19.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮ್ಮ
ಮೂಲ ಸಂಸ್ಕಾರವು ಪವಿತ್ರತೆಯದಾಗಿದೆ, ನೀವು ರಾವಣನ ಸಂಗದಲ್ಲಿ ಬಂದು ಪತಿತರಾದಿರಿ, ಈಗ ಪುನಃ
ಪಾವನರಾಗಿ ಪಾವನ ಪ್ರಪಂಚಕ್ಕೆ ಮಾಲೀಕರಾಗಬೇಕಾಗಿದೆ”
ಪ್ರಶ್ನೆ:
ಅಶಾಂತಿಗೆ ಕಾರಣ
ಮತ್ತು ಅದಕ್ಕೆ ನಿವಾರಣೆ ಏನಾಗಿದೆ?
ಉತ್ತರ:
ಅಶಾಂತಿಗೆ ಕಾರಣ
ಅಪವಿತ್ರತೆಯಾಗಿದೆ, ಈಗ ಭಗವಂತ ತಂದೆಯೊಂದಿಗೆ ಪ್ರತಿಜ್ಞೆ ಮಾಡಿರಿ- ನಾವು ಪವಿತ್ರರಾಗಿ ಪವಿತ್ರ
ಪ್ರಪಂಚವನ್ನು ಸ್ಥಾಪಿಸುತ್ತೇವೆ, ಪವಿತ್ರ ದೃಷ್ಟಿಯನ್ನು ಇಟ್ಟುಕೊಳ್ಳುತ್ತೇವೆ,
ಕುದೃಷ್ಟಿಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿರಿ, ಆಗ ಅಶಾಂತಿ ದೂರವಾಗುತ್ತದೆ. ನೀವು ಶಾಂತಿ
ಸ್ಥಾಪನೆ ಮಾಡಲು ನಿಮಿತ್ತರಾಗಿರುವ ಮಕ್ಕಳು ಎಂದೂ ಅಶಾಂತಿಯನ್ನು ಹರಡಲು ಸಾಧ್ಯವಿಲ್ಲ. ನೀವು
ಶಾಂತವಾಗಿರಬೇಕಾಗಿದೆ. ಮಾಯೆಗೆ ಗುಲಾಮರಾಗಬಾರದು.
ಓಂ ಶಾಂತಿ.
ತಂದೆಯೇ ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಗೀತೆಯ ಭಗವಂತನು ಗೀತೆಯನ್ನು ತಿಳಿಸಿದರು. ಒಂದು
ಬಾರಿ ತಿಳಿಸಿ ಮತ್ತೆ ಹೊರಟು ಹೋಗುತ್ತಾರೆಂದು ಹೇಳಿದ್ದಾರೆ, ಆದರೆ ನೀವು ಮಕ್ಕಳು ಗೀತೆಯ
ಭಗವಂತನಿಂದ ಅದೇ ಗೀತಾಜ್ಞಾನವನ್ನು ಕೇಳುತ್ತಿದ್ದೀರಿ ಮತ್ತು ರಾಜಯೋಗವನ್ನೂ ಕಲಿಯುತ್ತಿದ್ದೀರಿ.
ಅವರಾದರೆ ಬರೆದಿರುವ ಗೀತೆಯನ್ನು ಓದಿ ಕಂಠಪಾಠ ಮಾಡಿಕೊಂಡು ಮನುಷ್ಯರಿಗೆ ತಿಳಿಸುತ್ತಾ ಇರುತ್ತಾರೆ.
ಅವರು ಶರೀರ ಬಿಟ್ಟ ನಂತರ ಮತ್ತೊಂದು ಜನ್ಮದಲ್ಲಿ ಮಗುವಾಗಿ ಅದನ್ನೇ ತಿಳಿಸಲು ಸಾಧ್ಯವಿಲ್ಲ. ಈಗ
ತಂದೆಯು ನಿಮಗೆ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವವರೆಗೆ ಗೀತೆಯನ್ನು ತಿಳಿಸುತ್ತಾ
ಇರುತ್ತಾರೆ. ಲೌಕಿಕ ಶಿಕ್ಷಕರೂ ಸಹ ವಿದ್ಯೆಯನ್ನು ಓದಿಸುತ್ತಲೇ ಇರುತ್ತಾರೆ. ಪಾಠವು
ಮುಕ್ತಾಯವಾಗುವವರೆಗೆ ಕಲಿಸುತ್ತಲೇ ಇರುತ್ತಾರೆ. ಪಾಠವು ಪೂರ್ಣವಾದ ಮೇಲೆ ಹದ್ದಿನ ಸಂಪಾದನೆಯಲ್ಲಿ
ತೊಡಗುತ್ತಾರೆ. ಶಿಕ್ಷಕರಿಂದ ಓದಿ ಸಂಪಾದನೆ ಮಾಡಿ ವೃದ್ಧರಾದ ಮೇಲೆ ಶರೀರ ಬಿಟ್ಟು ಮತ್ತೊಂದು
ಶರೀರವನ್ನು ತೆಗೆದುಕೊಳ್ಳುತ್ತಾರೆ. ಅವರಾದರೆ ಗೀತೆಯನ್ನು ತಿಳಿಸುತ್ತಾರೆ ಆದರೆ ಇದರಿಂದ
ಪ್ರಾಪ್ತಿಯಾದರೂ ಏನು, ಇದು ಯಾರಿಗೂ ಗೊತ್ತಿಲ್ಲ. ಗೀತೆಯನ್ನು ತಿಳಿಸಿ ಮತ್ತೆ ಇನ್ನೊಂದು
ಜನ್ಮದಲ್ಲಿ ಹೋಗಿ ಮಗುವಾದರೆ ಮತ್ತೆ ತಿಳಿಸಲು ಸಾಧ್ಯವಿಲ್ಲ. ಯಾವಾಗ ದೊಡ್ಡವರಾಗಿ ವೃದ್ಧರಾಗುವರೋ
ಗೀತಾಪಾಠಿಯಾಗುವರೋ ಆಗಲೇ ಮತ್ತೆ ತಿಳಿಸುವರು. ಇಲ್ಲಿ ತಂದೆಯಂತೂ ಒಂದೇ ಬಾರಿ ಶಾಂತಿಧಾಮದಿಂದ ಬಂದು
ಓದಿಸುತ್ತಾರೆ ಮತ್ತೆ ಹೊರಟು ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ - ನಿಮಗೆ ರಾಜಯೋಗವನ್ನು ಕಲಿಸಿ
ನನ್ನ ಮನೆಗೆ ಹೊರಟು ಹೋಗುತ್ತೇನೆ. ಯಾರಿಗೆ ಓದಿಸುವೆನೋ ಅವರು ನಂತರ ಬಂದು ತಮ್ಮ ಪ್ರಾಲಬ್ಧವನ್ನು
ಪಡೆಯುತ್ತಾರೆ, ತಮ್ಮ ಸಂಪಾದನೆ ಮಾಡಿಕೊಳ್ಳುತ್ತಾರೆ. ನಂಬರ್ವಾರ್ ಪುರುಷಾರ್ಥದನುಸಾರ ಧಾರಣೆ
ಮಾಡಿಕೊಂಡು ಮತ್ತೆ ಹೊರಟು ಹೋಗುತ್ತಾರೆ - ಎಲ್ಲಿಗೆ? ಹೊಸ ಪ್ರಪಂಚಕ್ಕೆ. ಈ ವಿದ್ಯೆಯಿರುವುದೇ ಹೊಸ
ಪ್ರಪಂಚಕ್ಕಾಗಿ. ಹಳೆಯ ಪ್ರಪಂಚವು ಸಮಾಪ್ತಿಯಾಗಿ ಹೊಸ ಪ್ರಪಂಚವು ಸ್ಥಾಪನೆಯಾಗುವುದೆಂದು
ಮನುಷ್ಯರಿಗೆ ಗೊತ್ತಿಲ್ಲ. ನಿಮಗೆ ಗೊತ್ತಿದೆ- ನಾವು ರಾಜಯೋಗವನ್ನು ಕಲಿಯುವುದು ಹೊಸ ಪ್ರಪಂಚಕ್ಕಾಗಿ,
ನಂತರ ಈ ಹಳೆಯ ಪ್ರಪಂಚವಾಗಲಿ, ಹಳೆಯ ಶರೀರವಾಗಲಿ ಇರುವುದಿಲ್ಲ. ಆತ್ಮವು ಅವಿನಾಶಿಯಾಗಿದೆ, ಆತ್ಮರು
ಪವಿತ್ರವಾಗಿ ಪವಿತ್ರ ಪ್ರಪಂಚದಲ್ಲಿ ಬರುತ್ತೀರಿ. ಹೊಸ ಪ್ರಪಂಚವಿತ್ತು, ಅಲ್ಲಿ ದೇವಿ-ದೇವತೆಗಳ
ರಾಜ್ಯವಿತ್ತು, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಆ ಹೊಸ ಜಗತ್ತಿನ ಸ್ಥಾಪಕ ಭಗವಂತನೇ
ಆಗಿದ್ದಾರೆ. ಒಂದು ಧರ್ಮದ ಸ್ಥಾಪನೆ ಮಾಡುತ್ತಾರೆ. ಯಾವುದೇ ದೇವತೆಗಳ ಮುಖಾಂತರ ಮಾಡಿಸುವುದಿಲ್ಲ.
ಏಕೆಂದರೆ ದೇವತೆಗಳಂತೂ ಇಲ್ಲಿಲ್ಲ ಅಂದಮೇಲೆ ಅವಶ್ಯವಾಗಿ ಯಾವುದೋ ಮನುಷ್ಯನ ಮೂಲಕವೇ ಜ್ಞಾನ
ಕೊಡುತ್ತಾರೆ, ಅವರೇ ನಂತರ ಹೋಗಿ ದೇವತೆಯಾಗುತ್ತಾರೆ. ಅದೇ ದೇವತೆಗಳು ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಬ್ರಾಹ್ಮಣರಾಗಿದ್ದಾರೆ- ಈ ರಹಸ್ಯವನ್ನು ನೀವು ಮಕ್ಕಳೇ
ತಿಳಿದುಕೊಂಡಿದ್ದೀರಿ. ಭಗವಂತನು ನಿರಾಕಾರನಾಗಿದ್ದಾರೆ, ಹೊಸ ಪ್ರಪಂಚವನ್ನು ರಚಿಸುತ್ತಾರೆ. ಈಗಂತೂ
ರಾವಣ ರಾಜ್ಯವಾಗಿದೆ. ನೀವು ಕೇಳುತ್ತೀರಿ- ತಾವು ಕಲಿಯುಗೀ ಪತಿತರೋ ಅಥವಾ ಸತ್ಯಯುಗೀ ಪಾವನರೋ? ಎಂದು.
ಆದರೆ ಅವರಿಗೆ ಅರ್ಥವಾಗುವುದಿಲ್ಲ. ಈಗ ತಂದೆಯು ಮಕ್ಕಳಿಗೆ ಹೇಳುತ್ತಾರೆ- ನಾನು 5000 ವರ್ಷಗಳ
ಮೊದಲೂ ಸಹ ನಿಮಗೆ ತಿಳಿಸಿದ್ದೆನು. ನಾನು ಬರುವುದೇ ನೀವು ಮಕ್ಕಳನ್ನು ಅರ್ಧಕಲ್ಪ ಸುಖಿಯನ್ನಾಗಿ
ಮಾಡಲು. ನಂತರ ರಾವಣ ಬಂದು ನಿಮ್ಮನ್ನು ದುಃಖಿಯನ್ನಾಗಿ ಮಾಡುತ್ತಾನೆ, ಇದು ಸುಖ-ದುಃಖದ ಆಟವಾಗಿದೆ.
ಕಲ್ಪದ ಆಯಸ್ಸು 5000 ವರ್ಷಗಳಾಗಿದೆ ಅಂದಮೇಲೆ ಅರ್ಧ-ಅರ್ಧ ಭಾಗ ಮಾಡಬೇಕಲ್ಲವೆ. ರಾವಣ ರಾಜ್ಯದಲ್ಲಿ
ಎಲ್ಲರೂ ದೇಹಾಭಿಮಾನಿ, ವಿಕಾರಿಗಳಾಗಿ ಬಿಡುತ್ತಾರೆ. ಈ ಮಾತುಗಳನ್ನೂ ಸಹ ನೀವು ಈಗ
ತಿಳಿದುಕೊಳ್ಳುತ್ತೀರಿ. ಮೊದಲು ತಿಳಿದುಕೊಂಡಿರಲಿಲ್ಲ. ಕಲ್ಪ-ಕಲ್ಪವು ಯಾರು ತಿಳಿದುಕೊಳ್ಳುವರೋ
ಅವರಿಗೆ ಈಗಲೂ ಅರ್ಥವಾಗುವುದು. ಯಾರು ದೇವತೆಗಳಾಗುವವರಲ್ಲವೋ ಅವರು ಬರುವುದೇ ಇಲ್ಲ. ನೀವು ದೇವತಾ
ಧರ್ಮದ ಸಸಿಯನ್ನು ಹಾಕುತ್ತೀರಿ. ಯಾವಾಗ ಅದು ಆಸುರೀ ತಮೋಪ್ರಧಾನವಾಗಿ ಬಿಡುವುದೋ ಆಗ ದೈವೀ
ವೃಕ್ಷವೆಂದು ಹೇಳುವುದಿಲ್ಲ. ವೃಕ್ಷವೂ ಸಹ ಹೊಸದಿದ್ದಾಗ ಸತೋಪ್ರಧಾನವಾಗಿತ್ತು. ನಾವು ಅದರ ಎಲೆಗಳು
ದೇವಿ-ದೇವತೆಗಳಾಗಿದ್ದೆವು, ನಂತರ ರಜೋ, ತಮೋದಲ್ಲಿ ಬಂದೆವು, ಹಳೆಯ ಪತಿತ-ಶೂದ್ರರಾಗಿ ಬಿಟ್ಟೆವು.
ಹಳೆಯ ಪ್ರಪಂಚದಲ್ಲಿ ಹಳೆಯ ಮನುಷ್ಯರೇ ಇರುತ್ತಾರೆ, ಹಳಬರನ್ನೇ ಪುನಃ ಹೊಸಬರನ್ನಾಗಿ
ಮಾಡಬೇಕಾಗುತ್ತದೆ. ಈಗ ದೇವಿ-ದೇವತಾ ಧರ್ಮವೇ ಪ್ರಾಯಃಲೋಪವಾಗಿ ಬಿಟ್ಟಿದೆ. ತಂದೆಯೂ ಹೇಳುತ್ತಾರೆ-
ಯಾವಾಗ ಧರ್ಮಗ್ಲಾನಿಯಾಗುವುದೋ ಆಗ ಬರುತ್ತೇನೆ. ನೀವು ಕೇಳಬಹುದು- ಯಾವ ಧರ್ಮದ ಗ್ಲಾನಿಯಾಗುತ್ತದೆ
ಎಂದು. ಆದಿ ಸನಾತನ ದೇವಿ-ದೇವತಾ ಧರ್ಮದ ಗ್ಲಾನಿಯಾಗುತ್ತದೆ. ಯಾವುದನ್ನು ನಾನು ಸ್ಥಾಪನೆ
ಮಾಡಿದ್ದೆನು, ಆ ಧರ್ಮವೇ ಪ್ರಾಯಃಲೋಪವಾಯಿತು. ಅದಕ್ಕೆ ಬದಲು ಅಧರ್ಮವಾಗಿ ಬಿಟ್ಟಿದೆ. ಯಾವಾಗ
ಧರ್ಮದಿಂದ ಅಧರ್ಮದ ವೃದ್ಧಿಯಾಗುತ್ತದೆಯೋ ಆಗ ತಂದೆಯು ಬರುತ್ತಾರೆ. ಧರ್ಮದ ವೃದ್ಧಿ ಎಂದು
ಹೇಳುವುದಿಲ್ಲ. ಧರ್ಮವಂತೂ ಪ್ರಾಯಃಲೋಪವಾಯಿತು, ಬಾಕಿ ಅಧರ್ಮದ ವೃದ್ಧಿಯಾಯಿತು. ವೃದ್ಧಿಯಂತೂ ಎಲ್ಲಾ
ಧರ್ಮಗಳದೂ ಆಗುತ್ತದೆ, ಒಬ್ಬ ಕ್ರೈಸ್ಟ್ ನಿಂದ ಎಷ್ಟೊಂದು ಕ್ರಿಶ್ಚಿಯನ್ ಧರ್ಮದ ವೃದ್ಧಿಯಾಗುತ್ತದೆ,
ಬಾಕಿ ದೇವಿ-ದೇವತಾ ಧರ್ಮವು ಪ್ರಾಯಃಲೋಪವಾಯಿತು. ಪತಿತರಾಗುವ ಕಾರಣ ತಮ್ಮದೇ ಗ್ಲಾನಿ
ಮಾಡಿಕೊಳ್ಳುತ್ತಾರೆ. ಧರ್ಮದಿಂದ ಅಧರ್ಮವು ಒಂದೇ ಧರ್ಮವಾಗುತ್ತದೆ, ಮತ್ತೆಲ್ಲಾ ಧರ್ಮದವರು
ಚೆನ್ನಾಗಿ ನಡೆಯುತ್ತಿದ್ದಾರೆ. ಎಲ್ಲರೂ ತಮ್ಮ-ತಮ್ಮ ಧರ್ಮದಲ್ಲಿ ಸ್ಥಿರವಾಗಿರುತ್ತಾರೆ. ಆದಿ
ಸನಾತನ ದೇವಿ-ದೇವತಾ ಧರ್ಮ ಯಾವುದು ನಿರ್ವಿಕಾರಿಯಾಗಿತ್ತೋ ಅದು ಮಾತ್ರವೇ ವಿಕಾರಿಯಾಗಿದೆ. ನಾನು
ಪಾವನ ಪ್ರಪಂಚದ ಸ್ಥಾಪನೆ ಮಾಡಿದೆನು ನಂತರ ಅವರೇ ಪತಿತ ಶೂದ್ರರಾಗಿ ಬಿಡುತ್ತೀರಿ ಅರ್ಥಾತ್ ಧರ್ಮದ
ಗ್ಲಾನಿಯಾಗುತ್ತದೆ. ಅಪವಿತ್ರರಾದಾಗ ನನ್ನ ಗ್ಲಾನಿ ಮಾಡಿಸುತ್ತೀರಿ. ವಿಕಾರದಲ್ಲಿ ಹೋಗುವ ಕಾರಣ
ಪತಿತರಾಗಿ ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳಲು ಆಗುವುದಿಲ್ಲ. ಸ್ವರ್ಗವು ಬದಲಾಗಿ ನರಕವಾಗಿ
ಬಿಟ್ಟಿದೆ. ಆದ್ದರಿಂದ ಯಾರೂ ವಾಹ್! ವಾಹ್! ಪಾವನರು ಇಲ್ಲ. ನೀವು ಎಷ್ಟೊಂದು ಛೀ ಛೀ, ಪತಿತರಾಗಿ
ಬಿಟ್ಟಿದ್ದೀರಿ. ತಂದೆಯು ಹೇಳುತ್ತಾರೆ- ನಿಮ್ಮನ್ನು ಹೂಗಳನ್ನಾಗಿ ಮಾಡಿದೆನು, ನಂತರ ರಾವಣನು
ನಿಮ್ಮನ್ನು ಮುಳ್ಳುಗಳನ್ನಾಗಿ ಮಾಡಿದನು, ಪಾವನರಿಂದ ಪತಿತರಾಗಿ ಬಿಟ್ಟಿದ್ದೀರಿ. ತಮ್ಮ ಧರ್ಮದ
ಸ್ಥಿತಿಯನ್ನೇ ನೋಡಿಕೊಳ್ಳಿರಿ. ಭಗವಂತನೇ, ನಾವೆಷ್ಟು ಪತಿತರಾಗಿದ್ದೇವೆಂದು ನಮ್ಮ ಸ್ಥಿತಿಯನ್ನು
ಬಂದು ನೋಡಿ, ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಪತಿತರಿಂದ ಪಾವನರನ್ನಾಗಿ ಮಾಡಲು ತಂದೆಯು
ಬರುತ್ತಾರೆ ಅಂದಮೇಲೆ ಪಾವನರಾಗಬೇಕು, ಅನ್ಯರನ್ನು ಮಾಡಬೇಕು. ನೀವು ಮಕ್ಕಳು ತಮ್ಮನ್ನು
ನೋಡಿಕೊಳ್ಳುತ್ತಾ ಇರಿ- ನಾವು ಸರ್ವಗುಣ ಸಂಪನ್ನರಾಗಿದ್ದೇವೆಯೇ? ನಮ್ಮ ಚಲನೆಯು ದೇವತೆಗಳಂತೆ ಇದೆಯೇ?
ದೇವತೆಗಳ ರಾಜ್ಯದಲ್ಲಿ ಶಾಂತಿಯಿತ್ತು, ಈಗ ಪುನಃ ವಿಶ್ವದಲ್ಲಿ ಶಾಂತಿ ಹೇಗೆ ಸ್ಥಾಪನೆಯಾಗುವುದು
ಎಂಬುದನ್ನು ಕಲಿಸಲು ಬಂದಿದ್ದೇನೆ ಅಂದಮೇಲೆ ನೀವೂ ಶಾಂತಿಯಲ್ಲಿರಬೇಕಾಗಿದೆ. ಶಾಂತರಾಗುವ
ಯುಕ್ತಿಯನ್ನು ತಿಳಿಸುತ್ತೇನೆ- ನನ್ನನ್ನು ನೆನಪು ಮಾಡಿದರೆ ನೀವು ಶಾಂತರಾಗಿ ಶಾಂತಿಧಾಮಕ್ಕೆ ಹೊರಟು
ಹೋಗುತ್ತೀರಿ. ಕೆಲವು ಮಕ್ಕಳು ಶಾಂತವಾಗಿದ್ದು, ಅನ್ಯರಿಗೂ ಶಾಂತಿಯಲ್ಲಿರುವುದನ್ನು ಕಲಿಸುತ್ತಾರೆ.
ಕೆಲವರು ಅಶಾಂತಿ ಮಾಡಿ ಬಿಡುತ್ತಾರೆ. ತಾವೂ ಅಶಾಂತವಾಗಿದ್ದು ಅನ್ಯರನ್ನೂ ಅಶಾಂತ ಮಾಡಿ ಬಿಡುತ್ತಾರೆ.
ಶಾಂತಿಯ ಅರ್ಥವನ್ನು ತಿಳಿದುಕೊಂಡಿಲ್ಲ. ಶಾಂತಿಯನ್ನು ಕಲಿಯಲು ಇಲ್ಲಿಗೆ ಬರುತ್ತಾರೆ. ಮತ್ತೆ
ಇಲ್ಲಿಂದ ಹೋಗುತ್ತಾರೆಂದರೆ ಅಶಾಂತರಾಗಿ ಬಿಡುತ್ತಾರೆ. ಅಶಾಂತಿಯು ಅಪವಿತ್ರತೆಯಿಂದಲೇ ಆಗುತ್ತದೆ.
ಇಲ್ಲಿ ಬಂದು ಪ್ರತಿಜ್ಞೆ ಮಾಡುತ್ತಾರೆ- ಬಾಬಾ, ನಾನು ನಿಮ್ಮವನಾಗಿದ್ದೇನೆ, ತಮ್ಮಿಂದ ವಿಶ್ವದ
ರಾಜ್ಯಭಾಗ್ಯವನ್ನು ಪಡೆಯಬೇಕಾಗಿದೆ. ನಾವು ಪವಿತ್ರರಾಗಿ ಮತ್ತೆ ವಿಶ್ವದ ಮಾಲೀಕರು ಅವಶ್ಯವಾಗಿ
ಆಗುತ್ತೇವೆಂದು, ಮತ್ತೆ ಮನೆಗೆ ಹೋದ ಮೇಲೆ ಮಾಯೆಯು ಬಿರುಗಾಳಿಗಳಲ್ಲಿ ತೆಗೆದುಕೊಂಡು ಬರುತ್ತದೆ,
ಯುದ್ಧವಾಗುತ್ತದೆಯಲ್ಲವೆ. ನಂತರ ಮಾಯೆಗೆ ಗುಲಾಮರಾಗಿ ಪತಿತರಾಗಬಯಸುತ್ತಾರೆ. ನಾವು
ಪವಿತ್ರರಾಗಿರುತ್ತೇವೆಂದು ಯಾರು ಪ್ರತಿಜ್ಞೆ ಮಾಡಿ ನಂತರ ಮಾಯೆಯ ಯುದ್ಧಕ್ಕೆ ಸೋತು ಪ್ರತಿಜ್ಞೆ
ಮರೆತು ಹೋಗುವರು, ಅವರೇ ಅಬಲೆಯರ ಅತ್ಯಾಚಾರ ಮಾಡುತ್ತಾರೆ. ಭಗವಂತನೊಂದಿಗೆ ನಾವು ಪವಿತ್ರರಾಗಿ
ಪವಿತ್ರ ಪ್ರಪಂಚದ ಆಸ್ತಿಯನ್ನು ಪಡೆಯುತ್ತೇವೆ. ನಾವು ಕುದೃಷ್ಟಿಯನ್ನು ಇಟ್ಟುಕೊಳ್ಳದೇ ಪವಿತ್ರ
ದೃಷ್ಟಿಯನ್ನು ಇಟ್ಟುಕೊಳ್ಳುತ್ತೇವೆ, ವಿಕಾರದಲ್ಲಿ ಹೋಗುವುದಿಲ್ಲ. ಕೆಟ್ಟ ದೃಷ್ಟಿಯನ್ನು
ಬಿಡುತ್ತೇವೆಂದು ಪ್ರತಿಜ್ಞೆ ಮಾಡಿ ಮತ್ತೆ ಮಾಯಾರಾವಣನಿಗೆ ಸೋತು ಹೋಗುತ್ತಾರೆ. ಯಾರು
ನಿರ್ವಿಕಾರಿಗಳಾಗಲು ಬಯಸುತ್ತಾರೆಯೋ ಅವರಿಗೇ ಮತ್ತೆ ತೊಂದರೆ ಕೊಡುತ್ತಾರೆ. ಆದ್ದರಿಂದ ಅಬಲೆಯರ
ಮೇಲೆ ಅತ್ಯಾಚಾರವಾಗುತ್ತದೆ ಎಂದು ಹೇಳಲಾಗುತ್ತದೆ. ಪುರುಷರು ಬಲಶಾಲಿಗಳಾಗಿರುತ್ತಾರೆ, ಸ್ತ್ರೀಯರು
ನಿರ್ಬಲರಾಗಿರುತ್ತಾರೆ. ಯುದ್ಧಕ್ಕೂ ಸಹ ಪುರುಷರೇ ಹೋಗುತ್ತಾರೆ ಏಕೆಂದರೆ ಬಲಶಾಲಿಯಾಗಿದ್ದಾರೆ.
ಸ್ತ್ರೀ ಕೋಮಲವಾಗಿರುತ್ತಾರೆ, ಅವರ ಕರ್ತವ್ಯವೇ ಬೇರೆ, ಮನೆ ಸಂಭಾಲನೆ ಮಾಡಿ ಮಕ್ಕಳಿಗೆ ಜನ್ಮಕೊಟ್ಟು
ಅವರ ಪಾಲನೆ ಮಾಡುತ್ತಾರೆ. ಇದನ್ನೂ ತಂದೆಯು ತಿಳಿಸುತ್ತಾರೆ. ಸತ್ಯಯುಗದಲ್ಲಿ ಇರುವುದೇ ಒಂದು ಗಂಡು
ಮಗು, ಅದರಲ್ಲಿಯೂ ವಿಕಾರದ ಹೆಸರಿರುವುದಿಲ್ಲ. ಇಲ್ಲಂತೂ ಸನ್ಯಾಸಿಗಳೂ ಸಹ ಕೆಲಕೆಲವೊಮ್ಮೆ ಒಂದು
ಗಂಡು ಮಗುವಂತೂ ಅವಶ್ಯವಾಗಿ ಇರಬೇಕೆಂದು ಹೇಳಿ ಕೆಟ್ಟ ಶಿಕ್ಷಣವನ್ನು ಕೊಡುತ್ತಾರೆ. ಈಗ ತಂದೆಯು
ತಿಳಿಸುತ್ತಾರೆ - ಈ ಸಮಯದ ಮಕ್ಕಳು ಏನು ಪ್ರಯೋಜನಕ್ಕೆ ಬರುತ್ತಾರೆ? ಈಗ ವಿನಾಶವೂ ಸನ್ಮುಖದಲ್ಲಿ
ನಿಂತಿದೆ. ಎಲ್ಲರೂ ಸಮಾಪ್ತಿಯಾಗುವರು. ನಾನು ಬಂದಿರುವುದೇ ಹಳೆಯ ಪ್ರಪಂಚದ ವಿನಾಶ ಮಾಡಲು ಅದು
ಸನ್ಯಾಸಿಗಳ ಮಾತಾಯಿತು. ಅವರಿಗಂತೂ ವಿನಾಶದ ಮಾತಿನ ಬಗ್ಗೆ ತಿಳಿದೇ ಇಲ್ಲ. ನಿಮಗೆ ಬೇಹದ್ದಿನ
ತಂದೆಯು ತಿಳಿಸುವುದೇನೆಂದರೆ ಮಕ್ಕಳೇ ಈಗ ವಿನಾಶವಾಗಲಿದೆ. ನಿಮ್ಮ ಮಕ್ಕಳೂ ಸಹ
ವಾರಸುಧಾರರಾಗುವುದಿಲ್ಲ. ನಮ್ಮ ಕುಲದ ಹೆಸರು ಹೇಳುವವರಿರಲಿ ಎಂದು ನೀವು ತಿಳಿಯುತ್ತೀರಿ ಆದರೆ
ಪತಿತ ಪ್ರಪಂಚದ ಚಿಹ್ನೆಗಳು ಯಾವುದೂ ಇರುವುದಿಲ್ಲ. ಪಾವನ ಪ್ರಪಂಚದವರಾಗಿದ್ದೆವು ಎಂದು ನೀವು
ತಿಳಿಯುತ್ತೀರಿ. ಮನುಷ್ಯರೂ ಸಹ ನೆನಪು ಮಾಡಿಕೊಳ್ಳುತ್ತಾರೆ ಏಕೆಂದರೆ ಪಾವನ ಪ್ರಪಂಚವು ಇದ್ದು
ಹೋಗಿದೆ ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತಿತ್ತು. ಆದರೆ ಈಗ ತಮೋಪ್ರಧಾನರಾಗಿರುವ ಕಾರಣ
ತಿಳಿದುಕೊಳ್ಳುವುದಿಲ್ಲ. ಅವರ ದೃಷ್ಟಿಯೇ ವಿಕಾರಿಯಾಗಿದೆ. ಇದಕ್ಕೆ ಧರ್ಮಗ್ಲಾನಿಯೆಂದು
ಹೇಳಲಾಗುತ್ತದೆ. ಆದಿ ಸನಾತನ ಧರ್ಮದಲ್ಲಿ ಇಂತಹ ಮಾತುಗಳಿರುವುದೇ ಇಲ್ಲ. ಪತಿತ-ಪಾವನ ಬನ್ನಿ, ನಾವು
ಪತಿತ, ದುಃಖಿಯಾಗಿದ್ದೇವೆಂದು ಕರೆಯುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ- ನಾನು ನಿಮ್ಮನ್ನು
ಪಾವನರನ್ನಾಗಿ ಮಾಡಿದೆನು, ನಂತರ ಮಾಯಾರಾವಣನ ಕಾರಣ ನೀವು ಪತಿತರಾಗಿದ್ದೀರಿ. ಈಗ ಮತ್ತೆ ಪಾವನರಾಗಿ.
ಪಾವನರಾಗುತ್ತೀರೆಂದರೆ ಮಾಯೆಯ ಯುದ್ಧವು ನಡೆಯುತ್ತದೆ, ತಂದೆಯಿಂದ ಆಸ್ತಿಯನ್ನು ಪಡೆಯುವ
ಪುರುಷಾರ್ಥ ಮಾಡುತ್ತಿದ್ದವರು ನಂತರ ಮುಖ ಕಪ್ಪು ಮಾಡಿಕೊಂಡರೆ ಆಸ್ತಿಯನ್ನು ಹೇಗೆ ಪಡೆಯುವರು!
ತಂದೆಯು ಬರುವುದೇ ಸುಂದರರನ್ನಾಗಿ ಮಾಡಲು. ಸುಂದರರಾಗಿದ್ದ ದೇವತೆಗಳೇ ಕಪ್ಪಾಗಿದ್ದಾರೆ.
ದೇವತೆಗಳನ್ನೇ ಕಪ್ಪು ಶರೀರದಲ್ಲಿ ತೋರಿಸುತ್ತಾರೆ. ಕ್ರೈಸ್ಟ್, ಬುದ್ಧ ಮುಂತಾದವರನ್ನು ಎಂದಾದರೂ
ಕಪ್ಪಾಗಿ ನೋಡಿದ್ದೀರಾ? ದೇವಿ-ದೇವತೆಗಳ ಚಿತ್ರಗಳನ್ನು ಮಾತ್ರ ಕಪ್ಪಾಗಿ ತೋರಿಸುತ್ತಾರೆ. ಯಾರು
ಸರ್ವರ ಸದ್ಗತಿದಾತ, ಪರಮಪಿತ ಪರಮಾತ್ಮ, ಸರ್ವರ ತಂದೆಯಾಗಿದ್ದಾರೆಯೋ ಅವರನ್ನೇ ಪರಮಪಿತ ಪರಮಾತ್ಮ
ಬಂದು ಮುಕ್ತಗೊಳಿಸು ಎಂದು ಕರೆಯುತ್ತಾರೆ. ಅವರೇನು ಕಪ್ಪಾಗಿದ್ದಾರೆಯೇ? ಅವರು ಸದಾ ಸುಂದರ, ಸದಾ
ಪಾವನನಾಗಿದ್ದಾರೆ. ಕೃಷ್ಣನು ಇನ್ನೊಂದು ಶರೀರವನ್ನು ತೆಗೆದುಕೊಂಡರೂ ಸಹ ಪವಿತ್ರನೇ ಅಲ್ಲವೆ. ಮಹಾನ್
ಆತ್ಮರೆಂದು ದೇವತೆಗಳಿಗೇ ಹೇಳಲಾಗುತ್ತದೆ. ಕೃಷ್ಣನು ದೇವತೆಯಾದನು, ಈಗಂತೂ ಕಲಿಯುಗವಿದೆ ಅಂದಮೇಲೆ
ಕಲಿಯುಗದಲ್ಲಿ ಮಹಾತ್ಮರು ಎಲ್ಲಿಂದ ಬರುವರು? ಶ್ರೀಕೃಷ್ಣನು ಸತ್ಯಯುಗದ ಮೊದಲ ರಾಜಕುಮಾರನಾಗಿದ್ದಾನೆ,
ಕೃಷ್ಣನಲ್ಲಿ ದೈವೀ ಗುಣಗಳಿತ್ತು, ಈಗಂತೂ ದೇವತೆಗಳು ಯಾರೂ ಇಲ್ಲ. ಸಾಧು-ಸಂತರು,
ಪವಿತ್ರರಾಗುತ್ತಾರೆ. ಆದರೂ ಪುನರ್ಜನ್ಮವನ್ನಂತೂ ವಿಕಾರದಿಂದ ಪಡೆಯುತ್ತಾರೆ, ಮತ್ತೆ ಸನ್ಯಾಸ ಧಾರಣೆ
ಮಾಡಬೇಕಾಗುತ್ತದೆ. ದೇವತೆಗಳು ಸದಾ ಪವಿತ್ರರಾಗಿರುತ್ತಾರೆ, ಇಲ್ಲಿ ರಾವಣ ರಾಜ್ಯವಿದೆ.
ಸ್ತ್ರೀಯರಲ್ಲಿನ 5 ವಿಕಾರಗಳು, ಪುರುಷರಲ್ಲಿನ 5 ವಿಕಾರಗಳನ್ನು ತೋರಿಸಿ ರಾವಣನಿಗೆ 10 ತಲೆಗಳನ್ನು
ತೋರಿಸುತ್ತಾರೆ. 5 ವಿಕಾರಗಳು ಪ್ರತಿಯೊಬ್ಬರಲ್ಲಿಯೂ ಇವೆ ಎಂಬುದನ್ನು ತಿಳಿದುಕೊಳ್ಳುತ್ತಾರೆ, ಆದರೆ
ದೇವತೆಗಳಲ್ಲಂತೂ ಇರಲಿಲ್ಲ ತಾನೆ! ಅದು ಸುಖಧಾಮವಾಗಿತ್ತು, ಅಲ್ಲಿಯೂ ರಾವಣನು ಇದ್ದಿದ್ದರೆ ಅದೂ
ದುಃಖಧಾಮವಾಗಿ ಬಿಡುತ್ತಿತ್ತು. ದೇವತೆಗಳು ಮಕ್ಕಳಿಗೆ ಜನ್ಮ ಕೊಡುತ್ತಾರೆ ಅಂದಮೇಲೆ ಅವರು
ವಿಕಾರಿಗಳಾದರಲ್ಲವೆ ಎಂದು ಮನುಷ್ಯರು ತಿಳಿದುಕೊಳ್ಳುತ್ತಾರೆ ಆದರೆ ಅವರಿಗೆ ಗೊತ್ತೇ ಇಲ್ಲ-
ದೇವತೆಗಳಿಗೆ ಸಂಪೂರ್ಣ ನಿರ್ವಿಕಾರಿಗಳೆಂದೇ ಗಾಯನ ಮಾಡಲಾಗುತ್ತದೆ ಆದ್ದರಿಂದಲೇ ಅವರಿಗೆ ಪೂಜೆ
ನಡೆಯುತ್ತದೆ. ಸನ್ಯಾಸಿಗಳದು ಒಂದು ಮಿಷನ್ (ಟ್ರಸ್ಟ್) ಆಗಿದೆ. ಕೇವಲ ಪುರುಷರಿಗೆ ಸನ್ಯಾಸ ಮಾಡಿಸಿ
ತಮ್ಮ ಸಂಸ್ಥೆಯನ್ನು ವೃದ್ಧಿ ಮಾಡುತ್ತಾರೆ. ತಂದೆಯು ಮತ್ತೆ ಪ್ರವೃತ್ತಿ ಮಾರ್ಗದ ಹೊಸ ಮಿಷನ್ನ್ನು
ಸ್ಥಾಪಿಸುತ್ತಾರೆ. ಸ್ತ್ರೀ-ಪುರುಷರಿಬ್ಬರನ್ನು ಪವಿತ್ರರನ್ನಾಗಿ ಮಾಡುತ್ತಾರೆ. ನಂತರ ನೀವೇ ಹೋಗಿ
ದೇವತೆಗಳಾಗುತ್ತೀರಿ. ನೀವಿಲ್ಲಿ ಸನ್ಯಾಸಿಗಳಾಗಲು ಬಂದಿಲ್ಲ. ವಿಶ್ವದ ಮಾಲೀಕರಾಗಲು ಬಂದಿದ್ದೀರಿ.
ಅವರಂತೂ ಗೃಹಸ್ಥದಲ್ಲಿಯೇ ಜನ್ಮ ತೆಗೆದುಕೊಳ್ಳುತ್ತಾರೆ ಮತ್ತೆ ಅಲ್ಲಿಂದ ಹೊರಟು ಹೋಗುತ್ತಾರೆ.
ನಿಮ್ಮ ಸಂಸ್ಕಾರವೇ ಪವಿತ್ರತೆಯದಾಗಿದೆ, ಈಗ ಅಪವಿತ್ರರಾಗಿದ್ದೀರಿ, ಪುನಃ ಪವಿತ್ರರಾಗಬೇಕಾಗಿದೆ.
ತಂದೆಯು ಪವಿತ್ರ ಗೃಹಸ್ಥ ಆಶ್ರಮವನ್ನು ಸ್ಥಾಪಿಸುತ್ತಾರೆ. ಪಾವನ ಪ್ರಪಂಚಕ್ಕೆ ಸತ್ಯಯುಗವೆಂತಲೂ,
ಪತಿತ ಪ್ರಪಂಚಕ್ಕೆ ಕಲಿಯುಗವೆಂತಲೂ ಹೇಳಲಾಗುತ್ತದೆ. ಇಲ್ಲಿ ಎಷ್ಟೊಂದು ಪಾಪಾತ್ಮರಿದ್ದಾರೆ,
ಸತ್ಯಯುಗದಲ್ಲಿ ಈ ಮಾತುಗಳಿರುವುದೇ ಇಲ್ಲ. ತಂದೆಯು ತಿಳಿಸುತ್ತಾರೆ- ಯಾವಾಗ ಭಾರತದಲ್ಲಿ
ಧರ್ಮಗ್ಲಾನಿಯಾಗುವುದೋ ಅರ್ಥಾತ್ ದೇವಿ-ದೇವತಾ ಧರ್ಮದವರು ಪತಿತರಾಗುವರೋ ಆಗ ತಮ್ಮ ನಿಂದನೆ
ಮಾಡಿಸುತ್ತಾರೆ. ಅದಕ್ಕಾಗಿ ತಂದೆಯು ಹೇಳುತ್ತಾರೆ- ನಾನು ನಿಮ್ಮನ್ನು ಪಾವನರನ್ನಾಗಿ ಮಾಡಿದ್ದೆನು,
ಮತ್ತೆ ಪತಿತರಾದಿರಿ. ಈಗ ಯಾವುದೇ ಕೆಲಸಕ್ಕೆ ಬಾರದವರಾಗಿದ್ದಿರಿ, ಯಾವಾಗ ಈ ರೀತಿ ಪತಿತರಾಗಿ
ಬಿಡುತ್ತೀರಿ. ಆಗ ಪುನಃ ಪಾವನರನ್ನಾಗಿ ಮಾಡಲು ನಾನೇ ಬರಬೇಕಾಗುತ್ತದೆ. ಈ ಸೃಷ್ಟಿಯ ಚಕ್ರವು
ಸುತ್ತುತ್ತಿರುತ್ತದೆ. ಸ್ವರ್ಗದಲ್ಲಿ ಹೋಗುವುದಕ್ಕಾಗಿ ದೈವೀ ಗುಣಗಳೂ ಬೇಕು, ಕ್ರೋಧವಿರಬಾರದು.
ಕ್ರೋಧವಿದ್ದರೆ ಅವರನ್ನೂ ಅಸುರರೆಂದೇ ಹೇಳಲಾಗುವುದು. ಬಹಳ ಶಾಂತಚಿತ್ತ ಸ್ಥಿತಿಯು ಬೇಕಾಗಿದೆ.
ಕ್ರೋಧ ಮಾಡಿದರೆ ಇವರಲ್ಲಿ ಕ್ರೋಧದ ಭೂತವಿದೆಯೆಂದು ಹೇಳುತ್ತಾರೆ. ಯಾರಲ್ಲಿ ಯಾವುದೇ ಭೂತವಿದ್ದರೂ
ಅವರು ದೇವತೆಗಳಾಗಲು ಸಾಧ್ಯವಿಲ್ಲ. ನರನಿಂದ ನಾರಾಯಣನಾಗಲು ಸಾಧ್ಯವಿಲ್ಲ. ದೇವತೆಗಳಂತೂ
ನಿರ್ವಿಕಾರಿಗಳಾಗಿದ್ದರು, ಯಥಾ ರಾಜ-ರಾಣಿ ತಥಾ ಪ್ರಜಾ ಎಲ್ಲರೂ ನಿರ್ವಿಕಾರಿಯಾಗಿದ್ದರು. ಭಗವಂತ
ತಂದೆಯೇ ಬಂದು ಸಂಪೂರ್ಣ ನಿರ್ವಿಕಾರಿಗಳನ್ನಾಗಿ ಮಾಡುತ್ತಾರೆ. ಒಳ್ಳೆಯದು.
ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಜೊತೆ
ಪವಿತ್ರತೆಯ ಪ್ರತಿಜ್ಞೆ ಮಾಡಿದ್ದೀರೆಂದರೆ ತಮ್ಮನ್ನು ಮಾಯೆಯ ಯುದ್ಧದಿಂದ ರಕ್ಷಣೆ ಮಾಡಿಕೊಳ್ಳುತ್ತಾ
ಇರಬೇಕಾಗಿದೆ. ಎಂದೂ ಮಾಯೆಗೆ ಗುಲಾಮರಾಗಬಾರದು. ಈ ಪ್ರತಿಜ್ಞೆಯನ್ನು ಮರೆಯಬಾರದು ಏಕೆಂದರೆ ಈಗ
ಪಾವನ ಪ್ರಪಂಚಕ್ಕೆ ಹೋಗಬೇಕಾಗಿದೆ.
2. ದೇವತೆಗಳಾಗಬೇಕೆಂದರೆ ಸ್ಥಿತಿಯನ್ನು ಬಹಳ-ಬಹಳ ಶಾಂತಚಿತ್ತ ಮಾಡಿಕೊಳ್ಳಬೇಕಾಗಿದೆ. ಯಾವುದೇ ಭೂತ
ಪ್ರವೇಶವಾಗಲು ಬಿಡಬಾರದು. ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕು.
ವರದಾನ:
ಮುಖದ ಮೂಲಕ
ಸರ್ವ ಶ್ರೇಷ್ಠ ಪ್ರಾಪ್ತಿಗಳ ಅನುಭವ ಮಾಡುವಂತಹ ಸರ್ವ ಪ್ರಾಪ್ತಿ ಸಂಪನ್ನ ಭವ.
ಸಂಗಮಯುಗದಲ್ಲಿ ನೀವು
ಬ್ರಾಹ್ಮಣ ಆತ್ಮರಿಗೆ ವರದಾನವಾಗಿದೆ “ಸರ್ವ ಪ್ರಾಪ್ತಿ ಸಂಪನ್ನ ಭವ”. ಇಂತಹ ವರದಾನಿ ಆತ್ಮರಿಗೆ
ಪರಿಶ್ರಮ ಪಡುವ ಅಗತ್ಯವಿಲ್ಲ. ಅವರ ಮುಖದ ಹೊಳಪು ತಿಳಿಸುವುದು ಇವರು ಏನನ್ನೋ ಪಡೆದಿರುವರು ಎಂದು,
ಇವರು ಪ್ರಾಪ್ತಿ ಸ್ವರೂಪ ಆತ್ಮರಾಗಿದ್ದಾರೆ. ಕೆಲವೊಂದು ಮಕ್ಕಳ ಮುಖವನ್ನು ನೋಡಿ ಜನ ಹೇಳುತ್ತಾರೆ
ಉನ್ನತವಾದ ಗುರಿ ಇವರದು, ಇವರು ಬಹಳ ಉನ್ನತವಾದ ತ್ಯಾಗ ಮಾಡಿದ್ದಾರೆ. ತ್ಯಾಗ ಕಂಡು ಬರುವುದು ಆದರೆ
ಭಾಗ್ಯ ಇಲ್ಲ. ಯಾವಾಗ ಸರ್ವ ಪ್ರಾಪ್ತಿಗಳ ನಶೆಯಲ್ಲಿರುತ್ತಾ ತಮ್ಮ ಭಾಗ್ಯವನ್ನು ತೋರಿಸುವಿರಿ ಆಗ
ಸಹಜವಾಗಿ ಆಕರ್ಷಿತರಾಗಿ ಬರುವಿರಿ.
ಸ್ಲೋಗನ್:
ಎಲ್ಲಿ
ಉಮಂಗ-ಉತ್ಸಾಹ ಮತ್ತು ಏಕಮತದ ಸಂಘಟನೆಯಿದೆ, ಅಲ್ಲಿ ಸಫಲತೆ ಸಮಾವೇಶವಾಗಿರುವುದು.