25.02.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಆತ್ಮಾಭಿಮಾನಿಯಾಗುವ ಅಭ್ಯಾಸ ಮಾಡಿ ಆಗ ದೈವೀ ಗುಣಗಳು ಬರುತ್ತಿರುತ್ತವೆ, ಕೆಟ್ಟ ದೃಷ್ಟಿಯು
ಸಮಾಪ್ತಿಯಾಗುತ್ತದೆ, ಅಪಾರ ಖುಷಿಯಿರುತ್ತದೆ”
ಪ್ರಶ್ನೆ:
ತಮ್ಮ ಚಲನೆಯನ್ನು
ಸುಧಾರಣೆ ಮಾಡಿಕೊಳ್ಳಲು ಹಾಗೂ ಅಪಾರ ಖುಷಿಯಲ್ಲಿರಲು ಯಾವ ಮಾತನ್ನು ಸದಾ
ಸ್ಮೃತಿಯಲ್ಲಿಟ್ಟುಕೊಳ್ಳಬೇಕು?
ಉತ್ತರ:
ಸದಾ
ಸ್ಮೃತಿಯಲ್ಲಿರಲಿ - ನಾವು ದೈವೀ ಸ್ವರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ, ಮೃತ್ಯು ಲೋಕವನ್ನು
ಬಿಟ್ಟು ಅಮರ ಲೋಕದಲ್ಲಿ ಹೋಗುತ್ತಿದ್ದೇವೆ. ಇದರಿಂದ ಬಹಳ ಖುಷಿಯಿರುವುದು, ಚಲನೆಯೂ
ಸುಧಾರಣೆಯಾಗುತ್ತಾ ಹೋಗುವುದು. ಏಕೆಂದರೆ ಅಮರಲೋಕ ಹೊಸ ಪ್ರಪಂಚದಲ್ಲಿ ಹೋಗಲು ದೈವೀ ಗುಣಗಳು
ಅವಶ್ಯವಾಗಿ ಬೇಕು. ಸ್ವರಾಜ್ಯಕ್ಕಾಗಿ ಅನೇಕರ ಕಲ್ಯಾಣವನ್ನೂ ಮಾಡಬೇಕಾಗುತ್ತದೆ, ಎಲ್ಲರಿಗೆ
ಮಾರ್ಗವನ್ನು ತಿಳಿಸಬೇಕಾಗುತ್ತದೆ.
ಓಂ ಶಾಂತಿ.
ಮಕ್ಕಳು ತಮ್ಮನ್ನು ಇಲ್ಲಿಯವರೆಂದು ತಿಳಿಯಬಾರದು, ಏಕೆಂದರೆ ನಿಮಗೆ ಅರ್ಥವಾಗಿದೆ, ನಮ್ಮ
ರಾಜ್ಯವಿತ್ತು, ಯಾವುದಕ್ಕೆ ರಾಮ ರಾಜ್ಯ ಅಥವಾ ಸೂರ್ಯವಂಶಿ ರಾಜ್ಯವೆಂದು ಹೇಳುತ್ತಾರೆಯೋ ಅದರಲ್ಲಿ
ಎಷ್ಟೊಂದು ಸುಖ-ಶಾಂತಿಯಿತ್ತು. ಈಗ ನಾವು ಮತ್ತೆ ಅಂತಹ ದೇವತೆಗಳಾಗುತ್ತಿದ್ದೇವೆ. ಮೊದಲೂ
ಆಗಿದ್ದೆವು, ನಾವೇ ಸರ್ವಗುಣ ಸಂಪನ್ನ..... ದೈವೀ ಗುಣವಂತರಾಗಿದ್ದೆವು. ನಾವು ನಮ್ಮ
ರಾಜ್ಯದಲ್ಲಿದ್ದೆವು, ಈಗ ರಾವಣ ರಾಜ್ಯದಲ್ಲಿದ್ದೇವೆ. ನಾವು ನಮ್ಮ ರಾಜ್ಯದಲ್ಲಿ ಬಹಳ
ಸುಖಿಯಾಗಿದ್ದೇವೆ ಅಂದಮೇಲೆ ಆಂತರ್ಯದಲ್ಲಿ ಬಹಳ ಖುಷಿ ಮತ್ತು ನಿಶ್ಚಯವಿರಬೇಕು. ಏಕೆಂದರೆ ನೀವು
ಪುನಃ ತಮ್ಮ ರಾಜ್ಯದಲ್ಲಿ ಹೋಗುತ್ತಿದ್ದೀರಿ. ರಾವಣನು ನಿಮ್ಮ ರಾಜ್ಯವನ್ನು ಕಸಿದುಕೊಂಡಿದ್ದಾನೆ.
ನಿಮಗೆ ಗೊತ್ತಿದೆ, ನಮ್ಮದೇ ಸೂರ್ಯವಂಶಿ ರಾಜ್ಯವಿತ್ತು, ರಾಮ ರಾಜ್ಯದವರಾಗಿದ್ದೆವು, ನಾವೇ ದೈವೀ
ಗುಣವಂತರಾಗಿದ್ದೆವು, ನಾವೇ ಬಹಳ ಸುಖಿಯಾಗಿದ್ದೆವು ಮತ್ತೆ ನಮ್ಮ ರಾಜ್ಯಭಾಗ್ಯವನ್ನು ರಾವಣನೇ
ಕಸಿದುಕೊಂಡನು. ಈಗ ತಂದೆಯು ಬಂದು ತಮ್ಮ ಮತ್ತು ಪರರಾಜ್ಯದ ರಹಸ್ಯವನ್ನು ತಿಳಿಸುತ್ತಾರೆ.
ಅರ್ಧಕಲ್ಪ ನಾವು ರಾಮ ರಾಜ್ಯದಲ್ಲಿದ್ದೆವು ಇನ್ನರ್ಧಕಲ್ಪ ರಾವಣ ರಾಜ್ಯದಲ್ಲಿದ್ದೆವು. ಮಕ್ಕಳಿಗೆ ಈ
ಪ್ರತಿಯೊಂದು ಮಾತಿನ ನಿಶ್ಚಯವಿದ್ದಾಗ ಖುಷಿಯಲ್ಲಿಯೂ ಇರುತ್ತೀರಿ, ಚಲನೆಯೂ ಸುಧಾರಣೆಯಾಗುತ್ತದೆ.
ಈಗ ಪರರಾಜ್ಯದಲ್ಲಿ ಬಹಳ ದುಃಖಿಯಾಗಿದ್ದೀರಿ. ಇಂದು ಭಾರತವಾಸಿಗಳು ನಾವು ಪರರಾಜ್ಯದಲ್ಲಿ
ದುಃಖಿಯಾಗಿದ್ದೆವು, ಈಗ ನಮ್ಮ ರಾಜ್ಯದಲ್ಲಿ ಸುಖಿಯಾಗಿದ್ದೇವೆಂದು ತಿಳಿಯುತ್ತಾರೆ. ಆದರೆ ಅದು
ಅಲ್ಪಕಾಲದ ಕಾಗವಿಷ್ಟ ಸಮಾನ ಸುಖವಾಗಿದೆ. ನೀವು ಮಕ್ಕಳು ಈಗ ಸದಾಕಾಲ ಸುಖದಲ್ಲಿ ಹೋಗುತ್ತಿದ್ದೀರಿ.
ಅಂದಮೇಲೆ ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ಜ್ಞಾನದಲ್ಲಿ ಇಲ್ಲದಿದ್ದರೆ ಹೇಗೆ ಕಲ್ಲು
ಬುದ್ಧಿಯವರಾಗಿರುತ್ತಾರೆ. ನೀವು ಮಕ್ಕಳಿಗೆ ತಿಳಿದಿದೆ, ಅವಶ್ಯವಾಗಿ ನಾವು ನಮ್ಮ ರಾಜ್ಯವನ್ನು
ಪಡೆಯುತ್ತೇವೆ, ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ರಾಜ್ಯವನ್ನು ಪಡೆದಿದ್ದೆವು, ಅರ್ಧಕಲ್ಪ
ರಾಜ್ಯ ಮಾಡಿದೆವು ಮತ್ತೆ ರಾವಣನು ನಮ್ಮ ರಾಜ್ಯವನ್ನೇ ಸಂಪೂರ್ಣ ಕಸಿದುಕೊಂಡನು. ಯಾರಾದರೂ ಒಳ್ಳೆಯ
ಮಕ್ಕಳ ನಡವಳಿಕೆಯು ಹಾಳಾಗುತ್ತದೆಯೆಂದರೆ ನಿಮ್ಮ ಅದೃಷ್ಟವು ಕೆಟ್ಟಿದೆಯೇ ಎಂದು ಹೇಳುತ್ತಾರೆ
ಅಂದಾಗ ಇವು ಬೇಹದ್ದಿನ ಮಾತುಗಳಾಗಿವೆ. ತಿಳಿಯಬೇಕು, ಮಾಯೆಯು ನಮ್ಮ ಕಲೆಗಳನ್ನೇ ಕೆಡಿಸಿ ಬಿಟ್ಟಿತು,
ನಾವು ಬೀಳುತ್ತಲೇ ಬಂದೆವು. ಈಗ ತಂದೆಯು ದೈವೀ ಗುಣಗಳನ್ನು ಕಲಿಸುತ್ತಾರೆ ಅಂದಾಗ ಖುಷಿಯ
ನಶೆಯೇರಬೇಕು. ಶಿಕ್ಷಕರು ಜ್ಞಾನವನ್ನು ಕೊಡುತ್ತಾರೆಂದರೆ ವಿದ್ಯಾರ್ಥಿಗಳಿಗೆ ಖುಷಿಯಾಗುತ್ತದೆ. ಇದು
ಬೇಹದದ್ದಿನ ಜ್ಞಾನವಾಗಿದೆ. ನನ್ನಲ್ಲಿ ಯಾವುದೇ ಆಸುರೀ ಗುಣವಿಲ್ಲವೆ ಎಂದು ನೋಡಿಕೊಳ್ಳಬೇಕು.
ಸಂಪೂರ್ಣರಾಗದಿದ್ದರೆ ಶಿಕ್ಷೆಗಳನ್ನೂ ಅನುಭವಿಸಬೇಕಾಗುತ್ತದೆ ಆದರೆ ನಾವು ಶಿಕ್ಷೆಗಳನ್ನು
ಅನುಭವಿಸುವುದಾದರೂ ಏಕೆ? ಆದ್ದರಿಂದ ತಂದೆ, ಯಾರಿಂದ ಈ ರಾಜ್ಯವು ಸಿಗುತ್ತದೆಯೋ ಅವರನ್ನು ನೆನಪು
ಮಾಡಬೇಕು. ಯಾವ ದೈವೀ ಗುಣಗಳಿತ್ತೋ ಅವನ್ನು ಈಗ ನಮ್ಮಲ್ಲಿ ಧಾರಣೆ ಮಾಡಿಕೊಳ್ಳಬೇಕು. ಸತ್ಯಯುಗದಲ್ಲಿ
ಯಥಾ ರಾಜ-ರಾಣಿ ತಥಾ ಪ್ರಜಾ ಎಲ್ಲರಲ್ಲಿ ದೈವೀ ಗುಣಗಳಿತ್ತು. ದೈವೀ ಗುಣಗಳನ್ನಂತೂ
ತಿಳಿದಿದ್ದೀರಲ್ಲವೆ. ಒಂದು ವೇಳೆ ದೈವೀ ಗುಣಗಳನ್ನು ತಿಳಿಯದಿದ್ದರೆ ಅವನ್ನು ಹೇಗೆ ಧಾರಣೆ
ಮಾಡುತ್ತೀರಿ? ಸರ್ವಗುಣ ಸಂಪನ್ನ.... ಎಂದು ಗಾಯನವೂ ಮಾಡುತ್ತೀರಿ ಅಂದಮೇಲೆ ಪುರುಷಾರ್ಥ ಮಾಡಿ
ಅವರಂತೆಯೇ ಆಗಬೇಕು, ಆಗುವುದರಲ್ಲಿಯೇ ಶ್ರಮವಾಗುತ್ತದೆ, ಕುದೃಷ್ಟಿಯು ಬಂದು ಬಿಡುತ್ತದೆ.
ಆದ್ದರಿಂದ ತಮ್ಮನ್ನು ಆತ್ಮನೆಂದು ತಿಳಿಯಿರಿ, ಆಗ ಕೆಟ್ಟ ವಿಚಾರಗಳೆಲ್ಲವೂ ಹಾರಿ ಹೋಗುತ್ತವೆ ಎಂದು
ತಂದೆಯು ತಿಳಿಸುತ್ತಾರೆ. ತಂದೆಯಂತೂ ಬಹಳ ಯುಕ್ತಿಗಳನ್ನು ತಿಳಿಸುತ್ತಾರೆ. ಯಾರಲ್ಲಿ ದೈವೀ
ಗುಣಗಳಿವೆಯೋ ಅವರನ್ನು ದೇವತೆ ಎಂದು ಹೇಳಲಾಗುತ್ತದೆ, ಯಾರಲ್ಲಿ ಇಲ್ಲವೋ ಅವರಿಗೆ ಮನುಷ್ಯರೆಂದು
ಹೇಳಲಾಗುತ್ತದೆ. ಹಾಗೆ ನೋಡಿದರೆ ಇಬ್ಬರೂ ಮನುಷ್ಯರೇ ಆದರೆ ದೇವತೆಗಳನ್ನು ಏಕೆ ಪೂಜಿಸುತ್ತಾರೆ?
ಏಕೆಂದರೆ ಅವರಲ್ಲಿ ದೈವೀ ಗುಣಗಳಿವೆ ಮತ್ತು ಮನುಷ್ಯರ ಕರ್ತವ್ಯವು ಮಂಗನ ತರಹ ಇದೆ. ಪರಸ್ಪರ
ಎಷ್ಟೊಂದು ಜಗಳ-ಕಲಹ ಮಾಡಿಕೊಳ್ಳುತ್ತಾರೆ, ಆದರೆ ಸತ್ಯಯುಗದಲ್ಲಿ ಈ ಮಾತುಗಳಿರುವುದಿಲ್ಲ. ಇಲ್ಲಂತೂ
ಇವೆಲ್ಲವೂ ಆಗುತ್ತವೆ. ಅವಶ್ಯವಾಗಿ ತಮ್ಮದೇ ತಪ್ಪಾಗುತ್ತದೆಯೆಂದರೆ ಸಹನೆ ಮಾಡಬೇಕಾಗುತ್ತದೆ.
ಆತ್ಮಾಭಿಮಾನಿ ಆಗಿಲ್ಲವೆಂದರೆ ಸಹನೆಯೂ ಮಾಡಬೇಕಾಗುತ್ತದೆ. ನೀವೆಷ್ಟು ಆತ್ಮಾಭಿಮಾನಿಗಳಾಗುತ್ತಾ
ಹೋಗುತ್ತೀರಿ ಅಷ್ಟೂ ದೈವೀ ಗುಣಗಳು ಧಾರಣೆಯಾಗುತ್ತವೆ. ನಮ್ಮಲ್ಲಿ ದೈವೀ ಗುಣಗಳಿವೆಯೇ ಎಂದು
ತಮ್ಮನ್ನು ತಾವು ನೋಡಿಕೊಳ್ಳಬೇಕು. ತಂದೆಯು ಸುಖದಾತನಾಗಿದ್ದಾರೆ ಅಂದಮೇಲೆ ಎಲ್ಲರಿಗೆ ಸುಖ
ಕೊಡುವುದು ಮಕ್ಕಳ ಕೆಲಸವಾಗಿದೆ. ತಮ್ಮ ಹೃದಯವನ್ನು ಕೇಳಿಕೊಳ್ಳಬೇಕು - ನಾವು ಯಾರಿಗೂ ದುಃಖವನ್ನು
ಕೊಡುತ್ತಿಲ್ಲವೆ? ಕೆಲ ಕೆಲವರಿಗೆ ಈ ಅಭ್ಯಾಸವಿರುತ್ತದೆ - ಅವರು ದುಃಖವನ್ನು ಕೊಡದೇ ಇರುವುದಿಲ್ಲ,
ಸುಧಾರಣೆಯಾಗುವುದೇ ಇಲ್ಲ. ಪಂಜರದ ಪಕ್ಷಿಗಳಿಂತಿರುತ್ತಾರೆ. ಅವರು ಜೈಲಿನಲ್ಲಿಯೇ ತಮಗೆ
ಸುಖವಿದೆಯೆಂದು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ - ಸತ್ಯಯುಗದಲ್ಲಿ ಈ ಜೈಲು ಮೊದಲಾದವುಗಳು
ಇರುವುದೇ ಇಲ್ಲ. ಜೈಲಿಗೆ ಹೋಗಬೇಕಾದಂತಹ ಪಾಪವಾಗುವುದೇ ಇಲ್ಲ. ಇಲ್ಲಿ ಜೈಲಿನಲ್ಲಿ ಶಿಕ್ಷೆಗಳನ್ನು
ಅನುಭವಿಸಬೇಕಾಗುತ್ತದೆ. ಈಗ ನೀವು ತಿಳಿಯುತ್ತೀರಿ - ಯಾವಾಗ ನಾವು ನಮ್ಮ ರಾಜ್ಯದಲ್ಲಿದ್ದೆವೋ ಆಗ
ಬಹಳ ಸಾಹುಕಾರರಾಗಿದ್ದೆವು. ಯಾರು ಬ್ರಾಹ್ಮಣ ಕುಲದವರು ಆಗಿರುತ್ತಾರೆಯೋ ಅವರು, ನಾವು ನಮ್ಮ
ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ತಿಳಿಯುತ್ತಾರೆ. ನಮ್ಮ ರಾಜ್ಯವು ಒಂದೇ ಆಗಿತ್ತು,
ಯಾವುದಕ್ಕೆ ದೇವತೆಗಳ ರಾಜ್ಯವೆಂದು ಹೇಳಲಾಗುತ್ತದೆ, ಆತ್ಮಕ್ಕೆ ಯಾವಾಗ ಜ್ಞಾನವು ಸಿಗುತ್ತದೆಯೋ ಆಗ
ಖುಷಿಯಾಗುತ್ತದೆ. ಜೀವಾತ್ಮವೆಂದು ಅವಶ್ಯವಾಗಿ ಹೇಳಬೇಕು. ನಾವು ಜೀವಾತ್ಮರು ಯಾವಾಗ ದೇವಿ-ದೇವತಾ
ಧರ್ಮದವರಾಗಿದ್ದೆವೋ ಆಗ ಇಡೀ ವಿಶ್ವದಲ್ಲಿ ನಮ್ಮ ರಾಜ್ಯವಿತ್ತು. ಈ ಜ್ಞಾನವು ನಿಮಗಾಗಿ ಇದೆ. ನಮ್ಮ
ರಾಜ್ಯವಿತ್ತು, ನಾವೇ ಸತೋಪ್ರಧಾನರಾಗಿದ್ದೆವೆಂದು ಭಾರತವಾಸಿಗಳು ತಿಳಿಯುವುದಿಲ್ಲ. ನೀವೇ ಇದೆಲ್ಲಾ
ಜ್ಞಾನವನ್ನು ತಿಳಿಯುತ್ತೀರಿ ಅಂದಾಗ ನೀವೇ ದೇವತೆಗಳಾಗಿದ್ದಿರಿ ಮತ್ತೆ ಈಗ ನೀವೇ ಆಗಬೇಕು. ಅಂದಮೇಲೆ
ವಿಘ್ನಗಳು ಬರುತ್ತವೆ ಅಂದಮೇಲೆ ದಿನ-ಪ್ರತಿದಿನ ನಿಮ್ಮ ಉನ್ನತಿಯಾಗುತ್ತಾ ಹೋಗುವುದು, ನಿಮ್ಮ ಹೆಸರು
ಪ್ರಸಿದ್ಧವಾಗುತ್ತಾ ಹೋಗುವುದು. ಆಗ ಇದು ಒಳ್ಳೆಯ ಸಂಸ್ಥೆಯಾಗಿದೆ, ಒಳ್ಳೆಯ ಕಾರ್ಯ
ಮಾಡುತ್ತಿದ್ದಾರೆ, ಬಹಳ ಸಹಜ ಮಾರ್ಗವನ್ನೂ ತಿಳಿಸುತ್ತಾರೆ ಎಂಬುದನ್ನು ಎಲ್ಲರೂ ತಿಳಿಯುತ್ತಾರೆ.
ನೀವೇ ಸತೋಪ್ರಧಾನರಾಗಿದ್ದಿರಿ, ದೇವತೆಗಳಾಗಿ ತಮ್ಮ ರಾಜಧಾನಿಯಲ್ಲಿದ್ದಿರಿ. ಈಗ
ತಮೋಪ್ರಧಾನರಾಗಿದ್ದೀರಿ ಮತ್ತ್ಯಾರೂ ತಮ್ಮನ್ನು ರಾವಣ ರಾಜ್ಯದಲ್ಲಿದ್ದೇವೆಂದು ತಿಳಿಯುವುದಿಲ್ಲ.
ನಿಮಗೆ ತಿಳಿದಿದೆ - ನಾವು ಎಷ್ಟೊಂದು ಸ್ವಚ್ಛವಾಗಿದ್ದೆವು ಈಗ ತುಚ್ಚವಾಗಿದ್ದೇವೆ.
ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪಾರಸ ಬುದ್ಧಿಯವರಿಂದ ಕಲ್ಲು
ಬುದ್ಧಿಯಾರಾಗಿದ್ದೇವೆ. ಈಗ ನಾವು ನಮ್ಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ ಅಂದಮೇಲೆ ನಿಮಗೆ
ಬಹಳ ಖುಷಿಯಿರಬೇಕು, ಪುರುಷಾರ್ಥದಲ್ಲಿ ತೊಡಗಬೇಕಾಗಿದೆ. ಯಾರು ಕಲ್ಪದ ಹಿಂದೆ ತೊಡಗಿದ್ದರೋ ಅವರು
ಈಗಲೂ ಅವಶ್ಯವಾಗಿ ತೊಡಗುತ್ತಾರೆ. ನಂಬರ್ವಾರ್ ಪುರುಷಾರ್ಥದನುಸಾರ ನಾವು ನಮ್ಮ ದೈವೀ ರಾಜ್ಯವನ್ನು
ಸ್ಥಾಪನೆ ಮಾಡುತ್ತಿದ್ದೇವೆ. ಇದನ್ನೂ ಸಹ ನೀವು ಪದೇ-ಪದೇ ಮರೆತು ಹೋಗುತ್ತೀರಿ. ಇಲ್ಲವೆಂದರೆ
ಆಂತರ್ಯದಲ್ಲಿ ಬಹಳ ಖುಷಿಯಿರಬೇಕಲ್ಲವೆ. ಒಬ್ಬರು ಇನ್ನೊಬ್ಬರಿಗೆ ಇದೇ ನೆನಪನ್ನು ತರಿಸಿ-
ಮನ್ಮನಾಭವ, ತಂದೆಯನ್ನು ನೆನಪು ಮಾಡಿ, ಇದರಿಂದಲೇ ಈಗ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಇದು
ಹೊಸದೇನಲ್ಲ. ಕಲ್ಪ-ಕಲ್ಪವು ತಂದೆಯು ನಮಗೆ ಶ್ರೀಮತವನ್ನು ಕೊಡುತ್ತಾರೆ. ಇದರಿಂದ ನಾವು ದೈವೀ
ಗುಣಗಳನ್ನು ಧಾರಣೆ ಮಾಡುತ್ತೇವೆ ಇಲ್ಲದಿದ್ದರೆ ಶಿಕ್ಷೆಗಳನ್ನು ಅನುಭವಿಸಿ ಕಡಿಮೆ ಪದವಿಯನ್ನು
ಪಡೆಯುತ್ತೇವೆ. ಇದು ಬಹಳ ದೊಡ್ಡ ಲಾಟರಿಯಾಗಿದೆ. ಈಗ ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು
ಪಡೆಯುತ್ತೀರಿ ಅಂದಮೇಲೆ ಕಲ್ಪ-ಕಲಾಂತರ ಪಡೆಯುತ್ತಲೇ ಇರುತ್ತೀರಿ. ಅಂದಾಗ ತಂದೆಯು ಎಷ್ಟೊಂದು
ಸಹಜವಾಗಿ ತಿಳಿಸುತ್ತಾರೆ! ಪ್ರದರ್ಶನಿಯಲ್ಲಿಯೂ ಇದನ್ನೇ ತಿಳಿಸುತ್ತಾ ಇರಿ, ನೀವು ಭಾರತವಾಸಿಗಳೂ
ದೇವತೆಗಳ ರಾಜಧಾನಿಯವರಾಗಿದ್ದಿರಿ ಮತ್ತೆ ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ, ಇಳಿಯುತ್ತಾ-ಇಳಿಯುತ್ತಾ ಹೀಗಾಗಿದ್ದೀರಿ. ತಂದೆಯು ಎಷ್ಟು
ಸಹಜವಾಗಿ ತಿಳಿಸುತ್ತಾರೆ. ಪರಮಪಿತ, ಪರಮ ಶಿಕ್ಷಕ, ಪರಮ ಸದ್ಗುರು ಆಗಿದ್ದಾರಲ್ಲವೆ. ನೀವು
ಎಷ್ಟೊಂದು ವಿದ್ಯಾರ್ಥಿಗಳಿದ್ದೀರಿ, ಓಟವನ್ನು ಓಡುತ್ತಾ ಇರುತ್ತೀರಿ. ಎಷ್ಟು ನಿರ್ವಿಕಾರಿ
ಪವಿತ್ರರಾಗಿದ್ದೀರಿ ಎಂಬ ಪಟ್ಟಿಯನ್ನು ತಂದೆಯು ತರಿಸುತ್ತಿರುತ್ತಾರೆ. ಮಕ್ಕಳಿಗೆ ತಿಳಿಸಲಾಗಿದೆ -
ಭೃಕುಟಿಯ ಮಧ್ಯದಲ್ಲಿ ಆತ್ಮವು ಹೊಳೆಯುತ್ತದೆ. ನಾನೂ ಸಹ ಅಲ್ಲಿ ಬಂದು ಕುಳಿತುಕೊಳ್ಳುತ್ತೇನೆ,
ನನ್ನ ಪಾತ್ರವನ್ನು ಅಭಿನಯಿಸುತ್ತೇನೆ. ಪತಿತರನ್ನು ಪಾವನ ಮಾಡುವುದು ನನ್ನ ಪಾತ್ರವೇ ಆಗಿದೆ, ನಾನು
ಜ್ಞಾನ ಸಾಗರನಾಗಿದ್ದೇನೆ ಎಂದು ತಂದೆಯು ತಿಳಿಸುತ್ತಾರೆ. ಮಕ್ಕಳೂ ಜನ್ಮ ಪಡೆಯುತ್ತಾರೆ ಅದರಲ್ಲಿ
ಕೆಲವರು ಒಳ್ಳೆಯವರೂ ಇರುತ್ತಾರೆ, ಕೆಲವರು ಕೆಟ್ಟವರೂ ಆಗಿ ಬಿಡುತ್ತಾರೆ. ಆಶ್ಚರ್ಯವಾಗಿ
ಕೇಳುತ್ತಾರೆ, ನಡೆಯುತ್ತಾರೆ, ಓಡಿ ಹೋಗುತ್ತಾರೆ. ಅರೆ! ಮಾಯೆ, ನೀನೆಷ್ಟು ಪ್ರಬಲವಾಗಿದ್ದೀಯೇ!
ಆದರೂ ಸಹ ಮತ್ತೆ ತಂದೆಯು ಹೇಳುತ್ತಾರೆ - ಅವರು ಓಡಿ ಹೋದರೂ ಎಲ್ಲಿಗೆ ಹೋಗುತ್ತಾರೆ? ಈ ಒಬ್ಬ
ತಂದೆಯು ಮೇಲೆತ್ತುವವರಾಗಿದ್ದಾರೆ, ಇವರೊಬ್ಬರೇ ಸದ್ಗತಿದಾತನಾಗಿದ್ದಾರೆ. ಈ ಜ್ಞಾನವನ್ನು ಕೆಲವರು
ತಿಳಿದುಕೊಂಡೇ ಇಲ್ಲ. ಯಾರು ಕಲ್ಪದ ಹಿಂದೆ ಒಪ್ಪಿದರೋ ಅವರೇ ಒಪ್ಪುತ್ತಾರೆ. ಇದರಲ್ಲಿ ತಮ್ಮ
ಚಲನೆಯನ್ನು ಬಹಳ ಸುಧಾರಣೆ ಮಾಡಿಕೊಳ್ಳಬೇಕು, ಸರ್ವೀಸ್ ಮಾಡಬೇಕಾಗುತ್ತದೆ. ಅನೇಕರ ಕಲ್ಯಾಣವನ್ನೂ
ಮಾಡಬೇಕಾಗುತ್ತದೆ, ಹೋಗಿ ಅನೇಕರಿಗೆ ಮಾರ್ಗವನ್ನು ತಿಳಿಸಬೇಕು. ಬಹಳ-ಬಹಳ ಮಧುರವಾಗಿ ತಿಳಿಸಬೇಕು -
ನೀವು ಭಾರತವಾಸಿಗಳೇ ವಿಶ್ವದ ಮಾಲೀಕರಾಗಿದ್ದಿರಿ. ಪುನಃ ನೀವು ಈ ಪ್ರಕಾರದಿಂದ ತಮ್ಮ ರಾಜ್ಯವನ್ನು
ಪಡೆಯುತ್ತೀರಿ. ಇದನ್ನಂತೂ ನೀವು ತಿಳಿಯುತ್ತೀರಿ, ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು
ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಆದರೂ ಸಹ ನಡೆಯುತ್ತಾ-ನಡೆಯುತ್ತಾ ಮಾಯೆಯಿಂದ ಸೋಲನ್ನು
ಅನುಭವಿಸುತ್ತಾರೆ. ವಿಕಾರಗಳ ಮೇಲೆ ಜಯ ಗಳಿಸುವುದರಿಂದಲೇ ನೀವು ಜಗತ್ಜೀತರಾಗುತ್ತೀರೆಂದು ತಂದೆಯು
ತಿಳಿಸುತ್ತಾರೆ. ಈ ದೇವತೆಗಳು ಜಗತ್ಜೀತರಾಗಿದ್ದಾರೆ. ಅವಶ್ಯವಾಗಿ ಅವರು ಅಂತಹ ಕರ್ಮವನ್ನು
ಮಾಡಿದ್ದಾರೆ. ತಂದೆಯು ಕರ್ಮಗಳ ಗತಿಯನ್ನೂ ತಿಳಿಸುತ್ತಾರೆ. ರಾವಣ ರಾಜ್ಯದಲ್ಲಿ ಕರ್ಮವು ವಿಕರ್ಮವೇ
ಆಗುತ್ತದೆ, ರಾಮ ರಾಜ್ಯದಲ್ಲಿ ಕರ್ಮವು ಅಕರ್ಮವಾಗುತ್ತದೆ. ಮೂಲ ಮಾತು ಕಾಮದ ಮೇಲೆ ಜಯ ಗಳಿಸಿ
ಜಗತ್ಜೀತರಾಗುವುದಾಗಿದೆ. ತಂದೆಯನ್ನು ನೆನಪು ಮಾಡಿ ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ನಮಗೆ
100% ನಿಶ್ಚಯವಿದೆ - ನಾವು ನಮ್ಮ ರಾಜ್ಯವನ್ನು ತೆಗೆದುಕೊಳ್ಳುತ್ತೇವೆ, ಅಮರ ಲೋಕದಲ್ಲಿ ರಾಜ್ಯ
ಮಾಡುತ್ತೇವೆ. ಈಗ ಮೃತ್ಯುಲೋಕ ಮತ್ತು ಅಮರ ಲೋಕದ ಮಧ್ಯದಲ್ಲಿ ಇದ್ದೇವೆಂದು ಮರೆತು ಹೋಗುತ್ತಾರೆ.
ಆದ್ದರಿಂದ ತಂದೆಯು ಪದೇ-ಪದೇ ನೆನಪು ತರಿಸುತ್ತಾರೆ. ಈಗ ನಾವು ನಮ್ಮ ರಾಜಧಾನಿಯಲ್ಲಿ ಹೋಗಿಯೇ
ಹೋಗುತ್ತೇವೆಂದು ನಿಶ್ಚಯವಿದೆ. ಈ ಹಳೆಯ ರಾಜಧಾನಿಯು ಅವಶ್ಯವಾಗಿ ಸಮಾಪ್ತಿಯಾಗಲಿದೆ, ಹೊಸ
ಪ್ರಪಂಚದಲ್ಲಿ ಹೋಗಲು ಈಗ ಇಡೀ ದಿನಗಳನ್ನು ಧಾರಣೆ ಮಾಡಬೇಕಾಗಿದೆ. ತಮ್ಮೊಂದಿಗೆ
ಮಾತನಾಡಿಕೊಳ್ಳಬೇಕಾಗಿದೆ - ತಮ್ಮನ್ನು ಆತ್ಮನೆಂದು ತಿಳಿಯಬೇಕು. ಏಕೆಂದರೆ ಈಗಲೇ ಹಿಂತಿರುಗಿ
ಹೋಗಬೇಕಾಗಿದೆ. ಆದುದರಿಂದ ತಮ್ಮನ್ನು ಈಗಲೇ ಆತ್ಮನೆಂದು ತಿಳಿಯಬೇಕು. ಮತ್ತೆಂದೂ ಹಿಂತಿರುಗಿ
ಹೋಗುವುದೂ ಇಲ್ಲ, ಈ ಜ್ಞಾನವು ಸಿಗುವುದೂ ಇಲ್ಲ. ಸತ್ಯಯುಗದಲ್ಲಿ ನಾವು ಯೋಗ ಮಾಡುವುದಕ್ಕೆ ಅಲ್ಲಿ
ಪಂಚ ವಿಕಾರಗಳೇ ಇರುವುದಿಲ್ಲ ಅಂದಾಗ ಈ ಸಮಯದಲ್ಲಿ ಪಾವನರಾಗಲು ಯೋಗ ಮಾಡಬೇಕಾಗುತ್ತದೆ. ಅಲ್ಲಂತೂ
ಎಲ್ಲರೂ ಸುಧಾರಣೆಯಾಗಿರುತ್ತಾರೆ ಮತ್ತೆ ನಿಧಾನ-ನಿಧಾನವಾಗಿ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ.
ಇದಂತೂ ಬಹಳ ಸಹಜವಾಗಿದೆ, ಕ್ರೋಧವೂ ಸಹ ಅನ್ಯರಿಗೆ ದುಃಖ ಕೊಡುತ್ತದೆಯಲ್ಲವೆ. ದೇಹಾಭಿಮಾನವು
ಮುಖ್ಯವಾಗಿದೆ, ಸತ್ಯಯುಗದಲ್ಲಿ ದೇಹಾಭಿಮಾನವು ಇರುವುದೇ ಇಲ್ಲ. ಆತ್ಮಾಭಿಮಾನಿಗಳಾಗುವುದರಿಂದ
ಕೆಟ್ಟ ದೃಷ್ಟಿಯು ಇರುವುದೇ ಇಲ್ಲ, ಆತ್ಮಿಕ ದೃಷ್ಟಿಯಾಗಿ ಬಿಡುತ್ತದೆ. ರಾವಣ ರಾಜ್ಯದಲ್ಲಿ ಕೆಟ್ಟ
ದೃಷ್ಟಿಯಾಗುತ್ತದೆ. ನಿಮಗೆ ಗೊತ್ತಿದೆ - ನಮ್ಮ ರಾಜ್ಯದಲ್ಲಿ ಬಹಳ ಸುಖಿಯಾಗಿರುತ್ತೇವೆ. ಕಾಮವೂ
ಇಲ್ಲ, ಕ್ರೋಧವೂ ಇರುವುದಿಲ್ಲ. ಇದರ ಮೇಲೆ ಒಂದು ಗೀತೆಯನ್ನೂ ಮಾಡಲಾಗಿದೆ. ಅಲ್ಲಿ ಈ ವಿಕಾರಗಳು
ಇರುವುದೇ ಇಲ್ಲ. ನಮ್ಮದು ಅನೇಕ ಬಾರಿ ಈ ಸೋಲು ಮತ್ತು ಗೆಲುವಾಗಿದೆ. ಸತ್ಯಯುಗದಿಂದ ಕಲಿಯುಗದವರೆಗೆ
ಏನೆಲ್ಲವೂ ಆಯಿತು ಅದು ಮತ್ತೆ ಆಗಬೇಕಾಗಿದೆ. ತಂದೆ ಅಥವಾ ಶಿಕ್ಷಕರ ಬಳಿ ಯಾವ ಜ್ಞಾನವಿದೆಯೋ ಅದನ್ನು
ನಿಮಗೆ ತಿಳಿಸುತ್ತಿರುತ್ತಾರೆ. ಈ ಆತ್ಮಿಕ ಶಿಕ್ಷಕರೂ ಸಹ ವಿಚಿತ್ರವಾಗಿದ್ದಾರೆ. ಸರ್ವ ಶ್ರೇಷ್ಠ
ಭಗವಂತ, ಸರ್ವ ಶ್ರೇಷ್ಠ ಶಿಕ್ಷಕರೂ ಆಗಿದ್ದಾರೆ ಮತ್ತು ನಮ್ಮನ್ನೂ ಸಹ ಸರ್ವ ಶ್ರೇಷ್ಠರನ್ನಾಗಿ
ಮಾಡುತ್ತಾರೆ. ತಂದೆಯು ಹೇಗೆ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆಂದು ನೀವು
ನೋಡುತ್ತಿದ್ದೀರಿ, ನೀವೇ ದೇವತೆಗಳಾಗುತ್ತಿದ್ದೀರಿ. ಈಗಂತೂ ಎಲರೂ ತಮ್ಮನ್ನು ಹಿಂದೂಗಳೆಂದು
ಹೇಳಿಕೊಳ್ಳುತ್ತಿರುತ್ತಾರೆ. ಅವರಿಗೂ ಸಹ ತಿಳಿಸಬೇಕು - ವಾಸ್ತವದಲ್ಲಿ ಆದಿ ಸನಾತನ ದೇವಿ-ದೇವತಾ
ಧರ್ಮವಿದೆ, ಯಾವುದು ಪ್ರಾಯಲೋಪವಾಗಿ ಬಿಟ್ಟಿದೆ. ಇದಂತೂ ಬಹಳ ಪವಿತ್ರ ಧರ್ಮವಾಗಿ ಬಿಟ್ಟಿದೆ. ಇಂತಹ
ಪವಿತ್ರ ಧರ್ಮ ಮತ್ತ್ಯಾವುದೂ ಇಲ್ಲ. ಈಗ ಪವಿತ್ರರಾಗಿರದೇ ಇರುವ ಕಾರಣ ಯಾರೂ ತಮ್ಮನ್ನು
ದೇವತೆಗಳೆಂದು ಕರೆಸಿಕೊಳ್ಳುವುದಿಲ್ಲ. ನೀವು ತಿಳಿಸಬಹುದು - ನಾವು ಆದಿ ಸನಾತನ ದೇವಿ-ದೇವತಾ
ಧರ್ಮದವರಾಗಿದ್ದೆವು. ಆದ್ದರಿಂದಲೇ ದೇವತೆಗಳನ್ನು ಪೂಜಿಸುತ್ತಾರೆ, ಕ್ರಿಸ್ತನನ್ನು ಪೂಜಿಸುವವರು
ಕ್ರಿಶ್ಚಿಯನ್ನರಾದರು, ಬುದ್ಧನನ್ನು ಪೂಜಿಸುವವರು ಬೌದ್ಧಿಗಳಾದರು, ದೇವತೆಗಳನ್ನು ಪೂಜಿಸುವವರು
ದೇವತೆಗಳಾದರು ಅಂದಮೇಲೆ ಮತ್ತೆ ತಮ್ಮನ್ನು ಹಿಂದೂಗಳೆಂದು ಏಕೆ ಕರೆಸಿಕೊಳ್ಳುತ್ತೀರಿ? ಯುಕ್ತಿಯಿಂದ
ತಿಳಿಸಬೇಕು. ಕೇವಲ ಹಿಂದೂ ಧರ್ಮವು ಧರ್ಮವಲ್ಲವೆಂದು ಹೇಳಿದರೆ ಕೋಪಿಸಿಕೊಳ್ಳುತ್ತಾರೆ. ಆದ್ದರಿಂದ
ಹಿಂದೂ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದರು ಎಂದು ಹೇಳಿದರೆ ಆಗ ಸ್ವಲ್ಪ
ತಿಳಿದುಕೊಳ್ಳುತ್ತಾರೆ. ಆದಿ ಸನಾತನ ಧರ್ಮವಂತೂ ಯಾವುದೇ ಹಿಂದೂ ಅಲ್ಲ, ಆದಿ ಸನಾತನ ಶಬ್ಧವು
ಸರಿಯಾಗಿದೆ. ದೇವತೆಗಳು ಪವಿತ್ರರಾಗಿದ್ದರು, ಇವರು ಅಪವಿತ್ರರಾಗಿದ್ದಾರೆ. ಆದ್ದರಿಂದ ದೇವತೆಗಳೆಂದು
ಕರೆಸಿಕೊಳ್ಳುವುದಿಲ್ಲ. ಕಲ್ಪ-ಕಲ್ಪವೂ ಹೀಗೆಯೇ ಆಗುತ್ತದೆ. ಇವರ ರಾಜ್ಯದಲ್ಲಿ ಎಷ್ಟೊಂದು
ಸಾಹುಕಾರರಿದ್ದರು, ಈಗಂತೂ ಕಂಗಾಲರಾಗಿ ಬಿಟ್ಟಿದ್ದಾರೆ, ಅವರು ಪದಮಾಪದಮ ಪತಿಗಳಾಗಿದ್ದರು. ತಂದೆಯು
ಬಹಳ ಚೆನ್ನಾಗಿ ಯುಕ್ತಿಗಳನ್ನು ಕೊಡುತ್ತಾರೆ. ಕೇಳಬೇಕು - ನೀವು ಸತ್ಯಯುಗದಲ್ಲಿರುವವರೋ ಅಥವಾ
ಕಲಿಯುಗದವರೋ? ಕಲಿಯುಗದವರಾಗಿದ್ದರೆ ಅವಶ್ಯವಾಗಿ ನರಕವಾಸಿಗಳಾಗಿದ್ದೀರಿ,
ಸತ್ಯಯುಗದಲ್ಲಿರುವವರಾಗಿದ್ದರೆ ಸ್ವರ್ಗವಾಸಿಗಳಾಗಿದ್ದಾರೆ. ಇಂತಹ ಪ್ರಶ್ನೆಗಳನ್ನು ಕೇಳಿದಾಗ
ಅವಶ್ಯವಾಗಿ ಪ್ರಶ್ನೆ ಕೇಳುವವರು ವರ್ಗಾವಣೆ ಮಾಡಿ ದೇವತೆಗಳನ್ನಾಗಿ ಮಾಡುವವರೇ ಆಗಿರುತ್ತಾರೆ.
ಮತ್ತ್ಯಾರೂ ಇಂತಹ ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲವೆಂದು ತಿಳಿಯುತ್ತಾರೆ. ಆ ಭಕ್ತಿಮಾರ್ಗವೇ
ಬೇರೆಯಾಗಿದೆ, ಭಕ್ತಿಯ ಫಲವೇನು? ಅದು ಜ್ಞಾನವಾಗಿದೆ. ಸತ್ಯಯುಗದಲ್ಲಿ-ತ್ರೇತಾದಲ್ಲಿ
ಭಕ್ತಿಯಿರುವುದಿಲ್ಲ, ಜ್ಞಾನದಿಂದ ಅರ್ಧಕಲ್ಪ ದಿನ, ಭಕ್ತಿಯಿಂದ ಅರ್ಧಕಲ್ಪ ರಾತ್ರಿ.
ಒಪ್ಪುವವರಿದ್ದರೆ ಒಪ್ಪುತ್ತಾರೆ. ಒಪ್ಪದಿರುವವರು ಜ್ಞಾನವನ್ನೂ ಒಪ್ಪುವುದಿಲ್ಲ, ಭಕ್ತಿಯನ್ನೂ
ಒಪ್ಪುವುದಿಲ್ಲ. ಅವರಿಗೆ ಕೇವಲ ಹಣ ಸಂಪಾದನೆಯಷ್ಟೇ ಗೊತ್ತಿರುತ್ತದೆ. ನೀವು ಮಕ್ಕಳ ಯೋಗಬಲದಿಂದ ಈಗ
ಶ್ರೀಮತದಂತೆ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ. ಅರ್ಧಕಲ್ಪದ ನಂತರ ರಾಜ್ಯವನ್ನು
ಕಳೆದುಕೊಳ್ಳುತ್ತೀರಿ. ಈ ಚಕ್ರವು ಸುತ್ತುತ್ತಲೇ ಇರುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
೧. ಅನೇಕರ
ಕಲ್ಯಾಣ ಮಾಡಲು ತಮ್ಮ ನಾಲಿಗೆಯನ್ನು ಬಹಳ ಮಧುರ ಮಾಡಿಕೊಳ್ಳಬೇಕು. ಬಹಳ ಮಧುರತೆಯಿಂದ ಸರ್ವೀಸ್
ಮಾಡಬೇಕು. ಸಹನಶೀಲರಾಗಬೇಕಾಗಿದೆ.
೨. ಕರ್ಮಗಳ ಗುಹ್ಯ ಗತಿಯನ್ನು ಅರಿತು ವಿಕಾರಗಳ ಮೇಲೆ ಜಯ ಗಳಿಸಬೇಕು. ಜಗತ್ಜೀತ್ ದೇವತೆಗಳಾಗಬೇಕು.
ಆತ್ಮಾಭಿಮಾನಿಯಾಗಿ ಕುದೃಷ್ಟಿಯನ್ನು ಆತ್ಮಿಕ ದೃಷ್ಟಿಯನ್ನಾಗಿ ಮಾಡಿಕೊಳ್ಳಬೇಕು.
ವರದಾನ:
ಬ್ರಾಹ್ಮಣ
ಜನ್ಮದ ಜನ್ಮ ಪತ್ರಿಯನ್ನು ತಿಳಿದು ಸದಾ ಖುಷಿಯಲ್ಲಿರುವವರೇ ಶ್ರೇಷ್ಠ ಭಾಗ್ಯವಾನ್ ಭವ.
ಬ್ರಾಹ್ಮಣ ಜೀವನ ಹೊಸ
ಜೀವನವಾಗಿದೆ, ಬ್ರಾಹ್ಮಣ ಆದಿಯಲ್ಲಿ ದೇವಿ-ದೇವತಾ ಆಗಿದ್ದರು ಮತ್ತು ಈಗ ಬಿ.ಕೆ. ಆಗಿದ್ದಾರೆ.
ಬ್ರಾಹ್ಮಣರ ಜನ್ಮ ಪತ್ರಿ ಮೂರೂ ಕಾಲ ಒಳ್ಳೆಯದರಲ್ಲಿ ಒಳ್ಳೆಯದಿದೆ. ಏನಾಯಿತು ಅದು ಸಹಾ
ಒಳ್ಳೆಯದಾಗಿದೆ ಮತ್ತು ಏನಾಗುತ್ತಿದೆ ಅದು ಇನ್ನೂ ಒಳ್ಳೆಯದು ಮತ್ತು ಏನು ಆಗುವುದಿದೆ ಅದು ಇನ್ನು
ಇನ್ನೂ ಬಹಳ-ಬಹಳ ಒಳ್ಳೆಯದು. ಬ್ರಾಹ್ಮಣ ಜೀವನದ ಜನ್ಮ ಪತ್ರಿ ಸದಾ ಒಳ್ಳೆಯದಿರುತ್ತದೆ, ಗ್ಯಾರೆಂಟಿ
ಇದೆ. ಆದ್ದರಿಂದ ಸದಾ ಇದೇ ಖುಷಿಯಲ್ಲಿರಿ ಸ್ವಯಂ ಭಾಗ್ಯವಿಧಾತ ತಂದೆಯು ಭಾಗ್ಯದ ಶ್ರೇಷ್ಠ
ರೇಖೆಯನ್ನು ಎಳೆದಿದ್ದಾರೆ, ತನ್ನವರನ್ನಾಗಿ ಮಾಡಿಕೊಂಡಿದ್ದಾರೆ.
ಸ್ಲೋಗನ್:
ಏಕರಸ ಸ್ಥಿತಿಯ
ಅನುಭವ ಮಾಡಬೇಕಾದರೆ ಒಬ್ಬ ತಂದೆಯಿಂದ ಸರ್ವ ಸಂಬಂಧದ ರಸವನ್ನು ಪಡೆಯಿರಿ.