21.07.19 Avyakt Bapdada
Kannada
Murli
02.01.85 Om Shanti Madhuban
ಸರ್ವೋತ್ತಮ ಸ್ನೇಹ,
ಸಂಬಂಧ ಮತ್ತು ಸೇವೆ
ಇಂದು ಬಾಪ್ದಾದಾರವರು
ಎಲ್ಲಾ ಮಕ್ಕಳ ಸ್ನೇಹ ತುಂಬಿದ ಉಡುಗೊರೆಗಳನ್ನು ನೋಡುತ್ತಿದ್ದರು. ಪ್ರತಿಯೊಂದು ಮಕ್ಕಳ ಸ್ನೇಹ
ಸಂಪನ್ನವಾದ ನೆನಪಿನ ಉಡುಗೊರೆಯು ಭಿನ್ನ-ಭಿನ್ನ ಪ್ರಕಾರದ್ದಿತ್ತು. ಒಬ್ಬ ಬಾಪ್ದಾದಾರವರಿಗೆ, ಅನೇಕ
ಮಕ್ಕಳ ಉಡುಗೊರೆಗಳು ಅನೇಕ ಸಂಖ್ಯೆಯಲ್ಲಿ ಸಿಕ್ಕಿದವು. ಇಂತಹ ಉಡುಗೊರೆ ಮತ್ತು ಇಷ್ಟೊಂದು
ಉಡುಗೊರೆಗಳು ವಿಶ್ವದಲ್ಲಿ ಯಾರಿಗೂ ಸಿಗಲು ಸಾಧ್ಯವಿಲ್ಲ. ಇದು ಹೃದಯದ ಉಡುಗೊರೆಯು ಹೃದಯ ರಾಮನಿಗೆ
ಇತ್ತು. ಮತ್ತೆಲ್ಲಾ ಮನುಷ್ಯಾತ್ಮರು ಸ್ಥೂಲ ಉಡುಗೊರೆಗಳನ್ನು ಕೊಡುತ್ತಾರೆ. ಆದರೆ ಸಂಗಮಯುಗದಲ್ಲಿ
ಇವರು ವಿಚಿತ್ರ ತಂದೆ ಮತ್ತು ವಿಚಿತ್ರ ಉಡುಗೊರೆಗಳಿವೆ. ಅಂದಮೇಲೆ ಬಾಪ್ದಾದಾರವರು ಎಲ್ಲರ ಸ್ನೇಹದ
ಉಡುಗೊರೆಗಳನ್ನು ನೋಡುತ್ತಾ ಹರ್ಷಿತವಾಗುತ್ತಿದ್ದರು. ಇಂತಹ ಯಾವುದೇ ಮಗುವಿರಲಿಲ್ಲ, ಯಾರದು
ಉಡುಗೊರೆಯೇ ತಲುಪಿಲ್ಲ ಎನ್ನುವಂತೆ. ಭಿನ್ನ-ಭಿನ್ನ ಮೌಲ್ಯದ್ದು ಖಂಡಿತವಾಗಿ ಇತ್ತು. ಕೆಲವರದು
ಹೆಚ್ಚು ಮೌಲ್ಯದ್ದಿತ್ತು, ಕೆಲವರದು ಕಡಿಮೆಯದು. ಎಷ್ಟು ಅಟೂಟ ಮತ್ತು ಸರ್ವ ಸಂಬಂಧದ ಸ್ನೇಹವಿತ್ತು,
ಅಷ್ಟೇ ಮೌಲ್ಯದ ಉಡುಗೊರೆಯಿತ್ತು. ನಂಬರ್ವಾರ್ ಸ್ನೇಹ ಮತ್ತು ಸಂಬಂಧದ ಆಧಾರದಿಂದ ಹೃದಯದ
ಉಡುಗೊರೆಗಳಿತ್ತು. ಎರಡೂ ಸಹ ತಂದೆಯ ಉಡುಗೊರೆಗಳಿಂದ ನಂಬರ್ವಾರ್ ಅಮೂಲ್ಯವಾದ ಮಾಲೆಯನ್ನು
ಮಾಡುತ್ತಿದ್ದರು ಮತ್ತು ಮಾಲೆಯನ್ನು ನೋಡುತ್ತಾ ಪರಿಶೀಲನೆ ಮಾಡುತ್ತಿದ್ದರು - ಯಾವ ಮಾತಿನಲ್ಲಿ
ವಿಶೇಷವಾಗಿ ಮೌಲ್ಯದ ಅಂತರವಿದೆ. ಅಂದಾಗ ಏನು ನೋಡಿರಬಹುದು? ಸ್ನೇಹವು ಎಲ್ಲರಲ್ಲಿಯೂ ಇದೆ, ಸಂಬಂಧವೂ
ಎಲ್ಲರದೂ ಇದೆ, ಸೇವೆಯೂ ಸಹ ಎಲ್ಲರೂ ಮಾಡುತ್ತಾರೆ. ಆದರೆ ಸ್ನೇಹದಲ್ಲಿ ಆದಿಯಿಂದ ಈಗಿನವರೆಗಿನ
ಸಂಕಲ್ಪದ ಮೂಲಕ ಅಥವಾ ಸ್ವಪ್ನದಲ್ಲಿಯೂ ಸಹ ಮತ್ತ್ಯಾವುದೇ ವ್ಯಕ್ತಿ ಅಥವಾ ವೈಭವದ ಕಡೆಗೆ ಬುದ್ಧಿಯ
ಆಕರ್ಷಣೆಯಾಗಲಿಲ್ಲವೆ. ಒಬ್ಬ ತಂದೆಯ ಏಕರಸ ಅಟೂಟ ಸ್ನೇಹದಲ್ಲಿ ಸದಾ ಸಮಾವೇಶವಾಗಿದ್ದಾರೆಯೇ. ಸದಾ
ಸ್ನೇಹದ ಅನುಭವಗಳ ಸಾಗರದಲ್ಲಿ ಹೀಗೆ ಸಮಾವೇಶವಾಗಿದ್ದಾರೆಯೇ, ಅವರ ಪ್ರಪಂಚವನ್ನು ಬಿಟ್ಟು
ಮತ್ತ್ಯಾವುದೇ ವ್ಯಕ್ತಿ ಅಥವಾ ವಸ್ತುವೂ ಕಾಣಿಸಬಾರದು. ಬೇಹದ್ದಿನ ಸ್ನೇಹದ ಆಕಾಶ ಮತ್ತು ಬೇಹದ್ದಿನ
ಅನುಭವಗಳ ಸಾಗರ. ಈ ಆಕಾಶ ಮತ್ತು ಸಾಗರವಲ್ಲದೆ ಮತ್ತ್ಯಾವುದೇ ಆಕರ್ಷಣೆಯಿರಬಾರದು. ಇಂತಹ ಅಟೂಟ
ಸ್ನೇಹದ ಉಡುಗೊರೆಯು ನಂಬರ್ವಾರ್ ಅಮೂಲ್ಯವಾದುದಾಗಿತ್ತು. ಎಷ್ಟು ವರ್ಷಗಳು ಕಳೆಯಿತು,
ಅಷ್ಟುವರ್ಷಗಳ ಸ್ನೇಹದ ಬೆಲೆಯು ಅಷ್ಟೇ ಸ್ವತಹವಾಗಿ ಜಮಾ ಆಗಿರುತ್ತದೆ ಮತ್ತು ಅಷ್ಟೇ ಮೌಲ್ಯದ
ಉಡುಗೊರೆಗಳು ಬಾಪ್ದಾದಾರವರ ಮುಂದೆ ಪ್ರತ್ಯಕ್ಷವಾಯಿತು. ಮೂರು ಮಾತುಗಳ ವಿಶೇಷತೆಯನ್ನು
ಎಲ್ಲರಲ್ಲಿಯೂ ನೋಡಿದರು.
1. ಸ್ನೇಹವು ಅಟೂಟವಾಗಿರುವುದು - ಹೃದಯದ ಸ್ನೇಹವಿದೆಯೇ ಅಥವಾ ಸಮಯದನುಸಾರವಾಗಿ ಅವಶ್ಯಕತೆಯ
ಕಾರಣದಿಂದ, ತನ್ನನ್ನು ಸಿದ್ಧ ಮಾಡುವ ಕಾರಣವಿದೆ - ಇಂತಹ ಸ್ನೇಹವಂತು ಇಲ್ಲವೇ?
i. ಸದಾ ಸ್ನೇಹ ಸ್ವರೂಪವು ಇಮರ್ಜ್ ರೂಪದಲ್ಲಿದೆಯೇ ಅಥವಾ ಸಮಯದಲ್ಲಿ ಇಮರ್ಜ್ ಆಗುತ್ತದೆ, ಬಾಕಿ
ಸಮಯದಲ್ಲಿ ಮರ್ಜ್ ಇರುತ್ತದೆಯೇ?
ii. ದಿಲ್ಖುಷ್ ಮಾಡುವ ಸ್ನೇಹವಿದೆಯೇ ಅಥವಾ ಹೃದಯದ ಸ್ನೇಹವಿದೆಯೇ? ಅಂದಮೇಲೆ ಸ್ನೇಹದಲ್ಲಿ ಇವೆಲ್ಲಾ
ಮಾತುಗಳ ಪರಿಶೀಲನೆ ಮಾಡಿದರು.
2. ಸಂಬಂಧದಲ್ಲಿ- ಮೊದಲ ಮಾತು ಸರ್ವ ಸಂಬಂಧವಿದೆಯೇ ಅಥವಾ ಕೆಲಕೆಲವು ವಿಶೇಷ ಸಂಬಂಧವಿದೆಯೇ? ಒಂದು
ಸಂಬಂಧದ ಅನುಭೂತಿಯೇನಾದರೂ ಕಡಿಮೆಯಿದೆಯೆಂದರೆ ಸಂಪನ್ನತೆಯಲ್ಲಿ ಕೊರತೆಯಿದೆ ಮತ್ತು ಸಮಯ - ಪ್ರತಿ
ಸಮಯದಲ್ಲಿ ಉಳಿದುಕೊಂಡಿರುವ ಆ ಒಂದು ಸಂಬಂಧವೂ ಸಹ ತನ್ನ ಕಡೆಗೆ ಆಕರ್ಷಿಸಿ ಬಿಡುತ್ತದೆ. ಹೇಗೆ
ತಂದೆಯು ಶಿಕ್ಷಕ ಸದ್ಗುರುವಿನ ಈ ವಿಶೇಷ ಸಂಬಂಧವನ್ನಂತು ಜೋಡಣೆಯಾಯಿತು. ಆದರೆ ಚಿಕ್ಕದಾದ
ಸಂಬಂಧವಾದ ಮೊಮ್ಮಗು, ಮರಿ ಮಗುವನ್ನಾಗಿಯೂ ಸಹ ಮಾಡಿಕೊಂಡಿಲ್ಲವೆಂದರೆ, ಆ ಸಂಬಂಧವೂ ಸಹ ತನ್ನ ಕಡೆಗೆ
ಸೆಳೆದು ಬಿಡುತ್ತದೆ. ಅಂದಮೇಲೆ ಸಂಬಂಧದಲ್ಲಿ ಸರ್ವ ಸಂಬಂಧವಿದೆಯೇ?
ಇನ್ನೊಂದು ಮಾತು - ತಂದೆಯೊಂದಿಗೆ ಪ್ರತೀ ಸಂಬಂಧವೂ 100% ಇದೆಯೇ ಅಥವಾ ಕೆಲವು ಸಂಬಂಧವು 100% ಇದೆ,
ಕೆಲವು 50 % ಅಥವಾ ನಂಬರ್ವಾರ್ ಇದೆಯೇ? ಶೇಕಡವಾರಿನಲ್ಲಿಯೂ ಫುಲ್ ಇದೆಯೇ ಅಥವಾ ಸ್ವಲ್ಪ ಅಲೌಕಿಕ,
ಸ್ವಲ್ಪ ಲೌಕಿಕ, ಎರಡರಲ್ಲಿಯೂ ಶೇಕಡದಲ್ಲಿ ಹಂಚಲಾಗಿದೆಯೇ?
ಮೂರನೆಯ ಮಾತು- ಸರ್ವ ಸಂಬಂಧದ ಅನುಭೂತಿಯ ಆತ್ಮಿಕ ಪ್ರಾಪ್ತಿಯನ್ನು ಸದಾ ಅನುಭವ ಮಾಡುತ್ತೀರಾ ಅಥವಾ
ಯಾವಾಗ ಅವಶ್ಯಕತೆಯಿರುತ್ತದೆಯೋ ಆಗ ಅನುಭವ ಮಾಡುತ್ತೀರಾ? ಸದಾ ಸರ್ವ ಸಂಬಂಧ ಪ್ರಾಪ್ತಿಯನ್ನು
ತೆಗೆದುಕೊಳ್ಳುವವರಾಗಿದ್ದಾರೆಯೇ ಅಥವಾ ಕೆಲ ಕೆಲವೊಮ್ಮೆಯೇ?
3. ಸೇವೆಯಲ್ಲಿ - ಸೇವೆಯಲ್ಲಿ ವಿಶೇಷವಾಗಿ ಯಾವುದರ ಪರಿಶೀಲನೆ ಮಾಡಿರಬಹುದು? ಮೊದಲ ಮಾತು - ಅದು
ಸೂಕ್ಷ್ಮ ರೂಪದಲ್ಲಿ ಪರಿಶೀಲನೆಯಿದೆ - ಮನ, ವಾಣಿ, ಕರ್ಮ ಅಥವಾ ತನು-ಮನ-ಧನ ಎಲ್ಲಾಪ್ರಕಾರದ ಸೇವೆಯ
ಖಾತೆಯು ಜಮಾ ಇದೆಯೇ? ಇನ್ನೊಂದು ಮಾತು - ತನು-ಮನ-ಧನ, ಮನ-ವಾಣಿ-ಕರ್ಮ ಈ 6 ಮಾತುಗಳಲ್ಲಿ ಎಷ್ಟು
ಮಾಡಬಹುದು, ಅಷ್ಟು ಮಾಡಿದರೆ ಅಥವಾ ಎಷ್ಟು ಮಾಡಬಹುದಿತ್ತು ಅಷ್ಟನ್ನು ಮಾಡದೆಯೇ ಯಥಾ ಶಕ್ತಿ
ಸ್ಥಿತಿಯನುಸಾರ ಮಾಡಲಾಯಿತೇ? ಇಂದು ಸ್ಥಿತಿಯು ಬಹಳ ಚೆನ್ನಾಗಿದೆಯೆಂದರೆ ಸೇವೆಯ ಶೇಕಡವು
ಚೆನ್ನಾಗಿದೆ, ನಾಳೆ ಕಾರಣಾಂತರದಿಂದ ಸ್ಥಿತಿಯು ಬಲಹೀನವಾಗಿದೆಯೆಂದರೆ ಸೇವೆಯ ಶೇಕಡವೂ ಬಲಹೀನವಾಗಿದೆ.
ಎಷ್ಟಾಗಬೇಕಿತ್ತು ಅಷ್ಟಾಗಲಿಲ್ಲ. ಈ ಕಾರಣದಿಂದ ಯಥಾಶಕ್ತಿ ನಂಬರ್ವಾರ್ ಆಗಿ ಬಿಡುತ್ತಾರೆ.
ಮೂರನೇ ಮಾತು - ಬಾಪ್ದಾದಾರವರ ಮೂಲಕ ಜ್ಞಾನದ ಖಜಾನೆ, ಶಕ್ತಿಗಳ ಖಜಾನೆ, ಗುಣಗಳ ಖಜಾನೆ, ಖುಷಿಗಳ
ಖಜಾನೆ, ಶ್ರೇಷ್ಠ ಸಮಯದ ಖಜಾನೆ, ಶುದ್ಧ ಸಂಕಲ್ಪಗಳ ಖಜಾನೆಯು ಸಿಕ್ಕಿದೆಯೋ, ಅದೆಲ್ಲಾ ಖಜಾನೆಗಳ
ಮೂಲಕ ಸೇವೆಯನ್ನು ಮಾಡಿದರೆ ಅಥವಾ ಕೆಲವು ಖಜಾನೆಗಳ ಮೂಲಕ ಸೇವೆಯನ್ನು ಮಾಡಿದರೆ? ಒಂದುವೇಳೆ ಒಂದು
ಖಜಾನೆಯಲ್ಲೇನಾದರೂ ಸೇವೆ ಮಾಡುವ ಕೊರತೆಯಿದೆ ಅಥವಾ ವಿಶಾಲ ಹೃದಯಿಯಾಗಿ ಖಜಾನೆಗಳನ್ನು ಕಾರ್ಯಗತ
ಮಾಡಲಿಲ್ಲ, ಅಲ್ಪ ಸ್ವಲ್ಪವಷ್ಟೇ ಮಾಡಿ ಬಿಟ್ಟರು ಅರ್ಥಾತ್ ಜಿಪುಣತೆ ಮಾಡಿದರೆಂದರೆ, ಇದರದೂ
ಫಲಿತಾಂಶದಲ್ಲಿ ಅಂತರವಾಗಿ ಬಿಡುತ್ತದೆ!
ನಾಲ್ಕನೇ ಮಾತು - ಮನಃಪೂರ್ವಕವಾಗಿ ಮಾಡಿದರೆ ಅಥವಾ ಕರ್ತವ್ಯದ ಕಾರಣದಿಂದ ಮಾಡಿದರೆ, ಸೇವೆಯು ಸದಾ
ಹರಿಯುವ ಗಂಗೆಯಾಗಿದೆಯೇ ಅಥವಾ ಸೇವೆಯಲ್ಲಿ ಸ್ವಲ್ಪ ಹರಿಯುವುದು ಸ್ವಲ್ಪ ನಿಲ್ಲುವುದು ಇದೆಯೇ. ಮೂಡ್
ಇದೆಯೆಂದರೆ ಸೇವೆಯನ್ನು ಮಾಡಿದರು, ಮೂಡ್ ಇಲ್ಲವೆಂದರೆ ಮಾಡಲಿಲ್ಲ - ಹೀಗೆ ನಿಂತಿರುವ ಬಾವಿಯಂತು
ಅಲ್ಲವೇ.
ಹೀಗೆ ಮೂರು ಮಾತುಗಳ ಪರಿಶೀಲನೆಯನುಸಾರವಾಗಿ ಪ್ರತಿಯೊಬ್ಬರ ಮೌಲ್ಯವನ್ನು ಪರಿಶೀಲಿಸಿದರು. ಅಂದಮೇಲೆ
ಹೀಗೀಗೆ ವಿಧಿಪೂರ್ವಕವಾಗಿ ಪ್ರತಿಯೊಬ್ಬರೂ ಪರಿಶೀಲನೆ ಮಾಡಿಕೊಳ್ಳಿರಿ ಮತ್ತು ಈ ಹೊಸ ವರ್ಷದಲ್ಲಿ
ಇದೇ ಧೃಡ ಸಂಕಲ್ಪ ಮಾಡಿರಿ - ಕೊರತೆಯನ್ನು ಸದಾಕಾಲಕ್ಕಾಗಿ ಸಮಾಪ್ತಿಗೊಳಿಸಿ, ಸಂಪನ್ನರಾಗಿ
ನಂಬರ್ವನ್ ಮೌಲ್ಯವಂತ ಉಡುಗೊರೆಯನ್ನು ತಂದೆಯ ಮುಂದೆ ಇಡುತ್ತೇನೆ. ಪರಿಶೀಲನೆ ಮಾಡುವುದು ಮತ್ತು
ನಂತರ ಪರಿವರ್ತನೆ ಮಾಡುವುದು ಬರುತ್ತದೆಯಲ್ಲವೆ. ಫಲಿತಾಂಶದನುಸಾರವಾಗಿ ಈಗ ಒಂದಲ್ಲ ಒಂದು
ಮಾತಿನಲ್ಲಿ ಮೆಜಾರಿಟಿ ಯಥಾಶಕ್ತಿಯಿದ್ದಾರೆ. ಸಂಪನ್ನ ಶಕ್ತಿ ಸ್ವರೂಪರಿಲ್ಲ . ಆದ್ದರಿಂದ ಈಗ
ಕಳೆದಿರುವುದನ್ನು ಕಳೆದು, ವರ್ತಮಾನ ಮತ್ತು ಭವಿಷ್ಯವನ್ನು ಸಂಪನ್ನ, ಶಕ್ತಿಶಾಲಿಯನ್ನಾಗಿ
ಮಾಡಿಕೊಳ್ಳಿರಿ.
ತಮ್ಮ ಬಳಿಯೂ ಸಹ ಉಡುಗೊರೆಗಳು ಸೇರುತ್ತದೆಯೆಂದರೆ ಪರಿಶೀಲನೆ ಮಾಡುತ್ತೀರಲ್ಲವೆ, ಯಾವ-ಯಾವುದು
ಬೆಲೆಯಿರುವುದಾಗಿದೆ. ಬಾಪ್ದಾದಾರವರೂ ಸಹ ಮಕ್ಕಳ ಇದೇ ಆಟವನ್ನು ಆಡುತ್ತಿದ್ದರು. ಉಡುಗೊರೆಗಳಂತು
ಬಹಳಷ್ಟಿದ್ದವು. ಪ್ರತಿಯೊಬ್ಬರು ತನ್ನನುಸಾರವಾಗಿ ಬಹಳ ಒಳ್ಳೆಯ ಉಮ್ಮಂಗ-ಉತ್ಸಾಹ ತುಂಬಿರುವ
ಸಂಕಲ್ಪ, ಶಕ್ತಿಶಾಲಿ ಸಂಕಲ್ಪವನ್ನು ತಂದೆಯ ಮುಂದೆ ಮಾಡಿದರು. ಈಗ ಕೇವಲ ಯಥಾಶಕ್ತಿಗೆ ಬದಲು ಸದಾ
ಶಕ್ತಿಶಾಲಿ - ಈ ಪರಿವರ್ತನೆ ಮಾಡಬೇಕು. ತಿಳಿಯಿತೆ - ಒಳ್ಳೆಯದು!
ಎಲ್ಲರೂ ಸದಾಕಾಲದ ಸ್ನೇಹಿ, ಹೃದಯ ಸ್ನೇಹಿ, ಸರ್ವ ಸಂಬಂಧದ ಸ್ನೇಹಿ, ಆತ್ಮಿಕ ಪ್ರಾಪ್ತಿಯ ಅನುಭವಿ
ಆತ್ಮರು, ಸರ್ವ ಖಜಾನೆಗಳ ಮೂಲಕ ಶಕ್ತಿಶಾಲಿ, ಸದಾ ಸೇವಾಧಾರಿ, ಸರ್ವ ಮಾತುಗಳಲ್ಲಿ ಯಥಾ ಶಕ್ತಿಯನ್ನು
ಸದಾ ಶಕ್ತಿಶಾಲಿಯಾಗಿರುವುದರಲ್ಲಿ ಪರಿವರ್ತನೆ ಮಾಡುವಂತಹ, ವಿಶೇಷ ಸ್ನೇಹಿ ಮತ್ತು ಸಮೀಪ ಸಂಬಂಧಿ
ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ದಾದಿ
ಜಾನಕಿಜೀಯವರೊಂದಿಗೆ:-
ಮಧುಬನದ ಶೃಂಗಾರವು ಮಧುಬನದಲ್ಲಿ ತಲುಪಿ ಬಿಟ್ಟಿದ್ದಾರೆ. ಭಲೆ ಬಂದಿದೀರಿ. ಬಾಪ್ದಾದಾ ಹಾಗೂ
ಮಧುಬನದ ವಿಶೇಷ ಶೃಂಗಾರವಾಗಿದ್ದೀರಿ, ವಿಶೇಷ ಶೃಂಗಾರದಿಂದ ಏನಾಗುತ್ತದೆ? ಹೊಳಪುಂಟಾಗಿ ಬಿಡುತ್ತದೆ
ಅಲ್ಲವೆ. ಅಂದಮೇಲೆ ಬಾಪ್ದಾದಾ ಹಾಗೂ ಮಧುಬನದ ವಿಶೇಷ ಶೃಂಗಾರವನ್ನು ನೋಡುತ್ತಾ
ಹರ್ಷಿತವಾಗುತ್ತಿದ್ದೇವೆ. ವಿಶೇಷ ಸೇವೆಯಲ್ಲಿ ತಂದೆಯ ಸ್ನೇಹ ಮತ್ತು ಸಂಬಂಧವನ್ನು
ಪ್ರತ್ಯಕ್ಷಗೊಳಿಸಿದಿರಿ, ಈ ವಿಶೇಷ ಸೇವೆಯು ಎಲ್ಲರ ಹೃದಯಗಳನ್ನು ಸಮೀಪ ತರುವಂತದ್ದಾಗಿದೆ.
ಫಲಿತಾಂಶವಂತು ಸದಾ ಚೆನ್ನಾಗಿದೆ. ಆದರೂ ಸಮಯ-ಸಮಯದ ತಮ್ಮ ವಿಶೇಷತೆಯ ಫಲಿತಾಂಶವಾಗುತ್ತದೆಯೆಂದರೆ
ತಂದೆಯ ಸ್ನೇಹವನ್ನು ತಮ್ಮ ಸ್ನೇಹಿ ಚಹರೆಯಿಂದ, ನಯನಗಳಿಂದ ಪ್ರತ್ಯಕ್ಷ ಮಾಡಿದಿರಿ - ಈ ವಿಶೇಷ
ಸೇವೆಯನ್ನು ಮಾಡಿದ್ದೀರಿ. ಕೇಳುವವರನ್ನಾಗಿ ಮಾಡುವುದು, ಇದೇನೂ ದೊಡ್ಡ ಮಾತಲ್ಲ ಆದರೆ
ಸ್ನೇಹಿಯನ್ನಾಗಿ ಮಾಡುವುದು, ಯಾವುದು ಸದಾಕಾಲ ಆಗುತ್ತಿರುತ್ತದೆ ಅದು ವಿಶೇಷವಾದ ಸೇವೆಯಾಗಿದೆ.
ಎಷ್ಟು ಪತಂಗಗಳನ್ನು ನೋಡಿದೆವು, ಜ್ಯೋತಿಯ ಮೇಲೆ ಅರ್ಪಣೆಯಾಗುವ ಇಚ್ಛೆಯಿರುವ ಎಷ್ಟು ಪತಂಗಗಳನ್ನು
ನೋಡಿದಿರಿ? ಈಗ ನಯನಗಳ ದೃಷ್ಟಿಯಿಂದ ಪತಂಗಗಳನ್ನು ಜ್ಯೋತಿಯ ಕಡೆಗೆ ಸೂಚನೆ ಮಾಡುವಂತಹ ವಿಶೇಷ ಸಮಯವೇ
ಆಗಿದೆ. ಸೂಚನೆ ಸಿಕ್ಕಿತು ಮತ್ತು ನಡೆಯುತ್ತಿರುತ್ತೇವೆ. ಹಾರುತ್ತಾ-ಹಾರುತ್ತಾ ತಲುಪಿ ಬಿಡುತ್ತೀರಿ.
ಅಂದಮೇಲೆ ಈ ವಿಶೇಷ ಸೇವೆಯ ಅವಶ್ಯಕತೆಯೂ ಇದೆ ಮತ್ತು ಅದನ್ನೂ ಸಹ ಮಾಡಿದ್ದೀರಿ. ಇಂತಹ
ಫಲಿತಾಂಶವಿದೆಯಲ್ಲವೆ. ಚೆನ್ನಾಗಿದೆ, ಪ್ರತೀ ಹೆಜ್ಜೆಯಲ್ಲಿ ಅನೇಕ ಆತ್ಮರ ಸೇವೆಯು ಸಮಾವೇಶವಾಗಿದೆ,
ಎಷ್ಟು ಹೆಜ್ಜೆಯನ್ನು ಇಟ್ಟಿರಿ? ಯಾರೆಷ್ಟು ಹೆಜ್ಜೆ, ಅಷ್ಟೇ ಆತ್ಮರ ಸೇವೆ. ಒಳ್ಳೆಯ ಚಕ್ರವೇ
ಇದ್ದಿತು. ಅವರದೂ ಉಮ್ಮಂಗ-ಉತ್ಸಾಹದ ಸೀಜನ್ ಸಹ ಈಗ ಇದೆ. ಏನಾಗುತ್ತದೆಯೋ ಅದು ಬಹಳ ಒಳ್ಳೆಯದೇ
ಆಗುತ್ತದೆ. ಬಾಪ್ದಾದಾರವರ ಮುದ್ದಾದ ಮಕ್ಕಳ ಪ್ರತೀ ಕರ್ಮದ ರೇಖೆಯಿಂದ ಅನೇಕರ ಕರ್ಮಗಳ ರೇಖೆಗಳು
ಬದಲಾಗುತ್ತದೆ. ಅಂದಮೇಲೆ ಪ್ರತಿಯೊಂದು ಕರ್ಮದ ರೇಖೆಯಿಂದ ಅನೇಕರ ಅದೃಷ್ಟದ ರೇಖೆಯನ್ನೆಳಿದಿರಿ.
ನಡೆಯುವುದು ಅರ್ಥಾತ್ ಅದೃಷ್ಟವನ್ನು ಬರೆಯುವುದು. ಅಂದಮೇಲೆ ಎಲ್ಲೆಲ್ಲಿ ಹೋಗುತ್ತೀರಿ, ತಮ್ಮ
ಕರ್ಮಗಳ ಲೇಖನಿಯಿಂದ ಅನೇಕರ ಅದೃಷ್ಟದ ರೇಖೆಯನ್ನೆಳೆದು ಬಿಡುತ್ತೀರಿ. ಅಂದಮೇಲೆ ಹೆಜ್ಜೆ ಅರ್ಥಾತ್
ಕರ್ಮವೇ ಮುದ್ದಾದ ಮಕ್ಕಳ ಅದೃಷ್ಟದ ರೇಖೆಯನ್ನೆಳೆಯುವ ಸೇವೆಗೆ ನಿಮಿತ್ತರಾದರು. ಹಾಗಾದರೆ ಈಗ
ಉಳಿದಂತೆ ಅಂತಿಮ ಧ್ವನಿಯಿದೆ- "ಇದೇ ಆಗಿದೆ, ಇದೇ ಆಗಿದೆ" ಯಾರನ್ನು ಹುಡುಕುತ್ತಿದ್ದೆವು ಅದು ಇದೇ
ಆಗಿದೆ. ಈಗ ಯೋಚಿಸುತ್ತಾರೆ- ಅದು ಇದೇನಾ ಅಥವಾ ಅದಾಗಿದೆಯೇ? ಆದರೆ ಕೇವಲ ಇದೊಂದೇ ಎನ್ನುವ ಧ್ವನಿಯು
ಹೊರಡಬೇಕು. ಈಗ ಆ ಸಮಯವು ಸಮೀಪ ಬರುತ್ತಿದೆ. ಅದೃಷ್ಟದ ರೇಖೆಯು ಉದ್ದವಾಗುತ್ತಾ ಆಗುತ್ತಾ, ಇದೂ ಸಹ
ಸ್ವಲ್ಪ ಬುದ್ಧಿಯ ಬೀಗವನ್ನೇನು ಹಾಕಲ್ಪಟ್ಟಿದೆ, ಅದು ತೆರೆದು ಬಿಡುತ್ತದೆ. ಬೀಗದ ಕೈಯಂತು
ಹಾಕಲಾಗಿದೆ, ತೆರೆದೂ ಇದೆ ಆದರೆ ಈಗ ಸ್ವಲ್ಪ ಸಿಕ್ಕಿಹಾಕಿಕೊಂಡಿದೆ, ಆ ದಿನವೂ ಬಂದು ಬಿಡುತ್ತದೆ.
ಶಿಕ್ಷಕಿ
ಸಹೋದರಿಯರೊಂದಿಗೆ:-
ಟೀಚರ್ಸ್
ಅರ್ಥಾತ್ ಸದಾ ಸಂಪನ್ನ. ಅಂದಮೇಲೆ ಸಂಪನ್ನತೆಯ ಅನುಭೂತಿ ಮಾಡುವವರಾಗಿದ್ದೀರಲ್ಲವೆ. ಸ್ವಯಂ ಸರ್ವ
ಖಜಾನೆಗಳಿಂದ ಸಂಪನ್ನವಾದಾಗಲೇ, ಅನ್ಯರ ಸೇವೆಯನ್ನು ಮಾಡಬಹುದು. ತಮ್ಮಲ್ಲಿ ಸಂಪನ್ನತೆಯಿಲ್ಲವೆಂದರೆ
ಅನ್ಯರಿಗೇನು ಕೊಡುವಿರಿ! ಸೇವಾಧಾರಿಯ ಅರ್ಥವೇ ಆಗಿದೆ- ಸರ್ವ ಖಜಾನೆಗಳಿಂದ ಸಂಪನ್ನರಾಗುವುದು. ಸದಾ
ಸಂಪನ್ನತೆಯ ನಶೆ ಮತ್ತು ಖುಷಿ. ಯಾವುದೊಂದು ಖಜಾನೆಯ ಕೊರತೆಯಿಲ್ಲ. ಶಕ್ತಿಯಿದೆ, ಗುಣವಿಲ್ಲ,
ಗುಣವಿದೆ ಶಕ್ತಿಯಿಲ್ಲ- ಹೀಗಾಗಬಾರದು, ಸರ್ವ ಖಜಾನೆಗಳಲ್ಲಿಯೂ ಸಂಪನ್ನರು. ಯಾವ ಶಕ್ತಿಯನ್ನು ಯಾವ
ಸಮಯದಲ್ಲಿ ಆಹ್ವಾನ ಮಾಡುವಿರಿ, ಶಕ್ತಿ ಸ್ವರೂಪರಾಗಿ ಬಿಡಬೇಕು- ಇದಕ್ಕೆ ಹೇಳಲಾಗುತ್ತದೆ ಸಂಪನ್ನತೆ.
ಹೀಗಿದ್ದೀರಾ? ಯಾರು ನೆನಪು ಮತ್ತು ಸೇವೆಯ ಸಮತೋಲನದಲ್ಲಿರುತ್ತಾರೆ, ಕೆಲವೊಮ್ಮೆ ನೆನಪು ಹೆಚ್ಚಾಗಿ
ಇದೆ, ಕೆಲವೊಮ್ಮೆ ಸೇವೆಯು ಹೆಚ್ಚಾಗಿದೆ - ಹೀಗಲ್ಲ, ಎರಡೂ ಸಮಾನವಿರಲಿ, ಸಮತೋಲನದಲ್ಲಿ
ಇರುವವರಾಗಿದ್ದೀರಿ, ಅವರೇ ಸಂಪನ್ನತೆಯ ಬ್ಲೆಸ್ಸಿಂಗ್ನ ಅಧಿಕಾರಿಯಾಗುತ್ತಾರೆ. ಇಂತಹ
ಸೇವಾಧಾರಿಯಾಗಿದ್ದೀರಿ, ಲಕ್ಷ್ಯವನ್ನೇನಿಡುತ್ತೀರಿ? ಸರ್ವ ಖಜಾನೆಗಳಿಂದ ಸಂಪನ್ನ, ಒಂದು ಗುಣದ
ಕೊರತೆಯಾಯಿತೆಂದರೆ ಸಂಪನ್ನರಲ್ಲ. ಒಂದು ಶಕ್ತಿಯ ಕೊರತೆಯಾದರೂ ಸಂಪನ್ನರಲ್ಲ. ಸದಾ ಸಂಪನ್ನ ಮತ್ತು
ಸರ್ವದರಲ್ಲಿಯೂ ಸಂಪನ್ನ ಎರಡೂ ಇರಲಿ. ಇಂತಹವರಿಗೆ ಯೋಗ್ಯ ಸೇವಾಧಾರಿ ಎಂದು ಹೇಳಲಾಗುತದೆ. ತಿಳಿಯಿತೆ!
ಪ್ರತೀ ಹೆಜ್ಜೆಯಲ್ಲಿ ಸಂಪನ್ನತೆ. ಇಂತಹ ಅನುಭವಿ ಆತ್ಮನು ಅನುಭವದ ಅಥಾರಿಟಿ ಆಗಿದ್ದಾರೆ. ಸದಾ
ತಂದೆಯ ಜೊತೆಯ ಅನುಭವವಾಗಲಿ.
ಕುಮಾರಿಯರೊಂದಿಗೆ:-
ಸದಾ ಅದೃಷ್ಟ(ಲಕಿ) ಕುಮಾರಿಯರಾಗಿದ್ದೀರಲ್ಲವೆ. ಸದಾ ತಮ್ಮ ಭಾಗ್ಯದ ಹೊಳೆಯುತ್ತಿರುವ ನಕ್ಷತ್ರವು,
ತಮ್ಮ ಮಸ್ತಕದಲ್ಲಿದೆಯೆಂದು ಅನುಭವ ಮಾಡುತ್ತೀರಾ. ಮಸ್ತಕದಲ್ಲಿ ಭಾಗ್ಯದ ನಕ್ಷತ್ರವು
ಹೊಳೆಯುತ್ತಿದೆಯಲ್ಲವೆ ಅಥವಾ ಹೊಳೆಯುವಂತದ್ದೇ? ತಂದೆಯ ಮಗುವಾಗುವುದು ಅರ್ಥಾತ್ ನಕ್ಷತ್ರವು
ಹೊಳೆಯುವುದು. ಅಂದಮೇಲೆ ಆಗಿ ಬಿಟ್ಟಿರಾ ಅಥವಾ ಈಗ ಮಗುವಾಗಲು ಯೋಚಿಸುತ್ತಿದ್ದೀರಾ? ಯೋಚಿಸುವವರೇ
ಅಥವಾ ಮಾಡುವವರೇ? ಯಾರೇ ಮಗುವಾಗುವುದರಿಂದ ದೂರ ಮಾಡಲು ಬಯಸುತ್ತಾರೆಂದರೆ ದೂರವಾಗುತ್ತೀರಾ?
ತಂದೆಯೊಂದಿಗೆ ವ್ಯಾಪಾರ ಮಾಡಿ ನಂತರ ಅನ್ಯರೊಂದಿಗೆ ವ್ಯಾಪಾರ ಮಾಡಿದರೆ ಏನಾಗುತ್ತದೆ? ಮತ್ತೆ ತಮ್ಮ
ಭಾಗ್ಯವನ್ನು ನೋಡಿಕೊಳ್ಳಬೇಕಾಗುತ್ತದೆ. ಯಾರೇ ಆಗಲಿ ಲಕ್ಷಾಧಿಪತಿಯಾಗಿ ಬಡವರಾಗುವುದಿಲ್ಲ,
ಬಡವರಾಗಿದ್ದು ಸಾಹುಕಾರರಾಗುತ್ತಾರೆ. ಸಾಹುಕಾರರು ಬಡವರಾಗುವುದಿಲ್ಲ, ತಂದೆಯ ಮಕ್ಕಳಾದ ನಂತರ
ಎಲ್ಲಿಗೂ ಸಂಕಲ್ಪ ಹೋಗಲು ಸಾಧ್ಯವಿಲ್ಲ - ಹೀಗೆ ಪರಿಪಕ್ವವಿದ್ದೀರಾ? ಸಂಗವೆಷ್ಟಿರುತ್ತದೆಯೋ ಅಷ್ಟು
ರಂಗೇರುತ್ತದೆ. ಸಂಗವು ಕಚ್ಚಾ ಇದ್ದರೆ ರಂಗೂ ಸಹ ಕಚ್ಚಾ. ಆದ್ದರಿಂದ ವಿದ್ಯೆ ಮತ್ತು ಸೇವೆಯೆರಡರ
ಸಂಗವಿರಬೇಕು. ಅದರಿಂದ ಸದಾಕಾಲಕ್ಕಾಗಿ ಪರಿಪಕ್ವ ಅಚಲರಾಗಿರುತ್ತೀರಿ. ಹಲ್ಚಲ್ನಲ್ಲಿ ಬರುವುದಿಲ್ಲ.
ಪರಿಪಕ್ವ ರಂಗೇರಿತೆಂದರೆ ಇಷ್ಟೊಂದು ಭುಜಗಳಿಂದ, ಇಷ್ಟೊಂದು ಸೇವಾಕೇಂದ್ರಗಳನ್ನು ತೆರೆಯಬಹುದು
ಏಕೆಂದರೆ ಕುಮಾರಿರುವುದೇ ನಿರ್ಬಂಧನರು. ಅನ್ಯರ ಬಂಧನಗಳನ್ನೂ ಸಮಾಪ್ತಿ ಮಾಡುತ್ತಾರಲ್ಲವೆ. ಸದಾ
ತಂದೆಯ ಜೊತೆ ಪರಿಪಕ್ವ ವ್ಯಾಪಾರ ಮಾಡುವವರು. ಸಾಹಸವಿದೆಯೆಂದರೆ ತಂದೆಯ ಸಹಯೋಗವೂ ಸಿಗುತ್ತದೆ.
ಸಾಹಸ ಕಡಿಮೆಯಿದ್ದರೆ ಸಹಯೋಗವೂ ಕಡಿಮೆ. ಒಳ್ಳೆಯದು. ಓಂ ಶಾಂತಿ.
ವರದಾನ:
ಪರಮಾತ್ಮ ಪ್ರೀತಿಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಈಗಿನ(ವರ್ತಮಾನ)ದರಿಂದ ಭವಿಷ್ಯ ರಾಜಾ ಮಗು
ಭವ.
ಸಂಗಮಯುಗದಲ್ಲಿ
ತಾವು ಭಾಗ್ಯಶಾಲಿ ಮಕ್ಕಳೇ ಹೃದಯರಾಮನ ಮಗುವಾಗಲು ಪಾತ್ರರಾಗಿದ್ದೀರಿ. ಈ ಪರಮಾತ್ಮನ ಪ್ರೀತಿಯು
ಕೋಟಿಯಲ್ಲಿ ಕೆಲವು ಆತ್ಮರಿಗೆ ಪ್ರಾಪ್ತವಾಗುತ್ತದೆ. ಈ ದಿವ್ಯ ಪ್ರೀತಿಯ ಮೂಲಕ ರಾಜಾ ಮಗುವಾಗಿ
ಬಿಡುತ್ತೀರಿ. ರಾಜಾ ಮಗು ಅರ್ಥಾತ್ ಈಗಲೂ ರಾಜರು ಮತ್ತು ಭವಿಷ್ಯದಲ್ಲಿಯೂ ರಾಜಾ. ಭವಿಷ್ಯಕ್ಕಿಂತಲೂ
ಮೊದಲು ಈಗ ಸ್ವರಾಜ್ಯ ಅಧಿಕಾರಿಯಾಗಿ ಬಿಟ್ಟಿರಿ. ಹೇಗೆ ಭವಿಷ್ಯ ರಾಜ್ಯದ ಮಹಿಮೆಯಿದೆ- ಒಂದು ರಾಜ್ಯ,
ಒಂದು ಧರ್ಮ..... ಹೀಗೆ ಈಗ ಸರ್ವ ಕರ್ಮೇಂದ್ರಿಯಗಳ ಮೇಲೆ ಆತ್ಮದ ಒಂದು ರಾಜ್ಯವಿದೆ.
ಸ್ಲೋಗನ್:
ತಮ್ಮ ಚಹರೆಯಿಂದ
ತಂದೆಯ ಮೂರ್ತಿಯನ್ನು ತೋರಿಸುವವರೇ ಪರಮಾತ್ಮ ಸ್ನೇಹಿ ಆಗಿದ್ದಾರೆ.
ಸೂಚನೆ:
ಇಂದು ತಿಂಗಳಿನ
ಮೂರನೆಯ ರವಿವಾರವಾಗಿದೆ, ಎಲ್ಲರೂ ಸಂಘಟಿತ ರೂಪದಲ್ಲಿ ಸಂಜೆ 6.30ರಿಂದ 7.30ರವರೆಗೆ
ಅಂತರಾಷ್ಟ್ರೀಯ ಯೋಗದಲ್ಲಿ ಸಮೂಹದಲ್ಲಿದ್ದು, ಬೀಜರೂಪದ ತಂದೆಯ ಜೊತೆ ತಮ್ಮ ಪೂರ್ವಜ ಸ್ವರೂಪದ
ಸ್ಮೃತಿಯಲ್ಲಿ ಸ್ಥಿತರಾಗಿದ್ದು, ಇಡೀ ವೃಕ್ಷಕ್ಕೆ ಸ್ನೇಹ ಹಾಗೂ ಶಕ್ತಿಯ ಸಕಾಶ ಕೊಡುವ ಸೇವೆಯನ್ನು
ಮಾಡಿರಿ -ಇಡೀ ದಿನದಲ್ಲಿ ಪೂರ್ವಜ ಆತ್ಮನಾಗಿದ್ದೇನೆ, ಈ ಸ್ವಮಾನದಲ್ಲಿರುವ ಅಭ್ಯಾಸವನ್ನು ಮಾಡಿರಿ.