24/04/21 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ - ನೀವೀಗ ಇಂತಹ ಪ್ರಪಂಚಕ್ಕೆ ಮಾಲೀಕರಾಗುತ್ತೀರಿ ಎಲ್ಲಿ ಯಾವುದೇ ಮಿತಿಯಿಲ್ಲ, ಯೋಗಬಲದಿಂದ ಇಡೀ ವಿಶ್ವದ ರಾಜ್ಯಭಾಗ್ಯವನ್ನು ಪಡೆಯುವುದೇ ಅಧ್ಬುತವಾಗಿದೆ”

ಪ್ರಶ್ನೆ:

ಡ್ರಾಮಾದ ಯಾವ ಬಂಧನದಲ್ಲಿ ತಂದೆಯೂ ಸಹ ಬಂಧಿತರಾಗಿದ್ದಾರೆ?

ಉತ್ತರ:

ತಂದೆಯು ತಿಳಿಸುತ್ತಾರೆ - ನಾನು ಮಕ್ಕಳ ಮುಂದೆ ಬರಲೇಬೇಕಾಗಿದೆ, ಈ ಬಂಧನದಲ್ಲಿ ನಾನೂ ಸಹ ಬಂಧಿತನಾಗಿದ್ದೇನೆ. ಎಲ್ಲಿಯವರೆಗೆ ನಾನು ಬರುವುದಿಲ್ಲವೋ ಅಲ್ಲಿಯವರೆಗೆ ಗಂಟಾಗಿರುವ ಸೂತ್ರವನ್ನು ಬಿಡಿಸಲು ಸಾಧ್ಯವಿಲ್ಲ. ಬಾಕಿ ನಾನು ನಿಮ್ಮ ಮೇಲೆ ಯಾವುದೇ ಕೃಪೆ ಅಥವಾ ಆಶೀರ್ವಾದವನ್ನು ಮಾಡಲು ಬರುವುದಿಲ್ಲ. ನಾನು ಯಾರೇ ಸತ್ತಿರುವವರನ್ನು ಬದುಕಿಸುವುದಿಲ್ಲ, ನಾನು ಪತಿತರನ್ನು ಪಾವನ ಮಾಡಲು ಬರುತ್ತೇನೆ.

ಗೀತೆ:

ನಿನ್ನನ್ನು ಪಡೆದು ನಾನು ಜಗತ್ತನ್ನೇ ಪಡೆದೆನು.............

ಓಂ ಶಾಂತಿ. ಗೀತೆಯನ್ನು ಕೇಳಿದ ಕೂಡಲೇ ಮಕ್ಕಳಿಗೆ ರೋಮಾಂಚನವಾಗಬೇಕು ಏಕೆಂದರೆ ಸನ್ಮುಖದಲ್ಲಿ ಕುಳಿತಿದ್ದೀರಿ. ಇಡೀ ಪ್ರಪಂಚದಲ್ಲಿ ಎಷ್ಟೊಂದು ಮಂದಿ ಆಚಾರ್ಯರು, ವಿದ್ವಾನರು, ಪಂಡಿತರಿದ್ದಾರೆ. ಆದರೆ ಮನುಷ್ಯರಿಗೆ 5000 ವರ್ಷಗಳಿಗೊಮ್ಮೆ ಭಗವಂತ ಬರುತ್ತಾರೆಂದು ಗೊತ್ತಿಲ್ಲ ಆದರೆ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನಾವು ಹೇಗಿದ್ದೆವೋ ಹಾಗೆಯೇ ನಿಮ್ಮವರೂ ಇದ್ದಾರೆ ಎಂದು ಹೇಳುತ್ತಾರೆ. ನೀವು ಹೇಗಿದ್ದೀರೋ ಹಾಗೆಯೇ ನಾನೂ ಇದ್ದೇನೆಂದು ತಂದೆಯೂ ಹೇಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಎಲ್ಲಾ ಆತ್ಮರುಗಳ ತಂದೆಯು ಅವರಾಗಿದ್ದಾರೆ ಎಂದು. ಎಲ್ಲರೂ ಕೂಗುತ್ತಾರೆ. ಅಂದಾಗ ನೋಡಿ, ರಾವಣನ ನೆರಳು ಎಷ್ಟು ದೊಡ್ಡದಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಯಾರನ್ನು ನಾವು ಪರಮಪಿತ ಪರಮಾತ್ಮ ಎಂದು ಹೇಳುತ್ತೇವೆಯೋ ಅವರ ಬಗ್ಗೆ ಯಾರಿಗೂ ತಿಳಿದಿಲ್ಲ. ನಂತರ ತಂದೆ ಎಂದು ಹೇಳುವುದರಿಂದ ಏಕೆ ಖುಷಿಯಾಗುವುದಿಲ್ಲ! ಇದನ್ನು ಮರೆತು ಹೋಗಿದ್ದಾರೆ. ಆ ತಂದೆಯೇ ನಮಗೆ ಆಸ್ತಿಯನ್ನು ಕೊಡುತ್ತಾರೆ, ಇಷ್ಟು ಸಹಜವಾದ ಮಾತನ್ನು ಯಾರೂ ತಿಳಿದುಕೊಂಡಿಲ್ಲವೆಂದು ಸ್ವಯಂ ತಂದೆಯೇ ತಿಳಿಸಿಕೊಡುತ್ತಾರೆ. ಓ ಖುದಾ, ಹೇ ರಾಮ ಎಂದು ಕರೆಯುತ್ತಾ-ಕರೆಯುತ್ತಾ ಪ್ರಾಣ ಬಿಡುತ್ತಾರೆ. ಯಾರನ್ನು ಇಡೀ ಪ್ರಪಂಚವು ಕರೆಯುತ್ತದೆಯೋ ಆ ತಂದೆಯು ನಮಗೆ ತಿಳಿಸುತ್ತಾರೆ. ಈಗ ನಿಮ್ಮ ಬುದ್ಧಿಗೆ ಅಲ್ಲಿಗೆ ಹೊರಟು ಹೋಗಲಿ. ಕಲ್ಪದ ಹಿಂದಿನ ತರಹ ತಂದೆಯು ಈಗ ಬಂದಿದ್ದಾರೆ, ತಂದೆಯು ಬಂದು ಕಲ್ಪ-ಕಲ್ಪವೂ ಪತಿತರಿಂದ ಪಾವನ ಮಾಡಿ, ದುರ್ಗತಿಯಿಂದ ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಪತಿತ-ಪಾವನ ತಂದೆಯೆಂದು ಗಾಯನವೂ ಮಾಡುತ್ತಾರೆ, ನೀವೀಗ ಅವರ ಸನ್ಮುಖದಲ್ಲಿ ಕುಳಿತಿದ್ದೀರಿ. ನೀವು ಅತಿ ಪ್ರಿಯವಾದ ಮಧುರ ಮಕ್ಕಳಾಗಿದ್ದೀರಿ ಅಂದಾಗ ಭಾರತವಾಸಿಗಳದ್ದೇ ಮಾತಾಗಿದೆ. ತಂದೆಯು ಭಾರತದಲ್ಲಿಯೇ ಜನ್ಮ ಪಡೆಯುತ್ತಾರೆ. ನಾನು ಭಾರತದಲ್ಲಿಯೇ ಜನ್ಮ ತೆಗೆದುಕೊಳ್ಳುತ್ತೇನೆ, ಅವಶ್ಯವಾಗಿ ಭಾರತವೇ ನನಗೆ ಇಷ್ಟವಿದೆಯೆಂದು ತಂದೆಯು ಹೇಳುತ್ತಾರೆ. ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ, ಯಾರು-ಯಾರು ಯಾವ ಧರ್ಮ ಸ್ಥಾಪಕರಿದ್ದಾರೆಯೋ ಅವರನ್ನು ನೆನಪು ಮಾಡುತ್ತಾರೆ. ಆದರೆ ನಾವು ಆದಿ ಸನಾತನ ಧರ್ಮದವರಾಗಿದ್ದೆವು ಎಂದು ಭಾರತವಾಸಿಗಳಿಗೆ ಗೊತ್ತಿಲ್ಲ. ಭಾರತವು ಪ್ರಾಚೀನ ದೇಶವಾಗಿದೆ ಅಂದಾಗ ಕೇವಲ ಭಾರತ ಒಂದೇ ಆಗಿತ್ತು ಎಂದು ಅನೇಕಾನೇಕ ಮಾತುಗಳನ್ನು ಹೇಳುತ್ತಿರುತ್ತಾರೆ. ಕೆಲವರು ಕೆಲವನ್ನು, ಇನ್ನೂ ಕೆಲವರು ಇನ್ನೇನನ್ನೋ ಹೇಳುತ್ತಿರುತ್ತಾರೆ. ಗೀತೆಯು ಶಿವ ಪರಮಾತ್ಮನು ಹಾಡಿದರೆಂದು ಯಾರು ಎಂದು ಕೆಲವರು ಕೇಳುತ್ತಾರೆ. ಕೃಷ್ಣನೇ ಪರಮಾತ್ಮನಾಗಿದ್ದನು, ಅವನೇ ಹಾಡಿದನೆಂದು ಹೇಳುತ್ತಾರೆ. ಪರಮಾತ್ಮ ಸರ್ವವ್ಯಾಪಿಯಾಗಿದ್ದಾನೆ, ಇದೆಲ್ಲಾ ಆಟವು ಅವನದೇ ಆಗಿದೆ ಎಂದು ಹೇಳುತ್ತಾರೆ. ಇವೆಲ್ಲಾ ರೂಪಗಳು ಭಗವಂತನದೇ ಆಗಿದೆ, ಭಗವಂತನೇ ಅನೇಕ ರೂಪಗಳನ್ನು ಧರಿಸಿ ಲೀಲೆಯನ್ನು ತೋರಿಸುತ್ತಾರೆ. ಭಗವಂತನು ಏನು ಮಾಡಲು ಸಾಧ್ಯವಿದೆ ಎಂದು ಹೇಳುತ್ತಾರೆ. ಮಾಯೆಯು ಎಷ್ಟು ಪ್ರಬಲವಾಗಿದೆ ಎಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಬಾಬಾ, ನಾವು ನರನಿಂದ ನಾರಾಯಣನಾಗುವ ಆಸ್ತಿಯನ್ನು ಪಡೆದೇ ಪಡೆಯುತ್ತೇವೆಂದು ಇಂದು ಹೇಳಿ ನಾಳೆ ನೋಡಿದರೆ ಇಲ್ಲವೇ ಇಲ್ಲ. ನೀವು ತಿಳಿದುಕೊಂಡಿದ್ದೀರಿ – ಎಷ್ಟೊಂದು ಮಂದಿ ಹೊರಟು ಹೋದರು ಮತ್ತು ಬಹಳ ಮಂದಿ ವಿಚ್ಛೇದನವನ್ನೂ ಕೊಟ್ಟು ಬಿಟ್ಟರು. ಮಮ್ಮಾರವರನ್ನು ಮೋಟಾರಿನಲ್ಲಿ ಓಡಾಡಿಸುತ್ತಿದ್ದವರು ಇಂದು ಇಲ್ಲವೇ ಇಲ್ಲ. ಇಷ್ಟು ಒಳ್ಳೊಳ್ಳೆಯವರು ಮಾಯೆಯ ಸಂಗದಲ್ಲಿ ಬಂದು ಈ ರೀತಿ ಬಿದ್ದು ಬಿಡುತ್ತಾರೆ. ಒಂದೇ ಸಾರಿ ಕೆಳಗೆ ಹೋಗಿ ಬಿಡುತ್ತಾರೆ. ಯಾರು ಕಲ್ಪದ ಹಿಂದೆ ತಿಳಿದುಕೊಂಡಿದ್ದರೋ ಅವರೇ ಈಗಲೂ ತಿಳಿದುಕೊಳ್ಳುತ್ತಾರೆ. ಇತ್ತೀಚಿನ ಪ್ರಪಂಚದವರು ಏನಾಗುತ್ತಿದೆ ಮತ್ತು ನೀವು ಏನಾಗುತ್ತಿದ್ದೀರಿ! ಗೀತೆಯನ್ನು ಕೇಳಿದಿರಲ್ಲವೆ ಅಂದಾಗ ನಾವು ವಿಶ್ವದ ಮಾಲೀಕರಾಗುವ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಅಲ್ಲಿ ಯಾವುದೇ ಅಲ್ಪಕಾಲದ ಮಾತಿಲ್ಲ, ಇಲ್ಲಂತೂ ಕೇವಲ ಇತಿಮಿತಿಗಳ ಮಾತೇ ಆಗಿದೆ, ಎಲ್ಲದರಲ್ಲಿ ಮಿತಿಯಿದೆ. ನಮ್ಮ ಆಕಾಶದ ಮೇಲೆ ನಿಮ್ಮ ವಿಮಾನವು ಬಂದರೆ ಶೂಟ್ ಮಾಡುತ್ತೇವೆಂದು ಹೇಳಿ ಬಿಡುತ್ತಾರೆ ಆದರೆ ಅಲ್ಲಂತೂ ಯಾವುದೇ ಪರಿಮಿತಿಯಿಲ್ಲ. ಗೀತೆಯನ್ನಂತೂ ಹೇಳುತ್ತಾರೆ ಆದರೆ ಅದರ ಅರ್ಥವಂತೂ ಏನೂ ಗೊತ್ತಿಲ್ಲ. ಪುನಃ ನಮ್ಮನ್ನು ವಿಶ್ವದ ಮಾಲೀಕರ ಅವಶ್ಯವಾಗಿ ಮಾಡುತ್ತಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. 84 ಜನ್ಮಗಳ ಚಕ್ರವನ್ನು ಅನೇಕ ಬಾರಿ ಸುತ್ತಿದ್ದೀರಿ. ಸ್ವಲ್ಪ ಸಮಯವು ದುಃಖವನ್ನನುಭವಿಸಿದ್ದೇವೆ, ಸುಖವಂತೂ ಬಹಳ ಇದೆ. ಆದರೆ ತಂದೆಯು ತಿಳಿಸುತ್ತಾರೆ - ನೀವು ಮಕ್ಕಳಿಗೆ ಬಹಳ ಸುಖ ಕೊಡುತ್ತೇನೆ. ಈಗ ಮಾಯೆಯಿಂದ ಸೋಲಬಾರದು. ನೀವು ತಂದೆಯ ಮಕ್ಕಳಾಗಿದ್ದೀರಿ, ಎಲ್ಲರೂ ಒಂದೇರೀತಿ ಒಳ್ಳೆಯ ಮಕ್ಕಳಾಗಲು ಸಾಧ್ಯವಿಲ್ಲ. ಕೆಲವರಿಗೆ 5-7 ಮಕ್ಕಳಿದ್ದರೆ ಅವರಲ್ಲಿ 1-2 ಕೆಟ್ಟ ಮಕ್ಕಳು ತಲೆಯನ್ನೇ ಕೆಡಿಸಿ ಬಿಡುತ್ತಾರೆ. ಲಕ್ಷ-ಕೋಟಿ ಗಟ್ಟಲೆ ಹಣವನ್ನು ವ್ಯರ್ಥ ಮಾಡಿ ಬಿಡುತ್ತಾರೆ. ತಂದೆಯು ಧರ್ಮಾತ್ಮರಾಗಿರುತ್ತಾರೆ, ಮಕ್ಕಳು ಪ್ರಯೋಜನ ಬರದವರಾಗಿರುತ್ತಾರೆ. ಇಂತಹ ಉದಾಹರಣೆಗಳನ್ನು ತಂದೆಯು ಬಹಳಷ್ಟು ನೋಡಿದ್ದಾರೆ.

ಇಡೀ ಪ್ರಪಂಚದವರು ಬೇಹದ್ದಿನ ತಂದೆಯ ಮಕ್ಕಳಾಗಿದ್ದಾರೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಭಾರತವು ನನ್ನ ಜನ್ಮ ಸ್ಥಾನವಾಗಿದೆ ಎಂದು ತಂದೆಯು ಹೇಳುತ್ತಾರೆ. ಪ್ರತಿಯೊಬ್ಬರಿಗೂ ಅವರ ಮಾತೃಭೂಮಿಯ ಬಗ್ಗೆ ಕಾಳಜಿಯಿರುತ್ತದೆ. ಬೇರೆ ಎಲ್ಲಾದರೂ ಶರೀರ ಬಿಟ್ಟರೆ ಅವರನ್ನು ಅವರ ಮಾತೃಭೂಮಿಗೇ ಕರೆದುಕೊಂಡು ಹೋಗುತ್ತಾರೆ. ತಂದೆಯೂ ಸಹ ಭಾರತದಲ್ಲಿಯೇ ಬರುತ್ತಾರೆ. ನೀವು ಭಾರತವಾಸಿಗಳಿಗೆ ಪುನಃ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ನೀವು ಮಕ್ಕಳು ಪುನಃ ನಾವು ದೇವತೆಗಳು ಅರ್ಥಾತ್ ವಿಶ್ವದ ಮಾಲೀಕರಾಗುತ್ತಿದ್ದೇವೆಂದು ಹೇಳುತ್ತೀರಿ. ನಾವೇ ಮಾಲೀಕರಾಗಿದ್ದೆವು, ಈಗ ನಮ್ಮ ಗತಿಯೇನಾಗಿ ಬಿಟ್ಟಿದೆ! ಎಲ್ಲಿದ್ದವರು ಎಲ್ಲಿಗೆ ಬಂದಿದ್ದೇವೆ, 84 ಜನ್ಮಗಳನ್ನು ಅನುಭವಿಸಿ ಈ ಗತಿಯಲ್ಲಿ ಬಂದು ಬಿಟ್ಟಿದೆ. ಡ್ರಾಮವನ್ನು ತಿಳಿದುಕೊಳ್ಳಬೇಕಾಗಿದೆ, ಇದಕ್ಕೆ ಸೋಲು-ಗೆಲುವಿನ ಆಟವೆಂದು ಹೇಳಲಾಗುತ್ತದೆ. ಇದು ಭಾರತದ್ದೇ ಆಟವಾಗಿದೆ, ಇದರಲ್ಲಿ ನಿಮ್ಮ ಪಾತ್ರವೂ ಇದೆ. ಈ ಡ್ರಾಮಾದಲ್ಲಿ ನೀವು ಬ್ರಾಹ್ಮಣರ ಪಾತ್ರವು ಎಲ್ಲದಕ್ಕಿಂತ ಶ್ರೇಷ್ಠಾತಿ ಶ್ರೇಷ್ಠವಾಗಿದೆ. ನೀವು ಇಡೀ ಪ್ರಪಂಚದ ಮಾಲೀಕರಾಗುತ್ತೀರಿ, ಎಷ್ಟೊಂದು ಸುಖವನ್ನನುಭವಿಸುತ್ತೀರಿ, ನಿಮ್ಮಷ್ಟು ಸುಖ ಮತ್ತ್ಯಾರೂ ಭೋಗಿಸಲು ಸಾಧ್ಯವಿಲ್ಲ. ಹೆಸರೇ ಆಗಿದೆ ಸ್ವರ್ಗ, ಇದಾಗಿದೆ ನರಕ. ಇಲ್ಲಿಯ ಸುಖವು ಕಾಗವಿಷ್ಟ ಸಮಾನವಾಗಿದೆ, ಈಗಿನ ಲಕ್ಷಾಧೀಪತಿ ಮುಂದಿನ ಜನ್ಮದಲ್ಲಿ ಏನಾಗುತ್ತಾನೆ ಎಂದು ತಿಳಿದಿರುತ್ತದೆಯೇ? ಇದು ಪಾಪಾತ್ಮರ ಪ್ರಪಂಚವಾಗಿದೆ, ಸತ್ಯಯುಗವು ಪುಣ್ಯಾತ್ಮರ ಪ್ರಪಂಚವಾಗಿದೆ. ನೀವು ಪುಣ್ಯಾತ್ಮರಾಗುತ್ತಿದ್ದೀರಿ ಅಂದಮೇಲೆ ಎಂದೂ ಪಾಪವನ್ನು ಮಾಡಬಾರದು. ಸದಾ ತಂದೆಯ ಜೊತೆ ನೇರವಾಗಿ ನಡೆಯಬೇಕು. ದ್ವಾಪರದಿಂದ ಹಿಡಿದು ನನ್ನ ಜೊತೆಯಲ್ಲಿ ಸದಾ ಧರ್ಮರಾಜನಿರುತ್ತಾನೆಂದು ತಂದೆಯು ತಿಳಿಸುತ್ತಾರೆ. ನನ್ನ ಜೊತೆಯಲ್ಲಿ ಧರ್ಮರಾಜನು ಸತ್ಯ-ತ್ರೇತಾಯುಗದಲ್ಲಿ ಇರುವುದಿಲ್ಲ. ದ್ವಾಪರದಿಂದ ನೀವು ನನ್ನ ಹೆಸರಿನಲ್ಲಿ ದಾನ-ಪುಣ್ಯವನ್ನು ಮಾಡುತ್ತಲೇ ಬಂದಿದ್ದೀರಿ, ಈಶ್ವರಾರ್ಪಣಂ ಎಂದು ಹೇಳುತ್ತೀರಲ್ಲವೆ. ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಶ್ರೀಕೃಷ್ಣಾರ್ಪಣಂ ಎನ್ನುತ್ತಾರೆ. ಅದಕ್ಕೆ ರಿಟರ್ನ್ ಕೊಡುವಂತಹವರು ಒಬ್ಬರೇ ತಂದೆಯಾಗಿದ್ದಾರೆ. ಆದ್ದರಿಂದ ಶ್ರೀಕೃಷ್ಣಾರ್ಪಣಂ ಎಂದು ಹೇಳುವುದೂ ತಪ್ಪಾಗಿದೆ. ಈಶ್ವರಾರ್ಪಣಂ ಎಂದು ಹೇಳುವುದು ಸರಿಯಾಗಿದೆ, ಶ್ರೀ ಗಣೇಶಾರ್ಪಣಂ ಎಂದು ಹೇಳುವುದರಿಂದ ಸ್ವಲ್ಪವೂ ಸಿಗುವುದಿಲ್ಲ. ಆದರೂ ಸಹ ಭಾವನೆಗಾಗಿ ನಾನೇ ಅಲ್ಪಸ್ವಲ್ಪವಾದರೂ ಕೊಡುತ್ತಾ ಬಂದಿದ್ದೇನೆ, ನನ್ನನ್ನು ಯಾರೂ ತಿಳಿದುಕೊಂಡಿಲ್ಲ. ನನ್ನನ್ನು ಈಗ ನೀವು ಮಕ್ಕಳು ತಿಳಿದುಕೊಂಡು ಎಲ್ಲವನ್ನೂ ಶಿವ ತಂದೆಗೆ ಅರ್ಪಣೆ ಮಾಡುತ್ತಿದ್ದೀರಿ. ನಾವು 21 ಜನ್ಮಗಳ ಆಸ್ತಿಯನ್ನು ಪಡೆಯಲು ಬಂದಿದ್ದೇನೆಂದು ತಂದೆಯು (ಬ್ರಹ್ಮಾ) ಹೇಳುತ್ತಾರೆ. ಈಗಿರುವುದೇ ಇಳಿಯುವ ಕಲೆಯಾಗಿದೆ. ರಾವಣ ರಾಜ್ಯದಲ್ಲಿ ಏನೇ ದಾನ-ಪುಣ್ಯ ಮಾಡಿದರೂ ಸಹ ಪಾಪಾತ್ಮರಿಗೇ ಕೊಡುತ್ತಾರೆ. ಇಳಿಯುವ ಕಲೆಯಲ್ಲಿಯೇ ಹೋಗುತ್ತಾರೆ. ಮಾಡಿದ್ದರೂ ಸಹ ಸ್ವಲ್ಪಕಾಲಕ್ಕಾಗಿ ಪ್ರಾಪ್ತಿಯಾಗುತ್ತದೆ. ನಿಮಗೆ ಈಗ 21 ಜನ್ಮಗಳಿಗಾಗಿ ಸಿಗುತ್ತದೆ. ಅದಕ್ಕೆ ರಾಮ ರಾಜ್ಯವೆಂದು ಹೇಳುತ್ತಾರೆ. ಅಲ್ಲಿ ಈಶ್ವರನ ರಾಜ್ಯವೆಂದು ಹೇಳುವುದಿಲ್ಲ, ರಾಜ್ಯವಂತೂ ದೇವಿ-ದೇವತೆಗಳದ್ದಾಗಿದೆ. ನಾನು ರಾಜ್ಯ ಮಾಡುವುದಿಲ್ಲವೆಂದು ತಂದೆಯು ತಿಳಿಸುತ್ತಾರೆ. ನಿಮ್ಮ ಆದಿ ಸನಾತನ ದೇವಿ-ದೇವತಾ ಧರ್ಮವು ಯಾವುದಿತ್ತೋ ಅದು ಪ್ರಾಯಲೋಪವಾಗಿದೆ, ಈಗ ಮತ್ತೆ ಅದು ಸ್ಥಾಪನೆಯಾಗುತ್ತಿದೆ. ತಂದೆಯಂತೂ ಕಲ್ಯಾಣಕಾರಿಯಂತೂ ಹೌದು, ಅವರಿಗೆ ಸತ್ಯವಾದ ತಂದೆಯೆಂದು ಹೇಳುತ್ತಾರೆ. ನಿಮಗೇ ತಮ್ಮ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಸತ್ಯವಾದ ಜ್ಞಾನವನ್ನು ಕೊಡುತ್ತಿದ್ದಾರೆ. ತಂದೆಯು ನಿಮಗೆ ಬೇಹದ್ದಿನ ಇತಿಹಾಸ ಮತ್ತು ಭೂಗೋಳವನ್ನು ತಿಳಿಸುತ್ತಾರೆ. ಎಷ್ಟೊಂದು ಶಕ್ತಿಶಾಲಿ ಸಂಪಾದನೆಯಾಗಿದೆ, ನೀವು ಚಕ್ರವರ್ತಿ ರಾಜರಾಗುತ್ತೀರಿ. ಅವರು ಹಿಂಸೆಯ ಚಕ್ರವನ್ನು ಕೊಟ್ಟು ಬಿಟ್ಟಿದ್ದಾರೆ. ಇದು ಅಸಲಾಗಿ ಜ್ಞಾನದ ಚಕ್ರವಾಗಿದೆ ಆದರೆ ಜ್ಞಾನವಂತೂ ಪ್ರಾಯಲೋಪವಾಗಿ ಬಿಡುತ್ತದೆ. ನಿಮ್ಮದು ಇದು ಮುಖ್ಯವಾದ ಚಿತ್ರವಾಗಿದೆ. ಒಂದು ಕಡೆ ತ್ರಿಮೂರ್ತಿ, ಇನ್ನೊಂದು ಕಡೆ ಚಕ್ರ ಮತ್ತು ವೃಕ್ಷವಾಗಿದೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆಂದು ತಂದೆಯು ತಿಳಿಸುತ್ತಾರೆ. ಇಡೀ ಸೂತ್ರವೇ ಗಂಟಾಗಿ ಬಿಟ್ಟಿದೆ. ತಂದೆಯನ್ನು ಬಿಟ್ಟರೆ ಮತ್ತ್ಯಾರಿಂದಲೂ ಗಂಟನ್ನು ಬಿಡಿಸಲು ಸಾಧ್ಯವಿಲ್ಲ. ತಂದೆಯು ಸನ್ಮುಖದಲ್ಲಿ ಸ್ವಯಂ ಬಂದಿದ್ದಾರೆ. ಡ್ರಾಮಾನುಸಾರವಾಗಿ ನಾನು ಬರಲೇಬೇಕಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ನಾನು ಈ ಡ್ರಾಮಾದಲ್ಲಿ ಬಂಧಿತನಾಗಿದ್ದೇನೆ, ನಾನು ಬರದೇ ಇರಲು ಸಾಧ್ಯವೇ ಇಲ್ಲ. ಸತ್ತಿರುವವರನ್ನು ಬದುಕಿಸುತ್ತೇನೆ, ರೋಗದಿಂದ ಬಿಡಿಸುತ್ತೇನೆಂದು ಎಂದಲ್ಲ. ಬಾಬಾ, ನಮ್ಮ ಮೇಲೆ ಕೃಪೆ ತೋರಿ ಎಂದು ಬಹಳ ಮಕ್ಕಳು ಕೇಳುತ್ತಿರುತ್ತಾರೆ ಆದರೆ ಇಲ್ಲಿ ಯಾವುದೇ ಕೃಪೆಯ ಮಾತಿಲ್ಲ. ನೀವು ನನಗೆ ಆಶೀರ್ವಾದ ಕೊಡಿ, ನಮಗೆ ಯಾವುದೇ ನಷ್ಟವಾಗದಿರಲೆಂದು ಕರೆಯಲಿಲ್ಲವಲ್ಲವೆ. ನೀವು ಪತಿತ-ಪಾವನ, ದುಃಖಹರ್ತ-ಸುಖಕರ್ತ ಬನ್ನಿ ಎಂದು ಕರೆದಿರಿ. ಶರೀರದ ದುಃಖಹರ್ತನು ವೈದ್ಯನೂ ಆಗುತ್ತಾನೆ. ನಾನು ಇದಕ್ಕಾಗಿಯೇ ಬರುತ್ತೇನೆಯೇ! ಹೊಸ ಪ್ರಪಂಚದ ಮಾಲೀಕರನ್ನಾಗಿ ಮಾಡಿ, ಶಾಂತಿ ಕೊಡಿ ಎಂದು ನೀವೇ ಕರೆಯುತ್ತೀರಿ. ನಮ್ಮನ್ನು ರೋಗದಿಂದ ಮುಕ್ತರನ್ನಾಗಿ ಮಾಡಿ ಎಂದೇನೂ ಹೇಳುವುದಿಲ್ಲ. ಸದಾಕಾಲಕ್ಕಾಗಿ ಶಾಂತಿ ಅಥವಾ ಮುಕ್ತಿ ಸಿಗುವುದಿಲ್ಲ, ಪಾತ್ರವನ್ನಂತೂ ಅಭಿನಯಿಸಲೇಬೇಕಾಗಿದೆ. ಅಂತ್ಯದಲ್ಲಿ ಬರುವವರಿಗೆ ಎಷ್ಟೊಂದು ಶಾಂತಿ ಸಿಗುತ್ತದೆ. ಇಲ್ಲಿಯವರೆಗೂ ಬರುತ್ತಲೇ ಇದ್ದಾರೆ. ಇಷ್ಟು ಸಮಯದವರೆಗೂ ಅವರು ಶಾಂತಿಧಾಮದಲ್ಲಿರುತ್ತಾರಲ್ಲವೆ. ಡ್ರಾಮಾನುಸಾರವಾಗಿ ಯಾರ ಪಾತ್ರವಿದೆಯೋ ಅವರು ಬರುತ್ತಲೇ ಇರುತ್ತಾರೆ, ಪಾತ್ರವನ್ನು ಬದಲಾಯಿಸಲು ಸಾಧ್ಯವಿಲ್ಲ. ಶಾಂತಿಧಾಮದಲ್ಲಿ ಬಹಳಷ್ಟು ಆತ್ಮಗಳಿರುತ್ತಾರೆ ಅವರು ಅಂತ್ಯದಲ್ಲಿ ಬರುತ್ತಾರೆಂದು ತಂದೆಯು ತಿಳಿಸುತ್ತಾರೆ. ಈ ಡ್ರಾಮವು ಮಾಡಿ-ಮಾಡಲ್ಪಟ್ಟಿದೆ. ಅಂತ್ಯದಲ್ಲಿ ಬರುವವರು ಅಂತ್ಯದಲ್ಲಿಯೇ ಬರಬೇಕಾಗಿದೆ. ಈ ವೃಕ್ಷವು ಮಾಡಲ್ಪಟ್ಟಿರುವುದಾಗಿದೆ, ನೀವು ತಿಳಿದುಕೊಳ್ಳುವುದಕ್ಕಾಗಿ ಈ ಚಿತ್ರಗಳನ್ನು ಮಾಡಿದ್ದಾರೆ. ಕಲ್ಪದ ಹಿಂದಿನ ರೀತಿ ಇನ್ನೂ ಅನೇಕ ಚಿತ್ರಗಳು ಬರುತ್ತಲೇ ಇರುತ್ತವೆ. 84 ಜನ್ಮಗಳ ವಿಸ್ತಾರವು ವೃಕ್ಷದ ಚಿತ್ರದಲ್ಲಿದೆ, ಡ್ರಾಮಾದ ಚಕ್ರದಲ್ಲಿಯೂ ಇದೆ. ಈಗ ಮತ್ತೆ ಏಣಿಯ ಚಿತ್ರವು ಬಂದಿದೆ, ಇದು ಮನುಷ್ಯರಿಗೆ ಗೊತ್ತಿಲ್ಲ. ಸಂಪೂರ್ಣ ಮಂಧಬುದ್ಧಿಯವರಾಗಿದ್ದಾರೆ. ಪರಮಪಿತ ಪರಮಾತ್ಮ ಜ್ಞಾನ ಸಾಗರ, ಶಾಂತಿಯ ಸಾಗರ ನಮಗೆಲ್ಲರಿಗೂ ಈ ಶರೀರದ (ಬ್ರಹ್ಮಾ) ಮೂಲಕ ಓದಿಸುತ್ತಿದ್ದಾರೆಂದು ನೀವು ಮಕ್ಕಳ ಬುದ್ಧಿಯಲ್ಲಿದೆ. ಯಾರು ಮೊಟ್ಟ ಮೊದಲು ವಿಶ್ವದ ಮಾಲೀಕರಾಗಿದ್ದರೋ ಅವರ ಶರೀರದಲ್ಲಿ ನಾನು ಬರುತ್ತೇನೆಂದು ತಂದೆಯು ತಿಳಿಸುತ್ತಾರೆ. ಅವಶ್ಯವಾಗಿ ನಾವು ಬ್ರಹ್ಮನ ಮೂಲಕ ಬ್ರಾಹ್ಮಣರಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಗೀತೆಯಲ್ಲಿ ಈ ಮಾತುಗಳೇ ಇಲ್ಲ. ಇವರು ಸ್ವಯಂ ನಾರಾಯಣ ಪೂಜೆ ಮಾಡುತ್ತಿದ್ದರು, ರೈಲಿನಲ್ಲಿ ಪ್ರಯಾಣವೂ ಮಾಡುತ್ತಿದ್ದರು, ಗೀತೆಯನ್ನೂ ಓದುತ್ತಿದ್ದರೆಂದು ತಂದೆಯು ತಿಳಿಸುತ್ತಾರೆ. ಇವರು ದೊಡ್ಡ ಧರ್ಮಾತ್ಮರೆಂದು ಮನುಷ್ಯರು ತಿಳಿದುಕೊಂಡಿದ್ದರು. ಈಗ ಈ ಎಲ್ಲಾ ಮಾತುಗಳನ್ನು ಮರೆತು ಬಿಟ್ಟಿದ್ದಾರೆ ಆದರೂ ಸಹ ಇವರು ಗೀತೆಯನ್ನು ಓದಿದ್ದಾರಲ್ಲವೆ! ತಂದೆಯು ತಿಳಿಸುತ್ತಾರೆ - ನಾನು ಎಲ್ಲವನ್ನೂ ತಿಳಿದಿದ್ದೇನೆ, ಈಗ ನೀವು ಮಕ್ಕಳು ವಿಚಾರ ಮಾಡಿ - ನಾವು ಯಾರ ಮುಂದೆ ಕುಳಿತಿದ್ದೇವೆ, ಯಾವುದರಿಂದ ವಿಶ್ವದ ಮಾಲೀಕರಾಗುತ್ತೀರಿ ಆದರೂ ಸಹ ಘಳಿಗೆ-ಘಳಿಗೆಗೂ ಏಕೆ ಮರೆತು ಹೋಗುತ್ತೀರಿ? ನಿಮಗೆ 16 ಗಂಟೆಗಳ ಕಾಲವನ್ನು ಉಚಿತವಾಗಿ ಕೊಡುತ್ತೇನೆ ಬಾಕಿ ಉಳಿದ ಸಮಯದಲ್ಲಿ ನನ್ನ ಸೇವೆಯನ್ನು ಮಾಡಿ. ನಿಮ್ಮ ಸೇವೆ ಮಾಡಿಕೊಳ್ಳುತ್ತೀರೆಂದರೆ ವಿಶ್ವದ ಸೇವೆಯೂ ಮಾಡಿದಂತಾಯಿತು. ಕೊನೆಪಕ್ಷ 8 ಗಂಟೆಗಳಕಾಲ ತಂದೆಯನ್ನು ನೆನಪು ಮಾಡುವ ಪುರುಷಾರ್ಥ ಮಾಡಿ. ಈಗ ಇಡೀ ದಿನದಲ್ಲಿ 8 ಗಂಟೆಗಳು ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲವೆ? ಯಾವಾಗ ಈ ಸ್ಥಿತಿಯನ್ನು ತಲುಪುವಿರೋ ಆಗ ಇವರು ಬಹಳ ಸರ್ವೀಸ್ ಮಾಡುತ್ತಾರೆ ತಿಳಿದುಕೊಳ್ಳುತ್ತಾರೆ. ನಾವು ತುಂಬಾ ಸೇವೆ ಮಾಡುತ್ತೇವೆಂದು ನೀವು ತಿಳಿದುಕೊಳ್ಳಬಾರದು. ಭಾಷಣವನ್ನಂತೂ ಬಹಳ ಚೆನ್ನಾಗಿ ಮಾಡುತ್ತಾರೆ ಆದರೆ ಯೋಗವಂತೂ ಇಲ್ಲ. ಯೋಗದ ಯಾತ್ರೆಯೇ ಮುಖ್ಯವಾಗಿದೆ.

ತಂದೆಯು ತಿಳಿಸುತ್ತಾರೆ - ವಿಕರ್ಮಗಳ ಹೊರೆಯು ಬಹಳ ಇದೆ ಆದ್ದರಿಂದ ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡಿ. ಎರಡು ಗಂಟೆಯಿಂದ ಐದು ಗಂಟೆಯವರೆಗೆ ಬಹಳ ಒಳ್ಳೆಯ ವಾಯುಮಂಡಲವಿರುತ್ತದೆ. ರಾತ್ರಿಯಲ್ಲಿ ಆತ್ಮಾಭಿಮಾನಿಯಾಗುತ್ತದೆ, ಇದಕ್ಕೆ ನಿದ್ರೆಯೆಂದು ಹೇಳಲಾಗುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು ಮಾಡಿ. ಈಗ ತಂದೆಯು ತಿಳಿಸುತ್ತಾರೆ - ಮನ್ಮನಾಭವ. ಇದು ಏರುವ ಕಲೆಯ ಮಂತ್ರವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1) ತಂದೆಯ ಜೊತೆ ಸೀದಾ ಮತ್ತು ಸತ್ಯವಾಗಿ ನಡೆಯಬೇಕಾಗಿದೆ. ಕಲ್ಯಾಣಕಾರಿ ತಂದೆಯ ಮಕ್ಕಳಾಗಿರುವುದರಿಂದ ಸರ್ವರ ಕಲ್ಯಾಣ ಮಾಡಬೇಕಾಗಿದೆ. ಸುಪುತ್ರ ಮಕ್ಕಳಾಗಬೇಕಾಗಿದೆ.

2) ಕರ್ಮವನ್ನು ಮಾಡುತ್ತಾ ಕೊನೆಪಕ್ಷ 8 ಗಂಟೆಗಳ ಕಾಲ ಅವಶ್ಯವಾಗಿ ನೆನಪು ಮಾಡಬೇಕಾಗಿದೆ. ನೆನಪೇ ಮುಖ್ಯವಾಗಿದೆ, ಇದರಿಂದಲೇ ವಿಕರ್ಮಗಳ ಹೊರೆಯನ್ನು ಇಳಿಸಿಕೊಳ್ಳಬೇಕಾಗಿದೆ.

ವರದಾನ:

ಪುರುಷಾರ್ಥ ಶಬ್ಧವನ್ನು ಯಥಾರ್ಥ ರೀತಿಯಿಂದ ಉಪಯೋಗ ಮಾಡುತ್ತಾ ಸದಾ ಮುಂದುವರೆಯುವ ಶ್ರೇಷ್ಠ ಪುರುಷಾರ್ಥಿ ಭವ.

ಹಲವೊಮ್ಮೆ ಪುರುಷಾರ್ಥಿ ಎಂಬ ಶಬ್ಧವೂ ಸಹ ಸೋಲುಂಟು ಮಾಡುವುದರಲ್ಲಿ ಅಥವಾ ಅಸಫಲತೆಯನ್ನು ಪ್ರಾಪ್ತಿ ಮಾಡಿಸುವುದರಲ್ಲಿ ಆಧಾರವಾಗಿ ಬಿಡುತ್ತದೆ, ಯಾವಾಗ ಯಾವುದೇ ತಪ್ಪಾಯಿತೆಂದರೆ ಹೇಳಿ ಬಿಡುತ್ತೀರಿ - ನಾವಂತು ಈಗ ಪುರುಷಾರ್ಥಿ ಆಗಿದ್ದೇವೆ. ಆದರೆ ಯಥಾರ್ಥ ಪುರುಷಾರ್ಥಿ ಎಂದಿಗೂ ಸಹ ಸೋಲನ್ನು ಅನುಭವಿಸಲು ಸಾಧ್ಯವಿಲ್ಲ ಏಕೆಂದರೆ ಪುರುಷಾರ್ಥ ಶಬ್ಧದ ಯಥಾರ್ಥ ಅರ್ಥವು ಇದೇ ಆಗಿದೆ - ಸ್ವಯಂನ್ನು ಪುರುಷ ಅರ್ಥಾತ್ ಆತ್ಮನೆಂದು ತಿಳಿದುಕೊಂಡು ನಡೆಯುವುದು. ಇಂತಹ ಆತ್ಮಿಕ ಸ್ಥಿತಿಯಲ್ಲಿ ಇರುವಂತಹ ಪುರುಷಾರ್ಥಿಗಳು ಸದಾಕಾಲಾವೂ ಗುರಿಯನ್ನು ಮುಂದಿಟ್ಟುಕೊಂಡು ನಡೆಯುತ್ತಾರೆ, ಅವರೆಂದಿಗೂ ಸಹ ನಿಲ್ಲುವುದಿಲ್ಲ, ಸಾಹಸ-ಉಲ್ಲಾಸವನ್ನು ಬಿಡುವುದಿಲ್ಲ.

ಸ್ಲೋಗನ್:

ಮಾಸ್ಟರ್ ಸರ್ವಶಕ್ತಿವಂತನ ಸ್ಮೃತಿಯಲ್ಲಿರಿ - ಈ ಸ್ಮೃತಿಯೇ ಮಾಲೀಕತ್ವದ ಸ್ಮೃತಿಯನ್ನು ತರಿಸುತ್ತದೆ.