14.04.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಅಂತರ್ಮುಖಿಯಾಗಿದ್ದು ಜ್ಞಾನ ರೂಪದ ಸ್ಥಿತಿಯಲ್ಲಿರುತ್ತಾ ಮಹಾವಾಕ್ಯಗಳನ್ನು ಧಾರಣೆ ಮಾಡಿಕೊಂಡಾಗ, ತಮ್ಮ ಅಥವಾ ಅನ್ಯ ಆತ್ಮರುಗಳ ಕಲ್ಯಾಣವಾಗಲು ಸಾಧ್ಯ, ತಮ್ಮ-ಮನ ಅಥವಾ ಹೃದಯವೆಂಬ ಮಂದಿರವನ್ನು ಈಶ್ವರೀಯ ಗುಣಗಳೆಂಬ ಮೂರ್ತಿಗಳಿಂದ ಶೃಂಗರಿಸಿರಿ ಹಾಗೂ ಪವಿತ್ರ ಸಂಕಲ್ಪಗಳ ಸುಗಂಧವನ್ನು ಹರಡಿಸಿರಿ”.

ಪ್ರಶ್ನೆ:
ಸರ್ವೋತ್ತಮ ಸತ್ಯ ಸೇವೆಯು ಯಾವುದಾಗಿದೆ? ಯಥಾರ್ಥ ಸೇವೆಯ ಸೂಕ್ಷ್ಮತೆ ಹಾಗೂ ಸೂಕ್ಷ್ಮ ರಹಸ್ಯವೇನಾಗಿದೆ?

ಉತ್ತರ:
ಯಾವಾಗ ಯಾರಿಂದಲಾದರೂ ತಪ್ಪಾಗುತ್ತದೆ ಎಂದರೆ ಅವರಿಗೆ ಎಚ್ಚರಿಕೆ ಕೊಡುವುದರ ಜೊತೆಗೆ ಸೂಕ್ಷ್ಮ ರೀತಿಯಿಂದ ತಮ್ಮ ಯೋಗ ಶಕ್ತಿಯನ್ನು ತಲುಪಿಸುತ್ತಾ, ಅವರ ಅಶುದ್ಧ ಸಂಕಲ್ಪಗಳನ್ನು ಭಸ್ಮಗೊಳಿಸುವುದೇ ಸರ್ವೋತ್ತಮ ಸತ್ಯ ಸೇವೆಯಾಗಿದೆ. ಜೊತೆ-ಜೊತೆಗೆ ಸ್ವಯಂನ ಪ್ರತಿಯೂ ಗಮನ ಕೊಡಬೇಕಾಗಿದೆ, ಮನಸ್ಸಿನಲ್ಲಿಯೂ ಯಾವುದೇ ಅಶುದ್ಧ ಸಂಕಲ್ಪಗಳ ಉತ್ಪನ್ನವಾಗಬಾರದು. ಇದರಲ್ಲಿ ಸ್ವಯಂ ತಾವೂ ಸಹ ಎಚ್ಚರಿಕೆಯಿಂದ ಇರಬೇಕು ಹಾಗೂ ಅನ್ಯರ ಪ್ರತಿ ಇಂತಹ ದಿವ್ಯ ಸೇವೆಯನ್ನು ಮಾಡುವುದೇ ಸೇವೆಯ ಸೂಕ್ಷ್ಮತೆ ಹಾಗೂ ಸೂಕ್ಷ್ಮ ರಹಸ್ಯವಾಗಿದೆ.

ಓಂ ಶಾಂತಿ.
ಮೊಟ್ಟ ಮೊದಲು ಪ್ರತಿಯೊಬ್ಬ ಪುರುಷಾರ್ಥಿ ಮಕ್ಕಳು ಅವಶ್ಯವಾಗಿ ಅಂತರ್ಮುಖಿ ಸ್ಥಿತಿಯನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಅಂತರ್ಮುಖತೆಯಲ್ಲಿ ಶ್ರೇಷ್ಠವಾದ ಕಲ್ಯಾಣವೇ ಅಡಗಿದೆ, ಈ ಸ್ಥಿತಿಯಲ್ಲಿಯೇ ಅಚಲ, ಸ್ಥಿರ, ತಾಳ್ಮೆಯಿರುವ, ನಿರ್ಮಾಣ ಚಿತ್ತ ಇತ್ಯಾದಿ, ದೈವೀ ಗುಣಗಳ ಧಾರಣೆಯಾಗಲು ಸಾಧ್ಯ ಹಾಗೂ ಸಂಪೂರ್ಣ ಜ್ಞಾನಪೂರ್ಣ ಸ್ಥಿತಿಯು ಪ್ರಾಪ್ತಿಯಾಗಲು ಸಾಧ್ಯವಾಗುವುದು. ಅಂತರ್ಮುಖಿ ಆಗದಿರುವ ಕಾರಣದಿಂದ ಸಂಪೂರ್ಣ ಜ್ಞಾನರೂಪ ಸ್ಥಿತಿಯ ಪ್ರಾಪ್ತಿಯಾಗುವುದಿಲ್ಲ ಏಕೆಂದರೆ ಸನ್ಮುಖದಲ್ಲಿ ಏನೆಲ್ಲಾ ‘ಮಹಾವಾಕ್ಯ’ಗಳನ್ನು ಕೇಳಿಸಿಕೊಳ್ಳಲಾಗುತ್ತದೆ, ಅದನ್ನು ಆಳವಾದ ಚಿಂತನೆ ಮಾಡಿ ಗ್ರಹಿಸುವುದಿಲ್ಲ, ಮಹಾವಾಕ್ಯಗಳನ್ನು ಕೇಳಿಸಿಕೊಂಡು ಕೇವಲ ರಿಪೀಟ್ ಮಾಡುತ್ತೀರೆಂದರೆ ಮಹಾವಾಕ್ಯವು ವಾಕ್ಯವಾಗಿ ಬಿಡುತ್ತದೆ. ಮಹಾವಾಕ್ಯಗಳನ್ನು ಯಾರು ಜ್ಞಾನ ರೂಪ ಸ್ಥಿತಿಯಲ್ಲಿರುತ್ತಾ ಕೇಳುವುದಿಲ್ಲವೋ, ಆ ಮಹಾವಾಕ್ಯಗಳ ಮೇಲೆ ಮಾಯೆಯ ಛಾಯೆಯುಂಟಾಗುತ್ತದೆ. ಮಾಯೆಯ ಇಂತಹ ಅಶುದ್ಧ ಪ್ರಕಂಪನಗಳಿಂದ ಕೂಡಿರುವ ಆತ್ಮರೀಗ ಮಹಾವಾಕ್ಯಗಳನ್ನು ಕೇಳಿಸಿಕೊಂಡು, ಕೇವಲ ರಿಪೀಟ್ ಮಾಡುವುದರಿಂದ ತಮ್ಮ ಜೊತೆ ಅನ್ಯರ ಕಲ್ಯಾಣವಾಗುವುದಕ್ಕೆ ಬದಲು ಅಕಲ್ಯಾಣವೇ ಆಗಿ ಬಿಡುತ್ತದೆ. ಆದ್ದರಿಂದ ಮಕ್ಕಳೇ, ಸಂಪೂರ್ಣ ಅಂತರ್ಮುಖಿಗಳಾಗಿರಿ. ತಮ್ಮ ಈ ಮನಸ್ಸು ಮಂದಿರವಾಗಿದೆ. ಹೇಗೆ ಮಂದಿರಗದಲ್ಲಿ ಸದಾ ಸುಗಂಧವೇ ಬರುತ್ತದೆ ಹಾಗೆಯೇ ಮನ ಮಂದಿರವೂ ಸಹ ಯಾವಾಗ ಪವಿತ್ರವಾಗುತ್ತದೆಯೋ ಆಗ ಸಂಕಲ್ಪದಲ್ಲಿಯೂ ಪವಿತ್ರವಾದ ಸ್ಮೃತಿಗಳ ಉತ್ಪನ್ನವಾಗುತ್ತದೆ. ಹೇಗೆ ಮಂದಿರಗಳಲ್ಲಿ ಕೇವಲ ಪವಿತ್ರ ದೇವತೆಗಳ ಚಿತ್ರಗಳನ್ನೇ ಇಟ್ಟಿರುತ್ತಾರೆ, ದೈತ್ಯರದನ್ನು ಇಟ್ಟಿರುವುದಿಲ್ಲ. ಹಾಗೆಯೇ ನೀವು ಮಕ್ಕಳು ತಮ್ಮ ಮನಸ್ಸು ಅಥವಾ ಹೃದಯವೆಂಬ ಮಂದಿರವನ್ನು ಸರ್ವ ಈಶ್ವರೀಯ ಗುಣಗಳ ಮೂರ್ತಿಗಳಿಂದ ಶೃಂಗಾರ ಮಾಡಿರಿ. ಆ ದೇವತೆಗಳು ನಿರ್ಮೋಹ, ನಿರ್ಲೋಭ, ನಿರ್ಭಯ, ತಾಳ್ಮೆಯುಳ್ಳ, ನಿರಹಂಕಾರಿ ಇತ್ಯಾದಿ, ಆಗಿರುವುದೇ ಅವರ ಗುಣಗಳಾಗಿವೆ ಏಕೆಂದರೆ ಇವೆಲ್ಲವೂ ನಿಮ್ಮದೇ ದಿವ್ಯ ಲಕ್ಷಣಗಳಾಗಿವೆ. ತಾವು ಮಕ್ಕಳು ತಮ್ಮ ಮನಸ್ಸು ಮಂದಿರವನ್ನು ಪ್ರಕಾಶಿತಗೊಳಿಸಿರಿ ಅರ್ಥಾತ್ ಸಂಪೂರ್ಣ ಶುದ್ಧಗೊಳಿಸಬೇಕು. ಯಾವಾಗ ಮನಸ್ಸು ಮಂದಿರವು ಪ್ರಕಾಶತೆಯಿಂದ ಸಂಪನ್ನವಾಗುವುದೋ ಆಗ ತಮ್ಮ ಪ್ರಕಾಶತೆಯಿಂದ ಕೂಡಿರುವ, ಪ್ರಿಯವಾದ ವೈಕುಂಠ ದೇಶದಲ್ಲಿ ಹೋಗಲು ಸಾಧ್ಯವಾಗುವುದು. ಹಾಗಾದರೆ ಈಗ ತಮ್ಮ ಮನಸ್ಸನ್ನು ಉಜ್ವಲವನ್ನಾಗಿ ಮಾಡುವ ಪ್ರಯತ್ನ ಪಡಬೇಕಾಗಿದೆ ಹಾಗೂ ಮನಸ್ಸಿನ ಸಹಿತವಾಗಿ ವಿಕಾರಿ ಕರ್ಮೇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳಬೇಕಾಗಿದೆ. ಆದರೆ ಕೇವಲ ಸ್ವಯಂನ ಸೇವೆಯನ್ನಷ್ಟೇ ಮಾಡುವುದಲ್ಲ ಆದರೆ ಅನ್ಯರ ಪ್ರತಿಯೂ ಇದೇ ದಿವ್ಯ ಸೇವೆಯನ್ನು ಮಾಡಬೇಕಾಗಿದೆ. ವಾಸ್ತವದಲ್ಲಿ ಸೇವೆಯ ಅರ್ಥವು ಅತಿ ಸೂಕ್ಷ್ಮ ಮತ್ತು ಆಳವಾಗಿದೆ. ಕೇವಲ ಅನ್ಯರ ತಪ್ಪುಗಳಿಗೆ ಎಚ್ಚರಿಕೆ ಕೊಡುವವರೆಗಷ್ಟೇ ಸೇವೆ ಮಾಡುವುದಲ್ಲ. ಅವರಿಗೆ ಸೂಕ್ಷ್ಮವಾಗಿ ತಮ್ಮ ಯೋಗದ ಶಕ್ತಿಯನ್ನು ತಲುಪಿಸುತ್ತಾ, ಅವರ ಅಶುದ್ಧ ಸಂಕಲ್ಪಗಳನ್ನು ಭಸ್ಮ ಮಾಡಿ ಬಿಡಬೇಕು - ಸರ್ವೋತ್ತಮ ಸೇವೆಯು ಇದೇ ಆಗಿದೆ ಹಾಗೂ ಜೊತೆ-ಜೊತೆಗೆ ತಮ್ಮ ಬಗ್ಗೆ ಗಮನ ಇಡಬೇಕಾಗಿದೆ. ಕೇವಲ ವಾಚಾ ಅಥವಾ ಕರ್ಮದವರೆಗೆ ಗಮನವಿಡುವುದಲ್ಲ, ಆದರೆ ಮನಸ್ಸಿನಲ್ಲಿಯೂ ಯಾವುದೇ ಅಶುದ್ಧ ಸಂಕಲ್ಪಗಳ ಉತ್ಪನ್ನ ಆಗುತ್ತದೆಯೆಂದರೆ, ಅದರ ಪ್ರಕಂಪನಗಳು ಅನ್ಯರ ಬಳಿ ಹೋಗಿ ಸೂಕ್ಷವಾಗಿ ಅಕಲ್ಯಾಣವನ್ನು ಮಾಡುತ್ತದೆ, ಅದರ ಹೊರೆಯು ತಮ್ಮ ಮೇಲೆ ಬರುತ್ತದೆ, ನಂತರ ಅದೇ ಹೊರೆಯು ಬಂಧನವಾಗಿ ಬಿಡುತ್ತದೆ. ಆದ್ದರಿಂದ ಹೇ ಮಕ್ಕಳೇ, ಸ್ವಯಂ ತಾವು ಎಚ್ಚರಿಕೆಯಿಂದ ಇರಬೇಕು, ನಂತರ ಅನ್ಯರ ಬಗ್ಗೆ ಅದೇ ರೀತಿಯ ದಿವ್ಯ ಸೇವೆಯನ್ನು ಮಾಡಿರಿ - ಈ ಸೇವೆಯು ತಾವು ಸೇವಾಧಾರಿ ಮಕ್ಕಳ ಅಲೌಕಿಕ ಕರ್ತವ್ಯವಾಗಿದೆ. ಇಂತಹ ಸೇವೆ ಮಾಡುವವರು ತಮಗಾಗಿ ಯಾವುದೇ ಸೇವೆಯನ್ನು ತೆಗೆದುಕೊಳ್ಳಬಾರದು. ಭಲೆ ಯಾವುದೇ ಅಕಾರಣದಿಂದ ತಪ್ಪಾಗಿ ಬಿಡುತ್ತದೆಯೆಂದರೂ, ಅದನ್ನು ಸದಾ ತಮ್ಮ ಬುದ್ಧಿಯೋಗ ಬಲದಿಂದ ಸರಿಪಡಿಸಬೇಕಾಗಿದೆ. ಇಂತಹ ತೀವ್ರ ಪುರುಷಾರ್ಥಿಗಳಿಗೆ ಸ್ವಲ್ಪ ಸೂಚನೆ ಸಿಗುವುದರಿಂದಲೂ ಬಹಳ ಬೇಗನೆ ಅನುಭವ ಮಾಡುತ್ತಾ ಪರಿವರ್ತನೆ ಮಾಡಿಕೊಂಡು ಬಿಡುತ್ತಾರೆ ಮತ್ತು ಆನಂತರದಲ್ಲಿ ಬಹಳ ಗಮನವನ್ನಿಡುತ್ತಾ ನಡೆಯುತ್ತಾರೆ - ಇದು ವಿಶಾಲ ಬುದ್ಧಿಯಿರುವ ಮಕ್ಕಳ ಕರ್ತವ್ಯವೇ ಆಗಿದೆ. ಹೇ ನನ್ನ ಪ್ರಾಣ ಪ್ರಿಯರೇ, ಪರಮಾತ್ಮನ ಮೂಲಕ ರಚನೆಯಾಗಿರುವ ಈ ಅವಿನಾಶಿ ರಾಜಸ್ವ ಜ್ಞಾನ ಯಜ್ಞಕ್ಕಾಗಿ ಸಂಪೂರ್ಣವಾಗಿ ತನು-ಮನ-ಧನವನ್ನು ಸ್ವಾಹಾ ಮಾಡುವುದರ ರಹಸ್ಯವು ಬಹಳ ಸೂಕ್ಷ್ಮವಾಗಿದೆ. ಯಾವ ಕ್ಷಣದಲ್ಲಿ ತಾವು ಹೇಳುತ್ತೀರಿ - ನನ್ನ ತನು-ಮನ-ಧನ ಸಹಿತವಾಗಿ ಯಜ್ಞದಲ್ಲಿ ಸ್ವಾಹಾ ಅರ್ಥಾತ್ ಅರ್ಪಣೆಯಾಗಿ ಸತ್ತು ಹೋಗಿರುತ್ತೀರಿ, ಆ ಕ್ಷಣದಿಂದ ತಮ್ಮದೇನೂ ಇರುವುದಿಲ್ಲ. ಅದರಲ್ಲಿಯೂ ಮೊದಲು ತನು, ಮನಸ್ಸನ್ನು ಸಂಪೂರ್ಣವಾಗಿ ಸೇವೆಯಲ್ಲಿ ಉಪಯೋಗಿಸಬೇಕಾಗಿದೆ. ಯಾವಾಗ ಎಲ್ಲವನ್ನೂ ಯಜ್ಞ ಅಥವಾ ಪರಮಾತ್ಮನದಾಯಿತು, ಅಂದಮೇಲೆ ತಮ್ಮದೇನೂ ಇರಲು ಸಾಧ್ಯವಿಲ್ಲ, ಧನವನ್ನೂ ವ್ಯರ್ಥವಾಗಿ ಕಳೆಯಲು ಸಾಧ್ಯವಿಲ್ಲ. ಮನಸ್ಸನ್ನೂ ಅಶುದ್ಧ ಸಂಕಲ್ಪ-ವಿಕಲ್ಪದ ಕಡೆಗೆ ಓಡಲು ಸಾಧ್ಯವಿಲ್ಲ ಏಕೆಂದರೆ ಪರಮಾತ್ಮನಿಗೆ ಅರ್ಪಣೆ ಮಾಡಿದ್ದೀರಿ. ಈಗ ಪರಮಾತ್ಮನಂತು ಶುದ್ಧ ಶಾಂತ ಸ್ವರೂಪನಾಗಿದ್ದಾರೆ, ಈ ಕಾರಣದಿಂದ ಸ್ವತಹವಾಗಿಯೇ ಅಶುದ್ಧ ಸಂಕಲ್ಪಗಳು ಶಾಂತವಾಗಿ ಬಿಡುತ್ತವೆ. ಒಂದುವೇಳೆ ತಮ್ಮ ಮನಸ್ಸನ್ನು ಮಾಯೆಯ ಕೈಯಲ್ಲಿ ಕೊಡುತ್ತೀರೆಂದರೆ, ಮಾಯೆಯ ವಿವಿಧ ರೂಪಗಳಿರುವ ಕಾರಣದಿಂದ ಅನೇಕ ವಿಕಲ್ಪಗಳನ್ನು ಉತ್ಪನ್ನಗೊಳಿಸುತ್ತಾ, ಮನಸ್ಸೆಂಬ ಕುದುರೆಯ ಮೇಲೆ ಸವಾರಿ ಮಾಡುತ್ತದೆ. ಒಂದುವೇಳೆ ಈಗಿನವರೆಗೂ ಯಾವುದೇ ಮಕ್ಕಳಲ್ಲಿ ಸಂಕಲ್ಪ-ವಿಕಲ್ಪಗಳು ಬರುತ್ತವೆಯೆಂದರೆ ತಿಳಿಯಬೇಕು - ಈಗ ನನ್ನ ಮನಸ್ಸು ಸಂಪೂರ್ಣವಾಗಿ ಸ್ವಾಹಾ ಆಗಿಲ್ಲ ಅರ್ಥಾತ್ ಈಶ್ವರೀಯ ಮನಸ್ಸಾಗಿಲ್ಲ ಆದ್ದರಿಂದ ಹೇ ಸರ್ವ ತ್ಯಾಗಿ ಮಕ್ಕಳೇ, ತಾವು ಈ ಗುಹ್ಯ ರಹಸ್ಯಗಳನ್ನು ತಿಳಿದುಕೊಂಡು, ಕರ್ಮ ಮಾಡುತ್ತಾ ಸಾಕ್ಷಿಯಾಗಿದ್ದು ಸ್ವಯಂನ್ನು ನೋಡುತ್ತಾ, ಬಹಳ ಎಚ್ಚರಿಕೆಯಿಂದ ನಡೆಸಬೇಕಾಗಿದೆ. ಸ್ವಯಂ ಗೋಪಿ ವಲ್ಲಭನೇ ತನ್ನ ಪ್ರಿಯವಾದ ಗೋಪ-ಗೋಪಿಕೆಯರಾದ ನಿಮಗೆ ತಿಳಿಸುತ್ತಿದ್ದಾರೆ - ನೀವು ಪ್ರತಿಯೊಬ್ಬರ ವಾಸ್ತವಿಕ ಸತ್ಯ ಪ್ರೇಮವು ಯಾವುದು! ಹೇ ಪ್ರಾಣ ಪ್ರಿಯರೇ, ನೀವು ಪ್ರತಿಯೊಬ್ಬರೂ ಪರಸ್ಪರದಲ್ಲಿ ಪ್ರೇಮದಿಂದ ಕೂಡಿರುವ ಎಚ್ಚರಿಕೆಯನ್ನು ಸ್ವೀಕರಿಸಬೇಕಾಗಿದೆ ಏಕೆಂದರೆ ಎಷ್ಟು ಪ್ರಿಯವಾದ ಹೂವಾಗಿರುತ್ತದೆಯೋ ಅಷ್ಟೇ ಶ್ರೇಷ್ಠವಾದ ಪಾಲನೆ ಸಿಗುತ್ತದೆ. ಮಾಲಿಯು ಹೂವನ್ನು ಅತ್ಯಮೂಲ್ಯವನ್ನಾಗಿ ಮಾಡಲು, ಅದರ ಜೊತೆಯಿರುವ ಮುಳ್ಳನ್ನು ತೆಗೆಯಬೇಕಾಗುತ್ತದೆ. ಅದೇರೀತಿ ನಿಮಗೂ ಸಹ ಯಾರೇ ಎಚ್ಚರಿಕೆಯನ್ನು ಕೊಡುತ್ತಾರೆಂದರೆ ತಿಳಿಯಬೇಕಾಗಿದೆ - ಅವರು ನನ್ನ ಪಾಲನೆ ಮಾಡುತ್ತಿದ್ದಾರೆ ಅರ್ಥಾತ್ ನನ್ನ ಸೇವೆಯನ್ನು ಮಾಡಿದರು. ಅವರ ಆ ಸೇವೆಗೆ ಅಥವಾ ಪಾಲನೆಗೆ ಗೌರವ ಕೊಡಬೇಕಾಗುತ್ತದೆ - ಸಂಪೂರ್ಣರಾಗುವ ಯುಕ್ತಿಯೂ ಇದೇ ಆಗಿದೆ. ಇದು ಜ್ಞಾನ ಸಹಿತ ಆಂತರಿಕ ಸತ್ಯ ಪ್ರೇಮವಾಗಿದೆ, ಇದರಲ್ಲಿ ಪರಸ್ಪರದಲ್ಲಿ ಬಹಳ ಗೌರವವಿರಬೇಕು. ಪ್ರತಿಯೊಂದು ಮಾತಿನಲ್ಲಿ ಮೊದಲು ತಾವು ತಮಗೇ ಎಚ್ಚರಿಕೆ ಕೊಡಬೇಕು - ಇದು ನಿರ್ಮಾಣ ಚಿತ್ತರ ಅತಿ ಮಧುರವಾದ ಸ್ಥಿತಿಯಾಗಿದೆ. ಈ ರೀತಿ ಪ್ರೇಮದಿಂದ ನಡೆಯುವುದರಿಂದ ಆಂತರ್ಯದಲ್ಲಿ ಸತ್ಯಯುಗದ ಆ ಸೌಭಾಗ್ಯದ ದಿನಗಳಂತೆ ಇಲ್ಲಿಯೇ ಅನುಭವವಾಗುತ್ತದೆ. ಅಲ್ಲಂತು ಈ ಪ್ರೇಮವು ಸ್ವಾಭಾವಿಕವಾಗಿಯೇ ಇರುತ್ತದೆ ಆದರೆ ಈ ಸಂಗಮದ ಮಧುರಾತಿ ಮಧುರ ಸಮಯದಲ್ಲಿ, ಪರಸ್ಪರದಲ್ಲಿ ಇಂತಹ ಸೇವೆಯನ್ನು ಮಾಡುವುದರ ಅತಿಮಧುರ ರಮಣೀಕ ಪ್ರೇಮವಾಗಿದೆ, ಜಗತ್ತಿನಲ್ಲಿಯೂ ಈ ಶುದ್ಧ ಪ್ರೇಮದ ಮಹಿಮೆಯನ್ನೇ ಮಾಡುತ್ತಾರೆ. ಪ್ರತೀ ಕ್ಷಣದಲ್ಲಿಯೂ ನೀವು ಪ್ರತಿಯೊಂದು ಚೈತನ್ಯ ಹೂಗಳು ಹರ್ಷಿತಮುಖಿಯಾಗಿ ಇರಬೇಕಾಗಿದೆ ಏಕೆಂದರೆ ನಿಶ್ಚಯಬುದ್ಧಿ ಆಗಿರುವ ಕಾರಣದಿಂದ ನಿಮ್ಮ ಶ್ವಾಸ-ಶ್ವಾಸದಲ್ಲಿಯೂ ಸಂಪೂರ್ಣವಾಗಿ ಈಶ್ವರನ ಶಕ್ತಿಗಳ ಸಮಾವೇಶವಾಗಿರುತ್ತದೆ. ತಮ್ಮ ದಿವ್ಯ ಚಮತ್ಕಾರದಿಂದ ಇಂತಹ ಆಕರ್ಷಣೆಯ ಶಕ್ತಿಯು ಅವಶ್ಯವಾಗಿ ಹೊರ ಹೊಮ್ಮುತ್ತವೆ. ಹೇಗೆ ಚಿಕ್ಕ ಮಗು ನಿರ್ದೋಷಿ, ಶುದ್ಧ ಪವಿತ್ರವಾಗಿರುವ ಕಾರಣ ಸದಾ ಹಸನ್ಮುಖಿ ಆಗಿರುತ್ತದೆ ಮತ್ತು ತನ್ನ ರಮಣೀಕ ಚರಿತ್ರೆಯಿಂದ ಎಲ್ಲರನ್ನೂ ಬಹಳ ಆಕರ್ಷಣೆ ಮಾಡುತ್ತದೆ. ಅದೇರೀತಿ ತಾವು ಪ್ರತಿಯೊಬ್ಬರ ಜೀವನವು ಈಶ್ವರೀಯ ರಮಣೀಕವಾದ ಜೀವನವಾಗಿರಬೇಕು, ಇದಕ್ಕಾಗಿ ನೀವು ತಮ್ಮದೇ ಅಸುರಿ ಸ್ವಭಾವಗಳ ಮೇಲೆ ಯುಕ್ತಿ ಮಾಡುತ್ತಾ ವಿಜಯ ಸಾಧಿಸಬೇಕಾಗಿದೆ. ಯಾವಾಗ ಯಾರೇ ಕ್ರೋಧಕ್ಕೆ ವಶರಾಗಿರುವುದನ್ನು ನೋಡುತ್ತೀರೆಂದರೆ, ಅವರ ಮುಂದೆ ತಾವು ಬಾಲ್ಯದ ಮಧುರ ರೀತಿಯ ಜ್ಞಾನ ರೂಪವುಳ್ಳವರಾಗಿ ಮುಗುಳ್ನಗುತ್ತಾ ಇರುತ್ತೀರೆಂದರೆ, ಅವರು ತಾವಾಗಿಯೇ ಶಾಂತ ಚಿತ್ತರಾಗುತ್ತಾರೆ ಅರ್ಥಾತ್ ವಿಸ್ಮೃತಿ ಸ್ವರೂಪದಿಂದ ಸ್ಮೃತಿಯಲ್ಲಿ ಬರುತ್ತಾರೆ. ಭಲೆ ಅವರಿಗೆ ಗೊತ್ತಾಗದಂತೆ ಸೂಕ್ಷ್ಮವಾಗಿಯೇ ವಿಜಯವನ್ನು ಪಡೆದು ಮಾಲೀಕರಾಗಬೇಕು - ಇದೇ ತಾವು ಮಾಲೀಕ ಮತ್ತು ಬಾಲಕರ ಸರ್ವೋಚ್ಚ ಶಿರೋಮಣಿ ವಿಧಿಯಾಗಿದೆ. ಈಶ್ವರನ ಸಂಪೂರ್ಣ ಜ್ಞಾನ ರೂಪವು ಹೇಗಿದೆಯೋ ಹಾಗೆಯೇ ಸಂಪೂರ್ಣ ಪ್ರೇಮ ರೂಪವೂ ಇದೆ. ಈಶ್ವರನಲ್ಲಿ ಎರಡೂ ಗುಣಗಳೂ ಸಮಾವೇಶವಾಗಿದೆ ಆದರೆ ಮೊದಲು ಜ್ಞಾನ, ನಂತರ ಎರಡನೆಯದು ಪ್ರೇಮ ರೂಪವಿದೆ. ಒಂದುವೇಳೆ ಯಾರು ಜ್ಞಾನ ರೂಪರಾಗದೆ ಕೇವಲ ಪ್ರೇಮ ರೂಪರು ಆಗಿ ಬಿಡುತ್ತಾರೆಂದರೆ, ಅವರ ಪ್ರೇಮವು ಅಶುದ್ಧ ಖಾತೆಯಲ್ಲಿ ಕರೆದುಕೊಂಡು ಹೋಗುತ್ತದೆ. ಆದ್ದರಿಂದ ಪ್ರೇಮವನ್ನು ವಿಸ್ಮೃತಿ ಮಾಡಿಕೊಂಡು, ಅದಕ್ಕೆ ಮೊದಲು ಜ್ಞಾನ ರೂಪರಾಗಬೇಕು ಮತ್ತು ಬಂದಿರುವಂತಹ ಭಿನ್ನ-ಭಿನ್ನ ರೂಪಗಳ ಮಾಯೆಯ ಮೇಲೆ ವಿಜಯವನ್ನು ಪಡೆದ ನಂತರ ಪ್ರೇಮ ರೂಪವುಳ್ಳವರಾಗಬೇಕು. ಒಂದುವೇಳೆ ಜ್ಞಾನವಿಲ್ಲದೆ ಪ್ರೇಮದಲ್ಲಿ ಬರುತ್ತೀರೆಂದರೆ ವಿಚಲಿತರಾಗುತ್ತೀರಿ. ಹೇಗೆ ಯಾರಾದರೂ ಒಂದುವೇಳೆ ಜ್ಞಾನ ರೂಪರಾಗದೆ ಧ್ಯಾನದಲ್ಲಿ ಹೋಗುತ್ತಾರೆಂದರೆ, ಕೆಲವೊಮ್ಮೆ ಮಾಯೆಯಲ್ಲಿ ಸಿಲುಕಿ ಬಿಡುತ್ತಾರೆ. ಆದ್ದರಿಂದ ಬಾಬಾರವರು ಹೇಳುತ್ತಾರೆ - ಮಕ್ಕಳೇ, ಈ ಧ್ಯಾನವೂ ಸಹ ಒಂದು ಗಂಟಾಗಿರುವ ಸೂತ್ರದಂತೆ. ಆದರೆ ಜ್ಞಾನ ಸ್ವರೂಪರಾದ ನಂತರ ಧ್ಯಾನದಲ್ಲಿ ಹೋಗುವುದರಿಂದ ಅತ್ಯಂತ ಸ್ವಾರಸ್ಯದ ಅನುಭವವಾಗುತ್ತದೆ. ಅಂದಾಗ ಮೊದಲು ಜ್ಞಾನ, ನಂತರ ಧ್ಯಾನವಿರಲಿ. ಧ್ಯಾನ ಸ್ಥಿತಿಗಿಂತ ಜ್ಞಾನದ ಸ್ಥಿತಿಯು ಶ್ರೇಷ್ಠವಾಗಿದೆ ಆದ್ದರಿಂದ ಹೇ ಮಕ್ಕಳೇ, ಮೊದಲು ಜ್ಞಾನ ಸ್ವರೂಪರಾದ ನಂತರ ಪ್ರೇಮವನ್ನು ಪ್ರಕಟಗೊಳಿಸಬೇಕಾಗಿದೆ. ಈ ಪುರುಷಾರ್ಥಿ ಜೀವನದಲ್ಲಿ ಜ್ಞಾನವಿಲ್ಲದ ಪ್ರೇಮವು ವಿಘ್ನ ಹಾಕುತ್ತದೆ.

ಸಾಕ್ಷಿಯಾಗಿರುವ ಸ್ಥಿತಿಯು ಅತಿಮಧುರ, ರಮಣೀಕ ಹಾಗೂ ಸುಂದರವಾಗಿದೆ. ಮುಂದಿನ ಜೀವನದ ಆಧಾರವೂ ಈ ಸ್ಥಿತಿಯ ಮೇಲೆ ಆಧಾರಿತವಾಗಿದೆ. ಹೇಗೆ ಯಾರಾದರೂ ಶಾರೀರಿಕವಾಗಿ ಭೋಗಿಸುತ್ತಿದ್ದಾರೆಂದರೆ, ಆ ಸಮಾಯ್ದಲ್ಲೇನಾದರೂ ಸಾಕ್ಷಿ, ಸುಖ ಸ್ವರೂಪ ಸ್ಥಿತಿಯಲ್ಲಿ ಸ್ಥಿತರಾಗುತ್ತಾರೆಂದರೆ, ಹಿಂದಿನ ಕರ್ಮಗಳ ಲೆಕ್ಕಾಚಾರವನ್ನೂ ಮುಕ್ತಗೊಳಿಸುತ್ತಾರೆ, ಹಾಗೆಯೇ ಜೊತೆ-ಜೊತೆಗೆ ಭವಿಷ್ಯಕ್ಕಾಗಿ ಸುಖದ ಲೆಕ್ಕಾಚಾರವೂ ರೂಪುಗೊಳ್ಳುತ್ತದೆ. ಈ ರಹಸ್ಯವನ್ನು ತಿಳಿಯುವುದರಿಂದ ಅವರೆಂದಿಗೂ ಹೀಗೆ ಹೇಳುವುದಿಲ್ಲ - ನನ್ನ ಈ ಸೌಭಾಗ್ಯದ ದಿನಗಳೆಲ್ಲವೂ ಕೇವಲ ಲೆಕ್ಕಾಚಾರ ಮುಗಿಸುವುದರಲ್ಲಿಯೇ ಹೊರಟು ಹೋಯಿತು. ಯಾವ ಸಮಯದಲ್ಲಿ ಸಂಪೂರ್ಣವಾಗಿ ಎರಡೂ ಕಾರ್ಯಗಳ ಸಿದ್ಧವಾಗುತ್ತದೆಯೋ, ಆ ಸೌಭಾಗ್ಯಶಾಲಿ ಪುರುಷಾರ್ಥದ ಸಮಯವು ಇದೇ ಆಗಿದೆ. ಇವರೆಡೂ ಕಾರ್ಯಗಳನ್ನು ಸಿದ್ಧ ಮಾಡುವ ತೀವ್ರ ಪುರುಷಾರ್ಥಿಗಳೇ ಅತೀಂದ್ರಿಯ ಸುಖ ಅಥವಾ ಆನಂದದ ಅನುಭವದಲ್ಲಿರುತ್ತಾರೆ. ನೀವು ಮಕ್ಕಳಲ್ಲಿ ಈ ವಿಭಿನ್ನ ವಿರಾಟ ಡ್ರಾಮಾದ ಪ್ರತಿಯೊಂದು ಮಾತಿನಲ್ಲಿ ಸಂಪೂರ್ಣ ನಿಶ್ಚಯವಿರಬೇಕು. ಏಕೆಂದರೆ ಇದು ಮಾಡಿ-ಮಾಡಲ್ಪಟ್ಟಂತಹ ಡ್ರಾಮಾ ಖಚಿತವಾಗಿಯೇ ವಿಧೇಯನಾಗಿರುವ ಡ್ರಾಮಾ ಆಗಿದೆ. ಈ ಡ್ರಾಮಾದಲ್ಲಿ ಪ್ರತಿಯೊಂದು ಜೀವ ಜಂತುವಿನಿಂದಲೂ ಅದರ ಪಾತ್ರವನ್ನು ಪೂರ್ಣ ರೀತಿಯಿಂದ ಅಭಿನಯ ಮಾಡಿಸುತ್ತದೆ. ಅದರಲ್ಲಿ ಕೆಲವು ಅನ್ಯಾಯ ಮಾಡುವವರೇ ಇರಲಿ, ಆದರೂ ಅನ್ಯಾಯ ಮಾಡುವ ಪಾತ್ರವನ್ನೂ ಪೂರ್ಣ ರೀತಿಯಿಂದ ಅಭಿನಯ ಮಾಡಿಸುತ್ತದೆ - ಇದೂ ಸಹ ಡ್ರಾಮಾದಲ್ಲಿ ನೊಂದಣಿ ಆಗಿದೆ. ಯಾವಾಗ ಅನ್ಯಾಯ ಮತ್ತು ನ್ಯಾಯ ಎರಡೂ ಯೋಜನೆಗಳಲ್ಲಿ ನೊಂದಣಿ ಆಗಿದೆ ಅಂದಮೇಲೆ ಯಾವುದೇ ಮಾದಿನಲ್ಲಿ ಸಂಶಯ ಪಡುವುದನ್ನು ಜ್ಞಾನವೆಂದು ಹೇಳುವುದಿಲ್ಲ ಏಕೆಂದರೆ ಪ್ರತಿಯೊಬ್ಬ ಪಾತ್ರಧಾರಿಯೂ ತನ್ನ-ತನ್ನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ. ಹೇಗೆ ಚಲನಚಿತ್ರಗಳಲ್ಲಿ ಅನೇಕ ಭಿನ್ನ-ಭಿನ್ನ ರೂಪವುಳ್ಳ ಪಾತ್ರಧಾರಿಗಳಿರುತ್ತಾರೆ, ತನ್ನ-ತನ್ನ ಪಾತ್ರವನ್ನು ಅಭಿನಯಿಸುತ್ತಾರೆ, ಅದನ್ನು ನೋಡಿ ಅವರಿಂದ ತಿರಸ್ಕಾರ ಬರುತ್ತದೆ ಮತ್ತು ಇನ್ನೂ ಕೆಲವರಿಂದ ಖುಷಿಯಾಗುತ್ತಿದೆ ಎನ್ನುವುದಿಲ್ಲ. ಇದೊಂದು ಆಟವೆಂದು ಗೊತ್ತಿದೆ, ಇದರಲ್ಲಿ ಪ್ರತಿಯೊಬ್ಬರೂ ತನ್ನ-ತನ್ನ ಒಳ್ಳೆಯ ಅಥವ ಕೆಟ್ಟ ಪಾತ್ರವು ಸಿಕ್ಕಿರುತ್ತದೆ, ಅದೇರೀತಿಯಾಗಿ ಈ ಅನಾದಿ ಮಾಡಲ್ಪಟ್ಟಿರುವ ಡ್ರಾಮಾವನ್ನೂ ಸಹ ಸಾಕ್ಷಿಯಾಗಿರುತ್ತಾ ಏಕರಸ ಸ್ಥಿತಿಯಿಂದ ಹರ್ಷಿತಮುಖಿಯಾಗಿ ನೋಡುತ್ತಿರಬೇಕಾಗಿದೆ. ಈ ಅಂಶವನ್ನು ಸಂಘಟನೆಯಲ್ಲಿ ಬಹಳ ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಒಬ್ಬರಿನ್ನೊಬ್ಬರನ್ನು ಈಶ್ವರೀಯ ರೂಪದಿಂದ ನೋಡಬೇಕಾಗಿದೆ, ಅನುಭೂತಿಯಾಗುವ ಜ್ಞಾನದ ಅಂಶಗಳನ್ನು ತೆಗೆದುಕೊಂಡು ಈಶ್ವರೀಯ ಗುಣಗಳ ಧಾರಣೆ ಮಾಡಬೇಕಾಗಿದೆ. ತಮ್ಮ ಲಕ್ಷ್ಯ ಸ್ವರೂಪದ ಸ್ಮೃತಿಯಿಂದ ಶಾಂತಚಿತ್ತ, ನಿರ್ಮಾಣಚಿತ್ತ, ತಾಳ್ಮೆಯುಳ್ಳವರಾಗಿ, ಮಧುರ ಸ್ವಭಾವಿ, ಶೀತಲತೆ, ಇತ್ಯಾದಿ., ಸರ್ವ ದೈವೀ ಗುಣಗಳನ್ನು ಸ್ಮೃತಿಗೆ ತಂದುಕೊಳ್ಳಬೇಕಾಗಿದೆ. ತಾಳ್ಮೆಯಿರುವ ಸ್ಥಿತಿಯನ್ನು ಧಾರಣೆ ಮಾಡಿಕೊಳ್ಳಲು ಮುಖ್ಯ ಆಧಾರವಾಗಿದೆ - ವೇಟ್ ಅಂಡ್ ಸೀ (ಕಾದು ನೋಡಿರಿ). ಹೇ ನನ್ನ ಪ್ರೈಯವಾದ ಮಕ್ಕಳೇ, ವೇಟ್ ಅಂದರೆ ತಾಳ್ಮೆಯಿಂದ ಇರುವುದು, ಸೀ ಅರ್ಥಾತ್ ನೋಡಬೇಕು. ತಮ್ಮ ಹೃದಯದಲ್ಲಿ ಮೊದಲು ತಾಳ್ಮೆಯ ಗುಣವನ್ನು ಧಾರಣೆ ಮಾಡಿಕೊಂಡು, ಅದರ ನಂತರ ವಿಸ್ತಾರದಲ್ಲಿರುವ ವಿರಾಟ ಡ್ರಾಮಾವನ್ನು ಸಾಕ್ಷಿಯಾಗಿ ನೋಡಬೇಕಾಗಿದೆ. ಎಲ್ಲಿಯವರೆಗೆ ಯಾವುದೇ ರಹಸ್ಯವನ್ನು ಕೇಳುವ ಸಮಯವು ಸಮೀಪಕ್ಕೆ ಬರುತ್ತದೆಯೋ, ಅಲ್ಲಿಯವರೆಗೆ ತಾಳ್ಮೆಯ ಗುಣವನ್ನು ಧಾರಣೆ ಮಾಡಿಕೊಳ್ಳಬೇಕು. ಸಮಯ ಬಂದಮೇಲೆ ತಾಳ್ಮೆವಹಿಸಿ ರಹಸ್ಯವನ್ನು ಕೇಳುವುದರಿಂದ ತಾವೆಂದಿಗೂ ವಿಚಲಿತರಾಗುವುದಿಲ್ಲ. ಆದ್ದರಿಂದ ಹೇ ಪುರುಷಾರ್ಥಿ ಪ್ರಾಣ ಪ್ರಿಯರೇ, ಸ್ವಲ್ಪ ನಿಲ್ಲಿರಿ (ತಾಳ್ಮೆಯಿಂದಿರಿ) ಹಾಗೂ ಮುಂದೆ ಸಾಗುತ್ತಾ ರಹಸ್ಯಗಳನ್ನು ನೋಡುತ್ತಾ ಮುಂದೆ ಸಾಗಿರಿ, ಈ ತಾಳ್ಮೆಯ ಸ್ಥಿತಿಯಿಂದ ಎಲ್ಲಾ ಕರ್ತವ್ಯಗಳು ಸಂಪೂರ್ಣವಾಗಿ ಸಿದ್ಧವಾಗುತ್ತದೆ. ಈ ಗುಣವು ನಿಶ್ಚಯದ ಆಧಾರದ ಮೇಲೆ ಬಂಧಿತವಾಗಿದೆ, ಪ್ರತಿಯೊಂದು ಆಟವನ್ನು ಇಂತಹ ನಿಶ್ಚಯ ಬುದ್ಧಿ ಸಾಕ್ಷಿ ದೃಷ್ಟರಾಗಿ, ಹರ್ಷಿತ ಚಹರೆಯಿಂದ ನೋಡುತ್ತೀರಿ, ಆಂತರ್ಯದಲ್ಲಿ ತಾಳ್ಮೆ ಮತ್ತು ಅಡೋಲ ಚಿತ್ತರು ಆಗಿರುತ್ತೀರಿ - ಇದು ಜ್ಞಾನ ಪರಿಪಕ್ವ ಸ್ಥಿತಿಯಾಗಿದೆ, ಈ ಸ್ಥಿತಿಯೇ ಅಂತ್ಯದಲ್ಲಿ ಸಂಪೂರ್ಣತೆಯ ಸಮಯವು ಪ್ರತ್ಯಕ್ಷವಾಗಿರುತ್ತದೆ. ಆದ್ದರಿಂದ ಬಹಳ ಸಮಯದಿಂದ ಈ ಸಾಕ್ಷಿಯಾಗಿರುವ ಸ್ಥಿತಿಯಲ್ಲಿ ಸ್ಥಿತರಾಗುವ ಪರಿಶ್ರಮ ಪಡಬೇಕಾಗಿದೆ. ಹೇಗೆ ನಾಟಕದಲ್ಲಿ ಪಾತ್ರಧಾರಿಗೆ ಸಿಕ್ಕಿರುವ ತನ್ನ ಪಾತ್ರವನ್ನು ಸಂಪೂರ್ಣವಾಗಿ ಅಭಿನಯಿಸಬೇಕೆಂಬ ದೃಷ್ಟಿಯಿಂದ, ಅದನ್ನು ಮುಂಚಿತವಾಗಿಯೇ ಅಭ್ಯಾಸದ ರಿಹರ್ಸಲ್ ಮಾಡಬೇಕಾಗುತ್ತದೆ. ಹಾಗೆಯೇ ನೀವು ಪ್ರಿಯವಾದ ಹೂಗಳೂ ಸಹ ಯೋಗಬಲದಿಂದ ಬರುವಂತಹ ದೊಡ್ಡ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕೆಂದರೆ, ಬರುವ ಮೊದಲೇ ಅವಶ್ಯವಾಗಿ ಅಭ್ಯಾಸ ಮಾಡಬೇಕಾಗಿದೆ. ಆದರೆ ಬಹಳ ಸಮಯದಿಂದ ಈ ಪುರುಷಾರ್ಥವನ್ನು ಮಾಡದಿದ್ದರೆ, ಆ ಸಮಯದಲ್ಲಿ ಗಾಬರಿ ಪಡುತ್ತಾ ಸೋಲಾಗುತ್ತದೆ. ಆದ್ದರಿಂದ ಮೊದಲು ತಮ್ಮ ಈಶ್ವರೀಯ ಆಧಾರವನ್ನು ಪರಿಪಕ್ವ ಮಾಡಿಕೊಂಡು ದೈವೀ ಗುಣವುಳ್ಳವರು ಆಗಬೇಕಾಗಿದೆ. ಜ್ಞಾನ ಸ್ವರೂಪ ಸ್ಥಿತಿಯಲ್ಲಿ ಸ್ಥಿತರಾಗುವುದರಿಂದ ಸ್ವತಹವಾಗಿಯೇ ಶಾಂತ ರೂಪ ಸ್ಥಿತಿಯಾಗಿ ಬಿಡುತ್ತದೆ. ಯಾವಾಗ ಜ್ಞಾನ ಆತ್ಮ ಮಕ್ಕಳೆಲ್ಲರೂ ಒಟ್ಟಿಗೆ ಕುಳಿತುಕೊಂಡು ಮುರುಳಿಯನ್ನು ಕೇಳುತ್ತಾರೆ, ಆಗ ನಾಲ್ಕೂ ಕಡೆಯಲ್ಲಿ ಶಾಂತಿಯ ವಾಯುಮಂಡಲವು ರೂಪುಗೊಳ್ಳುತ್ತದೆ ಏಕೆಂದರೆ ಜ್ಞಾನಿ ಆತ್ಮ ಮಕ್ಕಳು ಯಾವುದೇ ಮಹಾವಾಕ್ಯಗಳನ್ನು ಕೇಳುತ್ತಾರೆಂದರೆ, ಆಂತರಿಕವಾಗಿ ಗುಹ್ಯತೆಯಲ್ಲಿ ಹೊರಟು ಹೋಗುತ್ತಾರೆ. ಅದರ ಗುಹ್ಯತೆಯಲ್ಲಿ ಹೋಗುವ ಕಾರಣ, ಆಂತರ್ಯದ ಮಧುರ ಶಾಂತಿಯ ಅನುಭೂತಿಯಾಗುವುದು. ಈಗ ಇದಕ್ಕಾಗಿ ಯಾರೂ ಕೂಡ ವಿಶೇಷವಾಗಿ ಕುಳಿತು ಪರಿಶ್ರಮ ಪಡಬೇಕಾಗಿಲ್ಲ. ಆದರೆ ಜ್ಞಾನದ ಸ್ಥಿತಿಯಲ್ಲಿ ಸ್ಥಿತರಾಗುವುದರಿಂದ ಈ ಗುಣವು ಧಾರಣೆಯಾಗುತ್ತದೆ. ನೀವು ಮಕ್ಕಳು ಯಾವಾಗ ಮುಂಜಾನೆಯಲ್ಲಿ ಎದ್ದು ಏಕಾಂತದಲ್ಲಿ ಕುಳಿತುಕೊಳ್ಳುತ್ತೀರೆಂದರೆ ಶುದ್ಧ ವಿಚಾರಗಳೆಂಬ ಪ್ರಕಂಪನಗಳು ಉತ್ಪನ್ನಗೊಳ್ಳುತ್ತವೆ, ಆ ಸಮಯದಲ್ಲಿ ಬಹಳ ಉಪರಾಂ ಸ್ಥಿತಿಯಿರಬೇಕಾಗಿದೆ. ತಮ್ಮ ಸತ್ಯ-ಶುದ್ಧ ಸಂಕಲ್ಪಗಳಲ್ಲಿ ಸ್ಥಿತರಾಗುವುದರಿಂದ ಸ್ವತಹವಾಗಿಯೇ ಬೇರೆಲ್ಲಾ ಸಂಕಲ್ಪಗಳು ಶಾಂತವಾಗಿ ಬಿಡುತ್ತವೆ ಮತ್ತು ಮನಸ್ಸು ನಿಶ್ಚಿಂತವಾಗಿ ಬಿಡುತ್ತದೆ ಏಕೆಂದರೆ ಅವಶ್ಯವಾಗಿ ಮನಸ್ಸನ್ನು ವಶ ಮಾಡಿಕೊಟ್ಟುಕೊಳ್ಳುವ ಯಾವುದಾದರೂ ಶಕ್ತಿಯು ಬೇಕಾಗಿದೆ ಆದ್ದರಿಂದ ಮೊದಲು ತಮ್ಮ ಲಕ್ಷ್ಯ ಸ್ವರೂಪದ ಶುದ್ಧಸಂಕಲ್ಪವನ್ನು ಧಾರಣೆ ಮಾಡಿಕೊಳ್ಳಿರಿ. ಯಾವಾಗ ಆಂತರಿಕ ಬುದ್ಧಿಯೋಗವು ಕಾಯಿದೆಯನುಸಾರ ಇರುತ್ತದೆಯೆಂದರೆ, ನಿಮ್ಮ ಈ ನಿಸ್ಸಂಕಲ್ಪ ಸ್ಥಿತಿಯು ಸ್ವತಹವಾಗಿಯೇ ತಯಾರಾಗಿ ಬಿಡುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ, ಜ್ಞಾನ ಗುಲ್ಜಾರಿ, ಜ್ಞಾನ ನಕ್ಷತ್ರಗಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಲಕ್ಷ್ಯ ಸ್ವರೂಪದ ಸ್ಥಿತಿಯಿಂದ ಶಾಂತ ಚಿತ್ತ, ನಿರ್ಮಾಣ ಚಿತ್ತ, ತಾಳ್ಮೆಯುಳ್ಳ, ಮಧುರ ಸ್ವಭಾವ, ಶೀತಲತೆ ಇತ್ಯಾದಿ ಸರ್ವ ದೈವೀ ಗುಣಗಳ ಧಾರಣೆ ಮಾಡಿಕೊಳ್ಳಬೇಕಾಗಿದೆ.

2. ಈ ಆಟವನ್ನು ನಿಶ್ಚಯಬುದ್ಧಿ ಸಾಕ್ಷಿದೃಷ್ಟಾ ಆಗಿರುತ್ತಾ, ಹರ್ಷಿತ ಚಹರೆಯಿಂದ ನೋಡುತ್ತಾ, ಆಂತರಿಕವಾಗಿ ತಾಳ್ಮೆಯುಳ್ಳವರು ಹಾಗೂ ಅಡೋಲ ಚಿತ್ತರಾಗಿ ಇರಬೇಕಾಗಿದೆ. ಬಹಳ ಸಮಯದಿಂದ ಈ ಸಾಕ್ಷಿ ಸ್ಥಿತಿಯಲ್ಲಿರುವ ಪರಿಶ್ರಮ ಪಡಬೇಕಾಗಿದೆ.

ವರದಾನ:
ಸ್ನೇಹ ಹಾಗೂ ಶಕ್ತಿ ರೂಪದ ಸಮತೋಲನದ ಮೂಲಕ ಸೇವೆ ಮಾಡುವಂತಹ ಸಫಲತಾ ಮೂರ್ತಿ ಭವ.

ಹೇಗೆ ಒಂದು ಕಣ್ಣಿನಲ್ಲಿ ತಂದೆಯವರ ಸ್ನೇಹ ಹಾಗೂ ಇನ್ನೊಂದು ಕಣ್ಣಿನಲ್ಲಿ ತಮಗೆ ಸಿಕ್ಕಿರುವ ಕರ್ತವ್ಯ(ಸೇವೆ)ಯು ಸದಾ ಸ್ಮೃತಿಯಲ್ಲಿ ಇರುತ್ತದೆ. ಹಾಗೆಯೇ ಈಗ ಸ್ನೇಹಿ-ಮೂರ್ತಿಯ ಜೊತೆ-ಜೊತೆಗೆ ಶಕ್ತಿರೂಪರೂ ಆಗಬೇಕು. ಸ್ನೇಹದ ಜೊತೆ-ಜೊತೆಗೆ ಶಬ್ಧಗಳಲ್ಲಿಯೂ ಇಂತಹ ಹರಿತವಿರಲಿ, ಅದರಿಂದ ಯಾರದೇ ಹೃದಯವನ್ನು ಸೀಳಿ ಬಿಡಲಿ. ಹೇಗೆ ತಾಯಿಯು ತನ್ನ ಮಕ್ಕಳಿಗೆ ಎಂತಹ ಶಬ್ಧಗಳಲ್ಲಿಯೇ ಶಿಕ್ಷಣವನ್ನು ಕೊಡುತ್ತಾಳೆ, ಅದರಲ್ಲಿ ತಾಯಿಯ ಸ್ನೇಹವಿರುವ ಕಾರಣದಿಂದ ಆ ಶಬ್ಧಗಳು ಹರಿತ ಅಥವಾ ಕಹಿಯೆಂಬ ಅನುಭವ ಆಗುವುದಿಲ್ಲ. ಅದೇ ರೀತಿಯಲ್ಲಿ ಜ್ಞಾನದ ಯಾವುದೆಲ್ಲಾ ಸತ್ಯ ಮಾತುಗಳಿವೆ, ಅವನ್ನು ಸ್ಪಷ್ಟ ಶಬ್ಧಗಳಲ್ಲಿ ತಿಳಿಸಿರಿ ಆದರೆ ಶಬ್ಧಗಳಲ್ಲಿ ಸ್ನೇಹವು ಸಮಾವೇಶವಾಗಿರಲಿ, ಆಗಲೇ ಸಫಲತಾ ಮೂರ್ತಿಗಳು ಆಗಿ ಬಿಡುವಿರಿ.

ಸ್ಲೋಗನ್:
ಸರ್ವ ಶಕ್ತಿವಂತ ತಂದೆಯನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತೀರೆಂದರೆ, ಪಶ್ಚಾತ್ತಾಪದಿಂದ ಮುಕ್ತರಾಗಿ ಬಿಡುವಿರಿ.