18.02.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಸ್ವದರ್ಶನ ಚಕ್ರಧಾರಿ ಭವ, ನೀವು ಲೈಟ್ಹೌಸ್ (ಪ್ರಕಾಶ ಗ್ರಹ) ಆಗಬೇಕಾಗಿದೆ, ತಮ್ಮನ್ನು ಆತ್ಮನೆಂದು ತಿಳಿಯಿರಿ, ಇದರಲ್ಲಿ ಹುಡುಗಾಟಿಕೆ ಮಾಡಬಾರದು”

ಪ್ರಶ್ನೆ:
ನೀವು ಎಲ್ಲರಿಗಿಂತ ವಿಚಿತ್ರವಾದ ವಿದ್ಯಾರ್ಥಿಗಳಾಗಿದ್ದೀರಿ - ಹೇಗೆ?

ಉತ್ತರ:
ನೀವು ಗೃಹಸ್ಥ ವ್ಯವಹಾರದಲ್ಲಿಯೇ ಇರಿ, ಶರೀರ ನಿರ್ವಹಣೆಗಾಗಿ 8 ಗಂಟೆ ಕಾರ್ಯವನ್ನೂ ಮಾಡುತ್ತಾ ಜೊತೆ ಜೊತೆಗೆ ಭವಿಷ್ಯದ 21 ಜನ್ಮಗಳಿಗಾಗಿ 8 ಗಂಟೆಗಳು ತಂದೆಯ ಸಮಾನ ಸೇವೆಯನ್ನು ಮಾಡುತ್ತೀರಿ, ಎಲ್ಲವನ್ನೂ ಮಾಡುತ್ತಾ ತಂದೆ ಮತ್ತು ಮನೆಯನ್ನು ನೆನಪು ಮಾಡುತ್ತೀರಿ - ಇದೇ ನಿಮ್ಮ ಆಶ್ಚರ್ಯಕರವಾಗಿರುವ ವಿದ್ಯಾರ್ಥಿ ಜೀವನವಾಗಿದೆ. ಜ್ಞಾನವು ಬಹಳ ಸಹಜವಾಗಿದೆ, ಕೇವಲ ಪಾವನರಾಗುವುದರಲ್ಲಿ ಪರಿಶ್ರಮ ಪಡುತ್ತೀರಿ.

ಓಂ ಶಾಂತಿ.
ತಂದೆಯು ಮಕ್ಕಳೊಂದಿಗೆ ನಂಬರ್ವಾರ್ ಪುರುಷಾರ್ಥದನುಸಾರವಾಗಿ ಕೇಳುತ್ತಾರೆ. ಮೂಲವತನವೂ ನಂಬರ್ವಾರ್ ನೆನಪಿಗೆ ಬರುತ್ತದೆ. ನೀವು ಮಕ್ಕಳಿಗೆ ಇದೂ ನೆನಪಿಗೆ ಬರುತ್ತದೆ - ನಾವು ಮೊದಲು ಶಾಂತಿಧಾಮದಲ್ಲಿದ್ದೆವು ನಂತರ ಸುಖಧಾಮದಲ್ಲಿ ಬರುತ್ತೇವೆ. ಇದು ಅವಶ್ಯವಾಗಿ ಆಂತರ್ಯದಲ್ಲಿ ತಿಳಿದುಕೊಂಡಿದ್ದೀರಿ. ಮೂಲವತನದಿಂದ ಹಿಡಿದು ಈ ಸೃಷ್ಟಿ ಚಕ್ರವು ಹೇಗೆ ಸುತ್ತುತ್ತದೆ ಎನ್ನುವುದು ನಿಮ್ಮ ಬುದ್ಧಿಯಲ್ಲಿದೆ. ಈ ಸಮಯದಲ್ಲಿ ತಾವು ಬ್ರಾಹ್ಮಣರಾಗಿದ್ದೀರಿ ನಂತರ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೇವೆ. ಇದು ಬುದ್ಧಿಯಲ್ಲಿ ಚಕ್ರವನ್ನು ತಿರುಗಿಸಬೇಕಾಗಿದೆ. ಮಕ್ಕಳ ಬುದ್ಧಿಯಲ್ಲಿ ಪೂರ್ಣ ಜ್ಞಾನವಿದೆ. ತಂದೆಯು ತಿಳಿಸಿದ್ದಾರೆ ಮೊದಲಂತೂ ತಿಳಿದುಕೊಂಡಿರಲಿಲ್ಲ. ಈಗ ನೀವೇ ತಿಳಿದುಕೊಂಡಿದ್ದೀರಿ. ದಿನ-ಪ್ರತಿ ದಿನ ನಿಮ್ಮ ವೃದ್ಧಿಯಾಗುತ್ತದೆ. ಮಕ್ಕಳಿಗೆ ಕಲಿಸಿ ಕೊಡಲಾಗುತ್ತದೆ - ಅವಶ್ಯವಾಗಿ ಮೊದಲು ನೀವೇ ಸ್ವದರ್ಶನ ಚಕ್ರಧಾರಿಯಾಗುತ್ತೀರಿ. ಇಲ್ಲಿ ನೀವು ಕುಳಿತಿದ್ದೀರಿ, ಬುದ್ಧಿಯಿಂದ ತಿಳಿದುಕೊಂಡಿದ್ದೀರಿ - ಅವರು ನಮ್ಮ ತಂದೆಯಾಗಿದ್ದಾರೆ, ಅವರು ಕಲಿಸಿ ಕೊಡುವ ಸುಪ್ರೀಂ ಟೀಚರ್ ಆಗಿದ್ದಾರೆ. ನಾವು 84 ಜನ್ಮಗಳ ಚಕ್ರವನ್ನು ಹೇಗೆ ಸುತ್ತುತ್ತೇವೆಂದು ತಂದೆಯೇ ತಿಳಿಸಿದ್ದಾರೆ. ಬುದ್ಧಿಯಲ್ಲಿ ಅವಶ್ಯವಾಗಿ ನೆನಪು ಬರುತ್ತದೆಯಲ್ಲವೆ. ಬುದ್ಧಿಯಿಂದ ಪ್ರತೀ ಸಮಯ ನೆನಪು ಮಾಡಿಕೊಳ್ಳಬೇಕು. ಪಾಠವೇನು ದೊಡ್ಡದಲ್ಲ, ಪಾಠವು ಸೆಕೆಂಡಿನದಾಗಿದೆ. ನಾವು ಎಲ್ಲಿಯ ನಿವಾಸಿಗಳಾಗಿದ್ದೇವೆ ನಂತರ ಇಲ್ಲಿಗೆ ಹೇಗೆ ಪಾತ್ರವನ್ನಭಿನಯಿಸಲು ಬಂದಿದ್ದೇವೆ ಎನ್ನುವುದು ಬುದ್ಧಿಯಲ್ಲಿರುತ್ತದೆ. 84 ಜನ್ಮಗಳ ಚಕ್ರವಾಗಿದೆ - ಸತ್ಯಯುಗದಲ್ಲಿ ಇಷ್ಟು ಜನ್ಮ, ತ್ರೇತಾದಲ್ಲಿ ಇಷ್ಟು ಜನ್ಮವೆಂದು ಚಕ್ರವನ್ನು ನೆನಪು ಮಾಡುತ್ತೀರಲ್ಲವೆ. ಯಾವ ಪದವಿಯು ಸಿಕ್ಕಿತು, ಪಾತ್ರವನ್ನಯಿನಯಿಸಿದ್ದೀರಿ ಅದೂ ಬುದ್ಧಿಯಲ್ಲಿ ನೆನಪಿರುತ್ತದೆಯಲ್ಲವೆ. ಡಬಲ್ ಕಿರೀಟಾಧಾರಿಯಾಗಿದ್ದೆವು, ನಂತರ ಸಿಂಗಲ್ ಕಿರೀಟಧಾರಿಯಾಗುತ್ತೇವೆ ಎಂದು ತಿಳಿಯುತ್ತೀರಿ ನಂತರ ಪೂರ್ಣ ರಾಜ್ಯಭಾಗ್ಯವನ್ನು ಕಳೆದುಕೊಂಡೆವು, ತಮೋಪ್ರಧಾನರಾದೆವು - ಈ ಚಕ್ರವನ್ನು ತಿರುಗಿಸಬೇಕಾಗಿದೆ. ಆದ ಕಾರಣ ಸ್ವದರ್ಶನ ಚಕ್ರಧಾರಿ ಎನ್ನುವ ಹೆಸರಿದೆ. ಆತ್ಮನಿಗೆ ಜ್ಞಾನವು ದೊರೆತಿದೆ, ಆತ್ಮನ ದರ್ಶನವಾಗಿದೆ, ಆತ್ಮವು ತಿಳಿದುಕೊಂಡಿದೆ - ನಾವು ಹೇಗೆ ಚಕ್ರವನ್ನು ಸುತ್ತುತ್ತೇವೆ, ಮತ್ತೆ ಮನೆಗೆ ಹಿಂತಿರುಗಿ ಹೋಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಆಗ ಮನೆಯನ್ನು ತಲುಪುತ್ತೀರಿ. ಈ ಸಮಯವು ನೀವು ಈ ಸ್ಥಿತಿಯಲ್ಲಿ ಕುಳಿತಿದ್ದೀರೆಂದು ಹೇಳಲು ಸಾಧ್ಯವಿಲ್ಲ. ಹೊರಗಿನ ಬಹಳ ಮಾತುಗಳು ಬುದ್ಧಿಯಲ್ಲಿ ಬರುತ್ತಿರುತ್ತದೆ. ಇಲ್ಲಿ ತಂದೆಯೂ ಹೇಳುತ್ತಾರೆ - ಅನ್ಯ ಎಲ್ಲಾ ಮಾತುಗಳನ್ನು ಅಳವಡಿಸಿ ಒಬ್ಬ ತಂದೆಯನ್ನು ನೆನಪು ಮಾಡಿರಿ. ಶ್ರೀಮತ ಸಿಗುತ್ತದೆ, ಅದರಂತೆಯೇ ನಡೆಯಬೇಕು, ಸ್ವದರ್ಶನ ಚಕ್ರಧಾರಿಗಳಾಗಿ ನೀವು ಅಂತ್ಯದವರೆಗೆ ಪುರುಷಾರ್ಥ ಮಾಡಬೇಕು. ಮೊದಲು ಏನೂ ತಿಳಿದಿರಲಿಲ್ಲ ಈಗ ತಂದೆಯು ತಿಳಿಸುತ್ತಾರೆ. ಅವರನ್ನು ನೆನಪು ಮಾಡುವುದರಲ್ಲಿಯೇ ಎಲ್ಲವೂ ಬಂದು ಬಿಡುತ್ತದೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಪೂರ್ಣ ರಹಸ್ಯವು ಪೂರ್ಣ ನೆನಪಿಗೆ ಬರುತ್ತದೆ. ಇಲ್ಲಿ ಪಾಠವು ಸಿಗುತ್ತದೆ ಅದನ್ನು ಮನೆಯಲ್ಲಿಯೂ ನೆನಪು ಮಾಡಬಹುದು. ಇದು ಬುದ್ಧಿಯಿಂದ ತಿಳಿದುಕೊಳ್ಳುವ ಮಾತುಗಳಾಗಿವೆ. ನೀವು ಆಶ್ಚರ್ಯ ಪೂರ್ಣ ವಿದ್ಯಾರ್ಥಿಗಳಾಗಿದ್ದೀರಿ. ತಂದೆಯು ತಿಳಿಸುತ್ತಾರೆ - 8 ಗಂಟೆ ವಿಶ್ರಾಂತಿಯನ್ನೂ ಮಾಡಿರಿ, 8 ಗಂಟೆ ಶರೀರ ನಿರ್ವಹಣೆಗಾಗಿ ಕೆಲಸವನ್ನೂ ಭಲೇ ಮಾಡಿರಿ, ಈ ಕಾಯ ಎಲ್ಲವನ್ನೂ ಮಾಡಬೇಕು ಜೊತೆಯಲ್ಲಿ ಇಲ್ಲಿ ತಂದೆಯು ಯಾವ ಕಾರ್ಯವನ್ನು ಕೊಟ್ಟಿದ್ದಾರೆಯೋ ಅದನ್ನು ತಮ್ಮ ಸಮಾನ ಮಾಡಿಕೊಳ್ಳುವುದೂ ಸಹ ಶರೀರ ನಿರ್ವಹಣೆಯಾಯಿತಲ್ಲವೆ. ಅದು ಅಲ್ಪಕಾಲದ್ದಾಗಿದೆ, ಇದು 21 ಜನ್ಮಗಳಿಗೆ ಶರೀರ ನಿರ್ವಹಣೆಯಾಗಿದೆ. ನೀವೀಗ ಯಾವ ಪಾತ್ರವನ್ನು ಅಭಿನಯಿಸುತ್ತೀರೋ ಅದರಲ್ಲಿ ಇದರ ಬಹಳ ಮಹತ್ವವಿದೆ. ಯಾರೆಷ್ಟು ಪರಿಶ್ರಮ ಪಡುತ್ತಾರೆಯೋ ನಂತರ ಭಕ್ತಿಯಲ್ಲಿ ಪೂಜೆಯಾಗುತ್ತದೆ. ಇದೆಲ್ಲವನ್ನೂ ನೀವು ಮಕ್ಕಳೇ ಧಾರಣೆ ಮಾಡಿಕೊಳ್ಳಬೇಕು. ನೀವು ಮಕ್ಕಳು ಪಾತ್ರಧಾರಿಯಾಗಿದ್ದೀರಿ, ತಂದೆಯು ಕೇವಲ ಜ್ಞಾನ ಕೊಡುವಂತಹ ಪಾತ್ರವನ್ನಭಿನಯಿಸುತ್ತಾರೆ. ಕೇವಲ ಶರೀರ ನಿರ್ವಹಣೆಗಾಗಿ ಪುರುಷಾರ್ಥ ನೀವು ಮಾಡುತ್ತೀರಿ ಆದರೆ ತಂದೆಯಂತೂ ಮಾಡುವುದಿಲ್ಲ. ತಂದೆಯು ಈ ವಿಶ್ವದ ಇತಿಹಾಸ-ಭೂಗೋಳ ಪುನರಾವರ್ತನೆಯಾಗುತ್ತದೆ, ಚಕ್ರ ಸುತ್ತುತ್ತದೆ ಎನ್ನುವ ಜ್ಞಾನವನ್ನು ತಿಳಿಸಲು ಬರುತ್ತಾರೆ. ಯುಕ್ತಿಯಿಂದ ತಿಳಿಸುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಹುಡುಗಾಟಿಕೆ ಮಾಡಬಾರದು, ಲೈಟ್ಹೌಸ್ ಆಗಿ ತನ್ನನ್ನು ಆತ್ಮನೆಂದು ತಿಳಿಯಬೇಕು. ಶರೀರದ ವಿನಃ ಆತ್ಮವು ಪಾತ್ರವನ್ನಭಿನಯಿಸಲು ಸಾಧ್ಯವಿಲ್ಲವೆಂದು ನೀವು ತಿಳಿದಿದ್ದೀರಿ. ಭಲೇ ನಿಮ್ಮ ಬಳಿ ಬರುತ್ತಾರೆ, ಚೆನ್ನಾಗಿದೆ -ಚೆನ್ನಾಗಿದೆ ಎಂದು ಹೇಳುತ್ತಾರೆ, ಆದರೆ ಸ್ವದರ್ಶನ ಚಕ್ರಧಾರಿಗಳಾಗುವುದಿಲ್ಲ. ಇದನ್ನು ಬಹಳ ಅಭ್ಯಾಸ ಮಾಡಬೇಕಾಗುತ್ತದೆ. ನಂತರ ಎಲ್ಲಿಗೇ ಹೋದರೂ ಜ್ಞಾನದ ಸಾಗರರಾಗಿರುತ್ತಾರೆ. ಹೇಗೆ ವಿದ್ಯಾರ್ಥಿಯು ಓದಿ ಕಾಲೇಜಿನಲ್ಲಿ ಓದಿಸುತ್ತಾರೆ ಮತ್ತು ಉದ್ಯೋಗದಲ್ಲಿ ತೊಡಗುತ್ತಾರೆ. ಟೀಚರ್ ಆಗುವುದೇ ನಿಮ್ಮ ಕರ್ತವ್ಯವಾಗಿದೆ. ಎಲ್ಲರನ್ನೂ ಸ್ವದರ್ಶನ ಚಕ್ರಧಾರಿಯನ್ನಾಗಿ ಮಾಡಿರಿ, ಮಕ್ಕಳು ಚಿತ್ರವನ್ನು ಮಾಡಿದ್ದಾರೆ - ಡಬಲ್ ಕಿರೀಟಧಾರಿ ರಾಜರು ನಂತರ ಸಿಂಗಲ್ ಕಿರೀಟಧಾರಿ ರಾಜರು ಹೇಗಾಗುತ್ತಾರೆ! ಇದಂತೂ ಸರಿಯಾಗಿದೆ ಆದರೆ ಎಂದಿನಿಂದ ಎಂದಿನವರೆಗೆ ಡಬಲ್ ಕಿರೀಟಧಾರಿಗಳಾಗಿದ್ದರು? ಮತ್ತು ಎಂದಿನಿಂದ ಎಂದಿನವರೆಗೆ ಸಿಂಗಲ್ ಕಿರೀಟಧಾರಿಗಳಾಗಿದ್ದರು? ನಂತರ ಹೇಗೆ ಮತ್ತು ಯಾವಾಗ ರಾಜ್ಯವನ್ನು ಕಳೆದುಕೊಂಡರು? ಅದರ ದಿನಾಂಕವನ್ನೂ ಬರೆಯಬೇಕಾಗಿದೆ. ಇದು ಬೇಹದ್ದಿನ ದೊಡ್ಡ ನಾಟಕವಾಗಿದೆ. ನಾವು ಪುನಃ ದೇವತೆಗಳಾಗುತ್ತೇವೆ ಈಗ ಬ್ರಾಹ್ಮಣರಾಗಿದ್ದೇವೆ. ಬ್ರಾಹ್ಮಣರು ಸಂಗಮಯುಗದಲ್ಲಿದ್ದಾರೆ, ನೀವು ತಿಳಿಸುವವರೆಗೂ ಯಾರೂ ತಿಳಿದುಕೊಳ್ಳುವುದಿಲ್ಲ. ಇದು ನಿಮ್ಮದು ಅಲೌಕಿಕ ಜನ್ಮವಾಗಿದೆ. ಲೌಕಿಕ ಮತ್ತು ಪಾರಲೌಕಿಕದಿಂದ ಆಸ್ತಿಯು ಸಿಗುತ್ತದೆ. ಇವರ (ಬ್ರಹ್ಮಾ) ಮೂಲಕ ತಂದೆಯು ನಿಮಗೆ ಆಸ್ತಿಯನ್ನು ಕೊಡುತ್ತಾರೆ, ಹೇ ಪ್ರಭು ಎಂದು ಹಾಡುತ್ತಾರೆಯೇ ವಿನಃ ಹೇ ಪ್ರಜಾಪಿತ ಬ್ರಹ್ಮಾ ಎಂದು ಹಾಡುವುದಿಲ್ಲ. ಲೌಕಿಕ ಮತ್ತು ಪಾರಲೌಕಿಕ ತಂದೆಯನ್ನು ನೆನಪು ಮಾಡುವುದಿಲ್ಲ, ನೀವು ಮಾತ್ರ ತಿಳಿದಿದ್ದೀರಿ. ಪಾರಲೌಕಿಕ ತಂದೆಯದು ಅವಿನಾಶಿ ಆಸ್ತಿಯಾಗಿದೆ, ಲೌಕಿಕ ತಂದೆಯದು ವಿನಾಶಿ ಆಸ್ತಿಯಾಗಿದೆ. ಭಲೇ ಯಾರೇ ರಾಜನ ಮಗನಾಗಿರಬಹುದು, 5 ಕೋಟಿ ಆಸ್ತಿ ಸಿಗುತ್ತದೆ ಮತ್ತು ಬೇಹದ್ದಿನ ಆಸ್ತಿಯನ್ನು ಹೋಲಿಸಿದರೆ ಇದು ಅವಿನಾಶಿ ಆಸ್ತಿಯಾಗಿದೆ, ಅದು ಸಮಾಪ್ತಿಯಾಗುವುದಿದೆ. ಇಂದಿನ ಕೋಟ್ಯಾಧಿಪತಿಗಳನ್ನು ಮಾಯೆಯು ಹಿಡಿದು ಬಿಟ್ಟಿದೆ. ತಂದೆಯು ಬಡವರ ಬಂಧುವಾಗಿದ್ದಾರೆ. ಈಗ ನೀವು ಅನೇಕರ ಕಲ್ಯಾಣ ಮಾಡಲು ಪುರುಷಾರ್ಥ ಮಾಡುತ್ತಿದ್ದೀರಿ. ಅಂದಾಜು ರೋಗಿಗಳಿಗೆ ವೈರಾಗ್ಯ ಬರುತ್ತದೆ. ಬದುಕುವುದು ಏತಕ್ಕಾಗಿ ಎಂದು ತಿಳಿದುಕೊಳ್ಳುತ್ತಾರೆ, ಮುಕ್ತಿಧಾಮಕ್ಕೆ ಹೋಗುವ ಮಾರ್ಗವು ಸಿಗಲಿ ಎಂದು ಯೋಚಿಸುತ್ತಾರೆ, ದುಃಖದಿಂದ ಮುಕ್ತರಾಗಲು ಮುಕ್ತಿ ಬೇಡುತ್ತಾರೆ. ಸತ್ಯಯುಗದಲ್ಲಿ ಬೇಡುವುದಿಲ್ಲ ಏಕೆಂದರೆ ಅಲ್ಲಿ ದುಃಖವಿರುವುದಿಲ್ಲ. ಈ ಮಾತುಗಳು ನೀವು ತಿಳಿದುಕೊಂಡಿದ್ದೀರಿ. ತಂದೆಯ ಮಕ್ಕಳು ವೃದ್ಧಿಯಾಗುತ್ತಾ ಹೋಗುತ್ತಾರೆ. ಯಾರು ಸೂರ್ಯವಂಶಿ, ಚಂದ್ರವಂಶಿ ದೇವತೆಗಳಾಗುವವರಿದ್ದಾರೆಯೋ ಅವರೇ ಬಂದು ಜ್ಞಾನವನ್ನು ತೆಗೆದುಕೊಳ್ಳುತ್ತಾರೆ ಆದರೆ ನಂಬರ್ವಾರ್ ಪುರುಷಾರ್ಥದನುಸಾರ. ಈ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಈಗ ನೀವು ಬೇಹದ್ದಿನ ತಂದೆಯನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಯಾರಿಗೆ ತಂದೆಯ ಜೊತೆ ಪ್ರೀತಿಯಿದೆಯೋ ಅವರು ತಿಳಿದುಕೊಳ್ಳುತ್ತಾರೆ - ಜ್ಞಾನವಂತೂ ಬಹಳ ಸಹಜವಾಗಿದೆ, ಬಾಕಿ ಪಾವನವಾಗುವುದರಲ್ಲಿ ಮಾಯೆಯು ವಿಘ್ನವನ್ನು ಹಾಕುತ್ತದೆ. ಯಾವುದೇ ಮಾತಿನಲ್ಲಿ ಹುಡುಗಾಟಿಕೆ ಮಾಡಿದರೆ ಅದರಿಂದಲೇ ಸೋಲನ್ನನುಭವಿಸುತ್ತೀರಿ. ಇದರ ಉದಾಹರಣೆಯಾಗಿ ಬಾಕ್ಸಿಂಗ್ ಚೆನ್ನಾಗಿರುತ್ತದೆ. ಬಾಕ್ಸಿಂಗ್ನಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ವಿಜಯವನ್ನು ಪಡೆಯುತ್ತಾರೆ. ಮಕ್ಕಳು ತಿಳಿದುಕೊಂಡಿದ್ದೀರಿ - ಮಾಯೆಯು ನಮ್ಮನ್ನು ಸೋಲಿಸಿ ಬಿಡುತ್ತದೆ. ತಂದೆಯು ಹೇಳುತ್ತಾರೆ - ಮಧುರ ಮಕ್ಕಳೇ, ಸ್ವಯಂನ್ನು ಆತ್ಮನೆಂದು ತಿಳಿಯಿರಿ. ತಂದೆಗೂ ಇದರಲ್ಲಿ ಪರಿಶ್ರಮವಿದೆ ಎಂದು ತಿಳಿದಿದ್ದಾರೆ. ಬಾಬಾ ಸಹಜ ಯುಕ್ತಿಯನ್ನು ತಿಳಿಸುತ್ತಾರೆ. ನಾನು ಆತ್ಮ, ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ, ಪಾತ್ರವನ್ನಭಿನಯಿಸುತ್ತೇನೆ, ಬೇಹದ್ದಿನ ತಂದೆಯ ಮಗುವಾಗಿದ್ದೇನೆ ಎಂಬ ಮಾತನ್ನು ಪಕ್ಕಾ ಮಾಡಿಕೊಳ್ಳಬೇಕು. ತಂದೆಯು ಅನುಭವ ಮಾಡುತ್ತಾರೆ - ಮಾಯೆಯು ಇವರ ಬುದ್ಧಿಯೋಗವನ್ನು ತೆಗೆದು ಬಿಡುತ್ತದೆ. ನಂಬರ್ವಾರ್ ಇದ್ದಾರೆ, ಈ ಲೆಕ್ಕದಿಂದ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಎಲ್ಲರೂ ಏಕರಸವಾದರೆ ರಾಜಧಾನಿಯಾಗಲು ಸಾಧ್ಯವಿಲ್ಲ. ರಾಜ-ರಾಣಿ, ಪ್ರಜೆ ಸಾಹುಕಾರ ಎಲ್ಲರೂ ಆಗುತ್ತಾರೆ. ಈ ಮಾತು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ನಾವು ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ಈ ಎಲ್ಲಾ ಮಾತುಗಳನ್ನು ನಿಮ್ಮಲ್ಲಿಯೂ ಯಾರು ಅನನ್ಯವಾಗಿದ್ದಾರೆಯೋ ಅವರಿಗೆ ನೆನಪಿರುತ್ತದೆ. ಈ ಮಾತುಗಳನ್ನು ಎಂದೂ ಮರೆಯಬಾರದು. ನಾವು ಮರೆತು ಬಿಡುತ್ತೇವೆ ಎಂದು ಮಕ್ಕಳು ತಿಳಿದುಕೊಂಡಿದ್ದೀರಿ ಇಲ್ಲವೆಂದರೆ ನಾವು ವಿಶ್ವಕ್ಕೆ ಮಾಲೀಕರಾಗುತ್ತೇವೆ ಎಂದು ಬಹಳ ಖುಷಿಯಿರಬೇಕಾಗಿದೆ. ಪುರುಷಾರ್ಥದಿಂದಲೇ ಆಗುತ್ತೇವೆಯೇ ವಿನಃ ಹೇಳುವುದರಿಂದ ಆಗುವುದಿಲ್ಲ. ತಂದೆಯೂ ಬಂದ ತಕ್ಷಣ ಕೇಳುತ್ತಾರೆ - ಮಕ್ಕಳೇ ಎಚ್ಚರಿಕೆ! ಸ್ವದರ್ಶನ ಚಕ್ರಧಾರಿಯಾಗಿ ಕುಳಿತಿದ್ದೀರಾ? ತಂದೆಯೂ ಸ್ವದರ್ಶನ ಚಕ್ರಧಾರಿಯಾಗಿದ್ದಾರೆ, ಇವರಲ್ಲಿ ಪ್ರವೇಶ ಮಾಡುತ್ತಾರೆ. ಮನುಷ್ಯರು ವಿಷ್ಣು ಸ್ವದರ್ಶನ ಚಕ್ರಧಾರಿಯೆಂದು ತಿಳಿದುಕೊಂಡಿದ್ದಾರೆ. ಇವರೇ ಲಕ್ಷ್ಮೀ-ನಾರಾಯಣ ಎಂದು ಗೊತ್ತಿಲ್ಲ, ಇವರಿಗೂ ಜ್ಞಾನವನ್ನು ಯಾರು ಕೊಟ್ಟರು? ಯಾರಿಂದ ಯಾವ ಜ್ಞಾನದ ಮೂಲಕ ಇವರು ಲಕ್ಷ್ಮೀ-ನಾರಾಯಣರ ಪದವಿಯನ್ನು ಪಡೆದರು? ಸ್ವದರ್ಶನ ಚಕ್ರದಿಂದ ಸಂಹಾರ ಮಾಡುತ್ತಾರೆ ಎಂದು ತೋರಿಸುತ್ತಾರೆ. ನಿಮಗೆ ಈ ಚಿತ್ರವನ್ನು ಮಾಡುವವರನ್ನು ನೋಡಿ ನಗು ಬರುತ್ತದೆ. ವಿಷ್ಣುವೆಂದು ಕಂಬೈಂಡ್ ಗೃಹಸ್ಥಾಶ್ರಮದ ಗುರುತಾಗಿದೆ. ಚಿತ್ರ ಶೋಭಿಸುತ್ತದೆ ಬಾಕಿ ಇದು ಸರಿಯಾದ ಚಿತ್ರವಲ್ಲ. ಮೊದಲು ನೀವೂ ತಿಳಿದುಕೊಂಡಿರಲಿಲ್ಲ. ನಾಲ್ಕು ಭುಜದ ಚಿತ್ರವು ಇಲ್ಲಿಗೆ ಏಕೆ ಬರುತ್ತದೆ, ಈ ಎಲ್ಲಾ ಮಾತುಗಳನ್ನು ನಿಮ್ಮಲ್ಲಿಯೂ ನಂಬರ್ವಾರ್ ತಿಳಿದುಕೊಂಡಿದ್ದಾರೆ. ತಂದೆಯು ಹೇಳುತ್ತಾರೆ - ಪುರುಷಾರ್ಥವೇ ಪೂರ್ಣ ಆಧಾರವಾಗಿದೆ. ತಂದೆಯ ನೆನಪಿನಿಂದಲೇ ಪಾಪವು ಭಸ್ಮವಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನಂಬರ್ವನ್ ಈ ಪುರುಷಾರ್ಥ ಮಾಡಬೇಕು. ಸಮಯವನ್ನು ತಂದೆಯು ಕೊಟ್ಟಿದ್ದಾರೆ. ಗೃಹಸ್ಥಾಶ್ರಮದಲ್ಲಿಯೂ ಇರಬೇಕು, ಇಲ್ಲವಾದರೆ ಮಕ್ಕಳನ್ನು ಯಾರು ಸಂಭಾಲನೆ ಮಾಡುತ್ತಾರೆ! ಎಲ್ಲವನ್ನೂ ಮಾಡುತ್ತಾ ಅಭ್ಯಾಸ ಮಾಡಬೇಕು, ಬಾಕಿ ಇನ್ನು ಯಾವ ಮಾತೂ ಇಲ್ಲ. ಕೃಷ್ಣನು ಅಕಾಸುರ-ಬಕಾಸುರರನ್ನು ಸ್ವದರ್ಶನ ಚಕ್ರದಿಂದ ಸಂಹಾರ ಮಾಡಿದನೆಂದು ತೋರಿಸುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ಚಕ್ರ ಮುಂತಾದವುಗಳ ಮಾತೇ ಇಲ್ಲ ಇದನ್ನು ತಂದೆಯೇ ತಿಳಿಸಿಕೊಡುತ್ತಾರೆ. ಮನುಷ್ಯರು ಮನುಷ್ಯರಿಗೆ ತಿಳಿಸಿಕೊಡಲು ಸಾಧ್ಯವಿಲ್ಲ. ಮನುಷ್ಯರು ಮನುಷ್ಯರ ಸದ್ಗತಿ ಮಾಡಲು ಸಾಧ್ಯವಿಲ್ಲ. ಸ್ವದರ್ಶನ ಚಕ್ರದ ಅರ್ಥವೇನೆಂದು ತಂದೆಯೇ ತಿಳಿಸಿದ್ದಾರೆ. ಶಾಸ್ತ್ರಗಳಲ್ಲಿ ಇಂತಹ ಕಥೆಗಳನ್ನು ಮಾಡಿದ್ದಾರೆ, ಕೇಳಲೇಬೇಡಿ. ಕೃಷ್ಣನನ್ನು ಹಿಂಸಕನನ್ನಾಗಿ ಮಾಡಿದ್ದಾರೆ. ಇದನ್ನು ಏಕಾಂತದಲ್ಲಿ ವಿಚಾರಸಾಗರ ಮಂಥನ ಮಾಡಬೇಕಾಗುತ್ತದೆ. ರಾತ್ರಿಯಲ್ಲಿ ಯಾರು ಕಾವಲು ಕಾಯುತ್ತಾರೆಯೋ ಅವರಿಗೆ ಬಹಳ ಸಮಯವು ಸಿಗುತ್ತದೆ. ಅವರು ಬಹಳ ನೆನಪು ಮಾಡಬಹುದು. ತಂದೆಯನ್ನು ನೆನಪು ಮಾಡುತ್ತಾ ಸ್ವದರ್ಶನ ಚಕ್ರವನ್ನು ತಿರುಗಿಸುತ್ತಿರಿ. ನೆನಪು ಮಾಡುತ್ತಿದ್ದರೆ ಖುಷಿಯಲ್ಲಿ ನಿದ್ರೆಯೂ ಹೊರಟು ಹೋಗುತ್ತದೆ. ಯಾರಿಗೆ ಹಣವು ಸಿಗುತ್ತದೆಯೋ ಅವರು ಬಹಳ ಖುಷಿಯಲ್ಲಿರುತ್ತಾರೆ, ಎಂದೂ ತೂಕಡಿಸುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ನಾವು ಸದಾ ಆರೋಗ್ಯವಂತರು, ಐಶ್ವರ್ಯವಂತರು ಆಗುತ್ತೇವೆ. ಇದರಲ್ಲಿ ಚೆನ್ನಾಗಿ ತತ್ಪರರಾಗಬೇಕು. ಇದನ್ನು ತಂದೆಯು ತಿಳಿದುಕೊಂಡಿದ್ದಾರೆ - ಡ್ರಾಮಾನುಸಾರ ಏನೆಲ್ಲವೂ ನಡೆಯುತ್ತದೆಯೋ ಅದು ಸರಿಯಾಗಿದೆ ಆದರೂ ಪುರುಷಾರ್ಥ ಮಾಡಿಸುತ್ತಿರುತ್ತಾರೆ. ಈಗ ತಂದೆಯು ಶಿಕ್ಷಣವನ್ನು ಕೊಡುತ್ತಾರೆ. ಹೀಗೆ ಇಂತಹವರೂ ಇದ್ದಾರೆ, ಅವರಲ್ಲಿ ಜ್ಞಾನವೂ ಇರುವುದಿಲ್ಲ, ಯೋಗವೂ ಇರುವುದಿಲ್ಲ. ಯಾರೇ ಬುದ್ಧಿವಂತರು, ವಿದ್ವಾನರು ಬಂದರೆ ಮಾತನಾಡಲು ಆಗುವುದಿಲ್ಲ. ಸೇವಾಧಾರಿ ಮಕ್ಕಳು ತಿಳಿದುಕೊಂಡಿದ್ದಾರೆ - ನಮ್ಮ ಬಳಿ ಯಾರು ಚೆನ್ನಾಗಿ ತಿಳಿಸಿಕೊಡುತ್ತಾರೆ ಎಂದು ನಂತರ ತಂದೆಯೂ ನೋಡುತ್ತಾರೆ - ಯಾರಾದರೂ ಬುದ್ಧಿವಂತ ಓದಿ-ಬರೆದಿರುವಂತಹ ಒಳ್ಳೆಯ ವ್ಯಕ್ತಿಗಳು ಬಂದಾಗ ತಿಳಿಸಿಕೊಡುವವರು ದಡ್ಡರಾದರೆ ತಂದೆಯೇ ಸ್ವಯಂ ಪ್ರವೇಶ ಮಾಡಿ ಅವರನ್ನು ಜಾಗೃತ ಮಾಡುತ್ತಾರೆ. ಯಾರು ಸತ್ಯವಂತ ಮಕ್ಕಳಿರುತ್ತಾರೆಯೋ ಅವರು ಹೇಳುತ್ತಾರೆ - ನಮ್ಮಲ್ಲಿ ಇಷ್ಟು ಜ್ಞಾನವಿರಲಿಲ್ಲ. ತಂದೆಯೇ ಕುಳಿತು ಅದನ್ನು ತಿಳಿಸಿಕೊಟ್ಟರು. ಕೆಲವರಿಗೆ ತನ್ನ ಅಹಂಕಾರ ಬರುತ್ತದೆ. ಈ ಸಹಾಯ ಮಾಡುವುದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ. ಡ್ರಾಮಾ ಬಹಳ ವಿಚಿತ್ರವಾಗಿದೆ, ಇದನ್ನು ತಿಳಿದುಕೊಳ್ಳಲು ಬಹಳ ವಿಶಾಲ ಬುದ್ಧಿಯು ಬೇಕು. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಅಂತಹ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ ಅದರಲ್ಲಿ ಎಲ್ಲರೂ ಅತೀ ಸುಂದರರಾಗಿದ್ದರು. ಅಲ್ಲಿ ಕಪ್ಪಾಗಿ ಯಾರೂ ಇರುವುದಿಲ್ಲ. ನೀವು ಕಪ್ಪು ಹಾಗೂ ಸುಂದರ ಚಿತ್ರವನ್ನು ಮಾಡಿ ಬರೆಯಿರಿ. 63 ಜನ್ಮಗಳು ಕಾಮ ಚಿತೆಯ ಮೇಲೆ ಕುಳಿತು ಈ ರೀತಿ ಕಪ್ಪಾಗಿದ್ದಾರೆ, ಆತ್ಮವೇ ಆಗಿದೆ. ಲಕ್ಷ್ಮೀ-ನಾರಾಯಣರದೂ ಸಹ ಚಿತ್ರವನ್ನು ಕಪ್ಪಾಗಿ ಮಾಡಿದ್ದಾರೆ. ಆತ್ಮವೇ ಕಪ್ಪಾಗುತ್ತದೆ ಎಂದು ತಿಳಿದಿಲ್ಲ. ಅವರು ಸತ್ಯಯುಗದ ಮಾಲೀಕರು ಸುಂದರರಾಗಿದ್ದರು. ನಂತರ ಕಾಮಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಕಪ್ಪಾಗುತ್ತಾರೆ. ಆತ್ಮವು ಪುನರ್ ಜನ್ಮವನ್ನು ತೆಗೆದುಕೊಳ್ಳುತ್ತಾ ತಮೋಪ್ರಧಾನವಾಗುತ್ತದೆ. ಆತ್ಮವು ಕಪ್ಪು ಮತ್ತು ಶರೀರವೂ ಸಹ ಕಪ್ಪಾಗುತ್ತದೆ. ಲಕ್ಷ್ಮೀ-ನಾರಾಯಣರನ್ನು ಕೆಲವೆಡೆ ಕಪ್ಪಾಗಿ, ಕೆಲವೆಡೆ ಸುಂದರರನ್ನಾಗಿ ಏಕೆ ತೋರಿಸಿದ್ದಾರೆಂದು ನೀವು ನಗುನಗುತ್ತಾ ಕೇಳಬಹುದು. ಕೃಷ್ಣನೇ ಸುಂದರ ನಂತರ ಕೃಷ್ಣನೇ ಕಪ್ಪಾಗಿ ಏತಕ್ಕೆ ಮಾಡಿದ್ದಾರೆ, ಇದನ್ನೂ ಸಹ ನೀವೇ ತಿಳಿದುಕೊಂಡಿದ್ದೀರಿ. ನಿಮಗೆ ಜ್ಞಾನದ ಮೂರನೆಯ ನೇತ್ರ ಸಿಕ್ಕಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

೧. ಖುಷಿಯಿಂದ ಇರಲು ಏಕಾಂತದಲ್ಲಿ ಕುಳಿತು ಪ್ರಾಪ್ತಿಯಾಗಿರುವ ಜ್ಞಾನ ಧನವನ್ನು ಸ್ಮರಣೆ ಮಾಡಬೇಕು. ಪಾವನ ಹಾಗೂ ಸದಾ ನಿರೋಗಿಯಾಗಲು ನೆನಪಿನಲ್ಲಿರುವ ಪರಿಶ್ರಮ ಪಡಬೇಕು.

೨. ತಂದೆಯ ಸಮಾನ ಮಾಸ್ಟರ್ ಜ್ಞಾನಸಾಗರನಾಗಿ ಎಲ್ಲರನ್ನೂ ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡಬೇಕು. ಲೈಟ್ಹೌಸ್ ಆಗಬೇಕು. ಭವಿಷ್ಯದ 21 ಜನ್ಮಗಳ ಶರೀರ ನಿರ್ವಹಣೆಗೆ ಅವಶ್ಯವಾಗಿ ಆತ್ಮಿಕ ಟೀಚರ್ ಆಗಬೇಕು.

ವರದಾನ:
ಅವಿನಾಶಿ ಉಮಂಗ-ಉತ್ಸಾಹದಿಂದ ಬಿರುಗಾಳಿಯನ್ನು ಬಳುವಳಿಯಾಗಿ ಮಾಡುವಂತಹ ಶ್ರೇಷ್ಠ ಬ್ರಾಹ್ಮಣ ಆತ್ಮ ಭವ.

ಉಮಂಗ-ಉತ್ಸಾಹವೇ ಬ್ರಾಹ್ಮಣರ ಹಾರುವ ಕಲೆಯ ರೆಕ್ಕೆಯಾಗಿದೆ. ಇದೇ ರೆಕ್ಕೆಗಳಿಂದ ಸದಾ ಹಾರುತ್ತಿರಿ. ಈ ಉಮಂಗ-ಉತ್ಸಾಹ ನೀವು ಬ್ರಾಹ್ಮಣರಿಗೆ ದೊಡ್ಡದರಲ್ಲಿ ದೊಡ್ಡ ಶಕ್ತಿಯಾಗಿದೆ. ನೀರಸ ಜೀವನವಲ್ಲ. ಉಮಂಗ-ಉತ್ಸಾಹದ ರಸ ಸದಾ ಇರುತ್ತದೆ. ಉಮಂಗ ಉತ್ಸಾಹ ಕಷ್ಟವನ್ನೂ ಸಹಾ ಸಹಜವನ್ನಾಗಿ ಮಾಡಿ ಬಿಡುವುದು. ಅವರು ಎಂದೂ ಹೃದಯ ವಿಧೀರ್ಣರಾಗಲು ಸಾಧ್ಯವಿಲ್ಲ. ಉತ್ಸಾಹ ಬಿರುಗಾಳಿಯನ್ನೂ ಸಹಾ ಬಳುವಳಿಯನ್ನಾಗಿ ಮಾಡಿ ಬಿಡುವುದು, ಉತ್ಸಾಹ ಯಾವುದೇ ಪರೀಕ್ಷೆ ಅಥವಾ ಸಮಸ್ಯೆಯನ್ನು ಮನೋರಂಜನೆಯ ಅನುಭವ ಮಾಡಿಸುವುದು. ಈ ರೀತಿಯ ಅವಿನಾಶಿ ಉಮಂಗ-ಉತ್ಸಾಹದಲ್ಲಿರುವಂತಹವರೇ ಶ್ರೇಷ್ಠ ಬ್ರಾಹ್ಮಣರಾಗಿದ್ದಾರೆ.

ಸ್ಲೋಗನ್:
ಶಾಂತಿಯ ಸುಗಂಧ ಭರಿತ ಧೂಪವನ್ನು ಬೆಳಗಿಸಿಕೊಂಡಿದ್ದಲ್ಲಿ ಅಶಾಂತಿಯ ದುರ್ಗಂಧ ಸಮಾಪ್ತಿಯಾಗಿ ಬಿಡುವುದು.