22.01.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವೀಗ
ಈ ಶರೀರವನ್ನು ಮರೆತು ಅನಾಸಕ್ತ ಕರ್ಮಾತೀತರಾಗಿ ಮನೆಗೆ ಹೋಗಬೇಕಾಗಿದೆ ಆದ್ದರಿಂದ ಸುಕರ್ಮ ಮಾಡಿರಿ,
ಯಾವುದೇ ವಿಕರ್ಮವಾಗದಿರಲಿ.”
ಪ್ರಶ್ನೆ:
ತಮ್ಮ
ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಲು ಯಾವ ಮೂರು ಮಹಿಮೆಯನ್ನು ನೆನಪಿಟ್ಟುಕೊಳ್ಳುವಿರಿ?
ಉತ್ತರ:
1. ನಿರಾಕಾರ
ತಂದೆಯ ಮಹಿಮೆ 2. ದೇವತೆಗಳ ಮಹಿಮೆ 3. ಸ್ವಯಂನ ಮಹಿಮೆ. ಈಗ ಪರಿಶೀಲನೆ ಮಾಡಿಕೊಳ್ಳಿರಿ - ನಿರಾಕಾರ
ತಂದೆಯ ಸಮಾನ ಪೂಜ್ಯನಾಗಿದ್ದೇನೆಯೇ! ಅವರ ಎಲ್ಲಾ ಗುಣಗಳನ್ನು ಧಾರಣೆ ಮಾಡಿಕೊಂಡಿದ್ದೇನೆಯೇ!
ದೇವತೆಗಳಂತೆ ಚಲನೆಯು ರಾಯಲ್ ಆಗಿದೆಯೇ! ದೇವತೆಗಳ ಆಹಾರ -ಪಾನೀಯಗಳೇನಿದೆ, ಅವರ ಗುಣಗಳೇನಿದೆ ಅದು
ನನ್ನದಾಗಿದೆಯೇ? ಆತ್ಮದ ಎಲ್ಲಾ ಗುಣಗಳನ್ನು ಅರಿತು ಅದರ ಸ್ವರೂಪನಾಗಿದ್ದೇನೆಯೇ?
ಓಂ ಶಾಂತಿ.
ಮಕ್ಕಳಿಗೆ
ತಿಳಿಸಲಾಗಿದೆ - ಆತ್ಮರ ನಿವಾಸ ಸ್ಥಾನವು ಶಾಂತಿಯ ಶಿಖರವಾಗಿದೆ. ಹೇಗೆ ಹಿಮಾಲಯ ಪರ್ವತದ ತುತ್ತ
ತುದಿಯಿದೆಯಲ್ಲವೆ. ಅದು ಬಹಳ ಎತ್ತರವಾಗಿದೆ ಹಾಗೆಯೇ ನೀವಿರುವುದೂ ಸಹ ಅತೀ ಎತ್ತರದಲ್ಲಿ. ಮನುಷ್ಯರು
ಪರ್ವತಾರೋಹಣ ಮಾಡುವ ಅಭ್ಯಾಸ ಮಾಡುತ್ತಾರೆ, ರೇಸ್ ಮಾಡುತ್ತಾರೆ. ಪರ್ವತವನ್ನೇರುವುದರಲ್ಲಿಯೂ
ಕೆಲವರು ಬುದ್ಧಿವಂತರಿರುತ್ತಾರೆ. ಎಲ್ಲರೂ ಏರಲು ಸಾಧ್ಯವಿಲ್ಲ. ನೀವು ಮಕ್ಕಳು ಇದರಲ್ಲಿ ರೇಸ್
ಮಾಡುವ ಅವಶ್ಯಕತೆಯಿಲ್ಲ. ಪತಿತನಾಗಿರುವ ಆತ್ಮವು ಪಾವನನಾಗಿ ಮೇಲೆ ಹೋಗಬೇಕಾಗಿದೆ. ಇದಕ್ಕೆ
ಹೇಳಲಾಗುತ್ತದೆ ಶಾಂತಿಯ ಶಿಖರ. ಅವರದು ವಿಜ್ಞಾನದ ಶಿಖರವಾಗಿದೆ. ಅವರ ಬಳಿ ಬಹಳ ದೊಡ್ಡ-ದೊಡ್ಡ
ಬಾಂಬುಗಳಿರುತ್ತವೆ, ಅದರ ಶಿಖರವೂ ಇರುತ್ತದೆ. ಅಲ್ಲಿ ಬಹಳ ಅಪಾಯಕಾರಿ ವಸ್ತುಗಳನ್ನಿಡುತ್ತಾರೆ.
ಬಾಂಬುಗಳಲ್ಲಿ ವಿಷ ಇತ್ಯಾದಿಯನ್ನು ತುಂಬಿಸಿರುತ್ತಾರೆ. ತಂದೆಯು ಹೇಳುತ್ತಾರೆ - ಮಕ್ಕಳೇ, ನೀವು
ಮನೆಯ ಕಡೆ ಹಾರಬೇಕಾಗಿದೆ. ಅವರು ಮನೆಯಲ್ಲಿ ಕುಳಿತಿದ್ದಂತೆಯೇ ಈ ರೀತಿ ಬಾಂಬುಗಳನ್ನು ಹಾಕುತ್ತಾರೆ
ಯಾವುದರಿಂದ ಎಲ್ಲವನ್ನು ಸಮಾಪ್ತಿ ಮಾಡಿ ಬಿಡುತ್ತಾರೆ. ನೀವಂತೂ ಇಲ್ಲಿಂದ ಶಾಂತಿಯ ಶಿಖರದೆಡೆಗೆ
ಹೋಗಬೇಕಾಗಿದೆ. ಅಲ್ಲಿಂದಲೇ ಬಂದಿದ್ದೀರಿ, ಯಾವಾಗ ಸತೋಪ್ರಧಾನರಾಗುವಿರೋ ಆಗ ಹೋಗುವಿರಿ.
ಸತೋಪ್ರಧಾನರಿಂದ ತಮೋಪ್ರಧಾನತೆಯಲ್ಲಿ ಬಂದಿದ್ದೀರಿ. ಪುನಃ ಸತೋಪ್ರಧಾನರಾಗಬೇಕು. ಯಾರು
ಸತೋಪ್ರಧಾನರಾಗುವ ಪುರುಷಾರ್ಥ ಮಾಡುತ್ತಾರೆ ಅವರು ಅನ್ಯರಿಗೆ ಮಾರ್ಗವನ್ನು ತಿಳಿಸುತ್ತಾರೆ. ಈಗ
ನೀವು ಮಕ್ಕಳು ಸುಕರ್ಮ ಮಾಡಬೇಕಾಗಿದೆ. ಯಾವುದೇ ವಿಕರ್ಮ ಮಾಡಬಾರದು. ತಂದೆಯು ಕರ್ಮಗಳ ರಹಸ್ಯವನ್ನು
ತಿಳಿಸಿದ್ದಾರೆ. ರಾವಣ ರಾಜ್ಯದಲ್ಲಿ ನಿಮ್ಮದು ದುರ್ಗತಿಯಾಗಿದೆ. ಈಗ ತಂದೆಯು ಸುಕರ್ಮವನ್ನು
ಕಲಿಸುತ್ತಾರೆ. ಐದು ವಿಕಾರಗಳ ದೊಡ್ಡ ಶತ್ರುವಾಗಿದೆ. ಮೋಹವೂ ವಿಕರ್ಮವಾಗಿದೆ. ಯಾವುದೇ ವಿಕಾರವು
ಕಡಿಮೆಯಿಲ್ಲ, ಮೋಹವನ್ನು ಇಟ್ಟುಕೊಳ್ಳುವುದರಿಂದಲೂ ದೇಹಾಭಿಮಾನದಲ್ಲಿ ಸಿಲುಕುತ್ತಾರೆ. ಆದ್ದರಿಂದ
ತಂದೆಯು ಕನ್ಯೆಯರಿಗೆ ಬಹಳ ತಿಳಿಸುತ್ತಾರೆ - ಪವಿತ್ರರಿಗೆ ಕನ್ಯೆಯರೆಂದು ಹೇಳಲಾಗುತ್ತದೆ. ಮಾತೆಯರೂ
ಸಹ ಪವಿತ್ರರಾಗಬೇಕಾಗಿದೆ. ನೀವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಭಲೇ
ವೃದ್ಧರಾಗಿರಬಹುದು ಆದರೆ ಬ್ರಹ್ಮನಿಗೆ ಮಕ್ಕಳಲ್ಲವೆ. ತಂದೆಯು ತಿಳಿಸುತ್ತಾರೆ, ಈಗ
ಕುಮಾರ-ಕುಮಾರಿಯ ಸ್ಥಿತಿಯಿಂದಲೂ ಮೇಲೆ ಹೋಗಿ. ಹೇಗೆ ಮೊದಲು ಶರೀರದಲ್ಲಿ ಬಂದಿರೋ ಹಾಗೆಯೇ ಈಗ
ಇದರಿಂದ ಹೊರಟು ಮೇಲೆ ಹೋಗಬೇಕಾಗಿದೆ. ಪರಿಶ್ರಮ ಪಡಬೇಕಾಗಿದೆ. ಒಂದು ವೇಳೆ ಶ್ರೇಷ್ಠ ಪದವಿಯನ್ನು
ಪಡೆಯಬೇಕೆಂದರೆ ಮತ್ತ್ಯಾರದೇ ಸ್ಮೃತಿ ಬರದಿರಲಿ. ನಮ್ಮ ಬಳಿ ಇರುವುದಾದರೂ ಏನು! ಖಾಲಿ ಕೈಯಲ್ಲಿ
ಬಂದಿದ್ದೇವಲ್ಲವೆ. ನಮ್ಮ ಬಳಿ ಏನೂ ಇಲ್ಲ, ಈ ಶರೀರವೂ ನಮ್ಮದಲ್ಲ, ಈಗ ಈ ಶರೀರವನ್ನು ಮರೆಯಬೇಕಾಗಿದೆ.
ಅನಾಸಕ್ತ, ಕರ್ಮಾತೀತರಾಗಿ ಬಿಡಬೇಕು, ಟ್ರಸ್ಟಿಗಳಾಗಬೇಕು. ತಂದೆಯು ತಿಳಿಸುತ್ತಾರೆ, ಭಲೇ ಸುತ್ತಿ,
ತಿರುಗಾಡಿ ಆದರೆ ವ್ಯರ್ಥವಾಗಿ ಖರ್ಚು ಮಾಡಬೇಡಿ, ಮನುಷ್ಯರು ಬಹಳ ದಾನ ಮಾಡುತ್ತಾರೆ. ಇಂತಹವರು ಬಹಳ
ದೊಡ್ಡ ದಾನಿಯಾಗಿದ್ದಾರೆ, ಆಸ್ಪತ್ರೆ-ಧರ್ಮ ಶಾಲೆಯನ್ನು ತೆರೆದಿದ್ದಾರೆಂದು ಪತ್ರಿಕೆಯಲ್ಲಿ ಹೆಸರು
ಬರುತ್ತದೆ. ಯಾರು ಬಹಳ ದಾನ ಮಾಡುವರೋ ಅವರಿಗೆ ಸರ್ಕಾರದಿಂದ ಬಿರುದು ಸಿಗುತ್ತದೆ. ಮೊಟ್ಟ ಮೊದಲು
ಹಿಸ್ ಹೋಲಿನೆಸ್, ಹರ್ ಹೋಲಿನೆಸ್ ಎಂದು ಬಿರುದಿರುತ್ತದೆ. ಹೋಲಿ ಎಂದು ಪವಿತ್ರತೆಗೆ ಹೇಳಲಾಗುತ್ತದೆ.
ಹೇಗೆ ದೇವತೆಗಳು ಪವಿತ್ರರಾಗಿದ್ದರೋ ಅದೇ ರೀತಿ ಆಗಬೇಕಾಗಿದೆ. ನಂತರ ಅರ್ಧಕಲ್ಪ
ಪವಿತ್ರರಾಗಿರುತ್ತೀರಿ, ಇದು ಹೇಗೆ ಸಾಧ್ಯ! ಅಲ್ಲಿಯೂ ಮಕ್ಕಳು ಜನ್ಮ ಪಡೆಯುತ್ತಾರೆ, ಅಂದಮೇಲೆ ಇದು
ಹೇಗೆ ಎಂದು ಅನೇಕರು ಹೇಳುತ್ತಾರೆ - ಆಗ ಹೇಳಿರಿ, ಅಲ್ಲಿ ರಾವಣನಿರುವುದಿಲ್ಲ. ರಾವಣನಿಂದಲೇ ವಿಕಾರಿ
ಪ್ರಪಂಚವಾಗುತ್ತದೆ, ತಂದೆ ರಾಮನು ಬಂದು ಪಾವನರನ್ನಾಗಿ ಮಾಡುತ್ತಾರೆ. ಅಲ್ಲಿ ಯಾರೂ
ಪತಿತರಿರುವುದಿಲ್ಲ. ಪವಿತ್ರತೆಯ ಮಾತನ್ನೂ ಆಡಬೇಡಿ, ಇದಿಲ್ಲದೆ ಶರೀರ ಹೇಗೆ ನಡೆಯುವುದು ಎಂದು
ಕೆಲವರು ಕೇಳುತ್ತಾರೆ. ಪವಿತ್ರ ಪ್ರಪಂಚವು ಇತ್ತು ಅದು ಈಗ ಅಪವಿತ್ರ ಪ್ರಪಂಚವಾಗಿದೆ ಎಂಬುದೇ
ಅವರಿಗೆ ತಿಳಿದಿಲ್ಲ. ಇದು ಆಟವಾಗಿದೆ. ವೇಶ್ಯಾಲಯ, ಶಿವಾಲಯ, ಪತಿತ ಪ್ರಪಂಚ-ಪಾವನ ಪ್ರಪಂಚ. ಮೊದಲು
ಸುಖ ನಂತರ ದುಃಖವಿದೆ. ಹೇಗೆ ರಾಜ್ಯಭಾಗ್ಯವನ್ನು ಪಡೆದರು ಮತ್ತೆ ಕಳೆದುಕೊಂಡರು ಎಂದು
ಕಥೆಯಿದೆಯಲ್ಲವೆ. ಇದನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ನಾವು ಸೋಲನ್ನನುಭವಿಸಿದ್ದೇವೆ,
ನಾವೇ ಜಯ ಗಳಿಸಬೇಕು. ಬಹದ್ದೂರರಾಗಬೇಕು. ತಮ್ಮ ಸ್ಥಿತಿಯನ್ನು ಮಾಡಿಕೊಳ್ಳಬೇಕು.
ಗೃಹಸ್ಥದಲ್ಲಿದ್ದರೂ ಸಂಭಾಲನೆ ಮಾಡುತ್ತಾ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಯಾವುದೆ ಅಪವಿತ್ರ
ಕರ್ಮ ಮಾಡಬಾರದು. ಅನೇಕರಲ್ಲಿ ಮೋಹವಿರುತ್ತದೆ, ತಮ್ಮನ್ನು ನೋಡಿಕೊಳ್ಳಬೇಕು - ಬಾಬಾ, ನಿಮ್ಮ ವಿನಃ
ನಾವು ಯಾರನ್ನೂ ಪ್ರೀತಿ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೀರಿ ಅಂದಮೇಲೆ ಮತ್ತೇಕೆ
ಅನ್ಯರನ್ನು ಪ್ರೀತಿ ಮಾಡುತ್ತೀರಿ! ಯಾವುದು ಪ್ರಿಯಾತಿ ಪ್ರಿಯ ವಸ್ತುವಿದೆಯೋ ಅದು ನೆನಪಿಗೆ ಬರಬೇಕು
ನಂತರ ಮತ್ತೆಲ್ಲಾ ದೇಹದ ಸಂಬಂಧಗಳು ಮರೆತು ಹೋಗುತ್ತವೆ. ಎಲ್ಲರನ್ನೂ ನೋಡುತ್ತಾ ಈ ರೀತಿ
ತಿಳಿದುಕೊಳ್ಳಿ - ನಾವೀಗ ಸ್ವರ್ಗದಲ್ಲಿ ಹೋಗುತ್ತಿದ್ದೇವೆ, ಇದೆಲ್ಲವೂ ಕಲಿಯುಗೀ ಬಂಧನವಾಗಿದೆ,
ನಾವು ದೈವೀ ಸಂಬಂಧದಲ್ಲಿ ಹೋಗುತ್ತಿದ್ದೇವೆ. ಮತ್ತ್ಯಾವುದೇ ಮನುಷ್ಯರ ಬುದ್ಧಿಯಲ್ಲಿ ಈ
ಜ್ಞಾನವಿಲ್ಲ. ನೀವು ಚೆನ್ನಾಗಿ ತಂದೆಯ ನೆನಪಿನಲ್ಲಿ ಆಗ ಖುಷಿಯ ನಶೆಯೇರಿರುವುದು. ಎಷ್ಟು ಸಾಧ್ಯವೋ
ಅಷ್ಟು ಬಂಧನಗಳನ್ನು ಕಡಿಮೆ ಮಾಡಿಕೊಳ್ಳುತ್ತಾ ಹೋಗಿ, ತಮ್ಮನ್ನು ಹಗುರ ಮಾಡಿಕೊಳ್ಳಿರಿ.
ಬಂಧನಗಳನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆಯಿಲ್ಲ. ಈ ರಾಜ್ಯವನ್ನು ಪಡೆಯುವುದರಲ್ಲಿ ಖರ್ಚಿನ
ಅವಶ್ಯಕತೆಯಿಲ್ಲ. ಖರ್ಚಿಲ್ಲದೆ ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಅವರ ಸೈನ್ಯ, ಸಿಡಿ
ಮದ್ದುಗಳು, ಎಲ್ಲದಕ್ಕಾಗಿ ಎಷ್ಟೊಂದು ಖರ್ಚಾಗುತ್ತದೆ. ನಿಮ್ಮ ಬಳಿ ಏನೂ ಖರ್ಚಿಲ್ಲ. ನೀವು
ಏನೆಲ್ಲವನ್ನು ತಂದೆಗೆ ಕೊಡುತ್ತೀರೋ ಅದು ಕೊಡುವುದಲ್ಲ, ಪಡೆದುಕೊಳ್ಳುತ್ತೀರಿ. ತಂದೆಯು
ಗುಪ್ತವಾಗಿದ್ದಾರೆ, ಅವರು ಶ್ರೀಮತವನ್ನು ಕೊಡುತ್ತಾ ಇರುತ್ತಾರೆ - ಮ್ಯೂಜಿಯಂ ತೆರೆಯಿರಿ,
ಆಸ್ಪತ್ರೆ, ವಿಶ್ವ ವಿದ್ಯಾಲಯವನ್ನು ತೆರೆಯಿರಿ ಯಾವುದರಿಂದ ನೀವು ಜ್ಞಾನವನ್ನು ಪ್ರಾಪ್ತಿ
ಮಾಡಿಕೊಳ್ಳುತ್ತೀರಿ. ಯೋಗದಿಂದ ಸದಾಕಾಲಕ್ಕಾಗಿ ನಿರೋಗಿಯಾಗಿ ಬಿಡುತ್ತೀರಿ. 21 ಜನ್ಮಗಳಿಗಾಗಿ
ಆರೋಗ್ಯ, ಭಾಗ್ಯ, ಸಂತೋಷ ಎಲ್ಲವೂ ಇರುತ್ತದೆ. ಒಂದು ಸೆಕೆಂಡಿನಲ್ಲಿ ಮುಕ್ತಿ-ಜೀವನ್ಮುಕ್ತಿಯು ಹೇಗೆ
ಸಿಗುತ್ತದೆ ಎಂಬುದನ್ನು ಬಂದು ತಿಳಿದುಕೊಳ್ಳಿರಿ. ದ್ವಾರದಲ್ಲಿಯೇ ತಿಳಿಸಬಲ್ಲಿರಿ. ಹೇಗೆ ಭಿಕ್ಷೆ
ಬೇಡಲು ಬಾಗಿಲಿಗೆ ಬರುತ್ತಾರಲ್ಲವೆ. ನೀವೂ ಸಹ ಈ ಜ್ಞಾನ ದಾನವನ್ನು ಭಿಕ್ಷೆಯಾಗಿ ಕೊಡುತ್ತೀರಿ
ಯಾವುದರಿಂದ ಮನುಷ್ಯರು ಸಂಪನ್ನರಾಗಿ ಬಿಡುತ್ತಾರೆ. ಯಾರೇ ಬಂದರೂ ಹೇಳಿರಿ, ನೀವು ಯಾವ ಭಿಕ್ಷೆಯನ್ನು
ಕೇಳುತ್ತೀರಿ, ನಾವು ನಿಮಗೆ ಇಂತಹ ಭಿಕ್ಷೆಯನ್ನು ಕೊಡುತ್ತೇವೆ, ಯಾವುದರಿಂದ ನೀವು
ಜನ್ಮ-ಜನ್ಮಾಂತರಕ್ಕೆ ಭಿಕ್ಷೆ ಬೇಡುವುದನ್ನು ಬಿಟ್ಟು ಬಿಡುತ್ತೀರಿ. ಬೇಹದ್ದಿನ ತಂದೆ ಹಾಗೂ ಸೃಷ್ಟಿ
ಚಕ್ರವನ್ನು ತಿಳಿದುಕೊಳ್ಳುವುದರಿಂದ ನೀವು ಈ ರೀತಿಯಾಗುತ್ತೀರಿ. ನಿಮ್ಮ ಈ ಬ್ಯಾಡ್ಜ್ ಬಹಳ ಕಮಾಲ್
ಮಾಡಬಲ್ಲದು. ಸೆಕೆಂಡಿನಲ್ಲಿ ಬೇಹದ್ದಿನ ಆಸ್ತಿಯನ್ನು ನೀವು ಇದರಿಂದ ಯಾರಿಗೆ ಬೇಕಾದರೂ ಕೊಡಬಹುದು.
ಸರ್ವೀಸ್ ಮಾಡಬೇಕು. ತಂದೆಯು ಸೆಕೆಂಡಿನಲ್ಲಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಪುರುಷಾರ್ಥದ
ಮೇಲಿದೆ. ಹಿರಿಯರು-ಕಿರಿಯರು ಎಲ್ಲರಿಗೂ ತಂದೆಯನ್ನು ನೆನಪು ಮಾಡಿರಿ ಎಂದು ಹೇಳಲಾಗುತ್ತದೆ.
ರೈಲಿನಲ್ಲಿಯೂ ನೀವು ಬ್ಯಾಡ್ಜ್ ನ ಮೇಲೆ ಸರ್ವೀಸ್ ಮಾಡಬಹುದು. ನೀವು ಬ್ಯಾಡ್ಜ್ ಹಾಕಿಕೊಂಡಿದ್ದರೆ
ಅದರಿಂದ ತಿಳಿಸಬಹುದು - ನಿಮಗೆ ಇಬ್ಬರು ತಂದೆಯರಿದ್ದಾರೆ, ಇಬ್ಬರಿಂದಲೆ ಆಸ್ತಿಯು ಸಿಗುತ್ತದೆ,
ಬ್ರಹ್ಮನಿಂದ ಆಸ್ತಿಯು ಸಿಗುವುದಿಲ್ಲ. ಅವರು ದಲ್ಲಾಳಿಯಾಗಿದ್ದಾರೆ. ಇವರ ಮುಖಾಂತರ ತಂದೆಯು ನಿಮಗೆ
ಕಲಿಸುತ್ತಾರೆ ಮತ್ತು ಆಸ್ತಿಯನ್ನು ಕೊಡುತ್ತಾರೆ. ಮನುಷ್ಯರನ್ನು ನೋಡಿ ತಿಳಿಸಬೇಕು. ಯಾತ್ರೆಗೂ
ಬಹಳಷ್ಟು ಹೋಗುತ್ತಾರೆ, ಅದೆಲ್ಲವೂ ಶಾರೀರಿಕ ಯಾತ್ರೆಗಳಾಗಿವೆ, ಇದು ಆತ್ಮಿಕ ಯಾತ್ರೆಯಾಗಿದೆ.
ಇದರಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ. ಸ್ಥೂಲ ಯಾತ್ರೆಯಿಂದಂತೂ ಮನುಷ್ಯರು ಪರಿಶ್ರಮ
ಪಡುತ್ತಿರುತ್ತಾರೆ. ನಿಮ್ಮ ಬಳಿ ಏಣಿಯ ಚಿತ್ರವು ಇರಲಿ. ಸರ್ವೀಸ್ ಮಾಡುತ್ತಾ ಇರಿ ಆಗ ಅವರ ಭೋಜನದ
ಅವಶ್ಯಕತೆಯೂ ಇರುವುದಿಲ್ಲ. ಖುಷಿಗಿಂತ ಮಿಗಿಲಾದ ಟಾನಿಕ್ ಇಲ್ಲವೆಂದು ಹೇಳಲಾಗುತ್ತದೆ,
ಧನವಿಲ್ಲದಿದ್ದರೆ ಅವರಿಗೆ ಪದೇ-ಪದೇ ಹಸಿವೆನಿಸುತ್ತಿರುತ್ತದೆ. ಧನವಂತ ರಾಜರ ಹೊಟ್ಟೆಯು
ತುಂಬಿರುತ್ತದೆ. ನಡವಳಿಕೆಯೂ ಬಹಳ ರಾಯಲ್ ಆಗಿರುತ್ತದೆ. ಮಾತು ಫಸ್ಟ್ ಕ್ಲಾಸ್ ಆಗಿರುತ್ತದೆ. ನಾವು
ಏನಾಗುತ್ತಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಅಲ್ಲಿ ಆಹಾರ-ಪಾನೀಯಗಳೆಲ್ಲವೂ ಬಹಳ
ರಾಯಲ್ ಆಗಿರುತ್ತದೆ. ಅವೇಳೆಯಲ್ಲಿ ಎಂದೂ ತಿನ್ನುವುದಿಲ್ಲ. ಬಹಳ ರಾಯಲ್ಟಿಯಿಂದ ಶಾಂತಿಯಿಂದ
ತಿನ್ನುತ್ತಾರೆ. ನೀವೀಗ ಎಲ್ಲಾ ಗುಣಗಳನ್ನು ಕಲಿಯಬೇಕು. ನಿರಾಕಾರ ತಂದೆಯ ಮಹಿಮೆ, ದೇವತೆಗಳ ಮಹಿಮೆ
ಮತ್ತು ತಮ್ಮ ಮಹಿಮೆ ಮೂರನ್ನೂ ಪರಿಶೀಲಿಸಿರಿ. ನೀವೀಗ ತಂದೆಯ ಹಾಗೆ ಗುಣವಂತರಾಗುತ್ತಿದ್ದೀರಿ.
ನಂತರ ದೇವತಾ ಗುಣದವರಾಗುತ್ತೀರಿ. ಆ ಗುಣಗಳನ್ನು ಈಗ ಧಾರಣೆ ಮಾಡಿಕೊಳ್ಳಬೇಕು. ನೀವೀಗ ದೈವೀ
ಗುಣಗಳನ್ನು ಧಾರಣೆ ಮಾಡಿಕೊಳ್ಳುತ್ತಿದ್ದೀರಿ. ಶಾಂತಿಯ ಸಾಗರ, ಪ್ರೇಮ ಸಾಗರನೆಂದು ಹಾಡುತ್ತಾರೆ.
ಹೇಗೆ ತಂದೆಗೆ ಪೂಜೆ ನಡೆಯುತ್ತದೆಯೋ ಹಾಗೆಯೇ ನೀವೂ ಪೂಜಿಸಲ್ಪಡುತ್ತೀರಿ. ತಂದೆಯು ನಿಮಗೆ ನಮಸ್ತೆ
ಮಾಡುತ್ತಾರೆ. ನಿಮಗಂತೂ ಡಬಲ್ ಪೂಜೆ ನಡೆಯುತ್ತದೆ. ಇವೆಲ್ಲಾ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ.
ನಿಮ್ಮ ಮಹಿಮೆಯನ್ನೂ ತಿಳಿಸುತ್ತಾರೆ - ಪುರುಷಾರ್ಥ ಮಾಡಿ ಈ ರೀತಿ ಆಗಿರಿ, ನಾವು ಈ ರೀತಿ
ಆಗಿದ್ದೇವೆಯೇ ಎಂದು ಹೃದಯದಿಂದ ಕೇಳಿಕೊಳ್ಳಬೇಕು. ಹೇಗೆ ನಾವು ಅಶರೀರಿಯಾಗಿ ಬಂದಿದ್ದೇವೆ ಹಾಗೆಯೇ
ನಾವು ಅಶರೀರಿಯಾಗಿ ಹೋಗಬೇಕು. ಈ ಊರುಗೋಲನ್ನೂ ಬಿಟ್ಟು ಬಿಡಿ ಎಂದು ಶಾಸ್ತ್ರಗಳಲ್ಲಿದೆ, ಆದರೆ
ಇಲ್ಲಿ ಕೋಲಿನ ಮಾತಿಲ್ಲ. ಇಲ್ಲಿ ಶರೀರ ಬಿಡುವ ಮಾತಾಗಿದೆ. ಉಳಿದೆಲ್ಲವೂ ಭಕ್ತಿ ಮಾರ್ಗದ
ಮಾತುಗಳಾಗಿವೆ. ಇಲ್ಲಿ ಕೇವಲ ತಂದೆಯನ್ನು ನೆನಪು ಮಾಡಬೇಕು. ತಂದೆಯ ವಿನಃ ಯಾರೂ ಇಲ್ಲ. ನೀವು
ಮಕ್ಕಳಿಗೆ ಜ್ಞಾನ ಸಿಕ್ಕಿದೆ, ನಿಮಗೆ ಗೊತ್ತಿದೆ - ಮನುಷ್ಯರು ಗುರುಗಳ ಸಂಕೋಲೆಗಳಲ್ಲಿ ಎಷ್ಟೊಂದು
ಸಿಲುಕಿದ್ದಾರೆ, ಅನೇಕ ಪ್ರಕಾರದ ಗುರುಗಳಿದ್ದಾರೆ. ಈಗ ನಿಮಗೆ ಗುರುಗಳು ಬೇಕಾಗಿಲ್ಲ. ಅದರಿಂದ
ಏನನ್ನೂ ಓದುವ ಅವಶ್ಯಕತೆಯೂ ಇಲ್ಲ. ತಂದೆಯು ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಒಂದೇ ಮಹಾ
ಮಂತ್ರವನ್ನು ಕೊಟ್ಟು ಬಿಟ್ಟಿದ್ದಾರೆ. ಈಗ ಆಸ್ತಿಯನ್ನು ನೆನಪು ಮಾಡಿ, ದೈವೀ ಗುಣಗಳನ್ನು ಧಾರಣೆ
ಮಾಡಿ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಬೇಕಾಗಿದೆ. ಇಲ್ಲಿಗೆ ರಿಫ್ರೆಷ್ ಆಗಲು
ಬರುತ್ತೀರಿ. ನಾವು ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆಂದು ತಿಳಿದುಕೊಂಡಿದ್ದೀರಿ. ನಿಮ್ಮ
ಸ್ಥಾನಗಳಿಗೆ ಹೋದ ಮೇಲೆ ತಂದೆಯು ಮಧುಬನದಲ್ಲಿ ಕುಳಿತಿದ್ದಾರೆಂದು ತಿಳಿದುಕೊಳ್ಳುತ್ತೀರಿ. ಹೇಗೆ
ನಾವಾತ್ಮರು ಸಿಂಹಾಸನದ ಮೇಲೆ ಕುಳಿತಿದ್ದೇವೆಯೋ ಹಾಗೆಯೇ ತಂದೆಯೂ ಈ ಸಿಂಹಾಸನದಲ್ಲಿ ಕುಳಿತಿದ್ದಾರೆ.
ಯಾವುದೇ ಗೀತಾ ಶಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಳ್ಳುವುದಿಲ್ಲ. ಇವರು ಕಂಠ ಪಾಠ ಮಾಡಿದ್ದಾರೆಂದೂ
ಅಲ್ಲ. ಆ ಸನ್ಯಾಸಿಗಳಾದರೆ ಕಂಠ ಪಾಠ ಮಾಡಿರುತ್ತಾರೆ, ಇಲ್ಲಿ ತಂದೆಯು ಜ್ಞಾನಸಾಗರನಾಗಿದ್ದಾರೆ,
ಬ್ರಹ್ಮಾರವರ ಮೂಲಕ ಎಲ್ಲಾ ರಹಸ್ಯವನ್ನು ತಿಳಿಸುತ್ತಾರೆ. ಶಿವತಂದೆ ಎಂದಾದರೂ ಯಾವುದೇ ಶಾಲೆ ಅಥವಾ
ಸತ್ಸಂಗಕ್ಕೆ ಹೋಗಿದ್ದಾರೆಯೇ? ತಂದೆಯು ಎಲ್ಲವನ್ನೂ ಬಲ್ಲವರಾಗಿದ್ದಾರೆ. ಭಲೇ ವಿಜ್ಞಾನವು
ಗೊತ್ತಿದೆಯೇ ಎಂದು ಯಾರಾದರೂ ಕೇಳಬಹುದು. ತಂದೆಯು ಹೇಳುತ್ತಾರೆ - ವಿಜ್ಞಾನದಿಂದ ನಾನೇನು ಮಾಡಬೇಕು?
ಪತಿತರನ್ನು ಪಾವನ ಮಾಡಲು ಬನ್ನಿ ಎಂದೇ ನನ್ನನ್ನು ಕರೆಯುತ್ತೀರಿ. ಇದರಲ್ಲಿ ವಿಜ್ಞಾನವನ್ನು
ಕಲಿಯುವ ಅವಶ್ಯಕತೆಯೇನಿದೆ? ಶಿವ ತಂದೆಯು ಇಂತಹ ಶಾಸ್ತ್ರವನ್ನು ಓದಿದ್ದಾರೆಯೇ ಎಂದು ಕೇಳುತ್ತಾರೆ.
ಅರೇ! ಅವರಿಗೆ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಇವಂತೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ.
ವಿಷ್ಣುವಿನ ಕೈಯಲ್ಲಿ ಶಂಖ -ಚಕ್ರವನ್ನು ಕೊಟ್ಟಿದ್ದಾರೆ, ಅರ್ಥವೇನೂ ಗೊತ್ತಿಲ್ಲ. ವಾಸ್ತವದಲ್ಲಿ
ಅಲಂಕಾರವನ್ನು ಈ ಬ್ರಹ್ಮನಿಗೆ ಹಾಗೂ ಬ್ರಾಹ್ಮಣರಿಗೆ ತೋರಿಸಬೇಕು. ಸೂಕ್ಷ್ಮವತನದಲ್ಲಂತೂ ಈ ಶರೀರವೇ
ಇರುವುದಿಲ್ಲ. ಅನೇಕರಿಗೆ ಮನೆಯಲ್ಲಿ ಕುಳಿತಿದ್ದಂತೆಯೇ ಬ್ರಹ್ಮನ ಸಾಕ್ಷಾತ್ಕಾರವಾಗುತ್ತದೆ,
ಕೃಷ್ಣನದೂ ಆಗುತ್ತದೆ. ಇದರ ಅರ್ಥವೇನೆಂದರೆ ಈ ಬ್ರಹ್ಮಾರವರ ಬಳಿ ಹೋದರೆ ಕೃಷ್ಣನ ತರಹ ಆಗುತ್ತೀರಿ
ಅಥವಾ ಕೃಷ್ಣನ ಮಡಿಲಲ್ಲಿ ಹೋಗುತ್ತೀರಿ. ಅವರಿಗಾದರೆ ಕೇವಲ ರಾಜಕುಮಾರನ ಸಾಕ್ಷಾತ್ಕಾರವಾಗುತ್ತದೆ.
ಒಂದು ವೇಳೆ ನೀವು ಚೆನ್ನಾಗಿ ಓದಿದರೆ ನೀವೂ ಆಗಬಲ್ಲಿರಿ. ಇದು ಗುರಿ-ಧ್ಯೇಯವಾಗಿದೆ. ಉದಾಹರಣೆಗೆ
ಒಬ್ಬರ ಬಗ್ಗೆ ತಿಳಿಸುತ್ತಾರೆ. ಅವರನ್ನೇ ಮಾದರಿಯನ್ನಾಗಿ ಹೇಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ-
ತಂದೆಯು ಸತ್ಯ ನಾರಾಯಣನ ಕಥೆಯನ್ನು ತಿಳಿಸಲು ನರನಿಂದ ನಾರಾಯಣನನ್ನಾಗಿ ಮಾಡಲು ಬಂದಿದ್ದಾರೆ.
ಮೊದಲಂತೂ ಅವಶ್ಯವಾಗಿ ರಾಜಕುಮಾರರಾಗುತ್ತೀರಿ. ಕೃಷ್ಣನು ಬೆಣ್ಣೆಯನ್ನು ತಿಂದನೆಂದು ಶಾಸ್ತ್ರಗಳಲ್ಲಿ
ತೋರಿಸುತ್ತಾರೆ. ವಾಸ್ತವದಲ್ಲಿ ಇದು ವಿಶ್ವ ರಾಜ್ಯಭಾಗ್ಯದ ಬೆಣ್ಣೆಯಾಗಿದೆ. ಬಾಕಿ ಚಂದ್ರ
ಇತ್ಯಾದಿಯನ್ನು ಬಾಯಲ್ಲಿ ಹೇಗೆ ತೋರಿಸುತ್ತಾರೆ! ಹೇಳಿಕೆಯಿದೆ - ಎರಡು ಬೆಕ್ಕುಗಳು ಪರಸ್ಪರದಲ್ಲಿ
ಕಚ್ಚಾಡಿದವು, ಮಧ್ಯದಲ್ಲಿ ಯಾರು ಸೃಷ್ಟಿಯ ಮಾಲೀಕನಾದರೋ ಅವರಿಗೆ ಬೆಣ್ಣೆಯನ್ನು ತೋರಿಸಿದ್ದಾರೆ.
ಈಗ ತಮ್ಮನ್ನು ನೋಡಿಕೊಳ್ಳಿ - ನಾವು ಈ ರೀತಿ ಆಗಿದ್ದೇವೆಯೇ, ಇಲ್ಲವೆ? ಈ ವಿದ್ಯೆಯು ಇರುವುದೇ
ರಾಜ್ಯ ಪದವಿಗಾಗಿ. ಪ್ರಜಾ ಪಾಠ ಶಾಲೆಯೆಂದು ಹೇಳುವುದಿಲ್ಲ. ಇದು ನರನಿಂದ ನಾರಾಯಣನಾಗುವ ಪಾಠ
ಶಾಲೆಯಾಗಿದೆ. ಇದು ಈಶ್ವರೀಯ ವಿಶ್ವವಿದ್ಯಾಲಯವಾಗಿದೆ, ಭಗವಂತನೇ ಓದಿಸುತ್ತಾರೆ. ತಂದೆಯು ಹೇಳಿದರು
- ಈ ರೀತಿ ಬರೆಯಿರಿ, ಈಶ್ವರೀಯ ವಿಶ್ವವಿದ್ಯಾಲಯ ಬ್ರಾಕೆಟಿನಲ್ಲಿ ಯೂನಿವರ್ಸಿಟಿ ಎಂದು ಬರೆಯಿರಿ
ಆದರೆ ಈ ರೀತಿ ಬರೆಯುವುದನ್ನೇ ಮರೆತು ಹೋಗುತ್ತಾರೆ. ನೀವು ಎಷ್ಟೇ ಪುಸ್ತಕಗಳನ್ನೂ ಕೊಟ್ಟರೂ
ಅದರಿಂದೇನೂ ಅರ್ಥವಾಗುವುದಿಲ್ಲ. ಇದನ್ನು ಸನ್ಮುಖದಲ್ಲಿ ತಿಳಿಸಬೇಕಾಗುತ್ತದೆ. ಬೇಹದ್ದಿನ
ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಜನ್ಮ-ಜನ್ಮಾಂತರದಿಂದ ನೀವು ಹದ್ದಿನ ಆಸ್ತಿಯನ್ನು
ಪಡೆಯುತ್ತಾ ಬಂದಿದ್ದೀರಿ. ನೀವೀಗ ಬ್ಯಾಡ್ಜ್ ನಿಂದಲೂ ಸರ್ವೀಸ್ ಮಾಡಬಹುದು. ಭಲೇ ಯಾರಾದರೂ ನಕ್ಕರೂ
ಪರವಾಗಿಲ್ಲ. ಇಬ್ಬರು ತಂದೆಯರ ಮಾತು ಬಹಳ ಚೆನ್ನಾಗಿದೆ. ಹೀಗೆ ಅನೇಕರು ತಮ್ಮ ಮಕ್ಕಳಿಗೆ
ತಿಳಿಸುತ್ತಾರೆ. ಮಕ್ಕಳೂ ಸಹ ತಂದೆಗೆ ತಿಳಿಸುತ್ತಾರೆ - ಸ್ತ್ರೀ ಪತಿಯನ್ನು ಜ್ಞಾನಕ್ಕೆ ತರುತ್ತಾರೆ,
ನಂತರ ಕೆಲ ಕೆಲವೆಡೆ ಪರಸ್ಪರ ಜಗಳವೂ ಆಗುತ್ತದೆ. ಈಗ ನೀವು ತಿಳಿದುಕೊಂಡಿದ್ದೀರಿ. ನೀವೆಲ್ಲಾ
ಆತ್ಮರು ಮಕ್ಕಳಾಗಿದ್ದೀರಿ. ಆಸ್ತಿಗೆ ಹಕ್ಕುದಾರರಾಗಿದ್ದೀರಿ. ಲೌಕಿಕ ಸಂಬಂಧದಲ್ಲಿ ಮಗಳಿಗೆ
ವಿವಾಹವಾಗಿ ಇನ್ನೊಂದು ಮನೆಗೆ ಹೋಗುತ್ತಾಳೆಂದರೆ ಅದಕ್ಕೆ ಕನ್ಯಾದಾನವೆಂದು ಹೇಳಲಾಗುತ್ತದೆ,
ಅನ್ಯರಿಗೆ ಕೊಡುತ್ತಾರಲ್ಲವೆ. ಈಗಂತೂ ಆ ಕೆಲಸ ಮಾಡಬಾರದು. ಸ್ವರ್ಗದಲ್ಲಿಯೂ ಸಹ ಕನ್ಯೆಯು ಇನ್ನೊಂದು
ಮನೆಗೆ ಹೋಗುತ್ತಾಳೆ. ಆದರೂ ಪವಿತ್ರವಾಗಿರುತ್ತಾಳೆ. ಇದು ಪತಿತ ಪ್ರಪಂಚ ಮತ್ತು ಸತ್ಯಯುಗವು
ಶಿವಾಲಯ ಪಾವನ ಪ್ರಪಂಚವಾಗಿದೆ. ನೀವು ಮಕ್ಕಳ ಮೇಲೆ ಈಗ ಬೃಹಸ್ಪತಿ ದೆಶೆಯಿದೆ, ನೀವು
ಸ್ವರ್ಗದಲ್ಲಂತೂ ಅವಶ್ಯವಾಗಿ ಹೋಗುತ್ತೀರಿ. ಇದು ಪಕ್ಕಾ ಆಗಿದೆ ಆದರೆ ಈಗ ಪುರುಷಾರ್ಥದಿಂದ
ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಹೃದಯದಿಂದ ಕೇಳಿಕೊಳ್ಳಿ - ನಾವು ಇಂತಹವರ ಹಾಗೆ ಸರ್ವೀಸ್
ಮಾಡುತ್ತೇವೆಯೇ? ಬ್ರಾಹ್ಮಣಿ ಅರ್ಥಾತ್ ನಿಮಿತ್ತ ಸಹೋದರಿ ಬೇಕೆಂದಲ್ಲ. ನೀವೇ ಸ್ವಯಂ ಶಿಕ್ಷಕರಾಗಿ.
ಒಳ್ಳೆಯದು - ಮಕ್ಕಳು ಪುರುಷಾರ್ಥ ಮಾಡಬೇಕಾಗಿದೆ. ಬಾಕಿ ತಂದೆಯು ಯಾರಿಂದ ಹಣ ತೆಗೆದುಕೊಂಡು ಏನು
ಮಾಡುವರು? ನಿಮ್ಮ ಹಣದಿಂದ ನೀವೇ ಮ್ಯೂಜಿಯಂ ತೆರೆಯಿರಿ. ಮನೆ ಇತ್ಯಾದಿಗಳೆಲ್ಲವೂ ಇಲ್ಲಿಯೇ
ಸಮಾಪ್ತಿಯಾಗುತ್ತದೆ. ತಂದೆಯಂತೂ ವ್ಯಾಪಾರಿಯಾಗಿದ್ದಾರಲ್ಲವೆ, ಚಿನ್ನ ಬೆಳ್ಳಿಯ ವ್ಯಾಪಾರಿಯೂ
ಆಗಿದ್ದಾರೆ. ದುಃಖದ ಸಂಕೋಲೆಗಳಿಂದ ಬಿಡಿಸಿ ಸುಖ ನೀಡುವವರಾಗಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ,
ಬಹಳಷ್ಟು ಕಳೆದಿದೆ, ಸ್ವಲ್ಪವೇ ಉಳಿದಿದೆ. ನೀವು ಮುಂದೆ ಹೋದಂತೆ ನೋಡುತ್ತೀರಿ - ಬಹಳ ಹೊಡೆದಾಟಗಳು
ನಡೆಯುತ್ತವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
೧ . ಟ್ರಸ್ಟಿ ಹಾಗೂ
ಅನಾಸಕ್ತರಾಗಿರಿ ಯಾವುದೇ ವ್ಯರ್ಥ ಖರ್ಚು ಮಾಡಬೇಡಿ, ಸ್ವಯಂನ್ನು ದೇವತೆಗಳಂತೆ ಪವಿತ್ರರನ್ನಾಗಿ
ಮಾಡಿಕೊಳ್ಳುವ ಪುರುಷಾರ್ಥ ಮಾಡುತ್ತಾ ಇರಿ.
೨ . ಒಬ್ಬ ಪ್ರಿಯಾತಿ
ಪ್ರಿಯ ವಸ್ತುವಾದ ತಂದೆಯನ್ನು ನೆನಪು ಮಾಡಿರಿ. ಸಾಧ್ಯವಾದಷ್ಟು ಕಲಿಯುಗೀ ಬಂಧನಗಳನ್ನು
ಬಿಡಿಸಿಕೊಳ್ಳುತ್ತಾ ಹೋಗಿ, ಹೆಚ್ಚಿಸಿಕೊಳ್ಳಬೇಡಿ. ಸತ್ಯಯುಗೀ ದೈವೀ ಸಂಬಂಧದಲ್ಲಿ ಹೋಗುತ್ತಿದ್ದೇವೆ
ಎಂಬ ಖುಷಿಯಲ್ಲಿರಿ.
ವರದಾನ:
ಜ್ಞಾನ
ಪೂರ್ಣರಾಗಿ ಸರ್ವ ವ್ಯರ್ಥದ ಪ್ರಶ್ನೆಗಳನ್ನು ಯಜ್ಞದಲ್ಲಿ ಸ್ವಾಹ ಮಾಡುವಂತಹ ನಿರ್ವಿಘ್ನ ಭವ.
ಯಾವಾಗ ಏನಾದರೂ ವಿಘ್ನ
ಬಂದಾಗ ಏನು? ಏಕೆ? ಎಂಬ ಅನೇಕ ಪ್ರಶ್ನೆಗಳಲ್ಲಿ ಹೋಗಿ ಬಿಡುವಿರಿ, ಪ್ರಶ್ನ ಚಿತ್ತರಾಗುವುದು
ಅರ್ಥಾತ್ ಪರೆಷಾನ್ (ಬೇಸರ) ಆಗುವುದು. ಜ್ಞಾನ ಪೂರ್ಣರಾಗಿ ಯಜ್ಞದಲ್ಲಿ ಸರ್ವ ವ್ಯರ್ಥ
ಪ್ರಶ್ನೆಗಳನ್ನು ಸ್ವಾಹ ಮಾಡಿ ಬಿಡಿ. ಆಗ ನಿಮ್ಮ ಸಮಯವೂ ಸಹಾ ಉಳಿಯುವುದು ಮತ್ತು ಇನ್ನೊಬ್ಬರ ಸಮಯವೂ
ಸಹಾ ಉಳಿಯುವುದು. ಇದರಿಂದ ಸಹಜವಾಗಿ ನಿರ್ವಿಘ್ನರಾಗಿ ಬಿಡುವಿರಿ. ನಿಶ್ಚಯ ಮತ್ತು ವಿಜಯ ಜನ್ಮ
ಸಿದ್ಧ ಅಧಿಕಾರವಾಗಿದೆ - ಈ ಗೌರವದಲ್ಲಿದ್ದಾಗ ಪರೆಷಾನ್ (ಬೇಸರ) ಆಗುವುದಿಲ್ಲ.
ಸ್ಲೋಗನ್:
ಸದಾ ಉತ್ಸಾಹದಲ್ಲಿರುವುದು ಮತ್ತು ಅನ್ಯರಲ್ಲೂ ಸಹ ಉತ್ಸಾಹ ತರುವುದು - ಇದೇ ನಿಮ್ಮ ಕರ್ತವ್ಯವಾಗಿದೆ.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ -
ಹೇಗೆ ಬ್ರಹ್ಮಾ ತಂದೆ ಸದಾ ಲವಲೀನ ಸ್ಥಿತಿಯಲ್ಲಿರುತ್ತ ನನ್ನತನವನ್ನು ವೃತ್ತಿಯಿಂದ ತ್ಯಾಗ ಮಾಡಿದರು,
ಎಲ್ಲರ ಗಮನ ತಂದೆಯ ಕಡೆ ಸೆಳೆಯುವಂತೆ ಮಾಡಿದರು. ಈ ರೀತಿ ತಂದೆಯನ್ನು ಅನುಕರಣೆ ಮಾಡಿ. ಜ್ಞಾನದ
ಆಧಾರದಿಂದ ತಂದೆಯ ನೆನಪಿನಲ್ಲಿ ಈ ರೀತಿ ಸಮಾವೇಶವಾಗಿರಿ, ಸಮಾವೇಶವಾಗಿರುವುದೇ ಲವಲೀನ
ಸ್ಥಿತಿಯಾಗಿದೆ.