14.02.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಭಾರತವಾಸಿಗಳಿಗೆ ಸಿದ್ಧ ಮಾಡಿ ಹೇಳಿ - ಶಿವ ಜಯಂತಿಯೇ ಗೀತಾ ಜಯಂತಿಯಾಗಿದೆ, ಗೀತೆಯಿಂದಲೇ ಮತ್ತೆ ಶ್ರೀ ಕೃಷ್ಣನ ಜಯಂತಿಯಾಗುತ್ತದೆ.”

ಪ್ರಶ್ನೆ:
ಯಾವುದೇ ಧರ್ಮ ಸ್ಥಾಪನೆಗೆ ಮುಖ್ಯ ಆಧಾರವೇನಾಗಿದೆ? ಧರ್ಮ ಸ್ಥಾಪಕರು ಯಾವ ಕಾರ್ಯವನ್ನು ಮಾಡುವುದಿಲ್ಲ, ಅದನ್ನು ತಂದೆಯು ಮಾಡುತ್ತಾರೆ?

ಉತ್ತರ:
ಯಾವುದೇ ಧರ್ಮ ಸ್ಥಾಪನೆಗಾಗಿ ಪವಿತ್ರತೆಯ ಬಲ ಬೇಕು. ಎಲ್ಲಾ ಧರ್ಮಗಳು ಪವಿತ್ರತೆಯ ಬಲದಿಂದ ಸ್ಥಾಪನೆಯಾಯಿತು. ಆದರೆ ಯಾವುದೇ ಧರ್ಮ ಸ್ಥಾಪಕರು ಯಾರನ್ನೂ ಪಾವನರನ್ನಾಗಿ ಮಾಡುವುದಿಲ್ಲ. ಏಕೆಂದರೆ ಯಾವಾಗ ಧರ್ಮ ಸ್ಥಾಪನೆಯಾಗುತ್ತದೆಯೋ ಆಗ ಮಾಯೆಯ ರಾಜ್ಯವಿರುತ್ತದೆ, ಆದ್ದರಿಂದ ಎಲ್ಲರೂ ಪತಿತರಾಗಲೇಬೇಕಾಗಿದೆ. ಪತಿತರನ್ನು ಪಾವನರನ್ನಾಗಿ ಮಾಡುವುದು ತಂದೆಯದೇ ಕರ್ತವ್ಯವಾಗಿದೆ. ಅವರೇ ಪಾವನರಾಗುವ ಶ್ರೀಮತವನ್ನು ಕೊಡುತ್ತಾರೆ.

ಗೀತೆ:
ಈ ಪಾಪದ ಪ್ರಪಂಚದಿಂದ.............

ಓಂ ಶಾಂತಿ.
ಈಗ ಮಕ್ಕಳು ಪಾಪದ ಪ್ರಪಂಚವೆಂದು ಯಾವುದಕ್ಕೆ ಹೇಳಲಾಗುತ್ತದೆ ಮತ್ತು ಪುಣ್ಯದ ಪ್ರಪಂಚ ಅಥವಾ ಪಾವನ ಪ್ರಪಂಚವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂದು ತಿಳಿದಿದ್ದೀರಿ. ವಾಸ್ತವದಲ್ಲಿ ಪಾಪದ ಪ್ರಪಂಚವು ಈ ಭಾರತವೇ ಆಗಿದೆ ಮತ್ತೆ ಈ ಭಾರತವೇ ಪುಣ್ಯದ ಪ್ರಪಂಚ, ಸ್ವರ್ಗವಾಗುತ್ತದೆ, ಭಾರತವೇ ಸ್ವರ್ಗವಾಗಿತ್ತು, ಭಾರತವೇ ನರಕವಾಗಿದೆ. ಏಕೆಂದರೆ ಕಾಮಚಿತೆಯ ಮೇಲೆ ಸುಡುತ್ತಿರುತ್ತಾರೆ. ಅಲ್ಲಿ ಕಾಮ ಚಿತೆಯ ಮೇಲೆ ಯಾರೂ ಸುಡುವುದಿಲ್ಲ, ಕಾಮ ಚಿತೆಯೇ ಇರುವುದಿಲ್ಲ. ಸತ್ಯಯುಗದಲ್ಲಿ ಕಾಮ ಚಿತೆಯಿರುತ್ತದೆ ಎಂದು ಹೇಳುವುದೂ ಇಲ್ಲ, ಇವು ತಿಳಿಯುವ ಮಾತುಗಳಾಗಿವೆ ಅಲ್ಲವೆ. ಮೊಟ್ಟ ಮೊದಲು ಪ್ರಶ್ನೆಯು ಉದ್ಭವಿಸುತ್ತದೆ - ಯಾವ ಭಾರತವು ಪತಿತ, ದುಃಖಿಯಾಗಿದೆಯೋ ಅದೇ ಭಾರತವು ಪಾವನ, ಸುಖಿಯಾಗಿತ್ತು. ಆದಿ ಸನಾತನ ಹಿಂದೂ ಧರ್ಮವಿತ್ತೆಂದು ಹೇಳುತ್ತಾರೆ, ಈಗ ಆದಿ ಸನಾತನ ಎಂದು ಯಾವುದಕ್ಕೆ ಹೇಳಲಾಗುತ್ತದೆ? ಆದಿ ಎಂದರೇನು ಮತ್ತು ಸನಾತನ ಎಂದರೇನು? ಆದಿ ಎಂದರೆ ಸತ್ಯಯುಗ ಅಂದಾಗ ಸತ್ಯಯುಗದಲ್ಲಿ ಯಾರಿದ್ದರು? ಇದಂತೂ ಎಲ್ಲರಿಗೂ ಗೊತ್ತಿದೆ - ಲಕ್ಷ್ಮೀ-ನಾರಾಯಣರಿದ್ದರು, ಅವಶ್ಯವಾಗಿ ಸತ್ಯಯುಗವನ್ನು ಸ್ಥಾಪನೆ ಮಾಡುವವರು ಪರಮಪಿತ ಪರಮಾತ್ಮನಾಗಿದ್ದಾರೆ. ಇವರು ಪರಮಾತ್ಮನ ಸಂತಾನರಾಗಿದ್ದರು ಆದರೆ ಈ ಸಮಯದಲ್ಲಿ ತಮ್ಮನ್ನು ಅವರ ಸಂತಾನರೆಂದು ತಿಳಿಯುವುದಿಲ್ಲ. ಒಂದು ವೇಳೆ ಸಂತಾನರೆಂದು ತಿಳಿಯುವುದೇ ಆದರೆ ತಂದೆಯನ್ನೂ ಸಹ ತಿಳಿಯುತ್ತಿದ್ದರು ಆದರೆ ತಂದೆಯನ್ನಂತೂ ತಿಳಿದುಕೊಂಡೇ ಇಲ್ಲ. ಈಗ ಹಿಂದೂ ಧರ್ಮವಂತೂ ಗೀತೆಯಲ್ಲಿಲ್ಲ. ಗೀತೆಯಲ್ಲಂತೂ ಭಾರತದ ಹೆಸರಿದೆ. ಹಿಂದೂ ಮಹಾಸಭೆಯೆಂದು ಅವರು ಕರೆಸಿಕೊಳ್ಳುತ್ತಾರೆ, ಈಗ ಶ್ರೀಮದ್ ಭಗವದ್ಗೀತೆಯು ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ. ಗೀತಾ ಜಯಂತಿಯನ್ನೂ ಆಚರಿಸಲಾಗುತ್ತದೆ, ಶಿವ ಜಯಂತಿಯನ್ನೂ ಆಚರಿಸಲಾಗುತ್ತದೆ. ಶಿವ ಜಯಂತಿ ಯಾವಾಗ ಆಯಿತು ಎಂಬುದನ್ನು ತಿಳಿಯಬೇಕು ನಂತರ ಕೃಷ್ಣನ ಜಯಂತಿಯಾಗಿದೆ. ಈಗ ನೀವು ಮಕ್ಕಳು ಇದನ್ನು ಯಥಾರ್ಥವಾಗಿ ತಿಳಿದಿದ್ದೀರಿ. ಶಿವ ಜಯಂತಿಯ ನಂತರ ಗೀತಾ ಜಯಂತಿಯಾಗಿದೆ. ಗೀತಾ ಜಯಂತಿಯ ನಂತರ ಕೃಷ್ಣ ಜಯಂತಿಯಾಗಿದೆ. ಗೀತಾ ಜಯಂತಿಯಿಂದಲೇ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಮತ್ತೆ ಗೀತಾ ಜಯಂತಿಯ ಜೊತೆ ಮಹಾ ಭಾರತದ ಸಂಬಂಧವೂ ಇದೆ. ಆದರೆ ಅದರಲ್ಲಿ ಯುದ್ಧದ ಮಾತು ಬರುತ್ತದೆ. ಯುದ್ಧದ ಮೈದಾನದಲ್ಲಿ ಮೂರು ಸೈನ್ಯಗಳಿತ್ತೆಂದು ತೋರಿಸುತ್ತಾರೆ. ಯಾದವರು, ಕೌರವರು ಮತ್ತು ಪಾಂಡವರನ್ನು ತೋರಿಸುತ್ತಾರೆ. ಯಾದವರು ಅಣ್ವಸ್ತ್ರಗಳನ್ನು ತಯಾರಿಸುತ್ತಾರೆ. ಅಲ್ಲಿ ಮಧ್ಯಪಾನ ಸೇವಿಸಿದರು ಮತ್ತು ಅಣ್ವಸ್ತ್ರಗಳನ್ನು ತಯಾರಿಸಿದರು. ನೀವು ತಿಳಿದಿದ್ದೀರಿ, ಈಗ ಅವಶ್ಯವಾಗಿ ಆ ಅಣ್ವಸ್ತ್ರಗಳು ತಯಾರಾಗುತ್ತಿವೆ. ಇವರು ತಮ್ಮ ಕುಲದ ವಿನಾಶ ಮಾಡಿಕೊಳ್ಳಲು ಒಬ್ಬರು ಇನ್ನೊಬ್ಬರೊಂದಿಗೆ ಹೊಡೆದಾಡುತ್ತಿರುತ್ತಾರೆ. ಎಲ್ಲರೂ ಕ್ರಿಶ್ಚಿಯನ್ನರೇ, ಅವರೇ ಯುರೋಪ್ ವಾಸಿಯಾದವರಾದರು ಅಂದಾಗ ಒಂದು ಅವರ ಸಭೆಯಾಗಿದೆ. ಅವರ ವಿನಾಶವಾಯಿತು, ಪರಸ್ಪರ ಎಲ್ಲರೂ ಬಂದು ಬಿಡುತ್ತಾರೆ. ಆದರೆ ಇಲ್ಲಿ ಕೌರವ ಮತ್ತು ಪಾಂಡವರಿದ್ದಾರೆ. ಕೌರವರೂ ಸಹ ವಿನಾಶ ಹೊಂದಿದರು ಮತ್ತು ಪಾಂಡವರದು ವಿಜಯವಾಯಿತು ಅಂದಾಗ ಈಗ ಪ್ರಶ್ನೆಯು ಉದ್ಭವಿಸುತ್ತದೆ - ಗೀತೆಯ ಭಗವಂತ ಯಾರು? ಯಾರು ಸಹಜ ಜ್ಞಾನ ಹಾಗೂ ಸಹಜ ರಾಜಯೋಗವನ್ನು ಕಲಿಸಿ ರಾಜರಿಗೂ ರಾಜರನ್ನಾಗಿ ಮಾಡಿದರು ಅಥವಾ ಪಾವನ ಪ್ರಪಂಚದ ಸ್ಥಾಪನೆ ಮಾಡಿದರು? ಏನು ಶ್ರೀ ಕೃಷ್ಣ ಬಂದನೇ? ಕೌರವರಂತೂ ಕಲಿಯುಗದಲ್ಲಿದ್ದರು. ಕೌರವ-ಪಾಂಡವರ ಸಮಯದಲ್ಲಿ ಶ್ರೀ ಕೃಷ್ಣನು ಹೇಗೆ ಬರಲು ಸಾಧ್ಯ? ಶ್ರೀ ಕೃಷ್ಣ ಜಯಂತಿಯನ್ನು ಆಚರಿಸುತ್ತಾರೆ, ಸತ್ಯಯುಗದ ಆದಿಯಲ್ಲಿ 16 ಕಲೆಗಳಿತ್ತು, ಶ್ರೀ ಕೃಷ್ಣನ ನಂತರ ತ್ರೇತಾಯುಗದಲ್ಲಿ ರಾಮನದು 14 ಕಲೆಗಳಾಯಿತು. ಶ್ರೀ ಕೃಷ್ಣನು ರಾಜರಿಗೂ ರಾಜ ಅಥವಾ ರಾಜಕುಮಾರರಿಗೂ ರಾಜಕುಮಾರ, ವಿಕಾರಿ ರಾಜಕುಮಾರರೂ ಸಹ ಶ್ರೀ ಕೃಷ್ಣನನ್ನು ಪೂಜಿಸುತ್ತಾರೆ. ಏಕೆಂದರೆ ಶ್ರೀ ಕೃಷ್ಣನು ಸತ್ಯಯುಗದ 16 ಕಲಾ ಸಂಪೂರ್ಣ ರಾಜನಾಗಿದ್ದನು, ನಾವು ವಿಕಾರಿಯಾಗಿದ್ದೇವೆಂದು ಅವರಿಗೇ ಗೊತ್ತಿದೆ. ಅವಶ್ಯವಾಗಿ ರಾಜಕುಮಾರರೂ ಸಹ ಹೀಗೆಯೇ ಹೇಳುತ್ತಾರಲ್ಲವೆ. ಶಿವ ಜಯಂತಿಯೂ ಇದೆ, ದೊಡ್ಡ-ದೊಡ್ಡ ಮಂದಿರಗಳೂ ಸಹ ಅವರದೇ ಆಗಿದೆ, ಅವು ನಿರಾಕಾರ ಶಿವನ ಮಂದಿರವಾಗಿದೆ. ಅವರನ್ನೇ ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರನೂ ಸಹ ದೇವತೆಗಳೇ ಆದರು. ಶಿವ ಜಯಂತಿಯನ್ನು ಭಾರತದಲ್ಲಿಯೇ ಆಚರಿಸಲಾಗುತ್ತದೆ. ಈಗ ನೋಡಿ, ಶಿಜಯಂತಿಯು ಬರುತ್ತಿದೆ. ಈಗ ಶಿವನನ್ನೇ ಜ್ಞಾನ ಸಾಗರ ಅರ್ಥಾತ್ ಸೃಷ್ಟಿಯನ್ನು ಪಾವನ ಮಾಡುವ ಪರಮಪಿತ ಪರಮಾತ್ಮನೆಂಬುದನ್ನು ಸಿದ್ಧ ಮಾಡಿ ತೋರಿಸಬೇಕು. ಗಾಂಧೀಜಿಯೂ ಸಹ ಹಾಡುತ್ತಿದ್ದರು, ಕೃಷ್ಣನ ಹೆಸರನ್ನು ತೆಗೆದುಕೊಳ್ಳುತ್ತಿರಲಿಲ್ಲ ಅಂದಮೇಲೆ ಈಗ ಪ್ರಶ್ನೆ ಉದ್ಭವಿಸುತ್ತದೆ - ಶಿವ ಜಯಂತಿಯು ಗೀತಾ ಜಯಂತಿಯೇ ಅಥವಾ ಕೃಷ್ಣ ಜಯಂತಿಯು ಗೀತಾ ಜಯಂತಿಯೇ? ಈಗ ಕೃಷ್ಣ ಜಯಂತಿಯೆಂದು ಸತ್ಯಯುಗದಲ್ಲಿ ಹೇಳುತ್ತಾರೆ, ಶಿವ ಜಯಂತಿಯು ಯಾವಾಗ ಆಗಿತ್ತು ಎಂದು ಯಾರಿಗೂ ಗೊತ್ತಿಲ್ಲ. ಶಿವನಂತೂ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ, ಅವರು ಸಂಗಮಯುಗದಲ್ಲಿ ಸೃಷ್ಟಿಯನ್ನು ರಚಿಸಿದರು. ಸತ್ಯಯುಗದಲ್ಲಿ ಶ್ರೀ ಕೃಷ್ಣನ ರಾಜ್ಯವಿತ್ತು ಅಂದಮೇಲೆ ಅವಶ್ಯವಾಗಿ ಮೊದಲು ಶಿವ ಜಯಂತಿಯಾಗಿರಬೇಕು. ಮಕ್ಕಳು ಬ್ರಾಹ್ಮಣ ಕುಲಭೂಷಣರು ಯಾರು ಸೇವೆಯಲ್ಲಿ ತತ್ಪರರಾಗಿರುತ್ತಾರೆಯೋ ಅವರಿಗೆ ಈ ಮಾತುಗಳನ್ನು ಬುದ್ಧಿಯಲ್ಲಿ ತರಬೇಕು - ಭಾರತವಾಸಿಗಳಿಗೆ ಶಿವ ಜಯಂತಿಯೇ ಗೀತಾ ಜಯಂತಿಯೆಂದು ಹೇಗೆ ಸಿದ್ಧ ಮಾಡಿ ತಿಳಿಸುವುದು. ನಂತರ ಗೀತೆಯಿಂದಲೇ ಕೃಷ್ಣ ಜಯಂತಿಯಾಗುತ್ತದೆ ಅಥವಾ ರಾಜಾಧಿ ರಾಜನ ಜಯಂತಿಯಾಗುತ್ತದೆ. ಕೃಷ್ಣನು ಪಾವನ ಪ್ರಪಂಚದ ರಾಜನಾಗಿದ್ದಾನೆ. ಅಲ್ಲಂತೂ ರಾಜ್ಯ ಭಾಗ್ಯವಿದೆ, ಅಲ್ಲಿ ಶ್ರೀ ಕೃಷ್ಣನು ಜನ್ಮ ಪಡೆದು ಗೀತೆಯನ್ನಂತೂ ಹೇಳಲಿಲ್ಲ ಮತ್ತು ಸತ್ಯಯುಗದಲ್ಲಿ ಮಹಾಭಾರತ ಯುದ್ಧ ಮೊದಲಾದವುಗಳು ಆಗಲು ಸಾಧ್ಯವಿಲ್ಲ. ಇದು ಅವಶ್ಯವಾಗಿ ಸಂಗಮದಲ್ಲಿಯೇ ಆಗಿರಬೇಕು. ನೀವು ಮಕ್ಕಳು ಬಹಳ ಚೆನ್ನಾಗಿ ಈ ಮಾತುಗಳ ಬಗ್ಗೆ ತಿಳಿಸಬೇಕು. ಪಾಂಡವ ಮತ್ತು ಕೌರವರ ಸಭೆಯು ಪ್ರಸಿದ್ಧವಾಗಿದೆ. ಶ್ರೀ ಕೃಷ್ಣನನ್ನು ಪಾಂಡವ ಪತಿಯಾಗಿ ತೋರಿಸುತ್ತಾರೆ. ಕೃಷ್ಣನ ಸಹಜ ಜ್ಞಾನವನ್ನು ಮತ್ತು ಸಹಜ ರಾಜಯೋಗವನ್ನು ಕಲಿಸಿದನೆಂದು ತಿಳಿಯುತ್ತಾರೆ. ವಾಸ್ತವದಲ್ಲಿ ಯಾವುದೇ ಯುದ್ಧದ ಮಾತಿಲ್ಲ. ವಿಜಯ ಪಾಂಡವರದಾಗಿದೆ, ಯಾರಿಗೆ ಪರಮಪಿತ ಪರಮಾತ್ಮನು ಸಹಜ ರಾಜಯೋಗವನ್ನು ಕಲಿಸಿದರು ಅವರೇ 21 ಜನ್ಮ ಸೂರ್ಯವಂಶಿ-ಚಂದ್ರವಂಶಿಯರಾಗಿ ಬಿಟ್ಟರು. ಅಂದಾಗ ಇದನ್ನು ಮೊಟ್ಟ ಮೊದಲು ಹಿಂದೂ ಮಹಾಸಭೆಯವರಿಗೆ ತಿಳಿಸಬೇಕು. ಸಭೆಗಳಂತೂ ಬಹಳಷ್ಟಿವೆ - ಲೋಕ ಸಭೆ, ರಾಜ್ಯ ಸಭೆ. ಈ ಹಿಂದೂ ಸಭೆಯು ಮುಖ್ಯವಾಗಿದೆ. ಹೇಗೆ ಮೂರು ಸೈನ್ಯಗಳೆಂದು ಗಾಯನವಿದೆ - ಯಾದವರು, ಕೌರವರು ಹಾಗೂ ಪಾಂಡವರು...... ಮತ್ತು ಇವರು ಇರುವುದೂ ಸಹ ಸಂಗಮದಲ್ಲಿಯೇ. ಈಗ ಸತ್ಯಯುಗದ ಸ್ಥಾಪನೆಯಾಗುತ್ತಾ ಇದೆ. ಕೃಷ್ಣನ ಜನ್ಮದ ತಯಾರಿಯಾಗುತ್ತದೆ. ಗೀತೆಯನ್ನು ಅವಶ್ಯವಾಗಿ ಸಂಗಮದಲ್ಲಿಯೇ ಹೇಳಲಾಗಿದೆ ಅಂದಮೇಲೆ ಈಗ ಸಂಗಮದಲ್ಲಿ ಯಾರನ್ನು ತರುವುದು? ಕೃಷ್ಣನಂತೂ ಬರಲು ಸಾಧ್ಯವಿಲ್ಲ. ಏಕೆಂದರೆ ಪಾವನ ಪ್ರಪಂಚವನ್ನು ಬಿಟ್ಟು ಪತಿತ ಪ್ರಪಂಚದಲ್ಲಿ ಬರಲು ಕೃಷ್ಣನಿಗೇನಾಗಿದೆ! ನಿಮಗೆ ಗೊತ್ತಿದೆ, ಈಗ ಅವರು 84ನೇ ಜನ್ಮದಲ್ಲಿದ್ದಾರೆ, ಆದರೆ ಕೆಲವರು ಇವರನ್ನು ಶ್ರೀ ಕೃಷ್ಣನು ಎಲ್ಲಿ ನೋಡಿದರಲ್ಲಿ ಇದ್ದಾನೆ, ಸರ್ವವ್ಯಾಪಿಯಾಗಿದ್ದಾನೆಂದು ತಿಳಿಯುತ್ತಾರೆ. ಎಲ್ಲದರಲ್ಲಿಯೂ ಕೃಷ್ಣನೇ ಕೃಷ್ಣನಿದ್ದಾನೆ, ಕೃಷ್ಣನೇ ಈ ರೂಪವನ್ನು ಧರಿಸಿದ್ದಾನೆ ಎಂದು ಕೃಷ್ಣನ ಭಕ್ತರು ಹೇಳುತ್ತಾರೆ ಮತ್ತು ರಾಧೆಯ ಭಕ್ತರು ಎಲ್ಲಿ ನೋಡಿದರಲ್ಲಿ ರಾಧೆಯೇ ರಾಧೆ..... ನಾನೂ ರಾಧೆ, ನೀವೂ ರಾಧೆ ಎಂದು ಹೇಳುತ್ತಾರೆ. ಅನೇಕ ಮತಗಳಾಗಿ ಬಿಟ್ಟಿವೆ ಅದರಲ್ಲಿ ಕೆಲವರು ಈಶ್ವರ ಸರ್ವವ್ಯಾಪಿ ಎಂದು ಹೇಳಿದರು, ಇನ್ನೂ ಕೆಲವರು ಕೃಷ್ಣನು ಸರ್ವವ್ಯಾಪಿ, ಕೆಲವರು ರಾಧೆಯು ಸರ್ವವ್ಯಾಪಿ ಎಂದು ಹೇಳುತ್ತಾರೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಆ ತಂದೆಯು ಸರ್ವ ಶಕ್ತಿವಂತನಾಗಿದ್ದಾರೆ, ಈಗ ನೀವು ಮಕ್ಕಳಿಗೂ ಸಹ ಹೇಗೆ ತಿಳಿಸಬೇಕೆಂದು ಶಕ್ತಿಯನ್ನು ಕೊಡುತ್ತಿದ್ದಾರೆ. ಹಿಂದೂ ಮಹಾಸಭೆಯವರಿಗೂ ತಿಳಿಸಿ, ಅವರು ಈ ಮಾತುಗಳನ್ನು ಅರಿತುಕೊಳ್ಳುತ್ತಾರೆ. ಅವರು ತಮ್ಮನ್ನು ಧಾರ್ಮಿಕ ವ್ಯಕ್ತಿಗಳೆಂದು ತಿಳಿಯುತ್ತಾರೆ. ಸರ್ಕಾರವಂತೂ ಯಾವುದೇ ಧರ್ಮವನ್ನು ಒಪ್ಪುವುದಿಲ್ಲ. ತಾನೇ ಗೊಂದಲಕ್ಕೊಳಾಗಿ ಬಿಟ್ಟಿದೆ. ಶಿವ ಪರಮಾತ್ಮನು ನಿರಾಕಾರ, ಜ್ಞಾನಸಾಗರನಾಗಿದ್ದಾನೆ ಮತ್ಯಾರಿಗೂ ಜ್ಞಾನಸಾಗರನೆಂದು ಹೇಳಲು ಸಾಧ್ಯವಿಲ್ಲ. ಅವರು ಯಾವಾಗ ಸನ್ಮುಖದಲ್ಲಿ ಬಂದು ಜ್ಞಾನವನ್ನು ಕೊಡುತ್ತಾರೆಯೋ ಆಗ ರಾಜಧಾನಿಯು ಸ್ಥಾಪನೆಯಾಗುತ್ತದೆ. ರಾಜಧಾನಿಯು ಸ್ಥಾಪನೆಯಾಯಿತೆಂದರೆ ಮತ್ತೆ ಯಾವಾಗ ರಾಜ್ಯವನ್ನು ಕಳೆದುಕೊಳ್ಳುವರೋ ಆಗಲೇ ಸನ್ಮುಖದಲ್ಲಿ ಬರುತ್ತಾರೆ ಅಂದಾಗ ನೀವು ಸಿದ್ಧ ಮಾಡಬೇಕು - ಶಿವ ಪರಮಾತ್ಮನು ನಿರಾಕಾರ, ಜ್ಞಾನ ಸಾಗರನಾಗಿದ್ದಾರೆ. ಶಿವ ಜಯಂತಿಯೇ ಗೀತಾ ಜಯಂತಿಯಾಗಿದೆ, ಇದರ ಮೇಲೆ ನಾಟಕವನ್ನು ರಚಿಸಬೇಕಾಗಿದೆ ಅದರಿಂದ ಮನುಷ್ಯರ ಬುದ್ಧಿಯಿಂದ ಕೃಷ್ಣನ ಮಾತು ಹೊರಟು ಹೋಗಬೇಕು. ನಿರಾಕಾರ ಶಿವ ಪರಮಾತ್ಮನಿಗೆ ಪತಿತ-ಪಾವನನೆಂದು ಹೇಳಲಾಗುತ್ತದೆ. ಶಾಸ್ತ್ರ ಮೊದಲಾದ ಏನೆಲ್ಲವೂ ರಚಿಸಲ್ಪಟ್ಟಿದೆಯೋ ಅವೆಲ್ಲವೂ ಮನುಷ್ಯರ ಮತದಂತಿದೆ, ಅವೆಲ್ಲವೂ ಮನುಷ್ಯರೇ ರಚಿಸಿದ್ದಾರೆ. ತಂದೆಯ ಶಾಸ್ತ್ರವಂತೂ ಯಾವುದೂ ಇಲ್ಲ. ತಂದೆಯು ತಿಳಿಸುತ್ತಾರೆ - ನಾನು ಮಕ್ಕಳ ಸನ್ಮುಖದಲ್ಲಿ ಬಂದು ಭಿಕಾರಿಯಿಂದ ರಾಜಕುಮಾರರನ್ನಾಗಿ ಮಾಡುತ್ತೇನೆ ಮತ್ತೆ ನಾನು ಹೊರಟು ಹೋಗುತ್ತೇನೆ. ಈ ಜ್ಞಾನವನ್ನು ನಾನೇ ಸನ್ಮುಖದಲ್ಲಿ ತಿಳಿಸುತ್ತೇನೆ. ಈ ಗೀತೆಯನ್ನು ತಿಳಿಸುವವರು ಭಲೇ ಗೀತೆಯನ್ನು ತಿಳಿಸುತ್ತಾರೆ, ಅಲ್ಲಿ ಭಗವಂತನಂತೂ ಸನ್ಮುಖದಲ್ಲಿಲ್ಲ. ಗೀತೆಯ ಭಗವಂತನು ಸನ್ಮುಖದಲ್ಲಿದ್ದರು, ಸ್ವರ್ಗವನ್ನು ರಚಿಸಿ ಹೊರಟು ಹೋದರೆಂದು ಹೇಳುತ್ತಾರೆ ಅಂದಾಗ ಆ ಗೀತೆಯನ್ನು ಕೇಳುವುದರಿಂದ ಯಾವುದೇ ಮನುಷ್ಯರು ಸ್ವರ್ಗವಾಸಿಗಳಾಗಲು ಸಾಧ್ಯವೇ? ಸಾಯುವ ಸಮಯದಲ್ಲಿಯೂ ಸಹ ಮನುಷ್ಯರಿಗೆ ಗೀತೆಯನ್ನು ತಿಳಿಸುತ್ತಾರೆ ಮತ್ಯ್ತಾವುದೇ ಶಾಸ್ತ್ರಗಳನ್ನು ಹೇಳುವುದಿಲ್ಲ. ಗೀತೆಯಿಂದ ಸ್ವರ್ಗದ ಸ್ಥಾಪನೆಯಾಗಿದೆ ಎಂದು ತಿಳಿದು ಗೀತೆಯನ್ನೇ ತಿಳಿಸುತ್ತಾರೆ. ಅಂದಮೇಲೆ ಆ ಗೀತೆಯೊಂದಿರಬೇಕಲ್ಲವೆ. ಅನ್ಯ ಧರ್ಮಗಳೆಲ್ಲವೂ ಕೊನೆಯಲ್ಲಿ ಬಂದಿವೆ. ನೀವು ಸ್ವರ್ಗವಾಸಿಗಳಾಗುತ್ತೀರೆಂದು ಅನ್ಯರ್ಯಾರೂ ಹೇಳಲು ಸಾಧ್ಯವಿಲ್ಲ. ಮತ್ತೆ ಮನುಷ್ಯರಿಗೆ ಗಂಗಾ ಜಲವನ್ನು ಕುಡಿಸುತ್ತಾರೆ, ಜಮುನಾ ಜಲವನ್ನು ಕುಡಿಸುವುದಿಲ್ಲ. ಗಂಗಾಜಲಕ್ಕೆ ಮಹತ್ವಿಕೆಯಿದೆ. ಅನೇಕ ವೈಷ್ಣವರು ಹೋಗುತ್ತಾರೆ, ಮಡಿಕೆಗಳನ್ನು ತುಂಬಿಸಿಕೊಂಡು ಬರುತ್ತಾರೆ ನಂತರ ಅದರಲ್ಲಿಂದ ಒಂದೊಂದು ಹನಿಯನ್ನು ತೆಗೆದು ಅದರಿಂದ ಎಲ್ಲಾ ರೋಗಗಳು ನಿವಾರಣೆಯಾಗಲೆಂದು ಕುಡಿಯುತ್ತಿರುತ್ತಾರೆ. ವಾಸ್ತವದಲ್ಲಿ ಇದು ಜ್ಞಾನಾಮೃತಧಾರೆಯಾಗಿದೆ, ಇದರಿಂದ 21 ಜನ್ಮಗಳ ದುಃಖವು ನಿವಾರಣೆಯಾಗುತ್ತದೆ. ನೀವು ಚೈತನ್ಯ ಜ್ಞಾನ ಗಂಗೆಯರು ಅಂತ್ಯದಲ್ಲಿಯೇ ಬಂದಿರಬೇಕು. ಆ ನೀರಿನ ನದಿಗಳಂತೂ ಇದ್ದೇ ಇದೆ. ಯಾವುದೇ ನೀರನ್ನು ಕುಡಿಯುವುದರಿಂದ ದೇವತೆಗಳಾಗಿ ಬಿಡುತ್ತಾರೆಯೇ! ಇಲ್ಲಿ ಯಾರೇ ಸ್ವಲ್ಪ ಜ್ಞಾನ ಕೇಳಿದರೂ ಸಹ ಸ್ವರ್ಗಕ್ಕೆ ಹಕ್ಕುದಾರರಾಗಿ ಬಿಡುತ್ತಾರೆ. ಇವರು ಜ್ಞಾನ ಸಾಗರ ಶಿವ ತಂದೆಯ ಜ್ಞಾನ ಗಂಗೆಯರಾಗಿದ್ದಾರೆ. ಜ್ಞಾನ ಸಾಗರ, ಗೀತಾ ಜ್ಞಾನದಾತ ಒಬ್ಬ ಶಿವನಾಗಿದ್ದಾರೆ, ಕೃಷ್ಣನಲ್ಲ. ಸತ್ಯಯುಗದಲ್ಲಿ ಯಾರಿಗಾದರೂ ಜ್ಞಾನವನ್ನು ಕೊಡಲು ಅಲ್ಲಿ ಯಾರೂ ಪತಿತರಿರುವುದಿಲ್ಲ. ಇದೆಲ್ಲವನ್ನೂ ತಂದೆಯೇ ತಿಳಿಸುತ್ತಾರೆ - ಹೇ ಅರ್ಜುನ, ಹೇ ಸಂಜಯ.... ಹೆಸರು ಪ್ರಸಿದ್ಧವಾಗಿ ಬಿಟ್ಟಿದೆ. ಬರೆಯುವುದರಲ್ಲಿ ಬಹಳ ತೀಕ್ಷ್ಣವಾಗಿದ್ದಾರೆ, ನಿಮಿತ್ತರಾಗಿದ್ದಾರೆ. ಈಗ ಶಿವ ಜಯಂತಿಯು ಬರುತ್ತದೆಯೆಂದರೆ ದೊಡ್ಡ-ದೊಡ್ಡ ಅಕ್ಷರಗಳಲ್ಲಿ ಬರೆಯಬೇಕು - ಶಿವ ನಿರಾಕಾರನಾದರು, ಅವರಿಗೆ ಜ್ಞಾನ ಸಾಗರ, ಆನಂದ ಸಾಗರನೆಂದು ಹೇಳಲಾಗುತ್ತದೆ. ಆದರೆ ಕೃಷ್ಣನಿಗೆ ಹೀಗೆ ಹೇಳಲಾಗುವುದಿಲ್ಲ. ಶಿವ ಪರಮಾತ್ಮನೇ ಜ್ಞಾನ ಕೊಡುತ್ತಾರೆ, ದಯೆ ತೋರಿಸುತ್ತಾರೆ, ಜ್ಞಾನವೇ ದಯೆಯಾಗಿದೆ. ಶಿಕ್ಷಕರು ದಯೆ ತೋರಿಸಿ ಓದಿಸುತ್ತಾರೆಂದರೆ ಬ್ಯಾರಿಸ್ಟರ್, ಇಂಜಿನಿಯರ್ ಆಗಿ ಬಿಡುತ್ತಾರೆ. ಸತ್ಯಯುಗದಲ್ಲಿ ದಯೆಯ ಅವಶ್ಯಕತೆಯೇ ಇಲ್ಲ. ಆದ್ದರಿಂದ ಮೊಟ್ಟ ಮೊದಲು ನಿರಾಕಾರ ಜ್ಞಾನ ಸಾಗರ ಶಿವ ಜಯಂತಿಯೇ ಗೀತಾ ಜಯಂತಿಯೋ ಹಾಗೂ ಸತ್ಯಯುಗೀ ಸಾಕಾರ ಕೃಷ್ಣ ಜಯಂತಿ ಗೀತಾ ಜಯಂತಿಯೇ ಎಂಬುದು ಸಿದ್ಧ ಮಾಡಬೇಕಾಗಿದೆ. ಇದನ್ನು ನೀವು ಮಕ್ಕಳೇ ಸಿದ್ಧ ಮಾಡಬೇಕಾಗಿದೆ. ನಿಮಗೆ ಗೊತ್ತಿದೆ - ಯಾರೆಲ್ಲಾ ಸಂದೇಶಕ ಮುಂತಾದವರು ಬರುತ್ತಾರೆ ಅವರು ಪಾವನರನ್ನಾಗಿ ಮಾಡುವುದಿಲ್ಲ. ದ್ವಾಪರದಿಂದ ಮಾಯೆಯ ರಾಜ್ಯವಾಗುವುದರಿಂದ ಎಲ್ಲರೂ ಪತಿತರಾಗಿ ಬಿಡುತ್ತಾರೆ ನಂತರ ಯಾವಾಗ ಕಷ್ಟಕ್ಕೊಳಗಾಗುತ್ತಾರೆಯೋ ಆಗ ನಾವು ಹೋಗಬೇಕೆಂದು ಬಯಸುತ್ತಾರೆ. ಯಾವ ಧರ್ಮ ಸ್ಥಾಪನೆ ಮಾಡುತ್ತಾರೆಯೋ ಅದೇ ಮತ್ತೆ ವೃದ್ಧಿಯನ್ನು ಹೊಂದುತ್ತದೆ. ಪವಿತ್ರತೆಯ ಬಲದಿಂದ ಧರ್ಮ ಸ್ಥಾಪನೆ ಮಾಡುತ್ತಾರೆ ಆದರೆ ಮತ್ತೆ ಅಪವಿತ್ರವಾಗಲೇಬೇಕಾಗಿದೆ. ಮುಖ್ಯವಾಗಿ ನಾಲ್ಕು ಧರ್ಮಗಳಾಗಿವೆ ಇದರಿಂದಲೇ ವೃದ್ಧಿಯಾಗುತ್ತದೆ. ರೆಂಬೆ-ಕೊಂಬೆಗಳು ಹೊರಡುತ್ತವೆ. ಶಿವ ಜಯಂತಿ, ಗೀತಾ ಜಯಂತಿಯು ಸಿದ್ಧವಾದರೆ ಮತ್ತೆಲ್ಲಾ ಶಾಸ್ತ್ರಗಳು ಹಾರಿ ಹೋಗುತ್ತವೆ ಏಕೆಂದರೆ ಅವು ಮನುಷ್ಯರಿಂದ ಮಾಡಲ್ಪಟ್ಟಿವೆ. ವಾಸ್ತವದಲ್ಲಿ ಭಾರತದ ಶಾಸ್ತ್ರವು ಒಂದೇ ಗೀತೆಯಾಗಿದೆ. ಪ್ರಿಯಾತಿ ಪ್ರಿಯ ತಂದೆಯು ಇಷ್ಟು ಸಹಜ ಮಾಡಿ ತಿಳಿಸುತ್ತಾರೆ. ಅವರದು ಶ್ರೇಷ್ಠಾತಿ ಶ್ರೇಷ್ಠ ಮತವಾಗಿದೆ. ನೀವೀಗ ಇದನ್ನು ಸಿದ್ಧ ಮಾಡಿ ತೋರಿಸಬೇಕು - ನಿರಾಕಾರ, ಜ್ಞಾನ ಸಾಗರನ ಜಯಂತಿಯು ಗೀತಾ ಜಯಂತಿಯೋ, ಸತ್ಯಯುಗೀ ಸಾಕಾರ ಕೃಷ್ಣನ ಜಯಂತಿಯು ಗೀತಾ ಜಯಂತಿಯೋ? ಇದಕ್ಕಾಗಿ ದೊಡ್ಡ ಸಮ್ಮೇಳನವನ್ನು ಮಾಡಬೇಕಾಗಿದೆ. ಅದರಿಂದ ಈ ಮಾತು ಸಿದ್ಧವಾಗಲಿ ಆಗ ಮತ್ತೆಲ್ಲಾ ಪಂಡಿತರು ಬಂದು ನಿಮ್ಮಿಂದ ಗುರಿಯನ್ನು ತೆಗೆದುಕೊಳ್ಳುತ್ತಾರೆ. ಶಿವ ಜಯಂತಿಯಲ್ಲಿ ಏನಾದರೂ ಮಾಡಬೇಕಲ್ಲವೆ. ಹಿಂದೂ ಮಹಾಸಭೆಯವರಿಗೆ ತಿಳಿಸಿ, ಅವರದು ದೊಡ್ಡ ಸಂಸ್ಥೆಯಾಗಿದೆ. ಸತ್ಯಯುಗದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮವಿರುತ್ತದೆ ಆಗ ಉಳಿದೆಲ್ಲಾ ಸಭೆಗಳು ಇರುವುದಿಲ್ಲ. ಇವೆಲ್ಲಾ ಸಭೆಗಳು ಸಂಗಮದಲ್ಲಿವೆ ಅಂದಾಗ ಮೊಟ್ಟ ಮೊದಲು ಸಿದ್ಧ ಮಾಡಬೇಕು - ವಾಸ್ತವದಲ್ಲಿ ಆದಿ ಸನಾತನ ಸಭೆಯು ಈ ಬ್ರಾಹ್ಮಣರದು, ಪಾಂಡವರದ್ದಾಗಿದೆ. ಪಾಂಡವರೇ ವಿಜಯವನ್ನು ಪಡೆದರು ಮತ್ತೆ ಸ್ವರ್ಗವಾಸಿಗಳಾದರು. ಈಗಂತೂ ಯಾವುದೇ ಆದಿ ಸನಾತನ ದೇವಿ-ದೇವತೆಗಳ ಸಭೆಯೆಂದು ಹೇಳಲು ಸಾಧ್ಯವಿಲ್ಲ. ದೇವತೆಗಳ ಸಭೆಯೆಂದೂ ಹೇಳುವುದಿಲ್ಲ, ಅದು ಸ್ವರ್ಗವಾಗಿದೆ ಕಲ್ಪದ ಸಂಗಮಯುಗದಲ್ಲಿ ಈ ಸಭೆಗಳಿತ್ತು, ಅದರಲ್ಲಿ ಒಬ್ಬ ಪಾಂಡವ ಸಭೆಯಾಗಿತ್ತು. ಯಾವುದೇ ಆದಿ ಸನಾತನ ಬ್ರಾಹ್ಮಣರ ಸಭೆಯೆಂದು ಹೇಳುತ್ತಾರೆ ಇದನ್ನು ಯಾರೂ ತಿಳಿದುಕೊಂಡಿಲ್ಲ. ಕೃಷ್ಣನ ಹೆಸರಿನ ಬ್ರಾಹ್ಮಣರಿಲ್ಲ, ಬ್ರಾಹ್ಮಣರ ಶಿಖೆಯು ಬ್ರಹ್ಮಾರವರ ಹೆಸರಲ್ಲಿದೆ. ಬ್ರಹ್ಮಾರವರ ಹೆಸರಿನಿಂದ ನೀವು ಬ್ರಾಹ್ಮಣ ಸಭೆಯೆಂದು ಹೇಳುತ್ತೀರಿ. ಈ ಮಾತುಗಳನ್ನು ತಿಳಿಸುವವರೂ ಸಹ ಬುದ್ಧಿವಂತರಾಗಿರಬೇಕು, ಇದರಲ್ಲಿ ಜ್ಞಾನದ ಪರಾಕಾಷ್ಠತೆಯೂ ಬೇಕು. ನಿರಾಕಾರ ಶಿವನೇ ಗೀತಾ ಜ್ಞಾನದಾತ, ದಿವ್ಯ ಚಕ್ಷು ವಿದಾತನಾಗಿದ್ದಾರೆ. ಇವೆಲ್ಲವನ್ನೂ ಧಾರಣೆ ಮಾಡಿ ಮತ್ತೆ ಸಮ್ಮೇಳನಗಳನ್ನು ಮಾಡುತ್ತೇವೆ, ನಾವು ಸಿದ್ಧ ಮಾಡಿ ತಿಳಿಸುತ್ತೇವೆಂದು ಯಾರು ತಿಳಿಯುತ್ತೀರೋ ಅವರು ಪರಸ್ಪರ ಸೇರಬೇಕು. ಹೇಗೆ ಯುದ್ಧದ ಮೈದಾನದಲ್ಲಿ ಮೇಜರ್ಸ್, ಕಮ್ಯಾಂಡರ್ಸ್ ಮೊದಲಾದವರ ಸಭೆಯಾಗುತ್ತದೆ. ಇಲ್ಲಿ ಮಹಾರಥಿಗಳಿಗೆ ಕಮ್ಯಾಂಡರ್ ಎಂದು ಹೇಳಲಾಗುತ್ತದೆ. ತಂದೆಯು ರಚಯಿತ, ನಿರ್ದೇಶಕನಾಗಿದ್ದಾರೆ, ಸ್ವರ್ಗದ ರಚನೆ ಮಾಡುತ್ತಾರೆ ಮತ್ತು ಮಹಾಸಭೆಯನ್ನು ತಯಾರಿಸಿ ಈ ಮಾತನ್ನು ತೆಗೆದುಕೊಳ್ಳಿ ಎಂದು ಆದೇಶ ನೀಡುತ್ತಾರೆ. ಗೀತೆಯ ಭಗವಂತನು ಸಿದ್ಧವಾದರೆ ನಂತರ ಎಲ್ಲರೂ ಅವರೊಂದಿಗೆ ಯೋಗವನ್ನಿಡಬೇಕೆಂದು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ - ಮಾರ್ಗದರ್ಶಕನಾಗಿ ಬಂದಿದ್ದೇನೆ, ನೀವು ಹಾರುವುದಕ್ಕಾದರೂ ಯೋಗ್ಯರಾಗಿ. ಮಾಯೆಯು ರೆಕ್ಕೆಗಳನ್ನು ಕತ್ತರಿಸಿ ಬಿಟ್ಟಿದೆ. ನನ್ನ ಜೊತೆ ಯೋಗವನ್ನಿಟ್ಟಾಗ ನೀವಾತ್ಮರು ಹಾರುತ್ತೀರಿ, ಪವಿತ್ರರಾಗುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
೧. ಜ್ಞಾನಾಮೃತಧಾರೆಯಿಂದ ಎಲ್ಲರನ್ನೂ ನಿರೋಗಿ ಹಾಗೂ ಸ್ವರ್ಗವಾಸಿಗಳನ್ನಾಗಿ ಮಾಡುವ ಸೇವೆ ಮಾಡಬೇಕು, ಮನುಷ್ಯರನ್ನು ದೇವತೆಗಳನ್ನಾಗಿ ಮಾಡಬೇಕು. ತಂದೆಯ ಸಮಾನ ಮಾಸ್ಟರ್ ದಯಾಸಾಗರ ದಯಾ ಹೃದಯಿಗಳಾಗಬೇಕು.

೨. ಜ್ಞಾನದ ಪರಾಕಾಷ್ಠತೆಯಿಂದ ಬುದ್ಧಿವಂತರಾಗಿ ಶಿವ ಜಯಂತಿಯ ಬಗ್ಗೆ ಸಿದ್ಧ ಮಾಡಿ ತಿಳಿಸಬೇಕು. ಶಿವ ಜಯಂತಿಯೇ ಗೀತಾ ಜಯಂತಿಯಾಗಿದೆ, ಗೀತಾ ಜ್ಞಾನದಿಂದಲೇ ಶ್ರೀ ಕೃಷ್ಣನ ಜನ್ಮವಾಗುತ್ತದೆ.
 

ವರದಾನ:
ತಂದೆಯ ಸ್ನೇಹವನ್ನು ಹೃದಯದಲ್ಲಿ ಧಾರಣೆ ಮಾಡಿ ಸರ್ವ ಆಕರ್ಷಣೆಗಳಿಂದ ಮುಕ್ತರಾಗಿರುವಂತಹ ಸತ್ಯ ಸ್ನೇಹಿ ಭವ.

ತಂದೆ ಎಲ್ಲಾ ಮಕ್ಕಳಿಗೆ ಒಂದೇ ತರಹ ಪ್ರೀತಿ ಕೊಡುತ್ತಾರೆ ಆದರೆ ಮಕ್ಕಳು ತಮ್ಮ ಶಕ್ತಿ ಅನುಸಾರ ಸ್ನೇಹವನ್ನು ಧಾರಣೆ ಮಾಡುತ್ತಾರೆ. ಯಾರು ಅಮೃತ ವೇಳೆಯ ಆದಿ ಸಮಯದಲ್ಲಿ ತಂದೆಯ ಸ್ನೇಹವನ್ನು ಧಾರಣೆ ಮಾಡುತ್ತಾರೆ, ಆಗ ಹೃದಯದಲ್ಲಿ ಪರಮಾತ್ಮನ ಸ್ನೇಹ ಸಮಾವೇಶ ಆಗಿರುವ ಕಾರಣ ಬೇರೆ ಯಾವ ಸ್ನೇಹವೂ ಅವರನ್ನು ಆಕರ್ಷಣೆ ಮಾಡುವುದಿಲ್ಲ. ಒಂದು ವೇಳೆ ಹೃದಯದಲ್ಲಿ ಪೂರ್ತಿ ಸ್ನೇಹವನ್ನು ಧಾರಣೆ ಮಾಡದೇ ಹೋದರೆ ಹೃದಯದಲ್ಲಿ ಸ್ಥಳ ಇರುವ ಕಾರಣ ಮಾಯೆ ಭಿನ್ನ-ಭಿನ್ನ ರೂಪದಿಂದ ಅನೇಕ ಸ್ನೇಹವನ್ನು ಆಕರ್ಷಣೆ ಮಾಡಿ ಬಿಡುವುದು. ಆದ್ದರಿಂದ ಸತ್ಯ ಸ್ನೇಹಿಯಾಗಿ ಪರಮಾತ್ಮನ ಪ್ರೀತಿಯಿಂದ ಭರಪೂರ್ ಆಗಿರಿ.

ಸ್ಲೋಗನ್:
ದೇಹ, ದೇಹದ ಹಳೆಯ ಪ್ರಪಂಚ ಮತ್ತು ಸಂಬಂಧಗಳಿಂದ ಮೇಲೆ ಹಾರುವಂತಹವರೇ ಇಂದ್ರಪ್ರಸ್ಥ ನಿವಾಸಿಯಾಗಿದ್ದಾರೆ.