24.06.19         Morning Kannada Murli       Om Shanti           BapDada Madhuban


“ಸ್ವಯಂನಲ್ಲಿ ಸತೋಪ್ರಧಾನತೆಯ ಶಕ್ತಿಯನ್ನು ತೆಗೆದುಕೊಂಡು ಬರಲು ಸದಾ ಶ್ರೇಷ್ಠ ಕರ್ಮ ಮಾಡುತ್ತಿರಿ, ಇದರಿಂದ ಪಾಪಗಳ ಹೊರೆ, ಬಂಧನ ಅಥವಾ ಅಡಚಣೆಗಳು ಹೋಗುತ್ತವೆ”

ಗೀತೆ:
ಇದು ನನ್ನ ಚಿಕ್ಕ ಸಂಸಾರವಾಗಿದೆ..........

ಓಂ ಶಾಂತಿ.
ಜ್ಞಾನ ಪೂರ್ಣರಾಗಿರುವ, ಬೇಹದ್ದಿನ ತಂದೆ ಆತ್ಮಗಳ ಜೊತೆ ಮಾತನಾಡುತ್ತಿದ್ದಾರೆ. ಆತ್ಮಗಳ ವಾಸ್ತವಿಕ ಸ್ಥಿತಿ ಯಾವುದಿತ್ತು ಅದು ಈಗ ಬೇರೊಂದಾಗಿಬಿಟ್ಟಿದೆ. ಸದಾ ಆತ್ಮ ಒಂದೇ ಸ್ಥಿತಿಯಲ್ಲಿ ಇರುತ್ತದೆ ಎಂದಲ್ಲ. ಆತ್ಮ ಭಲೆ ಅನಾದಿ ಆಗಿದ್ದರೂ ಅದರ ಸ್ಥಿತಿ ಬದಲಾವಣೆ ಆಗುತ್ತದೆ, ಹೇಗೇಗೆ ಸಮಯ ಕಳೆದು ಹೋಗುತ್ತಾ ಹೋಗುತ್ತದೆ ಅದೇ ರೀತಿ ಆತ್ಮನ ಸ್ಥಿತಿಯೂ ಬದಲಾವಣೆ ಆಗುತ್ತಾ ಹೋಗುತ್ತದೆ, ಹಾಗೆ ನೋಡಿದರೆ ಆತ್ಮ ಅನಾದಿ ಅವಿನಾಶಿಯಾಗಿದೆ, ಆದರೆ ಆತ್ಮ ಹೇಗೆ ಕರ್ಮ ಮಾಡುತ್ತದೋ ಹಾಗೆ ಫಲವನ್ನು ಪಡೆಯುತ್ತದೆ. ಅಂದಾಗ ಮಾಡುವಂತಹ ಜವಾಬ್ದಾರಿ ಆತ್ಮನದ್ದಾಗಿದೆ. ಈಗ ತಂದೆಯೂ ಸಹ ಆತ್ಮಗಳೊಂದಿಗೆ ಮಾತನಾಡುತ್ತಾರೆ, ಆತ್ಮರ ತಂದೆ ಪರಮಪಿತ ಪರಮಾತ್ಮನಾಗಿದ್ದಾರೆ ಎನ್ನುವುದಂತೂ ಎಲ್ಲರ ಬುದ್ಧಿಯಲ್ಲಿ ಇದೆ.

ಪಿತ ಎಂದು ಹೇಳಿದಾಗ ಖಂಡಿತ ನಾವು ಅವರ ಮಕ್ಕಳಾಗಿದ್ದೇವೆ, ಹೀಗಲ್ಲ ಅವರು ಪಿತ ಆದರೆ ನಾವೂ ಸಹ ಪಿತ ಆಗಿದ್ದೇವೆ ಎಂದು. ಒಂದುವೇಳೆ ಆತ್ಮನೇ ಪರಮಾತ್ಮ ಎಂದು ಹೇಳಿದಾಗ ಆತ್ಮಕ್ಕೆ ಪರಮಪಿತ ಎಂದೂ ಸಹ ಹೇಳುತ್ತಾರೆ. ಆದರೆ ಪಿತ ಮತ್ತು ಪುತ್ರನ ಸಂಬಂಧದಲ್ಲಿ ಪಿತ ಎಂದು ಹೇಳಲಾಗುತ್ತದೆ. ಒಂದುವೇಳೆ ನಾವೆಲ್ಲರೂ ಪಿತ ಆಗಿ ಬಿಟ್ಟರೆ ಪಿತ ಎಂದು ಯಾರು ಕರೆಯುತ್ತಾರೆ! ಖಂಡಿತವಾಗಿಯೂ ಪಿತ ಮತ್ತು ಪುತ್ರ ಇಬ್ಬರು ಬೇರೆ-ಬೇರೆ ಆಗಿದ್ದಾರೆ. ಪಿತ ಎಂದು ಹೇಳುವ ಸಂಬಂಧ ಪುತ್ರನಿಂದ ಆಗುತ್ತದೆ ಮತ್ತು ಪುತ್ರನ ಸಂಬಂಧದಲ್ಲೇ ಪಿತನ ಸಂಬಂಧ ಬರುತ್ತದೆ. ಅಂದಮೇಲೆ ಅವರಿಗೆ ಪರಮಪಿತ ಪರಮಾತ್ಮ ಎಂದು ಕರೆಯಲಾಗುತ್ತದೆ. ಈಗ ಆ ತಂದೆ ಕುಳಿತು ತಿಳಿಸುತ್ತಾರೆ, ಈಗ ನಿಮ್ಮದು ಯಾವ ಸ್ಥಿತಿ ಇದೆ ಮತ್ತು ಮೊದಲು ಯಾವ ಸ್ಥಿತಿ ಇತ್ತು, ಅದರಲ್ಲಿ ಅಂತರವಿದೆ. ಈಗ ನಾನು ಬಂದಿದ್ದೇನೆ ಆ ಅಂತರವನ್ನು ತೆಗೆದುಹಾಕಲು. ತಂದೆ ಜ್ಞಾನ ಕೊಟ್ಟು ತಿಳಿಸುತ್ತಾರೆ ನಿಮ್ಮದು ಯಾವ ಮೊಟ್ಟ ಮೊದಲಿನ ಸ್ಥಿತಿ ಇತ್ತು, ಈಗ ಅದನ್ನು ಧಾರಣೆ ಮಾಡಿಕೊಳ್ಳಿ ಎಂದು. ಹೇಗೆ ಧಾರಣೆ ಮಾಡುವುದು, ಅದರ ಜ್ಞಾನವನ್ನೂ ಕೊಡುತ್ತಿದ್ದಾರೆ, ಶಕ್ತಿಯನ್ನೂ ಕೊಡುತ್ತಿದ್ದಾರೆ. ನೀವು ನನ್ನನ್ನು ನೆನಪು ಮಾಡಿದಾಗ ಶ್ರೇಷ್ಠ ಕರ್ಮ ಮಾಡುವ ಬಲ ಬರುತ್ತದೆ ಎಂದು ಹೇಳುತ್ತಾರೆ, ಇಲ್ಲವೆಂದರೆ ನಿಮ್ಮ ಕರ್ಮ ಶ್ರೇಷ್ಠ ಇರುವುದಿಲ್ಲ. ಕೆಲವರು ಹೇಳುತ್ತಾರೆ ನಾವು ಒಳ್ಳೆಯ ಕರ್ಮ ಮಾಡಲು ಬಯಸುತ್ತೇವೆ ಆದರೆ ನಂತರ ಏನಾಗುತ್ತದೆ ಎಂದು ಗೊತ್ತಾಗುವುದಿಲ್ಲ, ಯಾವುದರಿಂದ ನಮ್ಮ ಮನಸ್ಸು ಒಳ್ಳೆಯದರ ಕಡೆ ಹೋಗುವುದೇ ಇಲ್ಲ, ಇನ್ನೊಂದು ಕಡೆ ಹೋಗುತ್ತದೆ ಏಕೆಂದರೆ ಆತ್ಮನಲ್ಲಿ ಒಳ್ಳೆ ಕರ್ಮ ಮಾಡುವ ಬಲ ಇಲ್ಲ. ನಮ್ಮ ಸ್ಥಿತಿ ತಮೋಪ್ರಧಾನ ಆಗಿರುವ ಕಾರಣ ತಮೋವಿನ ಪ್ರಭಾವ ಈಗ ಜೋರಾಗಿದೆ, ಯಾವುದು ನಮ್ಮನ್ನು ಅದುಮಿಡುತ್ತದೆ. ಆದ್ದರಿಂದ ಬುದ್ಧಿ ಆ ಕಡೆ ಬೇಗ ಹೋಗುತ್ತದೆ. ಮತ್ತು ಒಳ್ಳೆಯದರ ಕಡೆ ಬುದ್ಧಿ ಹೋಗುವುದರಲ್ಲಿ ಅಡಚಣೆ ಬರುತ್ತದೆ. ತಂದೆ ಹೇಳುತ್ತಾರೆ ಈಗ ನನ್ನೊಂದಿಗೆ ಯೋಗವನ್ನು ಜೋಡಿಸಿ ಮತ್ತು ನಾನು ಯಾವ ತಿಳುವಳಿಕೆ ಕೊಡುತ್ತೇನೆ, ಅದರ ಆಧಾರದ ಮೇಲೆ ತಮ್ಮ ಪಾಪಗಳ ಹೊರೆ ಯಾವುದಿದೆ, ಬಂಧನವಿದೆ, ಯಾವುದು ಅಡಚಣೆ ರೂಪದಲ್ಲಿ ಎದುರಿಗೆ ಬರುತ್ತದೆ, ಅದರಿಂದ ತಮ್ಮ ಮಾರ್ಗವನ್ನು ಸ್ಪಷ್ಟ ಮಾಡಿಕೊಳ್ಳುತ್ತಾ ಹೋಗಿ ಎಂದು. ನಂತರ ಶ್ರೇಷ್ಠ ಕರ್ಮ ಮಾಡುತ್ತಿದ್ದರೆ ನಿಮ್ಮಲ್ಲಿ ಸತೋಪ್ರಧಾನತೆಯ ಶಕ್ತಿ ಬರುತ್ತಾ ಹೋಗುತ್ತದೆ, ಆ ಆಧಾರದಿಂದ ನೀವು ಪುನಃ ಯಾವುದು ತಮ್ಮ ಮೊಟ್ಟ ಮೊದಲಿನ ಸ್ಥಿತಿ ಇತ್ತು ಅದನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ.

ನಂತರ ಎಂತಹ ಆತ್ಮವೋ ಅಂತಹ ಶರೀರವೂ ಸಿಗುತ್ತದೆ, ಮತ್ತೆ ಸಂಸಾರವೂ ಅದೇ ರೀತಿ ಇರುತ್ತದೆ. ಈಗ ಅಂತಹ ಸಂಸಾರವನ್ನು ಪರಮಪಿತ ಪರಮಾತ್ಮ ಮಾಡುತ್ತಾರೆ, ಆದ್ದರಿಂದ ಅವರಿಗೆ ವಿಶ್ವ ರಚಯಿತ ಎಂದು ಹೇಳಲಾಗುತ್ತದೆ ಅಂದರೆ ಹೀಗಲ್ಲ ಇಲ್ಲದೇ ಇರುವಂತಹ ಪ್ರಪಂಚವನ್ನು ಕುಳಿತು ಮಾಡುತ್ತಾರೆ ಎಂದು, ಆದರೆ ಇಂತಹ ಈ ರೀತಿಯ ಪ್ರಪಂಚವನ್ನು ಬದಲಾವಣೆ ಮಾಡುತ್ತಾರೆ. ಅನ್ಯ ಯಾರಿಗೂ ಸಹ ವಿಶ್ವ ರಚಯಿತ ಎಂದು ಹೇಳಲಾಗುವುದಿಲ್ಲ, ಕ್ರೈಸ್ತ ಬಂದರು, ಬುದ್ಧ ಬಂದರು, ಅವರು ತಮ್ಮ ಹೊಸ ಧರ್ಮವನ್ನು ಸ್ಥಾಪನೆ ಮಾಡಿದರು. ಆದರೆ ವಿಶ್ವವನ್ನು ಬದಲಾವಣೆ ಮಾಡುವುದು, ವಿಶ್ವವನ್ನು ಮಾಡುವುದು ಈ ಕಾರ್ಯ ವಿಶ್ವ ರಚಯಿತನದ್ದಾಗಿದೆ. ವಿಶ್ವಕ್ಕೇ ಸರ್ವ ಶಕ್ತಿವಂತ ಆಗಿದ್ದಾರೆ. ಅವರ ಕರ್ತವ್ಯ ಎಲ್ಲಾ ಆತ್ಮಗಳಿಗಿಂತಲೂ ಭಿನ್ನವಾಗಿದೆ ಎಂದು ಸಹ ತಿಳಿದುಕೊಳ್ಳಬೇಕು, ಆದರೆ ಅವರೂ ತಮ್ಮ ಕರ್ತವ್ಯವನ್ನು ಅಥವಾ ಪಾತ್ರವನ್ನು ಅನ್ಯ ಆತ್ಮಗಳ ಹಾಗೆ ಈ ಮನುಷ್ಯ ಸೃಷ್ಟಿಯ ಮೇಲೆ ಬಂದೇ ಮಾಡುತ್ತಾರೆ. ಬಾಕಿ ಪ್ರತಿಯೊಬ್ಬ ಆತ್ಮನ ಪಾತ್ರ ತಮ್ಮ-ತಮ್ಮದೇ ನಡೆಯುತ್ತದೆ, ಈ ಎಲ್ಲಾ ಪಾತ್ರಗಳೂ ಪರಮಾತ್ಮನದ್ದೇ ನಡೆಯುತ್ತದೆ ಎಂದು ಹೇಳುವುದಿಲ್ಲ. ಇಲ್ಲಿ ಪ್ರತಿಯೊಬ್ಬ ಆತ್ಮನ ತಮ್ಮ-ತಮ್ಮ ಕರ್ಮದ ಖಾತೆ ನಡೆಯುತ್ತದೆ, ಯಾರು ಮಾಡುತ್ತಾರೆ ಅವರು ಪಡೆದುಕೊಳ್ಳುತ್ತಾರೆ, ಅದರಲ್ಲಿ ಕೆಲವು ಒಳ್ಳೆಯ ಆತ್ಮಗಳೂ ಸಹ ಇದ್ದಾರೆ, ಹೇಗೆ ಕ್ರೈಸ್ತ, ಬುದ್ಧ ಬಂದರು, ಇಸ್ಲಾಮಿ ಬಂದರು, ಗಾಂಧಿ ಬಂದರು, ಯಾರು-ಯಾರು ಒಳ್ಳೊಳ್ಳೆಯವರು ಬಂದರು ಅವರೆಲ್ಲರೂ ತಮ್ಮ-ತಮ್ಮ ಪಾತ್ರವನ್ನು ಮಾಡಿ ಹೋಗಿದ್ದಾರೆ. ಇದೇ ರೀತಿ ತಾವು ಆತ್ಮಗಳದ್ದೂ ಸಹ ಬಹಳ ಜನ್ಮಗಳ ಪಾತ್ರವಿದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ಪಡೆದುಕೊಳ್ಳುತ್ತಾರೆ, ಪ್ರತಿಯೊಬ್ಬರದು ಎಷ್ಟು ಜನ್ಮಗಳ ಲೆಕ್ಕವಿದೆಯೋ, ಆತ್ಮ ಆ ಪಾತ್ರವನ್ನು ಅಭಿನಯಿಸುತ್ತದೆ. ಆತ್ಮನಲ್ಲಿ ಪೂರ್ತಿ ರಿಕಾರ್ಡ್ ತುಂಬಲ್ಪಟ್ಟಿದೆ, ಯಾವುದು ಆತ್ಮ ಅಭಿನಯಿಸುತ್ತದೆ. ಇದು ಪಾತ್ರವನ್ನು ಅಭಿನಯಿಸುವ ಸ್ಥಾನವಾಗಿದೆ, ಆದ್ದರಿಂದ ಇದಕ್ಕೆ ನಾಟಕ ಎಂದೂ ಸಹ ಹೇಳಲಾಗುತ್ತದೆ, ಡ್ರಾಮಾ ಎಂದೂ ಹೇಳಲಾಗುತ್ತದೆ. ಇದರಲ್ಲಿ ಒಮ್ಮೆ ಪರಮಾತ್ಮನ ಪಾತ್ರವೂ ಇದೆ, ಆದ್ದರಿಂದ ಅವರ ಪಾತ್ರದ ಮಹಿಮೆ ಎಲ್ಲರಿಗಿಂತ ಶ್ರೇಷ್ಠವಾಗಿದೆ. ಆದರೆ ಯಾವುದರಲ್ಲಿ ಶ್ರೇಷ್ಠವಾಗಿದೆ? ಅವರು ಬಂದು ನಮ್ಮ ಪ್ರಪಂಚವನ್ನೇ ಬದಲಾವಣೆ ಮಾಡುತ್ತಾರೆ.

ಇದು ಕರ್ಮಭೂಮಿ ಆಗಿದೆ, ಎಲ್ಲಿ ಪ್ರತಿಯೊಬ್ಬ ಮನುಷ್ಯ ಆತ್ಮರು ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸುತ್ತಾರೆ. ಇದರಲ್ಲಿ ಪರಮಾತ್ಮನದ್ದೂ ಸಹ ಪಾತ್ರವಿದೆ ಆದರೆ ಆತ್ಮಗಳ ಹಾಗೆ ಜನನ-ಮರಣದಲ್ಲಿ ಬರುವುದಿಲ್ಲ. ಆತ್ಮಗಳ ಹಾಗೆ ಅವರ ಕರ್ಮದ ಖಾತೆ ಉಲ್ಟಾ ಆಗುವುದಿಲ್ಲ. ಕೇವಲ ನಾನು ನಿಮ್ಮನ್ನು ಮುಕ್ತರನ್ನಾಗಿ ಮಾಡಲು ಬರುತ್ತೇನೆ ಎಂದು ಅವರು ಹೇಳುತ್ತಾರೆ ಆದ್ದರಿಂದ ನನಗೆ ಮುಕ್ತಿದಾತ, ಬಂಧನದಿಂದ ಬಿಡುಗಡೆ ಮಾಡುವ ಗತಿ-ಸದ್ಗತಿದಾತ ಎಂದು ಹೇಳುತ್ತಾರೆ.

ಆತ್ಮನ ಮೇಲೆ ಯಾವ ಮಾಯೆಯ ಬಂಧನ ಏರಿದೆ, ಅದನ್ನು ಇಳಿಸಿ ಪವಿತ್ರರನ್ನಾಗಿ ಮಾಡುತ್ತಾರೆ ಮತ್ತು ನನ್ನ ಕಾರ್ಯವಾಗಿದೆ ಆತ್ಮಗಳನ್ನು ಸರ್ವ ಬಂಧನಗಳಿಂದ ಬಿಡುಗಡೆ ಮಾಡಿ ವಾಪಸ್ ಕರೆದುಕೊಂಡು ಹೋಗುವುದು ಎಂದು ಹೇಳುತ್ತಾರೆ. ಯಾವುದು ಸೃಷ್ಟಿಯ ಅನಾದಿ ನಿಯಮ ಮತ್ತು ಕಾಯಿದೆ ಇದೆ, ಅದನ್ನೂ ಸಹ ತಿಳಿದುಕೊಳ್ಳಬೇಕು, ನಂತರ ಈ ಮನುಷ್ಯ ಸೃಷ್ಟಿಯ ವೃದ್ಧಿ ಯಾವ ರೀತಿ ಆಗುತ್ತದೆ, ನಂತರ ಇಂತಹ ಸಮಯವೂ ಬರುತ್ತದೆ ಯಾವಾಗ ಕಡಿಮೆಯೂ ಆಗುತ್ತದೆ. ಹೀಗಲ್ಲಾ ವೃದ್ಧಿ ಆಗುತ್ತದೆ ಎಂದರೆ ವೃದ್ಧಿ ಆಗುತ್ತಲೇ ಇರುತ್ತದೆ ಎಂದಲ್ಲ. ಕಡಿಮೆಯೂ ಆಗುತ್ತದೆ. ಅಂದಾಗ ಸೃಷ್ಟಿಯಲ್ಲಿ ಪ್ರತಿಯೊಂದು ವಸ್ತುವಿನ ನಿಯಮವಿದೆ. ತಮ್ಮ ಶರೀರದ್ದೂ ನಿಯಮವಿದೆ, ಮೊದಲು ಬಾಲಕ, ನಂತರ ಕಿಶೋರ ಸ್ಥಿತಿ , ನಂತರ ಯುವಕರು ನಂತರ ವೃದ್ಧರು. ಅಂದಾಗ ವೃದ್ಧರೂ ಬೇಗ ಆಗುವುದಿಲ್ಲ. ವೃದ್ಧರು ಆಗುತ್ತಾ-ಆಗುತ್ತಾ ಜಡಿಜಡೀಭೂತ ಆಗಿ ಬಿಡುತ್ತಾರೆ, ಪ್ರತಿಯೊಂದು ಮಾತು ಹೆಚ್ಚಾಗುವುದು ಮತ್ತೆ ಅಂತ್ಯ ಆಗುವುದು ಇದೂ ಸಹ ನಿಯಮವಾಗಿದೆ. ಈ ರೀತಿ ಸೃಷ್ಟಿಯ ವಂಶಾವಳಿಯದ್ದು (ಜೆನರೇಷನ್) ನಿಯಮವಿದೆ. ಒಂದು ಜೀವನದ್ದೂ ಸಹ ಹಂತಗಳಿವೆ ಅಂದಾಗ ಜನ್ಮಗಳ ಹಂತಗಳೂ ಸಹ ಇವೆ, ಮತ್ತುವಂಶಾವಳಿಗಳು ಯಾವುದು ನಡೆದಿದೆ ಅದರ ಹಂತಗಳೂ ಇರುತ್ತವೆ, ಈ ರೀತಿ ಎಲ್ಲಾ ಧರ್ಮದ ಹಂತಗಳು ಇರುತ್ತವೆ. ಮೊದಲು ಯಾವ ಧರ್ಮ ಇತ್ತು ಅದು ಎಲ್ಲದಕ್ಕಿಂತ ಶಕ್ತಿಶಾಲಿ ಆಗಿತ್ತು, ನಂತರ ನಿದಾನ-ನಿಧಾನವಾಗಿ ಯಾವುದು ಬರುತ್ತದೆ, ಅದರ ಶಕ್ತಿ ಕಡಿಮೆ ಆಗುತ್ತಾ ಹೋಗುತ್ತದೆ. ಧರ್ಮಗಳು ನಡೆಯುವುದು ಪ್ರತಿಯೊಂದು ಮಾತು ನಿಯಮಾನುಸಾರವಾಗಿ ನಡೆಯುತ್ತದೆ, ಈ ಎಲ್ಲಾ ಮಾತುಗಳನ್ನೂ ಸಹ ತಿಳಿದುಕೊಳ್ಳಬೇಕು.

ಈ ಲೆಕ್ಕದಿಂದ ತಂದೆಯೂ ಸಹ ಹೇಳುತ್ತಾರೆ - ನನ್ನದೂ ಇದರಲ್ಲಿ ಪಾತ್ರವಿದೆ. ನಾನೂ ಸಹ ಒಂದು ಆತ್ಮನಾಗಿದ್ದೇನೆ, ನಾನು ಭಗವಂತ ಬೇರೆ ಯಾವುದೇ ವಸ್ತುವಲ್ಲ. ನಾನೂ ಸಹ ಆತ್ಮನಾಗಿದ್ದೇನೆ ಆದರೆ ನನ್ನ ಕಾರ್ಯ ಬಹಳ ದೊಡ್ಡದು ಮತ್ತು ಶ್ರೇಷ್ಠವಾಗಿದೆ, ಆದ್ದರಿಂದ ನನಗೆ ಭಗವಂತ ಎಂದು ಹೇಳುತ್ತಾರೆ. ಹೇಗೆ ನೀವು ಆತ್ಮಗಳಾಗಿದ್ದೀರಿ, ಅದೇ ರೀತಿ ನಾನೂ ಸಹ ಆತ್ಮನಾಗಿದ್ದೇನೆ. ಹೇಗೆ ತಮ್ಮ ಮಕ್ಕಳಿದ್ದಾರೆ ಅವರೂ ಸಹ ಮನುಷ್ಯರಾಗಿದ್ದಾರೆ, ತಾವೂ ಸಹ ಮನುಷ್ಯರಾಗಿದ್ದೀರಿ, ಇದರಲ್ಲಿ ಯಾವುದೇ ಅಂತರವಿಲ್ಲವಲ್ಲವೇ. ನಾನೂ ಆತ್ಮನೇ ಆಗಿದ್ದೇನೆ, ಆತ್ಮನಲ್ಲಿ ಯಾವುದೇ ಅಂತರವಿಲ್ಲ. ಆದರೆ ಕರ್ತವ್ಯದಲ್ಲಿ ಬಹಳ ದೊಡ್ಡ ಅಂತರವಿದೆ. ಆದ್ದರಿಂದ ನನ್ನ ಯಾವ ಕರ್ತವ್ಯವಿದೆ ಅದು ಎಲ್ಲದಕ್ಕಿಂತ ಭಿನ್ನವಾಗಿದೆ. ನಾನು ಯಾವುದೇ ಹದ್ದಿನ ಒಂದು ಧರ್ಮದ ಸ್ಥಾಪಕನಲ್ಲ. ನಾನು ಪ್ರಪಂಚದ ರಚಯಿತನಾಗಿದ್ದೇನೆ, ಅವರು ಧರ್ಮದ ರಚಯಿತನಾಗಿದ್ದಾರೆ. ಹೇಗೆ ಆ ಆತ್ಮಗಳು ತಮ್ಮ ಕರ್ತವ್ಯವನ್ನು ತಮ್ಮ ಸಮಯದಲ್ಲಿ ಮಾಡುತ್ತಾರೆ, ಅದೇ ರೀತಿ ನಾನೂ ಸಹ ನನ್ನ ಸಮಯದಲ್ಲಿ ಬರುತ್ತೇನೆ. ನನ್ನ ಕರ್ತವ್ಯ ವಿಶಾಲವಾಗಿದೆ, ನನ್ನ ಕರ್ತವ್ಯ ಮಹಾನ್ ಆಗಿದೆ ಮತ್ತು ಎಲ್ಲದಕ್ಕಿಂತ ಭಿನ್ನವಾಗಿದೆ. ಆದ್ದರಿಂದ ಭಗವಂತನ ಕಾರ್ಯ ಭಿನ್ನವಾಗಿದೆ ಎಂದು ಹೇಳುತ್ತಾರೆ. ಅವರಿಗೆ ಸರ್ವಶಕ್ತಿವಂತ ಎಂದೂ ಸಹ ಕರೆಯುತ್ತಾರೆ, ಎಲ್ಲದಕ್ಕಿಂತ ಶಕ್ತಿಶಾಲಿ ಕಾರ್ಯ ಆತ್ಮಗಳನ್ನು ಮಾಯೆಯ ಬಂಧನಗಳಿಂದ ಬಿಡುಸುವುದಾಗಿದೆ ಮತ್ತು ಹೊಸ ಪ್ರಪಂಚದ ಸಸಿಯನ್ನು ನೆಡುವುದಾಗಿದೆ, ಆದ್ದರಿಂದ ಅವರಿಗೆ ಆಂಗ್ಲ ಭಾಷೆಯಲ್ಲಿ ಹೆವನ್ಲೀ ಗಾಡ್ ಫಾದರ್ ಎಂದು ಹೇಳುತ್ತಾರೆ. ಹೇಗೆ ಕ್ರೈಸ್ತನಿಗೆ ಕ್ರಿಶ್ಚಯನ್ನರ ತಂದೆ ಎಂದು ಹೇಳುತ್ತಾರೆ ಅವರಿಗೆ ಹೆವನ್ಲೀ ಗಾಡ್ ಫಾದರ್ ಎಂದು ಹೇಳುವುದಿಲ್ಲ. ಹೆವನ್ನ (ಸ್ವರ್ಗದ) ಸ್ಥಾಪಕರು ಪರಮಾತ್ಮನಾಗಿದ್ದಾರೆ. ಅಂದಾಗ ಹೆವನ್ ಪ್ರಪಂಚವಾಗಿದೆಯಲ್ಲವೇ, ಸ್ವರ್ಗ ಯಾವುದೇ ಒಂದು ಧರ್ಮವಲ್ಲ. ಅವರು ಪ್ರಪಂಚದ ಸ್ಥಾಪಕರಾಗಿದ್ದಾರೆ ಮತ್ತು ಆ ಪ್ರಪಂಚದಲ್ಲಿ ಒಂದು ಧರ್ಮ, ಒಂದು ರಾಜ್ಯವಿರುತ್ತದೆ, ತತ್ವಗಳು ಪರಿವರ್ತನೆ ಆಗಿಬಿಡುತ್ತವೆ. ಆದ್ದರಿಂದ ತಂದೆಗೆ ಹೆವನ್ಲೀ ಗಾಡ್ ಫಾದರ್ ಎಂದು ಹೇಳುತ್ತಾರೆ.

ಇನ್ನೊಂದು, ಗಾಡ್ ಈಸ್ ಟ್ರೂತ್ (ಭಗವಂತ ಸತ್ಯ) ಎಂದು ಹೇಳುತ್ತಾರೆ, ಅಂದಾಗ ಸತ್ಯ ಯಾವ ವಸ್ತು, ಯಾವುದರಲ್ಲಿ ಸತ್ಯ? ಇದೂ ಸಹ ತಿಳಿದುಕೊಳ್ಳುವ ವಿಷಯವಾಗಿದೆ. ಕೆಲವರು ತಿಳಿಯುತ್ತಾರೆ ಯಾರು ಸತ್ಯ ಹೇಳುತ್ತಾರೆ ಅವರೇ ಭಗವಂತ ಆಗಿದ್ದಾರೆ, ಭಗವಂತ ಬೇರೆ ಯಾವ ವಸ್ತುವೂ ಅಲ್ಲ ಅಷ್ಟೇ ಕೇವಲ ಸತ್ಯವನ್ನು ಹೇಳಬೇಕು ಎನ್ನುತ್ತಾರೆ. ಆದರೆ ಇದಲ್ಲ, ಗಾಡ್ ಈಸ್ ಟ್ರೂತ್ನ ಅರ್ಥವೇ ಆಗಿದೆ ಭಗವಂತನೇ ಬಂದು ಎಲ್ಲಾ ಮಾತುಗಳ ಸತ್ಯವನ್ನು ತಿಳಿಸಿದ್ದಾರೆ, ಗಾಡ್ ಈಸ್ ಟ್ರೂತ್ ಎಂದರೆ ಭಗವಂತ ಸತ್ಯವನ್ನೇ ತಿಳಿಸುತ್ತಾರೆ, ಅವರಲ್ಲೇ ಸತ್ಯತೆ ಇದೆ, ಅದಕ್ಕಾಗಿ ಅವರಿಗೆ ನಾಲೆಜ್ಫುಲ್ ಎಂದು ಹೇಳಲಾಗುತ್ತದೆ. ಜ್ಞಾನ ಸಾಗರ, ಆನಂದ ಸಾಗರ, ಗಾಡ್ ನೋಸ್ (ಈಶ್ವರನಿಗೆ ಗೊತ್ತಿದೆ).... ಅಂದಾಗ ಖಂಡಿತವಾಗಿಯೂ ವಿಶೇಷವಾಗಿ ತಿಳಿದುಕೊಳ್ಳುವ ಮಾತಿದೆಯಲ್ಲವೇ! ಅಂದರೆ ಅದು ಯಾವ ವಿಷಯವಾಗಿದೆ? ಹೀಗಲ್ಲ ಇವನು ಕಳ್ಳತನ ಮಾಡಿದ್ದಾನೆ, ಇದು ಈಶ್ವರನಿಗೆ ಗೊತ್ತಿದೆ (ಗಾಡ್ ನೋಸ್), ಈ ರೀತಿ ಅಲ್ಲ. ಭಲೆ ಅವರಿಗೆ ಎಲ್ಲಾ ಗೊತ್ತಿದೆ ಆದರೆ ಅವರ ಮಹಿಮೆ ಏನಿದೆ ಅಂದರೆ ನಮ್ಮ ಪ್ರಪಂಚ ಯಾವುದು ಕೆಳಗೆ ಬಿದ್ದು ಹೋಗಿದೆ ಅದನ್ನು ಹೇಗೆ ಮೇಲೆ ಎತ್ತುವುದು ಎನ್ನುವುದರ ಮೇಲಿದೆ, ಈ ಚಕ್ರದ ಮಾತುಗಳು ಅವರಿಗೆ ಗೊತ್ತಿದೆ. ಆದ್ದರಿಂದ ಹೇಳುತ್ತಾರೆ ಗಾಡ್ ನೋಸ್ (ಈಶ್ವರನಿಗೆ ಗೊತ್ತಿದೆ) ಎಂದು. ಪರಮಾತ್ಮನ ಮಹಿಮೆ ಈ ರೀತಿ ಬರುತ್ತದೆ ಯಾವುದು ಮನುಷ್ಯರಿಗಿಂತ ಭಿನ್ನವಾಗಿದೆ ಏಕೆಂದರೆ ಅವರನ್ನು ತಿಳಿಯುವುದು ಎಲ್ಲದಕ್ಕಿಂತ ಭಿನ್ನವಾಗಿದೆ. ಮನುಷ್ಯರನ್ನು ತಿಳಿಯುವುದು ಹದ್ದಿನ ಮಾತಾಗಿದೆ, ಮನುಷ್ಯರು ಅಲ್ಪಜ್ಞರು ಎಂದು ಹೇಳುತ್ತಾರೆ ಮತ್ತು ಪರಮಾತ್ಮನಿಗೆ ಸರ್ವಜ್ಞ ಎಂದು ಹೇಳುತ್ತಾರೆ, ಯಾವುದಕ್ಕೆ ಆಂಗ್ಲ ಭಾಷೆಯಲ್ಲಿ ನಾಲೆಜ್ಫುಲ್ (ಜ್ಞಾನಪೂರ್ಣ) ಎಂದು ಹೇಳುತ್ತಾರೆ ಅರ್ಥಾತ್ ಎಲ್ಲದರ ಜ್ಞಾನ ಅಥವಾ ತಿಳಿದಿರುವವನು ಎಂದು ಹೇಳುತ್ತಾರೆ. ಯಾರು ಸರ್ವಜ್ಞ ಆಗಿದ್ದಾರೆ ಅವರೇ ಸತ್ಯವನ್ನು ತಿಳುದುಕೊಳ್ಳಲು ಸಾಧ್ಯ, ಯಥಾರ್ಥ ಮಾತುಗಳ ಜ್ಞಾನ ಯಾರ ಬಳಿ ಇರುತ್ತದೆ, ಖಂಡಿತ ಅವರೇ ಎಲ್ಲರಿಗೂ ಕೊಡುತ್ತಾರಲ್ಲವೇ. ಒಂದುವೇಳೆ ಸ್ವಯಂ ತಿಳಿದು ಇನ್ನೊಬ್ಬರಿಗೆ ಕೊಡಲಿಲ್ಲವೆಂದರೆ ಅವರಿಂದ ನಮಗೆ ಏನು ಲಾಭವಿದೆ. ಹೋಗಲಿ ಬಿಡಿ, ಆದರೆ ಹಾಗಲ್ಲ. ಅವರ ತಿಳುವಳಿಕೆಯಿಂದ ನಮಗೆ ಲಾಭವಾಗಿದೆ ಆದ್ದರಿಂದ ಅವರ ಮಹಿಮೆಯನ್ನು ಮಾಡುತ್ತೇವೆ. ಅವರ ಹಿಂದೆ ಹೋಗುತ್ತೇವೆ. ಯಾರಿಗೆ ಏನೇ ಆದರೂ ಸಹ ಹೇಳುತ್ತಾರೆ. ಹೇ ಭಗವಂತ! ಈಗ ನೀನು ಇದು ಮಾಡು!ಒಳಿತು ಮಾಡು, ದಯೆ ಮಾಡು, ನನ್ನ ದುಃಖವನ್ನು ದೂರ ಮಾಡು ಎಂದು ನಾವು ಅವರನ್ನು ಬೇಡಿಕೊಳ್ಳುತ್ತೇವಲ್ಲವೇ. ಅವರ ಜೊತೆ ಏನಾದರೂ ಸಂಬಂಧವಿದೆಯಲ್ಲವೇ. ಆದ್ದರಿಂದ ಈ ರೀತಿಯಲ್ಲಿ ನೆನಪು ಮಾಡುತ್ತಾರೆ, ಹೇಗೆ ಅವರು ನಮ್ಮ ಮೇಲೆ ಏನೋ ಉಪಕಾರ ಮಾಡಿದ್ದಾರೆ, ಒಂದುವೇಳೆ ಅವರು ಎಂದೂ ಉಪಕಾರ ಮಾಡೇ ಇಲ್ಲವೆಂದರೆ ನಾವು ಏಕೆ ಅವರಿಗಾಗಿ ತಲೆ ಬಾಗಿಸುತ್ತೇವೆ. ಯಾವುದೇ ಕಷ್ಟದ ಸಮಯದಲ್ಲಿ ಸಹಯೋಗವನ್ನು ಕೊಟ್ಟರೆ ಹೃದಯದಲ್ಲಿ ಇವರು ಬಹಳ ಕಷ್ಟಕಾಲದಲ್ಲಿ ನನಗೆ ಸಹಾಯ ಮಾಡಿದ್ದಾರೆ ಎಂದು ಇರುತ್ತದೆ. ಸಮಯಕ್ಕೆ ನನ್ನ ರಕ್ಷಣೆ ಮಾಡಿದ್ದಾರೆ, ಅಂದಾಗ ಅವರ ಪ್ರತಿ ಹೃದಯದಲ್ಲಿ ಪ್ರೀತಿ ಇರುತ್ತದೆ. ಪರಮಾತ್ಮನ ಪ್ರತಿಯೂ ಸಹ ಅದೇ ರೀತಿ ಪ್ರೀತಿ ಇರುತ್ತದೆ, ಅವರು ನಮಗೆ ಸಮಯದಲ್ಲಿ ಸಹಯೋಗ ಕೊಟ್ಟಿದ್ದಾರೆ ಆದರೆ ಹೀಗಲ್ಲ. ಕೆಲವೊಮ್ಮೆ ಮನುಷ್ಯರಿಗೆ ಒಳ್ಳೆಯದಾದರೆ ಇದು ಭಗವಂತ ಮಾಡಿದ್ದಾರೆ..... ಎಂದು. ಭಗವಂತ ಅದೇ ರೀತಿ ಮಾಡುತ್ತಾರೆ. ಆದರೆ ಅವರದು ದೊಡ್ಡ ಕಾರ್ಯವಾಗಿದೆ, ವಿಶ್ವದ ಕಾರ್ಯ, ವಿಶ್ವಕ್ಕೆ ಸಂಬಂಧ ಪಟ್ಟಿರುವ ಮಾತಾಗಿದೆ. ಅಂದರೆ ಹೀಗಲ್ಲ ಬಾಕಿ ಯಾರಿಗಾದರೂ ಸ್ವಲ್ಪ ಹಣ ಸಿಕ್ಕಿದರೆ ಇದು ಭಗವಂತ ಕೊಟ್ಟಿದ್ದಾರೆ ಎಂದು. ಇದಂತೂ ನಾವೂ ಒಳ್ಳೆಯ ಕರ್ಮವನ್ನು ಮಾಡಿದಾಗ ಆ ಕರ್ಮದ ಫಲ ಸಿಗುತ್ತದೆ. ಒಳ್ಳೆಯ-ಕೆಟ್ಟ ಕರ್ಮದ ಲೆಕ್ಕಚಾರ ನಡೆಯುತ್ತಿರುತ್ತದೆ, ಅದರ ಫಲವೂ ನಾವು ಪಡೆಯುತ್ತಿರುತ್ತೇವೆ ಆದರೆ ಪರಮಾತ್ಮನು ಬಂದು ಯಾವ ಕರ್ಮವನ್ನು ಕಲಿಸಿದರು ಅದರ ಫಲ ಏನಿದೆ ಅದು ಬೇರೆಯಾಗಿದೆ. ಅಲ್ಪಕಾಲದ ಸುಖವಂತೂ ಬುದ್ಧಿಯ ಆಧಾರದ ಮೇಲೂ ಸಿಗುತ್ತದೆ. ಆದರೆ ಅವರು ಯಾವ ಜ್ಞಾನವನ್ನು ಕೊಟ್ಟಿದ್ದಾರೆ ಅದರಿಂದ ನಾವು ಸದಾ ಸುಖವನ್ನು ಪಡೆದುಕೊಳ್ಳುತ್ತೇವೆ. ಪರಮಾತ್ಮನ ಕಾರ್ಯ ಭಿನ್ನವಾಗಿದೆಯಲ್ಲವೇ. ಆದ್ದರಿಂದ ನಾನೇ ಬಂದು ಕರ್ಮದ ಯಥಾರ್ಥ ಜ್ಞಾನ ಯಾವುದಿದೆ ಅದನ್ನು ಕಲಿಸುತ್ತೇನೆ ಎಂದು ಹೇಳುತ್ತಾರೆ, ಯಾವುದಕ್ಕೆ ಕರ್ಮಯೋಗ ಶ್ರೆಷ್ಠವಾಗಿದೆ ಎಂದು ಹೇಳುತ್ತಾರೆ, ಇದರಲ್ಲಿ ಕರ್ಮವನ್ನಾಗಲಿ, ಗೃಹಸ್ಥವನ್ನಾಗಲಿ ಬಿಡುವ ಮಾತಿಲ್ಲ. ಕೇವಲ ತಮ್ಮ ಕರ್ಮಗಳನ್ನು ಹೇಗೆ ಪವಿತ್ರ ಮಾಡಿಕೊಳ್ಳುವುದು, ಅದರ ಜ್ಞಾನವನ್ನು ನಾನು ತಿಳಿಸುತ್ತೇನೆ. ಅಂದರೆ ಕರ್ಮವನ್ನು ಪವಿತ್ರ ಮಾಡಿಕೊಳ್ಳಬೇಕು, ಕರ್ಮವನ್ನು ಬಿಡಬಾರದು. ಕರ್ಮ ಮಾಡುವುದಂತೂ ಅನಾದಿಯಾಗಿದೆ. ಈ ಕರ್ಮಕ್ಷೇತ್ರವೂ ಸಹ ಅನಾದಿಯಾಗಿದೆ. ಮನುಷ್ಯರಿದ್ದಾರೆಂದರೆ ಕರ್ಮವೂ ಸಹ ಇದೆ, ಆದರೆ ಆ ಕರ್ಮವನ್ನು ತಾವು ಹೇಗೆ ಶ್ರೇಷ್ಠ ಮಾಡಿಕೊಳ್ಳುವುದು. ಅದನ್ನು ಬಂದು ತಿಳಿಸುತ್ತೇನೆ. ಯಾವುದರಿಂದ ನಿಮ್ಮ ಕರ್ಮದ ಖಾತೆ ಅಕರ್ಮವಾಗಿರುತ್ತದೆ. ಅಕರ್ಮದ ಅರ್ಥವೇ ಯಾವುದೇ ಕೆಟ್ಟ ಖಾತೆ ಆಗುವುದಿಲ್ಲ. ಒಳ್ಳೆಯದು.

ಅಂತಹ ಬಾಪ್ದಾದಾ ಮತ್ತು ತಾಯಿಯ ಮಧುರ-ಮಧುರ ಬಹಳ ಒಳ್ಳೆಯ, ಎಚ್ಚರಿಕೆಯಿಂದ ಇರುವ ಮಕ್ಕಳ ಪ್ರತಿ ನೆನಪು, ಪ್ರೀತಿ ಮತ್ತು ಗುಡ್ಮಾರ್ನಿಂಗ್. ಒಳ್ಳೆಯದು.

ವರದಾನ:
ವರದಾನ: ಸದಾ ಉಮಂಗ-ಉತ್ಸಾಹದಲ್ಲಿರುತ್ತಾ ಖುಶಿಯ ಗೀತೆ ಹಾಡುತ್ತಿರುವಂತಹ ಅವಿನಾಶಿ ಅಧೃಷ್ಠಶಾಲಿ ಭವ.

ತಾವು ಅಧೃಷ್ಠಶಾಲಿ ಮಕ್ಕಳು ಅವಿನಾಶಿ ವಿಧಿಯಿಂದ ಅವಿನಾಶಿ ಸಿದ್ಧಿಗಳನ್ನು ಪ್ರಾಪ್ತಿ ಮಾಡಿಕೊಳ್ಳುವಿರಿ. ನಿಮ್ಮ ಮನಸ್ಸಿನಿಂದ ಸದಾ ವ್ಹಾ! ವ್ಹಾ! ನ ಖುಶಿಯ ಗೀತೆ ನುಡಿಯುತ್ತಿರುವುದು. ವ್ಹಾ ಬಾಬಾ! ವ್ಹಾ ನನ್ನ ಅಧೃಷ್ಠ! ವ್ಹಾ ಮಧುರ ಪರಿವಾರ! ವ್ಹಾ ಶ್ರೇಷ್ಠ ಸಂಗಮದ ಸುಂದರ ಸಮಯ! ಪ್ರತಿ ಕರ್ಮ ವ್ಹಾ!-ವ್ಹಾ! ಆಗಿದೆ. ಆದ್ದರಿಂದ ನೀವು ಅವಿನಾಶಿ ಅಧೃಷ್ಠಶಾಲಿಗಳಾಗಿರುವಿರಿ. ನಿಮ್ಮ ಮನಸ್ಸಿನಲ್ಲಿ ಎಂದೂ ಸಹ ವೈ , ಐ (ಏಕೆ?, ನಾನು) ಬರಲು ಸಾಧ್ಯವಿಲ್ಲ. ವೈ ನ ಬದಲಿಗೆ ವ್ಹಾ!-ವ್ಹಾ! ಮತ್ತು ಐ (ನಾನು) ಬದಲಿಗೆ ಬಾಬಾ-ಬಾಬಾ ಶಬ್ಧವೇ ಬರುವುದು.

ಸ್ಲೋಗನ್:
ಏನು ಸಂಕಲ್ಪ ಮಾಡುವಿರಿ ಅದಕ್ಕೆ ಅವಿನಾಶಿ ಗೌರ್ಮೆಂಟ್ನ ಸ್ಟಾಂಪ್ ಹಾಕಿದಾಗ ಅಟಲವಾಗಿರುವಿರಿ.