01.05.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ನೀವಿಲ್ಲಿ ಮನುಷ್ಯರಿಂದ ದೇವತೆಯಾಗುವ ಟ್ಯೂಷನ್ ತೆಗೆದುಕೊಳ್ಳಲು ಬಂದಿದ್ದೀರಿ, ಕವಡೆಯಿಂದ ವಜ್ರ
ಆಗುತ್ತಿದ್ದೀರಿ”
ಪ್ರಶ್ನೆ:
ನೀವು ಮಕ್ಕಳಿಗೆ
ಯಾವ ವಿದ್ಯೆಯಲ್ಲಿ ಖರ್ಚಾಗುವುದೇ ಇಲ್ಲ - ಏಕೆ?
ಉತ್ತರ:
ಏಕೆಂದರೆ ನಿಮ್ಮ
ತಂದೆಯೇ ಶಿಕ್ಷಕನಾಗಿದ್ದಾರೆ, ತಂದೆಯು ಮಕ್ಕಳಿಂದ ಎಂದಾದರೂ ಶುಲ್ಕವನ್ನು ತೆಗೆದುಕೊಳ್ಳುತ್ತಾರೆಯೇ!
ತಂದೆಗೆ ಮಗುವಾಗಿ ಮಡಿಲಿನಲ್ಲಿ ಬಂದರೆ ಆಸ್ತಿಗೆ ಹಕ್ಕುದಾರರಾಗಿ ಬಿಡುತ್ತಾರೆ. ನೀವು ಮಕ್ಕಳು
ಖರ್ಚಿಲ್ಲದೆ ಕವಡೆಯಿಂದ ವಜ್ರದಂತೆ ದೇವತೆಯಾಗುತ್ತೀರಿ. ಭಕ್ತಿಯಲ್ಲಿ ತೀರ್ಥ ಯಾತ್ರೆ ಮಾಡುತ್ತಾ,
ದಾನ-ಪುಣ್ಯ ಮಾಡುತ್ತಾ ಬಹಳ ಖರ್ಚಾಗುತ್ತದೆ. ಇಲ್ಲಿ ತಂದೆಯು ಮಕ್ಕಳಿಗೆ ರಾಜ್ಯವನ್ನು ಕೊಡುತ್ತಾರೆ.
ಎಲ್ಲಾ ಆಸ್ತಿಯನ್ನು ಉಚಿತವಾಗಿ ನೀಡುತ್ತಾರೆ, ಪಾವನರಾಗಿ ಹಾಗೂ ಆಸ್ತಿಯನ್ನು ಪಡೆಯಿರಿ.
ಓಂ ಶಾಂತಿ.
ಮಕ್ಕಳು ನಾವು ವಿದ್ಯಾರ್ಥಿಗಳೆಂದು ತಿಳಿದುಕೊಂಡಿದ್ದೀರಿ. ತಂದೆಯ ವಿದ್ಯಾರ್ಥಿಗಳು ಏನು
ಓದುತ್ತಿದ್ದಾರೆ? ನಾವು ಮನುಷ್ಯರಿಂದ ದೇವತೆಗಳಾಗುವ ಟ್ಯೂಷನ್ ತೆಗೆದುಕೊಳ್ಳುತ್ತಿದ್ದೇವೆ.
ನಾವಾತ್ಮರು ಪರಮಪಿತ ಪರಮಾತ್ಮನಿಂದ ಟ್ಯೂಷನ್ ತೆಗೆದುಕೊಳ್ಳುತ್ತಿದ್ದೇವೆ. ಈಗ ನಾವು
ಜನ್ಮ-ಜನ್ಮಾಂತರದಿಂದ ಆತ್ಮವನ್ನು ಮರೆತು ದೇಹವೆಂದು ತಿಳಿಯುತ್ತಾ ಬಂದಿದ್ದೇವೆ. ಆ ಲೌಕಿಕ
ತಂದೆಯಂತೂ ಟ್ಯೂಷನ್ಗಾಗಿ ಬೇರೆ ಸ್ಥಾನಕ್ಕೆ ಕಳುಹಿಸಿಕೊಡುತ್ತಾರೆ, ಸದ್ಗತಿಗಾಗಿ ಇನ್ನೊಂದು
ಸ್ಥಾನಕ್ಕೆ ಕಳುಹಿಸಿಕೊಡುತ್ತಾರೆ. ತಂದೆಯು ವೃದ್ಧರಾದಾಗ ವಾನಪ್ರಸ್ಥದಲ್ಲಿ ಹೋಗಬೇಕೆಂದು
ಮನಸ್ಸಾಗುತ್ತದೆ ಆದರೆ ವಾನಪ್ರಸ್ಥದ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ವಾಣಿಯಿಂದ ದೂರ ಹೋಗಲು
ಹೇಗೆ ಸಾಧ್ಯ! ಇದು ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನಾವೀಗ ಪತಿತರಾಗಿದ್ದೇವೆ. ಎಲ್ಲಿಂದ
ನಾವಾತ್ಮಗಳು ಇಲ್ಲಿಗೆ ಬಂದಿದ್ದೇವೆ, ಅಲ್ಲಿ ನೀವು ಪಾವನರಾಗಿದ್ದೀರಿ, ಪಾವನರಾಗಿದ್ದವರು ನೀವು
ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಪತಿತರಾಗಿ ಬಿಟ್ಟಿದ್ದೀರಿ. ಈಗ ಮತ್ತೆ ಪಾವನರನ್ನಾಗಿ
ಯಾರು ಮಾಡುತ್ತಾರೆ. ಹೇ ಪತಿತ-ಪಾವನ ಎಂದು ಕರೆಯುತ್ತಾರೆ. ಗುರುಗಳಿಗಂತೂ ಪತಿತ-ಪಾವನನೆಂದು ಯಾರೂ
ಹೇಳುವುದಿಲ್ಲ. ಗುರುಗಳನ್ನು ಮಾಡಿಕೊಂಡರೂ ಸಹ ಒಬ್ಬ ಗುರುವಿನಲ್ಲಿಯೇ ನಿಶ್ಚಯವಿರುವುದಿಲ್ಲ.
ಆದ್ದರಿಂದ ಮನೆ ಅಥವಾ ವಾನಪ್ರಸ್ಥಕ್ಕೆ ತಲುಪಿಸುವ ಗುರುವನ್ನು ಹುಡುಕುತ್ತಿರುತ್ತಾರೆ ಅದಕ್ಕಾಗಿ
ಬಹಳ ಉಪಾಯಗಳನ್ನು ರಚಿಸುತ್ತಿರುತ್ತಾರೆ. ಯಾರದ್ದಾದರೂ ಯಾವುದಾದರೂ ಗುರುವಿನ ಮಹಿಮೆ ಕೇಳಿದ ತಕ್ಷಣ
ಅಲ್ಲಿಗೆ ಹೊರಟು ಹೋಗುತ್ತಾರೆ. ಯಾರು ಈ ವೃಕ್ಷದ ಸಸಿಯಾಗಿರುತ್ತಾರೆ ಅವರಿಗೆ ಜ್ಞಾನದ ಬಾಣ
ನಾಟುತ್ತದೆ. ಇದು ಸ್ಪಷ್ಟವಾದ ಮಾತಾಗಿದೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಈಗ ನಿಜವಾಗಿಯೂ
ವಾನಪ್ರಸ್ಥ ಸ್ಥಿತಿಯಲ್ಲಿ ಹೋಗುತ್ತೀರಲ್ಲವೆ. ದೊಡ್ಡ ಮಾತೇನಿಲ್ಲ. ಶಿಕ್ಷಕರಿಗೆ ಸ್ಕೂಲಿನಲ್ಲಿ
ಓದಿಸುವುದು ದೊಡ್ಡ ಮಾತೇನಿಲ್ಲ. ಭಕ್ತರಿಗೆ ಏನು ಬೇಕಾಗಿದೆ? ಇದು ಯಾರೂ ತಿಳಿದುಕೊಂಡಿಲ್ಲ. ಈಗ
ನೀವು ಮಕ್ಕಳು ಈ ನಾಟಕದ ಚಕ್ರವನ್ನು ನೀವು ಚೆನ್ನಾಗಿ ತಿಳಿದುಕೊಂಡಿದ್ದೀರಿ. ನಿಮಗೆ ತಿಳಿದಿದೆ -
ಹೌದು! ತಂದೆಯೇ ಆಸ್ತಿಯನ್ನು ಕೊಟ್ಟಿದ್ದರು ಈಗ ಕೊಡುತ್ತಿದ್ದಾರೆ. ಪುನಃ ನಾವು ಅದೇ ಸ್ಥಿತಿಯಲ್ಲಿ
ಹೋಗುತ್ತೇವೆಂದು ನೀವು ಮಕ್ಕಳು ಮಾತ್ರ ತಿಳಿದುಕೊಂಡಿದ್ದೀರಿ. ಮೊದಲನೇ ಮುಖ್ಯ ಮಾತಾಗಿದೆ-
ಪಾವನರಾಗಲು ತಂದೆಯನ್ನು ನೆನಪು ಮಾಡಬೇಕು. ಲೌಕಿಕ ತಂದೆಯಂತೂ ಎಲ್ಲರಿಗೂ ನೆನಪಿದೆ ಆದರೆ ಪಾರಲೌಕಿಕ
ತಂದೆಯನ್ನಂತೂ ಯಾರೂ ತಿಳಿದುಕೊಂಡಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ, ತಮ್ಮನ್ನು ಆತ್ಮನೆಂದು
ತಿಳಿದು ತಂದೆಯನ್ನು ನೆನಪು ಮಾಡುವುದು ಅತಿ ಸಹಜವಾಗಿದೆ, ಅತಿ ಕಷ್ಟವೂ ಆಗಿದೆ.
ಆತ್ಮವು ಅತಿ ಸೂಕ್ಷ್ಮ ನಕ್ಷತ್ರವಾಗಿದೆ, ತಂದೆಯೂ ನಕ್ಷತ್ರವಾಗಿದ್ದಾರೆ. ತಂದೆಯು ಸಂಪೂರ್ಣ
ಪವಿತ್ರ ಆತ್ಮ ಆಗಿದ್ದಾರೆ ಹಾಗೂ ಆತ್ಮರು ಸಂಪೂರ್ಣ ಅಪವಿತ್ರವಾಗಿದೆ. ಸಂಪೂರ್ಣ ಪವಿತ್ರ ಸಂಗ
ಮೇಲೆತ್ತುತ್ತದೆ, ಅದೂ ಸಹ ಒಬ್ಬರಿಂದ ಮಾತ್ರ ಆ ಸಂಗ ಸಿಗುತ್ತದೆ. ಅಗತ್ಯವಾಗಿ ಸಂಗ ಬೇಕಾಗುತ್ತದೆ
ನಂತರ ಪಂಚ ವಿಕಾರಗಳೆಂಬ ರಾವಣನ ಕೆಟ್ಟ ಸಂಗವು ಸಿಗುತ್ತದೆ. ಅವರಿಗೆ ರಾವಣ ಸಂಪ್ರದಾಯದವರೆಂದು
ಹೇಳಲಾಗುವುದು, ಈಗ ನೀವು ರಾಮನ ಸಂಪ್ರದಾಯದವರಾಗುತ್ತಿದ್ದೀರಿ. ನೀವು ರಾಮನ ಸಂಪ್ರದಾಯದವರಾದ ನಂತರ
ರಾವಣನ ಸಂಪ್ರದಾಯವಿರುವುದಿಲ್ಲ. ಈ ಜ್ಞಾನ ಬುದ್ಧಿಯಲ್ಲಿದೆ, ರಾಮನೆಂದು ಭಗವಂತನಿಗೆ ಹೇಳಲಾಗುತ್ತದೆ,
ಭಗವಂತನೇ ಬಂದು ರಾಮರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ ಅರ್ಥಾತ್ ಸೂರ್ಯವಂಶಿ ರಾಜ್ಯ ಸ್ಥಾಪನೆ
ಮಾಡುತ್ತಾರೆ. ರಾಮರಾಜ್ಯವೆಂದು ಹೇಳಬಾರದು ಆದರೆ ರಾಮ ರಾಜ್ಯ ಮತ್ತು ರಾವಣ ರಾಜ್ಯವೆಂದು
ತಿಳಿಸಿಕೊಡುವಾಗ ಸಹಜವಾಗಿರುತ್ತದೆ. ವಾಸ್ತವದಲ್ಲಿ ಅದು ಸೂರ್ಯವಂಶಿ ರಾಜ್ಯವಾಗಿದೆ. ವಜ್ರದಂತಹ
ಜೀವನವು ಹೇಗಾಗುತ್ತದೆ? ಎಂಬ ಚಿಕ್ಕದೊಂದು ಪುಸ್ತಕವಿದೆ. ಈ ವಜ್ರದಂತಹ ಜೀವನ ಯಾರಿಗೆ
ಹೇಳಲಾಗುತ್ತದೆ? ಎಂದು ನಿಮ್ಮ ವಿನಃ ಮನುಷ್ಯರಿಗೇನು ಗೊತ್ತಿದೆ! ಆದ್ದರಿಂದ ವಜ್ರದಂತಹ ದೇವತಾ
ಜೀವನವು ಹೇಗಾಗುತ್ತದೆ ಎಂದು ಬರೆಯಬೇಕು. ದೇವತಾ ಎಂಬ ಅಕ್ಷರ ಅದರೊಂದಿಗೆ ಸೇರ್ಪಡೆಯಾಗಿರಬೇಕು.
ನೀವು ನಮ್ಮ ಜೀವನ ವಜ್ರದಂತೆ ಆಗುತ್ತಿದೆ ಎಂದು ಇಲ್ಲಿ ಅನುಭವ ಮಾಡುತ್ತೀರಿ. ಅದನ್ನು ತಂದೆಯ ವಿನಃ
ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಪುಸ್ತಕವೇನೋ ಬಹಳ ಚೆನ್ನಾಗಿದೆ ಅದರಲ್ಲಿ ಕೇವಲ ಈ ಅಕ್ಷರವನ್ನು
ಸೇರಿಸಿ. ನೀವು ಆಸುರೀ ಕವಡೆಯಂತಹ ಜನ್ಮದಿಂದ ಒಂದು ಪೈಸೆಯೂ ಖರ್ಚಿಲ್ಲದೆ ದೇವತಾ ವಜ್ರದಂತಹ
ಜನ್ಮವನ್ನು ಪ್ರಾಪ್ತಿ ಮಾಡಿಕೊಳ್ಳಬಹುದು. ಮಗು ತಂದೆಯ ಬಳಿ ಜನ್ಮಪಡೆದಾಗ ತಂದೆಯ ಆಸ್ತಿಗೆ
ಅಧಿಕಾರಿಯಾಗುತ್ತದೆ. ಆಗ ಮಗುವಿಗೆ ಏನು ಖರ್ಚಾಗುತ್ತದೆ? ಮಡಿಲಿಗೆ ಬಂದಿತೆಂದರೆ ಆಸ್ತಿಗೆ
ಅಧಿಕಾರಿಯಾಯಿತು. ಕೇವಲ ತಂದೆಯು ಖರ್ಚು ಮಾಡಬೇಕಾಗುತ್ತದೆ ಆದರೆ ಮಗುವಲ್ಲ. ಈಗ ನೀವು ಏನನ್ನು
ಖರ್ಚು ಮಾಡಿದ್ದೀರಿ? ತಂದೆಯ ಮಗುವಾಗಲು ಏನಾದರೂ ಖರ್ಚಾಗುತ್ತದೆಯೇನು? ಇಲ್ಲ. ಲೌಕಿಕ ತಂದೆಗೂ
ಮಗುವಾಗುವುದರಲ್ಲಿಯೂ ಖರ್ಚಾಗುವುದಿಲ್ಲ. ಹಾಗೆಯೇ ಪಾರಲೌಕಿಕ ತಂದೆಗೆ ಮಗುವಾಗುವುದರಲ್ಲಿಯೂ ಏನೂ
ಖರ್ಚಾಗುವುದಿಲ್ಲ. ಇಲ್ಲಂತೂ ತಂದೆಯೇ ಕುಳಿತು ಓದಿಸುತ್ತಾರೆ, ಓದಿಸಿ ನಿಮ್ಮನ್ನು ದೇವತೆಯನ್ನಾಗಿ
ಮಾಡುತ್ತಾರೆ. ನೀವೇನೂ ಚಿಕ್ಕ ಮಕ್ಕಳಲ್ಲ ದೊಡ್ದವರಾಗಿದ್ದೀರಿ. ತಂದೆಗೆ ಮಗುವಾಗುವುದರಿಂದ ತಂದೆಯು
ಸಲಹೆ ಕೊಡುತ್ತಾರೆ. ನೀವು ನಿಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡಬೇಕು ಅದಕ್ಕಾಗಿ ಅಗತ್ಯವಾಗಿ
ಪವಿತ್ರರಾಗಬೇಕು. ಹೀಗೆ ಇಲ್ಲಿ ಸ್ವಲ್ಪವೂ ಖರ್ಚಾಗುವುದಿಲ್ಲ. ಗಂಗೆಯಲ್ಲಿ ಹೋಗಿ ತೀರ್ಥ
ಯಾತ್ರೆಯಲ್ಲಿ ಸ್ನಾನ ಮಾಡಲು ಖರ್ಚಾಗುತ್ತದೆಯಲ್ಲವೆ, ಆದರೆ ನಿಮಗೆ ತಂದೆಯ ಬಗ್ಗೆ ನಿಶ್ಚಯವಾಗಲು
ಖರ್ಚಾಯಿತೇನು? ನಿಮ್ಮ ಬಳಿ ಸೇವಾಕೇಂದ್ರಕ್ಕೆ ಬರುತ್ತಾರೆ, ನೀವು ಅವರಿಗೆ ಬೇಹದ್ದಿನ ತಂದೆಯನ್ನು
ನೆನಪು ಮಾಡಿ ಆಸ್ತಿಯನ್ನು ಪಡೆಯಿರಿ ಎಂದು ಹೇಳುತ್ತೀರಿ. ತಂದೆಯು ಸ್ವಯಂ ಹೇಳುತ್ತಾರೆ- ನಿಮಗೆ
ನನ್ನ ಆಸ್ತಿಯು ಬೇಕಾದರೆ ಪತಿತರಿಂದ ಪಾವನರಾಗಿ ಆಗ ಪಾವನ ವಿಶ್ವಕ್ಕೆ ಮಾಲೀಕರಾಗುತ್ತೀರಿ. ತಂದೆಯು
ವೈಕುಂಠದ ಸ್ಥಾಪನೆಯನ್ನು ಮಾಡುತ್ತಿದಾರೆಂದೂ ಸಹ ತಿಳಿದಿದ್ದೀರಿ. ಬುದ್ಧಿವಂತ ಮಕ್ಕಳು ಬಹಳ
ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಆ ವಿದ್ಯೆಗೆ ಎಷ್ಟೊಂದು ಖರ್ಚಾಗುತ್ತದೆ ಆದರೆ ಇಲ್ಲಿ ಸ್ವಲ್ಪವೂ
ಖರ್ಚಾಗುವುದಿಲ್ಲ. ಆತ್ಮವು ಹೇಳುತ್ತದೆ- ನಾವು ಅವಿನಾಶಿಯಾಗಿದ್ದೇವೆ, ಈ ಶರೀರವು ವಿನಾಶವಾಗಿ
ಬಿಡುತ್ತದೆ. ಮಕ್ಕಳು-ಮರಿ ಎಲ್ಲರೂ ವಿನಾಶವಾಗಿ ಬಿಡುತ್ತಾರೆ. ಒಳ್ಳೆಯದು, ನಂತರ ಇಷ್ಟೊಂದು
ಹಣವನ್ನು ಸೇರಿಸಿ ಏನು ಮಾಡುತ್ತೀರಿ? ಯೋಚನೆಯಿರುತ್ತದೆಯಲ್ಲವೆ. ಯಾರಾದರೂ ಶ್ರೀಮಂತರಾಗಿದ್ದು
ಅವರಿಗೆ ಮಕ್ಕಳಿಲ್ಲದಿರುವಾಗ, ಒಂದುವೇಳೆ ಅವರಿಗೆ ಜ್ಞಾನ ಪ್ರಾಪ್ತಿಯಾದರೆ ಈ ಸ್ಥಿತಿಯಲ್ಲಿ
ಹಣವನ್ನು ಏನು ಮಾಡಬೇಕೆಂದು ತಿಳಿಯುತ್ತಾರೆ? ವಿದ್ಯೆಯಂತೂ ಸಂಪಾದನೆಯಾಗಿದೆ. ತಂದೆ ತಿಳಿಸಿದ್ದಾರೆ-
ಒಬ್ಬ ಅಬ್ರಾಹಂ ಲಿಂಕನ್ ಇದ್ದ. ಅವನು ಬಡವನಾಗಿದ್ದನು. ಅವನು ರಾತ್ರಿಯಲ್ಲಾ ಓದುತ್ತಿದ್ದನು.
ಓದಿ-ಓದಿ ಅಧ್ಯಕ್ಷನಾಗುವಷ್ಟು ಬುದ್ಧಿವಂತನಾಗಿ ಬಿಟ್ಟನು. ಅದಕ್ಕೆ ಖರ್ಚಾಯಿತೇನು? ಏನೂ ಇಲ್ಲ.
ಬಹಳಷ್ಟು ಬಡವರಿಗೆ ಓದಲು ಹಣ ತೆಗೆದುಕೊಳ್ಳುವುದಿಲ್ಲ. ಹೀಗೆ ಬಹಳ ಜನ ಶುಲ್ಕವಿಲ್ಲದೆ ಓದಿ
ಅಧ್ಯಕ್ಷರಾಗಿದ್ದಾರೆ, ಎಷ್ಟೊಂದು ದೊಡ್ಡ ಪದವಿಯನ್ನು ಪಡೆದಿರುತ್ತಾರೆ. ಈ ಈಶ್ವರೀಯ ಸರ್ಕಾರವೂ ಸಹ
ಯಾವುದೇ ಖರ್ಚನ್ನು ತೆಗೆದುಕೊಳ್ಳುವುದಿಲ್ಲ, ಇಡೀ ಪ್ರಪಂಚವೇ ಬಡತನದಲ್ಲಿದೆ ಎಂದು ತಿಳಿದುಕೊಂಡಿದೆ.
ಒಂದುವೇಳೆ ಎಷ್ಟೇ ಶ್ರೀಮಂತರಿರಬಹುದು, ಲಕ್ಷಾಧಿಪತಿಗಳಿರಬಹುದು, ಕೋಟ್ಯಾಧಿಪತಿಗಳಿರಬಹುದು ಅವರೂ
ಸಹ ಬಡವರಾಗಿದ್ದಾರೆ, ನಾವು ಅವರನ್ನು ಶ್ರೀಮಂತರನ್ನಾಗಿ ಮಾಡುತ್ತೇವೆ. ಭಲೆ ಅವರ ಬಳಿ ಎಷ್ಟೇ
ಹಣವಿರಬಹುದು, ಇದು ಸ್ವಲ್ಪ ದಿನಕ್ಕಾಗಿ ಎಂದು ತಿಳಿದುಕೊಂಡಿದ್ದೀರಿ. ಇದೆಲ್ಲವೂ ಮಣ್ಣು ಪಾಲಾಗಿ
ಬಿಡುತ್ತದೆ ಅಂದಾಗ ಎಲ್ಲರೂ ಬಡವರಲ್ಲವೆ! ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ತಂದೆಯು
ಮಕ್ಕಳಿಂದ ವಿದ್ಯಾಭ್ಯಾಸಕ್ಕಾಗಿ ಏನು ತೆಗೆದುಕೊಳ್ಳುತ್ತಾರೆ? ತಂದೆಯಂತೂ ವಿಶ್ವದ
ಮಾಲೀಕರಾಗಿದ್ದಾರೆ, ಮಕ್ಕಳೂ ಸಹ ನಾವು ಭವಿಷ್ಯದಲ್ಲಿ ಹೀಗಾಗುತ್ತೇವೆಂದು ತಿಳಿದುಕೊಂಡಿದ್ದಾರೆ.
ನಾನು ಇದನ್ನು ಸ್ಥಾಪನೆ ಮಾಡುವುದಕ್ಕೆ ಬಂದಿದ್ದೇನೆ, ಬ್ಯಾಡ್ಜ್ನಲ್ಲಿಯೂ ಇದರ ತಿಳುವಳಿಕೆಯಿದೆ.
ಹೊಸ-ಹೊಸ ಸಂಶೋಧನೆಗಳು ನಡೆಯುತ್ತಿರುತ್ತವೆ. ಶಿವ ತಂದೆಯು ಹೇಳುತ್ತಾರೆ- ನನ್ನ ಆತ್ಮದಲ್ಲಿ ಎಲ್ಲವೂ
ನಿಗಧಿಯಾಗಿದೆ. ಯಾರು ವಿಕಾರಿ ಪತಿತರಾಗಿದ್ದಾರೆ ಅವರನ್ನು ತಂದೆಯು ಬಂದು ಪಾವನ ಮಾಡುತ್ತಾರೆ.
5000 ವರ್ಷಗಳ ಹಿಂದೆ ತಂದೆಯಿಂದ ವಿಶ್ವದ ರಾಜ್ಯಭಾಗ್ಯವನ್ನು ಪಡೆದಿದ್ದೆವೆಂದು ನೀವು
ತಿಳಿದುಕೊಂಡಿದ್ದೀರಿ. ಮುಖ್ಯ ಮಾತು ನನ್ನೊಬ್ಬನನ್ನೇ ನೆನಪು ಮಾಡಿ (ಮಾಮೇಕಂ ಯಾದ್ ಕರೋ) ಎಂದು
ತಂದೆಯು ಸನ್ಮುಖದಲ್ಲಿ ತಿಳಿಸುತ್ತಾರೆ. ರಥ ಸಿಕ್ಕಿರುವುದರಿಂದ ತಂದೆಯು ಬಂದು ಬಿಟ್ಟರು. ಒಂದೇ
ರಥವು ನಿಗಧಿಯಾಗಿದೆ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದು ಪರಿವರ್ತನೆಯಾಗುವುದಿಲ್ಲ. ವಜ್ರದ
ವ್ಯಾಪಾರಿಯಾಗಿದ್ದವರು ಹೇಗೆ ಪ್ರಜಾಪಿತ ಆದರೆಂದು ಹೇಳುತ್ತಾರೆ! ಇವರು ವಜ್ರದ
ವ್ಯಾಪಾರಿಯಾಗಿದ್ದಾರೆಂದು ತಿಳಿದುಕೊಂಡಿದ್ದರು. ವಜ್ರದ ವ್ಯಾಪಾರ ಒಂದು ಅಸಲಿ ಇನ್ನೊಂದು ನಕಲಿ
ವ್ಯಾಪಾರವಾಗಿದೆ ಮತ್ತು ಸ್ಥೂಲ ವಜ್ರದ ವ್ಯಾಪಾರವಾಗಿದೆ. ಇದರಲ್ಲಿಯೂ ಅಸಲಿ ವಜ್ರಗಳನ್ನು ತಂದೆಯು
ಕೊಡುತ್ತಾರೆ ಆದ್ದರಿಂದ ಆ ವಜ್ರಗಳು ಯಾವ ಕೆಲಸಕ್ಕೆ ಬರುತ್ತವೆ! ಇವು ಜ್ಞಾನರತ್ನಗಳಾಗಿವೆ, ಈ
ವಜ್ರಗಳ ಮುಂದೆ ಆ ವಜ್ರಗಳಿಗೆ ಬೆಲೆಯೇ ಇಲ್ಲ. ಯಾವಾಗ ಈ ರತ್ನಗಳು ಅವರಿಗೆ ದೊರೆತವು, ಆಗ ಆ
ವಜ್ರಗಳ ವ್ಯಾಪಾರವು ಕೆಲಸಕ್ಕೆ ಬಾರದೆಂದು ತಿಳಿದು ತೊರೆದು ಬಿಟ್ಟರು. ಈ ಅವಿನಾಶಿ ಜ್ಞಾನರತ್ನಗಳು
ಒಂದೊಂದು ಲಕ್ಷ ರೂಪಾಯಿಯದ್ದಾಗಿದೆ. ನಿಮಗೆ ಎಷ್ಟೊಂದು ರತ್ನಗಳು ಸಿಗುತ್ತವೆ. ಈ ಜ್ಞಾನರತ್ನಗಳೇ
ಸತ್ಯವಾಗುತ್ತವೆ. ನಿಮಗೆ ಗೊತ್ತಿದೆ, ತಂದೆಯು ಈ ರತ್ನಗಳನ್ನು ಜೋಳಿಗೆ ತುಂಬಲು ಕೊಡುತ್ತಿದ್ದಾರೆ,
ಇವು ಉಚಿತವಾಗಿ ಸಿಗುತ್ತಿವೆ, ಏನೂ ಖರ್ಚಾಗುತ್ತಿಲ್ಲ. ಅಲ್ಲಿ (ಸತ್ಯಯುಗ) ಗೋಡೆ, ಛಾವಣಿ ಎಲ್ಲದರ
ಮೇಲೆ ವಜ್ರ-ವೈಡೂರ್ಯಗಳಿಂದ ಶೃಂಗರಿಸಿರುತ್ತಾರೆ, ಅವುಗಳ ಬೆಲೆ ಏನಿರುತ್ತದೆ! ನಂತರ ಹೆಚ್ಚುತ್ತದೆ.
ಸತ್ಯಯುಗದಲ್ಲಿ ನಿಮಗಾಗಿ ವಜ್ರ-ವೈಡೂರ್ಯಗಳು ಬಹಳ ಸುಲಭ ಎನಿಸುತ್ತದೆ. ಇದು ಮಕ್ಕಳಿಗೆ
ನಿಶ್ಚಯವಿರಬೇಕಾಗಿದೆ-ತಂದೆ ತಿಳಿಸಿದ್ದಾರೆ ಇವರು ರೂಪನೂ ಆಗಿದ್ದಾರೆ, ಭಸಂತನೂ ಆಗಿದ್ದಾರೆ.
ತಂದೆಯದು ಅತಿ ಸೂಕ್ಷ್ಮ ರೂಪವಾಗಿದೆ, ಅವರಿಗೆ ಜ್ಞಾನಸಾಗರನೆಂದು ಕರೆಯಲಾಗುವುದು. ಇವು
ಜ್ಞಾನರತ್ನಗಳಾಗಿವೆ, ಇವುಗಳಿಂದ ನೀವು ಬಹಳ ಧನವಂತರಾಗುತ್ತೀರಿ ಬಾಕಿ ಯಾವುದೇ ಅಮೃತ ಅಥವಾ ನೀರಿನ
ಮಳೆಯಲ್ಲ. ವಿದ್ಯೆಯಲ್ಲಿ ಮಳೆಯ ಮಾತು ಬರುವುದಿಲ್ಲ. ಪಾವನರಾಗಲು ಖರ್ಚೂ ಸಹ ಆಗುವುದಿಲ್ಲ. ಈಗ
ನಿಮಗೆ ತಿಳುವಳಿಕೆ ಬಂದಿದೆ. ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆಂದು ನೀವು ತಿಳಿದಿದ್ದೀರಿ.
ನಿಮ್ಮ ಯೋಗಬಲದಿಂದ ನೀವು ಪಾವನರಾಗುತ್ತಿದ್ದೀರಿ. ಪಾವನರಾಗಿ ಪಾವನ ಪ್ರಪಂಚದಲ್ಲಿ ಹೊರಟು
ಹೋಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಈಗ ಯಾವುದು ಸರಿಯಾಗಿದೆ? ಈ ಎಲ್ಲಾ ಮಾತುಗಳಲ್ಲಿ
ಬುದ್ಧಿಯು ವಿಚಾರ ಮಾಡುತ್ತಿರಬೇಕು. ನಾಟಕದಲ್ಲಿ ಈ ಭಕ್ತಿಯ ಪಾತ್ರವು ಖಂಡಿತ ನಡೆಯುತ್ತದೆ. ಈಗ
ತಂದೆಯು ಹೇಳುತ್ತಾರೆ- ಈಗ ನೀವು ಪಾವನರಾಗಿ ಪಾವನ ಪ್ರಪಂಚದಲ್ಲಿ ಹೋಗಬೇಕು. ಈಗ ಯಾರು
ಪಾವನರಾಗುತ್ತಾರೆ ಅವರು ಹೋಗುತ್ತಾರೆ. ಯಾರು ಇಲ್ಲಿಯ ಸಸಿಯಾಗಿರುತ್ತಾರೆ ಅವರೇ ಹೊರಟು ಬರುತ್ತಾರೆ.
ಉಳಿದವರೆಲ್ಲರೂ ತಿಳಿದುಕೊಳ್ಳುವುದಿಲ್ಲ ಅವರಂತೂ ಕೆಸರಿನಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತಾರೆ.
ಯಾವಾಗ ಇದನ್ನೆಲ್ಲಾ ಕೇಳುತ್ತಾರೆ ಆಗ ಅಂತ್ಯದಲ್ಲಿ ಹೀಗೆ ಹೇಳುತ್ತಾರೆ- ಅಹೋ ಪ್ರಭು! ನಿನ್ನ ಲೀಲೆ......
ಹೇಗೆ ನೀವು ಹಳೆಯ ಪ್ರಪಂಚವನ್ನು ಹೊಸ ಪ್ರಪಂಚವನ್ನಾಗಿ ಮಾಡುತ್ತೀರಿ? ನಿಮ್ಮ ಈ ಜ್ಞಾನ ಸಮಾಚಾರ
ಪತ್ರಿಕೆಗಳಲ್ಲಿಯೂ ಸಹ ಬಹಳಷ್ಟು ಬರುತ್ತಿರುತ್ತದೆ. ವಿಶೇಷವಾಗಿ ಈ ಚಿತ್ರವನ್ನು ಬಣ್ಣದಲ್ಲಿ
ಮಾಡಿಸಿ ಸಮಾಚಾರ ಪತ್ರಿಕೆಯಲ್ಲಿ ಹಾಕಿಸಿ ಹಾಗೂ ಶಿವ ತಂದೆಯು ಪ್ರಜಾಪಿತ ಬ್ರಹ್ಮನ ಮೂಲಕ ಓದಿಸಿ
ಸ್ವರ್ಗದ ಮಾಲೀಕರ (ಲಕ್ಷ್ಮೀ-ನಾರಾಯಣ) ನ್ನಾಗಿ ಮಾಡುತ್ತಾರೆಂದು ಬರೆಯಿರಿ. ಹೇಗೆ ಮಾಡುತ್ತಾರೆ?
ನೆನಪಿನ ಯಾತ್ರೆಯಿಂದ. ನೆನಪನ್ನು ಮಾಡುತ್ತಾ ನಿಮ್ಮ ಪಾಪವು ನಾಶವಾಗಿ ಬಿಡುತ್ತದೆ. ನೀವು
ನಿಂತು-ನಿಂತಲ್ಲಿಯೇ ಎಲ್ಲರಿಗೂ ಈ ಮಾರ್ಗವನ್ನು ತೋರಿಸಬಹುದು...... ತಂದೆಯು ತಿಳಿಸುತ್ತಾರೆ-
ನನ್ನೊಬ್ಬನನ್ನೇ ನೆನಪು ಮಾಡಿ, ತಮ್ಮನ್ನು ಆತ್ಮನೆಂದು ತಿಳಿಯಿರಿ. ಪದೇ-ಪದೇ ನೆನಪು ತರಿಸುತ್ತಾ
ಅವರ ಮುಖವನ್ನು ನೋಡಿ ಅವರಲ್ಲಿ ಏನಾದರೂ ಪರಿವರ್ತನೆಯಾಗುತ್ತದೆಯೇ? ನಯನಗಳು ನೀರಿನಿಂದ
ತೇವವಾಗುತ್ತವೆಯೇ? ಆಗ ತಿಳಿದುಕೊಳ್ಳಿ- ಇವರ ಬುದ್ಧಿಯಲ್ಲಿ ಕುಳಿತಿದೆ. ಮೊಟ್ಟ ಮೊದಲು ಈ ಒಂದು
ಮಾತನ್ನೆ ತಿಳಿಸಿಕೊಡಬೇಕು. 5000 ವರ್ಷಗಳ ಹಿಂದೆ ತಂದೆಯು ನನ್ನೊಬ್ಬನನ್ನೇ ನೆನಪು ಮಾಡಿ ಎಂದು
ಹೇಳಿದ್ದರು. ಶಿವ ತಂದೆಯು ಈ ಸೃಷ್ಟಿಯಲ್ಲಿ ಬಂದಿರುವ ಕಾರಣ ಶಿವ ಜಯಂತಿಯನ್ನು ಆಚರಿಸುತ್ತಾರೆ.
ಭಾರತವನ್ನು ಸ್ವರ್ಗವನ್ನಾಗಿ ಮಾಡಲು ಅವರು ಇದನ್ನೇ ತಿಳಿಸಿದರು- ನನ್ನೊಬ್ಬನನ್ನೇ ನೆನಪು ಮಾಡಿದಾಗ
ನೀವು ಪಾವನರಾಗಿ ಬಿಡುತ್ತೀರಿ. ಚಿಕ್ಕ-ಚಿಕ್ಕ ಮಕ್ಕಳೂ ಸಹ ಹೀಗೆ ಕುಳಿತು ತಿಳಿಸಬಹುದು. ಬೇಹದ್ದಿನ
ತಂದೆಯು ಶಿವ ತಂದೆಯೇ ಹೀಗೆ ತಿಳಿಸುತ್ತಾರೆ. ಬಾಬಾ ಎಂಬ ಶಬ್ಧವು ಬಹಳ ಮಧುರವಾಗಿದೆ. ತಂದೆ ಹಾಗೂ
ಆಸ್ತಿ- ಈ ನಿಶ್ಚಯದಲ್ಲಿ ಮಕ್ಕಳಿರಬೇಕು. ಇದು ಮನುಷ್ಯರಿಂದ ದೇವತೆಗಳಾಗುವ ವಿದ್ಯಾಲಯವಾಗಿದೆ.
ದೇವತೆಗಳು ಪಾವನರಾಗಿರುತ್ತಾರೆ. ಈಗ ತಂದೆಯು ತಿಳಿಸುತ್ತಾರೆ- ತನ್ನನ್ನು ಆತ್ಮನೆಂದು ತಿಳಿದು
ನನ್ನನ್ನು ನೆನಪು ಮಾಡಿ, ಮನ್ಮನಾಭವ. ಅಕ್ಷರವನ್ನು ಕೇಳಿರುತ್ತಾರೆ, ಕೇಳದೇ ಇರುವವರಿಗೆ ತಂದೆಯು
ತಿಳಿಸುತ್ತಾರೆ- ನಾನೇ ಪತಿತ-ಪಾವನನಾಗಿದ್ದೇನೆ. ನೀವು ನನ್ನನ್ನು ನೆನಪು ಮಾಡಿದಾಗ ನಿಮ್ಮ
ಅಪವಿತ್ರತೆಯು ಸಮಾಪ್ತಿಯಾಗಿ ನೀವು ಸತೋಪ್ರಧಾನರಾಗಿ ಬಿಡುತ್ತೀರಿ. ಇದೇ ಶ್ರಮವಾಗಿದೆ. ಜ್ಞಾನವನ್ನು
ಎಲ್ಲರೂ ಹೇಳುತ್ತಾರೆ ಬಹಳ ಚೆನ್ನಾಗಿದೆ ಫಸ್ಟ್ ಕ್ಲಾಸ್ ಜ್ಞಾನವಾಗಿದೆ ಆದರೆ ಪ್ರಾಚೀನ ರಾಜಯೋಗದ
ಮಾತನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಪಾವನರಾಗುವ ಮಾತನ್ನು ತಿಳಿಸಿದರೂ
ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ- ಈಗ ನೀವೆಲ್ಲರೂ ತಮೋಪ್ರಧಾನ, ಪತಿತರಾಗಿ
ಬಿಟ್ಟಿದ್ದೀರಿ. ಈಗ ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ. ಮೂಲತಃ ನೀವಾತ್ಮರು
ನನ್ನ ಜೊತೆಯಲ್ಲಿದ್ದವರಲ್ಲವೆ! ನೀವು ನನ್ನನ್ನು ಕರೆಯುವುದೂ ಸಹ ಓ ಗಾಡ್ ಫಾದರ್ ಬನ್ನಿ ಎಂದು. ಈಗ
ನಾನು ಬಂದಿದ್ದೇನೆ, ಈಗ ನೀವು ನನ್ನ ಮತದಂತೆ ನಡೆಯಿರಿ. ಇದಾಗಿದೆ- ಪತಿತರಿಂದ ಪಾವನರಾಗುವ ಮತ.
ನಾನು ಸರ್ವಶಕ್ತಿವಂತನಾಗಿದ್ದೇನೆ, ಸದಾ ಪಾವನನಾಗಿದ್ದೇನೆ. ಈಗ ನೀವು ನನ್ನನ್ನು ನೆನಪು ಮಾಡಿ.
ಇದನ್ನೇ ಪ್ರಾಚೀನ ರಾಜಯೋಗವೆಂದು ಕರೆಯಲಾಗುವುದು. ನೀವು ವ್ಯವಹಾರದಲ್ಲಿ ಭಲೆ ಇರಿ, ಮಕ್ಕಳು-ಮರಿ
ಎಲ್ಲರನ್ನೂ ಸಂಭಾಲನೆ ಮಾಡಿ ಕೇವಲ ಬುದ್ಧಿಯೋಗವನ್ನು ಮಾತ್ರ ನನ್ನ ಜೊತೆ ಜೋಡಿಸಿ. ಇದು
ಎಲ್ಲದಕ್ಕಿಂತ ಮುಖ್ಯವಾದ ಮಾತಾಗಿದೆ. ಇದನ್ನು ತಿಳಿದುಕೊಳ್ಳದೇ ಇದ್ದರೆ ಬೇರೆ ಏನೂ
ತಿಳಿದುಕೊಂಡಿಲ್ಲ ಎಂದರ್ಥ. ಜ್ಞಾನಕ್ಕಾಗಿ ಬಹಳ ಒಳ್ಳೆಯ ಜ್ಞಾನವನ್ನು ಕೊಡುತ್ತಿದ್ದೀರಿ,
ಪವಿತ್ರತೆಯೂ ಚೆನ್ನಾಗಿದೆ ಆದರೆ ನಾವು ಹೇಗೆ ಪವಿತ್ರರಾಗುವುದು? ಸದಾಕಾಲಕ್ಕಾಗಿ ಈ ಮಾತುಗಳನ್ನು
ತಿಳಿದುಕೊಳ್ಳುವುದೇ ಇಲ್ಲ. ದೇವತೆಗಳು ಸದಾ ಪವಿತ್ರರಾಗಿದ್ದರಲ್ಲವೆ! ಹೇಗಾದರು? ಈ ಮಾತುಗಳನ್ನು
ಮೊಟ್ಟ ಮೊದಲು ತಿಳಿಸಬೇಕು. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ನನ್ನನ್ನು ನೆನಪು ಮಾಡಿ.
ನೆನಪಿನಿಂದ ಪಾಪವು ಅಳಿಸಿ ಹೋಗುತ್ತದೆ ಮತ್ತು ದೇವತೆಯಾಗಿ ಬಿಡುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪುಪ್ರೀತಿ ಹಾಗೂ ಸುಪ್ರಭಾತ. ಆತ್ಮಿಯ ಮಕ್ಕಳಿಗೆ ಆತ್ಮಿಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1.
ಸ್ವಯಂನ್ನುಬಡವರಿಂದ ಶ್ರೀಮಂತರನ್ನಾಗಿ ಮಾಡಿಕೊಳ್ಳಲು ತಂದೆಯಿಂದ ಅವಿನಾಶಿ
ಜ್ಞಾನರತ್ನಗಳನ್ನುತೆಗೆದುಕೊಳ್ಳಬೇಕು. ಈ ಒಂದೊಂದು ಜ್ಞಾನರತ್ನಗಳು ಲಕ್ಷಾಂತರ ರೂಪಾಯಿಗಳಾಗಿವೆ.
ಇದರ ಬೆಲೆಯನ್ನರಿತು ವಿದ್ಯೆಯನ್ನು ಓದಬೇಕು. ಈ ವಿದ್ಯೆಯು ಸಂಪಾದನೆಯಾಗಿದೆ. ಇದರಿಂದಲೇ ಶ್ರೇಷ್ಠ
ಪದವಿಯನ್ನು ಪಡೆಯಬೇಕು.
2. ರಾಮನ ಸಂಪ್ರದಾಯದಲ್ಲಿ ಬರುವ ಸಲುವಾಗಿ ಸಂಪೂರ್ಣ ಪವಿತ್ರರಾಗಿರುವಂತಹ ಒಬ್ಬ ತಂದೆಯ ಸಂಗವನ್ನು
ಮಾಡಬೇಕು. ಕೆಟ್ಟ ಸಂಗದಿಂದ ಸದಾ ದೂರವಿರಬೇಕು. ಎಲ್ಲಾ ಕಡೆಯಿಂದ ಬುದ್ಧಿಯೋಗವನ್ನು ತೆಗೆದು ಒಬ್ಬ
ತಂದೆಯಲ್ಲಿ ತೊಡಗಿಸಬೇಕು.
ವರದಾನ:
ಸ್ವಯಂನಲ್ಲಿ
ಸರ್ವ ಶಕ್ತಿಗಳನ್ನು ಇಮರ್ಜ್ ರೂಪದಲ್ಲಿ ಅನುಭವ ಮಾಡುವಂತಹ ಸರ್ವ ಸಿದ್ಧಿ ಸ್ವರೂಪ ಭವ.
ಲೌಕಿಕದಲ್ಲಿ ಕೆಲವರಲ್ಲಿ
ಕೆಲವು ಶಕ್ತಿಗಳಿರುತ್ತವೆ, ಇಲ್ಲಾ ಹಣದ್ದಿರಬಹುದು, ಇಲ್ಲಾ ಬುದ್ಧಿಯದಿರಬಹುದು, ಇಲ್ಲಾ
ಸಂಬಂಧ-ಸಂಪರ್ಕದ್ದಿರಬಹುದು..... ಅಂದರೆ ಅವರಿಗೆ ನಿಶ್ಚಯವಿರುವುದು ಇದೇನು ದೊಡ್ಡ ವಿಷಯ ಎಂದು.
ಅವರು ಶಕ್ತಿಯ ಆಧಾರದಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ನಿಮ್ಮ ಬಳಿಯಾದರೂ ಎಲ್ಲಾ
ಶಕ್ತಿಗಳೂ ಇವೆ, ಅವಿನಾಶಿ ಧನದ ಶಕ್ತಿ ಸದಾ ಜೊತೆಯಲ್ಲಿರುವುದು, ಬುದ್ಧಿಯ ಶಕ್ತಿಯೂ ಸಹಾ ಇದೆ
ಪೊಜಿಷನ್ ನ ಶಕ್ತಿಯೂ ಸಹಾ ಇದೆ, ಸರ್ವ ಶಕ್ತಿಗಳೂ ನಿಮ್ಮಲ್ಲಿ ಇವೆ, ಸರ್ವ ಶಕ್ತಿಗಳೂ ನಿಮ್ಮಲ್ಲಿವೆ,
ಅವುಗಳನ್ನು ಕೇವಲ ಇಮರ್ಜ್ ರೂಪದಲ್ಲಿ ಅನುಭವ ಮಾಡಿದಲ್ಲಿ ಸಮಯದಲ್ಲಿ ವಿಧಿಯ ಮೂಲಕ ಸಿದ್ಧಿಯನ್ನು
ಪ್ರಾಪ್ತಿ ಮಾಡಿಕೊಂಡು ಸಿದ್ಧಿ ಸ್ವರೂಪರಾಗಿ ಬಿಡುವಿರಿ.
ಸ್ಲೋಗನ್:
ಮನಸ್ಸನ್ನು
ಫ್ರಭುವಿನ ಸಂಪತ್ತು ಎಂದು ತಿಳಿದು ಅದನ್ನು ಸದಾ ಶ್ರೇಷ್ಠ ಕಾರ್ಯದಲ್ಲಿ ತೊಡಗಿಸಿ.