14.06.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಇಲ್ಲಿ
ನೀವು ಪರಿವರ್ತನೆಯಾಗುವುದಕ್ಕಾಗಿ ಬಂದಿದ್ದೀರಿ, ನೀವು ಆಸುರೀ ಗುಣಗಳನ್ನು ಪರಿವರ್ತಿಸಿ ದೈವೀ
ಗುಣಗಳನ್ನು ಅವಶ್ಯ ಧಾರಣೆ ಮಾಡಬೇಕಾಗಿದೆ”
ಪ್ರಶ್ನೆ:
ನೀವು ಮಕ್ಕಳು
ಯಾವ ವಿದ್ಯೆಯನ್ನು ತಂದೆಯಿಂದಲೇ ಓದುತ್ತೀರಿ, ಬೇರೆ ಯಾರೂ ಓದಿಸಲು ಸಾಧ್ಯವಿಲ್ಲ?
ಉತ್ತರ:
ಮನುಷ್ಯರಿಂದ
ದೇವತೆಗಳಾಗುವ ವಿದ್ಯೆ, ಅಪವಿತ್ರರಿಂದ ಪವಿತ್ರರಾಗಿ ಹೊಸ ಪ್ರಪಂಚದಲ್ಲಿ ಹೋಗುವ ವಿದ್ಯೆಯನ್ನು
ಒಬ್ಬ ತಂದೆಯ ವಿನಃ ಬೇರೆ ಯಾರೂ ಓದಿಸಲು ಸಾಧ್ಯವಿಲ್ಲ. ತಂದೆಯೇ ಸಹಜ ಜ್ಞಾನ ಮತ್ತು ರಾಜಯೋಗದ
ವಿದ್ಯೆಯ ಮೂಲಕ ಪವಿತ್ರ ಪ್ರವೃತ್ತಿ ಮಾರ್ಗವನ್ನು ಸ್ಥಾಪನೆ ಮಾಡುತ್ತಾರೆ.
ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ವಾಸ್ತವದಲ್ಲಿ ಇಬ್ಬರೂ ತಂದೆಯರಾಗಿದ್ದಾರೆ. ಒಬ್ಬರು
ಲೌಕಿಕ ತಂದೆ, ಇನ್ನೊಬ್ಬರು ಬೇಹದ್ದಿನ ತಂದೆ. ಅವರೂ ತಂದೆಯಾಗಿದ್ದಾರೆ, ಇವರೂ ತಂದೆಯಾಗಿದ್ದಾರೆ.
ಬೇಹದ್ದಿನ ತಂದೆಯು ಬಂದು ಓದಿಸುತ್ತಾರೆ. ನಾವು ಹೊಸ ಪ್ರಪಂಚ ಸತ್ಯಯುಗಕ್ಕಾಗಿ ಓದುತ್ತಿದ್ದೇವೆಂದು
ಮಕ್ಕಳಿಗೆ ಗೊತ್ತಿದೆ. ಇಂತಹ ವಿದ್ಯೆಯನ್ನು ಎಲ್ಲಿಯೂ ಓದಲು ಸಾಧ್ಯವಿಲ್ಲ. ನೀವು ಮಕ್ಕಳು ಬಹಳ
ಸತ್ಸಂಗಗಳಂತೂ ಮಾಡಿದ್ದೀರಿ. ನೀವು ಭಕ್ತರಾಗಿದ್ದೀರಲ್ಲವೆ. ಅವಶ್ಯವಾಗಿ ಗುರುಗಳನ್ನು
ಮಾಡಿಕೊಂಡಿದ್ದೀರಿ, ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದೀರಿ. ಆದರೆ ಈಗ ತಂದೆಯು ಬಂದು ಜಾಗೃತ
ಮಾಡಿದ್ದಾರೆ. ತಂದೆಯು ತಿಳಿಸುತ್ತಾರೆ- ಈಗ ಈ ಹಳೆಯ ಪ್ರಪಂಚವು ಬದಲಾಗುವುದಿದೆ, ಈಗ ನಾನು ನಿಮಗೆ
ಹೊಸ ಪ್ರಪಂಚಕ್ಕಾಗಿ ಓದಿಸುತ್ತೇನೆ, ನಿಮ್ಮ ಶಿಕ್ಷಕನಾಗಿದ್ದೇನೆ. ಯಾವುದೇ ಗುರುಗಳಿಗೆ
ಶಿಕ್ಷಕರೆಂದು ಹೇಳುವುದಿಲ್ಲ, ಶಾಲೆಯಲ್ಲಿ ಶಿಕ್ಷಕರಿರುತ್ತಾರೆ, ಅವರಿಂದ ಉತ್ತಮ ಪದವಿಯನ್ನು
ಪಡೆಯುತ್ತಾರೆ. ಆದರೆ ಅವರು ಕೇವಲ ಈ ಜನ್ಮಕ್ಕಾಗಿಯೇ ಓದಿಸುತ್ತಾರೆ ಆದರೆ ಈಗ ನೀವು ಮಕ್ಕಳಿಗೆ
ತಿಳಿದಿದೆ- ನಾವೀಗ ಹೊಸ ಪ್ರಪಂಚಕ್ಕಾಗಿ ಈ ವಿದ್ಯೆಯನ್ನು ಓದುತ್ತಿದ್ದೇವೆ. ಸ್ವರ್ಣೀಮ ಯುಗವೆಂದು
ಹೇಳಲಾಗುತ್ತದೆ. ಈ ಸಮಯದಲ್ಲಿ ಅಸುರೀ ಗುಣಗಳನ್ನು ತೆಗೆದು ದೈವೀ ಗುಣಗಳನ್ನು ಧಾರಣೆ ಮಾಡಬೇಕು,
ಇಲ್ಲಿ ನೀವು ಪರಿವರ್ತಿತರಾಗುವುದಕ್ಕಾಗಿ ಬಂದಿದ್ದೀರಿ. ಹೇಗೆ ಚಾರಿತ್ರ್ಯದ ಮಹಿಮೆಯನ್ನು
ಮಾಡಲಾಗುತ್ತದೆ, ದೇವತೆಗಳ ಮುಂದೆ ಹೋಗಿ ತಾವು ಇಷ್ಟು ಶ್ರೇಷ್ಠರಾಗಿದ್ದೀರಿ, ನಾವು ಹೀಗಿದ್ದೇವೆಂದು
ಹೇಳುತ್ತಾರೆ. ನಿಮಗೀಗ ಗುರಿ-ಉದ್ದೇಶವು ಸಿಕ್ಕಿದೆ, ಭವಿಷ್ಯಕ್ಕಾಗಿ ತಂದೆಯು ಹೊಸ ಪ್ರಪಂಚದ
ಸ್ಥಾಪನೆಯೂ ಮಾಡುತ್ತಾರೆ ಮತ್ತು ನಿಮಗೆ ಓದಿಸುತ್ತಾರೆ. ಅಲ್ಲಂತೂ ವಿಕಾರದ ಮಾತಿರುವುದಿಲ್ಲ. ನೀವು
ರಾವಣನ ಮೇಲೆ ವಿಜಯ ಗಳಿಸುತ್ತೀರಿ. ರಾವಣ ರಾಜ್ಯದಲ್ಲಿ ಎಲ್ಲರೂ ವಿಕಾರಿಗಳಾಗಿದ್ದಾರೆ. ಯಥಾ
ರಾಜ-ರಾಣಿ ತಥಾ ಪ್ರಜಾ. ಈಗ ಪಂಚಾಯತ್ ರಾಜ್ಯವಿದೆ ಅದಕ್ಕೆ ಮೊದಲು ರಾಜ-ರಾಣಿಯರ ರಾಜ್ಯವಿತ್ತು ಆದರೆ
ಅವರು ಪತಿತರಾಗಿದ್ದರು. ಆ ಪತಿತ ರಾಜರ ಬಳಿ ಮಂದಿರಗಳಿರುತ್ತವೆ. ನಿರ್ವಿಕಾರಿ ದೇವತೆಗಳನ್ನು ಪೂಜೆ
ಮಾಡುತ್ತಿದ್ದರು. ನಿಮಗೆ ತಿಳಿದಿದೆ- ಆ ದೇವತೆಗಳು ಇದ್ದು ಹೋಗಿದ್ದಾರೆ, ಈಗ ಅವರ ರಾಜ್ಯವೇ ಇಲ್ಲ.
ತಂದೆಯು ಆತ್ಮರನ್ನು ಪಾವನರನ್ನಾಗಿ ಮಾಡುತ್ತಾರೆ ಮತ್ತು ನೀವು ದೇವತಾ ಶರೀರದವರಾಗಿದ್ದಿರಿ ಎಂಬ
ನೆನಪನ್ನು ತರಿಸುತ್ತಾರೆ. ನಿಮ್ಮ ಆತ್ಮ ಮತ್ತು ಶರೀರವೆರಡೂ ಪವಿತ್ರವಾಗಿತ್ತು, ಈಗ ಪುನಃ ತಂದೆಯು
ಬಂದು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ ಆದ್ದರಿಂದಲೇ ನೀವಿಲ್ಲಿ ಬಂದಿದ್ದೀರಿ.
ತಂದೆಯು ಆದೇಶ ನೀಡುತ್ತಾರೆ - ಮಕ್ಕಳೇ, ಕಾಮ ಮಹಾಶತ್ರುವಾಗಿದೆ. ಇದೇ ನಿಮಗೆ ಆದಿ-ಮಧ್ಯ-ಅಂತ್ಯ
ದುಃಖವನ್ನು ಕೊಡುತ್ತದೆ. ಈಗ ನೀವು ಗೃಹಸ್ಥ ವ್ಯವಹಾರದಲ್ಲಿರುತ್ತಾ ಪಾವನರಾಗಬೇಕಾಗಿದೆ.
ದೇವಿ-ದೇವತೆಗಳು ಪರಸ್ಪರ ಪ್ರೀತಿಯಿಂದ ಇರುತ್ತಿರಲಿಲ್ಲ ಎಂದಲ್ಲ. ಆದರೆ ಅಲ್ಲಿ ವಿಕಾರದ
ದೃಷ್ಟಿಯಿರುವುದಿಲ್ಲ, ಅಲ್ಲಿ ನಿರ್ವಿಕಾರಿಗಳಾಗಿರುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ,
ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನರಾಗಿರಿ. ಹೇಗೆ ನೀವು ಪವಿತ್ರ ಪ್ರವೃತ್ತಿ
ಮಾರ್ಗದವರಾಗಿದ್ದಿರಿ ಅದೇ ರೀತಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಪ್ರತಿಯೊಂದು ಆತ್ಮವು
ಭಿನ್ನ-ಭಿನ್ನ ನಾಮ ರೂಪವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತಾ ಬಂದಿದೆ. ಈಗ ನಿಮ್ಮದು
ಅಂತಿಮ ಪಾತ್ರವಾಗಿದೆ. ಪವಿತ್ರತೆಗಾಗಿ ಬಹಳ ತಬ್ಬಿಬ್ಬಾಗುತ್ತಾರೆ- ಏನು ಮಾಡುವುದು, ಹೇಗೆ
ಸಂಗಾತಿಯಾಗಿ ನಡೆಯುವುದು. ಸಂಗಾತಿಯಾಗಿರುವುದರ ಅರ್ಥವೇನಾಗಿದೆ? ಇದು ಬಹಳ ಸಹಜ. ಹೇಗೆ ವಿದೇಶದಲ್ಲಿ
ವೃದ್ಧರಾದಾಗ ತಮ್ಮನ್ನು ನೋಡಿಕೊಳ್ಳಲು ವಿವಾಹ ಮಾಡಿಕೊಳ್ಳುತ್ತಾರೆ. ಹೀಗೆ ಅನೇಕರಿದ್ದಾರೆ,
ಬ್ರಹ್ಮಾಚಾರಿಯಾಗಿರುವುದನ್ನೇ ಇಚ್ಛಿಸುತ್ತಾರೆ. ಸನ್ಯಾಸಿಗಳ ಮಾತೇ ಬೇರೆಯಾಗಿದೆ. ಗೃಹಸ್ಥ
ವ್ಯವಹಾರದಲ್ಲಿ ಇರುವವರೂ ಸಹ ವಿವಾಹವಾಗದೇ ಇರುವುದನ್ನು ಇಚ್ಛಿಸುವವರೂ ಸಹ ಅನೇಕರಿದ್ದಾರೆ. ವಿವಾಹ
ಮಾಡಿಕೊಳ್ಳುವುದು ನಂತರ ಮಕ್ಕಳು-ಮರಿಯನ್ನು ಸಂಭಾಲನೆ ಮಾಡುವುದು, ಹೀಗೆ ತಾವೇ
ಸಿಕ್ಕಿಹಾಕಿಕೊಳ್ಳುವ ಜಾಲವನ್ನು ಹರಡುವುದಾದರೂ ಹೇಗೆ! ಇಂತಹವರು ಅನೇಕರು ಇಲ್ಲಿಯೂ ಬರುತ್ತಾರೆ.
ಬ್ರಹ್ಮಚಾರಿಯಾಗಿರುತ್ತ 40 ವರ್ಷಗಳಾಯಿತು. ಇದರ ನಂತರ ಇನ್ನೇನು ವಿವಾಹ ಮಾಡಿಕೊಳ್ಳುವುದೆಂದು ಹೇಳಿ
ಸ್ವತಂತ್ರವಾಗಿರಲು ಬಯಸುತ್ತಾರೆ. ತಂದೆಯು ಅಂತಹವರನ್ನು ನೋಡಿ ಖುಷಿಯಾಗುತ್ತಾರೆ. ಇದಂತೂ
ಬಂಧನಮುಕ್ತವಾಯಿತು, ಇನ್ನು ಉಳಿದದ್ದು ಶರೀರದ ಬಂಧನ ಅದರಲ್ಲಿ ದೇಹ ಸಹಿತ ಎಲ್ಲವನ್ನೂ
ಮರೆಯಬೇಕಾಗಿದೆ, ಕೇವಲ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾವುದೇ ದೇಹಧಾರಿ ಕ್ರಿಸ್ತ
ಮೊದಲಾದವರನ್ನು ನೆನಪು ಮಾಡಬಾರದು. ನಿರಾಕಾರ ಶಿವನಂತೂ ದೇಹಧಾರಿಯಲ್ಲ. ಅವರ ಹೆಸರಾಗಿದೆ ಶಿವ.
ಶಿವನ ಮಂದಿರವೂ ಇದೆ. ಆತ್ಮಕ್ಕೆ 84 ಜನ್ಮಗಳ ಪಾತ್ರವು ಸಿಕ್ಕಿದೆ. ಇದು ಅವಿನಾಶಿ ನಾಟಕವಾಗಿದೆ.
ಇದರಲ್ಲಿ ಯಾವುದೂ ಬದಲಾಗುವುದಿಲ್ಲ.
ನಿಮಗೆ ಗೊತ್ತಿದೆ- ಮೊಟ್ಟ ಮೊದಲು ನಮ್ಮ ಧರ್ಮ, ಕರ್ಮ ಯಾವುದು ಶ್ರೇಷ್ಠವಾಗಿತ್ತು, ಅದೂ ಸಹ ಈಗ
ಭ್ರಷ್ಟವಾಗಿ ಬಿಟ್ಟಿದೆ. ಅಂದರೆ ದೇವತಾ ಧರ್ಮವೇ ಸಮಾಪ್ತಿಯಾಗಿದೆ ಎಂದಲ್ಲ. ದೇವತೆಗಳು ಸರ್ವಗುಣ
ಸಂಪನ್ನರೆಂದು ಹಾಡುತ್ತಾರೆ. ಲಕ್ಷ್ಮೀ-ನಾರಾಯಣ ಇಬ್ಬರೂ ಪವಿತ್ರವಾಗಿದ್ದರು, ಪವಿತ್ರ ಪ್ರವೃತ್ತಿ
ಮಾರ್ಗವಿತ್ತು. ಈಗ ಅಪವಿತ್ರ ಪ್ರವೃತ್ತಿ ಮಾರ್ಗವಾಗಿದೆ. 84 ಜನ್ಮಗಳಲ್ಲಿ ಭಿನ್ನ ನಾಮ-ರೂಪ
ಬದಲಾಗುತ್ತಾ ಬಂದಿದೆ. ತಂದೆಯು ತಿಳಿಸಿದ್ದಾರೆ- ಮಧುರಾತಿ ಮಧುರ ಮಕ್ಕಳೇ, ನೀವು ತಮ್ಮ ಜನ್ಮಗಳನ್ನು
ಅರಿತುಕೊಂಡಿಲ್ಲ, ನಾನು ನಿಮಗೆ 84 ಜನ್ಮಗಳ ಕಥೆಯನ್ನು ತಿಳಿಸುತ್ತೇನೆ ಅಂದಮೇಲೆ ಮೊದಲ ಜನ್ಮದಿಂದ
ಹಿಡಿದು ತಿಳಿಸಬೇಕಾಗುತ್ತದೆ. ನೀವು ಪವಿತ್ರವಾಗಿದ್ದಿರಿ, ಈಗ ವಿಕಾರಿಗಳಾಗಿದ್ದೀರಿ. ಆದ್ದರಿಂದ
ದೇವತೆಗಳ ಮುಂದೆ ಹೋಗಿ ತಲೆ ಬಾಗುತ್ತೀರಿ. ಕ್ರಿಶ್ಚಿಯನ್ನರು ಕ್ರಿಸ್ತನ ಮುಂದೆ, ಬೌದ್ಧಿಯರು
ಬುದ್ಧನ ಮುಂದೆ, ಸಿಖ್ಖರು ಗುರುನಾನಕನ ದರ್ಬಾರಿನ ಮುಂದೆ ಹೋಗಿ ತಲೆ ಬಾಗುತ್ತಾರೆ. ಇದರಿಂದ ಇವರು
ಯಾವ ಪಂಥದವರೆಂದು ತಿಳಿದು ಬರುತ್ತದೆ. ನಿಮ್ಮನ್ನಂತೂ ಇವರು ಹಿಂದೂಗಳೆಂದು ಹೇಳಿ ಬಿಡುತ್ತಾರೆ. ಆದಿ
ಸನಾತನ ದೇವಿ-ದೇವತಾ ಧರ್ಮವು ಎಲ್ಲಿ ಹೋಯಿತೆಂದು ಯಾರಿಗೂ ಗೊತ್ತಿಲ್ಲ, ಪ್ರಾಯಲೋಪವಾಗಿ ಬಿಟ್ಟಿದೆ.
ಭಾರತದಲ್ಲಿ ಬಹಳಷ್ಟು ಚಿತ್ರಗಳನ್ನು ಮಾಡಿದ್ದಾರೆ. ಮನುಷ್ಯರದು ಅನೇಕ ಮತಗಳಿವೆ, ಶಿವನಿಗೂ ಅನೇಕ
ಹೆಸರುಗಳನ್ನಿಟ್ಟಿದ್ದಾರೆ. ಮೂಲತಃ ಅವರ ಹೆಸರು ಒಂದೇ ಆಗಿದೆ- ಶಿವ. ಅವರು ಪುನರ್ಜನ್ಮವನ್ನು
ತೆಗೆದುಕೊಂಡಿದ್ದರಿಂದ ಅವರ ಹೆಸರುಗಳು ಬದಲಾಗುತ್ತಾ ಹೋಗುತ್ತವೆ ಎಂದೂ ಸಹ ಅಲ್ಲ. ಮನುಷ್ಯರದು
ಅನೇಕ ಮತಗಳಾಗಿವೆ ಆದ್ದರಿಂದ ಅನೇಕ ಹೆಸರುಗಳನ್ನಿಡುತ್ತಾರೆ. ಶ್ರೀನಾಥ ದ್ವಾರದಲ್ಲಿ ಹೋದಾಗ
ಅಲ್ಲಿಯೂ ಸಹ ಅದೇ ಲಕ್ಷ್ಮೀ-ನಾರಾಯಣರು ಕುಳಿತಿದ್ದಾರೆ, ಜಗನ್ನಾಥ ಮಂದಿರದಲ್ಲಿಯೂ ಸಹ ಅದೇ
ಮೂರ್ತಿಯಿದೆ. ಆದರೆ ಭಿನ್ನ-ಭಿನ್ನ ಹೆಸರುಗಳನ್ನಿಟ್ಟಿದ್ದಾರೆ. ನೀವು ಸೂರ್ಯವಂಶಿಯರಾಗಿದ್ದಾಗ ಪೂಜೆ
ಇತ್ಯಾದಿಯನ್ನು ಮಾಡುತ್ತಿರಲಿಲ್ಲ. ನೀವು ಇಡೀ ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದಿರಿ,
ಸುಖಿಯಾಗಿದ್ದಿರಿ, ಶ್ರೀಮತದನುಸಾರ ಶ್ರೇಷ್ಠ ರಾಜ್ಯವನ್ನು ಸ್ಥಾಪನೆ ಮಾಡಿದ್ದಿರಿ ಅದಕ್ಕೆ
ಸುಖಧಾಮವೆಂದು ಹೇಳಲಾಗುತ್ತದೆ. ಮತ್ತ್ಯಾರೂ ಸಹ ನಮಗೆ ತಂದೆಯು ಓದಿಸುತ್ತಾರೆ ಮತ್ತು ಮನುಷ್ಯರಿಂದ
ದೇವತೆಗಳನ್ನಾಗಿ ಮಾಡುತ್ತಾರೆಂದು ಹೇಳಲು ಸಾಧ್ಯವಿಲ್ಲ. ಅದರ ಸಾಕ್ಷಿಗಳೂ ಇವೆ, ಅವಶ್ಯವಾಗಿ ಅವರದೇ
ರಾಜ್ಯವಿತ್ತು ಅಲ್ಲಿ ಕೋಟೆಗಳಿರುವುದಿಲ್ಲ. ಕೋಟೆಯನ್ನು ರಕ್ಷಣೆಗಾಗಿ ನಿರ್ಮಿಸುತ್ತಾರೆ. ಈ
ದೇವಿ-ದೇವತೆಗಳ ರಾಜ್ಯದಲ್ಲಿ ಕೋಟೆ ಇತ್ಯಾದಿಗಳು ಇರಲಿಲ್ಲ. ಏಕೆಂದರೆ ಅಲ್ಲಿ ಆಕ್ರಮಣ ಮಾಡುವವರು
ಯಾರೂ ಇರುವುದಿಲ್ಲ. ಈಗ ನಿಮಗೆ ಗೊತ್ತಿದೆ, ನಾವು ಅದೇ ದೇವಿ-ದೇವತಾ ಧರ್ಮದಲ್ಲಿ
ವರ್ಗವಾಗುತ್ತಿದ್ದೇವೆ, ಅದಕ್ಕಾಗಿ ರಾಜಯೋಗದ ವಿದ್ಯೆಯನ್ನು ಓದುತ್ತಿದ್ದೇವೆ, ರಾಜ್ಯಭಾಗ್ಯವನ್ನು
ಪಡೆಯಬೇಕಾಗಿದೆ. ಭಗವಾನುವಾಚ ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ. ಈಗಂತೂ ಯಾರೂ
ರಾಜ-ರಾಣಿಯರಿಲ್ಲ ಎಷ್ಟೊಂದು ಜಗಳವಾಡುತ್ತಾ-ಹೊಡೆದಾಡುತ್ತಾ ಇರುತ್ತಾರೆ. ಇದು ಕಲಿಯುಗ ಕಬ್ಬಿಣಕ್ಕೆ
ಸಮಾನವಾದ ಪ್ರಪಂಚವಾಗಿದೆ. ನೀವು ಸ್ವರ್ಣೀಮ ಯುಗದಲ್ಲಿದ್ದಿರಿ, ಈಗ ಪುರುಷೋತ್ತಮ ಸಂಗಮಯುಗದಲ್ಲಿ
ನಿಂತಿದ್ದೀರಿ. ತಂದೆಯು ನಿಮ್ಮನ್ನು ಮೊದಲನೇ ನಂಬರಿನಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ,
ಎಲ್ಲರ ಕಲ್ಯಾಣ ಮಾಡುತ್ತಾರೆ. ನೀವು ಮಕ್ಕಳಿಗೂ ಗೊತ್ತಿದೆ- ನಮ್ಮ ಕಲ್ಯಾಣವೂ ಆಗುತ್ತದೆ, ಮೊಟ್ಟ
ಮೊದಲು ನಾವು ಅವಶ್ಯವಾಗಿ ಸತ್ಯಯುಗದಲ್ಲಿ ಬರುತ್ತೇವೆ ಬಾಕಿ ಯಾವ-ಯಾವ ಧರ್ಮದವರಿದ್ದಾರೆಯೋ
ಅವರೆಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ- ಎಲ್ಲರೂ ಪವಿತ್ರರೂ
ಆಗಬೇಕಾಗಿದೆ, ನೀವಂತೂ ಪವಿತ್ರದೇಶದ ನಿವಾಸಿಗಳಾಗಿದ್ದೀರಿ, ಅದಕ್ಕೆ ನಿರ್ವಾಣಧಾಮವೆಂದು
ಹೇಳಲಾಗುತ್ತದೆ. ವಾಣಿಯಿಂದ ದೂರ ಕೇವಲ ಅಶರೀರಿ ಆತ್ಮಗಳಾಗಿರುತ್ತೀರಿ, ತಂದೆಯ ವಿನಃ ನಾನು
ನಿಮ್ಮನ್ನು ನಿರ್ವಾಣಧಾಮ, ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆಂದು ಹೇಳುವವರು ಯಾರೂ ಇಲ್ಲ.
ಅವರಂತೂ ನಾವು ಬ್ರಹ್ಮತತ್ವದಲ್ಲಿ ಲೀನವಾಗುತ್ತೇವೆಂದು ಹೇಳುತ್ತಾರೆ. ನೀವು ಮಕ್ಕಳಿಗೆ ಗೊತ್ತಿದೆ-
ಈಗ ಇದು ತಮೋಪ್ರಧಾನ ಪ್ರಪಂಚವಾಗಿದೆ, ಇದರಲ್ಲಿ ನಿಮಗೆ ಯಾವುದೇ ಸುಖದ ಅನುಭವವಾಗುವುದಿಲ್ಲ.
ಆದ್ದರಿಂದ ಹೊಸ ಪ್ರಪಂಚದ ಸ್ಥಾಪನೆ ಮತ್ತು ಹಳೆಯ ಪ್ರಪಂಚದ ವಿನಾಶಕ್ಕಾಗಿ ಭಗವಂತನೇ ಇಲ್ಲಿ
ಬರಬೇಕಾಗುತ್ತದೆ ಶಿವ ಜಯಂತಿಯನ್ನೂ ಸಹ ಇಲ್ಲಿಯೇ ಆಚರಿಸುತ್ತಾರೆ. ಅಂದಮೇಲೆ ಬಂದು ಏನು ಮಾಡುತ್ತಾರೆ?
ಯಾರಾದರೂ ತಿಳಿಸಲಿ. ಜಯಂತಿಯನ್ನು ಆಚರಿಸುತ್ತಾರೆಂದರೆ ಅವರು ಅವಶ್ಯವಾಗಿ ಬರುತ್ತಾರಲ್ಲವೆ.
ರಥದಲ್ಲಿ ವಿರಾಜಮಾನವಾಗುತ್ತಾರೆ. ಇದಕ್ಕೆ ಅವರು ಕುದುರೆ ಗಾಡಿಯ ರಥವನ್ನು ತೋರಿಸಿದ್ದಾರೆ. ತಂದೆಯು
ತಿಳಿಸುತ್ತಾರೆ- ನಾನು ಯಾವ ರಥದಲ್ಲಿ ಸವಾರಿ ಮಾಡುತ್ತೇನೆ ಎಂಬುದನ್ನು ಮಕ್ಕಳಿಗೆ ತಿಳಿಸುತ್ತೇನೆ
ನಂತರ ಈ ಜ್ಞಾನವು ಪ್ರಾಯಃಲೋಪವಾಗಿ ಬಿಡುತ್ತದೆ. ಇವರ 84 ಜನ್ಮಗಳ ಅಂತ್ಯದಲ್ಲಿ ತಂದೆಗೆ
ಬರಬೇಕಾಗುತ್ತದೆ. ಈ ಜ್ಞಾನವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಜ್ಞಾನವು ದಿನ ಮತ್ತು ಭಕ್ತಿಯು
ರಾತ್ರಿಯಾಗಿದೆ. ಕೆಳಗಿಳಿಯುತ್ತಲೇ ಇರುತ್ತಾರೆ, ಭಕ್ತಿಯದು ಎಷ್ಟೊಂದು ಆಡಂಬರವಿದೆ. ಕುಂಭಮೇಳ
ಇನ್ನೂ ಮುಂತಾದ ಮೇಳಗಳು ಆಗುತ್ತಿರುತ್ತವೆ ಆದರೆ ಈಗ ನೀವು ಪವಿತ್ರರಾಗಿ ಹೊಸ ಪ್ರಪಂಚದಲ್ಲಿ
ಹೋಗಬೇಕಾಗಿದೆ ಎಂದು ತಂದೆಯ ವಿನಃ ಯಾರೂ ಹೇಳುವುದಿಲ್ಲ. ಇದನ್ನು ತಂದೆಯೇ ತಿಳಿಸಿ ಕೊಡುತ್ತಾರೆ-
ಮಕ್ಕಳೇ, ಇದು ಸಂಗಮಯುಗವಾಗಿದೆ, ಕಲ್ಪದ ಹಿಂದೆ ಸಿಕ್ಕಿತ್ತು. ಅದರಿಂದ ಮನುಷ್ಯರಿಂದ
ದೇವತೆಗಳಾಗಿದ್ದಿರಿ, ಸದ್ಗುರು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಎಂಬ ಗಾಯನವೂ ಇದೆ ಅಂದಮೇಲೆ
ಅವಶ್ಯವಾಗಿ ತಂದೆಯೇ ಮಾಡುವರಲ್ಲವೆ! ನಿಮಗೂ ತಿಳಿದಿದೆ- ನಾವು ಅಪವಿತ್ರ ಗೃಹಸ್ಥಧರ್ಮದವರಾಗಿದ್ದೆವು,
ಈಗ ತಂದೆಯು ಬಂದು ಮತ್ತೆ ಪವಿತ್ರ ಪ್ರವೃತ್ತಿ ಮಾರ್ಗದವರನ್ನಾಗಿ ಮಾಡುತ್ತಾರೆ, ನೀವು ಬಹಳ
ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಶ್ರೇಷ್ಠಾತಿ ಶ್ರೇಷ್ಠ ತಂದೆಯು ಎಷ್ಟು ಶ್ರೇಷ್ಠರನ್ನಾಗಿ
ಮಾಡುತ್ತಾರೆ. ತಂದೆಯದು ಶ್ರೀ ಶ್ರೀ- ಶ್ರೇಷ್ಠಾತಿ ಶ್ರೇಷ್ಠ ಮತವಾಗಿದೆ. ನಾವು
ಶ್ರೇಷ್ಠರಾಗುತ್ತೇವೆ, ಶ್ರೀ ಶ್ರೀಯ ಅರ್ಥವು ಯಾರಿಗೂ ಗೊತ್ತಿಲ್ಲ. ಇದು ಒಬ್ಬ ಶಿವ ತಂದೆಯದೇ
ಬಿರುದಾಗಿದೆ ಆದರೆ ಅವರು (ಮನುಷ್ಯರು) ತಮ್ಮನ್ನು ಶ್ರೀ ಶ್ರೀ ಎಂದು ಹೇಳಿಕೊಳ್ಳುತ್ತಾರೆ,
ಮಾಲೆಯನ್ನೂ ಜಪಿಸಲಾಗುತ್ತದೆ. ಮಾಲೆಯೂ ಸಹ 108ರದಾಗಿದೆ, ಇದನ್ನು ಅವರು 16,108ರದನ್ನಾಗಿ
ಮಾಡಿದ್ದಾರೆ. ಅದರಲ್ಲಿ 8ರದಂತೂ ಬರಲೇಬೇಕಾಗಿದೆ. ನಾಲ್ಕು ಜೋಡಿಗಳು ಮತ್ತು ತಂದೆ. ಅಷ್ಟ ರತ್ನಗಳು
ಮತ್ತು ಒಂಬತ್ತನೆಯವನು ನಾನಾಗಿದ್ದೇನೆ. ಅವರಿಗೆ ರತ್ನವೆಂದು ಹೇಳುತ್ತಾರೆ. ಅವರನ್ನು
ಇಂತಹವರನ್ನಾಗಿ ಮಾಡುವವರು ತಂದೆಯಾಗಿದ್ದಾರೆ. ನೀವು ತಂದೆಯ ಮೂಲಕ ಪಾರಸಬುದ್ಧಿಯವರಾಗುತ್ತೀರಿ.
ರಂಗೂನ್ನಲ್ಲಿ ಒಂದು ಸರೋವರವಿದೆ, ಅದರಲ್ಲಿ ಸ್ನಾನ ಮಾಡುವುದರಿಂದ ದೇವತೆಗಳಾಗಿ ಬಿಡುತ್ತಾರೆ ಎಂದು
ಹೇಳುತ್ತಾರೆ. ವಾಸ್ತವದಲ್ಲಿ ಇದು ಜ್ಞಾನ ಸ್ನಾನವಾಗಿದೆ. ಇದರಲ್ಲಿ ನೀವು ದೇವತೆಗಳಾಗಿ ಬಿಡುತ್ತೀರಿ
ಬಾಕಿ ಅವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ನೀರಿನಲ್ಲಿ ಸ್ನಾನ ಮಾಡುವುದರಿಂದ ಎಂದಿಗೂ
ದೇವತೆಗಳಾಗಿ ಬಿಡಲು ಸಾಧ್ಯವಿಲ್ಲ. ಇದೆಲ್ಲವೂ ಭಕ್ತಿಮಾರ್ಗವಾಗಿದೆ. ಏನೇನೋ ಮಾತುಗಳನ್ನು ಬರೆದು
ಬಿಟ್ಟಿದ್ದಾರೆ. ಏನನ್ನೂ ತಿಳಿದುಕೊಳ್ಳುವುದಿಲ್ಲ, ಈಗ ನೀವು ತಿಳಿಯುತ್ತೀರಿ. ನಿಮ್ಮದೇ
ನೆನಪಾರ್ಥವಾಗಿ ದಿಲ್ವಾಡಾ, ಗುರುಶಿಖರ್ ಮೊದಲಾದವುಗಳಿವೆ. ತಂದೆಯು ಬಹಳ ಎತ್ತರದಲ್ಲಿ
ಇರುತ್ತಾರಲ್ಲವೆ. ನಿಮಗೂ ಗೊತ್ತಿದೆ- ತಂದೆ ಮತ್ತು ನಾವಾತ್ಮಗಳು ಎಲ್ಲಿ ನಿವಾಸ ಮಾಡುತ್ತೇವೆಯೋ ಅದು
ಮೂಲವತನವಾಗಿದೆ. ಸೂಕ್ಷ್ಮವತನವಂತೂ ಕೇವಲ ಸಾಕ್ಷಾತ್ಕಾರ ಮಾತ್ರವಾಗಿದೆ. ಅದ್ಯಾವುದೇ ಪ್ರಪಂಚವಲ್ಲ,
ಸೂಕ್ಷ್ಮವತನ ಹಾಗೂ ಮೂಲವತನಕ್ಕಾಗಿ ಈ ವಿಶ್ವದ ಇತಿಹಾಸ ಪುನರಾವರ್ತನೆಯಾಗುತ್ತದೆ ಎಂದು
ಹೇಳುವುದಿಲ್ಲ. ವಿಶ್ವವಂತೂ ಒಂದೇ ಆಗಿದೆ. ಈ ವಿಶ್ವದ ಇತಿಹಾಸವು ಪುನರಾವರ್ತನೆಯಾಗುತ್ತದೆ ಎಂದು
ಹೇಳಲಾಗುತ್ತದೆ.
ವಿಶ್ವದಲ್ಲಿ ಶಾಂತಿಯು ಸ್ಥಾಪನೆಯಾಗಲೆಂದು ಮನುಷ್ಯರು ಹೇಳುತ್ತಾರೆ ಆದರೆ ಆತ್ಮದ ಸ್ವಧರ್ಮವೇ
ಶಾಂತಿಯಾಗಿದೆ ಎಂಬುದನ್ನು ತಿಳಿದುಕೊಂಡಿಲ್ಲ. ಬಾಕಿ ಕಾಡಿನಲ್ಲಿ ಶಾಂತಿ ಸಿಗುತ್ತದೆಯೇ? ನೀವು
ಮಕ್ಕಳಿಗೆ ಸುಖ, ಮತ್ತೆಲ್ಲರಿಗೆ ಶಾಂತಿ ಸಿಗುತ್ತದೆ. ಯಾರೆಲ್ಲರೂ ಬರುತ್ತಾರೆಯೋ ಮೊದಲು
ಶಾಂತಿಧಾಮಕ್ಕೆ ಹೋಗಿ ಸುಖಧಾಮದಲ್ಲಿ ಬರುತ್ತಾರೆ. ಕೆಲವರು ಹೇಳುತ್ತಾರೆ- ನಾವು ಜ್ಞಾನವನ್ನು
ತೆಗೆದುಕೊಳ್ಳುವುದಿಲ್ಲ, ಅಂತ್ಯದಲ್ಲಿ ಬರುತ್ತೇವೆಂದರೆ ಇಷ್ಟೊಂದು ಸಮಯ ಮುಕ್ತಿಧಾಮದಲ್ಲಿರುತ್ತೇವೆ.
ಇದು ಒಳ್ಳೆಯದೇ ಅಲ್ಲವೆ, ಬಹಳ ಸಮಯ ಮುಕ್ತಿಯಲ್ಲಿರುತ್ತೇವೆ. ಇಲ್ಲಿ ಬಹಳ ಎಂದರೆ ಒಂದೆರಡು ಜನ್ಮಗಳ
ಪದವಿಯನ್ನು ಪಡೆಯುತ್ತಾರೆ. ಅದೇನಾಯಿತು? ಹೇಗೆ ಸೊಳ್ಳೆಗಳು ಈಗೀಗ ಬರುತ್ತವೆ ಮತ್ತು ಈಗೀಗ ಸತ್ತು
ಹೋಗುತ್ತವೆ. ಅಂದಾಗ ಒಂದು ಜನ್ಮದಲ್ಲಿ ಇಲ್ಲಿ ಏನು ಸುಖವಿದೆ. ಅದಂತೂ ಯಾವುದೇ ಕೆಲಸಕ್ಕಿಲ್ಲ, ಹೇಗೆ
ಪಾತ್ರವೇ ಇಲ್ಲದಂತಾಯಿತು. ನಿಮ್ಮ ಪಾತ್ರವಂತೂ ಬಹಳ ಶ್ರೇಷ್ಠವಾಗಿದೆ. ನಿಮ್ಮಷ್ಟು ಸುಖವನ್ನು
ಮತ್ತ್ಯಾರೂ ನೋಡಲು ಸಾಧ್ಯವಿಲ್ಲ ಆದ್ದರಿಂದ ಪುರುಷಾರ್ಥ ಮಾಡಬೆಕು, ಮಾಡುತ್ತಲೂ ಇರುತ್ತೀರಿ.
ಕಲ್ಪದ ಮೊದಲೂ ಸಹ ನೀವು ಪುರುಷಾರ್ಥ ಮಾಡಿದ್ದಿರಿ, ತಮ್ಮ ಪುರುಷಾರ್ಥದನುಸಾರ ಪ್ರಾಲಬ್ಧವನ್ನು
ಪಡೆದಿದ್ದೀರಿ. ಪುರುಷಾರ್ಥವಿಲ್ಲದೆ ಪ್ರಾಲಬ್ಧವನ್ನು ಪಡೆಯಲು ಸಾಧ್ಯವಿಲ್ಲ, ಆದ್ದರಿಂದ ಅವಶ್ಯವಾಗಿ
ಪುರುಷಾರ್ಥ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ- ಇದೂ ಸಹ ನಾಟಕವು ಮಾಡಲ್ಪಟ್ಟಿದೆ.
ಪುರುಷಾರ್ಥ ನಡೆಯುತ್ತದೆ ಎಂದಲ್ಲ. ನೀವು ಪುರುಷಾರ್ಥ ಅವಶ್ಯವಾಗಿ ಮಾಡಬೇಕಾಗಿದೆ.
ಪುರುಷಾರ್ಥವಿಲ್ಲದೆ ಏನಾದರೂ ಆಗುವುದೇ! ಕೆಮ್ಮು ತಾನಾಗಿಯೇ ಹೇಗೆ ವಾಸಿಯಾಗುತ್ತದೆ? ಔಷಧಿಯನ್ನು
ತೆಗೆದುಕೊಳ್ಳುವ ಪುರುಷಾರ್ಥವನ್ನಾದರೂ ಮಾಡಬೇಕಾಗುತ್ತದೆ. ಕೆಲಕೆಲವರು ಡ್ರಾಮಾದಲ್ಲಿ ಇದ್ದಂತೆ
ಆಗುತ್ತದೆ ಎಂದು ತಿಳಿದು ಡ್ರಾಮಾದ ಮೇಲೆ ಕುಳಿತು ಬಿಡುತ್ತಾರೆ. ಇಂತಹ ಉಲ್ಟಾ ಜ್ಞಾನವನ್ನು
ಬುದ್ಧಿಯಲ್ಲಿ ತುಂಬಿಕೊಳ್ಳಬಾರದು. ಮಾಯೆಯು ಹೀಗೂ ವಿಘ್ನವನ್ನು ಹಾಕುತ್ತದೆ. ಮಕ್ಕಳು ವಿದ್ಯೆಯನ್ನೇ
ಬಿಟ್ಟು ಬಿಡುತ್ತಾರೆ. ಇದಕ್ಕೆ ಮಾಯೆಯೊಂದಿಗೆ ಸೋಲುವುದು ಎಂದು ಹೇಳಲಾಗುತ್ತದೆ.
ಯುದ್ಧವಾಗಿದೆಯಲ್ಲವೆ. ಮಾಯೆಯೂ ಶಕ್ತಿಶಾಲಿಯಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಶ್ರೇಷ್ಠ
ರಾಜ್ಯವನ್ನು ಸ್ಥಾಪನೆ ಮಾಡುವುದಕ್ಕಾಗಿ ಶ್ರೀಮತದಂತೆ ನಡೆದು ತಂದೆಗೆ ಸಹಯೋಗಿಗಳಾಗಬೇಕಾಗಿದೆ. ಹೇಗೆ
ದೇವತೆಗಳು ನಿರ್ವಿಕಾರಿಗಳಾಗಿದ್ದಾರೆಯೋ ಹಾಗೆಯೇ ಗೃಹಸ್ಥದಲ್ಲಿರುತ್ತಾ ನಿರ್ವಿಕಾರಿಗಳಾಗಬೇಕಾಗಿದೆ.
ಪವಿತ್ರ ಪ್ರವೃತ್ತಿಮಾಡಿಕೊಳ್ಳಬೇಕಾಗಿದೆ.
2. ನಾಟಕದ ಜ್ಞಾನವನ್ನು ಉಲ್ಟಾ ರೂಪದಲ್ಲಿ ಉಪಯೋಗಿಸಬಾರದು. ನಾಟಕವೆಂದು ಹೇಳಿ ಕುಳಿತು ಬಿಡಬಾರದು.
ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಬೇಕು. ಪುರುಷಾರ್ಥದಿಂದ ತಮ್ಮ ಶ್ರೇಷ್ಠ ಪ್ರಾಲಬ್ಧವನ್ನು
ಮಾಡಿಕೊಳ್ಳಬೇಕು.
ವರದಾನ:
ಸ್ನೇಹದ
ಶಕ್ತಿಯಿಂದ ಮಾಯೆಯ ಶಕ್ತಿಯನ್ನು ಸಮಾಪ್ತಿ ಮಾಡುವಂತಹ ಸಂಪೂರ್ಣ ಜ್ಞಾನಿ ಭವ.
ಸ್ನೇಹದಲ್ಲಿ
ಸಮಾವೇಶ ಆಗುವುದೇ ಸಂಪೂರ್ಣ ಜ್ಞಾನವಾಗಿದೆ. ಸ್ನೇಹ ಬ್ರಾಹ್ಮಣ ಜೀವನದ ವರದಾನವಾಗಿದೆ.
ಸಂಗಮಯುಗದಲ್ಲಿ ಸ್ನೇಹ ಸಾಗರ ಸ್ನೇಹದ ಮುತ್ತು-ರತ್ನಗಳನ್ನು ತಟ್ಟೆಗಳಲ್ಲಿ ತುಂಬಿ-ತುಂಬಿ
ಕೊಡುತ್ತಿದ್ದಾರೆ. ಆದ್ದರಿಂದ ಸ್ನೇಹದಲ್ಲಿ ಸಂಪನ್ನರಾಗಿ. ಸ್ನೇಹದ ಶಕ್ತಿಯಿಂದ ಪರಿಸ್ಥಿತಿ ರೂಪಿ
ಬೆಟ್ಟವು ನೀರಿನ ಸಮಾನ ಹಗುರವಾಗಿ ಬಿಡುವುದು. ಮಾಯೆಯ ಎಂತಹದೇ ವಿಕ್ರಾಳ ರೂಪ ಅಥವಾ ರಾಯಲ್ ರೂಪ
ಎದುರಾದರೂ ಸೆಕೆಂಡ್ನಲ್ಲಿ ಸ್ನೇಹ ಸಾಗರನಲ್ಲಿ ಸಮಾವೇಶವಾಗಿ ಬಿಡಿ. ಆಗ ಸ್ನೇಹದ ಶಕ್ತಿಯಿಂದ ಮಾಯೆಯ
ಶಕ್ತಿಯು ಸಮಾಪ್ತಿಯಾಗಿ ಬಿಡುವುದು.
ಸ್ಲೋಗನ್:
ತನು-ಮನ-ಧನ,
ಮನಸ್ಸು-ವಾಣಿ ಮತ್ತು ಕರ್ಮದಿಂದ ತಂದೆಯ ಕರ್ತವ್ಯದಲ್ಲಿ ಸದಾ ಸಹಯೋಗಿಗಳೇ ಯೋಗಿಯಾಗಿದ್ದಾರೆ.