05.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ವಿದೇಹಿ
ತಂದೆಯಾದ ನಾನು ದೇಹಧಾರಿಯಾದ ನಿಮ್ಮನ್ನು ವಿದೇಹಿಯನ್ನಾಗಿ ಮಾಡಲು ಓದಿಸುತ್ತೇನೆ, ಇದು ಹೊಸ
ಮಾತಾಗಿದೆ ಇದನ್ನು ಮಕ್ಕಳೇ ತಿಳಿದುಕೊಳ್ಳುತ್ತಾರೆ”
ಪ್ರಶ್ನೆ:
ತಂದೆಯು ಒಂದೇ
ಮಾತನ್ನು ಪದೇ ಪದೇ ತಿಳಿಸುವ ಅವಶ್ಯಕತೆ ಏಕೆ ಬರುತ್ತದೆ?
ಉತ್ತರ:
ಏಕೆಂದರೆ ಮಕ್ಕಳು
ಪದೇ ಪದೇ ಮರೆತು ಬಿಡುತ್ತಾರೆ. ಕೆಲವು ಮಕ್ಕಳು ಹೇಳುತ್ತಾರೆ - ತಂದೆಯು ಪದೇ ಪದೇ ಅದೇ ಮಾತನ್ನು
ತಿಳಿಸುತ್ತಾರೆ, ಅದಕ್ಕೆ ತಂದೆಯು ಹೇಳುತ್ತಾರೆ, ನಾನು ಅವಶ್ಯವಾಗಿ ಅದೇ ಮಾತನ್ನು
ತಿಳಿಸಬೇಕಾಗುತ್ತದೆ ಏಕೆಂದರೆ ನೀವು ಮರೆಯುತ್ತೀರಿ. ನಿಮಗೆ ಮಾಯೆಯ ಬಿರುಗಾಳಿಗಳು ತೊಂದರೆ
ಕೊಡುತ್ತವೆ, ನಾನು ಪ್ರತಿ ದಿನ ಎಚ್ಚರಿಸದಿದ್ದರೆ ನೀವು ಮಾಯೆಯ ಬಿರುಗಾಳಿಗಳಿಂದ ಸೋಲನ್ನು
ಅನುಭವಿಸುತ್ತೀರಿ. ಇಲ್ಲಿಯವರೆಗೆ ನೀವು ಸತೋಪ್ರಧಾನರೆಲ್ಲಿ ಆಗಿದ್ದೀರಿ? ಯಾವಾಗ ಆಗುತ್ತೀರಿ ಆಗ
ನಾನು ಹೇಳುವುದನ್ನು ನಿಲ್ಲಿಸುತ್ತೇನೆ.
ಓಂ ಶಾಂತಿ.
ಇದಕ್ಕೆ ವಿಚಿತ್ರವಾದ ಆತ್ಮಿಕ ವಿದ್ಯೆಯೆಂದು ಹೇಳುತ್ತಾರೆ. ಹೊಸ ಪ್ರಪಂಚವಾದ ಸತ್ಯಯುಗದಲ್ಲಿಯೂ
ದೇಹಧಾರಿಗಳೇ ಒಬ್ಬರು ಇನ್ನೊಬ್ಬರಿಗೆ ಓದಿಸುತ್ತಾರೆ. ಜ್ಞಾನವನ್ನು ಎಲ್ಲರೂ ಓದಿಸುತ್ತಾರೆ,
ಇಲ್ಲಿಯೂ ಓದಿಸಲಾಗುತ್ತದೆ. ಆದರೆ ಅಲ್ಲಿ ಎಲ್ಲ ದೇಹಧಾರಿಗಳೇ ಒಬ್ಬರು ಇನ್ನೊಬ್ಬರಿಗೆ ಓದಿಸುತ್ತಾರೆ.
ವಿದೇಹಿ ತಂದೆ ಅಥವಾ ಆತ್ಮಿಕ ತಂದೆಯು ಓದಿಸಲು ಎಂದೂ ಸಾಧ್ಯವಿಲ್ಲ. ಶಾಸ್ತ್ರಗಳಲ್ಲಿಯೂ ಕೃಷ್ಣ
ಭಗವನುವಾಚ ಎಂದು ಬರೆದಿದ್ದಾರೆ. ಅವರೂ ಸಹ ಶರೀರಧಾರಿಯಾಗಿದ್ದಾರೆ. ಈ ಹೊಸ ಮಾತನ್ನು ಕೇಳಿ
ತಬ್ಬಿಬ್ಬಾಗುತ್ತಾರೆ. ಆತ್ಮಿಕ ತಂದೆಯೇ ನಾವು ಆತ್ಮಗಳಿಗೆ ಓದಿಸುತ್ತಿದ್ದಾರೆ ಎಂಬ ಮಾತನ್ನು
ನಿಮ್ಮಲ್ಲಿಯೂ ನಂಬರ್ವಾರ್ ಅನುಸಾರವೇ ತಿಳಿಯುತ್ತಾರೆ. ಇದು ಹೊಸ ಮಾತಾಗಿದೆ. ಕೇವಲ ಈ ಸಂಗಮದಲ್ಲಿ
ಸ್ವಯಂ ತಂದೆ ಬಂದು ತಿಳಿಸುತ್ತಾರೆ. ಇವರ ಮುಖಾಂತರ ನಿಮಗೆ ಓದಿಸುತ್ತೇನೆ. ಜ್ಞಾನದ ಸಾಗರ, ಶಾಂತಿಯ
ಸಾಗರ ಸರ್ವ ಆತ್ಮಗಳ ತಂದೆ ಅವರೇ ಆಗಿದ್ದಾರೆ, ಇದು ತಿಳುವಳಿಕೆಯ ಮಾತಾಗಿದೆ. ಸ್ಥೂಲವಾಗಿ
ನೋಡುವುದಕ್ಕೆ ಏನೂ ಕಾಣುವುದಿಲ್ಲ, ಆತ್ಮವೇ ಮುಖ್ಯವಾಗಿದೆ ಮತ್ತು ಅದು ಅವಿನಾಶಿಯಾಗಿದೆ ಶರೀರವು
ವಿನಾಶಿಯಾಗಿದೆ. ಈಗ ಆ ಅವಿನಾಶಿ ಆತ್ಮವು ಕುಳಿತು ಓದಿಸುತ್ತಾರೆ. ಭಲೆ ನೀವು ಸನ್ಮುಖದಲ್ಲಿ
ನೋಡುತ್ತೀರಿ. ಇವರು ಸಾಕಾರ ಶರೀರದಲ್ಲಿ ಕುಳಿತಿದ್ದಾರೆ, ಆದರೆ ನಿಮಗೆ ಗೊತ್ತಿದೆ, ಈ ಜ್ಞಾನವನ್ನು
ದೇಹಧಾರಿಗಳು ಕೊಡುವುದಿಲ್ಲ. ಜ್ಞಾನ ಕೊಡುವವರು ವಿದೇಹಿ ತಂದೆಯಾಗಿದ್ದಾರೆ. ಹೇಗೆ ಕೊಡುತ್ತಾರೆ?
ಅದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಮನುಷ್ಯರಂತೂ ಬಹಳ ಪರಿಶ್ರಮದಿಂದ ತಿಳಿದುಕೊಳ್ಳುತ್ತಾರೆ.
ಈ ನಿಶ್ಚಯ ಮಾಡಿಸಲು ನೀವು ಎಷ್ಟೊಂದು ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ನಿರಾಕಾರನಿಗೆ ಯಾವುದೇ
ನಾಮ, ರೂಪ, ದೇಶ, ಕಾಲವೇ ಇಲ್ಲ ಎಂದು ಅವರು ಹೇಳುತ್ತಾರೆ. ಆದರೆ ತಂದೆಯು ಕುಳಿತು ಓದಿಸುತ್ತಾರೆ
ಮತ್ತು ತಿಳಿಸುತ್ತಾರೆ - ಮಕ್ಕಳೇ ನಾನು ಎಲ್ಲ ಆತ್ಮಗಳ ತಂದೆಯಾಗಿದ್ದೇನೆ, ನನ್ನನ್ನು ನೀವು ಸ್ಥೂಲ
ಕಣ್ಣಿನಿಂದ ನೊಡಲು ಸಾಧ್ಯವಿಲ್ಲ. ನಿಮಗೆ ಗೊತ್ತಿದೆ. ತಂದೆಯು ವಿದೇಹಿಯಾಗಿದ್ದಾರೆ, ಜ್ಞಾನ ಆನಂದ
ಪ್ರೇಮದ ಸಾಗರ ಆಗಿದ್ದಾರೆ. ಅವರು ಹೇಗೆ ಓದಿಸುತ್ತಾರೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು
ಹೇಗೆ ಬರುತ್ತೇನೆ, ಯಾರ ಆಧಾರವನ್ನು ತೆಗೆದುಕೊಳ್ಳುತ್ತೇನೆ? ನಾನು ಯಾವುದೇ ಗರ್ಭದಿಂದ ಜನ್ಮ
ತೆಗೆದುಕೊಳ್ಳುವುದಿಲ್ಲ. ನಾನು ಮನುಷ್ಯ ಅಥವಾ ದೇವತೆಯಾಗುವುದಿಲ್ಲ. ದೇವತೆಗಳೂ ಸಹ ಶರೀರ
ತೆಗೆದುಕೊಳ್ಳುತ್ತಾರೆ. ಆದರೆ ನಾನು ಸದಾ ಅಶರೀರಿಯಾಗಿರುತ್ತೇನೆ. ನಾಟಕದಲ್ಲಿ ನನ್ನ ಪಾತ್ರವೇ
ಹೀಗಿದೆ. ನಾನೆಂದೂ ಪುನರ್ಜನ್ಮದಲ್ಲಿ ಬರುವುದಿಲ್ಲ. ಅಂದಾಗ ಇದು ತಿಳುವಳಿಕೆಯ ಮಾತಾಗಿದೆ.
ಸ್ಥೂಲವಾಗಿ ಕಾಣಿಸುವುದಿಲ್ಲ, ಮನುಷ್ಯರು ಕೃಷ್ಣ ಭಗವಾನುವಾಚ ಎಂದು ತಿಳಿಯುತ್ತಾರೆ.
ಭಕ್ತಿಮಾರ್ಗದಲ್ಲಿ ರಥವನ್ನೂ ಸಹ ಹೇಗೆ ಮಾಡಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು
ತಬ್ಬಿಬ್ಬಾಗುವುದಿಲ್ಲ ತಾನೇ? ಒಂದು ವೇಳೆ ಏನಾದರೂ ಅರ್ಥವಾಗದಿದ್ದರೆ ತಂದೆಯನ್ನು ಕೇಳಿ, ಹಾಗೆ
ಹೇಳುವುದಾದರೆ ಕೇಳದೆಯೇ ತಂದೆಯು ಎಲ್ಲವನ್ನೂ ಹೇಳುತ್ತಾರೆ. ನೀವು ಏನನ್ನೂ ಕೇಳುವ ಅವಶ್ಯಕತೆಯೇ
ಇಲ್ಲ. ನಾನು ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ಅವತರಿಸುತ್ತೇನೆ, ನನ್ನ ಜನ್ಮವೂ ಸಹ
ವಿಚಿತ್ರವಾಗಿದೆ. ನೀವು ಮಕ್ಕಳಿಗೂ ಸಹ ಆಶ್ಚರ್ಯವೆನಿಸುತ್ತದೆ. ಎಷ್ಟು ದೊಡ್ಡ ಪರೀಕ್ಷೆಯನ್ನು
ತೇರ್ಗಡೆ ಮಾಡಿಸುತ್ತಾರೆ. ಬಹಳ ದೊಡ್ಡ ವಿಶ್ವದ ಮಾಲೀಕರನ್ನಾಗಿ ಮಾಡಲು ಓದಿಸುತ್ತಾರೆ. ಬಹಳ
ಆಶ್ಚರ್ಯದ ಮಾತಾಗಿದೆಯಲ್ಲವೆ. ಆತ್ಮಗಳೇ, ಪ್ರತಿ 5000 ವರ್ಷಗಳ ನಂತರ ನಾನು ನಿಮ್ಮ ಸೇವೆಗಾಗಿ
ಬರುತ್ತೇನೆ, ಆತ್ಮಗಳಿಗೆ ಓದಿಸುತ್ತೇನಲ್ಲವೇ, ಕಲ್ಪ ಕಲ್ಪದ ಸಂಗಮಯುಗದಲ್ಲಿ ನಾನು ನಿಮ್ಮ ಸೇವೆಗಾಗಿ
ಬರುತ್ತೇನೆ. ಹೇ ತಂದೆ, ಹೇ ಪತಿತ ಪಾವನ ಬನ್ನಿ ಎಂದು ಅರ್ಧ ಕಲ್ಪದಿಂದ ನೀವು ನನ್ನನ್ನು ಕರೆದಿರಿ.
ಕೃಷ್ಣನಿಗೆ ಪತಿತ ಪಾವನ ಎಂದು ಯಾರೂ ಹೇಳುವುದಿಲ್ಲ. ಪತಿತ ಪಾವನ ಎಂದು ಪರಮಪಿತ ಪರಮಾತ್ಮನಿಗೆ
ಹೇಳುತ್ತಾರೆ. ಆದ್ದರಿಂದ ಹೇಳುತ್ತಾರೆ - ಅಕಾಲಮೂರ್ತಿ, ಸತ್ಯ ಶಿಕ್ಷಕ, ಅಕಾಲಮೂರ್ತಿ ಸದ್ಗುರು.
ಸಿಖ್ಖರ ಘೋಷಣಾ ವಾಕ್ಯಗಳು ಬಹಳ ಇವೆ ಆದರೆ ಸದ್ಗುರು, ಅಕಾಲಮೂರ್ತಿ ಯಾವಾಗ ಬರುತ್ತಾರೆ ಎನ್ನುವುದು
ಅವರಿಗೇ ಗೊತ್ತಿಲ್ಲ. ಇದೂ ಗಾಯನವಿದೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು. ಯಾವಾಗ ಬಂದು
ಮನುಷ್ಯರನ್ನು ದೇವತೆಯನ್ನಾಗಿ ಮಾಡುತ್ತಾರೆ? ಇದು ತಿಳಿದಿಲ್ಲ. ಅವರೇ ಸರ್ವರ ಸದ್ಗತಿ
ಮಾಡುವವರಾಗಿದ್ದಾರೆ. ಇದು ಪಕ್ಕಾ ನಿಶ್ಚಯವಿರಬೇಕು. ಅವರು ಬಂದು ಏನು ಹೇಳುತ್ತಾರೆ? ಕೇವಲ
ತಿಳಿಸುತ್ತಾರೆ - ಮನ್ಮನಾಭವ. ಅದರ ಅರ್ಥವನ್ನೂ ಸಹ ತಿಳಿಸುತ್ತಾರೆ. ಬೇರೆ ಯಾರೂ ಇದರ ಅರ್ಥವನ್ನು
ತಿಳಿಸಲು ಸಾಧ್ಯವಿಲ್ಲ. ತಮ್ಮನ್ನು ಆತ್ಮ ಎಂದು ತಿಳಿಯಿರಿ ಎಂಬ ಮತವನ್ನು ಸ್ವಯಂ ಅಕಾಲಮೂರ್ತಿಯೇ
ಕುಳಿತು ಈ ದೇಹದ ಮೂಲಕ ತಿಳಿಸುತ್ತಾರೆ ಅಂದಾಗ ಇದನ್ನು ತಿಳಿಸಿಕೊಡಲೇಬೇಕು. ವಿಶ್ವದ ಮಾಲೀಕರನ್ನಾಗಿ
ಮಾಡಲು ತಂದೆಯೇ ನಿಮ್ಮ ಸೇವೆಯಲ್ಲಿ ಬರಬೇಕಾಗುತ್ತದೆ. ತಿಳಿಸುತಾರೆ - ಹೇ ಆತ್ಮಗಳೇ, ನೀವು ಮೊದಲು
ಸತೋಪ್ರಧಾನರಾಗಿದ್ದಿರಿ ನಂತರ ತಮೋಪ್ರಧಾನರಾಗಿದ್ದೀರಿ. ಈ ಸೃಷ್ಟಿ ಚಕ್ರವು ಸುತ್ತುತ್ತದೆಯಲ್ಲವೇ.
ದೇವತೆಗಳ ಪ್ರಪಂಚವು ಪಾವನ ಆಗಿತ್ತು. ಅವರು ಎಲ್ಲಿ ಹೋದರು? ಇದೂ ಸಹ ಯಾರಿಗೂ ಗೊತ್ತಿಲ್ಲ.
ಗೊಂದಲಕ್ಕೊಳಗಾಗಿದ್ದಾರೆ. ತಂದೆಯು ಬಂದು ನಿಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತಾರೆ. ಮಕ್ಕಳೇ
ನಾನು ಒಂದೇ ಬಾರಿಗೆ ಬರುತ್ತೇನೆ. ಪಾವನ ಪ್ರಪಂಚದಲ್ಲಿ ನಾನೇಕೆ ಬರಲಿ! ಅಲ್ಲಿ ಕಾಲವು ಬರುವುದಿಲ್ಲ.
ತಂದೆಯು ಕಾಲರ ಕಾಲ ಆಗಿದ್ದಾರೆ. ಅಂದಮೇಲೆ ಸತ್ಯಯುಗದಲ್ಲಿ ಬರುವ ಅವಶ್ಯಕತೆ ಇಲ್ಲ. ಅಲ್ಲಿ ಕಾಲವೂ
ಬರುವುದಿಲ್ಲ ಮಹಾಕಾಲನೂ ಬರುವುದಿಲ್ಲ. ಮಹಾಕಾಲ ತಂದೆಯು ಬಂದು ಎಲ್ಲ ಆತ್ಮರನ್ನು ಕರೆದುಕೊಂಡು
ಹೋಗುತ್ತಾರೆ, ಖುಷಿಯಿಂದ ಹೋಗುತ್ತೀರಲ್ಲವೆ. ಹೌದು ಬಾಬಾ, ಖುಷಿಯಿಂದ ಹೋಗಲು ಸಿದ್ಧರಿದ್ದೇವೆ.
ಅದಕ್ಕೆ ಈ ಪತಿತ ಪ್ರಪಂಚದಿಂದ ಪಾವನ ಪ್ರಪಂಚಕ್ಕೆ ಶಾಂತಿಧಾಮದ ಮೂಲಕ ಕರೆದುಕೊಂಡು ಹೋಗಿ ಎಂದು
ತಮ್ಮನ್ನು ಕರೆದೆವು. ಈ ಮಾತುಗಳನ್ನು ಪದೇ ಪದೇ ಮರೆತು ಬಿಡಬೇಡಿ. ಆದರೆ ಮಾಯಾ ಶತ್ರು ನಿಂತಿದೆ,
ಪದೇ ಪದೇ ಮರೆಸಿ ಬಿಡುತ್ತದೆ. ನಾನು ಸರ್ವಶಕ್ತಿವಂತನಾಗಿದ್ದೇನೆ, ಮಾಯೆ ಶಕ್ತಿವಂತ ಆಗಿದೆ, ಅದೂ
ಸಹ ಅರ್ಧ ಕಲ್ಪ ನಿಮ್ಮ ಮೇಲೆ ರಾಜ್ಯ ಮಾಡಿದೆ. ಮರೆಸಿ ಬಿಡುತ್ತದೆ. ಆದ್ದರಿಂದ ತಂದೆಯು
ಪ್ರತಿನಿತ್ಯ ತಿಳಿಸಬೇಕಾಗುತ್ತದೆ. ಪ್ರತಿ ನಿತ್ಯ ಎಚ್ಚರಿಸದಿದ್ದರೆ ಮಾಯೆ ಬಹಳ ನಷ್ಟ ಮಾಡುತ್ತದೆ.
ಪವಿತ್ರತೆ ಮತ್ತು ಅಪವಿತ್ರತೆಯ ಆಟವಾಗಿದೆ. ಈಗ ತಂದೆಯು ತಿಳಿಯುತ್ತಾರೆ - ಮಕ್ಕಳೇ, ತಮ್ಮ
ಚಲನೆಯನ್ನು ಸುಧಾರಣೆ ಮಾಡಿಕೊಳ್ಳಲು ಪವಿತ್ರರಾಗಿರಿ, ಕಾಮ ವಿಕಾರಕ್ಕಾಗಿ ಎಷ್ಟು ಜಗಳಗಳಾಗುತ್ತವೆ.
ತಂದೆಯು ತಿಳಿಸುತ್ತಾರೆ - ನಿಮಗೆ ಈ ಜ್ಞಾನದ ಮೂರನೆ ನೇತ್ರ ಸಿಕ್ಕಿದೆ ಅಂದಮೇಲೆ ಆತ್ಮವನ್ನೇ ನೋಡಿ
ಆದರೆ ಈ ಸ್ಥೂಲ ನೇತ್ರದಿಂದ ನೋಡಲೇಬೇಡಿ. ನಾವೆಲ್ಲ ಆತ್ಮರು ಸಹೋದರರಾಗಿದ್ದೇವೆ ಅಂದಮೇಲೆ ವಿಕಾರವು
ಹೇಗೆ ಬರಲು ಸಾಧ್ಯ! ನಾವು ಅಶರೀರಿಯಾಗಿ ಬಂದಿದ್ದೆವು ಈಗ ಮತ್ತೆ ಅಶರೀರಿಯಾಗಿ ಹೋಗಬೇಕು. ಆತ್ಮವು
ಸತೋಪ್ರಧಾನವಾಗಿ ಬಂದಿತ್ತು. ಈಗ ಸತೋಪ್ರಧಾನವಾಗಿಯೇ ಮಧುರ ಮನೆಗೆ ಹೋಗಬೇಕಾಗಿದೆ. ಮುಖ್ಯವಾದುದು
ಪವಿತ್ರತೆಯ ಮಾತಾಗಿದೆ. ಪ್ರತಿನಿತ್ಯವೂ ಅದೇ ಮಾತನ್ನು ತಿಳಿಸುತ್ತಾರೆಂದು ಮನುಷ್ಯರು ಹೇಳುತ್ತಾರೆ,
ಇದಂತೂ ಸರಿ ಆದರೆ ಏನು ತಿಳಿಸಿಕೊಡುತ್ತಾರೆ ಅದರಂತೆ ನಡೆಯಬೇಕಲ್ಲವೆ. ಮಾಡುವುದಕ್ಕೋಸ್ಕರವೇ
ತಿಳಿಸಿಕೊಡಲಾಗುತ್ತದೆ. ಆದರೆ ಯಾರೂ ನಡೆಯುವುದಿಲ್ಲ. ಆದ್ದರಿಂದ ಪ್ರತಿನಿತ್ಯವೂ
ತಿಳಿಸಬೇಕಾಗುತ್ತದೆ. ಬಾಬಾ, ತಾವು ಯಾವುದನ್ನು ಪ್ರತಿನಿತ್ಯವೂ ತಿಳಿಸುತ್ತೀರಿ ಅದನ್ನು ನಾವು
ಚೆನ್ನಾಗಿ ತಿಳಿದುಕೊಂಡಿದ್ದೇವೆ. ಈಗ ನಾವು ತಮೋಪ್ರಧಾನರಿಂದ ಸತೋಪ್ರಧಾನ ಆಗಿ ಬಿಡುತ್ತೇವೆ
ತಮಗಿನ್ನು ಬಿಡುವು ಎಂದು ಹೇಳುತ್ತಾರೇನು? ಆದ್ದರಿಂದ ತಂದೆಯು ಪ್ರತಿನಿತ್ಯ
ತಿಳಿಸಿಕೊಡಬೇಕಾಗುತ್ತದೆ. ಮಾತು ಒಂದೇ ಆಗಿದೆ ಆದರೆ ಮಾಡುತ್ತಿಲ್ಲವಲ್ಲ! ತಂದೆಯನ್ನೇ ನೆನಪು
ಮಾಡುವುದಿಲ್ಲ. ಬಾಬಾ ಪದೇ ಪದೇ ಮರೆತು ಹೋಗುತ್ತೇವೆಂದು ಹೇಳುತ್ತಾರೆ. ತಂದೆಯ ನೆನಪು ತರಿಸಲು ಪದೇ
ಪದೇ ಹೇಳಬೇಕಾಗುತ್ತದೆ. ನೀವು ಸಹ ಇದನ್ನೇ ಪದೇ ಪದೇ ತಿಳಿಸಿ - ತಮ್ಮನ್ನು ಆತ್ಮವೆಂದು ತಿಳಿದು
ತಂದೆಯನ್ನು ನೆನಪು ಮಾಡಿ ಆಗ ನಿಮ್ಮ ಪಾಪವು ಭಸ್ಮವಾಗುತ್ತವೆ, ಬೇರೆ ಯಾವ ಉಪಾಯವಿಲ್ಲ.
ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಇದೇ ಮಾತನ್ನು ಹೇಳುತ್ತೇನೆ ಏಕೆಂದರೆ ನೆನಪಿನಿಂದಲೇ
ಸತೋಪ್ರಧಾನರಾಗಬೇಕಾಗಿದೆ. ಬಾಬಾ ಮಾಯೆಯ ಬಿರುಗಾಳಿ ಮರೆಸಿ ಬಿಡುತ್ತದೆ ಎಂದು ಹೇಳುತ್ತಾರೆಂದಮೇಲೆ
ತಂದೆಯು ಎಚ್ಚರಿಸಬಾರದೇ ಹೇಳುವುದನ್ನು ಬಿಟ್ಟು ಬಿಡುವುದೇ? ನಂಬರ್ವಾರ್ ಪುರುಷಾರ್ಥನುಸಾರವೇ
ನಡೆಯುತ್ತಾರೆಂದು ತಂದೆಗೆ ಗೊತ್ತಿದೆ. ಎಲ್ಲಿಯವರೆಗೆ ಸತೋಪ್ರಧಾನರಾಗುವುದಿಲ್ಲವೋ ಅಲ್ಲಿಯವರೆಗೆ
ಹೋಗಲು ಸಾಧ್ಯವಿಲ್ಲ. ಯುದ್ಧದ ಸಂಬಂಧವೂ ಇದೆಯಲ್ಲವೆ. ಯಾವಾಗ ನೀವು ನಂಬರ್ವಾರ್ ಪುರುಷಾರ್ಥನುಸಾರ
ಸತೋಪ್ರಧಾನರಾಗುತ್ತೀರಿ ಆಗ ಯುದ್ಧವು ಪ್ರಾರಂಭವಾಗುವುದು. ಜ್ಞಾನವಂತೂ ಒಂದು ಸೆಕೆಂಡಿನದಾಗಿದೆ.
ಬೇಹದ್ದಿನ ತಂದೆಯನ್ನು ಪಡೆದುಕೊಂಡಿರಿ, ಯಾವಾಗ ಪವಿತರಾಗುತ್ತೀರೊ ಆಗಲೇ ಅವರಿಂದ ಬೇಹದ್ದಿನ ಸುಖವು
ಸಿಗುತ್ತದೆ. ಒಳ್ಳೆಯ ರೀತಿಯಲ್ಲಿ ಪುರುಷಾರ್ಥ ಮಾಡಬೇಕಾಗಿದೆ. ಕೆಲವರಂತೂ ಏನನ್ನೂ
ತಿಳಿದುಕೊಳ್ಳುವುದಿಲ್ಲ. ತಂದೆಯ ನೆನಪು ಮಾಡುವಷ್ಟು ಬುದ್ಧಿಯಿಲ್ಲ. ಎಂದೂ ಈ ವಿದ್ಯೆಯನ್ನು
ಓದಿಲ್ಲ. ಇಡೀ ಚಕ್ರದಲ್ಲಿ ನಿರಾಕಾರ ತಂದೆಯಿಂದ ಯಾರೂ ಓದಿಲ್ಲ. ಆದ್ದರಿಂದ ಇದು ಹೊಸ ಮಾತಾಗಿದೆ.
ತಂದೆಯು ತಿಳಿಸುತ್ತಾರೆ - ನಿಮ್ಮನ್ನು ಸತೋಪ್ರಧಾನರನ್ನಾಗಿ ಮಾಡಲು ನಾನು ಪ್ರತಿ 5000 ವರ್ಷಗಳ
ನಂತರ ಬರುತ್ತೇನೆ, ಎಲ್ಲಿಯವರೆಗೆ ನೀವು ಸತೋಪ್ರಧನರಾಗುವುದಿಲ್ಲವೋ ಅಲ್ಲಿಯವರೆಗೆ ಈ ಪದವಿಯನ್ನು
ಪಡೆಯಲು ಸಾಧ್ಯವಿಲ್ಲ. ಹೇಗೆ ಅನ್ಯ ವಿದ್ಯೆಯಲ್ಲಿ ಅನುತ್ತೀರ್ಣರಾಗುತ್ತಾರೊ ಅದೇ ರೀತಿ ಇಲ್ಲಿಯೂ
ಅನುತ್ತೀರ್ಣರಾಗುತ್ತಾರೆ. ಶಿವ ತಂದೆಯನ್ನು ನೆನಪು ಮಾಡುವುದರಿಂದ ಏನಾಗುತ್ತದೆ ಎಂಬುದನ್ನೂ ಸಹ
ತಿಳಿದುಕೊಳ್ಳುವುದಿಲ್ಲ. ತಂದೆಯಾಗಿದ್ದಾರೆ ಎಂದಮೇಲೆ ಅವಶ್ಯವಾಗಿ ತಂದೆಯಿಂದ ಆಸ್ತಿಯು
ಸಿಗಬೇಕಲ್ಲವೆ. ಸ್ವರ್ಗದ ಆಸ್ತಿಯು ಸಿಗಬೇಕಲ್ಲವೆ. ತಂದೆಯು ಒಂದೇ ಬಾರಿ ತಿಳಿಸುತ್ತಾರೆ ಇದರಿಂದ
ನೀವು ದೇವತೆಗಳಾಗುತ್ತೀರಿ. ನೀವು ದೇವತೆಗಳಾದ ನಂತರ ನಂಬರ್ವಾರ್ ಪಾತ್ರ ಅಭಿನಯಿಸಲು ಬರುತ್ತೀರಿ.
ಈ ಎಲ್ಲ ಮಾತುಗಳು ವೃದ್ಧೆಯರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ ಆದ್ದರಿಂದ ತಂದೆಯು ಸಹಜವಾಗಿ
ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ಅರಿತು ತಂದೆಯನ್ನು ನೆನಪು ಮಾಡಿ, ಸಾಕು. ಆ ಶಿವ ತಂದೆಯು
ಎಲ್ಲ ಆತ್ಮರಿಗೆ ತಂದೆಯಾಗಿದ್ದಾರೆ, ಶರೀರದ ತಂದೆಯು ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿದ್ದಾರೆ.
ಶಿವ ತಂದೆಯು ನಿರಾಕಾರ ಆಗಿದ್ದಾರೆ ಅವರನ್ನು ನೆನಪು ಮಾಡುತ್ತಾ ಮಾಡುತ್ತಾ ಪವಿತ್ರರಾಗಿ ಶರೀರ
ಬಿಟ್ಟು ತಂದೆಯ ಬಳಿ ಹೋಗಿ ತಲುಪಬೇಕಾಗಿದೆ. ತಂದೆಯಂತೂ ಎಲ್ಲರಿಗೂ ತಿಳಿಸುತ್ತಾರೆ, ಆದರೆ ಎಲ್ಲರೂ
ಏಕರಸವಾಗಿ ತಿಳಿದುಕೊಳ್ಳುವುದಿಲ್ಲ. ಮಾಯೆ ಮರೆಸಿ ಬಿಡುತ್ತದೆ. ಇದಕ್ಕೆ ಯುದ್ಧವೆಂದು ಹೇಳುತ್ತಾರೆ.
ತಂದೆಯು ಎಷ್ಟು ಚೆನ್ನಾಗಿ ತಿಳಿಸಿಕೊಡುತ್ತಾರೆ, ಎಷ್ಟು ಮಾತುಗಳ ಸ್ಮೃತಿ ತರಿಸುತ್ತಾರೆ.
ಮುಖ್ಯವಾಗಿ ಆಗಿರುವ ತಪ್ಪಿನ ಪಟ್ಟಿಯನ್ನು ಮಾಡಿರಿ, ಒಂದು ತಂದೆಯನ್ನು ಸರ್ವವ್ಯಾಪಿ ಎಂದು
ಹೇಳಿರುವುದು. ಭಗವಾನುವಾಚ - ನಾನು ಸರ್ವವ್ಯಾಪಿ ಅಲ್ಲ. ಸರ್ವವ್ಯಾಪಿಯಂತೂ ಪಂಚ ವಿಕಾರಗಳಾಗಿವೆ.
ಇದು ಅತಿ ದೊಡ್ಡ ತಪ್ಪಾಗಿದೆ. ಗೀತೆಯ ಭಗವಂತನು ಶ್ರೀ ಕೃಷ್ಣನಲ್ಲ, ಪರಮಪಿತ ಪರಮಾತ್ಮ ಆಗಿದ್ದಾರೆ.
ಈ ತಪ್ಪುಗಳನ್ನು ಸುಧಾರಣೆ ಮಾಡಿಕೊಂಡರೆ ದೇವತೆಗಳಾಗುತ್ತೀರಿ. ಆದರೆ ನಾವು ತಿಳಿಸಿಕೊಟ್ಟೆವು, ಈ
ತಪ್ಪುಗಳ ಕಾರಣವೇ ಪಾವನವಾಗಿದ್ದ ಭಾರತ ಪತಿತವಾಗಿದೆ ಎಂದು ಯಾವ ಮಕ್ಕಳು ಬರೆದಿಲ್ಲ. ಅನ್ಯರಿಗೆ
ಅದನ್ನು ಸಹ ತಿಳಿಸಬೇಕಾಗುತ್ತದೆ. ಭಗವಂತನು ಸರ್ವವ್ಯಾಪಿ ಆಗಲು ಹೇಗೆ ಸಾಧ್ಯ? ಭಗವಂತ ಒಬ್ಬರೇ
ಆಗಿದ್ದಾರೆ. ಅವರು ಪಾರಲೌಕಿಕ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಯಾವುದೇ ದೇಹಧಾರಿಗೆ ತಂದೆ,
ಶಿಕ್ಷಕ, ಸದ್ಗುರು ಎಂದು ಹೇಳಲು ಸಾಧ್ಯವಿಲ್ಲ. ಕೃಷ್ಣ ಇಡೀ ಸೃಷ್ಟಿಯಲ್ಲಿ ಎಲ್ಲರಿಗಿಂತ
ಶ್ರೇಷ್ಠನಾಗಿದ್ದಾನೆ. ಸೃಷ್ಟಿ ಸತೋಪ್ರಧಾನವಾದಾಗ ಕೃಷ್ಣನು ಬರುತ್ತಾನೆ. ನಂತರ ಸತೋದಲ್ಲಿ ರಾಮನು
ಬರುತ್ತಾನೆ. ಅದಾದ ನಂತರ ನಂಬರವಾರ್ ಆಗಿ ತಮ್ಮ ತಮ್ಮ ಸಮಯದಲ್ಲಿಯೇ ಬರುತ್ತಾರೆ. ಶಾಸ್ತ್ರಗಳಲ್ಲಿ
ತೋರಿಸುತ್ತಾರೆ ಎಲ್ಲರ ವಿಕಾರಗಳನ್ನು ತೆಗೆದುಕೊಂಡು ಕಂಠವೇ ಕಪ್ಪಾಗಿ ಹೋಯಿತು. ಆದರೆ ಈಗ
ತಿಳಿಸುತ್ತಾ ತಿಳಿಸುತ್ತಾ ಗಂಟಲೇ ಒಣಗಿ ಹೋಗುತ್ತದೆ. ಮಾತು ಎಷ್ಟು ಚಿಕ್ಕದಾಗಿದೆ ಆದರೆ ಮಾಯೆಯು
ಎಷ್ಟು ಶಕ್ತಿಶಾಲಿಯಾಗಿದೆ. ಪ್ರತಿಯೊಬ್ಬರೂ ತಮ್ಮನ್ನು ಕೇಳಿಕೊಳ್ಳಿ, ನಾವು ಇಂತಹ ಗುಣವಂತರು,
ಸತೋಪ್ರಧಾನರಾಗಿದ್ದೇವೆಯೇ? ತಂದೆಯು ತಿಳಿಸುತ್ತಾರೆ - ಎಲ್ಲಿಯವರೆಗೆ ವಿನಾಶವಾಗುವುದಿಲ್ಲವೋ
ಅಲ್ಲಿಯವರೆಗೆ ನೀವು ಕರ್ಮಾತೀತ ಸ್ಥಿತಿಯನ್ನು ತಲುಪಲು ಸಾಧ್ಯವಿಲ್ಲ. ಭಲೆ ಎಷ್ಟೇ ತಲೆ
ಕೆಡಿಸಿಕೊಳ್ಳಿ, ಇಡೀ ಸಮಯ ಶಿವ ತಂದೆಯನ್ನು ನೆನಪು ಮಾಡಿ, ಬೇರೆ ಯಾವ ಮಾತನಾಡಬೇಡಿ, ಸಾಕು, ಬಾಬಾ
ಯುದ್ಧಕ್ಕೆ ಮೊದಲೇ ನಾನು ಕರ್ಮಾತೀತ ಸ್ಥಿತಿಯನ್ನು ಪಡೆದು ತೋರಿಸುತ್ತೇನೆ ಎನ್ನುವವರು ಯಾರಾದರೂ
ಮುಂದೆ ಬರಲಿ - ಆದರೆ ಈ ರೀತಿ ನಾಟಕದಲ್ಲಿಲ್ಲ. ಮೊದಲನೇ ನಂಬರಿನಲ್ಲಿ ಒಬ್ಬರೇ ಹೋಗಬೇಕಾಗಿದೆ, ಇವರೂ
ಸಹ ಹೇಳುತ್ತಾರೆ - ನಾವು ಎಷ್ಟು ತಲೆ ಕೆಡಿಸಿಕೊಳ್ಳಬೇಕಾಗುತ್ತದೆ, ಮಾಯೆಯಂತೂ ಇನ್ನೂ
ಶಕ್ತಿಶಾಕಿಯಾಗಿ ಬರುತ್ತದೆ. ಈ ಬಾಬಾರವರೂ ಸಹ ಹೇಳುತ್ತಾರೆ - ನನ್ನ ಪಕ್ಕದಲ್ಲಿಯೇ ಶಿವ ತಂದೆ
ಕುಳಿತಿದ್ದಾರೆ. ಆದರೂ ಸಹ ನಾನು ನೆನಪು ಮಾಡಲು ಆಗುವುದಿಲ್ಲ, ಮರೆತು ಹೋಗುತ್ತದೆ. ನನ್ನ ಜೊತೆ
ತಂದೆ ಇದ್ದಾರೆ ಎಂದು ತಿಳಿಯುತ್ತೇನೆ, ಆದರೆ ಪುನಃ ನೀವು ಹೇಗೆ ಮಾಡುತ್ತೀರೋ ಹಾಗೆ ನಾನು
ಮಾಡಬೇಕಾಗುತ್ತದೆ. ನಾನು ಜೊತೆಯಲ್ಲಿದ್ದೇನೆಂದು ಹೇಳಿ ಖುಷಿ ಪಡುವುದಲ್ಲ, ನನಗೂ ಶಿವ ತಂದೆ
ಹೇಳುತ್ತಾರೆ - ನಿರಂತರ ನೆನಪು ಮಾಡಿ. ಜೊತೆಯಲ್ಲಿರುವಂತಹ ನೀವು ಶಕ್ತಿಶಾಲಿಯಾಗಿದ್ದೀರಿ. ನಿಮಗೆ
(ಬ್ರಹ್ಮಾ ಅವರಿಗೆ) ಹೆಚ್ಚು ಬಿರುಗಾಳಿಗಳು ಬರುತ್ತವೆ, ಇಲ್ಲವಾದರೆ ನೀವು ಮಕ್ಕಳಿಗೆ ಹೇಗೆ
ತಿಳಿಸುತ್ತೀರಿ? ಎಲ್ಲ ಬಿರುಗಾಳಿಗಳು ಮೊದಲು ನಿಮಗೆ ಬರುತ್ತವೆ, ನೀವೇ ಪಾರು ಮಾಡುತ್ತೀರಿ. ನಾನು
ಶಿವ ತಂದೆಗೆ ಇಷ್ಟು ಸಮೀಪದಲ್ಲಿ ಕುಳಿತಿದ್ದರೂ ಸಹ ಕರ್ಮಾತೀತ ಸ್ಥಿತಿಯನ್ನು
ಪಡೆಯಲಾಗುತ್ತಿಲ್ಲವೆಂದರೆ ಬೇರೆ ಯಾರು ಪಡೆಯಲು ಸಾಧ್ಯ? ಈ ಗುರಿಯು ಬಹಳ ಉನ್ನತವಾಗಿದೆ.
ನಾಟಕದನುಸಾರ ಎಲ್ಲರೂ ಪುರುಷಾರ್ಥ ಮಾಡುತ್ತಿರುತ್ತಾರೆ. ಈ ನಾಟಕವು ಮಾಡಿ ಮಾಡಲ್ಪಟ್ಟಿದೆ.
ನೀವು ಬಹಳ ಪುರುಷಾರ್ಥ ಮಾಡಬೇಕಾಗಿದೆ. ಮುಖ್ಯ ಮಾತು ನಡವಳಿಕೆಯದಾಗಿದೆ. ದೇವತೆಗಳ ನಡವಳಿಕೆ ಮತ್ತು
ಪತಿತ ಮನುಷ್ಯರ ನಡವಳಿಕೆಯಲ್ಲಿ ಎಷ್ಟು ಅಂತರವಿದೆ. ನಿಮ್ಮನ್ನು ವಿಕಾರಿಯಿಂದ ನಿರ್ವಿಕಾರಿಯನ್ನಾಗಿ
ಮಾಡುವವರು ಶಿವ ತಂದೆಯಾಗಿದ್ದಾರೆ ಅಂದಮೇಲೆ ಪುರುಷಾರ್ಥ ಮಾಡಿ ತಂದೆಯನ್ನು ನೆನಪು ಮಾಡಬೇಕು.
ಮರೆಯಬೇಡಿ. ಅಬಲೆಯರಂತೂ ಪಾಪ ಪರವಶರಾಗಿದ್ದಾರೆ ಅರ್ಥಾತ್ ರಾವಣನ ವಶವಾಗಿದ್ದಾರೆ ಅಂದಾಗ ಅವರೇನು
ಮಾಡಲು ಸಾಧ್ಯ? ನೀವು ರಾಮ ಈಶ್ವರನ ವಶವಾಗಿದ್ದೀರಿ. ಅವರು ರಾವಣನ ವಶವಾಗಿದ್ದಾರೆ ಎಂದಾಗ ಯುದ್ಧ
ನಡೆಯುತ್ತದೆ ಆದರೆ ರಾಮ ಮತ್ತು ರಾವಣನ ಯುದ್ಧವಾಗುವುದಿಲ್ಲ. ತಂದೆಯು ನೀವು ಮಕ್ಕಳಿಗೆ ಭಿನ್ನ
ಭಿನ್ನ ಪ್ರಕಾರದಲ್ಲಿ ಪ್ರತಿ ದಿನ ತಿಳಿಸುತ್ತಾರೆ - ಮಕ್ಕಳೇ ನಿಮ್ಮನ್ನು ನೀವು ಸುಧಾರಣೆ
ಮಾಡಿಕೊಳ್ಳಿ. ಹಗಲು ರಾತ್ರಿ ಲೆಕ್ಕವನ್ನು ನೋಡಿ, ಇಡೀ ದಿನದಲ್ಲಿ ಯಾವುದೇ ಆಸುರೀ ಚಲನೆಯಂತೂ
ನಡೆಯಲಿಲ್ಲ ತಾನೇ? ಉದ್ಯಾನವನದಲ್ಲಿ ಹೂವುಗಳು ನಂಬರವಾರಾಗಿಯೇ ಇರುತ್ತವೆ. ಒಂದು ಇನ್ನೊಂದರಂತೆ
ಇರುವುದಿಲ್ಲ. ಎಲ್ಲ ಆತ್ಮರಿಗೆ ತಮ್ಮ ತಮ್ಮದೇ ಪಾತ್ರ ಸಿಕ್ಕಿದೆ. ಪ್ರತಿಯೊಬ್ಬ ಪತ್ರಧಾರಿ ಪಾತ್ರ
ಅಭಿನಯಿಸುತ್ತಾರೆ. ತಂದೆಯು ಬಂದು ಸ್ಥಾಪನೆಯ ಕಾರ್ಯವನ್ನು ಮಾಡಿಯೇ ಮಾಡುತ್ತಾರೆ. ಪ್ರತಿ 5000
ವರ್ಷಗಳ ನಂತರ ಬಂದು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಬೇಹದ್ದಿನ ತಂದೆ ಅಂದಮೇಲೆ ಅವಶ್ಯವಾಗಿ
ಹೊಸ ಪ್ರಪಂಚದ ಆಸ್ತಿಯನ್ನು ಕೊಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾ ಅವರ ನೆನಪು ಪ್ರೀತಿ
ಮತ್ತು ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಜ್ಞಾನದ
ಮೂರನೆ ನೇತ್ರದಿಂದ ಆತ್ಮವನ್ನೇ ನೋಡಬೇಕಾಗಿದೆ. ಶರೀರದ ನೇತ್ರಗಳಿಂದ ನೋಡಲೇಬಾರದು. ಅಶರೀರಿ ಆಗುವ
ಅಭ್ಯಾಸ ಮಾಡಬೇಕು.
2. ತಂದೆಯ ನೆನಪಿನಿಂದ ನಿಮ್ಮ ನಡವಳಿಕೆಯನ್ನು ದಿವ್ಯ ಮಾಡಿಕೊಳ್ಳಬೇಕಾಗಿದೆ. ತಮ್ಮ ಹೃದಯದೊಂದಿಗೆ
ಕೇಳಿಕೊಳ್ಳಬೇಕು - ಎಲ್ಲಿಯವರೆಗೆ ಗುಣವಂತನಾಗಿದ್ದೇನೆ? ನಾವು ಇಡೀ ದಿನದಲ್ಲಿ ಆಸುರೀ ಚಲನೆಯಂತೂ
ನಡೆಯಲಿಲ್ಲವೇ?
ವರದಾನ:
ಹಲ್-ಚಲ್
ಇರುವಾಗ ಬೇಸರ ಆಗುವ ಬದಲು ವಿಶಾಲ ಹೃದಯ ಇಡುವಂತಹ ಸಾಹಸವಾನ್ ಭವ.
ಎಂದೂ ಸಹ ಯಾವುದೇ
ಶಾರೀರಿಕ ಖಾಯಿಲೆ ಇರಲಿ, ಮನಸ್ಸಿನಲ್ಲಿ ಬಿರುಗಾಳಿ ಇರಲಿ, ಹಣದ ಅಥವಾ ಪ್ರವೃತ್ತಿಯಲ್ಲಿ ಹಲ್-ಚಲ್
ಇರಲಿ, ಸೇವೆಯಲ್ಲಿ ಹಲ್-ಚಲ್ ಇರಬಹುದು - ಅಂತಹ ಹಲ್-ಚಲ್ ನಲ್ಲಿಯೂ ಸಹ ಬೇಸರಗೊಳ್ಳಬೇಡಿ. ವಿಶಾಲ
ಹೃದಯದವರಾಗಿ, ಯಾವಾಗ ಲೆಕ್ಕಾಚಾರ ಬಂದು, ಅದರಿಂದ ನೋವುಂಟಾದರೆ ಅದನ್ನು ಯೋಚಿಸಿ-ಯೋಚಿಸಿ,
ಬೇಸರಗೊಂಡು ಅದನ್ನೇ ಹೆಚ್ಚಿಸ ಬೇಡಿ, ಧೈರ್ಯವಂತರಾಗಿ, ಹೀಗೆ ಯೋಚಿಸಬೇಡಿ ಹಾಯ್! ಏನು ಮಾಡಲಿ....
ಧೈರ್ಯಗೆಡಬೇಡಿ. ಸಾಹಸವಂತರಾಗಿ ಆಗ ತಂದೆಯ ಸಹಾಯ ಸ್ವತಃವಾಗಿ ಸಿಗುತ್ತಿರುವುದು.
ಸ್ಲೋಗನ್:
ಬೇರೆಯವರ
ಬಲಹೀನತೆಯನ್ನು ನೋಡುವ ಕಣ್ಣುಗಳನ್ನು ಬಂದ್ ಮಾಡಿ ಮನಸ್ಸನ್ನು ಅಂತರ್ಮುಖಿಯನ್ನಾಗಿ ಮಾಡಿಕೊಳ್ಳಿ.