17.05.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ನೆನಪಿನಿಂದ ನೆನಪು ಸಿಗುತ್ತದೆ, ಯಾವ ಮಕ್ಕಳು ಪ್ರೀತಿಯಿಂದ ತಂದೆಯನ್ನು ನೆನಪು ಮಾಡುತ್ತಾರೆ ಅವರ
ಆಕರ್ಷಣೆ ತಂದೆಗೂ ಸಹ ಆಗುತ್ತದೆ.”
ಪ್ರಶ್ನೆ:
ತಮ್ಮ ಪರಿಪಕ್ವ
ಅವಸ್ಥೆಯ ಗುರುತು ಏನಾಗಿದೆ? ಆ ಅವಸ್ಥೆಯನ್ನು ಪಡೆಯುವ ಪುರುಷಾರ್ಥವನ್ನು ತಿಳಿಸಿ?
ಉತ್ತರ:
ತಾವು ಮಕ್ಕಳಿಗೆ
ಪರಿಪಕ್ವ ಅವಸ್ಥೆ ಇದ್ದಾಗ ಎಲ್ಲಾ ಕರ್ಮೇಂದ್ರಿಯಗಳು ಶೀತಲ ಆಗಿ ಬಿಡುತ್ತದೆ. ಕರ್ಮೇಂದ್ರಿಯಗಳಿಂದ
ಯಾವುದೇ ಉಲ್ಟಾ ಕರ್ಮ ಆಗುವುದಿಲ್ಲ. ಅವಸ್ಥೆ ಅಚಲ, ಅಡೋಲವಾಗಿ ಬಿಡುತ್ತದೆ. ಈ ಸಮಯದ ಅಡೋಲ
ಅವಸ್ಥೆಯಿಂದ 21 ಜನ್ಮಗಳಿಗಾಗಿ ಕರ್ಮೇಂದ್ರಿಯಗಳು ವಶ ಆಗಿ ಬಿಡುತ್ತವೆ. ಈ ಅವಸ್ಥೆಯನ್ನು
ಪಡೆದುಕೊಳ್ಳಲು ತಮ್ಮ ಪರಿಶೀಲನೆ ಮಾಡಿಕೊಳ್ಳಿ, ನೋಟ್ ಮಾಡಿಕೊಳ್ಳುವುದರಿಂದ ಎಚ್ಚರಿಕೆಯಿಂದ
ಇರುತ್ತೀರಿ. ಯೋಗಬಲದಿಂದಲೇ ಕರ್ಮೇಂದ್ರಿಯಗಳನ್ನು ವಶ ಮಾಡಿಕೊಳ್ಳಬೇಕು. ಯೋಗವೇ ನಿಮ್ಮ
ಅವಸ್ಥೆಯನ್ನು ಪರಿಪಕ್ವ ಮಾಡುತ್ತದೆ.
ಓಂ ಶಾಂತಿ.
ಇದು ನೆನಪಿನ ಯಾತ್ರೆಯಾಗಿದೆ. ಮಕ್ಕಳೆಲ್ಲಾ ಈ ಯಾತ್ರೆಯಲ್ಲಿ ಇರುತ್ತಾರೆ, ಕೇವಲ ನೀವು ಇಲ್ಲಿ
ಹತ್ತಿರ ಇದ್ದೀರಿ. ಯಾರು-ಯಾರು ಎಲ್ಲೆಲ್ಲಿದ್ದಾರೋ ತಂದೆಯನ್ನು ನೆನಪು ಮಾಡುತ್ತಾರೆ, ಅಂದಾಗ ಅವರು
ಸ್ವತಃವಾಗಿಯೇ ಹತ್ತಿರ ಬಂದು ಬಿಡುತ್ತಾರೆ. ಹೇಗೆ ಚಂದ್ರಮನ ಮುಂದೆ ಯಾವುದಾದರೂ ನಕ್ಷತ್ರ ಬಹಳ
ಹತ್ತಿರ ಇರುತ್ತದೆ. ಕೆಲವು ಬಹಳ ಹೊಳೆಯುತ್ತಿರುತ್ತವೆ. ಕೆಲವು ಹತ್ತಿರ, ಕೆಲವು ದೂರವೂ ಸಹ
ಇರುತ್ತವೆ. ಈ ನಕ್ಷತ್ರ ಬಹಳ ಹೊಳೆಯುತ್ತಿದೆ, ಈ ನಕ್ಷತ್ರ ಬಹಳ ಹತ್ತಿರ ಇದೆ, ಇದಂತೂ ಹೊಳೆಯುವುದೇ
ಇಲ್ಲ ಎನ್ನುವುದು ಕಂಡು ಬರುತ್ತದೆ. ತಾವು ಜ್ಞಾನ ಹಾಗೂ ಯೋಗದ ನಕ್ಷತ್ರಗಳಾಗಿದ್ದೀರಿ ಎಂದು
ನಿಮ್ಮದೂ ಸಹ ಗಾಯನವಿದೆ. ಮಕ್ಕಳಿಗೆ ಜ್ಞಾನಸೂರ್ಯ ಸಿಕ್ಕಿದ್ದಾರೆ. ತಂದೆ ಮಕ್ಕಳನ್ನೇ ನೆನಪು
ಮಾಡುತ್ತಾರೆ, ಸೇವಾಧಾರಿ ಮಕ್ಕಳನ್ನು ನೆನಪು ಮಾಡುತ್ತಾರೆ. ತಂದೆ ಸರ್ವಶಕ್ತಿವಂತ ಆಗಿದ್ದಾರೆ, ಆ
ತಂದೆಯನ್ನೇ ನೆನಪು ಮಾಡುತ್ತೇವೆ, ಅಂದಾಗ ನೆನಪಿನಿಂದ ನೆನಪು ಸಿಗುತ್ತದೆ. ಎಲ್ಲಿ ಇಂತಹ ಸೇವಾಧಾರಿ
ಮಕ್ಕಳಿರುತ್ತಾರೆ, ಜ್ಞಾನ ಸೂರ್ಯ ತಂದೆಯೂ ಸಹ ಅವರನ್ನು ನೆನಪು ಮಾಡುತ್ತಾರೆ. ಮಕ್ಕಳೂ ಸಹ ನೆನಪು
ಮಾಡುತ್ತಾರೆ. ಯಾವ ಮಕ್ಕಳು ನೆನಪು ಮಾಡುವುದಿಲ್ಲವೋ ಅವರನ್ನು ತಂದೆಯೂ ಸಹ ನೆನಪು ಮಾಡುವುದಿಲ್ಲ.
ಅವರಿಗೆ ತಂದೆಯ ನೆನಪೂ ಸಹ ತಲುಪುವುದಿಲ್ಲ. ನೆನಪಿನಿಂದ ಖಂಡಿತ ನೆನಪು ಸಿಗುತ್ತದೆ. ಮಕ್ಕಳನ್ನೂ
ಸಹ ನೆನಪು ಮಾಡಬೇಕು. ಬಾಬಾ ತಾವು ನಮ್ಮನ್ನು ನೆನಪು ಮಾಡುತ್ತೀರಾ? ಎಂದು ಮಕ್ಕಳು ಕೇಳುತ್ತಾರೆ.
ತಂದೆ ಹೇಳುತ್ತಾರೆ ಏಕೆ ಮಾಡುವುದಿಲ್ಲ. ಈ ರೀತಿ ಬಾಬಾ ಏಕೆ ನೆನಪು ಮಾಡುವುದಿಲ್ಲ. ಯಾರು ಹೆಚ್ಚು
ಪವಿತ್ರವಾಗಿದ್ದಾರೆ ಮತ್ತು ತಂದೆಯ ಜೊತೆ ಹೆಚ್ಚು ಪ್ರೀತಿ ಇದೆ ಮತ್ತು ಅಷ್ಟೇ ಆಕರ್ಷಣೆ
ಮಾಡುತ್ತಾರೆ. ನಾವು ಎಷ್ಟು ಬಾಬಾರವರನ್ನು ನೆನಪು ಮಾಡುತ್ತೇವೆ? ಎಂದು ಪ್ರತಿಯೊಬ್ಬರು ತಮ್ಮನ್ನು
ತಾವು ಕೇಳಿಕೊಳ್ಳಿ. ಒಬ್ಬರ ನೆನಪಿನಲ್ಲಿ ಇರುವುದರಿಂದ ಮತ್ತೆ ಈ ಹಳೆಯ ಪ್ರಪಂಚ ಮರೆತು ಹೋಗುತ್ತದೆ.
ಬಾಬಾರವರನ್ನೇ ನೆನಪು ಮಾಡುತ್ತಾ-ಮಾಡುತ್ತಾ ಹೋಗಿ ಮಿಲನ ಮಾಡುತ್ತಾರೆ. ಈಗ ಮಿಲನ ಮಾಡುವ ಸಮಯ
ಬಂದಿದೆ. ಡ್ರಾಮಾದ ರಹಸ್ಯವನ್ನೂ ಸಹ ಬಾಬಾ ತಿಳಿಸಿದ್ದಾರೆ. ತಂದೆ ಬರುತ್ತಾರೆ, ಬಂದು ಮಕ್ಕಳನ್ನು
ತನ್ನ ಆತ್ಮಿಕ ಮಕ್ಕಳನ್ನಾಗಿ ಮಾಡುತ್ತಾರೆ. ಪತಿತರಿಂದ ಪಾವನ ಹೇಗೆ ಆಗಬೇಕು ಎಂದು ಕಲಿಸುತ್ತಾರೆ.
ತಂದೆಯಂತೂ ಒಬ್ಬರೇ ಆಗಿದ್ದಾರೆ, ಅವರನ್ನೇ ಎಲ್ಲರೂ ನೆನಪು ಮಾಡುತ್ತಾರೆ. ಆದರೆ ನೆನಪು ಎಲ್ಲರಿಗೆ
ನಂಬರ್ವಾರ್ ತನ್ನ-ತನ್ನ ಪುರುಷಾರ್ಥದನುಸಾರ ಸಿಗುತ್ತದೆ. ಅವರು ಎದುರಿನಲ್ಲಿ ನಿಂತಿದ್ದಾರೆ
ಎನ್ನುವಷ್ಟು ಬಹಳ ನೆನಪು ಮಾಡುತ್ತಾರೆ. ಕರ್ಮಾತೀತ ಅವಸ್ಥೆಯೂ ಸಹ ಈ ರೀತಿ ಆಗಬೇಕು. ಎಷ್ಟು ನೆನಪು
ಮಾಡುತ್ತೀರೋ ಅಷ್ಟು ಕರ್ಮೇಂದ್ರಿಯಗಳು ಚಂಚಲ ಆಗುವುದಿಲ್ಲ. ಕರ್ಮೇಂದ್ರಿಯಗಳು ಬಹಳ ಚಂಚಲ
ಆಗುತ್ತವೆಯಲ್ಲವೇ, ಇದನ್ನೇ ಮಾಯೆ ಎಂದು ಹೇಳಲಾಗುತ್ತದೆ. ಕರ್ಮೇಂದ್ರಿಯಗಳಿಂದ ಯಾವುದೇ ಕೆಟ್ಟ
ಕರ್ಮ ಆಗಬಾರದು. ಇಲ್ಲಿ ಯೋಗ ಬಲದಿಂದ ಕರ್ಮೇಂದ್ರಿಯಗಳನ್ನು ವಶ ಮಾಡಿಕೊಳ್ಳಬೇಕು. ಅವರಂತೂ
ಔಷಧಿಯಿಂದ ವಶ ಮಾಡಿಕೊಳ್ಳುತ್ತಾರೆ. ಇವು ಏಕೆ ವಶ ಆಗುವುದಿಲ್ಲ? ಎಂದು ಮಕ್ಕಳು ಕೇಳುತ್ತಾರೆ. ನೀವು
ಎಷ್ಟು ನೆನಪು ಮಾಡುತ್ತೀರಿ ಅಷ್ಟು ಕರ್ಮೇಂದ್ರಿಯಗಳು ವಶ ಆಗಿ ಬಿಡುತ್ತವೆ ಎಂದು ತಂದೆ ಹೇಳುತ್ತಾರೆ.
ಇದಕ್ಕೆ ಕರ್ಮಾತೀತ ಅವಸ್ಥೆ ಎಂದು ಹೇಳಲಾಗುತ್ತದೆ. ಇದು ಕೇವಲ ನೆನಪಿನ ಯಾತ್ರೆಯಿಂದಲೇ ಆಗುತ್ತದೆ.
ಇದಕ್ಕೆ ಭಾರತದ ಪ್ರಾಚೀನ ರಾಜಯೋಗ ಎಂದು ಗಾಯನವೂ ಸಹ ಇದೆ. ಅಂದಾಗ ಭಗವಂತನೇ ಕಲಿಸುತ್ತಾರೆ. ಭಗವಂತ
ತನ್ನ ಮಕ್ಕಳಿಗೆ ಕಲಿಸುತ್ತಾರೆ. ನೀವು ವಿಕಾರಿ ಕರ್ಮೇಂದ್ರಿಯಗಳ ಮೇಲೆ ಯೋಗ ಬಲದಿಂದ ಜಯ ಗಳಿಸುವ
ಪುರುಷಾರ್ಥ ಮಾಡಬೇಕು. ಸಂಪೂರ್ಣರು ಅಂತ್ಯದಲ್ಲಿ ಆಗುತ್ತೀರಿ. ಪರಿಪಕ್ವ ಅವಸ್ಥೆ ಇದ್ದಾಗ ಮತ್ತೆ
ಯಾವುದೇ ಕರ್ಮೇಂದ್ರಿಯಗಳು ಚಂಚಲತೆ ಮಾಡುವುದಿಲ್ಲ. ಈಗ ಚಂಚಲತೆ ಸಮಾಪ್ತಿ ಆಗುವುದರಿಂದ ಮತ್ತೆ 21
ಜನ್ಮಗಳಿಗಾಗಿ ಯಾವುದೇ ಕರ್ಮೇಂದ್ರಿಯ ಮೋಸ ಮಾಡುವುದಿಲ್ಲ. 21 ಜನ್ಮಗಳಿಗಾಗಿ ಕರ್ಮೇಂದ್ರಿಯಗಳು ವಶ
ಆಗಿ ಬಿಡುತ್ತವೆ. ಎಲ್ಲದಕ್ಕಿಂತ ಮುಖ್ಯ ಕಾಮ ವಿಕಾರವಾಗಿದೆ. ನೆನಪು ಮಾಡುತ್ತಾ -ಮಾಡುತ್ತಾ
ಕರ್ಮೇಂದ್ರಿಯಗಳು ವಶ ಆಗಿ ಬಿಡುತ್ತವೆ. ಈಗ ಕರ್ಮೇಂದ್ರಿಯಗಳನ್ನು ವಶ ಮಾಡಿಕೊಳ್ಳುವುದರಿಂದ
ಅರ್ಧಕಲ್ಪಕ್ಕಾಗಿ ಬಹುಮಾನ ಸಿಗುತ್ತದೆ. ವಶ ಮಾಡಿಕೊಂಡಿಲ್ಲವೆಂದರೆ ಪಾಪ ಉಳಿದುಕೊಂಡು ಬಿಡುತ್ತದೆ.
ನಿಮ್ಮ ಪಾಪ ಯೋಗ ಬಲದಿಂದ ಕಡಿಮೆ ಆಗುತ್ತಾ ಹೋಗುತ್ತದೆ. ನೀವು ಪವಿತ್ರರಾಗುತ್ತಾ ಹೋಗುತ್ತೀರಿ. ಇದು
ನಂಬರವನ್ ಸಬ್ಜೆಕ್ಟ್ ಆಗಿದೆ. ಕರೆಯುವುದೂ ಸಹ ಪತಿತರಿಂದ ಪಾವನರಾಗಲು. ತಂದೆಯೇ ಬಂದು ಪಾವನರನ್ನಾಗಿ
ಮಾಡುತ್ತಾರೆ. ತಂದೆಯೇ ಜ್ಞಾನಸಾಗರ ಆಗಿದ್ದಾರೆ, ತಂದೆ ಹೇಳುತ್ತಾರೆ - ತಮ್ಮನ್ನು ಆತ್ಮ ಎಂದು
ತಿಳಿಯಿರಿ, ತಂದೆಯನ್ನು ನೆನಪು ಮಾಡಿ. ಇದೂ ಸಹ ಜ್ಞಾನವಾಗಿದೆ. ಒಂದು ಯೋಗದ ಜ್ಞಾನವಾಗಿದೆ,
ಇನ್ನೊಂದು 84 ಜನ್ಮಗಳ ಚಕ್ರದ ಜ್ಞಾನವಾಗಿದೆ. ಎರಡು ಪ್ರಕಾರದ ಜ್ಞಾನವಾಗಿದೆ ಮತ್ತೆ ಅದರಲ್ಲಿ ದೈವೀ
ಗುಣಗಳು ಸ್ವತಃವಾಗಿಯೇ ಸಮಾವೇಶವಾಗಿರುತ್ತವೆ. ನಾವು ಮನುಷ್ಯರಿಂದ ದೇವತೆಗಳು ಆಗುತ್ತೇವೆ ಅಂದಾಗ
ದೈವೀ ಗುಣಗಳನ್ನು ಅವಶ್ಯವಾಗಿ ಧಾರಣೆ ಮಾಡಬೇಕು ಎಂದು ಮಕ್ಕಳಿಗೆ ಗೊತ್ತಿದೆ. ತಮ್ಮ ಪರಿಶೀಲನೆ
ಮಾಡಿಕೊಳ್ಳಬೇಕು. ನೋಟ್ ಮಾಡಿಕೊಳ್ಳುವುದರಿಂದ ತಮ್ಮ ಮೇಲೆ ಎಚ್ಚರಿಕೆ ಇರುತ್ತದೆ. ತಮ್ಮ ಪರಿಶೀಲನೆ
ಮಾಡಿಕೊಂಡರೆ ಯಾವುದೇ ತಪ್ಪು ಆಗುವುದಿಲ್ಲ. ತಂದೆಯು ಸ್ವತಃ ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು
ಮಾಡಿ. ನೀವೇ ನನ್ನನ್ನು ಕರೆದಿದ್ದೀರಿ ಏಕೆಂದರೆ ನಿಮಗೆ ತಂದೆ ಪತಿತ ಪಾವನ ಎಂದು ಗೊತ್ತಿದೆ. ತಂದೆ
ಯಾವಾಗ ಬರುತ್ತಾರೆ ಆಗ ಈ ಆದೇಶವನ್ನು ಕೊಡುತ್ತಾರೆ. ಈಗ ಈ ಆದೇಶವನ್ನು ಆತ್ಮಗಳು ಪ್ರತ್ಯಕ್ಷ
ರೂಪದಲ್ಲಿ ತರಬೇಕು. ನೀವು ಈ ಶರೀರದ ಮೂಲಕ ಪಾತ್ರವನ್ನು ಮಾಡುತ್ತೀರಿ. ತಂದೆಯೂ ಸಹ ಈ ಶರೀರದಲ್ಲಿ
ಪಾತ್ರವನ್ನು ಅಭಿನಯಿಸಲು ಬರಬೇಕಾಗುತ್ತದೆ. ಇದು ಬಹಳ ಅದ್ಭುತವಾದಂತಹ ಮಾತುಗಳಾಗಿವೆ.
ತ್ರಿಮೂರ್ತಿಯ ಚಿತ್ರ ಎಷ್ಟು ಸ್ಪಷ್ಟವಾಗಿದೆ. ಬ್ರಹ್ಮಾ ತಪಸ್ಸು ಮಾಡಿ ಈ ರೀತಿ ಆಗುತ್ತಾರೆ. 84
ಜನ್ಮಗಳ ನಂತರ ಈ ರೀತಿ ಆಗುತ್ತಾರೆ. ನಾವು ಬ್ರಾಹ್ಮಣರೇ ದೇವತೆಗಳಾಗಿದ್ದೆವು ನಂತರ 84 ಜನ್ಮಗಳ
ಚಕ್ರವನ್ನು ಸುತ್ತಿದ್ದೇವೆ ಎಂದೂ ಸಹ ಬುದ್ಧಿಯಲ್ಲಿ ನೆನಪು ಇರಲಿ. ಈಗ ಪುನಃ ದೇವತೆಯಾಗಲು
ಬಂದಿದ್ದೇವೆ. ದೇವತೆಗಳ ವಂಶ ಪೂರ್ತಿ ಆಗಿ ಬಿಡುತ್ತದೆ, ಆಗ ಭಕ್ತಿ ಮಾರ್ಗದಲ್ಲೂ ಸಹ ಬಹಳ
ಪ್ರೀತಿಯಿಂದ ಅವರನ್ನು ನೆನಪು ಮಾಡುತ್ತಾರೆ. ಈಗ ಆ ತಂದೆಯು ನೀವು ಪದವಿಯನ್ನು ಪಡೆಯುವ ಸಲುವಾಗಿ
ಉಪಾಯವನ್ನು ತಿಳಿಸುತ್ತಿರುತ್ತಾರೆ. ನೆನಪೂ ಸಹ ಬಹಳ ಸಹಜವಾಗಿದೆ. ಕೇವಲ ಇಲ್ಲಿ ಚಿನ್ನದ ಪಾತ್ರೆಯು
ಬೇಕಾಗಿದೆ. ಎಷ್ಟೆಷ್ಟು ಪುರುಷಾರ್ಥ ಮಾಡುತ್ತೀರಿ ಅಷ್ಟು ಹೊಸ ಅಂಶಗಳು ಉತ್ಪನ್ನವಾಗುತ್ತದೆ, ಆಗ
ಜ್ಞಾನವನ್ನೂ ಸಹ ಅನ್ಯರಿಗೆ ಬಹಳ ಚೆನ್ನಾಗಿ ತಿಳಿಸುತ್ತೀರಿ. ಆಗ ತಂದೆಯೇ ಬಂದು ನಮ್ಮಲ್ಲಿ ಪ್ರವೇಶ
ಮಾಡಿ ಹೇಳುತ್ತಿದ್ದಾರೆ ಎಂದು ತಿಳಿಯುತ್ತೀರಿ. ತಂದೆಯೂ ಸಹ ಬಹಳ ಸಹಯೋಗವನ್ನು ಕೊಡುತ್ತಾರೆ.
ಅಂದಾಗ ಅನ್ಯರ ಕಲ್ಯಾಣ ಮಾಡಬೇಕಾಗಿದೆ. ಇದೂ ಸಹ ನಾಟಕದಲ್ಲಿ ನಿಗದಿಯಾಗಿದೆ. ಒಂದು ಸೆಕೆಂಡ್
ಮತ್ತೊಂದು ಸೆಕೆಂಡಿಗೆ ಸಂಬಂಧವಿರುವುದಿಲ್ಲ. ಸಮಯ ಕಳೆಯುತ್ತಾ ಹೋಗುತ್ತದೆ. ಇಷ್ಟೊಂದು ವರ್ಷಗಳು,
ಇಷ್ಟೊಂದು ತಿಂಗಳಗಳು ಹೇಗೆ ಕಳೆಯಿತು? ಪ್ರಾರಂಭದಿಂದ ಹಿಡಿದು ಸಮಯ ಕಳೆಯುತ್ತಾ ಬಂದಿದೆ, ಈ
ಸೆಕೆಂಡ್ ಮತ್ತೆ 5000 ವರ್ಷಗಳ ನಂತರ ಪುನರಾವರ್ತನೆ ಮಾಡುತ್ತೀರಿ. ಇದನ್ನೂ ಸಹ ಚೆನ್ನಾಗಿ
ತಿಳಿದುಕೊಳ್ಳಬೇಕು ಹಾಗೂ ತಂದೆಯನ್ನು ನೆನಪು ಮಾಡಬೇಕು. ಇದರಿಂದ ವಿಕರ್ಮ ವಿನಾಶ ಆಗುತ್ತದೆ.
ಇನ್ಯಾವುದೇ ಉಪಾಯವಿಲ್ಲ. ಎಷ್ಟೊಂದು ಸಮಯವನ್ನು ನೀವು ಕಳೆಯುತ್ತಾ ಬಂದಿದ್ದೀರಿ, ಇದೆಲ್ಲವೂ ಭಕ್ತಿ
ಆಗಿತ್ತು, ಭಕ್ತಿಯ ಫಲವನ್ನು ಭಗವಂತನೇ ಕೊಡುತ್ತಾರೆ ಎಂದು ಹೇಳುತ್ತಾರೆ ಅಂದಾಗ ಯಾವ ಫಲವನ್ನು
ಕೊಡುತ್ತಾರೆ? ಯಾವಾಗ ಮತ್ತು ಯಾವ ಫಲವನ್ನು ಕೊಡುತ್ತಾರೆ? ಇದು ಯಾವುದೂ ಸ್ವಲ್ಪವೂ ಗೊತ್ತಿಲ್ಲ.
ಯಾವಾಗ ತಂದೆಯು ಫಲವನ್ನು ಕೊಡಲು ಬರುತ್ತಾರೆಯೋ ಆಗ ಪಡೆಯುವವರು ಹಾಗೂ ಕೊಡುವವರು ಜೊತೆ ಇರಬೇಕು.
ನಾಟಕದಲ್ಲಿ ಪಾತ್ರವು ಮುಂದುವರೆಯುತ್ತಾ ಹೋಗುತ್ತದೆ. ಇಡೀ ನಾಟಕದಲ್ಲಿ ಇದು ಅಂತಿಮ ಜೀವನವಾಗಿದೆ.
ಈಗಲೂ ಸಹ ಒಂದು ವೇಳೆ ಯಾರಾದರೂ ಶರೀರ ಬಿಡಬಹುದು, ಬೇರೆ ಯಾವುದಾದರೂ ಪಾತ್ರವನ್ನಭಿನಯಿಸುವುದರಿಂದ
ಜನ್ಮವನ್ನು ಪಡೆಯಬಹುದು. ಯಾರಿಗಾದರೂ ಬಹಳ ಲೆಕ್ಕಾಚಾರ ಇದ್ದರೆ ಜನ್ಮವನ್ನು ತೆಗೆದುಕೊಳ್ಳುತ್ತಾರೆ.
ಯಾರಲ್ಲಿ ಬಹಳ ಪಾಪವಿರುತ್ತದೆಯೋ ಅವರು ಪುನಃ-ಪುನಃ ಒಂದು ಜನ್ಮವನ್ನು ತೆಗೆದುಕೊಂಡು ನಂತರ
ಎರಡನೆಯದು, ಮೂರನೆಯದು ಹೀಗೆ ಜನ್ಮವನ್ನು ತೆಗೆದುಕೊಳ್ಳುವುದು ಬಿಡುವುದು ಮಾಡುತ್ತಿರುತ್ತಾರೆ.
ಗರ್ಭದಲ್ಲಿ ಹೋಗಿ ದುಃಖವನ್ನು ಅನುಭವ ಮಾಡಿ ಆ ಶರೀರವನ್ನು ಬಿಟ್ಟು ಮತ್ತೊಂದು
ತೆಗೆದುಕೊಳ್ಳುತ್ತಾರೆ. ಕಾಶಿ-ಕಲ್ವಟ್ನಲ್ಲಿಯೂ ಸಹ ಇದೇ ಸ್ಥಿತಿ ಇರುತ್ತದೆ. ತಲೆಯ ಮೇಲೆ ಬಹಳ
ಪಾಪದ ಹೊರೆ ಇದೆ. ಅಲ್ಲಿ ಯೋಗಬಲವಿಲ್ಲ. ಕಾಶಿ ಕಲ್ವಟ್ನಲ್ಲಿ ದೇಹ ಬಿಡುವುದು ಎಂದರೆ ತನ್ನ
ದೇಹವನ್ನು ಘಾತ ಮಾಡಿಕೊಳ್ಳುವುದಾಗಿದೆ. ಆತ್ಮವೂ ಸಹ ಇದು ಶರೀರದ ಘಾತವೆಂದು ತಿಳಿದುಕೊಳ್ಳುತ್ತದೆ.
ಆತ್ಮವು ಹೇಳುತ್ತದೆ - ತಂದೆಯೇ, ಯಾವಾಗ ನೀವು ಬರುತ್ತೀರಿ ಆಗ ನಾವು ನಿಮ್ಮ ಮೇಲೆ ಬಲಿಹಾರಿ
ಆಗುತ್ತೇವೆ. ಉಳಿದಂತೆ ಭಕ್ತಿ ಮಾರ್ಗದಲ್ಲಿ ಬಲಿ ಆಗುತ್ತಾರೆ. ಅದು ಭಕ್ತಿ ಆಗಿ ಬಿಡುತ್ತದೆ.
ದಾನ-ಪುಣ್ಯ, ತೀರ್ಥ ಯಾತ್ರೆ ಮಾಡುವುದೆಲ್ಲವೂ ಯಾರೊಂದಿಗೆ ಲೆಕ್ಕಾಚಾರ
ಕೊಟ್ಟು-ತೆಗೆದುಕೊಳ್ಳುವುದಾಗಿ ಬಿಡುತ್ತದೆ? ಪಾಪಾತ್ಮರೊಂದಿಗೆ. ರಾವಣನ ರಾಜ್ಯವಾಗಿದೆಯಲ್ಲವೇ!
ತಂದೆಯು ತಿಳಿಸುತ್ತಾರೆ - ಬಹಳ ಎಚ್ಚರಿಕೆಯಿಂದ ಕೊಟ್ಟು-ತೆಗೆದುಕೊಳ್ಳಬೇಕು. ಒಂದು ವೇಳೆ
ಎಲ್ಲಿಯಾದರೂ ಕೊಟ್ಟಿದ್ದನ್ನು ಕೆಟ್ಟ ಕರ್ಮದಲ್ಲಿ ತೊಡಗಿಸಿದರೆ ನಿಮ್ಮ ತಲೆಯ ಮೇಲೆ ಹೊರೆ ಏರುತ್ತದೆ.
ದಾನ-ಪುಣ್ಯವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗಿದೆ. ಬಡವರಿಗೆ ಅನ್ನ ಹಾಗೂ ವಸ್ತ್ರವನ್ನು ದಾನ
ಮಾಡಲಾಗುತ್ತದೆ ಹಾಗೂ ಈ ಸಮಯದಲ್ಲಿ ಧರ್ಮ ಶಾಲೆಗಳೆನ್ನೆಲ್ಲಾ ಮಾಡಿ ಕೊಡುತ್ತಾರೆ. ಶ್ರೀಮಂತರಿಗಾಗಿ
ದೊಡ್ಡ ಮಹಲ್ಗಳು ಇವೆ. ಬಡವರಿಗೆ ಗುಡಿಸಲುಗಳು ಇವೆ. ಅವರಂತೂ ಅಶುದ್ದ, ಚರಂಡಿ ಅಂತಹ ಕಾಲುವೆಗಳ ಬಳಿ
ಇರುತ್ತಾರೆ. ಆ ಕೊಳಕು ಗೊಬ್ಬರವಾಗುತ್ತದೆ ಮತ್ತು ಅದನ್ನು ಮಾರಾಟ ಮಾಡುತ್ತಾರೆ. ಮತ್ತೆ ಅದರಿಂದ
ಬೆಳೆ ಬೆಳೆಯುತ್ತಾರೆ. ಅಂದರೆ ಸತ್ಯಯುಗದಲ್ಲಿ ಈ ರೀತಿ ಕಸದಿಂದ ಬೆಳೆಯನ್ನು ಬೆಳೆಯುವುದಿಲ್ಲ.
ಅಲ್ಲಂತೂ ಮಣ್ಣು ಹೊಸದಾಗಿರುತ್ತದೆ, ಅದರ ಹೆಸರು ಸ್ವರ್ಗವಾಗಿದೆ, ಪುಕರಾಜಪುರಿ, ಸಬ್ಜ್ ಪುರಿ ಎಂಬ
ಹೆಸರುಗಳ ಗಾಯನವಿದೆ, ಇದೆಲ್ಲವೂ ರತ್ನಗಳಾಗಿವೆಯಲ್ಲವೇ. ಕೆಲವರು ಎಷ್ಟೊಂದು ಸೇವೆ ಮಾಡುತ್ತಾರೆ.
ಕೆಲವರು ನಾವು ಸೇವೆ ಮಾಡಲಾಗುವುದಿಲ್ಲವೆಂದು ಹೇಳುತ್ತಾರೆ ಆದರೆ ತಂದೆಗೆ ಎಲ್ಲರೂ ರತ್ನಗಳೇ
ಆಗಿದ್ದಾರೆ. ಅದರಲ್ಲಿಯೂ ನಂಬರವಾರ್ ಪುರುಷಾರ್ಥದನುಸಾರ ಪೂಜಿಸಲ್ಪಡುತ್ತಾರೆ. ದೇವತೆಗಳಿಗೆ ಪೂಜೆ
ನಡೆಯುತ್ತದೆ, ಭಕ್ತಿ ಮಾರ್ಗದಲ್ಲಿ ಅನೇಕ ಪೂಜೆಗಳು ನಡೆಯುತ್ತವೆ, ಇದೆಲ್ಲವೂ ನಾಟಕದಲ್ಲಿ
ನಿಗದಿತವಾಗಿದೆ, ಇದನ್ನು ನೋಡುತ್ತಾ ಮಜಾ ಎನಿಸುತ್ತದೆ. ನಾವು ಪಾತ್ರಧಾರಿಗಳಾಗಿದ್ದೇವೆ. ಈ
ಸಮಯದಲ್ಲಿ ನಿಮಗೆ ಜ್ಞಾನವು ಪ್ರಾಪ್ತಿ ಆಗುತ್ತದೆ. ಆದ್ದರಿಂದ ನೀವು ಬಹಳ ಖುಷಿ ಪಡುತ್ತೀರಿ.
ಭಕ್ತಿಯದೂ ಪಾತ್ರವಿದೆ ಎಂದು ನೀವು ತಿಳಿದುಕೊಂಡಿದ್ದೀರಿ. ಭಕ್ತಿಯಲ್ಲಿಯೂ ಸಹ ಬಹಳ ಖುಷಿ
ಪಡುತ್ತಾರೆ. ಗುರು ಮಾಲೆಯ ಜಪ ಮಾಡಿ ಎಂದು ಹೇಳಿದರೆ ಸಾಕು ಆ ಖುಷಿಯಲ್ಲಿ ಜಪ ಮಾಡಲು ತೊಡಗಿ
ಬಿಡುತ್ತಾರೆ. ಆದರೆ ಏನೂ ತಿಳುವಳಿಕೆ ಇರುವುದಿಲ್ಲ. ಶಿವ ತಂದೆಯು ನಿರಾಕಾರನಾಗಿದ್ದಾರೆ. ಭಲೇ
ಅವರಿಗೆ ಹಾಲು, ನೀರು ಮುಂತಾದವುಗಳನ್ನು ಏಕೆ ಅರ್ಪಿಸುತ್ತಾರೆ? ಮೂರ್ತಿಗಳಿಗೆ ಭೋಗವನ್ನು
ಇಡುತ್ತಾರೆ, ಅವರು ಏನಾದರೂ ತಿನ್ನುತ್ತಾರೆಯೇ? ಭಕ್ತಿಯ ವಿಸ್ತಾರವು ದೊಡ್ಡದಾಗಿದೆ. ಭಕ್ತಿಯು
ವೃಕ್ಷವಾಗಿದೆ. ಜ್ಞಾನ ಅದರ ಬೀಜವಾಗಿದೆ. ರಚಯಿತ ಮತ್ತು ರಚನೆಯನ್ನು ನೀವು ಮಕ್ಕಳ ವಿನಃ ಮತ್ತ್ಯಾರೂ
ತಿಳಿಯುವುದಿಲ್ಲ. ಕೆಲವು ಮಕ್ಕಳಂತೂ ತಮ್ಮ ಮೂಳೆಗಳನ್ನು ಈ ಸೇವೆಯಲ್ಲಿ ಸ್ವಾಹಾ
ಮಾಡುವಂತಹವರಾಗಿದ್ದಾರೆ. ಇದು ನಿಮ್ಮ ಕಲ್ಪನೆ ಆಗಿದೆ ಎಂದು ತಮಗೆ ಕೆಲವರು ಹೇಳುತ್ತಾರೆ. ಅರೇ!
ಇದಂತೂ ಪ್ರಪಂಚದ ಇತಿಹಾಸ-ಭೂಗೋಳವು ಪುನರಾವರ್ತನೆ ಆಗುತ್ತದೆ. ಕಲ್ಪನೆಗಳು
ಪುನರಾವರ್ತಿತವಾಗುತ್ತದೆಯೇ? ಇದಂತೂ ಜ್ಞಾನವಾಗಿದೆ. ಇದು ಹೊಸ ಮಾತುಗಳು, ಹೊಸ ಪ್ರಪಂಚಕ್ಕಾಗಿಯೇ
ಆಗಿವೆ. ಭಗವಾನುವಾಚ. ಭಗವಂತನು ಹೊಸಬರಾಗಿದ್ದಾರೆ, ಅವರ ಮಹಾವಾಕ್ಯಗಳೂ ಸಹ ಹೊಸದಾಗಿವೆ. ಅವರು
ಕೃಷ್ಣ ಭಗವಾನುವಾಚ ಎಂದು ಹೇಳುತ್ತಾರೆ. ನೀವು ಶಿವಭಗವಾನುವಾಚ ಎಂದು ಹೇಳುತ್ತೀರಿ. ಪ್ರತಿಯೊಬ್ಬರದು
ತಮ್ಮ-ತಮ್ಮ ಮತವಾಗಿದೆ. ಒಬ್ಬರದು ಇನ್ನೊಬ್ಬರಿಗೆ ಹೋಲುವುದಿಲ್ಲ. ಇದು ವಿದ್ಯೆಯಾಗಿದೆ, ಶಾಲೆಯಲ್ಲಿ
ಓದುತ್ತೀರಿ ಕಲ್ಪನೆಯ ಮಾತೇ ಇಲ್ಲ. ತಂದೆಯಾಗಿದ್ದಾರೆ - ಜ್ಞಾನ ಸಾಗರ, ಜ್ಞಾನ ಪೂರ್ಣ.
ಋಷಿ-ಮುನಿಗಳು ಹೇಳುತ್ತಾರೆ - ನಾವು ರಚಯಿತ ಮತ್ತು ರಚನೆಯನ್ನು ತಿಳಿದಿಲ್ಲ ಎಂದು. ಯಾವ
ಆದಿ-ಸನಾತನ ದೇವೀ-ದೇವತೆಗಳೇ ತಿಳಿದುಕೊಂಡಿಲ್ಲವೆಂದಾಗ ಅವರಿಗೆ ಈ ಜ್ಞಾನವು ಎಲ್ಲಿಂದ ಸಿಗುತ್ತದೆ!
ಯಾರು ಇದನ್ನು ತಿಳಿದಿದ್ದಾರೋ ಅವರೆ ಪದವಿ ಪಡೆದುಕೊಳ್ಳುತ್ತಾರೆ. ನಂತರ ಸಂಗಮಯುಗ ಬಂದಾಗ ತಂದೆಯು
ಬಂದು ತಿಳಿಸುತ್ತಾರೆ. ಹೊಸಬರು ಈ ಮಾತುಗಳಲ್ಲಿ ಗೊಂದಲಕ್ಕೀಡಾಗುತ್ತಾರೆ. ಹೌದು! ನೀವು ಅಷ್ಟೇ
ಸತ್ಯ ಉಳಿದೆಲ್ಲವೂ ಅಸತ್ಯ ಎಂದು ಕೇಳುತ್ತಾರೆ. ಗೀತಾ ಮಾತಾ ಯಾವ ತಂದೆ ಆಗಿದ್ದಾರೆಯೋ ಅವರನ್ನೇ
ಖಂಡನೆ ಮಾಡಿದ್ದಾರೆ, ಉಳಿದೆಲ್ಲವೂ ರಚನೆ ಆಗಿದೆ ಎಂದು ನೀವು ತಿಳಿಸುತ್ತೀರಿ. ಅವರಿಂದ (ಸನ್ಯಾಸಿಗಳು)
ಆಸ್ತಿಯು ಸಿಗಲು ಸಾಧ್ಯವಿಲ್ಲ. ವೇದ ಶಾಸ್ತ್ರಗಳಲ್ಲಿ ರಚಯಿತ ಮತ್ತು ರಚನೆಯ ಜ್ಞಾನವಿರಲು
ಸಾಧ್ಯವಿಲ್ಲ. ವೇದಗಳಿಂದ ಯಾವ ಧರ್ಮದ ಸ್ಥಾಪನೆ ಆಯಿತು? ಎಂದು ಮೊದಲು ತಿಳಿಸಿ. ಧರ್ಮಗಳಿರುವುದೇ
ನಾಲ್ಕು. ಪ್ರತಿಯೊಂದು ಧರ್ಮದ ಧರ್ಮ ಶಾಸ್ತ್ರ ಒಂದೇ ಆಗಿರುತ್ತದೆ. ತಂದೆಯು ಬ್ರಾಹ್ಮಣ ಕುಲದ
ಸ್ಥಾಪನೆಯನ್ನು ಮಾಡುತ್ತಾರೆ. ಬ್ರಾಹ್ಮಣರೇ ಪುನಃ ಸೂರ್ಯವಂಶಿ-ಚಂದ್ರವಂಶಿ ಕುಲದಲ್ಲಿ ತಮ್ಮ
ಪದವಿಯನ್ನು ಪಡೆಯುತ್ತಾರೆ. ತಂದೆಯೇ ಬಂದು ತಮ್ಮ ಸನ್ಮುಖದಲ್ಲಿ ತಿಳಿಸುತ್ತಾರೆ - ಈ ರಥದ ಮೂಲಕ
ಅಂದಾಗ ರಥ (ಶರೀರ) ವಂತೂ ಅವಶ್ಯವಾಗಿ ಬೇಕಾಗಿದೆ. ಆತ್ಮವಂತೂ ನಿರಾಕಾರನಾಗಿದೆ. ಅವರಿಗೆ ಸಾಕಾರ
ಶರೀರವು ಸಿಗುತ್ತದೆ. ಆತ್ಮವು ಎಂತಹದ್ದಾಗಿದೆ ಎಂಬುವುದನ್ನು ತಿಳಿಯದಿದ್ದರೆ ತಂದೆಯನ್ನು ಹೇಗೆ
ತಿಳಿಯುತ್ತಾರೆ! ಸತ್ಯವನ್ನಂತೂ ತಂದೆಯೇ ತಿಳಿಸುತ್ತಾರೆ, ಉಳಿದೆಲ್ಲವೂ ಅಸತ್ಯವಾಗಿದೆ, ಆದ್ದರಿಂದ
ಯಾವುದೇ ಲಾಭವಿಲ್ಲ. ಯಾರ ಮಾಲೆಯನ್ನು ಸ್ಮರಣೆ ಮಾಡುತ್ತಾರೆ, ಇದೇನೂ ತಿಳಿದಿಲ್ಲ, ತಂದೆಯನ್ನೂ
ತಿಳಿದಿಲ್ಲ. ತಂದೆಯು ಸ್ವಯಂ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ. ಜ್ಞಾನದಿಂದ ಸದ್ಗತಿ
ಆಗುತ್ತದೆ. ಅರ್ಧಕಲ್ಪ ಜ್ಞಾನ, ಅರ್ಧ ಕಲ್ಪ ಭಕ್ತಿ ಆಗಿದೆ. ರಾವಣ ರಾಜ್ಯದಿಂದ ಭಕ್ತಿ
ಪ್ರಾರಂಭವಾಗುತ್ತದೆ. ಭಕ್ತಿಯಿಂದ ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ತಮೋಪ್ರಧಾನವಾಗುತ್ತಾರೆ.
ಯಾರ ಕರ್ತವ್ಯಗಳನ್ನೂ ತಿಳಿದಿಲ್ಲ. ಭಗವಂತನಿಗಂತೂ ಎಷ್ಟೊಂದು ಪೂಜೆಯನ್ನು ಮಾಡುತ್ತಾರೆ ಏನನ್ನೂ
ತಿಳಿದಿಲ್ಲ. ಅಂದಮೇಲೆ ತಂದೆಯು ತಿಳಿಸುತ್ತಾರೆ – ಶ್ರೇಷ್ಠ ಪದವಿಯನ್ನು ಪಡೆಯಲು ತಮ್ಮನ್ನು ಆತ್ಮ
ಎಂದು ತಿಳಿಯಬೇಕು ಮತ್ತು ತಂದೆಯನ್ನು ನೆನಪು ಮಾಡಬೇಕು. ಇದರಲ್ಲಿಯೇ ಪರಿಶ್ರಮವಿದೆ. ಒಂದು ವೇಳೆ
ಯಾರ ಬುದ್ಧಿಯಾದರೂ ಮಂದ ಬುದ್ಧಿಯಾಗಿದ್ದರೆ, ಮಂದ ಬುದ್ಧಿಯಿಂದಲೇ ನೆನಪು ಮಾಡಲಿ. ಆದರೆ ನೆನಪು
ಒಬ್ಬರನ್ನೇ ಮಾಡಲಿ. ಬಾಬಾ ತಾವು ಬಂದರೆ ತಮ್ಮ ಜೊತೆಯೇ ಬುದ್ಧಿಯೋಗವನ್ನು ಜೋಡಿಸುತ್ತೇವೆ ಎಂದು
ಹೇಳುತ್ತಾರೆ. ಈಗ ತಂದೆಯೂ ಸಹ ಬಂದಿದ್ದಾರೆ, ತಾವೆಲ್ಲಾ ಯಾರ ಜೊತೆ ಮಿಲನ ಮಾಡಲು ಬಂದಿದ್ದೀರಿ?
ಯಾರು ಪ್ರಾಣ ದಾನ ಕೊಡುತ್ತಾರೆ, ಆತ್ಮನನ್ನು ಅಮರಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಮೃತ್ಯುವಿನ
ಮೇಲೆ ವಿಜಯಿಯನ್ನಾಗಿ ಮಾಡುತ್ತೇನೆ, ನಿಮ್ಮನ್ನು ಅಮರಲೋಕಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು
ತಂದೆಯು ತಿಳಿಸಿದ್ದಾರೆ. ಅಮರ ಕಥೆ ಪಾರ್ವತಿಗೆ ತಿಳಿಸಿದರು ಎಂದು ತೋರಿಸುತ್ತಾರಲ್ಲವೇ. ಈಗ
ಅಮರನಾಥ ಒಬ್ಬರೇ ಆಗಿದ್ದಾರೆ. ಹಿಮಾಲಯದ ಪರ್ವತದ ಮೇಲೆ ಕುಳಿತು ಕಥೆ ತಿಳಿಸುತ್ತಾರೇನು.
ಭಕ್ತಿಮಾರ್ಗದ ಪ್ರತಿಯೊಂದು ಮಾತಿನಲ್ಲಿ ಆಶ್ಚರ್ಯ ಆಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಯೋಗ ಬಲದಿಂದ
ಕರ್ಮೇಂದ್ರಿಯಾಜೀತರಾಗಿ ಸಂಪೂರ್ಣ ಪವಿತ್ರರಾಗಬೇಕು. ಈ ಅವಸ್ಥೆಯನ್ನು ಪಡೆಯಲು ತಮ್ಮ ಪರಿಶೀಲನೆ
ಮಾಡಿಕೊಳ್ಳುತ್ತಿರಬೇಕು.
2. ಸದಾ ಬುದ್ಧಿಯಲ್ಲಿ ನಾವೇ ಬ್ರಾಹ್ಮಣರಿಂದ ದೇವತೆಗಳಾಗಿದ್ದೆವು ಮತ್ತೆ ಈಗ ದೇವತೆ ಆಗಲು
ಬಂದಿದ್ದೇವೆ ಎಂದು ನೆನಪು ಇರಬೇಕು. ಆದ್ದರಿಂದ ಬಹಳ ಎಚ್ಚರಿಕೆಯಿಂದ ಪಾಪ ಹಾಗೂ ಪುಣ್ಯವನ್ನು
ತಿಳಿದು ವ್ಯವಹಾರ ಮಾಡಬೇಕು.
ವರದಾನ:
ಸರ್ವ
ಪ್ರಾಪ್ತಿಗಳನ್ನು ಸ್ಮೃತಿಯಲ್ಲಿ ಇಮರ್ಜ್ ಆಗಿಟ್ಟುಕೊಂಡು ಸದಾ ಸಂಪನ್ನರಾಗಿರುವಂತಹ ಸಂತುಷ್ಠ ಆತ್ಮ
ಭವ.
ಸಂಗಮಯುಗದಲ್ಲಿ
ಬಾಪ್ದಾದಾರವರ ಮೂಲಕ ಏನೆಲ್ಲಾ ಪ್ರಾಪ್ತಿಗಳಾಗಿವೆ, ಅವುಗಳ ಸ್ಮೃತಿ ಇಮರ್ಜ್ ರೂಪದಲ್ಲಿ ಇರಬೇಕು.
ಆದ್ದರಿಂದ ಪ್ರಾಪ್ತಿಗಳ ಖುಷಿ ಎಂದೂ ಹಲ್ಚಲ್ನಲ್ಲಿ ಕೆಳಗೆ ತರುವುದಿಲ್ಲ. ಸದಾ ಅಚಲರಾಗಿರುತ್ತಾರೆ.
ಸಂಪನ್ನತೆ ಅಚಲರನ್ನಾಗಿ ಮಾಡುವುದು, ಹಲ್ಚಲ್ ನಿಂದ ಬಿಡಿಸುವುದು. ಯಾರು ಸರ್ವ ಪ್ರಾಪ್ತಿಗಳಿಂದ
ಸಂಪನ್ನರಾಗಿದ್ದಾರೆ ಅವರು ಸದಾ ರಾಜಿ, ಸದಾ ಸಂತುಷ್ಠರಾಗಿರುತ್ತಾರೆ. ಸಂತುಷ್ಠತೆ ಎಲ್ಲಕ್ಕಿಂತ
ದೊಡ್ಡ ಖಜಾನೆಯಾಗಿದೆ. ಯಾರ ಬಳಿ ಸಂತುಷ್ಠತೆಯಿದೆ ಅವರ ಬಳಿ ಎಲ್ಲವೂ ಇದೆ. ಅವರು ಇದೇ ಗೀತೆ
ಹಾಡುತ್ತಿರುತ್ತಾರೆ ಏನು ಪಡೆಯ ಬೇಕಿತ್ತೊ ಅದನ್ನು ಪಡೆದೆನು.
ಸ್ಲೋಗನ್:
ಪ್ರೀತಿಯ
ಉಯ್ಯಾಲೆಯಲ್ಲಿ ಕುಳಿತು ಬಿಡಿ ಆಗ ಪರಿಶ್ರಮ ತಾನಾಗಿಯೇ ಬಿಟ್ಟು ಹೋಗುವುದು.