17.03.19 Avyakt Bapdada
Kannada
Murli
15.03.84 Om Shanti Madhuban
"ಹೋಲಿ ಉತ್ಸವ
ಪವಿತ್ರರಾಗುವ, ಅನ್ಯರನ್ನು ಮಾಡುವ ನೆನಪಾರ್ಥ"
ಹೋಲಿಯೆಸ್ಟ್ (ಪವಿತ್ರತೆಯ
ಸಾಗರ) ತಂದೆಯು ಹೋಲಿ ಹಂಸಗಳೊಂದಿಗೆ ಹೋಲಿ-ಡೇ ಆಚರಿಸುವುದಕ್ಕಾಗಿ ಬಂದಿದ್ದಾರೆ. ಹೋಲಿ-ಡೇ (ಪವಿತ್ರ
ದಿನ) ಈ ಸಂಗಮಯುಗಕ್ಕೆ ಹೇಳಲಾಗುತ್ತದೆ. ಸಂಗಮಯುಗವಿರುವುದೇ ಹೋಲಿ ಡೇ. ಅಂದಮೇಲೆ ಹೋಲಿಯೆಸ್ಟ್
ತಂದೆಯು ಹೋಲಿ ಮಕ್ಕಳೊಂದಿಗೆ ಹೋಲಿ-ಡೇ ಆಚರಿಸುವುದಕ್ಕಾಗಿ ಬಂದಿದ್ದಾರೆ. ಪ್ರಪಂಚದವರ ಹೋಲಿಯು
ಒಂದೆರಡು ದಿನದ್ದಾಗಿದೆ ಮತ್ತು ತಾವು ಹೋಲಿ ಹಂಸಗಳದು ಸಂಗಮಯುಗವೇ ಹೋಲಿಯನ್ನಾಚರಿಸುತ್ತೀರಿ. ಅವರು
ಬಣ್ಣವನ್ನು ಹಾಕುತ್ತಾರೆ ಮತ್ತು ತಾವು ತಂದೆಯ ಸಂಗದ ರಂಗಿನಲ್ಲಿ ತಂದೆಯ ಸಮಾನ ಸದಾಕಾಲವೂ ಹೋಲಿಯಾಗಿ
ಬಿಡುತ್ತೀರಿ. ಹದ್ದಿನಿಂದ ಬೇಹದ್ದಿನವರಾಗುವುದರಿಂದ ಸದಾಕಾಲದ ಹೋಲಿ ಅರ್ಥಾತ್ ಪವಿತ್ರರಾಗಿ
ಬಿಡುತ್ತೀರಿ. ಈ ಹೋಲಿಯ ಉತ್ಸವವು ಹೋಲಿ ಅರ್ಥಾತ್ ಪವಿತ್ರರನ್ನಾಗಿ ಮಾಡುವ, ಆಗುವ ಉತ್ಸವವನ್ನು
ತರುತ್ತದೆ. ಏನೆಲ್ಲಾ ನೆನಪಾರ್ಥ, ವಿಧಿಯನ್ನು ಆಚರಿಸುತ್ತಾರೆ, ಅದೆಲ್ಲಾ ವಿಧಿಗಳಲ್ಲಿ
ಪವಿತ್ರರಾಗುವ ಸಾರವು ಸಮಾವೇಶವಾಗಿದೆ. ಮೊದಲು ಹೋಲಿಯಾಗುವ ಹಾಗೂ ಹೋಲಿಯನ್ನಾಚರಿಸುವುದಕ್ಕಾಗಿ
ಅಪವಿತ್ರತೆ, ಕೆಟ್ಟದ್ದನ್ನು ಭಸ್ಮ ಮಾಡಬೇಕಾಗಿದೆ, ಸುಡಬೇಕಾಗಿದೆ. ಎಲ್ಲಿಯವರೆಗೆ ಅಪವಿತ್ರತೆಯನ್ನು
ಸಂಪೂರ್ಣವಾಗಿ ಸಮಾಪ್ತಿ ಮಾಡಿಲ್ಲವೋ, ಅಲ್ಲಿಯವರೆಗೆ ಪವಿತ್ರತೆಯ ರಂಗೇರಲು ಸಾಧ್ಯವಿಲ್ಲ.
ಪವಿತ್ರತೆಯ ದೃಷ್ಟಿಯಿಂದ ಒಬ್ಬರಿನ್ನೊಬ್ಬರಲ್ಲಿ ರಂಗನ್ನಾಕುವ ಉತ್ಸವವನ್ನು ಆಚರಿಸಲು ಸಾಧ್ಯವಿಲ್ಲ.
ಭಿನ್ನ-ಭಿನ್ನ ಭಾವಗಳನ್ನು ಮರೆತು ಒಂದೇ ಪರಿವಾರದವರಾಗಿದ್ದೇವೆ, ಒಂದೇ ಸಮಾನರಿದ್ದೇವೆ ಅರ್ಥಾತ್
ಸಹೋದರ-ಸಹೋದರನ ಒಂದು ಸಮಾನವಾದ ವೃತ್ತಿಯಿಂದ ಆಚರಿಸುವ ನೆನಪಾರ್ಥವಾಗಿದೆ. ಅವರಂತು ಲೌಕಿಕ
ರೂಪದಲ್ಲಿ ಆಚರಿಸುವುದಕ್ಕಾಗಿ ಕಿರಿಯರು, ಹಿರಿಯರು, ನರ-ನಾರಿ ಸಮಾನ ಭಾವದಿಂದ ಆಚರಿಸಬೇಕು - ಈ
ಭಾವದಿಂದ ಆಚರಿಸುತ್ತಾರೆ. ವಾಸ್ತವದಲ್ಲಿ ಸಹೋದರ-ಸಹೋದರನ ಸಮಾನ ಸ್ವರೂಪದ ಸ್ಮೃತಿಯು ಅವಿನಾಶಿ
ರಂಗಿನ ಅನುಭವವನ್ನು ಮಾಡಿಸುತ್ತದೆ. ಯಾವಾಗ ಈ ಸಮಾನ ಸ್ವರೂಪದಲ್ಲಿ ಸ್ಥಿತರಾಗಿ ಬಿಡುತ್ತೀರಿ, ಆಗಲೇ
ಅವಿನಾಶಿ ಖುಷಿಯ ಹೊಳಪಿನ ಅನುಭವವಾಗುವುದು ಮತ್ತು ಸದಾಕಾಲಕ್ಕಾಗಿ ಉತ್ಸಾಹವಿರುತ್ತದೆ - ಸರ್ವ
ಆತ್ಮರಿಗೆ ಇಂತಹ ಅವಿನಾಶಿ ರಂಗೇರಿ ಬಿಡಲಿ. ರಂಗನ್ನು ಪಿಚಕಾರಿಯ ಮೂಲಕ ಹಾಕಲಾಗುತ್ತದೆ. ತಮ್ಮ
ಪಿಚಕಾರಿ (ಬಣ್ಣವನ್ನು ಹಾಕುವ ಸಾಧನ)ವು ಯಾವುದು? ತಮ್ಮ ದಿವ್ಯ ಬುದ್ಧಿಯೆಂಬ ಪಿಚಕಾರಿಯಲ್ಲಿ
ಅವಿನಾಶಿ ರಂಗು ತುಂಬಿಕೊಂಡಿದೆಯಲ್ಲವೆ. ಸಂಗದ ರಂಗಿನಿಂದ ಅನುಭವವನ್ನು ಮಾಡುತ್ತೀರಿ, ಆ
ಭಿನ್ನ-ಭಿನ್ನ ಅನುಭವಗಳ ರಂಗಿನಿಂದ ಪಿಚಕಾರಿಯು ತುಂಬಿರುತ್ತದೆಯಲ್ಲವೆ. ತುಂಬಿಕೊಂಡಿರುವ ಬುದ್ಧಿಯ
ಪಿಚಕಾರಿಯಿಂದ ಯಾವುದೇ ಆತ್ಮನಿಗೆ ದೃಷ್ಟಿಯ ಮೂಲಕ, ವೃತ್ತಿಯ ಮೂಲಕ, ಮುಖದ ಮೂಲಕ ಈ ರಂಗಿನಲ್ಲಿ
ರಂಗಿತರನ್ನಾಗಿ ಮಾಡಬಹುದು, ಅದರಿಂದ ಅವರು ಸದಾಕಾಲಕ್ಕಾಗಿ ಹೋಲಿಯಾಗಿ ಬಿಡಲಿ. ಅವರು (ಹಬ್ಬದ
ರೀತಿಯಲ್ಲಿ ಆಚರಿಸುವವರು) ಹೋಲಿಯನ್ನಾಚರಿಸುತ್ತಾರೆ, ತಾವು ಹೋಲಿಯನ್ನಾಗಿ ಮಾಡುತ್ತೀರಿ. ಎಲ್ಲಾ
ದಿನಗಳನ್ನು ಹೋಲಿ-ಡೇ ಮಾಡಿ ಬಿಡುತ್ತೀರಿ. ಅವರು ಅಲ್ಪಕಾಲಕ್ಕಾಗಿ ಆಚರಿಸುವುದಕ್ಕಾಗಿ ತಮ್ಮ ಖುಷಿಯ
ಮೂಡ್ ಮಾಡುತ್ತಾರೆ. ಆದರೆ ತಾವೆಲ್ಲರೂ ಸದಾಕಾಲ ಆಚರಿಸುವುದಕ್ಕಾಗಿ ಹೋಲಿ ಮತ್ತು ಹ್ಯಾಪಿ
ಮೂಡ್ನಲ್ಲಿ ಇರುತ್ತೀರಿ. ಮೂಡ್ ಮಾಡಬೇಕಾಗಿರುವುದಿಲ್ಲ. ಸದಾ ಹೋಲಿ ಮೂಡ್ನಲ್ಲಿ ಇರುತ್ತೀರಿ,
ಮತ್ತ್ಯಾವುದೇ ಪ್ರಕಾರದ ಮೂಡ್ ಇಲ್ಲ. ಹೋಲಿ ಮೂಡ್ ಸದಾ ಹಗುರ, ಸದಾ ನಿಶ್ಚಿಂತ, ಸದಾ ಸರ್ವ
ಖಜಾನೆಗಳಿಂದ ಸಂಪನ್ನ, ಬೇಹದ್ದಿನ ಸ್ವರಾಜ್ಯ ಅಧಿಕಾರಿ. ಈ ಯಾವ ಭಿನ್ನ-ಭಿನ್ನ ಮೂಡ್ ಬದಲಾಗುತ್ತದೆ,
ಕೆಲವೊಮ್ಮೆ ಖುಷಿಯ, ಕೆಲವೊಮ್ಮೆ ಹೆಚ್ಚು ಯೋಚಿಸುವ, ಕೆಲವೊಮ್ಮೆ ಹಗುರವಾಗಿರುವ, ಕೆಲವೊಮ್ಮೆ
ಹೊರೆಯಿರುವ - ಇವೆಲ್ಲಾ ಮೂಡ್ ಬದಲಾಯಿಸಿಕೊಂಡು ಸದಾ ಹ್ಯಾಪಿ ಮತ್ತು ಹೋಲಿ ಮೂಡ್ನವರಾಗಿ
ಬಿಡುತ್ತೀರಿ. ಇಂತಹ ಅವಿನಾಶಿ ಉತ್ಸವವನ್ನು ತಂದೆಯ ಜೊತೆಯಲ್ಲಿ ಆಚರಿಸುತ್ತೀರಿ. ಸಮಾಪ್ತಿ
ಮಾಡುವುದು, ಆಚರಿಸುವುದು ಮತ್ತು ನಂತರ ಮಿಲನವನ್ನಾಚರಿಸುವುದು. ಅದರ ನೆನಪಾರ್ಥವಾಗಿ ಸುಡುತ್ತಾರೆ,
ರಂಗನ್ನು ಹಾಕುತ್ತಾರೆ ಮತ್ತು ನಂತರ ಮಿಲನವಾಗುತ್ತಾರೆ. ತಾವೆಲ್ಲರೂ ಸಹ ಯಾವಾಗ ತಂದೆಯವರ
ರಂಗಿನಲ್ಲಿ ರಂಗಿತರಾಗಿ ಬಿಡುತ್ತೀರಿ, ಜ್ಞಾನದ ರಂಗಿನಲ್ಲಿ, ಖುಷಿಯ ರಂಗಿನಲ್ಲಿ, ಎಷ್ಟೊಂದು
ರಂಗುಗಳಲ್ಲಿ ಹೋಲಿಯನ್ನಾಡುತ್ತೀರಿ. ಯಾವಾಗ ಇವೆಲ್ಲಾ ರಂಗುಗಳಿಂದ ರಂಗಿತರಾಗಿ ಬಿಡುತ್ತೀರಿ, ಆಗ
ತಂದೆಯ ಸಮಾನರಾಗಿ ಬಿಡುತ್ತೀರಿ ಮತ್ತು ಯಾವಾಗ ಸಮಾನರು ಪರಸ್ಪರದಲ್ಲಿ ಮಿಲನವಾಗುತ್ತೀರೆಂದರೆ ಹೇಗೆ
ಮಿಲನವಾಗುತ್ತೀರಿ? ಸ್ಥೂಲದಲ್ಲಂತು ಆಲಂಗಿಸಿಕೊಳ್ಳುತ್ತಾರೆ, ಆದರೆ ತಾವು ಹೇಗೆ ಮಿಲನವಾಗುತ್ತೀರಿ?
ಯಾವಾಗ ಸಮಾನರಾಗಿ ಬಿಡುತ್ತೀರೆಂದರೆ ಸ್ನೇಹದಲ್ಲಿ ಸಮಾವೇಶವಾಗುತ್ತೀರಿ. ಸಮಾವೇಶವಾಗುವುದೇ
ಮಿಲನವಾಗುವುದಾಗಿದೆ. ಅಂದಮೇಲೆ ಇವೆಲ್ಲಾ ವಿಧಿಗಳು ಎಲ್ಲಿಂದ ಪ್ರಾರಂಭವಾದವು? ತಾವು ಅವಿನಾಶಿಯಾಗಿ
ಆಚರಿಸುತ್ತೀರಿ, ಅವರು ವಿನಾಶಿ ನೆನಪಾರ್ಥದ ರೂಪದಲ್ಲಿ ಆಚರಿಸಿಕೊಂಡು ಖುಷಿಯಾಗಿ ಬಿಡುತ್ತಾರೆ.
ಇದರಿಂದ ಯೋಚನೆ ಮಾಡಿರಿ - ತಾವೆಲ್ಲರೂ ಎಷ್ಟೊಂದು ಅವಿನಾಶಿ ಉತ್ಸವ ಅರ್ಥಾತ್ ಉತ್ಸಾಹದಲ್ಲಿ ಇರುವ
ಅನುಭವಿಯಾಗಿದ್ದೀರಿ, ಅದು ಈಗ ಕೇವಲ ತಮ್ಮ ನೆನಪಾರ್ಥದ ದಿನವನ್ನೂ ಸಹ ಆಚರಿಸುವುದರಿಂದ ಖುಷಿಯಾಗಿ
ಬಿಡುತ್ತೀರಿ. ಅಂತ್ಯದವರೆಗೂ ತಮ್ಮ ಉತ್ಸಾಹ ಮತ್ತು ಖುಷಿಯ ನೆನಪಾರ್ಥವು ಅನೇಕ ಆತ್ಮರಿಗೆ ಖುಷಿಯ
ಅನುಭವವನ್ನು ಮಾಡಿಸುತ್ತಿರುತ್ತದೆ. ಅಂದಮೇಲೆ ಇಂತಹ ಉತ್ಸಹ ತುಂಬಿರುವ ಜೀವನ, ಖುಷಿಗಳಿಂದ
ತುಂಬಿರುವ ಜೀವನವನ್ನಾಗಿ ಮಾಡಿಕೊಂಡಿದ್ದೀರಲ್ಲವೆ! ಡ್ರಾಮಾದಲ್ಲಿ ಇದೇ ಸಂಗಮಯುಗದ ಅದ್ಭುತವಾದ
ಪಾತ್ರವಿದೆ, ಯಾವ ಅವಿನಾಶಿ ಉತ್ಸವವನ್ನಾಚರಿಸುತ್ತಾ, ತಮ್ಮ ನೆನಪಾರ್ಥದ ಉತ್ಸವವನ್ನೂ
ನೋಡುತ್ತಿದ್ದೀರಿ. ಒಂದು ಕಡೆಯಲ್ಲಿ ಚೈತನ್ಯ ಶ್ರೇಷ್ಠಾತ್ಮರಿದ್ದೀರಿ. ಇನ್ನೊಂದು ಕಡೆಯಲ್ಲಿ ತಮ್ಮ
ಚಿತ್ರವನ್ನು ನೋಡುತ್ತಿದ್ದೀರಿ. ಒಂದು ಕಡೆ ನೆನಪಿನ ಸ್ವರೂಪರಾಗಿದ್ದೀರಿ, ಇನ್ನೊಂದು ಕಡೆ ತಮ್ಮ
ಪ್ರತೀ ಶ್ರೇಷ್ಠ ಕರ್ಮದ ನೆನಪಾರ್ಥವನ್ನು ನೋಡುತ್ತಿದ್ದೀರಿ. ಮಹಿಮಾ ಯೋಗ್ಯರಾಗಿದ್ದೀರಿ ಮತ್ತು
ಕಲ್ಪದ ಮೊದಲಿನ ಮಹಿಮೆಯನ್ನು ಆಲಿಸುತ್ತಿದ್ದೀರಿ. ಇದು ವಂಡರ್ ಆಗಿದೆಯಲ್ಲವೆ. ಮತ್ತು ಸ್ಮೃತಿಯಿಂದ
ನೋಡಿರಿ - ಇದು ನಮ್ಮ ಗಾಯನವಾಗಿದೆಯೇ! ಹಾಗೆ ನೋಡಿದರೆ ಪ್ರತೀ ಆತ್ಮವು ಭಿನ್ನ ನಾಮ-ರೂಪದಿಂದ ತನ್ನ
ಶ್ರೇಷ್ಠ ಕರ್ಮದ ನೆನಪಾರ್ಥದ ಚಿತ್ರವನ್ನೂ ನೋಡುತ್ತಾರೆ ಆದರೆ ತಿಳಿದಿಲ್ಲ. ಈಗ ಗಾಂಧೀಜಿಯವರೂ ಸಹ
ಭಿನ್ನ ನಾಮ-ರೂಪದಿಂದ ತಮ್ಮ ಭಾವ ಚಿತ್ರವನ್ನು ನೋಡುತ್ತಿರಬಹುದಲ್ಲವೆ. ಆದರೆ ಪರಿಚಯವಿಲ್ಲ. ತಾವು
ಪರಿಚಯದಿಂದ ತಮ್ಮ ಚಿತ್ರವನ್ನು ನೋಡುತ್ತೀರಿ. ಇದು ನಮ್ಮ ಚಿತ್ರವಾಗಿದೆ ಎನ್ನುವುದನ್ನು
ತಿಳಿದಿದ್ದೀರಿ! ಇದು ನಮ್ಮ ಉತ್ಸಾಹ ತುಂಬಿರುವ ದಿನಗಳ ನೆನಪಾರ್ಥವನ್ನು ಉತ್ಸವದ ರೂಪದಲ್ಲಿ
ಆಚರಿಸುತ್ತಿದ್ದಾರೆ. ಈ ತಿಳುವಳಿಕೆಯೆಲ್ಲವೂ ಬಂದು ಬಿಟ್ಟಿದೆಯಲ್ಲವೆ. ಡಬಲ್ ವಿದೇಶಿಗಳ ಚಿತ್ರವು
ಮಂದಿರಗಳಲ್ಲಿದೆಯೇ? ಈ ದಿಲ್ವಾಡಾ ಮಂದಿರದಲ್ಲಿ ತಮ್ಮ ಚಿತ್ರವನ್ನು ನೋಡಿದ್ದೀರಾ? ಅಥವಾ ಕೇವಲ
ಭಾರತದವರ ಚಿತ್ರವಾಗಿದೆಯೇ? ಎಲ್ಲರೂ ತಮ್ಮ ಚಿತ್ರವನ್ನು ನೋಡಿದಿರಾ? ಇದನ್ನು ಗುರುತಿಸಿದಿರಾ -
ನಮ್ಮ ಚಿತ್ರವಿದೆ, ಹೇಗೆ ಹೇ ಅರ್ಜುನ! ಒಬ್ಬರ ಉದಾಹರಣೆಯಿದೆ, ಹೇಗೆ ನೆನಪಾರ್ಥವೂ ಸ್ವಲ್ಪ
ತೋರಿಸುತ್ತಾರೆ. ಆದರೆ ಇರುವುದಂತು ಎಲ್ಲರದೂ ಇದೆ. ಹೀಗೆ ತಿಳಿಯಬಾರದು - ಇದಂತು ಬಹಳ ಕೆಲವರ
ಚಿತ್ರವಿದೆ, ನಾವು ಹೇಗಾಗುತ್ತೇವೆ. ಇದಂತು ಉದಾಹರಣೆಯನ್ನು ತೋರಿಸಲಾಗಿದೆ, ಆದರೆ ತಮ್ಮೆಲ್ಲರ
ನೆನಪಾರ್ಥವಿದೆ. ಯಾರು ನೆನಪಿನಲ್ಲಿರುತ್ತಾರೆಯೋ ಅವರ ನೆನಪಾರ್ಥವು ಅವಶ್ಯವಾಗಿ ಆಗುತ್ತದೆ.
ತಿಳಿಯಿತೆ! ಅಂದಮೇಲೆ ಪಿಚಕಾರಿ ಹಿರಿಯರ ಎಲ್ಲರದೂ ತುಂಬಿದೆಯಲ್ಲವೆ! ಅದು ಒಂದೇ ಸಾರಿಯೇ
ಸಮಾಪ್ತಿಯಾಗಿ ಬಿಡುತ್ತದೆ, ಮತ್ತೆ-ಮತ್ತೆ ತುಂಬಬೇಕಾಗುತ್ತದೆ ಎನ್ನುವಂತೆ ಚಿಕ್ಕ-ಚಿಕ್ಕ
ಪಿಚಕಾರಿಯಲ್ಲ ಅಲ್ಲವೆ. ಹೀಗೆ ಪರಿಶ್ರಮ ಪಡುವ ಅವಶ್ಯಕತೆಯೂ ಇಲ್ಲ. ಎಲ್ಲರಿಗೂ ಅವಿನಾಶಿ ರಂಗಿನಿಂದ
ರಂಗಿತರನ್ನಾಗಿಸಿರಿ. ಹೋಲಿಯನ್ನಾಗಿ ಮಾಡುವ ಹೋಲಿಯನ್ನಾಚರಿಸಿರಿ. ತಮ್ಮದಂತು ಹೋಲಿ ಆಗಿ
ಹೋಯಿತಲ್ಲವೆ ಅಥವಾ ಆಚರಿಸಬೇಕಾಗಿದೆಯೇ? ಹೋಲಿಯಾಗಿ ಬಿಟ್ಟಿರಿ ಅರ್ಥಾತ್ ಹೋಲಿಯನ್ನಾಚರಿಸಿದಿರಿ.
ರಂಗಿತರಾಗಿದ್ದೀರಲ್ಲವೆ. ಈ ರಂಗನ್ನು ಸ್ವಚ್ಛಗೊಳಿಸಬೇಕಾಗಿರುವುದಿಲ್ಲ. ಸ್ಥೂಲ
ರಂಗನ್ನಾಕುತ್ತಿದ್ದರೂ ಖುಷಿಯಿಂದ ಹಾಕುತ್ತಾರೆ ಮತ್ತು ನಂತರ ಅದರಿಂದ ಪಾರಾಗುವುದಕ್ಕೂ ಬಯಸುತ್ತಾರೆ.
ತಮ್ಮ ಈ ರಂಗಂತು ಇಂತಹದ್ದಾಗಿದೆ, ಇನ್ನೂ ಹಾಕಿರಿ ಎಂದು ಹೇಳುತ್ತಾರೆ. ಇದರಿಂದ ಯಾವುದೇ ಭಯವಿಲ್ಲ.
ಆ ರಂಗಿನಿಂದಂತು ಕಣ್ಣಿಗೆ ಬೀಳಬಾರದೆಂದು ಭಯ ಪಡುವರು. ಇದನ್ನಂತು ಹೇಳುತ್ತಾರೆ - ಎಷ್ಟಾದರೂ
ಹಾಕಿರಿ ಅಷ್ಟೂ ಒಳ್ಳೆಯದು. ಅಂದಮೇಲೆ ಇಂತಹ ಹೋಲಿಯನ್ನಾಚರಿಸಲಾಯಿತು ಅಲ್ಲವೆ. ಹೋಲಿಯಾಗಿ ಬಿಟ್ಟಿರೆ!
ಇದು ಪವಿತ್ರರಾಗುವ - ಮಾಡುವ ನೆನಪಾರ್ಥವಾಗಿದೆ. ಇಲ್ಲಿ ಭಾರತದಲ್ಲಂತು ಅನೇಕ ಕಥೆಗಳನ್ನು ಮಾಡಿ
ಬಿಟ್ಟಿದ್ದಾರೆ, ಏಕೆಂದರೆ ಕಥೆಗಳನ್ನು ಕೇಳುವ ರುಚಿಯಿಡುತ್ತಾರೆ. ಆದ್ದರಿಂದ ಪ್ರತಿಯೊಂದು
ಉತ್ಸವಗಳ ಕಥೆಗಳನ್ನು ಮಾಡಿ ಬಿಟ್ಟಿದ್ದಾರೆ. ತಮ್ಮ ಜೀವನ ಕಥೆಯಿಂದ ಭಿನ್ನ-ಭಿನ್ನ ಚಿಕ್ಕ ಪುಟ್ಟ
ಕಥೆಗಳನ್ನು ಮಾಡಿ ಬಿಟ್ಟಿದ್ದಾರೆ. ಕೆಲವರು ರಾಖಿಯ ಕಥೆಯನ್ನು ಮಾಡಿ ಬಿಟ್ಟರು, ಕೆಲವರು ಹೋಲಿಯ ಕಥೆ,
ಕೆಲವರು ಜನ್ಮ ದಿನದ ಕಥೆಯನ್ನು ಮಾಡಿ ಬಿಟ್ಟಿದ್ದಾರೆ. ಕೆಲವರು ರಾಜ್ಯ ದಿನದ ಕಥೆಯನ್ನು ಮಾಡಿ
ಬಿಟ್ಟರು ಆದರೆ ಇದೆಲ್ಲವೂ ಜೀವನ ಕಥೆಗಳ ಕಥೆ. ದ್ವಾಪರದಲ್ಲಿ ವ್ಯವಹಾರದಲ್ಲಿಯೂ ಇಷ್ಟೂ ಸಮಯವನ್ನು
ಕೊಡಬೇಕಾಗಿರಲಿಲ್ಲ, ಫ್ರಿ ಆಗಿದ್ದರು. ಸಂಖ್ಯೆಯೂ ಸಹ ತಮ್ಮ ಲೆಕ್ಕದಿಂದ ಕಡಿಮೆಯಿತ್ತು. ಸಂಪತ್ತೂ
ಸಹ ರಜೋಪ್ರಧಾನವಿತ್ತು, ಸ್ಥಿತಿಯೂ ಸಹ ರಜೋಪ್ರಧಾನವಿತ್ತು ಆದ್ದರಿಂದ ಬ್ಯುಜಿಯಾಗಿರುವುದಕ್ಕಾಗಿ ಈ
ಕಥೆ, ಪುರಾಣಗಳು, ಕೀರ್ತನೆ - ಇವೆಲ್ಲಾ ಸಾಧನಗಳನ್ನು ತಮ್ಮದಾಗಿಸಿಕೊಂಡರು. ಏನಾದರೂ
ಸಾಧನಗಳಿರಬೇಕಲ್ಲವೆ. ತಾವುಗಳಂತು ಫ್ರೀ ಆಗಿರುತ್ತೀರೆಂದರೆ ಸೇವೆ ಮಾಡುತ್ತೀರಿ ಅಥವಾ ನೆನಪಿನಲ್ಲಿ
ಕುಳಿತು ಬಿಡುತ್ತೀರಿ. ಅವರು ಆ ಸಮಯದಲ್ಲೇನು ಮಾಡುತ್ತಾರೆ! ಪ್ರಾರ್ಥನೆ ಮಾಡುವರು ಅಥವಾ ಕಥೆ
ಕೀರ್ತನೆಗಳನ್ನು ಮಾಡುವರು. ಆದ್ದರಿಂದ ಫ್ರೀ ಬುದ್ಧಿಯವರಾಗಿದ್ದು, ಬಹಳ ಒಳ್ಳೊಳ್ಳೆಯ ಕಥೆಗಳನ್ನು
ಮಾಡಿದ್ದಾರೆ. ಆದರೂ ಒಳ್ಳೆಯದು, ಅವರು ಅಪವಿತ್ರತೆಯಲ್ಲಿ ಹೋಗುವುದರಿಂದ ಪಾರಾಗಿ ಬಿಟ್ಟರು.
ಇತ್ತೀಚಿನ ಸಾಧನಗಳಂತು ಹೀಗಿವೆ, ಅದು 5 ವರ್ಷದ ಮಕ್ಕಳನ್ನೂ ವಿಕಾರಿಯನ್ನಾಗಿ ಮಾಡಿ ಬಿಡುತ್ತದೆ.
ಮತ್ತು ಆ ಸಮಯದಲ್ಲಿ ಆದರೂ ಸ್ವಲ್ಪ ಮರ್ಯಾದೆಗಳೂ ಸಹ ಇದ್ದವು. ಆದರೆ ಇರುವುದೆಲ್ಲವೂ ತಮ್ಮ
ನೆನಪಾರ್ಥವಾಗಿದೆ. ಇಷ್ಟು ನಶೆ ಮತ್ತು ಖುಷಿಯಿದೆಯಲ್ಲವೆ - ಇವರು ನಮ್ಮ ನೆನಪಾರ್ಥವನ್ನು
ಆಚರಿಸುತ್ತಿದ್ದಾರೆ. ನಮ್ಮ ಗೀತೆಯನ್ನು ಗಾಯನ ಮಾಡುತ್ತಿದ್ದಾರೆ. ಎಷ್ಟೊಂದು ಪ್ರೀತಿಯಿಂದ ಗಾಯನ
ಮಾಡುತ್ತಾರೆ. ಇಷ್ಟು ಪ್ರೀತಿ ಸ್ವರೂಪರು ತಾವಾಗಿದ್ದಿರಿ ಆದ್ದರಿಂದ ಪ್ರೀತಿಯಿಂದ ಹಾಡುತ್ತಾರೆ.
ಹೋಲಿಯ ನೆನಪಾರ್ಥವೇನೆಂದು ತಿಳಿಯಿತೆ! ಸದಾ ಖುಷಿಯಾಗಿ ಇರಿ, ಹಗುರವಾಗಿ ಇರಿ - ಇದೇ
ಆಚರಿಸುವುದಾಗಿದೆ. ಒಳ್ಳೆಯದು - ಎಂದಿಗೂ ಮೂಡ್ ಆಫ್ ಮಾಡದಿರಿ. ಸದಾ ಹೋಲಿ ಮೂಡ್, ಲೈಟ್ ಮೂಡ್!
ಹ್ಯಾಪಿ ಮೂಡ್. ಈಗ ಬಹಳ ಒಳ್ಳೆಯ ಬುದ್ಧಿವಂತರಾಗುತ್ತಾ ಸಾಗುತ್ತೀರಿ. ಮೊದಲ ದಿನದಂದು ಯಾವಾಗ
ಮಧುಬನಕ್ಕೆ ಬರುತ್ತೀರಿ, ಆ ಪೋಟೊ ಮತ್ತು ಯಾವಾಗ ಹೋಗುತ್ತೀರಿ ಆ ಪೋಟೊ - ಎರಡೂ ಪೋಟೊ
ತೆಗೆಯಬೇಕಾಗಿದೆ. ತಿಳಿದುಕೊಳ್ಳುವುದು ಸೂಚನೆಯಿಂದ, ಆದರೂ ಬಾಪ್ದಾದಾರವರ ಹಾಗೂ ಬಾಪ್ದಾದಾರವರ
ಮನೆಯ ಶೃಂಗಾರವಾಗಿರುವವರು. ತಾವು ಬರುವುದರಿಂದ ಮಧುಬನದ ಶೋಭೆಯು ಎಷ್ಟೊಂದು ಚೆನ್ನಾಗಿ ಆಗಿ
ಬಿಡುತ್ತದೆ ನೋಡಿರಿ! ಎಲ್ಲಿ ನೋಡಿದರೂ ಅಲ್ಲಿ ಫರಿಶ್ತೆಗಳು ಬರುತ್ತಿದ್ದಾರೆ-ಹೋಗುತ್ತಿದ್ದಾರೆ.
ಶೋಭೆಯಲ್ಲವೆ! ತಾವು ಶೃಂಗಾರವಾಗಿದ್ದೀರಿ ಎನ್ನುವುದು ಬಾಪ್ದಾದಾರವರಿಗೆ ಗೊತ್ತಿದೆ. ಒಳ್ಳೆಯದು -
ಎಲ್ಲಾ ಜ್ಞಾನದ ರಂಗಿನಲ್ಲಿ ರಂಗಿತರಾಗಿರುವ, ಸದಾ ತಂದೆಯ ಸಂಗದ ರಂಗಿನಲ್ಲಿರುವವರು, ತಂದೆಯ ಸಮಾನ
ಸಂಪನ್ನರಾಗಿದ್ದು ಅನ್ಯರನ್ನೂ ಅವಿನಾಶಿ ರಂಗಿನಲ್ಲಿ ರಂಗಿತರಾಗಿಸುವ, ಸದಾ ಹೋಲಿ ಡೆ ಆಚರಿಸುವಂತಹ,
ಹೋಲಿ ಹಂಸ ಆತ್ಮರಿಗೆ ಬಾಪ್ದಾದಾರವರ ಸದಾ ಹ್ಯಾಪಿ ಮತ್ತು ಹೋಲಿಯಾಗಿರುವ ಶುಭಾಷಯಗಳು.
ಸದಾ ಸ್ವಯಂನ್ನು ಸಂಪನ್ನ ಮಾಡಿಕೊಳ್ಳುವ, ಉಮ್ಮಂಗ-ಉತ್ಸಾಹದಲ್ಲಿರುವ ಶುಭಾಷಯಗಳು. ಜೊತೆ ಜೊತೆಗೆ
ನಾಲ್ಕೂ ಕಡೆಯಲ್ಲಿನ ಲಗನ್ನಿನಲ್ಲಿ ಮಗ್ನರಾಗಿರುವವರು, ಸದಾ ಮಿಲನವನ್ನಾಚರಿಸುವ, ವಿಶೇಷ ಮಕ್ಕಳಿಗೆ
ನೆನಪು-ಪ್ರೀತಿ ಹಾಗೂ ನಮಸ್ತೆ!
ವ್ಯಕ್ತಿಗತ
ವಾರ್ತಾಲಾಪ -
1. ಸದಾ ತಮ್ಮನ್ನು ತಂದೆಯ ಆಸ್ತಿಯ ಅಧಿಕಾರಿಯೆಂದು ಅನುಭವ ಮಾಡುತ್ತೀರಾ? ಅಧಿಕಾರಿ ಅರ್ಥಾತ್
ಶಕ್ತಿಶಾಲಿ ಆತ್ಮರಾಗಿದ್ದೇವೆ, ಹೀಗೆ ತಿಳಿಯುತ್ತಾ ಕರ್ಮವನ್ನು ಮಾಡಿರಿ. ಯಾವುದೇ ಪ್ರಕಾದ
ಬಲಹೀನತೆಯಂತು ಉಳಿದುಕೊಂಡಿಲ್ಲವೇ? ಸದಾ ಸ್ವಯಂನ್ನು ತಂದೆಯಂತೆ ನಾವು, ತಂದೆಯು
ಸರ್ವಶಕ್ತಿವಂತನಿದ್ದಾರೆ ಅಂದಮೇಲೆ ಮಕ್ಕಳು ಮಾಸ್ಟರ್ ಸರ್ವಶಕ್ತಿವಂತನಾಗಿದ್ದೇವೆ- ಈ ಸ್ಮೃತಿಯಿಂದ
ಸದಾಕಾಲವೂ ಸಹಜವಾಗಿ ಮುಂದುವರೆಯುತ್ತಿರುತ್ತೀರಿ. ಈ ಖುಷಿಯು ಸದಾ ಇರಲಿ ಏಕೆಂದರೆ ಈಗಿನ ಖುಷಿಯು
ಇಡೀ ಕಲ್ಪದಲ್ಲಾಗಲು ಸಾಧ್ಯವಿಲ್ಲ. ಈಗ ತಂದೆಯ ಮೂಲಕ ಪ್ರಾಪ್ತಿಯಾಗಿದೆ, ನಂತರ ಆತ್ಮರುಗಳ ಮೂಲಕ
ಆತ್ಮರಿಗೆ ಪ್ರಾಪ್ತವಾಗುತ್ತದೆ. ತಂದೆಯ ಮೂಲಕ ಯಾವ ಪ್ರಾಪ್ತಿಯಾಗುತ್ತದೆಯೋ ಅದು ಆತ್ಮರುಗಳಿಂದ
ಆಗಲು ಸಾಧ್ಯವಿಲ್ಲ. ಆತ್ಮವು ಸ್ವಯಂ ಸರ್ವಜ್ಞನಲ್ಲ, ಆದ್ದರಿಂದ ಅದರಿಂದೇನು ಪ್ರಾಪ್ತಿಯಾಗುತ್ತದೆ,
ಅದು ಅಲ್ಪಕಾಲದ್ದಾಗಿರುತ್ತದೆ ಮತ್ತು ತಂದೆಯ ಮೂಲಕ ಸದಾಕಾಲದ ಅವಿನಾಶಿ ಪ್ರಾಪ್ತಿಯಾಗುತ್ತದೆ. ಈಗ
ತಂದೆಯ ಮೂಲಕ ಅವಿನಾಶಿ ಖುಷಿಯು ಸಿಗುತ್ತದೆ. ಸದಾ ಖುಷಿಯಲ್ಲಿ ನರ್ತಿಸುತ್ತಿರುತ್ತೀರಲ್ಲವೆ! ಸದಾ
ಖುಷಿಯ ಉಯ್ಯಾಲೆಯಲ್ಲಿ ತೂಗುತ್ತಿರಿ. ಕೆಳಗೆ ಬಂದಿರಿ ಮತ್ತು ಮೈಲಿಯಾಯಿತು ಏಕೆಂದರೆ ಕೆಳಗೆ
ಮಣ್ಣಿದೆ. ಸದಾ ಉಯ್ಯಾಲೆಯಲ್ಲಿರುತ್ತೀರೆಂದರೆ ಸದಾ ಸ್ವಚ್ಛವಿದ್ದೀರಿ, ಸ್ವಚ್ಛವಾಗದೇ ತಂದೆಯೊಂದಿಗೆ
ಮಿಲನವಾಗಲು ಸಾಧ್ಯವಿಲ್ಲ. ಹೇಗೆ ತಂದೆಯು ಸ್ವಚ್ಛವಿದ್ದಾರೆ, ಅವರೊಂದಿಗೆ ಮಿಲನವಾಗುವ ವಿಧಿಯೂ ಸಹ
ಸ್ವಚ್ಛವಾಗಬೇಕಾಗುತ್ತದೆ. ಅಂದಮೇಲೆ ಸದಾ ಉಯ್ಯಾಲೆಯಲ್ಲಿ ಇರುವವರು ಸದಾ ಸ್ವಚ್ಛ. ಯಾವಾಗ
ಉಯ್ಯಾಲೆಯು ಸಿಗುತ್ತದೆಯೆಂದರೆ, ಕೆಳಗೆ ಬರುವುದಾದರೂ ಏಕೆ ಬರುತ್ತೀರಿ! ಉಯ್ಯಾಲೆಯಲ್ಲಿಯೇ
ತಿನ್ನಿರಿ, ಕುಡಿಯಿರಿ, ನಡೆಯಿರಿ..... ಇಷ್ಟು ದೊಡ್ಡ ಉಯ್ಯಾಲೆಯಿದೆ. ಕೆಳಗೆ ಬರುವ ದಿನಗಳು
ಸಮಾಪ್ತಿಯಾಯಿತು, ಈಗ ತೂಗುತ್ತಿರುವ ದಿನವಾಗಿದೆ. ಅಂದಮೇಲೆ ಸದಾ ತಂದೆಯ ಜೊತೆ ಸುಖದ ಉಯ್ಯಾಲೆಯಲ್ಲಿ,
ಖುಷಿ, ಪ್ರೇಮ, ಜ್ಞಾನ, ಆನಂದದ ಉಯ್ಯಾಲೆಯಲ್ಲಿ ತೂಗುವಂತಹ ಶ್ರೇಷ್ಠಾತ್ಮರಾಗಿದ್ದೇವೆ
ಎನ್ನುವುದನ್ನು ಸದಾ ನೆನಪಿಟ್ಟುಕೊಳ್ಳಿರಿ. ಯಾವಾಗ ಯಾವುದೇ ಮಾತು ಬರುತ್ತದೆಯೆಂದರೆ ಈ ವರದಾನವನ್ನು
ನೆನಪಿಟ್ಟುಕೊಂಡರೆ, ಪುನಃ ವರದಾನದ ಆಧಾರದಿಂದ ಜೊತೆಯ, ತೂಗುವ ಅನುಭವವನ್ನು ಮಾಡುವಿರಿ. ಈ ವರದಾನವು
ಸದಾ ಸುರಕ್ಷತೆಯ ಸಾಧನವಾಗಿದೆ. ವರದಾನವು ನೆನಪಿರುವುದು ಅರ್ಥಾತ್ ವರದಾತನ ನೆನಪಿರುವುದು.
ವರದಾನದಲ್ಲಿ ಕಷ್ಟವೇನೂ ಇರುವುದಿಲ್ಲ. ಸರ್ವ ಪ್ರಾಪ್ತಿಗಳೂ ಸಹಜವಾಗಿ ಪ್ರಾಪ್ತಿಯಾಗುತ್ತದೆ.
2. ಎಲ್ಲರೂ ಒಂದು ಬಲ ಒಂದು ಭರವಸೆಯಲ್ಲಿ ನಡೆಯುವಂತಹ ಶ್ರೇಷ್ಠಾತ್ಮರಾಗಿದ್ದೀರಲ್ಲವೆ! ಒಂದು ಬಲ
ಮತ್ತು ಒಂದು ಭರವಸೆಯಲ್ಲಿ ನಡೆಯುವ ನಿಶ್ಚಯಬುದ್ಧಿ ಮಕ್ಕಳು ತಿಳಿದಿದ್ದಾರೆ - ಈ ಸಾಕಾರ
ಮುರುಳಿಯೇನಿದೆ, ಅದೇ ಮುರುಳಿಯಾಗಿದೆ, ಮಧುಬನದಿಂದ ಶ್ರೀ ಮತವೇನು ಸಿಗುತ್ತದೆ, ಅದೇ ಶ್ರೀ
ಮತವಾಗಿದೆ, ಮಧುಬನದ ಬಾಬಾರವರಲ್ಲದೆ ಮತ್ತೆಲ್ಲಿಂದಲೂ ಸಿಗಲು ಸಾಧ್ಯವಿಲ್ಲ. ಸದಾ ಒಬ್ಬ ತಂದೆಯ
ವಿದ್ಯೆಯಲ್ಲಿ ನಿಶ್ಚಯವಿರಲಿ. ಮಧುಬನದಿಂದ ಯಾವ ವಿದ್ಯೆಯ ಪಾಠವು ಹೋಗುತ್ತದೆ, ಅದೇ ವಿದ್ಯೆಯಾಗಿದೆ,
ಮತ್ತ್ಯಾವುದೇ ವಿದ್ಯೆಯಿಲ್ಲ. ಒಂದುವೇಳೆ ಎಲ್ಲಿಯಾದರೂ ಭೋಗ ಮುಂತಾದ ಸಮಯದಲ್ಲಿ ಸಂದೇಶಿಯ ಮೂಲಕ
ಬಾಬಾರವರ ಪಾತ್ರವು ನಡೆಯುತ್ತದೆಯೆಂದರೆ, ಇದು ಸಂಪೂರ್ಣವಾಗಿ ರಾಂಗ್ ಆಗಿದೆ, ಇದೂ ಸಹ ಮಾಯೆಯಾಗಿದೆ.
ಇದಕ್ಕೆ ಒಂದು ಬಲ ಒಂದು ಭರವಸೆಯೆಂದು ಹೇಳುವುದಿಲ್ಲ. ಮಧುಬನದಿಂದ ಯಾವ ಮುರುಳಿಯು ಬರುತ್ತದೆಯೋ
ಅದರಲ್ಲಿ ಗಮನ ಕೊಡಿರಿ, ಇಲ್ಲವೆಂದರೆ ಬೇರೆ ಮಾರ್ಗದಲ್ಲಿ ಹೊರಟು ಹೋಗುತ್ತೀರಿ. ಮಧುಬನದಲ್ಲಿಯೇ
ಬಾಬಾರವರ ಮುರುಳಿಯು ನಡೆಯುತ್ತದೆ, ಮಧುಬನದಲ್ಲಿಯೇ ಬಾಬಾರವರು ಬರುತ್ತಾರೆ. ಆದ್ದರಿಂದ ಪ್ರತಿಯೊಂದು
ಮಕ್ಕಳು ಈ ಎಚ್ಚರಿಕೆಯನ್ನಿಡಿರಿ, ಇಲ್ಲವೆಂದರೆ ಮಾಯೆಯು ಮೋಸ ಮಾಡಿ ಬಿಡುತ್ತದೆ.
ವರದಾನ:
ಧೃಡತೆಯ ಶಕ್ತಿಯ
ಮೂಲಕ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವ ತ್ರಿಕಾಲದರ್ಶಿ ಆಸನಧಾರಿ ಭವ.
ಧೃಡತೆಯ ಶಕ್ತಿಯು
ಶ್ರೇಷ್ಠ ಶಕ್ತಿಯಾಗಿದೆ, ಅದು ಹುಡುಗಾಟಿಕೆಯ ಶಕ್ತಿಯನ್ನು ಸಹಜವಾಗಿ ಪರಿವರ್ತನೆ ಮಾಡಿ ಬಿಡುತ್ತದೆ.
ಬಾಪ್ದಾದಾರವರ ವರದಾನವಿದೆ - ಎಲ್ಲಿ ಧೃಡತೆಯಿದೆ ಅಲ್ಲಿ ಸಫಲತೆಯಿದ್ದೇ ಇರುತ್ತದೆ. ಕೇವಲ ಎಂತಹ
ಸಮಯ, ಅಂತಹ ವಿಧಿಯಿಂದ ಸಿದ್ಧಿ ಸ್ವರೂಪರಾಗಿರಿ. ಯಾವುದೇ ಕರ್ಮವನ್ನು ಮಾಡುವುದಕ್ಕೆ ಮೊದಲು ಅದರ
ಆದಿ-ಮಧ್ಯ-ಅಂತ್ಯವನ್ನು ಯೋಚಿಸಿ - ತಿಳಿದುಕೊಂಡು ಕಾರ್ಯವನ್ನು ಮಾಡಿರಿ ಮತ್ತು ಮಾಡಿಸಿರಿ ಅರ್ಥಾತ್
ತ್ರಿಕಾಲದರ್ಶಿ ಆಸನಧಾರಿ ಆಗಿರುತ್ತಿರೆಂದರೆ, ಹುಡುಗಾಟಿಕೆಯು ಸಮಾಪ್ತಿಯಾಗಿ ಬಿಡುತ್ತದೆ.
ಸಂಕಲ್ಪವೆಂಬ ಬೀಜವು ಶಕ್ತಿಶಾಲಿ ಧೃಡತೆಯಿಂದ ಕೂಡಿರುತ್ತದೆಯೆಂದರೆ, ವಾಣಿ ಮತ್ತು ಕರ್ಮದಲ್ಲಿ
ಸಹಜವಾಗಿ ಸಫಲತೆಯಿದ್ದೇ ಇರುತ್ತದೆ.
ಸ್ಲೋಗನ್:
ದಾ
ಸಂತುಷ್ಟರಾಗಿದ್ದು ಸರ್ವರನ್ನು ಸಂತುಷ್ಟ ಪಡಿಸುವವರೇ ಸಂತುಷ್ಟ ಮಣಿಯಾಗಿದ್ದಾರೆ.
ಸೂಚನೆ :-
ಇಂದು ತಿಂಗಳಿನ ಮೂರನೇ ರವಿವಾರವಾಗಿದೆ, ಎಲ್ಲಾ ಸಹೋದರ-ಸಹೋದರಿಯರು ಸಂಜೆ 6.30 ರಿಂದ 7.30 ರವರೆಗೆ
ವಿಶೇಷವಾಗಿ ಸಂಘಟಿತ ರೂಪದಲ್ಲಿ - ದಿವ್ಯ ಬುದ್ಧಿಯ ವಿಮಾನದ ಮೂಲಕ ಅವ್ಯಕ್ತ ವತನ ವಾಸಿಯಾಗಿರುತ್ತಾ
ಸರ್ವ ಆತ್ಮರಿಗಾಗಿ ಶುಭಭಾವನೆ ಮತ್ತು ಶುಭಕಾಮನೆಯ ಸಹಯೋಗದ ಪ್ರಕಂಪನಗಳನ್ನು ಹರಡಿಸುವ ಸೇವೆಯನ್ನು
ಮಾಡಿರಿ.