27.04.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಮ್ಮ ಸ್ವಧರ್ಮ ಶಾಂತಿಯಾಗಿದೆ, ಸತ್ಯವಾದ ಶಾಂತಿಯು ಶಾಂತಿಧಾಮದಲ್ಲಿಯೇ ಸಿಗುತ್ತದೆ, ಈ ಮಾತನ್ನು ಎಲ್ಲರಿಗೂ ತಿಳಿಸಬೇಕು, ಸ್ವಧರ್ಮದಲ್ಲಿಯೇ ಸ್ಥಿತರಾಗಿರಬೇಕಾಗಿದೆ”

ಪ್ರಶ್ನೆ:
ಯಾವ ಜ್ಞಾನವು ಒಬ್ಬ ತಂದೆಯ ಬಳಿಯಿದೆ ಅದನ್ನು ನೀವೀಗ ಓದುತ್ತಿದ್ದೀರಿ?

ಉತ್ತರ:
ಪಾಪ ಮತ್ತು ಪುಣ್ಯದ ಜ್ಞಾನ ತಂದೆಯ ಬಳಿಯಿದೆ. ಭಾರತವಾಸಿಗಳು ಯಾವಾಗ ತಂದೆಯನ್ನು ನಿಂದನೆ ಮಾಡಲು ತೊಡಗುವರೋ ಆಗ ಆತ್ಮವು ಪಾಪಾತ್ಮವಾಗುತ್ತದೆ ಹಾಗೂ ತಂದೆ ಮತ್ತು ಡ್ರಾಮಾವನ್ನು ತಿಳಿದುಕೊಂಡಾಗ ಪುಣ್ಯಾತ್ಮರಾಗುತ್ತಾರೆ. ಈ ವಿದ್ಯೆಯನ್ನು ನೀವು ಮಕ್ಕಳು ಈಗಲೇ ಓದುತ್ತೀರಿ. ನಿಮಗೆ ತಿಳಿದಿದೆ - ಎಲ್ಲರಿಗೂ ಸದ್ಗತಿ ಕೊಡುವವರು ಒಬ್ಬರೇ ಆಗಿದ್ದಾರೆ. ಮನುಷ್ಯರು ಮನುಷ್ಯರಿಗೆ ಸದ್ಗತಿ ಅಥವಾ ಮುಕ್ತಿ-ಜೀವನ್ಮುಕ್ತಿಯನ್ನು ಕೊಡಲು ಸಾಧ್ಯವಿಲ್ಲ.

ಗೀತೆ:
ಈ ಪಾಪದ ಪ್ರಪಂಚದಿಂದ...................

ಓಂ ಶಾಂತಿ.
ತಂದೆಯು ತಿಳಿಸುತ್ತಾರೆ - ಇದು ಪಾಪಾತ್ಮರ ಪ್ರಪಂಚವಾಗಿದೆ ಹಾಗೂ ಭಾರತವೇ ಪುಣ್ಯಾತ್ಮರ ಪ್ರಪಂಚವಾಗಿತ್ತು ಎಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು. ಈ ಭಾರತ ಸುಖಧಾಮವಾಗಿತ್ತು ಮತ್ತ್ಯಾವುದೇ ಖಂಡವಿರಲಿಲ್ಲ, ಒಂದೇ ಭಾರತವಿತ್ತು. ಸುಖ-ಶಾಂತಿ ಸತ್ಯಯುಗದಲ್ಲಿತ್ತು ಯಾವುದನ್ನು ಸ್ವರ್ಗವೆಂದು ಕರೆಯುತ್ತಿದ್ದರು, ಇದು ನರಕವಾಗಿದೆ. ಭಾರತವೇ ಸ್ವರ್ಗವಾಗಿತ್ತು, ಈಗ ನರಕವಾಗಿದೆ. ನರಕದಲ್ಲಿ ಸುಖ-ಶಾಂತಿ ಎಲ್ಲಿಂದ ಬರಲು ಸಾಧ್ಯ? ಕಲಿಯುಗಕ್ಕೆ ನರಕ ಎಂದು ಹೇಳಲಾಗುತ್ತದೆ. ಕಲಿಯುಗದ ಅಂತ್ಯವನ್ನು ರೌರವ ನರಕವೆಂದು ಕರೆಯಲಾಗುತ್ತದೆ, ದುಃಖಧಾಮವೆಂದು ಹೇಳಲಾಗುತ್ತದೆ. ಭಾರತವೇ ಸುಖಧಾಮವಾಗಿತ್ತು ಯಾವಾಗ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಭಾರತವಾಸಿಗಳು ಪವಿತ್ರ ಗೃಹಸ್ಥ ಧರ್ಮದಲ್ಲಿದ್ದರು, ಪವಿತ್ರತೆಯೂ ಇತ್ತು, ಸುಖ-ಶಾಂತಿಯೂ ಇತ್ತು, ಸಂಪತ್ತು ಸಮೃದ್ಧಿಯಾಗಿತ್ತು, ಈಗ ಅದೇ ಭಾರತ ಪತಿತವಾಗಿದೆ. ಎಲ್ಲರೂ ವಿಕಾರಿಗಳಾಗಿದ್ದಾರೆ. ಇದು ದುಃಖಧಾಮವಾಗಿದೆ, ಭಾರತ ಸುಖಧಾಮವಾಗಿತ್ತು. ಮತ್ತು ನಾವಾತ್ಮಗಳು ಎಲ್ಲಿ ನಿವಾಸ ಮಾಡುತ್ತೇವೆಯೋ ಅದು ಶಾಂತಿಧಾಮವಾಗಿದೆ. ಶಾಂತಿಯು ಶಾಂತಿಧಾಮದಲ್ಲಿಯೇ ಸಿಗಲು ಸಾಧ್ಯ. ಆತ್ಮವು ಶಾಂತವಾಗಿ ಅಲ್ಲಿರಲು ಸಾಧ್ಯ ಯಾವುದನ್ನು ಸ್ವೀಟ್ಹೋಮ್, ನಿರಾಕಾರಿ ಪ್ರಪಂಚವೆಂದು ಹೇಳಲಾಗುತ್ತದೆ, ಅದು ಆತ್ಮಗಳ ಮನೆಯಾಗಿದೆ. ಅಲ್ಲಿ ಇರುವಾಗ ಆತ್ಮವು ಶಾಂತವಾಗಿರುತ್ತದೆ, ಬಾಕಿ ಶಾಂತಿಯು ಯಾವುದೇ ಕಾಡಿಗೆ ಹೋಗುವುದರಿಂದ ಸಿಗುವುದಿಲ್ಲ. ಶಾಂತಿಧಾಮವಂತೂ ಅದೇ ಆಗಿದೆ, ಸತ್ಯಯುಗದಲ್ಲಿ ಸುಖವೂ ಇರುತ್ತದೆ, ಶಾಂತಿಯೂ ಇರುತ್ತದೆ. ಈ ದುಃಖಧಾಮದಲ್ಲಿ ಶಾಂತಿಯಿರಲು ಸಾಧ್ಯವೇ ಇಲ್ಲ. ಶಾಂತಿಧಾಮದಲ್ಲಿ ಶಾಂತಿಯು ಸಿಗಲು ಸಾಧ್ಯ. ಸುಖಧಾಮದಲ್ಲಿ ಕರ್ಮವು ನಡೆಯುತ್ತದೆ, ಶರೀರದಿಂದ ಪಾತ್ರವನ್ನಭಿನಯಿಸಲಾಗುತ್ತದೆ, ಈ ದುಃಖಧಾಮದಲ್ಲಿ ಸುಖ-ಶಾಂತಿಯಿರುವ ಒಬ್ಬ ಮನುಷ್ಯನೂ ಇಲ್ಲ. ಇದು ಭ್ರಷ್ಠಾಚಾರಿ, ಪತಿತಧಾಮವಾಗಿದೆ ಆದ್ದರಿಂದ ಪತಿತ-ಪಾವನನನ್ನು ಕರೆಯುತ್ತಾರೆ. ಆದರೆ ತಂದೆಯನ್ನು ಯಾರೂ ತಿಳಿದುಕೊಳ್ಳದೆ ನಿರ್ಧನಿಕರಾಗಿ ಬಿಟ್ಟಿದ್ದಾರೆ. ಅನಾಥರಾಗಿರುವ ಕಾರಣ ಪರಸ್ಪರದಲ್ಲಿ ಜಗಳವಾಡುತ್ತಿರುತ್ತಾರೆ. ಎಷ್ಟೊಂದು ದುಃಖ, ಅಶಾಂತಿ, ಹೊಡೆದಾಟಗಳಿವೆ. ಇದು ರಾವಣ ರಾಜ್ಯವಾಗಿದೆ. ರಾಮರಾಜ್ಯವು ಬೇಕೆಂದು ಬಯಸುತ್ತಿರುತ್ತಾರೆ. ರಾವಣ ರಾಜ್ಯದಲ್ಲಿ ಸುಖವೂ ಇಲ್ಲ, ಶಾಂತಿಯೂ ಇಲ್ಲ. ರಾಮ ರಾಜ್ಯದಲ್ಲಿ ಸುಖ-ಶಾಂತಿ ಎರಡೂ ಇರುತ್ತದೆ. ಪರಸ್ಪರದಲ್ಲಿ ಎಂದೂ ಜಗಳವಿರುವುದಿಲ್ಲ, ಅಲ್ಲಿ 5 ವಿಕಾರಗಳೇ ಇರುವುದಿಲ್ಲ. ಇಲ್ಲಿ 5 ವಿಕಾರಗಳೂ ಇವೆ, ಮುಖ್ಯವಾಗಿ ಮೊದಲನೆಯದು ದೇಹಾಭಿಮಾನವಾಗಿದೆ ನಂತರ ಕಾಮ, ಕ್ರೋಧ ವಿಕಾರವಾಗಿದೆ. ಭಾರತವು ಯಾವಾಗ ಸ್ವರ್ಗವಾಗಿತ್ತೋ ಆಗ ಈ ವಿಕಾರಗಳಿರಲಿಲ್ಲ. ಅಲ್ಲಿ ಎಲ್ಲರೂ ದೇಹೀ-ಅಭಿಮಾನಿಗಳಾಗಿರುತ್ತಾರೆ. ಈಗ ಎಲ್ಲಾ ಮನುಷ್ಯರು ದೇಹಾಭಿಮಾನಿಗಳಾಗಿದ್ದಾರೆ. ದೇವತೆಗಳು ದೇಹೀ-ಅಭಿಮಾನಿಗಳಾಗಿದ್ದರು, ದೇಹಾಭಿಮಾನಿ ಮನುಷ್ಯರು ಎಂದೂ ಯಾರಿಗೂ ಸುಖವನ್ನು ಕೊಡಲು ಸಾಧ್ಯವೇ ಇಲ್ಲ, ಒಬ್ಬರಿಗೊಬ್ಬರು ದುಃಖವನ್ನೇ ಕೊಡುತ್ತಾರೆ. ಲಕ್ಷಾಧೀಶ್ವರ, ಕೋಟ್ಯಾಧೀಶ್ವರರು, ಪದಮಾಪತಿಗಳು ಸುಖಿಯಾಗಿದ್ದಾರೆಂದು ತಿಳಿದುಕೊಳ್ಳಬೇಡಿ. ಇದೆಲ್ಲವೂ ಮಾಯೆಯ ಆಡಂಬರವಾಗಿದೆ, ಇದು ಮಾಯೆಯ ರಾಜ್ಯವಾಗಿದೆ. ಈಗ ಈ ಮಾಯೆಯ ರಾಜ್ಯವನ್ನು ವಿನಾಶ ಮಾಡಲು ಮಹಾಭಾರತ ಯುದ್ಧ ಸನ್ಮುಖದಲ್ಲಿ ನಿಂತಿದೆ. ಇದರ ನಂತರ ಸ್ವರ್ಗದ ಬಾಗಿಲು ತೆರೆಯಲ್ಪಡುತ್ತದೆ. ಅರ್ಧಕಲ್ಪದ ನಂತರ ಮತ್ತೆ ನರಕದ ಬಾಗಿಲು ತೆರೆಯುತ್ತದೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ಭಕ್ತಿಯನ್ನು ಮಾಡುವುದರಿಂದ ಭಗವಂತನು ಸಿಗುತ್ತಾರೆ ಎಂದು ಭಾರತವಾಸಿಗಳು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಭಕ್ತಿ ಮಾಡುತ್ತಾ-ಮಾಡುತ್ತಾ ಕೆಳಗೇ ಬರುತ್ತೀರಿ, ಆಗ ನಾನು ಸ್ವರ್ಗದ ಸ್ಥಾಪನೆ ಅರ್ಥಾತ್ ಭಾರತವನ್ನು ಸ್ವರ್ಗವನ್ನಾಗಿ ಮಾಡಲು ಬರಬೇಕಾಗುತ್ತದೆ. ಭಾರತವು ಸ್ವರ್ಗವಾಗಿತ್ತು, ಅದು ನರಕವು ಹೇಗಾಯಿತು? ರಾವಣನು ಮಾಡಿದನು. ಗೀತೆಯ ಭಗವಂತನಿಂದ ರಾಜ್ಯ ಸಿಕ್ಕಿತು, 21 ಜನ್ಮ ಸ್ವರ್ಗದ ರಾಜ್ಯ ಮಾಡಿದಿರಿ ನಂತರ ಭಾರತವು ದ್ವಾಪರದಿಂದ ಕಲಿಯುಗದಲ್ಲಿ ಬಂದು ಅರ್ಥಾತ್ ಇಳಿಯುವ ಕಲೆಯಲ್ಲಿ ಬಂದಿತು. ಆದ್ದರಿಂದ ಎಲ್ಲರೂ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಪತಿತ ಮನುಷ್ಯರಿಗೆ ಸುಖ-ಶಾಂತಿ ಪತಿತ ಪ್ರಪಂಚದಲ್ಲಿ ಸಿಗಲು ಸಾಧ್ಯವೇ ಇಲ್ಲ!! ಎಷ್ಟೊಂದು ದುಃಖಗಳನ್ನನುಭವಿಸುತ್ತಾರೆ. ಇಂದು ಹಣದ ಕಳ್ಳತನವಾಯಿತು, ಒಬ್ಬರು ದಿವಾಳಿಯಾದರು, ಇಂದು ರೋಗಿಯಾದರು, ದುಃಖವೇ ದುಃಖವಿದೆ. ಈಗ ನೀವು ಸುಖ-ಶಾಂತಿಯ ಆಸ್ತಿಯನ್ನು ಪಡೆಯಲು ಪುರುಷಾರ್ಥ ಮಾಡುತ್ತಿದ್ದೀರಿ - ತಂದೆಯಿಂದ ಸ್ವರ್ಗದ ಆಸ್ತಿಯನ್ನು ಪಡೆಯಲು ಪುರುಷಾರ್ಥ ಮಾಡುತ್ತಿದ್ದೀರಿ. ಸದಾ ಸುಖಿಯನ್ನಾಗಿ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ. ಸದಾ ದುಃಖಿಯನ್ನಾಗಿ ಮಾಡುವವನು ರಾವಣನಾಗಿದ್ದಾನೆ. ಈ ಮಾತುಗಳು ಭಾರತವಾಸಿಗಳಿಗೆ ಗೊತ್ತಿಲ್ಲ. ಸತ್ಯಯುಗದಲ್ಲಿ ದುಃಖದ ಮಾತೇ ಇರುವುದಿಲ್ಲ, ಅಲ್ಲಿ ಎಂದೂ ಅಳಬೇಕಾಗಿಲ್ಲ. ಸದಾ ಸುಖವೇ ಸುಖವಿರುತ್ತದೆ. ಅಲ್ಲಿ ದೇಹಾಭಿಮಾನ ಅಥವಾ ಕಾಮ-ಕ್ರೋಧ ಇತ್ಯಾದಿಗಳಿರುವುದಿಲ್ಲ, ಎಲ್ಲಿಯವರೆಗೆ 5 ವಿಕಾರಗಳ ದಾನ ಮಾಡುವುದಿಲ್ಲವೋ ಅಲ್ಲಿಯವರೆಗೂ ದುಃಖದ ಗ್ರಹಣ ಬಿಟ್ಟು ಹೋಗುವುದಿಲ್ಲ. ದಾನ ಕೊಟ್ಟರೆ ಗ್ರಹಣ ಬಿಟ್ಟು ಬಿಡುತ್ತದೆ ಎಂದು ಹೇಳುತ್ತಾರಲ್ಲವೆ. ಈ ಸಮಯದಲ್ಲಿ ಭಾರತವನ್ನು 5 ವಿಕಾರಗಳರೂಪಿ ಗ್ರಹಣ ಹಿಡಿದಿದೆ. ಎಲ್ಲಿಯವರೆಗೆ 5 ವಿಕಾರಗಳ ದಾನ ಮಾಡುವುದಿಲ್ಲವೋ ಅಲ್ಲಿಯವರೆಗೂ 16 ಕಲಾಸಂಪೂರ್ಣರಾಗಲು ಸಾಧ್ಯವಿಲ್ಲ. ತಂದೆಯು ಎಲ್ಲರ ಸದ್ಗತಿ ದಾತನಾಗಿದ್ದಾರೆ, ಗುರುವಿಲ್ಲದೆ ಸದ್ಗತಿಯಿಲ್ಲ ಎಂದು ಹೇಳುತ್ತಾರೆ ಆದರೆ ಗತಿಯ ಅರ್ಥವನ್ನು ತಿಳಿದುಕೊಂಡೇ ಇಲ್ಲ. ಮನುಷ್ಯರ ಗತಿ-ಸದ್ಗತಿ ಎಂದರೆ ಮುಕ್ತಿ-ಜೀವನ್ಮುಕ್ತಿ ಯಾವುದನ್ನು ತಂದೆಯೇ ಕೊಡಲು ಸಾಧ್ಯ. ಈ ಸಮಯದಲ್ಲಿ ಎಲ್ಲರ ಸದ್ಗತಿಯಾಗಬೇಕಾಗಿದೆ.

ದೆಹಲಿಯನ್ನು ಹೊಸ ದೆಹಲಿ, ಹಳೆಯ ದೆಹಲಿ ಎಂದು ಹೇಳುತ್ತಾರೆ ಆದರೆ ಅದು ಹೊಸದಲ್ಲ. ಹೊಸ ಪ್ರಪಂಚದಲ್ಲಿ ಹೊಸ ದೆಹಲಿಯಿರುತ್ತದೆ. ಹಳೆಯ ಪ್ರಪಂಚದಲ್ಲಿ ಹಳೆಯ ದೆಹಲಿಯಿದೆ. ಅವಶ್ಯವಾಗಿ ಜಮುನಾ ತೀರವಿತ್ತು, ದೆಹಲಿ ಫರಿಸ್ತಾನವಾಗಿತ್ತು. ಸತ್ಯಯುಗವಾಗಿತ್ತಲ್ಲವೆ! ದೇವಿ-ದೇವತೆಗಳು ರಾಜ್ಯಭಾರ ಮಾಡುತ್ತಿದ್ದರು. ಈಗಂತೂ ಹಳೆಯ ಪ್ರಪಂಚ, ಹಳೆಯ ದೆಹಲಿಯಾಗಿದೆ, ಹೊಸ ದೆಹಲಿಯಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಭಾರತವಾಸಿಗಳು ಇದನ್ನು ಮರೆತು ಹೋಗಿದ್ದಾರೆ. ಹೊಸ ಭಾರತ, ಹೊಸ ದೆಹಲಿಯಿತ್ತು, ಅವರ ರಾಜ್ಯವಿತ್ತು ಬೇರೆ ಯಾವುದೇ ಖಂಡವಿರಲಿಲ್ಲ. ಇದು ಯಾರಿಗೂ ತಿಳಿದಿಲ್ಲ. ಇದನ್ನು ಸರ್ಕಾರದವರು ಓದಿಸುವುದಿಲ್ಲ. ಇದೂ ಗೊತ್ತಿದೆ, ಇದು ಅಪೂರ್ಣ ಇತಿಹಾಸವಾಗಿದೆ. ಯಾವಾಗಿನಿಂದ ಇಸ್ಲಾಮಿ, ಬೌದ್ಧಿಯರು ಬಂದರು, ಲಕ್ಷ್ಮೀ-ನಾರಾಯಣರ ರಾಜ್ಯದ ಬಗ್ಗೆ ಯಾರಿಗೂ ಗೊತ್ತಿಲ್ಲ. ಇಡೀ ಸೃಷ್ಟಿಯ ಚಕ್ರವು ಹೇಗೆ ಸುತ್ತುತ್ತದೆಯೆಂದು ತಂದೆಯು ತಿಳಿಸುತ್ತಾರೆ. ಯಾವಾಗ ಭಾರತ ಸ್ವರ್ಗವಾಗಿತ್ತೋ ಆಗ ಚಿನ್ನದ ಯುಗವಾಗಿತ್ತು, ನೋಡಿ, ಈಗ ಅದೇ ಭಾರತವು ಏನಾಗಿದೆ! ಭಾರತವನ್ನು ಪುನಃ ವಜ್ರ ಸಮಾನವನ್ನಾಗಿ ಯಾರು ಮಾಡಿದರು? ನೀವು ಪಾಪವನ್ನು ಮಾಡಿದಾಗ ನಾನು ಪುಣ್ಯಾತ್ಮರನ್ನಾಗಿ ಮಾಡಲು ಬರುತ್ತೇನೆಂದು ತಂದೆಯು ತಿಳಿಸುತ್ತಾರೆ. ಇದು ಮಾಡಿ-ಮಾಡಲ್ಪಟ್ಟ ಡ್ರಾಮ ಆಗಿದೆ, ಇದನ್ನು ಯಾರೂ ತಿಳಿದುಕೊಂಡಿಲ್ಲ. ಈ ಜ್ಞಾನವನ್ನು ತಂದೆಯ ವಿನಃ ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯು ಜ್ಞಾನ ಸಾಗರನಾಗಿದ್ದಾರೆ, ಅವರೇ ಬಂದು ಓದಿಸುತ್ತಾರೆ. ಮನುಷ್ಯನು ಮನುಷ್ಯನಿಗೆ ಎಂದೂ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ. ಯಾವಾಗ ದೇವಿ-ದೇವತೆಗಳಿದ್ದರೋ ಆಗ ಒಬ್ಬರಿಗೊಬ್ಬರು ಸುಖವನ್ನೇ ಕೊಡುತ್ತಿದ್ದರು. ಯಾವುದೇ ರೋಗವಾಗಲೀ, ರೋಗಿಗಳಾಗಲೀ ಇರಲಿಲ್ಲ, ಇಲ್ಲಿ ಎಲ್ಲರೂ ರೋಗಿಗಳೇ ಆಗಿದ್ದಾರೆ. ಈಗ ತಂದೆಯು ಪುನಃ ಸ್ವರ್ಗವನ್ನಾಗಿ ಮಾಡಲು ಬಂದಿದ್ದಾರೆ. ತಂದೆಯು ಸ್ವರ್ಗವನ್ನಾಗಿ ಮಾಡುತ್ತಾರೆ, ರಾವಣನು ನರಕವನ್ನಾಗಿ ಮಾಡುತ್ತಾನೆ. ಈ ಆಟವನ್ನು ಯಾರೂ ತಿಳಿದುಕೊಂಡಿಲ್ಲ. ಶಾಸ್ತ್ರಗಳ ಜ್ಞಾನವಾಗಿದೆ - ಫಿಲಾಸಫಿ, ಭಕ್ತಿಮಾರ್ಗ. ಅದ್ಯಾವುದೇ ಸದ್ಗತಿಯ ಮಾರ್ಗವಲ್ಲ. ಇದು ಯಾವುದೇ ಶಾಸ್ತ್ರಗಳ ಫಿಲಾಸಫಿಯಲ್ಲ. ತಂದೆಯು ಯಾವುದೇ ಶಾಸ್ತ್ರಗಳನ್ನು ತಿಳಿಸುವುದಿಲ್ಲ. ಇದು ಆಧ್ಯಾತ್ಮಿಕ ಜ್ಞಾನವಾಗಿದೆ. ತಂದೆಯನ್ನು ಸ್ಪಿರಿಚ್ಯುಯಲ್ ಫಾದರ್ ಎಂದು ಕರೆಯಲಾಗುತ್ತದೆ. ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ತಂದೆಯು ಮನುಷ್ಯ ಸೃಷ್ಟಿಯ ಬೀಜರೂಪನಾಗಿರುವುದರಿಂದ ಜ್ಞಾನಸಾಗರನಾಗಿದ್ದಾರೆ. ಈ ಮನುಷ್ಯ ಸೃಷ್ಟಿರೂಪಿ ವೃಕ್ಷದ ಆಯಸ್ಸು ಎಷ್ಟಿದೆ, ಹೇಗೆ ವೃದ್ಧಿಯಾಗುತ್ತದೆ ಮತ್ತು ಹೇಗೆ ಭಕ್ತಿ ಪ್ರಾರಂಭವಾಗುತ್ತದೆ, ಇದೆಲ್ಲವನ್ನೂ ನಾನು ತಿಳಿದುಕೊಂಡಿದ್ದೇನೆ. ನೀವು ಮಕ್ಕಳಿಗೆ ಜ್ಞಾನವನ್ನು ಕೊಟ್ಟು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ, ನಂತರ ನೀವು ಮಾಲೀಕರಾಗಿ ಬಿಡುತ್ತೀರಿ. ಈ ಜ್ಞಾನವು ನಿಮಗೆ ಒಂದೇ ಬಾರಿ ಸಿಗುತ್ತದೆ ನಂತರ ಪ್ರಾಯಲೋಪವಾಗಿ ಬಿಡುತ್ತದೆ. ಮತ್ತೆ ಸತ್ಯಯುಗ-ತ್ರೇತಾದಲ್ಲಿ ಈ ಜ್ಞಾನದ ಅವಶ್ಯಕತೆಯಿಲ್ಲ. ಈ ಜ್ಞಾನವು ಬ್ರಾಹ್ಮಣರಾದ ನಿಮ್ಮಲ್ಲಿ ಮಾತ್ರವೇ ಇದೆ, ದೇವತೆಗಳಲ್ಲಿಲ್ಲ ಆದ್ದರಿಂದ ಈ ಜ್ಞಾನವು ಪರಂಪರೆಯಾಗಿ ಬರಲು ಸಾಧ್ಯವಿಲ್ಲ. ನೀವು ಮಕ್ಕಳಿಗೆ ಮಾತ್ರ ಈ ಜ್ಞಾನವು ಒಂದು ಬಾರಿ ಸಿಗುತ್ತದೆ ಯಾವುದರಿಂದ ನೀವು ಜೀವನ್ಮುಕ್ತರಾಗಿ ಬಿಡುತ್ತೀರಿ. ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳುತ್ತೀರಿ, ನಿಮ್ಮ ಬಳಿ ಬಹಳಷ್ಟು ಮಂದಿ ಬರುತ್ತಾರೆ, ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಕೇಳುತ್ತಾರೆ. ಆದರೆ ಹೀಗೆ ಹೇಳುವುದೂ ತಪ್ಪಾಗಿದೆ. ಹೇಗೆ ಶರೀರದ ಅಂಗಗಳಿವೆಯೋ ಅದೇರೀತಿ ಮನಸ್ಸು-ಬುದ್ಧಿ ಆತ್ಮದ ಅಂಗಗಳಾಗಿವೆ. ಆತ್ಮವನ್ನು ಕಲ್ಲು ಬುದ್ಧಿಯಿಂದ ವಜ್ರ ಸಮಾನವನ್ನಾಗಿ ತಂದೆಯೇ ಮಾಡುತ್ತಾರೆ ಯಾವುದು ಸತ್ಯ-ತ್ರೇತಾಯುಗದವರೆಗೂ ನಡೆಯುತ್ತದೆ. ಪುನಃ ಕಲ್ಲು ಬುದ್ಧಿಯವರಾಗಿ ಬಿಡುತ್ತಾರೆ. ಈಗ ಪುನಃ ನೀವು ಕಲ್ಲು ಬುದ್ಧಿಯವರಿಂದ ವಜ್ರ ಸಮಾನರಾಗುತ್ತೀರಿ. ನಿಮ್ಮಲ್ಲಿದ್ದ ವಜ್ರ ಸಮಾನ ಬುದ್ಧಿಯಲ್ಲಿ ತುಕ್ಕು ಬೆರಕೆಯಾಗಿ ಬಿಟ್ಟಿದೆ. ಈಗ ಪುನಃ ಪಾರಸ ಬುದ್ಧಿಯವರಾಗಲು ತಂದೆಯು ನನ್ನನ್ನು ನೆನಪು ಮಾಡಿ ಎಂದು ತಿಳಿಸುತ್ತಾರೆ. ನೆನಪಿನ ಯಾತ್ರೆಯಿಂದಲೇ ನೀವು ಪವಿತ್ರರಾಗಿ ನನ್ನ ಬಳಿ ಬಂದು ಬಿಡುತ್ತೀರಿ. ಬಾಕಿ ಮನಸ್ಸಿನ ಶಾಂತಿಯು ಹೇಗೆ ಸಿಗುತ್ತದೆ ಎಂದು ಕೇಳುವವರಿಗೆ ತಿಳಿಸಿ - ಇಲ್ಲಿ ಶಾಂತಿಯು ಹೇಗೆ ಸಿಗುತ್ತದೆ? ಎಂದು. ಇದು ದುಃಖಧಾಮವಾಗಿದೆ ಏಕೆಂದರೆ ಇಲ್ಲಿ ವಿಕಾರಗಳ ಪ್ರವೇಶತೆಯಿದೆ. ಬೇಹದ್ದಿನ ತಂದೆಯಿಂದಲೇ ಈ ಆಸ್ತಿಯು ಸಿಗಲು ಸಾಧ್ಯ. ನಂತರ ರಾವಣನ ಜೊತೆ ಸೇರುವುದರಿಂದ ಪತಿತರಾಗುತ್ತೀರಿ ಪುನಃ ತಂದೆಯ ಮೂಲಕ ಪಾವನರಾಗಲು ಒಂದು ಸೆಕೆಂಡ್ ಹಿಡಿಸುತ್ತದೆ. ಈಗ ನೀವು ತಂದೆಯಿಂದ ಜೀವನ್ಮುಕ್ತಿಯ ಆಸ್ತಿಯನ್ನು ಪಡೆಯಲು ಬಂದಿದ್ದೀರಿ. ತಂದೆಯು ಜೀವನ್ಮುಕ್ತಿಯ ಆಸ್ತಿಯನ್ನು ಕೊಡುತ್ತಾರೆ ಮತ್ತು ರಾವಣನು ಜೀವನ ಬಂಧನದ ಶಾಪ ಕೊಡುತ್ತಾನೆ. ಆದ್ದರಿಂದ ಇಲ್ಲಿ ದುಃಖವೇ ದುಃಖವಿದೆ. ಡ್ರಾಮಾವನ್ನು ತಿಳಿದುಕೊಳ್ಳಬೇಕಾಗಿದೆ. ದುಃಖಧಾಮದಲ್ಲಿ ಯಾರಿಗೂ ಸುಖ-ಶಾಂತಿ ಸಿಗಲು ಸಾಧ್ಯವಿಲ್ಲ. ಹಾ! ಶಾಂತಿ ನಾವೆಲ್ಲಾ ಆತ್ಮರ ಸ್ವಧರ್ಮವಾಗಿದೆ. ಶಾಂತಿಧಾಮ ಆತ್ಮದ ಮನೆಯಾಗಿದೆ. ನಮ್ಮ ಸ್ವಧರ್ಮ ಶಾಂತಿಯೆಂದು ಆತ್ಮವು ಹೇಳುತ್ತದೆ. ಈ ಶರೀರವು ಪಾತ್ರವನ್ನು ಮಾಡುವುದಿಲ್ಲ ಆದರೆ ಇದರಲ್ಲಿ ಕುಳಿತುಕೊಳ್ಳುತ್ತೇನೆ. ಆದರೆ ಎಲ್ಲಿಯವರೆಗೆ ಕುಳಿತುಕೊಳ್ಳುವುದು! ಕರ್ಮವನ್ನಂತೂ ಮಾಡಲೇಬೇಕಾಗಿದೆ, ಎಲ್ಲಿಯವರೆಗೆ ಮನುಷ್ಯನು ಡ್ರಾಮಾವನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ದುಃಖಿಯಾಗಿಯೇ ಇರುತ್ತಾನೆ. ನಾನಂತೂ ಬಡವರ ಬಂಧುವಾಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ಇಲ್ಲಿಗೆ ಬಡವರೇ ಬರುತ್ತಾರೆ, ಸಾಹುಕಾರರಿಗಂತೂ ಸ್ವರ್ಗವು ಇಲ್ಲಿಯೇ ಇದೆ, ಅವರ ಅದೃಷ್ಟದಲ್ಲಿ ಸ್ವರ್ಗದ ಸುಖವಿಲ್ಲ. ನಾನು ಬಡವರ ಬಂಧುವಾಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ಸಾಹುಕಾರರನ್ನು ಬಡವರನ್ನಾಗಿ, ಬಡವರನ್ನು ಸಾಹುಕಾರರನ್ನಾಗಿ ಮಾಡುತ್ತೇನೆ. ಸಾಹುಕಾರರು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ ಏಕೆಂದರೆ ಅವರಿಗೆ ಸಾಹುಕಾರಿತನದ ನಶೆಯಿದೆ. ಹಾ! ಪ್ರಜೆಗಳಲ್ಲಿ ಬರುತ್ತಾರೆ, ಸ್ವರ್ಗದಲ್ಲಂತೂ ಅವಶ್ಯವಾಗಿ ಬರುತ್ತಾರೆ ಆದರೆ ಬಡವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಬಡವರು ಸಾಹುಕಾರರಾಗುತ್ತಾರೆ. ಅವರಿಗೆ ನಾವು ಸಾಹುಕಾರರೆಂಬ ದೇಹಾಭಿಮಾನವಿದೆಯಲ್ಲವೆ! ಆದರೆ ತಂದೆಯು ತಿಳಿಸುತ್ತಾರೆ - ಈ ಹಣ-ಸಂಪತ್ತು ಎಲ್ಲವೂ ಮಣ್ಣಿನ ಪಾಲಾಗುತ್ತದೆ ಎಂದು. ವಿನಾಶವಂತೂ ಆಗಲೇಬೇಕಾಗಿದೆ, ದೇಹೀ-ಅಭಿಮಾನಿಯಾಗುವುದರಲ್ಲಿಯೇ ಬಹಳ ಪರಿಶ್ರಮವಿದೆ. ಈ ಸಮಯದಲ್ಲಿ ಎಲ್ಲರೂ ದೇಹಾಭಿಮಾನಿಗಳಾಗಿದ್ದಾರೆ. ಈಗ ನೀವು ದೇಹೀ-ಅಭಿಮಾನಿಯಾಗಬೇಕಾಗಿದೆ. 84 ಜನ್ಮಗಳನ್ನು ಪೂರ್ಣ ಮಾಡಿದೆನೆಂದು ಆತ್ಮವೇ ಹೇಳುತ್ತದೆ. ನಾಟಕವು ಪೂರ್ಣವಾಯಿತು, ಈಗ ಹಿಂತಿರುಗಿ ಹೋಗಬೇಕಾಗಿದೆ. ಈಗ ಕಲಿಯುಗದ ಅಂತ್ಯ, ಸತ್ಯಯುಗದ ಆದಿ ಸಂಗಮವಾಗಿದೆ. 5000 ವರ್ಷಗಳ ನಂತರ ನಾನು ಬಂದು ವಜ್ರ ಸಮಾನ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಇತಿಹಾಸ-ಭೂಗೋಳವನ್ನು ತಂದೆಯೇ ತಿಳಿಸಲು ಸಾಧ್ಯ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ತಂದೆಯಿಂದ ಜೀವನ್ಮುಕ್ತಿಯ ಆಸ್ತಿಯನ್ನು ಪಡೆಯಲು ಅವಶ್ಯವಾಗಿ ಪಾವನರಾಗಬೇಕಾಗಿದೆ. ಡ್ರಾಮಾದ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಂಡು ದುಃಖಧಾಮದಲ್ಲಿದ್ದರೂ ಸಹ ದುಃಖದಿಂದ ಮುಕ್ತರಾಗಬೇಕಾಗಿದೆ.

2) ಧನ, ಸಂಪತ್ತು ಅಥವಾ ಸಾಹುಕಾರಿತನದ ನಶೆಯನ್ನು ಬಿಟ್ಟು ದೇಹೀ-ಅಭಿಮಾನಿಯಾಗುವ ಪುರುಷಾರ್ಥ ಮಾಡಬೇಕಾಗಿದೆ.

ವರದಾನ:
ಮಹಾನ್ ಮತ್ತು ಮೆಹಮಾನ್ (ಅಥಿತಿ) - ಇವೆರಡು ಸ್ಮೃತಿಗಳ ಮೂಲಕ ಸರ್ವ ಆಕರ್ಷಣೆಗಳಿಂದ ಮುಕ್ತರಾಗುವಂತಹ ಉಪರಾಂ ಅಥವಾ ಸಾಕ್ಷಿ ಭವ.

ಉಪರಾಂ ಅಥವಾ ಸಾಕ್ಷಿ ಸ್ಥಿತಿಯನ್ನಾಗಿ ಮಾಡಿಕೊಳ್ಳುವುದಕ್ಕಾಗಿ ಎರಡು ಮಾತುಗಳ ಗಮನವಿರಲಿ – ಒಂದಂತು - ನಾನು ಆತ್ಮನು ಮಹಾನ್ ಆತ್ಮನಾಗಿದ್ದೇನೆ, ಇನ್ನೊಂದು - ನಾನು ಆತ್ಮನು ಈಗ ಈ ಹಳೆಯ ಸೃಷ್ಟಿಯಲ್ಲಿ ಅಥವಾ ಈ ಹಳೆಯ ಶರೀರದಲ್ಲಿ ಅಥಿತಿ ಆಗಿದ್ದೇನೆ. ಈ ಸ್ಮೃತಿಗಳಲ್ಲಿ ಇರುವುದರಿಂದ ಸರ್ವ ಬಲಹೀನತೆಗಳು ಅಥವಾ ಸೆಳೆತಗಳ ಆಕರ್ಷಣೆಗಳೆಲ್ಲವೂ ಸ್ವತಹ ಹಾಗೂ ಸಹಜವಾಗಿಯೇ ಸಮಾಪ್ತಿ ಆಗಿ ಬಿಡುತ್ತವೆ. ಮಹಾನ್ ಎಂದು ತಿಳಿಯುವುದರಿಂದ, ಯಾರು ಸಾಧಾರಣ ಕರ್ಮ ಅಥವಾ ಸಂಕಲ್ಪ-ಸಂಸ್ಕಾರಗಳಿಗೆ ವಶರಾಗಿ ನಡೆಯುತ್ತಾರೆಯೋ ಅವರೂ ಪರಿವರ್ತನೆ ಆಗಿ ಬಿಡುತ್ತಾರೆ. ಮಹಾನ್ ಮತ್ತು ಮೆಹಮಾನ್ (ಅಥಿತಿ) ಎಂದು ತಿಳಿದುಕೊಂಡು ನಡೆಯುವುದರಿಂದ ಮಹಿಮಾ ಯೋಗ್ಯರೂ ಆಗಿ ಬಿಡುತ್ತೀರಿ.

ಸ್ಲೋಗನ್:
ಸರ್ವರ ಶುಭ ಭಾವನೆ ಮತ್ತು ಸಹಯೋಗದ ಹನಿಯಿಂದ ದೊಡ್ಡ ಕಾರ್ಯವೂ ಸಹಜವಾಗಿ ಬಿಡುತ್ತದೆ.