18.03.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಸತ್ಯವನ್ನು ತಿಳಿಸುವವರು ಒಬ್ಬ ತಂದೆಯಾಗಿದ್ದಾರೆ, ಆದ್ದರಿಂದ ತಂದೆಯಿಂದಲೇ ಕೇಳಿ,
ಮನುಷ್ಯರಿಂದಲ್ಲ, ಒಬ್ಬ ತಂದೆಯಿಂದ ಕೇಳುವವರೇ ಜ್ಞಾನಿಗಳು.”
ಪ್ರಶ್ನೆ:
ಯಾವ ಆತ್ಮಗಳು
ದೇವಿ-ದೇವತಾ ಮನೆತನದವರಾಗಿರುವರೋ ಅವರ ಮುಖ್ಯ ಲಕ್ಷಣಗಳು ಏನಾಗಿರುತ್ತದೆ?
ಉತ್ತರ:
ದೇವಿ-ದೇವತಾ
ಧರ್ಮದವರಿಗೆ ಈ ಜ್ಞಾನವು ಬಹಳ ಒಳ್ಳೆಯದು ಮತ್ತು ಮಧುರವೆನಿಸುತ್ತದೆ. ಅವರು ಮನುಷ್ಯ ಮತವನ್ನು
ಬಿಟ್ಟು ಈಶ್ವರೀಯ ಮತದಂತೆ ನಡೆಯ ತೊಡಗುತ್ತಾರೆ. ಅವರ ಬುದ್ಧಿಯಲ್ಲಿ ಬರುತ್ತದೆ - ಶ್ರೀಮತದಿಂದಲೇ
ನಾವು ಶ್ರೇಷ್ಠರಾಗುತ್ತೇವೆ. ಈಗ ಇದು ಪುರುಷೋತ್ತಮ ಸಂಗಮಯುಗವು ನಡೆಯುತ್ತಿದೆ. ನಾವೇ ಮ
ಪುರುಷರಾಗಬೇಕಾಗಿದೆ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ಆತ್ಮಾಭಿಮಾನಿಗಳಾಗಿ. ದೇಹದ ಅಭಿಮಾನವನ್ನು ಬಿಟ್ಟು ತನ್ನನ್ನು
ಆತ್ಮನೆಂದು ತಿಳಿಯಿರಿ. ಇದೂ ಸಹ ನಿಮಗೆ ಗೊತ್ತಿದೆ, ಪರಮಾತ್ಮ ಒಬ್ಬರೇ ಇದ್ದಾರೆ. ಬ್ರಹ್ಮನಿಗೆ
ಪರಮಾತ್ಮನೆಂದು ಹೇಳಲಾಗುವುದಿಲ್ಲ. ಬ್ರಹ್ಮನ 84 ಜನ್ಮಗಳ ಕಥೆಯೂ ನಿಮಗೆ ಗೊತ್ತಿದೆ. ಇದು ಅವರ
ಅಂತಿಮ ಜನ್ಮವಾಗಿದೆ. ನಾನು ಇವರಲ್ಲಿಯೆ ಬರಬೇಕಾಗುತ್ತದೆ, ಇವರೇ ಪೂರ್ಣ 84 ಜನ್ಮಗಳನ್ನು
ತೆಗೆದುಕೊಂಡಿದ್ದಾರೆ. ಇವರಿಗೆ ತಿಳಿಸುತ್ತೇನೆ - ತಾವು 84 ಜನ್ಮಗಳನ್ನು ತಿಳಿದುಕೊಂಡಿಲ್ಲ ನಾನೇ
ತಿಳಿಸುತ್ತೇನೆ. ಮೊದಲು-ಮೊದಲು ಈ ದೇವಿ-ದೇವತೆಗಳಾಗಿದ್ದಿರಿ ಈಗ ಪುನಃ ಆಗುವುದಕ್ಕಾಗಿ ಪುರುಷಾರ್ಥ
ಮಾಡಬೇಕು. ಪುನರ್ಜನ್ಮವು ಮೊದಲ ಜನ್ಮದಿಂದಲೇ ಪ್ರಾರಂಭವಾಗುತ್ತದೆ. ಆದ್ದರಿಂದ ತಂದೆಯೂ
ತಿಳಿಸುತ್ತಾರೆ - ನಾನು ನಿಮಗೆ ಏನನ್ನು ತಿಳಿಸುತ್ತೇನೆಯೋ ಅದು ಸತ್ಯವಾಗಿದೆ. ಉಳಿದಂತೆ ನೀವು
ಏನೆಲ್ಲವನ್ನೂ ಕೇಳಿದ್ದೀರಿ ಅದು ಅಸತ್ಯವಾಗಿದೆ. ನನ್ನನ್ನೇ ಸತ್ಯವೆಂದು ಹೇಳುತ್ತಾರೆ. ಸಚ್ ತೊ
ಬಿಟೊ ನಚ್ ಎಂದು ಹೇಳುತ್ತಾರೆ ಅರ್ಥಾತ್ ಸತ್ಯವಾಗಿದ್ದರೆ ಖುಷಿಯಲ್ಲಿ ನರ್ತನ ಮಾಡಿ ಎಂದು
ಹೇಳುತ್ತಾರೆ. ಇದು ಜ್ಞಾನದ ನರ್ತನವಾಗಿದೆ. ಅವರು ಕೃಷ್ಣನಿಗೆ ಮುರುಳಿಯನ್ನು ನುಡಿಸಿದನು, ನರ್ತನ
ಮಾಡಿದನೆಂದು ತೋರಿಸುತ್ತಾರೆ. ವಾಸ್ತವದಲ್ಲಿ ಕೃಷ್ಣನು ಸತ್ಯ ಖಂಡದ ಮಾಲೀಕನಾಗಿದ್ದಾನೆ, ಆದರೆ
ಇವರನ್ನೂ ಸಹ ಹೀಗೆ ಮಾಡುವವರು ಯಾರು? ಸತ್ಯ ಖಂಡದ ಸ್ಥಾಪನೆಯನ್ನು ಯಾರು ಮಾಡುವರು? ಸತ್ಯಯುಗವು
ಸತ್ಯ ಖಂಡವಾಗಿತ್ತು, ಇದು ಅಸತ್ಯಖಂಡವಾಗಿದೆ. ಯಾವಾಗ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತೋ ಆಗ
ಭಾರತವು ಸತ್ಯ ಖಂಡವಾಗಿತ್ತು ಮತ್ಯ್ತಾವುದೇ ಖಂಡವಿರಲಿಲ್ಲ. ಸ್ವರ್ಗವೆಲ್ಲಿದೆ ಎಂಬುದನ್ನು
ಮನುಷ್ಯರು ತಿಳಿದಿಲ್ಲ. ಆದ್ದರಿಂದ ಯಾರಾದರೂ ಮರಣ ಹೊಂದಿದರೆ ಸ್ವರ್ಗವಾಸಿಗಳಾದರೆಂದು ಹೇಳುತ್ತಾರೆ.
ತಂದೆಯು ತಿಳಿಸುತ್ತಾರೆ - ನೀವು ತಲೆಕೆಳಕಾಗಿ ನಿಂತಿದ್ದೀರಿ, ಮಾಯೆಗೆ ಅಧೀನರಾಗಿ ಬಿಟ್ಟಿದ್ದೀರಿ.
ನಿಮ್ಮನ್ನು ತಂದೆಯು ಬಂದು ಸರಿಪಡಿಸುತ್ತಾರೆ. ನಿಮಗೆ ಗೊತ್ತಿದೆ, ಭಕ್ತರಿಗೆ ಭಕ್ತಿಯ ಫಲವನ್ನು
ಕೊಡುವವರು ಭಗವಂತನಾಗಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಭಕ್ತಿಯಲ್ಲಿದ್ದಾರೆ. ಶಾಸ್ತ್ರ
ಮೊದಲಾದವುಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಈ ಗೀತೆಯನ್ನು ಹಾಡುವುದೂ ಸಹ ಭಕ್ತಿಮಾರ್ಗವಾಗಿದೆ.
ಜ್ಞಾನ ಮಾರ್ಗದಲ್ಲಿ ಭಜನೆಯಿರುವುದಿಲ್ಲ. ಏಕೆಂದರೆ ನಿಮಗೂ ಸಹ ತಿಳಿದಿದೆ - ನಾವೀಗ ಶಬ್ಧದಿಂದ ದೂರ
ಹೋಗಬೇಕು, ಹಿಂತಿರುಗಿ ಹೋಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ಬಾಯಿಂದ ಹೇ
ಭಗವಂತನೇ ಎಂದೂ ಸಹ ಹೇಳಬಾರದು, ಇದು ಭಕ್ತಿ ಮಾರ್ಗದ ಶಬ್ಧವಾಗಿದೆ. ಕಲಿಯುಗದ ಅಂತ್ಯದವರೆಗೂ ಭಕ್ತಿ
ಮಾರ್ಗ ನಡೆಯುತ್ತದೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ. ಈ ಸಮಯದಲ್ಲಿ ತಂದೆಯು ಬಂದು ಜ್ಞಾನದಿಂದ
ನಿಮ್ಮನ್ನು ಉತ್ತಮ ಪುರುಷರನ್ನಾಗಿ ಮಾಡುತ್ತಾರೆ. ನೀವು ಈಶ್ವರೀಯ ಮತದಂತೆ ನಡೆಯಿರಿ. ಈಶ್ವರನು
ಏನನ್ನು ತಿಳಿಸುತ್ತಾರೆಯೋ ಅದು ಸತ್ಯವಾಗಿದೆ. ತಂದೆಯು ಮನುಷ್ಯನ ತನುವಿನಲ್ಲಿ ಬಂದು
ತಿಳಿಸಿಕೊಡುತ್ತಾರೆ - ಮಕ್ಕಳೇ, ನೀವು ಎಷ್ಟೊಂದು ಬುದ್ಧಿವಂತರಾಗಿದ್ದಿರಿ ಈಗ ನೋಡಿ, ಎಷ್ಟು
ಬುದ್ಧಿಹೀನರಾಗಿದ್ದೀರಿ! ನೀವೇ ಸತ್ಯಯುಗದಲ್ಲಿದ್ದಿರಿ ಈಗ ಕಲಿಯುಗದಲ್ಲಿ ಬಂದಿದ್ದೀರಿ. ಯಾರು
ಇಲ್ಲಿಯವರಾಗಿರುವರೋ ಅವರಿಗೆ ಈ ಜ್ಞಾನವು ಬಹಳ ಇಷ್ಟವಾಗುತ್ತದೆ ಮತ್ತು ಮಧುರವೆನಿಸುತ್ತದೆ. ಈ
ಬ್ರಹ್ಮಾ ತಂದೆಯೂ ಸಹ ಗೀತೆಯನ್ನು ಓದುತ್ತಿದ್ದರು. ತಂದೆಯು ಸಿಕ್ಕಿರುವುದರಿಂದ ಎಲ್ಲವನ್ನೂ ಬಿಟ್ಟು
ಬಿಟ್ಟರು. ಅನೇಕ ಗುರುಗಳನ್ನೂ ಮಾಡಿಕೊಂಡಿದ್ದರು, ಇವರೆಲ್ಲರೂ ಭಕ್ತಿಮಾರ್ಗದ ಗುರುಗಳೆಂದು,
ಜ್ಞಾನಮಾರ್ಗದ ಗುರು ನಾನೊಬ್ಬನೇ ಆಗಿದ್ದೇನೆ, ಯಾವಾಗ ನನ್ನಿಂದ ಜ್ಞಾನವನ್ನು ಕೇಳುವರೋ ಆಗ ಅವರಿಗೆ
ಜ್ಞಾನಿಗಳೆಂದು ಹೇಳಬಹುದು ಉಳಿದವರೆಲ್ಲರೂ ಭಕ್ತರಾಗಿದ್ದಾರೆ. ಶ್ರೀ ಮತವೇ ಶ್ರೇಷ್ಠ, ಉಳಿದೆಲ್ಲವೂ
ಮನುಷ್ಯ ಮತಗಳಾಗಿವೆ, ಇದು ಈಶ್ವರೀಯ ಮತವಾಗಿದೆ. ಅದು ರಾವಣನ ಮತ, ಇದು ಭಗವಂತನ ಮತವಾಗಿದೆ.
ಭಗವಾನುವಾಚ - ನೀವು ಎಷ್ಟೊಂದು ಮಹಾನ್ ಭಾಗ್ಯಶಾಲಿಯಾಗಿದ್ದೀರಿ. ಆದ್ದರಿಂದ ಈಗ ನಿಮ್ಮದು ವಜ್ರ
ಸಮಾನ ಜನ್ಮವಾಗಿದೆ. ಉಂಗುರದಲ್ಲಿಯೂ ಸಹ ನಡುವೆ ವಜ್ರವನ್ನು ಪೋಣಿಸಿರುತ್ತಾರೆ. ಮಾಲೆಯಲ್ಲಿಯೂ ಸಹ
ಮೇಲೆ ಹೂವಿರುತ್ತದೆ ನಂತರ ದೊಡ್ಡ ಮಣಿಯಿರುತ್ತದೆ. ಇವರ ಹೆಸರಾಗಿದೆ - ಆದಿ ದೇವ - ಆದಿ ದೇವಿ (ಆದಂ-ಬೀಬಿ).
ಆದಿ ದೇವ ಮತ್ತು ಆದಿ ದೇವಿ ಸಂಗಮಯುಗದವರಾಗಿದ್ದಾರೆ. ಸಂಗಮಯುಗವೇ ಎಲ್ಲದಕ್ಕಿಂತ ಉತ್ತಮವಾಗಿದೆ,
ಈಗಲೇ ಈ ರಾಜ್ಯದ ಸ್ಥಾಪನೆಯಾಗುತ್ತಿದೆ. ಆದ್ದರಿಂದ ಮಕ್ಕಳು ಇಲ್ಲಿಯೇ 16 ಕಲಾ ಸಂಪೂರ್ಣರಾಗಬೇಕು.
ತಂದೆಯು ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು ಬರುತ್ತಾರೆ. ಈ ಪ್ರಪಂಚದ ಕಾಲಾವಧಿಯನ್ನೂ ಸಹ
ತಾವು ಮಕ್ಕಳ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ,
ಇವೆಲ್ಲವೂ ಸುಳ್ಳು ಮಾತುಗಳಾಗಿವೆ. ಸುಳ್ಳು ಮಾಯೆ, ಸುಳ್ಳು ಶರೀರ....... ಎಂದು ಹೇಳಲಾಗುತ್ತದೆ.
ಸತ್ಯ-ಸತ್ಯವಾದುದು ಹೊಸ ಪ್ರಪಂಚವಾಗಿದೆ. ಇದು ಅಸತ್ಯ ಖಂಡವಾಗಿದೆ. ಮತ್ತೆ ಈ ಅಸತ್ಯ ಖಂಡವನ್ನು
ಸತ್ಯ ಖಂಡವನ್ನಾಗಿ ಮಾಡುವುದು ತಂದೆಯ ಕರ್ತವ್ಯವೇ ಆಗಿದೆ. ಅಂದಾಗ ತಂದೆಯು ತಿಳಿಸುತ್ತಾರೆ - ಭಕ್ತಿ
ಮಾರ್ಗದಲ್ಲಿ ಏನೆಲ್ಲವನ್ನೂ ಓದಿದ್ದೀರೋ ಅದೆಲ್ಲವನ್ನೂ ಮರೆಯಿರಿ. ನಿಮ್ಮದು ಬೇಹದ್ದಿನ
ವೈರಾಗ್ಯವಾಗಿದೆ. ಸನ್ಯಾಸಿಗಳಂತೂ ಕೇವಲ ಮನೆ-ಮಠವನ್ನು ಬಿಟ್ತು ಮತ್ತೆ ಇದೇ ಪ್ರಪಂಚದಲ್ಲಿ ಕಾಡಿಗೆ
ಹೊರಟು ಹೋಗುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಏಕೆ ಎನ್ನುವ ಶಬ್ಧವೇ
ಉಧ್ಭವಿಸುವುದಿಲ್ಲ. ಏಕೆಂದರೆ ಇದು ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ. ಹೀಗೀಗೆ ಆಗುತ್ತದೆ ಎಂದು
ತಂದೆಯು ತಾವು ಮಕ್ಕಳಿಗೆ ತಿಳಿಸುತ್ತಾರೆ. ಅನ್ಯ ಧರ್ಮದವರು ಸ್ವರ್ಗದಲ್ಲಿ ಬರುವುದಿಲ್ಲ. ಬೌದ್ಧ
ಧರ್ಮದವರು, ಕ್ರಿಶ್ಚಿಯನ್ ಧರ್ಮದವರು ಯಾರೂ ಬರುವುದಿಲ್ಲ, ಅವರು ಕೊನೆಯಲ್ಲಿ ಬರುತ್ತಾರೆ. ಮೊಟ್ಟ
ಮೊದಲು ದೈವೀ ರಾಜಧಾನಿ ಇರುತ್ತದೆ. ನಂತರ ಇಬ್ರಾಹಿಂ, ಬುದ್ಧ, ಕ್ರೈಸ್ಟ್ ಬಂದು ತಮ್ಮ ಧರ್ಮ
ಸ್ಥಾಪನೆ ಮಾಡುತ್ತಾರೆ. ತಂದೆಯು ಪುರುಷೋತ್ತಮ ಸಂಗಮಯುಗದಲ್ಲಿ ಬಂದು ಈ ದೈವೀ ರಾಜಧಾನಿಯನ್ನು
ಸ್ಥಾಪನೆ ಮಾಡುತ್ತಾರೆ. ಯಾವುದೇ ಆತ್ಮವು ಬರುತ್ತದೆಯೆಂದರೆ ಗರ್ಭದಿಂದಲೇ ಬರುತ್ತದೆ, ಚಿಕ್ಕ
ಮಗುವಿನಿಂದ ದೊಡ್ಡವರಾಗುತ್ತಾರೆ ಆದರೆ ಶಿವ ತಂದೆಯು ಚಿಕ್ಕವರು, ದೊಡ್ಡವರು ಆಗುವುದಿಲ್ಲ ಅಥವಾ
ಗರ್ಭದಿಂದಲೂ ಜನ್ಮ ಪಡೆಯುವುದಿಲ್ಲ. ಬುದ್ಧನ ಆತ್ಮವು ಪ್ರವೇಶ ಮಾಡಿತು, ಮೊದಲು ಬೌದ್ಧ ಧರ್ಮವಂತೂ
ಇರಲಿಲ್ಲ. ಅಂದಮೇಲೆ ಅವಶ್ಯವಾಗಿ ಬುದ್ಧನ ಆತ್ಮವು ಇಲ್ಲಿನ ಯಾವುದೋ ಮನುಷ್ಯನಲ್ಲಿ ಪ್ರವೇಶ
ಮಾಡುತ್ತಾರೆ ಮತ್ತೆ ಗರ್ಭದಲ್ಲಿ ಅವಶ್ಯವಾಗಿ ಹೋಗುತ್ತಾರೆ. ಬುದ್ಧ ಧರ್ಮವನ್ನು ಒಬ್ಬರೇ ಸ್ಥಾಪನೆ
ಮಾಡಿದರು, ನಂತರ ಅವರ ಹಿಂದೆ ಅನೇಕರು ಬಂದರು, ವೃದ್ಧಿಯಾಯಿತು. ಯಾವಾಗ ಲಕ್ಷಾಂತರ
ಜನಸಂಖ್ಯೆಯಾಗುತ್ತದೆಯೋ ಆಗ ಅವರ ರಾಜಧಾನಿಯು ನಡೆಯುತ್ತದೆ. ಬೌದ್ಧಿಯರ ರಾಜ್ಯವೂ ಇತ್ತು. ತಂದೆಯು
ತಿಳಿಸುತ್ತಾರೆ - ಇವರೆಲ್ಲರೂ ಕೊನೆಯಲ್ಲಿ ಬರುತ್ತಾರೆ, ಇವರಿಗೆ ಗುರುವೆಂದು ಹೇಳಲಾಗುವುದಿಲ್ಲ.
ಒಬ್ಬರೇ ಗುರುವಾಗುತ್ತಾರೆ. ಅವರಂತೂ ತಮ್ಮ ಧರ್ಮದ ಸ್ಥಾಪನೆಯನ್ನೂ ಮಾಡಿ ನಂತರ ಕೆಳಗಿಳಿಯುತ್ತಾರೆ.
ತಂದೆಯು ಎಲ್ಲರನ್ನೂ ಮೇಲೆ ಕಳುಹಿಸಿದ್ದರು ಮತ್ತೆ ಮುಕ್ತಿಧಾಮದಿಂದ ಒಬ್ಬೊಬ್ಬರಾಗಿ ಕೆಳಗೆ
ಬರುತ್ತಾರೆ. ನೀವೂ ಸಹ ಜೀವನ್ಮುಕ್ತಿಯಿಂದ ಕೆಳಗೆ ಬರುತ್ತೀರಿ. ಹಾಗೆಯೇ ಅವರು ಮುಕ್ತಿಯಿಂದ ಕೆಳಗೆ
ಬರುತ್ತಾರೆ. ಅವರ ಮಹಿಮೆ ಎಲ್ಲಿಯದು! ಜ್ಞಾನವಂತೂ ಆ ಸಮಯದಲ್ಲಿ ಪ್ರಾಯಲೋಪವಾಗುತ್ತದೆ. ತಂದೆಯು
ಗತಿ-ಸದ್ಗತಿಗಾಗಿ ಜ್ಞಾನವನ್ನು ಕೊಡುತ್ತಾರೆ, ಅವರು ಗರ್ಭದಲ್ಲಿ ಬರುವುದಿಲ್ಲ ಇವರ ತನುವಿನಲ್ಲಿ
ಕುಳಿತಿದ್ದಾರೆ. ಇವರಿಗೆ ಇನ್ನೊಂದು ಹೆಸರಿಲ್ಲ. ಅನ್ಯರಿಗೆ ಶರೀರದ ಹೆಸರಿರುತ್ತದೆ. ಇವರು
ಪರಮಾತ್ಮನಾಗಿದ್ದಾರೆ, ಜ್ಞಾನಸಾಗರನಾಗಿದ್ದಾರೆ. ಈ ಜ್ಞಾನವು ಮೊದಲು ಆದಿ ಸನಾತನ ದೇವಿ-ದೇವತಾ
ಧರ್ಮದ ಆತ್ಮಗಳಿಗೇ ಸಿಗುತ್ತದೆ. ಏಕೆಂದರೆ ಅವರಿಗೆ ಭಕ್ತಿಯ ಫಲ ಸಿಗಬೇಕಾಗಿದೆ. ಭಕ್ತಿಯನ್ನು ನೀವೇ
ಪ್ರಾರಂಭಿಸುತ್ತೀರಿ, ನಿಮಗೆ ಫಲ ಕೊಡುತ್ತೇನೆ. ಉಳಿದವರೆಲ್ಲರೂ ಬೈಪ್ಲಾಟ್ಸ್ ಆಗಿದೆ. ಅವರು 84
ಜನ್ಮಗಳನ್ನೂ ತೆಗೆದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವೀಗ ಆತ್ಮಾಭಿಮಾನಿಗಳಾಗಿ.
ಸತ್ಯಯುಗದಲ್ಲಿಯೂ ಸಹ ತಿಳಿಯುತ್ತಾರೆ ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು
ತೆಗೆದುಕೊಳ್ಳುತ್ತೇವೆಂದು. ದುಃಖದ ಮಾತಿರುವುದಿಲ್ಲ, ವಿಕಾರದ ಮಾತಿಲ್ಲ. ವಿಕಾರಗಳು ರಾವಣ
ರಾಜ್ಯದಲ್ಲಿರುತ್ತವೆ. ಸತ್ಯಯುಗವು ನಿರ್ವಿಕಾರಿ ಪ್ರಪಂಚವಾಗಿದೆ. ನೀವು ತಿಳಿಸಿದರೂ ಸಹ ಅವರು
ಒಪ್ಪುವುದೇ ಇಲ್ಲ. ಕಲ್ಪದ ಹಿಂದಿನ ತರಹ ಯಾರು ಒಪ್ಪುತ್ತಾರೆಯೋ ಅವರೇ ಪದವಿಯನ್ನು ಪಡೆಯುತ್ತಾರೆ.
ಯಾರು ಒಪ್ಪುವುದಿಲ್ಲವೋ ಅವರು ಪಡೆಯುವುದಿಲ್ಲ. ಸತ್ಯಯುಗದಲ್ಲಿ ಎಲ್ಲರೂ ಪವಿತ್ರ, ಸುಖ,
ಶಾಂತಿಯಲ್ಲಿರುತ್ತಾರೆ. ಎಲ್ಲರ ಮನೋಕಾಮನೆಗಳು 21 ಜನ್ಮಗಳಿಗಾಗಿ ಈಡೇರುತ್ತವೆ. ಸತ್ಯಯುಗದಲ್ಲಿ
ಯಾವುದೇ ಕಾಮನೆಯಿರುವುದಿಲ್ಲ. ದವಸ-ಧಾನ್ಯ ಎಲ್ಲರೂ ಅಪಾರವಾಗಿ ಸಿಕ್ಕಿ ಬಿಡುತ್ತವೆ. ಈ ಬಾಂಬೆಯು
ಮೊದಲು ಇರಲಿಲ್ಲ. ದೇವತೆಗಳು ಉಪ್ಪಿನ ಜಮೀನಿನಲ್ಲಿರುವುದಿಲ್ಲ. ಎಲ್ಲಿ ಸಿಹಿ ನೀರಿನ ನದಿಗಳಿದ್ದವೋ
ಅಲ್ಲಿದ್ದರು. ಕೆಲವರೇ ಮನುಷ್ಯರಿದ್ದರು, ಒಬ್ಬೊಬ್ಬರಿಗೆ ಬಹಳಷ್ಟು ಜಮೀನಿರುತ್ತದೆ. ಸುಧಾಮನು 2
ಹಿಡಿ ಅವಲಕ್ಕಿಯನ್ನು ಕೊಟ್ಟನು, ಮಹಲು ಸಿಕ್ಕಿ ಬಿಟ್ಟಿತು ಎಂದು ತೋರಿಸುತ್ತಾರೆ. ಮನುಷ್ಯರು
ಈಶ್ವರಾರ್ಥವಾಗಿ ದಾನ-ಪುಣ್ಯ ಮಾಡುತ್ತಾರೆ. ಈಶ್ವರನು ಭಿಕಾರಿಯೇನು? ಅವರಂತೂ ದಾತನಾಗಿದ್ದಾರೆ.
ಇನ್ನೊಂದು ಜನ್ಮದಲ್ಲಿ ಈಶ್ವರನು ಬಹಳಷ್ಟು ಕೊಡುತ್ತಾನೆಂದು ತಿಳಿಯುತ್ತಾರೆ. ನೀವು ಎರಡು ಮುಷ್ಠಿ
ಕೊಡುತ್ತೀರಿ, ಹೊಸ ಪ್ರಪಂಚದಲ್ಲಿ ಬಹಳಷ್ಟು ಪಡೆಯುತ್ತೀರಿ. ನೀವು ಖರ್ಚು ಮಾಡಿ ಎಲ್ಲರಿಗೆ ಶಿಕ್ಷಣ
ಸಿಗಲೆಂದು ಸೇವಾಕೇಂದ್ರವನ್ನು ತೆರೆಯುತ್ತೀರಿ. ತಮ್ಮ ಧನವನ್ನೂ ಖರ್ಚು ಮಾಡುತ್ತೀರಿ. ಮತ್ತೆ
ರಾಜ್ಯಭಾಗ್ಯವನ್ನೂ ನೀವೇ ಪಡೆಯುತ್ತೀರಿ. ತಂದೆಯು ತಿಳಿಸುತ್ತಾರೆ - ನಾನೇ ನಿಮಗೆ ನನ್ನ
ಪರಿಚಯವನ್ನು ಕೊಡುತ್ತೇನೆ. ನನ್ನ ಪರಿಚಯ ಯಾರಿಗೂ ಇಲ್ಲ. ನಾನು ಮತ್ತೆ ಮತ್ತ್ಯಾರ ತನುವಿನಲ್ಲಿ
ಬರುವುದಿಲ್ಲ, ಯಾವಾಗ ಪತಿತ ಪ್ರಪಂಚವನ್ನು ಪರಿವರ್ತನೆ ಮಾಡಬೇಕೋ ಆಗ ಒಂದೇ ಬಾರಿ ಬರುತ್ತೇನೆ. ನಾನು
ಪತಿತ-ಪಾವನನಾಗಿದ್ದೇನೆ, ನನ್ನ ಪಾತ್ರವೇ ಸಂಗಮಯುಗದಲ್ಲಿದೆ. ಅದೂ ಸಹ ನಿಖರವಾದ ಸಮಯದಲ್ಲಿಯೇ
ಬರುತ್ತೇನೆ. ಶಿವ ತಂದೆಯು ಇವರಲ್ಲಿ ಯಾವಾಗ ಪ್ರವೇಶವಾಗುತ್ತಾರೆಂದು ನಿಮಗೇನು ತಿಳಿಯುತ್ತದೆ?
ಕೃಷ್ಣನ ತಿಥಿ-ತಾರೀಖು, ನಿಮಿಷ-ಗಳಿಗೆಗಳನ್ನು ಬರೆಯುತ್ತಾರೆ. ಆದರೆ ಇವರಿಗೆ ಯಾವುದೇ ನಿಮಿಷ,
ಗಳಿಗೆಯನ್ನು ಸೂಚಿಸಲು ಸಾಧ್ಯವಿಲ್ಲ. ಈ ಬ್ರಹ್ಮಾರವರಿಗೂ ಸಹ ಗೊತ್ತಿರಲಿಲ್ಲ. ಯಾವಾಗ ತಂದೆಯು
ಇವರಲ್ಲಿ ಬಂದು ಜ್ಞಾನವನ್ನು ತಿಳಿಸಿದರು ಆಗ ತಿಳಿಯಿತು, ಆಕರ್ಷಣೆಯಾಗುತ್ತದೆ. ಇವರ (ಬ್ರಹ್ಮಾ)
ಆತ್ಮದಲ್ಲಂತೂ ತುಕ್ಕು ಹಿಡಿದಿತ್ತು. ಯಾವಾಗ ಪರಮಪಿತ ಪರಮಾತ್ಮನು ಇವರಲ್ಲಿ ಪ್ರವೇಶ ಮಾಡಿದರೋ ಆಗ
ನಿಮಗೆ ಆಕರ್ಷಣೆಯಾಯಿತು. ನೀವು ಓಡಿ ಬಂದಿರಿ. ನೀವು ಯಾವುದೇ ಚಿಂತೆ ಮಾಡಲಿಲ್ಲ. ತಂದೆಯು
ತಿಳಿಸುತ್ತಾರೆ - ನಾನಂತೂ ಸಂಪೂರ್ಣ ಪವಿತ್ರನಾಗಿದ್ದೇನೆ. ನೀವಾತ್ಮರಲ್ಲಿ ಹಿಡಿದಿರುವ ತುಕ್ಕು
ಹೇಗೆ ಹೋಗುವುದು? ನಾಟಕದಲ್ಲಿ ಎಲ್ಲಾ ಆತ್ಮಗಳಿಗೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ. ಇವು ಬಹಳ
ಗುಹ್ಯವಾದ ಮಾತುಗಳಾಗಿವೆ. ಆತ್ಮವು ಎಷ್ಟು ಚಿಕ್ಕದಾಗಿದೆ. ದಿವ್ಯ ದೃಷ್ಟಿಯ ಹೊರತು ಅದನ್ನು ಯಾರೂ
ನೋಡಲು ಸಾಧ್ಯವಿಲ್ಲ. ತಂದೆಯು ಬಂದು ನಿಮಗೆ ಜ್ಞಾನದ ಮೂರನೆಯ ನೇತ್ರವನ್ನು ಕೊಡುತ್ತಾರೆ. ನಿಮಗೂ
ಗೊತ್ತಿದೆ, ತಂದೆಯು ನಾವಾತ್ಮಗಳಿಗೆ ಓದಿಸುತ್ತಾರೆ. ಭಕ್ತಿ ಮಾರ್ಗದಲ್ಲಂತೂ ಹಿಟ್ಟಿನಲ್ಲಿ
ಉಪ್ಪಿನಷ್ಟು ಜ್ಞಾನವಿದೆ. ಹೇಗೆ ಭಗವಾನುವಾಚ ಶಬ್ಧವು ಸರಿಯಾಗಿದೆ. ಆದರೆ ಮತ್ತೆ ಕೃಷ್ಣನೆಂದು
ಹೇಳುವುದರಿಂದ ಅದು ತಪ್ಪಾಗಿ ಬಿಡುತ್ತದೆ. ಮನ್ಮನಾಭವ ಶಬ್ಧವು ಸರಿಯಾಗಿದೆ. ಇದು ಗೀತೆಯ ಯುಗ ಆಗಿದೆ.
ಭಗವಂತನು ಈ ಸಮಯದಲ್ಲಿಯೇ ಈ ರಥದಲ್ಲಿ ಬರುತ್ತಾರೆ, ಇದನ್ನು ಅವರು ಕುದುರೆ ಗಾಡಿಯನ್ನು ತೋರಿಸಿ,
ಅದರಲ್ಲಿ ಕೃಷ್ಣನು ಕುಳಿತಿರುವಂತೆ ತೋರಿಸುತ್ತಾರೆ. ಭಗವಂತನ ಈ ರಥವೆಲ್ಲಿ, ಕುದುರೆಗಾಡಿ ಎಲ್ಲಿ?
ಏನೂ ತಿಳಿದುಕೊಳ್ಳುವುದಿಲ್ಲ. ಇದು ಬೇಹದ್ದಿನ ಮನೆಯಾಗಿದೆ. ತಂದೆಯು ಎಲಾ ಆತ್ಮಗಳಿಗೆ (ಮಕ್ಕಳು)
21 ಜನ್ಮಗಳಿಗಾಗಿ ಆರೋಗ್ಯ-ಭಾಗ್ಯ, ಸಂತೋಷವನ್ನು ಕೊಡುತ್ತಾರೆ. ಇದೂ ಸಹ ಅನಾದಿ, ಅವಿನಾಶಿ,
ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ. ಇದು ಯಾವಾಗ ಪ್ರಾರಂಭವಾಯಿತೆಂದು ಹೇಳಲು ಸಾಧ್ಯವಿಲ್ಲ. ಚಕ್ರವು
ಸುತ್ತುತ್ತಲೇ ಇರುತ್ತದೆ. ಈ ಸಂಗಮಯುಗದ ಬಗ್ಗೆ ತಂದೆಯು ತಿಳಿಸುತ್ತಾರೆ - ಈ ನಾಟಕವು 5000
ವರ್ಷಗಳದ್ದಾಗಿದೆ. ಅರ್ಧದಲ್ಲಿ ಸೂರ್ಯವಂಶಿ, ಚಂದ್ರವಂಶಿಯರು, ಇನ್ನರ್ಧದಲ್ಲಿ ಅರ್ಥಾತ್ 2500
ವರ್ಷಗಳಲ್ಲಿ ಮತ್ತೆಲ್ಲಾ ಧರ್ಮಗಳು ಬರುತ್ತವೆ. ನಿಮಗೆ ಗೊತ್ತಿದೆ - ಸತ್ಯಯುಗವೇ ನಿರ್ವಿಕಾರಿ
ಪ್ರಪಂಚವಾಗಿದೆ. ನೀವೀಗ ಯೋಗ ಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಕ್ರಿಶ್ಚಿಯನ್ನರು
ಸ್ವಯಂ ತಿಳಿಯುತ್ತಾರೆ - ನಮಗೆ ಯಾರೋ ಪ್ರೇರೇಪಿಸುತ್ತಿದ್ದಾರೆ. ಆದ್ದರಿಂದ ನಾವು ವಿನಾಶಕ್ಕಾಗಿ
ಇವೆಲ್ಲ (ಅಣ್ವಸ್ತ್ರ)ವನ್ನೂ ತಯಾರಿಸುತ್ತೇವೆ, ಅದರಿಂದ ಒಂದು ಪ್ರಪಂಚವೇನು! 10 ಪ್ರಪಂಚಗಳನ್ನೇ
ಸಮಾಪ್ತಿ ಮಾಡಬಲ್ಲೆವು ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಸ್ವರ್ಗ
ಸ್ಥಾಪನೆ ಮಾಡಲು ಬಂದಿದ್ದೇನೆ. ಬಾಕಿ ವಿನಾಶವನ್ನಂತೂ ಇವರು ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಬೇಹದ್ದಿನ
ವೈರಾಗಿಗಳಾಗಿ ಇಲ್ಲಿಯವರೆಗೆ ಭಕ್ತಿಯಲ್ಲಿ ಏನೆಲ್ಲವನ್ನೂ ಓದಿದ್ದೀರಿ ಹಾಗೂ ಕೇಳಿದ್ದೀರೋ
ಅದೆಲ್ಲವನ್ನೂ ಮರೆಯಬೇಕಾಗಿದೆ. ಒಬ್ಬ ತಂದೆಯಿಂದ ಕೇಳಿ ಅವರ ಶ್ರೀಮತದಿಂದ ಸ್ವಯಂನ್ನು ಶ್ರೇಷ್ಠ
ಮಾಡಿಕೊಳ್ಳಬೇಕಾಗಿದೆ.
2. ಹೇಗೆ ತಂದೆಯು ಸಂಪೂರ್ಣ ಪವಿತ್ರರಾಗಿದ್ದಾರೆ, ಅವರಲ್ಲಿ ಯಾವುದೇ ತುಕ್ಕಿಲ್ಲ. ಹಾಗೆಯೇ ನೀವೂ
ಸಹ ಪವಿತ್ರರಾಗಬೇಕಾಗಿದೆ. ನಾಟಕದ ಪ್ರತಿಯೊಬ್ಬ ಪಾತ್ರಧಾರಿಯ ಪಾತ್ರವು ಕರಾರುವಾಕ್ಕಾಗಿದೆ, ಈ
ಗುಹ್ಯ ರಹಸ್ಯವನ್ನು ಅರಿತು ನಡೆಯಬೇಕಾಗಿದೆ.
ವರದಾನ:
ಅವಿನಾಶಿ ಮತ್ತು
ಬೇಹದ್ಧಿನ ಅಧಿಕಾರದ ಖುಶಿ ಹಗೂ ನಶೆಯ ಮೂಲಕ ಸದಾ ನಿಶ್ಚಿಂತ ಭವ.
ಜಗತ್ತಿನಲ್ಲಿ ಬಹಳ
ಪರಿಶ್ರಮ ಪಟ್ಟು ಅಧಿಕಾರವನ್ನು ಪಡೆಯುತ್ತಾರೆ, ನಿಮಗೆ ಪರಿಶ್ರಮವಿಲ್ಲದೆಯೆ ಅಧಿಕಾರ ಸಿಕ್ಕಿ
ಬಿಟ್ಟಿದೆ. ಮಗುವಾಗುವುದು ಎಂದರೇನೆ ಅಧಿಕಾರ ಪಡೆಯುವುದು. “ವಾಹ್ ನಾನು ಶ್ರೇಷ್ಠ ಅಧಿಕಾರಿ ಆತ್ಮ”,
ಈ ಬೆಹದ್ದಿನ ಅಧಿಕಾರದ ನಶೆ ಮತ್ತು ಖುಷಿಯಲ್ಲಿದ್ದಾಗ ಸದಾ ನಿಶ್ಚಿಂತರಾಗಿರುವಿರಿ. ಈ ಅವಿನಾಶಿ
ಅಧಿಕಾರ ನಿಶ್ಚಿತವಾಗಿದೆ. ಎಲ್ಲಿ ನಿಶ್ಚತವಾಗಿರುತ್ತದೆ ಅಲ್ಲಿ ನಿಶ್ಚಿಂತರಾಗಿರುತ್ತಾರೆ. ನಿಮ್ಮ
ಎಲ್ಲಾ ಜವಾಬ್ಧಾರಿಗಳನ್ನು ತಂದೆಗೆ ಒಪ್ಪಿಸಿದಾಗ ಎಲ್ಲಾ ಚಿಂತೆಗಳಿಂದ ಮುಕ್ತರಾಗಿ ಬಿಡುವಿರಿ.
ಸ್ಲೋಗನ್:
ಯಾರು
ಉದಾರಚಿತ್ತ, ವಿಶಾಲ ಹೃದಯಿಗಳಾಗಿದ್ದಾರೆ ಅವರೇ ಏಕತೆಗೆ ಆಧಾರವಾಗಿದ್ದಾರೆ.