09.06.19    Avyakt Bapdada     Kannada Murli     10.12.84     Om Shanti     Madhuban


“ಹಳೆಯ ಖಾತೆಗಳ ಸಮಾಪ್ತಿಯ ಚಿಹ್ನೆ”


ಇಂದು ಬಾಪ್ದಾದಾರವರು ಸಾಕಾರ ತನುವಿನ ಆಧಾರವನ್ನು ತೆಗೆದುಕೊಂಡು ಸಾಕಾರ ಪ್ರಪಂಚದಲ್ಲಿ, ಸಾಕಾರ ರೂಪ ಧರಿಸಿರುವ ಮಕ್ಕಳೊಂದಿಗೆ ಮಿಲನವಾಗಲು ಬಂದಿದ್ದಾರೆ. ವರ್ತಮಾನ ಸಮಯದ ಏರುಪೇರಿನ ಪ್ರಪಂಚದ ಅರ್ಥಾತ್ ದುಃಖದ ವಾತಾವರಣವಿರುವ ಪ್ರಪಂಚದಲ್ಲಿ ಬಾಪ್ದಾದಾರವರು, ತಮ್ಮ ಅಚಲ-ಅಡೋಲ ಮಕ್ಕಳನ್ನು ನೋಡುತ್ತಿದ್ದಾರೆ. ಏರುಪೇರಿನಲ್ಲಿರುತ್ತಾ ಭಿನ್ನ ಹಾಗೂ ತಂದೆಗೆ ಪ್ರಿಯವಾಗಿರುವ ಕಮಲ ಪುಷ್ಫಗಳನ್ನು ನೋಡುತ್ತಿದ್ದಾರೆ. ಭಯದ ವಾತಾವರಣದಲ್ಲಿರುತ್ತಾ ನಿರ್ಭಯ, ಶಕ್ತಿ ಸ್ವರೂಪ ಮಕ್ಕಳನ್ನು ನೋಡುತ್ತಿದ್ದಾರೆ. ಈ ವಿಶ್ವದ ಪರಿವರ್ತಕರು, ನಿಶ್ಚಿಂತ ಚಕ್ರವರ್ತಿಗಳನ್ನು ನೋಡುತ್ತಿದ್ದಾರೆ. ಇಂತಹ ನಿಶ್ಚಿಂತ ಚಕ್ರವರ್ತಿಯಾಗಿದ್ದೀರಿ, ನಾಲ್ಕೂ ಕಡೆಯಲ್ಲಿರುವ ಚಿಂತೆಗಳ ವಾಯುಮಂಡಲದ ಪ್ರಭಾವದ ಅಂಶವೂ ಅವರ ಮೇಲೆ ಬೀಳಲು ಸಾಧ್ಯವಿಲ್ಲ. ವರ್ತಮಾನ ಸಮಯದಲ್ಲಿ ವಿಶ್ವದಲ್ಲಿ ಮೆಜಾರಿಟಿ ಆತ್ಮರಲ್ಲಿ ಭಯ ಮತ್ತು ಚಿಂತೆಯೆರಡೂ ಸಹ ವಿಶೇಷವಾಗಿ ಎಲ್ಲರಲ್ಲಿ ಪ್ರವೇಶವಿದೆ. ಆದರೆ ಅವರೆಷ್ಟೇ ಚಿಂತೆಯಲ್ಲಿದ್ದಾರೆ, ಅಷ್ಟೇ ತಾವು ಶುಭಚಿಂತಕರಾಗಿದ್ದೀರಿ. ಚಿಂತೆಯು ಬದಲಾಗಿ ಶುಭಚಿಂತಕನ ಭಾವನಾ ಸ್ವರೂಪರಾಗಿ ಬಿಟ್ಟಿದ್ದೀರಿ. ಭಯಕ್ಕೊಳಗಾಗುವ ಬದಲು ಸುಖದ ಗೀತೆಯನ್ನು ಹಾಡುತ್ತಿರುತ್ತೀರಿ. ಇಷ್ಟೂ ಪರಿವರ್ತನೆಯ ಅನುಭವವನ್ನು ಮಾಡುತ್ತೀರಲ್ಲವೆ! ಸದಾ ಶುಭಚಿಂತಕರಾಗಿದ್ದು ಶುಭಭಾವನೆ, ಶುಭಕಾಮನೆಯ ಮಾನಸಿಕ ಸೇವೆಯಿಂದಲೂ ಎಲ್ಲರಿಗೂ ಸುಖ-ಶಾಂತಿಯ ಹನಿಯನ್ನು ಕೊಡುವವರಾಗಿದ್ದೀರಲ್ಲವೆ! ಅಕಾಲ ಮೃತ್ಯುವಿರುವ ಆತ್ಮರಿಗೆ, ಅಕಾಲಮೂರ್ತಿಯಾಗಿ ಶಾಂತಿ ಮತ್ತು ಶಕ್ತಿಯ ಸಹಯೋಗವನ್ನು ಕೊಡುವವರಾಗಿದ್ದೀರಲ್ಲವೆ ಏಕೆಂದರೆ ವರ್ತಮಾನ ಸಮಯದ ಸೀಜನ್ ಇರುವುದೇ ಅಕಾಲಮೃತ್ಯುವಿನದಾಗಿದೆ. ಹೇಗೆ ವಾಯು, ಸಮುದ್ರದ ಬಿರುಗಾಳಿಗಳು ಇದ್ದಕ್ಕಿದ್ದಂತೆ ಬರುತ್ತದೆ, ಹಾಗೆಯೇ ಈ ಅಕಾಲಮೃತ್ಯುವಿನ ಬಿರುಗಾಳಿಯೂ ಸಹ ಇದ್ದಕ್ಕಿದ್ದಂತೆ ಮತ್ತು ತೀವ್ರ ಗತಿಯಿಂದ ಒಟ್ಟಿಗೆ ಅನೇಕರನ್ನು ತೆಗೆದುಕೊಂಡು ಬರುತ್ತದೆ. ಈ ಅಕಾಲಮೃತ್ಯುವಿನ ಬಿರುಗಾಳಿಯು ಈಗಂತು ಪ್ರಾರಂಭವಾಗಿದೆ. ವಿಶೇಷವಾಗಿ ಭಾರತದಲ್ಲಿ ಗೃಹ ಯುದ್ಧ ಮತ್ತು ಪ್ರಾಕೃತಿಕ ಆಪತ್ತುಗಳು - ಇದೇ ಪ್ರತೀ ಕಲ್ಪದ ಪರಿವರ್ತನೆಗೆ ನಿಮಿತ್ತವಾಗುತ್ತದೆ. ವಿದೇಶದ ರೂಪ ರೇಖೆಯು ವಿಭಿನ್ನ ಪ್ರಕಾರದ್ದಾಗಿದೆ. ಆದರೆ ಭಾರತದಲ್ಲಿ ಇವೆರಡೇ ಮಾತುಗಳು ವಿಶೇಷವಾಗಿ ನಿಮಿತ್ತವಾಗುತ್ತದೆ ಮತ್ತು ಎರಡರ ರಿಹರ್ಸಲ್ ನೋಡುತ್ತಿದ್ದೀರಿ. ಎರಡೂ ಒಟ್ಟೊಟ್ಟಿಗೆ ತನ್ನ ಪಾತ್ರವನ್ನಭಿನಯಿಸುತ್ತಿದೆ.

ಮಕ್ಕಳು ಕೇಳುತ್ತಾರೆ - ಒಂದೇ ಸಮಯದಲ್ಲಿ ಒಟ್ಟಿಗೆ ಮೃತ್ಯು ಹೇಗೆ ಮತ್ತು ಏಕೆ ಆಗುತ್ತದೆ? ಇದರ ಕಾರಣವೇನು? ಇದಂತು ತಿಳಿದಿದ್ದೀರಿ ಮತ್ತು ಅನುಭವ ಮಾಡುತ್ತೀರಿ- ಈಗ ಸಂಪನ್ನವಾಗುವ ಸಮಯವು ಸಮೀಪಿಸುತ್ತಿದೆ. ಎಲ್ಲಾ ಆತ್ಮರ, ದ್ವಾಪರಯುಗ ಅಥವಾ ಕಲಿಯುಗದಿಂದ ಮಾಡಿರುವ ವಿಕರ್ಮಗಳ ಅಥವಾ ಪಾಪಗಳ ಖಾತೆಯೇನು ಉಳಿದುಕೊಂಡಿದೆ, ಅದನ್ನೀಗ ಪೂರ್ಣವಾಗಿ ಸಮಾಪ್ತಿ ಮಾಡಬೇಕು. ಏಕೆಂದರೆ ಎಲ್ಲರೂ ಈಗ ಹಿಂತಿರುಗಿ ಮನೆಗೆ ಹೋಗಬೇಕು. ದ್ವಾಪರದಿಂದ ಮಾಡಿರುವ ಕರ್ಮ ಹಾಗೂ ವಿಕರ್ಮಗಳೆರಡರ ಫಲವೇನಾದರೂ, ಒಂದು ಜನ್ಮದಲ್ಲಿ ಸಮಾಪ್ತಿಯಾಗಲಿಲ್ಲವೆಂದರೆ, ಇನ್ನೊಂದು ಜನ್ಮದಲ್ಲಿಯೂ ಸಮಾಪ್ತಿಯ ಅಥವಾ ಪ್ರಾಪ್ತಿಯ ಲೆಕ್ಕವು ನಡೆಯುತ್ತಾ ಬರುತ್ತದೆ. ಆದರೆ ಈ ಅಂತಿಮ ಸಮಯವಾಗಿದೆ ಮತ್ತು ಪಾಪಗಳ ಲೆಕ್ಕವು ಹೆಚ್ಚಿಗಿದೆ. ಆದ್ದರಿಂದ ಈಗ ಬೇಗ ಬೇಗನೆ ಜನ್ಮ ಮತ್ತು ಬೇಗ ಬೇಗನೆ ಮೃತ್ಯು- ಈ ಶಿಕ್ಷೆಯ ಮೂಲಕ ಅನೇಕ ಆತ್ಮರ ಹಳೆಯ ಖಾತೆಯು ಸಮಾಪ್ತಿಯಾಗುತ್ತಿದೆ. ಅಂದಮೇಲೆ ವರ್ತಮಾನ ಸಮಯದಲ್ಲಿ ಮೃತ್ಯುವೂ ಸಹ ಬಹಳ ನೋವಿರುವುದಿರುತ್ತದೆ ಮತ್ತು ಜನ್ಮವೂ ಸಹ ಮೆಜಾರಿಟಿಯಲ್ಲಿ ಬಹಳ ದುಃಖದಿಂದಾಗುತ್ತಿದೆ. ಸಹಜ ಮೃತ್ಯುವೂ ಇಲ್ಲ, ಸಹಜ ಜನ್ಮವೂ ಇಲ್ಲ. ಅಂದಮೇಲೆ ನೋವಿರುವ ಮೃತ್ಯು ಮತ್ತು ದುಃಖಮಯ ಜನ್ಮ- ಇದು ಬೇಗನೆ ಲೆಕ್ಕಾಚಾರವು ಸಮಾಪ್ತಿ ಮಾಡುವ ಸಾಧನವಾಗಿದೆ. ಹೇಗೆ ಈ ಹಳೆಯ ಪ್ರಪಂಚದಲ್ಲಿ ಇರುವೆಗಳು, ಸೊಳ್ಳೆ ಮುಂತಾದುವನ್ನು ಸಾಯಿಸಲು ಸಾಧನಗಳನ್ನು ತಯಾರು ಮಾಡಲಾಗಿದೆ. ಆ ಸಾಧನಗಳ ಮೂಲಕ ಒಂದೇ ಸಾರಿ ಇರುವೆ ಅಥವಾ ಸೊಳ್ಳೆ ಅಥವಾ ಅನೇಕ ಪ್ರಕಾರದ ಕೀಟಾಣುಗಳು ಒಟ್ಟಿಗೆ ವಿನಾಶವಾಗಿ ಬಿಡುತ್ತದೆಯಲ್ಲವೆ. ಹಾಗೆಯೇ ಇಂದಿನ ಸಮಯದ ಮಾನವನೂ ಸಹ ಸೊಳ್ಳೆಗಳು, ಇರುವೆಗಳಂತೆ ಅಕಾಲ ಮೃತ್ಯುವಿಗೆ ವಶವಾಗುತ್ತಿದ್ದಾನೆ. ಮಾನವ ಮತ್ತು ಇರುವೆಗಳಲ್ಲಿ ಅಂತರವೇ ಇಲ್ಲದಂತಾಗಿದೆ. ಇವೆಲ್ಲಾ ಲೆಕ್ಕಾಚಾರಗಳು ಮತ್ತು ಸದಾಕಾಲಕ್ಕಾಗಿ ಸಮಾಪ್ತಿಯಾಗುವ ಕಾರಣದಿಂದ ಒಟ್ಟಿಗೆ ಅಕಾಲ ಮೃತ್ಯುವಿನ ಬಿರುಗಾಳಿಯು ಸಮಯ-ಸಮಯದಲ್ಲಿ ಬರುತ್ತಿದೆ.

ಹಾಗೆ ನೋಡಿದರೆ ಧರ್ಮರಾಜ ಪುರಿಯ ಶಿಕ್ಷೆಯ ಪಾತ್ರವು ಅಂತ್ಯದಲ್ಲಿ ನೊಂದಣಿಯಾಗಿದೆ. ಆದರೆ ಆ ಶಿಕ್ಷೆಯು ಕೇವಲ ಆತ್ಮವು ತನಗೆ ತಾನೇ ಭೋಗಿಸುತ್ತದೆ ಮತ್ತು ಲೆಕ್ಕಾಚಾರವನ್ನು ಸಮಾಪ್ತಿ ಮಾಡುತ್ತದೆ. ಆದರೆ ಕರ್ಮಗಳ ಲೆಕ್ಕಾಚಾರವು ಅನೇಕ ಪ್ರಕಾರದಲ್ಲಿಯೂ ವಿಶೇಷವಾಗಿ ಮೂರು ಪ್ರಕಾರದ್ದಿದೆ – ಒಂದು - ಆತ್ಮನು ತನಗೆ ತಾನೇ ಭೋಗಿಸುವ ಲೆಕ್ಕ, ಉದಾ: ರೋಗಗಳು. ತನಗೆ ತಾನೇ ಆತ್ಮವು ತನುವಿನ ರೋಗದ ಮೂಲಕ ಲೆಕ್ಕವನ್ನು ಸಮಾಪ್ತಿ ಮಾಡುತ್ತದೆ. ಹಾಗೆಯೇ ಇನ್ನೂ ಬುದ್ಧಿಯು ಬಲಹೀನವಾಗುವುದು ಅಥವಾ ಯಾವುದೇ ಪ್ರಕಾರದ ಭೂತ ಪ್ರವೇಶತೆ. ಇಂತಿಂತ ಪ್ರಕಾರದ ಶಿಕ್ಷೆಗಳ ಮೂಲಕ ಆತ್ಮವು ಸ್ವಯಂ ಲೆಕ್ಕಾಚಾರವನ್ನು ಭೋಗಿಸುತ್ತದೆ. ಇನ್ನೊಂದು ಲೆಕ್ಕವಿದೆ- ಸಂಬಂಧ-ಸಂಪರ್ಕದ ಮೂಲಕ ದುಃಖ ಪ್ರಾಪ್ತಿ. ಇದನ್ನಂತು ಸಹಜವಾಗಿ ತಿಳಿದುಕೊಳ್ಳಬಹುದಲ್ಲವೆ- ಹೇಗಿರುತ್ತದೆ ಎಂದು ಮತ್ತು ಮೂರನೆಯದು- ಪ್ರಾಕೃತಿಕ ಆಪತ್ತಿನ ಮೂಲಕ ಲೆಕ್ಕಾಚಾರವು ಸಮಾಪ್ತಿಯಾಗುವುದು. ಮೂರು ಪ್ರಕಾರದ ಆಧಾರದಿಂದ ಲೆಕ್ಕಾಚಾರವು ಸಮಾಪ್ತಿಯಾಗುತ್ತಿದೆ. ಅಂದಮೇಲೆ ಧರ್ಮರಾಜ ಪುರಿಯ ಸಂಬಂಧ ಮತ್ತು ಸಂಪರ್ಕದ ಮೂಲಕ ಅಥವಾ ಪ್ರಾಕೃತಿಕ ಆಪತ್ತಿನ ಮೂಲಕ ಲೆಕ್ಕಾಚಾರವು ಸಮಾಪ್ತಿಯಾಗುವುದಿಲ್ಲ. ಅದು ಇಲ್ಲಿ ಸಾಕಾರ ಸೃಷ್ಟಿಯಲ್ಲಾಗುತ್ತದೆ. ಹಳೆಯ ಖಾತೆಯೆಲ್ಲವೂ ಸಮಾಪ್ತಿಯಾಗಲೇಬೇಕು. ಆದ್ದರಿಂದ ಈ ಲೆಕ್ಕಾಚಾರಗಳ ಸಮಾಪ್ತಿಯ ಯಂತ್ರವೀಗ ತೀವ್ರಗತಿಯಿಂದ ನಡೆಯಲೇಬೇಕು. ವಿಶ್ವದಲ್ಲಿ ಇದೆಲ್ಲವೂ ಆಗಲೇಬೇಕು. ತಿಳಿಯಿತೆ. ಇದು ಕರ್ಮಗಳ ಗತಿಯ ಲೆಕ್ಕಾಚಾರ. ಈಗ ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಿರಿ- ನಾನು ಬ್ರಾಹ್ಮಣ ಆತ್ಮನ ತೀವ್ರ ಗತಿಯ ಪುರುಷಾರ್ಥದ ಮೂಲಕ ಹಳೆಯ ಎಲ್ಲಾ ಲೆಕ್ಕಾಚಾರಗಳು ಸಮಾಪ್ತಿಯಾಗಿದೆಯೇ ಅಥವಾ ಈಗಲೂ ಹೊರೆಯಿದೆಯೇ? ಹಳೆಯ ಯಾವುದೇ ಲೆಕ್ಕವು ಉಳಿದುಕೊಂಡಿದೆಯೇ ಅಥವಾ ಸಮಾಪ್ತಿಯಾಗಿ ಬಿಟ್ಟಿದೆಯೇ, ಇದರ ವಿಶೇಷ ಚಿಹ್ನೆಯನ್ನು ತಿಳಿದಿದ್ದೀರಾ? ಶ್ರೇಷ್ಠ ಪರಿವರ್ತನೆಯಲ್ಲಿ ಅಥವಾ ಶ್ರೇಷ್ಠ ಕರ್ಮವನ್ನು ಮಾಡುವುದರಲ್ಲಿ ತಮ್ಮ ಸ್ವಭಾವ-ಸಂಸ್ಕಾರವೇನು ವಿಘ್ನವನ್ನು ಹಾಕುತ್ತದೆ ಅಥವಾ ಎಷ್ಟು ಬಯಸುತ್ತೀರಿ, ಎಷ್ಟು ಯೋಚಿಸುತ್ತೀರಿ ಅಷ್ಟು ಮಾಡಲಾಗುವುದಿಲ್ಲ ಮತ್ತು ಇದೇ ಮಾತು ಬರುತ್ತದೆ ಅಥವಾ ಸಂಕಲ್ಪವು ಮನಸ್ಸಿನಲ್ಲಿ ನಡೆಯುತ್ತಿರುತ್ತದೆ- ಬಯಸದಿದ್ದರೂ ಗೊತ್ತಿಲ್ಲ, ಹೀಗೇಕೆ ಆಗಿ ಬಿಡುತ್ತದೆ. ಏನಾಗಿ ಬಿಡುತ್ತದೆ ಗೊತ್ತಿಲ್ಲ ಅಥವಾ ಸ್ವಯಂ ಬಯಕೆಯು ಶ್ರೇಷ್ಠವಾಗಿರುತ್ತದೆ, ಸಾಹಸ-ಉಲ್ಲಾಸವಿದ್ದರೂ ಸಹ ಪರವಶತೆಯ ಅನುಭವವಾಗುತ್ತದೆ, ಹೇಳುತ್ತಾರೆ- ಹೀಗೆ ಮಾಡಬೇಕೆಂದು ತಿಳಿದಿರಲಿಲ್ಲ, ಯೋಚಿಸಿರಲಿಲ್ಲ ಆದರೆ ಆಗಿ ಬಿಟ್ಟಿತು. ಇದಕ್ಕೆ ಹೇಳಲಾಗುತ್ತದೆ- ಸ್ವಯಂನ ಹಳೆಯ ಸ್ವಭಾವ-ಸಂಸ್ಕಾರಗಳ ಪರವಶತೆ ಅಥವಾ ಯಾರದೇ ಸಂಗದೋಷದ ಪರವಶತೆ ಅಥವಾ ಯಾವುದೇ ವಾಯುಮಂಡಲದ ಪ್ರಕಂಪನಗಳ ಪರವಶತೆ. ಈ ಮೂರು ಪ್ರಕಾರದ ಪರವಶ ಸ್ಥಿತಿಗಳಿರುತ್ತದೆ, ಅದರಿಂದ ಬಯಸದಿದ್ದರೂ ಆಗುವುದು, ಯೋಚಿಸದಿದ್ದರೂ ಆಗುತ್ತದೆ ಅಥವಾ ಪರವಶನಾಗಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳದಿರುವುದು- ಇದು ಹಿಂದಿನ ಹಳೆಯ ಖಾತೆಯ ಹೊರೆಯ ಚಿಹ್ನೆಗಳಾಗಿವೆ. ಈ ಚಿಹ್ನೆಗಳ ಮೂಲಕ ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಿರಿ- ಯಾವುದೇ ಪ್ರಕಾರದ ಹೊರೆಯು ಹಾರುವ ಕಲೆಯ ಅನುಭವದಿಂದ ಕೆಳಗಂತು ತೆಗೆದುಕೊಂಡು ಬರುವುದಿಲ್ಲವೇ! ಲೆಕ್ಕಾಚಾರವು ಸಮಾಪ್ತಿ ಅರ್ಥಾತ್ ಪ್ರತಿಯೊಂದು ಪ್ರಾಪ್ತಿಯ ಅನುಭವಗಳಲ್ಲಿ ಹಾರುವ ಕಲೆ. ಕೆಲಕೆಲವೊಮ್ಮೆ ಪ್ರಾಪ್ತಿ, ಕೆಲವೊಮ್ಮೆ ಇದೆಯೆಂದರೆ ಈಗಲೂ ಉಳಿದುಕೊಂಡಿದೆ. ಅಂದಮೇಲೆ ಇದೇ ವಿಧಿಯಿಂದ ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಿರಿ. ದುಃಖಮಯವಾಗಿರುವ ಪ್ರಪಂಚದಲ್ಲಂತು ದುಃಖದ ಘಟನೆಗಳ ಬೆಟ್ಟವು ಅವಶ್ಯವಾಗಿ ಹೊಡೆಯಲ್ಪಡುತ್ತದೆ. ಅಂತಹ ಸಮಯದಲ್ಲಿ ಸುರಕ್ಷತೆಯ ಸಾಧನವಿರುವುದೇ "ತಂದೆಯ ಛತ್ರಛಾಯೆ". ಛತ್ರಛಾಯೆಯಂತು ಇದ್ದೇ ಇದೆಯಲ್ಲವೆ. ಒಳ್ಳೆಯದು.

ಮಿಲನದ ಮೇಳವನ್ನಾಚರಿಸಲು ಎಲ್ಲರೂ ಬಂದಿದ್ದಾರೆ. ಇದೇ ಮಿಲನದ ಮೇಳವು ಎಷ್ಟೇ ನೋವಿರುವ ದೃಶ್ಯವಿರಬಹುದು ಆದರೆ ಮೇಳವಿದೆಯೆಂದರೆ ಆಟವೆನಿಸುತ್ತದೆ. ಭಯಭೀತರಾಗುವುದಿಲ್ಲ. ಮಿಲನದ ಗೀತೆಯನ್ನು ಹಾಡುತ್ತಿರುತ್ತೀರಿ. ಖುಷಿಯಲ್ಲಿ ನರ್ತಿಸುತ್ತಿರುತ್ತೀರಿ. ಅನ್ಯರಿಗೂ ಸಾಹಸದ ಸಹಯೋಗವನ್ನು ಕೊಡುತ್ತೀರಿ. ಸ್ಥೂಲ ನರ್ತನವಲ್ಲ, ಇದು ಖುಷಿಯ ನರ್ತನವಾಗಿದೆ. ಮೇಳವನ್ನು ಸದಾ ಆಚರಿಸುತ್ತಿರುತ್ತೀರಲ್ಲವೆ! ಇರುವುದೂ ಮಿಲನದಲ್ಲಿ ಮೇಳದಲ್ಲಿರುತ್ತೀರಿ. ಆದರೂ ಮಧುಬನದ ಮೇಳದಲ್ಲಿ ಬಂದಿದ್ದೀರಿ, ಬಾಪ್ದಾದಾರವರೂ ಸಹ ಇಂತಹ ಮೇಳವನ್ನಾಚರಿಸುವ ಮಕ್ಕಳನ್ನು ನೋಡುತ್ತಾ ಹರ್ಷಿತವಾಗುತ್ತಾರೆ. ಮಧುಬನದ ಶೃಂಗಾರವು ಮಧುಬನದಲ್ಲಿ ತಲುಪಿ ಬಿಟ್ಟಿದೆ. ಒಳ್ಳೆಯದು.

ಹೀಗೆ ಸದಾ ಸ್ವಯಂನ ಸರ್ವ ಲೆಕ್ಕಾಚಾರಗಳನ್ನು ಸಮಾಪ್ತಿಗೊಳಿಸಿ, ಅನ್ಯರ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಸುವ ಶಕ್ತಿ ಸ್ವರೂಪ ಆತ್ಮರಿಗೆ, ಸದಾ ದುಃಖ ನೋವಿರುವ ವಾಯುಮಂಡದಲ್ಲಿರುತ್ತಾ ಭಿನ್ನ ಹಾಗೂ ತಂದೆಯ ಪ್ರಿಯರಾಗಿರುವ ಕಮಲ ಪುಷ್ಫಗಳಿಗೆ, ಸರ್ವ ಆತ್ಮರ ಪ್ರತಿ ಶುಭ ಚಿಂತಕರಾಗಿರುವ ಶ್ರೇಷ್ಠಾತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಟೀಚರ್ಸ್ ಸಹೋದರಿಯರೊಂದಿಗೆ:- ಸೇವಾಧಾರಿಯಾಗಿದ್ದೀರಿ, ಟೀಚರ್ಸ್ ಅಲ್ಲ. ಸೇವೆಯಲ್ಲಿ ತ್ಯಾಗ, ತಪಸ್ಸು ಸಮಾವೇಶವಾಗಿದೆ. ಸೇವಾಧಾರಿ ಆಗುವುದು ಅಂದರೆ ಖಜಾನೆಯ ಅಧಿಕಾರಿಯಾಗುವುದು. ಸೇವೆಯು ಇಂತಹ ವಸ್ತುವಾಗಿದೆ, ಅದರಿಂದ ಪ್ರತೀ ಸೆಕೆಂಡಿನಲ್ಲಿ ಸಂಪನ್ನವೇ ಸಂಪನ್ನತೆಯಿರುತ್ತದೆ. ಇಷ್ಟೂ ಸಂಪನ್ನರಾಗಿ ಬಿಡುತ್ತೀರಿ, ಅದು ಅರ್ಧಕಲ್ಪದ ಖಾತೆಯೇ ಇರುತ್ತದೆ. ಪರಿಶ್ರಮ ಪಡುವ ಅವಶ್ಯಕತೆಯಿಲ್ಲ, ಅಂತಹ ಸೇವಾಧಾರಿಯಾಗಿದ್ದೀರಿ. ಅದೂ ಸಹ ಆತ್ಮಿಕ ಸೇವಾಧಾರಿಗಳು, ಆತ್ಮಿಕ ಸ್ಥಿತಿಯಲ್ಲಿ ಸ್ಥಿತರಾಗಿದ್ದು ಆತ್ಮಗಳ ಸೇವೆಯನ್ನು ಮಾಡುವವರು. ಇವರಿಗೆ ಹೇಳಲಾಗುತ್ತದೆ- ಆತ್ಮಿಕ ಸೇವಾಧಾರಿ. ಇಂತಹ ಆತ್ಮಿಕ ಸೇವಾಧಾರಿಗಳಿಗೆ ಬಾಪ್ದಾದಾರವರು ಸದಾ ಆತ್ಮಿಕ ಗುಲಾಬಿ ಎನ್ನುವ ಬಿರುದನ್ನು ಕೊಡುತ್ತಾರೆ. ಅಂದಮೇಲೆ ಎಲ್ಲರೂ ಆತ್ಮಿಕ ಗುಲಾಬಿ ಆಗಿದ್ದೀರಿ, ಅದೆಂದಿಗೂ ಮುದುಡುವ ಗುಲಾಬಿಯಲ್ಲ. ಸದಾ ತಮ್ಮ ಆತ್ಮೀಯತೆಯ ಸುಗಂಧದಿಂದ ಎಲ್ಲರನ್ನು ರಿಫ್ರೆಷ್ ಮಾಡುವವರು.

2. ಸೇವಾಧಾರಿ ಆಗುವುದೂ ಸಹ ಬಹಳ ಶ್ರೇಷ್ಠ ಭಾಗ್ಯವಾಗಿದೆ. ಸೇವಾಧಾರಿ ಅರ್ಥಾತ್ ತಂದೆಯ ಸಮಾನ. ಹೇಗೆ ತಂದೆಯು ಸೇವಾಧಾರಿ ಆಗಿದ್ದಾರೆ ಹಾಗೆಯೇ ತಾವೂ ನಿಮಿತ್ತ ಸೇವಾಧಾರಿ ಆಗಿದ್ದೀರಿ. ತಂದೆಯು ಬೇಹದ್ದಿನ ಶಿಕ್ಷಕನಾಗಿದ್ದಾರೆ, ತಾವೂ ಸಹ ನಿಮಿತ್ತ ಶಿಕ್ಷಕರಾಗಿದ್ದೀರಿ. ಅಂದಮೇಲೆ ತಂದೆಯ ಸಮಾನರಾಗುವ ಭಾಗ್ಯವು ಪ್ರಾಪ್ತಿಯಾಗಿದೆ. ಸದಾ ಇದೇ ಶ್ರೇಷ್ಠ ಭಾಗ್ಯದ ಮೂಲಕ ಅನ್ಯರಿಗೂ ಅವಿನಾಶಿಭಾಗ್ಯದ ವರದಾನವನ್ನು ಕೊಡಿಸುತ್ತಿರಿ. ಇಡೀ ವಿಶ್ವದಲ್ಲಿ ಇಂತಹ ಶ್ರೇಷ್ಠ ಭಾಗ್ಯವು ಬಹಳ ಸ್ವಲ್ಪ ಆತ್ಮರಿಗಿದೆ. ಈ ವಿಶೇಷ ಭಾಗ್ಯವನ್ನು ಸ್ಮೃತಿಯಲ್ಲಿಟ್ಟುಕೊಂಡು ಸಮರ್ಥರಾಗಿದ್ದು ಸಮರ್ಥರನ್ನಾಗಿ ಮಾಡುತ್ತಿರಿ. ಹಾರುತ್ತಿರಿ. ಸದಾ ಸ್ವಯಂನ್ನು ಮುಂದುವರೆಸುತ್ತಾ, ಅನ್ಯರನ್ನೂ ಮುಂದುವರೆಸುತ್ತಿರಿ. ಒಳ್ಳೆಯದು.

ಆಯ್ಕೆ ಮಾಡಿರುವ ಅವ್ಯಕ್ತ-ಮಹಾವಾಕ್ಯಗಳು- ಮಾಯಾಜೀತನಾಗುವ ಜೊತೆಗೆ ಪ್ರಕೃತಿಜೀತರಾಗಿರಿ.
ತಾವು ಮಕ್ಕಳು ಮಾಯಾಜೀತರಂತು ಆಗಿದ್ದೀರಿ ಆದರೆ ಪ್ರಕೃತಿಜೀತರೂ ಆಗಿರಿ. ಏಕೆಂದರೆ ಈಗ ಪ್ರಕೃತಿಯ ಹಲ್ಚಲ್ ಬಹಳಷ್ಟು ಆಗಲಿದೆ. ಕೆಲವೊಮ್ಮೆ ಸಮುದ್ರದ ಜಲವು ತನ್ನ ಪ್ರಭಾವವನ್ನು ತೋರಿಸುತ್ತದೆ, ಕೆಲವೊಮ್ಮೆ ಧರಣಿಯು ತನ್ನ ಪ್ರಭಾವವನ್ನು ತೋರಿಸುತ್ತದೆ. ಒಂದುವೇಳೆ ಪ್ರಕೃತಿಜೀತರಾಗಿದ್ದರೆ ಪ್ರಕೃತಿಯ ಯಾವುದೇ ಏರುಪೇರುಗಳು ತಮ್ಮನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ಸದಾ ಸಾಕ್ಷಿಯಾಗಿರುತ್ತಾ ಎಲ್ಲಾ ಆಟಗಳನ್ನು ನೋಡುತ್ತಿರುತ್ತೀರಿ. ತಾವು ತಮ್ಮನ್ನೆಷ್ಟು ಫರಿಶ್ತಾ ಸ್ವರೂಪದಲ್ಲಿ ಅರ್ಥಾತ್ ಶ್ರೇಷ್ಠ ಸ್ಥಿತಿಯಲ್ಲಿಟ್ಟುಕೊಳ್ಳುತ್ತೀರಿ, ಅಷ್ಟು ಏರುಪೇರುಗಳಿಂದ ಸ್ವತಹವಾಗಿಯೇ ದೂರವಿರುತ್ತೀರಿ. ಪ್ರಕೃತಿಜೀತರಾಗುವ ಮೊದಲು ಕರ್ಮೇಂದ್ರಿಯಾಜೀತರಾಗಿರಿ, ಆಗಲೇ ಪ್ರಕೃತಿಜೀತರಿಂದ ಕರ್ಮಾತೀತ ಸ್ಥಿತಿಯ ಆಸನಧಾರಿಯಿಂದ ವಿಶ್ವ ರಾಜ್ಯಾಧಿಕಾರಿ ಆಗಲು ಸಾಧ್ಯವಾಗುವುದು. ಅಂದಮೇಲೆ ತಮ್ಮೊಂದಿಗೆ ಕೇಳಿಕೊಳ್ಳಿರಿ- ಪ್ರತಿಯೊಂದು ಕರ್ಮೇಂದ್ರಿಯವು "ಜೀ ಹಜೂರ್" (ಆಯಿತು ಪ್ರಭು) "ಜೀ ಹಾಜಿರ್" ಮಾಡುತ್ತಾ ನಡೆಯುತ್ತದೆಯೇ? ತಮ್ಮ ಮಂತ್ರಿ, ಉಪ ಮಂತ್ರಿಯು ಎಲ್ಲಿಯಾದರೂ ಮೋಸ ಮಾಡುತ್ತಿಲ್ಲವೇ?

ತಾವು ಮಕ್ಕಳ ಬಳಿ ಪವಿತ್ರತೆಯ ಬಹಳ ಮಹಾನ್ ಶಕ್ತಿಯಿದೆ, ಅದು ತಮ್ಮ ಪವಿತ್ರ ಮನಸ್ಸು ಅರ್ಥಾತ್ ಶುದ್ಧ ವೃತ್ತಿಯ ಮೂಲಕ ಪ್ರಕೃತಿಯನ್ನೂ ಪರಿವರ್ತನೆ ಮಾಡಬಹುದು. ಮನಸ್ಸಾ ಪವಿತ್ರತೆಯ ಶಕ್ತಿಯ ಪ್ರತ್ಯಕ್ಷ ಪ್ರಮಾಣವಾಗಿದೆ- ಪ್ರಕೃತಿಯಲ್ಲಿಯೂ ಪರಿವರ್ತನೆ. ಅಂದಮೇಲೆ ಸ್ವಪರಿವರ್ತನೆಯಿಂದ ಪ್ರಕೃತಿ ಮತ್ತು ವ್ಯಕ್ತಿಯ ಪರಿವರ್ತನೆಯನ್ನು ಮಾಡಬಹುದು. ತಮೋಗುಣಿ ಮನುಷ್ಯಾತ್ಮರು ಹಾಗೂ ತಮೋಗುಣಿ ಪ್ರಕೃತಿಯ ವಾಯುಮಂಡಲ, ಪ್ರಕಂಪನಗಳಿಂದ ಪಾರಾಗುವ ಸಹಜ ಸಾಧನವು ಈಶ್ವರೀಯ ಮರ್ಯಾದೆಗಳಾಗಿದೆ. ಮರ್ಯಾದೆಗಳಲ್ಲಿ ಇರುತ್ತೀರೆಂದರೆ ಪರಿಶ್ರಮದಿಂದ ಪಾರಾಗಿರುತ್ತೀರಿ. ಯಾವಾಗ ಮರ್ಯಾದೆಗಳ ಗೆರೆಯಿಂದ ಸಂಕಲ್ಪ, ಮಾತು ಅಥವಾ ಕರ್ಮದಿಂದ ಹೊರಗೆ ಬಂದು ಬಿಡುತ್ತೀರಿ ಆಗಲೇ ಪರಿಶ್ರಮ ಪಡಬೇಕಾಗುತ್ತದೆ.

ತಾವು ಸದಾ ತಮ್ಮ ಪೂರ್ವಜತನದ ಸ್ಥಿತಿಯಲ್ಲಿದ್ದು ಸಂಕಲ್ಪದ ಮೂಲಕ ಆದೇಶ ಮಾಡಿರಿ- ಐದು ವಿಕಾರಗಳಿಂದ ನೀವು ಅರ್ಧಕಲ್ಪಕ್ಕಾಗಿ ವಿದಾಯಿಯನ್ನು ತೆಗೆದುಕೊಂಡು ಬಿಡಿ, ಪ್ರಕೃತಿಯು ಸತೋಪ್ರಧಾನ, ಸುಖ ಕೊಡುವಂತಾಗಿ ಎಲ್ಲರಿಗೂ ಸುಖವನ್ನು ತಲುಪಿಸಿರಿ. ಆಗ ಅದು ತಮ್ಮ ಆದೇಶದನುಸಾರವಾಗಿ ಕಾರ್ಯವನ್ನು ಮಾಡುತ್ತದೆ. ನಂತರ ಈ ಪ್ರಕೃತಿಯು ಮೋಸವನ್ನು ಮಾಡಲು ಸಾಧ್ಯವಿಲ್ಲ. ಆದರೆ ಮೊದಲು ಸ್ವಯಂನ ಅಧಿಕಾರಿ ಆಗಿರಿ, ಸ್ವಭಾವ-ಸಂಸ್ಕಾರಗಳಿಗೂ ಅಧೀನರಲ್ಲ, ಯಾವಾಗ ಅಧಿಕಾರಿಯಾಗುತ್ತೀರಿ, ಆಗಲೇ ಎಲ್ಲವೂ ಆದೇಶದನುಸಾರವಾಗಿ ಕಾರ್ಯವನ್ನು ಮಾಡುತ್ತದೆ. ಹೇಗೆ ವಿಜ್ಞಾನದ ಶಕ್ತಿಯಿಂದ ಪ್ರಕೃತಿ ಅರ್ಥಾತ್ ತತ್ವಗಳನ್ನು ಇಂದೂ ಸಹ ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಿದ್ದಾರೆ, ಅಂದಮೆಲೆ ತಾವು ಈಶ್ವರನ ಸಂತಾನರು ಮಾಸ್ಟರ್ ರಚೈತ, ಮಾಸ್ಟರ್ ಸರ್ವಶಕ್ತಿವಂತನ ಮುಂದೆ ಈ ಪ್ರಕೃತಿ ಮತ್ತು ಪರಿಸ್ಥಿತಿಯು ದಾಸಿಯಾಗಲು ಸಾಧ್ಯವಿಲ್ಲವೇ! ಯಾವಾಗ ವಿಜ್ಞಾನದ ಅಣು ಶಕ್ತಿಯು ಮಹಾನ್ ಕರ್ತವ್ಯವನ್ನೇ ಮಾಡಬಹುದು, ಅಂದಮೇಲೆ ಆತ್ಮಿಕ ಶಕ್ತಿ, ಪರಮಾತ್ಮ ಶಕ್ತಿಯು ಏನು ಮಾಡಲು ಸಾಧ್ಯವಿಲ್ಲ! ಸಹಜವಾಗಿಯೇ ಪ್ರಕೃತಿ ಮತ್ತು ಪರಿಸ್ಥಿತಿಯ ರೂಪ ಮತ್ತು ಗುಣವನ್ನು ಪರಿವರ್ತನೆ ಮಾಡಬಹುದು. ಸರ್ವ ವಿಘ್ನಗಳಿಂದ, ಸರ್ವ ಪ್ರಕಾರದ ಪರಿಸ್ಥಿತಿಗಳಿಂದ ಅಥವಾ ತಮೋಗುಣಿ ಪ್ರಕೃತಿಯ ಆಪತ್ತುಗಳಿಂದ ಸೆಕೆಂಡಿನಲ್ಲಿ ವಿಜಯಿಯಾಗಲು ಕೇವಲ ಒಂದು ಮಾತಿನ ನಿಶ್ಚಯ ಮತ್ತು ನಶೆಯಲ್ಲಿರಿ- "ವಾಹ್ ನಾನಾತ್ಮನೇ!", ನಾನು ಶ್ರೇಷ್ಠ ಬ್ರಾಹ್ಮಣ ಆತ್ಮನಾಗಿದ್ದೇನೆ, ಈ ಸ್ಮೃತಿಯಲ್ಲಿರುತ್ತೀರೆಂದರೆ ಸಮರ್ಥ ಸ್ವರೂಪರಾಗಿ ಬಿಡುತ್ತೀರಿ.

ಯಾವಾಗ ಪ್ರಕೃತಿಯ ಮೂಲಕ ಯಾವುದೇ ಪರೀಕ್ಷೆಗಳು ಬರುತ್ತವೆ, ಆಗ ಇದೇಕೆ, ಇದೇನು.... ಈ ಏರುಪೇರಿನಲ್ಲಿ ಬರಬಾರದು. ಏರುಪೇರಿನಲ್ಲಿ ಬರುವುದು ಅರ್ಥಾತ್ ಅನುತ್ತೀರ್ಣರಾಗುವುದು. ಏನೇ ಆಗಲಿ ಆದರೆ ಆಂತರ್ಯದಿಂದ ಸದಾ ಈ ಶಬ್ಧವು ಬರಲಿ- ವಾಹ್ ಮಧುರ ಡ್ರಾಮಾ. `ಅಯ್ಯೊ ಏನಾಯಿತು' ಇದು ಸಂಕಲ್ಪದಲ್ಲಿಯೂ ಬರಬಾರದು, ಡ್ರಾಮಾದ ಜ್ಞಾನದಿಂದ ಸ್ವಯಂನ್ನು ಹೀಗೆ ಶಕ್ತಿಶಾಲಿ ಮಾಡಿಕೊಳ್ಳಿರಿ. ಮಾಯಾಜೀತ ಅಥವಾ ಪ್ರಕೃತಿಜೀತರಾಗುವುದಕ್ಕಾಗಿ ಸಂಕ್ಷಿಪ್ತಗೊಳಿಸುವ ಶಕ್ತಿಯನ್ನು ಧಾರಣೆ ಮಾಡಿಕೊಳ್ಳಿರಿ, ಇದಕ್ಕಾಗಿ ನೋಡುತ್ತಿದ್ದರೂ ನೋಡದಂತಿರಿ, ಕೇಳುತ್ತಿದ್ದರೂ ಕೇಳದಂತಿರಿ. ಅಭ್ಯಾಸವನ್ನು ಮಾಡಿರಿ- ಈಗೀಗ ಸಾಕಾರಿ, ಈಗೀಗ ಆಕಾರಿ ಮತ್ತು ಈಗೀಗ ನಿರಾಕಾರಿ, ಪ್ರಕೃತಿಯ ಏರುಪೇರನ್ನು ನೋಡುತ್ತಾ ಪ್ರಕೃತಿ ಪತಿಯಾಗಿದ್ದು, ತಮ್ಮ ಪೂರ್ಣ ವಿರಾಮದ ಸ್ಥಿತಿಯಿಂದ ಪ್ರಕೃತಿಯ ಏರುಪೇರುಗಳನ್ನು ಸ್ಟಾಪ್ ಮಾಡಿರಿ. ತಮೋಗುಣಿಯಿಂದ ಸತೋಗುಣಿ ಸ್ಥಿತಿಯಲ್ಲಿ ಪರಿವರ್ತನೆ ಮಾಡಿರಿ. ಈ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಿರಿ.

ಸಂಗಮದಲ್ಲಿಯೇ ಪ್ರಕೃತಿಯು ಸಹಯೋಗಿಯಾಗುವ ತನ್ನ ಪಾತ್ರವನ್ನು ಆರಂಭ ಮಾಡಿಬಿಡುತ್ತದೆ. ಎಲ್ಲಾಕಡೆಯಿಂದ ಪ್ರಕೃತಿ ಪತಿಯ ಮತ್ತು ಮಾಸ್ಟರ್ ಪ್ರಕೃತಿ ಪತಿಯ ಆಹ್ವಾನ ಮಾಡುತ್ತದೆ. ಎಲ್ಲಾ ಕಡೆಗಳಿಂದ ಆಫ್ರೀನ್ ಮತ್ತು ಆಫರ್ ಆಗುತ್ತದೆ. ಆದ್ದರಿಂದ ಪ್ರಕೃತಿಯ ಪ್ರತಿಯೊಂದು ತತ್ವವನ್ನು ದೇವತಾ ರೂಪದಲ್ಲಿ ತೋರಿಸಲಾಗಿದೆ. ದೇವತಾ ಅರ್ಥಾತ್ ಕೊಡುವವರು. ಅಂದಮೇಲೆ ಅಂತ್ಯದಲ್ಲಿ ಇವೆಲ್ಲವೂ ಪ್ರಕೃತಿಯ ತತ್ವಗಳು ತಮ್ಮೆಲ್ಲರಿಗೂ ಸಹಯೋಗ ಕೊಡುವ ದಾತಾ ಆಗಿ ಬಿಡುತ್ತವೆ. ನಾಲ್ಕೂ ಕಡೆಗಳಲ್ಲಿ ಯಾವ ತತ್ವದ ಮೂಲಕ ಎಷ್ಟೇ ಏರುಪೇರಾಗಲಿ ಆದರೆ ಎಲ್ಲಿ ತಾವು ಪ್ರಕೃತಿಯ ಮಾಲೀಕರಿರುತ್ತೀರಿ ಅಲ್ಲಿ ಪ್ರಕೃತಿಯು ದಾಸಿಯಾಗಿ ಸೇವೆಯನ್ನು ಮಾಡುತ್ತದೆ ಕೇವಲ ತಾವು ಪ್ರಕೃತಿಜೀತರಾಗಿಬಿಡಿ. ನಂತರ ಈ ಪ್ರಕೃತಿಯು ತನ್ನ ಮಾಲೀಕನಿಗೆ ಸಹಯೋಗದ ಮಾಲೆಯನ್ನು ಹಾಕುತ್ತದೆ. ಎಲ್ಲಿ ತಾವು ಪ್ರಕೃತಿಜೀತ ಬ್ರಾಹ್ಮಣರ ಪಾದಗಳಿರುತ್ತದೆ, ಸ್ಥಾನವಿರುತ್ತದೆ ಅಲ್ಲಿ ಯಾವುದೇ ನಷ್ಟವಾಗಲು ಸಾಧ್ಯವಿಲ್ಲ. ನಂತರ ಎಲ್ಲರೂ ತಮ್ಮ ಕಡೆ ಸ್ಥೂಲ-ಸೂಕ್ಷ್ಮ ಆಶ್ರಯವನ್ನು ತೆಗೆದುಕೊಳ್ಳುವುದಕ್ಕಾಗಿ ಓಡುತ್ತಾರೆ. ತಮ್ಮ ಸ್ಥಾನವು ಸುರಕ್ಷಿತವಾಗಿ ಬಿಡುತ್ತದೆ ಮತ್ತು ಎಲ್ಲ ಮುಖದಿಂದ "ಅಹೋ ಪ್ರಭು, ತಮ್ಮ ಲೀಲೆ ಅಪರಮಪಾರವಾಗಿದೆ" ಈ ಮಾತು ಬರುತ್ತದೆ. "ಧನ್ಯರಾದಿರಿ, ಧನ್ಯರಾದಿರಿ, ತಾವುಗಳು ಪಡೆದಿರಿ, ನಾವು ತಿಳಿಯಲಿಲ್ಲ, ಕಳೆದುಕೊಂಡೆವು"- ಈ ಧ್ವನಿಯು ನಾಲ್ಕೂ ಕಡೆಗಳಿಂದ ಬರುತ್ತದೆ. ಒಳ್ಳೆಯದು. ಓಂ ಶಾಂತಿ.

ವರದಾನ:
ಒಬ್ಬ ತಂದೆಯನ್ನು ತಮ್ಮ ಸಂಸಾರವನ್ನಾಗಿ ಮಾಡಿಕೊಂಡು ಸದಾ ಒಬ್ಬರ ಆಕರ್ಷಣೆಯಲ್ಲಿ ಇರುವಂತಹ ಕರ್ಮ ಬಂಧನ ಮುಕ್ತಭವ.

ಸದಾ ಇದೇ ಅನುಭವದಲ್ಲಿರಿ- ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ. ಒಬ್ಬ ತಂದೆಯೇ ನನ್ನ ಸಂಸಾರ ಮತ್ತ್ಯಾವುದೇ ಆಕರ್ಷಣೆಯಿಲ್ಲ, ಯಾವುದೇ ಕರ್ಮ ಬಂಧನವಿಲ್ಲ. ತಮ್ಮ ಯಾವುದೇ ಬಲಹೀನ ಸಂಸ್ಕಾರದ ಬಂಧನವೂ ಇರಬಾರದು. ಯಾರು ಯಾರ ಮೇಲೆಯೇ ನನ್ನದೆಂಬ ಅಧಿಕಾರವನ್ನಿಡುತ್ತಾರೆ, ಅವರಿಗೆ ಕ್ರೋಧ ಅಥವಾ ಅಭಿಮಾನವು ಬರುತ್ತದೆ- ಇದೂ ಸಹ ಕರ್ಮ ಬಂಧನವಾಗಿದೆ. ಆದರೆ ಯಾವಾಗ ತಂದೆಯವರೇ ನನ್ನ ಸಂಸಾರವಾಗಿದ್ದಾರೆ, ಈ ಸ್ಮೃತಿಯಿರುತ್ತದೆಯೆಂದರೆ ನನ್ನದು-ನನ್ನದು ಎನ್ನುವುದೆಲ್ಲವೂ ಒಬ್ಬ ನನ್ನ ಬಾಬಾರವರಲ್ಲಿ ಸಮಾವೇಶವಾಗಿ ಬಿಡುತ್ತದೆ ಮತ್ತು ಕರ್ಮ ಬಂಧನಗಳಿಂದ ಸಹಜವಾಗಿಯೇ ಮುಕ್ತರಾಗಿ ಬಿಡುತ್ತೀರಿ.

ಸ್ಲೋಗನ್:
ಸ್ಲೋಗನ್: ಮಹಾನ್ ಆತ್ಮರು ಅವರಾಗಿದ್ದಾರೆ, ಯಾರ ದೃಷ್ಟಿ ಮತ್ತು ವೃತ್ತಿಯು ಬೇಹದ್ದಿನದಾಗಿರುತ್ತದೆ.