30/04/21 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ - ನೀವು ತಂದೆಯ ಮೂಲಕ ಸನ್ಮುಖದಲ್ಲಿ ಓದುತ್ತಿದ್ದೀರಿ, ನೀವು ಅವಶ್ಯವಾಗಿ ಸತ್ಯಯುಗದ ರಾಜಧಾನಿಗೆ ಯೋಗ್ಯರಾಗುವುದಕ್ಕಾಗಿ ಪಾವನರಾಗಬೇಕು”

ಪ್ರಶ್ನೆ:

ತಂದೆಯ ಯಾವ ಕರ್ತವ್ಯವನ್ನು ನೀವು ಮಕ್ಕಳೇ ತಿಳಿದಿದ್ದೀರಿ?

ಉತ್ತರ:

ನಮ್ಮ ತಂದೆಯು ತಂದೆಯೂ ಆಗಿದ್ದಾರೆ, ಶಿಕ್ಷಕ ಮತ್ತು ಸದ್ಗುರುವೂ ಆಗಿದ್ದಾರೆಂಬುದನ್ನು ನೀವು ತಿಳಿದಿದ್ದೀರಿ. ತಂದೆಯು ಕಲ್ಪದ ಸಂಗಮಯುಗದಲ್ಲಿ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು, ಒಂದು ಆದಿ ಸನಾತನ ಧರ್ಮದ ಸ್ಥಾಪನೆ ಮಾಡುವುದಕ್ಕಾಗಿ ಬಂದಿದ್ದಾರೆ. ತಂದೆಯು ಈಗ ನಾವು ಮಕ್ಕಳನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವುದಕ್ಕಾಗಿ ಓದಿಸುತ್ತಾರೆ, ಈ ಕರ್ತವ್ಯವನ್ನು ನಾವು ಮಕ್ಕಳ ಹೊರತು ಮತ್ತ್ಯಾರೂ ತಿಳಿದುಕೊಂಡಿಲ್ಲ.

ಗೀತೆ:

ಭೋಲಾನಾಥನಿಗಿಂತ ಭಿನ್ನ......

ಓಂ ಶಾಂತಿ. ಓಂ ಶಾಂತಿಯ ಅರ್ಥವನ್ನಂತು ಮಕ್ಕಳಿಗೆ ಪದೇ-ಪದೇ ತಿಳಿಸಲಾಗಿದೆ. ಓಂ ಎಂದರೆ ನಾನು ಆತ್ಮ ಆಗಿದ್ದೇನೆ ಮತ್ತು ಇದು ನನ್ನ ಶರೀರ ಆಗಿದೆ. ಶರೀರವೂ ಸಹ ಹೇಳುತ್ತದೆ - ಇದು ನನ್ನ ಆತ್ಮವಾಗಿದೆ. ಶಿವ ತಂದೆಯೂ ಹೇಳುತ್ತಾರಲ್ಲವೆ - ನೀವು ನನ್ನವರಾಗಿದ್ದೀರಿ. ಮಕ್ಕಳೂ ಸಹ ತಂದೆಯು ನನ್ನವರಾಗಿದ್ದೀರಿ ಎಂದು ಹೇಳುತ್ತಾರೆ. ಅದೇರೀತಿ ಆತ್ಮವೂ ಸಹ ಇದು ನನ್ನ ಶರೀರ ಎಂದು ಹೇಳುತ್ತದೆ. ಶರೀರವೂ ಸಹ ನನ್ನ ಆತ್ಮವೆಂದು ಹೇಳುತ್ತದೆ. ಈಗ ಆತ್ಮವು ನಾನು ಅವಿನಾಶಿ ಆಗಿದ್ದೇನೆ ಎಂದು ತಿಳಿದುಕೊಂಡಿದೆ. ಆತ್ಮವಿಲ್ಲದೆ ಶರೀರವೇನೂ ಮಾಡುವುದಕ್ಕೆ ಆಗುವುದಿಲ್ಲ. ಶರೀರವಂತು ಇದೆ ಆದರೆ ಹೇಳುತ್ತಾರೆ - ನಾನಾತ್ಮನಿಗೆ ಕಷ್ಟ ಕೊಡಬೇಡಿ, ನಾನಾತ್ಮನು ಪಾಪಾತ್ಮ ಆಗಿದ್ದೇನೆ ಅಥವಾ ಪುಣ್ಯಾತ್ಮನಾಗಿದ್ದೇನೆ ಎಂದು ಹೇಳುತ್ತಾರೆ. ನೀವು ಹೇಳುತ್ತೀರಿ - ನಾನಾತ್ಮನು ಸತ್ಯಯುಗದಲ್ಲಿ ಪುಣ್ಯಾತ್ಮನಾಗಿದ್ದೆನು. ನಾನು ಸತ್ಯಯುಗದಲ್ಲಿ ಸತೋಪ್ರಧಾನ ಅಥವಾ ಶುದ್ಧ ಚಿನ್ನವಾಗಿದ್ದೆನು ಎಂದು ಸ್ವಯಂ ಆತ್ಮವೇ ಹೇಳುತ್ತದೆ. ಚಿನ್ನವೆಂದರೆ ಚಿನ್ನವಲ್ಲ, ಇದೊಂದು ಉದಾಹರಣೆ ಕೊಡಲಾಗುತ್ತದೆ ಅಷ್ಟೆ. ನಮ್ಮ ಆತ್ಮವು ಪವಿತ್ರವಾಗಿತ್ತು, ಪರಿಶುದ್ಧವಾದ ಚಿನ್ನದ ಸಮಾನವಿತ್ತು, ಈಗಂತು ಹೇಳುತ್ತಾರೆ - ಅಶುದ್ಧವಾಗಿದ್ದೇನೆ. ಪ್ರಪಂಚದವರು ಇದನ್ನು ತಿಳಿದುಕೊಂಡಿಲ್ಲ. ನಿಮಗಂತು ಶ್ರೀಮತ ಸಿಗುತ್ತದೆ, ನೀವೀಗ ಇದನ್ನು ತಿಳಿದಿದ್ದೀರಿ - ನಮ್ಮ ಆತ್ಮವು ಸತೋಪ್ರಧಾನವಿತ್ತು, ಈಗ ತಮೋಪ್ರಧಾನವಾಗಿದೆ. ಬಾಲ್ಯಾವಸ್ಥೆ, ಯುವ, ವೃದ್ಧಾಪ್ಯ..... ಹೀಗೆ ಪ್ರತಿಯೊಂದು ವಸ್ತುವೂ ಆಗುತ್ತದೆ, ಪ್ರತಿಯೊಂದು ವಸ್ತುವು ಹೊಸದರಿಂದ ಹಳೆಯದಂತು ಆಗುತ್ತದೆ. ಪ್ರಪಂಚದವೂ ಸಹ ಮೊದಲು ಚಿನ್ನದ ಸಮಾನ ಸತೋಪ್ರಧಾನವಾಗಿತ್ತು ನಂತರ ತಮೋಪ್ರಧಾನ ಕಬ್ಬಿಣದ ಸಮಾನವಾಗಿದೆ, ಆದ್ದರಿಂದಲೇ ದುಃಖಿಗಳಾಗಿದ್ದಾರೆ. ಸತೋಪ್ರಧಾನದ ಅರ್ಥವೇ ಆಗಿದೆ - ಸುಧಾರಣೆ ಆಗಿರುವವರು (ಪರಿಶುದ್ಧ), ತಮೋಪ್ರಧಾನವೆಂದರೆ ದೋಷವುಳ್ಳವರು. ಗೀತೆಯಲ್ಲಿಯೂ ಹೇಳುತ್ತಾರೆ - ಹಾಳಾಗಿರುವವರನ್ನು ಸುಧಾರಣೆ ಮಾಡುವವರು.... ಹಳೆಯ ಪ್ರಪಂಚದಲ್ಲಿ ದೋಷವುಂಟಾಗಿದೆ ಏಕೆಂದರೆ ರಾವಣ ರಾಜ್ಯವಿದೆ ಮತ್ತು ಎಲ್ಲರೂ ಪತಿತರಿದ್ದಾರೆ. ಸತ್ಯಯುಗದಲ್ಲಿ ಎಲ್ಲರೂ ಪಾವನರಿದ್ದರು, ಅದಕ್ಕೆ ನವ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ, ಇದು ಹಳೆಯ ವಿಕಾರಿ ಪ್ರಪಂಚವಾಗಿದೆ. ಕಲಿಯುಗವೂ ಸಹ ಈಗ ಕಬ್ಬಿಣದ ಯುಗವಾಗಿದೆ, ಇವೆಲ್ಲಾ ಮಾತುಗಳನ್ನು ಯಾವುದೇ ಶಾಲೆ, ಕಾಲೇಜುಗಳಲ್ಲಿಯೂ ಓದಿಸುವುದಿಲ್ಲ. ಭಗವಂತನೇ ಬಂದು ಓದಿಸುತ್ತಾರೆ ಹಾಗೂ ರಾಜಯೋಗದ ವಿದ್ಯೆಯನ್ನು ಕಲಿಸುತ್ತಾರೆ. ಗೀತೆಯಲ್ಲಿಯೂ ಭಗವಾನುವಾಚ ಬರೆಯಲಾಗಿದೆ - ಶ್ರೀಮತ್ ಭಗವತ್ ಗೀತಾ. ಶ್ರೀಮತವೆಂದರೆ ಶ್ರೇಷ್ಠ ಮತ ಎಂದಾಗಿದೆ. ಶ್ರೇಷ್ಠಕ್ಕಿಂತಲೂ ಶ್ರೇಷ್ಠವಾದ ಸರ್ವೋಚ್ಛನು ಭಗವಂತನಾಗಿದ್ದಾರೆ, ಅವರ ಹೆಸರು ಯಥಾರ್ಥವಾಗಿ ಶಿವ ಎಂದಿದೆ. ಎಂದಿಗೂ ರುದ್ರ ಜಯಂತಿ ಅಥವಾ ರುದ್ರ ರಾತ್ರಿಯೆಂದು ಕೇಳಿರುವುದಿಲ್ಲ, ಶಿವರಾತ್ರಿ ಎಂದು ಹೇಳುತ್ತಾರೆ. ಶಿವನಂತು ನಿರಾಕಾರ, ಈಗ ನಿರಾಕಾರನ ರಾತ್ರಿ ಅಥವಾ ಜಯಂತಿಯನ್ನು ಆಚರಿಸುವುದಾದರೂ ಹೇಗೆ? ಕೃಷ್ಣ ಜಯಂತಿ ಎನ್ನುವುದು ಸರಿಯಾಗಿದೆ. ಇಂತಹವರ ಮಗು, ಅವರ ತಿಥಿ-ತಾರೀಖನ್ನು ತೋರಿಸುತ್ತಾರೆ. ಶಿವನ ಜನ್ಮವು ಯಾವಾಗ ಆಯಿತು ಎಂದು ಯಾರೂ ತಿಳಿದುಕೊಂಡಿಲ್ಲ, ಇದನ್ನಂತು ತಿಳಿದುಕೊಳ್ಳಬೇಕಲ್ಲವೆ. ಈಗ ನಿಮಗೆ ಆ ತಿಳುವಳಿಕೆಯು ಸಿಕ್ಕಿದೆ - ಶ್ರೀಕೃಷ್ಣನು ಸತ್ಯಯುಗದ ಆದಿಯಲ್ಲಿ ಜನ್ಮವನ್ನು ಹೇಗೆ ಪಡೆದನು. ಅವನ ಜನ್ಮವಾಗಿ 5000 ವರ್ಷಗಳಾಯಿತು ಎಂದು ನೀವು ಹೇಳುತ್ತೀರಿ. ಅವರೂ(ಕ್ರಿಶ್ಚಿಯನ್ನರು) ಹೇಳುತ್ತಾರೆ- ಕ್ರೈಸ್ತ ಬರುವುದಕ್ಕೆ 3000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು. ಇಸ್ಲಾಮಿಗಳು ಬರುವುದಕ್ಕೆ ಮೊದಲು ಚಂದ್ರವಂಶಿ, ಅವರಿಗೂ ಮುಂಚೆ ಸೂರ್ಯವಂಶಿಗಳಿದ್ದರು. ಶಾಸ್ತ್ರಗಳಲ್ಲಿ ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳನ್ನು ಕೊಟ್ಟಿದ್ದಾರೆ, ಇದಕ್ಕಾಗಿ ಗೀತೆಯು ಮುಖ್ಯವಾಗಿದೆ. ಗೀತೆಯಿಂದಲೇ ದೇವಿ-ದೇವತಾ ಧರ್ಮವು ಸ್ಥಾಪನೆಯಾಯಿತು. ಅದು ಸತಯುಗ-ತ್ರೇತಾದವರೆಗೂ ನಡೆಯಿತು ಅರ್ಥಾತ್ ಗೀತಾ ಶಾಸ್ತ್ರದಿಂದ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ಪರಮಪಿತ ಪರಮಾತ್ಮನೇ ಸ್ಥಾಪಿಸಿದರು. ಆ ಅರ್ಧಕಲ್ಪದಲ್ಲಂತು ಯಾವುದೇ ಶಾಸ್ತ್ರಗಳೂ ತಯಾರಾಗಲಿಲ್ಲ, ಯಾವುದೇ ಧರ್ಮ ಸ್ಥಾಪಕರೂ ಇರಲಿಲ್ಲ. ತಂದೆಯೇ ಬಂದು ಬ್ರಾಹ್ಮಣರನ್ನು ದೇವತಾ-ಕ್ಷತ್ರಿಯರನ್ನಾಗಿ ತಯಾರು ಮಾಡಿದರು ಅಂದರೆ ತಂದೆಯು 3 ಧರ್ಮಗಳ ಸ್ಥಾಪನೆ ಮಾಡುತ್ತಾರೆ, ಇದು ಗುಪ್ತ ಧರ್ಮವಾಗಿದೆ. ಇದರ ಆಯಸ್ಸು ಸ್ವಲ್ಪವೇ ಇರುತ್ತದೆ ಅಂದಾಗ ಸರ್ವಶಾಸ್ತ್ರಗಳ ಶಿರೋಮಣಿ ಗೀತೆಯನ್ನು ಭಗವಂತನೇ ನುಡಿಸಲಾಗಿದೆ. ತಂದೆಯು ಪುನರ್ಜನ್ಮದಲ್ಲಿ ಬರುವುದಿಲ್ಲ, ಜನ್ಮವಿದೆ ಆದರೆ ತಂದೆಯವರು ಹೇಳುತ್ತಾರೆ - ನಾನು ಗರ್ಭದಲ್ಲಿ ಬರಬೇಕಾಗಿರುವುದಿಲ್ಲ. ಪಾಪಗಳನ್ನು ಜೈಲಿನಲ್ಲಿ ಅನುಭವಿಸುತ್ತಾರೆ, ಗರ್ಭದಲ್ಲಿ ಪ್ರತಿಜೆಯನ್ನೂ ಮಾಡುತ್ತಾರೆ - ಇನ್ನು ನಾವು ಪಾಪಗಳನ್ನು ಮಾಡುವುದಿಲ್ಲ... ಆದರೆ ಇದಂತು ಪಾಪಾತ್ಮರ ಪ್ರಪಂಚವೇ ಆಗಿದೆ. ಹೊರಬಂದ ನಂತರ ಪಾಪಗಳನ್ನು ಮಾಡತೊಡಗುತ್ತಾರೆ. ಅಲ್ಲಿನ ಪ್ರತಿಜ್ಞೆಯು ಅಲ್ಲಿಯೇ ಉಳಿಯಿತು.... ಇಲ್ಲಿಯೂ ಸಹ ನಾವು ಪಾಪಗಳನ್ನು ಮಾಡುವುದಿಲ್ಲ, ಪರಸ್ಪರದಲ್ಲಿ ಕಾಮ ವಿಕಾರವನ್ನು ನಡೆಸುವುದಿಲ್ಲವೆಂದು ಬಹಳಷ್ಟು ಪ್ರತಿಜ್ಞೆಗಳನ್ನು ಮಾಡುತ್ತಾರೆ. ಏಕೆಂದರೆ ಈ ವಿಕಾರಗಳು ಆದಿ-ಮಧ್ಯ-ಅಂತ್ಯದಲ್ಲಿ ದುಃಖ ಕೊಡುತ್ತದೆ. ಸತ್ಯಯುಗದಲ್ಲಿ ಈ ವಿಕಾರಗಳೇ ಇರುವುದಿಲ್ಲ ಅಂದಮೇಲೆ ಮನುಷ್ಯನು ಆದಿ- ಮಧ್ಯ-ಅಂತ್ಯದ 21 ಜನ್ಮಗಳಲ್ಲಿ ದುಃಖವನ್ನು ಅನುಭವಿಸುವುದಿಲ್ಲ ಏಕೆಂದರೆ ಅಲ್ಲಿ ರಾಮ ರಾಜ್ಯವಿರುತ್ತದೆ. ಅದರ ಸ್ಥಾಪನೆಯನ್ನೀಗ ತಂದೆಯು ಮತ್ತೆ ಸ್ಥಾಪಿಸುತ್ತಿದ್ದಾರೆ. ಸಂಗಮಯುಗದಲ್ಲಿಯೇ ಸ್ಥಾಪನೆ ಆಗುತ್ತದೆಯಲ್ಲವೆ. ಯಾರೆಲ್ಲರೂ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ, ಅವರು ಯಾವುದೇ ಪಾಪವನ್ನು ಮಾಡಬಾರದು. ಅರ್ಧ ಸಮಯ ಪುಣ್ಯಾತ್ಮನಾಗಿರುತ್ತಾರೆ, ಅರ್ಥ ಸಮಯದ ನಂತರ ಪಾಪಾತ್ಮನಾಗುತ್ತಾರೆ. ನೀವು ಸತ್ಯಯುಗ-ತ್ರೇತಾದಲ್ಲಿ ಪುಣಾತ್ಮನಾಗಿ ಇರುತ್ತೀರಿ, ನಂತರದಲ್ಲಿ ಪಾಪಾತ್ಮನಾಗುತ್ತೀರಿ. ಯಾವಾಗ ಸತೋಪ್ರಧಾನ ಆತ್ಮನು ಮೇಲಿಂದ ಬರುವನು, ಆಗ ಅವರು ಶಿಕ್ಷೆಯನ್ನು ಅನುಭವಿಸಲು ಸಾಧ್ಯವಿಲ್ಲ. ಕ್ರೈಸ್ತನ ಆತ್ಮವು ಧರ್ಮ ಸ್ಥಾಪನೆ ಮಾಡುವುದಕ್ಕಾಗಿ ಬಂದಿತು, ಅವರಿಗೆ ಯಾವುದೇ ಶಿಕ್ಷೆಯು ಸಿಗಲು ಸಾಧ್ಯವಿಲ್ಲ. ಹೇಳುವುದೇನು - ಕ್ರೈಸ್ತನನ್ನು ಶಿಲುಬೆಗೇರಿಸಿದರು ಆದರೆ ಅವರ ಆತ್ಮವಂತು ಯಾವುದೇ ವಿಕರ್ಮಗಳನ್ನೇ ಮಾಡಿರಲಿಲ್ಲ, ಯಾವ ಶರೀರದಲ್ಲಿ ಅವರು ಪ್ರವೇಶ ಮಾಡುತ್ತಾರೆಯೋ ಅವರಿಗೆ ದುಃಖವಾಗುತ್ತದೆ, ಶರೀರದಲ್ಲಿರುವವರು ಸಹನೆ ಮಾಡುತ್ತಾರೆ. ಹೇಗೆ ಇದರಲ್ಲಿ (ಬ್ರಹ್ಮಾ) ತಂದೆಯು ಬರುತ್ತಾರೆ, ಅವರಂತು ಇರುವುದೇ ಸತೋಪ್ರಧಾನ. ಯಾವುದೇ ದುಃಖ, ಕಷ್ಟಗಳು ಇವರ ಆತ್ಮನಿಗಾಗುತ್ತದೆ, ಶಿವ ತಂದೆಗೆ ಆಗುವುದಿಲ್ಲ. ಶಿವ ತಂದೆಯಂತು ಸದಾ ಸುಖ-ಶಾಂತಿಯಲ್ಲಿ ಇರುತ್ತಾರೆ, ಅವರಂತು ಸದಾ ಸತೋಪ್ರಧಾನ ಆದರೆ ಬರುವುದಂತು ಈ ಹಳೆಯ ಶರೀರದಲ್ಲಿ ಬರುತ್ತಾರಲ್ಲವೆ. ಅದೇರೀತಿ ಕ್ರೈಸ್ತನ ಆತ್ಮವು ಯಾವ ಶರೀರದಲ್ಲಿ ಪ್ರವೇಶ ಮಾಡಿತು, ಆ ಶರೀರಕ್ಕೆ ದುಃಖವಾಗಬಹುದು, ಕ್ರೈಸ್ತನ ಆತ್ಮವು ದುಃಖವನ್ನು ಅನುಭವಿಸಲು ಸಾಧ್ಯವಿಲ್ಲ ಏಕೆಂದರೆ ಸತೋ-ರಜೋ-ತಮೋದಲ್ಲಿ ಬರುತ್ತದೆ. ಹೊಸ-ಹೊಸ ಆತ್ಮಗಳೂ ಸಹ ಬರುತ್ತಾರಲ್ಲವೆ. ಅವರಿಗೆ ಮೊದಲು ಅವಶ್ಯವಾಗಿ ಸುಖ ಭೋಗಿಸಬೇಕಾಗುತ್ತದೆ, ದುಃಖವನ್ನಲ್ಲ. ದುಃಖವನ್ನು ಅನುಭವಿಸಲು ನಿಯಮವೇ ಹೇಳುವುದಿಲ್ಲ. ಇದರಲ್ಲಿ ಬಾಬಾರವರು ಕುಳಿತಿದ್ದಾರೆ, ಆದರೆ ಯಾವುದೇ ಕಷ್ಟ-ನೋವುಗಳು ಇವರಿಗಾಗುತ್ತದೆ, ಶಿವ ತಂದೆಗೆ ಆಗುವುದಿಲ್ಲ. ಆದರೆ ಈ ಮಾತುಗಳನ್ನು ನೀವು ತಿಳಿದುಕೊಂಡಿದ್ದೀರಿ ಮತ್ತ್ಯಾರಿಗೂ ಗೊತ್ತಿಲ್ಲ.

ಇವೆಲ್ಲಾ ರಹಸ್ಯಗಳನ್ನೀಗ ತಂದೆಯು ಕುಳಿತು ತಿಳಿಸುತ್ತಿದ್ದಾರೆ. ಈ ಸಹಜ ರಾಜಯೋಗದಿಂದಲೇ ಸ್ಥಾಪನೆಯು ಆಗಿತ್ತು, ನಂತರ ಭಕ್ತಿಮಾರ್ಗದಲ್ಲಿಯೂ ಇದೇ ಮಾತುಗಳನ್ನು ಮಹಿಮೆ ಮಾಡಲಾಗುತ್ತದೆ. ಈ ಸಂಗಮದಲ್ಲಿ ಏನೆಲ್ಲಾ ಆಯಿತು, ಅದೆಲ್ಲದರ ಮಹಿಮೆಯಾಗುತ್ತದೆ. ಭಕ್ತಿಮಾರ್ಗದ ಆರಂಭ ಆಗುತ್ತಿದ್ದಂತೆಯೇ ಶಿವ ತಂದೆಯ ಪೂಜೆಯಾಗುತ್ತದೆ. ಮೊಟ್ಟ ಮೊದಲು ಭಕ್ತಿಯನ್ನು ಯಾರು ಮಾಡುವರೊ, ಅದೇ ಲಕ್ಷ್ಮೀ-ನಾರಾಯಣರು ಯಾವಾಗ ರಾಜ್ಯಾಡಳಿತ ಮಾಡುತ್ತಿದ್ದರೋ ಆ ಸಮಯದಲ್ಲಿ ಪೂಜ್ಯರಾಗಿದ್ದರು, ಅವರೇ ನಂತರ ಯಾವಾಗ ವಾಮಮಾರ್ಗದಲ್ಲಿ ಬರುತ್ತಾರೆಯೋ ಆಗ ಪೂಜ್ಯರಿದ್ದವರು ಪೂಜಾರಿ ಆಗಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳ ಬುದ್ಧಿಯಲ್ಲಿ ಮೊಟ್ಟ ಮೊದಲು ಇದೇ ಬರಬೇಕು - ನಿರಾಕಾರ ಪರಮಪಿತ ಪರಮಾತ್ಮನು ಇವರ (ಬ್ರಹ್ಮಾ ತಂದೆ) ಮೂಲಕ ನಮಗೆ ಓದಿಸುತ್ತಿದ್ದಾರೆ. ಇಡೀ ವಿಶ್ವದಲ್ಲಿ ಇಲ್ಲಿ ತಿಳಿಸುವಂತೆ ಮತ್ತ್ಯಾವುದೇ ಸ್ಥಾನಗಳಲ್ಲಿಯೂ ತಿಳಿಸುವುದಿಲ್ಲ. ತಂದೆಯೇ ಬಂದು ಭಾರತಕ್ಕೆ ಪುನಃ ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ಇದನ್ನು ತ್ರಿಮೂರ್ತಿಯ ಕೆಳಗೆ ಬರೆಯಲಾಗಿದೆ - ಡೀಟಿ ವರ್ಲ್ಡ್ ಸಾವರಾನಿಟಿ ಈಜ್ ಯುವರ್ ಗಾಡ್ ಫಾದರ್ಲಿ ಬರ್ಥ್ ರೈಟ್ (ದೈವೀ ಪ್ರಪಂಚದ (ಸ್ವರ್ಗ) ಆಸ್ತಿಯು ನಿಮ್ಮ ಜನ್ಮ ಸಿದ್ಧ ಅಧಿಕಾರವಾಗಿದೆ). ನೀವು ಮಕ್ಕಳಿಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಿದ್ದಾರೆ, ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ನೀವೂ ತಿಳಿದಿದ್ದೀರಿ - ಬಾಬಾರವರು ನಮ್ಮನ್ನು ಯೋಗ್ಯರನ್ನಾಗಿ ಮಾಡುತ್ತಿದ್ದಾರೆ ಏಕೆಂದರೆ ನಾವು ಪತಿರರಾಗಿದ್ದೆವು. ಪಾವನರಾಗುತ್ತೀರೆಂದರೆ ಈ ಶರೀರವು ಇರುವುದಿಲ್ಲ. ರಾವಣನಿಂದ ನಾವು ಪತಿತರಾದೆವು, ಮತ್ತೆ ಪರಮಪಿತ ಪರಮಾತ್ಮನು ಪಾವನರನ್ನಾಗಿ ಮಾಡಿ ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ, ಅವರು ಜ್ಞಾನ ಸಾಗರನೂ ಆಗಿದ್ದಾರೆ ಮತ್ತು ಪತಿತ-ಪಾವನನೂ ಆಗಿದ್ದಾರೆ. ಇದನ್ನು ನಿರಾಕಾರ ತಂದೆಯೇ ನಮಗೆ ಓದಿಸುತ್ತಿದ್ದಾರೆ, ಒಂದೇ ಸಾರಿ ಎಲ್ಲರೂ ಓದುವುದಕ್ಕೂ ಸಾಧ್ಯವಿಲ್ಲ. ನೀವು ಸನ್ಮುಖದಲ್ಲಿ ಸ್ವಲ್ಪವೇ ಮಕ್ಕಳು ಕುಳಿತಿದ್ದೀರಿ, ಉಳಿದ ಎಲ್ಲಾ ಮಕ್ಕಳು ತಿಳಿದುಕೊಂಡಿದ್ದಾರೆ - ಈಗ ಶಿವ ತಂದೆಯು ಬ್ರಹ್ಮಾರವರ ತನುವಿನಲ್ಲಿ ಕುಳಿತುಕೊಂಡು, ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಿರಬಹುದು. ಅದನ್ನು ಮುರುಳಿಯು ಬರವಣಿಗೆಯ ಮೂಲಕ ಬರುತ್ತದೆ. ಅನ್ಯ ಸತ್ಸಂಗಗಳಲ್ಲಿ ಈ ರೀತಿ ತಿಳಿದುಕೊಳ್ಳುತ್ತಾರೆಯೇ! ವರ್ತಮಾನದಲ್ಲಿ ಟೇಪ್ರೆಕಾರ್ಡ್ ಸಹ ಬಂದಿದೆ. ಆದ್ದರಿಂದ ಅದರಲ್ಲಿಯೂ ರೆಕಾರ್ಡ್ ಮಾಡಿ ಕಳುಹಿಸುತ್ತಾರೆ. ಅವರುಗಳಂತು ಇಂತಹ ಹೆಸರಿನ ಗುರುಗಳು ತಿಳಿಸುತ್ತಾರೆಂದು ಹೇಳುತ್ತಾರೆ, ಬುದ್ಧಿಯಲ್ಲಿ ಮನುಷ್ಯರೇ ಇರುತ್ತಾರೆ, ಇಲ್ಲಂತು ಆ ಮಾತಿರುವುದಿಲ್ಲ. ಇಲ್ಲಂತು ನಿರಾಕಾರ ತಂದೆಯಾದ ಜ್ಞಾನ ಸಾಗರನಿದ್ದಾರೆ. ಮನುಷ್ಯರನ್ನು ಜ್ಞಾನ ಸಾಗರನೆಂದು ಹೇಳಲಾಗುವುದಿಲ್ಲ. ಮಹಿಮೆಯಲ್ಲಿ ಹಾಡುತ್ತಾರೆ - ಗಾಡ್ ಫಾದರ್ ಈಸ್ ನಾಲೆಡ್ಜ್ಫುಲ್, ಪೀಸ್ಫುಲ್, ಬ್ಲಿಸ್ಫುಲ್ ಎಂದು ಹಾಡುತ್ತಾರೆ, ಅಂದಮೇಲೆ ಆಸ್ತಿಯೂ ಇರಬೇಕಲ್ಲವೆ. ಅವರಲ್ಲಿ ಯಾವ ಗುಣಗಳಿವೆಯೋ ಅವು ಮಕ್ಕಳಿಗೂ ಸಿಗಬೇಕು, ಅದೀಗ ಸಿಗುತ್ತಿದೆ. ಗುಣಗಳನ್ನು ಧಾರಣೆ ಮಾಡಿಕೊಂಡು ನಾವು ಇಂತಹ ಲಕ್ಷೀ-ನಾರಾಯಣ ಆಗುತ್ತಿದ್ದೇವೆ. ಆದರೆ ಎಲ್ಲರೂ ರಾಜ-ರಾಣಿಯರು ಆಗುವುದಿಲ್ಲ. ಗಾಯನ ಮಾಡುತ್ತಾರೆ - ರಾಜಾ-ರಾಣಿ, ಮಂತ್ರಿ..... ಅಲ್ಲಂತು ಮಂತ್ರಿಯೇ ಇರುವುದಿಲ್ಲ. ಅಲ್ಲಿನ (ಸತ್ಯ-ತ್ರೇತಾ) ಮಹಾರಾಜಾ -ಮಹಾರಾಣಿಯಲ್ಲಿ ಅಂತಹ ಪವರ್ ಇರುತ್ತದೆ, ಆದರೆ ಯಾವಾಗ ವಿಕಾರಿಗಳಾಗುವರೋ ಆಗ ಮಂತ್ರಿ ಮುಂತಾದವರು ಇರುತ್ತಾರೆ. ಮುಂಚೆ ಮಂತ್ರಿ ಮುಂತಾದವರೇ ಇರಲಿಲ್ಲ. ಅಲ್ಲಂತು ರಾಜಾ-ರಾಣಿಯ ರಾಜ್ಯವೇ ನಡೆಯುತ್ತಿತ್ತು, ಅವರೇ ಮಾಲೀಕರಾಗಿದ್ದಾಗ ಮಂತ್ರಿಗಳ ಅವಶ್ಯಕತೆ ಅಥವಾ ಸಲಹೆ ತೆಗೆದುಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ - ಇದೆಲ್ಲವೂ ಚರಿತ್ರೆ-ಭೂಗೋಳವಾಗಿದೆ. ಆದರೆ ಮೊಟ್ಟ ಮೊದಲು ತಾವು ಏಳುತ್ತಾ-ಕುಳಿತುಕೊಳ್ಳುತ್ತಾ ಬುದ್ಧಿಯಲ್ಲಿ ಇದಿರಬೇಕು - ನಮಗಂತು ತಂದೆಯು ಓದಿಸುತ್ತಿದ್ದಾರೆ, ಯೋಗ ಕಲಿಸುತ್ತಿದ್ದಾರೆ. ಈಗ ನಾಟಕವು ಪೂರ್ಣವಾಗುತ್ತದೆ, ನಾವು ಸಂಪೂರ್ಣ ಪತಿತರಾಗಿದ್ದೇವೆ ಏಕೆಂದರೆ ವಿಕಾರಗಳಲ್ಲಿ ಹೋಗಿರುವ ಕಾರಣದಿಂದ ಪಾಪಾತ್ಮನೆಂದು ಹೇಳಲಾಗುತ್ತದೆ. ಅದಕ್ಕಾಗಿ ನಾವೀಗ ನೆನಪಿನ ಯಾತ್ರೆಯಲ್ಲಿ ನಾವಿರಬೇಕಾಗಿದೆ. ಸತ್ಯಯುಗದಲ್ಲಿ ಪಾಪಾತ್ಮರೇ ಇರುವುದಿಲ್ಲ, ಅಲ್ಲಂತು ಪುಣ್ಯಾತ್ಮರಿರುತ್ತಾರೆ ಮತ್ತು ಅದು ಪ್ರಾಲಬ್ಧವಾಗಿದೆ, ಅದಕ್ಕಾಗಿಯೇ ನೀವೀಗ ಪುರುಷಾರ್ಥವನ್ನು ಮಾಡುತ್ತಿದ್ದೀರಿ. ಇದು ನಿಮ್ಮ ನೆನಪಿನ ಯಾತ್ರೆಯಾಗಿದೆ, ಇದನ್ನೇ ಭಾರತದ ಯೋಗವೆಂದೂ ಹೇಳುತ್ತಾರೆ. ಆದರೆ ಯೋಗ ಎಂದರೆ ನೆನಪು, ಇದರಿಂದ ವಿಕರ್ಮಗಳು ವಿನಾಶವಾಗುತ್ತವೆ ನಂತರ ಈ ಶರೀರವನ್ನು ಬಿಟ್ಟು ಹೊರಟು ಹೋಗುತ್ತೇವೆ ಯಾವುದಕ್ಕೆ ಮಧುರ ಮನೆ ಎಂದು ಹೇಳಲಾಗುತ್ತದೆ - ಇದರ ಅರ್ಥವನ್ನೂ ಸಹಾ ಅವರು ತಿಳಿದುಕೊಂಡಿಲ್ಲ. ಆತ್ಮವು ಹೇಳುತ್ತದೆ - ನಾವು ಆ ಶಾಂತಿಧಾಮದ ನಿವಾಸಿ ಆಗಿದ್ದೇವೆ. ನಾವು ಅಲ್ಲಿಂದ ಅಶರೀರಿಯಾಗಿ ಬಂದಿದ್ದೇವೆ, ಇಲ್ಲಿ ಪಾತ್ರವನ್ನು ಅಭಿನಯಿಸುವುದಕ್ಕಾಗಿ ಶರೀರವನ್ನು ಪಡೆದೆವು. ಇದನ್ನೂ ತಿಳಿಸಲಾಗಿದೆ - ಮಾಯೆ ಎಂದು 5 ವಿಕಾರಗಳಿಗೆ ಹೇಳಲಾಗುತ್ತದೆ, ಈ ಕಾಮದ ಭೂತ, ಕ್ರೋಧದ ಭೂತ......ಇವು ಪಂಚ ಭೂತಗಳಾವಿದೆ. ಮೊದಲ ನಂಬರಿನನಲ್ಲಿದೆ - ದೇಹಾಭಿಮಾನದ ಭೂತ. ತಂದೆಯು ತಿಳಿಸುತ್ತಾರೆ - ಸತ್ಯಯುಗದಲ್ಲಿ ಈ ವಿಕಾರಗಳೇ ಇರಲಿಲ್ಲ, ಆ ಪ್ರಪಂಚಕ್ಕೆ ನಿರ್ವಿಕಾರಿ ಜಗತ್ತು ಎಂದು ಹೇಳಲಾಗುತ್ತದೆ. ವಿಕಾರಿ ಪ್ರಪಂಚವನ್ನು ನಿರ್ವಿಕಾರಿಯನ್ನಾಗಿ ಮಾಡುವುದಂತು ತಂದೆಯವರ ಕಾರ್ಯವೇ ಆಗಿದೆ. ಅವರನ್ನೇ ಸರ್ವಶಕ್ತಿವಂತ, ಜ್ಞಾನದ ಸಾಗರ, ಪತಿತ-ಪಾವನನೆಂದು ಹೇಳಲಾಗುತ್ತದೆ, ಈ ಸಮಯದಲ್ಲಿ ಎಲ್ಲರೂ ಭ್ರಷ್ಟಾಚಾರದಿಂದ ಜನ್ಮ ಪಡೆಯುವರು. ಸತ್ಯಯುಗದಲ್ಲಿಯೇ ನಿರ್ವಿಕಾರಿ ಪ್ರಪಂಚವಿರುತ್ತದೆ. ಅದಕ್ಕಾಗಿ ತಂದೆಯು ಹೇಳುತ್ತಾರೆ - ನೀವೀಗ ವಿಕಾರಿಗಳಿಂದ ನಿರ್ವಿಕಾರಿಗಳು ಆಗಬೇಕಾಗಿದೆ, ಮನುಷ್ಯರು ಹೇಳುತ್ತಾರೆ – ಇದಿಲ್ಲದೆ (ವಿಕಾರ) ಮಕ್ಕಳ ಜನ್ಮ ಹೇಗಾಗುತ್ತದೆ. ತಂದೆಯು ತಿಳಿಸುತ್ತಾರೆ - ಈಗ ನಿಮ್ಮದು ಅಂತಿಮ ಜನ್ಮವಾಗಿದೆ, ಮೃತ್ಯುಲೋಕವೇ ಸಮಾಪ್ತಿಯಾಗುವುದಿದೆ, ಇದರ ನಂತರ ವಿಕಾರಿ ಜನರಿರುವುದಿಲ್ಲ. ಆದ್ದರಿಂದ ತಂದೆಯ ಬಳಿ ಪವಿತ್ರರಾಗುವ ಪ್ರತಿಜ್ಞೆ ಮಾಡಬೇಕು. ಮಕ್ಕಳು ಹೇಳುತ್ತಾರೆ - ಬಾಬಾ, ನಾವು ತಮ್ಮಿಂದ ಅವಶ್ಯವಾಗಿ ಆಸ್ತಿಯನ್ನು ಪಡೆಯುತ್ತೇವೆ. ಅವರಂತು (ಪ್ರಪಂಚದವರು) ಅಸತ್ಯವಾದ ಪ್ರತಿಜ್ಞೆ ಮಾಡುತ್ತಾರೆ. ಯಾರ ಮುಂದೆ ಪ್ರತಿಜ್ಞೆ ಮಾಡುತ್ತಾರೆಯೋ, ಅವರು ಯಾವಾಗ ಹೇಗೆ ಬರುತ್ತಾರೆ, ಅವರ ನಾಮ-ರೂಪ-ದೇಶ-ಕಾಲವೇನಾಗಿದೆ ಏನನ್ನೂ ತಿಳಿದುಕೊಂಡಿಲ್ಲ. ತಂದೆಯೇ ಬಂದು ತನ್ನ ಪರಿಚಯವನ್ನು ಕೊಡುತ್ತಾರೆ, ಈಗ ನಿಮಗಂತು ಪರಿಚಯ ಸಿಗುತಿದೆ. ಪ್ರಪಂಚದಲ್ಲಿ ಯಾರೂ ಸಹ ಪರಮಪಿತನನ್ನು ತಿಳಿದುಕೊಂಡಿಲ್ಲ, ಭಲೆ ಕರೆಯುತ್ತಾರೆ ಪೂಜೆಯನ್ನೂ ಮಾಡುತ್ತಾರೆ ಆದರೆ ಅವರ ಕರ್ತವ್ಯವನ್ನೇ ತಿಳಿದಿಲ್ಲ. ಈಗ ನೀವು ತಿಳಿದಿದ್ದೀರಿ - ಪರಮಪಿತ ಪರಮಾತ್ಮನು ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಈ ತಂದೆಯು ಸ್ವಯಂ ತನ್ನ ಪರಿಚಯವನ್ನು ಕೊಡುತ್ತಾರೆ- ಮಕ್ಕಳೆ, ನಾನು ನಿಮ್ಮ ತಂದೆಯಾಗಿರುವೆನು. ನಾನು ಈ ಶರೀರದಲ್ಲಿ ಪ್ರವೇಶ ಮಾಡಿದ್ದೇನೆ. ಪ್ರಜಾಪಿತ ಬ್ರಹ್ಮಾನ ಮೂಲಕ ಸ್ಥಾಪನೆಯಾಗುತ್ತದೆ. ಯಾವುದರ ಸ್ಥಾಪನೆ? ಬ್ರಾಹ್ಮಣರ ಸ್ಥಾಪನೆ. ನೀವು ಬ್ರಾಹ್ಮಣರು ಓದಿದ ನಂತರ ದೇವತೆಗಳಾಗುವಿರಿ. ನಾನು ಬಂದು ನಿಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತೇನೆ. ತಂದೆಯು ಹೇಳುತ್ತಾರೆ- ಮಕ್ಕಳೇ, ನಾನು ಬರುವುದೇ ಕಲ್ಪದ ಸಂಗಮಯುಗದಲ್ಲಿ. ಕಲ್ಪವಿರುವುದೇ 5 ವರ್ಷಗಳು. ಈ ಸೃಷ್ಟಿಚಕ್ರವಂತು ಸುತ್ತುತ್ತಾ ಇರುತ್ತದೆ, ನಾನು ಈ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡುವುದಕ್ಕಾಗಿ ಬರುತ್ತೇನೆ. ನೀವು 21 ಜನ್ಮಗಳಿಗಾಗಿ ಮನುಷ್ಯರಿಂದ ದೇವತೆಗಳಾಗುತ್ತೀರಿ. ದೇವತೆಗಳಂತು ಸೂರ್ಯವಂಶಿ, ಚಂದ್ರವಂಶಿ, ಪ್ರಜೆಗಳು ಎಲ್ಲರೂ ಇರುತ್ತಾರೆ, ಉಳಿದಂತೆ ಪುರುಷಾರ್ಥದನುಸಾರ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಈಗ ಯಾರೆಷ್ಟು ಪುರುಷಾರ್ಥ ಮಾಡುವಿರಿ. ಅದೇರೀತಿ ಕಲ್ಪ-ಕಲ್ಪವೂ ನಡೆಯುತ್ತದೆ. ಮಕ್ಕಳೂ ಸಹ ತಿಳಿಯುತ್ತಾರೆ - ಕಲ್ಪ-ಕಲ್ಪವೂ ಇಂತಹ ಪುರುಷಾರ್ಥ ಮಾಡುತ್ತೇವೆ, ಇಂತಹ ಪದವಿಯನ್ನೇ ಪಡೆಯುತ್ತೇವೆ. ನೀವು ಮಕ್ಕಳ ಬುದ್ಧಿಯಲ್ಲಿದೆ - ನಮಗೆ ನಿರಾಕಾರ ತಂದೆಯು ಓದಿಸುತಿದ್ದಾರೆ, ಅದನ್ನು ನೆನಪಿಟ್ಟುಕೊಳ್ಳುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ನೆನಪಿಡದೆ ವಿಕರ್ಮಗಳ ವಿನಾಶವಾಗುವುದಿಲ್ಲ. ಮನುಷ್ಯರಿಗೆ ಇದೂ ಗೊತ್ತಿಲ್ಲ - ನಾವೆಷ್ಟು ಜನ್ಮಗಳನ್ನು ಪಡೆಯುತ್ತೇವೆ. ಇದರ ಬಗ್ಗೆ ಶಾಸ್ತ್ರಗಳಲ್ಲಿ ಅಸತ್ಯವನ್ನು ಬರೆದು ಬಿಟ್ಟಿದ್ದಾರೆ - 84 ಲಕ್ಷ ಜನ್ಮಗಳಾಗುತ್ತವೆ ಎಂದು. ಈಗ ನೀವು ತಿಳಿದುಕೊಂಡಿದ್ದೀರಿ - ನಮ್ಮದು 84 ಜನ್ಮಗಳಾಗುವುದು. ಇದು ಅಂತಿಮ ಜನ್ಮವಾಗಿದೆ, ನಂತರ ನಾವು ಸ್ವರ್ಗದಲ್ಲಿ ಹೋಗಬೇಕಾಗಿದೆ. ಮೊದಲು ಮೂಲವತನಕ್ಕೆ ಹೋಗಿ, ನಂತರ ಸ್ವರ್ಗದಲ್ಲಿ ಬರುತ್ತೇವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ತಂದೆಯೊಂದಿಗೆ ಪವಿತ್ರರಾಗುತ್ತೇವೆಂಬ ಯಾವ ಪ್ರತಿಜ್ಞೆ ಮಾಡಲಾಗಿದೆಯೋ, ಅದರಂತೆ ಪರಿಪಕ್ವವಾಗಿ ಇರಬೇಕಾಗಿದೆ. ಕಾಮ, ಕ್ರೋಧ, ಇತ್ಯಾದಿ ಭೂತಗಳ ಮೇಲೆ ಖಂಡಿತ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ.

2. ನಡೆಯುತ್ತಾ-ಸುತ್ತಾಡುತ್ತಾ ಪ್ರತಿಯೊಂದು ಕಾರ್ಯವನ್ನು ಮಾಡುತ್ತಿದ್ದರೂ, ಓದಿಸುವಂತಹ ತಂದೆಯನ್ನು ನೆನಪಿಟ್ಟುಕೊಳ್ಳಬೇಕು. ಈಗ ನಾಟಕ ಪೂರ್ಣವಾಗುತ್ತಿದೆ, ಆದ್ದರಿಂದ ಈ ಅಂತಿಮ ಜನ್ಮದಲ್ಲಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.

ವರದಾನ:

ಒಂದು ಲಗನ್, ಒಂದು ಭರವಸೆ, ಏಕರಸ ಸ್ಥಿತಿಯ ಮೂಲಕ ಸದಾ ನಿರ್ವಿಘ್ನರಾಗಿರುವ ನಿವಾರಣಾ ಸ್ವರೂಪ ಭವ.

ಸದಾ ಒಬ್ಬ ತಂದೆಯದೇ ಲಗನ್ ಇರಲಿ, ತಂದೆಯ ಕರ್ತವ್ಯದ ಲಗನ್ನಿನಲ್ಲಿ ಮಗ್ನರಾಗಿರಿ, ಅದರಿಂದ ಪ್ರಪಂಚದಲ್ಲಿನ ಯಾವುದೇ ವಸ್ತು ಅಥವಾ ಯಾವುದೇ ವ್ಯಕ್ತಿಯಿದ್ದರೂ ಅನುಭವವೇ ಆಗಬಾರದು. ಇಂತಹ ಒಂದು ಲಗನ್, ಒಂದು ಭರವಸೆಯಲ್ಲಿ, ಏಕರಸ ಸ್ಥಿತಿಯಲ್ಲಿ ಇರುವಂತಹ ಮಕ್ಕಳು ಸದಾ ನಿರ್ವಿಘ್ನವಾಗಿದ್ದು, ಏರುವ ಕಲೆಯ ಅನುಭವ ಮಾಡುತ್ತಾರೆ. ಅವರು ಕಾರಣವನ್ನು ಪರಿವರ್ತನೆ ಮಾಡಿ ನಿವಾರಣಾ ಸ್ವರೂಪರಾಗಿ ಬಿಡುತ್ತಾರೆ. ಕಾರಣವನ್ನು ನೋಡಿ ಬಲಹೀನರಾಗುವುದಿಲ್ಲ, ನಿವಾರಣಾ ಸ್ವರೂಪರಾಗುತ್ತಾರೆ.

ಸ್ಲೋಗನ್:

ಅಶರೀರಿ ಆಗುವುದು ವೈರ್ಲೆಸ್ ಸೆಟ್ ಆಗಿದೆ, ವೈಸ್ಲೆಸ್(ನಿರ್ವಿಕಾರಿ) ಆಗುವುದು ವೈರ್ಲೆಸ್ ಸೆಟ್ನ ಸೆಟ್ಟಿಂಗ್ ಆಗಿದೆ.