14.08.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ತಂದೆಯನ್ನು ಎಷ್ಟು ನೆನಪು ಮಾಡುತ್ತೀರೊ ಅಷ್ಟು ಆತ್ಮನಲ್ಲಿ ಪ್ರಕಾಶ ಬರುತ್ತದೆ, ಜ್ಞಾನವಂತ ಆತ್ಮರು ಕಾಂತಿಯುಳ್ಳವರಾಗಿರುತ್ತಾರೆ”

ಪ್ರಶ್ನೆ:
ಮಾಯೆಯು ಎಂತಹ ಮಕ್ಕಳಿಗೆ ಸ್ವಲ್ಪವೂ ತೊಂದರೆ ಕೊಡುವುದಿಲ್ಲ?

ಉತ್ತರ:
ಯಾರು ಪಕ್ಕಾ ಯೋಗಿಗಳಾಗಿರುತ್ತಾರೆ, ಯೋಗಬಲದಿಂದ ತಮ್ಮ ಸರ್ವ ಕರ್ಮೇಂದ್ರಿಯಗಳನ್ನು ಶೀತಲ ಮಾಡಿಕೊಂಡಿರುತ್ತಾರೆ, ಯೋಗದಲ್ಲಿರುವ ಪರಿಶ್ರಮ ಪಡುತ್ತಾರೆ ಅವರಿಗೆ ಮಾಯೆ ಸ್ವಲ್ಪವೂ ತೊಂದರೆ ಕೊಡುವುದಿಲ್ಲ. ಯಾವಾಗ ನೀವು ಪಕ್ಕಾ ಯೋಗಿಗಳಾಗುತ್ತೀರಿ ಆಗ ಯೋಗ್ಯರಾಗುತ್ತೀರಿ. ಯೋಗ್ಯರಾಗಲು ಮೊದಲನೇಯದು ಪವಿತ್ರತೆಯಾಗಿದೆ.

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳಿಗೆ ತಂದೆ ಕುಳಿತು ತಿಳಿಸಿಕೊಡುತ್ತಾರೆ. ಅಜ್ಞಾನದ ಕಾರಣ ನಿಮ್ಮ ಆತ್ಮವು ಕಳೆಗುಂದಿದೆ. ವಜ್ರದಲ್ಲಿ ಹೊಳಪಿರುತ್ತದೆಯಲ್ಲವೆ, ಕಲ್ಲಿನಲ್ಲಿ ಹೊಳಪಿರುವುದಿಲ್ಲ. ಕಲ್ಲಿನ ತರಹ ಕಳೆಗುಂದಿದೆ ಎಂದು ಹೇಳಲಾಗುತ್ತದೆ, ನಂತರ ಜಾಗೃತರಾದಾಗ ಇವರು ಪಾರಸಮಣಿಯೆಂದು ಹೇಳಲಾಗುತ್ತದೆ. ಈಗ ಅಜ್ಞಾನದ ಕಾರಣ ಆತ್ಮ ಜ್ಯೋತಿಯು ಕಳೆಗುಂದಿದೆ. ಪೂರ್ಣ ಕಪ್ಪಾಗುವುದಿಲ್ಲ. ಆಫ್ರಿಕಾದ ಕಡೆ ಎಷ್ಟು ಕಪ್ಪಾಗಿರುತ್ತಾರೆ, ಶರೀರದ ರಚನೆಯಂತೂ ಅನೇಕ ಪ್ರಕಾರದಾಗಿರುತ್ತದೆ ಆದರೆ ಆತ್ಮವಂತೂ ಒಂದೇ ಆಗಿದೆ. ನಾವು ಆತ್ಮರಾಗಿದ್ದೇವೆ, ತಂದೆಯ ಮಕ್ಕಳಾಗಿದ್ದೇವೆ ಎಂದು ಈಗ ನೀವು ತಿಳಿಯುತ್ತೀರಿ. ಈ ಜ್ಞಾನ ಪೂರ್ಣವಾಗಿತ್ತು, ನಂತರ ನಿಧಾನ ನಿಧಾನವಾಗಿ ಹೊರಟು ಹೋಯಿತು, ಹೊರಟು ಹೋಗಿ ಕೊನೆಗೆ ಏನೂ ಇಲ್ಲದಿರುವಾಗ ಅದಕ್ಕೆ ಅಜ್ಞಾನವೆಂದು ಹೇಳುತ್ತಾರೆ. ನೀವು ಅಜ್ಞಾನಿಗಳಾಗಿದ್ದಿರಿ, ಈಗ ಜ್ಞಾನಸಾಗರನಿಂದ ಜ್ಞಾನಿಗಳಾಗುತ್ತೀರಿ. ಆತ್ಮವಂತೂ ಬಹಳ ಸೂಕ್ಷ್ಮವಾಗಿದೆ. ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ತಂದೆಯು ಬಂದು ತಿಳಿಸಿಕೊಡುತ್ತಾರೆ, ಮಕ್ಕಳನ್ನು ಜ್ಞಾನಪೂರ್ಣರನ್ನಾಗಿ ಮಾಡುತ್ತಾರೆ. ಆಗ ಜಾಗೃತರಾಗುತ್ತೀರಿ. ಮನೆ ಮನೆಯಲ್ಲಿ ಬೆಳಕಾಗುತ್ತದೆ. ಈಗ ಮನೆ ಮನೆಯಲ್ಲಿ ಅಂಧಕಾರವಿದೆ. ಅರ್ಥಾತ್ ಆತ್ಮವು ಕಾಂತಿಯಿಲ್ಲದಂತಾಗಿದೆ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ಹೊಳಪು ಬರುತ್ತದೆ. ಪುನಃ ನೀವು ಜ್ಞಾನವಂತರಾಗುತ್ತೀರಿ. ತಂದೆಯು ಯಾರ ನಿಂದನೆಯನ್ನು ಮಾಡುವುದಿಲ್ಲ. ಈ ನಾಟಕದ ರಹಸ್ಯವನ್ನು ತಿಳಿಸುತ್ತಾರೆ. ಮಕ್ಕಳಿಗೆ ಹೇಳಿದ್ದಾರಲ್ಲವೆ - ಇವರಂತೂ ಎಲ್ಲರೂ ಮೂಢಮತಿಗಳಾಗಿದ್ದಾರೆ. ಯಾರು ಹೇಳುತ್ತಾರೆ? ತಂದೆ. ಮಕ್ಕಳೇ, ನಿಮ್ಮ ಬುದ್ಧಿಯು ಶ್ರೀಮತನುಸಾರ ಎಷ್ಟು ಸುಂದರವಾಗಿತ್ತು, ಈಗ ನೀವು ಅದನ್ನು ಅನುಭವ ಮಾಡುತ್ತೀರಲ್ಲವೆ. ನಿಮಗೆ ಜ್ಞಾನವು ಸಿಕ್ಕಿದೆ, ಜ್ಞಾನಕ್ಕೆ ವಿದ್ಯೆ ಎಂದು ಹೇಳುತ್ತಾರೆ. ತಂದೆಯ ವಿದ್ಯೆಯಿಂದ ನಮ್ಮ ಜ್ಯೋತಿಯು ಜಾಗೃತವಾಗುತ್ತದೆ. ಇದಕ್ಕೆ ಸತ್ಯ ಸತ್ಯವಾದ ದೀಪಾವಳಿಯೆಂದು ಹೇಳುತ್ತಾರೆ. ಬಾಲ್ಯದಲ್ಲಿ ಮಣ್ಣಿನ ಹಣತೆಯಲ್ಲಿ ಎಣ್ಣೆ ಹಾಕಿ ಜ್ಯೋತಿ ಬೆಳಗಿಸುತ್ತಿದ್ದಿರಿ. ಆ ಪದ್ಧತಿಯು ನಡೆಯುತ್ತಿರುತ್ತದೆ. ಅದರಿಂದೇನು ದೀಪಾವಳಿಯಾಗುವುದಿಲ್ಲ. ಇದಂತೂ ಒಳಗಿರುವ ಆತ್ಮವು ಕಾಂತಿಹೀನವಾಗಿದೆ ಮತ್ತೆ ತಂದೆ ಬಂದು ಜ್ಯೋತಿಯನ್ನು ಬೆಳಗಿಸಿದ್ದಾರೆ. ಬಂದು ಮಕ್ಕಳಿಗೆ ಜ್ಞಾನ ಕೊಡುತ್ತಾರೆ, ಓದಿಸುತ್ತಾರೆ. ಶಾಲೆಯಲ್ಲಿ ಶಿಕ್ಷಕರು ಓದಿಸುತ್ತಾರಲ್ಲವೆ. ಅದು ಸೀಮಿತ ಜ್ಞಾನವಾಗಿದೆ, ಇದು ಬೇಹದ್ದಿನ ಜ್ಞಾನವಾಗಿದೆ. ಯಾವುದೇ ಸಾಧು ಸಂತರು ಓದಿಸುತ್ತಾರೇನು? ರಚಯಿತ ಮತ್ತು ರಚನೆಯ ಆದಿ, ಮಧ್ಯ, ಅಂತ್ಯದ ಜ್ಞಾನವನ್ನು ಎಂದಾದರೂ ಕೇಳಿದ್ದೀರಾ? ಎಂದಾದರೂ ಯಾರಾದರೂ ಬಂದು ಓದಿಸಿದ್ದರೆ? ಹೋಗಿ ನೋಡಿ, ಎಲ್ಲಿಯಾದರೂ ಈ ಜ್ಞಾನವನ್ನು ಓದಿಸುತ್ತಾರೆಯೇ? ಕೇವಲ ಒಬ್ಬ ತಂದೆ ಮಾತ್ರ ಓದಿಸುತ್ತಾರೆ. ಆದ್ದರಿಂದ ಅವರ ಬಳಿ ಓದಬೇಕು. ತಂದೆಯು ಅನಾಯಾಸವಾಗಿಯೇ ಬರುತ್ತಾರೆ. ನಾನು ಬರುತ್ತಿದ್ದೇನೆಂದು ಡಂಗುರವನ್ನು ಹೊಡಿಸುತ್ತಾರೇನು! ಅನಾಯಾಸವಾಗಿಯೇ ಬಂದು ಪ್ರವೇಶ ಮಾಡುತ್ತಾರೆ. ಎಲ್ಲಿಯವರೆಗೆ ಕರ್ಮೇಂದ್ರಿಯಗಳು ಸಿಗುವುದಿಲ್ಲವೋ ಅಲ್ಲಿಯವರೆಗೆ ಮಾತನಾಡಲು ಸಾಧ್ಯವಿಲ್ಲ. ಆತ್ಮವು ಕರ್ಮೇಂದ್ರಿಯಗಳಿಲ್ಲದೇ ಮಾತನಾಡಲು ಸಾಧ್ಯವಿಲ್ಲ. ಶರೀರದಲ್ಲಿ ಬಂದಾಗ ಶಬ್ದ ಬರುತ್ತದೆ. ನೀವು ತಿಳಿಸಿದರೆ ಯಾರೂ ಒಪ್ಪುವುದಿಲ್ಲ ಮಕ್ಕಳಿಗೆ ಜ್ಞಾನ ಕೊಟ್ಟಾಗ ತಿಳಿದುಕೊಳ್ಳುತ್ತಾರೆ. ಈ ಜ್ಞಾನವನ್ನು ಒಬ್ಬ ತಂದೆಯ ವಿನಃ ಬೇರೆ ಯಾರೂ ಕೊಡಲು ಸಾಧ್ಯವಿಲ್ಲ. ವಿನಾಶದ ಸಾಕ್ಷಾತ್ಕಾರವನ್ನೂ ಸಹ ಯಾರೂ ಬಯಸುವುದಿಲ್ಲ. ಇದನ್ನು ತಂದೆಯೇ ಬಂದು ಸಾಕ್ಷಾತ್ಕಾರ ಮಾಡಿಸುತ್ತಾರೆ. ನಾಟಕದನುಸಾರ ಈಗ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ. ಯಾರು ತಂದೆಯಿಂದ ಜ್ಞಾನ ತೆಗೆದುಕೊಳ್ಳಬೇಕಾಗಿದೆಯೋ ಅವರು ಬರುತ್ತಿರುತ್ತಾರೆ. ಎಷ್ಟು ಜನರಿಗೆ ಜ್ಞಾನವನ್ನು ಕೊಟ್ಟಿರಬಹುದು? ಲೆಕ್ಕವಿಲ್ಲದಷ್ಟು ಹಳ್ಳಿ ಹಳ್ಳಿಗಳಿಂದ ಅನೇಕರು ಬರುತ್ತಾರೆ. ಈ ಆತ್ಮರ ಮತ್ತು ಪರಮಾತ್ಮನ ಮೇಳವು ಒಂದೇ ಬಾರಿ ನಡೆಯುತ್ತದೆ. ಸಂಗಮಯುಗದಲ್ಲಿಯೇ ಬರುತ್ತಾರೆ. ತಂದೆಯು ಬಂದು ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಾರೆ. ಯಾರು ತಮ್ಮ ಜ್ಯೋತಿಯನ್ನು ಬೆಳಗಿಸಿಕೊಂಡಿರುತ್ತಾರೆ ಅವರೇ ಹೋಗಿ ಅನ್ಯರ ಜ್ಯೋತಿಯನ್ನು ಬೆಳಗಿಸುತ್ತಾರೆ. ಈಗ ಹಿಂತಿರುಗಿ ಹೋಗಬೇಕಾಗಿದೆ. ಇದರಲ್ಲಿ ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗುತ್ತದೆ. ಭಕ್ತಿಮಾರ್ಗದಲ್ಲಿ ಅಂಧಕಾರವಿದೆ, ಜ್ಞಾನ ಕೊಡುವವರು ಒಬ್ಬ ತಂದೆ ಮಾತ್ರ ಆಗಿದ್ದಾರೆ. ಅವರು ಬರುವುದೇ ಸಂಗಮಯುಗದಲ್ಲಿ, ಹಳೆಯ ಪ್ರಪಂಚದಲ್ಲಿ ಜ್ಞಾನ ಸಿಗಲು ಸಾಧ್ಯವಿಲ್ಲ. ಇನ್ನೂ 40 ಸಾವಿರ ವರ್ಷಗಳಿವೆ ಎಂದು ಮನುಷ್ಯರ ಬುದ್ಧಿಯಲ್ಲಿದೆ. ಆದ್ದರಿಂದ ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. 40 ಸಾವಿರ ವರ್ಷಗಳ ನಂತರ ಭಗವಂತ ಬರುತ್ತಾನೆಂದು ಅವಶ್ಯವಾಗಿ ಜ್ಞಾನ ಕೊಟ್ಟು ಸದ್ಗತಿ ಮಾಡುವನೆಂದು ತಿಳಿದುಕೊಂಡಿದ್ದಾರೆ. ಇದು ಅಜ್ಞಾನವಾಯಿತಲ್ಲವೆ. ಇದಕ್ಕೆ ಅಜ್ಞಾನ ಅಂಧಕಾರವೆಂದು ಹೇಳುತ್ತಾರೆ. ಅಜ್ಞಾನಿಗಳಿಗೆ ಜ್ಞಾನವು ಬೇಕು, ಭಕ್ತಿಗೆ ಜ್ಞಾನವೆಂದು ಹೇಳಲಾಗುವುದಿಲ್ಲ. ಒಂದು ಕಡೆ ಜ್ಞಾನ ಸೂರ್ಯ ಬಂದಾಗ ಪ್ರಕಾಶವಾಗುತ್ತದೆ ಎಂದು ಹೇಳುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಜ್ಞಾನಸೂರ್ಯ ಪ್ರಕಟವಾದಾಗ ಅಜ್ಞಾನ ಅಂಧಕಾರ ವಿನಾಶ.... ಜ್ಞಾನ ಸೂರ್ಯನೆಂದು ಯಾರಿಗೆ ಹೇಳುತ್ತಾರೆ? ಯಾವಾಗ ಬಂದರೆಂದು ಯಾರಿಗೂ ಗೊತ್ತಿಲ್ಲ. ಪಂಡಿತರು ಯಾರಾದರೂ ಇದ್ದರೆ ಯಾವಾಗ ಕಲಿಯುಗವು ಪೂರ್ಣವಾಗುವುದೋ ಆಗ ಬೆಳಕಾಗುವುದು ಎಂದು ಹೇಳುತ್ತಾರೆ. ಇವೆಲ್ಲ ಮಾತುಗಳನ್ನು ತಂದೆಯು ಬಂದು ತಿಳಿಸಿಕೊಡುತ್ತಾರೆ. ಮಕ್ಕಳೇ, ನಂಬರ್ವಾರ್ ತಿಳಿಯುತ್ತಾರೆ. ಶಿಕ್ಷಕರು ಮಕ್ಕಳಿಗೆ ಓದಿಸುತ್ತಾರೆ, ಆದರೆ ಮಕ್ಕಳು ಏಕರಸವಾಗಿ ಓದುವುದಿಲ್ಲ. ವಿದ್ಯೆಯಲ್ಲಿ ಏಕರಸವಾದ ಅಂಕಗಳು ಎಂದೂ ಇರುವುದಿಲ್ಲ.

ನಿಮಗೆ ಗೊತ್ತಿದೆ, ಬೇಹದ್ದಿನ ತಂದೆಯು ಬಂದಿದ್ದಾರೆ, ಈಗ ಹಳೆಯ ಪ್ರಪಂಚದ ವಿನಾಶವು ಸನ್ಮುಖದಲ್ಲಿ ನಿಂತಿದೆ. ಈಗಲೇ ತಂದೆಯಿಂದ ಜ್ಞಾನವನ್ನು ತೆಗೆದುಕೊಳ್ಳಬೇಕು, ಯೋಗವನ್ನು ಕಲಿಯಬೇಕಾಗಿದೆ. ಯೋಗದಿಂದಲೇ ವಿಕರ್ಮವು ವಿನಾಶವಾಗುತ್ತವೆ. ತಂದೆಯು ತಿಳಿಸುತ್ತಾರೆ - ಈ ಸಂಗಮಯುಗದಲ್ಲಿಯೇ ಬಂದು ನಾನು ಈ ಶರೀರವನ್ನು ಸಾಲ ತೆಗೆದುಕೊಳ್ಳುತ್ತೇನೆ ಅರ್ಥಾತ್ ಪ್ರಕೃತಿಯ ಆಧಾರ ಪಡೆಯುತ್ತೇನೆ. ಗೀತೆಯಲ್ಲಿ ಈ ಶಬ್ದವಿದೆ ಬೇರೆ ಯಾವ ಶಾಸ್ತ್ರದ ಹೆಸರನ್ನು ತಂದೆಯು ತೆಗೆದುಕೊಳ್ಳುವುದಿಲ್ಲ. ಒಂದೇ ಗೀತೆಯಾಗಿದೆ. ಇದು ರಾಜಯೋಗದ ವಿದ್ಯೆಯಾಗಿದೆ. ಗೀತೆಯೆಂದು ಹೆಸರಿಟ್ಟಿದ್ದಾರೆ, ಇದರಲ್ಲಿ ಮೊಟ್ಟ ಮೊದಲು ಭಗವಾನುವಾಚವೆಂದು ಬರೆದಿದ್ದಾರೆ. ಈಗ ಭಗವಂತನೆಂದು ಯಾರಿಗಾದರೂ ಹೇಳಲು ಸಾಧ್ಯವೇ? ಭಗವಂತ ನಿರಾಕಾರನಾಗಿದ್ದಾರೆ, ಅವರಿಗೆ ತಮ್ಮ ಶರೀರವಿಲ್ಲ. ಅದು ನಿರಾಕಾರಿ ಪ್ರಪಂಚವಾಗಿದೆ, ಅಲ್ಲಿ ಆತ್ಮಗಳಿರುತ್ತಾರೆ. ಸೂಕ್ಷ್ಮವತನಕ್ಕೆ ಪ್ರಪಂಚವೆಂದು ಹೇಳುವುದಿಲ್ಲ. ಇದು ಸ್ಥೂಲ ಸಾಕಾರಿ ಪ್ರಪಂಚವಾಗಿದೆ. ಅದು ಆತ್ಮಗಳ ಪ್ರಪಂಚವಾಗಿದೆ. ಆಟವೆಲ್ಲವು ಇಲ್ಲಿಯೇ ನಡೆಯುತ್ತದೆ. ನಿರಾಕಾರಿ ಆತ್ಮ ಎಷ್ಟು ಸೂಕ್ಷ್ಮವಾಗಿದೆ. ನಂತರ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಈ ವಿಚಾರಗಳನ್ನು ನೀವು ಮಕ್ಕಳ ಬುದ್ಧಿಯಲ್ಲಿಯೇ ಕೂರಿಸಲಾಗುತ್ತದೆ. ಇದಕ್ಕೆ ಜ್ಞಾನವೆಂದು ಹೇಳುತ್ತಾರೆ. ವೇದ ಶಾಸ್ತ್ರಕ್ಕೆ ಭಕ್ತಿಯೆಂದು ಹೇಳುತ್ತಾರೆ, ಜ್ಞಾನವೆಂದಲ್ಲ. ಸಾಧು ಸನ್ಯಾಸಿಗಳ ಜೊತೆ ನಿಮ್ಮನ್ನು ಹೋಲಿಸಲಾಗುವುದಿಲ್ಲ. ಬಾಬಾರವರಿಗೆ ಸಾಧು ಸನ್ಯಾಸಿಗಳ ಸಂಗ ಬಹಳ ಇತ್ತು, ಅನೇಕ ಗುರುಗಳನ್ನು ಮಾಡಿಕೊಂಡಿದ್ದರು. ನೀವು ಸನ್ಯಾಸವೇಕೆ ಮಾಡಿದಿರಿ? ಮನೆ ಮಠವನ್ನು ಏಕೆ ಬಿಟ್ಟಿರಿ ಎಂದು ಕೇಳುತ್ತಿದ್ದರು, ಆಗ ವಿಕಾರದಿಂದ ಪದಭ್ರಷ್ಟವಾಗುತ್ತದೆ, ಅದಕ್ಕೆ ಬಿಟ್ಟೆನೆಂದು ಹೇಳಿದರು. ಕಾಡಿನಲ್ಲಿ ಹೋಗಿ ಇರುತ್ತೀರಿ, ಮನೆ ಮಠದ ನೆನಪು ಬರುತ್ತಿರಬಹುದಲ್ಲವೆ? ಹೌದು ಎಂದು ಹೇಳಿದರು. ಬಾಬಾ ಅವರು ನೋಡಿದ್ದಾರೆ, ಒಬ್ಬ ಸನ್ಯಾಸಿ ಮನೆಗೂ ಬಂದಿದ್ದರು. ಇದು ಶಾಸ್ತ್ರದಲ್ಲಿದೆ. ಯಾವಾಗ ವಯಸ್ಸಾಗುತ್ತದೆ ಆಗ ಮನುಷ್ಯರು ವಾನಪ್ರಸ್ಥಕ್ಕೆ ಹೋಗುತ್ತಾರೆ. ಚಿಕ್ಕ ವಯಸ್ಸಿನಲ್ಲಿ ವಾನಪ್ರಸ್ಥವನ್ನು ತೆಗೆದುಕೊಳ್ಳುವುದಿಲ್ಲ. ಕುಂಭ ಮೇಳದಲ್ಲಿ ಅನೇಕ ಚಿಕ್ಕ ಚಿಕ್ಕವರು ವಸ್ತ್ರಗಳಿಲ್ಲದೆ ಬರುತ್ತಾರೆ. ಔಷಧಿಯನ್ನು ತಿನ್ನಿಸುತ್ತಾರೆ. ಇದರಿಂದ ಕರ್ಮೇಂದ್ರಿಯಗಳು ತಣ್ಣಗಾಗುತ್ತವೆ. ನಿಮ್ಮದು ಯೋಗ ಬಲದಿಂದ ಕರ್ಮೇಂದ್ರಿಯಗಳನ್ನು ವಶಮಾಡಿಕೊಳ್ಳುವುದಾಗಿದೆ. ಯೋಗ ಬಲದಿಂದ ವಶವಾಗುತ್ತಾ ಆಗುತ್ತಾ ಕೊನೆಗೆ ತಣ್ಣಗಾಗಿ ಬಿಡುತ್ತವೆ. ಕೆಲವರು ಹೇಳುತ್ತಾರೆ - ಬಾಬಾ, ಮಾಯೆ ಬಹಳ ತೊಂದರೆ ಕೊಡುತ್ತದೆ. ಅಲ್ಲಿ ಈ ಮಾತು ಇರುವುದಿಲ್ಲ. ಯಾವಾಗ ನೀವು ಪಕ್ಕಾ ಯೋಗಿ ಆಗುತ್ತೀರಿ ಆಗ ಕರ್ಮೇಂದ್ರಿಯಗಳು ವಶವಾಗುತ್ತವೆ. ಕರ್ಮೇಂದ್ರಿಯಗಳು ಶಾಂತವಾಗುತ್ತವೆ. ಇದರಲ್ಲಿ ಬಹಳ ಪರಿಶ್ರಮವಿದೆ. ಸತ್ಯಯುಗದಲ್ಲಿ ಇಂತಹ ಛೀ ಛೀ ಕೆಲಸಗಳಾಗುವುದಿಲ್ಲ, ಅಂತಹ ಸ್ವರ್ಗಧಾಮಕ್ಕೆ ಕರೆದುಕೊಂಡು ಹೋಗಲು ತಂದೆ ಬಂದಿದ್ದಾರೆ. ನಿಮ್ಮನ್ನು ಯೋಗ್ಯರನ್ನಾಗಿ ಮಾಡುತ್ತಾರೆ. ಮಾಯೆ ನಿಮ್ಮನ್ನು ಅಯೋಗ್ಯರನ್ನಾಗಿ ಮಾಡಿದೆ ಅರ್ಥಾತ್ ಸ್ವರ್ಗ ಅಥವಾ ಜೀವನ್ಮುಕ್ತಿಧಾಮಕ್ಕೆ ಹೋಗಲು ಯೋಗ್ಯರಾಗಿಲ್ಲ. ಆದ್ದರಿಂದ ತಂದೆಯು ಯೋಗ್ಯರನ್ನಾಗಿ ಮಾಡುತ್ತಾರೆ, ಅದಕ್ಕಾಗಿ ಮೊದಲು ಪವಿತ್ರತೆ ಬೇಕು. ಬಾಬಾ ನಾವು ಪತಿತರಾಗಿದ್ದೇವೆ ಬಂದು ನಮ್ಮನ್ನು ಪಾವನ ಮಾಡಿ ಎಂದು ಹಾಡುತ್ತಾರೆ, ಪಾವನರೆಂದರೆ ಪವಿತ್ರರು. ಅಮೃತವನ್ನು ಬಿಟ್ಟು ವಿಷವನ್ನು ಏಕೆ ಕುಡಿಯಬೇಕು ಎನ್ನುವ ಗಾಯನವಿದೆ. ಅದರ ಹೆಸರು ವಿಷ ಎಂದೇ ಇದೆ, ಇದು ಆದಿ, ಮಧ್ಯ, ಅಂತ್ಯ ದುಃಖವನ್ನು ಕೊಡುತ್ತದೆ. ಇದೂ ಸಹ ನಾಟಕದಲ್ಲಿ ನಿಗದಿಯಾಗಿದೆ. ತಂದೆಯು ಎಷ್ಟೊಂದು ಬಾರಿ ಬಂದಿದ್ದಾರೆ. ಬಂದು ನೀವು ಮಕ್ಕಳೊಂದಿಗೆ ಮಿಲನ ಮಾಡಿದ್ದಾರೆ. ನಿಮ್ಮನ್ನು ಕನಿಷ್ಟರಿಂದ ಉತ್ತಮ ಪುರುಷರನ್ನಾಗಿ ಮಾಡುತ್ತಾರೆ. ಆತ್ಮವು ಪವಿತ್ರವಾದಾಗ ಆಯುಷ್ಯ ದೀರ್ಘವಾಗುತ್ತದೆ. ಆರೋಗ್ಯ, ಐಶ್ವರ್ಯ, ಸಂತೋಷ ಎಲ್ಲವೂ ಸಿಗುತ್ತದೆ. ಇದನ್ನು ನೀವು ಬೋರ್ಡಿನ ಮೇಲೆ ಬರೆಯಿರಿ - ಆರೋಗ್ಯ, ಐಶ್ವರ್ಯ, ಸಂತೋಷವನ್ನು 21 ಪೀಳಿಗೆಯವರೆಗೆ ಒಂದು ಕ್ಷಣದಲ್ಲಿ ಪಡೆಯಬಹುದಾಗಿದೆ. ತಂದೆಯಿಂದ 21 ಜನ್ಮಗಳಿಗಾಗಿ ಈ ಆಸ್ತಿಯು ಸಿಗುತ್ತದೆ. ಕೆಲವು ಮಕ್ಕಳು ಬೋರ್ಡ ಹಾಕಲು ಹೆದರುತ್ತಾರೆ. ಬೋರ್ಡ ಎಲ್ಲರ ಮನೆಯಲ್ಲಿ ಇರುತ್ತದೆ. ನೀವಂತೂ ಸರ್ಜನ್ನ ಮಕ್ಕಳಾಗಿದ್ದೀರಿ, ನಿಮಗೆ ಆರೋಗ್ಯ, ಐಶ್ವರ್ಯ, ಸಂತೋಷ ಎಲ್ಲವೂ ಸಿಗುತ್ತದೆ ಅಂದಮೇಲೆ ನೀವು ಅನ್ಯರಿಗೂ ಕೊಡಿ. ನೀವು ಕೊಡಲು ಸಾಧ್ಯವಿದೆ ಅಂದಮೇಲೆ ಬೋರ್ಡನಲ್ಲಿ ಏಕೆ ಬರೆಯುವುದಿಲ್ಲ! ಇದರಿಂದ ಮನುಷ್ಯರು ಬಂದು ತಿಳಿದುಕೊಳ್ಳಲಿ - ಭಾರತದಲ್ಲಿ 5000 ವರ್ಷಗಳ ಮೊದಲು ಆರೋಗ್ಯ, ಐಶ್ವರ್ಯ, ಪವಿತ್ರತೆ ಇತ್ತು. ಒಂದು ಸೆಕೆಂಡಿನಲ್ಲಿ ಬೇಹದ್ದಿನ ತಂದೆಯಿಂದ ಆಸ್ತಿಯು ಸಿಗುತ್ತದೆ, ನಿಮ್ಮ ಬಳಿ ಅನೇಕರು ಬರುತ್ತಾರೆ. ನೀವು ಕುಳಿತು ತಿಳಿಸಿಕೊಡಿ - ಇದೇ ಭಾರತವು ಚಿನ್ನದ ಪಕ್ಷಿಯಾಗಿತ್ತು, ಲಕ್ಷ್ಮೀ ನಾರಾಯಣರ ರಾಜ್ಯವಿತ್ತು. ಮತ್ತೆ ಅವರು ಎಲ್ಲಿಗೆ ಹೋದರು? 84 ಜನ್ಮಗಳನ್ನು ಮೊದಲು ಇವರೇ ತೆಗೆದುಕೊಳ್ಳುತ್ತಾರೆ. ಇವರು ನಂಬರ್ವನ್ ಆಗಿದ್ದಾರಲ್ಲವೇ, ಪುನಃ ಇವರೇ ಕೊನೆಯಲ್ಲಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ಈಗ ನಿಮ್ಮ 84 ಜನ್ಮಗಳ ಚಕ್ರವು ಮುಕ್ತಾಯವಾಯಿತು, ಪುನಃ ಪ್ರಾರಂಭವಾಗುತ್ತದೆ. ಬೇಹದ್ದಿನ ತಂದೆಯೇ ಈ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ. ಕೇವಲ ತಿಳಿಸುತ್ತಾರೆ - ಮಕ್ಕಳೇ, ನೀವು ನನ್ನನ್ನು ನೆನಪು ಮಾಡಿ ಆಗ ಪಾವನರಾಗುತ್ತೀರಿ. 84 ಜನ್ಮಗಳನ್ನು ಅರಿತುಕೊಂಡು ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಆದರೆ ವಿದ್ಯೆಯಂತೂ ಬೇಕಲ್ಲವೆ.

ನಿಮಗೆ ಸ್ವದರ್ಶನ ಚಕ್ರಧಾರಿಗಳೆಂದು ಹೇಳುತ್ತಾರೆ. ಹೊಸಬರಂತೂ ತಿಳಿದುಕೊಳ್ಳಲು ಆಗುವುದಿಲ್ಲ. ನಿಮಗೆ ಗೊತ್ತಿದೆ, ಆತ್ಮಕ್ಕೆ ಸ್ವ ಎಂದು ಹೇಳುತ್ತಾರೆ. ನಾವು ಆತ್ಮರು ಪವಿತ್ರವಾಗಿದ್ದೆವು. ಪ್ರಾರಂಭದಿಂದ 84 ಜನ್ಮಗಳ ಚಕ್ರವನ್ನು ಸುತ್ತಿದೆವು. ಇದನ್ನೂ ಸಹ ತಂದೆಯು ತಿಳಿಸುತ್ತಾರೆ - ನೀವೇ ಮೊಟ್ಟ ಮೊದಲು ಶಿವನ ಭಕ್ತಿಯನ್ನು ಪ್ರಾರಂಭ ಮಾಡಿದಿರಿ. ನೀವಂತೂ ಅವ್ಯಭಿಚಾರಿ ಭಕ್ತರಾಗಿದ್ದಿರಿ. ತಂದೆಯ ವಿನಃ ಈ ಮಾತನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನೀವು ಮೊಟ್ಟ ಮೊದಲು ಇಂತಹ ಜನ್ಮವನ್ನು ತೆಗೆದುಕೊಂಡಿರಿ. ಹೇಗೆ ಯಾರಾದರೂ ಸಾಹುಕಾರರಾಗಿದ್ದರೆ ಹಿಂದಿನ ಜನ್ಮದಲ್ಲಿ ಇವರು ಒಳ್ಳೆಯ ಕರ್ಮ ಮಾಡಿದ್ದರು ಎಂದು ಹೇಳುತ್ತಾರೆ. ರೋಗಿಯಾಗಿದ್ದರೆ ಇವರದು ಹಿಂದಿನ ಜನ್ಮದ ಲೆಕ್ಕಾಚಾರವಾಗಿದೆ ಎಂದು ಹೇಳುತ್ತಾರೆ. ಹಾಗಾದರೆ ಈ ಲಕ್ಷ್ಮೀ ನಾರಾಯಣರು ಎಂತಹ ಕರ್ಮ ಮಾಡಿದರು. ಇದನ್ನು ತಂದೆಯೇ ತಿಳಿಸುತ್ತಾರೆ. ಇವರ 84 ಜನ್ಮಗಳು ಈಗ ಮುಕ್ತಾಯವಾಯಿತು. ಈಗ ಮತ್ತೆ ಮೊದಲಿನವರಾಗಿ ಬರಬೇಕಾಗಿದೆ. ಭಗವಂತನು ಸಂಗಮಯುಗದಲ್ಲಿಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ಈಗ ನೀವೂ ಸಹ ತಿಳಿದುಕೊಳ್ಳುತ್ತೀರಿ. ತಂದೆಯು ಬಂದು ರಾಜಯೋಗ ಕಲಿಸುತ್ತಿದ್ದಾರೆಂದು. ಆದರೂ ಸಹ ಮರೆತು ಬಿಡುತ್ತೀರಿ. ಕರ್ಮ, ಅಕರ್ಮ ಮತ್ತು ವಿಕರ್ಮದ ಗುಹ್ಯ ಗತಿಯನ್ನೂ ಸಹ ತಂದೆಯು ತಿಳಿಸಿದ್ದಾರೆ. ರಾವಣನ ರಾಜ್ಯದಲ್ಲಿ ನಿಮ್ಮ ಕರ್ಮಗಳು ವಿಕರ್ಮಗಳಾಗುತ್ತವೆ. ಸತ್ಯಯುಗದಲ್ಲಿ ಕರ್ಮವು ಅಕರ್ಮವಾಗುತ್ತದೆ, ಅಲ್ಲಿ ರಾವಣ ರಾಜ್ಯವಿರುವುದೇ ಇಲ್ಲ. ವಿಕಾರವಿರುವುದೇ ಇಲ್ಲ. ಅಲ್ಲಿ ಯೋಗ ಬಲವಿರುತ್ತದೆ. ನಾವು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೇವೆಂದ ಮೇಲೆ ನಮಗೆ ಅವಶ್ಯವಾಗಿ ಪವಿತ್ರ ಪ್ರಪಂಚವು ಬೇಕು. ಹಳೆಯ ಪ್ರಪಂಚಕ್ಕೆ ಪತಿತ ಪ್ರಪಂಚ ಮತ್ತು ಹೊಸ ಪ್ರಪಂಚಕ್ಕೆ ಪಾವನ ಪ್ರಪಂಚವೆಂದು ಹೇಳುತ್ತಾರೆ. ಅದು ನಿರ್ವಿಕಾರಿ ಪ್ರಪಂಚವಾಗಿದೆ, ಇದು ವಿಕಾರಿ ಪ್ರಪಂಚವಾಗಿದೆ. ತಂದೆಯು ಬಂದು ವೇಶ್ಯಾಲಯವನ್ನು ಶಿವಾಲಯವನ್ನಾಗಿ ಮಾಡುತ್ತಾರೆ. ಸತ್ಯಯುಗವು ಶಿವಾಲಯವಾಗಿದೆ. ತಂದೆಯು ಬಂದು ನಿಮ್ಮನ್ನು ಸತ್ಯಯುಗಕ್ಕೆ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ಲಕ್ಷ್ಮೀ ನಾರಾಯಣರ ಮಂದಿರಕ್ಕೆ ಹೋಗಿ ನೀವು ಕೇಳಬಹುದು. ಇವರು ಇಂತಹ ಪದವಿಯನ್ನು ಹೇಗೆ ಪಡೆದರು? ವಿಶ್ವದ ಮಾಲೀಕರು ಹೇಗಾದರು ಎಂದು ತಮಗೆ ಗೊತ್ತಿದೆಯೇ? ತಂದೆಯು ತಿಳಿಸುತ್ತಾರೆ - ನಿಮಗೆ ಗೊತ್ತಿಲ್ಲ, ನಾನು ತಿಳಿದುಕೊಂಡಿದ್ದೇನೆ. ನೀವು ತಂದೆಯ ಮಕ್ಕಳೇ ಹೇಳಬಲ್ಲಿರಿ - ಇವರು ಇಂತಹ ಪದವಿಯನ್ನು ಹೇಗೆ ಪಡೆದರೆಂಬುದನ್ನು ನಾವು ತಮಗೆ ತಿಳಿಸುತ್ತೇವೆ. ಇವರೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡರು. ಇದೇ ಪುರುಷೋತ್ತಮ ಸಂಗಮಯುಗದಲ್ಲಿ ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ ಮತ್ತು ರಾಜ್ಯಭಾಗ್ಯವನ್ನು ಕೊಡುತ್ತಾರೆ. ಅದಕ್ಕೆ ಮೊದಲು ನಂಬರ ಒನ್ ಪತಿತರಾಗಿದ್ದರು ನಂತರ ನಂಬರ್ ಒನ್ ಪಾವನಾರಾದರು. ಇಡೀ ರಾಜಧಾನಿಯಿದೆಯಲ್ಲವೆ. ನಿಮ್ಮ ಚಿತ್ರಗಳಲ್ಲಿ ಇವರಿಗೆ ರಾಜಯೋಗ ಯಾರು ಕಲಿಸಿದರೆಂದು ಸ್ಪಷ್ಟವಾಗಿದೆ. ಶ್ರೇಷ್ಠಾತಿ ಶ್ರೇಷ್ಠ ಪರಮಾತ್ಮನಾಗಿದ್ದಾರೆ. ದೇವತೆಗಳು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ, ಭಗವಂತನೇ ಕಲಿಸುತ್ತಾರೆ ಅವರಿಗೆ ಜ್ಞಾನಸಾಗರನೆಂದು ಹೇಳುತ್ತಾರೆ. ತಂದೆ-ಶಿಕ್ಷಕ-ಸದ್ಗುರು ಎಂದೂ ಹೇಳುತ್ತಾರೆ.

ಯಾರು ಪ್ರಾರಂಭದಿಂದ ಶಿವನ ಭಕ್ತಿ ಮಾಡಿದರೋ ಅವರೇ ಈ ಎಲ್ಲ ಮಾತುಗಳನ್ನು ತಿಳಿದುಕೊಳ್ಳುತ್ತಾರೆ. ಮಂದಿರ ಕಟ್ಟಿಸುವವರನ್ನು ನೀವು ಪ್ರಶ್ನೆ ಮಾಡಿ - ತಾವು ಈ ಮಂದಿರವನ್ನು ಕಟ್ಟಿಸಿದ್ದೀರಿ, ಇವರು ಈ ಪದವಿಯನ್ನು ಹೇಗೆ ಪಡೆದರು? ಇವರ ರಾಜ್ಯವು ಯಾವಾಗ ಇತ್ತು? ಮತ್ತೆ ಇವರು ಎಲ್ಲಿ ಹೋದರು? ಈಗ ಎಲ್ಲಿದ್ದಾರೆ? ನೀವು 84 ಜನ್ಮಗಳ ಕಥೆಯನ್ನು ತಿಳಿಸಿದರೆ ಬಹಳ ಖುಷಿಯಾಗುತ್ತದೆ. ಚಿತ್ರವು ಜೇಬಿನಲ್ಲಿ ಸದಾ ಇರಲಿ. ನೀವು ಯಾರಿಗೆ ಬೇಕಾದರೂ ತಿಳಿಸಬಹುದು ಮತ್ತು ಯಾರು ಪ್ರಾರಂಭದಿಂದ ಶಿವನ ಭಕ್ತಿ ಮಾಡಿರುವರೋ ಅವರೇ ಕೇಳುತ್ತಾರೆ. ಖುಷಿ ಪಡುತ್ತಾರೆ. ಆಗ ನೀವು ತಿಳಿಯುತ್ತೀರಿ - ಇವರು ನಮ್ಮ ಕುಲದವರಾಗಿದ್ದಾರೆ. ದಿನ ಪ್ರತಿದಿನ ತಂದೆಯು ಬಹಳ ಸಹಜ ಯುಕ್ತಿಯನ್ನು ತಿಳಿಸುತ್ತಾರೆ. ಪರಮಪಿತ ಪರಮಾತ್ಮನೇ ಸರ್ವರ ಸದ್ಗತಿ ದಾತಾ ಆಗಿದ್ದಾರೆ. 21 ಜನ್ಮಗಳಿಗಾಗಿ ಸತ್ಯಯುಗೀ ರಾಜ್ಯಭಾಗ್ಯವು ಸಿಗುತ್ತದೆ. 21 ಜನ್ಮಗಳ ಆಸ್ತಿ ಈ ವಿದ್ಯೆಯಿಂದಲೇ ಸಿಗುತ್ತದೆ. ಇಂತಹ ಟಾಪಿಕ್ ಬಹಳ ಇವೆ. ವೇಶ್ಯಾಲಯ ಮತ್ತು ಶಿವಾಲಯವೆಂದು ಯಾವುದಕ್ಕೆ ಹೇಳುತ್ತಾರೆ? ಈ ಟಾಪಿಕ್ನ ಬಗ್ಗೆ, ಪರಮಪಿತ ಪ್ರಮಾತ್ಮನ ಜೀವನ ಕಥೆಯನ್ನು ತಿಳಿಸುತ್ತೇವೆ. ಲಕ್ಷ್ಮೀ ನಾರಾಯಣರ 84 ಜನ್ಮಗಳ ಕಥೆ ಇದೂ ಒಂದು ಟಾಪಿಕ್ ಆಗಿದೆ. ವಿಶ್ವದಲ್ಲಿ ಶಾಂತಿ ಹೇಗಿತ್ತು, ನಂತರ ಅಶಾಂತಿ ಹೇಗಾಯಿತು, ಈಗ ಪುನಃ ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ, ಇದೂ ಒಂದು ಟಾಪಿಕ್ ಆಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈಗ ಉತ್ತಮ ಪುರುಷರಾಗಲು ನೆನಪಿನ ಬಲದಿಂದ ಆತ್ಮವನ್ನು ಪವಿತ್ರ ಮಾಡಿಕೊಳ್ಳಬೇಕಾಗಿದೆ. ಕರ್ಮೇಂದ್ರಿಯಗಳಿಂದ ಯಾವ ವಿಕರ್ಮ ಮಾಡಬಾರದು.

2. ಜ್ಞಾನವಂತರಾಗಿ ಆತ್ಮಗಳನ್ನು ಜಾಗೃತ ಮಾಡುವ ಸೇವೆ ಮಾಡಬೇಕು. ಆತ್ಮರೂಪಿ ಜ್ಯೋತಿಯಲ್ಲಿ ಜ್ಞಾನ ಯೋಗದ ಎಣ್ಣೆಯನ್ನು ಹಾಕಬೇಕು. ಶ್ರೀಮತದನುಸಾರ ಬುದ್ಧಿಯನ್ನು ಸ್ವಚ್ಛ ಮಾಡಿಕೊಳ್ಳಬೇಕು.

ವರದಾನ:
ಮಾಲೀಕತನದ ಸ್ಮೃತಿಯ ಮೂಲಕ ಮನ್ಮನಾಭವದ ಸ್ಥಿತಿ ಮಾಡಿಕೊಳ್ಳುವಂತಹ ಮಾಸ್ಟರ್ ಸರ್ವ ಶಕ್ತಿವಾನ್ ಭವ.

ಸದಾ ಇದೇ ಸ್ಮೃತಿ ಇಮರ್ಜ್ ರೂಪದಲ್ಲಿರಲಿ ನಾನು ಆತ್ಮ “ಮಾಡಿಸುವಂತಹವನಾಗಿದ್ದೇನೆ” ಮಾಲೀಕನಾಗಿದ್ದೇನೆ, ವಿಶೇಷ ಆತ್ಮ, ಮಾಸ್ಟರ್ ಸರ್ವ ಶಕ್ತಿವಾನ್ ಆಗಿದ್ದೇನೆ - ಆದ್ದರಿಂದ ಈ ಮಾಲೀಕತನದ ಸ್ಮೃತಿಯಿಂದ ಮನಸ್ಸು-ಬುದ್ಧಿ ಮತ್ತು ಸಂಸ್ಕಾರ ನನ್ನ ನಿಯಂತ್ರಣದಲ್ಲಿರುವುದು. ನಾನು ಬೇರೆಯಾಗಿದ್ದೇನೆ ಮತ್ತು ಮಾಲೀಕನಾಗಿದ್ದೇನೆ - ಈ ಸ್ಮೃತಿಯಿಂದ ಮನ್ಮನಾಭವದ ಸ್ಥಿತಿ ಸಹಜವಾಗಿ ಆಗುವುದು. ಇದೇ ನ್ಯಾರಾತನದ ಅಭ್ಯಾಸ ಕರ್ಮಾತೀತರನ್ನಾಗಿ ಮಾಡುವುದು.

ಸ್ಲೋಗನ್:
ನಿಂದನೆ ಅಥವಾ ತೊಂದರೆಯನ್ನು ಸಹನೆ ಮಾಡುವುದು ಮತ್ತು ಅಳವಡಿಸಿಕೊಳ್ಳುವುದು ಅರ್ಥಾತ್ ತಮ್ಮ ರಾಜಧಾನಿಯನ್ನು ನಿಶ್ಚಿತ ಮಾಡಿಕೊಳ್ಳುವುದು.