15.09.19    Avyakt Bapdada     Kannada Murli     28.01.85     Om Shanti     Madhuban


ವಿಶ್ವ ಸೇವೆಯ ಸಹಜ ಸಾಧನ - ಮನಸ್ಸಾ ಸೇವೆ


ಇಂದು ಸರ್ವಶಕ್ತಿವಂತ ತಂದೆಯು ತನ್ನ ಶಕ್ತಿ ಸೇನೆ, ಪಾಂಡವ ಸೇನೆ, ಆತ್ಮಿಕ ಸೇವೆಯನ್ನು ನೋಡುತ್ತಿದ್ದಾರೆ. ಸೇನೆಯ ಮಹಾವೀರರು ತಮ್ಮ ಆತ್ಮಿಕ ಶಕ್ತಿಯಿಂದ ಎಲ್ಲಿಯವರೆಗೆ ವಿಜಯಿಯಾಗಿದ್ದಾರೆ. ವಿಶೇಷವಾಗಿ ಮೂರು ಶಕ್ತಿಗಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಮಹಾವೀರ ಆತ್ಮನ ಮನಸ್ಸಾ ಶಕ್ತಿಯು ಎಲ್ಲಿಯವರೆಗೆ ಸ್ವಪರಿವರ್ತನೆಯ ಪ್ರತಿ ಮತ್ತು ಸೇವೆಯ ಪ್ರತಿ ಧಾರಣೆಯಾಗಿದೆ? ಹಾಗೆಯೇ ವಾಚಾ ಶಕ್ತಿ, ಕರ್ಮಣಾ ಶಕ್ತಿ ಅರ್ಥಾತ್ ಶ್ರೇಷ್ಠ ಕರ್ಮದ ಶಕ್ತಿಯು ಎಲ್ಲಿಯವರೆಗೆ ಜಮಾ ಆಗಿದೆ? ವಿಜಯಿ ರತ್ನವಾಗಲು ಈ ಮೂರೂ ಶಕ್ತಿಗಳೇ ಅವಶ್ಯಕತೆಯಿದೆ. ಮೂರರಿಂದ ಒಂದು ಶಕ್ತಿಯ ಕೊರತೆಯಿದ್ದರೂ ವರ್ತಮಾನದ ಪ್ರಾಪ್ತಿ ಮತ್ತು ಪ್ರಾಲಬ್ಧವು ಕಡಿಮೆಯಾಗಿ ಬಿಡುತ್ತದೆ. ವಿಜಯಿ ರತ್ನ ಅರ್ಥಾತ್ ಮೂರೂ ಶಕ್ತಿಗಳಿಂದ ಸಂಪನ್ನ. ವಿಶ್ವ ಸೇವಾಧಾರಿಯಿಂದ ವಿಶ್ವ ಮಹಾರಾಜನಾಗುವುದು ಅಥವಾ ಸತ್ಯಯುಗದ ಮಹಾರಾಜನಾಗುವುದು - ಇದರಲ್ಲಿಯೂ ಅಂತರವಿದೆ. ಸೇವಾಧಾರಿಯು ಅನೇಕರಿದ್ದಾರೆ, ವಿಶ್ವ ಸೇವಾಧಾರಿಗಳು ಕೆಲಕೆಲವರಿದ್ದಾರೆ. ಸೇವಾಧಾರಿ ಅರ್ಥಾತ್ ಮೂರು ಶಕ್ತಿಗಳನ್ನು ನಂಬರ್ವಾರ್ ಯಥಾಶಕ್ತಿ ಧಾರಣೆಯಾಗುವುದು. ವಿಶ್ವ ಸೇವಾಧಾರಿ ಅರ್ಥಾತ್ ಮೂರು ಶಕ್ತಿಗಳ ಸಂಪನ್ನತೆ. ಇಂದು ಪ್ರತಿಯೊಬ್ಬರಲ್ಲಿ ಮೂರು ಶಕ್ತಿಗಳ ಪರ್ಸೆಂಟೇಜ್ ನೋಡುತ್ತಿದ್ದರು.

ಸರ್ವ ಶ್ರೇಷ್ಠವಾದ ಮನಸ್ಸಾ ಶಕ್ತಿಯ ಮೂಲಕ ಭಲೆ ಯಾವುದೇ ಆತ್ಮವು ಸನ್ಮುಖದಲ್ಲಿರಲಿ, ಸಮೀಪವಿರಲಿ ಅಥವಾ ಎಷ್ಟೇ ದೂರವಿರಲಿ - ಸೆಕೆಂಡಿನಲ್ಲಿ ಆ ಆತ್ಮನಿಗೆ ಪ್ರಾಪ್ತಿಯ ಶಕ್ತಿಯ ಅನುಭೂತಿಯನ್ನು ಮಾಡಿಸಬಹುದು. ಮನಸ್ಸಾ ಶಕ್ತಿಯು ಯಾವುದೇ ಆತ್ಮನ ಮಾನಸಿಕ ಏರುಪೇರಿನ ಸ್ಥಿತಿಯನ್ನೂ ಅಚಲವನ್ನಾಗಿ ಮಾಡಬಹುದು. ಮಾನಸಿಕ ಶಕ್ತಿ ಅರ್ಥಾತ್ ಶುಭ ಭಾವನೆ, ಶ್ರೇಷ್ಠ ಕಾಮನೆ - ಈ ಶ್ರೇಷ್ಠ ಭಾವನೆಯ ಮೂಲಕ ಯಾವುದೇ ಆತ್ಮನನ್ನು, ಸಂಶಯ ಬುದ್ಧಿಯನ್ನೂ ಭಾವನಾತ್ಮಕವನ್ನಾಗಿ ಮಾಡಬಹುದು. ಈ ಶ್ರೇಷ್ಠ ಭಾವನೆಯಿಂದ ಯಾವುದೇ ಆತ್ಮನ ವ್ಯರ್ಥ ಭಾವವನ್ನು ಪರಿವರ್ತನೆ ಮಾಡಿ ಸಮರ್ಥ ಭಾವವನ್ನಾಗಿ ಮಾಡಬಹುದು. ಶ್ರೇಷ್ಠ ಭಾವದ ಮೂಲಕ ಯಾವುದೇ ಆತ್ಮನ ಸ್ವಭಾವವನ್ನೂ ಸಹ ಬದಲಾಯಿಸಬಹುದು. ಶ್ರೇಷ್ಠ ಭಾವನೆಯ ಶಕ್ತಿಯ ಮೂಲಕ ಆತ್ಮನಿಗೆ ಭಾವನೆಯ ಫಲಾನುಭೂತಿಯನ್ನು ಮಾಡಿಸಬಹುದು. ಶ್ರೇಷ್ಠ ಭಾವನೆಯ ಮೂಲಕ ಭಗವಂತನ ಸಮೀಪಕ್ಕೆ ಕರೆತರಬಹುದು. ಶ್ರೇಷ್ಠ ಭಾವನೆಯು ಯಾವುದೇ ಆತ್ಮನ ಭಾಗ್ಯದ ರೇಖೆಯನ್ನು ಬದಲಾಯಿಸಬಹುದು. ಶ್ರೇಷ್ಠ ಭಾವನೆಯು ಸಾಹಸಹೀನ ಆತ್ಮನನ್ನು ಸಾಹಸವಂತನನ್ನಾಗಿ ಮಾಡಿ ಬಿಡುತ್ತದೆ. ಇದೇ ಶ್ರೇಷ್ಠ ಭಾವನೆಯ ವಿಧಿಯನುಸಾರವಾಗಿ ಮನಸ್ಸಾ ಸೇವೆಯನ್ನು ಯಾವುದೇ ಆತ್ಮನಿಗಾಗಿಯಾದರೂ ಮಾಡಬಹುದು. ಮನಸ್ಸಾ ಸೇವೆಯು ವರ್ತಮಾನ ಸಮಯದನುಸಾರವಾಗಿ ಅತಿ ಅವಶ್ಯಕವಿದೆ. ಆದರೆ ಮನಸ್ಸಾ ಸೇವೆಯನ್ನು ಅವರೇ ಮಾಡಬಹುದು, ಯಾರು ಸ್ವಯಂನ ಮನಸ್ಸಾ ಅರ್ಥಾತ್ ಸಂಕಲ್ಪವನ್ನು ಸದಾ ಸರ್ವರ ಪ್ರತಿ ಶ್ರೇಷ್ಠವಿರುತ್ತದೆ, ನಿಸ್ವಾರ್ಥವಿರುತ್ತದೆ. ಪರ-ಉಪಕಾರದ ಸದಾ ಭಾವನೆಯಿರುತ್ತದೆ. ಅಪಕಾರಿಗಳ ಮೇಲೂ ಸಹ ಉಪಕಾರದ ಶ್ರೇಷ್ಠ ಭಾವನೆಯಿರುತ್ತದೆ. ಸದಾ ದಾತಾತನದ ಭಾವನೆಯಿರುತ್ತದೆ. ಸದಾ ಸ್ವಪರಿವರ್ತನೆ, ಸ್ವಯಂನ ಶ್ರೇಷ್ಠ ಕರ್ಮದ ಮೂಲಕ ಅನ್ಯರಿಗೆ ಶ್ರೇಷ್ಠ ಕರ್ಮದ ಪ್ರೇರಣೆಯನ್ನು ಕೊಡುವಂತದ್ದಾಗಿರಲಿ. ಇವರೂ ಮಾಡಲಿ ಆಗ ನಾನು ಮಾಡುವೆನು, ಇವರು ಸ್ವಲ್ಪ ಮಾಡಲಿ ಸ್ವಲ್ಪ ನಾನು ಮಾಡುವೆನು ಅಥವಾ ಸ್ವಲ್ಪವಾದರೂ ಇವರೂ ಮಾಡಲಿ, ಈ ಭಾವನೆಯಿಂದ ಆಚೆಯಿರಬೇಕು. ಯಾರೇ ಮಾಡಲು ಸಾಧ್ಯವಿಲ್ಲ, ಆದರೂ ಸಹ ದಯಾ ಭಾವನೆ, ಸದಾ ಸಹಯೋಗದ ಭಾವನೆ, ಸಾಹಸವನ್ನು ಹೆಚ್ಚಿಸುವ ಭಾವನೆಯಿರಲಿ. ಇದಕ್ಕೆ ಮನಸ್ಸಾ ಸೇವಾಧಾರಿ ಎಂದು ಹೇಳಲಾಗುತ್ತದೆ. ಮನಸ್ಸಾ ಸೇವೆಯನ್ನು ಒಂದು ಸ್ಥಾನದಲ್ಲಿದ್ದುಕೊಂಡು ನಾಲ್ಕೂ ಕಡೆಗೂ ಸೇವೆಯನ್ನು ಮಾಡಬಹುದು. ವಾಚಾ ಮತ್ತು ಕರ್ಮಣಾಕ್ಕಾಗಿ ಹೋಗಬೇಕಾಗುತ್ತದೆ. ಮನಸ್ಸಾ ಸೇವೆಯನ್ನು ಎಲ್ಲಿಯಾದರೂ ಕುಳಿತುಕೊಂಡು ಮಾಡಬಹುದು.

ಮನಸ್ಸಾ ಸೇವೆ - ಆತ್ಮಿಕ ವೈರ್ಲೆಸ್ ಸೆಟ್ ಆಗಿದೆ. ಅದರ ಮೂಲಕ ದೂರದ ಸಂಬಂಧವನ್ನು ಸಮೀಪವನ್ನಾಗಿ ಮಾಡಬಹುದು. ದೂರ ಕುಳಿತುಕೊಂಡು ಯಾವುದೇ ಆತ್ಮನನ್ನೇ ತಂದೆಯ ಮಗುವಾಗುವ ಉಮ್ಮಂಗ-ಉತ್ಸಾಹವನ್ನು ಉತ್ಪನ್ನವಾಗುವ ಸಂದೇಶವನ್ನು ಕೊಡಬಹುದು. ಆ ಆತ್ಮನು ಅದರ ಅನುಭವ ಮಾಡುತ್ತದೆ - ನನ್ನನ್ನು ಯಾವುದೋ ಮಹಾನ್ ಶಕ್ತಿಯು ಕರೆಯುತ್ತಿದೆ. ಏನೋ ಅಮೂಲ್ಯವಾದ ಪ್ರೇರಣೆಗಳು ನಮಗೆ ಪ್ರೇರೇಪಿಸುತ್ತಿದೆ. ಹೇಗೆ ಯಾರಿಗಾದರೂ ಸನ್ಮುಖದಲ್ಲಿ ಸಂದೇಶವನ್ನು ಕೊಟ್ಟು ಉಮ್ಮಂಗ-ಉತ್ಸಾಹದಲ್ಲಿ ಕರೆ ತರುತ್ತೀರಿ, ಹಾಗೆ ಮನಸ್ಸಾ ಶಕ್ತಿಯ ಮೂಲಕವೂ ಸಹ ಆ ಆತ್ಮನು ಇಂತಹ ಅನುಭವ ಮಾಡುತ್ತದೆ- ಹೇಗೆಂದರೆ, ಯಾರೋ ಸನ್ಮುಖದಲ್ಲಿ ಹೇಳುತ್ತಿದ್ದಾರೆ. ದೂರವಿದ್ದರೂ ಸಹ ಸನ್ಮುಖದ ಅನುಭವ ಮಾಡುತ್ತಾರೆ. ವಿಶ್ವ ಸೇವಾಧಾರಿಯಾಗುವ ಸಹಜ ಸಾಧನವೇ ಮನಸ್ಸಾ ಸೇವೆಯಾಗಿದೆ. ಹೇಗೆ ವಿಜ್ಞಾನಿಗಳು ಈ ಸಾಕಾರ ಸೃಷ್ಟಿಯಿಂದ, ಪೃಥ್ವಿಯಿಂದ ಮೇಲೆ ಅಂತರಿಕ್ಷಯಾನದ ಮೂಲಕ ತನ್ನ ಕಾರ್ಯವನ್ನು ಶಕ್ತಿಶಾಲಿ ಮಾಡುವ ಪ್ರಯತ್ನ ಪಡುತ್ತಿದ್ದಾರೆ. ಸ್ಥೂಲದಿಂದ ಸೂಕ್ಷ್ಮದಲ್ಲಿ ಹೋಗುತ್ತಿದ್ದಾರೆ. ಏಕೆ? ಸೂಕ್ಷ್ಮವು ಶಕ್ತಿಶಾಲಿಯಾಗಿರುತ್ತದೆ. ಮನಸ್ಸಾ ಶಕ್ತಿಯೂ ಸಹ ಅಂತರ್ಮುಖಿಯಾನ ಆಗಿದೆ. ಇದರ ಮೂಲಕ ಎಲ್ಲಿಗೆ ಬೇಕೊ, ಅಲ್ಲಿಗೆ ಬೇಗನೆ ತಲುಪಿ ಬಿಡಬಹುದು. ಹೇಗೆ ವಿಜ್ಞಾನದ ಮೂಲಕ ಪೃಥ್ವಿಯ ಆಕರ್ಷಣೆಯಿಂದ ದೂರದಲ್ಲಿ ಹೋಗುವವರು ಸ್ವತಹವಾಗಿಯೇ ಹಗುರವಾಗಿ ಬಿಡುತ್ತಾರೆ. ಹಾಗೆಯೇ ಮನಸ್ಸಾ ಶಕ್ತಿಶಾಲಿ ಆತ್ಮವು ಸ್ವತಹವಾಗಿ ಡಬಲ್ಲೈಟ್ ಸ್ವರೂಪವನ್ನು ಸದಾ ಅನುಭವ ಮಾಡುತ್ತದೆ. ಹೇಗೆ ಅಂತರಿಕ್ಷಯಾನದವರು ಶ್ರೇಷ್ಠವಾಗುವ ಕಾರ್ಯ ಇಡೀ ಪೃಥ್ವಿಯ ಎಲ್ಲಿಯೇ ಚಿತ್ರವನ್ನು ಮಾಡಬೇಕೆಂದರೆ ಎಳೆಯಬಹುದು, ಹಾಗೆಯೇ ಶಾಂತಿಯ ಶಕ್ತಿಯಿಂದ ಅಂತರ್ಮುಖಿಯಾನದ ಮೂಲಕ ಮನಸ್ಸಾ ಶಕ್ತಿಯ ಮೂಲಕ ಯಾವುದೇ ಆತ್ಮನನ್ನೂ ಚಾರಿತ್ರ್ಯವಂತನಾಗುವ, ಶ್ರೇಷ್ಠಾತ್ಮನಾಗುವ ಪ್ರೇರಣೆಯನ್ನು ಕೊಡಬಹುದು. ವಿಜ್ಞಾನಿಗಳಂತು ಪ್ರತಿಯೊಂದು ವಸ್ತುವಿಗಾಗಿ ಸಮಯ ಮತ್ತು ಸಂಪತ್ತನ್ನು ಬಹಳ ಉಪಯೋಗಿಸುತ್ತಾರೆ. ಆದರೆ ತಾವು ಖರ್ಚಿಲ್ಲದೆಯೇ ಸ್ವಲ್ಪ ಸಮಯದಲ್ಲಿ ಬಹಳಷ್ಟು ಸೇವೆಯನ್ನು ಮಾಡಬಹುದು. ಹೇಗೆ ಇತ್ತೀಚೆಗೆ ಕೆಲಕೆಲವೊಂದು ಕಡೆ ಮಿಂಚು ಹುಳುವನ್ನು ನೋಡುತ್ತೀರಿ, ಸಮಾಚಾರವನ್ನು ಕೇಳುತ್ತೀರಲ್ಲವೆ. ಅದೂ ಸಹ ಕೇವಲ ಲೈಟ್ ಮಾತ್ರವೇ ಕಾಣಿಸುತ್ತದೆ. ಹಾಗೆಯೇ ತಾವು ಮನಸ್ಸಾ ಸೇವಾಧಾರಿ ಆತ್ಮರು ಮುಂದುವರೆದು ಅನುಭವ ಮಾಡುವಿರಿ - ಯಾವುದೋ ಲೈಟ್ ಬಿಂದು ಬಂದಿತು, ವಿಚಿತ್ರ ಅನುಭವವನ್ನು ಮಾಡಿಸಿ ಹೊರಟಿತು. ಇದು ಯಾರಾಗಿದ್ದರು? ಎಲ್ಲಿಂದ ಬಂದಿತು? ಏನನ್ನು ಕೊಟ್ಟು ಹೋಯಿತು, ಇದರ ಚರ್ಚೆಯನ್ನು ಹೆಚ್ಚಿಸುತ್ತದೆ. ಹೇಗೆ ಆಕಾಶದ ನಕ್ಷತ್ರಗಳ ಕಡೆಗೆ ಎಲ್ಲರ ಕಣ್ಣು ಹೋಗುತ್ತದೆ, ಹಾಗೆಯೇ ಧರಣಿಯ ನಕ್ಷತ್ರಗಳು ದಿವ್ಯ ಜ್ಯೋತಿಯನ್ನು ನಾಲ್ಕೂ ಕಡೆಯಲ್ಲಿಯೂ ಅನುಭವ ಮಾಡುವರು. ಇಂತಹ ಶಕ್ತಿಯು ಮನಸ್ಸಾ ಸೇವಾಧಾರಿಗಳದಾಗಿರುತ್ತದೆ. ತಿಳಿಯಿತೆ? ಮಹಾನತೆಯಂತು ಇನ್ನೂ ಬಹಳಷ್ಟಿವೆ ಆದರೆ ಇಂದು ಇಷ್ಟೇ ತಿಳಿಸುತ್ತೇವೆ. ಮನಸ್ಸಾ ಸೇವೆಯನ್ನು ಈಗ ಇನ್ನೂ ತೀವ್ರವನ್ನಾಗಿ ಮಾಡಿರಿ, ಆಗಲೇ 9 ಲಕ್ಷ ತಯಾರಾಗುವರು. ಈಗ ಗೋಲ್ಡನ್ ಜುಬಿಲಿಯವರೆಗೆ ಎಷ್ಟು ಸಂಖ್ಯೆಯಾಗಿದೆ? ಸತ್ಯಯುಗದ ಡೈಮಂಡ್ ಜುಬಿಲಿಯವರೆಗೆ 9 ಲಕ್ಷವಂತು ಆಗಬೇಕಲ್ಲವೆ. ಇಲ್ಲವೆಂದರೆ ವಿಶ್ವ ಮಹಾರಾಜನು ಯಾರ ಮೇಲೆ ರಾಜ್ಯವನ್ನಾಳುವನು? 9 ಲಕ್ಷ ನಕ್ಷತ್ರಗಳ ಗಾಯನವಿದೆಯಲ್ಲವೆ. ನಕ್ಷತ್ರವೆಂಬ ಆತ್ಮವು ಅನುಭವ ಮಾಡುತ್ತದೆ, ಆಗ 9 ಲಕ್ಷ ನಕ್ಷತ್ರಗಳ ಗಾಯನವಾಗುತ್ತದೆ. ಆದ್ದರಿಂದ ಈಗ ನಕ್ಷತ್ರಗಳ ಅನುಭವ ಮಾಡಿಸಿರಿ. ಒಳ್ಳೆಯದು. ನಾಲ್ಕೂ ಕಡೆಯಿಂದ ಬಂದಿರುವ ಮಕ್ಕಳಿಗೆ, ಮಧುಬನ ನಿವಾಸಿಯಾಗುವ ಶುಭಾಶಯಗಳು ಅಥವಾ ಮಿಲನದ ಮೇಳದ ಶುಭಾಶಯಗಳು. ಇದೇ ಅವಿನಾಶಿ ಅನುಭವ ಶುಭಾಶಯಗಳನ್ನು ಸದಾ ಜೊತೆಯಿಟ್ಟುಕೊಳ್ಳಿರಿ. ತಿಳಿಯಿತೆ.

ಸದಾ ಮಹಾವೀರನಾಗಿ ಮನಸ್ಸಾ ಶಕ್ತಿಯ ಮಹಾನತೆಯಿಂದ ಶ್ರೇಷ್ಠ ಸೇವೆಯನ್ನು ಮಾಡುವವರು, ಸದಾ ಶ್ರೇಷ್ಠ ಭಾವನೆ ಮತ್ತು ಶ್ರೇಷ್ಠ ಕಾಮನೆಯ ವಿಧಿಯಿಂದ ಬೇಹದ್ದಿನ ಸೇವೆಯ ಸಿದ್ಧಿಯನ್ನು ಪಡೆಯುವವರು, ತಮ್ಮ ಶ್ರೇಷ್ಠ ಸ್ಥಿತಿಯ ಮೂಲಕ ನಾಲ್ಕೂ ಕಡೆಯ ಆತ್ಮರಿಗೆ ಶ್ರೇಷ್ಠ ಪ್ರೇರಣೆಯನ್ನು ಕೊಡುವ ವಿಶ್ವ ಸೇವಾಧಾರಿ, ಸದಾ ತಮ್ಮ ಶುಭ ಭಾವನೆಯ ಮೂಲಕ ಅನ್ಯ ಆತ್ಮರಿಗೂ ಭಾವನೆಯ ಫಲವನ್ನು ಕೊಡುವ, ಇಂತಹ ವಿಶ್ವ ಕಲ್ಯಾಣಕಾರಿ, ಪರ-ಉಪಕಾರಿ, ವಿಶ್ವ ಸೇವಾಧಾರಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಕುಮಾರರ ಪ್ರತಿ ವಿಶೇಷ ಅವ್ಯಕ್ತ-ಬಾಪ್ದಾದಾರವರ ಮಧುರ ಮಹಾವಾಕ್ಯಗಳು:-
ಕುಮಾರ, ಬ್ರಹ್ಮಾಕುಮಾರರಂತು ಆಗಿ ಬಿಟ್ಟಿರಿ, ಆದರೆ ಬ್ರಹ್ಮಾಕುಮಾರರಾದ ನಂತರ ಏನಾಗಬೇಕಾಗಿದೆ? ಶಕ್ತಿಶಾಲಿ ಕುಮಾರ. ಎಲ್ಲಿಯವರೆಗೆ ಶಕ್ತಿಶಾಲಿಯಾಗುವುದಿಲ್ಲವೋ ಅಲ್ಲಿಯವರೆಗೆ ವಿಜಯಿಯಾಗಲು ಸಾಧ್ಯವಿಲ್ಲ. ಶಕ್ತಿಶಾಲಿ ಕುಮಾರನು ಸದಾ ಜ್ಞಾನಪೂರ್ಣ ಮತ್ತು ಶಕ್ತಿಪೂರ್ಣ ಆತ್ಮನಾಗಿರುವನು. ಜ್ಞಾನಪೂರ್ಣ ಅರ್ಥಾತ್ ರಚೈತನನ್ನೂ ಸಹ ತಿಳಿದಿರುವವರು, ರಚನೆಯನ್ನೂ ತಿಳಿದಿರುವವರು ಮತ್ತು ಮಾಯೆಯ ಭಿನ್ನ-ಭಿನ್ನ ರೂಪಗಳನ್ನೂ ತಿಳಿದಿರುವವರು. ಇಂತಹ ಜ್ಞಾನಪೂರ್ಣ, ಶಕ್ತಿಪೂರ್ಣರು ಸದಾ ವಿಜಯಿಯಾಗಿರುತ್ತಾರೆ. ಜ್ಞಾನವನ್ನು ಜೀವನದಲ್ಲಿ ಧಾರಣೆ ಮಾಡುವುದು ಅರ್ಥಾತ್ ಜ್ಞಾನವನ್ನು ಶಸ್ತ್ರವನ್ನಾಗಿ ಮಾಡಿ ಬಿಡುವುದು. ಅಂದಮೇಲೆ ಶಸ್ತ್ರಧಾರಿ ಶಕ್ತಿಶಾಲಿ ಆಗಿದ್ದೀರಲ್ಲವೆ. ಇಂದು ಮಿಲಿಟರಿಯವರು ಶಕ್ತಿಶಾಲಿಯಾಗಿರುತ್ತಾರೆ- ಯಾವುದರ ಆಧಾರದಿಂದ? ಶಸ್ತ್ರಗಳಿವೆ, ಬಂದೂಕುಗಳಿವೆ, ಆದ್ದರಿಂದ ನಿರ್ಭಯರಾಗಿ ಬಿಡುತ್ತಾರೆ. ಅಂದಮೇಲೆ ಯಾರು ಜ್ಞಾನಪೂರ್ಣರಾಗಿರುತ್ತಾರೆಯೋ ಅವರು ಅವಶ್ಯವಾಗಿ ಶಕ್ತಿಪೂರ್ಣರಾಗಿರುತ್ತಾರೆ. ಅಂದಮೇಲೆ ಮಾಯೆಯ ಸಂಪೂರ್ಣ ಜ್ಞಾನವಿದೆಯೆಂದಾಯಿತು. ಏನಾಗುತ್ತದೆ, ಹೇಗಾಗುತ್ತದೆ, ಗೊತ್ತಿಲ್ಲ, ಮಾಯೆಯು ಹೇಗೆ ಬಂದು ಬಿಟ್ಟಿತು - ಇದಿದ್ದರೆ ಜ್ಞಾನಪೂರ್ಣರಾಗಿಲ್ಲ. ಜ್ಞಾನಪೂರ್ಣ ಆತ್ಮನು ಮುಂಚೆಯೇ ತಿಳಿದಿರುತ್ತಾನೆ. ಹೇಗೆ ಯಾರು ಬುದ್ಧಿವಂತರಿರುತ್ತಾರೆಯೋ ಅವರು ಮೊದಲೇ ರೋಗವನ್ನೂ ತಿಳಿದು ಬಿಡುತ್ತಾರೆ ಮತ್ತು ಗುಣವಾಗಿ ಬಿಡುತ್ತಾರೆ. ಬುದ್ಧಿಹೀನರಿಗೆ ಜ್ವರವು ಬಂದೇ ಬಿಡುತ್ತದೆ, ಆದರೂ ನಡೆಯುತ್ತಾ-ಸುತ್ತಾಡುತ್ತಾ ಇರುತ್ತಾರೆ ಮತ್ತು ಜ್ವರವು ಹೆಚ್ಚಾಗುತ್ತಾ ಹೋಗುತ್ತದೆ. ಇದೇ ರೀತಿ ಮಾಯೆಯು ಬರುತ್ತದೆ ಆದರೆ ಬರುವುದಕ್ಕೆ ಮೊದಲು ತಿಳಿದು ಬಿಡುವುದು ಮತ್ತು ಅದನ್ನು ದೂರದಿಂದಲೇ ಓಡಿಸಿ ಬಿಡಬೇಕು. ಅಂದಮೇಲೆ ಇಂತಹ ಬುದ್ಧಿವಂತ ಶಕ್ತಿಶಾಲಿ ಕುಮಾರರಾಗಿದ್ದೀರಲ್ಲವೇ! ಸದಾ ವಿಜಯಿಯಾಗಿದ್ದೀರಲ್ಲವೆ! ಅಥವಾ ತಮಗೂ ಮಾಯೆಯು ಬರುತ್ತದೆ ಮತ್ತು ಓಡಿಸುವುದರಲ್ಲಿ ಸಮಯ ಹಿಡಿಸುತ್ತದೆಯೇ! ಶಕ್ತಿಯನ್ನು ನೋಡಿ ಶತ್ರುವು ದೂರದಿಂದ ಓಡಿ ಬಿಡುತ್ತಾನೆ. ಒಂದುವೇಳೆ ಬಂದು ಬಿಟ್ಟಿತು ಆದರೂ ಅದನ್ನು ಓಡಿಸಿದಿರೆಂದರೆ ಸಮಯವೇ ವ್ಯರ್ಥ ಮತ್ತು ಬಲಹೀನದ ಹವ್ಯಾಸವು ಆಗಿ ಬಿಡುತ್ತದೆ. ಕೆಲವೊಮ್ಮೆ ಮತ್ತೆ-ಮತ್ತೆ ರೋಗವುಂಟಾದರೆ ಬಲಹೀನರಾಗಿ ಬಿಡುತ್ತಾರಲ್ಲವೆ! ಅಥವಾ ಮತ್ತೆ-ಮತ್ತೆ ಓದುವುದರಲ್ಲಿ ಫೇಲ್ ಆಗುತ್ತಾರೆಂದರೆ ಹೇಳುತ್ತಾರೆ - ಇವರು ಓದುವುದರಲ್ಲಿ ಬಲಹೀನರಿದ್ದಾರೆ. ಹೀಗೆಯೇ ಮಾಯೆಯು ಮತ್ತೆ-ಮತ್ತೆ ಬಂದಿತು ಮತ್ತು ಯುದ್ಧ ಮಾಡುತ್ತಿರುತ್ತದೆಯೆಂದರೆ, ಸೋಲನ್ನನುಭವಿಸುವ ಹವ್ಯಾಸಿಯಾಗಿ ಬಿಡುತ್ತೀರಿ ಮತ್ತು ಮತ್ತೆ-ಮತ್ತೆ ಸೋಲನನ್ನುಭವಿಸುವುದರಿಂದ ಬಲಹೀನರಾಗಿ ಬಿಡುತ್ತೀರಿ, ಆದ್ದರಿಂದ ಶಕ್ತಿಶಾಲಿ ಆಗಿರಿ. ಇಂತಹ ಶಕ್ತಿಶಾಲಿ ಆತ್ಮವು ಸದಾ ಪ್ರಾಪ್ತಿಯ ಅನುಭವ ಮಾಡುತ್ತದೆ, ಯುದ್ಧದಲ್ಲಿ ತನ್ನ ಸಮಯವನ್ನು ವ್ಯರ್ಥವಾಗಿ ಕಳೆಯುವುದಿಲ್ಲ. ವಿಜಯದ ಖುಷಿಯನ್ನಾಚರಿಸುತ್ತದೆ. ಅಂದಮೇಲೆ ಯಾವಾಗ ಯಾವುದೇ ಮಾತಿನಲ್ಲಿ ಬಲಹೀನರಾಗಬಾರದು. ಕುಮಾರ ಬುದ್ಧಿಯು ಸ್ವಚ್ಛವಾಗಿರುತ್ತದೆ, ಅಧರ್ಕುಮಾರರಾಗುವುದರಿಂದ ಬುದ್ಧಿಯು ಹಂಚಿ ಹೋಗುತ್ತದೆ. ಕುಮಾರರಿಗೆ ಒಂದೇ ಕೆಲಸವಿದೆ, ತನ್ನದೇ ಜೀವನವಿದೆ. ಅವರಿಗಂತು ಎಷ್ಟೊಂದು ಜವಾಬ್ದಾರಿಗಳಿರುತ್ತದೆ. ತಾವು ಜವಾಬ್ಧಾರಿಗಳಿಂದ ಸ್ವತಂತ್ರರು, ಯಾರು ಸ್ವತಂತ್ರರಾಗಿರುತ್ತಾರೆ ಅವರು ಮುಂದುವರೆಯುತ್ತಾರೆ. ಹೊರೆಯಿರುವವರು ನಿಧಾನ-ನಿಧಾನವಾಗಿ ನಡೆಯುವರು. ಸ್ವತಂತ್ರರು ಹಗುರವಾಗಿರುತ್ತಾರೆ, ಅವರು ತೀವ್ರವಾಗಿ ನಡೆಯುತ್ತಾರೆ. ಅಂದಮೇಲೆ ತೀವ್ರಗತಿಯಿರುವವರಾಗಿದ್ದೀರಾ, ಏಕರಸವಿದ್ದೀರಾ? ಸದಾ ತೀವ್ರ ಅರ್ಥಾತ್ ಏಕರಸ. ಈ ರೀತಿಯೂ ಅಲ್ಲ, 6 ತಿಂಗಳುಗಳು ಕಳೆದು ಹೋಯಿತು, ಹೇಗಿದ್ದೆವೋ ಅದೇ ರೀತಿ ನಡೆಯುತ್ತಿದ್ದೇವೆ, ಇದಕ್ಕೂ ತೀವ್ರಗತಿ ಎಂದು ಹೇಳುವುದಿಲ್ಲ. ತೀವ್ರ ಗತಿಯವರು ಇಂದು ಏನಿದ್ದಾರೆಯೋ, ನಾಳೆಯು ಅದಕ್ಕಿಂತಲೂ ಮುಂದೆ, ನಾಡಿದ್ದು ಅದಕ್ಕಿಂತಲೂ ಮುಂದೆ, ಇದಕ್ಕೆ ಹೇಳಲಾಗುತ್ತದೆ - `ತೀವ್ರಗತಿಯವರು'. ಅಂದಮೇಲೆ ಸದಾ ತಮ್ಮನ್ನು ಶಕ್ತಿಶಾಲಿ ಕುಮಾರನೆಂದು ತಿಳಿಯಿರಿ. ಬ್ರಹ್ಮಾಕುಮಾರನಂತು ಆಗಿ ಬಿಟ್ಟಿರಿ, ಕೇವಲ ಈ ಖುಷಿಯಲ್ಲಿರಿ, ಶಕ್ತಿಶಾಲಿ ಆಗಿಲ್ಲವೆಂದರೆ ವಿಜಯಿಯಾಗಲು ಸಾಧ್ಯವಿಲ್ಲ. ಬ್ರಹ್ಮಾಕುಮಾರನಾಗುವುದು ಬಹಳ ಒಳ್ಳೆಯದು, ಆದರೆ ಶಕ್ತಿಶಾಲಿ ಬ್ರಹ್ಮಾಕುಮಾರನು ಸದಾ ಸಮೀಪವಿರುತ್ತಾನೆ. ಈಗ ಸಮೀಪದಲ್ಲಿರುವವರು ರಾಜ್ಯದಲ್ಲಿಯೂ ಸಮೀಪದಲ್ಲಿರುತ್ತಾರೆ. ಈಗಿನ ಸ್ಥಿತಿಯಲ್ಲಿ ಸಮೀಪತೆಯಿಲ್ಲವೆಂದರೆ ರಾಜ್ಯದಲ್ಲಿಯೂ ಸಮೀಪತೆಯಿರುವುದಿಲ್ಲ. ಈಗಿನ ಪ್ರಾಪ್ತಿಯು ಸದಾಕಾಲದ ಪ್ರಾಲಬ್ಧವನ್ನಾಗಿ ಮಾಡಿ ಬಿಡುತ್ತದೆ ಆದ್ದರಿಂದ ಸದಾ ಶಕ್ತಿಶಾಲಿ. ಇಂತಹ ಶಕ್ತಿಶಾಲಿಗಳೇ ವಿಶ್ವ ಕಲ್ಯಾಣಕಾರಿ ಆಗಬಹುದು. ಕುಮಾರರಲ್ಲಿ ಶಕ್ತಿಯಂತು ಇದ್ದೇ ಇದೆ. ಭಲೆ ಶಾರೀರಿಕ ಶಕ್ತಿ, ಆತ್ಮಿಕ ಶಕ್ತಿಯೂ ಇರಲಿ. ಆದರೆ ವಿಶ್ವ ಕಲ್ಯಾಣಕ್ಕಾಗಿ ಶಕ್ತಿಯಿದೆಯೋ ಅಥವಾ ಶ್ರೇಷ್ಠ ವಿಶ್ವವನ್ನು ವಿನಾಶಕಾರಿಯನ್ನಾಗಿ ಮಾಡಿಸುವ ಕಾರ್ಯದಲ್ಲಿ ತೊಡಗುವ ಶಕ್ತಿಯಿದೆಯೇ? ಅಂದಮೇಲೆ ಕಲ್ಯಾಣಕಾರಿ ಕುಮಾರರಲ್ಲವೆ. ಅಕಲ್ಯಾಣ ಮಾಡುವವರಲ್ಲ. ಸಂಕಲ್ಪದಲ್ಲಿಯೂ ಸದಾ ಸರ್ವರ ಪ್ರತಿ ಕಲ್ಯಾಣದ ಭಾವನೆಯಿರಲಿ. ಸ್ವಪ್ನದಲ್ಲಿಯೂ ಕಲ್ಯಾಣದ ಭಾವನೆಯಿರಲಿ, ಇದಕ್ಕೇ ಹೇಳಲಾಗುತ್ತದೆ - ಶ್ರೇಷ್ಠ ಶಕ್ತಿಶಾಲಿ. ಕುಮಾರ ಶಕ್ತಿಯ ಮೂಲಕ ಏನನ್ನು ಯೋಚಿಸುವರು ಅದನ್ನು ಮಾಡಬಹುದು. ಅದೇ ಸಂಕಲ್ಪ ಮತ್ತು ಕರ್ಮ, ಎರಡೂ ಒಟ್ಟೊಟ್ಟಿಗೆ ಮಾಡುವರು. ಸಂಕಲ್ಪವನ್ನು ಇಂದು ಮಾಡಲಾಯಿತು, ಕರ್ಮವನ್ನು ನಂತರ ಎನ್ನುವಂತಾಗಬಾರದು. ಸಂಕಲ್ಪ ಮತ್ತು ಕರ್ಮವು ಒಂದೇ ಇರಲಿ ಮತ್ತು ಜೊತೆ ಜೊತೆಯಿರಲಿ. ಇಂತಹ ಶಕ್ತಿಯಾಗಿದ್ದೀರಿ. ಇಂತಹ ಶಕ್ತಿಯಿರುವವರೇ ಅನೇಕ ಆತ್ಮರ ಕಲ್ಯಾಣವನ್ನು ಮಾಡಬಹುದು. ಅಂದಮೇಲೆ ಸದಾ ಸೇವೆಯಲ್ಲಿ ಸಫಲರಾಗುವವರಾಗಿದ್ದೀರಾ ಅಥವಾ ಕಿರಿಕಿರಿ ಮಾಡುವವರಾಗಿದ್ದೀರಾ? ಮನಸ್ಸಿನಲ್ಲಿ, ಕರ್ಮದಲ್ಲಿ, ಪರಸ್ಪರದಲ್ಲಿ ಎಲ್ಲದರಲ್ಲಿಯೂ ಸರಿ. ಯಾವುದರಲ್ಲಿಯೂ ಕಿರಿಕಿರಿ ಮಾಡುವವರಲ್ಲ. ಸದಾ ತಮ್ಮನ್ನು ವಿಶ್ವ ಕಲ್ಯಾಣಕಾರಿ ಕುಮಾರನೆಂದು ತಿಳಿಯುತ್ತೀರೆಂದರೆ, ಯಾವುದೇ ಕರ್ಮವನ್ನು ಮಾಡುತ್ತೀರಿ ಅದರಲ್ಲಿ ಕಲ್ಯಾಣದ ಭಾವನೆಯು ಸಮಾವೇಶವಾಗಿರುತ್ತದೆ. ತಿಳಿಯಿತೆ.

ವಿದಾಯಿಯ ಸಮಯ ಅಮೃತವೇಳೆಯಲ್ಲಿ ಎಲ್ಲಾ ಮಕ್ಕಳಿಗೂ ನೆನಪು-ಪ್ರೀತಿಯನ್ನು ಕೊಟ್ಟರು:-
ಪ್ರತೀ ಕಾರ್ಯವು ಮಂಗಳವಾಗಲಿ. ಪ್ರತೀ ಕಾರ್ಯವು ಸದಾ ಸಫಲವಾಗಲಿ. ಅದಕ್ಕಾಗಿ ಎಲ್ಲಾ ಮಕ್ಕಳಿಗೂ ಶುಭಾಶಯಗಳು. ಹಾಗೆ ನೋಡಿದರೆ ಸಂಗಮಯುಗದ ಪ್ರತೀ ದಿನವೂ ಶುಭವಾಗಿದೆ, ಶ್ರೇಷ್ಠವಿದೆ, ಉಮ್ಮಂಗ-ಉತ್ಸಾಹವನ್ನು ತರಿಸುವಂತದ್ದಾಗಿದೆ. ಆದ್ದರಿಂದ ಪ್ರತೀ ದಿನ ಮಹತ್ವಿಕೆಯು ತನ್ನ-ತನ್ನದಾಗಿದೆ. ಇಂದಿನ ದಿನದಲ್ಲಿ ಪ್ರತೀ ಸಂಕಲ್ಪವೂ ಮಂಗಳಮಯವಾಗಿದೆ ಅರ್ಥಾತ್ ಶುಭಚಿಂತಕ ರೂಪವಿರುವಂತದ್ದಾಗಿದೆ. ಯಾರ ಪ್ರತಿಯೂ ಸಹ ಮಂಗಳ ಕಾಮನೆ ಅರ್ಥಾತ್ ಶುಭ ಕಾಮನೆಯನ್ನು ಮಾಡುವಂತಹ ಸಂಕಲ್ಪವಿರಲಿ. ಪ್ರತೀ ಸಂಕಲ್ಪವೂ ಮಂಗಳಂ ಅರ್ಥಾತ್ ಖುಷಿ ತರಿಸುವಂತದ್ದು. ಅಂದಮೇಲೆ ಇಂದು ಈ ಮಹತ್ವ ಸಂಕಲ್ಪ, ಮಾತು ಮತ್ತು ಕರ್ಮ ಮೂರರನ್ನು ವಿಶೇಷ ಸ್ಮೃತಿಯಲ್ಲಿಟ್ಟುಕೊಳ್ಳಿರಿ. ಮತ್ತು ಈ ಸ್ಮೃತಿಯಿಟ್ಟುಕೊಳ್ಳುವುದೇ, ಪ್ರತೀ ಸೆಕೆಂಡ್ ಬಾಪ್ದಾದಾರವರ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡುವುದಾಗಿದೆ. ಅಂದಮೇಲೆ ಕೇವಲ ಈಗ ನೆನಪು-ಪ್ರೀತಿಯನ್ನು ಕೊಡುತ್ತಿಲ್ಲ ಆದರೆ ಪ್ರಾಕ್ಟಿಕಲ್ ಮಾಡುವುದು ಅರ್ಥಾತ್ ನೆನಪು-ಪ್ರೀತಿಯನ್ನು ತೆಗೆದುಕೊಳ್ಳುವುದು. ಇಡೀ ದಿನದಲ್ಲಿ ಇಂದು ನೆನಪು-ಪ್ರೀತಿಯನ್ನು ತೆಗೆದುಕೊಳ್ಳುತ್ತಿರಿ ಅರ್ಥಾತ್ ನೆನಪಿನಲ್ಲಿದ್ದು ಪ್ರತೀ ಸಂಕಲ್ಪ, ಮಾತಿನ ಮೂಲಕ ಪ್ರೀತಿಯ ಪ್ರಕಂಪನದಲ್ಲಿ ತೇಲಾಡುತ್ತಿರುವುದು. ಒಳ್ಳೆಯದು. ಎಲ್ಲರಿಗೂ ವಿಶೇಷ ನೆನಪುಗಳು, ಗುಡ್ಮಾರ್ನಿಂಗ್!

ಸಮ್ಮೇಳನದ ಬಗ್ಗೆ ಅವ್ಯಕ್ತ-ಬಾಪ್ದಾದಾರವರ ವಿಶೇಷ ಸಂದೇಶ:-
ಬಾಪ್ದಾದಾರವರು ಹೇಳಿದರು - ಮಕ್ಕಳು ಸಮ್ಮೇಳನವನ್ನು ಮಾಡುತ್ತಿದ್ದಾರೆ. ಸಮ್ಮೇಳನದ ಅರ್ಥವಾಗಿದೆ - ಸಮ್ - ಮಿಲನ. ಅಂದರೆ ಯಾರು ಸಮ್ಮೇಳನದಲ್ಲಿ ಬರುವವರಿದ್ದಾರೆಯೋ ಅವರನ್ನು ತಂದೆಯ ಸಮಾನರನ್ನಾಗಿ ಅಲ್ಲದಿದ್ದರೂ ತಮ್ಮ ಸಮಾನ ನಿಶ್ಚಯ ಬುದ್ಧಿಯವರನ್ನಾಗಿಯಂತು ಅವಶ್ಯವಾಗಿ ಮಾಡುವುದು. ಯಾರೇ ಬರುತ್ತಾರೆ ಏನಾದರೂ ಆಗಿ ಹೋಗಲಿ, ಕೇವಲ ಇದು ದಾತನ ಮನೆಯಾಗಿದೆ ಎಂದು ಹೇಳಿ ಹೋಗಬಾರದು. ಆದ್ದರಿಂದ ಬರುವವರು ಇದನ್ನು ತಿಳಿಯಬಾರದು - ನಾವು ಇವರಿಗೆ ಸಹಯೋಗವನ್ನು ಕೊಡಲು ಬಂದಿದ್ದೇವೆ ಅಥವಾ ಇವರಿಗೆ ಸಹಯೋಗ ಕೊಡುವುದಕ್ಕೆ ಬಂದಿದ್ದೇವೆ. ಆದರೆ ಅವರು ತಿಳಿಯಲಿ- ಈ ಸ್ಥಾನವು ತೆಗೆದುಕೊಳ್ಳುವ ಸ್ಥಾನವಾಗಿದೆ, ನಾವು ಕೊಡುವ ಸ್ಥಾನವಲ್ಲ. ಇಲ್ಲಿ ಪ್ರತಿಯೊಬ್ಬರೂ ಚಿಕ್ಕ-ದೊಡ್ಡವರು ಯಾರಿಂದಲೇ ಭೇಟಿಯಾಗುತ್ತೀರಿ, ಆ ಸಮಯದಲ್ಲಿ ಇಲ್ಲಿದ್ದು ಈ ಸಂಕಲ್ಪವನ್ನು ಮಾಡಬೇಕು - ದೃಷ್ಟಿಯಿಂದ, ವಾಯುಮಂಡಲದಿಂದ, ಸಂಬಂಧ-ಸಂಪರ್ಕದಿಂದ `ಮಾಸ್ಟರ್ ದಾತಾ' ಆಗಿರಬೇಕು. ಎಲ್ಲರಿಗೂ ಏನಾದರೊಂದು ಕೊಟ್ಟೇ ಕಳುಹಿಸಬೇಕು. ಇದು ಪ್ರತಿಯೊಬ್ಬರ ಲಕ್ಷ್ಯವಿರಲಿ, ಬರುವವರಿಗಂತು ಗೌರವವನ್ನಂತು ಕೊಡಲೇಬೇಕು. ಆದರೆ ಎಲ್ಲರ ಗೌರವವನ್ನು ಒಬ್ಬ ತಂದೆಯಲ್ಲಿ ಕೂರಿಸಬೇಕು. ಬಾಬಾರವರು ಹೇಳುತ್ತಿದ್ದರು - ನನ್ನ ಇಷ್ಟೆಲ್ಲಾ ಲೈಟ್ಹೌಸ್ ಮಕ್ಕಳು ನಾಲ್ಕೂ ಕಡೆಯಿಂದ ಮನಸ್ಸಾ ಸೇವೆಯ ಮೂಲಕ ಲೈಟ್ ಕೊಡುತ್ತಾರೆಂದರೆ ಸಫಲತೆಯಿದ್ದೇ ಇದೆ. ಆ ಒಂದು ಲೈಟ್ಹೌಸ್ ಎಷ್ಟು ಮಂದಿಗೆ ಮಾರ್ಗವನ್ನು ತೋರಿಸುತ್ತದೆ - ತಾವು ಲೈಟ್ಹೌಸ್, ಮೈಟ್ಹೌಸ್ ಮಕ್ಕಳಂತು ಬಹಳ ಕಮಾಲ್ ಮಾಡಬಹುದು. ಒಳ್ಳೆಯದು!

ವರದಾನ:  
ಈಶ್ವರೀಯ ಸೇವೆಯ ಬಂಧನದ ಮೂಲಕ ಸಮೀಪ ಸಂಬಂಧದಲ್ಲಿ ಬರುವ ರಾಯಲ್ ಫ್ಯಾಮಿಲಿಯ ಅಧಿಕಾರಿ ಭವ.

ಈಶ್ವರೀಯ ಸೇವೆಯ ಬಂಧನವು ಸಮೀಪ ಸಂಬಂಧದಲ್ಲಿ ತರುವಂತದ್ದಾಗಿದೆ. ಯಾರೆಷ್ಟು ಸೇವೆಯನ್ನು ಮಾಡುತ್ತಾರೆ, ಸೇವೆಯ ಅಷ್ಟೂ ಫಲವು ಸಮೀಪ ಸಂಬಂಧದಲ್ಲಿ ಬರುತ್ತಾರೆ. ಇಲ್ಲಿನ ಸೇವಾಧಾರಿ, ಅಲ್ಲಿನ ರಾಯಲ್ ಫ್ಯಾಮಿಲಿಯ ಅಧಿಕಾರಿಯಾಗುವರು. ಇಲ್ಲಿ ಎಷ್ಟು ಹಾರ್ಡ್ ಸೇವೆಯನ್ನು ಮಾಡುತ್ತಾರೆ, ಅಲ್ಲಿ ಅಷ್ಟೇ ಆರಾಮವಾಗಿ ಸಿಂಹಾಸನದ ಮೇಲೆ ಕುಳಿತಿರುವರು ಮತ್ತು ಇಲ್ಲಿ ಯಾರು ಆರಾಮ ಮಾಡುತ್ತಾರೆಯೋ ಅಲ್ಲಿ ಅವರು ಕೆಲಸ ಮಾಡುವರು. ಒಂದೊಂದು ಸೆಕೆಂಡಿನ, ಒಂದೊಂದು ಕಾರ್ಯದ ಲೆಕ್ಕಾಚಾರವು ತಂದೆಯ ಬಳಿಯಿದೆ.

ಸ್ಲೋಗನ್:
ಸ್ವ ಪರಿವರ್ತನೆಯ ಮೂಲಕ ವಿಶ್ವ ಪರಿವರ್ತನೆಯ ಪ್ರಕಂಪನಗಳನ್ನು ತೀವ್ರ ಗತಿಯಿಂದ ಹರಡಿಸಿರಿ.
 


ಸೂಚನೆ:
ಇಂದು ತಿಂಗಳಿನ ಮೂರನೇ ರವಿವಾರವಾಗಿದೆ, ಎಲ್ಲರೂ ಸಂಘಟಿತ ರೂಪದಲ್ಲಿ ಸಂಜೆ 6.30 ರಿಂದ 7.30ರವರೆಗೆ ಅಂತರಾಷ್ಟ್ರೀಯ ಯೋಗದಲ್ಲಿ ಒಟ್ಟಿಗೆ ಸೇರಿ, ತಮ್ಮ ನಿರಾಕಾರಿ ಸ್ವರೂಪದಲ್ಲಿ ಸ್ಥಿತರಾಗಿ, ಪರಮಧಾಮದ ಶ್ರೇಷ್ಠ ಸ್ಥಿತಿಯ ಅನುಭವ ಮಾಡಿರಿ. ಮಧುರ ಶಾಂತಿಯಲ್ಲಿ ಕುಳಿತುಕೊಂಡು ಎಲ್ಲರಿಗೂ ಶಾಂತಿಯ ಸಕಾಶವನ್ನು ಕೊಡುವ ಸೇವೆಯನ್ನು ಮಾಡಿರಿ.