13.12.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಸತ್ಯ ಸಂಪಾದನೆ ಮಾಡಿಕೊಳ್ಳುವ ಪುರುಷಾರ್ಥವನ್ನು ಮೊದಲು ಸ್ವಯಂ ಮಾಡಿ ನಂತರ ತಮ್ಮ ಮಿತ್ರ ಸಂಬಂಧಿಗಳಿಂದಲೂ ಮಾಡಿಸಿ, ಮನೆಯೇ ಮೊದಲ ಪಾಠಶಾಲೆ”

ಪ್ರಶ್ನೆ:
ಸುಖ ಅಥವಾ ಶಾಂತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ವಿಧಿ ಯಾವುದು?

ಉತ್ತರ:
ಪವಿತ್ರತೆ. ಎಲ್ಲಿ ಪವಿತ್ರತೆಯಿದೆಯೋ ಅಲ್ಲಿ ಸುಖ-ಶಾಂತಿಯಿದೆ. ತಂದೆಯು ಪವಿತ್ರ ಪ್ರಪಂಚ, ಸತ್ಯಯುಗದ ಸ್ಥಾಪನೆ ಮಾಡುತ್ತಾರೆ. ಅಲ್ಲಿ ವಿಕಾರಗಳಿರುವುದಿಲ್ಲ. ಯಾರು ದೇವತೆಗಳ ಪೂಜಾರಿಗಳಾಗಿದ್ದಾರೆಯೋ ಅವರು ವಿಕಾರಗಳಿಲ್ಲದೆ ಪ್ರಪಂಚವು ಹೇಗೆ ನಡೆಯುವುದೆಂದು ಎಂದಿಗೂ ಕೇಳುವುದಿಲ್ಲ. ಈಗ ನೀವು ಶಾಂತಿಯ ಪ್ರಪಂಚದಲ್ಲಿ ಹೋಗಬೇಕಾಗಿದೆ. ಆದ್ದರಿಂದ ಈ ಪತಿತ ಪ್ರಪಂಚವನ್ನು ಮರೆಯಬೇಕಾಗಿದೆ. ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಬೇಕಾಗಿದೆ.

ಓಂ ಶಾಂತಿ.
ಓಂ ಶಾಂತಿಯ ಅರ್ಥವನ್ನಂತೂ ಮಕ್ಕಳಿಗೆ ತಿಳಿಸಲಾಗಿದೆ. ಶಿವ ತಂದೆಯೂ ಸಹ ಓಂ ಶಾಂತಿ ಎಂದು ಹೇಳುತ್ತಾರೆ ಮತ್ತು ಸಾಲಿಗ್ರಾಮ ಮಕ್ಕಳೂ ಸಹ ಹೇಳುತ್ತೀರಿ. ಓಂ ಶಾಂತಿ ಎಂದು ಆತ್ಮವೇ ಹೇಳುತ್ತದೆ. ಸನ್ ಆಫ್ ಸೈಲೆನ್ಸ್ ಫಾದರ್ (ನಾನು ಶಾಂತಿ ಸಾಗರ ತಂದೆಯ ಮಗುವಾಗಿದ್ದೇನೆ) ಶಾಂತಿಗಾಗಿ ಕಾಡಿಗೆ ಹೋಗಿ ಯಾವುದೇ ಉಪಾಯವನ್ನು ಮಾಡಬೇಕಾಗಿಲ್ಲ. ಆತ್ಮವೇ ಶಾಂತ ಸ್ವರೂಪನಾಗಿದೆ, ಮತ್ತೆ ಇನ್ನೇನು ಉಪಾಯ ಮಾಡುವುದು. ತಂದೆಯು ಉಪಾಯ ತಿಳಿಸುತ್ತಾರೆ, ಆ ತಂದೆಯನ್ನು ಎಲ್ಲಿ ಸುಖ-ಶಾಂತಿಯಿದೆಯೋ ಅಲ್ಲಿಗೆ ಕರೆದುಕೊಂಡು ಹೋಗು ಎಂದು ಕರೆಯುತ್ತಾರೆ. ಸುಖ ಅಥವಾ ಶಾಂತಿಯನ್ನು ಎಲ್ಲಾ ಮನುಷ್ಯರು ಬಯಸುತ್ತಾರೆ ಆದರೆ ಸುಖ ಮತ್ತು ಶಾಂತಿಗೆ ಮೊದಲು ಪವಿತ್ರತೆ ಬೇಕು. ಪವಿತ್ರರಿಗೆ ಪಾವನರೆಂದು, ಅಪವಿತ್ರರಿಗೆ ಪತಿತರೆಂದು ಹೇಳಲಾಗುತ್ತದೆ. ಪತಿತ ಪ್ರಪಂಚದವರು ತಂದೆಯೇ, ಬಂದು ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗು ಎಂದು ತಂದೆಯನ್ನು ಕರೆಯುತ್ತಾರೆ. ಈ ತಂದೆಯೇ ಪತಿತ ಪ್ರಪಂಚದಿಂದ ಮುಕ್ತ ಮಾಡಿ ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ. ಸತ್ಯಯುಗದಲ್ಲಿ ಪವಿತ್ರತೆಯಿರುತ್ತದೆ, ಕಲಿಯುಗದಲ್ಲಿ ಅಪವಿತ್ರತೆಯಿದೆ. ಅದು ನಿರ್ವಿಕಾರಿ ಪ್ರಪಂಚ, ಇದು ವಿಕಾರಿ ಪ್ರಪಂಚವಾಗಿದೆ. ಪ್ರಪಂಚವು ಹೇಗೆ ವೃದ್ಧಿಯಾಗುತ್ತದೆ ಎಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಸತ್ಯಯುಗವು ನಿರ್ವಿಕಾರಿ ಪ್ರಪಂಚವಾಗಿದ್ದಾಗ ಅವಶ್ಯವಾಗಿ ಕೆಲವರೇ ಮನುಷ್ಯರಿರುತ್ತಾರೆ. ಆ ಕೆಲವರೂ ಯಾರಿರುತ್ತಾರೆ? ಅವಶ್ಯವಾಗಿ ಸತ್ಯಯುಗದಲ್ಲಿ ದೇವಿ-ದೇವತೆಗಳದೇ ರಾಜ್ಯವಿರುತ್ತದೆ. ಅದನ್ನು ಶಾಂತಿಯ ಪ್ರಪಂಚ ಅಥವಾ ಸುಖಧಾಮವೆಂದು ಕರೆಯಲಾಗುತ್ತದೆ. ಇದು ದುಃಖಧಾಮವಾಗಿದೆ, ದುಃಖಧಾಮವನ್ನು ಪರಿವರ್ತಿಸಿ ಸುಖಧಾಮವನ್ನಾಗಿ ಮಾಡುವವರು ಒಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆ. ಸುಖದ ಆಸ್ತಿಯನ್ನು ಅವಶ್ಯವಾಗಿ ತಂದೆಯೇ ಕೊಡುತ್ತಾರೆ. ಈಗ ಆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ದುಃಖಧಾಮವನ್ನು ಮರೆಯಿರಿ, ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಿ ಇದಕ್ಕೆ ಮನ್ಮನಾಭವ ಎಂದು ಹೇಳಲಾಗುತ್ತದೆ. ತಂದೆಯು ಬಂದು ಸುಖಧಾಮದ ಸಾಕ್ಷಾತ್ಕಾರ ಮಾಡಿಸುತ್ತಾರೆ. ದುಃಖಧಾಮದ ವಿನಾಶ ಮಾಡಿಸಿ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ಚಕ್ರವನ್ನು ಈಗ ಯಥಾರ್ಥವಾಗಿ ಅರಿತುಕೊಳ್ಳಬೇಕು. 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾರು ಮೊಟ್ಟ ಮೊದಲಿಗೆ ಸುಖಧಾಮದಲ್ಲಿ ಬರುತ್ತಾರೆಯೋ ಅವರದೇ 84 ಜನ್ಮಗಳಿವೆ. ಕೇವಲ ಇಷ್ಟು ಮಾತನ್ನು ನೆನಪು ಮಾಡುವುದರಿಂದಲೂ ಮಕ್ಕಳು ಸುಖಧಾಮದ ಮಾಲೀಕರಾಗಬಲ್ಲಿರಿ.

ತಂದೆಯು ತಿಳಿಸುತ್ತಾರೆ - ಮಕ್ಕಳೇ, ಶಾಂತಿಧಾಮವನ್ನು ನೆನಪು ಮಾಡಿ ಮತ್ತು ಆಸ್ತಿ ಅರ್ಥಾತ್ ಸುಖಧಾಮವನ್ನು ನೆನಪು ಮಾಡಿ. ಮೊಟ್ಟ ಮೊದಲು ನೀವು ಶಾಂತಿಧಾಮದಲ್ಲಿ ಹೋದಾಗ ತಮ್ಮನ್ನು ಶಾಂತಿಧಾಮದ, ಬ್ರಹ್ಮಾಂಡದ ಮಾಲೀಕನೆಂದು ತಿಳಿಯಿರಿ. ನಡೆಯುತ್ತಾ-ತಿರುಗಾಡುತ್ತಾ ತಮ್ಮನ್ನು ಅಲ್ಲಿಯ ನಿವಾಸಿಗಳೆಂದು ತಿಳಿಯುತ್ತೀರೆಂದರೆ ಈ ಪ್ರಪಂಚವು ಮರೆಯುತ್ತಾ ಹೋಗುವುದು. ಸತ್ಯಯುಗವು ಸುಖಧಾಮವಾಗಿದೆ, ಆದರೆ ಎಲ್ಲರೂ ಸತ್ಯಯುಗದಲ್ಲಿ ಬರಲು ಸಾಧ್ಯವಿಲ್ಲ. ಯಾರು ದೇವತೆಗಳ ಪೂಜಾರಿಯಾಗಿದ್ದಾರೆಯೋ ಅವರೇ ಈ ಮಾತುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇದು ಸತ್ಯ ಸಂಪಾದನೆಯಾಗಿದೆ. ಇದನ್ನು ಸತ್ಯ ತಂದೆಯೇ ಕಲಿಸುತ್ತಾರೆ ಉಳಿದೆಲ್ಲರದು ಸುಳ್ಳು ಸಂಪಾದನೆಗಳಾಗಿವೆ. ಅವಿನಾಶಿ ಜ್ಞಾನ ರತ್ನಗಳ ಸಂಪಾದನೆಯೇ ಸತ್ಯ ಸಂಪಾದನೆಯೆಂದು ಹೇಳಲಾಗುತ್ತದೆ. ಉಳಿದೆಲ್ಲಾ ವಿನಾಶಿ ಹಣ-ಅಧಿಕಾರ ಎಲ್ಲವೂ ಸುಳ್ಳು ಸಂಪಾದನೆಯಾಗಿದೆ. ದ್ವಾಪರದಿಂದ ಹಿಡಿದು ಆ ಸುಳ್ಳು ಸಂಪಾದನೆಯನ್ನು ಮಾಡುತ್ತಾ ಬಂದಿದ್ದಾರೆ. ಈ ಅವಿನಾಶಿ ಸತ್ಯ ಸಂಪಾದನೆಯ ಪ್ರಾಲಬ್ಧವು ಸತ್ಯಯುಗದಿಂದ ಆರಂಭವಾಗಿ ತ್ರೇತಾಯುಗದಲ್ಲಿ ಮುಕ್ತಾಯವಾಗುತ್ತದೆ ಅರ್ಥಾತ್ ಅರ್ಧಕಲ್ಪ ಸುಖವನ್ನನುಭವಿಸುತ್ತೀರಿ ನಂತರ ದ್ವಾಪರದಿಂದ ಅಸತ್ಯ ಸಂಪಾದನೆಯು ಆರಂಭವಾಗುತ್ತದೆ. ಇದರಿಂದ ಅಲ್ಪಕಾಲ, ಕ್ಷಣ ಭಂಗುರ ಸುಖವು ಸಿಗುತ್ತದೆ. ಈ ಅವಿನಾಶಿ ಜ್ಞಾನರತ್ನಗಳನ್ನು ಜ್ಞಾನ ಸಾಗರನೇ ಕೊಡುತ್ತಾರೆ. ಸತ್ಯ ಸಂಪಾದನೆಯನ್ನು ಸತ್ಯ ತಂದೆಯೇ ಮಾಡಿಸುತ್ತಾರೆ. ಭಾರತವು ಸತ್ಯ ಖಂಡವಾಗಿತ್ತು, ಈಗ ಭಾರತವೇ ಅಸತ್ಯ ಖಂಡವಾಗಿದೆ. ಅನ್ಯ ಖಂಡಗಳಿಗೆ ಸತ್ಯ ಖಂಡ, ಅಸತ್ಯ ಖಂಡಗಳೆಂದು ಹೇಳಲಾಗುವುದಿಲ್ಲ. ಸತ್ಯ ಖಂಡವನ್ನಾಗಿ ಮಾಡುವ ಸತ್ಯ ಸಾಮ್ರಾಟನೂ ಅವರಾಗಿದ್ದಾರೆ. ಒಬ್ಬ ಪರಮಾತ್ಮನೇ ಸತ್ಯನಾಗಿದ್ದಾರೆ ಉಳಿದೆಲ್ಲರೂ ಸುಳ್ಳು ತಂದೆಯರಾಗಿದ್ದಾರೆ. ಸತ್ಯಯುಗದಲ್ಲಿಯೂ ಸತ್ಯ ತಂದೆಯರು ಸಿಗುತ್ತಾರೆ ಏಕೆಂದರೆ ಅಲ್ಲಿ ಅಸತ್ಯ, ಪಾಪವಿರುವುದಿಲ್ಲ. ಇದು ಪಾಪಾತ್ಮರ ಪ್ರಪಂಚವಾಗಿದೆ, ಅದು ಪುಣ್ಯಾತ್ಮರ ಪ್ರಪಂಚವಾಗಿದೆ. ಅಂದಮೇಲೆ ಈಗ ಈ ಸತ್ಯ ಸಂಪಾದನೆ ಮಾಡಿಕೊಳ್ಳಲು ಎಷ್ಟೊಂದು ಪುರುಷಾರ್ಥ ಮಾಡಬೇಕು! ಯಾರು ಕಲ್ಪದ ಹಿಂದೆ ಸಂಪಾದನೆ ಮಾಡಿಕೊಂಡಿರುವರೋ ಅವರೇ ಮಾಡಿಕೊಳ್ಳುತ್ತಾರೆ. ಮೊದಲು ತಾನು ಸತ್ಯ ಸಂಪಾದನೆ ಮಾಡಿ ನಂತರ ತಂದೆ ಮತ್ತು ಮಾವನ ಮನೆಯವರಿಗೆ ಇದೇ ಸತ್ಯ ಸಂಪಾದನೆ ಮಾಡಿಸಬೇಕಾಗಿದೆ. ಮನೆಯೇ ಮೊದಲ ಪಾಠಶಾಲೆ ಅರ್ಥಾತ್ ದಾನವು ಮನೆಯಿಂದಲೇ ಆರಂಭವಾಗುತ್ತದೆ.

ಸರ್ವವ್ಯಾಪಿಯ ಜ್ಞಾನವುಳ್ಳವರು ಭಕ್ತಿ ಮಾಡಲು ಸಾಧ್ಯವಿಲ್ಲ. ಎಲ್ಲರೂ ಭಗವಂತನ ರೂಪವಾಗಿದ್ದರೆ ಇನ್ನ್ಯಾರ ಭಕ್ತಿ ಮಾಡುತ್ತಾರೆ? ಆದ್ದರಿಂದ ಮನುಷ್ಯರನ್ನು ಈ ಕೆಸರಿನಿಂದ ತೆಗೆಯುವುದರಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ಸನ್ಯಾಸಿಗಳು ದಾನವನ್ನು ಮನೆಯಿಂದಲೇ ಹೇಗೆ ಆರಂಭಿಸಲು ಸಾಧ್ಯ? ಏಕೆಂದರೆ ಮೊದಲಿಗೆ ಅವರು ಮನೆಯ ಸಮಾಚಾರವನ್ನು ತಿಳಿಸುವುದೇ ಇಲ್ಲ. ಏಕೆ ತಿಳಿಸುವುದಿಲ್ಲ ಎಂದು ಹೇಳಿ. ಇದರಿಂದ ತಿಳಿದುಕೊಳ್ಳಬೇಕಲ್ಲವೆ! ಇಂತಹ ಮನೆಯವರಾಗಿದ್ದೆವು ನಂತರ ಸನ್ಯಾಸತ್ವವನ್ನು ಧಾರಣೆ ಮಾಡಿದೆವು ಎಂದು ತಿಳಿಸುವುದರಲ್ಲೇನಿದೆ! ನಿಮ್ಮೊಂದಿಗೆ ಕೇಳಿದರೆ ನೀವು ಬಹಳ ಬೇಗನೆ ತಿಳಿಸಬಲ್ಲಿರಿ. ಸನ್ಯಾಸಿಗಳ ಅನುಯಾಯಿಗಳಂತೂ ಅನೇಕರಿದ್ದಾರೆ. ಅವರು ಒಂದುವೇಳೆ ಭಗವಂತನು ಒಬ್ಬರೇ ಆಗಿದ್ದಾರೆಂದು ಹೇಳಿದರೆ ಎಲ್ಲರೂ ಅವರನ್ನು ಈ ಜ್ಞಾನವನ್ನು ನಿಮಗೆ ಯಾರು ತಿಳಿಸಿದರು ಎಂದು ಕೇಳಿದರೆ ಆಗ ಬ್ರಹ್ಮಾಕುಮಾರ-ಕುಮಾರಿಯರು ತಿಳಿಸಿದರೆಂದು ಹೇಳಿ ಬಿಟ್ಟರೆ ಅವರ ವ್ಯಾಪಾರವೇ ಸಮಾಪ್ತಿಯಾಗಿ ಬಿಡುತ್ತದೆ. ಆದ್ದರಿಂದ ಹೀಗೆ ತಮ್ಮ ಗೌರವವನ್ನು ಕಳೆದುಕೊಳ್ಳಲು ಯಾರು ತಾನೆ ಇಚ್ಛಿಸುತ್ತಾರೆ! ಹಾಗೆ ಹೇಳಿ ಬಿಟ್ಟರೆ ಮತ್ತೆ ಅವರಿಗೆ ಭೋಜನವನ್ನೂ ಕೊಡುವುದಿಲ್ಲ. ಆದ್ದರಿಂದ ಆ ಸನ್ಯಾಸಿಗಳಿಗೆ ಬಹಳ ಕಷ್ಟವಾಗುತ್ತದೆ. ಮೊದಲಂತೂ ತಮ್ಮ ಮಿತ್ರ ಸಂಬಂಧಿ ಮೊದಲಾದವರಿಗೆ ಈ ಜ್ಞಾನವನ್ನು ತಿಳಿಸಿ ಸತ್ಯ ಸಂಪಾದನೆ ಮಾಡಿಸಬೇಕಾಗಿದೆ. ಇದರಿಂದ ಅವರೂ ಸಹ 21 ಜನ್ಮಗಳ ಸುಖವನ್ನು ಪಡೆಯಲಿ. ಮಾತು ಬಹಳ ಸಹಜವಾಗಿದೆ ಆದರೆ ನಾಟಕದಲ್ಲಿ ಇಷ್ಟೊಂದು ಶಾಸ್ತ್ರ, ಮಂದಿರಗಳಾಗುವುದೂ ಸಹ ನಿಗಧಿಯಾಗಿದೆ.

ಪತಿತ ಪ್ರಪಂಚದಲ್ಲಿರುವವರು ಈಗ ನಮ್ಮನ್ನು ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಸತ್ಯಯುಗಕ್ಕೆ 5000 ವರ್ಷಗಳಾಯಿತು, ಮನುಷ್ಯರು ಕಲಿಯುಗದ ಆಯಸ್ಸನ್ನೇ ಲಕ್ಷಾಂತರ ವರ್ಷಗಳೆಂದು ಹೇಳಿ ಬಿಟ್ಟಿದ್ದಾರೆ ಅಂದಮೇಲೆ ಮನುಷ್ಯರು ಸುಖಧಾಮವೆಲ್ಲಿದೆ? ಯಾವಾಗ ಬರುವುದು ಎಂಬುದನ್ನು ಹೇಗೆ ಅರಿತುಕೊಳ್ಳುತ್ತಾರೆ? ಮನುಷ್ಯರಂತೂ ಹೇಳುತ್ತಾರೆ - ಮಹಾ ಪ್ರಳಯವಾಗಿ ಬಿಡುತ್ತದೆ. ಅದರ ನಂತರ ಸತ್ಯಯುಗವಾಗುತ್ತದೆ, ಮೊಟ್ಟ ಮೊದಲಿಗೆ ಶ್ರೀಕೃಷ್ಣನು ಹೆಬ್ಬೆರಳನ್ನು ಚೀಪುತ್ತಾ ಆಲದ ಎಲೆಯ ಮೇಲೆ ತೇಲಿ ಬರುತ್ತಾನೆ ಎಂದು ಹೇಳುತ್ತಾರೆ. ಎಲ್ಲಿಯ ಮಾತನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ! ಈಗ ತಂದೆಯು ತಿಳಿಸುತ್ತಾರೆ - ಬ್ರಹ್ಮಾರವರ ಮೂಲಕ ನಾನು ಎಲ್ಲಾ ವೇದ ಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ. ಆದ್ದರಿಂದ ವಿಷ್ಣುವಿನ ನಾಭಿ ಕಮಲದಿಂದ ಬ್ರಹ್ಮನು ಬಂದರೆಂದು ತೋರಿಸುತ್ತಾರೆ ಮತ್ತು ಕೈಯಲ್ಲಿ ಶಾಸ್ತ್ರಗಳನ್ನು ಕೊಟ್ಟಿದ್ದಾರೆ. ಬ್ರಹ್ಮನಂತೂ ಅವಶ್ಯವಾಗಿ ಇಲ್ಲಿಯೇ ಇರಬೇಕಲ್ಲವೆ! ಸೂಕ್ಷ್ಮವತನದಲ್ಲಂತೂ ಶಾಸ್ತ್ರಗಳಿರುವುದಿಲ್ಲ ಅಂದಮೇಲೆ ಬ್ರಹ್ಮನು ಇಲ್ಲಿಯೇ ಇರಬೇಕು. ಲಕ್ಷ್ಮಿ-ನಾರಾಯಣರ ರೂಪವಾದ ವಿಷ್ಣುವೂ ಸಹ ಇಲ್ಲಿಯೇ ಇರುತ್ತಾರೆ. ಬ್ರಹ್ಮಾರವರೇ ನಂತರ ವಿಷ್ಣುವಾಗುತ್ತಾರೆ ಮತ್ತೆ ವಿಷ್ಣುವಿನಿಂದ ಬ್ರಹ್ಮಾ. ಈಗ ಬ್ರಹ್ಮನಿಂದ ವಿಷ್ಣು ಬರುವರೋ ಅಥವಾ ವಿಷ್ಣುವಿನಿಂದ ಬ್ರಹ್ಮನು ಬರುವರೋ? ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ ಆದರೆ ಈ ಮಾತುಗಳನ್ನು ಯಾರು ಬಹಳ ಚೆನ್ನಾಗಿ ಓದುವರೋ ಅವರೇ ಅರಿತುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಶರೀರವನ್ನು ಬಿಡುವವರೆಗೂ ತಿಳಿದುಕೊಳ್ಳುತ್ತಲೇ ಇರುತ್ತೀರಿ. ನೀವೇ 100% ಬುದ್ಧಿಹೀನರು, ಕಂಗಾಲಾಗಿ ಬಿಟ್ಟಿದ್ದೀರಿ. ಮೊದಲು ನೀವೇ ಬುದ್ಧಿವಂತ ದೇವಿ-ದೇವತೆಗಳಾಗಿದ್ದಿರಿ. ಈಗ ಪುನಃ ದೇವಿ-ದೇವತೆಗಳಾಗುತ್ತಿದ್ದೀರಿ. ದೇವತೆಗಳನ್ನಾಗಿ ಮನುಷ್ಯರಂತೂ ಮಾಡಲು ಸಾಧ್ಯವಿಲ್ಲ. ನೀವೇ ದೇವತೆಗಳಾಗಿದ್ದಿರಿ ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಒಮ್ಮೆಲೆ ಕಲಾಹೀನರಾಗಿ ಬಿಟ್ಟಿದ್ದೀರಿ. ನೀವು ಸುಖಧಾಮದಲ್ಲಿ ಬಹಳ ಶಾಂತಿಯಲ್ಲಿದ್ದಿರಿ, ಈಗ ಅಶಾಂತರಾಗಿದ್ದೀರಿ. ನೀವು 84 ಜನ್ಮಗಳ ಲೆಕ್ಕವನ್ನೂ ಸಹ ತಿಳಿಸಬಹುದು. ಇಸ್ಲಾಮಿ, ಬೌದ್ಧಿ, ಸಿಖ್ಖ್, ಇಸಾಯಿ ಮಠ ಪಂಥಗಳವರು ಎಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ? ಇದರ ಲೆಕ್ಕವನ್ನು ತೆಗೆಯುವುದು ಸಹಜವಾಗಿದೆ. ಭಾರತವಾಸಿಗಳೇ ಸ್ವರ್ಗದ ಮಾಲೀಕರಾಗುತ್ತಾರೆ. ಸಸಿಯ ನಾಟಿಯಾಗುತ್ತದೆಯಲ್ಲವೆ. ಇದು ತಿಳುವಳಿಕೆಯಾಗಿದೆ. ಮೊದಲು ತಾವು ತಿಳಿದುಕೊಂಡರೆ ನಂತರ ತಮ್ಮ ತಂದೆ-ತಾಯಿ, ಸಹೋದರ-ಸಹೋದರಿಯರಿಗೆ ಜ್ಞಾನವನ್ನು ಕೊಡಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನರಾಗಿರಬೇಕಾಗಿದೆ ಮತ್ತು ಮನೆಯೇ ಮೊದಲ ಪಾಠಶಾಲೆ, ದಾನವು ಅಲ್ಲಿಂದಲೇ ಆರಂಭವಾಗಬೇಕು. ತಂದೆಯ ಮನೆ ಮತ್ತು ಅತ್ತೆಯ ಮನೆಯವರಿಗೆ ಜ್ಞಾನವನ್ನು ತಿಳಿಸಬೇಕಾಗಿದೆ. ವ್ಯಾಪಾರದಲ್ಲಿಯೂ ಸಹ ತಮ್ಮ ಸಹೋದರರನ್ನೇ ಭಾಗೀಧಾರರನ್ನಾಗಿ ಮಾಡಿಕೊಳ್ಳುತ್ತಾರೆ ಇಲ್ಲಿಯೂ ಹಾಗೆಯೇ. ಗಾಯನವೂ ಇದೆ - ಕನ್ಯೆಯೆಂದರೆ ತಂದೆ ಮತ್ತು ಅತ್ತೆಯ ಮನೆಯ ಉದ್ಧಾರ ಮಾಡುವವರು ಎಂದು. ಅಪವಿತ್ರರು ಉದ್ಧಾರ ಮಾಡಲು ಸಾಧ್ಯವಿಲ್ಲ ಅಂದಮೇಲೆ ಯಾವ ಕನ್ಯೆ? ಈ ಬ್ರಹ್ಮಾರವರ ಕನ್ಯೆ ಬ್ರಹ್ಮಾಕುಮಾರಿಯಾಗಿದ್ದಾರಲ್ಲವೆ. ಇಲ್ಲಿ ಅಧರ್ ಕನ್ಯಾ, ಕನ್ಯಾಕುಮಾರಿಯ ಮಂದಿರವೂ ಮಾಡಲ್ಪಟ್ಟಿದೆ. ಇದು ನಿಮ್ಮ ನೆನಪಾರ್ಥವಾಗಿದೆ. ಈ ದಿಲ್ವಾಡಾ ಮಂದಿರವು ನಮ್ಮದೇ ನೆನಪಾರ್ಥ ಮಂದಿರವಾಗಿದೆ, ಭಾರತವನ್ನು ಪುನಃ ಸ್ವರ್ಗವನ್ನಾಗಿ ಮಾಡಲು ನಾವು ಬಂದಿದ್ದೇವೆ ಎಂಬುದನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ. ಈ ದಿಲ್ವಾಡಾ ಮಂದಿರವು ಸಂಪೂರ್ಣ ನೆನಪಾರ್ಥವಾಗಿದೆ. ಮೇಲೆ ಸ್ವರ್ಗವನ್ನು ತೋರಿಸಿದ್ದಾರೆ, ಸ್ವರ್ಗವಿರುವುದೂ ಇಲ್ಲಿಯೇ, ರಾಜಯೋಗದ ತಪಸ್ಸೂ ಇಲ್ಲಿಯೇ ನಡೆಯುತ್ತದೆ. ದಿಲ್ವಾಡಾ ಮಂದಿರವನ್ನು ಕಟ್ಟಿಸುವವರು ಇದರ ಪರಿಚಯವನ್ನು ತಿಳಿದುಕೊಂಡಿಲ್ಲ. ಯಾರ ಮಂದಿರವಾಗಿದೆಯೋ ಅವರನ್ನಾದರೂ ತಿಳಿದುಕೊಳ್ಳಬೇಕಲ್ಲವೆ. ಒಳಗೆ ಜಗತ್ಪಿತ, ಜಗದಂಬಾ, ಆದಿ ದೇವ-ಆದಿ ದೇವಿ ಕುಳಿತಿದ್ದಾರೆ ಅಂದಮೇಲೆ ಆದಿ ದೇವನು ಯಾರ ಮಗನಾಗಿದ್ದಾರೆ? ಶಿವ ತಂದೆಯ ಮಗನಾಗಿದ್ದಾರೆ. ಅಧರ್ ಕುಮಾರಿ, ಕನ್ಯಾಕುಮಾರಿಯರೆಲ್ಲರೂ ರಾಜಯೋಗದಲ್ಲಿ ಕುಳಿತಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ. ಇದರಿಂದ ನೀವು ವೈಕುಂಠದ ಮಾಲೀಕರಾಗುವಿರಿ. ಮುಕ್ತಿ-ಜೀವನ್ಮುಕ್ತಿಧಾಮವನ್ನು ನೆನಪು ಮಾಡಿ. ಇದು ನಿಮ್ಮ ಪೂರ್ಣ ನೆನಪಾರ್ಥವಾಗಿದೆ ಆದರೆ ಪೂಜಾರಿಗಳು ಏನನ್ನೂ ಅರಿತುಕೊಂಡಿಲ್ಲ. ನಿಮ್ಮದು ಇದು ಸನ್ಯಾಸವಾಗಿದೆ. ಜೈನರ ಸನ್ಯಾಸವು ಎಷ್ಟೊಂದು ಕಠಿಣವಾಗಿದೆ. ಕೂದಲನ್ನು ಬರಿ ಗೈಯಿಂದ ತೆಗೆಯುವುದು ಎಷ್ಟೊಂದು ಕಠಿಣವಾಗಿದೆ. ಇಲ್ಲಂತೂ ಇದು ಸಹಜ ರಾಜಯೋಗವಾಗಿದೆ ಮತ್ತು ಪ್ರವೃತ್ತಿ ಮಾರ್ಗದ್ದಾಗಿದೆ. ಇದು ನಾಟಕದಲ್ಲಿ ನಿಗಧಿಯಾಗಿದೆ. ಯಾರು ಜೈನ ಮುನಿಗಳು ಕುಳಿತು ತಮ್ಮ ಹೊಸ ಧರ್ಮವನ್ನು ಸ್ಥಾಪನೆ ಮಾಡಿದರು. ಅದಕ್ಕೆ ಆದಿ ಸನಾತನ ದೇವಿ-ದೇವತಾ ಧರ್ಮವೆಂದಂತೂ ಹೇಳುವುದಿಲ್ಲ ಅಲ್ಲವೆ! ಅದಂತೂ ಈಗ ಪ್ರಾಯಃಲೋಪವಾಗಿದೆ. ಯಾರು ಜೈನ ಧರ್ಮವನ್ನು ನಡೆಸಿದರು ಮತ್ತು ಅದೇ ನಡೆಯುತ್ತಾ ಬಂದಿತು, ಇದೂ ಸಹ ನಾಟಕದಲ್ಲಿದೆ. ಆದಿ ದೇವನಿಗೆ ಪಿತಾ ಎಂತಲೂ, ಜಗದಂಬೆ ಮಾತೆಯೆಂತಲೂ ಹೇಳುತ್ತಾರೆ. ಆದಿ ದೇವ ಬ್ರಹ್ಮನಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರನ್ನು ಆದಂ ಬೀಬಿ, ಆಡಂ ಈವ್ ಎಂತಲೂ ಹೇಳುತ್ತಾರೆ. ಕ್ರಿಶ್ಚಿಯನ್ನರಿಗೂ ಈ ಆಡಂ ಈವ್ ಈಗ ತಪಸ್ಸು ಮಾಡುತ್ತಿದ್ದಾರೆಂಬುದು ತಿಳಿದಿದೆಯೇ! ಇವರು ಮನುಷ್ಯ ಸೃಷ್ಟಿಯ ಮೂಲವಾಗಿದ್ದಾರೆ. ಈ ರಹಸ್ಯವನ್ನು ತಂದೆಯೇ ತಿಳಿಸುತ್ತಾರೆ. ಇಷ್ಟೊಂದು ಶಿವ ಮತ್ತು ಲಕ್ಷ್ಮೀ-ನಾರಾಯಣರ ಮಂದಿರಗಳಿವೆಯೆಂದರೆ ಅವರ ಚರಿತ್ರೆಯನ್ನು ಅರಿತುಕೊಳ್ಳಬೇಕಲ್ಲವೆ. ಇದನ್ನೂ ಸಹ ಜ್ಞಾನಸಾಗರ ತಂದೆಯೇ ತಿಳಿಸುತ್ತಾರೆ. ಪರಮಪಿತ ಪರಮಾತ್ಮನಿಗೆ ಜ್ಞಾನ ಸಾಗರ, ಆನಂದ ಸಾಗರನೆಂದು ಹೇಳಲಾಗುತ್ತದೆ. ಈ ಪರಮಾತ್ಮನ ಮಹಿಮೆಯನ್ನು ಯಾವುದೇ ಸಾಧು-ಸಂತ ಮೊದಲಾದವರು ಅರಿತುಕೊಂಡಿಲ್ಲ. ಅವರಂತೂ ಪರಮಾತ್ಮ ಸರ್ವವ್ಯಾಪಿ ಎಂದು ಹೇಳುತ್ತಾರೆ. ಅಂದಮೇಲೆ ಮತ್ತ್ಯಾರ ಮಹಿಮೆ ಮಾಡುವುದು? ಪರಮಾತ್ಮನನ್ನು ಅರಿತುಕೊಳ್ಳದಿರುವ ಕಾರಣವೇ ತಮ್ಮನ್ನು ಶಿವೋಹಂ ಎಂದು ಹೇಳಿಕೊಳ್ಳುತ್ತಾರೆ. ಇಲ್ಲವಾದರೆ ಪರಮಾತ್ಮನ ಮಹಿಮೆಯು ಇಷ್ಟು ದೊಡ್ಡದಾಗಿದೆ, ಅವರಂತೂ ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದಾರೆ. ಮುಸಲ್ಮಾನರೂ ಸಹ ನಮಗೆ ಖುದಾ ರಚಿಸಿದರೆಂದು ಹೇಳುತ್ತಾರೆ ಅಂದಮೇಲೆ ನಾವು ರಚನೆ ಹಾಗೂ ರಚನೆಗೆ ರಚನೆಯಿಂದ ಆಸ್ತಿಯು ಸಿಗಲು ಸಾಧ್ಯವಿಲ್ಲ. ರಚನೆಗೆ ರಚಯಿತನಿಂದ ಆಸ್ತಿಯು ಸಿಗುತ್ತದೆ. ಈ ಮಾತುಗಳನ್ನು ಯಾರೂ ಅರಿತುಕೊಳ್ಳುವುದಿಲ್ಲ. ಅವರು ಬೀಜ ರೂಪನು ಸತ್ಯ, ಚೈತನ್ಯನಾಗಿದ್ದಾರೆ, ಅವರಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಆ ಬೀಜದ ವಿನಃ ಆದಿ-ಮಧ್ಯ-ಅಂತ್ಯದ ಜ್ಞಾನವು ಮತ್ತ್ಯಾವ ಮನುಷ್ಯರಲ್ಲಿರಲು ಸಾಧ್ಯವಿಲ್ಲ. ಬೀಜವು ಚೈತನ್ಯವಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಜ್ಞಾನವು ಅವರಲ್ಲಿಯೇ ಇರುವುದು, ಅವರೇ ಬಂದು ನಿಮಗೆ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ. ಈ ಬೋರ್ಡನ್ನೂ ಹಾಕಬೇಕು. ಈ ಚಕ್ರವನ್ನು ಅರಿತುಕೊಳ್ಳುವುದರಿಂದ ಚಕ್ರವರ್ತಿ ರಾಜರು ಅಥವಾ ಸ್ವರ್ಗದ ರಾಜರಾಗಿ ಬಿಡುತ್ತೀರಿ. ಎಷ್ಟೊಂದು ಸಹಜ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ಎಲ್ಲಿಯವರೆಗೆ ಜೀವಿಸಿರಬೇಕಾಗಿದೆಯೋ ಅಲ್ಲಿಯವರೆಗೆ ನನ್ನನ್ನು ನೆನಪು ಮಾಡಬೇಕಾಗಿದೆ. ನಾನೇ ನಿಮಗೆ ಈ ವಶೀಕರಣ ಮಂತ್ರವನ್ನು ಕೊಡುತ್ತೇನೆ. ಈಗ ನೀವು ತಂದೆಯನ್ನು ನೆನಪು ಮಾಡಬೇಕಾಗಿದೆ. ಈ ಸ್ವದರ್ಶನ ಚಕ್ರವು ಸದಾ ತಿರುಗುತ್ತಿರಲಿ, ಆಗ ಮಾಯೆಯ ತಲೆ ಕತ್ತರಿಸಿ ಹೋಗುವುದು. ನಾನು ನೀವಾತ್ಮಗಳನ್ನು ಪವಿತ್ರರನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತೇನೆ ನಂತರ ನೀವು ಸತೋಪ್ರಧಾನ ಶರೀರವನ್ನು ಪಡೆಯುತ್ತೀರಿ. ಅಲ್ಲಿ ವಿಕಾರವಿರುವುದಿಲ್ಲ. ವಿಕಾರವಿಲ್ಲದೆ ಸೃಷ್ಟಿಯು ಹೇಗೆ ನಡೆಯುವುದೆಂದು ಹೇಳುತ್ತಾರೆ ಆಗ ಹೇಳಿ, ನೀವು ಬಹುಷಃ ಪೂಜಾರಿಗಳಲ್ಲ, ಲಕ್ಷ್ಮೀ-ನಾರಾಯಣರ ಮಹಿಮೆಯಲ್ಲಿ ನೀವು ಸಂಪೂರ್ಣ ನಿರ್ವಿಕಾರಿಗಳೆಂದು ಹಾಡುತ್ತಾರೆ. ಜಗದಂಬಾ-ಜಗತ್ಪಿತ ನಿರ್ವಿಕಾರಿಯಾಗಿದ್ದಾರೆ. ರಾಜಯೋಗದ ತಪಸ್ಸು ಮಾಡಿ ಪತಿತರಿಂದ ಪಾವನ, ಸ್ವರ್ಗದ ಮಾಲೀಕರಾಗುತ್ತಾರೆ. ತಪಸ್ಸು ಮಾಡುವುದೇ ಪುಣ್ಯಾತ್ಮರಾಗುವುದಕ್ಕಾಗಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
 
ಧಾರಣೆಗಾಗಿ ಮುಖ್ಯಸಾರ-
1. ಈ ಹಳೆಯ ಪ್ರಪಂಚವನ್ನು ಬುದ್ಧಿಯಿಂದ ಮರೆಯಲು ನಡೆಯುತ್ತಾ-ತಿರುಗಾಡುತ್ತಾ ತನ್ನನ್ನು ಶಾಂತಿಧಾಮವಾಸಿ ಎಂದು ತಿಳಿಯಬೇಕಾಗಿದೆ. ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಿ ಸತ್ಯ ಸಂಪಾದನೆ ಮಾಡಿಕೊಳ್ಳಬೇಕು ಮತ್ತು ಅನ್ಯರಿಗೂ ಮಾಡಿಸಬೇಕು.

2. ರಾಜಯೋಗದ ತಪಸ್ಸು ಮಾಡಿ ಸ್ವಯಂನ್ನು ಪುಣ್ಯಾತ್ಮರನ್ನಾಗಿ ಮಾಡಿಕೊಳ್ಳಬೇಕಾಗಿದೆ. ಮಾಯೆಯ ತಲೆಯನ್ನು ಕತ್ತರಿಸಲು ಸ್ವದರ್ಶನ ಚಕ್ರವು ಸದಾ ತಿರುಗುತ್ತಿರಲಿ.

ವರದಾನ:
ಶಾಂತಿಯ ಶಕ್ತಿಯ ಪ್ರಯೋಗದಿಂದ ಎಲ್ಲಾ ಕಾರ್ಯದಲ್ಲಿಯೂ ಸಹಜವಾಗಿ ಸಫಲತೆ ಪ್ರಾಪ್ತಿ ಮಾಡಿಕೊಳ್ಳುವಂತಹ ಪ್ರಯೋಗಿ ಆತ್ಮ ಭವ.

ಈಗ ಸಮಯದ ಪರಿವರ್ತನೆಯ ಪ್ರಮಾಣ ಶಾಂತಿಯ ಶಕ್ತಿಯ ಸಾಧನವನ್ನು ಪ್ರಯೋಗದಲ್ಲಿ ತಂದು ಪ್ರಯೋಗಿ ಆತ್ಮ ಆಗಿ. ಹೇಗೆ ವಾಣಿಯ ಮೂಲಕ ಆತ್ಮರಲ್ಲಿ ಸ್ನೇಹದ ಸಹಯೋಗದ ಭಾವನೆಯನ್ನು ಉತ್ಪನ್ನ ಮಾಡುವಿರಿ ಈ ರೀತಿಯ ಶುಭ ಭಾವನೆ, ಸ್ನೇಹದ ಭಾವನೆಯ ಸ್ಥಿತಿಯಲ್ಲಿ ಸ್ಥಿತರಾಗಿ ಅವರಲ್ಲಿ ಶ್ರೇಷ್ಠ ಭಾವನೆಗಳನ್ನು ಉತ್ಪನ್ನ ಮಾಡಿ. ಹೇಗೆ ದೀಪ, ದೀಪವನ್ನು ಬೆಳಗಿಸುತ್ತದೆ ಅದೇ ರೀತಿ ತಮ್ಮ ಶಕ್ತಿಶಾಲಿ ಶುಭ ಭಾವನೆ ಮತ್ತು ಬೇರೆಯವರಲ್ಲಿ ಸರ್ವ ಶ್ರೇಷ್ಠ ಭಾವನೆಯನ್ನು ಉತ್ಪನ್ನ ಮಾಡುವುದು. ಈ ಶಕ್ತಿಯಿಂದ ಸ್ಥೂಲ ಕಾರ್ಯದಲ್ಲಿಯೂ ಸಹಾ ಬಹಳ ಸಫಲತೆಯನ್ನು ಪ್ರಾಪ್ತಿ ಮಾಡಲು ಸಾಧ್ಯ, ಕೇವಲ ಪ್ರಯೋಗ ಮಾಡಿ ನೋಡಿ.

ಸ್ಲೋಗನ್:
ಎಲ್ಲರಿಗೂ ಪ್ರೀಯರಾಗಬೇಕಾದರೆ ಅರಳಿರುವಂತಹ ಆತ್ಮೀಯ ಗುಲಾಬಿಯಾಗಿ, ಬಾಡಿರುವಂತಹದಲ್ಲ.