24.02.19    Avyakt Bapdada     Kannada Murli     26.04.84     Om Shanti     Madhuban


" ಆತ್ಮಿಕ ವಿಚಿತ್ರ ಮೇಳದಲ್ಲಿ ಸರ್ವ ಖಜಾನೆಗಳ ಪ್ರಾಪ್ತಿ"


ಇಂದು ಬಾಪ್ದಾದಾರವರು ಮಕ್ಕಳ ಮಿಲನದ ಲಗನ್ನ್ನು ನೋಡುತ್ತಿದ್ದಾರೆ. ಎಲ್ಲರೂ ಏತಕ್ಕಾಗಿ ದೂರ-ದೂರದಿಂದ ಬಂದಿದ್ದೀರಿ? ಮಿಲನವನ್ನಾಚರಿಸಲು ಅರ್ಥಾತ್ ಮೇಳದಲ್ಲಿ ಬಂದಿದ್ದೀರಿ. ಈ ಆತ್ಮಿಕ ಮೇಳವು ವಿಚಿತ್ರ ಮೇಳವಾಗಿದೆ. ಈ ಮೇಳದ ಮಿಲನವೂ ಸಹ ವಿಚಿತ್ರವಾಗಿದೆ ಮತ್ತು ವಿಚಿತ್ರ ಆತ್ಮರು ವಿಚಿತ್ರ ತಂದೆಯೊಂದಿಗೆ ಭೇಟಿಯಾಗುತ್ತಾರೆ. ಇದು ಸಾಗರ ಮತ್ತು ನದಿಗಳ ಮೇಳವಾಗಿದೆ. ಈಶ್ವರೀಯ ಪರಿವಾರದ ಮಿಲನದ ಮೇಳವಾಗಿದೆ. ಈ ಮೇಳವು ಒಂದು ಬಾರಿಯ ಮೇಳದಿಂದ ಅನೇಕ ಬಾರಿಯ ಸರ್ವ ಪ್ರಾಪ್ತಿಗಳನ್ನು ಮಾಡಿಕೊಳ್ಳುವ ಮೇಳವಾಗಿದೆ. ಈ ಮೇಳದಲ್ಲಿ ತೆರೆದ ಭಂಡಾರ, ತೆರೆದ ಖಜಾನೆಯಿದೆ. ಯಾರಿಗೆ ಯಾವ ಖಜಾನೆಯು ಬೇಕು, ಎಷ್ಟು ಬೇಕು ಅಷ್ಟನ್ನೂ ಖರ್ಚಿಲ್ಲದೆಯೇ, ಅಧಿಕಾರದಿಂದ ತೆಗೆದುಕೊಳ್ಳಬಹುದು. ಲಾಟರಿಯೂ ಸಹ ಆಗಿದೆ. ಭಾಗ್ಯದ ಶ್ರೇಷ್ಠ ಲಾಟರಿಯನ್ನು ಎಷ್ಟು ತೆಗೆದುಕೊಳ್ಳಲು ಬಯಸುತ್ತೀರಿ, ಅಷ್ಟೂ ತೆಗೆದುಕೊಳ್ಳಬಹುದು. ಈಗ ಲಾಟರಿಯನ್ನು ತೆಗೆದುಕೊಳ್ಳಿರಿ ಮತ್ತು ನಂತರ ನಂಬರ್ ಬರುತ್ತದೆಂದಲ್ಲ. ಈಗ ಏನು ತೆಗೆದುಕೊಳ್ಳಬೇಕು, ಧೃಡಸಂಕಲ್ಪದ ಮೂಲಕ ಎಷ್ಟು ಭಾಗ್ಯದ ರೇಖೆಯನ್ನು ಎಳೆದುಕೊಳ್ಳಬೇಕು, ಅಷ್ಟೂ ಮಾಡಿಕೊಳ್ಳಬಹುದು. ಲಾಟರಿಯನ್ನು ಸೆಕೆಂಡಿನಲ್ಲಿ ತೆಗೆದುಕೊಳ್ಳಬಹುದು. ಈ ಮೇಳದಲ್ಲಿ ಜನ್ಮ ಜನ್ಮಕ್ಕಾಗಿ ರಾಜ್ಯ ಪದವಿಯ ಅಧಿಕಾರವನ್ನು ತೆಗೆದುಕೊಳ್ಳಬಹುದೇ ಅರ್ಥಾತ್ ಈ ಮೇಳದಲ್ಲಿ ರಾಜಯೋಗಿಯಿಂದ ಜನ್ಮ ಜನ್ಮದ ವಿಶ್ವದ ರಾಜರಾಗಬಹುದು. ಎಷ್ಟು ಶ್ರೇಷ್ಠ ಪ್ರಾಪ್ತಿಯ ಸ್ಥಾನವು ಬೇಕು, ಆ ಸ್ಥಾನವನ್ನು ಬುಕ್ ಮಾಡಿಕೊಳ್ಳಬಹುದು. ಈ ಮೇಳದಲ್ಲಿ ವಿಶೇಷವಾಗಿ ಒಂದು ಸುವರ್ಣಾವಕಾಶವೂ ಸಿಗುತ್ತದೆ. ಆ ಸುವರ್ಣಾವಕಾಶವಾಗಿದೆ - "ಹೃದಯದಿಂದ ಮೇರಾ ಬಾಬಾ ಹೇಳಿರಿ ಮತ್ತು ಬಾಬಾರವರ ಹೃದಯ ಸಿಂಹಾಸನ ಅಧಿಕಾರಿಯಾಗಿರಿ". ಈ ಮೇಳದಲ್ಲಿ ಒಂದು ವಿಶೇಷವಾದ ಉಡುಗೊರೆಯೂ ಸಿಗುತ್ತದೆ - ಆ ಉಡುಗೊರೆಯಾಗಿದೆ - "ಚಿಕ್ಕದಾದ ಸುಖಿ ಮತ್ತು ಸಂಪನ್ನ ಸಂಸಾರ". ಆ ಸಂಸಾರ(ಪ್ರಪಂಚ)ದಲ್ಲಿ ಏನು ಬೇಕು ಎಲ್ಲವೂ ಸದಾ ಪ್ರಾಪ್ತಿಯಾಗಿರುತ್ತದೆ. ಅದು ಚಿಕ್ಕದಾದ ಸಂಸಾರ, ತಂದೆಯಲ್ಲಿಯೇ ಸಂಸಾರವಿದೆ. ಈ ಸಂಸಾರ (ಪ್ರಪಂಚ)ದಲ್ಲಿರುವವರು ಸದಾಕಾಲ ಪ್ರಾಪ್ತಿಗಳ, ಖುಷಿಗಳ ಅಲೌಕಿಕ ಉಯ್ಯಾಲೆಯಲ್ಲಿ ತೂಗುತ್ತಿರುತ್ತಾರೆ. ಈ ಸಂಸಾರದಲ್ಲಿರುವವರು ಸದಾ ಈ ದೇಹದ ಮಣ್ಣಿನ ಮೈಲಿಗೆಯಿಂದ ಮೇಲೆ, ಅಂದರೆ ಫರಿಶ್ತೆಯಾಗಿ ಹಾರುವ ಕಲೆಯಲ್ಲಿ ಹಾರುತ್ತಿರುತ್ತಾರೆ. ಸದಾ ರತ್ನಗಳೊಂದಿಗೆ ಆಡುತ್ತಿರುತ್ತಾರೆ, ಸದಾ ಪರಮಾತ್ಮನ ಜೊತೆಯ ಅನುಭವ ಮಾಡುತ್ತಾರೆ. ನಿಮ್ಮೊಂದಿಗೇ ತಿನ್ನುವೆನು, ನಿಮ್ಮೊಂದಿಗೇ ಕೇಳಿಸಿಕೊಳ್ಳುವೆನು, ನಿಮ್ಮೊಂದಿಗೇ ಮಾತನಾಡುವೆನು, ನಿಮ್ಮೊಂದಿಗೇ ಸರ್ವ ಸಂಬಂಧದ ಪ್ರೀತಿಯ ರೀತಿಯನ್ನು ನಿಭಾಯಿಸುವೆನು, ನಿಮ್ಮ ಶ್ರೀಮತದಂತೆಯೇ, ಆಜ್ಞೆಯಂತೆಯೇ ಪ್ರತೀ ಹೆಜ್ಜೆಯನ್ನು ಇಡುವೆನು.... ಇದೇ ಉಮ್ಮಂಗ-ಉತ್ಸಾಹದ, ಖುಷಿಯ ಗೀತೆಯನ್ನು ಹಾಡುತ್ತಿರುತ್ತಾರೆ. ಇಂತಹ ಸಂಸಾರ, ಈ ಮಿಲನದ ಮೇಳದಲ್ಲಿ ಸಿಗುತ್ತದೆ. ತಂದೆಯು ಸಿಕ್ಕಿದರು, ಸಂಸಾರವೇ ಸಿಕ್ಕಿತು - ಇದು ಇಂತಹ ಶ್ರೇಷ್ಠವಾದ ಮೇಳವಾಗಿದೆ. ಅಂದಮೇಲೆ ಇಂತಹ ಮೇಳದಲ್ಲಿ ಬಂದಿದ್ದೀರಲ್ಲವೆ! ಹೀಗಾಗಬಾರದು - ಮೇಳವನ್ನು ನೋಡುತ್ತಾ-ನೋಡುತ್ತಾ ಒಂದೇ ಪ್ರಾಪ್ತಿಯಲ್ಲಿ ಇಷ್ಟೂ ಮಸ್ತರಾಗಿ ಬಿಡಿ, ಅದರಿಂದ ಸರ್ವ ಪ್ರಾಪ್ತಿಗಳು ಉಳಿದುಕೊಂಡು ಬಿಡಲಿ. ಈ ಆತ್ಮಿಕ ಮೇಳದಲ್ಲಿ ಸರ್ವ ಪ್ರಾಪ್ತಿಗಳನ್ನು ಪ್ರಾಪ್ತಿ ಮಾಡಿಕೊಂಡು ಹೋಗಬೇಕು. ಬಹಳ ಸಿಕ್ಕಿತು, ಇದರಲ್ಲಿಯೇ ಖುಷಿಯಾಗಿ ಹೊರಟು ಹೋಗೋಣ - ಹೀಗೆ ಮಾಡಬಾರದು, ಸಂಪೂರ್ಣವಾಗಿ ಪಡೆದುಕೊಂಡು ಹೋಗಿರಿ. ಈಗಲೂ ಪರಿಶೀಲನೆ ಮಾಡಿರಿ - ಮೇಳದ ಸರ್ವ ಪ್ರಾಪ್ತಿಗಳನ್ನು ಪ್ರಾಪ್ತಿ ಮಾಡಿಕೊಂಡಿದ್ದೇನೆಯೇ? ಯಾವಾಗ ತೆರೆದ ಖಜಾನೆಯಿದೆ ಅಂದಮೇಲೆ ಸಂಪನ್ನರಾಗಿಯೇ ಹೋಗಬೇಕು. ನಂತರ ಅಲ್ಲಿಗೆ ಹೋದ ಮೇಲೆ ಹೀಗೆ ಹೇಳಬಾರದು - ಇದೂ ಮಾಡಬೇಕಾಗಿತ್ತು. ಎಷ್ಟು ಬೇಕಾಗಿತ್ತು ಅಷ್ಟು ಮಾಡಲಿಲ್ಲ. ಹೀಗಂತು ಹೇಳುವುದಿಲ್ಲ ಅಲ್ಲವೇ? ಅಂದಮೇಲೆ ತಿಳಿಯಿತೆ - ಈ ಮೇಳದ ಮಹತ್ವ? ಮೇಳವನ್ನು ಆಚರಿಸುವುದು ಅರ್ಥಾತ್ ಮಹಾನರಾಗುವುದು. ಕೇವಲ ಬರುವುದು ಮತ್ತು ಹೋಗುವುದಲ್ಲ. ಆದರೆ ಸಂಪನ್ನ ಪ್ರಾಪ್ತಿ ಸ್ವರೂಪರಾಗಬೇಕು. ಇಂತಹ ಮೇಳವನ್ನಾಚರಿಸಿದಿರೆ? ನಿಮಿತ್ತ ಸೇವಾಧಾರಿಯು ಏನು ತಿಳಿಯುತ್ತಾನೆ? ವೃದ್ಧಿ, ವಿಧಿಯನ್ನೂ ಪರಿವರ್ತನೆ ಮಾಡಿಕೊಳ್ಳುತ್ತಾರೆ. ವೃದ್ಧಿಯಾಗುವುದೂ ಅವಶ್ಯಕವಿದೆ ಮತ್ತು ಪ್ರತಿಯೊಂದು ವಿಧಿಯಲ್ಲಿ ಸಂಪನ್ನ ಮತ್ತು ಸಂತುಷ್ಟರಾಗಿರುವುದೂ ಅವಶ್ಯಕತೆಯಿದೆ. ಈಗಂತು ಇಷ್ಟಾದರೂ ತಂದೆ ಮತ್ತು ಮಕ್ಕಳ ಸಂಬಂಧದಿಂದ ಮಿಲನವಾಗುತ್ತೀರಿ. ಸಮೀಪಕ್ಕೆ ಬರುತ್ತೀರಿ. ನಂತರವಂತು ದರ್ಶನವಷ್ಟೇ ಉಳಿದುಕೊಳ್ಳುತ್ತದೆ. ಒಳ್ಳೆಯದು - ಆತ್ಮಿಕ ಮಿಲನದ ಮೇಳವನ್ನಾಚರಿಸುವವರೆಲ್ಲರಿಗೂ, ಸರ್ವ ಪ್ರಾಪ್ತಿಗಳ ಸಂಪೂರ್ಣ ಅಧಿಕಾರವನ್ನು ಪಡೆಯುವವರು, ಸದಾ ಸುಖಮಯ ಸಂಪನ್ನ ಸಂಸಾರವನ್ನು ತಮ್ಮದನ್ನಾಗಿ ಮಾಡಿಕೊಳ್ಳುವ, ಸದಾ ಪ್ರಾಪ್ತಿಗಳ, ಖುಷಿಗಳ ಗೀತೆಯನ್ನು ಹಾಡುವಂತಹ, ಹೀಗೆ ಸದಾ ಶ್ರೇಷ್ಠ ಮತದಂತೆ ನಡೆಯುವ, ಆಜ್ಞಾಕಾರಿ ಸುಪುತ್ರ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ನಿಮಿತ್ತ ಶಿಕ್ಷಕಿಯರೊಂದಿಗೆ :-
ಸದಾ ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಇಡುವ ಮತ್ತು ಸದಾ ತಂದೆಯ ಬ್ಲೆಸ್ಸಿಂಗ್ ತೆಗೆದುಕೊಳ್ಳುವವರು. ಎಲ್ಲಿ ಬ್ಯಾಲೆನ್ಸ್ ಇದೆ. ಅಲ್ಲಿ ತಂದೆಯ ಮೂಲಕ ಸ್ವತಹವಾಗಿಯೇ ಆಶೀರ್ವಾದವೇನು, ವರದಾನದ ಪ್ರಾಪ್ತಿಯೇ ಆಗುತ್ತದೆ. ಎಲ್ಲಿ ಬ್ಯಾಲೆನ್ಸ್ ಇರುವುದಿಲ್ಲ ಅಲ್ಲಿ ವರದಾನವೂ ಇಲ್ಲ. ಮತ್ತು ಎಲ್ಲಿ ವರದಾನವಿರುವುದಿಲ್ಲ ಅಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ವರದಾನವು ಪ್ರಾಪ್ತಿಯಾಗುತ್ತಿದೆ ಅರ್ಥಾತ್ ಸರ್ವ ಪ್ರಾಪ್ತಿಗಳು ಸಹಜವಾಗಿ ಆಗುತ್ತಿದೆ. ಇಂತಹ ವರದಾನಗಳನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸೇವಾಧಾರಿ ಆಗಿದ್ದೀರಲ್ಲವೆ. ಸದಾ ಒಬ್ಬ ತಂದೆ, ಏಕರಸ ಸ್ಥಿತಿ ಮತ್ತು ಏಕಮತದವರಾಗಿ ನಡೆಯುವವರು. ಇಂತಹ ಗ್ರೂಪ್ ಆಗಿದೆಯಲ್ಲವೆ. ಎಲ್ಲಿ ಏಕಮತವಿದೆ ಅಲ್ಲಿ ಸದಾ ಸಫಲತೆಯು ಇದ್ದೇ ಇದೆ. ಅಂದಮೇಲೆ ಸದಾ ಪ್ರತೀ ಹೆಜ್ಜೆಯಲ್ಲಿ ವರದಾತಾ ತಂದೆಯ ಮೂಲಕ ವರದಾನವನ್ನು ಪ್ರಾಪ್ತಿ ಮಾಡಿಕೊಳ್ಳುವವರು. ಇಂತಹ ಸತ್ಯ ಸೇವಾಧಾರಿಗಳು, ಸದಾ ತಮ್ಮನ್ನು ಡಬಲ್ ಲೈಟ್ ಎಂದು ತಿಳಿದು ಸೇವೆಯನ್ನು ಮಾಡುತ್ತಿರಿ. ಎಷ್ಟು ಹಗುರ ಅಷ್ಟೇ ಸೇವೆಯಲ್ಲಿ ಹಗುರತನವಿರಲಿ. ಮತ್ತು ಸೇವೆಯಲ್ಲಿ ಎಷ್ಟು ಹಗುರತನ(ಸಹಜವಾಗಿ ಮಾಡುವುದು) ಬರುತ್ತದೆ. ಅಷ್ಟೇ ಸಹಜವಾಗಿ ಎಲ್ಲರೂ ಹಾರುತ್ತೀರಿ, ಹಾರಿಸುತ್ತೀರಿ. ಡಬಲ್ ಲೈಟ್ ಆಗಿದ್ದು ಸೇವೆಯನ್ನು ಮಾಡುವುದು, ನೆನಪಿನಲ್ಲಿದ್ದು ಸೇವೆಯನ್ನು ಮಾಡುವುದೇ ಸಫಲತೆಗೆ ಆಧಾರವಾಗಿದೆ. ಆ ಸೇವೆಯ ಪ್ರತ್ಯಕ್ಷ ಫಲವು ಅವಶ್ಯವಾಗಿ ಸಿಗುತ್ತದೆ.

" ಪಾರ್ಟಿಯೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ" -

ಸಂಗಮಯುಗವು ಸದಾ ಸರ್ವ ಪ್ರಾಪ್ತಿಗಳನ್ನು ರೂಪಿಸುವ ಯುಗವಾಗಿದೆ. ಸಂಗಮಯುಗವು ಶ್ರೇಷ್ಠರಾಗುವ ಹಾಗೂ ಅನ್ಯರನ್ನೂ ಮಾಡುವ ಯುಗವಾಗಿದೆ. ಇಂತಹ ಯುಗದಲ್ಲಿ ಪಾತ್ರವನ್ನಭಿನಯಿಸುವ ಆತ್ಮರು ಎಷ್ಟೊಂದು ಶ್ರೇಷ್ಠರಾಗಿ ಬಿಟ್ಟರು! ಅಂದಮೇಲೆ ಸದಾ ಇದು ಸ್ಮೃತಿಯಲ್ಲಿರುತ್ತದೆಯೇ - ನಾವು ಸಂಗಮಯುಗಿ ಶ್ರೇಷ್ಠಾತ್ಮರಾಗಿದ್ದೇವೆ? ಸರ್ವ ಪ್ರಾಪ್ತಿಗಳ ಅನುಭವವಾಗುತ್ತದೆಯೇ? ತಂದೆಯಿಂದ ಯಾವ ಪ್ರಾಪ್ತಿಯಾಗುತ್ತದೆಯೋ, ಆ ಪ್ರಾಪ್ತಿಯ ಆಧಾರದ ಮೇಲೆ ಸದಾ ಸ್ವಯಂನ್ನು ಸಂಪನ್ನ, ಸಂಪನ್ನ ಆತ್ಮನೆಂದು ತಿಳಿಯುತ್ತೀರಾ? ಇಷ್ಟೂ ಸಂಪನ್ನರಾಗಿದ್ದೀರಿ, ಅದನ್ನು ಸ್ವಯಂ ಸಹ ಅನುಭವಿಸುತ್ತೀರಿ ಮತ್ತು ಅನ್ಯರಿಗೂ ಹಂಚುತ್ತೀರಿ. ಹೇಗೆ ತಂದೆಗಾಗಿ ಹೇಳಲಾಗುತ್ತದೆ - ಅವರ ಭಂಡಾರವು ತುಂಬಿರುತ್ತದೆ, ಹಾಗೆಯೇ ತಾವು ಮಕ್ಕಳ ಭಂಡಾರವೂ ಸಹ ಸದಾ ಸಂಪನ್ನವಾಗಿದೆ, ಎಂದಿಗೂ ಖಾಲಿಯಾಗಲು ಸಾಧ್ಯವಿಲ್ಲ. ಯಾರಿಗೆಷ್ಟು ಕೊಡುತ್ತೀರಿ ಅಷ್ಟು ಇನ್ನೂ ಹೆಚ್ಚುತ್ತಿರುತ್ತದೆ. ಸಂಗಮಯುಗದ ವಿಶೇಷತೆಯೇನಿದೆಯೋ ಅದು ತಮ್ಮ ವಿಶೇಷತೆಯಾಗಿದೆ. ನಾವು ಸಂಗಮಯುಗಿಗಳು, ಸರ್ವ ಪ್ರಾಪ್ತಿ ಸ್ವರೂಪ ಆತ್ಮರಾಗಿದ್ದೇವೆ - ಇದೇ ಸ್ಮೃತಿಯಲ್ಲಿರಿ. ಸಂಗಮಯುಗವು ಪುರುಷೋತ್ತಮ ಯುಗವಾಗಿದೆ, ಈ ಯುಗದಲ್ಲಿ ಪಾತ್ರವನ್ನಭಿನಯಿಸುವವರೂ ಸಹ ಪುರುಷೋತ್ತಮರಾದರಲ್ಲವೆ. ಪ್ರಪಂಚದ ಸರ್ವ ಆತ್ಮರು ತಮ್ಮ ಮುಂದೆ ಸಾಧಾರಣರು, ತಾವು ಅಲೌಕಿಕ ಮತ್ತು ಭಿನ್ನವಾದ ಆತ್ಮರಾಗಿದ್ದೀರಿ! ಅವರು ಅಜ್ಞಾನಿಯಿದ್ದಾರೆ, ತಾವು ಜ್ಞಾನಿಗಳಿದ್ದೀರಿ. ಅವರು ಶೂದ್ರರಾಗಿದ್ದಾರೆ, ತಾವು ಬ್ರಾಹ್ಮಣರಿದ್ದೀರಿ. ಅವರು ದುಃಖಧಾಮದವರು ಮತ್ತು ತಾವು ಸಂಗಮಯುಗದವರಾಗಿದ್ದೀರಿ. ಸಂಗಮಯುಗವೇ ಸುಖಧಾಮವಾಗಿದೆ. ಎಷ್ಟೊಂದು ದುಃಖಗಳಿಂದ ಪಾರಾಗಿ ಬಿಟ್ಟಿದ್ದೀರಿ. ಈಗ ಸಾಕ್ಷಿಯಾಗಿದ್ದು ನೋಡುತ್ತೀರಿ - ಪ್ರಪಂಚದವರು ಎಷ್ಟೊಂದು ದುಃಖಿಯಾಗಿದ್ದಾರೆ ಮತ್ತು ಅದರ ಹೋಲಿಕೆಯಲ್ಲಿ ತಾವು ಎಷ್ಟೊಂದು ಸುಖಿಯಾಗಿರುವಿರಿ, ಅಂತರವನ್ನು ಗೊತ್ತಾಗುತ್ತದೆಯಲ್ಲವೆ! ಅಂದಮೇಲೆ ಸದಾ ನಾವು ಪುರುಷೋತ್ತಮ ಸಂಗಮಯುಗದ ಪುರುಷೋತ್ತಮ ಆತ್ಮರು, ಸುಖ ಸ್ವರೂಪ ಶ್ರೇಷ್ಠಾತ್ಮರಾಗಿದ್ದೇವೆ, ಇದೇ ಸ್ಮೃತಿಯಲ್ಲಿರಿ. ಒಂದು ವೇಳೆ ಸುಖವಿಲ್ಲ, ಶ್ರೇಷ್ಠತೆಯಿಲ್ಲವೆಂದರೆ ಜೀವನವಿಲ್ಲ. ಸದಾ ನೆನಪಿನಲ್ಲಿ ಖುಷಿಯಲ್ಲಿರುತ್ತೀರಲ್ಲವೆ? ಖುಷಿಯೇ ಅತೀ ದೊಡ್ಡ ಆಶೀರ್ವಾದ ಮತ್ತು ಔಷಧಿಯಾಗಿದೆ. ಸದಾ ಇದೇ ಖುಷಿಯ ಔಷಧಿ ಮತ್ತು ಆಶೀರ್ವಾದವನ್ನು ತೆಗೆದುಕೊಳ್ಳುತ್ತಿರಿ, ಸದಾ ಖುಷಿಯಲ್ಲಿರುವ ಕಾರಣದಿಂದ ಶರೀರದ ಲೆಕ್ಕಾಚಾರವೂ ತನ್ನ ಕಡೆಗೆ ಸೆಳೆಯುವುದಿಲ್ಲ. ಭಿನ್ನ ಹಾಗೂ ಪ್ರಿಯರಾಗಿದ್ದು ಶರೀರದ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡುವಿರಿ. ಎಷ್ಟೇ ಕಠಿಣವಾದ ಕರ್ಮ ಭೋಗವಿರಲಿ, ಅದೂ ಸಹ ಶೂಲದಿಂದ ಮುಳ್ಳಿನಷ್ಟಾಗಿ ಬಿಡುತ್ತದೆ. ದೊಡ್ಡ ಮಾತೆನಿಸುವುದಿಲ್ಲ. ಇದು ಲೆಕ್ಕಾಚಾರವಾಗಿದೆ ಎನ್ನುವ ತಿಳುವಳಿಕೆ ಸಿಕ್ಕಿ ಬಿಟ್ಟಿದೆ ಅಂದಮೇಲೆ ಖುಷಿ-ಖುಷಿಯಿಂದ ಲೆಕ್ಕಾಚಾರವನ್ನು ಸಮಾಪ್ತಿ ಮಾಡುವುದಕ್ಕೆ ಎಲ್ಲವೂ ಸಹಜವಾಗಿ ಬಿಡುತ್ತದೆ. ಅಜ್ಞಾನಿಗಳು ಅಯ್ಯೊ-ಅಯ್ಯೊ ಎನ್ನುತ್ತಾರೆ ಮತ್ತು ಜ್ಞಾನಿಗಳು ಸದಾ ವಾಹ್ ಮಧುರ ಬಾಬಾ! ವಾಹ್ ಡ್ರಾಮಾ!ದ ಸ್ಮೃತಿಯಲ್ಲಿರುತ್ತಾರೆ. ಸದಾ ಖುಷಿಯ ಗೀತೆಯನ್ನು ಹಾಡಿರಿ. ಇದನ್ನಷ್ಟೇ ನೆನಪಿಟ್ಟುಕೊಳ್ಳಿರಿ - ಜೀವನದಲ್ಲಿ ಪಡೆಯಬೇಕಾದುದನ್ನು ಪಡೆದು ಬಿಟ್ಟೆನು. ಪ್ರಾಪ್ತಿಯೇನಾಗಬೇಕು ಅದೆಲ್ಲವೂ ಪ್ರಾಪ್ತಿಯಾಯಿತು. ಸರ್ವ ಪ್ರಾಪ್ತಿಗಳ ಸಂಪನ್ನ ಭಂಡಾರವಿದೆ. ಎಲ್ಲಿ ಭಂಡಾರವರು ಸದಾ ಸಂಪನ್ನವಾಗಿದೆ ಅಲ್ಲಿ ದುಃಖ-ನೋವುಗಳೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಸದಾ ತಮ್ಮ ಭಾಗ್ಯವನ್ನು ನೋಡಿಕೊಳ್ಳುತ್ತಾ ಹರ್ಷಿತವಾಗುತ್ತಿರಿ - ವಾಹ್ ನನ್ನ ಶ್ರೇಷ್ಠ ಭಾಗ್ಯವೇ! ಸದಾ ಇದೇ ಗೀತೆಯನ್ನು ಮನಸ್ಸಿನಲ್ಲಿ ಹಾಡುತ್ತಿರಿ. ತಮ್ಮದು ಎಷ್ಟು ದೊಡ್ಡ ಭಾಗ್ಯವಾಗಿದೆ! ಪ್ರಪಂಚದವರಿಗಂತು ಭಾಗ್ಯದಲ್ಲಿ ಸಂತಾನವು ಸಿಗುತ್ತದೆ, ಧನ ಸಿಗುತ್ತದೆ, ಸಂಪತ್ತು ಸಿಗುತ್ತದೆ. ಆದರೆ ಇಲ್ಲಿ ಏನು ಸಿಗುತ್ತದೆ? ಸ್ವಯಂ ಭಾಗ್ಯವಿದಾತನೇ ಭಾಗ್ಯದಲ್ಲಿ ಸಿಕ್ಕಿ ಬಿಡುತ್ತಾರೆ. ಭಾಗ್ಯವಿದಾತನು ಯಾವಾಗ ತಮ್ಮವರಾಗಿ ಬಿಟ್ಟರು, ಬಾಕಿ ಇನ್ನೇನು ಉಳಿದುಕೊಂಡಿತು! ಈ ಅನುಭವವಾಗಿದೆಯಲ್ಲವೆ! ಕೇವಲ ಹೇಳಿಕೆ-ಕೇಳಿಕೆಯಲ್ಲಂತು ನಡೆಯುತ್ತಿಲ್ಲವೇ. ಹಿರಿಯರು ಹೇಳಿದರು - ಭಾಗ್ಯವು ಸಿಗುತ್ತದೆ ಮತ್ತು ತಾವು ನಡೆಯತೊಡಗಿದಿರಿ, ಇದಕ್ಕೆ ಹೇಳಲಾಗುತ್ತದೆ - ಹೇಳಿಕೆ-ಕೇಳಿಕೆಯಲ್ಲಿ ನಡೆಯುವುದು. ಅಂದಮೇಲೆ ಕೇಳುವುದರಿಂದ ತಿಳಿಯುತ್ತೀರಾ ಅಥವಾ ಅನುಭವದಿಂದ ತಿಳಿಯುತ್ತೀರಾ? ಎಲ್ಲರೂ ಅನುಭವಿಯಾಗಿದ್ದೀರಾ? ಸಂಗಮಯುಗವಿರುವುದೇ ಅನುಭವ ಮಾಡುವ ಯುಗ, ಈ ಯುಗದಲ್ಲಿ ಸರ್ವ ಪ್ರಾಪ್ತಿಗಳ ಅನುಭವವನ್ನು ಮಾಡಬಹುದು. ಈಗೇನು ಅನುಭವ ಮಾಡುತ್ತಿದ್ದೀರಿ, ಅದು ಸತ್ಯಯುಗದಲ್ಲಿ ಆಗುವುದಿಲ್ಲ. ಇಲ್ಲಿ ಯಾವ ಸ್ಮೃತಿಯಿದೆ ಅದು ಸತ್ಯಯುಗದಲ್ಲಿ ಮರ್ಜ್ ಆಗಿ ಬಿಡುತ್ತದೆ. ಇಲ್ಲಿ ತಂದೆಯು ಸಿಕ್ಕಿದರೆಂದು ಅನುಭವ ಮಾಡುತ್ತೀರಿ, ಅಲ್ಲಿ ತಂದೆಯ ಮಾತೇ ಇರುವುದಿಲ್ಲ. ಸಂಗಮಯುಗವೇ ಅನುಭವ ಮಾಡುವ ಯುಗವಾಗಿದೆ. ಅಂದಮೇಲೆ ಈ ಯುಗದಲ್ಲಿ ಎಲ್ಲರೂ ಅನುಭವಿಯಾಗಿ ಬಿಟ್ಟಿರಿ. ಅನುಭವಿ ಆತ್ಮರೆಂದಿಗೂ ಮಾಯೆಯಿಂದ ಮೋಸವನ್ನನುಭವಿಸಲು ಸಾಧ್ಯವಿಲ್ಲ. ಮೋಸವನ್ನನುಭವಿಸುವವರಿಗೇ ದುಃಖವಾಗುತ್ತದೆ. ಅನುಭವದ ಅಥಾರಿಟಿಯವರೆಂದಿಗೂ ಮೋಸವನ್ನನುಭವಿಸಲು ಸಾಧ್ಯವಿಲ್ಲ. ಸದಾಕಾಲವೂ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿರುತ್ತಾರೆ. ಸದಾ ಖುಷಿಯಲ್ಲಿರುತ್ತಾರೆ. ಅಂದಮೇಲೆ ವರ್ತಮಾನ ಸೀಜನ್ನಿನ ವರದಾನವನ್ನು ನೆನಪಿಟ್ಟುಕೊಳ್ಳಿರಿ - ಸರ್ವ ಪ್ರಾಪ್ತಿ ಸ್ವರೂಪರು ಸಂತುಷ್ಟ ಆತ್ಮರಾಗಿದ್ದೇವೆ. ಸಂತುಷ್ಟ ಪಡಿಸುವರಾಗಿದ್ದೀರಿ. ಒಳ್ಳೆಯದು.

ಬಾಪ್ದಾದಾರವರ ಸನ್ಮುಖದಲ್ಲಿ ಇನ್ಕಮ್ ಟ್ಯಾಕ್ಸ್ ಆಫೀಸರ್ ಕುಳಿತಿದ್ದಾರೆ , ಅವರ ಪ್ರತಿ ನುಡಿಸಿರುವ ಮಧುರ ಮಹಾವಾಕ್ಯಗಳು -

ಇದನ್ನಂತು ತಿಳಿಯುತ್ತೀರಲ್ಲವೆ - ನಮ್ಮ ಮನೆಯಲ್ಲಿ ಬಂದಿದ್ದೇವೆ? ಇದು ಯಾವ ಮನೆಯಾಗಿದೆ? ಪರಮಾತ್ಮನ ಮನೆ ಎಲ್ಲರ ಮನೆಯಾಯಿತಲ್ಲವೆ? ಅಂದಮೇಲೆ ತಮ್ಮ ಮನೆಯೂ ಆಯಿತಲ್ಲವೆ? ಮನೆಯಲ್ಲಿ ಬಂದಿದ್ದೀರಿ, ಇದಂತು ಬಹಳ ಒಳ್ಳೆಯದನ್ನೇ ಮಾಡಿದಿರಿ - ಈಗ ಇನ್ನೂ ಒಳ್ಳೆಯದನ್ನೇನು ಮಾಡುವಿರಿ? ಒಳ್ಳೆಯದಕ್ಕಿಂತ ಒಳ್ಳೆಯದನ್ನು ಮಾಡುವುದು ಮತ್ತು ಅತೀ ಶ್ರೇಷ್ಠರಾಗುವುದು - ಇದಂತು ಜೀವನದ ಲಕ್ಷ್ಯವಂತು ಇದ್ದೇ ಇದೆ. ಈಗ ಇನ್ನೂ ಒಳ್ಳೆಯದನ್ನೆನು ಮಾಡಬೇಕು? ಯಾವ ಪಾಠವನ್ನೀಗ ತಿಳಿಸಲಾಯಿತು - ಅದೊಂದೇ ಪಾಠವನ್ನು ಪರಿಪಕ್ವ ಮಾಡಿಕೊಂಡು ಬಿಟ್ಟರೆ, ಈ ಒಂದು ಪಾಠದಲ್ಲಿ ಎಲ್ಲಾ ಪಾಠವೂ ಸಮಾವೇಶವಾಗಿದೆ. ಇದು ಅದ್ಭುತವಾದ ವಿಶ್ವವಿದ್ಯಾಲಯವಾಗಿದೆ, ನೋಡುವುದಕ್ಕೆ ಮನೆಯೂ ಆಗಿದೆ ಆದರೆ ತಂದೆಯು ಸತ್ಯ ಶಿಕ್ಷಕನಾಗಿದ್ದಾರೆ, ಮನೆಯೂ ಆಗಿದೆ ಮತ್ತು ವಿದ್ಯಾಲಯವೂ ಆಗಿದೆ. ಆದ್ದರಿಂದ ಕೆಲ ಜನರು ಇದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ, ಅದೇನೆಂದರೆ ಇದು ಮನೆಯೋ ಅಥವಾ ವಿದ್ಯಾಲಯವಾಗಿದೆಯೋ ಎಂದು. ಆದರೆ ಮನೆಯೂ ಆಗಿದೆ ಮತ್ತು ವಿದ್ಯಾಲಯವೂ ಆಗಿದೆ. ಏಕೆಂದರೆ ಎಲ್ಲದಕ್ಕಿಂತ ಶ್ರೇಷ್ಠ ಪಾಠವೇನಿದೆ, ಅದನ್ನು ಓದಿಸಲಾಗುತ್ತದೆ. ಕಾಲೇಜಿನಲ್ಲಿ ಅಥವಾ ಸ್ಕೂಲಿನಲ್ಲಿ ಓದಿಸುವ ಲಕ್ಷ್ಯವೇನಿರುತ್ತದೆ? ಚಾರಿತ್ರ್ಯವಂತರಾಗಲಿ, ಸಂಪಾದಿಸಲು ಯೋಗ್ಯರಾಗಲಿ, ಪರಿವಾರವನ್ನು ಬಹಳ ಚೆನ್ನಾಗಿ ಪಾಲನೆ ಮಾಡುವವರಾಗಲಿ ಎನ್ನುವ ಲಕ್ಷ್ಯವಿದೆಯಲ್ಲವೆ. ಅಂದಮೇಲೆ ಇಲ್ಲಿ ಇದೆಲ್ಲಾ ಲಕ್ಷ್ಯವೂ ಪೂರ್ಣವಾಗಿ ಬಿಡುತ್ತದೆ. ಒಬ್ಬೊಬ್ಬರೂ ಚಾರಿತ್ರ್ಯವಂತರಾಗಿ ಬಿಡುತ್ತಾರೆ. ಭಾರತ ದೇಶದ ನೇತರು ಏನು ಬಯಸುತ್ತಾರೆ? ಭಾರತದ ಬಾಪೂಜಿಯವರು ಏನು ಬಯಸುತ್ತಿದ್ದರು? ಇದನ್ನೇ ಬಯಸುತ್ತಿದ್ದರಲ್ಲವೆ - ಭಾರತವು ಲೈಟ್ಹೌಸ್ ಆಗಲಿ. ಭಾರತವು ಪ್ರಪಂಚದ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಲಿ. ಅದೇ ಕಾರ್ಯವು ಇಲ್ಲಿ ಗುಪ್ತ ರೂಪದಿಂದ ಆಗುತ್ತಿದೆ. ಒಂದು ವೇಳೆ ಒಬ್ಬರು ರಾಮ-ಸೀತೆಯ ಸಮಾನರಾಗಿ ಬಿಡಲಿ, ಅವರ ಕಾರಣ ರಾಮ ರಾಜ್ಯವಾಯಿತು ಮತ್ತು ಇಷ್ಟೆಲ್ಲರೂ ರಾಮ-ಸೀತೆಯರ ಸಮಾನರಾಗಿ ಬಿಟ್ಟರೆ ಏನಾಗುತ್ತದೆ? ಅಂದಮೇಲೆ ಈ ಪಾಠವು ಕಷ್ಟವಿಲ್ಲ, ಬಹಳ ಸಹಜವಿದೆ. ಈ ಪಾಠವನ್ನು ಪರಿಪಕ್ವ ಮಾಡಿಕೊಳ್ಳುತ್ತೀರೆಂದರೆ, ತಾವೂ ಸಹ ಸತ್ಯ ಶಿಕ್ಷಕನ ಮೂಲಕ ಆತ್ಮಿಕ ಸರ್ಟಿಫಿಕೇಟನ್ನೂ ತೆಗೆದುಕೊಳ್ಳುತ್ತೀರಿ ಮತ್ತು ಗ್ಯಾರಂಟಿಯನ್ನೂ ತೆಗೆದುಕೊಳ್ಳುತ್ತೀರಿ - ಇದು ಆದಾಯದ ಮೂಲವಾಗಿದೆ. ಮತ್ತೆ ಅವಶ್ಯವಾಗಿ ಅದ್ಭುತವೂ ಆಗಿದೆ - ದಾದಾ, ಪರದಾದಾರವರೂ ಇಲ್ಲಿಯೇ ಓದುತ್ತಾರೆಂದರೆ ಮೊಮ್ಮಕ್ಕಳು, ಮರಿ ಮಕ್ಕಳೂ ಸಹ ಇಲ್ಲಿಯೇ ಓದುತ್ತಾರೆ. ಒಂದೇ ಕ್ಲಾಸಿನಲ್ಲಿ ಇಬ್ಬರೂ ಓದುತ್ತಾರೆ. ಏಕೆಂದರೆ ಇಲ್ಲಿ ಆತ್ಮರಿಗೆ ಓದಿಸಲಾಗುತ್ತದೆ, ಶರೀರವನ್ನು ನೋಡುವುದಿಲ್ಲ. ಭಲೇ ಐದು ವರ್ಷದ ಮಗುವಾಗಿರಬಹುದು, ಆ ಮಗುವೂ ಸಹ ಈ ಪಾಠವನ್ನಂತು ಓದಬಹುದಲ್ಲವೆ. ಮತ್ತು ಮಕ್ಕಳು ಹೆಚ್ಚು ಕಾರ್ಯವನ್ನು ಮಾಡಬಹುದು. ಮತ್ತು ಯಾರು ವೃದ್ಧರಾಗಿ ಬಿಟ್ಟಿದ್ದಾರೆ ಅವರಿಗಾಗಿಯೂ ಈ ಪಾಠವು ಅವಶ್ಯಕವಾಗಿದೆ, ಇಲ್ಲವೆಂದರೆ ಜೀವನದಿಂದ ನಿರಾಶರಾಗಿ ಬಿಡುತ್ತಾರೆ. ಅವಿದ್ಯಾವಂತ ಮಾತೆಯರ ಜೀವನವೂ ಶ್ರೇಷ್ಠವಾಗಬೇಕಲ್ಲವೆ. ಆದ್ದರಿಂದ ಸತ್ಯ ಶಿಕ್ಷಕನು ಎಲ್ಲರಿಗೂ ಓದಿಸುತ್ತಾರೆ. ಅಂದಮೇಲೆ ಏನು ಮಾಡುವಿರಿ? ಪಾಠವನ್ನು ಓದುವಿರಲ್ಲವೆ, ಲಾಭವು ತಮಗೇ ಆಗುತ್ತದೆ. ಯಾರು ಮಾಡುವರು ಅವರು ಪಡೆಯುವರು. ಎಷ್ಟು ಮಾಡುವರು ಅಷ್ಟು ಲಾಭವಾಗುತ್ತದೆ, ಏಕೆಂದರೆ ಇಲ್ಲಿ ಒಂದಕ್ಕೆ ಪದಮದಷ್ಟಾಗಿ ಸಿಗುತ್ತದೆ. ಅಲ್ಲಿ ವಿನಾಶಿಯಲ್ಲಿ ಹಾಗಾಗುವುದಿಲ್ಲ. ಅವಿನಾಶಿ ವಿದ್ಯೆಯಲ್ಲಿ ಒಂದಕ್ಕೆ ಪದಮದಷ್ಟಾಗಿ ಬಿಡುತ್ತದೆ. ಏಕೆಂದರೆ ದಾತನಿದ್ದಾರಲ್ಲವೆ. ಒಳ್ಳೆಯದು.

ರಾಜಾಸ್ಥಾನ ಜೋನಿನವರೊಂದಿಗೆ ಬಾಪ್ದಾದಾರವರ ವಾರ್ತಾಲಾಪ :-

ರಾಜಾಸ್ಥಾನ ಜೋನಿನ ವಿಶೇಷತೆಯೇನಾಗಿದೆ? ರಾಜಾಸ್ಥಾನದಲ್ಲಿಯೇ ಮುಖ್ಯ ಕೇಂದ್ರವಿದೆ. ಅಂದಮೇಲೆ ಹೇಗೆ ಜೋನಿನ ವಿಶೇಷತೆಯಿದೆಯೋ ಹಾಗೆಯೇ ರಾಜಾಸ್ಥಾನ ನಿವಾಸಿಗಳದೂ ವಿಶೇಷತೆಯಾಗುತ್ತದೆಯಲ್ಲವೆ. ಈಗ ರಾಜಾಸ್ಥಾನದಲ್ಲಿ ವಿಶೇಷವಾದ ಯಾವುದಾದರೂ ರತ್ನವನ್ನು ಹೊರತೆಗೆಯಬೇಕೆ ಅಥವಾ ತಾವೇ ವಿಶೇಷ ರತ್ನವಾಗಿದ್ದೀರಾ? ತಾವಂತು ಅತೀ ವಿಶೇಷವಂತು ಹೌದು ಆದರೆ ಸೇವಾ ಕ್ಷೇತ್ರದಲ್ಲಿ ಪ್ರಪಂಚದವರ ದೃಷ್ಟಿಯಲ್ಲಿ ಯಾರು ವಿಶೇಷವಾಗಿದ್ದಾರೆ, ಅವರನ್ನೂ ಸೇವೆಗೆ ನಿಮಿತ್ತ ಮಾಡಬೇಕಾಗಿದೆ. ಇಂತಹ ಸೇವೆಯನ್ನು ಮಾಡಿದ್ದೀರಾ? ರಾಜಾಸ್ಥಾನದವರಿಗೆ ಎಲ್ಲರಿಗಿಂತಲೂ ನಂಬರ್ವನ್ ಆಗಬೇಕಾಗಿದೆ. ಸಂಖ್ಯೆಯಲ್ಲಿ, ಕ್ವಾಲಿಟಿಯಲ್ಲಿ, ಸೇವೆಯ ವಿಶೇಷತೆಯಲ್ಲಿ, ಎಲ್ಲದರಲ್ಲಿಯೂ ನಂಬರ್ವನ್. ಮುಖ್ಯ ಕೇಂದ್ರವಂತು ನಂಬರ್ವನ್ ಇದ್ದೇ ಇರುತ್ತದೆ, ಆದರೆ ಅದರ ಪ್ರಭಾವವು ಇಡೀ ರಾಜಾಸ್ಥಾನದಲ್ಲಾಗಬೇಕು. ಈಗ ನಂಬರ್ವನ್ ಸಂಖ್ಯೆಯಲ್ಲಿ ಮಹಾರಾಷ್ಟ್ರ, ಗುಜರಾತನ್ನು ಲೆಕ್ಕದಲ್ಲಿಟ್ಟುಕೊಳ್ಳುತ್ತೇವೆ. ಈಗ ಇದನ್ನು ಲೆಕ್ಕದಲ್ಲಿಟ್ಟುಕೊಳ್ಳುತ್ತೇವೆ - ಎಲ್ಲದಕ್ಕಿಂತಲೂ ನಂಬರ್ವನ್ ರಾಜಾಸ್ಥಾನವಾಗಿದೆ. ಈಗ ಈ ವರ್ಷದಲ್ಲಿ ತಯಾರು ಮಾಡಿರಿ. ಮುಂದಿನ ವರ್ಷದಲ್ಲಿ ಮಹಾರಾಷ್ಟ್ರ ಮತ್ತು ಗುಜರಾತಿಗಿಂತಲೂ ನಂಬರ್ವನ್ ಹೋಗಬೇಕು. ನಿಶ್ಚಯ ಬುದ್ಧಿ ವಿಜಯಿ. ಎಷ್ಟು ಒಳ್ಳೊಳ್ಳೆಯ ಅನುಭವಿ ರತ್ನಗಳಿದ್ದಾರೆ. ಸೇವೆಯನ್ನು ಮುಂದುವರೆಸುತ್ತೀರಿ, ಅವಶ್ಯವಾಗಿ ವೃದ್ಧಿಯಾಗುತ್ತದೆ. ಒಳ್ಳೆಯದು.

ವರದಾನ:
ಭಗವಂತ ಮತ್ತು ಭಾಗ್ಯದ ಸ್ಮೃತಿಯಿಂದ ಅನ್ಯರಿಗೂ ಭಾಗ್ಯವನ್ನು ರೂಪಿಸುವ ಖುಷ್ನುಮಃ ಭಾಗ್ಯಶಾಲಿ ಭವ.

ಅಮೃತ ವೇಳೆಯಿಂದ ರಾತ್ರಿಯವರೆಗೆ ತಮ್ಮ ಭಿನ್ನ-ಭಿನ್ನ ಭಾಗ್ಯವನ್ನು ಸ್ಮೃತಿಯಲ್ಲಿ ತಂದುಕೊಳ್ಳಿರಿ ಮತ್ತು ಇದೇ ಗೀತೆಯನ್ನು ಹಾಡುತ್ತಿರಿ - ವಾಹ್ ನನ್ನ ಶ್ರೇಷ್ಠ ಭಾಗ್ಯವೇ! ಯಾರು ಭಗವಂತ ಮತ್ತು ಭಾಗ್ಯದ ಸ್ಮೃತಿಯಲ್ಲಿರುತ್ತಾರೆಯೋ ಅವರೇ ಅನ್ಯರನ್ನೂ ಭಾಗ್ಯವಂತರನ್ನಾಗಿ ಮಾಡಲು ಸಾಧ್ಯವಿದೆ. ಬ್ರಾಹ್ಮಣನೆಂದರೆ ಸದಾ ಭಾಗ್ಯವಂತ, ಸದಾ ಭಾಗ್ಯಶಾಲಿ. ಬ್ರಾಹ್ಮಣ ಆತ್ಮನ ಖುಷಿಯನ್ನು ಕಡಿಮೆ ಮಾಡಲು ಯಾರಿಗೂ ಸಾಹಸವಿಲ್ಲ. ಪ್ರತಿಯೊಬ್ಬರೂ ಖುಷ್ನುಮಃ ಭಾಗ್ಯಶಾಲಿ ಆಗಿರುವಿರಿ. ಬ್ರಾಹ್ಮಣ ಜೀವನದಲ್ಲಿ ಖುಷಿಯು ಹೋಗುವುದು ಅಸಂಭವವಾಗಿದೆ, ಭಲೇ ಶರೀರ ಹೊರಟು ಹೋಗಬಹುದು, ಆದರೆ ಖುಷಿಯು ಹೋಗಲು ಸಾಧ್ಯವಿಲ್ಲ.

ಸ್ಲೋಗನ್:
ಮಾಯೆಯ ಉಯ್ಯಾಲೆಯನ್ನು ಬಿಟ್ಟು ಅತೀಂದ್ರಿಯ ಸುಖದ ಉಯ್ಯಾಲೆಯಲ್ಲಿ ಸದಾ ತೂಗುತ್ತಿರಿ.