13.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ವಿನಾಶಿ
ಶರೀರಗಳೊಂದಿಗೆ ಪ್ರೀತಿ ಮಾಡದೆ ಅವಿನಾಶಿ ತಂದೆಯೊಂದಿಗೆ ಪ್ರೀತಿಯನ್ನಿಡಿ, ಆಗ ಅಳುವುದರಿಂದ
ಮುಕ್ತರಾಗುತ್ತೀರಿ”
ಪ್ರಶ್ನೆ:
ಅಸತ್ಯ ಪ್ರೀತಿ
ಯಾವುದಾಗಿದೆ ಮತ್ತು ಅದರ ಪರಿಣಾಮವೇನಾಗುತ್ತದೆ?
ಉತ್ತರ:
ವಿನಾಶಿ
ಶರೀರಗಳೊಂದಿಗೆ ಮೋಹವನ್ನಿಡುವುದು ಅಸತ್ಯ ಪ್ರೀತಿಯಾಗಿದೆ. ಯಾರು ವಿನಾಶಿ ವಸ್ತುಗಳೊಂದಿಗೆ
ಮೋಹವನ್ನಿಟ್ಟುಕೊಳ್ಳುವರೋ ಅವರು ಅಳುತ್ತಾರೆ, ದೇಹಾಭಿಮಾನದ ಕಾರಣ ಅಳು ಬರುತ್ತದೆ. ಸತ್ಯಯುಗದಲ್ಲಿ
ಎಲ್ಲರೂ ಆತ್ಮಾಭಿಮಾನಿಯಾಗಿರುತ್ತಾರೆ, ಆದ್ದರಿಂದ ಅಳುವ ಮಾತೇ ಇಲ್ಲ. ಯಾರು ಅಳುವರೋ ಅವರು
ಕಳೆದುಕೊಳ್ಳುತ್ತಾರೆ. ಈಗ ಅವಿನಾಶಿ ಮಕ್ಕಳಿಗೆ ಅವಿನಾಶಿ ತಂದೆಯ ಶಿಕ್ಷಣವು ಸಿಗುತ್ತದೆ -
ದೇಹೀ-ಅಭಿಮಾನಿಯಾಗಿ ಆಗ ಅಳುವುದರಿಂದ ಮುಕ್ತರಾಗುತ್ತೀರಿ.
ಓಂ ಶಾಂತಿ.
ಇದನ್ನಂತೂ ಮಕ್ಕಳೇ ತಿಳಿದುಕೊಂಡಿದ್ದೀರಿ - ಆತ್ಮವು ಅವಿನಾಶಿಯಾಗಿದೆ ಮತ್ತು ತಂದೆಯೂ
ಅವಿನಾಶಿಯಾಗಿದ್ದಾರೆ ಅಂದಮೇಲೆ ಯಾರನ್ನು ಪ್ರೀತಿ ಮಾಡಬೇಕು? ಅವಿನಾಶಿ ಆತ್ಮನನ್ನು. ಅವಿನಾಶಿಯನ್ನೇ
ಪ್ರೀತಿ ಮಾಡಬೇಕಾಗಿದೆ. ವಿನಾಶಿ ಶರೀರವನ್ನೇಕೆ ಪ್ರೀತಿ ಮಾಡಬೇಕು. ಇಡೀ ಪ್ರಪಂಚವು ವಿನಾಶಿಯಾಗಿದೆ,
ಪ್ರತಿಯೊಂದು ವಸ್ತು ವಿನಾಶಿಯಾಗಿದೆ. ಈ ಶರೀರವು ವಿನಾಶಿಯಾಗಿದೆ, ಆತ್ಮವು ಅವಿನಾಶಿಯಾಗಿದೆ.
ಆತ್ಮದ ಪ್ರೀತಿಯು ಅವಿನಾಶಿಯಾಗಿರುತ್ತದೆ. ಆತ್ಮವೆಂದೂ ಸಾಯುವುದಿಲ್ಲ. ಅದಕ್ಕೆ ಸತ್ಯವೆಂದು
ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು ಅಸತ್ಯವಾಗಿ ಬಿಟ್ಟಿದ್ದೀರಿ, ವಾಸ್ತವದಲ್ಲಿ
ಅವಿನಾಶಿಯ ಜೊತೆ ಅವಿನಾಶಿ ಪ್ರೀತಿಯಿರಬೇಕು. ನಿಮಗೆ ವಿನಾಶಿ ಶರೀರದ ಜೊತೆ ಪ್ರೀತಿಯುಂಟಾಗಿ
ಬಿಟ್ಟಿದೆ ಆದ್ದರಿಂದ ಅಳಬೇಕಾಗುತ್ತದೆ. ಅವಿನಾಶಿಯ ಜೊತೆ ಪ್ರೀತಿಯಿಲ್ಲ, ವಿನಾಶಿಯ ಜೊತೆ
ಪ್ರೀತಿಯಿರುವುದರಿಂದ ಅಳಬೇಕಾಗುತ್ತದೆ. ಈಗ ನೀವು ತಮ್ಮನ್ನು ಆವಿನಾಶಿ ಆತ್ಮವೆಂದು ತಿಳಿಯುತ್ತೀರಿ,
ಆದ್ದರಿಂದ ಅಳುವ ಮಾತಿಲ್ಲ. ಏಕೆಂದರೆ ದೇಹಾಭಿಮಾನಿಗಳಾಗುವುದರಿಂದ ಅಳಬೇಕಾಗುತ್ತದೆ. ವಿನಾಶಿ
ಶರೀರದ ಹಿಂದೆ ಅಳುತ್ತಾರೆ. ಆತ್ಮವು ಸಾಯುವುದಿಲ್ಲವೆಂಬುದು ತಿಳಿದಿದೆ, ತಂದೆಯು ತಿಳಿಸುತ್ತಾರೆ -
ತಮ್ಮನ್ನು ಆತ್ಮವೆಂದು ತಿಳಿಯಿರಿ. ನೀವು ಅವಿನಾಶಿ ತಂದೆಯ ಮಕ್ಕಳು ಅವಿನಾಶಿ ಆತ್ಮರಾಗಿದ್ದೀರಿ.
ನೀವು ಅಳುವ ಅವಶ್ಯಕತೆಯಿಲ್ಲ. ಆತ್ಮವು ಒಂದು ಶರೀರವನ್ನು ಬಿಟ್ಟು ಹೋಗಿ ಇನ್ನೊಂದು
ಪಾತ್ರವನ್ನಭಿನಯಿಸುತ್ತದೆ, ಇದು ಆಟವಾಗಿದೆ. ನೀವು ಶರೀರದಲ್ಲಿ ಮಮತ್ವವನ್ನೇಕೆ
ಇಟ್ಟುಕೊಳ್ಳುತ್ತೀರಿ. ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳಿಂದ ಬುದ್ಧಿಯೋಗವನ್ನು ತೆಗೆಯಿರಿ,
ತಮ್ಮನ್ನು ಅವಿನಾಶಿ ಆತ್ಮವೆಂದು ತಿಳಿಯಿರಿ. ಆತ್ಮವೆಂದೂ ಸಾಯುವುದಿಲ್ಲ, ಗಾಯನವೂ ಇದೆ - ಯಾರು
ಅಳುತ್ತಾರೆಯೋ ಅವರು ಕಳೆದುಕೊಳ್ಳುತ್ತಾರೆ. ಆತ್ಮಾಭಿಮಾನಿಯಾಗುವುದರಿಂದಲೇ ಯೋಗ್ಯರಾಗಿ ಬಿಡುತ್ತೀರಿ.
ಆದ್ದರಿಂದ ತಂದೆಯು ಬಂದು ದೇಹಾಭಿಮಾನಿಗಳಿಂದ ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಾರೆ. ತಂದೆಯು
ತಿಳಿಸುತ್ತಾರೆ - ನೀವು ಹೇಗೆ ಮರೆತು ಹೋಗಿದ್ದೀರಿ. ಆದ್ದರಿಂದಲೇ ಜನ್ಮ-ಜನ್ಮಾಂತರ ನೀವು
ಅಳಬೇಕಾಯಿತು. ಈಗ ಮತ್ತೆ ನಿಮಗೆ ಆತ್ಮಾಭಿಮಾನಿಯಾಗುವ ಶಿಕ್ಷಣವು ಸಿಗುತ್ತದೆ. ನೀವೆಂದೂ ಅಳುವುದೇ
ಇಲ್ಲ. ಇದು ಅಳುವ ಪ್ರಪಂಚವಾಗಿದೆ, ಸತ್ಯಯುಗವು ನಗುವ ಪ್ರಪಂಚವಾಗಿದೆ. ಇದು ದುಃಖದ ಪ್ರಪಂಚ, ಅದು
ಸುಖದ ಪ್ರಪಂಚವಾಗಿದೆ. ತಂದೆಯು ಬಹಳ ಚೆನ್ನಾಗಿ ಶಿಕ್ಷಣ ಕೊಡುತ್ತಾರೆ. ಅವಿನಾಶಿ ಮಕ್ಕಳಿಗೆ
ಅವಿನಾಶಿ ತಂದೆಯ ಶಿಕ್ಷಣವು ಸಿಗುತ್ತದೆ, ಅವರೇ ದೇಹಾಭಿಮಾನಿಗಳಾಗುವುದರಿಂದ ದೇಹವನ್ನೇ ನೋಡುತ್ತಾ
ಶಿಕ್ಷಣವನ್ನು ಕೊಡುತ್ತಾರೆ. ಆದ್ದರಿಂದ ದೇಹದ ನೆನಪು ಬರುವುದರಿಂದ ಅಳುತ್ತಾರೆ. ಶರೀರ
ಸಮಾಪ್ತಿಯಾಯಿತೆಂಬುದನ್ನೂ ನೋಡುತ್ತಾರೆ ಮತ್ತೆ ಅದನ್ನೇ ನೆನಪು ಮಾಡುವುದರಿಂದ ಏನು ಲಾಭ? ಮಣ್ಣನ್ನು
ನೆನಪು ಮಾಡಲಾಗುತ್ತದೆಯೇ? ಅವಿನಾಶಿ ವಸ್ತುವು ಹೋಗಿ ಇನ್ನೊಂದು ಶರೀರವನ್ನು ತೆಗೆದುಕೊಂಡಿತು.
ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ಯಾರು ಒಳ್ಳೆಯ ಕರ್ಮ ಮಾಡುವರೋ ಅವರಿಗೆ ಮತ್ತೆ ಒಳ್ಳೆಯ
ಶರೀರವೇ ಸಿಗುತ್ತದೆ. ಕೆಲವರಿಗೆ ಕೆಟ್ಟಿರುವ ರೋಗಿ ಶರೀರವು ಸಿಗುತ್ತದೆ, ಅದು
ಕರ್ಮಗಳಿಗನುಸಾರವಾಗಿದೆ. ಒಳ್ಳೆಯ ಕರ್ಮ ಮಾಡಿದರೆ ಮೇಲೆ ಹೋಗಿ ಬಿಡುತ್ತಾರೆಂದಲ್ಲ, ಮೇಲೆ ಯಾರೂ
ಹೋಗಲು ಸಾಧ್ಯವಿಲ್ಲ. ಒಳ್ಳೆಯ ಕರ್ಮ ಮಾಡಿದರೆ ಒಳ್ಳೆಯವರೆಂದು ಕರೆಸಿಕೊಳ್ಳುತ್ತಾರೆ, ಒಳ್ಳೆಯ
ಜನ್ಮ ಸಿಗುತ್ತದೆ, ಆದರೂ ನಂತರ ಕೆಳಗಿಳಿಯಲೇಬೇಕಾಗಿದೆ. ನಿಮಗೆ ಗೊತ್ತಿದೆ - ನಾವು ಹೇಗೆ
ಮೇಲೇರುತ್ತೇವೆ, ಭಲೆ ಒಳ್ಳೆಯ ಕರ್ಮಗಳಿಂದ ಯಾರಾದರೂ ಮಹಾತ್ಮರಾಗುತ್ತಾರೆ. ಆದರೂ ಕಲೆಗಳು
ಕಡಿಮೆಯಾಗುತ್ತಾ ಹೋಗುತ್ತದೆ. ಆದರೂ ತಂದೆಯು ತಿಳಿಸುತ್ತಾರೆ, ನಂತರವೂ ಈಶ್ವರನನ್ನು ನೆನಪು ಮಾಡಿ
ಒಳ್ಳೆಯ ಕರ್ಮ ಮಾಡುತ್ತಾರೆಂದರೆ ಅವರಿಗೆ ಅಲ್ಪಕಾಲದ ಕ್ಷಣಭಂಗುರ ಸುಖವನ್ನು ಕೊಡುತ್ತೇನೆ. ಆದರೂ
ಏಣಿಯಂತೂ ಕೆಳಗಿಳಿಯಲೇಬೇಕಾಗಿದೆ. ಹೆಸರು ಭಲೆ ಒಳ್ಳೆಯದಿರಬಹುದು, ಇಲ್ಲಂತೂ ಮನುಷ್ಯರು ಒಳ್ಳೆಯ
ಮತ್ತು ಕೆಟ್ಟ ಕರ್ಮಗಳನ್ನೂ ಅರಿತುಕೊಂಡಿಲ್ಲ. ರಿದ್ಧಿ-ಸಿದ್ಧಿಯವರಿಗೆ ಎಷ್ಟೊಂದು ಮಾನ್ಯತೆ
ಕೊಡುತ್ತಾರೆ, ಅವರ ಹಿಂದೆ ಎಷ್ಟೊಂದು ಮನುಷ್ಯರು ಹುಚ್ಛರಾಗುತ್ತಾರೆ. ಎಲ್ಲವೂ ಅಜ್ಞಾನವಾಗಿದೆ.
ತಿಳಿದುಕೊಳ್ಳಿ, ಯಾರಾದರೂ ಪರೋಕ್ಷವಾಗಿ ದಾನ-ಪುಣ್ಯ ಮಾಡುತ್ತಾರೆ, ಧರ್ಮಶಾಲೆ - ಆಸ್ಪತ್ರೆಗಳನ್ನು
ಕಟ್ಟಿಸುತ್ತಾರೆಂದರೆ ನಂತರದ ಜನ್ಮದಲ್ಲಿ ಅದಕ್ಕೆ ಪ್ರತಿಫಲವು ಅವಶ್ಯವಾಗಿ ಸಿಗುತ್ತದೆ. ತಂದೆಯನ್ನು
ನೆನಪು ಮಾಡುತ್ತಾರೆ, ಭಲೆ ನಿಂದನೆಯನ್ನೂ ಮಾಡುತ್ತಾರೆ. ಆದರೂ ಸಹ ಬಾಯಿಂದ ಭಗವಂತನ ಹೆಸರನ್ನು
ಹೇಳುತ್ತಾರೆ. ಬಾಕಿ ತಿಳಿಯದ ಕಾರಣ ಏನನ್ನೂ ಅರಿತುಕೊಂಡಿಲ್ಲ. ಭಗವಂತನನ್ನು ನೆನಪು ಮಾಡಿ ರುದ್ರ
ಪೂಜೆ ಮಾಡುತ್ತಾರೆ. ರುದ್ರನನ್ನು ಭಗವಂತನೆಂದು ತಿಳಿಯುತ್ತಾರೆ. ರುದ್ರ ಯಜ್ಞವನ್ನು ರಚಿಸುತ್ತಾರೆ.
ಶಿವ ಅಥವಾ ರುದ್ರನ ಪೂಜೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನ ಪೂಜೆ ಮಾಡುತ್ತಾರೆ ಆದರೆ
ತಿಳುವಳಿಕೆಯಿಲ್ಲದೆ ಏನೇನೋ ಮಾಡುತ್ತಾರೆ, ಮಾಡಿಸುತ್ತಾರೆ. ಎಷ್ಟು ಜನ ಮನುಷ್ಯರೋ ಅಷ್ಟು
ಗುರುಗಳಿರುತ್ತಾರೆ. ವೃಕ್ಷದಲ್ಲಿ ಹೊಸ-ಹೊಸ ಎಲೆಗಳೂ, ರೆಂಬೆ-ಕೊಂಬೆಗಳು ಬರುತ್ತವೆಯೆಂದರೆ ಅವು
ಎಷ್ಟು ಶೋಭಿಸುತ್ತವೆ! ಅವು ಸತೋಗುಣಿಯಾಗಿರುವ ಕಾರಣ ಅವರ ಮಹಿಮೆಯಾಗುತ್ತದೆ. ತಂದೆಯು
ತಿಳಿಸುತ್ತಾರೆ - ಇದು ವಿನಾಶಿ ವಸ್ತುಗಳನ್ನು ಪ್ರೀತಿ ಮಾಡುವ ಪ್ರಪಂಚವಾಗಿದೆ. ಯಾರ ಜೊತೆಯಾದರೂ
ಬಹಳ ಪ್ರೀತಿಯಿರುತ್ತದೆಯೆಂದರೆ ಆ ಮೋಹದಲ್ಲಿ ಹುಚ್ಛರಾಗಿ ಬಿಡುತ್ತಾರೆ. ದೊಡ್ಡ-ದೊಡ್ಡ ಸೇಟುಗಳು
ಮೋಹಕ್ಕೆ ವಶರಾಗಿ ಹುಚ್ಛರಾಗಿ ಬಿಡುತ್ತಾರೆ. ಮಾತೆಯರಿಗೆ ಜ್ಞಾನವಿಲ್ಲದ ಕಾರಣ ವಿನಾಶಿ ಶರೀರದ
ಹಿಂದೆ ವಿಧವೆಯರಾಗಿ ಎಷ್ಟೊಂದು ಅಳುತ್ತಾರೆ, ನೆನಪು ಮಾಡುತ್ತಿರುತ್ತಾರೆ. ಈಗ ತಮ್ಮನ್ನು
ಆತ್ಮವೆಂದು ತಿಳಿದು ಆತ್ಮವೆಂದೇ ನೋಡುತ್ತೀರಿ ಆದ್ದರಿಂದ ಸ್ವಲ್ಪವೂ ದುಃಖವಾಗುವುದಿಲ್ಲ.
ವಿದ್ಯೆಯನ್ನು ಸಂಪಾದನೆಯ ಮೂಲವೆಂದು ಹೇಳಲಾಗುತ್ತದೆ. ವಿದ್ಯೆಯಲ್ಲಿ ಗುರಿ-ಉದ್ದೇಶವೂ ಇರುತ್ತದೆ,
ಆದರೆ ಅದು ಒಂದು ಜನ್ಮಕ್ಕಾಗಿ. ಸರ್ಕಾರದಿಂದ ಸಂಬಳವೂ ಸಿಗುತ್ತದೆ, ಓದಿ ಉದ್ಯೋಗ-ವ್ಯವಹಾರಗಳನ್ನು
ಮಾಡುತ್ತಾರೆ ಅದರಿಂದ ಹಣ ಇತ್ಯಾದಿ ಸಿಗುತ್ತದೆ. ಆದರೆ ಇಲ್ಲಂತೂ ಮಾತೇ ಹೊಸದಾಗಿದೆ. ನೀವು ಅವಿನಾಶಿ
ಜ್ಞಾನರತ್ನಗಳಿಂದ ಜೋಳಿಗೆಯನ್ನು ಹೇಗೆ ತುಂಬಿಕೊಳ್ಳುತ್ತೀರಿ! ತಂದೆಯು ನಮಗೆ ಅವಿನಾಶಿ ಜ್ಞಾನದ
ಖಜಾನೆಯನ್ನು ಕೊಡುತ್ತಾರೆಂದು ಆತ್ಮವು ತಿಳಿಯುತ್ತದೆ. ಭಗವಂತನು ಓದಿಸುತ್ತಾರೆಂದರೆ ಅವಶ್ಯವಾಗಿ
ಭಗವಾನ್-ಭಗವತಿಯರನ್ನಾಗಿಯೇ ಮಾಡುತ್ತಾರೆ. ಅವಶ್ಯವಾಗಿ ಈ ಲಕ್ಷ್ಮೀ-ನಾರಾಯಣರನ್ನು ಭಗವಾನ್-ಭಗವತಿ
ಎಂದು ತಿಳಿಯುವುದು ತಪ್ಪಾಗಿದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಓಹೋ! ಯಾವಾಗ ನಾವು
ದೇಹಾಭಿಮಾನಿಗಳಾಗಿ ಬಿಡುತ್ತೇವೆಯೋ ಆಗ ನಮ್ಮ ಬುದ್ಧಿಯು ಎಷ್ಟೊಂದು ಕೆಳದರ್ಜೆಯದಾಗಿರುತ್ತದೆ. ಹೇಗೆ
ಪ್ರಾಣಿಗಳ ಬುದ್ಧಿಯವರಾಗಿ ಬಿಡುತ್ತೇವೆ. ಪ್ರಾಣಿಗಳ ಸೇವೆಯಾದರೂ ಬಹಳ ಚೆನ್ನಾಗಿರುತ್ತದೆ.
ಮನುಷ್ಯರದಂತೂ ಏನೂ ಇಲ್ಲ. ಸ್ಪರ್ಧೆಯ ಕುದುರೆಗಳನ್ನು ಎಷ್ಟು ಚೆನ್ನಾಗಿ ಸಂಭಾಲನೆ ಮಾಡುತ್ತಾರೆ.
ಇಲ್ಲಿಯ ಮನುಷ್ಯರದನ್ನು ನೋಡಿ ಯಾವ ಗತಿಯಾಗಿದೆ! ನಾಯಿಯನ್ನು ಎಷ್ಟು ಚೆನ್ನಾಗಿ ಸಾಕುತ್ತಾರೆ,
ನೇವರಿಸುತ್ತಿರುತ್ತಾರೆ. ಜೊತೆಯಲ್ಲಿ ಮಲಗಿಸಿಕೊಳ್ಳುತ್ತಾರೆ, ನೋಡಿ ಪ್ರಪಂಚದ ಸ್ಥಿತಿಯೇನಾಗಿ
ಬಿಟ್ಟಿದೆ! ಸತ್ಯಯುಗದಲ್ಲಿ ಇಂತಹ ವ್ಯವಹಾರವಿರುವುದಿಲ್ಲ.
ಅಂದಾಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮ್ಮನ್ನು ಮಾಯಾ ರಾವಣನು ಅಸತ್ಯವಂತರನ್ನಾಗಿ ಮಾಡಿ
ಬಿಟ್ಟಿದ್ದಾನೆ. ಅಸತ್ಯ ರಾಜ್ಯವಾಗಿದೆಯಲ್ಲವೆ. ಮನುಷ್ಯರು ಅಸತ್ಯವಂತರಾದ್ದರಿಂದ ಇಡೀ ಪ್ರಪಂಚವು
ಅಸತ್ಯವಾಗಿ ಬಿಡುತ್ತದೆ. ಸತ್ಯ ಮತ್ತು ಅಸತ್ಯ ಪ್ರಪಂಚದಲ್ಲಿ ನೋಡಿ ಎಷ್ಟು ಅಂತರವಿದೆ! ಕಲಿಯುಗದ
ಸ್ಥಿತಿಯು ಏನಾಗಿದೆ! ನಾನು ಸ್ವರ್ಗ ಸ್ಥಾಪನೆ ಮಾಡುತ್ತಿದ್ದೇನೆಂದರೆ ಮಾಯೆಯು ತನ್ನ ಸ್ವರ್ಗವನ್ನು
ತೋರಿಸುತ್ತದೆ. ತನ್ನ ಪ್ರಭಾವವು ಬೀರುತ್ತದೆ. ತಾತ್ಕಾಲಿಕ ಹಣವು ಎಷ್ಟೊಂದಿದೆ. ನಾವು ಇಲ್ಲಿಯೇ
ಸ್ವರ್ಗದಲ್ಲಿ ಕುಳಿತಿದ್ದೇವೆಂದು ತಿಳಿಯುತ್ತಾರೆ, ಸ್ವರ್ಗದಲ್ಲಿ ಎಷ್ಟು ಎತ್ತರದ ನೂರ ಅಂತಸ್ತಿನ
ಮನೆಗಳಿರುತ್ತವೆಯೇ! ಹೇಗೆ ತಮ್ಮ ಮನೆಗಳನ್ನು ಶೃಂಗರಿಸುತ್ತಾರೆ. ಎರಡಂತಸ್ಥಿನ ಮಹಡಿ ಮನೆಗಳೂ
ಇರುವುದಿಲ್ಲ. ಮನುಷ್ಯರೇ ಬಹಳ ಕಡಿಮೆ ಇರುತ್ತಾರೆ. ಇಷ್ಟು ಜಮೀನನ್ನು ನೀವು ಏನು ಮಾಡುತ್ತೀರಿ!
ಇಲ್ಲಿ ಜಮೀನಿನ ಹಿಂದೆ ಹೊಡೆದಾಡುತ್ತಾರೆ, ಜಗಳವಾಡುತ್ತಾರೆ, ಅಲ್ಲಿ ಜಮೀನೆಲ್ಲವೂ ನಿಮ್ಮದೇ
ಆಗಿರುತ್ತದೆ. ಎಷ್ಟು ಹಗಲು-ರಾತ್ರಿಯ ಅಂತರವಿದೆ. ಅವರು ಲೌಕಿಕ ತಂದೆ ಮತ್ತು ಇವರು ಪಾರಲೌಕಿಕ ತಂದೆ.
ಪಾರಲೌಕಿಕ ತಂದೆಯು ಮಕ್ಕಳಿಗೆ ಏನು ತಾನೆ ಕೊಡುವುದಿಲ್ಲ. ಅರ್ಧಕಲ್ಪ ನೀವು ಭಕ್ತಿ ಮಾಡುತ್ತೀರಿ.
ತಂದೆಯು ನೇರವಾಗಿ ತಿಳಿಸುತ್ತಾರೆ. ಮಕ್ಕಳೇ, ಇದರಿಂದ ಮುಕ್ತಿ ಸಿಗುವುದಿಲ್ಲ ಅರ್ಥಾತ್ ನನ್ನೊಂದಿಗೆ
ಮಿಲನ ಮಾಡುವುದಿಲ್ಲ. ನೀವು ಮುಕ್ತಿಧಾಮದಲ್ಲಿ ನನ್ನೊಂದಿಗೆ ಮಿಲನ ಮಾಡುತ್ತೀರಿ. ನಾನೂ ಸಹ
ಮುಕ್ತಿಧಾಮದಲ್ಲಿರುತ್ತೇನೆ. ನೀವೂ ಸಹ ಮುಕ್ತಿಧಾಮದಲ್ಲಿರುತ್ತೀರಿ ನಂತರ ಅಲ್ಲಿಂದ ಸ್ವರ್ಗದಲ್ಲಿ
ಬರುತ್ತೀರಿ ಅಂದರೆ ಸ್ವರ್ಗದಲ್ಲಿ ನಾನು ಇರುವುದಿಲ್ಲ. ಇದು ಡ್ರಾಮಾ ಆಗಿದೆ. ನಂತರ ಚಾಚೂ ತಪ್ಪದೆ
ಈ ರೀತಿ ಪುನರಾವರ್ತನೆಯಾಗುತ್ತದೆ ಮತ್ತೆ ಈ ಜ್ಞಾನವೇ ಮರೆತು ಹೋಗುತ್ತದೆ. ಎಲ್ಲಿಯವರೆಗೆ
ಸಂಗಮಯುಗವು ಬರುವುದಿಲ್ಲವೋ ಅಲ್ಲಿಯವರೆಗೆ ಗೀತಾ ಜ್ಞಾನವಿರಲು ಹೇಗೆ ಸಾಧ್ಯ. ಬಾಕಿ ಯಾವುದೇ
ಶಾಸ್ತ್ರಗಳಿವೆಯೋ ಅವು ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ.
ಈಗ ನೀವು ಜ್ಞಾನವನ್ನು ಕೇಳುತ್ತಿದ್ದೀರಿ, ನಾನು ಬೀಜರೂಪ, ಜ್ಞಾನಸಾಗರನಾಗಿದ್ದೇನೆ. ನಿಮ್ಮನ್ನೇನೂ
ಶ್ರಮ ಪಡಲು ಬಿಡುವುದಿಲ್ಲ. ಕಾಲಿಗೂ ಸಹ ಬೀಳಲು ಬಿಡುವುದಿಲ್ಲ. ಯಾರ ಕಾಲಿಗೆ ಬೀಳುತ್ತೀರಿ! ಶಿವ
ತಂದೆಗಂತೂ ಕಾಲುಗಳು ಇಲ್ಲವೇ ಇಲ್ಲ. ಕಾಲಿಗೆ ಬೀಳುವುದಾದರೆ ಈ ಬ್ರಹ್ಮಾರವರ ಕಾಲಿಗೆ
ಬಿದ್ದಂತಾಗುತ್ತದೆ. ನಾನಂತೂ ನಿಮ್ಮ ಗುಲಾಮನಾಗಿದ್ದೇನೆ. ಅವರಿಗೆ ನಿರಾಕಾರಿ ನಿರಹಂಕಾರಿ ಎಂದು
ಹೇಳಲಾಗುತ್ತದೆ. ಅದೂ ಸಹ ಯಾವಾಗ ಅವರು ಪಾತ್ರದಲ್ಲಿ ಬರುವರೋ ಆಗಲೇ ಅವರು ನಿರಹಂಕಾರಿ ಎಂದು
ಹೇಳಲಾಗುತ್ತದೆ. ಆ ತಂದೆಯು ನಿಮಗೆ ಅಪಾರ ಜ್ಞಾನವನ್ನು ಕೊಡುತ್ತಾರೆ. ಇದು ಅವಿನಾಶಿ ಜ್ಞಾನ
ರತ್ನಗಳ ದಾನವಾಗಿದೆ. ಯಾರೆಷ್ಟು ಬೇಕಾದರೂ ಪಡೆಯಬಹುದು. ಅವಿನಾಶಿ ಜ್ಞಾನರತ್ನಗಳನ್ನು ತೆಗೆದುಕೊಂಡು
ನಂತರ ಅನ್ಯರಿಗೆ ದಾನ ಮಾಡುತ್ತಾ ಇರಿ. ಈ ರತ್ನಗಳಿಗಾಗಿಯೇ ಒಂದೊಂದು ರತ್ನವೂ ಲಕ್ಷಾಂತರ
ರೂಪಾಯಿಗಳದೆಂದು ಹೇಳಲಾಗುತ್ತದೆ. ಹೆಜ್ಜೆ-ಹೆಜ್ಜೆಯಲ್ಲಿ ಪದುಮದಷ್ಟನ್ನು ಕೊಡುವವರು ಒಬ್ಬರೇ
ತಂದೆಯಾಗಿದ್ದಾರೆ. ಸರ್ವೀಸಿನಲ್ಲಿ ಬಹಳ ಗಮನವಿರಬೇಕು. ನಿಮ್ಮ ಹೆಜ್ಜೆಯು ನೆನಪಿನ ಯಾತ್ರೆಯದಾಗಿದೆ,
ಅದರಿಂದ ನೀವು ಅಮರರಾಗಿ ಬಿಡುತ್ತೀರಿ. ಸತ್ಯಯುಗದಲ್ಲಿ ಸಾಯುವ ಚಿಂತೆಯೇ ಇರುವುದಿಲ್ಲ. ಒಂದು
ಶರೀರವನ್ನು ಬಿಟ್ಟು ಇನ್ನೊಂದು ತೆಗೆದುಕೊಳ್ಳುತ್ತಾರೆ. ಮೋಹಜೀತ ರಾಜನ ಕಥೆಯನ್ನೂ ಕೇಳಿರಬಹುದು.
ಇದನ್ನಂತೂ ತಂದೆಯು ಕುಳಿತು ತಿಳಿಸುತ್ತಾರೆ. ಈಗ ನಿಮ್ಮನ್ನು ಆ ರೀತಿ ಮಾಡುತ್ತಾರೆ, ಇವು ಈಗಿನದೇ
ಮಾತುಗಳಾಗಿವೆ. ರಕ್ಷಾಬಂಧನದ ಹಬ್ಬವನ್ನು ಆಚರಿಸುತ್ತಾರೆ ಇದು ಯಾವಾಗಿನ ಸಂಕೇತವಾಗಿದೆ?
ಪವಿತ್ರರಾಗಿ ಎಂದು ಭಗವಂತನು ಯಾವಾಗ ಹೇಳಿದರು? ಹೊಸ ಪ್ರಪಂಚವು ಯಾವಾಗ, ಹಳೆಯ ಪ್ರಪಂಚವು ಯಾವಾಗ
ಆಗುತ್ತದೆಯೆಂದು ಮನುಷ್ಯರಿಗೇನು ಗೊತ್ತಿದೆ? ಇದೂ ಸಹ ಯಾರಿಗೂ ಗೊತ್ತಿಲ್ಲ. ಇಷ್ಟಂತೂ ಹೇಳುತ್ತಾರೆ
- ಇದು ಕಲಿಯುಗವಾಗಿದೆ, ಸತ್ಯಯುಗವಿತ್ತು ಈಗಿಲ್ಲ. ಪುನರ್ಜನ್ಮವನ್ನು ನಂಬುತ್ತಾರೆ, 84 ಲಕ್ಷ
ಜನ್ಮಗಳೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಪುನರ್ಜನ್ಮವಾಯಿತಲ್ಲವೆ. ನಿರಾಕಾರ ತಂದೆಯನ್ನು
ಎಲ್ಲರೂ ನೆನಪು ಮಾಡುತ್ತಾರೆ, ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಅವರೇ ಬಂದು ತಿಳಿಸುತ್ತಾರೆ.
ದೇಹಧಾರಿ ತಂದೆಯಂತೂ ಅನೇಕರಿದ್ದಾರೆ, ಪ್ರಾಣಿಗಳೂ ಸಹ ತನ್ನ ಮರಿಗಳಿಗೆ ತಂದೆಯಾಗಿದೆ. ಪ್ರಾಣಿಗಳ
ತಂದೆ ಎಂದು ಅವುಗಳಿಗೆ ಹೇಳುವುದಿಲ್ಲ. ಸತ್ಯಯುಗದಲ್ಲಿ ಯಾವುದೇ ಕೊಳಕು ವಸ್ತುಗಳಿರುವುದಿಲ್ಲ.
ಎಂತಹ ಮನುಷ್ಯರೋ ಅಂತಹ ಉಪಕರಣಗಳಿರುತ್ತವೆ. ಅಲ್ಲಿ ಪಕ್ಷಿಗಳೂ ಸಹ ಬಹಳ ಸುಂದರವಾಗಿರುತ್ತವೆ.
ಎಲ್ಲವೂ ಒಳ್ಳೊಳ್ಳೆಯ ವಸ್ತುಗಳಿರುತ್ತವೆ, ಅಲ್ಲಿ ಫಲವು ಬಹಳ ಸಿಹಿಯಾಗಿರುತ್ತದೆ. ನಂತರ ಅವೆಲ್ಲವೂ
ಎಲ್ಲಿ ಹೊರಟು ಹೋಗುತ್ತದೆ. ಸಿಹಿಯಿದ್ದದ್ದು ಕಹಿಯು ಬಂದು ಬಿಡುತ್ತದೆ, ಕನಿಷ್ಟರಾಗಿ ಬಿಡುತ್ತಾರೆ.
ಆದ್ದರಿಂದ ವಸ್ತುಗಳೂ ಸಹ ಕೆಳಮಟ್ಟದ್ದಾಗಿ ಬಿಡುತ್ತದೆ. ವಸ್ತುಗಳೂ ಸಹ ಕೆಳಮಟ್ಟದ್ದಾಗಿ ಬಿಡುತ್ತದೆ.
ಸತ್ಯಯುಗವು ಸುಂದರವಾಗಿರುವುದರಿಂದ ಸುಂದರವಾಗಿರುವುದೇ ಸಿಗುತ್ತದೆ. ಕಲಿಯುಗದಲ್ಲಿ ಕಳಪೆಯ
ವಸ್ತುಗಳಾಗಿವೆ. ಎಲ್ಲಾ ವಸ್ತುಗಳು ಸತೋ, ರಜೋ, ತಮೋದಿಂದ ಪಾರಾಗುತ್ತವೆ. ಇಲ್ಲಂತೂ ಯಾವುದೇ ಮಜಾ
ಇಲ್ಲ. ಆತ್ಮವೂ ತಮೋಪ್ರಧಾನ ಆದ್ದರಿಂದ ಶರೀರವು ತಮೋಪ್ರಧಾನವಾಗಿದೆ. ಈಗ ನೀವು ಮಕ್ಕಳಿಗೆ
ಜ್ಞಾನವಿದೆ, ಅದೆಲ್ಲಿ, ಇದೆಲ್ಲಿ! ರಾತ್ರಿ-ಹಗಲಿನ ಅಂತರವಿದೆ. ತಂದೆಯು ನಿಮ್ಮನ್ನು ಎಷ್ಟು
ಶ್ರೇಷ್ಠರನ್ನಾಗಿ ಮಾಡುತ್ತಾರೆ. ಎಷ್ಟು ನೆನಪು ಮಾಡುವಿರೋ ಅಷ್ಟು ಆರೋಗ್ಯ-ಐಶ್ವರ್ಯ ಸಿಕ್ಕಿ
ಬಿಡುತ್ತದೆ ಮತ್ತೆ ಇನ್ನೇನು ಬೇಕು? ಎರಡೂ ವಸ್ತುಗಳಲ್ಲಿ ಯಾವುದಾದರೂ ಬಂದಿಲ್ಲದಿದ್ದರೂ ಸಹ
ಸಂತೋಷವಿರುವುದಿಲ್ಲ. ತಿಳಿದುಕೊಳ್ಳಿ - ಆರೋಗ್ಯವಿದೆ, ಆದರೆ ಐಶ್ವರ್ಯವಿಲ್ಲವೆಂದರೆ ಏನು ಪ್ರಯೋಜನ?
ಹಾಡುತ್ತಾರೆ - ಹಣವಿದ್ದರೆ ಮಜಾ ಮಾಡಿಕೊಂಡು ಬನ್ನಿ, ಮಕ್ಕಳು ತಿಳಿಯುತ್ತೀರಿ - ಭಾರತವು ಚಿನ್ನದ
ಪಕ್ಷಿಯಾಗಿತ್ತು, ಈಗ ಚಿನ್ನವೆಲ್ಲಿದೆ? ಚಿನ್ನ, ಬೆಳ್ಳಿ ತಾಮ್ರವೂ ಹೋಯಿತು, ಈಗಂತೂ ಕಾಗದವೇ
ಕಾಗದವಿದೆ. ಕಾಗದವು ನೀರಿನಲ್ಲಿ ತೋಯ್ದು ಹೋದರೆ ಹಣವೆಲ್ಲಿಂದ ಸಿಗುತ್ತದೆ. ಚಿನ್ನವಂತೂ ಬಹಳ
ಭಾರವಾಗಿರುತ್ತದೆ, ಅದು ಅಲ್ಲಿಯೇ ಬಿದ್ದಿರುತ್ತದೆ. ಬೆಂಕಿಯೂ ಸಹ ಚಿನ್ನವನ್ನು ಸುಡಲು
ಸಾಧ್ಯವಿಲ್ಲ ಅಂದಾಗ ಇಲ್ಲಿ ಎಲ್ಲವೂ ದುಃಖದ ಮಾತುಗಳಾಗಿವೆ. ಸತ್ಯಯುಗದಲ್ಲಿ ಇವೆಲ್ಲಾ
ಮಾತುಗಳಿರುವುದಿಲ್ಲ. ಈ ಸಮಯದಲ್ಲಿ ನಿಮಗೆ ಅಪಾರ ದುಃಖವಿದೆ, ಯಾವಾಗ ಅಪಾರ ದುಃಖವಿರುವುದೋ ಆಗಲೇ
ತಂದೆಯು ಬರುತ್ತಾರೆ. ಮತ್ತೆ ನಾಳೆ ಅಪಾರ ಸುಖವಿರುತ್ತದೆ. ತಂದೆಯಂತೂ ಕಲ್ಪ-ಕಲ್ಪವೂ ಬಂದು
ಓದಿಸುತ್ತಾರೆ. ಇದೇನು ಹೊಸ ಮಾತಲ್ಲ, ಖುಷಿಯಲ್ಲಿರಬೇಕು, ಖುಷಿಯೇ ಖುಷಿ ಇದು ಅಂತ್ಯದ ಮಾತಾಗಿದೆ.
ಅತೀಂದ್ರಿಯ ಸುಖವನ್ನು ಗೋಪ-ಗೋಪಿಕೆಯರೊಂದಿಗೆ ಕೇಳಿ, ಅಂತಿಮದಲ್ಲಿ ನೀವು ಬಹಳ ಚೆನ್ನಾಗಿ ಅರ್ಥ
ಮಾಡಿಕೊಳ್ಳುತ್ತೀರಿ. ಸತ್ಯ ಶಾಂತಿಯೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು ತಂದೆಯೇ
ತಿಳಿಸುತ್ತಾರೆ. ನೀವು ತಂದೆಯಿಂದ ಶಾಂತಿಯ ಆಸ್ತಿಯನ್ನು ಪಡೆಯುತ್ತೀರಿ. ಅವರನ್ನು ಎಲ್ಲರೂ ನೆನಪು
ಮಾಡುತ್ತಾರೆ. ತಂದೆಯು ಶಾಂತಿಯ ಸಾಗರನಾಗಿದ್ದಾರೆ, ತಿಳಿಸುತ್ತಾರೆ- ನನ್ನ ಬಳಿ ಯಾರು ಬರಲು ಸಾಧ್ಯ
ಎಂದು. ಇಂತಿಂತಹ ಧರ್ಮದವರು ಇಂತಿಂತಹ ಸಮಯದಲ್ಲಿ ಬರುತ್ತಾರೆ, ಸ್ವರ್ಗದಲ್ಲಂತೂ ಬರಲು ಸಾಧ್ಯವಿಲ್ಲ.
ಈಗ ಸಾಧು-ಸಂತರು ಅನೇಕರಾಗಿ ಬಿಟ್ಟಿದ್ದಾರೆ, ಆದ್ದರಿಂದ ಅವರ ಮಹಿಮೆಯಾಗುತ್ತದೆ.
ಪವಿತ್ರರಾಗಿದ್ದಾರೆಂದಮೇಲೆ ಅವಶ್ಯವಾಗಿ ಅವರ ಮಹಿಮೆಯೂ ಆಗಬೇಕು. ಈಗ ಮೇಲಿನಿಂದ ಹೊಸದಾಗಿ
ಬಂದಿದ್ದಾರೆ, ಹೊಸದಾಗಿ ಇಳಿದಿದ್ದಾರೆ. ಹಳಬರದು ಇಷ್ಟು ಮಹಿಮೆಯಾಗುವುದಿಲ್ಲ, ಅವರಂತೂ ಸುಖವನ್ನು
ಭೋಗಿಸಿ ತಮೋಪ್ರಧಾನತೆಯಲ್ಲಿ ಹೊರಟು ಹೋಗಿದ್ದಾರೆ. ಅನೇಕ ಗುರುಗಳು ಭಿನ್ನ-ಭಿನ್ನ ಪ್ರಕಾರದವರು
ಬರುತ್ತಾ ಹೋಗುತ್ತಾರೆ. ಈ ಬೇಹದ್ದಿನ ವೃಕ್ಷವನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು
ತಿಳಿಸುತ್ತಾರೆ - ಎಷ್ಟು ವೃಕ್ಷವು ಹರಡುತ್ತದೆಯೋ ಅಷ್ಟು ಭಕ್ತಿಯ ಸಾಮಗ್ರಿಯಿದೆ. ಜ್ಞಾನ ಬೀಜವು
ಎಷ್ಟು ಚಿಕ್ಕದಾಗಿದೆ. ಭಕ್ತಿಗೆ ಅರ್ಧಕಲ್ಪ ಹಿಡಿಸುತ್ತದೆ. ಈ ಜ್ಞಾನವಂತೂ ಕೇವಲ ಈ ಒಂದು
ಜನ್ಮಕ್ಕಾಗಿ ಜ್ಞಾನವನ್ನು ಪ್ರಾಪ್ತಿ ಮಾಡಿಕೊಂಡು ನೀವು ಅರ್ಧಕಲ್ಪಕ್ಕಾಗಿ ಮಾಲೀಕರಾಗಿ ಬಿಡುತ್ತೀರಿ.
ಭಕ್ತಿಯು ನಿಂತು ಹೋಗುತ್ತದೆ, ದಿನವು ಆರಂಭವಾಗುತ್ತದೆ. ಈಗ ನೀವು ಸದಾಕಾಲಕ್ಕಾಗಿ
ಹರ್ಷಿತರಾಗುತ್ತೀರಿ. ಇದಕ್ಕೆ ಈಶ್ವರನ ಅವಿನಾಶಿ ಲಾಟರಿಯೆಂದು ಹೇಳಲಾಗುತ್ತದೆ. ಅದಕ್ಕಾಗಿ
ಪುರುಷಾರ್ಥ ಮಾಡಬೇಕಾಗುತ್ತದೆ. ಈಶ್ವರೀಯ ಲಾಟರಿ ಮತ್ತು ಆಸುರೀ ಲಾಟರಿಯಲ್ಲಿ ಎಷ್ಟೊಂದು
ಅಂತರವಿರುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನಿಮ್ಮ
ನೆನಪಿನ ಪ್ರತೀ ಹೆಜ್ಜೆಯಲ್ಲಿ ಪದುಮಗಳಿವೆ ಇದರಿಂದಲೇ ಅಮರ ಪದವಿಯನ್ನು ಪಾಪ್ತಿ
ಮಾಡಿಕೊಳ್ಳಬೇಕಾಗಿದೆ. ತಂದೆಯಿಂದ ಯಾವ ಅವಿನಾಶಿ ಜ್ಞಾನರತ್ನಗಳು ಸಿಗುತ್ತವೆಯೋ ಅವುಗಳ ದಾನ
ಮಾಡಬೇಕಾಗಿದೆ.
2. ಆತ್ಮಾಭಿಮಾನಿಯಾಗಿ ಅಪಾರ ಖುಷಿಯ ಅನುಭವ ಮಾಡಬೇಕಾಗಿದೆ. ಶರೀರದಿಂದ ಮೋಹವನ್ನು ತೆಗೆದು ಸದಾ
ಹರ್ಷಿತರಾಗಿರಬೇಕು, ಮೋಹಜೀತರಾಗಬೇಕು.
ವರದಾನ:
ಸೇವೆ ಮತ್ತು
ಸ್ವ ಪುರುಷಾರ್ಥದ ಬ್ಯಾಲೆನ್ಸ್ ನಿಂದ ಬ್ಲೆಸ್ಸಿಂಗ್ ಪ್ರಾಪ್ತಿ ಮಾಡಿಕೊಳ್ಳುವಂತಹ ಕರ್ಮಯೋಗಿ ಭವ.
ಕರ್ಮಯೋಗಿ ಅರ್ಥಾತ್
ಕರ್ಮದ ಸಮಯದಲ್ಲಿಯೂ ಸಹಾ ಯೋಗದ ಬ್ಯಾಲೆನ್ಸ್ ಇಟ್ಟಿರುವವರು. ಸೇವೆ ಅರ್ಥಾತ್ ಕರ್ಮ ಸ್ವ
ಪುರುಷಾರ್ಥ ಅರ್ಥಾತ್ ಯೋಗಯುಕ್ತ - ಈ ಎರಡರ ಬ್ಯಾಲೆನ್ಸ್ ಇಡಬೇಕಾದರೆ ಒಂದೇ ಶಬ್ಧ ನೆನಪಿನಲ್ಲಿಡಿ.
ತಂದೆ ಮಾಡಿಸುವಂತಹವರಾಗಿದ್ದಾರೆ ಮತ್ತು ನಾನು ಆತ್ಮ ಮಾಡುವಂತಹವನಾಗಿದ್ದೇನೆ. ಈ ಒಂದು ಶಬ್ಧ
ಸಹಜವಾಗಿ ಬ್ಯಾಲೆನ್ಸ್ ಮಾಡಿಸುತ್ತೆ ಮತ್ತು ಸರ್ವರಿಂದ ಬ್ಲೆಸ್ಸಿಂಗ್ಸ್ ಸಿಗುತ್ತಿರುವುದು. ಯಾವಾಗ
ಮಾಡುವಂತಹವನು ಎಂದು ತಿಳಿಯುವ ಬದಲು ತಮ್ಮನ್ನು ಮಾಡಿಸುವಂತಹವನು ಎಂದು ತಿಳಿದಿದ್ದೇ ಆದರೆ
ಬ್ಯಾಲೆನ್ಸ್ ಇರುವುದಿಲ್ಲ ಮತ್ತು ಮಾಯೆ ತನ್ನ ಚಾನ್ಸ್ ತೆಗೆದುಕೊಳ್ಳುತ್ತದೆ.
ಸ್ಲೋಗನ್:
ದೃಷ್ಠಿಯಿಂದ
ಪ್ರಸನ್ನ ಮಾಡುವಂತಹ ಸೇವೆ ಮಾಡಬೇಕಾದರೆ ಬಾಪ್ದಾದಾರವರನ್ನು ತಮ್ಮ ದೃಷ್ಠಿಯಲ್ಲಿ
ಸಮಾವೇಶಮಾಡಿಕೊಂಡುಬಿಡಿ.