27.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಪವಿತ್ರರಾಗದ ವಿನಃ ಹಿಂತಿರುಗಿ ಹೋಗಲು ಸಾಧ್ಯವಿಲ್ಲ, ಆದ್ದರಿಂದ ತಂದೆಯ ನೆನಪಿನಿಂದ ಆತ್ಮದ
ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಿ ಮತ್ತು ಸ್ವಾಭಾವಿಕವಾಗಿ ಪವಿತ್ರರಾಗಿ”
ಪ್ರಶ್ನೆ:
ತಂದೆಯು ನೀವು
ಮಕ್ಕಳಿಗೆ ಮನೆಗೆ ಹೋಗುವುದಕ್ಕೆ ಮುಂಚೆ ಯಾವ ಮಾತನ್ನು ಕಲಿಸುತ್ತಾರೆ?
ಉತ್ತರ:
ಮಕ್ಕಳೇ, ಮನೆಗೆ
ಹೋಗುವುದಕ್ಕೆ ಮುಂಚೆ ಜೀವಿಸಿದ್ದಂತೆಯೇ ಸಾಯಬೇಕಾಗಿದೆ ಆದ್ದರಿಂದ ತಂದೆಯೂ ನಿಮಗೆ ಮೊದಲಿನಿಂದಲೇ
ದೇಹಭಾನದಿಂದ ದೂರ ಕರೆದುಕೊಂಡು ಹೋಗುವ ಅಭ್ಯಾಸ ಮಾಡಿಸುತ್ತಾರೆ ಅರ್ಥಾತ್ ಸಾಯುವುದನ್ನು
ಕಲಿಸುತ್ತಾರೆ. ಮೇಲೆ ಹೋಗುವುದೆಂದರೆ ಸಾಯುವುದು, ಹೋಗುವ ಮತ್ತು ಬರುವ ಜ್ಞಾನವು ಈಗ ನಿಮಗೆ
ಸಿಕ್ಕಿದೆ. ನಿಮಗೆ ತಿಳಿದಿದೆ ಈ ಶರೀರದ ಮೂಲಕ ಪಾತ್ರವನ್ನಭಿನಯಿಸಲು ಮೇಲಿನಿಂದ ಬಂದಿದ್ದೇವೆ. ನಾವು
ಮೂಲತಃ ಅಲ್ಲಿಯ ನಿವಾಸಿಗಳಾಗಿದ್ದೇವೆ ಈಗ ಮತ್ತೆ ಅಲ್ಲಿಗೇ ಹಿಂತಿರುಗಿ ಹೋಗಬೇಕಾಗಿದೆ.
ಓಂ ಶಾಂತಿ.
ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದರಲ್ಲಿ ಯಾವುದೇ ಕಷ್ಟವಿಲ್ಲ. ಇದಕ್ಕೆ
ಸಹಜವಾದ ನೆನಪೆಂದು ಹೇಳಲಾಗುತ್ತದೆ. ಮೊಟ್ಟ ಮೊದಲು ತಮ್ಮನ್ನು ಆತ್ಮವೆಂದೇ ತಿಳಿಯಬೇಕಾಗಿದೆ.
ಆತ್ಮವೇ ಶರೀರ ಧಾರಣೆ ಮಾಡಿ ಪಾತ್ರವನ್ನಭಿನಯಿಸುತ್ತದೆ. ಸಂಸ್ಕಾರವೆಲ್ಲವೂ ಸಹ ಆತ್ಮದಲ್ಲಿಯೇ
ಇರುತ್ತದೆ. ಆತ್ಮವಂತೂ ಸ್ವತಂತ್ರವಾಗಿದೆ, ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು
ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ, ಈ ಜ್ಞಾನವು ನಿಮಗೆ ಈಗಲೇ ಸಿಗುತ್ತದೆ ನಂತರ
ಸಿಗುವುದಿಲ್ಲ. ನಿಮ್ಮ, ಈ ಶಾಂತಿಯಲ್ಲಿ ಕುಳಿತುಕೊಳ್ಳುವುದನ್ನು ಜಗತ್ತಿನವರು ತಿಳಿದುಕೊಂಡಿಲ್ಲ.
ಇದಕ್ಕೆ ಸ್ವಾಭಾವಿಕ ಶಾಂತಿಯೆಂದು ಹೇಳಲಾಗುತ್ತದೆ. ನಾವಾತ್ಮರು ಈ ಶರೀರದ ಮೂಲಕ
ಪಾತ್ರವನ್ನಭಿನಯಿಸಲು ಬಂದಿದ್ದೇವೆ. ನಾವಾತ್ಮಗಳೂ ಮೂಲತಃ ಅಲ್ಲಿನ ನಿವಾಸಿಗಳಾಗಿದ್ದೇವೆ, ಇದು
ಬುದ್ಧಿಯಲ್ಲಿ ಜ್ಞಾನವಿದೆ ಉಳಿದಂತೆ ಇದರಲ್ಲಿ ಯಾವುದೇ ಹಠಯೋಗದ ಮಾತಿಲ್ಲ, ಬಹಳ ಸಹಜವಾಗಿದೆ. ಈಗ
ನಾವಾತ್ಮಗಳು ಮನೆಗೆ ಹೋಗಬೇಕಾಗಿದೆ ಆದರೆ ಪವಿತ್ರರಾಗದ ವಿನಃ ಹಿಂತಿರುಗಿ ಹೋಗಲು ಸಾಧ್ಯವಿಲ್ಲ.
ಪವಿತ್ರರಾಗಲು ತಂದೆಯನ್ನು ನೆನಪು ಮಾಡಬೇಕಾಗಿದೆ. ನೆನಪು ಮಾಡುತ್ತಾ-ಮಾಡುತ್ತಾ ಪಾಪಗಳು
ಕಳೆಯುತ್ತವೆ. ಕಷ್ಟದ ಯಾವುದೇ ಮಾತಿಲ್ಲ. ನೀವು ನಡೆದಾಡಲು ಹೋಗುತ್ತೀರೆಂದರೆ ತಂದೆಯ ನೆನಪಿನಲ್ಲಿರಿ.
ಈಗಲೇ ನೆನಪಿನಿಂದ ಪವಿತ್ರರಾಗಲು ಸಾಧ್ಯ. ಅದಂತೂ ಪವಿತ್ರ ಪ್ರಪಂಚವಾಗಿದೆ, ಅಲ್ಲಿ ಆ ಪಾವನ
ಪ್ರಪಂಚದಲ್ಲಿ ಈ ಜ್ಞಾನದ ಅವಶ್ಯಕತೆಯಿರುವುದಿಲ್ಲ, ಏಕೆಂದರೆ ಅಲ್ಲಿ ಯಾವುದೇ
ವಿಕರ್ಮಗಳಾಗುವುದಿಲ್ಲ. ಇಲ್ಲಿ ನೆನಪಿನಿಂದ ವಿಕರ್ಮಗಳನ್ನು ವಿನಾಶ ಮಾಡಿಕೊಳ್ಳಬೇಕಾಗಿದೆ.
ಸತ್ಯಯುಗದಲ್ಲಂತೂ ನೀವು ಇಲ್ಲಿ ಹೇಗೆ ನಡೆಯುತ್ತೀರೋ ಹಾಗೆಯೇ ಅಲ್ಲಿ ಸ್ವಾಭಾವಿಕವಾಗಿ ನಡೆಯುತ್ತೀರಿ
ನಂತರ ಸ್ವಲ್ಪ-ಸ್ವಲ್ಪ ಕೆಳಗಿಳಿಯುತ್ತೀರಿ. ಅಲ್ಲಿಯೂ ಸಹ ನೀವು ಇದನ್ನು ಅಭ್ಯಾಸ ಮಾಡಬೇಕೆಂದಲ್ಲ.
ಇದನ್ನು ಈಗಲೇ ಅಭ್ಯಾಸ ಮಾಡಬೇಕಾಗಿದೆ. ಬ್ಯಾಟರಿಯನ್ನು ಈಗ ಚಾರ್ಜ್ ಮಾಡಿಕೊಳ್ಳಬೇಕಾಗಿದೆ ನಂತರ
ನಿಧಾನ-ನಿಧಾನವಾಗಿ ಬ್ಯಾಟರಿಯು ಖಾಲಿಯಾಗುತ್ತಾ ಹೋಗುತ್ತದೆ. ಬ್ಯಾಟರಿ ಚಾರ್ಜ್ ಮಾಡುವ ಜ್ಞಾನ ಈಗ
ಒಮ್ಮೆ ಮಾತ್ರ ಸಿಗುತ್ತದೆ. ಸತೋಪ್ರಧನರಿಂದ ತಮೋಪ್ರಧಾನರಾಗಲು ನಿಮಗೆ ಎಷ್ಟು ಸಮಯ ಆಗಿ ಬಿಡುತ್ತದೆ.
ಆರಂಭದಿಂದಲೇ ಸ್ವಲ್ಪ-ಸ್ವಲ್ಪ ಬ್ಯಾಟರಿ ಕಡಿಮೆಯಗುತ್ತಾ ಹೋಗುತ್ತದೆ. ಮೂಲವತನದಲ್ಲಂತೂ ಕೇವಲ
ಆತ್ಮಗಳಷ್ಟೇ ಇರುತ್ತಾರೆ, ಶರೀರವಿರುವುದಿಲ್ಲ ಅಂದಾಗ ಸ್ವಾಭಾವಿಕವಾಗಿ ಇಳಿಯುವ ಅರ್ಥಾತ್ ಬ್ಯಾಟರಿ
ಕಡಿಮೆಯಾಗುವ ಮಾತಿಲ್ಲ. ವಾಹನವು ಯಾವಾಗ ನಡೆಯುವುದೋ ಆಗ ಬ್ಯಾಟರಿ ಕಡಿಮೆಯಾಗುತ್ತಾ ಹೋಗುವುದು.
ವಾಹನವು ನಿಂತಿರುವಾಗ ಬ್ಯಾಟರಿ ಕಾರ್ಯ ನಿರತವಾಗಿರುವುದಿಲ್ಲ. ವಾಹನ ನಡೆಯುವಾಗ ಬ್ಯಾಟರಿಯು ಕೆಲಸ
ಮಾಡತೊಡಗುತ್ತದೆ. ಭಲೆ ವಾಹನದಲ್ಲಿ ಬ್ಯಾಟರಿಯು ಚಾರ್ಜ್ ಆಗುತ್ತಾ ಇರುತ್ತದೆ ಆದರೆ ಇಲ್ಲಿ ನಿಮ್ಮ
ಬ್ಯಾಟರಿಯು ಒಂದೇ ಬಾರಿ ಈ ಸಮಯದಲ್ಲಿಯೇ ಚಾರ್ಜ್ ಆಗುತ್ತದೆ. ನಂತರ ನೀವು ಯಾವಾಗ ಇಲ್ಲಿ (ಸತ್ಯಯುಗ)
ಶರೀರದಿಂದ ಕರ್ಮ ಮಾಡುವಿರೋ ಆಗ ಸ್ವಲ್ಪ-ಸ್ವಲ್ಪವಾಗಿ ಬ್ಯಾಟರಿಯು ಖಾಲಿಯಾಗುತ್ತಾ ಹೋಗುತ್ತದೆ.
ಮೊಟ್ಟ ಮೊದಲಿಗೆ ಇದನ್ನು ತಿಳಿಸಬೇಕು - ಪರಮಾತ್ಮನು ಪಾರಲೌಕಿಕ ತಂದೆಯಾಗಿದ್ದಾರೆ, ಅವರನ್ನು ಎಲ್ಲಾ
ಆತ್ಮಗಳೂ ನೆನಪು ಮಾಡುತ್ತಾರೆ. ಹೇ ಭಗವಂತನೇ ಎಂದು ಹೇಳುತ್ತಾರೆಂದಮೇಲೆ ಅವರು ತಂದೆ ಮತ್ತು ನಾವು
ಮಕ್ಕಳಾಗಿದ್ದೇವೆ. ಇಲ್ಲಿ ಬ್ಯಾಟರಿಯನ್ನು ಹೇಗೆ ಚಾರ್ಜ್ ಮಾಡಿಕೊಳ್ಳಬೇಕೆಂದು ನೀವು ಮಕ್ಕಳಿಗೆ
ತಿಳಿಸಲಾಗುತ್ತದೆ. ಭಲೆ ನಡೆದಾಡಿ-ತಿರುಗಾಡಿ ತಂದೆಯನ್ನು ನೆನಪು ಮಾಡಿದರೆ ನೀವು ಸತೋಪ್ರಧಾನರಾಗಿ
ಬಿಡುತ್ತೀರಿ. ಯಾವುದೇ ಮಾತುಗಳು ಅರ್ಥವಾಗದಿದ್ದರೆ ಕೇಳಬಹುದು, ಇದು ಬಹಳ ಸಹಜವಾಗಿದೆ. ಪ್ರತೀ
5000 ವರ್ಷಗಳ ನಂತರ ನಮ್ಮ ಬ್ಯಾಟರಿಯು ಡಿಸ್ಚಾರ್ಜ್ ಆಗಿ ಬಿಡುತ್ತದೆ, ತಂದೆ ಬಂದು ಎಲ್ಲರ
ಬ್ಯಾಟರಿಯನ್ನು ಚಾರ್ಜ್ ಮಾಡುತ್ತಾರೆ. ವಿನಾಶದ ಸಮಯದಲ್ಲಿ ಎಲ್ಲರೂ ಈಶ್ವರನನ್ನು ನೆನಪು
ಮಾಡುತ್ತಾರೆ. ತಿಳಿಯಿರಿ ಪ್ರವಾಹ ಬಂದಿತು, ಆಗ ಯಾರೆಲ್ಲಾ ಭಕ್ತರಿರುತ್ತಾರೋ ಅವರು ಭಗವಂತನನ್ನೇ
ನೆನಪು ಮಾಡುತ್ತಾರೆ ಆದರೆ ಆ ಸಮಯದಲ್ಲಿಭಗವಂತನ ನೆನಪು ಬರುವುದಿಲ್ಲ. ಮಿತ್ರ-ಸಂಬಂಧಿಗಳು,
ಹಣ-ಅಧಿಕಾರವೇ ನೆನಪಿಗೆ ಬಂದು ಬಿಡುತ್ತವೆ. ಭಲೆ ಹೇ ಭಗವಂತ ಎಂದು ಹೇಳುತ್ತಾರೆ ಆದರೆ ಅದು ನಾಮ
ಮಾತ್ರ. ಭಗವಂತನು ತಂದೆಯಾಗಿದ್ದಾರೆ, ನಾವು ಅವರ ಮಕ್ಕಳಾಗಿದ್ದೇವೆ. ಇದನ್ನಂತೂ ತಿಳಿದುಕೊಂಡೇ
ಇಲ್ಲ. ಭಕ್ತರಿಗೆ ಸರ್ವವ್ಯಾಪಿಯ ಉಲ್ಟಾ ಜ್ಞಾನವು ಸಿಗುತ್ತದೆ, ತಂದೆಯು ಬಂದು ಸರಿಯಾದ ಜ್ಞಾನವನ್ನು
ಕೊಡುತ್ತಾರೆ. ಭಕ್ತಿಯ ವಿಭಾಗವೇ ಬೇರೆಯಾಗಿದೆ. ಭಕ್ತಿಯಲ್ಲಿ ಪೆಟ್ಟು ತಿನ್ನಬೇಕಾಗುತ್ತದೆ.
ಬ್ರಹ್ಮಾರವರ ರಾತ್ರಿಯೇ ಸೋ ಬ್ರಾಹ್ಮಣರ ರಾತ್ರಿಯಾಗಿದೆ. ಬ್ರಹ್ಮಾರವರ ದಿನ ಸೋ ಬ್ರಾಹ್ಮಣರ
ದಿನವಾಗಿದೆ. ಶೂದ್ರರ ದಿನ ಶೂದ್ರರ ರಾತ್ರಿ ಎಂದು ಹೇಳುವುದಿಲ್ಲ ಈ ರಹಸ್ಯವನ್ನು ತಂದೆಯು ಕುಳಿತು
ತಿಳಿಸುತ್ತಾರೆ.ಇದಾಗಿದೆ ಬೇಹದ್ದಿನ ದಿನ ಮತ್ತು ರಾತ್ರಿ ಈಗ ನೀವು ಹಗಲಿನಲ್ಲಿ ಹೋಗುತ್ತೀರಿ,
ರಾತ್ರಿಯು ಮುಕ್ತಾಯವಾಗುತ್ತದೆ. ಈ ಶಬ್ಧವು ಶಾಸ್ತ್ರಗಳಲ್ಲಿದೆ. ಬ್ರಹ್ಮನ ದಿನ, ಬ್ರಹ್ಮನ
ರಾತ್ರಿಯೆಂದು ಹೇಳುತ್ತಾರೆ ಆದರೆ ಅರಿತುಕೊಂಡಿಲ್ಲ. ನಿಮ್ಮ ಬುದ್ಧಿಯು ಈಗ ಬೇಹದ್ದಿನ ಕಡೆಗೆ ಹೊರಟು
ಹೋಗಿದೆ. ಹಾಗೆ ಹೇಳುವುದಾದರೆ ದೇವತೆಗಳಿಗೂ ಸಹ ವಿಷ್ಣುವಿನ ದಿನ, ವಿಷ್ಣುವಿನ ರಾತ್ರಿಯೆಂದು
ಹೇಳಬಹುದು. ಏಕೆಂದರೆ ವಿಷ್ಣು ಮತ್ತು ಬ್ರಹ್ಮಾರವರ ಸಂಬಂಧವನ್ನೂ ತಿಳಿಸಲಾಗುತ್ತದೆ. ತ್ರಿಮೂರ್ತಿಯ
ಕರ್ತವ್ಯವೇನೆಂದು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅವರಂತೂ ಭಗವಂತನನ್ನೇ ಮೀನು,
ಮೊಸಳೆಯಲ್ಲಿ ಹಾಗೂ ಜನನ-ಮರಣದ ಚಕ್ರದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ರಾಧೆ-ಕೃಷ್ಣ ಮೊದಲಾದವರೂ
ಸಹ ಮನುಷ್ಯರೇ ಆಗಿದ್ದಾರೆ. ಆದರೆ ಅವರು ದೈವೀ ಗುಣವಂತ ಮನುಷ್ಯರು. ಆದರೆ ಈಗ ನೀವು ಅದೇ ರೀತಿ
ಆಗಬೇಕಾಗಿದೆ. ನಂತರದ ಜನ್ಮದಲ್ಲಿ ದೇವತೆಗಳಾಗುತ್ತೀರಿ. 84 ಜನ್ಮಗಳ ಯಾವ ಲೆಕ್ಕಾಚಾರವಿತ್ತೋ ಅದು
ಈಗ ಸಮಾಪ್ತಿಯಾಯಿತು ಮತ್ತೆ ಪುನರಾವರ್ತನೆಯಾಗುವುದು. ಈಗ ನಿಮಗೆ ಈ ಶಿಕ್ಷಣವು ಸಿಗುತ್ತಿದೆ.
ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ. ನಾವು
ಪಾತ್ರಧಾರಿಗಳೆಂದು ಹೇಳುತ್ತಾರೆ, ನಾವಾತ್ಮರು ಮೇಲಿನಿಂದ ಕೆಳಗೆ ಹೇಗೆ ಬರುತ್ತೇವೆಂದು
ತಿಳಿದುಕೊಳ್ಳುವುದಿಲ್ಲ. ತಮ್ಮನ್ನು ದೇಹಧಾರಿಗಳೆಂದೇ ತಿಳಿದುಕೊಳ್ಳುತ್ತಾರೆ. ನಾವಾತ್ಮರು
ಮೇಲಿನಿಂದ ಬರುತ್ತೇವೆ ನಂತರ ಯಾವಾಗ ಹೋಗುತ್ತೇವೆ? ಮೇಲೆ ಹೋಗುವುದೆಂದರೆ ಸಾಯುವುದು, ಶರೀರ
ಬಿಡುವುದು, ಸಾಯಲು ಯಾರು ಇಷ್ಟ ಪಡುತ್ತಾರೆ? ಇಲ್ಲಂತೂ ತಂದೆಯು ತಿಳಿಸಿದ್ದಾರೆ - ನೀವು ಈ
ಶರೀರವನ್ನು ಮರೆಯುತ್ತಾ ಹೋಗಿ. ಜೀವಿಸಿದ್ದಂತೆಯೇ ಸಾಯುವುದನ್ನು ನಿಮಗೆ ತಂದೆಯೇ ಕಲಿಸಿಕೊಡುತ್ತಾರೆ.
ಇದನ್ನು ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ನೀವು ತಮ್ಮ ಮನೆಗೆ ಹೋಗುವುದಕ್ಕಾಗಿ ಬಂದಿದ್ದೀರಿ.
ಮನೆಗೆ ಹೇಗೆ ಹೋಗಬೇಕೆಂಬ ಜ್ಞಾನವು ಈಗಲೇ ಸಿಗುತ್ತದೆ. ನಿಮ್ಮದು ಈ ಮೃತ್ಯುಲೋಕ ಅಂತಿಮ ಜನ್ಮವಾಗಿದೆ.
ಅಮರಲೋಕವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ನಾವು ಬೇಗ-ಬೇಗನೆ ಹೋಗಬೇಕೆಂದು ಈಗ ನೀವು ಮಕ್ಕಳ
ಬುದ್ಧಿಯಲ್ಲಿದೆ. ಮೊಟ್ಟ ಮೊದಲು ಮನೆಯಾದ ಮುಕ್ತಿಧಾಮದಲ್ಲಿ ಹೋಗಬೇಕಾಗಿದೆ. ಈ ಶರೀರರೂಪಿ
ವಸ್ತ್ರವನ್ನು ಇಲ್ಲಿಯೇ ಬಿಡಬೇಕಾಗಿದೆ. ನಂತರ ಆತ್ಮವು ಮನೆಗೆ ಹೊರಟು ಹೋಗುತ್ತದೆ. ಹೇಗೆ ಆ
ಹದ್ದಿನ ನಾಟಕದ ಪಾತ್ರಧಾರಿಗಳಿರುತ್ತಾರೆ. ನಾಟಕವು ಮುಕ್ತಾಯವಾದ ಮೇಲೆ ವಸ್ತ್ರಗಳನ್ನು ಅಲ್ಲಿಯೇ
ಕಳಚಿ ಮನೆಯ ವಸ್ತ್ರಗಳನ್ನು ಧರಿಸಿ ಮನೆಗೆ ಹೋಗುತ್ತಾರೆ. ನೀವೂ ಸಹ ಈಗ ಈ ವಸ್ತ್ರವನ್ನು
ಕಳಚಬೇಕಾಗಿದೆ. ಸತ್ಯಯುಗದಲ್ಲಂತೂ ಕೆಲವರೇ ದೇವತೆಗಳಿರುತ್ತಾರೆ, ಇಲ್ಲಿ ಎಣಿಸಲಾರದಷ್ಟು
ಜನಸಂಖ್ಯೆಯಿದೆ. ಸತ್ಯಯುಗದಲ್ಲಿ ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮವಿರುತ್ತದೆ. ಈಗಂತೂ
ತಮ್ಮನ್ನು ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ. ತಮ್ಮ ಶ್ರೇಷ್ಠ ಧರ್ಮ-ಕರ್ಮವನ್ನೇ ಮರೆತು
ಹೋಗಿದ್ದಾರೆ ಆದ್ದರಿಂದ ದುಃಖಿಯಾಗಿದ್ದಾರೆ. ಸತ್ಯಯುಗದಲ್ಲಿ ನಿಮ್ಮದು ಶ್ರೇಷ್ಠ ಕರ್ಮ, ಶ್ರೇಷ್ಠ
ಧರ್ಮವಿತ್ತು. ಈಗ ಕಲಿಯುಗದಲ್ಲಿ ಧರ್ಮ ಭ್ರಷ್ಟವಾಗಿದ್ದೀರಿ, ಆದ್ದರಿಂದ ನಾವು ಹೇಗೆ
ಕೆಳಗಿಳಿದಿದ್ದೇವೆಂದು ಬುದ್ಧಿಯಲ್ಲಿ ಬರುತ್ತದೆ. ಈಗ ನೀವು ಬೇಹದ್ದಿನ ತಂದೆಯ ಪರಿಚಯವನ್ನು
ಕೊಡುತ್ತೀರಿ. ಬೇಹದ್ದಿನ ತಂದೆಯೇ ಬಂದು ಹೊಸ ಪ್ರಪಂಚ, ಸ್ವರ್ಗವನ್ನು ರಚಿಸುತ್ತಾರೆ. ಹೇಳುತ್ತಾರೆ,
ಮನ್ಮನಾಭವ. ಇದು ಗೀತೆಯ ಶಬ್ಧವೇ ಆಗಿದೆ. ಸಹಜ ರಾಜಯೋಗದ ಜ್ಞಾನದ ಹೆಸರನ್ನು ಗೀತೆಯೆಂದು
ಇಡಲಾಗುತ್ತದೆ. ಇದು ನಿಮ್ಮ ಪಾಠಶಾಲೆಯಾಗಿದೆ, ಮಕ್ಕಳು ಬಂದು ಓದುತ್ತಾರೆ. ಆದ್ದರಿಂದ ನಮ್ಮ ತಂದೆಯ
ಪಾಠಶಾಲೆಯಾಗಿದೆ ಎಂದು ಹೇಳುತ್ತಾರೆ. ಹೇಗೆ ಯಾರ ಮಗುವಿನ ತಂದೆಯಾದರೂ ಪ್ರಾಂಶುಪಾಲರಾಗಿದ್ದರೆ ನಾವು
ನಮ್ಮ ತಂದೆಯ ಕಾಲೇಜಿನಲ್ಲಿ ಓದುತ್ತೇವೆಂದು ಹೇಳುತ್ತಾರೆ. ಅವರ ತಾಯಿಯೂ ಸಹ ಪ್ರಾಂಶುಪಾಲರಾಗಿದ್ದರೆ
ನಮ್ಮ ತಂದೆ-ತಾಯಿ ಇಬ್ಬರೂ ಪ್ರಾಂಶುಪಾಲರಾಗಿದ್ದಾರೆಂದು ಹೇಳುತ್ತಾರೆ, ಇಬ್ಬರೂ ಓದಿಸುತ್ತಾರೆ.
ನಮ್ಮದು ಮಮ್ಮಾ-ಬಾಬಾರವರ ಕಾಲೇಜಾಗಿದೆ. ನೀವು ಹೇಳುತ್ತೀರಿ - ನಮ್ಮ ಮಮ್ಮಾ-ಬಾಬಾರವರ
ಪಾಠಶಾಲೆಯಾಗಿದೆ, ಇಬ್ಬರೂ ಓದಿಸುತ್ತಾರೆ. ಇಬ್ಬರೂ ಈ ಆತ್ಮಿಕ ವಿಶ್ವ ವಿದ್ಯಾಲಯ ಅಥವಾ
ಯುನಿವರ್ಸಿಟಿಯನ್ನು ತೆರೆದಿದ್ದಾರೆ, ಇಬ್ಬರೂ ಒಟ್ಟಿಗೆ ಓದಿಸುತ್ತಾರೆ. ಬ್ರಹ್ಮಾರವರು ದತ್ತು
ಮಾಡಿಕೊಂಡಿದ್ದಾರಲ್ಲವೆ. ಇವು ಬಹಳ ಗುಹ್ಯವಾದ ಜ್ಞಾನದ ಮಾತುಗಳಾಗಿವೆ. ತಂದೆಯು ಯಾವುದೇ ಹೊಸ
ಮಾತನ್ನು ತಿಳಿಸುವುದಿಲ್ಲ. ಕಲ್ಪದ ಹಿಂದೆಯೂ ಈ ತಿಳುವಳಿಕೆಯನ್ನು ಕೊಟ್ಟಿದ್ದರು, ಹಾ! ಇಷ್ಟೊಂದು
ಜ್ಞಾನವಿದೆ, ಇದು ದಿನ-ಪ್ರತಿದಿನ ಗುಹ್ಯವಾಗುತ್ತಾ ಹೋಗುತ್ತದೆ. ಆತ್ಮದ ತಿಳುವಳಿಕೆಯು ನೋಡಿ,
ಅದೆಂದೂ ವಿನಾಶ ಹೊಂದುವುದಿಲ್ಲ. ಆತ್ಮವು ಅವಿನಾಶಿಯಾಗಿರುವುದರಿಂದ ಅದರಲ್ಲಿ ಪಾತ್ರವೂ
ಅವಿನಾಶಿಯಾಗಿದೆ. ಆತ್ಮವು ಕಿವಿಗಳ ಮೂಲಕ ಕೇಳಿತು, ಶರೀರವಿದೆಯೆಂದರೆ ಪಾತ್ರವಿದೆ. ಶರೀರದಿಂದ
ಆತ್ಮವು ಬೇರೆಯಾಗಿ ಬಿಡುತ್ತದೆ ಎಂದರೆ ಉತ್ತರ ಸಿಗುವುದಿಲ್ಲ. ಈಗ ತಂದೆಯು ತಿಳಿಸುತ್ತಾರೆ -
ಮಕ್ಕಳೇ, ಈಗ ನೀವು ಹಿಂತಿರುಗಿ ಹೋಗಬೇಕಾಗಿದೆ. ಯಾವಾಗ ಪುರುಷೋತ್ತಮ ಯುಗವು ಬರುವುದೋ ಆಗಲೇ
ಹಿಂತಿರುಗಿ ಹೋಗಬೇಕಾಗುತ್ತದೆ. ಇದರಲ್ಲಿ ಮುಖ್ಯವಾಗಿ ಪವಿತ್ರತೆ ಬೇಕು. ಶಾಂತಿಧಾಮದಲ್ಲಂತೂ
ಪವಿತ್ರ ಆತ್ಮಗಳೇ ಇರುತ್ತಾರೆ. ಶಾಂತಿಧಾಮ ಮತ್ತು ಸುಖಧಾಮ ಎರಡು ಪವಿತ್ರಧಾಮಗಳಾಗಿರುತ್ತವೆ, ಅಲ್ಲಿ
ಶರೀರಗಳಿರುವುದಿಲ್ಲ. ಆತ್ಮವು ಪವಿತ್ರವಾಗಿದೆ ಆದುದರಿಂದ ಅಲ್ಲಿ ಬ್ಯಾಟರಿಯು ಡಿಸ್ಚಾರ್ಜ್
ಆಗುವುದಿಲ್ಲ. ಇಲ್ಲಿ ಶರೀರ ಧಾರಣೆ ಮಾಡುವುದರಿಂದ ವಾಹನವು ನಡೆಯುತ್ತದೆ. ವಾಹನವು ನಿಂತಿದೆಯೆಂದರೆ
ಇಂಧನವು ಕಡಿಮೆಯಾಗುತ್ತದೆಯೇ? ಈಗ ನೀವಾತ್ಮ ಜ್ಯೋತಿಯು ಬಹಳ ಕಡಿಮೆಯಾಗಿ ಬಿಟ್ಟಿದೆ, ಒಮ್ಮೆಲೆ ನಂದಿ
ಹೋಗುವುದಿಲ್ಲ. ಯಾರಾದರೂ ಶರೀರ ಬಿಟ್ಟಾಗ ದೀಪ ಬೆಳಗಿಸುತ್ತಾರೆ. ಅದು ನಂದಿ ಹೋಗದಿರಲೆಂದು ಬಹಳ
ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾರೆ. ಆತ್ಮ ಜ್ಯೋತಿಯು ಎಂದೂ ನಂದಿ ಹೋಗುವುದಿಲ್ಲ ಅದು
ಅವಿನಾಶಿಯಾಗಿದೆ. ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಇವೆಲ್ಲಾ ಗೊತ್ತಿದೆ, ಇವರು
ಬಹಳ ಮಧುರ ಮಕ್ಕಳಾಗಿದ್ದಾರೆ, ಇವರೆಲ್ಲರೂ ಕಾಮಚಿತೆಯ ಮೇಲೆ ಕುಳಿತು ಸುಟ್ಟು ಭಸ್ಮವಾಗಿ
ಬಿಟ್ಟಿದ್ದಾರೆ. ಮತ್ತೆ ಇವರನ್ನು ಜಾಗೃತಗೊಳಿಸುತ್ತೇನೆ. ಸಂಪೂರ್ಣ ತಮೋಪ್ರಧಾನ ಶವಗಳಂತಾಗಿ
ಬಿಟ್ಟಿದ್ದಾರೆ, ತಂದೆಯನ್ನು ಅರಿತುಕೊಂಡೇ ಇಲ್ಲ. ಮನುಷ್ಯರು ಯಾವುದೇ ಪ್ರಯೋಜನಕ್ಕೆ ಇಲ್ಲ.
ಮನುಷ್ಯರ ಮಣ್ಣು ಯಾವುದೇ ಕೆಲಸಕ್ಕೆ ಬರುವುದಿಲ್ಲ. ಹಾಗೆಂದು ಹೇಳಿ ಹಿರಿಯ ವ್ಯಕ್ತಿಗಳ ಶರೀರವು
ಕೆಲಸಕ್ಕೆ ಬರುತ್ತದೆ, ಬಡವರದು ಬರುವುದಿಲ್ಲವೆಂದಲ್ಲ. ಈ ಶರೀರವೆಂಬ ಮಣ್ಣು, ಮಣ್ಣು ಪಾಲಾಗಿ
ಬಿಡುತ್ತದೆ. ಭಲೆ ಯಾರದೇ ಶರೀರವಾಗಿರಲಿ ಕೆಲವರು ಸುಡುತ್ತಾರೆ, ಕೆಲವರು ಸ್ಮಶಾನದಲ್ಲಿ ಮಣ್ಣಿನಲ್ಲಿ
ಮುಚ್ಚುತ್ತಾರೆ. ಪಾರಸಿಗಳು ಬಾವಿಯ ಬಳಿ ಇಟ್ಟು ಬರುತ್ತಾರೆ ನಂತರ ಪಕ್ಷಿಗಳು ಮಾಂಸವನ್ನು ತಿಂದು
ಬಿಡುತ್ತವೆ, ನಂತರ ಮೂಳೆಗಳು ಹೋಗಿ ಕೆಳಗೆ ಬೀಳುತ್ತವೆ. ಅದಾದರೂ ಕೆಲಸಕ್ಕೆ ಬರುತ್ತದೆ,
ಪ್ರಪಂಚದಲ್ಲಂತೂ ಅನೇಕ ಮನುಷ್ಯರು ಸಾಯುತ್ತಾರೆ. ಈಗ ನೀವಂತೂ ತಾವಾಗಿಯೇ ಶರೀರ ಬಿಡಬೇಕಾಗಿದೆ.
ಇಲ್ಲಿ ನೀವು ಶರೀರವನ್ನು ಬಿಟ್ಟು ಹಿಂತಿರುಗಿ ಮನೆಗೆ ಹೋಗಲು ಅರ್ಥಾತ್ ಸಾಯಲು ಬಂದಿದ್ದೀರಿ. ನಾವು
ಜೀವನ್ಮುಕ್ತಿಯಲ್ಲಿ ಹೋಗುತ್ತೇವೆಂದು ನೀವು ಖುಷಿಯಿಂದ ಹೋಗುತ್ತೀರಿ.
ಯಾರು ಯಾವ ಪಾತ್ರವನ್ನಭಿನಯಿಸಿದ್ದಾರೆಯೋ ಅಂತ್ಯದವರೆಗೆ ಅವರೇ ಅಭಿನಯಿಸುತ್ತಾರೆ. ತಂದೆಯು
ಪುರುಷಾರ್ಥ ಮಾಡಿಸುತ್ತಾ ಇರುತ್ತಾರೆ, ಸಾಕ್ಷಿಯಾಗಿ ನೋಡುತ್ತಾ ಇರುತ್ತಾರೆ. ಇದಂತೂ
ತಿಳಿದುಕೊಳ್ಳುವ ಮಾತಾಗಿದೆ. ಇದರಲ್ಲಿ ಭಯ ಪಡುವ ಯಾವುದೇ ಮಾತಿಲ್ಲ. ನಾವು ಸ್ವರ್ಗದಲ್ಲಿ
ಹೋಗುವುದಕ್ಕಾಗಿ ನಾವೇ ಪುರುಷಾರ್ಥ ಮಾಡಿ ಶರೀರವನ್ನು ಬಿಟ್ಟು ಬಿಡುತ್ತೇವೆ. ತಂದೆಯನ್ನೇ ನೆನಪು
ಮಾಡುತ್ತಿರಬೇಕಾಗಿದೆ ಆಗ ಅಂತ್ಯಮತಿ ಸೋ ಗತಿಯಾಗಿ ಬಿಡುವುದು, ಇದರಲ್ಲಿಯೇ ಪರಿಶ್ರಮವಿದೆ.
ಪ್ರತಿಯೊಂದು ವಿದ್ಯೆಯಲ್ಲಿ ಪರಿಶ್ರಮವಿದೆ. ಭಗವಂತನೇ ಬಂದು ಓದಿಸಬೇಕಾಗುತ್ತದೆ ಅಂದಮೇಲೆ
ಅವಶ್ಯವಾಗಿ ಇದು ದೊಡ್ಡ ವಿದ್ಯೆಯೇ ಆಗಿರುವುದು, ಇದರಲ್ಲಿ ದೈವೀ ಗುಣಗಳೂ ಬೇಕು. ಈ
ಲಕ್ಷ್ಮೀ-ನಾರಾಯಣರಾಗಬೇಕಲ್ಲವೆ. ಇವರು ಸತ್ಯಯುಗದಲ್ಲಿದ್ದರು, ಈಗ ಮತ್ತೆ ಸತ್ಯಯುಗೀ ದೇವತೆಗಳಾಗಲು
ಬಂದಿದ್ದೀರಿ. ನೀವು ದೇವಿ-ದೇವತೆಗಳಾಗಲು ಬಂದಿದ್ದೀರಿ. ಗುರಿ-ಧ್ಯೇಯವು ಎಷ್ಟು ಸಹಜವಾಗಿದೆ.
ತ್ರಿಮೂರ್ತಿ ಚಿತ್ರದಲ್ಲಂತೂ ಸ್ಪಷ್ಟವಾಗಿದೆ. ಈ ಬ್ರಹ್ಮಾ-ವಿಷ್ಣು-ಶಂಕರ ಮೊದಲಾದ
ಚಿತ್ರಗಳಿರದಿದ್ದರೆ ನಾವು ತಿಳಿಸಲು ಹೇಗೆ ಸಾಧ್ಯ. ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮಾ.
ಬ್ರಹ್ಮನಿಗೆ 8 ಭುಜಗಳು, 100 ಭುಜಗಳನ್ನು ತೋರಿಸುತ್ತಾರೆ. ಏಕೆಂದರೆ ಬ್ರಹ್ಮನಿಗೆ ಅನೇಕ
ಮಕ್ಕಳಿರುತ್ತಾರೆ ಆದ್ದರಿಂದ ಅವರು ಚಿತ್ರವನ್ನು ಆ ರೀತಿ ತೋರಿಸಿದ್ದಾರೆ ಮತ್ತು ಮನುಷ್ಯರಿಗೆ
ಇಷ್ಟೊಂದು ಭುಜಗಳೇನೂ ಇರುವುದಿಲ್ಲ. ರಾವಣನ 10 ತಲೆಗಳಿಗೂ ಅರ್ಥವಿದೆ. ಸ್ಥೂಲವಾಗಿ ಇಂತಹ
ಮನುಷ್ಯರಿರುವುದಿಲ್ಲ. ಇದನ್ನು ತಂದೆಯೇ ತಿಳಿಸುತ್ತಾರೆ. ಮನುಷ್ಯರಂತೂ ಏನನ್ನೂ ತಿಳಿದುಕೊಂಡಿಲ್ಲ.
ಇದೂ ಸಹ ಆಟವಾಗಿದೆ. ಇದು ಯಾವಾಗಿನಿಂದ ಪ್ರಾರಂಭವಾಗಿದೆ ಎಂದು ಮನುಷ್ಯರಿಗೆ ಗೊತ್ತೇ ಇಲ್ಲ.
ಪರಂಪರೆಯಿಂದ ಎಂದು ಹೇಳಿ ಬಿಡುತ್ತಾರೆ. ಅರೆ! ಪರಂಪರೆ ಎಂದರೆ ಯಾವಾಗಿನಿಂದ? ಅಂದಾಗ ಮಧುರಾತಿ
ಮಧುರ ಮಕ್ಕಳಿಗೆ ತಂದೆಯು ಓದಿಸುತ್ತಾರೆ. ಅವರು ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ
ಅಂದಮೇಲೆ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು.
ಈ ಮ್ಯೂಜಿಯಂ ಇತ್ಯಾದಿಗಳು ಯಾರ ಸಲಹೆಯ ಮೇರೆಗೆ ತೆರೆಯುತ್ತಾ ಇರುತ್ತಾರೆ? ಇಲ್ಲಿರುವುದೇ ತಂದೆ,
ತಾಯಿ ಮತ್ತು ಮಕ್ಕಳು ನಿರ್ದೇಶನದಂತೆ ತೆರೆಯುತ್ತಿರುತ್ತಾರೆ. ನೀವು ಭಗವಾನುವಾಚವೆಂದು ಹೇಳುತ್ತೀರಿ.
ಅಂದಮೇಲೆ ರಥದ ಮೂಲಕ ನಮಗೆ ಭಗವಂತನ ಸಾಕ್ಷಾತ್ಕಾರ ಮಾಡಿಸಿ ಎಂದು ಕೇಳುತ್ತಾರೆ. ಅರೆ! ನೀವು ಆತ್ಮದ
ಸಾಕ್ಷಾತ್ಕಾರ ಮಾಡಿದ್ದೀರಾ? ಇಷ್ಟು ಸೂಕ್ಷ್ಮ ಬಿಂದುವಿನ ಸಾಕ್ಷಾತ್ಕಾರವನ್ನು ನೀವೇನು ಮಾಡುತ್ತೀರಿ!
ಅವಶ್ಯಕತೆಯೇ ಇಲ್ಲ. ಕೇವಲ ಆತ್ಮವನ್ನು ಅರಿತುಕೊಳ್ಳಲಾಗುತ್ತದೆ. ಆತ್ಮವು ಭೃಕುಟಿಯ
ಮಧ್ಯದಲ್ಲಿರುತ್ತದೆ. ಅದರ ಆಧಾರದ ಮೇಲೆಯೇ ಇಷ್ಟು ದೊಡ್ಡ ಶರೀರವು ನಡೆಯುತ್ತದೆ. ಈಗ ನಿಮ್ಮ ಬಳಿ
ಪ್ರಕಾಶತೆಯ ಕಿರೀಟವಾಗಲಿ, ರತ್ನ ಜಡಿತ ಕಿರೀಟವಾಗಲಿ ಇಲ್ಲ, ಎರಡೂ ಕಿರೀಟಗಳಿಗಾಗಿ ನೀವು
ಪುರುಷಾರ್ಥ ಮಾಡುತ್ತಿದ್ದೀರಿ. ಕಲ್ಪ-ಕಲ್ಪವೂ ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ.
ತಂದೆಯು ಕೇಳುತ್ತಾರೆ - ಮೊದಲು ಎಂದಾದರೂ ಮಿಲನ ಮಾಡಿದ್ದೀರಾ? ಅದಕ್ಕೆ ಹೌದು ಬಾಬಾ ಎಂದು ಎಲ್ಲರೂ
ಹೇಳುತ್ತಾರೆ. ಕಲ್ಪ-ಕಲ್ಪವೂ ಏಕೆ ಮಿಲನ ಮಾಡುತ್ತಾ ಬಂದಿದ್ದೀರಿ? ಈ ಲಕ್ಷ್ಮೀ-ನಾರಾಯಣರಾಗಲು.
ಇದೊಂದೇ ಮಾತನ್ನು ಎಲ್ಲರೂ ಹೇಳುತ್ತಾರೆ ಅದಕ್ಕೆ ತಂದೆಯು ತಿಳಿಸುತ್ತಾರೆ - ಒಳ್ಳೆಯದು, ಶುಭವನ್ನೇ
ಹೇಳುತ್ತೀರಿ ಅಂದಮೇಲೆ ಪುರುಷಾರ್ಥ ಮಾಡಿ. ಎಲ್ಲರೂ ನರನಿಂದ ನಾರಾಯಣನಾಗುವುದಿಲ್ಲ, ಪ್ರಜೆಗಳೂ ಬೇಕು.
ಸತ್ಯ ನಾರಾಯಣನ ಕಥೆಯೂ ಇದೆ. ಅವರು ಕಥೆಯನ್ನು ತಿಳಿಸುತ್ತಾರೆ ಆದರೆ ಬುದ್ಧಿಯಲ್ಲೇನೂ ಬರುವುದಿಲ್ಲ.
ನೀವು ಮಕ್ಕಳು ತಿಳಿಯುತ್ತೀರಿ, ಅದು ಶಾಂತಿಧಾಮ-ನಿರಾಕಾರಿ ಪ್ರಪಂಚವಾಗಿದೆ ಮತ್ತೆ ಅಲ್ಲಿಂದ
ಸುಖಧಾಮದಲ್ಲಿ ಹೋಗುತ್ತೇವೆ. ಸುಖಧಾಮದಲ್ಲಿ ಕರೆದುಕೊಂಡು ಹೋಗುವವರು ಒಬ್ಬ ತಂದೆಯೇ ಆಗಿದ್ದಾರೆ.
ನೀವು ಅನ್ಯರಿಗೆ ತಿಳಿಸಿ, ಈಗ ನಾವು ಹಿಂತಿರುಗಿ ಮನೆಗೆ ಹೋಗುತ್ತೇವೆ. ಆತ್ಮಗಳನ್ನು ತಮ್ಮ ಮನೆಗೆ
ಅಶರೀರಿ ತಂದೆಯೇ ಕರೆದುಕೊಂಡು ಹೋಗುತ್ತಾರೆ. ಈಗ ತಂದೆಯು ಬಂದಿದ್ದಾರೆ, ಅವರನ್ನು ಅರಿತುಕೊಂಡಿಲ್ಲ.
ನಾನು ಯಾವ ತನುವಿನಲ್ಲಿ ಬಂದಿದ್ದೇನೆ, ಅದನ್ನೂ ಸಹ ತಿಳಿದುಕೊಂಡಿಲ್ಲವೆಂದು ತಂದೆಯು ಹೇಳುತ್ತಾರೆ.
ರಥವಂತೂ ಇದೆಯಲ್ಲವೆ. ಪ್ರತಿಯೊಂದು ರಥದಲ್ಲಿ ಆತ್ಮವು ಪ್ರವೇಶ ಮಾಡುತ್ತದೆ, ಎಲ್ಲರ ಆತ್ಮವು
ಭೃಕುಟಿಯ ಮಧ್ಯದಲ್ಲಿರುತ್ತದೆ. ತಂದೆಯು ಬಂದು ಭೃಕುಟಿಯ ಮಧ್ಯದಲ್ಲಿಯೇ ಕುಳಿತುಕೊಳ್ಳುವರು. ತಂದೆಯು
ಬಹಳಷ್ಟು ಸಹಜವಾಗಿ ತಿಳಿಸುತ್ತಾರೆ. ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ, ತಂದೆಗೆ ಎಲ್ಲಾ
ಮಕ್ಕಳು ಸಮಾನರು. ಅವರಲ್ಲಿ ಪ್ರತಿಯೊಬ್ಬರ ಪಾತ್ರವು ತಮ್ಮ-ತಮ್ಮದೇ ಆಗಿದೆ. ಇದರಲ್ಲಿ ಯಾರೂ ಮಧ್ಯ
ಪ್ರವೇಶ ಮಾಡಲು ಸಾಧ್ಯವಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ ಶರೀರರೂಪಿ
ವಸ್ತ್ರದಿಂದ ಮಮತ್ವವನ್ನು ತೆಗೆದು ಜೀವಿಸಿದ್ದಂತೆಯೇ ಸಾಯಬೇಕು, ಅಂದರೆ ತಮ್ಮ ಎಲ್ಲಾ ಹಳೆಯ
ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ.
2. ಡಬಲ್ ಕಿರೀಟಧಾರಿಗಳಾಗಲು ವಿದ್ಯಾಭ್ಯಾಸದ ಪರಿಶ್ರಮ ಪಡಬೇಕಾಗಿದೆ. ದೈವೀ ಗುಣಗಳನ್ನು ಧಾರಣೆ
ಮಾಡಬೇಕಾಗಿದೆ. ಯಾವ ಲಕ್ಷ್ಯವಿದೆಯೋ, ಶುಭ ನುಡಿಯಿದೆಯೋ ಅಂತಹ ಪುರುಷಾರ್ಥ ಮಾಡಬೇಕಾಗಿದೆ.
ವರದಾನ:
ಸಿದ್ಧಿಯನ್ನು
ಸ್ವೀಕಾರ ಮಾಡುವ ಬದಲು ಸಿದ್ಧಿಯ ಪ್ರತ್ಯಕ್ಷ ಪ್ರಮಾಣ ತೋರಿಸುವಂತಹ ಶಕ್ತಿಶಾಲಿ ಆತ್ಮ ಭವ.
ಈಗ ನಿಮ್ಮೆಲ್ಲರ
ಸಿದ್ಧಿಯ ಪ್ರತ್ಯಕ್ಷ ರೂಪ ಕಂಡು ಬರುವುದು. ಯಾವುದೇ ಕೆಟ್ಟಿರುವ ಕಾರ್ಯ ಸಹ ನಿಮ್ಮ ದೃಷ್ಠಿಯಿಂದ,
ನಿಮ್ಮ ಸಹಯೋಗದಿಂದ ಸಹಜವಾಗಿ ಸರಿಯಾಗಿ ಬಿಡುತ್ತೆ. ಯಾವುದೇ ಸಿದ್ಧಿಯ ರೂಪದಲ್ಲಿ ನೀವು
ಹೇಳುವುದಿಲ್ಲ, ಹಾಂ! ಇದು ಆಗಿ ಬಿಡುತ್ತೆ ಎಂದು. ಆದರೆ ನಿಮ್ಮ ಗುರಿ ಸ್ವತಃ ಸಿದ್ಧಿ ಪ್ರಾಪ್ತಿ
ಮಾಡಿಸುತ್ತಿರುವುದು ಆಗ ಪ್ರಜೆಗಳು ಬೇಗ-ಬೇಗ ತಯಾರಾಗುವರು, ಎಲ್ಲಾ ಕಡೆಯಿಂದ ತೆಗೆದು ನಿಮ್ಮ ಕಡೆ
ಬರುವರು. ಈ ಸಿದ್ಧಿಯ ಪಾತ್ರ ಈಗ ನಡೆಯುವುದು ಆದರೆ ಮೊದಲು ಇಷ್ಟು ಶಕ್ತಿಶಾಲಿಯಾಗಿ ಸಿದ್ಧಿಯನ್ನು
ಸ್ವೀಕಾರ ಮಾಡಬೇಡಿ ಆಗ ಪ್ರತ್ಯಕ್ಷವಾಗುವಿರಿ.
ಸ್ಲೋಗನ್:
ಅವ್ಯಕ್ತ
ಸ್ಥಿತಿಯಲ್ಲಿ ಸ್ಥಿತರಾಗಿ ಮಿಲನ ಆಚರಿಸಿ ಆಗ ವರದಾನಗಳ ಭಂಢಾರ ತೆರೆದುಕೊಳ್ಳುವುದು.