04.12.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಎಲ್ಲವೂ
ಕರ್ಮಗಳ ಮೇಲೆ ಆಧಾರಿತವಾಗಿದೆ, ಸದಾ ಗಮನವಿರಲಿ - ಮಾಯೆಗೆ ವಶೀಭೂತರಾಗಿ
ಶಿಕ್ಷೆಗಳನ್ನನುಭವಿಸುವಂತಹ ಯಾವುದೇ ಉಲ್ಟಾ ಕರ್ಮವಾಗದಿರಲಿ”
ಪ್ರಶ್ನೆ:
ತಂದೆಯ ದೃಷ್ಟಿಯಲ್ಲಿ ಎಲ್ಲರಿಗಿಂತ ಅಧಿಕ ಬುದ್ಧಿವಂತರು ಯಾರು?
ಉತ್ತರ:
ಯಾರಲ್ಲಿ ಪವಿತ್ರತೆಯ ಧಾರಣೆಯಿರುತ್ತದೆಯೋ ಅವರೇ ಬುದ್ಧಿವಂತರಾಗಿದ್ದಾರೆ, ಪತಿತರು
ಬುದ್ಧಿಹೀನರಾಗಿದ್ದಾರೆ. ಪಾವನರು ಬುದ್ಧಿವಂತರಾಗಿದ್ದಾರೆ. ಲಕ್ಷ್ಮಿ-ನಾರಾಯಣರಿಗೆ ಎಲ್ಲರಿಗಿಂತ
ಅಧಿಕ ಬುದ್ಧಿವಂತರೆಂದು ಹೇಳಲಾಗುತ್ತದೆ. ನೀವು ಮಕ್ಕಳೂ ಸಹ ಬುದ್ಧಿವಂತರಾಗುತ್ತಿದ್ದೀರಿ.
ಪವಿತ್ರತೆಯೇ ಎಲ್ಲದಕ್ಕಿಂತ ಮುಖ್ಯವಾಗಿದೆ. ಆದ್ದರಿಂದ ತಂದೆಯು ಎಚ್ಚರಿಕೆ ನೀಡುತ್ತಾರೆ - ಮಕ್ಕಳೇ,
ಈ ಕಣ್ಣುಗಳು ಮೋಸ ಮಾಡದಿರಲಿ, ಇದರಿಂದ ಜೋಪಾನವಾಗಿರಿ. ಈ ಹಳೆಯ ಪ್ರಪಂಚವನ್ನು ನೋಡಿಯೂ ನೋಡದಂತಿರಿ.
ಹೊಸ ಪ್ರಪಂಚ, ಸ್ವರ್ಗವನ್ನು ನೆನಪು ಮಾಡಿ.
ಓಂ ಶಾಂತಿ.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳು ಇದನ್ನಂತೂ ತಿಳಿದುಕೊಂಡಿದ್ದೀರಿ - ಈ ಹಳೆಯ
ಪ್ರಪಂಚದಲ್ಲಿ ನಾವಿನ್ನು ಸ್ವಲ್ಪ ದಿನಗಳ ಯಾತ್ರಿಕರಾಗಿದ್ದೇವೆ. ಇನ್ನೂ 40 ಸಾವಿರ ವರ್ಷಗಳು
ಇಲ್ಲಿಯೇ ಇರಬೇಕೆಂದು ಪ್ರಪಂಚದ ಮನುಷ್ಯರು ತಿಳಿಯುತ್ತಾರೆ. ನೀವು ಮಕ್ಕಳಿಗಂತೂ ನಿಶ್ಚಯವಿದೆಯಲ್ಲವೆ
ಅಂದಾಗ ಈ ಮಾತುಗಳನ್ನು ಮರೆಯಬೇಡಿ. ಇಲ್ಲಿ ನೀವು ಕುಳಿತಿದ್ದರೂ ಸಹ ನೀವು ಮಕ್ಕಳಿಗೆ ಒಳಗೆ
ಗದ್ಗದಿತವಾಗಬೇಕು, ಏಕೆಂದರೆ ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಎಲ್ಲವೂ
ವಿನಾಶವಾಗುವುದಿದೆ. ಆತ್ಮವು ಅವಿನಾಶಿಯಾಗಿದೆ. ನಾವಾತ್ಮಗಳೇ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ.
ಈಗ ಮನೆಗೆ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ, ಯಾವಾಗ ಹಳೆಯ ಪ್ರಪಂಚದ ಮುಕ್ತಾಯವಾಗುವುದೋ
ಆಗ ಹೊಸ ಪ್ರಪಂಚವನ್ನಾಗಿ ಮಾಡಲು ತಂದೆಯು ಬರುತ್ತಾರೆ. ಹೊಸದರಿಂದ ಹಳೆಯದು, ಹಳೆಯದರಿಂದ ಹೊಸ
ಪ್ರಪಂಚವು ಹೇಗಾಗುತ್ತದೆ ಎಂಬುದು ನಿಮ್ಮ ಬುದ್ಧಿಯಲ್ಲಿದೆ. ನಾವು ಅನೇಕ ಬಾರಿ ಚಕ್ರವನ್ನು
ಸುತ್ತಿದ್ದೇವೆ. ಈಗ ಚಕ್ರವು ಪೂರ್ಣವಾಗುತ್ತದೆ. ಹೊಸ ಪ್ರಪಂಚದಲ್ಲಿ ನಾವು ಕೆಲವರೇ ಇರುತ್ತೇವೆ,
ಮನುಷ್ಯರಿರುವುದಿಲ್ಲ ಉಳಿದಂತೆ ಎಲ್ಲವೂ ಕರ್ಮಗಳ ಮೇಲೆ ಆಧಾರಿತವಾಗಿದೆ. ಮನುಷ್ಯರು ಉಲ್ಟಾ ಕರ್ಮ
ಮಾಡಿದರೆ ಅದು ಅವಶ್ಯವಾಗಿ ತಿನ್ನುತ್ತದೆ. ಆದ್ದರಿಂದ ತಂದೆಯು ಕೇಳುತ್ತಾರೆ - ಈ ಜನ್ಮದಲ್ಲಿ
ಯಾವುದೇ ಅಂತಹ ಪಾಪವನ್ನಂತೂ ಮಾಡಿಲ್ಲವೆ? ಇದು ಪತಿತ, ಛೀ ಛೀ ರಾವಣ ರಾಜ್ಯವಾಗಿದೆ. ಇದು ಅಂಧಕಾರ
ಪ್ರಪಂಚವಾಗಿದೆ. ಈಗ ತಂದೆಯು ನೀವು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಿದ್ದಾರೆ. ನೀವು ಮಕ್ಕಳಿಗೆ
ಭಕ್ತಿ ಮಾಡುವುದಿಲ್ಲ. ಭಕ್ತಿಯ ಅಂಧಕಾರದಲ್ಲಿ ಪೆಟ್ಟು ತಿನ್ನುತ್ತಾ ಬಂದಿದ್ದೀರಿ. ಈಗ ತಂದೆಯ ಕೈ
ಸಿಕ್ಕಿದೆ, ತಂದೆಯ ಆಶ್ರಯವಿಲ್ಲದೆ ನೀವು ವಿಷಯ ವೈತರಣೀ ನದಿಯಲ್ಲಿ ಮುಳುಗುತ್ತಿದ್ದಿರಿ. ಅರ್ಧ
ಕಲ್ಪ ಭಕ್ತಿಯಿರುತ್ತದೆ, ಜ್ಞಾನ ಸಿಗುವುದರಿಂದ ನೀವು ಸತ್ಯಯುಗೀ ಹೊಸ ಪ್ರಪಂಚದಲ್ಲಿ ಹೊರಟು
ಹೋಗುತ್ತೀರಿ. ಈಗಂತೂ ಇದು ಪುರುಷೋತ್ತಮ ಸಂಗಮಯುಗವಾಗಿದೆ. ಈಗ ನೀವು ಛೀ ಛೀ ಪತಿತರಿಂದ ಪಾವನರು,
ಮುಳ್ಳುಗಳಿಂದ ಹೂಗಳಾಗುತ್ತಿದ್ದಿರಿ. ಯಾರು ಮಾಡುತ್ತಾರೆ? ಬೇಹದ್ದಿನ ತಂದೆ. ಲೌಕಿಕ ತಂದೆಯನ್ನು
ಬೇಹದ್ದಿನ ತಂದೆಯೆಂದು ಹೇಳುವುದಿಲ್ಲ. ನೀವು ಬ್ರಹ್ಮಾ ಮತ್ತು ವಿಷ್ಣುವಿನ ಕರ್ತವ್ಯವನ್ನು
ಅರಿತುಕೊಂಡಿದ್ದೀರಿ, ಚರಿತ್ರೆಯನ್ನೂ ಅರಿತುಕೊಂಡಿದ್ದೀರಿ ಅಂದಾಗ ನಿಮಗೆ ಎಷ್ಟೊಂದು ಶುದ್ಧ
ನಶೆಯಿರಬೇಕು! ಮೂಲವತನ, ಸೂಕ್ಷ್ಮವತನ, ಸ್ಥೂಲವತನ..... ಇವೆಲ್ಲವೂ ಸಂಗಮದಲ್ಲಿಯೇ ಇರುತ್ತದೆ.
ತಂದೆಯು ಕುಳಿತು ಈಗ ನೀವು ಮಕ್ಕಳಿಗೆ ತಿಳಿಸಿ ಕೊಡುತ್ತಾರೆ - ಇದು ಹಳೆಯ ಮತ್ತು ಹೊಸ ಪ್ರಪಂಚದ
ಸಂಗಮಯುಗವಾಗಿದೆ. ಪತಿತರನ್ನು ಪಾವನ ಮಾಡಲು ಬನ್ನಿ ಎಂದು ತಂದೆಯನ್ನು ಕರೆಯುತ್ತಾರೆ. ಈ
ಸಂಗಮದಲ್ಲಿಯೇ ತಂದೆಯ ಪಾತ್ರವು ನಡೆಯುತ್ತದೆ. ತಂದೆಯು ರಚಯಿತ, ನಿರ್ದೇಶಕನಾಗಿದ್ದಾರಲ್ಲವೆ
ಅಂದಮೇಲೆ ಅವಶ್ಯವಾಗಿ ಅವರ ಪಾತ್ರವೂ ಇರುವುದಲ್ಲವೆ. ಎಲ್ಲರಿಗೂ ತಿಳಿದಿದೆ - ಅವರಿಗೆ ಮನುಷ್ಯರೆಂದು
ಹೇಳಲಾಗುವುದಿಲ್ಲ, ಅವರಿಗೆ ತಮ್ಮ ಶರೀರವೇ ಇಲ್ಲ, ಉಳಿದೆಲ್ಲರಿಗೆ ಮನುಷ್ಯ ಅಥವಾ ದೇವತೆಗಳೆಂದು
ಹೇಳುತ್ತಾರೆ. ಶಿವ ತಂದೆಗೆ ದೇವತೆಯೆಂದಾಗಲಿ ಅಥವಾ ಮನುಷ್ಯನೆಂದಾಗಲಿ ಹೇಳುವುದಿಲ್ಲ, ಕೇವಲ
ತಾತ್ಕಾಲಿಕವಾಗಿ ಈ ಶರೀರವನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆ. ಗರ್ಭದಿಂದ ಜನ್ಮ
ತೆಗೆದುಕೊಂಡಿಲ್ಲ. ಆ ತಂದೆಯೇ ತಿಳಿಸುತ್ತಾರೆ - ಮಕ್ಕಳೇ, ಶರೀರವಿಲ್ಲದೆ ನಾನು ರಾಜಯೋಗವನ್ನು ಹೇಗೆ
ಕಲಿಸಲಿ! ಭಲೆ ಮನುಷ್ಯರು ನನ್ನನ್ನು ಕಲ್ಲು-ಮುಳ್ಳಿನಲ್ಲಿದ್ದಾರೆಂದು ಹೇಳಿ ಬಿಡುತ್ತಾರೆ. ಆದರೆ
ನಾನು ಹೇಗೆ ಬರುತ್ತೇನೆಂಬುದನ್ನು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನೀವೀಗ ರಾಜಯೋಗವನ್ನು
ಕಲಿಯುತ್ತಿದ್ದೀರಿ. ಇದನ್ನು ಯಾವುದೇ ಮನುಷ್ಯರು ಕಲಿಸಲು ಸಾಧ್ಯವಿಲ್ಲ. ದೇವತೆಗಳಂತೂ ರಾಜಯೋಗವನ್ನು
ಕಲಿಯಲು ಸಾಧ್ಯವಿಲ್ಲ. ಇಲ್ಲಿ ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ರಾಜಯೋಗವನ್ನು ಕಲಿತು
ದೇವತೆಗಳಾಗುತ್ತೀರಿ.
ಈಗ ನೀವು ಮಕ್ಕಳಿಗೆ ಅಪಾರ ಖುಷಿಯಿರಬೇಕು - ನಾವೀಗ 84 ಜನ್ಮಗಳ ಚಕ್ರವನ್ನು ಪೂರ್ಣ ಮಾಡಿದ್ದೇವೆ.
ತಂದೆಯು ಕಲ್ಪ-ಕಲ್ಪವೂ ಬರುತ್ತಾರೆ, ಸ್ವಯಂ ಅವರೇ ತಿಳಿಸುತ್ತಾರೆ - ಮಕ್ಕಳೇ, ಇದು ಬಹಳ ಜನ್ಮಗಳ
ಅಂತಿಮ ಜನ್ಮವಾಗಿದೆ. ಶ್ರೀ ಕೃಷ್ಣನು ಸತ್ಯಯುಗದ ಮೊದಲ ರಾಜಕುಮಾರನಾಗಿದ್ದನು ಮತ್ತೆ ಅವರೇ 84
ಜನ್ಮಗಳ ಚಕ್ರವನ್ನು ಸುತ್ತುತ್ತಾರೆ. ಶಿವ ತಂದೆಯು 84 ಜನ್ಮಗಳ ಚಕ್ರದಲ್ಲಿ ಬರುವುದಿಲ್ಲ. ಶ್ರೀ
ಕೃಷ್ಣನ ಆತ್ಮವು ಸುಂದರನಿಂದ ಶ್ಯಾಮನಾಗುತ್ತದೆ, ಈ ಮಾತುಗಳು ಯಾರಿಗೂ ತಿಳಿದಿಲ್ಲ. ನಿಮ್ಮಲ್ಲಿಯೂ
ನಂಬರ್ವಾರ್ ತಿಳಿದುಕೊಂಡಿದ್ದಾರೆ. ಮಾಯೆಯು ಬಹಳ ಕಠಿಣವಾಗಿದೆ ಯಾರನ್ನೂ ಬಿಡುವುದಿಲ್ಲ. ತಂದೆಗೆ
ಎಲ್ಲವೂ ಅರ್ಥವಾಗುತ್ತದೆ. ಮಾಯಾ ಮೊಸಳೆಯು ಒಮ್ಮೆಲೆ ನುಂಗಿ ಬಿಡುತ್ತದೆ. ಇದು ತಂದೆಗೆ ಬಹಳ
ಚೆನ್ನಾಗಿ ಗೊತ್ತಿದೆ. ತಂದೆಯು ಅಂತರ್ಯಾಮಿಯೆಂದು ತಿಳಿದುಕೊಳ್ಳಬೇಡಿ, ತಂದೆಗೆ ಎಲ್ಲರ
ಚಟುವಟಿಕೆಗಳು ತಿಳಿದಿವೆ. ಸಮಾಚಾರವಂತೂ ತಂದೆಯ ಬಳಿ ಬರುತ್ತದೆಯಲ್ಲವೆ. ಮಾಯೆಯು ಒಮ್ಮೆಲೆ
ಹಸಿಯಾಗಿಯೇ ನುಂಗಿ ಬಿಡುತ್ತದೆ, ಇಂತಹ ಬಹಳ ಮಾತುಗಳು ನೀವು ಮಕ್ಕಳಿಗೂ ತಿಳಿಯುವುದಿಲ್ಲ, ತಂದೆಗಂತೂ
ಎಲ್ಲವೂ ತಿಳಿದಿದೆ, ಪರಮಾತ್ಮನು ಅಂತರ್ಯಾಮಿಯೆಂದು ಹೇಳಿ ಬಿಡುತ್ತಾರೆ. ಆದರೆ ನಾನು
ಅಂತರ್ಯಾಮಿಯಲ್ಲ ಎಂದು ತಂದೆಯು ತಿಳಿಸುತ್ತಾರೆ. ಪ್ರತಿಯೊಬ್ಬರ ಚಲನೆಯಿಂದ ಕಾಣುತ್ತದೆಯಲ್ಲವೆ.
ಬಹಳ ಪತಿತ ನಡವಳಿಕೆಯಲ್ಲಿ ನಡೆಯುತ್ತಾರೆ, ಆದ್ದರಿಂದ ತಂದೆಯು ಪದೇ-ಪದೇ ಮಕ್ಕಳಿಗೆ ಎಚ್ಚರ
ನೀಡುತ್ತಾರೆ. ಮಾಯೆಯಿಂದ ರಕ್ಷಿಸಿಕೊಳ್ಳಬೇಕಾಗಿದೆ. ಭಲೆ ತಂದೆಯು ತಿಳಿಸಿ ಕೊಡುತ್ತಾರೆ. ಆದರೂ ಸಹ
ಕೆಲವರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಕಾಮ ಮಹಾಶತ್ರುವಾಗಿದೆ, ನಾವು ವಿಕಾರದಲ್ಲಿ
ಹೋಗಿದ್ದೇವೆಂದು ಕೆಲವರಿಗೆ ತಿಳಿಯುವುದೂ ಇಲ್ಲ. ಈ ರೀತಿಯೂ ಆಗುತ್ತದೆ, ಆದ್ದರಿಂದ ತಂದೆಯು
ತಿಳಿಸುತ್ತಾರೆ - ಏನೇ ತಪ್ಪುಗಳಾದರೆ ಅದನ್ನು ಸ್ಪಷ್ಟವಾಗಿ ತಿಳಿಸಿ, ಮುಚ್ಚಿಡಬೇಡಿ. ಇಲ್ಲವಾದರೆ
ಒಂದಕ್ಕೆ ನೂರರಷ್ಟು ಪಾಪವಾಗಿ ಬಿಡುವುದು, ಅದು ಒಳಗೆ ತಿನ್ನುತ್ತಾ ಇರುವುದು, ವೃದ್ಧಿಯಾಗುತ್ತಾ
ಇರುವುದು. ಒಮ್ಮೆಲೆ ಕೆಳಗೆ ಬೀಳುತ್ತೀರಿ, ಆದ್ದರಿಂದ ಮಕ್ಕಳು ತಂದೆಯ ಜೊತೆ ಸಂಪೂರ್ಣ
ಸತ್ಯವಾಗಿರಬೇಕಾಗಿದೆ. ಇಲ್ಲದಿದ್ದರೆ ಬಹಳ-ಬಹಳ ನಷ್ಟವಾಗಿಬಿಡುವುದು. ಇದಂತೂ ರಾವಣನ ಪ್ರಪಂಚವಾಗಿದೆ,
ರಾವಣನ ಪ್ರಪಂಚವನ್ನು ನಾವೇಕೆ ನೆನಪು ಮಾಡುವುದು. ನಾವಂತೂ ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ.
ತಂದೆಯು ಹೊಸ ಮನೆಯನ್ನು ಕಟ್ಟಿಸುತ್ತಾರೆಂದರೂ ನಮಗಾಗಿ ಹೊಸ ಮನೆಯು ತಯಾರಾಗುತ್ತಿದೆ ಎಂದು ಮಕ್ಕಳು
ತಿಳಿಯುತ್ತಾರೆ, ಬಹಳ ಖುಷಿಯಿರುತ್ತದೆ. ಇಲ್ಲಂತೂ ಇದು ಬೇಹದ್ದಿನ ಮಾತಾಗಿದೆ. ನಮಗಾಗಿ ಹೊಸ
ಪ್ರಪಂಚ, ಸ್ವರ್ಗವು ತಯಾರಾಗುತ್ತಿದೆ. ಈಗ ನಾವು ಹೊಸ ಪ್ರಪಂಚದಲ್ಲಿ ಹೋಗಲಿದ್ದೇವೆ ಮತ್ತೆ
ಯಾರೆಷ್ಟು ತಂದೆಯನ್ನು ನೆನಪು ಮಾಡುವರೋ ಅಷ್ಟು ಪಾವನರಾಗುತ್ತಾರೆ. ನಾವು ವಿಕಾರಗಳಿಗೆ ವಶರಾಗಿ
ಮುಳ್ಳುಗಳಾಗಿ ಬಿಟ್ಟಿದ್ದೇವೆ. ಮಕ್ಕಳಿಗೆ ತಿಳಿದಿದೆ - ಯಾರು ಬರುವುದಿಲ್ಲವೋ ಅವರು ಮಾಯೆಗೆ
ವಶರಾಗಿ ಬಿಟ್ಟಿದ್ದಾರೆ, ತಂದೆಯ ಬಳಿ ಇಲ್ಲವೇ ಇಲ್ಲ ವಿರೋಧಿಗಳಾಗಿ ಬಿಟ್ಟಿದ್ದಾರೆ. ಹಳೆಯ
ಶತ್ರುವಿನ ಬಳಿ ಹೊರಟು ಹೋಗಿದ್ದಾರೆ, ಹೀಗೆ ಅನೇಕರನ್ನು ಮಾಯೆಯು ನುಂಗಿ ಬಿಡುತ್ತದೆ. ಅನೇಕರು
ಸಮಾಪ್ತಿಯಾಗುತ್ತಾರೆ. ಬಹಳ ಒಳ್ಳೆಯ ಮಕ್ಕಳು ನಾವು ಇದನ್ನು ಮಾಡುತ್ತೇವೆ, ಅದನ್ನು ಮಾಡುತ್ತೇವೆ,
ನಾವು ಯಜ್ಞಕ್ಕಾಗಿ ಪ್ರಾಣ ಕೊಡುವುದಕ್ಕೂ ತಯಾರಾಗಿದ್ದೇವೆ ಎಂದು ಹೇಳುತ್ತಾರೆ. ಅಂತಹವರು ಇಂದು
ಇಲ್ಲ. ನಿಮ್ಮ ಯುದ್ಧವು ಮಾಯೆಯ ಜೊತೆ ಇದೆ, ಪ್ರಪಂಚದಲ್ಲಿ ಯಾರಿಗೂ ಸಹ ಮಾಯೆಯ ಜೊತೆ ಯುದ್ಧವು
ಹೇಗಾಗುತ್ತದೆ ಎಂಬುದು ತಿಳಿದಿಲ್ಲ. ದೇವತೆಗಳು ಮತ್ತು ಅಸುರರಲ್ಲಿ ಯುದ್ಧವು ನಡೆಯಿತು, ಕೌರವರು
ಮತ್ತು ಪಾಂಡವರ ನಡುವೆ ಯುದ್ಧ ನಡೆಯಿತೆಂದು ಶಾಸ್ತ್ರಗಳಲ್ಲಿ ತೋರಿಸಿದ್ದಾರೆ. ಇವೆರಡು ಮಾತುಗಳು
ಶಾಸ್ತ್ರಗಳಲ್ಲಿ ಹೇಗಿವೆ ಎಂದು ಯಾರನ್ನಾದರೂ ಕೇಳಿ ಏಕೆಂದರೆ ದೇವತೆಗಳಂತೂ ಅಹಿಂಸಕರಾಗುತ್ತಾರೆ.
ಅವರು ಸತ್ಯಯುಗದಲ್ಲಿಯೇ ಬರುತ್ತಾರೆ ಅಂದಾಗ ಅವರು ಕಲಿಯುಗದಲ್ಲಿ ಹೊಡೆದಾಡಲು ಏಕೆ ಬರುತ್ತಾರೆ!
ಕೌರವರು ಮತ್ತು ಪಾಂಡವರ ಅರ್ಥವನ್ನೂ ತಿಳಿದುಕೊಂಡಿಲ್ಲ. ಶಾಸ್ತ್ರಗಳಲ್ಲಿ ಏನು ಬರೆದಿದ್ದಾರೆಯೋ
ಅದನ್ನೇ ಓದಿ ಹೇಳುತ್ತಿರುತ್ತಾರೆ. ಈ ಬ್ರಹ್ಮಾರವರಂತೂ ಇಡೀ ಗೀತೆಯನ್ನೇ ಓದುತ್ತಾರೆ, ಯಾವಾಗ ಈ
ಜ್ಞಾನವು ಸಿಕ್ಕಿತೋ ಆಗ ಗೀತೆಯಲ್ಲಿ ಈ ಯುದ್ಧ ಮೊದಲಾದ ಮಾತುಗಳು ಹೇಗೆ ಬರೆದಿದ್ದಾರೆ ಎಂದು
ವಿಚಾರವು ನಡೆಯಿತು. ಕೃಷ್ಣನು ಗೀತೆಯ ಭಗವಂತನಲ್ಲ, ಇವರಲ್ಲಿ ತಂದೆಯು ಕುಳಿತಿದ್ದರಿಂದ ಇವರ ಮೂಲಕ
ಆ ಗೀತೆಯನ್ನು ಬಿಡಿಸಿದರು. ಈಗ ತಂದೆಯ ಮೂಲಕ ಎಷ್ಟೊಂದು ಬೆಳಕು ಸಿಕ್ಕಿದೆ. ಆತ್ಮಕ್ಕೆ ಬೆಳಕು
ಸಿಗುತ್ತದೆ, ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ತನ್ನನ್ನು ಆತ್ಮನೆಂದು ತಿಳಿಯಿರಿ.
ಬೇಹದ್ದಿನ ತಂದೆಯನ್ನು ನೆನಪು ಮಾಡಿ. ಭಕ್ತಿಯಲ್ಲಿ ನೀವು ನೆನಪು ಮಾಡುತ್ತಿದ್ದಿರಿ - ತಾವು ಬಂದರೆ
ನಾವು ಬಲಿಹಾರಿಯಾಗುತ್ತೇವೆಂದು ಹೇಳುತ್ತಿದ್ದಿರಿ. ಆದರೆ ಅವರು ಹೇಗೆ ಬರುತ್ತಾರೆ! ಹೇಗೆ
ಬಲಿಹಾರಿಯಾಗುತ್ತೇವೆ! ಇದೇನೂ ತಿಳಿದಿರಲಿಲ್ಲ.
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಹೇಗೋ ನಾವಾತ್ಮಗಳೂ ಅದೇ ರೀತಿಯಿದ್ದೇವೆ.
ತಂದೆಯದು ಅಲೌಕಿಕ ಜನ್ಮವಾಗಿದೆ, ಅವರು ಬಂದು ನೀವು ಮಕ್ಕಳಿಗೆ ಎಷ್ಟು ಚೆನ್ನಾಗಿ ಓದಿಸುತ್ತಾರೆ.
ಇವರಂತೂ ಅದೇ ನಮ್ಮ ಕಲ್ಪದ ಹಿಂದಿನ ತಂದೆಯಾಗಿದ್ದಾರೆ, ಕಲ್ಪ-ಕಲ್ಪ-ಕಲ್ಪವೂ ಬಂದು ನಮ್ಮ
ತಂದೆಯಾಗುತ್ತಾರೆ ಎಂದು ನೀವು ಹೇಳುತ್ತೀರಿ. ನಾವೆಲ್ಲರೂ ಬಾಬಾ, ಬಾಬಾ ಎನ್ನುತ್ತೇವೆ. ತಂದೆಯೂ ಸಹ
ಮಕ್ಕಳೇ, ಮಕ್ಕಳೇ ಎಂದು ಹೇಳುತ್ತಾರೆ. ಅವರೇ ಶಿಕ್ಷಕನ ರೂಪದಲ್ಲಿ ರಾಜಯೋಗವನ್ನು ಕಲಿಸುತ್ತಾರೆ.
ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಾಗ ಇಂತಹ ತಂದೆಗೆ ಮಕ್ಕಳಾಗಿ ನಂತರ ಅದೇ
ಶಿಕ್ಷಕನಿಂದ ಶಿಕ್ಷಣವನ್ನು ಪಡೆಯಬೇಕು. ಕೇಳಿ-ಕೇಳಿ ಗದ್ಗದಿತರಾಗಬೇಕು. ಒಂದುವೇಳೆ ಪತಿತರಾದರೆ ಆ
ಖುಷಿಯು ಬರುವುದಿಲ್ಲ. ಭಲೆ ಎಷ್ಟಾದರೂ ತಲೆ ಕೆಡಿಸಿಕೊಳ್ಳಿ ಅವರು ನಮ್ಮ ಕುಲದವರಲ್ಲ. ಇಲ್ಲಿ
ಮನುಷ್ಯರಿಗೆ ಎಷ್ಟೊಂದು ಉಪ ನಾಮಗಳಿರುತ್ತವೆ, ಇವೆಲ್ಲವೂ ಮಿತವಾದ ಮಾತುಗಳಾಗಿವೆ. ನಿಮ್ಮ ಉಪನಾಮವು
ನೋಡಿ, ಎಷ್ಟು ದೊಡ್ಡದಾಗಿದೆ. ದೊಡ್ಡವರಿಗಿಂತ ದೊಡ್ಡವರು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್
ಆಗಿದ್ದಾರೆ, ಅವರನ್ನು ಯಾರೂ ತಿಳಿದುಕೊಂಡೇ ಇಲ್ಲ. ಶಿವ ತಂದೆಯನ್ನು ಸರ್ವವ್ಯಾಪಿಯೆಂದು ಹೇಳಿ
ಬಿಟ್ಟಿದ್ದಾರೆ. ಬ್ರಹ್ಮಾರವರ ಬಗ್ಗೆ ಯಾರಿಗೂ ಗೊತ್ತಿಲ್ಲ. ಬ್ರಹ್ಮಾ-ವಿಷ್ಣು-ಶಂಕರರ ಚಿತ್ರಗಳೂ
ಇವೆ. ಮತ್ತೆ ಬ್ರಹ್ಮನನ್ನು ಸೂಕ್ಷ್ಮವತನದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಅವರ ಚರಿತ್ರೆಯನ್ನೇನೂ
ತಿಳಿದುಕೊಂಡಿಲ್ಲ. ಸೂಕ್ಷ್ಮವತನದಲ್ಲಿ ಬ್ರಹ್ಮನೆಲ್ಲಿಂದ ಬಂದರು? ಸೂಕ್ಷ್ಮವತನದಲ್ಲಿ ಹೇಗೆ ದತ್ತು
ಮಾಡಿಕೊಳ್ಳುತ್ತಾರೆ? ಅಂದಾಗ ತಂದೆಯು ತಿಳಿಸಿದ್ದಾರೆ - ಇವರು ನನ್ನ ರಥವಾಗಿದ್ದಾರೆ. ಬಹಳ ಜನ್ಮಗಳ
ಅಂತಿಮದಲ್ಲಿ ನಾವು ಇವರನ್ನು ಪ್ರವೇಶ ಮಾಡಿದ್ದೇನೆ, ಇದು ಪುರುಷೋತ್ತಮ ಸಂಗಮಯುಗವು ಗೀತಾ
ಭಾಗವಾಗಿದೆ. ಇದರಲ್ಲಿ ಪವಿತ್ರತೆಯು ಮುಖ್ಯವಾಗಿದೆ. ಪತಿತರಿಂದ ಹೇಗೆ ಪಾವನರಾಗಬೇಕೆಂಬುದು ಯಾರಿಗೂ
ತಿಳಿದಿಲ್ಲ. ಸಾಧು-ಸಂತ ಮೊದಲಾದವರು ಎಂದೂ ಕೂಡ ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆತು
ನಾನೊಬ್ಬ ತಂದೆಯನ್ನು ನೆನಪು ಮಾಡಿ ಆಗ ಮಾಯೆಯ ಪಾಪಕರ್ಮಗಳು ಭಸ್ಮವಾಗಿಬಿಡುತ್ತವೆ ಎಂದು
ಹೇಳುವುದಿಲ್ಲ. ಅವರಂತೂ ತಂದೆಯನ್ನೇ ಅರಿತುಕೊಂಡಿಲ್ಲ. ಗೀತೆಯಲ್ಲಿ ತಂದೆಯು ಹೇಳಿದ್ದಾರೆ - ನಾನೇ
ಬಂದು ಸಾಧು-ಸಂತ ಮೊದಲಾದವರ ಉದ್ಧಾರ ಮಾಡುತ್ತೇನೆ.
ತಂದೆಯು ತಿಳಿಸುತ್ತಾರೆ - ಪ್ರಾರಂಭದಿಂದ ಹಿಡಿದು ಇಲ್ಲಿಯವರೆಗೆ ಯಾರೆಲ್ಲಾ ಆತ್ಮಗಳು
ಪಾತ್ರವನ್ನಭಿನಯಿಸುತ್ತಾರೆಯೋ ಎಲ್ಲರದೂ ಇದು ಅಂತಿಮ ಜನ್ಮವಾಗಿದೆ. ಇವರದು ಇದು ಅಂತಿಮ ಜನ್ಮವಾಗಿದೆ,
ಇವರೇ ಮತ್ತೆ ಬ್ರಹ್ಮನಾಗಿದ್ದಾರೆ. ಬಾಲ್ಯದಲ್ಲಿ ಹಳ್ಳಿಯ ಬಾಲಕನಾಗಿದ್ದರು, ಮೊದಲಿನಿಂದ
ಕೊನೆಯವರೆಗೆ 84 ಜನ್ಮಗಳನ್ನು ಇವರೇ ಪೂರ್ಣ ಮಾಡಿದರು. ಈಗ ನೀವು ಮಕ್ಕಳ ಬುದ್ಧಿಯ ಬೀಗವು ತೆರೆದಿದೆ.
ಈಗ ನೀವು ಬುದ್ಧಿವಂತರಾಗುತ್ತೀರಿ, ಮೊದಲು ಬುದ್ಧಿಹೀನರಾಗಿದ್ದಿರಿ. ಈ ಲಕ್ಷ್ಮಿ-ನಾರಾಯಣರು
ಬುದ್ಧಿವಂತರಾಗಿದ್ದಾರೆ. ಪತಿತರಿಗೆ ಬುದ್ಧಿಹೀನರೆಂದು ಹೇಳಲಾಗುತ್ತದೆ ಅಂದಾಗ ಮುಖ್ಯವಾದುದು
ಪವಿತ್ರತೆಯಾಗಿದೆ. ಮಾಯೆಯು ನಮ್ಮನ್ನು ಬೀಳಿಸಿ ಬಿಟ್ಟಿತು, ಕುದೃಷ್ಟಿಯಾಯಿತೆಂದು ಬರೆಯುತ್ತಾರೆ.
ತಂದೆಯಂತೂ ಪದೇ-ಪದೇ ಸಾವಧಾನ ನೀಡುತ್ತಾರೆ - ಮಕ್ಕಳೇ ಎಂದೂ ಮಾಯೆಯಿಂದ ಸೋಲನ್ನನುಭವಿಸಬೇಡಿ. ಈಗ
ಮನೆಗೆ ಹೋಗಬೇಕಾಗಿದೆ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಈ ಹಳೆಯ
ಪ್ರಪಂಚವು ಈಗ ಸಮಾಪ್ತಿಯಾಯಿತೆಂದರೆ ಆಯಿತು. ನಾವು ಪಾವನರಾಗುತ್ತೇವೆಂದರೆ ನಮಗೆ ಪಾವನ ಪ್ರಪಂಚವು
ಬೇಕಲ್ಲವೆ. ನೀವು ಮಕ್ಕಳೇ ಪತಿತರಿಂದ ಪಾವನರಾಗಬೇಕಾಗಿದೆ. ತಂದೆಯಂತೂ ಯೋಗ ಮಾಡುವುದಿಲ್ಲ. ತಂದೆಯು
ನೆನಪು ಮಾಡಲು ಅವರೇನು ಪತಿತನಾಗುತ್ತಾರೆಯೇ! ತಂದೆಯಂತೂ ತಿಳಿಸುತ್ತಾರೆ - ನಾನು ನನ್ನ ಸೇವೆಯಲ್ಲಿ
ಉಪಸ್ಥಿತನಾಗುತ್ತೇನೆ. ಬಂದು ನಾವು ಪತಿತರನ್ನು ಪಾವನ ಮಾಡಿ ಎಂದು ನೀವೇ ಕರೆದಿರಿ, ನಿಮ್ಮ
ಮಾತಿನಂತೆ ನಾನು ಬಂದಿದ್ದೇನೆ, ನಿಮಗೆ ಬಹಳ ಸಹಜವಾದ ಮಾತನ್ನು ತಿಳಿಸುತ್ತೇನೆ - ಮನ್ಮನಾಭವ.
ಭಗವಾನುವಾಚವಲ್ಲವೆ. ಕೇವಲ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಎಲ್ಲರೂ ತಂದೆಯನ್ನು ಮರೆತಿದ್ದಾರೆ.
ತಂದೆಯು ಮೊದಲಿಗರು, ಕೃಷ್ಣನು ನಂತರದ ದೇವತೆಯಾಗಿದ್ದೇನೆ. ತಂದೆಯು ಪರಮಧಾಮದ ಮಾಲೀಕರು, ಕೃಷ್ಣನು
ವೈಕುಂಠದ ಮಾಲೀಕನಾಗಿದ್ದಾರೆ. ಸೂಕ್ಷ್ಮವತನದಲ್ಲಂತೂ ಏನೂ ಇರುವುದಿಲ್ಲ. ಎಲ್ಲರಲ್ಲಿ ಕೃಷ್ಣನು
ಮೊಟ್ಟ ಮೊದಲಿಗನಾಗಿದ್ದಾನೆ, ಕೃಷ್ಣನನ್ನು ಎಲ್ಲರೂ ಪ್ರೀತಿ ಮಾಡುತ್ತಾರೆ. ಉಳಿದವರಂತೂ
ಕೊನೆ-ಕೊನೆಯಲ್ಲಿ ಬರುತ್ತಾರೆ. ಸ್ವರ್ಗದಲ್ಲಿ ಎಲ್ಲರೂ ಹೋಗಲು ಸಾಧ್ಯವಿಲ್ಲ.
ಈಗ ನೀವು ಮಧುರಾತಿ ಮಧುರ ಮಕ್ಕಳಿಗೆ ಅಪಾರ ಖುಷಿಯಿರಬೇಕು. ಕೆಲವು ಮಕ್ಕಳು ತಂದೆಯ ಬಳಿಯಂತೂ
ಬರುತ್ತಾರೆ, ಅವರೆಂದೂ ಪವಿತ್ರರಾಗಿರುವುದಿಲ್ಲ. ವಿಕಾರದಲ್ಲಿ ಹೋಗುತ್ತೀರಿ ಮತ್ತೆ ತಂದೆಯ ಬಳಿ ಏಕೆ
ಬರುತ್ತೀರೆಂದು ತಂದೆಯು ತಿಳಿಸುತ್ತಾರೆ. ಅದಕ್ಕೆ ನಾನೇನು ಮಾಡುವುದು, ವಿಕಾರವಿಲ್ಲದೆ ನಾವು ಇರಲು
ಸಾಧ್ಯವಾಗುವುದಿಲ್ಲ ಆದರೂ ಬಹುಷಃ ಎಂದಾದರೂ ಬಾಣ ನಾಟಬಹುದೆಂದು ಇಲ್ಲಿ ಬರುತ್ತೇವೆ, ತಾವಿಲ್ಲದೆ
ನಮ್ಮ ಸದ್ಗತಿಯನ್ನು ಯಾರು ಮಾಡುವರು. ಆದ್ದರಿಂದ ಬಂದು ಕುಳಿತುಕೊಳ್ಳುತ್ತೇವೆ ಎಂದು ಹೇಳುತ್ತಾರೆ.
ಮಾಯೆಯು ಎಷ್ಟೊಂದು ಪ್ರಬಲವಾಗಿದೆ! ತಂದೆಯು ನಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆಂಬ
ನಿಶ್ಚಯವೂ ಇರುತ್ತದೆ. ಆದರೆ ಏನು ಮಾಡುವುದು, ಸತ್ಯವನ್ನು ಹೇಳುವುದರಿಂದ ಎಂದಾದರೂ ಅವಶ್ಯವಾಗಿ
ಸುಧಾರಣೆಯಾಗುತ್ತೇವೆ ಎಂದು ತಿಳಿಯುತ್ತಾರೆ. ಬಾಬಾ, ನಾವು ತಮ್ಮಿಂದಲೇ ಸುಧಾರಣೆಯಾಗುತ್ತೇವೆ ಎಂಬ
ನಿಶ್ಚಯವಿದೆ ಎಂದು ಹೇಳುತ್ತಾರೆ. ಇಂತಹ ಮಕ್ಕಳ ಮೇಲೆ ತಂದೆಗೆ ದಯೆ ಬರುತ್ತದೆ. ಕಲ್ಪದ ನಂತರವೂ ಇದೇ
ರೀತಿಯಾಗುವುದು, ಇದು ಹೊಸದೇನಲ್ಲ. ತಂದೆಯಂತೂ ಪ್ರತಿನಿತ್ಯವೂ ಶ್ರೀಮತವನ್ನು ಕೊಡುತ್ತಾರೆ,
ಕೆಲವರದನ್ನು ಪ್ರತ್ಯಕ್ಷದಲ್ಲಿಯೂ ತರುತ್ತಾರೆ. ಇದರಲ್ಲಿ ತಂದೆಯೇನು ಮಾಡಲು ಸಾಧ್ಯ? ಇದಕ್ಕೆ
ತಂದೆಯು ಹೇಳುತ್ತಾರೆ - ಬಹುಷಃ ಇವರ ಪಾತ್ರವೇ ಹೀಗಿದೆ, ಎಲ್ಲರೂ ರಾಜ-ರಾಣಿಯಾಗುವುದಿಲ್ಲ.
ರಾಜಧಾನಿಯು ಸ್ಥಾಪನೆಯಾಗುತ್ತಿದೆ, ರಾಜಧಾನಿಯಲ್ಲಿ ಎಲ್ಲರೂ ಬೇಕು ಆದರೂ ಸಹ ತಂದೆಯು ತಿಳಿಸುತ್ತಾರೆ
- ಮಕ್ಕಳೇ, ಧೈರ್ಯವನ್ನು ಬಿಡಬೇಡಿ, ನೀವು ಮುಂದೆ ಹೋಗಬಲ್ಲಿರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಜೊತೆ
ಸದಾ ಸತ್ಯವಾಗಿರಬೇಕು. ಈಗ ಯಾವುದೇ ತಪ್ಪಾದರೆ ತಂದೆಯಿಂದ ಮುಚ್ಚಿಡಬಾರದು. ಕಣ್ಣುಗಳೆಂದೂ
ಕುದೃಷ್ಟಿಯಾಗದಂತೆ ಸಂಭಾಲನೆ ಮಾಡಬೇಕಾಗಿದೆ.
2. ಸದಾ ಶುದ್ಧ ನಶೆಯಿರಲಿ - ಬೇಹದ್ದಿನ ತಂದೆಯು ನಮ್ಮನ್ನು ಪತಿತರಿಂದ ಪಾವನರು, ಮುಳ್ಳುಗಳಿಂದ
ಹೂಗಳನ್ನಾಗಿ ಮಾಡುತ್ತಿದ್ದಾರೆ. ಈಗ ನಮಗೆ ತಂದೆಯ ಕೈ ಸಿಕ್ಕಿದೆ, ಇದರ ಆಧಾರದಿಂದ ನಾವು ವಿಷಯ
ವೈತರಣೀ ನದಿಯಿಂದ ಪಾರಾಗಿ ಬಿಡುತ್ತೇವೆ.
ವರದಾನ:
ಬ್ರಾಹ್ಮಣ
ಜೀವನದಲ್ಲಿ ತಂದೆಯ ಮೂಲಕ ಲೈಟ್ ನ ಕಿರೀಟ ಪ್ರಾಪ್ತಿಮಾಡಿಕೊಳ್ಳುವಂತಹ ಮಹಾನ್ ಭಾಗ್ಯವಾನ್ ಆತ್ಮ ಭವ.
ಸಂಗಮಯುಗದ ಬ್ರಾಹ್ಮಣ
ಜೀವನದ ವಿಶೇಷತೆಯಾಗಿದೆ “ಪವಿತ್ರತೆ”. ಪವಿತ್ರತೆಯ ಗುರುತು - ಲೈಟ್ ನ ಕಿರೀಟವಾಗಿದೆ, ಯಾವುದು
ಎಲ್ಲಾ ಬ್ರಾಹಣ ಆತ್ಮರಿಗೆ ತಂದೆಯಿಂದ ಪ್ರಾಪ್ತಿಯಾಗಿರುವುದು. ಪವಿತ್ರತೆಯ ಲೈಟ್ ನ ಈ ಕಿರೀಟ ಆ
ರತ್ನ-ಜಡಿತ ಕಿರೀಟಕ್ಕಿಂತಲೂ ಅತೀ ಶ್ರೇಷ್ಠವಾಗಿದೆ. ಮಹಾನ್ ಆತ್ಮ, ಪರಮಾತ್ಮ ಭಾಗ್ಯವಾನ್ ಆತ್ಮ,
ಶ್ರೇಷ್ಠಾತಿ ಶ್ರೇಷ್ಠ ಆತ್ಮದ ಗುರುತು ಆಗಿದೆ ಈ ಕಿರೀಟ. ಬಾಪ್ದಾದಾ ಪ್ರತಿಯೊಂದು ಮಗುವಿಗೂ ಜನ್ಮ
ಪಡೆದೊಡನೆ “ಪವಿತ್ರ ಭವ”ದ ವರದಾನ ಕೊಡುತ್ತಾರೆ, ಅದರ ಸೂಚಕವಾಗಿ ಲೈಟ್ ನ ಕಿರೀಟವಾಗಿದೆ.
ಸ್ಲೋಗನ್:
ಬೇಹದ್ದಿನ ವೈರಾಗ್ಯ
ವೃತ್ತಿಯ ಮೂಲಕ ಇಚ್ಛೆಗಳಿಗೆ ವಶರಾಗಿ ಚಿಂತೆಯಿಂದಿರುವ ಆತ್ಮಗಳ ಚಿಂತೆಯನ್ನು ದೂರ ಮಾಡಿ.