29.12.19    Avyakt Bapdada     Kannada Murli     27.03.85     Om Shanti     Madhuban


ಕರ್ಮಾತೀತ ಸ್ಥಿತಿ


ಇಂದು ಬಾಪ್ದಾದಾರವರು ನಾಲ್ಕೂ ಕಡೆಯಲ್ಲಿರುವ ಮಕ್ಕಳನ್ನು ವಿಶೇಷವಾಗಿ ನೋಡುವುದಕ್ಕಾಗಿ ಪರಿಕ್ರಮಣ ಹಾಕಲು ಹೊರಟರು. ಹೇಗೆ ಭಕ್ತಿಮಾರ್ಗದಲ್ಲಿ ತಾವೆಲ್ಲರೂ ಬಹಳ ಬಾರಿ ಪರಿಕ್ರಮಣ ಹಾಕಿದ್ದೀರಿ. ಅಂದಮೇಲೆ ಬಾಪ್ದಾದಾರವರೂ ಸಹ ಇಂದು ನಾಲ್ಕೂ ಕಡೆಯ ಸತ್ಯ ಬ್ರಾಹ್ಮಣರ ಸ್ಥಾನಗಳ ಪರಿಕ್ರಮಣ ಮಾಡಿದರು. ಎಲ್ಲಾ ಮಕ್ಕಳ ಸ್ಥಾನವನ್ನೂ ನೋಡಿದರು ಮತ್ತು ಸ್ಥಿತಿಯನ್ನೂ ನೋಡಿದರು. ಸ್ಥಾನವು ಭಿನ್ನ-ಭಿನ್ನ ವಿಧಿಪೂರ್ವಕವಾಗಿ ಶೃಂಗಾರಿತವಾಗಿತ್ತು. ಕೆಲವು ಸ್ಥಾನಗಳಿಂದ ಆಕರ್ಷಣೆ ಮಾಡುವಂತದ್ದಾಗಿತ್ತು, ಕೆಲವು ತಪಸ್ಸಿನ ಪ್ರಕಂಪನಗಳಿಂದ ಆಕರ್ಷಣೆ ಮಾಡುವಂತದ್ದಾಗಿತ್ತು. ಕೆಲವು ತ್ಯಾಗ ಮತ್ತು ಶ್ರೇಷ್ಠ ಭಾಗ್ಯ ಅರ್ಥಾತ್ ಸರಳತೆ ಮತ್ತು ಶ್ರೇಷ್ಠತೆ - ಈ ವಾಯುಮಂಡಲದಿಂದ ಆಕರ್ಷಣೆ ಮಾಡುವಂತದ್ದಿತ್ತು. ಕೆಲಕೆಲವು ಸಾಧಾರಣ ಸ್ವರೂಪದಲ್ಲಿಯೂ ಕಾಣಿಸುತ್ತಿತ್ತು. ಎಲ್ಲರೂ ಈಶ್ವರೀಯ ನೆನಪಿನ ಸ್ಥಾನದ ಭಿನ್ನ-ಭಿನ್ನ ರೂಪಗಳನ್ನು ನೋಡಿದರು. ಸ್ಥಿತಿಯನ್ನೇನು ನೋಡಿದರು? ಇದರಲ್ಲಿಯೂ ಭಿನ್ನ-ಭಿನ್ನ ಪ್ರಕಾರದ ಬ್ರಾಹ್ಮಣ ಮಕ್ಕಳ ಸ್ಥಿತಿಯನ್ನು ನೋಡಿದರು. ಸಮಯದನುಸಾರವಾಗಿ ಮಕ್ಕಳ ತಯಾರಿಯು ಎಲ್ಲಿಯವರೆಗೆ ಆಗಿದೆ, ಇದನ್ನು ನೋಡುವುದಕ್ಕಾಗಿ ಬ್ರಹ್ಮಾ ತಂದೆಯು ಹೊರಟಿದ್ದರು. ಬ್ರಹ್ಮಾ ತಂದೆಯು ಹೇಳಿದರು - ಮಕ್ಕಳು ಸರ್ವ ಬಂಧನಗಳಿಂದ ಬಂಧನ ಮುಕ್ತ, ಯೋಗ ಯುಕ್ತ, ಜೀವನ್ಮುಕ್ತ ಎವರೆಡಿಯಿದ್ದಾರೆ. ಕೇವಲ ಸಮಯದ ನಿರೀಕ್ಷಣೆಯಲ್ಲಿದ್ದಾರೆ. ಇಂತಹ ತಯಾರಿಯಿದೆಯೇ? ತಯಾರಿ ಆಗಿ ಬಿಟ್ಟಿದೆ, ಕೇವಲ ಸಮಯದ ನಿರೀಕ್ಷಣೆಯಿದೆಯೇ? ಬಾಪ್ದಾದಾರವರ ಆತ್ಮಿಕ ವಾರ್ತಾಲಾಪ ನಡೆಯಿತು. ಶಿವ ತಂದೆಯು ಹೇಳಿದರು - ಪರಿಕ್ರಮಣ ಹಾಕಿ ನೋಡಿದಾಗ ಎಲ್ಲಿಯವರೆಗೆ ಬಂಧನಮುಕ್ತರಾಗಿದ್ದಾರೆ? ಯೋಗಯುಕ್ತರು ಎಲ್ಲಿಯವರೆಗೆ ಆಗಿದ್ದಾರೆ? ಏಕೆಂದರೆ ಬಂಧನಮುಕ್ತ ಆತ್ಮರೇ ಜೀವನ್ಮುಕ್ತತೆಯ ಅನುಭವ ಮಾಡಬಹುದು. ಯೋಗಯುಕ್ತ ಅರ್ಥಾತ್ ಬಂಧನಗಳಿಂದ ಆಚೆಯಿರುವುದು. ಒಂದುವೇಳೆ ಯಾವುದೇ ಪ್ರಕಾರದ ಚಿಕ್ಕ ಪುಟ್ಟ ಅಥವಾ ಸೂಕ್ಷ್ಮ ಮನಸ್ಸಿನಿಂದ ಅಥವಾ ಕರ್ಮದಿಂದ ಅಲ್ಪಕಾಲದ ಯಾವುದೇ ಆಶ್ರಯದಲ್ಲಿದ್ದಾರೆಂದರೆ, ಬಂಧನಗಳಿಂದ ಮುಕ್ತರಾಗಲು ಸಾಧ್ಯವಿಲ್ಲ. ಅಂದಾಗ ಇದನ್ನು ನೋಡುವುದಕ್ಕಾಗಿ ಬ್ರಹ್ಮಾ ತಂದೆಯು ವಿಶೇಷವಾಗಿ ಇಂದು ಪರಿಕ್ರಮಣ ಮಾಡಿಸಿದರು. ಏನು ನೋಡಿದರು?

ಮೆಜಾರಿಟಿ ದೊಡ್ಡ-ದೊಡ್ಡ ಬಂಧನಗಳಿಂದ ಮುಕ್ತರಿದ್ದಾರೆ. ಯಾವುದು ಸ್ಪಷ್ಟವಾಗಿ ಕಾಣಿಸುವ ಬಂಧನವಿದೆ ಅಥವಾ ಹಗ್ಗಗಳಿಗೆ, ಅದರಿಂದಂತು ಮುಕ್ತರನ್ನಾಗಿ ಮಾಡಿಕೊಂಡು ಬಿಟ್ಟಿದ್ದಾರೆ. ಆದರೆ ಈಗ ಕೆಲಕೆಲವರು ಅತಿ ಸೂಕ್ಷ್ಮ ಬಂಧನ ಅಥವಾ ಹಗ್ಗಗಳು ಈಗಲೂ ಉಳಿದುಕೊಂಡಿದೆ, ಅದನ್ನು ಸೂಕ್ಷ್ಮ ಬುದ್ಧಿಯಿಲ್ಲದೆ ನೋಡುವುದಾಗಲಿ ಅಥವಾ ತಿಳಿದುಕೊಳ್ಳುವುದಕ್ಕೂ ಸಾಧ್ಯವಿಲ್ಲ. ಹೇಗೆ ಇತ್ತೀಚೆಗೆ ಸೂಕ್ಷ್ಮ ವಸ್ತುಗಳನ್ನು ಶಕ್ತಿಶಾಲಿ ಗ್ಲಾಸಿನ ಮೂಲಕ ನೋಡಬಹುದು. ಸಾಧಾರಣ ರೀತಿಯಿಂದ ನೋಡಲು ಸಾಧ್ಯವಿಲ್ಲ. ಇಂತಹ ಸೂಕ್ಷ್ಮ ಪರಿಶೀಲನಾ ಶಕ್ತಿಯ ಮೂಲಕ ಆ ಸೂಕ್ಷ್ಮ ಬಂಧನಗಳನ್ನು ನೋಡಬಹುದು ಅಥವಾ ಸೂಕ್ಷ್ಮ ಬುದ್ಧಿಯ ಮೂಲಕ ತಿಳಿದುಕೊಳ್ಳಬಹುದು. ಒಂದುವೇಳೆ ಮೇಲ್ಭಾಗವನ್ನಷ್ಟೇ ನೋಡುತ್ತೀರೆಂದರೆ ನೋಡದಿರುವ ಅಥವಾ ತಿಳಿಯದ ಕಾರಣದಿಂದ, ಅವರು ತಮ್ಮನ್ನು ಬಂಧನಮುಕ್ತರೆಂದೇ ತಿಳಿಯುತ್ತಿರುತ್ತಾರೆ. ಬ್ರಹ್ಮಾ ತಂದೆಯು ಇಂತಹ ಸೂಕ್ಷ್ಮ ಆಶ್ರಯವನ್ನು ಪರಿಶೀಲಿಸಿದರು. ಬಹಳ ಹೆಚ್ಚಿನದಾಗಿ ಎಂದರೆ ಎರಡು ಪ್ರಕಾರ ಆಶ್ರಯಗಳನ್ನು ನೋಡಿದರು:-

ಒಂದು - ಅತಿ ಸೂಕ್ಷ್ಮ ಸ್ವರೂಪದಲ್ಲಿ ಒಬ್ಬರಲ್ಲ ಒಬ್ಬರು ಸೇವೆಯ ಜೊತೆಗಾರರ ಸೂಕ್ಷ್ಮ ಆಶ್ರಯವನ್ನು ನೋಡಿದರು, ಇದರಲ್ಲಿಯೂ ಅನೇಕ ಪ್ರಕಾರವಾಗಿ ನೋಡಿದರು. ಸೇವೆಯ ಸಹಯೋಗಿಯಾಗುವ ಕಾರಣ, ಸೇವೆಯನ್ನು ವೃದ್ಧಿ ಮಾಡಲು ನಿಮಿತ್ತರಾಗಿರುವ ಕಾರಣ ಅಥವಾ ವಿಶೇಷವಾಗಿ ಯಾವುದಾದರೂ ವಿಶೇಷತೆ, ವಿಶೇಷ ಗುಣವಿರುವ ಕಾರಣದಿಂದ, ವಿಶೇಷವಾಗಿ ಯಾವುದಾದರೂ ಸಂಸ್ಕಾರವು ಸಿಗುವ ಕಾರಣ ಅಥವಾ ಸಮಯ ಪ್ರತಿ ಸಮಯದಲ್ಲಿ ವಿಶೇಷ ಸಹಯೋಗವನ್ನು ಕೊಡುವ ಕಾರಣ, ಇಂತಹ ಕಾರಣಗಳಿಂದ, ಸೇವೆಯ ಜೊತೆಗಾರರಾಗಿದ್ದಾರೆ, ಸಹಯೋಗಿಯಾಗಿದ್ದಾರೆ. ಆದರೆ ವಿಶೇಷವಾಗಿ ಬಾಗುವ ಕಾರಣ ಸೂಕ್ಷ್ಮ ಸೆಳೆತದ ರೂಪವಾಗಿ ಬಿಡುತ್ತದೆ. ಇದರ ಪರಿಣಾಮವೇನಾಗುವುದು? ಇದು ಬಾಬಾರವರ ಕೊಡುಗೆಯಾಗಿದೆ ಎನ್ನುವುದು ಮರೆತು ಬಿಡುತ್ತಾರೆ. ತಿಳಿಯುತ್ತಾರೆ - ಇವರು ಬಹಳ ಒಳ್ಳೆಯ ಸಹಯೋಗಿಯಾಗಿದ್ದಾರೆ, ಒಳ್ಳೆಯ ವಿಶೇಷತಾ ಸ್ವರೂಪರಿದ್ದಾರೆ, ಗುಣವಂತರಾಗಿದ್ದಾರೆ. ಆದರೆ ಸಮಯ ಪ್ರತಿ ಸಮಯದಲ್ಲಿ ತಂದೆಯು ಇಂತಹ ಒಳ್ಳೆಯ ಕಾರ್ಯವನ್ನು ಮಾಡಿದರೆನ್ನುವುದು ಮರೆತು ಹೋಗುತ್ತದೆ. ಸಂಕಲ್ಪದಲ್ಲಿಯೂ ಯಾವುದಾದರೊಂದು ಆತ್ಮನ ಕಡೆ ಬುದ್ಧಿಯ ಬಾಗುವಿಕೆಯಿದೆಯೆಂದರೆ, ಆ ಬಾಗುವಿಕೆಯು ಆಶ್ರಯವಾಗಿ ಬಿಡುತ್ತದೆ. ಅಂದಮೇಲೆ ಸಾಕಾರ ರೂಪದಲ್ಲಿ ಸಹಯೋಗಿಯಾಗುವ ಕಾರಣದಿಂದ ಸಮಯದಲ್ಲಿ ತಂದೆಗೆ ಬದಲು ಮೊದಲು ಅವರ ನೆನಪು ಬರುವುದು. ಎರಡು-ನಾಲ್ಕು ನಿಮಿಷಗಳೂ ಸಹ ಒಂದುವೇಳೆ ಸ್ಥೂಲ ಆಶ್ರಯವು ಸ್ಮೃತಿಯಲ್ಲಿ ಬಂದಿತೆಂದರೆ, ತಂದೆಯ ಆಶ್ರಯದ ನೆನಪು ಆ ಸಮಯದಲ್ಲಿರುತ್ತದೆಯೇ? ಇನ್ನೊಂದು ಮಾತು - ಒಂದುವೇಳೆ ಎರಡು-ನಾಲ್ಕು ನಿಮಿಷಕ್ಕಾದರೂ ನೆನಪಿನ ಯಾತ್ರೆಯ ಲಿಂಕ್ ತುಂಡಾಗಿ ಬಿಟ್ಟಿತೆಂದರೆ, ತುಂಡಾದ ನಂತರ ಜೋಡಿಸಲು ಮತ್ತೆ ಪರಿಶ್ರಮ ಪಡಬೇಕಾಗುತ್ತದೆ. ಏಕೆಂದರೆ ನಿರಂತರದಲ್ಲಿ ಅಂತರವಾಗಿ ಬಿಟ್ಟಿತಲ್ಲವೆ! ಹೃದಯದಲ್ಲಿ ಹೃದಯರಾಮನ ಬದಲು ಮತ್ತ್ಯಾರದೋ ಕಡೆಗೆ, ಯಾವುದೇ ಕಾರಣದಿಂದಾದರೂ ಹೃದಯವು ಬಾಗುತ್ತದೆ, ಇದಕ್ಕಿಂತಲೂ ಮಾತನಾಡುವುದು ಚೆನ್ನಾಗಿದೆಯೆನಿಸುತ್ತದೆ, ಇದಕ್ಕಿಂತಲೂ ಕುಳಿತುಕೊಳ್ಳುವುದು ಇಷ್ಟವಾಗುತ್ತದೆ. "ಇವರಿಂದಲೇ", ಈ ಶಬ್ಧ ಎಂದರೆ ದಾಲ್ ಮೆ ಕಾಲ್ ಅಂದರೆ ಹೀನತೆಯು ಬಂದಿತು. ಹಾಗೆ ನೋಡಿದರೆ ಎಲ್ಲರೂ ಪ್ರಿಯವೆನಿಸುತ್ತಾರೆ, ಆದರೆ ಇವರಿಗಿಂತಲೂ ಹೆಚ್ಚು ಇಷ್ಟವಾಗುತ್ತಾರೆ! ಎಲ್ಲರೊಂದಿಗೆ ಆತ್ಮಿಕ ಸ್ನೇಹವನ್ನಿಡುವುದು, ಮಾತನಾಡುವುದು ಅಥವಾ ಸೇವೆಯಲ್ಲಿ ಸಹಯೋಗವನ್ನು ತೆಗೆದುಕೊಳ್ಳುವುದು ಮತ್ತು ಕೊಡುವುದು ಬೇರೆ ಮಾತಾಗಿದೆ. ವಿಶೇಷತೆಯನ್ನು ನೋಡಿ, ಗುಣವನ್ನು ನೋಡಿ ಆದರೆ ಇವರದೇ ಈ ಗುಣವು ಬಹಳ ಚೆನ್ನಾಗಿದೆ, ಇವ “ರೇ'’ ಇದನ್ನು ಮಧ್ಯದಲ್ಲಿ ತರಬೇಡಿ. ಇವ “ರೇ'' ಶಬ್ಧವು ಹೆಚ್ಚು ಕಡಿಮೆ ಮಾಡುತ್ತದೆ, ಇದಕ್ಕೇ ಸೆಳೆತ ಎಂದು ಹೇಳಲಾಗುತ್ತದೆ. ನಂತರ ಭಲೆ ಹೊರ ರೂಪದಲ್ಲಿ ಸೇವೆಯಿರಬಹುದು, ಜ್ಞಾನವಿರಬಹುದು, ಯೋಗವಿರಲಿ ಆದರೆ ಯಾವಾಗ ಇವರಿಂದ “ಲೇ'’ ಯೋಗವನ್ನು ಮಾಡುವುದು, ಇವರದೇ ಯೋಗ ಚೆನ್ನಾಗಿದೆ! ಇದರಿಂದ “ಲೇ'' ಶಬ್ಧವು ಬರಬಾರದು. ಇವರೇ ಸೇವೆಯಲ್ಲಿ ಸಹಯೋಗಿಯಾಗಬಹುದು. ಇವರೇ ಜೊತೆಗಾರರುಬೇಕು..... ಅಂದಮೇಲೆ ಸೆಳೆತದ ಸಂಕೇತವೇನೆಂದು ತಿಳಿದಿರಾ! ಆದ್ದರಿಂದ ಇ”ದೇ'' ತೆಗೆದು ಬಿಡಿ. ಎಲ್ಲರೂ ಒಳ್ಳೆಯವು. ವಿಶೇಷತೆಯನ್ನು ನೋಡಿರಿ. ಸಹಯೋಗಿಯೂ ಆಗಿರಿ, ಮಾಡಿರಿ ಆದರೆ ಮೊದಲು ಸ್ವಲ್ಪವೇ ಆಗುತ್ತದೆ ನಂತರ ವೃದ್ಧಿಯಾಗುತ್ತಾ-ಆಗುತ್ತಾ ಭಯಾನಕವಾಗಿ ಬಿಡುತ್ತದೆ. ನಂತರ ಸ್ವಯಂ ತಾವೇ ಅವರಿಂದ ಹೊರ ಬರಲು ಬಯಸುತ್ತೀರೆಂದರೆ ಹೊರ ಬರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಪರಿಪಕ್ವ ಬಂಧನವಾಗಿ ಬಿಟ್ಟಿರುತ್ತದೆ. ಮೊದಲು ಬಹಳ ಸೂಕ್ಷ್ಮದಲ್ಲಾಗುತ್ತದೆ ನಂತರ ಪರಿಪಕ್ವವಾಗಿ ಬಿಡುತ್ತದೆ, ಮತ್ತೆ ಅದನ್ನು ಬಿಡಿಸಿಕೊಳ್ಳುವುದು ಕಷ್ಟವಾಗಿ ಬಿಡುತ್ತದೆ. ಆಶ್ರಯವು ಒಬ್ಬ ತಂದೆಯದಾಗಿದೆ. ಯಾವುದೇ ಮನುಷ್ಯಾತ್ಮರು ಆಶ್ರಯವಲ್ಲ. ತಂದೆಯವರು ಯಾರನ್ನಾದರೂ ಸಹಯೋಗಿ ನಿಮಿತ್ತರನ್ನಾಗಿ ಮಾಡುತ್ತಾರೆ, ಆದರೆ ಮಾಡುವವರನ್ನೆಂದಿಗೂ ಮರೆಯಬಾರದು. ತಂದೆಯು ಮಾಡಿದರು, ತಂದೆಯು ಮಧ್ಯದಲ್ಲಿ ಬರುವುದರಿಂದ ಎಲ್ಲಿ ತಂದೆಯಿರುತ್ತಾರೆಯೋ ಅಲ್ಲಿ ಪಾಪವಾಗುವುದಿಲ್ಲ! ತಂದೆಯು ಮಧ್ಯದಿಂದ ಹೊರ ಬರುತ್ತಾರೆಂದರೆ ಪಾಪವಾಗಿ ಬಿಡುತ್ತದೆ. ಅಂದಮೇಲೆ ಈ ಆಶ್ರಯದ ಒಂದು ಮಾತಿದೆ.

ಇನ್ನೊಂದು ಮಾತು - ಯಾವುದಾದರೊಂದು ಸಾಕಾರ ಸಾಧನಗಳನ್ನು ಆಶ್ರಯವನ್ನಾಗಿ ಮಾಡಿಕೊಳ್ಳುವುದು. ಸಾಧನಗಳಿದೆಯೆಂದರೆ ಸೇವೆಯಿದೆ. ಸಾಧನಗಳಲ್ಲಿ ಸ್ವಲ್ಪ ಏರುಪೇರಾಗುತ್ತೀರೆಂದರೆ ಸೇವೆಯಲ್ಲಿಯೂ ಏರುಪೇರಾಯಿತು. ಸಾಧನಗಳನ್ನು ಕಾರ್ಯದಲ್ಲಿ ತೊಡಗಿಸುವುದು ಬೇರೆ ಮಾತಾಗಿದೆ. ಆದರೆ ಸಾಧನಗಳಿಗೆ ವಶರಾಗಿ ಸೇವೆ ಮಾಡುವುದು - ಇದು ಸಾಧನಗಳನ್ನು ಆಶ್ರಯವನ್ನಾಗಿ ಮಾಡಿಕೊಳ್ಳುವುದಾಯಿತು. ಸಾಧನಗಳ ಸೇವೆಗೆ ವೃದ್ಧಿಗಾಗಿ ಇದೆ. ಆದ್ದರಿಂದ ಆ ಸಾಧನಗಳನ್ನು ಅದೇ ರೀತಿಯಿಂದ ಕಾರ್ಯದಲ್ಲಿ ತೊಡಗಿಸಿರಿ, ಸಾಧನಗಳನ್ನು ಆಧಾರವನ್ನಾಗಿ ಮಾಡಿಕೊಳ್ಳಬಾರದು. ಆಧಾರವು ಒಬ್ಬ ತಂದೆಯಾಗಿದ್ದಾರೆ, ಸಾಧನವಂತು ವಿನಾಶಿಯಾಗಿದೆ. ವಿನಾಶಿ ಸಾಧನಗಳನ್ನು ಆಧಾರವನ್ನಾಗಿ ಮಾಡಿಕೊಳ್ಳುವುದು ಅರ್ಥಾತ್ ಹೇಗೆ ಸಾಧನಗಳು ವಿನಾಶಿಯೋ, ಹಾಗೆಯೇ ಸ್ಥಿತಿಯೂ ಸಹ ಕೆಲವೊಮ್ಮೆ ಶ್ರೇಷ್ಠ, ಕೆಲವೊಮ್ಮೆ ಮಧ್ಯ ಸ್ಥಿತಿ, ಕೆಲವೊಮ್ಮೆ ಕನಿಷ್ಠದಲ್ಲಿ ಬದಲಾಗುತ್ತಿರುತ್ತದೆ, ಅವಿನಾಶಿ ಏಕರಸ ಸ್ಥಿತಿಯಿರುವುದಿಲ್ಲ. ಹಾಗಾದರೆ ಇನ್ನೊಂದು ಮಾತು - ವಿನಾಶಿ ಸಾಧನಗಳ ಆಶ್ರಯ, ಆಧಾರವೆಂದು ತಿಳಿಯಬಾರದು. ಇದು ನಿಮಿತ್ತವಷ್ಟೇ ಇದೆ, ಸೇವೆಗಾಗಿ ಇದೆ. ಸೇವಾರ್ಥವಾಗಿ ಕಾರ್ಯದಲ್ಲಿ ಉಪಯೋಗಿಸಲಾಯಿತು ಮತ್ತು ಅದರಿಂದ ಭಿನ್ನವಾಗಿ ಬಿಡಿ. ಸಾಧನಗಳ ಆಕರ್ಷಣೆಯಲ್ಲಿ ಮನಸ್ಸು ಆಕರ್ಷಿತವಾಗಬಾರದು. ಹಾಗಾದರೆ ಇವೆರಡು ಪ್ರಕಾರದ ಆಶ್ರಯವು ಸೂಕ್ಷ್ಮ ರೂಪದಲ್ಲಿ ಆಧಾರವನ್ನಾಗಿ ಮಾಡಿಕೊಂಡಿರುವುದನ್ನು ನೋಡಿದೆವು. ಯಾವಾಗ ಕರ್ಮಾತೀತ ಸ್ಥಿತಿಯಾಗಬೇಕು, ಆಗ ಪ್ರತಿಯೊಂದು ವ್ಯಕ್ತಿ, ವಸ್ತು, ಕರ್ಮದ ಬಂಧನಗಳಿಂದ ಅತೀತರಾಗುವುದು, ಭಿನ್ನರಾಗುವುದು - ಇದಕ್ಕೆ ಕರ್ಮಾತೀತ ಸ್ಥಿತಿಯೆಂದು ಹೇಳಲಾಗುತ್ತದೆ. ಕರ್ಮಾತೀತ ಅಂದರೆ ಕರ್ಮದಿಂದ ಭಿನ್ನರಾಗಿ ಬಿಡುವುದಲ್ಲ. ಕರ್ಮದ ಬಂಧನಗಳಿಂದ ಭಿನ್ನರಾಗುವುದು. ಭಿನ್ನರಾಗಿ ಕರ್ಮವನ್ನು ಮಾಡುವುದು ಅರ್ಥಾತ್ ಕರ್ಮದಿಂದ ಭಿನ್ನ. ಕರ್ಮಾತೀತ ಸ್ಥಿತಿ ಅರ್ಥಾತ್ ಬಂಧನಮುಕ್ತ, ಯೋಗಯುಕ್ತ, ಜೀವನ್ಮುಕ್ತ ಸ್ಥಿತಿ!

ಮತ್ತು ವಿಶೇಷ ಮಾತನ್ನು ಇದನ್ನು ನೋಡಿದೆವು - ಸಮಯ ಪ್ರತಿ ಸಮಯದಲ್ಲಿ ಪರಿಶೀಲನಾ ಶಕ್ತಿಯಲ್ಲಿ ಕೆಲಮಕ್ಕಳು ಬಲಹೀನರಾಗಿ ಬಿಡುತ್ತಾರೆ. ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೋಸವನ್ನನುಭವಿಸಿ ಬಿಡುತ್ತಾರೆ. ಪರಿಶೀಲನಾ ಶಕ್ತಿಯಲ್ಲಿ ಬಲಹೀನರಾಗುವ ಕಾರಣವಾಗಿದೆ - ಬುದ್ಧಿಯ ಲಗನ್ ಏಕಾಗ್ರವಾಗಿಲ್ಲ. ಎಲ್ಲಿ ಏಕಾಗ್ರತೆಯಿದೆಯೋ ಅಲ್ಲಿ ಪರಿಶೀಲನಾ ಶಕ್ತಿಯು ಸ್ವತಹವಾಗಿಯೇ ವೃದ್ಧಿಯಾಗುತ್ತದೆ. ಏಕಾಗ್ರತೆ ಅರ್ಥಾತ್ ಒಬ್ಬ ತಂದೆಯ ಜೊತೆ ಸದಾ ಲಗನ್ನಿನಲ್ಲಿ ಮಗ್ನರಾಗಿರುವುದು. ಏಕಾಗ್ರತೆಯ ಚಿಹ್ನೆಯು ಸದಾ ಹಾರುವ ಕಲೆಯ ಅನುಭೂತಿಯ ಏಕರಸ ಸ್ಥಿತಿಯಿರುತ್ತದೆ. ಏಕರಸದ ಅರ್ಥವು ಇದಲ್ಲ - ಅದೇ ಗತಿಯಿರುತ್ತದೆಯೆಂದರೆ ಏಕರಸವಿದೆ ಎಂದು. ಏಕರಸ ಅರ್ಥಾತ್ ಸದಾ ಹಾರುವ ಕಲೆಯ ಅನುಭೂತಿಯಾಗುತ್ತಿರುವುದು, ಇದರಲ್ಲಿ ಏಕರಸ. ನೆನ್ನೆಯೇನಿತ್ತು, ಅದಕ್ಕಿಂತಲೂ ಇಂದು ಶೇಕಡಾವಾರು ವೃದ್ಧಿಯ ಅನುಭವ ಮಾಡುವುದು - ಇದಕ್ಕೆ ಹೇಳಲಾಗುತ್ತದೆ ಹಾರುವ ಕಲೆ. ಅಂದಮೇಲೆ ಸ್ವ ಉನ್ನತಿಗಾಗಿ, ಸೇವೆಯ ಉನ್ನತಿಗಾಗಿ ಪರಿಶೀಲನಾ ಶಕ್ತಿಯ ಅವಶ್ಯಕತೆ ಬಹಳಷ್ಟಿದೆ. ಪರಿಶೀಲಿಸುವ ಶಕ್ತಿಯು ಬಲಹೀನವಾಗಿರುವ ಕಾರಣದಿಂದ, ತನ್ನ ಬಲಹೀನತೆಯನ್ನು ಬಲಹೀನತೆಯೆಂದು ತಿಳಿಯುವುದಿಲ್ಲ. ಇನ್ನೂ ತನ್ನ ಬಲಹೀನತೆಯನ್ನು ಬಚ್ಚಿಡುವುದಕ್ಕಾಗಿ ಸಿದ್ಧ ಮಾಡುವರು, ಇಲ್ಲವೆಂದರೆ ಜಿದ್ದು ಮಾಡುವರು. ಇವೆರಡು ಮಾತುಗಳು ಬಚ್ಚಿಡಲು ವಿಶೇಷ ಸಾಧನವಾಗಿದೆ. ಆಂತರ್ಯದಲ್ಲಿ ಕೆಲವೊಮ್ಮೆ ಅನುಭೂತಿಯೂ ಆಗುತ್ತದೆ ಆದರೆ ಮತ್ತೆ ಪೂರ್ಣ ಪರಿಶೀಲನಾಶಕ್ತಿಯಿಲ್ಲದಿರುವ ಕಾರಣದಿಂದ, ತನ್ನನ್ನು ಸದಾ ರೈಟ್ ಮತ್ತು ಬುದ್ಧಿವಂತನೆಂದು ಸಿದ್ಧ ಮಾಡುವರು. ತಿಳಿಯಿತೆ! ಕರ್ಮಾತೀತರಂತು ಆಗಬೇಕಲ್ಲವೆ. ನಂಬರಂತು ತೆಗೆದುಕೊಳ್ಳಬೇಕಲ್ಲವೆ. ಆದ್ದರಿಂದ ಪರಿಶೀಲನೆ ಮಾಡಿರಿ. ಬಹಳ ಚೆನ್ನಾಗಿ - ಯೋಗಯುಕ್ತರಾಗಿ ಪರಿಶೀಲನಾ ಶಕ್ತಿಯನ್ನು ಧಾರಣೆ ಮಾಡಿಕೊಳ್ಳಿರಿ. ಏಕಾಗ್ರ ಬುದ್ಧಿಯವರಾಗಿ ಮಾಡುತ್ತಾ ನಂತರ ಪರಿಶೀಲನೆ ಮಾಡಿರಿ. ಅದರಿಂದ ಏನೆಲ್ಲಾ ಸೂಕ್ಷ್ಮ ಕೊರತೆಗಳಿವೆ, ಅದು ಸ್ಪಷ್ಟ ರೂಪದಲ್ಲಿ ಕಾಣಿಸುತ್ತದೆ. ಹೀಗಾಗಬಾರದು - ನಾನು ಸರಿಯಿದ್ದೇನೆ, ಬಹಳ ಚೆನ್ನಾಗಿ ನಡೆಯುತ್ತಿರುವೆನು. ಕರ್ಮಾತೀತನೂ ನಾನೇ ಆಗುತ್ತೇನೆ ಮತ್ತು ಯಾವಾಗ ಸಮಯ ಬಂದಿತು, ಆಗ ಹಾರುತ್ತೀರಾ ಅಥವಾ ಕೆಳಗೆ ಬಂದು ಬಿಡುತ್ತೀರಾ! ಆದ್ದರಿಂದ ಈ ಸೂಕ್ಷ್ಮ ಬಂಧನಗಳು ಸಮಯದಲ್ಲಿ ನಂಬರ್ ತೆಗೆದುಕೊಳ್ಳುವುದರಲ್ಲಿ ಅಥವಾ ಜೊತೆ ನಡೆಯುವುದರಲ್ಲಿ ಅಥವಾ ಎವರೆಡಿಯಾಗುವುದರಲ್ಲಿ ಬಂಧನವಾಗಿ ಬಿಡಬಾರದು. ಆದ್ದರಿಂದ ಬ್ರಹ್ಮಾ ತಂದೆಯು ಪರಿಶೀಲನೆ ಮಾಡುತ್ತಿದ್ದರು. ಇದೇನನ್ನು ಆಶ್ರಯವೆಂದು ತಿಳಿಯುತ್ತೀರಿ ಅದು ಆಶ್ರಯವಲ್ಲ. ಆದರೆ ಅದು ರಾಯಲ್ ಕಲೆ (ಕೊರತೆ)ಯಾಗಿದೆ. ಹೇಗೆ ಚಿನ್ನದ ಜಿಂಕೆಯ ಉದಾಹರಣೆಯಿದೆಯಲ್ಲವೆ. ಸೀತೆಯನ್ನು ಎಲ್ಲಿಗೆ ತೆಗೆದುಕೊಂಡು ಹೋಯಿತು! ಆದ್ದರಿಂದ ಚಿನ್ನದ ಜಿಂಕೆ - ಇದು ಬಂಧನವಾಗಿದೆ, ಇದನ್ನು ಚಿನ್ನ ಎಂದು ತಿಳಿಯುವುದು ಎಂದರೆ ತಮ್ಮ ಶ್ರೇಷ್ಠ ಭಾಗ್ಯವನ್ನು ಕಳೆದುಕೊಳ್ಳುವುದು. ಚಿನ್ನವಲ್ಲ ಕಳೆದುಕೊಳ್ಳುವುದಾಯಿತು. ರಾಮನನ್ನು ಕಳೆದುಕೊಂಡಳು, ಅಶೋಕ ವಾಟಿಕೆಯನ್ನು ಕಳೆದುಕೊಂಡಳು.

ಬ್ರಹ್ಮಾ ತಂದೆಗೆ ಮಕ್ಕಳೊಂದಿಗೆ ವಿಶೇಷ ಪ್ರೀತಿಯಿದೆ. ಆದ್ದರಿಂದ ಬ್ರಹ್ಮಾ ತಂದೆಯು ಸದಾ ಮಕ್ಕಳನ್ನು ತನ್ನ ಸಮಾನ ಎವರೆಡಿ ಬಂಧನ ಮುಕ್ತರಾಗಿ ನೋಡಲು ಬಯಸುತ್ತಾರೆ. ಬಂಧನ ಮುಕ್ತರನ್ನಾಗಿ ನೋಡಿದರಲ್ಲವೇ! ಎಷ್ಟು ಸಮಯದಲ್ಲಿ ಎವರೆಡಿಯಾದರು! ಯಾವುದಾದರೂ ಬಂಧನದಲ್ಲಿ ಬಂಧಿಸಿಕೊಂಡರೆ! ಇವರು ಇಂತಹವರು ಎಂದೇನಾದರೂ ನೆನಪು ಬಂದಿತೆ! ಇಂತಹವರು ಸೇವೆಯ ಜೊತೆಗಾರರಾಗಿದ್ದಾರೆ, ನೆನಪು ಬಂದಿತೆ? ಅಂದಮೇಲೆ ಎವರೆಡಿಯ ಪಾತ್ರವು ಕರ್ಮಾತೀತ ಸ್ಥಿತಿಯ ಪಾತ್ರವನ್ನು ನೋಡಿದಿರಲ್ಲವೆ! ಮಕ್ಕಳೊಂದಿಗೆ ಎಷ್ಟು ಪ್ರೀತಿಯಿತ್ತು, ಅಷ್ಟೇ ಪ್ರಿಯ ಮತ್ತು ಭಿನ್ನವಾಗಿ ನೋಡಿದಿರಲ್ಲವೆ! ಕರೆಯು ಬಂದಿತು ಮತ್ತು ಹೊರಟರು. ಇಲ್ಲವೆಂದರೆ ಎಲ್ಲರಿಗಿಂತಲೂ ಮಕ್ಕಳೊಂದಿಗೆ ಪ್ರೀತಿ ಬ್ರಹ್ಮಾರವರದಾಗಿತ್ತಲ್ಲವೆ! ಎಷ್ಟು ಪ್ರಿಯ ಅಷ್ಟು ಭಿನ್ನ. ಭಿನ್ನರಾಗುವುದನ್ನು ನೋಡಿದಿರಲ್ಲವೆ. ಯಾವುದೇ ವಸ್ತು ಅಥವಾ ಭೋಜನವು ಯಾವಾಗ ತಯಾರಾಗಿ ಬಿಡುತ್ತದೆ. ಆಗ ಭಿನ್ನ(ತಳ ಬಿಡುತ್ತದೆ)ವಾಗಿ ಬಿಡುತ್ತದೆಯಲ್ಲವೆ! ಅಂದಮೇಲೆ ಸಂಪೂರ್ಣರಾಗುವುದು ಅರ್ಥಾತ್ ಆಧಾರವನ್ನು ಬಿಡುವುದು. ಆಧಾರ ಬಿಡುವುದು ಅರ್ಥಾತ್ ಭಿನ್ನವಾಗಿಟ್ಟರು. ಆಶ್ರಯವು ಒಂದೇ ಅವಿನಾಶಿ ಆಶ್ರಯದ್ದಾಗಿದೆ. ವ್ಯಕ್ತಿಯನ್ನೂ ಅಲ್ಲ, ವೈಭವವನ್ನೂ ಅಲ್ಲ ಅಥವಾ ವಸ್ತುವನ್ನೂ ಆಶ್ರಯವನ್ನಾಗಿ ಮಾಡಿಕೊಳ್ಳಬಾರದು, ಇದಕ್ಕೇ ಕರ್ಮಾತೀತ ಎಂದು ಹೇಳಲಾಗುತ್ತದೆ. ಎಂದಿಗೂ ಸಹ ಬಚ್ಚಿಟ್ಟುಕೊಳ್ಳಬಾರದು. ಬಚ್ಚಿಡುವುದರಿಂದ ಅದು ಇನ್ನೂ ವೃದ್ಧಿಯಾಗಿ ಬಿಡುತ್ತದೆ. ಮಾತು ದೊಡ್ಡದಾಗಿರುವುದಿಲ್ಲ, ಆದರೆ ಎಷ್ಟು ಬಚ್ಚಿಡಲಾಗುತ್ತದೆಯೋ ಅಷ್ಟು ಮಾತನ್ನು ದೊಡ್ಡದನ್ನಾಗಿ ಮಾಡುತ್ತೀರಿ. ತಮ್ಮನ್ನೆಷ್ಟು ರೈಟ್ ಸಿದ್ಧ ಮಾಡುವ ಪ್ರಯತ್ನ ಮಾಡುತ್ತಾರೆಯೋ ಅಷ್ಟು ಮಾತನ್ನು ಹೆಚ್ಚಿಸುತ್ತಾರೆ. ಎಷ್ಟು ಜಿದ್ದು ಮಾಡುತ್ತಾರೆಯೋ ಅಷ್ಟು ಮಾತುಗಳು ಹೆಚ್ಚಾಗುತ್ತದೆ. ಆದ್ದರಿಂದ ಮಾತನ್ನು ದೊಡ್ಡದನ್ನಾಗಿ ಮಾಡದೆ, ಚಿಕ್ಕ ರೂಪದಿಂದಲೇ ಸಮಾಪ್ತಿ ಮಾಡಿ ಬಿಡಿ. ಅದರಿಂದ ಸಹಜವಾಗುತ್ತದೆ ಮತ್ತು ಖುಷಿಯಾಗುತ್ತದೆ. ಈ ಮಾತಾಯಿತು, ಇದನ್ನೂ ಪಾರು ಮಾಡಿದೆವು, ಇದರಲ್ಲಿಯೂ ವಿಜಯಿಯಾಗುತ್ತೀರೆಂದರೆ ಖುಷಿಯಾಗುತ್ತದೆ. ತಿಳಿಯಿತೆ! ವಿದೇಶದವರು ಕರ್ಮಾತೀತ ಸ್ಥಿತಿಯನ್ನು ಪಡೆಯುವ ಉಮ್ಮಂಗ-ಉತ್ಸಾಹದವರಾಗಿದ್ದೀರಲ್ಲವೆ! ಹಾಗಾದರೆ ಡಬಲ್ ವಿದೇಶಿ ಮಕ್ಕಳೊಂದಿಗೆ ವಿಶೇಷವಾಗಿ ಬ್ರಹ್ಮಾ ತಂದೆಯವರು ಸೂಕ್ಷ್ಮ ಪಾಲನೆಯನ್ನು ಕೊಡುತ್ತಿದ್ದಾರೆ. ಇದು ಪ್ರೀತಿಯ ಪಾಲನೆಯಾಗಿದೆ, ಶಿಕ್ಷಣದ ಎಚ್ಚರಿಕೆಯಲ್ಲ. ತಿಳಿಯಿತೆ! ಏಕೆಂದರೆ ಬ್ರಹ್ಮಾ ತಂದೆಯವರು ತಾವು ಮಕ್ಕಳನ್ನು ವಿಶೇಷ ಆಹ್ವಾನದಿಂದ ಜನ್ಮ ಕೊಟ್ಟರು. ಬ್ರಹ್ಮನ ಸಂಕಲ್ಪದಿಂದ ತಮ್ಮ ಜನ್ಮವಾಯಿತು. ಹೇಳುತ್ತಾರಲ್ಲವೆ - ಬ್ರಹ್ಮನ ಸಂಕಲ್ಪದಿಂದ ಸೃಷ್ಟಿ ರಚನೆಯಾಯಿತು. ಬ್ರಹ್ಮನ ಸಂಕಲ್ಪದಿಂದ ಈ ಬ್ರಾಹ್ಮಣರ ಇಷ್ಟೂ ಸೃಷ್ಟಿಯು ರಚನೆಯಾಯಿತಲ್ಲವೆ. ಅಂದಮೇಲೆ ಬ್ರಹ್ಮನ ಸಂಕಲ್ಪದಿಂದ ಆಹ್ವಾನದಿಂದ ರಚನೆಯಾಗಿರುವ ವಿಶೇಷ ಆತ್ಮರಾಗಿದ್ದೀರಿ. ಮುದ್ದಾದ ಮಗುವಾಗಿ ಬಿಟ್ಟಿರಲ್ಲವೆ. ಬ್ರಹ್ಮಾ ತಂದೆಯು ತಿಳಿಯುತ್ತಾರೆ- ಇವರು ತೀವ್ರ ಪುರುಷಾರ್ಥ ಮಾಡುತ್ತಾ ಫಸ್ಟ್ ಬರುವ ಉಮ್ಮಂಗ-ಉತ್ಸಾಹದವರಾಗಿದ್ದಾರೆ. ವಿದೇಶಿ ಮಕ್ಕಳ ವಿಶೇಷತೆಯಿಂದ ವಿಶೇಷ ಶೃಂಗಾರ ಮಾಡುವ ಮಾತುಗಳು ನಡೆಯುತ್ತಿದೆ. ಪ್ರಶ್ನೆಯನ್ನೂ ಮಾಡುವರು ಮತ್ತೆ ಬೇಗನೇ ತಿಳಿಯುವರು, ವಿಶೇಷ ಬುದ್ಧಿವಂತರಿದ್ದೀರಿ. ಆದ್ದರಿಂದ ತಂದೆಯು ತನ್ನ ಸಮಾನ ಎಲ್ಲಾ ಬಂಧನಗಳಿಂದ ಭಿನ್ನ ಮತ್ತು ಪ್ರಿಯರಾಗುವುದಕ್ಕಾಗಿ ಸೂಚನೆ ಕೊಡುತ್ತಿದ್ದಾರೆ. ಈ ರೀತಿಯಲ್ಲ - ಯಾರು ಸನ್ಮುಖದಲ್ಲಿದ್ದಾರೆಯೋ ಅವರಿಗೆ ತಿಳಿಸುತ್ತಿದ್ದಾರೆ, ಎಲ್ಲಾ ಮಕ್ಕಳಿಗೂ ತಿಳಿಸುತ್ತಿದ್ದಾರೆ. ತಂದೆಯ ಮುಂದೆ ಸದಾ ಎಲ್ಲಾ ಬ್ರಾಹ್ಮಣ ಮಕ್ಕಳು ಭಲೆ ದೇಶ, ಭಲೆ ವಿದೇಶದವರೆಲ್ಲರೂ ಇದ್ದಾರೆ. ಒಳ್ಳೆಯದು - ಇಂದು ಆತ್ಮಿಕ ವಾರ್ತಾಲಾಪ ಮಾಡುತ್ತಿದ್ದಾರೆ. ತಿಳಿಸಿದೆವಲ್ಲವೆ- ಮುಂದಿನ ವರ್ಷಕ್ಕಿಂತ ಈ ವರ್ಷದ ಫಲಿತಾಂಶವು ಬಹಳ ಚೆನ್ನಾಗಿದೆ. ಇದರಿಂದ ಸಿದ್ಧವಾಗಿದೆ - ವೃದ್ಧಿಯನ್ನು ಪಡೆಯುವವರಾಗಿದ್ದಾರೆ. ಹಾರುವ ಕಲೆಯಲ್ಲಿ ಹೋಗುವ ಆತ್ಮರಾಗಿದ್ದೀರಿ. ಯಾರನ್ನು ಯೋಗ್ಯರೆಂದು ನೋಡುತ್ತೇವೆ, ಅವರಿಗೆ ಸಂಪೂರ್ಣ ಯೋಗಿಯನ್ನಾಗಿ ಮಾಡುವ ಸೂಚನೆ ಕೊಡಲಾಗುತ್ತದೆ. ಒಳ್ಳೆಯದು.

ನಿರ್ಮಲಶಾಂತ ದಾದಿಯವರೊಂದಿಗೆ:- ಸದಾ ತಂದೆಯ ಜೊತೆಯಿರುವವರಂತು ಆಗಿಯೇ ಇದ್ದೀರಿ. ಯಾರು ಆದಿಯಿಂದ ತಂದೆಯ ಸಂಗ-ಸಂಗದಲ್ಲಿ ನಡೆಯುತ್ತಿದ್ದಾರೆ, ಅವರಲ್ಲಿ ಸದಾ ಜೊತೆಯ ಅನುಭವವೆಂದಿಗೂ ಸಹ ಕಡಿಮೆಯಾಗಲು ಸಾಧ್ಯವಿಲ್ಲ. ಬಾಲ್ಯದ ಪ್ರತಿಜ್ಞೆಯಿದೆ. ಅಂದಮೇಲೆ ಸದಾ ಜೊತೆಯಿದ್ದೇವೆ ಮತ್ತು ಸದಾ ಜೊತೆ ನಡೆಯುತ್ತೇವೆ. ಅಂದಮೇಲೆ ಸದಾ ಜೊತೆಯ ಪ್ರತಿಜ್ಞೆಯೆಂದಾದರೂ ಹೇಳಿ ಅಥವಾ ವರದಾನವೆಂದಾದರೂ ಹೇಳಿ, ಅದು ಸಿಕ್ಕಿದೆ. ಆದರೂ ಹೇಗೆ ತಂದೆಯು ಪ್ರೀತಿಯ ರೀತಿಯನ್ನು ನಿಭಾಯಿಸಲು ಅವ್ಯಕ್ತದಿಂದ ವ್ಯಕ್ತ ರೂಪದಲ್ಲಿ ಬರುತ್ತಾರೆ, ಹಾಗೆಯೇ ಮಕ್ಕಳೂ ಸಹ ಪ್ರೀತಿಯ ರೀತಿಯನ್ನು ನಿಭಾಯಿಸುವುದಕ್ಕಾಗಿ ತಲುಪಿ ಬಿಡುತ್ತಾರೆ. ಹೀಗೆ ಇದ್ದೀರಲ್ಲವೆ! ಸಂಕಲ್ಪದಲ್ಲೇನು ಆದರೆ ಸ್ವಪ್ನದಲ್ಲಿಯೂ, ಯಾವುದಕ್ಕೆ ಸಬ್ಕಾನ್ಶಿಯಸ್ ಎಂದು ಹೇಳಲಾಗುತ್ತದೆ..... ಆ ಸ್ಥಿತಿಯಲ್ಲಿಯೂ ತಂದೆಯ ಜೊತೆಯನ್ನೆಂದಿಗೂ ಸಹ ಬಿಡಲು ಸಾಧ್ಯವಿಲ್ಲ. ಇಷ್ಟು ಪರಿಪಕ್ವ ಸಂಬಂಧವು ಜೋಡಣೆಯಾಗಿದೆ. ಎಷ್ಟು ಜನ್ಮಗಳ ಸಂಬಂಧವಿದೆ! ಇಡೀ ಕಲ್ಪದ್ದಿದೆ. ಸಂಬಂಧವು ಈ ಜನ್ಮದ ಲೆಕ್ಕದಿಂದ ಇಡೀ ಕಲ್ಪದ್ದೇ ಇರುತ್ತದೆ. ಇವರಂತು ಅಂತಿಮ ಜನ್ಮದಲ್ಲಿ ಕೆಲಕೆಲವು ಮಕ್ಕಳು ಸೇವೆಗಾಗಿ ಎಲ್ಲೆಲ್ಲಿ ಹೋಗಿದ್ದಾರೆ. ಹೇಗೆ ಇವರುಗಳು ವಿದೇಶದಲ್ಲಿ ತಲುಪಿ ಬಿಟ್ಟರು, ತಾವುಗಳು ಸಿಂಧ್ನಲ್ಲಿ ತಲುಪಿ ಬಿಟ್ಟಿರಿ. ಕೆಲವರು ಕೆಲವೊಂದೆಡೆ ತಲುಪಿದಿರಿ, ಕೆಲವರು ಕೆಲವೊಂದೆಡೆ ತಲುಪಿದಿರಿ. ಒಂದುವೇಳೆ ಇವರು ವಿದೇಶಕ್ಕೆ ತಲುಪಿರಲಿಲ್ಲವೆಂದರೆ, ಇಷ್ಟು ಸೇವಾಕೇಂದ್ರಗಳೆಲ್ಲಿ ತೆರೆಯಲಾಗುತ್ತಿತ್ತು. ಒಳ್ಳೆಯದು. ಸದಾ ಜೊತೆಯಿರುವ, ಜೊತೆಯ ಪ್ರತಿಜ್ಞೆಯನ್ನು ನಿಭಾಯಿಸುವ ಪರದಾದಿ ಆಗಿದ್ದೀರಿ! ಬಾಪ್ದಾದಾರವರು ಮಕ್ಕಳ ಸೇವೆಯ ಉಮ್ಮಂಗ-ಉತ್ಸಾಹವನ್ನು ನೋಡುತ್ತಾ ಖುಷಿಯಾಗುತ್ತಾರೆ. ವರದಾನಿ ಆತ್ಮರಾಗಿದ್ದೀರಿ. ಈಗ ನೋಡಿ - ಗುಂಪು ಸೇರುವುದು ಪ್ರಾರಂಭವಾಗಿ ಬಿಟ್ಟಿತು. ಯಾವಾಗ ಇನ್ನೂ ವೃದ್ಧಿಯಾಗುತ್ತದೆಯೋ ಆಗ ಎಷ್ಟು ಗುಂಪಾಗಿ ಬಿಡುತ್ತದೆ. ಈ ವರದಾನಿ ರೂಪದ ವಿಶೇಷತೆಯ ಬುನಾದಿಯು ಬೀಳುತ್ತಿದೆ. ಯಾವಾಗ ಗುಂಪಾಗಿ ಬಿಡುತ್ತದೆ ಮತ್ತೇನು ಮಾಡುವಿರಿ! ವರದಾನ ಕೊಡುವಿರಿ, ದೃಷ್ಟಿ ಕೊಡುವಿರಿ. ಇಲ್ಲಿಂದಲೇ ಚೈತನ್ಯ ಮೂರ್ತಿಗಳು ಪ್ರಸಿದ್ಧವಾಗುವರು. ಹೇಗೆ ಪ್ರಾರಂಭದಲ್ಲಿ ತಾವುಗಳಿಗೆ ಎಲ್ಲರೂ ದೇವಿ-ದೇವತೆಗಳೆಂದು ಹೇಳುತ್ತಿದ್ದರು..... ಅಂತ್ಯದಲ್ಲಿಯೂ ಗುರುತಿಸಿ ದೇವಿ-ದೇವತೆಗಳನ್ನಾಗಿ ಮಾಡುವರು. ‘ಜೈ ದೇವಿ, ಜೈ ದೇವಿ' ಇಲ್ಲಿಂದಲೇ ಪ್ರಾರಂಭವಾಗಿಬಿಡುತ್ತದೆ. ಒಳ್ಳೆಯದು.

ವರದಾನ:  
ಈಶ್ವರೀಯ ವಿಧಾನವನ್ನು ತಿಳಿದು ವಿಧಿಯಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಫಸ್ಟ್ ಡಿವಿಷನ್ನ ಅಧಿಕಾರಿ ಭವ.

ಒಂದು ಹೆಜ್ಜೆಯ ಸಾಹಸವಿದೆಯೆಂದರೆ ಪದಮ ಹೆಜ್ಜೆಗಳ ಸಹಯೋಗ - ಡ್ರಾಮಾದಲ್ಲಿ ಈ ವಿಧಾನದ ವಿಧಿಯು ನೊಂದಣಿಯಾಗಿದೆ. ಒಂದುವೇಳೆ ಈ ವಿಧಿ, ವಿಧಾನದಲ್ಲಿರುವುದಿಲ್ಲವೆಂದರೆ, ಎಲ್ಲರೂ ವಿಶ್ವದ ಮೊದಲ ರಾಜರಾಗಿ ಬಿಡುತ್ತಾರೆ. ನಂಬರ್ವಾರ್ ಆಗುವ ವಿಧಾನವು ಈ ವಿಧಿಯ ಕಾರಣದಿಂದಲೇ ಆಗುತ್ತದೆ. ಅಂದಮೇಲೆ ಎಷ್ಟು ಸಾಧ್ಯವೋ ಅಷ್ಟು ಧೈರ್ಯವನ್ನಿಡಿ ಮತ್ತು ಸಹಯೋಗವನ್ನು ತೆಗೆದುಕೊಳ್ಳಿರಿ. ಭಲೆ ಸಮರ್ಪಿತರಾಗಿರಬಹುದು, ಪ್ರವೃತ್ತಿಯವರೇ ಆಗಿರಬಹುದು - ಅಧಿಕಾರವು ಸಮಾನವಿದೆ. ಆದರೆ ವಿಧಿಯಿಂದ ಸಿದ್ಧಿಯಾಗುತ್ತದೆ. ಈ ಈಶ್ವರೀಯ ವಿಧಾನವನ್ನು ತಿಳಿದುಕೊಂಡು ಹುಡುಗಾಟಿಕೆಯ ಲೀಲೆಯನ್ನು ಸಮಾಪ್ತಿ ಮಾಡಿರಿ, ಆಗ ಫಸ್ಟ್ ಡಿವಿಷನ್ನ ಅಧಿಕಾರವು ಸಿಕ್ಕಿ ಬಿಡುತ್ತದೆ.

ಸ್ಲೋಗನ್:
ಸಂಕಲ್ಪದ ಖಜಾನೆಯ ಪ್ರತಿ ಎಕಾನಮಿಯ(ಉಳಿತಾಯ ಮಾಡುವ) ಅವತಾರರಾಗಿರಿ.