21.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ನಿಮ್ಮಲ್ಲಿ ಯಾರು ಇಡೀ ವಿಶ್ವದ ಸೇವೆ ಮಾಡುವರೋ, ಅನೇಕರನ್ನು ತಮ್ಮ ಸಮಾನರನ್ನಾಗಿ ಮಾಡುವರೋ, ಆರಾಮ
ಪ್ರಿಯರಾಗುವುದಿಲ್ಲವೋ ಅವರೇ ಪ್ರಾಮಾಣಿಕರು”
ಪ್ರಶ್ನೆ:
ನೀವು ಬ್ರಾಹ್ಮಣ
ಮಕ್ಕಳು ಯಾವ ಮಾತನ್ನು ಎಂದೂ ಮಾತನಾಡಲು ಸಾಧ್ಯವಿಲ್ಲ?
ಉತ್ತರ:
ನಮ್ಮದು
ಬ್ರಹ್ಮಾರವರೊಂದಿಗೆ ಯಾವುದೇ ಸಂಬಂಧವಿಲ್ಲ, ನಾವು ಡೈರೆಕ್ಟ್ ಶಿವ ತಂದೆಯನ್ನು ನೆನಪು
ಮಾಡುತ್ತೇವೆಂದು ನೀವು ಬ್ರಾಹ್ಮಣರು ಎಂದಿಗೂ ಹೇಳುವುದಿಲ್ಲ. ಬ್ರಹ್ಮಾ ತಂದೆಯಿಲ್ಲದೆ
ಬ್ರಾಹ್ಮಣರೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಯಾರದು ಬ್ರಹ್ಮಾರವರೊಂದಿಗೆ ಸಂಬಂಧವಿಲ್ಲವೋ
ಅರ್ಥಾತ್ ಯಾರು ಬ್ರಹ್ಮಾಮುಖವಂಶಿಯರಲ್ಲವೋ ಅವರು ಶೂದ್ರರಾದರು. ಶೂದ್ರರೆಂದೂ ದೇವತೆಗಳಾಗುವುದಿಲ್ಲ.
ಓಂ ಶಾಂತಿ.
ಆತ್ಮಿಕ ತಂದೆಯು ದಾದಾರವರ ಮೂಲಕ ತಿಳಿಸುತ್ತಾರೆ - ಮಕ್ಕಳು ಮ್ಯೂಸಿಯಂ ಅಥವಾ ಪ್ರದರ್ಶನಿಯ
ಉದ್ಘಾಟನೆ ಮಾಡಿಸುತ್ತಾರೆ ಆದರೆ ಉದ್ಘಾಟನೆಯಂತೂ ಬೇಹದ್ದಿನ ತಂದೆಯು ಯಾವಾಗಲೋ ಮಾಡಿ ಬಿಟ್ಟಿದ್ದಾರೆ.
ಈಗ ಈ ಶಾಖೆಗಳು ಅಥವಾ ಸೇವಾಕೇಂದ್ರಗಳು ತೆರೆಯುತ್ತಿವೆ. ಪಾಠಶಾಲೆಗಳು ಬಹಳ ಬೇಕಲ್ಲವೆ. ಒಂದನೆಯದಾಗಿ,
ಇದು ಪಾಠಶಾಲೆಯಾಗಿದೆ. ಇಲ್ಲಿ ತಂದೆಯಿರುತ್ತಾರೆ, ಆದ್ದರಿಂದ ಇದಕ್ಕೆ ಮಧುಬನವೆಂದು ಹೆಸರಿಡಲಾಗಿದೆ.
ಮಕ್ಕಳಿಗೆ ಗೊತ್ತಿದೆ - ಮಧುಬನದಲ್ಲಿ ಸದಾ ಮುರುಳಿಯು ನಡೆಯುತ್ತಿರುತ್ತದೆ. ಯಾರದು? ಭಗವಂತನದು.
ಭಗವಂತ ನಿರಾಕಾರನಾಗಿದ್ದಾರೆ. ಸಾಕಾರ ರಥದ ಮೂಲಕ ಮುರುಳಿಯನ್ನು ನುಡಿಸುತ್ತಾರೆ. ಅವರ ಹೆಸರನ್ನು
ಭಾಗ್ಯಶಾಲಿ ರಥವೆಂದು ಇಡಲಾಗಿದೆ. ಇದನ್ನು ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಇವರಲ್ಲಿ
ತಂದೆಯು ಪ್ರವೇಶ ಮಾಡುತ್ತಾರೆ. ಇದು ನೀವು ಮಕ್ಕಳಿಗೇ ಗೊತ್ತಿದೆ, ಮತ್ತ್ಯಾರೂ ರಚಯಿತನನ್ನಾಗಲಿ,
ರಚನೆಯ ಆದಿ-ಮಧ್ಯ-ಅಂತ್ಯವನ್ನಾಗಲಿ ತಿಳಿದುಕೊಂಡಿಲ್ಲ. ಕೇವಲ ಗವರ್ನರ್ ಮುಂತಾದ ವ್ಯಕ್ತಿಗಳಿದ್ದರೆ
ಅವರಿಂದ ಉದ್ಘಾಟನೆ ಮಾಡಿಸುತ್ತಾರೆ. ಇದನ್ನು ಯಾವಾಗಲೂ ತಂದೆಯು ಬರೆಯುತ್ತಿರುತ್ತಾರೆ - ಮಕ್ಕಳೇ,
ಯಾರಿಂದಲೇ ಉದ್ಘಾಟನೆ ಮಾಡಿಸುತ್ತೀರೆಂದರೆ ಅವರಿಗೆ ತಂದೆಯು ಹೇಗೆ ಹೊಸ ಪ್ರಪಂಚವನ್ನು ಸ್ಥಾಪನೆ
ಮಾಡುತ್ತಾರೆ, ಹೇಗೆ ಅವರು ಈ ಶಾಖೆಗಳು ತೆರೆಯುತ್ತಿದ್ದಾರೆ ಎಂದು ಮೊದಲು ಪರಿಚಯ ಕೊಡಬೇಕು.
ಯಾರಾದರೊಬ್ಬರಿಂದ ತೆರೆಸಲಾಗುತ್ತದೆ ಏಕೆಂದರೆ ಅವರದೂ ಕಲ್ಯಾಣವಾಗಲಿ. ಸ್ವಲ್ಪವಾದರೂ ತಂದೆಯು
ಬಂದಿದ್ದಾರೆಂಬುದು ಅರ್ಥವಾಗಲಿ. ಬ್ರಹ್ಮಾರವರ ಮುಖಾಂತರ ವಿಶ್ವದಲ್ಲಿ ಶಾಂತಿಯ ರಾಜ್ಯ ಅಥವಾ ಆದಿ
ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ, ಅದರ ಉದ್ಘಾಟನೆಯಂತೂ ಆಗಿಯೇ ಬಿಟ್ಟಿದೆ, ಈಗ
ಕೇವಲ ಶಾಖೆಗಳನ್ನು ತೆರೆಯಲಾಗುತ್ತಿದೆ. ಹೇಗೆ ಬ್ಯಾಂಕ್ನ ಶಾಖೆಗಳು ತೆರೆಯಲ್ಪಡುತ್ತವೆಯಲ್ಲವೆ.
ತಂದೆಯೇ ಬಂದು ಜ್ಞಾನವನ್ನು ಕೊಡಬೇಕಾಗಿದೆ. ಈ ಜ್ಞಾನವು ಪರಮಪಿತ ಪರಮಾತ್ಮನಲ್ಲಿಯೇ ಇದೆ,
ಆದ್ದರಿಂದ ಅವರಿಗೇ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಆತ್ಮಿಕ ತಂದೆಯಲ್ಲಿಯೇ ಆತ್ಮಿಕ ಜ್ಞಾನವಿದೆ.
ಅವರೇ ಬಂದು ಆತ್ಮರಿಗೆ ನೀಡುತ್ತಾರೆ. ತಿಳಿಸುತ್ತಾರೆ - ಹೇ ಮಕ್ಕಳೇ, ಆತ್ಮರೇ, ನೀವು ತಮ್ಮನ್ನು
ಆತ್ಮನೆಂದು ತಿಳಿಯಿರಿ. ಆತ್ಮನ ಹೆಸರಂತೂ ಸಾಮಾನ್ಯವಾಗಿದೆ, ಮಹಾನ್ ಆತ್ಮ, ಪುಣ್ಯಾತ್ಮ,
ಪಾಪಾತ್ಮನೆಂದು ಹೇಳಲಾಗುತ್ತದೆ. ಅಂದಮೇಲೆ ಆತ್ಮನಿಗೆ ಪರಮಪಿತ ಪರಮಾತ್ಮ ತಂದೆಯು
ತಿಳಿಸುತ್ತಿದ್ದಾರೆ. ತಂದೆಯೇಕೆ ಬರುತ್ತಾರೆ? ಅವಶ್ಯವಾಗಿ ಮಕ್ಕಳಿಗೆ ಆಸ್ತಿಯನ್ನು ಕೊಡುವುದಕ್ಕಾಗಿ.
ಮತ್ತೆ ಸತೋಪ್ರಧಾನ ಹೊಸ ಪ್ರಪಂಚದಲ್ಲಿ ಬರಬೇಕಾಗಿದೆ. ಈಗ ಇದಕ್ಕೆ ವಿಶ್ವದ ಇತಿಹಾಸ-ಭೂಗೋಳದ
ಪುನರಾವರ್ತನೆಯೆಂದು ಹೇಳಲಾಗುತ್ತದೆ. ಹೊಸ ಅಥವಾ ಹಳೆಯ ಪ್ರಪಂಚವು ಮನುಷ್ಯರದೇ ಆಗಿದೆ. ನಾನು ಹೊಸ
ಪ್ರಪಂಚವನ್ನು ರಚಿಸಲು ಬಂದಿದ್ದೇನೆಂದು ತಂದೆಯು ಹೇಳುತ್ತಾರೆ. ಮನುಷ್ಯರಿಲ್ಲದೆ
ಪ್ರಪಂಚವಿರುವುದಿಲ್ಲ, ಹೊಸ ಪ್ರಪಂಚದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಯಾವುದರ ಸ್ಥಾಪನೆ ಈಗ
ಪುನಃ ಆಗುತ್ತಿದೆ. ನೀವು ಮಕ್ಕಳು ಈಗ ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ, ಪುನಃ ನಿಮ್ಮನ್ನು
ಬ್ರಾಹ್ಮಣರಿಂದ ದೇವತೆಗಳನ್ನಾಗಿ ಮಾಡಲು ಬಂದಿದ್ದೇನೆ. ತಂದೆಯು ಹೇಗೆ ತಿಳಿಸುತ್ತಾರೆಂಬುದನ್ನು
ನೀವು ಅನ್ಯರಿಗೆ ತಿಳಿಸಬಲ್ಲಿರಿ. ನೀವು ಹೊಸ ಪ್ರಪಂಚದಲ್ಲಿ ಹೇಗೆ ಹೋಗಬಲ್ಲಿರಿ ಎಂಬುದನ್ನೂ
ತಿಳಿಸಬಹುದು. ಈಗಂತೂ ನೀವಾತ್ಮರು ಪತಿತ, ವಿಕಾರಿಯಾಗಿದ್ದೀರಿ, ಈಗ ಪುನಃ
ನಿರ್ವಿಕಾರಿಗಳಾಗಬೇಕಾಗಿದೆ. ಜನ್ಮ-ಜನ್ಮಾಂತರದ ಪಾಪಗಳ ಹೊರೆಯು ತಲೆಯ ಮೇಲಿದೆ. ಪಾಪವು
ಯಾವಾಗಿನಿಂದ ಆರಂಭವಾಗುತ್ತದೆ? ತಂದೆಯು ಎಷ್ಟು ವರ್ಷಗಳಿಗಾಗಿ ಪುಣ್ಯಾತ್ಮರನ್ನಾಗಿ ಮಾಡುತ್ತಾರೆ?
ಇದನ್ನೂ ಸಹ ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ. 21 ಜನ್ಮಗಳವರೆಗೆ ನೀವು
ಪುಣ್ಯಾತ್ಮರಾಗಿರುತ್ತೀರಿ ನಂತರ ಪಾಪಾತ್ಮನಾಗುತ್ತೀರಿ. ಎಲ್ಲಿ ಪಾಪವಿರುವುದೋ ಅಲ್ಲಿ ದುಃಖವೇ
ಆಗುವುದು. ಪಾಪ ಯಾವುದು? ಅದನ್ನೂ ತಂದೆಯು ತಿಳಿಸುತ್ತಾರೆ- 1. ನೀವು ಧರ್ಮಗ್ಲಾನಿ ಮಾಡುತ್ತೀರಿ,
ಎಷ್ಟು ಪತಿತರಾಗಿ ಬಿಟ್ಟಿದ್ದೀರಿ. ಹೇ ಪತಿತ-ಪಾವನ ಬನ್ನಿ ಎಂದು ನೀವು ನನ್ನನ್ನು ಕರೆಯುತ್ತಾ
ಬಂದಿದ್ದೀರಿ, ಆದ್ದರಿಂದ ನಾನೀಗ ಬಂದಿದ್ದೇನೆ. ಪಾವನರನ್ನಾಗಿ ಮಾಡುವ ತಂದೆಗೆ ನೀವು ನಿಂದನೆ
ಮಾಡುತ್ತೀರಿ. ಆದ್ದರಿಂದ ನೀವು ಪಾಪಾತ್ಮರಾಗಿ ಬಿಟ್ಟಿದ್ದೀರಿ. ಹೇ ಪ್ರಭು, ಜನ್ಮ-ಜನ್ಮಾಂತರದ
ಪಾಪಿಯಾಗಿದ್ದೇನೆ, ಬಂದು ಪಾವನ ಮಾಡಿ ಎಂದು ಹೇಳುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ -
ಯಾರು ಎಲ್ಲದಕ್ಕಿಂತ ಹೆಚ್ಚು ಜನ್ಮ ತೆಗೆದುಕೊಂಡಿದ್ದಾರೆಯೋ ಅವರದೇ ಬಹಳ ಜನ್ಮಗಳ ಅಂತಿಮದಲ್ಲಿ
ಪ್ರವೇಶ ಮಾಡುತ್ತೇನೆ. ತಂದೆಯು ಬಹಳ ಜನ್ಮಗಳೆಂದು ಯಾವುದಕ್ಕೆ ಹೇಳುತ್ತಾರೆ? 84 ಜನ್ಮಗಳಿಗೆ. ಯಾರು
ಮೊಟ್ಟ ಮೊದಲು ಬಂದಿದ್ದಾರೆಯೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಮೊದಲಿಗೆ ಈ
ಲಕ್ಷ್ಮೀ-ನಾರಾಯಣರೇ ಬರುತ್ತಾರೆ. ನೀವು ಬರುವುದೇ ನರನಿಂದ ನಾರಾಯಣನಾಗುವುದಕ್ಕಾಗಿ. ಸತ್ಯ
ನಾರಾಯಣನ ಕಥೆಯನ್ನೂ ತಿಳಿಸುತ್ತಾರೆ. ಎಂದಾದರೂ ರಾಮ-ಸೀತೆಯಾಗುವ ಕಥೆಯನ್ನು ಯಾರಾದರೂ
ಹೇಳಿದ್ದಾರೆಯೇ? ಅವರಿಗೆ ಗ್ಲಾನಿ ಮಾಡಿದ್ದಾರೆ. ತಂದೆಯು ಬರುವುದೇ ನರನಿಂದ ನಾರಾಯಣ, ನಾರಿಯಿಂದ
ಲಕ್ಷ್ಮಿಯನ್ನಾಗಿ ಮಾಡಲು. ಲಕ್ಷ್ಮೀ-ನಾರಾಯಣರಿಗೆ ಮಾತ್ರ ಎಂದೂ ಯಾರೂ ನಿಂದನೆ ಮಾಡುವುದಿಲ್ಲ. ನಾನು
ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ವಿಷ್ಣುವಿನ ಎರಡು ರೂಪ ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ.
ಬಾಲ್ಯದಲ್ಲಿ ರಾಧೆ-ಕೃಷ್ಣನಾಗಿರುತ್ತಾರೆ. ಇವರು ಸಹೋದರ-ಸಹೋದರಿಯಲ್ಲ. ಬೇರೆ-ಬೇರೆ ರಾಜರ
ಮಕ್ಕಳಾಗಿದ್ದರು. ಕೃಷ್ಣ ಮಹಾ ರಾಜಕುಮಾರ, ರಾಧೆ ಮಹಾ ರಾಜಕುಮಾರಿ. ಇವರಿಗೆ ಸ್ವಯಂವರದ ನಂತರ
ಲಕ್ಷ್ಮೀ-ನಾರಾಯಣರೆಂದು ಹೇಳಲಾಗುತ್ತದೆ. ಇವೆಲ್ಲಾ ಮಾತುಗಳು ಯಾವುದೇ ಮನುಷ್ಯರಿಗೆ ಗೊತ್ತಿಲ್ಲ.
ಕಲ್ಪದ ಮೊದಲು ಇವೆಲ್ಲಾ ಮಾತುಗಳು ಯಾರ ಬುದ್ಧಿಯಲ್ಲಿ ಕುಳಿತಿತ್ತೋ ಅವರ ಬುದ್ಧಿಯಲ್ಲಿಯೇ ಈಗಲೂ
ಕುಳಿತುಕೊಳ್ಳುವುದು. ಈ ಲಕ್ಷ್ಮೀ-ನಾರಾಯಣ, ರಾಧೆ-ಕೃಷ್ಣ, ಮೊದಲಾದವರ ಮಂದಿರಗಳಿವೆ. ವಿಷ್ಣುವಿನ
ಮಂದಿರವೂ ಇದೆ, ಅದಕ್ಕೆ ನರ ನಾರಾಯಣನ ಮಂದಿರವೆಂದು ಹೇಳುತ್ತಾರೆ. ಮತ್ತೆ ಲಕ್ಷ್ಮೀ-ನಾರಾಯಣರಿಗೂ
ಬೇರೆ-ಬೇರೆ ಮಂದಿರವೂ ಇದೆ, ಬ್ರಹ್ಮನ ಮಂದಿರವೂ ಇದೆ. ಬ್ರಹ್ಮ ದೇವತಾಯ ನಮಃ ಎಂದು ಹೇಳುತ್ತಾರೆ,
ಮತ್ತೆ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆಂದರೆ ಇಬ್ಬರೂ ಬೇರೆ-ಬೇರೆಯಾದರಲ್ಲವೆ.
ದೇವತೆಗಳಿಗೆಂದೂ ಭಗವಂತನೆಂದು ಹೇಳಲಾಗುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಮೊದಲು
ಯಾರಿಂದ ಉದ್ಘಾಟನೆ ಮಾಡಿಸಬೇಕಾಗಿದೆಯೋ ಅವರಿಗೆ ತಿಳಿಸಿರಿ - ವಿಶ್ವದಲ್ಲಿ ಶಾಂತಿ ಸ್ಥಾಪನಾರ್ಥವಾಗಿ
ಭಗವಂತನು ತಳಪಾಯವನ್ನು ಹಾಕಿ ಬಿಟ್ಟಿದ್ದಾರೆ. ವಿಶ್ವದಲ್ಲಿ ಶಾಂತಿಯು ಲಕ್ಷ್ಮೀ-ನಾರಾಯಣರ
ರಾಜ್ಯದಲ್ಲಿತ್ತು, ಇವರು ಸತ್ಯಯುಗದ ಮಾಲೀಕರಾಗಿದ್ದರು ಅಂದಮೇಲೆ ಮನುಷ್ಯನನ್ನು ನರನಿಂದ ನಾರಾಯಣ,
ನಾರಿಯಿಂದ ಲಕ್ಷ್ಮಿಯನ್ನಾಗಿ ಮಾಡುವ ಇದು ಬಹಳ ದೊಡ್ಡ ಗಾಡ್ಲಿ ಯೂನಿವರ್ಸಿಟಿ ಅಥವಾ ಈಶ್ವರೀಯ
ವಿಶ್ವ ವಿದ್ಯಾಲಯವಾಗಿದೆ. ವಿಶ್ವ ವಿದ್ಯಾಲಯವೆಂದು ಅನೇಕರು ಹೆಸರಿಟ್ಟಿದ್ದಾರೆ. ವಾಸ್ತವದಲ್ಲಿ ಅದು
ಯಾವುದೂ ವಿಶ್ವ ವಿದ್ಯಾಲಯವಲ್ಲ. ಯೂನಿವರ್ಸ್ ಎಂದರೆ ಇಡೀ ವಿಶ್ವವೆಂದಾಯಿತು. ಇಡೀ ವಿಶ್ವದಲ್ಲಿ
ಬೇಹದ್ದಿನ ತಂದೆಯು ಒಂದೇ ಕಾಲೇಜನ್ನು ತೆರೆಯುತ್ತಾರೆ. ನಿಮಗೆ ತಿಳಿದಿದೆ - ವಿಶ್ವದಲ್ಲಿ ಎಲ್ಲರೂ
ಪಾವನರಾಗಬೇಕಾಗಿದೆ, ವಿಶ್ವ ವಿದ್ಯಾಲಯ ಒಂದೇ ಆಗಿದೆ ಅದನ್ನು ತಂದೆಯು ಸ್ಥಾಪಿಸುತ್ತಾರೆ. ನಾನು ಇಡೀ
ವಿಶ್ವದಲ್ಲಿ ಇರುವವರನ್ನು ಶಾಂತಿಧಾಮ, ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ. ಆದ್ದರಿಂದ ಇದನ್ನು
ಈಶ್ವರೀಯ ವಿಶ್ವ ವಿದ್ಯಾಲಯವೆಂದು ಹೇಳಲಾಗುತ್ತದೆ. ಈಶ್ವರನೇ ಬಂದು ಇಡೀ ವಿಶ್ವಕ್ಕೆ
ಮುಕ್ತಿ-ಜೀವನ್ಮುಕ್ತಿಯ ಆಸ್ತಿಯನ್ನು ಕೊಡುತ್ತಾರೆ. ತಂದೆಯ ಮಾತೆಲ್ಲಿ! ಇವರೆಲ್ಲರೂ ಯೂನಿವರ್ಸಿಟಿ
ಎಂದು ಹೇಳುವುದೆಲ್ಲಿ! ಯೂನಿವರ್ಸ್ ಎಂದರೆ ಇಡೀ ವಿಶ್ವವನ್ನು ಪರಿವರ್ತನೆ ಮಾಡುವುದು, ಇದು ತಂದೆಯದೇ
ಕರ್ತವ್ಯವಾಗಿದೆ. ನಮಗೆ ಈ ಹೆಸರನ್ನಿಡಲು ಬಿಡುವುದಿಲ್ಲ, ಆದರೆ ಸರ್ಕಾರವು ಸ್ವಯಂ
ಇಟ್ಟುಕೊಳ್ಳುತ್ತದೆ. ಹೇಳಿ, ನಮ್ಮ ಹೆಸರೇ ಆಗಿದೆ - ಬ್ರಹ್ಮಾಕುಮಾರ, ಬ್ರಹ್ಮಾಕುಮಾರಿಯರು. ಯಾವಾಗ
ತಂದೆಯು ಬಂದು ಈ ರಥವನ್ನು ತೆಗೆದುಕೊಂಡರೋ ಆಗಿನಿಂದ ಇವರಿಗೆ ಬ್ರಹ್ಮಾ ಎಂದು ಹೆಸರು ಬಂದಿತು.
ಪ್ರಜಾಪಿತ ಎಂಬ ಹೆಸರು ಪ್ರಸಿದ್ಧವಾಗಿದೆಯಲ್ಲವೆ. ಅವರು ಎಲ್ಲಿಂದ ಬಂದರು? ಅವರ ತಂದೆಯ ಹೆಸರೇನು?
ಬ್ರಹ್ಮನಿಗೆ ದೇವತೆಯೆಂದು ತೋರಿಸುತ್ತಾರಲ್ಲವೆ. ದೇವತೆಗಳ ತಂದೆಯು ಅವಶ್ಯವಾಗಿ ಪರಮಾತ್ಮನೇ
ಆಗಿರುವರು. ಅವರು ರಚಯಿತನಾಗಿದ್ದಾರೆ. ಬ್ರಹ್ಮನಿಗೆ ಮೊಟ್ಟ ಮೊದಲ ರಚನೆಯೆಂದು ಹೇಳಲಾಗುತ್ತದೆ.
ಅವರ ತಂದೆಯು ಶಿವ ತಂದೆಯಾಗಿದ್ದಾರೆ. ನಾನು ಇವರಲ್ಲಿ ಪ್ರವೇಶ ಮಾಡಿ, ಇವರ ಪರಿಚಯವನ್ನು ನಿಮಗೆ
ಕೊಡುತ್ತೇನೆಂದು ಹೇಳುತ್ತಾರೆ.
ನೀವು ಮಕ್ಕಳು ತಿಳಿಸಬೇಕಾಗಿದೆ - ಇದು ಈಶ್ವರೀಯ ಮ್ಯೂಜಿಯಂ ಆಗಿದೆ. ಇದರಲ್ಲಿ ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನರನ್ನಾಗಿ ಮಾಡಿ ಎಂದು
ಕರೆದಿರಿ. ಈಗ ಹೇ ಮಕ್ಕಳೇ, ಹೇ ಆತ್ಮರೇ, ನೀವು ತಮ್ಮ ತಂದೆಯನ್ನು ನೆನಪು ಮಾಡಿರಿ. ಆಗ ಪತಿತರಿಂದ
ಪಾವನರಾಗಿ ಬಿಡುತ್ತೀರಿ. ಈ ಮನ್ಮನಾಭವ ಎಂಬ ಶಬ್ಧವು ಗೀತೆಯದಾಗಿದೆ. ಭಗವಂತನು ಒಬ್ಬರೇ ಜ್ಞಾನಸಾಗರ
ಪತಿತ-ಪಾವನನಾಗಿದ್ದಾರೆ. ಕೃಷ್ಣನು ಪತಿತ-ಪಾವನನಾಗಲು ಸಾಧ್ಯವಿಲ್ಲ. ಕೃಷ್ಣನೆಂದೂ ಪತಿತ
ಪ್ರಪಂಚದಲ್ಲಿ ಬರುವುದಕ್ಕೇ ಸಾಧ್ಯವಿಲ್ಲ. ಪತಿತ ಪ್ರಪಂಚದಲ್ಲಿ ಪತಿತ ಪಾವನ ತಂದೆಯೇ ಬರುತ್ತಾರೆ.
ಈಗ ನನ್ನನ್ನು ನೆನಪು ಮಾಡಿರಿ. ಆಗ ಪಾಪಗಳು ಭಸ್ಮವಾಗುವುದು. ಎಷ್ಟು ಸಹಜ ಮಾತಾಗಿದೆ. ಭಗವಾನುವಾಚ
ಎಂಬ ಶಬ್ಧವನ್ನು ಅವಶ್ಯವಾಗಿ ಹೇಳಬೇಕು. ಪರಮಪಿತ ಪರಮಾತ್ಮನೇ ತಿಳಿಸುತ್ತಾರೆ - ಕಾಮ ವಿಕಾರವು
ಮಹಾಶತ್ರುವಾಗಿದೆ. ಮೊದಲು ನಿರ್ವಿಕಾರಿ ಪ್ರಪಂಚವಿತ್ತು, ಈಗ ವಿಕಾರಿ ಪ್ರಪಂಚವಾಗಿದೆ. ದುಃಖವೇ
ದುಃಖವಿದೆ, ನಿರ್ವಿಕಾರಿಗಳಾದರೆ ಸುಖವೇ ಸುಖವಿರುವುದು. ಭಗವಾನುವಾಚ - ಕಾಮ ಮಹಾಶತ್ರುವಾಗಿದೆ.
ಇದರ ಮೇಲೆ ಜಯ ಗಳಿಸಿದಾಗಲೇ ನೀವು ಜಗಜ್ಜೀತರಾಗುವಿರಿ. ಒಬ್ಬ ತಂದೆಯನ್ನು ನೆನಪು ಮಾಡಿರಿ, ನಾವೂ
ಅವರನ್ನೇ ನೆನಪು ಮಾಡುತ್ತೇವೆಂದು ತಿಳಿಸಬೇಕು. ಹೇಗೆ ಯಾರಾದರೂ ಕಾಲೇಜನ್ನು ಕಟ್ಟಿಸಿದರೆ ಅದರ
ಉದ್ಘಾಟನೆ ಮಾಡಿಸುತ್ತಾರಲ್ಲವೆ. ಇದೂ ಸಹ ಕಾಲೇಜಾಗಿದೆ, ಅನೇಕ ಸೇವಾಕೇಂದ್ರಗಳಿವೆ.
ಸೇವಾಕೇಂದ್ರಗಳಲ್ಲಿ ನಿಮಿತ್ತ ಸಹೋದರಿಯರನ್ನು ನಿಮಿತ್ತ ಮಾಡಲಾಗಿದೆ. ಸಹೋದರಿಯರೂ ಸಹ ಅವಶ್ಯವಾಗಿ
ಗಮನವನ್ನಿಟ್ಟುಕೊಳ್ಳಬೇಕು. ತಂದೆಯು ಹೊಸ-ಹೊಸ ಸೇವಾಕೇಂದ್ರಗಳಲ್ಲಿ ಒಳ್ಳೊಳ್ಳೆಯ ಬ್ರಾಹ್ಮಣಿಯರನ್ನು
ಇಡುತ್ತಾರೆ ಏಕೆಂದರೆ ಬಹು ಬೇಗನೆ ತಮ್ಮ ಸಮಾನರನ್ನಾಗಿ ಮಾಡಿ ಇನ್ನೂ ಸರ್ವೀಸ್ ಮಾಡುವುದಕ್ಕಾಗಿ
ಅನ್ಯ ಸೇವಾಕೇಂದ್ರಗಳಿಗೆ ಓಡುತ್ತಿರಬೇಕು. ಯಾರು ಯಾರು ಚೆನ್ನಾಗಿ ಮುರುಳಿಯನ್ನು ಓದಿ
ತಿಳಿಸುತ್ತಾರೆ ಎಂಬುದನ್ನು ನೋಡುತ್ತಾರೆ. ನೀವೀಗ ಇಲ್ಲಿ ಕುಳಿತು ತರಗತಿಯನ್ನು ನಡೆಸಿ ಎಂದು
ಅವರಿಗೆ ಹೇಳುತ್ತಾರೆ. ಹೀಗೆ ಟ್ರಯಲ್ ಮಾಡಿಸಿ ಅವರನ್ನು ಕೂರಿಸಿ ಮತ್ತೊಂದು ಸೇವಾಕೇಂದ್ರಕ್ಕೆ
ಅದನ್ನು ಮೇಲೆತ್ತಲು ಹೋಗಬೇಕು. ಹೀಗೆ ಒಂದು ಸೇವಾಕೇಂದ್ರವು ವೃದ್ಧಿಯಾದ ಮೇಲೆ ಇನ್ನೊಂದು
ಸೇವಾಕೇಂದ್ರವನ್ನು ವೃದ್ಧಿ ಪಡಿಸಲು ಹೋಗುತ್ತಿರಬೇಕು, ಇದೇ ಬ್ರಾಹ್ಮಣಿಯರ ಕರ್ತವ್ಯವಾಗಿದೆ.
ಒಬ್ಬೊಬ್ಬ ನಿಮಿತ್ತ ಶಿಕ್ಷಕಿಯು 10-20 ಸೇವಾಕೇಂದ್ರಗಳನ್ನು ಸ್ಥಾಪನೆ ಮಾಡಬೇಕು, ಬಹಳ ಸರ್ವೀಸ್
ಮಾಡಬೇಕು. ಅಂಗಡಿಗಳನ್ನು ತೆರೆಯುತ್ತಾ ಹೋಗಬೇಕು, ತಮ್ಮ ಸಮಾನರನ್ನಾಗಿ ಮಾಡಿ ಅವರಿಗೆ ಆ
ಸೇವಾಕೇಂದ್ರವನ್ನು ಬಿಟ್ಟು ಹೋಗಬೇಕು. ಯಾರನ್ನಾದರೂ ತಮ್ಮ ಸಮಾನರನ್ನಾಗಿ ತಯಾರು ಮಾಡಿದರೆ
ಮತ್ತೊಂದು ಸೇವಾಕೇಂದ್ರವನ್ನು ತೆರೆಯಬಹುದೆಂದು ಹೃದಯದಲ್ಲಿ ಬರಬೇಕು. ಆದರೆ ಇಷ್ಟು
ಪ್ರಾಮಾಣಿಕರಿರುವುದು ಬಹಳ ವಿರಳ. ಯಾರು ಇಡೀ ವಿಶ್ವದ ಸೇವೆ ಮಾಡುವರೋ ಅವರಿಗೇ ಪ್ರಾಮಾಣಿಕರೆಂದು
ಹೇಳಲಾಗುವುದು. ಒಂದು ಸೇವಾಕೇಂದ್ರವನ್ನು ತೆರೆದು ತಮ್ಮ ಸಮಾನರನ್ನಾಗಿ ಮಾಡಿ ನಂತರ ಮತ್ತೊಂದು
ಸ್ಥಾನದಲ್ಲಿ ಸೇವೆ ಮಾಡಬೇಕು. ಒಂದೇ ಸ್ಥಾನದಲ್ಲಿ ಸಿಕ್ಕಿ ಹಾಕಿಕೊಳ್ಳಬಾರದು. ಒಳ್ಳೆಯದು.
ಯಾರಿಗಾದರೂ ತಿಳಿಸಲು ಆಗಲಿಲ್ಲವೆಂದರೆ ಅನ್ಯ ಸೇವೆಯನ್ನು ಮಾಡಿ ಇದರಲ್ಲಿ ದೇಹಾಭಿಮಾನ ಬರಬಾರದು.
ನಾನು ದೊಡ್ಡ ಮನೆಯಿಂದ ಬಂದಿದ್ದೇನೆ, ಈ ಸೇವೆ ಹೇಗೆ ಮಾಡಲಿ, ನನಗೆ ನೋವಾಗುತ್ತದೆ ಎಂದು ಹೇಳಬಾರದು.
ಸ್ವಲ್ಪ ಕೆಲಸ ಮಾಡಿದರೂ ಮೂಳೆ ನೋಯುತ್ತದೆಯೆಂದು ಹೇಳಿದರೆ ಅದಕ್ಕೆ ದೇಹಾಭಿಮಾನವೆಂದು
ಹೇಳಲಾಗುತ್ತದೆ. ಸ್ವಲ್ಪವೂ ತಿಳಿದುಕೊಳ್ಳುವುದಿಲ್ಲ, ಅನ್ಯರ ಸೇವೆ ಮಾಡಬೇಕಲ್ಲವೆ. ನೀವು ಯಾರಿಗೆ
ತಿಳಿಸಿಕೊಡುತ್ತೀರಿ ಅವರೂ ಸಹ ಪತ್ರವನ್ನು ಬರೆಯಬೇಕು. ಬಾಬಾ, ಇಂತಹವರು ನಮಗೆ ತಿಳಿಸಿದರು, ನಮ್ಮ
ಜೀವನವನ್ನು ರೂಪಿಸಿದರು ಎಂದು. ಸೇವೆಯ ಪ್ರತ್ಯಕ್ಷ ಪ್ರಮಾಣ ಸಿಗಬೇಕು. ಒಬ್ಬೊಬ್ಬರೂ
ಶಿಕ್ಷಕರಾಗಬೇಕು. ಮತ್ತೆ ತಾವೇ ಬರೆಯಬೇಕು. ಬಾಬಾ, ನಮ್ಮ ಹಿಂದೆ ಅನೇಕರು ಸಂಭಾಲನೆ
ಮಾಡುವವರಿದ್ದಾರೆ. ನಾವು ಅನೇಕರನ್ನು ತಮ್ಮ ಸಮಾನ ಮಾಡಿದ್ದೇವೆ. ಸೇವಾಕೇಂದ್ರವನ್ನು ತೆರೆಯುತ್ತಾ
ಹೋಗುತ್ತೇವೆ. ಇಂತಹ ಮಕ್ಕಳಿಗೆ ಹೂಗಳೆಂದು ಹೇಳಲಾಗುತ್ತದೆ. ಸೇವೆಯನ್ನೇ ಮಾಡದಿದ್ದರೆ ಹೇಗೆ
ಹೂವಾಗುತ್ತೀರಿ! ಹೂಗಳ ಉದ್ಯಾನವನವಲ್ಲವೆ.
ಉದ್ಘಾಟನೆ ಮಾಡುವವರಿಗೂ ತಿಳಿಸಬೇಕು - ನಾವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ, ಶೂದ್ರರಿಂದ
ಬ್ರಾಹ್ಮಣರಾಗಿ ದೇವತೆಗಳಾಗುತ್ತೇವೆ. ತಂದೆಯೇ ಈ ಬ್ರಾಹ್ಮಣ ಕುಲ ಮತ್ತು ಸೂರ್ಯವಂಶಿ, ಚಂದ್ರವಂಶಿ
ಕುಲದ ಸ್ಥಾಪನೆ ಮಾಡುತ್ತಾರೆ. ಈ ಸಮಯದಲ್ಲಿ ಎಲ್ಲರೂ ಶೂದ್ರ ವರ್ಣದವರಾಗಿದ್ದಾರೆ. ಸತ್ಯಯುಗದಲ್ಲಿ
ದೇವತಾ ವರ್ಣದವರಾಗಿದ್ದೆವು, ನಂತರ ಕ್ಷತ್ರಿಯ, ವೈಶ್ಯ ವರ್ಣದವರಾದೆವು. ತಂದೆಗೆ ಗೊತ್ತಿದೆ -
ಮಕ್ಕಳು ಎಷ್ಟೊಂದು ಪಾಯಿಂಟ್ಸ್ ಗಳನ್ನು ಮರೆತು ಹೋಗುತ್ತಾರೆ. ಮೊಟ್ಟ ಮೊದಲು ಬ್ರಾಹ್ಮಣ ವರ್ಣ,
ಪ್ರಜಾಪಿತ ಬ್ರಹ್ಮನ ಸಂತಾನರು.... ಬ್ರಹ್ಮನೆಲ್ಲಿಂದ ಬಂದರು? ಈ ಬ್ರಹ್ಮಾರವರು ಕುಳಿತಿದ್ದಾರಲ್ಲವೆ.
ಇದನ್ನು ಚೆನ್ನಾಗಿ ತಿಳಿಸಬೇಕು. ಬ್ರಹ್ಮನ ಮೂಲಕ ಸ್ಥಾಪನೆ ಆದರೆ ಯಾರದು? ಬ್ರಾಹ್ಮಣರದು. ಮತ್ತೆ
ಅವರಿಗೇ ಶಿಕ್ಷಣವನ್ನು ಕೊಟ್ಟು ದೇವತೆಗಳನ್ನಾಗಿ ಮಾಡುತ್ತಾರೆ. ನಾವು ತಂದೆಯಿಂದ ಓದುತ್ತಿದ್ದೇವೆ,
ಅವರಂತೂ ಭಗವಾನುವಾಚವು ಅರ್ಜುನನ ಪ್ರತಿಯೆಂದು ಬರೆದು ಬಿಟ್ಟಿದ್ದಾರೆ. ಆದರೆ ಅರ್ಜುನ ಯಾರಾಗಿದ್ದರು
ಎಂಬುದೂ ಗೊತ್ತಿಲ್ಲ. ನೀವು ತಿಳಿದುಕೊಂಡಿದ್ದೀರಿ - ನಾವು ಬ್ರಹ್ಮನ ಸಂತಾನರು
ಬ್ರಾಹ್ಮಣರಾಗಿದ್ದೇವೆ. ಒಂದುವೇಳೆ ನಾವು ಶಿವ ತಂದೆಯ ಮಕ್ಕಳು, ಬ್ರಹ್ಮನೊಂದಿಗೆ ನಮ್ಮ
ಸಂಬಂಧವಿಲ್ಲವೆಂದು ಯಾರಾದರೂ ಹೇಳುವುದಾದರೆ ಅಂತಹವರು ಮತ್ತೆ ದೇವತೆ ಹೇಗಾಗುತ್ತಾರೆ? ಬ್ರಹ್ಮನ
ಮೂಲಕವೇ ಆಗಬೇಕಲ್ಲವೆ. ಶಿವ ತಂದೆಯು ನಿಮಗೆ ಹೇಗೆ ಯಾರ ಮೂಲಕ ಹೇಳಿದರು, ನನ್ನನ್ನು ನೆನಪು ಮಾಡಿ
ಎಂದು? ಬ್ರಹ್ಮನ ಮುಖಾಂತರವೇ ಹೇಳಿದರಲ್ಲವೆ. ಪ್ರಜಾಪಿತ ಬ್ರಹ್ಮನ ಮಕ್ಕಳಾಗಿದ್ದೀರಲ್ಲವೆ.
ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ. ನಾವು ಬ್ರಹ್ಮನ ಮಕ್ಕಳಾಗಿದ್ದೇವೆ, ಅಂದಮೇಲೆ
ಅವಶ್ಯವಾಗಿ ಬ್ರಹ್ಮನು ನೆನಪಿಗೆ ಬರುವರು. ಶಿವ ತಂದೆಯು ಬ್ರಹ್ಮಾರವರ ತನುವಿನಿಂದ ಓದಿಸುತ್ತಾರೆ.
ಬ್ರಹ್ಮಾ ತಂದೆಯು ಮಧ್ಯದಲ್ಲಿದ್ದಾರೆ. ಬ್ರಾಹ್ಮಣರಾಗದೆ ದೇವತೆಗಳಾಗಲು ಹೇಗೆ ಸಾಧ್ಯ! ನಾನು ಯಾವ
ರಥದಲ್ಲಿ ಬರುತ್ತೇನೆಯೋ ಅವರನ್ನೂ ತಿಳಿದುಕೊಳ್ಳಬೇಕು, ಬ್ರಾಹ್ಮಣರಾಗಬೇಕು. ಬ್ರಹ್ಮನನ್ನು
ತಂದೆಯೆಂದು ಹೇಳದಿದ್ದರೆ ಮಕ್ಕಳು ಹೇಗಾಗುವಿರಿ? ತಮ್ಮನ್ನು ಬ್ರಾಹ್ಮಣರೆಂದು ತಿಳಿಯದಿದ್ದರೆ ಅವರು
ಶೂದ್ರರೆಂದು ಅರ್ಥ. ಶೂದ್ರರಿಂದ ದೇವತೆಗಳಾಗುವುದು ಸಾಧ್ಯವಿಲ್ಲ. ಬ್ರಾಹ್ಮಣರಾಗಿ ಶಿವ ತಂದೆಯನ್ನು
ನೆನಪು ಮಾಡದ ವಿನಃ ದೇವತೆಗಳು ಹೇಗಾಗುವರು? ಇದರಲ್ಲಿ ತಬ್ಬಿಬ್ಬಾಗುವ ಅವಶ್ಯಕತೆಯಿಲ್ಲ. ಉದ್ಘಾಟನೆ
ಮಾಡುವವರಿಗೂ ಸಹ ತಿಳಿಸಬೇಕಾಗಿದೆ - ತಂದೆಯ ಮೂಲಕ ಉದ್ಘಾಟನೆಯಾಗಿ ಬಿಟ್ಟಿದೆ. ತಮಗೂ ಸಹ
ತಿಳಿಸುತ್ತೇವೆ - ಕೇವಲ ತಂದೆಯನ್ನು ನೆನಪು ಮಾಡಿರಿ ಆಗ ಪಾಪಗಳು ಭಸ್ಮವಾಗುತ್ತವೆ. ಆ ತಂದೆಯೇ
ಪತಿತ ಪಾವನನಾಗಿದ್ದಾರೆ. ಅವರಿಂದ ನೀವು ಪಾವನರಾಗಿ ದೇವತೆಗಳಾಗಿ ಬಿಡುತ್ತೀರಿ. ಮಕ್ಕಳು ಬಹಳಷ್ಟು
ಸೇವೆ ಮಾಡಬಲ್ಲಿರಿ. ಹೇಳಿರಿ, ನಾವು ತಂದೆಯ ಸಂದೇಶ ನೀಡುತ್ತೇವೆ. ಮಾಡಿದರೆ ಮಾಡಿ ಇಲ್ಲದಿದ್ದರೆ
ಬಿಡಿ ಅದು ನಿಮ್ಮಿಷ್ಟ. ನಾವು ಸಂದೇಶವನ್ನಂತೂ ಕೊಟ್ಟು ಹೋಗುತ್ತೇವೆ. ಮತ್ತ್ಯಾವುದೇ ರೀತಿಯಿಂದಲೂ
ಪಾವನರಾಗುವುದಿಲ್ಲ. ಬಿಡುವು ಸಿಕ್ಕಿದಾಗಲೆಲ್ಲಾ ಸರ್ವೀಸ್ ಮಾಡಿರಿ. ಸಮಯವಂತೂ ಬಹಳ ಸಿಗುತ್ತದೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಹೊಸ-ಹೊಸ
ಸೇವಾಕೇಂದ್ರದ ವೃದ್ಧಿಯನ್ನು ಮಾಡಲು ತಮ್ಮ ಸಮಾನರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.
ಸೇವಾಕೇಂದ್ರಗಳನ್ನು ತೆರೆಯುತ್ತಾ ಹೋಗಬೇಕಾಗಿದೆ. ಒಂದು ಸ್ಥಾನದಲ್ಲಿ ಕುಳಿತುಕೊಳ್ಳಬಾರದು.
2. ಹೂಗಳ ಉದ್ಯಾನವನವನ್ನು ತಯಾರು ಮಾಡಬೇಕಾಗಿದೆ. ಪ್ರತಿಯೊಬ್ಬರನ್ನು ಹೂವನ್ನಾಗಿ ಮಾಡಿ ಅನ್ಯರನ್ನು
ತಮ್ಮ ಸಮಾನ ಹೂಗಳನ್ನಾಗಿ ಮಾಡಬೇಕಾಗಿದೆ. ಯಾವುದೇ ಸೇವೆಯಲ್ಲಿ ದೇಹಾಭಿಮಾನ ಬರಬಾರದು.
ವರದಾನ:
ದಿನಚರ್ಯೆಯ
ಪ್ರತಿ ಕರ್ಮದಲ್ಲಿ ಯಥಾರ್ತ ಮತ್ತು ಯುಕ್ತಿಯುಕ್ತವಾಗಿ ನಡೆಯುವಂತಹ ಪೂಜ್ಯ, ಪವಿತ್ರ ಆತ್ಮ ಭವ.
ಪೂಜ್ಯ, ಪವಿತ್ರ ಆತ್ಮರ
ಗುರುತು ಆಗಿದೆ - ಅವರ ಪ್ರತಿ ಸಂಕಲ್ಪ, ಮಾತು, ಕರ್ಮ ಮತ್ತು ಸ್ವಪ್ನ ಯಥಾರ್ತ ಅರ್ಥಾತ್
ಯುಕ್ತಿಯುಕ್ತವಾಗಿರುವುದು. ಪ್ರತಿ ಸಂಕಲ್ಪದಲ್ಲಿ ಅರ್ಥವಿರುವುದು. ಹೀಗಲ್ಲ ಸುಮ್ಮನೆ ಹೀಗೇ
ಮಾತನಾಡಿದೆ, ಮಾತು ಹೊರ ಬಂದಿತು, ಮಾಡಿ ಬಿಟ್ಟೆ, ಆಗಿ ಹೋಯಿತು ಎಂದು. ಪವಿತ್ರ ಆತ್ಮ ಸದಾ
ದಿನಚರ್ಯೆಯ ಪ್ರತಿ ಕರ್ಮದಲ್ಲಿ ಯಥಾರ್ತ, ಯುಕ್ತಿಯುಕ್ತವಾಗಿರುತ್ತಾರೆ. ಆದ್ದರಿಂದ ಅವರ ಪ್ರತೀ
ಕರ್ಮದ ಪೂಜೆಯೂ ಸಹ ಆಗುವುದು ಅರ್ಥಾತ್ ಪೂರ್ತಿ ದಿನಚರ್ಯೆಯದ್ದು ಆಗುವುದು. ಏಳುವುದರಿಂದ ಹಿಡಿದು
ಮಲಗುವವರೆಗೆ ಭಿನ್ನ-ಭಿನ್ನ ಕರ್ಮದ ದರ್ಶನವಾಗುವುದು.
ಸ್ಲೋಗನ್:
ಸೂರ್ಯವಂಶಿಯಾಗಬೇಕಾದರೆ ಸದಾ ವಿಜಯಿ ಮತ್ತು ಏಕರಸ ಸ್ಥಿತಿ ಮಾಡಿಕೊಳ್ಳಿ.