09.05.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಶಿವ ತಂದೆಯು ಅದ್ಭುತವಾದ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ, ಅವರಿಗೆ ತಮ್ಮ ತಂದೆ ಯಾರೂ ಇಲ್ಲ, ಅವರು ಎಂದೂ ಯಾರಿಂದಲೂ ಏನನ್ನೂ ಕಲಿಯುವುದಿಲ್ಲ, ಅವರಿಗೆ ಗುರುವಿನ ಅವಶ್ಯಕತೆಯಿಲ್ಲ, ಹೀಗೆ ಆಶ್ಚರ್ಯದಿಂದ ನೆನಪು ಮಾಡಬೇಕು”

ಪ್ರಶ್ನೆ:
ನೆನಪಿನಲ್ಲಿ ಯಾವ ನವೀನತೆಯಿದ್ದಾಗ ಆತ್ಮವು ಸಹಜವಾಗಿ ಪಾವನವಾಗುತ್ತದೆ?

ಉತ್ತರ:
ಯಾವಾಗ ನೆನಪಿನಲ್ಲಿ ಕುಳಿತುಕೊಳ್ಳುತ್ತೀರಿ ಆಗ ತಂದೆಯಿಂದ ಕರೆಂಟ್ ಅನ್ನು ಸೆಳೆಯುತ್ತಿರಿ. ತಂದೆಯು ನಿಮ್ಮನ್ನು ನೋಡುತ್ತಿರಲಿ, ನೀವು ತಂದೆಯನ್ನು ನೋಡುತ್ತಿರಿ. ಇಂತಹ ನೆನಪಿನಿಂದ ಆತ್ಮನನ್ನು ಪಾವನ ಮಾಡಬಹುದು. ಇದು ಬಹಳ ಸಹಜವಾದ ನೆನಪಾಗಿದೆ ಆದರೆ ಮಕ್ಕಳು ನಾನು ಆತ್ಮನಾಗಿದ್ದೇನೆ, ಶರೀರವಲ್ಲ ಎನ್ನುವುದನ್ನು ಪದೇ-ಪದೇ ಮರೆತು ಹೋಗುತ್ತಾರೆ. ದೇಹೀ-ಅಭಿಮಾನಿ ಮಕ್ಕಳೇ ನೆನಪಿನಲ್ಲಿರಬಹುದಾಗಿದೆ.

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳಿಗೆ ನಿಶ್ಚಯವಿದೆ- ಇವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಇವರಿಗೆ ಯಾರೂ ಸಹ ತಂದೆಯಿಲ್ಲ. ಪ್ರಪಂಚದಲ್ಲಿ ತಂದೆಯಿಲ್ಲದಿರುವ ಮನುಷ್ಯರು ಯಾರೂ ಇರುವುದಿಲ್ಲ. ಒಂದೊಂದು ಮಾತನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳಬೇಕು ಹಾಗೂ ಅವರೇ ಜ್ಞಾನವನ್ನೂ ತಿಳಿಸುತ್ತಾರೆ. ಅವರು ಎಂದಿಗೂ ಓದುವುದಿಲ್ಲ ಇಲ್ಲವೆಂದರೆ ಮನುಷ್ಯ ಮಾತ್ರರೂ ಅವಶ್ಯವಾಗಿ ಏನನ್ನಾದರೂ ಓದುತ್ತಾರೆ. ಕೃಷ್ಣನೂ ಸಹ ಓದಿದ್ದಾನೆ. ತಂದೆಯು ತಿಳಿಸುತ್ತಾರೆ- ನಾನು ಏನು ಓದಲಿ? ನಾನು ಓದಿಸಲು ಬಂದಿದ್ದೇನೆ ಆದರೆ ಓದುವವನಲ್ಲ. ನಾನು ಯಾರಿಂದಲೂ ಶಿಕ್ಷಣವನ್ನು ಪಡೆದಿಲ್ಲ. ಯಾವ ಗುರುಗಳನ್ನೂ ಮಾಡಿಕೊಂಡಿಲ್ಲ. ನಾಟಕದನುಸಾರ ಅವಶ್ಯವಾಗಿ ತಂದೆಗೆ ಶ್ರೇಷ್ಠಾತಿ ಶ್ರೇಷ್ಠ ಮಹಿಮೆಯಾಗುತ್ತದೆ- ಶ್ರೇಷ್ಠಾತಿ ಶ್ರೇಷ್ಠ ಭಗವಂತನೆಂದು ಕರೆಯಲಾಗುವುದು. ಅವರಿಗಿಂತಲೂ ಶ್ರೇಷ್ಠವಾಗಿರುವುದು ಬೇರೇನಿದೆ? ತಂದೆಯೂ ಇಲ್ಲ, ಶಿಕ್ಷಕನೂ ಇಲ್ಲ, ಗುರುವೂ ಇಲ್ಲ! ಈ ಬೇಹದ್ದಿನ ತಂದೆಗೆ ಯಾವುದೇ ತಂದೆ, ಶಿಕ್ಷಕ, ಗುರುವಿಲ್ಲ. ಅವರು ಸ್ವಯಂ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಇದನ್ನು ನೀವು ಚೆನ್ನಾಗಿ ತಿಳಿದುಕೊಂಡಿದ್ದೀರಿ. ಇಂತಹವರು ಬೇರೆ ಯಾರೂ ಇರುವುದಿಲ್ಲ. ಹೀಗೆ ಆಶ್ಚರ್ಯ ಪಡುತ್ತಾ ಇಂತಹ ತಂದೆ, ಶಿಕ್ಷಕ, ಸದ್ಗುರುವನ್ನು ನೆನಪು ಮಾಡಬೇಕಾಗಿದೆ. ಮನುಷ್ಯರು ಓ ಗಾಡ್ ಫಾದರ್ ಎಂದು ಹೇಳುತ್ತಾರೆ. ಅವರು ನಾಲೆಡ್ಜ್ ಫುಲ್ ಶಿಕ್ಷಕರೂ ಆಗಿದ್ದಾರೆ, ಸುಪ್ರೀಂ ಗುರುವೂ ಆಗಿದ್ದಾರೆ, ಎಲ್ಲವೂ ಒಬ್ಬರೇ ಆಗಿದ್ದಾರೆ. ಇಂತಹ ಯಾವುದೇ ಮನುಷ್ಯರಿರಲು ಸಾಧ್ಯವಿಲ್ಲ. ಅವರು ಮನುಷ್ಯರ ತನುವಿನಲ್ಲಿಯೇ ಓದಿಸುತ್ತಾರೆ. ಓದಿಸಲು ಅಗತ್ಯವಾಗಿ ಮುಖ (ಶರೀರ) ಬೇಕಾಗಿದೆ. ಇದು ಮಕ್ಕಳಿಗೆ ಪದೇ-ಪದೇ ನೆನಪಿದ್ದಾಗ ಹಡಗು ಪಾರಾಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುತ್ತದೆ. ಶ್ರೇಷ್ಠ ಶಿಕ್ಷಕನೆಂದು ತಿಳಿಯುವುದರಿಂದ ಎಲ್ಲಾ ಜ್ಞಾನವೂ ಬುದ್ಧಿಯಲ್ಲಿ ಬಂದು ಬಿಡುತ್ತದೆ. ಇವರು ಸದ್ಗುರುವೂ ಆಗಿದ್ದಾರೆ. ನಮಗೆ ಯೋಗ ಕಲಿಸುತ್ತಿದ್ದಾರೆ, ಒಬ್ಬನ ಜೊತೆಯಲ್ಲಿ ಯೋಗವನ್ನಿಡಬೇಕು. ಸರ್ವ ಆತ್ಮಗಳಿಗೆ ಒಬ್ಬರೇ ತಂದೆಯಾಗಿದ್ದಾರೆ. ಅವರು ಎಲ್ಲಾ ಆತ್ಮಗಳಿಗೂ ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ಆತ್ಮವೇ ಎಲ್ಲವನ್ನೂ ಮಾಡುತ್ತದೆ, ಈ ಶರೀರವೆಂಬ ವಾಹನವನ್ನು ಆತ್ಮವೇ ನಡೆಸುತ್ತದೆ. ಇದನ್ನು ರಥ ಅಥವಾ ಏನಾದರೂ ಹೇಳಿ, ಮುಖ್ಯವಾಗಿ ನಡೆಸುವವರು ಆತ್ಮವಾಗಿದೆ. ಆತ್ಮನ ತಂದೆಯು ಒಬ್ಬರೇ ಆಗಿದ್ದಾರೆ. ನಾವೆಲ್ಲಾ ಸಹೋದರ-ಸಹೋದರರಾಗಿದ್ದೇವೆಂದು ಮುಖದಿಂದ ಹೇಳುತ್ತೀರಿ. ಒಬ್ಬ ತಂದೆಗೆ ಮಕ್ಕಳು ಸಹೋದರ-ಸಹೋದರರಾಗಿದ್ದೇವೆ ನಂತರ ತಂದೆಯು ಪ್ರಜಾಪಿತ ಬ್ರಹ್ಮನಲ್ಲಿ ಬಂದಾಗ ಸಹೋದರ-ಸಹೋದರಿಯರಾಗುತ್ತೇವೆ. ಪ್ರಜಾಪಿತ ಬ್ರಹ್ಮನ ಮುಖವಂಶಾವಳಿಯಂತೂ ಸಹೋದರ -ಸಹೋದರಿಯರಾಗುತ್ತಾರಲ್ಲವೆ! ಸಹೋದರನೊಂದಿಗೆ ಸಹೋದರಿಯ ವಿವಾಹವಂತೂ ಎಂದಿಗೂ ಆಗುವುದಿಲ್ಲ. ಆದ್ದರಿಂದ ಎಲ್ಲರೂ ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರಾಗಿ ಬಿಟ್ಟರು. ಸಹೋದರ-ಸಹೋದರಿಯೆಂದು ತಿಳಿಯುವುದರಿಂದ ತಂದೆಗೆ ಅತೀ ಪ್ರಿಯ ಮಕ್ಕಳು ಈಶ್ವರೀಯ ಸಂಪ್ರದಾಯದವರಾಗಿ ಬಿಡುತ್ತಾರೆ. ನಾವು ಈಶ್ವರನ ಸಂತಾನರಾಗಿದ್ದೇವೆಂದು ಹೇಳುತ್ತೀರಿ. ಈಶ್ವರ ತಂದೆಯೇ ನಮಗೆ ಎಲ್ಲವನ್ನೂ ಕಲಿಸುತ್ತಿದ್ದಾರೆ, ಅವರು ಯಾರಿಂದಲೂ ಕಲಿಯಲ್ಪಟ್ಟಿಲ್ಲ! ಅವರು ಸದಾ ಸಂಪೂರ್ಣರಾಗಿದ್ದಾರೆ. ಅವರ ಕಲೆಗಳು ಎಂದಿಗೂ ಕಡಿಮೆಯಾಗುವುದಿಲ್ಲ. ಆದರೆ ಎಲ್ಲರ ಕಲೆಗಳು ಕಡಿಮೆಯಾಗುತ್ತವೆ. ನಾವಂತೂ ಶಿವ ತಂದೆಯ ಮಹಿಮೆಯನ್ನಂತೂ ಬಹಳ ಮಾಡುತ್ತೇವೆ. ಶಿವ ತಂದೆ ಎಂದು ಹೇಳುವುದು ಬಹಳ ಸಹಜವಾಗಿದೆ ಮತ್ತು ತಂದೆಯೇ ಪತಿತ-ಪಾವನನಾಗಿದ್ದಾರೆ. ಕೇವಲ ಈಶ್ವರನೆಂದು ಹೇಳುವುದರಿಂದ ಅಷ್ಟೊಂದು ಅನುಭವವಾಗುವುದಿಲ್ಲ. ಈಗ ತಂದೆಯು ಬಂದು ಹೇಗೆ ಪತಿತರನ್ನು ಪಾವನ ಮಾಡುತ್ತಿದ್ದಾರೆಂದು ನೀವು ಮಕ್ಕಳ ಮನಸ್ಸಿನಲ್ಲಿ ಬರುತ್ತದೆ. ಇಲ್ಲಿ ಲೌಕಿಕ ತಂದೆಯೂ ಇದ್ದಾರೆ, ಅಲೌಕಿಕ ತಂದೆಯೂ ಇದ್ದಾರೆ. ಈ ತಂದೆಯನ್ನು ಎಲ್ಲರೂ ನೆನಪು ಮಾಡುತ್ತಾರೆ ಏಕೆಂದರೆ ಪತಿತರಾಗಿರುವ ಕಾರಣ ನೆನಪು ಮಾಡುತ್ತಾರೆ. ಪಾವನನಾದ ನಂತರ ಪಾವನ ಮಾಡಲು ಬನ್ನಿ ಎಂದು ಕರೆಯುವ ಅವಶ್ಯಕತೆಯಿಲ್ಲ. ನಾಟಕವನ್ನು ನೋಡಿ ಹೇಗೆ ಮಾಡಲ್ಪಟ್ಟಿದೆ! ಪತಿತ-ಪಾವನ ತಂದೆಯನ್ನು ನೆನಪು ಮಾಡುತ್ತಾರೆ, ನಾವು ಪಾವನ ಪ್ರಪಂಚದ ಮಾಲೀಕರಾಗಬೇಕೆಂದು ಇಚ್ಛಿಸುತ್ತಾರೆ. ಶಾಸ್ತ್ರಗಳಲ್ಲಿ ದೇವತೆಗಳಿಗೂ-ಅಸುರರಿಗೂ ಯುದ್ಧ ನಡೆಯಿತೆಂದು ತೋರಿಸುತ್ತಾರೆ ಆದರೆ ಆ ರೀತಿಯೇನೂ ಇಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ - ನಾವು ಅಸುರರೂ ಅಲ್ಲ, ದೇವತೆಗಳೂ ಅಲ್ಲ ಮಧ್ಯದಲ್ಲಿದ್ದೇವೆ. ಎಲ್ಲವೂ ನಿಮಗೆ ಮನಸ್ಸು ತಿನ್ನುತ್ತಿರುತ್ತದೆ. ಇದು ಬಹಳ ಮಜವಾಗಿರುವ ನಾಟಕವಾಗಿದೆ. ನಾಟಕದಲ್ಲಿ ಮಜಾ ನೋಡಲು ಹೋಗುತ್ತಾರೆ ಆದರೆ ಅದು ಅಲ್ಪಕಾಲದ ನಾಟಕ, ಇದು ಬೇಹದ್ದಿನ ನಾಟಕವಾಗಿದೆ. ಇದನ್ನು ಬೇರೆ ಯಾರೂ ತಿಳಿದುಕೊಂಡಿಲ್ಲ. ದೇವತೆಗಳೂ ಸಹ ತಿಳಿದುಕೊಳ್ಳಲು ಆಗುವುದಿಲ್ಲ. ಈಗ ನೀವು ಕಲಿಯುಗವನ್ನು ಬಿಟ್ಟು ಬಂದಿದ್ದೀರಿ. ಯಾರು ಸ್ವಯಂ ತಿಳಿದುಕೊಂಡಿದ್ದಾರೆಯೋ ಅವರೇ ಅನ್ಯರಿಗೂ ತಿಳಿಸುತ್ತಾರೆ. ಒಮ್ಮೆ ನಾಟಕವನ್ನು ನೋಡಿದ ತಕ್ಷಣ ನಾಟಕವೆಲ್ಲವೂ ಬುದ್ಧಿಯಲ್ಲಿ ಬಂದು ಬಿಡುತ್ತದೆ. ತಂದೆಯು ತಿಳಿಸುತ್ತಾರೆ- ಇದು ಮನುಷ್ಯ ಸೃಷ್ಟಿ ರೂಪಿ ವೃಕ್ಷ, ಇದರ ಬೀಜ ಮೇಲಿದ್ದಾರೆ. ವಿರಾಟ ರೂಪವೆಂದು ಹೇಳುತ್ತಾರಲ್ಲವೆ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ ಆದರೆ ಮನುಷ್ಯರಿಗೆ ಇದು ತಿಳಿದಿಲ್ಲ. ಶಿವ ತಂದೆಯು ಯಾರಿಂದಲಾದರೂ ಭಾಷೆಯನ್ನು ಕಲಿತಿರಬಹುದೇ? ಅವರಿಗೆ ಶಿಕ್ಷಕನೇ ಇಲ್ಲದಿರುವಾಗ ಭಾಷೆಯನ್ನು ಹೇಗೆ ಕಲಿಯುತ್ತಾರೆ? ಅವಶ್ಯವಾಗಿ ಯಾವ ರಥದಲ್ಲಿ ಬರುತ್ತಾರೆಯೋ ಅವರ ಭಾಷೆಯನ್ನೇ ಕಾರ್ಯದಲ್ಲಿ ಉಪಯೋಗಿಸುತ್ತಾರೆ. ಶಿವ ತಂದೆಗೆ ತನ್ನದೇ ಆದ ಭಾಷೆ ಯಾವುದೂ ಇಲ್ಲ, ಅವರೇನೂ ಓದಿ ಕಲಿಯುವುದಿಲ್ಲ. ಅವರಿಗೆ ಯಾರೂ ಶಿಕ್ಷಕರಿಲ್ಲ. ಕೃಷ್ಣನಂತೂ ಕಲಿಯುತ್ತಾನೆ. ಕೃಷ್ಣನಿಗೆ ತಂದೆ-ತಾಯಿ, ಶಿಕ್ಷಕ ಇದ್ದಾರೆ, ಅವನಿಗೆ ಗುರುವಿನ ಅವಶ್ಯಕತೆಯಿಲ್ಲ ಏಕೆಂದರೆ ಅವರಿಗಂತೂ ಸದ್ಗತಿ ಸಿಕ್ಕಿರುತ್ತದೆ. ಇದನ್ನು ನೀವು ತಿಳಿದಿದ್ದೀರಿ. ನೀವು ಬ್ರಾಹ್ಮಣರು ಎಲ್ಲರಿಗಿಂತ ಶ್ರೇಷ್ಠರಾಗಿದ್ದೀರಿ. ಇದನ್ನು ನೆನಪಿಟ್ಟುಕೊಳ್ಳಿ - ನಮಗೆ ತಂದೆಯು ಓದಿಸುತ್ತಿದ್ದಾರೆ, ನಾವೆಲ್ಲರೂ ಬ್ರಾಹ್ಮಣರಾಗಿದ್ದೇವೆ, ಬ್ರಾಹ್ಮಣ ದೇವತಾ...... ಎಷ್ಟೊಂದು ಸ್ಪಷ್ಟವಾಗಿದೆ. ತಂದೆಗಂತೂ ಎಲ್ಲವನ್ನೂ ತಿಳಿದಿದ್ದಾರೆಂದು ಮೊದಲೇ ಹೇಳಿ ಬಿಟ್ಟಿದ್ದಾರೆ, ಅವರು ಏನು ತಿಳಿದುಕೊಂಡಿದ್ದಾರೆಂದು ಯಾರಿಗೂ ಗೊತ್ತಿಲ್ಲ. ಅವರು ಜ್ಞಾನಪೂರ್ಣನಾಗಿದ್ದಾರೆ, ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ಅವರಲ್ಲಿರುತ್ತದೆ. ಬೀಜದಲ್ಲಿ ಇಡೀ ವೃಕ್ಷದ ಜ್ಞಾನವಿರುತ್ತದೆ. ಅದಂತೂ ಜಡ ಬೀಜವಾಗಿದೆ, ನೀವಂತೂ ಚೈತನ್ಯವಾಗಿದ್ದೀರಿ. ನೀವು ನಿಮ್ಮ ವೃಕ್ಷದ ಜ್ಞಾನವನ್ನು ತಿಳಿಸುತ್ತೀರಿ. ತಂದೆಯು ತಿಳಿಸುತ್ತಾರೆ- ನಾನು ಈ ಭಿನ್ನತೆಯುಳ್ಳ ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದೇನೆ. ಎಲ್ಲರೂ ಮನುಷ್ಯರೇ ಆಗಿದ್ದಾರೆ ಆದರೆ ವಿಭಿನ್ನವಾಗಿದ್ದಾರೆ. ಒಂದು ಆತ್ಮನ ಲಕ್ಷಣದಂತೆ ಇನ್ನೊಂದು ಆತ್ಮನದಿರುವುದಿಲ್ಲ. ಇಬ್ಬರ ಲಕ್ಷಣ ಒಂದೇ ರೀತಿಯಾಗುವುದಿಲ್ಲ, ಇದು ಬೇಹದ್ದಿನ ನಾಟಕವಾಗಿದೆ. ನಾವು ಮನುಷ್ಯರಿಗೆ ಪಾತ್ರಧಾರಿಗಳೆಂದು ಹೇಳುವುದಿಲ್ಲ, ಆತ್ಮನಿಗೇ ಹೇಳಲಾಗುವುದು. ಅವರು ಮನುಷ್ಯರಿಗೆ ಪಾತ್ರಧಾರಿಗಳೆಂದು ತಿಳಿದುಕೊಂಡಿದ್ದಾರೆ. ನಾವು ಆತ್ಮಗಳೇ ಪಾತ್ರಧಾರಿಗಳೆಂದು ನಿಮ್ಮ ಬುದ್ಧಿಯಲ್ಲಿದೆ. ಆ ಮನುಷ್ಯರು ನೃತ್ಯ ಮಾಡುತ್ತಾರೆ, ಮನುಷ್ಯರು ಮಂಗಕ್ಕೆ ನೃತ್ಯವನ್ನು ಕಲಿಸಿರುವಂತೆ ಮಾಡುತ್ತಾರೆ. ಇದು ಆತ್ಮವಾಗಿದೆ, ಶರೀರಕ್ಕೆ ನೃತ್ಯ ಮಾಡಿಸುತ್ತದೆ, ಪಾತ್ರ ಮಾಡಿಸುತ್ತದೆ. ಇವು ಸಹಜವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಬೇಹದ್ದಿನ ತಂದೆಯು ಅಗತ್ಯವಾಗಿ ಬರುತ್ತಾರೆ, ಬರುವುದಿಲ್ಲವೆಂದು ತಿಳಿಯಬಾರದು. ಶಿವ ಜಯಂತಿಯೂ ಆಗುತ್ತದೆ, ಪ್ರಪಂಚವು ಪರಿವರ್ತನೆಯ ಸಮಯದಲ್ಲಿ ತಂದೆಯು ಬರುತ್ತಾರೆ. ಭಕ್ತಿ ಮಾರ್ಗದಲ್ಲಿ ಕೃಷ್ಣನನ್ನು ನೆನಪು ಮಾಡುತ್ತಿರುತ್ತಾರೆ ಆದರೆ ಕೃಷ್ಣನು ಹೇಗೆ ಬರುತ್ತಾನೆ? ಕಲಿಯುಗದಲ್ಲಿ ಅಥವಾ ಸಂಗಮಯುಗದಲ್ಲಿ ಕೃಷ್ಣನನ್ನು ಈ ಕಣ್ಣುಗಳಿಂದ ನೋಡಲು ಆಗುವುದಿಲ್ಲ ಹಾಗಾದರೆ ಅವರನ್ನು ಭಗವಂತನೆಂದು ಹೇಗೆ ಹೇಳುವುದು? ಕೃಷ್ಣನಂತೂ ಸತ್ಯಯುಗದ ಮೊದಲನೇ ರಾಜಕುಮಾರನಾಗಿದ್ದನು. ಅವನಿಗೆ ತಂದೆ, ಶಿಕ್ಷಕನಿದ್ದಾರೆ. ಸ್ವಯಂ ಸದ್ಗತಿಯಲ್ಲಿರುವ ಕಾರಣ ಗುರುವಿನ ಅವಶ್ಯಕತೆಯಿರುವುದಿಲ್ಲ. ಈ ಲೆಕ್ಕವು ಬಹಳ ಸ್ಪಷ್ಟವಾಗಿದೆ, ಮನುಷ್ಯರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ತಿಳಿದಿದ್ದೀರಿ. ಯಾರು-ಯಾರು ಎಷ್ಟೆಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ಅಂದಾಜು ಮಾಡುತ್ತೀರಿ. ದೈವೀ ಮನೆತನದವರು ಮೊಟ್ಟ ಮೊದಲು ಜನ್ಮವನ್ನು ತೆಗೆದುಕೊಳ್ಳುತ್ತಾರೆ, ಮೊದಲು ಅವರ ಜನ್ಮವಾಗುತ್ತದೆ. ಒಬ್ಬರು ಬಂದರೆ ಅವರ ಹಿಂದೆ ಉಳಿದವರು ಬರುತ್ತಾರೆ. ಈ ಮಾತುಗಳನ್ನು ನೀವು ಮಾತ್ರವೇ ತಿಳಿದುಕೊಳ್ಳುತ್ತೀರಿ. ನಿಮ್ಮಲ್ಲಿಯೂ ಕೆಲವರು ತುಂಬಾ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಲೌಕಿಕ ವಿದ್ಯೆಯಲ್ಲಿಯೂ ಇದೇ ರೀತಿಯಾಗಿರುತ್ತದೆ ಆದರೆ ಇದು ಬಹಳ ಸಹಜವಾಗಿದೆ. ಕೇವಲ ಒಂದು ಗುಪ್ತವಾದ ಪರಿಶ್ರಮವಿದೆ - ನೀವು ತಂದೆಯನ್ನು ನೆನಪು ಮಾಡುತ್ತಿರುವಾಗ ಮಾಯೆಯು ವಿಘ್ನ ಹಾಕುತ್ತದೆ ಏಕೆಂದರೆ ಮಾಯಾ ರಾವಣ ಈರ್ಷ್ಯೆ ಪಡುತ್ತಾನೆ. ನೀವು ರಾಮನನ್ನು ನೆನಪು ಮಾಡುತ್ತಿರುವಾಗ ಅಸೂಯೆ ಬರುತ್ತದೆ. ಇವರು ನನ್ನ ಕಡೆಯ ಶಿಷ್ಯ ರಾಮನನ್ನು ಏಕೆ ನೆನಪು ಮಾಡುತ್ತಾರೆ! ಇದು ನಾಟಕದಲ್ಲಿ ಮೊದಲೇ ನೊಂದಾವಣೆಯಾಗಿದೆ. ಕಲ್ಪದ ಮೊದಲು ಯಾವ ಪಾತ್ರವನ್ನಭಿನಯಿಸಲಾಗಿತ್ತು ಅದೆ ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ಈಗ ನೀವು ಪುರುಷಾರ್ಥ ಮಾಡುತ್ತಿದ್ದೀರಿ. ಕಲ್ಪದ ಹಿಂದೆ ಯಾವ ಪುರುಷಾರ್ಥವನ್ನು ಮಾಡಿದ್ದೀರಿ ಈಗಲೂ ಅದನ್ನೇ ಮಾಡುತ್ತಿದ್ದೀರಿ. ಈ ಚಕ್ರವು ಸುತ್ತುತ್ತಿರುತ್ತದೆ ಎಂದಿಗೂ ನಿಲ್ಲುವುದಿಲ್ಲ. ಹೇಗೆ ಈ ದೈನಂದಿನ ಗಡಿಯಾರ ಟಿಕ್-ಟಿಕ್ ಆಗುತ್ತಿರುತ್ತದೆ. ತಂದೆಯು ತಿಳಿಸುತ್ತಾರೆ- ಇದು 5000 ವರ್ಷಗಳ ನಾಟಕವಾಗಿದೆ. ಶಾಸ್ತ್ರಗಳಲ್ಲಿ ಎಂತೆಂತಹ ಮಾತುಗಳನ್ನು ಬರೆದು ಬಿಟ್ಟಿದ್ದಾರೆ! ತಂದೆಯು ಭಕ್ತಿಯನ್ನು ಮಾಡಬೇಡಿ, ಬಿಟ್ಟು ಬಿಡಿ ಎಂದು ಹೇಳುವುದೇ ಇಲ್ಲ. ಏಕೆಂದರೆ ಅವರು ಇಲ್ಲಿ ನಡೆಯಲು ಆಗದಿದ್ದರೆ ಭಕ್ತಿಯನ್ನೂ ಬಿಟ್ಟರೆ ಇಲ್ಲಿನವರು ಅಲ್ಲ, ಅಲ್ಲಿನವರೂ ಆಗದಂತೆ ಆಗಬಾರದು. ಯಾವ ಕೆಲಸಕ್ಕೂ ಬಾರದಂತೆ ಆಗಿ ಬಿಡುತ್ತಾರೆ. ಆದ್ದರಿಂದ ನೀವು ನೋಡುತ್ತಿರಿ- ಕೆಲವರು ಮನುಷ್ಯರು ಭಕ್ತಿಯೇನೂ ಮಾಡುವುದಿಲ್ಲ. ಸುಮ್ಮನೆ ಹಾಗೆಯೇ ಜೀವನ ನಡೆಸುತ್ತಿರುತ್ತಾರೆ. ಕೆಲವರು ಭಗವಂತನೇ ಅನೇಕ ರೂಪಗಳನ್ನು ಧರಿಸಿದ್ದಾರೆಂದು ಹೇಳಿ ಬಿಡುತ್ತಾರೆ. ಅರೆ! ಇದು ಬೇಹದ್ದಿನ ಅನಾದಿಯಾಗಿ ಮಾಡಲ್ಪಟ್ಟಿರುವ ನಾಟಕವಾಗಿದೆ, ಇದು ಪುನರಾವರ್ತನೆಯಾಗುತ್ತಿರುತ್ತದೆ. ಆದ್ದರಿಂದ ಇದನ್ನು ಅನಾದಿ-ಅವಿನಾಶಿ, ವಿಶ್ವ ನಾಟಕವೆಂದು ಕರೆಯಲಾಗುವುದು. ಇದನ್ನು ನೀವು ಮಕ್ಕಳು ತಿಳಿದಿದ್ದೀರಿ. ಇದರಲ್ಲಿ ನೀವು ಕುಮಾರಿಯರಿಗಾಗಿ ಬಹಳ ಸಹಜವಾಗಿದೆ. ಮಾತೆಯರಿಗೆ ಹತ್ತಿರುವ ಏಣಿಯನ್ನು ಇಳಿಯಬೇಕಾಗುತ್ತದೆ ಆದರೆ ಕುಮಾರಿಯರಿಗೆ ಯಾವುದೇ ಬಂಧನವಿಲ್ಲ, ಚಿಂತೆಯಿಲ್ಲ ಅಂದಾಗ ತಂದೆಗೆ ಅರ್ಪಣೆಯಾಗಿ ಬಿಡಬೇಕು. ಲೌಕಿಕ ಸಂಬಂಧವನ್ನು ಮರೆತು ಪಾರಲೌಕಿಕ ಸಂಬಂಧವನ್ನು ಜೋಡಿಸಬೇಕು. ಕಲಿಯುಗವು ದುರ್ಗತಿಯಾಗಿದೆ, ನಾಟಕದನುಸಾರವಾಗಿ ಕೆಳಗಡೆ ಇಳಿಯಲೇಬೇಕು. ಭಾರತವಾಸಿಗಳು ಇದೆಲ್ಲವೂ ಈಶ್ವರನದೆಂದು ಹೇಳುತ್ತಾರೆ ಅವರೇ ಮಾಲೀಕನಾಗಿದ್ದಾರೆ ಎಂದು ಹೇಳುತ್ತಾರೆ. ನೀವು ಯಾರು! ನಾವು ಆತ್ಮ ಆಗಿದ್ದೇವೆ, ಬಾಕಿ ಇದೆಲ್ಲವೂ ಈಶ್ವರನದಾಗಿದೆ. ಈ ದೇಹ ಮೊದಲಾದವುಗಳೆಲ್ಲವನ್ನೂ ಪರಮಾತ್ಮನೇ ಕೊಟ್ಟಿದ್ದಾರೆ. ಮುಖದಿಂದ ಹೇಳುವುದೇನೋ ಸರಿ, ಇದೆಲ್ಲವೂ ಈಶ್ವರನದೆಂದು ಹೇಳಿ ಬಿಡುತ್ತಾರೆ. ಒಳ್ಳೆಯದು - ಅವರು ಕೊಟ್ಟಂತಹ ವಸ್ತುವಿನಲ್ಲಿ ನನ್ನತನವನ್ನೇನಾದರೂ ಇರಬೇಕೇನು! ಆದರೆ ಹೇಳುವಂತೆ ನಡೆಯುವುದಿಲ್ಲ. ರಾವಣನ ಮತದಂತೆ ನಡೆಯುತ್ತಾರೆ. ತಂದೆಯು ತಿಳಿಸುತ್ತಾರೆ- ನೀವು ನಿಮಿತ್ತರಾಗಿರಿ ಆದರೆ ರಾವಣನ ಸಂಪ್ರದಾಯದವರಾಗಿರುವ ಕಾರಣ ನಿಮಗೆ ಮೋಸ ಮಾಡಿಕೊಳ್ಳುತ್ತೀರಿ. ಮುಖದಿಂದ ಒಂದನ್ನು ಹೇಳುವುದು ಮಾಡುವುದು ಇನ್ನೊಂದು. ತಂದೆಯು ಕೊಟ್ಟಂತಹ ವಸ್ತುವನ್ನು ಮರಳಿ ಪಡೆದರೆ ದುಃಖವೇಕೆ ಆಗಬೇಕು! ಮಮತೆಯನ್ನು ದೂರ ಮಾಡಲು ಈ ಎಲ್ಲಾ ಮಾತುಗಳನ್ನು ಮಕ್ಕಳಿಗೆ ತಿಳಿಸುತ್ತಾರೆ. ಈಗ ತಂದೆಯು ಬಂದಿದ್ದಾರೆ- ತಂದೆಯೇ ನಮ್ಮನ್ನು ನಿಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿ ಎಂದು ನೀವೇ ಕರೆದಿರಿ. ನಾವು ರಾವಣ ರಾಜ್ಯದಲ್ಲಿ ಬಹಳ ದುಃಖಿಗಳಾಗಿದ್ದೇವೆ ಬಂದು ಪಾವನ ಮಾಡಿ ಏಕೆಂದರೆ ಪಾವನರಾಗದ ಹೊರಟು ಹೋಗಲು ಸಾಧ್ಯವಿಲ್ಲವೆಂದು ತಿಳಿದುಕೊಂಡಿದ್ದಾರೆ. ನಮ್ಮನ್ನು ಕರೆದುಕೊಂಡು ಹೋಗಿ! ಎಲ್ಲಿಗೆ? ಮನೆಗೆ ಕರೆದುಕೊಂಡು ಹೋಗಿ. ಎಲ್ಲರೂ ನಾವು ಮನೆಗೆ ಹೋಗೋಣವೆಂದು ಹೇಳುತ್ತಾರೆ, ಕೃಷ್ಣನ ಭಕ್ತರು ಕೃಷ್ಣಪುರಿ, ವೈಕುಂಠಕ್ಕೆ ಹೋಗೋಣವೆಂದು ಹೇಳುತ್ತಾರೆ, ಅವರಿಗೆ ಸತ್ಯಯುಗದ ನೆನಪಿರುತ್ತದೆ, ಅದು ಪ್ರೀತಿಯ ವಸ್ತುವಾಗಿದೆ. ಮನುಷ್ಯರು ಸತ್ತಾಗ ಸ್ವರ್ಗಕ್ಕೆ ಹೋಗುವುದಿಲ್ಲ. ಸತ್ಯಯುಗದಲ್ಲಿ ಸ್ವರ್ಗವಿರುತ್ತದೆ, ನರಕವು ಕಲಿಯುಗದಲ್ಲಿದೆ. ಅಗತ್ಯವಾಗಿ ಕಲಿಯುಗದಲ್ಲಿಯೇ ಅವರ ಪುನರ್ಜನ್ಮವಾಗುತ್ತದೆ. ಇದು ಸತ್ಯಯುಗವೇನು? ಅದಂತೂ ಅದ್ಭುತ ಜಗತ್ತಾಗಿತ್ತು. ಹೇಳಿಯೂ ಹೇಳುತ್ತಾರೆ, ತಿಳಿದುಕೊಂಡಿದ್ದಾರೆ ಆದರೂ ಮತ್ತೆ ಸತ್ತಾಗ ಅವರ ಸಂಬಂಧಿಕರು ಏನೂ ಅರ್ಥ ಮಾಡಿಕೊಳ್ಳುವುದಿಲ್ಲ. ತಂದೆಯ ಬಳಿ 84 ಜನ್ಮದ ಚಕ್ರದ ಜ್ಞಾನವಿದೆ ಅದನ್ನು ತಂದೆಯೇ ಕೊಡುತ್ತಾರೆ. ನೀವಂತೂ ನಿಮ್ಮನ್ನು ದೇಹವೆಂದು ತಿಳಿದುಕೊಂಡಿದ್ದೀರಿ, ಅದು ತಪ್ಪಾಗಿತ್ತು. ಈಗ ತಂದೆಯು ತಿಳಿಸುತ್ತಾರೆ- ದೇಹೀ ಅಭಿಮಾನಿಭವ. ದೇಹೀ ಅಭಿಮಾನಿ ಭವ ಎಂದು ಕೃಷ್ಣನು ಹೇಳಲಾಗುವುದಿಲ್ಲ ಏಕೆಂದರೆ ಅವನಿಗಂತೂ ದೇಹವಿದೆ. ಶಿವ ತಂದೆಗಂತೂ ತನ್ನ ದೇಹವಿಲ್ಲ. ಇದು ಅವರ ರಥವಾಗಿದೆ. ಇದರಲ್ಲಿ ಅವರು ವಿರಾಜಮಾನನಾಗಿದ್ದಾರೆ. ಇದು ಶಿವನ ರಥವೂ ಆಗಿದೆ, ಬ್ರಹ್ಮನ ರಥವೂ ಆಗಿದೆ. ಈ ಶರೀರದ ಆತ್ಮವೂ ಇದೆ, ತಂದೆಯು ಲೋನ್ ತೆಗೆದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ- ನಾನು ಇವರ ಆಧಾರವನ್ನು ತೆಗೆದುಕೊಳ್ಳುತ್ತೇನೆ. ನನ್ನದಂತೂ ಇಲ್ಲ ಹಾಗಾದರೆ ಹೇಗೆ ಓದಿಸುವುದು! ತಂದೆಯು ಪ್ರತಿನಿತ್ಯ ಕುಳಿತು ಮಕ್ಕಳನ್ನು ಆಕರ್ಷಣೆ ಮಾಡುತ್ತಾರೆ, ನಿಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಬೇಕು, ಈ ಶರೀರವನ್ನು ಮರೆತು ಬಿಡಿ. ನಾನು ನಿಮ್ಮನ್ನು ನೋಡುತ್ತೇನೆ, ನೀವು ನನ್ನನ್ನು ನೋಡಿ. ನೀವು ತಂದೆಯನ್ನು ಎಷ್ಟೆಷ್ಟು ನೋಡುತ್ತೀರಿ ಅಷ್ಟೂ ಪಾವನರಾಗುತ್ತೀರಿ. ಪಾವನರಾಗಲು ಇನ್ನ್ಯಾವುದೆ ಉಪಾಯವಿಲ್ಲ. ಒಂದು ವೇಳೆ ಇದ್ದರೆ ಅದರಿಂದ ಆತ್ಮ ಪಾವನವಾಗುವುದಿದ್ದರೆ ಹೇಳಿ ಆತ್ಮವು ಗಂಗೆಯ ನೀರಿನಿಂದ ಪಾವನವಾಗುವುದಿಲ್ಲ, ಮೊದಲು ಯಾರಿಗಾದರೂ ತಂದೆಯ ಪರಿಚಯ ಕೊಡಬೇಕು. ಇಂತಹ ತಂದೆಯಂತೂ ಯಾರೂ ಇರುವುದಿಲ್ಲ. ನಾಡಿಯನ್ನು ನೋಡಿ ತಿಳಿಸಿಕೊಡಿ ಅವರು ಆಶ್ಚರ್ಯ ಪಡಬೇಕು. ಹೌದು! ಇವರೇ ಪರಮಾತ್ಮನೆಂದು ತಿಳಿದುಕೊಳ್ಳಬೇಕು. ಈಗ ನೀವು ಮಕ್ಕಳಿಗೆ ತಂದೆಯು ತನ್ನ ಪರಿಚಯವನ್ನು ಕೊಟ್ಟಿದ್ದಾರೆ. ನಾನು ಯಾರೆಂದು ಮಕ್ಕಳಿಗೆ ತಿಳಿದಿದೆ. ಚರಿತ್ರೆಯು ಪುನರಾವರ್ತನೆಯಾಗುತ್ತದೆ. ಯಾರು ಈ ಕುಲದವರಾಗಿರುತ್ತಾರೆಯೋ ಅವರೇ ಬರುತ್ತಾರೆ, ಉಳಿದವರು ತಮ್ಮ-ತಮ್ಮ ಧರ್ಮದಲ್ಲಿ ಹೊರಟು ಹೋಗುತ್ತಾರೆ. ಯಾರು ಅನ್ಯ ಧರ್ಮಗಳಿಗೆ ಪರಿವರ್ತನೆಯಾಗುತ್ತಾರೆ ಅವರು ಈಗ ಬಂದು ಅವರವರ ವಿಭಾಗಕ್ಕೆ ಹೋಗುತ್ತಾರೆ ಆದ್ದರಿಂದ ನಿರಾಕಾರಿ ವೃಕ್ಷವನ್ನು ತೋರಿಸಲಾಗಿದೆ. ಈ ಮಾತುಗಳನ್ನು ನೀವು ಮಕ್ಕಳು ಮಾತ್ರ ತಿಳಿದುಕೊಳ್ಳುತ್ತೀರಿ ಬಾಕಿ ಕಷ್ಟ ಪಟ್ಟು ತಿಳಿದುಕೊಳ್ಳುತ್ತಾರೆ. 7-8 ಜನಕ್ಕೆ ತಿಳಿಸಿದರೆ ಒಬ್ಬರು ಅಥವಾ ಇಬ್ಬರು ಈ ಜ್ಞಾನವು ಬಹಳ ಚೆನ್ನಾಗಿದೆ ಎಂದು ತಿಳಿದುಕೊಂಡು ಉಳಿಯುತ್ತಾರೆ. ಇಲ್ಲಿನವರಾಗಿದ್ದಾಗ ಬಿರುಗಾಳಿ ಕಡಿಮೆ ಬರುತ್ತದೆ, ಅವರಿಗೆ ಮುರುಳಿಯನ್ನು ಕೇಳೋಣ, ಮತ್ತೆ ಹೋಗೋಣವೆಂದು ಮನಸ್ಸಾಗುತ್ತಿರುತ್ತದೆ. ಕೆಲವರು ಸಂಗದ ರಂಗಿನಲ್ಲಿ ಬಂದು ಇಲ್ಲಿಗೆ ಬರುವುದೇ ಇಲ್ಲ. ಎಲ್ಲಾದರೂ ಬೇರೆ ಪಾರ್ಟಿ ಹೋಗುವುದನ್ನು ನೋಡಿ ಮತ್ತೆ ಸಿಕ್ಕಿಹಾಕಿಕೊಳ್ಳುತ್ತಾರೆ. ಬಹಳ ಶ್ರಮ ಪಡಬೇಕಾಗುತ್ತದೆ. ಎಷ್ಟೊಂದು ಶ್ರಮ ಪಡಬೇಕಾಗುತ್ತದೆ! ಪದೇ-ಪದೇ ಮರೆತು ಹೋಗುತ್ತೇವೆಂದು ಹೇಳುತ್ತಾರೆ. ನಾನು ಆತ್ಮನಾಗಿದ್ದೇನೆ, ಶರೀರವಲ್ಲ. ಇದು ಪದೇ-ಪದೇ ಮರೆತು ಹೋಗುತ್ತದೆ. ತಂದೆಯೂ ತಿಳಿದಿದ್ದಾರೆ- ಮಕ್ಕಳು ಕಾಮ ಚಿತೆಯ ಮೇಲೆ ಕುಳಿತು ಕಪ್ಪಾಗಿ ಬಿಟ್ಟಿದ್ದಾರೆ, ಸ್ಮಶಾನವಾಸಿಗಳಾಗಿದ್ದಾರೆ ಆದ್ದರಿಂದ ಅವರು ಪತಿತರಾಗಿದ್ದಾರೆ. ಅವರಿಗೆ ಮತ್ತೆ ತಂದೆಯು ತಿಳಿಸುತ್ತಾರೆ- ನನ್ನ ಮಕ್ಕಳೆಲ್ಲರೂ ಸುಟ್ಟು ಭಸ್ಮವಾಗಿದ್ದಾರೆ, ಇದು ಬೇಹದ್ದಿನ ಮಾತಾಗಿದೆ. ಎಷ್ಟೊಂದು ಕೋಟ್ಯಾಂತರ ಆತ್ಮಗಳು ತಮ್ಮ ಮನೆಯಲ್ಲಿರುವವರಾಗಿದ್ದಾರೆ ಅರ್ಥಾತ್ ಬ್ರಹ್ಮ ಲೋಕದಲ್ಲಿರುವವರಾಗಿದ್ದಾರೆ. ತಂದೆಯಂತೂ ಬೇಹದ್ದಿನಲ್ಲಿ ನಿಂತಿದ್ದಾರಲ್ಲವೆ, ನೀವೂ ಬೇಹದ್ದಿನಲ್ಲಿ ನಿಂತು ಬಿಡುತ್ತೀರಿ. ಬಾಬಾ ಸ್ಥಾಪನೆ ಮಾಡಿ ಹೊರಟು ಹೋಗುತ್ತಾರೆಂದು ತಿಳಿದಿದ್ದೀರಿ, ಮತ್ತೆ ನೀವು ರಾಜ್ಯ ಮಾಡುತ್ತೀರಿ. ಉಳಿದ ಆತ್ಮರು ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಯಾವುದೇ ಪಾತ್ರಧಾರಿಯೊಂದಿಗೆ ರಾವಣನು ಅಸೂಯೆ ಪಡಲಿ, ವಿಘ್ನ ಹಾಕಲಿ, ಬಿರುಗಾಳಿಯಲ್ಲಿ ತರಲಿ ಆದರೂ ಅದನ್ನು ನೋಡದೇ ತಮ್ಮ ಪುರುಷಾರ್ಥದಲ್ಲಿ ತತ್ಪರರಾಗಿರಬೇಕು. ಏಕೆಂದರೆ ಈ ನಾಟಕದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯ ಪಾತ್ರವು ತಮ್ಮ-ತಮ್ಮದೇ ಆಗಿದೆ. ಇದು ಅನಾದಿ ನಾಟಕ ಮಾಡಲ್ಪಟ್ಟಿದೆ.

2. ರಾವಣನ ಮತದಂತೆ ಈಶ್ವರನ ಆಸ್ತಿಯಲ್ಲಿ ಕೈ ಹಾಕಬಾರದು. ಎಲ್ಲದರಿಂದ ಮಮತೆಯನ್ನು ಅಳಿಸಿ ಸಂಪೂರ್ಣ ನಿಮಿತ್ತರಾಗಿರಬೇಕು.


ವರದಾನ:
ಕೆಟ್ಟದರಲ್ಲಿಯೂ ಸಹ ಒಳ್ಳೆಯದರ ಅನುಭವ ಮಾಡುವಂತಹ ನಿಶ್ಚಯಬುದ್ಧಿ ನಿಶ್ಚಿಂತ ಚಕ್ರವರ್ತಿ ಭವ.

ಸದಾ ಇದೇ ಸ್ಲೋಗನ್ ನೆನಪಿರಲಿ ಏನಾಯಿತು ಒಳ್ಳೆಯದೇ ಆಯಿತು, ಒಳ್ಳೆಯದೇ ಆಗಿದೆ ಮತ್ತು ಒಳ್ಳೆಯದೇ ಆಗಬೇಕು. ಕೆಟ್ಟದನ್ನು ಕೆಟ್ಟದರ ರೂಪದಲ್ಲಿ ನೋಡಬೇಡಿ. ಆದರೆ ಕೆಟ್ಟದರಲ್ಲಿಯೂ ಸಹಾ ಒಳ್ಳೆಯದರ ಅನುಭವ ಮಾಡಿ, ಕೆಟ್ಟದರಿಂದಲೂ ಸಹಾ ಪಾಠ ಕಲಿಯಿರಿ. ಯಾವುದೇ ಮಾತು ಬಂದಾಗ “ಏನಾಗುವುದು” ಈ ಸಂಕಲ್ಪ ಬರಬಾರದು, ಆದರೆ ತಕ್ಷಣ ಬರಲಿ “ ಒಳ್ಳೆಯದೇ ಆಗುವುದು”. ಕಳೆದು ಹೋದದ್ದು ಒಳ್ಳೆಯದೇ ಆಯಿತು. ಎಲ್ಲಿ ಒಳ್ಳೆಯದಿದೆ ಅಲ್ಲಿ ನಿಶ್ಚಿಂತ ಚಕ್ರವರ್ತಿಯಿರುತ್ತಾರೆ. ನಿಶ್ಚಯ ಬುದ್ಧಿಯ ಅರ್ಥವೇ ಆಗಿದೆ ನಿಶ್ಚಿಂತ ಚಕ್ರವರ್ತಿ.

ಸ್ಲೋಗನ್:
ಯಾರು ಸ್ವಯಂಗೆ ಅಥವಾ ಅನ್ಯರಿಗೆ ಮಾನ್ಯತೆ ಕೊಡುತ್ತಾರೆ ಅವರ ರಿಕಾರ್ಡ್ ಸದಾ ಸರಿಯಾಗಿರುವುದು.