11.04.21 Avyakt Bapdada
Kannada
Murli 10.12.87 Om Shanti Madhuban
“ತನು, ಮನ, ಧನ ಮತ್ತು
ಸಂಬಂಧದ ಶ್ರೇಷ್ಠ ವ್ಯವಹಾರ”
ಇಂದು ಸರ್ವ ಖಜಾನೆಗಳ
ಸಾಗರ ರತ್ನಾಗರ ತಂದೆಯು ತನ್ನ ಮಕ್ಕಳನ್ನು ನೋಡಿ ಮುಗುಳ್ನಗುತ್ತಿದ್ದಾರೆ – ಸರ್ವ ಖಜಾನೆಗಳ
ರತ್ನಾಗರ ತಂದೆಯ ಸೌಧಾಗಾರ ಮಕ್ಕಳು ಅರ್ಥಾತ್ ಸೌಧ (ವ್ಯಾಪಾರ) ಮಾಡುವವರು ಯಾರಾಗಿದ್ದಾರೆ ಮತ್ತು
ಯಾರೊಂದಿಗೆ ವ್ಯಾಪಾರ ಮಾಡಿದ್ದಾರೆ? ಪರಮಾತ್ಮನೊಂದಿಗೆ ವ್ಯಾಪಾರ ಮಾಡುವಂತಹ ಮುಖಗಳು ಇಷ್ಟು
ಮುಗ್ಧವಾಗಿವೆ ಮತ್ತು ಎಷ್ಟೊಂದು ಶ್ರೇಷ್ಠವಾದ ವ್ಯಾಪಾರ ಮಾಡಿದ್ದಾರೆ? ಇವರು ಇಷ್ಟು ಶ್ರೇಷ್ಠ
ವ್ಯಾಪಾರ ಮಾಡುವಂತಹ ವ್ಯಾಪಾರಿ ಆತ್ಮಗಳಾಗಿದ್ದಾರೆ ಎಂಬುದು ಪ್ರಪಂಚದ ಮನುಷ್ಯರಿಗೆ
ಅರ್ಥವಾಗುವುದಿಲ್ಲ. ಯಾವ ಆತ್ಮಗಳನ್ನು ಪ್ರಪಂಚದವರು ನಿರಾಶಾವಾಧಿಗಳು, ಅತಿ ಬಡವರು, ಈ
ಕನ್ಯೆಯರು-ಮಾತೆಯರು ಪರಮಾತ್ಮನ ಪ್ರಾಪ್ತಿಗೆ ಅಧಿಕಾರಿಗಳು ಎಲ್ಲಾಗುತ್ತಾರೆ, ಇದು ಅಸಂಭವವೆಂದು
ಅವರನ್ನು ದೂರ ಮಾಡಿದರು ಆದರೆ ತಂದೆಯು ಮೊದಲು ಮಾತೆಯರು ಮತ್ತು ಕನ್ಯೆಯರನ್ನೇ ಇಷ್ಟು ದೊಡ್ಡ
ವ್ಯಾಪಾರ ಮಾಡುವಂತಹ ಶ್ರೇಷ್ಠ ವ್ಯಕ್ತಿಗಳನ್ನಾಗಿ ಮಾಡಿ ಬಿಟ್ಟರು. ಜ್ಞಾನದ ಕಳಶವನ್ನು ಮೊದಲು
ಮಾತೆಯರು ಮತ್ತು ಕನ್ಯೆಯರ ಮೇಲಿಟ್ಟರು. ಬಡ ಕನ್ಯೆಯನ್ನು ಯಜ್ಞ ಮಾತೆ ಜಗದಂಬೆಯನ್ನಾಗಿ ನಿಮಿತ್ತ
ಮಾಡಿದರು. ಮಾತೆಯರ ಬಳಿಯಾದರೂ ತಮ್ಮ ಬಳಿ ಬಚ್ಚಿಟ್ಟುಕೊಂಡಿರುವ ಅಲ್ಪಸ್ವಲ್ಪ ಹಣವಿರುತ್ತದೆ, ಆದರೆ
ಕನ್ಯೆಯರು ಮಾತೆಯರಿಗಿಂತಲೂ ಬಡವರಾಗಿರುತ್ತಾರೆ. ಆದ್ದರಿಂದ ತಂದೆಯು ಅತಿ ಬಡವರನ್ನೇ ಮೊದಲು
ಸೌಧಾಗರ (ವ್ಯಾಪಾರ) ರನ್ನಾಗಿ ಮಾಡಿದರು ಮತ್ತು ಎಷ್ಟು ಶ್ರೇಷ್ಠವಾದ ವ್ಯಾಪಾರ ಮಾಡಿದರು!
ಬಡಕುಮಾರಿಯಿಂದ ಜಗದಂಬೆ ಸೋ ಧನ ದೇವಿ ಲಕ್ಷ್ಮಿಯನ್ನಾಗಿ ಮಾಡಿದರು! ಇಲ್ಲಿ ಇಂದಿನವರೆಗೂ ಸಹ ಭಲೆ
ಎಷ್ಟೇ ದೊಡ್ಡ ಕೋಟ್ಯಾಧೀಶ್ವರು ಇರಬಹುದು ಆದರೆ ಅವರೂ ಸಹ ಲಕ್ಷ್ಮಿಯಿಂದ ಹಣವನ್ನು ಅವಶ್ಯವಾಗಿ
ಕೇಳುತ್ತಾರೆ, ಪೂಜೆ ಮಾಡುತ್ತಾರೆ. ಅಂದಾಗ ರತ್ನಾಗಾರ ತಂದೆಯು ತಮ್ಮ ವ್ಯಾಪಾರಿ ಮಕ್ಕಳನ್ನು ನೋಡಿ
ಹರ್ಷಿತರಾಗುತ್ತಿದ್ದಾರೆ. ಈ ಒಂದು ಜನ್ಮದ ವ್ಯಾಪಾರ ಮಾಡುವುದರಿಂದ ಅನೇಕ ಜನ್ಮಗಳು ಸಂಪನ್ನರಾಗಿ
ಬಿಡುತ್ತೀರಿ ಮತ್ತು ವ್ಯಾಪಾರ ಮಾಡುವವರು ಭಲೆ ಎಷ್ಟು ದೊಡ್ಡ ವ್ಯಾಪಾರಿಯಾಗಿರಬಹುದು. ಆದರೆ ಅವರು
ಕೇವಲ ಹಣದ ವ್ಯಾಪಾರ, ವಸ್ತುವಿನ ವ್ಯಾಪಾರ ಮಾಡುತ್ತಾರೆ. ಆದರೆ ಒಬ್ಬ ಬೇಹದ್ದಿನ ತಂದೆಯು ತನು, ಮನ,
ಧನ ಮತ್ತು ಸದಾ ಶ್ರೇಷ್ಠ ಸಂಬಂಧದ ವ್ಯಾಪಾರ ಮಾಡಿದ್ದಾರೆ. ಇಂತಹ ದಾತನನ್ನು ಯಾರಾದರೂ ನೋಡಿದ್ದೀರಾ?
ನಾಲ್ಕೂ ಪ್ರಕಾರದ ವ್ಯಾಪಾರ ಮಾಡಿದ್ದಾರಲ್ಲವೆ? ತನುವು ಸದಾ ಸ್ವಸ್ಥವಾಗಿರುವುದು, ಮನಸ್ಸು ಸದಾ
ಖುಷಿ. ಧನದ ಭಂಡಾರವು ಸಂಪನ್ನ ಮತ್ತು ಸಂಬಂಧದಲ್ಲಿ ನಿಸ್ವಾರ್ಥ ಸ್ನೇಹ ಮತ್ತು ಗ್ಯಾರಂಟಿಯಿದೆ.
ಇಂದು ಯಾವುದು ಮೌಲ್ಯವುಳ್ಳ ವಸ್ತುವಾಗಿರುವುದೋ ಅದಕ್ಕೆ ಗ್ಯಾರಂಟಿ ಕೊಡುವರು - ಐದು ವರ್ಷ, ಹತ್ತು
ವರ್ಷ ಗ್ಯಾರಂಟಿ ಕೊಡುತ್ತಾರೆ, ಮತ್ತೇನು ಮಾಡುತ್ತಾರೆ? ಆದರೆ ರತ್ನಾಗಾರ ತಂದೆಯು ಎಷ್ಟು ಸಮಯದ
ಗ್ಯಾರಂಟಿ ಕೊಡುತ್ತಾರೆ? ಅನೇಕ ಜನ್ಮಗಳ ಗ್ಯಾರಂಟಿ ಕೊಡುತ್ತಾರೆ. ನಾಲ್ಕರಲ್ಲಿಯೂ ಯಾವ ಒಂದರ
ಕೊರತೆಯೂ ಇರುವುದಿಲ್ಲ. ಭಲೆ ಪ್ರಜೆಗಳಿಗೆ ಪ್ರಜೆಗಳಾದರೂ ಸಹ ಅವರಿಗೂ ಅಂತಿಮ ಜನ್ಮದವರೆಗೆ ಅರ್ಥಾತ್
ತ್ರೇತಾದ ಅಂತ್ಯದವರೆಗೂ ಸಹ ಈ ನಾಲ್ಕೂ ಪ್ರಕಾರದ ಮಾತುಗಳು ಪ್ರಾಪ್ತಿ (ತನು, ಮನ, ಧನ, ಮತ್ತು
ಸಂಬಂಧ) ಯಾಗುತ್ತವೆ. ಇಂತಹ ವ್ಯಾಪಾರವನ್ನು ಎಂದಾದರೂ ಮಾಡಿದ್ದಿರಾ? ಈಗಂತೂ ವ್ಯಾಪಾರ
ಮಾಡಿದಿರಲ್ಲವೆ? ಪಕ್ಕಾ ವ್ಯಾಪಾರ ಮಾಡಿದ್ದೀರಾ ಅಥವಾ ಕಚ್ಚಾ? ಪರಮಾತ್ಮನಿಂದ ಎಷ್ಟು ಸಸ್ತಾ
ವ್ಯಾಪಾರ ಮಾಡಿದ್ದೀರಿ! ಅದಕ್ಕೆ ಬದಲಾಗಿ ನೀವು ಏನು ಕೊಟ್ಟಿರಿ, ಯಾವುದೇ ಕೆಲಸಕ್ಕೆ ಬರುವ
ವಸ್ತುವನ್ನು ಕೊಟ್ಟಿರಾ?
ವಿದೇಶಿಯರು ಬಾದಾದಾರವರಿಗೆ ಸದಾ ಹೃದಯವನ್ನು (ಚಿತ್ರಣ) ಮಾಡಿ ಕಳುಹಿಸುತ್ತಾರೆ. ಪತ್ರವನ್ನೂ
ಹೃದಯದ ಚಿತ್ರದೊಳಗೆ ಬರೆಯುತ್ತಾರೆ, ಹೃದಯದ ಚಿತ್ರವಿರುವ ಉಡುಗೊರೆಯನ್ನೇ ಕಳುಹಿಸುತ್ತಾರೆ ಅಂದಮೇಲೆ
ತಮ್ಮ ಹೃದಯವನ್ನು ಕೊಟ್ಟಿದ್ದೀರಲ್ಲವೆ ಆದರೆ ಯಾವ ಹೃದಯವನ್ನು ಕೊಟ್ಟಿದ್ದೀರಿ? ಒಂದು ಹೃದಯ - ಅದು
ಎಷ್ಟೊಂದು ಹರಿದು ಹಂಚಿ ಹೋಗಿತ್ತು, ತಂದೆ-ತಾಯಿ, ಚಿಕ್ಕಪ್ಪ-ದೊಡ್ಡಪ್ಪ ಎಷ್ಟು ದೊಡ್ಡ ಪಟ್ಟಿಯಿದೆ!
ಒಂದುವೇಳೆ ಸಂಬಂಧ ಪಟ್ಟಿಯನ್ನು ತೆಗೆದರೆ ಕಲಿಯುಗದಲ್ಲಿ ಎಷ್ಟು ದೊಡ್ಡ ಪಟ್ಟಿಯಾಗುವುದು! ಒಂದು -
ಸಂಬಂಧದಲ್ಲಿ ತಮ್ಮ ಹೃದಯವನ್ನು ಹಂಚಿದಿರಿ ಮತ್ತು ಇನ್ನೊಂದು - ವಸ್ತುಗಳಲ್ಲಿಯೂ ಹೃದಯವನ್ನು
ಕೊಟ್ಟಿದ್ದಿರಿ...... ಅಂದಾಗ ಹೃದಯವನ್ನು ಹಂಚಿರುವ ವಸ್ತುಗಳು ಎಷ್ಟಿವೆ, ವ್ಯಕ್ತಿಗಳು ಎಷ್ಟೊಂದು
ಮಂದಿಯಿದ್ದಾರೆ? ಎಲ್ಲದರಲ್ಲಿ ಹೃದಯವನ್ನಿಟ್ಟು ಹೃದಯವನ್ನೇ ತುಂಡು-ತುಂಡು ಮಾಡಿಕೊಂಡಿರಿ.
ಎಲ್ಲದರಲ್ಲಿ ಹೃದಯವನ್ನು ಹಂಚಿದಿರಿ. ತಂದೆಯು ಅನೇಕ ಭಾಗಗಳಾಗಿರುವ ಹೃದಯವನ್ನು ಒಂದು ಕಡೆ
ಜೋಡಿಸಿದರು ಅಂದಾಗ ಏನನ್ನು ಕೊಟ್ಟಿರಿ ಮತ್ತು ಏನನ್ನು ಪಡೆದಿರಿ! ಮತ್ತು ವ್ಯಾಪಾರ ಮಾಡುವ ವಿಧಿಯು
ನೋಡಿ, ಎಷ್ಟು ಸಹಜವಾಗಿದೆ! ಸೆಕೆಂಡಿನ ವ್ಯಾಪಾರವಲ್ಲವೆ. “ಬಾಬಾ" ಶಬ್ಧವೇ ವಿಧಿಯಾಗಿದೆ. ಒಂದು
ಶಬ್ದದ ವಿಧಿಯಾಗಿದೆ, ಇದರಲ್ಲಿ ಎಷ್ಟು ಸಮಯ ಹಿಡಿಸುತ್ತದೆ? ಕೇವಲ ಹೃದಯದಿಂದ "ಬಾಬಾ" ಎಂದು
ಹೇಳಿದರೆ ಸೆಕೆಂಡಿನಲ್ಲಿ ವ್ಯಾಪಾರವಾಗಿ ಬಿಟ್ಟಿತು. ಎಷ್ಟು ಸಹಜವಾದ ವಿಧಿಯಾಗಿದೆ! ಎಷ್ಟೊಂದು
ಸಸ್ತಾ ವ್ಯಾಪಾರವನ್ನು ಈ ಸಂಗಮಯುಗದ ವಿನಃ ಮತ್ತ್ಯಾವುದೇ ಯುಗದಲ್ಲಿ ಮಾಡಿಕೊಳ್ಳಲು ಸಾಧ್ಯವಿಲ್ಲ
ಅಂದಾಗ ಇಂದು ವ್ಯಾಪಾರಿ ಮಕ್ಕಳ ಚಹರೆಯನ್ನು ನೋಡುತ್ತಿದ್ದರು. ಪ್ರಪಂಚದ ಅಂತರದಲ್ಲಿ ಎಷ್ಟೊಂದು
ಮುಗ್ಧರಾಗಿದ್ದೀರಿ! ಆದರೆ ಈ ಮುಗ್ಧರೇ ಚಮತ್ಕಾರ ಮಾಡಿದ್ದೀರಿ. ವ್ಯಾಪಾರ ಮಾಡುವುದರಲ್ಲಿ
ಬುದ್ಧಿವಂತರಾದಿರಲ್ಲವೆ. ಇಂದಿನ ದೊಡ್ಡ-ದೊಡ್ಡ ಪ್ರಸಿದ್ಧ ಧನವಂತರು ಧನವನ್ನು ಸಂಪಾದನೆ ಮಾಡುವ
ಬದಲು ಅದನ್ನು ಸಂಭಾಲನೆ ಮಾಡುವ ಗೊಂದಲದಲ್ಲಿದ್ದಾರೆ. ಅದೇ ಗೊಂದಲದಲ್ಲಿ ತಂದೆಯನ್ನು
ಅರಿತುಕೊಳ್ಳುವುದಕ್ಕೂ ಬಿಡುವಿಲ್ಲ. ತಮ್ಮನ್ನು ರಕ್ಷಿಸಿಕೊಳ್ಳುವುದರಲ್ಲಿ, ಹಣವನ್ನು
ರಕ್ಷಿಸಿಕೊಳ್ಳುವುದರಲ್ಲಿಯೇ ಸಮಯವು ಹೊರಟು ಹೋಗುತ್ತಿದೆ. ಒಂದುವೇಳೆ ಚಕ್ರವರ್ತಿಗಳಾಗಿದ್ದರೂ ಸಹ
ಅವರು ಚಿಂತಿತ ಚಕ್ರವರ್ತಿಗಳಾಗಿದ್ದಾರೆ ಏಕೆಂದರೆ ಇದು ಕಪ್ಪು ಹಣ (ಅಪವಿತ್ರ ಧನ) ವಲ್ಲವೆ.
ಆದ್ದರಿಂದ ಚಿಂತಿತ ಚಕ್ರವರ್ತಿಗಳಾಗಿದ್ದಾರೆ ಮತ್ತು ತಾವು ಹೊರಗಿನಿಂದ ನೋಡಿದರೆ, ನಿಮ್ಮ ಬಳಿ
ಕವಡೆಯೂ ಇಲ್ಲ ಆದರೆ ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಿ. ಭಿಕಾರಿಗಳಾಗಿದ್ದರೂ ಚಕ್ರವರ್ತಿಗಳು.
ಪ್ರಾರಂಭದಲ್ಲಿ ಏನೆಂದು ಸಹಿ ಮಾಡುತ್ತಿದ್ದಿರಿ? ಬೆಗ್ಗರ್ ಟು ಪ್ರಿನ್ಸ್ (ಭಿಕಾರಿಯಿಂದ ರಾಜಕುಮಾರ).
ಈಗಲೂ ಸಹ ಚಕ್ರವರ್ತಿಗಳು, ಭವಿಷ್ಯದಲ್ಲಿಯೂ ಚಕ್ರವರ್ತಿಗಳಾಗುತ್ತೀರಿ. ಈಗಿನ ಯಾರು ನಂಬರ್ವನ್
ಧನವಂತ ವ್ಯಕ್ತಿಯಾಗಿದ್ದಾರೆಯೋ ಅವರ ಮುಂದೆ ತಮ್ಮ ತ್ರೇತಾಯುಗದ ಅಂತ್ಯದ ಪ್ರಜೆಯೂ ಸಹ ಹೆಚ್ಚು
ಧನವಂತರಾಗಿರುವರು. ಈಗಿನ ಸಂಖ್ಯೆಯ ಲೆಕ್ಕದಿಂದ ಆಲೋಚಿಸಿ - ಹಣವಂತು ಅದೇ ಆಗಿದೆ, ಇನ್ನೂ
ಮುಚ್ಚಿಟ್ಟಿರುವ ಹಣವು ಹೊರ ಬರುವುದು ಅಂದಾಗ ಎಷ್ಟು ದೊಡ್ಡ ಸಂಖ್ಯೆಯೋ ಅಷ್ಟೇ ಹಣವು ಹಂಚಲ್ಪಟ್ಟಿದೆ
ಮತ್ತು ಅಲ್ಲಿ ಸಂಖ್ಯೆಯು ಎಷ್ಟಿರುವುದು? ಆ ಲೆಕ್ಕದಿಂದ ಹಣವು ಎಷ್ಟಿರಬೇಕು? ಪ್ರಜೆಗಳಿಗೂ ಸಹ
ಯಾವುದೇ ಅಪ್ರಾಪ್ತ ವಸ್ತುವಿರುವುದಿಲ್ಲ ಅಂದಮೇಲೆ ಚಕ್ರವರ್ತಿಗಳಾದರಲ್ಲವೆ. ಚಕ್ರವರ್ತಿಗಳೆಂದರೆ
ಅಂದರೆ ಅರ್ಥ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಲ್ಲ. ಚಕ್ರವರ್ತಿ ಅರ್ಥಾತ್ ಸಂಪನ್ನರು, ಯಾವುದೇ
ಅಪ್ರಾಪ್ತಿಯಿಲ್ಲ, ಕೊರತೆಯಿಲ್ಲ ಅಂದಾಗ ಇಂತಹ ವ್ಯಾಪಾರವನ್ನು ಮಾಡಿ ಬಿಟ್ಟಿದ್ದೀರೋ ಅಥವಾ
ಮಾಡುತ್ತಿದ್ದಿರೋ? ಇಲ್ಲವೆ ಇನ್ನೂ ಯೋಚಿಸುತ್ತಿದ್ದೀರಾ? ಯಾವಾಗಲಾದರೂ ಯಾವುದೇ ದೊಡ್ಡ ವಸ್ತುವು
ಅಗ್ಗವಾಗಿ ಮತ್ತು ಸಹಜವಾಗಿ ಸಿಕ್ಕಿ ಬಿಡುತ್ತದೆಯೆಂದರೂ ಸಹ ಈ ವಸ್ತು ಸರಿಯಿದೆಯೋ ಅಥವಾ ಇಲ್ಲವೋ
ಎಂದು ಗೊಂದಲದಲ್ಲಿ ಬರುತ್ತಾರೆ. ನೀವಂತೂ ಇಂತಹ ಗೊಂದಲದಲ್ಲಿ ಇಲ್ಲ ತಾನೆ? ಏಕೆಂದರೆ
ಭಕ್ತಿಮಾರ್ಗದವರು ಸಹಜವಾಗಿರುವುದನ್ನು ಇಷ್ಟು ಕಷ್ಟಪಟ್ಟು ಇನ್ನೂ ಸುರುಳಿಯಲ್ಲಿ ಹಾಕಿದ್ದಾರೆ.
ಆದ್ದರಿಂದ ಇಂದಿಗೂ ತಂದೆಯನ್ನು ಅದೇ ರೂಪದಿಂದ ಹುಡುಕುತ್ತಿರುತ್ತಾರೆ. ಚಿಕ್ಕ ಮಾತನ್ನು ದೊಡ್ಡ
ಮಾತನ್ನಾಗಿ ಮಾಡಿ ಬಿಟ್ಟಿದ್ದಾರೆ. ಆದ್ದರಿಂದ ಗೊಂದಲದಲ್ಲಿ ಸಿಲುಕುತ್ತಾರೆ. ಶ್ರೇಷ್ಠಾತಿ
ಶ್ರೇಷ್ಠ ಭಗವಂತನಾಗಿದ್ದಾರೆ ಆದ್ದರಿಂದ ಅವರು ಸಿಗುವಂತಹ ವಿಧಿಯನ್ನೂ ಬಹಳ ಉದ್ದಗಲವಾಗಿ ಹೇಳಿ
ಬಿಟ್ಟಿದ್ದಾರೆ. ಅದೇ ಚಕ್ರದಲ್ಲಿ ಭಕ್ತಾತ್ಮರು ಇನ್ನೂ ಆಲೋಚಿಸುವುದರಲ್ಲಿ ಮುಳುಗಿ ಬಿಟ್ಟಿದ್ದಾರೆ.
ಭಗವಂತನು ಭಕ್ತಿಯ ಫಲವನ್ನು ಕೊಡಲು ಬಂದು ಬಿಟ್ಟಿದ್ದಾರೆ ಆದರೆ ಭಕ್ತಾತ್ಮರು ಗೊಂದಲದ ಕಾರಣ
ಎಲೆ-ಎಲೆಗೂ ನೀರು ಕೊಡುವುದರಲ್ಲಿಯೇ (ಪೂಜಾರಿಗಳಿಗೆ ಪೂಜಾರಿಗಳಾಗಿಯೇ) ಬ್ಯುಸಿಯಾಗಿದ್ದಾರೆ. ತಾವು
ಇಷ್ಟೊಂದು ಸಂದೇಶ ಕೊಡುತ್ತೀರಿ, ಇದಕ್ಕೆ ಏನು ಹೇಳುತ್ತಾರೆ? ಅಷ್ಟು ಶ್ರೇಷ್ಠ ಭಗವಂತ ಇಷ್ಟು ಸಹಜ
ರೂಪದಲ್ಲಿ ಬರಲು ಸಾಧ್ಯವೇ ಇಲ್ಲ ಎಂದು ಬಿಡುತ್ತಾರೆ. ಆದ್ದರಿಂದ ತಂದೆಯು ಮುಗುಳ್ನಗುತ್ತಿದ್ದರು -
ಈಗಿನ ಭಕ್ತಿಯಲ್ಲಿ ಪ್ರಖ್ಯಾತರಾದವರಿರಬಹುದು, ಹಣದಲ್ಲಿ ಪ್ರಸಿದ್ಧರಾದವರು ಯಾವುದೇ ಸ್ಥಾನದಲ್ಲಿ
ಪ್ರಸಿದ್ಧರಾದವರು ಸಹ ತಮ್ಮದೇ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ತಾವು ಸಾಧಾರಣ ಆತ್ಮಗಳು
ತಂದೆಯೊಂದಿಗೆ ವ್ಯಾಪಾರ ಮಾಡಿದಿರಿ, ಪಾಂಡವರು (ಅಣ್ಣಂದಿರು) ಪಕ್ಕಾ ವ್ಯಾಪಾರ ಮಾಡಿದಿರಲ್ಲವೇ?
ಡಬಲ್ ವಿದೇಶಿಯರು ವ್ಯಾಪಾರ ಮಾಡುವುದರಲ್ಲಿ ಬುದ್ಧಿವಂತರಾಗಿದ್ದಾರೆ. ವ್ಯಾಪಾರವನ್ನು ಎಲ್ಲರೂ
ಮಾಡಿದಿರಿ ಆದರೆ ಎಲ್ಲಾ ಮಾತುಗಳಲ್ಲಿ ನಂಬರ್ವಾರ್ ಇರುತ್ತಾರೆ. ತಂದೆಯಂತೂ ಎಲ್ಲರಿಗೆ ಸರ್ವ
ಖಜಾನೆಗಳನ್ನು ಒಂದೇ ಸಮನಾಗಿ ಕೊಟ್ಟಿದ್ದಾರೆ ಏಕೆಂದರೆ ಅಕೂಟ ಸಾಗರನಾಗಿದ್ದಾರೆ. ತಂದೆಯು
ಕೊಡುವುದರಲ್ಲಿ ನಂಬರ್ವಾರ್ ಆಗಿ ಕೊಡುವ ಅವಶ್ಯಕತೆಯಿಲ್ಲ.
ಹೇಗೆ ಈಗಿನ ವಿನಾಶಕಾರಿ ಆತ್ಮಗಳು ಹೇಳುತ್ತಾರೆ - ವಿನಾಶಕ್ಕಾಗಿ ಇಷ್ಟೊಂದು ಸಾಮಗ್ರಿಗಳನ್ನು ತಯಾರು
ಮಾಡಿದ್ದೇವೆ ಅದರಿಂದ ಇಂತಹ ಅನೇಕ ಪ್ರಪಂಚಗಳನ್ನೇ ವಿನಾಶ ಮಾಡಬಹುದಾಗಿದೆ. ತಂದೆಯೂ ತಿಳಿಸುತ್ತಾರೆ
- ತಂದೆಯ ಬಳಿಯೂ ಎಷ್ಟೊಂದು ಖಜಾನೆಗಳಿವೆ, ಇಡೀ ವಿಶ್ವದ ಆತ್ಮಗಳೆಲ್ಲರೂ ತಮ್ಮ ಹಾಗೆ
ಬುದ್ಧಿವಂತರಾಗಿ ನನ್ನೊಂದಿಗೆ ವ್ಯಾಪಾರ ಮಾಡಿದರೂ ಮುಗಿಯುವುದಿಲ್ಲ. ತಾವು ಬ್ರಾಹ್ಮಣರ ಸಂಖ್ಯೆಯು
ಎಷ್ಟಿದೆಯೋ ಅದಕ್ಕಿಂತ ಇನ್ನೂ ಪದಮದಷ್ಟು ಆತ್ಮಗಳು ಬಂದರೂ ಸಹ ನನ್ನಿಂದ ತೆಗೆದುಕೊಳ್ಳಬಹುದಾಗಿದೆ,
ಇಷ್ಟು ಅಪಾರವಾದ ಖಜಾನೆಗಳಿವೆ ಆದರೆ ತೆಗೆದುಕೊಳ್ಳುವವರಲ್ಲಿ ನಂಬರ್ವಾರ್ ಆಗಿ ಬಿಡುತ್ತಾರೆ.
ತೆರೆದ ಹೃದಯದಿಂದ ವ್ಯಾಪಾರ ಮಾಡುವಂತಹ ಸಾಹಸವಂತರು ಕೆಲವರೇ ಇದ್ದಾರೆ ಆದ್ದರಿಂದ ಎರಡು ಪ್ರಕಾರದ
ಮಾಲೆಯು ಪೂಜಿಸಲ್ಪಡುತ್ತದೆ. ಅಷ್ಟ ರತ್ನಗಳೆಲ್ಲ, 16 ಸಾವಿರದ ಕೊನೆಯ ಮಣಿಯೆಲ್ಲಿ! ಎಷ್ಟು
ಅಂತರವಾಯಿತಲ್ಲವೆ. ವ್ಯಾಪಾರ ಮಾಡುವುದರಲ್ಲಂತೂ ಒಂದೇ ತರಹವಿದ್ದಾರೆ. ಕೊನೆಯ ನಂಬರಿನವರೂ ಸಹ ಬಾಬಾ
ಎಂದು ಹೇಳುತ್ತಾರೆ ಮತ್ತು ಮೊದಲಿನವರೂ ಬಾಬಾ ಎಂದೇ ಹೇಳುತ್ತಾರೆ. ಶಬ್ಧದಲ್ಲಿ ಅಂತರವಿಲ್ಲ.
ವ್ಯಾಪಾರ ಮಾಡುವ ವಿಧಿಯೂ ಒಂದೇ ರೀತಿಯಿದೆ ಮತ್ತು ಕೊಡುವಂತಹ ದಾತನೂ ಒಂದೇ ರೀತಿಯಾಗಿ ಕೊಡುತ್ತಾರೆ.
ಜ್ಞಾನದ ಖಜಾನೆ, ಶಕ್ತಿಗಳ ಖಜಾನೆ, ಯಾವುದೆಲ್ಲಾ ಸಂಗಮಯುಗದ ಖಜಾನೆಗಳನ್ನು ತಿಳಿದುಕೊಂಡಿದ್ದೀರೋ
ಎಲ್ಲರ ಬಳಿ ಒಂದೇ ರೀತಿಯಿವೆ. ಕೆಲವರಿಗೆ ಸರ್ವ ಶಕ್ತಿಗಳನ್ನು ಕೊಟ್ಟು, ಕೆಲವರಿಗೆ ಒಂದು
ಶಕ್ತಿಯನ್ನು ಕೊಟ್ಟಿಲ್ಲ ಅಥವಾ ಕೆಲವರಿಗೆ ಒಂದು ಗುಣ, ಇನ್ನೂ ಕೆಲವರಿಗೆ ಸರ್ವ ಗುಣಗಳನ್ನು
ಕೊಟ್ಟಿಲ್ಲ, ಇದರಲ್ಲಿ ಅಂತರವಿಲ್ಲ. ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿದುಕೊಂಡಿರುವ
ತ್ರಿಕಾಲದರ್ಶಿಗಳು, ಮಾII ಸರ್ವಶಕ್ತಿವಂತರೆಂದು ಎಲ್ಲರ ಬಿರುದು ಒಂದೇ ಆಗಿದೆ. ಕೆಲವರು
ಸರ್ವಶಕ್ತಿವಂತರು, ಇನ್ನೂ ಕೆಲವರು ಕೇವಲ ಶಕ್ತಿವಂತರಲ್ಲ, ಎಲ್ಲರಿಗೆ ಸರ್ವಗುಣ ಸಂಪನ್ನರಾಗುವ
ದೇವಾತ್ಮನೆಂದೇ ಹೇಳುತ್ತಾರೆ, ಗುಣಮೂರ್ತಿಯೆಂದು ಹೇಳುತ್ತಾರೆ. ಖಜಾನೆಯು ಎಲ್ಲರ ಬಳಿಯಿದೆ. ಒಂದು
ತಿಂಗಳಿನಿಂದ ವಿದ್ಯೆಯನ್ನು ಓದುವವರೂ ಸಹ ಜ್ಞಾನದ ಖಜಾನೆಯನ್ನು 50 ವರ್ಷದವರು ವರ್ಣನೆ ಮಾಡುವ
ರೀತಿಯೇ ಮಾಡುತ್ತಾರೆ. ಒಂದುವೇಳೆ ಒಂದೊಂದು ಗುಣ, ಶಕ್ತಿಗಳ ಮೇಲೆ ಭಾಷಣ ಮಾಡಲು ಹೇಳಿದರೆ ಬಹಳ
ಚೆನ್ನಾಗಿ ಭಾಷಣ ಮಾಡುತ್ತಾರೆ. ಬುದ್ಧಿಯಲ್ಲಿದೆ ಆದ್ದರಿಂದಲೇ ಮಾಡುತ್ತಾರಲ್ಲವೆ ಅಂದಾಗ ಖಜಾನೆಯೂ
ಎಲ್ಲರ ಬಳಿ ಇದೆ ಆದರೆ ಅಂತರವೇನಾಯಿತು? ನಂಬರ್ ವನ್ಸೌಧಾಗರರು ಖಜಾನೆಯನ್ನು ಸ್ವಯಂನ ಪ್ರತಿ ಮನನ
ಮಾಡುವುದರಿಂದ ಕಾರ್ಯದಲ್ಲಿ ತೊಡಗಿಸುತ್ತಾರೆ. ಅದೇ ಅನುಭವದ ಅಥಾರಿಟಿಯಿಂದ ಅನುಭವಿಗಳಾಗಿ ಅನ್ಯರಿಗೆ
ಹಂಚುತ್ತಾರೆ. ಕಾರ್ಯದಲ್ಲಿ ತೊಡಗಿಸುವುದು ಎಂದರೆ ಖಜಾನೆಯನ್ನು ಹೆಚ್ಚಿಸಿಕೊಳ್ಳುವುದು. ಒಂದು
ಪ್ರಕಾರದವರು ಕೇವಲ ವರ್ಣನೆ ಮಾಡುವವರು, ಎರಡನೆಯವರು ಮನನ ಮಾಡುವವರು ಅಂದಾಗ ಮನನ ಮಾಡುವವರು ಯಾರಿಗೆ
ಕೊಡುತ್ತಾರೆಂದರೆ ಅವರು ಸ್ವಯಂ ಅನುಭವಿಯಾಗಿರುವ ಕಾರಣ , ಅನ್ಯರನ್ನೂ ಅನುಭವಿಯನ್ನಾಗಿ ಮಾಡುತ್ತಾರೆ.
ವರ್ಣನೆ ಮಾಡುವವರು ಅನ್ಯರನ್ನೂ ವರ್ಣನೆ ಮಾಡುವವರನ್ನಾಗಿ ಮಾಡಿ ಬಿಡುತ್ತಾರೆ. ಮಹಿಮೆ
ಮಾಡುತ್ತಿರುತ್ತಾರೆ ಆದರೆ ಅನುಭವಿಗಳಾಗುವುದಿಲ್ಲ. ಸ್ವಯಂ ಮಹಾನ್ ಆಗುವುದಿಲ್ಲ ಆದರೆ ಮಹಿಮೆ
ಮಾಡುವವರಾಗುತ್ತಾರೆ.
ಅಂದಾಗ ನಂಬರ್ವನ್ ಅರ್ಥಾತ್ ಮನನ ಶಕ್ತಿಯಿಂದ ಖಜಾನೆಯ ಅನುಭವಿಗಳಾಗಿ ಅನುಭವಿಗಳನ್ನಾಗಿ ಮಾಡುವವರು
ಅಂದರೆ ಅನ್ಯರನ್ನೂ ಧನವಂತರನ್ನಾಗಿ ಮಾಡುವವರು. ಆದ್ದರಿಂದ ಅವರ ಖಜಾನೆಯು ಸದಾ ಹೆಚ್ಚುತ್ತಾ
ಹೋಗುತ್ತದೆ ಮತ್ತು ಸಮಯ ಪ್ರಮಾಣ ಸ್ವಯಂನ ಪ್ರತಿ ಮತ್ತು ಅನ್ಯರ ಪ್ರತಿ ಕಾರ್ಯದಲ್ಲಿ
ತೊಡಗಿಸುವುದರಿಂದ ಸದಾ ಸಫಲತಾ ಸ್ವರೂಪರಾಗಿರುತ್ತಾರೆ. ಕೇವಲ ವರ್ಣನೆ ಮಾಡುವವರೇ ಅನ್ಯರನ್ನೂ
ಧನವಂತರನ್ನಾಗಿ ಮಾಡಲು ಸಾಧ್ಯವಿಲ್ಲ ಮತ್ತು ತನ್ನ ಪ್ರತಿಯೂ ಸಮಯ ಪ್ರಮಾಣ ಯಾವ ಶಕ್ತಿ, ಗುಣ,
ಜ್ಞಾನದ ಮಾತುಗಳನ್ನೇ ಉಪಯೋಗಿಸಬೇಕೋ ಅವನ್ನು ಸಮಯದಲ್ಲಿ ಉಪಯೋಗಿಸುವುದಿಲ್ಲ. ಆದುದರಿಂದ ಖಜಾನೆಯ
ಸಂಪನ್ನ ಸ್ವರೂಪದ ಸುಖ ಮತ್ತು ದಾತನಾಗಿ ನೀಡುವ ಅನುಭವ ಮಾಡಲು ಸಾಧ್ಯವಿಲ್ಲ. ಹಣವಿದ್ದರೂ ಹಣದಿಂದ
ಸುಖವನ್ನು ಪಡೆಯಲು ಸಾಧ್ಯವಿಲ್ಲ. ಶಕ್ತಿಯಿದ್ದರೂ ಸಮಯದಲ್ಲಿ ಶಕ್ತಿಯ ಮೂಲಕ ಸಫಲತೆ ಹೊಂದುವುದಿಲ್ಲ,
ಗುಣವಿದ್ದರೂ ಸಮಯ ಪ್ರಮಾಣ ಆ ಗುಣವನ್ನು ಉಪಯೋಗಿಸುವುದಿಲ್ಲ, ಕೇವಲ ವರ್ಣನೆ ಮಾಡುತ್ತಾರೆ. ಹಣವು
ಎಲ್ಲರ ಬಳಿಯಿದೆ ಆದರೆ ಹಣದ ಸುಖವು ಅದನ್ನು ಸಮಯದಲ್ಲಿ ಉಪಯೋಗಿಸುವುದರಿಂದಲೇ ಅನುಭವವಾಗುತ್ತದೆ.
ಹೇಗೆ ಈಗಿನ ಸಮಯದಲ್ಲಿಯೂ ಕೆಲವರು ವಿನಾಶೀ ಧನವಂತರ ಬಳಿಯೂ ಹಣವು ಬ್ಯಾಂಕ್ನಲ್ಲಿರಬಹುದು,
ಅಲಮಾರಿನಲ್ಲಿರುವುದು, ಇಲ್ಲವೆ ದಿಂಬಿನ ಕೆಳಗಿರಬಹುದು ಆದರೆ ತಾನೂ ಕಾರ್ಯದಲ್ಲಿ
ಉಪಯೋಗಿಸುವುದಿಲ್ಲ, ಅನ್ಯರೂ ಉಪಯೋಗಿಸಲು ಬಿಡುವುದಿಲ್ಲ. ತಾನೂ ಲಾಭ ಪಡೆಯುವುದಿಲ್ಲ, ಅನ್ಯರಿಗೂ
ಲಾಭ ಮಾಡಿಸುವುದಿಲ್ಲ ಅಂದಾಗ ಹಣವಿದ್ದರೂ ಸುಖವನ್ನು ಪಡೆಯಲಿಲ್ಲ ಅಲ್ಲವೆ. ಹಣವು ದಿಂಬಿನ ಕೆಳಗಡೆಯೇ
ಉಳಿದು ಬಿಡುವುದು ತಾನು ಹೊರಟು ಹೋಗುವರು ಅಂದಾಗ ಈ ವರ್ಣನೆ ಮಾಡುವುದೆಂದರೆ ಉಪಯೋಗಿಸದೇ ಇರುವುದು.
ಸದಾ ಬಡವರಾಗಿಯೇ ಕಾಣಿಸುತ್ತಾರೆ. ಈ ಧನವನ್ನೂ ಸಹ ಒಂದುವೇಳೆ ಸ್ವಯಂನ ಪ್ರತಿ ಹಾಗೂ ಅನ್ಯರ ಪ್ರತಿ
ಸಮಯ ಪ್ರಮಾಣ ಉಪಯೋಗಿಸುವುದಿಲ್ಲ ಕೇವಲ ಬುದ್ಧಿಯಲ್ಲಿಟ್ಟುಕೊಂಡರೆ ತಾನೂ ಅವಿನಾಶಿ ಧನದ
ಖುಷಿ-ನಶೆಯಲ್ಲಿರುವುದಿಲ್ಲ, ಅನ್ಯರಿಗೂ ಕೊಡುವುದಿಲ್ಲ. ಸದಾ ಏನು ಮಾಡುವುದು? ಹೇಗೆ ಮಾಡುವುದು.......?
ಈ ವಿಧಿಯಿಂದ ನಡೆಯುತ್ತಿರುತ್ತಾರೆ ಆದ್ದರಿಂದಲೇ ಎರಡು ಮಾಲೆಗಳಾಗಿ ಬಿಡುತ್ತವೆ. ಒಂದನೆಯವರು ಮನನ
ಮಾಡುವವರು, ಎರಡನೆಯವರು ಕೇವಲ ವರ್ಣನೆ ಮಾಡುವವರು ಅಂದಾಗ ಎಂತಹ ವ್ಯಾಪಾರಿಗಳಾಗಿದ್ದೀರಿ? ನಂಬರ್ವನ್
ಆಗುವವರೋ ಅಥವಾ ಎರಡನೆಯವರೋ? ಈ ಖಜಾನೆಯ ಷರತ್ತು ಏನೆಂದರೆ ಅನ್ಯರಿಗೆ ಎಷ್ಟು ಕೊಡುತ್ತೀರೋ, ಎಷ್ಟು
ಕಾರ್ಯದಲ್ಲಿ ತೊಡಗಿಸುತ್ತೀರೋ ಅಷ್ಟು ಹೆಚ್ಚುವುದು, ಇದು ವೃದ್ಧಿಯಾಗುವ ವಿಧಿಯಾಗಿದೆ. ಇದರಲ್ಲಿ
ವಿಧಿಯನ್ನು ಅಳವಡಿಸಿಕೊಳ್ಳದ ಕಾರಣ ಸ್ವಯಂನಲ್ಲಿಯೂ ವೃದ್ಧಿಯಿಲ್ಲ ಮತ್ತು ಅನ್ಯರ ಸೇವೆ
ಮಾಡುವುದರಲ್ಲಿಯೂ ವೃದ್ಧಿಯಿಲ್ಲ. ಸಂಖ್ಯೆಯ ವೃದ್ಧಿಯ ಮಾತನ್ನು ಹೇಳುತ್ತಿಲ್ಲ, ಸಂಪನ್ನರನ್ನಾಗಿ
ಮಾಡುವ ವೃದ್ಧಿಯಾಗಿದೆ. ಕೆಲವರು ವಿದ್ಯಾರ್ಥಿಗಳು ಸಂಖ್ಯೆಯಲ್ಲಿ ಎಣಿಕೆಗೆ ಬರುತ್ತಾರೆ ಆದರೆ
ಇಲ್ಲಿಯವರೆಗೂ ಯೋಗವೆಂದರೇನು, ತಂದೆಯನ್ನು ಹೇಗೆ ನೆನಪು ಮಾಡುವುದೆಂತಲೂ ಹೇಳುತ್ತಾರೆ. ಈಗ
ಶಕ್ತಿಯಿಲ್ಲ ಅಂದಾಗ ವಿದ್ಯಾರ್ಥಿಗಳ ಸಾಲಿನಲ್ಲಂತೂ ಇದ್ದಾರೆ, ರಿಜಿಸ್ಟರ್ನಲ್ಲಿ ಹೆಸರಿರುತ್ತದೆ
ಆದರೆ ಧನವಂತರಾಗಲಿಲ್ಲ ಅಲ್ಲವೆ. ಬೇಡುತ್ತಲೇ ಇರುತ್ತಾರೆ. ಕೆಲವರು ಶಿಕ್ಷಕರ ಬಳಿ ಹೋಗಿ ಸಹಯೋಗ
ಕೊಡಿ ಎಂದು ಅಥವಾ ಕೆಲವೊಮ್ಮೆ ತಂದೆಯೊಂದಿಗೆ ವಾರ್ತಾಲಾಪದಲ್ಲಿ ನನಗೆ ಸಹಾಯ ಮಾಡಿ ಎಂದು
ಹೇಳುತ್ತಿರುತ್ತಾರೆ ಅಂದಮೇಲೆ ಸಂಪನ್ನರಾಗಲಿಲ್ಲ ಅಲ್ಲವೆ. ಯಾರು ಸ್ವಯಂ ತನ್ನ ಪ್ರತಿ ಮನನ
ಶಕ್ತಿಯಿಂದ ಜ್ಞಾನ ಧನವನ್ನು ಹೆಚ್ಚಿಸಿಕೊಳ್ಳುವರೋ ಅವರು ಅನ್ಯರನ್ನೂ ಧನದಲ್ಲಿ ಮುಂದುವರೆಸುತ್ತಾರೆ.
ಮನನ ಶಕ್ತಿ ಅರ್ಥಾತ್ ಜ್ಞಾನ ಧನವನ್ನು ಹೆಚ್ಚಿಸಿಕೊಳ್ಳುವುದು. ಆದ್ದರಿಂದ ಧನವಂತನ ಖುಷಿ, ಧನವಂತನ
ಸುಖದ ಅನುಭವ ಮಾಡಿ. ತಿಳಿಯಿತೆ? ಮನನ ಶಕ್ತಿಯ ಮಹತ್ವಿಕೆ ಬಹಳಷ್ಟಿದೆ, ಮೊದಲೂ ಸಹ ಸ್ವಲ್ಪ
ಸೂಚನೆಯಿಂದ ತಿಳಿಸಿದ್ದೇವೆ. ಇನ್ನೂ ಮನನ ಶಕ್ತಿಯ ಮಹತ್ವಿಕೆಯನ್ನು ಮತ್ತೆಂದಾದರೂ ತಿಳಿಸಿ
ಕೊಡುತ್ತೇವೆ. ಪರಿಶೀಲನೆ ಮಾಡಿಕೊಳ್ಳುವ ಕೆಲಸವನ್ನು ಕೊಡುತ್ತಿರುತ್ತೇನೆ. ಕೊನೆಯಲ್ಲಿ ಫಲಿತಾಂಶವು
ಹೊರಬಂದಾಗ ನಮಗೆ ತಿಳಿದೇ ಇರಲಿಲ್ಲ, ಈ ಮಾತನ್ನು ಬಾಪ್ದಾದಾರವರು ತಿಳಿಸಿಯೇ ಇರಲಿಲ್ಲ ಎಂದು
ಹೇಳುವಂತಾಗಬಾರದು. ಆದ್ದರಿಂದ ನಿತ್ಯವೂ ತಿಳಿಸುತ್ತಿರುತ್ತೇವೆ ಅಂದಾಗ ಪರಿಶೀಲನೆ
ಮಾಡಿಕೊಳ್ಳುವುದೆಂದರೆ ಪರಿವರ್ತನೆ ಮಾಡಿಕೊಳ್ಳುವುದು. ಒಳ್ಳೆಯದು.
ಸರ್ವ ಶ್ರೇಷ್ಠ ಸೌಧಾಗಾರ
ಆತ್ಮಗಳಿಗೆ, ಸದಾ ಸರ್ವ ಖಜಾನೆಗಳನ್ನು ಸಮಯ ಪ್ರಮಾಣ ಕಾರ್ಯದಲ್ಲಿ ತೊಡಗಿಸುವಂತಹ ಮಹಾನ್ ವಿಶಾಲ
ಬುದ್ಧಿಯುಳ್ಳ ಮಕ್ಕಳಿಗೆ, ಸದಾ ಸ್ವಯಂನ್ನು ಮತ್ತು ಸರ್ವರಿಗೆ ಸಂಪನ್ನ ಅನುಭವ ಮಾಡಿ,
ಅನುಭವಿಗಳನ್ನಾಗಿ ಮಾಡಿಸುವಂತಹ ಅನುಭವದ ಅಥಾರಿಟಿ ಮಕ್ಕಳಿಗೆ ಆಲ್ಮೈಟಿ ಅಥಾರಿಟಿ ಬಾದಾದಾರವರ ನೆನಪು,
ಪ್ರೀತಿ ಹಾಗೂ ನಮಸ್ತೆ.
ಈಸ್ಟರ್ನ್ ಜೋನಿನ
ಸಹೋದರ-ಸಹೋದರಿಯರೊಂದಿಗೆ ಅವ್ಯಕ್ತ ಬಾಪ್ ದಾದಾರವರ ವಾರ್ತಾಲಾಪ:-
ಪೂರ್ವದಿಂದ ಸೂರ್ಯನ
ಉದಯವಾಗುತ್ತದೆ ಅಲ್ಲವೆ. ಅಂದಮೆಲೆ ಈಸ್ಟರ್ನ್ ಜೋನ್ ಅಂದರೆ ಅವಶ್ಯವಾಗಿ ಸದಾ ಜ್ಞಾನ ಸೂರ್ಯನ
ಉದಯವಾಗಿಯೇ ಇರುತ್ತಾನೆ. ಈಸ್ಟರ್ನ್ನವರು ಅಂದರೆ ಸದಾ ಜ್ಞಾನ ಸೂರ್ಯನ ಪ್ರಕಾಶದ ಮೂಲಕ ಪ್ರತಿಯೊಂದು
ಆತ್ಮವನ್ನೂ ಪ್ರಕಾಶತೆಯಲ್ಲಿ ತರುವವರು, ಅಂಧಕಾರವನ್ನು ಸಮಾಪ್ತಿಗೊಳಿಸುವವರು. ಸೂರ್ಯನ ಕಾರ್ಯವೇ
ಆಗಿದೆ - ಅಂಧಕಾರವನ್ನು ಸಮಾಪ್ತಿ ಮಾಡುವುದು. ಅಂದಮೇಲೆ ತಾವೆಲ್ಲರೂ ಮಾಸ್ಟರ್ ಜ್ಞಾನ ಸೂರ್ಯ ಅಂದರೆ
ನಾಲ್ಕೂ ಕಡೆಯಲ್ಲಿರುವ ಅಜ್ಞಾನವನ್ನು ಸಮಾಪ್ತಿ ಮಾಡುವವರು ಆಗಿದ್ದೀರಿ ಅಲ್ಲವೆ. ಎಲ್ಲರೂ ಇದೇ
ಸೇವೆಯಲ್ಲಿ ವ್ಯಸ್ತವಾಗಿ ಇರುತ್ತೀರಾ ಅಥವ ತಮ್ಮ ಅಥವಾ ಪ್ರವೃತ್ತಿಯ ಪರಿಸ್ಥಿತಿಗಳ ಜಂಜಾಟಗಳಲ್ಲಿಯೇ
ಸಿಲುಕಿರುತ್ತೀರಾ? ಸೂರ್ಯನ ಕಾರ್ಯವಾಗಿದೆ -ಪ್ರಕಾಶತೆಯನ್ನು ಕೊಡುವ ಕಾರ್ಯದಲ್ಲಿ ವ್ಯಸ್ತವಾಗಿ
ಇರುವುದು, ಅದು ಭಲೆ ಪ್ರವೃತ್ತಿಯಲ್ಲಿ ಅಥವಾ ಯಾವುದೇ ವ್ಯವಹಾರದಲ್ಲಿ ಇರಬಹುದು, ಅಥವ ಯಾವುದೇ
ಪರಿಸ್ಥಿತಿಗಳೇ ತಮ್ಮ ಮುಂದೆ ಬರುತ್ತದೆ ಆದರೆ ಸೂರ್ಯನು ಪ್ರಕಾಶತೆಯನ್ನು ಕೊಡುವ ಕಾರ್ಯ ಮಾಡದೆ
ಇರಲು ಸಾಧ್ಯವಿಲ್ಲ. ಅಂದಾಗ ಇಂತಹ ಮಾಸ್ಟರ್ ಜ್ಞಾನಸೂರ್ಯ ಆಗಿದ್ದೀರಾ ಅಥವಾ ಕೆಲವೊಮ್ಮೆ
ಗೊಂದಲಗಳಲ್ಲಿ ಬಂದು ಬಿಡುವಿರಾ? ಮೊದಲ ಕರ್ತವ್ಯವಾಗಿದೆ-ಜ್ಞಾನದ ಪ್ರಕಾಶತೆ ಕೊಡುವುದು. ಪರಮಾರ್ಥದ
ಮೂಲಕ ವ್ಯವಹಾರ ಮತ್ತು ಪರಿವಾರ ಎರಡನ್ನೂ ಶ್ರೇಷ್ಠಗೊಳಿಸಬೇಕು ಎಂಬ ಸ್ಮೃತಿಯು ಇರುತ್ತದೆಯೆಂದರೆ,
ಈ ಸೇವೆಯು ಸ್ವತಹವಾಗಿಯೇ ಆಗುತ್ತದೆ. ಎಲ್ಲಿ ಪರಮಾರ್ಥವಿದೆಯೋ ಅಲ್ಲಿ ವ್ಯವಹಾರವು ಸಿದ್ಧವಾಗುತ್ತದೆ
ಅಥವ ಸಹಜವಾಗಿ ಬಿಡುತ್ತದೆ. ಮತ್ತು ಪರಮಾರ್ಥದ ಭಾವನೆಯಿಂದ ಪರಿವಾರದಲ್ಲಿಯೂ ಸತ್ಯತೆ ಹಾಗೂ ಏಕತೆಯು
ಸ್ವತಹವಾಗಿಯೇ ಬಂದು ಬಿಡುತ್ತದೆ. ಹಾಗಾದರೆ ಪರಿವಾರವೂ ಶ್ರೇಷ್ಠ ಮತ್ತು ವ್ಯವಹಾರವೂ
ಶ್ರೇಷ್ಟವಾಯಿತು. ಪರಮಾರ್ಥವು ವ್ಯವಹಾರದಿಂದ ದೂರ ಮಾಡುವುದಿಲ್ಲ, ಇನ್ನೂ ಪರಮಾರ್ಥದ ಕಾರ್ಯದಲ್ಲಿ
ವ್ಯಸ್ತವಾಗಿ ಇರುವುದರಿಂದ ಪರಿವಾರ ಮತ್ತು ವ್ಯವಹಾರದಲ್ಲಿ ಆಶ್ರಯವು ಸಿಗುತ್ತದೆ. ಅಂದಮೇಲೆ
ಪರಮಾರ್ಥದಲ್ಲಿ ಸದಾ ಮುಂದುವರೆಯುತ್ತಾ ಸಾಗಿರಿ. ನೇಪಾಳದವರ ಸಂಕೇತದಲ್ಲಿಯೂ ಸೂರ್ಯನನ್ನು
ತೋರಿಸುತ್ತಾರಲ್ಲವೆ. ಅದೇ ರೀತಿ ರಾಜರುಗಳಲ್ಲಿ ಸೂರ್ಯ ವಂಶಿಯರು ಪ್ರಸಿದ್ಧವಿದ್ದಾರೆ,
ಶ್ರೇಷ್ಠರೆಂಬ ಮಾನ್ಯತೆಯಿದೆ ಅಂದಮೇಲೆ ತಾವೂ ಸಹ ಮಾಸ್ಟರ್ ಜ್ಞಾನಸೂರ್ಯರು ಎಲ್ಲರಿಗೂ
ಪ್ರಕಾಶತೆಯನ್ನು ಕೊಡುವವರು ಆಗಿದ್ದೀರಿ. ಒಳ್ಳೆಯದು.
ವರದಾನ:
ಸಂಗಮಯುಗದಲ್ಲಿ ಪ್ರತಿಯೊಂದು ಕರ್ಮವು ಕಲೆಯ (ವಿಶೇಷತೆ) ರೂಪದಲ್ಲಿ ಮಾಡುವಂತಹ 16 ಕಲಾ ಸಂಪನ್ನ ಭವ.
ಸಂಗಮಯುಗದ ವಿಶೇಷ
ಕರ್ಮವೆಂಬ ಕಲೆಯನ್ನು ತೋರಿಸುವ ಯುಗವಾಗಿದೆ. ಯಾರ ಪ್ರತೀ ಕರ್ಮವು ಕಲೆಯ ರೂಪದಲ್ಲಿ ಇರುತ್ತದೆಯೋ,
ಅವರ ಪ್ರತೀ ಕರ್ಮ ಅಥವಾ ಗುಣದ ಗಾಯನವಾಗುತ್ತದೆ. 16 ಕಲಾ ಸಂಪನ್ನ ಅರ್ಥಾತ್ ಪ್ರತೀ ಚಲನೆಯು
ಸಂಪೂರ್ಣ ಕಲೆಯ ರೂಪದಲ್ಲಿ ಕಾಣಿಸುವುದು - ಇದೇ ಸಂಪೂರ್ಣ ಸ್ಥಿತಿಯ ಸಂಕೇತವಾಗಿದೆ. ಹೇಗೆ ಸಾಕಾರನ
ಮಾತು, ನಡೆ... ಎಲ್ಲದರಲ್ಲಿಯೂ ವಿಶೇಷತೆಯನ್ನು ನೋಡಿದಿರಿ, ಅಂದಮೇಲೆ ಇದು ಕಲೆ ಆಯಿತು.
ಏಳುವ-ಕುಳಿತುಕೊಳ್ಳುವ ಕಲೆ, ನೋಡುವ ಕಲೆ, ನಡೆಯುವ ಕಲೆವುಳ್ಳವರಾಗಿದ್ದರು. ಎಲ್ಲದರಲ್ಲಿಯೂ
ವಿಭಿನ್ನತೆ ಹಾಗೂ ವಿಶೇಷತೆ ಇದ್ದಿತು. ಅಂದಾಗ ಇದೇರೀತಿ ಫಾಲೋ ಫಾದರ್ ಮಾಡುತ್ತಾ 16 ಕಲಾ
ಸಂಪನ್ನರಾಗಿರಿ.
ಸ್ಲೋಗನ್:
ಯಾರು
ತಕ್ಷಣದಲ್ಲಿ ಪರಿಶೀಲನೆ ಮಾಡಿ ನಿರ್ಣಯ ಮಾಡುವರೋ ಅವರೇ ಶಕ್ತಿಶಾಲಿಗಳು ಆಗಿದ್ದಾರೆ.