21.01.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯ ಸಮಾನ ಆತ್ಮೀಯ ಶಿಕ್ಷಕರಾಗಿ, ಏನನ್ನು ತಂದೆಯಿಂದ ಓದಿದ್ದೀರೋ ಅದನ್ನು ಅನ್ಯರಿಗೂ ಓದಿಸಿ, ಧಾರಣೆಯಾಗಿದೆ ಅಂದರೆ ಅನ್ಯರಿಗೂ ಅದನ್ನು ತಿಳಿಸಿ ತೋರಿಸಿರಿ”

ಪ್ರಶ್ನೆ:
ಯಾವ ಮಾತಿನಲ್ಲಿ ತಂದೆಗೆ ಅಟಲ ನಿಶ್ಚಯವಿದೆ? ಮಕ್ಕಳೂ ಸಹ ಅದರಲ್ಲಿ ಅಟಲವಾಗಬೇಕಾಗಿದೆ?

ಉತ್ತರ:
ತಂದೆಗೆ ಡ್ರಾಮಾದ ಮೇಲೆ ಅಟಲ ನಿಶ್ಚಯವಿದೆ. ಏನು ಕಳೆದುಹೋಯಿತೋ ಅದು ಡ್ರಾಮಾ. ಕಲ್ಪದ ಮೊದಲು ಏನು ಮಾಡಿದ್ದೇವೆಯೋ ಅದನ್ನೇ ಮಾಡುತ್ತೇವೆ. ಡ್ರಾಮಾ ನಿಮ್ಮನ್ನು ಏರಿಳಿತವಾಗಲು ಬಿಡುವುದಿಲ್ಲ ಎಂದು ತಂದೆಯು ಹೇಳುತ್ತಾರೆ ಆದರೆ ಇಲ್ಲಿಯವರೆಗೂ ಮಕ್ಕಳದು ಆ ಸ್ಥಿತಿಯು ಬಂದಿಲ್ಲ. ಆದ್ದರಿಂದ ಬಾಯಿಂದ ಈ ಮಾತು ಬರುತ್ತದೆ - ಈ ರೀತಿ ಇದ್ದಿದ್ದರೆ ಹೀಗೆ ಮಾಡುತ್ತಿದ್ದೆವು. ಮೊದಲೇ ತಿಳಿದಿದ್ದರೆ ಈ ರೀತಿ ಮಾಡುತ್ತಿರಲಿಲ್ಲ ಎಂದು ಹೇಳುತ್ತಾರೆ. ಆದರೆ ತಂದೆಯು ಏನು ಹೇಳುತ್ತಾರೆಂದರೆ ಕಳೆದು ಹೋಗಿದ್ದಕ್ಕೆ ಚಿಂತಿಸಬೇಡಿ, ಮುಂದೆ ಅಂತಹ ಯಾವುದೇ ತಪ್ಪಾಗದಂತೆ ಪುರುಷಾರ್ಥ ಮಾಡಿರಿ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಸ್ವಯಂ ತಂದೆ ಹೇಳುತ್ತಾರೆ - ಯಾವಾಗ ನಾನು ಬರುತ್ತೇನೆಂದು ಯಾರಿಗೂ ಅರ್ಥವಾಗುವುದಿಲ್ಲ, ಏಕೆಂದರೆ ನಾನು ಗುಪ್ತವಾಗಿದ್ದೇನೆ. ಹೇಗೆ ಗರ್ಭದಲ್ಲಿಯೂ ಆತ್ಮವು ಪ್ರವೇಶ ಮಾಡುವಾಗ ಅದು ಪ್ರವೇಶವಾಗುವುದು ತಿಳಿಯುವುದೇ ಇಲ್ಲ, ಅದರ ತಿಥಿ-ತಾರೀಖನ್ನು ಹೇಳಲು ಸಾಧ್ಯವಿಲ್ಲ. ಅದು ಗರ್ಭದಿಂದ ಹೊರ ಬಂದಾಗ ಅದರ ತಿಥಿ-ತಾರೀಖನ್ನು ತಿಳಿಸುತ್ತಾರೆ ಹಾಗೆಯೇ ತಂದೆಯ ಅವತರಣೆಯಾದ ತಿಥಿ-ತಾರೀಖು ಅರ್ಥವಾಗುವುದಿಲ್ಲ. ಯಾವಾಗ ಪ್ರವೇಶ ಮಾಡಿದರು, ಯಾವಾಗ ರಥದಲ್ಲಿ ಬಂದರು ಏನೂ ತಿಳಿಯುವುದಿಲ್ಲ. ಯಾರನ್ನೇ ನೋಡಿದರೂ ಅವರು ನಶೆಯಲ್ಲಿ ಹೊರಟು ಹೋಗುತ್ತಿದ್ದರು, ಆಗಿನಿಂದ ಇದನ್ನು ತಿಳಿದುಕೊಳ್ಳುತ್ತಾ ಬಂದರು - ಏನೋ ಪ್ರವೇಶತೆಯಾಗಿದೆ ಅಥವಾ ಯಾವುದೋ ಶಕ್ತಿಯು ಬಂದಿದೆ ಆದರೆ ಆ ಶಕ್ತಿಯು ಎಲ್ಲಿಂದ ಬಂದಿತು, ನಾನಂತೂ ವಿಶೇಷವಾಗಿ ಯಾವುದೇ ಜಪ-ತಪವನ್ನಂತೂ ಮಾಡಿಲ್ಲ. ಇದಕ್ಕೆ ಗುಪ್ತವೆಂದು ಹೇಳಲಾಗುತ್ತದೆ. ಯಾವುದೇ ತಿಥಿ-ತಾರೀಖು ಇಲ್ಲ, ಸೂಕ್ಷ್ಮವತನದ ಸ್ಥಾಪನೆಯೂ ಸಹ ಯಾವಾಗ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮುಖ್ಯ ಮಾತಾಗಿದೆ - ಮನ್ಮನಾಭವ. ತಂದೆಯು ತಿಳಿಸುತ್ತಾರೆ - ಹೇ ಆತ್ಮರೇ, ನೀವು ತಂದೆಯಾದ ನನ್ನನ್ನು ಕರೆಯುತ್ತೀರಿ - ಬಂದು ಪತಿತರನ್ನು ಪಾವನ ಮಾಡಿರಿ, ಪಾವನ ಪ್ರಪಂಚ ಮಾಡಿ ಎಂದು. ತಂದೆಯು ತಿಳಿಸುತ್ತಾರೆ - ಡ್ರಾಮಾ ಪ್ಲಾನ್ನುಸಾರ ಯಾವಾಗ ನಾನು ಬರುತ್ತೇನೆಯೋ ಆಗ ಅವಶ್ಯವಾಗಿ ಪರಿವರ್ತನೆಯಾಗುತ್ತದೆ. ಸತ್ಯಯುಗದಿಂದ ಹಿಡಿದು ಏನೆಲ್ಲವೂ ಕಳೆಯಿತೋ ಅದನ್ನು ಪುನಃ ರಿಪೀಟ್ ಮಾಡುತ್ತೀರಿ. ಸತ್ಯ-ತ್ರೇತಾಯುಗವು ಪುನಃ ಅವಶ್ಯವಾಗಿ ಪುನರಾವರ್ತನೆಯಾಗುವುದು. ಕ್ಷಣ-ಕ್ಷಣವು ಕಳೆಯುತ್ತಾ ಹೋಗುತ್ತದೆ. ಸಂವತ್ಸರವು ಕಳೆಯುತ್ತಾ ಹೋಗುತ್ತದೆ. ಸತ್ಯಯುಗವು ಕಳೆಯಿತು ಎಂದು ಹೇಳುತ್ತಾರೆ. ಆದರೆ ನೋಡಿಯಂತೂ ಇಲ್ಲ, ತಂದೆಯು ತಿಳಿಸಿದ್ದಾರೆ. ನೀವೇ ಕಳೆಯುತ್ತಾ ಬಂದಿದ್ದೀರಿ, ನೀವೇ ಮೊಟ್ಟ ಮೊದಲು ನನ್ನಿಂದ ಅಗಲಿದ್ದೀರಿ. ಅಂದಮೇಲೆ ಇದರ ಮೇಲೆ ಈಗ ವಿಚಾರ ಮಾಡಿ- ಹೇಗೆ ನಾವು 84 ಜನ್ಮಗಳನ್ನು ತೆಗೆದುಕೊಂಡೆವು, ಯಾವುದನ್ನು ಪುನಃ ಅದೇ ರೀತಿ ತೆಗೆದುಕೊಳ್ಳಬೇಕಾಗುತ್ತದೆ ಅರ್ಥಾತ್ ದುಃಖ ಹಾಗೂ ಸುಖದ ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ಸತ್ಯಯುಗದಲ್ಲಂತೂ ಸುಖವಿರುತ್ತದೆ, ಯಾವಾಗ ಮನೆಯು ಹಳೆಯದಾಗುವುದೋ ಆಗ ಕೆಲವೊಂದು ಕಡೆ ಮಳೆಯ ನೀರು ಸೋರುತ್ತದೆ. ಕೆಲವೊಂದು ಕಡೆ ಬೀಳುತ್ತಿರುತ್ತದೆ ಆಗ ಇದನ್ನು ರಿಪೇರಿ ಮಾಡಿಸಬೇಕೆಂದು ಚಿಂತೆಯಾಗುತ್ತದೆ. ಯಾವಾಗ ಬಹಳ ಹಳೆಯದಾಗಿ ಬಿಡುವುದೋ ಆಗ ಈ ಮನೆಯು ಇರುವುದಕ್ಕೆ ಯೋಗ್ಯವಿಲ್ಲವೆಂದು ತಿಳಿದುಕೊಳ್ಳುವರು. ಆದರೆ ಹೊಸ ಪ್ರಪಂಚಕ್ಕಾಗಿ ಈ ರೀತಿ ಹೇಳುವುದಿಲ್ಲ. ನೀವೀಗ ಹೊಸ ಪ್ರಪಂಚದಲ್ಲಿ ಹೋಗಲು ಯೋಗ್ಯರಾಗುತ್ತೀರಿ. ಪ್ರತೀ ವಸ್ತು ಮೊದಲು ಹೊಸದಾಗಿತ್ತು, ನಂತರ ಹಳೆಯದಾಗುತ್ತದೆ.

ಈಗ ನೀವು ಮಕ್ಕಳಿಗೆ ಈ ವಿಚಾರ ಬರುತ್ತದೆ - ಮತ್ತ್ಯಾರೂ ಈ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಗೀತಾ-ರಾಮಾಯಣ ಇತ್ಯಾದಿ ತಿಳಿಸುತ್ತಾ ಇರುತ್ತಾರೆ, ಅದರಲ್ಲಿಯೇ ವ್ಯಸ್ತರಾಗಿರುತ್ತಾರೆ. ನೀವು ಮತ್ತು ನಾನೂ ಸಹ ಇದೇ ಉದ್ಯೋಗದಲ್ಲಿ ತೊಡಗಿದ್ದೆವು, ಈಗ ತಂದೆಯು ಎಷ್ಟು ಬುದ್ಧಿವಂತರನ್ನಾಗಿ ಮಾಡಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಈ ಹಳೆಯ ಪ್ರಪಂಚವು ಸಮಾಪ್ತಿಯಾಗುವುದಿದೆ, ಈಗ ಹೊಸ ಪ್ರಪಂಚಕ್ಕೆ ಹೋಗಬೇಕಾಗಿದೆ. ಎಲ್ಲರೂ ಹೋಗುತ್ತಾರೆಂದಲ್ಲ, ಎಲ್ಲರೂ ಮುಕ್ತಿಧಾಮದಲ್ಲಿ ಕುಳಿತು ಬಿಡುವುದು ನಿಯಮವಿಲ್ಲ. ಹಾಗಿದ್ದರೆ ಪ್ರಳಯವಾಗಿ ಬಿಡುವುದು. ನಿಮಗೆ ಗೊತ್ತಿದೆ, ಇದು ಹಳೆಯ ಪ್ರಪಂಚ ಮತ್ತು ಹೊಸ ಪ್ರಪಂಚದ ನಡುವಿನ ಬಹಳ ಕಲ್ಯಾಣಕಾರಿ ಸಂಗಮಯುಗವಾಗಿದೆ. ಈಗ ಪರಿವರ್ತನೆಯಾಗಲಿದೆ, ನಂತರ ಶಾಂತಿಧಾಮಕ್ಕೆ ಹೊರಟು ಹೋಗುವಿರಿ. ಅಲ್ಲಿ ಸುಖದ ಅನುಭವವಾಗುವುದಿಲ್ಲ. ಯಜ್ಞದಲ್ಲಿ ವಿಘ್ನ ಎಂದು ಗಾಯನವಿದೆ, ಅದೇ ರೀತಿ ಈಗ ವಿಘ್ನಗಳು ಬರುತ್ತಿರುತ್ತವೆ, ಕಲ್ಪದ ನಂತರವೂ ಇದೇ ರೀತಿ ಬರುತ್ತವೆ. ನೀವೀಗ ಪಕ್ಕಾ ಆಗಿ ಬಿಟ್ಟಿದ್ದೀರಿ. ಈ ಸ್ಥಾಪನೆ ಹಾಗೂ ವಿನಾಶವು ಚಿಕ್ಕ ಕೆಲಸವಲ್ಲ. ವಿಘ್ನಗಳು ಯಾವ ಮಾತಿನಲ್ಲಿ ಬರುತ್ತವೆ? ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ. ಇದರ ಮೇಲೆ ಅತ್ಯಾಚಾರವಾಗುತ್ತದೆ, ದ್ರೌಪದಿಯ ಮಾತಿದೆಯಲ್ಲವೆ. ಬ್ರಹ್ಮಚರ್ಯದ ಮೇಲೆ ಎಲ್ಲಾ ಕಿರಿಕಿರಿ ನಡೆಯುತ್ತವೆ. ಸತೋಪ್ರಧಾನರಿಂದ ತಮೋಪ್ರಧಾನರಾಗಲೇಬೇಕಾಗಿದೆ, ಏಣಿಯನ್ನು ಇಳಿಯಲೇಬೇಕಾಗಿದೆ. ಅವಶ್ಯವಾಗಿ ಹಳೆಯ ಪ್ರಪಂಚವಾಗಬೇಕಾಗಿದೆ. ಇವೆಲ್ಲಾ ಮಾತುಗಳನ್ನು ನೀವೇ ತಿಳಿದುಕೊಳ್ಳುತ್ತೀರಿ ಮತ್ತು ಸ್ಮರಣೆ ಮಾಡುತ್ತೀರಿ. ಓದಿ, ಓದಿಸಲೂಬೇಕಾಗಿದೆ. ಶಿಕ್ಷಕರಾಗಬೇಕಾಗಿದೆ. ಅವಶ್ಯವಾಗಿ ಜ್ಞಾನವು ಬುದ್ಧಿಯಲ್ಲಿದ್ದಾಗಲೇ ಓದಿ ಶಿಕ್ಷಕರಾಗುವಿರಿ. ಯಾರು ಶಿಕ್ಷಕರಿಂದ ಕಲಿತು ಬುದ್ಧಿವಂತರಾಗುತ್ತಾರೆಯೋ ಅವರನ್ನು ಸರ್ಕಾರವೂ ಸಹ ತೇರ್ಗಡೆ ಮಾಡುತ್ತವೆ. ನೀವೂ ಸಹ ಶಿಕ್ಷಕರಾಗಿದ್ದೀರಿ. ತಂದೆಯು ನಿಮ್ಮನ್ನು ಶಿಕ್ಷಕರನ್ನಾಗಿ ಮಾಡಿದ್ದಾರೆ. ಒಬ್ಬ ಶಿಕ್ಷಕನಿಂದ ಏನು ಮಾಡಲು ಸಾಧ್ಯ. ನೀವೆಲ್ಲರೂ ಆತ್ಮಿಕ ಶಿಕ್ಷಕರಾಗಿದ್ದೀರಿ ಅಂದಮೇಲೆ ಬುದ್ಧಿಯಲ್ಲಿ ಜ್ಞಾನವಿರಬೇಕು. ಮನುಷ್ಯರಿಂದ ದೇವತೆಯಾಗುವ ಈ ಜ್ಞಾನವು ಸಂಪೂರ್ಣ ಆಕ್ಯೂರೇಟ್ ಆಗಿದೆ.

ಈಗ ನೀವು ಮಕ್ಕಳು ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಲೈಟ್ ಬರುತ್ತಾ ಇರುತ್ತದೆ. ಮನುಷ್ಯರಿಗೆ ಸಾಕ್ಷಾತ್ಕಾರವಾಗುತ್ತಾ ಇರುತ್ತದೆ, ಏಕೆಂದರೆ ಆತ್ಮವು ಪವಿತ್ರವಾಗುವುದೇ ನೆನಪಿನಿಂದ. ಇದರಿಂದ ಯಾರಿಗೆ ಬೇಕಾದರೂ ಸಾಕ್ಷಾತ್ಕಾರವಾಗುವುದು. ಸಹಯೋಗಿ ತಂದೆಯು ಕುಳಿತಿದ್ದಾರೆ, ತಂದೆಯು ಯಾವಾಗಲೂ ಮಕ್ಕಳ ಸಹಯೋಗಿಯಾಗಿದ್ದಾರೆ. ವಿದ್ಯೆಯಲ್ಲಿ ನಂಬರ್ವಾರ್ ಇದ್ದಾರೆ, ಪ್ರತಿಯೊಬ್ಬರೂ ನನ್ನಲ್ಲಿ ಎಷ್ಟು ಧಾರಣೆಯಿದೆ ಎಂಬುದನ್ನು ತಮ್ಮ ಬುದ್ಧಿಯಿಂದ ತಿಳಿದುಕೊಳ್ಳಬಹುದು. ಒಂದುವೇಳೆ ಧಾರಣೆಯಿದ್ದರೆ ಅನ್ಯರಿಗೆ ತಿಳಿಸಿ ತೋರಿಸಿರಿ. ಇದು ಧನವಾಗಿದೆ, ನೀವು ಧನ ದಾನ ಮಾಡದಿದ್ದರೆ ಇವರ ಬಳಿ ಹಣವಿದೆ ಎಂದು ಯಾರೂ ಒಪ್ಪುವುದಿಲ್ಲ. ಧನ ದಾನ ಮಾಡುತ್ತೀರೆಂದರೆ ಮಹಾದಾನಿಗಳೆಂದು ಹೇಳಲಾಗುವುದು. ಮಹಾರಥಿ ಮಹಾವೀರ ಎರಡೂ ಒಂದೇ ಆಗಿದೆ. ಎಲ್ಲರೂ ಒಂದೇ ಸಮನಾಗಿರಲು ಸಾಧ್ಯವಿಲ್ಲ. ನಿಮ್ಮ ಬಳಿ ಎಷ್ಟೊಂದು ಮಂದಿ ಬರುತ್ತಾರೆ. ಒಬ್ಬೊಬ್ಬರೊಂದಿಗೆ ಕುಳಿತು ತಲೆ ಕೆಡಿಸಿಕೊಳ್ಳಲಾಗುತ್ತದೆಯೇ? ಅವರಂತೂ ಪತ್ರಿಕೆಗಳ ಮೂಲಕ ಅನೇಕ ಮಾತುಗಳನ್ನು ಕೇಳುವ ಕಾರಣ ಬಹಳ ದೊಡ್ಡವರೆಂದು ತಿಳಿದಿರುತ್ತಾರೆ. ನಂತರ ನಿಮ್ಮ ಬಳಿ ಬಂದು ಕೇಳಿದಾಗ ನಾವಂತೂ ಪರಮತದ ಮೇಲೆ ಏನೇನು ಮಾಡಿದೆವು, ಇಲ್ಲಂತೂ ಬಹಳ ಚೆನ್ನಾಗಿದೆ ಎಂದು ಹೇಳುತ್ತಾರೆ. ಒಬ್ಬೊಬ್ಬರನ್ನು ಸರಿ ಪಡಿಸುವುದರಲ್ಲಿ ಪರಿಶ್ರಮವಾಗುತ್ತದೆ. ಇಲ್ಲಿಯೂ ಸಹ ಎಷ್ಟೊಂದು ಪರಿಶ್ರಮವಾಯಿತು. ಇದರಲ್ಲಿ ಕೆಲವರು ಮಹಾರಥಿ, ಕೆಲವರು ಕುದುರೆ ಸವಾರರು, ಕೆಲವರು ಕಾಲಾಳುಗಳು. ಇದು ಡ್ರಾಮಾದಲ್ಲಿ ಪಾತ್ರವಿದೆ. ಇದಂತೂ ನಿಮಗೆ ತಿಳಿದಿದೆ - ಕೊನೆಗೆ ನಿಮ್ಮದೇ ಜಯವಾಗಲಿದೆ, ಯಾರು ಕಲ್ಪದ ಹಿಂದೆ ಆಗಿದ್ದರು ಅವರೇ ಆಗುವರು. ಮಕ್ಕಳಂತೂ ಪುರುಷಾರ್ಥ ಮಾಡಲೇಬೇಕಾಗಿದೆ. ತಂದೆಯು ಸಲಹೆ ನೀಡುತ್ತಾರೆ - ಮಕ್ಕಳೇ, ಅನ್ಯರಿಗೆ ತಿಳಿಸುವ ಪ್ರಯತ್ನ ಮಾಡಿರಿ. ಮೊದಲು ಶಿವನ ಮಂದಿರದಲ್ಲಿ ಹೋಗಿ ಸರ್ವೀಸ್ ಮಾಡಿರಿ. ಇವರು ಯಾರು? ಇವರ ಮೇಲೆ ನೀರನ್ನು ಏಕೆ ಎರೆಯುತ್ತಾರೆ ಎಂದು ನೀವು ಕೇಳಬಹುದು ಏಕೆಂದರೆ ನೀವು ಚೆನ್ನಾಗಿ ತಿಳಿದುಕೊಂಡಿದ್ದೀರಿ. ಬೆಂಕಿ ತರಲು ಹೋಗಿ ಮಾಲೀಕರಾಗಿ ಕುಳಿತು ಬಿಟ್ಟರೆಂದು ಹೇಳುತ್ತಾರೆ. ಈ ದೃಷ್ಟಾಂತವು ನಿಮ್ಮದೇ ಆಗಿದೆ. ನೀವು ಎಲ್ಲರನ್ನು ಜಾಗೃತಗೊಳಿಸಲು ಹೋಗುತ್ತೀರಿ, ನಿಮಗೆ ನಿಮಂತ್ರಣ ಕೊಟ್ಟು ಕರೆಸುತ್ತಾರೆ. ಈ ರೀತಿ ನಿಮಂತ್ರಣ ಬಂದರೆ ಖುಷಿಯಾಗಬೇಕು. ಕಾಶಿಯಲ್ಲಿ ದೊಡ್ಡ-ದೊಡ್ಡ ಬಿರುದುಗಳನ್ನು ಕೊಡುತ್ತಾರೆ. ಭಕ್ತಿಯಲ್ಲಿ ಅನೇಕ ಮಂದಿರಗಳಿವೆ, ಇದೂ ಸಹ ಒಂದು ವ್ಯಾಪಾರವಾಗಿದೆ. ಯಾರಾದರೂ ಒಳ್ಳೆಯ ಸ್ತ್ರೀಯನ್ನು ನೋಡಿದರೆ ಅವರಿಗೆ ಗೀತೆಯನ್ನು ಕಂಠಪಾಠ ಮಾಡಿಸಿ ಅವರನ್ನು ಮುಂದಿಡುತ್ತಾರೆ. ನಂತರ ಇದರಿಂದ ಯಾವ ಸಂಪಾದನೆಯಾಗುವುದು ಅದು ಅವರಿಗೆ ಸಿಗುತ್ತದೆ. ಇದರಲ್ಲಿ ಏನೂ ಇಲ್ಲ ರಿದ್ಧಿ-ಸಿದ್ಧಿ ಬಹಳ ಕಲಿಯುತ್ತಾರೆ, ಇಂತಹ ಸ್ಥಾನಗಳಿಗೆ ಹೋಗಿ ತಿಳಿಸಬೇಕು. ನೀವು ಮಕ್ಕಳು ಎಂದು ಶಾಸ್ತ್ರಾರ್ಥ ಮಾಡಬಾರದು. ನೀವಂತೂ ಹೋಗಿ ತಂದೆಯ ಪರಿಚಯ ಕೊಡಬೇಕಾಗಿದೆ. ಮುಕ್ತಿ-ಜೀವನ್ಮುಕ್ತಿದಾತ ಒಬ್ಬ ತಂದೆಯಾಗಿದ್ದಾರೆ, ಅವರ ಮಹಿಮೆ ಮಾಡಬೇಕಾಗಿದೆ. ಆ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿರಿ. ಬಾಕಿ ಮನ್ಮನಾಭವದ ಅರ್ಥವು ಗಂಗೆಯಲ್ಲಿ ಹೋಗಿ ಸ್ನಾನ ಮಾಡಿ ಎಂದಲ್ಲ. ನನ್ನೊಬ್ಬನನ್ನೇ ನೆನಪು ಮಾಡಿರಿ ಎಂಬುದು ಇದರ ಅರ್ಥವಾಗಿದೆ. ಆಗ ನಾನು ನಿಮ್ಮನ್ನು ಎಲ್ಲಾ ಪಾಪಗಳಿಂದ ಮುಕ್ತ ಮಾಡುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ. ಯಾವಾಗಿನಿಂದ ರಾವಣನು ಬಂದನೋ ಆಗಿನಿಂದ ಪಾಪಗಳು ಆರಂಭವಾಯಿತು. ಆದರೆ ಈಗ ಶ್ರೇಷ್ಠ ಪದವಿಯನ್ನು ಪಡೆಯುವ ಬಹಳ ಪುರುಷಾರ್ಥ ಮಾಡಬೇಕಾಗಿದೆ. ಅಧಿಕಾರಕ್ಕಾಗಿ ಮನುಷ್ಯರು ರಾತ್ರಿ-ಹಗಲು ಎಷ್ಟು ತಲೆ ಕೆಡಿಸಿಕೊಳ್ಳುತ್ತಾರೆ! ಇದೂ ಸಹ ವಿದ್ಯೆಯಾಗಿದೆ, ಇದರಲ್ಲಿ ಯಾವುದೇ ಪುಸ್ತಕ ಓದುವ ಮಾತಿಲ್ಲ. 84 ಜನ್ಮಗಳ ಚಕ್ರವಂತೂ ಬುದ್ಧಿಯಲ್ಲಿ ಬಂದು ಬಿಟ್ಟಿದೆ. ಇದೇನೂ ದೊಡ್ಡ ಮಾತಲ್ಲ. ಆದರೆ ಒಂದೊಂದು ಜನ್ಮದ ವಿವರವನ್ನು ನೀಡಲು ಸಾಧ್ಯವೇ! ಈಗ 84 ಜನ್ಮಗಳು ಪೂರ್ಣವಾಯಿತು, ನಾವಾತ್ಮರು ಮರಳಿ ಮನೆಗೆ ಹೋಗಬೇಕಾಗಿದೆ. ಆತ್ಮವು ಯಾವುದು ಪತಿತವಾಗಿದೆಯೋ ಅದು ಅವಶ್ಯವಾಗಿ ಪಾವನವಾಗಬೇಕಾಗಿದೆ. ಎಲ್ಲರಿಗೂ ಇದೇ ಮಾತನ್ನು ಹೇಳುತ್ತಾ ಇರಿ - ತಂದೆಯೊಬ್ಬರನ್ನೇ ನೆನಪು ಮಾಡಿರಿ ಎಂದು. ಬಾಬಾ ಯೋಗದಲ್ಲಿರಲು ನಮಗೆ ಆಗುವುದಿಲ್ಲ ಎಂದು ಮಕ್ಕಳು ಹೇಳುತ್ತಾರೆ. ಅರೆ! ನಿಮಗೆ ಸನ್ಮುಖದಲ್ಲಿದ್ದು ಹೇಳುತ್ತೇನೆ - ನೀವು ನನ್ನನ್ನು ನೆನಪು ಮಾಡಿರಿ. ನೆನಪು ಎಂಬುದಕ್ಕೆ ಬದಲಾಗಿ ಯೋಗ ಎಂದು ಏಕೆ ಹೇಳುತ್ತೀರಿ? ಯೋಗವೆಂದು ಹೇಳುವುದರಿಂದಲೇ ನೀವು ಮರೆಯುತ್ತೀರಿ. ತಂದೆಯನ್ನು ಯಾರು ತಾನೆ ನೆನಪು ಮಾಡಲು ಸಾಧ್ಯವಿಲ್ಲ!! ಲೌಕಿಕ ತಂದೆ-ತಾಯಿಯನ್ನು ಹೇಗೆ ನೆನಪು ಮಾಡುತ್ತೀರೋ ಹಾಗೆಯೇ ಇವರೂ ಸಹ ತಂದೆ-ತಾಯಿಯಲ್ಲವೆ. ಇವರು ಓದುತ್ತಿದ್ದಾರೆ, ಸರಸ್ವತಿಯೂ ಓದುತ್ತಾರೆ. ಓದಿಸುವವರು ಒಬ್ಬ ತಂದೆಯಾಗಿದ್ದಾರೆ. ಎಷ್ಟು ನೀವು ಓದುತ್ತೀರೋ ಅಷ್ಟು ಅನ್ಯರಿಗೆ ತಿಳಿಸುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಶಾಸ್ತ್ರಗಳನ್ನು ಓದುವುದರಿಂದ, ಜಪ-ತಪ ಮಾಡುವುದರಿಂದ ನನ್ನನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಇನ್ನೇನು ಲಾಭವಿದೆ! ಏಣಿಯನ್ನು ಇಳಿಯುತ್ತಲೇ ಬಂದಿದ್ದೀರಿ.

ನಿಮಗೆ ಯಾರೂ ಶತ್ರುವಿಲ್ಲ, ಆದರೂ ನೀವು ತಿಳಿಸಬೇಕಾಗಿದೆ - ಪಾಪ ಹಾಗೂ ಪುಣ್ಯವು ಹೇಗೆ ಜಮಾ ಆಗುತ್ತದೆ. ರಾವಣ ರಾಜ್ಯದ ನಂತರವೇ ನೀವು ಪಾಪ ಮಾಡುವುದನ್ನು ಆರಂಭಿಸಿದ್ದೀರಿ. ಇಂತಹ ಮಕ್ಕಳೂ ಇದ್ದಾರೆ - ಯಾರಿಗೆ ಹೊಸ ಪ್ರಪಂಚ, ಹಳೆಯ ಪ್ರಪಂಚವೆಂದರೇನು ಎಂಬುದನ್ನೂ ತಿಳಿಸಲೂ ಬರುವುದಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಬೇಹದ್ದಿನ ತಂದೆಯನ್ನು ನೆನಪು ಮಾಡಿರಿ, ಅವರೇ ಪತಿತ-ಪಾವನನಾಗಿದ್ದಾರೆ, ಬಾಕಿ ನೀವು ಎಲ್ಲಿಗೂ ಹೋಗುವ ಅವಶ್ಯಕತೆಯಿಲ್ಲ. ಭಕ್ತಿಮಾರ್ಗದಲ್ಲಿ ಸದಾ ಕಾಲುಗಳು ಮನೆಯಿಂದ ಹೊರಗಡೆಯೇ ಇರುತ್ತಿತ್ತು. ಪತಿಯು ಸ್ತ್ರೀಗೆ ಹೇಳುತ್ತಾರೆ - ಕೃಷ್ಣನ ಚಿತ್ರವು ಮನೆಯಲ್ಲಿಯೂ ಇದೆ ಆದರೆ ಹೊರಗಡೆ ಏಕೆ ಹೋಗುತ್ತೀಯಾ! ಅಂತರವೇನು ಎಂದು. ಪತಿ ಪರಮೇಶ್ವರನಾಗಿದ್ದಾರೆ ಎನ್ನುವುದನ್ನು ಒಪ್ಪುವುದಿಲ್ಲ. ಭಕ್ತಿಮಾರ್ಗದಲ್ಲಿ ಬಹಳ ದೂರ-ದೂರ ಅತಿ ಎತ್ತರದಲ್ಲಿ ಮಂದಿರಗಳನ್ನು ಕಟ್ಟಿಸುತ್ತಾರೆ. ಇದರಿಂದ ಮನುಷ್ಯರಿಗೆ ಭಾವನೆ ಬರಲಿ ಎಂದು. ನೀವು ತಿಳಿಸುತ್ತೀರಿ - ಮಂದಿರಗಳಲ್ಲಿ ಹೋಗಿ ಎಷ್ಟೊಂದು ಕಷ್ಟ ಪಡುತ್ತಾರೆ, ಇದೊಂದು ಪದ್ಧತಿಯಾಗಿ ಬಿಟ್ಟಿದೆ. ಶಿವ ಕಾಶಿಯಲ್ಲಿ ತೀರ್ಥ ಯಾತ್ರೆ ಮಾಡಲು ಹೋಗುತ್ತಾರೆ ಆದರೆ ಪ್ರಾಪ್ತಿಯೇನೂ ಇಲ್ಲ. ಈಗ ನಿಮಗೆ ತಂದೆಯ ಶ್ರೀಮತ ಸಿಗುತ್ತದೆ, ನೀವು ಎಲ್ಲಿಯೂ ಹೋಗುವಂತಿಲ್ಲ. ಪತಿಯರಿಗೂ ಪತಿ ಪರಮೇಶ್ವರ ವಾಸ್ತವದಲ್ಲಿ ಇವರೊಬ್ಬರೇ ಆಗಿದ್ದಾರೆ. ಯಾರನ್ನು ನಿಮ್ಮ ಪತಿ, ಚಿಕ್ಕಪ್ಪ, ದೊಡ್ಡಪ್ಪ, ಮಾವ ಎಲ್ಲರೂ ನೆನಪು ಮಾಡುತ್ತಾರೆಯೋ ಅವರೇ ಪತಿ ಪರಮೇಶ್ವರ ಅಥವಾ ಪಿತ ಪರಮೇಶ್ವರನಾಗಿದ್ದಾರೆ. ಅವರೇ ನಿಮಗೆ ತಿಳಿಸುತ್ತಿದ್ದಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನಿಮ್ಮ ಜ್ಯೋತಿಯು ಈಗ ಜಾಗೃತವಾಗುತ್ತಿದೆ. ಆದ್ದರಿಂದ ಮನುಷ್ಯರಿಗೆ ನಿಮ್ಮಿಂದ ಪ್ರಕಾಶವು ಕಾಣಿಸುತ್ತದೆ. ಇದರಿಂದ ಮಕ್ಕಳ ಹೆಸರೂ ಪ್ರಸಿದ್ಧವಾಗಬೇಕು. ತಂದೆಯು ಮಕ್ಕಳ ಹೆಸರನ್ನು ಪ್ರಖ್ಯಾತಗೊಳಿಸುತ್ತಾರಲ್ಲವೆ. ಸುದೇಶ್ ಮಗು (ಸುದೇಶ್ ಬೆಹೆನ್) ತಿಳಿಸುವುದರಲ್ಲಿ ಬಹಳ ತೀಕ್ಷ್ಣವಾಗಿದ್ದಾರೆ, ಬಹಳ ಚೆನ್ನಾಗಿ ಪುರುಷಾರ್ಥ ಮಾಡಿದ್ದಾರೆ ಆದ್ದರಿಂದ ಹಳಬರಿಗಿಂತಲೂ ಮುಂದೆ ಹೋಗಿದ್ದಾರೆ. ಇದರಲ್ಲಿಯೂ ಹೆಚ್ಚು ಪುರುಷಾರ್ಥ ಮಾಡಿ ಮುಂದೆ ಹೋಗಿ ಬಿಡುವರು. ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಇದರಲ್ಲಿ ಹೃದಯಘಾತವಾಗಬಾರದು. ಕೊನೆಯಲ್ಲಿ ಬಂದರೂ ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಪಡೆಯಬಹುದು. ದಿನ-ಪ್ರತಿದಿನ ಇಂತಹವರು ಅನೇಕರು ಬರುತ್ತಿರುತ್ತಾರೆ. ಡ್ರಾಮಾದಲ್ಲಿ ನಿಮ್ಮ ವಿಜಯದ ಪಾತ್ರವು ಇದ್ದೇ ಇದೆ. ವಿಘ್ನಗಳು ಬರಲೇಬೇಕಾಗಿದೆ. ಮತ್ತ್ಯಾವುದೇ ಸತ್ಸಂಗಗಳಲ್ಲಿ ಈ ರೀತಿ ವಿಘ್ನಗಳು ಬರುವುದಿಲ್ಲ. ಇಲ್ಲಿ ವಿಕಾರಕ್ಕಾಗಿಯೇ ಜಗಳವಾಗುತ್ತದೆ. ಅಮೃತವನ್ನು ಬಿಟ್ಟು ವಿಷವನ್ನು ಏಕೆ ಕುಡಿಯಬೇಕು ಎಂಬ ಗಾಯನವಿದೆ, ಜ್ಞಾನದಿಂದ ಒಂದು ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಸತ್ಯಯುಗದಲ್ಲಿ ರಾವಣ ರಾಜ್ಯವಿರಲು ಸಾಧ್ಯವಿಲ್ಲ. ಎಷ್ಟು ಸ್ಪಷ್ಟ ತಿಳುವಳಿಕೆಯಿದೆ. ರಾಮ ರಾಜ್ಯದ ಪಕ್ಕದಲ್ಲಿಯೇ ರಾವಣ ರಾಜ್ಯವನ್ನು ತೋರಿಸಲಾಗಿದೆ. ನೀವು ಅದರಲ್ಲಿ ಸಮಯವನ್ನು ತೋರಿಸುತ್ತೀರಿ. ಈಗಿನದು ಸಂಗಮವಾಗಿದೆ. ಪ್ರಪಂಚ ಬದಲಾಗುತ್ತಿದೆ. ಸ್ಥಾಪನೆ, ಪಾಲನೆ, ವಿನಾಶ ಮಾಡಿಸುವವರು ಒಬ್ಬ ತಂದೆಯಾಗಿದ್ದಾರೆ, ಬಹಳ ಸಹಜವಾಗಿದೆ. ಆದರೆ ಪೂರ್ಣ ಧಾರಣೆಯಾಗದ ಕಾರಣ ಮತ್ತೆಲ್ಲಾ ಮಾತುಗಳು ನೆನಪಿರುತ್ತವೆ. ಬಾಕಿ ಜ್ಞಾನ-ಯೋಗವೇ ಮರೆತು ಹೋಗುತ್ತದೆ. ನೀವು ಶ್ರೇಷ್ಠಾತಿ ಶ್ರೇಷ್ಠ ಭಗವಂತನ ಸಂತಾನರಾಗಿದ್ದೀರಿ. ದಿನ-ಪ್ರತಿದಿನ ನೀವು ಸಾಹುಕಾರರಾಗುತ್ತಾ ಹೋಗುತ್ತೀರಿ. ಧನ ಸಿಗುತ್ತಿದೆಯಲ್ಲವೆ. ಖರ್ಚು ಬರುತ್ತಿರುವುದು, ತಂದೆಯು ತಿಳಿಸುತ್ತಾರೆ - ಹುಂಡಿಯೂ ತುಂಬುತ್ತಾ ಹೋಗುವುದು. ಕಲ್ಪದ ಮೊದಲಿನಂತೆಯೇ ನೀವು ಖರ್ಚು ಮಾಡುತ್ತೀರಿ. ಹೆಚ್ಚು ಕಡಿಮೆ ಮಾಡಲು ಡ್ರಾಮಾ ಬಿಡುವುದಿಲ್ಲ. ಡ್ರಾಮಾದ ಮೇಲೆ ತಂದೆಗೆ ಅಟಲ ನಿಶ್ಚಯವಿದೆ, ಕಳೆದು ಹೋದುದೆಲ್ಲವೂ ಡ್ರಾಮಾ. ಈ ರೀತಿಯಾಗಿದ್ದರೆ ಹೀಗೆ ಮಾಡುತ್ತಿರಲಿಲ್ಲ ಎಂದು ಹೇಳುವಂತಿಲ್ಲ. ಈಗಿನ್ನೂ ಆ ಸ್ಥಿತಿಯು ಬಂದಿಲ್ಲ. ಯಾವುದಾದರೊಂದು ಇಂತಹ ಮಾತುಗಳು ಬಾಯಿಂದ ಬಂದು ಬಿಡುತ್ತದೆ ನಂತರ ಪಶ್ಚಾತ್ತಾಪವಾಗುತ್ತದೆ. ತಂದೆಯು ಹೇಳುತ್ತಾರೆ - ಕಳೆದುಹೋದದಕ್ಕೆ ಚಿಂತಿಸಬೇಡಿ, ಮುಂದೆ ಇಂತಹ ತಪ್ಪಾಗದಂತೆ ಪುರುಷಾರ್ಥ ಮಾಡಿರಿ. ಚಾರ್ಟ್ ಬರೆಯಿರಿ, ಇದರಲ್ಲಿ ಬಹಳ ಕಲ್ಯಾಣವಿದೆ ಎಂದು ತಂದೆಯು ಹೇಳುತ್ತಾರೆ. ಬ್ರಹ್ಮಾ ತಂದೆಯು ಒಬ್ಬರನ್ನು ನೋಡಿದರು - ಅವರು ಇಡೀ ಜೀವನ ಕಥೆಯನ್ನು ಬರೆಯುತ್ತಿದ್ದರು. ಏಕೆಂದರೆ ಇದನ್ನು ನೋಡಿ ಮಕ್ಕಳು ಕಲಿಯುವರೆಂದು ತಿಳಿಯುತ್ತಿದ್ದರು. ಇಲ್ಲಿಯೂ ಸಹ ಶ್ರೀಮತದಂತೆ ನಡೆಯುವುದರಲ್ಲಿಯೇ ಕಲ್ಯಾಣವಿದೆ, ಇಲ್ಲಿ ಅಸತ್ಯವು ನಡೆಯಲು ಸಾಧ್ಯವಿಲ್ಲ. ನಾರದನ ಉದಾಹರಣೆಯ ಹಾಗೆ ಚಾರ್ಟ್ನಿಂದ ಬಹಳ ಲಾಭವಿದೆ. ತಂದೆಯು ಆದೇಶ ನೀಡುತ್ತಾರೆಂದರೆ ಮಕ್ಕಳು ಆದೇಶದಂತೆ ನಡೆಯಬೇಕಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ. 

ಧಾರಣೆಗಾಗಿ ಮುಖ್ಯಸಾರ:

1. ಜ್ಞಾನ ಧಾರಣೆ ಮಾಡಿ ಅನ್ಯರಿಗೂ ತಿಳಿಸಬೇಕಾಗಿದೆ. ಜ್ಞಾನ ಧನವನ್ನು ದಾನ ಮಾಡಿ ಮಹಾದಾನಿಗಳಾಗಬೇಕು. ಯಾರಿಂದಲೂ ಶಾಸ್ತ್ರಾರ್ಥವಾಗಿ ಮಾಡದೇ ತಂದೆಯ ಪರಿಚಯವನ್ನು ಕೊಡಬೇಕು.

2. ನೀವು ಕಳೆದ ಮಾತುಗಳ ಚಿಂತನೆ ಮಾಡಬಾರದು ಮಾಡಬಾರದು. ಇಂತಹ ಪುರುಷಾರ್ಥ ಮಾಡಬೇಕು ಮತ್ತೆ ಎಂದೂ ತಪ್ಪು ಆಗದ ಹಾಗೆ. ತಮ್ಮ ಸತ್ಯ-ಸತ್ಯ ಚಾರ್ಟ್ ಇಡಬೇಕಾಗಿದೆ.

ವರದಾನ:
ಸತ್ಯತೆಯ ಅಧಿಕಾರವನ್ನು ಧಾರಣೆ ಮಾಡಿ ಎಲ್ಲರನ್ನೂ ಆಕರ್ಷಣೆ ಮಾಡುವಂತಹ ನಿರ್ಭಯ ಮತ್ತು ವಿಜಯಿ ಭವ.

ನೀವು ಮಕ್ಕಳು ಸತ್ಯತೆಯ ಶಕ್ತಿಶಾಲಿ ಶ್ರೇಷ್ಠ ಆತ್ಮಗಳಾಗಿರುವಿರಿ. ಸತ್ಯ ಜ್ಞಾನ, ಸತ್ಯ ತಂದೆ, ಸತ್ಯ ಪ್ರಾಪ್ತಿ, ಸತ್ಯ ನೆನಪು, ಸತ್ಯ ಗುಣ, ಸತ್ಯ ಶಕ್ತಿಗಳು ಎಲ್ಲವೂ ಪ್ರಾಪ್ತಿಯಾಗಿವೆ. ಇಷ್ಟು ದೊಡ್ಡ ಅಧಿಕಾರದ ನಶೆ ಇದ್ದಾಗ ಈ ಸತ್ಯತೆಯ ಶಕ್ತಿ ಎಲ್ಲಾ ಆತ್ಮಗಳನ್ನು ಆಕರ್ಷಣೆ ಮಾಡಿತ್ತಿರುತ್ತದೆ. ಸುಳ್ಳಿನ ಖಂಡದಲ್ಲಿಯೂ ಸಹ ಇಂತಹ ಸತ್ಯತೆಯ ಶಕ್ತಿಯುಳ್ಳವರು ವಿಜಯಿಗಳಾಗುತ್ತಾರೆ. ಸತ್ಯತೆಯ ಪ್ರಾಪ್ತಿ ಖುಷಿ ಮತ್ತು ನಿರ್ಭಯತೆಯಾಗಿದೆ. ಸತ್ಯ ಹೇಳುವವರು ನಿರ್ಭಯರಾಗಿರುತ್ತಾರೆ. ಅವರಿಗೆ ಎಂದೂ ಸಹ ಭಯವಾಗಲು ಸಾಧ್ಯವಿಲ್ಲ.

ಸ್ಲೋಗನ್:
ವಾಯುಮಂಡಲವನ್ನು ಪರಿವರ್ತನೆ ಮಾಡುವ ಸಾಧನವಾಗಿದೆ - ಸಕಾರಾತ್ಮಕ ಸಂಕಲ್ಪ ಮತ್ತು ಶಕ್ತಿಶಾಲಿ ವೃತ್ತಿ.


ಬ್ರಹ್ಮಾ ತಂದೆಯ ಸಮಾನರಾಗಲು ವಿಶೇಷ ಪುರುಷಾರ್ಥ :
ಹೇಗೆ ಬ್ರಹ್ಮಾ ತಂದೆ ಪ್ರತಿ ಕರ್ಮದಲ್ಲಿ, ವಾಣಿಯಲ್ಲಿ, ಸಂಪರ್ಕ ಹಾಗೂ ಸಂಬಂಧದಲ್ಲಿ ಪ್ರೀತಿಯ ಸ್ವರೂಪರಾಗಿದ್ದರು ಮತ್ತು ಸ್ಮತಿ ಅಥವಾ ಸ್ಥಿತಿಯಲ್ಲಿ ಲವಲೀನರಾಗಿದ್ದರು, ಹೀಗೆ ತಂದೆಯನ್ನು ಅನುಕರಣೆ ಮಾಡಿ. ಎಷ್ಟು ಲವ್ಲೀ ಅಷ್ಟು ಲವ್ಲೀನರಾಗಿರಲು ಸಾಧ್ಯ ಮತ್ತು ಅನ್ಯರನ್ನೂ ಸಹಾ ಸಹಜವಾಗಿ ತಮ್ಮ ಸಮಾನ ಅಥವಾ ತಂದೆ ಸಮಾನ ಮಾಡಲು ಸಾಧ್ಯ.