01.03.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆ
ಮತ್ತು ಮಕ್ಕಳ ಚಟುವಟಿಕೆಯಲ್ಲಿ ಯಾವ ಅಂತರವಿದೆಯೋ ಅದನ್ನು ಅರಿತುಕೊಳ್ಳಿ, ತಂದೆಯು ನಾವು
ಮಕ್ಕಳೊಂದಿಗೆ ಆಟವಾಡುತ್ತಾರೆಯೇ ಹೊರತು ಊಟ ಮಾಡುವುದಿಲ್ಲ.”
ಪ್ರಶ್ನೆ:
ಸತ್ಯ ಸಂಗವು
ಮೇಲೆತ್ತುತ್ತದೆ ಕೆಟ್ಟ ಸಂಗವು ಕೆಳಗೆ ಬೀಳಿಸುತ್ತದೆ - ಇದರ ಭಾವಾರ್ಥವೇನು?
ಉತ್ತರ:
ನೀವೀಗ ಸತ್ಯ
ಸಂಗವನ್ನು ಮಾಡುತ್ತೀರಿ ಅರ್ಥಾತ್ ತಂದೆಯೊಂದಿಗೆ ಬುದ್ಧಿಯೋಗವನ್ನಿಡುತ್ತೀರಿ, ಆದ್ದರಿಂದ ಪಾರಾಗಿ
ಬಿಡುತ್ತೀರಿ. ನಂತರ ನಿಧಾನ - ನಿಧಾನವಾಗಿ ಕೆಟ್ಟ ಸಂಗ ಅರ್ಥಾತ್ ದೇಹದ ಸಂಗದಲ್ಲಿ ಬರುತ್ತೀರಿ,
ಆದ್ದರಿಂದ ಇಳಿಯುತ್ತಾ ಹೋಗುತ್ತೀರಿ. ಏಕೆಂದರೆ ಸತ್ಸಂಗದ ರಂಗು ಅಂಟುತ್ತದೆ. ಆದ್ದರಿಂದಲೇ
ಸತ್ಸಂಗವು ಮೇಲೆತ್ತುತ್ತದೆ ಕೆಟ್ಟ ಸಂಗವು ಬೀಳಿಸುತ್ತದೆ ಎಂದು ಹೇಳಲಾಗುತ್ತದೆ. ನೀವು ದೇಹ ಸಹಿತ
ದೇಹದ ಎಲ್ಲಾ ಸಂಬಂಧಗಳನ್ನು ಮರೆತು ತಂದೆಯ ಸಂಗ ಮಾಡಿ ಅರ್ಥಾತ್ ತಂದೆಯನ್ನು ನೆನಪು ಮಾಡಿ ಅದರಿಂದ
ತಂದೆಯ ಸಮಾನ ಪಾವನರಾಗಿ ಬಿಡುತ್ತೀರಿ.
ಓಂ ಶಾಂತಿ.
ಈಗ ಮಕ್ಕಳಿಗೆ ಎರಡು ತರಗತಿಗಳಾಗಿ ಬಿಟ್ಟಿತು. ಇದು ಒಳ್ಳೆಯದಾಗಿದೆ, ಒಂದು ನೆನಪಿನ ಯಾತ್ರೆಯಾಗಿದೆ.
ಇದರಿಂದ ಪಾಪಗಳು ನಾಶವಾಗುತ್ತಾ ಹೋಗುತ್ತವೆ. ಆತ್ಮವು ಪವಿತ್ರವಾಗುತ್ತಾ ಹೋಗುತ್ತದೆ ಮತ್ತು
ಎರಡನೆಯ ತರಗತಿ ಜ್ಞಾನದ್ದಾಗಿದೆ. ಜ್ಞಾನವೂ ಸಹಜವಾಗಿದೆ ಯಾವುದೇ ಕಷ್ಟವಿಲ್ಲ. ನಿಮ್ಮ
ಸೇವಾಕೇಂದ್ರಕ್ಕೂ ಮತ್ತು ಇಲ್ಲಿಗೂ ಅಂತರವಿರುತ್ತದೆ. ಇಲ್ಲಂತೂ ತಂದೆ ಮತ್ತು ಮಕ್ಕಳು
ಕುಳಿತಿದ್ದೀರಿ. ಈ ಮೇಳವು ತಂದೆ ಮತ್ತು ಮಕ್ಕಳ ಮೇಳವಾಗಿದೆ. ನಿಮ್ಮ ಸೇವಾಕೇಂದ್ರದಲ್ಲಿ ಕೇವಲ
ಪರಸ್ಪರ ಮಕ್ಕಳ ಮೇಳವಾಗುತ್ತದೆ. ಆದ್ದರಿಂದ ಮಕ್ಕಳು ಸನ್ಮುಖದಲ್ಲಿ ಬರುತ್ತೀರಿ. ಭಲೆ ನೆನಪು
ಮಾಡುತ್ತಾರೆ ಆದರೆ ನೀವು ಸನ್ಮುಖದಲ್ಲಿ ನೋಡುತ್ತೀರಿ - ನಿಮ್ಮೊಂದಿಗೇ ಕುಳಿತುಕೊಳ್ಳುವೆನು,
ನಿಮ್ಮೊಂದಿಗೇ ಮಾತನಾಡುವೆನು..... ತಂದೆಯು ತಿಳಿಸಿದ್ದಾರೆ - ತಂದೆ ಮತ್ತು ಮಕ್ಕಳ ಚಟುವಟಿಕೆಯಲ್ಲಿ
ಅಂತರವಿದೆ ಅಂದಮೇಲೆ ವಿಚಾರ ಮಾಡಿ - ಇದರಲ್ಲಿ ತಂದೆಯ ಪಾತ್ರವೇನು ಮತ್ತು ರಥದ ಪಾತ್ರವೇನು? ತಂದೆಯು
ರಥದ ಮೂಲಕ ಆಟವಾಡುತ್ತಾರೆಯೇ? ಹೌದು ಆಟವಾಡುತ್ತಾರೆ. ಏಕೆಂದರೆ ನಿಮ್ಮೊಂದಿಗೇ ಕುಳಿತುಕೊಳ್ಳುವೆಂದು
ಹೇಳುತ್ತಾರಲ್ಲವೆ. ಹಾಗೆಯೇ ನಿಮ್ಮೊಂದಿಗೇ ತಿನ್ನುವೆನು.... ಎಂದೂ ಹೇಳುತ್ತಾರೆ, ಆದರೆ ಅವರು
ತಿನ್ನುವುದೇ ಇಲ್ಲ. ಮಕ್ಕಳ ಜೊತೆ ಆಟವಾಡುತ್ತಾರೆ. ಅದಂತೂ ತಂದೆಗೆ ಗೊತ್ತಿದೆ, ಇಬ್ಬರೂ ಆಡುತ್ತಾರೆ.
ಎಲ್ಲವನ್ನೂ ಇಲ್ಲಿ ನಿಮ್ಮ ಜೊತೆಯಲ್ಲಿಯೇ ಮಾಡುತ್ತಾರೆ. ಏಕೆಂದರೆ ಅವರು ಪರಮ ಶಿಕ್ಷಕನೂ ಆಗಿದ್ದಾರೆ,
ಶಿಕ್ಷಕರ ಕರ್ತವ್ಯ ಮಕ್ಕಳನ್ನು ಖುಷಿ ಪಡಿಸುವುದಾಗಿದೆ. ಒಳಾಂಗಣ ಆಟವಿರುತ್ತದೆಯಲ್ಲವೆ.
ಇತ್ತೀಚೆಗಂತೂ ಬಹಳಷ್ಟು ಭಿನ್ನ-ಭಿನ್ನ ಪ್ರಕಾರದ ಆಟಗಳಿವೆ. ಎಲ್ಲದಕ್ಕಿಂತ ಹೆಸರುವಾಸಿಯಾದದ್ದು
ಪಗಡೆಯಾಟ ಆಗಿದೆ, ಭಾರತದಲ್ಲಿ ಇದರ ವರ್ಣನೆಯಿದೆ, ಆದರೆ ಇದು ಜೂಜಾಟದ ರೂಪದಲ್ಲಿದೆ. ಜೂಜಾಟ
ಆಡುವವರನ್ನು ಹಿಡಿಯುತ್ತಾರೆ. ಇದೆಲ್ಲವನ್ನೂ ಭಕ್ತಿಮಾರ್ಗದ ಪುಸ್ತಕಗಳಿಂದ ಈ ಮಾತುಗಳನ್ನು
ಆರಿಸಿಕೊಂಡಿದ್ದಾರೆ. ನಿಮಗೆ ಗೊತ್ತಿದೆ, ಈ ವ್ರತ-ನಿಯಮ ಮೊದಲಾದವುಗಳೆಲ್ಲವೂ ಭಕ್ತಿಮಾರ್ಗದ
ಮಾತುಗಳಾಗಿವೆ. ನಿರ್ಜಲ ವ್ರತವನ್ನಿಡುತ್ತಾರೆ, ಭೋಜನವನ್ನೂ ಸ್ವೀಕರಿಸುವುದಿಲ್ಲ ಮತ್ತು ನೀರನ್ನೂ
ಕುಡಿಯುವುದಿಲ್ಲ. ಒಂದುವೇಳೆ ಭಕ್ತಿಮಾರ್ಗದಲ್ಲಿ ಪ್ರಾಪ್ತಿಯಾಗುತ್ತದೆಯೆಂದರೂ ಸಹ ಅದು
ಅಲ್ಪಕಾಲದ್ದಾಗಿದೆ. ಇಲ್ಲಂತೂ ನೀವು ಮಕ್ಕಳಿಗೆ ಎಲ್ಲವನ್ನೂ ತಿಳಿಸಲಾಗುತ್ತದೆ. ಭಕ್ತಿಮಾರ್ಗದಲ್ಲಿ
ಬಹಳ ಪೆಟ್ಟು ತಿನ್ನುತ್ತಾರೆ. ಜ್ಞಾನಮಾರ್ಗವು ಸುಖದ ಮಾರ್ಗವಾಗಿದೆ. ನೀವೂ ಸಹ ತಿಳಿದುಕೊಂಡಿದ್ದೀರಿ
- ನಾವು ಸುಖದ ಆಸ್ತಿಯನ್ನು ತಂದೆಯಿಂದ ಪಡೆಯುತ್ತಿದ್ದೇವೆ. ಭಕ್ತಿಮಾರ್ಗದಲ್ಲಿಯೂ ಸಹ ಒಬ್ಬರ ನೆನಪು
ಮಾಡುತ್ತಾರೆ. ಒಬ್ಬರ ಪೂಜೆಯೂ ಸಹ ಅವ್ಯಭಿಚಾರಿ ಪೂಜೆಯಾಗಿದೆ, ಅದೂ ಒಳ್ಳೆಯದಾಗಿದೆ. ಭಕ್ತಿಯೂ ಸಹ
ಸತೋ, ರಜೋ, ತಮೋ ಇರುತ್ತದೆ. ಎಲ್ಲದಕ್ಕಿಂತ ಸರ್ವಶ್ರೇಷ್ಠ ಸತೋಗುಣಿ ಭಕ್ತಿಯು ಶಿವ ತಂದೆಯ
ಭಕ್ತಿಯಾಗಿದೆ. ಶಿವ ತಂದೆಯೇ ಬಂದು ಎಲ್ಲಾ ಮಕ್ಕಳನ್ನು ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ.
ಯಾರು ಎಲ್ಲರಿಗಿಂತ ಹೆಚ್ಚಿನ ಮಕ್ಕಳು ಸೇವೆಯನ್ನು ಮಾಡುತ್ತಾರೆ, ಪಾವನರನ್ನಾಗಿ ಮಾಡುತ್ತಾರೆಯೋ
ಅವರನ್ನೇ ಕರೆಯುತ್ತಾರೆ. ಆದರೆ ಅವರನ್ನು ಕಲ್ಲು, ಮುಳ್ಳಿನಲ್ಲಿದ್ದಾರೆಂದು ಹೇಳುತ್ತಾರೆ ಅಂದಮೇಲೆ
ಇದು ನಿಂದನೆಯಾಯಿತಲ್ಲವೆ. ತಾವು ಮಕ್ಕಳಿಗೆ ಬೇಹದ್ದಿನ ತಂದೆಯ ಮೂಲಕ ರಾಜ್ಯಭಾಗ್ಯವು ಸಿಕ್ಕಿತ್ತು.
ಈಗ ಮತ್ತೆ ಅವಶ್ಯವಾಗಿ ಸಿಗುತ್ತದೆ. ನೀವು ಜ್ಞಾನವು ಬೇರೆ ಮತ್ತು ಭಕ್ತಿಯು ಬೇರೆ ಎಂದು
ತಿಳಿಯುತ್ತೀರಿ. ರಾವಣ ರಾಜ್ಯ ಮತ್ತು ರಾಮ ರಾಜ್ಯವು ಹೇಗೆ ನಡೆಯುತ್ತದೆ ಎನ್ನುವುದನ್ನೂ ಸಹ ನೀವು
ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಆದ್ದರಿಂದ ಪತ್ರಿಕೆಗಳನ್ನೂ ಸಹ ಮುದ್ರಣ
ಮಾಡಿಸುತ್ತೀರಿ. ಏಕೆಂದರೆ ಮನುಷ್ಯರಿಗೆ ಸತ್ಯವಾದ ತಿಳುವಳಿಕೆಯೂ ಬೇಕಲ್ಲವೆ. ನಿಮ್ಮದೆಲ್ಲವೂ
ಸತ್ಯವಾಗಿದೆ. ಮಕ್ಕಳು ಸರ್ವೀಸ್ ಮಾಡಬೇಕು, ಸರ್ವೀಸಂತೂ ಬಹಳ ಇದೆ. ಸರ್ವೀಸಿಗಾಗಿ ಈ ಬ್ಯಾಡ್ಜ್
ಎಷ್ಟು ಚೆನ್ನಾಗಿದೆ. ಎಲ್ಲದಕ್ಕಿಂತ ದೊಡ್ಡ ಶಾಸ್ತ್ರ ಈ ಬ್ಯಾಡ್ಜ್ ಆಗಿದೆ, ಇವು ಜ್ಞಾನದ
ಮಾತುಗಳಾಗಿವೆ, ಇದರಲ್ಲಿ ತಿಳಿಸಬೇಕಾಗಿದೆ. ಆ ನೆನಪಿನ ಯಾತ್ರೆಯೇ ಭಿನ್ನವಾಗಿದೆ. ಅದಕ್ಕೆ ಅಜಪಾಜಪ
ಎಂದು ಹೇಳಲಾಗುತ್ತದೆ. ಏನನ್ನೂ ಜಪಿಸಬೇಕಾಗಿಲ್ಲ ಅಥವಾ ಆಂತರ್ಯದಲ್ಲಿ ಶಿವ-ಶಿವ ಎಂದು
ಹೇಳುವಂತಿಲ್ಲ. ಕೇವಲ ತಂದೆಯನ್ನು ನೆನಪು ಮಾಡಬೇಕು. ಇದಂತೂ ನಿಮಗೆ ಗೊತ್ತಿದೆ, ಶಿವಬಾಬಾ
ತಂದೆಯಾಗಿದ್ದಾರೆ, ನಾವೆಲ್ಲರೂ ಅವರ ಸಂತಾನರಾಗಿದ್ದೇವೆ. ಅವರೇ ಸನ್ಮುಖದಲ್ಲಿ ಬಂದು ತಿಳಿಸುತ್ತಾರೆ
ಮಕ್ಕಳೇ, ನಾನು ಪತಿತ-ಪಾವನನಾಗಿದ್ದೇನೆ, ಪಾವನರನ್ನಾಗಿ ಮಾಡಲು ಕಲ್ಪ-ಕಲ್ಪವೂ ಬರುತ್ತೇನೆ.
ಆದ್ದರಿಂದ ದೇಹ ಸಹಿತ ದೇಹದ ಎಲ್ಲಾ ಸಂಬಂಧವನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯಿರಿ ಮತ್ತು
ತಂದೆಯಾದ ನನ್ನನ್ನು ನೆನಪು ಮಾಡಿ ಆಗ ನೀವು ಪಾವನರಾಗಿ ಬಿಡುತ್ತೀರಿ. ಪತಿತರನ್ನು ಪಾವನರನ್ನಾಗಿ
ಮಾಡುವುದೇ ನನ್ನ ಕರ್ತವ್ಯವಾಗಿದೆ. ಇದು ತಂದೆಯ ಜೊತೆ ಬುದ್ಧಿಯೋಗ ಅಥವಾ ಸಂಗವಾಗಿದೆ. ಸಂಗದ ರಂಗು
ಅಂಟುತ್ತದೆ ಆದ್ದರಿಂದಲೇ ಹೇಳಲಾಗುತ್ತದೆ, ಸತ್ಸಂಗವು ಮೇಲೆತ್ತುತ್ತದೆ ಕೆಟ್ಟ ಸಂಗವು ಕೆಳಗೆ
ಬೀಳಿಸುತ್ತದೆ.... ತಂದೆಯೊಂದಿಗೆ ಬುದ್ಧಿಯೋಗವನ್ನಿಡುವುದರಿಂದ ನೀವು ಪಾರಾಗಿ ಬಿಡುತ್ತೀರಿ ಮತ್ತೆ
ಇಳಿಯಲು ಪ್ರಾರಂಭಿಸುತ್ತೀರಿ. ಅದ್ಕಕಾಗಿಯೇ ಗಾಯನವಿದೆ - ಸತ್ಸಂಗವು ಮೇಲೆತ್ತುತ್ತದೆ, ಅದರ
ಅರ್ಥವನ್ನೂ ಸಹ ಭಕ್ತಿಮಾರ್ಗದವರು ತಿಳಿದುಕೊಂಡಿಲ್ಲ. ನಿಮಗೆ ಗೊತ್ತಿದೆ, ನಾವಾತ್ಮಗಳು
ಪತಿತರಾಗಿದ್ದೇವೆ, ಆ ಪಾವನ ತಂದೆಯೊಂದಿಗೆ ಬುದ್ಧಿಯೋಗವನ್ನು ಇಡುವುದರಿಂದ ಪಾವನರಾಗುತ್ತೇವೆ.
ಆತ್ಮವು ಪರಮಾತ್ಮ ತಂದೆಯನ್ನು ನೆನಪು ಮಾಡುವುದು. ಯಾವ ಆತ್ಮವು ಪಾವನವಾಗುತ್ತದೆ ಆಗ ಶರೀರವೂ
ಪವಿತ್ರವಾಗುತ್ತದೆ, ಸತ್ಯ ಚಿನ್ನವಾಗುತ್ತದೆ. ಇದಾಗಿದೆ ನೆನಪಿನ ಯಾತ್ರೆ. ಯೋಗಾಗ್ನಿಯಿಂದ
ವಿಕರ್ಮಗಳು ವಿನಾಶವಾಗುತ್ತದೆ, ತುಕ್ಕು ಬಿಟ್ಟು ಹೋಗುತ್ತದೆ. ನೀವು ತಿಳಿದಿದ್ದೀರಿ, ಸತ್ಯಯುಗೀ
ಹೊಸ ಪ್ರಪಂಚದಲ್ಲಿ ನಾವು ಪವಿತ್ರ ಸಂಪೂರ್ಣ ನಿರ್ವಿಕಾರಿಗಳಾಗಿದ್ದೆವು, 16 ಕಲಾ ಸಂಪೂರ್ಣರೂ
ಆಗಿದ್ದೆವು. ಈಗ ಯಾವುದೇ ಕಲೆಯು ಉಳಿದಿಲ್ಲ, ಇದಕ್ಕೆ ರಾಹುವಿನ ಗ್ರಹಣವೆಂದು ಹೇಳಲಾಗುತ್ತದೆ. ಇಡೀ
ಪ್ರಪಂಚದಲ್ಲಿ ಅದರಲ್ಲಿಯೂ ಭಾರತದಲ್ಲಿ ರಾಹುವಿನ ಗ್ರಹಣ ಹಿಡಿದಿದೆ. ಶರೀರವೂ ಕಪ್ಪಾಗಿದೆ, ನೀವು ಈ
ಕಣ್ಣುಗಳಿಂದ ಏನೆಲ್ಲಾ ನೋಡುತ್ತೀರೋ ಅದೆಲ್ಲವೂ ಕಪ್ಪಾಗಿ ಬಿಟ್ಟಿದೆ. ಯಥಾ ರಾಜಾ-ರಾಣಿ ತಥಾ ಪ್ರಜಾ
ಅಂದಾಗ ಶ್ಯಾಮ ಸುಂದರ ಎಂಬುದರ ಅರ್ಥವನ್ನೂ ಯಾರೂ ತಿಳಿದುಕೊಂಡಿಲ್ಲ. ಮನುಷ್ಯರಿಗೆ ಎಷ್ಟೊಂದು
ಹೆಸರನ್ನು ಇಟ್ಟು ಬಿಡುತ್ತಾರೆ ಅಂದಾಗ ಈಗ ತಂದೆಯು ಬಂದು ಅರ್ಥವನ್ನು ತಿಳಿಸುತ್ತಿದ್ದಾರೆ. ನೀವೇ
ಮೊದಲು ಸುಂದರ ನಂತರ ಶ್ಯಾಮ ಆಗಿದ್ದಿರಿ, ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ನೀವು
ಸುಂದರರಾಗಿ ಬಿಡುತ್ತೀರಿ. ನಂತರವೂ ಈ ರೀತಿ ಆಗಬೇಕಾಗಿದೆ - ಶ್ಯಾಮನಿಂದ ಸುಂದರ, ಸುಂದರನಿಂದ
ಶ್ಯಾಮ. ಅದರ ಅರ್ಥವನ್ನು ತಂದೆಯು ಆತ್ಮಗಳಿಗೆ ತಿಳಿಸಿದ್ದಾರೆ. ನಾವಾತ್ಮಗಳು ಒಬ್ಬ ತಂದೆಯನ್ನೇ
ನೆನಪು ಮಾಡುತ್ತೇವೆ, ಬುದ್ಧಿಯಲ್ಲಿ ನಾವು ಬಿಂದುವಾಗಿದ್ದೇವೆ ಎಂಬ ನೆನಪು ಬಂದಿತು. ಇದಕ್ಕೆ ಆತ್ಮ
ಸಾಕ್ಷಾತ್ಕಾರ ಎಂದು ಹೇಳಲಾಗುತ್ತದೆ. ನಂತರ ನೋಡುವುದಕ್ಕೆ ಒಳ ನೋಟವಿರುತ್ತದೆ. ಇದಂತೂ
ತಿಳಿದುಕೊಳ್ಳುವಂತಹ ಮಾತುಗಳಾಗಿವೆ. ಆತ್ಮವು ತಿಳಿದಿದೆ - ನಾನು ಆತ್ಮನಾಗಿದ್ದೇನೆ, ಇದು ನನ್ನ
ಶರೀರವಾಗಿದೆ. ನಾವು ಶರೀರದಲ್ಲಿ ಬಂದು ಪಾತ್ರವನ್ನಭಿನಯಿಸುತ್ತಿದ್ದೇವೆ. ನಾಟಕದನುಸಾರವಾಗಿ ಮೊಟ್ಟ
ಮೊದಲು ನಾವು ಬರುತ್ತೇವೆ. ಆತ್ಮಗಳೆಲ್ಲರೂ ಇದ್ದಾರೆ - ಕೆಲವರಲ್ಲಿ ಕೆಲವೊಂದು ಪಾತ್ರವಿದೆ,
ಕೆಲವರಲ್ಲಿ ಕೆಲವೊಂದು. ಇದು ಬಹಳ ದೊಡ್ಡ ಬೇಹದ್ದಿನ ನಾಟಕವಾಗಿದೆ. ಇದರಲ್ಲಿ ನಂಬರ್ವಾರ್ ಹೇಗೆ
ಬರುತ್ತಾರೆ, ಹೇಗೆ ಪಾತ್ರವನ್ನಭಿನಯಿಸುತ್ತಾರೆ - ಇದನ್ನು ನೀವು ತಿಳಿದುಕೊಂಡಿದ್ದೀರಿ. ಮೊಟ್ಟ
ಮೊದಲು ದೇವಿ-ದೇವತೆಗಳ ಮನೆತನವಿರುತ್ತದೆ. ಈ ಜ್ಞಾನವೂ ನಿಮಗೆ ಈ ಪುರುಷೋತ್ತಮ ಸಂಗಮಯುಗದಲ್ಲಿ
ಸಿಕ್ಕಿದೆ. ನಂತರದಲ್ಲಿ ಇದೆಲ್ಲವೂ ನೆನಪಿನಲ್ಲಿರುವುದಿಲ್ಲ. ಸ್ವಯಂ ತಂದೆಯು ತಿಳಿಸುತ್ತಾರೆ - ಈ
ಜ್ಞಾನವು ಪ್ರಾಯಲೋಪವಾಗಿ ಬಿಡುವುದು. ಈ ದೇವಿ-ದೇವತಾ ಧರ್ಮದ ಸ್ಥಾಪನೆಯು ಹೇಗಾಗುತ್ತದೆ ಎಂದು
ಯಾರಿಗೂ ತಿಳಿದಿಲ್ಲ. ಚಿತ್ರವಂತೂ ಇದೆ ಆದರೆ ಅದು ಹೇಗೆ ಸ್ಥಾಪನೆಯಾಯಿತು, ಯಾರಿಗೂ ಗೊತ್ತಿಲ್ಲ.
ನೀವು ಮಕ್ಕಳಿಗೆ ಗೊತ್ತಿದೆ ಅಂದಮೇಲೆ ನಂತರ ನೀವು ಅನ್ಯರನ್ನು ತಮ್ಮ ಸಮಾನರನ್ನಾಗಿ
ಮಾಡಿಕೊಳ್ಳುತ್ತೀರಿ. ಬಹಳ ಮಕ್ಕಳಾಗಿ ಬಿಡುತ್ತಾರೆಂದರೆ ನಂತರ ಧ್ವನಿವರ್ಧಕ
ಯಂತ್ರವನ್ನಿಟ್ಟುಕೊಳ್ಳಬೇಕಾಗಿದೆ. ಅವಶ್ಯವಾಗಿ ಯಾರಾದರೂ ಯುಕ್ತಿಗಳನ್ನು ರಚಿಸುತ್ತಾರೆ ಅಂದಾಗ
ಬಹಳ ದೊಡ್ಡ ಸಾರ್ವಜನಿಕ ಸಭಾಂಗಣದ ಅವಶ್ಯಕತೆಯಿರುವುದು. ಹೇಗೆ ಕಲ್ಪದ ಹಿಂದೆ ಯಾರೆಲ್ಲಾ
ಪಾತ್ರವನ್ನಭಿನಯಿಸಿದ್ದರೋ ಅವರೇ ನಂತರ ಮಾಡುತ್ತಾರೆ. ಇದು ತಿಳುವಳಿಕೆಯಲ್ಲಿ ಬರುತ್ತದೆ ಅಂದಾಗ
ಮಕಳು ವೃದ್ಧಿ ಹೊಂದುತ್ತಿರುತ್ತಾರೆ. ತಂದೆಯು ತಿಳಿಸಿದ್ದರು - ವಿವಾಹಕ್ಕಾಗಿ ಯಾವ ಧರ್ಮ ಶಾಲೆ
ಮುಂತಾದವನ್ನು ಕಟ್ಟಿರುತ್ತಾರೆಯೋ ಅವರಿಗೂ ಸಹ ಹೋಗಿ ತಿಳಿಸಬೇಕು. ಇದನ್ನೂ ಸಹ ವಿವಾಹಕ್ಕಾಗಿ
ಧರ್ಮಶಾಲೆ ಮುಂತಾದವೆಲ್ಲವೂ ಕಟ್ಟಿರುತ್ತಾರಲ್ಲವೆ. ಯಾರು ನಮ್ಮ ಕುಲದವರಾಗಿರುತ್ತಾರೆ ಅವರು ತಕ್ಷಣ
ತಿಳಿದುಕೊಳ್ಳುತ್ತಾರೆ. ಯಾರು ಈ ಕುಲದವರಲ್ಲವೋ ಅವರು ವಿಘ್ನವನ್ನು ಹಾಕುತ್ತಿರುತ್ತಾರೆ. ಯಾರು
ಕುಲದವರಾಗಿರುತ್ತಾರೆ ಅವರು ಇದನ್ನು ಒಪ್ಪುತ್ತಾರೆ ಮತ್ತು ಸತ್ಯವೆಂದು ಹೇಳುತ್ತಾರೆ. ಯಾರು ಈ
ಧರ್ಮದವರಲ್ಲವೋ ಅವರು ಜಗಳವಾಡುತ್ತಿರುತ್ತಾರೆ. ಈ ಪದ್ಧತಿಯು ನಡೆಯುತ್ತಲೇ ಬಂದಿದೆ ಎಂದು
ಹೇಳುತ್ತಾರೆ. ಇದು ಪವಿತ್ರ ಮಾರ್ಗವೂ ಆಗಿದೆ. ನಂತರ ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆ.
ನೀವು ಪವಿತ್ರತೆಗಾಗಿ ಪ್ರಯತ್ನಿಸುತ್ತೀರಿ ಅದಕ್ಕೆ ಎಷ್ಟೊಂದು ವಿಘ್ನಗಳು ಬೀಳುತ್ತವೆ.
ಹಾಂಗ್ಕಾಂಗ್ನಲ್ಲಿರುವವರಿಗೆ ಎಷ್ಟೊಂದು ಮಾನ್ಯತೆ ಕೊಡುತ್ತಾರೆ, ಪೋಪ್ನಿಗೂ ಸಹ ಮಾನ್ಯತೆ
ಕೊಡುತ್ತಾರೆ. ಪೋಪ್ ಬಂದು ಏನು ಮಾಡುತ್ತಾರೆ ಎಂದು ನೀವು ತಿಳಿದುಕೊಂಡಿದ್ದೀರಿ ಅಂದರೆ ಲಕ್ಷ
ಗಟ್ಟಲೆ, ಕೋಟಿ ಗಟ್ಟಲೆ ವಿವಾಹವನ್ನು ಮಾಡಿಸುತ್ತಿರುತ್ತಾರೆ. ಬಹಳ ವಿವಾಹಗಳು ಆಗುತ್ತಿರುತ್ತವೆ
ಪೋಪ್ ಬಂದು ಆಶೀರ್ವಾದ ಮಾಡುತ್ತಾರೆ. ಇದರಲ್ಲಿ ಆ ಮನುಷ್ಯರು ತಮ್ಮ ಪ್ರತಿಷ್ಠತೆಯನ್ನು
ತೋರಿಸಿಕೊಳ್ಳುತ್ತಾರೆ, ಮಹಾತ್ಮರನ್ನು ವಿವಾಹದ ಸಂದರ್ಭದಲ್ಲಿ ಕರೆ ನೀಡುತ್ತಾರೆ. ಇತ್ತೀಚೆಗೆ
ವಿವಾಹವನ್ನೂ ಮಾಡಿಸುತ್ತಿರುತ್ತಾರೆ. ತಂದೆಯು ಹೇಳುತ್ತಾರೆ - ಕಾಮ ಮಹಾಶತ್ರುವಾಗಿದೆ. ಈ ರೀತಿ
ಶಾಸನವನ್ನು ರೂಪಿಸುವಂತದ್ದು ಚಿಕ್ಕಮ್ಮನ ಮನೆಯಂತಲ್ಲ. ಇದರಲ್ಲಿ ತಿಳಿಸಿಕೊಡುವುದಕ್ಕೆ ಬಹಳ
ಯುಕ್ತಿಗಳು ಬೇಕಾಗಿದೆ. ಮುಂದೆ ಹೋದಂತೆ ನಿಧಾನ-ನಿಧಾನವಾಗಿ ತಿಳಿದುಕೊಳ್ಳುತ್ತಾ ಹೋಗುತ್ತಾರೆ. ಆದಿ
ಸನಾತನ ಹಿಂದೂ ಧರ್ಮದವರು ಯಾರಿರುತ್ತಾರೆಯೋ ಅವರಿಗೆ ತಿಳಿಸಿ ಕೊಡಿ. ಆಗ ಅವರು ತಕ್ಷಣ
ತಿಳಿದುಕೊಳ್ಳಲು ಸಾಧ್ಯ. ಸರಾಸರಿ ಆದಿ ಸನಾತನ ಧರ್ಮವಿತ್ತು ಅದೇ ಇಂದು ಹಿಂದೂ ಧರ್ಮವಾಗಿದೆ. ಹೇಗೆ
ನೀವು ತಂದೆಯ ಮೂಲಕ ತಿಳಿದುಕೊಂಡಿದ್ದೀರಿ ಹಾಗೆಯೇ ಅನ್ಯರಿಗೂ ತಿಳಿಸುತ್ತಾ ವೃದ್ಧಿ
ಹೊಂದುತ್ತಿರುತ್ತೀರಿ. ಇದೂ ಸಹ ಪಕ್ಕಾ ನಿಶ್ಚಯವಿದೆ, ಈ ಮಾನವ ವಂಶ ವೃಕ್ಷದ ಸಸಿಯು ನಾಟಿಯಾಗುತ್ತಾ
ಹೋಗುತ್ತದೆ. ನೀವು ತಂದೆಯ ಶ್ರೀಮತದಂತೆ ಇಲ್ಲಿ ದೇವತೆಗಳಾಗುತ್ತಿದ್ದೀರಿ, ಇವರು ಹೊಸ ಪ್ರಪಂಚದಲ್ಲಿ
ಇರುವವರಾಗಿದ್ದಾರೆ. ತಂದೆಯು ಸಂಗಮಯುಗದಲ್ಲಿ ಬಂದು ನಮಗೆ ವರ್ಗಾವಣೆ ಮಾಡುತ್ತಾರೆಂದು ಮೊದಲು ನಿಮಗೆ
ಸ್ವಲ್ಪವೂ ತಿಳಿದಿರಲಿಲ್ಲ. ಎಂದೂ ಸಹ ಗೊತ್ತಿರಲಿಲ್ಲ. ಇದಕ್ಕೆ ಸತ್ಯ-ಸತ್ಯವಾದ ಪುರುಷೋತ್ತಮ
ಸಂಗಮಯುಗವೆಂದು ಹೇಳಲಾಗುತ್ತದೆ ಎಂದು ಈಗ ನೀವು ತಿಳಿದುಕೊಂಡಿದ್ದೀರಿ. ಈಗ ನೀವು
ಪುರುಷೋತ್ತಮರಾಗುತ್ತಿದ್ದೀರಿ. ಈಗ ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟೂ ಆಗುತ್ತೀರಿ.
ಪ್ರತಿಯೊಬ್ಬರೂ ತಮ್ಮೊಂದಿಗೆ ತಾವು ಕೇಳಿಕೊಳ್ಳಬೇಕಾಗಿದೆ - ಶಾಲೆಯಲ್ಲಿ ಯಾವ ಸಬ್ಜೆಕ್ಟ್ನಲ್ಲಿ
ಬಲಹೀನರಾಗಿದ್ದಾರೆ, ಅದರಲ್ಲಿ ಅನುತ್ತೀರ್ಣರಾಗುತ್ತಾರೆಂದು ತಿಳಿದು ಬರುತ್ತದೆ. ಇದೂ ಸಹ
ಪಾಠಶಾಲೆಯಾಗಿದೆ ಮತ್ತು ಸ್ಕೂಲ್ ಆಗಿದೆ. ಗೀತಾ ಪಾಠಶಾಲೆಯಂತೂ ಪ್ರಸಿದ್ಧವಾಗಿದೆ ನಂತರ ಅದರ
ಹೆಸರನ್ನು ಸ್ವಲ್ಪ ಬದಲಾಯಿಸುತ್ತಾರೆ. ಸತ್ಯ ಗೀತೆ, ಸುಳ್ಳು ಗೀತೆ ಎಂದು ನೀವು ಬರೆಯುತ್ತೀರಿ.
ಇದರಿಂದಲೂ ಸಹ ಮನುಷ್ಯರು ಕೋಪಿಸಿಕೊಳ್ಳುತ್ತಾರೆ. ಅವಶ್ಯವಾಗಿ ಏರುಪೇರುಗಳಾಗುತ್ತವೆ, ಇದರಲ್ಲಿ
ಹೆದರುವ ಮಾತಿಲ್ಲ. ಇತ್ತೀಚೆಗಂತೂ ಬಸ್ಸುಗಳನ್ನು ಸುಟ್ಟು ಹಾಕುತ್ತಾರೆ, ಇದಂತೂ ಫ್ಯಾಷನ್ ಆಗಿ
ಬಿಟ್ಟಿದೆ. ಯಾರು ಏನನ್ನು ಕಲಿಸುತ್ತಾರೆಯೋ ಅದನ್ನೆ ಕಲಿತಿದ್ದಾರೆ. ಮೊದಲಿಗಿಂತಲೂ ಹೆಚ್ಚಿನದಾಗಿ
ಎಲ್ಲವನ್ನು ಕಲಿತು ಬಿಟ್ಟಿದ್ದಾರೆ. ಪಿಕೆಟಿಂಗ್ ಮೊದಲಾದವನ್ನು ಮಾಡುತ್ತಿರುತ್ತಾರೆ, ಸರ್ಕಾರಕ್ಕೂ
ಸಹ ನಷ್ಟವುಂಟಾಗುತ್ತದೆ ಎಂದರೆ ಕಂದಾಯವನ್ನು ಹೆಚ್ಚಿಸಲಾಗುತ್ತದೆ. ಒಂದು ದಿನ ಬ್ಯಾಂಕ್ ಮೊದಲಾದ
ಎಲ್ಲರ ಸಂಪತ್ತನ್ನು ಹೊರ ಹಾಕುತ್ತದೆ, ದವಸ-ಧಾನ್ಯಗಳಿಗಾಗಿಯೂ ಸಹ ಎಲ್ಲಿಯೂ ಹೆಚ್ಚಿನದಾಗಿ ಇವರು
ಇಟ್ಟುಕೊಂಡಿಲ್ಲವೆ ಎಂದು ಶೋಧನೆ ಮಾಡುತ್ತಾರೆ. ನೀವು ಈ ಎಲ್ಲಾ ಮಾತುಗಳಿಂದ ಬಿಡುಗಡೆಯಾಗಿದ್ದೀರಿ,
ನಿಮಗಂತೂ ಮುಖ್ಯವಾದದ್ದು ನೆನಪಿನ ಯಾತ್ರೆಯಾಗಿದೆ. ತಂದೆಯು ತಿಳಿಸುತ್ತಾರೆ - ಈ ಮಾತುಗಳೊಂದಿಗೆ
ನನಗೆ ಯಾವುದೇ ಸಂಬಂಧವಿಲ್ಲ. ಕೇವಲ ನನ್ನ ಕೆಲಸವು ಮಾರ್ಗವನ್ನು ತಿಳಿಸುವುದಾಗಿದೆ. ಅದರಿಂದ ನಿಮ್ಮ
ದುಃಖವೆಲ್ಲವೂ ದೂರವಾಗಿ ಬಿಡುತ್ತದೆ. ಈ ಸಮಯದಲ್ಲಿ ನಿಮ್ಮ ಕರ್ಮಗಳ ಲೆಕ್ಕಾಚಾರವು
ಸಮಾಪ್ತಿಯಾಗುತ್ತದೆ. ಒಳಗಿರುವ ಖಾಯಿಲೆ ಮೊದಲಾದುವೆಲ್ಲವೂ ಹೊರ ಬರುತ್ತದೆ ಅಂತ್ಯದಲ್ಲಿ
ಉಳಿದುಕೊಂಡಿರುವ ಕರ್ಮಗಳ ಲೆಕ್ಕಾಚಾರವು ಸಮಾಪ್ತಿಯಾಗಬೇಕಾಗಿದೆ ಅಂದಾಗ ಇದರಲ್ಲಿ ಹೆದರಬಾರದು.
ರೋಗಿಯಾದಾಗಲೂ ಸಹ ಮನುಷ್ಯರಿಗೆ ಭಗವಂತನ ನೆನಪನ್ನು ತರಿಸುತ್ತಾರಲ್ಲವೆ. ನೀವು ಆಸ್ಪತ್ರೆಯಲ್ಲಿಯೂ
ಸಹ ಹೋಗಿ ಜ್ಞಾನವನ್ನು ತಿಳಿಸಿ - ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ.
ಕೇವಲ ಈ ಜನ್ಮದ ಮಾತಲ್ಲ, ಭವಿಷ್ಯದ 21 ಜನ್ಮಗಳಿಗಾಗಿ ನಾವು ಗ್ಯಾರಂಟಿ ಕೊಡುತ್ತೇವೆ, ತಾವು ಎಂದೂ
ರೋಗಿಯಾಗುವುದಿಲ್ಲ. ಒಬ್ಬ ತಂದೆಯನ್ನು ನೆನಪು ಮಾಡುವುದರಿಂದ ನಿಮ್ಮ ಆಯಸ್ಸೂ ಸಹ ವೃದ್ಧಿಯಾಗುತ್ತದೆ.
ಭಾರತವಾಸಿಗಳದು ದೀರ್ಘಾಯಸ್ಸಿತ್ತು, ನಿರೋಗಿಯಾಗಿದ್ದಿರಿ. ಈಗ ತಂದೆಯು ಶ್ರೇಷ್ಠರಾಗಲು ನಿಮಗೆ
ಶ್ರೀಮತವನ್ನು ಕೊಡುತ್ತಾರೆ. ಪುರುಷೋತ್ತಮ ಶಬ್ಧವನ್ನು ನೀವು ಎಂದೂ ಮರೆಯಬಾರದು. ಕಲ್ಪ-ಕಲ್ಪವೂ
ನೀವೇ ಆಗುತ್ತೀರಿ ಅಂದಾಗ ಈ ರೀತಿ ಹೇಳುವವರು ಮತ್ತ್ಯಾರೂ ಇಲ್ಲ ಅಂದಾಗ ಇಂತಹ ಸರ್ವೀಸನ್ನು ಬಹಳ
ಮಾಡಬೇಕು. ವೈದ್ಯರೊಂದಿಗೆ ಯಾವುದೇ ಸಮಯದಲ್ಲಿ ಅವಕಾಶವನ್ನು ತೆಗೆದುಕೊಂಡು ತಿಳಿಸಬಹುದು. ನೌಕರಿ
ಮಾಡುವವರೂ ಸಹ ಬಹಳ ಸರ್ವೀಸ್ ಮಾಡಬಹುದು. ರೋಗಿಗಳಿಗೂ ಸಹ ತಿಳಿಸಿ - ನಮಗೂ ದೊಡ್ಡ ವೈದ್ಯರಿದ್ದಾರೆ,
ಅವಿನಾಶಿ ಬೇಹದ್ದಿನ ಸರ್ಜನ್ ಆಗಿದ್ದಾರೆ, ನಾವು ಅವರ ಮಕ್ಕಳಾಗಿದ್ದೇವೆ. ಅದರಿಂದ ನಾವು 21
ಜನ್ಮಗಳಲ್ಲಿ ನಿರೋಗಿಗಳಾಗುತ್ತೇವೆ. ಆರೋಗ್ಯ ಮಂತ್ರಿಗೂ ಹೋಗಿ ತಿಳಿಸಿ - ಆರೋಗ್ಯವನ್ನು ಸುಧಾರಣೆ
ಮಾಡುವುದಕ್ಕೋಸ್ಕರ ಇಷ್ಟೇಕೆ ತಲೆ ಕೆಡಿಸಿಕೊಳ್ಳುತ್ತೀರಿ! ಸತ್ಯಯುಗದಲ್ಲಿ ಬಹಳ ಕಡಿಮೆ
ಮನುಷ್ಯರಿದ್ದರು. ಸುಖ-ಶಾಂತಿ ಪವಿತ್ರತೆ ಎಲ್ಲವೂ ಇತ್ತು. ಇಡೀ ಪ್ರಪಂಚದಲ್ಲಿ ನೀವೇ ಎಲ್ಲರ
ಕಲ್ಯಾಣ ಮಾಡುವವರಾಗಿದ್ದೀರಿ. ನೀವು ಮಾರ್ಗದರ್ಶಕರಾಗಿದ್ದೀರಲ್ಲವೆ. ಪಾಂಡವ
ಸಂಪ್ರದಾಯದವರಾಗಿದ್ದೀರಿ. ಇದು ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಆಹಾರ ಮಂತ್ರಿಗೂ ಹೋಗಿ ತಿಳಿಸಿ
- ಮೊಟ್ಟ ಮೊದಲು ಎಲ್ಲರಗಿಂತ ದೊಡ್ಡ ಆಹಾರ ಮಂತ್ರಿ ಶಿವ ತಂದೆಯಾಗಿದ್ದಾರೆ. ಇಷ್ಟು ಆಹಾರ
ಕೊಡುತ್ತಾರೆ ಅದರಿಂದ ಸ್ವರ್ಗದಲ್ಲಿ ಎಂದೂ ಯಾವುದೇ ಕೊರತೆಯೇ ಇರುವುದಿಲ್ಲ. ಈಗ ನೀವು
ಸಂಗಮಯುಗದಲ್ಲಿದ್ದೀರಿ, ಪೂರ್ಣ ಚಕ್ರವು ನಿಮ್ಮ ಬುದ್ಧಿಯಲ್ಲಿದೆ. ಆದ್ದರಿಂದ ನಿಮ್ಮನ್ನು
ಸ್ವದರ್ಶನ ಚಕ್ರಧಾರಿಗಳೆಂದು ಹೇಳುತ್ತಾರೆ, ಆದರೆ ಭಾರತವು ಬಹಳ ಬಡ ರಾಷ್ಟ್ರವಾಗಿದೆ. ಬುದ್ಧಿವಂತರು
ಬಂದು ಬುದ್ಧಿವಂತಿಕೆಯನ್ನು ಕಲಿಸುತ್ತಿರುತ್ತಾರೆ ಅಂದಾಗ ಇದೂ ಸಹ ನೀವು ಮಕ್ಕಳ ಬುದ್ಧಿಯಲ್ಲಿದೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಒಬ್ಬ
ತಂದೆಯನ್ನು ಜೊತೆಗಾರರನ್ನಾಗಿ ಮಾಡಿಕೊಂಡು ನಿಮ್ಮೊಂದಿಗೇ ಕುಳಿತುಕೊಳ್ಳುವೆನು, ನಿಮ್ಮೊಂದಿಗೇ
ತಿನ್ನುವೆನು, ನಿಮ್ಮೊಂದಿಗೆ ಕೇಳುವೆನು.... ಇದನ್ನು ಅನುಭವ ಮಾಡಬೇಕಾಗಿದೆ. ಕೆಟ್ಟ ಸಂಗವನ್ನು
ಬಿಟ್ಟು ಸತ್ಸಂಗದಲ್ಲಿರಬೇಕಾಗಿದೆ.
2. ಕರ್ಮಗಳ ಲೆಕ್ಕಾಚಾರವನ್ನು ನೆನಪಿನ ಯಾತ್ರೆ ಹಾಗೂ ಕರ್ಮ ಭೋಗದಿಂದ ಸಮಾಪ್ತಿ ಮಾಡಿ ಸಂಪೂರ್ಣ
ಪಾವನರಾಗಬೇಕಾಗಿದೆ. ಸಂಗಮಯುಗದಲ್ಲಿ ಸ್ವಯಂನ್ನು ಸಂಪೂರ್ಣ ವರ್ಗಾವಣೆ ಮಾಡಬೇಕಾಗಿದೆ.
ವರದಾನ:
ಬಿಂದು
ಸ್ವರೂಪದಲ್ಲಿ ಸ್ಥಿತರಾಗಿ ಮನಸ್ಸು ಬುದ್ದಿಯನ್ನು ನಕಾರಾತ್ಮಕ ಪ್ರಭಾವದಿಂದ ಸುರಕ್ಷಿತರಾಗಿಡುವಂತಹ
ವಿಶೇಷ ಆತ್ಮ ಭವ.
ಹೇಗೆ ಯಾವುದೇ
ಋತುವಿನಲ್ಲಿ ಆ ಋತುವಿನಿಂದ ಸುರಕ್ಷಿತವಾಗಿರಲು ಅಷ್ಟೇ ಪ್ರಮಾಣದ ಗಮನ ಕೊಡಲಾಗುವುದು. ಮಳೆ ಬರುವಾಗ
ಛತ್ರಿ, ರೇನ್ ಕೋಟ್ ಇತ್ಯಾದಿಗಳ ಕಡೆ ಗಮನ ಇಡುವಿರಿ. ಚಳಿಗಾಲದಲ್ಲಿ ಬೆಚ್ಚನೆಯ ಬಟ್ಟೆ ಗಳನ್ನು
ಇಡುವಿರಿ..... ಹಾಗೇ ವರ್ತಮಾನ ಸಮಯ ಮನಸ್ಸು ಬುದ್ದಿಯಲ್ಲಿ ನಕಾರಾತ್ಮಕ ಭಾವ ಮತ್ತು ಭಾವನೆ
ಉತ್ಪನ್ನ ಮಾಡುವಂತಹ ವಿಶೇಷ ಕಾರ್ಯ ಮಾಯೆ ಮಾಡುತ್ತಿದೆ. ಆದ್ದರಿಂದ ವಿಶೇಷವಾಗಿ ಸುರಕ್ಷಿತವಾಗಿರುವ
ಸಾಧನವನ್ನು ತಂದುಕೊಳ್ಳಿ. ಇದರ ಸಹಜ ಸಾಧನವಾಗಿದೆ - ಒಂದು ಬಿಂದು ಸ್ವರೂಪದಲ್ಲಿ ಸ್ಥಿತರಾಗುವುದು.
ಆಶ್ಚರ್ಯ ಮತ್ತು ಪ್ರಶ್ನಾರ್ಥಕ ಚಿನ್ಹೆಗೆ ಬದಲಾಗಿ ಬಿಂದು ಹಾಕುವುದು ಅರ್ಥಾತ್ ವಿಶೇಷ ಆತ್ಮ
ಆಗುವುದು.
ಸ್ಲೋಗನ್:
ಆಜ್ಞಾಕಾರಿ ಅವರೇ
ಆಗಿದ್ದಾರೆ ಯಾರು ಸಂಕಲ್ಪ, ಮಾತು ಮತ್ತು ಕರ್ಮದಲ್ಲಿ ಜೀ ಹಝೂರ್ ಮಾಡುತ್ತಾರೆ.