26.05.19 Avyakt Bapdada
Kannada
Murli
03.12.84 Om Shanti Madhuban
“ಸರ್ವಸಮರ್ಥಶಿಕ್ಷಕನಶ್ರೇಷ್ಠಶಿಕ್ಷಾಧಾರಿಆಗಿರಿ"
ಇಂದು ಸರ್ವಶಕ್ತಿವಂತ
ತಂದೆಯು ತನ್ನ ನಾಲ್ಕೂ ಕಡೆಯ ಶಕ್ತಿ ಸೇನೆಯನ್ನು ನೋಡುತ್ತಿದ್ದಾರೆ. ಯಾರ್ಯಾರು ಸದಾ ಸರ್ವಶಕ್ತಿಗಳ
ಶಸ್ತ್ರಧಾರಿ, ಮಹಾವೀರ ವಿಜಯಿ ವಿಶೇಷ ಆತ್ಮರಾಗಿದ್ದಾರೆ. ಯಾರ್ಯಾರು ಸದಾ ಅಲ್ಲ ಆದರೆ ಸಮಯದಲ್ಲಿ,
ಸಮಯದನುಸಾರವಾಗಿ ಶಸ್ತ್ರಧಾರಿಗಳಾಗುತ್ತಾರೆ. ಯಾರ್ಯಾರು ಸಮಯದಲ್ಲಿ ಶಸ್ತ್ರಧಾರಿಯಾಗುವ
ಪ್ರಯತ್ನಮಾಡುತ್ತಾರೆ ಆದ್ದರಿಂದ ಕೆಲವೊಮ್ಮೆ ಯುದ್ಧ ಮಾಡಬಹುದು, ಕೆಲವೊಮ್ಮೆ ಸೋಲಬಹುದು.
ಕೆಲವೊಮ್ಮೆ ಯುದ್ಧ, ಕೆಲವೊಮ್ಮೆ ಸೋಲಿನ ಚಕ್ರದಲ್ಲಿ ನಡೆಯುತ್ತಿರುತ್ತಾರೆ. ಇಂತಹ ಮೂರು ಪ್ರಕಾರದ
ಸೇನೆಯ ಅಧಿಕಾರಿ ಮಕ್ಕಳನ್ನು ನೋಡಿದೆವು. ಆದರೆ ವಿಜಯಿ ಶ್ರೇಷ್ಠಾತ್ಮರು ಸದಾ ಮುಂಚಿತವಾಗಿಯೇ
ಎವರೆಡಿಯಾಗಿರುತ್ತಾರೆ. ಸಮಯದನುಸಾರವಾಗಿ ಶಸ್ತ್ರಧಾರಿಯಾಗುವುದರಲ್ಲಿ ಸಮಯವು ಶಿಕ್ಷಕನಾಗಿ
ಬಿಡುತ್ತದೆ. ಸಮಯವೆಂಬ ಶಿಕ್ಷಕನ ಆಧಾರದ ಮೇಲೆ ನಡೆಯುವವರು ಸರ್ವಶಕ್ತಿವಂತ ಶಿಕ್ಷಕನ ಶಿಕ್ಷಣದಿಂದ
ಎವರೆಡಿಯಾಗಿರದಿರುವ ಕಾರಣದಿಂದ, ಕೆಲವೊಮ್ಮೆ ಸಮಯದಲ್ಲಿ ಮೋಸವನ್ನೂ ಅನುಭವಿಸಿ ಬಿಡುತ್ತಾರೆ.
ಮೋಸವನ್ನನುಭವಿಸುವುದರಿಂದ ಸ್ಮೃತಿಯ ಜಾಗರೂಕತೆಯಲ್ಲಿ ಬರುತ್ತಾರೆ ಆದ್ದರಿಂದ ಸರ್ವಶಕ್ತಿವಂತಹ
ಶಿಕ್ಷಕನ ಶ್ರೇಷ್ಠ ಶಿಕ್ಷಾಧಾರಿಯಾಗಿರಿ. ಸಮಯವೆಂಬ ಶಿಕ್ಷಕನ ಶಿಕ್ಷಾಧಾರಿಯಲ್ಲ.
ಕೆಲಮಕ್ಕಳು ಬಾಪ್ದಾದಾರವರೊಂದಿಗೆ ಆತ್ಮಿಕ ವಾರ್ತಾಲಾಪ ಮಾಡುತ್ತಾ ಅಥವಾ ಪರಸ್ಪರದಲ್ಲಿಯೂ ಆತ್ಮಿಕ
ವಾರ್ತಾಲಾಪವನ್ನು ಮಾಡುತ್ತಾ, ಸಾಧಾರಣ ರೂಪದಿಂದ ಇದನ್ನೇ ಮಾತನಾಡುತ್ತಿರುತ್ತಾರೆ- ಸಮಯ ಬಂದಾಗ
ಎಲ್ಲವೂ ಸರಿಯಾಗಿ ಬಿಡುತ್ತದೆ. ಸಮಯದಲ್ಲಿ ತೋರಿಸಿ ಬಿಡುತ್ತೇವೆ ಅಥವಾ ಸಮಯದಲ್ಲಿ ಮಾಡಿ
ಬಿಡುತ್ತೇವೆ. ಆದರೆ ತಾವು ವಿಶ್ವ ಪರಿವರ್ತಕ ಮಕ್ಕಳಿಗೆ ಸಂಪನ್ನ ಶ್ರೇಷ್ಠ ಸಮಯವನ್ನು ಆಹ್ವಾನ
ಮಾಡುವ ಕಾರ್ಯವು ಸಿಕ್ಕಿದೆ. ತಾವು ಸ್ವರ್ಣೀಮ ಪ್ರಭಾತದ ಸಮಯವನ್ನು ತರುವುದರಲ್ಲಿ
ನಿಮಿತ್ತರಾಗಿದ್ದೀರಿ. ತಾವು ಸಮಯವೆಂಬ ರಚನೆಯ ಮಾಸ್ಟರ್ ರಚೈತ, ಸಮಯ ಅರ್ಥಾತ್ ಯುಗ
ಪರಿವರ್ತಕರಾಗಿದ್ದೀರಿ, ವಿಜಯಿಯಾಗಿದ್ದೀರಿ. ಅಮರಭವದ ವರದಾನಿ ಸ್ವರೂಪರಾಗಿದ್ದೀರಿ ಆದ್ದರಿಂದ ಸಮಯ
ಪ್ರಮಾಣ ಮಾಡುವವರಲ್ಲ, ಆದರೆ ತಂದೆಯ ಆದೇಶ ಪ್ರಮಾಣ ನಡೆಯುವವರು. ಸಮಯವಂತು ಅಜ್ಞಾನಿ ಆತ್ಮರಿಗೂ
ಶಿಕ್ಷಕನಾಗಿ ಬಿಡುತ್ತದೆ. ತಮ್ಮ ಶಿಕ್ಷಕನು ಸಮರ್ಥ ತಂದೆ ಆಗಿದ್ದಾರೆ. ಯಾವುದೇ ತಯಾರಿಯು ಸಮಯಕ್ಕೆ
ಮೊದಲೇ ಆಗಿ ಬಿಡುತ್ತದೆ, ಆ ಸಮಯದಲ್ಲಲ್ಲ. ಎವರೆಡಿ ಸರ್ವಶಸ್ತ್ರ ಶಕ್ತಿಧಾರಿ ಸೇನೆಯಾಗಿದ್ದೀರಿ.
ಅಂದಮೇಲೆ ಮಾಯೆಯು ಅದೇ ಬಲಹೀನತೆಯ ವಿಧಿಯ ಮೂಲಕವೇ ಯುದ್ಧಮಾಡುತ್ತದೆ ಆದ್ದರಿಂದ ಇದರಲ್ಲಿಯೂ
ಹುಡುಗಾಟಿಕೆಯಾಗಬೇಡಿ ಮತ್ತು ಎಲ್ಲವೂ ಸರಿಯಾಗಿದೆ, ಸ್ವಲ್ಪವೇನಾದರೂ ಒಂದು ಮಾತಿನಲ್ಲಿ
ಬಲಹೀನತೆಯಿದೆ, ಆದರೆ ಒಂದು ಬಲಹೀನತೆಯು ಮಾಯೆಯ ಯುದ್ಧಕ್ಕೆ ದಾರಿಯಾಗಿ ಬಿಡುತ್ತದೆ. ಹೇಗೆ ತಂದೆಯದು
ಮಕ್ಕಳೊಂದಿಗೆ ಪ್ರತಿಜ್ಞೆಯಿದೆ- ಎಲ್ಲಿ ತಂದೆಯ ನೆನಪಿದೆ, ಅಲ್ಲಿ ಸದಾ ನಾನು ಜೊತೆಯಿದ್ದೇನೆ, ಹೀಗೆ
ಮಾಯೆಯದೂ ಚಾಲೆಂಜ್ ಇದೆ- ಎಲ್ಲಿ ಬಲಹೀನತೆಯಿದೆ, ಅಲ್ಲಿ ನಾನು ವ್ಯಾಪಕನಾಗಿರುವೆನು. ಆದ್ದರಿಂದ
ಬಲಹೀನತೆಯ ಅಂಶ ಮಾತ್ರದಲ್ಲಿಯೂ ಮಾಯೆಯ ವಂಶದ ಆಹ್ವಾನವನ್ನು ಮಾಡಿ ಬಿಡುತ್ತದೆ. ಸರ್ವಶಕ್ತಿವಂತನ
ಮಕ್ಕಳಂತು ಎಲ್ಲದರಲ್ಲಿಯೂ ಸಂಪನ್ನವಾಗಿರಬೇಕು. ತಂದೆಯು ಮಕ್ಕಳಿಗೇನು ಆಸ್ತಿಯ ಅಧಿಕಾರವನ್ನು
ಕೊಡುತ್ತಾರೆ, ಅಥವಾ ಶಿಕ್ಷಕನ ರೂಪದಲ್ಲಿ ಈಶ್ವರೀಯ ವಿದ್ಯೆಯ ಪ್ರಾಲಬ್ಧ ಅಥವಾ ಡಿಗ್ರಿ ಕೊಡುತ್ತಾರೆ,
ಅದರಲ್ಲಿ ವರ್ಣನೆಯನ್ನೇನು ಮಾಡುತ್ತೀರಿ? ಸರ್ವಗುಣ ಸಂಪನ್ನ ಎಂದು ಹೇಳುತ್ತೀರಾ ಅಥವಾ ಗುಣ ಸಂಪನ್ನ
ಎಂದು ಹೇಳುತ್ತೀರಾ? ಸಂಪೂರ್ಣ ನಿರ್ವಿಕಾರಿ, 16 ಕಲಾ ಸಂಪನ್ನ ಎಂದು ಹೇಳುತ್ತೀರಿ, 14 ಕಲೆಯೆಂದು
ಹೇಳುವುದಿಲ್ಲ. 100% ಸಂಪೂರ್ಣ ಸುಖ-ಶಾಂತಿಯ ಆಸ್ತಿಯೆಂದು ಹೇಳುತ್ತೀರಿ. ಅಂದಮೇಲೆ ಆಗುವುದೂ ಸಹ
ಹೀಗಾಗಬೇಕಾಗುತ್ತದೆಯೇ ಅಥವಾ ಒಂದು ಅಥವಾ ಅರ್ಧ ಬಲಹೀನತೆಯು ನಡೆಯುತ್ತದೆಯೆಂದು ತಿಳಿಯುತ್ತೀರಾ?
ಲೆಕ್ಕಾಚಾರವು ಗುಹ್ಯವಾದುದಾಗಿದೆ. ಭೋಲಾನಾಥನೂ ಆಗಿದ್ದಾರೆ ಆದರೆ ಕರ್ಮಗಳ ಗತಿಯನ್ನು ಬಲ್ಲವರೂ
ಆಗಿದ್ದಾರೆ. ಕೊಡುವುದೂ ಸಹ ಬಹಳ ಹೆಚ್ಚು ಮಾಡಿ ಕೊಡುತ್ತಾರೆ ಮತ್ತು ಲೆಕ್ಕವನ್ನೂ ಕಣ ಕಣದ್ದೂ
ಮಾಡುತ್ತಾರೆ. ಒಂದುವೇಳೆ ಒಂದು ಅರ್ಧ ಬಲಹೀನತೆಯು ಇದ್ದು ಬಿಡುತ್ತದೆಯೆಂದರೆ, ಪ್ರಾಪ್ತಿಯಲ್ಲಿಯೂ
ಅರ್ಧ ಜನ್ಮ, ಒಂದು ಜನ್ಮದ ಹಿಂದೆ ಬರಬೇಕಾಗುತ್ತದೆ. ಶ್ರೀಕೃಷ್ಣನ ಜೊತೆ ಜೊತೆ ಅಥವಾ ವಿಶ್ವ
ಮಹಾರಾಜನ ಮೊದಲ ಲಕ್ಷ್ಮೀ-ನಾರಾಯಣನ ರಾಯಲ್ ಫ್ಯಾಮಿಲಿ ಅಥವಾ ಸಮೀಪ ಸಂಬಂಧದಲ್ಲಿ ಬರಲು ಸಾಧ್ಯವಿಲ್ಲ.
ಹೇಗೆ ಸಂವತ್ಸರವು 1-1-1ರಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಹೊಸ ಸಂಬಂಧ, ಹೊಸ ಪ್ರಕೃತಿ,
ನಂಬರ್ವನ್ ಹೊಸ ಆತ್ಮರು, ಹೊಸ ಅರ್ಥಾತ್ ಮೇಲಿಂದ ಇಳಿದಿರುವ ಹೊಸ ಆತ್ಮರು, ಹೊಸ ರಾಜ್ಯ, ಈ
ನವೀನತೆಯ ಸಮಯದ ಸುಖ, ಸತೋಪ್ರಧಾನ ನಂಬರ್ವನ್ ಪ್ರಕೃತಿಯ ಸುಖವನ್ನು ನಂಬರ್ವನ್ ಆತ್ಮರೇ
ಪಡೆದುಕೊಳ್ಳಬಹುದು. ನಂಬರ್ವನ್ ಅರ್ಥಾತ್ ಮಾಯೆಯ ಮೇಲೆ ವಿನ್ ಮಾಡುವವರು. ಅದರಿಂದ ಲೆಕ್ಕಾಚಾರವು
ಪೂರ್ಣವಾಗುತ್ತದೆ. ತಂದೆಯಿಂದ ವರದಾನ ಅಥವಾ ಆಸ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ
ಪ್ರತಿಜ್ಞೆಯಲ್ಲಿ ಇದನ್ನೇ ಮಾಡಿದಿರಿ- ಜೊತೆಯಿರುತ್ತೇವೆ, ಜೊತೆ ಹೋಗುತ್ತೇವೆ ಮತ್ತು ನಂತರ
ಹಿಂತಿರುಗಿ ಬ್ರಹ್ಮಾ ತಂದೆಯ ಜೊತೆಯಲ್ಲಿ ರಾಜ್ಯಾಡಳಿತಲ್ಲಿ ಬರುತ್ತೇವೆ. ಹಿಂದಿಂದೆ ಬರುತ್ತೇವೆ
ಎಂದು ಪ್ರತಿಜ್ಞೆಯನ್ನು ಮಾಡಲಿಲ್ಲ ಅಲ್ಲವೇ? ಸಮಾನರಾಗಲೇಬೇಕು, ಜೊತೆಯಿರಬೇಕು. ಸಂಪನ್ನತೆ,
ಸಮಾನತೆಯು ಸದಾ ಜೊತೆಯ ಪ್ರಾಲಬ್ಧದ ಅಧಿಕಾರಿಯನ್ನಾಗಿ ಮಾಡುತ್ತದೆ ಆದ್ದರಿಂದ ಸಂಪನ್ನ ಮತ್ತು
ಸಮಾನರಾಗುವ ಸಮಯದಲ್ಲಿ ಹುಡುಗಾಟಿಕೆಯಲ್ಲಿ ಕಳೆದು, ಅಂತ್ಯದ ಸಮಯದಲ್ಲಿ ಜಾಗೃತೆಯಲ್ಲಿ
ಬರುತ್ತೀರೆಂದರೆ ಏನು ಪಡೆಯುವಿರಿ!
ಅಂದಮೇಲೆ ಇಂದು ಎಲ್ಲರ ಸರ್ವಶಕ್ತಿಗಳ ಶಸ್ತ್ರಗಳ ಪರಿಶೀಲನೆಯನ್ನು ಮಾಡುತ್ತಿದ್ದೆವು.
ಫಲಿತಾಂಶವನ್ನು ತಿಳಿಸಿದೆವು- ಮೂರು ಪ್ರಕಾರದ ಮಕ್ಕಳನ್ನು ನೋಡಿದೆವು. ತಾವು ಯೋಚಿಸುತ್ತೀರಿ-
ಮುಂದೆ ನಡೆದಂತೆ ಈ ಹುಡುಗಾಟಿಕೆಯ ತುಂಟಾಟ, ಇಷ್ಟು ಸ್ವಲ್ಪವಂತು ನಡೆಯುತ್ತದೆ, ಇಷ್ಟು
ಸಹಯೋಗವನ್ನಂತು ತಂದೆಯು ಮಾಡಿಯೇ ಬಿಡುತ್ತಾರೆ ಎಂದು. ಆದರೆ ಈ ತುಂಟಾಟವು ಸೂಕ್ಷ್ಮವಾದ ಸಮಯದಲ್ಲಿ
ಮೋಸವನ್ನು ಮಾಡದಿರಲಿ. ಮತ್ತು ಮಕ್ಕಳು ತುಂಟಾಟದಿಂದ ದೂರನ್ನು ಕೊಡದಿರಲಿ- ಇಷ್ಟಂತು
ಯೋಚಿಸಿರಲಿಲ್ಲ ಆದ್ದರಿಂದ ಸೂಕ್ಷ್ಮವಾದ ಸಮಯವು ಮುಂದೆ ಬರುತ್ತಿದೆ. ಭಿನ್ನ-ಭಿನ್ನ ಪ್ರಕಾರದ
ಏರುಪೇರುಗಳು ಹೆಚ್ಚುತ್ತಲೇ ಇರುತ್ತದೆ. ಇದು ಸಮಯ ಬರುವ ಚಿಹ್ನೆಗಳಾಗಿವೆ. ಈ ಡ್ರಾಮಾದಲ್ಲಿ
ಸೂಚನೆಯಿದೆ- ತೀವ್ರ ಗತಿಯಿಂದ ಸಂಪನ್ನರಾಗುವ ಸೂಚನೆ. ತಿಳಿಯಿತೆ!
ವರ್ತಮಾನದಲ್ಲಿ ಮಧುಬನದಲ್ಲಿ ಮೂರು ಕಡೆಯ ನದಿಗಳ ಮಿಲನವಾಗಿದೆ. ತ್ರಿವೇಣಿ ನದಿಯ
ಮಿಲನವಾಗಿದೆಯಲ್ಲವೆ! ಮೂರು ಕಡೆಗಳಿಂದ ಬಂದಿರುವ, ಲಗನ್ನಿನಿಂದ ತಲುಪಿರುವ ಮಕ್ಕಳನ್ನು ವಿಶೇಷವಾಗಿ
ನೋಡುತ್ತಾ, ಮಕ್ಕಳ ಸ್ನೇಹದಲ್ಲಿ ಬಾಪ್ದಾದಾರವರು ಹರ್ಷಿತವಾಗುತ್ತಾರೆ. ಮುಖದ ಭಾಷೆಯನ್ನು
ತಿಳಿದಿಲ್ಲ ಆದರೆ ಸ್ನೇಹದ ಭಾಷೆಯು ಗೊತ್ತಿದೆ. ಕರ್ನಾಟಕದವರು ಸ್ನೇಹದ ಭಾಷೆಯನ್ನು
ತಿಳಿದಿರುವವರಾಗಿದ್ದಾರೆ. ಮತ್ತು ಪಂಜಾಬ್ನವರು ಏನು ತಿಳಿದುಕೊಂಡಿದ್ದಾರೆ? ಪಂಜಾಬ್ನವರು ಘರ್ಜನೆ
ಮಾಡುವುದರಲ್ಲಿ ಬುದ್ಧಿವಂತರಿದ್ದಾರೆ. ಅಂದಮೇಲೆ ದೈವೀ ರಾಜಾಸ್ಥಾನದ ಘರ್ಜನೆಯ ಜಾಗದಲ್ಲಿ ಜಯ
ಜಯಕಾರವನ್ನು ಮಾಡುವವರಾಗಿದ್ದಾರೆ. ಗುಜರಾತಿನವರು ಏನು ಮಾಡುತ್ತಾರೆ? ಗುಜರಾತಿನವರು ಸದಾ
ಉಯ್ಯಾಲೆಯಲ್ಲಿ ತೂಗುತ್ತಿರುತ್ತಾರೆ. ತಮ್ಮ ಸಂಗಮಯುಗಿ ಸಮೀಪ ಸ್ಥಾನದ ಭಾಗ್ಯದ ಉಯ್ಯಾಲೆಯಲ್ಲಿಯೂ
ತೂಗುತ್ತೀರಿ. ಖುಷಿಯಲ್ಲಿ ತೂಗುತ್ತಿರುತ್ತೀರಿ- ನಾವಂತು ಬಹಳ ಸಮೀಪವಿದ್ದೇವೆ. ಅಂದಮೇಲೆ
ಗುಜರಾತಿನವರು ಭಿನ್ನ-ಭಿನ್ನ ಉಯ್ಯಾಲೆಗಳಲ್ಲಿ ತೂಗುವವರಾಗಿದ್ದಾರೆ. ವೆರೈಟಿ ಗ್ರೂಪ್ ಸಹ ಇದೆ.
ವೆರೈಟಿ ಎಲ್ಲರಿಗೂ ಇಷ್ಟವಾಗುತ್ತದೆ. ಹೂಗುಚ್ಛದಲ್ಲಿಯೂ ಸಹ ವೆರೈಟಿ ರಂಗು, ರೂಪ, ಸುಗಂಧವಿರುವ
ಹೂಗಳು ಪ್ರಿಯವೆನಿಸುತ್ತದೆ. ಒಳ್ಳೆಯದು!
ಎಲ್ಲಾ ಕಡೆಯಿಂದ ಬಂದಿರುವ ಎಲ್ಲಾ ಶಕ್ತಿಶಾಲಿ, ಸದಾ ಅಲರ್ಟ್ ಆಗಿರುವಂತಹ, ಸದಾ ಸರ್ವ ಶಕ್ತಿಗಳ
ಶಸ್ತ್ರಧಾರಿಗಳು, ಸರ್ವ ಆತ್ಮರಿಗೆ ಸಂಪೂರ್ಣ ಸಂಪನ್ನರಾಗಿದ್ದು ಶಕ್ತಿಗಳ ಸಹಯೋಗವನ್ನು ಕೊಡುವವರು,
ಶ್ರೇಷ್ಠ ಕಾಲ, ಶ್ರೇಷ್ಠ ಯುಗವನ್ನು ತರುವಂತಹ, ಯುಗ ಪರಿವರ್ತಕ ನಂಬರ್ವನ್ ಆಗಿ, ನಂಬರ್ವನ್
ಸಂಪನ್ನ ರಾಜ್ಯ ಭಾಗ್ಯದ ಅಧಿಕಾರಿ- ಇಂತಹ ಸರ್ವ ಶ್ರೇಷ್ಠ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ
ಹಾಗೂ ನಮಸ್ತೆ.
ಪಂಜಾಬ್ಪಾರ್ಟಿಯೊಂದಿಗೆ- ಸದಾ ಪ್ರತೀ ಹೆಜ್ಜೆಯಲ್ಲಿ ನೆನಪಿನ ಶಕ್ತಿಯ ಮೂಲಕ ಪದಮಗಳ ಸಂಪಾದನೆಯನ್ನು
ಜಮಾ ಮಾಡಿಕೊಳ್ಳುತ್ತಾ ಮುಂದುವರೆಯುತ್ತಿದ್ದೀರಲ್ಲವೆ! ಪ್ರತೀ ಹೆಜ್ಜೆಯಲ್ಲಿ ಪದಮಗಳು ತುಂಬಿದೆಯೇ-
ಇದನ್ನು ಪರಿಶೀಲನೆ ಮಾಡುತ್ತಿರುತ್ತೀರಾ? ನೆನಪಿನ ಹೆಜ್ಜೆಯು ಸಂಪನ್ನವಾಗಿದೆ, ನೆನಪಿನಲ್ಲದೆ
ಹೆಜ್ಜೆಯು ಸಂಪನ್ನವಿಲ್ಲ, ಸಂಪಾದನೆಯಿಲ್ಲ. ಅಂದಮೇಲೆ ಪ್ರತೀ ಹೆಜ್ಜೆಯಲ್ಲಿ ಸಂಪಾದನೆಯನ್ನು ಜಮಾ
ಮಾಡಿಕೊಳ್ಳುವ ಸಂಪಾದಿಸುವ ಮಕ್ಕಳಲ್ಲವೆ! ಒಬ್ಬರಿದ್ದಾರೆ- ಕೇವಲ ತಿಂದರು, ಕುಡಿದರು ಮತ್ತು ಅದನ್ನು
ಖಾಲಿ ಮಾಡಿದರು ಮತ್ತು ಇನ್ನೊಬ್ಬರಿದ್ದಾರೆ- ಸಂಪಾದನೆಯನ್ನು ಜಮಾ ಮಾಡಿಕೊಳ್ಳುವವರು. ತಾವು ಎಂತಹ
ಮಕ್ಕಳು? ಎಲ್ಲಿ ಮಕ್ಕಳು ಸಂಪಾದಿಸುತ್ತಾರೆ, ತನಗಾಗಿಯೂ ಮತ್ತು ತಂದೆಗಾಗಿಯೂ ಸಂಪಾದಿಸುತ್ತಾರೆ.
ಇಲ್ಲಿ ತಂದೆಗಂತು ಬೇಕಾಗಿಲ್ಲ. ತಮಗಾಗಿಯೇ ಸಂಪಾದಿಸಿಕೊಳ್ಳುತ್ತೀರಿ. ಸದಾ ಪ್ರತೀ ಹೆಜ್ಜೆಯಲ್ಲಿ
ಜಮಾ ಮಾಡಿಕೊಳ್ಳುವವರು, ಸಂಪಾದನೆ ಮಾಡಿಕೊಳ್ಳುವ ಮಕ್ಕಳಾಗಿದ್ದೇವೆಯೇ- ಇದನ್ನು ಪರಿಶೀಲನೆ ಮಾಡಿರಿ.
ಏಕೆಂದರೆ ಸಮಯವು ಸೂಕ್ಷ್ಮವಾಗುತ್ತಾ ಹೋಗುತ್ತಿದೆ. ಅಂದಮೇಲೆ ಸಂಪಾದನೆಯು ಎಷ್ಟು ಜಮಾ ಆಗುತ್ತದೆಯೋ
ಅಷ್ಟು ಆರಾಮದಿಂದ ಶ್ರೇಷ್ಠ ಪ್ರಾಲಬ್ಧದ ಅನುಭವವನ್ನು ಮಾಡುತ್ತಿರುತ್ತೀರಿ. ಭವಿಷ್ಯದಲ್ಲಂತು
ಪ್ರಾಪ್ತಿಯಿದ್ದೇ ಇದೆ. ಅಂದಮೇಲೆ ಈ ಸಂಪಾದನೆಯ ಪ್ರಾಪ್ತಿಯು ಈಗ ಸಂಗಮದಲ್ಲಿಯೂ ಆಗುತ್ತದೆ ಮತ್ತು
ಭವಿಷ್ಯದಲ್ಲಿಯೂ ಆಗುತ್ತದೆ. ಅಂದಮೇಲೆ ಎಲ್ಲರೂ ಸಂಪಾದನೆ ಮಾಡುವವರಾಗಿದ್ದೀರಾ ಅಥವಾ ಸಂಪಾದಿಸಿದಿರಿ
ಮತ್ತು ತಿಂದು ಬಿಡುವರೇ!
ತಂದೆಯ ಮಕ್ಕಳು. ಹೇಗೆ ತಂದೆಯು ಸಂಪನ್ನವಾಗಿದ್ದಾರೆ, ಸಂಪೂರ್ಣವಾಗಿದ್ದಾರೆ, ಹಾಗೆಯೇ ಮಕ್ಕಳೂ ಸಹ
ಸದಾ ಸಂಪನ್ನವಿರುವವರು. ಎಲ್ಲರೂ ಬಹದ್ದೂರರಾಗಿದ್ದಾರಲ್ಲವೆ? ಭಯ ಪಡುವವರಂತು ಅಲ್ಲ ಅಲ್ಲವೆ?
ಸ್ವಲ್ಪ ಭಯದ ಅಂಶ, ಸಂಕಲ್ಪದಲ್ಲಿಯೂ ಬರುತ್ತದೆಯೇ ಅಥವಾ ಇಲ್ಲವೇ? ಇದು ಹೊಸದೇನಲ್ಲ ಅಲ್ಲವೆ. ಎಷ್ಟೇ
ಸಾರಿ ಇದಾಗಿರಬಹುದು, ಅನೇಕ ಬಾರಿ ರಿಪೀಟ್ ಆಗಿ ಬಿಟ್ಟಿದೆ. ಈಗ ಆಗುತ್ತಿದೆ ಆದ್ದರಿಂದ
ಗಾಬರಿಯಾಗುವ ಮಾತಿಲ್ಲ. ಶಕ್ತಿಯರೂ ನಿರ್ಭಯರಾಗಿದ್ದೀರಲ್ಲವೆ. ಶಕ್ತಿಯರು ಸದಾ ವಿಜಯಿ, ಸದಾ
ನಿರ್ಭಯ. ಯಾವಾಗ ತಂದೆಯ ಛತ್ರಛಾಯೆಯಲ್ಲಿ ಇರುವವರಾಗಿದ್ದೀರಿ ಅಂದಮೇಲೆ ನಿರ್ಭಯರಾಗಿಯೇ ಇರುತ್ತೀರಿ.
ಯಾವಾಗ ತಮ್ಮನ್ನು ಒಂಟಿಯೆಂದು ತಿಳಿಯುತ್ತೀರಿ, ಆಗ ಭಯವಾಗುತ್ತದೆ. ಛತ್ರಛಾಯೆಯಲ್ಲಿ
ಭಯವಾಗುವುದಿಲ್ಲ. ಸದಾ ನಿರ್ಭಯವಿರುತ್ತದೆ. ಶಕ್ತಿಯರ ವಿಜಯವು ಸದಾ ಗಾಯನಗೊಂಡಿದೆ. ಎಲ್ಲರೂ ವಿಜಯಿ
ಸಿಂಹಗಳಾಗಿದ್ದೀರಲ್ಲವೆ! ಶಿವ ಶಕ್ತಿಯರ, ಪಾಂಡವರ ವಿಜಯವಾಗುವುದಿಲ್ಲವೆಂದರೆ ಯಾರದಾಗುತ್ತದೆ!
ಪಾಂಡವ ಮತ್ತು ಶಕ್ತಿಯರು ಕಲ್ಪ-ಕಲ್ಪದ ವಿಜಯಿಯಾಗಿದ್ದಾರೆ. ಮಕ್ಕಳೊಂದಿಗೆ ತಂದೆಗೆ
ಸ್ನೇಹವಿದೆಯಲ್ಲವೆ. ತಂದೆಯ ಸ್ನೇಹಿ ಮಕ್ಕಳಿಗೆ ನೆನಪಿನಲ್ಲಿರುವ ಮಕ್ಕಳಿಗೆ ಏನೂ ಆಗಲು
ಸಾಧ್ಯವಿಲ್ಲ. ನೆನಪಿನ ಬಲಹೀನತೆಯಿರುತ್ತದೆಯೆಂದರೆ ಸ್ವಲ್ಪ ಕಿಡಿಯಷ್ಟು ಬರಬಹುದು. ನೆನಪಿನ
ಛತ್ರಛಾಯೆಯಿದೆಯೆಂದರೆ ಏನೂ ಸಹ ಆಗಲು ಸಾಧ್ಯವಿಲ್ಲ. ಬಾಪ್ದಾದಾರವರು ಯಾವುದಾದರೊಂದು ಸಾಧನದಿಂದ
ಪಾರು ಮಾಡಿ ಬಿಡುತ್ತಾರೆ. ಯಾವಾಗ ಭಕ್ತಾತ್ಮರಿಗೂ ಸಹ ಆಶ್ರಯವಿದೆ, ಅಂದಮೇಲೆ ಮಕ್ಕಳ ಆಶ್ರಯವು
ಸದಾಕಾಲವಿದ್ದೇ ಇರುತ್ತದೆ.
2. ಸದಾ ಸಾಹಸ ಮತ್ತು ಉಲ್ಲಾಸದ ರೆಕ್ಕೆಗಳಿಂದ ಹಾರುವವರಲ್ಲವೆ! ಸದಾ ಉಮ್ಮಂಗ-ಉತ್ಸಾಹದ ರೆಕ್ಕೆಗಳು
ಸ್ವಯಂನ್ನೂ ಹಾರಿಸುತ್ತದೆ ಮತ್ತು ಅನ್ಯರಿಗೂ ಹಾರಿಸುವ ಮಾರ್ಗವನ್ನು ತಿಳಿಸುತ್ತದೆ. ಇವೆರಡೇ
ರೆಕ್ಕೆಗಳು ಸದಾಕಾಲವೂ ಜೊತೆಯಿರಲಿ. ಒಂದು ರೆಕ್ಕೆಯೂ ಸಹ ಸಡಿಲವಾಗುತ್ತದೆಯೆಂದರೆ ಶ್ರೇಷ್ಠ
ಮಟ್ಟಕ್ಕೆ ಹಾರಲು ಸಾಧ್ಯವಾಗುವುದಿಲ್ಲ ಆದ್ದರಿಂದ ಇವೆರಡೂ ಅವಶ್ಯಕವಿದೆ. ಸಾಹಸವೂ,
ಉಮ್ಮಂಗ-ಉಲ್ಲಾಸವೂ ಇರಲಿ. ಸಾಹಸವು ಅಂತಹ ವಸ್ತುವಾಗಿದೆ, ಅದು ಅಸಂಭವವನ್ನೂ ಸಂಭವ ಮಾಡಬಹುದು,
ಸಾಹಸವು ಕಷ್ಟವನ್ನು ಸಹಜವನ್ನಾಗಿ ಮಾಡುವಂತದ್ದಾಗಿದೆ. ಕೆಳಗಿನಿಂದ ಶ್ರೇಷ್ಠಕ್ಕೆ
ಹಾರಿಸುವಂತದ್ದಾಗಿದೆ. ಅಂದಮೇಲೆ ಸದಾ ಹಾರುವಂತಹ ಅನುಭವಿ ಆತ್ಮರಾಗಿದ್ದೀರಲ್ಲವೆ! ಕೆಳಗೆ
ಬರುವುದರಿಂದಂತು ನೋಡಿ ಬಿಟ್ಟಿರಿ- ಪ್ರಾಪ್ತಿಯೇನಾಯಿತು! ಕೆಳಗೆ ಬೀಳುತ್ತಲೇ ಇರಬೇಕಾಯಿತು ಆದರೆ
ಈಗ ಹಾರುವ ಕಲೆಯ ಸಮಯವಾಗಿದೆ. ಹೈಜಂಪ್ನ ಸಮಯವೂ ಅಲ್ಲ. ಸೆಕೆಂಡಿನಲ್ಲಿ ಸಂಕಲ್ಪ ಮಾಡಲಾಯಿತು ಮತ್ತು
ಹಾರಿದಿರಿ. ಇಂತಹ ಶಕ್ತಿಯು ತಂದೆಯ ಮೂಲಕ ಸದಾ ಸಿಗುತ್ತಿರುತ್ತದೆ.
3. ಸ್ವಯಂನ್ನು ಸದಾ ಮಾಸ್ಟರ್ ಜ್ಞಾನ ಸೂರ್ಯನೆಂದು ತಿಳಿಯುತ್ತೀರಾ? ಜ್ಞಾನ ಸೂರ್ಯನ ಕಾರ್ಯವಾಗಿದೆ-
ಸರ್ವರಿಂದ ಅಜ್ಞಾನ ಅಂಧಕಾರದ ನಾಶಗೊಳಿಸುವುದು. ಸೂರ್ಯನು ತನ್ನ ಪ್ರಕಾಶತೆಯಿಂದ ರಾತ್ರಿಯನ್ನು
ಹಗಲನ್ನಾಗಿ ಮಾಡಿ ಬಿಡುತ್ತಾನೆ, ಅಂದಮೇಲೆ ಇಂತಹ ಮಾಸ್ಟರ್ ಜ್ಞಾನ ಸೂರ್ಯನು ವಿಶ್ವದಿಂದ
ಅಂಧಕಾರವನ್ನೇ ಸಮಾಪ್ತಿಗೊಳಿಸುವವರು, ಅಲೆಯುತ್ತಿರುವ ಆತ್ಮರಿಗೆ ಮಾರ್ಗವನ್ನು ತೋರಿಸುವವರು,
ರಾತ್ರಿಯನ್ನು ಹಗಲನ್ನಾಗಿ ಮಾಡುವವರಾಗಿದ್ದೀರಲ್ಲವೆ! ತಮ್ಮ ಈ ಕಾರ್ಯವು ಸದಾ ನೆನಪಿರುತ್ತದೆಯೇ?
ಹೇಗೆ ಲೌಕಿಕ ಕರ್ತವ್ಯವನ್ನು ಮರೆತೂ ಸಹ ಮರೆಯುವುದಿಲ್ಲ. ಅದಂತು ಒಂದು ಜನ್ಮದ ವಿನಾಶಿ
ಕಾರ್ಯವಾಗಿದೆ, ವಿನಾಶಿ ಕರ್ತವ್ಯ, ಇದಾಗಿದೆ- ಸದಾಕಾಲದ ಕರ್ತವ್ಯ- ನಾವು ಮಾಸ್ಟರ್
ಜ್ಞಾನಸೂರ್ಯನಾಗಿದ್ದೇವೆ. ಅಂದಮೇಲೆ ಸದಾ ತಮ್ಮ ಈ ಅವಿನಾಶಿ ಕರ್ತವ್ಯ ಅಥವಾ ಡ್ಯೂಟಿಯೆಂದು
ತಿಳಿದುಕೊಂಡು ಅಂಧಕಾರವನ್ನು ಸಮಾಪ್ತಿ ಮಾಡಿ ಪ್ರಕಾಶತೆಯನ್ನು ತರಬೇಕಾಗಿದೆ. ಇದರಿಂದ ಸ್ವಯಂನಿಂದಲೂ
ಅಂಧಕಾರವು ಸಮಾಪ್ತಿಯಾಗಿ ಪ್ರಕಾಶತೆಯಾಗುತ್ತದೆ ಏಕೆಂದರೆ ಪ್ರಕಾಶತೆಯನ್ನು ಕೊಡುವವರಂತು ಸ್ವಯಂ
ಪ್ರಕಾಶಮಯವಾಗಿಯೇ ಇರುತ್ತಾರೆ. ಅಂದಮೇಲೆ ಈ ಕಾರ್ಯವನ್ನು ಸದಾ ನೆನಪಿಟ್ಟುಕೊಳ್ಳಿರಿ ಮತ್ತು ತಾವು
ತಮ್ಮನ್ನು ಪ್ರತಿನಿತ್ಯವೂ ಪರಿಶೀಲಿಸಿರಿ- ನಾನು ಮಾಸ್ಟರ್ ಜ್ಞಾನಸೂರ್ಯನು ಪ್ರಕಾಶಮಯವಾಗಿದ್ದೇನೆಯೇ!
ಹೇಗೆ ಬೆಂಕಿಯನ್ನು ಶಮನ ಮಾಡುವವರು, ಸ್ವಯಂ ಬೆಂಕಿಯ ಕಿಡಿಯಲ್ಲಿ ಬರುವುದಿಲ್ಲ, ಅದೇ ರೀತಿ ಸದಾ
ಅಂಧಕಾರವನ್ನು ದೂರ ಮಾಡುವವರು ಅಂಧಕಾರದಲ್ಲಿ ಸ್ವಯಂ ಬರಲು ಸಾಧ್ಯವಿಲ್ಲ. ಅಂದಮೇಲೆ ನಾನು ಮಾಸ್ಟರ್
ಜ್ಞಾನಸೂರ್ಯನಾಗಿದ್ದೇನೆ ಎಂಬ ನಶೆ ಅಥವಾ ಖುಷಿಯು ಸದಾ ಇರಲಿ.
ಕುಮಾರರೊಂದಿಗೆಅವ್ಯಕ್ತ-ಬಾಪ್ದಾದಾರವರವಾರ್ತಾಲಾಪ:
1. ಕುಮಾರ
ಜೀವನವು ಶ್ರೇಷ್ಠ ಜೀವನವಾಗಿದೆ, ಕುಮಾರ ಜೀವನದಲ್ಲಿ ತಂದೆಯ ಮಕ್ಕಳಾಗಿ ಬಿಟ್ಟೆವು- ಇಂತಹ ತಮ್ಮ
ಶ್ರೇಷ್ಠ ಅದೃಷ್ಟವನ್ನು ನೋಡುತ್ತಾ ಸದಾ ಹರ್ಷಿತವಾಗಿರಿ ಮತ್ತು ಅನ್ಯರನ್ನೂ ಹರ್ಷಿತವಾಗಿರುವ
ವಿಧಿಯನ್ನು ತಿಳಿಸುತ್ತಿರಿ. ಎಲ್ಲರಿಗಿಂತಲೂ ನಿರ್ಬಂಧನರು ಕುಮಾರ ಮತ್ತು ಕುಮಾರಿಯರಾಗಿದ್ದಾರೆ.
ಕುಮಾರನು ಏನುಬೇಕೋ ಅದನ್ನು ತನ್ನ ಭಾಗ್ಯದಲ್ಲಿ ಮಾಡಿಕೊಳ್ಳಬಹುದು. ಸಾಹಸವಿರುವ
ಕುಮಾರರಾಗಿದ್ದೀರಲ್ಲವೇ! ಬಲಹೀನ ಕುಮಾರನಂತು ಅಲ್ಲ. ಯಾರೆಷ್ಟೇ ತನ್ನ ಕಡೆಗೆ ಆಕರ್ಷಿಸಲಿ ಆದರೆ
ಮಹಾವೀರ ಆತ್ಮರು ಒಬ್ಬ ತಂದೆಯಲ್ಲಿ ಅಲ್ಲದೆ ಎಲ್ಲಿಯೂ ಆಕರ್ಷಿತರಾಗಲು ಸಾಧ್ಯವಿಲ್ಲ. ಇಂತಹ
ಬಹದ್ದೂರರಾಗಿದ್ದೀರಿ. ಕೆಲವು ರೂಪದಿಂದ ಮಾಯೆಯು ತನ್ನವರನ್ನಾಗಿ ಮಾಡಿಕೊಳ್ಳುವ ಪ್ರಯತ್ನವನ್ನಂತು
ಮಾಡುತ್ತದೆ ಆದರೆ ನಿಶ್ಚಯಬುದ್ಧಿ ವಿಜಯಿ. ಗಾಬರಿಯಾಗುವವರಲ್ಲ. ಚೆನ್ನಾಗಿದೆ. ವಾಹ್ ನನ್ನ
ಶ್ರೇಷ್ಠ ಅದೃಷ್ಟವೇ! ಅಷ್ಟೇ ಇದೇ ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿರಿ. ನಮ್ಮಂತಹವರು ಯಾರೂ ಆಗಲು
ಸಾಧ್ಯವಿಲ್ಲ- ಈ ನಶೆಯಿಟ್ಟುಕೊಳ್ಳಿರಿ. ಎಲ್ಲಿ ಈಶ್ವರೀಯ ನಶೆಯಿರುತ್ತದೆ ಅಲ್ಲಿ ಮಾಯೆಯಿಂದ
ದೂರವಿರುತ್ತೀರಿ. ಸೇವೆಯಲ್ಲಂತು ಸದಾ ಬ್ಯುಜಿಯಾಗಿರುತ್ತೀರಲ್ಲವೆ! ಇದೂ ಸಹ ಅವಶ್ಯವಾಗಿರಬೇಕು.
ಸೇವೆಯಲ್ಲಿ ಎಷ್ಟು ಬ್ಯುಜಿಯಾಗಿರುತ್ತೀರಿ ಅಷ್ಟು ಸಹಜಯೋಗಿಯಾಗಿರುತ್ತೀರಿ ಆದರೆ ನೆನಪಿನ
ಸಹಿತವಿರುವ ಸೇವೆಯಂತು ಸುರಕ್ಷತೆಯಾಗಿದೆ. ನೆನಪಿಲ್ಲವೆಂದರೆ ಸುರಕ್ಷತೆಯಿಲ್ಲ.
2. ಕುಮಾರರು ಸದಾ ನಿರ್ವಿಘ್ನವಾಗಿದ್ದೀರಲ್ಲವೆ? ಮಾಯೆಯು ಆಕರ್ಷಣೆಯನ್ನಂತು ಮಾಡುವುದಿಲ್ಲವೇ?
ಕುಮಾರರಿಗೆ ಮಾಯೆಯು ತನ್ನವರನ್ನಾಗಿ ಮಾಡಿಕೊಳ್ಳುವ ಪ್ರಯತ್ನವನ್ನಂತು ಮಾಡುತ್ತಿರುತ್ತದೆ. ಮಾಯೆಗೆ
ಕುಮಾರರು ಬಹಳ ಇಷ್ಟವಾಗುತ್ತದೆ. ಅದು ತಿಳಿಯುತ್ತದೆ- ನನ್ನವರಾಗಿ ಬಿಡಲಿ. ಆದರೆ ತಾವೆಲ್ಲರಂತು
ಬಹದ್ದೂರರಾಗಿದ್ದೀರಲ್ಲವೆ! ಮಾಯೆಯ ಮಗುವಲ್ಲ, ಮಾಯೆಗೆ ಚಾಲೆಂಜ್ ಮಾಡುವವರು. ಅರ್ಧ ಕಲ್ಪದಲ್ಲಿ
ಮಾಯೆಯ ಮಕ್ಕಳಾಗಿದ್ದಿರಿ, ಸಿಕ್ಕಿದ್ದೇನು? ಎಲ್ಲವನ್ನೂ ಕಳೆದುಕೊಂಡಿರಿ ಆದ್ದರಿಂದ ಈಗ
ಪ್ರಭುವಿನವರಾಗಿಬಿಡಿ. ಪ್ರಭುವಿನವರಾಗುವುದು ಅರ್ಥಾತ್ ಸ್ವರದ ಅಧಿಕಾರವನ್ನು ಪಡೆಯುವುದು. ಅಂದಮೇಲೆ
ಎಲ್ಲಾ ಕುಮಾರರು ವಿಜಯಿ ಕುಮಾರರಾಗಿದ್ದಾರೆ. ನೋಡಿರಿ, ಕಚ್ಚಾ ಆಗಬಾರದು. ಮಾಯೆಗೆ ಕುಮಾರರೊಂದಿಗೆ
ವಿಶೇಷ ಪ್ರೀತಿ ಇದೆ ಆದ್ದರಿಂದ ನಾಲ್ಕೂ ಕಡೆಯಿಂದ ಆಕರ್ಷಿಸುತ್ತಿರುತ್ತದೆ, ನನ್ನವರಾಗಿ ಬಿಡಲಿ
ಎಂದು. ಆದರೆ ತಾವೆಲ್ಲರೂ ಸಂಕಲ್ಪವನ್ನು ಮಾಡಿ ಬಿಟ್ಟಿದ್ದೀರಿ. ಯಾವಾಗ ತಂದೆಯವರಾಗಿ ಬಿಟ್ಟಿರೆಂದರೆ
ನಿಶ್ಚಿಂತರಾಗಿ ಬಿಟ್ಟಿರಿ. ಸದಾ ನಿರ್ವಿಘ್ನ ಭವ, ಹಾರುವ ಕಲೆಯ ಭವ.
3. ಕುಮಾರ- ಸದಾ ಸಮರ್ಥ. ಎಲ್ಲಿ ಸಮರ್ಥತೆಯಿರುತ್ತದೆ ಅಲ್ಲಿ ಪ್ರಾಪ್ತಿಯಿದೆ. ಸದಾ ಸರ್ವಪ್ರಾಪ್ತಿ
ಸ್ವರೂಪ. ಜ್ಞಾನಪೂರ್ಣರಾಗಿರುವ ಕಾರಣದಿಂದ ಮಾಯೆಯ ಭಿನ್ನ-ಭಿನ್ನ ರೂಪಗಳನ್ನು ತಿಳಿದಿರುವವರು
ಆದ್ದರಿಂದ ತಮ್ಮ ಭಾಗ್ಯವನ್ನು ವೃದ್ಧಿ ಮಾಡಿಕೊಳ್ಳುತ್ತಿರಿ. ಸದಾ ಒಂದೇ ಮಾತನ್ನು ಪರಿಪಕ್ವ
ಮಾಡಿಕೊಳ್ಳಿರಿ- ಕುಮಾರ ಜೀವನ ಅರ್ಥಾತ್ ಮುಕ್ತ ಜೀವನ. ಯಾರು ಜೀವನ್ಮುಕ್ತರಾಗಿದ್ದಾರೆ, ಅವರು
ಸಂಗಮಯುಗದ ಪ್ರಾಪ್ತಿಯುಕ್ತರಾಗಿರುತ್ತಾರೆ. ಸದಾ ಮುಂದುವರೆಯುತ್ತಿರಿ ಮತ್ತು ಮುಂದುವರೆಸುತ್ತಿರಿ.
ಕುಮಾರರಂತು ಸದಾ ಖುಷಿಯಲ್ಲಿ ನರ್ತಿಸುತ್ತಿರಬೇಕು- ವಾಹ್ ಕುಮಾರ ಜೀವನ! ವಾಹ್ ಭಾಗ್ಯವೇ! ವಾಹ್
ಡ್ರಾಮಾ! ವಾಹ್ ಬಾಬಾ!..... ಇದೇ ಗೀತೆಯನ್ನು ಹಾಡುತ್ತಿರಿ. ಖುಷಿಯಲ್ಲಿರುತ್ತೀರೆಂದರೆ ಬಲಹೀನತೆಯು
ಬರಲು ಸಾಧ್ಯವಿಲ್ಲ. ಸೇವೆ ಮತ್ತು ನೆನಪು- ಎರಡರಿಂದ ಶಕ್ತಿಯನ್ನು ತುಂಬುತ್ತಿರಿ. ಕುಮಾರ ಜೀವನವು
ಹಗುರವಾದ ಜೀವನವಾಗಿದೆ. ಈ ಜೀವನದಲ್ಲಿ ತಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವುದು- ಎಲ್ಲದಕ್ಕಿಂತಲೂ
ಶ್ರೇಷ್ಠ ಭಾಗ್ಯವಾಗಿದೆ. ಎಷ್ಟೊಂದು ಬಂಧನಗಳಲ್ಲಿ ಬಂಧಿತರಾಗುವುದರಿಂದ ಪಾರಾಗಿ ಬಿಟ್ಟಿರಿ. ಸದಾ
ತಮ್ಮನ್ನು ಇಂತಹ ಡಬಲ್ಲೈಟ್ ಎಂದು ತಿಳಿಯುತ್ತಾ ಹಾರುವ ಕಲೆಯಲ್ಲಿ ನಡೆಯುತ್ತಿರುತ್ತೀರೆಂದರೆ ಮೊದಲ
ನಂಬರ್ರನ್ನು ತೆಗೆದುಕೊಂಡು ಬಿಡುತ್ತೀರಿ. ಒಳ್ಳೆಯದು. ಓಂ ಶಾಂತಿ.
ವರದಾನ:
ತಮ್ಮ ಮುಂದೆ
ಯಾರೇ ಕ್ರೋಧಾಗ್ನಿಯಲ್ಲಿ ಸುಡುತ್ತಿರುವವರು ಬಂದರು, ತಮಗೆ ನಿಂದನೆ ಮಾಡಿದರು, ಗ್ಲಾನಿ ಮಾಡಿದರು....
ಆಗ ಇಂತಹ ಆತ್ಮನಿಗೂ ಸಹ ತಮ್ಮ ಶುಭ ಭಾವನೆ, ಶುಭ ಕಾಮನೆಯ ಮೂಲಕ, ವೃತ್ತಿಯ ಮೂಲಕ, ಸ್ಥಿತಿಯ ಮೂಲಕ
ಗುಣ ದಾನ ಅಥವಾ ಸಹನಶೀಲತೆಯ ಶಕ್ತಿಯ ವರದಾನವನ್ನು ಕೊಡಿ. ಕ್ರೋಧಿ ಆತ್ಮನು ಪರವಶನಾಗಿದ್ದಾನೆ,
ಇಂತಹ ಪರವಶ ಆತ್ಮನಿಗೆ ದಯೆಯ ಶೀತಲ ಜಲದ ಮೂಲಕ ಶಾಂತ ಮಾಡಿ ಬಿಡಿ, ಇದು ತಾವು ವರದಾನಿ ಆತ್ಮರ
ಕರ್ತವ್ಯವಾಗಿದೆ. ಚೈತನ್ಯದಲ್ಲಿ ಯಾವಾಗ ತಮ್ಮಲ್ಲಿ ಇಂತಹ ಸಂಸ್ಕಾರವು ತುಂಬಿರುತ್ತದೆ, ಆಗಲೇ ಜಡ
ಚಿತ್ರಗಳ ಮೂಲಕ ಭಕ್ತರಿಗೆ ವರದಾನವು ಸಿಗುತ್ತದೆ.
ಸ್ಲೋಗನ್:
ನೆನಪಿನ ಮೂಲಕ
ಸರ್ವಶಕ್ತಿಗಳ ಖಜಾನೆಯನ್ನು ಅನುಭವ ಮಾಡುವವರೇ ಶಕ್ತಿ ಸಂಪನ್ನರಾಗುತ್ತಾರೆ.