15.01.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಹೇಗೆ
ತಂದೆಯು ಸಿಹಿಯಾದ ಬೆಟ್ಟವಾಗಿದ್ದಾರೆ, ಅದೇ ರೀತಿ ನೀವು ಮಕ್ಕಳೂ ಸಹ ಸಿಹಿಯಾದ ತಂದೆ ಹಾಗೂ
ಆಸ್ತಿಯನ್ನು ನೆನಪು ಮಾಡುತ್ತಾ ಅತೀ ಮಧುರರಾಗಬೇಕಾಗಿದೆ.”
ಪ್ರಶ್ನೆ:
ನೀವೀಗ ಯಾವ
ವಿಧಿಯಿಂದ ಸ್ವಯಂನ್ನು ರಕ್ಷಿಸಿಕೊಂಡು ತಮ್ಮದೆಲ್ಲವನ್ನೂ ಸುರಕ್ಷಿತ ಮಾಡಿಕೊಳ್ಳುತ್ತೀರಿ?
ಉತ್ತರ:
ತಾವು
ಹೇಳುತ್ತೀರಿ - ಬಾಬಾ, ದೇಹ ಸಹಿತ ಯಾವುದೆಲ್ಲಾ ಕೆಲಸಕ್ಕೆಬಾರದಿರುವುದಿದೆ, ನಾವು ನಮ್ಮದೆಲ್ಲವನ್ನೂ
ತಮಗೆ ಕೊಡುತ್ತೇವೆ ಮತ್ತು ನಂತರ ತಮ್ಮಿಂದ ಅಲ್ಲಿ (ಭವಿಷ್ಯ) ಎಲ್ಲವನ್ನು ಪಡೆಯುತ್ತೇವೆ ಅಂದಾಗ
ತಾವು ಸುರಕ್ಷಿತವಾಗಿ ಬಿಟ್ಟಿರಿ. ಎಲ್ಲವನ್ನೂ ತಂದೆಯ ತಿಜೋರಿ(ಭಂಡಾರ)ಯಲ್ಲಿ ಸುರಕ್ಷಿತ ಮಾಡಿ
ಬಿಡುತ್ತೀರಿ. ಇದು ಶಿವತಂದೆಯ ಸುರಕ್ಷಿತವಾದ ಬ್ಯಾಂಕ್ ಆಗಿದೆ. ತಾವು ತಂದೆಯ ರಕ್ಷಣೆಯಲ್ಲಿದ್ದು
ಅಮರರಾಗಿರುತ್ತೀರಿ. ತಾವು ಮೃತ್ಯುವಿನ ಮೇಲೂ ಸಹ ವಿಜಯಗಳಿಸುತ್ತೀರಿ. ಶಿವತಂದೆಯ ಮಕ್ಕಳಾಗಿದ್ದೀರಿ
ಅಂದಾಗ ಸುರಕ್ಷಿತರಾದಿರಿ. ಬಾಕಿ ಮ ಪದವಿಯನ್ನು ಪಡೆಯಲು ಪುರುಷಾರ್ಥ ಮಾಡಬೇಕಾಗಿದೆ.
ಓಂ ಶಾಂತಿ.
ತಂದೆಯು ಮಕ್ಕಳಿಗೆ ಹೇಳುತ್ತಾರೆ - ಮಧುರ ಮಕ್ಕಳೇ, ತಮ್ಮ ಭವಿಷ್ಯದ ಪುರುಷೋತ್ತಮ ಮುಖವನ್ನು
ನೋಡುತ್ತೀರಾ? ಪುರುಷೋತ್ತಮ ವಸ್ತ್ರವನ್ನು ನೋಡುತ್ತೀರಾ? ನಾವು ಹೊಸ ಭವಿಷ್ಯ ಸತ್ಯಯುಗೀ
ಪ್ರಪಂಚದಲ್ಲಿ ಇವರ (ಲಕ್ಷ್ಮೀ-ನಾರಾಯಣ) ವಂಶಾವಳಿಯಾಗುತ್ತೇವೆ ಅಂದರೆ ಸುಖಧಾಮದಲ್ಲಿ ಹೋಗುತ್ತೇವೆ
ಅಥವಾ ಪುರುಷೋತ್ತಮರಾಗುತ್ತೇವೆ ಎಂಬುದು ಅರ್ಥವಾಗುತ್ತದೆ. ವಿದ್ಯಾರ್ಥಿಗಳು ಓದುವಾಗ ನಾನು ಮುಂದೆ
ಈ ರೀತಿಯಾಗುತ್ತೇನೆಂದು ಬುದ್ಧಿಯಲ್ಲಿರುತ್ತದೆಯಲ್ಲವೆ. ನಾವು ವಿಷ್ಣುವಿನ ಕುಲದಲ್ಲಿ ಹೋಗುತ್ತೇವೆ
ಏಕೆಂದರೆ ವಿಷ್ಣುವಿನ ರೂಪವೇ ಲಕ್ಷ್ಮೀ-ನಾರಾಯಣರಾಗಿದ್ದಾರೆ ಎಂಬುದೂ ಸಹ ನಿಮಗೆ ಗೊತ್ತಿದೆ. ಈಗ
ನಿಮ್ಮ ಬುದ್ಧಿಯು ಅಲೌಕಿಕವಾಗಿದೆ, ಬೇರೆ ಯಾರ ಬುದ್ಧಿಯಲ್ಲಿ ಈ ಮಾತುಗಳು ಬರುವುದಿಲ್ಲ. ನಾವು
ಸತ್ಯ ತಂದೆ, ಶಿವ ತಂದೆಯ ಸಂಗದಲ್ಲಿ ಕುಳಿತಿದ್ದೇವೆ ಎಂಬುದೂ ಸಹ ನಿಮಗೆ ಗೊತ್ತಿದೆ. ಸರ್ವ
ಶ್ರೇಷ್ಠ ತಂದೆಯು ನಮಗೆ ಓದಿಸುತ್ತಿದ್ದಾರೆ, ಅವರು ಬಹಳ ಮಧುರವಾಗಿದ್ದಾರೆ. ಆ ಅತೀ ಮಧುರ
ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕು. ಏಕೆಂದರೆ ತಂದೆಯು ಹೇಳುತ್ತಾರೆ - ಮಕ್ಕಳೇ,
ನನ್ನನ್ನು ನೆನಪು ಮಾಡುವುದರಿಂದ ತಾವು ಅಂತಹ ಪುರುಷೋತ್ತಮರಾಗುತ್ತೀರಿ ಹಾಗೂ ಜ್ಞಾನ ರತ್ನಗಳನ್ನು
ಧಾರಣೆ ಮಾಡುವುದರಿಂದ ತಾವು ಭವಿಷ್ಯದ 21 ಜನ್ಮಗಳಿಗಾಗಿ ಪದಮಾ ಪದಮಾಪತಿಗಳಾಗುತ್ತೀರಿ. ತಂದೆಯು ವರ
ಕೊಡುತ್ತಾರೆ, ಅದು ಮಧುರಾತಿ ಮಧುರ ಪ್ರಿಯತಮೆಗೆ ಅಥವಾ ಮಧುರಾತಿ ಮಧುರ ಸುಪುತ್ರರಿಗೆ ಸಿಗುತ್ತದೆ.
ಮಧುರಾತಿ ಮಧುರ ಮಕ್ಕಳನ್ನು ನೋಡಿ ಖುಷಿಯಾಗುತ್ತಾರೆ. ಮಕ್ಕಳಿಗೆ ತಿಳಿದಿದೆ, ಈ ನಾಟಕದಲ್ಲಿ ಎಲ್ಲರೂ
ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸುತ್ತಿದ್ದಾರೆ. ಬೇಹದ್ದಿನ ತಂದೆಯೂ ಸಹ ಈ ಬೇಹದ್ದಿನ ನಾಟಕದಲ್ಲಿ
ಸಮ್ಮುಖದಲ್ಲಿ ಪಾತ್ರವನ್ನಭಿನಯಿಸುತ್ತಿದ್ದಾರೆ. ಮಧುರ ತಂದೆಯ, ತಾವು ಮಧುರ ಮಕ್ಕಳಿಗೆ ಅತಿ ಮಧುರ
ತಂದೆಯು ಸಮ್ಮುಖದಲ್ಲಿ ಕಾಣಿಸುತ್ತಾರೆ. ಆತ್ಮವೇ ಈ ಶರೀರದ ಕರ್ಮೇಂದ್ರಿಯಗಳಿಂದ ಪರಸ್ಪರರನ್ನು
ನೋಡುತ್ತದೆ ಅಂದಮೇಲೆ ತಾವು ಮಧುರ ಮಕ್ಕಳಾಗಿದ್ದೀರಿ. ನಾನು ಮಕ್ಕಳನ್ನು ಬಹಳ ಮಧುರರನ್ನಾಗಿ ಮಾಡಲು
ಬಂದಿದ್ದೇನೆಂದು ತಂದೆಗೆ ಗೊತ್ತಿದೆ. ಈ ಲಕ್ಷ್ಮೀ – ನಾರಾಯಣರು ಬಹಳ ಮಧುರರಾಗಿದ್ದಾರೆ, ಇವರ
ರಾಜಧಾನಿಯೂ ಸಹ ಮಧುರವಾಗಿದೆ. ಹಾಗೆಯೇ ಇವರ ಪ್ರಜೆಗಳೂ ಸಹ ಬಹಳ ಮಧುರರಾಗಿದ್ದಾರೆ. ಮಂದಿರಕ್ಕೆ
ಹೋದಾಗ ಇವರನ್ನು ಎಷ್ಟೊಂದು ಮಧುರರಾಗಿ ನೋಡುತ್ತಾರೆ. ಎಲ್ಲಿಯಾದರೂ ಮಂದಿರಗಳು ತೆರೆದಿದ್ದರೆ ನಾವು
ಮಧುರ ದೇವತೆಗಳ ದರ್ಶನ ಮಾಡೋಣವೆಂದು ಹೇಳುತ್ತಾರೆ. ಇವರು ಈ ಮಧುರ ಸ್ವರ್ಗದ ಮಾಲೀಕರಾಗಿದ್ದರು ಎಂದು
ದರ್ಶನ ಮಾಡೋಣವೆಂದು ತಿಳಿಯುತ್ತಾರೆ. ಶಿವನ ಮಂದಿರದಲ್ಲಿಯೂ ಸಹ ಎಷ್ಟೊಂದು ಮನುಷ್ಯರಿರುತ್ತಾರೆ
ಏಕೆಂದರೆ ಅವರು ಬಹಳ ಮಧುರರಾಗಿದ್ದಾರೆ. ಈ ಮಧುರಾತಿ ಮಧುರ ಶಿವ ತಂದೆಯ ಮಹಿಮೆಯನ್ನು ಮಾಡುತ್ತಾರೆ.
ತಾವು ಮಕ್ಕಳೂ ಸಹ ಬಹಳ ಮಧುರರಗಬೇಕಾಗಿದೆ. ಅತೀ ಮಧುರ ತಂದೆಯು ತಾವು ಮಕ್ಕಳ ಸಮ್ಮುಖದಲ್ಲಿ
ಕುಳಿತಿದ್ದಾರೆ. ಏಕೆಂದರೆ ಅವರು ನಿರಾಕಾರಿಯಾಗಿದ್ದಾರೆ. ಇವರಂತಹ ಮಧುರರು ಬೇರೆ ಯಾರೂ ಇರಲು
ಸಾಧ್ಯವಿಲ್ಲ. ತಂದೆಯು ಸಿಹಿಯಾದ ಬೆಟ್ಟವಾಗಿದ್ದಾರೆ, ಮಧುರ ತಂದೆಯೇ ಬಂದು ಕಹಿಯಾದ ಜಗತ್ತನ್ನು
ಬಹಳ ಮಧುರವನ್ನಾಗಿ ಮಾಡುತ್ತಾರೆ. ಮಕ್ಕಳಿಗೆ ಗೊತ್ತಿದೆ - ಮಧುರ ತಂದೆಯು ನಮ್ಮನ್ನು ಬಹಳ
ಮಧುರರನ್ನಾಗಿ ಮಾಡುತ್ತಾರೆ, ತಮ್ಮ ಸಮಾನ ಮಾಡಿಕೊಳ್ಳುತ್ತಾರೆ. ಯಾರು ಹೇಗಿರುತ್ತಾರೆಯೋ ಹಾಗೆಯೇ
ಮಾಡುತ್ತಾರಲ್ಲವೆ ಅಂದಮೇಲೆ ಆ ರೀತಿ ಮಧುರವಾಗಲು ಮಧುರ ತಂದೆ ಹಾಗೂ ಮಧುರ ಆಸ್ತಿಯನ್ನು ನೆನಪು
ಮಾಡಬೇಕು. ತಂದೆಯು ಪದೇ-ಪದೇ ಮಕ್ಕಳಿಗೆ ಹೇಳುತ್ತಾರೆ - ಮಧುರ ಮಕ್ಕಳೇ, ತಮ್ಮನ್ನು ಅಶರೀರಿಯೆಂದು
ತಿಳಿದು ನನ್ನನ್ನು ನೆನಪು ಮಾಡಿದಾಗ ನೆನಪಿನಿಂದಲೇ ನಿಮ್ಮ ಎಲ್ಲಾ ಕಲಹ -ಕ್ಲೇಷಗಳು ಅಳಿಸು
ಹೋಗುತ್ತವೆಂದು ನಾನು ಪ್ರತಿಜ್ಞೆ ಮಾಡುತ್ತೇನೆ. ತಾವು ಆರೋಗ್ಯವಂತರು-ಐಶ್ವರ್ಯವಂತರು ಆಗುತ್ತೀರಿ,
ತಾವು ಬಹಳ ಮಧುರರೂ ಆಗುತ್ತೀರಿ. ಆತ್ಮವು ಮಧುರವಾದರೆ ಶರೀರವೂ ಅಂತಹದ್ದೇ ಸಿಗುತ್ತದೆ. ಮಕ್ಕಳಿಗೆ
ಪ್ರಿಯಾತಿ ಪ್ರಿಯ ತಂದೆಗೆ ನಾವು ಮಕ್ಕಳಾಗಿದ್ದೇವೆ, ನಾವು ತಂದೆಯ ಶ್ರೀಮತದಂತೆ ನಡೆಯಬೇಕೆಂಬ
ನಶೆಯಿರಬೇಕು. ಬಹಳ ಮಧುರಾತಿ ಮಧುರ ತಂದೆಯು ನಮ್ಮನ್ನು ಬಹಳ ಮಧುರವನ್ನಾಗಿ ಮಾಡುತ್ತಾರೆ. ಅತೀ
ಪ್ರಿಯ ತಂದೆಯು ಹೇಳುತ್ತಾರೆ - ನಿಮ್ಮ ಮುಖದಿಂದ ಸದಾ ರತ್ನಗಳೇ ಹೊರ ಬರುತ್ತಿರಬೇಕು, ಯಾವುದೇ
ಕಠಿಣ ಮಾತುಗಳು ಬರಬಾರದು. ಎಷ್ಟು ಮಧುರರಾಗುತ್ತೀರಿ ಅಷ್ಟು ತಂದೆಯ ಹೆಸರನ್ನು ಪ್ರಸಿದ್ಧ
ಮಾಡುತ್ತೀರಿ. ತಾವು ಮಕ್ಕಳು ತಂದೆಯನ್ನು ಅನುಸರಿಸಿದಾಗ ನಿಮ್ಮನ್ನು ಎಲ್ಲರೂ ಅನುಸರಿಸುತ್ತಾರೆ.
ತಂದೆಯು ನಿಮ್ಮ ಶಿಕ್ಷಕರೂ ಆಗಿದ್ದಾರಲ್ಲವೆ ಅಂದಮೇಲೆ ಶಿಕ್ಷಕರು ಖಂಡಿತ ಮಕ್ಕಳಿಗೆ ಶಿಕ್ಷಣ
ಕೊಡುತ್ತಾರೆ - ಮಕ್ಕಳೇ, ಪ್ರತಿ ದಿನ ನೆನಪಿನ ಚಾರ್ಟನ್ನಿಡಬೇಕು. ಹೇಗೆ ವ್ಯಾಪಾರಿಗಳು
ರಾತ್ರಿಯಲ್ಲಿ ಲೆಕ್ಕ ಹಾಕುತ್ತಾರಲ್ಲವೆ ಅಂದಾಗ ತಾವು ವ್ಯಾಪಾರಿಗಳು ತಂದೆಯೊಂದಿಗೆ ಎಷ್ಟು ದೊಡ್ಡ
ವ್ಯಾಪಾರ ಮಾಡುತ್ತೀರಿ, ತಂದೆಯನ್ನು ಎಷ್ಟು ನೆನಪು ಮಾದುತ್ತೀರೋ ಅಷ್ಟು ತಂದೆಯಿಂದ ಅಪಾರ ಸುಖವನ್ನು
ಪಡೆಯುತ್ತೀರಿ, ಸತೋಪ್ರಧಾನರಾಗುತ್ತೀರಿ. ಪ್ರತಿನಿತ್ಯ ತಮ್ಮೊಂದಿಗೆ ತಾವು ಪರಿಶೀಲನೆ ಮಾಡಿಕೊಳ್ಳಿ.
ಹೇಗೆ ನಾರದನಿಗೆ ಕನ್ನಡಿಯಲ್ಲಿ ನಿನ್ನ ಮುಖವನ್ನು ನೋಡಿಕೋ ಲಕ್ಷ್ಮೀಯನ್ನು ವರಿಸಲು
ಯೋಗ್ಯನಾಗಿದ್ದೇನೆಯೇ ಎಂದು ಹೇಳಲಾಯಿತು. ನೀವೂ ಸಹ ನಾನು ಆ ರೀತಿಯಾಗಲು ಯೋಗ್ಯನಾಗಿದ್ದೇನೆಯೇ ಎಂದು
ನೋಡಿಕೊಳ್ಳಬೇಕು. ಇಲ್ಲವೆಂದರೆ ನಮ್ಮಲ್ಲಿ ಏನೇನು ನಿಶ್ಯಕ್ತತೆಗಳಿವೆ ಎಂದು ತಿಳಿಯುತ್ತದೆ.
ಏಕೆಂದರೆ ತಾವು ಮಕ್ಕಳು ಸಂಪೂರ್ಣರಾಗಬೇಕಾಗಿದೆ. ತಂದೆಯು ಬಂದಿರುವುದೇ ನಮ್ಮನ್ನು ಸಂಪನ್ನರನ್ನಾಗಿ
ಮಾಡಲು ಅಂದಮೇಲೆ ಪ್ರಾಮಾಣಿಕರಾಗಿ ತಮ್ಮನ್ನು ನೋಡಿಕೊಳ್ಳಬೇಕು - ನಮ್ಮಲ್ಲಿ ಏನೇನು
ನಿಶ್ಯಕ್ತತೆಯಿದೆ? ಇದರ ಕಾರಣದಿಂದ ನಾನು ಉತ್ತಮ ಪದವಿಯನ್ನು ಪಡೆಯಲು ಸಾಧ್ಯವಿಲ್ಲವೆಂದು
ಗೊತ್ತಾಗುತ್ತದೆ. ಈ ಭೂತಗಳನ್ನು ಓಡಿಸುವ ಯುಕ್ತಿಯನ್ನು ತಂದೆಯೇ ಹೇಳುತ್ತಿರುತ್ತಾರೆ. ತಂದೆಯು
ಕುಳಿತು ಎಲ್ಲಾ ಆತ್ಮರನ್ನೂ ನೋಡುತ್ತಿರುತ್ತಾರೆ. ಯಾರದಾದರೂ ನಿಶ್ಯಕ್ತತೆಯನ್ನು ನೋಡಿದರೆ ಆಗ
ಅವರಿಗೆ ಇವರ ವಿಘ್ನಗಳೆಲ್ಲವೂ ಹೋಗಬೇಕೆಂದು ಕರೆಂಟ್ ಕೊಡುತ್ತೇವೆ. ತಂದೆಗೆ ಎಷ್ಟು ಸಹಯೋಗ ಕೊಟ್ಟು
ತಂದೆಯ ಮಹಿಮೆಯನ್ನು ಮಾಡುತ್ತಿರುತ್ತೀರಿ. ಆಗ ಈ ಭೂತಗಳು ಓಡುತ್ತಿರುತ್ತವೆ ಹಾಗೂ ನಿಮಗೆ ಬಹಳ
ಖುಷಿಯಾಗುತ್ತದೆ. ತಮ್ಮನ್ನು ಪೂರ್ಣ ಪರಿಶೀಲನೆ ಮಾಡಿಕೊಳ್ಳಬೇಕು - ಇಡೀ ದಿನದಲ್ಲಿ
ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖ ಕೊಟ್ಟಿಲ್ಲವೆ? ಸಾಕ್ಷಿಯಾಗಿ ತಮ್ಮ ನಡುವಳಿಕೆಯನ್ನು
ನೋಡಿಕೊಳ್ಳಬೇಕು. ಬೇರೆಯವರ ನಡವಳಿಕೆಯನ್ನು ನೋಡಬಹುದು. ಮೊದಲು ತಮ್ಮನ್ನು ನೋಡಿಕೊಳ್ಳಬೇಕಾಗಿದೆ.
ಕೇವಲ ಬೇರೆಯವರು ಅದನ್ನು ನೋಡುವುದರಿಂದ ತಮ್ಮದನ್ನು ಮರೆತು ಹೋಗುತ್ತೀರಿ. ಪ್ರತಿಯೊಬ್ಬರೂ ತಮ್ಮ
ಸರ್ವೀಸ್ ಮಾಡಿಕೊಳ್ಳಬೇಕು, ಅನ್ಯರ ಸರ್ವೀಸ್ ಮಾಡುವುದೆಂದರೆ ತಮ್ಮ ಸರ್ವೀಸ್ ಮಾಡಿಕೊಳ್ಳುವುದಾಗಿದೆ.
ತಾವು ಶಿವ ತಂದೆಯ ಸರ್ವೀಸ್ ಮಾಡುವುದಿಲ್ಲ. ಆದರೆ ಶಿವ ತಂದೆಯಂತೂ ತಮ್ಮ ಸೇವೆ ಮಾಡಬೇಕೆಂದೇ
ಬಂದಿದ್ದಾರೆ. ತಾವು ಬ್ರಾಹ್ಮಣ ಮಕ್ಕಳು ಬಹಳ-ಬಹಳ ಅಮೂಲ್ಯವಾಗಿದ್ದೀರಿ. ತಾವು ಶಿವ ತಂದೆಯ
ಬ್ಯಾಂಕ್ನಲ್ಲಿ ತಿಜೋರಿಯಲ್ಲಿ(ಲಾಕರ್) ಕುಳಿತಿದ್ದೀರಿ. ತಾವು ತಂದೆಯ ರಕ್ಷಣೆಯಲ್ಲಿದ್ದು
ಅಮರರಾಗುತ್ತೀರಿ. ತಾವು ಮೃತ್ಯುವಿನ ಮೇಲೆ ಜಯ ಗಳಿಸುತ್ತಿದ್ದೀರಿ. ಶಿವ ತಂದೆಯ
ಮಕ್ಕಾಳಾಗಿದ್ದೀರೆಂದರೆ ಸುರಕ್ಷಿತರಾದಿರಿ ಬಾಕಿ ಉತ್ತಮ ಪದವಿಯನ್ನು ಪಡೆಯಲು ಪುರುಷಾರ್ಥ
ಮಾಡಬೇಕಾಗಿದೆ. ಪ್ರಪಂಚದಲ್ಲಿ ಮನುಷ್ಯರ ಬಳಿ ಎಷ್ಟೇ ಹಣ-ಐಶ್ವರ್ಯವಿದ್ದರೂ ಸಹ ಅದೂ ಸಮಾಪ್ತಿಯಾಗಿ
ಬಿಡುವುದು, ಏನೂ ಇರುವುದಿಲ್ಲ. ತಾವು ಮಕ್ಕಳ ಬಳಿ ಈಗ ಏನೂ ಇಲ್ಲ, ಈ ದೇಹವೂ ಸಹ ಇಲ್ಲ ಇದನ್ನೂ ಸಹ
ತಂದೆಗೆ ಕೊಟ್ಟು ಬಿಡಿ. ಯಾರ ಬಳಿ ಏನೂ ಇಲ್ಲವೋ ಅವರ ಬಳಿಯೇ ಎಲ್ಲವೂ ಇದೆಯೆಂದರ್ಥ. ತಾವು
ಬೇಹದ್ದಿನ ತಂದೆಯಿಂದ ಭವಿಷ್ಯ ಹೊಸ ಪ್ರಪಂಚಕ್ಕಾಗಿ ವ್ಯಾಪಾರ ಮಾಡಿದ್ದೀರಿ. ತಂದೆಯೇ, ದೇಹ ಸಹಿತ
ಏನೆಲ್ಲಾ ಕೆಲಸಕ್ಕೆ ಬಾರದಿರುವುದಿದೆ ಅದೆಲ್ಲವನ್ನೂ ನಿಮಗೆ ಕೊಡುತ್ತೇವೆ ಮತ್ತು ತಮ್ಮಿಂದ ನಂತರ
ಅಲ್ಲಿ ಎಲ್ಲವನ್ನೂ ಪಡೆಯುತ್ತೇವೆಂದು ತಾವು ಹೇಳುತ್ತೀರಿ ಅಂದಮೇಲೆ ತಾವು ಒಂದು ರೀತಿ
ಸುರಕ್ಷಿತರಾಗಿ ಬಿಟ್ಟಿರಿ. ಎಲ್ಲವೂ ತಂದೆಯ ತಿಜೋರಿಯಲ್ಲಿ ಸುರಕ್ಷಿತವಾಯಿತು. ತಾವು ಮಕ್ಕಳಲ್ಲಿ
ಎಷ್ಟೊಂದು ಖುಷಿಯಿರಬೇಕು. ಬಾಕಿ ಸ್ವಲ್ಪ ಸಮಯವಿದೆ ಮತ್ತೆ ನಾವು ನಮ್ಮ ರಾಜಧಾನಿಯಲ್ಲಿರುತ್ತೇವೆ.
ನೀವು ಯಾರಾದರೂ ಕೇಳಿದರೆ ಹೇಳಿ - ನಾವಂತೂ ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು
ಪಡೆಯುತ್ತಿದ್ದೇವೆ! ಸದಾಕಾಲಕ್ಕೆ ಆರೋಗ್ಯ-ಐಶ್ವರ್ಯವಂತರಾಗುತ್ತೇವೆ. ನಮ್ಮದೆಲ್ಲಾ ಮನೋಕಾಮನೆಗಳು
ಪೂರ್ಣವಾಗುತ್ತಿವೆ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ಈಗ ಆತ್ಮಾಭಿಮಾನಿಗಳಾಗಿ. ಯೋಗ
ಬಲದಿಂದ ತಾವು ಯಾರಿಗಾದರೂ ಸ್ವಲ್ಪ ಹೇಳಿದರೆ ಸಾಕು, ಅವರಿಗೆ ತಕ್ಷಣ ಬಾಣ ನಾಟುತ್ತದೆ. ಯಾರಿಗೆ
ಬಾಣವು ನಾಟಿದೆ ಒಂದೇ ಸಲ ಬಲಿಯಾಗುತ್ತಾರೆ. ಮೊದಲು ಬಲಿಹಾರಿಗಳಾಗುತ್ತಾರೆ ನಂತರ ತಂದೆಯ
ಮಕ್ಕಳಾಗುತ್ತಾರೆ. ತಂದೆಯನ್ನು ಪ್ರೀತಿಯಿಂದ ನೆನಪು ಮಾಡಿದರೆ ತಂದೆಗೂ ಸಹ ಆಕರ್ಷಣೆಯಾಗುತ್ತದೆ.
ಕೆಲವರಂತೂ ಸ್ವಲ್ಪವೂ ನೆನಪೇ ಮಾಡುವುದಿಲ್ಲ. ತಂದೆಗೆ ದಯೆ ಬರುತ್ತದೆ ಆದರೂ ಹೇಳುತ್ತಾರೆ - ಮಕ್ಕಳೇ,
ಉನ್ನತಿಯನ್ನು ಹೊಂದಿರಿ. ಮೊದಲ ನಂಬರಿನಲ್ಲಿ ಬನ್ನಿ. ಎಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರೋ
ಅಷ್ಟು ಸಮೀಪ ಬರುತ್ತೀರಿ. ಅಷ್ಟು ಅಪಾರ ಸುಖ ಸಿಗುತ್ತದೆ. ಪತಿತ-ಪಾವನನಂತೂ ಒಬ್ಬ ತಂದೆಯೇ
ಆಗಿದ್ದಾರೆ. ಆದ್ದರಿಂದ ಒಬ್ಬ ತಂದೆಯನ್ನು ನೆನಪು ಮಾಡಬೇಕು. ಕೇವಲ ಒಬ್ಬ ತಂದೆಯನ್ನು ಮಾತ್ರವೇ
ಅಲ್ಲ ಜೊತೆ ಜೊತೆಗೆ ಮಧುರ ಮನೆಯನ್ನೂ ನೆನಪು ಮಾಡಬೇಕು. ಕೇವಲ ಮಧುರ ಮನೆಯನ್ನು ಮಾತ್ರವೇ ಅಲ್ಲ,
ಸಂಪತ್ತೂ ಸಹ ಬೇಕಲ್ಲವೆ. ಆದ್ದರಿಂದ ಸ್ವರ್ಗಧಾಮವನ್ನೂ ನೆನಪು ಮಾಡಬೇಕು, ಅವಶ್ಯವಾಗಿ
ಪವಿತ್ರರಾಗಬೇಕಾಗಿದೆ. ಸಾಧ್ಯವಾದಷ್ಟು ಮಕ್ಕಳು ಅಂತರ್ಮುಖಿಗಳಾಗಬೇಕು, ಹೆಚ್ಚು ಮಾತನಾಡಬಾರದು.
ಶಾಂತಿಯಲ್ಲಿರಬೇಕು. ಮಧುರ ಮಕ್ಕಳೇ, ಅಶಾಂತಿಯನ್ನು ಹರಡಬಾರದು ಎಂದು ತಂದೆಯು ಮಕ್ಕಳಿಗೆ ಶಿಕ್ಷಣ
ಕೊಡುತ್ತಾರೆ. ತಮ್ಮ ಮನೆ-ಗೃಹಸ್ಥದಲ್ಲಿದ್ದರೂ ಸಹ ಬಹಳ ಶಾಂತಿಯಲ್ಲಿರಿ ಮತ್ತು ಬಹಳ ಮಧುರವಾಗಿ
ಮಾತನಾಡಿ. ಅಂರ್ತಮುಖಿಯಾಗಿರಿ ಯಾರಿಗೂ ದುಃಖವನ್ನು ಕೊಡಬಾರದು. ಕೋಪ ಮಾಡಿಕೊಳ್ಳಬಾರದು, ಕ್ರೋಧದ
ಭೂತವಿದ್ದರೆ ನೆನಪಿನಲ್ಲಿರಲು ಸಾಧ್ಯವಿಲ್ಲ. ತಂದೆಯು ಎಷ್ಟು ಮಧುರವಾಗಿದ್ದಾರೆ ಅಂದಮೇಲೆ ಮಕ್ಕಳಿಗೂ
ತಿಳಿಸುತ್ತಾರೆ - ಬುದ್ಧಿಗೆ ಪೆಟ್ಟು ಕೊಡಬಾರದು. ಬಾಹರ್ಮುಖಿಗಳಾಗಬಾರದು ಅಂತರ್ಮುಖಿಗಳಾಗಬೇಕು.
ತಂದೆಯು ಎಷ್ಟೊಂದು ಪ್ರಿಯ ಹಾಗೂ ಪವಿತ್ರವಾಗಿದ್ದಾರೆ. ತಾವು ಮಕ್ಕಳನ್ನೂ ಸಹ ತಮ್ಮ ಸಮಾನ
ಪವಿತ್ರರನ್ನಾಗಿ ಮಾಡುತ್ತಾರೆ. ತಾವೆಷ್ಟು ತಂದೆಯನ್ನು ನೆನಪು ಮಾಡುತ್ತೀರಿ ಅಷ್ಟೂ
ಪ್ರಿಯರಾಗುತ್ತೀರಿ. ದೇವತೆಗಳೂ ಸಹ ಎಷ್ಟೊಂದು ಪ್ರಿಯರು, ಅವರನ್ನು ಇಲ್ಲಿಯ ತನಕ ಅವರ ಎಷ್ಟೊಂದು
ಜಡ ಚಿತ್ರಗಳನ್ನು ಪೂಜಿಸುತ್ತಲೇ ಇರುತ್ತಾರೆ ಅಂದಮೇಲೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು
ಅಂತಹ ಪ್ರಿಯರಾಗಬೇಕು ಯಾವುದೇ ದೇಹಧಾರಿ, ಯಾವುದೇ ವಸ್ತುವಿನ ನೆನಪು ಬರಬಾರದು. ಎಷ್ಟು
ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು, ಕುಳಿತು-ಕುಳಿತಿದ್ದಂತೆಯೇ ಪ್ರೇಮದ ಕಣ್ಣೀರು
ಹರಿಯುತ್ತಿರಬೇಕು. ಬಾಬಾ, ಓ ಮಧುರ ಬಾಬಾ ತಮ್ಮಿಂದ ನಮಗೆ ಎಲ್ಲವೂ ಪ್ರಾಪ್ತಿಯಾಗಿದೆ. ಬಾಬಾ, ತಾವು
ನಮ್ಮನ್ನು ಎಷ್ಟೊಂದು ಪ್ರಿಯರನ್ನಾಗಿ ಮಾಡುತ್ತೀರಿ. ಆತ್ಮವು ಪ್ರಿಯವಾಗುತ್ತದೆಯಲ್ಲವೆ. ಹೇಗೆ
ತಂದೆಯು ಅತಿಪ್ರಿಯ, ಪವಿತ್ರರಾಗಿದ್ದಾರೆಯೋ ಹಾಗೆಯೇ ಪವಿತ್ರರಾಗಬೇಕಾಗಿದೆ. ಬಹಳ ಪ್ರೀತಿಯಿಂದ
ತಂದೆಯನ್ನು ನೆನಪು ಮಾಡಬೇಕು. ಬಾಬಾ, ನಿಮ್ಮ ವಿನಃ ನಮ್ಮ ಮುಂದೆ ಯಾರೂ ಬರಬಾರದು. ತಂದೆಯ ಹಾಗೆ
ಪ್ರಿಯರು ಬೇರೆ ಯಾರೂ ಇಲ್ಲ. ಪ್ರತಿಯೊಬ್ಬರೂ ಆ ಒಬ್ಬ ಪ್ರಿಯತಮನ ಪ್ರಿಯತಮೆಯರಾಗುತ್ತಾರೆ ಅಂದಾಗ ಈ
ಪ್ರಿಯತಮನನ್ನು ಬಹಳ ನೆನಪು ಮಾಡಬೇಕು. ತಂದೆಯು ತಿಳಿಸುತ್ತಾರೆ - ಆ ಶಾರೀರಿಕ
ಪ್ರಿಯತಮ-ಪ್ರಿಯತಮೆಯರು ಒಟ್ಟಿಗೆ ಏನೂ ಇರುವುದಿಲ್ಲ, ಒಂದು ಬಾರಿ ನೋಡಿದರೆ ಸಾಕು ಅಂದಮೇಲೆ ತಂದೆಯು
ತಿಳಿಸುತ್ತಾರೆ - ಮಧುರ ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿದರೆ ದೋಣಿಯು ಪಾರಾಗುತ್ತದೆ. ಯಾವ
ಮಧುರ ತಂದೆಯ ಮೂಲಕ ನಾವು ವಜ್ರ ಸಮಾನರಾಗುತ್ತಿದ್ದೇವೆ ಅಂತಹ ತಂದೆಯೊಂದಿಗೆ ನಮ್ಮದು ಎಷ್ಟು
ಪ್ರೀತಿಯಿದೆ. ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಿ ಒಳಗೆ ಒಂದೇ ಸಲ, ರೋಮಾಂಚನವಾಗಬೇಕು.
ಯಾವುದೆಲ್ಲಾ ಕಲೆಗಳಿವೆಯೋ ಅದನ್ನು ತೆಗೆದು ಪವಿತ್ರ ವಜ್ರವಾಗಬೇಕು. ಒಂದು ವೇಳೆ ಸ್ವಲ್ಪ
ಕೊರತೆಯಿದ್ದರೂ ಸಹ ಬೆಲೆಯು ಕಡಿಮೆಯಾಗುತ್ತದೆ. ತಮ್ಮನ್ನು ಬಹಳ ಅಮೂಲ್ಯವಾದ ವಜ್ರವನ್ನಾಗಿ
ಮಾಡಿಕೊಳ್ಳಬೇಕು. ತಂದೆಯ ನೆನಪು ಸತಾಯಿಸಬೇಕು ಮರೆಯಬಾರದು ಬದಲಿಗೆ ಇನ್ನೂ ನೆನಪು ಸತಾಯಿಸಬೇಕು.
ಬಾಬಾ-ಬಾಬಾ ಎನ್ನುತ್ತಾ ಸಂಪೂರ್ಣ ಶೀತಲರಾಗಬೇಕು. ತಂದೆಯಿಂದ ಎಷ್ಟು ದೊಡ್ಡ ಆಸ್ತಿಯು
ಸಿಗುತ್ತದೆಯಲ್ಲವೆ. ಈಗ ತಾವು ಮಕ್ಕಳು ತಮ್ಮ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ,
ಎಲ್ಲರೂ ಪುರುಷಾರ್ಥ ಮಾಡುತ್ತಾರೆ. ಯಾರು ಹೆಚ್ಚು ಪುರುಷಾರ್ಥ ಮಾಡುತ್ತಾರೆಯೋ ಅವರು ಹೆಚ್ಚು
ಬಹುಮಾನವನ್ನು ಪಡೆಯುತ್ತಾರೆ. ಇದಂತೂ ಕಾಯಿದೆಯಾಗಿದೆ, ಸ್ಥಾಪನೆಯಾಗುತ್ತಿದೆ ಇದಕ್ಕೆ ದೈವೀ
ರಾಜಧಾನಿ ಎಂದಾದರೂ ಹೇಳಿ ಅಥವಾ ಹೂದೋಟವೆಂದಾದರೂ ಹೇಳಿ. ಹೂದೋಟದಲ್ಲಿ ನಂಬರ್ವಾರ್ ಹೂಗಳಿರುತ್ತವೆ.
ಕೆಲವಂತೂ ಬಹಳ ಚೆನ್ನಾಗಿ ಫಲ ಕೊಡುತ್ತವೆ, ಕೆಲವು ಕಡಿಮೆ. ಇಲ್ಲಿಯೂ ಸಹ ಅದೇ ರೀತಿಯಾಗಿ ಇದೆ.
ಕಲ್ಪದ ಮೊದಲಿನಂತೆ ಮಧುರರಾಗುತ್ತಿದ್ದಾರೆ, ಸುಗಂಧಭರಿತರೂ ಸಹ ಆಗುತ್ತಿದ್ದಾರೆ ನಂಬರ್ವಾರ್
ಪುರುಷಾರ್ಥದನುಸಾರ ಸ್ವರ್ಗದ ಮಾಲೀಕರಾಗುತ್ತಿದ್ದೇವೆಂದು ಮಕ್ಕಳಿಗೆ ನಿಶ್ಚಯವಿದೆ. ಸ್ವರ್ಗದ
ಮಾಲೀಕರಾಗುವುದರಲ್ಲಿ ಮಕ್ಕಳಿಗೆ ಬಹಳ ಖುಷಿಯಿದೆ ಅಂದಾಗ ತಂದೆಯು ಕುಳಿತು ಮಕ್ಕಳನ್ನು ನೋಡುತ್ತಾರೆ.
ಮನೆಯ ಮೇಲೆ ಯಜಮಾನನ ದೃಷ್ಟಿಯಿರುತ್ತದೆಯಲ್ಲವೆ. ಯಾರಲ್ಲಿ ಯಾವ-ಯಾವ ಗುಣವಿದೆ, ಯಾವ-ಯಾವ
ಅವಗುಣವಿದೆಯೆಂದು ನೋಡುತ್ತಾರೆ. ಮಕ್ಕಳೂ ಸಹ ತಿಳಿದುಕೊಂಡಿದ್ದಾರೆ. ಆದ್ದರಿಂದ ತಂದೆಯು
ಹೇಳುತ್ತಾರೆ - ತಮ್ಮ ಬಲಹೀನತೆಗಳನ್ನು ತಾವೇ ಬರೆದುಕೊಂಡು ಬನ್ನಿ. ಸಂಪೂರ್ಣರಂತೂ ಯಾರೂ ಸಹ
ಆಗಿಲ್ಲ, ಹಾ! ಆಗಲೇಬೇಕು. ಕಲ್ಪ-ಕಲ್ಪದಲ್ಲಿಯೂ ಆಗಿದ್ದೀರಿ. ತಂದೆಯು ತಿಳಿಸುತ್ತಾರೆ-
ದೇಹಾಭಿಮಾನದ ಬಲಹೀನತೆಯು ಮುಖ್ಯವಾಗಿದೆ. ದೇಹಾಭಿಮಾನವು ಬಹಳ ತೊಂದರೆ ಮಾಡುತ್ತದೆ. ಸ್ಥಿತಿಯನ್ನು
ಚೆನ್ನಾಗಿಟ್ಟುಕೊಳ್ಳಲು ಬಿಡುವುದೇ ಇಲ್ಲ. ಈ ದೇಹವನ್ನೂ ಮರೆಯಬೇಕಾಗಿದೆ. ಈ ಹಳೆಯ ಶರೀರವನ್ನು
ಬಿಟ್ಟು ಹೋಗಬೇಕು. ಆದ್ದರಿಂದ ದೈವೀ ಗುಣವನ್ನೂ ಸಹ ಇಲ್ಲಿಯೇ ಧಾರಣೆ ಮಾಡಿಕೊಂಡು ಹೋಗಬೇಕು.
ಹೋಗಬೇಕಾದರೆ ಯಾವುದೇ ಕಲೆಗಳಿರಬಾರದು. ತಾವು ವಜ್ರ ಸಮಾನರಾಗುತ್ತೀರಲ್ಲವೆ. ಯಾವ-ಯಾವ ಕೊರತೆಯಿದೆ
ಎಂಬುದು ನಿಮಗೆ ಗೊತ್ತಿದೆ. ಈ ವಜ್ರದಲ್ಲಿಯೂ ಸಹ ಕಲೆಯಿರುತ್ತದೆ. ಆದರೆ ಅದರಿಂದ ಆ ಕಲೆಯನ್ನು
ತೆಗೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅದು ಜಡ ವಸ್ತುವಲ್ಲವೆ. ಅದನ್ನು ತುಂಡರಿಸಬೇಕಾಗುತ್ತದೆ.
ತಾವು ಚೈತನ್ಯ ವಜ್ರಗಳಾಗಿದ್ದೀರಿ ಅಂದಮೇಲೆ ಯಾವುದೆಲ್ಲಾ ಕಲೆಯಿದೆಯೋ ಅದನ್ನು ಸಂಪೂರ್ಣವಾಗಿ
ತೆಗೆದು ಅಂತಿಮದ ಸಮಯಕ್ಕೆ ಕಲಾರಹಿತರಾಗಬೇಕು. ಒಂದು ವೇಳೆ ಕಲಾರಹಿತರಾಗದಿದ್ದರೆ ಬೆಲೆಯು
ಕಡಿಮೆಯಾಗುತ್ತದೆ. ತಾವು ಚೈತನ್ಯವಾಗಿರುವ ಕಾರಣ ಕಲೆಯನ್ನು ತೆಗೆಯಬಹುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾರವರ ನೆನಪು-ಪ್ರೀತಿ
ಹಾಗೂ ಗುಡ್ಮಾರ್ನಿಂಗ್. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
೧. ಎಷ್ಟು
ಸಾಧ್ಯವೋ ಅಷ್ಟು ಅಂತರ್ಮುಖಿಗಳಾಗಿ, ಶಾಂತಿಯಲ್ಲಿರಬೇಕು. ಹೆಚ್ಚು ಮಾತನಾಡಬಾರದು, ಅಶಾಂತಿಯನ್ನು
ಹರಡಬಾರದು. ಬಹಳ ಮಧುರವಾಗಿ ಮಾತನಾಡಬೇಕು, ಯಾರಿಗೂ ದುಃಖ ಕೊಡಬಾರದು. ಕ್ರೋಧ ಮಾಡಬಾರದು,
ಬಾಹರ್ಮುಖಿಗಳಾಗಿ ಬುದ್ಧಿಗೆ ಪೆಟ್ಟು ಕೊಡಬಾರದು.
೨. ಸಂಪೂರ್ಣ ಸರಿಯಾಗಲು ಪ್ರಾಮಾಣಿಕರಾಗಿ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕು - ನನ್ನಲ್ಲಿ
ಯಾವ-ಯಾವ ಕೊರತೆಯಿದೆ, ಸಾಕ್ಷಿಯಾಗಿ ತಮ್ಮ ನಡವಳಿಕೆಯನ್ನು ನೋಡಿಕೊಳ್ಳಬೇಕು, ಭೂತಗಳನ್ನು ಓಡಿಸುವ
ಯುಕ್ತಿಗಳನ್ನು ರಚಿಸಬೇಕು.
ವರದಾನ:
ಅನುಭವಿಸುವ ಶಕ್ತಿಯ ಮುಖಾಂತರ ಮಧುರವಾದ ಅನುಭವ ಮಾಡುವಂತಹ ಸದಾ ಶಕ್ತಿಶಾಲಿ ಆತ್ಮ ಭವ.
ಈ ಅನುಭವಿಸುವ ಶಕ್ತಿ
ಬಹಳ ಮಧುರವಾದ ಅನುಭವವನ್ನು ಮಾಡಿಸುವುದು - ಕೆಲವೊಮ್ಮೆ ತಮ್ಮನ್ನು ತಂದೆಯ ಕಣ್ಮಣಿ ಆತ್ಮ ಅರ್ಥಾತ್
ನಯನಗಳಲ್ಲಿ ಸಮಾವೇಶವಾಗಿರುವ ಶ್ರೇಷ್ಠ ಬಿಂದುವಾಗಿ ಅನುಭವ ಮಾಡಿ, ಕೆಲವೊಮ್ಮೆ ಮಸ್ತಕದಲ್ಲಿ
ಹೊಳೆಯುತ್ತಿರುವ ಮಸ್ತಕ ಮಣಿ, ಕೆಲವೊಮ್ಮೆ ನಿಮ್ಮನ್ನು ಬ್ರಹ್ಮಾ ತಂದೆಗೆ ಸಹಯೋಗಿ ಬಲಗೈ,
ಬ್ರಹ್ಮಾರವರ ಭುಜಗಳೆಂದು ಅನುಭವ ಮಾಡಿ, ಕೆಲವೊಮ್ಮೆ ಅವ್ಯಕ್ತ ಫರಿಶ್ಥಾ ಸ್ವರೂಪ ಅನುಭವ ಮಾಡಿ.....
ಈ ಅನುಭವ ಮಾಡುವಂತಹ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಆಗ ಶಕ್ತಿಶಾಲಿಯಾಗುವಿರಿ. ನಂತರ ಸಣ್ಣ ಕಲೆಯೂ
ಸಹಾ ಸ್ಪಷ್ಠವಾಗಿ ಕಂಡು ಬರುವುದು ಮತ್ತು ಅದನ್ನು ಪರಿವರ್ತನೆ ಮಾಡಿಕೊಳ್ಳುವಿರಿ.
ಸ್ಲೋಗನ್:
ಎಲ್ಲರ ಹೃದಯದ
ಆಶೀರ್ವಾದಗಳನ್ನು ಪಡೆಯುತ್ತಾ ಹೋಗಿ ಆಗ ನಿಮ್ಮ ಪುರುಷಾರ್ಥ ಸಹಜವಾಗಿ ಬಿಡುವುದು.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ -
ಹೇಗೆ ಬ್ರಹ್ಮಾ ತಂದೆ ಬೀಜ ರೂಪ ಸ್ಟೇಜ್ ಅರ್ಥಾತ್ ಶಕ್ತಿಶಾಲಿ ಸ್ಟೇಜ್ ನ ವಿಶೇಷ ಅಭ್ಯಾಸ ಮಾಡಿ ಇಡೀ
ವಿಶ್ವಕ್ಕೆ ಸಕಾಶವನ್ನು ಕೊಟ್ಟರು. ಅದೇ ರೀತಿ ತಂದೆಯನ್ನು ಅನುಕರಣೆ ಮಾಡಿ. ಏಕೆಂದರೆ ಈ ಸ್ಟೇಜ್
ಲೈಟ್ ಹೌಸ್ , ಮೈಟ್ ಹೌಸ್ ನ ಕಾರ್ಯ ಮಾಡುವುದು. ಹೆಗೆ ಬೀಜದ ಮೂಲಕ ಇಡೀ ವೃಕ್ಷಕ್ಕೆ ನೀರು
ದೊರೆಯುವುದು, ಅದೇ ರೀತಿ ಯವಾಗ ಬೀಜರೂಪ ಸ್ಟೇಜ್ ಮೇಲೆ ಸ್ಥಿತರಾಗುವಿರಿ ಆಗ ಸ್ವತಃವಾಗಿ ವಿಶ್ವಕ್ಕೆ
ಲೈಟ್ ನ ನೀರು ದೊರಕುವುದು.