08.05.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ತಂದೆಯಿಂದ ಭಕ್ತಿಯ ಫಲವನ್ನು ಪಡೆಯಲು ಬಂದಿದ್ದೀರಿ, ಯಾರು ಹೆಚ್ಚು ಭಕ್ತಿ ಮಾಡಿರುತ್ತಾರೆಯೋ ಅವರು
ಜ್ಞಾನದಲ್ಲಿ ಮುಂದೆ ಹೋಗುತ್ತಾರೆ”
ಪ್ರಶ್ನೆ:
ಕಲಿಯುಗೀ
ರಾಜ್ಯದಲ್ಲಿ ಯಾವ ಎರಡು ವಸ್ತುಗಳ ಅವಶ್ಯಕತೆಯಿರುತ್ತದೆ ಅದು ಸತ್ಯಯುಗೀ ರಾಜ್ಯದಲ್ಲಿರುವುದಿಲ್ಲ?
ಉತ್ತರ:
ಕಲಿಯುಗೀ
ರಾಜ್ಯದಲ್ಲಿ 1. ಮಂತ್ರಿ 2. ಗುರುವಿನ ಅವಶ್ಯಕತೆಯಿರುತ್ತದೆ. ಸತ್ಯಯುಗದಲ್ಲಿ ಇವರಿಬ್ಬರೂ
ಇರುವುದಿಲ್ಲ. ಅಲ್ಲಿ ಯಾರ ಸಲಹೆಯನ್ನೂ ಪಡೆಯುವ ಅವಶ್ಯಕತೆಯಿರುವುದಿಲ್ಲ. ಏಕೆಂದರೆ ಸತ್ಯಯುಗೀ
ರಾಜ್ಯವು ತಂದೆಯ ಶ್ರೀಮತದಂತೆ ಸ್ಥಾಪನೆಯಾಗುತ್ತದೆ. ಆ ಶ್ರೀಮತವು 21 ಜನ್ಮಗಳವರೆಗೆ ನಡೆಯುತ್ತದೆ
ಹಾಗೂ ಎಲ್ಲರೂ ಸದ್ಗತಿಯಲ್ಲಿರುತ್ತಾರೆ, ಆದ್ದರಿಂದ ಗುರುವಿನ ಅವಶ್ಯಕತೆಯೂ ಇರುವುದಿಲ್ಲ.
ಓಂ ಶಾಂತಿ.
ಓಂ ಶಾಂತಿಯ ಅರ್ಥವೇನಾಗಿದೆ? ಸ್ವಧರ್ಮದಲ್ಲಿ ಕುಳಿತುಕೊಳ್ಳಿ ಅಥವಾ ತಮ್ಮನ್ನು ಆತ್ಮನೆಂದು ತಿಳಿದು
ಶಾಂತಿಯಲ್ಲಿ ಕುಳಿತುಕೊಳ್ಳಿ. ಇದನ್ನು ಸ್ವಧರ್ಮದಲ್ಲಿ ಕುಳಿತುಕೊಳ್ಳುವುದು ಎಂದು ಕರೆಯಲಾಗುವುದು.
ಭಗವಾನುವಾಚ - ಸ್ವಧರ್ಮದಲ್ಲಿ ಕುಳಿತುಕೊಳ್ಳಿ. ನಿಮ್ಮ ತಂದೆಯು ಕುಳಿತು ನಿಮಗೆ ಓದಿಸುತ್ತಿದ್ದಾರೆ.
ಬೇಹದ್ದಿನ ತಂದೆಯು ಬೇಹದ್ದಿನ ವಿದ್ಯೆಯನ್ನು ಓದಿಸುತ್ತಿದ್ದಾರೆ. ಏಕೆಂದರೆ ತಂದೆಯು ಬೇಹದ್ದಿನ
ಸುಖವನ್ನು ಕೊಡುವವರಾಗಿದ್ದಾರೆ. ವಿದ್ಯೆಯಿಂದ ಸುಖ ಸಿಗುತ್ತದೆಯಲ್ಲವೆ! ಸದಾ ತಂದೆಯು ಹೇಳುತ್ತಾರೆ-
ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಿ. ಬೇಹದ್ದಿನ ತಂದೆಯು ನಿಮ್ಮನ್ನು ವಜ್ರ ಸಮಾನರನ್ನಾಗಿ ಮಾಡಲು
ಬಂದಿದ್ದಾರೆ. ವಜ್ರದಂತೆ ದೇವಿ-ದೇವತೆಗಳೇ ಇರುತ್ತಾರೆ ಅಂದಾಗ ಆ ರೀತಿ ಯಾವಾಗ ಆಗುತ್ತಾರೆ?
ಇಷ್ಟೊಂದು ಶ್ರೇಷ್ಠ ಪುರುಷೋತ್ತಮರು ಹೇಗಾದರು? ಇದನ್ನು ತಂದೆಯ ವಿನಃ ಬೇರೆ ಯಾರೂ ತಿಳಿಸಿಕೊಡಲು
ಆಗುವುದಿಲ್ಲ. ಪ್ರಜಾಪಿತ ಬ್ರಹ್ಮನ ಮಕ್ಕಳು ನೀವು ಬ್ರಾಹ್ಮಣರಾಗಿದ್ದೀರಿ ಮತ್ತೆ ನೀವೀಗ
ದೇವತೆಗಳಾಗಬೇಕು ಬ್ರಾಹ್ಮಣರಿಗೆ ಶಿಖೆಯಿರುತ್ತದೆ. ನೀವೀಗ ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ.
ನೀವು ಪ್ರಜಾಪಿತ ಬ್ರಹ್ಮನ ಮುಖ ವಂಶಾವಳಿಯಾಗಿದ್ದೀರಿ, ಕುಖ ವಂಶಾವಳಿಯಲ್ಲ. ಕಲಿಯುಗದವರೆಲ್ಲಾ ಕುಖ
ವಂಶಾವಳಿಗಳಾಗಿದ್ದಾರೆ, ಸಾಧು-ಸಂತ, ಋಷಿ-ಮುನಿಗಳೆಲ್ಲರೂ ದ್ವಾಪರಯುಗದಿಂದ ಕುಖ
ವಂಶಾವಳಿಗಳಾಗಿದ್ದಾರೆ. ಈಗ ನೀವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ಮಾತ್ರ ಮುಖ
ವಂಶಾವಳಿಗಳಾಗಿದ್ದೀರಿ. ಇದು ದೇವತೆಗಳಿಗಿಂತಲೂ ಉತ್ತಮ ಸರ್ವೋತ್ತಮ ಕುಲವಾಗಿದೆ ಏಕೆಂದರೆ ನಿಮಗೆ
ಓದಿಸುವವರು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ತಂದೆಯೇ ಬಂದಿದ್ದಾರೆ. ತಂದೆಯು ಮಕ್ಕಳಿಗೆ
ಕುಳಿತು ತಿಳಿಸುತ್ತಾರೆ- ಯಾರು ಭಕ್ತಿಮಾರ್ಗದಲ್ಲಿರುತ್ತಾರೆಯೋ ಅವರು ಬರುವುದಿಲ್ಲ, ಜ್ಞಾನ
ಮಾರ್ಗದವರು ಬರುತ್ತಾರೆ. ನೀವಿಲ್ಲಿ ಬೇಹದ್ದಿನ ತಂದೆಯಿಂದ ಭಕ್ತಿಯ ಫಲವನ್ನು ತೆಗೆದುಕೊಳ್ಳಲು
ಬರುತ್ತೀರಿ. ಈಗ ಭಕ್ತಿಯ ಫಲವನ್ನು ಯಾರು ಪಡೆಯುತ್ತಾರೆ? ಯಾರು ಎಲ್ಲರಿಗಿಂತ ಹೆಚ್ಚು ಭಕ್ತಿ
ಮಾಡಿರುತ್ತಾರೆಯೋ ಅವರೇ ಕಲ್ಲಿನಿಂದ ಪಾರಸ ಬುದ್ಧಿಯವರಾಗುತ್ತಾರೆ, ಅವರೇ ಬಂದು ಜ್ಞಾನವನ್ನು
ಪಡೆಯುತ್ತಾರೆ ಏಕೆಂದರೆ ಭಕ್ತಿಯ ಫಲವನ್ನು ಭಗವಂತನೇ ಬಂದು ಕೊಡಬೇಕು. ಇದನ್ನು ಬಹಳ ಚೆನ್ನಾಗಿ
ತಿಳಿದುಕೊಳ್ಳುವ ಮಾತಾಗಿದೆ. ಈಗ ನೀವು ಕಲಿಯುಗಿಗಳಿಂದ ಸತ್ಯಯುಗಿ, ವಿಕಾರಿಗಳಿಂದ
ನಿರ್ವಿಕಾರಿಗಳಾಗುತ್ತೀರಿ ಅಥವಾ ಪುರುಷೋತ್ತಮರಾಗುತ್ತೀರಿ. ನೀವು ಇಂತಹ ಲಕ್ಷ್ಮೀ-ನಾರಾಯಣರಾಗಲು
ಬಂದಿದ್ದೀರಿ. ಇವರು ಭಗವಾನ್-ಭಗವತಿಯಾಗಿರುವುದರಿಂದ ಇವರಿಗೆ ಭಗವಂತನೇ ಓದಿಸುತ್ತಾರೆ. ಭಗವಾನುವಾಚ,
ಆದರೆ ಭಗವಂತನೆಂದು ಯಾರಿಗೆ ಕರೆಯಲಾಗುವುದು? ಭಗವಂತನಂತೂ ಒಬ್ಬರೇ ಆಗಿರುತ್ತಾರೆ.
ನೂರಾರು-ಸಾವಿರಾರು ಭಗವಂತರಿರುವುದಿಲ್ಲ. ಕಲ್ಲು-ಮುಳ್ಳಿನಲ್ಲಿರುವುದಿಲ್ಲ, ತಂದೆಯನ್ನರಿಯದ ಕಾರಣ
ಭಾರತವು ಕಂಗಾಲಾಗಿ ಬಿಟ್ಟಿದೆ. ಈಗ ಮಕ್ಕಳು ತಿಳಿದುಕೊಂಡಿದ್ದೀರಿ- ಭಾರತದಲ್ಲಿ ಇವರ (ಲಕ್ಷ್ಮೀ-ನಾರಾಯಣ)
ರಾಜಧಾನಿಯಿತ್ತು. ಇವರ ಮಕ್ಕಳೆಲ್ಲರೂ ರಾಜಧಾನಿಯ ಮಾಲೀಕರಾಗಿದ್ದರು. ನೀವು ಇಲ್ಲಿಗೆ ಆ ರಾಜಧಾನಿಯ
ಮಾಲೀಕರಾಗಲು ಬಂದಿದ್ದೀರಿ. ಈಗ ಇಲ್ಲವಲ್ಲವೆ. ಭಾರತದಲ್ಲಿ ಇವರ ರಾಜ್ಯವಿತ್ತು. ಈಗ ಇಲ್ಲವಲ್ಲವೆ.
ಮಕ್ಕಳಿಗೆ ತಿಳಿಸಲಾಗಿದೆ- ಯಾವಾಗ ದೇವಿ-ದೇವತೆಗಳ ರಾಜಧಾನಿಯಿತ್ತು,
ಸೂರ್ಯವಂಶಿ-ಚಂದ್ರವಂಶಿಯರಿದ್ದರು ಆಗ ಅನ್ಯ ಧರ್ಮಗಳಿರಲಿಲ್ಲ. ಈ ಸಮಯದಲ್ಲಿ ಅನೇಕ ಧರ್ಮಗಳಿವೆ ಆದರೆ
ಈ ಧರ್ಮವಿಲ್ಲದಂತಾಗಿದೆ. ಇದು ತಳಪಾಯವಾಗಿದ್ದು ಇದಕ್ಕೆ ಬೇರು (ಮೂಲ) ಎಂದೂ ಕರೆಯಲಾಗುವುದು. ಈ
ಸಮಯದಲ್ಲಿ ಮನುಷ್ಯ ಸೃಷ್ಟಿಯ ಬೇರುಗಳೆಲ್ಲವೂ ಸುಟ್ಟು ಹೋಗಿದೆ. ಉಳಿದ ಎಲ್ಲಾ ಧರ್ಮಗಳು ನಿಂತಿವೆ.
ಈಗ ಇವುಗಳ ಆಯಸ್ಸು ಪೂರ್ಣ ಆಗುತ್ತಿದೆ. ಈ ಮನುಷ್ಯ ಸೃಷ್ಟಿ ರೂಪಿ ಭಿನ್ನತೆಯುಳ್ಳ ವೃಕ್ಷವಾಗಿದೆ.
ನಾಮ-ರೂಪ, ದೇಶ-ಕಾಲ ಭಿನ್ನವಾಗಿದೆಯಲ್ಲವೆ! ಎಷ್ಟು ದೊಡ್ಡ ವೃಕ್ಷವಾಗಿದೆ. ತಂದೆಯು ತಿಳಿಸುತ್ತಾರೆ-
ಕಲ್ಪ-ಕಲ್ಪವೂ ಈ ವೃಕ್ಷ ತಮೋಪ್ರಧಾನವಾಗಿ ಬಿಡುತ್ತದೆ, ನಿಸ್ಸಾರವಾಗಿ ಬಿಡುತ್ತದೆ ಆಗ ನಾನು
ಬರುತ್ತೇನೆ. ನೀವು ನನ್ನನ್ನು ಕರೆಯುತ್ತೀರಿ, ತಂದೆಯೇ ಬನ್ನಿ, ನಾವು ಪತಿತರನ್ನು ಪಾವನ ಮಾಡಲು
ಬನ್ನಿ ಎಂದು ಕರೆಯುತ್ತೀರಿ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಆಗ ನಿರಾಕಾರ ತಂದೆಯ
ನೆನಪು ಬರುತ್ತದೆ ಆದರೆ ಸಾಕಾರ ತಂದೆಯ ನೆನಪು ಬರುವುದಿಲ್ಲ. ಪತಿತ-ಪಾವನ, ಸದ್ಗತಿದಾತ ಒಬ್ಬರೇ
ಆಗಿದ್ದಾರೆ. ಯಾವಾಗ ಸತ್ಯಯುಗವಾಗಿತ್ತು, ನಿಮಗೆ ಸದ್ಗತಿಯಿತ್ತು. ಈಗ ನೀವು ಪುರುಷೋತ್ತಮ
ಸಂಗಮಯುಗದಲ್ಲಿ ಕುಳಿತಿದ್ದೀರಿ ಉಳಿದವರೆಲ್ಲರೂ ಕಲಿಯುಗದಲ್ಲಿದ್ದಾರೆ. ನೀವು ಪುರುಷೋತ್ತಮ
ಸಂಗಮಯುಗದಲ್ಲಿದ್ದಿರಿ, ಒಬ್ಬ ಭಗವಂತನಿಗೆ ಉತ್ತಮಕ್ಕಿಂತಲೂ ಉತ್ತಮ ಪುರುಷ ಅಥವಾ ಸರ್ವೋತ್ತಮ ಎಂದು
ಗಾಯನ ಮಾಡಲಾಗುತ್ತದೆ. ನಿಮ್ಮ ಹೆಸರೂ ಶ್ರೇಷ್ಠ, ನಿಮ್ಮ ಧಾಮವೂ ಶ್ರೇಷ್ಠ. ಶ್ರೇಷ್ಠಾತಿ ಶ್ರೇಷ್ಠ
ತಂದೆಯು ಪರಮಧಾಮದಲ್ಲಿರುತ್ತಾರೆ. ಇವನ್ನು ತಿಳಿದುಕೊಳ್ಳಲು ಬಹಳ ಸಹಜವಾಗಿದೆ. ಸತ್ಯಯುಗ, ತ್ರೇತಾ,
ದ್ವಾಪರ, ಕಲಿಯುಗ ಮತ್ತೆ ಸಂಗಮಯುಗವಾಗಿದೆ. ಇದು ಯಾರಿಗೂ ತಿಳಿದಿಲ್ಲ. ನಾಟಕದಲ್ಲಿ ಈ
ಭಕ್ತಿಮಾರ್ಗವೂ ಮಾಡಲ್ಪಟ್ಟಿದೆ. ತಂದೆಯು ಮತ್ತೆ ಭಕ್ತಿ ಮಾರ್ಗವನ್ನು ಏಕೆ ಮಾಡಿದ್ದಾರೆಂದು
ಹೇಳುವಂತಿಲ್ಲ. ಇದು ಅನಾದಿಯಾಗಿದೆ, ನಾನು ಕುಳಿತು ನಿಮಗೆ ನಾಟಕದ ರಹಸ್ಯವನ್ನು ತಿಳಿಸುತ್ತೇನೆ.
ನಾನು ಮಾಡಿದೆ ಅಂದರೆ ಯಾವಾಗ ಮಾಡಿದರೆಂದು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ- ಇದು
ಅನಾದಿಯಾಗಿದೆ. ಯಾವಾಗ ಆರಂಭವಾಯಿತೆಂಬ ಪ್ರಶ್ನೆಯು ಬರುವುದಿಲ್ಲ. ಒಂದು ವೇಳೆ ಇಂತಹ ಸಮಯದಲ್ಲಿ
ಪ್ರಾರಂಭವಾಯಿತೆಂದು ಹೇಳಿದರೆ ಯಾವಾಗ ಸಮಾಪ್ತಿಯಾಗುತ್ತದೆ ಎಂದು ಕೇಳುತ್ತಾರೆ ಆದರೆ ಈ ಚಕ್ರವು
ಸುತ್ತುತ್ತಲೇ ಇರುತ್ತದೆ. ನೀವು ಬ್ರಹ್ಮಾ, ವಿಷ್ಣು, ಶಂಕರರ ಚಿತ್ರವನ್ನು ಮಾಡುತ್ತೀರಿ. ಇವರು
ದೇವತೆಗಳಾಗಿದ್ದಾರೆ. ತ್ರಿಮೂರ್ತಿಗಳನ್ನು ತೋರಿಸುತ್ತಾರೆ ಅದರಲ್ಲಿ ಸರ್ವೋತ್ತಮ ಶಿವನನ್ನು
ತೋರಿಸುವುದಿಲ್ಲ, ಅವರನ್ನು ಬೇರೆ ಮಾಡಿ ಬಿಡುತ್ತಾರೆ. ಬ್ರಹ್ಮನಿಂದ ಸ್ಥಾಪನೆ ಅದು ಈಗ
ನಡೆಯುತ್ತಿದೆ, ನೀವು ನಿಮ್ಮ ರಾಜ್ಯ ಸ್ಥಾಪನೆ ಮಾಡುತ್ತಿದ್ದೀರಿ. ರಾಜಧಾನಿಯಲ್ಲಿ ಎಲ್ಲಾ ರೀತಿಯ
ಪದವಿಗಳಿರುತ್ತವೆ. ಅಧ್ಯಕ್ಷ, ರಾಷ್ಟ್ರಾಧ್ಯಕ್ಷ, ಪ್ರಧಾನಮಂತ್ರಿ, ಮುಖ್ಯಮಂತ್ರಿ.... ಎಲ್ಲರೂ
ಇರುತ್ತಾರೆ. ಇವರೆಲ್ಲರೂ ಸಲಹೆ ಕೊಡಲು ಇರುತ್ತಾರೆ. ಸತ್ಯಯುಗದಲ್ಲಿ ಸಲಹೆ ಕೊಡಲು ಯಾರೂ
ಬೇಕಾಗುವುದಿಲ್ಲ. ಈಗ ನಿಮಗೆ ಸಲಹೆ ಅಥವಾ ಶ್ರೀಮತ ಸಿಗುತ್ತಿದೆ, ಇದೇ ಅವಿನಾಶಿಯಾಗಿ ಬಿಡುತ್ತದೆ.
ಈಗ ಎಷ್ಟೊಂದು ಜನ ಸಲಹೆಗಾರರಿದ್ದಾರೆ! ಬಹಳಷ್ಟು ಮಂದಿಯಿದ್ದಾರೆ. ಹಣವನ್ನೂ ಖರ್ಚು ಮಾಡಿ ಸಲಹೆ
ಕೊಡಲು ಮಂತ್ರಿಯಾಗುತ್ತಾರೆ. ಸರ್ಕಾರವೇ ಹೇಳುತ್ತದೆ- ಇವರು ಲಂಚ ತಿನ್ನುವವರಾಗಿದ್ದಾರೆ, ಇದು
ಕಲಿಯುಗವಾಗಿದೆ ಆದರೆ ಅಲ್ಲಿ ಈ ರೀತಿ ನಡೆಯುವುದಿಲ್ಲ, ಅಲ್ಲಿ ಮಂತ್ರಿಯ ಅವಶ್ಯಕತೆಯೂ ಇರುವುದಿಲ್ಲ,
ಸತ್ಯಯುಗದಲ್ಲಿ ಗುರು, ಮಂತ್ರಿಯಿರುವುದಿಲ್ಲ, ಈಗ ನಿಮಗೆ ಅವಿನಾಶಿಯಾಗಿ 21 ಜನ್ಮಗಳಿಗಾಗಿ
ಶ್ರೀಮತವು ಸಿಗುತ್ತಿದೆ. ವೃದ್ಧರಾದ ನಂತರ ಚಿಕ್ಕ ಮಗುವಾಗುತ್ತೀರಿ. ಹೇಗೆ ಸರ್ಪವು ಒಂದು
ಪೊರೆಯನ್ನು ಬಿಟ್ಟು ಇನ್ನೊಂದನ್ನು ಪಡೆಯುತ್ತದೆ! ಪ್ರಾಣಿಗಳ ಉದಾಹರಣೆಯನ್ನು ಕೊಡಲಾಗುತ್ತದೆ.
ಮನುಷ್ಯರಲ್ಲಿ ಸ್ವಲ್ಪವೂ ಬುದ್ಧಿಯಿಲ್ಲ ಏಕೆಂದರೆ ಕಲ್ಲು ಬುದ್ಧಿಯವರಾಗಿದ್ದಾರೆ. ತಂದೆಯು
ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ ನೀವು ಬ್ರಾಹ್ಮಣ-ಬ್ರಾಹ್ಮಣಿಯರಾಗಿದ್ದೀರಿ. ನೀವು ಕೊಳಕು
ವಸ್ತ್ರವನ್ನು ಸ್ವಚ್ಛ ಮಾಡುವವರೆಂದು ಗ್ರಂಥದಲ್ಲಿಯೂ ಕೇಳುತ್ತಾ-ಓದುತ್ತಾ ಬಂದಿದ್ದೀರಿ.
ಭಗವಂತನನ್ನು ಕರೆಯುತ್ತಾರೆ- ಬಂದು ಆತ್ಮರೂಪಿ ಅಶುದ್ಧ ವಸ್ತ್ರವನ್ನು ಸ್ವಚ್ಛ ಮಾಡು ಎಂದು
ಕರೆಯುತ್ತಾರೆ. ನಾವೆಲ್ಲಾ ಆತ್ಮರ ತಂದೆ ಬಂದು ನಮ್ಮ ವಸ್ತ್ರವನ್ನು ಸ್ವಚ್ಛ ಮಾಡು, ಶರೀರವನ್ನು
ತೊಳೆಯುವುದಲ್ಲ-ಆತ್ಮವನ್ನು ಸ್ವಚ್ಛ ಮಾಡಬೇಕು ಏಕೆಂದರೆ ಆತ್ಮವೇ ಪತಿತವಾಗಿದೆ. ಪತಿತ ಆತ್ಮರನ್ನು
ಬಂದು ಪಾವನ ಮಾಡು ಆಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ನಾನು ಇಲ್ಲಿ
ಬರಬೇಕಾಗುತ್ತದೆ, ನಾನೇ ಜ್ಞಾನಸಾಗರನಾಗಿದ್ದೇನೆ, ಪವಿತ್ರತೆಯ ಸಾಗರನಾಗಿದ್ದೇನೆ. ನೀವು ಬೇಹದ್ದಿನ
ತಂದೆಯಿಂದ ಆಸ್ತಿಯನ್ನು ಪಡೆಯುತ್ತೀರಿ. ಹದ್ದಿನ ತಂದೆಯಿಂದ ಹದ್ದಿನ ಆಸ್ತಿಯನ್ನು ಪಡೆಯುತ್ತೀರಿ.
ಹದ್ದಿನ ಆಸ್ತಿಯಲ್ಲಿ ಬಹಳ ದುಃಖವಿದೆ ಆದ್ದರಿಂದ ತಂದೆಯನ್ನು ನೆನಪು ಮಾಡುತ್ತಾರೆ. ಅಪಾರ ದುಃಖವಿದೆ.
ತಂದೆಯು ತಿಳಿಸಿದ್ದಾರೆ- ಈ ಪಂಚ ವಿಕಾರಗಳೆಂಬ ರಾವಣನು ನಿಮ್ಮ ಅತೀ ದೊಡ್ಡ ಶತ್ರುವಾಗಿದ್ದಾನೆ, ಇದೇ
ನಿಮ್ಮ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ಹೇ ಮಕ್ಕಳೇ, ಈ ಒಂದು ಜನ್ಮದಲ್ಲಿ ಬ್ರಾಹ್ಮಣರಾಗಿ
ಕಾಮ ವಿಕಾರದ ಮೇಲೆ ವಿಜಯಿಗಳಾದರೆ ಜಗತ್ಜೀತರಾಗುತ್ತೀರಿ. ನೀವು ದೇವತೆಗಳಾಗಲು ಪವಿತ್ರತೆಯನ್ನು
ಧಾರಣೆ ಮಾಡುತ್ತೀರಿ. ನೀವು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಲು ಬಂದಿದ್ದೀರಿ. ಇದು
ಪುರುಷೋತ್ತಮ ಸಂಗಮಯುಗವಾಗಿದೆ, ಇದರಲ್ಲಿ ಪುರುಷಾರ್ಥ ಮಾಡಿ ಪುರುಷೋತ್ತಮರಾಗಬೇಕು. ಕಲ್ಪದ ಹಿಂದೆ
ಯಾರು ಸೂರ್ಯವಂಶಿ-ಚಂದ್ರವಂಶಿ ಪಾವನರಾಗಿದ್ದರು ಅವರೇ ಅವಶ್ಯವಾಗಿ ನಂತರ ಆಗುತ್ತಾರೆ. ಆದರೆ
ಅದರಲ್ಲಿ ಸಮಯವಂತೂ ಹಿಡಿಸುತ್ತದೆ. ತಂದೆಯು ಬಹಳ ಸಹಜವಾಗಿ ಉಪಾಯವನ್ನು ತಿಳಿಸುತ್ತಾರೆ. ಈಗ ನೀವು
ತಂದೆಗೆ ಮಕ್ಕಳಂತೂ ಆಗಿದ್ದೀರಿ. ಇಲ್ಲಿಗೆ ನೀವು ಯಾರ ಬಳಿ ಬಂದಿದ್ದೀರಿ? ಅವರು ನಿರಾಕಾರ
ಆಗಿದ್ದಾರೆ, ಅವರು ಈ (ಬ್ರಹ್ಮಾ) ಶರೀರವನ್ನು ಲೋನ್ ತೆಗೆದುಕೊಂಡಿದ್ದಾರೆ. ಸ್ವಯಂ ತಂದೆಯೇ
ತಿಳಿಸುತ್ತಾರೆ- ಇದಾಗಿದೆ ಅನೇಕ ಜನ್ಮಗಳ ಅಂತ್ಯದಲ್ಲಿಯೂ ಅಂತ್ಯ ಜನ್ಮವಾಗಿದೆ. ಇದು
ಎಲ್ಲದಕ್ಕಿಂತಲೂ ಹಳೆಯ ಶರೀರವಾಗಿದೆ. ನಾನು ಹಳೆಯ ರಾವಣನ ಅಸುರೀ ಪ್ರಪಂಚದಲ್ಲಿ ಬರುತ್ತೇನೆ ಹಾಗೂ
ಯಾರು ತಮ್ಮ ಜನ್ಮಗಳನ್ನು ತಿಳಿದುಕೊಂಡಿಲ್ಲವೋ ಅವರ ಶರೀರದಲ್ಲಿ ಬರುತ್ತೇನೆ. ಇದು ಅನೇಕ ಜನ್ಮಗಳ
ಅಂತಿಮ ಜನ್ಮವಾಗಿದೆ. ಯಾವಾಗ ಅವರ ವಾನಪ್ರಸ್ಥ ಸ್ಥಿತಿಯಾಗುತ್ತದೆ ಆಗ ನಾನು ಪ್ರವೇಶ ಮಾಡುತ್ತೇನೆ.
ಸಾಮಾನ್ಯವಾಗಿ ವಾನಪ್ರಸ್ಥ ಜೀವನದಲ್ಲಿ ಗುರುಗಳನ್ನು ಮಾಡಿಕೊಳ್ಳುತ್ತಾರೆ. 60 ಆಯಿತೆಂದರೆ ಊರುಗೋಲು
ಬರುತ್ತದೆ..... ಎಂದು ಹೇಳುತ್ತಾರಲ್ಲವೆ! ಮನೆಯಲ್ಲಿದ್ದಾಗ ಮಕ್ಕಳಿಂದ ತೊಂದರೆಯಾಗುತ್ತದೆ.
ಆದ್ದರಿಂದ ಮನೆ ಬಿಟ್ಟು ಹೋಗುತ್ತಾರೆ. ಮಕ್ಕಳೂ ಸಹ ತಂದೆಗೆ ಹೊಡೆಯುವುದರಲ್ಲಿ ತಡ ಮಾಡುವುದಿಲ್ಲ.
ಇವರು ಯಾವಾಗ ಸಾಯುತ್ತಾರೆ, ನಮಗೆ ಹಣ ಸಿಗುತ್ತದೆ ಎಂದು ಹೇಳುತ್ತಾರೆ. ಬಹಳ ವಾನಪ್ರಸ್ಥಿಗಳ
ಸತ್ಸಂಗ ನಡೆಯುತ್ತದೆ. ಸರ್ವರ ಸದ್ಗತಿದಾತ ಒಬ್ಬರೇ ಆಗಿದ್ದಾರೆ, ಅವರು ಸಂಗಮಯುಗದಲ್ಲಿ
ಬರುತ್ತಾರೆಂದು ನೀವು ತಿಳಿದುಕೊಂಡಿದ್ದೀರಿ. ನೀವು ಸತ್ಯಯುಗದಲ್ಲಿ ಸದ್ಗತಿಯಲ್ಲಿದ್ದಾಗ ಉಳಿದವರು
ಶಾಂತಿಧಾಮದಲ್ಲಿರುತ್ತಾರೆ. ಇವರಿಗೆ ಸರ್ವರ ಸದ್ಗತಿದಾತ ಎಂದು ಕರೆಯುತ್ತಾರೆ, ತಂದೆಯ ವಿನಃ ಯಾರೂ
ಬೇರೆ ಸದ್ಗತಿದಾತರಾಗಲು ಸಾಧ್ಯವಿಲ್ಲ. ಯಾರಿಗೂ ಶ್ರೀ ಹಾಗೂ ಶ್ರೀ ಶ್ರೀ ಎಂದು ಹೇಳಬಾರದು. ಶ್ರೀ
ಅರ್ಥಾತ್ ದೇವತೆಗಳು ಶ್ರೇಷ್ಠವಾಗಿರುತ್ತಾರೆ. ಶ್ರೀ ಲಕ್ಷ್ಮೀ-ಶ್ರೀನಾರಾಯಣ ಅವರಿಗೆ
ಕರೆಯಲಾಗುತ್ತದೆ. ಅವರನ್ನು ಈ ರೀತಿ ಮಾಡುವವರು ಯಾರು? ಶ್ರೀ ಶ್ರೀ ಶಿವ ತಂದೆಗೆ ಹೇಳಬೇಕಾಗುವುದು.
ತಂದೆಯು ನಮ್ಮ ತಪ್ಪುಗಳನ್ನು ಸಿದ್ಧ ಮಾಡಿ ಹೇಳುತ್ತಾರೆ- ನೀವು ಇಷ್ಟೊಂದು ಗುರುಗಳ ಸೇವೆ ಮಾಡಿದಿರಿ
ಮತ್ತೆ ಮಾಡುತ್ತೀರಿ ಮತ್ತೆ ಅದೇ ಗುರುಗಳನ್ನೇ ಮಾಡಿಕೊಳ್ಳುತ್ತೀರಿ. ಚಕ್ರವು ಹಾಗೆಯೇ
ಪುನರಾವರ್ತನೆಯಾಗುತ್ತದೆ. ನೀವು ಸ್ವರ್ಗದಲ್ಲಿದ್ದಾಗ ಅದು ಸುಖಧಾಮವಾಗಿರುತ್ತದೆ.
ಪವಿತ್ರತೆ-ಸುಖ-ಶಾಂತಿಯೆಲ್ಲವೂ ಇರುತ್ತದೆ, ಅಲ್ಲಿ ಕಲಹ-ಜಗಳ ಇರುವುದೇ ಇಲ್ಲ. ಬಾಕಿ ಉಳಿದವರೆಲ್ಲರೂ
ಶಾಂತಿಧಾಮದಲ್ಲಿರುತ್ತಾರೆ. ಭಲೇ ಸತ್ಯಯುಗವನ್ನು ಲಕ್ಷಾಂತರ ವರ್ಷಗಳೆಂದು ಹೇಳಿರಬಹುದು. ಆದರೆ
ತಂದೆಯು ತಿಳಿಸುತ್ತಾರೆ- ಅದು ಲಕ್ಷಾಂತರ ವರ್ಷಗಳ ಮಾತಿಲ್ಲ, ಇದು 5000 ವರ್ಷಗಳ ಮಾತಾಗಿದೆ.
ತಂದೆಯು ಮನುಷ್ಯರಿಗೆ 84 ಜನ್ಮಗಳು ಮಾತ್ರವೆಂದು ತಿಳಿಸುತ್ತಾರೆ. ಇದೂ ಸಹ ನಾಟಕವು ಮಾಡಲ್ಪಟ್ಟಿದೆ.
ಪಾತ್ರಧಾರಿಗಳಾಗಿದ್ದು ನಾಟಕದ ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿಗಳು ಯಾರೆಂದು ತಿಳಿಯದೇ
ಇದ್ದಾಗ ಅಂತಹವರಿಗೆ ಏನು ಹೇಳಲಾಗುವುದು! ತಂದೆಯು ತಿಳಿಸುತ್ತಾರೆ- ಈ ಬೇಹದ್ದಿನ ನಾಟಕವನ್ನು
ಮನುಷ್ಯರು ಯಾರೂ ತಿಳಿದುಕೊಂಡಿಲ್ಲ ತಂದೆಯೇ ಬಂದು ತಿಳಿಸುತ್ತಾರೆ. ಇದು ನಾಟಕವಾಗಿದೆ, ನಾವು
ಶರೀರವನ್ನು ಪಡೆದು ಪಾತ್ರವನ್ನಭಿನಯಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ನಾಟಕದಲ್ಲಿ ಮುಖ್ಯ
ಪಾತ್ರಧಾರಿಗಳು ಯಾರು? ಯಾರೂ ತಿಳಿಸಿಕೊಡಲು ಸಾಧ್ಯವಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ-
ಈ ಬೇಹದ್ದಿನ ನಾಟಕವು ಹೇನಿನ ರೀತಿ ನಡೆಯುತ್ತದೆ, ಟಿಕ್-ಟಿಕ್ ಎಂದು ನಡೆಯುತ್ತಿರುತ್ತದೆ. ಮುಖ್ಯ
ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ, ಅವರೇ ಬಂದು ತಿಳಿಸುತ್ತಾರೆ ಹಾಗೂ ಸರ್ವರ ಸದ್ಗತಿ
ಮಾಡುತ್ತಾರೆ. ಸತ್ಯಯುಗದಲ್ಲಿ ಬೇರೆ ಯಾರೂ ಇರುವುದಿಲ್ಲ, ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ. ಆ
ಕಡಿಮೆಯಿರುವವರೇ ಎಲ್ಲದಕ್ಕಿಂತ ಹೆಚ್ಚು ಭಕ್ತಿ ಮಾಡಿರುತ್ತಾರೆ. ನಿಮ್ಮ ಬಳಿ ಪ್ರದರ್ಶನ ಅಥವಾ
ಮ್ಯೂಜಿಯಂಗೆ ಬಹಳ ಭಕ್ತಿ ಮಾಡಿರುವವರೇ ಬರುತ್ತಾರೆ. ಒಬ್ಬ ಶಿವನ ಭಕ್ತಿ ಮಾಡುವುದನ್ನು ಅವ್ಯಭಿಚಾರಿ
ಭಕ್ತಿಯೆ೦ದು ಕರೆಯಲಾಗುವುದು. ನಂತರ ಅನೇಕರ ಭಕ್ತಿ ಮಾಡುತ್ತಾ ವ್ಯಭಿಚಾರಿಗಳಾಗುತ್ತಾರೆ. ಈಗಂತೂ
ಸಂಪೂರ್ಣ ತಮೋಪ್ರಧಾನ ಭಕ್ತಿಯಾಗಿದೆ, ಮೊದಲು ಸತೋಪ್ರಧಾನ ಭಕ್ತಿಯಿತ್ತು ನಂತರ ಏಣಿ ಇಳಿಯುತ್ತಾ
ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಇಂತಹ ಸ್ಥಿತಿ ಬಂದಾಗ ತಂದೆಯು ಎಲ್ಲರನ್ನೂ ಸತೋಪ್ರಧಾನ ಮಾಡಲು
ಬರುತ್ತಾರೆ. ಈ ಬೇಹದ್ದಿನ ನಾಟಕವನ್ನು ನೀವೀಗ ತಿಳಿದುಕೊಂಡಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಬೇಹದ್ದಿನ
ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಲು ಅವಶ್ಯವಾಗಿ ಪಾವನರಾಗಬೇಕು. ಈಗ ಪವಿತ್ರತೆಯ
ಆಸ್ತಿಯನ್ನು ತೆಗೆದುಕೊಳ್ಳಿ ಅರ್ಥಾತ್ ಕಾಮಜೀತರಾಗಿ ಆಗ ಜಗತ್ಜೀತರಾಗುತ್ತೀರಿ.
2. ಬೇಹದ್ದಿನ ತಂದೆಯಿಂದ ವಿದ್ಯೆಯನ್ನು ಓದಿ ಸ್ವಯಂನ್ನು ಕವಡೆಯಿಂದ ವಜ್ರದಂತೆ ಮಾಡಿಕೊಳ್ಳಬೇಕು.
ಬೇಹದ್ದಿನ ಸುಖವನ್ನು ಪಡೆಯಬೇಕಾಗಿದೆ. ಮನುಷ್ಯರಿಂದ ದೇವತೆಯನ್ನಾಗಿ ಮಾಡುವ ತಂದೆಯು ಈಗ ನಮ್ಮ
ಸನ್ಮುಖದಲ್ಲಿದ್ದಾರೆ, ಇದು ನಮ್ಮ ಸರ್ವೋತ್ತಮ ಬ್ರಾಹ್ಮಣ ಕುಲವಾಗಿದೆ ಎಂಬ ನಶೆಯಿರಬೇಕು.
ವರದಾನ:
ಅಟಲ ನಿಶ್ಚಯದ
ಮೂಲಕ ಸಹಜ ವಿಜಯದ ಅನುಭವ ಮಾಡುವಂತಹ ಸದಾ ಹರ್ಷಿತ, ನಿಶ್ಚಿಂತ ಭವ.
ನಿಶ್ಚಯದ ನಿಶಾನಿಯಾಗಿದೆ
ಸಹಜ ವಿಜಯ. ಆದರೆ ನಿಶ್ಚಯ ಎಲ್ಲಾ ಮಾತುಗಳಲ್ಲಿಯೂ ಬೇಕು. ಕೇವಲ ತಂದೆಯಲ್ಲಿ ನಿಶ್ಚಯ ಇರುವುದಲ್ಲ,
ನಿಮ್ಮ ಮೇಲೆ ನಿಮಗೆ, ಬ್ರಾಹ್ಮಣ ಪರಿವಾರದಲ್ಲಿ ಮತ್ತು ಡ್ರಾಮದ ಪ್ರತೀ ದೃಷ್ಯದಲ್ಲಿ ಸಂಪೂರ್ಣ
ನಿಶ್ಚಯವಿರಬೇಕು, ಸ್ವಲ್ಪ ಮಾತಿನಲ್ಲಿ ನಿಶ್ಚಯ ಅಲುಗಾಡುವಂತಹುದಲ್ಲ. ಸದಾ ಇದೇ ಸ್ಮೃತಿ ಇರಲಿ
ವಿಜಯದ ಭವಿಷ್ಯ ಅಲುಗಾಡಿಸಲು ಸಾಧ್ಯವಿಲ್ಲ, ಇಂತಹ ನಿಶ್ಚಯ ಬುದ್ಧಿ ಮಕ್ಕಳು, ಏನಾಯಿತು ? ಏಕಾಯಿತು
?.... ಈ ಎಲ್ಲಾ ಪ್ರಶ್ನೆಗಳಿಂದ ಸಹಾ ದೂರ ಸದಾ ನಿಶ್ಚಿಂತ, ಸದಾ ಹರ್ಷಿತರಾಗಿರುತ್ತಾರೆ.
ಸ್ಲೋಗನ್:
ಸಮಯವನ್ನು
ವ್ಯರ್ಥ ಮಾಡುವುದರ ಬದಲು ತಕ್ಷಣ ನಿರ್ಣಯ ಮಾಡಿ ನಿರ್ಧಾರ ಮಾಡಿ.