16.09.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಮ್ಮ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳುವ ವಿಚಾರ ಮಾಡಿ, ತಮ್ಮ ಸಮಯವನ್ನು ಪರಚಿಂತನೆಯಲ್ಲಿ ವ್ಯರ್ಥ ಮಾಡಬೇಡಿ, ತಮ್ಮ ಚಿಂತನೆಯಿಂದಲೇ ನಶೆಯೇರುತ್ತದೆ.”

ಪ್ರಶ್ನೆ:
ಜ್ಞಾನವು ಒಂದು ಸೆಕೆಂಡಿನದಾಗಿದ್ದರೂ ಸಹ ತಂದೆಗೆ ಇಷ್ಟೊಂದು ವಿಸ್ತಾರವಾಗಿ ತಿಳಿಸುವ ಹಾಗೂ ಇಷ್ಟೊಂದು ಸಮಯದಿಂದ ತಿಳಿಸುವ ಅವಶ್ಯಕತೆಯೇನಿದೆ?

ಉತ್ತರ:
ಏಕೆಂದರೆ ಜ್ಞಾನವನ್ನು ಕೊಟ್ಟ ನಂತರ ಮಕ್ಕಳಲ್ಲಿ ಸುಧಾರಣೆ ಬಂದಿದೆಯೇ ಅಥವಾ ಇಲ್ಲವೆ ಎಂಬುದನ್ನೂ ಸಹ ತಂದೆಯು ನೋಡುತ್ತಾರೆ ಮತ್ತೆ ಸುಧಾರಣೆಗಾಗಿ ಮತ್ತೆ ಜ್ಞಾನವನ್ನು ಕೊಡುತ್ತಲೇ ಇರುತ್ತಾರೆ. ಇಡೀ ಬೀಜ ಮತ್ತು ವೃಕ್ಷದ ಜ್ಞಾನವನ್ನು ತಿಳಿಸುತ್ತಾರೆ. ಈ ಕಾರಣದಿಂದ ಅವರಿಗೆ ಜ್ಞಾನ ಸಾಗರನೆಂದು ಹೇಳಲಾಗುತ್ತದೆ. ಒಂದು ವೇಳೆ ಒಂದು ಸೆಕೆಂಡಿನ ಮಂತ್ರವನ್ನು ಕೊಟ್ಟು ಹೋಗುವಂತಿದ್ದರೆ ಜ್ಞಾನ ಸಾಗರನೆಂಬ ಬಿರುದೂ ಸಹ ಸಿಗುವುದಿಲ್ಲ.

ಓಂ ಶಾಂತಿ.
ಆತ್ಮಿಕ ತಂದೆಯೇ ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ. ಭಕ್ತಿಮಾರ್ಗದಲ್ಲಿ ಪರಮಪಿತ ಪರಮಾತ್ಮ ಶಿವನನ್ನು ಇಲ್ಲಿಯೇ ಪೂಜಿಸುತ್ತಾರೆ. ಭಲೇ ಇವರು ಬಂದು ಹೋಗಿದ್ದಾರೆಂದು ಬುದ್ಧಿಯಲ್ಲಿದೆ. ಎಲ್ಲಿಯೇ ಲಿಂಗವನ್ನು ನೋಡುತ್ತಾರೆಂದರೆ ಅದರ ಪೂಜೆ ಮಾಡುತ್ತಾರೆ. ಇದಂತೂ ತಿಳಿದಿದೆ - ಶಿವನೇ ಪರಮಧಾಮದ ನಿವಾಸಿಯಾಗಿದ್ದಾರೆ. ಇಲ್ಲಿಗೆ ಬಂದು ಹೋಗಿದ್ದಾರೆ. ಆದ್ದರಿಂದ ಅವರ ನೆನಪಾರ್ಥವನ್ನೂ ಮಾಡಿ ಪೂಜಿಸುತ್ತಾರೆ. ನೆನಪು ಮಾಡುವ ಸಮಯದಲ್ಲಿ ಬುದ್ಧಿಯಲ್ಲಿ ಅವಶ್ಯವಾಗಿ ತಂದೆಯು ನಿರಾಕಾರನಾಗಿದ್ದಾರೆ. ಅವರು ಪರಮಧಾಮದ ನಿವಾಸಿಯಾಗಿದ್ದಾರೆಂದು ಬುದ್ಧಿಯಲ್ಲಿ ಅವಶ್ಯವಾಗಿ ಬರುತ್ತದೆ. ಅವರಿಗೆ ಶಿವನೆಂದು ಹೇಳಿ ಪೂಜಿಸುತ್ತಾರೆ. ಮಂದಿರದಲ್ಲಿ ಹೋಗಿ ತಲೆ ಬಾಗುತ್ತಾರೆ. ಅವರ ಮೇಲೆ ಹಾಲು-ಹಣ್ಣು, ನೀರು ಇತ್ಯಾದಿಯನ್ನು ಇಡುತ್ತಾರೆ. ಆದರೆ ಅದಂತೂ ಜಡವಾಗಿದೆ. ಜಡದ ಭಕ್ತಿಯನ್ನೇ ಮಾಡುತ್ತಾರೆ. ಈಗ ನಿಮಗೆ ತಿಳಿದಿದೆ - ಅವರು ಚೈತನ್ಯವಾಗಿದ್ದಾರೆ. ಅವರ ನಿವಾಸ ಸ್ಥಾನವು ಪರಮಧಾಮವಾಗಿದೆ. ಅವರು ಪೂಜೆ ಮಾಡುವ ಸಮಯದಲ್ಲಿ ಬುದ್ಧಿಯಲ್ಲಿರುತ್ತದೆ. ತಂದೆಯು ಪರಮಧಾಮದ ನಿವಾಸಿಯಾಗಿದ್ದಾರೆ, ಬಂದು ಹೋಗಿದ್ದಾರೆ. ಆದ್ದರಿಂದಲೇ ಈ ಚಿತ್ರಗಳನ್ನು ಮಾಡಲಾಗಿದೆ. ಯಾವುದಕ್ಕೆ ಪೂಜೆ ಮಾಡಲಾಗುತ್ತದೆ. ಆ ಚಿತ್ರಗಳೇನೂ ಶಿವನಲ್ಲ. ಅದು ಅವರ ಪ್ರತಿಮೆಯಾಗಿದೆ. ಹಾಗೆಯೇ ದೇವತೆಗಳನ್ನು ಪೂಜಿಸುತ್ತಾರೆ. ಅವು ಜಡ ಚಿತ್ರಗಳಾಗಿವೆ. ಚೈತನ್ಯವಲ್ಲ ಆದರೆ ಯಾರು ಚೈತನ್ಯವಾಗಿದ್ದರು ಅವರು ಎಲ್ಲಿಗೆ ಹೋದರೆಂಬುದನ್ನು ತಿಳಿದುಕೊಂಡಿಲ್ಲ. ಅವಶ್ಯವಾಗಿ ಪುನರ್ಜನ್ಮವನ್ನು ತೆಗೆದುಕೊಂಡು ಕೆಳಗೆ ಬಂದಿರಬೇಕು. ಈಗ ನೀವು ಮಕ್ಕಳಿಗೆ ಜ್ಞಾನವು ಸಿಗುತ್ತಿದೆ, ಈಗ ಬಂದಿದ್ದಾರೆ. ಆತ್ಮವು ಅದೇ ಆಗಿದೆ. ಆತ್ಮದ ಹೆಸರು ಬದಲಾಗುವುದಿಲ್ಲ, ಬಾಕಿ ಶರೀರದ ಹೆಸರು ಬದಲಾಗುತ್ತದೆ. ಆ ಆತ್ಮವು ಯಾವುದಾದರೊಂದು ಶರೀರದಲ್ಲಿದೆ, ಪುನರ್ಜನ್ಮವನ್ನಂತೂ ತೆಗೆದುಕೊಳ್ಳಲೇಬೇಕಾಗಿದೆ. ಯಾರು ಮೊಟ್ಟ ಮೊದಲ ಶರೀರದವರಾಗಿದ್ದರೋ ಅವರನ್ನು ನೀವು ಪೂಜಿಸುತ್ತೀರಿ (ಸತ್ಯಯುಗೀ ಲಕ್ಷ್ಮೀ-ನಾರಾಯಣರನ್ನು ನೀವು ಪೂಜಿಸುತ್ತೀರಿ), ಈ ಸಮಯದಲ್ಲಿ ನಿಮಗೆ ಸಂಕಲ್ಪ ನಡೆಯುತ್ತದೆ - ಆ ಜ್ಞಾನವನ್ನು ತಂದೆಯು ತಿಳಿಸುತ್ತಾರೆ. ನೀವು ಸಹ ತಿಳಿದುಕೊಂಡಿದ್ದೀರಿ, ಯಾವ ಚಿತ್ರದ ಪೂಜೆ ಮಾಡುತ್ತಾರೆಯೋ ಅವರು ಮೊದಲ ನಂಬರಿನವರಾಗಿದ್ದಾರೆ. ಈ ಲಕ್ಷ್ಮೀ-ನಾರಾಯಣರು ಚೈತನ್ಯದಲ್ಲಿದ್ದರು, ಇದೇ ಭಾರತದಲ್ಲಿದ್ದರು. ಅವರು ಈಗ ಇಲ್ಲ. ಅವರು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ - ತೆಗೆದುಕೊಳ್ಳುತ್ತಾ ಭಿನ್ನ ನಾಮ-ರೂಪವನ್ನು ತೆಗೆದುಕೊಳ್ಳುತ್ತಾ 84 ಜನ್ಮಗಳ ಪಾತ್ರವನ್ನಭಿನಯಿಸುತ್ತಾರೆ ಎಂಬುದನ್ನೂ ಸಹ ಮನುಷ್ಯರು ತಿಳಿದುಕೊಂಡಿಲ್ಲ. ಇದು ಯಾರಿಗೂ ವಿಚಾರದಲ್ಲಿಯೂ ಬರುವುದಿಲ್ಲ. ಸತ್ಯಯುಗದಲ್ಲಿ ಅವಶ್ಯವಾಗಿದ್ದರು ಆದರೆ ಈಗ ಇಲ್ಲ. ಇದೂ ಸಹ ಯಾರಿಗೂ ಅರ್ಥವಾಗುವುದಿಲ್ಲ. ಈಗ ನಿಮಗೆ ತಿಳಿದಿದೆ- ನಾಟಕದ ಯೋಜನೆಯನುಸಾರ ಮತ್ತೆ ಚೈತನ್ಯದಲ್ಲಿ ಬರುತ್ತಾರೆ. ಮನುಷ್ಯರ ಬುದ್ಧಿಯಲ್ಲಿ ಈ ವಿಚಾರವೇ ಬರುವುದಿಲ್ಲ, ಬಾಕಿ ಇವರಿದ್ದರು ಎಂಬುದನ್ನಂತೂ ಅವಶ್ಯವಾಗಿ ತಿಳಿಯುತ್ತಾರೆ. ಈಗ ಇವರ ಜಡಚಿತ್ರಗಳಿವೆ. ಆದರೆ ಅವರು ಚೈತನ್ಯವಾಗಿದ್ದರು.ಎಲ್ಲಿ ಹೋದರೆಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಮನುಷ್ಯರಂತು 84 ಲಕ್ಷ ಪುನರ್ಜನ್ಮಗಳನ್ನು ಹೇಳಿ ಬಿಡುತ್ತಾರೆ. ಇದೂ ಸಹ ಮಕ್ಕಳಿಗೆ ಗೊತ್ತಿದೆ - 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆಯೋ ಹೊರತು 84 ಲಕ್ಷ ಜನ್ಮಗಳಲ್ಲ. ಈಗ ರಾಮಚಂದ್ರನ ಪೂಜೆ ಮಾಡುತ್ತಾರೆ. ರಾಮನು ಎಲ್ಲಿ ಹೋದರೆಂಬುದೂ ಸಹ ಅವರಿಗೆ ತಿಳಿದಿಲ್ಲ. ನಿಮಗೆ ತಿಳಿದಿದೆ - ಶ್ರೀರಾಮನ ಆತ್ಮವಂತೂ ಅವಶ್ಯವಾಗಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಿರುತ್ತದೆ. ಇಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ. ಆದರೆ ಯಾವುದಾದರೊಂದು ರೂಪದಲ್ಲಿ ಅವಶ್ಯವಾಗಿ ಇರುತ್ತಾರಲ್ಲವೆ (ಇಲ್ಲಿ ಅನುತ್ತೀರ್ಣರಾದವರೇ ತ್ರೇತಾಯುಗದಲ್ಲಿ ಬರುತ್ತಾರೆ) ಇಲ್ಲಿಯೇ ಪುರುಷಾರ್ಥವನ್ನು ಮಾಡುತ್ತಿರುತ್ತಾರೆ. ರಾಮನ ಹೆಸರು ಇಷ್ಟು ಪ್ರಸಿದ್ಧವಾಗಿದೆಯೆಂದರೆ ಅವಶ್ಯವಾಗಿ ಬರುತ್ತಾರೆ. ಅವರು ಜ್ಞಾನವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈಗ ಏನಾದರೂ ಅರ್ಥವಾಗದಿದ್ದರೆ ಆ ಮಾತನ್ನು ಬಿಟ್ಟು ಬಿಡಬೇಕಾಗುತ್ತದೆ. ಈ ಮಾತುಗಳಲ್ಲಿ ಹೋಗುವುದರಿಂದಲೂ ಸಹ ಸಮಯವು ವ್ಯರ್ಥವಾಗುತ್ತದೆ. ಇದಕ್ಕಿಂತ ತಮ್ಮ ಸಮಯವನ್ನು ಏಕೆ ಸಫಲ ಮಾಡಿಕೊಳ್ಳಬಾರದು! ತಮ್ಮ ಉನ್ನತಿಗಾಗಿ ಬ್ಯಾಟರಿಯನ್ನು ಏಕೆ ಚಾರ್ಜ್ ಮಾಡಿಕೊಳ್ಳಬಾರದು! ಅನ್ಯ ಮಾತುಗಳ ಚಿಂತನೆಯಂತೂ ಪರಚಿಂತನೆಯಾಯಿತು. ಈಗಂತೂ ತನ್ನ ಚಿಂತನೆ ಮಾಡಬೇಕಾಗಿದೆ. ನಾವು ತಂದೆಯನ್ನು ನೆನಪು ಮಾಡಬೇಕಾಗಿದೆ. ಅವಶ್ಯವಾಗಿ ತ್ರೇತಾಯುಗದ ಆತ್ಮಗಳೂ ಸಹ ಓದುತ್ತಿದ್ದಾರೆ. ತಮ್ಮ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳುತ್ತಾರೆ. ಆದರೆ ನೀವು ತಮ್ಮದನ್ನು ಚಾರ್ಜ್ ಮಾಡಿಕೊಳ್ಳಬೇಕಾಗಿದೆ. ಹೇಳಲಾಗುತ್ತದೆ - ತಮ್ಮ ಸ್ವಚಿಂತನೆಯಿಂದಲೇ ನಶೆಯೇರುತ್ತದೆ.

ತಂದೆಯು ತಿಳಿಸಿದ್ದಾರೆ- ನೀವು ಸತೋಪ್ರಧಾನರಾಗಿದ್ದಾಗ ನಿಮ್ಮದು ಬಹಳ ಶ್ರೇಷ್ಠ ಪದವಿಯಾಗಿತ್ತು. ಈಗ ಮತ್ತೆ ಪುರುಷಾರ್ಥ ಮಾಡಿ ನನ್ನನ್ನು ಮಾಡಿ ಆಗ ವಿಕರ್ಮ ವಿನಾಶವಾಗುವುದು. ಇದು ಗುರಿಯಾಗಿದೆಯಲ್ಲವೆ. ಈ ಚಿಂತನೆ ಮಾಡುತ್ತಾ-ಮಾಡುತ್ತಾ ಸತೋಪ್ರಧಾನರಾಗುತ್ತೀರಿ. ನಾರಾಯಣನ ಸ್ಮರಣೆ ಮಾಡುವುದರಿಂದ ನಾವು ನಾರಾಯಣ ಆಗುವುದಿಲ್ಲ. ಅಂತ್ಯ ಕಾಲದಲ್ಲಿ ಯಾರು ನಾರಾಯಣನ ಸ್ಮರಣೆ ಮಾಡಿದರು..... ನೀವಂತೂ ತಂದೆಯನ್ನು ನೆನಪು ಮಾಡಬೇಕಾಗಿದೆ. ಇದರಿಂದ ಪಾಪಗಳು ತುಂಡಾಗುತ್ತವೆ. ತಂದೆಯನ್ನು ನೆನಪು ಮಾಡುವುದರಿಂದಲೇ ನಾರಾಯಣನಾಗಲು ಸಾಧ್ಯ. ಇದು ನರನಿಂದ ನಾರಾಯಣನಾಗುವ ಅತ್ಯುತ್ತಮ ಯುಕ್ತಿಯಾಗಿದೆ. ಒಬ್ಬರೇ ನಾರಾಯಣರಾಗುವುದಿಲ್ಲ ಅಲ್ಲವೆ. ಇಡೀ ರಾಜಧಾನಿಯೇ ಸ್ಥಾಪನೆಯಾಗುತ್ತದೆ. ತಂದೆಯು ಅತ್ಯುತ್ತಮ ಪುರುಷಾರ್ಥವನ್ನು ಮಾಡಿಸುತ್ತಾರೆ. ಇದಂತೂ ರಾಜಯೋಗದ ಜ್ಞಾನವಾಗಿದೆ. ಅದರಲ್ಲಿಯೂ ಪೂರ್ಣ ವಿಶ್ವದ ಮಾಲೀಕರಾಗಬೇಕಾಗಿದೆ. ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಲಾಭವಿದೆ. ಮೊದಲನೆಯದಾಗಿ ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ. ಬಾಬಾ, ಇಂತ ಹೆಸರುಗಳು ಬರುತ್ತವೆ. ನಾನಾತ್ಮನು ತಮ್ಮ ಮಗುವಾಗಿದ್ದೇನೆ. ನಾನಾತ್ಮನ ಹೆಸರು ಇಂತಹದ್ದಾಗಿದೆ. ಆತ್ಮದ ಹೆಸರಂತೂ ಎಂದೂ ಬದಲಾಗುವುದಿಲ್ಲ. ನಾನಾತ್ಮ ಇಂತಹ ಶರೀರದವನಾಗಿದ್ದೇನೆ. ಶರೀರದ ಹೆಸರಂತೂ ಅವಶ್ಯವಾಗಿ ಬೇಕು ಇಲ್ಲದಿದ್ದರೆ ಇಷ್ಟೊಂದು ವ್ಯವಹಾರವು ನಡೆಯಲು ಸಾಧ್ಯವಿಲ್ಲ. ತಂದೆಯು ಇಲ್ಲಿ ತಿಳಿಸುತ್ತಾರೆ. ನಾನೂ ಸಹ ಈ ಬ್ರಹ್ಮಾರವರ ತನುವಿನಲ್ಲಿ ತಾತ್ಕಾಲಿಕವಾಗಿ ಬರುತ್ತೇನೆ. ಇವರ ಆತ್ಮಕ್ಕೂ ತಿಳಿಸುತ್ತೇನೆ. ನಾನು ಈ ಶರೀರದಿಂದ ನಿಮಗೆ ಓದಿಸಲು ಬರುತ್ತೇನೆ, ಇದು ನನ್ನ ಶರೀರವಲ್ಲ, ನಾನು ಇವರಲ್ಲಿ ಪ್ರವೇಶ ಮಾಡಿದ್ದೇನೆ ಮತ್ತೆ ನನ್ನ ಧಾಮಕ್ಕೆ ಹೊರಟು ಹೋಗುತ್ತೇನೆ. ನಾವು ನೀವು ಮಕ್ಕಳಿಗೆ ಈ ಮಂತ್ರವನ್ನು ಕೊಡುವುದಕ್ಕಾಗಿಯೇ ಬಂದಿದ್ದೇನೆ. ಕೇವಲ ಮಂತ್ರವನ್ನು ಕೊಟ್ಟು ಹೊರಟು ಹೋಗುತ್ತೇನೆಂದಲ್ಲ. ಮಕ್ಕಳು ಎಲ್ಲಿಯವರೆಗೆ ಸುಧಾರಣೆಯಾಗಿದ್ದೇವೆಂಬುದು ನೋಡಲೂಬೇಕಾಗುತ್ತದೆ ಮತ್ತು ಸುಧಾರಣೆಯಾಗುವ ಶಿಕ್ಷಣವನ್ನು ಕೊಡುತ್ತೇನೆ. ಸೆಕೆಂಡಿನಲ್ಲಿ ಜ್ಞಾನವನ್ನು ಕೊಟ್ಟು ಹೊರಟು ಹೋಗುತ್ತೇನೆಂದರೆ ಜ್ಞಾನ ಸಾಗರನೆಂದು ಹೇಳುತ್ತಿರಲಿಲ್ಲ. ಎಷ್ಟೊಂದು ಸಮಯದಿಂದ ನಿಮಗೆ ತಿಳಿಸುತ್ತಲೇ ಇರುತ್ತಾರೆ. ವೃಕ್ಷ, ಭಕ್ತಿಮಾರ್ಗದ ಎಲ್ಲಾ ಮಾತುಗಳು ತಿಳಿದುಕೊಳ್ಳುವ ವಿಸ್ತಾರವಾಗಿದೆ. ವಿಸ್ತಾರದಲ್ಲಿ ತಿಳಿಸುತ್ತಾರೆ - ಹೋಲ್ಸೇಲ್ ಎಂದರೆ ಮನ್ಮನಾಭವ ಆದರೆ ಈ ರೀತಿ ಹೇಳಿ ಹೊರಟು ಹೋಗುವುದಿಲ್ಲ. ಪಾಲನೆಯನ್ನೂ ಮಾಡಬೇಕಾಗುತ್ತದೆ. ಕೆಲವು ಮಕ್ಕಳು ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಕಾಣದಂತಾಗಿ ಬಿಡುತ್ತಾರೆ. ಇಂತಹ ಹೆಸರಿನ ಆತ್ಮವಂತೂ ಬಹಳ ಚೆನ್ನಾಗಿ ಓದುತ್ತಿದ್ದರು ಎಂದು ಸ್ಮತಿಯಂತೂ ಬರುತ್ತದೆಯಲ್ಲವೆ. ಹಳೆಯ ಮಕ್ಕಳು ಎಷ್ಟು ಒಳ್ಳೊಳ್ಳೆಯವರಿದ್ದರು, ಅವರನ್ನು ಮಾಯೆಯು ನುಂಗಿ ಹಾಕಿತು. ಪ್ರಾರಂಭದಲ್ಲಿ ಎಷ್ಟೊಂದು ಮಂದಿ ಬಂದರು. ಬೇಗನೆ ಬಂದು ಮಡಿಲನ್ನು ಸೇರಿದರು. ಭಟ್ಟಿಯಾಯಿತು, ಇದರಲ್ಲಿ ಎಲ್ಲರೂ ತಮ್ಮ ಭಾಗ್ಯವನ್ನು ರೂಪಿಸಿಕೊಂಡರು. ಮತ್ತೆ ಭಾಗ್ಯವನ್ನು ರೂಪಿಸಿಕೊಳ್ಳುತ್ತಾ-ರೂಪಿಸಿಕೊಳ್ಳುತ್ತಾ ಮಾಯೆಯು ಒಮ್ಮೆಲೆ ಹಾರಿಸಿ ಬಿಟ್ಟಿತು, ಅವರು ನಿಲ್ಲಲು ಆಗಲಿಲ್ಲ. ಪುನಃ 5000 ವರ್ಷಗಳ ನಂತರವೂ ಇದೇ ರೀತಿಯಾಗುತ್ತದೆ. ಇಷ್ಟೊಂದು ಜನರು ಹೊರಟು ಹೋದರು. ಅರ್ಧ ವೃಕ್ಷವಂತೂ ಅವಶ್ಯವಾಗಿ ಹೋಯಿತು. ಭಲೇ ಈಗ ವೃಕ್ಷವಂತೂ ವೃದ್ಧಿಯಾಗಿದೆ. ಆದರೆ ಹಳಬರಂತೂ ಹೊರಟು ಹೋದರು. ಅವರಿಂದ ಕೆಲವರು ಮತ್ತೆ ಓದಲು ಅವಶ್ಯವಾಗಿ ಬರುತ್ತಾರೆಂದು ತಿಳಿಯಬಹುದು. ನಾವು ತಂದೆಯಿಂದ ಓದುತ್ತಿದ್ದೇವು. ಮತ್ತೆಲ್ಲರೂ ಇಲ್ಲಿಯವರೆಗೂ ಓದುತ್ತಿದ್ದಾರೆ. ನಾವು ಸೋಲನ್ನನುಭವಿಸಿದೆವೆಂದು ಸ್ಮತಿಯಂತೂ ಬರುತ್ತದೆಯಲ್ಲವೆ. ಮತ್ತೆ ಮೈದಾನದಲ್ಲಿ ಬರುತ್ತಾರೆ. ತಂದೆಯೂ ಸಹ ಭಲೆ ಮತ್ತೆ ಬಂದು ಪುರುಷಾರ್ಥ ಮಾಡಲಿ, ಯಾವುದಾದರೊಂದು ಒಳ್ಳೆಯ ಪದವಿ ಸಿಗುವುದೆಂದು ತಂದೆಯು ಅನುಮತಿ ಕೊಡುತ್ತಾರೆ.

ತಂದೆಯು ಸ್ಮತಿ ತರಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಆಗ ಪಾಪಗಳು ಭಸ್ಮವಾಗುತ್ತವೆ. ಈಗ ಹೇಗೆ ನೆನಪು ಮಾಡುತ್ತೀರಿ. ತಂದೆಯು ಪರಮಧಾಮದಲ್ಲಿದ್ದಾರೆಂದು ತಿಳಿಯುತ್ತೀರಾ? ಇಲ್ಲ. ತಂದೆಯಂತೂ ಇಲ್ಲಿಯೇ ರಥದಲ್ಲಿ ಕುಳಿತಿದ್ದಾರೆ. ಈ ರಥದ ಬಗ್ಗೆ ಎಲ್ಲರಿಗೂ ತಿಳಿಯುತ್ತಾ ಹೋಗುತ್ತದೆ. ಇವರು ಭಾಗ್ಯಶಾಲಿ ರಥವಾಗಿದ್ದಾರೆ, ಇವರಲ್ಲಿ ತಂದೆಯು ಬಂದಿದ್ದಾರೆ. ಭಕ್ತಿಮಾರ್ಗದಲ್ಲಿದ್ದಾಗ ಅವರನ್ನು ಪರಮಧಾಮದಲ್ಲಿ ನೆನಪು ಮಾಡುತ್ತಿದ್ದೇವು. ಆದರೆ ನೆನಪಿನಿಂದ ಏನಾಗುವುದೆಂಬುದನ್ನು ಅರಿತುಕೊಂಡಿರಲಿಲ್ಲ. ಈಗ ನೀವು ಮಕ್ಕಳಿಗೆ ಸ್ವಯಂ ತಂದೆಯೇ ಈ ರಥದಲ್ಲಿ ಕುಳಿತು ಶ್ರೀಮತವನ್ನು ಕೊಡುತ್ತಾರೆ. ಆದ್ದರಿಂದ ನೀವು ಮಕ್ಕಳು ತಿಳಿಯುತ್ತೀರಿ - ಈ ಮೃತ್ಯುಲೋಕದಲ್ಲಿ ಪುರುಷೋತ್ತಮ ಸಂಗಮಯುಗದಲ್ಲಿದ್ದೇವೆ. ನಿಮಗೆ ಗೊತ್ತಿದೆ. ನಾವು ಬ್ರಹ್ಮಾ ತಂದೆಯನ್ನು ನೆನಪು ಮಾಡುವಂತಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ನಾನು ಈ ರಥದಲ್ಲಿದ್ದುಕೊಂಡು ನಿಮಗೆ ಈ ಜ್ಞಾನವನ್ನು ಕೊಡುತ್ತಿದ್ದೇನೆ, ನನ್ನ ಪರಿಚಯವನ್ನೂ ಕೊಡುತ್ತೇನೆ, ನಾನು ಇಲ್ಲಿಯೇ ಇದ್ದೇನೆ. ಮೊದಲಂತೂ ಪರಮಧಾಮದಲ್ಲಿದ್ದವರೆಂದು ತಿಳಿಯುತ್ತೀರಿ. ಅವರು ಬಂದು ಹೋಗಿದ್ದಾರೆ. ಆದರೆ ಯಾವಾಗ ಎಂದು ತಿಳಿದಿರಲಿಲ್ಲ. ಎಲ್ಲರೂ ಬಂದು ಹೋಗಿದ್ದಾರಲ್ಲವೆ. ಯಾರೆಲ್ಲರ ಚಿತ್ರಗಳಿವೆಯೋ ಅವರು ಎಲ್ಲಿದ್ದಾರೆಂದು ಯಾರಿಗೂ ಗೊತ್ತಿಲ್ಲ. ಯಾರು ಹೋಗುತ್ತಾರೆಯೋ ಅವರು ಮತ್ತೆ ತಮ್ಮ ಸಮಯದಲ್ಲಿ ಬರುತ್ತಾರೆ. ಭಿನ್ನ-ಭಿನ್ನ ಪಾತ್ರವನ್ನಭಿಯಿಸುತ್ತಾ ಇರುತ್ತಾರೆ. ಸ್ವರ್ಗದಲ್ಲಂತೂ ಯಾರೂ ಹೋಗುವುದಿಲ್ಲ. ತಂದೆಯು ತಿಳಿಸಿದ್ದಾರೆ- ಸ್ವರ್ಗದಲ್ಲಿ ಹೋಗುವುದಕ್ಕಾಗಿ ಪುರುಷಾರ್ಥವನ್ನು ಮಾಡಬೇಕಾಗುತ್ತದೆ ಮತ್ತು ಹಳೆಯ ಪ್ರಪಂಚದ ಅಂತ್ಯ ಮತ್ತು ಹೊಸ ಪ್ರಪಂಚ ಆದಿಯು ಬೇಕು. ಇದಕ್ಕೆ ಪುರುಷೋತ್ತಮ ಸಂಗಮಯುಗವೆಂದು ಹೇಳಲಾಗುತ್ತದೆ. ಈಗ ಈ ಜ್ಞಾನವು ನಿಮಗಿದೆ. ಮನುಷ್ಯರು ಏನನ್ನೂ ಅರಿತುಕೊಂಡಿಲ್ಲ. ಶರೀರವು ಸುಟ್ಟು ಹೋಗುತ್ತದೆ. ಬಾಕಿ ಆತ್ಮವಷ್ಟೇ ಹೊರಟು ಹೋಗುತ್ತದೆ ಎಂಬುದಷ್ಟೇ ಗೊತ್ತಿದೆ. ಈಗ ಕಲಿಯುಗವಾಗಿರುವುದರಿಂದ ಅವಶ್ಯವಾಗಿ ಕಲಿಯುಗದಲ್ಲಿಯೇ ಜನ್ಮ ತೆಗೆದುಕೊಳ್ಳುತ್ತಾರೆ. ಸತ್ಯಯುಗದಲ್ಲಿದ್ದಾಗ ಜನ್ಮವನ್ನೂ ಸತ್ಯಯುಗದಲ್ಲಿಯೇ ತೆಗೆದುಕೊಳ್ಳುತ್ತಿದ್ದರು. ಇದನ್ನೂ ತಿಳಿದುಕೊಂಡಿದ್ದೀರಿ - ಆತ್ಮಗಳೆಲ್ಲರ ಸಮೂಹವು ನಿರಾಕಾರಿ ಪ್ರಪಂಚದಲ್ಲಿರುತ್ತದೆ. ಇದಂತೂ ಬುದ್ಧಿಯಲ್ಲಿ ಕುಳಿತಿದೆಯಲ್ಲವೆ. ಮತ್ತೆ ಅಲ್ಲಿಂದ ಬರುತ್ತಾರೆ. ಇಲ್ಲಿ ಶರೀರ ಧಾರಣೆ ಮಾಡಿ ಜೀವಾತ್ಮರಾಗಿ ಬಿಡುತ್ತಾರೆ. ಎಲ್ಲರೂ ಇಲ್ಲಿ ಬಂದು ಜೀವಾತ್ಮರಾಗಬೇಕಾಗಿದೆ. ನಂತರ ನಂಬರ್ವಾರ್ ಹಿಂತಿರುಗಿ ಹೋಗಬೇಕಾಗಿದೆ. ಎಲ್ಲರನ್ನೂ ಕರೆದುಕೊಂಡು ಹೋಗುವುದಿಲ್ಲ. ಹಾಗಿದ್ದರೆ ಪ್ರಳಯವಾಗಿ ಬಿಡುತ್ತಿತ್ತು. ಪ್ರಳಯವಾಯಿತೆಂದು ತೋರಿಸುತ್ತಾರೆ. ಆದರೆ ಫಲಿತಾಂಶವೇನನ್ನೂ ತೋರಿಸುವುದಿಲ್ಲ. ಇದಂತೂ ನಿಮಗೆ ಗೊತ್ತಿದೆ, ಈ ಪ್ರಪಂಚವೆಂದೂ ಖಾಲಿಯಾಗಲು ಸಾಧ್ಯವಿಲ್ಲ. ರಾಮನೂ ಹೋದ, ರಾವಣನೂ ಹೋದ.... ಎಂಬ ಗಾಯನವಿದೆ. ಇವರದು ಬಹಳಷ್ಟು ಪರಿವಾರವಿದೆ. ಇಡೀ ಪ್ರಪಂಚದಲ್ಲಿ ರಾವಣ ಸಂಪ್ರದಾಯವಿದೆಯಲ್ಲವೆ. ರಾಮನ ಸಂಪ್ರದಾಯವು ಬಹಳ ಕಡಿಮೆಯಿದೆ. ರಾಮನ ಸಂಪ್ರದಾಯವು ಸತ್ಯಯುಗ-ತ್ರೇತಾಯುಗದಲ್ಲಿರುತ್ತದೆ. ಬಹಳ ಅಂತರವಿರುತ್ತದೆ! ನಂತರದಲ್ಲಿ ಇನ್ನೂ ಹೆಚ್ಚಿನ ರೆಂಬೆ-ಕೊಂಬೆಗಳು ಬರುತ್ತವೆ. ಈಗ ನೀವು ಬೀಜ ಮತ್ತು ವೃಕ್ಷವನ್ನು ಅರಿತಿದ್ದೀರಿ. ತಂದೆಗೆ ಎಲ್ಲವೂ ತಿಳಿದಿದೆ. ಆದ್ದರಿಂದಲೇ ತಿಳಿಸುತ್ತಿರುತ್ತಾರೆ. ಆದ್ದರಿಂದ ಅವರಿಗೆ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಒಂದುವೇಳೆ ಒಂದೇ ಮಾತು ಇದ್ದಿದ್ದರೆ ಇಷ್ಟೊಂದು ಶಾಸ್ತ್ರ ಇತ್ಯಾದಿಗಳೂ ಸಹ ರಚನೆಯಾಗುತ್ತಿರಲಿಲ್ಲ. ವೃಕ್ಷದ ವಿಸ್ತಾರವನ್ನೂ ಸಹ ತಿಳಿಸುತ್ತಿರುತ್ತಾರೆ. ಮೂಲ ಮಾತು ತಂದೆಯನ್ನು ನೆನಪು ಮಾಡುವುದೇ ನಂಬರ್ವಾರ್ ಸಬ್ಜೆಕ್ಟ್ ಆಗಿದೆ. ಇದರಲ್ಲಿ ಶ್ರಮವಿದೆ ಮತ್ತು ಇದರ ಮೇಲೆ ಎಲ್ಲವೂ ಆಧಾರಿತವಾಗಿದೆ. ಬಾಕಿ ವೃಕ್ಷವನ್ನಂತೂ ನೀವು ಅರಿತಿದ್ದೀರಿ. ಪ್ರಪಂಚದಲ್ಲಿ ಈ ಮಾತುಗಳನ್ನು ಯಾರೂ ಅರಿತುಕೊಂಡಿಲ್ಲ. ನೀವು ಎಲ್ಲಾ ಧರ್ಮದವರ ತಿಥಿ, ತಾರೀಖೂ ಎಲ್ಲವನ್ನೂ ತಿಳಿಸುತ್ತೀರಿ. ಅರ್ಧಕಲ್ಪದಲ್ಲಿ ಇವರೆಲ್ಲರೂ ಬಂದು ಬಿಡುತ್ತಾರೆ. ಉಳಿದವರು ಸೂರ್ಯವಂಶಿ, ಚಂದ್ರವಂಶಿಯರು. ಇವರಿಗೆ ಬಹಳ ಯುಗಗಳಂತೂ ಇರುವುದಿಲ್ಲ. ಎರಡು ಯುಗಗಳೇ ಇರುತ್ತವೆ. ಅಲ್ಲಿ ಮನುಷ್ಯರು ಕೆಲವರೇ ಇರುತ್ತಾರೆ. 84 ಜನ್ಮಗಳಂತೂ ಇರಲು ಸಾಧ್ಯವೇ ಇಲ್ಲ. ಮನುಷ್ಯರು ತಿಳುವಳಿಕೆಯಿಂದ ಆಚೆ ಬಂದು ಬಿಡುತ್ತಾರೆ. ಅರ್ಥಾತ್ ಬುದ್ಧಿಹೀನರಾಗುತ್ತಾರೆ. ಆದ್ದರಿಂದ ತಂದೆಯು ಮತ್ತೆ ಬಂದು ತಿಳುವಳಿಕೆಯನ್ನು ನೀಡುತ್ತಾರೆ. ರಚಯಿತ ತಂದೆಯೇ ತನ್ನ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ. ಭಾರತವಾಸಿಗಳಂತೂ ಏನನ್ನೂ ಅರಿತುಕೊಂಡಿಲ್ಲ. ಮುಸಲ್ಮಾನರನ್ನು ಪಾರಸಿ ಮೊದಲಾದವರನ್ನು ಪೂಜಿಸುತ್ತಿರುತ್ತಾರೆ. ಯಾರು ಬಂದರೆ ಅವರನ್ನು ಪೂಜಿಸಲು ತೊಡಗುತ್ತಾರೆ. ಏಕೆಂದರೆ ತಮ್ಮ ಧರ್ಮ ಮತ್ತು ಧರ್ಮ ಸ್ಥಾಪನಕರನ್ನು ಮರೆತು ಹೋಗಿದ್ದಾರೆ. ಮತ್ತೆಲ್ಲಾ ಧರ್ಮದವರು ತಮ್ಮ-ತಮ್ಮ ಧರ್ಮವನ್ನು ಅರಿತಿದ್ದಾರೆ. ಇಂತಹ ಧರ್ಮವು ಯಾವಾಗ ಮತ್ತು ಯಾರು ಸ್ಥಾಪನೆ ಮಾಡಿದ್ದಾರೆಂದು ಎಲ್ಲರಿಗೆ ತಿಳಿದಿದೆ. ಆದರೆ ಸತ್ಯಯುಗ-ತ್ರೇತಾಯುಗದ ಇತಿಹಾಸ-ಭೂಗೋಳದ ಬಗ್ಗೆ ಯಾರಿಗೂ ಗೊತ್ತಿಲ್ಲ. ಶಿವ ತಂದೆಯದು ಈ ರೂಪವಾಗಿದೆ. ಅವರೇ ಸರ್ವ ಶೇಷ್ಠ ತಂದೆಯಾಗಿದ್ದಾರೆ ಎಂದು ಚಿತ್ರವನ್ನೂ ನೋಡುತ್ತಾರೆ. ಅಂದಾಗ ಅವರನ್ನೇ ನೆನಪು ಮಾಡಬೇಕಾಗಿದೆ. ಇಲ್ಲಿ ಎಲ್ಲರಿಗಿಂತ ಹೆಚ್ಚಿನದಾಗಿ ಕೃಷ್ಣನ ಪೂಜೆ ಮಾಡುತ್ತಾರೆ. ಏಕೆಂದರೆ ತಂದೆಯ ನಂತರದವರಲ್ಲವೆ. ಅವರನ್ನೇ ಪ್ರೀತಿ ಮಾಡುತ್ತಾರೆ. ಆದ್ದರಿಂದ ಗೀತೆಯ ಭಗವಂತನು ಕೃಷ್ಣನೆಂದೇ ತಿಳಿದಿದ್ದಾರೆ. ತಿಳಿಸುವವರು ಬೇಕು ಆಗಲೇ ಅವರಿಂದ ಆಸ್ತಿಯು ಸಿಗುತ್ತದೆ. ತಂದೆಯೇ ತಿಳಿಸುತ್ತಾರೆ. ಹೊಸ ಪ್ರಪಂಚ ಸ್ಥಾಪನೆ ಮತ್ತು ಹಳೆಯ ಪ್ರಪಂಚದ ವಿನಾಶ ಮಾಡಿಸುವವರು ತಂದೆಯ ವಿನಃ ಮತ್ತ್ಯಾರೂ ಆಗಿರಲು ಸಾಧ್ಯವಿಲ್ಲ. ಬ್ರಹ್ಮಾರವರ ಮೂಲಕ ಸ್ಥಾಪನೆ, ಶಂಕರನ ಮೂಲಕ ವಿನಾಶ ವಿಷ್ಣುವಿನ ಮೂಲಕ ಪಾಪನೆ ಇದನ್ನೂ ಬರೆಯುತ್ತಾರೆ. ಇದೆಲ್ಲವೂ ಇಲ್ಲಿಗಾಗಿಯೇ ಬರೆಯಲ್ಪಟ್ಟಿದೆ. ಆದರೆ ತಿಳುವಳಿಕೆಯೇನೂ ಇಲ್ಲ.

ನಿಮಗೆ ತಿಳಿದಿದೆ, ಇದು ನಿರಾಕಾರಿ ಸೃಷ್ಟಿಯಾಗಿದೆ. ಇದು ಸಾಕಾರಿ ಸೃಷ್ಟಿಯಾಗಿದೆ. ಸೃಷ್ಟಿಯಂತೂ ಇದೇ ಆಗಿದೆ. ಇದೇ ರಾಮ ರಾಜ್ಯ ಮತ್ತು ರಾವಣ ರಾಜ್ಯವಾಗುತ್ತದೆ. ಮಹಿಮೆಯೆಲ್ಲವೂ ಇಲ್ಲಿಯದಾಗುತ್ತದೆ. ಬಾಕಿ ಸೂಕ್ಷ್ಮವತನ ಕೇವಲ ಸಾಕ್ಷಾತ್ಕಾರವಾಗುತ್ತದೆ. ಮೂಲವತದಲ್ಲಂತೂ ಆತ್ಮಗಳಿರುತ್ತಾರೆ. ಮತ್ತೆ ಇಲ್ಲಿಗೆ ಬಂದು ಪಾತ್ರವನ್ನಭಿನಯಿಸುತ್ತಾರೆ ಬಾಕಿ ಸೂಕ್ಷ್ಮವತನದಲ್ಲಿ ಏನಿದೆ. ಈ ಚಿತ್ರವನ್ನು ಮಾಡಿ ಬಿಟ್ಟಿದ್ದಾರೆ. ಇದರ ಬಗ್ಗೆ ತಂದೆಯು ತಿಳಿಸಿ ಕೊಡುತ್ತಾರೆ - ನೀವು ಮಕ್ಕಳು ಇಂತಹ ಸೂಕ್ಷ್ಮವತನವಾಸಿ ಫರಿಶ್ತೆಗಳಾಗಬೇಕಾಗಿದೆ. ಫರಿಶ್ತೆಗಳು ಮೂಳೆ-ಮಾಂಸ ರಹಿತವಾಗಿರುತ್ತಾರೆ. ದಧೀಜಿ ಋಷಿಯು ಮೂಳೆ-ಮೂಳೆಯನ್ನು ಕೊಟ್ಟು ಬಿಟ್ಟರೆಂದು ಹೇಳಿ ಬಿಡುತ್ತಾರಲ್ಲವೆ. ಬಾಕಿ ಶಂಕರ ಗಾಯನವಂತೂ ಎಲ್ಲಿಯೂ ಇಲ್ಲ. ಬ್ರಹ್ಮಾ-ವಿಷ್ಣುವಿನ ಮಂದಿರವಿದೆ. ಶಂಕರನಿಗೆ ಏನೂ ಇಲ್ಲ ಆದ್ದರಿಂದ ವಿನಾಶಕ್ಕಾಗಿ ಅವರನ್ನು ನಿಮಿತ್ತ ಮಾಡಿದ್ದಾರೆ. ಆದರೆ ಈ ರೀತಿ ಕಣ್ಣು ತೆರೆಯುವುದರಿಂದ ವಿನಾಶವೇನೂ ಆಗುವುದಿಲ್ಲ. ದೇವತೆಗಳು ಹಿಂಸೆಯ ಕೆಲಸವನ್ನು ಹೇಗೆ ಮಾಡುತ್ತಾರೆ? ಅವರು ಮಾಡುವುದಿಲ್ಲ. ಶಿವ ತಂದೆಯೂ ಸಹ ಈ ರೀತಿಯ ಸಲಹೆಯನ್ನು ಕೊಡುವುದಿಲ್ಲ. ಸಲಹೆ ಕೊಡುವವರ ಮೇಲೂ ಬಂದು ಬಿಡುತ್ತದೆಯಲ್ಲವೆ. ಹೇಳುವವರೂ ಸಿಕ್ಕಿಕೊಳ್ಳುತ್ತಾರೆ. ಮನುಷ್ಯರಂತೂ ಶಿವ-ಶಂಕರನನ್ನು ಒಂದೇ ಆಗಿದ್ದಾರೆಂದು ಹೇಳಿ ಬಿಡುತ್ತಾರೆ. ಈಗ ತಂದೆಯೂ ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಎಂದು ಹೇಳುವುದಿಲ್ಲ. ಪತಿತ-ಪಾವನನೆಂದು ಒಬ್ಬರಿಗೇ ಹೇಳುತ್ತಾರೆ. ಭಗವಂತನು ಅರ್ಥ ಸಹಿತವಾಗಿ ತಿಳಿಸುತ್ತಾರೆ. ಯಾರಾದರೂ ಇದನ್ನು ಅರಿತುಕೊಳ್ಳದಿದ್ದರೆ ಈ ಚಿತ್ರಗಳನ್ನು ನೋಡಿ ತಬ್ಬಿಬ್ಬಾಗುತ್ತಾರೆ. ಅರ್ಥವನ್ನಂತೂ ಅವಶ್ಯವಾಗಿ ತಿಳಿಸಬೇಕಾಗುತ್ತದೆಯಲ್ಲವೆ. ಅರಿತುಕೊಳ್ಳುವುದರಲ್ಲಿಯೇ ಸಮಯ ಹಿಡಿಸುತ್ತದೆ. ಕೋಟಿಯಲ್ಲಿ ಕೆಲವರೇ ಬರುತ್ತಾರೆ. ನಾನು ಯಾರಾಗಿದ್ದೇನೆ, ಹೇಗಿದ್ದೇನೆ ಎಂಬುದನ್ನು ಕೋಟಿಯಲ್ಲಿ ಕೆಲವರೇ ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾವುದೇ ಮಾತಿನ ಚಿಂತನೆಯಲ್ಲಿ ತಮ್ಮ ಸಮಯವನ್ನು ಕಳೆಯಬಾರದು. ತಮ್ಮ ಮಸ್ತಿಯಲ್ಲಿರಬೇಕಾಗಿದೆ. ಸ್ವಯಂನ ಪ್ರತಿ ಚಿಂತನೆ ಮಾಡಿ ಆತ್ಮವನ್ನು ಸತೋಪ್ರಧಾನವನ್ನಾಗಿ ಮಾಡಿಕೊಳ್ಳಬೇಕಾಗಿದೆ.

2. ನರನಿಂದ ನಾರಾಯಣರಾಗಲು ಅಂತಿಮ ಸಮಯದಲ್ಲಿ ಒಬ್ಬ ತಂದೆಯದೇ ನೆನಪಿರಲಿ. ನಾನಾತ್ಮನಾಗಿದ್ದೇನೆ ಎಂಬ ಅತ್ಯುತ್ತಮ ಯುಕ್ತಿಯನ್ನು ಸಮ್ಮುಖದಲ್ಲಿಟ್ಟುಕೊಂಡು ಪುರುಷಾರ್ಥ ಮಾಡಬೇಕಾಗಿದೆ.

ವರದಾನ:
ದೇಹ-ಭಾನದಿಂದ ಭಿನ್ನ ಆಗಿ ಪರಮಾತ್ಮನಿಗೆ ಪ್ರಿಯರಾಗುವ ಅನುಭವ ಮಾಡುವಂತಹ ಕಮಲ ಆಸನಧಾರಿ ಭವ.

ಕಮಲ ಆಸನ ಬ್ರಾಹ್ಮಣ ಆತ್ಮರ ಶ್ರೇಷ್ಠ ಸ್ಥಿತಿಯ ಲಕ್ಷಣವಾಗಿದೆ. ಇಂತಹ ಕಮಲ ಆಸನಧಾರಿ ಆತ್ಮಗಳು ಈ ದೇಹಾಭಿಮಾನದಿಂದ ಸ್ವತಃ ಭಿನ್ನ ಆಗಿರುತ್ತಾರೆ. ಅವರಿಗೆ ಶರೀರದ ಭಾನ ತನ್ನ ಕಡೆ ಆಕರ್ಷಣೆ ಮಾಡುವುದಿಲ್ಲ. ಯಾವ ರೀತಿ ಬ್ರಹ್ಮಾ ತಂದೆಗೆ ನಡೆಯುತ್ತಾ ತಿರುಗಾಡುತ್ತಾ ಫರಿಸ್ಥಾ ರೂಪ ಅಥವಾ ದೇವತಾ ರೂಪ ಸದಾ ಸ್ಮತಿಯಲ್ಲಿರುತ್ತಿತ್ತು. ಅದೇ ರೀತಿ ಸ್ವಾಭಾವಿಕವಾಗಿ ದೇಹೀ ಅಭಿಮಾನಿ ಸ್ಥಿತಿ ಸದಾ ಇರಬೇಕು. ಇದಕ್ಕೆ ಹೇಳಲಾಗುವುದು ದೇಹಭಾನದಿಂದ ಭಿನ್ನ. ಈ ರೀತಿ ದೇಹ ಭಾನದಿಂದ ಭಿನ್ನ ಇರುವಂತಹವರೆ ಪರಮಾತ್ಮನಿಗೆ ಪ್ರಿಯರಾಗುತ್ತಾರೆ.

ಸ್ಲೋಗನ್:
ತಮ್ಮ ವಿಶೇಷತೆಗಳು ಮತ್ತು ಗುಣ ಫ್ರಭು ಪಸಂದ್ ಆಗಿದೆ. ಅದನ್ನು ನನ್ನದು ಎಂದು ತಿಳಿಯುವುದೇ ದೇಹ-ಅಭಿಮಾನವಾಗಿದೆ.