30.01.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಾವು
ರಾಜಋಷಿಗಳಾಗಿದ್ದೀರಿ, ನೀವು ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳಲು ಪುರುಷಾರ್ಥ ಮಾಡಬೇಕು, ಜೊತೆ
ಜೊತೆಗೆ ದೈವೀ ಗುಣವನ್ನೂ ಸಹ ಅವಶ್ಯವಾಗಿ ಧಾರಣೆ ಮಾಡಬೇಕು”
ಪ್ರಶ್ನೆ:
ಉತ್ತಮ
ಪುರುಷರಾಗುವ ಪುರುಷಾರ್ಥವೇನಾಗಿದೆ? ಯಾವ ಮಾತಿನ ಮೇಲೆ ಬಹಳ ಗಮನ ಕೊಡಬೇಕು?
ಉತ್ತರ:
ಮ
ಪುರುಷರಾಗಬೇಕೆಂದರೆ ವಿದ್ಯೆಯ ಜೊತೆ ಎಂದೂ ಸಹ ಮುನಿಸಿಕೊಳ್ಳಬಾರದು. ವಿದ್ಯೆಗೂ ಜಗಳ,
ಹೊಡೆದಾಟಗಳಿಗೂ ಸಂಬಂಧವಿಲ್ಲ. ಓದುತ್ತಾರೆ, ಬರೆಯುತ್ತಾರೆಂದರೆ ನವಾಬರಾಗುತ್ತಾರೆ......
ಆದ್ದರಿಂದ ಸದಾ ತಮ್ಮ ಉನ್ನತಿಯ ಯೋಚನೆಯಿರಲಿ. ನಡವಳಿಕೆಯ ಮೇಲೆ ಬಹಳ ಗಮನವಿರಬೇಕು. ದೇವತೆಗಳ ಹಾಗೆ
ಆಗಬೇಕಾದರೆ ನಡವಳಿಕೆಯು ಬಹಳ ರಾಯಲ್ ಆಗಿರಬೇಕು, ಬಹಳ-ಬಹಳ ಮಧುರರಾಗಬೇಕು. ಮುಖದಿಂದ ಎಲ್ಲರಿಗೂ
ಮಧುರವೆನಿಸುವ ಮಾತುಗಳು ಬರಬೇಕು. ಯಾರಿಗೂ ದುಃಖವಾಗಬಾರದು.
ಓಂ ಶಾಂತಿ.
ಮಧುರಾತಿ ಮಧುರ
ಆತ್ಮೀಯ ಮಕ್ಕಳ ಪ್ರತಿ ತಂದೆಯು ಕುಳಿತು ತಿಳಿಸುತ್ತಾರೆ ಮತ್ತು ಕೇಳುತ್ತಾರೆ - ತಮ್ಮ ಬುದ್ಧಿಯ
ನೆಲೆ ಎಲ್ಲಿದೆ? ಮನುಷ್ಯರ ಬುದ್ಧಿಯಂತೂ ಒಮ್ಮೆ ಅಲ್ಲಿ, ಒಮ್ಮೆ ಇಲ್ಲಿ ಅಲೆಯುತ್ತದೆ. ತಂದೆಯು
ತಿಳಿಸುತ್ತಾರೆ - ನಿಮ್ಮ ಬುದ್ಧಿಯ ಅಲೆದಾಟ ಬಂದ್. ಬುದ್ದಿಯನ್ನು ಒಂದು ನೆಲೆಯಲ್ಲಿರಿಸಿ.
ಬೇಹದ್ದಿನ ತಂದೆಯನ್ನೇ ನೆನಪು ಮಾಡಿ. ಈಗ ಪೂರ್ಣ ಜಗತ್ತು ತಮೋಪ್ರಧಾನವಾಗಿದೆ ಎಂಬುದನ್ನು ಆತ್ಮೀಯ
ಮಕ್ಕಳು ತಿಳಿದುಕೊಂಡಿದ್ದೀರಿ. ಆತ್ಮಗಳೇ ನಂಬರ್ವಾರ್ ಪುರುಷಾರ್ಥದನುಸಾರ ಸತೋಪ್ರಧಾನರಾಗಿದ್ದವು,
ಈಗ ತಮೋಪ್ರಧಾನವಾಗಿದೆ. ಈಗ ಮತ್ತೆ ತಂದೆಯು ಹೇಳುತ್ತಾರೆ, ಸತೋಪ್ರಧಾನರಾಗಬೇಕು ಆದ್ದರಿಂದ ತಮ್ಮ
ಬುದ್ಧಿಯನ್ನು ತಂದೆಯ ಜೊತೆ ಜೋಡಿಸಿ ಮತ್ತೆ ಹಿಂತಿರುಗಬೇಕು. ಮತ್ತೆ ಬೇರೆ ಯಾರಿಗೂ ಸಹ ನಾವು
ಹಿಂತಿರುಗಿ ಹೋಗಬೇಕೆನ್ನುವುದು ಗೊತ್ತಿಲ್ಲ. ಮಕ್ಕಳೇ, ತಂದೆಯಾದ ನನ್ನನ್ನು ನೆನಪು ಮಾಡಿ ಎಂಬ
ಆದೇಶವು ಬೇರೆ ಯಾರಿಗೂ ಸಿಕ್ಕಿರುವುದಿಲ್ಲ. ಎಷ್ಟು ಸಹಜವಾದ ವಿಚಾರಗಳನ್ನು ತಿಳಿಸುತ್ತಾರೆ, ಕೇವಲ
ತಂದೆಯನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮ ವಿನಾಶವಾಗುತ್ತದೆ. ಈ ರೀತಿ ಬೇರೆ ಯಾರೂ ತಿಳಿಸಲು
ಸಾಧ್ಯವಿಲ್ಲ. ತಂದೆಯೇ ತಿಳಿಸುತ್ತಾರೆ, ಯಾರಲ್ಲಿ ತಂದೆಯು ಪ್ರವೇಶ ಮಾಡಿದ್ದಾರೆಯೋ ಅವರೂ
ಕೇಳಿಸಿಕೊಳ್ಳುತ್ತಾರೆ. ಪತಿತರಿಂದ ಪಾವನರಾಗುವ ಹಾಗೂ ಅದರಂತೆಯೇ ನಡೆಯುವ ಎಲ್ಲದಕ್ಕಿಂತ ಒಳ್ಳೆಯ
ಮತವನ್ನು ತಂದೆಯು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವೇ ಸತೋಪ್ರಧಾನರಾಗಿದ್ದಿರಿ
ಈಗ ಮತ್ತೆ ಆಗಬೇಕು. ತಾವೇ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಿರಿ ಮತ್ತೆ 84 ಜನ್ಮಗಳನ್ನು
ಭೋಗಿಸಿ ಕವಡೆಯ ಸಮಾನರಾಗಿದ್ದೀರಿ. ತಾವು ವಜ್ರ ಸಮಾನರಾಗಿದ್ದಿರಿ ಈಗ ಪುನಃ ಆಗಬೇಕು. ತಮ್ಮನ್ನು
ತಾವು ಆತ್ಮನೆಂದು ತಿಳಿಯಿರಿ ಎಂದು ಬಹಳ ಸಹಜವಾದ ವಿಚಾರಗಳನ್ನು ತಂದೆಯು ತಿಳಿಸುತ್ತಾರೆ. ಆತ್ಮಗಳೇ
ಹಿಂತಿರುಗಬೇಕು, ಶರೀರವಂತೂ ಹೋಗುವುದಿಲ್ಲ. ತಂದೆಯ ಬಳಿಗೆ ಖುಷಿಯಿಂದ ಹೋಗಬೇಕು. ತಂದೆಯು ಯಾವ
ಶ್ರೀಮತವನ್ನು ಕೊಡುತ್ತಾರೆಯೋ ಅದರಿಂದಲೇ ತಾವು ಶ್ರೇಷ್ಠರಾಗುತ್ತೀರಿ. ಪವಿತ್ರ ಆತ್ಮಗಳೂ
ಮೂಲವತನದಲ್ಲಿ ಹೋಗಿ ಮತ್ತೆ ಬಂದರೆ ಹೊಸ ಶರೀರವನ್ನು ಪಡೆಯುತ್ತಾರೆ. ಇದು ನಿಶ್ಚಯವಿದೆಯಲ್ಲವೆ.
ಹಾಗಾದರೆ ಅದೇ ಗುಂಗಿನಲ್ಲಿರಬೇಕು. ದೈವೀ ಗುಣವನ್ನು ಧಾರಣೆ ಮಾಡಬೇಕು, ಆಗ ಬಹಳ ಲಾಭವಾಗುತ್ತದೆ.
ಯಾವ ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯೆಯನ್ನು ಓದುತ್ತಾರೆಯೋ ಅವರೇ ಉತ್ತಮ ಪದವಿಯನ್ನೂ
ಪಡೆಯುತ್ತಾರೆ. ಇದೂ ಸಹ ವಿದ್ಯೆಯಾಗಿದೆ. ತಾವು ಕಲ್ಪ-ಕಲ್ಪದಲ್ಲಿಯೂ ಇದೇ ರೀತಿ ಓದುತ್ತೀರಿ.
ತಂದೆಯೂ ಸಹ ಇದೇ ರೀತಿ ಕಲ್ಪ-ಕಲ್ಪದಲ್ಲಿಯೂ ಓದಿಸುತ್ತಾರೆ. ಯಾವ ಸಮಯ ಕಳೆದು ಹೋಯಿತೋ ಅದು
ನಾಟಕವಾಗಿದೆ. ನಾಟಕದನುಸಾರವಾಗಿಯೇ ತಂದೆ ಮತ್ತು ಮಕ್ಕಳ ಪಾತ್ರ ನಡೆಯಿತು. ತಂದೆಯು ಸಲಹೆಯನ್ನಂತೂ
ಚೆನ್ನಾಗಿ ಕೊಡುತ್ತಾರಲ್ಲವೆ. ಮಕ್ಕಳು ಹೇಳುತ್ತಾರೆ - ಬಾಬಾ, ನಾನು ನಿಮ್ಮನ್ನು ಪದೇ-ಪದೇ ಮರೆತು
ಹೋಗುತ್ತೇವೆ. ಇದಂತೂ ಮಾಯೆಯ ಬಿರುಗಾಳಿಯಾಗಿದೆ. ಮಾಯೆಯು ದೀಪವನ್ನು ನಂದಿಸಿ ಬಿಡುತ್ತದೆ. ತಂದೆಗೆ
ಪರಂಜ್ಯೋತಿ ಎನ್ನಲಾಗುತ್ತದೆ, ಸರ್ವಶಕ್ತಿವಂತ ಎಂದೂ ಸಹ ಹೇಳಲಾಗುತ್ತದೆ. ಯಾವುದೆಲ್ಲಾ
ವೇದ-ಶಾಸ್ತ್ರಗಳಿವೆಯೋ ಎಲ್ಲದರ ಸಾರವನ್ನು ಹೇಳುತ್ತಾರೆ. ಅವರು ಜ್ಞಾನಪೂರ್ಣ ಸೃಷ್ಟಿಯ
ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಈ ಬ್ರಹ್ಮಾ ತಂದೆಯೂ ಸಹ ನಾವು ಮಕ್ಕಳಿಗೆ ತಂದೆಯು
ತಿಳಿಸುತ್ತಾರೆಂದು ಹೇಳುತ್ತಾರೆ. ತಂದೆಯು ಹೇಳುತ್ತಾರೆ - ನಾನು ನೀವು ಮಕ್ಕಳಿಗೆ ತಿಳಿಸುತ್ತೇನೆ.
ಅದರಲ್ಲಿ ಈ ಬ್ರಹ್ಮಾರವರೂ ಸಹ ಬಂದು ಬಿಡುತ್ತಾರೆ. ಇದರಲ್ಲಿ ಗೊಂದಲ್ಲಕ್ಕೊಳಗಾಗುವ ಮಾತಿಲ್ಲ. ಇದು
ಬಹಳ ಸಹಜ ರಾಜಯೋಗವಾಗಿದೆ. ತಾವು ರಾಜಋಷಿಗಳಾಗಿದ್ದೀರಿ. ಖುಷಿ ಎಂದು ಪವಿತ್ರ ಆತ್ಮಕ್ಕೆ
ಹೇಳಲಾಗುತ್ತದೆ. ತಮ್ಮಂತಹ ಋಷಿಗಳು ಬೇರೆ ಯಾರೂ ಇರಲು ಸಾಧ್ಯವಿಲ್ಲ. ಆತ್ಮಕ್ಕೆ ಖುಷಿ ಎಂದು
ಕರೆಯಲಾಗುತ್ತದೆ, ಶರೀರಕ್ಕಲ್ಲ. ಆತ್ಮ ಖುಷಿಯಾಗಿದೆ, ರಾಜಋಷಿ. ರಾಜ್ಯವೆಲ್ಲಿಂದ ಪಡೆಯುತ್ತದೆ?
ತಂದೆಯಿಂದ. ಅಂದಮೇಲೆ ತಾವು ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು. ನಾವು ಶಿವ ತಂದೆಯಿಂದ
ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ, ತಂದೆಯು ನೀವು ವಿಶ್ವದ ಮಾಲೀಕರಾಗಿದ್ದಿರಿ ಎಂಬ
ಸ್ಮೃತಿಯನ್ನು ತರಿಸಿದ್ದಾರೆ. ಮತ್ತೆ ಪುನರ್ ಜನ್ಮವನ್ನು ಪಡೆಯುತ್ತಾ-ಪಡೆಯುತ್ತಾ ಕೆಳಗಿಳಿಯುತ್ತಾ
ಬಂದಿದ್ದೀರಿ. ದೇವತೆಗಳ ಚಿತ್ರವೂ ಸಹ ಇದೆ, ಮನುಷ್ಯರು ಜ್ಯೋತಿಯಲ್ಲಿ ಜ್ಯೋತಿಯು ಸಮಾವೇಶವಾಯಿತು
ಎಂದು ತಿಳಿಯುತ್ತಾರೆ, ಈಗ ತಂದೆಯು ತಿಳಿಸಿದ್ದಾರೆ ಒಬ್ಬ ಮನುಷ್ಯನೂ ಜ್ಯೋತಿಯಲ್ಲಿ ಜ್ಯೋತಿ
ಸಮಾವೇಶವಾಗುವುದಿಲ್ಲ. ಯಾರೂ ಸಹ ಮುಕ್ತಿ-ಜೀವನ್ಮುಕ್ತಿಯನ್ನು ಪಡೆಯಲು ಸಾಧ್ಯವಿಲ್ಲ ಅಂದಮೇಲೆ ಇಡೀ
ದಿನ ಮಕ್ಕಳಿಗೆ ಒಳಗಡೆ ವಿಚಾರ ನಡೆಯುತ್ತಿರಬೇಕು. ಎಷ್ಟು ನೆನಪಿನಲ್ಲಿರುತ್ತೀರೋ ಅಷ್ಟು
ಖುಷಿಯಾಗುತ್ತದೆ. ವಿದ್ಯೆ ಓದಿಸುವಂತಹವರನ್ನು ನೋಡಿ ಯಾರಾಗಿದ್ದಾರೆ ಕೃಷ್ಣನಿಗೆ ಲಾರ್ಡ್ ಕೃಷ್ಣ
ಎಂದೂ ಸಹ ಹೇಳುತ್ತಾರೆ ಭಗವಂತನಿಗೆ ಎಂದೂ ಲಾರ್ಡ್ ಎನ್ನುವುದಿಲ್ಲ. ಅವರಿಗೆ ಗಾಡ್ ಫಾದರ್ ಎಂದೇ
ಹೇಳುತ್ತಾರೆ. ಶಿವ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ, ಈಗ ನಿಮಗೆ ಅನಿಸುತ್ತದೆ, ಆ ಸ್ವರ್ಗದ
ರಚಯಿತನೇ ಸ್ವರ್ಗವೆಂದರೆ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ, ಸತ್ಯಯುಗದಲ್ಲಿ ಬೇರೆ
ಯಾವುದೇ ಧರ್ಮವಿರಲಿಲ್ಲ. ಈ ದೇವತೆಗಳ ಚಿತ್ರವೂ ಸಹ ಇದೆ, ಅವರಿಗೆ ಆದಿ ಸನಾತನ ದೇವಿ-ದೇವತೆಗಳು
ಎನ್ನಲಾಗುತ್ತದೆ. ಇವರು ವಿಶ್ವದ ಮಾಲೀಕರಾಗಿದ್ದರು. ಅವರು ಸತ್ಯಯುಗದವರು, ನೀವು ಸಂಗಮಯುಗಿಗಳು.
ತಂದೆಯು ನಮ್ಮನ್ನು ಸತ್ಯವಂತರನ್ನಾಗಿ ಮಾಡುತ್ತಾರೆ ಎಂದು ನಿಮಗೆ ಗೊತ್ತಿದೆ. ತಾವು
ಸತ್ಯವಂತರಾಗುತ್ತಾ ಹೋಗುತ್ತೀರಿ. ವಿಕಾರಿಗಳಿಗೆ ಅಸತ್ಯವಂತರೆಂದು ಹೇಳಲಾಗುತ್ತದೆ. ಈ ದೇವತೆಗಳೂ
ಪವಿತ್ರರು. ಪವಿತ್ರತೆಗೆ ಪ್ರಭಾಮಂಡಲವನ್ನು ತೋರಿಸುತ್ತಾರೆ. ಅಸತ್ಯವೆಂದರೆ ಒಂದು ಹೆಜ್ಜೆಯೂ
ಸರಿಯಾಗಿಲ್ಲ ಎಂದರ್ಥ. ಶಿವಾಲಯದಿಂದ ಇಳಿದು ವೇಶ್ಯಾಲಯಕ್ಕೆ ಬಂದು ಬಿಡುತ್ತಾರೆ. ಅವರು ಸ್ವರ್ಗದ
ರಚೈತನೆಂದು ಎಲ್ಲಿಯ ತನಕ ತಾವು ತಂದೆಯ ಪರಿಚಯವನ್ನು ಅವರಿಗೆ ಕೊಡುವುದಿಲ್ಲ ಅಲ್ಲಿಯ ತನಕ ಈ
ಮಾತುಗಳನ್ನು ಹೊಸಬರು ತಿಳಿದುಕೊಳ್ಳಲು ಸಾಧ್ಯವಿಲ್ಲ. ಸ್ವರ್ಗ ಹಾಗೂ ನರಕ ಇವೆರಡಕ್ಷರಗಳಿವೆ. ಸುಖ
ಹಾಗೂ ದುಃಖ, ಸ್ವರ್ಗ ಹಾಗೂ ನರಕ. ತಮಗೆ ಗೊತ್ತಿದೆ - ಭಾರತದಲ್ಲಿ ಸುಖವಿತ್ತು, ಈಗ ದುಃಖವಿದೆ.
ಮತ್ತೆ ತಂದೆಯು ಬಂದು ಸುಖವನ್ನು ನೀಡುತ್ತಾರೆ. ಈಗ ದುಃಖದ ಸಮಯ ಸಮಾಪ್ತಿಯಾಗಬೇಕು. ತಂದೆಯು
ಮಕ್ಕಳಿಗೆ ಸುಖದ ಉಡುಗೊರೆಯನ್ನು ತರುತ್ತಾರೆ. ಸರ್ವರಿಗೂ ಸುಖ ಕೊಡುತ್ತಾರೆ, ಅದಕ್ಕಾಗಿಯೇ ಎಲ್ಲರೂ
ಅವರ ಭಕ್ತಿಯನ್ನು ಮಾಡುತ್ತಾರೆ. ಸನ್ಯಾಸಿ-ಉದಾಸಿಗಳು ತಪಸ್ಸು ಮಾಡುತ್ತಾರೆ, ಅವರಿಗೂ ಸಹ
ಯಾವುದಾದರೊಂದು ಆಸೆಯು ಖಂಡಿತವಾಗಿಯೂ ಇರುತ್ತದೆ. ಸತ್ಯಯುಗದಲ್ಲಿ ಅಂತಹ ಯಾವುದೇ ಮಾತಿಲ್ಲ. ಅಲ್ಲಿ
ಬೇರೆ ಯಾವುದೇ ಧರ್ಮದವರೂ ಇರುವುದಿಲ್ಲ. ತಾವು ಈಗ ಹೊಸ ಜಗತ್ತಿಗೆ ಹೋಗಲು ಪುರುಷಾರ್ಥ
ಮಾಡುತ್ತಿದ್ದೀರಿ. ನಿಮಗೆ ಗೊತ್ತಿದೆ, ಅದು ಸುಖಧಾಮ, ಅದು ಶಾಂತಿಧಾಮ, ಇದು ದುಃಖಧಾಮವಾಗಿದೆ. ತಾವು
ಸಂಗಮದಲ್ಲಿದ್ದೀರಿ ಉತ್ತಮ ಪುರುಷರಾಗಲು ಪುರುಷಾರ್ಥ ಮಾಡುತ್ತಿದ್ದೀರಿ. ಪುರುಷಾರ್ಥವನ್ನು
ಚೆನ್ನಾಗಿ ಮಾಡಬೇಕು. ವಿದ್ಯೆಯೊಂದಿಗೆ ಎಂದೂ ಮುನಿಸಿಕೊಳ್ಳಬಾರದು. ಯಾರ ಜೊತೆಯಲ್ಲಿಯೇ
ಬೇಸರವಾಗಿದ್ದರೆ ವಿದ್ಯೆಯನ್ನು ಬಿಡಬಾರದು. ಜಗಳ, ಹೊಡೆದಾಟಕ್ಕೂ, ವಿದ್ಯೆಗೂ ಸಂಬಂಧವಿಲ್ಲ.
ಓದುತ್ತೀರಿ, ಬರೆಯುತ್ತೀರೆಂದರೆ ನವಾಬರಾಗುತ್ತೀರಿ....... ಜಗಳವಾಡಿದರೆ, ಹೊಡೆದಾಟ ಮಾಡಿದರೆ ಹೇಗೆ
ನವಾಬರಾಗುತ್ತೀರಿ! ಮತ್ತೆ ನಡವಳಿಕೆಯೂ ತಮೋಪ್ರಧಾನವಾಗಿ ಬಿಡುತ್ತದೆ. ಪ್ರತಿಯೊಬ್ಬರೂ ತಮ್ಮ
ಉನ್ನತಿಯ ಯೋಚನೆಯನ್ನು ಮಾಡಬೇಕು. ತಂದೆಯು ತಿಳಿಸುತ್ತಾರೆ - ಹೇ ಆತ್ಮರೇ, ತಂದೆಯನ್ನು ನೆನಪು
ಮಾಡಿದಾಗ ವಿಕರ್ಮ ವಿನಾಶವಾಗುತ್ತದೆ, ದೈವೀ ಗುಣಗಳೂ ಸಹ ಧಾರಣೆಯಾಗುತ್ತದೆ. ಒಂದುವೇಳೆ
ಲಕ್ಷ್ಮೀ-ನಾರಾಯಣರಂತೆ ಆಗಬೇಕಾದರೆ ತಂದೆಯೇ ಅವರನ್ನೂ ಸಹ ಆ ರೀತಿ ಮಾಡಿದ್ದಾರೆ. ತಂದೆಯು
ತಿಳಿಸುತ್ತಾರೆ - ತಾವೇ ಈ ರಾಜ್ಯ ಮಾಡುತ್ತಿದ್ದಿರಿ ಈಗ ಮತ್ತೆ ತಾವೇ ಆಗಬೇಕು. ರಾಜಯೋಗವನ್ನು
ತಂದೆಯು ಸಂಗಮದಲ್ಲಿಯೇ ಕಲಿಸುತ್ತಾರೆ. ತಾವು ಕಲ್ಪ-ಕಲ್ಪದಲ್ಲಿಯೂ ಈ ರೀತಿಯೇ ಆಗುತ್ತೀರಿ. ಸದಾ
ಕಲಿಯುಗವೇ ನಡೆಯುತ್ತಿರುತ್ತದೆ ಎಂದಲ್ಲ. ಕಲಿಯುಗದ ನಂತರ ಸತ್ಯಯುಗ..... ಈ ಚಕ್ರವು ಅವಶ್ಯವಾಗಿ
ಪುನರಾವರ್ತನೆಯಾಗುತ್ತದೆ. ಸತ್ಯಯುಗದಲ್ಲಿ ಮನುಷ್ಯರು ಕಡಿಮೆಯಿದ್ದರು, ಈಗ ಮತ್ತೆ ಅವಶ್ಯವಾಗಿ
ಕಡಿಮೆಯಾಗಲೇಬೇಕು. ಇದು ಸಹಜವಾಗಿ ಅರ್ಥ ಮಾಡಿಕೊಳ್ಳುವ ಮಾತುಗಳಾಗಿವೆ. ಕಳೆದು ಹೋಗಿರುವ ಕಥೆಯನ್ನು
ಹೇಳುತ್ತಾರೆ. ಇದು ಚಿಕ್ಕ ಕಥೆಯಾಗಿದೆ. ವಾಸ್ತವದಲ್ಲಿ ದೊಡ್ಡದೇ ಆದರೆ ತಿಳಿದುಕೊಳ್ಳುವುದರಲ್ಲಿ
ಚಿಕ್ಕದಾಗಿದೆ. 84 ಜನ್ಮಗಳ ರಹಸ್ಯವಿದೆ, ತಮಗೂ ಸಹ ಮೊದಲು ಗೊತ್ತಿರಲಿಲ್ಲ. ಈಗ ಓದುತ್ತಿದ್ದೇವೆ
ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಇದು ಸಂಗಮಯುಗದ ವಿದ್ಯೆಯಾಗಿದೆ. ಈಗ ಡ್ರಾಮಾದ ಚಕ್ರವು
ಸುತ್ತಿಕೊಂಡು ಬಂದಿದೆ. ಪುನಃ ಸತ್ಯಯುಗದಿಂದ ಆರಂಭವಾಗುವುದು. ಈ ಹಳೆಯ ಸೃಷ್ಟಿಯು ಬದಲಾಗುತ್ತಿದೆ.
ಕಲಿಯುಗದ ಕಾಡಿನ ವಿನಾಶವಾಗುವುದು ಪುನಃ ಸತ್ಯಯುಗೀ ಹೂಗಳ ಹೂದೋಟವಾಗುತ್ತದೆ. ದೈವೀ ಗುಣ ಇರುವವರಿಗೆ
ಹೂ ಎಂದು ಹೇಳಲಾಗುತ್ತದೆ. ಮುಳ್ಳುಗಳೆಂದು ಆಸುರೀ ಗುಣವುಳ್ಳವರಿಗೆ ಹೇಳಲಾಗುತ್ತದೆ. ನನ್ನಲ್ಲಿ
ಯಾವುದೇ ಅವಗುಣವಿಲ್ಲವೆ ಎಂದು ನೋಡಿಕೊಳ್ಳಬೇಕು. ಈಗ ನಾವು ದೇವತೆಗಳಾಗಲು
ಯೋಗ್ಯರಾಗುತ್ತಿದ್ದೇವೆಂದರೆ ಅವಶ್ಯವಾಗಿ ದೈವೀ ಗುಣವನ್ನು ಧಾರಣೆ ಮಾಡಿಕೊಳ್ಳಬೇಕು. ತಂದೆಯು
ಶಿಕ್ಷಕ-ಸದ್ಗುರುವಾಗಿ ಬರುತ್ತಾರೆಂದಾಗ ನಡವಳಿಕೆ ಸುಧಾರಿಸಿಕೊಳ್ಳಬೇಕು. ಎಲ್ಲರ ನಡವಳಿಕೆ
ಹಾಳಾಗಿದೆ ಎಂದು ಮನುಷ್ಯರು ಹೇಳುತ್ತಾರೆ ಆದರೆ ಒಳ್ಳೆಯ ನಡವಳಿಕೆಯೆಂದು ಯಾವುದಕ್ಕೆ ಹೇಳಬಹುದು -
ಇದೂ ಸಹ ಗೊತ್ತಿಲ್ಲ. ತಾವು ತಿಳಿಸಬಹುದು - ಈ ದೇವತೆಗಳ ನಡವಳಿಕೆ ಚೆನ್ನಾಗಿತ್ತಲ್ಲವೆ. ಇವರು ಎಂದೂ
ಯಾರಿಗೂ ದುಃಖವನ್ನು ಕೊಡುತ್ತಿರಲಿಲ್ಲ. ಯಾರದಾದರೂ ನಡವಳಿಕೆ ಚೆನ್ನಾಗಿದ್ದರೆ ಹೇಳುತ್ತಾರೆ - ಇವರು
ದೇವಿಯಾಗಿದ್ದಾರೆ, ಇವರ ಮಾತುಗಳು ಎಷ್ಟು ಮಧುರವಾಗಿವೆ ಎಂದು. ತಂದೆಯು ಹೇಳುತ್ತಾರೆ - ನಿಮ್ಮನ್ನೂ
ದೇವತೆಗಳನ್ನಾಗಿ ಮಾಡುತ್ತೇನೆಂದ ಮೇಲೆ ತಾವು ಬಹಳ ಮಧುರರಾಗಬೇಕು, ದೈವೀ ಗುಣಗಳನ್ನು ಧಾರಣೆ
ಮಾಡಬೇಕು. ಯಾರು ಹೇಗಿರುತ್ತಾರೆಯೋ ಹಾಗೆಯೇ ಮಾಡುತ್ತಾರೆ. ತಾವೆಲ್ಲರೂ ಶಿಕ್ಷಕರಾಗಬೇಕು. ಶಿಕ್ಷಕನ
ಮಕ್ಕಳು ಶಿಕ್ಷಕರು. ತಾವು ಪಾಂಡವ ಸೇನೆಯಲ್ಲವೆ. ಎಲ್ಲರಿಗೂ ಮಾರ್ಗ ತೋರಿಸುವುದೇ ನಿಮ್ಮ
ಕೆಲಸವಾಗಿದೆ. ದೈವೀ ಗುಣವನ್ನು ಧಾರಣೆ ಮಾಡಿಕೊಳ್ಳಬೇಕು, ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕು.
ಮನೆಯಲ್ಲಿಯೂ ಸಹ ಸರ್ವೀಸ್ ಮಾಡಬಹುದು ಯಾರೇ ಬಂದರೂ ಶಿಕ್ಷಣ ಕೊಡುತ್ತಿರಬೇಕು. ಈ ರೀತಿ
ಅನೇಕರಿದ್ದಾರೆ ಅವರು ತಮ್ಮ ಬಳಿ ಗೀತಾ ಪಾಠಶಾಲೆಯನ್ನು ತೆರೆದು ಅನೇಕರ ಸರ್ವೀಸ್ ಮಾಡುತ್ತಾರೆ.
ಇಲ್ಲಿಯೇ ಬಂದು ಕುಳಿತುಕೊಳ್ಳಬೇಕು ಎಂದೇನಿಲ್ಲ. ಕನ್ಯೆಯರಿಗೆ ಬಹಳ ಸಹಜವಾಗಿದೆ. ಒಂದೆರಡು ತಿಂಗಳು
ಸುತ್ತು ಹಾಕಿ ಮತ್ತೆ ಮನೆಗೆ ಹೋಗಬಹುದು. ಮನೆ-ಮಠವನ್ನು ಬಿಡಬಾರದು. ತಮಗೆ ಮನೆಯಿಂದ ಕರೆ ಬಂದರೆ
ಹೋಗುತ್ತೀರಿ, ಅದಕ್ಕೇನು ಪರವಾಗಿಲ್ಲ. ಇದರಲ್ಲಿ ಯಾವುದೇ ನಷ್ಟದ ಮಾತಿಲ್ಲ. ಇನ್ನಷ್ಟು ಉತ್ಸಾಹ
ಬರುತ್ತದೆ. ನಾವೂ ಸಹ ಈಗ ಬುದ್ಧಿವಂತರಾಗಿದ್ದೇವೆ. ಮನೆಯವರಿಗೂ ಸಹ ತಮ್ಮ ಸಮಾನರನ್ನಾಗಿ ಮಾಡಿ
ಜೊತೆಯಲ್ಲಿ ಕರೆದೊಯ್ಯುತ್ತೇವೆ. ಈ ರೀತಿ ಅನೇಕರಿದ್ದಾರೆ - ಮನೆಯಲ್ಲಿಯೇ ಇದ್ದುಕೊಂಡು ಸರ್ವೀಸ್
ಮಾಡುತ್ತಾರೆ. ಆಗ ಅವರು ಬುದ್ಧಿವಂತರಾಗುತ್ತಾರೆ. ತಮ್ಮನ್ನು ತಾವು ಆತ್ಮನೆಂದು ತಿಳಿದು ತಂದೆಯನ್ನು
ನೆನಪು ಮಾಡಿ ಎಂಬ ಮುಖ್ಯ ಮಾತನ್ನು ತಂದೆಯು ತಿಳಿಸುತ್ತಾರೆ. ತಮ್ಮ ಉನ್ನತಿಯನ್ನು ಮಾಡಿಕೊಳ್ಳಬೇಕು.
ಇಲ್ಲಿರುವವರಿಗಿಂತ ಮನೆಯಲ್ಲಿರುವವರು ಚೆನ್ನಾಗಿ ಉನ್ನತಿಯಾಗಬಹುದು. ತಾವು ಮನೆಗೆ ಹೋಗಬೇಡಿ ಎಂದೂ
ಸಹ ಹೇಳುವುದಿಲ್ಲ. ಅವರ ಕಲ್ಯಾಣವನ್ನೂ ಮಾಡಬೇಕು. ಯಾರಿಗೆ ಕಲ್ಯಾಣ ಮಾಡುವ ಅಭ್ಯಾಸವಾಗಿ ಬಿಡುತ್ತದೆ
ಅವರು ಸುಮ್ಮನಿರಲು ಸಾಧ್ಯವಿಲ್ಲ. ಜ್ಞಾನ ಹಾಗೂ ಯೋಗ ಪೂರ್ಣವಾಗಿದ್ದರೆ ಯಾರೂ ಅಗೌರವಿಸಲು
ಸಾಧ್ಯವಿಲ್ಲ. ಯೋಗವಿಲ್ಲವೆಂದರೆ ಮಾಯೆಯೂ ಸಹ ಏಟನ್ನು ಕೊಡುತ್ತದೆ ಅಂದಮೇಲೆ ಗೃಹಸ್ಥದಲ್ಲಿದ್ದು
ಕಮಲಪುಷ್ಫ ಸಮಾನ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಭಲೇ ಮನೆಯಲ್ಲಿಯೇ ಇರಿ ಎಂದು ತಂದೆಯು
ಸ್ವತಂತ್ರ ಕೊಡುತ್ತಾರೆ. ಎಲ್ಲರೂ ಇಲ್ಲಿಗೆ ಬಂದು ಹೇಗೆ ಇರುತ್ತೀರಿ. ಯಾರೆಲ್ಲಾ ಬರುತ್ತಾರೆಯೋ
ಅವರೆಲ್ಲರಿಗೂ ಇಲ್ಲಿ ಮನೆಯನ್ನು ಕಟ್ಟಿಸಬೇಕಾಗುತ್ತದೆ. ಕಲ್ಪದ ಮೊದಲೂ ಏನಾಗಿತ್ತೋ ಅದೇ
ಪುನರಾವರ್ತನೆಯಾಗುತ್ತದೆ. ಮಕ್ಕಳು ವೃದ್ಧಿ ಹೊಂದುತ್ತಿರುತ್ತಾರೆ. ಡ್ರಾಮಾದ ವಿನಃ ಬೇರೇನೂ
ಆಗುವುದೇ ಇಲ್ಲ. ಈ ಯಾವ ಯುದ್ಧಗಳೆಲ್ಲವೂ ಆಗುತ್ತದೆ - ಇಷ್ಟೆಲ್ಲಾ ಮನುಷ್ಯರು ಸಾಯುತ್ತಾರೆ
ಅದೆಲ್ಲವೂ ನಾಟಕದಲ್ಲಿ ನಿಶ್ಚಿತವಾಗಿದೆ. ಯಾವುದು ಕಳೆದು ಹೋಗಿದೆಯೋ ಅದು ಪುನಃ
ಪುನರಾವರ್ತನೆಯಾಗುತ್ತದೆ. ಯಾವುದನ್ನು ಕಲ್ಪ-ಕಲ್ಪದಲ್ಲಿಯೂ ತಿಳಿಸಿದ್ದೇನೋ ಅದನ್ನೇ ಈಗಲೂ
ತಿಳಿಸುತ್ತೇನೆ. ಮನುಷ್ಯರು ಭಲೇ ಏನೇ ವಿಚಾರ ಮಾಡಲಿ ನಾನಂತೂ ಅದೇ ಪಾತ್ರವನ್ನಭಿನಯಿಸುತ್ತೇನೆ,
ಯಾವುದು ನನ್ನಲ್ಲಿ ನಿಗಧಿಯಾಗಿದೆ. ಡ್ರಾಮಾದಲ್ಲಿ ಏರುಪೇರಾಗಲು ಸಾಧ್ಯವಿಲ್ಲ. ಯಾರು ಕಲ್ಪದ ಮೊದಲು
ಓದಿದ್ದರೋ ಅವರೇ ಓದುತ್ತಾರೆ. ಪ್ರತಿಯೊಬ್ಬರ ನಡುವಳಿಕೆಯಿಂದ ಸಾಕ್ಷಾತ್ಕಾರವೂ ಆಗುತ್ತಾ ಇರುತ್ತದೆ.
ಇವರು ಏನು ಓದುತ್ತಾರೆ? ಏನು ಪದವಿ ಪಡೆಯುತ್ತಾರೆ ಎಂದು. ಚೆನ್ನಾಗಿ ಸರ್ವೀಸ್ ಮಾಡುತ್ತಾ
ತಿಳಿದುಕೊಳ್ಳಿ - ಇದಕ್ಕಿದ್ದಂತೆ ಅಪಘಾತವಾದರೆ ಅವರು ಹೋಗಿ ಒಳ್ಳೆಯ ಕುಲದಲ್ಲಿ ಜನ್ಮ ಪಡೆಯುತ್ತಾರೆ,
ಬಹಳ ಸುಖಿಗಳಾಗಿರುತ್ತಾರೆ. ಯಾರಿಗೆ ಎಷ್ಟು ಸುಖವನ್ನು ಕೊಟ್ಟಿದ್ದರೋ ಅಷ್ಟೇ ಅವರು ಪಡೆಯುತ್ತಾರೆ.
ಈ ಸಂಪಾದನೆಯು ಎಂದಿಗೂ ಸಹ ಹೋಗುವುದಿಲ್ಲ. ಸತ್ಯಯುಗದಲ್ಲಂತೂ ಎಲ್ಲಿ ಗೆಲ್ಲುತ್ತಾರೆಯೋ ಅಲ್ಲಿ
ಜನ್ಮ ಪಡೆಯುತಾರೆ. ಅನೇಕರಿಗೆ ಸುಖ ನೀಡಿದ್ದರೆ ಗೋಲ್ಡನ್ ಸ್ಫೂನ್ ಇನ್ ದಿ ಮೌತ್ (ಬಹಳ
ಸುಖವಿರುತ್ತದೆ) ಅದಕ್ಕಿಂತ ಕಡಿಮೆ ಬೆಳ್ಳಿಯಾಗಿದೆ. ಅದಕ್ಕಿಂತಲೂ ಕಡಿಮೆ ಹಿತ್ತಾಳೆಯದು ಸಿಗುತ್ತದೆ.
ಅರ್ಥವಾಗುತ್ತದೆಯಲ್ಲವೆ. ನಮ್ಮದು ಎಷ್ಟು ಯೋಗವಿದೆ, ರಾಜ-ರಾಣಿ, ಪ್ರಜೆ ಎಲ್ಲಾ ಪ್ರಕಾರದವರೂ
ಆಗುವವರಿದ್ದಾರೆ. ಚೆನ್ನಾಗಿ ಓದಲಿಲ್ಲ, ದೈವೀ ಗುಣಗಳನ್ನು ಧಾರಣೆ ಮಾಡಲಿಲ್ಲವೆಂದರೆ ಪದವಿಯು
ಕಡಿಮೆಯಾಗುತ್ತದೆ. ಒಳ್ಳೆಯ ಅಥವಾ ಕೆಟ್ಟ ಕರ್ಮವಂತೂ ಎದುರಿಗೆ ಬರುತ್ತದೆ. ನಾನು ಎಷ್ಟರ ಮಟ್ಟಿಗೆ
ಸರ್ವೀಸ್ ಮಾಡುತ್ತಿದ್ದೇನೆಂದು ಆತ್ಮಕ್ಕೆ ಗೊತ್ತಾಗುತ್ತದೆ. ಒಂದು ವೇಳೆ ಈಗಲೇ ಶರೀರ ಬಿಟ್ಟರೆ
ಯಾವ ಪದವಿ ಪಡೆಯಬಹುದು! ಈಗ ತಾವು ಓದಿ ಸುಧಾರಣೆಯಾಗುತ್ತಿದ್ದೀರಿ. ಕೆಲವರಂತೂ ಹಾಳಾಗಿದ್ದಾರೆ ಆಗ
ಇವರ ಅದೃಷ್ಟದಲ್ಲಿಲ್ಲವೆಂದು ಹೇಳಬಹುದು. ತಂದೆಯಂತೂ ಎಷ್ಟೊಂದು ಶ್ರೇಷ್ಠರನ್ನಾಗಿ ಮಾಡುತ್ತಾರೆ.
ಪ್ರಭುವಿನ ಮನೆಯಿಂದ ಯಾರೂ ಸಹ ಖಾಲಿಯಾಗಿ ಹೋಗಬಾರದು. ಈಗ ಪ್ರಭು ನಿಮ್ಮ ಸಮ್ಮುಖದಲ್ಲಿದ್ದಾರೆ.
ಯಾರಿಗಾದರೂ ತಾವು ಎರಡು ಅಕ್ಷರವನ್ನು ಹೇಳಿದರೂ ಸಹ ಪ್ರಜೆಗಳಲ್ಲಿ ಬರುತ್ತಾರೆ. ದೇವಿ-ದೇವತಾ
ಧರ್ಮದವರು ಇಲ್ಲಿಯ ತನಕ ಬರುತ್ತಲೇ ಇದ್ದಾರೆ. ಆದರೆ ಪತಿತರಾಗಿರುವ ಕಾರಣ ತಮ್ಮನ್ನು ಹಿಂದೂಗಳೆಂದು
ಹೇಳಿಕೊಳ್ಳುತ್ತಾರೆ. ತಂದೆಯ ಬಳಿ ಹೇಗೆ ಜ್ಞಾನವಿದೆಯೋ ಹಾಗೆಯೇ ನಿಮ್ಮ ಬುದ್ಧಿಯಲ್ಲಿಯೂ ಇದೆ.
ತಂದೆಯು ಜ್ಞಾನಸಾನರನಾಗಿದ್ದಾರೆ. ಈ ಇತಿಹಾಸ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತಿದೆ ಎಂದು
ತಂದೆಯು ಹೇಳುತ್ತಾರೆ. ಶಿಕ್ಷಕರೂ ಸಹ ವಿದ್ಯಾರ್ಥಿಯ ವಿದ್ಯೆಯಿಂದ ಎಷ್ಟು ಅಂಕಗಳಲ್ಲಿ
ಉತ್ತೀರ್ಣನಾಗುತ್ತಾನೆಂದು ತಿಳಿದುಕೊಳ್ಳುತ್ತಾರೆ. ಪ್ರತಿಯೊಬ್ಬರೂ ಸ್ವಯಂನ್ನೂ ಸಹ
ತಿಳಿದುಕೊಂಡಿರುತ್ತಾರೆ. ಕೆಲವರು ದೈವೀ ಗುಣಗಳಲ್ಲಿ ಕಡಿಮೆಯಿರುತ್ತಾರೆ, ಕೆಲವರು ಯೋಗದಲ್ಲಿ,
ಕೆಲವರು ಜ್ಞಾನದಲ್ಲಿ ಬಲಹೀನರಾಗಿರುತ್ತಾರೆ. ಆ ರೀತಿಯಿದ್ದರೆ ನಪಾಸಾಗುತ್ತಾರೆ. ಇಂದು
ಕಡಿಮೆಯಿದ್ದಾರೆ, ನಾಳೆ ಪಕ್ಕಾ ಆಗುವುದಿಲ್ಲ ಎಂದಲ್ಲ, ಮುಂದುವರೆಯಲು ಸಾಧ್ಯವಿದೆ. ಸ್ವಯಂ ಸಹ ನಾನು
ಯಾವುದರಲ್ಲಿ ಎಲ್ಲೆಲ್ಲಿ ನಪಾಸಾಗುತ್ತಿದ್ದೇನೆಂದು ಅನುಭವ ಮಾಡುತ್ತಾರೆ. ಇಂತಹವರು ನಮಗಿಂತ
ಬುದ್ಧಿವಂತರೆಂದು ತಿಳಿಯುತ್ತದೆ. ಕಲಿತು ಬುದ್ಧಿವಂತರೂ ಸಹ ಆಗಬಹುದು. ಒಂದು ವೇಳೆ
ದೇಹಾಭಿಮಾನವಿದ್ದರೆ ನಂತರ ಏನು ಕಲಿಯಲು ಸಾಧ್ಯ. ನಾನಾತ್ಮನಾಗಿದ್ದೇನೆ ಎಂಬುದನ್ನಂತೂ ಚೆನ್ನಾಗಿ
ಪಕ್ಕಾ ಮಾಡಿಕೊಳ್ಳಿ. ತಂದೆಯೇ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು
ವಿನಾಶವಾಗುತ್ತವೆ ನಂತರ ದೈವೀ ಗುಣ ಧಾರಣೆಯಾಗುತ್ತದೆ. ನಾನು ಎಷ್ಟರ ಮಟ್ಟಿಗೆ ಯೋಗ್ಯನಾಗಿದ್ದೇನೆ
ಎಂಬುದನ್ನು ನೋಡಿಕೊಳ್ಳಬೇಕು. ತಾವೀಗ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಪಡೆಯುತ್ತಿದ್ದೀರಿ.
ಈ ರಾಜಯೊಗದ ಜ್ಞಾನವನ್ನು ತಂದೆಯ ವಿನಃ ಬೇರೆ ಯಾರೂ ಕಲಿಸಲು ಸಾಧ್ಯವಿಲ್ಲ. ಮಕ್ಕಳು ಕಲಿಯುತ್ತಾ
ಹೋಗುತ್ತಾರೆ. ಮಕ್ಕಳು ಕೇಳುತ್ತಾರೆ - ನಮ್ಮ ಕುಲದ ಬ್ರಾಹ್ಮಣರು ಎಷ್ಟಿದ್ದಾರೆ? ಇದು ಪೂರ್ಣ ಹೇಗೆ
ಗೊತ್ತಾಗುತ್ತದೆ. ಬರುತ್ತಾ-ಹೋಗುತ್ತಾ ಇರುತ್ತಾರೆ. ಈಗ ಹೊಸಬರೂ ಸಹ ಬರುತ್ತಿರುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
೧. ತಮ್ಮದನ್ನು
ದೈವೀ ನಡವಳಿಕೆಯನ್ನಾಗಿ ಮಾಡಿಕೊಳ್ಳಬೇಕು. ದೈವೀ ಗುಣವನ್ನು ಧಾರಣೆ ಮಾಡಿ ತಮ್ಮ ಹಾಗೂ ಸರ್ವರ
ಕಲ್ಯಾಣ ಮಾಡಬೇಕು, ಎಲ್ಲರಿಗೂ ಸುಖ ಕೊಡಬೇಕು.
೨. ಸತೋಪ್ರಧಾನರಾಗಲು ಬುದ್ಧಿಯನ್ನು ಒಬ್ಬ ತಂದೆಯ ಜೊತೆ ಜೋಡಿಸಬೇಕು. ಬುದ್ಧಿಯನ್ನು ಅಲೆದಾಡಲು
ಬಿಡಬಾರದು. ತಂದೆಯ ಸಮಾನ ಶಿಕ್ಷಕರಾಗಿ ಸರ್ವರಿಗೂ ಸರಿಯಾದ ಮಾರ್ಗವನ್ನು ತಿಳಿಸಬೇಕು.
ವರದಾನ:
ಖುಷಿಯ
ಖಜಾನೆಗಳಿಂದ ಸಂಪನ್ನರಾಗಿ ದುಃಖಿ ಆತ್ಮಗಳಿಗೆ ಖುಷಿಯ ದಾನ ಕೊಡುವಂತಹ ಪುಣ್ಯ ಆತ್ಮ ಭವ.
ಈ ಸಮಯ ಪ್ರಪಂಚದಲ್ಲಿ
ಪ್ರತಿ ಸಮಯ ದುಃಖವಿದೆ ಮತ್ತು ನಿಮ್ಮ ಬಳಿ ಎಲ್ಲಾ ಸಮಯದ ಖುಷಿಯಿದೆ. ಆದ್ದರಿಂದ ದುಃಖಿ ಆತ್ಮಗಳಿಗೆ
ಖುಷಿ ಕೊಡುವುದು - ಇದು ಎಲ್ಲದಕ್ಕಿಂತಲೂ ದೊಡ್ಡ ಪುಣ್ಯವಾಗಿದೆ. ಪ್ರಪಂಚದವರು ಖುಷಿಗಾಗಿ ಎಷ್ಟು
ಸಮಯ, ಸಂಪತ್ತು ಖರ್ಚು ಮಾಡುತ್ತಾರೆ ಮತ್ತು ನಿಮಗೆ ಸಹಜ ಅವಿನಾಶಿ ಖುಷಿ ದೊರಕಿ ಬಿಟ್ಟಿದೆ. ಈಗ
ಕೇವಲೇನು ಸಿಕ್ಕಿದೆ ಅದನ್ನು ಹಂಚುತ್ತಾ ಹೋಗಿ. ಹಂಚುವುದು ಎಂದರೇನೆ ಹೆಚ್ಚಿಸಿಕೊಳ್ಳುವುದು.
ಯಾವುದೇ ಸಂಬಂಧದಲ್ಲಿ ಬರಲಿ ಅವರು ಅನುಭವ ಮಾಡಬೇಕು ಇವರಿಗೆ ಯಾವುದೋ ಶ್ರೇಷ್ಠ ಪ್ರಾಪ್ತಿಯಾಗಿದೆ
ಅದರದ್ದೇ ಖುಷಿಯಲ್ಲಿದ್ದಾರೆ ಎಂದು.
ಸ್ಲೋಗನ್:
ಅನುಭವಿ ಆತ್ಮ ಎಂದೂ ಸಹ ಯಾವುದೇ ಮಾತಿನಲ್ಲಿ ಮೋಸ ಹೋಗುವುದಿಲ್ಲ, ಅವರು ಸದಾ ವಿಜಯಿಯಾಗಿರುತ್ತಾರೆ.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ -
ಬ್ರಹ್ಮಾ ತಂದೆಯ ಸಮಾನ ನಿಮ್ಮ ಸ್ಥಿತಿಯನ್ನು ಅಚಲ ಅಡೋಲ ಮಾಡಿಕೊಳ್ಳಬೇಕಾದರೆ ಯಾವುದೇ
ವಾತಾವರಣದಲ್ಲಿ, ವಾಯುಮಂಡಲದಲ್ಲಿರುತ್ತಾ ಪ್ರತಿಯೊಬ್ಬರ ಸಲಹೆಗೆ ಗೌರವ ಕೊಡಿ. ಎಂದೂ ಸಹಾ ಬೇರೆಯವರ
ಸಲಹೆ ಕೇಳುತ್ತಾ ಗೊಂದಲದಲ್ಲಿ ಬರಬೇಡಿ ಏಕೆಂದರೆ ಯಾರು ನಿಮಿತ್ತರಾಗಿದ್ದಾರೆ ಅವರು
ಅನುಭವಿಯಾಗಿದ್ದಾರೆ. ಒಂದು ವೇಳೆ ಅವರ ಸೂಚನೆಗಳು ಸ್ಪಷ್ಠವಾಗಿರದಿದ್ದರು ಸಹ ಹಲ್ಚಲ್ನಲ್ಲಿ ಬರಬೇಡಿ.
ಧೈರ್ಯದಿಂದ ಹೇಳಿ ಇದನ್ನು ತಿಳಿದುಕೊಳ್ಳಲು ಪ್ರಯತ್ನ ಪಡುತ್ತೇನೆ ಎಂದು ಆಗ ಸ್ಥಿತಿ ಏಕರಸ ಅಚಲ,
ಅಡೋಲವಾಗಿರುವುದು.