22.05.19         Morning Kannada Murli       Om Shanti           BapDada Madhuban


“ಮಧುರಮಕ್ಕಳೇ- ಜ್ಞಾನದಬುಲ್-ಬುಲ್ (ಹಕ್ಕಿ) ಆಗಿತಮ್ಮಸಮಾನಮಾ ಡುವಂತಹಸೇವೆಮಾಡಿ, ಎಷ್ಟುಜನರನ್ನುತಮ್ಮಸ ಮಾನಮಾಡಿದೆವು ಎಂದುಪರಿಶೀಲಿಸಿಕೊಳ್ಳಿ, ನೆನಪಿನಚಾರ್ಟ್ಹೇಗಿದೆ?"

ಪ್ರಶ್ನೆ:
ಭಗವಂತ ತಮ್ಮ ಮಕ್ಕಳೊಂದಿಗೆ ಯಾವ ಭರವಸೆಯನ್ನು ಕೊಡುತ್ತಾರೆಯೋ ಅದನ್ನು ಮನುಷ್ಯರು ಮಾಡುವುದಿಲ್ಲ?

ಉತ್ತರ:
ಭಗವಂತ ಈ ಭರವಸೆಯನ್ನು ಮಾಡುತ್ತಾರೆ - ಮಕ್ಕಳೇ, ನಾನು ನಿಮ್ಮನ್ನು ಅವಶ್ಯವಾಗಿ ಮನೆಗೆ ಕರೆದುಕೊಂಡು ಹೋಗುತ್ತೇನೆ, ನೀವು ಶ್ರೀಮತದಂತೆ ನಡೆದು ಪಾವನರಾದರೆ ಮುಕ್ತಿ ಹಾಗೂ ಜೀವನ್ಮುಕ್ತಿಯಲ್ಲಿ ಹೋಗುತ್ತೀರಿ. ಇಲ್ಲದಿದ್ದಲ್ಲಿ ಪ್ರತಿಯೊಬ್ಬರೂ ಮುಕ್ತಿಯಲ್ಲಿ ಹೋಗಲೇಬೇಕಾಗಿದೆ. ಯಾರೇ ಇಷ್ಟ ಪಡಲಿ, ಇಷ್ಟ ಪಡದಿರಲಿ ಬಲವಂತದಿಂದಾದರೂ ಲೆಕ್ಕವನ್ನು ಸಮಾಪ್ತಿ ಮಾಡಿ ಕರೆದುಕೊಂಡು ಹೋಗುತ್ತೇನೆ. ತಂದೆಯು ತಿಳಿಸುತ್ತಾರೆ - ಯಾವಾಗ ನಾನು ಬರುತ್ತೇನೆ ಆಗ ನಿಮ್ಮೆಲ್ಲರ ವಾನಪ್ರಸ್ಥ ಸ್ಥಿತಿಯಾಗಿರುತ್ತದೆ, ನಾನು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ.

ಓಂ ಶಾಂತಿ.
ಮಕ್ಕಳೀಗ ವಿದ್ಯೆಯ ಬಗ್ಗೆ ಗಮನ ಕೊಡಬೇಕಾಗಿದೆ. ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ..... ಈ ಎಲ್ಲಾ ಗುಣಗಳನ್ನು ಧಾರಣೆ ಮಾಡಬೇಕು. ನಮ್ಮನ್ನು ನಾವು ಈ ಗುಣಗಳಿವೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಏಕೆಂದರೆ ನೀವು ಏನಾಗುತ್ತೀರಿ ನಿಮಗೆ ಅದೇ ಕಡೆ ಗಮನ ಹೋಗುತ್ತದೆ. ಇದು ಓದಿ ಅನ್ಯರಿಗೆ ಓದಿಸುವುದರ ಮೇಲೆ ಆಧಾರವಾಗಿದೆ. ನಮ್ಮ ಮನಸ್ಸನ್ನು ನಾವೇ ಕೇಳಿಕೊಳ್ಳಬೇಕು - ನಾನು ಎಷ್ಟು ಮಂದಿಗೆ ಓದಿಸುತ್ತೇವೆ? ಸಂಪೂರ್ಣ ದೇವತೆಗಳಂತೂ ಯಾರೂ ಆಗಿಲ್ಲ. ಚಂದ್ರನು ಸಂಪೂರ್ಣನಾಗಿದ್ದಾಗ ಎಷ್ಟೊಂದು ಪ್ರಕಾಶವಿರುತ್ತದೆ. ಇಲ್ಲಿಯೂ ನೋಡಲಾಗುತ್ತದೆ. ನಂಬರ್ವಾರ್ ಪುರುಷಾರ್ಥನುಸಾರವಾಗಿ ಇದ್ದಾರೆ. ಇದನ್ನು ಮಕ್ಕಳು ತಿಳಿದುಕೊಳ್ಳಬಹುದು. ಶಿಕ್ಷಕರೂ ಸಹ ತಿಳಿದುಕೊಳ್ಳುತ್ತಾರೆ. ಒಂದೊಂದು ಮಗುವಿನ ಕಡೆ ಏನು ಮಾಡುತ್ತಿದ್ದಾರೆಂದು ದೃಷ್ಟಿಯು ಹೋಗುತ್ತದೆ. ನನ್ನ ಪ್ರತಿಯಾಗಿ ಏನು ಸೇವೆ ಮಾಡುತ್ತಿದ್ದಾರೆ? ಎಲ್ಲಾ ಹೂಗಳನ್ನು ನೋಡುತ್ತಾರೆ. ಎಲ್ಲರೂ ಹೂಗಳಾಗಿದ್ದಾರೆ, ಇದು ತೋಟವಲ್ಲವೆ. ಪ್ರತಿಯೊಬ್ಬರೂ ತಮ್ಮ ಸ್ಥಿತಿಯನ್ನೂ ತಿಳಿದುಕೊಂಡಿದ್ದಾರೆ, ತಮ್ಮ ಖುಷಿಯನ್ನೂ ತಿಳಿದುಕೊಂಡಿದ್ದಾರೆ. ಅತೀಂದ್ರಿಯ ಸುಖದ ಜೀವನ ಪ್ರತಿಯೊಬ್ಬರಿಗೂ ತಮ್ಮದೇ ರೀತಿಯಲ್ಲಿ ಅನುಭವವಾಗುತ್ತದೆ. ಒಬ್ಬ ತಂದೆಯನ್ನು ಬಹಳ ನೆನಪು ಮಾಡಬೇಕು. ನೆನಪು ಮಾಡುವುದರಿಂದ ನೆನಪಿಗೆ ನೆನಪು ಸಿಗುತ್ತದೆ. ತಮೋಪ್ರಧಾನದಿಂದ ಸತೋಪ್ರಧಾನರಾಗಲು ನೀವು ಮಕ್ಕಳಿಗೆ ಸಹಜ ಉಪಾಯವನ್ನು ತೋರಿಸುತ್ತೇನೆ- ಅದು ನೆನಪಿನ ಯಾತ್ರೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಕೇಳಿಕೊಳ್ಳಬೇಕು- ನಮ್ಮ ನೆನಪಿನ ಯಾತ್ರೆಯು ಸರಿಯಿದೆಯೇ? ಹಾಗೂ ಯಾರನ್ನಾದರೂ ನನ್ನ ಸಮಾನ ಮಾಡುತ್ತೇನೆಯೇ? ಏಕೆಂದರೆ ನೀವು ಜ್ಞಾನದ ಪಕ್ಷಿಯಾಗಿದ್ದೀರಿ, ಕೆಲವರು ಗಿಣಿಯಾಗಿದ್ದಾರೆ, ಕೆಲವರು ಬೇರೇನೋ ಆಗಿದ್ದಾರೆ. ನೀವು ಪಾರಿವಾಳವಲ್ಲ ಕೇವಲ ಗಿಣಿಯಾಗಬೇಕು. ನಮ್ಮನ್ನು ನಾವು ಕೇಳಿಕೊಳ್ಳುವುದು ಬಹಳ ಸಹಜವಾಗಿದೆ- ತಂದೆಯ ನೆನಪು ನಮಗೆ ಎಷ್ಟಿರುತ್ತದೆ? ಎಲ್ಲಿಯ ತನಕ ನಾವು ಅತೀಂದ್ರಿಯ ಸುಖದಲ್ಲಿರುತ್ತೇವೆ? ಮನುಷ್ಯರಿಂದ ದೇವತೆಗಳಾಗಬೇಕಲ್ಲವೆ! ಮನುಷ್ಯರಂತೂ ಮನುಷ್ಯರೇ ಆಗಿದ್ದಾರೆ. ಸ್ತ್ರೀ ಅಥವಾ ಪುರುಷ ಇಬ್ಬರನ್ನು ನೋಡಿದರೆ ಮನುಷ್ಯರಂತೆಯೇ ಕಾಣುತ್ತಾರೆ ನಂತರ ದೈವೀ ಗುಣಗಳನ್ನು ಧಾರಣೆ ಮಾಡಿ ನೀವು ದೇವತೆಯಾಗುತ್ತೀರಿ. ನಿಮ್ಮ ವಿನಃ ದೇವತೆಯಾಗುವವರು ಬೇರೆ ಯಾರೂ ಇಲ್ಲ. ನೀವು ಇಲ್ಲಿಗೆ ದೈವೀ ಪರಿವಾರದ ಸಂಬಂಧಿಯಾಗಲು ಬರುತ್ತೀರಿ. ಅಲ್ಲಿಯೂ ಸಹ ನೀವು ದೈವೀ ಸಂಬಂಧದಲ್ಲಿರುತ್ತೀರಿ. ಅಲ್ಲಿ ನಿಮ್ಮಲ್ಲಿ ಯಾವುದೇ ಈರ್ಷ್ಯೆ-ದ್ವೇಷದ ಮಾತೂ ಇರುವುದಿಲ್ಲ. ಇಂತಹ ದೈವೀ ಪರಿವಾರದವರಾಗಲು ಬಹಳ ಪುರುಷಾರ್ಥ ಮಾಡಬೇಕು. ನಿಯಮಾನುಸಾರವಾಗಿ ಓದಬೇಕು. ಎಂದಿಗೂ ವಿದ್ಯೆಯನ್ನು ತಪ್ಪಿಸಬಾರದು. ಭಲೆ ಆರೋಗ್ಯ ಸರಿಯಿಲ್ಲದಿದ್ದರೂ ಬುದ್ಧಿಯಲ್ಲಿ ಶಿವ ತಂದೆಯ ನೆನಪಿರಬೇಕು. ಇಲ್ಲಿ ಮಾತನಾಡುವ ಅವಶ್ಯಕತೆಯಿರುವುದಿಲ್ಲ. ಆತ್ಮ, ನಾವು ಶಿವ ತಂದೆಯ ಮಕ್ಕಳಾಗಿದ್ದೇವೆಂದು ತಿಳಿದುಕೊಂಡಿದೆ. ತಂದೆಯು ನಮ್ಮನ್ನು ಮನೆಗೆ ಕರೆದೊಯ್ಯಲು ಬಂದಿದ್ದಾರೆ, ಈ ಅಭ್ಯಾಸವೂ ಬಹಳ ಚೆನ್ನಾಗಿರಬೇಕು. ಭಲೆ ನೀವು ಎಲ್ಲಿಯೇ ಇರಿ ಆದರೆ ತಂದೆಯ ನೆನಪಿನಲ್ಲಿರಿ. ತಂದೆಯು ಬಂದಿರುವುದೇ ಶಾಂತಿಧಾಮ ಹಾಗೂ ಸುಖಧಾಮಕ್ಕೆ ಕರೆದೊಯ್ಯಲು. ಇದು ಎಷ್ಟೊಂದು ಸಹಜವಾಗಿದೆ. ಬಹಳ ಮಕ್ಕಳು ಹೆಚ್ಚು ಧಾರಣೆ ಮಾಡಲು ಆಗುವುದಿಲ್ಲ, ಒಳ್ಳೆಯದು. ನೆನಪು ಮಾಡಿ. ಇಲ್ಲಿ ಎಲ್ಲಾ ಮಕ್ಕಳು ಕುಳಿತಿದ್ದಾರೆ, ಇದರಲ್ಲಿಯೂ ನಂಬರ್ವಾರ್ ಇದ್ದಾರೆ. ಹಾ! ಅಗತ್ಯವಾಗಿ ಆಗಬೇಕಾಗಿದೆ. ಶಿವ ತಂದೆಯ ನೆನಪನ್ನು ಅಗತ್ಯವಾಗಿ ಮಾಡುತ್ತಾರೆ. ಅನ್ಯ ಸಂಗವನ್ನು ಬಿಟ್ಟು ಒಬ್ಬನ ಸಂಗ ಮಾಡುವವರು ಎಲ್ಲರೂ ಇರುತ್ತಾರೆ. ಆದರೆ ಕೆಲವರಿಗೆ ನೆನಪಿಲ್ಲದಿರಬಹುದು ಆದರೆ ಇದರಲ್ಲಿ ಕೊನೆಯವರೆಗೂ ಪುರುಷಾರ್ಥ ಮಾಡಬೇಕು, ಶ್ರಮ ಪಡಬೇಕಾಗುತ್ತದೆ. ಆಂತರ್ಯದಲ್ಲಿ ಸದಾ ಒಬ್ಬ ತಂದೆಯ ನೆನಪಿರಬೇಕು, ಎಲ್ಲಿಗಾದರೂ ತಿರುಗಾಡಲು ಹೋಗುತ್ತೀರೆಂದಾಗ ಆಂತರ್ಯದಲ್ಲಿ ತಂದೆಯ ನೆನಪೇ ಇರಬೇಕು. ಮಾತನಾಡುವ ಅವಶ್ಯಕತೆಯಿರುವುದಿಲ್ಲ, ಇದು ಸಹಜ ವಿದ್ಯೆಯಾಗಿದೆ. ಓದಿಸಿ ನಿಮ್ಮನ್ನು ತನ್ನ ಸಮಾನ ಮಾಡುತ್ತಾರೆ. ಇಂತಹ ಸ್ಥಿತಿಯಲ್ಲಿಯೇ ನೀವು ಮಕ್ಕಳು ತಲುಪಬೇಕು. ಹೇಗೆ ಸತೋಪ್ರಧಾನ ಸ್ಥಿತಿಯಲ್ಲಿ ಬಂದಿದ್ದಿರಿ, ಹೀಗೆ ಬಂದವರು ಅದೇ ಸ್ಥಿತಿಯಲ್ಲಿ ಹೋಗಬೇಕು. ತಿಳಿಸಿಕೊಡಲು ಎಷ್ಟೊಂದು ಸಹಜವಾಗಿದೆ! ಮನೆಯ ಕೆಲಸ-ಕಾರ್ಯ ಮಾಡುತ್ತಾ, ನಡೆಯುತ್ತಾ-ತಿರುಗಾಡುತ್ತಾ ತಮ್ಮನ್ನು ಹೂವನ್ನಾಗಿ ಮಾಡಿಕೊಳ್ಳಬೇಕು. ನಮ್ಮಲ್ಲಿ ಯಾವುದೇ ಗೊಂದಲವಿಲ್ಲವೆ ಎಂದು ಪರಿಶೀಲನೆ ಮಾಡಿಕೊಳ್ಳಬೇಕು. ವಜ್ರದ ಉದಾಹರಣೆಯು ಬಹಳ ಚೆನ್ನಾಗಿದೆ- ನಮ್ಮನ್ನು ನಾವು ಪರಿಶೀಲನೆ ಮಾಡಿಕೊಳ್ಳಬೇಕು- ನೀವು ಸ್ವಯಂ ಮ್ಯಾಗ್ನಿಫೈ ಗ್ಲಾಸ್ (ಭೂತ ಕನ್ನಡಿ) ಆಗಿದ್ದೀರಿ, ಅದರಲ್ಲಿ ನಿಮ್ಮನ್ನು ನೀವೇ ಪರಿಶೀಲನೆ ಮಾಡಿಕೊಳ್ಳಿ. ನನ್ನಲ್ಲಿ ದೇಹಾಭಿಮಾನವು ಸ್ವಲ್ಪವೂ ಇಲ್ಲವೇ! ಭಲೆ ಈ ಸಮಯದಲ್ಲಿ ಎಲ್ಲರೂ ಪುರುಷಾರ್ಥಿಗಳೇ ಆಗಿದ್ದೀರಿ ಆದರೆ ಗುರಿ-ಉದ್ದೇಶ ನಿಮ್ಮ ಸನ್ಮುಖದಲ್ಲಿದೆಯಲ್ಲವೆ. ನೀವು ಎಲ್ಲರಿಗೂ ಸಂದೇಶವನ್ನು ಕೊಡಬೇಕು. ತಂದೆಯೂ ಸಹ ತಿಳಿಸಿದ್ದರು- ಸಮಾಚಾರ ಪತ್ರಿಕೆಗಾಗಿ ಒಂದುವೇಳೆ ಖರ್ಚಾದರೂ ಎಲ್ಲರಿಗೂ ಸಂದೇಶ ಸಿಗುವಂತಾಗಲಿ. ಹೇಳಿ, ಒಬ್ಬ ತಂದೆಯನ್ನು ನೆನಪು ಮಾಡಿದಾಗ ವಿಕರ್ಮ ವಿನಾಶವಾಗಿ ಪವಿತ್ರವಾಗುತ್ತೀರಿ. ಈಗ ಯಾರೂ ಪವಿತ್ರವಾಗಿಲ್ಲ. ತಂದೆಯು ತಿಳಿಸುತ್ತಾರೆ- ಪವಿತ್ರ ಆತ್ಮರು ಹೊಸ ಪ್ರಪಂಚದಲ್ಲಿರುತ್ತಾರೆ, ಇದು ಹಳೆಯ ಅಪವಿತ್ರ ಪ್ರಪಂಚವಾಗಿದೆ, ಇಲ್ಲಿ ಒಬ್ಬರೂ ಸಹ ಪವಿತ್ರರಿಲ್ಲ. ಆತ್ಮವು ಪವಿತ್ರವಾಗಿ ಬಿಟ್ಟಾಗ ಈ ಶರೀರವು ಬಿಟ್ಟು ಬಿಡುತ್ತದೆ, ಬಿಡಲೇ ಬೇಕಾಗುವುದು. ನೆನಪು ಮಾಡುತ್ತಾ-ಮಾಡುತ್ತಾ ನಿಮ್ಮ ಆತ್ಮವು ಒಮ್ಮೆಯೇ ಪವಿತ್ರವಾಗಿ ಬಿಡುವುದು. ಶಾಂತಿಧಾಮದಿಂದ ನಾವು ಒಮ್ಮೆಯೇ ಪವಿತ್ರ ಆತ್ಮ ಬಂದು ಗರ್ಭ ಮಹಲಿನಲ್ಲಿ ಬಂದು ಕುಳಿತುಕೊಳ್ಳುತ್ತೇವೆ. ನಂತರ ಇಷ್ಟೆಲ್ಲಾ ಪಾತ್ರವನ್ನಭಿನಯಿಸಿದೆವು. ಈಗ ಚಕ್ರವು ಪೂರ್ಣವಾಯಿತು, ಮತ್ತೆ ನೀವಾತ್ಮರು ಮನೆಗೆ ಹಿಂದಿರುಗುತ್ತೀರಿ. ಅಲ್ಲಿಂದ ಸುಖಧಾಮಕ್ಕೆ ಬರುತ್ತೀರಿ. ಅಲ್ಲಿ ಗರ್ಭ ಮಹಲಿರುತ್ತದೆ, ಆದರೂ ಶ್ರೇಷ್ಠ ಪದವಿಯನ್ನು ಪಡೆಯಲು ಪುರುಷಾರ್ಥ ಮಾಡಬೇಕು. ಇದು ವಿದ್ಯೆಯಾಗಿದೆ, ಈಗ ನರಕ ವೇಶ್ಯಾಲಯ ವಿನಾಶವಾಗಿ ಸ್ವರ್ಗ ಶಿವಾಲಯ ಸ್ಥಾಪನೆಯಾಗುತ್ತಿದೆ. ಈಗ ಎಲ್ಲರೂ ಮನೆಗೆ ಹಿಂತಿರುಗಬೇಕಾಗಿದೆ.

ನಾವು ಈ ಶರೀರವನ್ನು ಬಿಟ್ಟು ಹೊಸ ಪ್ರಪಂಚದಲ್ಲಿ ರಾಜಕುಮಾರ-ರಾಜಕುಮಾರಿಯಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಕೆಲವರು ನಾವು ಪ್ರಜೆಗಳಲ್ಲಿ ಹೋಗುತ್ತೇವೆಂದು ತಿಳಿದುಕೊಂಡಿದ್ದಾರೆ, ಇದರಲ್ಲಿ ಸಂಪೂರ್ಣವಾಗಿ ಲೈನ್ ಸ್ಪಷ್ಟವಾಗಿರಲಿ. ಒಬ್ಬ ತಂದೆಯ ನೆನಪಿರಲಿ, ಬೇರೆ ಯಾವ ನೆನಪಿಲ್ಲದಿರಲಿ. ಇಲ್ಲಿ ಬದುಕಿದ್ದೂ ಸಾಯಬೇಕು ಎನ್ನುವುದನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕು. ನಾವು ನಮ್ಮ ಮನೆಯನ್ನು ಮರೆತು ಬಿಟ್ಟಿದ್ದೆವು ಈಗ ತಂದೆಯು ನೆನಪು ತರಿಸಿದ್ದಾರೆ. ಈಗ ಈ ನಾಟಕವು ಪೂರ್ಣವಾಗುತ್ತಿದೆ. ತಂದೆಯು ತಿಳಿಸುತ್ತಾರೆ- ನೀವೆಲ್ಲರೂ ವಾನಪ್ರಸ್ಥಿಗಳಾಗಿದ್ದೀರಿ, ಪ್ರಪಂಚದಲ್ಲಿರುವ ಎಲ್ಲಾ ಮನುಷ್ಯ ಮಾತ್ರರೂ ಈ ಸಮಯದಲ್ಲಿ ವಾನಪ್ರಸ್ಥ ಸ್ಥಿತಿಯಲ್ಲಿದ್ದಾರೆ. ನಾನು ಬಂದಿದ್ದೇನೆ, ಎಲ್ಲಾ ಆತ್ಮಗಳನ್ನು ಶಬ್ಧದಿಂದ ದೂರ ಕರೆದೊಯ್ಯುತ್ತೇನೆ. ತಂದೆಯು ತಿಳಿಸುತ್ತಾರೆ- ನೀವೀಗ ಚಿಕ್ಕವರು-ದೊಡ್ಡವರು ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ವಾನಪ್ರಸ್ಥ ಎಂದು ಯಾವುದಕ್ಕೆ ಹೇಳಲಾಗುತ್ತದೆ ಎಂದು ನಿಮಗೂ ಸಹ ತಿಳಿದಿರಲಿಲ್ಲ. ಹಾಗೆಯೇ ಹೋಗಿ ಗುರುಗಳನ್ನು ಮಾಡಿಕೊಳ್ಳುತ್ತಿದ್ದಿರಿ, ನೀವು ಲೌಕಿಕ ಗುರುಗಳ ಮುಖಾಂತರ ಅರ್ಧಕಲ್ಪ ಪುರುಷಾರ್ಥ ಮಾಡುತ್ತಾ ಬಂದಿದ್ದೀರಿ, ಆದರೆ ಯಾವುದೇ ಜ್ಞಾನವಿಲ್ಲ, ಈಗ ತಂದೆ ಸ್ವತಃ ಹೇಳುತ್ತಾರೆ ನಿಮ್ಮದು ಈಗ ಚಿಕ್ಕವರು ದೊಡ್ಡವರು ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ಮುಕ್ತಿಯು ಎಲ್ಲರಿಗೂ ಪ್ರಾಪ್ತಿಯಾಗುತ್ತದೆ. ಚಿಕ್ಕವರು-ದೊಡ್ಡವರೆಲ್ಲರೂ ನಾಶವಾಗಿ ಬಿಡುತ್ತಾರೆ. ತಂದೆಯು ಮನೆಗೆ ಕರೆದೊಯ್ಯಲು ಬಂದಿದ್ದಾರೆ ಇದರಲ್ಲಿ ಮಕ್ಕಳಿಗೆ ಬಹಳ ಖುಷಿಯಾಗಬೇಕಾಗಿದೆ. ಇಲ್ಲಿ ದುಃಖದ ಅನುಭವ ಬಹಳ ಆಗುತ್ತಿರುತ್ತದೆ. ಆದುದರಿಂದ ತಮ್ಮ ಮಧುರ ಮನೆಯನ್ನು ನೆನಪು ಮಾಡುತ್ತಾರೆ, ಮನೆಗೆ ಹೋಗಲು ಇಚ್ಛೆ ಪಡುತ್ತಾರೆ ಆದರೆ ಬುದ್ಧಿಯಂತೂ ಇಲ್ಲ. ನಾವು ಆತ್ಮರಿಗೆ ಶಾಂತಿ ಬೇಕೆಂದು ಹೇಳುತ್ತಾರೆ! ಎಷ್ಟು ಸಮಯದವರೆಗೆ ಬೇಕೆಂದು ತಂದೆ ಕೇಳುತ್ತಾರೆ ಇಲ್ಲಿ ಪ್ರತಿಯೊಬ್ಬರೂ ತಮ್ಮ-ತಮ್ಮ ಪಾತ್ರವನ್ನಭಿನಯಿಸಬೇಕು. ಇಲ್ಲಿ ಶಾಂತಿಯಲ್ಲಿರಲು ಸಾಧ್ಯವೇನು?. ಅರ್ಧಕಲ್ಪ ಈ ಗುರು ಮೊದಲಾದವರು ನಿಮ್ಮಿಂದ ಶ್ರಮ ಪಡಿಸಿದರು. ಶ್ರಮ ಪಡುತ್ತಾ ಅಲೆಯುತ್ತಾ-ಅಲೆಯುತ್ತಾ ಇನ್ನೂ ಅಶಾಂತರಾಗಿದ್ದೀರಿ. ಈಗ ಶಾಂತಿಧಾಮದ ಮಾಲೀಕನೇ ಬಂದು ಎಲ್ಲರನ್ನೂ ಮನೆಗೆ ಕರೆದೊಯ್ಯುತ್ತಾರೆ ಅವರೇ ಓದಿಸುತ್ತಾರೆ. ನಿರ್ವಾಣಧಾಮ, ಮುಕ್ತಿಧಾಮಕ್ಕೆ ಹೋಗಲೆಂದೇ ಭಕ್ತಿ ಮಾಡುವುದು. ಅವರ ಮನಸ್ಸಿನಲ್ಲಿ ಸುಖಧಾಮಕ್ಕೆ ಹೋಗುವ ಮಾತು ಬರುವುದೇ ಇಲ್ಲ. ಎಲ್ಲರೂ ವಾನಪ್ರಸ್ಥದಲ್ಲಿ ಹೋಗಲು ಪುರುಷಾರ್ಥ ಮಾಡುತ್ತಾರೆ ನೀವು ಸುಖಧಾಮಕ್ಕೆ ಹೋಗಲು ಪುರುಷಾರ್ಥ ಮಾಡುತ್ತೀರಿ. ಮೊದಲು ವಾಣಿಯಿಂದ ದೂರ ಹೋಗುವ ಸ್ಥಿತಿ ಬೇಕೆಂದು ನೀವು ತಿಳಿದಿದ್ದೀರಿ. ಭಗವಂತನೂ ಪ್ರಾಮಿಸ್ ಮಾಡುತ್ತಾರೆ ಮಕ್ಕಳೊಂದಿಗೆ, ನಾನು ನೀವು ಮಕ್ಕಳನ್ನು ನನ್ನ ಮನೆಗೆ ಅಗತ್ಯವಾಗಿ ಕರೆದೊಯ್ಯುತ್ತೇನೆ. ಅದಕ್ಕಾಗಿ ನೀವು ಅರ್ಧಕಲ್ಪ ಭಕ್ತಿ ಮಾಡಿದ್ದೀರಿ, ಈಗ ನೀವು ಶ್ರೀಮತದಂತೆ ನಡೆದರೆ ಮುಕ್ತಿ-ಜೀವನ್ಮುಕ್ತಿಯಲ್ಲಿ ನಡೆಯುತ್ತೀರಿ. ಇಲ್ಲದಿದ್ದರೆ ಎಲ್ಲರೂ ಶಾಂತಿಧಾಮಕ್ಕೆ ಹೋಗಲೇಬೇಕು. ಯಾರೇ ಹೋಗಲು ಇಷ್ಟ ಪಡಲಿ, ಇಷ್ಟ ಪಡದೇ ಇರಲಿ ಎಲ್ಲರೂ ಮುಕ್ತಿಧಾಮಕ್ಕೆ ಹೋಗಲೇಬೇಕು. ಇಷ್ಟ ಪಡಿ ಅಥವಾ ಇಷ್ಟ ಪಡದೇ ಇರಿ ಆದರೆ ನಾನು ಎಲ್ಲರನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ. ಬಲವಂತವಾಗಿ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಕರೆದುಕೊಂಡು ಹೋಗುತ್ತೇನೆ. ನೀವು ಸತ್ಯಯುಗದಲ್ಲಿ ಹೋಗುತ್ತೀರಿ ಬಾಕಿ ಉಳಿದವರೆಲ್ಲರೂ ವಾಣಿಯಿಂದ ದೂರ ಮುಕ್ತಿಯಲ್ಲಿರುತ್ತಾರೆ. ಯಾರನ್ನೂ ಬಿಡುವುದಿಲ್ಲ ಯಾರೂ ಹೊರಡದೇ ಇದ್ದರೆ ಶಿಕ್ಷೆಯನ್ನು ಕೊಟ್ಟು ಕರೆದೊಯ್ಯುತ್ತೇನೆ. ನಾಟಕದಲ್ಲಿ ಪಾತ್ರವೇ ಈ ರೀತಿಯಿದೆ ಆದ್ದರಿಂದ ತಮ್ಮ ಸಂಪಾದನೆ ಮಾಡಿಕೊಂಡು ನಡೆಯಿರಿ ಆಗ ಉತ್ತಮ ಪದವಿಯೂ ಸಿಗುತ್ತದೆ. ಅಂತ್ಯದಲ್ಲಿ ಬರುವವರು ಎಂತಹ ಸುಖವನ್ನು ಪಡೆಯುತ್ತಾರೆ? ತಂದೆಯು ಎಲ್ಲರಿಗೂ ತಿಳಿಸುತ್ತಾರೆ- ಅಗತ್ಯವಾಗಿ ಹಿಂತಿರುಗಬೇಕು. ಶರೀರಗಳಿಗೆ ಬೆಂಕಿ ಇಟ್ಟು ಎಲ್ಲಾ ಆತ್ಮಗಳನ್ನು ಕರೆದೊಯ್ಯುತ್ತೇನೆ. ಆತ್ಮಗಳೇ ನನ್ನ ಜೊತೆ-ಜೊತೆ ಬರಬೇಕು. ನನ್ನ ಮತದಂತೆ ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣರಾದಾಗ ಉತ್ತಮ ಪದವಿ ಸಿಗುತ್ತದೆ. ನೀವು ಬಂದು ನಮಗೆ ಮೃತ್ಯು ಕೊಡಿ ಎಂದು ನೀವು ಕರೆದಿದ್ದೀರಲ್ಲವೆ. ಈಗ ಮೃತ್ಯುವು ಬಂದಿತೆಂದರೆ ಬಂದಿತು, ಯಾರೂ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಅಪವಿತ್ರ ಶರೀರವು ಇರಬಾರದಾಗಿದೆ. ತಂದೆಯನ್ನು ಕರೆದಿರುವುದೇ ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗಲು, ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಅಪವಿತ್ರ ಪ್ರಪಂಚದಿಂದ ನಿಮ್ಮನ್ನು ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗುತ್ತೇನೆ. ನಿಮ್ಮದೇ ನೆನಪಾರ್ಥವೂ ನಿಂತಿದೆ. ದಿಲ್ವಾಡಾ ಮಂದಿರವು ಇದೆಯಲ್ಲವೆ. ಮನಸ್ಸನ್ನು ತೆಗೆದುಕೊಳ್ಳುವವರ ಮಂದಿರವಾಗಿದೆ. ಆದಿ ದೇವನೂ ಸಹ ಕುಳಿತಿದ್ದಾನೆ, ಶಿವ ತಂದೆಯೂ ಇದ್ದಾರೆ, ಬಾಪ್ದಾದಾ ಇಬ್ಬರೂ ಇದ್ದಾರೆ. ಇವರ ಶರೀರದಲ್ಲಿ ತಂದೆಯು ವಿರಾಜಮಾನವಾಗಿದ್ದಾರೆ. ನೀವು ಅಲ್ಲಿಗೆ ಹೋದಾಗ ಆದಿ ದೇವನನ್ನು ನೋಡುತ್ತೀರಿ. ಇಲ್ಲಿ ಬಾಪ್ದಾದಾ ಕುಳಿತಿದ್ದಾರೆಂದು ನಿಮ್ಮ ಆತ್ಮವು ತಿಳಿದುಕೊಳ್ಳುತ್ತದೆ.

ಈ ಸಮಯದಲ್ಲಿ ನೀವು ಅಭಿನಯಿಸುತ್ತಿರುವ ಪಾತ್ರದ ಚಿಹ್ನೆಯು ನೆನಪಾರ್ಥವಾಗಿ ನಿಂತಿದೆ. ಅದರಲ್ಲಿ ಮಹಾರಥಿ, ಕುದುರೆ ಸವಾರ, ಕಾಲಾಳುಗಳೂ ಇದ್ದಾರೆ. ಅದು ಜಡವಾಗಿದೆ, ಇದು ಚೈತನ್ಯವಾಗಿದೆ. ಮೇಲೆ ವೈಕುಂಠವೂ ಇದೆ. ನೀವು ಆ ಮಾಡಲ್ನ್ನು ನೋಡಿಕೊಂಡು ಬರುತ್ತೀರಿ. ದಿಲ್ವಾಡಾ ಮಂದಿರವನ್ನು ನೀವು ತಿಳಿದಿದ್ದೀರಿ. ಕಲ್ಪ-ಕಲ್ಪವೂ ಈ ಮಂದಿರವು ಹೀಗೆಯೇ ಆಗುತ್ತದೆ ಮತ್ತೆ ನೀವು ಹೋಗಿ ನೋಡುತ್ತೀರಿ. ಕೆಲವರು ಗೊಂದಲವಾಗುತ್ತಾರೆ, ಈ ಎಲ್ಲಾ ಬೆಟ್ಟ-ಗುಡ್ಡಗಳು ಮುರಿದು ನಂತರ ಇದೇ ರೀತಿಯಾಗಿ ಆಗುತ್ತದೆ. ಹೇಗೆ ಎನ್ನುವ ಚಿಂತೆಯಂತೂ ಮಾಡಬಾರದು. ಈಗಂತೂ ಸ್ವರ್ಗವೂ ಇಲ್ಲ. ಅದು ಹೇಗೆ ಬರುತ್ತದೆ! ಪುರುಷಾರ್ಥದಿಂದ ಎಲ್ಲವೂ ಆಗುತ್ತದೆಯಲ್ಲವೆ. ನೀವೀಗ ತಯಾರಿ ಮಾಡುತ್ತಿದ್ದೀರಿ. ನೀವು ಸ್ವರ್ಗಕ್ಕೆ ಹೋಗಬೇಕಾಗಿದೆ. ಕೆಲವರು ಗೊಂದಲದಲ್ಲಿ ಬಂದು ವಿದ್ಯೆಯನ್ನು ಬಿಟ್ಟು ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ- ಇಲ್ಲಿ ಗೊಂದಲವಾಗುವ ಅವಶ್ಯಕತೆಯಿಲ್ಲ. ಅಲ್ಲಿ ಎಲ್ಲವನ್ನೂ ನಾವು ನಮ್ಮದನ್ನಾಗಿ ಮಾಡಿಕೊಳ್ಳುತ್ತೇವೆ. ಆ ಪ್ರಪಂಚವೇ ಸತೋಪ್ರಧಾನವಾಗಿರುತ್ತದೆ. ಅಲ್ಲಿಯ ಫಲ-ಪುಷ್ಫಗಳೆಲ್ಲವನ್ನೂ ನೋಡಿ ಬರುತ್ತೀರಿ. ಶೂಬೀ ರಸವನ್ನೂ ಕುಡಿಯುತ್ತೀರಿ. ಸೂಕ್ಷ್ಮವತನ, ಮೂಲವತನದಲ್ಲಿ ಇವೇನೂ ಇರುವುದಿಲ್ಲ. ಇವೆಲ್ಲವೂ ವೈಕುಂಠದಲ್ಲಿ ಇರುತ್ತವೆ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತದೆ. ಇದು ಪಕ್ಕಾ ನಿಶ್ಚಯವಿರಬೇಕು ಆದರೆ ಯಾರ ಅದೃಷ್ಟದಲ್ಲಿ ಇಲ್ಲವೆಂದರೆ ಇದು ಹೇಗೆ ಸಾಧ್ಯವೆಂದು ಹೇಳುತ್ತಾರೆ. ಈಗ ವಜ್ರ-ವೈಡೂರ್ಯಗಳನ್ನು ನೋಡಲು ಇಲ್ಲವೆಂದರೆ ಅಲ್ಲಿ ಹೇಗೆ ಬರುತ್ತದೆ. ಹೇಗೆ ಪೂಜ್ಯರಾಗುತ್ತಾರೆ? ತಂದೆಯು ತಿಳಿಸುತ್ತಾರೆ- ಇದು ಪೂಜ್ಯ ಹಾಗೂ ಪೂಜಾರಿಯ ಆಟವನ್ನು ಮಾಡಲ್ಪಟ್ಟಿದೆ. ನಾವೇ ಬ್ರಾಹ್ಮಣ, ದೇವತಾ, ಕ್ಷತ್ರಿಯ...... ಈ ಸೃಷ್ಟಿಚಕ್ರವನ್ನು ತಿಳಿಯುವುದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ. ನಿಮಗೆ ಗೊತ್ತಿರುವ ಕಾರಣ ಹೇಳುತ್ತೀರಿ. ತಂದೆಯು ಕಲ್ಪದ ಹಿಂದೆಯೂ ನಿಮ್ಮನ್ನು ಮಿಲನ ಮಾಡಿದ್ದೆವು, ನಮ್ಮದೇ ನೆನಪಾರ್ಥ ಮಂದಿರವು ಮುಂದೆ ನಿಂತಿದೆ. ಇದರ ನಂತರವೇ ಸ್ವರ್ಗ ಸ್ಥಾಪನೆಯಾಗುತ್ತದೆ. ಇಲ್ಲಿರುವ ನಿಮ್ಮ ಚಿತ್ರಗಳಲ್ಲಿ ಚಮತ್ಕಾರವಿದೆ. ಎಷ್ಟೊಂದು ಆಸಕ್ತಿಯಿಂದ ಬಂದು ನೋಡುತ್ತಾರೆ. ಇಡೀ ಪ್ರಪಂಚದಲ್ಲಿ ಇದನ್ನು ಯಾರು ಎಲ್ಲಿಯೂ ನೋಡಿಲ್ಲ. ಯಾರು ಇಂತಹ ಚಿತ್ರವನ್ನು ಮಾಡಿ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಈ ಚಿತ್ರವನ್ನು ಕಾಪಿ ಮಾಡಲು ಆಗುವುದಿಲ್ಲ. ಈ ಚಿತ್ರವು ನಿಮ್ಮ ಖಜಾನೆಯಾಗಿದೆ, ಇದರಿಂದ ಪದಮಾಪದಮ ಭಾಗ್ಯಶಾಲಿಗಳಾಗುತ್ತೀರಿ. ನಮ್ಮ ಹೆಜ್ಜೆ-ಹೆಜ್ಜೆಯಲ್ಲಿ ಪದಮಗಳಿವೆಯಂದು ತಿಳಿದಿದ್ದೀರಿ. ಇದು ವಿದ್ಯೆಯಂಬ ಹೆಜ್ಜೆಯಾಗಿದೆ. ಎಷ್ಟೆಷ್ಟು ಯೋಗ ಮಾಡುತ್ತೀರಿ, ಎಷ್ಟು ಓದುತ್ತೀರಿ ಅಷ್ಟು ಪದುಮಗಳಿವೆ. ಒಂದುಕಡೆ ಮಾಯೆ ಶಕ್ತಿಶಾಲಿಯಾಗಿ ಬರುತ್ತದೆ, ನೀವು ಶ್ಯಾಮ ಸುಂದರರಾಗುತ್ತೀರಿ. ಸತ್ಯಯುಗದಲ್ಲಿ ನೀವು ಬಹಳ ಸುಂದರರಾಗಿದ್ದವರು ಸ್ವರ್ಣೀಮ ಯುಗ, ಕಲಿಯುಗದಲ್ಲಿ ಶ್ಯಾಮ ಕಬ್ಬಿಣದ ಯುಗವಾಗಿದೆ. ಪ್ರತಿಯೊಂದು ವಸ್ತು ಹೀಗೆಯೇ ಆಗುತ್ತದೆ. ಇಲ್ಲಿ ಭೂಮಿಯೂ ಸಹ ಬಂಜರು ಭೂಮಿಯಾಗಿದೆ. ಅಲ್ಲಿನ ಭೂಮಿ ಫಸ್ಟ್ ಕ್ಲಾಸ್ ಆಗಿರುತ್ತದೆ, ಪ್ರತಿಯೊಂದು ವಸ್ತುವು ಸತೋಪ್ರಧಾನವಾಗಿರುತ್ತದೆ. ಇಂತಹ ರಾಜಧಾನಿಗೆ ನೀವು ಮಾಲೀಕರಾಗುತ್ತೀರಿ, ಅನೇಕ ಬಾರಿ ನೀವು ಆಗಿದ್ದಿರಿ. ನಂತರ ಇಂತಹ ರಾಜಧಾನಿಗೆ ಮಾಲೀಕರಾಗುವ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಪುರುಷಾರ್ಥದ ವಿನಃ ಪ್ರಾಲಬ್ಧವನ್ನು ಹೇಗೆ ರೂಪಿಸಿಕೊಳ್ಳುತ್ತೀರಿ. ಇಲ್ಲಿ ಯಾವುದೇ ಕಷ್ಟವಿಲ್ಲ.

ಮುರುಳಿ ಮುದ್ರಿಸಲ್ಪಡುತ್ತದೆ. ಮುಂದೆ ಹೋದಂತೆ ಲಕ್ಷ-ಕೋಟಾಂತರ ಅಂದಾಜಿನಲ್ಲಿ ಮುದ್ರಿಸಲ್ಪಡುತ್ತದೆ. ಮಕ್ಕಳೂ ಸಹ ಹೇಳುತ್ತೀರಿ - ಇರುವ ಹಣವನ್ನು ಯಜ್ಞದಲ್ಲಿ ತೊಡಗಿಸೋಣ, ಇಟ್ಟುಕೊಂಡು ಏನು ಮಾಡುವುದು? ಮುಂದೆ ಹೋದಂತೆ ಏನಾಗುತ್ತದೆ ಎಂಬುದನ್ನು ನೋಡಬೇಕು. ವಿನಾಶದ ತಯಾರಿಯನ್ನು ನೋಡುತ್ತಿರುತ್ತೀರಿ. ರಿಹರ್ಸಲ್ ನಡೆಯುತ್ತಿರುತ್ತದೆ, ಮತ್ತೆ ಶಾಂತಿಯಾಗಿ ಬಿಡುತ್ತದೆ. ಮಕ್ಕಳ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ, ಅಂತೂ ಬಹಳ ಸಹಜವಾಗಿದೆ. ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಈ ಶರೀರವನ್ನು ಮರೆತು ಪೂರ್ಣ ಪವಿತ್ರ ಬಡವರಾಗಬೇಕು. ಲೈನ್ ಕ್ಲಿಯರ್ ಇಟ್ಟುಕೊಳ್ಳಬೇಕು. ಬುದ್ಧಿಯಲ್ಲಿರಲಿ- ಈಗ ನಾಟಕವು ಪೂರ್ಣವಾಯಿತು. ನಾವು ನಮ್ಮ ಮಧುರ ಮನೆಗೆ ಹೋಗುತ್ತೇವೆ.

2. ವಿದ್ಯೆಯ ಪ್ರತೀ ಹೆಜ್ಜೆಯಲ್ಲಿ ಪದುಮಗಳಿವೆ ಆದ್ದರಿಂದ ಪ್ರತಿನಿತ್ಯ ಚೆನ್ನಾಗಿ ಓದಬೇಕು. ದೇವತಾ ಮನೆತನದಲ್ಲಿ ಬರಲು ಪುರುಷಾರ್ಥ ಮಾಡಬೇಕು. ನಮಗೆ ಅತೀಂದ್ರಿಯ ಸುಖವು ಎಲ್ಲಿಯವರೆಗೆ ಅನುಭವವಾಗುತ್ತದೆ? ಖುಷಿಯಿರುತ್ತದೆ? ಎಂದು ತಮ್ಮನ್ನು ತಾವು ಕೇಳಿಕೊಳ್ಳಬೇಕು.

ವರದಾನ:
ತಮ್ಮ ಟೈಟಲ್ ನ ಸ್ಮೃತಿಯ ಜೊತೆ ಸಮರ್ಥ ಸ್ಥಿತಿ ಮಾಡಿಕೊಳ್ಳುವಂತಹ ಸ್ವಮಾನಧಾರಿ ಭವ.

ಸಂಗಮಯುಗದಲ್ಲಿ ಸ್ವಯಂ ತಂದೆ ತನ್ನ ಮಕ್ಕಳಿಗೆ ಶ್ರೇಷ್ಠ ಟೈಟಲ್ ಕೊಡುತ್ತಾರೆ, ಆದ್ದರಿಂದ ಅದೇ ಆತ್ಮೀಯ ನಶೆಯಲ್ಲಿರಿ. ಹೇಗೆ ಟೈಟಲ್ ನೆನಪಿಗೆ ಬರುತ್ತೆ ಹಾಗೇ ಸಮರ್ಥ ಸ್ಥಿತಿ ಆಗುತ್ತ ಹೋಗುವುದು. ಹೇಗೆ ನಿಮ್ಮ ಟೈಟಲ್ ಆಗಿದೆ ಸ್ವದರ್ಶನ ಚಕ್ರಧಾರಿ ಅಂದರೆ ಈ ಸ್ಮೃತಿ ಬಂದೊಡನೆ ಪರದರ್ಶನ ಸಮಾಪ್ತಿಯಾಗಿ ಬಿಡುವುದು, ಸ್ವದರ್ಶನದ ಮುಂದೆ ಮಾಯೆಯ ಕೊರಳು ಕಟ್ ಆಗಬೇಕು. ಮಹಾವೀರನಾಗಿದ್ದೇನೆ, ಈ ಟೈಟಲ್ ನೆನಪಿಗೆ ಬಂದರೆ ಸ್ಥಿತಿ ಅಚಲ-ಅಡೋಲವಾಗಿ ಬಿಡುವುದು. ಟೈಟಲ್ ನ ಸ್ಮೃತಿಯ ಜೊತೆ ಸಮರ್ಥ ಸ್ಥಿತಿ ಮಾಡಿಕೊಳ್ಳಿ ಆಗ ಹೇಳಲಾಗುವುದು ಶ್ರೇಷ್ಠ ಸ್ವಮಾನಧಾರಿ.

ಸ್ಲೋಗನ್:
ಅಲೆದಾಡುತ್ತಿರುವ ಆತ್ಮಗಳ ಇಚ್ಛೆ ಪೂರ್ಣ ಮಾಡುವುದಕ್ಕಾಗಿ ಪರಿಶೀಲಿಸುವ ಶಕ್ತಿಯನ್ನು ಹೆಚ್ಚಿಸಿ.