13.02.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಸದಾ ತಂದೆಯ ನೆನಪಿನ ಚಿಂತನೆ ಮತ್ತು ಜ್ಞಾನದ ವಿಚಾರಸಾಗರ ಮಂಥನ ಮಾಡಿದಾಗ ಹೊಸ-ಹೊಸ ಅಂಶಗಳು ಹೊರ ಬರುತ್ತಿರುತ್ತವೆ, ಖುಷಿಯಲ್ಲಿರುತ್ತೀರಿ.”

ಪ್ರಶ್ನೆ:
ಈ ಡ್ರಾಮಾದಲ್ಲಿ ಅತೀ ದೊಡ್ಡ ಚಮತ್ಕಾರವೇನಾಗಿದೆ ಮತ್ತು ಏಕೆ?

ಉತ್ತರ:
1. ಎಲ್ಲದಕ್ಕಿಂತ ಅತೀ ದೊಡ್ಡ ಚಮತ್ಕಾರ ಶಿವತಂದೆಯದಾಗಿದೆ ಏಕೆಂದರೆ ನಿಮ್ಮನ್ನು ಸೆಕೆಂಡಿನಲ್ಲಿ ಅತೀ ಸುಂದರರನ್ನಾಗಿ ಮಾಡಿ ಬಿಡುತ್ತಾರೆ. ಇಂತಹ ವಿದ್ಯೆಯನ್ನು ಓದಿಸುತ್ತಾರೆ ಅದರಿಂದ ನೀವು ಮನುಷ್ಯರಿಂದ ದೇವತೆಗಳಾಗಿ ಬಿಡುತ್ತೀರಿ. ಪ್ರಪಂಚದಲ್ಲಿ ಇಂತಹ ವಿದ್ಯೆಯನ್ನು ತಂದೆಯ ವಿನಃ ಮತ್ತ್ಯಾರೂ ಓದಿಸಲು ಸಾಧ್ಯವಿಲ್ಲ. 2. ಜ್ಞಾನದ ಮೂರನೆಯ ನೇತ್ರವನ್ನು ಕೊಟ್ಟು ಅಂಧಕಾರ (ಕತ್ತಲು) ದಿಂದ ಬೆಳಕಿನಲ್ಲಿ ಕರೆದುಕೊಂಡು ಬರಬೇಕು, ಪೆಟ್ಟು ತಿನ್ನುವುದರಿಂದ ಪಾರು ಮಾಡುವುದು, ಇದು ತಂದೆಯ ಕಾರ್ಯವಾಗಿದೆ. ಆದ್ದರಿಂದ ಅವರಂತಹ ಚಮತ್ಕಾರ ಅದ್ಭುತವಾದ ಕಾರ್ಯವನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ.

ಓಂ ಶಾಂತಿ.
ಆತ್ಮಿಕ ತಂದೆಯು ಪ್ರತಿ ದಿನ ಮಕ್ಕಳಿಗೆ ತಿಳಿಸುತ್ತಾರೆ ಮತ್ತು ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯಿಂದ ಕೇಳುತ್ತಿದ್ದೀರಿ. ಹೇಗೆ ತಂದೆಯು ಗುಪ್ತವಾಗಿದ್ದಾರೆಯೋ ಹಾಗೆಯೇ ಜ್ಞಾನವೂ ಗುಪ್ತವಾಗಿದೆ. ಏಕೆಂದರೆ ಆತ್ಮವು ಏನಾಗಿದೆ, ಪರಮಪಿತ ಪರಮಾತ್ಮ ಏನಾಗಿದ್ದಾರೆ ಎಂದು ಯಾರಿಗೂ ಸಹ ತಿಳಿಸಲು ಬರುವುದಿಲ್ಲ. ನಾವು ಆತ್ಮಗಳಾಗಿದ್ದೇವೆ ಎಂದು ನೀವು ಮಕ್ಕಳಿಗೆ ಪಕ್ಕಾ ಅಭ್ಯಾಸವಾಗಬೇಕಾಗಿದೆ. ತಂದೆಯು ನಾವು ಆತ್ಮಗಳಿಗೆ ಹೇಳುತ್ತಿದ್ದಾರೆ. ಬುದ್ಧಿಯಿಂದ ತಿಳಿದು ಪಾತ್ರದಲ್ಲಿ ಇದನ್ನು ತರಬೇಕು ಬಾಕಿ ಕೆಲಸ ಮುಂತಾದವುಗಳಂತೂ ಮಾಡಲೇಬೇಕಾಗಿದೆ. ಯಾರನ್ನೇ ಕರೆಯುತ್ತಾರೆಂದರೆ ಹೆಸರಿನಿಂದ ಕರೆಯುತ್ತಾರೆ. ನಾಮ-ರೂಪವಿದ್ದರೆ ಹೇಳಲು ಸಾಧ್ಯ, ಏನಾದರೂ ಮಾಡಲು ಸಾಧ್ಯ. ಕೇವಲ ಇದನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ- ನಾವು ಆತ್ಮರಾಗಿದ್ದೇವೆ. ಮಹಿಮೆಯಲ್ಲವೂ ನಿರಾಕಾರನದಾಗಿದೆ. ಒಂದು ವೇಳೆ ಸಾಕಾರದಲ್ಲಿ ದೇವತೆಗಳ ಮಹಿಮೆಯಿದೆ ಆದರೆ ಅವರನ್ನೂ ಸಹ ಮಹಿಮಾಯೋಗ್ಯರನ್ನಾಗಿ ತಂದೆಯೇ ಮಾಡುತ್ತಾರೆ. ಮಹಿಮೆಗೆ ಯೋಗ್ಯರಾಗಿದ್ದರು, ಈಗ ಪುನಃ ತಂದೆಯು ಮಹಿಮಾಯೋಗ್ಯರನ್ನಾಗಿ ಮಾಡುತ್ತಿದ್ದಾರೆ, ಆದ್ದರಿಂದ ನಿರಾಕಾರನದೇ ಮಹಿಮೆಯಿದೆ. ವಿಚಾರ ನಡೆಯುತ್ತಿರುತ್ತದೆ, ತಂದೆಯ ಮಹಿಮೆಯು ಬಹಳ ಇದೆ ಮತ್ತು ಅವರ ಸೇವೆಯೂ ಬಹಳ ಇದೆ. ಅವರು ಸಮರ್ಥರು, ಅವರು ಎಲ್ಲವನ್ನೂ ಮಾಡಲು ಸಾಧ್ಯ. ನಮ್ಮದಂತೂ ಬಹಳ ಕಡಿಮೆ ಮಹಿಮೆಯಾಗುತ್ತದೆ ಆದರೆ ಅವರ ಮಹಿಮೆಯಂತೂ ಬಹಳ ಇದೆ ಮತ್ತು ಅವರ ಸೇವೆಯೂ ಬಹಳ ಇದೆ. ಅವರು ಸಮರ್ಥರು, ಅವರು ಎಲ್ಲವನ್ನೂ ಮಾಡಲು ಸಾಧ್ಯ. ನಮ್ಮದಂತೂ ಬಹಳ ಕಡಿಮೆ ಮಹಿಮೆಯಾಗುತ್ತದೆ ಆದರೆ ಅವರ ಮಹಿಮೆಯಂತೂ ಬಹಳ ಇದೆ. ಮುಸಲ್ಮಾನರು ಹೇಳುತ್ತಾರೆ - ಅಲ್ಲಾಹ್ ಮುಸಲ್ಮಾನನು ಇಂತಹ ಆಜ್ಞೆಯನ್ನು ಹೊರಡಿಸಿದನು! ಈಗ ಯಾರ ಮುಂದೆ ಆಜ್ಞೆ? ಯಾರು ಮನುಷ್ಯರಿಂದ ದೇವತೆಗಳಾಗುತ್ತಾರೆ. ಅಂತಹ ಮಕ್ಕಳ ಮುಂದೆ ಆಜ್ಞಾಪಿಸುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಅದು ಬೇರೆ ಯಾರಿಗೂ ಗೊತ್ತಿಲ್ಲ. ಈಗ ನಿಮಗೆ ತಿಳಿದು ಬರುತ್ತದೆ ನಂತರ ಈ ಜ್ಞಾನವೇ ಪ್ರಾಯಲೋಪವಾಗಿ ಬಿಡುತ್ತದೆ. ಬೌದ್ಧಿಯರೂ ಇದೇ ರೀತಿ ಹೇಳುತ್ತಾರೆ, ಕ್ರಿಶ್ಚಿಯನ್ನರೂ ಇದೇ ರೀತಿ ಹೇಳುತ್ತಾರೆ ಆದರೆ ಆಜ್ಞಾಪನೆ ಏನಾಗಿತ್ತು, ಇದಂತೂ ಯಾರಿಗೂ ತಿಳಿದಿಲ್ಲ. ತಂದೆಯು ನೀವು ಮಕ್ಕಳಿಗೆ ತಂದೆ ಮತ್ತು ಆಸ್ತಿಯನ್ನು ತಿಳಿಸುತ್ತಿದ್ದಾರೆ. ಆತ್ಮಗಳಿಗೆ ತಂದೆಯ ನೆನಪು ಮರೆತು ಹೋಗಲು ಸಾಧ್ಯವಿಲ್ಲ. ಆತ್ಮ ಅವಿನಾಶಿಯಾಗಿದೆ ಅಂದಮೇಲೆ ನೆನಪೂ ಸಹ ಅವಿನಾಶಿಯಾಗಿರುತ್ತದೆ. ತಂದೆಯೂ ಅವಿನಾಶಿಯಾಗಿದ್ದಾರೆ, ಭಕ್ತಿಮಾರ್ಗದಲ್ಲಿ ಪ್ರಾರ್ಥನೆ ಮಾಡುತ್ತಾರೆ. ಈಗ ನಿಮ್ಮ ಬಳಿ ಯಾರೇ ಬಂದರೂ ನೀವು ತಿಳಿಸುತ್ತೀರಿ, ಅವರು ಸತೋ-ರಜೋ-ತಮೋದಲ್ಲಿ ಬರಲೇಬೇಕಾಗಿದೆ. ಕ್ರೈಸ್ತ-ಬೌದ್ಧರು ಯಾರೆಲ್ಲಾ ಬರುತ್ತಾರೆಯೋ ಅವರ ಹಿಂದೆ ಎಲ್ಲರೂ ಕೆಳಗಿಳಿದು ಬರುತ್ತಾರೆ. ಏರುವಂತಹ ಮಾತಿಲ್ಲ. ತಂದೆಯೇ ಬಂದು ಎಲ್ಲರನ್ನು ಏರುವ ಕಲೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಸರ್ವರ ಸದ್ಗತಿದಾತ ಒಬ್ಬರೇ ಆಗಿದ್ದಾರೆ ಮತ್ತ್ಯಾರೂ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ. ಇವೆಲ್ಲಾ ಮಾತುಗಳನ್ನು ತಿಳಿದುಕೊಳ್ಳುವುದಕ್ಕೆ ಬುದ್ಧಿಯು ಚೆನ್ನಾಗಿರಬೇಕಾಗಿದೆ. ಹೊಸ-ಹೊಸ ಯುಕ್ತಿಗಳನ್ನು ಮಾಡಬೇಕಾಗಿದೆ. ಶ್ರಮ ಪಡಬೇಕು, ರತ್ನಗಳು ಹೊರ ಬರುತ್ತಿರಬೇಕು. ಆದ್ದರಿಂದ ತಂದೆಯು ಹೇಳುತ್ತಾರೆ - ವಿಚಾರಸಾಗರ ಮಂಥನ ಮಾಡಿ ಬರೆಯಬೇಕು, ನಂತರ ಓದಿ ಏನೇನು ಅದರಲ್ಲಿ ತಪ್ಪಿ ಹೋಗಿದೆ? ತಂದೆಯದು ಯಾವ ಪಾತ್ರವಿದೆಯೋ ಅವರು ಮಾಡುತ್ತಿದ್ದಾರೆ. ತಂದೆಯು ಕಲ್ಪದ ಮೊದಲೂ ಸಹ ಜ್ಞಾನವನ್ನು ಹೇಳಿದ್ದರು. ಯಾವ ಧರ್ಮದ ಸ್ಥಾಪನೆಯನ್ನು ಮಾಡಲು ತಂದೆಯು ಬಂದಿದ್ದಾರೆ, ಅದರ ಹಿಂದೆ ಅವರ ಧರ್ಮದವರೂ ಸಹ ಕೆಳಗಿಳಿಯುತ್ತಾರೆ ಎಂಬುದು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಅವರು ಅನ್ಯರನ್ನು ಹೇಗೆ ಮೇಲೆತ್ತುತ್ತಾರೆ? ಏಣಿಯನ್ನು ಕೆಳಗಿಳಿಯಲೇಬೇಕು. ಮೊದಲು ಸುಖ ನಂತರ ದುಃಖ. ಈ ನಾಟಕವು ಬಹಳ ಚೆನ್ನಾಗಿ ಮಾಡಲ್ಪಟ್ಟಿದೆ. ವಿಚಾರಸಾಗರ ಮಂಥನ ಮಾಡುವ ಅವಶ್ಯಕತೆಯಿದೆ. ಅವರು ಅನ್ಯರ ಸದ್ಗತಿಯನ್ನು ಮಾಡಲು ಬರುವುದಿಲ್ಲ. ಕೇವಲ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ. ಜ್ಞಾನದ ಸಾಗರ ಒಬ್ಬರೇ ಆಗಿದ್ದಾರೆ ಬೇರೆ ಯಾರಲ್ಲಿಯೂ ಜ್ಞಾನವಿಲ್ಲ. ಡ್ರಾಮಾದಲ್ಲಿ ಸುಖ-ದುಃಖದ ಆಟವು ಎಲ್ಲರಿಗಾಗಿಯೇ ಇದೆ. ದುಃಖಕ್ಕಿಂತಲೂ ಸುಖವೇ ಹೆಚ್ಚಾಗಿದೆ. ಡ್ರಾಮಾದಲ್ಲಿ ಪಾತ್ರವನ್ನಭಿನಯಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಸುಖವಿರಬೇಕಲ್ಲವೆ. ಬಾಬಾ ಸುಖದ ಸ್ಥಾಪನೆ ಮಾಡುತ್ತಾರೆ. ವಿಶ್ವದಲ್ಲಿ ಶಾಂತಿಯಾಗುತ್ತದೆ. ದುಃಖಧಾಮದಲ್ಲಿ ಶಾಂತಿಯಿರಲು ಸಾಧ್ಯವಿಲ್ಲ. ಯಾವಾಗ ಹಿಂತಿರುಗಿ ಶಾಂತಿಧಾಮಕ್ಕೆ ಹೋಗುತ್ತೀರೋ ಆಗ ಶಾಂತಿ ಸಿಗುತ್ತದೆ. ತಂದೆಯು ಕುಳಿತು ತಿಳಿಸುತ್ತಿದ್ದಾರೆ - ಇದನ್ನು ಎಂದೂ ಮರೆಯಬಾರದು, ನಾವು ತಂದೆಯ ಜೊತೆಯಲ್ಲಿದ್ದೇವೆ. ತಂದೆಯು ಆಸುರರಿಂದ ದೇವತೆಗಳನ್ನಾಗಿ ಮಾಡಲು ಬಂದಿದ್ದಾರೆ. ದೇವತೆಗಳು ಸದ್ಗತಿಯಲ್ಲಿದ್ದಾಗ ಉಳಿದವರೆಲ್ಲರೂ ಮೂಲವತನದಲ್ಲಿರುತ್ತಾರೆ. ಡ್ರಾಮಾದಲ್ಲಿ ಅತೀ ದೊಡ್ಡ ಚಮತ್ಕಾರವು ಬೇಹದ್ದಿನ ತಂದೆಯದಾಗಿದೆ ಅವರು ನಮ್ಮನ್ನು ದೇವತೆಗಳನ್ನಾಗಿ ಮಾಡುತ್ತಾರೆ. ವಿದ್ಯೆಯಿಂದ ನೀವು ದೇವತೆಗಳಾಗುತ್ತೀರಿ. ಭಕ್ತಿಮಾರ್ಗದಲ್ಲಿ ಏನೂ ತಿಳಿಯದೆ ಮಾಲೆಯನ್ನು ಜಪಿಸುತ್ತಿರುತ್ತಾರೆ. ಕೆಲವರು ಹನುಮಂತನನ್ನು, ಕೆಲವರು ಅನ್ಯರನ್ನು ನೆನಪು ಮಾಡುತ್ತಾರೆ. ಅವರನ್ನು ನೆನಪು ಮಾಡಿದರೆ ಏನು ಲಾಭವಿದೆ? ತಂದೆಯು ಮಹಾರಥಿ ಎಂದು ಹೇಳಿದ ಕಾರಣ ಅವರು ಆನೆಯ ಮೇಲೆ ಸವಾರಿಯನ್ನು ತೋರಿಸಿದ್ದಾರೆ. ಈ ಎಲ್ಲಾ ಮಾತುಗಳನ್ನು ತಂದೆಯೇ ತಿಳಿಸಿಕೊಡುತ್ತಾರೆ. ದೊಡ್ಡ-ದೊಡ್ಡ ವ್ಯಕ್ತಿಗಳು ಎಲ್ಲಿಗೇ ಹೋಗುತ್ತಾರೆಂದರೆ ಎಷ್ಟೊಂದು ಸತ್ಕಾರ ಮಾಡುತ್ತಾರೆ! ನೀವು ಅನ್ಯರಿಗೆ ಸತ್ಕಾರ ಮಾಡುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ಈ ಸಮಯದಲ್ಲಿ ಪೂರ್ಣ ವೃಕ್ಷವು ಜಡ ಜಡೀ ಭೂತವಾಗಿದೆ, ವಿಕಾರದಿಂದ ಜನ್ಮ ಪಡೆಯುತ್ತಾರೆ. ನಿಮಗೆ ಈಗ ಅನುಭವವಾಗುತ್ತದೆ - ಸತ್ಯಯುಗದಲ್ಲಿ ಈ ಮಾತುಗಳಿರುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಪದಮಾಪತಿಯನ್ನಾಗಿ ಮಾಡುತ್ತೇನೆ, ಸುಧಾಮ ಪದಮಾಪತಿಯಾದನಲ್ಲವೆ. ಎಲ್ಲರೂ ತಮಗಾಗಿಯೇ ಮಾಡುತ್ತಾರೆ, ತಂದೆಯು ಹೇಳುತ್ತಾರೆ - ಈ ವಿದ್ಯೆಯಿಂದ ನೀವು ಎಷ್ಟೊಂದು ಶ್ರೇಷ್ಠರಾಗುತ್ತೀರಿ. ಆ ಗೀತೆಯನ್ನು ಎಲ್ಲರೂ ಕೇಳುತ್ತಾರೆ ಮತ್ತು ಓದುತ್ತಾರೆ. ಇವರು (ಬ್ರಹ್ಮಾ) ಓದುತ್ತಿದ್ದರು ಆದರೆ ತಂದೆಯು ಯಾವಾಗ ತಿಳಿಸಿದರೋ ಆಗ ಆಶ್ಚರ್ಯವಾಯಿತು. ತಂದೆಯ ಗೀತೆಯಿಂದ ಸದ್ಗತಿಯಾಯಿತು. ಮನುಷ್ಯರು ಏನೆಲ್ಲಾ ಕುಳಿತು ಮಾಡಿದ್ದಾರೆ. ಅಲ್ಲಾಹ್ ಭಗವಂತನು ಈ ರೀತಿ ಹೇಳಿದರು ಎಂದು ಹೇಳುತ್ತಾರೆ ಆದರೆ ಅಲ್ಲಾ ಯಾರೆಂದು ತಿಳಿದುಕೊಂಡಿಲ್ಲ. ದೇವಿ-ದೇವತಾ ಧರ್ಮದವರೇ ಭಗವಂತನನ್ನು ತಿಳಿದಿಲ್ಲವೆಂದಮೇಲೆ ನಂತರ ಬರುವವರು ಹೇಗೆ ತಿಳಿಯುತ್ತಾರೆ. ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆಯನ್ನೇ ತಪ್ಪು ಮಾಡಿದ್ದಾರೆ ಅಂದಮೇಲೆ ಇಲ್ಲಿ ಶಾಸ್ತ್ರಗಳಲ್ಲಿ ಏನಿರಬಹುದು? ತಂದೆಯು ನಾವು ಮಕ್ಕಳಿಗೆ ಏನನ್ನು ತಿಳಿಸಿದ್ದರೋ ಅದು ಪ್ರಾಯಃಲೋಪವಾಗಿ ಬಿಟ್ಟಿದೆ. ಈಗ ನೀವು ತಂದೆಯಿಂದ ಕೇಳಿ ದೇವತೆಗಳಾಗುತ್ತಿದ್ದೀರಿ. ಹಳೆಯ ಪ್ರಪಂಚದ ಲೆಕ್ಕಾಚಾರವಂತೂ ಇಲ್ಲಿಯೇ ಸಮಾಪ್ತಿ ಮಾಡಬೇಕು ಆಗ ಆತ್ಮವು ಪವಿತ್ರವಾಗಿ ಬಿಡುತ್ತದೆ. ಸಂಕಲ್ಪ ಲೆಕ್ಕಾಚಾರವಿದ್ದರೂ ಸಹ ಅದು ಸಮಾಪ್ತಿಯಾಗುವುದು. ನಾವೇ ಮೊದಲು ಹೋಗುತ್ತೇವೆ ಮತ್ತು ನಾವೇ ಮೊಟ್ಟ ಮೊದಲು ಬರುತ್ತೇವೆ. ಉಳಿದವರೆಲ್ಲರೂ ಶಿಕ್ಷೆಯನ್ನನುಭವಿಸಿ ಲೆಕ್ಕಾಚಾರವನ್ನು ಸಮಾಪ್ತಿ ಮಾಡುತ್ತಾರೆ. ಈ ಮಾತುಗಳಲ್ಲಿ ಹೆಚ್ಚಿಗೆ ಹೋಗಬೇಡಿ. ಮೊದಲು ಈ ನಿಶ್ಚಯ ಮಾಡಿಸಿ - ಎಲ್ಲರ ಸದ್ಗತಿದಾತ ತಂದೆಯಾಗಿದ್ದಾರೆ. ಶಿಕ್ಷಕ, ಗುರುವೂ ಸಹ ಅವರೇ ಆಗಿದ್ದಾರೆ, ಅಶರೀರಿಯಾಗಿದ್ದಾರೆ. ಆತನಲ್ಲಿ ಎಷ್ಟೊಂದು ಜ್ಞಾನವಿದೆ. ಅವರು ಜ್ಞಾನದ ಸಾಗರ, ಸುಖದ ಸಾಗರನಾಗಿದ್ದಾರೆ. ಅವರದು ಎಷ್ಟೊಂದು ಮಹಿಮೆಯಿದೆ. ಹಾಗೆ ನೋಡಿದರೆ ಅವರೂ ಆತ್ಮನಾಗಿದ್ದಾರೆ, ಆತ್ಮವೇ ಬಂದು ಶರೀರದಲ್ಲಿ ಪ್ರವೇಶ ಮಾಡುತ್ತದೆ. ಪರಮಪಿತ ಪರಮಾತ್ಮನ ವಿನಃ ಮತ್ತ್ಯಾವುದೇ ಆತ್ಮಕ್ಕೆ ಮಹಿಮೆ ಮಾಡಲು ಸಾಧ್ಯವಿಲ್ಲ. ಮತ್ತೆಲ್ಲರೂ ಶರೀರಧಾರಿಗಳ ಮಹಿಮೆ ಮಾಡುತ್ತಾರೆ ಆದರೆ ಇವರು ಪರಮ ಆತ್ಮನಾಗಿದ್ದಾರೆ. ಶರೀರವಿಲ್ಲದೇ ಆತ್ಮದ ಮಹಿಮೆಯು ಒಬ್ಬ ನಿರಾಕಾರ ತಂದೆಯ ವಿನಃ ಮತ್ತ್ಯಾರಿಗೂ ಮಾಡಲು ಸಾಧ್ಯವಿಲ್ಲ. ಆತ್ಮದಲ್ಲಿಯೇ ಜ್ಞಾನದ ಸಂಸ್ಕಾರವಿದೆ. ತಂದೆಯಲ್ಲಿ ಎಷ್ಟೊಂದು ಜ್ಞಾನದ ಸಂಸ್ಕಾರವಿದೆ. ಪ್ರೀತಿಯ ಸಾಗರ, ಜ್ಞಾನದ ಸಾಗರ....... ಇದು ಆತ್ಮನ ಮಹಿಮೆಯೇ? ಯಾವುದೇ ಮನುಷ್ಯರಿಗೆ ಈ ಮಹಿಮೆಯಾಗಲು ಸಾಧ್ಯವಿಲ್ಲ, ಕೃಷ್ಣನಿಗೂ ಸಹ ಆಗಲು ಸಾಧ್ಯವಿಲ್ಲ. ಆತ್ಮನು ವಿಶ್ವದ ಮೊದಲನೇ ರಾಜಕುಮಾರನಾಗಿದ್ದಾನೆ. ತಂದೆಯಲ್ಲಿ ಎಲ್ಲಾ ಜ್ಞಾನವಿದೆ, ಅವರೇ ಬಂದು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಆದ್ದರಿಂದ ಅವರ ಮಹಿಮೆಯನ್ನು ಮಾಡಲಾಗುತ್ತದೆ. ಶಿವ ಜಯಂತಿಯು ವಜ್ರ ಸಮಾನವಾಗಿದೆ, ಧರ್ಮ ಸ್ಥಾಪಕರು ಬರುತ್ತಾರೆ, ಅವರು ಏನು ಮಾಡುತ್ತಾರೆ? ತಿಳಿಯಿರಿ, ಕ್ರೈಸ್ಟ್ ಬಂದರು ಆ ಸಮಯದಲ್ಲಂತೂ ಕ್ರಿಶ್ಚಿಯನ್ನರಿರಲಿಲ್ಲ ಅಂದಮೇಲೆ ಅವರಿಗೆ ಯಾರು ಯಾವ ಜ್ಞಾನವನ್ನು ಕೊಡುತ್ತಾರೆ? ಭಲೇ ಒಳ್ಳೆಯ ನಡುವಳಿಕೆಯಿಂದ ನಡೆಯಿರಿ ಎಂದು ಹೇಳಬಹುದು ಆದರೆ ಈ ಮಾತನ್ನು ಅನೇಕ ಮನುಷ್ಯರೂ ತಿಳಿಸುತ್ತಿರುತ್ತಾರೆ ಬಾಕಿ ಸದ್ಗತಿಯ ಜ್ಞಾನವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಅವರಿಗೆ ತಮ್ಮ ತಮ್ಮದೇ ಆದ ಪಾತ್ರವು ಸಿಕ್ಕಿದೆ. ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಕ್ರಿಸ್ತನು ಬರುತ್ತಿದ್ದಂತೆಯೇ ಕ್ರಿಶ್ಚಿಯನ್ನರ ಚರ್ಚ್ ಹೇಗಾಗುತ್ತದೆ? ಯಾವಾಗ ಅನೇಕರು ಬರುತ್ತಾರೆ, ಭಕ್ತಿಯು ಪ್ರಾರಂಭವಾಗುವುದೋ ಆಗ ಚರ್ಚ್ನ್ನು ಕಟ್ಟುತ್ತಾರೆ. ಅದರಲ್ಲಿ ಬಹಳಷ್ಟು ಹಣವು ಬೇಕು. ಯುದ್ಧದಲ್ಲಿಯೂ ಹಣ ಬೇಕಾಗುತ್ತದೆ ಅಂದಾಗ ತಂದೆಯು ತಿಳಿಸುತ್ತಾರೆ - ಇದು ಮನುಷ್ಯ ಸೃಷ್ಟಿಯ ವೃಕ್ಷವಾಗಿದೆ. ವೃಕ್ಷವೆಂದಾದರೂ ಲಕ್ಷಾಂತರ ವರ್ಷಗಳದ್ದಾಗಿರುತ್ತದೆಯೇ? ಅದಕ್ಕೆ ಲೆಕ್ಕವಿರುವುದಿಲ್ಲ. ತಂದೆಯು ತಿಳಿಸುತ್ತಾರೆ - ಹೇ ಮಕ್ಕಳೇ, ನೀವು ಎಷ್ಟೊಂದು ಬುದ್ಧಿಹೀನರಾಗಿ ಬಿಟ್ಟಿದ್ದಿರಿ. ಈಗ ನೀವು ಬುದ್ಧಿವಂತರಾಗಿದ್ದೀರಿ. ರಾಜ್ಯ ಮಾಡಲು ಮೊದಲಿನಿಂದಲೇ ತಯಾರಾಗಿ ಬಿಡುತ್ತೀರಿ. ಅವರಂತೂ ಒಂಟಿಯಾಗಿ ಬರುತ್ತಾರೆ ನಂತರ ವೃದ್ಧಿಯಾಗುತ್ತದೆ. ವೃಕ್ಷದ ಬುನಾದಿಯು ದೇವಿ-ದೇವತಾ ಧರ್ಮ, ಅದರಿಂದ ಮತ್ತೆ 3 ಕೊಂಬೆಗಳು ಹೊರಡುತ್ತದೆ. ನಂತರ ಚಿಕ್ಕ-ಚಿಕ್ಕ ಮಠ-ಪಂಥಗಳು ಬರುತ್ತವೆ, ವೃದ್ಧಿಯಾಗುತ್ತದೆ ಮತ್ತೆ ಅವರದು ಸ್ವಲ್ಪ ಮಹಿಮೆಯಾಗಿ ಬಿಡುತ್ತದೆ ಆದರೆ ಲಾಭವೇನೂ ಇಲ್ಲ. ಎಲ್ಲರೂ ಕೆಳಗೆ ಬರಲೇಬೇಕಾಗಿದೆ. ಈಗ ನಿಮಗೆ ಪೂರ್ಣ ಜ್ಞಾನವು ಸಿಗುತ್ತಿದೆ. ಭಗವಂತನು ಜ್ಞಾನ ಸಾಗರನೆಂದು ಹೇಳುತ್ತಾರೆ ಆದರೆ ಅವರಲ್ಲಿ ಯಾವ ಜ್ಞಾನವಿದೆ ಎಂಬುದು ಯಾರಿಗೂ ಗೊತ್ತಿಲ್ಲ. ನಿಮಗೀಗ ಜ್ಞಾನವು ಸಿಗುತ್ತಿದೆ, ಭಾಗ್ಯಶಾಲಿ ರಥವಂತೂ ಅವಶ್ಯವಾಗಿ ಬೇಕು. ತಂದೆಯು ಸಾಧಾರಣ ತನುವಿನಲ್ಲಿ ಬರುತ್ತಾರೆ ಆಗ ಇವರು (ಬ್ರಹ್ಮಾ) ಭಾಗ್ಯಶಾಲಿಯಾಗುತ್ತಾರೆ. ಸತ್ಯಯುಗದಲ್ಲಿ ಎಲ್ಲರೂ ಭಾಗ್ಯಶಾಲಿಯಾಗಿರುತ್ತಾರೆ. ಈಗ ನಿಮಗೆ ಜ್ಞಾನದ ಮೂರನೇ ನೇತ್ರವು ಸಿಗುತ್ತದೆ ಇದರಿಂದ ನೀವು ಲಕ್ಷ್ಮೀ-ನಾರಾಯಣರ ಸಮಾನರಾಗುತ್ತೀರಿ. ಜ್ಞಾನವಂತೂ ಒಂದೇ ಸಾರಿ ಸಿಗುತ್ತದೆ, ಭಕ್ತಿಯಲ್ಲಂತೂ ಮೋಸ ಹೋಗುತ್ತಾರೆ ಅಂಧಕಾರವಿದೆ. ಜ್ಞಾನವು ದಿನವಾಗಿದೆ, ದಿನದಲ್ಲಿ ಮೋಸ ಹೋಗುವುದಿಲ್ಲ. ತಂದೆಯು ತಿಳಿಸುತ್ತಾರೆ - ಭಲೇ ಮನೆಯಲ್ಲಿ ಗೀತಾ ಪಾಠಶಾಲೆಯನ್ನು ತೆರೆಯಿರಿ. ಅನೇಕರು ಹೀಗಿದ್ದಾರೆ - ನಾವಂತೂ ಜ್ಞಾನವನ್ನು ಪಡೆಯುವುದಿಲ್ಲ, ಬೇರೆಯವರಿಗಾಗಿ ಸ್ಥಳವನ್ನು ಕೊಡುತ್ತೇವೆ. ಇದು ಒಳ್ಳೆಯದೇ ಆಗಿದೆ. ಇಲ್ಲಿ ಬಹಳ ಶಾಂತಿಯಿಂದಿರಬೇಕು. ಇದು ಹೋಲಿಯಸ್ಟ್ ಆಫ್ ಹೋಲಿ ಕ್ಲಾಸ್ ಆಗಿದೆ. ಇಲ್ಲಿ ಶಾಂತಿಯಲ್ಲಿ ತಂದೆಯನ್ನು ನೆನಪು ಮಾಡುತ್ತೀರಿ. ನಾವೀಗ ಶಾಂತಿಧಾಮಕ್ಕೆ ಹೋಗಬೇಕಾಗಿದೆ. ಆದ್ದರಿಂದ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಸತ್ಯಯುಗದಲ್ಲಿ 21 ಜನ್ಮಗಳಿಗಾಗಿ ನೀವು ಸುಖ-ಶಾಂತಿ ಎರಡನ್ನೂ ಪಡೆಯುತ್ತೀರಿ. ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡುವವರಾಗಿದ್ದಾರೆ ಅಂದಾಗ ಇಂತಹ ತಂದೆಯನ್ನು ಅನುಸರಿಸಬೇಕು, ಇದರಲ್ಲಿ ಅಹಂಕಾರವಿರಬಾರದು, ಇದು ಕೆಳಗೆ ಬೀಳಿಸುತ್ತದೆ. ಬಹಳ ಧೈರ್ಯವಂತ ಸ್ಥಿತಿಯಿರಬೇಕು, ಹಠವಲ್ಲ. ದೇಹಾಭಿಮಾನಕ್ಕೆ ಹಠವೆಂದು ಹೇಳಲಾಗುತ್ತದೆ. ಬಹಳ ಮಧುರರಾಗಬೇಕು. ದೇವತೆಗಳು ಎಷ್ಟೊಂದು ಮಧುರರಾಗಿದ್ದಾರೆ, ಅವರಲ್ಲಿ ಎಷ್ಟೊಂದು ಆಕರ್ಷಣೆಯಿರುತ್ತದೆ. ತಂದೆಯು ನಿಮ್ಮನ್ನು ಈ ರೀತಿ ಮಾಡುತ್ತಾರೆ ಅಂದಾಗ ಇಂತಹ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕು. ಆದ್ದರಿಂದ ನೀವು ಮಾಡಿ ಹರ್ಷಿತವಾಗಿರಬೇಕು. ಇವರಿಗಂತೂ (ಬ್ರಹ್ಮಾ) ನಿಶ್ಚಯವಿದೆ - ನಾನು ಶರೀರವನ್ನು ಬಿಟ್ಟು ಈ ರೀತಿ (ಲಕ್ಷ್ಮೀ-ನಾರಾಯಣ) ಆಗುತ್ತೇನೆ. ಗುರಿ-ಉದ್ದೇಶದ ಚಿತ್ರವನ್ನು ಮೊಟ್ಟ ಮೊದಲು ನೋಡಬೇಕು. ಅಲ್ಲಂತೂ ಓದಿಸುವವರು ದೇಹಧಾರಿ ಶಿಕ್ಷಕರಾಗಿರುತ್ತಾರೆ, ಆದರೆ ಇಲ್ಲಿ ಓದಿಸುವವರು ನಿರಾಕಾರ ತಂದೆಯಾಗಿದ್ದಾರೆ, ಅವರು ಆತ್ಮಗಳಿಗೆ ಓದಿಸುತ್ತಾರೆ. ಈ ಚಿಂತನೆ ಮಾಡುವುದರಿಂದಲೇ ಖುಷಿಯಾಗುತ್ತದೆ. ಇವರಿಗೆ ಈ ನಶೆಯಿರುತ್ತದೆ - ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ ಹೇಗಾಗುತ್ತಾರೆ. ಈ ಅದ್ಭುತ ಮಾತುಗಳನ್ನು ನೀವೇ ಕೇಳಿ ಧಾರಣೆ ಮಾಡುತ್ತೀರಿ ಮತ್ತು ಮಾಡಿಸುತ್ತೀರಿ. ತಂದೆಯಂತೂ ಎಲ್ಲರನ್ನೂ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಇದರಲ್ಲಿ ಯಾರ್ಯಾರು ರಾಜ್ಯಭಾರ ಮಾಡಲು ಯೋಗ್ಯರಾಗುತ್ತಾರೆಂದು ತಿಳಿದುಕೊಳ್ಳಬಹುದು. ಮಕ್ಕಳನ್ನು ಮೇಲೆತ್ತುವುದು ತಂದೆಯ ಕರ್ತವ್ಯವಾಗಿದೆ. ತಂದೆಯು ಇವರ ಬ್ರಹ್ಮಾ ಮುಖದ ಮೂಲಕ ಜ್ಞಾನವನ್ನು ತಿಳಿಸುತ್ತಾರೆ. ಆಕಾಶವಾಣಿಯೆಂದು ಹೇಳುತ್ತಾರೆ. ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಸತ್ಯ ಆಕಾಶವಾಣಿಯಂತೂ ಇದಾಗಿದೆ ತಂದೆಯು ಮೇಲಿಂದ ಬಂದು ಈ ಗೋಮುಖದ ಮೂಲಕ ತಿಳಿಸುತ್ತಾರೆ. ಈ ಮುಖದ ಮೂಲಕ ಶಬ್ಧಗಳು ಹೊರಡುತ್ತವೆ. ಮಕ್ಕಳು ಬಹಳ ಮಧುರರಾಗಿರುತ್ತಾರೆ. ಬಾಬಾ ಇಂದು ಟೋಲಿಯನ್ನು ತಿನ್ನಿಸಿ ಎಂದು ಹೇಳುತ್ತಾರೆ, ಒಳ್ಳೆಯ ಮಕ್ಕಳು ಹೇಳುತ್ತಾರೆ - ನಾವು ಮಕ್ಕಳೂ ಆಗಿದ್ದೇವೆ, ಸೇವಾಧಾರಿಗಳೂ ಆಗಿದ್ದೇವೆ. ತಂದೆಗೆ ಮಕ್ಕಳನ್ನು ನೋಡಿ ಬಹಳ ಖುಷಿಯಾಗುತ್ತದೆ. ಮಕ್ಕಳಿಗೂ ಗೊತ್ತಿದೆ, ಸಮಯವು ಬಹಳ ಕಡಿಮೆಯಿದೆ. ಇಷ್ಟೆಲ್ಲಾ ಯಾವ ಅಣು ಬಾಂಬುಗಳನ್ನು ತಯಾರಿಸಿದ್ದಾರೆ, ಅವನ್ನು ಹಾಕದೆ ಸುಮ್ಮನೆ ಇಡುತ್ತಾರೆಯೇ? ಯಾವುದು ಕಲ್ಪದ ಮೊದಲು ಆಗಿತ್ತೋ ಅದೇ ಮತ್ತೆ ಆಗುತ್ತದೆ. ವಿಶ್ವದಲ್ಲಿ ಶಾಂತಿ ಸ್ಥಾಪನೆ ಆಗಲೆಂದು ತಿಳಿಯುತ್ತಾರೆ. ಆದರೆ ಈ ರೀತಿಯಂತೂ ಆಗಲು ಸಾಧ್ಯವಿಲ್ಲ. ವಿಶ್ವದಲ್ಲಿ ಶಾಂತಿಯನ್ನು ನೀವು ಸ್ಥಾಪನೆ ಮಾಡುತ್ತೀರಿ. ನಿಮಗೇ ವಿಶ್ವದ ರಾಜ್ಯಭಾಗ್ಯದ ಬಹುಮಾನವು ಸಿಗುತ್ತದೆ. ಕೊಡುವವರು ತಂದೆಯಾಗಿದ್ದಾರೆ, ವಿನಾಶವಾಗುತ್ತದೆ. ಶಾಂತಿಯಿಂದ ನೀವು ವಿಜಯ ಪಡೆಯುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
೧. ತಮ್ಮ ಸ್ಥಿತಿಯನ್ನು ಬಹಳ ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ತಂದೆಯನ್ನು ಅನುಸರಿಸಬೇಕಾಗಿದೆ. ಯಾವುದೇ ಮಾತಿನಲ್ಲಿ ಅಹಂಕಾರವು ತೋರಿಸಬಾರದು. ದೇವತೆಗಳ ರೀತಿ ಮಧುರರಾಗಬೇಕಾಗಿದೆ.

೨. ಸದಾ ಹರ್ಷಿತರಾಗಿರುವುದಕ್ಕೆ ಜ್ಞಾನದ ಸ್ಮರಣೆ ಮಾಡುತ್ತಿರಿ. ವಿಚಾರ ಸಾಗರ ಮಂಥನ ಮಾಡಿ - ನಾವು ಭಗವಂತನ ಮಕ್ಕಳೂ ಆಗಿದ್ದೇವೆ ಅಂದಾಗ ಸೇವಾಧಾರಿಯೂ ಆಗಿದ್ದೇವೆ - ಇದೇ ಸ್ಮೃತಿಯಿಂದ ಸೇವೆಯಲ್ಲಿ ತತ್ಪರರಾಗಿರಿ.
 

ವರದಾನ:
ಪ್ರತಿ ಘಳಿಗೆ ಅಂತಿಮ ಘಳಿಗೆ ಎಂದು ತಿಳಿದು ಸದಾ ಆತ್ಮೀಯ ಮೋಜಿನಲ್ಲಿರುವಂತಹ ವಿಶೇಷ ಆತ್ಮ ಭವ.

ಸಂಗಮಯುಗ ಆತ್ಮೀಯ ಮೋಜಿನಲ್ಲಿರುವಂತಹ ಯುಗವಾಗಿದೆ, ಆದ್ದರಿಂದ ಪ್ರತಿ ಘಳಿಗೆ ಆತ್ಮೀಯ ಮೋಜಿನ ಅನುಭವ ಮಡುತ್ತಾ ಹೋಗಿ, ಎಂದೂ ಯಾವುದೇ ಪರಿಸ್ಥಿತಿ ಅಥವಾ ಪರೀಕ್ಷೆಯಲ್ಲಿ ತಬ್ಬಿಬ್ಬಾಗಬೇಡಿ. ಏಕೆಂದರೆ ಈ ಸಮಯ ಅಕಾಲ ಮೃತ್ಯುವಿನದಾಗಿದೆ. ಸ್ವಲ್ಪ ಸಮಯವಾದರೂ ಒಂದು ವೇಳೆ ಮೋಜಿಗೆ ಬದಲಾಗಿ ತಬ್ಬಿಬ್ಬಾದರೆ ಮತ್ತು ಅದೇ ಸಮಯದಲ್ಲಿ ಅಂತಿಮ ಘಳಿಗೆ ಬಂದು ಬಿಟ್ಟರೆ ಆಗ ಅಂತ ಮತಿ ಸೋ ಗತಿ ಏನಾಗುವುದು, ಆದ್ದರಿಂದ ಎವೆರೆಡಿಯ ಪಾಠ ಓದಿಸಲಾಗುವುದು. ಒಂದು ಸೆಕೆಂಡೂ ಸಹಾ ಮೋಸ ಮಾಡುವಂತಹದಾಗಿರಲು ಸಾಧ್ಯವಿರಬಹುದು. ಆದ್ದರಿಂದ ಸ್ವಯ೦ ಅನ್ನು ವಿಶೇಷ ಆತ್ಮ ಎಂದು ತಿಳಿದು ಪ್ರತಿ ಸಂಕಲ್ಪ, ಮಾತು ಮತ್ತು ಕರ್ಮ ಮಾಡಿ ಮತ್ತು ಸದಾ ಆತ್ಮೀಯ ಮೋಜಿನಲ್ಲಿರಿ.

ಸ್ಲೋಗನ್:
ಅಚಲ ಆಗಬೇಕಾದರೆ ವ್ಯರ್ಥ ಮತ್ತು ಅಶುದ್ದತೆಯನ್ನು ಸಮಾಪ್ತಿ ಮಾಡಿ.