02.08.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಯೋಗದ ಮೂಲಕ ತತ್ವಗಳನ್ನು ಪಾವನ ಮಾಡುವ ಸೇವೆ ಮಾಡಿ, ಏಕೆಂದರೆ ತತ್ವಗಳು ಪಾವನ ಆದಾಗ ಈ ಸೃಷ್ಟಿಯಲ್ಲಿ ದೇವತೆಗಳು ಕಾಲಿಡುತ್ತಾರೆ”

ಪ್ರಶ್ನೆ:
ನಿಮ್ಮ ಹೊಸ ರಾಜಧಾನಿಯಲ್ಲಿ ಯಾವುದೇ ಪ್ರಕಾರದ ಅಶಾಂತಿಯಿರಲು ಸಾಧ್ಯವಿಲ್ಲ - ಏಕೆ?

ಉತ್ತರ:
1. ಏಕೆಂದರೆ ಆ ರಾಜಧಾನಿಯು ನಿಮಗೆ ತಂದೆಯ ಮೂಲಕ ಆಸ್ತಿಯಲ್ಲಿ ಸಿಕ್ಕಿದೆ. 2. ವರದಾತ ತಂದೆಯು ನೀವು ಮಕ್ಕಳಿಗೆ ಈಗಲೇ ವರದಾನ ಅರ್ಥಾತ್ ಆಸ್ತಿಯನ್ನು ಕೊಟ್ಟಿದ್ದಾರೆ, ಅಲ್ಲಿ ಅಶಾಂತಿಯಿರುವುದಿಲ್ಲ. ನೀವು ತಂದೆಗೆ ಮಕ್ಕಳಾಗುವುದರಿಂದ ಪೂರ್ಣ ಆಸ್ತಿಯನ್ನು ಪಡೆಯುತ್ತೀರಿ.

ಓಂ ಶಾಂತಿ.
ಮಕ್ಕಳಿಗೆ ಗೊತ್ತಿದೆ, ನಾವು ಯಾರ ಮಕ್ಕಳಾಗಿದ್ದೇವೆ ಅವರಿಗೆ ಸತ್ಯ ಸಾಹೇಬನೆಂದು ಹೇಳುತ್ತಾರೆ, ಆದ್ದರಿಂದ ಇಂದಿನ ದಿನಗಳಲ್ಲಿ ನೀವು ಮಕ್ಕಳನ್ನು ಪ್ರಭುವಿನ ಸಂತಾನರೆಂದು ಹೇಳುತ್ತಾರೆ. ಸತ್ಯತೆಯ ಬಗ್ಗೆ ಒಂದು ಮಾತಿದೆ - ಸತ್ಯವನ್ನು ತಿನ್ನಬೇಕು, ಸತ್ಯವನ್ನೇ ತೊಡಬೇಕು. ಭಲೆ ಇದನ್ನು ಮನುಷ್ಯರು ರಚಿಸಿದ್ದಾರೆ, ಆದರೆ ಇದನ್ನು ತಂದೆಯು ತಿಳಿಸುತ್ತಾರೆ - ಮಕ್ಕಳಿಗೆ ಗೊತ್ತಿದೆ, ತಂದೆ ಶ್ರೇಷ್ಠಾತಿ ಶ್ರೇಷ್ಠ ಆಗಿದ್ದಾರೆ, ಅವರ ಮಹಿಮೆ ಮಾಡುತ್ತಾರೆ. ತಂದೆಯ ಮಕ್ಕಳಲ್ಲವೆ! ಎಲ್ಲ ಆತ್ಮರು ತಂದೆಯ ಜೊತೆಯಲ್ಲಿರುತ್ತಾರೆ, ಅದಕ್ಕೆ ತಂದೆಯ ಮನೆ, ಮಧುರ ಮನೆಯೆಂದು ಹೇಳುತ್ತಾರೆ. ಇದೇನೂ ಮನೆಯಲ್ಲ, ಮಕ್ಕಳಿಗೆ ತಿಳಿದಿದೆ - ಅವರು ನಮ್ಮ ಮಧುರಾತಿ ಮಧುರ ತಂದೆಯಾಗಿದ್ದಾರೆ. ಮಧುರ ಮನೆ ಶಾಂತಿಧಾಮವಾಗಿದೆ ಮತ್ತು ಸತ್ಯಯುಗವೂ ಮಧುರ ಮನೆಯಾಗಿದೆ. ಏಕೆಂದರೆ ಅಲ್ಲಿ ಪ್ರತಿಯೊಂದು ಮನೆಯೂ ಶಾಂತವಾಗಿರುತ್ತದೆ. ಆದರೆ ಇಲ್ಲಿ ಮನೆ ಮನೆಯಲ್ಲಿ ಲೌಕಿಕ ತಂದೆ ತಾಯಿಯ ಬಳಿಯೂ ಅಶಾಂತಿಯಿದೆ, ಪ್ರಪಂಚದಲ್ಲಿಯೂ ಅಶಾಂತಿಯಿದೆ. ಅಲ್ಲಿ ಪ್ರಪಂಚದಲ್ಲಿಯೂ ಶಾಂತಿ ಮನೆಯಲ್ಲಿಯೂ ಶಾಂತಿಯಿರುತ್ತದೆ. ಸತ್ಯಯುಗದಲ್ಲಿ ಸುಖ ಶಾಂತಿಯಿರುತ್ತದೆ. ಸತ್ಯಯುಗಕ್ಕೆ ಹೊಸ ಚಿಕ್ಕದಾದ ಪ್ರಪಂಚವೆಂದು ಹೇಳುತ್ತಾರೆ. ಈ ಹಳೆಯ ಪ್ರಪಂಚ ಎಷ್ಟು ದೊಡ್ಡದಾಗಿದೆ, ಸತ್ಯಯುಗದಲ್ಲಿ ಸುಖ ಶಾಂತಿಯಿರುತ್ತದೆ. ಯಾವ ಏರುಪೇರಿನ ಮಾತಿಲ್ಲ. ಏಕೆಂದರೆ ಬೇಹದ್ದಿನ ತಂದೆಯಿಂದ ಸುಖ ಶಾಂತಿಯ ಆಸ್ತಿ ಸಿಕ್ಕಿದೆ. ಪುತ್ರವಾನ್ ಭವ, ಆಯುಷ್ಯವಾನ್ ಭವ ಎಂದು ಗುರು ಗೋಸಾಯಿಗಳು ಆಶೀರ್ವಾದ ಮಾಡುತ್ತಾರೆ, ಇವರೇನು ಹೊಸ ಆಶೀರ್ವಾದ ಮಾಡುವುದಿಲ್ಲ. ತಂದೆಯ ಆಸ್ತಿ ತಾನಾಗಿಯೇ ಸಿಗುತ್ತದೆ, ಈಗ ತಂದೆಯು ಮಕ್ಕಳಿಗೆ ಸ್ಮೃತಿ ತರಿಸಿದ್ದಾರೆ - ಪ್ರಪಂಚ ದುಃಖಿಯಾದಾಗ ಈ ತಂದೆಯನ್ನು ಭಕ್ತಿ ಮಾರ್ಗದಲ್ಲಿ ಎಲ್ಲ ಧರ್ಮದವರು ನೆನಪು ಮಾಡುತ್ತಾರೆ. ಇದು ಪತಿತ ಪ್ರಪಂಚಾವಾಗಿದೆ, ಹೊಸ ಪ್ರಪಂಚದಲ್ಲಿ ಸುಖ ಇರುತ್ತದೆ. ಅಶಾಂತಿಯ ಹೆಸರಿರುವುದಿಲ್ಲ. ಈಗ ನೀವು ಮಕ್ಕಳು ಪವಿತ್ರರು ಮತ್ತು ಗುಣವಂತರಾಗಬೇಕು. ಇಲ್ಲವಾದರೆ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ತಂದೆಯ ಜೊತೆ ಜೊತೆಗೆ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಸುವವರೂ ಇದ್ದಾರೆ, ನ್ಯಾಯ ನಡೆಯುತ್ತದೆ. ಯಾರು ಒಳ್ಳೆಯ ರೀತಿಯಲ್ಲಿ ಶ್ರಮ ಪಡುವರೋ ಅವರು ಶಿಕ್ಷೆಯನ್ನು ಅನುಭವಿಸುವುದಿಲ್ಲ. ಪಾಪಗಳಿಗೆ ಶಿಕ್ಷೆಯಂತೂ ಅವಶ್ಯ ಸಿಗುತ್ತದೆ. ಇದಕ್ಕೆ ಕರ್ಮ ಭೋಗವೆಂದು ಹೇಳುತ್ತಾರೆ. ಇದಂತೂ ರಾವಣನ ಪರರಾಜ್ಯವಾಗಿದೆ, ಇದರಲ್ಲಿ ಅಪಾರ ದುಃಖವಿದೆ. ರಾಮರಾಜ್ಯದಲ್ಲಿ ಅಪಾರ ಸುಖವಿರುತ್ತದೆ. ನೀವಂತೂ ಅನೇಕರಿಗೆ ತಿಳಿಸಿಕೊಡುತ್ತೀರಿ, ಆದರೆ ಕೆಲವರು ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ, ಇನ್ನು ಕೆಲವರು ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಕಡಿಮೆ ತಿಳಿದುಕೊಂಡರೆ ಇವರು ತಡವಾಗಿ ಭಕ್ತಿ ಮಾಡಿದ್ದಾರೆಂದು ತಿಳಿಯಿರಿ. ಪ್ರಾರಂಭದಿಂದ ಭಕ್ತಿ ಮಾಡಿದವರು ಜ್ಞಾನವನ್ನೂ ಸಹ ಬೇಗನೆ ತಿಳಿದುಕೊಳ್ಳುವರು ಏಕೆಂದರೆ ಅವರು ಮೊದಲ ನಂಬರಿನಲ್ಲಿ ಹೋಗಬೇಕಾಗಿದೆ.

ನೀವು ಮಕ್ಕಳಿಗೆ ಗೊತ್ತಿದೆ - ನಾವು ಆತ್ಮಗಳು ಮಧುರ ಮನೆಯಿಂದ ಇಲ್ಲಿಗೆ ಬಂದಿದ್ದೇವೆ, ಸೈಲೆನ್ಸ್, ಮೂವಿ, ಟಾಕಿ ಇದೆಯಲ್ಲವೆ. ಮಕ್ಕಳು ಧ್ಯಾನದಲ್ಲಿ ಹೋದಾಗ ಅಲ್ಲಿ ಸನ್ನೆಯ ಭಾಷೆಯು ನಡೆಯುತ್ತದೆಯೆಂದು ಹೇಳುತ್ತಾರೆ. ಜ್ಞಾನ ಮಾರ್ಗದೊಂದಿಗೆ ಅದರ ಸಂಬಂಧವಿಲ್ಲ. ಮುಖ್ಯವಾದುದು ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುವುದು, ಮತ್ಯಾವುದೇ ಸಂಬಂಧವಿಲ್ಲ. ತಂದೆಯು ನಿರಾಕಾರನಾಗಿದ್ದಾರೆ, ಮಕ್ಕಳಾದ ಆತ್ಮರೂ ಸಹ ಈ ಶರೀರದಲ್ಲಿ ನಿರಾಕಾರಿಯಾಗಿದ್ದೀರಿ ಬೇರೆ ಯಾವ ಮಾತು ಬರುವುದೇ ಇಲ್ಲ. ಆತ್ಮನ ಪ್ರೀತಿಯು ಒಬ್ಬ ಪರಮಾತ್ಮನ ಜೊತೆಯಿದೆ. ಎಲ್ಲರ ಶರೀರಗಳೂ ಪತಿತವಾಗಿವೆ. ಆದ್ದರಿಂದ ಪತಿತ ಶರೀರದೊಂದಿಗೆ ಪ್ರೀತಿ ಇರಲು ಸಾಧ್ಯವಿಲ್ಲ. ಆತ್ಮ ಪಾವನವಾದರೂ ಶರೀರ ಪತಿತವಾಗಿದೆ. ಪತಿತ ಪ್ರಪಂಚದಲ್ಲಿ ಶರೀರವು ಪಾವನವಾಗುವುದೇ ಇಲ್ಲ. ಆತ್ಮವು ಇಲ್ಲಿಯೇ ಪಾವನವಾಗಬೇಕು. ಆಗ ಹಳೆಯ ಶರೀರಗಳು ವಿನಾಶವಾಗುವವು. ಆತ್ಮವು ಅವಿನಾಶಿಯಾಗಿದೆ. ಬೇಹದ್ದಿನ ತಂದೆಯನ್ನು ನೆನಪು ಮಾಡಿ ಪಾವನವಾಗುವುದು ಆತ್ಮದ ಕೆಲಸವಾಗಿದೆ. ಆತ್ಮವು ಪಾವನವಾಗಿದ್ದಾಗೆ ಶರೀರವೂ ಪಾವನ ಆಗಿರುವಂತಹದೇ ಬೇಕು. ಇದು ಹೊಸ ಪ್ರಪಂಚದಲ್ಲಿ ಸಿಗುತ್ತದೆ. ಭಲೆ ಆತ್ಮವು ಪಾವನವಾಗುತ್ತದೆ, ಆತ್ಮವು ಒಬ್ಬ ಪರಮಪಿತ ಪರಮಾತ್ಮನ ಜೊತೆ ಬುದ್ಧಿಯೋಗನ್ನಿಡಬೇಕು. ಈ ಪತಿತ ಶರೀರವನ್ನು ಸ್ಪರ್ಶಿಸಲೂಬಾರದು. ತಂದೆಯು ಹೀಗೆ ಆತ್ಮಗಳೊಂದಿಗೆ ಮಾತನಾಡುತ್ತಾರೆ. ಅರಿತುಕೊಳ್ಳುವ ಮಾತುಗಳಲ್ಲವೆ. ಸತ್ಯಯುಗದಿಂದ ಹಿಡಿದು ಕಲಿಯುಗದವರೆಗೆ ಶರೀರದಲ್ಲಿ ಸಿಕ್ಕಿ ಹಾಕಿಕೊಂಡಿರುವಿರಿ. ಸತ್ಯಯುಗದಲ್ಲಿ ಆತ್ಮ ಮತ್ತು ಶರೀರ ಪವಿತ್ರವಾಗಿರುವುದರಿಂದ ಆತ್ಮ ವಿಕಾರಿಯಾಗುವುದಿಲ್ಲ. ವಲ್ಲಭಾಚಾರಿಗಳು ಸ್ಪರ್ಶಿಸಲೂ ಬಿಡುವುದಿಲ್ಲ, ಅವರ ಆತ್ಮವೇನೂ ನಿರ್ವಿಕಾರಿ ಪಾವನವಾಗಿರುವುದಿಲ್ಲ ಎನ್ನುವುದು ನಿಮಗೆ ಗೊತ್ತಿದೆ. ಕೇವಲ ಅದೊಂದು ವಲ್ಲಭಾಚಾರಿ ಪಂಥವಾಗಿದೆ. ಆದರೆ ನಾವು ವಿಕಾರಿ ಅಪವಿತ್ರರಾಗಿದ್ದೇವೆ, ಈ ಶರೀರವು ಭ್ರಷ್ಠಾಚಾರದಿಂದ ಜನ್ಮ ತೆಗೆದುಕೊಂಡಿದೆ ಎಂದು ಅವರಿಗೆ ತಿಳಿದಿಲ್ಲ. ಈ ಮಾತುಗಳನ್ನು ತಂದೆಯು ಬಂದು ತಿಳಿಸುತ್ತಾರೆ. ಆತ್ಮವು ಪಾವನವಾದಾಗ ಶರೀರವನ್ನು ಬದಲಾಯಿಸಬೇಕಾಗುತ್ತದೆ. ಪಂಚತತ್ವಗಳು ಪಾವನವಾದಾಗ ಶರೀರವೂ ಪಾವನವಾಗುತ್ತದೆ. ಸತ್ಯಯುಗದಲ್ಲಿ ತತ್ವಗಳೂ ಸಹ ಪವಿತ್ರವಾಗಿರುತ್ತವೆ ಆದ್ದರಿಂದ ಶರೀರ ಪವಿತ್ರವಾಗಿರುತ್ತದೆ. ದೇವತೆಗಳು ಪತಿತ ಶರೀರದಲ್ಲಿ, ಪತಿತ ಧರಣಿಯಲ್ಲಿ ಪಾದಗಳನ್ನಿಡುವುದಿಲ್ಲ. ಅವರ ಆತ್ಮ ಮತ್ತು ಶರೀರ ಎರಡೂ ಪಾವನವಾಗಿರುತ್ತದೆ. ಪಾವನವಾಗಿರುವುದರಿಂದ ಅವರು ಸತ್ಯಯುಗದಲ್ಲಿಯೇ ಹೆಜ್ಜೆಯನ್ನಿಡುತ್ತಾರೆ. ಇದು ಪತಿತ ಪ್ರಪಂಚವಾಗಿದೆ, ಆತ್ಮವು ಪಾರಲೌಕಿಕ ತಂದೆಯಾದ ಪರಮಾತ್ಮನನ್ನು ನೆನಪು ಮಾಡುತ್ತದೆ. ಒಬ್ಬರು ಶರೀರದ ತಂದೆ, ಇನ್ನೊಬ್ಬರು ಅಶರೀರಿ ತಂದೆ. ಅಶರೀರಿ ತಂದೆಯನ್ನು ನೆನಪು ಮಾಡುತ್ತಾರೆ ಏಕೆಂದರೆ ಅವರಿಂದೆ ಇಂತಹ ಸುಖದ ಆಸ್ತಿಯು ಅವಶ್ಯವಾಗಿ ಸಿಕ್ಕಿದೆ ಅಂದಮೇಲೆ ನೆನಪು ಮಾಡದೇ ಇರಲು ಸಾಧ್ಯವಿಲ್ಲ. ಈ ಸಮಯದಲ್ಲಿ ತಮೋಪ್ರಧಾನರಾಗಿದ್ದರೂ ಸಹ ಅವಶ್ಯವಾಗಿ ತಂದೆಯನ್ನು ನೆನಪು ಮಾಡುತ್ತೀರಿ. ಆದರೆ ನಂತರ ಈಶ್ವರ ಸರ್ವವ್ಯಾಪಿ ಎನ್ನುವ ಉಲ್ಟಾ ಶಿಕ್ಷಣವು ಸಿಗುತ್ತದೆ ಮತ್ತು ಮನುಷ್ಯನು ಮನುಷ್ಯನೇ ಆಗುತ್ತಾನೆಂಬ ಮಾತಿನಲ್ಲಿ ತಬ್ಬಿಬ್ಬಾಗುತ್ತಾರೆ. ಇವೆಲ್ಲ ಮಾತುಗಳನ್ನು ತಂದೆ ಬಂದು ತಿಳಿಸುತ್ತಾರೆ. ತಂದೆಯು ಒಂದೇ ಮನ್ಮನಾಭವದ ಮಂತ್ರವನ್ನು ಕೊಡುತ್ತಾರೆ, ಅದರ ಅರ್ಥವೂ ಇರಬೇಕು - ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದೇ ಗುಂಗಿರಲಿ, ಇದರಿಂದ ನೀವು ಪಾವನರಾಗುತ್ತೀರಿ. ದೇವತೆಗಳು ಪವಿತ್ರರಾಗಿರುತ್ತಾರೆ. ಈಗ ತಂದೆಯು ಬಂದು ಪುನಃ ಅಂತಹ ಪವಿತ್ರರನ್ನಾಗಿ ಮಾಡುತ್ತಾರೆ. ಸನ್ಮುಖದಲ್ಲಿ ಗುರಿ ಉದ್ದೇಶವನ್ನು ಮುಂದಿಡುತ್ತಾರೆ. ಹೇಗೆ ಮೂರ್ತಿಯನ್ನು ಮಾಡುವವರು ಮನುಷ್ಯರನ್ನು ನೋಡಿ ತಕ್ಷಣ ಅವರ ಪ್ರತಿಮೆಯನ್ನು ಮಾಡುತ್ತಾರೆ. ಅವರು ಜೀವಂತವಾಗಿ ಸನ್ಮುಖದಲ್ಲಿ ಕುಳಿತಿರುವಂತೆ ಮಾಡುತ್ತಾರೆ. ಆದರೂ ಅದು ಜಡ ಪ್ರತಿಮೆಯಾಗಿದೆ. ಇಲ್ಲಿ ತಂದೆಯು ನಿಮಗೆ ತಿಳಿಸುತ್ತಾರೆ - ಮಕ್ಕಳೇ, ನೀವು ಇಂತಹ ಚೈತನ್ಯ ಲಕ್ಷ್ಮೀ ನಾರಾಯಣರಾಗಬೇಕು. ಹೇಗಾಗುತ್ತೀರಿ? ನೀವು ಈ ವಿದ್ಯೆ ಮತ್ತು ಪವಿತ್ರತೆಯಿಂದಲೇ ಮನುಷ್ಯರಿಂದ ದೇವತೆಗಳಾಗುತ್ತೀರಿ. ಈ ಶಾಲೆಯು ಮನುಷ್ಯರಿಂದ ದೇವತೆಗಳಾಗುವುದಾಗಿದೆ. ಅವರು ಬಹಳಷ್ಟು ಮಾಡುತ್ತಾರೆ, ಅದಕ್ಕೆ ಕಲೆಯೆಂದು ಹೇಳಲಾಗುತ್ತದೆ. ಚಾಚೂ ತಪ್ಪದೇ ಅದೇ ಮುಖವನ್ನು ತಯಾರಿಸುತ್ತಾರೆ. ಇದರಲ್ಲಿ ಅಂತಹ ಮಾತೇ ಇಲ್ಲ. ಇಲ್ಲಿ ಜಡ ಚಿತ್ರಗಳಿವೆ ಅಲ್ಲಿ ನೀವು ಸ್ವಭಾವಿಕವಾಗಿ ಚೈತನ್ಯದಲ್ಲಿ ಆಗುತ್ತೀರಲ್ಲವೆ. ಪಂಚ ತತ್ವಗಳ ಚೈತನ್ಯ ಶರೀರವಿರುತ್ತದೆ. ಈ ಜಡ ಚಿತ್ರಗಳನ್ನಂತೂ ಮನುಷ್ಯರು ಮಾಡಿದ್ದಾರೆ. ಅಲ್ಲಿನ ರೀತಿಯಲ್ಲಿ ಚಾಚೂ ತಪ್ಪದೇ ಇಲ್ಲಿ ಬರೆಯಲು ಸಾಧ್ಯವಿಲ್ಲ. ಏಕೆಂದರೆ ದೇವತೆಗಳ ಭಾವ ಚಿತ್ರವನ್ನು ತೆಗೆಯಲು ಸಾಧ್ಯವಿಲ್ಲ. ಸಾಕ್ಷಾತ್ಕಾರದಲ್ಲಿ ನೋಡಬಹುದು ಆದರೆ ಭಾವಚಿತ್ರವನ್ನು ತೆಗೆಯಲು ಸಾಧ್ಯವಿಲ್ಲ. ನಾವು ಇಂತಹ ಸಾಕ್ಷಾತ್ಕಾರವನ್ನು ನೋಡಿದೆವು ಎಂದು ಹೇಳುತ್ತಾರೆ ಆದರೆ ಅಂತಹ ಚಿತ್ರವನ್ನು ರಚಿಸಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ತಂದೆಯಿಂದ ಜ್ಞಾನ ತೆಗೆದುಕೊಂಡು ಪೂರ್ಣ ಆದಾಗ ಕಲ್ಪದ ಹಿಂದಿನಂತೆ ಆಗುತ್ತೀರಿ. ಇದು ಎಂತಹ ವಿಚಿತ್ರ ಸೃಷ್ಟಿ ನಾಟಕವಾಗಿದೆ. ತಂದೆಯು ಇದನ್ನು ಕುಳಿತು ತಿಳಿಸಿಕೊಡುತ್ತಾರೆ. ಈ ಮಾತುಗಳು ಮನುಷ್ಯರ ವಿಚಾರದಲ್ಲಿಯೂ ಬರುವುದಿಲ್ಲ, ಅವರ ಮುಂದೆ ಹೋಗಿ ತಲೆ ಬಾಗುತ್ತಾರೆ. ಇವರು ರಾಜ್ಯವನ್ನು ಮಾಡಿ ಹೋದರು ಎಂದು ತಿಳಿಯುತ್ತಾರೆ, ಆದರೆ ಯಾವಾಗ? ಇದೂ ಸಹ ಗೊತ್ತಿಲ್ಲ. ಪುನಃ ಯಾವಾಗ ಬರುತ್ತಾರೆ? ಬಂದು ಏನು ಮಾಡುತ್ತಾರೆ? ಎನೂ ತಿಳಿದಿಲ್ಲ. ನಿಮಗೆ ತಿಳಿದಿದೆ, ಸೂರ್ಯ ವಂಶಿ, ಚಂದ್ರವಂಶಿಯರು ಯಾರು ಬಂದು ಹೋಗಿದ್ದರೋ ಅವರು ಪುನಃ ಈ ಜ್ಞಾನದಿಂದ ಬರುತ್ತಾರೆ. ವಿಚಿತ್ರವಾಗಿದೆಯಲ್ಲವೆ! ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇಂತಹ ಪುರುಷಾರ್ಥ ಮಾಡಿದರೆ ನೀವು ದೇವತೆಗಳಾಗುತ್ತೀರಿ. ಸತ್ಯಯುಗದಲ್ಲಿ ಯಾವ ಚಟುವಟಿಕೆಗಳು ನಡೆದಿದ್ದವೋ ಅದೇ ನಡೆಯುತ್ತದೆ. ಎಷ್ಟು ಅದ್ಭುತವಾದ ಜ್ಞಾನವಾಗಿದೆ. ಹೃದಯ ಸ್ವಚ್ಛವಿದ್ದಾಗ ಮಾತ್ರ ಈ ಜ್ಞಾನ ನಿಲ್ಲುತ್ತದೆ, ಎಲ್ಲರ ಬುದ್ಧಿಯಲ್ಲಿ ಈ ಮಾತುಗಳು ನಿಲ್ಲಲು ಸಾಧ್ಯವಿಲ್ಲ. ಪರಿಶ್ರಮ ಪಡಬೇಕು. ಪರಿಶ್ರಮವಿಲ್ಲದೇ ಫಲ ಸಿಗುತ್ತದೆಯೇ? ತಂದೆಯಂತೂ ಪುರುಷಾರ್ಥ ಮಾಡಿಸುತ್ತಾರೆ. ನಾಟಕದನುಸಾರವೇ ಆಗುತ್ತದೆ ಆದರೂ ಪುರುಷಾರ್ಥ ಮಾಡಬೇಕು. ನಾಟಕದಲ್ಲಿದ್ದರೆ ನಮ್ಮಿಂದ ಪುರುಷಾರ್ಥ ನಡೆಯುತ್ತದೆ ಎಂದು ಸುಮ್ಮನೆ ಕುಳಿತು ಬಿಡುವುದಲ್ಲ. ನಮ್ಮ ಅದೃಷ್ಟದಲ್ಲಿದ್ದರೆ ಪುರುಷಾರ್ಥವು ನಡೆಯುವುದೆಂದು ತಿಳಿಯುವಂತಹ ಕಾಡು ವಿಚಾರದವರು ಅನೇಕರಿದ್ದಾರೆ. ಅರೆ! ಪುರುಷಾರ್ಥವಂತೂ ನೀವು ಮಾಡಲೇಬೇಕು. ಪುರುಷಾರ್ಥ ಮತ್ತು ಪ್ರಾಲಬ್ಧವಿರುತ್ತದೆ. ಪುರುಷಾರ್ಥ ದೊಡ್ಡದೊ ಅಥವಾ ಪ್ರಾಲಬ್ಧ ದೊಡ್ಡದೋ ಎಂದು ಮನುಷ್ಯರು ಕೇಳುತ್ತಾರೆ. ಈಗ ಪ್ರಾಲಬ್ಧವಂತೂ ದೊಡ್ಡದಾಗಿದೆ. ಆದರೆ ಪುರುಷಾರ್ಥವನ್ನು ದೊಡ್ಡದನ್ನಾಗಿ ಇಡಲಾಗಿದೆ. ಏಕೆಂದರೆ ಇದರಿಂದಲೇ ಪ್ರಾಲಬ್ಧ ಸಿಗುತ್ತದೆ. ಮನುಷ್ಯಾತ್ಮನಿಗೆ ಪುರುಷಾರ್ಥದಿಂದಲೇ ಎಲ್ಲವೂ ಸಿಗುತ್ತದೆ. ಪ್ರತಿಯೊಬ್ಬ ಮನುಷ್ಯಾತ್ಮನಿಗೆ ಪುರುಷಾರ್ಥದಿಂದಲೇ ಎಲ್ಲವೂ ಸಿಗುತ್ತದೆ. ಕೆಲವರು ಇಂತಹ ಕಲ್ಲು ಬುದ್ಧಿಯವರಾಗಿರುತ್ತಾರೆ, ಅವರು ಅದನ್ನು ವಿರುದ್ಧವಾಗಿ ತೆಗೆದುಕೊಳ್ಳುತ್ತಾರೆ ಆಗ ಅವರ ಅದೃಷ್ಟದಲ್ಲಿಲ್ಲವೆಂದು ತಿಳಿಯಬೇಕಾಗುತ್ತದೆ ಬಿದ್ದು ಬಿಡುತ್ತಾರೆ. ಇಲ್ಲಿ ಮಕ್ಕಳಿಗೆ ಎಷ್ಟು ಪುರುಷಾರ್ಥ ಮಾಡಿಸುತ್ತಾರೆ, ಹಗಲು-ರಾತ್ರಿ ತಿಳಿಸುತ್ತಾರೆ, ಆದ್ದರಿಂದ ತಮ್ಮ ನಡವಳಿಕೆಯನ್ನು ಅವಶ್ಯವಾಗಿ ಸುಧಾರಣೆ ಮಾಡಿಕೊಳ್ಳಬೇಕಾಗಿದೆ.

ಪಾವನರಾಗುವುದು ನಂಬರ್ವಾರ್ ನಡವಳಿಕೆಯಾಗಿದೆ, ದೇವತೆಗಳಂತೂ ಪಾವನರಾಗಿದ್ದಾರೆ ನಂತರ ಯಾವಾಗ ಕೆಳಗಿಳಿಯುತ್ತಾರೆ, ನಡವಳಿಕೆಯು ಕೆಟ್ಟು ಹೋಗುತ್ತದೆ ಮತ್ತೆ ಒಮ್ಮೆಲೆ ಪತಿತರಾಗುತ್ತಾರೆ. ಈಗ ನಿಮಗೆ ಗೊತ್ತಿದೆ - ನಮ್ಮದು ಸುಂದರವಾದ ನಡವಳಿಕೆಯಿತ್ತು ನಂತರ ಒಮ್ಮೆಲೆ ಬಿದ್ದು ಹೋದೆವು. ಎಲ್ಲವೂ ಪವಿತ್ರತೆಯ ಮೇಲೆ ಆಧಾರವಾಗಿದೆ. ಇದರಲ್ಲಿಯೇ ಬಹಳ ಕಷ್ಟವಾಗುತ್ತದೆ. ಮನುಷ್ಯರ ಕಣ್ಣುಗಳು ಬಹಳ ಮೋಸ ಮಾಡುತ್ತವೆ. ಏಕೆಂದರೆ ರಾವಣನ ರಾಜ್ಯವಾಗಿದೆ. ಸತ್ಯಯುಗದಲ್ಲಿ ಕಣ್ಣುಗಳು ಮೋಸ ಮಾಡುವುದೇ ಇಲ್ಲ. ಜ್ಞಾನದ ಮೂರನೇ ನೇತ್ರವು ಸಿಕ್ಕಿ ಬಿಡುತ್ತದೆ. ಆದ್ದರಿಂದ ಧರ್ಮವೇ ಶಕ್ತಿಯೆಂದು ಹೇಳುತ್ತಾರೆ. ಸರ್ವ ಶಕ್ತಿವಂತ ತಂದೆಯೇ ಬಂದು ಈ ದೇವಿ ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಮಾಡುವುದೆಲ್ಲವೂ ಆತ್ಮವೇ ಆದರೆ ಮನುಷ್ಯ ರೂಪದಲ್ಲಿ ಮಾಡುತ್ತಾರೆ. ಆ ತಂದೆಯು ಜ್ಞಾನ ಸಾಗರನಾಗಿದ್ದಾರೆ. ದೇವತೆಗಳಿಗಿಂತಲೂ ಇವರ ಮಹಿಮೆಯು ಸಂಪೂರ್ಣ ಭಿನ್ನವಾಗಿದೆ. ಅಂದಮೇಲೆ ಇಂತಹ ತಂದೆಯನ್ನು ಏಕೆ ನೆನಪು ಮಾಡುವುದಿಲ್ಲ! ಅವರಿಗೆ ಜ್ಞಾನಪೂರ್ಣ, ಬೀಜರೂಪನೆಂದು ಹೇಳುತ್ತಾರೆ ಅವರಿಗೆ ಸತ್, ಚಿತ್, ಆನಂದ ಸ್ವರೂಪನೆಂದು ಏಕೆ ಹೇಳುತ್ತಾರೆ? ಅವರು ವೃಕ್ಷದ ಬೀಜವಾಗಿದ್ದಾರೆ, ಆ ವೃಕ್ಷದ ಬೀಜಕ್ಕೂ ವೃಕ್ಷದ ಬಗ್ಗೆ ತಿಳಿದಿದೆಯಲ್ಲವೆ ಆದರೆ ಅದು ಜಡವಾಗಿರುತ್ತದೆ. ಆದರಲ್ಲಿ ಆತ್ಮವು ಜಡವಾಗಿದೆ, ಮನುಷ್ಯನಲ್ಲಿ ಆತ್ಮವು ಚೈತನ್ಯವಾಗಿದೆ. ಚೈತನ್ಯ ಬೀಜಕ್ಕೆ ಜ್ಞಾನ ಸಾಗರನೆಂದು ಹೇಳುತ್ತಾರೆ. ವೃಕ್ಷವು ಚಿಕ್ಕದರಿಂದ ದೊಡ್ಡದಾಗುತ್ತದೆ, ಅಂದಾಗ ಅವಶ್ಯವಾಗಿ ಆತ್ಮವಿದೆ ಎಂದರ್ಥ ಆದರೆ ಅದು ಮಾತನಾಡುವುದಿಲ್ಲ. ಪರಮಾತ್ಮನ ಮಹಿಮೆ ಎಷ್ಟೊಂದಿದೆ, ಜ್ಞಾನ ಸಾಗರ.... ಈ ಮಹಿಮೆಯು ಆತ್ಮದ್ದಲ್ಲ, ಪರಮ-ಆತ್ಮನೆಂದು ಪರಮಾತ್ಮನ ಮಹಿಮೆ ಮಾಡುತ್ತಾರೆ. ಅವರನ್ನು ಈಶ್ವರನೆಂದೂ ಸಹ ಹೇಳುತ್ತಾರೆ. ಮೂಲ ಹೆಸರಾಗಿದೆ - ಪರಮಪಿತ ಪರಮಾತ್ಮ. ಪರಮ ಎಂದರೆ ಸುಪ್ರೀಂ. ಬಹಳ ದೊಡ್ಡ ಮಹಿಮೆ ಮಾಡುತ್ತಾರೆ. ಈಗ ದಿನ ಕಳೆದಂತೆ ಮಹಿಮೆಯೂ ಕಡಿಮೆಯಾಗುತ್ತದೆ.

ಏಕೆಂದರೆ ಮೊದಲು ಬುದ್ಧಿಯು ಸತೋ ಆಗಿತ್ತು, ನಂತರ ರಜೋ, ತಮೋಪ್ರಧಾನವಾಗಿ ಬಿಡುತ್ತದೆ. ಈ ಎಲ್ಲಾ ಮಾತುಗಳನ್ನು ತಂದೆಯು ಬಂದು ತಿಳಿಸುತ್ತಾರೆ. ನಾನು ಪ್ರತಿ 5000 ವರ್ಷಗಳ ನಂತರ ಬಂದು ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡುತ್ತೇನೆ. ಗಾಯನವೂ ಇದೆಯಲ್ಲವೆ - ಸತ್ಯಯುಗದ ಆದಿಯೂ ಸತ್ಯ, ಎಲ್ಲವೂ ಸತ್ಯ....... ಒಂದು ಮಾತನ್ನು ಬಹಳ ಚೆನ್ನಾಗಿ ಬರೆದಿದ್ದಾರೆ, ಏಕೆಂದರೆ ಅವರು ಇಷ್ಟು ಪತಿತರಾಗಿರುವುದಿಲ್ಲ. ಕೊನೆಯಲ್ಲಿ ಬರುವವರು ಇಷ್ಟೊಂದು ಪತಿತರಾಗುವುದಿಲ್ಲ. ಭಾರತವಾಸಿಗಳೇ ಬಹಳ ಸತೋಪ್ರಧಾನವಾಗಿದ್ದಿರಿ, ಅವರೇ ಬಹಳ ಜನ್ಮಗಳ ನಂತರ ಅಂತ್ಯದಲ್ಲಿ ತಮೋಪ್ರಧಾನರಾಗಿದ್ದಾರೆ. ಅನ್ಯ ಧರ್ಮ ಸ್ಥಾಪಕರಿಗೆ ಈ ರೀತಿ ಹೇಳುವುದಿಲ್ಲ. ಅವರು ಸತೋಪ್ರಧಾನರೂ ಆಗುವುದಿಲ್ಲ. ಇಷ್ಟು ತಮೋಪ್ರಧಾನರೂ ಆಗುವುದಿಲ್ಲ. ಅವರು ಬಹಳ ಸುಖವನ್ನೂ ನೋಡಿಲ್ಲ, ಬಹಳ ದುಃಖವನ್ನೂ ನೋಡುವುದಿಲ್ಲ. ಎಲ್ಲರಿಗಿಂತ ಹೆಚ್ಚಿನ ತಮೋಪ್ರಧಾನ ಬುದ್ಧಿಯು ಯಾರದಾಗಿದೆ? ಯಾರು ಮೊದಲು ದೇವತೆಗಳಾಗಿದ್ದರೋ ಅವರೇ ಎಲ್ಲ ಧರ್ಮದವರಿಗಿಂತ ಹೆಚ್ಚು ಇಳಿದಿದ್ದಾರೆ. ಭಾರತದ ಮಹಿಮೆ ಮಾಡುತ್ತಾರೆ, ಏಕೆಂದರೆ ಬಹಳ ಹಳೆಯದಾಗಿದೆ. ವಿಚಾರ ಮಾಡಿದರೆ ಈ ಸಮಯದಲ್ಲಿ ಭಾರತವು ಬಹಳ ಕೆಳಗಿಳಿದಿದೆ. ಉತ್ಥಾನ ಮತ್ತು ಪತನವು ಭಾರತದ್ದೇ ಆಗಿದೆ ಅರ್ಥಾತ್ ದೇವಿ ದೇವತೆಗಳದ್ದಾಗಿದೆ. ಇದನ್ನು ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗುತ್ತದೆ. ಸತೋಪ್ರಧಾನರಾಗಿದ್ದಾಗ ನಾವು ಬಹಳ ಸುಖವನ್ನು ನೋಡಿದೆವು, ನಂತರ ದುಃಖವನ್ನೂ ಬಹಳ ನೋಡಿದೆವು. ಏಕೆಂದರೆ ತಮೋಪ್ರಧಾನರಾಗಿದ್ದೇವೆ. ನಾಲ್ಕು ಧರ್ಮಗಳು ಮುಖ್ಯವಾಗಿವೆ - ದೇವತಾ, ಇಸ್ಲಾಮಿ, ಬೌದ್ಧಿ ಮತ್ತು ಕ್ರಿಶ್ಚಿಯನ್. ಬಾಕಿ ಇದರಿಂದ ವೃದ್ಧಿಯಾಗುತ್ತಾ ಹೋಗಿದೆ. ನಾವು ಯಾವ ಧರ್ಮದವರೆಂದು ಭಾರತವಾಸಿಗಳಿಗೆ ತಿಳಿಯುವುದೇ ಇಲ್ಲ. ಧರ್ಮದ ಬಗ್ಗೆ ಗೊತ್ತಿಲ್ಲದ ಕಾರಣ ಧರ್ಮವನ್ನೇ ಬಿಟ್ಟು ಬಿಡುತ್ತಾರೆ. ವಾಸ್ತವದಲ್ಲಿ ಎಲ್ಲದಕ್ಕಿಂತ ಮುಖ್ಯ ಧರ್ಮವು ಇದಾಗಿದೆ. ಆದರೆ ತಮ್ಮ ಧರ್ಮವನ್ನು ಮರೆತು ಹೋಗಿದ್ದಾರೆ. ಯಾರು ಬಹಳ ಬುದ್ಧಿವಂತರಿರುತ್ತಾರೆ ಅವರೇ ತಿಳಿದುಕೊಳ್ಳುತ್ತಾರೆ - ಇವರಿಗೆ ತಮ್ಮ ಧರ್ಮದಲ್ಲಿ ಪ್ರಾಮಾಣಿಕತೆ ಇಲ್ಲ, ಇಲ್ಲದಿದ್ದರೆ ಭಾರತವು ಹೇಗಿತ್ತು ಈಗ ಏನಾಗಿ ಬಿಟ್ಟಿದೆ! ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಏನಾಗಿದ್ದಿರಿ! ಪೂರ್ಣ ಚರಿತ್ರೆಯನ್ನು ತಂದೆಯು ತಿಳಿಸುತ್ತಾರೆ - ನೀವು ದೇವತೆಗಳಾಗಿದ್ದಿರಿ, ಅರ್ಧ ಕಲ್ಪ ರಾಜ್ಯ ಮಾಡಿದಿರಿ, ಪುನಃ ಅರ್ಧ ಕಲ್ಪ ನೀವು ರಾವಣ ರಾಜ್ಯದಲ್ಲಿ ಧರ್ಮ ಭ್ರಷ್ಟ ಕರ್ಮ ಭ್ರಷ್ಟರಾದಿರಿ, ಈಗ ಪುನಃ ದೈವೀ ಸಂಪ್ರದಾಯದವರಾಗುತ್ತಿದ್ದೀರಿ. ಭಗವಾನುವಾಚ - ಕಲ್ಪ ಕಲ್ಪವೂ ನಾನು ಮಕ್ಕಳಿಗೆ ತಿಳಿಸಿ ಈಶ್ವರೀಯ ಸಂಪ್ರದಾಯದವರನ್ನಾಗಿ ಮಾಡುತ್ತೇನೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾ ಅವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಹೃದಯದ ಸ್ವಚ್ಛತೆಯಿಂದ ತಂದೆಯ ಅದ್ಭುತ ಜ್ಞಾನವನ್ನು ಜೀವನದಲ್ಲಿ ಧಾರಣೆ ಮಾಡಬೇಕಾಗಿದೆ. ಪುರುಷಾರ್ಥದಿಂದ ಶ್ರೇಷ್ಠ ಪ್ರಾಲಬ್ಧವನ್ನು ಮಾಡಿಕೊಳ್ಳಬೇಕಾಗಿದೆ. ನಾಟಕವೆಂದು ಹೇಳಿ ನಿಂತು ಬಿಡಬಾರದು.

2. ರಾವಣ ರಾಜ್ಯದಲ್ಲಿ ವಿಕಾರಿ ಕಣ್ಣುಗಳ ಮೋಸದಿಂದ ಪಾರಾಗಲು ಜ್ಞಾನದ ಮೂರನೇಯ ನೇತ್ರದಿಂದ ನೋಡುವ ಅಭ್ಯಾಸ ಮಾಡಬೇಕು. ನಂಬರ್ ಒನ್ ನಡವಳಿಕೆಯಾದ ಪವಿತ್ರತೆಯನ್ನು ಧಾರಣೆ ಮಾಡಬೇಕು.

ವರದಾನ:
ಸತ್ಯತೆಯ ಅಡಿಪಾಯದ ಮೂಲಕ ಚಲನೆ ಮತ್ತು ಚಹರೆಯಿಂದ ದಿವ್ಯತೆಯ ಅನುಭೂತಿ ಮಾಡಿಸುವಂತಹ ಸತ್ಯವಾಧಿ ಭವ.

ಪ್ರಪಂಚದಲ್ಲಿ ಅನೇಕ ಆತ್ಮರು ತಮ್ಮನ್ನು ಸತ್ಯವಾಧಿ ಎಂದು ಹೇಳುತ್ತಾರೆ ಹಾಗೂ ತಿಳಿದುಕೊಂಡಿದ್ದಾರೆ ಆದರೆ ಸಂಪೂರ್ಣ ಸತ್ಯತೆ ಪವಿತ್ರತೆಯ ಆಧಾರದ ಮೇಲೆ ಇರುವುದು. ಪವಿತ್ರತೆ ಇಲ್ಲದೇ ಹೋದರೆ ಸದಾ ಸತ್ಯತೆ ಇರಲು ಸಾಧ್ಯವಿಲ್ಲ. ಸತ್ಯತೆಯ ಅಡಿಪಾಯ ಪವಿತ್ರತೆಯಾಗಿದೆ ಮತ್ತು ಸತ್ಯತೆಯ ಪ್ರತ್ಯಕ್ಷ ಪ್ರಮಾಣ ಚಹರೆ ಮತ್ತು ಚಲನೆಯಲ್ಲಿ ದಿವ್ಯತೆ ಇರುವುದು. ಪವಿತ್ರತೆಯ ಆಧಾರದ ಮೇಲೆ ಸತ್ಯತೆಯ ಸ್ವರೂಪ ಸ್ವತಃ ಮತ್ತು ಸಹಜವಾಗಿರುವುದು. ಯಾವಾಗ ಆತ್ಮ ಮತ್ತು ಶರೀರ ಎರಡೂ ಪಾವನವಾಗಿರುವುದು ಆಗ ಹೇಳಲಾಗುವುದು ಸಂಪೂರ್ಣ ಸತ್ಯವಾಧಿ ಅರ್ಥಾತ್ ದಿವ್ಯತಾ ಸಂಪನ್ನ ದೇವತೆ.

ಸ್ಲೋಗನ್:
ಬೇಹದ್ಧಿನ ಸೇವೆಯಲ್ಲಿ ಬ್ಯುಸಿಯಾಗಿದ್ದಾಗ ಬೇಹದ್ದಿನ ವ್ಯೆರಾಗ್ಯ ಸ್ವತಃವಾಗಿ ಬರುವುದು.