28.04.19    Avyakt Bapdada     Kannada Murli     19.11.84     Om Shanti     Madhuban


"ಬೇಹದ್ದಿನ ವೈರಾಗ್ಯ ವೃತ್ತಿಯಿಂದ ಸಿದ್ಧಿಗಳ ಪ್ರಾಪ್ತಿ"


ಇಂದು ವಿಶ್ವದ ರಚೈತನು ತನ್ನ ಶ್ರೇಷ್ಠ ರಚನೆಗೆ ಹಾಗೂ ರಚನೆಯ ಪೂರ್ವಜ ಆತ್ಮರನ್ನು ನೋಡುತ್ತಿದ್ದಾರೆ. ನಾಲ್ಕೂ ಕಡೆಯಲ್ಲಿರುವ ಪೂರ್ವಜ-ಪೂಜ್ಯಾತ್ಮರು ಬಾಪ್ದಾದಾರವರ ಸನ್ಮುಖದಲ್ಲಿದ್ದಾರೆ. ಪೂರ್ವಜ ಆತ್ಮರ ಆಧಾರದಿಂದ ವಿಶ್ವದ ಸರ್ವಾತ್ಮರಿಗೆ ಶಕ್ತಿ ಹಾಗೂ ಶಾಂತಿಯ ಪ್ರಾಪ್ತಿಯಾಗುತ್ತಿದೆ ಮತ್ತು ಆಗಬೇಕು. ಅನೇಕ ಆತ್ಮರು ಪೂರ್ವಜ ಮತ್ತು ಪೂಜ್ಯಾತ್ಮರನ್ನು ಶಾಂತಿದೇವ, ಶಕ್ತಿದೇವ ಎಂದು ಕರೆಯುತ್ತಾ ನೆನಪು ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಶಾಂತಿ ದೇವಾತ್ಮರು ಮಾಸ್ಟರ್ ಶಾಂತಿಯ ಸಾಗರ, ಮಾಸ್ಟರ್ ಶಾಂತಿಯ ಸೂರ್ಯನು, ತನ್ನ ಶಾಂತಿಯ ಕಿರಣಗಳು ಹಾಗೂ ಶಾಂತಿಯ ಪ್ರಕಂಪನಗಳ ದಾತಾ ಮಕ್ಕಳು ದೇವನಾಗಿದ್ದು ಸರ್ವರಿಗೂ ಕೊಡುತ್ತಿದ್ದೀರಾ! ಈ ವಿಶೇಷ ಸೇವೆಯನ್ನು ಮಾಡುವ ಅಭ್ಯಾಸಿ ಆಗಿದ್ದೀರಾ ಅಥವಾ ಅನ್ಯ ಭಿನ್ನ-ಭಿನ್ನ ಪ್ರಕಾರದ ಸೇವೆಗಳಲ್ಲಿ ಇಷ್ಟೂ ಬ್ಯುಜಿಯಾಗಿದ್ದೀರಿ, ಅದರಿಂದ ಈ ವಿಶೇಷ ಸೇವೆಗಾಗಿ ಸಮಯ ಹಾಗೂ ಅಭ್ಯಾಸವು ಕಡಿಮೆಯಾಗುತ್ತದೆಯೇ? ಸಮಯವು ಹೇಗಿರುತ್ತದೆಯೋ ಹಾಗೆಯೇ ಸೇವಾ ಸ್ವರೂಪವನ್ನು ತಮ್ಮದಾಗಿಸಿಕೊಳ್ಳುತ್ತೀರಾ? ಒಂದು ವೇಳೆ ಯಾರಿಗಾದರೂ ಬಾಯಾರಿಕೆಯಾಗಿರುತ್ತದೆ ಮತ್ತು ತಾವು ಶ್ರೇಷ್ಠವಾದ ಭೋಜವನ್ನು ಕೊಡುತ್ತೀರೆಂದರೆ, ಅವರು ಸಂತುಷ್ಟವಾಗುವರೇ? ಹೀಗೆಯೇ ವರ್ತಮಾನ ಸಮಯದಲ್ಲಿ ಶಾಂತಿ ಮತ್ತು ಶಕ್ತಿಯ ಅವಶ್ಯಕತೆಯಿದೆ. ಮನಸ್ಸಾ ಶಾಂತಿಯ ಮೂಲಕ ಆತ್ಮರಿಗೆ ಮನಸ್ಸಿನ ಶಾಂತಿಯನ್ನು ಮಾಡಿಸಲು ಸಾಧ್ಯವಾಗಬೇಕು. ವಾಣಿಯ ಮೂಲಕ ಕಿವಿಗಳವರೆಗೂ ಧ್ವನಿಯು ತಲುಪಬಹುದು. ಆದರೆ ವಾಣಿಯ ಜೊತೆಗೆ ಮನಸ್ಸಾ ಶಕ್ತಿಯ ಮೂಲಕ ಮನಸ್ಸಿನವರೆಗೂ ತಲುಪುತ್ತದೆ. ಮನಸ್ಸಿನ ಧ್ವನಿಯು ಮನಸ್ಸಿನವರೆಗೆ ತಲುಪುತ್ತದೆ. ಕೇವಲ ಮುಖದ ಧ್ವನಿಯು ಕಿವಿ ಹಾಗೂ ಮುಖದವರೆಗೆ ಉಳಿದುಕೊಳ್ಳುತ್ತದೆ. ಕೇವಲ ವಾಣಿಯಿಂದ ವರ್ಣನಾ ಶಕ್ತಿ ಮತ್ತು ಮನಸ್ಸಿನಿಂದ ಮನನ ಶಕ್ತಿ, ಮಗ್ನ ಸ್ವರೂಪದ ಶಕ್ತಿಯೆರಡರ ಪ್ರಾಪ್ತಿಯಾಗುತ್ತದೆ. ಅವರು ಕೇಳುವವರು ಮತ್ತು ಅವರು ಆಗುವವರಾಗಿ ಬಿಡುತ್ತಾರೆ, ಇಬ್ಬರಲ್ಲಿ ಅಂತರವಾಗಿ ಬಿಡುತ್ತದೆ ಅಂದಮೇಲೆ ಸದಾ ವಾಚಾ ಮತ್ತು ಮನಸ್ಸಾ ಎರಡೂ ಒಟ್ಟೊಟ್ಟಿಗೆ ಸೇವೆಯಾಗುತ್ತಿರಲಿ. ವರ್ತಮಾನದಲ್ಲಿ ವಿಶೇಷವಾಗಿ ಭಾರತವಾಸಿಗಳ ಕ್ಷೇಮ ಸಮಾಚಾರವನ್ನೇನು ನೋಡಿದೆವು? ಈಗ ಸ್ಮಶಾನ ವೈರಾಗ್ಯ ವೃತ್ತಿಯಲ್ಲಿದೆ. ಇಂತಹ ವೈರಾಗ್ಯ ವೃತ್ತಿಯಿರುವವರಿಗೆ ಬೇಹದ್ದಿನ ವೈರಾಗ್ಯ ವೃತ್ತಿಯನ್ನು ತರಿಸುವುದಕ್ಕಾಗಿ, ತಾವು ಬೇಹದ್ದಿನ ವೈರಾಗ್ಯ ವೃತ್ತಿಯಿರುವವರಾಗಿರಿ. ತಮ್ಮನ್ನು ತಾವು ಪರಿಶೀಲಿಸಿರಿ- ಕೆಲವೊಮ್ಮೆ ದ್ವೇಷ ಕೆಲವೊಮ್ಮೆ ವೈರಾಗ್ಯ ಎರಡರಲ್ಲಿ ನಡೆಯುತ್ತೀರಾ ಅಥವಾ ಸದಾ ಬೇಹದ್ದಿನ ವೈರಾಗಿ ಆಗಿರುತ್ತೀರಾ? ಬೇಹದ್ದಿನ ವೈರಾಗಿ ಅರ್ಥಾತ್ ದೇಹವೆಂಬ ಮನೆಯಿಂದ ಬೆಗ್ಗರ್(ಬಿಕಾರಿ). ದೇಹವೂ ತಂದೆಯಾಗಿದೆ, ನನ್ನದಲ್ಲ, ದೇಹಭಾನದಿಂದ ಇಷ್ಟೂ ಭಿನ್ನ. ಬೇಹದ್ದಿನ ವೈರಾಗಿಯೆಂದಿಗೂ ಸಹ ಸಂಸ್ಕಾರ, ಸ್ವಭಾವ, ಸಾಧನಗಳು, ಯಾವುದರಲ್ಲಿಯೂ ವಶರಾಗುವುದಿಲ್ಲ. ಭಿನ್ನರಾಗಿದ್ದು, ಮಾಲೀಕನಾಗಿದ್ದು ಸಾಧನಗಳ ಮೂಲಕ ಸಿದ್ಧಿ ಸ್ವರೂಪರಾಗುತ್ತಾರೆ. ಸಾಧನಗಳನ್ನು ವಿಧಿಯನ್ನಾಗಿ ಮಾಡಿಕೊಳ್ಳುತ್ತಾರೆ. ವಿಧಿಯ ಮೂಲಕ ಸ್ವ-ಉನ್ನತಿಯ ವೃದ್ಧಿಯ ಸಿದ್ಧಿಯನ್ನು ಪಡೆಯುತ್ತಾರೆ. ಸೇವೆಯಿಂದ ವೃದ್ಧಿಯ ಸಿದ್ಧಿಯ ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ನಿಮಿತ್ತ ಆಧಾರವಿರುತ್ತದೆ ಆದರೆ ಅದರಲ್ಲಿ ಅಧೀನರಾಗುವುದಿಲ್ಲ. ಆಧಾರದ ಅಧೀನರಾಗುವುದು ಅರ್ಥಾತ್ ವಶರಾಗುವುದು, ವಶರಾಗುವುದು ಶಬ್ಧದ ಅರ್ಥವಂತು ಇದ್ದೇ ಇದೆ, ಹೇಗೆ ಭೂತಾತ್ಮವು ಪರವಶ ಮತ್ತು ಬೇಸರ ಪಡಿಸುತ್ತದೆ, ಹಾಗೆಯೇ ಯಾವುದೇ ಸಾಧನ ಅಥವಾ ಸಂಸ್ಕಾರ ಹಾಗೂ ಸ್ವಭಾವ ಅಥವಾ ಸಂಪರ್ಕಕ್ಕೆ ವಶರಾಗಿ ಬಿಡುತ್ತೀರೆಂದರೆ, ಭೂತದಂತೆ ಬೇಸರ ಮತ್ತು ಪರವಶರಾಗಿ ಬಿಡುತ್ತಾರೆ. ಬೇಹದ್ದಿನ ವೈರಾಗಿ, ಸದಾ ಮಾಡಿಸುವವರು ಮಾಡಿಸುತ್ತಿದ್ದಾರೆ, ಇದೇ ಮಸ್ತಿಯಲ್ಲಿ ರಮತಾ ಯೋಗಿಯಿಂದಲೇ ಶ್ರೇಷ್ಠ ಹಾರುವ ಯೋಗಿಯಾಗಿರುತ್ತಾರೆ. ಹೇಗೆ ಅಲ್ಪಕಾಲದ ವೈರಾಗಿ ಹಠಯೋಗಿಯ ವಿಧಿಯಿಂದ ಧರಣಿ, ಬೆಂಕಿ, ನೀರು ಎಲ್ಲದರ ಮೇಲೂ ಶ್ರೇಷ್ಠ ಆಸನಧಾರಿಯನ್ನಾಗಿ ತೋರಿಸುತ್ತಾರೆ. ಅವರನ್ನು ಯೋಗದ ಸಿದ್ಧಿ ಸ್ವರೂಪರೆಂದು ಒಪ್ಪುತ್ತಾರೆ. ಅದಾಯಿತು- ಅಲ್ಪಕಾಲದ ಹಠಯೋಗದ ವಿಧಿಯ ಸಿದ್ಧಿ. ಹಾಗೆಯೇ ಬೇಹದ್ದಿನ ವೈರಾಗ್ಯ ವೃತ್ತಿಯಿರುವವರು ಈ ವಿಧಿಯ ಮೂಲಕ ದೇಹಭಾನದ ಧರಣಿಯಿಂದ ಮೇಲೆ, ಭಿನ್ನ-ಭಿನ್ನ ವಿಕಾರಗಳ ಅಗ್ನಿಯಿಂದ ಮೇಲೆ, ಭಿನ್ನ-ಭಿನ್ನ ಪ್ರಕಾರದ ಸಾಧನಗಳ ಮೂಲಕ ಸಂಗದ ರಂಗಿನಲ್ಲಿ ಬರುವುದರಿಂದ ಭಿನ್ನರಾಗಿ ಬಿಡುತ್ತಾರೆ. ಹೇಗೆ ನೀರಿನ ವಿಶೇಷತೆಯು ತನ್ನದನ್ನಾಗಿ ಮಾಡಿಕೊಂಡು ಬಿಡುತ್ತದೆ, ತನ್ನ ಕಡೆಗೆ ಸೆಳೆದು ಬಿಡುತ್ತದೆ. ಹಾಗೆಯೇ ಯಾವುದೇ ಪ್ರಕಾರದ ಅಲ್ಪಕಾಲದ ಸೆಳೆತವು ತನ್ನ ಕಡೆಗೆ ಆಕರ್ಷಿಸಬಾರದು. ಹಾಗೆಯೇ ನೀರಿನ ಆಕರ್ಷಣೆಯಿಂದಲೇ ಮೇಲಿರುವುದಕ್ಕೆ ಹೇಳಲಾಗುತ್ತದೆ- ಹಾರುವ ಯೋಗಿ. ಇವೆಲ್ಲಾ ಸಿದ್ಧಿಗಳು ಬೇಹದ್ದಿನ ವೈರಾಗ್ಯದ ವಿಧಿಯಿಂದ ಪ್ರಾಪ್ತಿಯಾಗುತ್ತದೆ. ಬೇಹದ್ದಿನ ವೈರಾಗಿ ಅರ್ಥಾತ್ ಪ್ರತೀ ಸಂಕಲ್ಪ, ಮಾತು ಮತ್ತು ಸೇವೆಯಲ್ಲಿ ಬೇಹದ್ದಿನ ವೃತ್ತಿ, ಸ್ಮೃತಿ ಭಾವನೆ ಮತ್ತು ಕಾಮನೆಯಿರಲಿ. ಪ್ರತೀ ಸಂಕಲ್ಪವು ಬೇಹದ್ದಿನ ಸೇವೆಯಲ್ಲಿ ಸಮರ್ಪಿತವಾಗಲಿ. ಪ್ರತೀ ಮಾತಿನಲ್ಲಿ ನಿಸ್ವಾರ್ಥ ಭಾವನೆಯಿರಲಿ. ಪ್ರತೀ ಕರ್ಮದಲ್ಲಿ ಮಾಡಿಸುವವರು ಮಾಡಿಸುತ್ತಿದ್ದಾರೆ- ಈ ವೈಬ್ರೇಷನ್ ಸರ್ವರಿಗೂ ಅನುಭವವಾಗಲಿ, ಇದಕ್ಕೆ ಹೇಳಲಾಗುತ್ತದೆ- ಬೇಹದ್ದಿನ ವೈರಾಗಿ. ಬೇಹದ್ದಿನ ವೈರಾಗಿ ಅರ್ಥಾತ್ ತನ್ನತನವೂ ಸಮಾಪ್ತಿಯಾಗಲಿ. ಬಾಬಾ ಎನ್ನುವುದೇ ಬಂದು ಬಿಡಲಿ. ಹೇಗೆ ನಿರಂತರ ಜಪ ಮಾಡುತ್ತಾರೆ, ಹಾಗೆಯೇ ನಿರಂತರ ಸ್ಮೃತಿ ಸ್ವರೂಪರಾಗಿರಿ. ಪ್ರತೀ ಸಂಕಲ್ಪದಲ್ಲಿ, ಪ್ರತೀ ಶ್ವಾಸದಲ್ಲಿ ಬೇಹದ್ ಮತ್ತು ಬಾಬಾರವರು ಸಮಾವೇಶವಾಗಿರಲಿ. ಅಂದಮೇಲೆ ವರ್ತಮಾನದಲ್ಲಿ ಅಲ್ಪಕಾಲದ ವೈರಾಗಿ, ಸ್ಮಶಾನಿ ವೈರಾಗಿ ಆತ್ಮರಿಗೆ ಶಾಂತಿ ಮತ್ತು ಶಕ್ತಿದೇವ ಆಗಿದ್ದು ಬೇಹದ್ದಿನ ವೈರಾಗಿಯನ್ನಾಗಿ ಮಾಡಿರಿ. ಅಂದಮೇಲೆ ವರ್ತಮಾನ ಸಮಯದನುಸಾರ ಮಕ್ಕಳ ಫಲಿತಾಂಶದಲ್ಲಿ ಏನಿತ್ತು- ಈ ಟಿ.ವಿ.ಯನ್ನು ಬಾಪ್ದಾದಾರವರು ನೋಡಿದರು ಮತ್ತು ಮಕ್ಕಳು ಇಂದಿರಾ ಗಾಂಧಿಯ ಟಿ.ವಿ.ಯನ್ನು ನೋಡಿದರು. ಸಮಯದಲ್ಲಿ ನೋಡಿದರು, ಜ್ಞಾನಕ್ಕಾಗಿ ನೋಡಿದರು, ಸಮಾಚಾರಕ್ಕಾಗಿ ನೋಡಿದರು, ಇದರಲ್ಲೇನು ಮಾತಿಲ್ಲ. ಆದರೆ ಏನಾಯಿತು, ಏನಾಗುತ್ತದೆ- ಈ ರೂಪದಿಂದ ನೋಡಬಾರದು. ಜ್ಞಾನ ಪೂರ್ಣರಾಗಿದ್ದು ಪ್ರತಿಯೊಂದು ದೃಶ್ಯವನ್ನು ಕಲ್ಪದ ಮೊದಲಿನ ಸ್ಮೃತಿಯಿಂದ ನೋಡಿರಿ. ಅಂದಮೇಲೆ ಬಾಪ್ದಾದಾರವರು ಮಕ್ಕಳ ಯಾವ ಮಾತನ್ನು ನೋಡಿದರು. ಮಕ್ಕಳ ದೃಶ್ಯವೂ ರಮಣೀಕವಾಗಿತ್ತು. ಮೂರು ಪ್ರಕಾರದ ಫಲಿತಾಂಶವನ್ನು ನೋಡಿದರು. 1. ಒಬ್ಬರಿದ್ದರು- ನಡೆಯುತ್ತಾ-ನಡೆಯುತ್ತಾ ಹುಡುಗಾಟಿಕೆಯ ನಿದ್ರೆಯಲ್ಲಿ ಮಲಗಿರುವ ಆತ್ಮರು. ಹೇಗೆ ಜೋರಾಗಿ ಧ್ವನಿಯಾಗುತ್ತದೆ ಅಥವಾ ಯಾರಾದರೂ ಅಲುಗಾಡಿಸುತ್ತಾರೆಂದರೆ, ಮಲಗಿರುವವರು ಜಾಗೃತವಾಗಿ ಬಿಡುತ್ತಾರೆ ಆದರೆ ಏನಾಯಿತು! ಈ ಸಂಕಲ್ಪದಿಂದ ಸ್ವಲ್ಪ ಸಮಯ ಜಾಗೃತರಾದರು ಮತ್ತೆ ನಿಧಾನ-ನಿಧಾನವಾಗಿ ಅದೇ ಹುಡುಗಾಟಿಕೆಯ ನಿದ್ರೆ- ಇದಂತು ಆಗುತ್ತಲೇ ಇರುತ್ತದೆ, ಈ ಹೊದಿಕೆಯಲ್ಲಿ ಮಲಗಿ ಬಿಟ್ಟರು. ಈಗಂತು ರಿಹರ್ಸಲ್ ಆಗಿದೆ, ಫೈನಲಂತು ಮುಂದೆ ಆಗುತ್ತದೆ. ಇದರಿಂದು ಇನ್ನೂ ಮುಖದವರೆಗೂ ಹೊದಿಕೆಯನ್ನು ಹಾಕಿಕೊಂಡರು. 2. ಇನ್ನೊಂದು ಪ್ರಕಾರದವರಿದ್ದರು- ಆಲಸ್ಯದ ನಿದ್ರೆಯಲ್ಲಿ ಮಲಗಿರುವವರು. ಇದೆಲ್ಲವೂ ಆಗಲೇಬೇಕಿತ್ತು, ಅದಾಯಿತು. ಪುರುಷಾರ್ಥವನ್ನಂತು ಮಾಡುತ್ತಿದ್ದೇವೆ ಮತ್ತು ಮುಂದೆಯೂ ಮಾಡಿ ಬಿಡುತ್ತೇವೆ. ಸಂಗಮಯುಗದಲ್ಲಂತು ಪುರುಷಾರ್ಥವನ್ನು ಮಾಡಲೇಬೇಕು. ಸ್ವಲ್ಪ ಮಾಡಿದ್ದೇವೆ, ಸ್ವಲ್ಪ ಮುಂದೆ ಮಾಡಿ ಬಿಡುತ್ತೇವೆ. ಅನ್ಯರನ್ನು ಜಾಗೃತಗೊಳಿಸಿ ನೋಡುತ್ತಿರುತ್ತಾರೆ. ಹೇಗೆ ಹೊದಿಕೆಯಿಂದ ಮುಖವನ್ನು ತೆಗೆದು ಒಬ್ಬರಿನ್ನೊಬ್ಬರನ್ನು (ಮಲಗಿರುವವರನ್ನು) ನೋಡುತ್ತಾರಲ್ಲವೆ. ಯಾರು ಪ್ರಸಿದ್ಧವಾಗಿದ್ದಾರೆ ಅವರೂ ಇಷ್ಟೇ ಗತಿಯಿಂದ ನಡೆಯುತ್ತಿದ್ದಾರೆ, ನಾವೂ ನಡೆಯುತ್ತಿದ್ದೇವೆ. ಹೀಗೆ ಅನ್ಯರ ಬಲಹೀನತೆಗಳನ್ನು ನೋಡುತ್ತಾ ಫಾಲೋಫಾದರ್ ಮಾಡುವುದಕ್ಕೆ ಬದಲು, ಸಹೋದರ-ಸಹೋದರಿಯರನ್ನು ಫಾಲೋ ಮಾಡಿ ಬಿಡುತ್ತಾರೆ ಮತ್ತು ಅವರ ಬಲಹೀನತೆಗಳನ್ನೂ ಫಾಲೋ ಮಾಡುತ್ತಾರೆ. ಹೀಗೆ ಸಂಕಲ್ಪ ಮಾಡುವವರು ಆಲಸ್ಯದ ನಿದ್ರೆಯಲ್ಲಿ ಮಲಗಿರುವವರೂ ಸಹ ಅವಶ್ಯವಾಗಿ ಏಳಲಿ. ಉಮ್ಮಂಗ ಮತ್ತು ಉತ್ಸಾಹದ ಆಧಾರದಿಂದ ಆಲಸ್ಯದ ನಿದ್ರೆಯನ್ನು ಕೆಲವರು ತ್ಯಾಗವೂ ಮಾಡಿದರು. ಸ್ವ-ಉನ್ನತಿ ಮತ್ತು ಸೇವೆಯ ಉನ್ನತಿಯಲ್ಲಿ ಹೆಜ್ಜೆಯನ್ನೂ ಮುಂದುವರೆಸಿದರು. ಏರುಪೇರುಗಳು ಅಲುಗಾಡಿಸಿತು ಮತ್ತು ಮುಂದುವರೆದರು. ಆದರೆ ಆಲಸ್ಯದ ಸಂಸ್ಕಾರವು ಮಧ್ಯ-ಮಧ್ಯದಲ್ಲಿ ಪುನಃ ತನ್ನ ಕಡೆಗೆ ಸೆಳೆಯುತ್ತಿರುತ್ತದೆ. ಮತ್ತೆ ಏರುಪೇರುಗಳು ಅಲುಗಾಡಿಸಿತು, ಮುಂದುವರೆಸಿತು. 3. ಮೂರನೇ ಪ್ರಕಾರದವರು- ಏರುಪೇರುಗಳನ್ನು ನೋಡುತ್ತಾ ಅಚಲರಾಗಿರುವವರು. ಸೇವೆಯ ಶ್ರೇಷ್ಠ ಸಂಕಲ್ಪದಲ್ಲಿ ಸೇವೆಯ ಭಿನ್ನ-ಭಿನ್ನ ಯೋಜನೆಗಳನು ಯೋಚಿಸುವುದು ಮತ್ತು ಮಾಡುವುದು. ಇಡೀ ವಿಶ್ವಕ್ಕೆ ಶಾಂತಿ ಮತ್ತು ಶಕ್ತಿಯ ಸಹಾಯತೆಯನ್ನು ಕೊಡುವವರು, ಸಾಹಸವನ್ನಿಡುವವರು. ಅನ್ಯರಿಗೂ ಸಾಹಸವನ್ನು ತರಿಸುವವರು. ಇಂತಹ ಮಕ್ಕಳನ್ನೂ ನೋಡಿದೆವು. ಆದರೆ ಸ್ಮಶಾನಿ ಉಮ್ಮಂಗ-ಉತ್ಸಾಹ ಅಥವಾ ಸ್ಮಶಾನಿ ತೀವ್ರ ಪುರುಷಾರ್ಥ ಅಥವಾ ಬಲಹೀನತೆಯಿಂದ ವೈರಾಗ್ಯ ವೃತ್ತಿ, ಇದೇ ಪ್ರಕಂಪನದಲ್ಲಿ ನಡೆಯಬಾರದು. ಸದಾ ಪರಿಸ್ಥಿತಿಯನ್ನು ಸ್ವ ಸ್ಥಿತಿಯ ಶಕ್ತಿಯಿಂದ ಪರಿವರ್ತನೆ ಮಾಡುವವರು, ವಿಶ್ವ ಪರಿವರ್ತಕದ ಸ್ಮೃತಿಯಲ್ಲಿರಿ. ಪರಿಸ್ಥಿತಿಯು ಸ್ಥಿತಿಯನ್ನು ಮುಂದುವರೆಸುವುದೇ ಅಥಕಾ ವಾಯುಮಂಡಲವು ಮಾಸ್ಟರ್ ಸರ್ವಶಕ್ತಿವಂತನನ್ನು ನಡೆಸುವುದೇ! ಮನುಷ್ಯಾತ್ಮರ ಸ್ಮಶಾನಿ ವೈರಾಗ್ಯ, ಅಲ್ಪಕಾಲಕ್ಕಾಗಿ ಬೇಹದ್ದಿನ ವೈರಾಗಿಯನ್ನಾಗಿ ಮಾಡುತ್ತದೆ- ಇದು ಪೂರ್ವಜ ಆತ್ಮರ ಕರ್ಮವಲ್ಲ. ಸಮಯವು ರಚನೆ, ಮಾಸ್ಟರ್ ರಚೈತನನ್ನು ಮುಂದುವರೆಸುವುದು- ಇದು ಮಾಸ್ಟರ್ ರಚೈತನ ಬಲಹೀನತೆಯಾಗಿದೆ. ತಮ್ಮ ಶ್ರೇಷ್ಠ ಸಂಕಲ್ಪವು ಸಮಯವನ್ನು ಪರಿವರ್ತನೆ ಮಾಡುವಂತದ್ದಾಗಿದೆ. ಸಮಯವು ತಾವು ವಿಶ್ವ ಪರಿವರ್ತಕ ಆತ್ಮರ ಸಹಯೋಗಿಯಾಗಿದೆ. ತಿಳಿಯಿತೆ! ಸಮಯವನ್ನು ನೋಡಿ, ಸಮಯದ ಅಲುಗಾಡುವಿಕೆಯಲ್ಲಿ ಮುಂದುವರೆಯುವವರಲ್ಲ. ಆದರೆ ಸ್ವಯಂ ಮುಂದುವರೆದು ಸಮಯವನ್ನು ಸಮೀಪಕ್ಕೆ ತನ್ನಿರಿ. ಪ್ರಶ್ನೆಗಳಂತು ಬಹಳಷ್ಟು ಉತ್ಪನ್ನವಾಯಿತು- ಈಗ ಏನಾಗುತ್ತದೆ? ಆದರೆ ಪ್ರಶ್ನೆಯನ್ನು ಪೂರ್ಣ ವಿರಾಮದ ರೂಪದಲ್ಲಿ ಪರಿವರ್ತನೆ ಮಾಡಿರಿ ಅರ್ಥಾತ್ ತಮ್ಮನ್ನು ಎಲ್ಲಾ ವಿಷಯಗಳಲ್ಲಿಯೂ ಸಂಪೂರ್ಣ ಮಾಡಿರಿ. ಇದು ಪೂರ್ಣ ವಿರಾಮವಾಯಿತು. ಇಂತಹ ಸಮಯದಲ್ಲೇನಾಗುತ್ತದೆ? ಈ ಪ್ರಶ್ನೆಯು ಬರುವುದಿಲ್ಲ, ಆದರೆ ಏನು ಮಾಡಬೇಕು, ಇಂತಹ ಸಮಯದಲ್ಲಿ ನನ್ನ ಕರ್ತವ್ಯವೇನಾಗಿದೆ, ಆ ಸೇವೆಯಲ್ಲಿ ತೊಡಗಿ ಬಿಡಿ. ಹೇಗೆ ಬೆಂಕಿಯನ್ನು ಶಮನ ಮಾಡುವವರು ಶಮನ ಮಾಡುವುದರಲ್ಲಿ ತೊಡಗಿ ಬಿಡುತ್ತಾರೆ. ಇದು ಹೇಗಾಯಿತು ಎಂದು ಪ್ರಶ್ನೆ ಮಾಡುವುದಿಲ್ಲ. ತಮ್ಮ ಸೇವೆಯಲ್ಲಿ ತೊಡಗಿ ಬಿಟ್ಟರಲ್ಲವೆ. ಹಾಗೆಯೇ ಆತ್ಮಿಕ ಸೇವಾಧಾರಿಗಳ ಕರ್ತವ್ಯವಾಗಿದೆ- ತಮ್ಮ ಆತ್ಮಿಕ ಸೇವೆಯಲ್ಲಿ ತೊಡಗಿ ಬಿಡುವುದು. ಪ್ರಪಂಚದವರಿಗೂ ಭಿನ್ನತನದ ಅನುಭವವಾಗಲಿ. ತಿಳಿಯಿತೆ! ಆದರೂ ಸಮಯದನುಸಾರವಾಗಿ ತಲುಪಿ ಬಿಟ್ಟಿದ್ದೀರಲ್ಲವೆ. ಪರಿಸ್ಥಿತಿಯೇನೇ ಆಗಿರಲಿ ಆದರೆ ಡ್ರಾಮಾವು ಆದರೂ ಮಿಲನದ ಮೇಳವನ್ನಾಚರಿಸಿ ಬಿಟ್ಟಿತು, ಯಾರು ತಲುಪಿ ಬಿಟ್ಟಿದ್ದೀರಿ ಅವರು ಇನ್ನೂ ಅದೃಷ್ಟವಂತರಾಗಿ ಬಿಟ್ಟಿರಲ್ಲವೆ. ಖುಷಿಯಾಗುತ್ತಿದೆಯಲ್ಲವೆ- ಯಾರು ತಲುಪಿದೆವು ನಮ್ಮ ಭಾಗ್ಯವಿದೆ. ಭಲೇ ಬಂದಿದ್ದೀರಿ. ಮಧುಬನದ ಶೋಭೆಯು ತಾವೆಲ್ಲಾ ಮಕ್ಕಳಾಗಿದ್ದೀರಿ. ಮಧುಬನದ ಶೃಂಗಾರವು ಮಧುಬನದಲ್ಲಿ ತಲುಪಿದೆ. ಕೇವಲ ಮಧುಬನದ ಬಾಬಾ ಅಲ್ಲ, ಮಧುಬನದ ಮಕ್ಕಳೂ ಇದ್ದಾರೆ. ಒಳ್ಳೆಯದು.

ನಾಲ್ಕೂ ಕಡೆಯ ಸಂಕಲ್ಪದ ಮೂಲಕ, ಸ್ನೇಹದ ಮೂಲಕ, ಆಕಾರಿ ರೂಪದ ಮೂಲಕ ತಲುಪಿರುವ ಸರ್ವ ಮಕ್ಕಳಿಗೆ ಬಾಪ್ದಾದಾರವರು ಸದಾ ಅಚಲ ಭವ, ಸದಾ ಬೇಹದ್ದಿನ ವೈರಾಗಿ, ಸದಾ ಹಾರುವ ಯೋಗಿ ಭವದ ಆಸ್ತಿ ಮತ್ತು ವರದಾನವನ್ನು ಕೊಡುತ್ತಿದ್ದಾರೆ. ಸದಾ ನಿರಂತರ ಸ್ಮೃತಿ ಸ್ವರೂಪ, ಹುಡುಗಾಟಿಕೆ ಮತ್ತು ಆಲಸ್ಯದ ನಿದ್ರಾಜೀತ, ಸದಾ ಬೇಹದ್ದಿನ ಸ್ಮೃತಿ ಸ್ವರೂಪ - ಇಂತಹ ಪೂರ್ವಜ ಮತ್ತು ಪೂಜ್ಯಾತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ದಾದೀಜಿ ಹಾಗೂ ಜಗದೀಶ್ ಅಣ್ಣನವರು ವಿದೇಶದ ಯಾತ್ರೆಯ ಸಮಾಚಾರವನ್ನು ತಿಳಿಸಿದರು ಹಾಗೂ ನೆನಪು -ಪ್ರೀತಿಯನ್ನು ಕೊಟ್ಟರು-

ಎಲ್ಲರಿಗೂ ಸಂದೇಶವನ್ನು ಕೊಟ್ಟು ಅನುಭವ ಮಾಡಿಸಿದಿರಿ. ಸ್ನೇಹ ಮತ್ತು ಸಂಬಂಧವನ್ನು ವೃದ್ಧಿ ಮಾಡಿದಿರಿ. ಈಗ ಅಧಿಕಾರವನ್ನು ತೆಗೆದುಕೊಳ್ಳುವುದಕ್ಕಾಗಿ ಮುಂದೆ ಬರುತ್ತೀರಿ. ಪ್ರತೀ ಹೆಜ್ಜೆಯಲ್ಲಿ ಅನೇಕ ಆತ್ಮರ ಕಲ್ಯಾಣದ ಪಾತ್ರವು ನೊಂದಣಿಯಾಗಿದೆ. ಇದೇ ನೊಂದಣಿಯಿಂದ ಎಲ್ಲರ ಹೃದಯದಲ್ಲಿ ಉಮ್ಮಂಗ-ಉತ್ಸಾಹವನ್ನು ತರಿಸಿದಿರಿ. ಬಹಳ ಚೆನ್ನಾಗಿ ಸೇವೆ ಮತ್ತು ಸ್ನೇಹದ ಪಾತ್ರವನ್ನಭಿನಯಿಸಿದಿರಿ. ಬಾಪ್ದಾದಾ ಮಾಡಿಸುವವರೂ ಇದ್ದಾರೆ ಮತ್ತು ಸಾಕ್ಷಿಯಾಗಿದ್ದು ನೋಡುವವರೂ ಇದ್ದಾರೆ. ಮಾಡಿಸಿರುವುದೂ ಹೌದು ಮತ್ತು ನೋಡುತ್ತಲೂ ಇರುತ್ತಾರೆ. ಮಕ್ಕಳ ಉಮ್ಮಂಗ-ಉತ್ಸಾಹ ಮತ್ತು ಸಾಹಸದಲ್ಲಿ ಬಾಪ್ದಾದಾರವರಿಗೆ ಹೆಮ್ಮೆಯಿದೆ. ಮುಂದೆ ಇನ್ನೂ ಧ್ವನಿ ಮೊಳಗುತ್ತದೆ. ಇಂತಹ ಧ್ವನಿಯು ಮೊಳಗುತ್ತದೆ, ಅದನ್ನು ಎಲ್ಲಾ ಕುಂಭಕರ್ಣರು ಕಣ್ಣುಗಳನ್ನು ತೆರೆದು ನೋಡುವರು- ಇದೇನಾಯಿತು! ಕೆಲವರ ಭಾಗ್ಯವು ಪರಿವರ್ತನೆಯಾಗುತ್ತದೆ. ಧರಣಿಯನ್ನು ತಯಾರಿ ಮಾಡಿ ಬಂದಿದ್ದೀರಿ, ಬೀಜವನ್ನು ಬಿತ್ತನೆ ಮಾಡಿ ಬಂದಿದ್ದೀರಿ. ಈಗ ಬೇಹದ್ದಿನ ಬೀಜದ ಫಲವೂ ಹೊರ ಬರುತ್ತದೆ. ಪ್ರತ್ಯಕ್ಷತೆಯ ಫಲವು ಹೊರ ಬರುವಂತದ್ದೇ ಇದೆ. ಸಮಯವು ಸಮೀಪ ಬರುತ್ತಿದೆ. ಈಗಂತು ತಾವುಗಳು ಹೋಗಿದ್ದಿರಿ. ಆದರೆ ಯಾವ ಸೇವೆಯನ್ನು ಮಾಡಿ ಬಂದಿದ್ದೀರಿ, ಆ ಸೇವೆಯ ಫಲ ಸ್ವರೂಪವಾಗಿ, ಅವರು ಸ್ವಯಂ ಓಡಿಕೊಂಡು ಬರುತ್ತಾರೆ. ಇಂತಹ ಅನುಭವವನ್ನು ಮಾಡುವರು, ಹೇಗೆಂದರೆ ಅಯಸ್ಕಾಂತವು ದೂರದಿಂದಲೇ ಸೆಳೆಯುತ್ತದೆಯಲ್ಲವೆ. ಹೀಗೆ ಯಾರೋ ಸೆಳೆಯುತ್ತಿದ್ದಾರೆ. ಹೇಗೆ ಆದಿಯಲ್ಲಿ ಅನೇಕ ಆತ್ಮರನ್ನು ಈ ಆತ್ಮೀಯತೆಯು ಸೆಳೆಯಿತು- ಯಾರೋ ಸೆಳೆಯುತ್ತಿದ್ದಾರೆ, ಎಲ್ಲಿಗೆ ಹೋಗುವುದು! ಹೀಗೆ ಇವರೂ ಸಹ ಸೆಳೆದು ಬರುತ್ತಾರೆ. ಆತ್ಮೀಯತೆಯ ಸೆಳೆತ ಹೆಚ್ಚುತ್ತಿದೆ- ಇಂತಹ ಅನುಭವವನ್ನು ಮಾಡಿದಿರಲ್ಲವೆ. ಹೆಚ್ಚುತ್ತಾ-ಹೆಚ್ಚುತ್ತಾ ಸೆಳೆದು ಹಾರಿಕೊಂಡು ತಲುಪಿ ಬಿಡುತ್ತಾರೆ, ಅದೂ ಸಹ ಈಗ ದೃಶ್ಯವಾಗುವುದೇ ಇದೆ. ಈಗ ಇದೇ ಆಗುತ್ತಿದೆ. ಸಂದೇಶವಾಹಕರು ಹೊರಟು ಹೋಗುತ್ತಾರೆ ಆದರೆ ಅವರು ಸ್ವಯಂ ತೀರ್ಥ ಸ್ಥಾನದಲ್ಲಿ ತಲುಪಲಿ- ಇದು ಅಂತಿಮ ದೃಶ್ಯವಾಗಿದೆ. ಇದಕ್ಕಾಗಿ ಈಗ ಧರಣಿಯು ತಯಾರಾಗಿ ಬಿಟ್ಟಿದೆ, ಬೀಜವೂ ಸಹ ಬಿದ್ದಿದೆ, ಈಗ ಫಲವು ಬಂದಿತೆಂದರೆ ಬಂದಿತು. ಒಳ್ಳೆಯದು- ಎರಡೂ ಕಡೆಯಲ್ಲಿ ಹೋಗಿದ್ದಿರಿ. ಬಾಪ್ದಾದಾರವರ ಬಳಿ ಎಲ್ಲರ ಸಾಹಸ-ಉಲ್ಲಾಸ, ಉಮ್ಮಂಗವು ತಲುಪುತ್ತದೆ. ಮೆಜಾರಿಟಿ ಸೇವೆಯ ಉಮ್ಮಂಗ-ಉತ್ಸಾಹವಿರುವ ಕಾರಣದಿಂದ ಮಾಯಾಜೀತರಾಗುವುದರಲ್ಲಿಯೂ ಸಹಜವಾಗಿಯೇ ಮುಂದುವರೆಯುತ್ತಿದ್ದಾರೆ. ಬಿಡುವಿನ ಸಮಯವಿದ್ದರೆ ಮಾಯೆಯ ಯುದ್ಧವೂ ಆಗಿ ಬಿಡುತ್ತದೆ, ಆದರೆ ಹೃದಯದಿಂದ ಬ್ಯುಜಿಯಾಗಿರುತ್ತಾರೆ, ಕರ್ತವ್ಯದಿಂದಲ್ಲ. ಯಾರು ಹೃದಯದಿಂದ ಸೇವೆಯಲ್ಲಿ ಬ್ಯುಜಿಯಾಗಿರುತ್ತಾರೆಯೋ, ಅವರು ಸಹಜವಾಗಿಯೇ ಮಾಯಾಜೀತರಾಗಿ ಬಿಡುತ್ತಾರೆ. ಲಕ್ಷ್ಯವಿದೆ, ಪರಿಶ್ರಮವಿದೆ ಮತ್ತು ಸಾಧನವೂ ಸಹಜವಾಗಿ ಪ್ರಾಪ್ತಿಯಾಗುತ್ತದೆ, ಮೂರು ಮಾತುಗಳ ಕಾರಣದಿಂದ ಒಳ್ಳೆಯ ರೇಸ್ನಲ್ಲಿ ನಂಬರ್ ತೆಗೆದುಕೊಳ್ಳುತ್ತಿದ್ದಾರೆ. ಚೆನ್ನಾಗಿದೆ. ಆದರೆ ದೇಶದಲ್ಲಿಯೂ ಕಡಿಮೆಯೇನೂ ಇಲ್ಲ. ಎಲ್ಲರೂ ತಮ್ಮ-ತಮ್ಮ ಉಮ್ಮಂಗ-ಉತ್ಸಾಹದ ಆಧಾರದ ಮೇಲೆ ಮುಂದುವರೆಯುತ್ತಿದ್ದಾರೆ. ಹೆಸರಂತು ದೇಶದಿಂದಲೇ ಬರುತ್ತದೆ. ವಿದೇಶದ ಸಫಲತೆಯೂ ಸಹ ದೇಶದಿಂದಲೇ ಬರುತ್ತದೆ. ಈ ಒಳ್ಳೆಯ ಸ್ಮೃತಿಯು ಅವರಿಗೇ ಇರುತ್ತದೆ ಮತ್ತು ತನ್ನ ಕರ್ತವ್ಯವೆಂದು ತಿಳಿಯುತ್ತಾರೆ- ಮಾಡುತ್ತಿದ್ದೇವೆ ಆದರೆ ಈಗ ವಿದೇಶದವರೆಗೂ ಧ್ವನಿಯಿದೆ. ವಿದೇಶದಿಂದ ದೇಶದವರೆಗೂ ತಲುಪಲಿ, ಅವರು ಹಾರುತ್ತಾ-ಹಾರುತ್ತಾ ಬರುತ್ತಿದ್ದಾರೆ. ಈಗ ಯಾತ್ರೆ ಮಾಡುತ್ತಿದ್ದಾರೆ- ಇದು ಧ್ವನಿಯಾಗಿದೆ. ಹಾರುತ್ತಾ-ಹಾರುತ್ತಾ ಇಲ್ಲಿ ತಲುಪಿ ಬಿಡುತ್ತಾರೆ. ಈಗ ವಿದೇಶದಲ್ಲಿ ಹರಡುತ್ತಿದೆ ಆದರೆ ವಿದೇಶದಿಂದ ದೇಶದಲ್ಲಿ ತಲುಪಲಿ, ಇದೂ ಸಹ ಆಗಲೇಬೇಕು. ಒಳ್ಳೆಯದು- ಏನೇ ಪಾತ್ರವನ್ನಭಿನಯಿಸಿದಿರಿ, ಚೆನ್ನಾಗಿ ಅಭಿನಯಿಸಿದಿರಿ. ಸದಾ ಮುಂದುವರೆಯುವ ಸಹಯೋಗ ಮತ್ತು ವರದಾನವಿದೆ. ಪ್ರತಿಯೊಂದು ಆತ್ಮನ ಪಾತ್ರವು ತನ್ನ-ತನ್ನದಿದೆ. ಎಷ್ಟು ಅನುಭವಿ ಆಗುತ್ತಾ ಹೋಗುತ್ತೀರಿ, ಅಷ್ಟು ಅನ್ಯರಿಗೂ ಅನುಭವದ ಆಧಾರದಿಂದ ಮುಂದಿದ್ದಾರೆ. ಮಾಡಿಸುವವರು ಯಾರಿಂದ ಮಾಡಿಸಿದರು, ಅದು ಡ್ರಾಮಾನುಸಾರವಾಗಿ ಬಹಳ ಒಳ್ಳೆಯದನ್ನು ಮಾಡಿಸಿದರು. ನಿಮಿತ್ತ ಭಾವ ಸೇವೆಯನ್ನು ಮಾಡಿಸಿ ಬಿಡುತ್ತದೆ. ಅಂದಮೇಲೆ ಸೇವೆಯನ್ನು ಮಾಡಿಸಿದರು, ನಿಮಿತ್ತರಾದಿರಿ, ಜಮಾ ಆಯಿತು ಮತ್ತು ಮುಂದೆಯೂ ಜಮಾ ಆಗುತ್ತಿರುತ್ತದೆ. ಒಳ್ಳೆಯದು.

ವರದಾನ:
ಶಾಂತಿಯ ಶಕ್ತಿಯ ಮೂಲಕ ಅಸಂಭವವನ್ನು ಸಂಭವ ಮಾಡುವಂತಹ ಸಹಜಯೋಗಿ ಭವ.

ಶಾಂತಿಯ ಶಕ್ತಿಯು ಸರ್ವ ಶ್ರೇಷ್ಠ ಶಕ್ತಿಯಾಗಿದೆ. ಶಾಂತಿಯ ಶಕ್ತಿಯಿಂದಲೇ ಉಳಿದೆಲ್ಲಾ ಶಕ್ತಿಗಳು ಹೊರ ಬರುತ್ತದೆ. ವಿಜ್ಞಾನದ ಶಕ್ತಿಯ ಪ್ರಭಾವವೂ ಸಹ ಏನಿದೆಯೋ, ಅದೂ ಸಹ ಸೈಲೆನ್ಸ್ ನಿಂದಲೇ ಹೊರಬಂದಿದೆ. ಅಂದಮೇಲೆ ಶಾಂತಿಯ ಶಕ್ತಿಯಿಂದ ಏನುಬೇಕು ಅದನ್ನು ಮಾಡಬಹುದು. ಅಸಂಭವವನ್ನೂ ಸಂಭವ ಮಾಡಬಹುದು. ಯಾವುದನ್ನು ಪ್ರಪಂಚದವರು ಅಸಂಭವವೆಂದು ಹೇಳುವರು, ಅದು ತಮಗಾಗಿ ಸಂಭವವಿದೆ ಮತ್ತು ಸಂಭವವಾಗುವ ಕಾರಣ ಸಹಜವಿದೆ. ಶಾಂತಿಯ ಶಕ್ತಿಯನ್ನು ಧಾರಣೆ ಮಾಡಿಕೊಂಡು ಸಹಜ ಯೋಗಿಯಾಗಿರಿ.

ಸ್ಲೋಗನ್:
ವಾಣಿಯ ಮೂಲಕ ಎಲ್ಲರಿಗೂ ಸುಖ ಮತ್ತು ಶಾಂತಿಯನ್ನು ಕೊಡುತ್ತೀರೆಂದರೆ ಗಾಯನಯೋಗ್ಯರಾಗುವಿರಿ.