09.03.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಗಳಿಗೆ-ಗಳಿಗೆಯೂ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ತಂದೆಯು ಆತ್ಮಿಕ ಸರ್ಜನ್ ಆಗಿದ್ದಾರೆ,
ಅವರು ನಿಮಗೆ ನಿರೋಗಿಯನ್ನಾಗಿ ಮಾಡಲು ಒಂದೇ ಔಷಧಿಯನ್ನು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು
ನೆನಪು ಮಾಡಿ.”
ಪ್ರಶ್ನೆ:
ತಮ್ಮೊಂದಿಗೆ
ತಾವು ಯಾವ ಮಾತುಗಳನ್ನು ಮಾತನಾಡಿಕೊಂಡಾಗ ಬಹಳ ಮಜಾ ಬರುವುದು?
ಉತ್ತರ:
ತಮ್ಮೊಂದಿಗೆ
ತಾವು ಮಾತನಾಡಿಕೊಳ್ಳಿ - ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೇವೆಯೋ ಇದೆಲ್ಲವೂ ಸಮಾಪ್ತಿಯಾಗಿ
ಬಿಡುವುದು. ನಾವು ಮತ್ತು ತಂದೆಯಷ್ಟೇ ಇರುತ್ತೇವೆ. ಮಧುರ ಬಾಬಾ ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ
ಮಾಡುತ್ತಾರೆ. ಈ ರೀತಿ ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಿ, ಏಕಾಂತದಲ್ಲಿ ಹೊರಟು ಹೋಗಿ ಆಗ ಮಜಾ
ಇರುತ್ತದೆ.
ಓಂ ಶಾಂತಿ.
ಪರಮಪಿತ ಶಿವ ಭಗವಾನುವಾಚ. ಮಧುರಾತಿ ಮಧುರ ಮಕ್ಕಳಿಗೆ ಪುರುಷೋತ್ತಮ ಸಂಗಮಯುಗವು ಹೆಜ್ಜೆ
ಹೆಜ್ಜೆಯಲ್ಲಿ ನೆನಪಿರಬೇಕು. ಇದೂ ಸಹ ನೀವು ಮಕ್ಕಳಿಗೇ ಗೊತ್ತಿದೆ ನಂಬರ್ವಾರ್ ಪುರುಷಾರ್ಥದನುಸಾರ.
ಬುದ್ಧಿಯಲ್ಲಿ ಈ ನೆನಪಿರಲಿ - ನಾವೀಗ ಪುರುಷೋತ್ತಮ ಸಂಗಮಯುಗದಲ್ಲಿ ಪುರುಷೋತ್ತಮರಾಗುತ್ತಿದ್ದೇವೆ.
ಈ ರಾವಣನ ಯಾವ ಪಂಜರವಿದೆಯೋ ಅದರಿಂದ ಬಿಡಿಸಲು ತಂದೆಯು ಬಂದಿದ್ದಾರೆ. ಹೇಗೆ ಯಾವುದೇ ಪಕ್ಷಿಯನ್ನು
ಪಂಜರದಿಂದ ಹೊರ ಬಿಟ್ಟಾಗ ಅದು ಬಹಳ ಖುಷಿಯಾಗಿ ಹಾರಿ ಸುಖದ ಅನುಭವ ಮಾಡುತ್ತದೆ. ಹಾಗೆಯೇ ತಾವು
ಮಕ್ಕಳಿಗೂ ತಿಳಿದಿದೆ - ಇದು ರಾವಣನ ಪಂಜರವಾಗಿದೆ. ಅನೇಕ ಪ್ರಕಾರದ ದುಃಖವೇ ದುಃಖವಿದೆ. ಈಗ ಈ
ಪಂಜರದಿಂದ ಹೊರ ತೆಗೆಯಲು ತಂದೆಯು ಬಂದಿದ್ದಾರೆ. ಈಗ ಅಲ್ಲಿರುವವರು ಮನುಷ್ಯರೇ ಆಗಿದ್ದಾರೆ,
ಶಾಸ್ತ್ರಗಳಲ್ಲಿ ದೇವತೆಗಳು ಮತ್ತು ಅಸುರರ ಯುದ್ಧವಾಯಿತು, ದೇವತೆಗಳು ಜಯ ಪಡೆದರೆಂದು ಬರೆದಿದ್ದಾರೆ,
ಆದರೆ ಯುದ್ಧದ ಮಾತೇನಿಲ್ಲ. ನೀವೀಗ ಅಸುರರಿಂದ ದೇವತೆಗಳಾಗುತ್ತಿದ್ದೀರಿ. ಅಸುರೀ ರಾವಣ ಅರ್ಥಾತ್
ಪಂಚ ವಿಕಾರಗಳ ಮೇಲೆ ನೀವು ಜಯಗಳಿಸುತ್ತೀರಿ ವಿನಃ ರಾವಣ ಸಂಪ್ರದಾಯದ ಮೇಲಲ್ಲ. ಪಂಚ ವಿಕಾರಗಳನ್ನು
ರಾವಣನೆಂದು ಹೇಳಲಾಗುತ್ತದೆ. ಉಳಿದಂತೆ ಯಾರನ್ನೂ ಸುಡುವ ಮಾತಿಲ್ಲ. ನೀವು ಮಕ್ಕಳು ಬಹಳ
ಖುಷಿಯಾಗುತ್ತೀರಿ - ನಾವೀಗ ಇಂತಹ ಪ್ರಪಂಚಕ್ಕೆ ಹೋಗುತ್ತಿದ್ದೇವೆ, ಅಲ್ಲಿ ತುಂಬಾ ಬಿಸಿಯೂ
ಇರುವುದಿಲ್ಲ, ಚಳಿಯೂ ಇರುವುದಿಲ್ಲ. ಸದಾ ವಸಂತ ಋತುವೇ ಇರುತ್ತದೆ. ಸತ್ಯಯುಗ ಸ್ವರ್ಗದ ವಸಂತ ಋತು
ಈಗ ಬರುತ್ತದೆ. ಈ ವಸಂತ ಋತುವಂತೂ ಸ್ವಲ್ಪ ಸಮಯಕ್ಕಾಗಿ ಬರುತ್ತದೆ. ಆದರೆ ಆ ವಸಂತ ಋತುವು
ಅರ್ಧಕಲ್ಪಕ್ಕಾಗಿ ಬರುತ್ತದೆ. ಅಲ್ಲಿ ಬಿಸಿಲು ಮೊದಲಾದವು ಇರುವುದೇ ಇಲ್ಲ. ಬಿಸಿಲಿನಿಂದಲೂ
ಮನುಷ್ಯರಿಗೆ ದುಃಖವಾಗುತ್ತದೆ ಮತ್ತು ಸತ್ತು ಹೋಗುತ್ತಾರೆ. ಇವೆಲ್ಲಾ ದುಃಖದ ಮಾತುಗಳಿಂದ ಬಿಡುಗಡೆ
ಮಾಡಲು ನಮಗೆ ಅವಿನಾಶಿ ಸರ್ಜನ್ ಬಹಳ ಸಹಜವಾದ ಔಷಧಿಯನ್ನು ನೀಡುತ್ತಾರೆ. ಹೇಗೆ ಆ ಸರ್ಜನ್ನ ಬಳಿ
ಹೋಗುತ್ತಾರೆಂದರೆ ಅನೇಕ ಪ್ರಕಾರದ ಔಷಧಿಗಳು ನೆನಪಿಗೆ ಬರುತ್ತದೆ. ಆದರೆ ಆ ಸರ್ಜನ್ನ ಬಳಿ ಯಾವುದೇ
ಔಷಧಿಯಿಲ್ಲ. ಕೇವಲ ಅವರನ್ನು ನೆನಪು ಮಾಡುವುದರಿಂದಲೇ ಎಲ್ಲಾ ರೋಗಗಳು ನಿವಾರಣೆಯಾಗುತ್ತವೆ
ಮತ್ತ್ಯಾವುದೇ ಔಷಧಿ ಮೊದಲಾದುದೇನೂ ಇಲ್ಲ. ಮಕ್ಕಳು ಹೇಳುತ್ತಿದ್ದರು - ಬಾಬಾ, ಇಂದು ಸೆಮಿನಾರ್
ಮಾಡುತ್ತೇವೆ ಅಂದಮೇಲೆ ಚಾರ್ಟನ್ನು ಹೇಗೆ ಬರೆಯುವುದು? ತಂದೆಯನ್ನು ಹೇಗೆ ನೆನಪು ಮಾಡಬೇಕು? ಇದರ
ಮೇಲೆ ಸೆಮಿನಾರ್ ಮಾಡುತ್ತೇವೆ. ಕುಳಿತು ಬರೆಯಿರಿ, ಕಾಗದಗಳನ್ನು ಹಾಳು ಮಾಡಿ ಎಂದು ತಂದೆಯಂತೂ
ತೊಂದರೆ ಕೊಡುವುದಿಲ್ಲ, ಅದರ ಅವಶ್ಯಕತೆಯೂ ಇಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕೇವಲ
ಬುದ್ಧಿಯಿಂದ ತಂದೆಯನ್ನು ನೆನಪು ಮಾಡಿ. ಅಜ್ಞಾನ ಕಾಲದಲ್ಲಿ ತಂದೆಯನ್ನು ನೆನಪು ಮಾಡಲು ಚಾರ್ಟ್
ಇಡುತ್ತಾರೆಯೇ! ಇದರಲ್ಲಿ ಬರವಣಿಗೆಯಿಂದಲೇ ಬರೆಯಬೇಕೆಂಬ ಅವಶ್ಯಕತೆಯಿಲ್ಲ. ಕೆಲವರು ಬಾಬಾ, ನಾವು
ತಮ್ಮನ್ನು ಮರೆತು ಹೋಗುತ್ತೇವೆ ಎಂದು ಹೇಳುತ್ತಾರೆ. ಇದನ್ನು ಯಾರಾದರೂ ಕೇಳಿದರೆ ಏನು ಹೇಳುತ್ತಾರೆ?
ನಾವು ಜೀವಿಸಿದ್ದಂತೆಯೇ ತಂದೆಯ ಮಕ್ಕಳಾಗಿದ್ದೇವೆ ಎಂಬುದನ್ನೂ ಹೇಳುತ್ತೀರಿ ಅಂದಾಗ ಏಕಾಗಿದ್ದೀರಿ?
ತಂದೆಯಿಂದ ವಿಶ್ವದ ರಾಜಧಾನಿಯ ಆಸ್ತಿಯನ್ನು ಪಡೆಯಲು, ಅಂದಮೇಲೆ ಮತ್ತೆ ಇಂತಹ ತಂದೆಯನ್ನೇ ನೀವು ಏಕೆ
ಮರೆಯುತ್ತೀರಿ? ಇಂತಹ ತಂದೆ ಯಾರಿಂದ ಇಷ್ಟು ದೊಡ್ಡ ಆಸ್ತಿಯು ಸಿಗುತ್ತದೆ ಅವರನ್ನೇ ನೀವು ನೆನಪು
ಮಾಡುವುದಿಲ್ಲವೇ! ಇಷ್ಟೊಂದು ಬಾರಿ ನೀವು ಆಸ್ತಿಯನ್ನು ಪಡೆದಿದ್ದೀರಿ ಆದರೂ ಮರೆತು ಹೋಗುತ್ತೀರಿ.
ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕೆಂದರೆ ನೆನಪೂ ಮಾಡಬೇಕು, ದೈವೀ ಗುಣಗಳನ್ನೂ ಧಾರಣೆ
ಮಾಡಬೇಕಾಗಿದೆ. ಬರೆಯುವುದೇನಿದೆ? ಇದಂತೂ ಪ್ರತಿಯೊಬ್ಬರೂ ತಮ್ಮನ್ನು ತಾವು ಕೇಳಿಕೊಳ್ಳಬೇಕಾಗಿದೆ.
ನಾರದನ ಉದಾಹರಣೆಯೂ ಇದೆ - ನಾರದನು ದೊಡ್ಡ ಭಕ್ತನಾಗಿದ್ದನು ಎಂಬುದನ್ನೂ ಹೇಳುತ್ತೀರಿ ಮತ್ತು ನಿಮಗೆ
ಗೊತ್ತಿದೆ, ಜನ್ಮ-ಜನ್ಮಾಂತರದ ಹಳೆಯ ಭಕ್ತರೂ ನಾವೇ ಆಗಿದ್ದೇವೆ. ನಾವು ಮಧುರ ತಂದೆಯನ್ನು ನೆನಪು
ಮಾಡಿದಾಗ ಎಷ್ಟೊಂದು ಖುಷಿಯಾಗುತ್ತದೆ. ಯಾರೆಷ್ಟು ನೆನಪು ಮಾಡುತ್ತಾರೋ ಅವರೇ
ಲಕ್ಷ್ಮೀ-ನಾರಾಯಣರನ್ನು ವರಿಸಲು ಯೋಗ್ಯರಾಗುತ್ತಾರೆ. ಯಾರಾದರೂ ಬಡವರ ಮಕ್ಕಳು ಹೋಗಿ ಸಾಹುಕಾರರ
ಮಡಿಲನ್ನು ಪಡೆಯುತ್ತಾರೆಂದರೆ ಅವರಿಗೆ ಎಷ್ಟೊಂದು ಖುಷಿಯಾಗುತ್ತದೆ. ತಂದೆ ಮತ್ತು ಸಂಪತ್ತನ್ನೇ
ನೆನಪು ಮಾಡುತ್ತಾರೆ. ಇಲ್ಲಂತೂ ಅನೇಕರಿಗೆ ಬೇಹದ್ದಿನ ತಂದೆಯ ಮಗುವಾಗಿ ರಾಜ್ಯಭಾಗ್ಯವನ್ನು
ಪಡೆದುಕೊಳ್ಳುವಷ್ಟೂ ಬುದ್ಧಿಯಿಲ್ಲ. ಇದು ಆಶ್ಚರ್ಯದ ಮಾತಾಗಿದೆ. ಯಾವ ತಂದೆಯು ಸ್ವರ್ಗದ
ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನೇ ನೆನಪು ಮಾಡುವುದಿಲ್ಲ. ತಂದೆಯು ಮಕ್ಕಳನ್ನು ದತ್ತು
ಮಾಡಿಕೊಳ್ಳುತ್ತಾರೆ ಆದರೆ ಇಂತಹ ತಂದೆಯನ್ನೇ ನೆನಪು ಮಾಡದಿರುವುದು ಆಶ್ಚರ್ಯದ ಮಾತಾಗಿದೆ.
ಗಳಿಗೆ-ಗಳಿಗೆಯೂ ತಂದೆ ಮತ್ತು ಆಸ್ತಿಯ ನೆನಪು ಬರಬೇಕು. ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ
ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳೇ, ದತ್ತು ಮಾಡಿಕೊಳ್ಳುವುದಕ್ಕಾಗಿ ನೀವು ತಂದೆಯನ್ನು ಕರೆದಿರಿ
ತಂದೆಯನ್ನು ಕರೆಯಲಾಗುತ್ತದೆಯಲ್ಲವೆ, ಏಕೆಂದರೆ ತಂದೆಯೇ ಸ್ವರ್ಗದ ಸ್ಥಾಪನೆ ಮಾಡುತ್ತಾರೆ,
ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ಬಾಬಾ, ನಾವು ಪತಿತರನ್ನು ಬಂದು ಮಡಿಲಿಗೆ ತೆಗೆದುಕೊಳ್ಳಿ.
ನಾವಂತೂ ಪತಿತ, ಕಂಗಾಲ, ಒಂದು ಪೈಸೆಗೂ ಬೆಲೆಯಿಲ್ಲದವರಾಗಿದ್ದೇವೆಂದು ತಾವೇ ಕರೆಯುತ್ತೀರಿ. ಭಕ್ತಿ
ಮಾರ್ಗದಲ್ಲಿ ನೀವು ಬೇಹದ್ದಿನ ತಂದೆಯನ್ನು ಕೂಗುತ್ತಾ ಇರುತ್ತೀರಿ. ಈಗ ತಂದೆಯು ತಿಳಿಸುತ್ತಾರೆ -
ಭಕ್ತಿ ಮಾರ್ಗದಲ್ಲಿಯೂ ಸಹ ನಿಮಗೆ ಇಷ್ಟೊಂದು ದುಃಖವಿರಲಿಲ್ಲ. ಆದರೆ ಈಗ ಮನುಷ್ಯರಿಗೆ ಎಷ್ಟೊಂದು
ದುಃಖವಿದೆ. ತಂದೆಯು ಬಂದಿದ್ದಾರೆ ಅಂದಮೇಲೆ ಅವಶ್ಯವಾಗಿ ವಿನಾಶದ ಸಮಯವೂ ಬಂದಿದೆ, ಈ ಯುದ್ಧದ ನಂತರ
ಎಷ್ಟು ಜನ್ಮ, ಎಷ್ಟು ವರ್ಷಗಳ ಕಾಲ ಯುದ್ಧದ ಹೆಸರು ಇರುವುದೇ ಇಲ್ಲ, ಯುದ್ಧವಾಗುವುದೇ ಇಲ್ಲ.
ಯಾವುದೇ ದುಃಖ-ರೋಗಗಳ ಹೆಸರೂ ಇರುವುದಿಲ್ಲ. ಈಗಂತೂ ಎಷ್ಟೊಂದು ಕಾಯಿಲೆಗಳಿವೆ. ಮಧುರ ಮಕ್ಕಳೇ, ನಾನು
ನಿಮ್ಮನ್ನು ಎಲ್ಲಾ ದುಃಖಗಳಿಂದ ಬಿಡಿಸುತ್ತೇನೆ. ಹೇ ಭಗವಂತ, ಬಂದು ದುಃಖವನ್ನು ಹರಣ ಮಾಡು,
ಸುಖ-ಶಾಂತಿ ಕೊಡು ಎಂದೇ ನೀವು ನೆನಪು ಮಾಡುತ್ತೀರಿ. ಈ ಎರಡು ವಸ್ತುಗಳನ್ನು ಪ್ರತಿಯೊಬ್ಬರೂ
ಬೇಡುತ್ತಾರೆ. ಇಲ್ಲಿ ಅಶಾಂತಿಯಿದೆ, ಶಾಂತಿಗಾಗಿ ಯಾರು ಸಲಹೆ ನೀಡುತ್ತಾರೆಯೋ ಅಂತಹವರಿಗೆ ಬಹುಮಾನ
ಸಿಗುತ್ತಿರುತ್ತದೆ. ಆದರೆ ಯಾವುದಕ್ಕೆ ಸತ್ಯ ಶಾಂತಿ ಎಂದು ಹೇಳಲಾಗುತ್ತದೆ ಎಂಬುದು ಪಾಪ ಅವರಿಗೆ
ಗೊತ್ತೇ ಇಲ್ಲ. ಸಂಪೂರ್ಣ ಶಾಂತಿಯು ಮಧುರ ತಂದೆಯ ವಿನಃ ಮತ್ತ್ಯಾರಿಂದಲೂ ಸಿಗುವುದಿಲ್ಲ. ಇದನ್ನು
ತಿಳಿಸಲು ನೀವು ಎಷ್ಟೊಂದು ಶ್ರಮ ಪಡುತ್ತೀರಿ ಆದರೂ ತಿಳಿದುಕೊಳ್ಳುವುದೇ ಇಲ್ಲ. ನೀವು ಸರ್ಕಾರಕ್ಕೂ
ಸಹ ಇದನ್ನು ತಿಳಿಸಬಹುದು - ನೀವು ಹಣವನ್ನು ವ್ಯರ್ಥವಾಗಿ ಏಕೆ ಖರ್ಚು ಮಾಡುತ್ತೀರಿ? ಶಾಂತಿಯ ಸಾಗರ
ಒಬ್ಬರೇ ತಂದೆಯಾಗಿದ್ದಾರೆ, ಅವರೇ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುತ್ತಾರೆ. ಸರ್ಕಾರದ
ಮುಖ್ಯಸ್ಥರಿಗೆ ಒಳ್ಳೊಳ್ಳೆಯ ಕಾಗದದಲ್ಲಿ ಬಹಳ ಘನತೆಯಿಂದ ಪತ್ರವನ್ನು ಬರೆಯಬೇಕು. ಅದರಿಂದ ಅವರು
ಒಳ್ಳೆಯ ಕಾಗದವನ್ನು ನೋಡಿ ಬಹುಷಃ ಇದು ಯಾರದೋ ಹಿರಿಯ ವ್ಯಕ್ತಿಗಳ ಪತ್ರವಾಗಿದೆ ಎಂದು
ತಿಳಿಯುತ್ತಾರೆ. ತಿಳಿಸಿ, ವಿಶ್ವದಲ್ಲಿ ಶಾಂತಿ ಎಂದು ಯಾವುದನ್ನು ನೀವು ಹೇಳುತ್ತೀರಿ ಅದು ಮತ್ತೆ
ಸಿಗಲು ಮೊದಲು ಎಂದಾದರೂ ಇತ್ತೇ? ಅವಶ್ಯವಾಗಿ ಎಂದಾದರೂ ಸಿಕ್ಕಿರಬೇಕು. ಇದು ನಿಮಗೆ ಗೊತ್ತಿದೆ,
ಆದ್ದರಿಂದ ನೀವು ತಿಥಿ, ತಾರೀಖನ್ನು ಬರೆಯಿರಿ. ತಂದೆಯೇ ಬಂದು ವಿಶ್ವದಲ್ಲಿ ಸುಖ-ಶಾಂತಿ ಸ್ಥಾಪನೆ
ಮಾಡಿದ್ದರು, ಅದು ಸತ್ಯಯುಗದ ಸಮಯವಾಗಿತ್ತು. ಈ ಲಕ್ಷ್ಮೀ-ನಾರಾಯಣರು ದೈವೀ ರಾಜಧಾನಿಗೆ
ಗುರುತಾಗಿದ್ದಾರೆ. ಬ್ರಹ್ಮಾ ಮತ್ತು ನೀವು ಬ್ರಾಹ್ಮಣರ ಪಾತ್ರವು ಯಾರಿಗೂ ಗೊತ್ತಿಲ್ಲ. ಮುಖ್ಯ
ಪಾತ್ರವು ಬ್ರಹ್ಮಾರವರದಾಗಿದೆಯಲ್ಲವೆ. ಅವರೇ ರಥವಾಗುತ್ತಾರೆ. ಅವರ ಮೂಲಕವೇ ತಂದೆಯು ಇಷ್ಟೊಂದು
ಕಾರ್ಯವನ್ನು ಮಾಡುತ್ತಾರೆ. ಹೆಸರೇ ಆಗಿದೆ - ಪದಮಾಪದಮ ಭಾಗ್ಯಶಾಲಿ ರಥ ಅಂದಮೇಲೆ ಯಾರಿಗೆ ಹೇಗೆ
ತಿಳಿಸಬೇಕೆಂದು ವಿಚಾರ ಮಾಡಿ. ಮನುಷ್ಯರಿಗೆ ಎಷ್ಟೊಂದು ನಶೆಯಿದೆ ಅವರಿಗೆ ನೀವು ತಂದೆಯ ಪರಿಚಯವನ್ನೇ
ಕೊಡಬೇಕು. ಜ್ಞಾನವಂತೂ ಕೇವಲ ಜ್ಞಾನ ಸಾಗರ ತಂದೆಯ ಬಳಿಯಷ್ಟೇ ಇದೆ. ಅವರು ಯಾವಾಗ ಬರುವರೋ ಆಗಲೇ
ಬಂದು ಜ್ಞಾನವನ್ನು ಕೊಡುತ್ತಾರೆ ಅಲ್ಲಿಯವರೆಗೆ ಈ ಜ್ಞಾನವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ.
ಭಕ್ತಿಯನ್ನಂತೂ ಎಲ್ಲರೂ ಮಾಡುತ್ತಾರೆ. ಆದರೆ ಜ್ಞಾನವನ್ನು ಒಬ್ಬ ತಂದೆಯೇ ಕೊಡುತ್ತಾರೆ. ಜ್ಞಾನದ
ಶಾಶ್ವತವಾದ ಪುಸ್ತಕ ರಚನೆಯಾಗುವುದಿಲ್ಲ. ಜ್ಞಾನವನ್ನು ಕಿವಿಯಿಂದ ಕೇಳಲಾಗುತ್ತದೆ. ಈ ಯಾವ ಪುಸ್ತಕ
ಮೊದಲಾದವುಗಳನ್ನು ನೀವು ಇಡುತ್ತೀರೋ ಇವೆಲ್ಲವೂ ತತ್ಕಾಲಕ್ಕಾಗಿ ಇದೆ. ಇವೆಲ್ಲವೂ
ಸಮಾಪ್ತಿಯಾಗುತ್ತವೆ. ನಿಮ್ಮ ನೋಟ್ಸ್ ಮೊದಲಾದವುಗಳು ಸಮಾಪ್ತಿಯಾಗುತ್ತದೆ. ಇವು ಕೇವಲ ತಮ್ಮ
ಪುರುಷಾರ್ಥಕ್ಕಾಗಿಯೇ ಇದೆ. ತಂದೆಯು ತಿಳಿಸುತ್ತಾರೆ - ಭಾಷಣದ ಲಿಸ್ಟನ್ನು ರಚಿಸಿ, ಆಗ ನೆನಪಿಗೆ
ಬರುತ್ತದೆ. ಆದರೆ ನಿಮಗೆ ಗೊತ್ತಿದೆ, ಈ ಪುಸ್ತಕ ಮೊದಲಾದವುಗಳೇನೂ ಉಳಿಯುವುದಿಲ್ಲ. ನಿಮ್ಮ
ಬುದ್ಧಿಯಲ್ಲಿ ಕೇವಲ ನೆನಪಷ್ಟೇ ಉಳಿಯುತ್ತದೆ. ಆತ್ಮವು ತಂದೆಯ ತರಹ ಸಂಪೂರ್ಣವಾಗಿ ಬಿಡುತ್ತದೆ.
ಉಳಿದಂತೆ ಯಾವುದೆಲ್ಲಾ ಹಳೆಯ ವಸ್ತುಗಳನ್ನು ಈ ಕಣ್ಣುಗಳಿಂದ ನೋಡುತ್ತೀರೋ ಇವೆಲ್ಲವೂ ಸಮಾಪ್ತಿಯಾಗಿ
ಬಿಡುತ್ತದೆ ಅಂತಿಮದಲ್ಲಿ ಏನೂ ಉಳಿಯುವುದಿಲ್ಲ. ತಂದೆಯು ಅವಿನಾಶಿ ಸರ್ಜನ್ ಆಗಿದ್ದಾರೆ, ಆತ್ಮವೂ
ಅವಿನಾಶಿಯಾಗಿದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ದಿನ-ಪ್ರತಿದಿನ
ಯಾವ ಶರೀರಗಳು ಸಿಗುತ್ತವೆಯೋ ಅವು ಪತಿತವಾದದ್ದೇ ಸಿಗುತ್ತದೆ. ಈಗ ನೀವು ಮಕ್ಕಳು ನಾವು
ಶ್ರೇಷ್ಠಾಚಾರಿಗಳಾಗುತ್ತಿದ್ದೇವೆಂದು ತಿಳಿದುಕೊಂಡಿದ್ದೀರಿ. ತಂದೆಯೇ ಶ್ರೇಷ್ಠಾಚಾರಿಗಳನ್ನಾಗಿ
ಮಾಡುತ್ತಾರೆ, ಸಾಧು-ಸಂತ ಮೊದಲಾದವರು ಮಾಡಲು ಸಾಧ್ಯವೇ! ತಂದೆಯು ನಿಮ್ಮನ್ನು
ಶ್ರೇಷ್ಠಾಚಾರಿಗಳನ್ನಾಗಿ ಮಾಡುತ್ತಾರೆ ಮತ್ತು ತಿಳಿಸುತ್ತಾರೆ - ಮಧುರ ಮಕ್ಕಳೇ, ನಾನು ನಿಮ್ಮನ್ನು
ನಯನಗಳಲ್ಲಿ ಕುಳ್ಳರಿಸಿಕೊಂಡು ಕರೆದುಕೊಂಡು ಹೋಗುತ್ತೇನೆ. ಆತ್ಮವೂ ಇಲ್ಲಿ ನಯನಗಳ ಮೇಲೆ
ಕುಳಿತುಕೊಳ್ಳುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಹೇ ಆತ್ಮಗಳೇ, ನಿಮ್ಮೆಲ್ಲರನ್ನೂ
ಸಂಪನ್ನರನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತೇನೆ. ಇನ್ನು ಸ್ವಲ್ಪ ಸಮಯ ಮಾತ್ರವಿದೆ, ಈಗ ಪರಿಶ್ರಮ
ಪಡಿ. ತಮ್ಮನ್ನು ಕೇಳಿಕೊಳ್ಳಿ - ನಾನು ಹೋಗುತ್ತೇನೆ. ಇನ್ನು ಸ್ವಲ್ಪ ಸಮಯ ಮಾತ್ರವಿದೆ, ಈಗ
ಪರಿಶ್ರಮ ಪಡಿ. ತಮ್ಮನ್ನು ಕೇಳಿಕೊಳ್ಳಿ - ನಾನು ಮಧುರ ತಂದೆಯನ್ನು ಎಷ್ಟು ನೆನಪು ಮಾಡುತ್ತೇನೆ?
ಹೀರಾ ಮತ್ತು ರಾಂಜಾಳಿಗೆ ವಿಕಾರಕ್ಕಾಗಿ ಪ್ರೀತಿಯಿರಲಿಲ್ಲ, ಶಾರೀರಿಕ ಪ್ರೀತಿಯಿತ್ತು. ಒಬ್ಬರು
ಇನ್ನೊಬ್ಬರನ್ನು ನೆನಪು ಮಾಡುತ್ತಿದ್ದರು ಮತ್ತು ಸನ್ಮುಖದಲ್ಲಿ ಬಂದು ಬಿಡುತ್ತಿದ್ದರು. ಇಬ್ಬರೂ
ಪರಸ್ಪರ ಸೇರುತ್ತಿದ್ದರು. ನಿಮಗೂ ಸಹ ತಂದೆಯ ಪ್ರತಿ ಇಷ್ಟು ಪ್ರೀತಿಯಿರಬೇಕು. ಅವರು ಕೇವಲ ಒಂದು
ಜನ್ಮದ ಪ್ರಿಯತಮ- ಪ್ರಿಯತಮೆಯಾಗಿದ್ದಾರೆ. ನೀವು ಜನ್ಮ-ಜನ್ಮಾಂತರದ ಪ್ರೇಮಿಕೆಯರಾಗಿದ್ದೀರಿ. ಈ
ಮಾತುಗಳು ಈ ಸಮಯದಲ್ಲಿಯೇ ಇರುತ್ತವೆ. ಪ್ರಿಯತಮ-ಪ್ರಿಯತಮೆಯ ಶಬ್ಧವೂ ಸಹ ಸ್ವರ್ಗದಲ್ಲಿರುವುದಿಲ್ಲ.
ಅವರು ಪವಿತ್ರರಾಗಿರುತ್ತಾರೆ. ಮನಸ್ಸಿನಲ್ಲಿ ವಿಚಾರ ಬರುತ್ತದೆ. ಸಮ್ಮುಖದಲ್ಲಿ ನೋಡುತ್ತಾರೆ ಮತ್ತು
ಖುಷಿ ಪಡುತ್ತಾರೆ. ನೀವು ಮಕ್ಕಳಂತೂ ನೋಡುವ ಅವಶ್ಯಕತೆಯೇ ಇಲ್ಲ. ಕೇವಲ ಈ ಸಮಯದಲ್ಲಿ ತಮ್ಮನ್ನು
ಆತ್ಮನೆಂದು ತಿಳಿದು ಪ್ರಿಯತಮನಾದ ತಂದೆಯನ್ನು ನೆನಪು ಮಾಡಿ, ಆತ್ಮವೆಂದು ತಿಳಿದು ತಂದೆಯನ್ನು ಬಹಳ
ಪ್ರೀತಿಯಿಂದ ನೆನಪು ಮಾಡಬೇಕು. ತಂದೆಯು ತಿಳಿಸುತ್ತಿರುತ್ತಾರೆ - ಮಕ್ಕಳೇ, ಭಕ್ತಿ ಮಾರ್ಗದಲ್ಲಿ
ನೀವು ಇಂತಹ ಪ್ರೇಮಿಕೆಯರಾಗಿದ್ದಿರಿ, ಪ್ರಿಯತಮನ ಮೇಲೆ ಬಲಿಹಾರಿಯಾಗಿ ಬಿಡುತ್ತಿದ್ದಿರಿ. ಹೇ
ಪ್ರಿಯತಮನೆ, ತಾವು ಬಂದರೆ ನಾವು ನಿಮ್ಮ ಮೇಲೆ ಬಲಿಹಾರಿಯಾಗಿ ಬಿಡುತ್ತೇವೆ ಎಂದು. ತಾವು
ಹೇಳುತ್ತಿದ್ದಿರಿ ಅಂದಮೇಲೆ ಈಗ ಎಲ್ಲರನ್ನೂ ಪಾವನರನ್ನಾಗಿ ಮಾಡಲು ಪ್ರಿಯತಮ ತಂದೆಯು ಬಂದಿದ್ದಾರೆ.
ಹಿಂದೆ ಯಾರು ಹೇಗಿದ್ದರೋ ಹಾಗೆಯೇ ಮಾಡುವ ಪ್ರಯತ್ನ ಪಡುತ್ತಾರೆ. ನೀವು ಪಾವನರಾಗುತ್ತೀರೆಂದರೆ
ಶರೀರವೂ ಪಾವನವಾಗುತ್ತದೆ. ಆತ್ಮದಲ್ಲಿಯೇ ತುಕ್ಕು ಬೀಳುತ್ತದೆ. ಈಗ ನನ್ನನ್ನು ನೆನಪು ಮಾಡಿದರೆ
ತುಕ್ಕು ಹೊರಟು ಹೋಗುತ್ತದೆ. ನೀವು ಮಕ್ಕಳೂ ಇಲ್ಲಿಗೆ ಬರುತ್ತೀರಿ, ಏಕಾಂತವು ಬಹಳ ಚೆನ್ನಾಗಿದೆ,
ಪಾದ್ರಿಗಳೂ ಸಹ ಪಾದಯಾತ್ರೆ ಮಾಡುತ್ತಾರೆ, ಸಂಪೂರ್ಣ ಶಾಂತಿಯಲ್ಲಿರುತ್ತಾರೆ, ಕೈಯಲ್ಲಿ
ಮಾಲೆಯಿರುತ್ತದೆ, ಅವರು ಯಾರನ್ನೂ ನೋಡುವುದೇ ಇಲ್ಲ. ನಿಧಾನ-ನಿಧಾನವಾಗಿ ನಡೆಯುತ್ತಾ ಹೋಗುತ್ತಾರೆ.
ಅವರು ಕ್ರೈಸ್ಟ್ ನನ್ನು ನೆನಪು ಮಾಡುತ್ತಾ ಇರುತ್ತಾರೆ. ಏಕೆಂದರೆ ಅವರು ತಂದೆಯನ್ನು ತಿಳಿದುಕೊಂಡೇ
ಇಲ್ಲ. ತಂದೆಯು ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಹೇಳಿ ಬಿಡುತ್ತಾರೆ. ಈಗ ಬಿಂದುವನ್ನು
ನೋಡಿದರೂ ಸಹ ಹೇಗೆ ನೆನಪು ಮಾಡುವುದು ಎಂಬುದು ಯಾರಿಗೂ ಗೊತ್ತಿಲ್ಲ. ನಿಮಗೀಗ ಗೊತ್ತಾಗಿದೆ
ಆದ್ದರಿಂದ ಇಲ್ಲಿ ಬರುತ್ತೀರಿ. ಮಧುಬನದ ಗಾಯನವಿದೆ, ಇದು ಸತ್ಯ-ಸತ್ಯ ಮಧುಬನವಾಗಿದೆ. ಇಲ್ಲಿಗೆ
ನೀವು ಬರುತ್ತೀರಿ. ಎಷ್ಟು ಸಾಧ್ಯವೋ ಅಷ್ಟು ಏಕಾಂತದಲ್ಲಿ ನೆನಪಿನಲ್ಲಿರಿ ಯಾರನ್ನೂ ನೋಡಬಾರದು.
ಮಾಳಿಗೆಯ ಮೇಲೆ ಸ್ಥಳವಿದೆ, ಬೆಳಗ್ಗೆ ತಂದೆಯ ನೆನಪಿನಲ್ಲಿ ಮಾಳಿಗೆಯ ಮೇಲೆ ಹೊರಟು ಹೋಗಿ ಬಹಳ ಮಜಾ
ಬರುತ್ತದೆ. ರಾತ್ರಿಯಲ್ಲಿ 2 ಗಂಟೆಗೆ ಏಳುವ ಪ್ರಯತ್ನ ಪಡಿ. ನೀವು ನಿದ್ರೆಯನ್ನು ಗೆಲ್ಲುವವರು
ಪ್ರಸಿದ್ಧರಾಗಿದ್ದೀರಿ. ರಾತ್ರಿಯಲ್ಲಿ ಬೇಗನೆ ಮಲಗಿ, 1-2 ಗಂಟೆಗೆ ಎದ್ದು ಮಾಳಿಗೆಯ ಮೇಲೆ
ಏಕಾಂತದಲ್ಲಿ ನೆನಪಿನ ಯಾತ್ರೆ ಮಾಡುತ್ತಾ ಇರಿ. ಏಕೆಂದರೆ ಬಹಳ ಜಮಾ ಮಾಡಿಕೊಳ್ಳಬೇಕಾಗಿದೆ.
ತಂದೆಯನ್ನು ನೆನಪು ಮಾಡುತ್ತಾ ತಂದೆಯ ಮಹಿಮೆ ಮಾಡುವುದರಲ್ಲಿ ತೊಡಗಬೇಕು. ಪರಸ್ಪರದಲ್ಲಿಯೂ ಸಹ ಇದೇ
ಸಲಹೆಯನ್ನು ಕೊಡುತ್ತಾ ಇರಬೇಕು. ತಂದೆಯು ಎಷ್ಟು ಮಧುರರಾಗಿದ್ದಾರೆಯೋ ಅವರನ್ನು ನೆನಪು
ಮಾಡುವುದರಿಂದಲೂ ಪಾಪಗಳು ಪರಿಹಾರವಾಗುತ್ತದೆ. ಇಲ್ಲಿ ನೀವು ಬಹಳಷ್ಟು ಸಂಪಾದನೆ ಮಾಡಿಕೊಳ್ಳಬಹುದು.
ಈ ಅವಕಾಶವೂ ಸಹ ಇಲ್ಲಿಯೇ ಚೆನ್ನಾಗಿ ಸಿಗುತ್ತದೆ. ಮನೆಯಲ್ಲಂತೂ ನೀವು ಹೀಗೆ ಮಾಡಲು ಆಗುವುದಿಲ್ಲ,
ಬಿಡುವೆಲ್ಲಿರುತ್ತದೆ? ಪ್ರಪಂಚದ ವಾತಾವರಣವು ಬಹಳ ಕೆಟ್ಟದ್ದಾಗಿರುತ್ತದೆ. ಆದ್ದರಿಂದ ಅಲ್ಲಿ
ಇಷ್ಟೊಂದು ನೆನಪಿನ ಯಾತ್ರೆ ಮಾಡಲು ಸಾಧ್ಯವಿಲ್ಲ ಅಂದಾಗ ಇದರಲ್ಲಿ ಬರೆಯುವ ಮಾತೇನಿದೆ?
ಪ್ರಿಯತಮ-ಪ್ರಿಯತಮೆಯರು ಚಾರ್ಟನ್ನು ಬರೆಯುತ್ತಾರೆಯೇ! ಆಂತರ್ಯದಲ್ಲಿ ನೋಡಿಕೊಳ್ಳಿ - ನಾನು ಯಾರಿಗೂ
ದುಃಖವನ್ನು ಕೊಡುವುದಿಲ್ಲವೆ? ಎಷ್ಟು ಜನರಿಗೆ ತಂದೆಯ ನೆನಪು ತರಿಸಿದೆನು? ನೀವು ಜಮಾ
ಮಾಡಿಕೊಳ್ಳುವುದಕ್ಕಾಗಿಯೇ ಇಲ್ಲಿಗೆ ಬರುತ್ತೇವೆಂದರೆ ಇಲ್ಲಿ ಹೆಚ್ಚಿನದಾಗಿ ಜಮಾ ಮಾಡಿಕೊಳ್ಳುವ
ಪ್ರಯತ್ನ ಪಡಿ. ಮಾಳಿಗೆಯ ಮೇಲೆ ಏಕಾಂತದಲ್ಲಿ ಹೋಗಿ ಕುಳಿತುಕೊಳ್ಳಿ, ಖಜಾನೆಯನ್ನು ಜಮಾ ಮಾಡಿಕೊಳ್ಳಿ,
ಇದು ಜಮಾ ಮಾಡಿಕೊಳ್ಳುವ ಸಮಯವಾಗಿದೆ. 7 ದಿನ, 5 ದಿನಗಳಿಗಾಗಿ ಬರುತ್ತೀರಿ ಅಂದಾಗ ಮುರುಳಿಯನ್ನು
ಕೇಳಿ, ಹೋಗಿ ಏಕಾಂತದಲ್ಲಿ ಕುಳಿತುಕೊಳ್ಳಿ. ಇಲ್ಲಂತೂ ತಂದೆಯ ಮನೆಯಲ್ಲಿರುತ್ತೀರಿ. ತಂದೆಯನ್ನು
ನೆನಪು ಮಾಡಿ ಅದರಿಂದ ನಿಮ್ಮ ಖಾತೆಯು ಜಮಾ ಆಗಲಿ. ಅನೇಕ ಮಾತೆಯರು ಬಂಧನದಲ್ಲಿದ್ದಾರೆ. ತಂದೆಯೇ
ಬಂಧನದಿಂದ ಬಿಡಿಸಿ ಎಂದು ನೆನಪು ಮಾಡುತ್ತಾರೆ. ವಿಕಾರಕ್ಕಾಗಿ ಎಷ್ಟೊಂದು ಹೊಡೆಯುತ್ತಾರೆ,
ದ್ರೌಪದಿಯ ವಸ್ತ್ರಾಪಹರಣದ ಆಟವನ್ನೂ ತೋರಿಸಿದ್ದಾರಲ್ಲವೆ. ವಾಸ್ತವದಲ್ಲಿ ನೀವೆಲ್ಲರೂ
ದ್ರೌಪದಿಯರಾಗಿದ್ದೀರಿ ಅಂದಮೇಲೆ ತಂದೆಯನ್ನು ನೆನಪು ಮಾಡಬೇಕು. ತಂದೆಯು ಬಹಳ ಯುಕ್ತಿಗಳನ್ನು
ತಿಳಿಸುತ್ತಾರೆ, ಮನುಷ್ಯರಂತೂ ಸ್ನಾನದ ಸಮಯದಲ್ಲಿಯೂ ಸಹ ಯಾವುದೇ ದೇವತೆ ಅಥವಾ ಭಗವಂತನನ್ನು ನೆನಪು
ಮಾಡುತ್ತಾರೆ. ಮುಖ್ಯ ಮಾತು ನೆನಪಿನದಾಗಿದೆ. ಜ್ಞಾನವು ಬಹಳ ಸಿಕ್ಕಿದೆ, 84 ಜನ್ಮಗಳ ಚಕ್ರದ
ಜ್ಞಾನವಿದೆ. ಕುಳಿತು ತಮ್ಮಲ್ಲಿ ನೋಡಿಕೊಳ್ಳಿ, ತಮ್ಮೊಂದಿಗೆ ಕೇಳಿಕೊಳ್ಳಿ - ಇಂತಹ ಮಧುರಾತಿ ಮಧುರ
ತಂದೆ ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಅಂತಹ ತಂದೆಯನ್ನು ಇಡೀ ದಿನದಲ್ಲಿ ಎಷ್ಟು
ನೆನಪು ಮಾಡಿದೆನು? ಮನಸ್ಸು ಎಲ್ಲಿಯೂ ಓಡುವುದಿಲ್ಲವೇ? ಎಲ್ಲಿ ಓಡುತ್ತದೆ? ನಿಮಗಾಗಿ ಪ್ರಪಂಚವೇ
ಇಲ್ಲ. ಇದೆಲ್ಲವೂ ಸಮಾಪ್ತಿಯಾಗಲಿದೆ. ನಾವು ಮತ್ತು ತಂದೆಯಷ್ಟೇ ಇರುತ್ತೇವೆ. ಹೀಗೆ ತಮ್ಮಲ್ಲಿ
ಮಾತನಾಡಿಕೊಂಡಾಗ ಬಹಳ ಮಜಾ ಬರುತ್ತದೆ. ಇಲ್ಲಿ ಯಾರೆಲ್ಲರೂ ಬರುತ್ತಾರೆಯೋ ಅವರು ಬಹಳ ಹಳೆಯ
ಭಕ್ತರಾಗಿದ್ದಾರೆ. ಯಾರು ಬರುವುದಿಲ್ಲವೋ ಅವರು ಇತ್ತೀಚಿನ ಭಕ್ತರಾಗಿದ್ದಾರೆಂದು ತಿಳಿಯಿರಿ. ಅವರು
ತಡವಾಗಿ ಬರುತ್ತಾರೆ. ಪ್ರಾರಂಭದಿಂದ ಭಕ್ತಿ ಮಾಡುವವರು ತಂದೆಯಿಂದ ಆಸ್ತಿಯನ್ನು ಪಡೆಯಲು ಅವಶ್ಯವಾಗಿ
ಬರುತ್ತಾರೆ. ಇದು ಗುಪ್ತ ಪರಿಶ್ರಮವಾಗಿದೆ. ಯಾರು ಧಾರಣೆ ಮಾಡುವುದಿಲ್ಲವೋ ಅವರೇನೂ ಪರಿಶ್ರಮ
ಪಡುವುದಿಲ್ಲ. ಇಲ್ಲಿ ನೀವು ರಿಫ್ರೆಷ್ ಆಗುವುದಕ್ಕಾಗಿಯೇ ಬರುತ್ತೀರಿ ಅಂದಾಗ ಪರಿಶ್ರಮ ಪಡಿ. ಇಲ್ಲಿ
ಒಂದು ವಾರದಲ್ಲಿ ಜಮಾ ಮಾಡಿಕೊಳ್ಳುವುದನ್ನೂ ಅದು ಅಲ್ಲಿ 12 ತಿಂಗಳ ಸಮಯದಲ್ಲಿಯೂ ಮಾಡಿಕೊಳ್ಳಲು
ಆಗುವುದಿಲ್ಲ. ಇಲ್ಲಿ 7 ದಿನಗಳಲ್ಲಿ ಪೂರ್ಣ ಕೊಳಕನ್ನು ತೆಗೆದುಹಾಕಬಹುದು. ತಂದೆಯು ಸಲಹೆ
ಕೊಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಏಕಾಂತದಲ್ಲಿ
ಕುಳಿತು ತಂದೆಯನ್ನು ನೆನಪು ಮಾಡಿ. ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕು. ತಮಲ್ಲಿ ಪರಿಶೀಲನೆ
ಮಾಡಿಕೊಳ್ಳಬೇಕು - ನೆನಪಿನ ಸಮಯದಲ್ಲಿ ಮನಸ್ಸು ಓಡುವುದಿಲ್ಲ ತಾನೇ? ನಾವು ಮಧುರ ತಂದೆಯನ್ನು ಎಷ್ಟು
ಸಮಯ ನೆನಪು ಮಾಡುತ್ತೇವೆ?
2. ಸದಾ ಇದೇ ಖುಷಿಯಲ್ಲಿರಬೇಕು - ನಮ್ಮನ್ನು ತಂದೆಯು ರಾವಣನ ಪಂಜರದಿಂದ ಮುಕ್ತರನ್ನಾಗಿ ಮಾಡಿದರು.
ಈಗ ನಾವು ಇಂತಹ ಪ್ರಪಂಚಕ್ಕೆ ಹೋಗುತ್ತಿದ್ದೇವೆ. ಅಲ್ಲಿ ಬಿಸಿಲೂ ಇರುವುದಿಲ್ಲ, ಚಳಿಯೂ
ಇರುವುದಿಲ್ಲ ಸದಾ ವಸಂತ ಋತುವಿರುತ್ತದೆ.
ವರದಾನ:
ಆತ್ಮೀಯ ನಶೆಯ
ಮೂಲಕ ಹಳೆಯ ಪ್ರಪಂಚವನ್ನು ಮರೆಯುವಂತಹ ಸ್ವರಾಜ್ಯ ಅಧಿಕಾರಿ ಭವ.
ಸಂಗಮಯುಗದಲ್ಲಿ ಯಾರು
ತಂದೆಯ ಆಸ್ತಿಗೆ ಅಧಿಕಾರಿಯಾಗುತ್ತಾರೆ, ಅವರೇ ಸ್ವರಾಜ್ಯ ಮತ್ತು ವಿಶ್ವ ರಾಜ್ಯ
ಅಧಿಕಾರಿಯಾಗುತ್ತಾರೆ. ಇಂದು ಸ್ವರಾಜ್ಯವಿದೆ ನಾಳೆ ವಿಶ್ವದ ರಾಜ್ಯವಿರುವುದು. ಇಂದು ನಾಳೆಯ
ಮಾತಾಗಿದೆ, ಇಂತಹ ಅಧಿಕಾರಿ ಆತ್ಮ ಆತ್ಮೀಯ ನಶೆಯಲ್ಲಿರುವುದು ಮತ್ತು ಈ ನಶೆ ಹಳೆಯ ಪ್ರಪಂಚವನ್ನು
ಸಹಜವಾಗಿ ಮರೆಸಿ ಬಿಡುವುದು. ಅಧಿಕಾರಿ ಎಂದೂ ಯಾವುದೇ ವಸ್ತುವಿನ, ವ್ಯಕ್ತಿಯ, ಸಂಸ್ಕಾರದ ಅಧೀನ
ಆಗಲು ಸಾಧ್ಯವಿಲ್ಲ. ಹದ್ದಿನ ಮಾತುಗಳನ್ನು ಅವರು ಬಿಡುವ ಅಗತ್ಯವಿರಲ್ಲ ಸ್ವತಃವಾಗಿ ಬಿಟ್ಟು ಹೋಗಿ
ಬಿಡುತ್ತವೆ.
ಸ್ಲೋಗನ್:
ಪ್ರತಿ ಸೆಕೆಂಡ್,
ಪ್ರತಿ ಶ್ವಾಸ, ಪ್ರತಿ ಖಜಾನೆಯನ್ನು ಸಫಲ ಮಾಡಿಕೊಳ್ಳುವಂತಹವರೇ ಸಫಲತಾ ಮೂರ್ತಿಗಳಾಗುತ್ತಾರೆ.