18.01.19 Morning Kannada Murli Om Shanti
BapDada Madhuban
“ಮದುರ ಮಕ್ಕಳೇ
ಪರಿಪೂರ್ಣರಾಗಬೇಕಾದರೆ ಪ್ರಾಮಾಣಿಕತೆ ಹಾಗೂ ಸತ್ಯತೆಯಿಂದ ನೋಡಿಕೊಳ್ಳಿ. ನನ್ನಲ್ಲಿ ಯಾವ್ಯಾವ
ಬಲಹೀನತೆಗಳಿವೆ ಎಂದು, ತಂದೆಯಿಂದ ಸಲಹೆ ಪಡೆಯುತ್ತಾ ಆ ಬಲಹೀನತೆಗಳನ್ನು ತೆಗೆಯುತ್ತಾ ಹೋಗಿ”
ಪ್ರಶ್ನೆ:
ಯಾರು ಸದಾ
ಪ್ರಸನ್ನಚಿತ್ತರಾಗಿರಲು ಸಾಧ್ಯ? ಪ್ರಸನ್ನಚಿತ್ತರಾಗಿರಲು ಸಾಧನವೇನಾಗಿದೆ?
ಉತ್ತರ:
ಯಾರು
ಜ್ಞಾನದಲ್ಲಿ ಬಹಳ ಬುದ್ಧಿವಂತರಾಗಿರುತ್ತಾರೆಯೋ, ಯಾರು ಡ್ರಾಮಾವನ್ನು ಕಥೆಯ ರೀತಿ ತಿಳಿದುಕೊಂಡು
ಮತ್ತು ಸ್ಮರಣೆ ಮಾಡುತ್ತಾರೆಯೋ ಅವರೇ ಸದಾ ಪ್ರಸನ್ನಚಿತ್ತರಾಗಿರಲು ಸಾಧ್ಯ. ಪ್ರಸನ್ನರಾಗಿರಲು ಸದಾ
ತಂದೆಯ ಶ್ರೀಮತದಂತೆ ನಡೆಯುತ್ತಿರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯು ಏನೆಲ್ಲಾ
ತಿಳಿಸುತ್ತಾರೆಯೋ ಅದನ್ನು ಚೆನ್ನಾಗಿ ಮಂಥನ ಮಾಡಿ. ವಿಚಾರ ಸಾಗರ ಮಂಥನ ಮಾಡುತ್ತಾ-ಮಾಡುತ್ತಾ
ಪ್ರಸನ್ನರಾಗುತ್ತೀರಿ.
ಓಂ ಶಾಂತಿ.
ಈಗ ನೀವು ಮಕ್ಕಳ
ಪ್ರೀತಿ ಅಥವಾ ಪ್ರೇಮ ಒಬ್ಬ ತಂದೆಯ ಜೊತೆ ಇದೆ. ಯಾವ ಆತ್ಮಕ್ಕೆ ಹೇಳುವಿರಿ ಅದನ್ನು ಬೆಂಕಿಯಲ್ಲಿ
ಸುಡಲಾಗುವುದಿಲ್ಲ, ನೀರಿನಲ್ಲಿ ಮುಳುಗಿಸಲಾಗುವುದಿಲ್ಲ. ಅಂತಹ ಆತ್ಮದ ಯೋಗ ಈಗ ತಂದೆಯ ಜೊತೆ ಇದೆ.
ಅವರನ್ನು ಪರಂ ಜ್ಯೋತಿ ಎಂದೂ ಸಹಾ ಹೇಳುತ್ತಾರೆ. ಯಾವುದರ ಮೇಲೆ ಪತಂಗಗಳು ಹೋಗಿ ಸುಟ್ಟು ಸಾಯುತ್ತವೆ.
ಕೆಲವು ಸುತ್ತೊಡೆಯುತ್ತಾ ನಾಟ್ಯವಾಡುತ್ತವೆ, ಕೆಲವು ಸುಟ್ಟು ಬಲಿಹಾರಿಯಾಗುತ್ತವೆ. ಪರಂ ಜ್ಯೋತಿಗೆ
ಇಡೀ ಸೃಷ್ಠಿಯೇ ಬಲಿಯಾಗಬೇಕಿದೆ. ಆ ತಂದೆ ಪರಂ ಜ್ಯೋತಿಯ ಜೊತೆ ನೀವು ಮಕ್ಕಳೂ ಸಹಾ
ಸಹಯೋಗಿಗಳಾಗಿರುವಿರಿ. ಎಲ್ಲಿ-ಎಲ್ಲಿ ಸೇವಾ ಕೇಂದ್ರಗಳಿವೆ ಅಲ್ಲಿ ಎಲ್ಲರೂ ಬಂದು ನೀವು ಮಕ್ಕಳ
ಮೂಲಕ ಪರಂಜ್ಯೋತಿಯ ಮೇಲೆ ಬಲಿಹಾರಿಯಾಗುತ್ತಾರೆ. ತಂದೆ ಹೇಳುತ್ತಾರೆ ಯಾರು ನನ್ನ ಮೇಲೆ
ಬಲಿಹಾರಿಯಾಗುತ್ತಾರೆ, ನಾನು ನಂತರ ಅವರ ಮೇಲೆ 21 ಬಾರಿ ಬಲಿಹಾರಿಯಾಗುತ್ತೇನೆ. ಈಗ ಇದನ್ನಂತೂ
ಮಕ್ಕಳು ತಿಳಿದುಕೊಂಡಿರುವಿರಿ ವೃಕ್ಷ ನಿಧಾನವಾಗಿ ವೃದ್ಧಿಯಾಗುವುದು. ದೀಪಾವಳಿಯಲ್ಲಿ ನೋಡಿರುವಿರಿ
ಸಣ್ಣ-ಸಣ್ಣ ಪತಂಗಗಳು ಹೇಗೆ ಬಲಿಹಾರಿಯಾಗುತ್ತವೆ. ನೀವು ಮಕ್ಕಳು ಎಷ್ಟೆಷ್ಟು ಯೋಗವಿಡುವಿರಿ, ಶಕ್ತಿ
ಧಾರಣೆ ಮಾಡುವಿರಿ ಅಷ್ಟೂ ನೀವೂ ಸಹಾ ಪರಂ ಜ್ಯೋತಿಯ ಸಮಾನ ಆಗಿ ಬಿಡುವಿರಿ. ಈಗಂತೂ ಎಲ್ಲರ ಜ್ಯೋತಿ
ಆರಿ ಹೋಗಿದೆ. ಯಾರಲ್ಲಿಯೂ ಶಕ್ತಿಯಿಲ್ಲ. ಆತ್ಮರೆಲ್ಲರೂ ಸುಳ್ಳಾಗಿ ಹೋಗಿದ್ದಾರೆ. ಇತ್ತೀಚೆಗೆ ನಕಲಿ
ಚಿನ್ನವೂ ಸಹಾ ಈ ರೀತಿ ಕಂಡು ಬರುವುದು ಹೇಗೆ ಸತ್ಯ ಚಿನ್ನದ ಹಾಗೆ, ಆದರೆ ಅದರ ಬೆಲೆ ಏನು ಇಲ್ಲ. ಈ
ರೀತಿ ಆತ್ಮಗಳೂ ಸಹಾ ಸುಳ್ಳಾಗಿ ಬಿಟ್ಟಿವೆ. ಸತ್ಯ ಚಿನ್ನಕ್ಕೇ ಅಲಾಯ್ ಮಿಕ್ಸ್ ಮಾಡುತ್ತಾರೆ.
ಆದ್ದರಿಂದ ಆತ್ಮದಲ್ಲಿ ತುಕ್ಕು ಹಿಡಿದಿದೆ ಈ ಕಾರಣದಿಂದ ಭಾರತ ಮತ್ತು ಇಡೀ ಪ್ರಪಂಚ ಬಹಳ
ದುಃಖಿಯಾಗಿದೆ. ಈಗ ನೀವು ಯೋಗ ಅಗ್ನಿಯಿಂದ ತುಕ್ಕನ್ನು ಭಸ್ಮ ಮಾಡಿ ಪವಿತ್ರರಾಗಬೇಕು. ಪ್ರತಿಯೊಬ್ಬ
ಮಗು ತಮ್ಮನ್ನು ತಾವು ಕೇಳಿಕೊಳ್ಳಬೇಕು ತಂದೆಯಿಂದ ನಮಗೆ ಎಲ್ಲವೂ ಸಿಕ್ಕಿದೆಯಾ? ಯಾವುದೇ ವಸ್ತುವಿನ
ಕೊರತೆ ನನ್ನಲ್ಲಿ ಇಲ್ಲವೇ? ನಮ್ಮೊಳಗೆ ನಾವು ನೋಡಬೇಕಾಗುವುದು. ಹೇಗೆ ನಾರದನನ್ನು ಕೇಳಲಾಯಿತಲ್ಲವೆ
ಲಕ್ಷ್ಮೀಯನ್ನು ವರಿಸಲು ನೀನು ಲಾಯಕ್ಕಾಗಿರುವೆ ಎಂದು ತಿಳಿದಿರುವೆಯಾ? ತಂದೆಯೂ ಕೇಳುತ್ತಾರೆ
ಲಕ್ಷ್ಮೀಯನ್ನು ವರಿಸಲು ಲಾಯಕ್ಕಾಗಿರುವಿರಾ? ಎಂದು. ಏನೇನು ಕೊರತೆಗಳಿವೆ, ಯಾವುದನ್ನು ತೆಗೆದು
ಹಾಕಲು ಬಹಳ ಪುರುಷಾರ್ಥ ಮಾಡಬೇಕಿದೆ. ಹಾಗೆ ನೋಡಿದರೆ ಸ್ವಲ್ಪವೂ ಪುರುಷಾರ್ಥ ಮಾಡುತ್ತಿಲ್ಲ.
ಕೆಲವರು ಒಳ್ಳೆಯ ರೀತಿಯಲ್ಲಿ ಪುರುಷಾರ್ಥ ಮಾಡುತ್ತಿದ್ದಾರೆ. ಹೊಸ-ಹೊಸ ಮಕ್ಕಳಿಗೆ ಅರ್ಥ
ಮಾಡಿಸಲಾಗುತ್ತದೆ ತಿಳಿಸಿ ನಿಮ್ಮಲ್ಲಿ ಯಾವುದೇ ಕೊರತೆ ಇಲ್ಲ ತಾನೆ! ಏಕೆಂದರೆ ಈಗ ನೀವು
ಪರಿಪೂರ್ಣರಾಗಬೇಕಿದೆ, ತಂದೆ ಬರುವುದೇ ಪರಿಪೂರ್ಣರನ್ನಾಗಿ ಮಾಡಲು. ಆದ್ದರಿಂದ ನಿಮ್ಮ ಒಳಗೆ
ಪರೀಕ್ಷಿಸಿಕೊಳ್ಳಿ ನಾನು ಈ ಲಕ್ಷ್ಮೀ-ನಾರಾಯಣರ ತರಹ ಪರಿಪೂರ್ಣ ಆಗಿರುವೆನಾ? ನಿಮ್ಮ ಗುರಿ
ಉದ್ದೇಶವೇ ಇದಾಗಿದೆ. ಒಂದು ವೇಳೆ ಏನಾದರೂ ಕೊರತೆ ಇದ್ದಲ್ಲಿ ತಂದೆಗೆ ತಿಳಿಸಬೇಕಾಗಿದೆ.
ಇಂತಹ-ಇಂತಹ ಕೊರತೆ ನನ್ನಿಂದ ಬಿಟ್ಟು ಹೋಗುತ್ತಿಲ್ಲ, ಬಾಬಾ ನನಗೆ ಈ ಬಗ್ಗೆ ಏನಾದರೂ ಉಪಾಯ ತಿಳಿಸಿ.
ಕಾಯಿಲೆ ಸರ್ಜ್ನ್ ಮೂಲಕವೇ ಬಿಟ್ಟು ಹೋಗಲು ಸಾಧ್ಯ. ಆದ್ದರಿಂದ ಪ್ರಾಮಾಣಿಕವಾಗಿ ಸತ್ಯತೆಯಿಂದ
ನೋಡಿಕೊಳ್ಳಿ ನನ್ನಲ್ಲಿ ಏನು ಕಡಿಮೆಗಳಿವೆ! ಯಾವುದರಿಂದ ನಾವು ಪದವಿಯನ್ನು ಪಡೆಯಲು
ಸಾಧ್ಯವಾಗುವುದಿಲ್ಲಾ ಎಂದು ತಿಳಿಯುವಿರಿ. ತಂದೆಯಂತೂ ತಿಳಿಸುತ್ತಾರೆ ನೀವು ಇವರ ತರಹವೇ ಆಗಲು
ಸಾಧ್ಯ ಎಂದು. ನಿಮ್ಮ ಕಡಿಮೆಗಳನ್ನು ಹೇಳಿಕೊಂಡಾಗ ಮಾತ್ರ ತಂದೆ ಸಲಹೆಯನ್ನು ಕೊಡಲು ಸಾಧ್ಯ.
ಕಡಿಮೆಗಳು ಬಹಳ ಜನರಲ್ಲಿ ಇದೆ. ಕೆಲವರಲ್ಲಿ ಕ್ರೋಧ ಇದೆ ಅಥವಾ ಲೋಭವಿದೆ ಅಥವಾ ವ್ಯರ್ಥ ಚಿಂತನೆಯಿದೆ,
ಆದ್ದರಿಂದ ಅವರಿಗೆ ಜ್ಞಾನದ ಧಾರಣೆಯಾಗಲು ಸಾಧ್ಯವಿಲ್ಲ. ಅವರು ಬೇರೆಯವರಿಗೂ ಧಾರಣೆ ಮಾಡಿಸಲು
ಸಾಧ್ಯವಿಲ್ಲ. ತಂದೆ ಪ್ರತಿನಿತ್ಯ ಅರ್ಥ ಮಾಡಿಸುತ್ತಾರೆ, ವಾಸ್ತವದಲ್ಲಿ ಇಷ್ಟು ಅರ್ಥ ಮಾಡಿ
ತಿಳಿಸಲು ಅವಶ್ಯಕತೆ ಇಲ್ಲ, ಇದೆಲ್ಲಾ ಧಾರಣೆ ಮಾಡುವಂತಹ ಮಾತಾಗಿದೆ, ಮಂತ್ರ ಬಹಳ ಚೆನ್ನಾಗಿದೆ,
ಯಾವುದರ ಅರ್ಥವನ್ನು ತಂದೆ ತಿಳಿಸುತ್ತಲೇ ಇರುತ್ತಾರೆ. ಇಷ್ಟು ದಿನಗಳಿಂದ ಅರ್ಥ ಮಾಡಿಸುತ್ತಲೇ
ಇದ್ದಾರೆ ಮಾತು ಒಂದೇ ಆಗಿದೆ, ಬೆಹದ್ದಿನ ತಂದೆಯಿಂದ ನಾವು ಹೀಗೆ ಆಗಬೇಕು. 5 ವಿಕಾರಗಳನ್ನು
ಜಯಿಸುವ ಮಾತು ಈಗಿನದೇ ಆಗಿದೆ. ಯಾವ ಭೂತಗಳು ದುಃಖವನ್ನು ಕೊಡುತ್ತವೆ ಅವುಗಳನ್ನು ತೆಗೆದು ಹಾಕುವ
ಯುಕ್ತಿಯನ್ನು ತಂದೆ ತಿಳಿಸುತ್ತಾರೆ, ಆದರೆ ಮೊದಲು ವರ್ಣನೆ ಮಾಡಲಾಗುವುದು. ಈ ಭೂತವು ನಮಗೆ
ಇಂತಹ-ಇಂತಹ ತೊಂದರೆ ಮಾಡುವುದು. ನೀವು ತಿಳಿದಿರುವಿರಿ ನಿಮ್ಮಲ್ಲಿ ಆ ತರಹದ ಯಾವುದೇ ಭೂತ ಇಲ್ಲ, ಈ
ವಿಕಾರವೇ ಜನ್ಮ-ಜನ್ಮಾಂತರದ ಭೂತವಾಗಿದೆ ಯಾವುದು ನಮಗೆ ದುಃಖ ಕೊಟ್ಟಿದೆ. ಆದ್ದರಿಂದ ತಂದೆಯ ಬಳಿ
ನಿಮ್ಮ ಒಳ ಮನಸ್ಸನ್ನು ಬಿಚ್ಚಿಡಬೇಕಿದೆ-ನನ್ನಲ್ಲಿ ಇಂತಹ-ಇಂತಹ ಭೂತವಿದೆ ಅದನ್ನು ಹೇಗೆ
ತೆಗೆದುಹಾಕುವುದು! ಕಾಮರೂಪಿ ಭೂತಕ್ಕಂತೂ ಪ್ರತೀ ದಿನ ತಂದೆ ತಿಳಿಸುತ್ತಲೇ ಇರುತ್ತಾರೆ. ಕಣ್ಣೂ
ಬಹಳ ಮೋಸ ಮಾಡುತ್ತದೆ ಆದ್ದರಿಂದ ಆತ್ಮವನ್ನು ನೋಡುವ ಅಭ್ಯಾಸ ಒಳ್ಳೆ ರೀತಿಯಲ್ಲಿ ಮಾಡಿಕೊಳ್ಳಬೇಕು.
ನಾನು ಆತ್ಮನಾಗಿದ್ದೇನೆ, ಇವರೂ ಸಹಾ ಆತ್ಮ ಆಗಿದ್ದಾರೆ. ಭಲೇ ಶರೀರವಿದೆ ಆದರೆ ಕಾಯಿಲೆಯಿಂದ
ಬಿಡಿಸಿಕೊಳ್ಳಲು ತಿಳಿಸಿ ಹೇಳಲಾಗುವುದು. ನೀವು ಆತ್ಮರಂತೂ ಸಹೋದರ-ಸಹೋದರರಾಗಿರುವಿರಲ್ಲವೆ.
ಆದ್ದರಿಂದ ಈ ಶರೀರವನ್ನು ನೋಡಬಾರದು. ನಾವೆಲ್ಲರೂ ಆತ್ಮಗಳು ವಾಪಸ್ಸು ಮನೆಗೆ ಹೋಗಬೇಕಿದೆ. ತಂದೆ
ಬಂದಿದ್ದಾರೆ ನಮ್ಮನ್ನು ಕರೆದುಕೊಂಡು ಹೋಗಲು, ಬಾಕಿ ಇದನ್ನು ನೋಡಬೇಕಿದೆ ನಾವು ಸಂಪೂರ್ಣ
ಸಂಪನ್ನರಾಗಿದ್ದೇವೆಯೇ! ಯಾವ ಗುಣದ ಕೊರತೆಯಿದೆ? ಆತ್ಮವನ್ನು ನೋಡಿ ತಿಳಿಸಲಾಗುವುದು ಈ ಆತ್ಮನಲ್ಲಿ
ಇದರ ಕೊರತೆಯಿದೆ. ಆದ್ದರಿಂದ ಮತ್ತೆ ಕುಳಿತು ಕರೆಂಟ್ ಕೊಡಿ ಇವರಲ್ಲಿನ ಈ ಖಾಯಿಲೆ ಹೊರಟು ಹೋಗಲಿ.
ಮುಚ್ಚಿಡಬಾರದು, ಅವಗುಣ ತಿಳಿಸುತ್ತಿದ್ದರೆ ತಂದೆ ತಿಳುವಳಿಕೆ ಕೊಡುತ್ತಾರೆ. ತಂದೆಯೊಂದಿಗೆ
ಮಾತನಾಡಬೇಕು, ಬಾಬಾ ನೀವು ಇಂತಹವರಾಗಿರುವಿರಿ! ಬಾಬಾ ನೀವು ಎಷ್ಟು ಮಧುರರಾಗಿರುವಿರಿ. ಹಾಗೆ
ತಂದೆಯ ನೆನಪಿನಿಂದ ಬಾಬಾರವರ ಮಹಿಮೆ ಮಾಡುವುದರಿಂದ ಈ ಭೂತಗಳು ಓಡಿ ಹೋಗುತ್ತಿರುತ್ತವೆ ಮತ್ತು
ನಿಮಗೆ ಖುಷಿ ಸಹಾ ಇರುವುದು. ಭಿನ್ನ-ವಿಭಿನ್ನ ಭೂತಗಳಿವೆ. ತಂದೆ ಸಮ್ಮುಖದಲ್ಲಿ ಕುಳಿತಿದ್ದಾರೆ
ಆದ್ದರಿಂದ ಎಲ್ಲವನ್ನೂ ತಿಳಿಸಿ. ಬಾಬಾ ನನಗೆ ಅನ್ನಿಸುತ್ತದೆ ಈ ಅವಸ್ಥೆಯಲ್ಲಿ ನನಗೆ ನಷ್ಟವಾಗಿ
ಬಿಡುವುದು ಎಂದು. ನಾನು ದುಃಖದ ಅನುಭವ ಮಾಡುತ್ತೇನೆ. ತಂದೆಗೆ ದಯೆ ಬರುತ್ತದೆ. ಮಾಯೆಯ ಭೂತಗಳನ್ನು
ಓಡಿಸುವವರು ಒಬ್ಬರೇ ಭಗವಂತ ತಂದೆಯಾಗಿದ್ದಾರೆ. ಆ ಭೂತಗಳನ್ನು ಓಡಿಸಲು ಎಷ್ಟು ಜನರ ಬಾಗಿಲಿಗೆ
ಹೋಗುತ್ತಾರೆ. ಇಲ್ಲಂತೂ ಒಂದೇ ಆಗಿದೆ. ಭಲೇ ಮಕ್ಕಳಿಗೂ ಸಹ ಕಲಿಸಲಾಗುವುದು 5 ವಿಕಾರ ರೂಪಿ
ಭೂತಗಳನ್ನು ಓಡಿಸುವ ಯುಕ್ತಿಯನ್ನು ಎಲ್ಲರಿಗೂ ತಿಳಿಸಿ. ನೀವು ಮಕ್ಕಳು ತಿಳಿದಿರುವಿರಿ ಈ ವೃಕ್ಷ
ಬಹಳ ನಿಧಾನವಾಗಿ ವೃದ್ಧಿಯನ್ನು ಹೊಂದುತ್ತದೆ ಮಾಯೆಯಂತೂ ನಾಲ್ಕೂ ಕಡೆಯಿಂದ ಹೀಗೆ ಮುತ್ತಿಗೆ
ಹಾಕುತ್ತದೆ ಒಂದೇ ಏಟಿಗೆ ಕಳೆದು ಹೋಗುವರು. ತಂದೆಯ ಕೈಯನ್ನೂ ಬಿಟ್ಟು ಬಿಡುವರು. ನೀವು
ಪ್ರತಿಯೊಬ್ಬರ ಕನೆಕ್ಷನ್ ತಂದೆಯ ಜೊತೆಯಲ್ಲಿದೆ. ಮಕ್ಕಳಂತು ಎಲ್ಲರೂ ನಂಬರ್ವಾರ್
ನಿಮಿತ್ತರಾಗಿರುವಿರಿ. ಮಧುರಾತಿ ಮಧುರ ಮಕ್ಕಳಿಗೆ ಬಾಬಾ ಪದೇ-ಪದೇ ತಿಳಿಸುತ್ತಾರೆ ಮಕ್ಕಳೇ
ನಿಮ್ಮನ್ನು ಆತ್ಮ ಎಂದು ತಿಳಿಯಿರಿ, ಈ ಶರೀರ ನನ್ನದಲ್ಲ, ಇದೂ ಸಹಾ ಸಮಾಪ್ತಿಯಾಗುತ್ತದೆ. ನಾವು
ತಂದೆಯ ಬಳಿ ಹೋಗಬೇಕು. ಈ ರೀತಿ ಜ್ಞಾನದ ಮಸ್ತಿಯಲ್ಲಿ ಇರುವುದರಿಂದ ನಿಮ್ಮಲ್ಲಿ ಆಕರ್ಷಣೆ ಬಹಳಷ್ಟು
ಬರುವುದು. ಇದನ್ನಂತೂ ತಿಳಿದಿರುವಿರಿ ಈ ಹಳೆಯ ಶರಿರವನ್ನು ಬಿಡಬೇಕಾಗಿದೆ, ಇಲ್ಲಿ ಇರುವಂತಿಲ್ಲ. ಈ
ಶರೀರದಿಂದ ಮಮತ್ವ ತೆಗೆದು ಹಾಕಬೇಕು. ಈ ಶರೀರದಲ್ಲಿ ಕೇವಲ ಸೇವೆಗಾಗಿ ಮಾತ್ರ ಇರುವಿರಿ, ಇದರಲ್ಲಿ
ಮಮತ್ವ ಇರಬಾರದು. ಕೇವಲ ಮನೆಗೆ ಹೊಗಬೇಕು. ಈ ಸಂಗಮದ ಸಮಯ ಸಹಾ ಪುರುಷಾರ್ಥಕ್ಕಾಗಿ ಬಹಳ
ಅವಶ್ಯಕವಾಗಿದೆ. ಈಗಲೇ ತಿಳಿಯುತ್ತಿದ್ದೇವೆ ನಾವು 84 ಜನ್ಮ ಚಕ್ರದಲ್ಲಿ ಬಂದೆವು, ತಂದೆ
ಹೇಳುತ್ತಾರೆ ನೆನಪಿನ ಯಾತ್ರೆಯಲ್ಲಿರಿ, ಎಷ್ಟು ನೆನಪಿನ ಯಾತ್ರೆಯಲ್ಲಿರುವಿರಿ ಆಗ ನಿಮ್ಮ ಪ್ರಕೃತಿ
ನಿಮಗೆ ದಾಸಿಯಾಗುತ್ತದೆ. ಸನ್ಯಾಸಿಗಳು ಎಂದೂ ಯಾರಿಂದಲೂ ಏನನ್ನು ಕೇಳುವುದಿಲ್ಲ. ಅವರು
ಯೋಗಿಗಳಾಗಿದ್ದಾರಲ್ಲವೆ! ನಿಶ್ಚಯವಿದೆ ನಾವು ಬ್ರಹ್ಮನಲ್ಲಿ ಲೀನವಾಗಬೇಕು ಎಂದು. ಅವರ ಧರ್ಮವೇ
ಬೇರೆಯಾಗಿದೆ, ಬಹಳ ಪಕ್ಕಾ ಆಗಿರುತ್ತಾರೆ, ನಾವು ಹೋಗುತ್ತೇವೆ ಅಷ್ಟೆ, ಈ ಶರೀರ ಬಿಟ್ಟು ಹೋಗುವೆವು,
ಈ ಶರೀರ ಬಿಟ್ಟು ಹೋಗುವುದು. ಆದರೆ ಅವರ ರಸ್ತೆಯೇ ತಪ್ಪಾಗಿದೆ, ಹೋಗಲು ಸಾಧ್ಯವೇ ಇಲ್ಲ, ಬಹಳ
ಪರಿಶ್ರಮ ಪಡುತ್ತಾರೆ. ಭಕ್ತಿ ಮಾರ್ಗದಲ್ಲಿ ದೇವತೆಗಳ ಜೊತೆ ಮಿಲನ ಮಾಡಲು ಕೆಲವರಂತೂ ಜೀವಘಾತವನ್ನು
ಮಾಡಿಕೊಳ್ಳುತ್ತಾರೆ. ಆತ್ಮಘಾತವೆಂದು ಹೇಳಲಾಗುವುದಿಲ್ಲ, ಅದಂತೂ ಆಗುವುದಿಲ್ಲ. ಬಾಕಿ
ಜೀವಘಾತವಾಗುವುದು. ಆದ್ದರಿಂದ ನೀವು ಮಕ್ಕಳು ಸೇವೆಯ ಬಗ್ಗೆ ಹೆಚ್ಚು ರುಚಿ ಇಟ್ಟುಕೊಳ್ಳಿ. ಸೇವೆ
ಮಾಡಿದರೆ ತಂದೆಯೂ ಸಹಾ ನೆನಪಿನಲ್ಲಿರುತ್ತಾರೆ, ಎಲ್ಲಾ ಕಡೆಯೂ ಸೇವೆಯಿದೆ, ಎಲ್ಲಿ ಬೇಕಾದರೂ ನೀವು
ಹೋಗಿ ತಿಳಿಸಿಕೊಡಿ ಏನೂ ಮಾಡುವುದಿಲ್ಲ. ಯೋಗದಲ್ಲಿದ್ದಿದ್ದೇ ಆದರೆ ನೀವು ಅಮರರಾದ ಹಾಗೆ. ಬೇರೆ
ಯಾವುದೇ ವಿಚಾರ ತಲೆಗೆ ಬರುವುದಿಲ್ಲ, ಆದರೆ ಆ ಅವಸ್ಥೆ ಮಜ್ಭೂತ್ ಆಗಿರಲಿ. ಮೊದಲು ನಿಮ್ಮೊಳಗೆ
ನೋಡಿಕೊಳ್ಳಿ ನನ್ನಲ್ಲಿ ಯಾವುದೇ ಕಡಿಮೆಗಳಿಲ್ಲಾ ತಾನೆ! ಕಡಿಮೆ ಇಲ್ಲಾ ಎಂದರೆ ಸೇವೆ ಸಹಾ ಚೆನ್ನಾಗಿ
ಮಾಡಲು ಸಾಧ್ಯ. ಫಾದರ್ ಷೋಸ್ ಸನ್, ಸನ್ ಷೋಸ್ ಫಾದರ್, ತಂದೆ ನಿಮ್ಮನ್ನು ಲಾಯಕ್ಕಾಗಿ ಮಾಡಿದ್ದಾರೆ
ನೀವು ಮಕ್ಕಳು ನಂತರ ಹೊಸಬರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಮಕ್ಕಳನ್ನು ತಂದೆ
ಬುದ್ಧಿವಂತರನ್ನಾಗಿ ಮಾಡಿದ್ದಾರೆ. ಬಾಬಾ ತಿಳಿದಿದ್ದಾರೆ ಬಹಳ ಒಳ್ಳೆ-ಒಳ್ಳೆಯ ಮಕ್ಕಳಿದ್ದಾರೆ ಯಾರು
ಸೇವೆ ಮಾಡಿ ಬರುತ್ತಾರೆ. ಚಿತ್ರಗಳ ಮೇಲೆ ಯಾರಿಗೇ ಆದರೂ ತಿಳಿಸಿಕೊಡುವುದು ಬಹಳ ಸಹಜವಾಗಿದೆ,
ಚಿತ್ರವಿಲ್ಲದೆ ತಿಳಿಸಿಕೊಡುವುದು ಬಹಳ ಕಠಿಣವಾಗಿದೆ. ಹಗಲು-ರಾತ್ರಿ ಇದೇ ಆಲೋಚನೆಯಲ್ಲಿರಬೇಕಾಗಿದೆ
ನಾವು ಇವರ ಜೀವನವನ್ನು ಹೇಗೆ ರೂಪಿಸುವುದು, ಇದರಿಂದ ನಮ್ಮ ಜೀವನವೂ ಸಹಾ ಉನ್ನತಿಯನ್ನು ಹೊಂದುತ್ತದೆ.
ಖುಶಿಯಾಗುವುದು. ಪ್ರತಿಯೊಬ್ಬರಲ್ಲಿಯೂ ಉಮ್ಮಂಗ ಇರುವುದು ನಾವು ನಮ್ಮ ಹಳ್ಳಿಯಲ್ಲಿರುವವರನ್ನು
ಉದ್ದಾರ ಮಾಡಬೇಕು ಎಂದು. ನಮ್ಮ ಸಮಕಾಲೀನರ ಸೇವೆ ಮಾಡಬೇಕು. ತಂದೆಯೂ ಹೇಳುತ್ತಾರೆ ಚಾರಿಟಿ
ಬಿಗಿನ್ಸ್ ಅಟ್ ಹೋಮ್. ಒಂದೇ ಜಾಗದಲ್ಲಿ ಕುಳಿತು ಬಿಡಬಾರದು, ಭ್ರಮಣ ಮಾಡುತ್ತಿರಬೇಕು. ಸನ್ಯಾಸಿಗಳೂ
ಸಹಾ ಯಾರನ್ನಾದರೂ ಗದ್ಧಿಯ ಮೆಲೆ ಕುಳ್ಳಿರಿಸಿ ಖುದ್ಧು ಭ್ರಮಣ ಮಾಡುತ್ತಿರುತ್ತಾರಲ್ಲವೆ. ಈ ರೀತಿ
ಮಾಡುತ್ತಾ-ಮಾಡುತ್ತಾ ವೃದ್ಧಿಯನ್ನು ಪಡೆಯುತ್ತಾರೆ. ಹೊಸ-ಹೊಸಬರು ಅನೇಕರು ಬರುತ್ತಾರೆ - ಅವರದು
ಸ್ವಲ್ಪ ಮಹಿಮೆ ಆಗುವುದು, ಆದ್ದರಿಂದ ಅವರಲ್ಲಿ ಸ್ವಲ್ಪ ಶಕ್ತಿಯೂ ಸಹಾ ಬಂದು ಬಿಡುವುದು. ಹಳೆಯ
ಎಲೆಯೂ ಸಹಾ ಹೊಳೆಯುತ್ತದೆ. ಯಾರಲ್ಲಾದರೂ ಇಂತಹ ಯಾವುದಾದರೂ ಆತ್ಮ ಪ್ರವೇಶವಾದಾಗ ಅವರದೂ
ಉನ್ನತಿಯಾಗಿ ಬಿಡುವುದು. ತಂದೆ ಕುಳಿತು ಶಿಕ್ಷಣ ಕೊಡುತ್ತಾರೆ ಮಕ್ಕಳೇ ಸದಾ ನಿಮ್ಮ ಉನ್ನತಿ
ಮಾಡಿಕೊಳ್ಳಬೇಕು. ಮುದ್ದಿನ ಮಕ್ಕಳೇ, ಮುಂದೆ ಹೋದಂತೆ ನಿಮ್ಮಲ್ಲಿ ಯೋಗ ಬಲದ ಶಕ್ತಿ ಬಂದು ಬಿಡುವುದು
- ನಂತರ ನೀವು ಯಾರಿಗೆ ಸ್ವಲ್ಪ ತಿಳಿಸಿದರೂ ಅವರು ತಕ್ಷಣ ತಿಳಿದುಕೊಂಡು ಬಿಡುತ್ತಾರೆ. ಇದೂ ಸಹಾ
ಜ್ಞಾನ ಬಾಣವಾಗಿದೆಯಲ್ಲವೇ. ಬಾಣ ತಗಲಿದೊಡನೆ ಘಾಸಿಗೊಳಿಸುತ್ತಾರೆ. ಮೊದಲು ಗಾಯಗೊಳ್ಳುತ್ತಾರೆ
ನಂತರ ಬಾಬಾನ ಮಗುವಾಗುತ್ತಾರೆ. ಆದ್ದರಿಂದ ಏಕಾಂತದಲ್ಲಿ ಕುಳಿತು ಯುಕ್ತಿಗಳನ್ನು ರಚಿಸಬೇಕಿದೆ.
ಹೀಗಲ್ಲಾ ರಾತ್ರಿ ಮಲಗಿದೆ ಬೆಳ್ಳಿಗ್ಗೆ ಎದ್ದೆ, ಇಲ್ಲಾ. ಬೆಳಿಗ್ಗೆ ಬೇಗ ಎದ್ದು ಬಾಬಾರವರನ್ನು
ಬಹಳ ಪ್ರೇಮದಿಂದ ನೆನಪು ಮಾಡಬೇಕು. ರಾತ್ರಿಯೂ ಸಹಾ ನೆನಪಿನಲ್ಲಿಯೇ ಮಲಗಬೇಕು. ಬಾಬಾರವರನ್ನು ನೆನಪೇ
ಮಾಡದೆ ಹೋದರೆ ತಂದೆ ಮತ್ತೆ ಪ್ರೀತಿ ಹೇಗೆ ಮಾಡುತ್ತಾರೆ. ಪ್ರಯತ್ನವೇ ಮಾಡುವುದಿಲ್ಲ. ಭಲೇ
ಬಾಬಾನಿಗೆ ಗೊತ್ತಿದೆ ಡ್ರಾಮಾದಲ್ಲಿ ಎಲ್ಲಾ ಪ್ರಕಾರದಲ್ಲಿ ನಂಬರ್ವಾರ್ ಆಗಬೇಕು ಎಂದು ಆದರೂ ಸಹಾ
ಸುಮ್ಮನೆ ಕುಳಿತುಕೊಂಡಂತು ಇರುವುದಿಲ್ಲ. ಪುರುಷಾರ್ಥವನ್ನಂತು ಮಾಡಿಸುತ್ತಾರಲ್ಲವೆ, ಇಲ್ಲದೇ ಹೋದರೆ
ಮುಂದೆ ಬಹಳ ಪಶ್ಚಾತಾಪ ಪಡಬೇಕಾಗುವುದು. ಬಾಬಾ ನಮಗೆ ಎಷ್ಟು ತಿಳಿಸಿ ಹೇಳುತ್ತಿದ್ದರು! ಬಹಳ
ಪಶ್ಚಾತಾಪ ಪಡಬೇಕಾಗುತ್ತದೆ. ನಾನು ಏಕೆ ಹಾಗೆ ಮಾಡಲಿಲ್ಲಾ! ಮಾಯೆಗೆ ವಶ ಆಗಿ ಬಿಟ್ಟಿದ್ದೆ! ತಂದೆಗೆ
ದಯೆ ಬರುತ್ತೆ. ಸುಧಾರಣೆ ಆಗದೇ ಹೋದರೆ ಅವರ ಗತಿ ಏನಾಗುವುದು, ಅಳುತ್ತಾರೆ, ಕೂಗುತ್ತಾರೆ, ಸಜೆ
ತಿನ್ನುತ್ತಾರೆ. ಆದ್ದರಿಂದ ತಂದೆ ಮಕ್ಕಳಿಗೆ ಪದೆ-ಪದೆ ಶಿಕ್ಷಣ ಕೊಡುತ್ತಾರೆ. ಮಕ್ಕಳೇ ನೀವು
ಖಂಡಿತ ಪರಿಪೂರ್ಣರಾಗಲೇಬೇಕು. ಪದೇ-ಪದೇ ನಿಮ್ಮ ಚೆಕಿಂಗ್ ಮಾಡಿಕೊಳ್ಳುತ್ತಲೇ ಇರಬೇಕು. ಒಳ್ಳೆಯದು.
ಅತೀ ಮಧುರ, ಅತೀ ಮುದ್ದಾದ ಸರ್ವ ಅಗಲಿ ಹೋಗಿ ಮತ್ತೆ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ
ಬಾಪ್ದಾದಾರವರ ಹೃದಯ ತುಂಬಿದ ಪ್ರೀತಿ ಪ್ರೇಮದ ನೆನಪು ಪ್ರೀತಿ ಮತ್ತು ಗುಡ್ಮಾರ್ನಿಂಗ್. ಆತ್ಮೀಯ
ತಂದೆಯಿಂದ ಆತ್ಮೀಯ ಮಕ್ಕಳಿಗೆ ನಮಸ್ತೆ.
ಅವ್ಯಕ್ತ
ಮಹಾವಾಕ್ಯ ( ರಿವೈಸ್ಡ್ ) : -
ಹೇಗೆ ವಿಜ್ಞಾನ ರಿಫೈನ್ ಆಗುತ್ತಾ ಹೋಗುತ್ತಿದೆ ಅದೇ ರೀತಿ ನಿಮಗೆ ನಿಮ್ಮಲ್ಲಿ ಸೈಲೆನ್ಸ್ ನ ಶಕ್ತಿ
ಅಥವಾ ನಿಮ್ಮ ಸ್ಥಿತಿ ರಿಫೈನ್ ಆಗುತ್ತಿದೆಯೇ? ಯಾವ ವಸ್ತು ರಿಫೈನ್ ಆಗಿರುತ್ತದೆ ಅದರಲ್ಲಿ ಏನೇನು
ವಿಶೇಷತೆಗಳಿರುತ್ತವೆ ? ರಿಫೈನ್ ಆಗಿರುವ ವಸ್ತು ಭಲೇ ಕಡಿಮೆ ಪ್ರಮಾಣದಲ್ಲಿರುತ್ತೆ, ಆದರೆ
ಗುಣಮಟ್ಟ ಬಹಳ ಶಕ್ತಿಶಾಲಿಯಾಗಿರುತ್ತೆ. ಯಾವ ವಸ್ತು ರಿಫೈನ್ ಆಗಿರುವುದಿಲ್ಲ ಅದರ
ಪ್ರಮಾಣ(ಕ್ವಾಂಟಿಟಿ) ಹೆಚ್ಚು, ಗುಣಮಟ್ಟ(ಕ್ವಾಲಿಟಿ) ಕಡಿಮೆ ಇರುವುದು. ಅದೇ ರೀತಿ ಇಲ್ಲೂ ಸಹಾ
ಯಾವಾಗ ರಿಫೈನ್ ಆಗುತ್ತಾ ಹೋಗುವಿರಿ ಆಗ ಕಡಿಮೆ ಸಮಯದಲ್ಲಿ, ಕಡಿಮೆ ಸಂಕಲ್ಪ, ಕಡಿಮೆ
ಶಕ್ತಿ(ಎನರ್ಜಿ)ಯಲ್ಲಿ ಏನು ಕರ್ತವ್ಯ ಆಗಬೇಕು ಅದು 100% ಆಗುವುದು ಮತ್ತು ಹಗುರತನ ಸಹಾ ಇರುವುದು.
ಹಗುರತನದ ನಿಶಾನಿ-ಅವರು ಎಂದೂ ಕೆಳಗೆ ಬರುವುದಿಲ್ಲ, ಇಚ್ಛೆ ಇಲ್ಲದಿದ್ದರೂ ಸಹಾ ಸ್ವತಃ ಮೇಲಿನ
ಸ್ಥಿತಿಯಲ್ಲಿರುವರು. ಇದಾಗಿದೆ ರಿಫೈನ್ ನ ಅರ್ಹತೆ. ಆದ್ದರಿಂದ ನಿಮ್ಮಲ್ಲಿ ಈ ಎರಡೂ ವಿಶೇಷತೆಯ
ಅನುಭವವಾಗುತ್ತಾ ಹೋಗುವುದೆ? ಭಾರಿಯಾಗಿರುವ ಕಾರಣ ಪರಿಶ್ರಮ ಹೆಚ್ಚು ಹಾಕಬೇಕಾಗುವುದು.
ಹಗುರವಾಗಿರುವ ಕಾರಣ ಪರಿಶ್ರಮ ಕಡಿಮೆಯಾಗುವುದು. ಆದ್ದರಿಂದ ಈ ರೀತಿ ಸ್ವಾಭಾವಿಕ
ಪರಿವರ್ತನೆಯಾಗುತ್ತಾ ಹೋಗುವುದು. ಈ ಎರಡೂ ವಿಶೇಷತೆಗಳು ಸದಾ ಗಮನದಲ್ಲಿಟ್ಟಿರಿ. ಇದನ್ನು
ಎದುರಿನಲ್ಲಿಟ್ಟುಕೊಂಡು ತಮ್ಮ ರಿಫೈನ್ನೆಸ್ ಅನ್ನು ಚೆಕ್ ಮಾಡಿಕೊಳ್ಳಲು ಸಾಧ್ಯವೇ. ರಿಫೈನ್ ವಸ್ತು
ಹೆಚ್ಚು ಅಲೆದಾಡುವುದಿಲ್ಲ. ವೇಗವನ್ನು ಕಂಡುಕೊಳ್ಳುವುದು. ಒಂದು ವೇಳೆ ರಿಫೈನ್ ಇಲ್ಲದೇ ಹೋದರೆ,
ಕೊಳಕು ಮಿಕ್ಸ್ ಆಗಿದ್ದಲ್ಲಿ ಆಗ ವೇಗ ಪಡೆಯಲಾಗುವುದಿಲ್ಲ. ನಿರ್ವಿಘ್ನವಾಗಿ ನಡೆಯಲು ಸಾಧ್ಯವಿಲ್ಲ.
ಒಂದು ಕಡೆ ಎಷ್ಟೆಷ್ಟು ರಿಫೈನ್ ಆಗುತ್ತಾ ಹೋಗುವಿರಿ, ಇನ್ನೊಂದು ಕಡೆ ಅಷ್ಟೇ ಸಣ್ಣ-ಸಣ್ಣ ಮಾತುಗಳು
ಅಥವಾ ತಪ್ಪು ಅಥವಾ ಸಂಸ್ಕಾರ ಏನಿದೆ ಅದರ ಫೈನ್(ದಂಡ) ಸಹಾ ಹೆಚ್ಚುತ್ತ ಹೋಗುತ್ತಿದೆ. ಒಂದು ಕಡೆ ಆ
ದೃಷ್ಯ, ಇನ್ನೊಂದು ಕಡೆ ರಿಫೈನ್ ಆಗುತ್ತಿರುವ ದೃಷ್ಯ, ಎರಡರ ಫೋರ್ಸ್ ಇದೆ. ಒಂದು ವೇಳೆ ರಿಫೈನ್
ಆಗಿರದಿದ್ದರೆ ಫೈನ್ ಎಂದು ತಿಳಿಯಿರಿ. ಎರಡೂ ಜೊತೆ-ಜೊತೆಯ ದೃಷ್ಯ ಕಂಡು ಬರುತ್ತಿದೆ. ಅದೂ ಸಹಾ
ಅತಿಯಲ್ಲಿ ಹೋಗುತ್ತಿದೆ ಮತ್ತು ಇದೂ ಸಹಾ ಅತೀ ಪ್ರತ್ಯಕ್ಷ ರೂಪದಲ್ಲಿ ಕಂಡು ಬರುತ್ತಿದೆ.
ಗುಪ್ತವಾಗಿ ಈಗ ಪ್ರಖ್ಯಾತವಾಗುತ್ತಿದೆ. ಆದ್ದರಿಂದ ಯಾವಾಗ ಎರಡೂ ಮಾತುಗಳು ಪ್ರತ್ಯಕ್ಷವಾಗುವುದು,
ಅದರ ಅನುಸಾರದಲ್ಲಿಯೇ ನಂಬರ್ ಸಿಗುವುದು. ಮಾಲೆ ಕೈ ನಲ್ಲಿ ತಿರುಗಿಸುವುದಲ್ಲ. ಚಲನೆಯಿಂದಲೇ ಸ್ವಯಂ
ತಮ್ಮ ನಂಬರ್ ಪಡೆದುಕೊಳ್ಳುತ್ತಾರೆ. ಈಗ ನಂಬರ್ ಫಿಕ್ಸ್ ಆಗುವ ಸಮಯ ಬರುತ್ತಿದೆ. ಆದ್ದರಿಂದ ಎರಡೂ
ಮಾತುಗಳು ಸ್ಪಷ್ಠವಾಗಿ ಕಂಡು ಬರುತ್ತಿದೆ ಮತ್ತು ಎರಡನ್ನೂ ನೋಡುತ್ತಿದ್ದರೂ ಸಾಕ್ಷಿಯಾಗಿದ್ದು
ಹರ್ಷಿತರಾಗಿರಿ. ಆಟವೂ ಸಹಾ ಅದೇ ಚೆನ್ನಾಗಿರುವುದು ಯಾವುದರಲ್ಲಿ ಯಾವುದೇ ಮಾತಿನ ಅತಿಯಾಗಿರುವುದು.
ಅದೇ ದೃಶ್ಯ ಅತೀ ಆಕರ್ಷಣೆಯುಳ್ಳದ್ದಾಗಿರುತ್ತದೆ. ಈಗಲೂ ಸಹಾ ಇಂತಹ ಪ್ರಯಾಸಕರವಾದ ದೃಶ್ಯ
ನಡೆಯುತ್ತಿದೆ. ನೋಡಲು ಮಜಾ ಆಗುವುದಲ್ಲವೇ? ಅಥವಾ ದಯೆ ಬರುವುದಾ? ಒಂದು ಕಡೆ ನೋಡಿದರೆ
ಖುಷಿಯಾಗುವುದು, ಇನ್ನೊಂದು ಕಡೆ ನೋಡಿದರೆ ದಯೆ ಬರುತ್ತೆ. ಎರಡರದೂ ಆಟ ನಡೆಯುತ್ತಿದೆ. ವತನದಿಂದ
ಅಂತೂ ಈ ದೃಶ್ಯ ಬಹಳ ಸ್ಪಷ್ಠವಾಗಿ ಕಂಡು ಬರುವುದು. ಎಷ್ಟು ಯಾರು ಮೇಲಕ್ಕೆ ಹೋಗುತ್ತಾರೆ ಅವರಿಗೆ
ಸ್ಪಷ್ಠವಾಗಿ ಕಂಡು ಬರುವುದು. ಯಾರು ಕೆಳಗೆ ಸ್ಟೇಜ್ ಮೇಲೆ ಪಾತ್ರಧಾರಿಯಾಗಿರುತ್ತಾರೆ ಅವರಿಗೆ
ಏನಾದರೂ ಕಂಡು ಬರಲು ಸಾಧ್ಯವೇ, ಏನೂ ಇಲ್ಲ. ಆದರೆ ಮೇಲಿನಿಂದ ಸಾಕ್ಷಿಯಾಗಿ ನೋಡುವುದರಿಂದ ಎಲ್ಲವೂ
ಸ್ಪಷ್ಠವಾಗಿ ಕಂಡು ಬರುವುದು. ಆದ್ದರಿಂದ ಇಂದು ವತನದಲ್ಲಿ ಪರಿವರ್ತನೆ ಆಟದ ದೃಶ್ಯಗಳನ್ನು
ನೋಡುತ್ತಿದ್ದೆವು. ಒಳ್ಳೆಯದು.
ವರದಾನ:
ಮೇಲಿನಿಂದ
ಅವತಾರ ತೆಗೆದುಕೊಂಡು ಅವತಾರರಾಗಿ ಸೇವೆ ಮಾಡುವಂತಹ ಸಾಕ್ಷಾತ್ಕಾರ ಮೂರ್ತಿ ಭವ.
ಹೇಗೆ ತಂದೆ ಸೇವೆಗಾಗಿ
ವತನದಿಂದ ಕೆಳಗೆ ಬರುತ್ತಾರೆ, ಹಾಗೆ ನಾವೂ ಸಹಾ ಸೇವೆಯ ಪ್ರತಿ ವತನದಿಂದ ಬಂದಿರುವೆವು, ಈ ರೀತಿ
ಅನುಭವ ಮಾಡಿ ಸೇವೆ ಮಾಡಿ ಆಗ ಸದಾ ನ್ಯಾರಾ ಮತ್ತು ತಂದೆ ಸಮಾನ ವಿಶ್ವಕ್ಕೆ ಪ್ರಿಯ ಆಗಿ ಬಿಡುವಿರಿ.
ಮೇಲಿನಿಂದ ಕೆಳಗೆ ಬರುವುದು ಎಂದರೇನೆ ಅವತಾರ ತೆಗೆದುಕೊಂಡು ಅವತರಿತರಾಗಿ ಸೇವೆ ಮಾಡುವುದು. ಎಲ್ಲರೂ
ಬಯಸುತ್ತಾರೆ ಅವತಾರ ತೆಗೆದುಕೊಂಡು ಬಂದು ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲಿ ಎಂದು.
ಆದ್ದರಿಂದ ಸತ್ಯ ಅವತರಣೆ ನೀವಾಗಿರುವಿರಿ ಯಾರಿಂದ ಎಲ್ಲರನ್ನೂ ಮುಕ್ತಿಧಾಮಕ್ಕೆ ಜೊತೆಯಲ್ಲಿ
ಕರೆದುಕೊಂಡು ಹೋಗುವಿರಿ. ಯಾವಾಗ ಅವತಾರ ತೆಗೆದುಕೊಂಡಿರುವೆನು ಎಂದು ತಿಳಿದು ಸೇವೆ ಮಾಡುವಿರಿ ಆಗ
ಸಾಕ್ಷಾತ್ಕಾರ ಮೂರ್ತಿಗಳಾಗುವಿರಿ ಮತ್ತು ಅನೇಕರ ಇಚ್ಛೆಗಳು ಪೂರ್ಣವಾಗುವವು.
ಸ್ಲೋಗನ್:
ನಿಮಗೆ ಯಾರಾದರೂ ಒಳ್ಳೆಯದು ಅಥವಾ ಕೆಟ್ಟದ್ದನ್ನು ಕೊಡಲಿ ಆದರೆ ನೀವು ಎಲ್ಲರಿಗೂ ಸ್ನೇಹ ಕೊಡಿ,
ಸಹಯೋಗ ಕೊಡಿ, ದಯೆ ತೋರಿ.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ -
ಸದಾ ಪರಮಾತ್ಮನ ಪ್ರಿತಿಯಲ್ಲಿ ಲವಲೀನರಾಗಿದ್ದಾಗ ಪ್ರಿತಿಯ ಸ್ವರೂಪ, ಮಾಸ್ಟರ್ ಪ್ರೀತಿಯ ಸಾಗರರಾಗಿ
ಬಿಡುವಿರಿ. ಪ್ರೀತಿ ಮಾಡುವ ಅಗತ್ಯ ಇರುವುದಿಲ್ಲ, ಪ್ರೀತಿಯ ಸ್ವರೂಪರಾಗಿ ಬಿಡುವಿರಿ. ಇಡೀ ದಿನ
ಪ್ರೀತಿಯ ಅಲೆಗಳು ಸ್ವತಃವಾಗಿ ಏಳುತ್ತಿರುತ್ತವೆ. ಎಷ್ಟೆಷ್ಟು ಜ್ಞಾನ ಸೂರ್ಯನ ಕಿರಣಗಳು ಅಥವಾ
ಪ್ರಕಾಶ ಹೆಚ್ಚುತ್ತಾ ಹೋಗುತ್ತೆ ಅಷ್ಟೇ ಹೆಚ್ಚು ಪ್ರೀತಿಯ ಅಲೆಗಳು ಏಳುತ್ತಿರುತ್ತವೆ.