14.05.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯು ಬಂದಿರುವುದೇ ನಿಮಗೆ ಪವಿತ್ರ ದೃಷ್ಟಿ (ಸಿವಿಲ್ ಐ) ಯನ್ನು ಕೊಡಲು, ನಿಮಗೆ ಜ್ಞಾನದ ಮೂರನೇ ನೇತ್ರ ಸಿಕ್ಕಿದೆ, ಆದ್ದರಿಂದ ಈ ನೇತ್ರವು ಎಂದಿಗೂ ಅಪವಿತ್ರವಾಗಬಾರದು.”

ಪ್ರಶ್ನೆ:
ನೀವು ಬೇಹದ್ದಿನ ಸನ್ಯಾಸಿಗಳಿಗೆ ತಂದೆಯು ಯಾವ ಒಂದು ಶ್ರೀಮತವನ್ನು ಕೊಟ್ಟಿದ್ದಾರೆ?

ಉತ್ತರ:
ತಂದೆಯ ಶ್ರೀಮತವಾಗಿದೆ - ನೀವು ನರಕ ಹಾಗೂ ನರಕವಾಸಿಗಳಿಂದ ಬುದ್ಧಿಯೋಗವನ್ನು ತೆಗೆದು ಸ್ವರ್ಗವನ್ನು ನೆನಪು ಮಾಡಬೇಕು. ಗೃಹಸ್ಥ ವ್ಯವಹಾರದಲ್ಲಿರುತ್ತಾ ನರಕವನ್ನು ಬುದ್ಧಿಯಿಂದ ತ್ಯಾಗ ಮಾಡಿ. ಈ ಹಳೆಯ ಪ್ರಪಂಚ ನರಕವಾಗಿದೆ, ನೀವು ಬುದ್ಧಿಯಿಂದ ಹಳೆಯ ಪ್ರಪಂಚವನ್ನು ಮರೆಯಬೇಕು ಅಂದರೆ ಒಂದು ಹದ್ದಿನ ಮನೆಯನ್ನು ತ್ಯಾಗ ಮಾಡಿ, ಇನ್ನೊಂದು ಕಡೆ ಹೋಗುವುದೆಂದಲ್ಲ. ನಿಮ್ಮದು ಬೇಹದ್ದಿನ ವೈರಾಗ್ಯವಾಗಿದೆ. ನಿಮ್ಮದು ಈಗ ವಾನಪ್ರಸ್ಥ ಸ್ಥಿತಿಯಾಗಿದೆ, ಎಲ್ಲವನ್ನೂ ಬಿಟ್ಟು ಮನೆಗೆ ಹೋಗಬೇಕಾಗಿದೆ.

ಓಂ ಶಾಂತಿ.
ಶಿವ ಭಗವಾನುವಾಚ- ಇಲ್ಲಿ ಬೇರೆ ಯಾರ ಹೆಸರನ್ನು ತೆಗೆದುಕೊಂಡಿಲ್ಲ. ಇವರ (ಬ್ರಹ್ಮಾ) ಹೆಸರನ್ನೂ ತೆಗೆದುಕೊಳ್ಳುವುದಿಲ್ಲ, ಪತಿತ-ಪಾವನ ಆ ತಂದೆಯಾಗಿದ್ದರಿಂದ ಅವರು ಅಗತ್ಯವಾಗಿ ಪತಿತರನ್ನು ಪಾವನ ಮಾಡಲು ಇಲ್ಲಿಗೆ ಬರುತ್ತಾರೆ. ಪಾವನ ಮಾಡುವಂತಹ ಯುಕ್ತಿಯನ್ನು ಇಲ್ಲಿ ತಿಳಿಸುತ್ತಾರೆ. ಶಿವಭಗವಾನುವಾಚ ಎಂದಿದೆ ಆದರೆ ಕೃಷ್ಣ ಭಗವಾನುವಾಚ ಎಂದಿಲ್ಲ. ಇದನ್ನು ಅಗತ್ಯವಾಗಿ ತಿಳಿಸಿ ಕೊಡಬೇಕು. ಬ್ಯಾಡ್ಜ್ ಸಹ ನಿಮ್ಮ ಬಳಿಯಿದೆ, ರಚಯಿತ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯದ ಪೂರ್ಣ ರಹಸ್ಯವು ಈಗ ಈ ಬ್ಯಾಡ್ಜ್ ನಲ್ಲಿ ತೋರಿಸಲಾಗಿದೆ. ಈ ಬ್ಯಾಡ್ಜ್ ಕಡಿಮೆಯೇನಲ್ಲ, ಇದು ಸನ್ನೆಯ ಮಾತಾಗಿದೆ. ನೀವೆಲ್ಲರೂ ನಂಬರವಾರ್ ಪುರುಷಾರ್ಥದನುಸಾರ ಆಸ್ತಿಕರಾಗಿದ್ದೀರಿ, ಅಗತ್ಯವಾಗಿ ನಂಬರವಾರ್ ಎಂದು ಹೇಳಲಾಗುತ್ತದೆ, ಏಕೆಂದರೆ ಕೆಲವರು ರಚಯಿತ-ರಚನೆಯ ಜ್ಞಾನವನ್ನು ತಿಳಿಸಿಕೊಡುವುದಿಲ್ಲ. ಅಂತಹವರಿಗೆ ಸತೋಪ್ರಧಾನ ಬುದ್ಧಿಯವರೆಂದು ಹೇಳಲಾಗುತ್ತದೆಯೇನು! ಸತೋಪ್ರಧಾನ ಬುದ್ಧಿ ನಂತರ ರಜೋ ಬುದ್ಧಿ, ತಮೋ ಬುದ್ಧಿಯವರೂ ಇದ್ದಾರೆ. ಯಾರು ಹೇಗೆ-ಹೇಗೆ ತಿಳಿದುಕೊಳ್ಳುತ್ತಾರೆಯೋ ಅವರಿಗೆ ಅಂತಹ ಬಿರುದು ಸಿಗುತ್ತದೆ. ಇವರು ಸತೋಪ್ರಧಾನ ಬುದ್ಧಿಯವರು, ಇವರು ರಜೋ ಬುದ್ಧಿಯವರು ಆದರೆ ಹಾಗೆಂದು ಹೇಳಲು ಆಗುವುದಿಲ್ಲ ಏಕೆಂದರೆ ಮೂರ್ಚಿತರಾಗದಿರಲಿ ಎಂದು. ನಂಬರವಾರ್ ಅಂತೂ ಆಗಿರುತ್ತಾರೆ, ಫಸ್ಟ್ ಕ್ಲಾಸ್ ಇರುವವರ ಬೆಲೆ ಬಹಳ ಉನ್ನತವಾಗಿರುತ್ತದೆ. ಈಗ ನಿಮಗೆ ಸತ್ಯ-ಸತ್ಯ ಸದ್ಗುರುವು ಸಿಕ್ಕಿದ್ದಾರೆ. ಸದ್ಗುರುವು ಸಿಕ್ಕಿ ಒಂದೇ ಸಾರಿ ಸತ್ಯ-ಸತ್ಯ ಮಾಡುತ್ತಿದ್ದಾರೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಸತ್ಯವಾಗಿರುವವರು ದೇವಿ-ದೇವತೆಗಳು ಅವರೇ ನಂತರ ವಾಮ ಮಾರ್ಗದಲ್ಲಿ ಹೋಗಿ ಅಸತ್ಯರಾಗಿ ಬಿಡುತ್ತಾರೆ. ಸತ್ಯಯುಗದಲ್ಲಿ ಕೇವಲ ನೀವು ದೇವೀ ದೇವತೆಗಳಿರುತ್ತೀರಿ ಬೇರೆ ಯಾರೂ ಇರುವುದಿಲ್ಲ. ಕೆಲವರು ಜ್ಞಾನವಿಲ್ಲದ ಕಾರಣ ಇದು ಹೇಗೆ ಸಾಧ್ಯವಿದೆಯೆ೦ದು ಕೇಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಾವು ನಾಸ್ತಿಕರಿಂದ ಆಸ್ತಿಕರಾಗಿದ್ದೇವೆ, ರಚಯಿತ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಯಥಾವತ್ತಾಗಿ ತಿಳಿದುಕೊಂಡಿದ್ದೀರಿ. ನಾಮ -ರೂಪದಿಂದ ಭಿನ್ನವಾಗಿರುವ ವಸ್ತು ನೋಡುವುದಕ್ಕೂ ಸಾಧ್ಯವಿಲ್ಲ. ಹೇಗೆ ಆಕಾಶ ದೃವ ಪ್ರದೇಶವಾಗಿದೆ, ಇದು ಆಕಾಶವೆಂದು ಅನುಭವ ಮಾಡಲಾಗುತ್ತದೆ. ಇದೂ ಸಹ ಜ್ಞಾನವಾಗಿದೆ. ಪೂರ್ಣ ಆಧಾರ ಬುದ್ಧಿಯ ಮೇಲಿದೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವು ಸಿಗುತ್ತದೆ. ಈ ರೀತಿ ಅನೇಕ ಸ್ಲೋಗನ್ಗಳಿವೆ. ದಿನ-ಪ್ರತಿದಿನ ಹೊಸ-ಹೊಸ ಅಂಶ, ಹೊಸ-ಹೊಸ ಸ್ಲೋಗನ್ ತಯಾರಾಗುತ್ತಿರುತ್ತದೆ. ಆಸ್ತಿಕರಾಗಲು ರಚಯಿತ ಹಾಗೂ ರಚನೆಯ ಜ್ಞಾನವು ಅವಶ್ಯವಾಗಿ ಬೇಕು ಅದರಿಂದ ನಾಸ್ತಿಕತನವು ದೂರವಾಗಿ ಬಿಡುತ್ತದೆ. ನೀವು ಆಸ್ತಿಕರಾಗಿ ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ನೀವಿಲ್ಲಿ ಆಸ್ತಿಕರಾಗಿದ್ದೀರಿ ಆದರೆ ನಂಬರವಾರ್ ಪುರುಷಾರ್ಥದನುಸಾರ. ತಿಳಿದುಕೊಳ್ಳುವುದು ಮನುಷ್ಯರೇ ತಿಳಿದುಕೊಳ್ಳುತ್ತಾರೆ ಆದರೆ ಪ್ರಾಣಿಗಳು ತಿಳಿದುಕೊಳ್ಳುವುದಿಲ್ಲ. ಮನುಷ್ಯರೇ ಬಹಳ ಉತ್ತಮರಾಗಿದ್ದಾರೆ, ಮನುಷ್ಯರೇ ಬಹಳ ಕನಿಷ್ಟರಾಗಿದ್ದಾರೆ. ಯಾವುದೇ ಮನುಷ್ಯ ಮಾತ್ರರಿಗೆ ರಚಯಿತ-ರಚನೆಯ ಜ್ಞಾನವನ್ನು ತಿಳಿದುಕೊಂಡಿಲ್ಲ. ಬುದ್ಧಿಗೆ ಒಂದೇ ಸಾರಿ ಗೋದ್ರೇಜ್ ಬೀಗವನ್ನು ಹಾಕಲ್ಪಟ್ಟಿದೆ. ನಾವು ತಂದೆಯ ಬಳಿ ವಿಶ್ವದ ಮಾಲೀಕರಾಗಬೇಕೆಂದು ನಿಮ್ಮಲ್ಲಿಯೂ ನಂಬರವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ನೀವು 100% ಪವಿತ್ರತೆಯಲ್ಲಿರುತ್ತೀರಿ, ಪವಿತ್ರತೆಯೂ ಇದೆ, ಶಾಂತಿಯೂ ಇದೆ, ಸಂಪತ್ತೂ ಇದೆ. ಹೀಗೆ ಆಶೀರ್ವಾದವನ್ನು ಕೊಡುತ್ತಾರಲ್ಲವೆ, ಆದರೆ ಈ ಅಕ್ಷರ ಭಕ್ತಿಮಾರ್ಗದ್ದಾಗಿದೆ. ಈ ಲಕ್ಷ್ಮೀ-ನಾರಾಯಣರಂತೂ ನೀವು ವಿದ್ಯೆಯಿಂದ ಆಗುತ್ತೀರಿ. ಓದಿ ನಂತರ ನೀವು ಎಲ್ಲರಿಗೂ ಓದಿಸಬೇಕು. ಶಾಲೆಗೆ ಕುಮಾರ-ಕುಮಾರಿಯರು ವಿದ್ಯಾಭ್ಯಾಸ ಮಾಡಲು ಹೋಗುತ್ತಾರೆ, ಜೊತೆಯಲ್ಲಿಯೇ ಇರುವ ಕಾರಣ ನಂತರ ಬಹಳ ಕೆಟ್ಟು ಹೋಗುತ್ತಾರೆ ಏಕೆಂದರೆ ದೃಷ್ಟಿಯು ಅಪವಿತ್ರವಾಗಿ ಬಿಡುತ್ತದೆ. ಅಪವಿತ್ರ ದೃಷ್ಟಿಯಾಗುವ ಕಾರಣ ಸೆರಗನ್ನು ಹಾಕುತ್ತಾರೆ. ಅಲ್ಲಿ ಕುದೃಷ್ಟಿಯಿರುವುದೇ ಇಲ್ಲ ಆದುದರಿಂದ ಸೆರಗನ್ನು (ಮುಸುಕು) ಹಾಕುವ ಅವಶ್ಯಕತೆಯಿರುವುದಿಲ್ಲ. ಈ ಲಕ್ಷ್ಮೀ-ನಾರಾಯಣರಿಗೆ ಮುಸುಕು ಹಾಕಿರುವುದನ್ನು ಎಂದಾದರೂ ನೋಡಿದ್ದೇರೇನು! ಅಲ್ಲಿ ಈ ರೀತಿ ಅಶುದ್ಧ ವಿಚಾರಗಳು ಬರುವುದಿಲ್ಲ. ಇದಂತೂ ರಾವಣ ರಾಜ್ಯವಾಗಿದೆ, ಈ ಕಣ್ಣುಗಳು ದೊಡ್ಡ ಶೈತಾನ್ (ಭೂತ) ಆಗಿದೆ. ತಂದೆಯು ಬಂದು ಜ್ಞಾನದ ನೇತ್ರವನ್ನು ಕೊಡುತ್ತಾರೆ. ಆತ್ಮವೇ ಎಲ್ಲವನ್ನೂ ಕೇಳುತ್ತದೆ, ಮಾತನಾಡುತ್ತದೆ, ಎಲ್ಲವನ್ನೂ ಆತ್ಮವೇ ಮಾಡುತ್ತದೆ, ಈಗ ನಿಮ್ಮ ಆತ್ಮವು ಸುಧಾರಣೆಯಾಗುತ್ತಿದೆ. ಆತ್ಮವೇ ಕೆಟ್ಟು ಪಾಪಾತ್ಮವಾಗಿ ಬಿಟ್ಟಿತ್ತು. ಯಾರಿಗೆ ಅಪವಿತ್ರ ದೃಷ್ಟಿಯಿರುತ್ತದೆ ಅವರಿಗೆ ಪಾಪಾತ್ಮನೆಂದು ಕರೆಯಲಾಗುವುದು. ಆ ಅಪವಿತ್ರ ದೃಷ್ಟಿಯನ್ನು ತಂದೆಯ ವಿನಃ ಬೇರೆ ಯಾರೂ ಸುಧಾರಣೆ ಮಾಡಲು ಸಾಧ್ಯವಿಲ್ಲ. ಜ್ಞಾನದ ಪವಿತ್ರ ದೃಷ್ಟಿಯನ್ನು ತಂದೆಯೊಬ್ಬರೇ ಕೊಡುತ್ತಾರೆ, ಈ ಜ್ಞಾನವನ್ನೂ ಸಹ ನೀವೇ ತಿಳಿದುಕೊಂಡಿದ್ದೀರಿ. ಶಾಸ್ತ್ರಗಳಲ್ಲಂತೂ ಈ ಜ್ಞಾನವು ಸ್ವಲ್ಪವೂ ಇಲ್ಲ. ತಂದೆಯು ತಿಳಿಸುತ್ತಾರೆ- ಈ ವೇದ-ಶಾಸ್ತ್ರ, ಉಪನಿಷತ್ತುಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಜಪ-ತಪ ಮುಂತಾದವುಗಳೆಲ್ಲವನ್ನೂ ಮಾಡುವುದರಿಂದ ನನ್ನೊಂದಿಗೆ ಮಿಲನ ಮಾಡುವುದಿಲ್ಲ. ಭಕ್ತಿಮಾರ್ಗವು ಅರ್ಧಕಲ್ಪ ನಡೆಯುತ್ತದೆ, ಈಗ ನೀವು ಮಕ್ಕಳು ಎಲ್ಲರಿಗೂ ಈ ಸಂದೇಶವನ್ನು ನೀಡಬೇಕು- ಬನ್ನಿ, ನಾವು ನಿಮಗೆ ರಚಯಿತ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಹೇಳುತ್ತೇವೆ, ಪರಮಪಿತ ಪರಮಾತ್ಮನ ಜೀವನ ಚರಿತ್ರೆಯನ್ನು ತಿಳಿಸುತ್ತೇವೆ. ಮನುಷ್ಯರಂತೂ ಅಂಶ ಮಾತ್ರವೂ ತಿಳಿದುಕೊಂಡಿಲ್ಲ. ಮುಖ್ಯವಾಗಿದೆ- ಸಹೋದರ-ಸಹೋದರಿಯರೇ ಬನ್ನಿ, ಬಂದು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೇಳಿ ವಿದ್ಯಾಭ್ಯಾಸವನ್ನು ಮಾಡಿ ಇದರಿಂದ ನೀವು ಹೀಗೆ ಆಗುತ್ತೀರಿ. ಈ ಜ್ಞಾನವನ್ನು ಪಡೆಯುವುದರಿಂದ ಅಥವಾ ಸೃಷ್ಟಿಚಕ್ರವನ್ನು ತಿಳಿದುಕೊಳ್ಳುವುದರಿಂದ ನೀವು ಇಂತಹ ಚಕ್ರವರ್ತಿ ಸತ್ಯಯುಗದ ಮಹಾರಾಜ-ಮಹಾರಾಣಿಯಾಗಬಹುದು. ಈ ಲಕ್ಷ್ಮೀ-ನಾರಾಯಣರು ಈ ವಿದ್ಯೆಯಿಂದಲೇ ಆಗಿದ್ದಾರೆ, ನೀವೂ ಸಹ ವಿದ್ಯೆಯಿಂದ ಆಗುತ್ತಿದ್ದೀರಿ. ಈ ಪುರುಷೋತ್ತಮ ಸಂಗಮಯುಗಕ್ಕೆ ಬಹಳ ಮಹಿಮೆಯಿದೆ. ತಂದೆಯು ಬರುವುದೇ ಭಾರತದಲ್ಲಿ, ಅನ್ಯ ಯಾವುದೇ ಖಂಡದಲ್ಲಿ ಏಕೆ ಬರುತ್ತಾರೆ? ತಂದೆಯು ಅವಿನಾಶಿ ಸರ್ಜನ್ ಆಗಿದ್ದಾರೆ, ಅವರು ಬರುವುದೇ ಯಾವ ಭೂಮಿ ಸದಾ ಶಾಶ್ವತವಾಗಿರುತ್ತದೆಯೋ ಆ ಧರಣಿಯಲ್ಲಿ ಭಗವಂತನ ಹೆಜ್ಜೆ ಸ್ಪರ್ಶವಾಗುತದೆಯೋ ಆ ಧರಣಿಯು ಎಂದಿಗೂ ವಿನಾಶವಾಗುವುದಿಲ್ಲ. ಈ ಭಾರತವು ದೇವತೆಗಳಿಗಾಗಿಯೇ ಇರುತ್ತದೆಯಲ್ಲವೆ, ಇದು ಕೇವಲ ಪರಿವರ್ತನೆಯಾಗುತ್ತದೆ. ಬಾಕಿ ಭಾರತವೇ ಸತ್ಯ ಖಂಡವಾಗಿದೆ, ಅಸತ್ಯ ಖಂಡವೂ ಭಾರತವೇ ಆಗಿದೆ. ಆಲ್ರೌಂಡ್ ಪಾತ್ರವೂ ಭಾರತದ್ದೇ ಇದೆ, ಅನ್ಯ ಖಂಡಗಳಿಗೆ ಈ ರೀತಿ ಹೇಳಲು ಸಾಧ್ಯವಿಲ್ಲ. ಸತ್ಯ ಅಥವಾ ಟ್ರೂಥ್ ಭಗವಂತನೇ ಬಂದು ಮಾಡುತ್ತಾರೆ ನಂತರ ಇದನ್ನೇ ಅಸತ್ಯ ಖಂಡವನ್ನಾಗಿ ರಾವಣನು ಮಾಡುತ್ತಾನೆ. ನಂತರ ಅಂಶ ಮಾತ್ರವೂ ಸತ್ಯತೆಯು ಇರುವುದಿಲ್ಲ, ಆದ್ದರಿಂದ ಸತ್ಯವಾದ ಗುರು ಸಹ ಸಿಗುವುದಿಲ್ಲ. ಆ ಸನ್ಯಾಸಿ, ಅನುಯಾಯಿ ಗೃಹಸ್ಥಿಗಳು, ಇವರನ್ನು ಹೇಗೆ ಅನುಯಾಯಿಗಳೆಂದು ಹೇಳುತ್ತಾರೆ. ಈಗ ಸ್ವಯಂ ತಂದೆಯೇ ಹೇಳುತ್ತಾರೆ- ಮಕ್ಕಳೇ, ಪವಿತ್ರರಾಗಿ ದೈವೀ ಗುಣಗಳನ್ನು ಧಾರಣೆ ಮಾಡಿ. ನೀವೀಗ ದೇವತೆಗಳಾಗಬೇಕು, ಯಾವುದೇ ಸನ್ಯಾಸಿ ಸಂಪೂರ್ಣ ನಿರ್ವಿಕಾರಿಯಾಗಿದ್ದಾರೇನು! ಪದೇ-ಪದೇ ವಿಕಾರಿಗಳ ಬಳಿಗೆ ಹೋಗಿ ಜನ್ಮ ಪಡೆಯುತ್ತಾರೆ. ಕೆಲವರು ಬಾಲ ಬ್ರಹ್ಮಾಚಾರಿಗಳೂ ಆಗಿರುತ್ತಾರೆ, ಈ ರೀತಿಯಂತೂ ಬಹಳಷ್ಟು ಮಂದಿಯಿರುತ್ತಾರೆ, ವಿದೇಶದಲ್ಲಿಯೂ ಇರುತ್ತಾರೆ. ಯಾವಾಗ ವೃದ್ಧಾಪ್ಯವಾಗುತ್ತದೆಯೋ ಆಗ ತಮ್ಮ ಪಾಲನೆಗಾಗಿ ವಿವಾಹ ಮಾಡಿಕೊಳ್ಳುತ್ತಾರೆ. ನಂತರ ಅವರನ್ನು ಪಾಲನೆ ಮಾಡುತ್ತಿದವರಿಗೆ ಬಿಟ್ಟು ಹೋಗುತ್ತಾರೆ, ಉಳಿದ ಹಣವನ್ನು ದಾನ ಮಾಡುತ್ತಾರೆ. ಇಲ್ಲಂತೂ ಅವರಿಗೆ ತಮ್ಮ ಮಕ್ಕಳ ಮೇಲೆ ಬಹಳ ಮೋಹವಿರುತ್ತದೆ, 60 ವರ್ಷಗಳ ನಂತರವೂ ಮಕ್ಕಳಿಗೆ ಒಪ್ಪಿಸುತ್ತಾರೆ ನಮ್ಮ ನಂತರ ಸರಿಯಾಗಿ ನಡೆಸಿಕೊಂಡು ಹೋಗುತ್ತಾರೆಯೋ ಅಥವಾ ಇಲ್ಲವೋ ಎಂದು ನೋಡುತ್ತಾರೆ. ಆದರೆ ಇಂದಿನ ಮಕ್ಕಳಂತೂ ತಂದೆಯು ವಾನಪ್ರಸ್ಥದಲ್ಲಿ ಹೋದರೆ ಒಳ್ಳೆಯದು, ಬೀಗದ ಕೈಯಂತೂ ನನಗೆ ದೊರೆಯಿತಲ್ಲವೆ ಎಂದು ತಿಳಿಯುತ್ತಾರೆ. ಅವರು ಬದುಕಿದ್ದಂತೆಯೇ ಎಲ್ಲಾ ಹಾಳು ಮಾಡುತ್ತಾರೆ ನಂತರ ತಂದೆಗೂ ಇಲ್ಲಿಂದ ಹೊರಟು ಹೋಗು ಎಂದು ಹೇಳುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಪ್ರದರ್ಶನಿಯಲ್ಲಿ ಇದನ್ನೂ ಸಹ ಬರೆಯಬೇಕು - ಸಹೋದರ-ಸಹೋದರಿಯರೇ ಬಂದು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೇಳಿ. ಈ ಸೃಷ್ಟಿ ಚಕ್ರವನ್ನು ತಿಳಿದುಕೊಳ್ಳುವುದರಿಂದ ನೀವು ಚಕ್ರವರ್ತಿ ದೇವಿ-ದೇವತಾ ವಿಶ್ವ ಮಹಾರಾಜ-ಮಹಾರಾಣಿಯಾಗಿ ಬಿಡುತ್ತೀರಿ, ತಂದೆಯು ಈ ಡೈರೆಕ್ಷನ್ ಕೊಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಈ ಜನ್ಮ ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ನಾನು ಈ (ಬ್ರಹ್ಮಾ) ಶರೀರದಲ್ಲಿಯೇ ಪ್ರವೇಶ ಮಾಡುತ್ತೇನೆ, ಬ್ರಹ್ಮನ ಮುಂದೆ ವಿಷ್ಣು ಇದ್ದಾರೆ, ವಿಷ್ಣುವಿಗೆ ನಾಲ್ಕು ಭುಜಗಳನ್ನು ಏಕೆ ಕೊಟ್ಟಿದ್ದಾರೆ? ಎರಡು ಭುಜ ಸ್ತ್ರೀಯದ್ದಾಗಿದೆ, ಎರಡು ಭುಜ ಪುರುಷನದ್ದಾಗಿದೆ (ಲಕ್ಷ್ಮೀ-ನಾರಾಯಣ) ಇಲ್ಲಿ ನಾಲ್ಕು ಭುಜಗಳುಳ್ಳ ಯಾವುದೇ ಮನುಷ್ಯರಿರುವುದಿಲ್ಲ. ಇದು ತಿಳಿಸಿ ಕೊಡುವ ಸಲುವಾಗಿ ಇದೆ. ವಿಷ್ಣುವೆಂದರೆ ಲಕ್ಷ್ಮೀ-ನಾರಾಯಣರೆಂದಾಗಿದೆ. ಬ್ರಹ್ಮನಿಗೂ ತೋರಿಸುತ್ತಾರೆ - ಎರಡು ಭುಜ ಬ್ರಹ್ಮಾ ಮತ್ತು ಎರಡು ಭುಜ ಸರಸ್ವತಿಯದ್ದಾಗಿದೆ. ಇಬ್ಬರೂ ಬೇಹದ್ದಿನ ಸನ್ಯಾಸಿಗಳಾಗಿದ್ದಾರೆ. ಸನ್ಯಾಸ ಮಾಡಿ ಬೇರೆ ಕಡೆ ಹೋಗುವುದು ಎಂದಲ್ಲ. ತಂದೆಯು ತಿಳಿಸುತ್ತಾರೆ- ಗೃಹಸ್ಥ ವ್ಯವಹಾರದಲ್ಲಿದ್ದು ನರಕದಿಂದ ಬುದ್ಧಿಯನ್ನು ತ್ಯಾಗ ಮಾಡಿ. ನರಕವನ್ನು ಮರೆತು ಸ್ವರ್ಗವನ್ನು ಬುದ್ಧಿಯಿಂದ ನೆನಪು ಮಾಡಬೇಕು. ನರಕವಾಸಿಗಳಿಂದ ಬುದ್ಧಿಯೋಗವನ್ನು ತೊರೆದು ಸ್ವರ್ಗವಾಸಿ ದೇವತೆಗಳೊಂದಿಗೆ ಜೋಡಿಸಬೇಕು. ಯಾರು ಓದುತ್ತಾರೆಯೋ ಅವರ ಬುದ್ಧಿಯಲ್ಲಿ, ನಾವು ಉತ್ತೀರ್ಣರಾದ ನಂತರ ಈ ರೀತಿ ಆಗುತ್ತೇವೆಂದು ಇರುತ್ತದೆ. ಮೊದಲೆಲ್ಲಾ ವಾನಪ್ರಸ್ಥ ಜೀವನದಲ್ಲಿ ಗುರುಗಳನ್ನು ಮಾಡಿಕೊಳ್ಳುತ್ತಿದ್ದರು. ತಂದೆಯು ತಿಳಿಸುತ್ತಾರೆ- ನಾನೂ ಸಹ ಇವರ ವಾನಪ್ರಸ್ಥ ಸ್ಥಿತಿಯಲ್ಲಿಯೇ ಪ್ರವೇಶ ಮಾಡುತ್ತೇನೆ. ಅವರೇ ಅನೇಕ ಜನ್ಮಗಳ ಅಂತಿಮ ಜನ್ಮದಲ್ಲಿದ್ದಾರೆ. ಭಗವಾನುವಾಚ- ನಾನು ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿಯೇ ಪ್ರವೇಶ ಮಾಡುತ್ತೇನೆ. ಯಾರು ಪ್ರಾರಂಭದಿಂದ ಅಂತ್ಯದವರೆಗೂ ಪಾತ್ರವನ್ನಭಿನಯಿಸಿದ್ದಾರೆ ಅವರಲ್ಲಿಯೇ ಪ್ರವೇಶ ಮಾಡುತ್ತೇನೆ ಏಕೆಂದರೆ ಅವರೇ ಮೊದಲನೆ ನಂಬರಿನಲ್ಲಿ ಹೋಗಬೇಕಾಗಿದೆ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ..... ಇಬ್ಬರಿಗೂ ನಾಲ್ಕು ಭುಜಗಳನ್ನು ಕೊಡುತ್ತಾರೆ. ಲೆಕ್ಕಾಚಾರಕ್ಕನುಗುಣವಾಗಿ ಬ್ರಹ್ಮಾ-ಸರಸ್ವತಿಯಿಂದ ಲಕ್ಷ್ಮೀ-ನಾರಾಯಣರು ಮತ್ತೆ ಲಕ್ಷ್ಮೀ-ನಾರಾಯಣರಿಂದ ಬ್ರಹ್ಮಾ-ಸರಸ್ವತಿ. ನೀವು ಮಕ್ಕಳು ತಕ್ಷಣವೆ ಈ ಲೆಕ್ಕಾಚಾರವನ್ನು ತಿಳಿಸುತ್ತೀರಿ. ವಿಷ್ಣು ಅರ್ಥಾತ್ ಈ ಲಕ್ಷ್ಮೀ-ನಾರಾಯಣರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ -ತೆಗೆದುಕೊಳ್ಳುತ್ತಾ ಅಂತ್ಯದಲ್ಲಿ ಬಂದು ಸಾಧಾರಣ ಈ ಬ್ರಹ್ಮಾ-ಸರಸ್ವತಿಯಾಗುತ್ತಾರೆ ನಂತರ ಇವರಿಗೆ ತಂದೆಯು ಬ್ರಹ್ಮಾ ಎಂದು ಹೆಸರಿಟ್ಟಿದ್ದಾರೆ. ಇಲ್ಲವೆಂದರೆ ಬ್ರಹ್ಮನಿಗೆ ತಂದೆ ಯಾರು? ಅಗತ್ಯವಾಗಿ ಶಿವ ತಂದೆಯೆ೦ದು ಹೇಳಬೇಕು. ಹೇಗೆ ರಚಿಸಿದರು? ದತ್ತು ತೆಗೆದುಕೊಂಡರು. ತಂದೆಯು ತಿಳಿಸುತ್ತಾರೆ- ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ. ಆದ್ದರಿಂದ ಈ ರೀತಿ ಬರೆಯಬೇಕು, ಶಿವ ಭಗವಾನುವಾಚ- ನಾನು ಬ್ರಹ್ಮನಲ್ಲಿ ಪ್ರವೇಶ ಮಾಡುತ್ತೇನೆ. ಅವರು ತಮ್ಮ ಜನ್ಮಗಳನ್ನು ತಿಳಿದುಕೊಂಡಿರುವುದಿಲ್ಲ. ಅವರ ಅನೇಕ ಜನ್ಮಗಳ ಅಂತ್ಯದ ಜನ್ಮದಲ್ಲಿ ನಾನು ಪ್ರವೇಶ ಮಾಡುತ್ತೇನೆ. ಅದೂ ಸಹ ಯಾವಾಗ ವಾನಪ್ರಸ್ಥ ಸ್ಥಿತಿಯಾಗುತ್ತದೆಯೋ ಆಗ ನಾನು ಬರುತ್ತೇನೆ ಹಾಗೂ ಯಾವಾಗ ಈ ಪ್ರಪಂಚವು ಹಳೆಯದಾಗಿ ಪತಿತವಾಗುತ್ತದೆಯೋ ಆಗ ನಾನು ಬರುತ್ತೇನೆ. ಹೀಗೆ ಎಷ್ಟು ಸಹಜವಾಗಿ ತಿಳಿಸುತ್ತಾರೆ! ಮೊದಲೆಲ್ಲಾ 60 ವರ್ಷದಲ್ಲಿ ಗುರುಗಳನ್ನು ಮಾಡಿಕೊಳ್ಳುತ್ತಿದ್ದರು, ಈಗಂತೂ ಜನ್ಮತಃ ಗುರುಗಳನ್ನು ಮಾಡಿಕೊಳ್ಳುತ್ತಾರೆ, ಇದನ್ನು ಕ್ರಿಶ್ಚಿಯನ್ನರಿಂದ ಕಲಿತಿದ್ದಾರೆ. ಅರೆ!.... ಬಾಲ್ಯದಲ್ಲಿಯೇ ಗುರುವನ್ನು ಮಾಡಿಕೊಳ್ಳುವ ಅವಶ್ಯಕತೆಯೇನಿದೆ? ಏಕೆಂದರೆ ಬಾಲ್ಯದಲ್ಲಿಯೇ ಒಂದು ವೇಳೆ ಶರೀರ ಬಿಟ್ಟರೆ ಸದ್ಗತಿಯನ್ನು ಪಡೆಯುವರೆಂದು ತಿಳಿದುಕೊಂಡಿದ್ದಾರೆ. ಆದರೆ ತಂದೆಯು ತಿಳಿಸುತ್ತಾರೆ - ಇಲ್ಲಿ ಯಾರ ಸದ್ಗತಿಯೂ ಆಗುವುದಿಲ್ಲ. ಈಗ ತಂದೆಯು ನಿಮಗೆ ಎಷ್ಟೊಂದು ಸಹಜವಾಗಿ ತಿಳಿಸುತ್ತಿದ್ದಾರೆ, ಶ್ರೇಷ್ಠ ಮಾಡುತ್ತಿದ್ದಾರೆ. ಭಕ್ತಿಯಲ್ಲಂತೂ ನೀವು ಮೆಟ್ಟಿಲನ್ನು (ಜನ್ಮಗಳನ್ನು) ಇಳಿಯುತ್ತಾ ಬಂದಿದ್ದೀರಿ. ಇದು ರಾವಣ ರಾಜ್ಯವಾಗಿದೆಯಲ್ಲವೆ. ವಿಕಾರಿ ಪ್ರಪಂಚ ಪ್ರಾರಂಭವಾಗುತ್ತದೆ. ಎಲ್ಲರೂ ಗುರುವನ್ನಂತೂ ಮಾಡಿಕೊಂಡಿದ್ದಾರೆ. ಇವರು (ಬ್ರಹ್ಮಾ) ಸ್ವಯಂ ಹೇಳುತ್ತಾರೆ- ನಾನು ಬಹಳ ಗುರುಗಳನ್ನು ಮಾಡಿಕೊಂಡಿದ್ದೆನು. ಸರ್ವರ ಸದ್ಗತಿಯನ್ನು ಮಾಡುವಂತ ತಂದೆಯನ್ನು ತಿಳಿದುಕೊಂಡಿರಲಿಲ್ಲ. ಭಕ್ತಿಯಲ್ಲಿಯು ಬಹಳ ಕಠಿಣವಾದ ಬಂಧನಗಳು ಮಾಡಲ್ಪಟ್ಟಿವೆ. ಕೆಲವು ಸರಪಳಿ (ಬಂಧನ) ಗಳು ದೊಡ್ಡದಾಗಿರುತ್ತವೆ, ಕೆಲವು ತೆಳ್ಳಗಿರುತ್ತವೆ. ಯಾವುದೇ ಭಾರವಾದ ವಸ್ತುವನ್ನು ಎತ್ತುವಾಗ ಎಷ್ಟು ದಪ್ಪದಾದ ಸರಪಳಿಯನ್ನು ಕಟ್ಟಿ ಎತ್ತುತ್ತಾರೆ, ಇಲ್ಲಿಯೂ ಹಾಗೆಯೇ ಆಗಿದೆ. ಕೆಲವರು ತಕ್ಷಣ ಬಂದು ನೀವು ಹೇಳುವುದನ್ನು ಕೇಳುತ್ತಾರೆ, ಚೆನ್ನಾಗಿ ಓದುತ್ತಾರೆ. ಕೆಲವರು ತಿಳಿದುಕೊಳ್ಳುವುದೇ ಇಲ್ಲ. ನಂಬರವಾರ್ ಮಾಲೆಯ ಮಣಿಯಾಗುತ್ತಾರೆ. ಮನುಷ್ಯರು ಭಕ್ತಿಮಾರ್ಗದಲ್ಲಿ ಮಾಲೆಯನ್ನು ಸ್ಮರಿಸುತ್ತಾರೆ ಆದರೆ ಜ್ಞಾನವಂತೂ ಸ್ವಲ್ಪವೂ ಇಲ್ಲ. ಮಾಲೆಯನ್ನು ಜಪ ಮಾಡಿ ಎಂದು ಗುರುಗಳು ಹೇಳಿದ ತಕ್ಷಣ ರಾಮ-ರಾಮ ಎಂಬ ಧ್ವನಿ ಮಾಡಲು ತೊಡಗುತ್ತಾರೆ. ಹೇಗೆ ವಾಧ್ಯಗಳು ಮೊಳಗುತ್ತಿರುತ್ತವೆ, ಆ ಶಬ್ಧ ಬಹಳ ಮಧುರವೆನಿಸುತ್ತದೆ. ಉಳಿದಂತೆ ಏನೂ ಗೊತ್ತಿರುವುದಿಲ್ಲ. ರಾಮ ಎಂದು ಯಾರಿಗೆ ಹೇಳಲಾಗುತ್ತದೆ, ಕೃಷ್ಣ ಎಂದು ಯಾರಿಗೆ ಹೇಳುತ್ತಾರೆ, ಯಾವಾಗ ಬರುತ್ತಾರೆ ಎಂದು ಏನನ್ನೂ ತಿಳಿದುಕೊಂಡಿಲ್ಲ. ಕೃಷ್ಣನನ್ನು ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ ಇದನ್ನು ಯಾರು ಕಲಿಸಿದರು ಗುರುಗಳು, ಕೃಷ್ಣನು ದ್ವಾಪರದಲ್ಲಿ ಬಂದಿದ್ದಾದರೆ, ನಂತರ ಕಲಿಯುಗ ಬಂದು ಬಿಟ್ಟಿತಲ್ಲವೆ! ತಮೋಪ್ರಧಾನವಾಗಿ ಬಿಟ್ಟನಲ್ಲವೆ! ತಂದೆಯು ತಿಳಿಸುತ್ತಾರೆ- ನಾನು ಸಂಗಮದಲ್ಲಿಯೇ ಬಂದು ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡುತ್ತೇನೆ. ನೀವು ಎಷ್ಟೊಂದು ಅಂಧ ಶ್ರದ್ಧೆಯುಳ್ಳವರಾಗಿ ಬಿಟ್ಟಿದ್ದೀರಿ. ತಂದೆಯು ತಿಳಿಸುತ್ತಾರೆ- ಮುಳ್ಳಿನಿಂದ ಹೂವಾಗುವವರಿದ್ದರೆ ತಕ್ಷಣ ತಿಳಿದು ಬಿಡುತ್ತಾರೆ. ಹಾ! ಇದು ಸಂಪೂರ್ಣ ಸತ್ಯವಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಕೆಲಕೆಲವರು ಬಹಳ ಚೆನ್ನಾಗಿ ತಿಳಿದುಕೊಂಡು ನೀವು ಬಹಳ ಚೆನ್ನಾಗಿ ತಿಳಿಸಿಕೊಟ್ಟಿರೆಂದು ಹೇಳುತ್ತಾರೆ. 84 ಜನ್ಮಗಳ ಕಥೆಯಂತೂ ಯಥಾರ್ಥವಾಗಿದೆ. ಜ್ಞಾನ ಸಾಗರ ತಂದೆಯು ಒಬ್ಬರೇ ಆಗಿದ್ದಾರೆ. ಅವರೇ ಬಂದು ನಿಮಗೆ ಪೂರ್ಣ ಜ್ಞಾನವನ್ನು ಕೊಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಸದ್ಗುರು ತಂದೆಯ ನೆನಪಿನಿಂದ ಬುದ್ಧಿಯನ್ನು ಸತೋಪ್ರಧಾನ ಮಾಡಿಕೊಳ್ಳಬೇಕು, ಸತ್ಯವಾಗಬೇಕು. ಆಸ್ತಿಕರಾಗಿ ಅನ್ಯರನ್ನು ಆಸ್ತಿಕರನ್ನಾಗಿ ಮಾಡುವ ಸೇವೆ ಮಾಡಬೇಕು.

2. ಈಗ ವಾನಪ್ರಸ್ಥ ಸ್ಥಿತಿಯಾಗಿದೆ, ಆದ್ದರಿಂದ ಬೇಹದ್ದಿನ ಸನ್ಯಾಸಿಯಾಗಿ ಎಲ್ಲದರಿಂದ ಬುದ್ಧಿಯೋಗವನ್ನು ತೆಗೆಯಬೇಕು. ಪಾವನರಾಗಬೇಕು ಹಾಗೂ ದೈವೀ ಗುಣವನ್ನು ಧಾರಣೆ ಮಾಡಬೇಕು.


ವರದಾನ:
ಎಲ್ಲವನ್ನೂ ನಿನ್ನದು-ನಿನ್ನದು ಎಂದು ಮಾಡಿ ನನ್ನತನವನ್ನು ಅಂಶ ಮಾತ್ರವನ್ನೂ ಸಹಾ ಸಮಾಪ್ತಿ ಮಾಡುವಂತಹ ಡಬ್ಬಲ್ ಲೈಟ್ ಭವ.

ಯಾವುದೇ ಪ್ರಕಾರದ ನನ್ನತನ-ನನ್ನ ಸ್ವಬಾವ, ನನ್ನ ಸಂಸ್ಕಾರ, ನನ್ನ ಸ್ವಭಾವ...... ಯಾವುದೇ ಆಗಲಿ ನನ್ನದು ಎಂದಾಗ ಹೊರೆಯಾಗಿದೆ ಮತ್ತು ಹೊರೆಯುಳ್ಳವರು ಹಾರಲು ಸಾದ್ಯವಿಲ್ಲ. ಈ ನನ್ನದು-ನನ್ನದು ಎನ್ನುವುದೇ ಮೈಲಿಗೆ ಮಾಡುವಂತಹದು. ಆದ್ದರಿಂದ ಈಗ ನಿನ್ನದು-ನಿನ್ನದು ಎಂದು ಹೇಳುತ್ತ ಸ್ವಚ್ಛ ಆಗಿ. ಫರಿಶ್ತಾ ಎಂದರೇನೆ ನನ್ನತನ ಅಂಶ ಮಾತ್ರವೂ ಇಲ್ಲ. ಸಂಕಲ್ಪದಲ್ಲಿಯೂ ಸಹ ನನ್ನತನದ ಭಾನ ಬಂದಲ್ಲಿ ತಿಳಿಯಿರಿ ಮೈಲಿಗೆ ಆಯಿತು ಎಂದು. ಆದ್ದರಿಂದ ಈ ಮೈಲಿಗೆ ತನದ ಹೊರೆಯನ್ನು ಸಮಾಪ್ತಿ ಮಾಡಿ, ಡಬ್ಬಲ್ ಲೈಟ್ ಆಗಿ.

ಸ್ಲೋಗನ್:
ಈ ಜಗತ್ತಿನ ಶೋಭೆ ಅವರೇ ಆಗಿದ್ದಾರೆ ಯಾರು ಬಾಪ್ದಾದಾರವರನ್ನು ತಮ್ಮ ಕಣ್ಣುಗಳಲ್ಲಿ ಸಮಾವೇಶ ಮಾಡಿಕೊಂಡಿರುತ್ತಾರೆ.