12.08.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಾವಿಲ್ಲಿ ವಿದ್ಯೆಯನ್ನು ಓದಲು ಬಂದಿರುವಿರಿ, ತಾವು ಕಣ್ಣುಗಳನ್ನು ಮುಚ್ಚುವ ಅವಶ್ಯಕತೆ ಇಲ್ಲ. ಕಣ್ಣುಗಳನ್ನು ತೆರೆದು ಓದಲಾಗುತ್ತದೆ”

ಪ್ರಶ್ನೆ:
ಭಕ್ತಿಮಾರ್ಗದಲ್ಲಿ ಭಕ್ತಿರಲ್ಲಿ ಯಾವ ಹವ್ಯಾಸವಿರುತ್ತದೆ, ಅದೀಗ ನೀವು ಮಕ್ಕಳಲ್ಲಿರಬಾರದು?

ಉತ್ತರ:
ಭಕ್ತಿಯಲ್ಲಿ ಯಾವುದೇ ದೇವತೆಯ ಮುಂದೆ ಹೋದರೂ ಏನಾದರೂ ಬೇಡುತ್ತಾರೆ, ಅವರಲ್ಲಿ ಬೇಡುವ ಹವ್ಯಾಸವಾಗಿ ಬಿಟ್ಟಿದೆ. ಲಕ್ಷ್ಮಿಯ ಮುಂದೆ ಹೋಗಿ ಹಣ ಕೇಳುತ್ತಾರೆ, ಆದರೆ ಏನೂ ಸಿಗುವುದಿಲ್ಲ. ಈಗ ನೀವು ಮಕ್ಕಳಲ್ಲಿ ಈ ಹವ್ಯಾಸವಿಲ್ಲ. ನೀವಂತೂ ತಂದೆಯ ಆಸ್ತಿಗೆ ಅಧಿಕಾರಿಯಾಗಿದ್ದೀರಿ. ನೀವು ಸತ್ಯ ವಿಚಿತ್ರ ತಂದೆಯನ್ನು ನೋಡುತ್ತಿರಿ. ಇದರಲ್ಲಿಯೇ ನಿಮ್ಮ ಸತ್ಯ ಸಂಪಾದನೆಯಿದೆ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಇದು ಪಾಠಶಾಲೆಯಾಗಿದೆ. ಆದರೆ ಇಲ್ಲಿ ಯಾವ ಚಿತ್ರ ಅರ್ಥಾತ್ ದೇಹಧಾರಿಗಳನ್ನು ನೋಡಬಾರದು. ಇಲ್ಲಿ ನೋಡುತ್ತಿದ್ದರು, ಬುದ್ಧಿಯು ಯಾರಿಗೆ ಚಿತ್ರ ಇಲ್ಲವೋ ಅವರ ಕಡೆ ಹೋಗಬೇಕು. ಶಾಲೆಯಲ್ಲಿ ಮಕ್ಕಳ ಗಮನವು ಸದಾ ಶಿಕ್ಷಕನ ಕಡೆ ಇರುತ್ತದೆ. ಎಕೆಂದರೆ ಅವರು ಓದಿಸುತ್ತಾರೆ, ಆದ್ದರಿಂದ ಅವಶ್ಯವಾಗಿ ಅವರು ಹೇಳುವುದನ್ನು ಕೇಳಬೇಕು ಮತ್ತು ಪ್ರತ್ಯುತ್ತರವನ್ನೂ ನೀಡಬೇಕಾಗಿದೆ. ಶಿಕ್ಷಕರು ಪ್ರಶ್ನೆ ಕೇಳಿದಾಗ ನಾನು ಹೇಳುತ್ತೇನೆಂದು ಸನ್ನೆ ಮಾಡುತ್ತಾರಲ್ಲವೆ! ಇಲ್ಲಿ ಇದು ವಿಚಿತ್ರ ಶಾಲೆಯಾಗಿದೆ, ಏಕೆಂದರೆ ವಿಚಿತ್ರ ವಿದ್ಯೆಯಾಗಿದೆ. ಇವರಿಗೆ ಯಾವ ಚಿತ್ರವಿಲ್ಲ ಅಂದಾಗ ವಿದ್ಯೆಯಲ್ಲಿ ಕಣ್ಣು ಮುಚ್ಚಿ ಕುಳಿತುಕೊಳ್ಳಬಾರದಲ್ಲವೆ. ಶಾಲೆಯಲ್ಲಿ ಶಿಕ್ಷಕರ ಮುಂದೆ ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾರೆಯೆ! ಭಕ್ತಿಮಾರ್ಗದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಕಣ್ಣು ಮುಚ್ಚಿ ಮಾಲೆಯನ್ನು ಜಪಿಸುವುದು ಇತ್ಯಾದಿ... ಸಾಧು ಸಂತರೂ ಸಹ ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾರೆ. ಮನಸ್ಸು ಇಲ್ಲಿ ಚಲಾಯಮಾನವಾಗದಿರಲೆಂದು ಅವರು ಸ್ತ್ರೀಯರನ್ನು ನೋಡುವುದಿಲ್ಲ. ಆದರೆ ಇತ್ತೀಚೆಗೆ ಕಾಲವು ತಮೋಪ್ರಧಾನವಾಗಿದೆ. ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ನೀವು ಇಲ್ಲಿ ಶರೀರವನ್ನು ನೋಡಿದರೂ ಬುದ್ಧಿಯು ಆ ವಿಚಿತ್ರ ತಂದೆಯನ್ನು ನೆನಪು ಮಾಡುವುದರಲ್ಲಿರುತ್ತದೆ. ಹೀಗೆ ಶರೀರವನ್ನು ನೋಡುತ್ತಿದ್ದರೂ ವಿಚಿತ್ರವನ್ನು ನೆನಪು ಮಾಡುವಂತಹ ಸಾಧು ಸಂತರು ಯಾರೂ ಇಲ್ಲ. ನಿಮಗೆ ಗೊತ್ತಿದೆ ತಂದೆಯು ಈ ರಥದಲ್ಲಿದ್ದು ನಮಗೆ ಓದಿಸುತ್ತಾರೆ, ಮಾತನಾಡುತ್ತಾರೆ. ಎಲ್ಲವನ್ನೂ ಆತ್ಮವೇ ಮಾಡುತ್ತದೆಯಲ್ಲವೆ, ಶರೀರವೇನೂ ಮಾಡುವುದಿಲ್ಲ, ಆತ್ಮವೇ ಕೇಳುತ್ತದೆ, ಆತ್ಮಿಕ ಜ್ಞಾನ ಹಾಗೂ ಶಾರೀರಿಕ ಜ್ಞಾನವನ್ನು ಆತ್ಮವೇ ಕೇಳುತ್ತದೆ ಮತ್ತು ಹೇಳುತ್ತದೆ. ಆತ್ಮವು ದೈಹಿಕ ಶಿಕ್ಷಕನಾಗುತ್ತಾನೆ. ಶರೀರದ ಮೂಲಕ ಶಾರೀರಿಕ ವಿದ್ಯೆಯನ್ನು ಓದಿಸುತ್ತಾರೆ ಮತ್ತು ಆತ್ಮವು ಓದುತ್ತದೆ. ಒಳ್ಳೆಯ ಮತ್ತು ಕೆಟ್ಟ ಸಂಸ್ಕಾರವನ್ನು ಆತ್ಮವೇ ಧಾರಣೆ ಮಾಡುತ್ತದೆ, ಶರೀರವಂತೂ ಬೂದಿಯಾಗುತ್ತದೆ. ಇದೂ ಸಹ ಯಾವುದೇ ಮನುಷ್ಯರಿಗೆ ಗೊತ್ತಿಲ್ಲ - ನಾನು ಇಂತಹವನಾಗಿದ್ದೇನೆ, ನಾನು ಪ್ರಧಾನ ಮಂತ್ರಿಯಾಗಿದ್ದೇನೆಂದು ಅವರಿಗೆ ದೇಹಾಭಿಮಾನವಿರುತ್ತದೆ. ನಾನು ಆತ್ಮ ಈ ಪ್ರಧಾನಮಂತ್ರಿಯ ಶರೀರವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳುವುದಿಲ್ಲ. ಇದೂ ಸಹ ನಿಮಗೆ ಮಾತ್ರ ಗೊತ್ತಿದೆ. ಎಲ್ಲವನ್ನೂ ಆತ್ಮವೇ ಮಾಡುತ್ತದೆ. ಆತ್ಮವು ಅವಿನಾಶಿಯಾಗಿದೆ, ಶರೀರವೇನೂ ಮಾಡಲು ಸಾಧ್ಯವಿಲ್ಲ. ಆತ್ಮವು ಶರೀರದಿಂದ ಹೊರಟು ಹೋದರೆ ಇದು ಶವವಾಗಿ ಬಿಡುತ್ತದೆ, ಆತ್ಮವನ್ನು ಸ್ಥೂಲ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ, ಅದು ಸೂಕ್ಷ್ಮವಾಗಿದೆಯಲ್ಲವೆ. ತಂದೆ ತಿಳಿಸುತ್ತಾರೆ - ಬುದ್ಧಿಯಿಂದ ನೆನಪು ಮಾಡಿ, ನಮಗೆ ಇವರ ಮೂಲಕ ಶಿವ ತಂದೆ ಓದಿಸುತ್ತಾರೆಂದು ನಿಮ್ಮ ಬುದ್ಧಿಯಲ್ಲಿಯೂ ಇದೆ. ಇವು ಸೂಕ್ಷ್ಮ ತಿಳಿದುಕೊಳ್ಳುವ ಮಾತುಗಳಾಗಿವೆ. ಕೆಲವರು ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ಕೆಲವರು ಸ್ವಲ್ಪವೂ ತಿಳಿದುಕೊಳ್ಳುವುದಿಲ್ಲ, ಇರುವುದೊಂದೇ ಮಾತು, ಅಲ್ಫ್ ಅಂದರೆ ಭಗವಂತ, ತಂದೆ. ಭಗವಂತ, ಈಶ್ವರ ಎಂದು ಹೇಳುವುದರಿಂದ ತಂದೆಯ ಸಂಬಂಧವಿರುವುದಿಲ್ಲ. ಈ ಸಮಯದಲ್ಲಿ ಎಲ್ಲರೂ ಕಲ್ಲುಬುದ್ಧಿಯರಾಗಿದ್ದಾರೆ, ಏಕೆಂದರೆ ರಚಯಿತ ತಂದೆ ಮತ್ತು ರಚನೆಯ ಆದಿ, ಮಧ್ಯ, ಅಂತ್ಯವನ್ನು ತಿಳಿದುಕೊಂಡಿಲ್ಲ. ವಿಶ್ವದ ಇತಿಹಾಸ ಭೂಗೋಳವು ಪುನರಾವರ್ತನೆಯಾಗುತ್ತದೆ. ಈಗ ಸಂಗಮಯುಗವಾಗಿದೆ, ಇದು ಯಾರಿಗೂ ಗೊತ್ತಿಲ್ಲ. ಮೊದಲು ನಮಗೂ ಸಹ ಗೊತ್ತಿರಲಿಲ್ಲವೆಂದು ನಿಮಗೆ ತಿಳಿದಿದೆ. ತಂದೆಯು ಈಗ ನಿಮ್ಮನ್ನು ಇಲ್ಲಿ ಜ್ಞಾನದಿಂದ ಶೃಂಗಾರ ಮಾಡುತ್ತಾರೆ ಮತ್ತೆ ಇಲ್ಲಿಂದ ಹೊರಗೆ ಹೋದರೆ ಮಾಯೆಯ ಧೂಳಿನಲ್ಲಿ ಹೊರಳಾಡಿ ಜ್ಞಾನ ಶೃಂಗಾರವು ಕೆಟ್ಟು ಹೋಗುತ್ತದೆ. ತಂದೆಯು ಶೃಂಗಾರ ಮಾಡುತ್ತಾರೆ ಆದರೆ ತಮ್ಮ ಪುರುಷಾರ್ಥವನ್ನೂ ಮಾಡಬೇಕು. ಕೆಲವು ಮಕ್ಕಳು ಕಾಡು ಪ್ರಾಣಿಗಳಂತೆ ಮಾತನಾಡುತ್ತಾರೆ. ಶೃಂಗಾರವೇ ಆಗಿಲ್ಲವೆನ್ನುವಂತೆ ಎಲ್ಲವನ್ನೂ ಮರೆತು ಬಿಡುತ್ತಾರೆ. ಕೊನೆಯಲ್ಲಿ ಕುಳಿತಿರುವ ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಅಷ್ಟು ಮನಸ್ಸಿರುವುದಿಲ್ಲ. ಹಾ! ಕಾರ್ಖಾನೆ ಇತ್ಯಾದಿಗಳಲ್ಲಿ ಕೆಲಸ ಮಾಡಿ ಸಾಹುಕಾರರಾಗುತ್ತಾರೆ. ಏನನ್ನು ಓದಿರುವುದಿಲ್ಲ. ಇದು ಶ್ರೇಷ್ಠ ವಿದ್ಯೆಯಾಗಿದೆ. ವಿದ್ಯೆಯಿಲ್ಲದೇ ಭವಿಷ್ಯ ಪದವಿಯು ಸಿಗಲು ಸಾಧ್ಯವಿಲ್ಲ. ಇಲ್ಲಿ ನೀವು ಕಾರ್ಖಾನೆಯಲ್ಲಿ ಕೆಲಸ ಮಾಡಿ ಸಾಹುಕಾರರಾಗಬೇಕಾಗಿಲ್ಲ. ಎಲ್ಲವೂ ಸಮಾಪ್ತಿಯಾಗಲಿದೆ ಕೇವಲ ಅವಿನಾಶಿ ಸಂಪಾದನೆ ಮಾತ್ರ ಜೊತೆಯಲ್ಲಿ ಬರುತ್ತದೆ. ನಿಮಗೆ ಗೊತ್ತಿದೆ ಮನುಷ್ಯರು ಸಾಯುವಾಗ ಬರಿಗೈಯಲ್ಲಿ ಹೋಗುತ್ತಾರೆ, ಜೊತೆಯಲ್ಲಿ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ನೀವು ತುಂಬಿದ ಕೈಗಳಿಂದ ಹೋಗುತ್ತೀರಿ. ನಿಮ್ಮ ಈ ಸತ್ಯ ಸಂಪಾದನೆಯು 21 ಜನ್ಮಗಳಿಗಾಗಿ ಇದೆ. ಬೇಹದ್ದಿನ ತಂದೆಯೇ ಸತ್ಯ ಸಂಪಾದನೆಯನ್ನು ಮಾಡಿಸುತ್ತಾರೆ.

ನೀವು ಮಕ್ಕಳು ಈ ಚಿತ್ರವನ್ನು ನೋಡುತ್ತೀರಿ, ಆದರೆ ವಿಚಿತ್ರ ತಂದೆಯನ್ನು ನೆನಪು ಮಾಡುತ್ತೀರಿ ಏಕೆಂದರೆ ನೀವು ಆತ್ಮಗಳಾಗಿದ್ದೀರಿ. ಆದ್ದರಿಂದ ಆತ್ಮವು ತನ್ನ ತಂದೆಯನ್ನೇ ನೋಡುತ್ತದೆ, ಅವರಿಂದಲೇ ಓದುತ್ತಾರೆ. ಆತ್ಮವನ್ನು ಮತ್ತು ಪರಮಾತ್ಮನನ್ನು ಸ್ಥೂಲವಾಗಿ ನೋಡಲು ಆಗುವುದಿಲ್ಲ ಆದರೆ ಬುದ್ಧಿಯಿಂದ ಅರಿತುಕೊಂಡಿದ್ದೀರಿ. ನಾನು ಆತ್ಮ ಅವಿನಾಶಿಯಾಗಿದ್ದೇನೆ. ಈ ಶರೀರವು ವಿನಾಶಿಯಾಗಿದೆ. ಈ ತಂದೆಯೂ ಸಹ ಸನ್ಮುಖದಲ್ಲಿ ನೀವು ಮಕ್ಕಳನ್ನು ನೋಡುತ್ತಾರೆ, ಆದರೆ ಆತ್ಮಗಳಿಗೆ ತಿಳಿಸುತ್ತೇನೆಂದು ಬುದ್ಧಿಯಲ್ಲಿದೆ. ಈಗ ತಂದೆಯು ನಿಮಗೆ ಏನೇನು ತಿಳಿಸಿಕೊಡುತ್ತಾರೆ ಅದು ಸತ್ಯವೇ ಸತ್ಯವಾಗಿದೆ. ಇದರಲ್ಲಿ ಅಸತ್ಯದ ಅಂಶವೂ ಇಲ್ಲ. ನೀವು ಸತ್ಯ ಖಂಡದ ಮಾಲೀಕರಾಗುತ್ತೀರಿ, ಇದು ಅಸತ್ಯ ಖಂಡವಾಗಿದೆ. ಅಸತ್ಯ ಖಂಡವು ಕಲಿಯುಗವಾಗಿದೆ, ಸತ್ಯ ಖಂಡವು ಸತ್ಯಯುಗವಾಗಿದೆ. ರಾತ್ರಿ ಹಗಲಿನ ಅಂತರವಿದೆ. ಸತ್ಯಯುಗದಲ್ಲಿ ದುಃಖದ ಮಾತಿರುವುದಿಲ್ಲ, ಹೆಸರೇ ಆಗಿದೆ ಸುಖಧಾಮ. ಬೇಹದ್ದಿನ ತಂದೆಯು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ಅವರಿಗೆ ಯಾವ ಚಿತ್ರವಿಲ್ಲ, ಬೇರೆ ಎಲ್ಲರಿಗೂ ಚಿತ್ರವಿದೆ. ಅವರ ಆತ್ಮದ ಹೆಸರು ಬದಲಾಗುತ್ತದೆಯೇ? ಅವರ ಹೆಸರೇ ಆಗಿದೆ ಶಿವ, ಬೇರೆಯವರಿಗೆ ಆತ್ಮವೆಂದೇ ಹೇಳುತ್ತಾರೆ, ಬಾಕಿ ಶರೀರಕ್ಕೆ ಹೆಸರಿರುತ್ತದೆ. ಶಿವಲಿಂಗವು ನಿರಾಕಾರವಾಗಿದೆ, ಜ್ಞಾನಸಾಗರ, ಶಾಂತಿಯ ಸಾಗರ.... ಇದು ಶಿವನ ಮಹಿಮೆಯಾಗಿದೆ. ಅವರು ತಂದೆಯೂ ಆಗಿದ್ದಾರೆ. ಅಂದಮೇಲೆ ಅವರಿಂದ ಅವಶ್ಯವಾಗಿ ಆಸ್ತಿಯು ಸಿಗುತ್ತದೆ. ರಚನೆಗೆ ರಚನೆಯಿಂದ ಆಸ್ತಿ ಸಿಗುವುದಿಲ್ಲ. ಆಸ್ತಿಯನ್ನು ರಚಯಿತ ತಂದೆ ಮಕ್ಕಳಿಗೆ ಕೊಡುತ್ತಾರೆ. ತಮ್ಮ ಮಕ್ಕಳಿದ್ದರೂ ಸೋದರನ ಮಕ್ಕಳಿಗೆ ಆಸ್ತಿ ಕೊಡುತ್ತಾರೆಯೇ? ಈ ಬೇಹದ್ದಿನ ತಂದೆಯು ಸಹ ತಮ್ಮ ಬೇಹದ್ದಿನ ಮಕ್ಕಳಿಗೆ ಕೊಡುತ್ತಾರೆ. ಇದು ಬೇಹದ್ದಿನ ವಿದ್ಯೆಯಾಗಿದೆ ಅಲ್ಲವೆ. ಹೇಗೆ ವಿದ್ಯೆಯಿಂದ ಮನುಷ್ಯರು ಬ್ಯಾರಿಸ್ಟರ್ ಇತ್ಯಾದಿಯಾಗುತ್ತಾರೆ, ಅಲ್ಲಿ ಓದಿಸುವವರ ಜೊತೆ ಮತ್ತು ವಿದ್ಯೆಯ ಜೊತೆ ಯೋಗವಿರುತ್ತದೆ. ಇಲ್ಲಿ ಓದಿಸುವವರು ವಿಚಿತ್ರ ತಂದೆಯಾಗಿದ್ದಾರೆ. ನೀವಾತ್ಮರೂ ಸಹ ವಿಚಿತ್ರವಾಗಿದ್ದೀರಿ. ತಂದೆಯು ಹೇಳುತ್ತಾರೆ - ನಾನು ನೀವಾತ್ಮರಿಗೆ ಓದಿಸುತ್ತೇನೆ. ನಮಗೆ ತಂದೆಯು ಓದಿಸುತ್ತಿದ್ದಾರೆ ಎಂದು ನೀವೂ ಸಹ ತಿಳಿಯಿರಿ. ಒಂದೇ ಬಾರಿ ಬಂದು ಓದಿಸುತ್ತಾರೆ, ಓದುವುದು ಆತ್ಮವೇ ಅಲ್ಲವೆ. ಸುಖ, ದುಃಖವನ್ನು ಆತ್ಮವೇ ಭೋಗಿಸುತ್ತದೆ ಆದರೆ ಶರೀರದ ಮೂಲಕ. ಆತ್ಮ ಹೊರಟು ಹೋದರೆ ಮತ್ತೆ ಈ ಶರೀರವನ್ನು ಎಷ್ಟಾದರೂ ಹೊಡೆಯಿರಿ, ಮಣ್ಣಿಗೆ ಹೊಡೆದಂತೆ, ಆದ್ದರಿಂದ ತಂದೆಯು ಬಾರಿ ಬಾರಿಗೂ ತಿಳಿಸುತ್ತಾರೆ - ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ. ತಂದೆಗೆ ಗೊತ್ತಿದೆ ನಂಬರವಾರ್ ಆಗಿ ಎಲ್ಲರೂ ನೆನಪು ಮಾಡುತ್ತಾರೆ. ಕೆಲವರಂತೂ ಸಂಪೂರ್ಣ ಮಂದ ಬುದ್ಧಿಯವರಾಗಿದ್ದಾರೆ, ಏನನ್ನೂ ತಿಳಿದುಕೊಂಡಿಲ್ಲ. ಜ್ಞಾನವಂತೂ ಬಹಳ ಸಹಜವಾಗಿದೆ. ಇದನ್ನು ಕುರುಡರು, ಕುಂಟರು, ಮೂಖರೂ ಸಹ ತಿಳಿದುಕೊಳ್ಳಬಹುದಾಗಿದೆ. ಏಕೆಂದರೆ ಇದನ್ನು ಆತ್ಮಕ್ಕೆ ತಿಳಿಸಲಾಗುತ್ತದೆಯಲ್ಲವೆ. ಆತ್ಮವು ಕುರುಡು, ಕುಂಟನಾಗಿರುವುದಿಲ್ಲ, ಶರೀರಕ್ಕೆ ಆಗುತ್ತದೆ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ ಆದರೆ ಭಕ್ತಿಮಾರ್ಗದಲ್ಲಿ ಕಣ್ಣು ಮುಚ್ಚಿ ಕುಳಿತುಕೊಳ್ಳುವ ಅಭ್ಯಾಸವಾಗಿರುವುದರಿಂದ ಇಲ್ಲಿಯೂ ಕಣ್ನನ್ನು ಮುಚ್ಚಿ ಕುಳಿತುಕೊಳ್ಳುತ್ತಾರೆ, ಹೇಗೆ ಅಮಲೇರಿದವರಂತೆ. ತಂದೆಯು ತಿಳಿಸುತ್ತಾರೆ - ಕಣ್ಣುಗಳನ್ನು ಮುಚ್ಚಬೇಡಿ. ಸನ್ಮುಖದಲ್ಲಿ ನೋಡುತ್ತಿದ್ದರೂ ಬುದ್ಧಿಯಿಂದ ತಂದೆಯನ್ನು ನೆನಪು ಮಾಡಿರಿ. ಆಗಲೇ ವಿಕರ್ಮ ವಿನಾಶವಾಗುವುದು. ಎಷ್ಟು ಸಹಜವಾಗಿದೆ, ನಮಗೆ ನೆನಪು ಮಾಡಲು ಆಗುತ್ತಿಲ್ಲವೆಂದು ಹೇಳುತ್ತಾರೆ. ಅರೆ! ಲೌಕಿಕ ತಂದೆ, ಯಾರಿಂದ ಕ್ಷಣಿಕವಾದ ಆಸ್ತಿ ಸಿಗುತ್ತದೆ, ಅವರನ್ನು ಸಾಯುವ ತನಕವೂ ನೆನಪು ಮಾಡುತ್ತೀರಿ. ಇವರು ಎಲ್ಲ ಆತ್ಮಗಳ ಪಾರಲೌಕಿಕ ತಂದೆಯಾಗಿದ್ದಾರೆ. ಅವರನ್ನು ನೀವು ನೆನಪು ಮಾಡಲು ಆಗುವುದಿಲ್ಲವೆ! ಓ ಗಾಡ್ ಫಾದರ್, ನನಗೆ ಮಾರ್ಗದರ್ಶನ ಮಾಡಿ ಎಂದು ಆ ತಂದೆಯನ್ನು ನೀವು ಕರೆಯುತ್ತೀರಿ. ವಾಸ್ತವದಲ್ಲಿ ಈ ರೀತಿ ಹೇಳುವುದು ತಪ್ಪಾಗಿದೆ. ತಂದೆಯು ಕೇವಲ ಒಬ್ಬರಿಗೆ ಮಾರ್ಗದರ್ಶಕರಾಗಿಲ್ಲ, ಅವರು ಬೇಹದ್ದಿನ ಮಾರ್ಗದರ್ಶಕರಾಗಿದ್ದಾರೆ. ಒಬ್ಬರನ್ನಷ್ಟೇ ಬಿಡುಗಡೆ ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಬಂದು ಎಲ್ಲರ ಸದ್ಗತಿ ಮಾಡುತ್ತೇನೆ. ನಾನು ಬಂದಿರುವುದೇ ಎಲ್ಲರನ್ನೂ ಶಾಂತಿಧಾಮಕ್ಕೆ ಕಳುಹಿಸಲು ಅಂದಾಗ ಇಲ್ಲಿ ಬೇಡುವ ಅವಶ್ಯಕತೆಯಿಲ್ಲ. ಬೇಹದ್ದಿನ ತಂದೆಯಲ್ಲವೆ. ಅವರಂತೂ ಸೀಮಿತತನದಲ್ಲಿ ಬಂದು ಹೇ ಪರಮಾತ್ಮ ನನಗೆ ಸುಖ ಕೊಡು, ದುಃಖ ದೂರ ಮಾಡು, ನಾವು ಪಾಪಿ ನೀಚರಾಗಿದ್ದೇವೆ, ತಾವು ದಯೆ ತೋರಿಸಿ ಎಂದು ಹೇಳುತ್ತಾರೆ. ನಾನಂತೂ ಬೇಹದ್ದಿನ ಹಳೆಯು ಸೃಷ್ಟಿಯನ್ನು ಹೊಸದನ್ನಾಗಿ ಮಾಡಲು ಬಂದಿದ್ದೇನೆ. ಹೊಸ ಸೃಷ್ಟಿಯಲ್ಲಿ ದೇವತೆಗಳಿರುತ್ತಾರೆ. ನಾನು ಪ್ರತಿ 5000 ವರ್ಷಗಳ ನಂತರ ಬರುತ್ತೇನೆ, ಯಾವಾಗ ನೀವು ಪೂರ್ಣ ಪತಿತರಾಗುತ್ತೀರಿ. ಇದು ಆಸುರೀ ಸಂಪ್ರದಾಯವಾಗಿದೆ. ಸತ್ಯವನ್ನು ಹೇಳುವಂತಹ ಸದ್ಗುರು ತಂದೆಯೊಬ್ಬರೇ ಆಗಿದ್ದಾರೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರು ಸಹ ಆಗಿದ್ದಾರೆ. ತಂದೆಯು ತಿಳಿಸುತ್ತಾರೆ ಈ ಮಾತೆಯರು ಸ್ವರ್ಗದ ಬಾಗಿಲನ್ನು ತೆರೆಯುವವರಾಗಿದ್ದಾರೆ. ಸ್ವರ್ಗದ ಹೆಬ್ಬಾಗಿಲು ಎಂದು ಬರೆಯಲಾಗಿದೆ ಆದರೆ ಇದನ್ನೂ ಸಹ ಮನುಷ್ಯರು ತಿಳಿದುಕೊಳ್ಳುವುದಿಲ್ಲ. ನರಕದಲ್ಲಿ ಬಿದ್ದಿದ್ದಾರಲ್ಲವೆ. ಆದ್ದರಿಂದಲೇ ಕರೆಯುತ್ತಾರೆ. ಈಗ ತಂದೆಯು ನಿಮಗೆ ಸ್ವರ್ಗಕ್ಕೆ ಹೋಗುವ ದಾರಿಯನ್ನು ತಿಳಿಸುತ್ತಾರೆ - ಮಕ್ಕಳೇ, ನಾನು ಪತಿತರನ್ನು ಪಾವನರನ್ನಾಗಿ ಮಾಡಲು, ಹಿಂತಿರುಗಿ ಕರೆದುಕೊಂಡು ಹೋಗಲು ಬಂದಿದ್ದೇನೆ. ಈಗ ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ. ಆಗ ನಿಮ್ಮ ಪಾಪಗಳು ತುಂಡಾಗುತ್ತವೆ. ಎಲ್ಲರಿಗೂ ಒಂದೇ ಮಾತನ್ನು ತಿಳಿಸಿ, ತಂದೆಯು ಹೇಳುತ್ತಾರೆ - ಮಾಯಜೀತ ಜಗಜ್ಜೀತರಾಗಿರಿ. ನಾನು ನಿಮ್ಮೆಲ್ಲರಿಗೂ ಜಗತ್ತಿನ ಮಾಲೀಕರಾಗುವ ಮಾರ್ಗವನ್ನು ತಿಳಿಸುತ್ತೇನೆ. ದೀಪಾವಳಿಯಂದು ಲಕ್ಷ್ಮಿಯ ಪೂಜೆ ಮಾಡುತ್ತಾರೆ, ಅವರಿಂದ ಧನ ಬೇಡುತ್ತಾರೆ. ಒಳ್ಳೆಯ ಆರೋಗ್ಯವನ್ನು ಮತ್ತು ದೀರ್ಘಾಯುಷ್ಯವನ್ನು ಕೊಡು ಎಂದು ಕೇಳುವುದಿಲ್ಲ. ನೀವು ತಂದೆಯಿಂದ ಆಸ್ತಿಯನ್ನು ಪಡೆಯುತ್ತೀರಿ. ಆಯುಷ್ಯ ಎಷ್ಟು ದೀರ್ಘವಾಗುತ್ತದೆ, ಈಗ ಆರೋಗ್ಯ, ಐಶ್ವರ್ಯ, ಸಂತೋಷ ಎಲ್ಲವನ್ನೂ ಕೊಡುತ್ತಾರೆ. ಅವರಂತೂ ಲಕ್ಷ್ಮಿಯಿಂದ ಕ್ಷಣಿಕವಾದುದನ್ನು ಕೇಳುತ್ತಾರೆ. ಅವು ಸಿಗುತ್ತವೆಯೇ! ಇದಂತೂ ಅಭ್ಯಾಸವಾಗಿ ಬಿಟ್ಟಿದೆ. ದೇವತೆಗಳ ಮುಂದೆ ಭಿಕ್ಷೆ ಬೇಡುತ್ತಾರೆ. ಇಲ್ಲಂತೂ ನೀವು ತಂದೆಯಿಂದ ಏನನ್ನೂ ಬೇಡುವ ಅವಶ್ಯಕತೆ ಇರುವುದಿಲ್ಲ. ನಿಮಗೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ನನ್ನೊಬ್ಬನನ್ನು ನೆನಪು ಮಾಡುವುದರಿಂದ ಮಾಲೀಕರಾಗುತ್ತೀರಿ, ಮತ್ತು ಸೃಷ್ಠಿಚಕ್ರವನ್ನು ನೆನಪು ಮಾಡುವುದರಿಂದ ಚಕ್ರವರ್ತಿ ರಾಜರಾಗುವಿರಿ. ದೈವೀಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಿದೆ. ಇದರಲ್ಲಿ ಏನೂ ಮಾತನಾಡುವ ಅವಶ್ಯಕತೆ ಇಲ್ಲ. ಯಾವಾಗ ನಿಮಗೆ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ ಅಂದಾಗ ನೀವು ಇವರ ಪೂಜೆ ಮಾಡುತ್ತೀರಾ? ನಾವೇ ಈ ರೀತಿ ಆಗುತ್ತೇವೆಂದು ಗೊತ್ತಿದೆ. ಅಂದಮೇಲೆ ಈ ಪಂಚ ತತ್ವಗಳ ಪೂಜೆಯನ್ನೇನು ಮಾಡುತ್ತೀರಿ! ನಿಮಗೆ ವಿಶ್ವದ ರಾಜ್ಯ ಭಾಗ್ಯವು ಸಿಗುತ್ತದೆ ಆದ್ದರಿಂದ ಇದನ್ನೇನು ಮಾಡುತ್ತೀರಿ! ಈಗ ನೀವು ಯಾವುದೇ ಮಂದಿರಗಳಿಗೆ ಹೋಗುವುದಿಲ್ಲ. ಇವೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಗಳಾಗಿವೆ. ಜ್ಞಾನದಲ್ಲಿ ಒಂದೇ ಶಬ್ದವಿದೆ - ನನ್ನೊಬ್ಬನನ್ನೇ ನೆನಪು ಮಾಡಿ. ನೆನಪಿನಿಂದ ಮಾತ್ರ ಪಾಪಗಳು ಪರಿಹಾರವಾಗುತ್ತವೆ. ಸತೋಪ್ರಧಾನರಾಗುತ್ತೀರಿ. ನೀವೇ ಸರ್ವಗುಣ ಸಂಪನ್ನರಾಗಿದ್ದಿರಿ ಈಗ ಪುನಃ ಆಗಬೇಕಾಗಿದೆ. ಮನುಷ್ಯರು ಇದನ್ನೂ ಸಹ ತಿಳಿದುಕೊಂಡಿಲ್ಲ. ಕಲ್ಲು ಬುದ್ಧಿಯವರೊಂದಿಗೆ ತಂದೆಯು ಎಷ್ಟು ತಲೆ ಕೆಡಿಸಿಕೊಳ್ಳಬೇಕಾಗುತ್ತದೆ ಈ ನಿಶ್ಚಯವಾಗಬೇಕಾಗಿದೆ. ಈ ಮಾತುಗಳನ್ನು ತಂದೆಯ ವಿನಃ ಬೇರೆ ಯಾವ ಸಾಧು ಸಂತರು ತಿಳಿಸಿಕೊಡಲು ಸಾಧ್ಯವಿಲ್ಲ. ಇವರು ಈಶ್ವರನೇನು! ಇವರು(ಬ್ರಹ್ಮಾ) ಬಹಳ ಜನ್ಮಗಳ ಅಂತ್ಯದಲ್ಲಿದ್ದಾರೆ, ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ, ಹಳ್ಳಿಯ ಬಾಲಕರಾಗಿದ್ದರು, ಅವರಲ್ಲಿಯೇ ನಾನು ಪ್ರವೇಶ ಮಾಡುತ್ತೇನೆ. ನಂತರ ಅವರು ಶ್ಯಾಮ ಸುಂದರ ಆಗುತ್ತಾರೆ. ಇವರಂತೂ ಪೂರ್ಣ ಹಳ್ಳಿಯ ಬಾಲಕರಾಗಿದ್ದರು, ಯಾವಾಗ ಸಾಧಾರಣರಾದರೋ ಆಗ ತಂದೆಯು ಪ್ರವೇಶ ಮಾಡಿದರು. ಏಕೆಂದರೆ ಭಟ್ಟಿಯಾಗಬೇಕಿತ್ತು. ಇವರಿಗೆ ತಿನ್ನಿಸುವವರು ಯಾರು? ಅಂದಮೇಲೆ ಅವಶ್ಯವಾಗಿ ಸಾಧಾರಣರೇ ಬೇಕಲ್ಲವೆ. ಇವೆಲ್ಲವೂ ತಿಳಿದುಕೊಳ್ಳುವ ಮಾತಾಗಿದೆ. ತಂದೆಯೇ ತಿಳಿಸುತ್ತಾರೆ - ನಾನು ಇವರ ಬಹಳ ಜನ್ಮಗಳ ಅಂತಿಮದಲ್ಲಿ ಪ್ರವೇಶ ಮಾಡುತ್ತೇನೆ. ಇವರೇ ಎಲ್ಲರಿಗಿಂತ ಪತಿತರಾಗಿದ್ದಾರೆ, ಪುನಃ ಇವರೇ ಪಾವನರಾಗುತ್ತಾರೆ. 84 ಜನ್ಮಗಳು ಇವರೇ ತೆಗೆದುಕೊಂಡಿದ್ದಾರೆ, ತತತ್ವಂ. ಒಬ್ಬರ ಮಾತಲ್ಲ ಅನೇಕರಿದ್ದಾರೆ. ನಂಬರವಾರ್ ಪುರುಷಾರ್ಥದನುಸಾರ ಸೂರ್ಯ ವಂಶಿ, ಚಂದ್ರವಂಶಿಯಾಗುವರೇ ಬರುತ್ತಾರೆ. ಉಳಿದವರು ಇಲ್ಲಿ ನಿಲ್ಲಲು ಸಾಧ್ಯವಿಲ್ಲ. ತಡವಾಗಿ ಬರುವವರು ಜ್ಞಾನವನ್ನು ಸಹ ಸ್ವಲ್ಪವೇ ಕೇಳುತ್ತಾರೆ. ಪುನಃ ತಡವಾಗಿಯೇ ಬರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯು ಮಾಡುವ ಜ್ಞಾನ ಶೃಂಗಾರವನ್ನು ಸ್ಥಿರವಾಗಿಟ್ಟುಕೊಳ್ಳುವ ಪುರುಷಾರ್ಥ ಮಾಡಬೇಕು. ಮಾಯೆಯ ಧೂಳಿನಲ್ಲಿ ಜ್ಞಾನದ ಶೃಂಗಾರವನ್ನು ಕೆಡಿಸಿಕೊಳ್ಳಬಾರದು. ವಿದ್ಯೆಯನ್ನು ಬಹಳ ಚೆನ್ನಾಗಿ ಓದಿ ಅವಿನಾಶಿ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕು.

2. ಈ ಚಿತ್ರ ಅರ್ಥಾತ್ ದೇಹಧಾರಿಯನ್ನು ನೋಡುತ್ತಿದ್ದರೂ ಬುದ್ಧಿಯಿಂದ ವಿಚಿತ್ರ ತಂದೆಯನ್ನು ನೆನಪು ಮಾಡಬೇಕು. ಕಣ್ಣು ಮುಚ್ಚಿ ಕುಳಿತುಕೊಳ್ಳುವ ಅಭ್ಯಾಸ ಇಟ್ಟುಕೊಳ್ಳಬಾರದು. ಬೇಹದ್ದಿನ ತಂದೆಯಿಂದ ಏನನ್ನೂ ಬೇಡಬಾರದು.

ವರದಾನ:
ಸಾಕ್ಷಿಯಾಗಿರುತ್ತಾ ಕರ್ಮೇಂದ್ರಿಯಗಳಿಂದ ಕರ್ಮ ಮಾಡಿಸುವಂತಹ ಕರ್ತಾಪನದ ಭಾನದಿಂದ ಮುಕ್ತ, ಅಶರೀರಿ ಭವ.

ಯಾವಾಗ ಬೇಕೊ ಆಗ ಶರೀರದಲ್ಲಿ ಬನ್ನಿ ಮತ್ತು ಯಾವಾಗ ಬೇಕೊ ಅಶರೀರಿಗಳಾಗಿ ಬಿಡಿ. ಯಾವುದಾದರೂ ಕರ್ಮ ಮಾಡಬೇಕಾದಾಗ ಕರ್ಮೇಂದ್ರಿಯಗಳ ಆಧಾರ ತೆಗೆದುಕೊಳ್ಳಿ. ಆದರೆ ಆಧಾರ ತೆಗೆದುಕೊಳ್ಳುವವನು ನಾನು ಆತ್ಮನಾಗಿದ್ದೇನೆ, ಇದನ್ನು ಮರೆಯಬಾರದು, ಮಾಡುವಂತಹವನಲ್ಲ, ಮಾಡಿಸುವಂತಹವನು. ಹೇಗೆ ಬೇರೆಯವರಿಂದ ಕೆಲಸ ಮಾಡಿಸುವಿರಿ ಆಗ ಆ ಸಮಯದಲ್ಲಿ ನಿಮ್ಮನ್ನು ಬೇರೆ ಎಂದು ತಿಳಿಯುವಿರಿ, ಹಾಗೆ ಸಾಕ್ಷಿಯಾಗಿ ಕರ್ಮೇಂದ್ರಿಯಗಳಿಂದ ಕರ್ಮ ಮಾಡಿಸಿ, ಆಗ ಕರ್ತಾಪನದ ಭಾನದಿಂದ ಮುಕ್ತ ಅಶರೀರಿಗಳಾಗಿ ಬಿಡುವಿರಿ. ಕರ್ಮ ಮಾಡುತ್ತ ಮಧ್ಯೆ-ಮಧ್ಯೆ ಒಂದೆರಡು ನಿಮಿಷವಾದರೂ ಸಹ ಅಶರೀರಿಗಳಾಗುವ ಅಭ್ಯಾಸ ಮಾಡಿದಾಗ ಅಂತ್ಯದ ಸಮಯದಲ್ಲಿ ಬಹಳ ಸಹಕಾರ ಸಿಗುವುದು.

ಸ್ಲೋಗನ್:
ವಿಶ್ವ ರಾಜನ್ ಆಗಬೇಕಾದರೆ ವಿಶ್ವಕ್ಕೆ ಸಕಾಶವನ್ನು ಕೊಡುವಂತಹವರಾಗಿ.