್ಲ, ಇದನ್ನೆಷ್ಟು ಖರ್ಚು ಮಾಡುವಿರೋ ಅಷ್ಟೂ ಹೆಚ್ಚಾಗುತ್ತದೆ. ಜ್ಞಾನದ ಖಜಾನೆಯನ್ನು ಎಷ್ಟು ಹಂಚುವಿರಿ ಅಷ್ಟೂ ವೃದ್ಧಿ ಆಗುತ್ತಾ ಇರುತ್ತದೆ. ಸರ್ವ ಸಾಧನಗಳೂ ಸಹ ಸ್ವತಹವಾಗಿಯೇ ಪ್ರಾಪ್ತಿಯಾಗುತ್ತಾ ಇರುತ್ತವೆ. ಅಂದಮೇಲೆ ಸದಾಕಾಲಕ್ಕಾಗಿ ಆಸ್ತಿಯ ಅಧಿಕಾರಿ ಆಗಿ ಬಿಟ್ಟಿದ್ದೀರಿ ಎಂಬ ಖುಷಿಯಿರುತ್ತದೆ ಅಲ್ಲವೆ. ಆಸ್ತಿಯೂ ಸಹ ಎಷ್ಟೊಂದು ಶ್ರೇಷ್ಠವಾದುದು! ಇದರಲ್ಲಿ ಯಾವುದೇ ಅಪ್ರಾಪ್ತಿಯಿಲ್ಲ, ಸರ್ವ ಪ್ರಾಪ್ತಿಗಳೂ ಇವೆ. ಒಳ್ಳೆಯದು!
ಅಮೃತವೇಳೆ ವಿದಾಯಿಯ ಸಮಯದಲ್ಲಿ ದಾದಿಯರೊಂದಿಗೆ ಹಾಗೂ ದಾದಿ ನಿರ್ಮಲ ಶಾಂತರವರೊಂದಿಗೆ ಬಾಪ್ದಾದಾರವರ ವಾರ್ತಾಲಾಪ:-
ಮಹಾರಥಿಗಳ ಪ್ರತೀ ಹೆಜ್ಜೆಯಲ್ಲಿ ಸೇವೆಯು ಅಡಗಿದೆ. ಭಲೆ ಮಾತನಾಡಲಿ ಅಥವಾ ಮಾತನಾಡದೇ ಇರಲಿ ಆದರೆ ಪ್ರತೀ ಕರ್ಮ, ಪ್ರತಿಯೊಂದು ಚಲನೆಯಲ್ಲಿ ಸೇವೆಯಿದೆ. ಒಂದು ಸೆಕೆಂಡಿಗೂ ಸೇವೆಯಿಲ್ಲದೆ ಇರಲು ಸಾಧ್ಯವಿಲ್ಲ. ಭಲೆ ಮನಸಾ ಸೇವೆಯಲ್ಲಿರಿ ಅಥವಾ ವಾಚಾ ಸೇವೆಯಲ್ಲಿ, ಅಥವಾ ಸಂಬಂಧ-ಸಂಪರ್ಕದಿಂದ ಸೇವೆಯಲ್ಲಿರಿ ಆದರೆ ನಿರಂತರ ಯೋಗಿಯೂ ಹೌದು ಮತ್ತು ನಿರಂತರ ಸೇವಾಧಾರಿಯೂ ಹೌದು. ಯಾರು ಮಧುಬನದಲ್ಲಿ ಖಜಾನೆಯನ್ನು ಜಮಾ ಮಾಡಿಕೊಂಡಿದ್ದೀರಿ, ಅವರೆಲ್ಲರಿಗೂ ಹಂಚುತ್ತಾ ಸೇವನೆ ಮಾಡಿಸುವುದಕ್ಕಾಗಿ ಹೋಗುತ್ತಿದ್ದಾರೆ. ಮಹಾರಥಿಗಳ ಸ್ಥಾನದಲ್ಲಿ ಇರುವುದೂ ಸಹ ಅನೇಕ ಆತ್ಮರ ಸ್ಥೂಲ ಆಶ್ರಯ ಆಗಿ ಬಿಡುತ್ತದೆ. ಹೇಗೆ ತಂದೆಯವರು ಛತ್ರಛಾಯೆ ಆಗಿದ್ದಾರೆ, ಹಾಗೆಯೇ ತಂದೆಯ ಸಮಾನ ಮಕ್ಕಳೂ ಸಹ ಛತ್ರಛಾಯೆ ಆಗಿ ಬಿಡುತ್ತಾರೆ. ಅವರನ್ನು ಎಲ್ಲರೂ ನೋಡಿ ಎಷ್ಟೊಂದು ಖುಷಿ ಆಗುತ್ತಾರೆ! ಅಂದಮೇಲೆ ಈ ವರದಾನವು ಎಲ್ಲಾ ಮಹಾರಥಿಗಳ ಕಣ್ಣುಗಳ ವರದಾನ, ಮಸ್ತಕದ ವರದಾನ ಎಷ್ಟೊಂದು ವರದಾನಗಳಿವೆ! ಪ್ರತೀ ಕರ್ಮವನ್ನು ಮಾಡಲು ನಿಮಿತ್ತವಾದ ಕರ್ಮೇಂದ್ರಿಯಗಳಿಗೂ ವರದಾನವಿದೆ. ನಯನಗಳಿಂದ ನೋಡುತ್ತೀರೆಂದರೆ ಏನು ತಿಳಿಯುತ್ತಾರೆ? ಎಲ್ಲರೂ ತಿಳಿಯುತ್ತಾರಲವೆ - ತಂದೆಯವರ ದೃಷ್ಟಿಯು ಈ ಆತ್ಮರುಗಳ ದೃಷ್ಟಿಯಿಂದ ಅನುಭವ ಆಗುತ್ತದೆ. ಹಾಗಾದರೆ ನಯನಗಳಿಗೆ ವರದಾನವಾಯಿತಲ್ಲವೆ. ಮುಖಕ್ಕೆ ವರದಾನವಿದೆ, ಈ ಚಹರೆಗೆ ವರದಾನವಿದೆ, ಹೆಜ್ಜೆ-ಹೆಜ್ಜೆಗೂ ವರದಾನವಿದೆ. ಎಷ್ಟೊಂದು ವರದಾನಗಳಿವೆ, ಅದನ್ನು ಲೆಕ್ಕ ಮಾಡುವಿರಾ! ಅನ್ಯರಿಗಂತು ವರದಾನವನ್ನು ಕೊಡುತ್ತೀರಿ ಆದರೆ ತಮಗಂತು ಮುಂಚಿತವಾಗಿಯೇ ವರದಾನವು ಸಿಕ್ಕಿತುತ್ತದೆ. ಯಾವುದೇ ಹೆಜ್ಜೆಯನ್ನಿಡುತ್ತೀರಿ, ಅದು ವರದಾನಗಳಿಂದ ಜೋಳಿಗೆಯು ತುಂಬಿರುತ್ತದೆ. ಹೇಗೆ ಲಕ್ಷ್ಮೀಯನ್ನು ತೋರಿಸುತ್ತಾರಲ್ಲವೆ- ಅವರ ಕೈಗಳಿಂದ ಎಲ್ಲರಿಗೂ ಹಣ ಸಿಗುತ್ತಲೇ ಇರುವುದು. ಸ್ವಲ್ಪ ಸಮಯಕ್ಕಾಗಿ ಅಲ್ಲ, ಸದಾ ಸಂಪತ್ತಿನ ದೇವಿಯಾಗಿ ಸಂಪತ್ತನ್ನು ಕೊಡುತ್ತಾ ಇರುತ್ತಾಳೆ. ಅಂದಮೇಲೆ ಇದು ಯಾರ ಚಿತ್ರವಾಗಿದೆ?
ಹಾಗಾದರೆ ಎಷ್ಟು ವರದಾನಗಳಿವೆ! ತಂದೆಯವರಂತು ಹೇಳುತ್ತಾರೆ - ಯಾವುದೇ ವರದಾನಗಳೂ ಉಳಿದುಕೊಂಡಿಲ್ಲ. ಅಂದಮೇಲೆ ಮತ್ತೇನು ಕೊಡುವುದು? ವರದಾನಗಳಿಂದಲೇ ಶೃಂಗಾರಿತರಾಗಿ ನಡೆಯುತ್ತಿದ್ದೀರಿ. ಹೇಗೆ ಹೇಳುತ್ತಾರಲ್ಲವೆ - ಕೈಯನ್ನು ಹೀಗೆ ತಿರುಗಿಸಿದರು ವರದಾನವು ಸಿಕ್ಕಿ ಬಿಟ್ಟಿತು. ಅಂದಮೇಲೆ ತಂದೆಯವರಂತು ‘ಸಮಾನ ಭವ’ದ ವರದಾನವನ್ನು ಕೊಟ್ಟರು, ಇದರಿಂದ ಎಲ್ಲಾ ವರದಾನಗಳು ಸಿಕ್ಕಿ ಬಿಟ್ಟವು. ಯಾವಾಗ ತಂದೆಯವರು ಅವ್ಯಕ್ತನಾದರು, ಆಗ ಎಲ್ಲರಿಗೂ ‘ಸಮಾನ ಭವ’ದ ವರದಾನವನ್ನು ಕೊಟ್ಟರಲ್ಲವೆ. ಕೇವಲ ಸನ್ಮುಖದಲ್ಲಿ ಇರುವವರಿಗಲ್ಲ, ಎಲ್ಲರಿಗೂ ಕೊಟ್ಟರು. ಎಲ್ಲಾ ಮಹಾವೀರರು ತಂದೆಯ ಸನ್ಮುಖದಲ್ಲಿ ಸೂಕ್ಷ್ಮ ರೂಪದಲ್ಲಿದ್ದರು ಮತ್ತು ವರದಾನವು ಸಿಕ್ಕಿತು. ಒಳ್ಳೆಯದು.
ತಮ್ಮ ಜೊತೆ ಸರ್ವರ ಆಶೀರ್ವಾದಗಳು ಮತ್ತು ಔಷಧಿಯಂತು ಇದ್ದೇ ಇದೆ. ಆದ್ದರಿಂದ ದೊಡ್ಡ ರೋಗವೂ ಸಹ ಚಿಕ್ಕದಾಗಿ ಬಿಡುತ್ತದೆ. ಕೇವಲ ರೂಪ ರೇಖೆಯು ತೋರಿಸುತ್ತದೆ ಆದರೆ ಅಧೀನರಾಗಲು ಸಾಧ್ಯವಿಲ್ಲ. ಇದು ಶೂಲದಿಂದ ಮುಳ್ಳಿನ ರೂಪವಾಗಿ ತೋರಿಸುತ್ತದೆ. ಉಳಿದಂತೆ ತಂದೆಯ ಕೈ (ಶ್ರೀಮತ) ಹಾಗೂ ಸಂಗವು ಸದಾಕಾಲವೂ ಇದ್ದೇ ಇರುತ್ತದೆ. ಪ್ರತೀ ಹೆಜ್ಜೆಯಲ್ಲಿ, ಪ್ರತೀ ಮಾತಿನಲ್ಲಿಯೂ ತಂದೆಯ ಆಶೀರ್ವಾದ-ಔಷಧಿಯು ಸಿಗುತ್ತಿರುತ್ತದೆ. ಆದ್ದರಿಂದ ನಿಶ್ಚಿಂತವಾಗಿರಿ. (ಯಾವಾಗ ಇದರಿಂದ ಮುಕ್ತರಾಗುವರು) ಇದೇರೀತಿ ಮುಕ್ತರಾಗಿ ಬಿಡುತ್ತೀರೆಂದರೆ ಸೂಕ್ಷ್ಮವತನದಲ್ಲಿ ತಲುಪಿಬಿಡಿ. ಇದರಿಂದ ಅನ್ಯರಿಗೂ ಶಕ್ತಿ ಸಿಗುವುದು. ಈ ರೋಗವೂ ಸಹ ತಾವುಗಳ ಸೇವೆಯನ್ನು ಮಾಡುತ್ತದೆ. ಅಂದಮೇಲೆ ರೋಗವು ರೋಗವಲ್ಲ, ಸೇವೆಯ ಸಾಧನವಾಗಿದೆ. ಇಲ್ಲದಿದ್ದರೆ ಅನ್ಯರೆಲ್ಲರೂ ತಿಳಿಯುತ್ತಾರೆ - ಇವರಿಗಂತು ಸಹಯೋಗವಿದೆ, ಇವರಿಗಂತು ಅನುಭವವಿದೆಯೇನು! ಆದರೆ ಅನುಭವಿಯನ್ನಾಗಿ ಮಾಡಿಕೊಳ್ಳುತ್ತಾ, ಅನ್ಯರಿಗೂ ಸಾಹಸವನ್ನು ಕೊಡಿಸುವ ಸೇವೆಗಾಗಿ ಸ್ವಲ್ಪ ರೂಪರೇಖೆಗಳನ್ನು ತೋರಿಸುತ್ತದೆ, ಇಲ್ಲದಿದ್ದರೆ ಎಲ್ಲರೂ ಬೇಸರವಾಗಿ ಬಿಡುತ್ತಾರೆ. ತಾವೆಲ್ಲರೂ ಉದಾಹರಣೆಯ ರೂಪದಿಂದ ಅಲ್ಪಸ್ವಲ್ಪ ರೂಪ ರೇಖೆಗಳನ್ನು ನೋಡುತ್ತೀರಿ, ಉಳಿದಂತೆ ಅದೆಲ್ಲವೂ ಸಮಾಪ್ತಿಯಾಗಿ ಬಿಟ್ಟಿದೆ, ಕೇವಲ ರೂಪ ರೇಖೆಗಳಷ್ಟೇ ಉಳಿದುಕೊಂಡಿದೆ. ಒಳ್ಳೆಯದು.
ವಿದೇಶಿ ಸಹೋದರ-ಸಹೋದರಿಯರೊಂದಿಗೆ:- ಹೃದಯದಿಂದ ಪ್ರತಿಯೊಂದು ಆತ್ಮನ ಬಗ್ಗೆ ಶುಭ ಭಾವನೆ ಇಡುವುದು - ಇದೇ ಹೃದಯದ ಧನ್ಯವಾದಗಳು ಆಗಿದೆ. ತಂದೆಯ ಪ್ರತಿಯೊಂದು ಮಕ್ಕಳಿಗೆ ಪ್ರತೀ ಹೆಜ್ಜೆಯಲ್ಲಿ ಹೃದಯದಿಂದ ಧನ್ಯವಾದಗಳು ಸಿಗುತ್ತಿರುತ್ತವೆ. ಸಂಗಮಯುಗದಲ್ಲಿ ಸರ್ವ ಆತ್ಮರುಗಳ ಬಗ್ಗೆ ಸದಾಕಾಲಕ್ಕಾಗಿ ಧನ್ಯವಾದಗಳನ್ನು ಕೊಡುವ ಸಮಯವೆಂದು ಹೇಳುತ್ತೇವೆ. ಸಂಗಮಯುಗವೇ ಧನ್ಯವಾದಗಳ ದಿನವಾಗಿದೆ. ಸದಾ ಒಬ್ಬರಿಗೊಬ್ಬರು ಶುಭ ಕಾಮನೆ, ಶುಭ ಭಾವನೆಯನ್ನು ಕೊಡುತ್ತಿರಿ ಮತ್ತು ತಂದೆಯವರೂ ಕೊಡುತ್ತಾರೆ. ಒಳ್ಳೆಯದು.
ವರದಾನ: ಖುಷಿಯ ಜೊತೆಗೆ ಶಕ್ತಿಯನ್ನು ಧಾರಣೆ ಮಾಡಿಕೊಂಡು ವಿಘ್ನಗಳನ್ನು ಪಾರು ಮಾಡುವಂತಹ ವಿಘ್ನಜೀತ ಭವ.
ಯಾವ ಮಕ್ಕಳು ಜಮಾ ಮಾಡುವುದನ್ನು ತಿಳಿದುಕೊಂಡಿದ್ದಾರೆಯೋ ಅವರು ಶಕ್ತಿಶಾಲಿ ಆಗುತ್ತಾರೆ. ಒಂದುವೇಳೆ ಈಗೀಗ ಸಂಪಾದಿಸಿದರು, ಈಗೀಗ ಹಂಚಿದರು, ಸ್ವಯಂನಲ್ಲಿ ಸಮಾವೇಶ ಮಾಡಿಕೊಳ್ಳಲಿಲ್ಲವೆಂದರೆ ಶಕ್ತಿಯಿರುವುದಿಲ್ಲ. ಕೇವಲ ಹಂಚುವ ಅಥವಾ ದಾನ ಮಾಡುವ ಖುಷಿಯಿರುತ್ತದೆ. ಖುಷಿಯ ಜೊತೆಗೆ ಶಕ್ತಿಯೂ ಇದ್ದರೆ, ಸಹಜವಾಗಿಯೇ ವಿಘ್ನಗಳನ್ನು ಪಾರುಮಾಡುತ್ತಾ ವಿಘ್ನಜೀತರು ಆಗಿ ಬಿಡುತ್ತೀರಿ. ಆನಂತರ ಯಾವುದೇ ವಿಘ್ನಗಳು ತಮ್ಮ ಲಗನ್ನ್ನು ತೊಂದರೆ ಮಾಡುವುದಿಲ್ಲ. ಆದ್ದರಿಂದ ಚಹರೆಯಿಂದ ಖುಷಿಯ ಹೊಳಪು ಕಾಣಿಸುತ್ತದೆ, ಇದೇರೀತಿ ಶಕ್ತಿ ಹಾಗೂ ಹೊಳಪೂ ಸಹ ಕಾಣಿಸಲಿ.

ಸ್ಲೋಗನ್:

ಸ್ಲೋಗನ್: ಪರಿಸ್ಥಿತಿಗಳಲ್ಲಿ ಗಾಬರಿಯಾಗುವುದಕ್ಕೆ ಬದಲಾಗಿ ಅದನ್ನು ಶಿಕ್ಷಕನೆಂದು ತಿಳಿದುಕೊಂಡು ಪಾಠವನ್ನು ಕಲಿಯಿರಿ.

 

ಸೂಚನೆ:-

ಇಂದು ತಿಂಗಳಿನ ಮೂರನೇ ರವಿವಾರ, ಅಂತರಾಷ್ಟ್ರೀಯ ಯೋಗದಿನ ಆಗಿದೆ, ಬಾಬಾರವರ ಎಲ್ಲಾ ಮಕ್ಕಳು ಸಂಜೆ 6.30ರಿಂದ 7.30ರವರೆಗೆ ವಿಶೇಷವಾಗಿ ಪರಮಧಾಮದ ಶ್ರೇಷ್ಠ ಸ್ಥಾನದಲ್ಲಿ ಸ್ಥಿತರಾಗಿ ಲೈಟ್, ಮೈಟ್ ಹೌಸ್ ಆಗಿರುತ್ತಾ, ಪ್ರಕೃತಿ ಸಹಿತವಾಗಿ ಇಡೀ ವಿಶ್ವಕ್ಕೆ ಸರ್ಚ್ಲೈಟ್ ಕೊಡುವ ಸೇವೆಯನ್ನು ಮಾಡಿರಿ.