28.03.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯ ಕರ್ತವ್ಯವಾಗಿದೆ, ಮುಳ್ಳುಗಳ ಕಾಡನ್ನು ಸಮಾಪ್ತಿ ಮಾಡಿ ಹೂದೋಟವನ್ನು ಮಾಡುವುದು, ಇದರಿಂದಲೇ ನಂಬರವನ್ ಕುಟುಂಬ ಯೋಜನೆಯಾಗುವುದು”

ಪ್ರಶ್ನೆ:
ಕುಟುಂಬ ಯೋಜನೆಯ ಫಸ್ಟ್ ಕ್ಲಾಸ್ ಶಾಸ್ತ್ರವು ಯಾವುದಾಗಿದೆ ಮತ್ತು ಹೇಗೆ?

ಉತ್ತರ:
ಗೀತೆಯು ಕುಟುಂಬ ಯೋಜನೆಯ ಫಸ್ಟ್ ಕ್ಲಾಸ್ ಶಾಸ್ತ್ರವಾಗಿದೆ ಏಕೆಂದರೆ ಗೀತೆಯ ಮುಖಾಂತರವೇ ತಂದೆಯು ಅನೇಕ ಅಧರ್ಮಗಳನ್ನು ವಿನಾಶ ಮಾಡಿ ಒಂದು ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಗೀತೆಯಲ್ಲಿಯೇ ಭಗವಂತನ ಮಹಾವಾಕ್ಯವಿದೆ - ಕಾಮ ಮಹಾಶತ್ರು. ಯಾವಾಗ ಕಾಮ ಮಹಾಶತ್ರುವಿನ ಮೇಲೆ ವಿಜಯವನ್ನು ಪಡೆಯುತ್ತೀರೋ ಆಗ ಕುಟುಂಬ ಯೋಜನೆಯು ಸ್ವತಹವಾಗಿಯೇ ಆಗುತ್ತದೆ. ಇದು ಒಬ್ಬ ತಂದೆಯ ಕಾರ್ಯವಾಗಿದೆಯೇ ಹೊರತು ಯಾವುದೇ ಮನುಷ್ಯನದಲ್ಲ.

ಓಂ ಶಾಂತಿ.
ಶಿವ ಭಗವಾನುವಾಚ. ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸಿಕೊಡುತ್ತಾರೆ - ಈ ಪ್ರಪಂಚಕ್ಕೆ ಆಸುರೀ ಪ್ರಪಂಚವೆಂದು ಹೇಳಲಾಗುತ್ತದೆ. ಹೊಸ ಪ್ರಪಂಚವನ್ನು ದೈವೀ ಪ್ರಪಂಚವೆಂದು ಹೇಳಲಾಗುತ್ತದೆ. ದೈವೀ ಪ್ರಪಂಚದಲ್ಲಿ ಮನುಷ್ಯರು ಬಹಳ ಕಡಿಮೆಯಿರುತ್ತಾರೆ, ಈಗ ಈ ರಹಸ್ಯವನ್ನೂ ಸಹ ಯಾರಿಗಾದರೂ ತಿಳಿಸಬಹುದು. ಯಾರು ಕುಟುಂಬ ಯೋಜನೆಯ ಮಂತ್ರಿಯಿರುತ್ತಾರೆಯೋ ಅವರಿಗೆ ತಿಳಿಸಬೇಕಾಗಿದೆ. ಕುಟುಂಬ ಯೋಜನೆಯ ಕರ್ತವ್ಯವಂತೂ ಗೀತೆಯ ಹೇಳಿಕೆಯನುಸಾರ ಒಬ್ಬ ತಂದೆಯದೇ ಆಗಿದೆ ಎಂದು ಹೇಳಿ. ಗೀತೆಯನ್ನಂತೂ ಎಲ್ಲರೂ ಒಪ್ಪುತ್ತಾರೆ. ಗೀತೆಯು ಕುಟುಂಬ ನಿಯೋಜನೆಯ ಶಾಸ್ತ್ರವಾಗಿದೆ. ಗೀತೆಯಿಂದಲೇ ತಂದೆಯು ಹೊಸ ಪ್ರಪಂಚದ ಸ್ಥಾಪನೆಯನ್ನು ಮಾಡುತ್ತಾರೆ ಇದಂತೂ ಸ್ವತಹವಾಗಿ ಡ್ರಾಮಾದಲ್ಲಿ ಅವರ ಪಾತ್ರವು ಹಾಗೆಯೇ ಇದೆ. ತಂದೆಯೇ ಬಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ ಅಥವಾ ಪವಿತ್ರ ರಾಷ್ಟ್ರೀಯತೆಯ ಸ್ಥಾಪನೆ ಮಾಡುತ್ತಾರೆ. ತಮ್ಮನ್ನು ದೇವಿ-ದೇವತಾ ಧರ್ಮದವರೆಂದೇ ಹೇಳುತ್ತಾರೆ. ಗೀತೆಯಲ್ಲಿ ಭಗವಂತ ಸ್ಪಷ್ಟವಾಗಿ ತಿಳಿಸುತ್ತಾರೆ - ನಾನು ಬರುವುದೇ ಒಂದು ಧರ್ಮದ ಸ್ಥಾಪನೆ ಮಾಡಲು ಬಾಕಿ ಅನೇಕ ಧರ್ಮಗಳ ವಿನಾಶ ಮಾಡುತ್ತೇನೆ. ಇದರಿಂದ ಕುಟುಂಬ ಯೋಜನೆಯು ನಂಬರವನ್ ಆಗಿ ಬಿಡುತ್ತದೆ. ಇಡೀ ಸೃಷ್ಟಿಯಲ್ಲಿಯೇ ಜಯ ಜಯಕಾರವಾಗುತ್ತದೆ ಹಾಗೂ ಒಂದು ಆದಿ ಸನಾತನ ಧರ್ಮದ ಸ್ಥಾಪನೆಯಾಗುತ್ತದೆ. ಈಗಂತೂ ಅನೇಕ ಮನುಷ್ಯರಿರುವ ಕಾರಣ ಬಹಳ ಕೊಳಕಾಗಿ ಬಿಟ್ಟಿದೆ. ಅಲ್ಲಿಯ ಪ್ರಾಣಿ-ಪಕ್ಷಿ ಮುಂತಾದವೆಲ್ಲವೂ ಫಸ್ಟ್ ಕ್ಲಾಸ್ ಆಗಿರುತ್ತದೆ. ನೋಡುವುದರಿಂದಲೇ ಮನಸ್ಸಿಗೆ ಖುಷಿಯಾಗುತ್ತದೆ ಭಯ ಪಡುವ ಮಾತಿಲ್ಲ. ತಂದೆಯು ಕುಳಿತು ತಿಳಿಸುತ್ತಾರೆ- ನೀವು ನನ್ನನ್ನು ಕರೆದಿರುವುದೇ ಬಂದು ಕುಟುಂಬ ಯೋಜನೆಯನ್ನು ಮಾಡಿ ಎಂದು ಅರ್ಥಾತ್ ಪತಿತ ಕುಟುಂಬಗಳನ್ನು ಹಿಂತಿರುಗಿ ಕರೆದುಕೊಂಡು ಹೋಗಿ ಪಾವನ ಕುಟುಂಬಗಳನ್ನು ಸ್ಥಾಪನೆ ಮಾಡಿ ಎಂದು. ನೀವೆಲ್ಲರೂ ಹೇಳುತ್ತಿದ್ದಿರಿ- ಬಾಬಾ ನೀವು ಬಂದು ಪತಿತ ಪ್ರಪಂಚವನ್ನು ವಿನಾಶ ಮಾಡಿ ಪಾವನ ಪ್ರಪಂಚವನ್ನು ರೂಪಿಸಿ. ಇದು ತಂದೆಯದೇ ಯೋಜನೆಯಾಗಿದೆ. ಅದನ್ನು ನೋಡುವುದರಿಂದಲೇ ಮನಸ್ಸಿಗೆ ಖುಷಿಯಾಗುತ್ತದೆ ಮತ್ತು ಲಕ್ಷ್ಮೀ-ನಾರಾಯಣರನ್ನು ನೋಡುವುದರಿಂದಲೇ ನಿಮ್ಮ ಮನಸ್ಸಿಗೆ ಖುಷಿಯಾಗುತ್ತದೆಯಲ್ಲವೆ. ಅಲ್ಲಂತೂ ಯಥಾ ರಾಜ-ರಾಣಿ ತಥಾ ಪ್ರಜಾ ಎಲ್ಲರೂ ಫಸ್ಟ್ ಕ್ಲಾಸ್ ಆಗಿರುತ್ತಾರೆ ಆದ್ದರಿಂದ ಈ ಕುಟುಂಬ ಯೋಜನೆಯ ಯುಕ್ತಿಯು ನಾಟಕದಲ್ಲಿ ನಿಗಧಿಯಾಗಿದೆ. ನೀವು ಮಕ್ಕಳು ತಿಳಿಸಬೇಕಾಗಿದೆ- ಪಾರಲೌಕಿಕ ತಂದೆಯಂತೂ ಸತ್ಯಯುಗೀ ಯೋಜನೆಯನ್ನು ಫಸ್ಟ್ ಕ್ಲಾಸ್ ಆಗಿ ಮಾಡುತ್ತಾರೆ, ಮುಳ್ಳುಗಳ ಕಾಡನ್ನೇ ಸಮಾಪ್ತಿ ಮಾಡುತ್ತಾರೆ. ಇಡೀ ಬಿದುರಿನ ಕಾಡಿಗೆ ಬೆಂಕಿ ಬೀಳುತ್ತದೆ, ಈ ಕಾರ್ಯವು ತಂದೆಯದೇ ಆಗಿದೆ, ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಎಷ್ಟೇ ಕಷ್ಟ ಪಟ್ಟರೂ ಸಫಲತೆಯನ್ನಂತೂ ಯಾರೂ ಪಡೆಯಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ- ಯಾವ ಕಾಮ ವಿಕಾರವನ್ನು ನೀವು ಮಿತ್ರನೆಂದು ತಿಳಿದಿದ್ದೀರೋ ಅದು ಬಹಳ ದೊಡ್ಡ ಶತ್ರುವಾಗಿದೆ, ಅನೇಕರು ಅದಕ್ಕೆ ವಶೀಭೂತರಾಗುತ್ತಾರೆ. ತಂದೆಯು ಆದೇಶ ಹೊರಡಿಸುತ್ತಾರೆ, ನೀವು ಇದರ ಮೇಲೆ ವಿಜಯ ಪಡೆಯಿರಿ. ಕಾಮ ಮಹಾಶತ್ರುವಾಗಿದೆ ಎಂದು ನೀವು ಹೇಳಿ ಅಂದಾಗ ಕುಟುಂಬ ಯೋಜನೆಯನ್ನು ಹೇಗೆ ಮಾಡುವುದು ಎಂದು ಯಾರೂ ತಿಳಿದುಕೊಂಡೇ ಇಲ್ಲ. ಡ್ರಾಮಾನುಸಾರ ಇದನ್ನು ಕಲ್ಪ-ಕಲ್ಪವೂ ತಂದೆಯು ಮಾಡುತ್ತಾರೆ ಮತ್ತೆ ಇದು ಆಗಲೇಬೇಕಾಗಿದೆ. ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ ಇದರಲ್ಲಿ ಚಿಂತೆ ಪಡುವ ಮಾತಿಲ್ಲ. ತಂದೆಯು ಪ್ರತ್ಯಕ್ಷವಾಗಿ ಈ ಕಾರ್ಯವನ್ನು ಮಾಡುತ್ತಾರೆ. ಅವರೆಲ್ಲರೂ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ. ಶಿಕ್ಷಣ ಮಂತ್ರಿಗೂ ಇದನ್ನು ತಿಳಿಸಿ- ಈಗಿನ ಚಾರಿತ್ರ್ಯ ಎಷ್ಟು ಕೊಳಕಾಗಿದೆ ಆದರೆ ದೇವತೆಗಳ ಚಾರಿತ್ರ್ಯ ಎಷ್ಟು ಚೆನ್ನಾಗಿತ್ತು. ನೀವು ಯಾವುದೇ ಚಿಂತೆಯಿಲ್ಲದೆ ವಾಣಿಯನ್ನು ನುಡಿಸಿ. ಇದು ಯಾವುದೇ ಮಂತ್ರಿಯ ಕೆಲಸವಲ್ಲ ಎಂದು ಹೇಳಿ. ಇದಂತೂ ಶ್ರೇಷ್ಠಾತಿ ಶ್ರೇಷ್ಠ ತಂದೆಯ ಕಾರ್ಯವಾಗಿದೆ. ಈ ದೇವತೆಗಳ ರಾಜ್ಯದಲ್ಲಿ ಒಂದೇ ರಾಜ್ಯ, ಒಂದೇ ಭಾಷೆ, ಒಂದೇ ಧರ್ಮವಿತ್ತು. ಬಹಳ ಕಡಿಮೆ ಜನಸಂಖ್ಯೆಯೂ ಇತ್ತು ಆದರೆ ಇಂತಹ ಯುಕ್ತಿಯಿಂದ ಹೇಳುವುದು ಬಹಳ ಕೆಲವರಿಗೆ ಬರುತ್ತದೆ ಆದರೆ ಆ ಆತ್ಮೀಯ ನಶೆ ಎಲ್ಲರಿಗೂ ಇರುವುದಿಲ್ಲ. ಅವರಿಗೆ ಈ ಲಕ್ಷ್ಮೀ-ನಾರಾಯಣನ ಚಿತ್ರವನ್ನು ತೋರಿಸಬೇಕಾಗಿದೆ. ಈ ಕುಟುಂಬ ಯೋಜನೆಯು ತಂದೆಯದೇ ಆಗಿತ್ತು ಈಗ ಪುನಃ ಮಾಡುತ್ತಿದ್ದಾರೆ. ಇವರ ರಾಜ್ಯ ಸ್ಥಾಪನೆಯೂ ಆಗುತ್ತಿದೆ. ಈ ಲಕ್ಷ್ಮೀ-ನಾರಾಯಣ ಚಿತ್ರವು ಸದಾ ಮುಂದೆ ಇಡಿ ಹಾಗೂ ಅದಕ್ಕೆ ಲೈಟ್ಗಳನ್ನು ಚೆನ್ನಾಗಿ ಹಾಕಿ ಎಂದು ತಂದೆಯು ಹೇಳುತ್ತಾರೆ. ಶೋಭಾ ಯಾತ್ರೆಯಲ್ಲಿ ಈ ಟ್ರಾನ್ಸ್ ಲೇಟ್ ಚಿತ್ರವಿಡಿ. ಯಾರೇ ಆಗಲಿ ಅದನ್ನು ಸ್ಪಷ್ಟವಾಗಿ ನೋಡಬೇಕು. ತಂದೆಯು ತಿಳಿಸುತ್ತಾರೆ- ನಾವು ಕುಟುಂಬ ಯೋಜನೆಯನ್ನು ಮಾಡುತ್ತಿದ್ದೇವೆಂದು ಹೇಳಿ. ಯಥಾ ರಾಜ-ರಾಣಿ ತಥಾ ಪ್ರಜಾ. ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ ಉಳಿದವೆಲ್ಲವೂ ವಿನಾಶವಾಗುತ್ತದೆ. ನೀವೂ ಸಹ ಹೇಳುತ್ತೀರಿ- ಹೇ ಪತಿತ-ಪಾವನ ಬನ್ನಿ, ನಮ್ಮನ್ನು ಪಾವನ ಮಾಡಿ. ಅದನ್ನಂತೂ ತಂದೆಯೇ ಮಾಡಲು ಸಾಧ್ಯ. ಒಂದು ದೇವಿ-ದೇವತಾ ಧರ್ಮವೇ ಪಾವನವಾಗುತ್ತದೆ ಉಳಿದವೆಲ್ಲವೂ ಸಮಾಪ್ತಿಯಾಗುತ್ತದೆ. ಶಿವ ತಂದೆಯ ಕೈಯಲ್ಲಿಯೇ ಈ ಯೋಜನೆಯಿದೆ ಎಂತಲೂ ಹೇಳಿ. ಸತ್ಯಯುಗದಲ್ಲಿ ಈ ಯೋಜನೆಯಾಗುತ್ತದೆ ಅಂದಾಗ ಅಲ್ಲಿರುವುದೇ ದೇವತಾ ವಂಶ ಆದರೆ ಶೂದ್ರರು ಯಾರೂ ಇರುವುದಿಲ್ಲ. ಇದು ಬಹಳ ದೊಡ್ಡ ಫಸ್ಟ್ ಕ್ಲಾಸ್ ಯೋಜನೆಯಾಗಿದೆ ಬಾಕಿ ಎಲ್ಲವೂ ಸಮಾಪ್ತಿಯಾಗುತ್ತದೆ. ಈ ತಂದೆಯ ಯೋಜನೆಯನ್ನು ಬಂದು ತಿಳಿದುಕೊಳ್ಳಿ. ಈ ಮಾತನ್ನು ಕೇಳಿ ನಿಮ್ಮ ಮೇಲೆ ಬಲಿಹಾರಿಯಾಗಿ ಬಿಡುತ್ತಾರೆ. ತಂದೆಯು ಹೇಳುತ್ತಾರೆ - ಈ ಮಂತ್ರಿ ಮುಂತಾದವರೆಲ್ಲರೂ ನಿರ್ವಿಕಾರಿ ಯೋಜನೆಯನ್ನು ಮಾಡಲು ಹೇಗೆ ಸಾಧ್ಯ. ತಂದೆಯು ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ, ಅವರು ಈ ಯೋಜನೆಯನ್ನು ಮಾಡುವ ಸಲುವಾಗಿಯೇ ಬರುತ್ತಾರೆ ಅದಕ್ಕಾಗಿ ಉಳಿದೆಲ್ಲಾ ಧರ್ಮಗಳನ್ನು ಸಮಾಪ್ತಿ ಮಾಡಿ ಬಿಡುತ್ತಾರೆ. ಪ್ರತಿಯೊಂದು ಮಾತು ಬೇಹದ್ದಿನ ತಂದೆಯ ಕೈಯಲ್ಲಿದೆ, ಅವರು ಹಳೆಯ ಪ್ರಪಂಚವನ್ನು ಹೊಸ ಪ್ರಪಂಚವನ್ನಾಗಿ ಮಾಡುತ್ತಾರೆ. ತಂದೆಯು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಿ ಹಳೆಯ ಪ್ರಪಂಚವನ್ನು ವಿನಾಶ ಮಾಡಿಸುತ್ತಾರೆ. ಇದು ನಾಟಕದಲ್ಲಿ ನಿಗಧಿಯಾಗಿದೆ. ಸಹೋದರಿಯರೇ ಹಾಗೂ ಸಹೋದರರೇ, ಈ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ನೀವು ತಿಳಿದುಕೊಂಡಿಲ್ಲ ಆದರೆ ಅದನ್ನು ತಂದೆಯೇ ತಿಳಿಸಿಕೊಡುತ್ತಾರೆಂದು ತಿಳಿಸಬೇಕಾಗಿದೆ. ಸತ್ಯಯುಗದ ಆದಿಯಲ್ಲಿ ಇಷ್ಟೊಂದು ಮನುಷ್ಯರಿರುವುದಿಲ್ಲ ಅಲ್ಲಿ ಕುಟುಂಬ ಯೋಜನೆ ಮೊದಲಾದ ಮಾತುಗಳನ್ನು ಮಾತನಾಡುವುದೇ ಇಲ್ಲ. ಆದ್ದರಿಂದ ನೀವು ಮೊದಲು ಬಂದು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳಿ. ಸದ್ಗತಿದಾತ ಒಬ್ಬ ತಂದೆಯೇ ಆಗಿದ್ದಾರೆ. ಸದ್ಗತಿಯೆಂದರೆ ಸತ್ಯಯುಗೀ ಮನುಷ್ಯರೆಂದರ್ಥ. ಮೊಟ್ಟ ಮೊದಲು ಈ ದೇವಿ-ದೇವತೆಗಳು ಬಹಳ ಕಡಿಮೆಯಿದ್ದರು. ಅದು ಅದ್ಭುತವಾದ ಧರ್ಮವಾಗಿತ್ತು. ತಂದೆಯು ಹೂಗಳ ಅತ್ಯುತ್ತಮ ಯೋಜನೆಯನ್ನು ಮಾಡುತ್ತಾರೆ. ಕಾಮ ಮಹಾಶತ್ರುವಾಗಿದೆ, ವರ್ತಮಾನ ಸಮಯದಲ್ಲಂತೂ ಇದರ ಹಿಂದೆ ಪ್ರಾಣ ಬೇಕಾದರೂ ಕೊಡುತ್ತಾರೆ. ಯಾರಿಗಾದರೂ ಯಾರೊಂದಿಗಾದರೂ ಮನಸ್ಸಾಯಿತೆಂದರೆ ತಂದೆ-ತಾಯಿ ವಿವಾಹ ಮಾಡದೇ ಇದ್ದಾಗ ಮನೆಯಲ್ಲಿ ಜಗಳವನ್ನೇ ಪ್ರಾರಂಭ ಮಾಡುತ್ತಾರೆ. ಇದು ಕೊಳಕಾದ ಪ್ರಪಂಚವಾಗಿದೆ. ಪರಸ್ಪರ ಒಬ್ಬರಿಗೊಬ್ಬರು ಮುಳ್ಳನ್ನೇ ಚುಚ್ಚುತ್ತಿರುತ್ತಾರೆ. ಸತ್ಯಯುಗದಲ್ಲಂತೂ ಪುಷ್ಫವೃಷ್ಟಿಯಾಗುತ್ತದೆ. ಈ ರೀತಿಯಾಗಿ ವಿಚಾರ ಸಾಗರ ಮಂಥನ ಮಾಡಬೇಕು. ತಂದೆಯಂತೂ ಸಲಹೆ ಕೊಡುತ್ತಿರುತ್ತಾರೆ, ನೀವು ಇದನ್ನು ರಿಫೈನ್ ಮಾಡಿ. ಚಿತ್ರಗಳನ್ನೂ ಸಹ ಭಿನ್ನ-ಭಿನ್ನ ಪ್ರಕಾರವಾಗಿ ಮಾಡುತ್ತಾರೆ. ನಾಟಕದನುಸಾರವಾಗಿ ಏನು ನಡೆಯುತ್ತದೆಯೋ ಅದು ಚೆನ್ನಾಗಿಯೇ ಇದೆ. ಇದನ್ನು ಯಾರಿಗಾದರೂ ತಿಳಿಸಿಕೊಡಲೂ ಸಹ ಸಹಜವಾಗಿದೆ. ಎಲ್ಲರ ಗಮನ ತಂದೆಯ ಕಡೆ ಸೆಳೆಯುವಂತಾಗಬೇಕು. ಇದು ತಂದೆಯ ಕರ್ತವ್ಯವೇ ಆಗಿದೆ ಆದರೆ ಈ ಕರ್ತವ್ಯವನ್ನು ತಂದೆಯು ಮೇಲೆಯೇ ಕುಳಿತು ಮಾಡಲು ಆಗುವುದಿಲ್ಲ. ಯಾವಾಗ ಧರ್ಮಗ್ಲಾನಿಯಾಗುತ್ತದೆಯೋ, ಆಸುರೀ ರಾಜ್ಯವಾಗುತ್ತದೆಯೋ ಆಗ ನಾನು ಬಂದು ಇದೆಲ್ಲವನ್ನೂ ಸಮಾಪ್ತಿ ಮಾಡಿ ದೈವೀ ರಾಜ್ಯವನ್ನು ಸ್ಥಾಪನೆ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಮನುಷ್ಯರಂತೂ ಅಜ್ಞಾನ ನಿದ್ರೆಯಲ್ಲಿ ಮಲಗಿದ್ದಾರೆ. ಇದೆಲ್ಲವೂ ವಿನಾಶವಾಗಿ ಬಿಡುತ್ತದೆ. ಯಾರು ನಿರ್ವಿಕಾರಿಯಾಗುತ್ತಾರೆಯೋ ಆ ಕುಟುಂಬಗಳೇ ಬಂದು ರಾಜ್ಯ ಮಾಡುತ್ತವೆ. ಬ್ರಹ್ಮನ ಮುಖಾಂತರ ಸ್ಥಾಪನೆ ಎಂಬ ಗಾಯನವಿದೆ, ಯಾವುದರ ಸ್ಥಾಪನೆ? ಇಂತಹ ಕುಟುಂಬ (ನಿರ್ವಿಕಾರಿ ಕುಟುಂಬ) ಈಗ ಈ ಯೋಜನೆಯು ನಡೆಯುತ್ತಿದೆ. ಯಾರು ಯಾವ ಬ್ರಹ್ಮಾಕುಮಾರ-ಕುಮಾರಿಯರು ಪವಿತ್ರರಾಗುತ್ತಾರೆಯೋ ಅವರಿಗಾಗಿ ಅವಶ್ಯವಾಗಿ ಪವಿತ್ರವಾಗಿರುವ ಪ್ರಪಂಚ ಬೇಕಾಗಿದೆ. ಈ ಪುರುಷೋತ್ತಮ ಸಂಗಮಯುಗ ಬಹಳ ಚಿಕ್ಕದಾಗಿದೆ. ಈ ಸ್ವಲ್ಪ ಸಮಯದಲ್ಲಿ ಸಂಪೂರ್ಣವಾಗಿ ಉತ್ತಮವಾದ ಯೋಜನೆಯನ್ನು ಮಾಡಿ ಬಿಡುತ್ತಾರೆ. ತಂದೆಯು ಎಲ್ಲರ ಲೆಕ್ಕಾಚಾರವನ್ನು ಮುಗಿಸಿ ತನ್ನ ಮನೆಗೆ ಕರೆದೊಯ್ಯುತ್ತಾರೆ. ಇಷ್ಟೆಲ್ಲಾ ಕೊಳಕನ್ನು ಅಲ್ಲಿಗೆ ತೆಗೆದುಕೊಂಡು ಹೋಗುವುದಿಲ್ಲ. ಅಶುದ್ಧ ಆತ್ಮಗಳೆಲ್ಲರೂ ಹೋಗಲು ಸಾಧ್ಯವಿಲ್ಲ ಆದ್ದರಿಂದ ತಂದೆಯು ಬಂದು ಹೂಗಳನ್ನಾಗಿ ಮಾಡಿ ಮನೆಗೆ ಕರೆದೊಯ್ಯುತ್ತಾರೆ. ಹೀಗೆ ವಿಚಾರ ಸಾಗರ ಮಂಥನ ಮಾಡಬೇಕು. ನೀವು ಅನುಭವ ಮಾಡುತ್ತಿರುತ್ತೀರಿ. ತಂದೆಯು ಹೇಳುತ್ತಾರೆ- ನಾನು ಒಂದೇ ಧರ್ಮದ ಸ್ಥಾಪನೆಯನ್ನು ಮಾಡಿಸಲು ನಿಮ್ಮಿಂದ ರಿಹರ್ಸಲ್ ಮಾಡಿಸುತ್ತಿದ್ದೇನೆ. ಈ ಕುಟುಂಬ ಯೋಜನೆಯನ್ನು ಯಾರು ಮಾಡಿದರು? ನಾನು ಕಲ್ಪದ ಹಿಂದಿನಂತೆ ಈ ನನ್ನ ಕಾರ್ಯವನ್ನು ಮಾಡುತ್ತಿದ್ದೇನೆ. ಪತಿತ ಪರಿವಾರವನ್ನು ಪರಿವರ್ತನೆ ಮಾಡಿ ಪಾವನ ಪರಿವಾರವನ್ನಾಗಿ ಮಾಡಿ ಎಂದು ಕರೆಯುತ್ತಿರುತ್ತಾರೆ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ವಿವಾಹಕ್ಕಾಗಿ ಲಕ್ಷಗಟ್ಟಲೆ ಖರ್ಚು ಮಾಡುತ್ತಾರೆ, ಎಷ್ಟೊಂದು ಆಡಂಬರದಿಂದ ಕೂಡಿದ್ದು ಇನ್ನೂ ಪಾವನರಾಗುವುದಕ್ಕೆ ಬದಲಾಗಿ ಪತಿತರೇ ಆಗುತ್ತಾರೆ. ನೀವು ಮಕ್ಕಳು ಇದೇ ಈಶ್ವರನ ಕರ್ತವ್ಯವನ್ನು ಮಾಡಬೇಕಾಗಿದೆ. ಎಲ್ಲರಿಗೂ ಇದನ್ನು ತಿಳಿಸಬೇಕು- ಎಲ್ಲರೂ ಆಸುರೀ ನಿದ್ರೆಯಲ್ಲಿ ಮಲಗಿದ್ದಾರೆ ಅಂತಹವರನ್ನು ಜಾಗೃತಗೊಳಿಸಬೇಕು. ತಾವು ಪಾವನರಾಗಿ ಅನ್ಯರನ್ನೂ ಪಾವನರನ್ನಾಗಿ ಮಾಡಬೇಕು ಆಗ ತಂದೆಯೂ ಸಹ ಪ್ರೀತಿ ಮಾಡುತ್ತಾರೆ. ಸೇವೆ ಮಾಡದೇ ಇದ್ದಾಗ ಪ್ರೀತಿಯು ಹೇಗೆ ಸಿಗುತ್ತದೆ? ಯಾರಾದರೂ ರಾಜನ ಪದವಿಯನ್ನು ಪಡೆಯದಿದ್ದರೆ ಅವರು ಅವಶ್ಯವಾಗಿ ಉತ್ತಮ ಕರ್ಮವನ್ನು ಮಾಡಿರುತ್ತಾರೆ. ಇದನ್ನಂತೂ ಯಾರು ಬೇಕಾದರೂ ತಿಳಿದುಕೊಳ್ಳಬಹುದು- ಇವರು ರಾಜಾ-ರಾಣಿಯಾಗಿದ್ದಾರೆ, ನಾವು ದಾಸ-ದಾಸಿಯಾಗಿದ್ದೇವೆ ಎಂದು. ಅಂದಾಗ ಹಿಂದಿನ ಜನ್ಮದಲ್ಲಿ ಅಂತಹ ಉತ್ತಮ ಕರ್ಮವನ್ನು ಮಾಡಿರುತ್ತಾರೆ. ಕೆಟ್ಟ ಕರ್ಮವನ್ನು ಮಾಡುವುದರಿಂದ ಕನಿಷ್ಟ ಮಟ್ಟದ ಜನ್ಮವು ಸಿಗುತ್ತದೆ. ಹೀಗೆ ಕರ್ಮದ ಲೆಕ್ಕಾಚಾರವು ನಡೆಯುತ್ತಿರುತ್ತದೆ. ಈಗ ತಂದೆಯು ನಿಮಗೆ ಶ್ರೇಷ್ಠಕರ್ಮ ಮಾಡುವುದನ್ನು ಕಲಿಸುತ್ತಾರೆ. ಹಿಂದಿನ ಜನ್ಮದ ಕರ್ಮದನುಸಾರ ಆ ರೀತಿ ಆಗಿದ್ದೇವೆಂದು ಅಲ್ಲಿಯೂ ಸಹ ತಿಳಿದುಕೊಳ್ಳುತ್ತಾರೆ ಆದರೆ ಎಂತಹ ಕರ್ಮವನ್ನು ಮಾಡಿದ್ದೇವೆಂದು ಗೊತ್ತಾಗುವುದಿಲ್ಲ. ಕರ್ಮದ ಬಗ್ಗೆ ಮಹಿಮೆ ಮಾಡುತ್ತಾರೆ. ಯಾರು ಎಷ್ಟು ಶ್ರೇಷ್ಠ ಕರ್ಮವನ್ನು ಮಾಡುತ್ತಾರೆಯೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಶ್ರೇಷ್ಠ ಕರ್ಮದಿಂದ ಶ್ರೇಷ್ಠರಾಗುತ್ತಾರೆ ಉತ್ತಮ ಕರ್ಮವನ್ನು ಮಾಡದೇ ಇದ್ದಾಗ ಕಸಗುಡಿಸುವಂತಹ ಕಡಿಮೆ ಪದವಿಯನ್ನು ಪಡೆಯಬೇಕಾಗುತ್ತದೆ. ಮಂಕರಿಯನ್ನೂ ಸಹ ಹೊರಬೇಕಾಗುತ್ತದೆ. ಇದೆಲ್ಲವನ್ನೂ ಕರ್ಮದ ಫಲವೆಂದು ಹೇಳಲಾಗುತ್ತದೆ. ಹೀಗೆ ಕರ್ಮದ ಚರಿತ್ರೆಯು ನಡೆಯುತ್ತದೆ. ಶ್ರೀಮತದಿಂದ ಶ್ರೇಷ್ಠ ಕರ್ಮವಾಗುತ್ತದೆ. ಎಲ್ಲಿ ರಾಜಾ ಎಲ್ಲಿ ದಾಸ-ದಾಸಿ! ಅದಕ್ಕಾಗಿ ತಂದೆಯು ತಿಳಿಸುತ್ತಾರೆ- ಫಾಲೋ ಫಾದರ್. ನನ್ನ ಶ್ರೀಮತದಂತೆ ನಡೆದಾಗ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ತಂದೆಯು ಸಾಕ್ಷಾತ್ಕಾರವನ್ನೂ ಸಹ ಮಾಡಿಸುತ್ತಾರೆ. ಈ ಮಮ್ಮಾ-ಬಾಬಾ ಹಾಗೂ ಮಕ್ಕಳು ಇಷ್ಟೊಂದು ಶ್ರೇಷ್ಠ ಕರ್ಮದ ಫಲವಾಗಿಯೇ ಆಗಿದ್ದಾರೆ ಆದರೆ ಅನೇಕ ಮಕ್ಕಳು ಕರ್ಮವನ್ನು ತಿಳಿದುಕೊಂಡಿಲ್ಲ. ಅಂತ್ಯದಲ್ಲಿ ಎಲ್ಲರಿಗೂ ಸಾಕ್ಷಾತ್ಕಾರವಾಗುತ್ತದೆ. ಬಹಳ ಚೆನ್ನಾಗಿ ಬರೆಯುತ್ತೀರಿ, ಓದುತ್ತೀರೆಂದರೆ ನವಾಬರಾಗುತ್ತೀರಿ. ಮುನಿಸಿಕೊಳ್ಳುತ್ತೀರಿ-ಕೋಪಿಸಿಕೊಳ್ಳುತ್ತೀರಿ ಎಂದರೆ ಎಲ್ಲವನ್ನೂ ಕಳೆದುಕೊಳ್ಳುತ್ತೀರಿ. ಆ ವಿದ್ಯೆಯಲ್ಲಿಯೂ ಹೀಗೆಯೇ ಆಗುತ್ತದೆ. ಭಗವಾನುವಾಚ- ಈ ಸಮಯದಲ್ಲಿ ಇಡೀ ಜಗತ್ತು ಕಾಮಚಿತೆಯ ಮೇಲೆ ಸುಡುತ್ತಿದೆ. ಸ್ತ್ರೀಯನ್ನು ನೋಡಿದರೆ ಸ್ಥಿತಿಯು ಕೆಡುತ್ತದೆಯೆಂದು ಹೇಳುತ್ತಾರೆ ಆದರೆ ಅಲ್ಲಿ ಈ ರೀತಿ ಸ್ಥಿತಿಯು ಹಾಳಾಗುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ ನಾಮ ರೂಪವನ್ನು ನೋಡಲೇಬೇಡಿ ನೀವು ಸಹೋದರ-ಸಹೋದರರನ್ನು ನೋಡಿ. ಇದೇ ಅತೀ ದೊಡ್ಡ ಗುರಿಯಾಗಿದೆ. ವಿಶ್ವದ ಮಾಲೀಕರಾಗಬೇಕು. ಎಂದಿಗೂ ಈ ಲಕ್ಷ್ಮೀ-ನಾರಾಯಣರು ಹೇಗಾದರೆಂಬ ಮಾತು ಯಾರ ಬುದ್ಧಿಯಲ್ಲಿಯೂ ಇಲ್ಲ. ತಂದೆಯು ತಿಳಿಸುತ್ತಾರೆ- ನಾನೇ ನಿಮ್ಮನ್ನು ಹೀಗೆ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಲಕ್ಷ್ಮೀ-ನಾರಾಯಣರು ಸರ್ವಗುಣ ಸಂಪನ್ನರಾಗಿದ್ದರು. ವರ್ತಮಾನ ಸಮಯದಲ್ಲಿ ಯಾರಿಗೆ ನೀವು ಹೊಸ ರಕ್ತದವರೆಂದು ತಿಳಿದುಕೊಂಡಿದ್ದೀರಿ ಅಂದಾಗ ಅವರು ಏನು ಮಾಡುತ್ತಿರುತ್ತಾರೆ! ಗಾಂಧೀಜಿಯು ಅವರಿಗೆ ಇದನ್ನೆಲ್ಲವನ್ನೂ ಕಲಿಸಿಕೊಟ್ಟು ಹೋದರೇನು? ರಾಮ ರಾಜ್ಯವನ್ನು ನಿಭಾಯಿಸಲು ಯುಕ್ತಿ ಬೇಕಾಗುತ್ತದೆ. ಇದು ತಂದೆಯ ಕರ್ತವ್ಯವಾಗಿದೆ ಏಕೆಂದರೆ ತಂದೆಯು ಸದಾ ಪಾವನರಾಗಿದ್ದಾರೆ. ನಂತರ ನೀವು 21 ಜನ್ಮಗಳು ಪಾವನರಾಗಿದ್ದು ಅನಂತರ 63 ಜನ್ಮಗಳು ಪತಿತರಾಗಿ ಬಿಡುತ್ತೀರಿ. ಹೀಗೆ ತಿಳಿಸುವುದರಲ್ಲಿ ಮಸ್ತರಾಗಿರಬೇಕು. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಪಾವನರಾಗಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ತಮ್ಮ ಸ್ಥಿತಿಯನ್ನು ಸದಾ ಏಕರಸ, ಅಡೋಲವನ್ನಾಗಿ ಮಾಡಿಕೊಳ್ಳಲು ಯಾರ ನಾಮ-ರೂಪವನ್ನೂ ನೋಡಬಾರದು. ಸಹೋದರ-ಸಹೋದರರನ್ನು ನೋಡಬೇಕು. ದೃಷ್ಟಿಯನ್ನು ಪಾವನ ಮಾಡಿಕೊಳ್ಳಿ. ತಿಳಿಸಿಕೊಡುವಾಗ ಆತ್ಮೀಯ ನಶೆಯನ್ನು ಧಾರಣೆ ಮಾಡಿ.

2. ತಂದೆಯ ಪ್ರೀತಿಯನ್ನು ಪಡೆದುಕೊಳ್ಳಲು ತಂದೆಯ ಸಮಾನ ಕರ್ತವ್ಯವನ್ನು ಮಾಡಬೇಕು. ಆಸುರೀ ನಿದ್ರೆಯಲ್ಲಿ ಮಲಗಿರುವವರನ್ನು ಜಾಗೃತಗೊಳಿಸಬೇಕು. ತಾವು ಸುಂದರರಾಗಿ ಅನ್ಯರನ್ನೂ ಸುಂದರರನ್ನಾಗಿ ಮಾಡಬೇಕು.

ವರದಾನ:
ಬಾಲಕ ಹಾಗೂ ಮಾಲಿಕನ ಸ್ಮೃತಿಯಿಂದ ಸರ್ವ ಖಜಾನೆಗಳನ್ನು ತಮ್ಮದನ್ನಾಗಿಸಿಕೊಳ್ಳುವವರೆ ಸ್ವರಾಜ್ಯ ಅಧಿಕಾರಿ ಭವ.

ಈ ಸಮಯದಲ್ಲಿ ತಾವು ಮಕ್ಕಳು ಕೇವಲ ಬಾಲಕರಲ್ಲ ಆದರೆ ಬಾಲಕರಿಂದ ಮಾಲೀಕರಾಗಿರುವಿರಿ, ಒಂದು ಸ್ವರಾಜ್ಯ ಅಧಿಕಾರಿ ಮಾಲೀಕ ನಂತರ ಎರಡನೆಯದು ತಂದೆಯ ಆಸ್ತಿಗೆ ಮಾಲೀಕ. ಯಾವಾಗ ಸ್ವರಾಜ್ಯ ಅಧಿಕಾರಿಯಾಗುವಿರಿ ಆಗ ಸ್ವಯಂನ ಸರ್ವ ಕರ್ಮೇಂದ್ರಿಯ ಆದೇಶದ ಪ್ರಮಾಣ ಇರಬೇಕು. ಆದರೆ ಸಮಯ ಪ್ರತೀ ಸಮಯ ಮಾಲೀಕತನದ ಸ್ಮೃತಿಯನ್ನು ಮರೆಸಿ ತನ್ನ ವಶದಲ್ಲಿ ಮಾಡಿಕೊಳ್ಳುವಂತಹದು ಈ ಮನಸ್ಸಾಗಿದೆ, ಆದ್ದರಿಂದ ಮನ್ಮನಾಭವ. ಮನ್ಮನಾಭವವಾಗಿರುವುದರಿಂದ ಯಾವುದೇ ವ್ಯರ್ಥ ಮಾತಿನ ಪ್ರಭಾವ ಬೀಳುವುದಿಲ್ಲ ಮತ್ತು ಸರ್ವ ಖಜಾನೆಗಳು ನಿಮಗೆ ಅನುಭವವಾಗುವುದು.

ಸ್ಲೋಗನ್:
ಪರಮಾತ್ಮನ ಪ್ರೀತಿಯ ಉಯ್ಯಾಲೆಯಲ್ಲಿ ಹಾರುವ ಕಲೆಯ ಮೋಜನ್ನು ಆಚರಿಸುವುದು ಇದೇ ಎಲ್ಲಕ್ಕಿಂತ ಶ್ರೇಷ್ಠ ಭಾಗ್ಯವಾಗಿದೆ.