21.04.19 Avyakt Bapdada
Kannada
Murli
26.08.84 Om Shanti Madhuban
"ಲಕ್ಷ್ಯದನುಸಾರವಾಗಿ
ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಸ್ವಾರ್ಥಕ್ಕೆ ಬದಲು ಸೇವಾರ್ಥವಾಗಿಕಾರ್ಯವನ್ನು
ಮಾಡಿರಿ"
ಇಂದು ತ್ರಿಮೂರ್ತಿ
ಮಿಲನವನ್ನು ನೋಡುತ್ತಿದ್ದೇವೆ. ಜ್ಞಾನಸೂರ್ಯ, ಜ್ಞಾನ ಚಂದ್ರಮ ಮತ್ತು ಜ್ಞಾನ ನಕ್ಷತ್ರಗಳ
ಮಿಲನವಾಗುತ್ತಿದೆ. ಈ ತ್ರಿಮೂರ್ತಿ ಮಿಲನವು ಈ ಬ್ರಾಹ್ಮಣ ಸಂಸಾರದ ಮಾಡಲ್ ವಿಶೇಷವಾಗಿ
ಮಧುಬನದಲ್ಲಾಗುತ್ತದೆ. ಆಕಾಶ ಮಂಡಲದಲ್ಲಿ ಚಂದ್ರಮ ಮತ್ತು ನಕ್ಷತ್ರಗಳ ಮಿಲನವಾಗುತ್ತದೆ. ಈ
ಬೇಹದ್ದಿನ ಮಧುಬನದ ಮಂಡಲದಲ್ಲಿ ಸೂರ್ಯ ಮತ್ತು ಚಂದ್ರಮರಿಬ್ಬರ ಮಿಲನವಾಗುತ್ತದೆ. ಇವರಿಬ್ಬರ
ಮಿಲನದಿಂದ ನಕ್ಷತ್ರಗಳಿಗೂ ಜ್ಞಾನಸೂರ್ಯನ ಮೂಲಕ ಶಕ್ತಿಯ ವಿಶೇಷ ವರದಾನವು ಸಿಗುತ್ತದೆ ಮತ್ತು
ಚಂದ್ರಮನ ಮೂಲಕ ಸ್ನೇಹದ ವಿಶೇಷ ವರದಾನವು ಸಿಗುತ್ತದೆ. ಅದರಿಂದ ಲವಲಿ ಮತ್ತು ಲೈಟ್ಹೌಸ್ ಆಗಿ
ಬಿಡುತ್ತದೆ. ಇವೆರಡೂ ಶಕ್ತಿಗಳು ಸದಾ ಜೊತೆ ಜೊತೆಯಿರಲಿ. ತಾಯಿಯ ವರದಾನ ಮತ್ತು ತಂದೆಯ ವರದಾನವೆರಡೂ
ಸದಾ ಸಫಲತಾ ಸ್ವರೂಪರನ್ನಾಗಿ ಮಾಡುತ್ತದೆ. ಎಲ್ಲರೂ ಇಂತಹ ಸಫಲತೆಯ ಶ್ರೇಷ್ಠ ನಕ್ಷತ್ರಗಳಾಗಿರುವಿರಿ.
ಸಫಲತೆಯ ನಕ್ಷತ್ರಗಳು ಸರ್ವರನ್ನೂ ಸಫಲತಾ ಸ್ವರೂಪರಾಗುವ ಸಂದೇಶವನ್ನು ಕೊಡುವುದಕ್ಕಾಗಿ
ಹೋಗುತ್ತಿದ್ದೀರಿ. ಯಾವುದೇ ವರ್ಗದ ಆತ್ಮರು, ಯಾವುದೇ ಕಾರ್ಯವನ್ನು ಮಾಡುತ್ತಿದ್ದೀರಿ, ಎಲ್ಲರ
ಮುಖ್ಯ ಲಕ್ಷ್ಯವೂ ಇದೇ ಆಗಿದೆ - ನಾವು ನಮ್ಮ ಕಾರ್ಯದಲ್ಲಿ ಸಫಲರಾಗಿ ಬಿಡೋಣ ಮತ್ತು ಸಫಲತೆಯನ್ನು
ಏಕೆ ಬಯಸುತ್ತೀರಿ! ಏಕೆಂದರೆ ತಿಳಿಯುತ್ತೀರಿ - ನಮ್ಮ ಮೂಲಕ ಎಲ್ಲರಿಗೂ ಸುಖ-ಶಾಂತಿಯ
ಪ್ರಾಪ್ತಿಯಾಗಲಿ. ಭಲೇ ತನ್ನ ಹೆಸರಿನ ಸ್ವಾರ್ಥದಿಂದ ಮಾಡಬಹುದು, ಅಲ್ಪಕಾಲದ ಸಾಧನಗಳಿಂದ ಮಾಡಬಹುದು
ಆದರೆ ಲಕ್ಷ್ಯವು ಸ್ವ ಪ್ರತಿ ಹಾಗೂ ಸರ್ವರ ಪ್ರತಿ ಸುಖ-ಶಾಂತಿ ಕೊಡುವುದೇ ಆಗಿದೆ. ಲಕ್ಷ್ಯವಂತು
ಎಲ್ಲರದೂ ಸರಿಯಿದೆ ಆದರೆ ಲಕ್ಷ್ಯದನುಸಾರವಾಗಿ ಸ್ವ-ಸ್ವಾರ್ಥದ ಕಾರಣದಿಂದ ಧಾರಣೆ ಮಾಡಲಾಗುವುದಿಲ್ಲ.
ಆದ್ದರಿಂದ ಲಕ್ಷ್ಯ ಮತ್ತು ಲಕ್ಷಣದಲ್ಲಿ ಅಂತರವಾಗುವ ಕಾರಣದಿಂದ ಸಫಲತೆಯನ್ನು ಪಡೆಯಲು
ಸಾಧ್ಯವಾಗುವುದಿಲ್ಲ. ಇಂತಹ ಆತ್ಮರಿಗೆ ತಮ್ಮ ಮುಖ್ಯ ಲಕ್ಷ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವ ಸಹಜ
ಸಾಧನದಲ್ಲಿ ಇದನ್ನೇ ತಿಳಿಸಿರಿ- ಒಂದು ಶಬ್ಧದ ಅಂತರ ಮಾಡುವುದರಿಂದ ಸಫಲತೆಯ ಮಂತ್ರವು
ಪ್ರಾಪ್ತಿಯಾಗಿ ಬಿಡುತ್ತದೆ. ಅದಾಗಿದೆ- ಸ್ವಾರ್ಥಕ್ಕೆ ಬದಲು ಸರ್ವರ ಸೇವಾರ್ಥ. ಸ್ವಾರ್ಥ
ಲಕ್ಷ್ಯದಿಂದ ದೂರ ಮಾಡಿ ಬಿಡುತ್ತದೆ. ಸೇವಾರ್ಥ- ಈ ಸಂಕಲ್ಪವು ಲಕ್ಷ್ಯವನ್ನು ಪ್ರಾಪ್ತಿ
ಮಾಡಿಕೊಳ್ಳುವುದರಲ್ಲಿ ಸಹಜ ಸಫಲತೆಯನ್ನು ಪ್ರಾಪ್ತಿ ಮಾಡಿಸುತ್ತದೆ. ಯಾವುದೇ ಲೌಕಿಕ ಅಥವಾ ಅಲೌಕಿಕ
ಕಾರ್ಯರ್ಥವಾಗಿ ನಿಮಿತ್ತರಾಗಿರಬಹುದು, ತಮ್ಮ-ತಮ್ಮ ಕಾರ್ಯದಲ್ಲಿ ಸಂತುಷ್ಟತೆ ಅಥವಾ ಸಫಲತೆಯನ್ನು
ಸಹಜವಾಗಿ ಅದೇ ಪಡೆದುಕೊಂಡು ಬಿಡುತ್ತದೆ ಈ ಒಂದು ಶಬ್ಧದ ಅಂತರದ ಮಂತ್ರವನ್ನು ಪ್ರತಿಯೊಂದು
ವರ್ಗದವರಿಗೆ ತಿಳಿಸಬೇಕಾಗಿದೆ. ಎಲ್ಲಾ ಕಲಹ-ಕ್ಲೇಷ, ಏರುಪೇರುಗಳು, ಅನೇಕ ಪ್ರಕಾರದ ವಿಶ್ವದ ನಾಲ್ಕೂ
ಕಡೆಯಲ್ಲಿರುವ ಗಲಾಟೆಗಳು, ಈ ಒಂದು ಶಬ್ಧ "ಸ್ವಾರ್ಥ"ದ ಕಾರಣವಾಗಿದೆ. ಆದ್ದರಿಂದ ಸೇವಾ ಭಾವವು
ಸಮಾಪ್ತಿಯಾಗಿ ಬಿಟ್ಟಿದೆ. ಯಾರೇ ಯಾವುದೇ ಕರ್ತವ್ಯವಿರುವವರಿರಬಹುದು, ಯಾವಾಗ ತನ್ನ ಕಾರ್ಯವನ್ನು
ಆರಂಭಿಸುತ್ತಾರೆಯೋ ಆಗ ಸಂಕಲ್ಪವನ್ನೇನು ತೆಗೆದುಕೊಳ್ಳುತ್ತಾರೆ? ನಿಸ್ವಾರ್ಥ ಸೇವೆಯ ಸಂಕಲ್ಪವನ್ನು
ಮಾಡುತ್ತಾರೆ ಆದರೆ ಲಕ್ಷ್ಯ ಮತ್ತು ಲಕ್ಷಣವು ನಡೆಯುತ್ತಾ-ನಡೆಯುತ್ತಾ ಬದಲಾಗಿ ಬಿಡುತ್ತದೆ. ಅಂದರೆ
ಮೂಲ ಕಾರಣದಲ್ಲಿ ಯಾವುದೇ ವಿಕಾರವೇ ಬರಬಹುದು, ಅದರ ಬೀಜವಾಗಿದೆ "ಸ್ವಾರ್ಥ". ಅಂದಮೇಲೆ ಎಲ್ಲರಿಗೂ
ತಮ್ಮ ಲಕ್ಷ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವ ಸಫಲತೆಯ ಬೀಗದ ಕೈಯನ್ನು ಕೊಟ್ಟು ಬನ್ನಿರಿ. ಅದೇ
ರೀತಿ ಜನರು ಮುಖ್ಯವಾದ ಬೀಗದ ಕೈಯನ್ನು ಕೊಡುತ್ತಾರೆ. ತಾವೆಲ್ಲರಿಗೂ ಸಫಲತೆಯ ಬೀಗದ ಕೈಯನ್ನು
ಕೊಡುವುದಕ್ಕಾಗಿ ಹೋಗುತ್ತಿದ್ದೀರಿ ಮತ್ತು ಎಲ್ಲವನ್ನೂ ಕೊಟ್ಟು ಬಿಡುತ್ತೀರಿ ಆದರೆ ಖಜಾನೆಯ ಬೀಗದ
ಕೈಯನ್ನು ಯಾರೂ ಕೊಡುವುದಿಲ್ಲ. ಯಾವುದನ್ನು ಮತ್ತ್ಯಾರೂ ಕೊಡುವುದಿಲ್ಲವೋ, ಅದನ್ನೇ ತಾವು ಕೊಡಿರಿ.
ಯಾವಾಗ ಸರ್ವ ಖಜಾನೆಗಳ ಬೀಗದ ಕೈ ಅವರ ಬಳಿ ಹೋಯಿತೆಂದರೆ ಸಫಲತೆಯಿದ್ದೇ ಇದೆ. ಒಳ್ಳೆಯದು - ಇಂದಂತು
ಕೇವಲ ಮಿಲನವಾಗುವುದಕ್ಕಾಗಿ ಬಂದಿದ್ದೇವೆ. ರಾಜ ತಿಲಕವಂತು 21 ಜನ್ಮಗಳು ಸಿಗುತ್ತಲೇ ಇರುತ್ತದೆ
ಮತ್ತು ಸ್ಮೃತಿಯ ತಿಲಕವೂ ಸಂಗಮದ ಹೆಸರಿನ ಸಂಸ್ಕಾರದ ದಿನವಾಗಿದೆ, ಬಾಪ್ದಾದಾರವರ ಮೂಲಕ ಸಿಕ್ಕಿ
ಬಿಟ್ಟಿದೆ. ಬ್ರಾಹ್ಮಣರಿರುವುದೇ ಸ್ಮೃತಿಯ ತಿಲಕಧಾರಿ ಮತ್ತು ದೇವತೆಗಳಿರುವುದು ರಾಜ್ಯ
ತಿಲಕಧಾರಿಗಳು. ಬಾಕಿ ಮಧ್ಯದ ಫರಿಶ್ತಾ ಸ್ವರೂಪ, ಅದರ ತಿಲಕವಾಗಿದೆ- ಸಂಪನ್ನ ಸ್ವರೂಪದ ತಿಲಕ,
ಸಮಾನ ಸ್ವರೂಪದ ತಿಲಕ. ಬಾಪ್ದಾದಾರವರು ಯಾವ ತಿಲಕವನ್ನಿಡುತ್ತಾರೆ? ಸಂಪನ್ನ ಮತ್ತು ಸಮಾನ ಸ್ವರೂಪದ
ತಿಲಕ ಮತ್ತು ಸರ್ವ ವಿಶೇಷತೆಗಳ ಮಣಿಗಳಿಂದ ಶೃಂಗಾರಿತವಾಗಿರುವ ಕಿರೀಟ. ಇಂತಹ ತಿಲಕಧಾರಿ,
ಕಿರೀಟಧಾರಿ ಫರಿಶ್ತಾ ಸ್ವರೂಪವು ಸದಾ ಡಬಲ್ಲೈಟ್ನ ಸಿಂಹಾಸನಾಧೀಶ ಶ್ರೇಷ್ಠಾತ್ಮರಾಗಿದ್ದೀರಿ.
ಬಾಪ್ದಾದಾರವರು ಇದೇ ಅಲೌಕಿಕ ಶೃಂಗಾರದಿಂದ ಸಮಾರೋಹವನ್ನಾಚರಿಸುತ್ತಿದ್ದಾರೆ, ಕಿರೀಟಧಾರಿ ಆಗಿ
ಬಿಟ್ಟಿದ್ದೀರಲ್ಲವೆ! ಕಿರೀಟ, ತಿಲಕ ಮತ್ತು ಸಿಂಹಾಸನ- ವಿಶೇಷವಾಗಿ ಇದೇ ಸಮಾರೋಹವಾಗಿದೆ. ಎಲ್ಲರೂ
ಸಮಾರೋಹವನ್ನು ಆಚರಿಸುವುದಕ್ಕಾಗಿ ಬಂದಿದ್ದೀರಲ್ಲವೆ. ಒಳ್ಳೆಯದು.
ದೇಶ ಮತ್ತು ವಿದೇಶದ ಎಲ್ಲಾ ಸಫಲತೆಯ ನಕ್ಷತ್ರಗಳಿಗೂ ಬಾಪ್ದಾದಾರವರು ಸಫಲತೆಯ ಮಾಲೆಯನ್ನು
ಕೊರಳಿನಲ್ಲಿ ಹಾಕುತ್ತಿದ್ದಾರೆ. ಕಲ್ಪ-ಕಲ್ಪದ ಸಫಲತೆಯ ಅಧಿಕಾರಿ ವಿಶೇಷ ಆತ್ಮರಾಗಿದ್ದೀರಿ
ಆದ್ದರಿಂದ ಸಫಲತೆಯು ಜನ್ಮಸಿದ್ಧ ಅಧಿಕಾರವಾಗಿದೆ, ಪ್ರತೀ ಕಲ್ಪದ್ದಾಗಿದೆ. ಇದೇ ನಿಶ್ಚಯ, ನಶೆಯಲ್ಲಿ
ಸದಾ ಹಾರುತ್ತಾ ಸಾಗಿರಿ. ಪ್ರತಿನಿತ್ಯವೂ ಎಲ್ಲಾ ಮಕ್ಕಳ ನೆನಪು ಮತ್ತು ಪ್ರೀತಿಯ ಮಾಲೆಗಳನ್ನು ಬಹಳ
ಸ್ನೇಹದ ವಿಧಿಪೂರ್ವಕವಾಗಿ ತಂದೆಯವರಿಗೆ ತಲುಪಿಸುತ್ತಾರೆ. ಇದನ್ನೇ ಭಕ್ತ ಲೋಕವೂ ಸಹ ಪ್ರತಿನಿತ್ಯವೂ
ಮಾಲೆಯನ್ನು ಅವಶ್ಯವಾಗಿ ಹಾಕುವ ಕಾಪಿ ಮಾಡಿದ್ದಾರೆ. ಯಾರು ಸತ್ಯ ಲಗನ್ನಿನಲ್ಲಿ ಮಗ್ನವಾಗಿರುವ
ಮಕ್ಕಳಿದ್ದಾರೆ, ಅವರು ಅಮೃತ ವೇಳೆಯಲ್ಲಿ ಬಹಳ ಶ್ರೇಷ್ಠ ಸ್ನೇಹದ ಶ್ರೇಷ್ಠ ಸಂಕಲ್ಪಗಳ ರತ್ನಗಳ
ಮಾಲೆಗಳು, ಆತ್ಮಿಕ ಗುಲಾಬಿಯ ಮಾಲೆಗಳು, ಪ್ರತಿನಿತ್ಯವೂ ಬಾಪ್ದಾದಾರವರಿಗೆ ಖಂಡಿತವಾಗಿಯೂ
ಹಾಕುತ್ತಾರೆ, ಆದ್ದರಿಂದ ಎಲ್ಲಾ ಮಕ್ಕಳ ಮಾಲೆಗಳಿಂದ ಬಾಪ್ದಾದಾರವರು ಶೃಂಗಾರಿತರಾಗುತ್ತಾರೆ. ಹೇಗೆ
ಭಕ್ತ ಜನರೂ ಸಹ ಬಾಪ್ದಾದಾರವರಿಗೆ ತನ್ನ ಉಮ್ಮಂಗ-ಉತ್ಸಾಹದ ಪುಷ್ಪಾರ್ಪಣೆ ಮಾಡುತ್ತಾರೆ, ಹಾಗೆಯೇ
ಸ್ನೇಹ ಮಕ್ಕಳಿಗೆ ಸ್ನೇಹದ ರಿಟರ್ನ್ನಲ್ಲಿ ಪದಮದಷ್ಟು ಸ್ನೇಹದ, ವರದಾನಗಳ, ಶಕ್ತಿಗಳ ಮಾಲೆಗಳನ್ನು
ಹಾಕುತ್ತಿದ್ದಾರೆ. ಎಲ್ಲರ ಖುಷಿಯ ನರ್ತನವನ್ನೂ ಬಾಪ್ದಾದಾರವರು ನೋಡುತ್ತಿದ್ದಾರೆ. ಡಬಲ್ಲೈಟ್
ಆಗಿದ್ದು ಹಾರುತ್ತಿದ್ದಾರೆ ಮತ್ತು ಹಾರಿಸುವ ಪ್ಲಾನ್ ಮಾಡುತ್ತಿದ್ದಾರೆ. ಎಲ್ಲಾ ಮಕ್ಕಳು ತಮ್ಮ
ಹೆಸರನ್ನು ಮೊದಲ ನಂಬರಿನಲ್ಲಿ ನನ್ನ ನೆನಪು ತಂದೆಯ ಮೂಲಕ ಬಂದಿದೆ ಎಂದು ತಿಳಿದುಕೊಂಡು ಸ್ವೀಕಾರ
ಮಾಡಿರಿ. ಹೆಸರಂತು ಅನೇಕ ಇದೆ. ಆದರೆ ಎಲ್ಲರೂ ನಂಬರವಾರ್ ನೆನಪಿಗೆ ಪಾತ್ರರಾಗಿದ್ದಾರೆ. ಒಳ್ಳೆಯದು.
ಮಧುಬನದವರೆಲ್ಲರೂ ಶಕ್ತಿಶಾಲಿ ಆತ್ಮರಾಗಿದ್ದೀರಲ್ಲವೆ. ಅವಿಶ್ರಾಂತ ಸೇವೆಯ ಪಾತ್ರವನ್ನೂ ಸಹ
ಅಭಿನಯಿಸಿದಿರಿ ಮತ್ತು ಸ್ವ ಅಧ್ಯಯನದ ಪಾತ್ರವನ್ನೂ ಅಭಿನಯಿಸಿದಿರಿ. ಸೇವೆಯಲ್ಲಿ
ಶಕ್ತಿಶಾಲಿಯಾಗಿದ್ದು ಅನೇಕ ಜನ್ಮಗಳ ಭವಿಷ್ಯ ಮತ್ತು ವರ್ತಮಾನವನ್ನೂ ರೂಪಿಸಿಕೊಂಡಿದ್ದೀರಿ. ಕೇವಲ
ಭವಿಷ್ಯವೇ ಅಲ್ಲ ಆದರೆ ವರ್ತಮಾನವೂ ಸಹ ಮಧುಬನದವರ ಹೆಸರು ಪ್ರಸಿದ್ಧವಿದೆ. ಅಂದಮೇಲೆ ವರ್ತಮಾನವನ್ನೂ
ರೂಪಿಸಿಕೊಂಡಿದ್ದೀರಿ ಮತ್ತು ಭವಿಷ್ಯವೂ ಜಮಾ ಮಾಡಿಕೊಂಡಿರಿ. ಎಲ್ಲರೂ ಶಾರೀರಿಕ ವಿಶ್ರಾಂತಿಯನ್ನು
ತೆಗೆದುಕೊಂಡು ಬಿಟ್ಟಿರಿ. ಈಗ ಮತ್ತೆ ಸೀಜನ್ನಿಗಾಗಿ ತಯಾರಾಗಿ ಬಿಟ್ಟಿದೆ, ಸೀಜನ್ನಲ್ಲಿ
ರೋಗಿಯಾಗಬಾರದು, ಆದ್ದರಿಂದ ಆ ಲೆಕ್ಕಾಚಾರವನ್ನೂ ಪೂರ್ಣ ಮಾಡಿದಿರಿ. ಒಳ್ಳೆಯದು. ಯಾರೆಲ್ಲರೂ
ಬಂದಿದ್ದಾರೆ, ಎಲ್ಲರಿಗೂ ಲಾಟರಿಯಂತು ಸಿಕ್ಕಿಬಿಟ್ಟಿದೆ. ಬರುವುದು ಅರ್ಥಾತ್ ಪದಮದಷ್ಟು ಜಮಾ
ಆಗುವುದು. ಮಧುಬನದಲ್ಲಿ ಆತ್ಮ ಮತ್ತು ಶರೀರವೆರಡರ ರಿಫ್ರೆಷ್ಮೆಂಟ್ ಇದೆ.
ಜಗದೀಶ್
ಅಣ್ಣನವರೊಂದಿಗೆ -
ಸೇವೆಯಲ್ಲಿ ಶಕ್ತಿಯರ
ಜೊತೆ ಪಾತ್ರವನ್ನಭಿನಯಿಸಲು ನಿಮಿತ್ತರಾಗುವುದೂ ಸಹ ವಿಶೇಷ ಪಾತ್ರವಾಗಿದೆ. ಸೇವೆಯಿಂದ ಜನ್ಮವಾಯಿತು,
ಸೇವೆಯಿಂದ ಪಾಲನೆಯಾಯಿತು ಮತ್ತು ಸದಾ ಸೇವೆಯಲ್ಲಿ ಮುಂದುವರೆಯುತ್ತಾ ಸಾಗಿರಿ. ಸೇವೆಯ ಆದಿಯಲ್ಲಿ
ಮೊದಲು ಪಾಂಡವರು ಡ್ರಾಮಾನುಸಾರವಾಗಿ ನಿಮಿತ್ತರಾದರು ಆದ್ದರಿಂದ ಇದೂ ಸಹ ವಿಶೇಷವಾಗಿ ಸಹಯೋಗದ
ರಿಟರ್ನ್ ಆಗಿದೆ. ಸಹಯೋಗವು ಸದಾ ಪ್ರಾಪ್ತಿಯಾಗಿದೆ ಮತ್ತು ಆಗುತ್ತಿರುತ್ತದೆ. ಪ್ರತಿಯೊಂದು ವಿಶೇಷ
ಆತ್ಮನ ವಿಶೇಷತೆಯಿದೆ. ಅದೇ ವಿಶೇಷತೆಯನ್ನು ಕಾರ್ಯದಲ್ಲಿ ಸದಾ ಉಪಯೋಗಿಸುತ್ತಾ, ವಿಶೇಷತೆಯ ಮೂಲಕ
ವಿಶೇಷ ಆತ್ಮರಾಗಿರುವಿರಿ. ಸೇವೆಯ ಭಂಡಾರದಲ್ಲಿಯೇ ಹೋಗುತ್ತಿದ್ದೀರಿ. ವಿದೇಶದಲ್ಲಿ ಹೋಗುವುದು
ಅರ್ಥಾತ್ ಸೇವೆಯ ಭಂಡಾರದಲ್ಲಿ ಹೋಗುವುದಾಗಿದೆ. ಶಕ್ತಿಯರ ಜೊತೆ ಪಾಂಡವರದೂ ವಿಶೇಷ ಪಾತ್ರವಿದೆ. ಸದಾ
ಅವಕಾಶಗಳು ಸಿಗುತ್ತಿದೆ ಮತ್ತು ಸಿಗುತ್ತಿರುತ್ತದೆ. ಹೀಗೆಯೇ ಎಲ್ಲರೂ ವಿಶೇಷತೆಯನ್ನು
ತುಂಬಿಸಿಕೊಳ್ಳಿರಿ. ಒಳ್ಳೆಯದು.
ಮೋಹಿನಿ
ಬೆಹೆನ್ರವರೊಂದಿಗೆ -
ಸದಾ ವಿಶೇಷವಾಗಿ ಜೊತೆಯಿರುವ ಪಾತ್ರವಿದೆ. ಹೃದಯದಿಂದಲೂ ಸದಾ ಜೊತೆ ಮತ್ತು ಸಾಕಾರ ರೂಪದಲ್ಲಿ
ಶ್ರೇಷ್ಠ ಜೊತೆಯ ವರದಾನಿ ಆಗಿರುವಿರಿ. ಎಲ್ಲರಿಗೂ ಇದೇ ವರದಾನದ ಮೂಲಕ ಜೊತೆಯ ಅನುಭವವನ್ನು
ಮಾಡಿಸಿರಿ. ತಮ್ಮ ವರದಾನದಿಂದ ಅನ್ಯರನ್ನೂ ವರದಾನಿಯನ್ನಾಗಿ ಮಾಡಿರಿ. ಪರಿಶ್ರಮದಿಂದ
ಪ್ರೀತಿಯೇನಾಗುತ್ತದೆ, ಪರಿಶ್ರಮದಿಂದ ಮುಕ್ತರಾಗುವ ಮತ್ತು ಪ್ರೀತಿಯಲ್ಲಿರುವ - ಇದು ವಿಶೇಷವಾಗಿ
ಎಲ್ಲರಿಗೂ ಅನುಭವವಾಗಲಿ, ಇದಕ್ಕಾಗಿ ಹೋಗುತ್ತಿದ್ದೀರಿ. ವಿದೇಶಿ ಆತ್ಮರು ಪರಿಶ್ರಮ ಪಡಲು
ಬಯಸುವುದಿಲ್ಲ, ಸುಸ್ತಾಗಿ ಬಿಟ್ಟಿದ್ದಾರೆ. ಇಂತಹ ಆತ್ಮರಿಗೆ ಸದಾಕಾಲಕ್ಕಾಗಿ ಜೊತೆ ಅರ್ಥಾತ್
ಪ್ರೀತಿಯಲ್ಲಿ ಮಗ್ನರಾಗಿರುವ ಸಹಜ ಅನುಭವವನ್ನು ಮಾಡಿಸಿರಿ. ಸೇವೆಯ ಅವಕಾಶವಾಗಿ ಇದೂ ಸಹ ಗೋಲ್ಡನ್
ಲಾಟರಿಯಾಗಿದೆ. ಸದಾ ಲಾಟರಿಯನ್ನು ತೆಗೆದುಕೊಳ್ಳುವ ಸಹಜ ಪುರುಷಾರ್ಥಿ. ಪರಿಶ್ರಮದಿಂದ ಪ್ರೀತಿ-
ಇದರ ಅನುಭವವು ಹೇಗಿರುತ್ತದೆ, ಇದರ ವಿಶೇಷತೆಯನ್ನು ಎಲ್ಲರಿಗೂ ತಿಳಿಸುತ್ತಾ ಸ್ವರೂಪರನ್ನಾಗಿ ಮಾಡಿ
ಬಿಡಬೇಕು. ಯಾವ ಧೃಡ ಸಂಕಲ್ಪವನ್ನು ಮಾಡಿದ್ದೀರಿ, ಅದು ಬಹಳ ಚೆನ್ನಾಗಿರುವುದೇ ಮಾಡಿದ್ದೀರಿ. ಸದಾ
ಅಮೃತ ವೇಳೆಯಲ್ಲಿ ಇದೇ ಧೃಡ ಸಂಕಲ್ಪವನ್ನು ರಿವೈಜ್ ಮಾಡುತ್ತಿರಿ. ಒಳ್ಳೆಯದು.
ಪಾರ್ಟಿಯೊಂದು
ವಾರ್ತಾಲಾಪ -
ಸದಾ ತಮ್ಮ
ವಿಶೇಷ ಪಾತ್ರವನ್ನು ನೋಡುತ್ತಾ ಹರ್ಷಿತರಾಗುತ್ತಿರುತ್ತೀರಾ? ಸರ್ವ ಶ್ರೇಷ್ಠ ತಂದೆಯ ಜೊತೆಯಲ್ಲಿ
ಪಾತ್ರವನ್ನಭಿನಯಿಸುವವರು ವಿಶೇಷ ಪಾತ್ರಧಾರಿಯಾಗಿದ್ದೀರಿ. ವಿಶೇಷ ಪಾತ್ರಧಾರಿಯ ಪ್ರತೀ ಕರ್ಮವೂ
ಸ್ವತಹವಾಗಿಯೇ ವಿಶೇಷವಾಗಿರುತ್ತದೆ ಏಕೆಂದರೆ ಸ್ಮೃತಿಯಲ್ಲಿದೆ- ನಾನು ವಿಶೇಷ
ಪಾತ್ರಧಾರಿಯಾಗಿರುವೆನು. ಸ್ಮೃತಿಯು ಹೇಗಿರುತ್ತದೆಯೋ ಅದರಂತೆಯೇ ಸ್ವತಹವಾಗಿ ಸ್ಥಿತಿಯಾಗಿ
ಬಿಡುತ್ತದೆ. ಪ್ರತೀ ಕರ್ಮ, ಪ್ರತೀ ಮಾತು ವಿಶೇಷ. ಸಾಧಾರಣತೆಯು ಸಮಾಪ್ತಿಯಾಯಿತು. ವಿಶೇಷ
ಪಾತ್ರಧಾರಿಯು ಎಲ್ಲರನ್ನೂ ಸ್ವತಹ ಆಕರ್ಷಣೆ ಮಾಡುತ್ತಾರೆ. ಸದಾ ಇದೇ ಸ್ಮೃತಿಯಲ್ಲಿರಲಿ- ನಮ್ಮ ಈ
ವಿಶೇಷ ಪಾತ್ರದ ಮೂಲಕ ಅನೇಕ ಆತ್ಮರು ತನ್ನ ವಿಶೇಷತೆಯನ್ನು ತಿಳಿಯುತ್ತಾರೆ. ಯಾವುದೇ ವಿಶೇಷ
ಆತ್ಮರನ್ನು ನೋಡುತ್ತಾ, ಸ್ವಯಂ ವಿಶೇಷವಾಗುವ ಉಮ್ಮಂಗ ಬರುತ್ತದೆ. ಎಲ್ಲಿಯೇ ಇರಬಹುದು, ಎಂತಹ
ಮಾಯಾವೀ ವಾಯುಮಂಡಲದಲ್ಲಿಯೇ ಇರಬಹುದು ಆದರೆ ವಿಶೇಷ ಆತ್ಮನು ಪ್ರತಿಯೊಂದು ಸ್ಥಾನದಲ್ಲಿ ವಿಶೇಷವಾಗಿ
ಕಾಣಿಸುವನು. ಹೇಗೆ ವಜ್ರವು ಮಣ್ಣಿಯೊಳಗೂ ಸಹ ಹೊಳೆಯುತ್ತಿರುವಂತೆ ಕಾಣಿಸುತ್ತದೆ. ವಜ್ರವು
ವಜ್ರವಾಗಿಯೇ ಇರುತ್ತದೆ. ಅದೇ ರೀತಿ ಎಂತಹ ವಾಯುಮಂಡಲದಲ್ಲಿಯೇ ಇರಬಹುದು ಆದರೆ ವಿಶೇಷ ಆತ್ಮವು ಸದಾ
ತನ್ನ ವಿಶೇಷತೆಯಿಂದ ಆಕರ್ಷಣೆ ಮಾಡುತ್ತಾನೆ. ಸದಾ ನೆನಪಿಡಿ- ನಾವು ವಿಶೇಷ ಯುಗದ ವಿಶೇಷ
ಆತ್ಮರಾಗಿದ್ದೇವೆ.
ಬಾಂಬೆಯವರಿಗಾಗಿ
ನೆನಪು-ಪ್ರೀತಿ -
ಬಾಂಬೆಯಲ್ಲಿ
ಮೊಟ್ಟ ಮೊದಲು ಸಂದೇಶವನ್ನು ಕೊಡಬೇಕಾಗಿದೆ. ಬಾಂಬೆಯವರು ಬಹಳ ಬ್ಯುಜಿಯಾಗಿರುತ್ತಾರೆ.
ಬ್ಯುಜಿಯಾಗಿರುವವರಿಗೆ ಬಹಳ ಮುಂಚೆಯೇ ಸಂದೇಶವನ್ನು ಕೊಡಬೇಕಾಗಿದೆ, ಇಲ್ಲವೆಂದರೆ ದೂರು ಕೊಡುತ್ತಾರೆ-
ನಾವಂತು ಬ್ಯುಜಿಯಿದ್ದೆವು, ತಾವು ಹೇಳಲಿಲ್ಲ. ಆದ್ದರಿಂದಲೇ ಅವರಿಗೆ ಈಗಿನಿಂದ ಬಹಳ ಚೆನ್ನಾಗಿ
ಜಾಗೃತಗೊಳಿಸಬೇಕು. ಅಂದಮೇಲೆ ಬಾಂಬೆಯವರಿಗೆ ಹೇಳಿರಿ - ತಮ್ಮ ಜನ್ಮದ ವಿಶೇಷತೆಯನ್ನು ಸೇವೆಯಲ್ಲಿ
ವಿಶೇಷವಾಗಿ ಉಪಯೋಗಿಸುತ್ತಾ ಸಾಗಿರಿ. ಇದರಿಂದ ಸಫಲತೆಯು ಸಹಜವಾಗಿಯೇ ಅನುಭವ ಮಾಡುವಿರಿ.
ಪ್ರತಿಯೊಬ್ಬರ ಜನ್ಮದ ವಿಶೇಷತೆಯಿದೆ, ಅದೇ ವಿಶೇಷತೆಯನ್ನು ಕೇವಲ ಪ್ರತೀ ಸಮಯದಲ್ಲಿ ಕಾರ್ಯದಲ್ಲಿ
ಉಪಯೋಗಿಸಬೇಕು. ತಮ್ಮ ವಿಶೇಷತೆಯನ್ನು ಸ್ಟೇಜಿನಲ್ಲಿ ತನ್ನಿರಿ. ಕೇವಲ ಒಳಗಡೆ ಇಟ್ಟುಕೊಳ್ಳದಿರಿ,
ಸ್ಟೇಜಿನಲ್ಲಿ ತನ್ನಿರಿ. ಒಳ್ಳೆಯದು.
ಅವ್ಯಕ್ತ ಮುರುಳಿಗಳಿಂದ ಆಯ್ಕೆಯಾಗಿರುವ ಪ್ರಶ್ನೆ ಮತ್ತು ಅದರ ಉತ್ತರ -
ಪ್ರಶ್ನೆ-
ಏಕಾಗ್ರತೆಯ ಶಕ್ತಿಯು ಯಾವ-ಯಾವ ಅನುಭೂತಿಗಳನ್ನು ಮಾಡಿಸುತ್ತದೆ?
ಉತ್ತರ -
ಏಕಾಗ್ರತೆಯ
ಶಕ್ತಿಯಿಂದ ಮಾಲೀಕತ್ವದ ಶಕ್ತಿಯು ಬರುತ್ತದೆ, ಅದರಿಂದ 1. ಸಹಜವಾಗಿ ನಿರ್ವಿಘ್ನ ಸ್ಥಿತಿಯ
ಅನುಭವವಾಗುತ್ತದೆ, ಯುದ್ಧವನ್ನು ಮಾಡಬೇಕಾಗಿರುವುದಿಲ್ಲ. 2. ಸ್ವತಹವಾಗಿಯೇ ಒಬ್ಬ ತಂದೆಯಲ್ಲದೆ
ಮತ್ತ್ಯಾರೂ ಇಲ್ಲ- ಈ ಅನುಭೂತಿಯಾಗುತ್ತದೆ. 3. ಏಕರಸ ಫರಿಶ್ತಾ ಸ್ವರೂಪದ ಅನುಭೂತಿಯು ಸ್ವತಹವಾಗಿ
ಆಗುತ್ತದೆ. 4. ಸರ್ವರ ಪ್ರತಿ ಸ್ನೇಹ, ಕಲ್ಯಾಣ, ಸಮ್ಮಾನದ ವೃತ್ತಿಯು ಸ್ವತಹವಾಗಿ ಇರುತ್ತದೆ.
ಪ್ರಶ್ನೆ –
ಬ್ರಹ್ಮಾ ತಂದೆಯ
ಸಮಾನ ಹೇಗೇಗೆ ಸಂಪನ್ನತೆಯ ಸಮಯವು ಸಮೀಪಕ್ಕೆ ಬರುತ್ತದೆಯೋ, ಹಾಗೆಯೇ ಎಂತಹ ಸ್ವಮಾನವಿರುತ್ತದೆ?
ಉತ್ತರ –
ಫರಿಶ್ತಾ
ಸ್ಥಿತಿಯ ಸ್ವಮಾನ. ನಡೆಯುತ್ತಾ-ಸುತ್ತಾಡುತ್ತಾ ಫರಿಶ್ತಾ ರೂಪ, ದೇಹಭಾನ ರಹಿತ. ಹೇಗೆ ಬ್ರಹ್ಮಾ
ತಂದೆಯಿಂದ- ಕರ್ಮ ಮಾಡುತ್ತಾ, ಮಾತನಾಡುತ್ತಾ, ಡೈರೆಕ್ಷನ್ ಕೊಡುತ್ತಾ, ಉಮ್ಮಂಗ-ಉತ್ಸಾಹವನ್ನು
ಹೆಚ್ಚಿಸುತ್ತಲೂ ದೇಹಭಾನದಿಂದ ಭಿನ್ನ, ಸೂಕ್ಷ್ಮ ಪ್ರಕಾಶತೆಯ ರೂಪದ ಅನುಭೂತಿ ಮಾಡಿದಿರಿ. ಹಾಗೆಯೇ
ಅನುಭವವಾಗುತ್ತಿತ್ತು- ಹೇಗೆಂದರೆ ಮಾತನಾಡುತ್ತಿದ್ದಾರೆ ಆದರೆ ಇಲ್ಲಿಲ್ಲ, ನೋಡುತ್ತಿದ್ದಾರೆ ಆದರೆ
ದೃಷ್ಟಿಯು ಅಲೌಕಿಕವಾಗಿದೆ. ದೇಹಭಾನದಿಂದ ಭಿನ್ನ, ಅನ್ಯರೂ ಸಹ ದೇಹದ ಪರಿವೆಯಲ್ಲಿ ಬರಲಿಲ್ಲ,
ಭಿನ್ನವಾದ ರೂಪವು ಕಾಣಿಸಲಿ- ಇದಕ್ಕೆ ಹೇಳಲಾಗುತ್ತದೆ ದೇಹದಲ್ಲಿರುತ್ತಾ ಫರಿಶ್ತಾ ಸ್ವರೂಪ.
ಪ್ರಶ್ನೆ –
ಫರಿಶ್ತಾ ರೂಪದ ಜೊತೆ ಫರಿಶ್ತೆಯಾಗಿ ವತನದಲ್ಲಿ ನಡೆಯಬೇಕೆಂದರೆ ಯಾವ ಮಾತಿನ ಮೇಲೆ ಗಮನವನ್ನು
ಕೊಡಬೇಕು?
ಉತ್ತರ -
ಮನಸ್ಸಿನ
ಏಕಾಗ್ರತೆಯ ಮೇಲೆ. ಆದೇಶದಿಂದ ಮನಸ್ಸನ್ನು ನಡೆಸಿರಿ. ಹೇಗೆ ನಂಬರವನ್ ಬ್ರಹ್ಮಾರವರ ಆತ್ಮವು ಸಾಕಾರ
ರೂಪದಲ್ಲಿ ಫರಿಶ್ತಾ ಜೀವನದ ಅನುಭವವನ್ನು ಮಾಡಿಸಿದರು ಮತ್ತು ಫರಿಶ್ತೆಯಾಗಿ ಬಿಟ್ಟರು. ಹಾಗೆಯೇ
ಫರಿಶ್ತಾ ಸ್ಥಿತಿಯ ಅನುಭೂತಿಯನ್ನು ಸ್ವಯಂ ಸಹ ಮಾಡಿರಿ ಮತ್ತು ಅನ್ಯರಿಗೂ ಮಾಡಿಸಿರಿ ಏಕೆಂದರೆ
ಫರಿಶ್ತೆಯಾಗದೇ ದೇವತೆಯಾಗಲು ಸಾಧ್ಯವಿಲ್ಲ.
ಪ್ರಶ್ನೆ -
ಯಾವ ಸ್ಥಿತಿಯು
ವಶೀಭೂತ ಸ್ಥಿತಿಯಾಗಿದೆ, ಅದು ಇಷ್ಟವಾಗುವುದಿಲ್ಲ?
ಉತ್ತರ -
ಕೆಲಮಕ್ಕಳು
ಹೇಳುತ್ತಾರೆ- ಬಯಸುವುದಿಲ್ಲ, ಯೋಚಿಸುವುದಿಲ್ಲ ಆದರೆ ಆಗಿ ಬಿಟ್ಟಿತು, ಮಾಡಬಾರದಿತ್ತು. ಆದರೆ ಆಗಿ
ಬಿಟ್ಟಿತು- ಇದು ಮನಸ್ಸಿನ ವಶೀಭೂತ ಸ್ಥಿತಿಯಾಗಿದೆ. ಇಂತಹ ಸ್ಥಿತಿಯು ಪ್ರಿಯವೆನಿಸುವುದಿಲ್ಲ.
ಮಾಡಬೇಕೆಂದರೆ ಮನಸ್ಸಿನ ಮೂಲಕ ಕರ್ಮವಾಗಲಿ, ಮಾಡಬಾರದು ಮತ್ತು ಮನಸ್ಸು ಮಾಡು ಎಂದಿತು- ಇದು
ಮಾಲೀಕತ್ವವಲ್ಲ.
ಪ್ರಶ್ನೆ –
ಯಾವ ಮಾತಿನಲ್ಲಿ
ಬ್ರಹ್ಮಾ ತಂದೆಯನ್ನು ಫಾಲೋ ಮಾಡಬೇಕು?
ಉತ್ತರ -
ಹೇಗೆ ಬ್ರಹ್ಮಾ
ತಂದೆಯಿಂದ ಅನುಭವವಾಯಿತು- ಸನ್ಮುಖದಲ್ಲಿ ಫರಿಶ್ತಾ ನಿಂತಿದೆ, ಫರಿಶ್ತಾ ದೃಷ್ಟಿಯನ್ನು ಕೊಡುತ್ತಿದೆ,
ಹಾಗೆಯೇ ಫಾಲೋ ಬ್ರಹ್ಮಾ ತಂದೆ. ಮನಸ್ಸಿನ ಏಕಾಗ್ರತೆಯ ಶಕ್ತಿಯು ಸಹಜವಾಗಿಯೇ ಇಂತಹ ಫರಿಶ್ತೆಯನ್ನಾಗಿ
ಮಾಡಿ ಬಿಡುತ್ತದೆ.
ವರದಾನ:
ವ್ಯರ್ಥ ಹಾಗೂ
ಮಾಯೆಯಿಂದ ಮುಗ್ಧರಾಗಿದ್ದು ದಿವ್ಯತೆಯ ಅನುಭವವನ್ನು ಮಾಡಿಸುವ ಮಹಾನ್ ಆತ್ಮ ಭವ.
ಮಹಾನ್ ಆತ್ಮ ಅರ್ಥಾತ್
ಸೆಂಟ್, ಹೀಗೆ ಅವರಿಗೇ ಹೇಳಲಾಗುತ್ತದೆ- ಯಾರು ವ್ಯರ್ಥ ಹಾಗೂ ಮಾಯೆಯಿಂದ ಇನೋಸೆಂಟ್ ಆಗಿರುತ್ತಾರೆ.
ಹೇಗೆ ದೇವಾತ್ಮರು ಇದರಿಂದ ಇನೋಸೆಂಟ್ ಇದ್ದರು, ಹಾಗೆಯೇ ತಮ್ಮ ಆ ಸಂಸ್ಕಾರಗಳನ್ನು ಇಮರ್ಜ್
ಮಾಡಿಕೊಳ್ಳಿರಿ, ವ್ಯರ್ಥದ ಅವಿದ್ಯಾ ಸ್ವರೂಪರಾಗಿರಿ. ಏಕೆಂದರೆ ಈ ವ್ಯರ್ಥದ ಜೋಶ್ ಕೆಲವೊಮ್ಮೆ
ಸತ್ಯದ ಹೋಶ್, ಯಥಾರ್ಥವಾದ ಹೋಶ್ (ಜಾಗರೂಕತೆ)ನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಆದ್ದರಿಂದ ಸಮಯ,
ಶ್ವಾಸ, ಮಾತು, ಕರ್ಮ, ಎಲ್ಲದರಲ್ಲಿಯೂ ವ್ಯರ್ಥದಿಂದ ಇನೋಸೆಂಟ್ ಆಗಿರಿ. ಯಾವಾಗ ವ್ಯರ್ಥದ ಅವಿದ್ಯಾ
ಆಗುತ್ತದೆಯೆಂದರೆ ದಿವ್ಯತೆಯು ಸ್ವತಹವಾಗಿ ಅನುಭವವಾಗುತ್ತದೆ ಮತ್ತು ಅನುಭವ ಮಾಡಿಸುತ್ತದೆ.
ಸ್ಲೋಗನ್:
ಮೊದಲ
ದರ್ಜೆಯಲ್ಲಿ ಬರಬೇಕೆಂದರೆ ಬ್ರಹ್ಮಾ ತಂದೆಯ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡಿ.
ಸೂಚನೆ - ಇಂದು ತಿಂಗಳಿನ
ಮೂರನೆಯ ರವಿವಾರವಾಗಿದೆ, ಎಲ್ಲರೂ ಸಂಘಟಿತ ರೂಪದಲ್ಲಿ ಸಂಜೆ 6.30 ರಿಂದ 7.30 ರವರೆಗೆ
ಅಂತರಾಷ್ಟ್ರೀಯ ಯೋಗದಲ್ಲಿ ಸಮೂಹದಲ್ಲಿದ್ದು, ತಮ್ಮ ಫರಿಶ್ತಾ ಸ್ವರೂಪದ ಮೂಲಕ ಇಡೀ ವಿಶ್ವಕ್ಕೆ
ಶಾಂತಿಯ ಸಕಾಶವನ್ನು ಕೊಡುವ ಸೇವೆಯನ್ನು ಮಾಡಿರಿ. ಇಡೀ ದಿನದಲ್ಲಿ ನಡೆಯುತ್ತಾ-ಕಾರ್ಯವನ್ನು
ಮಾಡುತ್ತಾ ತಮ್ಮನ್ನು ನಿರಾಕಾರಿ ಆತ್ಮ ಮತ್ತು ಕರ್ಮ ಮಾಡುತ್ತಾ ಫರಿಶ್ತೆಯೆಂದು ತಿಳಿದು
ಕರ್ಮಯೋಗಿಯಾಗಿರಿ.