16.02.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ತಂದೆಯು ನಿಮಗೆ ಏನನ್ನು ಓದಿಸುತ್ತಾರೆಯೋ ಅದು ಹೇಗಿದೆಯೋ ಹಾಗೆಯೇ ಧಾರಣೆ ಮಾಡಿ, ಸದಾ ಶ್ರೀಮತದಂತೆ ನಡೆಯುತ್ತಿರಿ”

ಪ್ರಶ್ನೆ:
ಎಂದೂ ಸಹ ದುಃಖವಾಗಬಾರದು ಅದಕ್ಕಾಗಿ ಯಾವ ಮಾತಿನ ಮೇಲೆ ಬಹಳ ಚೆನ್ನಾಗಿ ವಿಚಾರ ಮಾಡಬೇಕಾಗಿದೆ?

ಉತ್ತರ:
ಪ್ರತಿಯೊಂದು ಆತ್ಮವು ಯಾವ ಪಾತ್ರವನ್ನು ಅಭಿನಯಿಸುತ್ತಿದೆಯೋ ಅದು ಡ್ರಾಮಾದಲ್ಲಿ ಆಕ್ಯುರೇಟ್ ಆಗಿ ನೊಂದಾವಣೆಯಾಗಿದೆ. ಇದು ಅನಾದಿ ಮತ್ತು ಅವಿನಾಶಿ ಡ್ರಾಮಾ ಆಗಿದೆ. ಈ ಮಾತಿನ ಬಗ್ಗೆ ವಿಚಾರ ಮಾಡಿದಾಗ ಎಂದೂ ಸಹ ದುಃಖವಾಗಲು ಸಾಧ್ಯವಿಲ್ಲ. ಯಾರು ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ಯಥಾರ್ಥವಾಗಿ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರಿಗೆ ದುಃಖವಾಗುತ್ತದೆ. ನೀವು ಮಕ್ಕಳು ಈ ನಾಟಕವನ್ನು ಹೇಗಿದೆಯೋ ಹಾಗೆಯೇ ಸಾಕ್ಷಿಯಾಗಿ ನೋಡಬೇಕು. ಇದರಲ್ಲಿ ದುಃಖಿಸುವ ಮಾತಿಲ್ಲ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಆತ್ಮವು ಎಷ್ಟೊಂದು ಸೂಕ್ಷ್ಮವಾಗಿದೆ. ಬಹಳ ಸೂಕ್ಷ್ಮವಾಗಿದೆ ಮತ್ತು ಅಷ್ಟು ಚಿಕ್ಕ ಆತ್ಮನಿಂದ ಶರೀರವು ಎಷ್ಟು ದೊಡ್ಡದಾಗಿ ಕಾಣಿಸುತ್ತದೆ. ಈ ಸೂಕ್ಷ್ಮ ಆತ್ಮವು ಶರೀರದಿಂದ ಬೇರೆಯಾಗಿ ಬಿಡುತ್ತದೆ ಎಂದರೆ ಮತ್ತೇನನ್ನೂ ಸಹ ನೋಡಲು ಸಾಧ್ಯವಿಲ್ಲ. ಆತ್ಮದ ಬಗ್ಗೆ ವಿಚಾರ ಮಾಡಲಾಗುತ್ತದೆ - ಇಷ್ಟೂ ಚಿಕ್ಕ ಬಿಂದು ಎಂತೆಂತಹ ಕೆಲಸ ಮಾಡುತ್ತದೆ. ಹೇಗೆ ಮ್ಯಾಗ್ನಿಫೈ ಗ್ಲಾಸ್ನಿಂದ ಚಿಕ್ಕ-ಚಿಕ್ಕ ವಜ್ರಗಳನ್ನು ಅದರಲ್ಲಿ ಯಾವುದೇ ಕಲೆಯಂತೂ ಇಲ್ಲವೇ ಎಂದು ನೋಡುತ್ತಾರೆ. ಅಂದಾಗ ಆತ್ಮವೂ ಇಷ್ಟೊಂದು ಸೂಕ್ಷ್ಮವಾಗಿದೆ. ಹೇಗೆ ಮ್ಯಾಗ್ನಿಫೈ ಗ್ಲಾಸ್ನಿಂದ ನೋಡುತ್ತೀರಿ ಹಾಗೆಯೇ ಈ ಆತ್ಮವು ಎಲ್ಲಿರುತ್ತದೆ? ಏನು ಸಂಬಂಧವಿದೆ, ಇದೇ ಕಣ್ಣುಗಳಿಂದ ಎಷ್ಟು ದೊಡ್ಡ ಭೂಮಿ-ಆಕಾಶವನ್ನು ನೋಡಬಹುದಾಗಿದೆ. ಆ ಬಿಂದು ಹೊರಟು ಹೋದರೆ ಏನೂ ಉಳಿಯುವುದಿಲ್ಲ. ಹೇಗೆ ಬಿಂದು ತಂದೆಯಿದ್ದಾರೆಯೋ ಬಿಂದು ಆತ್ಮವೂ ಸಹ ಹಾಗೆಯೇ ಇದೆ. ಇಷ್ಟು ಚಿಕ್ಕ ಆತ್ಮವು ಪವಿತ್ರವಾದದ್ದು ಅಪವಿತ್ರವಾಗುತ್ತದೆ. ಇವು ಬಹಳ ವಿಚಾರ ಮಾಡುವ ಮಾತುಗಳಾಗಿವೆ. ಆತ್ಮ ಏನು, ಪರಮಾತ್ಮ ಯಾರು, ಇಷ್ಟು ಚಿಕ್ಕ ಆತ್ಮವು ಶರೀರದಲ್ಲಿದ್ದು ಏನೇನನ್ನು ಮಾಡುತ್ತದೆ, ಆ ಆತ್ಮದಲ್ಲಿ 84 ಜನ್ಮಗಳ ಪೂರ್ಣ ಪಾತ್ರವು ತುಂಬಲ್ಪಟ್ಟಿದೆ. ಅದು ಹೇಗೆ ಕೆಲಸ ಮಾಡುತ್ತದೆ? ಎಷ್ಟು ವಿಚಿತ್ರವಾಗಿದೆ ಎಂಬ ಮಾತುಗಳನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ಇಷ್ಟು ಚಿಕ್ಕ ಬಿಂದುವಿನಲ್ಲಿ 84 ಜನ್ಮಗಳ ಪಾತ್ರವು ನೊಂದಾವಣೆಯಾಗಿದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ತಿಳಿದುಕೊಳ್ಳಿ, ನೆಹರು ಸತ್ತರು, ಕ್ರೈಸ್ಟ್ ಸತ್ತರು ಅಂದರೆ ಆತ್ಮವು ಹೊರಟು ಹೋಯಿತೆಂದರೆ ಶರೀರ ಸತ್ತು ಹೋಯಿತು. ಇಷ್ಟು ದೊಡ್ಡ ಶರೀರ ಮತ್ತು ಎಷ್ಟು ಚಿಕ್ಕ ಆತ್ಮ. ಇದನ್ನೂ ಸಹ ತಂದೆಯು ಅನೇಕ ಬಾರಿ ತಿಳಿಸಿದ್ದಾರೆ - ಈ ಸೃಷ್ಟಿ ಚಕ್ರವು ಪ್ರತೀ 5000 ವರ್ಷಗಳ ನಂತರ ಪುನರಾವರ್ತನೆಯಾಗುತ್ತದೆ ಎಂದು ಮನುಷ್ಯರಿಗೆ ಹೇಗೆ ತಿಳಿಯಬೇಕು? ಇಂತಹವರು ಶರೀರ ಬಿಟ್ಟರು, ಇದು ಯಾವುದೇ ಹೊಸ ಮಾತಲ್ಲ. ಅವರ ಆತ್ಮವು ಈ ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡಿತು, 5000 ವರ್ಷಗಳ ಹಿಂದೆಯೂ ಸಹ ಈ ನಾಮ-ರೂಪವನ್ನು ಇದೇ ಸಮಯದಲ್ಲಿ ಬಿಟ್ಟಿದ್ದರು. ನಾನು ಒಂದು ಶರೀರವನ್ನು ಬಿಟ್ಟು ಇನ್ನೊಂದರಲ್ಲಿ ಪ್ರವೇಶ ಮಾಡುತ್ತೇನೆಂದು ಆತ್ಮಕ್ಕೆ ಗೊತ್ತಿದೆ. ಈಗ ನೀವು ಶಿವ ಜಯಂತಿಯನ್ನು ಆಚರಿಸುತ್ತಿದ್ದೀರಿ. 5000 ವರ್ಷಗಳ ಹಿಂದೆಯೂ ಸಹ ಶಿವ ಜಯಂತಿಯನ್ನು ಆಚರಿಸಿದ್ದೇವೆಂದು ತೋರಿಸುತ್ತೀರಿ. ಪ್ರತೀ 5000 ವರ್ಷಗಳ ನಂತರ ಶಿವ ಜಯಂತಿ ಯಾವುದು ವಜ್ರ ಸಮಾನವಾಗಿದೆಯೋ ಅದನ್ನು ಆಚರಿಸುತ್ತಲೇ ಇರುತ್ತಾರೆ. ಇವು ಸತ್ಯ ಮಾತುಗಳಾಗಿವೆ. ಇದಕ್ಕೆ ನೀವು ಹೇಳುತ್ತೀರಿ - ಇದು ಹೊಸ ಮಾತೇನಲ್ಲ. ಇತಿಹಾಸವು ಅಥವಾ ಚರಿತ್ರೆಯು ಪುನರಾವರ್ತನೆಯಾಗುತ್ತದೆ. 5000 ವರ್ಷಗಳ ನಂತರ ಯಾರೆಲ್ಲಾ ಪಾತ್ರಧಾರಿಗಳಿದ್ದಾರೆಯೋ ಅವರು ತಮ್ಮ ಶರೀರವನ್ನು ಪಡೆಯುತ್ತಾರೆ. ಒಂದು ನಾಮ, ರೂಪ, ದೇಶ, ಕಾಲವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಇದರ ಬಗ್ಗೆ ವಿಚಾರ ಸಾಗರ ಮಂಥನ ಮಾಡಿ. ಈ ರೀತಿ ಬರೆಯಬೇಕು ಅದನ್ನು ಮೊದಲು ಎಂದಾದರೂ ಮಿಲನ ಮಾಡಿದ್ದೀರಾ! ಇಷ್ಟು ಚಿಕ್ಕ ಆತ್ಮನೊಂದಿಗೆ ಕೇಳಲಾಗುತ್ತದೆಯಲ್ಲವೆ. ನೀವು ಈ ನಾಮ, ರೂಪದಲ್ಲಿ ಮೊದಲು ಎಂದಾದರೂ ಮಿಲನ ಮಾಡಿದ್ದೀರಾ? ಆತ್ಮವು ಕೇಳಿತು. ಅನೇಕರು ಹೇಳುತ್ತಾರೆ - ಹೌದು ಬಾಬಾ, ತಮ್ಮೊಂದಿಗೆ ಕಲ್ಪದ ಹಿಂದೆಯೂ ಮಿಲನ ಮಾಡಿದ್ದೆವು. ಇಡೀ ನಾಟಕದ ಪಾತ್ರವು ಬುದ್ಧಿಯಲ್ಲಿದೆ. ಹೇಗೆ ಆ ಅಲ್ಪಕಾಲದ ನಾಟಕವು ಬಹಳ ಆಕ್ಯುರೇಟ್ ಆಗಿದೆ. ಇದರಲ್ಲಿ ಸ್ವಲ್ಪವೂ ಅಂತರವಾಗುವುದಿಲ್ಲ. ಹೇಗೆ ಆ ಅಲ್ಪಕಾಲದ ಬಯಸ್ಕೋಪನ್ನು ಯಂತ್ರದಿಂದ ನಡೆಸಿ ತೋರಿಸುತ್ತಾರೆ, ಅದರಲ್ಲಿ 2-4 ರೋಲ್ಗಳೂ ಇರಬಹುದು. ಅವು ಸುತ್ತುತ್ತಿರುತ್ತವೆ. ಇದಂತೂ ಅನಾದಿ, ಅವಿನಾಶಿ ಒಂದೇ ಬೇಹದ್ದಿನ ನಾಟಕವಾಗಿದೆ. ಇದರಲ್ಲಿ ಎಷ್ಟು ಜನ್ಮಗಳ ಎಷ್ಟು ದೊಡ್ಡ ಚಲನಚಿತ್ರದ ರೋಲ್ ಇರಬಹುದು, ಇದೂ ಸಹ ಸೃಷ್ಟಿಯಾಗಿದೆ. ಇದು ಯಾರ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ! ಇದಂತೂ ಆ ಸ್ಥೂಲ ರೆಕಾರ್ಡ್ ತರಹವೇ ಇದೆ, ಬಹಳ ವಿಚಿತ್ರವಾಗಿದೆ. 84 ಲಕ್ಷ ಜನ್ಮಗಳಂತೂ ಇರಲು ಸಾಧ್ಯವಿಲ್ಲ. ಇದು 84 ರ ಚಕ್ರವೇ ಆಗಿದೆ. ಇದರ ಪರಿಚಯವನ್ನು ಹೇಗೆ ಕೊಡುವುದು. ಪತ್ರಕರ್ತರಿಗೂ ಸಹ ತಿಳಿಸಿದಾಗ ಅವರು ಪತ್ರಿಕೆಯಲ್ಲಿ ಹಾಕುತ್ತಾರೆ. ಕಾದಂಬರಿಯಲ್ಲಿಯೂ ಸಹ ಪದೇ-ಪದೇ ಹಾಕಬಹುದು. ತಾವು ಈ ಸಂಗಮಯುಗದ ಸಮಯದ ಮಾತುಗಳನ್ನೇ ಆಡುತ್ತೇವೆ, ಸತ್ಯಯುಗದಲ್ಲಂತೂ ಈ ಮಾತುಗಳಿರುವುದಿಲ್ಲ ಅಥವಾ ಕಲಿಯುಗದಲ್ಲಿಯೂ ಇರುವುದಿಲ್ಲ. ಪ್ರಾಣಿ-ಪಕ್ಷಿ ಮೊದಲಾದವುಗಳೆಲ್ಲವನ್ನೂ 5000 ವರ್ಷಗಳ ನಂತರ ನೋಡಲಾಗುತ್ತದೆ, ವ್ಯತ್ಯಾಸವಾಗುವುದಿಲ್ಲ. ಡ್ರಾಮಾದಲ್ಲಿ ಪೂರ್ಣ ನಿಗಧಿತವಾಗಿದೆ. ಸತ್ಯಯುಗದಲ್ಲಿ ಪ್ರಾಣಿಗಳು ಬಹಳ ಸುಂದರವಾಗಿರುತ್ತವೆ. ಪೂರ್ಣ ವಿಶ್ವದ ಇತಿಹಾಸ-ಭೂಗೋಳ ಪುನರಾವರ್ತನೆಯಾಗುತ್ತದೆ. ಹೇಗೆ ಡ್ರಾಮಾದಲ್ಲಿ ನೊಣ ಹಾರಿ ಹೋಗುವುದೂ ಸಹ ಶೂಟಿಂಗ್ ಆಗುತ್ತದೆ, ಅದು ಪುನರಾವರ್ತನೆಯಾಗುತ್ತದೆ. ಈಗ ನಾವು ಚಿಕ್ಕ-ಚಿಕ್ಕ ಮಾತುಗಳ ಬಗ್ಗೆ ವಿಚಾರ ಮಾಡುವುದಿಲ್ಲ. ಮೊದಲು ತಂದೆಯು ಸ್ವಯಂ ತಿಳಿಸುತ್ತಾರೆ - ನಾನು ಕಲ್ಪ-ಕಲ್ಪ ಸಂಗಮಯುಗದಲ್ಲಿ ಈ ಭಾಗ್ಯಶಾಲಿ ರಥದಲ್ಲಿ ಬರುತ್ತೇನೆ. ಆತ್ಮವೇ ಹೇಳುತ್ತದೆ - ಹೇಗೆ ಬರುತ್ತೇನೆ, ಇಷ್ಟು ಚಿಕ್ಕ ಬಿಂದುವಾಗಿದ್ದೇನೆ. ಅವರಿಗೆ ಜ್ಞಾನಸಾಗರ ಎಂದು ಹೇಳಲಾಗುತ್ತದೆ. ಈ ಮಾತುಗಳನ್ನು ನೀವು ಮಕ್ಕಳಲ್ಲಿಯೂ ಯಾರು ಬುದ್ಧಿವಂತರಿದ್ದಾರೆಯೋ ಅವರೇ ತಿಳಿದುಕೊಳ್ಳುತ್ತಾರೆ. ಪ್ರತೀ 5000 ವರ್ಷಗಳ ನಂತರ ನಾನು ಬರುತ್ತೇನೆ, ಇದು ಎಷ್ಟು ಅಮೂಲ್ಯವಾದ ವಿದ್ಯೆಯಾಗಿದೆ. ತಂದೆಯಲ್ಲಿಯೇ ಕರಾರುವಕ್ಕಾದ (ಆಕ್ಯೂರೇಟ್) ಜ್ಞಾನವಿದೆ, ಅದನ್ನು ತಂದೆಯು ಮಕ್ಕಳಿಗೆ ಕೊಡುತ್ತಾರೆ. ನಿಮ್ಮನ್ನು ಯಾರಾದರೂ ಸತ್ಯಯುಗದ ಆಯಸ್ಸು ಎಷ್ಟು ಎಂದು ಕೇಳಿದರೆ 1250 ವರ್ಷಗಳೆಂದು ಹೇಳುತ್ತೀರಿ. ಒಂದು ಜನ್ಮದ ಆಯಸ್ಸು 150 ವರ್ಷವಿರುತ್ತದೆ. ಎಷ್ಟು ಪಾತ್ರವನ್ನು ಅಭಿನಯಿಸುತ್ತೇವೆ, ಬುದ್ಧಿಯಲ್ಲಿ ಪೂರ್ಣ ಚಕ್ರವು ತಿರುಗುತ್ತದೆ. ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ. ಪೂರ್ಣ ಸೃಷ್ಟಿಯು ಈ ರೀತಿ ಚಕ್ರದ ರೂಪದಲ್ಲಿ ತಿರುಗುತ್ತಿರುತ್ತದೆ. ಇದು ಅನಾದಿ-ಅವಿನಾಶಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಇದು ಹೊಸದಾಗಿ ಜೋಡಣೆಯಾಗುವುದಿಲ್ಲ. ಗಾಯನವೂ ಇದೆ - ಏನು ಆಗುವುದಿದೆಯೋ ಅದೇ ಆಗುತ್ತದೆ, ಅದಕ್ಕಾಗಿ ಚಿಂತೆಯೇಕೆ ಮಾಡುವುದು. ಡ್ರಾಮಾದಲ್ಲಿ ನಿಗಧಿತವಾಗಿದೆ ಅಂದಾಗ ಸಾಕ್ಷಿಯಾಗಿ ನೋಡಬೇಕು, ಆ ಡ್ರಾಮಾದಲ್ಲಿಯೂ ಯಾವುದೇ ಇಂತಹ ದುಃಖದ ಪಾತ್ರವಿದ್ದರೆ ಬಲಹೀನ ಮನಸ್ಸುಳ್ಳವರಿದ್ದರೆ ಅದನ್ನು ನೋಡಿ ಅಳುತ್ತಾರೆ. ಇದು ನಾಟಕವಲ್ಲವೆ! ಇದು ವಾಸ್ತವಿಕ(ರಿಯಲ್)ವಾಗಿದೆ. ಇದರಲ್ಲಿ ಪ್ರತಿಯೊಂದು ಆತ್ಮವು ಪಾತ್ರವನ್ನಭಿನಯಿಸುತ್ತದೆ, ನಾಟಕವು ಎಂದೂ ಸಮಾಪ್ತಿಯಾಗುವುದಿಲ್ಲ. ಇದರಲ್ಲಿ ಅಳುವ-ಮುನಿಸಿಕೊಳ್ಳುವ ಮಾತಿಲ್ಲ ಅಂದಮೇಲೆ ಇದೇನೂ ಹೊಸ ಮಾತಲ್ಲ. ಯಾರು ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ಅನುಭೂತಿ ಮಾಡುವುದಿಲ್ಲವೋ ಅವರಿಗೆ ದುಃಖವಾಗುತ್ತದೆ. ಇದೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಈ ಸಮಯದಲ್ಲಿ ನಾವು ಈ ಜ್ಞಾನದಿಂದ ಯಾವ ಪದವಿಯನ್ನು ಪಡೆಯುತ್ತೇವೆಯೋ ಚಕ್ರ ಸುತ್ತಿ ನಂತರ ಅದೇ ಆಗುತ್ತೇವೆ ಇದು ಬಹಳ ಆಶ್ಚರ್ಯವಾಗಿ ವಿಚಾರ ಸಾಗರ ಮಂಥನ ಮಾಡುವ ಮಾತುಗಳಾಗಿವೆ. ಯಾವುದೇ ಮನುಷ್ಯರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಋಷಿ-ಮುನಿಗಳೂ ಸಹ ಹೇಳುತ್ತಿದ್ದರು - ನಾವು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲ. ರಚಯಿತನು ಇಷ್ಟು ಚಿಕ್ಕ ಬಿಂದುವೆಂದು ಅವರಿಗೇನು ಗೊತ್ತು! ಅವರೇ ಹೊಸ ಸೃಷ್ಟಿಯ ರಚಯಿತನಾಗಿದ್ದಾರೆ. ನೀವು ಮಕ್ಕಳಿಗೆ ಓದಿಸುತ್ತಾರೆ, ಜ್ಞಾನದ ಸಾಗರನಾಗಿದ್ದಾರೆ, ಈ ಮಾತುಗಳನ್ನು ನೀವು ಮಕ್ಕಳೇ ತಿಳಿಸಿಕೊಡುತ್ತೀರಿ. ನಾವು ತಿಳಿದುಕೊಂಡಿಲ್ಲವೆಂದು ನೀವು ಹೇಳುವುದಿಲ್ಲ. ನಿಮಗೆ ತಂದೆಯು ಈ ಸಮಯದಲ್ಲಿ ಎಲ್ಲವನ್ನೂ ತಿಳಿಸುತ್ತಾರೆ. ನೀವು ಯಾವುದೇ ಮಾತಿನಲ್ಲಿ ದುಃಖ ಪಡುವ ಅವಶ್ಯಕತೆಯಿಲ್ಲ ಸದಾ ಹರ್ಷಿತರಾಗಿರಬೇಕು. ಈ ಡ್ರಾಮಾದ ರೀಲ್ ಉಪಯೋಗಿಸುತ್ತಾ ಸವೆದು ಹಳೆಯದಾದ ನಂತರ ಬದಲಾಯಿಸುತ್ತಾರೆ. ಹಳೆಯದನ್ನು ಸಮಾಪ್ತಿ ಮಾಡುತ್ತಾರೆ. ಇದು ಬೇಹದ್ದಿನ ಅವಿನಾಶಿ ಡ್ರಾಮಾ ಆಗಿದೆ. ಇಂತಹ ಮಾತುಗಳ ಬಗ್ಗೆ ವಿಚಾರ ಮಾಡಿ ಪಕ್ಕಾ ಮಾಡಬೇಕು. ಯಾವ ಮಾತಿನಿಂದಲೂ ಪತಿತರಿಂದ ಪಾವನರಾಗಲು ಅಥವಾ ತಮೋಪ್ರಧಾನರಿಂದ ಸತೋಪ್ರಧಾನರಾಗಲು ಸಾಧ್ಯವಿಲ್ಲ. ಪಾತ್ರವನ್ನಭಿನಯಿಸುತ್ತಾ ನಾವು ಸತೋಪ್ರಧಾನರಿಂದ ತಮೋಪ್ರಧಾನರಾಗುತ್ತೇವೆ, ಪುನಃ ಸತೋಪ್ರಧಾನರಾಗಬೇಕು. ಆತ್ಮವು ವಿನಾಶ ಹೊಂದುವುದಿಲ್ಲ ಮತ್ತು ಪಾತ್ರವು ವಿನಾಶವಾಗುವುದಿಲ್ಲ. ಈ ಮಾತುಗಳ ಬಗ್ಗೆ ಕೆಲವರಿಗೆ ವಿಚಾರ ನಡೆಯುವುದಿಲ್ಲ, ಆದರೆ ಮನುಷ್ಯರು ಕೇಳಿ ಆಶ್ಚರ್ಯಚಕಿತರಾಗುತ್ತಾರೆ. ಅವರು ಕೇವಲ ಭಕ್ತಿ ಮಾರ್ಗದ ಶಾಸ್ತ್ರಗಳನ್ನೇ ಓದುತ್ತಾರೆ. ರಾಮಾಯಣ, ಭಾಗವತ, ಗೀತಾ ಮುಂತಾದವುಗಳಿವೆ. ಇದರಲ್ಲಿ ವಿಚಾರಸಾಗರ ಮಂಥನ ಮಾಡಬೇಕಾಗುತ್ತದೆ. ಬೇಹದ್ದಿನ ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಹೇಗಿದೆಯೋ ಹಾಗೆಯೇ ಧಾರಣೆ ಮಾಡಿಕೊಂಡಾಗ ಉನ್ನತ ಪದವಿಯನ್ನು ಪಡೆದುಕೊಳ್ಳುತ್ತೇವೆ. ಎಲ್ಲರೂ ಒಂದೇ ರೀತಿಯಲ್ಲಿ ಧಾರಣೆ ಮಾಡಿಕೊಳ್ಳುವುದಿಲ್ಲ. ಕೆಲವರು ಬಹಳ ಆಳವಾಗಿ ತಿಳಿಸಿಕೊಡುತ್ತಾರೆ. ಇಂದಿನ ದಿನಗಳಲ್ಲಿ ಜೈಲಿನಲ್ಲಿಯೂ ಭಾಷಣ ಮಾಡಲು ಹೋಗುತ್ತಾರೆ, ವೇಶ್ಯೆಯರ ಬಳಿಯೂ ಭಾಷಣ ಮಾಡಲು ಹೋಗುತ್ತಾರೆ. ಕಿವುಡರ-ಕುರುಡರ ಬಳಿಗೂ ಮಕ್ಕಳು ಹೋಗುತ್ತಾರೆ ಏಕೆಂದರೆ ಅವರಿಗೂ ಅಧಿಕಾರವಿದೆ. ಸನ್ನೆಯಿಂದ ತಿಳಿದುಕೊಳ್ಳುತ್ತಾರೆ, ತಿಳಿದುಕೊಳ್ಳುವ ಆತ್ಮವು ಒಳಗಡೆಯಿದೆಯಲ್ಲವೆ. ಚಿತ್ರವನ್ನು ಮುಂದಿಟ್ಟರೆ ಓದಬಹುದಲ್ಲವೆ. ಆತ್ಮದಲ್ಲಿ ಬುದ್ಧಿಯಿದೆಯಲ್ಲವೆ. ಭಲೇ ಕುರುಡರು, ಕುಂಟರಾಗಿರಬಹುದು ಆದರೆ ಒಂದಲ್ಲ ಒಂದು ಪ್ರಕಾರದಿಂದ ತಿಳಿದುಕೊಳ್ಳಬಹುದು. ಕುರುಡರಿಗೆ ಕಿವಿಯಿದೆಯಲ್ಲವೆ! ನಿಮ್ಮ ಏಣಿಯ ಚಿತ್ರವು ಬಹಳ ಚೆನ್ನಾಗಿದೆ, ಈ ಜ್ಞಾನ ಯಾರಿಗಾದರೂ ತಿಳಿಸಿ ಸ್ವರ್ಗದಲ್ಲಿ ಹೋಗಲು ಯೋಗ್ಯರನ್ನಾಗಿ ಮಾಡಬಹುದು. ಆತ್ಮವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತದೆ, ಸ್ವರ್ಗದಲ್ಲಿ ಹೋಗಬಹುದಾಗಿದೆ. ಭಲೇ ಕರ್ಮೇಂದ್ರಿಯಗಳು ಬಲಹೀನವಾಗಿರಬಹುದು ಆದರೆ ಸತ್ಯಯುಗದಲ್ಲಿ ಕುರುಡರು-ಕುಂಟರು ಇರುವುದಿಲ್ಲ. ಅಲ್ಲಿ ಆತ್ಮ ಮತ್ತು ಶರೀರವು ಕಂಚನದ (ಚಿನ್ನ) ಸಮಾನವಾಗಿರುತ್ತದೆ, ಪ್ರಕೃತಿಯೂ ಚಿನ್ನದ ಸಮಾನವಾಗಿರುತ್ತದೆ. ಅಲ್ಲಿನ ಪ್ರತಿಯೊಂದು ವಸ್ತುವು ಚಿನ್ನದ ಸಮಾನವಾಗಿರುತ್ತದೆ, ಇದೂ ಸಹ ಡ್ರಾಮಾದಲ್ಲಿ ಮಾಡಲ್ಪಟ್ಟಿರುತ್ತದೆ. ಒಂದು ಸೆಕೆಂಡಿನ ತರಹ ಮತ್ತೊಂದು ಸೆಕೆಂಡ್ ಸಿಗುವುದಿಲ್ಲ, ಸ್ವಲ್ಪವಾದರೂ ವ್ಯತ್ಯಾಸವಿರುತ್ತದೆ. ಇಂತಹ ಡ್ರಾಮಾವನ್ನು ಸಾಕ್ಷಿಯಾಗಿ ನೋಡಬೇಕು. ಈ ಜ್ಞಾನವು ನಿಮಗೆ ಈಗ ಸಿಗುತ್ತದೆ ಮತ್ತೆಂದೂ ಸಿಗುವುದಿಲ್ಲ. ಮೊದಲು ಈ ಜ್ಞಾನವಿರುವುದಿಲ್ಲ ಇದು ಅನಾದಿ-ಅವಿನಾಶಿ ಮಾಡಿ-ಮಾಡಲ್ಪಟ್ಟ ಡ್ರಾಮ ಆಗಿದೆ ಎಂದು ಹೇಳಲಾಗುತ್ತದೆ. ಇದನ್ನು ಚೆನ್ನಾಗಿ ತಿಳಿದು ಮತ್ತು ಧಾರಣೆ ಮಾಡಿಕೊಂಡು ಅನ್ಯರಿಗೆ ತಿಳಿಸಿಕೊಡಬೇಕು. ನೀವು ಬ್ರಾಹ್ಮಣರೇ ಈ ಜ್ಞಾನವನ್ನು ತಿಳಿದುಕೊಂಡಿದ್ದೀರಿ. ಈ ಸಕ್ಕರೆ ಅನ್ನ ನಿಮಗೆ ಸಿಗುತ್ತದೆ. ಒಳ್ಳೆಯ ವಸ್ತುವನ್ನು ಮಹಿಮೆ ಮಾಡಲಾಗುತ್ತದೆ. ಹೊಸ ಪ್ರಪಂಚವು ಹೇಗೆ ಸ್ಥಾಪನೆಯಾಗುತ್ತದೆ, ಪುನಃ ಈ ರಾಜ್ಯವು ಹೇಗೆ ಆಗುತ್ತದೆ ಎನ್ನುವುದು ನಂಬರ್ವಾರ್ ತಿಳಿದುಕೊಂಡಿದ್ದೀರಿ. ಯಾರು ತಿಳಿದುಕೊಂಡಿದ್ದಾರೆಯೋ ಅವರು ಅನ್ಯರಿಗೂ ತಿಳಿಸಿಕೊಡಬಹುದು, ಬಹಳಷ್ಟು ಖುಷಿಯಿರುತ್ತದೆ, ಕೆಲವರಿಗೆ ಪೈಸೆಯಷ್ಟೂ ಖುಷಿಯಿರುವುದಿಲ್ಲ. ಎಲ್ಲರದೂ ತನ್ನ ತನ್ನದೇ ಆದ ಪಾತ್ರವಾಗಿದೆ. ಯಾರಿಗೆ ಬುದ್ಧಿಯಲ್ಲಿ ಕೂರುತ್ತದೆಯೋ, ವಿಚಾರಸಾಗರ ಮಂಥನ ಮಾಡುತ್ತಾರೆಯೋ ಅವರೇ ಅನ್ಯರಿಗೆ ತಿಳಿಸುತ್ತಾರೆ. ನಿಮ್ಮ ಈ ವಿದ್ಯೆಯಿಂದ ಈ ಪದವಿಯನ್ನು ಪಡೆಯುತ್ತೀರಿ. ನೀವು ಆತ್ಮವೆಂದು ಯಾರಿಗಾದರೂ ತಿಳಿಸಬಹುದು. ಆತ್ಮವೇ ಪರಮಾತ್ಮನನ್ನು ನೆನಪು ಮಾಡುತ್ತದೆ. ಎಲ್ಲಾ ಆತ್ಮಗಳು ಸಹೋದರರಾಗಿದ್ದಾರೆ. ಗಾಡ್ ಈಜ್ ಒನ್ (ದೇವರು ಒಬ್ಬನೆ) ಬಾಕಿ ಎಲ್ಲಾ ಮನುಷ್ಯರಲ್ಲಿಯೂ ಆತ್ಮವಿದೆ. ಎಲ್ಲಾ ಆತ್ಮಗಳಿಗೆ ಪಾರಲೌಕಿಕ ತಂದೆಯೊಬ್ಬರೇ ಆಗಿದ್ದಾರೆ. ಯಾರಿಗೆ ಪಕ್ಕಾ ನಿಶ್ಚಯ ಬುದ್ಧಿಯಿರುತ್ತದೆಯೋ ಅವರನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಕಚ್ಚಾ ಇದ್ದರೆ ಬೇಗ ಬದಲಾಯಿಸುತ್ತಾರೆ. ಸರ್ವವ್ಯಾಪಿಯ ಜ್ಞಾನದ ಬಗ್ಗೆ ಎಷ್ಟೊಂದು ಚರ್ಚೆ ಮಾಡುತ್ತಾರೆ, ಅವರೂ ತನ್ನ ಜ್ಞಾನದಲ್ಲಿ ಪಕ್ಕಾ ಇದ್ದಾರೆ. ಅವರು (ಮನುಷ್ಯರು) ನಮ್ಮ ಜ್ಞಾನದವರಲ್ಲ, ಅವರನ್ನು ದೇವತಾ ಧರ್ಮದವರು ಎಂದು ಹೇಳಲಾಗುವುದಿಲ್ಲ. ಆದಿ ಸನಾತನ ದೇವಿ-ದೇವತಾ ಧರ್ಮವು ಪ್ರಾಯಲೋಪವಾಗಿದೆ. ನಮ್ಮ ಆದಿ ಸನಾತನ ಧರ್ಮವು ಪವಿತ್ರ ಪ್ರವೃತ್ತಿಯಾಗಿತ್ತು ಎಂದು ನೀವು ಮಕ್ಕಳಿಗೆ ಗೊತ್ತಿದೆ, ಈಗ ಅಪವಿತ್ರವಾಗಿದೆ. ಯಾರು ಮೊದಲು ಪೂಜ್ಯರಾಗಿದ್ದರೋ ಅವರೇ ಪೂಜಾರಿಯಾಗಿದ್ದಾರೆ. ಬಹಳ ಮಾತುಗಳು ಕಂಠ ಪಾಠ ಮಾಡಿದ್ದರೆ ತಿಳಿಸುತ್ತಿರುತ್ತಾರೆ. ತಂದೆಯು ನಿಮಗೆ ತಿಳಿಸುತ್ತಾರೆ - ನೀವು ಅನ್ಯರಿಗೆ ಈ ಸೃಷ್ಟಿ ಚಕ್ರವು ಹೇಗೆ ಸುತ್ತುತ್ತದೆ ಎಂದು ತಿಳಿಸಿರಿ. ನಿಮ್ಮ ವಿನಃ ಬೇರೆ ಯಾರೂ ತಿಳಿದಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ. ತಂದೆಯು ಗಳಿಗೆ-ಗಳಿಗೆಗೆ ಪುನರಾವರ್ತನೆ ಮಾಡಬೇಕಾಗುತ್ತದೆ ಏಕೆಂದರೆ ಹೊಸಬರು ಬರುತ್ತಿರುತ್ತಾರೆ. ಆದಿಯಲ್ಲಿ ಹೇಗೆ ಸ್ಥಾಪನೆಯಾಯಿತು ಎಂದು ನಿಮ್ಮನ್ನು ಕೇಳಿದರೆ ನೀವು ಪುನರಾವರ್ತನೆ ಮಾಡಬೇಕಾಗುತ್ತದೆ. ನೀವು ಬಹಳ ಚಟುವಟಿಕೆಯಿಂದಿರುತ್ತೀರಿ. ಚಿತ್ರಗಳ ಬಗ್ಗೆ ನೀವು ತಿಳಿಸಿಕೊಡಬಹುದು ಆದರೆ ಜ್ಞಾನದ ಧಾರಣೆಯು ಎಲ್ಲರಿಗೂ ಏಕರಸವಾಗಿ ಆಗುವುದಿಲ್ಲ. ಇದರಲ್ಲಿ ಜ್ಞಾನವೂ ಬೇಕು, ಯೋಗವೂ ಬೇಕು, ಧಾರಣೆಯೂ ಬೇಕು. ಸತೋಪ್ರಧಾನರಾಗಲು ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕು. ಕೆಲವು ಮಕ್ಕಳಂತೂ ತನ್ನ ಕೆಲಸ-ಕಾರ್ಯಗಳಲ್ಲಿ ತತ್ಪರರಾಗಿರುತ್ತಾರೆ ಸ್ವಲ್ಪವೂ ಪುರುಷಾರ್ಥ ಮಾಡುವುದಿಲ್ಲ. ಇದೂ ಡ್ರಾಮಾದಲ್ಲಿ ನಿಗಧಿತವಾಗಿದೆ. ಕಲ್ಪದ ಹಿಂದೆ ಯಾರೆಷ್ಟು ಪುರುಷಾರ್ಥ ಮಾಡಿದ್ದರೋ ಅಷ್ಟೇ ಪುರುಷಾರ್ಥ ಮಾಡುತ್ತಾರೆ. ಅಂತಿಮದಲ್ಲಿ ನೀವು ಸಂಪೂರ್ಣ ಸಹೋದರ-ಸಹೋದರರಾಗಿರಬೇಕು. ಅಶರೀರಿಯಾಗಿ ಬಂದೆವು ಅಶರೀರಿಯಾಗಿ ಹೋಗಬೇಕು. ಅಂತ್ಯದಲ್ಲಿ ಬೇರೆ ಯಾರೂ ನೆನಪಿಗೆ ಬರಬಾರದು. ಈಗಂತೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ವಿನಾಶವಾಗುವವರೆಗೂ ಸ್ವರ್ಗದಲ್ಲಿ ಹೋಗಲು ಹೇಗೆ ಸಾಧ್ಯ. ಸೂಕ್ಷ್ಮ ವತನದಲ್ಲಿ ಹೋಗುತ್ತಾರೆ ಅಥವಾ ಇಲ್ಲಿಯೇ ಜನ್ಮ ಪಡೆಯುತ್ತಾರೆ ಬಾಕಿ ಯಾವುದರ ಕೊರತೆಯಿದೆಯೋ ಅದರ ಪುರುಷಾರ್ಥ ಮಾಡುತ್ತಾರೆ. ಆದರೂ ದೊಡ್ಡವರಾದ ಮೇಲೆ ತಿಳಿಯಬಹುದು. ಇದೂ ಡ್ರಾಮಾದಲ್ಲಿ ನಿಗಧಿತವಾಗಿದೆ. ನಿಮ್ಮ ಏಕರಸ ಸ್ಥಿತಿಯು ಅಂತ್ಯದಲ್ಲಿಯೇ ಆಗುತ್ತದೆ. ಬರೆದರೆ ಎಲ್ಲವೂ ನೆನಪಿಗೆ ಬರುತ್ತದೆ ಎಂದಲ್ಲ. ಹಾಗಾದರೆ ಪುಸ್ತಕ ಸಂಗ್ರಹಾಲಯದಲ್ಲಿ ಇಷ್ಟು ಪುಸ್ತಕಗಳು ಏಕೆ ಇರುತ್ತವೆ. ವೈದ್ಯರು, ವಕೀಲರು ಬಹಳ ಪುಸ್ತಕಗಳನ್ನು ಇಟ್ಟುಕೊಂಡಿರುತ್ತಾರೆ, ಅಭ್ಯಾಸ ಮಾಡುತ್ತಿರುತ್ತಾರೆ. ಅಲ್ಲಿ ಮನುಷ್ಯರು ಮನುಷ್ಯರಿಗೆ ವಕೀಲರಾಗಿರುತ್ತಾರೆ ಆದರೆ ನೀವಾತ್ಮರು ಆತ್ಮರಿಗೆ ವಕೀಲರಾಗುತ್ತೀರಿ. ಆತ್ಮಗಳು ಆತ್ಮಗಳಿಗೆ ಓದಿಸುತ್ತಾರೆ. ಅದು ಶಾರೀರಿಕ ವಿದ್ಯೆಯಾಗಿದೆ, ಇದು ಆತ್ಮಿಕ ವಿದ್ಯೆಯಾಗಿದೆ. ಈ ಆತ್ಮಿಕ ವಿದ್ಯೆಯಿಂದ ನಂತರ 21 ಜನ್ಮಗಳಲ್ಲಿ ಎಂದೂ ತಪ್ಪುಗಳಾಗುವುದಿಲ್ಲ. ಮಾಯೆಯ ರಾಜ್ಯದಲ್ಲಿಯೇ ಬಹಳ ತಪ್ಪುಗಳಾಗುತ್ತಿರುತ್ತವೆ ಆದಕಾರಣ ಸಹನೆ ಮಾಡಬೇಕಾಗುತ್ತದೆ. ಯಾರು ಪೂರ್ಣ ರೀತಿಯಲ್ಲಿ ಓದುವುದಿಲ್ಲವೋ, ಕರ್ಮಾತೀತ ಸ್ಥಿತಿಯನ್ನು ಪಡೆಯುವುದಿಲ್ಲವೋ ಅವರು ಸಹನೆ ಮಾಡಲೇಬೇಕಾಗುತ್ತದೆ ನಂತರ ಪದವಿಯೂ ಕಡಿಮೆಯಾಗುತ್ತದೆ. ವಿಚಾರ ಸಾಗರ ಮಂಥನ ಮಾಡಿ ಅನ್ಯರಿಗೆ ತಿಳಿಸಿದಾಗ ಚಿಂತನೆ ನಡೆಯುತ್ತದೆ. ಮಕ್ಕಳು ತಿಳಿದುಕೊಂಡಿದ್ದೀರಾ - ಕಲ್ಪದ ಹಿಂದೆಯೂ ತಂದೆಯು ಬಂದಿದ್ದರು, ಅವರ ಶಿವ ಜಯಂತಿಯನ್ನು ಆಚರಿಸಲಾಗಿತ್ತು. ಯುದ್ಧ ಮುಂತಾದ ಮಾತಿಲ್ಲ. ಅದೆಲ್ಲವೂ ಶಾಸ್ತ್ರಗಳ ಮಾತುಗಳಾಗಿವೆ, ಇದು ವಿದ್ಯೆಯಾಗಿದೆ ಸಂಪಾದನೆಯಲ್ಲಿ ಖುಷಿಯಿರುತ್ತದೆ. ಯಾರಿಗೆ ಲಕ್ಷಾಂತರ ಹಣವಿರುತ್ತದೆಯೋ ಅವರಿಗೆ ಖುಷಿಯಿರುತ್ತದೆ, ಕೆಲವರು ಲಕ್ಷಾಧಿಪತಿಗಳೂ ಸಹ ಇರುತ್ತಾರೆ, ಕೆಲವರಿಗೆ ಏನೂ ಇರುವುದಿಲ್ಲ. ಯಾರ ಬಳಿ ಎಷ್ಟು ಜ್ಞಾನರತ್ನಗಳಿವೆಯೋ ಅಷ್ಟು ಖುಷಿಯೂ ಇರುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
೧. ವಿಚಾರ ಸಾಗರ ಮಂಥನ ಮಾಡಿ ಸ್ವಯಂನ್ನು ಜ್ಞಾನ ರತ್ನಗಳಿಂದ ತುಂಬಿಸಿಕೊಳ್ಳಬೇಕು. ಜ್ಞಾನದ ರಹಸ್ಯವನ್ನು ಚೆನ್ನಾಗಿ ತಿಳಿದುಕೊಂಡು ಅನ್ಯರಿಗೂ ತಿಳಿಸಬೇಕು. ಯಾವುದೇ ಮಾತಿನಲ್ಲಿ ದುಃಖಿಗಳಾಗದೆ ಸದಾ ಹರ್ಷಿತರಾಗಿರಬೇಕು.

೨. ತಮ್ಮ ಸ್ಥಿತಿಯನ್ನು ಬಹಳ ಕಾಲದಿಂದ ಏಕರಸ ಮಾಡಿಕೊಳ್ಳಬೇಕು ಏಕೆಂದರೆ ಅಂತ್ಯದಲ್ಲಿ ಒಬ್ಬ ತಂದೆಯ ವಿನಃ ಬೇರೆ ಯಾರ ನೆನಪೂ ಬರಬಾರದು. ನಾವು ಸಹೋದರ-ಸಹೋದರರಾಗಿದ್ದೇವೆ, ಹಿಂತಿರುಗಿ ಹೋಗುತ್ತೇವೆ ಎನ್ನುವ ಅಭ್ಯಾಸ ಮಾಡಬೇಕು.

ವರದಾನ:
ಎಲ್ಲವನ್ನು ತಂದೆಗೆ ಒಪ್ಪಸಿ ಕಮಲ ಪುಷ್ಪ ಸಮಾನ ನ್ಯಾರೆ-ಪ್ಯಾರೆ ಆಗಿರುವಂತಹ ಡಬ್ಬಲ್ ಲೈಟ್ ಭವ.

ತಂದೆಗೆ ಮಗುವಾಗುವುದು ಅರ್ಥಾತ್ ಎಲ್ಲಾ ಹೊರೆಯನ್ನು ತಂದೆಗೆ ಕೊಟ್ಟು ಬಿಡುವುದು. ಡಬ್ಬಲ್ ಲೈಟ್ ನ ಅರ್ಥವೇ ಇದಾಗಿದೆ ಎಲ್ಲವನ್ನೂ ತಂದೆಗೆ ಅರ್ಪಿಸಿ ಬಿಡುವುದು. ಈ ತನುವೂ ಸಹ ನನ್ನದಲ್ಲ. ಯಾವಾಗ ಈ ತನುವೂ ನನ್ನದಲ್ಲ ಎಂದಮೇಲೆ ಬಾಕಿ ಏನು ಉಳಿಯುವುದು. ನಿಮ್ಮೆಲ್ಲರ ಪ್ರತಿಜ್ಞೆ ಇದೇ ಆಗಿದೆ ಈ ತನುವೂ ನಿನ್ನದು, ಮನಸ್ಸು ನಿನ್ನದು, ಧನವೂ ನಿನ್ನದು - ಯಾವಾಗ ಎಲ್ಲವೂ ನಿನ್ನದೇ ಎಂದಮೇಲೆ ಹೊರೆ ಯಾವ ಮಾತಿನದು. ಆದ್ದರಿಂದ ಕಮಲ ಪುಷ್ಪದ ದೃಷ್ಟಾಂತ ಸ್ಮೃತಿಯಲ್ಲಿಟ್ಟುಕೊಂಡು ಸದಾ ನ್ಯಾರೆ ಮತ್ತು ಪ್ಯಾರೆ ಆಗಿರಿ ಆಗ ಡಬ್ಬಲ್ ಲೈಟ್ ಆಗಿ ಬಿಡುವಿರಿ.

ಸ್ಲೋಗನ್:
ಆತ್ಮೀಯತೆಯಿಂದ ರೋಷವನ್ನು ಸಮಾಪ್ತಿ ಮಾಡಿ, ಸ್ವಯಂನ್ನು ಶರೀರದ ಸ್ಮೃತಿಯಿಂದ ಕರಗಿಸಿ ಬಿಡುವಂತಹವರೇ ಸತ್ಯ ಪಾಂಡವರಾಗಿದ್ದಾರೆ.