16.01.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಆತ್ಮಾಭಿಮಾನಿಯಾಗುವ ಅಭ್ಯಾಸ ಮಾಡಿ, ಆಗ ವಿಕಾರಿ ವಿಚಾರಗಳು ಸಮಾಪ್ತಿಯಾಗುವವು, ತಂದೆಯ ನೆನಪಿರುವುದು, ಆತ್ಮವು ಸತೋಪ್ರಧಾನವಾಗಿ ಬಿಡುವುದು.”

ಪ್ರಶ್ನೆ:
ಮನುಷ್ಯರಿಗೆ ಪ್ರಪಂಚದಲ್ಲಿ ಯಾವ ಮಾರ್ಗವು ಸಂಪೂರ್ಣವಾಗಿ ತಿಳಿದಿಲ್ಲ?

ಉತ್ತರ:
ಮನುಷ್ಯರಿಗೆ ತಂದೆಯನ್ನು ಮಿಲನ ಮಾಡುವ ಹಾಗೂ ಜೀವನ್ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಮಾರ್ಗದ ಬಗ್ಗೆ ಯಾರಿಗೂ ತಿಳಿದಿಲ್ಲ. ಕೇವಲ ಶಾಂತಿ-ಶಾಂತಿ ಎಂದು ಹೇಳುತ್ತಿರುತ್ತಾರೆ. ಸಮ್ಮೇಳನಗಳನ್ನು ಮಾಡುತ್ತಿರುತ್ತಾರೆ. ಆದರೆ ವಿಶ್ವದಲ್ಲಿ ಶಾಂತಿ ಯಾವಾಗ ಇತ್ತು ಮತ್ತು ಹೇಗೆ ಸ್ಥಾಪನೆಯಾಗಿತ್ತೆಂದು ಗೊತ್ತಿಲ್ಲ. ನೀವು ಇದನ್ನು ಕೇಳಬಹುದು - ತಾವು ವಿಶ್ವದಲ್ಲಿ ಶಾಂತಿಯನ್ನು ನೋಡಿದ್ದೀರಾ? ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ? ವಿಶ್ವದಲ್ಲಿ ಶಾಂತಿಯಂತೂ ತಂದೆಯ ಮೂಲಕವೇ ಸ್ಥಾಪನೆಯಾಗುತ್ತಿದೆ. ತಾವು ಬಂದು ತಿಳಿದುಕೊಳ್ಳಿ.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸಿಕೊಡುತ್ತಿದ್ದಾರೆ. ಮೊಟ್ಟ ಮೊದಲು ನಾವೆಲ್ಲರೂ ಆತ್ಮರಾಗಿದ್ದೇವೆ, ನಾವಾತ್ಮರು ಸಹೋದರ ಆತ್ಮರನ್ನು ನೋಡುತ್ತೇವೆ ಎಂಬ ದೃಷ್ಟಿಯನ್ನು ಪಕ್ಕಾ ಮಾಡಿಕೊಳ್ಳಿ. ಹೇಗೆ ನಾನು ಮಕ್ಕಳನ್ನು ನೋಡುತ್ತೇನೆ ಎಂದು ತಂದೆಯು ಹೇಳುತ್ತಾರೆ. ಆತ್ಮವೇ ಶರೀರದ ಕರ್ಮೇಂದ್ರಿಯಗಳ ಮೂಲಕ ಕೇಳುತ್ತದೆ, ಮಾತನಾಡುತ್ತದೆ. ಆತ್ಮದ ಸಿಂಹಾಸನವು ಭೃಕುಟಿಯಾಗಿದೆ. ಆದ್ದರಿಂದ ತಂದೆಯು ಆತ್ಮರನ್ನು ನೋಡುತ್ತಾರೆ. ಈ ಸಹೋದರ ಆತ್ಮನೂ ಸಹ ತನ್ನ ಸಹೋದರನನ್ನೇ ನೋಡುತ್ತಾರೆ, ಹಾಗೆಯೇ ತಾವೂ ಸಹ ಸಹೋದರರ ರೂಪದಲ್ಲಿ ನೋಡಬೇಕು. ಮೊದಲು ಈ ದೃಷ್ಟಿಯು ಪರಿಪಕ್ವವಾಗಬೇಕು. ನಂತರ ಕೆಟ್ಟ ವಿಚಾರಗಳು ಸಮಾಪ್ತಿಯಾಗಿ ಬಿಡುತ್ತವೆ. ಇದೇ ಅಭ್ಯಾಸವಾಗಿ ಬಿಡುವುದು. ಆತ್ಮವೇ ಕೇಳುತ್ತದೆ, ಆತ್ಮವೇ ನಟಿಸುತ್ತದೆ. ಈ ದೃಷ್ಟಿಯು ಪಕ್ಕಾ ಆದಾಗ ಮತ್ತೆಲ್ಲಾ ವಿಚಾರಗಳು ಸಮಾಪ್ತಿಯಾಗುತ್ತವೆ. ಇದು ನಂಬರ್ವನ್ ಸಬ್ಜೆಕ್ಟ್ ಆಗಿದೆ. ಇದರಲ್ಲಿ ದೈವೀ ಗುಣಗಳೂ ಸಹ ತಾನಾಗಿಯೇ ಧಾರಣೆಯಾಗುತ್ತಿರುತ್ತವೆ. ದೇಹದ ಅಭಿಮಾನದಲ್ಲಿ ಬರುವುದರಿಂದ ಕರ್ಮೇಂದ್ರಿಯಗಳು ಚಂಚಲವಾಗುತ್ತವೆ. ದೇಹೀ-ಅಭಿಮಾನಿಯಾಗುವ ಬಹಳ ಅಭ್ಯಾಸ ಮಾಡಿದಾಗ ನಿಮ್ಮಲ್ಲಿ ಶಕ್ತಿಯು ಬರುತ್ತದೆ. ಸರ್ವಶಕ್ತಿವಂತ ತಂದೆಯ ಶಕ್ತಿಯಿಂದಲೇ ಆತ್ಮವು ಸತೋಪ್ರಧಾನವಾಗುತ್ತದೆ. ತಂದೆಯಂತೂ ಸತೋಪ್ರಧಾನರಾಗಿಯೇ ಇದ್ದಾರೆ. ಅಂದಾಗ ಮೊಟ್ಟ ಮೊದಲು ಈ ದೃಷ್ಟಿಯು ಪರಿಪಕ್ವವಾಗಲಿ ಆಗ ನಾವು ಆತ್ಮಾಭಿಮಾನಿಗಳಾಗಿದ್ದೇವೆಂದು ತಿಳಿದುಕೊಳ್ಳಬಹುದು. ಆತ್ಮಾಭಿಮಾನಿ-ದೇಹಾಭಿಮಾನಿಗಳಲ್ಲಿ ರಾತ್ರಿ-ಹಗಲಿನ ಅಂತರವಿದೆ. ನಾವಾತ್ಮಗಳು ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಆತ್ಮಾಭಿಮಾನಿಯಾಗುವುದರಿಂದಲೇ ನಾವು ಪವಿತ್ರ ಸತೋಪ್ರಧಾನರಾಗುತ್ತೇವೆ. ಈ ಅಭ್ಯಾಸ ಮಾಡುವುದರಿಂದ ವಿಕಾರಿ ವಿಚಾರಗಳು ಸಮಾಪ್ತಿಯಾಗುತ್ತವೆ. ಧರಣಿಯ ನಕ್ಷತ್ರಗಳೆಂದು ಮನುಷ್ಯರು ಹೇಳುತ್ತಾರೆ. ಅವಶ್ಯವಾಗಿ ನಾವಾತ್ಮರು ನಕ್ಷತ್ರಗಳಾಗಿದ್ದೇವೆ, ಕರ್ಮ ಮಾಡುವುದಕ್ಕಾಗಿ ಈ ಶರೀರವು ಸಿಕ್ಕಿದೆ, ಈಗ ನಾವು ತಮೋಪ್ರಧಾನರಾಗಿದ್ದೇವೆ ಮತ್ತೆ ನಾವೇ ಸತೋಪ್ರಧಾನರಾಗಬೇಕಾಗಿದೆ. ತಂದೆಯೂ ಸಹ ಪುರುಷೋತ್ತಮ ಸಂಗಮಯುಗದಲ್ಲಿಯೇ ಬರಬೇಕಾಗಿದೆ ಆದರೆ ಕ್ರಿಸ್ತನ ಶರೀರದಲ್ಲಿ ಬರುತ್ತಾರೆಂದೂ ಸಹ ಹೇಳುವುದಿಲ್ಲ. ಏಕೆಂದರೆ ಸೃಷ್ಟಿಯು ರಜೋಪ್ರಧಾನದಲ್ಲಿ ಕ್ರೈಸ್ತ ಬರುತ್ತಾನೆ. ಯಾವುದೇ ಬುದ್ಧ ಅಥವಾ ಕ್ರಿಸ್ತನ ಶರೀರದಲ್ಲಿ ಭಗವಂತನು ಬರಲು ಸಾಧ್ಯವಿಲ್ಲ. ಬರುವುದು ಒಂದೇ ಬಾರಿ ಮತ್ತು ಹಳೆಯ ಪ್ರಪಂಚದಲ್ಲಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವುದಕ್ಕಾಗಿಯೇ ಬರುತ್ತಾರೆ. ತಮೋಪ್ರಧಾನ ಪ್ರಪಂಚವನ್ನು ಪರಿವರ್ತನೆ ಮಾಡಿ ಸತೋಪ್ರಧಾನವನ್ನಾಗಿ ಮಾಡಲು ಅವಶ್ಯವಾಗಿ ಸಂಗಮಯುಗದಲ್ಲಿ ಬರುತ್ತಾರೆ. ಮತ್ತ್ಯಾವ ಸಮಯದಲ್ಲಿಯೂ ಬರಲು ಸಾಧ್ಯವಿಲ್ಲ. ಅವರು ಬಂದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಬೇಕಾಗಿದೆ. ಅವರಿಗೆ ಸ್ವರ್ಗದ ರಚಯಿತನೆಂದು ಹೇಳಲಾಗುತ್ತದೆ. ಡ್ರಾಮಾನುಸಾರ ಸಂಗಮಯುಗದ ಹೆಸರೂ ಇದೆ, ಕೃಷ್ಣನಿಗೆ ತಂದೆ ಅಥವಾ ಪತಿತ-ಪಾವನನೆಂದು ಹೇಳುವುದಿಲ್ಲ. ಕೃಷ್ಣನ ಮಹಿಮೆಯೇ ಭಿನ್ನವಾಗಿದೆ. ತಂದೆಯು ಯಾವಾಗಲೂ ತಿಳಿಸುತ್ತಿರುತ್ತಾರೆ - ಮೊಟ್ಟ ಮೊದಲು ಯಾರಿಗೇ ತಿಳಿಸುವಾಗ ಗುರಿ -ಉದ್ದೇಶವನ್ನು ತಿಳಿಸಿ - ಭಾರತದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಆಗ ಒಂದು ಧರ್ಮ, ಒಂದು ರಾಜ್ಯವಿತ್ತು. ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಒಂದೇ ಅದ್ವೈತ ಧರ್ಮವಾಗಿತ್ತು. ಸ್ವರ್ಗವನ್ನು ಸ್ಥಾಪನೆ ಮಾಡುವುದು ಒಬ್ಬ ತಂದೆಯ ಕರ್ತವ್ಯವೇ ಆಗಿದೆ. ಅವರು ಹೇಗೆ ಸ್ಥಾಪಿಸುತ್ತಾರೆಂಬುದೂ ಸಹ ಸ್ಪಷ್ಟವಾಗಿದೆ. ಸಂಗಮದಲ್ಲಿಯೇ ತಂದೆ ಬಂದು ತಿಳಿಸುತ್ತಾರೆ - ಮಕ್ಕಳೇ, ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತಮ್ಮನ್ನು ತಾವು ಆತ್ಮನೆಂದು ತಿಳಿಯಿರಿ. ಲಕ್ಷ್ಮೀ-ನಾರಾಯಣರ ಚಿತ್ರದ ಬಗ್ಗೆ ಸಂಪೂರ್ಣವಾಗಿ ತಿಳಿಸಬೇಕು. ಶಿವ ತಂದೆಯ ಚಿತ್ರವೂ ಇದೆ, ಶಿವ ತಂದೆಯ ಮಹಿಮೆಯ ಚಿತ್ರವು ಬಹಳ ಸುಂದರವಾಗಿ ಮಾಡಲ್ಪಟ್ಟಿದೆ. ಇದು ನರನಿಂದ ನಾರಾಯಣನಾಗುವ ಸತ್ಯ ಕಥೆಯಾಗಿದೆ. ಇದಕ್ಕೆ ರಾಧಾ-ಕೃಷ್ಣನ ಕಥೆಯೆಂದು ಹೇಳುವುದಿಲ್ಲ. ಸತ್ಯ ನಾರಾಯಣನ ಕಥೆಯೆಂದೇ ಹೇಳುತ್ತಾರೆ. ತಂದೆಯು ನಿಮ್ಮನ್ನು ನರನಿಂದ ನಾರಾಯಣರನ್ನಾಗಿ ಮಾಡುತ್ತಾರೆ. ಮೊದಲು ಚಿಕ್ಕ ಮಗುವಾಗಿದ್ದಾಗ ಅದಕ್ಕೆ ನರನೆಂದು ಹೇಳಲಾಗುವುದಿಲ್ಲ. ನರ-ನಾರಾಯಣ, ನಾರಿ ಲಕ್ಷ್ಮಿಯೆಂದು ಹೇಳಲಾಗುತ್ತದೆ ಅಂದಾಗ ತಾವು ಮಕ್ಕಳು ಈ ಚಿತ್ರದ ಬಗ್ಗೆ ಚೆನ್ನಾಗಿ ತಿಳಿಸಬೇಕು. ಸನ್ಯಾಸಿಗಳಂತೂ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡಲು ಸಾಧ್ಯವಿಲ್ಲ, ಶಂಕರಾಚಾರ್ಯರು ಬರುವುದೇ ರಜೋಪ್ರಧಾನದ ಸಮಯದಲ್ಲಿ. ಅವರು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ತಂದೆಯು ಸಂಗಮಯುಗದಲ್ಲಿ ಬರುತ್ತಾರೆ ಮತ್ತು ಅನೇಕ ಜನ್ಮಗಳ ಅಂತಿಮ ಜನ್ಮದ ಅಂತಿಮ ಸಮಯದಲ್ಲಿ ನಾನು ಪ್ರವೇಶ ಮಾಡುತ್ತೇನೆಂದು ಹೇಳುತ್ತಾರೆ. ಮೇಲೆ ತ್ರಿಮೂರ್ತಿಗಳೂ ಇದ್ದಾರೆ, ಅದರಲ್ಲಿ ಬ್ರಹ್ಮಾ ಯೋಗದಲ್ಲಿ ಕುಳಿತಿದ್ದಾರೆ, ಶಂಕರನ ಮಾತೇ ಬೇರೆಯಾಗಿದೆ. ಎತ್ತಿನ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ. ತಂದೆಯಂತೂ ಇಲ್ಲಿಯೇ ಬಂದು ತಿಳಿಸಬೇಕಾಗುತ್ತದೆ, ವಿನಾಶವೂ ಸಹ ಇಲ್ಲಿಯೇ ಆಗುತ್ತದೆ. ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಲೆಂದು ಮನುಷ್ಯರು ಹೇಳುತ್ತಾರೆ. ಅದಂತೂ ಈಗ ಸ್ಥಾಪನೆಯಾಗುವುದಿದೆ, ಆದ್ದರಿಂದಲೇ ಬುದ್ಧಿಯಲ್ಲಿ ಬರುತ್ತದೆ. ಚಿತ್ರಗಳ ಬಗ್ಗೆ ನೀವು ಬಹಳ ಚೆನ್ನಾಗಿ ತಿಳಿಸಬಹುದು. ಯಾರು ಶಿವನ ಹಾಗೂ ದೇವತೆಗಳ ಭಕ್ತಿ ಮಾಡುತ್ತಾರೆಯೋ ಅವರಿಗೆ ತಿಳಿಸಬೇಕಾಗುತ್ತದೆ. ಅವರು ಇದನ್ನು ಬೇಗನೆ ಒಪ್ಪುತ್ತಾರೆ. ಬಾಕಿ ವಿಜ್ಞಾನ ಹಾಗೂ ಪ್ರಕೃತಿ ಇತ್ಯಾದಿಗಳನ್ನು ಒಪ್ಪುವವರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ, ಅನ್ಯ ಧರ್ಮದವರ ಬುದ್ಧಿಯಲ್ಲಿಯೂ ಬರುವುದಿಲ್ಲ. ಯಾರು ಅನ್ಯ ಧರ್ಮಗಳಲ್ಲಿ ಮತಾಂತರ ಆದವರು ಮತ್ತೆ ಬರುತ್ತಾರೆ. ಅವರ ಚಿಂತೆಯನ್ನೇಕೆ ಮಾಡಬೇಕು. ದೇವತಾ ಧರ್ಮದವರು ಹಾಗೂ ಬಹಳ ಭಕ್ತಿ ಮಾಡುವವರು ತಮ್ಮ ಧರ್ಮದಲ್ಲಿಯೇ ಬಹಳ ಪಕ್ಕಾ ಆಗಿರುತ್ತಾರೆ. ಆದ್ದರಿಂದ ದೇವತೆಗಳ ಪೂಜಾರಿಗಳಿಗೆ ಹೋಗಿ ತಿಳಿಸಿ - ಹಿರಿಯ ವ್ಯಕ್ತಿಗಳು ಎಂದೂ ಬರುವುದಿಲ್ಲ. ಬಿರ್ಲಾದವರು ಇಷ್ಟೊಂದು ಮಂದಿರಗಳನ್ನು ಕಟ್ಟಿಸುತ್ತಾರೆ. ಆದರೆ ಅವರ ಬಳಿ ಜ್ಞಾನವನ್ನು ಕೇಳುವ ಸಮಯವೆಲ್ಲಿದೆ? ಇಡೀ ದಿನ ಬುದ್ದಿಯು ವ್ಯವಹಾರದಲ್ಲಿಯೇ ತೊಡಗಿರುತ್ತದೆ, ಅವರಿಗೆ ಬಹಳ ಹಣ ಬರುತ್ತದೆಯೆಂದರೆ ಅದರಿಂದ ಮಂದಿರವನ್ನು ಕಟ್ಟಿಸುತ್ತಾರೆ. ಇನ್ನೂ ಹೆಚ್ಚಿನ ಹಣವು ಸಿಗುತ್ತದೆ, ಇದು ದೇವತೆಗಳ ಕೃಪೆಯಾಗಿದೆ ಎಂದು ತಿಳಿಯುತ್ತಾರೆ. ನಿಮ್ಮ ಬಳಿ ಯಾರೇ ಬರಲಿ ಅವರಿಗೆ ಲಕ್ಷ್ಮೀ-ನಾರಾಯಣ ಚಿತ್ರವನ್ನು ತೋರಿಸಿ, ತಿಳಿಸಿ - ತಾವು ವಿಶ್ವದಲ್ಲಿ ಶಾಂತಿಯನ್ನು ಬಯಸುತ್ತೀರಿ, ಆ ಶಾಂತಿಯ ರಾಜ್ಯವು ಇದೇ ಪ್ರಪಂಚದಲ್ಲಿತ್ತು. ಇಂತಹ ದಿನಾಂಕದಿಂದ ಇಂತಹ ದಿನಾಂಕದವರೆಗೆ ಸೂರ್ಯವಂಶಿ ರಾಜಧಾನಿಯನ್ನು ನೋಡಿ ಬಹಳ ಶಾಂತಿಯಿತ್ತು. ನಂತರ 2 ಕಲೆಗಳು ಕಡಿಮೆಯಾಗಿ ಬಿಡುತ್ತದೆ. ಈ ಚಿತ್ರದ ಮೇಲೆಯೇ ಎಲ್ಲವೂ ಆಧಾರಿತವಾಗಿದೆ. ಈಗ ನೀವು ವಿಶ್ವದಲ್ಲಿ ಶಾಂತಿಯನ್ನು ಬಯಸುತ್ತೀರಿ ಅಂದಾಗ ಎಲ್ಲಿಗೆ ಹೋಗುತ್ತೀರಿ. ಮನೆಯ ಮಾರ್ಗವಂತೂ ಯಾರಿಗೂ ಗೊತ್ತಿಲ್ಲ. ನಾವಾತ್ಮರು ಶಾಂತ ಸ್ವರೂಪರಾಗಿದ್ದೇವೆ, ಮೂಲವತನದಲ್ಲಿರುತ್ತೇವೆ, ಅದೇ ಶಾಂತಿಧಾಮವಾಗಿದೆ. ಅದು ಈ ಪ್ರಪಂಚದಲ್ಲಿಲ್ಲ. ಅದಕ್ಕೆ ನಿರಾಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಬಾಕಿ ವಿಶ್ವವೆಂದು ಇದಕ್ಕೆ ಹೇಳಲಾಗುತ್ತದೆ. ವಿಶ್ವದಲ್ಲಿ ಯಾವಾಗ ಹೊಸ ಪ್ರಪಂಚ ಇರುವುದೋ ಆಗಲೇ ಶಾಂತಿಯಿರುತ್ತದೆ. ವಿಶ್ವದ ಮಾಲೀಕರು ಇಲ್ಲಿ ಕುಳಿತಿದ್ದಾರೆ. ಬಡವರು ಈ ಮಾತುಗಳನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಈ ಮಾತು ಬಹಳ ಚೆನ್ನಾಗಿದೆ. ನಾವು ಮಾರ್ಗವನ್ನು ಹುಡುಕುತ್ತಿದ್ದೇವೆಂದು ಕೆಲವರು ಹೇಳುತ್ತಾರೆ. ಮಾರ್ಗದ ಬಗ್ಗೆಯೇ ಗೊತ್ತಿಲ್ಲವೆಂದರೆ ಹುಡುಕುವುದಾದರೂ ಏನು? ತಂದೆ ಮತ್ತು ಜೀವನ್ಮುಕ್ತಿಯ ಮಾರ್ಗವನ್ನು ತಿಳಿದಿರುವವರು ಯಾರೂ ಇಲ್ಲ. ಶಾಂತಿ-ಶಾಂತಿ ಎಂದು ಹೇಳುತ್ತಿರುತ್ತಾರೆ ಬಾಕಿ ಶಾಂತಿಯು ಯಾವಾಗ ಇತ್ತು, ಹೇಗೆ ಸ್ಥಾಪನೆಯಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಎಷ್ಟೊಂದು ಸಮ್ಮೇಳನ ಮೊದಲಾದವುಗಳನ್ನು ಮಾಡುತ್ತಿರುತ್ತಾರೆ ಅಂದಾಗ ಅವರನ್ನು ಕೇಳಬೇಕು - ತಾವು ಎಂದಾದರೂ ವಿಶ್ವದಲ್ಲಿ ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ ಎಂದು ನೋಡಿದ್ದೀರಾ? ನೀವು ಪ್ರಜೆಗಳು ಪರಸ್ಪರ ಏಕೆ ತಬ್ಬಿಬ್ಬಾಗುವಿರಿ! ಸಮ್ಮೇಳನಗಳನ್ನು ಮಾಡುತ್ತಿರುತ್ತೀರಿ, ಎಲ್ಲಿಂದಲೂ ಉತ್ತರವು ಸಿಗುತ್ತಿಲ್ಲ. ವಿಶ್ವದಲ್ಲಿ ಶಾಂತಿಯಂತೂ ಈಗ ತಂದೆಯ ಮೂಲಕ ಸ್ಥಾಪನೆಯಾಗುತ್ತಾ ಇದೆ. ನೀವು ಹೇಳುತ್ತೀರಿ - ಕ್ರೈಸ್ತ ಬರುವುದಕ್ಕೆ 3000 ವರ್ಷಗಳ ಹಿಂದೆ ಸ್ವರ್ಗವಿತ್ತು ಆಗ ಅಲ್ಲಿಯೇ ಶಾಂತಿಯಿತ್ತು. ಒಂದು ವೇಳೆ ಅಲ್ಲಿಯೂ ಅಶಾಂತಿಯಿದ್ದಿದ್ದರೆ ಶಾಂತಿಯು ಇನ್ನೆಲ್ಲಿಂದ ಸಿಗುತ್ತದೆ. ಇದನ್ನು ಬಹಳ ಚೆನ್ನಾಗಿ ತಿಳಿಸಬೇಕು. ಈ ಸಮಯದಲ್ಲಂತೂ ನಿಮಗೆ ಇಷ್ಟೊಂದು ಮಾತನಾಡಲು ಸಮಯವನ್ನು ಕೊಡುವುದಿಲ್ಲ. ಏಕೆಂದರೆ ಈಗ ಅವರಿಗೆ ಕೇಳುವ ಸಮಯವು ಬಂದಿಲ್ಲ. ಕೇಳುವುದಕ್ಕೂ ಸಹ ಸೌಭಾಗ್ಯ ಬೇಕಲ್ಲವೆ! ನೀವು ಪದಮಾಪದಮ ಭಾಗ್ಯಶಾಲಿ ಮಕ್ಕಳು ತಂದೆಯಿಂದ ಕೇಳುವ ಅಧಿಕಾರಿಗಳಾಗಿದ್ದೀರಿ, ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯು ತಾವು ಮಕ್ಕಳಿಗೇ ತಿಳಿಸುತ್ತಾರೆ. ಇದು ರಾವಣ ರಾಜ್ಯವಾಗಿದೆ ಅಂದಾಗ ಇಲ್ಲಿ ಶಾಂತಿಯಿರಲು ಹೇಗೆ ಸಾಧ್ಯ. ರಾವಣ ರಾಜ್ಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ, ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಪಾವನ ಪ್ರಪಂಚವಂತೂ ಈ ಲಕ್ಷ್ಮೀ-ನಾರಾಯಣರದ್ದಾಗಿತ್ತು. ರಾಮ ರಾಜ್ಯ ಮತ್ತು ರಾವಣ ರಾಜ್ಯದಲ್ಲಿ ಎಷ್ಟೊಂದು ಅಂತರವಿದೆ. ಸೂರ್ಯವಂಶಿ, ಚಂದ್ರವಂಶಿ ನಂತರ ರಾವಣವಂಶಿಯಾಗುತ್ತಾರೆ. ಈ ಸಮಯವು ಕಲಿಯುಗ ರಾವಣನ ಸಂಪ್ರದಾಯವಾಗಿದೆ. ದೊಡ್ಡ-ದೊಡ್ಡವರು ಸಹ ಒಬ್ಬರು ಇನ್ನೊಬ್ಬರ ಮೇಲೆ ಬಹಳ ಕ್ರೋಧ ಮಾಡುತ್ತಲೇ ಇರುತ್ತಾರೆ. ನಾನು ಇಂತಹವನಾಗಿದ್ದೇನೆ ಎನ್ನುವ ಬಹಳ ಅಹಂಕಾರವಿರುತ್ತದೆ ಅಂದಾಗ ಈ ಲಕ್ಷ್ಮೀ-ನಾರಾಯಣರ ಚಿತ್ರದ ಬಗ್ಗೆ ತಿಳಿಸುವುದು ಬಹಳ ಸಹಜವಾಗಿದೆ. ಹೇಳಿ, ಇವರ ರಾಜ್ಯದಲ್ಲಿಯೇ ವಿಶ್ವದಲ್ಲಿ ಶಾಂತಿಯಿತ್ತು ಮತ್ತ್ಯಾವುದೇ ಧರ್ಮವಿರಲಿಲ್ಲ. ವಿಶ್ವದಲ್ಲಿ ಶಾಂತಿಯಂತೂ ಇಲ್ಲಿಯೇ ಇರುತ್ತದೆ ಅಂದಾಗ ಇದು ಮುಖ್ಯವಾದ ಚಿತ್ರವಾಗಿದೆ. ಅನೇಕ ಚಿತ್ರಗಳ ಬಗ್ಗೆ ತಿಳಿಸುವುದರಿಂದ ಮನುಷ್ಯರ ವಿಚಾರಗಳು ಬೇರೆ ಕಡೆ ಹೊರಟು ಹೋಗುತ್ತದೆ. ಏನು ತಿಳಿದುಕೊಂಡರೋ ಅದೂ ಸಹ ಮರೆತು ಹೋಗುತ್ತದೆ. ಆದ್ದರಿಂದಲೇ ಟೂ ಮೆನಿ ಕುಕ್ಸ್..... ಎಂದು ಹೇಳಲಾಗುತ್ತದೆ. ಬಹಳ ಚಿತ್ರಗಳು ಇರುತ್ತವೆ ಮತ್ತು ಅನೇಕ ಉಪ ಕಥೆಗಳ ಮಾದರಿಗಳಿರುತ್ತವೆಯೆಂದರೆ ಅಲ್ಲಿ ಮೂಲ ಮಾತು ಬುದ್ಧಿಯಿಂದ ಹೊರಟು ಹೋಗುತ್ತದೆ. ಕೆಲವರೇ ವಿರಳವಾಗಿ ತಂದೆಯು ಇದನ್ನು ಸ್ಥಾಪಿಸುತ್ತಿದ್ದಾರೆಂದು ಅರಿತುಕೊಳ್ಳುತ್ತಾರೆ. 84 ಜನ್ಮಗಳು ಇವರಿಗೋಸ್ಕರವೇ ಆಗಿದೆ. ಉದಾಹರಣೆಗೆ ಒಬ್ಬರದನ್ನೇ ತೋರಿಸುತ್ತಾರೆ. ಎಲ್ಲರನ್ನೂ ಹೇಗೆ ತೋರಿಸಲು ಸಾಧ್ಯ. ಹೇಗೆ ಶಾಸ್ತ್ರಗಳಲ್ಲಿಯೂ ಸಹ ಒಬ್ಬ ಅರ್ಜುನನ ಹೆಸರನ್ನು ಇಟ್ಟಿದ್ದಾರಲ್ಲವೆ. ಶಾಲೆಯಲ್ಲಿ ಶಿಕ್ಷಕರು ಒಬ್ಬರಿಗೇ ಓದಿಸುತ್ತಾರೇನು? ಹಾಗೆಯೇ ಇದೂ ಸಹ ಶಾಲೆಯಾಗಿದೆ. ಗೀತೆಯಲ್ಲಿ ಶಾಲೆಯ ರೂಪವೇನೂ ಕೊಟ್ಟಿಲ್ಲ. ಕೃಷ್ಣ ಚಿಕ್ಕ ಮಗುವಾಗಿದ್ದಾನೆ ಅಂದಾಗ ಗೀತೆಯನ್ನು ಹೇಗೆ ತಿಳಿಸಲು ಸಾಧ್ಯ. ಇದು ಭಕ್ತಿ ಮಾರ್ಗವಾಗಿದೆ. ಈ ನಿಮ್ಮ ಬ್ಯಾಡ್ಜ್ ಸಹ ಬಹಳ ಸೇವೆ ಮಾಡುತ್ತದೆ. ಇದು ಎಲ್ಲದಕ್ಕಿಂತ ಒಳ್ಳೆಯದಾಗಿದೆ. ಮೊದಲು ಶಿವ ತಂದೆಯ ಚಿತ್ರದ ಮುಂದೆ ಕರೆ ತರಬೇಕು. ನಂತರ ಲಕ್ಷ್ಮೀ-ನಾರಾಯಣರ ಚಿತ್ರದ ಮುಂದೆ ನಿಲ್ಲಿಸಬೇಕು. ನೀವು ಶಾಂತಿಯನ್ನು ಬಯಸುತ್ತೀರಿ ಅಂದಮೇಲೆ ಅದು ಕಲ್ಪ-ಕಲ್ಪದಲ್ಲಿಯೂ ತಂದೆಯ ಮೂಲಕವೇ ಸ್ಥಾಪನೆಯಾಗುತ್ತದೆ. ನೀವು ಈ ಚಕ್ರವನ್ನು ತಿಳಿದುಕೊಂಡಿದ್ದೀರಿ. ಮೊದಲು ನೀವೂ ಸಹ ತುಚ್ಛ ಬುದ್ಧಿಯವರಾಗಿದ್ದಿರಿ, ಈಗ ತಂದೆಯು ಸ್ವಚ್ಛ ಬುದ್ಧಿಯವರನ್ನಾಗಿ ಮಾಡುತ್ತಾರೆ. ಇದನ್ನು ಬರೆಯಬೇಕು - ಪರಮಪಿತ ಪರಮಾತ್ಮನ ವಿನಃ ಮತ್ತ್ಯಾರೂ ಯಾರದೇ ಸದ್ಗತಿಯನ್ನು ಮಾಡಲು ಸಾಧ್ಯವಿಲ್ಲ. ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ತಂದೆಯೇ ಇವೆಲ್ಲವನ್ನೂ ಮಾಡುತ್ತಿದ್ದಾರೆ. ಎಲ್ಲರೂ ಅವರನ್ನೇ ನೆನಪು ಮಾಡುತ್ತಾರೆ. ಮುಖ್ಯ ಚಿತ್ರಗಳು ಇವೆರಡಾಗಿವೆ. ಎಲ್ಲಿಯವರೆಗೆ ಈ ಚಿತ್ರಗಳ ಬಗ್ಗೆ ಪೂರ್ಣ ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ಚಿತ್ರಗಳನ್ನು ಬಿಟ್ಟು ಅಲುಗಾಡಬಾರದು. ಇದನ್ನು ಅರಿತುಕೊಳ್ಳದಿದ್ದರೆ ಮತ್ತೇನೂ ಅರಿತುಕೊಂಡಿಲ್ಲವೆಂದರ್ಥ. ಸಮಯವೂ ವ್ಯರ್ಥವಾಗಿ ಬಿಡುತ್ತದೆ. ಬುದ್ಧಿಯಲ್ಲಿ ಕುಳಿತುಕೊಳ್ಳಲಿಲ್ಲವೆಂದರೆ ಅವರನ್ನು ಪಳಗಿಸಬೇಕು. ಇದರಲ್ಲಿ ತಿಳಿಸಿಕೊಡುವವರು ಬಹಳ ಒಳ್ಳೆಯವರು ಬೇಕು. ಒಂದು ವೇಳೆ ಮಾತೆಯರಿದ್ದರೂ ಒಳ್ಳೆಯದೇ ಆಗಿದೆ. ಇದರಲ್ಲಿ ಯಾರೂ ಬೇಜಾರಾಗುವುದಿಲ್ಲ. ಇದಂತೂ ಎಲ್ಲರಿಗೂ ಗೊತ್ತಿದೆ. ಆದರೆ ಯಾರ್ಯಾರು ತಿಳಿಸುವುದರಲ್ಲಿ ತೀಕ್ಷ್ಣವಾಗಿದ್ದಾರೆ. ಮೋಹಿನಿ, ಮನೋಹರ್, ಗೀತಾ ಇವರು ಬಹಳ ಒಳ್ಳೊಳ್ಳೆಯ ಮಕ್ಕಳಾಗಿದ್ದಾರೆ. ಅಂದಾಗ ಮೊದಲು ಲಕ್ಷ್ಮೀ-ನಾರಾಯಣರ ಚಿತ್ರದ ಬಗ್ಗೆ ಪಕ್ಕಾ ಮಾಡಿಸಬೇಕು. ತಿಳಿಸಿ - ಈ ಮಾತುಗಳನ್ನು ಚೆನ್ನಾಗಿ ತಿಳಿದುಕೊಳ್ಳಿ. ಆಗ ತಾವು ಶಾಂತಿಯ ಪ್ರಪಂಚದಲ್ಲಿ ಹೋಗಬಲ್ಲಿರಿ, ಮುಕ್ತಿ-ಜೀವನ್ಮುಕ್ತಿ ಎರಡೂ ಸಿಕ್ಕಿ ಬಿಡುವುದು. ಮುಕ್ತಿಯಲ್ಲಂತೂ ಎಲ್ಲರೂ ಹೋಗುತ್ತಾರೆ ನಂತರ ನಂಬರ್ವಾರ್ ಆಗಿ ಪಾತ್ರವನ್ನಭಿನಯಿಸಲು ಬರುತ್ತಾರೆ. ಇದನ್ನು ತಿಳಿಸುವುದೂ ಸಹ ಬಹಳ ಆಡಂಬರವಾಗಿ ತಿಳಿಸಬೇಕು ಅರ್ಥಾತ್ ಸುಂದರವಾಗಿ ತಿಳಿಸಬೇಕು. ಇದು ನಂಬರ್ವನ್ ಚಿತ್ರವಾಗಿದೆ. ವಿಶ್ವದಲ್ಲಿ ಇವರೇ ಶಾಂತಿಗೆ ಮಾಲೀಕರಾಗಿದ್ದರು. ಈ ಮಾತುಗಳು ಬುದ್ಧಿವಂತರ ಬುದ್ಧಿಯಲ್ಲಿಯೇ ಕುಳಿತುಕೊಳ್ಳುತ್ತದೆ, ಭಲೇ ಚೆನ್ನಾಗಿದೆ, ಚೆನ್ನಾಗಿದೆ ಎಂದು ಹೇಳುತ್ತಾರೆ, ಕಾಲಿಗೆ ಬೀಳುತ್ತಾರೆ. ಆದರೆ ತಂದೆಯನ್ನು ಅರಿತುಕೊಂಡರೇನು ಅವರನ್ನೂ ಮಾಯೆಯು ಬಿಡುವುದಿಲ್ಲ. ಯಾವ ತಂದೆಯು ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ ಅವರನ್ನು ಎಷ್ಟೊಂದು ನೆನಪು ಮಾಡಬೇಕು ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದಾಗಲೇ ನಿಮ್ಮ ಪಾಪಗಳು ಭಸ್ಮವಾಗುತ್ತದೆ ಸತೋಪ್ರದಾನರಾಗುವಿರಿ. ಇಲ್ಲಿ ಒಳಗೆ ಬಂದ ಕೂಡಲೇ ಈ ರೀತಿ (ಲಕ್ಷ್ಮೀ-ನಾರಾಯಣ) ಆಗುತ್ತೇನೆಂದು ತಕ್ಷಣ ಖುಷಿಯಲ್ಲಿ ರೋಮಾಂಚನವಾಗಿ ಬಿಡಬೇಕು. ನಾನು (ಬ್ರಹ್ಮಾ) ಒಳಗೆ ಬರುತ್ತೇನೆ ಮತ್ತು ಲಕ್ಷ್ಮೀ-ನಾರಾಯಣನನ್ನು ನೋಡುತ್ತೇನೆಂದರೆ ಬಹಳ ಖುಷಿಯಾಗುತ್ತದೆ. ಓಹೋ, ಬಾಬಾ ನಮ್ಮನ್ನು ಈ ರೀತಿ ಮಾಡುತ್ತಿದ್ದಾರೆ. ವಾಹ್ ಬಾಬಾ ವಾಹ್! ಎನುತ್ತೇನೆ. ಲೌಕಿಕ ಮನೆಯಲ್ಲಿ ಯಾರ ತಂದೆಯಾದರೂ ದೊಡ್ಡ ಹುದ್ದೆಯಲ್ಲಿ ಇರುತ್ತಾರೆಂದರೆ ನನ್ನ ತಂದೆಯು ಮಂತ್ರಿಯಾಗಿದ್ದಾರೆಂದು ಮಕ್ಕಳಿಗೆ ಬಹಳ ಖುಷಿಯಿರುತ್ತದೆ ಹಾಗೆಯೇ ತಂದೆಯೂ ನಮ್ಮನ್ನು ಈ ರೀತಿ ಮಾಡುತ್ತಿದ್ದಾರೆಂದು ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು. ಆದರೆ ಮಾಯೆಯು ಮರೆಸಿ ಬಿಡುತ್ತದೆ ಬಹಳ ವಿರೋಧ ಮಾಡುತ್ತಿದ್ದು ನೀವು ಮಕ್ಕಳಿಗೆ ಬಹಳ ಖಷಿ ಇರಬೇಕು. ದೈವೀ ಗುಣಗಳನ್ನೂ ಸಹ ಧಾರಣೆ ಮಾಡಬೇಕು. ಆತ್ಮಾಭಿಮಾನಿ ಭವ ಮಕ್ಕಳು ಆತ್ಮರನ್ನು ಸಹೋದರ-ಸಹೋದರನ ರೂಪದಲ್ಲಿ ನೋಡಿ ಆಗ ಸ್ತ್ರೀಯರನ್ನೂ ಸಹ ಆತ್ಮದ ರೂಪದಲ್ಲಿಯೇ ನೋಡುವಿರಿ ಕುದೃಷ್ಟಿಯು ಬರುವುದಿಲ್ಲ. ಯಾವಾಗ ನೀವು ಸಹೋದರ-ಸಹೋದರರ ದೃಷ್ಟಿಯಿಂದ ನೋಡುವುದಿಲ್ಲವೋ ಆಗಲೇ ಮನಸ್ಸಿನ ಬಿರುಗಾಳಿಗಳು ಬರುವುದು. ಇದರಲ್ಲಿ ಬಹಳ ಪರಿಶ್ರಮವಿದೆ, ಚೆನ್ನಾಗಿ ಅಭ್ಯಾಸ ಬೇಕು, ಆತ್ಮಾಭಿಮಾನಿಗಳಾಗಬೇಕು, ಕರ್ಮಾತೀತ ಸ್ಥಿತಿಯಂತೂ ಅಂತ್ಯದಲ್ಲಿಯೇ ಆಗುವುದು. ಸರ್ವೀಸ್ ಮಾಡುವ ಮಕ್ಕಳೇ ತಂದೆಯ ಹೃದಯವನ್ನೇರುತ್ತಾರೆ. ತಡವಾಗಿ ಬಂದವರೂ ಸಹ ಅವರೂ ಸಹ ತೀವ್ರ ಪುರುಷಾರ್ಥ ಮಾಡಿ ಮುಂದೆ ಹೋಗುತ್ತಾರೆ. ನೀವು ಮಕ್ಕಳು ಮೊದಲಿನ ಇತಿಹಾಸವನ್ನು ಕೇಳಿದ್ದೀರಿ - ಇವರು ಹೇಗೆ ಗೃಹಸ್ಥವನ್ನು ಬಿಟ್ಟರು, ರಾತ್ರಿ-ರಾತ್ರಿಯಲ್ಲಿಯೇ ಓಡಿ ಬಂದರು, ನಂತರ ಇಷ್ಟೊಂದು ಮಕ್ಕಳನ್ನು ಪಾಲನೆ ಮಾಡಲಾಯಿತು. ಇದಕ್ಕೆ ಭಟ್ಟಿ ಎಂದು ಹೇಳಲಾಗುತ್ತದೆ. ಆ ಭಟ್ಟಿಯಿಂದ ನಂಬರ್ವಾರ್ ಸಿದ್ದರಾದರು. ಇದಂತೂ ಅದ್ಭುತವಾಗಿದೆ. ತಂದೆಯು ನಿಮ್ಮನ್ನು ಇಂತಹ ಸುಂದರವಾದ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಸ್ವಯಂ ಭಗವಂತನೇ ನಿಮಗೆ ಓದಿಸುತ್ತಾರೆ. ಎಷ್ಟೊಂದು ಸಾಧಾರಣವಾಗಿದ್ದಾರೆ, ಪ್ರತಿನಿತ್ಯವೂ ನಿಮಗೆ ಎಷ್ಟೊಂದು ತಿಳಿಸುತ್ತಾರೆ ಮತ್ತು ಮಕ್ಕಳಿಗೆ ನಮಸ್ಕಾರವನ್ನು ಹೇಳುತ್ತಾರೆ. ಮಕ್ಕಳೇ, ನೀವು ನನಗಿಂತಲೂ ಉನ್ನತವಾಗಿ ಹೋಗುತ್ತೀರಿ. ನೀವೇ ಕಂಗಾಲರಿಂದ ಡಬಲ್ ಕಿರೀಟಧಾರಿ ವಿಶ್ವದ ಮಾಲೀಕರಾಗುತ್ತೀರಿ. ಆದ್ದರಿಂದ ತಂದೆಯು ನಿಮಗೆ ತಿಳಿಸಲು ಬಹಳ ರುಚಿಯಿಂದ ಬರುತ್ತಾರೆ. ಲೆಕ್ಕವಿಲ್ಲದಷ್ಟು ಬಾರಿ ಬಂದಿರುತ್ತಾರೆ. ಇಂದು ನೀವು ರಾಮನಾದ ನನ್ನಿಂದ ರಾಜ್ಯವನ್ನು ಪಡೆಯುತ್ತೀರಿ ನಂತರ ನೀವು ರಾಜ್ಯವನ್ನು ರಾವಣನಿಂದ ಕಳೆದುಕೊಳ್ಳುತ್ತೀರಿ, ಇದು ಆಟವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

೧. ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳುವುದಕ್ಕಾಗಿ ಒಬ್ಬ ಸರ್ವಶಕ್ತಿವಂತ ತಂದೆಯಿಂದ ಶಕ್ತಿಯನ್ನು ಪಡೆದುಕೊಳ್ಳಬೇಕು. ಆತ್ಮಾಭಿಮಾನಿಯಾಗುವ ಪುರುಷಾರ್ಥ ಮಾಡಿ. ನಾವಾತ್ಮಗಳು ಸಹೋದರ-ಸಹೋದರರಾಗಿದ್ದೇವೆ ಎಂಬ ಅಭ್ಯಾಸವನ್ನು ನಿರಂತರ ಮಾಡುತ್ತಾ ಇರಿ.

೨. ತಂದೆ ಮತ್ತು ಲಕ್ಷ್ಯ (ಲಕ್ಷ್ಮೀ-ನಾರಾಯಣ) ದ ಚಿತ್ರದ ಬಗ್ಗೆ ಪ್ರತಿಯೊಬ್ಬರಿಗೆ ವಿಸ್ತಾರವಾಗಿ ತಿಳಿಸಿ. ಅನ್ಯ ಮಾತುಗಳಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ.

ವರದಾನ:
ಸೇವೆಯಲ್ಲಿ ಶುಭ ಭಾವನೆಯನ್ನು ಸೇರಿಸಿಕೊಳ್ಳುವುದರ ಮೂಲಕ ಶಕ್ತಿಶಾಲಿ ಫಲ ಪ್ರಾಪ್ತಿ ಮಾಡಿಕೊಳ್ಳುವಂತಹ ಸಫಲತಾ ಮೂರ್ತಿ ಭವ.

ಯಾವುದೇ ಸೇವೆ ಮಾಡುವಿರಿ ಅದರಲ್ಲಿ ಸರ್ವ ಆತ್ಮಗಳಿಗೆ ಸಹಯೋಗದ ಭಾವನೆಯಿರಲಿ, ಖುಷಿಯ ಭಾವನೆ ಹಾಗೂ ಸದ್ಭಾವನೆ ಇರಲಿ. ಆಗ ಪ್ರತಿ ಕಾರ್ಯ ಸಹಜವಾಗಿ ಸಫಲವಾಗುವುದು. ಹೇಗೆ ಹಿಂದಿನ ಕಾಲದಲ್ಲಿ ಯಾವುದೇ ಕಾರ್ಯ ಮಾಡಲು ಹೋಗುವ ಮೊದಲು ಇಡೀ ಪರಿವಾರದ ಆಶೀರ್ವಾದ ಪಡೆದು ನಂತರ ಹೋಗುತ್ತಿದ್ದರು. ಹಾಗೆ ವರ್ತಮಾನ ಸೇವೆಯಲ್ಲಿ ಇದನ್ನು ಸೇರಿಸಿಕೊಳ್ಳುವ ಅವಶ್ಯಕತೆಯಿದೆ. ಯಾವುದೇ ಕಾರ್ಯ ಪ್ರಾರಂಭ ಮಾಡುವ ಮೊದಲು ಎಲ್ಲರ ಶುಭ ಭಾವನೆಗಳು ಮತ್ತು ಶುಭ ಕಾಮನೆಗಳನ್ನು ತೆಗೆದುಕೊಳ್ಳಿ. ಎಲ್ಲರ ಸಂತುಷ್ಠತೆಯ ಬಲ ತುಂಬಿಕೊಳ್ಳಿ, ಆಗ ಶಕ್ತಿಶಾಲಿ ಫಲ ಸಿಗುವುದು.

ಸ್ಲೋಗನ್:
ಹೇಗೆ ತಂದೆ ಜೀ ಹಾಜಿರ್ ಎನ್ನುತ್ತಾರೆ ಅದೇ ರೀತಿ ನೀವೂ ಸಹಾ ಸೇವೆಯಲ್ಲಿ ಜೀ ಹಾಜಿರ್. ಜೀ ಹಝೂರ್ ಮಾಡಿದಾಗ ಪುಣ್ಯ ಜಮಾ ಆಗುವುದು.


ಬ್ರಹ್ಮಾ ತಂದೆಯ ಸಮಾನರಾಗಲು ವಿಶೇಷ ಪುರುಷಾರ್ಥ -
ಹೇಗೆ ಬ್ರಹ್ಮಾ ತಂದೆ ಸದಾ ಪರಮಾತ್ಮನ ಪ್ರೀತಿಯಲ್ಲಿ ಲವಲೀನರಾಗಿರುತ್ತಿದ್ದರು. ತಂದೆಯನ್ನು ಬಿಟ್ಟರೆ ಬೇರೆ ಏನು ಸಹಾ ಕಂಡು ಬರುತ್ತಿರಲಿಲ್ಲ. ಸಂಕಲ್ಪದಲ್ಲಿಯೂ ಬಾಬಾ, ಮಾತಿನಲ್ಲಿಯೂ ಬಾಬಾ, ಕರ್ಮದಲ್ಲಿಯೂ ತಂದೆಯ ಜೊತೆ, ಇಂತಹ ಲವಲೀನ ಸ್ಥಿತಿಯಲ್ಲಿರುತ್ತಾ ಯಾವುದೇ ಶಬ್ಧ ಹೇಳಿದಾಗ ಆ ಸ್ನೇಹದ ಮಾತು, ಅನ್ಯ ಆತ್ಮಗಳನ್ನೂ ಸಹಾ ಸ್ನೇಹದಲ್ಲಿ ಬಂದಿಸಲ್ಪಡುವುದು. ಈ ರೀತಿ ಲವಲೀನ ಸ್ಥಿತಿಯಲ್ಲಿದ್ದಲ್ಲಿ ಒಬ್ಬ ಬಾಬಾ ಎಂಬ ಶಬ್ಧವು ಜಾದೂ ಮಂತ್ರದ ರೀತಿ ಕೆಲಸ ಮಾಡುವುದು.