19.05.19 Avyakt Bapdada
Kannada
Murli
28.11.84 Om Shanti Madhuban
"ಸಂಕಲ್ಪವನ್ನು ಸಫಲಮಾಡಲು
ಸಹಜಸಾಧನ"
ಇಂದು ವಿಶ್ವ ರಚೈತ,
ವಿಶ್ವ ಕಲ್ಯಾಣಕಾರಿ ತಂದೆಯು ವಿಶ್ವದ ಪರಿಕ್ರಮಣ ಮಾಡುವುದಕ್ಕಾಗಿ, ವಿಶೇಷವಾಗಿ ಸರ್ವ ಮಕ್ಕಳ
ರೂಪ-ರೇಖೆಗಳನ್ನು ನೋಡುವುದಕ್ಕಾಗಿ ನಾಲ್ಕೂ ಕಡೆಯಲ್ಲಿ ಹೊರಟರು. ಜ್ಞಾನಿ ಆತ್ಮ ಮಕ್ಕಳನ್ನೂ
ನೋಡಿದರು. ಭಕ್ತ ಮಕ್ಕಳನ್ನೂ ನೋಡಿದರು, ಅಜ್ಞಾನಿ ಮಕ್ಕಳನ್ನೂ ನೋಡಿದರು. ಭಿನ್ನ-ಭಿನ್ನ ಆತ್ಮರು
ತನ್ನ-ತನ್ನ ಲಗನ್ನಿನಲ್ಲಿ ಮಗ್ನರಾಗಿರುವುದನ್ನು ನೋಡಿದರು. ಕೆಲವರು ಕೆಲವು ಕಾರ್ಯಗಳನ್ನು ಮಾಡುವ
ಲಗನ್ನಿನಲ್ಲಿ ಮಗ್ನ ಮತ್ತು ಕೆಲವರು ಅದನ್ನು ಮುರಿಯುವ ಕಾರ್ಯದಲ್ಲಿ ಮಗ್ನರು, ಕೆಲವರು ಜೋಡಿಸುವ
ಕಾರ್ಯದಲ್ಲಿ ಮಗ್ನರಾಗಿದ್ದಾರೆ ಆದರೆ ಎಲ್ಲರೂ ಖಂಡಿತವಾಗಿ ಮಗ್ನವಾಗಿದ್ದಾರೆ. ಎಲ್ಲರ ಮನಸ್ಸಿನಲ್ಲಿ
ಸಂಕಲ್ಪವು ಇದೇ ಇತ್ತು- ಏನಾದರೂ ಸಿಕ್ಕಿ ಬಿಡಲಿ, ಸ್ವಲ್ಪ ತೆಗೆದುಕೊಂಡು ಬಿಡೋಣ, ಸ್ವಲ್ಪ ಪಡೆದು
ಬಿಡೋಣ, ಇದೇ ಲಕ್ಷ್ಯದಿಂದ ಪ್ರತಿಯೊಬ್ಬರೂ ತಮ್ಮ-ತಮ್ಮ ಕಾರ್ಯದಲ್ಲಿ ತೊಡಗಿದ್ದಾರೆ. ಭಲೇ
ಅಲ್ಪಕಾಲದ ಪ್ರಾಪ್ತಿಯಿದೆ, ಆದರೂ ಸಹ ಏನಾದರೂ ಸಿಕ್ಕಿ ಬಿಡಲಿ ಅಥವಾ ಸ್ವಲ್ಪ ಆಗಿ ಬಿಡಬೇಕು, ಇದೇ
ಗುಂಗು ಮತ್ತು ಕಾರ್ಯವನ್ನು ಎಲ್ಲಾ ಕಡೆಯಿಂದ ನೋಡಿದೆವು. ಇದರ ಮಧ್ಯೆ ಬ್ರಾಹ್ಮಣ ಮಕ್ಕಳನ್ನು
ವಿಶೇಷವಾಗಿ ನೋಡಿದೆವು. ದೇಶದಲ್ಲಿರಬಹುದು, ಭಲೇ ವಿದೇಶದಲ್ಲಿರುವ ಎಲ್ಲಾ ಮಕ್ಕಳಲ್ಲಿ ಇದೇ ಒಂದು
ಸಂಕಲ್ಪವನ್ನು ನೋಡಿದೆವು- ಈಗ ಸ್ವಲ್ಪ ಮಾಡಿಬಿಡೋಣ. ಬೇಹದ್ದಿನ ಕಾರ್ಯದಲ್ಲಿ ಏನಾದರೂ ವಿಶೇಷತೆ
ಮಾಡಿ ತೋರಿಸೋಣ. ತನ್ನಲ್ಲಿಯೂ ಯಾವುದಾದರೂ ವಿಶೇಷತೆಯನ್ನು ಧಾರಣೆ ಮಾಡಿಕೊಂಡು ವಿಶೇಷ ಆತ್ಮನಾಗಿ
ಬಿಡೋಣ. ಇಂತಹ ಉಮ್ಮಂಗವು ಮೆಜಾರಿಟಿ ಮಕ್ಕಳಲ್ಲಿ ನೋಡಿದೆವು. ಉಮ್ಮಂಗ-ಉತ್ಸಾಹದ ಬೀಜವು ಸ್ವಯಂನ
ಪುರುಷಾರ್ಥದಿಂದ, ಜೊತೆ ಜೊತೆಗೆ ಸಮಯದ ವಾತಾವರಣದಿಂದ ಎಲ್ಲರಲ್ಲಿ ಪ್ರತ್ಯಕ್ಷ ರೂಪದಲ್ಲಿ ನೋಡಿದೆವು.
ಇದೇ ಉಮ್ಮಂಗದ ಬೀಜವನ್ನು ಮತ್ತೆ ಮತ್ತೆ ನಿರಂತರವನ್ನಾಗಿ ಮಾಡಿಕೊಳ್ಳುವ, ಗಮನ ಕೊಡುವ ಮತ್ತು
ಪರಿಶೀಲನೆ ಅರ್ಥಾತ್ ಸದಾ ವೃದ್ಧಿಯನ್ನು ಪಡೆಯುವ ವಿಧಿಯೆಂಬ ಬಿಸಿಲನ್ನು ಕೊಡುತ್ತಿರುವುದು-
ಇದರಲ್ಲಿ ನಂಬರವಾರ್ ಆಗಿ ಬಿಡುತ್ತಾರೆ. ಬೀಜವನ್ನು ಬಿತ್ತನೆ ಮಾಡುವುದಂತು ಎಲ್ಲರಿಗೂ ಬರುತ್ತದೆ
ಆದರೆ ಅದರ ಪಾಲನೆ ಮಾಡಿ ಫಲ ಸ್ವರೂಪವನ್ನಾಗಿ ಮಾಡುವುದರಲ್ಲಿ ಅಂತರವಾಗಿ ಬಿಡುತ್ತದೆ.
ಬಾಪ್ದಾದಾರವರು ಅಮೃತ ವೇಳೆಯಿಂದ ಇಡೀ ದಿನದವರೆಗೂ ಮಕ್ಕಳ ಈ ಆಟವೆಂದಾದರೂ ಹೇಳಿ ಅಥವಾ ಲಗನ್ನಿನ
ಪುರುಷಾರ್ಥವೆಂದಾದರೂ ಹೇಳಿರಿ, ಪ್ರತಿನಿತ್ಯವೂ ನೋಡುತ್ತಾರೆ. ಪ್ರತಿಯೊಬ್ಬರೂ ಬಹಳ ಒಳ್ಳೆಯ
ಉಮ್ಮಂಗದ ಸಂಕಲ್ಪವನ್ನು ಸ್ವಪ್ರತಿ ಅಥವಾ ಸೇವೆಯ ಪ್ರತಿ ಮಾಡುತ್ತಾರೆ - ಈಗಿನಿಂದ ಇದನ್ನು
ಮಾಡುತ್ತೇವೆ, ಹೀಗೆ ಮಾಡುತ್ತೇವೆ, ಅವಶ್ಯವಾಗಿ ಮಾಡುತ್ತೇವೆ. ಮಾಡಿಯೇ ತೋರಿಸುತ್ತೇವೆ- ಇಂತಹ
ಶ್ರೇಷ್ಠ ಸಂಕಲ್ಪದ ಬೀಜವನ್ನು ಬಿತ್ತುತ್ತಿರುತ್ತಾರೆ. ಬಾಪ್ದಾದಾರವರಿಂದ ಆತ್ಮಿಕ
ವಾರ್ತಾಲಾಪದಲ್ಲಿಯೂ ಸಹ ಬಹಳ ಮಧುರಾತಿ ಮಧುರವಾಗಿ ಮಾತನಾಡುತ್ತಾರೆ. ಆದರೆ ಯಾವಾಗ ಆ ಸಂಕಲ್ಪವನ್ನು
ಅರ್ಥಾತ್ ಬೀಜವನ್ನು ಪ್ರತ್ಯಕ್ಷದಲ್ಲಿ ತರುವ ಪಾಲನೆ ಮಾಡಲಾಗುತ್ತದೆ, ಆಗ ಏನಾಗುತ್ತದೆ?
ಯಾವುದಾದರೊಂದು ಮಾತುಗಳಲ್ಲಿ ವೃದ್ಧಿಯ ವಿಧಿಯಲ್ಲಿ ಅಥವಾ ಫಲ ಸ್ವರೂಪವನ್ನಾಗಿ ಮಾಡುವುದರ
ವಿಶೇಷತೆಯಲ್ಲಿ ನಂಬರವಾರ್ ಯಥಾ ಶಕ್ತಿಯಾಗಿ ಬಿಡುತ್ತಾರೆ. ಯಾವುದೇ ಸಂಕಲ್ಪವೆಂಬ ಬೀಜವನ್ನು
ಫಲವನ್ನಾಗಿ ಮಾಡುವ ಸಹಜ ಸಾಧನವು ಒಂದೇ ಆಗಿದೆ - "ಸದಾ ಬೀಜವೆಂಬ ತಂದೆಯಿಂದ ಪ್ರತೀ ಸಮಯದಲ್ಲಿ
ಸರ್ವ ಶಕ್ತಿಗಳ ಬಲವನ್ನು ಆ ಬೀಜದಲ್ಲಿ ತುಂಬುತ್ತಿರಿ". ಬೀಜರೂಪದ ಮೂಲಕ ತಮ್ಮ ಸಂಕಲ್ಪಗಳೆಂಬ ಬೀಜವು
ಸಹಜ ಮತ್ತು ಸ್ವತಹವಾಗಿಯೇ ವೃದ್ಧಿಯನ್ನು ಪಡೆಯುತ್ತಾ ಫಲೀಭೂತವಾಗಿ ಬಿಡುತ್ತದೆ. ಆದರೆ
ಬೀಜರೂಪದೊಂದಿಗೆ ಸದಾ ಸಂಪರ್ಕವಿರದ ಕಾರಣದಿಂದ ಅನ್ಯ ಆತ್ಮರನ್ನು ಅಥವಾ ಸಾಧನಗಳನ್ನು ವೃದ್ಧಿಯ
ವಿಧಿಯನ್ನಾಗಿ ಮಾಡಿಕೊಂಡು ಬಿಡುತ್ತಾರೆ. ಈ ಕಾರಣದಿಂದ ಹೀಗೆ ಮಾಡುವುದೇ, ಹಾಗೆ ಮಾಡುವುದೇ, ಇದರಂತೆ
ಮಾಡಲೇ, ಈ ವಿಸ್ತಾರದಲ್ಲಿ ಸಮಯ ಮತ್ತು ಪರಿಶ್ರಮವನ್ನು ಹೆಚ್ಚಾಗಿ ಉಪಯೋಗ ಮಾಡುತ್ತಾರೆ. ಏಕೆಂದರೆ
ಯಾವುದೇ ಆತ್ಮ ಮತ್ತು ಸಾಧನಗಳನ್ನು ತಮ್ಮ ಆಧಾರವನ್ನಾಗಿ ಮಾಡಿಕೊಂಡು ಬಿಡುತ್ತಾರೆ. ಸಾಗರ ಮತ್ತು
ಸೂರ್ಯನಿಂದ ನೀರು ಮತ್ತು ಬಿಸಿಲು ಸಿಗುವುದಕ್ಕೆ ಬದಲಾಗಿ ಸಾಧನಗಳ ನೀರಿನಿಂದ, ಆತ್ಮರನ್ನು
ಆಧಾರವೆಂದು ತಿಳಿದು ಸಕಾಶ ಕೊಡುವುದರಿಂದ ಬೀಜವು ಫಲೀಭೂತವಾಗಲು ಸಾಧ್ಯವಿಲ್ಲ. ಆದ್ದರಿಂದ ಪರಿಶ್ರಮ
ಪಟ್ಟ ನಂತರದಲ್ಲಿ, ಸಮಯವನ್ನು ತೊಡಗಿಸಿದ ನಂತರ ಯಾವಾಗ ಪ್ರತ್ಯಕ್ಷ ಫಲದ ಪ್ರಾಪ್ತಿಯಾಗುವುದಿಲ್ಲ,
ಆಗ ನಡೆಯುತ್ತಾ-ನಡೆಯುತ್ತಾ ಉತ್ಸಾಹವು ಕಡಿಮೆಯಾಗಿ ಬಿಡುತ್ತದೆ ಮತ್ತು ಸ್ವಯಂನಿಂದ ಅಥವಾ
ಜೊತೆಗಾರರಿಂದ ಅಥವಾ ಸೇವೆಯಿಂದ ನಿರಾಶರಾಗಿ ಬಿಡುತ್ತಾರೆ. ಕೆಲವೊಮ್ಮೆ ಖುಷಿ, ಕೆಲವೊಮ್ಮೆ ಬೇಸರ
ಎರಡೂ ಪ್ರಕಂಪನಗಳು ಬ್ರಾಹ್ಮಣ ಜೀವನದ ದೋಣಿಯನ್ನು ಕೆಲವೊಮ್ಮೆ ಅಲುಗಾಡಿಸುತ್ತಾ, ಕೆಲವೊಮ್ಮೆ
ನಡೆಸುತ್ತದೆ. ವರ್ತಮಾನದಲ್ಲಿ ಕೆಲ ಮಕ್ಕಳ ಜೀವನದ ಗತಿ ವಿಧಿಯು ಹೀಗೆ ಕಂಡು ಬರುತ್ತದೆ.
ನಡೆಯುತ್ತಿದ್ದಾರೆ, ಕಾರ್ಯವನ್ನೂ ಮಾಡುತ್ತಿದ್ದಾರೆ ಆದರೆ ಹೇಗಾಗಬೇಕು ಹಾಗೆ ಅನುಭವ ಮಾಡುತ್ತಿಲ್ಲ.
ಖುಷಿಯಿದೆ ಆದರೆ ಖುಷಿಯಲ್ಲಿ ನರ್ತಿಸುವುದು- ಅದು ಇಲ್ಲ. ನಡೆಯುತ್ತಿದ್ದಾರೆ ಆದರೆ ತೀವ್ರ ಗತಿಯ
ನಡಿಗೆಯಿಲ್ಲ. ಸಂತುಷ್ಟರೂ ಆಗಿದ್ದಾರೆ- ಶ್ರೇಷ್ಠ ಜೀವನದವರಾದೆವು, ತಂದೆಯ ಮಗುವಾದೆವು, ಸೇವಾಧಾರಿ
ಆಗಿ ಬಿಟ್ಟೆವು, ದುಃಖ-ನೋವಿನ ಪ್ರಪಂಚದಿಂದ ದೂರವಾಗಿ ಬಿಟ್ಟೆವು. ಆದರೆ ಸಂತುಷ್ಟತೆಯ ಮಧ್ಯದಲ್ಲಿ
ಕೆಲಕೆಲವೊಮ್ಮೆ ಅಸಂತುಷ್ಟತೆಯ ಪ್ರಕಂಪನಗಳು ಬಯಸದೇ ಇದ್ದರೂ ಸಹ, ತಿಳಿಯುತ್ತಿದ್ದರೂ ಬಂದು
ಬಿಡುತ್ತದೆ ಏಕೆಂದರೆ ಜ್ಞಾನವು ಸಹಜವಿದೆ, ನೆನಪೂ ಸಹಜವಿದೆ ಆದರೆ ಸಂಬಂಧ-ಸಂಪರ್ಕದಲ್ಲಿ ಭಿನ್ನ
ಮತ್ತು ಪ್ರಿಯರಾಗಿದ್ದು ಪ್ರೀತಿಯನ್ನು ನಿಭಾಯಿಸುವುದು- ಇದರಲ್ಲಿ ಕೆಲವೊಮ್ಮೆ ಸಹಜ ಮತ್ತು
ಕೆಲವೊಮ್ಮೆ ಕಷ್ಟವಾಗಿ ಬಿಡುತ್ತದೆ. ಬ್ರಾಹ್ಮಣ ಪರಿವಾರ ಮತ್ತು ಸೇವೆಯ ಪ್ರವೃತ್ತಿ, ಇದಕ್ಕೆ
ಹೇಳಲಾಗುತ್ತದೆ- ಸಂಬಂಧ-ಸಂಪರ್ಕ. ಇದರಲ್ಲಿ ಒಂದಲ್ಲ ಒಂದು ಮಾತಿನಿಂದ ಎಂತಹ ಅನುಭವವಾಗಬೇಕು ಹಾಗೆ
ಮಾಡುವುದಿಲ್ಲ. ಈ ಕಾರಣದಿಂದ ಎರಡೂ ಪ್ರಕಂಪನಗಳು ನಡೆಯುತ್ತದೆ. ಈಗ ಸಮಯದ ಸಮೀಪತೆಯ ಕಾರಣದಿಂದ
ಪುರುಷಾರ್ಥದ ಈ ಗತಿಯು ಸಮಯದನುಸಾರವಾಗಿ ಸಂಪೂರ್ಣ ಗುರಿಯಲ್ಲಿ ತಲುಪಲು ಸಾಧ್ಯವಿಲ್ಲ. ಈಗ ಸಮಯವಿದೆ-
ವಿಘ್ನ ವಿನಾಶಕರಾಗಿದ್ದು ವಿಶ್ವದ ವಿಘ್ನಗಳ ಮಧ್ಯೆ ದುಃಖಿ ಆತ್ಮರಿಗೆ ಸುಖ-ಶಾಂತಿಯ ಅನುಭೂತಿಯನ್ನು
ಮಾಡಿಸುವುದು. ಬಹಳ ಕಾಲದಿಂದ ನಿರ್ವಿಘ್ನ ಸ್ಥಿತಿಯಿರುವವರೇ ವಿಘ್ನ ವಿನಾಶಕ ಕಾರ್ಯವನ್ನು ಮಾಡಲು
ಸಾಧ್ಯವಾಗುವುದು. ಈಗಿನವರೆಗೂ ತಮ್ಮ ಜೀವನದಲ್ಲಿ ಬಂದಿರುವಂತಹ ವಿಘ್ನಗಳನ್ನು ಸಮಾಪ್ತಿ
ಮಾಡುವುದರಲ್ಲಿಯೇ ಬ್ಯುಜಿಯಾಗಿರುತ್ತಾರೆ, ಅದರಲ್ಲಿಯೇ ಶಕ್ತಿಯನ್ನು ಉಪಯೋಗಿಸುತ್ತಾರೆಂದರೆ,
ಅನ್ಯರಿಗೆ ಶಕ್ತಿಯನ್ನು ಕೊಡಲು ನಿಮಿತ್ತರಾಗಲು ಹೇಗೆ ಸಾಧ್ಯ! ನಿರ್ವಿಘ್ನರಾಗಿದ್ದು ಶಕ್ತಿಗಳ
ಸ್ಟಾಕ್ನ್ನು ಜಮಾ ಮಾಡಿಕೊಳ್ಳಿರಿ ಆಗಲೇ ಶಕ್ತಿರೂಪರಾಗಿದ್ದು ವಿಘ್ನ ವಿನಾಶಕನ ಕಾರ್ಯವನ್ನು
ಮಾಡಬಹುದು. ತಿಳಿಯಿತೆ! ವಿಶೇಷವಾಗಿ ಎರಡು ಮಾತುಗಳನ್ನು ನೋಡಿದೆವು. ಅಜ್ಞಾನಿ ಮಕ್ಕಳು ಭಾರತದಲ್ಲಿ
ಸೀಟ್ ತೆಗೆದುಕೊಳ್ಳುವುದರಲ್ಲಿ ಅಥವಾ ಸೀಟ್ ಕೊಡಿಸುವುದರಲ್ಲಿ ತೊಡಗಿದ್ದಾರೆ. ಹಗಲು-ರಾತ್ರಿ
ಸ್ವಪ್ನದಲ್ಲಿಯೂ ಸೀಟ್ ಕಂಡು ಬರುತ್ತದೆ ಮತ್ತು ಬ್ರಾಹ್ಮಣ ಮಕ್ಕಳು ಸೆಟ್ ಆಗುವುದರಲ್ಲಿ
ತೊಡಗಿದ್ದಾರೆ. ಸೀಟ್ ಸಿಕ್ಕಿದೆ ಆದರೆ ಸೆಟ್ ಆಗುತ್ತಿದ್ದಾರೆ. ವಿದೇಶದಲ್ಲಿ ತಾನೇ ಮಾಡಿರುವಂತಹ
ವಿನಾಶಕಾರಿ ಶಕ್ತಿಯಿಂದ ಪಾರಾಗುವ ಸಾಧನಗಳನ್ನು ಹುಡುಕುವುದರಲ್ಲಿ ತೊಡಗಿದ್ದಾರೆ. ಮೆಜಾರಿಟಿಯ
ಜೀವನವು, ಜೀವನವಲ್ಲ ಆದರೆ ಪ್ರಶ್ನಾರ್ಥಕ ಚಿಹ್ನೆಯಾಗಿ ಬಿಟ್ಟಿದೆ. ಅಜ್ಞಾನಿಗಳು ಪಾರಾಗಲು
ತೊಡಗಿದ್ದಾರೆ ಮತ್ತು ಜ್ಞಾನಿಗಳು ಪ್ರತ್ಯಕ್ಷತೆಯ ಧ್ವಜಾರೋಹಣದಲ್ಲಿ ತೊಡಗಿದ್ದಾರೆ. ಇದು ವಿಶ್ವದ
ಕ್ಷೇಮ-ಸಮಾಚಾರವಾಗಿದೆ. ಈಗ ಬೇಸರಗಳಿಂದ ಪಾರಾಗಿರಿ. ಭಿನ್ನ-ಭಿನ್ನ ಬೇಸರಗಳಲ್ಲಿ ಅಲೆಯುತ್ತಿರುವ
ಆತ್ಮರಿಗೆ ಶಾಂತಿಯ ನೆಲೆಯನ್ನು ಕೊಡಿ. ಒಳ್ಳೆಯದು.
ಸದಾ ಸಂಪನ್ನ ಸ್ಥಿತಿಯ ಸೀಟಿನಲ್ಲಿ ಸೆಟ್ ಆಗಿರುವಂತಹ, ಸ್ವಯಂನ ಮತ್ತು ವಿಶ್ವದ ವಿಘ್ನವಿನಾಶಕ,
ಬೀಜರೂಪ ತಂದೆಯ ಸಂಬಂಧದಿಂದ ಪ್ರತೀ ಶ್ರೇಷ್ಠ ಸಂಕಲ್ಪವೆಂಬ ಬೀಜವನ್ನು ಫಲೀಭೂತವನ್ನಾಗಿ ಮಾಡುತ್ತಾ
ಪ್ರತ್ಯಕ್ಷ ಫಲವನ್ನು ಅನುಭವಿಸುವಂತಹ, ಸದಾ ಸಂತುಷ್ಟವಾಗಿರುವ, ಸಂತುಷ್ಟಮಣಿ ಮಕ್ಕಳಿಗೆ
ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಹಾಸ್ಟೆಲ್ನ
ಕುಮಾರಿಯರೊಂದಿಗೆ ಬಾಪ್ದಾದಾರವರ ವಾರ್ತಾಲಾಪ -
ತಮ್ಮ ಭಾಗ್ಯವನ್ನು ನೋಡುತ್ತಾ ಹರ್ಷಿತರಾಗುತ್ತಿದ್ದೀರಲ್ಲವೇ? ಉಲ್ಟಾ ಮಾರ್ಗದಲ್ಲಿ ಹೋಗುವುದರಿಂದ
ಪಾರಾಗಿ ಬಿಟ್ಟಿರಿ. ಕಳೆದುಕೊಳ್ಳುವುದಕ್ಕೆ ಬದಲು ಸಂಪಾದಿಸುವ ಜೀವನವನ್ನಾಗಿ ಮಾಡಿಕೊಂಡು ಬಿಟ್ಟಿರಿ.
ಲೌಕಿಕ ಜೀವನದಲ್ಲಿ ಜ್ಞಾನವಿಲ್ಲದೆ ಕೇವಲ ಕಳೆದುಕೊಳ್ಳುವುದೇ ಇದೆ ಮತ್ತು ಜ್ಞಾನಿ ಜೀವನದಲ್ಲಿ
ಪ್ರತೀ ಸೆಕೆಂಡ್ ಸಂಪಾದನೆಯೇ ಸಂಪಾದನೆಯಿದೆ. ಹಾಗೆ ನೋಡಿದರೆ ಅದೃಷ್ಟವಂತರು ಎಲ್ಲಾ
ಬ್ರಾಹ್ಮಣರಾಗಿದ್ದಾರೆ ಆದರೆ ಆದರೂ ಸಹ ಕುಮಾರರು ಡಬಲ್ ಅದೃಷ್ಟವಂತರು. ಮತ್ತು ಕುಮಾರಿ ಜೀವನದಲ್ಲಿ
ಬ್ರಹ್ಮಾಕುಮಾರಿಯರಾಗುವುದು, ಬ್ರಾಹ್ಮಣರಾಗುವುದು ಬಹಳ ಮಹಾನ್ ಆಗಿದೆ. ಕಡಿಮೆ ಮಾತಲ್ಲ. ಬಹಳ
ದೊಡ್ಡ ಮಾತಾಗಿದೆ. ಇಂತಹ ನಶೆಯಿರುತ್ತದೆಯೇ- ಏನಾಗಿ ಬಿಟ್ಟೆವು, ಸಾಧಾರಣ ಕುಮಾರಿಯಿಂದ
ಶಕ್ತಿರೂಪವಾಗಿ ಬಿಟ್ಟೆವು. ಮಾಯೆಯನ್ನು ಸಂಹರಿಸುವ ಶಕ್ತಿಯರಾಗಿದ್ದೀರಲ್ಲವೆ! ಮಾಯೆಯಿಂದ
ಗಾಬರಿಯಾಗುವವರಲ್ಲ, ಸಂಹಾರ ಮಾಡುವವರು. ಬಲಹೀನರಲ್ಲ, ಬಹದ್ದೂರರು. ಕೆಲವೊಮ್ಮೆ ಚಿಕ್ಕ ಪುಟ್ಟ
ಮಾತುಗಳಲ್ಲಿ ಗಾಬರಿಯಾಗುವುದಿಲ್ಲವೇ? ಸದಾ ಶ್ರೇಷ್ಠ ಪ್ರಾಪ್ತಿಯನ್ನು
ನೆನಪಿಟ್ಟುಕೊಂಡಿರುತ್ತೀರೆಂದರೆ ಚಿಕ್ಕ ಪುಟ್ಟ ಮಾತುಗಳೇನು ದೊಡ್ಡದೆನಿಸುವುದಿಲ್ಲ. ಈಗ ಇಡೀ
ಜೀವನದ ವ್ಯಾಪಾರವನ್ನು ಮಾಡಿದಿರಾ ಅಥವಾ ಎಲ್ಲಿಯವರೆಗೆ ಹಾಸ್ಟೆಲ್ನಲ್ಲಿರುತ್ತೀರಿ ಅಲ್ಲಿಯವರೆಗಿನ
ವ್ಯಾಪಾರವಿದೆಯೇ? ಎಂದಿಗೂ ಸಹ ಯಾರೂ ಸಹ ಸಾಧಾರಣ ಜೀವನವನ್ನು ತಿಳಿದುಕೊಂಡು ಶ್ರೇಷ್ಠ ಜೀವನದಿಂದ
ಹೋಗಲು ಸಾಧ್ಯವಿಲ್ಲ. ಒಂದು ವೇಳೆ ಯಾರೇ ಲಕ್ಷಾಧಿಪತಿಯಾಗಿರಲಿ, ಅವರಿಗೆ ಹೇಳಿರಿ- ಬಡವರಾಗಿ ಎಂದು,
ಅವರು ಆಗುತ್ತಾರೆಯೇ? ಸಂದರ್ಭದ ಕಾರಣದಿಂದ ಕೆಲವರು ಆಗಿ ಬಿಡುತ್ತಾರೆ, ಆದರೂ ಇಷ್ಟವಾಗುವುದಿಲ್ಲ.
ಅಂದಾಗ ಈ ಜೀವನವಿದೆ- ಸ್ವರಾಜ್ಯ ಅಧಿಕಾರಿ ಜೀವನ. ಅದರಿಂದ ಸಾಧಾರಣ ಜೀವನದಲ್ಲಿ ಹೋಗಲು
ಸಾಧ್ಯವಿಲ್ಲ. ಅಂದಮೇಲೆ ಈಗ ಬುದ್ಧಿವಂತರಾಗಿದ್ದು ಅನುಭವ ಮಾಡುತ್ತಿದ್ದೀರಾ ಅಥವಾ
ಒಬ್ಬರಿನ್ನೊಬ್ಬರ ಸಂಗದಲ್ಲಿ ನಡೆಯುತ್ತಿದ್ದೀರಾ? ತಮ್ಮ ಬುದ್ಧಿಯ ನಿರ್ಣಯವನ್ನು ಮಾಡಿದ್ದೀರಾ?
ತಮ್ಮ ವಿವೇಕದ ನಿರ್ಣಯದಿಂದ ಈ ಜೀವನವನ್ನು ರೂಪಿಸಿಕೊಂಡಿದ್ದೀರಲ್ಲವೆ! ಅಥವಾ ತಾಯಿ-ತಂದೆಯು
ಹೇಳಿದರು, ಆದ್ದರಿಂದ ಹೊರಟು ಬಂದಿರಾ? ಒಳ್ಳೆಯದು!
2. ಕುಮಾರಿಯರು ತಮಗೆ ತಾವೇ ಆಫರ್ ಮಾಡಿದಿರಾ? ಎಲ್ಲಿಯೇ ಸೇವೆಗಾಗಿ ಕಳುಹಿಸಲಿ, ಅಲ್ಲಿಗೆ ಹೋಗುವಿರಾ?
ಪರಿಪಕ್ವವಾದ ವ್ಯಾಪಾರವನ್ನು ಮಾಡಿದಿರಾ ಅಥವಾ ಕಚ್ಚಾ? ಪಕ್ಕಾ ವ್ಯಾಪಾರವಾಗಿದೆಯೆಂದರೆ ಎಲ್ಲಿಯೇ
ಕೂರಿಸಿರಿ, ಏನೇ ಮಾಡಿಸಿರಿ.... ಹಾಗೆಯೇ ತಯಾರಾಗಿದ್ದೀರಾ? ಒಂದು ವೇಳೆ ಯಾವುದೇ ಬಂಧನವಿದೆಯೆಂದರೆ
ಪರಿಪಕ್ವವಾದ ವ್ಯಾಪಾರವಿಲ್ಲ. ಒಂದು ವೇಳೆ ಸ್ವಯಂ ತಯಾರಾಗಿದ್ದರೆ, ಯಾರೂ ತಡೆಯಲು ಸಾಧ್ಯವಿಲ್ಲ.
ಕುರಿಯನ್ನು ಕಟ್ಟಿ ಕೂರಿಸುತ್ತಾರೆ, ಸಿಂಹವನ್ನು ಯಾರೂ ಬಂಧಿಸಲು ಸಾಧ್ಯವಿಲ್ಲ. ಅಂದಮೇಲೆ
ಸಿಂಹಿಣಿಯು ಯಾರದೇ ಬಂಧನದಲ್ಲಿ ಬರಲು ಹೇಗೆ ಸಾಧ್ಯ! ಅದು ಕಾಡಿನಲ್ಲಿದ್ದರೂ ಸ್ವತಂತ್ರವಾಗಿದೆ,
ಅಂದಮೇಲೆ ಯಾರಾಗಿದ್ದೀರಿ? ಸಿಂಹಿಣಿಯೇ? ಸಿಂಹಿಣಿ ಎಂದರೆ ಮೈದಾನದಲ್ಲಿ ಬರುವವರು. ಯಾವಾಗ ಒಂದು ಬಲ
ಒಂದು ಭರವಸೆಯಿದೆಯೆಂದರೆ ಸಾಹಸ ಮಕ್ಕಳದು, ಸಹಯೋಗ ತಂದೆಯದು. ಎಂತಹ ಕಠಿಣವಾದ ಬಂಧನವಿರಬಹುದು ಆದರೆ
ಸಾಹಸದ ಆಧಾರದ ಮೇಲೆ, ಆ ಕಠಿಣ ಬಂಧನವೂ ಸಹಜವಾಗಿ ಮುಕ್ತವಾಗಿ ಬಿಡುತ್ತದೆ. ಹೇಗೆ ತೋರಿಸುತ್ತಾರೆ-
ಜೈಲಿನ ಬೀಗಗಳೂ ಸಹ ತೆರೆದು ಬಿಟ್ಟವು, ಅಂದಮೇಲೆ ತಮ್ಮ ಬಂಧನವೂ ತೆರೆದು ಬಿಡುತ್ತದೆ, ಅಂದಮೇಲೆ
ಹೀಗಾಗಿರಿ. ಒಂದು ವೇಳೆ ಸ್ವಲ್ಪವೇನಾದರೂ ಬಂಧನವಿದೆಯೆಂದರೆ, ಅದನ್ನು ಯೋಗಾಗ್ನಿಯಿಂದ ಭಸ್ಮ ಮಾಡಿ
ಬಿಡಿ. ಭಸ್ಮವಾಗಿ ಬಿಡುತ್ತದೆಯೆಂದರೆ ಹೆಸರು -ಚಿಹ್ನೆಯೂ ಮಾಯವಾಗಿ ಬಿಡುತ್ತದೆ. ತುಂಡಾಗುವುದರಿಂದ
ಮತ್ತೆ ಗಂಟು ಹಾಕಬಹುದು, ಆದ್ದರಿಂದ ತುಂಡು ಮಾಡಬೇಡಿ ಆದರೆ ಭಸ್ಮ ಮಾಡಿ ಬಿಡುತ್ತೀರೆಂದರೆ
ಸದಾಕಾಲಕ್ಕಾಗಿ ಮುಕ್ತರಾಗಿ ಬಿಡುತ್ತೀರಿ. ಒಳ್ಳೆಯದು.
ಆಯ್ಕೆ ಮಾಡಿರುವ ಅವ್ಯಕ್ತ-ಮಹಾವಾಕ್ಯಗಳು - ಸರಳಚಿತ್ತರಾಗುತ್ತೀರೆಂದರೆ ಸಫಲತೆಯು
ಸಿಗುತ್ತಿರುತ್ತದೆ. ಬ್ರಾಹ್ಮಣರ ಮುಖ್ಯ ಸಂಸ್ಕಾರವಾಗಿದೆ - ಸರ್ವಸ್ವ ತ್ಯಾಗಿ. ತ್ಯಾಗದಿಂದ
ಜೀವನದಲ್ಲಿ ಸರಳತೆ ಮತ್ತು ಸಹನಶೀಲತೆಯ ಗುಣವು ಸಹಜವಾಗಿಯೇ ಬಂದು ಬಿಡುತ್ತದೆ. ಯಾರಲ್ಲಿ ಸರಳತೆ,
ಸಹನಶೀಲತೆಯಿರುತ್ತದೆ, ಅವರು ಅನ್ಯರನ್ನೂ ಅವಶ್ಯವಾಗಿ ಆಕರ್ಷಿಸುತ್ತಾರೆ ಮತ್ತು ಒಬ್ಬರಿನ್ನೊಬ್ಬರ
ಸ್ನೇಹಿಯಾಗಲು ಸಾಧ್ಯವಾಗುವುದು. ಯಾರು ಸ್ವಯಂ ಸರಳಚಿತ್ತರಾಗಿರುತ್ತಾರೆಯೋ ಅವರು ಅನ್ಯರನ್ನೂ
ಸರಳಚಿತ್ತರನ್ನಾಗಿ ಮಾಡಬಹುದು. ಸರಳಚಿತ್ತ ಅಂದರೆ ಯಾವ ಮಾತು ಕೇಳಿದಿರಿ, ನೋಡಿದಿರಿ, ಮಾಡಿದಿರಿ,
ಅದರ ಸಾರಯುಕ್ತರಾಗಿ ಮತ್ತು ಸಾರವನ್ನೇ ತೆಗೆದುಕೊಳ್ಳಿ ಮತ್ತು ಯಾವ ಮಾತು ಮತ್ತು ಕರ್ಮವನ್ನು ಸ್ವಯಂ
ಮಾಡುತ್ತೀರಿ, ಅದರಲ್ಲಿಯೇ ಸಾರವು ತುಂಬಿರಬೇಕು. ಯಾರು ಸರಳ ಪುರುಷಾರ್ಥಿಯಾಗಿರುತ್ತಾರೆ, ಅವರು
ಅನ್ಯರನ್ನೂ ಸರಳ ಪುರುಷಾರ್ಥಿಯನ್ನಾಗಿ ಮಾಡಿ ಬಿಡುತ್ತಾರೆ. ಸರಳ ಪುರುಷಾರ್ಥಿಯು ಎಲ್ಲಾ
ಮಾತುಗಳಲ್ಲಿ ಆಲ್ರೌಂಡರ್ ಆಗಿರುತ್ತಾರೆ. ಅವರಲ್ಲಿ ಯಾವುದೇ ಮಾತಿನ ಕೊರತೆಯು ಕಾಣಿಸುವುದಿಲ್ಲ.
ಯಾವುದೇ ಮಾತಿನಲ್ಲಿ ಸಾಹಸವು ಕಡಿಮೆಯಿರುವುದಿಲ್ಲ. ಮುಖದಿಂದ ಇಂತಹ ಮಾತುಗಳು ಬರುವುದಿಲ್ಲ-
ಇದನ್ನೀಗ ಮಾಡಲು ಸಾಧ್ಯವಿಲ್ಲ. ಇದೊಂದೇ ಸರಳತೆಯ ಗುಣದಿಂದ ಆ ಎಲ್ಲಾ ಮಾತುಗಳಲ್ಲಿ
ಉದಾಹರಣೆಯಾಗಿದ್ದು, ಪಾಸ್-ವಿತ್-ಆನರ್ ಆಗಿ ಬಿಡುತ್ತಾರೆ. ಹೇಗೆ ಸಾಕಾರ ತಂದೆಯನ್ನು ನೋಡಿದಿರಿ-
ಎಷ್ಟು ಜ್ಞಾನಪೂರ್ಣವೋ ಅಷ್ಟೇ ಸರಳ ಸ್ವಭಾವ. ಅದಕ್ಕೆ ಹೇಳಲಾಗುತ್ತದೆ- ಬಾಲ್ಯದ ಸಂಸ್ಕಾರ.
ವೃದ್ಧರಿಗೆ ವೃದ್ಧ, ಮಕ್ಕಳಿಗೆ ಮಗು. ಹೀಗೆ ಫಾಲೋಫಾದರ್ ಮಾಡುತ್ತಾ ಸರಳಚಿತ್ತರಾಗಿರಿ. ಅನ್ಯರ
ಸಂಸ್ಕಾರಗಳನ್ನು ಸರಳವನ್ನಾಗಿ ಮಾಡುವ ಸಾಧನವಾಗಿದೆ- ಹಾಂ ಜಿ ಹೇಳುವುದು. ಯಾವಾಗ ತಾವು ಇಲ್ಲಿ ಹಾಂ
ಜಿ, ಹಾಂ ಜಿ ಮಾಡುವಿರಿ, ಆಗ ಅಲ್ಲಿ ಸತ್ಯಯುಗದಲ್ಲಿ ತಮ್ಮ ಪ್ರಜೆಗಳು ಇಷ್ಟೇ ಹಾಂ ಜಿ, ಹಾಂ ಜಿ
ಮಾಡುವರು. ಒಂದು ವೇಳೆ ಇಲ್ಲಿಯೇ ನಾ ಜಿ, ನಾ ಜಿ ಮಾಡುತ್ತೀರೆಂದರೆ ಅಲ್ಲಿಯೂ ಪ್ರಜೆಗಳು ದೂರದಿಂದಲೇ
ಪ್ರಣಾಮವನ್ನು ಮಾಡುವರು. ಅಂದಮೇಲೆ ಇಲ್ಲ ಶಬ್ಧವನ್ನು ತೆಗೆದು ಬಿಡಬೇಕು. ಯಾವುದೇ ಮಾತಿರಲಿ, ಮೊದಲು
ಹಾಂ ಜಿ. ಇದರಿಂದ ಸಂಸ್ಕಾರಗಳಲ್ಲಿ ಸರಳತೆಯು ಬಂದು ಬಿಡುತ್ತದೆ. ಸಫಲತಾಮೂರ್ತಿಯಾಗುವುದಕ್ಕಾಗಿ
ಮುಖ್ಯ ಗುಣ ಸರಳತೆ ಮತ್ತು ಸಹನಶೀಲತೆಯ ಧಾರಣೆ ಮಾಡಿಕೊಳ್ಳಿರಿ. ಹೇಗೆ ಯಾರೇ ಧೈರ್ಯವಿರುವ ಮನುಷ್ಯನು
ಯೋಚಿಸಿ, ತಿಳಿದುಕೊಂಡು ಕಾರ್ಯವನ್ನು ಮಾಡುತ್ತಾನೆ, ಅದರಿಂದ ಸಫಲತೆಯು ಪ್ರಾಪ್ತವಾಗುತ್ತದೆ.
ಹಾಗೆಯೇ ಯಾರು ಸರಳ ಸ್ವಭಾವವಿರುವ ಸಹನಶೀಲರಾಗಿರುತ್ತಾರೆ, ಅವರು ತನ್ನ ಸಹನಶೀಲತೆಯ ಶಕ್ತಿಯಿಂದ
ಎಂತಹ ಕಠೋರ ಸಂಸ್ಕಾರವಿರುವವರನ್ನೂ ಶೀತಲರನ್ನಾಗಿ ಮಾಡಿ ಬಿಡುತ್ತಾರೆ. ಕಠಿಣ ಕಾರ್ಯವನ್ನು ಸಹಜ
ಮಾಡಿ ಬಿಡುತ್ತಾರೆ. ತಮ್ಮ ನೆನಪಾರ್ಥ ದೇವತೆಗಳ ಚಿತ್ರಗಳನ್ನೂ ಏನು ಮಾಡುತ್ತಾರೆ, ಅದರ ಚಹರೆಯಲ್ಲಿ
ಸರಳತೆಯನ್ನು ಖಂಡಿತವಾಗಿ ತೋರಿಸುತ್ತಾರೆ. ಈ ವಿಶೇಷ ಗುಣವನ್ನು ತೋರಿಸುತ್ತಾರೆ. ಲಕ್ಷಣದಲ್ಲಿಯೂ
ಸರಳತೆ, ಅದನ್ನು ತಾವು ಮುಗ್ಧತೆ ಎಂದು ಹೇಳುತ್ತೀರಿ. ಯಾರೆಷ್ಟು ಸಹಜ ಪುರುಷಾರ್ಥಿ ಆಗುವರು, ಅವರ
ಮನಸ್ಸಿನಲ್ಲಿಯೂ ಸರಳ, ವಾಚಾದಲ್ಲಿಯೂ ಸರಳ, ಕರ್ಮದಲ್ಲಿಯೂ ಸರಳವಾಗಿರುತ್ತಾರೆ, ಅವರಿಗೇ ಫರಿಶ್ತಾ
ಎಂದು ಹೇಳಲಾಗುತ್ತದೆ. ಸರಳತೆಯ ಗುಣದ ಧಾರಣೆಯ ಜೊತೆಗೆ ಸಮಾವೇಶ ಮಾಡಿಕೊಳ್ಳುವ, ಸಹನೆ ಮಾಡುವ
ಶಕ್ತಿಯೂ ಸಹ ಅವಶ್ಯವಾಗಿರಬೇಕು. ಒಂದು ವೇಳೆ ಸಮಾವೇಶ ಮಾಡಿಕೊಳ್ಳುವ ಮತ್ತು ಸಹನೆ ಮಾಡುವ
ಶಕ್ತಿಯಿಲ್ಲವೆಂದರೆ ಸರಳತೆಯು ಬಹಳ ಮುಗ್ಧತೆಯ ರೂಪವನ್ನು ಧಾರಣೆ ಮಾಡಿ ಬಿಡುತ್ತದೆ ಮತ್ತು ಕೆಲ
ಕೆಲವೊಮ್ಮೆ ಮುಗ್ಧತೆಯು ಬಹಳ ಹೆಚ್ಚಾಗಿ ನಷ್ಟ ಮಾಡಿ ಬಿಡುತ್ತದೆ. ಅಂದಾಗ ಇಂತಹ ಸರಳಚಿತ್ತರಾಗಬಾರದು.
ಸರಳತೆಯ ಗುಣದ ಕಾರಣದಿಂದ ತಂದೆಯನ್ನೂ ಭೋಲಾನಾಥ ಎಂದು ಹೇಳುತ್ತೀರಿ ಆದರೆ ಅವರು ಭೋಲಾನಾಥನ ಜೊತೆ
ಜೊತೆಗೆ ಸರ್ವಶಕ್ತಿವಂತನೂ ಆಗಿರುವರು. ಕೇವಲ ಭೋಲಾನಾಥನೇ ಅಲ್ಲ. ಅಂದಮೇಲೆ ತಾವೂ ಸಹ ಸರಳತೆಯ
ಗುಣವನ್ನು ಧಾರಣೆ ಮಾಡಿರಿ ಆದರೆ ತಮ್ಮ ಶಕ್ತಿ ಸ್ವರೂಪವನ್ನೂ ಸದಾ ನೆನಪಿಟ್ಟುಕೊಳ್ಳಿರಿ. ಒಂದು
ವೇಳೆ ಶಕ್ತಿ ರೂಪವನ್ನು ಮರೆತು ಕೇವಲ ಮುಗ್ಧರಾಗಿ ಬಿಡುತ್ತೀರೆಂದರೆ, ಮಾಯೆಯ ಗುಂಡು ಬಿದ್ದು
ಬಿಡುತ್ತದೆ. ಆದ್ದರಿಂದ ಇಂತಹ ಶಕ್ತಿ ಸ್ವರೂಪರಾಗಿರಿ, ಆ ಮಾಯೆಯು ಎದುರಿಸುವುದಕ್ಕೆ ಮೊದಲೇ
ನಮಸ್ಕಾರ ಮಾಡಿ ಬಿಡಲಿ. ಬಹಳ ಎಚ್ಚರಿಕೆ, ಬುದ್ಧಿವಂತರಾಗಿ ಇರಬೇಕು. ಬ್ರಾಹ್ಮಣ ಜೀವನದಲ್ಲಿ ಇಂತಹ
ವಿಶೇಷತಾ ಸಂಪನ್ನರಾಗಿರಿ, ಅದರಿಂದ ತಮ್ಮ ಸ್ವಭಾವವು ಸದಾ ಸರಳವಾಗಿರಲಿ, ಮಾತು ಸರಳವಾಗಿರಲಿ, ಪ್ರತೀ
ಕರ್ಮವೂ ಸರಳತಾ ಸಂಪನ್ನವಾಗಿರಲಿ. ಸದಾ ಒಬ್ಬರದೇ ಮತದಂತೆ, ಒಬ್ಬರೊಂದಿಗೆ ಸರ್ವ ಸಂಬಂಧ,
ಒಬ್ಬರೊಂದಿಗೆ ಸರ್ವ ಪ್ರಾಪ್ತಿಗಳನ್ನು ಮಾಡಿಕೊಳ್ಳುತ್ತಾ, ಸದಾ ಏಕರಸವಾಗಿರುವ ಸಹಜ ಅಭ್ಯಾಸಿಯಾಗಿರಿ.
ಸದಾ ಖುಷಿಯಾಗಿರಿ ಮತ್ತು ಖುಷಿಯ ಔಷಧಿಯನ್ನು ಹಂಚಿರಿ. ಸರಳತೆಯ ಗುಣವನ್ನು ಜೀವನದಲ್ಲಿ
ತರುವುದಕ್ಕಾಗಿ ವರ್ತಮಾನ ಸಮಯದಲ್ಲಿ ಕೇವಲ ಒಂದು ಮಾತನ್ನು ಅವಶ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು
- ತಮ್ಮ ಸ್ಥಿತಿಯು ಸ್ತುತಿ(ಹೊಗಳಿಕೆ) ಯ ಆಧಾರದ ಮೇಲೆ ಇರಬಾರದು. ಒಂದು ವೇಳೆ ಸ್ತುತಿಯ ಆಧಾರದ
ಮೇಲೆ ಸ್ಥಿತಿಯಿದೆಯೆಂದರೆ ಯಾವ ಕರ್ಮವನ್ನು ಮಾಡುತ್ತೀರಿ, ಅದರ ಫಲದ ಇಚ್ಛೆ ಅಥವಾ ಲೋಭವಿರುತ್ತದೆ.
ಒಂದುವೇಳೆ ಸ್ತುತಿಯಾಗುತ್ತದೆಯೆಂದರೆ ಸ್ಥಿತಿಯೂ ಇರುತ್ತದೆ. ಒಂದು ವೇಳೆ ನಿಂದನೆಯಾಗುತ್ತದೆಯೆಂದರೆ
ನಿರ್ಧನಿಕರಾಗಿ ಬಿಡುತ್ತೀರಿ. ತಮ್ಮ ಸ್ಥಿತಿಯನ್ನು ಬಿಟ್ಟು ಬಿಡುತ್ತೀರಿ ಮತ್ತು ಧಣಿಯನ್ನೂ ಮರೆತು
ಬಿಡುತ್ತೀರಿ. ಆದ್ದರಿಂದ ಇದನ್ನೆಂದಿಗೂ ಯೋಚಿಸಬಾರದು- ನಮ್ಮ ಸ್ತುತಿಯಾಗಲಿ. ಸ್ತುತಿಯ ಆಧಾರದ ಮೇಲೆ
ಸ್ಥಿತಿಯಿಟ್ಟುಕೊಳ್ಳಬಾರದು ಆಗ ಹೇಳಲಾಗುತ್ತದೆ- ಸರಳಚಿತ್ತರು. ಸರಳತೆಯನ್ನು ತಮ್ಮ ನಿಜ
ಸ್ವಭಾವವನ್ನಾಗಿ ಮಾಡಿಕೊಳ್ಳುವುದರಿಂದ ಸಂಕ್ಷಿಪ್ತಗೊಳಿಸುವ ಶಕ್ತಿಯೂ ಸಹ ಸಹಜವಾಗಿ ಬಂದು
ಬಿಡುತ್ತದೆ. ಯಾರು ಸರಳ ಸ್ವಭಾವದವರಿರುತ್ತಾರೆಯೋ ಅವರು ಎಲ್ಲರ ಸ್ನೇಹಿಯಾಗಿರುತ್ತಾರೆ, ಅವರಿಗೆ
ಎಲ್ಲರ ಮೂಲಕ ಸಹಯೋಗವೂ ಅವಶ್ಯವಾಗಿ ಪ್ರಾಪ್ತಿಯಾಗುವುದು. ಆದ್ದರಿಂದ ಆ ಎಲ್ಲಾ ಮಾತುಗಳನ್ನು
ಎದುರಿಸುವುದು ಮತ್ತು ಸಂಕ್ಷಿಪ್ತಗೊಳಿಸುವುದು ಸಹಜವಾಗಿಯೇ ಮಾಡಿಕೊಳ್ಳಬಹುದು. ಯಾರೆಷ್ಟು ಸರಳ
ಸ್ವಭಾವದವರಾಗಿರುತ್ತಾರೆಯೋ ಅಷ್ಟೇ ಮಾಯೆಯೂ ಎದುರಿಸುವುದು ಕಡಿಮೆ ಮಾಡುತ್ತದೆ. ಅವರು ಎಲ್ಲರ
ಪ್ರಿಯರಾಗಿ ಬಿಡುತ್ತಾರೆ. ಸರಳ ಸ್ವಭಾವದವರ ವ್ಯರ್ಥ ಸಂಕಲ್ಪಗಳು ಅಧಿಕವಾಗಿ ನಡೆಯುವುದಿಲ್ಲ. ಅವರ
ಸಮಯವೂ ವ್ಯರ್ಥವಾಗುವುದಿಲ್ಲ. ವ್ಯರ್ಥ ಸಂಕಲ್ಪವು ನಡೆಯದಿರುವ ಕಾರಣದಿಂದ ಅವರ ಬುದ್ಧಿಯು ವಿಶಾಲ
ಮತ್ತು ದೂರಾಂದೇಶಿಯಿರುತ್ತಾರೆ. ಆದ್ದರಿಂದ ಅವರ ಮುಂದೆ ಯಾವುದೇ ಸಮಸ್ಯೆಯು ಎದುರಿಸಲು
ಸಾಧ್ಯವಿಲ್ಲ. ಎಷ್ಟು ಸರಳತೆಯಿರುತ್ತದೆ, ಅಷ್ಟು ಸ್ವಚ್ಛತೆಯೂ ಇರುತ್ತದೆ. ಸ್ವಚ್ಛತೆಯು ಎಲ್ಲರನ್ನೂ
ತನ್ನ ಕಡೆಗೆ ಆಕರ್ಷಿಸುತ್ತದೆ. ಸ್ವಚ್ಛತೆ ಅರ್ಥಾತ್ ಸತ್ಯತೆ ಮತ್ತು ಶುದ್ಧತೆಯು ಆಗ ಬರುತ್ತದೆ,
ಯಾವಾಗ ತಮ್ಮ ಸ್ವಭಾವವನ್ನು ಸರಳವನ್ನಾಗಿ ಮಾಡಿಕೊಳ್ಳುತ್ತೀರಿ. ಸರಳ ಸ್ವಭಾವದವರು
ಬಹುರೂಪಿಯಾಗಬಲ್ಲರು. ಕೋಮಲ ವಸ್ತುವನ್ನು ಯಾವ ರೂಪದಲ್ಲಿಯೇ ತನ್ನಿರಿ. ಅಂದಮೇಲೆ ಈಗ ಗೋಲ್ಡ್ ಆಗಿರಿ
ಆದರೆ ಗೋಲ್ಡ್ ಅನ್ನು ಈಗ ಅಗ್ನಿಯಲ್ಲಿ ಮುಳುಗಿಸಿರಿ, ಆಗ ಮೋಲ್ಡ್ ಸಹ ಆಗಲು ಸಾಧ್ಯ. ಇದರ
ಕೊರತೆಯಿರುವ ಕಾರಣದಿಂದ ಸರ್ವೀಸಿನ ಸಫಲತೆಯಲ್ಲಿ ಕೊರತೆಯಾಗುತ್ತದೆ. ತನ್ನ ಅಥವಾ ಅನ್ಯರದನ್ನು
ಕಳೆದು ಹೋದದನ್ನು ನೋಡಬೇಡಿ, ಆಗ ಸರಳಚಿತ್ತರಾಗಿ ಬಿಡುತ್ತೀರಿ. ಯಾರು ಸರಳಚಿತ್ತರಾಗುವರು, ಅವರಲ್ಲಿ
ಮಧುರತೆಯ ಗುಣವು ಪ್ರತ್ಯಕ್ಷವಾಗಿ ಕಾಣಿಸುತ್ತದೆ. ಅವರ ನಯನಗಳಿಂದ, ಮುಖದಿಂದ, ಚಲನೆಯಿಂದ ಮಧುರತೆಯು
ಪ್ರತ್ಯಕ್ಷ ರೂಪದಲ್ಲಿ ಕಂಡು ಬರುತ್ತದೆ. ಯಾರೆಷ್ಟು ಸ್ಪಷ್ಟವಾಗುತ್ತಾರೆಯೋ ಅವರಷ್ಟೇ ಸರಳ ಮತ್ತು
ಶ್ರೇಷ್ಠವಾಗಿರುತ್ತಾರೆ. ಸ್ಪಷ್ಟತೆಯು ಶ್ರೇಷ್ಠತೆಗೆ ಸಮೀಪವಿದೆ ಮತ್ತು ಎಷ್ಟು
ಸ್ಪಷ್ಟತೆಯಾಗುತ್ತದೆ ಅಷ್ಟು ಸಫಲತೆಯೂ ಆಗುತ್ತದೆ ಮತ್ತು ಸಮಾನತೆಯೂ ಬರುತ್ತಿರುತ್ತದೆ. ಸ್ಪಷ್ಟತೆ,
ಸರಳತೆ ಮತ್ತು ಶ್ರೇಷ್ಠತೆಯು ತಂದೆಯ ಸಮಾನರನ್ನಾಗಿ ಮಾಡಿ ಬಿಡುತ್ತದೆ.
ವರದಾನ:
ಯಾವುದೇ
ಪರಿಸ್ಥಿತಿಯಲ್ಲಿ ಪೂರ್ಣ ವಿರಾಮವನ್ನಿಟ್ಟು ಸ್ವಯಂನ್ನು ಪರಿವರ್ತನೆ ಮಾಡುವಂತಹ ಸರ್ವರ
ಆಶೀರ್ವಾದಗಳಿಗೆ ಪಾತ್ರ ಭವ.
ಯಾವುದೇ
ಪರಿಸ್ಥಿತಿಯಲ್ಲಿ ಪೂರ್ಣ ವಿರಾಮವನ್ನು ಆಗ ಇಡುವುದಕ್ಕೆ ಸಾಧ್ಯ, ಯಾವಾಗ ಬಿಂದೂ ಸ್ವರೂಪ ತಂದೆ
ಮತ್ತು ಬಿಂದೂ ಸ್ವರೂಪ ಆತ್ಮವೆರಡರ ಸ್ಮೃತಿಯಿರುತ್ತದೆ. ನಿಯಂತ್ರಣಾ ಶಕ್ತಿಯಿರುತ್ತದೆ. ಯಾವ
ಮಕ್ಕಳು ಯಾವುದೇ ಪರಿಸ್ಥಿತಿಯಲ್ಲಿ ಸ್ವಯಂನ್ನು ಪರಿವರ್ತನೆ ಮಾಡಿಕೊಂಡು ಪೂರ್ಣ
ವಿರಾಮವನ್ನಿಡುವುದರಲ್ಲಿ ಸ್ವಯಂನ್ನು ಮೊದಲು ಆಫರ್ ಮಾಡುತ್ತಾರೆ, ಅವರು ಆಶೀರ್ವಾದಗಳಿಗೆ
ಪಾತ್ರರಾಗಿ ಬಿಡುತ್ತಾರೆ. ಅವರು ಸ್ವಯಂಗೆ ಸ್ವಯಂ ಸಹ ಆಶೀರ್ವಾದಗಳು ಅರ್ಥಾತ್ ಖುಷಿ ಸಿಗುತ್ತದೆ,
ತಂದೆಯ ಮೂಲಕ ಮತ್ತು ಬ್ರಾಹ್ಮಣ ಪರಿವಾರದ ಮೂಲಕವೂ ಆಶೀರ್ವಾದಗಳು ಸಿಗುತ್ತವೆ.
ಸ್ಲೋಗನ್:
ಯಾವ
ಸಂಕಲ್ಪವನ್ನು ಮಾಡುತ್ತೀರಿ, ಅದಕ್ಕೆ ಮಧ್ಯ ಮಧ್ಯದಲ್ಲಿ ಧೃಡತೆಯ ಸ್ಟಾಂಪ್ನ್ನು ಹಾಕಿರಿ, ಆಗ
ವಿಜಯಿಯಾಗಿ ಬಿಡುತ್ತೀರಿ.
ಸೂಚನೆ - ಇಂದು ತಿಂಗಳಿನ
ಮೂರನೇ ರವಿವಾರವಾಗಿದೆ, ಎಲ್ಲರೂ ಸಂಘಟಿತ ರೂಪದಲ್ಲಿ ಸಂಜೆ 6.30ರಿಂದ 7.30ರವರೆಗೆ ಅಂತರಾಷ್ಟ್ರೀಯ
ಯೋಗದಲ್ಲಿ ಒಟ್ಟಿಗೆ ಇದ್ದು, ತಮ್ಮ ಡಬಲ್ಲೈಟ್ ಸ್ವರೂಪದ ಮೂಲಕ ಇಡೀ ವಿಶ್ವಕ್ಕೆ ಶಾಂತಿ ಮತ್ತು
ಶಕ್ತಿಯ ಸಕಾಶವನ್ನು ಕೊಡುವ ಸೇವೆಯನ್ನು ಮಾಡಿರಿ. ಇಡೀ ದಿನದಲ್ಲಿ ಅಂತರ್ಮುಖತೆಯ ಗುಹೆಯಲ್ಲಿದ್ದು
ಕರ್ಮಯೋಗಿಯಾಗಿದ್ದು ಕರ್ಮವನ್ನು ಮಾಡಿರಿ.