23.02.19 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ಶಿವ
ಜಯಂತಿಯೆಂದು ನೀವು ವಿಜೃಂಭಣೆಯಿಂದ ನಿರಾಕಾರ ತಂದೆಯ ಚರಿತ್ರೆಯನ್ನು ಎಲ್ಲರಿಗೆ ತಿಳಿಸಿ, ಈ ಶಿವ
ಜಯಂತಿಯೇ ವಜ್ರ ಸಮಾನವಾಗಿದೆ.
ಪ್ರಶ್ನೆ:
ನೀವು
ಬ್ರಾಹ್ಮಣರ ಸತ್ಯ ದೀಪಾವಳಿಯು ಯಾವಾಗ ಆಗುತ್ತದೆ?
ಉತ್ತರ:
ವಾಸ್ತವದಲ್ಲಿ
ಶಿವ ಜಯಂತಿಯೇ ನಿಮಗಾಗಿ ಸತ್ಯ-ಸತ್ಯವಾದ ದೀಪಾವಳಿಯಾಗಿದೆ, ಏಕೆಂದರೆ ಶಿವ ತಂದೆಯು ಬಂದು ನೀವಾತ್ಮ
ರೂಪಿ ದೀಪವನ್ನು ಬೆಳಗಿಸುತ್ತಾರೆ. ಪ್ರತಿಯೊಬ್ಬರ ಮನೆಯ ದೀಪವೂ ಬೆಳಗುತ್ತದೆ ಅರ್ಥಾತ್ ಆತ್ಮ
ಜ್ಯೋತಿಯು ಜಾಗೃತವಾಗುತ್ತದೆ. ಅವರು ಸ್ಥೂಲ ದೀಪವನ್ನು ಬೆಳಗುತ್ತಾರೆ. ಆದರೆ ನಿಮ್ಮ ಸತ್ಯವಾದ
ದೀಪವು ಶಿವ ತಂದೆಯು ಬಂದಾಗ ಜಾಗೃತವಾಗುತ್ತದೆ ಆದ್ದರಿಂದ ನೀವು ಹೆಚ್ಚಿನ ವಿಜೃಂಭಣೆಯಿಂದ ಶಿವ
ಜಯಂತಿಯನ್ನು ಆಚರಿಸಿ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಶಿವನ ಜಯಂತಿಯನ್ನು ಆಚರಿಸುತ್ತೀರಿ ಮತ್ತು ಭಾರತದಲ್ಲಂತೂ ಶಿವ
ಜಯಂತಿಯನ್ನು ಅವಶ್ಯವಾಗಿ ಆಚರಿಸುತ್ತಾರೆ. ಜಯಂತಿಯು ಒಬ್ಬರದನ್ನು ಆಚರಿಸಲಾಗುತ್ತದೆ ಮತ್ತೆ
ಅವರನ್ನೇ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಈಗ ಸರ್ವರ ಜಯಂತಿಯು ಇರಲು ಸಾಧ್ಯವಿಲ್ಲ ಅಂದಾಗ
ಜಯಂತಿಯನ್ನು ಯಾವಾಗ ಆಚರಿಸಲಾಗುತ್ತದೆ? ಯಾವಾಗ ಗರ್ಭದಿಂದ ಹೊರ ಬರುತ್ತಾರೆಯೋ ಆಗ ಜಯಂತಿಯನ್ನು
ಆಚರಿಸಲಾಗುತ್ತದೆ. ಶಿವ ಜಯಂತಿಯಂತೂ ಅವಶ್ಯವಾಗಿ ಆಚರಿಸುತ್ತಾರೆ. ಆರ್ಯ ಸಮಾಜಿಗಳೂ ಆಚರಿಸುತ್ತಾರೆ.
ಈಗ ನೀವು 73ನೇ ಶಿವ ಜಯಂತಿಯನ್ನು ಆಚರಿಸುತ್ತೀರಿ ಅಂದರೆ ಈ ಜಯಂತಿಗೆ 73 ವರ್ಷಗಳಾಯಿತು. ಜನ್ಮ
ದಿನವಂತೂ ಎಲ್ಲರಿಗೂ ನೆನಪಿರುತ್ತದೆ. ಇಂತಹ ದಿನದಂದು ಇಂತಹವರು ಗರ್ಭದಿಂದ ಹೊರ ಬಂದರು ಎಂಬ
ನೆನಪಿರುತ್ತದೆ. ಈಗ ನೀವು ಶಿವ ತಂದೆಯ 73ನೇ ಶಿವ ಜಯಂತಿಯನ್ನು ಆಚರಿಸುತ್ತಿದ್ದೀರಿ. ಅವರಂತೂ
ನಿರಾಕಾರನಾಗಿದ್ದಾರೆ ಅಂದಮೇಲೆ ಅವರ ಜಯಂತಿಯಾಗಲು ಹೇಗೆ ಸಾಧ್ಯ? ಇಷ್ಟೂ ದೊಡ್ಡ-ದೊಡ್ಡ ಮನುಷ್ಯರಿಗೆ
ನಿಮಂತ್ರಣ ಪತ್ರಗಳು ಹೋಗುತ್ತವೆ. ಅವರಲ್ಲಿ ಯಾರಾದರೂ ಪ್ರಶ್ನಿಸಬೇಕಲ್ಲವೆ - ಜಯಂತಿಯನ್ನು ಹೇಗೆ
ಆಚರಿಸುತ್ತೀರಿ? ಅವರು ಯಾವಾಗ ಜನ್ಮ ಪಡೆದರು? ಹೇಗೆ ಪಡೆದರು? ಮತ್ತೆ ಅವರ ಶರೀರದ ಹೆಸರು ಏನೆಂದು
ಇಟ್ಟರು? ಅಂದಾಗ ಇಷ್ಟು ಕಲ್ಲು ಬುದ್ಧಿಯವರಾಗಿದ್ದಾರೆ. ಎಂದೂ ಈ ಪ್ರಶ್ನೆಯನ್ನು ಕೇಳುವುದೇ ಇಲ್ಲ.
ನೀವು ಅವರಿಗೆ ತಿಳಿಸಿ - ಅವರು ನಿರಾಕಾರನಾಗಿದ್ದಾರೆ, ಅವರ ಹೆಸರಾಗಿದೆ - ಶಿವ, ನೀವು ಸಾಲಿಗ್ರಾಮ
ಮಕ್ಕಳಾಗಿದ್ದೀರಿ. ಈ ಶರೀರದಲ್ಲಿ ಸಾಲಿಗ್ರಾಮವಿದೆಯೆಂದು ನಿಮಗೆ ಗೊತ್ತಿದೆ. ಹೆಸರಂತೂ ಶರೀರಕ್ಕೆ
ಬರುತ್ತದೆ ಆದರೆ ಅವರು ಪರಮಾತ್ಮ ಸಾಲಿಗ್ರಾಮವಿದೆಯೆಂದು ನಿಮಗೆ ಗೊತ್ತಿದೆ. ಹೆಸರಂತೂ ಶರೀರಕ್ಕೆ
ಬರುತ್ತದೆ ಆದರೆ ಅವರು ಪರಮಾತ್ಮ ಶಿವನಾಗಿದ್ದಾರೆ. ಈಗ ನೀವು ಎಷ್ಟೊಂದು ವಿಜೃಂಭಣೆಯಿಂದ
ಸಮಾರಂಭಗಳನ್ನಿಡುತ್ತೀರಿ. ದಿನ-ಪ್ರತಿದಿನ ನೀವು ವಿಜೃಂಭಣೆಯಿಂದ ತಿಳಿಸುತ್ತಾ ಹೋಗುತ್ತೀರಿ -
ಯಾವಾಗ ಬ್ರಹ್ಮಾರವರ ತನುವಿನಲ್ಲಿ ಶಿವ ತಂದೆಯ ಪ್ರವೇಶತೆಯಾಗುತ್ತದೆಯೋ ಅದೇ ಅವರ ಜಯಂತಿಯೆಂದು
ಗಾಯನ ಮಾಡಲಾಗುತ್ತದೆ. ಅವರ ತಿಥಿ-ತಾರೀಖು ಯಾವುದೂ ಇಲ್ಲ. ನಾನು ಸಾಧಾರಣ ತನುವಿನಲ್ಲಿ ಪ್ರವೇಶ
ಮಾಡುತ್ತೇನೆ ಆದರೆ ಯಾವಾಗ ಯಾವ ಗಳಿಗೆಯೆಂದು ತಿಳಿಸುವುದಿಲ್ಲ. ತಿಥಿ-ತಾರೀಖು, ದಿನ
ಮೊದಲಾದವುಗಳನ್ನು ತಿಳಿಸಿದರೆ ಇಂತಹ ತಾರೀಖು ಎಂದು ಹೇಳುತ್ತಿದ್ದಿರಿ. ನನಗೆ ಯಾವುದೇ ಜನ್ಮ ಪತ್ರಿ
ಮೊದಲಾದವುಗಳು ಇಲ್ಲ. ವಾಸ್ತವದಲ್ಲಿ ಎಲ್ಲರಿಗಿಂತ ಶ್ರೇಷ್ಠ ಜನ್ಮ ಪತ್ರಿಯು ಇವರದಾಗಿದೆ. ಇವರ
ಕರ್ತವ್ಯವೂ ಎಲ್ಲರಿಗಿಂತ ಶ್ರೇಷ್ಠವಾಗಿದೆ. ಪ್ರಭು ನಿಮ್ಮ ಮಹಿಮೆಯು ಅಪರಮಪಾರವಾಗಿದೆ ಎಂದು
ಹಾಡುತ್ತಾರೆ ಅಂದಮೇಲೆ ಅವಶ್ಯವಾಗಿ ಏನಾದರೂ ಮಾಡಿರಬೇಕಲ್ಲವೆ. ಅನೇಕರ ಮಹಿಮೆ ಮಾಡಲಾಗುತ್ತದೆ,
ನೆಹರು-ಗಾಂಧಿ ಮುಂತಾದವರೆಲ್ಲರ ಮಹಿಮೆಯನ್ನು ಹಾಡುತ್ತಾರೆ. ಆದರೆ ಇವರ (ಶಿವ ತಂದೆ) ಮಹಿಮೆಯನ್ನು
ಯಾರೂ ತಿಳಿಸಲು ಸಾಧ್ಯವಿಲ್ಲ. ನೀವೇ ತಿಳಿಸುತ್ತೀರಿ - ಅವರು ಜ್ಞಾನ ಸಾಗರ, ಶಾಂತಿಯ
ಸಾಗರನಾಗಿದ್ದಾರೆ. ಅವರಂತೂ ಒಬ್ಬರೇ ಆದರಲ್ಲವೆ ಮತ್ತೆ ಅವರನ್ನು ಸರ್ವವ್ಯಾಪಿ ಎಂದು ಏಕೆ
ಹೇಳುತ್ತೀರಿ. ಆದರೆ ಏನನ್ನೂ ಅರಿತುಕೊಂಡಿಲ್ಲ. ನೀವು ಶಿವ ಜಯಂತಿಯನ್ನು ಆಚರಿಸುತ್ತೀರೆಂದರೆ
ನಿಮ್ಮನ್ನು ಯಾರೂ ಕೇಳುವ ಸಾಹಸವನ್ನಿಡುವುದಿಲ್ಲ. ಇಲ್ಲವಾದರೆ ಶಿವ ಜಯಂತಿಯನ್ನು ಆಚರಿಸಲಾಗುತ್ತದೆ,
ಮಹಿಮೆಯನ್ನು ಹಾಡಲಾಗುತ್ತದೆ ಅಂದಮೇಲೆ ಅವಶ್ಯವಾಗಿ ಅವರು ಇದ್ದು ಹೋಗಿರಬೇಕು ಎಂಬುದನ್ನು
ಕೇಳುತ್ತಿದ್ದರು. ಬಹಳ ಭಕ್ತರಿದ್ದಾರೆ. ಒಂದು ವೇಳೆ ಸರ್ಕಾರವು ಒಪ್ಪದಿದ್ದರೆ ಭಕ್ತರು ಸಾಧುಗಳು,
ಗುರುಗಳ ಸ್ಟಾಂಪನ್ನು ಮಾಡಿಸುತ್ತಿರಲಿಲ್ಲ. ಎಂತಹ ಸರ್ಕಾರವೋ ಅಂತಹ ಪ್ರಜೆಗಳು.... ಈಗ ನೀವು
ಮಕ್ಕಳಿಗೆ ತಂದೆಯ ಚರಿತ್ರೆಯು ಬಹಳ ಚೆನ್ನಾಗಿ ತಿಳಿದಿದೆ. ನಿಮಗೆಷ್ಟು ನಶೆಯಿರುತ್ತದೆಯೋ ಅಷ್ಟು
ನಶೆಯು ಮತ್ತ್ಯಾರಿಗೂ ಇರುವುದಿಲ್ಲ. ನೀವೇ ಹೇಳುತ್ತೀರಿ - ಶಿವ ಜಯಂತಿಯು ವಜ್ರ ಸಮಾನವಾಗಿದೆ,
ಉಳಿದವರೆಲ್ಲರ ಜಯಂತಿಯು ಕವಡೆಯ ಸಮಾನವಾಗಿದೆ. ತಂದೆಯೇ ಬಂದು ಕವಡೆಯನ್ನು ವಜ್ರ ಸಮಾನವನ್ನಾಗಿ
ಮಾಡುತ್ತಾರೆ. ಶ್ರೀ ಕೃಷ್ಣನೂ ಸಹ ತಂದೆಯ ಮೂಲಕ ಎಷ್ಟು ಶ್ರೇಷ್ಠರಾದರು ಆದ್ದರಿಂದ ಅವರ ಜಯಂತಿಯು
ವಜ್ರ ಸಮಾನವೆಂದು ಹೇಳುತ್ತಾರೆ. ಆದರೆ ಮೊದಲು ಕವಡೆಯ ಸಮಾನರಾಗಿದ್ದರು ಮತ್ತೆ ತಂದೆಯೇ ಬಂದು ವಜ್ರ
ಸಮಾನವನ್ನಾಗಿ ಮಾಡಿದರು. ಈ ಮಾತುಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ. ಅವರನ್ನು ಇಂತಹ ವಿಶ್ವದ
ರಾಜಕುಮಾರರನ್ನಾಗಿ ಯಾರು ಮಾಡಿದರು? ಅಂದಾಗ ಇದನ್ನೂ ತಿಳಿಸಬೇಕು - ಕೃಷ್ಣ ಜನ್ಮಾಷ್ಟಮಿಯನ್ನು
ಆಚರಿಸುತ್ತಾರೆ, ಮಗುವಂತೂ ತಾಯಿಯ ಗರ್ಭದಿಂದಲೇ ಹೊರಡುವುದು, ಅದನ್ನು ಬುಟ್ಟಿಯಲ್ಲಿ ತೆಗೆದುಕೊಂಡು
ಹೋದರು. ಕೃಷ್ಣನಂತೂ ವಿಶ್ವದ ರಾಜಕುಮಾರನಾಗಿದ್ದನು ಅಂದಮೇಲೆ ಆತನಿಗೆ ಭಯ ಎಲ್ಲಿಯದು? ಅಲ್ಲಿ ಕಂಸ
ಮುಂತಾದವರೆಲ್ಲಿಂದ ಬಂದರು. ಇವೆಲ್ಲಾ ಮಾತುಗಳನ್ನು ಶಾಸ್ತ್ರಗಳಲ್ಲಿ ಬರೆದು ಬಿಟ್ಟಿದ್ದಾರೆ. ಈಗ
ನೀವು ಇದನ್ನು ಬಹಳ ಚೆನ್ನಾಗಿ ತಿಳಿಸಬೇಕು. ತಿಳಿಸಲು ಬಹಳ ಒಳ್ಳೆಯ ಯುಕ್ತಿಗಳು ಬೇಕು. ಎಲ್ಲರೂ
ಒಂದೇ ರೀತಿಯಾಗಿ ಓದಿಸಲು ಸಾಧ್ಯವಿಲ್ಲ. ಯುಕ್ತಿ ಯುಕ್ತವಾಗಿ ತಿಳಿಸದೇ ಹೋದರೆ ಇನ್ನೂ
ಸೇವಾಭಂಗವಾಗುತ್ತದೆ. ಈಗ ಶಿವ ಜಯಂತಿಯನ್ನು ಆಚರಿಸಲಾಗುತ್ತದೆ ಎಂದರೆ ಅವಶ್ಯವಾಗಿ ಶಿವನ
ಮಹಿಮೆಯನ್ನೇ ಮಾಡುತ್ತೀರಿ. ಗಾಂಧಿ ಜಯಂತಿಯಂದು ಗಾಂಧೀಜಿಯದೇ ಮಹಿಮೆ ಮಾಡುತ್ತಾರೆ ಮತ್ತೇನೂ
ತೋಚುವುದಿಲ್ಲ. ಈಗ ನೀವು ಶಿವ ಜಯಂತಿಯನ್ನು ಆಚರಿಸುತ್ತೀರೆಂದರೆ ಅವರ ಮಹಿಮೆ, ಅವರ ಚರಿತ್ರೆಯೂ
ಇರುವುದು. ನೀವು ಆ ದಿನದಂದು ಅವರದೇ ಜೀವನ ಚರಿತ್ರೆಯನ್ನು ತಿಳಿಸಿ. ಹೇಗೆ ತಂದೆಯೂ ಸಹ ಹೇಳುತ್ತಾರೆ
- ಶಿವ ಜಯಂತಿಯು ಹೇಗೆ ಪ್ರಾರಂಭವಾಯಿತು ಎಂಬುದನ್ನು ಮನುಷ್ಯರು ಯಾರೂ ಕೇಳುವುದೇ ಇಲ್ಲ. ಅವರ
ವರ್ಣನೆಯೂ ಸಹ ಇಲ್ಲ. ಅವರ ಮಹಿಮೆಯಂತೂ ಅಪರಮಪಾರವೆಂದು ಗಾಯನವಿದೆ, ಶಿವ ತಂದೆಗೆ ಭೋಲಾನಾಥನೆಂದು
ಹೇಳಿ ಬಹಳ ಮಹಿಮೆಯನ್ನು ಮಾಡುತ್ತಾರೆ, ಅವರಂತೂ ಭೋಲಾ ಭಂಡಾರಿಯಾಗಿದ್ದಾರೆ ಆದರೆ ಮನುಷ್ಯರು
ಶಿವ-ಶಂಕರ ಒಬ್ಬರೇ ಆಗಿದ್ದಾರೆಂದು ತಿಳಿಯುತ್ತಾರೆ, ಶಂಕರನನ್ನೇ ಭೋಲಾನಾಥನೆಂದು ತಿಳಿಯುತ್ತಾರೆ.
ವಾಸ್ತವದಲ್ಲಿ ಭೋಲಾನಾಥನೆಂಬುದು ಶಂಕರನಿಗೆ ಹೋಲುವುದಿಲ್ಲ. ಶಂಕರನಿಗಾಗಿ ಹೇಳುತ್ತಾರೆ - ಮೂರನೇ
ಕಣ್ಣನ್ನು ತೆರೆದಾಗ ವಿನಾಶವಾಯಿತು, ದತ್ತೂರಿಯನ್ನು ಸೇವಿಸುತ್ತಾರೆ ಎಂದು ಹೇಳಾಗುತ್ತಾರೆಂದ ಮೇಲೆ
ಮತ್ತೆ ಅವರಿಗೆ ಭೋಲಾನಾಥನೆಂದು ಹೇಳಲು ಹೇಗೆ ಸಾಧ್ಯ. ಮಹಿಮೆಯಂತೂ ಒಬ್ಬರದೇ ಆಗುತ್ತದೆ. ನೀವು
ಶಿವನ ಮಂದಿರದಲ್ಲಿ ಹೋಗಿ ತಿಳಿಸಬೇಕು, ಅಲ್ಲಿ ಅನೇಕರು ಬರುತ್ತಾರೆ ಆದ್ದರಿಂದ ಅವರಿಗೆ ಶಿವನ ಜೀವನ
ಚರಿತ್ರೆಯನ್ನು ತಿಳಿಸಬೇಕು. ಭೋಲಾ ಭಂಡಾರಿ ಶಿವ ತಂದೆಯೆಂದು ಹೇಳುತ್ತಾರೆ. ಶಿವ ಮತ್ತು ಶಂಕರನ
ಭೇದವನ್ನು ನೀವೇ ತಿಳಿಸಿದ್ದೀರಿ. ಶಿವನ ಮಂದಿರದಲ್ಲಿ ಶಿವನ ಪೂಜೆಯಾಗುತ್ತದೆ, ತಾವು ಅಲ್ಲಿಗೆ ಹೋಗಿ
ಶಿವನ ಕಥೆಯನ್ನು ತಿಳಿಸಬೇಕು. ಶಿವನ ಜೀವನ ಕಥೆಯನ್ನು ತಿಳಿಸುತ್ತಾರೆ, ಜೀವನದ ಕಥೆಯೆಂಬ ಶಬ್ಧವನ್ನು
ಕೇಳಿ ಕೆಲವರ ತಲೆಯೇ ಚಕ್ರಿತವಾಗಿ ಬಿಡುತ್ತದೆ. ಮನುಷ್ಯರು ಈ ವಿಚಿತ್ರವಾದ ಮಾತನ್ನು ತಿಳಿದು
ಅನೇಕರು ಬರತೊಡಗುತ್ತಾರೆ. ಅವರಿಗೆ ತಿಳಿಸಿ, ನಿಮಂತ್ರಣದಿಂದ ಯಾರು ಬರುತ್ತಾರೆಯೋ ಅವರಿಗೆ ನಾವು
ನಿರಾಕಾರ ಪರಮಪಿತ ಪರಮಾತ್ಮನ ಜೀವನ ಚರಿತ್ರೆಯನ್ನು ತಿಳಿಸುತ್ತೇವೆ. ಗಾಂಧೀಜಿ, ನೆಹರೂರವರ
ಚರಿತ್ರೆಯನ್ನು ಕೇಳುತ್ತಾರಲ್ಲವೆ. ಈಗ ನೀವು ಶಿವನ ಮಹಿಮೆಯನ್ನು ಮಾಡುತ್ತೀರೆಂದರೆ ಮನುಷ್ಯರ
ಬುದ್ಧಿಯಿಂದ ಸರ್ವವ್ಯಾಪಿಯ ಮಾತೇ ಹಾರಿ ಹೋಗುತ್ತದೆ. ಒಬ್ಬರ ಮಹಿಮೆಯು ಇನ್ನೊಬ್ಬರಿಗೆ
ಹೋಲುವುದಿಲ್ಲ. ಇಲ್ಲಿ ಪ್ರದರ್ಶನಿ ಮಾಡುತ್ತಾರೆ, ಅದು ಯಾವುದೇ ಶಿವನ ಮಂದಿರವಂತೂ ಅಲ್ಲ. ನಿಮಗೆ
ಗೊತ್ತಿದೆ, ಸತ್ಯ-ಸತ್ಯ ಶಿವನ ಮಂದಿರವು ವಾಸ್ತವದಲ್ಲಿ ಇದಾಗಿದೆ. ಇಲ್ಲಿ ಸ್ವಯಂ ತಂದೆಯೇ ಕುಳಿತು
ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿಸುತ್ತಾರೆ. ತಾವು ಬರೆಯಿರಿ - ರಚಯಿತನ ಜೀವನ
ಚರಿತ್ರೆ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತೇವೆ. ಅದೂ ಹಿಂದಿ ಮತ್ತು
ಆಂಗ್ಲ ಭಾಷೆಯಲ್ಲಿ ಬರವಣಿಗೆಯಿರಲಿ. ದೊಡ್ಡ-ದೊಡ್ಡವರ ಬಳಿ ಹೋಗುತ್ತೀರೆಂದರೆ ಇವರು ಯಾರು! ಪರಮಪಿತ
ಪರಮಾತ್ಮನ ಚರಿತ್ರೆಯನ್ನು ತಿಳಿಸುತ್ತಾರೆಂದು ಆಶ್ಚರ್ಯ ಚಕಿತರಾಗುತ್ತಾರೆ. ಕೇವಲ ರಚನೆಗೆ ನೀವು
ಹೇಳುತ್ತೀರೆಂದರೆ ಪ್ರಳಯವಾಯಿತು, ಮತ್ತೆ ಹೊಸ ರಚನೆಯನ್ನು ರಚಿಸಿದರೆಂದು ಹೇಳುತ್ತಾರೆ ಆದರೆ ಇಷ್ಟೇ
ಅಲ್ಲ. ತಾವು ಅವರಿಗೆ ತಿಳಿಸಬೇಕು - ತಂದೆಯು ಬಂದು ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆಂದಾಗ
ಮನುಷ್ಯರು ಆಶ್ಚರ್ಯ ಚಕಿತರಾಗುತ್ತಾರೆ. ಶಿವನ ಮಂದಿರದಲ್ಲಿಯೂ ಅನೇಕ ಮನುಷ್ಯರು ಬರುತ್ತಾರೆ.
ಆದ್ದರಿಂದ ಸಭಾಂಗಣ ಬಹಳ ದೊಡ್ಡದಾಗಿರಬೇಕು. ಈ ಲಕ್ಷ್ಮೀ-ನಾರಾಯಣರ ರಾಜ್ಯವು ಯಾರು ಸ್ಥಾಪನೆ
ಮಾಡಿದರು ಎಂಬುದನ್ನು ಅವರಿಗೆ ತಿಳಿಸಬೇಕು. ಹೇಗೆ ನಿರಾಕಾರ ಶಿವ ತಂದೆ ಯಾರು ಎಲ್ಲಾ ಆತ್ಮಗಳ
ತಂದೆಯಾಗಿದ್ದಾರೆಯೋ ಅವರೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ಹೇಗೆ ಶಿವನ ಮಂದಿರದಲ್ಲಿ ಹೋಗಿ
ಸರ್ವೀಸ್ ಮಾಡಬೇಕೆಂದು ವಿಚಾರಸಾಗರ ಮಂಥನ ಮಾಡಬೇಕು. ಶಿವನ ಮಂದಿರದಲ್ಲಿ ಮುಂಜಾನೆ ಪೂಜೆ
ಮಾಡುತ್ತಾರೆ, ಮುಂಜಾನೆಯಲ್ಲಿ ಘಂಟೆ ಮೊದಲಾದವುಗಳು ಮೊಳಗುತ್ತವೆ. ಶಿವ ತಂದೆಯು ಮುಂಜಾನೆಯ
ಸಮಯದಲ್ಲಿಯೇ ಬರುತ್ತಾರೆ, ಅರ್ಧ ರಾತ್ರಿಯೆಂದು ಹೇಳುವುದಿಲ್ಲ. ಆ ಸಮಯದಲ್ಲಿ ನೀವು ಜ್ಞಾನವನ್ನೂ
ತಿಳಿಸಲು ಆಗುವುದಿಲ್ಲ, ಏಕೆಂದರೆ ಮನುಷ್ಯರು ಮಲಗಿರುತ್ತಾರೆ. ಮನುಷ್ಯರಿಗೆ ರಾತ್ರಿಯ ಸಮಯದಲ್ಲಿ
ಬಿಡುವು ಇರುತ್ತದೆ, ದೀಪಗಳು ಬೆಳಗುತ್ತವೆ. ಬಹಳ ಹೆಚ್ಚಿನದಾಗಿ ಬೆಳಕಿರಬೇಕು. ಶಿವ ತಂದೆಯು ಬಂದು
ನೀವಾತ್ಮರನ್ನು ಜಾಗೃತಗೊಳಿಸುತ್ತಾರೆ. ಸತ್ಯ ದೀಪಾವಳಿಯಂತೂ ಇದಾಗಿದೆ, ಪ್ರತಿಯೊಬ್ಬರ ಮನೆಯ ದೀಪ
ಬೆಳಗುತ್ತದೆಯೆಂದರೆ ಆತ್ಮ ಜ್ಯೋತಿಯು ಬೆಳಗುತ್ತದೆ. ಮನುಷ್ಯರು ಮನೆಯಲ್ಲಿ ಸ್ಥೂಲ ದೀಪವನ್ನು
ಬೆಳಗಿಸುತ್ತಾರೆ. ಆದರೆ ವಾಸ್ತವದಲ್ಲಿ ಸತ್ಯ ದೀಪಾವಳಿಯ ಅರ್ಥವು ಇದಾಗಿದೆ. ಕೆಲಕೆಲವರ ದೀಪವಂತೂ
ಬೆಳಗುವುದೇ ಇಲ್ಲ. ನಿಮಗೆ ಗೊತ್ತಿದೆ, ಈಗ ನಮ್ಮ ದೀಪವು ಹೇಗೆ ಬೆಳಗುತ್ತದೆ? ಯಾರಾದರೂ
ಸಾಯುತ್ತಾರೆಂದರೆ ಅಂಧಕಾರವಾಗದಿರಲೆಂದು ದೀಪವನ್ನೂ ಬೆಳಗಿಸುತ್ತಾರೆ. ಆದರೆ ಮೊದಲು ಆತ್ಮದ ದೀಪವು
ಬೆಳಗಬೇಕು ಆಗಲೇ ಅಂಧಕಾರವಿರುವುದಿಲ್ಲ. ಇಲ್ಲವಾದರೆ ಮನುಷ್ಯರು ಘೋರ ಅಂಧಕಾರದಲ್ಲಿದ್ದಾರೆ,
ಆತ್ಮವಂತೂ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಇದರಲ್ಲಿ ಅಂಧಕಾರ
ಮೊದಲಾದ ಮಾತುಗಳೇ ಇಲ್ಲ. ಇದು ಭಕ್ತಿ ಮಾರ್ಗದ ಪದ್ಧತಿಯಾಗಿದೆ. ಎಣ್ಣೆ ಮುಗಿದಾಗ ದೀಪವು ನಂದಿ
ಹೋಗುತ್ತದೆ. ಅಂಧಕಾರದ ಸತ್ಯವಾದ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ಮೊದಲು ಆತ್ಮಗಳನ್ನು
ಕರೆಸುತ್ತಿದ್ದರು, ಏನನ್ನಾದರೂ ಕೇಳುತ್ತಿದ್ದರು, ಈಗ ಅದು ನಡೆಯುತ್ತಿಲ್ಲ. ಇಲ್ಲಿಯೂ ಬರುತ್ತಾರೆ
ಕೆಲವೊಂದು ಸಮಯದಲ್ಲಿ ಏನಾದರೂ ಮಾತನಾಡುತ್ತಾರೆ. ನೀವು ಸುಖಿಯಾಗಿದ್ದೀರಾ ಎಂದು ಕೇಳಿದರೆ ಹೌದು
ಎಂದು ಹೇಳುತ್ತಾರೆ ಅಂದರೆ ಅವಶ್ಯವಾಗಿ ಇಲ್ಲಿಂದ ಯಾರು ಹೋಗುತ್ತಾರೆ ಅವರು ಒಳ್ಳೆಯ ಮನೆಯಲ್ಲಿಯೇ
ಜನ್ಮ ಪಡೆಯುತ್ತಾರೆ. ಅಜ್ಞಾನಿಯ ಮನೆಯಲ್ಲಿಯೇ ಜನ್ಮ ಪಡೆಯುತ್ತಾರೆ, ಜ್ಞಾನಿ ಮನೆಯಲ್ಲಂತೂ
ಪಡೆಯುವುದಿಲ್ಲ. ಏಕೆಂದರೆ ಜ್ಞಾನಿ ಬ್ರಾಹ್ಮಣನಂತೂ ವಿಕಾರದಲ್ಲಿ ಬೀಳಲು ಸಾಧ್ಯವಿಲ್ಲ. ಅವರಂತೂ
ಪವಿತ್ರರಾಗಿರುತ್ತಾರೆ. ಹಾ! ಇಷ್ಟಂತೂ ಹೇಳಬಹುದು, ಒಳ್ಳೆಯ ಸುಖಿ ಮನೆಯಲ್ಲಿ ಹೋಗಿ ಸುಖ
ಪಡೆಯುತ್ತಾರೆ. ವಿವೇಕವೂ ಹೇಳುತ್ತದೆ, ಎಂತಹ ಸ್ಥಿತಿಯೋ ಅಂತಹ ಜನ್ಮ. ಮತ್ತೆ ಅಲ್ಲಿ ತಮ್ಮ
ಶೌರ್ಯವನ್ನೂ ತೋರಿಸುತ್ತಾರೆ. ಭಲೇ ಶರೀರವು ಚಿಕ್ಕದಾಗಿರುವ ಕಾರಣ ಮಾತನಾಡಲು ಸಾಧ್ಯವಾಗುವುದೇ
ಇಲ್ಲ. ಸ್ವಲ್ಪ ದೊಡ್ಡವರಾದಾಗ ಅವಶ್ಯವಾಗಿ ಜ್ಞಾನದ ಹೊಳಪನ್ನು ತೋರಿಸುತ್ತಾರೆ. ಹೇಗೆ ಕೆಲವರು
ಶಾಸ್ತ್ರಗಳ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆಂದರೆ ನಂತರ ಜನ್ಮದಲ್ಲಿ ಅದರ ಬಾಲ್ಯದಲ್ಲಿ
ತೊಡಗಿ ಬಿಡುತ್ತಾರೆ. ಹಾಗೆಯೇ ಇಲ್ಲಿಂದಲೂ ಜ್ಞಾನವನ್ನು ತೆಗೆದುಕೊಂಡು ಹೋಗುತ್ತಾರೆಂದರೆ ಅವರ
ಮಹಿಮೆಯಾಗುವುದು. ನೀವು ಶಿವ ಜಯಂತಿಯನ್ನು ಆಚರಿಸುತ್ತೀರಿ. ಇದರ ಅರ್ಥವನ್ನು ಅವರು
ತಿಳಿದುಕೊಳ್ಳುವುದಿಲ್ಲ. ಕೇಳಬೇಕು, ಒಂದು ವೇಳೆ ತಂದೆಯು ಸರ್ವವ್ಯಾಪಿಯಾಗಿದ್ದರೆ ಅವರ ಜಯಂತಿಯನ್ನು
ಹೇಗೆ ಆಚರಿಸುತ್ತೀರಿ? ಈಗ ನೀವು ಮಕ್ಕಳು ಓದುತ್ತಿದ್ದೀರಿ, ನಿಮಗೆ ಗೊತ್ತಿದೆ - ಅವರು ತಂದೆಯೂ
ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ತಂದೆಯು ತಿಳಿಸಿದ್ದಾರೆ,
ಸಿಕ್ಕಿದರೂ ಸಹ ಸತ್ಶ್ರೀ ಅಕಾಲ್ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಎಲ್ಲಾ ಆತ್ಮರೂ ಅಕಾಲ
ಮೂರ್ತರಾಗಿದ್ದಾರೆ ಆದರೆ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ.
ಆದ್ದರಿಂದ ಜನನ-ಮರಣವೆಂದು ಹೇಳಲಾಗುತ್ತದೆ. ಆತ್ಮವಂತೂ ಅದೇ ಆಗಿದೆ, ಆತ್ಮವೇ 84 ಜನ್ಮಗಳನ್ನು
ಪಡೆಯುತ್ತದೆ. ಯಾವಾಗ ಕಲ್ಪವು ಪೂರ್ಣವಾಗುತ್ತದೆಯೋ ಆಗ ಸ್ವಯಂ ತಂದೆಯೇ ಬಂದು ತಿಳಿಸುತ್ತಾರೆ -
ನಾನು ಯಾರು? ನಾನು ಹೇಗೆ ಇವರಲ್ಲಿ ಪ್ರವೇಶ ಮಾಡುತ್ತೇನೆ? ಇದರಿಂದ ತಾವು ತಾನಾಗಿಯೇ
ಅರಿತುಕೊಳ್ಳುತ್ತೀರಿ. ಮೊದಲು ತಿಳಿದಿರಲಿಲ್ಲ, ಪರಮಾತ್ಮ ಪ್ರವೇಶತೆಯಾಗಿದೆ ಎಂದು ತಿಳಿದಿತ್ತು.
ಆದರೆ ಹೇಗೆ, ಯಾವಾಗ ಆಯಿತೆಂದು ಗೊತ್ತಿರಲಿಲ್ಲ. ದಿನ-ಪ್ರತಿದಿನ ನಿಮ್ಮ ಬುದ್ಧಿಯಲ್ಲಿ ಆ ಮಾತುಗಳು
ಬರುತ್ತಾ ಇರುತ್ತವೆ. ಹೊಸ-ಹೊಸ ಮಾತುಗಳನ್ನು ಕೇಳುತ್ತಾ ಇರುತ್ತೀರಿ. ಮೊದಲು ಇಬ್ಬರು ತಂದೆಯ
ರಹಸ್ಯವನ್ನೇನೂ ತಿಳಿಸುತ್ತಿರಲಿಲ್ಲ, ಮೊದಲಂತೂ ನೀವು ಹೇಗೆ ಚಿಕ್ಕ ಮಕ್ಕಳಾಗಿದ್ದಿರಿ, ಈಗಲೂ ಸಹ
ಅನೇಕರು ಹೇಳುತ್ತಾರೆ - ಬಾಬಾ, ನಾವು ತಮ್ಮ 2 ದಿನದ ಮಗುವಾಗಿದ್ದೇವೆ, ಇಷ್ಟು ದಿನಗಳ
ಮಗುವಾಗಿದ್ದೇನೆ. ಏನಾಗುತ್ತದೆಯೋ ಅದು ಕಲ್ಪದ ಹಿಂದೆಯೂ ಆಗಿದ್ದೆನು ಎಂದು ತಿಳಿಯುತ್ತಾರೆ.
ಇದರಲ್ಲಿಯೂ ಬಹಳ ಜ್ಞಾನವಿದೆ, ತಿಳಿಯುವುದರಲ್ಲಿಯೂ ಸಮಯ ಹಿಡಿಸುತ್ತದೆ. ಜನ್ಮ ತೆಗೆದುಕೊಂಡು ಮತ್ತೆ
ಸಾಯಲೂಬಹುದು. 2-8 ತಿಂಗಳಿನವರಾಗಿರಬಹುದು ಅವರು ಒಂದು ವೇಳೆ ಶರೀರವನ್ನು ಬಿಡಬಹುದು. ನಿಮ್ಮ ಬಳಿ
ಬರುತ್ತಾರೆ - ಇದು ಸತ್ಯವಾಗಿದೆ ಎಂದು ಹೇಳುತ್ತಾರೆ. ಅವರು ನಮ್ಮ ತಂದೆಯಾಗಿದ್ದಾರೆ, ನಾವು ಅವರ
ಸಂತಾನರಾಗಿದ್ದೇವೆ, ಹೌದು-ಹೌದು ಎಂದು ಹೇಳುತ್ತಾರೆ. ಬಹಳ ಪ್ರಭಾವಿತರಾಗಿ ಬಿಡುತ್ತಾರೆಂದು ಮಕ್ಕಳೂ
ಬರೆಯುತ್ತಾರೆ, ಮತ್ತೆ ಹೊರಗೆ ಹೋದರೆ ಜ್ಞಾನದಿಂದ ಸತ್ತು ಹೋದರು ಮತ್ತೆ ಬರುವುದೇ ಇಲ್ಲವೆಂದರೆ
ಏನಾಗುವುದು? ಇಲ್ಲವೆ ಅಂತ್ಯದಲ್ಲಿ ಬಂದು ರಿಫ್ರೆಷ್ ಆಗುವರು ಇಲ್ಲವೆಂದರೆ ಪ್ರಜೆಗಳಲ್ಲಿ ಬರುವರು,
ಇವೆಲ್ಲಾ ಮಾತುಗಳನ್ನು ತಿಳಿಸಬೇಕು. ನಾವು ಶಿವ ಜಯಂತಿಯನ್ನು ಏಕೆ ಆಚರಿಸುತ್ತೇವೆ? ಶಿವ ಜಯಂತಿಯು
ಹೇಗೆ ಸದ್ಗತಿ ಕೊಡುತ್ತದೆ? ಶಿವ ತಂದೆಯು ಸ್ವರ್ಗದ ಉಡುಗೊರೆಯನ್ನು ತೆಗೆದುಕೊಂಡು ಬರುತ್ತಾರೆ.
ತಾವೇ ತಿಳಿಸುತ್ತಾರೆ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ, ವಿಶ್ವದ ಮಾಲೀಕರನ್ನಾಗಿ
ಮಾಡುತ್ತೇನೆ. ತಂದೆಯು ಸ್ವರ್ಗದ ರಚಯಿತನೆಂದಮೇಲೆ ಅವಶ್ಯವಾಗಿ ಸ್ವರ್ಗದ ಮಾಲೀಕರನ್ನಾಗಿಯೇ
ಮಾಡುತ್ತಾರೆ. ನಾವು ಅವರ ಚರಿತ್ರೆಯನ್ನು ತಿಳಿಸುತ್ತೇವೆ - ಅವರು ಹೇಗೆ ಸ್ವರ್ಗದ ಸ್ಥಾಪನೆ
ಮಾಡುತ್ತಾರೆ, ರಾಜಯೋಗವನ್ನು ಹೇಗೆ ಕಲಿಸುತ್ತಾರೆಂದು ಬಂದು ಕಲಿಯಿರಿ. ಹೇಗೆ ತಂದೆಯು
ತಿಳಿಸುತ್ತಾರೆಯೋ ಹಾಗೆಯೇ ಮಕ್ಕಳೂ ತಿಳಿಸಲಾಗುವುದಿಲ್ಲವೆ? ಇದರಲ್ಲಿ ಬಹಳ ಚೆನ್ನಾಗಿ ತಿಳಿಸಬೇಕು.
ಶಿವನ ಮಂದಿರದಲ್ಲಿ ಬಹಳ ಚೆನ್ನಾಗಿ ತಿಳಿಸುತ್ತಾರೆ ಅಂದಾಗ ಅಲ್ಲಿಗೆ ಹೋಗಿ ತಿಳಿಸಬೇಕು.
ಲಕ್ಷ್ಮೀ-ನಾರಾಯಣರ ಮಂದಿರದಲ್ಲಿ ಒಂದು ವೇಳೆ ಶಿವನ ಜೀವನ ಕಥೆಯನ್ನು ತಿಳಿಸಿದರೆ ಯಾರಿಗೂ
ಹಿಡಿಸುವುದಿಲ್ಲ, ವಿಚಾರದಲ್ಲಿಯೂ ಬರುವುದಿಲ್ಲ. ಮತ್ತೆ ಅವರಿಗೆ ಚೆನ್ನಾಗಿ ಬುದ್ಧಿಯಲ್ಲಿ
ಕೂರಿಸಬೇಕಾಗುತ್ತದೆ. ಲಕ್ಷ್ಮೀ-ನಾರಾಯಣನ ಮಂದಿರಕ್ಕೆ ಅನೇಕರು ಬರುತ್ತಾರೆ, ಅವರಿಗೆ
ಲಕ್ಷ್ಮೀ-ನಾರಾಯಣ, ರಾಧೆ-ಕೃಷ್ಣರ ರಹಸ್ಯವನ್ನು ತಿಳಿಸಿ. ಕೃಷ್ಣ ಜಯಂತಿಯನ್ನು ನೀವು ಕೃಷ್ಣ
ಮಂದಿರದಲ್ಲಿ ಹೋಗಿ ಕೃಷ್ಣನೇ ಸುಂದರ, ಕೃಷ್ಣನೇ ಶ್ಯಾಮನೆಂದು ಹೇಗೆ ಗಾಯನವಿದೆ ಎಂದು ತಿಳಿಸಿ.
ಕೃಷ್ಣನಿಗೆ ಗೊಲ್ಲ ಬಾಲನೆಂದು ಹೇಳುತ್ತಾರೆ. ಹಳ್ಳಿಯಲ್ಲಿ ಹಸು-ಕುರಿಗಳನ್ನು ಮೇಯಿಸುತ್ತಿದ್ದನೆಂದು
ಹೇಳುತ್ತಾರೆ. ಇದನ್ನು ಬಾಬಾ (ಬ್ರಹ್ಮಾ) ಅನುಭವ ಮಾಡುತ್ತಾರೆ. ನಾನೂ ಸಹ ಹಳ್ಳಿಯವನಾಗಿದ್ದೆನು,
ಟೋಪಿಯೂ ಇರಲಿಲ್ಲ, ಪಾದರಕ್ಷೆಗಳೂ ಇರಲಿಲ್ಲ. ಈಗ ಸ್ಮೃತಿಯು ಬರುತ್ತದೆ, ನಾವು ಹೇಗಿದ್ದೆವು ಆದರೆ
ತಂದೆಯು ಬಂದು ಪ್ರವೇಶ ಮಾಡಿದ್ದಾರೆ ಅಂದಾಗ ಈ ತಂದೆಯ ಲಕ್ಷ್ಯವು ಎಲ್ಲರಿಗೆ ಸಿಗಲಿ - ಶಿವ
ಜಯಂತಿಯನ್ನು ನೆನಪು ಮಾಡಿ ಅವರೇ ಸದ್ಗತಿದಾತನಾಗಿದ್ದಾರೆ. ನೀವು ರಾಮಚಂದ್ರನ ಜೀವನ ಕಥೆಯನ್ನು
ತಿಳಿಸಬಹುದು. ಅವರ ರಾಜ್ಯವು ಯಾವಾಗಿನಿಂದ ಪ್ರಾರಂಭವಾಯಿತು, ಎಷ್ಟು ವರ್ಷಗಳಾಯಿತು. ಇಂತಿಂತಹ
ವಿಚಾರಗಳು ಬರಬೇಕು. ಶಿವನ ಮಂದಿರದಲ್ಲಿ ಶಿವನ ಚರಿತ್ರೆಯನ್ನು ತಿಳಿಸಬೇಕು. ಲಕ್ಷ್ಮೀ-ನಾರಾಯಣನ
ಮಂದಿರದಲ್ಲಿ ಅವರ ಮಹಿಮೆ ಮಾಡಬೇಕು, ರಾಮನ ಮಂದಿರದಲ್ಲಿ ಹೋದಾಗ ರಾಮನ ಜೀವನ ಚರಿತ್ರೆಯನ್ನು ತಿಳಿಸಿ.
ಈಗ ನೀವು ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುವ ಪುರುಷಾರ್ಥ ಮಾಡುತ್ತಿದ್ದೀರಿ. ಹಿಂದೂ
ಧರ್ಮವನ್ನಂತೂ ಯಾರೂ ಸ್ಥಾಪನೆ ಮಾಡಲಿಲ್ಲ. ಬಾಕಿ ಯಾವುದೇ ಹಿಂದೂ ಧರ್ಮವಿಲ್ಲವೆಂದು ನೇರವಾಗಿ
ಹೇಳಿದರೆ ಕೋಪಿಸಿಕೊಳ್ಳುತ್ತಾರೆ. ಅವರು ಇಸಾಯಿಗಳೆಂದು ತಿಳಿಯುತ್ತಾರೆ, ಆದ್ದರಿಂದ ನೀವು ಹೇಳಿ,
ನಾವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೇವೆ ಅದಕ್ಕ ಇತ್ತೀಚೆಗೆ ಹಿಂದೂ ಎಂದು ಹೇಳಿ
ಬಿಟ್ಟಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
೧. ಶಿವ
ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿ ಶಿವನ ಮಂದಿರದಲ್ಲಿ ಶಿವನ ಮತ್ತು ಲಕ್ಷ್ಮೀ-ನಾರಾಯಣರ
ಮಂದಿರಲ್ಲಿ ಲಕ್ಷ್ಮೀ-ನಾರಾಯಣರ ಹಾಗೂ ರಾಧೆ-ಕೃಷ್ಣರ ಚರಿತ್ರೆಯನ್ನು ತಿಳಿಸಿ. ಎಲ್ಲರಿಗೆ
ಯುಕ್ತಿಯುಕ್ತವಾಗಿ ತಿಳುವಳಿಕೆ ನೀಡಿ.
೨. ಅಜ್ಞಾನ ಅಂಧಕಾರದಿಂದ ಪಾರಾಗಲು ಆತ್ಮ ರೂಪಿ ದೀಪವನ್ನು ಜ್ಞಾನದ ಎಣ್ಣೆಯಿಂದ ಸದಾ
ಪ್ರಜ್ವಲಿತವಾಗಿಟ್ಟುಕೊಳ್ಳಬೇಕು ಅನ್ಯರನ್ನೂ ಅಜ್ಞಾನದ ಅಂಧಕಾರದಿಂದ ಹೊರ ತೆಗೆಯಬೇಕು.
ವರದಾನ:
ಶ್ರೇಷ್ಠ
ಸ್ಮೃತಿಯಿಂದ ಶ್ರೇಷ್ಠ ಸ್ಥಿತಿ ಮತ್ತು ಶ್ರೇಷ್ಠ ವಾಯುಮಂಡಲ ರಚಿಸುವಂತಹ ಸರ್ವರ ಸಹಯೋಗಿ ಭವ.
ಯೋಗದ ಅರ್ಥವಾಗಿದೆ
ಶ್ರೇಷ್ಠ ಸ್ಮೃತಿಯಲ್ಲಿರಬೇಕು. ನಾನು ಶ್ರೇಷ್ಠ ಆತ್ಮ ಶ್ರೇಷ್ಠ ತಂದೆಯ ಸಂತಾನ ಆಗಿರುವೆನು, ಯಾವಾಗ
ಇಂತಹ ಸ್ಮೃತಿ ಇರುವುದು ಆಗ ಸ್ಥಿತಿ ಶ್ರೇಷ್ಠವಾಗಿ ಬಿಡುವುದು. ಶ್ರೇಷ್ಠ ಸ್ಥಿತಿಯಿಂದ ಶ್ರೇಷ್ಠ
ವಾಯುಮಂಡಲ ಸ್ವತಃವಾಗಿ ರಚನೆಯಾಗುವುದು. ಯಾವುದು ಅನೇಕ ಆತ್ಮಗಳಿಗೆ ತಮ್ಮ ಕಡೆ ಆಕರ್ಷಣೆ ಮಾಡುವುದು.
ಎಲ್ಲಾದರೂ ಸಹ ತಾವು ಆತ್ಮರು ಯೋಗದಲ್ಲಿರುತ್ತಾ ಕರ್ಮ ಮಾಡುವಿರಿ ಅಲ್ಲಿಯ ವಾತಾವರಣ, ವಾಯುಮಂಡಲ
ಬೇರೆಯವರಿಗೂ ಸಹಾ ಸಹಯೋಗ ಕೊಡುವುದು. ಈ ರೀತಿಯ ಸಹಯೋಗಿ ಆತ್ಮರು ತಂದೆಗೆ ಹಾಗೂ ವಿಶ್ವಕ್ಕೆ
ಪ್ರೀಯರಾಗಿ ಬಿಡುವರು.
ಸ್ಲೋಗನ್:
ಅಚಲ ಸ್ಥಿತಿಯ
ಆಸನದ ಮೇಲೆ ಕೂರುವುದರಿಂದಲೇ ರಾಜ್ಯದ ಸಿಂಹಾಸನ ಸಿಗುವುದು.