26.03.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯ
ಸಕಾಶವನ್ನು ಪಡೆಯಲು ಸುಗಂಧಭರಿತ ಹೂಗಳಾಗಿ, ಬೆಳಗ್ಗೆ-ಬೆಳಗ್ಗೆ ಎದ್ದು ನೆನಪಿನಲ್ಲಿ ಕುಳಿತು
ಪ್ರೀತಿಯಿಂದ ತಂದೆಯ ಜೊತೆ ಮಧುರ ಮಧುರವಾಗಿ ಮಾತನಾಡಿ.”
ಪ್ರಶ್ನೆ:
ತಂದೆಯನ್ನು
ಎಲ್ಲಾ ಮಕ್ಕಳು ನಂಬರವಾರ್ ನೆನಪು ಮಾಡುತ್ತಾರೆ, ಆದರೆ ತಂದೆಯು ಎಂತಹ ಮಕ್ಕಳನ್ನು ನೆನಪು
ಮಾಡುತ್ತಾರೆ?
ಉತ್ತರ:
ಯಾವ ಮಕ್ಕಳು
ಬಹಳ ಮಧುರರಾಗಿದ್ದಾರೆ, ಯಾರಿಗೆ ಸರ್ವೀಸಿನ ಹೊರತು ಮತ್ತೇನೂ ತೋಚುವುದೇ ಇಲ್ಲ. ಅತೀ ಪ್ರೀತಿಯಿಂದ
ತಂದೆಯನ್ನು ನೆನಪು ಮಾಡುತ್ತಾರೆ, ಖುಷಿಯಲ್ಲಿ ಪ್ರೇಮದ ಕಣ್ಣೀರನ್ನು ಹಾಕುತ್ತಾರೆಯೋ ಅಂತಹ
ಮಕ್ಕಳನ್ನು ತಂದೆಯೂ ಸಹ ನೆನಪು ಮಾಡುತ್ತಾರೆ. ತಂದೆಯ ದೃಷ್ಟಿಯು ಹೂಗಳ ಕಡೆ ಹೋಗುತ್ತದೆ, ಇಂತಹ
ಆತ್ಮವು ಬಹಳ ಒಳ್ಳೆಯದಾಗಿದೆ, ಈ ಆತ್ಮವು ಸರ್ವೀಸ್ ಇದ್ದ ಕಡೆ ಓಡುತ್ತಿರುತ್ತದೆ, ಅನೇಕರ ಕಲ್ಯಾಣ
ಮಾಡುತ್ತದೆ ಎಂದು ಹೇಳುತ್ತಾರೆ ಅಂದಾಗ ತಂದೆಯು ಅಂತಹವರನ್ನು ನೆನಪು ಮಾಡುತ್ತಾರೆ.
ಓಂ ಶಾಂತಿ.
ತಂದೆಯು ಕುಳಿತು ಆತ್ಮಗಳಿಗೆ ತಿಳಿಸುತ್ತಾರೆ. ಶರೀರವೂ ನೆನಪಿಗೆ ಬರುತ್ತದೆ, ಆತ್ಮವೂ ನೆನಪಿಗೆ
ಬರುತ್ತದೆ. ಶರೀರವಿಲ್ಲದೆ ಆತ್ಮವನ್ನು ನೆನಪು ಮಾಡಲು ಸಾಧ್ಯವಿಲ್ಲ. ತಿಳಿದುಕೊಳ್ಳಲಾಗುತ್ತದೆ - ಈ
ಆತ್ಮವು ಒಳ್ಳೆಯದಾಗಿದೆ, ಇವರು ಬಾಹ್ಯಮುಖಿ ಆಗಿದ್ದಾರೆ. ಇವರು ಈ ಪ್ರಪಂಚದ ಪರ್ಯಟನೆ ಮಾಡಲು
ಬಯಸುತ್ತಾರೆ. ಇವರು ಆ ಪ್ರಪಂಚವನ್ನು ಮರೆತಿದ್ದಾರೆ. ಮೊದಲು ಅವರ ನಾಮ-ರೂಪವು ಸನ್ಮುಖದಲ್ಲಿ
ಬರುತ್ತದೆ. ಇಂತಹವರ ಆತ್ಮವನ್ನು ನೆನಪು ಮಾಡಲಾಗುತ್ತದೆ. ಇಂತಹವರು ಆತ್ಮವು ಚೆನ್ನಾಗಿ ಸೇವೆ
ಮಾಡುತ್ತದೆ, ಇವರ ಬುದ್ಧಿಯೋಗವು ತಂದೆಯ ಜೊತೆಯಿದೆ. ಇವರಲ್ಲಿ ಇಂತಿಂತಹ ಗುಣಗಳಿವೆ. ಮೊದಲು ಶರೀರದ
ನೆನಪು ಬರುತ್ತದೆ ನಂತರ ಆತ್ಮವು ನೆನಪಿಗೆ ಬರುತ್ತದೆ. ಮೊದಲು ಶರೀರದ ನೆನಪೇ ಬರುತ್ತದೆ. ಇಷ್ಟು
ದೊಡ್ಡ ಶರೀರಕ್ಕೆ ಮಹಿಮೆ ಮಾಡಲಾಗುವುದಿಲ್ಲ. ಆತ್ಮದ ಮಹಿಮೆಯನ್ನೇ ಮಾಡುತ್ತಾರೆ. ಇವರ ಆತ್ಮವು ಬಹಳ
ಚೆನ್ನಾಗಿ ಸೇವೆ ಮಾಡುತ್ತದೆ. ಇಂತಹ ಆತ್ಮವು ಇವರಿಗಿಂತ ಒಳ್ಳೆಯದಾಗಿದೆ ಎಂದು ಹೇಳುತ್ತಾರೆ. ಮೊದಲು
ಶರೀರವೇ ನೆನಪಿಗೆ ಬರುತ್ತದೆ. ತಂದೆಯಂತೂ ಅನೇಕ ಆತ್ಮರನ್ನು ನೆನಪು ಮಾಡಬೇಕಾಗುತ್ತದೆ. ಶರೀರದ
ಹೆಸರು ನೆನಪಿಗೆ ಬರುವುದಿಲ್ಲ. ಕೇವಲ ರೂಪವು ಸನ್ಮುಖದಲ್ಲಿ ಬರುತ್ತದೆ. ಇಂತಹವರ ಆತ್ಮ ಎಂದು
ಹೇಳಿದಾಗ ಶರೀರವು ಅವಶ್ಯವಾಗಿ ನೆನಪಾಗುತ್ತದೆ ಹೇಗೆ ಈ ಬಾಬಾರವರ ಶರೀರದಲ್ಲಿ ಶಿವ ತಂದೆಯು
ಬರುತ್ತಾರೆಂದು ತಿಳಿಯುತ್ತೀರಿ, ತಂದೆಯು ಇವರ ಶರೀರದಲ್ಲಿದ್ದಾರೆ ಎಂದು ತಿಳಿದಿದೆ. ಅಂದಮೇಲೆ
ಶರೀರವು ಅವಶ್ಯವಾಗಿ ನೆನಪಾಗುತ್ತದೆ. ಕೆಲವು ಮಕ್ಕಳು ಕೇಳುತ್ತಾರೆ - ನಾವು ಹೇಗೆ ನೆನಪು ಮಾಡುವುದು?
ಶಿವ ತಂದೆಯನ್ನು ಬ್ರಹ್ಮಾರವರ ತನುವಿನಲ್ಲಿ ನೆನಪು ಮಾಡುವುದೇ ಅಥವಾ ಪರಮಧಾಮದಲ್ಲಿ ನೆನಪು
ಮಾಡುವುದೇ? ಅನೇಕರಿಗೆ ಈ ಪ್ರಶ್ನೆಯು ಉದ್ಭವಿಸುತ್ತದೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ಶರೀರವು
ಅವಶ್ಯವಾಗಿ ನೆನಪಿಗೆ ಬರುತ್ತದೆ ಆದರೆ ಆತ್ಮವನ್ನೇ ನೆನಪು ಮಾಡಬೇಕು. ಮೊದಲು ಶರೀರ ನಂತರ ಆತ್ಮ.
ತಂದೆಯು ಇವರ ಶರೀರದಲ್ಲಿ ಕುಳಿತಿದ್ದಾರೆ ಅಂದಮೇಲೆ ಶರೀರವು ಅವಶ್ಯವಾಗಿ ನೆನಪಿಗೆ ಬರುತ್ತದೆ.
ಇಂತಹ ಶರೀರದ ಆತ್ಮದಲ್ಲಿ ಈ ಗುಣಗಳಿವೆ ಎಂದು ಹೇಳುತ್ತಾರೆ. ನನ್ನನ್ನು ಯಾರು ನೆನಪು ಮಾಡುತ್ತಾರೆ,
ಯಾರಲ್ಲಿ ಬಹಳ ಗುಣಗಳಿವೆ, ಯಾವ-ಯಾವ ಹೂವಿನಲ್ಲಿ ಸುಗಂಧವಿದೆ ಎಂದು ತಂದೆಯು ನೋಡುತ್ತಿರುತ್ತಾರೆ.
ಎಲ್ಲರಿಗೆ ಹೂಗಳ ಜೊತೆ ಪ್ರೀತಿಯಿರುತ್ತದೆ. ಹೂಗುಚ್ಛವನ್ನು ಮಾಡುತ್ತಾರೆ. ಅದರಲ್ಲಿ ರಾಜಾ-ರಾಣಿ,
ಪ್ರಜೆ, ಭಿನ್ನ-ಭಿನ್ನ ಹೂವು, ಎಲೆ ಇತ್ಯಾದಿಗಳೆಲ್ಲವನ್ನೂ ಸೇರಿಸಿ ಮಾಡುತ್ತಾರೆ. ತಂದೆಯ ದೃಷ್ಟಿಯು
ಹೂಗಳ ಕಡೆ ಹೋಗುತ್ತದೆ. ಇಂತಹ ಆತ್ಮವು ಬಹಳ ಒಳ್ಳೆಯದಾಗಿದೆ, ಬಹಳ ಸರ್ವೀಸ್ ಮಾಡುತ್ತದೆ.
ಆತ್ಮಾಭಿಮಾನಿಯಾಗಿ ತಂದೆಯನ್ನು ನೆನಪು ಮಾಡುತ್ತಾರೆ. ಎಲ್ಲಿಯಾದರೂ ಸೇವೆ ನೋಡಿದರೆ ಓಡುತ್ತಾರೆ
ಎಂದು ತಂದೆಯೂ ಸಹ ಹೇಳುತ್ತಾರೆ. ಅಷ್ಟು ಸೇವೆ ಮಾಡಿಯು ಸಹ ಮುಂಜಾನೆ ಏದ್ದು ನೆನಪಿನಲ್ಲಿ
ಕುಳಿತುಕೊಂಡಾಗ ಯಾರನ್ನು ನೆನಪು ಮಾಡಬಹುದು? ಶಿವ ತಂದೆಯು ಪರಮಧಾಮದಲ್ಲಿ ನೆನಪಿಗೆ ಬರುತ್ತಾರೆಯೋ
ಅಥವಾ ಮಧುಬನದಲ್ಲಿಯೋ? ತಂದೆಯ ನೆನಪಂತೂ ಬರುತ್ತದೆಯಲ್ಲವೆ. ಇವರಲ್ಲಿ ಶಿವ ತಂದೆಯಿದ್ದಾರೆ ಏಕೆಂದರೆ
ತಂದೆಯಂತೂ ಈಗ ಕೆಳಗೆ ಬಂದು ಬಿಟ್ಟರು. ಮುರುಳಿಯನ್ನು ನುಡಿಸಲು ಬಂದಿದ್ದಾರೆ, ಇವರಿಗೆ ತಮ್ಮ
ಮನೆಯಲ್ಲಂತೂ ಯಾವುದೇ ಕೆಲಸವಿರುವುದಿಲ್ಲ ಅಂದಮೇಲೆ ಅಲ್ಲಿ ಹೋಗಿ ಏನು ಮಾಡುತ್ತಾರೆ? ಈ
ತನುವಿನಲ್ಲಿಯೇ ಪ್ರವೇಶ ಮಾಡುತ್ತಾರೆ. ಅಂದಾಗ ಮೊದಲು ಅವಶ್ಯವಾಗಿ ಶರೀರದ ನೆನಪು ಬರುತ್ತದೆ ನಂತರ
ಆತ್ಮ. ಇಂತಹವರ ಶರೀರದಲ್ಲಿ ಯಾವ ಆತ್ಮವಿದೆಯೋ ಅದು ಬಹಳ ಅನನ್ಯ ಮಗುವಾಗಿದೆ, ಅವರಿಗೆ ಸೇವೆಯ ಹೊರತು
ಮತ್ತೇನೂ ತೋಚುವುದಿಲ್ಲ. ಬಹಳ ಮಧುರರಾಗಿದ್ದಾರೆ, ಬಹಳ ನೆನಪು ಮಾಡುತ್ತಾರೆ ಎಂದು ತಂದೆಯು
ನೋಡುತ್ತಾರೆ. ಬಂಧನದಲ್ಲಿ ಇರುವ ಮಕ್ಕಳು ಬಹಳ ಒಳ್ಳೆಯವರಾಗಿದ್ದಾರೆ, ಬಹಳ ನೆನಪು ಮಾಡುತ್ತಾರೆ
ಎಂದು ತಂದೆಯು ನೋಡುತ್ತಾರೆ. ಬಂಧನದಲ್ಲಿ ಇರುವ ಮಕ್ಕಳಿಗೆ ವಿಕಾರಕ್ಕಾಗಿ ಎಷ್ಟೊಂದು ಪೆಟ್ಟು
ಬೀಳುತ್ತದೆ! ಎಷ್ಟು ಪ್ರೇಮದಿಂದ ನೆನಪು ಮಾಡುತ್ತಾರೆ! ಯಾವಾಗ ಬಹಳ ನೆನಪು ಮಾಡುತ್ತಾರೆಯೋ ಆಗ
ಖುಷಿಯಲ್ಲಿ ಪ್ರೇಮದ ಕಣ್ಣೀರು ಬಂದು ಬಿಡುತ್ತದೆ. ಕೆಲ ಕೆಲವೊಮ್ಮೆ ಆ ಕಣ್ಣೀರು ಕೆಳಗೂ ಬೀಳುತ್ತದೆ.
ತಂದೆಗೆ ಮತ್ತೇನು ಕೆಲಸವಿದೆ, ಎಲ್ಲರನ್ನು ನೆನಪು ಮಾಡುತ್ತಾರೆ. ಅನೇಕ ಮಕ್ಕಳು ನೆನಪಾಗುತ್ತಾರೆ -
ಇಂತಹವರ ಆತ್ಮದಲ್ಲಿ ಶಕ್ತಿಯಿಲ್ಲ, ತಂದೆಯನ್ನು ನೆನಪು ಮಾಡುವುದಿಲ್ಲ, ಯಾರಿಗೂ ಸುಖ ಕೊಡುವುದಿಲ್ಲ.
ಇವರು ತಮ್ಮ ಕಲ್ಯಾಣವನ್ನೇ ಮಾಡಿಕೊಳ್ಳುವುದಿಲ್ಲ ಎಂದು ತಂದೆಯು ಇದನ್ನೇ ಪರಿಶೀಲನೆ
ಮಾಡುತ್ತಿರುತ್ತಾರೆ. ನೆನಪು ಮಾಡುವುದು ಎಂದರೆ ಸಕಾಶ ಕೊಡುವುದು. ಆತ್ಮದ ಸಂಬಂಧವು ಪರಮಾತ್ಮನ ಜೊತೆ
ಇರುತ್ತದೆಯಲ್ಲವೆ. ಇಂತಹ ದಿನವು ಬರುತ್ತದೆ - ಯಾವಾಗ ಮಕ್ಕಳು ಬಹಳ ಯೋಗದಲ್ಲಿರುತ್ತಾರೆ, ಇವರೂ ಸಹ
ಯಾರನ್ನೇ ನೆನಪು ಮಾಡುತ್ತಾರೆಂದರೆ ತಕ್ಷಣ ಸಾಕ್ಷಾತ್ಕಾರವಾಗುತ್ತದೆ. ಆತ್ಮವು ಚಿಕ್ಕ ಬಿಂದುವಾಗಿದೆ.
ಒಂದು ವೇಳೆ ಅದರ ಸಾಕ್ಷಾತ್ಕಾರವಾದರೂ ಸಹ ಅದನ್ನು ಯಾರೂ ಅರಿತುಕೊಳ್ಳುವುದಿಲ್ಲ, ಶರೀರವೇ ನೆನಪಿಗೆ
ಬರುತ್ತದೆ. ಆತ್ಮವು ಸೂಕ್ಷ್ಮವಾಗಿದೆ ಆದರೆ ನೆನಪು ಮಾಡುವುದರಿಂದ ಪಾವನವಾಗುತ್ತಾ ಹೋಗುತ್ತದೆ.
ಹೂದೋಟದಲ್ಲಿ ಅನೇಕ ಪ್ರಕಾರದ ಹೂಗಳಿರುತ್ತವೆ. ತಂದೆಯು ನೋಡುತ್ತಾರೆ - ಇವು ಬಹಳ ಸುಗಂಧಭರಿತ
ಹೂಗಳಾಗಿವೆ. ಇವು ಇಷ್ಟೊಂದು ಇಲ್ಲ ಅಂದಮೇಲೆ ಪದವಿಯು ಕಡಿಮೆಯಾಗುತ್ತದೆ. ತಂದೆಗೆ ಯಾರು
ಸಹಯೋಗಿಗಳಾಗುತ್ತಾರೆಯೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಅವರು ತಂದೆಯನ್ನು ನೆನಪು
ಮಾಡುತ್ತಿರುತ್ತಾರೆ. ಬ್ರಾಹ್ಮಣರಿಂದ ವರ್ಗಾವಣೆಯಾಗಿ ದೇವತೆಗಳಾಗುತ್ತಾರೆ. ಇವರು ದೈವೀ
ಹೂವಾಗಿದ್ದಾರೆಯೇ ಅಥವಾ ಅಸುರೀ ಹೂವಾಗಿದ್ದಾರೆಯೇ ಎಂಬ ವರ್ಣನೆಯನ್ನು ಸಂಗಮದಲ್ಲಿಯೇ ಮಾಡಲು ಸಾಧ್ಯ.
ಹೂಗಳಂತೂ ಎಲ್ಲರೂ ಆಗಿದ್ದಾರೆ ಆದರೆ ಇದರಲ್ಲಿ ಅನೇಕ ಪ್ರಕಾರವಿದೆ. ತಂದೆಯೂ ನೆನಪು
ಮಾಡುತ್ತಿರುತ್ತಾರೆ. ಶಿಕ್ಷಕರು ತಮ್ಮ ವಿದ್ಯಾರ್ಥಿಯನ್ನು ನೆನಪು ಮಾಡುತ್ತಾರಲ್ಲವೆ. ಇವರು ಕಡಿಮೆ
ಓದುತ್ತಾರೆಂದು ಮನಸ್ಸಿನಲ್ಲಿ ತಿಳಿಯುತ್ತಾರೆ, ಹಾಗೆಯೇ ಇವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ
ಆಗಿದ್ದಾರೆ. ತಂದೆಯಂತೂ ಆಗಿಯೇ ಇದ್ದಾರೆ ಆದರೆ ಶಿಕ್ಷಕರ ಪಾತ್ರವು ಹೆಚ್ಚಾಗಿ ನಡೆಯುತ್ತದೆ.
ಶಿಕ್ಷಕರು ಪ್ರತಿನಿತ್ಯವೂ ಓದಿಸಬೇಕಾಗುತ್ತದೆ. ಈ ವಿದ್ಯೆಯ ಶಕ್ತಿಯಿಂದಲೇ ಅಂತಹ ಪದವಿಯನ್ನು
ಪಡೆಯುತ್ತೀರಿ. ಮುಂಜಾನೆಯ ಸಮಯದಲ್ಲಿ ನೀವೆಲ್ಲಾ ಸಹೋದರರು ತಂದೆಯ ನೆನಪಿನಲ್ಲಿ
ಕುಳಿತುಕೊಳ್ಳುತ್ತೀರಿ. ಅದು ನೆನಪಿನ ಸಬ್ಜೆಕ್ಟ್ ಆಗಿದೆ ನಂತರ ಮುರುಳಿಯು ನಡೆಯುತ್ತದೆ, ಇದು
ವಿದ್ಯೆಯ ಸಬ್ಜೆಕ್ಟ್ ಆಗಿದೆ. ಮುಖ್ಯವಾದದ್ದು ಯೋಗ ಮತ್ತು ವಿದ್ಯಾಭ್ಯಾಸವಾಗಿದೆ. ಅದಕ್ಕೆ ಜ್ಞಾನ
ಮತ್ತು ವಿಜ್ಞಾನವೆಂದು ಹೇಳಲಾಗುತ್ತದೆ. ಇದು ಜ್ಞಾನ ಮತ್ತು ವಿಜ್ಞಾನ ಭವನವಾಗಿದೆ. ಇಲ್ಲಿ ತಂದೆಯು
ಬಂದು ಕಲಿಸಿ ಕೊಡುತ್ತಾರೆ. ಜ್ಞಾನದಿಂದ ಇಡೀ ಸೃಷ್ಟಿಯ ಜ್ಞಾನವು ಸಿಕ್ಕಿ ಬಿಡುತ್ತದೆ.
ವಿಜ್ಞಾನವೆಂದರೆ ನೀವು ಯೋಗದಲ್ಲಿರುತ್ತೀರಿ ಆದ್ದರಿಂದ ಪಾವನರಾಗಿ ಬಿಡುತ್ತೀರಿ. ನಿಮಗೆ ಇದರ
ಅರ್ಥವು ತಿಳಿದಿದೆ. ತಂದೆಯು ಸದಾ ಮಕ್ಕಳನ್ನು ನೋಡುತ್ತಿರುತ್ತಾರೆ. ಆತ್ಮಾಭಿಮಾನಿಗಳಾಗುವುದರಿಂದಲೇ
ಭೂತಗಳು ಬಿಟ್ಟು ಹೋಗುತ್ತವೆ, ಎಲ್ಲರ ಭೂತಗಳು ಬೇಗನೆ ಬಿಟ್ಟು ಹೋಗುತ್ತವೆ ಎಂದು ಹೇಳಲು
ಸಾಧ್ಯವಿಲ್ಲ. ಲೆಕ್ಕಾಚಾರವು ಯಾವಾಗ ಸಮಾಪ್ತಿಯಾಗುವುದೋ ನಂತರ ನಡವಳಿಕೆಯ ಅನುಸಾರವೇ ಪದವಿಯನ್ನು
ಪಡೆಯುತ್ತಾರೆ. ಇನ್ನೊಂದು ತರಗತಿಗೆ ವರ್ಗಾವಣೆಯಾಗುತ್ತಾರೆ. ಈ ಪ್ರಪಂಚದ ವರ್ಗಾವಣೆಯು ಕೆಳಗೆ
ಹೋಗುತ್ತಿದೆ ಮತ್ತು ನಿಮ್ಮದು ಮೇಲೇರುತ್ತಿದೆ. ಎಷ್ಟೊಂದು ಅಂತರವಿದೆ. ಅವರು ಕಲಿಯುಗೀ ಏಣಿಯನ್ನು
ಇಳಿಯುತ್ತಾ ಹೋಗುತ್ತಾರೆ ಮತ್ತು ನೀವು ಪುರುಷೋತ್ತಮ ಸಂಗಮಯುಗೀ ಬ್ರಾಹ್ಮಣರು ಏಣಿಯನ್ನು ಹತ್ತುತ್ತಾ
ಹೋಗುತ್ತೀರಿ. ಪ್ರಪಂಚವಂತೂ ಇದೇ ಆಗಿದೆ ಆದರೆ ಇದು ಕೇವಲ ಬುದ್ಧಿಯ ಕೆಲಸವಾಗಿದೆ. ನಾವು
ಸಂಗಮಯುಗಿಗಳಾಗಿದ್ದೇವೆಂದು ನೀವು ಹೇಳುತ್ತೀರಿ. ಪುರುಷೋತ್ತಮರನ್ನಾಗಿ ಮಾಡಲು ತಂದೆಯೇ
ಬರಬೇಕಾಗುತ್ತದೆ. ಈಗ ನಿಮಗಾಗಿ ಈ ಪುರುಷೋತ್ತಮ ಸಂಗಮಯುಗವಾಗಿದೆ. ಉಳಿದೆಲ್ಲರೂ ಘೋರ
ಅಂಧಕಾರದಲ್ಲಿದ್ದಾರೆ. ಅವರು ಭಕ್ತಿಯನ್ನು ಬಹಳ ಒಳ್ಳೆಯದೆಂದು ತಿಳಿಯುತ್ತಾರೆ ಏಕೆಂದರೆ ಅವರಿಗೆ
ಜ್ಞಾನವೇ ಗೊತ್ತಿಲ್ಲ. ನಿಮಗೀಗ ಜ್ಞಾನವು ಸಿಕ್ಕಿದೆ, ಆದ್ದರಿಂದ ನೀವು ಅರಿತುಕೊಳ್ಳುತ್ತೀರಿ.
ಜ್ಞಾನದ ಒಂದು ಚಿಟುಕೆಯಿಂದ ಅರ್ಧಕಲ್ಪಕ್ಕಾಗಿ ನಾವು ಮೇಲೇರುತ್ತೇವೆ ಮತ್ತೆ ಅಲ್ಲಿ ಜ್ಞಾನದ ಮಾತೂ
ಇರುವುದಿಲ್ಲ. ಇವೆಲ್ಲಾ ಮಾತುಗಳನ್ನು ಮಹಾರಥಿ ಮಕ್ಕಳೇ ಧಾರಣೆ ಮಾಡಿ ಅನ್ಯರಿಗೆ
ತಿಳಿಸುತ್ತಿರುತ್ತಾರೆ. ಉಳಿದವರು ಇಲ್ಲಿಂದ ಹೊರಗೆ ಹೋದರೆ ಎಲ್ಲವೂ ಸಮಾಪ್ತಿಯಾಗುತ್ತದೆ. ಕರ್ಮ,
ಅಕರ್ಮ, ವಿಕರ್ಮದ ರಹಸ್ಯವನ್ನು ಭಗವಂತನೇ ತಿಳಿಸುತ್ತಾರೆ. ಇದು ಕಲ್ಪದ ಸಂಗಮಯುಗವಾಗಿದೆ. ಈಗ ಹಳೆಯ
ಪ್ರಪಂಚವು ಸಮಾಪ್ತಿಯಾಗಿ ಹೊಸ ಪ್ರಪಂಚವು ಸ್ಥಾಪನೆಯಾಗಲಿದೆ. ವಿನಾಶವೂ ಸಹ ಸನ್ಮುಖದಲ್ಲಿ ನಿಂತಿದೆ.
ನೀವು ಸಂಗಮಯುಗದಲ್ಲಿ ನಿಂತಿದ್ದೀರಿ ಮತ್ತು ಮನುಷ್ಯರಿಗೆ ಈಗ ಕಲಿಯುಗವು ನಡೆಯುತ್ತಿದೆ, ಎಷ್ಟು
ಘೋರ ಅಂಧಕಾರವಿದೆ. ಕೆಳಗೆ ಇಳಿಯುತ್ತಲೇ ಇರುತ್ತಾರೆ. ಕೆಲವರಂತೂ ಅನ್ಯರನ್ನು ಬೀಳಿಸಲು ನಿಮಿತ್ತರೂ
ಆಗುತ್ತಾರೆ. ಅವರೇ ರಾವಣನಾಗಿದ್ದಾರೆ. ವಾಸ್ತವದಲ್ಲಿ ಈ ಸಭೆಯಲ್ಲಿ ಪತಿತರು ಕುಳಿತುಕೊಳ್ಳಲು
ಸಾಧ್ಯವಿಲ್ಲ. ಪತಿತರು ವಾಯುಮಂಡಲವನ್ನು ಹಾಳು ಮಾಡುತ್ತಾರೆ. ಒಂದುವೇಳೆ ಯಾರಾದರೂ
ಮುಚ್ಚಿಟ್ಟುಕೊಂಡು ಕುಳಿತುಕೊಂಡರೆ ಅವರಿಗೆ ಏಟು ಬೀಳುತ್ತದೆ, ಒಮ್ಮೆಲೆ ಬಿದ್ದು ಹೋಗುತ್ತಾರೆ.
ಈಶ್ವರೀಯ ಸಭೆಯಲ್ಲಿ ದೈತ್ಯರು ಬಂದು ಕುಳಿತುಕೊಂಡರೆ ತಕ್ಷಣ ತಿಳಿಯುತ್ತದೆ. ಕಲ್ಲು ಬುದ್ಧಿಯವರಂತೂ
ಆಗಿಯೇ ಇದ್ದಾರೆ ಆದರೆ ಇನ್ನೂ ಕಲ್ಲುಬುದ್ಧಿಯವರಾಗಿ ಬಿಡುತ್ತಾರೆ. ಒಂದಕ್ಕೆ ನೂರರಷ್ಟು
ಶಿಕ್ಷೆಯಾಗುತ್ತದೆ. ಇನ್ನೂ ತಮ್ಮನ್ನು ನಷ್ಟಗೊಳಿಸಿಕೊಳ್ಳುತ್ತಾರೆ. ಇವರಿಗೆ ತಿಳಿಯುತ್ತದೆಯೇ ಎಂದು
ನೋಡೋಣ ಎಂದುಕೊಳ್ಳುತ್ತಾರೆ. ನಮಗೇನಾಗಬೇಕು! ಏನು ಮಾಡುವರೋ ಅದನ್ನು ಪಡೆಯುವರು. ನಾವು ಅದನ್ನು
ತಿಳಿಯುವ ಅವಶ್ಯಕತೆಯಿಲ್ಲ. ತಂದೆಯೊಂದಿಗೆ ಸದಾ ಸತ್ಯವಾಗಿರಬೇಕು. ಸತ್ಯದೊಂದಿಗೆ ನರ್ತಿಸಿ.
ಸತ್ಯವಾಗಿದ್ದರೆ ತಮ್ಮ ರಾಜಧಾನಿಯಲ್ಲಿಯೂ ನರ್ತನ ಮಾಡುತ್ತಾರೆ. ತಂದೆಯೇ ಸತ್ಯವಾಗಿದ್ದಾರೆ ಅಂದಮೇಲೆ
ಮಕ್ಕಳೂ ಸಹ ಸತ್ಯವಂತರಾಗಬೇಕು. ಶಿವ ತಂದೆಯು ಎಲ್ಲಿದ್ದಾರೆಂದು ಬಾಬಾರವರು ಕೇಳುತ್ತಾರೆ ಆಗ
ಇವರಲ್ಲಿ ಇದ್ದಾರೆಂದು ಹೇಳುತ್ತಾರೆ ಅಂದರೆ ಪರಮಧಾಮವನ್ನು ಬಿಟ್ಟು ದೂರದೇಶದಲ್ಲಿರುವವರು
ಪರದೇಶದಲ್ಲಿ ಬಂದರು. ಅವರು ಈಗ ಬಹಳ ಸೇವೆ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ,
ನಾನು ಇಲ್ಲಿ ಹಗಲು-ರಾತ್ರಿ ಸೇವೆ ಮಾಡಬೇಕಾಗುತ್ತದೆ. ಸಂದೇಶಿಯರಿಗೆ ಭಕ್ತರಿಗೆ ಸಾಕ್ಷಾತ್ಕಾರ
ಮಾಡಿಸಬೇಕಾಗುತ್ತದೆ. ಇಲ್ಲಿಯೇ ಸೇವೆ ಇರುತ್ತದೆ. ಪರಮಧಾಮದಲ್ಲಿ ಯಾವುದೇ ಸೇವೆಯಿರುವುದಿಲ್ಲ.
ಸೇವೆಯಿಲ್ಲದೆ ತಂದೆಗೆ ಸುಖವೆನಿಸುವುದೇ ಇಲ್ಲ. ಇಡೀ ಪ್ರಪಂಚದ ಸೇವೆ ಮಾಡಬೇಕಾಗಿದೆ. ತಂದೆಯೇ ಬನ್ನಿ
ಎಂದು ಎಲ್ಲರೂ ಕರೆಯುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಈ ರಥದಲ್ಲಿ ಬರುತ್ತೇನೆ
ಇದಕ್ಕೆ ಬದಲಾಗಿ ಅವರು ಕುದುರೆ ಗಾಡಿಯನ್ನು ತೋರಿಸಿದ್ದಾರೆ. ಆದರೆ ಕುದುರೆ ಗಾಡಿಯಲ್ಲಿ ಕೃಷ್ಣನು
ಹೇಗೆ ಕುಳಿತುಕೊಳ್ಳುತ್ತಾನೆ! ಕುದುರೆಯ ಗಾಡಿಯಲ್ಲಿ ಕುಳಿತುಕೊಳ್ಳಲು ಯಾವುದೇ ಆಸೆ ಇರುವುದಿಲ್ಲ.
ದೇಹೀ-ಅಭಿಮಾನಿ ಮತ್ತು ದೇಹಾಭಿಮಾನಿಯಾಗುವ ಮಾತು ಸಂಗಮಯುಗದಲ್ಲಿಯೇ ನಡೆಯುತ್ತದೆ ಮತ್ತು ತಂದೆಯ
ಹೊರತು ಈ ಮಾತನ್ನು ಇನ್ಯಾರೂ ತಿಳಿಸಲು ಸಾಧ್ಯವಿಲ್ಲ. ನೀವು ಈಗ ತಿಳಿದಿದ್ದೀರಿ. ಮೊದಲು
ತಿಳಿದಿರಲಿಲ್ಲ. ಯಾವುದಾದರೂ ಗುರು ತಿಳಿಸಿದರೇನು? ಗುರುಗಳನ್ನಂತೂ ಎಷ್ಟೊಂದು ಜನರನ್ನು
ಮಾಡಿಕೊಂಡಿರಿ. ಯಾರೂ ನಿಮಗೆ ಕಲಿಸಲಿಲ್ಲ. ಎಷ್ಟೊಂದು ಜನರು ಗುರುಗಳನ್ನು ಮಾಡಿಕೊಳ್ಳುತ್ತಾರೆ.
ಯಾರಿಂದಲಾದರೂ ಶಾಂತಿಯ ಮಾರ್ಗ ಸಿಗುತ್ತದೆಯೆಂದು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ -
ಶಾಂತಿಯ ಸಾಗರನಂತೂ ಒಬ್ಬ ತಂದೆಯೇ ಆಗಿದ್ದಾರೆ. ಅವರು ಜೊತೆ ಕರೆದುಕೊಂಡು ಹೋಗುತ್ತಾರೆ. ಸುಖಧಾಮ,
ಶಾಂತಿಧಾಮದ ಬಗ್ಗೆ ಯಾರಿಗೂ ಗೊತ್ತೇ ಇಲ್ಲ. ಕಲಿಯುಗದಲ್ಲಿ ಶೂದ್ರ ವರ್ಣವಿದೆ. ಪುರುಷೋತ್ತಮ
ಸಂಗಮಯುಗದಲ್ಲಿ ಬ್ರಾಹ್ಮಣ ವರ್ಣವಿದೆ. ಈ ವರ್ಣಗಳೂ ಸಹ ನಿಮ್ಮ ಹೊರತು ಯಾರೂ ತಿಳಿದಿಲ್ಲ. ಇಲ್ಲಿ
ಕೇಳುತ್ತಾರೆ ಮತ್ತೆ ಹೊರಗೆ ಹೋದಾಗ ಎಲ್ಲವನ್ನೂ ಮರೆತು ಹೋಗುತ್ತಾರೆ. ಧಾರಣೆ ಆಗುವುದಿಲ್ಲ.
ಆದ್ದರಿಂದ ತಂದೆಯು ತಿಳಿಸುತ್ತಾರೆ - ಎಲ್ಲಿಯೇ ಹೋಗುತ್ತೀರೆಂದರೆ ನಿಮ್ಮ ಬಳಿ ಬ್ಯಾಡ್ಜ್ ಇರಲಿ
ಇದರಲ್ಲಿ ಸಂಕೋಚದ ಮಾತಿಲ್ಲ. ಇದನ್ನು ತಂದೆಯು ಕಲ್ಯಾಣಕ್ಕಾಗಿಯೇ ಮಾಡಿಸಿದ್ದಾರೆ. ಯಾರಿಗೆ ತಿಳಿಸಿ
ಇದನ್ನು ಕೊಡುತ್ತೀರೆಂದರೆ ಅವರಲ್ಲಿ ಯಾರಾದರೂ ಬುದ್ಧಿವಂತರಿದ್ದರೆ ಇದಕ್ಕಾಗಿ ತಮಗೆ ಖರ್ಚು
ಆಗಿರಬೇಕೆಂದು ಹೇಳುತ್ತಾರೆ. ಆಗ ತಿಳಿಸಿ ಖರ್ಚಂತೂ ಆಗುತ್ತದೆ, ಇದು ಬಡವರಿಗಾಗಿ ಉಚಿತವಾಗಿದೆ.
ಇದನ್ನು ಧಾರಣೆ ಮಾಡಿದರೆ ಶ್ರೇಷ್ಠ ಪದವಿಯನ್ನು ಪಡೆಯಬಹುದು. ಬಡವರ ಬಳಿ ಹಣವೇ ಇಲ್ಲವೆಂದರೆ ಏನು
ಮಾಡುತ್ತಾರೆ! ಕೆಲವರ ಬಳಿ ಹಣವಿರುತ್ತದೆ ಆದರೆ ಜಿಪುಣರಾಗಿರುತ್ತಾರೆ. ಬ್ರಹ್ಮಾ ತಂದೆಯು
ಎಲ್ಲವನ್ನೂ ನಿಜ ಜೀವನದಲ್ಲಿ ಮಾಡಿ ತೋರಿಸಿದರು. ತಾವೇ ಎಲ್ಲವನ್ನು ಸಂಭಾಲನೆ ಮಾಡಿ ಎಂದು
ಮಾತೆಯರಿಗೆ ಎಲ್ಲವನ್ನೂ ಅರ್ಪಣೆ ಮಾಡಿ ಬಿಟ್ಟರು. ಏಕೆಂದರೆ ಅಂತ್ಯದಲ್ಲಿ ಏನೂ ಸಹ ನೆನಪಿಗೆ
ಬರಬಾರದೆಂದು ಈ ಜ್ಞಾನ ಸಿಕ್ಕಿದೆ. ಅಂತ್ಯ ಕಾಲದಲ್ಲಿ ಯಾರು ಸ್ತ್ರೀಯನ್ನು ನೆನಪು ಮಾಡಿದರೆ.....
ಎಂಬ ಮಾತಿದೆ. ದೊಡ್ಡ-ದೊಡ್ಡ ಮನೆ ಮುಂತಾದವುಗಳಿದ್ದರೆ ಅವಶ್ಯವಾಗಿ ನೆನಪಿಗೆ ಬರುತ್ತದೆ ಆದರೆ
ಸ್ವಲ್ಪ ಜ್ಞಾನ ಕೇಳಿದರೂ ಸಹ ಪ್ರಜೆಗಳಲ್ಲಿ ಬರುತ್ತಾರೆ. ತಂದೆಯಂತೂ ಬಡವರ ಬಂಧುವಾಗಿದ್ದಾರೆ.
ಕೆಲಕೆಲವರ ಬಳಿ ಹಣವಿದ್ದರೂ ಸಹ ಜಿಪುಣರಾಗಿರುತ್ತಾರೆ. ಶಿವ ತಂದೆಯು ಮೊದಲ ವಾರಸುಧಾರ
ಮಗನಾಗಿದ್ದಾರೆ ಎಂಬುದನ್ನು ತಿಳಿಯುವುದಿಲ್ಲ. ಭಕ್ತಿಮಾರ್ಗದಲ್ಲಿಯೂ ಸಹ ಭಗವಂತನನ್ನು
ವಾರಸುಧಾರನನ್ನಾಗಿ ಮಾಡಿಕೊಳ್ಳುತ್ತಾರೆ. ಈಶ್ವರಾರ್ಥವಾಗಿ ನೀಡುತ್ತಾರೆ ಅಂದಾಗ ಭಗವಂತನಿಗೆ ಕೊಡಲು
ಅವರೇನು ಕಂಗಾಲರಾಗಿದ್ದಾರೆಯೇ! ಈಶ್ವರನ ಹೆಸರಿನಲ್ಲಿ ಬಡವರಿಗೆ ದಾನ ಕೊಟ್ಟರೆ ಅದಕ್ಕೆ ಪ್ರತಿಯಾಗಿ
ಈಶ್ವರನು ಕೊಡುತ್ತಾನೆಂದು ತಿಳಿಯುತ್ತಾರೆ. ಅದು ಇನ್ನೊಂದು ಜನ್ಮದಲ್ಲಂತೂ ಸಿಗುತ್ತದೆ. ದಾನ
ಕೊಟ್ಟರೆ ಗ್ರಹಣ ಬಿಡುತ್ತದೆ ಎಂದು ಹೇಳುತ್ತಾರೆ. ಬ್ರಹ್ಮಾ ತಂದೆಯು ತಿಳಿಸುತ್ತಾರೆ - ನಾನು
ತಂದೆಗೆ ಎಲ್ಲವನ್ನೂ ಕೊಟ್ಟು ಬಿಟ್ಟೆನು, ಶರೀರ, ಮಿತ್ರ ಸಂಬಂಧಿ ಮುಂತಾದವರೆಲ್ಲರನ್ನೂ ತಂದೆಗೆ
ಸಮರ್ಪಣೆ ಮಾಡಿ ಬಿಟ್ಟೆನು. ಬಾಬಾ, ಇದೆಲ್ಲವೂ ತಮ್ಮದಾಗಿದೆ. ಈ ಸಮಯದಲ್ಲಿ ಇಡೀ ಪ್ರಪಂಚಕ್ಕೆ
ಗ್ರಹಣ ಹಿಡಿದಿದೆ. ಅದು ಹೇಗೆ ಒಂದು ಸೆಕೆಂಡಿನಲ್ಲಿ ಬಿಟ್ಟು ಹೋಗುತ್ತದೆ. ಪತಿತರಿಂದ ಹೇಗೆ
ಪಾವನರಾಗುತ್ತೇವೆ ಎಂಬುದನ್ನು ಈಗ ನೀವೇ ತಿಳಿದುಕೊಂಡಿದ್ದೀರಿ ಮತ್ತು ಅನ್ಯರಿಗೆ ತಿಳಿಸುತ್ತೀರಿ.
ಆಂತರ್ಯದಲ್ಲಿ ತಿಳಿದುಕೊಂಡಿದ್ದೇವೆ ಆದರೆ ಯಾರಿಗೂ ತಿಳಿಸಲು ಆಗುವುದಿಲ್ಲ ಎಂದು ಯಾರು
ಹೇಳುತ್ತಾರೆಯೋ ಅವರು ಯಾವುದೇ ಕೆಲಸಕ್ಕೆ ಉಪಯೋಗವಾಗುವುದಿಲ್ಲ. ತಂದೆಯು ತಿಳಿಸುತ್ತಾರೆ - ದಾನ
ಕೊಟ್ಟರೆ ಗ್ರಹಣ ಬಿಡುತ್ತದೆ. ನಾನು ನಿಮಗೆ ಅವಿನಾಶಿ ಜ್ಞಾನ ರತ್ನಗಳನ್ನು ಕೊಡುತ್ತೇನೆ. ಅವನ್ನು
ಎಲ್ಲರಿಗೆ ಕೊಡುತ್ತಾ ಹೋಗಿ ಆಗ ಭಾರತಕ್ಕೆ ಅಥವಾ ಇಡೀ ಪ್ರಪಂಚದ ಮೇಲೆ ಯಾವ ಗ್ರಹಣ ಕುಳಿತಿದೆಯೋ ಅದು
ಇಳಿದು ಹೋಗುತ್ತದೆ, ಬೃಹಸ್ಪತಿಯ ದೆಶೆಯಾಗುತ್ತದೆ. ಎಲ್ಲದಕ್ಕಿಂತ ಒಳ್ಳೆಯದು ಬೃಹಸ್ಪತಿ
ದೆಶೆಯಾಗಿದೆ. ಈಗ ನಿಮಗೆ ಗೊತ್ತಿದೆ, ಇಡೀ ಪ್ರಪಂಚ ಅದರಲ್ಲಿಯೂ ವಿಶೇಷವಾಗಿ ಭಾರತಕ್ಕೆ ರಾಹುವಿನ
ಗ್ರಹಣ ಹಿಡಿದಿದೆ, ಅದು ಹೇಗೆ ಬಿಡುತ್ತದೆ? ಇವರಂತೂ ತಂದೆಯಾಗಿದ್ದಾರಲ್ಲವೆ! ತಂದೆಯು ನಿಮ್ಮಿಂದ
ಹಳೆಯದನ್ನು ತೆಗೆದುಕೊಂಡು ಹೊಸದನ್ನು ಕೊಡುತ್ತಾರೆ. ಇದಕ್ಕೆ ಬೃಹಸ್ಪತಿ ದೆಶೆಯೆಂದು ಹೇಳಲಾಗುತ್ತದೆ.
ಮುಕ್ತಿಧಾಮದಲ್ಲಿ ಹೋಗುವವರಿಗೆ ಬೃಹಸ್ಪತಿ ದೆಶೆಯೆಂದು ಹೇಳುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಸದಾ
ಖುಷಿಯಲ್ಲಿ ನರ್ತನ ಮಾಡಲು ಸತ್ಯ ತಂದೆಯೊಂದಿಗೆ ಸದಾ ಸತ್ಯವಾಗಿರಬೇಕು, ಏನನ್ನೂ ಮುಚ್ಚಿಡಬಾರದು.
2. ತಂದೆಯ ಯಾವ ಅವಿನಾಶಿ ರತ್ನಗಳನ್ನು ಕೊಡುತ್ತಾರೆಯೋ ಅವನ್ನು ಎಲ್ಲರಿಗೆ ಹಂಚಬೇಕಾಗಿದೆ. ಜೊತೆ
ಜೊತೆಗೆ ಶಿವ ತಂದೆಯನ್ನು ತಮ್ಮ ವಾರಸುಧಾರನನ್ನಾಗಿ ಮಾಡಿಕೊಂಡು ಎಲ್ಲವನ್ನೂ ಸಫಲ ಮಾಡಬೇಕಾಗಿದೆ.
ಇದರಲ್ಲಿ ಜಿಪುಣರಾಗಬಾರದು.
ವರದಾನ:
ಗಂಭೀರತೆಯ ಗುಣದ
ಮೂಲಕ ಪೂರ್ತಿ ಅಂಕವನ್ನು ಜಮಾ ಮಾಡಿಕೊಳ್ಳುವಂತಹ ಗಂಭೀರತೆಯ ದೇವಿ ಅಥವಾ ದೇವತಾ ಭವ.
ವರ್ತಮಾನ ಸಮಯ ಗಂಭೀರತೆಯ
ಗುಣದ ಅವಶ್ಯಕತೆ ಬಹಳ-ಬಹಳ ಇದೆ, ಏಕೆಂದರೆ ಹೇಳಿಕೊಳ್ಳುವ ಅಭ್ಯಾಸ ಬಹಳವಾಗಿ ಬಿಟ್ಟಿದೆ, ಏನು
ಬಾಯಿಗೆ ಬರುವುದೋ ಅದನ್ನು ಹೇಳಿ ಬಿಡುವಿರಿ. ಯಾರಾದರೂ ಏನಾದರೂ ಒಳ್ಳೆಯ ಕೆಲಸ ಮಾಡಿ ನಂತರ ಅದನ್ನು
ಹೇಳಿಕೊಂಡು ಬಿಟ್ಟರೆ ಅರ್ಧ ಸಮಾಪ್ತಿಯಾಗಿ ಬಿಡುವುದು. ಅರ್ಧವೇ ಜಮಾ ಆಗುವುದು ಮತ್ತು ಯಾರು
ಗಂಭೀರವಾಗಿರುತ್ತಾರೆ ಅವರದು ಪೂರ್ತಿ ಜಮಾ ಅಗುವುದು. ಆದ್ದರಿಂದ ಗಂಭೀರತೆಯ ದೇವಿ ಅಥವಾ ದೇವತಾ ಆಗಿ
ಮತ್ತು ತಮ್ಮ ಪೂರ್ತಿ ಮಾರ್ಕ್ಸ್ ಜಮಾ ಮಾಡಿಕೊಳ್ಳಿ. ವರ್ಣನೆ ಮಾಡುವುದರಿಂದ ಮಾರ್ಕ್ಸ್ ಕಡಿಮೆಯಾಗಿ
ಬಿಡುವುದು.
ಸ್ಲೋಗನ್:
ಬಿಂದು ರೂಪದಲ್ಲಿ
ಸ್ಥಿತರಾಗಿದ್ದಾಗ ಸಮಸ್ಯೆಗಳಿಗೆ ಸೆಕೆಂಡ್ನಲ್ಲಿ ಬಿಂದು ಹಾಕಲು ಸಾಧ್ಯವಾಗುವುದು.