09.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಚೈತನ್ಯ ಲೈಟ್ಹೌಸ್ ಆಗಿದ್ದೀರಿ, ನೀವು ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕು, ಮನೆಯ ಮಾರ್ಗವನ್ನು
ತಿಳಿಸಬೇಕಾಗಿದೆ”
ಪ್ರಶ್ನೆ:
ಮುಂದೆ ಹೋದಂತೆ
ಯಾವ ಡೈರೆಕ್ಷನ್ ಮತ್ತು ಯಾವ ವಿಧಿಯಿಂದ ಅನೇಕ ಆತ್ಮರಿಗೆ ಸಿಗಲಿದೆ?
ಉತ್ತರ:
ಮುಂದೆ ಹೋದಂತೆ
ಅನೇಕರಿಗೆ ಈ ಡೈರೆಕ್ಷನ್ ಸಿಗುವುದು - ನೀವು ಬ್ರಹ್ಮಾಕುಮಾರ-ಕುಮಾರಿಯರ ಬಳಿ ಹೋಗಿ, ಅಲ್ಲಿ ನಿಮಗೆ
ಈ ವೈಕುಂಠದ ರಾಜಕುಮಾರ-ರಾಜಕುಮಾರಿಯರಾಗುವ ಜ್ಞಾನ ಕೊಡುತ್ತಾರೆ - ಈ ಸೂಚನೆಯು ಅವರಿಗೆ
ಬ್ರಹ್ಮಾರವರ ಸಾಕ್ಷಾತ್ಕಾರದಿಂದ ಸಿಗುವುದು. ಹೆಚ್ಚಿನದಾಗಿ ಬ್ರಹ್ಮಾ ಮತ್ತು ಶ್ರೀಕೃಷ್ಣನದೇ
ಸಾಕ್ಷಾತ್ಕಾರವಾಗುತ್ತದೆ. ಹೇಗೆ ಆದಿಯಲ್ಲಿ ಸಾಕ್ಷಾತ್ಕಾರದ ಪಾತ್ರವು ನಡೆಯಿತು ಹಾಗೆಯೇ
ಅಂತ್ಯದಲ್ಲಿಯೂ ನಡೆಯಲಿದೆ.
ಓಂ ಶಾಂತಿ.
ಆತ್ಮಿಕ ತಂದೆಯು ಮಕ್ಕಳೊಂದಿಗೆ ಕೇಳುತ್ತಾರೆ, ಎಲ್ಲರೊಂದಿಗೂ ಕೇಳುವುದಿಲ್ಲ. ಅದರಲ್ಲಿಯೂ ನಳಿನಿ
ಮಗುವಿನೊಂದಿಗೂ ಕೇಳುತ್ತಾರೆ - ಇಲ್ಲಿ ಏನು ಮಾಡುತ್ತಿದ್ದೀಯಾ? ಯಾರ ನೆನಪಿನಲ್ಲಿ ಕುಳಿತಿದ್ದೀಯಾ?
ತಂದೆಯ ನೆನಪಿನಲ್ಲಿ. ಕೇವಲ ತಂದೆಯ ನೆನಪಿನಲ್ಲಿ ಕುಳಿತಿದ್ದೀಯೋ ಅಥವಾ ಮತ್ತೇನಾದರೂ ನೆನಪಿದೆಯೋ?
ತಂದೆಯ ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ. ಮತ್ತೇನು ನೆನಪು ಮಾಡುತ್ತೀಯಾ? ಇದು ಬುದ್ಧಿಯ
ಕೆಲಸವಲ್ಲವೆ. ನಾವಾತ್ಮರು ನಮ್ಮ ಮನೆಗೆ ಹೋಗಬೇಕಾಗಿದೆ ಅಂದಮೇಲೆ ಮನೆಯನ್ನೂ ನೆನಪು ಮಾಡಬೇಕಾಗಿದೆ.
ಒಳ್ಳೆಯದು. ಮತ್ತೇನು ಮಾಡಬೇಕು? ಮನೆಯಲ್ಲಿ ಹೋಗಿ ಕುಳಿತು ಬಿಡುವುದೇ! ವಿಷ್ಣುವಿಗೆ ಸ್ವದರ್ಶನ
ಚಕ್ರ ತೋರಿಸುತ್ತಾರಲ್ಲವೆ. ಅದರ ಅರ್ಥವನ್ನೂ ಸಹ ತಂದೆಯು ತಿಳಿಸಿದ್ದಾರೆ. ಸ್ವ ಅರ್ಥಾತ್ ಆತ್ಮಕ್ಕೆ
ತನ್ನ 84 ಜನ್ಮಗಳ ಚಕ್ರದ ದರ್ಶನವಾಯಿತು, ಅಂದಮೇಲೆ ಚಕ್ರವನ್ನೂ ತಿರುಗಿಸಬೇಕಾಗಿದೆ. ನಿಮಗೆ
ತಿಳಿದಿದೆ, ನಾವು 84 ಜನ್ಮಗಳ ಚಕ್ರವನ್ನು ಸುತ್ತಿ ಮನೆಗೆ ಹೋಗುತ್ತೇವೆ. ನಂತರ ಅಲ್ಲಿಂದ
ಸತ್ಯಯುಗದಲ್ಲಿ ಪಾತ್ರವನ್ನಭಿನಯಿಸಲು ಬರುತ್ತೇವೆ. ಮತ್ತೆ 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ.
ವಾಸ್ತವದಲ್ಲಿ ವಿಷ್ಣುವಿಗೆ ಯಾವುದೇ ಚಕ್ರವಿರುವುದಿಲ್ಲ. ವಿಷ್ಣು ಸತ್ಯಯುಗದ ದೇವತೆಯಾಗಿದ್ದಾನೆ.
ವಿಷ್ಣು ಪುರಿ ಎಂದಾದರೂ ಹೇಳಿ ಅಥವಾ ಲಕ್ಷ್ಮೀ-ನಾರಾಯಣರ ಪುರಿ ಎಂದಾದರೂ ಹೇಳಿ, ಸ್ವರ್ಗವೆಂದಾದರೂ
ಹೇಳಿ. ಸ್ವರ್ಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಒಂದುವೇಳೆ ರಾಧಾ-ಕೃಷ್ಣರ ರಾಜ್ಯವೆಂದು
ಹೇಳಿದರೆ ತಪ್ಪಾಗುತ್ತದೆ. ರಾಧೆಕೃಷ್ಣರ ರಾಜ್ಯವಂತೂ ಇರುವುದಿಲ್ಲ ಏಕೆಂದರೆ ಬಾಲ್ಯದಲ್ಲಿ ಇಬ್ಬರೂ
ಬೇರೆ-ಬೇರೆ ರಾಜ್ಯದ ರಾಜಕುಮಾರ-ರಾಜಕುಮಾರಿ ಆಗಿದ್ದರು. ರಾಜ್ಯದ ಮಾಲೀಕರಂತೂ ಸ್ವಯಂವರದ ನಂತರವೇ
ಆಗುತ್ತಾರೆ ಅಂದಮೇಲೆ ವಿಷ್ಣುವಿಗೆ ತೋರಿಸಿರುವ ಚಕ್ರವು ವಾಸ್ತವದಲ್ಲಿ ನಿಮ್ಮದಾಗಿದೆ ಅಂದಮೇಲೆ
ಇಲ್ಲಿ ಕುಳಿತುಕೊಂಡಾಗ ಕೇವಲ ಶಾಂತಿಯಲ್ಲಿ ಕುಳಿತುಕೊಳ್ಳುವುದಲ್ಲ. ಆಸ್ತಿಯನ್ನೂ ನೆನಪು
ಮಾಡಬೇಕಾಗಿದೆ ಆದ್ದರಿಂದಲೇ ಈ ಚಕ್ರವಿದೆ. ತಂದೆಯು ತಿಳಿಸುತ್ತಾರೆ - ನೀವು ಲೈಟ್ಹೌಸ್ ಆಗಿದ್ದೀರಿ,
ನಡೆಯುವ-ತಿರುಗಾಡುವ ಲೈಟ್ಹೌಸ್ ಆಗಿದ್ದೀರಿ. ಒಂದು ಕಣ್ಣಿನಲ್ಲಿ ಶಾಂತಿಧಾಮ, ಇನ್ನೊಂದು
ಕಣ್ಣಿನಲ್ಲಿ ಸುಖಧಾಮವಿದೆ. ಎರಡನ್ನೂ ನೆನಪು ಮಾಡಬೇಕಾಗುತ್ತದೆ. ನೆನಪಿನಿಂದ ಪಾಪಗಳು ಭಸ್ಮವಾಗುವವು.
ಮನೆಯನ್ನು ನೆನಪು ಮಾಡುವುದರಿಂದ ಮನೆಗೆ ಹೋಗುತ್ತೀರಿ. ಜೊತೆಗೆ ಚಕ್ರವನ್ನೂ ನೆನಪು ಮಾಡಬೇಕಾಗಿದೆ.
ಈ ಚಕ್ರದ ಜ್ಞಾನವು ನಿಮಗೆ ಮಾತ್ರವೇ ಇದೆ - ಹೇಗೆ 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ. ಈಗ ಈ
ಮೃತ್ಯುಲೋಕದಲ್ಲಿ ಇದು ಅಂತಿಮ ಜನ್ಮವಾಗಿದೆ, ಹೊಸ ಪ್ರಪಂಚಕ್ಕೆ ಅಮರಲೋಕವೆಂದು ಹೇಳಲಾಗುತ್ತದೆ.
ಅಮರ ಅರ್ಥಾತ್ ನೀವು ಸದಾ ಜೀವಿಸಿರುತ್ತೀರಿ, ಎಂದೂ ಸಾಯುವುದಿಲ್ಲ. ಇಲ್ಲಂತೂ
ಕುಳಿತು-ಕುಳಿತಿದ್ದಂತೆಯೇ ಆಕಸ್ಮಿಕ ಮೃತ್ಯುವಾಗಿ ಬಿಡುತ್ತದೆ, ರೋಗಗಳು ಬರುತ್ತವೆ, ಅಲ್ಲಿ
ಸಾಯುವುದಕ್ಕೂ ಭಯವಿರುವುದಿಲ್ಲ ಏಕೆಂದರೆ ಅಮರಲೋಕವಾಗಿರುತ್ತದೆ. ನೀವು ವೃದ್ಧರಾದಾಗಲೂ ಸಹ ನಾವೀಗ
ಗರ್ಭಮಹಲಿನಲ್ಲಿ ಹೋಗಿ ಪ್ರವೇಶ ಮಾಡುತ್ತೇವೆಂದು ಜ್ಞಾನವಿರುತ್ತದೆ. ಇಲ್ಲಿ ಗರ್ಭಜೈಲಿನಲ್ಲಿ
ಹೋಗುತ್ತಾರೆ, ಅಲ್ಲಿ ಗರ್ಭವು ಮಹಲ್ ಆಗಿರುತ್ತದೆ. ಅಲ್ಲಿ ಪಾಪ ಮಾಡದಿರುವ ಕಾರಣ ಶಿಕ್ಷೆಯನ್ನೂ
ಅನುಭವಿಸುವುದಿಲ್ಲ, ಇಲ್ಲಿ ಪಾಪ ಮಾಡುವಕಾರಣ ಶಿಕ್ಷೆಯನ್ನು ಅನುಭವಿಸಿ ಹೊರಗಡೆ ಬರುತ್ತಾರೆ ಮತ್ತೆ
ಪಾಪ ಮಾಡಲು ತೊಡಗುತ್ತಾರೆ. ಇದು ಪಾಪಾತ್ಮರ ಪ್ರಪಂಚವಾಗಿದೆ. ಇಲ್ಲಿ ದುಃಖವೇ ಇರುತ್ತದೆ, ಅಲ್ಲಿ
ದುಃಖದ ಹೆಸರೇ ಇಲ್ಲ. ಆದ್ದರಿಂದ ಒಂದು ಕಣ್ಣಿನಲ್ಲಿ ಶಾಂತಿಧಾಮ, ಮತ್ತೊಂದು ಕಣ್ಣಿನಲ್ಲಿ
ಸುಖಧಾಮವನ್ನು ಇಟ್ಟುಕೊಳ್ಳಿ. ಭಲೆ ನೀವು ಜನ್ಮ-ಜನ್ಮಾಂತರದಿಂದ ಜಪ-ತಪ ಇತ್ಯಾದಿಗಳನ್ನು ಮಾಡುತ್ತಾ
ಬಂದಿದ್ದೀರಿ, ಆದರೆ ಅದು ಜ್ಞಾನವಂತೂ ಅಲ್ಲ ತಾನೆ! ಅದು ಭಕ್ತಿಯಾಗಿದೆ. ಅದರಲ್ಲಿ ನೀವು ಹೀಗೆ
ಮಾಡಿದರೆ ಸತೋಪ್ರಧಾನರಾಗುತ್ತೀರಿ ಎಂಬ ಯಾವುದೇ ಯುಕ್ತಿಯು ಸಿಗುವುದಿಲ್ಲ. ಯಾರಿಗೂ ಗೊತ್ತಿಲ್ಲ.
ಕೇವಲ ಕೇಳಿಸಿಕೊಂಡಿದ್ದಾರೆ ಕೃಷ್ಣ ಭಗವಾನುವಾಚ - ದೇಹ ಸಹಿತವಾಗಿ ದೇಹದ ಸಂಬಂಧಗಳನ್ನು ತ್ಯಜಿಸಿ.......
ಹೀಗೆ ಗೀತೆಯ ಅಕ್ಷರಗಳನ್ನು ಓದಿ ಹೇಳುತ್ತಾರೆ. ನೀವು ಈ ರೀತಿ ಆಗಿ ಎಂದು ಹೇಳುವುದಿಲ್ಲ. ಕೇವಲ
ಭಗವಂತನು ಹೀಗೆ ಹೇಳಿ ಹೋಗಿದ್ದರು, ಪತಿತರನ್ನು ಪಾವನರನ್ನಾಗಿ ಮಾಡಲು ಬಂದಿದ್ದರು ಎಂದಷ್ಟೇ
ಹೇಳುತ್ತಾರೆ. ಗೀತೆಯಲ್ಲಿ ಪರಮಪಿತ ಪರಮಾತ್ಮನ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ. ಈಗ
ಕೃಷ್ಣನಂತೂ ರಥಿಯಾಗಿದ್ದಾರಲ್ಲವೆ. ಅವರಿಗೆ ರಥವು ಬೇಕೇನು? ಅವರು ಸ್ವಯಂ ದೇಹಧಾರಿಯಾಗಿದ್ದಾರೆ.
ಕೃಷ್ಣನ ಹೆಸರನ್ನು ಯಾರಿಟ್ಟರು? ಹೇಗೆ ಒಬ್ಬೊಬ್ಬರಿಗೂ ನಾಮಕರಣ ಮಾಡುತ್ತಾರೆ, ಆದರೆ ತಂದೆಗೆ ಕೇವಲ
ಶಿವನೆಂದೇ ಹೇಳಲಾಗುತ್ತದೆ. ನೀವಾತ್ಮರು ಜನನ-ಮರಣದಲ್ಲಿ ಬರುತ್ತೀರಿ ಆದ್ದರಿಂದ ಶರೀರದ ಹೆಸರು
ಬದಲಾಗುತ್ತದೆ, ಆದರೆ ಶಿವ ತಂದೆಯಂತೂ ಜನನ-ಮರಣದಲ್ಲಿ ಬರುವುದೇ ಇಲ್ಲ ಅವರು ಸದಾ ಶಿವನೇ ಆಗಿದ್ದಾರೆ.
ಸೊನ್ನೆ (0) ಬರೆದಾಗಲೂ ಶಿವ ಎಂದು ಹೇಳುತ್ತಾರೆ. ಬಿಂದು ಆತ್ಮವಂತೂ ಬಹಳ ಸೂಕ್ಷ್ಮವಾಗಿದೆ.
ಒಂದುವೇಳೆ ಆತ್ಮದ ಸಾಕ್ಷಾತ್ಕಾರವಾದರೂ ಸಹ ಇದು ಯಾರಿಗೂ ಅರ್ಥವಾಗುವುದಿಲ್ಲ. ದೇವಿಯನ್ನು ನೋಡಿ
ಖುಷಿಯಾಗಿ ಬಿಡುತ್ತಾರೆ. ಆದರೆ ಪ್ರಾಪ್ತಿಯಂತೂ ಏನೂ ಇಲ್ಲ. ಅರ್ಥವೂ ಗೊತ್ತಿಲ್ಲ, ಕೇವಲ
ನೌಧಾಭಕ್ತಿಯನ್ನು ಮಾಡಿ ದರ್ಶನವಾಯಿತು ಎಂದರು. ಅದರಲ್ಲಿಯೇ ಖುಷಿಯಾಗಿ ಬಿಡುತ್ತಾರೆ. ಬಾಕಿ
ಮುಕ್ತಿ-ಜೀವನ್ಮುಕ್ತಿಯ ಮಾತೇನು ಇಲ್ಲ, ಅದೆಲ್ಲವೂ ಭಕ್ತಿಮಾರ್ಗವಾಗಿದೆ, ಇದು ಜ್ಞಾನಮಾರ್ಗವಾಗಿದೆ.
ಇಲ್ಲಿ ಬಹುತೇಕವಾಗಿ ಬ್ರಹ್ಮಾ ಹಾಗೂ ಕೃಷ್ಣನದೇ ಸಾಕ್ಷಾತ್ಕಾರವಾಗುತ್ತದೆ. ಈ ಬ್ರಹ್ಮಾರವರ ಬಳಿ
ಹೋಗಿ ಆಗ ನೀವು ಕೃಷ್ಣ ಪುರಿ ಅಥವಾ ವೈಕುಂಠದಲ್ಲಿ ಹೋಗುತ್ತೀರೆಂದು ಹೇಳುತ್ತಾರೆ.
ಲಕ್ಷ್ಮೀ-ನಾರಾಯಣರದೂ ಸಾಕ್ಷಾತ್ಕಾರವಾಗುತ್ತದೆ ಆದರೆ ಕೇವಲ ಸಾಕ್ಷಾತ್ಕಾರವಾದ ಮಾತ್ರಕ್ಕೆ
ಸದ್ಗತಿಯಾಯಿತು ಎಂದಲ್ಲ. ಇದು ಕೇವಲ ಇಂತಹ ಸ್ಥಾನಕ್ಕೆ ಹೋಗಿ ಎಂದು ಸೂಚನೆ ಸಿಗುತ್ತದೆ. ಮುಂದೆ
ಹೋದಂತೆ ಇಂತಹ ಜಾಗಕ್ಕೆ ಹೋಗಿ ಎಂದು ಅನೇಕರಿಗೆ ಸಾಕ್ಷಾತ್ಕಾರವಾಗುವುದು. ನಿಮ್ಮ ತ್ರಿಮೂರ್ತಿ
ಚಿತ್ರವು ಪತ್ರಿಕೆಗಳಲ್ಲಿ ಬರುತ್ತದೆ. ಬ್ರಹ್ಮಾಕುಮಾರ-ಕುಮಾರಿಯರ ಹೆಸರೂ ಬರುತ್ತದೆ, ಆಗ
ಹೆಚ್ಚಿನದಾಗಿ ಬ್ರಹ್ಮನ ಸಾಕ್ಷಾತ್ಕಾರವೇ ಆಗುತ್ತದೆ - ಇವರ ಬಳಿ ಹೋದರೆ ನಿಮಗೆ ವೈಕುಂಠದ
ರಾಜಕುಮಾರರಾಗುವ ಜ್ಞಾನ ಸಿಗುವುದು ಎಂದು. ಹೇಗೆ ಅರ್ಜುನನಿಗೆ ವಿಷ್ಣು ಹಾಗೂ ವಿನಾಶದ
ಸಾಕ್ಷಾತ್ಕಾರವಾಯಿತಲ್ಲವೆ.
ನೀವು ಹೇಗೆ ಕಮಲಪುಷ್ಫ ಸಮಾನರಾಗಬೇಕೆಂದು ತಂದೆಯು ಹೇಳುತ್ತಾರೆ ಆದರೆ ನೀವು ಸ್ಥಿರವಾಗಿರುವುದಿಲ್ಲ.
ಆದ್ದರಿಂದ ಅಲಂಕಾರಗಳನ್ನು ವಿಷ್ಣುವಿಗೆ ತೋರಿಸಲಾಗಿದೆ. ಇಲ್ಲವೆಂದರೆ ದೇವತೆಗಳಿಗೆ ಶಂಖ
ಇತ್ಯಾದಿಗಳ ಅವಶ್ಯಕತೆಯಾದರೂ ಏನಿದೆ! ವಾಸ್ತವದಲ್ಲಿ ಬಾಯಿಂದ ತಿಳಿಸುವುದಕ್ಕೆ ಶಂಖ ಧ್ವನಿ ಎಂದು
ಹೇಳಲಾಗುತ್ತದೆ. ಕಮಲದ ರಹಸ್ಯವನ್ನು ತಂದೆಯು ತಿಳಿಸುತ್ತಾರೆ. ನೀವು ಬ್ರಾಹ್ಮಣರು ಈ ಸಮಯದಲ್ಲಿ
ಕಮಲಪುಷ್ಪ ಸಮಾನ ಆಗಬೇಕಾಗಿದೆ. ಪಂಚ ವಿಕಾರಗಳೆಂಬ ಮಾಯೆಯನ್ನು ಗೆಲ್ಲುವ ಸಂಕೇತ ಗದೆಯಾಗಿದೆ.
ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆಯೆಂದು ತಂದೆಯು
ಉಪಾಯವನ್ನು ತಿಳಿಸುತ್ತಾರೆ. ಶ್ರೀಮತದಂತೆ ನಡೆದು ಪತಿತ-ಪಾವನ ತಂದೆಯನ್ನು ನೆನಪು ಮಾಡಿರಿ. ಒಬ್ಬ
ತಂದೆಯ ವಿನಃ ಮತ್ತ್ಯಾರೂ ಪತಿತ-ಪಾವನರಿಲ್ಲ. ತಂದೆಯು ಹೇಳುತ್ತಾರೆ - ನನ್ನನ್ನು ಕರೆಯುವುದೇ
ಇದಕ್ಕಾಗಿ - ನಮ್ಮೆಲ್ಲರನ್ನೂ ಈ ಶರೀರದಿಂದ ಬಿಡಿಸಿ ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದು.
ತಂದೆಯೇ ಬಂದು ಎಲ್ಲಾ ಆತ್ಮರನ್ನು ಪತಿತರಿಂದ ಪಾವನ ಮಾಡುತ್ತಾರೆ, ಏಕೆಂದರೆ ಅಪವಿತ್ರ ಆತ್ಮರು ಮನೆ
ಅಥವಾ ಸ್ವರ್ಗದಲ್ಲಿ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಪವಿತ್ರರಾಗಬೇಕೆಂದರೆ ನನ್ನನ್ನು ನೆನಪು
ಮಾಡಿರಿ. ನೆನಪಿನಿಂದಲೇ ನಿಮ್ಮ ಪಾಪಗಳು ಸಮಾಪ್ತಿಯಾಗುತ್ತಾ ಹೋಗುತ್ತವೆ, ನಾನು ಇದನ್ನು ಗ್ಯಾರಂಟಿ
ಕೊಡುತ್ತೇನೆಂದು ತಂದೆಯು ಹೇಳುತ್ತಾರೆ. ಹೇ ಪತಿತ-ಪಾವನ ಬನ್ನಿ, ನಮ್ಮನ್ನು ಪಾವನ ಮಾಡಿ, ಹೊಸ
ಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದೇ ಕರೆಯುತ್ತೇವೆ ಅಂದಮೇಲೆ ಅಲ್ಲಿಗೆ ಹೇಗೆ ಹೋಗುವುದು? ಎಷ್ಟು
ನೇರವಾದ ಮಾತನ್ನು ತಿಳಿಸುತ್ತಾರೆ. ತಂದೆಯ ಸಹಜ ಜ್ಞಾನ ಮತ್ತು ಸಹಜ ಮಾತಾಗಿದೆ. ತಿಳಿಸುತ್ತಾರೆ -
ಮಕ್ಕಳೇ, ಕೆಲಸ ಕಾರ್ಯಗಳನ್ನು ಮಾಡುತ್ತಲೂ ನನ್ನನ್ನು ನೆನಪು ಮಾಡಿರಿ. ಭಲೆ ನೌಕರಿ ಇತ್ಯಾದಿಗಳನ್ನು
ಮಾಡಿ, ಭೋಜನವನ್ನು ಮಾಡಿ ಆಗಲೂ ತಂದೆಯ ನೆನಪಿನಲ್ಲಿದ್ದು ಮಾಡಿದಾಗ ಭೋಜನವು ಶುದ್ಧವಾಗುವುದು.
ಆದ್ದರಿಂದಲೇ ಬ್ರಹ್ಮಾಭೋಜನವು ದೇವತೆಗಳಿಗೂ ಇಷ್ಟವಾಗುವುದೆಂದು ಗಾಯನವಿದೆ. ಮಕ್ಕಳು ಭೋಗವನ್ನು
ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಸಭೆ ಸೇರುತ್ತದೆ. ಬ್ರಾಹ್ಮಣರು ಮತ್ತು ದೇವತೆಗಳ
ಮಿಲನವಾಗುತ್ತದೆ. ಭೋಜನವನ್ನು ಸ್ವೀಕಾರ ಮಾಡಲು ಬರುತ್ತಾರೆ. ಅದಕ್ಕಾಗಿ ಬ್ರಾಹ್ಮಣರೂ ಸಹ ಭೋಜನ
ಮಾಡುವಾಗ ಮಂತ್ರವನ್ನು ಜಪಿಸುತ್ತಾರೆ. ಬ್ರಹ್ಮಾ ಭೋಜನಕ್ಕೆ ಬಹಳ ಮಹಿಮೆಯಿದೆ. ಸನ್ಯಾಸಿಗಳಂತೂ
ಬಹ್ಮ್ ತತ್ವವನ್ನೇ ನೆನಪು ಮಾಡುತ್ತಾರೆ. ಅವರ ಧರ್ಮವೇ ಬೇರೆಯಾಗಿದೆ. ಅವರು ಹದ್ದಿನ
ಸನ್ಯಾಸಿಗಳಾಗಿದ್ದಾರೆ. ನಾವು ಮನೆ-ಮಠ ಆಸ್ತಿ ಎಲ್ಲವನ್ನೂ ಬಿಟ್ಟಿದ್ದೇವೆಂದು ಹೇಳುತ್ತಾರೆ ಮತ್ತೆ
ಹಿಂತಿರುಗಿ ಮನೆಗೆ ಬರುತ್ತಾರೆ. ನಿಮ್ಮದು ಬೇಹದ್ದಿನ ಸನ್ಯಾಸವಾಗಿದೆ. ನೀವು ಈ ಹಳೆಯ ಪ್ರಪಂಚವನ್ನು
ಮರೆತು ಹೋಗುತ್ತೀರಿ. ನೀವು ಹೊಸ ಪ್ರಪಂಚಕ್ಕೆ ಹೋಗಬೇಕಾಗಿದೆ. ಭಲೆ ಗೃಹಸ್ಥದಲ್ಲಿದ್ದರೂ ಇದೇ
ಬುದ್ಧಿಯಲ್ಲಿರಲಿ - ನಾವೀಗ ಸುಖಧಾಮ ಹಾಗೂ ಶಾಂತಿಧಾಮಕ್ಕೆ ಹೋಗಬೇಕಾಗಿದೆ. ಶಾಂತಿಧಾಮವನ್ನೂ ನೆನಪು
ಮಾಡಬೇಕಾಗಿದೆ. ತಂದೆಯನ್ನು, ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡುತ್ತೀರಿ. ಈಗ 84
ಜನ್ಮಗಳು ಪೂರ್ಣವಾಯಿತು. ನಿಮ್ಮದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಸೂರ್ಯವಂಶಿಯರಿಂದ
ಚಂದ್ರವಂಶಿ ನಂತರ ವೈಶ್ಯ, ಶೂದ್ರವಂಶಿಯರಾಗಿರಿ..... ಅವರಂತೂ ಆತ್ಮವೇ ಪರಮಾತ್ಮ, ಆತ್ಮಕ್ಕೆ
ಯಾವುದೇ ಲೇಪಚೇಪವಿಲ್ಲ, ಏಕೆಂದರೆ ಆತ್ಮವೇ ಪರಮಾತ್ಮನೆಂದು ಹೇಳುತ್ತಾರೆ. ಆದರೆ ಇದು ಅವರ ಉಲ್ಟಾ
ಅರ್ಥವೆಂದು ತಂದೆಯು ತಿಳಿಸುತ್ತಾರೆ. ತಂದೆಯೇ ಕುಳಿತು ಹಮ್ ಸೋ ಸೋ ಹಮ್ನ ಅರ್ಥವನ್ನು
ತಿಳಿಸುತ್ತಾರೆ. ಇದರ ಅರ್ಥವಾಗಿದೆ - ನಾನಾತ್ಮ ಪರಮಪಿತ ಪರಮಾತ್ಮನ ಸಂತಾನನಾಗಿದ್ದೇನೆ. ಮೊಟ್ಟ
ಮೊದಲು ನಾವು ಸ್ವರ್ಗವಾಸಿ ದೇವತೆಗಳಾಗಿದ್ದೆವು ನಂತರ ಚಂದ್ರವಂಶಿ ಕ್ಷತ್ರಿಯರಾದೆವು. 2500
ವರ್ಷಗಳು ಪೂರ್ಣವಾಯಿತು, ಆಗ ವೈಶ್ಯ-ಶೂದ್ರವಂಶಿ ವಿಕಾರಿಗಳಾದೆವು. ಈಗ ನಾವು ಬ್ರಾಹ್ಮಣರು ಶಿಖೆಗೆ
ಸಮಾನರಾಗುತ್ತೇವೆ. ಇಲ್ಲಿ ಕುಳಿತಿದ್ದೇವೆ, ಇದು ಹೇಗೆ 84 ಜನ್ಮಗಳ ಬಾಜೋಲಿ ಆಟವನ್ನು ಆಡಿದಂತೆ. ಈ
ಬಾಜೋಲಿಯ ಜ್ಞಾನವೂ ಇದೆ ಹಿಂದಿನ ಕಾಲದಲ್ಲಿ ತೀರ್ಥ ಯಾತ್ರೆಗಳಿಗೆ ಹೋದಾಗಲೂ ಹೀಗೆ ಬಾಜೋಲಿಯನ್ನು
ಆಡುತ್ತಾ ಗುರುತು ಮಾಡುತ್ತಾ ಹೋಗುತ್ತಿದ್ದರು. ಈಗ ನಿಮ್ಮದು ಸತ್ಯವಾದ ತೀರ್ಥವಾಗಿದೆ- ಶಾಂತಿಧಾಮ
ಮತ್ತು ಸುಖಧಾಮ. ನೀವು ಆತ್ಮಿಕ ಮಾರ್ಗದರ್ಶಕರಾಗಿದ್ದೀರಿ. ಎಲ್ಲರಿಗೆ ಸಲಹೆ ನೀಡುತ್ತೀರಿ-
ತಂದೆಯನ್ನು ನೆನಪು ಮಾಡಿದರೆ ಶಾಂತಿಧಾಮಕ್ಕೆ ಹೋಗುತ್ತೀರಿ ಎಂದು. ಸಾಧು-ಸಂತ ಮುಂತಾದವರೆಲ್ಲರೂ
ಶಾಂತಿಧಾಮಕ್ಕೆ ಹೋಗುವುದಕ್ಕಾಗಿಯೇ ಪರಿಶ್ರಮ ಪಡುತ್ತಾರೆ. ಆದರೆ ಯಾರೂ ಹೋಗಲು ಸಾಧ್ಯವಿಲ್ಲ.
ತಂದೆಯು ತಿಳಿಸುತ್ತಾರೆ - ಸತ್ಯಯುಗದಲ್ಲಿ ಬಹಳ ಕಡಿಮೆ ಜನರಿರುತ್ತಾರೆ ನಂತರ ವೃದ್ಧಿಯಾಗುತ್ತಾ
ಹೋಗುತ್ತದೆ. ನೀವೀಗ ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ದೇವತೆಗಳಲ್ಲ ಆದರೆ ಈ ಸಮಯದಲ್ಲಿ ನಿಮ್ಮದು
ಮಾಯೆಯ ಜೊತೆ ಯುದ್ಧ ನಡೆಯುತ್ತಿದೆ. ಆ ಯುದ್ಧದಲ್ಲಿಯೂ ಯಾರನ್ನೂ ಬಹಳ ಯೋಧರೆಂದು ತಿಳಿಯುತ್ತಾರೆಯೋ
ಮತ್ತೆ ಅವರ ಬಳಿ ಹೋಗಿ ಶರಣಾಗತಿಯನ್ನು ಪಡೆಯುತ್ತಾರೆ. ನೀವೀಗ ಯಾರ ಶರಣಾಗತಿಯನ್ನು ಪಡೆಯುತ್ತೀರಿ?
ಸ್ತ್ರೀ-ಪುರುಷರಿಬ್ಬರೂ ಹೇಳುತ್ತಾರೆ - ತಂದೆಯೇ ನಾವು ನಿಮಗೆ ಶರಣಾಗುತ್ತೇವೆ. ನನಗೆ ಒಬ್ಬ ಶಿವ
ತಂದೆಯ ವಿನಃ ಯಾರೂ ಇಲ್ಲ. ಎಲ್ಲಾ ಆತ್ಮರ ತಂದೆಯು ಒಬ್ಬರೇ ಆಗಿದ್ದಾರಲ್ಲವೆ. ಆ ಒಬ್ಬ ತಂದೆಗೆ ನೀವು
ಮಕ್ಕಳಾಗಿದ್ದೀರಿ. ಸಾಧು-ಸಂತರಂತೂ ಒಬ್ಬರಲ್ಲ, ಅನೇಕ ಭಗವಂತರಾಗಿ ಬಿಡುತ್ತಾರೆ. ಯಾರು ಮನೆಯಿಂದ
ಮುನಿಸಿಕೊಂಡು ಹೊರಟು ಹೋದರು ಅವರೆಲ್ಲರೂ ಭಗವಂತರೆ. ಮುಸಲ್ಮಾನರನ್ನೂ ಸಹ ಗುರುಗಳನ್ನಾಗಿ
ಮಾಡಿಕೊಳ್ಳುತ್ತಾರೆ. ಅವರು ಕಲಿಸುತ್ತಾರೆ- ಹೇಳಿ, ನಾನು ಅಲ್ಲಾ ಆಗಿದ್ದೇನೆ, ಅಲ್ಲಾ ಆಗಿದ್ದೇನೆ
ಎಂದು. ದೊಡ್ಡ-ದೊಡ್ಡ ಸಾಹುಕಾರರು, ಕೋಟ್ಯಾಧೀಶ್ವರರು ಹೋಗಿ ಅವರ ಶಿಷ್ಯರಾಗುತ್ತಾರೆ ನಂತರ ಅಶುದ್ಧ
ಆಹಾರ ಪದಾರ್ಥಗಳ ಪಾರ್ಟಿಯನ್ನಾಚರಿಸುತ್ತಾರೆ, ತಮೋಪ್ರಧಾನ ಮನುಷ್ಯರಲ್ಲವೆ. ಪ್ರತೀ ವಾರದಲ್ಲಿ ಹೋಗಿ
ಅಲ್ಲಿ ನಮಾಜ್ ಮಾಡುತ್ತಾರೆ, ಹಿಂದೂಗಳಿಗೆ ತಮ್ಮ ಧರ್ಮದ ಬಗ್ಗೆ ಗೊತ್ತೇ ಇಲ್ಲ.
ತಂದೆಯು ತಿಳಿಸುತ್ತಾರೆ - ನೀವು ವಾಸ್ತವದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೀರಿ.
ಆದರೆ ಪತಿತರಾಗಿದ್ದೀರಿ. ಆದ್ದರಿಂದ ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಆ
ಧರ್ಮವೇ ಪ್ರಾಯಃಲೋಪವಾಗಿ ಬಿಟ್ಟಿದೆ. ಮನುಷ್ಯರು ಎಷ್ಟು ವಿಕಾರಿ ಕುದೃಷ್ಟಿಯವರಾಗಿದ್ದಾರೆ. ಒಬ್ಬ
ಮಂತ್ರಿಯು ಬಾಬಾರವರ ಬಳಿ ಬಂದಿದ್ದರು, ಬಾಬಾ ನನಗೆ ಬಹಳ ಕುದೃಷ್ಟಿ ಬರುತ್ತದೆ ಎಂದು ಹೇಳಿದರು. ಈಗ
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪವಿತ್ರ ದೃಷ್ಟಿಯವರಾಗಿ. ಎಲ್ಲಿಯವರೆಗೆ
ಕುದೃಷ್ಟಿಯಿರುತ್ತದೆಯೋ ಅಲ್ಲಿಯವರೆಗೆ ನೀವು ಪತಿತರೆ. ತಮ್ಮನ್ನು ಸಹೋದರ-ಸಹೋದರರೆಂದು ತಿಳಿಯಿರಿ
ಆಗ ಕುದೃಷ್ಟಿಯು ಹೊರಟು ಹೋಗುವುದು. ನಾವಾತ್ಮರು ಸಹೋದರರಾಗಿದ್ದೇವೆ. ಒಬ್ಬ ತಂದೆಯಿಂದ ಆಸ್ತಿಯನ್ನು
ತೆಗೆದುಕೊಳ್ಳುತ್ತಿದ್ದೇವೆ. ಆತ್ಮದ ಸಿಂಹಾಸನವು ಈ ಭೃಕುಟಿಯಾಗಿದೆ, ಇದಕ್ಕೆ ಅಕಾಲಸಿಂಹಾಸನವೆಂದು
ಹೇಳಲಾಗುತ್ತದೆ. ಅಕಾಲ ಆತ್ಮವು ಈ ಸಿಂಹಾಸನದಲ್ಲಿ ವಿರಾಜಮಾನವಾಗಿದೆ. ಇದಂತೂ ಮಣ್ಣಿನ ಗೊಂಬೆಯಾಗಿದೆ.
ಎಲ್ಲಾ ಪಾತ್ರವು ಆತ್ಮದಲ್ಲಿಯೇ ತುಂಬಲ್ಪಟ್ಟಿದೆ. ತಂದೆಯು ತಿಳಿಸುತ್ತಾರೆ - ನಾನು 5000 ವರ್ಷಗಳ
ನಂತರ ನೀವು ಮಕ್ಕಳಿಗೆ ಆಸ್ತಿ ಕೊಡಲು ಬರುತ್ತೇನೆ. ನಾವು ಆರೋಗ್ಯ, ಐಶ್ವರ್ಯ, ಸಂತೋಷದ ಆಸ್ತಿಯನ್ನು
ಪಡೆಯಲು ಬಂದಿದ್ದೇವೆಂದು ನಿಮಗೆ ಗೊತ್ತಿದೆ. ಸತ್ಯಯುಗದಲ್ಲಿ ಅಪಾರ ಧನ ಸಿಗುತ್ತದೆ. ನೀವು 21
ಪೀಳಿಗೆಗಳವರೆಗೆ ದೇವತೆಗಳಾಗುತ್ತೀರಿ. ವೃದ್ಧನಾಗದೇ ಎಂದೂ ಯಾರೂ ಶರೀರ ಬಿಡುವುದಿಲ್ಲ, ಇಲ್ಲಂತೂ
ಕುಳಿತು-ಕುಳಿತಿದ್ದಂತೆಯೇ ಆಕಸ್ಮಿಕವಾಗಿ ಶರೀರ ಬಿಡುತ್ತಾರೆ. ಗರ್ಭದಲ್ಲಿದ್ದಾಗಲೇ ಸತ್ತು
ಹೋಗುತ್ತಾರೆ. ಆದರೆ ಸತ್ಯಯುಗದಲ್ಲಿ ದುಃಖದ ಹೆಸರೂ ಇರುವುದಿಲ್ಲ. ಅದಕ್ಕೆ ಸುಖಧಾಮ,
ರಾಮರಾಜ್ಯವೆಂದು ಹೇಳಲಾಗುತ್ತದೆ. ಇದು ದುಃಖಧಾಮ, ರಾವಣ ರಾಜ್ಯವಾಗಿದೆ. ಸತ್ಯಯುಗದಲ್ಲಿ
ರಾವಣನಿರುವುದೇ ಇಲ್ಲ.
ಅಂದಮೇಲೆ ಈ 84 ಜನ್ಮಗಳ ಚಕ್ರವೂ ಸಹ ನಿಮಗೆ ಬುದ್ಧಿಯಲ್ಲಿ ನೆನಪಿರುವುದು. ಬಹಳ ಖುಷಿಯಿರುವುದು.
ನಾವು ಹೊಸ ವಿಶ್ವದ ಅರ್ಥಾತ್ ಸತ್ಯಯುಗದ ಮಾಲೀಕರಾಗಲಿದ್ದೇವೆಂದು ನಿಮಗೆ ಗೊತ್ತಿದೆ. ಗೀತೆಯಲ್ಲಿಯೂ
ಭಗವಾನುವಾಚ ಇದೆಯಲ್ಲವೆ - ಹೇ ಮಕ್ಕಳೇ, ದೇಹ ಸಹಿತವಾಗಿ ದೇಹದ ಎಲ್ಲಾ ಸಂಬಂಧಗಳನ್ನು ಬಿಡಿ,
ತಮ್ಮನ್ನು ಆತ್ಮನೆಂದು ತಿಳಿದು ನನ್ನೊಬ್ಬನನ್ನೇ ನೆನಪು ಮಾಡಿರಿ. ನಿಮ್ಮ ಸತ್ಯ-ಸತ್ಯವಾದ ಖುದಾ
ದೋಸ್ತ್ ಅವರಾಗಿದ್ದಾರೆ. ಅಲ್ಲಾ ಅವಲುದ್ದೀನನ ನಾಟಕ, ಹಾತಿಮ್ ತಾಯಿಯ ನಾಟಕ ಇವೆಲ್ಲವೂ ಈ
ಸಮಯದ್ದಾಗಿದೆ. ಜನಸಂಖ್ಯೆ ಕಡಿಮೆಯಾಗಲಿ ಎಂದು ಮನುಷ್ಯರು ಎಷ್ಟು ತಲೆ ಕೆಡಿಸಿಕೊಳ್ಳುತ್ತಾರೆ.
ಬೇಹದ್ದಿನ ತಂದೆಯು ಎಷ್ಟು ಕಡಿಮೆ ಮಾಡಿಬಿಡುತ್ತಾರೆ. ಇಡೀ ವಿಶ್ವದಲ್ಲಿ ಸತ್ಯಯುಗದಲ್ಲಿ 9 ಲಕ್ಷ
ಮಾತ್ರವೇ ಇರುತ್ತದೆ. ಇಷ್ಟೆಲ್ಲಾ ಕೋಟ್ಯಾಂತರ ಮನುಷ್ಯರು ಇರುವುದೇ ಇಲ್ಲ, ಎಲ್ಲರೂ ಮುಕ್ತಿಧಾಮ,
ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಇದು ಚಮತ್ಕಾರದ ಮಾತಲ್ಲವೆ. ಒಂದು ದೇವಿ-ದೇವತಾ ಧರ್ಮದ
ಅಡಿಪಾಯವನ್ನು ಹಾಕಿ ಉಳಿದೆಲ್ಲವನ್ನೂ ಸಮಾಪ್ತಿ ಮಾಡಿ ಬಿಡುತ್ತಾರೆ. ಈ 84 ಜನ್ಮಗಳ ಚಕ್ರವನ್ನು
ಚೆನ್ನಾಗಿ ಬುದ್ಧಿಯಲ್ಲಿ ಕೂರಿಸಿಕೊಳ್ಳಬೇಕು. ಇದು ಸ್ವದರ್ಶನ ಚಕ್ರವಾಗಿದೆ. ಬಾಕಿ ಈ ಚಕ್ರದಿಂದ
ಯಾರ ಕೊರಳನ್ನು ಕತ್ತರಿಸುವಂತಿಲ್ಲ. ಶಾಸ್ತ್ರಗಳಲ್ಲಿ ಕೃಷ್ಣನ ಬಗ್ಗೆ ಹಿಂಸಾತ್ಮಕ ಮಾರ್ಗಗಳನ್ನು
ಬರೆದಿದ್ದಾರೆ. ಎಲ್ಲರನ್ನೂ ಸ್ವದರ್ಶನ ಚಕ್ರದಿಂದ ಕೊಂದನು ಎಂದು ಹೇಳುತ್ತಾರೆ. ಇದು
ಗ್ಲಾನಿಯಾಯಿತಲ್ಲವೆ. ಎಷ್ಟೊಂದು ಹಿಂಸಕರನ್ನಾಗಿ ಮಾಡಿ ಬಿಟ್ಟಿದ್ದಾರೆ. ನೀವು ಡಬಲ್
ಅಹಿಂಸಕರಾಗುತ್ತೀರಿ. ಕಾಮ ಕಟಾರಿಯನ್ನು ನಡೆಸುವುದೂ ಸಹ ಹಿಂಸೆಯಾಗಿದೆ. ದೇವತೆಗಳಿಗೆ ಪವಿತ್ರರೆಂದು
ಹೇಳಲಾಗುತ್ತದೆ. ಯೋಗಬಲದಿಂದ ವಿಶ್ವಕ್ಕೇ ಮಾಲೀಕರಾಗಿ ಬಿಡುತ್ತೀರಿ ಅಂದಮೇಲೆ ಯೋಗಬಲದಿಂದ
ಮಕ್ಕಳಾಗಲು ಸಾಧ್ಯವಿಲ್ಲವೆ. ಈಗ ಮಗುವಾಗುವುದೆಂದು ಸಾಕ್ಷಾತ್ಕಾರವಾಗುತ್ತದೆ. ತಂದೆಯು
ತಿಳಿಸುತ್ತಾರೆ - ಈಗ ಈ ಹಳೆಯ ಶರೀರವನ್ನು ಬಿಟ್ಟರೆ ಸತ್ಯಯುಗದಲ್ಲಿ ನಮ್ಮ ಬಾಯಲ್ಲಿ ಚಿನ್ನದ
ಚಮಚವಿರುವುದೆಂದು ಬ್ರಹ್ಮಾ ತಂದೆಯು ತಿಳಿಯುತ್ತಿದ್ದರು. ಹಾಗೆಯೇ ನೀವೂ ಸಹ ತಿಳಿದುಕೊಂಡಿದ್ದೀರಿ
- ನಾವು ಅಮರಲೋಕದಲ್ಲಿ ಜನ್ಮ ತೆಗೆದುಕೊಂಡರೆ ಚಿನ್ನದ ಚಮಚವು ಬಾಯಲ್ಲಿರುತ್ತದೆ. ಪ್ರಜೆಗಳೂ
ಬೇಕಲ್ಲವೆ. ದುಃಖದ ಯಾವುದೇ ಮಾತುಗಳಂತೂ ಇಲ್ಲ. ಪ್ರಜೆಗಳ ಬಳಿ ಇಷ್ಟೊಂದು ಧನ-ಸಂಪತ್ತು ಇರುತ್ತದೆಯೇ!
ಬಾಕಿ, ಹೌದು ಸುಖವಿರುತ್ತದೆ, ಧೀರ್ಘಾಯಸ್ಸು ಇರುತ್ತದೆ, ರಾಜ-ರಾಣಿ ಸಾಹುಕಾರ ಪ್ರಜೆಗಳು ಎಲ್ಲರೂ
ಬೇಕಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯ
ನೆನಪಿನ ಜೊತೆ ಜೊತೆಗೆ ಖುಷಿಯಲ್ಲಿರುವುದಕ್ಕಾಗಿ 84 ಜನ್ಮಗಳ ಚಕ್ರವನ್ನೂ ನೆನಪು ಮಾಡಬೇಕಾಗಿದೆ.
ಸ್ವದರ್ಶನ ಚಕ್ರವನ್ನು ತಿರುಗಿಸಬೇಕು. ಖುದಾನನ್ನು ತಮ್ಮ ಸತ್ಯವಾದ ದೋಸ್ತ್(ಗೆಳೆಯ)ನನ್ನಾಗಿ
ಮಾಡಿಕೊಳ್ಳಬೇಕಾಗಿದೆ.
2. ಡಬಲ್ ಅಹಿಂಸಕರಾಗಲು ಕುದೃಷ್ಟಿಯನ್ನು ಪವಿತ್ರ ದೃಷ್ಟಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ.
ನಾವಾತ್ಮರು ಸಹೋದರ-ಸಹೋದರರಾಗಿದ್ದೇವೆ ಎಂಬ ಅಭ್ಯಾಸ ಮಾಡಬೇಕಾಗಿದೆ.
ವರದಾನ:
ಒತ್ತಡದಿಂದ
ಚಿಂತಿತರಾಗಿರುವ ದುಃಖಿ ಆತ್ಮಗಳಿಗೆ ಧೈರ್ಯ ತುಂಬಿ ಮುಂದುವರೆಸುವಂತಹ ಮಾಸ್ಟರ್ ದಯಾಹೃದಯಿ ಭವ.
ವರ್ತಮಾನ ಸಮಯ ಬಹಳಷ್ಟು
ಆತ್ಮಗಳು ಒಳಗಿನ ಒತ್ತಡದಿಂದ ದುಃಖಿ ಹಾಗೂ ಚಿಂತಿತರಾಗಿದ್ದಾರೆ, ಅಸಹಾಯಕರಾಗಿ ಮುಂದುವರೆಯಲು
ಶಕ್ತಿಯಿಲ್ಲ. ನೀವು ಅವರಿಗೆ ಶಕ್ತಿ ಕೊಡಿ. ಹೇಗೆ ಕಾಲಿಲ್ಲದವರಿಗೆ ಮರದ ಕಾಲನ್ನು ಮಾಡಿ ಕೊಟ್ಟಾಗ
ಅವರು ನಡೆಯಲು ಪ್ರಾರಂಭಿಸುತ್ತಾರೆ. ಅದೇ ರೀತಿ ನೀವು ಅವರಿಗೆ ಧೈರ್ಯದ ಕಾಲನ್ನು ಕೊಡಿ, ಏಕೆಂದರೆ
ಬಾಪ್ದಾದಾ ನೋಡುತ್ತಾರೆ ಅಜ್ಞಾನಿ ಮಕ್ಕಳಲ್ಲಿ ಪರಿಸ್ಥಿತಿ ಏನಾಗಿದೆ, ಹೊರ ನೋಟಕ್ಕೆ ನೋಟ ಬಹಳ
ಚೆನ್ನಾಗಿದೆ ಒಳ್ಳೆ ಟಿಪ್-ಟಾಪ್ ಆಗಿದ್ದಾರೆ. ಆದರೆ ಒಳಗೆ ಬಹಳ ದುಃಖಿಯಾಗಿದ್ದಾರೆ. ಆದ್ದರಿಂದ
ಮಾಸ್ಟರ್ ದಯಾಹೃದಯಿಯಾಗಿ.
ಸ್ಲೋಗನ್:
ನಿರ್ಮಾಣರಾಗಿ,
ಕೋಮಲರಾಗಬೇಡಿ, ನಿರ್ಮಾಣತೆಯೇ ಮಹಾನತೆಯಾಗಿದೆ.