07.03.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಜ್ಞಾನದ ವಿಭಾಗವೇ ಬೇರೆಯಾಗಿದೆ, ಯೋಗದ್ದೇ ಬೇರೆಯಾಗಿದೆ, ಯೋಗದಿಂದ ಆತ್ಮವು ಸತೋಪ್ರಧಾನವಾಗುತ್ತದೆ,
ಯೋಗಕ್ಕಾಗಿ ಏಕಾಂತತೆಯ ಅವಶ್ಯಕತೆಯಿದೆ.”
ಪ್ರಶ್ನೆ:
ಸ್ಥಿರವಾಗಿ
ನೆನಪಿನಲ್ಲಿರುವ ಆಧಾರವೇನಾಗಿದೆ?
ಉತ್ತರ:
ನಿಮ್ಮ ಬಳಿ
ಏನೆಲ್ಲವೂ ಇದೆಯೋ ಎಲ್ಲವನ್ನೂ ಮರೆತು ಹೋಗಿ. ಶರೀರವೂ ನೆನಪಿರಬಾರದು. ಎಲ್ಲವನ್ನೂ ಈಶ್ವರೀಯ
ಸೇವೆಯಲ್ಲಿ ತೊಡಗಿಸಿ. ಇದೇ ಪರಿಶ್ರಮವಾಗಿದೆ. ಈ ಬಲಿಹಾರಿಯಿಂದಲೇ ನೆನಪು ಸ್ಥಿರವಾಗಿರಲು ಸಾಧ್ಯ.
ನೀವು ಮಕ್ಕಳು ಪ್ರೀತಿಯಿಂದ ತಂದೆಯನ್ನು ನೆನಪು ಮಾಡುತ್ತೀರೆಂದರೆ ನೆನಪಿನಿಂದ ನೆನಪು ಸಿಗುತ್ತದೆ.
ತಂದೆಯು ಶಕ್ತಿಯನ್ನು ಕೊಡುತ್ತಾರೆ, ಶಕ್ತಿಯಿಂದಲೇ ಆಯಸ್ಸು ಹೆಚ್ಚುತ್ತದೆ. ಆತ್ಮವು ಸದಾ
ಆರೋಗ್ಯವಂತವಾಗಿ ಬಿಡುತ್ತದೆ.
ಓಂ ಶಾಂತಿ.
ಈಗ ಜ್ಞಾನ ಮತ್ತು ಯೋಗ ಎರಡು ವಿಷಯಗಳಿವೆ. ತಂದೆಯ ಬಳಿ ಬಹಳ ದೊಡ್ಡ ಖಜಾನೆಯಿದೆ, ಅದನ್ನು ಮಕ್ಕಳಿಗೆ
ಕೊಡುತ್ತಾರೆ. ತಂದೆಯನ್ನು ಯಾರು ಹೆಚ್ಚು ನೆನಪು ಮಾಡುತ್ತಾರೆಯೋ ಅವರಿಗೆ ಹೆಚ್ಚಿನ ಶಕ್ತಿಯು
ಸಿಗುತ್ತದೆ. ಏಕೆಂದರೆ ನೆನಪಿನಿಂದ ನೆನಪು ಸಿಗುತ್ತದೆ (ನಾವು ನೆನಪು ಮಾಡಿದರೆ ನಮ್ಮನ್ನು ತಂದೆಯು
ನೆನಪು ಮಾಡುತ್ತಾರೆ) ಇದು ಕಾಯಿದೆಯಾಗಿದೆ, ಏಕೆಂದರೆ ನೆನಪು ಮುಖ್ಯವಾಗಿದೆ. ಜ್ಞಾನವು ಬಹಳ ಇದೆ
ಅಂದರೆ ಇದರ ಅರ್ಥ ನೆನಪು ಮಾಡುತ್ತೇವೆ ಎಂದಲ್ಲ. ಜ್ಞಾನದ ವಿಭಾಗವೇ ಬೇರೆಯಾಗಿದೆ, ಯೋಗವು ಬಹಳ
ದೊಡ್ಡ ಸಬ್ಜೆಕ್ಟ್ ಆಗಿದೆ, ಜ್ಞಾನವು ಅದಕ್ಕಿಂತಲೂ ಕಡಿಮೆ. ಯೋಗದಿಂದ ಆತ್ಮವು ಸತೋಪ್ರಧಾನವಾಗಿ
ಬಿಡುತ್ತದೆ, ಏಕೆಂದರೆ ಬಹಳ ನೆನಪು ಮಾಡುತ್ತಾರೆ. ನೆನಪಿಲ್ಲದೇ ಸತೋಪ್ರಧಾನರಾಗುವುದು ಅಸಂಭವ.
ಮಕ್ಕಳೇ ಇಡೀ ದಿನ ತಂದೆಯನ್ನು ನೆನಪು ಮಾಡದಿದ್ದರೆ ತಂದೆಯೂ ನೆನಪು ಮಾಡುವುದಿಲ್ಲ. ಮಕ್ಕಳು ಬಹಳ
ಚೆನ್ನಾಗಿ ನೆನಪು ಮಾಡುತ್ತಾರೆಂದರೆ ತಂದೆಯದೂ ಸಹ ನೆನಪಿನಿಂದ ನೆನಪು ಸಿಗುತ್ತದೆ (ಯಾದ್ ಸೆ ಯಾದ್
ಮಿಲ್ತಾ ಹೈ). ತಂದೆಯನ್ನು ಸೆಳೆಯುತ್ತಾರೆ. ಇದು ಮಾಡಿ ಮಾಡಲ್ಪಟ್ಟಂತಹ ಆಟವಾಗಿದೆ, ಇದನ್ನು ಬಹಳ
ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ನೆನಪಿಗಾಗಿ ಬಹಳ ಏಕಾಂತವು ಬೇಕು. ತಡವಾಗಿ ಬರುವವರೂ ಸಹ
ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆಂದರೆ ಅದಕ್ಕೆ ಆಧಾರವೂ ನೆನಪಾಗಿದೆ. ಅಂತಹವರಿಗೆ ಬಹಳ
ನೆನಪಿರುತ್ತದೆ, ನೆನಪಿನಿಂದ ನೆನಪು ಸಿಗುತ್ತದೆ. ಯಾವಾಗ ಮಕ್ಕಳು ಬಹಳ ನೆನಪು ಮಾಡುತ್ತಾರೆಯೋ ಆಗ
ತಂದೆಯೂ ಬಹಳ ನೆನಪು ಮಾಡುತ್ತಾರೆ, ಅವರು ಆಕರ್ಷಣೆ ಮಾಡುತ್ತಾರೆ. ಹೇಳುತ್ತಾರಲ್ಲವೆ - ಬಾಬಾ, ದಯೆ
ತೋರಿಸಿ, ಕೃಪೆ ಮಾಡಿ. ಇದರಲ್ಲಿಯೂ ನೆನಪು ಬೇಕು. ಚೆನ್ನಾಗಿ ನೆನಪು ಮಾಡಿದರೆ ತಾನಾಗಿಯೇ
ಆಕರ್ಷಣೆಯಾಗುತ್ತದೆ, ಶಕ್ತಿ ಸಿಗುತ್ತದೆ. ನಾನು ತಂದೆಯನ್ನು ನೆನಪು ಮಾಡುತ್ತೇನೆಂದು ಆತ್ಮಕ್ಕೆ
ವಿಚಾರ ಬರುತ್ತದೆಯೆಂದರೆ ಆ ನೆನಪು ಒಮ್ಮೆಲೆ ಸಂಪನ್ನ ಮಾಡಿ ಬಿಡುತ್ತದೆ. ಜ್ಞಾನವು ಧನವಾಗಿದೆ.
ನೆನಪಿನಿಂದ ಮತ್ತೆ ನೆನಪು ಸಿಗುತ್ತದೆ. ಇದರಿಂದ ಆರೋಗ್ಯವಂತರಾಗಿ ಬಿಡುತ್ತೀರಿ, ಪವಿತ್ರರಾಗಿ
ಬಿಡುತ್ತೀರಿ. ತಂದೆಗೆ ಎಷ್ಟೊಂದು ಶಕ್ತಿಯಿದೆ ಅವರು ಇಡೀ ವಿಶ್ವವನ್ನು ಪವಿತ್ರ ಮಾಡಿ ಬಿಡುತ್ತಾರೆ.
ಆದ್ದರಿಂದ ತಂದೆಯೇ ಬಂದು ಪತಿತರನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಮನುಷ್ಯರಂತೂ ಏನೂ
ತಿಳಿದುಕೊಂಡಿಲ್ಲ ಕೇವಲ ಕೂಗುತ್ತಾ ಕರೆಯುತ್ತಾ ಇರುತ್ತಾರೆ ಮತ್ತು ಸಮಯವನ್ನು ವ್ಯರ್ಥ
ಮಾಡುತ್ತಿರುತ್ತಾರೆ, ತಂದೆಯನ್ನು ಅರಿತುಕೊಂಡೇ ಇಲ್ಲ. ಭಲೇ ನೌಧಾ ಭಕ್ತಿಯನ್ನು ಮಾಡುತ್ತಾರೆ.
ಶಿವನ ಮಂದಿರದಲ್ಲಿ ಹೋಗಿ ಶಿವನಿಗೆ ಬಲಿಯಾಗುತ್ತಾರೆ ಆದರೆ ಏನೂ ಸಿಗುವುದಿಲ್ಲ,ಇನ್ನೂ
ವಿಕರ್ಮಗಳಾಗಲು ಪ್ರಾರಂಭವಾಗುತ್ತದೆ. ಮಾಯೆಯು ಸಿಕ್ಕಿ ಹಾಕಿಸುತ್ತದೆ. ಪ್ರಾಪ್ತಿಯೇನೂ ಇಲ್ಲ. ಈಗ
ನಿಮಗೆ ತಿಳಿದಿದೆ - ಪತಿತ-ಪಾವನ ತಂದೆಯಾಗಿದ್ದಾರೆ, ಅವರಿಗೆ ಬಲಿಹಾರಿಯಾಗಬೇಕು. ಶಿವ-ಶಂಕರ ಒಂದೇ
ಎಂದು ಮನುಷ್ಯರು ತಿಳಿಯುತ್ತಾರೆ. ಇದು ಅಜ್ಞಾನವಾಗಿದೆ, ಇಲ್ಲಿ ತಂದೆಯು ಪದೇ-ಪದೇ ತಿಳಿಸುತ್ತಾರೆ
- ಮನ್ ಮನಾಭವ. ನನ್ನನ್ನು ನೆನಪು ಮಾಡಿದರೆ ನನ್ನನ್ನು ಬಿಟ್ಟು ಬಿಡುತ್ತಾರೆ ಎಂದು ಮಾಯೆಯು
ತಿಳಿಯುತ್ತದೆ. ಮೊದಲಾದುವುದೇನೂ ನೆನಪಿಗೆ ಬರಬಾರದು. ಒಂದು ಕಥೆಯೂ ಇದೆ, ಊರುಗೋಲನ್ನೂ ಸಹ ಬಿಡು
ಎಂದು ಎಲ್ಲವನ್ನೂ ಬಿಡಿಸುತ್ತಾರೆ. ಆದರೆ ಶರೀರವನ್ನು ನೆನಪು ಮಾಡಬೇಡಿ ಎಂಬುದನ್ನೂ ಎಂದಿಗೂ
ಹೇಳುವುದಿಲ್ಲ. ತಂದೆಯು ತಿಳಿಸುತ್ತಾರೆ - ಈ ಶರೀರವು ಹಳೆಯದಾಗಿದೆ. ಇದನ್ನೂ ಮರೆಯಿರಿ, ಭಕ್ತಿ
ಮಾರ್ಗದ ಮಾತುಗಳನ್ನೂ ಬಿಡಿ. ಒಮ್ಮೆಲೆ ಎಲ್ಲವನ್ನೂ ಮರೆತು ಹೋಗಿ ಅಥವಾ ಏನೆಲ್ಲವೂ ಇದೆಯೋ ಅದನ್ನು
ಕಾರ್ಯದಲ್ಲಿ ತೊಡಗಿಸಿ ಆಗಲೇ ನೆನಪು ನಿಲ್ಲುತ್ತದೆ. ಒಂದು ವೇಳೆ ಶ್ರೇಷ್ಠ ಪದವಿಯನ್ನು
ಪಡೆಯಬೇಕೆಂದರೆ ಬಹಳ ಪರಿಶ್ರಮ ಬೇಕು, ಶರೀರವೂ ನೆನಪಿರಬಾರದು. ಅಶರೀರಿಯಾಗಿ ಬಂದಿದ್ದಿರಿ,
ಅಶರೀರಿಯಾಗಿ ಹೋಗಬೇಕು. ತಂದೆಯು ಮಕ್ಕಳಿಗೆ ಓದಿಸುತ್ತಾರೆ, ಇವರಿಗೆ (ಬ್ರಹ್ಮಾ) ಯಾವುದೇ
ಚಿಂತೆಯಿಲ್ಲ, ಇವರಂತೂ ಸರ್ವೀಸ್ ಮಾಡುತ್ತಾರೆ, ತಂದೆಯಲ್ಲಿಯೇ ಜ್ಞಾನವಿದೆಯಲ್ಲವೆ. ಇದು ತಂದೆ
ಮತ್ತು ಮಕ್ಕಳ ಜೊತೆಯ ಆಟವಾಗಿದೆ. ಮಕ್ಕಳೂ ನೆನಪು ಮಾಡುತ್ತಾರೆ, ತಂದೆಯೂ ಕುಳಿತು ಸಕಾಶ
ಕೊಡುತ್ತಾರೆ. ಯಾರಾದರೂ ಕೆಲವರು ಬಹಳ ಸೆಳೆಯುತ್ತಾರೆಂದರೆ ತಂದೆಯು ಕುಳಿತು ಶಕ್ತಿ ಕೊಡುತ್ತಾರೆ.
ಬಹಳ ಸೆಳೆಯದಿದ್ದರೆ ಈ ಬ್ರಹ್ಮಾ ತಂದೆಯು ಮಕ್ಕಳ ಪ್ರತಿ ತಂದೆಯನ್ನು ನೆನಪು ಮಾಡುತ್ತಾರೆ. ಯಾವುದೇ
ಸಮಯದಲ್ಲಿ ಯಾರಿಗಾದರೂ ಶಕ್ತಿ ಕೊಡಬೇಕಾಗುತ್ತದೆಯೆಂದರೆ ನಿದ್ರೆಯೂ ಹೊರಟು ಹೋಗುತ್ತದೆ. ಇಂತಹವರಿಗೆ
ಶಕ್ತಿ ಕೊಡಬೇಕಾಗಿದೆ ಎಂಬ ಚಿಂತೆಯಿರುತ್ತದೆ. ವಿದ್ಯೆಯಿಂದ ಆಯಸ್ಸು ಹೆಚ್ಚುವುದಿಲ್ಲ. ಶಕ್ತಿಯಿಂದ
ಆಯಸ್ಸು ವೃದ್ಧಿಯಾಗುತ್ತದೆ, ಸದಾ ಆರೋಗ್ಯವಂತರಾಗುತ್ತಾರೆ, ಪ್ರಪಂಚದಲ್ಲಿ ಯಾರ ಆಯಸ್ಸಾದರೂ
124-150 ವರ್ಷಗಳಿದ್ದರೆ ಅವಶ್ಯವಾಗಿ ಆರೋಗ್ಯವಂತರಾಗುತ್ತಾರೆ. ಭಕ್ತಿಯು ಬಹಳ ಮಾಡಿರುತ್ತಾರೆ.
ಭಕ್ತಿಯಲ್ಲಿಯೂ ಅಲ್ಪ ಸ್ವಲ್ಪ ಲಾಭವಿದೆ. ನಷ್ಟವಂತೂ ಇಲ್ಲ. ಯಾರು ಭಕ್ತಿಯನ್ನು ಮಾಡುವುದಿಲ್ಲವೋ
ಅವರ ನಡವಳಿಕೆಯೂ ಚೆನ್ನಾಗಿರುವುದಿಲ್ಲ. ಭಕ್ತಿಯಲ್ಲಿ ಭಗವಂತನಲ್ಲಿ ವಿಶ್ವಾಸವಿರುತ್ತದೆ,
ಉದ್ಯೋಗ-ವ್ಯವಹಾರದಲ್ಲಿ ಸುಳ್ಳು-ಪಾಪ ಮಾಡುವುದಿಲ್ಲ. ಕ್ರೋಧ ಬರುವುದಿಲ್ಲ, ಭಕ್ತರಿಗೂ ಮಹಿಮೆಯಿದೆ.
ಭಕ್ತಿಯು ಯಾವಾಗ ಪ್ರಾರಂಭವಾಯಿತೆಂದು ಮನುಷ್ಯರಿಗೆ ಗೊತ್ತೇ ಇಲ್ಲ. ಜ್ಞಾನವಂತೂ ಮೊದಲೇ
ತಿಳಿಯುವುದಿಲ್ಲ. ಭಕ್ತಿಯೂ ಸಹ ಶಕ್ತಿಶಾಲಿಯಾಗುತ್ತಾ ಹೋಗುತ್ತದೆ. ಆದರೂ ಸಹ ಯಾವಾಗ ಜ್ಞಾನದ
ಪ್ರಭಾವವು ಬೀರುತ್ತದೆಯೋ ಆಗ ಭಕ್ತಿಯು ಸಂಪೂರ್ಣ ಬಿಟ್ಟು ಹೋಗುತ್ತದೆ. ಇದು ಸುಖ-ದುಃಖ, ಭಕ್ತಿ
ಮತ್ತು ಜ್ಞಾನದ ಆಟವಾಗಿದೆ. ಸುಖ-ದುಃಖವನ್ನು ಭಗವಂತನೇ ಕೊಡುತ್ತಾರೆಂದು ಮನುಷ್ಯರು ಹೇಳಿ
ಬಿಡುತ್ತಾರೆ. ಅವರನ್ನು ಸರ್ವವ್ಯಾಪಿ ಎಂದು ಹೇಳುತ್ತಾರೆ ಆದರೆ ಸುಖ-ದುಃಖ ಬೇರೆ-ಬೇರೆ
ವಸ್ತುವಾಗಿದೆ. ನಾಟಕವು ನಡೆಯದೇ ಇರುವ ಕಾರಣ ಏನನ್ನೂ ತಿಳಿಯುವುದಿಲ್ಲ. ಇಷ್ಟೆಲ್ಲಾ ಆತ್ಮರು ಒಂದು
ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ ಇದೂ ಸಹ ನಿಮಗೆ ಗೊತ್ತಿದೆ.
ಸತ್ಯಯುಗದಲ್ಲಿ ನೀವು ಆತ್ಮಾಭಿಮಾನಿ ಆಗಿರುತ್ತೀರಿ ಈಗಂತೂ ತಂದೆಯು ಕಲಿಸುತ್ತಾರೆ. ಮಕ್ಕಳೇ
ಆತ್ಮಾಭಿಮಾನಿಗಳಾಗಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು,
ಪವಿತ್ರರಾಗಬೇಕಾಗಿದೆ. ಅಲ್ಲಂತೂ ಪವಿತ್ರ- ಸುಖಧಾಮವಾಗಿರುತ್ತದೆ. ಸುಖದಲ್ಲಿ ಯಾರೂ ನೆನಪು
ಮಾಡುವುದಿಲ್ಲ. ಭಗವಂತನನ್ನು ನೆನಪು ಮಾಡುವುದೇ ದುಃಖದಲ್ಲಿ. ನೋಡಿ, ನಾಟಕವು ಎಷ್ಟು
ವಿಚಿತ್ರವಾಗಿದೆ! ಇದನ್ನು ನೀವೇ ನಂಬರ್ವಾರ್ ತಿಳಿದುಕೊಂಡಿದ್ದೀರಿ. ಪ್ರತಿನಿತ್ಯ ಯಾವ ಜ್ಞಾನ
ಬಿಂದುಗಳನ್ನು ಬರೆದುಕೊಳ್ಳುತ್ತೀರೋ ಅದೂ ಸಹ ಭಾಷಣದ ಸಮಯದಲ್ಲಿ ರಿವೈಜ್ ಮಾಡುವುದಕ್ಕಾಗಿ. ವೈದ್ಯರು,
ವಕೀಲರೂ ಸಹ ವಿಚಾರಗಳನ್ನು ಬರೆದುಕೊಳ್ಳುತ್ತಾರೆ. ಈಗ ನಿಮಗೆ ತಂದೆಯ ಮತ ಸಿಗುತ್ತದೆಯೆಂದರೆ ಅದನ್ನು
ಭಾಷಣ ಮಾಡುವ ಸಮಯದಲ್ಲಿ ರಿವೈಜ್ ಮಾಡಬೇಕು. ಇವರಲ್ಲಂತೂ ತಂದೆಯ ಪ್ರವೇಶತೆಯಾಗಿದೆ. ತಂದೆಯು ನಿಮಗೆ
ತಿಳಿಸುತ್ತಾರೆಂದರೆ ಇವರೂ ಕೇಳುತ್ತಾರೆ. ಶಿವ ತಂದೆಗೆ ವಿಚಾರಗಳನ್ನು ತಿಳಿಸದಿದ್ದರೆ ನಿಮಗೆ
ತಿಳಿಸಲು ನನಗೇನು ಗೊತ್ತಿದೆ. ತಂದೆಯು ತಿಳಿಸುತ್ತಾರೆ - ಇದು ಇವರ ಬಹಳ ಜನ್ಮಗಳ ಅಂತಿಮ
ಜನ್ಮವಾಗಿದೆ. ಬ್ರಹ್ಮಾ ಮತ್ತು ವಿಷ್ಣುವಿನ ಚಿತ್ರವೂ ಇದೆ. ನೀವು ರಾಜಧಾನಿಯಲ್ಲಿ ನಂಬರ್ವಾರ್
ನಡೆಯುತ್ತೀರಿ. ಎಷ್ಟು ನೆನಪು ಮಾಡುತ್ತೀರಿ, ಧಾರಣೆ ಮಾಡುತ್ತೀರಿ ಅಷ್ಟು ಪದವಿ ಪಡೆಯುತ್ತೀರಿ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮಗೆ ಗುಹ್ಯ-ಗುಹ್ಯ ಮಾತುಗಳನ್ನು ತಿಳಿಸುತ್ತೇನೆ. ನೀವು
ಹೊಸ-ಹೊಸ ಜ್ಞಾನದ ವಿಚಾರಗಳನ್ನು ಬರೆದುಕೊಳ್ಳಿ. ಹಳೆಯದು ಕೆಲಸಕ್ಕೆ ಬರುವುದಿಲ್ಲ. ಭಾಷಣದ ನಂತರ ಈ
ವಿಚಾರಗಳನ್ನು ತಿಳಿಸದಿದ್ದರೆ ಬುದ್ಧಿಯಲ್ಲಿ ಚೆನ್ನಾಗಿ ಕುಳಿತುಕೊಳ್ಳುತ್ತಿತ್ತು ಎಂದು ನೆನಪಿಗೆ
ಬರುತ್ತದೆ. ನೀವೆಲ್ಲರೂ ಜ್ಞಾನದ ಸ್ಪೀಕರ್ ಆಗಿದ್ದೀರಿ ಆದರೆ ನಂಬರ್ವಾರ್. ಒಳ್ಳೆಯ
ಮಹಾರಥಿಗಳಿದ್ದಾರೆ, ತಂದೆಯ ಮಾತು ಬೇರೆಯಾಗಿದೆ. ಈ ಬಾಪ್ದಾದಾ ಇಬ್ಬರೂ ಒಟ್ಟಿಗೆ ಇದ್ದಾರೆ, ಮಮ್ಮಾ
ಎಲ್ಲರಿಗಿಂತ ಚೆನ್ನಾಗಿ ತಿಳಿಸುತ್ತಿದ್ದರು. ಮಕ್ಕಳು ಸಂಪೂರ್ಣ ಮಮ್ಮಾರವರ ಸಾಕ್ಷಾತ್ಕಾರವನ್ನು
ನೋಡುತ್ತಿದ್ದರು. ಎಲ್ಲಿ ಅವಶ್ಯಕತೆಯಿರುತ್ತಿತ್ತೋ ಅಲ್ಲಿ ತಂದೆಯೂ ಸಹ ಪ್ರವೇಶ ಮಾಡಿ ತಮ್ಮ ಕೆಲಸ
ಮಾಡಿಸಿಕೊಳ್ಳುತ್ತಿದ್ದರು ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಬಿಡುವಿನ ಸಮಯದಲ್ಲಿ
ವಿದ್ಯಾಭ್ಯಾಸವಿರುತ್ತದೆ, ಇಡೀ ದಿನವಂತೂ ಉದ್ಯೋಗ-ವ್ಯವಹಾರಗಳನ್ನು ಮಾಡುತ್ತೀರಿ, ವಿಚಾರ ಸಾಗರ
ಮಂಥನ ಮಾಡಲು ಬಿಡುವು ಬೇಕು, ಶಾಂತಿ ಬೇಕು, ತಿಳಿದುಕೊಳ್ಳಿ- ಯಾರಿಗಾದರೂ ಶಕ್ತಿ ಕೊಡಬೇಕು.
ಯಾರಾದರೂ ಒಳ್ಳೆಯ ಸೇವೆ ಮಾಡುವ ಮಗುವಾಗಿದ್ದಾರೆಂದರೆ ಅವರಿಗೆ ಸಹಯೋಗ ಕೊಡಬೇಕು. ಅವರ ಆತ್ಮವನ್ನು
ನೆನಪು ಮಾಡಬೇಕಾಗುತ್ತದೆ. ಶರೀರವನ್ನು ನೆನಪು ಮಾಡಿಕೊಂಡು ಮತ್ತೆ ಆತ್ಮವನ್ನು ನೆನಪು ಮಾಡಬೇಕಾಗಿದೆ
- ಈ ಯುಕ್ತಿಯನ್ನು ರಚಿಸಬೇಕಾಗಿದೆ. ಸೇವಾಧಾರಿ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಅವರಿಗೆ ಸಹಯೋಗ
ಕೊಡಬೇಕಾಗಿದೆ. ತಂದೆಯನ್ನು ನೆನಪು ಮಾಡಬೇಕು ಮತ್ತು ತಮ್ಮನ್ನೂ ಸಹ ಆತ್ಮನೆಂದು ತಿಳಿದು ಅವರ
ಆತ್ಮವನ್ನೂ ನೆನಪು ಮಾಡಬೇಕು. ಇದು ಹೇಗೆ ಸಕಾಶ ಕೊಡುವಂತಾಗುತ್ತದೆ? ಕೇವಲ ಒಂದು ಸ್ಥಳದಲ್ಲಿ
ಕುಳಿತು ನೆನಪು ಮಾಡಬೇಕೆಂದಲ್ಲ. ನಡೆಯುತ್ತಾ-ತಿರುಗಾಡುತ್ತಾ ಭೋಜನವನ್ನು ಸ್ವೀಕರಿಸುವಾಗಲೂ
ತಂದೆಯನ್ನು ನೆನಪು ಮಾಡಿ. ಅನ್ಯರಿಗೆ ಶಕ್ತಿ ಕೊಡಬೇಕಾಗುತ್ತದೆಯೆಂದರೆ ರಾತ್ರಿಯಲ್ಲಿಯೂ ಜಾಗೃತರಾಗಿ.
ಮಕ್ಕಳಿಗೆ ತಿಳಿಸಲಾಗಿದೆ - ಮುಂಜಾನೆ ಎದ್ದು ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು
ಆಕರ್ಷಣೆಯಿರುವುದು. ತಂದೆಯು ಶಕ್ತಿಯನ್ನು ಕೊಡುತ್ತಾರೆ. ಮಕ್ಕಳಿಗೆ ಸಕಾಶ ಕೊಡುವುದೇ ಇವರ
ಕೆಲಸವಾಗಿದೆ. ಯಾವಾಗ ಬಹಳ ಶಕ್ತಿಯನ್ನು ಕೊಡುತ್ತಾರೆ. ಮಕ್ಕಳಿಗೆ ಸಕಾಶವನ್ನು ಕೊಡುವುದೇ ಇವರ
ಕೆಲಸವಾಗಿದೆ. ಯಾವಾಗ ಬಹಳ ಶಕ್ತಿಯನ್ನು ಕೊಡಬೇಕಾಗಿದೆಯೋ ಆಗ ಬ್ರಹ್ಮಾ ತಂದೆಯು ಶಿವ ತಂದೆಯನ್ನು
ಬಹಳ ನೆನಪು ಮಾಡುತ್ತಾರೆ. ಆಗ ತಂದೆಯೂ ಅವರಿಗೆ ಶಕ್ತಿ ಕೊಡುತ್ತಾರೆ. ಆತ್ಮವನ್ನು ನೆನಪು
ಮಾಡಿಕೊಂಡು ಸಕಾಶ ಕೊಡುತ್ತಾರೆ. ಈ ಬ್ರಹ್ಮಾ ತಂದೆಯು ಸಕಾಶ ಕೊಡುತ್ತಾರೆ. ಅಂದಾಗ ಇದಕ್ಕೆ ಕೃಪೆ
ಎಂದಾದರೂ ಹೇಳಿ, ಆಶೀರ್ವಾದ ಎಂದಾದರೂ ಹೇಳಿ, ಏನಾದರೂ ಹೇಳಿ. ಸೇವಾಧಾರಿ ಮಕ್ಕಳಿಗೆ ಕಾಯಿಲೆ ಬಂದರೆ
ತಂದೆಗೆ ದಯೆ ಬರುತ್ತದೆ. ರಾತ್ರಿಯಲ್ಲಿ ಜಾಗೃತರಾಗಿಯೂ ಅವರ ಆತ್ಮವನ್ನು ನೆನಪು ಮಾಡುತ್ತಾರೆ
ಏಕೆಂದರೆ ಅವರಿಗೆ ಶಕ್ತಿಯ ಅವಶ್ಯಕತೆಯಿರುತ್ತದೆ. ನೆನಪು ಮಾಡುತ್ತಾರೆಂದರೆ ಅವರಿಗೆ ಪ್ರತಿಫಲವಾಗಿ
ನೆನಪು ಸಿಗುತ್ತದೆ. ಮಕ್ಕಳ ಮೇಲೆ ತಂದೆಗೆ ಬಹಳ ಪ್ರೀತಿಯಿರುತ್ತದೆ ಮತ್ತೆ ಅವರಿಗೂ ಸಹ ನೆನಪು
ತಲುಪುತ್ತದೆ. ಜ್ಞಾನವಂತೂ ಸಹಜವಾಗಿದೆ, ಅದರಲ್ಲಿ ಮಾಯೆಯ ವಿಘ್ನಗಳು ಬರುವುದಿಲ್ಲ. ಮುಖ್ಯವಾದುದು
ನೆನಪಾಗಿದೆ, ಅದರಲ್ಲಿ ಬಹಳ ವಿಘ್ನಗಳು ಬರುತ್ತವೆ. ನೆನಪಿನಿಂದ ಬುದ್ಧಿಯು ಚಿನ್ನದ ಪಾತ್ರೆಯಂತಾಗಿ
ಬಿಡುತ್ತದೆ. ಅದರಲ್ಲಿ ಧಾರಣೆಯಾಗುತ್ತದೆ. ಹುಲಿಯ ಹಾಲು ಚಿನ್ನದ ಪಾತ್ರೆಯಲ್ಲಿಯೇ
ನಿಲ್ಲುತ್ತದೆಯೆಂಬ ಗಾದೆ ಮಾತಿದೆ. ತಂದೆಯ ಈ ಜ್ಞಾನ ಧನಕ್ಕಾಗಿಯೂ ಸಹ ಈ ಚಿನ್ನದ ಪಾತ್ರೆ ಬೇಕು.
ಯಾವಾಗ ನೆನಪಿನ ಯಾತ್ರೆಯಲ್ಲಿರುತ್ತೀರೋ ಆಗ ಬುದ್ಧಿಯು ಚಿನ್ನದ ಸಮಾನ ಸ್ವಚ್ಛವಾಗುತ್ತದೆ. ನೆನಪು
ಮಾಡದಿದ್ದರೆ ಧಾರಣೆಯೂ ಆಗುವುದಿಲ್ಲ. ತಂದೆಯು ಅಂತರ್ಯಾಮಿಯಾಗಿದ್ದಾರೆಂದು ತಿಳಿಯಬೇಡಿ. ಏನಾದರೂ
ಹೇಳಿದರೂ ಅದು ಆಗಿ ಬಿಟ್ಟಿತು - ಇದು ಭಕ್ತಿಮಾರ್ಗದಲ್ಲಿ ಆಗುತ್ತದೆ. ಮಗು ಜನಿಸಿದರೆ ಗುರುವಿನ
ಕೃಪೆಯೆಂದು ಹೇಳುತ್ತಾರೆ. ಒಂದು ವೇಳೆ ಆಗದಿದ್ದರೆ ಇದು ಈಶ್ವರನ ಇಚ್ಛೆಯೆಂದು ಹೇಳುತ್ತಾರೆ.
ರಾತ್ರಿ-ಹಗಲಿನ ಅಂತರವಿದೆ. ತಂದೆಯು ನೀವು ಮಕ್ಕಳಿಗೆ ನಾಟಕದ ರಹಸ್ಯವನ್ನು ಬಹಳ ಚೆನ್ನಾಗಿ
ತಿಳಿಸಿದ್ದಾರೆ. ನೀವೂ ಸಹ ಮೊದಲು ತಿಳಿದುಕೊಂಡಿರಲಿಲ್ಲ. ಇದು ನಿಮ್ಮ ಮರುಜೀವ ಜನ್ಮವಾಗಿದೆ. ಈಗ
ನಿಮಗೆ ತಿಳಿದಿದೆ - ನಾವು ದೇವತೆಗಳಾಗುತ್ತಿದ್ದೇವೆ. ನೀವು ಈ ವಿಷಯದ ಬಗ್ಗೆ ತಿಳಿಸಿ - ಈ
ಲಕ್ಷ್ಮೀ-ನಾರಾಯಣರಿಗೆ ಈ ರಾಜ್ಯವು ಹೇಗೆ ಸಿಕ್ಕಿತು? ಮತ್ತೆ ಹೇಗೆ ಕಳೆದುಕೊಂಡರು? ಪೂರ್ಣ
ಇತಿಹಾಸ-ಭೂಗೋಳವನ್ನು ನಾವು ತಿಳಿಸುತ್ತೇವೆ - ಈ ಬ್ರಹ್ಮಾ ತಂದೆಯೂ ಸಹ ಹೇಳುತ್ತಾರೆ - ನಾನು
ಲಕ್ಷ್ಮೀ-ನಾರಾಯಣರ ಪೂಜೆ ಮಾಡುತ್ತಿದ್ದೆನು, ಗೀತೆ ಓದುತ್ತಿದ್ದೆನು. ಯಾವಾಗ ತಂದೆಯು ಪ್ರವೇಶ
ಮಾಡಿದರೋ ಆಗ ಎಲ್ಲವನ್ನೂ ಬಿಟ್ಟೆನು. ಸಾಕ್ಷಾತ್ಕಾರವಾಗಿದೆ, ಅದರಲ್ಲಿ ತಂದೆಯು ತಿಳಿಸಿದರು -
ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಇದರಲ್ಲಿ ಗೀತೆ ಮೊದಲಾದವುಗಳನ್ನು
ಓದುವ ಮಾತಿಲ್ಲ. ತಂದೆಯು ಇವರಲ್ಲಿ ಕುಳಿತು ಎಲ್ಲವನ್ನೂ ಬಿಡಿಸಿದರು. ಎಂದೂ ಶಿವನ ದರ್ಶನ
ಮಾಡುವುದಕ್ಕೂ ಹೋಗಲಿಲ್ಲ. ಭಕ್ತಿಯ ಮಾತುಗಳು ಒಮ್ಮೆಲೆ ಹಾರಿ ಹೋದವು. ರಚೈತ ಮತ್ತು ರಚನೆಯ
ಆದಿ-ಮಧ್ಯ-ಅಂತ್ಯದ ಜ್ಞಾನವು ಬುದ್ಧಿಯಲ್ಲಿ ಬಂದು ಬಿಟ್ಟಿತು. ತಂದೆಯನ್ನು ಅರಿಯುವುದರಿಂದ
ಎಲ್ಲವನ್ನೂ ಅರಿತುಕೊಂಡು ಬಿಡುತ್ತೀರಿ ಅಂದಮೇಲೆ ನೀವು ಬಹಳ ಸುಂದರವಾದ ಪ್ರಬಂಧಗಳನ್ನು ಬರೆಯಿರಿ.
ಅದರಿಂದ ಮನುಷ್ಯರು ಆಶ್ಚರ್ಯಚಕಿತರಾಗಿ ಕೇಳಲು ಓಡಿ ಬರಲಿ. ಮಂದಿರಗಳಲ್ಲಿ ಹೋಗಿ ಯಾರೊಂದಿಗಾದರೂ
ಕೇಳಿ - ಯಾವಾಗ ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರೋ ಆಗ ಮತ್ತ್ಯಾವುದೇ
ಧರ್ಮವಿರಲಿಲ್ಲ. ಭಾರತವೇ ಇತ್ತು ಅಂದಮೇಲೆ ನೀವು ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳು ಹೇಗಾಯಿತು?
ಲಕ್ಷಾಂತರ ವರ್ಷಗಳಿದ್ದರೆ ಮನುಷ್ಯರು ಅನೇಕಾನೇಕ ಸೊಳ್ಳೆಗಳ ಸಮಾನ ಆಗಿ ಬಿಡುತ್ತಿದ್ದರು (ಬಹಳ ಜನ
ಸಂಖ್ಯೆ ಆಗುತ್ತಿತ್ತು). ಕೆಲವೊಂದು ಮಾತುಗಳನ್ನು ತಿಳಿಸಿದರೂ ಸಹ ಆಶ್ಚರ್ಯಚಕಿತರಾಗುತ್ತಾರೆ. ಆದರೆ
ಯಾರು ಈ ಕುಲದವರಿರುವರೋ ಅವರ ಬುದ್ಧಿಯಲ್ಲಿಯೇ ಈ ಜ್ಞಾನವು ಕುಳಿತುಕೊಳ್ಳುತ್ತದೆ. ಇಲ್ಲವೆಂದರೆ ಇದು
ಬ್ರಹ್ಮಾಕುಮಾರಿಯರ ವಿಚಿತ್ರ ಜ್ಞಾನವಾಗಿದೆ ಎಂದು ಹೇಳುತ್ತಾರೆ. ಇದರಲ್ಲಿ ತಿಳಿದುಕೊಳ್ಳುವ ಬುದ್ಧಿ
ಬೇಕು. ಮುಖ್ಯ ಮಾತು ನೆನಪಿನದಾಗಿದೆ. ಸ್ತ್ರೀ-ಪುರುಷ ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಾರೆ.
ಈ ಆತ್ಮವು ಪರಮಾತ್ಮನನ್ನು ನೆನಪು ಮಾಡುತ್ತದೆ. ಈ ಸಮಯದಲ್ಲಿ ಎಲ್ಲರೂ ರೋಗಿಗಳಾಗಿದ್ದಾರೆ, ಈಗ
ನಿರೋಗಿಯಾಗಬೇಕಾಗಿದೆ. ಈ ವಿಷಯವನ್ನು ಇಡಿ, ತಿಳಿಸಿ - ತಾವು ಯಾರು ಪದೇ-ಪದೇ ರೋಗಿಗಳಾಗುತ್ತೀರಿ.
ಅವರಿಗೆ ನಾವು ಇಂತಹ ಸಂಜೀವಿನಿ ಮೂಲಿಕೆಯನ್ನು ಕಾರ್ಯದಲ್ಲಿ ತರುತ್ತೀರೆಂದರೆ ತಾವು ಎಂದೂ
ರೋಗಿಗಳಾಗುವುದಿಲ್ಲ. ಎಷ್ಟೊಂದು ಸಸ್ತಾ ಔಷಧಿಯಾಗಿದೆ! 21 ಪೀಳಿಗೆ ಸತ್ಯಯುಗ-ತ್ರೇತಾದವರೆವಿಗೂ
ಖಾಯಿಲೆಯಿರುವುದಿಲ್ಲ. ಅದು ಸ್ವರ್ಗವಾಗಿದೆ. ಇಂತಿಂತಹ ಅಂಶಗಳನ್ನು ನೋಟ್ ಮಾಡಿ ಬರೆಯಿರಿ.
ನೀವೆಲ್ಲರೂ ಸರ್ಜನ್ಗಳಿಗಿಂತಲೂ ದೊಡ್ಡ ಅವಿನಾಶಿ ಸರ್ಜನ್ ನಿಮಗೆ ಇಂತಹ ಔಷಧಿಯನ್ನು ಕೊಡುತ್ತಾರೆ
ಅದರಿಂದ ನೀವು ಭವಿಷ್ಯ 21 ಜನ್ಮಗಳಿಗೆ ಎಂದೂ ಕಾಯಿಲೆ ಬರುವುದಿಲ್ಲ. ಇದು ಸಂಗಮಯುಗವಾಗಿದೆ. ಇಂತಹ
ಮಾತುಗಳನ್ನು ಕೇಳಿ ಮನುಷ್ಯರಿಗೆ ಖುಷಿಯಾಗುತ್ತದೆ. ಭಗವಂತನೂ ಹೇಳುತ್ತಾರೆ - ನಾನು ಅವಿನಾಶಿ
ಸರ್ಜನ್ ಆಗಿದ್ದೇನೆ. ಹೇ ಪತಿತ-ಪಾವನ, ಅವಿನಾಶ್ ಸರ್ಜನ್ ಬನ್ನಿ ಎಂದು ನೆನಪು ಮಾಡುತ್ತಾರೆ. ಈಗ
ನಾನು ಬಂದಿದ್ದೇನೆ. ನೀವು ಎಲ್ಲರಿಗೂ ತಿಳಿಸುತ್ತಿರಿ, ಅಂತ್ಯದಲ್ಲಿ ಎಲ್ಲರೂ ಅವಶ್ಯವಾಗಿ
ತಿಳಿದುಕೊಳ್ಳುತ್ತಾರೆ. ತಂದೆಯು ಯುಕ್ತಿಗಳನ್ನು ತಿಳಿಸುತ್ತಾ ಇರುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ತಂದೆಯಿಂದ
ಸಕಾಶವನ್ನು ಪಡೆಯುವುದಕ್ಕಾಗಿ ಮುಂಜಾನೆ ಎದ್ದು ನೆನಪಿನಲ್ಲಿ ಕುಳಿತುಕೊಳ್ಳಬೇಕು. ರಾತ್ರಿ (ಅಮೃತ
ವೇಳೆ) ಎದ್ದು ಒಬ್ಬರು ಇನ್ನೊಬ್ಬರಿಗೆ ಶಕ್ತಿಯನ್ನು ಕೊಟ್ಟು ಸಹಯೋಗಿಗಳಾಗಬೇಕಾಗಿದೆ.
2. ತಮ್ಮದೆಲ್ಲವನ್ನೂ ಈಶ್ವರೀಯ ಸೇವೆಯಲ್ಲಿ ಸಫಲ ಮಾಡಿ ಈ ಹಳೆಯ ಶರೀರವನ್ನೂ ಮರೆತು ತಂದೆಯ
ನನಪಿನಲ್ಲಿರಬೇಕು. ಪೂರ್ಣ ಬಲಿಹಾರಿಯಾಗಬೇಕು. ದೇಹೀ-ಅಭಿಮಾನಿಯಾಗಿರುವ ಪರಿಶ್ರಮ ಪಡಬೇಕು.
ವರದಾನ:
ನಿನ್ನದು ನನ್ನದು
ಎನ್ನುವ ಹಲ್ ಚಲ್ ಅನ್ನು ಸಮಾಪ್ತಿ ಮಾಡಿ ದಯಾ ಭಾವನೆಯನ್ನು ಇಮರ್ಜ್ ಮಾಡುವಂತಹ ದಯಾ ಸ್ವರೂಪ ಭವ.
ಸಮಯ ಪ್ರತಿ ಸಮಯ ಎಷ್ಟೋ
ಆತ್ಮಗಳು ದುಃಖದ ಅಲೆಯಲ್ಲಿ ಬರುತ್ತವೆ. ಪ್ರಕೃತಿಯ ಸ್ವಲ್ಪವೇ ಹಲ್ ಚಲ್ ಆದಾಗ, ಆಪತ್ತು ಬರುತ್ತದೆ
ಎಂದಾಗ ಅನೇಕ ಆತ್ಮಗಳು ಚಡಪಡಿಸುತ್ತವೆ, ದಯೆ, ಕರುಣೆಯನ್ನು ಬೇಡುತ್ತವೆ. ಆದ್ದರಿಂದ ಇಂತಹ ಆತ್ಮಗಳ
ಕೂಗನ್ನು ಕೇಳಿ ದಯೆಯ ಭಾವನೆಯನ್ನು ಇಮರ್ಜ್ ಮಾಡಿಕೊಳ್ಳಿ. ಪೂಜ್ಯ ಸ್ವರೂಪ, ದಯಾ ಸ್ವರೂಪವನ್ನು
ಧಾರಣೆ ಮಾಡಿಕೊಳ್ಳಿ. ಸ್ವಯಂ ಅನ್ನು ಸಂಪನ್ನವನ್ನಾಗಿ ಮಾಡಿಕೊಳ್ಳಿ ಆಗ ಈ ದುಃಖದ ಪ್ರಪಂಚ
ಸಮಾಪ್ತಿಯಾಗಲಿದೆ. ಈಗ ಪರಿವರ್ತನೆಯ ಶುಭ ಭಾವನೆಯ ಅಲೆ ತೀವ್ರ ಗತಿಯಿಂದ ಹರಡಿ ಆಗ ನಿನ್ನದು ನನ್ನದು
ಎನ್ನವ ಹಲ್ಚಲ್ ಸಮಾಪ್ತಿಯಾಗಿ ಬಿಡುವುದು.
ಸ್ಲೋಗನ್:
ವ್ಯರ್ಥ
ಸಂಕಲ್ಪಗಳ ಸುತ್ತಿಗೆಯಿಂದ ಸಮಸ್ಯಾ ರೂಪಿ ಬಂಡೆಯನ್ನು ಹೊಡೆಯುವ ಬದಲು ಹೈ ಜಂಪ್ ಹಾಕಿ ಸಮಸ್ಯೆ ರೂಪಿ
ಬೆಟ್ಟವನ್ನು ಪಾರು ಮಾಡುವಂತಹವರಾಗಿ.