04.05.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಮ್ಮನ್ನು ಸುಧಾರಣೆ ಮಾಡಿಕೊಳ್ಳಲು ಗಮನ ಕೊಡಿ, ದೈವೀ ಗುಣ ಧಾರಣೆ ಮಾಡಿ, ತಂದೆಯು ಎಂದೂ ಯಾರ ಮೇಲೂ ಬೇಸರ ಮಾಡಿಕೊಳ್ಳುವುದಿಲ್ಲ, ಶಿಕ್ಷಣ ಕೊಡುತ್ತಾರೆ, ಇದರಲ್ಲಿ ಹೆದರುವ ಮಾತಿಲ್ಲ”

ಪ್ರಶ್ನೆ:
ಮಕ್ಕಳಿಗೆ ಯಾವ ಒಂದು ಸ್ಮೃತಿಯಿದ್ದರೆ ಸಮಯವನ್ನು ವ್ಯರ್ಥ ಮಾಡುವುದಿಲ್ಲ?

ಉತ್ತರ:
ಇದು ಸಂಗಮದ ಸಮಯವಾಗಿದೆ, ಬಹಳ ದೊಡ್ಡ ಲಾಟರಿಯು ಸಿಕ್ಕಿದೆ. ತಂದೆಯು ನಮ್ಮನ್ನು ವಜ್ರ ಸಮಾನ ದೇವತೆಗಳನ್ನಾಗಿ ಮಾಡುತ್ತಿದ್ದಾರೆ. ಈ ಸ್ಮೃತಿಯಿದ್ದಾಗ ಎಂದೂ ಸಹ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಈ ಜ್ಞಾನವು ಆದಾಯದ ಮೂಲ ಆಧಾರವಾಗಿದೆ. ಆದ್ದರಿಂದ ವಿದ್ಯೆಯನ್ನು ಎಂದೂ ತಪ್ಪಿಸಬಾರದು. ಮಾಯೆಯು ದೇಹಾಭಿಮಾನದಲ್ಲಿ ತರಲು ಕಷ್ಟ ಪಡುತ್ತದೆ. ಆದರೆ ನಿಮ್ಮದು ಡೈರೆಕ್ಟ್ ತಂದೆಯೊಂದಿಗೆ ಯೋಗವಿದ್ದಾಗ ಸಮಯವು ಸಫಲವಾಗುತ್ತದೆ.

ಓಂ ಶಾಂತಿ.
ಮಕ್ಕಳಿಗೆ ಇವರು ತಂದೆಯಾಗಿದ್ದಾರೆಂದು ತಿಳಿದಿದೆ, ಇದರಲ್ಲಿ ಭಯ ಪಡುವ ಮಾತಿಲ್ಲ. ಯಾವುದೇ ಶಾಪ ಅಥವಾ ಕೋಪ ಮಾಡುವಂತಹ ಯಾವುದೇ ಸಾಧು-ಮಹಾತ್ಮರಿಲ್ಲ. ಗುರು ಮೊದಲಾದವರಲ್ಲಿ ಬಹಳ ಕೋಪವಿರುತ್ತದೆ ಆದ್ದರಿಂದ ಮನುಷ್ಯರು ಅವರೆಲ್ಲಿ ಶಾಪ ಕೊಡುತ್ತಾರೋ ಎಂದು ಭಯ ಪಡುತ್ತಾರೆ. ಇಲ್ಲಿ ಅಂತಹ ಮಾತಿಲ್ಲ. ಮಕ್ಕಳು ಎಂದಿಗೂ ಭಯ ಪಡುವ ಅವಶ್ಯಕತೆಯಿಲ್ಲ. ಸ್ವಯಂ ಚಂಚಲವಾಗಿರುವವರು ತಂದೆಯೊಂದಿಗೆ ಭಯ ಪಡುತ್ತಾರೆ. ಲೌಕಿಕ ತಂದೆಯಂತೂ ಕೋಪ ಮಾಡಿಕೊಳ್ಳುತ್ತಾರೆ. ಇಲ್ಲಿ ತಂದೆಯು ಎಂದಿಗೂ ಕೋಪ ಮಾಡಿಕೊಳ್ಳುವುದಿಲ್ಲ. ಕೇವಲ ತಂದೆಯನ್ನು ನೆನಪು ಮಾಡದಿದ್ದರೆ ವಿಕರ್ಮ ವಿನಾಶವಾಗುವುದಿಲ್ಲ ಎಂದು ತಿಳಿಸುತ್ತಾರೆ. ಇದರಿಂದ ನಿಮ್ಮ ಜನ್ಮ-ಜನ್ಮಾಂತರಕ್ಕೆ ನಷ್ಟ ಮಾಡಿಕೊಳ್ಳುತ್ತೀರಿ ಎಂದು ಮುಂದೆಯಾದರೂ ಸುಧಾರಣೆಯಾಗಲಿ ಎಂದು ತಂದೆಯು ತಿಳಿಸುತ್ತಾರೆ. ಆದರೆ ತಂದೆಯು ಬೇಸರ ಪಡುತ್ತಾರೆ ಎಂದು ತಿಳಿಯಬಾರದು. ತಂದೆಯಂತೂ ತಮ್ಮನ್ನು ಸುಧಾರಣೆ ಮಾಡಿಕೊಳ್ಳಲು ನೆನಪಿನ ಯಾತ್ರೆಯ ಕಡೆ ಗಮನ ಕೊಡಬೇಕೆಂದು ತಿಳಿಸುತ್ತಿರುತ್ತಾರೆ, ಜೊತೆ ಜೊತೆಯಲ್ಲಿ ಚಕ್ರವನ್ನೂ ಬುದ್ಧಿಯಲ್ಲಿಟ್ಟುಕೊಳ್ಳಿ, ದೈವೀ ಗುಣಗಳನ್ನು ಧಾರಣೆ ಮಾಡಿ. ನೆನಪು ಇಲ್ಲಿ ಮುಖ್ಯವಾಗಿದೆ. ಉಳಿದ ಚಕ್ರದ ಜ್ಞಾನವು ಬಹಳ ಸರಳವಾಗಿದೆ. ಜ್ಞಾನವು ಆದಾಯದ ಮೂಲಾಧಾರವಾಗಿದೆ. ಆದರೆ ಅದರ ಜೊತೆ ದೈವೀ ಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ಈ ಸಮಯದಲ್ಲಿ ಪೂರ್ತಿ ಅಸುರೀ ಗುಣಗಳಿವೆ, ಚಿಕ್ಕ ಮಕ್ಕಳಲ್ಲಿಯೂ ಸಹ ಅಸುರೀ ಗುಣಗಳಿರುತ್ತವೆ ಆದರೆ ಅವರನ್ನು ಎಂದೂ ಹೊಡೆಯಬಾರದು, ಇನ್ನೂ ಆಸುರೀ ಗುಣಗಳನ್ನು ಕಲಿಯುತ್ತಾರೆ. ಅಲ್ಲಿ ಸತ್ಯಯುಗದಲ್ಲಿ ಕಲಿಯುವ ಮಾತಿಲ್ಲ. ಇಲ್ಲಿ ತಾಯಿ-ತಂದೆಯಿಂದ ಮಕ್ಕಳು ಎಲ್ಲವನ್ನು ಕಲಿಯುತ್ತಾರೆ. ತಂದೆಯು ಬಡವರ ಮಾತನ್ನು ಹೇಳುತ್ತಾರೆ. ಶ್ರೀಮಂತರಿಗಾಗಿ ಸ್ವರ್ಗವು ಇಲ್ಲಿಯೇ ಇದೆ. ಅವರಿಗೆ ಜ್ಞಾನದ ಅವಶ್ಯಕತೆಯಿಲ್ಲ, ಇದು ವಿದ್ಯೆಯಾಗಿದೆ. ಸುಧಾರಣೆ ಮಾಡಲು, ಕಲಿಸಲು ಶಿಕ್ಷಕರು ಬೇಕಾಗುತ್ತದೆ. ತಂದೆಯು ಬಡವರ ಮಾತನ್ನು ಹೇಳುತ್ತಾರೆ. ಎಂತಹ ಸ್ಥಿತಿ ಆಗಿ ಬಿಟ್ಟಿದೆ. ಹೇಗೆ ಮಕ್ಕಳು ಹಾಳಾಗಿ ಬಿಡುತ್ತಾರೆ. ತಾಯಿ-ತಂದೆಯನ್ನು ಎಲ್ಲರೂ ನೋಡುತ್ತಿರುತ್ತಾರೆ. ನಂತರ ಚಿಕ್ಕ ವಯಸ್ಸಿನಲ್ಲಿಯೇ ಹಾಳಾಗಿ ಬಿಡುತ್ತಾರೆ. ಈ ಆತ್ಮಿಕ ತಂದೆಯು ನಾನು ಬಡವರ ಬಂಧುವಾಗಿದ್ದೇನೆಂದು ಹೇಳುತ್ತಾರೆ. ಅವರು ಈ ಪ್ರಪಂಚದ ಗತಿಯು ಏನಾಗಿದೆ ಎಂದು ತಿಳಿಸುತ್ತಾರೆ. ತಮೋಪ್ರಧಾನ ಪ್ರಪಂಚವಾಗಿದೆ, ತಮೋಪ್ರಧಾನತ್ವಕ್ಕೂ ಒಂದು ಮಿತಿಯಿರುತ್ತದೆಯಲ್ಲವೆ! 1250 ವರ್ಷಗಳು ಕಲಿಯುಗವಿರುತ್ತದೆ, ಒಂದು ದಿನವೂ ಹೆಚ್ಚು ಕಡಿಮೆಯಾಗುವುದಿಲ್ಲ. ಯಾವಾಗ ಪೂರ್ಣ ತಮೋಪ್ರಧಾನವಾಗುತ್ತದೆಯೋ ಆಗ ತಂದೆಯು ಬರಬೇಕಾಗುತ್ತದೆ. ನಾನು ನಾಟಕದನುಸಾರ ಬಂಧಿಸಲ್ಪಟ್ಟಿದ್ದೇನೆಂದು ತಂದೆಯು ತಿಳಿಸುತ್ತಾರೆ. ನಾನು ಬರಲೇಬೇಕಾಗುವುದು, ಪ್ರಾರಂಭದಲ್ಲಿ ಎಷ್ಟೊಂದು ಜನ ಬಡವರು ಬಂದರು, ಶ್ರೀಮಂತರೂ ಬಂದರು ಆದರೆ ಇಬ್ಬರೂ ಜೊತೆಯಲ್ಲಿಯೇ ಕುಳಿತುಕೊಳ್ಳುತ್ತಿದ್ದರು. ದೊಡ್ಡ-ದೊಡ್ಡ ಮನೆಯ ಹೆಣ್ಣು ಮಕ್ಕಳು ಓಡಿ ಬಂದರು ಆದರೆ ಏನೂ ತರಲಿಲ್ಲ ಆದರೆ ಎಷ್ಟೊಂದು ತೊಂದರೆಯಾಯಿತು. ನಾಟಕದಲ್ಲಿ ಏನು ಆಗಬೇಕಿತ್ತೋ ಅದು ಆಯಿತು, ಈ ರೀತಿ ಆಗುತ್ತದೆಯೆಂದು ಯೋಚನೆಯೂ ಇರಲಿಲ್ಲ. ತಂದೆಯು ಏನು ನಡೆಯುತ್ತಿದೆ ಎಂದು ಆಶ್ಚರ್ಯ ಪಡುತ್ತಿದ್ದರು. ಇವರ ಚರಿತ್ರೆಯು ಬಹಳ ವಿಚಿತ್ರವಾಗಿತ್ತು, ಇದೂ ಸಹ ನಾಟಕದಲ್ಲಿ ನೊಂದಾವಣೆಯಾಗಿದೆ. ತಂದೆಯು ಎಲ್ಲರಿಗೂ ನಾವು ಜ್ಞಾನಾಮೃತವನ್ನು ಕುಡಿಯಲು ಹೋಗುತ್ತೇವೆಂದು ಪತ್ರವನ್ನು ಬರೆಸಿಕೊಂಡು ಬರಲು ಹೇಳಿದರು. ಆಗ ಅವರ ಪತಿಯರು ವಿದೇಶದಿಂದ ಹಿಂತಿರುಗಿ ಬಂದು ಬಿಟ್ಟರು. ಅವರು ವಿಷವನ್ನು ಬೇಕೆಂದು ಕೇಳುತ್ತಿದ್ದರು. ಇವರು ನಾವು ಜ್ಞಾನಾಮೃತವನ್ನು ಕುಡಿದಿದ್ದೇವೆ, ವಿಷವನ್ನು ಕೊಡಲು ಹೇಗೆ ಸಾಧ್ಯ ಎಂದು ಹೇಳುತ್ತಿದ್ದರು. ಇದನ್ನು ಕುರಿತು ಒಂದು ಹಾಡೂ ಸಹ ಇದೆ. ಇದನ್ನೇ ಚರಿತ್ರೆ ಎಂದು ಹೇಳಲಾಗುತ್ತದೆ. ಶಾಸ್ತ್ರಗಳಲ್ಲಿ ಕೃಷ್ಣನ ಚರಿತ್ರೆಯನ್ನು ಬರೆದಿದ್ದಾರೆ, ಕೃಷ್ಣನಿಗೆ ಆ ರೀತಿಯ ಮಾತುಗಳಿರಲು ಸಾಧ್ಯವಿಲ್ಲ. ಇವೆಲ್ಲಾ ಮಾತುಗಳು ನಾಟಕದಲ್ಲಿ ನಿಗಧಿಯಾಗಿದೆ. ನಾಟಕದಲ್ಲಿ ಇದೆಲ್ಲವೂ ನಡೆಯುತ್ತದೆ. ಹಾಸ್ಯ ಮೊದಲಾದವುಗಳಿರುತ್ತವೆ..... ಇಲ್ಲಿ ಇಬ್ಬರು ತಂದೆಯರೂ ತಿಳಿಸುತ್ತಾರೆ- ನಾವೇನೂ ಮಾಡಲಿಲ್ಲ, ಇದೆಲ್ಲವೂ ನಾಟಕದಲ್ಲಿ ಆಟ ನಡೆಯುತ್ತಿದೆ, ಚಿಕ್ಕ-ಚಿಕ್ಕ ಮಕ್ಕಳೂ ಸಹ ಬಂದು ಬಿಟ್ಟರು, ಈಗ ಅವರೆಲ್ಲರೂ ಎಷ್ಟೊಂದು ದೊಡ್ಡವರಾಗಿ ಬಿಟ್ಟಿದ್ದಾರೆ. ಮಕ್ಕಳಿಗೆಲ್ಲಾ ಎಷ್ಟೊಂದು ಆಶ್ಚರ್ಯವಾದ ಹೆಸರುಗಳನ್ನು ಸಂದೇಶಿ ಪುತ್ರಿಯರು ತೆಗೆದುಕೊಂಡು ಬಂದಿದ್ದರು. ಆ ಹೆಸರನ್ನು ಪಡೆದವರೂ ಸಹ ಹೊರಟೇ ಹೋದರು. ಅವರ ಹೆಸರು ಇಂದು ಇಲ್ಲದಂತಾಯಿತು, ಮತ್ತೆ ಅವರಿಗೆ ತಮ್ಮ ಹಳೆಯ ಹೆಸರನ್ನೇ ಕರೆಯುವಂತಾಯಿತು. ಆದ್ದರಿಂದ ಬ್ರಾಹ್ಮಣರ ಮಾಲೆಯನ್ನು ಮಾಡುವುದಿಲ್ಲ. ನಿಮ್ಮ ಬಳಿ ಏನೂ ಇಲ್ಲ. ಮೊದಲು ನೀವು ಮಾಲೆಯನ್ನು ಜಪ ಮಾಡುತ್ತಿದ್ದಿರಿ, ಈಗ ನೀವು ಮಾಲೆಯ ಮಣಿಯಾಗುತ್ತೀರಿ. ಅಲ್ಲಿ ಭಕ್ತಿಯಿರುವುದಿಲ್ಲ, ಇದು ತಿಳುದುಕೊಳ್ಳುವಂತಹ ಜ್ಞಾನವಾಗಿದೆ, ಒಂದು ಸೆಕೆಂಡಿನ ಜ್ಞಾನವಾಗಿದೆ. ಮತ್ತೆ ಅವರಿಗೆ ಜ್ಞಾನಸಾಗರನೆಂದು ಕರೆಯಲಾಗುವುದು. ಇಡೀ ಸಾಗರವನ್ನು ಶಾಹಿಯನ್ನಾಗಿ ಮಾಡಿಕೊಂಡು, ಕಾಡನ್ನು ಲೇಖನಿಯನ್ನಾಗಿ ಮಾಡಿಕೊಂಡರೂ ಪೂರ್ಣವಾಗುವುದಿಲ್ಲವೆಂದು ಹೇಳುತ್ತಾರೆ ಮತ್ತೆ ಅದು ಒಂದು ಸೆಕೆಂಡಿನ ಮಾತಾಗಿದೆ. ತಂದೆಯನ್ನು ತಿಳಿದುಕೊಂಡರೆ ರಾಜ್ಯಭಾಗ್ಯವು ಸಿಗಲೇಬೇಕಾಗಿದೆ. ಹೀಗೆ ಸ್ಥಿತಿಯನ್ನು ಜಮಾ ಮಾಡಿಕೊಂಡು ಪತಿತರಿಂದ ಪಾವನರಾಗಲು ಪರಿಶ್ರಮ ಪಡಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ- ನಿಮ್ಮನ್ನು ಆತ್ಮನೆಂದು ತಿಳಿದು ನೀವು ಬೇಹದ್ದಿನ ತಂದೆಯಾದ ನನ್ನನ್ನು ನೆನಪು ಮಾಡಿ. ಇದರಲ್ಲಿಯೇ ಪರಿಶ್ರಮವಿದೆ. ಕರ್ಮವನ್ನು ಮಾಡಿಸುವಂತಹ ಶಿಕ್ಷಕನಿರುವಾಗ ಒಂದು ವೇಳೆ ಯಾರ ಅದೃಷ್ಟದಲ್ಲಿ ಇಲ್ಲವೆಂದರೆ ಏನು ಮಾಡುತ್ತಾರೆ! ಶಿಕ್ಷಕನಂತೂ ಓದಿಸುತ್ತಾರೆ. ಲಂಚ ತೆಗೆದುಕೊಂಡು ಉತ್ತೀರ್ಣ ಮಾಡಿ ಬಿಡುತ್ತಾರೆಂದು ತಿಳಿಯಬಾರದು. ಇಲ್ಲಿ ಬಾಪ್ದಾದಾರವರಿಬ್ಬರೂ ಒಟ್ಟಿಗೆ ಇದ್ದಾರೆಂದು ಮಕ್ಕಳಿಗೆ ತಿಳಿದಿದೆ. ಬಾಪ್ದಾದಾರವರ ಹೆಸರಿನಲ್ಲಿ ಬಹಳಷ್ಟು ಪತ್ರಗಳನ್ನು ಮಕ್ಕಳು ಬರೆಯುತ್ತಾರೆ. ಶಿವಬಾಬಾ C/೦ ಪ್ರಜಾಪಿತ ಬ್ರಹ್ಮಾ. ತಂದೆಯಿಂದ ಬ್ರಹ್ಮನ ಮೂಲಕ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ತ್ರಿಮೂರ್ತಿಗಳಲ್ಲಿ ಬ್ರಹ್ಮನಿಂದ ಸ್ಥಾಪನೆ ಮಾಡಿಸುತ್ತೀರಿ, ಬ್ರಹ್ಮನಿಗೆ ಕ್ರಿಯೇಟರ್ ಎಂದು ಹೇಳಲಾಗುವುದಿಲ್ಲ, ಬೇಹದ್ದಿನ ರಚಯಿತನಂತೂ ಆ ತಂದೆಯಾಗಿದ್ದಾರೆ. ಪ್ರಜಾಪಿತ ಬ್ರಹ್ಮಾರವರೂ ಸಹ ಬೇಹದ್ದಿನವರಾಗಿದ್ದಾರೆ. ಪ್ರಜಾಪಿತ ಬ್ರಹ್ಮನಿರುವಾಗ ಬಹಳ ಪ್ರಜೆಗಳಾಗುತ್ತಾರೆ. ಎಲ್ಲರೂ ಸಹ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳುತ್ತಾರೆ. ಅವರು ಸರ್ವ ಆತ್ಮರಿಗೂ ತಂದೆಯಾಗಿದ್ದಾರೆ. ಆತ್ಮರೆಲ್ಲರೂ ಸಹೋದರ -ಸಹೋದರರಾಗಿದ್ದಾರೆ ನಂತರ ಸಹೋದರ-ಸಹೋದರಿಯರಾಗುತ್ತಾರೆ. ಪ್ರಜಾಪಿತ ಬ್ರಹ್ಮಾರವರು ಬೇಹದ್ದಿನ ವೃಕ್ಷದ ಮುಖ್ಯಸ್ಥರಾಗಿದ್ದಾರೆ. ಹೇಗೆ ವಂಶವೃಕ್ಷವಿರುತ್ತದೆಯಲ್ಲವೆ! ಇದು ಬೇಹದ್ದಿನ ವೃಕ್ಷವಾಗಿದೆ. ಆದಂ ಹಾಗೂ ಬೀಬಿ, ಆಡಂ ಹಾಗೂ ಈವ್ ಎಂದು ಯಾರಿಗೆ ಹೇಳುತ್ತಾರೆ? ಬ್ರಹ್ಮಾ-ಸರಸ್ವತಿಗೆ ಹೇಳುತ್ತಾರೆ. ಈಗ ವೃಕ್ಷವಂತೂ ಅತೀ ದೊಡ್ಡದಾಗಿ ಬಿಟ್ಟಿದೆ, ಇಡೀ ವೃಕ್ಷವೂ ಹಳೆಯದಾಗಿ ಬಿಟ್ಟಿದೆ ನಂತರ ಹೊಸ ವೃಕ್ಷ ಬೇಕಾಗಿದೆ, ಇದನ್ನು ವಿಭಿನ್ನ ಧರ್ಮಗಳ ವೃಕ್ಷವಾಗಿದೆ ಎಂದು ಹೇಳಲಾಗುವುದು. ವಿಭಿನ್ನ ಲಕ್ಷಣವುಳ್ಳದ್ದಾಗಿದೆ, ಒಂದು ಮತ್ತೊಂದನ್ನು ಹೋಲುವುದಿಲ್ಲ. ಪ್ರತಿಯೊಬ್ಬರ ಚಟುವಟಿಕೆಯ ಪಾತ್ರವು ಮತ್ತೊಬ್ಬರನ್ನು ಹೋಲುವುದಿಲ್ಲ. ಇವು ಬಹಳ ಗುಹ್ಯವಾದ ಮಾತುಗಳಾಗಿವೆ. ಸಂಕುಚಿತ ಬುದ್ಧಿಯುಳ್ಳವರು ಇದನ್ನು ತಿಳಿದುಕೊಳ್ಳಲು ಆಗುವುದಿಲ್ಲ, ಬಹಳ ಕಷ್ಟವಿದೆ. ನಾವಾತ್ಮ ಅತೀ ಸೂಕ್ಷ್ಮ ಬಿಂದುವಾಗಿದ್ದೇವೆ. ಪರಮಪಿತ ಪರಮಾತ್ಮನೂ ಸಹ ಅತೀ ಸೂಕ್ಷ್ಮ ಬಿಂದುವಾಗಿದ್ದಾರೆ, ಅವರು ಇವರ ಪಕ್ಕದಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಆತ್ಮವು ಚಿಕ್ಕದು-ದೊಡ್ಡದು ಇರುವುದಿಲ್ಲ. ಬಾಪ್ದಾದಾರವರ ಜೊತೆ ಜೊತೆಯಿರುವ ಪಾತ್ರವು ಎಷ್ಟೊಂದು ಅದ್ಭುತವಾಗಿದೆ! ತಂದೆಯು ಅತೀ ದೊಡ್ಡ ಅನುಭವಿ ರಥವನ್ನು ತೆಗೆದುಕೊಂಡಿದ್ದಾರೆ. ಸ್ವಯಂ ತಂದೆಯು ತಿಳಿಸುತ್ತಾರೆ- ಇದು ಭಾಗ್ಯಶಾಲಿ ರಥವಾಗಿದೆ, ಈ ಮನೆ ಅಥವಾ ರಥದಲ್ಲಿ ಆತ್ಮವು ಕುಳಿತಿದೆ. ನಾವು ಇಂತಹ ತಂದೆಗೆ ಬಾಡಿಗೆಯ ಮೇರೆಗೆ ನಮ್ಮ ರಥವನ್ನು ಕೊಡುವುದಾದರೆ ಏನೆಂದು ತಿಳಿಯುತ್ತೀರಿ! ಆದ್ದರಿಂದ ಇವರನ್ನು ಭಾಗ್ಯಶಾಲಿ ರಥವೆಂದು ಕರೆಯಲಾಗುವುದು, ಯಾರಲ್ಲಿ ತಂದೆಯು ಕುಳಿತು ಮಕ್ಕಳನ್ನು ವಜ್ರ ಸಮಾನ ದೇವತೆಯನ್ನಾಗಿ ಮಾಡುತ್ತಾರೆ. ಮೊದಲು ನೀವೂ ಸಹ ತಿಳಿದುಕೊಂಡಿರಲಿಲ್ಲ, ಸಂಪೂರ್ಣ ತುಚ್ಛ ಬುದ್ಧಿಯವರಾಗಿದ್ದಿರಿ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಮತ್ತೆ ಉತ್ತಮ ಪುರುಷಾರ್ಥವನ್ನು ಮಾಡಬೇಕಾಗಿದೆ. ಸಮಯವನ್ನು ವ್ಯರ್ಥ ಮಾಡಬಾರದು. ಶಾಲೆಯಲ್ಲಿ ಸಮಯವನ್ನು ವ್ಯರ್ಥ ಮಾಡುವವರು ಅನುತ್ತೀರ್ಣರಾಗುತ್ತಾರೆ. ತಂದೆಯು ನಿಮಗೆ ಅತೀ ದೊಡ್ಡ ಲಾಟರಿ ಕೊಡುತ್ತಾರೆ. ಯಾರಾದರೂ ರಾಜನ ಮನೆಯಲ್ಲಿ ಜನ್ಮ ಪಡೆದರೆ ಅದು ಅವರಿಗೆ ಲಾಟರಿ ಸಿಕ್ಕಿದಂತೆ. ಬಡವರಾಗಿದ್ದರೆ ಅವರಿಗೆ ಲಾಟರಿಯೆಂದು ಹೇಳುತ್ತೀರೇನು! ಇದು ಅತೀ ದೊಡ್ಡ ಶ್ರೇಷ್ಠ ಲಾಟರಿಯಾಗಿದೆ, ಇದರಲ್ಲಿ ಸಮಯ ವ್ಯರ್ಥ ಮಾಡಬಾರದು, ಮಾಯೆಯ ಬಾಕ್ಸಿಂಗ್ ಆಗಿದೆಯೆಂದು ತಂದೆಯು ತಿಳಿದುಕೊಂಡಿದ್ದಾರೆ. ಪದೇ-ಪದೇ ಮಾಯೆಯು ದೇಹಾಭಿಮಾನದ ಬಾಕ್ಸಿಂಗ್ನಲ್ಲಿ ತರುತ್ತದೆ. ನಿಮ್ಮ ಡೈರೆಕ್ಟ್ ಸಂಬಂಧ ತಂದೆಯ ಜೊತೆಯಿದೆ. ಸನ್ಮುಖದಲ್ಲಿ ಕುಳಿತಿದ್ದಾರಲ್ಲವೆ ಆದುದರಿಂದ ಇಲ್ಲಿಗೆ ನಾಟಕದನುಸಾರವಾಗಿ ರಿಫ್ರೆಷ್ ಆಗಲು ಬರುತ್ತೀರಿ. ನಾನು ನಿಮಗೆ ಏನು ತಿಳಿಸುತ್ತೇನೆ, ಅದನ್ನು ಧಾರಣೆ ಮಾಡಬೇಕು, ಈ ಜ್ಞಾನವು ಈಗ ಮಾತ್ರ ಸಿಕ್ಕಿದೆ ಮತ್ತೆ ಪ್ರಾಯಲೋಪವಾಗಿ ಬಿಡುತ್ತದೆ. ಬಹಳ ಆತ್ಮರು ಹಿಂತಿರುಗಿ ಮನೆಗೆ ಹೋಗಿ ಬಿಡುತ್ತಾರೆ. ಅರ್ಧಕಲ್ಪದ ನಂತರ ಭಕ್ತಿಮಾರ್ಗವು ಪ್ರಾರಂಭವಾಗುತ್ತದೆ, ಅರ್ಧಕಲ್ಪದಿಂದ ನೀವು ವೇದ-ಶಾಸ್ತ್ರಗಳನ್ನು ಓದುತ್ತಾ, ಭಕ್ತಿ ಮಾಡುತ್ತಾ ಬಂದಿದ್ದೀರಿ. ಈಗ ಮೂಲ ಮಾತನ್ನು ತಿಳಿಸಿಕೊಡಲಾಗುತ್ತದೆ- ಈಗ ನೀವು ತಂದೆಯನ್ನು ನೆನಪು ಮಾಡುವುದರಿಂದ ನಿಮ್ಮ ಜನ್ಮ-ಜನ್ಮಾಂತರದ ಪಾಪವು ಭಸ್ಮವಾಗುತ್ತದೆ. ಈ ಜ್ಞಾನವು ಆದಾಯದ ಮೂಲಾಧಾರವಾಗಿದೆ. ಇದರಿಂದ ನೀವು ಪದಮಾಪದಮ ಭಾಗ್ಯಶಾಲಿಗಳಾಗುತ್ತೀರಿ, ಸ್ವರ್ಗದ ಮಾಲೀಕರಾಗುತ್ತೀರಿ. ಅಲ್ಲಿ ಎಲ್ಲಾ ಪ್ರಕಾರದ ಸುಖವಿದೆ, ತಂದೆಯೇ ನೆನಪು ಮಾಡಿಸುತ್ತಾರೆ. ಸ್ವರ್ಗದಲ್ಲಿ ನಿಮಗೆ ಎಷ್ಟೊಂದು ಅಪಾರ ಸುಖವನ್ನು ಕೊಡಲಾಗಿತ್ತು, ನೀವು ವಿಶ್ವದ ಮಾಲೀಕರಾಗಿದ್ದು ಎಲ್ಲವನ್ನೂ ಕಳೆದುಕೊಂಡಿರಿ. ನೀವು ರಾವಣನಿಗೆ ಗುಲಾಮರಾಗಿದ್ದೀರಿ. ಇದು ರಾಮ-ರಾವಣರ ಅದ್ಭುತವಾದ ಆಟವಾಗಿದೆ! ಇದು ನಂತರವೂ ನಡೆಯುತ್ತದೆ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಸ್ವರ್ಗದಲ್ಲಿ ನೀವು ಸದಾ ಆರೋಗ್ಯ, ಐಶ್ವರ್ಯವಂತರಾಗಿರುತ್ತೀರಿ. ಇಲ್ಲಿ ಒಂದು ಜನ್ಮಕ್ಕಾಗಿ ಮನುಷ್ಯರನ್ನು ಆರೋಗ್ಯವಂತರನ್ನಾಗಿ ಮಾಡಲು ಎಷ್ಟೊಂದು ಖರ್ಚು ಮಾಡುತ್ತಾರೆ. ದೇವತೆಗಳು ಸದಾ ಆರೋಗ್ಯವಂತರಾಗಿರುತ್ತಾರಲ್ಲವೆ. ನೀವಿಲ್ಲಿಗೆ ಸದಾ ಆರೋಗ್ಯವಂತರಾಗಲು ಬಂದಿದ್ದೀರಿ. ಸರ್ವರನ್ನೂ ಸದಾ ಆರೋಗ್ಯವಂತರನ್ನಾಗಿ ಮಾಡಲು ಒಬ್ಬ ತಂದೆಯ ವಿನಃ ಬೇರೆ ಯಾರಿಂದಲೂ ಸಾಧ್ಯವಿಲ್ಲ. ನೀವೀಗ ಸರ್ವಗುಣ ಸಂಪನ್ನರಾಗುತ್ತಿದ್ದೀರಿ.... ಈಗ ನೀವು ಸಂಗಮಯುಗದಲ್ಲಿದ್ದೀರಿ, ತಂದೆಯು ನಿಮ್ಮನ್ನು ಹೊಸ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ನಾಟಕದನುಸಾರವಾಗಿ ಎಲ್ಲಿಯವರೆಗೆ ಬ್ರಾಹ್ಮಣರಾಗುವುದಿಲ್ಲ, ಅಲ್ಲಿಯವರೆಗೆ ದೇವತೆಯೂ ಆಗುವುದಿಲ್ಲ. ಎಲ್ಲಿಯವರೆಗೆ ಪುರುಷೋತ್ತಮ ಸಂಗಮಯುಗದಲ್ಲಿ ತಂದೆಯಿಂದ ಪುರುಷೋತ್ತಮರಾಗಲು ಬರಲಿಲ್ಲವೆಂದರೆ ದೇವತೆಗಳಾಗಲು ಆಗುವುದಿಲ್ಲ. ಒಳ್ಳೆಯದು - ಇಂದು ತಂದೆಯು ಆತ್ಮಿಕ ಡ್ರಿಲ್ ಕಲಿಸಿದರು, ಜ್ಞಾನವನ್ನೂ ಹೇಳಿದರು, ಮಕ್ಕಳಿಗೆ ಎಚ್ಚರಿಕೆಯನ್ನೂ ಕೊಟ್ಟರು, ಆಲಸ್ಯ ಮಾಡಬೇಡಿ, ಉಲ್ಟಾ-ಸುಲ್ಟಾ ಮಾತನಾಡಬೇಡಿ, ಶಾಂತಿಯಲ್ಲಿರಿ ಹಾಗೂ ತಂದೆಯನ್ನು ನೆನಪು ಮಾಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ವಿಕರ್ಮ ವಿನಾಶ ಮಾಡಿ ಸ್ವಯಂನ್ನು ಸುಧಾರಣೆ ಮಾಡಿಕೊಳ್ಳಲು ನೆನಪಿನ ಯಾತ್ರೆಯ ಮೇಲೆ ಪೂರ್ಣ ಗಮನ ಕೊಡಬೇಕಾಗಿದೆ. ದೈವೀ ಗುಣವನ್ನು ಧಾರಣೆ ಮಾಡಬೇಕಾಗಿದೆ.

2. ದೇವತೆಯಾಗಲು ಸಂಗಮಯುಗದಲ್ಲಿ ಪುರುಷೋತ್ತಮರಾಗಲು ಪುರುಷಾರ್ಥ ಮಾಡಬೇಕಾಗಿದೆ, ಆಲಸ್ಯದಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು.


ವರದಾನ:
ಮನಸ್ಸು-ಬುದ್ಧಿಯನ್ನು ಅನುಭವದ ಸೀಟ್ ಮೇಲೆ ಸೆಟ್ ಮಾಡುವಂತಹ ನಂಬರ್ ಒನ್ ವಿಶೇಷ ಆತ್ಮ ಭವ.

ಎಲ್ಲಾ ಬ್ರಾಹ್ಮಣ ಆತ್ಮಗಳ ಒಳಗೆ ಸಂಕಲ್ಪವಿರಿವುದು ನಾನು ವಿಶೇಷ ಆತ್ಮ ನಂಬರ್ ಒನ್ ಆಗಬೇಕು ಆದರೆ ಸಂಕಲ್ಪ ಮತ್ತು ಕರ್ಮದಲ್ಲಿರುವ ಅಂತರವನ್ನು ಸಮಾಪ್ತಿ ಮಾಡಲು ಸ್ಮೃತಿಯನ್ನು ಅನುಭವದಲ್ಲಿ ತರಬೇಕು. ಹೇಗೆ ಕೇಳುವುದು, ತಿಳಿಯುವುದು ನೆನಪಿರುವುದು ಹಾಗೆ ಸ್ವಯಂನ್ನು ಆ ಅನುಭವದ ಸ್ಥಿತಿಯಲ್ಲಿ ತರುವುದು ಅದಕ್ಕಾಗಿ ಸ್ವಯಂನ ಹಾಗೂ ಸಮಯದ ಮಹತ್ವವನ್ನು ತಿಳಿದು ಒಪ್ಪಿ ಮತ್ತು ಬುದ್ಧಿಗೆ ಯಾವುದೇ ಅನುಭವದ ಸೀಟ್ ಮೇಲೆ ಸೆಟ್ ಮಾಡಿದಾಗ ನಂಬರ್ ಒನ್ ವಿಶೇಷ ಆತ್ಮ ಆಗಿ ಬಿಡುವರು.

ಸ್ಲೋಗನ್:
ಕೆಟ್ಟದರ ರೇಸ್ ಅನ್ನು ಬಿಟ್ಟು ಒಳ್ಳೆಯದರ ರೇಸ್ ಮಾಡಿ.
 


ಮಾತೇಶ್ವರಿಜೀಯವರ ಮಧುರ ಮಹಾವಾಕ್ಯಗಳು -
"ಗುಪ್ತ ವೇಷಧಾರಿ ಪರಮಾತ್ಮನ ಮುಂದೆ ಕನ್ಯೆಯರು, ಮಾತೆಯರ ಸನ್ಯಾಸ"

ಈಗ ಪ್ರಪಂಚದ ಮನುಷ್ಯರಿಗೆ ಈ ವಿಚಾರವಂತು ಬರಬೇಕಾಗಿದೆ- ಈ ಕನ್ಯೆಯರು, ಮಾತೆಯರು ಏತಕ್ಕಾಗಿ ಸನ್ಯಾಸವನ್ನು ತೆಗೆದುಕೊಂಡಿದ್ದಾರೆ? ಇವರದೇನು ಹಠಯೋಗ, ಕರ್ಮ ಸನ್ಯಾಸವಾಗಿಲ್ಲ. ಆದರೆ ಸಂಪೂರ್ಣ ಸಹಜಯೋಗ, ರಾಜಯೋಗ, ಕರ್ಮಯೋಗದ ಸನ್ಯಾಸವು ಅವಶ್ಯವಾಗಿ ಇದೆ. ಪರಮಾತ್ಮನು ಸ್ವಯಂ ಬಂದು ಬದುಕಿದ್ದಾಗಲೇ, ದೇಹ ಸಹಿತವಾಗಿ ದೇಹದ ಎಲ್ಲಾ ಕರ್ಮೇಂದ್ರಿಯಗಳ ಸನ್ಯಾಸವನ್ನು ಮನಃ ಸ್ಪೂರ್ತಿಯಾಗಿ ಮಾಡಿಸುತ್ತಾರೆ ಅರ್ಥಾತ್ ವಿಕಾರಗಳ ಸಂಪೂರ್ಣ ಸನ್ಯಾಸವನ್ನು ಅವಶ್ಯವಾಗಿ ಮಾಡಬೇಕಾಗಿದೆ. ಪರಮಾತ್ಮನು ಬಂದು ಹೇಳುತ್ತಾರೆ- ದಾನವನ್ನು ಕೊಟ್ಟರೆ ಗ್ರಹಣ ಬಿಟ್ಟು ಹೋಗುವುದು. ಈಗ ಮಾಯೆಯ ಈ ಗ್ರಹಣವೇನು ಅರ್ಧಕಲ್ಪದಿಂದ ಹಿಡಿದುಕೊಂಡಿದೆ, ಇದರಿಂದ ಆತ್ಮವು ಕಪ್ಪು (ಪತಿತ) ಆಗಿ ಬಿಟ್ಟಿದೆ, ಅದನ್ನು ಮತ್ತೆ ಪವಿತ್ರವನ್ನಾಗಿ ಮಾಡಬೇಕಾಗಿದೆ. ನೋಡಿ, ದೇವತೆಗಳ ಆತ್ಮರು ಎಷ್ಟೊಂದು ಪವಿತ್ರ ಮತ್ತು ಚಮತ್ಕಾರಿಯಾಗಿದ್ದಾರೆ, ಯಾವಾಗ ಆತ್ಮವು ಪವಿತ್ರವಾಗಿದೆಯೋ ಆಗ ತನುವೂ ಸಹ ನಿರೋಗಿ ಪವಿತ್ರವಾಗಿರುವುದು ಸಿಗುತ್ತದೆ. ಈಗ ಈ ಸನ್ಯಾಸವೂ ಆಗ ಆಗಲು ಸಾಧ್ಯವಾಗುವುದು, ಯಾವಾಗ ಮೊದಲು ಸ್ವಲ್ಪ ಆ ವಸ್ತುವಿರುತ್ತದೆ. ಬಡವರ ಬಾಲಕನು ಸಾಹುಕಾರನ ಮಡಿಲಿನಲ್ಲಿ ಹೋಗುತ್ತದೆಯೆಂದರೆ ಏನೋ ನೋಡಿ ಮಡಿಲನ್ನು ತೆಗೆದುಕೊಳ್ಳುತ್ತದೆ ಆದರೆ ಸಾಹುಕಾರನ ಬಾಲಕನು ಬಡವನ ಮಡಿಲಿನಲ್ಲಿ ಹೋಗಲು ಸಾಧ್ಯವಿಲ್ಲ. ಅಂದಮೇಲೆ ಇಲ್ಲಿ ಇದೇನೂ ಅನಾಥ ಆಶ್ರಮವಲ್ಲ, ಇಲ್ಲಂತು ದೊಡ್ಡ-ದೊಡ್ಡ ಶ್ರೀಮಂತರು, ಕುಲವಂತ ಮಾತೆಯರು-ಕನ್ಯೆಯರಿದ್ದಾರೆ, ಯಾರನ್ನು ಪ್ರಪಂಚದ ಜನರು ಈಗಲೂ ಬಯಸುತ್ತಾರೆ- ಮನೆಗೆ ಹಿಂತಿರುಗಿ ಬಂದು ಬಿಡಲಿ, ಆದರೆ ಇವರೇನು ಪ್ರಾಪ್ತಿಯನ್ನು ಮಾಡಿಕೊಂಡಿದ್ದಾರೆ, ಯಾವುದು ಆ ಮಾಯಾವಿ ಧನ, ಪದಾರ್ಥ ಅರ್ಥಾತ್ ಸರ್ವಂಶ ಸನ್ಯಾಸವನ್ನು ಮಾಡಿದ್ದಾರೆ. ಅಂದಮೇಲೆ ಅವಶ್ಯವಾಗಿ ಅವರಿಂದ ಅವರಿಗೆ ಹೆಚ್ಚಿನ ಸುಖ-ಶಾಂತಿಯ ಪ್ರಾಪ್ತಿಯಾಗಿದೆ, ಆದ್ದರಿಂದಲೇ ಆ ಧನ, ಪದಾರ್ಥವನ್ನು ತ್ಯಾಗ ಮಾಡಿ ಬಿಟ್ಟಿದ್ದಾರೆ. ಹೇಗೆ ರಾಜಾ ಗೋಪಿಚಂದರು ಅಥವಾ ಮೀರಾ ರಾಣಿ ಪದವಿಯ ಅಥವಾ ರಾಜ್ಯದ ಸನ್ಯಾಸವನ್ನು ಮಾಡಿ ಬಿಟ್ಟರು. ಇದು ಈಶ್ವರೀಯ ಅತೀಂದ್ರಿಯ ಅಲೌಕಿಕ ಸುಖ, ಇದರ ಮುಂದೆ ಪ್ರಪಂಚದ ಪದಾರ್ಥಗಳು ಕನಿಷ್ಟವಾಗಿದೆ, ಅವರಿಗೆ ಗೊತ್ತಿದೆ- ಈ ಮರುಜೀವಾ ಆಗುವುದರಿಂದ ನಾವು ಜನ್ಮ-ಜನ್ಮಾಂತರಕ್ಕಾಗಿ ಅಮರಪುರಿಯ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೇವೆ, ಆಗಲೇ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕಾಗಿ ಪುರುಷಾರ್ಥವನ್ನು ಮಾಡುತ್ತಿದ್ದೇವೆ. ಪರಮಾತ್ಮನ ಮಗುವಾಗುವುದು ಅರ್ಥಾತ್ ಪರಮಾತ್ಮನವನಾಗಿ ಬಿಡುವುದು, ಎಲ್ಲವನ್ನೂ ಅವರಿಗೆ ಅರ್ಪಣೆ ಮಾಡಿ ಬಿಡುವುದು, ನಂತರ ಅದರ ರಿಟರ್ನ್ನಲ್ಲಿ ಅವಿನಾಶಿ ಪದವಿಯನ್ನು ಕೊಟ್ಟು ಬಿಡುತ್ತಾರೆ. ಅಂದಮೇಲೆ ಈ ಮನೋಕಾಮನೆಯನ್ನು ಪರಮಾತ್ಮನೇ ಬಂದು, ಈ ಸಂಗಮದ ಸಮಯವನ್ನು ಪೂರ್ಣಗೊಳಿಸುತ್ತಾರೆ ಏಕೆಂದರೆ ತಾವು ತಿಳಿದಿದ್ದೀರಿ- ವಿನಾಶ ಜ್ವಾಲೆಯಲ್ಲಿ ತನು-ಮನ-ಧನ ಸಹಿತವಾಗಿ ಎಲ್ಲವೂ ಭಸ್ಮವಾಗಿ ಬಿಡುತ್ತದೆ, ಅಂದಮೇಲೆ ನಾವೇಕೆ ಪರಮಾತ್ಮನ ಅರ್ಥವಾಗಿ ಸಫಲ ಮಾಡಬಾರದು!! ಈಗ ಈ ರಹಸ್ಯವನ್ನೂ ತಿಳಿಯಬೇಕು- ಯಾವಾಗ ಎಲ್ಲವೂ ವಿನಾಶವಾಗುವುದು ಆಗ ನಾವೂ ಸಹ ತೆಗೆದುಕೊಂಡು ಏನು ಮಾಡುವುದು! ನಮಗೆ ಸನ್ಯಾಸಿಗಳಂತೆ, ಮಂಡಲೇಶ್ವರರಂತೆ ಇಲ್ಲಿ ಮಹಲುಗಳನ್ನು ಕಟ್ಟಿಕೊಂಡು ಕುಳಿತುಕೊಳ್ಳುವುದಿಲ್ಲ. ಆದರೆ ಈಶ್ವರಾರ್ಥವಾಗಿ ಬೀಜವನ್ನು ಬಿತ್ತುವುದರಿಂದ, ಅಲ್ಲಿ ಭವಿಷ್ಯ ಜನ್ಮ-ಜನ್ಮಾಂತರದಲ್ಲಿ ಇವರದಾಗಿ ಬಿಡುತ್ತದೆ, ಇದು ಗುಪ್ತ ರಹಸ್ಯವಾಗಿದೆ. ಪ್ರಭುವಂತು ದಾತಾನಾಗಿದ್ದಾರೆ, ಒಂದನ್ನು ಕೊಟ್ಟರೆ ನೂರಷ್ಟು ಪಡೆಯುತ್ತೀರಿ. ಆದರೆ ಈ ಜ್ಞಾನದಲ್ಲಿ ಮೊದಲು ಸಹನೆ ಮಾಡಬೇಕಾಗುತ್ತದೆ, ಎಷ್ಟು ಸಹನೆ ಮಾಡುವಿರಿ, ಅಷ್ಟು ಅಂತ್ಯದಲ್ಲಿ ಪ್ರಭಾವ ಬೀರುವುದು. ಆದ್ದರಿಂದ ಈಗಿನಿಂದಲೇ ಪುರುಷಾರ್ಥ ಮಾಡಿರಿ. ಒಳ್ಳೆಯದು.