30.07.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಪ್ರಭು ಸಂತಾನರೇ ರಾಜಕುಮಾರರಾಗಬೇಕಾಗಿದೆ, ಆದ್ದರಿಂದ ನೆನಪಿನ ಯಾತ್ರೆಯಿಂದ ತಮ್ಮ ವಿಕರ್ಮಗಳನ್ನು ಭಸ್ಮ ಮಾಡಿಕೊಳ್ಳಿ”

ಪ್ರಶ್ನೆ:
ಯಾವ ಒಂದು ವಿಧಿಯಿಂದ ನಿಮ್ಮ ಎಲ್ಲಾ ದುಃಖಗಳು ದೂರವಾಗಿ ಬಿಡುತ್ತವೆ?

ಉತ್ತರ:
ಯಾವಾಗ ನೀವು ತಮ್ಮ ದೃಷ್ಟಿಯನ್ನು ತಂದೆಯ ದೃಷ್ಟಿಯೊಂದಿಗೆ ಜೋಡಿಸುತ್ತೀರೋ ಆಗ ದೃಷ್ಟಿಯ ಜೋಡಣೆಯಿಂದ ನಿಮ್ಮ ಎಲ್ಲಾ ದುಃಖಗಳು ದೂರವಾಗಿ ಬಿಡುತ್ತವೆ. ಏಕೆಂದರೆ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದರಿಂದ ಎಲ್ಲಾ ಪಾಪಗಳು ತುಂಡಾಗುತ್ತವೆ. ಇದೇ ನಿಮ್ಮ ನೆನಪಿನ ಯಾತ್ರೆಯಾಗಿದೆ. ನೀವು ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತಂದೆಯನ್ನು ನೆನಪು ಮಾಡುತ್ತೀರಿ, ಇದರಿಂದ ಆತ್ಮವು ಸತೋಪ್ರಧಾನವಾಗಿ ಬಿಡುತ್ತದೆ, ನೀವು ಸುಖಧಾಮದ ಮಾಲೀಕರಾಗಿ ಬಿಡುತ್ತೀರಿ.

ಓಂ ಶಾಂತಿ.
ಶಿವ ಭಗವಾನುವಾಚ, ತಮ್ಮನ್ನು ಆತ್ಮನೆಂದು ತಿಳಿದು ಕುಳಿತುಕೊಳ್ಳಿ. ತಂದೆಯು ಆದೇಶಿಸುತ್ತಾರೆ - ಶಿವ ಭಗವಾನುವಾಚ ಅಂದರೆ ಶಿವ ತಂದೆಯು ತಿಳಿಸುತ್ತಾರೆ - ಮಕ್ಕಳೇ ತಮ್ಮನ್ನು ಆತ್ಮನೆಂದು ತಿಳಿದು ಕುಳಿತುಕೊಳ್ಳಿ ಏಕೆಂದರೆ ನೀವೆಲ್ಲರೂ ಸಹೋದರರಾಗಿದ್ದೀರಿ. ಒಬ್ಬ ತಂದೆಯ ಮಕ್ಕಳಾಗಿದ್ದೀರಿ, ಒಬ್ಬ ತಂದೆಯಿಂದಲೇ ಆಸ್ತಿಯನ್ನು ಪಡೆಯಬೇಕಾಗಿದೆ, 5000 ವರ್ಷಗಳ ಮೊದಲೂ ಸಹ ತಂದೆಯಿಂದ ಆಸ್ತಿಯನ್ನು ಪಡೆದಿದ್ದಿರಿ. ಆದಿ ಸನಾತನ ದೇವಿ-ದೇವತೆಗಳ ರಾಜಧಾನಿಯಲ್ಲಿದ್ದಿರಿ. ನೀವು ಸೂರ್ಯವಂಶಿ ಅರ್ಥಾತ್ ವಿಶ್ವದ ಮಾಲೀಕರು ಹೇಗಾಗಲು ಸಾಧ್ಯವೆಂಬುದನ್ನು ತಂದೆಯೂ ಕುಳಿತು ತಿಳುವಳಿಕೆ ನೀಡುತ್ತಾರೆ. ನೀವು ತಂದೆಯಾದ ನನ್ನನ್ನು ನೆನಪು ಮಾಡಿ, ನೀವೆಲ್ಲಾ ಆತ್ಮಗಳು ಸಹೋದರ-ಸಹೋದರರಾಗಿದ್ದೀರಿ. ಶ್ರೇಷ್ಠಾತಿ ಶ್ರೇಷ್ಠ ಭಗವಂತನು ಒಬ್ಬರೇ ಆಗಿದ್ದಾರೆ. ಸತ್ಯ ಸಾಹೇಬನ ಮಕ್ಕಳು ಪ್ರಭು ಸಂತಾನರಾಗಿದ್ದೀರಿ - ಇದನ್ನು ತಂದೆಯೇ ತಿಳಿಸುತ್ತಾರೆ. ಅವರ ಶ್ರೀಮತದನುಸಾರ ಬುದ್ಧಿಯೋಗವನ್ನು ಜೋಡಿಸುತ್ತೀರೆಂದರೆ ನಿಮ್ಮ ಪಾಪಗಳೆಲ್ಲವೂ ತುಂಡಾಗುತ್ತವೆ, ಎಲ್ಲಾ ದುಃಖಗಳು ದೂರ ಆಗಿ ಬಿಡುತ್ತವೆ. ಯಾವಾಗ ತಂದೆಯೊಂದಿಗೆ ನಮ್ಮ ದೃಷ್ಟಿಯು ಸೇರುವುದೋ ಆಗ ಎಲ್ಲಾ ದುಃಖವು ದೂರ ಆಗಿ ಬಿಡುವುದು. ದೃಷ್ಟಿಯನ್ನು ಜೋಡಿಸುವುದರ ಅರ್ಥವನ್ನು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದು ನೆನಪಿನ ಯಾತ್ರೆಯಾಗಿದೆ, ಇದಕ್ಕೆ ಯೋಗಾಗ್ನಿ ಎಂದು ಹೇಳಲಾಗುತ್ತದೆ. ಈ ಯೋಗಾಗ್ನಿಯಿಂದ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳೆಲ್ಲವೂ ಭಸ್ಮವಾಗುತ್ತವೆ. ಇದಂತೂ ದುಃಖಧಾಮವಾಗಿದೆ, ಎಲ್ಲರೂ ನರಕವಾಸಿಗಳಾಗಿದ್ದಾರೆ. ನೀವು ಬಹಳ ಪಾಪಗಳನ್ನು ಮಾಡಿದ್ದೀರಿ, ಇದಕ್ಕೆ ರಾವಣ ರಾಜ್ಯ ಎಂದು ಹೇಳಲಾಗುತ್ತದೆ. ಸತ್ಯಯುಗಕ್ಕೆ ರಾಮ ರಾಜ್ಯ ಎಂದು ಹೇಳುತ್ತಾರೆ. ನೀವು ಈ ರೀತಿಯಾಗಿ ತಿಳಿಸಬಹುದು. ಭಲೆ ಎಷ್ಟೇ ದೊಡ್ಡ ಸಭೆಯು ಕುಳಿತಿರಲಿ, ಭಾಷಣ ಮಾಡುವುದರಲ್ಲಿ ಹಿಂಜರಿಯಬಾರದು. ನೀವಂತೂ ಭಗವಾನುವಾಚವೆಂದು ಹೇಳುತ್ತಿರುತ್ತೀರಿ. ಶಿವ ಭಗವಾನುವಾಚ, ನಾವೆಲ್ಲರೂ ಅವರ ಸಂತಾನರಾಗಿದ್ದೇವೆ, ಪರಸ್ಪರ ಸಹೋದರರಾಗಿದ್ದೇವೆ. ಬಾಕಿ ಶ್ರೀ ಕೃಷ್ಣನಿಗೆ ಸಂತಾನರಿದ್ದಾರೆ ಎಂದು ಹೇಳುವುದಿಲ್ಲ ಹಾಗೂ ಇಷ್ಟು ಜನ ರಾಣಿಯರು ಇರಲಿಲ್ಲ. ಕೃಷ್ಣನಿಗೆ ಯಾವಾಗ ಸ್ವಯಂವರ ಆಗುವುದೋ ಆಗ ಹೆಸರೇ ಬದಲಾಗುತ್ತದೆ. ಆ ಲಕ್ಷ್ಮೀ-ನಾರಾಯಣರಿಗೆ ಮಕ್ಕಳಿದ್ದಾರೆ ಎಂದು ಹೇಳಬಹುದು. ರಾಧೆ ಕೃಷ್ಣರೇ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣರಾಗುತ್ತಾರೆ ಆಗ ಒಂದು ಮಗು ಆಗುತ್ತದೆ ನಂತರ ಅವರ ರಾಜಧಾನಿಯು ನಡೆಯುತ್ತದೆ. ನೀವು ಮಕ್ಕಳು ಈಗ ನನ್ನೊಬ್ಬನನ್ನೇ ನೆನಪು ಮಾಡಬೇಕಾಗಿದೆ. ದೇಹದ ಎಲ್ಲಾ ಧರ್ಮಗಳನ್ನು ಬಿಡಿ ತಂದೆಯನ್ನು ನೆನಪು ಮಾಡಿ. ಆಗ ನಿಮ್ಮೆಲ್ಲಾ ಪಾಪಗಳು ತುಂಡಾಗುತ್ತದೆ. ಸತೋಪ್ರಧಾನರಾಗಿ ಸ್ವರ್ಗದಲ್ಲಿ ಹೋಗುತ್ತೀರಿ, ಸ್ವರ್ಗದಲ್ಲಿ ಯಾವುದೇ ದುಃಖ ಇರುವುದಿಲ್ಲ, ನರಕದಲ್ಲಿ ಅಪಾರ ದುಃಖವಿದೆ, ಸುಖದ ಹೆಸರೂ, ಗುರುತೂ ಇಲ್ಲ. ಹೀಗೆ ಯುಕ್ತಿಯಿಂದ ತಿಳಿಸಬೇಕು. ಶಿವ ಭಗವಾನುವಾಚ, ಹೇ ಮಕ್ಕಳೇ, ಈ ಸಮಯದಲ್ಲಿ ನೀವು ಆತ್ಮಗಳು ಪತಿತರಾಗಿದ್ದೀರಿ, ಈಗ ಪಾವನರು ಹೇಗಾಗುತ್ತೀರಿ. ಹೇ ಪತಿತ ಪಾವನ ಬನ್ನಿ ಎಂದು ನಮ್ಮನ್ನು ಕರೆದಿರಿ ಅಂದಾಗ ಪಾವನರೂ ಸತ್ಯಯುಗದಲ್ಲಿ ಇರುತ್ತಾರೆ, ಕಲಿಯುಗದಲ್ಲಿ ಪತಿತರಿರುತ್ತಾರೆ, ಕಲಿಯುಗದ ನಂತರ ಸತ್ಯಯುಗವು ಅವಶ್ಯವಾಗಿ ಬರುವುದಿದೆ. ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶವು ಆಗುತ್ತದೆ. ಬ್ರಹ್ಮಾರವರ ಮೂಲಕ ಸ್ಥಾಪನೆ ಎಂದು ಗಾಯನವಿದೆ. ನಾವು ಬ್ರಹ್ಮಾಕುಮಾರ-ಕುಮಾರಿಯರು ದತ್ತು ಮಕ್ಕಳಾಗಿದ್ದೇವೆ. ನಾವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೇವೆ. ವಿರಾಟ ರೂಪವೂ ಇದೆಯಲ್ಲವೇ. ಅಂದಾಗ ಅವಶ್ಯವಾಗಿ ಬ್ರಾಹ್ಮಣರಾಗಬೇಕಾಗುತ್ತದೆ, ಬ್ರಹ್ಮನು ಬ್ರಾಹ್ಮಣನಾಗಿದ್ದಾರೆ. ದೇವತೆಗಳು ಇರುವುದೇ ಸತ್ಯಯುಗದಲ್ಲಿ, ಅಲ್ಲಿ ಸದಾ ಸುಖವಿದೆ, ದುಃಖದ ಹೆಸರು ಇರುವುದಿಲ್ಲ. ಕಲಿಯುಗದಲ್ಲಂತೂ ಅಪರಮಪಾರ ದುಃಖವಿದೆ, ಎಲ್ಲರೂ ದುಃಖಿ ಆಗಿದ್ದಾರೆ. ದುಃಖ ಇಲ್ಲದವರು ಯಾರೂ ಇರುವುದಿಲ್ಲ ಏಕೆಂದರೆ ಇದು ರಾವಣ ರಾಜ್ಯವಾಗಿದೆ. ಈ ರಾವಣನು ಭಾರತದ ನಂಬರ್ವನ್ ಶತ್ರು ಆಗಿದ್ದಾನೆ. ಪ್ರತಿಯೊಬ್ಬರಲ್ಲಿಯೂ ಪಂಚ ವಿಕಾರಗಳು ಇವೆ. ಸತ್ಯಯುಗದಲ್ಲಿ ಯಾವುದೇ ವಿಕಾರ ಇರುವುದಿಲ್ಲ, ಅದು ಪವಿತ್ರ ಗೃಹಸ್ಥ ಧರ್ಮವಾಗಿದೆ. ಈಗಂತೂ ದುಃಖದ ಪರ್ವತಗಳು ಬಿದ್ದಿವೆ, ಇನ್ನೂ ಬೀಳಲಿವೆ. ಇಷ್ಟೆಲ್ಲಾ ಬಾಂಬುಗಳು ಮೊದಲಾದವುಗಳನ್ನು ತಯಾರಿಸುತ್ತಿರುತ್ತಾರೆ ಎಂದರೆ ಇವನ್ನು ಸುಮ್ಮನೆ ಇಟ್ಟುಕೊಳ್ಳುತ್ತಾರೆಯೇ! ಬಹಳ ರಿಫೈನ್ ಆಗಿ ತಯಾರಿಸುತ್ತಿದ್ದಾರೆ. ಮೊದಲು ರಿಹರ್ಸಲ್ ಮಾಡುತ್ತಾರೆ, ನಂತರ ಅಂತಿಮ ತೀರ್ಮಾನವಾಗುತ್ತದೆ. ಈಗ ಸಮಯವು ಬಹಳ ಕಡಿಮೆ ಇದೆ. ನಾಟಕವಂತೂ ತನ್ನ ಸಮಯದಲ್ಲಿ ಮುಕ್ತಾಯವಾಗುತ್ತದೆಯಲ್ಲವೇ. ಮೊಟ್ಟ ಮೊದಲು ಶಿವ ತಂದೆಯ ಜ್ಞಾನವಿರಬೇಕು. ಯಾವುದೇ ಭಾಷಣವನ್ನು ಪ್ರಾರಂಭ ಮಾಡಿದಾಗ ಸದಾ ಮೊಟ್ಟ ಮೊದಲು ಶಿವಾಯ ನಮಃ ಎಂದು ಹೇಳುತ್ತಾರೆ, ಏಕೆಂದರೆ ಶಿವ ತಂದೆಯ ಮಹಿಮೆಯು ಮತ್ತ್ಯಾರಿಗೂ ಇರಲು ಸಾಧ್ಯವಿಲ್ಲ. ಶಿವ ಜಯಂತಿಯೇ ವಜ್ರ ಸಮಾನವಾಗಿದೆ. ಕೃಷ್ಣನ ಚರಿತ್ರೆ ಏನೂ ಇಲ್ಲ. ಸತ್ಯಯುಗದಲ್ಲಂತೂ ಚಿಕ್ಕ ಮಕ್ಕಳು ಸತೋಪ್ರಧಾನರಾಗಿರುತ್ತಾರೆ. ಮಕ್ಕಳಲ್ಲಿ ಯಾವುದೇ ಚಂಚಲತೆ ಇರುವುದಿಲ್ಲ ಆದರೆ ಕೃಷ್ಣನು ಬೆಣ್ಣೆ ಕದಿಯುತ್ತಿದ್ದ, ಹೀಗೆ ಮಾಡುತ್ತಿದ್ದ, ಹಾಗೆ ಮಾಡುತ್ತಿದ್ದ ಎಂದು ಕೃಷ್ಣನಿಗೆ ತೋರಿಸುತ್ತಾರೆ. ಹೀಗೆ ಹೇಳುವುದಂತೂ ಕೃಷ್ಣನ ಮಹಿಮೆಯ ಬದಲು ಇನ್ನೂ ನಿಂದನೆ ಆಗುತ್ತದೆ. ಎಷ್ಟೊಂದು ಖುಷಿಯಲ್ಲಿ ಬಂದು - ಈಶ್ವರ ಸರ್ವವ್ಯಾಪಿ ಎಂದು ಹೇಳುತ್ತಾರೆ, ನಿಮ್ಮಲ್ಲಿಯೂ ಇದ್ದಾರೆ, ನನ್ನಲ್ಲಿಯೂ ಇದ್ದಾರೆ ಅಂದಾಗ ಇದು ಬಹಳ ದೊಡ್ಡ ನಿಂದನೆ ಆಗಿದೆ. ಆದರೆ ತಮೋಪ್ರಧಾನ ಮನುಷ್ಯರು ಇದನ್ನು ಅರಿತುಕೊಳ್ಳುವುದಿಲ್ಲ. ಆದ್ದರಿಂದ ಮೊಟ್ಟ ಮೊದಲು ತಂದೆಯ ಪರಿಚಯವನ್ನು ಕೊಡಬೇಕು, ಅವರು ನಿರಾಕಾರ ತಂದೆಯಾಗಿದ್ದಾರೆ, ಅವರ ಹೆಸರೇ ಆಗಿದೆ ಕಲ್ಯಾಣಕಾರಿ ಶಿವ, ಸರ್ವರ ಸದ್ಗತಿದಾತನಾಗಿದ್ದಾರೆ. ಆ ನಿರಾಕಾರ ತಂದೆ ಸುಖದ ಸಾಗರ, ಶಾಂತಿಯ ಸಾಗರ ಆಗಿದ್ದಾರೆ, ಅಂದಾಗ ಇಷ್ಟೊಂದು ದುಃಖವು ಏಕೆ ಆಗಿದೆ? ಏಕೆಂದರೆ ರಾವಣ ರಾಜ್ಯವಾಗಿದೆ. ರಾವಣನು ಎಲ್ಲರ ಶತ್ರು ಆಗಿದ್ದಾನೆ. ರಾವಣನನ್ನು ಸಾಯಿಸುತ್ತಾರೆ ಆದರೆ ಸಾಯುವುದೇ ಇಲ್ಲ. ಇಲ್ಲಿ ಕೇವಲ ಒಂದು ದುಃಖವಲ್ಲ, ಅಪರಮಪಾರ ದುಃಖವಿದೆ, ಸತ್ಯಯುಗದಲ್ಲಿ ಅಪರಮಪಾರ ಸುಖವಿರುತ್ತದೆ. 5000 ವರ್ಷಗಳ ಮೊದಲು ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ, ಮತ್ತು ಈ ಆಸ್ತಿಯನ್ನು ಪಡೆದಿದ್ದಿರಿ. ಶಿವ ತಂದೆಯು ಅವಶ್ಯವಾಗಿ ಬರುತ್ತಾರೆ ಅಂದಾಗ ಬಂದು ಏನಾದರೂ ಮಾಡುತ್ತಾರಲ್ಲವೇ. ನಿಖರವಾಗಿ ಮಾಡುತ್ತಾರೆ. ಆದ್ದರಿಂದಲೇ ಮಹಿಮೆ ಆಗುತ್ತದೆ. ಶಿವರಾತ್ರಿ ಎಂದು ಹೇಳುತ್ತಾರೆ, ನಂತರ ಕೃಷ್ಣನ ರಾತ್ರಿ. ಈಗ ಶಿವರಾತ್ರಿ ಮತ್ತು ಕೃಷ್ಣನ ರಾತ್ರಿಯನ್ನು ತಿಳಿದುಕೊಳ್ಳಬೇಕು. ಶಿವ ತಂದೆಯಂತೂ ಬೇಹದ್ದಿನ ರಾತ್ರಿಯಲ್ಲೇ ಬರುತ್ತಾರೆ, ಕೃಷ್ಣನ ಜನ್ಮವು ಅಮೃತವೇಳೆಯಲ್ಲಿ ಆಗುತ್ತದೆಯೇ ಹೊರತು ರಾತ್ರಿಯ ಸಮಯದಲ್ಲಿ ಅಲ್ಲ. ಶಿವರಾತ್ರಿಯನ್ನು ಆಚರಿಸುತ್ತಾರೆ ಆದರೆ ಅವರಿಗೆ ಯಾವುದೆ ತಿಥಿ, ತಾರೀಖು ಇಲ್ಲ. ಕೃಷ್ಣನ ಜನ್ಮವು ಅಮೃತವೇಳೆಯ ಸಮಯದಲ್ಲಿ ಆಗುತ್ತದೆ. ಅಮೃತವೇಳೆ ಎಲ್ಲದಕ್ಕಿಂತ ಶುಭ ಮುಹೂರ್ತವೆಂಬ ಮಾನ್ಯತೆ ಇದೆ. ಅವರು ಕೃಷ್ಣನ ಜನ್ಮವನ್ನು 12 ಗಂಟೆಯ ಸಮಯದಲ್ಲಿ ಆಚರಿಸುತ್ತಾರೆ, ಆದರೆ ಆ ಸಮಯವು ಮುಂಜಾನೆಯಂತೂ ಆಗಲಿಲ್ಲ. ಪ್ರಭಾತವೆಂದರೆ ಬೆಳಿಗ್ಗೆ 2-3 ಗಂಟೆಯ ಸಮಯಕ್ಕೆ ಹೇಳಲಾಗುತ್ತದೆ. ಆಗ ಸ್ಮರಣೆಯನ್ನು ಮಾಡಬಹುದು, ಆದರೆ 12 ಗಂಟೆಗೆ ವಿಕಾರದಿಂದ ಎದ್ದು ಯಾರಾದರೂ ಭಗವಂತನ ಹೆಸರನ್ನು ತೆಗೆದುಕೊಳ್ಳುವವರೇ? ಇಲ್ಲವೇ ಇಲ್ಲ. 12 ಗಂಟೆಯ ಸಮಯಕ್ಕೆ ಅಮೃತವೇಳೆ ಎಂದು ಹೇಳುವುದಿಲ್ಲ, ಆ ಸಮಯದಲ್ಲಿ ಮನುಷ್ಯರು ಪತಿತರಾಗುತ್ತಾರೆ. ವಾಯುಮಂಡಲವೇ ಹಾಳಾಗಿರುತ್ತದೆ. 1.30 ಗಂಟೆಯ ಸಮಯದಲ್ಲಿ ಯಾರಾದರೂ ಏಳುತ್ತಾರೆಯೇ? 3.00-4.00 ಗಂಟೆಯ ಸಮಯವು ಅಮೃತವೇಳೆಯಾಗಿದೆ, ಆ ವೇಳೆ ಎದ್ದು ಮನುಷ್ಯರು ಭಕ್ತಿ ಮಾಡುತ್ತಾರೆ. ಈ ಸಮಯವಂತೂ ಮನುಷ್ಯರೇ ಮಾಡಿಕೊಂಡಿದ್ದಾರೆ, ಆದರೆ ಅದು ಸಮಯವಲ್ಲ. ಅಂದಾಗ ಕೃಷ್ಣನ ವೇಳೆಯನ್ನು ತೆಗೆಯಬಹುದು ಆದರೆ ಶಿವನ ವೇಳೆಯನ್ನು ತೆಗೆಯಲು ಸಾಧ್ಯವಿಲ್ಲ. ಇದನ್ನು ತಾವೇ ಬಂದು ತಿಳಿಸುತ್ತಾರೆ. ಅಂದಾಗ ಮೊಟ್ಟ ಮೊದಲು ಶಿವ ತಂದೆಯ ಮಹಿಮೆಯನ್ನು ತಿಳಿಸಬೇಕು. ಗೀತೆಯನ್ನು ಮೊದಲೇ ಹಾಕಬೇಕು, ಕೊನೆಯಲ್ಲಿ ಅಲ್ಲ. ಶಿವ ತಂದೆಯು ಎಲ್ಲರಿಗಿಂತ ಮಧುರ ತಂದೆಯಾಗಿದ್ದಾರೆ ಅವರಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಇಂದಿಗೆ 5000 ವರ್ಷಗಳ ಮೊದಲು ಶ್ರೀ ಕೃಷ್ಣನು ಸತ್ಯಯುಗದ ಮೊದಲ ರಾಜಕುಮಾರನಾಗಿದ್ದನು, ಅಲ್ಲಿ ಅಪರಮಪಾರ ಸುಖವಿತ್ತು, ಆ ಸ್ವರ್ಗದ ಗಾಯನವನ್ನು ಈಗಲೂ ಮಾಡುತ್ತಿರುತ್ತಾರೆ. ಯಾರೇ ಸತ್ತರು ಸ್ವರ್ಗಸ್ಥರಾದರೆಂದು ಹೇಳುತ್ತಾರೆ. ಅರೇ! ಈಗಂತೂ ನರಕವಿದೆ, ಸ್ವರ್ಗವಿದ್ದಿದ್ದರೆ ಸ್ವರ್ಗದಲ್ಲಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಿದ್ದರು. ತಿಳಿಸಬೇಕು - ನಮ್ಮ ಬಳಿ ಇಷ್ಟು ವರ್ಷಗಳ ಅನುಭವವಿದೆ, ಅದನ್ನು ಕೇವಲ 15 ನಿಮಿಷಗಳಲ್ಲಿ ತಿಳಿಸಲು ಸಾಧ್ಯವಿಲ್ಲ. ಇದರಲ್ಲಿ ಸಮಯ ಬೇಕು, ಮೊಟ್ಟ ಮೊದಲು ಒಂದು ಸೆಕೆಂಡಿನ ಮಾತನ್ನು ತಿಳಿಸುತ್ತೇವೆ. ಬೇಹದ್ದಿನ ತಂದೆ ಯಾರು ದುಃಖಹರ್ತ-ಸುಖಕರ್ತನಾಗಿದ್ದಾರೆ, ಅವರ ಕಥೆಯನ್ನು ಹೇಳುತ್ತೇವೆ. ಅವರು ನಾವೆಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ನಾವು ಬ್ರಹ್ಮಾಕುಮಾರ-ಕುಮಾರಿಯರೆಲ್ಲರೂ ಶಿವ ತಂದೆಯ ಶ್ರೀಮತದಂತೆ ನಡೆಯುತ್ತೇವೆ. ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಸಹೋದರ-ಸಹೋದರಿಯರಾಗಿದ್ದೀರಿ, ನಾನು ನಿಮ್ಮ ತಂದೆಯಾಗಿದ್ದೇನೆ. 5000 ವರ್ಷಗಳ ಹಿಂದೆಯು ಬಂದಿದ್ದೇನೆ. ಆದ್ದರಿಂದಲೇ ಶಿವ ಜಯಂತಿಯನ್ನು ಆಚರಿಸುತ್ತೇವೆ. ಸ್ವರ್ಗದಲ್ಲಂತೂ ಏನನ್ನೂ ಆಚರಿಸುವುದಿಲ್ಲ. ಶಿವ ಜಯಂತಿಯಾಗುತ್ತದೆ. ಭಕ್ತಿಮಾರ್ಗದಲ್ಲಿ ಅದರ ನೆನಪಾರ್ಥವಾಗಿ ಆಚರಣೆ ಮಾಡಲಾಗುತ್ತದೆ. ಈ ಗೀತಾಭಾಗವು ಪುನರಾವರ್ತನೆ ಆಗುತ್ತಿದೆ. ಹೊಸ ಪ್ರಪಂಚದ ಸ್ಥಾಪನೆಯು ಬ್ರಹ್ಮಾರವರ ಮೂಲಕ, ಶಂಕರನ ಮೂಲಕ ಹಳೆಯ ಪ್ರಪಂಚದ ವಿನಾಶವು ಆಗುತ್ತಿದೆ. ಈಗ ಈ ಹಳೆಯ ಪ್ರಪಂಚದ ವಾಯುಮಂಡಲವನ್ನಂತೂ ನೀವು ನೋಡುತ್ತಿದ್ದೀರಿ, ಈ ಹಳೆಯ ಪ್ರಪಂಚದ ವಿನಾಶವು ಅವಶ್ಯವಾಗಿ ಆಗುವುದಿದೆ, ಆದ್ದರಿಂದಲೇ ಕರೆಯುತ್ತಾರೆ ನಮ್ಮನ್ನು ಪಾವನ ಪ್ರಪಂಚಕ್ಕೆ ಕರೆದುಕೊಂಡು ಹೋಗಿ, ಇಲ್ಲಿ ಅಪಾರ ದುಃಖವಿದೆ ಯುದ್ಧ, ಮೃತ್ಯು, ವಿಧವೆತನ, ಜೀವಘಾತ, ಮಾಡಿಕೊಳ್ಳುವುದು ಸತ್ಯಯುಗದಲ್ಲಂತೂ ಅಪಾರ ಸುಖದ ರಾಜ್ಯವಿತ್ತು, ಈ ಗುರಿ-ಉದ್ದೇಶದ ಚಿತ್ರವನ್ನು ಅವಶ್ಯವಾಗಿ ತೆಗೆದುಕೊಂಡು ಹೋಗಬೇಕು. ಶ್ರೀ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು, 5000 ವರ್ಷಗಳ ಮಾತನ್ನು ತಿಳಿಸುತ್ತೇವೆ. ಇವರು ಈ ಜನ್ಮವನ್ನು ಹೇಗೆ ತೆಗೆದುಕೊಂಡರು? ಎಂತಹ ಕರ್ಮವನ್ನು ಮಾಡಿದ ಕಾರಣ ಈ ರೀತಿ ಆದರು? ಕರ್ಮ, ಅಕರ್ಮ, ವಿಕರ್ಮದ ಗತಿಯನ್ನು ತಂದೆಯೇ ತಿಳಿಸುತ್ತಾರೆ. ಸತ್ಯಯುಗದಲ್ಲಿ ಕರ್ಮವು ಅಕರ್ಮವಾಗುತ್ತದೆ, ಇಲ್ಲಂತೂ ರಾವಣ ರಾಜ್ಯ ಆಗಿರುವ ಕಾರಣ ಕರ್ಮವು ವಿಕರ್ಮವಾಗಿ ಬಿಡುತ್ತವೆ. ಆದ್ದರಿಂದ ಇದಕ್ಕೆ ಪಾಪಾತ್ಮರ ಪ್ರಪಂಚವೆಂದು ಹೇಳಲಾಗುತ್ತದೆ. ಕಾರ್ಯ ವ್ಯವಹಾರದಲ್ಲಿ ಪಾಪಾತ್ಮರೊಂದಿಗೆ ಈಗ ಹೊಟ್ಟೆಯಲ್ಲಿ ಮಗು ಇದ್ದಾಗ ನಿಶ್ಚಿತಾರ್ಥ ಮಾಡುತ್ತಾರೆ. ಎಷ್ಟೊಂದು ವಿಕಾರಿ ದೃಷ್ಟಿ ಇದೆ, ಇಲ್ಲಂತೂ ಇರುವುದೇ ವಿಕಾರಿ ದೃಷ್ಟಿ. ಸತ್ಯಯುಗದಲ್ಲಿ ನಿರ್ವಿಕಾರಿಗಳು ಎಂದು ಹೇಳಲಾಗುತ್ತದೆ. ಇಲ್ಲಿ ಕಣ್ಣುಗಳು ಬಹಳ ಪಾಪ ಮಾಡುತ್ತವೆ, ಅಲ್ಲಿ ಯಾವುದೇ ಪಾಪಗಳನ್ನು ಮಾಡುವುದಿಲ್ಲ. ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೆ ಇತಿಹಾಸ-ಭೂಗೋಳವು ಪುನರಾವರ್ತನೆ ಆಗುತ್ತದೆ, ಇದನ್ನಂತೂ ತಿಳಿಯಬೇಕಲ್ಲವೇ. ದುಃಖಧಾಮ-ಸುಖಧಾಮವೆಂದು ಏಕೆ ಹೇಳಲಾಗುತ್ತದೆ? ಎಲ್ಲವೂ ಪತಿತ ಮತ್ತು ಪಾವನ ಆಗುವುದರ ಮೇಲೆ ಆಧಾರಿತವಾಗಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ, ಕಾಮ ಮಹಾ ಶತ್ರುವಾಗಿದೆ, ಇದನ್ನು ಗೆಲ್ಲುವುದರಿಂದ ನೀವು ಜಗತ್ಜೀತರಾಗುತ್ತೀರಿ. ಅರ್ಧಕಲ್ಪ ಪವಿತ್ರ ಪ್ರಪಂಚವಿತ್ತು, ಅಲ್ಲಿ ಶ್ರೇಷ್ಠ ದೇವತೆಗಳು ಇದ್ದರು, ಈಗಂತೂ ಭ್ರಷ್ಟಾಚಾರಿಗಳು ಆಗಿದ್ದೀರಿ. ಒಂದು ಕಡೆ ಇದು ಭ್ರಷ್ಟಾಚಾರಿ ಪ್ರಪಂಚವಾಗಿದೆ ಎಂದು ಹೇಳುತ್ತಾರೆ, ಆದರೂ ಎಲ್ಲರಿಗೆ ಶ್ರೀ-ಶ್ರೀ ಎಂದು ಹೇಳುತ್ತಿರುತ್ತಾರೆ. ಏನು ಬಂದರೆ ಅದನ್ನೇ ಹೇಳಿ ಬಿಡುತ್ತಾರೆ. ಇದೆಲ್ಲವನ್ನೂ ಅರಿತುಕೊಳ್ಳಬೇಕಾಗಿದೆ. ಈಗಂತೂ ಮೃತ್ಯು ಸಮ್ಮುಖದಲ್ಲಿ ನಿಂತಿದೆ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮ ಪಾಪಗಳು ಸಮಾಪ್ತಿ ಆಗುತ್ತವೆ, ನೀವು ಸತೋಪ್ರಧಾನರಾಗುತ್ತೀರಿ, ಸುಖಧಾಮದ ಮಾಲೀಕರಾಗುತ್ತೀರಿ. ಈಗಂತೂ ದುಃಖವೇ ದುಃಖವಿದೆ. ಅವರು ಎಷ್ಟೇ ಸಮ್ಮೇಳನಗಳನ್ನು ಮಾಡಲಿ, ಸಂಘಟನೆ ಮಾಡಲಿ ಆದರೆ ಇದರಿಂದ ಏನೂ ಆಗುವುದಿಲ್ಲ. ಏಣಿಯನ್ನು ಇಳಿಯುತ್ತಲೇ ಹೋಗುತ್ತಾರೆ. ತಂದೆಯು ತನ್ನ ಕಾರ್ಯವನ್ನು ತಾವು ಮಕ್ಕಳ ಮೂಲಕ ಮಾಡುತ್ತಿದ್ದಾರೆ. ಪತಿತ ಪಾವನನೇ ಬನ್ನಿರಿ ಎಂದು ನೀವು ಕರೆದಿರಿ, ಆದ್ದರಿಂದ ನಾನು ನನ್ನ ಸಮಯದಲ್ಲಿ ಬಂದಿದ್ದೇನೆ. ಯದಾ-ಯದಾ ಧರ್ಮಸ್ಯ ಗ್ಲಾನಿರ್ಭವತಿ ಭಾರತ. ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ತಂದೆಯನ್ನು ಕರೆಯುತ್ತಾರೆ ಎಂದರೆ ಅವಶ್ಯವಾಗಿ ಪತಿತರಾಗಿದ್ದಾರೆ ಎಂದರ್ಥ. ರಾವಣ ನಿಮ್ಮನ್ನು ಪತಿತರನ್ನಾಗಿ ಮಾಡುತ್ತಾನೆ ಎಂದು ತಂದೆಯು ತಿಳಿಸುತ್ತಾರೆ. ಈಗ ನಾನು ಪಾವನರನ್ನಾಗಿ ಮಾಡುತ್ತೇನೆ, ಅದು ಪಾವನ ಪ್ರಪಂಚವಾಗಿದೆ. ಈಗ ಪತಿತ ಪ್ರಪಂಚವಾಗಿದೆ. ಈಗ ಎಲ್ಲರಲ್ಲಿಯೂ ಪಂಚ ವಿಕಾರಗಳಿವೆ, ಅಪರಮಪಾರ ದುಃಖವಿದೆ. ಎಲ್ಲೆಡೆಯೂ ಅಶಾಂತಿಯಿದೆ. ಯಾವಾಗ ನೀವು ಸಂಪೂರ್ಣ ತಮೋಪ್ರಧಾನ, ಪಾಪಾತ್ಮರಾಗಿ ಬಿಡುತ್ತೀರೋ ಆಗ ನಾನು ಬರುತ್ತೇನೆ. ಯಾರು ನನ್ನನ್ನು ಸರ್ವವ್ಯಾಪಿ ಎಂದು ಹೇಳಿ ನನಗೆ ಅಪಕಾರ ಮಾಡುತ್ತಾರೋ ಅಂತಹವರಿಗೆ ನಾನು ಉಪಕಾರ ಮಾಡಲು ಬರುತ್ತೇನೆ. ಈ ಪತಿತ ರಾವಣ ಪ್ರಪಂಚದಲ್ಲಿ ಬನ್ನಿ ಪತಿತ ಶರೀರದಲ್ಲಿ ಬನ್ನಿ ಎಂದು ನೀವು ನನಗೆ ನಿಮಂತ್ರಣ ನೀಡುತ್ತೀರಿ. ನನಗೆ ರಥವಂತೂ ಬೇಕಲ್ಲವೇ. ಪಾವನ ರಥ ಬೇಕಿಲ್ಲ, ರಾವಣ ರಾಜ್ಯದಲ್ಲಿ ಇರುವುದೇ ಪತಿತರು, ಯಾರೂ ಪಾವನರಿಲ್ಲ. ಎಲ್ಲರೂ ವಿಕಾರದಿಂದಲೇ ಜನ್ಮ ಪಡೆಯುತ್ತಾರೆ. ಇದು ವಿಕಾರಿ ಪ್ರಪಂಚವಾಗಿದೆ, ಸತ್ಯಯುಗವು ನಿರ್ವಿಕಾರಿ ಪ್ರಪಂಚವಾಗಿದೆ. ಈಗ ತಮೋಪ್ರಧಾನದಿಂದಲೇ ಸತೋಪ್ರಧಾನರು ಹೇಗಾಗುತ್ತೀರಿ. ಪತಿತ ಪಾವನನಂತೂ ನಾನೇ ಆಗಿದ್ದೇನೆ, ನನ್ನ ಜೊತೆ ಯೋಗವನ್ನು ಇಡಿ. ಇದು ಭಾರತದ ಪ್ರಾಚೀನ ರಾಜಯೋಗವಾಗಿದೆ. ಅವಶ್ಯವಾಗಿ ಬರುವುದು ಗೃಹಸ್ಥ ಮಾರ್ಗದಲ್ಲಿಯೇ. ಎಷ್ಟು ವಿಚಿತ್ರವಾದ ರೀತಿಯಲ್ಲಿ ಬರುತ್ತಾರೆ, ಇವರು ತಂದೆಯೂ ಆಗಿದ್ದಾರೆ, ತಾಯಿಯೂ ಆಗಿದ್ದಾರೆ ಏಕೆಂದರೆ ಗೋಮುಖವು ಬೇಕು. ಅದರಿಂದ ಜ್ಞಾನಾಮೃತವು ಬರಬೇಕು. ಆದ್ದರಿಂದ ಇವರು (ಬ್ರಹ್ಮಾ) ಮಾತಾಪಿತನಾಗಿದ್ದಾರೆ. ನಂತರ ಮಾತೆಯರ ಸಂಭಾಲನೆಗಾಗಿ ಸರಸ್ವತಿಯವರನ್ನು ನಿಮಿತ್ತವಾಗಿ ಇಟ್ಟಿದ್ದಾರೆ. ಅವರಿಗೆ ಜಗದಂಬೆ ಎಂದು ಹೇಳಲಾಗುತ್ತದೆ, ಕಾಳಿ ಮಾತೆ ಎಂದು ಹೇಳುತ್ತಾರೆ. ಆದರೆ ಈ ರೀತಿ ಶರೀರವು ಕಪ್ಪಾಗಿರುತ್ತದೆಯೇ. ಕೃಷ್ಣನನ್ನೂ ಸಹ ಕಪ್ಪು ಮಾಡಿಬಿಟ್ಟಿದ್ದಾರೆ, ಏಕೆಂದರೆ ಕಾಮ ಚಿತೆಯ ಮೇಲೆ ಕುಳಿತು ಕಪ್ಪಾಗಿದ್ದಾರೆ. ಕೃಷ್ಣನೇ ಶ್ಯಾಮ ಮತ್ತು ಸುಂದರನಾಗುತ್ತಾನೆ. ಇವೆಲ್ಲಾ ಮಾತುಗಳನ್ನು ತಿಳಿದುಕೊಳ್ಳಲೂ ಸಹ ಸಮಯ ಬೇಕು, ಇದು ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರ ಬುದ್ಧಿಯಲ್ಲಿಯೇ ಕುಳಿತುಕೊಳ್ಳುವುದು ಏಕೆಂದರೆ ಎಲ್ಲರಲ್ಲಿಯೂ ಪಂಚ ವಿಕಾರಗಳು ಪ್ರವೇಶವಾಗಿದೆ, ನೀವು ಈ ಮಾತನ್ನು ಸಭೆಯಲ್ಲಿಯೂ ತಿಳಿಸಬಹುದು ಏಕೆಂದರೆ ಯಾರಿಗೆ ಬೇಕಾದರೂ ತಿಳಿಸುವ ಹಕ್ಕಿದೆ, ಇಂತಹ ಅವಕಾಶವನ್ನು ತೆಗೆದುಕೊಳ್ಳಬೇಕು. ಬಹಳ ದೊಡ್ಡ ಸಭೆಯಲ್ಲಿ ಮಧ್ಯದಲ್ಲಿ ಯಾರಾದರೂ ಪ್ರಶ್ನೆಯು ಮಾಡಬಹುದು, ಆಗ ನಿಮಗೆ ಕೇಳಲು ಇಷ್ಟವಿಲ್ಲವೆಂದರೆ ಶಾಂತಿಯಿಂದ ಹೊರಟು ಹೋಗಿ, ಮಾತನಾಡಬೇಡಿ. ಹೀಗೆ ತಿಳಿಸಿಕೊಡಿ, ಈಗಂತೂ ಅಪಾರ ದುಃಖವಿದೆ, ದುಃಖದ ಪರ್ವತಗಳೇ ಬೀಳುವುದಿದೆ, ನಾವು ತಂದೆಯನ್ನು, ರಚನೆಯನ್ನು ತಿಳಿದುಕೊಂಡಿದ್ದೇವೆ. ನೀವು ಯಾರ ಪರಿಚಯವನ್ನು ತಿಳಿದುಕೊಂಡಿಲ್ಲ. ತಂದೆಯು ಭಾರತವನ್ನು ಯಾವಾಗ ಸ್ವರ್ಗವನ್ನಾಗಿ ಮಾಡಿದರು ಮತ್ತು ಹೇಗೆ ಮಾಡಿದರು, ಇದು ನಿಮಗೆ ಗೊತ್ತಿಲ್ಲ. ಬಂದರೆ ನಾವು ಅದನ್ನು ತಿಳಿಸಿಕೊಡುತ್ತೇವೆ. 84 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತೇವೆ? 7 ದಿನಗಳ ಸಾಪ್ತಾಹಿಕ ಶಿಕ್ಷಣವನ್ನು ತೆಗೆದುಕೊಂಡರೆ ನಾವು ನಿಮ್ಮನ್ನು 21 ಜನ್ಮಗಳಿಗಾಗಿ ಪಾಪಾತ್ಮರಿಂದ ಪುಣ್ಯಾತ್ಮರನ್ನಾಗಿ ಮಾಡಿ ಬಿಡುತ್ತೇವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆ ಕರ್ಮ-ಅಕರ್ಮ-ವಿಕರ್ಮದ ಯಾವ ಗುಹ್ಯಗತಿಯನ್ನು ತಿಳಿಸಿದ್ದಾರೆಯೋ ಅದನ್ನು ಬುದ್ಧಿಯಲ್ಲಿ ಇಟ್ಟುಕೊಂಡು ಪಾಪಾತ್ಮರೊಂದಿಗೆ ಈಗ ವ್ಯವಹರಿಸಬೇಕಾಗಿದೆ.

2. ಶ್ರೀಮತದನುಸಾರ ಒಬ್ಬ ತಂದೆಯೊಂದಿಗೆ ಈಗ ಬುದ್ಧಿಯನ್ನು ಇಡಬೇಕಾಗಿದೆ. ಸತೋಪ್ರಧಾನರಾಗುವ ಪುರುಷಾರ್ಥ ಮಾಡಬೇಕಾಗಿದೆ. ದುಃಖಧಾಮವನ್ನು ಸುಖಧಾಮವನ್ನಾಗಿ ಮಾಡಲು ಪತಿತರಿಂದ ಪಾವನರಾಗುವ ಪುರುಷಾರ್ಥ ಮಾಡಬೇಕಾಗಿದೆ. ವಿಕಾರಿ ದೃಷ್ಟಿಯನ್ನು ಪರಿವರ್ತಿಸಿಕೊಳ್ಳಬೇಕಾಗಿದೆ.

ವರದಾನ:
ಸರ್ವ ಖಜಾನೆಗಳಿಂದ ಸಂಪನ್ನರಾಗಿ ನಿರಂತರ ಸೇವೆ ಮಾಡುವಂತಹ ಅಖೂಟ, ಅಖಂಡ ಮಹಾಧಾನಿ ಭವ.

ಬಾಪ್ದಾದಾರವರು ಸಂಗಮಯುಗದಲ್ಲಿ ಎಲ್ಲಾ ಮಕ್ಕಳಿಗೆ “ಅಟಲ-ಅಖಂಡ”ತೆಯ ವರದಾನ ಕೊಟ್ಟಿದ್ದಾರೆ. ಯಾರು ಈ ವರದಾನವನ್ನು ಜೀವನದಲ್ಲಿ ಧಾರಣೆ ಮಾಡಿ ಅಖಂಡ ಮಹಾಧಾನಿ ಅರ್ಥಾತ್ ನಿರಂತರ ಸಹಜ ಸೇವಾಧಾರಿಗಳಾಗುತ್ತಾರೆ ಅವರು ನಂಬರ್ ಒನ್ ಆಗಿ ಬಿಡುತ್ತಾರೆ. ದ್ವಾಪರದಿಂದ ಭಕ್ತ ಆತ್ಮರು ಸಹ ದಾನಿಗಳಾಗುತ್ತಾರೆ ಆದರೆ ಅಖೂಟ ಖಜಾನೆಗಳ ದಾನಿಗಳಾಗಲು ಸಾಧ್ಯವಿಲ್ಲ. ವಿನಾಶಿ ಖಜಾನೆ ಅಥವಾ ವಸ್ತುಗಳ ದಾನಿಯಾಗುತ್ತಾರೆ, ಆದರೆ ನೀವು ದಾತಾನ ಮಕ್ಕಳು ಯಾರು ಸರ್ವ ಖಜಾನೆಗಳಿಂದ ಸಂಪನ್ನರಾಗಿ ಅವರು ಒಂದು ಸೆಕೆಂಡ್ ಸಹ ದಾನ ನೀಡದೆ ಇರಲು ಸಾಧ್ಯವಿಲ್ಲ.

ಸ್ಲೋಗನ್:
ಸ್ವಭಾವದಲ್ಲಿ ಸರಳತೆ ಇದ್ದಾಗ ಆಂತರಿಕ ಸತ್ಯತೆ ಮತ್ತು ಸ್ವಚ್ಛತೆ ಆಗುತ್ತದೆ.