22.02.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಾವು
ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೇವೆಂದು ಸದಾ ನೆನಪಿಟ್ಟುಕೊಳ್ಳಿ, ಪುರುಷೋತ್ತಮರಾಗುತ್ತಿದ್ದೇವೆ
ಅಂದಾಗ ಹರ್ಷಿತವಾಗಿರುತ್ತೇವೆ, ತಮಗೆ ತಾವು ಮಾತನಾಡುವುದನ್ನು ಕಲಿತುಕೊಂಡಾಗ ಅಪಾರ ಖುಷಿಯಿರುತ್ತದೆ.”
ಪ್ರಶ್ನೆ:
ತಂದೆಯ
ಆಶ್ರಯದಲ್ಲಿ ಯಾರು ಬರಲು ಸಾಧ್ಯವಿದೆ? ತಂದೆಯು ಯಾರಿಗೆ ಆಶ್ರಯ ಕೊಡುತ್ತಾರೆ?
ಉತ್ತರ:
ಯಾರು ಸಂಪೂರ್ಣ
ನಷ್ಟೋಮೋಹಿಗಳಾಗಿರುತ್ತಾರೆಯೋ ಅವರೇ ತಂದೆಯ ಆಶ್ರಯದಲ್ಲಿ ಬರಲು ಸಾಧ್ಯ. ಯಾರ ಬುದ್ಧಿಯೋಗವು ಎಲ್ಲಾ
ಕಡೆಯಿಂದ ತುಂಡರಿಸುತ್ತದೆ, ಮಿತ್ರ ಸಂಬಂಧಿಗಳು ಮುಂತಾದವರಲ್ಲಿ ಬುದ್ಧಿಯು ಸೆಳೆಯುವುದಿಲ್ಲವೋ ಅವರ
ಬುದ್ಧಿಯಲ್ಲಿ ಇದೇ ಇರುತ್ತದೆ - ನನಗಂತೂ ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ. ಇಂತಹ ಮಕ್ಕಳೇ
ಸರ್ವೀಸ್ ಮಾಡಲು ಸಾಧ್ಯ. ತಂದೆಯೂ ಸಹ ಇಂತಹ ಮಕ್ಕಳಿಗೇ ಆಶ್ರಯ ಕೊಡುತ್ತಾರೆ.
ಓಂ ಶಾಂತಿ.
ಇವರು ಆತ್ಮಿಕ ತಂದೆ, ಶಿಕ್ಷಕ, ಗುರುವಾಗಿದ್ದಾರೆ. ಇದನ್ನಂತೂ ಮಕ್ಕಳು ಚೆನ್ನಾಗಿ
ತಿಳಿದುಕೊಂಡಿದ್ದಾರೆ. ಆದರೆ ಪ್ರಪಂಚದವರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಭಲೇ ಸನ್ಯಾಸಿಗಳು
ಶಿವೋಹಂ ಎಂದು ಹೇಳುತ್ತಾರೆ ಆದರೂ ಸಹ ಅವರು ನಾವು ತಂದೆ, ಶಿಕ್ಷಕ, ಗುರುವಾಗಿದ್ದೇವೆ ಎಂದು ಹೇಳಲು
ಸಾಧ್ಯವಿಲ್ಲ. ಅವರು ಕೇವಲ ಶಿವೋಹಂ ತತತ್ವಂ ಎಂದು ಹೇಳುತ್ತಾರೆ. ಪರಮಾತ್ಮ ಸರ್ವವ್ಯಾಪಿಯಾಗಿದ್ದಾನೆ
ಅಂದಾಗ ಪ್ರತಿಯೊಬ್ಬರೂ ಸಹ ತಂದೆ, ಶಿಕ್ಷಕ, ಗುರುವಾಗಿ ಬಿಟ್ಟರು. ಈ ರೀತಿಯಾಗಿ ಯಾರೂ ತಿಳಿಯಲು
ಸಾಧ್ಯವಿಲ್ಲ. ಮನುಷ್ಯರು ತಮ್ಮನ್ನು ಭಗವಂತ, ಪರಮಾತ್ಮ ಎಂದು ಹೇಳುವುದಂತೂ ಖಂಡಿತವಾಗಿ ತಪ್ಪಾಗಿದೆ.
ತಂದೆಯು ಮಕ್ಕಳಿಗೆ ಏನನ್ನು ತಿಳಿಸುತ್ತಾರೆಯೋ ಅದಂತೂ ಬುದ್ಧಿಯಲ್ಲಿ ಧಾರಣೆಯಾಗುತ್ತದೆಯಲ್ಲವೆ.
ಲೌಕಿಕ ವಿದ್ಯೆಯಲ್ಲಿ ಎಷ್ಟೊಂದು ವಿಷಯಗಳಿರುತ್ತವೆ, ಆದರೆ ಎಲ್ಲಾ ವಿಷಯಗಳು (ಸಬ್ಜೆಕ್ಟ್)
ವಿದ್ಯಾರ್ಥಿಗಳ ಬುದ್ಧಿಯಲ್ಲಿರುತ್ತದೆ ಎಂದಲ್ಲ. ಇಲ್ಲಿ ತಂದೆಯು ಏನು ಓದಿಸುತ್ತಿದ್ದಾರೆಯೋ ಅದು
ಒಂದು ಸೆಕೆಂಡಿನಲ್ಲಿ ಮಕ್ಕಳ ಬುದ್ಧಿಯಲ್ಲಿ ಬಂದು ಬಿಡುತ್ತದೆ. ನೀವು ರಚಯಿತ ಮತ್ತು ರಚನೆಯ
ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಹೇಳುತ್ತೀರಿ. ನೀವೇ ತ್ರಿಕಾಲದರ್ಶಿ ಅಥವಾ ಸ್ವದರ್ಶನ
ಚಕ್ರಧಾರಿಗಳಾಗುತ್ತೀರಿ. ಶಾರೀರಿಕ ವಿದ್ಯೆಯಲ್ಲಿನ ವಿಷಯಗಳೇ ಬೇರೆಯಾಗಿರುತ್ತದೆ. ನೀವು ಸಿದ್ಧ
ಮಾಡಿ ತಿಳಿಸುವಿರಿ, ಸರ್ವರ ಸದ್ಗತಿದಾತ ಒಬ್ಬ ತಂದೆಯೇ ಆಗಿದ್ದಾರೆ. ಎಲ್ಲಾ ಆತ್ಮರು ಪರಮಾತ್ಮನನ್ನೇ
ನೆನಪು ಮಾಡುತ್ತಾರೆ - ಓ ಗಾಡ್ಫಾದರ್ ಎಂದು ಕರೆಯುತ್ತಾರೆ ಅಂದಾಗ ಅವಶ್ಯವಾಗಿ ತಂದೆಯಿಂದ ಆಸ್ತಿಯು
ಸಿಗುತ್ತದೆ. ಆ ಆಸ್ತಿಯು ಕಳೆದುಕೊಂಡಿರುವುದರಿಂದ ದುಃಖದಲ್ಲಿಯೇ ಸಿಗುತ್ತದೆ. ಇದು ಸುಖ-ದುಃಖದ
ಆಟವಾಗಿದೆ. ಈ ಸಮಯದಲ್ಲಿ ಎಲ್ಲರೂ ಪತಿತ-ದುಃಖಿಗಳಾಗಿದ್ದಾರೆ. ಪವಿತ್ರರಾಗುವುದರಿಂದ ಅವಶ್ಯವಾಗಿ
ಸುಖವು ಸಿಗುತ್ತದೆ. ಸುಖದ ಪ್ರಪಂಚವನ್ನು ತಂದೆಯೇ ಸ್ಥಾಪನೆ ಮಾಡುತ್ತಾರೆ. ನಮಗೆ ತಂದೆಯು
ತಿಳಿಸುತ್ತಿದ್ದಾರೆ, ಜ್ಞಾನಸಾಗರ ಒಬ್ಬ ತಂದೆಯೇ ಆಗಿದ್ದಾರೆ ಎಂಬುದನ್ನು ಮಕ್ಕಳ ಬುದ್ಧಿಯಲ್ಲಿ
ಇಟ್ಟುಕೊಳ್ಳಬೇಕಾಗಿದೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಂದೆಯೇ ಕೊಡುತ್ತಾರೆ.
ಮತ್ತೆಲ್ಲರೂ ಯಾವಾಗ ಧರ್ಮ ಸ್ಥಾಪನೆಯಾಗುತ್ತದೆಯೋ ಆ ಸಮಯದಲ್ಲಿಯೇ ಬರುತ್ತಾರೆ, ಈ ಮಾತುಗಳು ಬೇರೆ
ಯಾರ ಬುದ್ಧಿಯಲ್ಲಿಯೂ ಇಲ್ಲ. ನೀವು ಮಕ್ಕಳಿಗಾಗಿ ತಂದೆಯು ಈ ವಿದ್ಯೆಯನ್ನು ಅವಶ್ಯವಾಗಿ ಸಹಜವಾಗಿ
ಮಾಡಿದ್ದಾರೆ. ಕೇವಲ ಸ್ವಲ್ಪ ವಿಸ್ತಾರದಲ್ಲಿ ತಿಳಿಸುತ್ತಾರೆ. ತಂದೆಯಾದ ನನ್ನನ್ನು ನೆನಪು ಮಾಡಿ
ಆಗ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ಯೋಗದ ಮಹಿಮೆಯೂ ಬಹಳ ಇದೆ. ಭಾರತದ
ಪ್ರಾಚೀನ ಯೋಗದ ಗಾಯನ ಮಾಡಲಾಗುತ್ತದೆ ಆದರೆ ಯೋಗದಿಂದ ಲಾಭವೇನಾಗಿತ್ತು, ಇದಂತೂ ಯಾರಿಗೂ
ಗೊತ್ತಿಲ್ಲ. ಇದು ಗೀತೆಯ ಅದೇ ಯೋಗವನ್ನು ಭಗವಂತನು ಕಲಿಸುತ್ತಾರೆ, ಬಾಕಿ ಏನೆಲ್ಲಾ ಕಲಿಸುತ್ತಾರೆ
ಅದು ಮನುಷ್ಯರದ್ದಾಗಿದೆ, ದೇವತೆಗಳ ಬಳಿಯಂತೂ ಯೋಗದ ಮಾತೇ ಇಲ್ಲ. ಇದು ಹಠಯೋಗ ಮುಂತಾದವೆಲ್ಲವನ್ನೂ
ಮನುಷ್ಯರು ಕಲಿಸುತ್ತಾರೆ. ದೇವತೆಗಳು ಕಲಿಯುವುದೂ ಇಲ್ಲ, ಕಲಿಸುವುದೂ ಇಲ್ಲ. ದೈವೀ ಪ್ರಪಂಚದಲ್ಲಿ
ಯೋಗದ ಮಾತೇ ಇಲ್ಲ. ಯೋಗದಿಂದ ಎಲ್ಲರೂ ಪಾವನರಾಗುತ್ತಾರೆ, ಅವರು ಅವಶ್ಯವಾಗಿ ಇಲ್ಲಿಯೇ ಆಗುತ್ತಾರೆ.
ತಂದೆಯು ಬರುವುದೇ ಸಂಗಮಯುಗದಲ್ಲಿ, ಹೊಸ ಪ್ರಪಂಚವನ್ನಾಗಿ ಮಾಡಲು ಬರುತ್ತಾರೆ. ಈಗ ನೀವು ಹಳೆಯ
ಪ್ರಪಂಚದಿಂದ ಹೊಸ ಪ್ರಪಂಚಕ್ಕೆ ವರ್ಗಾವಣೆಯಾಗುತ್ತಿದ್ದೀರಿ. ಇದನ್ನು ಯಾರಿಗಾದರೂ
ತಿಳಿಸಿಕೊಡುವುದರಲ್ಲಿಯೂ ಅದ್ಭುತವಾಗಿದೆ. ನಾವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೇವೆ,
ಸತ್ಯಯುಗ ಮತ್ತು ಕಲಿಯುಗದ ಮಧ್ಯದಲ್ಲಿ ಬ್ರಾಹ್ಮಣರ ಶಿಖೆಯಿದೆ. ಇದನ್ನೇ ಸಂಗಮಯುಗವೆಂದು
ಕರೆಯಲಾಗುತ್ತದೆ, ಇಲ್ಲಿ ನೀವು ಪುರುಷೋತ್ತಮರಾಗುತ್ತಿದ್ದೀರಿ. ನಾವು ಪುರುಷೋತ್ತಮರಾಗುತ್ತಿದ್ದೇವೆ
ಎಂದು ಮಕ್ಕಳ ಬುದ್ಧಿಯಲ್ಲಿದೆ ಅಂದಾಗ ಸದಾ ಹರ್ಷಿತವಾಗಿರುತ್ತೀರಿ. ಎಷ್ಟು ಸರ್ವೀಸ್ ಮಾಡುತ್ತೀರೋ
ಅಷ್ಟೂ ಹರ್ಷಿತರಾಗಿರುತ್ತೀರಿ. ಸಂಪಾದನೆ ಮಾಡಿ ಮತ್ತು ಅನ್ಯರಿಗೂ ಮಾಡಿಸಬೇಕು. ಪ್ರದರ್ಶನಿಯಲ್ಲಿ
ಸರ್ವೀಸ್ ಮಾಡಿದರೆ ಕೇಳುವವರಿಗೂ ಸಹ ಸುಖ ಸಿಗುತ್ತದೆ. ತನ್ನ ಮತ್ತು ಅನ್ಯರ ಕಲ್ಯಾಣವಾಗುತ್ತದೆ.
ಚಿಕ್ಕ ಸೇವಾಕೇಂದ್ರದಲ್ಲಿಯೂ ಸಹ ಮುಖ್ಯವಾದ 5-6 ಚಿತ್ರಗಳು ಅವಶ್ಯವಾಗಿ ಇರಬೇಕು. ಚಿತ್ರಗಳ
ಮುಖಾಂತರ ತಿಳಿಸಿಕೊಡುವುದು ಸಹಜವಾಗಿರುತ್ತದೆ. ಇಡೀ ದಿನ ಸೇವೆಯೇ ಸೇವೆ, ಮಿತ್ರ ಸಂಬಂಧಿಗಳ ಬಗ್ಗೆ
ಸೆಳೆತ ಇರಬಾರದು. ಏನೆಲ್ಲಾ ಈ ಕಣ್ಣುಗಳಿಂದ ನೋಡುತ್ತಿದ್ದೀರಿ ಅದೆಲ್ಲದರ ವಿನಾಶವಾಗುತ್ತದೆ. ಬಾಕಿ
ದಿವ್ಯ ದೃಷ್ಟಿಯಿಂದ ಏನನ್ನು ನೋಡುತ್ತೀರೋ ಅದರ ಸ್ಥಾಪನೆಯಾಗುತ್ತಾ ಇದೆ. ಈ ರೀತಿ ತನ್ನೊಂದಿಗೆ
ತಾನು ಮಾತನಾಡಿದ್ದೇ ಆದರೆ ತಾವು ಪಕ್ಕಾ ಆಗಿ ಬಿಡುತ್ತೀರಿ. ಬೇಹದ್ದಿನ ತಂದೆಯೊಂದಿಗೆ ಮಿಲನ ಮಾಡುವ
ಖುಷಿಯಾಗಬೇಕು. ಯಾರಾದರೂ ರಾಜನ ಬಳಿ ಜನ್ಮವನ್ನು ತೆಗೆದುಕೊಳ್ಳುತ್ತಾರೆ ಅಂದರೆ ಎಷ್ಟೊಂದು
ನಶೆಯಿಂದಿರುತ್ತಾರೆ. ನೀವು ಮಕ್ಕಳು ಸ್ವರ್ಗಕ್ಕೆ ಮಾಲೀಕರಾಗುತ್ತಿದ್ದೀರಿ. ಪ್ರತಿಯೊಬ್ಬರೂ ತಮಗಾಗಿ
ಪರಿಶ್ರಮ ಪಡುತ್ತಿದ್ದಾರೆ. ತಂದೆಯು ಕೇವಲ ಹೇಳುತ್ತಿದ್ದಾರೆ - ಕಾಮಚಿತೆಯ ಮೇಲೆ ಕುಳಿತು ನೀವು
ಕಪ್ಪಾಗಿ ಬಿಟ್ಟಿದ್ದೀರಿ, ಈಗ ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಿ ಆಗ ಸುಂದರರಾಗಿ ಬಿಡುತ್ತೀರಿ.
ಬುದ್ಧಿಯಲ್ಲಿ ಇದೇ ಚಿಂತನೆ ನಡೆಯುತ್ತಿರಲಿ, ಭಲೇ ಆಫೀಸಿನಲ್ಲಿ ಕೆಲಸ-ಕಾರ್ಯ ಮಾಡುತ್ತಿರಿ, ನೆನಪು
ಮಾಡುತ್ತಾ ಇರಿ ಆದರೆ ಸಮಯವಿಲ್ಲ ಎಂದಲ್ಲ. ಎಷ್ಟು ಸಮಯ ಸಿಗುತ್ತದೆಯೋ ಅಷ್ಟು ಆತ್ಮಿಕ
ಸಂಪಾದನೆಯನ್ನು ಮಾಡಿಕೊಳ್ಳಬೇಕು. ಎಷ್ಟೊಂದು ದೊಡ್ಡ ಸಂಪಾದನೆಯಾಗಿದೆ. ಆರೋಗ್ಯ ಮತ್ತು ಸಂಪತ್ತು
ಎರಡೂ ಜೊತೆಯಲ್ಲಿಯೇ ಸಿಗುತ್ತದೆ. ಅರ್ಜುನ ಮತ್ತು ಏಕಲವ್ಯನ ಕಥೆಯಿದೆಯಲ್ಲವೆ. ಈ ರೀತಿ ಗೃಹಸ್ಥ
ವ್ಯವಹಾರದಲ್ಲಿದ್ದು ಒಳಗಿರುವವರಿಗಿಂತಲೂ ಮುಂದೆ ಹೋಗಲು ಸಾಧ್ಯ. ಎಲ್ಲದರ ಆಧಾರವೂ ನೆನಪಿನ ಮೇಲಿದೆ.
ಇಲ್ಲಿ ಎಲ್ಲರೂ ಕುಳಿತುಕೊಂಡು ಬಿಟ್ಟರೆ ಆಗ ಸರ್ವೀಸನ್ನು ಹೇಗೆ ಮಾಡುತ್ತೀರಿ? ರಿಫ್ರೆಷ್ ಆಗಿ
ಸೇವೆಯಲ್ಲಿ ತೊಡಗಬೇಕು. ಸೇವೆಯ ವಿಚಾರ ಇರಬೇಕು. ಪ್ರದರ್ಶನಿಯಲ್ಲಿ ತಂದೆ ಹೋಗಲು ಸಾಧ್ಯವಿಲ್ಲ.
ಏಕೆಂದರೆ ಬಾಪ್ದಾದಾ ಇಬ್ಬರೂ ಜೊತೆಯಲ್ಲಿದ್ದಾರೆ. ತಂದೆಯ ಆತ್ಮ ಮತ್ತು ಇವರ (ಬ್ರಹ್ಮಾ) ಆತ್ಮವು
ಜೊತೆಯಲ್ಲಿದೆ. ಇವರು ವಿಚಿತ್ರವಾದ ದಂಪತಿಗಳಾಗಿದ್ದಾರೆ. ನೀವು ಮಕ್ಕಳ ವಿನಃ ಬೇರಾರೂ ಈ
ದಂಪತಿಯನ್ನು ಅರಿಯಲಾರರು. ತನ್ನನ್ನು(ಬ್ರಹ್ಮಾ)ಯುಗಲ್ ಎಂದೂ ತಿಳಿಯುತ್ತಾರೆ, ಪುನಃ ಹೇಳುತ್ತಾರೆ
ನಾನು ತಂದೆಗೆ ಸಿಖಿಲದೆ ಮಗು ಲಕ್ಷ್ಮೀ ನಾರಾಯಣರ ಚಿತ್ರ ನೋಡಿದಾಗ ಬಹಳ ಖುಷಿಯಾಗುತ್ತದೆ. ನಮ್ಮ
ಇನ್ನೊಂದು ಜನ್ಮ ಇದಾಗಿದೆ, ನಾವು ಸಿಂಹಾಸನದ ಮೇಲೆ ಅವಶ್ಯವಾಗಿ ಕುಳಿತುಕೊಳ್ಳುತ್ತೇವೆ. ನೀವೂ ಸಹ
ರಾಜಯೋಗವನ್ನು ಕಲಿಯುತ್ತಿದ್ದೀರಿ, ಗುರಿ-ಉದ್ದೇಶವೂ ಸಹ ತಮ್ಮ ಬಳಿಯಿದೆ. ಇಂತಹವರಿಗಂತೂ
ಖುಷಿಯಿರುತ್ತದೆ - ನಾನು ತಂದೆಯ ಅಗಲಿ ಮರಳಿ ಸಿಕ್ಕಿದ ಮಗುವಾಗಿದ್ದೇನೆ. ಆದರೂ ಸದಾ
ನೆನಪಿರುವುದಿಲ್ಲ. ಬೇರೆ-ಬೇರೆ ಕಡೆ ವಿಚಾರಗಳು ಹೋಗುತ್ತಿರುತ್ತವೆ. ಯಾರೂ ಸಹ ಒಂದೇ ಸಾರಿ
ನೆನಪಿರಲು ಸಾಧ್ಯವಿಲ್ಲ ಮತ್ತು ಯಾರ ವಿಚಾರವೂ ಬರುವುದಿಲ್ಲವೆಂದು ಡ್ರಾಮಾದಲ್ಲಿ ಕಾನೂನಿಲ್ಲ.
ಮಾಯೆಯ ಬಿರುಗಾಳಿ ನೆನಪು ಮಾಡಲು ಬಿಡುವುದಿಲ್ಲ. ನಮಗಂತೂ ಬಹಳ ಸಹಜವಾಗಿದೆ. ಏಕೆಂದರೆ ತಂದೆಯ
ಪ್ರವೇಶತೆಯಿದೆ ಎಂದು ತಿಳಿದುಕೊಂಡಿದ್ದೇನೆ. ನಾನು ತಂದೆಯ ನಂಬರ್ವನ್ ಅಗಲಿ ಸಿಕ್ಕಿದ
ಮಗುವಾಗಿದ್ದೇನೆ, ಮೊದಲನೇ ನಂಬರಿನ ರಾಜಕುಮಾರನಾಗುತ್ತೇನೆ ಆದರೂ ನೆನಪು ಮರೆತು ಹೋಗುತ್ತದೆ. ಅನೇಕ
ಪ್ರಕಾರದ ವಿಚಾರಗಳು ಬಂದು ಬಿಡುತ್ತವೆ. ಇದು ಮಾಯೆಯಾಗಿದೆ. ಯಾವಾಗ ಈ ತಂದೆಗೆ ಅನುಭವವಾಗುವುದೋ
ಆಗಲೇ ನೀವು ಮಕ್ಕಳಿಗೆ ತಿಳಿಸಲು ಸಾಧ್ಯ. ಈ ವಿಚಾರವು ಯಾವಾಗ ಮುಕ್ತಾಯವಾಗುತ್ತದೆ ಆಗ ಕರ್ಮಾತೀತ
ಸ್ಥಿತಿಯಾಗಿದೆ. ಆತ್ಮವು ಯಾವಾಗ ಸಂಪೂರ್ಣವಾಗುತ್ತದೆ ನಂತರ ಈ ಶರೀರವಿರಲು ಸಾಧ್ಯವಿಲ್ಲ. ಶಿವ
ತಂದೆಯಂತೂ ಸದಾ ಪವಿತ್ರರಾಗಿದ್ದಾರೆ. ಪತಿತ ಪ್ರಪಂಚ ಮತ್ತು ಪತಿತ ಶರೀರದಲ್ಲಿ ಬಂದು ಪಾವನರನ್ನಾಗಿ
ಮಾಡುವ ಪಾತ್ರ ಇವರದೇ ಆಗಿದೆ. ಡ್ರಾಮಾದಲ್ಲಿ ಬಂಧಿತರಾಗಿದ್ದಾರೆ. ತಾವು ಪಾವನರಾದ ನಂತರ ಹೊಸ
ಶರೀರಬೇಕು. ಶಿವ ತಂದೆಗೆ ತಮ್ಮ ಶರೀರವಂತೂ ಇಲ್ಲ. ಈ ತನುವಿನಲ್ಲಿ ಈ (ಬ್ರಹ್ಮಾ) ಆತ್ಮದ ಮಹತ್ವವಿದೆ.
ಅದರದೇನನ್ನು ಇಟ್ಟಿದ್ದಾರೆ! ಅವರು (ಶಿವ) ಮುರುಳಿ ನುಡಿಸುತ್ತಿದ್ದಾರೆ. ಹೊರಟು ಹೋಗುತ್ತಾರೆ,
ಅವರು ಫ್ರೀ ಆಗಿರುತ್ತಾರೆ. ಇಲ್ಲೊಮ್ಮೆ ಅಲ್ಲೊಮ್ಮೆ ಹೊರಟು ಹೋಗುತ್ತಾರೆ. ಮಕ್ಕಳಿಗೆ
ಅನುಭವವಾಗುತ್ತದೆ, ಶಿವ ತಂದೆಯೇ ಮುರುಳಿ ನುಡಿಸುತ್ತಿದ್ದಾರೆ ಎಂದು. ತಾವು ಮಕ್ಕಳಿಗೆ ಗೊತ್ತಿದೆ
- ನಾವು ತಂದೆಗೆ ಸಹಯೋಗ ಕೊಡಲು ಈ ಈಶ್ವರೀಯ ಸೇವೆಯಲ್ಲಿ ಇದ್ದೇವೆ. ತಂದೆಯು ಹೇಳುತ್ತಾರೆ - ನಾನೂ
ಸಹ ನನ್ನ ಮಧುರ ಮನೆಯನ್ನು ಬಿಟ್ಟು ಬಂದಿದ್ದೇನೆ. ಪರಮಧಾಮವೆಂದರೆ ಎಲ್ಲದಕ್ಕಿಂತ ಮೇಲಿರುವ ಧಾಮವಾದ
ಮೂಲವತನವಾಗಿದೆ. ಬಾಕಿ ಪೂರ್ಣ ಆಟವೆಲ್ಲವೂ ಈ ಸೃಷ್ಟಿಯಲ್ಲಿಯೇ ನಡೆಯುತ್ತದೆ. ಇದು ವಿಚಿತ್ರ
ಆಟವೆಂದು ತಮಗೆ ಗೊತ್ತಿದೆ. ಜಗತ್ತಂತು ಒಂದೇ ಆಗಿದೆ. ಅವರು ಚಂದ್ರಲೋಕಕ್ಕೆ ಹೋಗಲು ಪ್ರಯತ್ನ
ಪಡುತ್ತಾರೆ, ಇದು ವಿಜ್ಞಾನದ ಶಕ್ತಿಯಾಗಿದೆ. ಶಾಂತಿಯ ಶಕ್ತಿಯಿಂದ ನಾವು ಯಾವಾಗ
ವಿಜಯಿಗಳಾಗುತ್ತೇವೆಯೋ ಆಗ ವಿಜ್ಞಾನವೂ ಸಹ ಸುಖದಾಯಿಯಾಗುತ್ತದೆ. ಇಲ್ಲಿ ವಿಜ್ಞಾನವು ಸುಖವನ್ನೂ
ಕೊಡುತ್ತದೆ, ದುಃಖವನ್ನೂ ಕೊಡುತ್ತದೆ. ಅಲ್ಲಿ ಸುಖವೇ ಸುಖವಿದೆ, ದುಃಖದ ಹೆಸರೇ ಇಲ್ಲ. ಇಂತಹ
ಮಾತುಗಳು ಇಡೀ ದಿನ ಬುದ್ಧಿಯಲ್ಲಿರಬೇಕು. ಬಾಬಾರವರಿಗೆ ಎಷ್ಟೊಂದು ಯೋಚನೆಗಳು ಬರುತ್ತಿರುತ್ತವೆ.
ಬಂಧನದಲ್ಲಿರುವ ಮಾತೆಯರು ವಿಷದ ವಿಚಾರದಲ್ಲಿ ಎಷ್ಟೊಂದು ಕಷ್ಟ ಪಡುತ್ತಾರೆ. ಕೆಲವರಂತೂ ಮೋಹಕ್ಕೆ
ವಶರಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ. ನಿಶ್ಚಯ ಬುದ್ಧಿಯವರು ನಾವು ಅಮೃತ ಕುಡಿಯಬೇಕೆಂದು
ಹೇಳುತ್ತಾರೆ ಅಂದಾಗ ಇದರಲ್ಲಿ ನಷ್ಟೋಮೋಹಿಗಳಾಗಬೇಕು. ಹಳೆಯ ಜಗತ್ತಿನಿಂದ ಮನಸ್ಸು ದೂರವಾಗಬೇಕು.
ಹಾಗೆಯೇ ಸೇವಾಧಾರಿ ಮಕ್ಕಳು ಹೃದಯವನ್ನೇರಲು ಸಾಧ್ಯ ಅವರಿಗೆ ಆಶ್ರಯ ಕೊಡಬಹುದು. ಕನ್ಯೆಯು ಪತಿಯ
ಆಶ್ರಯಕ್ಕೆ ಹೋಗುತ್ತಾಳೆ, ವಿಷವಿಲ್ಲದೆ ಇರುವುದಿಲ್ಲ. ನಂತರ ತಂದೆಯು ಆಶ್ರಯಕ್ಕೆ
ತೆಗೆದುಕೊಳ್ಳಬೇಕಾಗುತ್ತದೆ ಆದರೆ ಒಂದೇ ಸಾರಿ ನಷ್ಟೋಮೋಹಿಗಳಾಗಬೇಕು. ಪತಿಯರಿಗೂ ಪತಿ
ಸಿಕ್ಕಿದ್ದಾರೆ, ಈಗ ಅವರ ಜೊತೆ ನಾವು ಬುದ್ಧಿಯೋಗದ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಅಷ್ಟೇ.
ನನಗಂತೂ ಒಬ್ಬರ ವಿನಃ ಬೇರೆ ಯಾರೂ ಇಲ್ಲ. ಹೇಗೆ ಕನ್ಯೆಗೆ ಪತಿಯ ಜೊತೆ ಪ್ರೀತಿ ಬೆಳೆಯುತ್ತದೆ, ಇದು
ಪರಮಾತ್ಮನ ಜೊತೆ ಆತ್ಮದ ಪ್ರೀತಿಯಾಗಿದೆ. ಅವರಿಂದ ಸುಖ ಸಿಗುತ್ತದೆ, ಇವರಿಂದ ಸುಖ ಸಿಗುತ್ತದೆ. ಇದು
ಸಂಗಮವಾಗಿದೆ, ಇದನ್ನು ಯಾರೂ ಸಹ ತಿಳಿದುಕೊಂಡಿಲ್ಲ. ನಿಮಗೆ ಎಷ್ಟೊಂದು ಖುಷಿಯಾಗಬೇಕು, ನಮಗೆ
ಅಂಬಿಗ ಅಥವಾ ಹೂದೋಟದ ಮಾಲೀಕ ಸಿಕ್ಕಿದ್ದಾರೆ. ಅವರು ನಮ್ಮನ್ನು ಹೂಗಳ ತೋಟಕ್ಕೆ ಕರೆದೊಯ್ಯುತ್ತಾರೆ.
ಈ ಸಮಯದಲ್ಲಿ ಎಲ್ಲರೂ ಮುಳ್ಳುಗಳ ಸಮಾನರಾಗಿದ್ದಾರೆ. ಎಲ್ಲದಕ್ಕಿಂತ ಕಾಮ ವಿಕಾರದ ಮುಳ್ಳು ದೊಡ್ಡ
ಮುಳ್ಳಾಗಿದೆ. ಮೊದಲು ತಾವು ನಿರ್ವಿಕಾರಿ ಹೂಗಳಾಗಿದ್ದಿರಿ, ನಿಧಾನವಾಗಿ ಕಲೆಯಲ್ಲಿ ಕಡಿಮೆಯಾಯಿತು,
ಈಗ ದೊಡ್ಡ ಮುಳ್ಳಾಗಿದ್ದೀರಿ. ತಂದೆಗೆ ಬಬುಲ್ನಾಥನೆಂದೂ ಸಹ ಹೇಳುತ್ತಾರೆ. ತಮಗೆ ಗೊತ್ತಿದೆ,
ನಿಜವಾದ ಹೆಸರು ಶಿವ ಎಂದಾಗಿದೆ. ಬಬುಲ್ನಾಥ ಎಂದು ಹೆಸರಿಡುತ್ತಾರೆ ಏಕೆಂದರೆ ಮುಳ್ಳುಗಳನ್ನು
ಹೂಗಳನ್ನಾಗಿ ಮಾಡುತ್ತಾರೆ. ಭಕ್ತಿ ಮಾರ್ಗದಲ್ಲಿ ಅನೇಕ ಹೆಸರುಗಳನ್ನಿಡುತಾರೆ. ವಾಸ್ತವದಲ್ಲಿ ಶಿವ
ಎನ್ನುವುದೊಂದೇ ಹೆಸರಿದೆ. ರುದ್ರ ಜ್ಞಾನ ಯಜ್ಞ ಅಥವಾ ಶಿವ ಜ್ಞಾನ ಯಜ್ಞ , ಎಂಬುದು ಒಂದೇ ಮಾತಾಗಿದೆ.
ರುದ್ರ ಯಜ್ಞದಿಂದ ವಿನಾಶ ಜ್ವಾಲೆಯು ಬಂದಿತು ಹಾಗೂ ಶ್ರೀ ಕೃಷ್ಣ ಪುರಿ ಅಥವಾ ಆದಿ ಸನಾತನ
ದೇವಿ-ದೇವತಾ ಧರ್ಮದ ಸ್ಥಾಪನೆಯಾಯಿತು. ತಾವು ಯಜ್ಞದ ಮೂಲಕ ಮನುಷ್ಯರಿಂದ ದೇವತೆಗಳಾಗುತ್ತೀರಿ.
ಚಿತ್ರಗಳನ್ನೂ ಸಹ ಅದ್ಭುತವಾಗಿ ಮಾಡುತ್ತಾರೆ. ವಿಷ್ಣುವಿನ ನಾಭಿಯಿಂದ ಬ್ರಹ್ಮಾ ಬಂದರೆಂದು. ಈಗ
ಎಲ್ಲಾ ಮಾತುಗಳು ನಿಮಗೆ ಗೊತ್ತಿದೆ, ಬ್ರಹ್ಮಾ-ಸರಸ್ವತಿಯೇ ಲಕ್ಷ್ಮೀ-ನಾರಾಯಣರಾಗುತ್ತಾರೆ. ಇದು
ನಿಶ್ಚಯವಾಗಿದೆ. ಲಕ್ಷ್ಮೀ-ನಾರಾಯಣರೇ 84 ಜನ್ಮಗಳ ನಂತರ ಬ್ರಹ್ಮಾ-ಸರಸ್ವತಿಯಾಗುತ್ತಾರೆ.
ಮನುಷ್ಯರಂತೂ ಇಂತಹ ಮಾತುಗಳನ್ನು ಕೇಳಿ ಚಕಿತರಾಗುತ್ತಾರೆ. ಖುಷಿಯಲ್ಲಿಯೂ ಬರುತ್ತಾರೆ ಆದರೆ ಮಾಯೆ
ಕಡಿಮೆಯಿಲ್ಲ. ಕಾಮ ಮಹಾ ಶತ್ರುವಾಗಿದೆ. ಮಾಯೆಯು ನಾಮ-ರೂಪದಲ್ಲಿ ಸಿಕ್ಕಿಸಿ ಬಿಡುತ್ತದೆ, ತಂದೆಯ
ನೆನಪು ಮಾಡಲೂ ಬಿಡುವುದಿಲ್ಲ. ನಂತರ ಆ ಖುಷಿಯು ಕಡಿಮೆಯಾಗಿ ಬಿಡುತ್ತದೆ. ನಾನು ಅನೇಕರಿಗೆ
ತಿಳಿಸುತ್ತೇನೆ ಎಂಬುದರಲ್ಲಿ ಖುಷಿಯಾಗಬಾರದು, ತಂದೆಯನ್ನು ಎಷ್ಟು ನೆನಪು ಮಾಡುತ್ತೇನೆಂದು ಮೊದಲು
ನೋಡಿಕೊಳ್ಳಬೇಕಾಗಿದೆ. ರಾತ್ರಿ ತಂದೆಯನ್ನು ನೆನಪು ಮಾಡಿಯೇ ಮಲಗುತ್ತೇನೆಯೇ ಅಥವಾ ಇಲ್ಲವೆ ಎಂದು
ನೋಡಿಕೊಳ್ಳಬೇಕು. ಕೆಲವು ಮಕ್ಕಳಂತೂ ಪಕ್ಕಾ ನೇಮಿನಾಥರಾಗಿದ್ದಾರೆ. ತಾವು ಮಕ್ಕಳು ಬಹಳ
ಅದೃಷ್ಟವಂತರಾಗಿದ್ದೀರಿ, ತಂದೆಯ ಮೇಲಂತೂ ಬಹಳ ಹೊರೆಯಿದೆ, ಆದರೆ ರಥಕ್ಕೆ ರಿಯಾಯಿತಿ ಸಿಗುತ್ತದೆ.
ಜ್ಞಾನ ಮತ್ತು ಯೋಗವೂ ಸಹ ಇದೆ, ಇದರ ವಿನಃ ಲಕ್ಷ್ಮೀ-ನಾರಾಯಣರ ಪದವಿಯು ಹೇಗೆ ಸಿಗುತ್ತದೆ. ಜ್ಞಾನ
ಹಾಗೂ ಯೋಗವೂ ಸಹ ಇದೆ, ಇದರ ವಿನಃ ಲಕ್ಷ್ಮೀ-ನಾರಾಯಣರ ಪದವಿಯು ಹೇಗೆ ಸಿಗುತ್ತದೆ! ನಾನು ತಂದೆಗೆ
ಒಬ್ಬನೇ ಮಗನೆಂದು ಖುಷಿಯಂತೂ ಇರುತ್ತದೆ, ಮತ್ತೆ ಅನೇಕ ಮಕ್ಕಳಿದ್ದಾರೆ ಎಂಬ ನಶೆಯೂ ಇರುತ್ತದೆ
ಅಂದಮೇಲೆ ಮಾಯೆಯ ವಿಘ್ನವೂ ಹಾಕುತ್ತದೆ. ಮಕ್ಕಳಿಗೂ ಸಹ ಮಾಯೆಯ ವಿಘ್ನವು ಬರುತ್ತಿರುತ್ತದೆ, ಮುಂದೆ
ಹೋಗುತ್ತಾ ಕರ್ಮಾತೀತ ಸ್ಥಿತಿಯು ಬರುತ್ತದೆ. ಬಾಪ್ದಾದಾ ಇಬ್ಬರೂ ಒಟ್ಟಿಗೆ ಇದ್ದಾರೆ. ಮಧುರಾತಿ
ಮಧುರ ಮಕ್ಕಳೇ ಎಂದು ಹೇಳುತ್ತಾರೆ, ತಂದೆಯು ಪ್ರೇಮದ ಸಾಗರರಾಗಿದ್ದಾರೆ. ಇವರೂ ಸಹ ಪ್ರೀತಿ
ಮಾಡುತ್ತಾರೆ. ನಾನೆಂತಹ ಕರ್ಮವನ್ನು ಮಾಡುತ್ತೇನೆಯೋ ನನ್ನನ್ನು ನೋಡಿ ಅನ್ಯರು ಮಾಡುತ್ತಾರೆ
ಎಂಬುದನ್ನು ತಿಳಿದುಕೊಂಡಿದ್ದಾರೆ. ಬಹಳ ಮಧುರರಾಗಿರಬೇಕು, ಮಕ್ಕಳು ಬಹಳ ಬುದ್ಧಿವಂತರೂ ಬೇಕು. ಈ
ಲಕ್ಷ್ಮೀ-ನಾರಾಯಣರನ್ನು ನೋಡಿ, ಎಷ್ಟೊಂದು ಬುದ್ಧಿವಂತಿಕೆಯಿದೆ. ಬುದ್ಧಿವಂತಿಕೆಯಿಂದ ವಿಶ್ವದ
ರಾಜ್ಯವನ್ನು ಪಡೆದಿದ್ದಾರೆ. ಪ್ರದರ್ಶನಿಯ ಮೂಲಕ ಬಹಳ ಪ್ರಜೆಗಳಾಗುತ್ತಾರೆ. ಭಾರತವು ಬಹಳ
ದೊಡ್ಡದಾಗಿದೆ, ಎಷ್ಟೊಂದು ಸರ್ವೀಸ್ ಮಾಡಬೇಕು. ನೆನಪಿನಲ್ಲಿದ್ದು ವಿಕರ್ಮ ವಿನಾಶ ಮಾಡಿಕೊಳ್ಳಬೇಕು.
ಇದು ದೊಡ್ಡ ಚಿಂತೆಯಾಗಿರಬೇಕು - ನಾವು ತಮೋಪ್ರಧಾನದಿಂದ ಸತೋಪ್ರಧಾನ ಹೇಗೆ ಆಗುವುದು. ಇದರಲ್ಲಿ
ಶ್ರಮವಿದೆ. ಸರ್ವೀಸಿನ ಅವಕಾಶವಂತೂ ಬಹಳ ಇದೆ. ರೈಲಿನಲ್ಲಿ ಬ್ಯಾಡ್ಜ್ನಿಂದಲೇ ಸರ್ವೀಸ್ ಮಾಡಬಹುದು
- ಇದು ಬಾಬಾ, ಇದು ಆಸ್ತಿ. ಅವಶ್ಯವಾಗಿ 5000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು.
ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಮತ್ತೆ ಅವಶ್ಯವಾಗಿ ಇವರ ರಾಜ್ಯವು ಬರಲೇಬೇಕು. ನಾವು ತಂದೆಯ
ನೆನಪಿನಿಂದ ಪಾವನ ಜಗತ್ತಿನ ಮಾಲೀಕರಾಗುತ್ತಿದ್ದೇವೆ. ರೈಲಿನಲ್ಲಿ ಬಹಳ ಸರ್ವೀಸ್ ಮಾಡಬಹುದು. ಒಂದು
ಭೋಗಿಯಲ್ಲಿ ಸರ್ವೀಸ್ ಮಾಡಿ, ಮತ್ತೆ ಇನ್ನೊಂದು ಭೋಗಿಗೆ ಹೋಗಬೇಕು. ಆ ರೀತಿ ಸರ್ವೀಸ್ ಮಾಡುವಂತಹವರೇ
ತಂದೆಯ ಹೃದಯವನ್ನೇರುತ್ತಾರೆ. ನಾವು ನಿಮಗೆ ಖುಷಿಯ ಸಮಾಚಾರವನ್ನು ಹೇಳುತ್ತೇವೆ ಎಂದು ಹೇಳಿ. ತಾವು
ಪೂಜ್ಯ ದೇವತೆಗಳಾಗಿದ್ದಿರಿ, ಮತ್ತೆ 84 ಜನ್ಮಗಳನ್ನು ಪಡೆದು ಪೂಜಾರಿಗಳಾದಿರಿ, ಈಗ ಮತ್ತೆ
ಪೂಜ್ಯರಾಗಿ. ಏಣಿಯ ಚಿತ್ರವು ಚೆನ್ನಾಗಿದೆ, ಇದರಿಂದಲೇ ಸತೋ, ರಜೋ, ತಮೋ ಸ್ಥಿತಿಯನ್ನು ಸಿದ್ಧ
ಮಾಡಬೇಕಿದೆ. ಶಾಲೆಯಲ್ಲಿ ಕೊನೆಯಲ್ಲಿ ಮುಂದುವರೆಸುವ ಆಸಕ್ತಿಯಿರುತ್ತದೆ. ಈಗ ಇಲ್ಲಿಯೂ
ತಿಳಿಸಲಾಗುತ್ತದೆ, ಯಾರೆಲ್ಲಾ ಸಮಯವನ್ನು ವ್ಯರ್ಥವಾಗಿ ಕಳೆದರೋ ಅವರು ಮುಂದುವರೆದು ಸರ್ವೀಸಿನಲ್ಲಿ
ತೊಡಗಬೇಕು. ಸರ್ವೀಸಿನ ಅವಕಾಶಗಳೂ ಬಹಳ ಇವೆ. ಸೇವಾಧಾರಿ ಮಕ್ಕಳು ಅನೇಕರು ಹೊರ ಬರಬೇಕು. ಅವರನ್ನು
ಬಾಬಾ ಎಲ್ಲಿಯಾದರೂ ಕಳುಹಿಸಿಕೊಡುತ್ತಾರೆ. ಮಂದಿರಗಳಲ್ಲಿ ಸರ್ವೀಸಂತೂ ಚೆನ್ನಾಗಿ ಆಗುತ್ತದೆ. ದೇವತಾ
ಧರ್ಮದವರು ತಕ್ಷಣ ಅರ್ಥ ಮಾಡಿಕೊಳ್ಳುತ್ತಾರೆ. ಗಂಗಾ ಸ್ನಾನ ಮಾಡುವ ಕಡೆಯಲ್ಲಿಯೂ ತಿಳಿಸಬಹುದು.
ಅವರಿಗೆ ಖಂಡಿತ ಮನಸ್ಸಿಗೆ ನಾಟುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
೧. ಸದಾ
ಹರ್ಷಿತವಾಗಿರಲು ಆತ್ಮೀಯ ಸರ್ವೀಸ್ ಮಾಡಬೇಕು, ಸತ್ಯ ಸಂಪಾದನೆಯನ್ನು ಮಾಡಿ ಮತ್ತು ಅನ್ಯರಿಗೂ
ಮಾಡಿಸಬೇಕು. ತಮ್ಮ ಹಾಗೂ ಅನ್ಯರ ಕಲ್ಯಾಣ ಮಾಡಬೇಕು. ರೈಲಿನಲ್ಲಿಯೂ ಸಹ ಬ್ಯಾಡ್ಜ್ ನ ಮೇಲೆ ಸರ್ವೀಸ್
ಮಾಡಬೇಕು.
೨. ಹಳೆಯ ಜಗತ್ತಿನಿಂದ ಮನಸ್ಸನ್ನು ತೆಗೆಯಬೇಕು. ನಷ್ಟೋಮೋಹಿಗಳಾಗಬೇಕು. ಒಬ್ಬ ತಂದೆಯ ಜೊತೆ ಸತ್ಯ
ಪ್ರೀತಿಯನ್ನಿಟ್ಟುಕೊಳ್ಳಬೇಕು.
ವರದಾನ:
ಕರ್ಮ ಮತ್ತು
ಯೋಗದ ಬ್ಯಾಲೆನ್ಸ್ ನಿಂದ ಬ್ಲೆಸ್ಸಿಂಗ್ ನ ಅನುಭವ ಮಾಡುವಂತಹ ಕರ್ಮಯೋಗಿ ಭವ.
ಕರ್ಮಯೋಗಿ ಅರ್ಥಾತ್
ಪ್ರತೀ ಕರ್ಮ ಯೋಗಯುಕ್ತವಾಗಿರುವುದು. ಕರ್ಮಯೋಗಿ ಆತ್ಮ ಸದಾ ಕರ್ಮ ಮತ್ತು ಯೋಗದ ಜೊತೆ ಅರ್ಥಾತ್
ಬ್ಯಾಲೆನ್ಸ್ ಇಡುವಂತಹವರಾಗಿರುತ್ತಾರೆ. ಕರ್ಮ ಮತ್ತು ಯೋಗದ ಬ್ಯಾಲೆನ್ಸ್ ಇರುವ ಕಾರಣ ಪ್ರತೀ
ಕರ್ಮದಲ್ಲಿ ತಂದೆಯಿಂದಂತೂ ಬ್ಲೆಸ್ಸಿಂಗ್ಸ್ ಸಿಗುತ್ತಲೇ ಇರುತ್ತೆ ಆದರೆ ಯಾರದೇ ಸಂಬಂಧ ಸಂಪರ್ಕ
ಬರುತ್ತಾರೆ ಅವರಿಂದಲೂ ಸಹ ಆಶೀರ್ವಾದ ಸಿಗುತ್ತದೆ. ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಹೃದಯದಿಂದ
ಅವರಿಗೆ ಆಶೀರ್ವಾದ ಹೊರಬರುವುದು ಬಹಳ ಒಳ್ಳೆಯವರಾಗಿದ್ದಾರೆ. ಬಹಳ ಒಳ್ಳೆಯವರು ಎಂದು
ಒಪ್ಪಿಕೊಳ್ಳುವುದೇ ಆಶೀರ್ವಾದವಾಗಿದೆ.
ಸ್ಲೋಗನ್:
ಸೆಕೆಂಡ್ ನಲ್ಲಿ
ಸಂಕಲ್ಪಗಳನ್ನು ನಿಲ್ಲಿಸುವ ಅಭ್ಯಾಸವೇ ಕರ್ಮಾತೀತ ಅವಸ್ಥೆಯ ಸಮೀಪ ತರುವುದು.