25/04/21 ಪ್ರಾತಃಮುರುಳಿ ಓಂಶಾಂತಿ "ಅವ್ಯಕ್ತ-ಬಾಪ್ದಾದಾ" ರಿವೈಜ್: 18/12/87


ಕರ್ಮಾತೀತ ಸ್ಥಿತಿಯ ಗುಹ್ಯ ಪರಿಭಾಷೆ

ಇಂದು ವಿದೇಹಿ ಬಾಪ್ದಾದಾರವರು ತಮ್ಮ ವಿದೇಹಿ ಸ್ಥಿತಿಯಲ್ಲಿ ಸ್ಥಿತರಾಗಿರುವ ಶ್ರೇಷ್ಠ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಬ್ರಾಹ್ಮಣ ಆತ್ಮನು ವಿದೇಹಿಯಾಗುವ ಹಾಗೂ ಕರ್ಮಾತೀತರಾಗುವ ಶ್ರೇಷ್ಠ ಲಕ್ಷ್ಯವನ್ನಿಟ್ಟುಕೊಂಡು ಸಂಪೂರ್ಣ ಸ್ಥಿತಿಗೆ ಸಮೀಪ ತಲುಪುತ್ತಿದ್ದಾರೆ. ಅಂದಾಗ ಇಂದು ಬಾಪ್ದಾದಾರವರು ಮಕ್ಕಳ ಕರ್ಮಾತೀತ, ವಿದೇಹಿ ಸ್ಥಿತಿಯ ಸಮೀಪತೆಯನ್ನು ನೋಡುತ್ತಿದ್ದರು - ಯಾರ್ಯಾರೂ ಎಷ್ಟು ಸಮೀಪ ತಲುಪಿದ್ದಾರೆ? ಬ್ರಹ್ಮಾ ತಂದೆಯನ್ನು ಎಷ್ಟು ಫಾಲೋ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ? ಎಲ್ಲರ ಲಕ್ಷ್ಯವೂ ಸಹ ತಂದೆಯ ಸಮೀಪ ಮತ್ತು ಸಮಾನರಾಗುವುದೇ ಆಗಿದೆ ಆದರೆ ಕಾರ್ಯದಲ್ಲಿ ಬಂದಾಗ ನಂಬರ್ವಾರ್ ಆಗಿ ಬಿಡುತ್ತಾರೆ. ಈ ದೇಹದಲ್ಲಿರುತ್ತಾ ವಿದೇಹಿ ಅರ್ಥಾತ್ ಕರ್ಮಾತೀತರಾಗುವ ಉದಾಹರಣೆಯು ಸಾಕಾರದಲ್ಲಿ ಬ್ರಹ್ಮಾ ತಂದೆಯನ್ನು ನೋಡಿದಿರಿ ಅಂದಾಗ ಕರ್ಮಾತೀತರಾಗುವ ವಿಶೇಷತೆಯೇನಾಗಿದೆ? ಎಲ್ಲಿಯವರೆಗೆ ಈ ದೇಹವಿರುವುದೋ, ಕರ್ಮೇಂದ್ರಿಯಗಳ ಜೊತೆ ಈ ಕರ್ಮಕ್ಷೇತ್ರದಲ್ಲಿ ಪಾತ್ರವನ್ನು ಅಭಿನಯಿಸುತ್ತೀರೋ ಅಲ್ಲಿಯವರೆಗೆ ಕರ್ಮವಿಲ್ಲದೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಕರ್ಮಾತೀತ ಅರ್ಥಾತ್ ಕರ್ಮ ಮಾಡುತ್ತಾ ಕರ್ಮದ ಬಂಧನದಿಂದ ದೂರವಿರುವುದು. ಒಂದು ಬಂಧನ, ಇನ್ನೊಂದು ಸಂಬಂಧವಾಗಿದೆ. ಕರ್ಮೇಂದ್ರಿಯಗಳ ಮೂಲಕ ಕರ್ಮದ ಸಂಬಂಧದಲ್ಲಿ ಬರುವುದು ಬೇರೆ, ಆದರೆ ಕರ್ಮದ ಬಂಧನದಲ್ಲಿ ಬಂಧಿತರಾಗುವುದು ಬೇರೆ ಮಾತಾಗಿದೆ. ಕರ್ಮಬಂಧನವು ಕರ್ಮದ ಅಲ್ಪಕಾಲದ (ವಿನಾಶಿ) ಫಲಕ್ಕೆ ವಶರನ್ನಾಗಿ ಮಾಡಿ ಬಿಡುತ್ತದೆ. ವಿವಶತೆ ಎಂಬ ಶಬ್ಧವೇ ಸಿದ್ಧ ಮಾಡುತ್ತದೆ, ಅವರು ಅನ್ಯರ ವಶದಲ್ಲಿ ಬಂದು ಬಿಡುತ್ತಾರೆ. ವಶದಲ್ಲಿ ಬರುವವರು ಭೂತದ ಸಮಾನ ಅಲೆಯುವವರು ಆಗಿ ಬಿಡುತ್ತಾರೆ. ಹೇಗೆ ಅಶುದ್ಧ ಆತ್ಮವು ಭೂತವಾಗಿ ಪ್ರವೇಶವಾಗುತ್ತದೆಯೆಂದರೆ ಮನುಷ್ಯಾತ್ಮನ ಸ್ಥಿತಿಯು ಏನಾಗಿ ಬಿಡುತ್ತದೆ? ಪರವಶರಾಗಿ ಅಲೆಯುತ್ತಿರುತ್ತಾರೆ. ಹಾಗೆಯೇ ಕರ್ಮಕ್ಕೆ ವಿವಶರಾಗಿರುವವರು ಅರ್ಥಾತ್ ಕರ್ಮದ ವಿನಾಶಿ ಫಲದ ಇಚ್ಛೆಗೆ ವಶರಾಗಿದ್ದರೆ, ಕರ್ಮವೂ ಸಹ ಬಂಧನದಲ್ಲಿ ಬಂಧಿಸುತ್ತಾ, ಬುದ್ಧಿಯ ಮೂಲಕ ಅಲೆದಾಡಿಸುತ್ತಾ ಇರುತ್ತದೆ - ಇದಕ್ಕೆ ಕರ್ಮ ಬಂಧನವೆಂದು ಹೇಳಲಾಗುತ್ತದೆ. ಕರ್ಮ ಬಂಧನದ ಆತ್ಮಗಳು ಸ್ವಯಂನ್ನು ಬೇಸರ ಪಡಿಸಿಕೊಳ್ಳುತ್ತಾರೆ ಮತ್ತು ಅನ್ಯರನ್ನೂ ಬೇಸರಗೊಳಿಸುತ್ತಾರೆ. ಕರ್ಮಾತೀತ ಅರ್ಥಾತ್ ಕರ್ಮಕ್ಕೆ ವಶರಾಗುವವರಲ್ಲ, ಆದರೆ ಮಾಲೀಕನಾಗಿದ್ದು, ಅಧಿಕಾರಿಯಾಗಿದ್ದು ಕರ್ಮೇಂದ್ರಿಯಗಳ ಸಂಬಂಧದಲ್ಲಿ ಬರುವವರು, ವಿನಾಶಿ ಕಾಮನೆಯಿಂದ ಭಿನ್ನರಾಗಿ ಕರ್ಮೇಂದ್ರಿಯಗಳ ಮೂಲಕ ಕರ್ಮ ಮಾಡಿಸುವವರು. ಮಾಲೀಕನಾದ ಆತ್ಮನನ್ನು ಕರ್ಮವು ತನ್ನ ಅಧೀನ ಮಾಡಿಕೊಳ್ಳಬಾರದು, ಅಧಿಕಾರಿಯಾಗಿ ಕರ್ಮ ಮಾಡಿಸುತ್ತಾ ಇರಬೇಕು. ಕರ್ಮೇಂದ್ರಿಯಗಳು ತನ್ನ ಆಕರ್ಷಣೆಯಲ್ಲಿ ಆಕರ್ಷಿತ ಮಾಡುತ್ತದೆಯೆಂದರೆ ಕರ್ಮಕ್ಕೆ ವಶರಾಗುತ್ತಾರೆ, ಅಧೀನರಾಗುತ್ತಾರೆ, ಬಂಧನದಲ್ಲಿ ಬಂಧಿತರಾಗುತ್ತಾರೆ. ಕರ್ಮಾತೀತ ಅರ್ಥಾತ್ ಕರ್ಮ ಬಂಧನಗಳಿಂದ ಅತೀತ ಅರ್ಥಾತ್ ಭಿನ್ನ. ಕಣ್ಣುಗಳ ಕೆಲಸವು ನೋಡುವುದಾಗಿದೆ ಆದರೆ ನೋಡುವ ಕರ್ಮವನ್ನು ಮಾಡಿಸುವವರು ಯಾರು? ಕಣ್ಣುಗಳು ಕರ್ಮ ಮಾಡುವವನು ಮತ್ತು ಆತ್ಮವು ಕರ್ಮವನ್ನು ಮಾಡಿಸುವವನಾಗಿದೆ ಅಂದಮೇಲೆ ಮಾಡಿಸುವ ಆತ್ಮನು ಮಾಡುವಂತಹ ಕರ್ಮೇಂದ್ರಿಯಗಳಿಗೇ ವಶರಾಗಿ ಬಿಟ್ಟರೆ ಕರ್ಮ ಬಂಧನವೆಂದು ಹೇಳಲಾಗುತ್ತದೆ. ಮಾಡಿಸುವವನಾಗಿ ಕರ್ಮ ಮಾಡಿಸುವುದಕ್ಕೆ ಕರ್ಮದ ಸಂಬಂಧದಲ್ಲಿ ಬರುವುದೆಂದು ಹೇಳುತ್ತಾರೆ. ಕರ್ಮಾತೀತ ಆತ್ಮರು ಸಂಬಂಧದಲ್ಲಿ ಬರುತ್ತಾರೆಯೇ ಹೊರತು ಬಂಧನದಲ್ಲಿ ಇರುವುದಿಲ್ಲ. ಮಾತನಾಡಬೇಕು ಅಂದುಕೊಳ್ಳಲಿಲ್ಲ ಆದರೆ ಮಾತನಾಡಿ ಬಿಟ್ಟೆನು, ಮಾಡಬೇಕೆಂದು ಅಂದುಕೊಳ್ಳಲಿಲ್ಲ ಆದರೆ ಮಾಡಿ ಬಿಟ್ಟೆನು - ಈ ರೀತಿ ಕೆಲಕೆಲವೊಮ್ಮೆ ಹೇಳುತ್ತೀರಲ್ಲವೆ, ಇದಕ್ಕೆ ಕರ್ಮ ಬಂಧನದಲ್ಲಿ ವಶರಾದ ಆತ್ಮನೆಂದು ಹೇಳಲಾಗುತ್ತದೆ. ಇಂತಹ ಆತ್ಮನು ಕರ್ಮಾತೀತ ಸ್ಥಿತಿಗೆ ಸಮೀಪವಿದ್ದಾರೆಂದು ಹೇಳುವುದೋ ಅಥವಾ ದೂರವೆಂದು ಹೇಳುವುದೇ?

ಕರ್ಮಾತೀತ ಅರ್ಥಾತ್ ದೇಹ, ದೇಹದ ಸಂಬಂಧ, ಪದಾರ್ಥ, ಲೌಕಿಕ ಅಥವಾ ಅಲೌಕಿಕ ಎರಡೂ ಸಂಬಂಧಗಳ ಬಂಧನದಿಂದ ಅತೀತ ಅರ್ಥಾತ್ ಭಿನ್ನವಾಗಿರುವುದು. ಭಲೆ ಹೇಳುವಾಗ ಸಂಬಂಧವೆಂಬ ಶಬ್ಧವು ಬರುತ್ತದೆ - ದೇಹದ ಸಂಬಂಧ, ದೇಹದ ಸಂಬಂಧಿಗಳ ಸಂಬಂಧವೆಂದು, ಆದರೆ ಒಂದುವೇಳೆ ದೇಹದಲ್ಲಿ ಅಥವಾ ಸಂಬಂಧಗಳಲ್ಲಿ ಅಧೀನರಾಗಿದ್ದರೆ ಸಂಬಂಧವೂ ಸಹ ಅಧೀನವಾಗಿ ಬಿಡುತ್ತದೆ. ಸಂಬಂಧ ಶಬ್ಧವು ಭಿನ್ನ ಮತ್ತು ಪ್ರಿಯವಾದ ಅನುಭವವನ್ನು ಮಾಡಿಸುವಂತದ್ದಾಗಿದೆ. ಇಂದಿನ ಸರ್ವ ಆತ್ಮಗಳ ಸಂಬಂಧವು ಬಂಧನದ ರೂಪದಲ್ಲಿ ಬದಲಾಗಿ ಬಿಟ್ಟಿದೆ. ಎಲ್ಲಿ ಸಂಬಂಧವು ಬಂಧನ ರೂಪವಾಗಿ ಬಿಡುವುದೋ ಆ ಬಂಧನವು ಸದಾ ಸ್ವಯಂನಲ್ಲಿ ಯಾವುದಾದರೊಂದು ಪ್ರಕಾರದಿಂದ ಬೇಸರ ಮಾಡುತ್ತಿರುವುದು, ದುಃಖದ ಅಲೆಯ ಅನುಭವ ಮಾಡಿಸುವುದು, ವ್ಯಾಕುಲತೆಯ ಅನುಭವ ಮಾಡಿಸುವುದು. ವಿನಾಶಿ ಪ್ರಾಪ್ತಿಗಳಿದ್ದರೂ ಸಹ ಆ ಪ್ರಾಪ್ತಿಗಳ ಸುಖವು ಅಲ್ಪಕಾಲಕ್ಕಾಗಿ ಅನುಭವ ಮಾಡುವರು. ಸುಖದ ಜೊತೆ ಜೊತೆಗೆ ಈಗೀಗ ಪ್ರಾಪ್ತಿ ಸ್ವರೂಪದ ಅನುಭವವಾಗುತ್ತದೆ ಮತ್ತು ಈಗೀಗ ಪ್ರಾಪ್ತಿಗಳಿದ್ದರೂ ಸಹ ಅಪ್ರಾಪ್ತ ಸ್ಥಿತಿಯ ಅನುಭವವಾಗುವುದು. ಸಂಪನ್ನವಾಗಿದ್ದರೆ ತನ್ನನ್ನು ಖಾಲಿ-ಖಾಲಿ ಎಂಬ ಅನುಭವ ಮಾಡುತ್ತಾರೆ. ಎಲ್ಲವೂ ಇದ್ದರೂ ಸಹ ‘ಇನ್ನೇನೋ ಬೇಕು' ಎಂಬ ಅನುಭವ ಮಾಡುತ್ತಾ ಇರುತ್ತಾರೆ ಮತ್ತು ಎಲ್ಲಿ ‘ಬೇಕು-ಬೇಕು' ಎಂಬುದು ಇದೆಯೋ ಅಲ್ಲಿ ಎಂದಿಗೂ ಸಂತುಷ್ಟತೆಯಿರುವುದಿಲ್ಲ. ತನುವೂ ಖುಷಿಯಾಗಿರಲಿ, ಮನವೂ ಖುಷಿಯಾಗಿರಲಿ ಮತ್ತು ಅನ್ಯರೂ ಸಹ ಖುಷಿಯಾಗಿರಲಿ - ಈ ರೀತಿ ಸದಾಕಾಲ ಇರಲು ಸಾಧ್ಯವಿಲ್ಲ. ಯಾವುದಾದರೊಂದು ಮಾತಿನಲ್ಲಿ ಸ್ವಯಂನೊಂದಿಗೆ ಬೇಸರ ಮತ್ತು ಅನ್ಯರೊಂದಿಗೂ ಬೇಸರ ಬಯಸದಿದ್ದರೂ ಆಗುತ್ತಿರುವುದು ಏಕೆಂದರೆ ನಾರಾಜ್ (ಬೇಸರ) ಅರ್ಥಾತ್ ನಾ-ರಾಜ್, ರಹಸ್ಯವನ್ನು ತಿಳಿದುಕೊಳ್ಳದೇ ಇರುವುದು. ಅಧಿಕಾರಿಯಾಗಿ ಕರ್ಮೇಂದ್ರಿಯಗಳಿಂದ ಕರ್ಮ ಮಾಡಿಸುವ ರಹಸ್ಯವನ್ನೂ ತಿಳಿದುಕೊಂಡಿಲ್ಲ ಅಂದಮೇಲೆ ನಾರಾಜ್ ಆಗುವರಲ್ಲವೆ? ಕರ್ಮಾತೀತರು ಎಂದಿಗೂ ನಾರಾಜ್ (ಬೇಸರ) ಆಗುವುದಿಲ್ಲ ಏಕೆಂದರೆ ಅವರು ಕರ್ಮ ಸಂಬಂಧ ಮತ್ತು ಕರ್ಮ ಬಂಧನದ ರಹಸ್ಯವನ್ನು ತಿಳಿದುಕೊಂಡಿರುತ್ತಾರೆ. ಭಲೆ ಕರ್ಮವನ್ನು ಮಾಡಿ ಆದರೆ ವಶರಾಗಿದ್ದು ಮಾಡುವುದಲ್ಲ, ಅಧಿಕಾರಿ ಮಾಲೀಕನಾಗಿ ಕರ್ಮ ಮಾಡಿರಿ. ಕರ್ಮಾತೀತ ಅರ್ಥಾತ್ ತನ್ನ ಹಿಂದಿನ ಕರ್ಮಗಳ ಲೆಕ್ಕಾಚಾರದ ಬಂಧನದಿಂದಲೂ ಮುಕ್ತ. ಭಲೆ ಹಿಂದಿನ ಕರ್ಮಗಳ ಲೆಕ್ಕಾಚಾರದ ಫಲ ಸ್ವರೂಪ ತನುವಿನ ರೋಗವಿರಬಹುದು, ಅನ್ಯ ಆತ್ಮಗಳ ಸಂಸ್ಕಾರದ ಜೊತೆ, ತಮ್ಮ ಮನಸ್ಸಿನ ಸಂಸ್ಕಾರದ ಘರ್ಷಣೆಯಾಗುತ್ತಿರಬಹುದು ಆದರೆ ಕರ್ಮಾತೀತರು ಕರ್ಮಭೋಗಕ್ಕೆ ವಶರಾಗದೆ ಮಾಲೀಕನಾಗಿರುತ್ತಾ, ಎಲ್ಲವನ್ನೂ ಸಮಾಪ್ತಿ ಮಾಡಿಕೊಳ್ಳುತ್ತಾರೆ. ಕರ್ಮಯೋಗಿಗಳಾಗಿ ಕರ್ಮಭೋಗವನ್ನು ಕಳೆಯುವುದೇ ಕರ್ಮಾತೀತರಾಗುವ ಚಿಹ್ನೆಯಾಗಿದೆ. ಯೋಗದಿಂದ ಕರ್ಮ ಭೋಗವನ್ನು ಮುಗುಳ್ನಗುತ್ತಾ ಶೂಲದಿಂದ ಮುಳ್ಳಿನ ಸಮಾನ ಮಾಡುತ್ತಾ, ನಂತರ ಅದನ್ನು ಭಸ್ಮ ಮಾಡುವುದು ಅರ್ಥಾತ್ ಕರ್ಮ ಭೋಗವನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ. ಅದು ವ್ಯಾಧಿಯ ರೂಪವಾಗಬಾರದು. ಯಾರು ವ್ಯಾಧಿಯ ರೂಪವಾಗಿ ಬಿಡುವರೋ ಅವರು ಸ್ವಯಂ ಸದಾ ವ್ಯಾಧಿಯ ವರ್ಣನೆಯನ್ನೇ ಮಾಡುತ್ತಿರುವರು. ಮನಸ್ಸಿನಲ್ಲಿಯೂ ವರ್ಣನೆ ಮಾಡುತ್ತಿರುವರು, ಬಾಯಿಂದಲೂ ವರ್ಣನೆ ಮಾಡುತ್ತಿರುವರು. ಎರಡನೆಯ ಮಾತು - ವ್ಯಾಧಿಯ ರೂಪವಾಗುವ ಕಾರಣ ಸ್ವಯಂ ಸಹ ಬೇಸರವಾಗುವರು ಹಾಗೂ ಅನ್ಯರನ್ನೂ ಬೇಸರಗೊಳಿಸುವರು ಮತು ಅವರು ಚೀರಾಡುವರು. ಕರ್ಮಾತೀತರು ಶರೀರವನ್ನು ನಡೆಸುತ್ತಾ ಸಾಗುವರು. ಕೆಲವರಿಗೆ ಸ್ವಲ್ಪ ನೋವಾದರೂ ಸಹ ಬಹಳ ಚೀರಾಡುತ್ತಾರೆ, ಇನ್ನೂ ಕೆಲವರು ಹೆಚ್ಚು ನೋವಿದ್ದರೂ ಸಹ ಖುಷಿಯಿಂದ ನಡೆಸುತ್ತಾ ಸಾಗುತ್ತಾರೆ. ಕರ್ಮಾತೀತ ಸ್ಥಿತಿಯವರೇ ದೇಹದ ಮಾಲೀಕರಾಗಿರುವ ಕಾರಣ ಕರ್ಮ ಭೋಗವಿದ್ದರೂ ಅದರಿಂದ ಭಿನ್ನರಾಗುವ ಅಭ್ಯಾಸಿಗಳಾಗುತ್ತಾರೆ. ಮಧ್ಯ-ಮಧ್ಯದಲ್ಲಿ ಅಶರೀರಿ ಸ್ಥಿತಿಯ ಅನುಭವವು ರೋಗದಿಂದ ದೂರ ಮಾಡಿ ಬಿಡುತ್ತದೆ. ಹೇಗೆ ವೈಜ್ಞಾನಿಕ ಸಾಧನಗಳ ಮೂಲಕ ರೋಗಿಯನ್ನು ಮೂರ್ಛಿತನನ್ನಾಗಿ ಮಾಡಿದಾಗ ನೋವಿದ್ದರೂ ಸಹ ಮರೆತು ಹೋಗುತ್ತಾರೆ, ನೋವಿನ ಅನುಭವವಾಗುವುದಿಲ್ಲ ಏಕೆಂದರೆ ಔಷಧಿಯ ಪ್ರಭಾವವಿರುತ್ತದೆ. ಅದೇರೀತಿ ಕರ್ಮಾತೀತ ಸ್ಥಿತಿಯುಳ್ಳವರು ಅಶರೀರಿಯಾಗುವ ಅಭ್ಯಾಸಿಗಳಾಗುವ ಕಾರಣ ಮಧ್ಯ-ಮಧ್ಯದಲ್ಲಿ ಈ ಆತ್ಮಿಕ ಇಂಜೆಕ್ಷನ್ ಹಾಕಿಕೊಳ್ಳುತ್ತಾರೆ. ಇದರ ಕಾರಣದಿಂದ ಅವರಿಗೆ ಶೂಲದಿಂದ ಮುಳ್ಳಿನ ಸಮಾನ ಅನುಭವವಾಗುತ್ತದೆ. ಇನ್ನೊಂದು ಮಾತು - ಫಾಲೋ ಫಾದರ್ ಮಾಡುವ ಕಾರಣ ವಿಶೇಷ ಆಜ್ಞಾಕಾರಿಗಳಾಗಿ, ಪ್ರತ್ಯಕ್ಷ ಫಲದ ರೂಪದಲ್ಲಿ ತಂದೆಯಿಂದ ವಿಶೇಷವಾಗಿ ಹೃದಯದ ಆಶೀರ್ವಾದಗಳ ಪ್ರಾಪ್ತಿಯಾಗುತ್ತದೆ. ಒಂದು - ತನ್ನ ಅಶರೀರಿಯಾಗುವ ಅಭ್ಯಾಸ, ಇನ್ನೊಂದು - ಆಜ್ಞಾಕಾರಿಗಳಾಗುವ ಪ್ರತ್ಯಕ್ಷ ಫಲವಾಗಿ ತಂದೆಯ ಆಶೀರ್ವಾದಗಳು, ಇವೆರಡೂ ಆ ರೋಗ ಅರ್ಥಾತ್ ಕರ್ಮಭೋಗವನ್ನು ಶೂಲದಿಂದ ಮುಳ್ಳಿನ ಸಮಾನ ಹಗುರವನ್ನಾಗಿ ಮಾಡಿ ಬಿಡುತ್ತದೆ. ಕರ್ಮಾತೀತ ಶ್ರೇಷ್ಠ ಆತ್ಮನು ಕರ್ಮಭೋಗವನ್ನು ಕರ್ಮಯೋಗದ ಸ್ಥಿತಿಯಲ್ಲಿ ಪರಿವರ್ತನೆ ಮಾಡಿಕೊಳ್ಳುವರು ಅಂದಮೇಲೆ ಇಂತಹ ಅನುಭವವಿದೆಯೇ ಅಥವಾ ಬಹಳ ದೊಡ್ಡ ಮಾತೆಂದು ತಿಳಿದುಕೊಳ್ಳುತ್ತೀರಾ? ಸಹಜವೇ ಅಥವಾ ಕಷ್ಟವೇ? ಚಿಕ್ಕದನ್ನು ದೊಡ್ಡದನ್ನಾಗಿ ಮಾಡುವುದು ಮತ್ತು ದೊಡ್ಡದನ್ನು ಚಿಕ್ಕ ಮಾತನ್ನಾಗಿ ಮಾಡುವುದು - ಇದು ತಮ್ಮ ಸ್ಥಿತಿಯ ಮೇಲೆ ಆಧಾರಿತವಾಗಿದೆ. ಬೇಸರವಾಗುವುದು ಹಾಗೂ ತನ್ನ ಅಧಿಕಾರೀತನದ ಸ್ಥಿತಿಯಲ್ಲಿರುವುದು, ಇದು ತನ್ನ ಮೇಲೆ ಆಧಾರಿತವಾಗಿದೆ. ಇದೇನಾಗಿ ಬಿಟ್ಟಿತು! ಅಥವಾ ಏನಾಯಿತೋ ಒಳ್ಳೆಯದೇ ಆಯಿತು. - ಇವೆರಡೂ ತಮ್ಮ ಮೇಲೆ ಆಧಾರಿತವಾಗಿದೆ. ಈ ನಿಶ್ಚಯವು ಕೆಟ್ಟದ್ದನ್ನೂ ಸಹ ಒಳ್ಳೆಯದರಲ್ಲಿ ಪರಿವರ್ತನೆ ಮಾಡಬಲ್ಲದು ಏಕೆಂದರೆ ಲೆಕ್ಕಾಚಾರಗಳು ಸಮಾಪ್ತಿಯಾಗುವುದರಿಂದ ಹಾಗೂ ಸಮಯ-ಪ್ರತಿ ಸಮಯ ಪ್ರಾಕ್ಟಿಕಲ್ ಪೇಪರ್ ಡ್ರಾಮಾನುಸಾರ ಬರುವುದರಿಂದ, ಕೆಲವೊಂದು ಮಾತುಗಳು ಒಳ್ಳೆಯ ರೂಪದಲ್ಲಿ ಮುಂದೆ ಬರುತ್ತದೆ, ಇನ್ನೂ ಕೆಲವೊಮ್ಮೆ ಒಳ್ಳೆಯ ರೂಪವಾಗಿದ್ದರೂ ಸಹ ಹೊರಗಿನ ರೂಪವು ನಷ್ಟದ ರೂಪದಲ್ಲಿ ಕಾಣುತ್ತದೆ ಅಥವಾ ಇದು ಈ ರೂಪದಿಂದ ಒಳ್ಳೆಯದಾಗಲಿಲ್ಲ ಎಂದು ತಾವು ಹೇಳುತ್ತೀರಿ. ಮಾತುಗಳು ಬರುತ್ತವೆ, ಇಲ್ಲಿಯವರೆಗೆ ಇಂತಹ ರೂಪದ ಮಾತುಗಳು ಬರುತ್ತಿವೆ ಮತ್ತು ಬರುತ್ತಲೇ ಇರುತ್ತವೆ ಆದರೆ ನಷ್ಟದ ಪರದೆಯೊಳಗೆ ಲಾಭವು ಅಡಗಿರುತ್ತದೆ. ಭಲೆ ಹೊರಗಿನ ಪರದೆಯು ನಷ್ಟದ ರೂಪದಲ್ಲಿ ಕಾಣಿಸುತ್ತದೆ ಆದರೆ ಒಂದುವೇಳೆ ಸ್ವಲ್ಪ ಸಮಯ ತಾಳ್ಮೆಯಿಂದ ಸಹನಶೀಲ ಸ್ಥಿತಿಯಿಂದ ಅಂತರ್ಮುಖಿಯಾಗಿ ನೋಡಿದರೆ ಆ ಪರದೆಯೊಳಗೆ ಯಾವ ಲಾಭವು ಅಡಗಿರುವುದೋ ಅದೇ ತಮಗೆ ಕಂಡು ಬರುವುದು. ಮೇಲಿನ ಪರದೆಯನ್ನು ನೋಡಿಯೂ ನೋಡದಂತಿರುತ್ತೀರಿ. ಪವಿತ್ರ ಹಂಸಗಳಾಗಿದ್ದೀರಲ್ಲವೆ. ಯಾವಾಗ ಆ ಹಂಸವೇ ಕಲ್ಲು ಮತ್ತು ರತ್ನಗಳನ್ನು ಬೇರ್ಪಡಿಸುತ್ತದೆ ಅಂದಮೇಲೆ ಪವಿತ್ರ ಹಂಸಗಳು ತನ್ನ ಲಾಭವನ್ನು ಪಡೆದುಕೊಳ್ಳುವರು, ನಷ್ಟದ ಮಧ್ಯದಲ್ಲಿಯೂ ಲಾಭವನ್ನೇ ಹುಡುಕುವರು. ತಿಳಿಯಿತೆ? ಬಹು ಬೇಗನೆ ಗಾಬರಿಯಾಗಿ ಬಿಡುತ್ತೀರಲ್ಲವೆ. ಇದರಿಂದ ಏನಾಗುತ್ತದೆ? ಒಳ್ಳೆಯದನ್ನೇನು ಆಲೋಚಿಸಬೇಕೋ ಅದೂ ಸಹ ಗಾಬರಿಯಾಗುವ ಕಾರಣ ಬದಲಾಗಿ ಬಿಡುತ್ತದೆ. ಆದ್ದರಿಂದ ಗಾಬರಿಯಾಗಬೇಡಿ, ಕರ್ಮವನ್ನು ನೋಡಿ ಕರ್ಮ ಬಂಧನದಲ್ಲಿ ಸಿಕ್ಕಿ ಹಾಕಿಕೊಳ್ಳಬೇಡಿ. ಏನಾಯಿತು, ಹೇಗಾಯಿತು, ಈ ರೀತಿ ಆಗಬಾರದಿತ್ತು, ನನ್ನಿಂದಲೇ ಏಕಾಗುತ್ತದೆ, ಬಹುಷಃ ನನ್ನ ಭಾಗ್ಯವೇ ಹೀಗಿದೆ, ಈ ಹಗ್ಗಗಳನ್ನು ಬಂಧಿಸುತ್ತಾ ಹೋಗುತ್ತೀರಿ - ಈ ಸಂಕಲ್ಪಗಳೇ ಹಗ್ಗಗಳಾಗಿವೆ ಆದ್ದರಿಂದ ಕರ್ಮ ಬಂಧನದಲ್ಲಿ ಬಂದು ಬಿಡುತ್ತೀರಿ. ವ್ಯರ್ಥ ಸಂಕಲ್ಪಗಳೇ ಕರ್ಮ ಬಂಧನದ ಸೂಕ್ಷ್ಮ ಹಗ್ಗಗಳಾಗಿವೆ. ಕರ್ಮಾತೀತ ಆತ್ಮನು ಹೀಗೆ ಹೇಳುತ್ತಾರೆ - ಏನಾಗುವುದೋ ಅದು ಒಳ್ಳೆಯದೇ ಆಗುತ್ತದೆ. ನಾನೂ ಒಳ್ಳೆಯವನು, ತಂದೆಯೂ ಒಳ್ಳೆಯವರು, ನಾಟಕವೂ ಒಳ್ಳೆಯದೆಂದು ಹೇಳುತ್ತಾರೆ. ಈ ಸಂಕಲ್ಪವು ಬಂಧನವನ್ನು ಕತ್ತರಿಸುವ ಕತ್ತರಿಯ ಕೆಲಸ ಮಾಡುತ್ತದೆ. ಬಂಧನವು ಕತ್ತರಿಸಲ್ಪಟ್ಟ ನಂತರ ಕರ್ಮಾತೀತರಾಗಿ ಬಿಟ್ಟಿರಲ್ಲವೆ. ಕಲ್ಯಾಣಕಾರಿ ತಂದೆಯ ಮಕ್ಕಳಾಗಿರುವ ಕಾರಣ ಸಂಗಮಯುಗದ ಪ್ರತೀ ಕ್ಷಣವು ಕಲ್ಯಾಣಕಾರಿಯಾಗಿದೆ. ಪ್ರತೀಕ್ಷಣ ತಮ್ಮ ಕರ್ತವ್ಯವೇ ಕಲ್ಯಾಣ ಮಾಡುವುದು, ಸೇವೆಯೇ ಕಲ್ಯಾಣ ಮಾಡುವುದಾಗಿದೆ. ಬ್ರಾಹ್ಮಣರ ಕರ್ತವ್ಯವೇ ಆಗಿದೆ – ವಿಶ್ವ ಪರಿವರ್ತಕರು, ವಿಶ್ವ ಕಲ್ಯಾಣಿಗಳು. ಇಂತಹ ನಿಶ್ಚಯಬುದ್ಧಿ ಆತ್ಮನಿಗೆ ಪ್ರತಿಯೊಂದು ಗಳಿಗೆ ನಿಶ್ಚಿತ ಕಲ್ಯಾಣಕಾರಿಯಾಗಿದೆ. ತಿಳಿಯಿತೆ?

ಕರ್ಮಾತೀತ ಸ್ಥಿತಿಯ ಪರಿಭಾಷೆಯು ಇನ್ನೂ ಬಹಳಷ್ಟಿದೆ. ಹೇಗೆ ಕರ್ಮಗಳ ಗತಿಯು ಗುಹ್ಯವಾಗಿದೆಯೋ ಹಾಗೆಯೇ ಕರ್ಮಾತೀತ ಸ್ಥಿತಿಯ ಪರಿಭಾಷೆಯೂ ಸಹ ಮಹಾನ್ ಆಗಿದೆ ಮತ್ತು ಕರ್ಮಾತೀತರಾಗುವುದು ಅವಶ್ಯಕವಾಗಿದೆ. ಕರ್ಮಾತೀತರಾಗದೇ ತಂದೆಯ ಜೊತೆಯಲ್ಲಿಯೇ ಹೋಗಲು ಸಾಧ್ಯವಿಲ್ಲ. ಜೊತೆಯಲ್ಲಿ ಯಾರು ಹೋಗುವರು? ಯಾರು ಸಮಾನರಾಗಿರುವರೋ ಅವರೇ ಜೊತೆಯಲ್ಲಿ ಹೋಗುತ್ತಾರೆ. ಬ್ರಹ್ಮಾ ತಂದೆಯನ್ನು ನೋಡಿದಿರಿ, ಕರ್ಮಾತೀತ ಸ್ಥಿತಿಯನ್ನು ಹೇಗೆ ಪ್ರಾಪ್ತಿ ಮಾಡಿಕೊಂಡರು? ಕರ್ಮಾತೀತರಾಗುವುದನ್ನು ಫಾಲೋ ಮಾಡುವುದು ಅರ್ಥಾತ್ ಜೊತೆಯಲ್ಲಿ ನಡೆಯಲು ಯೋಗ್ಯರಾಗುವುದು. ಇಂದು ಇಷ್ಟನ್ನೇ ತಿಳಿಸುತ್ತೇವೆ, ಇಷ್ಟನ್ನು ಪರಿಶೀಲನೆ ಮಾಡಿಕೊಳ್ಳಿ ಉಳಿದುದನ್ನು ಮತ್ತೆಂದಾದರೂ ತಿಳಿಸುತ್ತೇವೆ. ಒಳ್ಳೆಯದು.

ಸರ್ವ ಅಧಿಕಾರಿ ಸ್ಥಿತಿಯಲ್ಲಿ ಸ್ಥಿತರಾಗಿರುವಂತಹ, ಕರ್ಮ ಬಂಧನವನ್ನು ಕರ್ಮದ ಸಂಬಂಧದಲ್ಲಿ ಪರಿವರ್ತನೆ ಮಾಡಿಕೊಳ್ಳುವಂತಹ, ಕರ್ಮ ಭೋಗವನ್ನು ಕರ್ಮಯೋಗದ ಸ್ಥಿತಿಯಲ್ಲಿ ಶೂಲದಿಂದ ಮುಳ್ಳಿನ ಸಮಾನ ಪರಿವರ್ತನೆ ಮಾಡಿಕೊಳ್ಳುವಂತಹ, ಪ್ರತಿಕ್ಷಣ ಕಲ್ಯಾಣ ಮಾಡುವಂತಹ, ಸದಾ ಬ್ರಹ್ಮಾ ತಂದೆಯ ಸಮಾನ ಕರ್ಮಾತೀತ ಸ್ಥಿತಿಯ ಅನುಭವ ಮಾಡುವಂತಹ ವಿಶೇಷ ಆತ್ಮಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ:

1. ಸದಾ ತಮ್ಮನ್ನು ಸಮರ್ಥ ತಂದೆಯ ಸಮರ್ಥ ಮಕ್ಕಳೆಂದು ಅನುಭವ ಮಾಡುತ್ತೀರಾ? ಕೆಲವೊಮ್ಮೆ ಸಮರ್ಥ, ಕೆಲವೊಮ್ಮೆ ಬಲಹೀನ - ಈ ರೀತಿಯಂತು ಇರುವುದಿಲ್ಲವೇ? ಸಮರ್ಥ ಎಂದರೆ ಸದಾ ವಿಜಯಿ. ಸಮರ್ಥನೆಂದಿಗೂ ಸಹ ಸೋಲಲು ಸಾಧ್ಯವಿಲ. ಸ್ವಪ್ನದಲ್ಲಿಯೂ ಸೋಲುಂಟಾಗಲು ಸಾಧ್ಯವಿಲ್ಲ. ಸ್ವಪ್ನ, ಸಂಕಲ್ಪ ಮತ್ತು ಕರ್ಮ - ಎಲ್ಲದರಲ್ಲಿ ಸದಾ ವಿಜಯಿ ಆಗಿರುವವರಿಗೆ ಸಮರ್ಥನೆಂದು ಹೇಳಲಾಗುತ್ತದೆ. ಈ ರೀತಿ ಸಮರ್ಥರಾಗಿದ್ದೀರಾ? ಏಕೆಂದರೆ ಈಗ ಯಾರು ಬಹಳ ಕಾಲದಿಂದ ವಿಜಯಿ ಆಗಿರುತ್ತಾರೆ, ಅವರೇ ವಿಜಯ ಮಾಲೆಯಲ್ಲಿ ಗಾಯನ-ಪೂಜ್ಯನೀಯ ಯೋಗ್ಯರಾಗುತ್ತಾರೆ. ಒಂದುವೇಳೆ ಬಹಳ ಕಾಲದ ವಿಜಯಿಯಲ್ಲ, ಸಮರ್ಥನಲ್ಲವೆಂದರೆ ಬಹಳ ಕಾಲದ ಗಾಯನ-ಪೂಜ್ಯನೀಯ ಯೋಗ್ಯರು ಆಗುವುದಿಲ್ಲ. ಯಾರು ಸದಾ ಮತ್ತು ಬಹಳ ಕಾಲದ ವಿಜಯಿ ಆಗಿದ್ದಾರೆಯೋ ಅವರೇ ಬಹಳ ಸಮಯ ವಿಜಯ ಮಾಲೆಯಲ್ಲಿ ಗಾಯನ ಮತ್ತು ಪೂಜ್ಯನೀಯ ಯೋಗ್ಯರಾಗುತ್ತಾರೆ ಮತ್ತು ಯಾರು ಕೆಲವೊಮ್ಮೆ ವಿಜಯಿ ಆಗಿದ್ದಾರೆ, ಅವರು ಕೆಲವೊಮ್ಮೆಗೆ ಅಂದರೆ 16 ಸಾವಿರದ ಮಾಲೆಯಲ್ಲಿ ಬರುವರು. ಅಂದಮೇಲೆ ಬಹಳ ಕಾಲದ ಲೆಕ್ಕವಿದೆ ಮತ್ತು ಸದಾಕಾಲದ ಲೆಕ್ಕವೂ ಇದೆ. 16 ಸಾವಿರದ ಮಾಲೆಯನ್ನು ಎಲ್ಲಾ ಮಂದಿರಗಳಲ್ಲಿ ಇರುವುದಿಲ್ಲ, ಕೆಲಕೆಲವು ಮಂದಿರಗಳಲ್ಲಿ ಇಡುತ್ತಾರೆ.

2. ಎಲ್ಲರೂ ತಮ್ಮನ್ನು ಈ ವಿಶಾಲ ಡ್ರಾಮಾದಲ್ಲಿ ಹೀರೋ ಪಾತ್ರಧಾರಿ ಆತ್ಮರೆಂದು ಅನುಭವ ಮಾಡುತ್ತೀರಾ? ತಮ್ಮೆಲ್ಲರ ಹೀರೋ ಪಾತ್ರವಿದೆ. ಹೀರೋ ಪಾತ್ರಧಾರಿ ಏಕೆ ಆಗಬೇಕು? ಏಕೆಂದರೆ ಯಾವ ಸರ್ವ ಶ್ರೇಷ್ಠ ತಂದೆಯ ಜೀರೋ ಆಗಿದ್ದಾರೆ, ಅವರ ಜೊತೆ ಪಾತ್ರವನ್ನು ಅಭಿನಯಿಸುವವರು ಆಗಿದ್ದೀರಿ. ತಾವೂ ಜೀರೋ ಹಾಗೂ ಬಿಂದು ಆಗಿದ್ದೀರಿ. ಆದರೆ ತಾವು ಶರೀರವುಳ್ಳವರು ಆಗುತ್ತೀರಿ ಮತ್ತು ತಂದೆಯು ಸದಾ ಜೀರೋ ಆಗಿದ್ದಾರೆ. ಅಂದಮೇಲೆ ಜೀರೋ ಜೊತೆಗೆ ಪಾತ್ರವನ್ನಭಿನಯಿಸುವ ಹೀರೋ ಪಾತ್ರಧಾರಿ ಆಗಿದ್ದೇವೆ ಎಂಬುದು ಎಷ್ಟು ಸ್ಪಷ್ಟವಿರುತ್ತದೆಯೆಂದರೆ ಸದಾ ಯಥಾರ್ಥ ಪಾತ್ರವನ್ನು ಅಭಿನಯಿಸುವಿರಿ, ಸ್ವತಹವಾಗಿಯೇ ಗಮನ ಹರಿಯುತ್ತದೆ. ಹೇಗೆ ಅಲ್ಪಕಾಲದ ಡ್ರಾಮಾದಲ್ಲಿ ಹೀರೊ ಪಾತ್ರಧಾರಿಗಳಲ್ಲಿ ಎಷ್ಟೊಂದು ಗಮನವಿರುತ್ತದೆ. ಅತಿ ಶ್ರೇಷ್ಠವಾದ ಹೀರೋ ಪಾತ್ರವು ತಮ್ಮೆಲ್ಲರದಾಗಿದೆ. ಸದಾ ಈ ನಶೆ ಹಾಗೂ ಖುಷಿಯಲ್ಲಿರಿ - ವಾಹ್ ನನ್ನ ಹೀರೋ ಪಾತ್ರವೇ! ಅದರಿಂದ ಇಡೀ ವಿಶ್ವದ ಆತ್ಮರು ಮತ್ತೆ-ಮತ್ತೆ ಮಹಿಮೆ ಮಾಡುತ್ತಾರೆಯೇ? ದ್ವಾಪರದಿಂದ ಯಾವ ಕೀರ್ತನೆಯನ್ನು ಮಾಡುತ್ತಾರೆಯೋ ಅದು ತಮ್ಮ ಈ ಸಮಯದ ಹೀರೊ ಪಾತ್ರದ ನೆನಪಾರ್ಥವೇ ಆಗಿದೆ. ಇದೆಷ್ಟು ಒಳ್ಳೆಯ ನೆನಪಾರ್ಥವಾಗಿದೆ! ತಾವು ಸ್ವಯಂ ಹೀರೊ ಆಗಿದ್ದೀರಿ. ಆದ್ದರಿಂದ ತಮ್ಮ ಹಿಂದೆ ಈಗಿನವರೆಗೂ ತಮ್ಮ ಗಾಯನವು ನಡೆಯುತ್ತಿರುತ್ತದೆ. ಅಂತಿಮ ಜನ್ಮದಲ್ಲಿಯೂ ತಮ್ಮ ಗಾಯನವನ್ನು ಕೇಳುತ್ತಿದ್ದೀರಾ! ಗೋಪಿವಲ್ಲಭನದೇ ಗಾಯನವಿದೆ ಅಂದಮೇಲೆ ಗೊಲ್ಲ ಬಾಲನ ಗಾಯನವೂ ಇದೆ, ಗೋಪಿಕೆಯರ ಗಾಯನವೂ ಇದೆ. ತಂದೆಯದು ಶಿವನ ರೂಪದಲ್ಲಿ ಗಾಯನವಿದೆ, ಅಂದಾಗ ಮಕ್ಕಳ ಗಾಯನವು ಶಕ್ತಿಯರ ರೂಪದಲ್ಲಿ ಆಗುತ್ತದೆ. ಸದಾ ಹೀರೋ ಪಾತ್ರವನ್ನಭಿನಯಿಸುವ ಶ್ರೇಷ್ಠ ಆತ್ಮರಾಗಿದ್ದೇವೆ - ಇದೇ ಸ್ಮೃತಿಯಲ್ಲಿ ಸದಾ ಖುಷಿಯಲ್ಲಿ ಮುಂದೆ ಸಾಗುತ್ತಾ ನಡೆಯುತ್ತಿರಿ.

ಕುಮಾರರೊಂದಿಗೆ:

1. ಸಹಜಯೋಗಿ ಕುಮಾರರು ಆಗಿದ್ದೀರಲ್ಲವೇ? ನಿರಂತರ ಯೋಗಿ ಕುಮಾರ, ಕರ್ಮಯೋಗಿ ಕುಮಾರ ಏಕೆಂದರೆ ಕುಮಾರರು ಎಷ್ಟು ತಮ್ಮನ್ನು ವೃದ್ಧಿ ಮಾಡಿಕೊಳ್ಳಬೇಕೆಂದು ಬಯಸುತ್ತೀರಿ ಅಷ್ಟೂ ವೃದ್ಧಿ ಮಾಡಿಕೊಳ್ಳಬಹುದು. ಏಕೆ? ನಿರ್ಬಂಧನರಾಗಿದ್ದಾರೆ, ಹೊರೆಯಿಲ್ಲ ಮತ್ತು ಜವಾಬ್ದಾರಿ ಇಲ್ಲ ಆದ್ದರಿಂದ ಸಹಜತೆಯಿದೆ. ಸಹಜತೆಯಿಂದ ಇರುವ ಕಾರಣದಿಂದ ತಾವೆಷ್ಟು ಶ್ರೇಷ್ಠ ಮಟ್ಟಕ್ಕೆ ಹೋಗಬೇಕೆಂದು ಬಯಸುತ್ತೀರಿ ಅಷ್ಟೂ ಹೋಗಬಹುದು. ನಿರಂತರ ಯೋಗಿ, ಸಹಜ ಯೋಗಿ - ಇದು ಶ್ರೇಷ್ಠ ಸ್ಥಿತಿ ಆಗಿದೆ ಹಾಗೂ ಇದು ಶ್ರೇಷ್ಠ ಮಟ್ಟಕ್ಕೆ ಹೋಗುವುದಾಗಿದೆ. ಇಂತಹ ಶ್ರೇಷ್ಠ ಸ್ಥಿತಿಯವರಿಗೆ ಹೇಳಲಾಗುತ್ತದೆ - ವಿಜಯಿ ಕುಮಾರು. ವಿಜಯಿಗಳು ಆಗಿದ್ದೀರಾ ಅಥವಾ ಕೆಲವೊಮ್ಮೆ ಸೋಲು, ಕೆಲವೊಮ್ಮೆ ಗೆಲುವು - ಇದೇ ಆಟದಲ್ಲಂತು ಆಡುವುದಿಲ್ಲವೇ? ಒಂದುವೇಳೆ ಕೆಲವೊಮ್ಮೆ ಸೋಲು, ಕೆಲವೊಮ್ಮೆ ಗೆಲುವಿನ ಸಂಸ್ಕಾರವಿರುತ್ತದೆಯೆಂದರೆ ಏಕರಸ ಸ್ಥಿತಿಯ ಅನುಭವ ಆಗುವುದಿಲ್ಲ. ಒಂದೇ ಲಗನ್ನಿನಲ್ಲಿ ಮಗ್ನರಾಗಿರುವ ಅನುಭವ ಮಾಡುವುದಿಲ್ಲ.

2. ಸದಾ ಪ್ರತೀ ಕರ್ಮದಲ್ಲಿ ಚಮತ್ಕಾರ ಮಾಡುವಂತಹ ಕುಮಾರರು ಆಗಿದ್ದೀರಲ್ಲವೇ? ಯಾವುದೇ ಕರ್ಮವು ಸಾಧಾರಣ ಆಗಬಾರದು, ಚಮತ್ಕಾರ ಮಾಡುವಂತದ್ದಾಗಿರಲಿ. ಹೇಗೆ ತಂದೆಯ ಮಹಿಮೆಯನ್ನು ಮಾಡುತ್ತೀರಿ, ತಂದೆಯ ಚಮತ್ಕಾರದ ಗಾಯನ ಮಾಡುತ್ತೀರಿ. ಹಾಗೆಯೇ ಕುಮಾರರು ಅರ್ಥಾತ್ ಪ್ರತೀ ಕರ್ಮದಲ್ಲಿ ಚಮತ್ಕಾರ ತೋರಿಸುವವರು. ಕೆಲವೊಮ್ಮೆ ಒಂದುರೀತಿ, ಕೆಲವೊಮ್ಮೆ ಇನ್ನೊಂದು ರೀತಿ ಇರುವವರಲ್ಲ. ಹೀಗೂ ಆಗಬಾರದು - ಎಲ್ಲಿ ಯಾವುದೇ ಸೆಳೆಯುತ್ತದೆ ಅಲ್ಲಿಯೇ ಸೆಳೆದು ಬಿಡುತ್ತೀರಿ, ಕೆಲವೊಮ್ಮೆಗೂ ಬೀಳುವವರು ಆಗಬಾರದು, ಚಮತ್ಕಾರ ಮಾಡುವವರಾಗಿರಿ. ಅವಿನಾಶಿ ಆಗಿರುವವರು, ಅನ್ಯರನ್ನೂ ಅವಿನಾಶಿ ಮಾಡುವವರಾಗಿದ್ದೇವೆ - ಈ ರೀತಿ ಚಾಲೆಂಜ್ ಮಾಡುವವರಾಗಿರಿ. ಇಂತಹ ಕಮಾಲ್ ಮಾಡಿ ತೋರಿಸಿರಿ - ಪ್ರತಿಯೊಬ್ಬ ಕುಮಾರರೂ ನಡೆಯುವಾಗ-ಸುತ್ತಾಡುವಾಗ ಫರಿಶ್ತೆಯಂತೆ ಆಗಿರಬೇಕು, ದೂರದಿಂದಲೂ ಫರಿಶ್ತೆಯ ಹೊಳಪಿನ ಅನುಭವವಾಗಲಿ. ವಾಣಿಯಿಂದ ಸೇವೆಯ ಕಾರ್ಯಕ್ರಮಗಳನ್ನು ಬಹಳಷ್ಟು ಮಾಡಿದ್ದೀರಿ, ಅದನ್ನಂತು ಮಾಡುತ್ತಲೇ ಇರುತ್ತೀರಿ ಆದರೆ ವರ್ತಮಾನದಲ್ಲಿ ಪ್ರತ್ಯಕ್ಷ ಪ್ರಮಾಣವನ್ನು ಬಯಸುತ್ತಾರೆ. ಪ್ರತ್ಯಕ್ಷ ಪ್ರಮಾಣವು ಬಹಳ ಶ್ರೇಷ್ಠವಾದ ಪ್ರಮಾಣವಾಗಿದೆ. ಪ್ರತ್ಯಕ್ಷ ಪ್ರಮಾಣವಂತು ಇಷ್ಟೆಲ್ಲರೂ ಆಗಿ ಬಿಟ್ಟಿರಿ ಎಂದರೆ ಸಹಜ ಸೇವೆಯು ಆಗಿ ಬಿಡುತ್ತದೆ. ಫರಿಶ್ತಾ ಸ್ಥಿತಿಯ ಸೇವೆಯನ್ನು ಮಾಡುತ್ತೀರೆಂದರೆ ಪರಿಶ್ರಮವೂ ಕಡಿಮೆ, ಸಫಲತೆಯೂ ಹೆಚ್ಚಾಗಿ ಸಿಗುತ್ತದೆ. ಕೇವಲ ವಾಣಿಯಿಂದ ಸೇವೆಯನ್ನು ಮಾಡುವುದಲ್ಲ, ಆದರೆ ಮನ, ವಾಣಿ ಮತ್ತು ಕರ್ಮ ಮೂರರಿಂದಲೂ ಒಟ್ಟಿಗೆ ಸೇವೆಯಾಗಲಿ - ಇದಕ್ಕೆ ಚಮತ್ಕಾರ ಎಂದು ಹೇಳಲಾಗುತ್ತದೆ. ಒಳ್ಳೆಯದು.

ವಿದಾಯಿಯ ಸಮಯದಲ್ಲಿ:

ನಾಲ್ಕೂ ಕಡೆಯಲ್ಲಿರುವ ತೀವ್ರ ಪುರುಷಾರ್ಥಿ, ಸದಾ ಸೇವಾಧಾರಿ, ಸದಾ ಡಬಲ್ ಲೈಟ್ ಆಗಿದ್ದು ಅನ್ಯರನ್ನೂ ಡಬಲ್ ಲೈಟ್ ಮಾಡುವಂತಹ, ಸಫಲತೆಯನ್ನು ಅಧಿಕಾರದಿಂದ ಪ್ರಾಪ್ತಿ ಮಾಡಿಕೊಳ್ಳುವಂತಹ, ಸದಾ ತಂದೆಯ ಸಮಾನ ಮುಂದುವರೆಯುವ ಹಾಗೂ ಅನ್ಯರನ್ನೂ ಮುಂದುವರೆಸುವ, ಇದೇರೀತಿ ಸದಾ ಒಲವು-ಉತ್ಸಾಹದಲ್ಲಿರುವ ಶ್ರೇಷ್ಠ ಆತ್ಮರಿಗೆ, ಸ್ನೇಹಿ ಮಕ್ಕಳಿಗೆ ಬಾಪ್ದಾದಾರವರ ಬಹಳ-ಬಹಳ ಪ್ರೀತಿಪೂರ್ವಕವಾಗಿ ನೆನಪು-ಪ್ರೀತಿ ಹಾಗೂ ಸುಪ್ರಭಾತ.

ವರದಾನ:

ವರದಾನ: ಹೆಜ್ಜೆ-ಹೆಜ್ಜೆಯಲ್ಲಿ ಎಚ್ಚರಿಕೆಯನ್ನು ಇಡುತ್ತಾ ಪದಮಗಳ ಸಂಪಾದನೆ ಜಮಾ ಮಾಡಿಕೊಳ್ಳುವ ಪದಮಾಪತಿ ಭವ.

ತಂದೆಯವರು ಮಕ್ಕಳಿಗೆ ಬಹಳ ಶ್ರೇಷ್ಠ ಸ್ಥಿತಿಯಲ್ಲಿ ಇರುವಂತಹ ಎಚ್ಚರಿಕೆಯನ್ನು ಕೊಡುತ್ತಿದ್ದಾರೆ. ಆದ್ದರಿಂದ ಸ್ವಲ್ಪವೂ ತಪ್ಪು ಮಾಡುವ ಸಮಯವಲ್ಲ, ಈಗಂತು ಹೆಜ್ಜೆ-ಹೆಜ್ಜೆಯಲ್ಲಿ ಎಚ್ಚರಿಕೆಯನ್ನು ಇಟ್ಟುಕೊಳ್ಳುತ್ತಾ, ಹೆಜ್ಜೆಯಲ್ಲಿ ಪದಮಗಳ ಸಂಪಾದನೆ ಮಾಡಿಕೊಳ್ಳುತ್ತಾ ಪದಮಪತಿ ಆಗಿರಿ. ಹೇಗೆ ಪದಮಾಪದಮ ಭಾಗ್ಯಶಾಲಿ ಎಂದು ಹೆಸರಿದೆ, ಕರ್ಮವೂ ಅದೇರೀತಿ ಇರಲಿ. ಒಂದು ಹೆಜ್ಜೆಯೂ ಸಹ ಪದಮಗಳ ಸಂಪಾದನೆಯಾಗದೆ ಉಳಿದುಕೊಳ್ಳಬಾರದು. ಅಂದಮೇಲೆ ಬಹಳ ಯೋಚನೆ ಮಾಡಿ - ಅದನ್ನು ತಿಳಿದುಕೊಂಡು, ಪ್ರತೀ ಹೆಜ್ಜೆಯನ್ನೂ ಶ್ರೀಮತದನುಸಾರ ಇಡಬೇಕು. ಶ್ರೀಮತದಲ್ಲಿ ಮನಮತವು ಸೇರ್ಪಡೆ ಆಗಬಾರದು.

ಸ್ಲೋಗನ್:

ಸ್ಲೋಗನ್: ಮನಸ್ಸನ್ನು ಆದೇಶದ ಅನುಸಾರ ನಡೆಸುತ್ತೀರೆಂದರೆ ಮನ್ಮನಾಭವದ ಸ್ಥಿತಿಯು ಸ್ವತಹವಾಗಿ ಇರುತ್ತದೆ.