08.09.19 Avyakt Bapdada
Kannada
Murli
23.01.85 Om Shanti Madhuban
ದಿವ್ಯ ಜನ್ಮದ ಉಡುಗೊರೆ
- ದಿವ್ಯ ನೇತ್ರ
ಇಂದು ತ್ರಿಕಾಲದರ್ಶಿ
ತಂದೆಯು ತನ್ನ ತ್ರಿಕಾಲದರ್ಶಿ, ತ್ರಿನೇತ್ರಿ ಮಕ್ಕಳನ್ನು ನೋಡುತ್ತಿದ್ದಾರೆ. ಬಾಪ್ದಾದಾರವರು
ದಿವ್ಯ ಬುದ್ಧಿ ಮತ್ತು ದಿವ್ಯ ನೇತ್ರ, ಯಾವುದನ್ನು ಮೂರನೇ ನೇತ್ರವೆಂದೂ ಸಹ ಹೇಳಲಾಗುತ್ತದೆ, ಆ
ನೇತ್ರವು ಎಲ್ಲಿಯವರೆಗೆ ಸ್ಪಷ್ಟ ಮತ್ತು ಶಕ್ತಿಶಾಲಿಯಾಗಿದೆ, ಪ್ರತಿಯೊಬ್ಬ ಮಗುವಿನ ದಿವ್ಯನೇತ್ರದ
ಶಕ್ತಿಯ ಪರ್ಸೆಂಟೇಜನ್ನು ನೋಡುತ್ತಿದ್ದಾರೆ. ಬಾಪ್ದಾದಾರವರು ಎಲ್ಲರಿಗೂ 100% ಶಕ್ತಿಶಾಲಿ
ದಿವ್ಯನೇತ್ರವನ್ನು ಜನ್ಮದ ಉಡುಗೊರೆಯಾಗಿ ಕೊಟ್ಟಿದ್ದಾರೆ. ಬಾಪ್ದಾದಾರವರು ನಂಬರ್ವಾರ್ ಆಗಿ
ಶಕ್ತಿಶಾಲಿ ನೇತ್ರವನ್ನು ಕೊಟ್ಟಿಲ್ಲ ಆದರೆ ಈ ದಿವ್ಯನೇತ್ರವನ್ನು ಪ್ರತಿಯೊಬ್ಬ ಮಗುವೂ,
ತನ್ನ-ತನ್ನ ಕಾಯಿದೆಯನುಸಾರವಾಗಿದೆ, ಪತ್ಯದ ಪ್ರಮಾಣ, ಗಮನಕೊಟ್ಟಿರುವ ಪ್ರಮಾಣವಾಗಿ ಪ್ರತ್ಯಕ್ಷ
ಕಾರ್ಯದಲ್ಲಿ ಉಪಯೋಗಿಸಿದ್ದಾರೆ. ಆದ್ದರಿಂದ ದಿವ್ಯನೇತ್ರದ ಶಕ್ತಿಯು, ಕೆಲವರದು ಸಂಪೂರ್ಣ
ಶಕ್ತಿಶಾಲಿಯಾಗಿದೆ, ಕೆಲವರದು ಶಕ್ತಿಯ ಪರ್ಸೆಂಟೇಜ್ನಲ್ಲಿ ಉಳಿದುಕೊಂಡಿದೆ. ಬಾಪ್ದಾದಾರವರ ಮೂಲಕ ಈ
ಮೂರನೇ ನೇತ್ರ, ದಿವ್ಯನೇತ್ರವು ಸಿಕ್ಕಿದೆ, ಹೇಗೆ ಇತ್ತೀಚೆಗೆ ವಿಜ್ಞಾನದ ಸಾಧನಗಳ ದುರ್ಬಿನ್ ಇದೆ,
ಅದು ದೂರದ ವಸ್ತುವನ್ನು ಸಮೀಪ ಮತ್ತು ಸ್ಪಷ್ಟವಾದ ಅನುಭವ ಮಾಡಿಸುತ್ತದೆ. ಹೀಗೆಯೇ ಈ ದಿವ್ಯನೇತ್ರವೂ
ಸಹ ದಿವ್ಯ ದುರ್ಬಿನ್ನ ಕಾರ್ಯವನ್ನು ಮಾಡುತ್ತದೆ. ಸೆಕೆಂಡಿನಲ್ಲಿ ಪರಮಧಾಮ, ಎಷ್ಟೊಂದು ದೂರವಿದೆ!
ಅದರ ಮೈಲಿಗಳನ್ನೂ ಲೆಕ್ಕ ಮಾಡಲು ಸಾಧ್ಯವಿಲ್ಲ, ಪರಮಧಾಮ ದೂರ ದೇಶವು ಎಷ್ಟೊಂದು ಸಮೀಪ ಮತ್ತು
ಸ್ಪಷ್ಟವಾಗಿ ಕಾಣಿಸುತ್ತದೆ. ವಿಜ್ಞಾನದ ಸಾಧನಗಳು ಈ ಸಾಕಾರ ಸೃಷ್ಟಿಯ ಸೂರ್ಯ, ಚಂದ್ರ,
ನಕ್ಷತ್ರಗಳವರೆಗೆ ನೋಡಬಹುದು. ಆದರೆ ಈ ದಿವ್ಯ ನೇತ್ರವು ಮೂರೂ ಲೋಕಗಳನ್ನು, ಮೂರೂ ಕಾಲಗಳನ್ನೂ
ನೋಡಬಹುದು. ಈ ದಿವ್ಯನೇತ್ರವನ್ನು ಅನುಭವದ ನೇತ್ರವೆಂದೂ ಹೇಳುತ್ತಾರೆ. ಅನುಭವ ಕಣ್ಣು, ಯಾವ
ಕಣ್ಣಿನ ಮೂಲಕ 5000 ವರ್ಷದ ಮಾತುಗಳನ್ನೂ ಇಷ್ಟೂ ಸ್ಪಷ್ಟವಾಗಿ ನೋಡಬಹುದು, ಹೇಗೆಂದರೆ ನೆನ್ನೆಯ
ಮಾತಂತೆ. 5000 ವರ್ಷಗಳ ಮಾತೆಲ್ಲಿ! ಮತ್ತು ನೆನ್ನೆಯೆಲ್ಲಿ! ಅಂದಮೇಲೆ ದೂರದ ಮಾತು ಸಮೀಪದ ಮತ್ತು
ಸ್ಪಷ್ಟವಾಗಿ ನೋಡುತ್ತೀರಲ್ಲವೆ. ಅನುಭವ ಮಾಡುತ್ತೀರಾ - ನೆನ್ನೆ ನಾನು ಪೂಜ್ಯ ದೇವಾತ್ಮನಿದ್ದೆನು
ಮತ್ತು ನಾಳೆ ಮತ್ತೆ ಆಗುವೆನು. ಇಂದು ಬ್ರಾಹ್ಮಣ ನಾಳೆ ದೇವತಾ. ಅಂದಾಗ ಇಂದು ಮತ್ತು ನಾಳೆಯ ಮಾತು
ಸಹಜವಾಯಿತಲ್ಲವೆ. ಶಕ್ತಿಶಾಲಿ ನೇತ್ರವಿರುವ ಮಕ್ಕಳು ತಮ್ಮ ಡಬಲ್ ಕಿರೀಟಧಾರಿ, ಅಲಂಕಾರಿ
ಸ್ವರೂಪವನ್ನು ಸದಾ ಸನ್ಮುಖದಲ್ಲಿ ಸ್ಪಷ್ಟವಾಗಿ ನೋಡುತ್ತಿರುತ್ತಾರೆ. ಹೇಗೆ ಸ್ಥೂಲ ವಸ್ತ್ರದಿಂದ
ಅಲಂಕಾರಿಯಾಗಿರುವಂತೆ ಸನ್ಮುಖದಲ್ಲಿ ಕಾಣಿಸುತ್ತದೆ ಮತ್ತು ತಿಳಿಯುತ್ತೀರಿ - ಈಗೀಗ ಧಾರಣೆ
ಮಾಡಿದೆನೆಂದರೆ ಮಾಡಿದೆನು. ಹೀಗೆ ಈ ದೇವತಾ ಶರೀರವೆಂಬ ವಸ್ತ್ರವನ್ನು ಸನ್ಮುಖದಲ್ಲಿ
ನೋಡುತ್ತಿದ್ದೀರಲ್ಲವೆ. ನಾಳೆ ಧಾರಣೆ ಮಾಡಲೇಬೇಕು ಅಷ್ಟೇ. ಅದು ಕಾಣಿಸುತ್ತಿದೆಯಲ್ಲವೆ. ಈಗ
ತಯಾರಾಗುತ್ತಿದ್ದೀರಾ ಅಥವಾ ಸನ್ಮುಖದಲ್ಲಿ ತಯಾರಾಗಿರುವುದು ಕಾಣಿಸುತ್ತಿದೆಯೇ? ಹೇಗೆ ಬ್ರಹ್ಮಾ
ತಂದೆಯನ್ನು ನೋಡಿದಿರಿ, ತಮ್ಮ ಭವಿಷ್ಯ ವಸ್ತ್ರವಾದ ಶ್ರೀಕೃಷ್ಣ ಸ್ವರೂಪವು ಸನ್ಮುಖದಲ್ಲಿ ಸದಾ
ಸ್ಪಷ್ಟವಾಗಿತ್ತು. ಅದೇರೀತಿ ಶಕ್ತಿಶಾಲಿ ನೇತ್ರದಿಂದ ತಮ್ಮೆಲ್ಲರಿಗೂ ಸಹ ಸ್ಪಷ್ಟ ಮತ್ತು
ಸನ್ಮುಖದಲ್ಲಿ ಕಾಣಿಸುತ್ತಿದೆಯೇ? ಈಗೀಗ ಫರಿಶ್ತಾ, ಈಗೀಗ ಫರಿಶ್ತಾ ಸೋ ದೇವತಾ. ನಶೆಯೂ ಇದೆ ಮತ್ತು
ಸಾಕ್ಷಾತ್ ದೇವತೆಯಾಗುವ ದಿವ್ಯ ನೇತ್ರದ ಮೂಲಕ ಸಾಕ್ಷಾತ್ಕಾರವೂ ಆಗಿದೆ. ಅಂದಮೇಲೆ ಇಂತಹ ಶಕ್ತಿಶಾಲಿ
ನೇತ್ರವಿದೆಯೇ? ಅಥವಾ ನೋಡುವ ಶಕ್ತಿಯು ಸ್ವಲ್ಪ ಕಡಿಮೆಯಾಗಿ ಬಿಟ್ಟಿದೆಯೇ? ಹೇಗೆ ಸ್ಥೂಲ ನೇತ್ರದ
ಶಕ್ತಿಯು ಕಡಿಮೆಯಾಗಿ ಬಿಡುತ್ತದೆಯೆಂದರೆ ಸ್ಪಷ್ಟ ವಸ್ತುವೂ ಸಹ ಹೇಗೆಂದರೆ, ಪರದೆಯೊಳಗೆ ಅಥವಾ
ಮೋಡಗಳೊಳಗೆ ಇರುವಂತೆ ಕಾಣಿಸುತ್ತದೆ. ಹೀಗೆಯೇ ತಾವೂ ಸಹ ದೇವತೆಯಂತು ಆಗಬೇಕು, ಆಗಿದ್ದಿರಿ ಆದರೆ
ಏನಾಗಿತ್ತು, ಹೇಗಿತ್ತು, ಈ 'ಇತ್ತು' ಎನ್ನುವ ಪರದೆಯೊಳಗಡೆಯಂತು ಕಾಣಿಸುವುದಿಲ್ಲ.
ಸ್ಪಷ್ಟವಿದೆಯಿದೆಯೇ? ನಿಶ್ಚಯದ ಪರದೆ ಮತ್ತು ಸ್ಮೃತಿಯ ಮಣಿಯೆರಡೂ ಸಹ ಶಕ್ತಿಶಾಲಿಯಾಗಿದೆಯಲ್ಲವೆ
ಅಥವಾ ಮಣಿಯು ಚೆನ್ನಾಗಿದೆ ಮತ್ತು ಪರದೆಯು ಬಲಹೀನವಾಗಿದೆಯೆ. ಒಂದು ಬಲಹೀನವಿದ್ದರೂ ಸಹ
ಸ್ಪಷ್ಟವಾಗುವುದಿಲ್ಲ. ಅಂದಮೇಲೆ ಪರಿಶೀಲನೆ ಮಾಡಿರಿ ಅಥವಾ ಪರಿಶೀಲನೆ ಮಾಡಿಸಿರಿ - ನೇತ್ರದ
ಶಕ್ತಿಯು ಕಡಿಮೆಯಂತು ಆಗಿಲ್ಲವೆ. ಒಂದುವೇಳೆ ಜನ್ಮದಿಂದ ಶ್ರೀಮತವೆಂಬ ಪತ್ಯೆವನ್ನು ಮಾಡುತ್ತಾ
ಬಂದಿದ್ದೀರೆಂದರೆ, ನೇತ್ರವು ಸದಾ ಶಕ್ತಿಶಾಲಿಯಾಗಿರುವುದು. ಶ್ರೀಮತದ ಪತ್ಯದಲ್ಲಿ
ಕೊರತೆಯಿದೆಯೆಂದರೆ ಶಕ್ತಿಯೂ ಕಡಿಮೆಯಿದೆ. ಅದನ್ನು ಶ್ರೀಮತದ ಆಶೀರ್ವಾದವೆಂದಾದರೂ ಹೇಳಿ,
ಔಷಧಿಯೆಂದಾದರೂ ಹೇಳಿ, ಪತ್ಯೆವೆಂದಾದರೂ ಹೇಳಿರಿ, ಅದನ್ನು ಮಾಡುತ್ತೀರೆಂದರೆ ಪುನಃ ಶಕ್ತಿಶಾಲಿಯಾಗಿ
ಬಿಡುತ್ತೀರಿ. ಅಂದಮೇಲೆ ಈ ನೇತ್ರವು ದಿವ್ಯ ದುರ್ಬಿನ್ ಆಗಿದೆ.
ಈ ನೇತ್ರವು ಶಕ್ತಿಶಾಲಿ ಯಂತ್ರವೂ ಆಗಿದೆ. ಅದರ ಮೂಲಕ ಯಾರು ಹೇಗಿದ್ದಾರೆಯೋ, ಆತ್ಮಿಕ ರೂಪವನ್ನು,
ಆತ್ಮದ ವಿಶೇಷತೆಯನ್ನು ಸಹಜವಾಗಿ ಹಾಗೂ ಸ್ಪಷ್ಟವಾಗಿಯೂ ನೋಡಬಹುದು. ಶರೀರದಲ್ಲಿ ವಿರಾಜಮಾನವಾಗಿರುವ
ಗುಪ್ತಆತ್ಮನನ್ನು ಹೀಗೆ ನೋಡಬಹುದು, ಹೇಗೆಂದರೆ ಸ್ಥೂಲ ನೇತ್ರದ ಮೂಲಕ ಸ್ಥೂಲ ಶರೀರವನ್ನು
ನೋಡುತ್ತೀರಿ. ಹೀಗೆ ಸ್ಪಷ್ಟವಾಗಿ ಆತ್ಮವು ಕಾಣಿಸುತ್ತಿದೆಯಲ್ಲವೆ ಅಥವಾ ಶರೀರವು ಕಾಣಿಸುತ್ತದೆಯೇ?
ದಿವ್ಯನೇತ್ರದ ಮೂಲಕ ದಿವ್ಯ ಸೂಕ್ಷ್ಮಆತ್ಮವೇ ಕಾಣಿಸುತ್ತದೆ ಮತ್ತು ಪ್ರತಿಯೊಂದು ಆತ್ಮದ ವಿಶೇಷತೆಯೇ
ಕಂಡುಬರುತ್ತದೆ. ಹೇಗೆ ನೇತ್ರವು ದಿವ್ಯವಾಗಿದೆಯೆಂದಾಗ ವಿಶೇಷತೆ ಅರ್ಥಾತ್ ಗುಣವೂ ದಿವ್ಯವಾಗಿದೆ.
ಅವಗುಣವು ಬಲಹೀನತೆಯಾಗಿದೆ. ಬಲಹೀನ ನೇತ್ರವು ಬಲಹೀನತೆಯನ್ನು ನೋಡುತ್ತದೆ. ಹೇಗೆ ಸ್ಥೂಲ ನೇತ್ರವು
ಬಲಹೀನವಾಗುತ್ತದೆಯೆಂದರೆ ಕಪ್ಪು-ಕಪ್ಪಾದ ಮಚ್ಚೆಯು ಕಾಣಿಸುತ್ತದೆ. ಇಂತಹ ಬಲಹೀನ ನೇತ್ರವು ಅವಗುಣದ
ಕಪ್ಪು(ಕೊರತೆ) ಮಚ್ಚೆಗಳನ್ನು ನೋಡುತ್ತದೆ. ಬಾಪ್ದಾದಾರವರು ಬಲಹೀನ ನೇತ್ರವನ್ನು ಕೊಟ್ಟಿಲ್ಲ.
ಸ್ವಯಂ ತಾವೇ ಬಲಹೀನವನ್ನಾಗಿ ಮಾಡಿಕೊಂಡಿದ್ದೀರಿ. ವಾಸ್ತವದಲ್ಲಿ ಈ ಶಕ್ತಿಶಾಲಿ ಯಂತ್ರವೆಂಬ
ನೇತ್ರವು ನಡೆಯುತ್ತಾ-ಸುತ್ತಾಡುತ್ತಾ ಸ್ವಾಭಾವಿಕ ರೂಪದಲ್ಲಿ ಸದಾ ಆತ್ಮಿಕ ರೂಪವನ್ನೇ ನೋಡುತ್ತದೆ.
ಇದು ಶರೀರವೇ ಅಥವಾ ಆತ್ಮವೇ, ಇದೋ ಅಥವಾ ಅದೋ ಎಂದು ಪರಿಶ್ರಮ ಪಡಬೇಕಾಗಿರುವುದಿಲ್ಲ. ಇದು ಬಲಹೀನ
ನೇತ್ರದ ಚಿಹ್ನೆಯಾಗಿದೆ, ಹೇಗೆ ವಿಜ್ಞಾನಿಗಳು ಶಕ್ತಿಶಾಲಿ ಗ್ಲಾಸ್ ಮೂಲಕ ಎಲ್ಲಾ ಕೀಟಾಣುವನ್ನು
ಸ್ಪಷ್ಟವಾಗಿ ನೋಡಬಹುದು. ಹೀಗೆ ಈ ಶಕ್ತಿಶಾಲಿ ದಿವ್ಯನೇತ್ರವು ಮಾಯೆಯ ಅತಿ ಸೂಕ್ಷ್ಮ ಸ್ವರೂಪವನ್ನು
ಸ್ಪಷ್ಟವಾಗಿ ನೋಡಬಹುದು. ಆದ್ದರಿಂದ ಕೀಟಾಣುಗಳನ್ನು ವೃದ್ಧಿಯಾಗಲು ಬಿಡುವುದಿಲ್ಲ, ಸಮಾಪ್ತಿ ಮಾಡಿ
ಬಿಡುತ್ತದೆ. ಯಾರದೇ ಮಾಯೆಯ ರೋಗವನ್ನು ಮುಂಚಿತವಾಗಿಯೇ ತಿಳಿದುಕೊಂಡು ಸಮಾಪ್ತಿ ಮಾಡಿ, ಸದಾ
ನಿರೋಗಿಯಾಗಿರುತ್ತಾರೆ.
ಇಂತಹ ಶಕ್ತಿಶಾಲಿ ದಿವ್ಯ ನೇತ್ರವಾಗಿದೆ. ಈ ದಿವ್ಯ ನೇತ್ರವು ದಿವ್ಯ ಟಿ.ವಿ., ಸಹ ಆಗಿದೆ.
ಇತ್ತೀಚೆಗೆ ಟಿ.ವಿ., ಎಲ್ಲರಿಗೂ ಇಷ್ಟವಾಗುತ್ತದೆಯಲ್ಲವೆ. ಇದನ್ನು ಟಿ.ವಿ.ಯೆಂದಾದರೂ ಹೇಳಿ ಅಥವಾ
ದೂರದರ್ಶನವೆಂದಾದರೂ ಹೇಳಿ, ಇದರಲ್ಲಿ ತಮ್ಮ ಸ್ವರ್ಗದ ಸರ್ವ ಜನ್ಮಗಳನ್ನು ಅರ್ಥಾತ್ ತಮ್ಮ 21
ಜನ್ಮಗಳ ದಿವ್ಯ ಫಿಲ್ಮ್ ನ್ನು ನೋಡಬಲ್ಲಿರಿ. ತಮ್ಮ ರಾಜ್ಯದ ಸುಂದರ ದೃಶ್ಯಗಳನ್ನು ನೋಡಬಹುದು.
ಪ್ರತೀ ಜನ್ಮದ ಆತ್ಮ ಕಥೆಯನ್ನು ನೋಡಬಹುದು. ತಮ್ಮ ಕಿರೀಟ, ಸಿಂಹಾಸನ, ರಾಜ್ಯಭಾಗ್ಯವನ್ನು ನೋಡಬಹುದು.
ದಿವ್ಯ ದರ್ಶನವೆಂದಾದರೂ ಹೇಳಿ ಅಥವಾ ದೂರದರ್ಶನವೆಂದಾದರೂ ಹೇಳಿ. ದಿವ್ಯದರ್ಶನದ ನೇತ್ರವು
ಶಕ್ತಿಶಾಲಿಯಾಗಿದೆಯಲ್ಲವೆ? ಯಾವಾಗ ಫ್ರೀ ಅಗುತ್ತೀರಿ, ಆಗ ಈ ಫಿಲ್ಮ್ ನ್ನು ನೋಡಿ, ಇತ್ತೀಚಿನ
ನೃತ್ಯಗಳನ್ನು ನೋಡಬೇಡಿ, ಅದು ಅಪಾಯಕರ ನೃತ್ಯವಾಗಿದೆ. ಫರಿಶ್ತೆಗಳ ನೃತ್ಯ, ದೇವತೆಗಳ ನೃತ್ಯವನ್ನು
ನೋಡಿರಿ. ಸ್ಮೃತಿಯ ಸ್ವಿಚಂತು ಸರಿಯಾಗಿದೆಯಲ್ಲವೆ. ಒಂದುವೇಳೆ ಸ್ವಿಚ್ ಸರಿಯಿಲ್ಲವೆಂದರೆ, ಅದನ್ನು
ಉಪಯೋಗಿಸಿದರೂ ಕಾಣಿಸುವುದಿಲ್ಲ. ಈ ನೇತ್ರವು ಎಷ್ಟೊಂದು ಶ್ರೇಷ್ಠವೆಂದು ತಿಳಿಯಿತೆ! ಇತ್ತೀಚೆಗೆ
ಮೆಜಾರಿಟಿಯಲ್ಲಿ ಯಾವುದೇ ವಸ್ತುವಿನ ಅನ್ವೇಷಣೆ ಮಾಡುತ್ತಾರೆಂದರೆ ಲಕ್ಷ್ಯವನ್ನಿಡುತ್ತಾರೆ - ಒಂದು
ವಸ್ತುವು ಭಿನ್ನ-ಭಿನ್ನ ಕಾರ್ಯದಲ್ಲಿ ಉಪಯೋಗಕ್ಕೆ ಬರಲಿ ಎಂದು. ಹಾಗೆಯೇ ಈ ದಿವ್ಯನೇತ್ರವು ಅನೇಕ
ಕಾರ್ಯಗಳನ್ನು ಸಿದ್ಧ ಮಾಡುವಂತದ್ದಾಗಿದೆ. ಬಾಪ್ದಾದಾರವರು ಮಕ್ಕಳ ಬಲಹೀನತೆಯ ಬಗ್ಗೆ ಕೆಲವೊಮ್ಮೆ
ದೂರುಗಳನ್ನು ಕೇಳಿಸಿಕೊಂಡು ಇದನ್ನೇ ಹೇಳುತ್ತಾರೆ, ದಿವ್ಯ ಬುದ್ಧಿಯು ಸಿಕ್ಕಿದೆ, ದಿವ್ಯ ನೇತ್ರವು
ಸಿಕ್ಕಿದೆ, ಇದನ್ನು ವಿಧಿಪೂರ್ವಕವಾಗಿ ಸದಾ ಉಪಯೋಗ ಮಾಡುತ್ತಿರುತ್ತೀರೆಂದರೆ ಯೋಚನೆ ಮಾಡುವುದಕ್ಕೂ
ಸಮಯವಿರುವುದಿಲ್ಲ, ನೋಡುವುದಕ್ಕೂ ಸಮಯವಿರುವುದಿಲ್ಲ. ಬೇರೇನನ್ನೂ ಯೋಚಿಸುವುದಿಲ್ಲ, ನೋಡುವುದಿಲ್ಲ.
ಅದರಿಂದ ಯಾವುದೇ ದೂರಗಳಿರಲು ಸಾಧ್ಯವಿಲ್ಲ. ಯೋಚಿಸುವುದು ಮತ್ತು ನೋಡುವುದು - ಕಂಪ್ಲೀಟ್ ಆಗುವ
ಅಥವಾ ಕಂಪ್ಲೇಂಟ್ ಮಾಡುವುದೆರಡರ ವಿಶೇಷ ಆಧಾರವಾಗಿದೆ. ಅದನ್ನು ನೋಡುತ್ತಾ, ಕೇಳುತ್ತಾ ಸದಾ
ದಿವ್ಯವನ್ನು ಯೋಚಿಸಿ, ಹೇಗೆ ಯೋಚಿಸುತ್ತೀರಿ ಹಾಗೆಯೇ ಮಾಡುವುದಿರುತ್ತದೆ ಆದ್ದರಿಂದ ಇವೆರಡೂ
ದಿವ್ಯ ಪ್ರಾಪ್ತಿಗಳನ್ನು ಸದಾ ಜೊತೆಯಿಟ್ಟುಕೊಳ್ಳಿರಿ. ಸಹಜವಾಯಿತಲ್ಲವೆ. ಇದಿರುವುದು ಸಮರ್ಥ ಆದರೆ
ಏನಾಗಿ ಬಿಡುತ್ತೀರಿ? ಯಾವಾಗ ಸ್ಥಾಪನೆಯಾಯಿತು, ಆಗ ಚಿಕ್ಕ ಚಿಕ್ಕ ಮಕ್ಕಳು ಡೈಲಾಗ್ ಮಾಡುತ್ತಿದ್ದರು.
ಇದ್ದಿದ್ದು ಸಮರ್ಥರಾಗಿ ಆದರೆ ಭೋಲಾ ಭಾಯಿ ಆಗಿ ಬಿಡುತ್ತಾರೆ. ಅಂದಾಗ ಭೋಲಾ ಭಾಯಿ ಆಗಬಾರದು. ಸದಾ
ಸಮರ್ಥರಾಗಿರಿ ಮತ್ತು ಅನ್ಯರನ್ನೂ ಸಮರ್ಥರನ್ನಾಗಿ ಮಾಡಿರಿ. ತಿಳಿಯಿತೆ. ಒಳ್ಳೆಯದು.
ಸದಾ ದಿವ್ಯ ಬುದ್ಧಿ ಮತ್ತು ದಿವ್ಯ ನೇತ್ರವನ್ನು ಕಾರ್ಯದಲ್ಲಿ ಉಪಯೋಗಿಸುವಂತಹ, ಸದಾ ದಿವ್ಯ
ಬುದ್ಧಿಯ ಮೂಲಕ ಶ್ರೇಷ್ಠ ಮನನ, ದಿವ್ಯ ನೇತ್ರದ ಮೂಲಕ ದಿವ್ಯ ದೃಶ್ಯವನ್ನು ನೋಡುವುದರಲ್ಲಿ
ಮಗ್ನರಾಗಿರುವ, ಸದಾ ತಮ್ಮ ಭವಿಷ್ಯ ದೇವ ಸ್ವರೂಪವನ್ನು ಸ್ಪಷ್ಟವಾಗಿ ಅನುಭವ ಮಾಡುವಂತಹ, ಸದಾ ಇಂದು
ಮತ್ತು ನಾಳೆ - ಇಷ್ಟೂ ಸಮೀಪದ ಅನುಭವ ಮಾಡುವಂತಹ ಶಕ್ತಿಶಾಲಿ ದಿವ್ಯ ನೇತ್ರವಿರುವ ತ್ರಿನೇತ್ರಿ,
ತ್ರಿಕಾಲದರ್ಶಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ವ್ಯಕ್ತಿಗತ
ವಾರ್ತಾಲಾಪ:
1. ಸಹಜಯೋಗಿಯಾಗುವ ವಿಧಿ - ಎಲ್ಲರೂ ಸಹಜಯೋಗಿ ಆತ್ಮರಾಗಿದ್ದೀರಲ್ಲವೆ. ಸದಾ ತಂದೆಯ ಸರ್ವ ಸಂಬಂಧಗಳ
ಸ್ನೇಹದಲ್ಲಿ ಸಮಾವೇಶವಾಗಿರುವವರು. ಸರ್ವ ಸಂಬಂಧದ ಸ್ನೇಹವೇ ಸಹಜ ಮಾಡಿ ಬಿಡುತ್ತದೆ. ಎಲ್ಲಿ
ಸ್ನೇಹದ ಸಂಬಂಧವಿದೆಯೋ ಅಲ್ಲಿ ಸಹಜವಿದೆ ಮತ್ತು ಯಾವುದು ಸಹಜವಿದೆಯೋ ಅದು ನಿರಂತರವಿರುವುದಾಗಿದೆ.
ಅಂದಮೇಲೆ ಇಂತಹ ಸಹಜಯೋಗಿ ಆತ್ಮವು ತಂದೆಯ ಸರ್ವ ಸ್ನೇಹಿ ಸಂಬಂಧದ ಅನುಭೂತಿ ಮಾಡುತ್ತೀರಾ?
ಉದ್ಯಾನವನ (ಕೃಷ್ಣನ ಗೆಳೆಯ) ಸಮಾನವಿದ್ದೀರಾ ಅಥವಾ ಗೋಪಿಯ ಸಮಾನವಿದ್ದೀರಾ? ಉದವನು ಕೇವಲ ಜ್ಞಾನದ
ವರ್ಣನೆ ಮಾಡುತ್ತಿದ್ದನು. ಗೋಪ-ಗೋಪಿಕೆಯರು ಪ್ರಭು ಪ್ರೀತಿಯ ಅನುಭವ ಮಾಡುವವರು. ಅಂದಾಗ ಸರ್ವ
ಸಂಬಂಧದ ಅನುಭವ - ಇದಾಗಿದೆ ವಿಶೇಷತೆ. ಈ ಸಂಗಮಯುಗದಲ್ಲಿ ಈ ವಿಶೇಷ ಅನುಭವವನ್ನು ಮಾಡುವುದೇ
ವರದಾನವನ್ನು ಪ್ರಾಪ್ತಿ ಮಾಡಿಕೊಳ್ಳುವುದಾಗಿದೆ. ಜ್ಞಾನವನ್ನು ಕೇಳುವುದು, ತಿಳಿಸುವುದು ಬೇರೆ
ಮಾತಾಗಿದೆ. ಸಂಬಂಧವನ್ನು ನಿಭಾಯಿಸುವುದು, ಸಂಬಂಧದ ಶಕ್ತಿಯಿಂದ ನಿರಂತರ ಲಗನ್ನಲ್ಲಿ
ಮಗ್ನರಾಗಿರುವುದು, ಅದು ಬೇರೆ ಮಾತಾಗಿದೆ. ಅಂದಮೇಲೆ ಸದಾ ಸರ್ವ ಸಂಬಂಧಗಳ ಆಧಾರದ ಮೇಲೆ ಸಹಯೋಗಿ ಭವ.
ಇದೇ ಅನುಭವವನ್ನು ಹೆಚ್ಚಿಸುತ್ತಾ ಸಾಗಿರಿ. ಈ ಮಗ್ನಾವಸ್ಥೆಯು ಗೋಪ-ಗೋಪಿಕೆಯರ ವಿಶೇಷತೆಯಾಗಿದೆ.
ಲಗನ್ನಲ್ಲಿರುವುದು ಬೇರೆ ಮಾತಾಗಿದೆ ಆದರೆ ಲಗನ್ನಲ್ಲಿ ಮಗ್ನರಾಗಿರುವುದು - ಇದೇ ಶ್ರೇಷ್ಠವಾದ
ಅನುಭವವಾಗಿದೆ.
2. ಶ್ರೇಷ್ಠ ಸ್ಥಿತಿಯವರು ವಿಘ್ನಗಳ ಪ್ರಭಾವದಿಂದ ದೂರವಿರುತ್ತಾರೆ - ಯಾವಾಗ ವಿಘ್ನದ
ಪ್ರಭಾವದಲ್ಲಂತು ಬರುವುದಿಲ್ಲವೇ? ಶ್ರೇಷ್ಠ ಸ್ಥಿತಿಯಿರುತ್ತದೆಯೆಂದರೆ ಶ್ರೇಷ್ಠ ಸ್ಥಿತಿಯುಳ್ಳವರು
ವಿಘ್ನಗಳ ಪ್ರಭಾವದಿಂದ ದೂರವಾಗಿ ಬಿಡುತ್ತಾರೆ. ಹೇಗೆಂದರೆ ಆಕಾಶದಲ್ಲಿ ಹೋಗುತ್ತಾರೆಂದರೆ ಮೇಲೆ
ಹೋಗುತ್ತಾರೆ, ಧರಣಿಯ ಪ್ರಭಾವದಿಂದ ಭಿನ್ನವಾಗಿ ಬಿಡುತ್ತಾರೆ. ಹಾಗೆಯೇ ಯಾವುದೇ ವಿಘ್ನಗಳ
ಪ್ರಭಾವದಿಂದ ಸದಾ ಸುರಕ್ಷಿತವಾಗಿರುತ್ತಾರೆ. ಯಾವುದೇ ಪ್ರಕಾರದ ಪರಿಶ್ರಮದ ಅನುಭವವನ್ನು ಅವರು
ಮಾಡಬೇಕಾಗುತ್ತದೆ, ಅವರು ಪ್ರೀತಿಯಲ್ಲಿ ಇರುವುದಿಲ್ಲ. ಅಂದಮೇಲೆ ಸರ್ವ ಸಂಬಂಧಗಳಿಂದ ಸ್ನೇಹದ
ಅನುಭೂತಿಯಲ್ಲಿರಿ. ಸ್ನೇಹವಿದೆ ಆದರೆ ಅದನ್ನು ಇಮರ್ಜ್ ಮಾಡಿಕೊಳ್ಳಿ. ಕೇವಲ ಅಮೃತವೇಳೆಯಲ್ಲಿ ನೆನಪು
ಮಾಡಿದಿರಿ ನಂತರ ಕಾರ್ಯದಲ್ಲಿ ಬ್ಯುಸಿಯಾಗಿ ಬಿಟ್ಟಿರೆಂದರೆ ಮರ್ಜ್ ಆಗಿ ಬಿಡುತ್ತದೆ. ಇಮರ್ಜ್
ರೂಪದಲ್ಲಿ ಇಟ್ಟುಕೊಂಡಿರುತ್ತೀರೆಂದರೆ ಸದಾ ಶಕ್ತಿಶಾಲಿಯಾಗಿರುತ್ತೀರಿ.
ವಿಶೇಷವಾಗಿ
ಆಯ್ಕೆ ಮಾಡಿರುವ ಅವ್ಯಕ್ತ-ಮಹಾವಾಕ್ಯ
ಎಲ್ಲರ ಪ್ರತಿ
ಶುಭಚಿಂತಕರಾಗಿರಿ. ಯಾರು ಸರ್ವರ ಶುಭಚಿಂತಕರಾಗಿರುತ್ತಾರೆ, ಅವರಿಗೆ ಸರ್ವರ ಸಹಯೋಗವು ಸ್ವತಹವಾಗಿಯೇ
ಪ್ರಾಪ್ತಿಯಾಗುತ್ತದೆ. ಶುಭಚಿಂತಕ ಭಾವನೆಯು ಅನ್ಯರ ಮನಸ್ಸಿನಲ್ಲಿ ಸಹಯೋಗದ ಭಾವನೆಯು ಸಹಜವಾಗಿ ಹಾಗೂ
ಸ್ವತಹವಾಗಿಯೇ ಉತ್ಪನ್ನ ಮಾಡುತ್ತದೆ. ಸ್ನೇಹವೇ ಸಹಯೋಗಿಯನ್ನಾಗಿ ಮಾಡಿ ಬಿಡುತ್ತದೆ. ಅಂದಮೇಲೆ ಸದಾ
ಶುಭಚಿಂತನೆಯಿಂದ ಸಂಪನ್ನವಾಗಿರಿ, ಶುಭಚಿಂತಕರಾಗಿದ್ದು ಸರ್ವರನ್ನೂ ಸ್ನೇಹಿ, ಸಹಯೋಗಿಯನ್ನಾಗಿ
ಮಾಡಿರಿ. ಅವಶ್ಯಕತೆಯಿರುವ ಸಮಯದಲ್ಲಿ ಯಾರೆಷ್ಟು ಸಹಯೋಗಿಯಾದರು, ಅದು ಭಲೆ ಜೀವನದಲ್ಲಿರಬಹುದು, ಭಲೆ
ಸೇವೆಯಲ್ಲಿಯೇ ಇರಬಹುದು...... ಅವರಿಗೆ ಡ್ರಾಮಾನುಸಾರವಾಗಿ ವಿಶೇಷ ಶಕ್ತಿಯು ಸಿಗುತ್ತದೆ. ತಮ್ಮ
ಪುರುಷಾರ್ಥವಂತು ಇದ್ದೇ ಇರುತ್ತದೆ ಆದರೆ ಹೆಚ್ಚಿನ ಶಕ್ತಿಯು ಸಿಗುತ್ತದೆ. ಸೇವೆಯ ಯೋಜನೆಯಲ್ಲಿ
ಎಷ್ಟು ಸಂಪರ್ಕದಲ್ಲಿ ಸಮೀಪಕ್ಕೆ ತರುತ್ತೀರಿ, ಅಷ್ಟೂ ಸೇವೆಯ ಪ್ರತ್ಯಕ್ಷ ಫಲಿತಾಂಶವು ಕಾಣಿಸುತ್ತದೆ.
ಸಂದೇಶವನ್ನು ಕೊಡುವ ಸೇವೆಯನ್ನಂತು ಮಾಡುತ್ತಾ ಬಂದಿದ್ದೀರಿ, ಮಾಡುತ್ತಿರಿ ಆದರೆ ವಿಶೇಷವಾಗಿ ಈ
ವರ್ಷದಲ್ಲಿ ಕೇವಲ ಸಂದೇಶವನ್ನು ಕೊಡುವುದಲ್ಲ, ಸಹಯೋಗಿಯನ್ನಾಗಿ ಮಾಡಬೇಕು ಅರ್ಥಾತ್ ಸಂಪರ್ಕದಲ್ಲಿ
ಸಮೀಪಕ್ಕೆ ತರಬೇಕು. ಕೇವಲ ಒಂದು ಗಂಟೆಗಾಗಿ ಅಥವಾ ಫಾರ್ಮ್ ತುಂಬಿಸುವ ಸಮಯದವರೆಗೆ ಸಹಯೋಗಿಯನ್ನಾಗಿ
ಮಾಡಬಾರದು ಆದರೆ ಅವರನ್ನು ಸಹಯೋಗದ ಮೂಲಕ ಸಮೀಪ ಸಂಪರ್ಕ, ಸಂಬಂಧದಲ್ಲಿ ತರಬೇಕಾಗಿದೆ.
ಯಾವುದೇ ಸೇವೆಯನ್ನು ಮಾಡುತ್ತೀರೆಂದರೆ, ಅದರ ಲಕ್ಷ್ಯವನ್ನು ಸದಾ ಇಟ್ಟುಕೊಳ್ಳಬೇಕು - ಇಂತಹ
ಸಹಯೋಗಿಯಾಗಲಿ, ಅದರಿಂದ ತಾವು ಸ್ವಯಂ ‘ಮೈಟ್' ಆಗಿ ಬಿಡಿ ಮತ್ತು ಅವರು ‘ಮೈಕ್' ಆಗಿ ಬಿಡಲಿ.
ಅಂದಮೇಲೆ ಸೇವೆಯ ಲಕ್ಷ್ಯದಲ್ಲಿ ‘ಮೈಕ್' ತಯಾರಿ ಮಾಡಬೇಕು, ಅನುಭವ ಆಧಾರದಿಂದ ತಮ್ಮ ಅಥವಾ ತಂದೆಯ
ಜ್ಞಾನವನ್ನು ಪ್ರತ್ಯಕ್ಷ ಮಾಡಲಿ. ಯಾರ ಪ್ರಭಾವವು ಸ್ವತಹವಾಗಿಯೇ ಅನ್ಯರ ಮೇಲೆ ಸಹಜವಾಗಿ
ಬೀಳುತ್ತಿರಲಿ, ಇಂತಹ ಮೈಕ್ ತಯಾರು ಮಾಡಿರಿ. ಲಕ್ಷ್ಯವನ್ನಿಡಿ - ತಮ್ಮ ಶಕ್ತಿಯನ್ನು ಉಪಯೋಗಿಸುವ
ಬದಲು ಅನ್ಯರ ಶಕ್ತಿಯನ್ನು ಈ ಈಶ್ವರೀಯ ಕಾರ್ಯದಲ್ಲಿ ಉಪಯೋಗಿಸಲಿ. ಯಾವುದೇ ವರ್ಗದ ಸಹಯೋಗಿಗಳು
ಪ್ರತೀ ಕ್ಷೇತ್ರದಲ್ಲಿ ಚಿಕ್ಕ-ಪುಟ್ಟ ದೇಶದಲ್ಲಿಯೂ ಸಿಗಲು ಸಾಧ್ಯವಿದೆ. ವರ್ತಮಾನ ಸಮಯದಲ್ಲಿ ಇಂತಹ
ಕೆಲವು ಸಂಸ್ಥೆಗಳಿವೆ, ಅವರಬಳಿ ಶಕ್ತಿಯಿದೆ ಆದರೆ ಅದನ್ನು ಉಪಯೋಗ ಮಾಡುವ ವಿಧಿಯು ಬರುವುದಿಲ್ಲ.
ಅವರಿಗೆ ಇಂತಹದ್ಯಾವುದೂ ಕಾಣಿಸುವುದಿಲ್ಲ. ಅವರು ಬಹಳ ಪ್ರೀತಿಯಿಂದ ತಮಗೆ ಸಹಯೋಗವನ್ನು ಕೊಡುತ್ತಾರೆ,
ಸಮೀಪಕ್ಕೆ ಬರುತ್ತಾರೆ. ಮತ್ತು ತಮ್ಮ 9 ಲಕ್ಷ ಪ್ರಜೆಗಳಲ್ಲಿಯೂ ವೃದ್ಧಿಯಾಗಿ ಬಿಡುತ್ತಾರೆ. ಕೆಲವರು
ವಾರಸುಧಾರರೂ ಬರುತ್ತಾರೆ, ಕೆಲವರು ಪ್ರಜೆಗಳೂ ಬರುತ್ತಾರೆ. ಈಗಿನವರೆಗೆ ಯಾರನ್ನು ಸಹಯೋಗಿಯನ್ನಾಗಿ
ಮಾಡಿದ್ದೀರಿ, ಅವರನ್ನು ವಾರಸುಧಾರರನ್ನಾಗಿ ಮಾಡಿರಿ. ಒಂದು ಕಡೆಗೆ ವಾರಸುಧಾರನನ್ನಾಗಿ ಮಾಡಿರಿ,
ಇನ್ನೊಂದು ಕಡೆ ಮೈಕ್ ಮಾಡಿರಿ. ವಿಶ್ವ ಕಲ್ಯಾಣಕಾರಿ ಆಗಿರಿ. ಹೇಗೆ ಸಹಯೋಗದ ಚಿಹ್ನೆಯಾಗಿ ಕೈಯಲ್ಲಿ
ಕೈ ಸೇರಿಸಿ ತೋರಿಸುತ್ತಾರಲ್ಲವೆ. ಅಂದಮೇಲೆ ಸದಾ ತಂದೆಯ ಸಹಯೋಗಿ ಆಗುವುದು - ಇದು ಸದಾ ಕೈಯಲ್ಲಿ
ಕೈ ಮತ್ತು ಸದಾ ಬುದ್ಧಿಯಿಂದ ಜೊತೆಯಿರುವುದು.
ಯಾವುದೇ ಕಾರ್ಯವನ್ನು ಮಾಡುತ್ತೀರೆಂದರೆ ಸ್ವಯಂ ಮಾಡುವುದರಲ್ಲಿ ವಿಶಾಲ ಹೃದಯ ಮತ್ತು ಅನ್ಯರನ್ನು
ಸಹಯೋಗಿಯನ್ನಾಗಿ ಮಾಡುವುದರಲ್ಲಿಯೂ ವಿಶಾಲ ಹೃದಯಿಯಾಗಿರಿ. ಎಂದಿಗೂ ಸ್ವಯಂ ಪ್ರತಿ ಅಥವಾ ಸಹಯೋಗಿ
ಆತ್ಮರ ಪ್ರತಿ, ಜೊತೆಗಾರರ ಪ್ರತಿ ಸಂಕುಚಿತ ಹೃದಯವನ್ನಿಡಬೇಡಿ. ವಿಶಾಲ ಹೃದಯವನ್ನಿಡುವುದರಿಂದ
ಗಾಯನವಿರುವಂತೆ - ಮಣ್ಣೂ ಸಹ ಚಿನ್ನವಾಗಿ ಬಿಡುತ್ತದೆ, ಅಂದರೆ ಬಲಹೀನ ಜೊತೆಗಾರರೂ ಸಹ ಶಕ್ತಿಶಾಲಿ
ಜೊತೆಗಾರರಾಗಿ ಬಿಡುತ್ತಾರೆ, ಅಸಂಭವವೂ ಸಫಲತೆಯ ಸಂಭವವಾಗಿ ಬಿಡುತ್ತದೆ. ಕೆಲವರು ಇಂತಹ
ಆತ್ಮರಿರುತ್ತಾರೆ, ಅವರು ಸೀದಾ ಸಹಯೋಗಿಯಾಗುವುದಿಲ್ಲ ಆದರೆ ಸಹಯೋಗವನ್ನು ತೆಗೆದುಕೊಳ್ಳುತ್ತಾ
ಸಾಗಿರಿ, ಸಹಯೋಗಿಯನ್ನಾಗಿ ಮಾಡುತ್ತಾ ಸಾಗಿರಿ. ಅಂದಾಗ ಸಹಯೋಗದಲ್ಲಿ
ಮುಂದುವರೆಯುತ್ತಾ-ಮುಂದುವರೆಯುತ್ತಾ ಸಹಯೋಗವೇ ಅವರನ್ನು ಯೋಗಿಯನ್ನಾಗಿ ಮಾಡಿ ಬಿಡುತ್ತದೆ. ಅಂದಾಗ
ಸಹಯೋಗಿ ಆತ್ಮರನ್ನೀಗ ಸ್ಟೇಜಿನ ಮೇಲೆ ಕರೆತನ್ನಿರಿ, ಅವರ ಸಹಯೋಗವನ್ನು ಸಫಲ ಮಾಡಿರಿ.
ವರದಾನ:
ಧರಣಿ, ನಾಡಿ ಮತ್ತು ಸಮಯವನ್ನು ನೋಡುತಾ ಸತ್ಯ ಜ್ಞಾನವನ್ನು ಪ್ರತ್ಯಕ್ಷಗೊಳಿಸುವ ನಾಲೆಡ್ಜ್ ಫುಲ್
ಭವ.
ತಂದೆಯ ಈ ಹೊಸ
ಜ್ಞಾನ, ಸತ್ಯ ಜ್ಞಾನವಾಗಿದೆ, ಈ ಹೊಸ ಜ್ಞಾನದಿಂದಲೇ ಹೊಸ ಪ್ರಪಂಚದ ಸ್ಥಾಪನೆಯಾಗುತ್ತದೆ, ಈ
ಅಥಾರಿಟಿ ಮತ್ತು ನಶೆಯ ಸ್ವರೂಪದಲ್ಲಿ ಇಮರ್ಜ್ ಆಗಿರಿ. ಆದರೆ ಇದರ ಅರ್ಥವು ಹೀಗೆ ಬರುವುದಿಲ್ಲ -
ಯಾರಿಗೇ ಆದರೂ ಹೊಸ ಜ್ಞಾನದ ಹೊಸ ಮಾತುಗಳನ್ನು ತಿಳಿಸುತ್ತಾ ಗೊಂದಲ ಮಾಡಿರಿ, ಎಂದಲ್ಲ. ಧರಣಿ, ನಾಡಿ
ಮತ್ತು ಸಮಯ ಎಲ್ಲವನ್ನೂ ನೋಡಿ ಜ್ಞಾನವನ್ನು ಕೊಡಿ - ಇದು ಜ್ಞಾನಪೂರ್ಣ ಚಿಹ್ನೆಯಾಗಿದೆ. ಆತ್ಮದ
ಇಚ್ಛೆಯನ್ನು ನೋಡಿರಿ, ನಾಡಿಯನ್ನು ನೋಡಿರಿ, ಧರಣಿಯನ್ನು ತಯಾರು ಮಾಡಿರಿ. ಆದರೆ ಒಳಗೆ ಸತ್ಯತೆಯ
ನಿರ್ಭಯತೆಯ ಶಕ್ತಿಯು ಅವಶ್ಯವಾಗಿ ಇರಲಿ, ಆಗಲೇ ಸತ್ಯ ಜ್ಞಾನವನ್ನು ಪ್ರತ್ಯಕ್ಷಗೊಳಿಸಬಹುದು.
ಸ್ಲೋಗನ್:
ನನ್ನದು ಎಂದು
ಹೇಳುವುದೆಂದರೆ ಚಿಕ್ಕ ಮಾತನ್ನು ದೊಡ್ಡದನ್ನಾಗಿ ಮಾಡುವುದು, ನಿನ್ನದು ಎಂದು ಹೇಳುವುದು ಎಂದರೆ
ಬೆಟ್ಟದಂತಹ ಮಾತನ್ನೂ ಹತ್ತಿಯನ್ನಾಗಿ ಮಾಡುವುದು.