30.06.19    Avyakt Bapdada     Kannada Murli     19.12.84     Om Shanti     Madhuban


"ಸರ್ವ ಶ್ರೇಷ್ಠ, ಸಹಜ ಹಾಗೂ ಸ್ಪಷ್ಟ ಮಾರ್ಗ"


ಇಂದು ಬಾಪ್ದಾದಾರವರ ವಿಶೇಷ ಸ್ನೇಹಿ, ಸದಾ ಜೊತೆ ನಿಭಾಯಿಸುವಂತಹ ತನ್ನ ಜೊತೆಗಾರರನ್ನು ನೋಡುತ್ತಿದ್ದಾರೆ. ಜೊತೆಗಾರ ಅರ್ಥಾತ್ ಸದಾ ಜೊತೆಯಲ್ಲಿರುವವರು. ಪ್ರತೀ ಕರ್ಮದಲ್ಲಿ, ಸಂಕಲ್ಪದಲ್ಲಿ ಜೊತೆ ನಿಭಾಯಿಸುವವರು. ಪ್ರತೀ ಹೆಜ್ಜೆಯಲ್ಲಿ ಹೆಜ್ಜೆಯನ್ನಿಟ್ಟು ಮುಂದುವರೆಯುವವರು. ಒಂದು ಹೆಜ್ಜೆಯೂ ಸಹ ಮನಮತ, ಪರಮತದಂತೆ ಇಡುವವರಲ್ಲ. ಇಂತಹ ಸದಾ ಜೊತೆಗಾರನ ಜೊತೆ ನಿಭಾಯಿಸುವವರು ಸದಾ ಸಹಜ ಮಾರ್ಗದ ಅನುಭವವನ್ನು ಮಾಡುತ್ತಾರೆ ಏಕೆಂದರೆ ತಂದೆ ಹಾಗೂ ಶ್ರೇಷ್ಠ ಜೊತೆಗಾರ, ಪ್ರತೀ ಹೆಜ್ಜೆಯನ್ನಿಡುತ್ತಾ ಮಾರ್ಗವನ್ನು ಸ್ಪಷ್ಟ ಮತ್ತು ಸ್ವಚ್ಛ ಮಾಡಿ ಬಿಡುತ್ತಾರೆ. ತಾವೆಲ್ಲರೂ ಕೇವಲ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ನಡೆಯಬೇಕಾಗಿದೆ. ಮಾರ್ಗವು ಸರಿಯಾಗಿದೆ, ಸಹಜವಿದೆ, ಸ್ಪಷ್ಟವಿದೆ - ಇದರ ಬಗ್ಗೆ ಯೋಚಿಸುವ ಅವಶ್ಯಕತೆಯಿಲ್ಲ. ಎಲ್ಲಿ ತಂದೆಯ ಹೆಜ್ಜೆಯಿದೆಯೋ ಅದಿರುವುದೇ ಶ್ರೇಷ್ಠ ಮಾರ್ಗ. ಕೇವಲ ಹೆಜ್ಜೆಯನ್ನಿಡಿ ಮತ್ತು ಪ್ರತೀ ಹೆಜ್ಜೆಯಲ್ಲಿ ಪದಮದಷ್ಟು ತೆಗೆದುಕೊಳ್ಳಿರಿ, ಎಷ್ಟು ಸಹಜವಿದೆ! ತಂದೆಯು ಜೊತೆಗಾರನಾಗಿದ್ದು ಜೊತೆಯನ್ನು ನಿಭಾಯಿಸುವುದಕ್ಕಾಗಿ ಸಾಕಾರ ಮಾಧ್ಯಮದ ಮೂಲಕ ಪ್ರತೀ ಹೆಜ್ಜೆಯೆಂಬ ಕರ್ಮವನ್ನು ಮಾಡಿ ತೋರಿಸುವುದಕ್ಕಾಗಿ, ಸಾಕಾರ ಸೃಷ್ಟಿಯಲ್ಲಿ ಅವತರಣೆಯಾಗುತ್ತಾರೆ. ಇದನ್ನೂ ಸಹಜ ಮಾಡುವುದಕ್ಕಾಗಿ ಸಾಕಾರನನ್ನು ಮಾಧ್ಯಮನನ್ನಾಗಿ ಮಾಡಿಕೊಂಡಿದ್ದಾರೆ. ಸಾಕಾರದಲ್ಲಿ ಫಾಲೋ ಮಾಡುವುದು ಅಥವಾ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುವುದಂತು ಸಹಜವಲ್ಲವೆ. ಶ್ರೇಷ್ಠ ಜೊತೆಗಾರನ ಜೊತೆಗಾರರಾಗುವುದಕ್ಕಾಗಿ ಇಷ್ಟು ಸಹಜವಾದ ಮಾರ್ಗವನ್ನು ತಿಳಿಸಲಾಯಿತು, ಏಕೆಂದರೆ ತಂದೆಯು ಜೊತೆಗಾರನು ತಿಳಿದಿದ್ದಾರೆ - ಯಾವ ಜೊತೆಗಾರರನ್ನು ಜೊತೆಗಾರನನ್ನಾಗಿ ಮಾಡಿಕೊಂಡಿದ್ದಾರೆ, ಅವರು ಬಹಳ ಹುಡುಕಾಡಿರುವ ಕಾರಣದಿಂದ ಸುಸ್ತಾಗಿದ್ದಾರೆ. ನಿರಾಶರಾಗಿದ್ದಾರೆ, ನಿರ್ಬಲರಾಗಿದ್ದಾರೆ. ಕಷ್ಟವೆಂದು ತಿಳಿದು ಹೃದಯ ವಿಧೀರ್ಣರಾಗಿ ಬಿಟ್ಟಿದ್ದಾರೆ. ಆದ್ದರಿಂದ ಅತಿ ಸಹಜವಾದುದು ಕೇವಲ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡಿ. ಇದೇ ಸಹಜ ಸಾಧನವನ್ನು ತಿಳಿಸುತ್ತಾರೆ. ಕೇವಲ ಹೆಜ್ಜೆಯನ್ನಿಡುವುದು ತಮ್ಮ ಕೆಲಸವಾಗಿದೆ, ನಡೆಸುವುದು, ಆ ದಡದಲ್ಲಿ ತಲುಪಿಸುವುದು, ಹೆಜ್ಜೆ ಹೆಜ್ಜೆಯಲ್ಲಿ ಶಕ್ತಿ ತುಂಬುವುದು, ಸುಸ್ತನ್ನು ನೀಗಿಸುವುದು - ಇದೆಲ್ಲವೂ ಜೊತೆಗಾರನ ಕಾರ್ಯವಾಗಿದೆ. ಕೇವಲ ಹೆಜ್ಜೆಯನ್ನು ಹಿಂತೆಗೆಯಬಾರದು. ಕೇವಲ ಹೆಜ್ಜೆಯನ್ನಿಡಿ, ಇದಂತು ಕಷ್ಟವಾಗಿಲ್ಲವಲ್ಲವೆ. ಹೆಜ್ಜೆಯನ್ನಿಡುವುದು ಅರ್ಥಾತ್ ಸಂಕಲ್ಪ ಮಾಡುವುದು. ಜೊತೆಗಾರನೇನು ಹೇಳುವರು, ಹೇಗೆ ನಡೆಸುತ್ತಾರೆಯೋ ಹಾಗೆಯೇ ನಡೆಯಿರಿ. ತಮ್ಮ ರೀತಿಯಲ್ಲಿ ನಡೆಸಬಾರದು, ತಮ್ಮ ರೀತಿ ನಡೆಸುವುದು ಅರ್ಥಾತ್ ಚೀರಾಡುವುದು. ಅಂದಮೇಲೆ ಹೀಗೆ ಹೆಜ್ಜೆಯನ್ನಿಡುವುದು ಬರುತ್ತದೆಯಲ್ಲವೆ. ಇದು ಕಷ್ಟವೇನು? ಜವಾಬ್ದಾರಿಯನ್ನು ತೆಗೆದುಕೊಳ್ಳುವವರು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಅಂದಮೇಲೆ ಅವರ ಮೇಲೆ ಜವಾಬ್ದಾರಿಯನ್ನು ಕೊಡುವುದಕ್ಕೆ ಬರುವುದಿಲ್ಲವೇ? ಯಾವಾಗ ಸಾಕಾರ ಮಾಧ್ಯಮವನ್ನು ಮಾರ್ಗದರ್ಶನ ಸ್ವರೂಪವನ್ನಾಗಿ ಮಾಡಿ, ಉದಾಹರಣೆಯನ್ನೂ ಇಟ್ಟರು. ಮತ್ತೆ ಮಾರ್ಗದಲ್ಲಿ ನಡೆಯುವುದಕ್ಕೆ ಕಷ್ಟವೇನು? ಸಹಜ ಸಾಧನವು ಸೆಕೆಂಡಿನ ಸಾಧನವಾಗಿದೆ. ಸಾಕಾರ ರೂಪದಲ್ಲಿ ಬ್ರಹ್ಮಾ ತಂದೆಯವರು ಹೇಗೆ ಮಾಡಿದರು, ಏನು ಮಾಡಿದರು ಅದನ್ನೇ ಮಾಡಬೇಕು. ಫಾಲೋ ಫಾದರ್ ಮಾಡಬೇಕಾಗಿದೆ.

ಪ್ರತೀ ಸಂಕಲ್ಪವನ್ನು ವಿಚಾರಣೆ ಮಾಡಿಸಬೇಕು. ತಂದೆಯ ಸಂಕಲ್ಪವೇ ನನ್ನ ಸಂಕಲ್ಪವಾಗಿದೆಯೇ? ಕಾಪಿ ಮಾಡುವುದಕ್ಕೂ ಬರುವುದಿಲ್ಲವೇ? ಪ್ರಪಂಚದವರು ಕಾಪಿ ಮಾಡುವುದರಿಂದ ತಡೆಯುತ್ತಾರೆ ಮತ್ತು ಇಲ್ಲಂತು ಮಾಡುವುದೇ ಕೇವಲ ಕಾಪಿ ಮಾಡುವುದು. ಅಂದಮೇಲೆ ಸಹಜವಾಯಿತೇ ಅಥವಾ ಕಷ್ಟವಾಯಿತೇ? ಯಾವಾಗ ಸಹಜ, ಸರಳ, ಸ್ಪಷ್ಟ ಮಾರ್ಗವು ಸಿಕ್ಕಿ ಬಿಟ್ಟಿತು, ಅಂದಮೇಲೆ ಫಾಲೋ ಮಾಡಿರಿ. ಅನ್ಯ ಮಾರ್ಗಗಳಲ್ಲೇಕೆ ಹೋಗುತ್ತೀರಿ? ಮತ್ತು ಮಾರ್ಗ ಅರ್ಥಾತ್ ವ್ಯರ್ಥ ಸಂಕಲ್ಪವೆಂಬ ಮಾರ್ಗ. ಬಲಹೀನತೆಯ ಸಂಕಲ್ಪವೆಂಬ ಮಾರ್ಗ. ಕಲಿಯುಗೀ ಆಕರ್ಷಣೆಯ ಭಿನ್ನ-ಭಿನ್ನ ಸಂಕಲ್ಪಗಳ ಮಾರ್ಗವಿದೆ. ಈ ಮಾರ್ಗಗಳ ಮೂಲಕ ಗೊಂದಲದ ಕಾಡಿನಲ್ಲಿ ತಲುಪಿ ಬಿಡುತ್ತೀರಿ. ಎಲ್ಲಿಂದ ಎಷ್ಟು ಬಿಡಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತೀರಿ, ಅಷ್ಟೂ ನಾಲ್ಕೂ ಕಡೆಯಲ್ಲಿಯೂ ಮುಳ್ಳಿರುವ ಕಾರಣದಿಂದ ಹೊರ ಬರಲು ಆಗುತ್ತಿಲ್ಲ. ಮುಳ್ಳುಗಳೇನಾಗಿರುತ್ತದೆ? ಎಲ್ಲಿ, ಏನಾಗುತ್ತದೆಯೋ- ಈ ಏನು ಎನ್ನುವ ಮುಳ್ಳು ಚುಚ್ಚುತ್ತದೆ. ಕೆಲವೊಂದೆಡೆ ಏಕೆ ಎನ್ನುವ ಮುಳ್ಳು ಚುಚ್ಚುತ್ತದೆ, ಕೆಲವೊಂದೆಡೆ ಹೇಗೆ ಎನ್ನುವ ಮುಳ್ಳು ಚುಚ್ಚುತ್ತದೆ. ಕೆಲವೊಂದೆಡೆ ತನ್ನದೇ ಬಲಹೀನತೆಗಳ ಸಂಸ್ಕಾರಗಳ ಮುಳ್ಳು ಚುಚ್ಚುತ್ತದೆ. ನಾಲ್ಕೂ ಕಡೆಗಳಲ್ಲಿ ಮುಳ್ಳುಗಳೇ ಮುಳ್ಳುಗಳು ಕಾಣಿಸುತ್ತದೆ. ನಂತರ ಚೀರಾಡುವುದು, ಈಗ ಜೊತೆಗಾರನಾಗಿ ಬಂದು ಕಾಪಾಡಿ ಎಂದು. ಅಂದಾಗ ಜೊತೆಗಾರನಾಗಿಯೂ ಹೇಳುತ್ತಾರೆ - ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುವುದಕ್ಕೆ ಬದಲಾಗಿ ಬೇರೆ ಮಾರ್ಗದಲ್ಲಿ ಹೋಗಿದ್ದೇಕೆ? ಯಾವಾಗ ಜೊತೆಗಾರನು ಜೊತೆ ಕೊಡುವುದಕ್ಕಾಗಿ ಸ್ವಯಂ ಆಫರ್ ಕೊಡುತ್ತಿದ್ದಾರೆ, ಮತ್ತೆ ಜೊತೆಗಾರನನ್ನೇಕೆ ಬಿಡುತ್ತೀರಿ? ದೂರ ಮಾಡುವುದು ಅರ್ಥಾತ್ ಆಶ್ರಯದಿಂದ ದೂರವಾಗುವುದು. ಒಂಟಿಯೇಕೆ ಆಗುತ್ತೀರಿ? ಅಲ್ಪಕಾಲದ ಜೊತೆಯ ಆಕರ್ಷಣೆ, ಭಲೆ ಯಾವುದೇ ಸಂಬಂಧಿ, ಭಲೆ ಯಾವುದೇ ಸಾಧನದ ಕಡೆ ಸ್ವಯಂ ಆಕರ್ಷಿತ ಮಾಡುತ್ತದೆ, ಇದೇ ಆಕರ್ಷಣೆಯ ಕಾರಣದಿಂದ ಸಾಧನವನ್ನು ಅಥವಾ ವಿನಾಶಿ ಸಂಬಂಧವನ್ನು ತಮ್ಮ ಜೊತೆಗಾರನನ್ನಾಗಿ ಮಾಡಿಕೊಂಡು ಬಿಡುತ್ತೀರಿ ಅಥವಾ ಆಶ್ರಯವನ್ನಾಗಿ ಮಾಡಿಕೊಂಡು ಬಿಡುತ್ತೀರಿ, ಆಗ ಅವಿನಾಶಿ ಜೊತೆಗಾರನಿಂದ ದೂರ ಮಾಡಿಕೊಳ್ಳುತ್ತೀರಿ ಮತ್ತು ಆಶ್ರಯವು ಕಳೆದು ಹೋಗುತ್ತದೆ. ಅರ್ಧಕಲ್ಪದ ಈ ಅಲ್ಪಕಾಲದ ಆಶ್ರಯವನ್ನೇ ಆಶ್ರಯವೆಂದು ತಿಳಿದು ಅನುಭವ ಮಾಡಿ ಬಿಟ್ಟಿರಿ - ಇದು ಆಶ್ರಯವೋ ಅಥವಾ ಕೆಸರಾಗಿದೆಯೇ! ಸಿಲುಕಿಸಿತು, ಬೀಳಿಸಿತೋ ಅಥವಾ ಗುರಿಯಲ್ಲಿ ತಲುಪಿಸಿತೋ? ಬಹಳ ಚೆನ್ನಾಗಿ ಅನುಭವ ಮಾಡಿದಿರಲ್ಲವೆ. ಒಂದು ಜನ್ಮದ ಅನುಭವಿಯಂತು ಆಗಿಲ್ಲ ಅಲ್ಲವೆ. 63 ಜನ್ಮಗಳ ಅನುಭವಿಯಾಗಿದ್ದೀರಿ. ಇನ್ನೂ ಒಂದೆರಡು ಜನ್ಮಗಳದು ಬೇಕೇ? ಒಂದು ಬಾರಿ ಮೋಸ ಹೋಗುವವರು ಮತ್ತೊಮ್ಮೆ ಮೋಸವನ್ನನುಭವಿಸುವುದಿಲ್ಲ. ಒಂದುವೇಳೆ ಮತ್ತೆ-ಮತ್ತೆ ಮೋಸವನ್ನನುಭವಿಸುತ್ತಾರೆಂದರೆ ಅವರಿಗೆ ಭಾಗ್ಯಹೀನರೆಂದು ಹೇಳಲಾಗುತ್ತದೆ. ಈಗಂತು ಸ್ವಯಂ ಭಾಗ್ಯವಿದಾತಾ ಬ್ರಹ್ಮಾ ತಂದೆಯು ಎಲ್ಲಾ ಬ್ರಾಹ್ಮಣರ ಜನ್ಮಪತ್ರಿಕೆಯಲ್ಲಿ ಶ್ರೇಷ್ಠ ಭಾಗ್ಯದ ದೊಡ್ಡ ರೇಖೆಯನ್ನು ಎಳೆದು ಬಿಟ್ಟಿದ್ದಾರಲ್ಲವೆ. ಭಾಗ್ಯವಿದಾತನು ತಮ್ಮ ಭಾಗ್ಯವನ್ನು ರೂಪಿಸಿದ್ದಾರೆ. ಭಾಗ್ಯವಿದಾತನು ತಂದೆಯಾಗಿರುವ ಕಾರಣದಿಂದ, ಪ್ರತಿಯೊಬ್ಬ ಬ್ರಾಹ್ಮಣ ಮಕ್ಕಳಿಗೆ ಭಾಗ್ಯದ ಸಂಪನ್ನ ಭಂಡಾರವನ್ನೇ ಆಸ್ತಿಯಾಗಿ ಕೊಟ್ಟಿದ್ದಾರೆ. ಅಂದಮೇಲೆ ಯೋಚಿಸಿರಿ - ಭಾಗ್ಯದ ಭಂಡಾರದ ಮಾಲೀಕನ ಬಾಲಕ! ಅವರಿಗೇನು ಕಡಿಮೆಯಿರಲು ಸಾಧ್ಯ!!

ನನ್ನ ಭಾಗ್ಯವೇನಾಗಿದೆ - ಯೋಚಿಸುವ ಅವಶ್ಯಕತೆಯೂ ಇಲ್ಲ, ಏಕೆಂದರೆ ಭಾಗ್ಯವಿದಾತಾ ತಂದೆಯಾಗಿ ಬಿಟ್ಟರು, ಅಂದಮೇಲೆ ಮಕ್ಕಳಿಗೆ ಭಾಗ್ಯದ ಆಸ್ತಿಯಲ್ಲಿ ಕಡಿಮೆಯೇನಾಗುತ್ತದೆ! ಭಾಗ್ಯದ ಖಜಾನೆಯ ಮಾಲೀಕರಾಗಿ ಬಿಟ್ಟರಲ್ಲವೆ. ಇಂತಹ ಭಾಗ್ಯವಂತರೆಂದಿಗೂ ಮೋಸವನ್ನನುಭವಿಸುವುದಿಲ್ಲ. ಆದ್ದರಿಂದ ಸಹಜ ಮಾರ್ಗದಲ್ಲಿ ಹೆಜ್ಜೆಯಲ್ಲಿ ಹೆಜ್ಜೆಯನ್ನಿಡಿ. ಸ್ವಯಂ ತಮಗೆ ತಾವೇ ಗೊಂದಲದಲ್ಲಿ ಹಾಕಿಕೊಳ್ಳುತ್ತೀರಿ, ಜೊತೆಗಾರನ ಜೊತೆಯನ್ನು ಬಿಟ್ಟು ಬಿಡುತ್ತೀರಿ. ಕೇವಲ ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿರಿ - ನಾವು ಶ್ರೇಷ್ಠ ಜೊತೆಗಾರನ ಜೊತೆಯಿದ್ದೇವೆ. ವಿಚಾರಣೆ ಮಾಡಿರಿ. ಅದರಿಂದ ಸದಾ ಸ್ವಯಂನಿಂದ ಸಂತುಷ್ಟವಾಗಿರುತ್ತೀರಿ. ಸಹಜ ಮಾರ್ಗವು ತಿಳಿಯಿತೆ! ಸಹಜವನ್ನು ಕಷ್ಟವೆಂದು ಮಾಡಿಕೊಳ್ಳಬೇಡಿ. ಸಂಕಲ್ಪದಲ್ಲಿಯೂ ಕೆಲವೊಮ್ಮೆ ಕಷ್ಟವೆಂದು ಅನುಭವ ಮಾಡಬಾರದು. ಇಂತಹ ಧೃಡ ಸಂಕಲ್ಪ ಮಾಡಲು ಬರುತ್ತದೆಯಲ್ಲವೆ - ಅಲ್ಲಿ ಹೋಗಿ ಮತ್ತೆ ಹೇಳುತ್ತೀರಾ - ಕಷ್ಟವಿದೆ. ಬಾಪ್ದಾದಾರವರು ನೋಡುತ್ತಾರೆ - ಹೆಸರು ಸಹಜಯೋಗಿ ಎನ್ನುವುದಿದೆ ಮತ್ತು ಅನುಭವ ಕಷ್ಟದಿಂದ ಆಗುತ್ತದೆ. ತಮ್ಮನ್ನು ಅಧಿಕಾರಿಯೆಂದು ಒಪ್ಪುತ್ತಾರೆ ಮತ್ತು ಆಗುವುದು ಅಧೀನರು. ಇರುವುದು ಭಾಗ್ಯವಿದಾತನ ಮಕ್ಕಳು ಮತ್ತು ಯೋಚಿಸುತ್ತಾರೆ - ಗೊತ್ತಿಲ್ಲ. ನನ್ನ ಭಾಗ್ಯದಲ್ಲಿದೆಯೋ ಅಥವಾ ಇಲ್ಲವೋ. ಬಹುಷಃ ಇದೇ ನನ್ನ ಭಾಗ್ಯವಾಗಿದೆ ಆದ್ದರಿಂದ ತಮ್ಮನ್ನು ತಾವು ತಿಳಿದುಕೊಳ್ಳಿರಿ ಮತ್ತು ಸದಾ ಸ್ವಯಂನ್ನು ಪ್ರತೀ ಸಮಯದ ಜೊತೆಗಾರನೆಂದು ತಿಳಿದುಕೊಂಡು ನಡೆಯುತ್ತಾ ಸಾಗಿರಿ. ಒಳ್ಳೆಯದು.

ಹೀಗೆ ಸದಾ ಪ್ರತೀ ಹೆಜ್ಜೆಯಲ್ಲಿ ಹೆಜ್ಜೆಯನ್ನಿಡುವ, ಫಾಲೋ ಫಾದರ್ ಮಾಡುವಂತಹ, ಸದಾ ಪ್ರತೀ ಸಂಕಲ್ಪದಲ್ಲಿ ಜೊತೆಗಾರನ ಜೊತೆಯ ಅನುಭವ ಮಾಡುವಂತಹ, ಸದಾ ಒಬ್ಬ ಜೊತೆಗಾರನ ಹೊರತು ಮತ್ತ್ಯಾರೂ ಇಲ್ಲ, ಇಂತಹ ಪ್ರೀತಿಯನ್ನು ನಿಭಾಯಿಸುವಂತಹ, ಸದಾ ಸಹಜಯೋಗಿ, ಶ್ರೇಷ್ಠ ಭಾಗ್ಯಶಾಲಿ ವಿಶೇಷ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಅವ್ಯಕ್ತ-ಬಾಪ್ದಾದಾರವರ ವ್ಯಕ್ತಿಗತ ವಾರ್ತಾಲಾಪ- ಕುಮಾರಿಯರೊಂದಿಗೆ -
1. ಕುಮಾರಿಯರು ಅರ್ಥಾತ್ ಕಮಾಲ್ ಮಾಡುವವರು. ಸಾಧಾರಣ ಕುಮಾರಿಯರಲ್ಲ, ಅಲೌಕಿಕ ಕುಮಾರಿಯರಾಗಿದ್ದೀರಿ. ಲೌಕಿಕ ಅಂದಮೇಲೆ ಈ ಲೋಕದ ಕುಮಾರಿಯರೇನು ಮಾಡುತ್ತಾರೆ ಮತ್ತು ತಾವು ಅಲೌಕಿಕ ಕುಮಾರಿಯರು ಏನು ಮಾಡುತ್ತೀರಿ? ರಾತ್ರಿ-ಹಗಲಿನ ಅಂತರವಿದೆ. ಅದು ದೇಹಾಭಿಮಾನದಲ್ಲಿದ್ದು ಅನ್ಯರನ್ನೂ ದೇಹಾಭಿಮಾನದಲ್ಲಿ ಬೀಳಿಸುತ್ತಾರೆ ಮತ್ತು ತಾವು ಸದಾ ದೇಹೀ-ಅಭಿಮಾನಿಯಾಗಿದ್ದು ಸ್ವಯಂ ಸಹ ಹಾರುತ್ತಾ ಮತ್ತು ಅನ್ಯರನ್ನೂ ಹಾರಿಸುತ್ತಾ ಇರುವಂತಹ ಕುಮಾರಿಯರಾಗಿದ್ದೀರಿ ಅಲ್ಲವೆ. ಯಾವಾಗ ತಂದೆಯು ಸಿಕ್ಕಿ ಬಿಟ್ಟರು ಅಂದಮೇಲೆ ಸರ್ವ ಸಂಬಂಧವು ಒಬ್ಬ ತಂದೆಯೊಂದಿಗೆ ಸದಾ ಇದ್ದೇ ಇರುತ್ತದೆ. ಮೊದಲು ಹೇಳುವುದಕ್ಕಷ್ಟೆ ಇತ್ತು, ಈಗ ಪ್ರತ್ಯಕ್ಷವಾಗಿ ಇದೆ. ಭಕ್ತಿಮಾರ್ಗದಲ್ಲಿಯೂ ಗಾಯನವನ್ನು ಅವಶ್ಯವಾಗಿ ಮಾಡುತ್ತಿದ್ದಿರಿ - ಸರ್ವ ಸಂಬಂಧವು ತಂದೆಯೊಂದಿಗಿದೆ ಆದರೆ ಈ ಪ್ರತ್ಯಕ್ಷದಲ್ಲಿ ಸರ್ವ ಸಂಬಂಧಗಳ ಪ್ರಾಪ್ತಿಯು ತಂದೆಯ ಮೂಲಕ ಸಿಕ್ಕಿದೆ. ಇಂತಹ ಅನುಭವ ಮಾಡುವವರಲ್ಲವೆ. ಯಾವಾವ ಸರ್ವ ಪ್ರಾಪ್ತಿಯು ಒಬ್ಬ ತಂದೆಯ ಮೂಲಕ ಸಿಗುತ್ತದೆ, ಅಂದಾಗ ಮತ್ತೆಲ್ಲಿಯಾದರೂ ಸಂಕಲ್ಪವು ಹೋಗಲು ಸಾಧ್ಯವಿಲ್ಲ. ಇಂತಹ ನಿಶ್ಚಯಬುದ್ಧಿ ವಿಜಯಿ ರತ್ನಗಳು ಸದಾ ಗಾಯನ ಮತ್ತು ಪೂಜ್ಯರಾಗುತ್ತಾರೆ. ಅಂದಮೇಲೆ ವಿಜಯಿ ಆತ್ಮರಾಗಿದ್ದೀರಿ, ಸದಾ ಸ್ಮೃತಿಯ ತಿಲಕಧಾರಿ ಆತ್ಮರಾಗಿದ್ದೀರಿ, ಇದು ಸ್ಮೃತಿಯಿರುತ್ತದೆಯೇ? ಇಷ್ಟು ಕುಮಾರಿಯರು ಎಂತಹ ಚಮತ್ಕಾರವನ್ನು ಮಾಡುವಿರಿ? ಸದಾ ಪ್ರತೀ ಕರ್ಮದ ಮೂಲಕ ತಂದೆಯನ್ನು ಪ್ರತ್ಯಕ್ಷ ಮಾಡುವರು. ಪ್ರತೀ ಕರ್ಮದಿಂದ ತಂದೆಯು ಕಾಣಿಸಲಿ. ಯಾವುದೇ ಮಾತನ್ನೇ ಹೇಳುವಿರಿ, ಅದು ಇಂತಹ ಮಾತಾಗಿರಲಿ, ಆ ಮಾತಿನಲ್ಲಿ ತಂದೆಯು ಕಾಣಿಸಿ ಬಿಡಲಿ. ಪ್ರಪಂಚದಲ್ಲಿಯೂ ಯಾರೇ ಬಹಳ ಚೆನ್ನಾಗಿ ಮಾತನಾಡುವವರಾಗಿರುತ್ತಾರೆಂದರೆ ಎಲ್ಲರೂ ಹೇಳುತ್ತಾರೆ - ಇವರಿಗೆ ಕಲಿಸುವವರು ಯಾರಾಗಿದ್ದಾರೆ? ಅವರ ಕಡೆಗೆ ದೃಷ್ಟಿ ಹೋಗುತ್ತದೆ. ಹಾಗೆಯೇ ತಮ್ಮ ಪ್ರತೀ ಕರ್ಮದ ಮೂಲಕ ತಂದೆಯ ಪ್ರತ್ಯಕ್ಷತೆಯಾಗಲಿ. ಇಂತಹ ಧಾರಣಾಮೂರ್ತಿ ದಿವ್ಯ ಮೂರ್ತಿ - ಇದು ವಿಶೇಷತೆಯಾಗಿದೆ. ಭಾಷಣ ಮಾಡುವವರಂತು ಎಲ್ಲರೂ ಆಗುತ್ತಾರೆ ಆದರೆ ತಮ್ಮ ಪ್ರತೀ ಕರ್ಮದಿಂದ ಭಾಷಣ ಮಾಡುವವರು- ಅವರು ಕೋಟಿಯಲ್ಲಿ ಕೆಲವರಾಗುತ್ತಾರೆ. ಅಂದಮೇಲೆ ಇಂತಹ ವಿಶೇಷತೆಯನ್ನು ತೋರಿಸುತ್ತೀರಲ್ಲವೆ. ತಮ್ಮ ಚರಿತ್ರೆಯ ಮೂಲಕ ತಂದೆಯ ಚಿತ್ರವನ್ನು ತೋರಿಸಿರಿ. ಒಳ್ಳೆಯದು!

2. ಕುಮಾರಿಯರ ಗುಂಪಿದೆ. ಸೇನೆಯು ತಯಾರಾಗುತ್ತಿದೆ. ಅವರಂತು ಲೆಫ್ಟ್ ರೈಟ್ ಮಾಡುತ್ತಾರೆ, ತಾವು ಸದಾ ರೈಟೇ ರೈಟ್ ಮಾಡುತ್ತೀರಿ. ಈ ಸೇನೆಯು ಬಹಳ ಶ್ರೇಷ್ಠವಾದುದಾಗಿದೆ, ಶಾಂತಿಯ ಮೂಲಕ ವಿಜಯಿಗಳಾಗಿ ಬಿಡುತ್ತಾರೆ. ಶಾಂತಿಯಿಂದಲೇ ಸ್ವರಾಜ್ಯವನ್ನು ಪಡೆದುಕೊಂಡು ಬಿಡುತ್ತೀರಿ. ಯಾವುದೇ ಶಬ್ಧವನ್ನೂ ಮಾಡಬೇಕಾಗಿರುವುದಿಲ್ಲ, ಅಂದಮೇಲೆ ಪರಿಪಕ್ವ ಶಾಂತಿಯ ಸೇನೆಯ ಶಕ್ತಿಯರಾಗಿದ್ದೀರಿ, ಸೇನೆಯನ್ನು ಬಿಟ್ಟು ಹೋಗುವವರಲ್ಲ. ಸ್ವಪ್ನದಲ್ಲಿಯೂ ಯಾರೂ ಅಲುಗಾಡಿಸಲು ಸಾಧ್ಯವಾಗಬಾರದು. ಕೆಲವೊಮ್ಮೆಗೂ ಯಾರದೇ ಸಂಗದೋಷದಲ್ಲಿ ಬರುವವರಲ್ಲ. ಸದಾ ತಂದೆಯ ಸಂಗದಲ್ಲಿರುವವರು, ಅನ್ಯರ ಸಂಗದಲ್ಲಿ ಬರಲು ಸಾಧ್ಯವಿಲ್ಲ. ಅಂದಮೇಲೆ ಇಡೀ ಗ್ರೂಪ್ ಬಹದ್ದೂರರಾಗಿದ್ದೀರಲ್ಲವೆ. ಬಹದ್ದೂರರು ಏನು ಮಾಡುತ್ತಾರೇ? ಮೈದಾನದಲ್ಲಿ ಬರುತ್ತಾರೆ. ಅಂದಾಗ ಇರುವುದೆಲ್ಲರೂ ಬಹದ್ದೂರ್ ಆದರೆ ಮೈದಾನದಲ್ಲಿ ಬಂದಿಲ್ಲ. ಬಹದ್ದೂರ್ ಯಾವಾಗ ಮೈದಾನದಲ್ಲಿ ಬರುತ್ತಾರೆಂದರೆ ನೋಡಿರಬಹುದು - ಬಹದ್ದೂರನ ಶಕ್ತಿಯಲ್ಲಿ ವಾದ್ಯಗಳನ್ನು ಮೊಳಗಿಸುತ್ತಾರೆ. ತಾವೂ ಸಹ ಯಾವಾಗ ಮೈದಾನದಲ್ಲಿ ಬರುತ್ತೀರೆಂದರೆ ಖುಷಿಯ ವಾದ್ಯವು ಮೊಳಗುತ್ತದೆ. ಕುಮಾರಿಯರು ಸದಾಕಾಲವೂ ಶ್ರೇಷ್ಠ ಅದೃಷ್ಟವಂತರಾಗಿದ್ದೀರಿ. ಕುಮಾರಿಯರಿಗೆ ಸೇವೆಯ ಬಹಳ ಒಳ್ಳೆಯ ಅವಕಾಶವಿದೆ ಮತ್ತು ಸಿಗುತ್ತದೆ, ಏಕೆಂದರೆ ಸೇವೆಯು ಬಹಳಷ್ಟಿದೆ ಮತ್ತು ಸೇವಾಧಾರಿಗಳು ಕಡಿಮೆಯಿದ್ದಾರೆ. ಯಾವಾಗ ಸೇವಾಧಾರಿಗಳು ಸೇವೆಯಲ್ಲಿ ಹೊರ ಬರುತ್ತಾರೆಂದರೆ ಎಷ್ಟೊಂದು ಸೇವೆಯಾಗಿ ಬಿಡುತ್ತ್ತದೆ. ನೋಡುತ್ತೇವೆ - ಕುಮಾರಿಯರು ಎಷ್ಟು ಚಮತ್ಕಾರವನ್ನು ಮಾಡುತ್ತಾರೆ. ಸಾಧಾರಣ ಕಾರ್ಯವನ್ನಂತು ಎಲ್ಲರೂ ಮಾಡುವರು ಆದರೆ ತಾವು ವಿಶೇಷ ಕಾರ್ಯವನ್ನು ಮಾಡಿ ತೋರಿಸಿರಿ. ಕುಮಾರಿಯರು ಮನೆಯ ಶೃಂಗಾರವಾಗಿದ್ದೀರಿ. ಲೌಕಿಕದಲ್ಲಿಯೂ ಕುಮಾರಿಯರನ್ನು ಏನಾದರೂ ತಿಳಿಯಲಿ ಆದರೆ ಪಾರಲೌಕಿಕ ಮನೆಯಲ್ಲಿ ಕುಮಾರಿಯರು ಮಹಾನ್ ಆಗಿದ್ದಾರೆ. ಕುಮಾರಿಯರಿದ್ದಾರೆಂದರೆ ಸೇವಾಕೇಂದ್ರವು ಶೋಭೆಯಿರುತ್ತದೆ. ಮಾತೆಯರಿಗಾಗಿಯೂ ವಿಶೇಷ ಲಿಫ್ಟ್ ಇದೆ. ಮೊದಲು ಮಾತಾ ಗುರುವಾಗಿದ್ದಾರೆ. ತಂದೆಯು ಮಾತಾ ಗುರುವನ್ನು ಮುಂದಿಟ್ಟರು ಆಗಲೇ ಭವಿಷ್ಯದಲ್ಲಿ ಮಾತೆಯರ ಹೆಸರು ಮೊದಲ ನಂಬರಿನಲ್ಲಿದೆ. ಒಳ್ಳೆಯದು.

ನಿಮಿತ್ತ ಶಿಕ್ಷಕಿಯರೊಂದಿಗೆ:- ಟೀಚರ್ಸ್ ಅರ್ಥಾತ್ ತಂದೆಯ ಸಮಾನರು. ಹೇಗೆ ತಂದೆಯೋ ಹಾಗೆಯೇ ನಿಮಿತ್ತ ಸೇವಾಧಾರಿಗಳು. ತಂದೆಯು ನಿಮಿತ್ತನಾಗಿದ್ದಾರೆ ಅಂದಮೇಲೆ ಸೇವಾಧಾರಿಯೂ ಸಹ ನಿಮಿತ್ತ ಆತ್ಮರಾಗಿದ್ದಾರೆ. ನಿಮಿತ್ತನೆಂದು ತಿಳಿಯುವುದರಿಂದ ಸ್ವತಹವಾಗಿಯೇ ತಂದೆಯ ಸಮಾನರಾಗುವ ಸಂಸ್ಕಾರವು ಪ್ರತ್ಯಕ್ಷದಲ್ಲಿ ಬರುತ್ತದೆ. ಒಂದುವೇಳೆ ನಿಮಿತ್ತರೆಂದು ತಿಳಿಯುವುದಿಲ್ಲವೆಂದರೆ ತಂದೆಯ ಸಮಾನರಾಗಲು ಸಾಧ್ಯವಿಲ್ಲ. ಅಂದಮೇಲೆ ಒಂದು ನಿಮಿತ್ತ, ಇನ್ನೊಂದು ಭಿನ್ನ ಹಾಗೂ ಪ್ರಿಯರಾಗುವುದು. ಇದು ತಂದೆಯ ವಿಶೇಷತೆಯಾಗಿದೆ. ಪ್ರಿಯನೂ ಆಗುತ್ತಾರೆ ಮತ್ತು ಭಿನ್ನವೂ ಇರುತ್ತಾರೆ. ಭಿನ್ನವಾಗಿದ್ದು ಪ್ರಿಯವಾಗುತ್ತಾರೆ. ಅಂದಮೇಲೆ ತಂದೆಯ ಸಮಾನ ಅರ್ಥಾತ್ ಅತಿ ಭಿನ್ನ ಹಾಗೂ ಅತಿ ಪ್ರಿಯ. ಅನ್ಯರಿಂದ ಭಿನ್ನ ಮತ್ತು ತಂದೆಗೆ ಪ್ರಿಯ. ಇದು ಸಮಾನತೆಯಾಯಿತು. ತಂದೆಯ ಇವೆರಡೇ ವಿಶೇಷತೆಯಿದೆ. ಅಂದಮೇಲೆ ತಂದೆಯ ಸಮಾನ ಸೇವಾಧಾರಿಗಳೂ ಹೀಗಿದ್ದಾರೆ. ಇದೇ ವಿಶೇಷತೆಯನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳುತ್ತಾ ಸಹಜವಾಗಿ ಮುಂದುವರೆಯುತ್ತೀರಿ. ಪರಿಶ್ರಮ ಪಡಬೇಕಾಗುವುದಿಲ್ಲ. ಎಲ್ಲಿ ನಿಮಿತ್ತರಿದ್ದೀರಿ, ಅಲ್ಲಿ ಸಫಲತೆಯಿದ್ದೇ ಇರುತ್ತದೆ. ಅಲ್ಲಿ ನನ್ನದೆನ್ನುವುದು ಬರಲು ಸಾಧ್ಯವಿಲ್ಲ. ಎಲ್ಲಿ ನನ್ನದಿರುತ್ತದೆ ಅಲ್ಲಿ ಸಫಲತೆಯಾಗುವುದಿಲ್ಲ. ನಿಮಿತ್ತ ಭಾವವು ಸಫಲತೆಯ ಬೀಗದ ಕೈ ಆಗಿದೆ. ಯಾವಾಗ ಅಲ್ಪಕಾಲದ ಲೌಕಿಕ ನನ್ನದೆನ್ನುವುದು ಬಿಡುತ್ತೀರಿ, ಆಗ ಮತ್ತೆ ನನ್ನದೆಲ್ಲಿಂದ ಬರುತ್ತದೆ. ನನ್ನದಕ್ಕೆ ಬದಲಾಗಿ ಬಾಬಾ ಬಾಬಾ ಎಂದು ಹೇಳುವುದರಿಂದ ಸದಾ ಸುರಕ್ಷಿತವಾಗಿ ಬಿಡುತ್ತದೆ. ನನ್ನ ಸೇವಾಕೇಂದ್ರವಲ್ಲ, ಬಾಬಾರವರ ಸೇವಾಕೇಂದ್ರ. ನನ್ನ ವಿದ್ಯಾರ್ಥಿಯಲ್ಲ, ತಂದೆಯ ವಿದ್ಯಾರ್ಥಿ. ನನ್ನದು ಸಮಾಪ್ತಿಯಾಗಿ ನಿನ್ನದಾಗಿ ಬಿಡುತ್ತದೆ. ನಿನ್ನದು ಎಂದು ಹೇಳುವುದು ಅರ್ಥಾತ್ ಹಾರುವುದು. ಅಂದಮೇಲೆ ನಿಮಿತ್ತ ಶಿಕ್ಷಕ ಅರ್ಥಾತ್ ಹಾರುವ ಕಲೆಯ ಉದಾಹರಣೆ. ಹೇಗೆ ತಾವು ಹಾರುವ ಕಲೆಯ ಉದಾಹರಣೆಯಾಗುತ್ತೀರಿ, ಹಾಗೆಯೇ ಅನ್ಯರೂ ಆಗುವರು. ಬಯಸದಿದ್ದರೂ ಯಾರಿಗೆ ನಿಮಿತ್ತರಾಗುತ್ತೀರಿ, ಅವರಲ್ಲಿ ಆ ಪ್ರಕಂಪನಗಳು ಸ್ವತಹವಾಗಿ ಬಂದು ಬಿಡುತ್ತದೆ. ಅಂದಮೇಲೆ ನಿಮಿತ್ತ ಶಿಕ್ಷಕ, ಸೇವಾಧಾರಿಯು ಸದಾ ಭಿನ್ನವಾಗಿದ್ದಾರೆ, ಸದಾ ಪ್ರಿಯವಾಗಿದ್ದಾರೆ. ಎಂದಾದರೂ ಯಾವುದೇ ಪರೀಕ್ಷೆಯು ಬರುತ್ತದೆಯೆಂದರೆ ಅದರಲ್ಲಿ ಉತ್ತೀರ್ಣರಾಗುವವರಾಗಿದ್ದಾರೆ. ನಿಶ್ಚಯಬುದ್ಧಿ ವಿಜಯಿಯಾಗಿದ್ದಾರೆ.

ಪಾರ್ಟಿಯೊಂದಿಗೆ:-
1. ಸದಾ ಸ್ವಯಂನ್ನು ಡಬಲ್ಲೈಟ್ ಫರಿಶ್ತಾ ಅನುಭವ ಮಾಡುತ್ತೀರಾ? ಫರಿಶ್ತಾ ಅರ್ಥಾತ್ ಯಾರ ಪ್ರಪಂಚದಲ್ಲಿ ಒಬ್ಬ ತಂದೆಯೇ ಇದ್ದಾರೆ. ಇಂತಹ ಫರಿಶ್ತೆಗಳು ಸದಾ ತಂದೆಗೆ ಪ್ರಿಯರಾಗಿದ್ದಾರೆ. ಫರಿಶ್ತಾ ಅರ್ಥಾತ್ ದೇಹ ಮತ್ತು ದೇಹದ ಸಂಬಂಧಗಳೊಂದಿಗೆ ಯಾವುದೆ ಆಕರ್ಷಣೆಯಿಲ್ಲ. ನಿಮಿತ್ತವಾಗಿ ದೇಹದಲ್ಲಿದ್ದೇವೆ ಮತ್ತು ದೇಹದ ಸಂಬಂಧಿಗಳೊಂದಿಗೆ ಕಾರ್ಯದಲ್ಲಿ ಬರುತ್ತೇವೆ ಆದರೆ ಸೆಳೆತವಿಲ್ಲ ಏಕೆಂದರೆ ಫರಿಶ್ತೆಗಳ ಸಂಬಂಧವು ಮತ್ತ್ಯಾರೊಂದಿಗೆ ಇರುವುದಿಲ್ಲ. ಫರಿಶ್ತೆಯ ಸಂಬಂಧವು ಒಬ್ಬ ತಂದೆಯ ಜೊತೆಯಿದೆ. ಇಂತಹ ಫರಿಶ್ತೆಯಾಗಿದ್ದೀರಲ್ಲವೆ. ಈಗೀಗ ದೇಹದಲ್ಲಿ ಕರ್ಮವನ್ನು ಮಾಡುವುದಕ್ಕಾಗಿ ಬರುವುದು ಮತ್ತು ಈಗೀಗ ದೇಹದಿಂದ ಭಿನ್ನ. ಫರಿಶ್ತೆಯು ಸೆಕೆಂಡಿನಲ್ಲಿ ಇಲ್ಲಿ, ಸೆಕೆಂಡಿನಲ್ಲಿ ಅಲ್ಲಿ. ಏಕೆಂದರೆ ಹಾರುವವರಾಗಿರುತ್ತಾರೆ. ಕರ್ಮವನ್ನು ಮಾಡುವುದಕ್ಕಾಗಿ ದೇಹದ ಆಧಾರವನ್ನು ತೆಗೆದುಕೊಳ್ಳಲಾಯಿತು ಮತ್ತು ನಂತರ ಮೇಲೆ. ಇಂತಹ ಅನುಭವವನ್ನು ಮಾಡುವವರಾಗಿದ್ದೀರಾ? ಒಂದುವೇಳೆ ಎಲ್ಲಿಯೇ ಸೆಳೆತವಿದೆ, ಬಂಧನವಿದೆಯೆಂದರೆ ಬಂಧನವಿರುವವರು ಹಾರಲು ಸಾಧ್ಯವಿಲ್ಲ. ಅವರು ಕೆಳಗೆ ಬಂದು ಬಿಡುತ್ತಾರೆ. ಫರಿಶ್ತೆ ಅರ್ಥಾತ್ ಸದಾ ಹಾರುವ ಕಲೆಯವರು. ಕೆಳಗೆ ಮೇಲೆ ಆಗುವವರಲ್ಲ. ಸದಾ ಶ್ರೇಷ್ಠ ಸ್ಥಿತಿಯಲ್ಲಿರುವವರು. ಫರಿಶ್ತೆಗಳ ಪ್ರಪಂಚದಲ್ಲಿರುವವರು. ಅಂದಮೇಲೆ ಫರಿಶ್ತೆಯೆಂಬ ಸ್ಮೃತಿ ಸ್ವರೂಪರಾದಿರೆಂದರೆ ಎಲ್ಲಾ ಬಂಧನಗಳು ಸಮಾಪ್ತಿ. ಇಂತಹ ಅಭ್ಯಾಸಿಯಾಗಿದ್ದೀರಲ್ಲವೆ. ಕರ್ಮವನ್ನು ಮಾಡಿದಿರಿ ಮತ್ತು ನಂತರದಲ್ಲಿ ಭಿನ್ನ. ಲಿಫ್ಟ್ನಲ್ಲಿ ಏನು ಮಾಡುತ್ತಾರೆ? ಈಗೀಗ ಕೆಳಗೆ, ಈಗೀಗ ಮೇಲೆ. ಕೆಳಗೆ ಬಂದಿರಿ ಕರ್ಮವನ್ನು ಮಾಡಲಾಯಿತು ಮತ್ತು ನಂತರ ಸ್ವಿಚ್ ಆನ್ ಮಾಡಲಾಯಿತು ಮತ್ತು ಮೇಲೆ. ಇಂತಹ ಅಭ್ಯಾಸಿಯಾಗಿರಿ. ಒಳ್ಳೆಯದು. ಓಂ ಶಾಂತಿ.

2. ಎಲ್ಲರೂ ಆತ್ಮಿಕ ಗುಲಾಬಿಯಾಗಿದ್ದೀರಲ್ಲವೆ! ಮಲ್ಲಿಗೆಯಾಗಿದ್ದೀರಾ ಅಥವಾ ಗುಲಾಬಿಯೇ? ಹೇಗೆ ಗುಲಾಬಿ ಹೂವು ಎಲ್ಲಾ ಹೂಗಳಿಗಿಂತಲೂ ಶ್ರೇಷ್ಠವೆಂದು ಗಾಯನಗೊಳ್ಳುತ್ತದೆ. ಹಾಗೆಯೇ ಆತ್ಮಿಕ ಗುಲಾಬಿ ಅರ್ಥಾತ್ ಶ್ರೇಷ್ಠಾತ್ಮರು. ಆತ್ಮಿಕ ಗುಲಾಬಿಯು ಸದಾ ಆತ್ಮೀಯಲ್ಲಿರುವವರು, ಸದಾ ಆತ್ಮಿಕ ನಶೆಯಲ್ಲಿರುವವರು. ಸದಾ ಆತ್ಮಿಕ ಸೇವೆಯಲ್ಲಿರುವವರು - ಇಂತಹ ಆತ್ಮಿಕ ಗುಲಾಬಿ ಆಗಿದ್ದೀರಿ. ವರ್ತಮಾನ ಸಮಯದನುಸಾರವಾಗಿ ಆತ್ಮೀಯತೆಯ ಅವಶ್ಯಕತೆಯಿದೆ. ಆತ್ಮೀಯತೆಯಿಲ್ಲದಿರುವ ಕಾರಣದಿಂದಲೇ ಜಗಳ-ಕಲಹಗಳೆಲ್ಲವೂ ಇದೆ. ಅಂದಮೇಲೆ ಆತ್ಮಿಕ ಗುಲಾಬಿಯಾಗಿದ್ದು ಆತ್ಮೀಯತೆಯ ಸುಗಂಧವನ್ನು ಹರಡಿಸುವವರು - ಇದೇ ಬ್ರಾಹ್ಮಣ ಜೀವನದ ವೃತ್ತಿಯೂ ಆಗಿದೆ. ಸದಾ ಇದೇ ವೃತ್ತಿಯಲ್ಲಿ ವ್ಯಸ್ತವಾಗಿರಿ.

ವರದಾನ:
ವರದಾನ: ಬ್ರಹ್ಮಾ ತಂದೆಯ ಸಮಾನ ಜೀವನ್ಮುಕ್ತ ಸ್ಥಿತಿಯ ಅನುಭವ ಮಾಡುವಂತಹ ಕರ್ಮದ ಬಂಧನಗಳಿಂದ ಮುಕ್ತ ಭವ.

ಬ್ರಹ್ಮಾ ತಂದೆಯು ಕರ್ಮವನ್ನು ಮಾಡುತ್ತಿದ್ದರೂ ಕರ್ಮಗಳ ಬಂಧನದಲ್ಲಿ ಸಿಲುಕಲಿಲ್ಲ. ಸಂಬಂಧಗಳನ್ನು ನಿಭಾಯಿಸುತ್ತಿದ್ದರೂ ಸಂಬಂಧಗಳ ಬಂಧನದಲ್ಲಿ ಬಂಧಿತರಾಗಲಿಲ್ಲ. ಅವರು ಹಣ ಮತ್ತು ಸಾಧನಗಳ ಬಂಧನಗಳಿಂದಲೂ ಮುಕ್ತರಾಗಿದ್ದರು, ಜವಾಬ್ದಾರಿಯನ್ನು ಸಂಭಾಲನೆ ಮಾಡುತ್ತಿದ್ದರೂ ಜೀವನ್ಮುಕ್ತ ಸ್ಥಿತಿಯ ಅನುಭವ ಮಾಡಿದರು. ಹೀಗೆಯೇ ಫಾಲೋ ಫಾದರ್ ಮಾಡಿರಿ. ಯಾವುದೇ ಹಿಂದಿನ ಲೆಕ್ಕಾಚಾರಗಳ ಬಂಧನದಲ್ಲಿ ಬಂಧಿತರಾಗಬಾರದು. ಸಂಸ್ಕಾರ, ಸ್ವಭಾವ, ಪ್ರಭಾವ ಮತ್ತು ಒತ್ತಡಗಳ ಬಂಧನದಲ್ಲಿಯೂ ಬರಬಾರದು, ಆಗಲೇ ಕರ್ಮ ಬಂಧನ ಮುಕ್ತ, ಜೀವನ್ಮುಕ್ತ ಎಂದು ಹೇಳಲಾಗುತ್ತದೆ.

ಸ್ಲೋಗನ್:
ಸ್ಲೋಗನ್: ತಮ್ಮ ಆತ್ಮಿಕ ವೃತ್ತಿಯಿಂದ ಪ್ರವೃತ್ತಿಯ ಸರ್ವ ಪರಿಸ್ಥಿತಿಗಳನ್ನು ಪರಿವರ್ತನೆ ಮಾಡಿ ಬಿಡಿ.