08.12.19 Avyakt Bapdada
Kannada
Murli
18.03.85 Om Shanti Madhuban
ಸಂತುಷ್ಟತೆ
ಇಂದು ಹೃದಯರಾಮ ತಂದೆಯು
ತನ್ನ ಸ್ನೇಹಿ ಹೃದಯ ಸಿಂಹಾಸನಾಧಿಕಾರಿ ಮಕ್ಕಳೊಂದಿಗೆ ಹೃದಯದ ವಾರ್ತಾಲಾಪವನ್ನು ಮಾಡುವುದಕ್ಕಾಗಿ
ಬಂದಿದ್ದಾರೆ. ಹೃದಯರಾಮನು ತನ್ನ ಸತ್ಯ ಹೃದಯವಿರುವವರೊಂದಿಗೆ ಹೃದಯದ ಲೇವಾದೇವಿ ಮಾಡಲು, ಹೃದಯದ
ಕ್ಷೇಮ ಸಮಾಚಾರವನ್ನು ಕೇಳುವುದಕ್ಕಾಗಿ ಬಂದಿದ್ದಾರೆ. ಆತ್ಮಿಕ ತಂದೆಯು ಆತ್ಮರೊಂದಿಗೆ
ವಾರ್ತಾಲಾಪವನ್ನು ಮಾಡುತ್ತಾರೆ. ಈ ಆತ್ಮಿಕ ವಾರ್ತಾಲಾಪವು ಕೇವಲ ಈ ಸಮಯದಲ್ಲಷ್ಟೇ ಅನುಭವ ಮಾಡಲು
ಸಾಧ್ಯವಾಗುವುದು. ತಾವು ಆತ್ಮರಲ್ಲಿ ಇಷ್ಟೂ ಸ್ನೇಹದ ಶಕ್ತಿಯಿದೆ, ವಾರ್ತಾಲಾಪವನ್ನು
ಮಾಡುವುದಕ್ಕಾಗಿ ಆತ್ಮರ ರಚೈತನಾದ ತಂದೆಯನ್ನೂ ಸಹ, ನಿರ್ವಾಣದಿಂದ ವಾಣಿಯಲ್ಲಿ ಕರೆದುಕೊಂಡು
ಬರುತ್ತೀರಿ. ಇಂತಹ ಶ್ರೇಷ್ಠಾತ್ಮರಾಗಿದ್ದೀರಿ, ಯಾರು ಬಂಧನಮುಕ್ತ ತಂದೆಯನ್ನೂ ಸಹ ಸ್ನೇಹದ
ಬಂಧನದಲ್ಲಿ ಬಂಧಿಸಿ ಬಿಡುತ್ತೀರಿ. ಪ್ರಪಂಚದವರು ಬಂಧನಗಳಿಂದ ಮುಕ್ತರನ್ನಾಗಿ ಮಾಡುವವರೆಂದು
ಹೇಳುತ್ತಾ ಕರೆಯುತ್ತಿದ್ದಾರೆ ಮತ್ತು ಇಂತಹ ಬಂಧನಮುಕ್ತ ತಂದೆಯು, ಮಕ್ಕಳ ಸ್ನೇಹದ ಬಂಧನದಲ್ಲಿ ಸದಾ
ಬಂಧಿತನಾಗಿದ್ದಾರೆ. ಬಂಧಿಸುವುದರಲ್ಲಿ ಬುದ್ಧಿವಂತರಿದ್ದೀರಿ. ಯಾವಾಗಲೇ ನೆನಪು ಮಾಡುತ್ತೀರಿ, ಆಗ
ತಂದೆಯು ಹಾಜಿರ್ ಆಗುವವರಲ್ಲವೆ, ಪ್ರಭು ಹಾಜಿರ್ ಆಗಿದ್ದಾರೆ. ಅಂದಮೇಲೆ ಇಂದು ವಿಶೇಷವಾಗಿ ಡಬಲ್
ವಿದೇಶಿ ಮಕ್ಕಳೊಂದಿಗೆ ವಾರ್ತಾಲಾಪ ಮಾಡುವುದಕ್ಕಾಗಿ ಬಂದಿದ್ದಾರೆ. ಈಗ ಸೀಜನ್ನಿನಲ್ಲಿಯೂ ವಿಶೇಷ
ಟರ್ನ್ ಸಹ ಡಬಲ್ ವಿದೇಶಿಗಳದಾಗಿದೆ. ಮೆಜಾರಿಟಿ ಡಬಲ್ ವಿದೇಶಿಗಳೇ ಬಂದಿದ್ದಾರೆ. ಮಧುಬನ
ನಿವಾಸಿಗಳಂತು ಮಧುಬನದ ಶ್ರೇಷ್ಠ ಸ್ಥಾನ ನಿವಾಸಿಗಳು ಇದ್ದೇ ಇರುತ್ತಾರೆ. ಒಂದೇ ಸ್ಥಾನದಲ್ಲಿ
ಕುಳಿತು ವಿಶ್ವದ ಅನೇಕ ಪ್ರಕಾರದ ಆತ್ಮರ ಮಿಲನದ ಮೇಳವನ್ನು ನೋಡುವವರಾಗಿದ್ದಾರೆ. ಯಾರು ಬರುತ್ತಾರೆ
ಅವರು ಹೋಗುತ್ತಾರೆ, ಆದರೆ ಮಧುಬನ ನಿವಾಸಿಗಳಂತು ಸದಾ ಇರುತ್ತಾರೆ!
ಇಂದು ವಿಶೇಷವಾಗಿ ಡಬಲ್ ವಿದೇಶಿ ಮಕ್ಕಳೊಂದಿಗೆ ಕೇಳುತ್ತಿದ್ದೇವೆ - ಎಲ್ಲರೂ ಸಂತುಷ್ಠ ಮಣಿಯಾಗಿ
ಬಾಪ್ದಾದಾರವರ ಕಿರೀಟದಲ್ಲಿ ಹೊಳೆಯುತ್ತಿದ್ದೀರಾ? ಎಲ್ಲರೂ ಸಂತುಷ್ಠ ಮಣಿಯಾಗಿದ್ದೀರಾ? ಸದಾ
ಸಂತುಷ್ಠವಾಗಿದ್ದೀರಾ? ಕೆಲವೊಮ್ಮೆ ಸ್ವಯಂನಿಂದ ಅಸಂತುಷ್ಠ ಅಥವಾ ಕೆಲವೊಮ್ಮೆ ಬ್ರಾಹ್ಮಣ ಆತ್ಮರಿಂದ
ಅಸಂತುಷ್ಠ ಅಥವಾ ಕೆಲವೊಮ್ಮೆ ತಮ್ಮ ಸಂಸ್ಕಾರಗಳಿಂದ ಅಸಂತುಷ್ಠ ಅಥವಾ ಕೆಲವೊಮ್ಮೆ ವಾಯುಮಂಡಲದ
ಪ್ರಭಾವದಿಂದ ಅಸಂತುಷ್ಠರಂತು ಆಗುವುದಿಲ್ಲವಲ್ಲವೆ! ಸದಾ ಎಲ್ಲಾಮಾತುಗಳಿಂದ ಸಂತುಷ್ಠವಿದ್ದೀರಾ?
ಕೆಲವೊಮ್ಮೆ ಸಂತುಷ್ಠ ಕೆಲವೊಮ್ಮೆ ಅಸಂತುಷ್ಠರಾಗಿರುವವರಿಗೆ ಸಂತುಷ್ಠ ಮಣಿ ಎಂದು ಹೇಳುವರೇ?
ತಾವೆಲ್ಲರೂ ಹೇಳಿದಿರಲ್ಲವೆ - ನಾವು ಸಂತುಷ್ಠ ಮಣಿಯಾಗಿದ್ದೇವೆ. ಮತ್ತೆ ಈ ರೀತಿಯಂತು
ಹೇಳುವುದಿಲ್ಲವೇ - ನಾವು ಸಂತುಷ್ಠವಾಗಿದ್ದೇವೆ. ಆದರೆ ಅನ್ಯರು ಅಸಂತುಷ್ಠಗೊಳಿಸುವರು. ಏನೇ ಆಗಲಿ
ಆದರೆ ಸಂತುಷ್ಠ ಆತ್ಮರೇನಿದ್ದೀರಿ, ಅವರೆಂದಿಗೂ ಸಹ ತಮ್ಮ ಸಂತುಷ್ಠತೆಯ ವಿಶೇಷತೆಯನ್ನು ಬಿಡಲು
ಸಾಧ್ಯವಿಲ್ಲ. ಸಂತುಷ್ಠತೆಯು ಬ್ರಾಹ್ಮಣ ಜೀವನದ ವಿಶೇಷ ಗುಣವೆಂದಾದರೂ ಹೇಳಿ ಅಥವಾ ಖಜಾನೆಯೆಂದಾದರೂ
ಹೇಳಿ ಅಥವಾ ವಿಶೇಷವಾಗಿ ಜೀವನದ ಶೃಂಗಾರವಾಗಿದೆ. ಹೇಗೆ ಯಾವುದೇ ಪ್ರಿಯವಾದ ವಸ್ತುವಾಗಿರುತ್ತದೆ, ಆ
ಪ್ರಿಯ ವಸ್ತುವನ್ನೆಂದಿಗೂ ಬಿಡುವುದಿಲ್ಲ. ಸಂತುಷ್ಠತೆಯು ವಿಶೇಷತೆಯಾಗಿದೆ. ಸಂತುಷ್ಠತೆಯು
ಬ್ರಾಹ್ಮಣ ಜೀವನದ ವಿಶೇಷ ಪರಿವರ್ತನೆಯ ದರ್ಪಣ (ಕನ್ನಡಿ)ಯಾಗಿದೆ. ಸಾಧಾರಣ ಜೀವನ ಮತ್ತು ಬ್ರಾಹ್ಮಣ
ಜೀವನ ಎರಡಿದೆ. ಬ್ರಾಹ್ಮಣ ಜೀವನ ಅರ್ಥಾತ್ ಕೆಲವೊಮ್ಮೆ ಸಂತುಷ್ಠ ಕೆಲವೊಮ್ಮೆ ಅಸಂತುಷ್ಠ.
ಬ್ರಾಹ್ಮಣ ಜೀವನದಲ್ಲಿ ಸಂತುಷ್ಠತೆಯ ವಿಶೇಷತೆಯನ್ನು ನೋಡಿ ಅಜ್ಞಾನಿಗಳೂ ಸಹ ಪ್ರಭಾವಿತರಾಗುತ್ತಾರೆ.
ಈ ಪರಿವರ್ತನೆಯೇನಿದೆ, ಅದು ಅನೇಕ ಆತ್ಮರಲ್ಲಿ ಪರಿವರ್ತನೆ ಮಾಡಿಕೊಳ್ಳಲು ನಿಮಿತ್ತವಾಗಿ ಬಿಡುತ್ತದೆ.
ಎಲ್ಲರ ಮುಖದಿಂದ ಇದೇ ಧ್ವನಿ ಬರುತ್ತದೆ, ಇವರು ಸದಾ ಸಂತುಷ್ಠರು ಅರ್ಥಾತ್ ಖುಷಿಯಾಗಿರುತ್ತಾರೆ.
ಎಲ್ಲಿ ಸಂತುಷ್ಠತೆಯಿದೆ ಅಲ್ಲಿ ಅವಶ್ಯವಾಗಿ ಖುಷಿಯಿದೆ. ಅಸಂತುಷ್ಠತೆಯು ಖುಷಿಯನ್ನು ಮಾಯ ಮಾಡಿ
ಬಿಡುತ್ತದೆ. ಬ್ರಾಹ್ಮಣ ಜೀವನದ ಮಹಿಮೆಯು ಇದೇ ಆಗಿದೆ. ಸದಾ ಸಂತುಷ್ಠರಿಲ್ಲವೆಂದರೆ ಸಾಧಾರಣ
ಜೀವನವಿದೆ. ಸಂತುಷ್ಠತೆಯು ಸಫಲತೆಗೆ ಸಹಜ ಆಧಾರವಾಗಿದೆ. ಸಂತುಷ್ಠತೆಯು ಸರ್ವ ಬ್ರಾಹ್ಮಣ ಪರಿವಾರದ
ಸ್ನೇಹಿಯನ್ನಾಗಿ ಮಾಡುವುದರಲ್ಲಿ ಶ್ರೇಷ್ಠ ಸಾಧನವಾಗಿದೆ. ಯಾರು ಸಂತುಷ್ಠರಾಗಿರುತ್ತಾರೆ, ಅವರ
ಪ್ರತಿ ಸ್ವತಹವಾಗಿಯೇ ಎಲ್ಲರ ಸ್ನೇಹವಿರುತ್ತದೆ. ಸಂತುಷ್ಠ ಆತ್ಮರನ್ನು ಸದಾ ಎಲ್ಲರೂ ತಾವಾಗಿಯೇ
ಸಮೀಪ ತರುವ ಅಥವಾ ಪ್ರತಿಯೊಂದು ಶ್ರೇಷ್ಠ ಕಾರ್ಯದಲ್ಲಿ ಸಹಯೋಗಿಯನ್ನಾಗಿ ಮಾಡುವುದರ ಪ್ರಯತ್ನ
ಪಡುತ್ತಾರೆ. ಅವರಿಗೆ ಪರಿಶ್ರಮವೆನಿಸುವುದಿಲ್ಲ - ನನ್ನನ್ನು ಸಮೀಪ ತನ್ನಿರಿ ಎಂದು. ನನ್ನನ್ನು
ಸಹಯೋಗಿಯನ್ನಾಗಿ ಮಾಡಿಕೊಳ್ಳಿರಿ ಅಥವಾ ನನ್ನನ್ನು ವಿಶೇಷ ಆತ್ಮರ ಲಿಸ್ಟ್ ನಲ್ಲಿ ತನ್ನಿರಿ, ಇದನ್ನು
ಯೋಚಿಸಬೇಕಾಗಿರುವುದಿಲ್ಲ, ಹೇಳಬೇಕಾಗಿರುವುದಿಲ್ಲ. ಸಂತುಷ್ಠತೆಯ ವಿಶೇಷತೆಯು ತಾನಾಗಿಯೇ
ಪ್ರತಿಯೊಂದು ಕಾರ್ಯದಲ್ಲಿ ಗೋಲ್ಡನ್ ಚಾನ್ಸ್ ಲರನ್ನಾಗಿ ಮಾಡಿ ಬಿಡುತ್ತದೆ. ಸ್ವತಹವಾಗಿಯೇ
ಕಾರ್ಯಾರ್ಥವಾಗಿ ನಿಮಿತ್ತವಾಗಿರುವ ಆತ್ಮರಿಗೆ ಸಂತುಷ್ಠ ಆತ್ಮರ ಬಗ್ಗೆ ಸಂಕಲ್ಪ ಬಂದೇ ಬರುತ್ತದೆ
ಮತ್ತು ಚಾನ್ಸ್ ಸಿಗುತ್ತಲೇ ಇರುತ್ತದೆ. ಸಂತುಷ್ಠತೆಯು ಸದಾ ಸರ್ವರ ಸ್ವಭಾವ-ಸಂಸ್ಕಾರಗಳನ್ನು
ಸೇರಿಸುವಂತದ್ದಾಗಿರುತ್ತದೆ. ಸಂತುಷ್ಠ ಆತ್ಮರೆಂದಿಗೂ ಯಾವುದೇ ಸ್ವಭಾವ-ಸಂಸ್ಕಾರಗಳಿಂದ
ಗಾಬರಿಯಾಗುವವರಾಗಿರುವುದಿಲ್ಲ. ಇಂತಹ ಸಂತುಷ್ಠ ಆತ್ಮರಾಗಿದ್ದೀರಲ್ಲವೆ. ಹೇಗೆ ಭಗವಂತನು ತಮ್ಮ ಬಳಿ
ಬಂದರು, ತಾವು ಹೋಗಲಿಲ್ಲ. ಭಾಗ್ಯವು ತಾನಾಗಿಯೇ ತಮ್ಮ ಬಳಿ ಬಂದಿತು. ಮನೆಯಲ್ಲಿ ಕುಳಿತಿದ್ದಂತೆಯ
ಭಗವಂತನು ಸಿಕ್ಕಿದರು, ಭಾಗ್ಯ ಸಿಕ್ಕಿತು. ಮನೆಯಲ್ಲಿ ಕುಳಿತುಕೊಂಡೇ ಸರ್ವ ಖಜಾನೆಗಳ ಬೀಗದ ಕೈ
ಸಿಕ್ಕಿತು. ಯಾವಾಗ ಬೇಕು, ಯಾವ ಖಜಾನೆಯು ಬೇಕೋ ಅದು ತಮ್ಮದಾಗಿದೆ ಏಕೆಂದರೆ ಅಧಿಕಾರಿಯಾಗಿ
ಬಿಟ್ಟಿರಲ್ಲವೆ. ಅಂದಮೇಲೆ ಹೀಗೆ ಸರ್ವರ ಸಮೀಪ ಬರುವ, ಸೇವೆಯಲ್ಲಿ ಸಮೀಪ ಬರುವ ಅವಕಾಶವೂ ಸಹ
ಸ್ವತಹವಾಗಿಯೇ ಸಿಗುತ್ತದೆ. ವಿಶೇಷತೆಯು ಸ್ವತಹವಾಗಿಯೇ ಮುಂದುವರೆಸುತ್ತದೆ. ಯಾರು ಸದಾ
ಸಂತುಷ್ಠವಾಗಿರುತ್ತಾರೆ, ಅವರೊಂದಿಗೆ ಸ್ವತಹವಾಗಿಯೇ ಎಲ್ಲರ ಹೃದಯದ ಪ್ರೀತಿಯಿರುತ್ತದೆ. ಬಾಹ್ಯ
ಪ್ರೀತಿಯಲ್ಲ. ಒಂದಿರುತ್ತದೆ - ಯಾರನ್ನೇ ರಾಜಿ ಮಾಡುವುದಕ್ಕಾಗಿ ಬಾಹ್ಯ ಪ್ರೀತಿ ಮಾಡುವುದು.
ಇನ್ನೊಂದಿರುತ್ತದೆ - ಹೃದಯದ ಪ್ರೀತಿ. ಬೇಸರವಾಗಬಾರದು, ಅದಕ್ಕಾಗಿ ಪ್ರೀತಿ ಮಾಡಬೇಕಾಗುತ್ತದೆ.
ಆದರೆ ಆ ಪ್ರೀತಿಯನ್ನು ಸದಾ ತೆಗೆದುಕೊಳ್ಳುವ ಪಾತ್ರರಾಗುವುದಿಲ್ಲ. ಸಂತುಷ್ಠ ಆತ್ಮರಿಗೆ ಸದಾ
ಎಲ್ಲರ ಹೃದಯದ ಪ್ರೀತಿಯು ಸಿಗುತ್ತದೆ. ಭಲೆ ಯಾರೇ ಹೊಸಬರಿರಬಹುದು ಅಥವಾ ಹಳಬರಿರಬಹುದು, ಯಾರೇ
ಯಾರನ್ನೇ ಪರಿಚಯದ ರೂಪದಿಂದ ತಿಳಿದಿರಬಹುದು ಅಥವಾ ತಿಳಿಯದೇ ಇರಬಹುದು. ಆದರೆ ಸಂತುಷ್ಠತೆಯು ಆ
ಆತ್ಮನ ಪರಿಚಯವನ್ನು ಕೊಡಿಸುತ್ತದೆ. ಪ್ರತಿಯೊಬ್ಬರಲ್ಲಿ ಮನಸ್ಸಾಗುತ್ತದೆ - ಇವರೊಂದಿಗೆ ಮಾತನಾಡೋಣ,
ಇವರೊಂದಿಗೆ ಕುಳಿತುಕೊಳ್ಳೋಣ. ಅಂದಮೇಲೆ ಹೀಗೆ ಸಂತುಷ್ಠರಾಗಿದ್ದೀರಾ? ಪರಿಪಕ್ವವಲ್ಲವೆ! ಈ
ರೀತಿಯಂತು ಹೇಳುವುದಿಲ್ಲವೇ- ಆಗುತ್ತಿದ್ದೇವೆ. ಇಲ್ಲವೇ! ಆಗಿ ಬಿಟ್ಟಿದ್ದೀರಾ.
ಸಂತುಷ್ಠ ಆತ್ಮರು ಸದಾ ಇರುವುದೇ ಮಾಯಾಜೀತರು. ಇದು ಮಾಯಾಜೀತರಾಗುವ ಸಭೆಯಾಗಿದೆಯಲ್ಲವೆ. ಮಾಯೆಯಿಂದ
ಗಾಬರಿಯಾಗುವವರಂತು ಅಲ್ಲ ಅಲ್ಲವೆ! ಮಾಯೆಯು ಯಾರ ಬಳಿ ಬರುತ್ತದೆ? ಎಲ್ಲರ ಬಳಿ
ಬರುತ್ತಿರುತ್ತದೆಯಲ್ಲವೆ! ಇಂತಹವರ್ಯಾರಾದರೂ ಇದ್ದೀರಿ, ನಮ್ಮ ಬಳಿ ಮಾಯೆಯು ಬರುವುದೇ ಇಲ್ಲ.
ಎಲ್ಲರ ಬಳಿಯೂ ಬರುತ್ತದೆ ಆದರೆ ಕೆಲವರು ಗಾಬರಿಯಾಗುತ್ತಾರೆ, ಕೆಲವರು ಗುರುತಿಸಿ ಬಿಡುತ್ತಾರೆ,
ಆದ್ದರಿಂದ ರಕ್ಷಿಸಿಕೊಳ್ಳುತ್ತಾರೆ. ಮರ್ಯಾದೆಯ ಗೆರೆಯೊಳಗೆ ಇರುವಂತಹ ತಂದೆಯ ಆಜ್ಞಾಕಾರಿ ಮಕ್ಕಳು,
ಮಾಯೆಯನ್ನು ದೂರದಿಂದಲೂ ಗುರುತಿಸಿ ಬಿಡುತ್ತಾರೆ. ಗುರುತಿಸುವುದರಲ್ಲಿ ತಡ ಮಾಡುತ್ತಾರೆ ಅಥವಾ
ಗ್ಲಾನಿ ಮಾಡುತ್ತಾರೆಂದರೆ ಮಾಯೆಯಿಂದ ಗಾಬರಿಯಾಗಿ ಬಿಡುತ್ತಾರೆ. ಹೇಗೆ ನೆನಪಾರ್ಥದಲ್ಲಿ ಕಥೆಯನ್ನು
ಕೇಳಿದ್ದೀರಾ - ಸೀತೆಯು ಏಕೆ ಮೋಸಕ್ಕೊಳಗಾದಳು? ಏಕೆಂದರೆ ಗುರುತಿಸಲಿಲ್ಲ. ಮಾಯೆಯ ಸ್ವರೂಪವನ್ನು
ಗುರುತಿಸದಿರುವ ಕಾರಣದಿಂದ ಮೋಸ ಹೋದಳು. ಒಂದುವೇಳೆ ಇವನು ಬ್ರಾಹ್ಮಣನಲ್ಲ, ಭಿಕಾರಿಯಲ್ಲ,
ರಾವಣನೆಂದು ಗುರುತಿಸಿ ಬಿಟ್ಟಿದ್ದರೆ, ಶೋಕವಾಟಿಕೆಯ ಇಷ್ಟೂ ಅನುಭವವನ್ನು
ಮಾಡಬೇಕಾಗಿರುತ್ತಿರಲಿಲ್ಲ. ಆದರೆ ತಡವಾಗಿ ಗುರುತಿಸಿದಳು ಆದ್ದರಿಂದ ಮೋಸ ಹೋದಳು ಮತ್ತು ಮೋಸದ
ಕಾರಣದಿಂದ ದುಃಖವನ್ನನುಭವಿಸಬೇಕಾಯಿತು. ಯೋಗಿಯಿಂದ ವಿಯೋಗಿಯಾಗಿ ಬಿಟ್ಟಳು. ಸದಾ
ಜೊತೆಯಿರುವುದರಿಂದ ದೂರವಾಗಿ ಬಿಟ್ಟಳು. ಪ್ರಾಪ್ತಿ ಸ್ವರೂಪ ಆತ್ಮನಿಂದ ಕರೆಯುವ ಆತ್ಮನಾಗಿ ಬಿಟ್ಟರು.
ಕಾರಣ? ಗುರುತಿಸುವುದರಲ್ಲಿ ಕೊರತೆ. ಮಾಯೆಯ ರೂಪವನ್ನು ಗುರುತಿಸುವ ಶಕ್ತಿಯು ಕಡಿಮೆಯಿರುವ
ಕಾರಣದಿಂದ ಮಾಯೆಯನ್ನು ಓಡಿಸುವುದಕ್ಕೆ ಬದಲು ಸ್ವಯಂ ಗಾಬರಿಯಾಗಿ ಬಿಡುತ್ತಾರೆ. ಗುರುತಿಸುವುದರಲ್ಲಿ
ಕೊರತೆಯೇಕೆ ಆಗುತ್ತದೆ, ಸಮಯದಲ್ಲಿ ಗುರುತಿಸಲು ಬರುವುದಿಲ್ಲ, ನಂತರವೇಕೆ ಬರುತ್ತದೆ. ಇದರ
ಕಾರಣವೇನು? ಏಕೆಂದರೆ ಸದಾ ತಂದೆಯ ಶ್ರೇಷ್ಠ ಮತದಂತೆ ನಡೆಯುವುದಿಲ್ಲ. ಕೆಲವೊಮ್ಮೆ ನೆನಪು
ಮಾಡುತ್ತಾರೆ, ಕೆಲವೊಮ್ಮೆ ಇಲ್ಲ. ಕೆಲವು ಸಮಯದಲ್ಲಿ ಉಮ್ಮಂಗ-ಉತ್ಸಾಹದಲ್ಲಿರುತ್ತಾ, ಕೆಲವೊಮ್ಮೆ
ಇರುವುದಿಲ್ಲ. ಯಾರು ಸದಾ ಆಜ್ಞೆಯನ್ನು ಉಲ್ಲಂಘಿಸುತ್ತಾರೆ ಅರ್ಥಾತ್ ಆಜ್ಞೆಯ ಗೆರೆಯೊಳಗೆ
ಇಲ್ಲದಿರುವ ಕಾರಣದಿಂದ, ಮಾಯೆಯು ಸಮಯದಲ್ಲಿ ಮೋಸ ಮಾಡಿ ಬಿಡುತ್ತದೆ. ಮಾಯೆಯಲ್ಲಿ ಪರಿಶೀಲಿಸುವ
ಶಕ್ತಿಯು ಬಹಳಷ್ಟಿರುತ್ತದೆ. ಮಾಯೆಯು ನೋಡುತ್ತದೆ - ಈ ಸಮಯದಲ್ಲಿ ಇವರು ಬಲಹೀನರಿದ್ದಾರೆ. ಆಗ ಈ
ಪ್ರಕಾರದ ಬಲಹೀನತೆಯ ಮೂಲಕ ಇವರನ್ನು ನನ್ನವರನ್ನಾಗಿ ಮಾಡಿಕೊಳ್ಳಬಹುದು. ಮಾಯೆಯು ಬರುವ ಮಾರ್ಗವೇ
ಆಗಿದೆ - ಬಲಹೀನತೆ. ಸ್ವಲ್ಪವೇನಾದರೂ ಮಾರ್ಗ ಸಿಕ್ಕಿತೆಂದರೆ ತಕ್ಷಣದಲ್ಲಿ ತಲುಪಿ ಬಿಡುತ್ತದೆ.
ಹೇಗೆ ಇತ್ತೀಚೆಗೆ ಕಳ್ಳನೇನು ಮಾಡುತ್ತಾನೆ! ಬಾಗಿಲು ಭಲೆ ಬಂಧ್ ಆಗಿರಲಿ, ಆದರೆ ವೆಂಟಿಲೇಟರ್ನಿಂದಲೂ
ಬಂದು ಬಿಡುತ್ತಾನೆ. ಸ್ವಲ್ಪವೇನಾದರೂ ಸಂಕಲ್ಪದಲ್ಲಿ ಬಲಹೀನತರಾಗುವುದು ಅರ್ಥಾತ್ ಮಾಯೆಗೆ
ಮಾರ್ಗವನ್ನು ಕೊಡುವುದು. ಆದ್ದರಿಂದ ಮಯಾಜೀತರಾಗುವ ಬಹಳ ಸಹಜ ಸಾಧನವಾಗಿದೆ - ಸದಾ ತಂದೆಯ ಜೊತೆಯಿರಿ.
ಜೊತೆಯಿರುವುದು ಅರ್ಥಾತ್ ಸ್ವತಹವಾಗಿಯೇ ಮರ್ಯಾದೆಯ ಗೆರೆಯೊಳಗೆ ಇರುವುದು. ಒಂದೊಂದು ವಿಕಾರದ ಹಿಂದೆ
ವಿಜಯಿಯಾಗುವ ಪರಿಶ್ರಮದಿಂದ ಮುಕ್ತರಾಗಿ ಬಿಡುತ್ತೀರಿ. ಜೊತೆಯಿರುತ್ತೀರೆಂದರೆ ಸ್ವತಹವಾಗಿಯೇ
ತಂದೆಯಂತೆ ತಾವು ಆಗಿ ಬಿಡುತ್ತೀರಿ. ಸಂಗದ ರಂಗು ಸ್ವತಹವಾಗಿಯೇ ಏರಿ ಬಿಡುತ್ತದೆ. ಬೀಜವನ್ನು
ಬಿಟ್ಟು ಕೇವಲ ರೆಂಬೆಗಳನ್ನು ತುಂಡರಿಸುವ ಕಷ್ಟ ಪಡಬೇಡಿ. ಇಂದು ಕಾಮ ಜೀತರಾಗಿ ಬಿಟ್ಟೆವು, ನೆನ್ನೆ
ಕ್ರೋಧಜೀತರಾಗಿ ಬಿಟ್ಟೆವು, ಅಲ್ಲ. ನಾವಿರುವುದೇ ಸದಾ ವಿಜಯಿ. ಯಾವಾಗ ಬೀಜರೂಪನ ಮೂಲಕ ಬೀಜವನ್ನು
ಸಮಾಪ್ತಿ ಮಾಡಿ ಬಿಡುತ್ತೀರಿ, ಮತ್ತೆ ಮತ್ತೆ ಪರಿಶ್ರಮ ಪಡುವುದರಿಂದ ಸ್ವತಹವಾಗಿಯೇ ಮುಕ್ತರಾಗಿ
ಬಿಡುತ್ತೀರಿ. ಕೇವಲ ಬೀಜರೂಪನನ್ನು ಜೊತೆಯಿಟ್ಟುಕೊಳ್ಳಿರಿ. ನಂತರ ಈ ಮಾಯೆಯ ಬೀಜವು ಹೀಗೆ ಭಸ್ಮವಾಗಿ
ಬಿಡುತ್ತದೆ, ಅದು ಮತ್ತೆಂದಿಗೂ ಸಹ ಬೀಜದಿಂದ ಅಂಶವನ್ನೂ ಹೊರ ತೆಗೆಯಲು ಸಾಧ್ಯವಾಗುವುದಿಲ್ಲ.
ಹಾಗಾದರೆ ಜೊತೆಯಿರಿ, ಸಂತುಷ್ಠವಿರುತ್ತೀರೆಂದರೆ ಮಾಯೆಯೇನು ಮಾಡಬಲ್ಲದು! ಸಮರ್ಪಣೆಯಾಗಿ ಬಿಡುತ್ತದೆ.
ಮಾಯೆಯನ್ನು ಸಮರ್ಪಣೆ ಮಾಡುವುದು ಬರುವುದಿಲ್ಲವೇ? ಒಂದುವೇಳೆ ಸ್ವಯಂ ಸಮರ್ಪಣೆಯಾಗಿರುತ್ತೀರೆಂದರೆ
ಮಾಯೆಯೂ ಸಹ ಅವರ ಮುಂದೆ ಸಮರ್ಪಣೆಯಾಗಿದ್ದೇ ಇರುತ್ತದೆ. ಅಂದಮೇಲೆ ಮಾಯೆಯನ್ನು ಸಮರ್ಪಣೆ ಮಾಡಿದಿರಾ
ಅಥವಾ ಈಗ ತಯಾರಿ ಮಾಡಿಕೊಳ್ಳುತ್ತಿದ್ದೀರಾ? ಕ್ಷೇಮ ಸಮಾಚಾರವೇನಿದೆ? ಹೇಗೆ ಸಮರ್ಪಣೆಯಾಗುವ ತಮ್ಮ
ಸಮಾರೋಹವನ್ನು ಆಚರಿಸುತ್ತೀರಿ ಹಾಗೆಯೇ ಮಾಯೆಯನ್ನು ಸಮರ್ಪಣೆ ಮಾಡುವ ಸಮಾರೋಹವನ್ನು ಆಚರಿಸಿ
ಬಿಟ್ಟಿರಾ ಅಥವಾ ಆಚರಿಸಬೇಕೆ? ಹೋಲಿಯಾಗಿ ಬಿಟ್ಟಿದ್ದೀರಿ ಅಂದರೆ ಸಮಾರೋಹವಾಯಿತು, ಸುಟ್ಟು ಹೋಯಿತು.
ನಂತರ ಅಲ್ಲಿ ಹೋಗಿ ಹೀಗೆ ಪತ್ರವನ್ನಂತು ಬರೆಯುವುದಿಲ್ಲವೇ - ಏನು ಮಾಡಲಿ, ಮಾಯೆಯು ಬಂದು ಬಿಟ್ಟಿತು.
ಖುಷಿಯ ಸಮಾಚಾರದ ಪತ್ರವನ್ನು ಬರೆಯುತ್ತೀರಲ್ಲವೆ. ಎಷ್ಟು ಸಮರ್ಪಣಾ ಸಮಾರೋಹವನ್ನು ಆಚರಿಸುವುದು,
ನಮ್ಮದಂತು ಆಗಿ ಬಿಟ್ಟಿತು ಆದರೆ ಅನ್ಯ ಆತ್ಮರ ಮೂಲಕವೂ ಸಹ ಮಾಯೆಯನ್ನು ಸಮರ್ಪಣೆ ಮಾಡಿಸಿದೆವು,
ಇಂತಹ ಸಮಾಚಾರವನ್ನು ಬರೆಯುತ್ತೀರಲ್ಲವೆ. ಒಳ್ಳೆಯದು.
ಎಷ್ಟೊಂದು ಉಮ್ಮಂಗ-ಉತ್ಸಾಹದಿಂದ ಬಂದಿದ್ದೀರಿ, ಅಷ್ಟೇ ಬಾಪ್ದಾದಾರವರೂ ಸಹ ಸದಾ ಮಕ್ಕಳನ್ನು ಇಷ್ಟು
ಉಮ್ಮಂಗ-ಉತ್ಸಾಹದಿಂದ ಸಂತುಷ್ಠ ಆತ್ಮನ ರೂಪದಲ್ಲಿ ನೋಡ ಬಯಸುತ್ತಾರೆ. ಲಗನ್ ಇದ್ದೇ ಇದೆ. ಲಗನ್ನಿನ
ಸಂಕೇತವಾಗಿದೆ - ಇಷ್ಟೂ ದೂರದಿಂದ ಸಮೀಪದಲ್ಲಿ ತಲುಪಿ ಬಿಟ್ಟಿದ್ದೀರಿ. ಹಗಲು-ರಾತ್ರಿ ಲಗನ್ನಿನಿಂದ
ದಿನವನ್ನು ಎಣಿಕೆ ಮಾಡುತ್ತಾ-ಮಾಡುತ್ತಾ ಇಲ್ಲಿ ತಲುಪಿ ಬಿಟ್ಟಿರಿ. ಲಗನ್ ಇಲ್ಲದಿದ್ದರೆ ತಲುಪುವುದೂ
ಸಹ ಕಷ್ಟವಾಗುತ್ತದೆ. ಲಗನ್ ಇದೆ, ಇದರಲ್ಲಂತು ಪಾಸ್ ಆಗಿದ್ದೀರಿ. ಪಾಸ್ ಸರ್ಟಿಫಿಕೇಟ್ ಸಿಕ್ಕಿ
ಬಿಟ್ಟಿತಲ್ಲವೆ. ಪ್ರತಿಯೊಂದು ವಿಷಯದಲ್ಲಿ ಪಾಸ್. ಆದರೂ ಬಾಪ್ದಾದಾರವರು ಮಕ್ಕಳಿಗೆ ಅವಕಾಶವನ್ನು
ಕೊಡುತ್ತಾರೆ ಏಕೆಂದರೆ ಗುರುತಿಸುವ ಶಕ್ತಿಯು ತೀಕ್ಷ್ಣವಾಗಿದೆ. ದೂರವಿರುತ್ತಿದ್ದರೂ ಸಹ ತಂದೆಯನ್ನು
ಗುರುತಿಸಿ ಬಿಟ್ಟಿರಿ. ಜೊತೆ ಅರ್ಥಾತ್ ದೇಶದಲ್ಲಿರುವವರು ಗುರುತಿಸಲು ಸಾಧ್ಯವಾಗಲಿಲ್ಲ. ಆದರೆ
ತಾವುಗಳು ದೂರ ಕುಳಿತುಕೊಂಡೇ ಗುರುತಿಸಿ ಬಿಟ್ಟಿರಿ. ಗುರುತಿಸುತ್ತಾ ತಂದೆಯನ್ನು ತನ್ನವರನ್ನಾಗಿ
ಮಾಡಿಕೊಂಡಿರಿ ಅಥವಾ ತಂದೆಯ ಮಗುವಾದಿರಿ. ಇದಕ್ಕಾಗಿ ಬಾಪ್ದಾದಾರವರು ವಿಶೇಷ ಅವಕಾಶವನ್ನು
ಕೊಡುತ್ತಾರೆ. ಹೇಗೆ ಗುರುತಿಸುವುದರಲ್ಲಿ ಮುಂದೆ ಹೋದಿರಿ, ಹಾಗೆಯೇ ಮಾಯಾಜೀತರಾಗುವುದರಲ್ಲಿಯೂ
ನಂಬರ್ವನ್ ಆಗಿ ಸದಾ ತಂದೆಯ ಅವಕಾಶವನ್ನು ತೆಗೆದುಕೊಳ್ಳುವ ಯೋಗ್ಯರೂ ಸಹ ಅವಶ್ಯವಾಗಿ ಆಗುತ್ತೀರಿ.
ಮಾಯೆಯಿಂದ ಗಾಬರಿಯಾಗುವ ಆತ್ಮರನ್ನು ತಮ್ಮ ಬಳಿ ಬಾಪ್ದಾದಾರವರು ಯಾರನ್ನೇ ಕಳುಹಿಸಲಿ - ಈ ಮಕ್ಕಳ
ಬಳಿ ಹೋಗಿ ಮಾಯಾಜೀತರಾಗುವ ಅನುಭವವನ್ನು ಕೇಳಿರಿ ಎಂದು. ಇಂತಹ ಉದಾಹರಣೆಯಾಗಿ ತೋರಿಸಿರಿ. ಹೇಗೆ
ಮೋಹಜೀತ ಪರಿವಾರವು ಪ್ರಸಿದ್ಧವಿದೆ, ಹಾಗೆಯೇ ಮಾಯಾಜೀತರಾಗುವ ಸೇವಾಕೇಂದ್ರವು ಪ್ರಸಿದ್ಧವಾಗಲಿ! ಇದು
ಇಂತಹ ಸೇವಾಕೇಂದ್ರವಾಗಿದೆ, ಎಲ್ಲಿ ಎಂದಿಗೂ ಮಾಯೆಯ ಯುದ್ಧವಾಗುವುದಿಲ್ಲ. ಬರುವುದು ಬೇರೆ ಮಾತಾಗಿದೆ,
ಯುದ್ಧ ಮಾಡುವುದು ಬೇರೆ ಮಾತಾಗಿದೆ. ಅಂದಮೇಲೆ ಇದರಲ್ಲಿಯೂ ನಂಬರ್ ತೆಗೆದುಕೊಳ್ಳುವವರಲ್ಲವೆ.
ಇದರಲ್ಲಿ ನಂಬರ್ವನ್ ಯಾರಾಗುವರು? ಲಂಡನ್, ಆಸ್ಟ್ರೇಲಿಯಾ ಆಗುವರೇ ಅಥವಾ ಅಮೇರಿಕಾ ಆಗುವುದೇ?
ಪ್ಯಾರಿಸ್ ಆಗುವುದೇ, ಜರ್ಮನ್ ಆಗುವುದೇ, ಬ್ರೆಜಿಲ್ ಆಗುವುದೇ, ಯಾರಾಗುವರು? ಯಾರೇ ಆಗಿರಿ.
ಬಾಪ್ದಾದಾರವರು ಇಂತಹ ಚೈತನ್ಯ ಮ್ಯೂಜಿಯಂ ಎಂದು ಅನೌನ್ಸ್ ಮಾಡುತ್ತಾರೆ, ಹೇಗೆ ಆಬುವಿನ ಮ್ಯೂಜಿಯಂ
ನಂಬರ್ವನ್ ಎಂದು ಹೇಳುವರು. ಸೇವೆಯಲ್ಲಿಯೂ ಹಾಗೂ ಅದನ್ನು ಮಾಡುವುದರಲ್ಲಿಯೂ ಹೇಳುವರು. ಇಂತಹ
ಮಾಯಾಜೀತ ಮಕ್ಕಳ ಚೈತನ್ಯ ಮ್ಯೂಜಿಯಂ ಆಗಲಿ. ಸಾಹಸವಿದೆ ಅಲ್ಲವೇ? ಅದಕ್ಕಾಗಿ ಈಗ ಎಷ್ಟು ಸಮಯ ಬೇಕು?
ಯಾರು ಮೊದಲೇ ಸ್ವಲ್ಪ ಮಾಡಿತೋರಿಸುತ್ತಾರೆಯೋ ಅವರಿಗೆ ಗೋಲ್ಡನ್ ಜುಬಿಲಿಯಲ್ಲಿಯೂ ಬಹುಮಾನವನ್ನು
ಕೊಡುತ್ತೇವೆ. ಲಾಸ್ಟ್ ಸೋ ಫಾಸ್ಟ್ ಆಗಿ ತೋರಿಸಿರಿ. ಅಷ್ಠ ಮಣಿಗಳಿಗೇ ಬಹುಮಾನ ಸಿಗುತ್ತದೆ.
ಹೀಗಲ್ಲ - ಕೇವಲ ಒಬ್ಬರಿಗೆ ಸಿಗುತ್ತದೆ. ಇದಂತು ಯೋಚಿಸುವುದಿಲ್ಲವೇ - ಲಂಡನ್ ಮತ್ತು
ಆಸ್ಟ್ರೇಲಿಯಾವಂತು ಹಳೆಯದಾಗಿದೆ, ನಾವಂತು ಈಗ ಹೊಸ ಹೊಸಬರಾಗಿದ್ದೇವೆ. ಎಲ್ಲರಿಗಿಂತಲೂ ಚಿಕ್ಕ,
ಹೊಸ ಸೇವಾಕೇಂದ್ರವು ಯಾವುದಾಗಿದೆ? ಎಲ್ಲದಕ್ಕಿಂತಲೂ ಚಿಕ್ಕದೇನಿರುತ್ತದೆ, ಅದು ಎಲ್ಲರಿಗೂ
ಇಷ್ಟವಾಗುತ್ತದೆ. ಹಾಗೆ ನೋಡಿದಾಗ ಚಿಕ್ಕವರಿಗೆ ಹೇಳಲಾಗುತ್ತದೆ - ಅತಿ ಶ್ರೇಷ್ಠ ಎಂದು ಆದರೆ
ಚಿಕ್ಕವರು ತಂದೆಯ ಸಮಾನರಾಗಿದ್ದಾರೆ. ಎಲ್ಲರೂ ಮಾಡಬಹುದು. ದೊಡ್ಡ ಮಾತೇನಿಲ್ಲ. ಗ್ರೀಸ್, ಟೈಂಪಾ,
ರೋಮ್ ಇದು ಚಿಕ್ಕದಾಗಿದೆ. ಇವರಂತು ಶ್ರೇಷ್ಠ ಉಮ್ಮಂಗದಲ್ಲಿರುವವರಾಗಿದ್ದಾರೆ. ಟೈಂಪಾ ಏನು
ಮಾಡುವಿರಿ? ಟೆಂಪಲ್ ಮಾಡುವಿರಾ? ರಮಣೀಕ ಮಗು ಬಂದಿದ್ದರಲ್ಲವೆ - ಅವರಿಗೆ ಹೇಳಲಾಗಿತ್ತು -
ಟೈಂಪಾವನ್ನು ಟೆಂಪಲ್ ಮಾಡಿರಿ. ಯಾರೆಲ್ಲರೂ ಟೈಂಪಾದಲ್ಲಿ ಬರುವರು, ಅವರು ಪ್ರತಿಯೊಬ್ಬರೂ ಸಹ
ಚೈತನ್ಯ ಮೂರ್ತಿಯನ್ನು ನೋಡಿ ಹರ್ಷಿತವಾಗಲಿ. ತಾವು ಶಕ್ತಿಶಾಲಿಗಳು ತಯಾರಾಗಿ ಬಿಡಿ. ಕೇವಲ ತಾವು
ರಾಜರು ತಯಾರಾಗಿ ಬಿಡಿ, ನಂತರ ತಕ್ಷಣದಲ್ಲಿ ಪ್ರಜೆಗಳಾಗುವರು. ರಾಯಲ್ ಫ್ಯಾಮಿಲಿಯಾಗುವುದರಲ್ಲಿ
ಸಮಯ ಹಿಡಿಸುತ್ತದೆ. ಈ ರಾಯಲ್ ಫ್ಯಾಮಿಲಿ, ರಾಜಾಧಾನಿ ಆಗುತ್ತಿದೆ, ನಂತರ ಪ್ರಜೆಗಳಂತು ಆಗಿ
ಬಿಡುತ್ತಾರಲ್ಲವೆ. ಕಿರೀಟಧಾರಿ, ತಿಲಕಧಾರಿಗಳಾಗಿ ಬಿಡುತ್ತಾರೆಂದರೆ, ಪ್ರಜೆಗಳೂ ಸಹ ಆಯಿತು ಪ್ರಭು
ಎಂದು ಹೇಳುವರು. ಕಿರೀಟಧಾರಿಗಳು ತಯಾರಾಗಿಲ್ಲವೆಂದರೆ ಪ್ರಜೆಗಳು ಹೇಗೆ ಒಪ್ಪುತ್ತಾರೆ - ಇವರು
ನಮ್ಮ ರಾಜನಾಗಿದ್ದಾರೆ ಎಂದು. ರಾಯಲ್ ಫ್ಯಾಮಿಲಿಯಾಗುವುದರಲ್ಲಿ ಸಮಯ ಹಿಡಿಸುತ್ತದೆ. ತಾವು ಒಳ್ಳೆಯ
ಸಮಯದಲ್ಲಿ ತಲುಪಿದ್ದೀರಿ, ಯಾರು ರಾಯಲ್ ಫ್ಯಾಮಿಲಿಯಲ್ಲಿ ಬರಲು ಅಧಿಕಾರಿಯಾಗಿದ್ದೀರಿ. ಈಗ
ಪ್ರಜೆಗಳ ಸಮಯವು ಬರುವುದಿದೆ. ರಾಜರಾಗುವ ಚಿಹ್ನೆಯನ್ನು ತಿಳಿದಿದ್ದೀರಲ್ಲವೆ. ಈಗಿನಿಂದ
ಸ್ವರಾಜ್ಯಾಧಿಕಾರಿ ವಿಶ್ವ ರಾಜ್ಯಾಧಿಕಾರಿಯಾಗಿ ಹೋಗಿರಿ. ಈಗಿನಿಂದ ರಾಜ್ಯಾಧಿಕಾರಿಯಾಗುವವರ ಸಮೀಪ
ಮತ್ತು ಸಹಯೋಗಿಯಾಗುವವರು, ಅಲ್ಲಿಯೂ ಸಹ ಸಮೀಪ ಮತ್ತು ರಾಜ್ಯವನ್ನು ನಡೆಸುವುದರಲ್ಲಿಯೂ
ಸಹಯೋಗಿಯಾಗುವರು. ಈಗ ಸೇವೆಯಲ್ಲಿ ಸಹಯೋಗಿ, ಮತ್ತೆ ರಾಜ್ಯಾಡಳಿತ ಮಾಡುವುದರಲ್ಲಿಯೂ ಸಹಯೋಗಿ.
ಅಂದಮೇಲೆ ಈಗಿನಿಂದ ಪರಿಶೀಲನೆ ಮಾಡಿಕೊಳ್ಳಿರಿ. ರಾಜರಾಗಿದ್ದೀರಾ ಅಥವಾ ಕೆಲವೊಮ್ಮೆ ರಾಜ ಕೆಲವೊಮ್ಮೆ
ಪ್ರಜೆಯಾಗಿ ಬಿಡುವಿರಾ! ಕೆಲವೊಮ್ಮೆ ಅಧೀನ ಕೆಲವೊಮ್ಮೆ ಅಧಿಕಾರಿಯೋ! ಸದಾ ರಾಜಾರಾಗಿದ್ದೀರಾ?
ಅಂದಮೇಲೆ ತಾವೆಷ್ಟು ಅದೃಷ್ಠಶಾಲಿಯಾಗಿದ್ದೀರಾ? ಇದಂತು ಯೋಚಿಸದಿರಿ - ನಾವಂತು ಹಿಂದೆ ಬಂದಿದ್ದೇವೆ,
ರಾಜರಾಗಲು ಸಾಧ್ಯವೋ ಅಥವಾ ಇಲ್ಲವೋ! ರಾಯಲ್ ಫ್ಯಾಮಿಲಿಯಲ್ಲಿ ಬರಬಹುದೋ ಅಥವಾ ಇಲ್ಲವೋ! ಸದಾ ಇದನ್ನು
ಯೋಚಿಸಿರಿ - ನಾವು ಬರುವುದಿಲ್ಲವೆಂದರೆ ಮತ್ತ್ಯಾರು ಬರುವರು? ಬರಲೇಬೇಕು. ಇದನ್ನು ಮಾಡಲು ಸಾಧ್ಯವೋ
ಅಥವಾ ಇಲ್ಲವೋ ಗೊತ್ತಿಲ್ಲ, ಇದಾಗುತ್ತದೆಯೋ ಅಥವಾ ಏನಾಗುತ್ತದೋ ಗೊತ್ತಿಲ್ಲ........ ಇಲ್ಲ. ಇದು
ಗೊತ್ತಿದೆ - ನಾವು ಪ್ರತೀಕಲ್ಪವೂ ಮಾಡಿದ್ದೇವೆ, ಮಾಡುತ್ತಿದ್ದೇವೆ ಮತ್ತು ಸದಾ ಮಾಡುತ್ತೇವೆ.
ತಿಳಿಯಿತೆ!
ಎಂದಿಗೂ ಸಹ ನಾವು ವಿದೇಶಿಯಾಗಿದ್ದೇವೆ, ಇವರು ದೇಶದವರಾಗಿದ್ದಾರೆಂದು ಯೋಚಿಸಬಾರದು. ಇವರು ಇಂಡಿಯನ್
ಆಗಿದ್ದಾರೆ, ನಾವು ವಿದೇಶಿಯಾಗಿದ್ದೇವೆ. ನಮ್ಮ ವಿಧಿಯು ನಮ್ಮದು, ಇವರದು ತಮ್ಮದಾಗಿದೆ, ಇದಂತು
ಕೇವಲ ಪರಿಚಯಕ್ಕಾಗಿ ಡಬಲ್ ವಿದೇಶಿ ಎಂದು ಹೇಳಲಾಗುತ್ತದೆ. ಹೇಗೆ ಇಲ್ಲಿಯೂ ಹೇಳುತ್ತಾರೆ - ಇವರು
ಕರ್ನಾಟಕದವರು, ಇವರು ಯು.ಪಿ.,ಯವರು ಎಂದು. ಇರುವುದಂತು ಬ್ರಾಹ್ಮಣರಲ್ಲವೆ. ಭಲೆ ಇಂಡಿಯನ್ ಆಗಿರಲಿ,
ಭಲೆ ವಿದೇಶಿಯಾಗಿರಲಿ, ಎಲ್ಲರೂ ಬ್ರಾಹ್ಮಣರಿದ್ದಾರೆ. ನಾವು ವಿದೇಶಿಯಾಗಿದ್ದೇವೆ ಎಂದು ಯೋಚಿಸುವುದೂ
ಸಹ ತಪ್ಪಾಗಿದೆ. ಹೊಸ ಜನ್ಮವಾಗಿಲ್ಲವೇನು? ಹಳೆಯ ಜನ್ಮವಂತು ವಿದೇಶದಲ್ಲಿತ್ತು. ಹೊಸ ಜನ್ಮವಂತು
ಬ್ರಹ್ಮಾರವರ ಮಡಿಲಿನಲ್ಲಾಯಿತಲ್ಲವೆ. ಇದು ಕೇವಲ ಪರಿಚಯಕ್ಕಾಗಿ ಹೇಳಲಾಗುತ್ತದೆ ಆದರೆ
ಸಂಸ್ಕಾರದಲ್ಲಿ ಅಥವಾ ತಿಳಿದುಕೊಳ್ಳುವುದರಲ್ಲಿ ಕೆಲವೊಮ್ಮೆಯೂ ಅಂತರವೆಂದು ತಿಳಿಯಬಾರದು.
ಬ್ರಾಹ್ಮಣ ವಂಶದವರಾಗಿದ್ದೀರಿ ಅಲ್ಲವೆ! ಅಮೇರಿಕಾ, ಆಫ್ರಿಕಾ ವಂಶವಂತು ಇಲ್ಲವಲ್ಲವೆ. ಎಲ್ಲರ
ಪರಿಚಯವನ್ನು ಹೇಗೆ ಕೊಡುವಿರಿ! ಶಿವವಂಶಿ ಬ್ರಹ್ಮಾಕುಮಾರ-ಕುಮಾರಿಯರು. ಒಂದೇ ವಂಶವಾಯಿತಲ್ಲವೆ.
ಎಂದಿಗೂ ಸಹ ಹೇಳುವುದರಲ್ಲಿಯೂ ಅಂತರವನ್ನಿಡಬಾರದು. ಇಂಡಿಯನ್ ಹೀಗೆ ಮಾಡುತ್ತಾರೆ, ವಿದೇಶಿಗಳು ಹೀಗೆ
ಮಾಡುತ್ತಾರೆ, ಅಲ್ಲ. ನಾವಂತು ಒಂದೇ ಆಗಿದ್ದೇವೆ. ತಂದೆಯು ಒಬ್ಬರೇ ಇದ್ದಾರೆ, ಮಾರ್ಗವೂ ಒಂದೇ ಇದೆ,
ಸ್ವಭಾವ-ಸಂಸ್ಕಾರವೂ ಒಂದೇ ಇದೆ. ಮತ್ತೆ ದೇಶಿ ಮತ್ತು ವಿದೇಶಿ ಎಂಬ ಅಂತರವೆಲ್ಲಿಂದ ಬಂದಿತು?
ತಮ್ಮನ್ನು ವಿದೇಶಿಯೆಂದು ಹೇಳುವುದರಿಂದ ದೂರವಾಗಿ ಬಿಡುತ್ತೀರಿ. ನಾವು ಬ್ರಹ್ಮಾವಂಶಿ ಎಲ್ಲರೂ
ಬ್ರಾಹ್ಮಣರಾಗಿದ್ದೇವೆ. ನಾವು ವಿದೇಶಿಯಿದ್ದೇವೆ, ನಾವು ಗುಜರಾತಿಯಾಗಿದ್ದೇವೆ..... ಆದ್ದರಿಂದ
ಹೀಗಾಗುತ್ತದೆ. ನಾವೆಲ್ಲರೂ ಒಬ್ಬ ತಂದೆಯ ಮಕ್ಕಳು, ಇದೇ ವಿಶೇಷತೆಯಾಗಿದೆ, ಯಾವುದು ಭಿನ್ನ-ಭಿನ್ನ
ಸಂಸ್ಕಾರದವರೆಲ್ಲರೂ ಸೇರಿ ಒಂದಾಗಿ ಬಿಟ್ಟೆವು. ಭಿನ್ನ-ಭಿನ್ನ ಧರ್ಮ, ಭಿನ್ನ-ಭಿನ್ನ ಜಾತಿಯೆಲ್ಲವೂ
ಸಮಾಪ್ತಿಯಾಗಿ ಬಿಟ್ಟಿತು. ಒಬ್ಬರವರಾಗಿ ಬಿಟ್ಟೆವು ಅರ್ಥಾತ್ ಒಂದಾಗಿ ಬಿಟ್ಟೆವು. ತಿಳಿಯಿತೆ!
ಒಳ್ಳೆಯದು.
ಸದಾ ಸಂತುಷ್ಟತೆಯ ವಿಶೇಷತೆಯಿರುವ ವಿಶೇಷ ಆತ್ಮರಿಗೆ, ಸದಾ ಸಂತುಷ್ಟತೆಯ ಮೂಲಕ ಸೇವೆಯಲ್ಲಿ
ಸಫಲತೆಯನ್ನು ಪಡೆಯುವ ಮಕ್ಕಳಿಗೆ, ಸದಾ ರಾಜ್ಯಾಧಿಕಾರಿಯಿಂದ ವಿಶ್ವ ರಾಜ್ಯಾಧಿಕಾರಿ
ಶ್ರೇಷ್ಠಾತ್ಮರಿಗೆ, ಸದಾ ನಿಶ್ಚಯದ ಮೂಲಕ ಪ್ರತಿಯೊಂದು ಕಾರ್ಯದಲ್ಲಿ ನಂಬರ್ವನ್ ಆಗುವ ಮಕ್ಕಳಿಗೆ
ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ವರದಾನ:
ವರದಾನ: ಸಾಧನಗಳನ್ನು ನಿರ್ಲೇಪ ಅಥವಾ ಭಿನ್ನರಾಗಿದ್ದು ಕಾರ್ಯದಲ್ಲಿ ಉಪಯೋಗಿಸುವಂತಹ ಬೇಹದ್ದಿನ
ವೈರಾಗಿ ಭವ.
ಬೇಹದ್ದಿನ
ವೈರಾಗಿ ಅರ್ಥಾತ್ ಯಾವುದರಲ್ಲಿಯೂ ಸೆಳೆತವಿಲ್ಲ, ಸದಾ ತಂದೆಯ ಪ್ರಿಯರು. ಈ ಪ್ರಿಯವಾಗಿರುವುದೇ
ಭಿನ್ನರನ್ನಾಗಿ ಮಾಡಿಸುತ್ತದೆ. ತಂದೆಯ ಪ್ರಿಯರಾಗಲಿಲ್ಲವೆಂದರೆ ಭಿನ್ನರೂ ಸಹ ಆಗಲು ಸಾಧ್ಯವಿಲ್ಲ,
ಸೆಳೆತದಲ್ಲಿ ಬಂದು ಬಿಡುತ್ತೀರಿ. ಯಾರು ತಂದೆಯ ಪ್ರಿಯರಾಗುವರು, ಅವರು ಸರ್ವ ಆಕರ್ಷಣೆಗಳಿಂದ
ಭಿನ್ನ ಅರ್ಥಾತ್ ಭಿನ್ನವಾಗುವರು - ಇದಕ್ಕೇ ನಿರ್ಲೇಪ ಸ್ಥಿತಿಯೆಂದು ಹೇಳಲಾಗುತ್ತದೆ. ಯಾವುದೇ
ಅಲ್ಪಕಾಲದ ಆಕರ್ಷಣೆಯ ಲೇಪದಲ್ಲಿ ಬರುವವರಲ್ಲ. ತಾವು ರಚನೆ ಅಥವಾ ಸಾಧನಗಳನ್ನು ನಿರ್ಲೇಪರಾಗಿದ್ದು
ಕಾರ್ಯದಲ್ಲಿ ಉಪಯೋಗಿಸಿರಿ - ಇಂತಹ ಬೇಹದ್ದಿನ ವೈರಾಗಿಯೇ ರಾಜಋಷಿಯಾಗಿದ್ದಾರೆ.
ಸ್ಲೋಗನ್:
ಸ್ಲೋಗನ್:
ಹೃದಯದ ಸ್ವಚ್ಛತೆ - ಶುದ್ಧತೆಯಿರಲಿ, ಆಗ ಸಾಹೇಬನು (ಪ್ರಭು) ರಾಜಿ(ಪ್ರಸನ್ನ)ಯಾಗಿ ಬಿಡುವನು.