28.02.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಾವೀಗ ಹಂಸಗಳಾಗುವ ಪುರುಷಾರ್ಥ ಮಾಡುತ್ತಿದ್ದೀರಿ, ತಾವು ಈ ಲಕ್ಷ್ಮೀ-ನಾರಾಯಣರಂತೆ ಹಂಸಗಳು ಅರ್ಥಾತ್ ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ.”

ಪ್ರಶ್ನೆ:
ಈ ಜ್ಞಾನ ಮಾರ್ಗದಲ್ಲಿ ತೀವ್ರ ಗತಿಯಲ್ಲಿ ಹೋಗುವ ಸಹಜ ವಿಧಿ ಏನು?

ಉತ್ತರ:
ಈ ಜ್ಞಾನದಲ್ಲಿ ತೀವ್ರವಾಗಿ ಹೋಗಬೇಕೆಂದರೆ ಮತ್ತೆಲ್ಲಾ ವಿಚಾರಗಳನ್ನು ಬಿಟ್ಟು ತಂದೆಯ ನೆನಪಿನಲ್ಲಿ ತೊಡಗಿ. ಇದರಿಂದ ವಿಕರ್ಮ ವಿನಾಶವಾಗಲಿ ಮತ್ತು ಪೂರ್ಣ ಕೊಳಕು ಹೊರಟು ಹೋಗಲಿ. ನೆನಪಿನ ಯಾತ್ರೆ ಶ್ರೇಷ್ಠ ಪದವಿಗೆ ಆಧಾರವಾಗಿದೆ. ಇದರಿಂದಲೇ ನೀವು ಕವಡೆಯಿಂದ ವಜ್ರ ಸಮಾನರಾಗುತ್ತೀರಿ. ನಿಮ್ಮನ್ನು ಕವಡೆಯಿಂದ ವಜ್ರ, ಪತಿತರಿಂದ ಪಾವನರನ್ನಾಗಿ ಮಾಡುವುದೇ ತಂದೆಯ ಕರ್ತವ್ಯವಾಗಿದೆ. ಇದನ್ನು ಬಿಟ್ಟು ತಂದೆಯೂ ಇರಲು ಸಾಧ್ಯವಿಲ್ಲ.

ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಈ ಪ್ರಪಂಚದಲ್ಲಿ ಕೆಲವರು ಹಂಸಗಳಂತಹವರೂ ಇದ್ದಾರೆ ಮತ್ತು ಕೊಕ್ಕರೆಗಳಂತಹವರೂ ಇದ್ದಾರೆ. ಈ ಲಕ್ಷೀ-ನಾರಾಯಣರು ಹಂಸಗಳಾಗಿದ್ದಾರೆ, ತಾವು ಇವರ ರೀತಿ ಆಗಬೇಕಾಗಿದೆ. ನಾವು ದೈವೀ ಸಂಪ್ರದಾಯದವರಾಗುತ್ತಿದ್ದೇವೆ ಎಂದು ತಾವು ಹೇಳುತ್ತೀರಿ. ಅದಕ್ಕೆ ತಂದೆಯು ನೀವು ದೈವೀ ಸಂಪ್ರದಾಯದವರಾಗುತ್ತಿದ್ದೀರಿ, ನಾನು ನಿಮ್ಮನ್ನು ಹಂಸಗಳನ್ನಾಗಿ ಮಾಡುತ್ತೇನೆ. ಈಗ ಪೂರ್ಣವಾಗಿ ಇನ್ನೂ ಆಗಿಲ್ಲ. ಈಗ ಆಗಬೇಕು ಎಂದು ತಂದೆಯೇ ತಿಳಿಸುತ್ತಾರೆ. ಹಂಸಗಳು ಮುತ್ತುಗಳನ್ನೇ ಹಾರಿಸುತ್ತವೆ, ಕೊಕ್ಕರೆಗಳು ಕೊಳಕನ್ನೇ ತಿನ್ನುತ್ತವೆ. ಈಗ ನಾವು ಹಂಸಗಳಾಗುತ್ತಿದ್ದೇವೆ. ಆದ್ದರಿಂದಲೇ ದೇವತೆಗಳಿಗೆ ಹೂಗಳೆಂದು ಹೇಳಲಾಗುತ್ತದೆ ಮತ್ತು ಯಾರು ಹೂ ಆಗಿಲ್ಲವೋ ಅವರನ್ನು ಮುಳ್ಳುಗಳೆಂದು ಹೇಳಲಾಗುತ್ತದೆ. ನೀವೇ ಹಂಸಗಳಾಗಿದ್ದೀರಿ ನಂತರ ನೀವೇ ಕೆಳಗೆ ಇಳಿಯುತ್ತಾ ನೀವೇ ಕೊಕ್ಕರೆಗಳಾಗಿದ್ದೀರಿ. ಅರ್ಧಕಲ್ಪ ಹಂಸ, ಇನ್ನೂ ಅರ್ಧಕಲ್ಪ ಕೊಕ್ಕರೆ, ಹಂಸಗಳಾಗುವುದರಲ್ಲಿಯೂ ಮಾಯೆಯ ವಿಘ್ನಗಳು ಬಹಳ ಬರುತ್ತವೆ. ಯಾವುದಾದರೂ ಒಂದು ಅಡಚಣೆ ಬಂದು ಬಿಡುತ್ತದೆ. ಮುಖ್ಯವಾದಂತಹ ಅಡಚಣೆಯು ದೇಹಾಭಿಮಾನವು ಬರುತ್ತದೆ. ಈ ಸಂಗಮದಲ್ಲಿಯೇ ತಾವು ಮಕ್ಕಳು ಪರಿವರ್ತನೆ ಆಗಬೇಕಾಗಿದೆ. ಯಾವಾಗ ತಾವು ಹಂಸಗಳಾಗಿರುತ್ತೀರೋ ಆಗ ಹಂಸಗಳೇ ಹಂಸಗಳಿರುತ್ತೀರಿ. ಹೊಸ ಪ್ರಪಂಚದಲ್ಲಿ ಹಂಸ ಅರ್ಥಾತ್ ದೇವೀ ದೇವತೆಗಳಿರುತ್ತಾರೆ. ಹಳೆಯ ಪ್ರಪಂಚದಲ್ಲಿ ಒಬ್ಬರೂ ಸಹ ಹಂಸಗಳು ಇರಲು ಸಾಧ್ಯವಿಲ್ಲ. ಭಲೇ ಸನ್ಯಾಸಿಗಳಿದ್ದಾರೆ, ಆದರೆ ಅವರು ಹದ್ದಿನ ಸನ್ಯಾಸಿಗಳಾಗಿದ್ದಾರೆ. ತಾವು ಬೇಹದ್ದಿನ ಸನ್ಯಾಸಿಗಳು ಆಗಿದ್ದೀರಿ. ತಂದೆಯು ಬೇಹದ್ದಿನ ಸನ್ಯಾಸವನ್ನು ಕಲಿಸಿದ್ದಾರೆ. ಈ ದೇವತೆಗಳಂತಹ ಸರ್ವಗುಣ ಸಂಪನ್ನರು ಮತ್ತ್ಯಾವುದೇ ಧರ್ಮದವರಾಗುವುದೇ ಇಲ್ಲ. ಆದಿ ಸನಾತನ ದೇವೀ-ದೇವತಾ ಧರ್ಮದ ಸ್ಥಾಪನೆ ಮಾಡಲು ಈಗ ತಂದೆಯು ಬಂದಿದ್ದಾರೆ, ತಾವೇ ಹೊಸ ಪ್ರಪಂಚದಲ್ಲಿ ಮೊಟ್ಟ ಮೊದಲು ಸುಖದಲ್ಲಿ ಬರುತ್ತೀರಿ ಮತ್ತ್ಯಾರೂ ಹೊಸ ಪ್ರಪಂಚದಲ್ಲಿ ಬರುವುದಿಲ್ಲ. ಈಗ ಈ ದೇವೀ ದೇವತಾ ಧರ್ಮವು ಪ್ರಾಯಃಲೋಪವಾಗಿದೆ. ಈ ಮಾತುಗಳನ್ನೂ ಸಹ ನೀವು ಈಗಲೇ ತಿಳಿದಿದ್ದೀರಿ ಮತ್ತು ತಿಳಿದುಕೊಳ್ಳುತ್ತೀರಿ ಮತ್ತ್ಯಾರೂ ತಿಳಿಯಲು ಸಾಧ್ಯವಿಲ್ಲ. ಅವೆಲ್ಲವೂ ಮನುಷ್ಯರ ಮಾತಾಗಿವೆ, ವಿಕಾರದಿಂದಂತೂ ಎಲ್ಲರೂ ಜನಿಸಿದ್ದಾರಲ್ಲವೇ. ಸತ್ಯಯುಗದಲ್ಲಿ ವಿಕಾರದ ಯವುದೇ ಮಾತಿಲ್ಲ. ದೇವತೆಗಳು ಪವಿತ್ರರಾಗಿದ್ದರು. ಇಲ್ಲಿ ಯೋಗಬಲದಿಂದಲೇ ಎಲ್ಲವೂ ನಡೆಯುತ್ತಿತ್ತು. ಇಲ್ಲಿನ ಪತಿತ ಮನುಷ್ಯರಿಗೆ ಅಲ್ಲಿ ಮಕ್ಕಳು ಹೇಗೆ ಜನಿಸುತ್ತಾರೆಂದು ಏನು ಗೊತ್ತಿದೆ? ಅದರ ಹೆಸರೇ ಆಗಿದೆ ನಿರ್ವಿಕಾರಿ ಪ್ರಪಂಚ, ವಿಕಾರದ ಮಾತೇ ಇಲ್ಲ. ಪ್ರಾಣಿ-ಪಕ್ಷಿಗಳು ಹೇಗೆ ಜನಿಸುತ್ತವೆ ಎಂದು ಕೇಳುತ್ತಾರೆ. ಅದಕ್ಕೆ ತಿಳಿಸಿ ಅಲ್ಲಿ ಯೋಗಬಲವಿರುತ್ತದೆ, ವಿಕಾರದ ಮಾತೇ ಇರುವುದಿಲ್ಲ. ಅಲ್ಲಿ 100% ನಿರ್ವಿಕಾರತೆ ಇರುತ್ತದೆ. ನಾವಂತೂ ಶುಭವನ್ನು ಹೇಳುತ್ತೇವೆ ಅಂದಮೇಲೆ ನೀವು ಅಶುಭವನ್ನು ಏಕೆ ಹೇಳುತ್ತೀರಿ? ಇದರ ಹೆಸರೇ ಆಗಿದೆ ವೇಶ್ಯಾಲಯ ಮತ್ತು ಅದರ ಹೆಸರಾಗಿದೆ ಶಿವಾಲಾಯ. ಶಿವ ತಂದೆಯು ಅಂತಹ ಶಿವಾಲಯವನ್ನು ಸ್ಥಾಪನೆ ಮಾಡುತ್ತಿದ್ದಾರೆ. ಶಿವ ತಂದೆಯು ಸರ್ವೊತ್ತಮ ಶಿಖರವಾಗಿದ್ದಾರೆ! ಶಿವಾಲಯವನ್ನೂ ಸಹ ಎಷ್ಟು ಎತ್ತರವಾಗಿ ಮಾಡಿಸುತ್ತಾರೆ. ಶಿವ ತಂದೆಯು ನಿಮ್ಮನ್ನು ಸುಖದ ಶಿಖರವನ್ನಾಗಿ ಮಾಡುತ್ತಾರೆ. ಸುಖದ ಶಿಖರಕ್ಕೆ ಕರೆದುಕೊಂಡು ಹೋಗುತ್ತಾರೆ, ಆದ್ದರಿಂದ ತಂದೆಯೊಂದಿಗೆ ಬಹಳ ಪ್ರೀತಿ ಇರುತ್ತದೆ. ಭಕ್ತಿ ಮಾರ್ಗದಲ್ಲೂ ಸಹ ಶಿವ ತಂದೆಯ ಜೊತೆ ಪ್ರೀತಿ ಇರುತ್ತದೆ. ಶಿವ ತಂದೆಯ ಮಂದಿರಕ್ಕೆ ಬಹಳ ಪ್ರೀತಿಯಿಂದ ಹೋಗುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಈಗ ತಾವು ಮಕ್ಕಳು ಸರ್ವಗುಣ ಸಂಪನ್ನರಾಗುತ್ತಿದ್ದೀರಿ. ಈಗ ಇನ್ನೂ ಸಂಪನ್ನರಾಗಿಲ್ಲ. ಯಾವಾಗ ನಿಮ್ಮ ರಾಜಧಾನಿಯು ಪೂರ್ಣ ಸ್ಥಾಪನೆ ಆಗಿ ಬಿಡುವುದು. ಆಗ ನಿಮ್ಮ ಪರೀಕ್ಷೆ ಆಗುವುದು. ಮತ್ತೆಲ್ಲರೂ ಸಮಾಪ್ತಿ ಆಗುತ್ತಾರೆ. ನಂತರ ನಂಬರವಾರಾಗಿ ಕೆಲ-ಕೆಲವರೇ ಬರುತ್ತಾ ಹೋಗುತ್ತಾರೆ. ನಿಮ್ಮ ರಾಜಧಾನಿಯು ಮೊದಲೇ ಆರಂಭವಾಗುತ್ತದೆ. ಅನ್ಯ ಧರ್ಮಗಳಲ್ಲಿ ಮೊದಲು ರಾಜಧಾನಿ ಆರಂಭವಾಗುವುದಿಲ್ಲ. ನಿಮ್ಮದಂತೂ ರಾಜ್ಯವಿದ್ದೇ ಇದೆ. ಈ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಕಾಶಿಗೆ ಮಕ್ಕಳು ಸರ್ವೀಸ್ಗಾಗಿ ಹೋದರು. ಅವರಿಗೆ ತಿಳಿಸುವ ನಶೆ ಇದೆ. ಆದರೆ ಅಲ್ಲಿನವರು ಇಷ್ಟೊಂದು ತಿಳಿದುಕೊಳ್ಳುವುದಿಲ್ಲ, ಆದ್ದರಿಂದ ಕೋಟಿಯಲ್ಲಿ ಕೆಲವರು ಎಂದು ಹೇಳಲಾಗುತ್ತದೆ. ಕೆಲವರೇ ವಿರಳವಾಗಿ ಹಂಸಗಳಾಗುತ್ತಾರೆ, ಆಗಲಿಲ್ಲವೆಂದರೆ ಶಿಕ್ಷೆಗಳನ್ನು ಅನುಭವಿಸುತ್ತಾರೆ. ಕೆಲವರಂತೂ 95% ಶಿಕ್ಷೆ ಅನುಭವಿಸಿ ಕೇವಲ 5% ಪರಿವರ್ತನೆ ಆಗುತ್ತಾರೆ. ಮೊದಲಿನ ಮತ್ತು ಕೊನೆಯ ಅಂಕಗಳಂತೂ ಇರುತ್ತದೆಯಲ್ಲವೇ. ಈಗ ತಮ್ಮನ್ನು ಹಂಸಗಳೆಂದು ತಿಳಿದುಕೊಳ್ಳಲು ಸಾಧ್ಯವಿಲ್ಲ. ಪುರುಷಾರ್ಥ ಮಾಡುತ್ತಿದ್ದಾರೆ, ಯಾವಾಗ ಜ್ಞಾನವು ಪೂರ್ಣವಾಗುತ್ತದೋ ಆಗ ಯುದ್ಧವೂ ಪ್ರಾರಂಭವಾಗುತ್ತದೆ. ಜ್ಞಾನವಂತೂ ಪೂರ್ಣ ತಿಳಿದುಕೊಳ್ಳಬೇಕಲ್ಲವೇ. ಈ ಯುದ್ಧವೇ ಅಂತಿಮವಾಗುವುದು. ಈಗಂತೂ ಯಾರೂ 100% ಆಗಿಲ್ಲ. ಆದ್ದರಿಂದ ಮನೆ-ಮನೆಗೆ ಸಂದೇಶವನ್ನು ತಲುಪಿಸಬೇಕಾಗಿದೆ. ಬಹಳ ದೊಡ್ಡ ಕ್ರಾಂತಿಯಾಗುವುದು. ಯಾರದೆಲ್ಲಾ ದೊಡ್ಡ-ದೊಡ್ಡ ಆಧಾರಗಳಿವೆಯೋ ಎಲ್ಲವೂ ಅಲುಗಾಡತೊಡಗುತ್ತವೆ. ಭಕ್ತಿಯ ಸಿಂಹಾಸನವು ಅಲುಗಾಡತೊಡಗುವುದು.ಈಗ ಭಕ್ತರ ರಾಜ್ಯವಿದೆಯಲ್ಲವೆ, ಅದರ ಮೇಲೆ ನೀವು ಜಯ ಪಡೆಯುತ್ತೀರಿ. ಈಗ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಿದೆ. ನಂತರ ಇದು ಪರಿವರ್ತನೆ ಆಗುತ್ತದೆ. ಲಕ್ಷ್ಮೀ-ನಾರಾಯಣರ ರಾಜ್ಯ ಆಗಿ ಬಿಡುತ್ತದೆ. ತಾವು ಸಾಕ್ಷಾತ್ಕಾರವನ್ನು ಮಾಡುತ್ತಿರುತ್ತೀರಿ. ಪ್ರಾರಂಭದಲ್ಲಿ ರಾಜಧಾನಿಯು ಹೇಗೆ ನಡೆಯುತ್ತದೆ ಎಂದು ನಿಮಗೆ ಬಹಳ ಸಾಕ್ಷಾತ್ಕಾರಗಳನ್ನು ಮಾಡಿಸಲಾಗಿದೆ. ಆದರೆ ಯಾರು ಸಾಕ್ಷಾತ್ಕಾರವನ್ನು ನೋಡಿದ್ದಾರೆಯೋ ಅವರು ಇಂದಿಲ್ಲ. ಇದೂ ಸಹ ನಾಟಕದಲ್ಲಿ ನೊಂದಾವಣೆಯಾಗಿದೆ. ಯಾರ ಪಾತ್ರವಿದೆಯೋ ಅವರು ನಡೆಯುತ್ತಲೇ ಇರುತ್ತಾರೆ. ಇದರಲ್ಲಿ ನಾವು ಯಾರದೇ ಮಹಿಮೆಯನ್ನು ಮಾಡುತ್ತೇವೆಯೇ! ತಂದೆಯೂ ಸಹ ಹೇಳುತ್ತಾರೆ - ನೀವು ನನ್ನ ಮಹಿಮೆಯೇನು ಮಾಡುತ್ತೀರಿ? ಪತಿತರಿಂದ ಪಾವನರನ್ನಾಗಿ ಮಾಡುವುದು ನನ್ನ ಕರ್ತವ್ಯವಾಗಿದೆ. ಹೇಗೆ ಓದಿಸುವುದು ಶಿಕ್ಷಕರ ಕರ್ತವ್ಯವಾಗಿರುತ್ತದೆ ಅಂದಮೇಲೆ ತಮ್ಮ ಕರ್ತವ್ಯವನ್ನು ಮಾಡುವವರಿಗೆ ಏಕೆ ಮಹಿಮೆ ಮಾಡುತ್ತೀರಿ. ನಾನೂ ಸಹ ನಾಟಕಕ್ಕೆ ವಶವಾಗಿದ್ದೇನೆ ಅಂದಮೇಲೆ ಇದರಲ್ಲಿ ಮತ್ತೆ ಶಕ್ತಿ ಎಲ್ಲಿಯದು? ಇದಂತೂ ನನ್ನ ಕರ್ತವ್ಯವಾಗಿದೆ. ಕಲ್ಪ-ಕಲ್ಪದ ಸಂಗಮಯುಗದಲ್ಲಿ ಬಂದು ಪತಿತರನ್ನು ಪಾವನರನ್ನಾಗಿ ಮಾಡುವ ಮಾರ್ಗವನ್ನು ತಿಳಿಸುತ್ತೇನೆ. ನಾನು ಪಾವನರನ್ನಾಗಿ ಮಾಡದೇ ಇರಲು ಸಾಧ್ಯವಿಲ್ಲ. ನನ್ನ ಪಾತ್ರವು ಬಹಳ ನಿಖರವಾಗಿದೆ. ಒಂದು ಕ್ಷಣವೂ ಸಹ ಮುಂಚೆ ಆಗಲಿ ಅಥವಾ ತಡವಾಗಿ ಆಗಲು ಸಾಧ್ಯವಿಲ್ಲ. ಸಂಪೂರ್ಣ ಖಚಿತವಾದ ಸಮಯದಲ್ಲಿಯೇ ಸೇವೆಯ ಪಾತ್ರವನ್ನು ಅಭಿನಯಿಸುತ್ತೇನೆ. ಕ್ಷಣ ಪ್ರತಿ ಕ್ಷಣ ಯಾವುದು ಕಳೆಯುತ್ತದೆಯೋ ಅದು ನನ್ನಿಂದ ಮಾಡಿಸುತ್ತದೆ. ನಾನು ಪರವಶವಾಗಿದ್ದೇನೆ, ಇದರಲ್ಲಿ ನನ್ನ ಮಹಿಮೆಯ ಮಾತೇ ಇಲ್ಲ. ನಾನು ಕಲ್ಪ-ಕಲ್ಪವು ಬರುತ್ತೇನೆ, ನನ್ನನ್ನು ಪತಿತರಿಂದ ಪಾವನರನ್ನಾಗಿ ಮಾಡುವ ತಂದೆಯೇ ಬನ್ನಿ ಎಂದು ಕರೆಯುತ್ತಾರೆ ಎಂದಮೇಲೆ ಎಷ್ಟೊಂದು ಪತಿತರಾಗಿ ಬಿಟ್ಟಿದ್ದಾರೆ. ಒಂದೊಂದು ಅವಗುಣವನ್ನು ಬಿಡಿಸುವುದರಲ್ಲಿ ಎಷ್ಟೊಂದು ಶ್ರಮವಾಗುತ್ತದೆ. ಬಹಳ ಸಮಯದಿಂದ ಪವಿತ್ರರಾಗಿದ್ದು ಮತ್ತೆ ನಡೆಯುತ್ತಾ-ನಡೆಯುತ್ತಾ ಮಾಯೆಯ ಏಟು ಬೀಳುವುದರಿಂದ ಮುಖ ಕಪ್ಪು ಮಾಡಿಕೊಳ್ಳುತ್ತಾರೆ. ಇದು ತಮೋಪ್ರಧಾನ ಪ್ರಪಂಚವಾಗಿದೆ. ಮಾಯಾ ಶತ್ರು ಬಹಳ ಎದುರಿಸುತ್ತದೆ. ಸನ್ಯಾಸಿಗಳೂ ಸಹ ವಿಕಾರದಿಂದಲೇ ಜನ್ಮ ಪಡೆಯುತ್ತಾರೆ. ಜ್ಯೋತಿಯು-ಜ್ಯೋತಿಯಲ್ಲಿ ಲೀನವಾಗುವುದಿಲ್ಲ, ಹಿಂತಿರುಗಿ ಹೋಗುವುದೂ ಇಲ್ಲ. ಆತ್ಮ ಅವಿನಾಶಿಯಾಗಿದೆ ಮತ್ತು ಅದರ ಪಾತ್ರವು ಅವಿನಾಶಿಯಾಗಿದೆ ಅಂದಮೇಲೆ ಜ್ಯೋತಿಯು ಜ್ಯೋತಿಯಲ್ಲಿ ಸಮಾವೇಶವಾಗಲು ಹೇಗೆ ಸಾಧ್ಯ! ಎಷ್ಟು ಮನುಷ್ಯರಿದ್ದಾರೆಯೋ ಅಷ್ಟು ಮತಗಳಿವೆ. ಅವೆಲ್ಲವೂ ಮನುಷ್ಯರ ಮತಗಳಾಗಿವೆ. ಈಶ್ವರೀಯ ಮತವು ಒಂದೇ ಆಗಿದೆ. ದೇವತಾ ಮತವಂತೂ ಇರುವುದೇ ಇಲ್ಲ, ದೇವತೆಗಳು ಸತ್ಯಯುಗದಲ್ಲಿ ಇರುತ್ತಾರೆ ಅಂದಾಗ ಇದೆಲ್ಲವೂ ಬಹಳ ತಿಳುದುಕೊಳ್ಳುವ ಮಾತುಗಳಾಗಿವೆ. ಮನುಷ್ಯರಂತೂ ಏನೂ ತಿಳಿದುಕೊಂಡಿಲ್ಲ, ಆದ್ದರಿಂದ ದಯೆ ತೋರಿಸು ಎಂದು ಈಶ್ವರನನ್ನು ಕರೆಯುತ್ತಾರೆ. ಇದಕ್ಕೆ ತಂದೆ ತಿಳಿಸುತ್ತಾರೆ - ನಾನು ನಿಮ್ಮನ್ನು ಇಷ್ಟು ಯೋಗ್ಯರನ್ನಾಗಿ ಮಾಡುತ್ತೇನೆ, ನೀವು ಪೂಜೆಗೆ ಯೋಗ್ಯರಾಗುತ್ತಿದ್ದೀರಿ, ಈಗ ಯೋಗ್ಯರಾಗಿಲ್ಲ, ಆಗುತ್ತಿದ್ದೀರಿ. ನಾವು ಈ ರೀತಿ ಆಗುತ್ತಿದ್ದೇವೆ ಎಂದು ನಿಮಗೆ ಗೊತ್ತಿದೆ ಮತ್ತು ಭಕ್ತಿಮಾರ್ಗದಲ್ಲಿಯೂ ಸಹ ನಮ್ಮದೇ ಮಹಿಮೆ ಆಗುತ್ತದೆ, ನಮ್ಮವೇ ಮಂದಿರಗಳಾಗುತ್ತದೆ. ನಿಮಗೆ ಗೊತ್ತಿದೆ – ಚಂಡಿಕಾ ದೇವಿಯ ಮೇಳವು ಆಗುತ್ತದೆ, ಯಾರು ತಂದೆಯ ಶ್ರೀಮತದ ಮೇಲೆ ನಡೆಯುವುದಿಲ್ಲವೋ ಅವರೇ ಚಂಡಿ ಆದರೂ ಸಹ ವಿಶ್ವವನ್ನು ಪವಿತ್ರವನ್ನಾಗಿ ಮಾಡುವುದರಲ್ಲಿ ಯಾವುದಾದರೂ ಸಹಯೋಗವನ್ನಂತೂ ಕೊಡುತ್ತಾರಲ್ಲವೇ. ಸೈನ್ಯವಿದೆಯಲ್ಲವೇ. ಶಿಕ್ಷೆಗಳನ್ನು ಭೋಗಿಸಿ ವಿಶ್ವದ ಮಾಲೀಕರಂತೂ ಆಗುತ್ತಾರಲ್ಲವೇ. ಇಲ್ಲಿ ಕಾಡು ಜನರೂ ಸಹ ನಾವು ಭಾರತದ ಮಾಲೀಕರು ಎಂದು ಹೇಳುತ್ತಾರಲ್ಲವೇ. ಇತ್ತೀಚಿಗಂತೂ ನೋಡಿ, ನಮ್ಮ ಭಾರತವು ಎಲ್ಲದಕ್ಕಿಂತ ಶ್ರೇಷ್ಠ ದೇಶವಾಗಿದೆ ಎಂದು ಒಂದು ಕಡೆ ಹಾಡುತ್ತಾರೆ, ಇನ್ನೊಂದು ಕಡೆ ಭಾರತದ ಸ್ಥಿತಿ ಏನಾಗಿದೆ ಎಂದು ಹೇಳುತ್ತಾರೆ. ರಕ್ತದ ನದಿಗಳು ಹರಿಯುತ್ತಿರುತ್ತವೆ. ಒಂದು ಹಾಡಿನಲ್ಲಿ ಮಹಿಮೆ ಇದ್ದರೆ ಇನ್ನೊಂದು ಹಾಡಿನಲ್ಲಿ ನಿಂದನೆ ಇದೆ. ಅಂದಮೇಲೆ ಏನನ್ನೂ ತಿಳಿದುಕೊಂಡಿಲ್ಲ. ಈಗ ತಂದೆಯು ನಿಮಗೆ ಯಥಾರ್ಥ ರೀತಿಯಲ್ಲಿ ತಿಳಿಸುತ್ತಾರೆ. ಇವರಿಗೆ ಭಗವಂತನೇ ಓದಿಸುತ್ತಿದ್ದಾರೆಂದು ಮನುಷ್ಯರಿಗೆ ಗೊತ್ತಿದೆಯೇ! ಇವರು ಭಗವಂತನನ್ನೇ ಶಿಕ್ಷಕನನ್ನಾಗಿ ಮಾಡಿಟ್ಟಿದ್ದಾರೆ ಎಂದು ಅವರು ಹೇಳುತ್ತಾರೆ. ಅರೇ! ಭಗವಾನುವಾಚವಿದೆಯಲ್ಲವೇ! ನಾನು ನಿಮ್ಮನ್ನು ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ಕೇವಲ ಗೀತೆಯಲ್ಲಿ ಮನುಷ್ಯರ ಹೆಸರನ್ನು ಹಾಕಿ ಗೀತೆಯನ್ನು ಖಂಡನೆ ಮಾಡಿ ಬಿಟ್ಟಿದ್ದಾರೆ. ಕೃಷ್ಣ ಭಗವಾನುವಾಚ ಎಂದರೆ ಮನುಷ್ಯನ ಮಾತಾಯಿತಲ್ಲವೇ. ಇಲ್ಲಿ ಶ್ರೀ ಕೃಷ್ಣನು ಎಲ್ಲಿಂದ ಬಂದನು? ಕೃಷ್ಣನಂತೂ ಸತ್ಯಯುಗದ ರಾಜಕುಮಾರನಾಗಿದ್ದನು ಅಂತಹವನು ಈ ಪತಿತ ಪ್ರಪಂಚದಲ್ಲಿ ಏಕೆ ಬರುತ್ತಾರೆ !. ನೀವು ಮಕ್ಕಳೇ ತಂದೆಯನ್ನು ಅರಿತುಕೊಂಡಿದ್ದೀರಿ ಆದರೆ ನಿಮ್ಮಲ್ಲಿಯೂ ಕೆಲವರೇ ಯಥಾರ್ಥ ರೀತಿಯಲ್ಲಿ ಅರಿತುಕೊಳ್ಳುತ್ತಾರೆ. ತಾವು ಮಕ್ಕಳ ಮುಖದಿಂದ ಸದಾ ಜ್ಞಾನರತ್ನಗಳೇ ಬರಬೇಕೇ ವಿನಃ ಕಲ್ಲುಗಳಲ್ಲ. ನಾವು ಈ ರೀತಿ ಆಗಿದ್ದೇವೆಯೇ ಎಂದು ತಮ್ಮನ್ನು ಕೇಳಿಕೊಳ್ಳಬೇಕು. ನಾವು ಕೆಸರಿನಿಂದ ಬೇಗ ಹೊರ ಬರಬೇಕೆಂದು ಬಯಸುತ್ತಾರೆ ಆದರೆ ಇದು ಬೇಗನೇ ಆಗಲು ಸಾಧ್ಯವಿಲ್ಲ. ಇದರಲ್ಲಿ ಸಮಯ ಹಿಡಿಸುತ್ತದೆ. ನೀವು ಬಹಳ ಪರಿಶ್ರಮ ಪಡಬೇಕಾಗುತ್ತದೆ. ತಿಳಿಸುವವರಲ್ಲಿಯೂ ನಂಬರವಾರ್ ಇದ್ದಾರೆ. ಯುಕ್ತಿ ಯುಕ್ತವಾಗಿ ತಿಳಿಸುವುದು ಅಂತ್ಯದಲ್ಲಿ ಬರುತ್ತದೆ ಆಗ ನಿಮ್ಮ ಬಾಣಗಳು ನಾಟುತ್ತದೆ. ನಿಮಗೆ ಗೊತ್ತಿದೆ, ನಮ್ಮ ವಿದ್ಯಾಭ್ಯಾಸವು ಈಗ ನಡೆಯುತ್ತದೆ, ಓದಿಸುವವರಂತೂ ಒಬ್ಬರೇ ಆಗಿದ್ದಾರೆ. ಎಲ್ಲರೂ ಅವರಿಂದ ಓದುವವರಾಗಿದ್ದಾರೆ. ಮುಂದೆ ಹೋದಂತೆ ನೀವು ಇಂತಹ ಯುದ್ಧಗಳನ್ನು ನೋಡುತ್ತೀರಿ, ಅದರ ಮಾತೇ ಕೇಳಬೇಡಿ. ಯುದ್ಧದಲ್ಲಿ ಅನೇಕರು ಸಾವನ್ನಪ್ಪುತ್ತಾರೆ. ಮತ್ತೆ ಇಷ್ಟೊಂದು ಆತ್ಮಗಳು ಎಲ್ಲಿ ಹೋಗುವರು? ಒಟ್ಟಿಗೆ ಹೋಗಿ ಜನ್ಮ ಪಡೆಯುತ್ತಾರೆಯೇ? ವೃಕ್ಷವು ದೊಡ್ಡದಾಗುತ್ತದೆ, ಬಹಳ ರೆಂಬೆ, ಕೊಂಬೆಗಳು ಎಲೆಗಳು ಆಗಿ ಬಿಡುತ್ತವೆ. ಪ್ರತಿನಿತ್ಯ ಅನೇಕರು ಜನಿಸುತ್ತಾರೆ ಹಾಗೂ ಸಾಯುತ್ತಾರೆ. ಯಾರೂ ಸಹ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಮನುಷ್ಯರು ವೃದ್ಧಿ ಆಗುತ್ತಾ ಹೋಗುತ್ತಾರೆ. ಇಂತಹ ವಿಸ್ತಾರ ಮಾತುಗಳಲ್ಲಿ ಹೋಗಲು ಮೊದಲು ತಂದೆಯನ್ನು ನೆನಪು ಮಾಡಿ, ಅದರಿಂದ ವಿಕರ್ಮ ವಿನಾಶವಾಗುತ್ತದೆ. ಮತ್ತೆ ಕೊಳಕೆಲ್ಲವೂ ಹೊರಟು ಹೋಗುತ್ತದೆ. ನಂತರ ಬೇರೆ ಮಾತು. ನೀವು ಇದರ ಯಾವುದೇ ವಿಚಾರವನ್ನು ಮಾಡಬೇಡಿ. ನೀವು ಮೊದಲು ತಮ್ಮ ಪುರುಷಾರ್ಥವನ್ನು ಮಾಡಿ, ಮುಖ್ಯವಾದದ್ದು ನೆನಪಿನ ಯಾತ್ರೆಯಾಗಿದೆ ಮತ್ತೆ ಎಲ್ಲರಿಗೂ ಸಂದೇಶವನ್ನು ಕೊಡಬೇಕಾಗಿದೆ. ಸಂದೇಶವಾಹಕರು ಒಬ್ಬರೇ ಆಗಿದ್ದಾರೆ. ಧರ್ಮ ಸ್ಥಾಪಕರಿಗೂ ಸಹ ಸಂದೇಶವಾಹಕರೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಸದ್ಗತಿದಾತ ಒಬ್ಬರೇ ಸದ್ಗುರು ಆಗಿದ್ದಾರೆ. ಉಳಿದಂತೆ ಭಕ್ತಿ ಮಾರ್ಗದಲ್ಲಿ ಅಲ್ಪ-ಸ್ವಲ್ಪ ಸುಧಾರಣೆ ಆಗುತ್ತಾರೆ. ಯಾವುದಾದರೂ ಒಂದು ದಾನವನ್ನು ಮಾಡುತ್ತಾರೆ. ತೀರ್ಥ ಯಾತ್ರೆಗೆ ಹೋಗುತ್ತಾರೆಂದರೆ ಏನಾದರೂ ಒಂದು ದಾನವನ್ನು ಕೊಟ್ಟು ಬರುತ್ತಾರೆ ಅಂದಾಗ ಇದಂತೂ ನಿಮಗೆ ಗೊತ್ತಿದೆ. ಈ ಅಂತಿಮ ಜನ್ಮದಲ್ಲಿ ತಂದೆಯು ನಮ್ಮನ್ನು ವಜ್ರ ಸಮಾನರನ್ನಾಗಿ ಮಾಡುತ್ತಾರೆ. ಇದನ್ನೇ ಅಮೂಲ್ಯ ಜೀವನವವೆಂದು ಹೇಳಲಾಗುತ್ತದೆ ಅಂದರೆ ಅಷ್ಟು ಪುರುಷಾರ್ಥವನ್ನು ಮಾಡಬೇಕು. ನಮ್ಮದೇನೂ ದೋಷವಿಲ್ಲ ಎಂದು ನೀವು ಹೇಳುತ್ತೀರಿ ಅರೇ! ನಾನು ಹೂಗಳನ್ನಾಗಿ ಮಾಡಲು ಬಂದಿದ್ದೇನೆಂದರೆ ತಾವು ಏಕೆ ಆಗುವುದಿಲ್ಲ. ಪಾವನರನ್ನಾಗಿ ಮಾಡುವುದು ನನ್ನ ಕರ್ತವ್ಯವಾಗಿದೆ ಅಂದಮೇಲೆ ನೀವು ಏಕೆ ಪುರುಷಾರ್ಥವನ್ನು ಮಾಡುವುದಿಲ್ಲ. ಪುರುಷಾರ್ಥವನ್ನು ಮಾಡಿಸುವ ತಂದೆಯಂತೂ ಸಿಕ್ಕಿದ್ದಾರೆ. ಈ ಲಕ್ಷ್ಮೀ-ನಾರಾಯಣರನ್ನು ಈ ರೀತಿ ಮಾಡಿದವರು ಯಾರು? ಇದು ಪ್ರಪಂಚಕ್ಕೆ ಗೊತ್ತಿದೆ. ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ. ಈಗ ನಿಮ್ಮ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಮುಂದೆ ಹೋದಂತೆ ನಿಮ್ಮ ಬಳಿ ಯಾವಾಗ ಅನೇಕರು ಬರುತ್ತಾರೆ. ಆಗ ಅವರ ವ್ಯಾಪರವು ನಿಂತು ಹೋಗುವುದು. ತಂದೆಯು ತಿಳಿಸುತ್ತಾರೆ ನಾನು ಈ ವೇದ-ಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ, ಭಕ್ತಿಮಾರ್ಗದ ಅನೇಕಾನೇಕ ಗುರುಗಳಿದ್ದಾರೆ, ಸತ್ಯಯುಗದಲ್ಲಿ ಎಲ್ಲರೂ ಪಾವನರಾಗಿದ್ದರು ಮತ್ತೆ ಪತಿತರಾಗಿದ್ದರು. ಈಗ ತಂದೆಯು ಬಂದು ನಿಮ್ಮಿಂದ ಬೇಹದ್ದಿನ ಸನ್ಯಾಸ ಮಾಡಿಸುತ್ತಾರೆ ಏಕೆಂದರೆ ಈ ಹಳೆಯ ಪ್ರಪಂಚವು ಸಮಾಪ್ತಿ ಆಗಲಿದೆ, ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ಸ್ಮಶಾನದಿಂದ ಬುದ್ಧಿಯನ್ನು ತೆಗೆದು ನನ್ನೊಬ್ಬನನ್ನೇ ನೆನಪು ಮಾಡಿದಾಗ ವಿಕರ್ಮಗಳು ವಿನಾಶವಾಗುತ್ತವೆ. ಈಗ ಅಂತಿಮ ಸಮಯವಾಗಿದೆ, ಎಲ್ಲರ ಲೆಕ್ಕಾಚಾರವು ಸಮಾಪ್ತಿ ಆಗಲಿದೆ. ಇಡೀ ಪ್ರಪಂಚದಲ್ಲಿ ಯಾರೆಲ್ಲಾ ಆತ್ಮಗಳಿದ್ದಾರೆಯೋ ಎಲ್ಲರಲ್ಲಿ ಪೂರ್ಣ ಪಾತ್ರವು ತುಂಬಲ್ಪಟ್ಟಿದೆ. ಆತ್ಮವು ಶರೀರ ಧಾರಣೆ ಮಾಡಿ ಪಾತ್ರವನ್ನು ಅಭಿನಯಿಸುತ್ತದೆ ಅಂದಮೇಲೆ ಆತ್ಮವು ಅವಿನಾಶಿಯಾಗಿದೆ, ಪಾತ್ರವು ಅವಿನಾಶಿ ಆಗಿದೆ. ಇದರಲ್ಲಿ ಯಾವುದೇ ಅಂತರವಾಗುವುದಿಲ್ಲ. ಇದು ಚಾಚೂ ತಪ್ಪದೆ ಪುನಾರವರ್ತನೆ ಆಗುತ್ತಲೇ ಇರುತ್ತದೆ. ಇದು ಬಹಳ ದೊಡ್ಡ ಬೇಹದ್ದಿನ ನಾಟಕವಾಗಿದೆ. ನಂಬರವಾರಂತೂ ಇದ್ದೇ ಇರುತ್ತಾರೆ. ಕೆಲವರು ಆತ್ಮಿಕ ಸರ್ವೀಸ್ ಮಾಡುವವರು, ಕೆಲವರು ಸ್ಥೂಲ ಸರ್ವೀಸ್ ಮಾಡುವವರು. ಬಾಬಾ ನಾವು ತಮ್ಮ ಚಾಲಕರಾಗುತ್ತೇವೆ, ಇದು ಕೆಲವರು ಹೇಳುತ್ತಾರೆ ಅಂದಾಗ ಅಲ್ಲಿಯೂ ವಿಮಾನದ ಮಾಲೀಕರಾಗುತ್ತಾರೆ. ಇಂದಿನ ದೊಡ್ಡ-ದೊಡ್ಡವರು ನಮಗಾಗಿ ಇದು ಸ್ವರ್ಗವಾಗಿದೆ. ದೊಡ್ಡ-ದೊಡ್ಡ ವಿಮಾನಗಳಿವೆ, ದೊಡ್ಡ-ದೊಡ್ಡ ಮಹಲ್ಗಳಿವೆ ಎಂದು ತಿಳಿಯುತ್ತಾರೆ. ಇದೆಲ್ಲವೂ ತಾತ್ಕಾಲಿಕವಾಗಿದೆ. ಇದಕ್ಕೆ ಮಾಯೆಯ ಆಡಂಬರವೆಂದು ಹೇಳಲಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಮನುಷ್ಯರು ಏನೇನನ್ನು ಕಲಿಯುತ್ತಿರುತ್ತಾರೆ. ಹಡಗು ಮೊದಲಾದವುಗಳನ್ನು ತಯಾರಿಸುತ್ತಿರುತ್ತಾರೆ. ಈಗ ಈ ಹಡಗು ಮೊದಲಾದವುಗಳು ಸತ್ಯಯುಗದಲ್ಲಿ ಕೆಲಸಕ್ಕೆ ಬರುವುದಿಲ್ಲ. ಇಲ್ಲಿ ಬಾಂಬುಗಳು ಮುಂತಾದವುಗಳನ್ನು ತಯಾರಿಸುತ್ತಾರೆ, ಇವೂ ಸಹ ಅಲ್ಲಿ ಕೆಲಸಕ್ಕೆ ಬರುವುದಿಲ್ಲ. ಸುಖದ ಸಾಧನಗಳೇ ಕೆಲಸಕ್ಕೆ ಬರುತ್ತವೆ. ವಿನಾಶ ಆಗುವುದರಲ್ಲಿಯೂ ವಿಜ್ಞಾನವು ಸಹಯೋಗಿ ಆಗುತ್ತದೆ ಮತ್ತು ಅದೇ ವಿಜ್ಞಾನವು ಹೊಸ ಪ್ರಪಂಚದ ಸ್ಥಾಪನೆಯಲ್ಲಿಯೂ ಸಹಯೋಗ ನೀಡುತ್ತದೆ. ಈ ನಾಟಕವು ಬಹಳ ವಿಚಿತ್ರವಾಗಿ ಮಾಡಲ್ಪಟ್ಟಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
೧. ಅಂತಿಮ ಸಮಯದಲ್ಲಿ ಹಳೆಯ ಪ್ರಪಂಚದಿಂದ ಬೇಹದ್ದಿನ ಸನ್ಯಾಸ ಮಾಡಬೇಕಾಗಿದೆ. ಈ ಸ್ಮಶಾನದಿಂದ ಬುದ್ಧಿಯನ್ನು ತೆಗೆಯಬೇಕಾಗಿದೆ. ನೆನಪಿನಲ್ಲಿದ್ದು ಎಲ್ಲಾ ಹಳೆಯ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ.

೨. ಮುಖದಿಂದ ಸದಾ ಜ್ಞಾನ ರತ್ನಗಳು ಬರಬೇಕೆ ಹೊರತು ಕಲ್ಲುಗಳಲ್ಲ. ಪೂರ್ಣ-ಪೂರ್ಣ ಹಂಸಗಳಾಗಬೇಕಾಗಿದೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.


ವರದಾನ:
ಸದಾ ಎಚ್ಚರಿಕೆ(ಕೇರ್ ಫುಲ್)ಯಿಂದಿರುತ್ತಾ ಮಾಯೆಯ ರಾಯಲ್ ರೂಪದ ನೆರಳಿನಿಂದ ಸುರಕ್ಷಿತರಾಗಿರುವಂತಹವರೆ ಮಾಯಾ ಪ್ರೂಫ್ ಭವ.

ವರ್ತಮಾನ ಸಮಯ ಮಾಯೆಯು ನಿಜವಾದ ತಿಳುವಳಿಕೆಯನ್ನು, ಕಂಡು ಹಿಡಿಯುವ ಶಕ್ತಿಯನ್ನು ಅಪಹರಿಸಿ ತಪ್ಪನ್ನು ಸರಿಯೆಂದು ಅನುಭವ ಮಾಡಿಸುವುದು. ಹೇಗೆ ಯಾರಾದರೂ ಜಾದೂ ಮಂತ್ರ ಮಾಡುವವರ ಬಳಿ ಹೋದರೆ ಪರವಶವಾಗಿ ಬಿಡುತ್ತಾರೆ, ಅದೇ ರೀತಿ ರಾಯಲ್ ಮಾಯೆ ರಿಯಲ್ ಅನ್ನು ತಿಳಿದುಕೊಳ್ಳಲು ಬಿಡುವುದಿಲ್ಲ. ಆದ್ದರಿಂದ ಬಾಪ್ದಾದಾ ಎಚ್ಚರಿಕೆಯಿಂದಿರುವುದಕ್ಕೆ ಡಬ್ಬಲ್ ಅಂಡರ್ ಲೈನ್ ಮಾಡಿಸುತ್ತಿದ್ದಾರೆ. ಈ ರೀತಿ ಎಚ್ಚರಿಕೆಯಿಂದಿರಿ ಯಾವುದು ಮಾಯೆಯ ನೆರಳಿನಿಂದ ಸುರಕ್ಷಿತರಾಗಿರುತ್ತಾ ಮಾಯಾ ಪ್ರೂಫ್ ಆಗಿ ಬಿಡಿ. ವಿಶೇಷ ಮನಸ್ಸು-ಬುದ್ದಿಯನ್ನು ತಂದೆ ಛತ್ರಛಾಯೆಯ ಆಶ್ರಯದಲ್ಲಿ ತೆಗೆದುಕೊಂಡು ಬನ್ನಿ.

ಸ್ಲೋಗನ್:
ಯಾರು ಸಹಯೋಗಿಗಳಾಗಿದ್ದಾರೆ ಅವರನ್ನು ನೋಡುತ್ತಾ ಬೇರೆಯವರ ಯೋಗವೂ ಸಹಾ ಸಹಜವಾಗಿ ಜೋಡಿಸಲ್ಪಡುವುದು.