21/04/21 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ - ನೀವೀಗ ಸತ್ಯ ತಂದೆಯ ಮೂಲಕ ಸತ್ಯ ಮಾತುಗಳನ್ನು ಕೇಳಿ ಪ್ರಕಾಶತೆಯಲ್ಲಿ ಬಂದಿದ್ದೀರಿ ಅಂದಾಗ ಅನ್ಯರನ್ನೂ ಅಂಧಕಾರದಿಂದ ಪ್ರಕಾಶತೆಯಲ್ಲಿ ಕರೆತರುವುದು ನಿಮ್ಮ ಕರ್ತವ್ಯವಾಗಿದೆ''

ಪ್ರಶ್ನೆ:

ಯಾವಾಗ ನೀವು ಮಕ್ಕಳು ಅನ್ಯರಿಗೆ ಜ್ಞಾನವನ್ನು ತಿಳಿಸುತ್ತೀರೆಂದರೆ ಅವಶ್ಯವಾಗಿ ಯಾವ ಮಾತನ್ನು ನೆನಪಿಟ್ಟುಕೊಳ್ಳಬೇಕು?

ಉತ್ತರ:

ಬಾಯಿಂದ ಪದೇ-ಪದೇ ಬಾಬಾ, ಬಾಬಾ ಎನ್ನುತ್ತಿರಿ, ಇದರಿಂದ ತನ್ನತನ ಸಮಾಪ್ತಿಯಾಗುವುದು, ಆಸ್ತಿಯೂ ನೆನಪಿನಲ್ಲಿರುವುದು. ಬಾಬಾ ಎನ್ನುವುದರಿಂದ ಸರ್ವವ್ಯಾಪಿಯ ಜ್ಞಾನವು ಮೊದಲೇ ಸಮಾಪ್ತಿಯಾಗುವುದು. ಒಂದುವೇಳೆ ಯಾರಾದರೂ ಭಗವಂತನು ಸರ್ವವ್ಯಾಪಿಯೆಂದರೆ ಹೇಳಿ, ತಂದೆಯು ಎಲ್ಲರಲ್ಲಿಯೂ ಇರಲು ಹೇಗೆ ಸಾಧ್ಯ!

ಗೀತೆ:

ಇಂದು ಮನುಷ್ಯರೆಲ್ಲರೂ ಘೋರ ಅಂಧಕಾರದಲ್ಲಿದ್ದಾರೆ..............

ಓಂ ಶಾಂತಿ. ಮಕ್ಕಳು ಏನು ಹೇಳಿದರು ಮತ್ತು ಯಾರನ್ನು ಕರೆದರು? ಹೇ ಜ್ಞಾನ ಸಾಗರ, ಜ್ಞಾನ ಸೂರ್ಯ ತಂದೆ........ ಭಗವಂತನೆಂದು ತಂದೆಗೆ ಹೇಳಲಾಗುತ್ತದೆ. ಭಗವಂತನು ತಂದೆಯಾದರೆ ನೀವೆಲ್ಲರೂ ಅವರ ಮಕ್ಕಳಾಗಿದ್ದೀರಿ. ನಾವೆಲ್ಲರೂ ಕತ್ತಲೆಯಲ್ಲಿ ಬಂದಿದ್ದೇವೆ, ನೀವು ನಮ್ಮನ್ನು ಬೆಳಕಿನಲ್ಲಿ ಕರೆದುಕೊಂಡು ಹೋಗಿ ಎಂದು ನೀವು ಮಕ್ಕಳು ಹೇಳುತ್ತೀರಿ. ಬಾಬಾ ಎಂದು ಹೇಳುವುದರಿಂದ ತಂದೆಯನ್ನೇ ಕರೆಯುತ್ತಿದ್ದಾರೆಂದು ಸಿದ್ಧವಾಗುತ್ತದೆ. ಬಾಬಾ ಅಕ್ಷರವನ್ನು ಹೇಳುವುದರಿಂದ ಪ್ರೀತಿಯುಂಟಾಗುತ್ತದೆ ಏಕೆಂದರೆ ತಂದೆಯಿಂದ ಆಸ್ತಿಯನ್ನು ಪಡೆದಿದ್ದೀರಿ. ಕೇವಲ ಈಶ್ವರ ಅಥವಾ ಪ್ರಭು ಎನ್ನುವುದರಿಂದ ತಂದೆಯ, ಆಸ್ತಿಯ ರುಚಿ ಬರುವುದಿಲ್ಲ. ಬಾಬಾ ಎನ್ನುವುದರಿಂದ ಆಸ್ತಿಯ ನೆನಪು ಬರುತ್ತದೆ. ನಾವು ಕತ್ತಲಿನಲ್ಲಿ ಬಂದಿದ್ದೇವೆಂದು ನೀವು ತಂದೆಯನ್ನು ಕರೆಯುತ್ತೀರಿ. ನೀವು ಮತ್ತೆ ಬಂದು ನಮ್ಮನ್ನು ಜ್ಞಾನದ ಮೂಲಕ ನಮ್ಮ ದೀಪಗಳನ್ನು ಬೆಳಗಿಸಿ ಏಕೆಂದರೆ ಆತ್ಮಗಳ ದೀಪವು ನಂದಿ ಹೋಗಿದೆ. ಮನುಷ್ಯರು ಶರೀರ ಬಿಡುತ್ತಾರೆಂದರೆ 12 ದಿನಗಳು ದೀಪವನ್ನಚಿಡುತ್ತಾರೆ. ದೀಪವು ನಂದಿ ಹೋಗದಿರಲೆಂದು ಒಬ್ಬರು ಎಣ್ಣೆಯನ್ನು ಹಾಕಲೆಂದು ಕುಳಿತಿರುತ್ತಾರೆ.

ತಂದೆಯು ತಿಳಿಸುತ್ತಾರೆ - ನೀವು ಭಾರತವಾಸಿಗಳು ಬೆಳಕಿನಲ್ಲಿ ಅರ್ಥಾತ್ ದಿನದಲ್ಲಿದ್ದಿರಿ, ಈಗ ರಾತ್ರಿಯಲ್ಲಿದ್ದೀರಿ. 12 ಗಂಟೆ ದಿನ, 12 ಗಂಟೆ ರಾತ್ರಿ - ಅದಾಗಿದೆ ಹದ್ದಿನ ಮಾತು, ಇದು ಬೇಹದ್ದಿನ ದಿನ, ಬೇಹದ್ದಿನ ರಾತ್ರಿ ಯಾವುದಕ್ಕೆ ಬ್ರಹ್ಮನ ದಿನ - ಸತ್ಯಯುಗ-ತ್ರೇತಾ, ಬ್ರಹ್ಮನ ರಾತ್ರಿ- ದ್ವಾಪರ-ಕಲಿಯುಗವಾಗಿದೆ. ರಾತ್ರಿಯಲ್ಲಿ ಬಹಳ ಕತ್ತಲಿರುತ್ತದೆ, ಮನುಷ್ಯರು ತಡವರಿಸಿ ಬೀಳುತ್ತಾರೆ. ಭಗವಂತನನ್ನು ಹುಡುಕಲು ನಾಲ್ಕೂ ಕಡೆಯೂ ತಿರುಗುತ್ತಾರೆ ಆದರೆ ಪರಮಾತ್ಮನನ್ನು ಪಡೆಯಲು ಸಾಧ್ಯವಿಲ್ಲ. ಪರಮಾತ್ಮನನ್ನು ಪಡೆಯಲು ಭಕ್ತಿಯನ್ನೂ ಮಾಡುತ್ತಾರೆ. ದ್ವಾಪರದಿಂದ ಭಕ್ತಿಯು ಆರಂಭವಾಗುತ್ತದೆ ಅರ್ಥಾತ್ ರಾವಣನ ರಾಜ್ಯವು ಆರಂಭವಾಗುತ್ತದೆ. ದಸರಾ ಹಬ್ಬವನ್ನೂ ಸಹ ಒಂದು ಕಥೆಯನ್ನಾಗಿ ಮಾಡಿದ್ದಾರೆ. ಹೇಗೆ ಸಿನೆಮಾ ನಾಟಕಗಳಿವೆಯೋ ಅದೇರೀತಿ ಕಥೆಗಳನ್ನು ಮನೋರಂಜನೆಗಾಗಿ ಮಾಡಿರುತ್ತಾರೆ. ಶ್ರೀಮತ್ಭಗವದ್ಗೀತಾ ಎನ್ನುವುದು ಸತ್ಯವಾಗಿದೆ, ಪರಮಾತ್ಮನೇ ಮಕ್ಕಳಿಗೆ ರಾಜಯೋಗವನ್ನು ಕಲಿಸಿಕೊಟ್ಟು ರಾಜ್ಯಭಾಗ್ಯವನ್ನು ಕೊಟ್ಟರು. ಮತ್ತೆ ಭಕ್ತಿಮಾರ್ಗದಲ್ಲಿ ಕುಳಿತು ಇದನ್ನೇ ಕಥೆಯನ್ನಾಗಿ ಮಾಡುತ್ತಾರೆ. ವ್ಯಾಸನೇ ಗೀತೆಯನ್ನು ಮಾಡಿದರು ಅರ್ಥಾತ್ ಕಥೆಯನ್ನು ಮಾಡಿದರು. ಸತ್ಯವಾದ ಮಾತನ್ನಂತೂ ನೀವೀಗ ತಂದೆಯಿಂದ ಕೇಳುತ್ತಿದ್ದೀರಿ. ಯಾವಾಗಲೂ ಬಾಬಾ, ಬಾಬಾ ಎಂದು ಹೇಳುತ್ತಿರಬೇಕು. ಪರಮಾತ್ಮನು ನಮ್ಮ ಬಾಬಾ ಆಗಿದ್ದಾರೆ, ಹೊಸ ಪ್ರಪಂಚದ ರಚಯಿತನಾಗಿದ್ದಾರೆ. ಅವಶ್ಯವಾಗಿ ಅವರಿಂದ ಸ್ವರ್ಗದ ಆಸ್ತಿಯು ಸಿಗಬೇಕಾಗಿದೆ. ಈಗಂತೂ ನಾವು 84 ಜನ್ಮಗಳನ್ನು ಭೋಗಿಸಿ ನರಕದಲ್ಲಿ ಬಂದಿದ್ದೀರಿ, ನೀವು ಭಾರತವಾಸಿಗಳು ಸೂರ್ಯವಂಶಿ, ಚಂದ್ರವಂಶಿಗಳಾಗಿದ್ದಿರಿ ಎಂದು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ. ವಿಶ್ವದ ಮಾಲೀಕರಾಗಿದ್ದಿರಿ ಆಗ ಯಾವುದೇ ಬೇರೆ ಧರ್ಮವಿರಲಿಲ್ಲ ಅದಕ್ಕೆ ಸ್ವರ್ಗ ಅಥವಾ ಕೃಷ್ಣ ಪುರಿಯೆಂದು ಹೇಳಲಾಗುತ್ತದೆ. ಇದು ಕಂಸ ಪುರಿಯಾಗಿದೆ. ಬಾಪ್ದಾದಾ ನೆನಪು ತರಿಸುತ್ತಾರೆ - ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ತಂದೆಯೇ ಜ್ಞಾನ ಸಾಗರ, ಶಾಂತಿಯ ಸಾಗರ, ಪತಿತ-ಪಾವನನಾಗಿದ್ದಾರೆ, ಗಂಗೆಯ ನೀರಲ್ಲ. ಎಲ್ಲಾ ವಧುಗಳ ವರನು ಒಬ್ಬರೇ ಭಗವಂತನಾಗಿದ್ದಾನೆಂದು ಮನುಷ್ಯರಿಗೆ ಗೊತ್ತಿಲ್ಲ. ಆತ್ಮಗಳ ತಂದೆಯು ಯಾರು ಎಂದು ಕೇಳಿದರೆ ಎಲ್ಲರೂ ತಬ್ಬಿಬ್ಬಾಗಿ ಬಿಡುತ್ತಾರೆ. ನಮಗೆ ಗೊತ್ತಿಲ್ಲವೆಂದು ಹೇಳಿ ಬಿಡುತ್ತಾರೆ. ಅರೆ ಆತ್ಮ! ನಿಮ್ಮ ತಂದೆಯ ಬಗ್ಗೆಯೇ ನಿಮಗೆ ಗೊತ್ತಿಲ್ಲ. ಗಾಡ್ ಫಾದರ್ ಎನ್ನುತ್ತೀರೆಂದರೆ ಅವರ ನಾಮ-ರೂಪವೇನು, ತಂದೆಯ ಪರಿಚಯವಿದೆಯೆಂದರೆ ಅವರು ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಅರೆ! ಮಕ್ಕಳ ತಂದೆಯು ಎಲ್ಲಿಯಾದರೂ ಸರ್ವವ್ಯಾಪಿಯಾಗಲು ಸಾಧ್ಯವೇ? ರಾವಣನ ಅಸುರೀ ಮತದಂತೆ ನಡೆದು ಎಷ್ಟೊಂದು ಅಜ್ಞಾನಿಗಳಾಗಿದ್ದಾರೆ. ದೇಹಾಭಿಮಾನವೇ ನಂಬರ್ವನ್ ಆಗಿದೆ. ತಮ್ಮನ್ನು ಆತ್ಮ ಎಂದು ನಿಶ್ಚಯ ಮಾಡಿಕೊಳ್ಳುವುದಿಲ್ಲ, ನಾನು ಇಂತಹವನೆಂದು ಹೇಳುತ್ತಾರೆ ಅಷ್ಟೆ. ಇದು ಶರೀರದ ಮಾತಾಗಿದೆ. ಅಸಲಾಗಿ ತಾವು ಯಾರು ಎಂದು ಗೊತ್ತಿಲ್ಲ. ನಾನು ನ್ಯಾಯಾಧೀಶನಾಗಿದ್ದೇನೆ, ಇದಾಗಿದ್ದೇನೆ...... ಎಂದು ಹೇಳುತ್ತಿರುತ್ತಾರೆ ಆದರೆ ಇದು ತಪ್ಪಾಗಿದೆ. ನಾನು ಮತ್ತು ನನ್ನದು ಎಂಬ ಎರಡು ವಸ್ತುಗಳಿವೆ, ಆತ್ಮವು ಅವಿನಾಶಿಯಾಗಿದೆ ಶರೀರವು ವಿನಾಶಿಯಾಗಿದೆ. ಹೆಸರನ್ನು ಶರೀರಕ್ಕೇ ಇಡಲಾಗುತ್ತದೆ. ಆತ್ಮಕ್ಕೆ ಯಾರೂ ಹೆಸರನ್ನಿಡುವುದಿಲ್ಲ. ನನ್ನ ಹೆಸರಂತೂ ಶಿವ ಎಂದಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಶಿವ ಜಯಂತಿಯನ್ನೂ ಸಹ ಆಚರಿಸುತ್ತಾರೆ. ಆ ನಿರಾಕಾರನ ಜಯಂತಿಯು ಹೇಗಾಗಲು ಸಾಧ್ಯ, ಅವರು ಯಾವುದರಲ್ಲಿ ಬರುತ್ತಾರೆ - ಇದು ಯಾರಿಗೂ ಗೊತ್ತಿಲ್ಲ. ಎಲ್ಲಾ ಆತ್ಮಗಳ ಹೆಸರು ಆತ್ಮ, ಪರಮಾತ್ಮನ ಹೆಸರು ಮಾತ್ರ ಶಿವ ಎಂದಾಗಿದೆ. ಬಾಕಿ ಎಲ್ಲರೂ ಸಾಲಿಗ್ರಾಮಗಳಾಗಿದ್ದಾರೆ, ಆತ್ಮಗಳೆಲ್ಲರೂ ಮಕ್ಕಳಾಗಿದ್ದಾರೆ. ಎಲ್ಲಾ ಆತ್ಮರುಗಳ ತಂದೆಯು ಒಬ್ಬ ಶಿವ ತಂದೆಯಾಗಿದ್ದಾರೆ. ಅವರು ಬೇಹದ್ದಿನ ತಂದೆಯೂ ಆಗಿದ್ದಾರೆ, ಅವರನ್ನು ಎಲ್ಲರೂ ಪಾವನ ಮಾಡು ಎಂದು ಕರೆಯುತ್ತಾರೆ. ನಾವೆಲ್ಲರೂ ದುಃಖಿಗಳಾಗಿದ್ದೇವೆ, ಆತ್ಮವು ಕರೆಯುತ್ತದೆ. ದುಃಖದಲ್ಲಿ ಎಲ್ಲಾ ಮಕ್ಕಳು ನೆನಪು ಮಾಡುತ್ತಾರೆ ಮತ್ತೆ ಈ ಮಕ್ಕಳೇ ಸುಖದಲ್ಲಿದ್ದಾಗ ನೆನಪೇ ಮಾಡುವುದಿಲ್ಲ. ರಾವಣನು ದುಃಖಿಯನ್ನಾಗಿ ಮಾಡಿದನು.

ರಾವಣನು ನಿಮ್ಮ ಹಳೆಯ ಶತ್ರುವಾಗಿದ್ದಾನೆಂದು ತಂದೆಯು ತಿಳಿಸುತ್ತಾರೆ. ಇದು ಡ್ರಾಮಾದ ಆಟವು ಮಾಡಲ್ಪಟ್ಟಿದೆ. ಎಲ್ಲರೂ ಈಗ ಅಂಧಕಾರದಲ್ಲಿದ್ದಾರೆ ಆದ್ದರಿಂದ ಜ್ಞಾನಸೂರ್ಯನೇ ಬನ್ನಿ, ನಮ್ಮನ್ನು ಬೆಳಕಿನಲ್ಲಿ ಕರೆದುಕೊಂಡು ಹೋಗು ಎಂದು ಕರೆಯುತ್ತಾರೆ. ಭಾರತವು ಸುಖಧಾಮವಾಗಿದ್ದಾಗ ಯಾರೂ ಕರೆಯುತ್ತಿರಲಿಲ್ಲ, ಅಲ್ಲಿ ಯಾವುದೇ ಅಪ್ರಾಪ್ತ ವಸ್ತುವೂ ಇರುವುದಿಲ್ಲ. ಇಲ್ಲಂತೂ ಶಾಂತಿ ದೇವ ಎಂದು ಚೀರಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಶಾಂತಿಯಂತೂ ನಿಮ್ಮ ಸ್ವಧರ್ಮವಾಗಿದೆ, ನಿಮ್ಮ ಕೊರಳಿನ ಹಾರವಾಗಿದೆ, ಆತ್ಮವು ಶಾಂತಿಧಾಮದ ನಿವಾಸಿಯಾಗಿದೆ, ಶಾಂತಿಧಾಮದಿಂದ ಮತ್ತೆ ಸುಖಧಾಮಕ್ಕೆ ಹೋಗುತ್ತದೆ. ಅಲ್ಲಂತೂ ಸುಖವೇ ಸುಖವಿದೆ, ನಿಮಗೆ ಅಲ್ಲಿ ಚೀರಾಡುವ ಗೋಜಿಲ್ಲ. ದುಃಖದಲ್ಲಿಯೇ ದಯೆ ತೋರಿಸಿ, ದುಃಖಹರ್ತ-ಸುಖಕರ್ತ ಬಾಬಾ ಬಾ ಎಂದು ಕೂಗುತ್ತೀರಿ. ಶಿವಬಾಬಾ, ಮಧುರ ಬಾಬಾ ಬನ್ನಿ ಎಂದು ಕರೆಯುತ್ತೀರಿ, ಬರುತ್ತಾರೆ. ಆದ್ದರಿಂದ ಶಿವ ಜಯಂತಿಯನ್ನಾಚರಿಸುತ್ತೀರಿ. ಶ್ರೀಕೃಷ್ಣನು ಸ್ವರ್ಗದ ರಾಜಕುಮಾರನಾಗಿದ್ದನು, ಅವರ ಜಯಂತಿಯನ್ನೂ ಸಹ ಆಚರಿಸುತ್ತಾರೆ ಆದರೆ ಕೃಷ್ಣನು ಯಾವಾಗ ಬಂದನೆಂದು ಯಾರಿಗೂ ಗೊತ್ತಿಲ್ಲ. ರಾಧೆ-ಕೃಷ್ಣರ ಸ್ವಯಂವರದ ನಂತರವೇ ಲಕ್ಷ್ಮೀ-ನಾರಾಯಣರಾಗುತ್ತಾರೆ, ಇದು ಯಾರಿಗೂ ತಿಳಿದಿಲ್ಲ. ಓ ಗಾಡ್ ಫಾದರ್ ಎಂದು ಕೂಗುತ್ತಾರೆ. ಒಳ್ಳೆಯದು, ಅವರ ನಾಮ-ರೂಪ ಏನೆಂದು ಕೇಳಿದರೆ ಅವರು ನಾಮ-ರೂಪದಿಂದ ಭಿನ್ನವೆಂದು ಹೇಳಿ ಬಿಡುತ್ತಾರೆ. ಅರೆ! ಗಾಡ್ ಫಾದರ್ ಎಂದು ಕರೆಯುತ್ತೀರಿ, ನಾಮ-ರೂಪದಿಂದ ಭಿನ್ನವೆಂದು ಹೇಳುತ್ತೀರಿ. ಆಕಾಶವು ಪೋಲಾರ್ ಆಗಿದೆ, ಅದರ ಹೆಸರೂ ಸಹ ಆಕಾಶವೆಂದು ಇದೆಯಲ್ಲವೆ. ನೀವು ತಂದೆಯ ನಾಮ-ರೂಪ ಗೊತ್ತಿಲ್ಲವೆಂದು ಹೇಳುತ್ತೀರಿ ಅಂದಮೇಲೆ ನಿಮ್ಮ ಬಗ್ಗೆ ನಿಮಗೆ ಗೊತ್ತಿದೆಯೇ ಎಂದು ಕೇಳಿದರೆ ಹೌದು ನಾವಾತ್ಮಗಳಾಗಿದ್ದೇವೆ ಎಂದು ಹೇಳುತ್ತಾರೆ. ಒಳ್ಳೆಯ ಆತ್ಮದ ನಾಮ-ರೂಪವನ್ನು ತಿಳಿಸಿರಿ ಎಂದು ಕೇಳಿದಾಗ ಆತ್ಮನೇ ಪರಮಾತ್ಮನೆಂದು ಹೇಳುತ್ತಾರೆ. ಆತ್ಮವು ನಾಮ-ರೂಪದಿಂದ ಭಿನ್ನವಾಗಿರಲು ಸಾಧ್ಯವೇ ಇಲ್ಲ. ಆತ್ಮವು ಒಂದು ಬಿಂದು ರೂಪ, ನಕ್ಷತ್ರದ ಸಮಾನವಾಗಿದೆ. ಭೃಕುಟಿಯ ಮಧ್ಯದಲ್ಲಿರುತ್ತದೆ. ಈ ಚಿಕ್ಕ ಆತ್ಮದಲ್ಲಿ 84 ಜನ್ಮಗಳ ಪಾತ್ರವು ನೊಂದಾವಣೆಯಾಗಿದೆ, ಇದು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಆದ್ದರಿಂದ 7 ದಿನದ ಭಟ್ಟಿಯ ಮಾತಿನ ಗಾಯನವಿದೆ. ದ್ವಾಪರದಿಂದ ರಾವಣ ರಾಜ್ಯವು ಪ್ರಾರಂಭವಾದಾಗಿನಿಂದ ವಿಕಾರಗಳ ಪ್ರವೇಶತೆಯಾಯಿತು. ಏಣಿಯನ್ನು ಇಳಿಯುತ್ತಲೇ ಬಂದಿರಿ, ಈಗ ಎಲ್ಲರಿಗೂ ಗ್ರಹಣ ಹಿಡಿದಿರುವುದರಿಂದ ಕಪ್ಪಾಗಿ ಬಿಟ್ಟಿದ್ದಾರೆ. ಆದ್ದರಿಂದ ಜ್ಞಾನಸೂರ್ಯ ಬನ್ನಿ, ಬಂದು ನಮ್ಮೆಲ್ಲರನ್ನೂ ಬೆಳಕಿನಲ್ಲಿ ಕರೆದುಕೊಂಡು ಹೋಗು ಎಂದು ಕರೆಯುತ್ತಾರೆ. ಜ್ಞಾನಾಂಜನವನ್ನು ಸದ್ಗುರು ಕೊಟ್ಟರು, ಅಜ್ಞಾನ ಅಂಧಕಾರ ವಿನಾಶವಾಯಿತು... ಬುದ್ಧಿಯಲ್ಲಿ ತಂದೆಯೇ ಬರುತ್ತಾರೆ. ಜ್ಞಾನಾಂಜನ ಗುರು ಕೊಟ್ಟರೆಂದಲ್ಲ ಏಕೆಂದರೆ ಗುರುಗಳು ಅನೇಕರಿದ್ದಾರೆ, ಅವರಲ್ಲಿ ಜ್ಞಾನವೆಲ್ಲಿದೆ? ಇದು ಅವರ ಗಾಯನವಲ್ಲ. ಜ್ಞಾನ ಸಾಗರ, ಪತಿತ-ಪಾವನ ಸರ್ವರ ಸದ್ಗತಿದಾತ ಒಬ್ಬರೇ ತಂದೆಯಾಗಿದೆ. ಬೇರೆ ಯಾರೂ ಈ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಸಾಧುಗಳು ಭಗವಂತನನ್ನು ಮಿಲನ ಮಾಡಲು ಅನೇಕ ಮಾರ್ಗಗಳನ್ನು ತಿಳಿಸುತ್ತಾರೆ. ಶಾಸ್ತ್ರವನ್ನು ಓದುವುದು, ಯಜ್ಞ, ತಪ ಇತ್ಯಾದಿಗಳನ್ನು ಮಾಡುವುದು ಇವೆಲ್ಲವೂ ಭಗವಂತನನ್ನು ಮಿಲನ ಮಾಡುವುದಕ್ಕೆ ಮಾರ್ಗಗಳೆಂದು ಹೇಳುತ್ತಾರೆ ಆದರೆ ಪತಿತರು ಮತ್ತೆ ಪಾವನ ಪ್ರಪಂಚಕ್ಕೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಸ್ವಯಂ ನಾನೇ ಬರುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರನು ದೇವತೆಯಾಗಿದ್ದಾರೆ, ಅವರನ್ನು ಭಗವಂತನೆಂದು ಕರೆಯಲು ಸಾಧ್ಯವಿಲ್ಲ. ಭಗವಂತನು ಒಬ್ಬರೇ ಆಗಿದ್ದಾರೆ. ಎಲ್ಲಾ ದೇವತೆಗಳ ತಂದೆಯು ಶಿವನಾಗಿದ್ದಾನೆ. ಪ್ರಜಾಪಿತ ಬ್ರಹ್ಮನೂ ಸಹ ಇಲ್ಲಿಯೇ ಇರಬೇಕಲ್ಲವೆ ಅಂದಾಗ ಪ್ರಜೆಗಳೂ ಇಲ್ಲಿಯೇ ಇದ್ದಾರೆ. ಹೆಸರನ್ನು ಬರೆಯಲ್ಪಟ್ಟಿದೆ - ಪ್ರಜಾಪಿತ ಬ್ರಹ್ಮಾಕುಮಾರೀಸ್ ಸಂಸ್ಥೆ. ಇವರೆಲ್ಲರೂ ಮಕ್ಕಳಾಗಿದ್ದಾರೆ, ಬೇಕಾದಷ್ಟು ಬಿ.ಕೆ.ಗಳಿದ್ದಾರೆ. ಆಸ್ತಿಯು ಶಿವ ತಂದೆಯಿಂದ ಸಿಗುತ್ತದೆ, ಬ್ರಹ್ಮನಿಂದಲ್ಲ. ಆಸ್ತಿಯು ತಾತನಿಂದ ಸಿಗುತ್ತದೆ. ಬ್ರಹ್ಮನ ಮೂಲಕ ಕುಳಿತುಕೊಂಡು ಯೋಗ್ಯರನ್ನಾಗಿ ಮಾಡುತ್ತಾರೆ. ಬ್ರಹ್ಮನ ಮೂಲಕ ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ. ಬಾಬಾ, ನಾವು ನಿಮ್ಮವರು, ನಿಮ್ಮಿಂದ ಆಸ್ತಿಯನ್ನು ಪಡೆಯುತ್ತೇವೆಂದು ನೀವು ಮಕ್ಕಳೂ ಹೇಳುತ್ತೀರಿ. ಬ್ರಹ್ಮನ ಮೂಲಕ ವಿಷ್ಣು ಪುರಿಯ ಸ್ಥಾಪನೆಯಾಗುತ್ತದೆ. ಶ್ರೀಮತ ಅಥವಾ ಶ್ರೇಷ್ಠಾತಿ ಶ್ರೇಷ್ಠ ಭಗವಂತನ ಗೀತೆಯಾಗಿದೆ. ಭಗವಂತ ಒಬ್ಬ ನಿರಾಕಾರಿಯಾಗಿದ್ದಾರೆ. ಮಕ್ಕಳಿಗೆ ನೀವು 84 ಜನ್ಮಗಳಿದ್ದೀರೆಂದು ತಂದೆಯೇ ತಿಳಿಸುತ್ತಾರೆ. ಆತ್ಮ, ಪರಮಾತ್ಮನು ಬಹಳ ಕಾಲ ಅಗಲಿದ್ದರು ಎಂದು...... ಬಹಳ ಕಾಲ ಭಾರತವಾಸಿಗಳೇ ಇದ್ದರು, ಬೇರೆ ಯಾವುದೇ ಧರ್ಮವು ಇರಲಿಲ್ಲ. ಮೊಟ್ಟ ಮೊದಲು ಅವರೇ ಅಗಲಿದವರಾಗಿದ್ದಾರೆ. ತಂದೆಯಿಂದ ಅಗಲಿ ಪಾತ್ರವನ್ನಭಿನಯಿಸಲು ಬಂದಿದ್ದಾರೆ. ಹೇ ಆತ್ಮಗಳೇ, ತಂದೆಯಾದ ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಇದು ನೆನಪಿನ ಯಾತ್ರೆ ಅಥವಾ ಯೋಗಾಗ್ನಿಯಾಗಿದೆ. ತಲೆಯ ಮೇಲೆ ಯಾವ ಪಾಪಗಳ ಹೊರೆಯಿದೆಯೋ ಅದು ಯೋಗದ ಅಗ್ನಿಯಿಂದಲೇ ಭಸ್ಮವಾಗುವುದು. ನೀವು ಚಿನ್ನದ ಯುಗದಲ್ಲಿದ್ದಿರಿ, ಈಗ ಕಬ್ಬಿಣದ ಯುಗದಲ್ಲಿ ಬಂದಿದ್ದೀರಿ. ಮಧುರ ಮಕ್ಕಳೇ, ಈಗ ನನ್ನನ್ನು ನೆನಪು ಮಾಡಿ ಎಂದು ತಿಳಿಸುತ್ತಾರೆ. ಇದು ಬುದ್ಧಿಯ ಕೆಲಸವಾಗಿದೆ, ದೇಹ ಸಹಿತವಾಗಿ ದೇಹದ ಎಲ್ಲಾ ಸಂಬಂಧವನ್ನು ಮರೆತು ನನ್ನನ್ನು ನೆನಪು ಮಾಡಿ, ನೀವು ಆತ್ಮರಾಗಿದ್ದೀರಲ್ಲವೆ. ಇದು ನಿಮ್ಮ ಶರೀರವಾಗಿದೆ. ನಾನು, ನಾನು ಎಂದು ಆತ್ಮವೇ ಹೇಳುತ್ತದೆ, ರಾವಣನು ನಿಮ್ಮನ್ನು ಪತಿತರನ್ನಾಗಿ ಮಾಡಿದ್ದಾನೆ. ಈ ಆಟವು ಮಾಡಲ್ಪಟ್ಟಿದೆ, ಪಾವನ ಭಾರತ ಮತ್ತು ಪತಿತ ಭಾರತವಾಗಿರುತ್ತದೆ. ನೀವು ಪತಿತರಾದಾಗ ರಾಮ ರಾಜ್ಯ ಬೇಕೆಂದು ಕೂಗುತ್ತೀರಿ. ಹೇಳುವುದೇನೋ ಹೇಳುತ್ತಾರೆ ಆದರೆ ಅದರ ಅರ್ಥವಂತೂ ಗೊತ್ತಿಲ್ಲ. ಜ್ಞಾನವನ್ನು ಕೊಡುವವರು ಜ್ಞಾನದ ಸಾಗರನಾಗಿದ್ದಾರೆ. ತಂದೆಯು ಬಂದು ಸೆಕೆಂಡಿನಲ್ಲಿ ಆಸ್ತಿಯನ್ನು ಕೊಡುತ್ತಾರೆ, ನೀವು ಈಗ ಸೂರ್ಯವಂಶಿ, ಚಂದ್ರವಂಶಿಯ ಆಸ್ತಿಯನ್ನು ಪಡೆಯಲು ತಂದೆಯ ಮಕ್ಕಳಾಗಿದ್ದೀರಿ. ನಂತರ ಸತ್ಯ-ತ್ರೇತಾಯುಗದಲ್ಲಿ ಅಮರರಾಗಿ ಹೋಗುತ್ತೀರಿ. ಇಂತಹವರು ಶರೀರ ಬಿಟ್ಟರೆಂದು ಅಲ್ಲಿ ಹೇಳುವುದಿಲ್ಲ, ಸತ್ಯಯುಗದಲ್ಲಿ ಅಕಾಲ ಮೃತ್ಯುವಾಗುವುದಿಲ್ಲ. ನೀವು ಕಾಲನ ಮೇಲೆ ವಿಜಯವನ್ನು ಪಡೆಯುತ್ತೀರಿ, ದುಃಖದ ಹೆಸರಿರುವುದಿಲ್ಲ. ಅದಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ನಾವಂತೂ ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತೇನೆಂದು ತಂದೆಯು ಹೇಳುತ್ತಾರೆ. ಅಲ್ಲಂತೂ ಬಹಳ ವೈಭವಗಳಿರುತ್ತವೆ, ಭಕ್ತಿಮಾರ್ಗದಲ್ಲಿ ಮಂದಿರಗಳನ್ನು ಕಟ್ಟಿಸುವಾಗಲೂ ನಿಮ್ಮಲ್ಲಿ ಎಷ್ಟೊಂದು ಹಣವಿತ್ತು, ಭಾರತವು ಏನಾಗಿತ್ತು! ಉಳಿದ ಬೇರೆಲ್ಲಾ ಆತ್ಮಗಳು ನಿರಾಕಾರಿ ಪ್ರಪಂಚದಲ್ಲಿದ್ದರು. ಶ್ರೇಷ್ಠಾತಿ ಶ್ರೇಷ್ಠ ತಂದೆಯು ಈಗ ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದಾರೆ. ಮೊದಲಿಗೆ ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆಯಾಗಿದ್ದಾರೆ, ನಂತರ ಬ್ರಹ್ಮಾ-ವಿಷ್ಣು-ಶಂಕರ ನಂತರ ಈ ಪ್ರಪಂಚ. ಜ್ಞಾನದಿಂದ ನೀವು ಮಕ್ಕಳಿಗೆ ಸದ್ಗತಿಯಾಗುತ್ತದೆ. ಗಾಯನವೂ ಇದೆ - ಜ್ಞಾನ, ಭಕ್ತಿ, ವೈರಾಗ್ಯ. ಹಳೆಯ ಪ್ರಪಂಚದಿಂದ ವೈರಾಗ್ಯವುಂಟಾಗುತ್ತದೆ ಏಕೆಂದರೆ ಸತ್ಯಯುಗದ ರಾಜ್ಯಭಾಗ್ಯ ಸಿಗುತ್ತದೆ. ಮಕ್ಕಳೇ, ನನ್ನನ್ನು ನೆನಪು ಮಾಡಿ ಎಂದು ತಿಳಿಸುತ್ತಾರೆ. ನನ್ನನ್ನು ನೆನಪು ಮಾಡುವುದರಿಂದ ನನ್ನಬಳಿ ಬರುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1) ತಲೆಯ ಮೇಲಿರುವ ಹೊರೆಯನ್ನು ಯೋಗಾಗ್ನಿಯಿಂದ ಭಸ್ಮ ಮಾಡಬೇಕಾಗಿದೆ. ಬುದ್ದಿಯಿಂದ ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ಒಬ್ಬ ತಂದೆಯನ್ನು ನೆನಪು ಮಾಡಬೇಕು.

2) ಚೀರಾಡುವ-ಕೂಗುವ ಬದಲಾಗಿ ತಮ್ಮ ಸ್ವಧರ್ಮ ಶಾಂತಿಯಲ್ಲಿ ಸ್ಥಿತರಾಗಬೇಕು. ಶಾಂತಿಯು ನಿಮ್ಮ ಕೊರಳಿನ ಹಾರವಾಗಿದೆ. ದೇಹಾಭಿಮಾನದಲ್ಲಿ ಬಂದು ನಾನು ಮತ್ತು ನನ್ನ ಶಬ್ಧವನ್ನು ಹೇಳಬಾರದು. ಸ್ವಯಂನ್ನು ಆತ್ಮ ನಿಶ್ಚಯ ಮಾಡಿಕೊಳ್ಳಬೇಕು.

ವರದಾನ:

ತಮ್ಮ ಶ್ರೇಷ್ಠ ಸ್ಥಿತಿಯ ಮೂಲಕ ತಮ್ಮ ಮುಂದೆ ಮಾಯೆಯನ್ನು ಬಾಗಿಸುವಂತಹ ಶ್ರೇಷ್ಠ ಪದವಿಯ ಅಧಿಕಾರಿ ಭವ.

ಮಹಾನ್ ಆತ್ಮರೆಂದಿಗೂ ಯಾರ ಮುಂದೆಯೂ ಬಾಗುವುದಿಲ್ಲ, ಅವರ ಮುಂದೆ ಎಲ್ಲರೂ ಬಾಗುವರು. ಹಾಗೆಯೇ ತಾವು ತಂದೆಯಿಂದ ಆಯ್ಕೆಯಾಗಿರುವ ಸರ್ವಶ್ರೇಷ್ಠ ಆತ್ಮರು, ತಾವೆಲ್ಲಿಯೂ ಯಾವುದೇ ಪರಿಸ್ಥಿತಿಯಲ್ಲಿಯೂ ಅಥವಾ ಮಾಯೆಯ ಭಿನ್ನ-ಭಿನ್ನವಾದ ಆಕರ್ಷಣೆಗೊಳಿಸುವ ರೂಪಗಳಲ್ಲಿ ತಮ್ಮನ್ನು ಬಾಗಿಸಲು ಸಾಧ್ಯವಿಲ್ಲ. ಈಗಿನಿಂದ ಸದಾ ಬಾಗಿಸುವಂತಹ ಸ್ಥಿತಿಯಲ್ಲಿ ಸ್ಥಿತರಾಗಿ ಇರುತ್ತೀರೆಂದರೆ, ಶ್ರೇಷ್ಠ ಪದವಿಯ ಅಧಿಕಾರವು ಪ್ರಾಪ್ತಿಯಾಗುವುದು. ಇಂತಹ ಆತ್ಮರ ಮುಂದೆ ಸತ್ಯಯುಗದಲ್ಲಿಯ ಪ್ರಜೆಗಳು ಸ್ವಮಾನದಿಂದ ಬಾಗುವರು ಹಾಗೂ ದ್ವಾಪರದಲ್ಲಿ ತಮ್ಮ ನೆನಪಾರ್ಥದ ಮುಂದೆ ಭಕ್ತರು ಬಾಗುತ್ತಾ ಇರುತ್ತಾರೆ (ನಮಸ್ಕರಿಸುವುದು).

ಸ್ಲೋಗನ್:

ಕರ್ಮದ ಸಮಯದಲ್ಲಿ ಯೋಗದ ಸಮತೋಲನವು ಪರಿಪಕ್ವವಾಗಿ ಇದ್ದರೆ ಹೇಳಲಾಗುತ್ತದೆ - ಕರ್ಮಯೋಗಿ.