11.01.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಸದಾ
ಖುಷಿಯಲ್ಲಿರಿ ಮತ್ತು ಅನ್ಯರಿಗೂ ಸಹ ಖುಷಿ ಪಡಿಸಿ, ಇದೇ ಎಲ್ಲರ ಮೇಲೆ ಕೃಪೆ ತೋರಿಸುವುದಾಗಿದೆ,
ಯಾರಿಗಾದರೂ ಮಾರ್ಗವನ್ನು ತೋರಿಸುವುದೇ ಎಲ್ಲದಕ್ಕಿಂತ ದೊಡ್ಡ ಪುಣ್ಯವಾಗಿದೆ.”
ಪ್ರಶ್ನೆ:
ಯಾರು ಸದಾ
ಪ್ರಸನ್ನಚಿತ್ತರಾಗಿರಲು ಸಾಧ್ಯ? ಪ್ರಸನ್ನಚಿತ್ತರಾಗಿರಲು ಸಾಧನವೇನಾಗಿದೆ?
ಉತ್ತರ:
ಯಾರು
ಜ್ಞಾನದಲ್ಲಿ ಬಹಳ ಬುದ್ಧಿವಂತರಾಗಿರುತ್ತಾರೆಯೋ, ಯಾರು ಡ್ರಾಮಾವನ್ನು ಕಥೆಯ ರೀತಿ ತಿಳಿದುಕೊಂಡು
ಮತ್ತು ಸ್ಮರಣೆ ಮಾಡುತ್ತಾರೆಯೋ ಅವರೇ ಸದಾ ಪ್ರಸನ್ನಚಿತ್ತರಾಗಿರಲು ಸಾಧ್ಯ. ಪ್ರಸನ್ನರಾಗಿರಲು ಸದಾ
ತಂದೆಯ ಶ್ರೀಮತದಂತೆ ನಡೆಯುತ್ತಿರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯು ಏನೆಲ್ಲಾ
ತಿಳಿಸುತ್ತಾರೆಯೋ ಅದನ್ನು ಚೆನ್ನಾಗಿ ಮಂಥನ ಮಾಡಿ. ವಿಚಾರ ಸಾಗರ ಮಂಥನ ಮಾಡುತ್ತಾ-ಮಾಡುತ್ತಾ
ಪ್ರಸನ್ನರಾಗುತ್ತೀರಿ.
ಓಂ ಶಾಂತಿ.
ಆತ್ಮೀಯ ತಂದೆ
ಆತ್ಮೀಯ ಮಕ್ಕಳ ಜೊತೆ ಆತ್ಮೀಯ ವಾರ್ತಾಲಾಪ ಮಾಡುತ್ತಿದ್ದಾರೆ. ನಮ್ಮ ಒಬ್ಬರೇ ತಂದೆಯು ಶಿಕ್ಷಣವನ್ನೂ
ಕೊಡುತ್ತಾರೆ, ಶಿಕ್ಷಕರ ಕೆಲಸ ಶಿಕ್ಷಣ ಕೊಡುವುದಾಗಿದೆ ಎಂಬುದು ನಿಮಗೆ ಗೊತ್ತಿದೆ. ಗುರುವಿನ ಕೆಲಸ
ಗುರಿಯನ್ನು ತಿಳಿಸುವುದು, ಗುರಿಯನ್ನೂ ಸಹ ತಾವು ಮಕ್ಕಳು ತಿಳಿದುಕೊಂಡಿದ್ದೀರಿ.
ಮುಕ್ತಿ-ಜೀವನ್ಮುಕ್ತಿಗಾಗಿ ನೆನಪಿನ ಯಾತ್ರೆಯ ಪೂರ್ಣ ಅವಶ್ಯಕತೆಯಿದೆ. ಎರಡೂ ಸಹಜವಾಗಿದೆ. 84
ಜನ್ಮಗಳ ಚಕ್ರವೂ ಸಹ ಸುತ್ತುತ್ತಾ ಇರುತ್ತದೆ. ಈಗ ನಮ್ಮ 84 ಜನ್ಮಗಳ ಚಕ್ರವು ಪೂರ್ಣವಾಯಿತು, ಈಗ
ಹಿಂತಿರುಗಬೇಕೆನ್ನುವ ನೆನಪಿರಬೇಕು. ಆದರೆ ಪಾಪಾತ್ಮರು ಮುಕ್ತಿ-ಜೀವನ್ಮುಕ್ತಿಯಲ್ಲಿ ಹಿಂತಿರುಗಲು
ಸಾಧ್ಯವಿಲ್ಲ - ಈ ರೀತಿ ವಿಚಾರ ಸಾಗರ ಮಂಥನವನ್ನು ಮಾಡುತ್ತಿರಬೇಕು. ಯಾರು ಮಾಡುತ್ತಾರೆಯೋ ಅವರು
ಪಡೆಯುತ್ತಾರೆ. ಅವರೇ ಖುಷಿಯಲ್ಲಿರುತ್ತಾರೆ ಹಾಗೂ ಅನ್ಯರನ್ನು ಖುಷಿಯಲ್ಲಿ ತರುತ್ತಾರೆ.
ಮಾರ್ಗವನ್ನು ತೋರಿಸುವ ಕೃಪೆಯನ್ನು ಅನ್ಯರ ಮೇಲೆ ತೋರಿಸಬೇಕು. ಇದು ಪುರುಷೋತ್ತಮ ಸಂಗಮಯುಗವಾಗಿದೆ
ಎಂಬುದು ತಾವು ಮಕ್ಕಳಿಗೆ ಗೊತ್ತಿದೆ. ಇದೂ ಸಹ ಕೆಲವರಿಗೆ ನೆನಪಿರುತ್ತದೆ, ಕೆಲವರಿಗೆ ಇರುವುದಿಲ್ಲ
ಮರೆತು ಹೋಗುತ್ತದೆ. ಇದು ನೆನಪಿದ್ದರೂ ಸಹ ಖುಷಿಯ ನಶೆಯೇರಿರುತ್ತದೆ. ತಂದೆ, ಶಿಕ್ಷಕ, ಗುರುವಿನ
ರೂಪದಲ್ಲಿ ನೆನಪಿದ್ದರೂ ಸಹ ಖುಷಿಯ ನಶೆಯೇರುತ್ತದೆ. ಆದರೆ ನಡೆಯುತ್ತಾ-ನಡೆಯುತ್ತಾ
ಏರು-ಪೇರಾಗುತ್ತದೆ. ಹೇಗೆ ಬೆಟ್ಟಗಳ ಮೇಲೆ ಏರುವಾಗ ಮೇಲೆ-ಕೆಳಗೆ ಆಗುತ್ತದೆ ಹಾಗೆಯೇ ಮಕ್ಕಳ
ಸ್ಥಿತಿಯೂ ಸಹ ಅದೇ ರೀತಿ ಆಗುತ್ತದೆ. ಕೆಲವರು ಮೇಲೇರುತ್ತಾರೆ ನಂತರ ಕೆಳಗಿಳಿಯುತ್ತಾರೆ. ಆಗ
ಮೊದಲಿಗಿಂತಲೂ ಕೆಳಗೆ ಬಿದ್ದು ಬಿಡುತ್ತಾರೆ. ಆಗ ಮಾಡಿಕೊಂಡಿರುವ ಸಂಪಾದನೆಯೂ ಸಮಾಪ್ತಿಯಾಗುತ್ತದೆ.
ಭಲೆ ಎಷ್ಟೇ ದಾನ-ಪುಣ್ಯ ಮಾಡಿರಲಿ ಆದರೆ ಪುಣ್ಯ ಮಾಡುತ್ತಾ-ಮಾಡುತ್ತಾ ಒಂದುವೇಳೆ ಪಾಪ ಮಾಡಿದರೆ
ಎಲ್ಲಾ ಪುಣ್ಯವು ಸಮಾಪ್ತಿಯಾಗಿ ಬಿಡುತ್ತದೆ. ತಂದೆಯನ್ನು ನೆನಪು ಮಾಡುವುದೇ ಎಲ್ಲದಕ್ಕಿಂತ ದೊಡ್ಡ
ಪುಣ್ಯವಾಗಿದೆ. ನೆನಪಿನಿಂದಲೇ ಪುಣ್ಯಾತ್ಮರಾಗುತ್ತೀರಿ. ಒಂದುವೇಳೆ ಸಂಗದ ರಂಗಿನಿಂದ ತಪ್ಪನ್ನೇ
ಮಾಡುತ್ತಾ ಹೋದರೆ ಮೊದಲಿಗಿಂತ ಹೆಚ್ಚು ಕೆಳಗೆ ಬಿದ್ದು ಹೋಗುತ್ತಾರೆ. ಮತ್ತೆ ಆ ಖಾತೆಯು ಜಮಾ
ಇರುವುದೆಲ್ಲಾ ನಷ್ಟವಾಗುತ್ತದೆ. ಪಾಪದ ಖಾತೆಯು ಬಹಳ ಏರುತ್ತದೆ. ತಂದೆಯು ತಿಳಿಸುತ್ತಾರೆ -
ನಿಮ್ಮದು ಪುಣ್ಯದ ಖಾತೆಯಿತ್ತು, ಪಾಪ ಮಾಡುವುದರಿಂದ ಅದು ನೂರು ಪಟ್ಟು ಆಯಿತು. ಇನ್ನಷ್ಷು
ನಷ್ಟದಲ್ಲಿ ಬಂದು ಬಿಡುತ್ತದೆ. ಪಾಪವೂ ಸಹ ಕೆಲವು ಬಹಳ ದೊಡ್ಡದು, ಕೆಲವು ಬಹಳ ಹಗುರವಾಗಿರುತ್ತದೆ.
ಕಾಮ ವಿಕಾರವು ಬಹಳ ಕಠಿಣವಾಗಿದೆ. ಕ್ರೋಧವು ಎರಡನೆಯದು, ಲೋಭವು ಅದಕ್ಕಿಂತ ಕಡಿಮೆ. ಎಲ್ಲದಕ್ಕಿಂತ
ಹೆಚ್ಚಾಗಿ ಕಾಮ ವಿಕಾರಕ್ಕೆ ವಶರಾದಾಗ ಏನು ಜಮಾ ಆಗಿದೆಯೋ ಅದು ಇಲ್ಲಂತಾಗುತ್ತದೆ. ಲಾಭಕ್ಕೆ ಬದಲಾಗಿ
ನಷ್ಟವಾಗುತ್ತದೆ. ಸದ್ಗುರುವಿನ ನಿಂಧಕರು ಪದವಿಯನ್ನು ಪಡೆಯುವುದಿಲ್ಲ. ತಂದೆಯ ಮಕ್ಕಳಾಗಿ ಮತ್ತೆ
ಬಿಟ್ಟು ಬಿಡುತ್ತಾರೆ. ಅದಕ್ಕೆ ಕಾರಣವೇನು? ಸಾಮಾನ್ಯವಾಗಿ ಕಾಮ ವಿಕಾರದ ಪೆಟ್ಟು ಬೀಳುತ್ತದೆ. ಇದು
ಕಠಿಣ ಶತ್ರುವಾಗಿದೆ. ಅದರದೇ ಭೂತವನ್ನು ಮಾಡಿ ಸುಡುತ್ತಾರೆ. ಕ್ರೋಧ-ಲೋಭದ ಭೂತವನ್ನು
ಮಾಡುವುದಿಲ್ಲ. ಕಾಮದ ಮೇಲೆಯೇ ಪೂರ್ಣ ವಿಜಯಿಗಳಾಗಬೇಕು ಆಗಲೇ ಜಗತ್ಜೀತರಾಗುತ್ತೀರಿ. ನಾವು ರಾವಣ
ರಾಜ್ಯದಲ್ಲಿ ಪತಿತರಾಗಿದ್ದೇವೆ. ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ.
ಪತಿತ-ಪಾವನನೆಂದು ಎಲ್ಲರೂ ಹಾಡುತ್ತಾರೆ. ಹೇ ಪತಿತರನ್ನು ಪಾವನ ಮಾಡುವಂತಹ ಸೀತೆಯರ ರಾಮನೇ ಬನ್ನಿ.
ಆದರೆ ಅರ್ಥವಂತೂ ಗೊತ್ತಿಲ್ಲ. ತಂದೆಯು ಖಂಡಿತ ಹೊಸ ಪ್ರಪಂಚದ ಸ್ಥಾಪನೆ ಮಾಡಲು ಬರುತ್ತಾರೆ ಎಂಬುದು
ಗೊತ್ತಿದೆ ಆದರೆ ಕಲ್ಪದ ಆಯಸ್ಸನ್ನು ಹೆಚ್ಚಾಗಿ ಹೇಳುವುದರಿಂದ ಘೋರ ಅಂಧಕಾರವಾಗಿದೆ. ಜ್ಞಾನ ಮತ್ತು
ಅಜ್ಞಾನವಿದೆಯಲ್ಲವೆ. ಅಜ್ಞಾನವೆಂದರೆ ಭಕ್ತಿ, ಯಾರನ್ನು ಪೂಜಿಸುತ್ತಾರೆಯೋ ಅವರ ಬಗ್ಗೆಯೇ
ತಿಳಿದುಕೊಂಡಿಲ್ಲ ಅಂದಮೇಲೆ ಅವರ ಬಳಿ ಹೇಗೆ ತಲುಪುತ್ತಾರೆ? ಆದ್ದರಿಂದ ದಾನ-ಪುಣ್ಯವೆಲ್ಲವೂ
ನಿಷ್ಫಲವಾಗುತ್ತದೆ. ಮಾಡಿದ್ದಕ್ಕೆ ಅಲ್ಪಕಾಲಕ್ಕೆ ಕಾಗವಿಷ್ಟ ಸಮಾನ ಸುಖ ಸಿಗುತ್ತದೆ, ಉಳಿದೆಲ್ಲವೂ
ದುಃಖವೇ ದುಃಖ. ಈಗ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದಾಗ ನಿಮ್ಮ ಎಲ್ಲಾ
ದುಃಖವು ದೂರವಾಗುತ್ತದೆ. ನಾವು ಎಷ್ಟು ನೆನಪು ಮಾಡುತ್ತೇವೆ ಎಂಬುದನ್ನು ಈಗ ನೋಡಬೇಕು. ಹಳೆಯದು
ಸಮಾಪ್ತಿಯಾಗಿ ಹೊಸದು ಜಮಾ ಆಗಬೇಕು. ಕೆಲವರಂತೂ ಏನೂ ಜಮಾ ಮಾಡಿಕೊಳ್ಳುವುದಿಲ್ಲ. ಎಲ್ಲದಕ್ಕೂ ನೆನಪು
ಆಧಾರಿತವಾಗಿದೆ. ನೆನಪಿಲ್ಲದೆ ಪಾಪವು ಹೇಗೆ ಕಳೆಯುತ್ತದೆ. ಜನ್ಮ-ಜನ್ಮಾಂತರದ ಪಾಪವಂತೂ ಬಹಳ ಇದೆ.
ಈ ಜನ್ಮದ ಜೀವನ ಕಥೆಯನ್ನು ಹೇಳುವುದರಿಂದ ಜನ್ಮ-ಜನ್ಮಾಂತರದ ಪಾಪವಂತೂ ತುಂಡಾಗುವುದಿಲ್ಲ. ಕೇವಲ ಈ
ಜನ್ಮದ್ದು ಹಗುರವಾಗುತ್ತದೆ. ಬಾಕಿ ಬಹಳ ಪರಿಶ್ರಮ ಪಡಬೇಕು. ಇಷ್ಟು ಜನ್ಮಗಳ ಯಾವ ಲೆಕ್ಕಾಚಾರವಿದೆ,
ಅದು ಯೋಗದಿಂದಲೇ ತೀರಿಸಬೇಕಾಗಿದೆ. ನಮ್ಮ ಯೋಗವು ಎಷ್ಟಿದೆ ಎಂಬುದನ್ನು ವಿಚಾರ ಮಾಡಬೇಕು. ನಮ್ಮ
ಜನ್ಮವು ಸತ್ಯಯುಗದ ಆದಿಯಲ್ಲಿ ಆಗಲು ಸಾಧ್ಯವೇ? ಯಾರು ಬಹಳ ಪುರುಷಾರ್ಥ ಮಾಡುತ್ತಾರೆಯೋ ಅವರೇ
ಸತ್ಯಯುಗದ ಆದಿಯಲ್ಲಿ ಜನ್ಮ ಪಡೆಯುತ್ತಾರೆ. ಅವರನ್ನು ಮುಚ್ಚಿಡಲು ಸಾಧ್ಯವಿಲ್ಲ. ಎಲ್ಲರೂ
ಸತ್ಯಯುಗದಲ್ಲಿ ಬರುವುದಿಲ್ಲ. ಕೊನೆಯಲ್ಲಿ ಹೋಗಿ ಸ್ವಲ್ಪ ಪದವಿಯನ್ನು ಪಡೆಯುತ್ತಾರೆ. ಒಂದುವೇಳೆ
ಮೊದಲು ಬಂದರೂ ನೌಕರಿ ಮಾಡುತ್ತಾರೆ. ಇದು ತಿಳಿದುಕೊಳ್ಳುವ ಸಾಮಾನ್ಯವಾದ ವಿಚಾರವಾಗಿದೆ. ಆದ್ದರಿಂದ
ತಂದೆಯನ್ನು ಬಹಳ ನೆನಪು ಮಾಡಬೇಕು. ನಾವು ಹೊಸ ಪ್ರಪಂಚಕ್ಕಾಗಿ ವಿಶ್ವದ ಮಾಲೀಕರಾಗಲು
ಬಂದಿದ್ದೇವೆಂದು ನಿಮಗೆ ಗೊತ್ತಿದೆ. ಯಾರು ನೆನಪು ಮಾಡುತ್ತಾರೆಯೋ ಅವರಿಗೆ ಖುಷಿಯೂ ಇರುತ್ತದೆ.
ಒಂದುವೇಳೆ ರಾಜರಾಗಬೇಕಾದರೆ ಪ್ರಜೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ನಾವು
ರಾಜರಾಗುವವರು ಎಂದು ಹೇಗೆ ತಿಳಿದುಕೊಳ್ಳುವುದು. ಯಾರು ಸೇವಾಕೇಂದ್ರವನ್ನು ತೆರೆಯುತ್ತಾರೆಯೋ,
ಸರ್ವೀಸ್ ಮಾಡುತ್ತಾರೆಯೋ ಅವರದೂ ಸಹ ಸಂಪಾದನೆಯಾಗುತ್ತದೆ, ಅವರಿಗೂ ಸಹ ಬಹಳ ಲಾಭವು ಸಿಗುತ್ತದೆ.
ಕೆಲವರು 3-4 ಸೇವಾಕೇಂದ್ರಗಳನ್ನು ತೆರೆಯುತ್ತಾರಲ್ಲದೆ ಯಾರೆಲ್ಲಾ ಮಾಡುತ್ತಾರೋ ಅವರಿಗೆ ಅದರ ಪಾಲು
ಸಿಗುತ್ತದೆ. ಮಾಯೆಯ ಚಪ್ಪರವನ್ನು ಎತ್ತುವುದರಲ್ಲಿ ಎಲ್ಲರೂ ಒಟ್ಟಾಗಿ ತಮ್ಮ ಹೆಗಲನ್ನು ಕೊಡುತ್ತಾರೆ.
ಆದುದರಿಂದ ಎಲ್ಲರಿಗೂ ಅದರ ಪ್ರತಿಫಲ ಸಿಗುತ್ತದೆ. ಯಾರು ಅನೇಕರಿಗೆ ಮಾರ್ಗವನ್ನು ತಿಳಿಸುತ್ತಾರೆಯೋ,
ಎಷ್ಟು ಶ್ರಮ ಪಡುತ್ತಾರೆಯೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ, ಅವರಿಗೆ ಬಹಳ
ಖುಷಿಯಾಗುತ್ತದೆ. ಮನಸ್ಸಿಗೆ ಅರ್ಥವಾಗುತ್ತದೆ - ನಾವು ಎಷ್ಟು ಜನರಿಗೆ ಮಾರ್ಗವನ್ನು ತಿಳಿಸಿದೆವು?
ಎಷ್ಟು ಜನರನ್ನು ಉದ್ಧಾರ ಮಾಡಿದೆವು? ಎಲ್ಲವನ್ನೂ ಮಾಡುವ ಸಮಯ ಇದೇ ಆಗಿದೆ. ಆಹಾರ-ಪಾನೀಯವಂತೂ
ಎಲ್ಲರಿಗೂ ಸಿಗುತ್ತದೆ. ಕೆಲವರಂತೂ ಏನೂ ಕೆಲಸ ಮಾಡುವುದಿಲ್ಲ. ಮಮ್ಮಾ ಹೇಗೆ ಎಷ್ಟೊಂದು ಸರ್ವೀಸ್
ಮಾಡಿದರು, ಸರ್ವೀಸಿನಿಂದ ಅವರ ಕಲ್ಯಾಣವಾಯಿತು. ಇದರಲ್ಲಿಯೂ ಬಹಳ ಸರ್ವೀಸ್ ಬೇಕು. ಯೋಗದ್ದೂ
ಸರ್ವೀಸ್ ಇದೆಯಲ್ಲವೆ. ಎಷ್ಟು ಆಳವಾದ ಆದೇಶಗಳಂತೂ ಸಿಗುತ್ತಿರುತ್ತವೆ. ಇನ್ನು ಮುಂದೆ ಏನೆಲ್ಲಾ
ಪಾಯಿಂಟ್ಸ್ ಬರಲಿದೆ. ದಿನ-ಪ್ರತಿದಿನ ಉನ್ನತಿಯಾಗುತ್ತಾ ಹೋಗುತ್ತದೆ. ಹೊಸ-ಹೊಸ ವಿಚಾರಗಳು ಬರಲಿವೆ.
ಯಾರು ಸರ್ವೀಸಿನಲ್ಲಿ ತೊಡಗಿರುತ್ತಾರೆಯೋ ಅವರು ತಕ್ಷಣ ಹಿಡಿದುಕೊಳ್ಳುತ್ತಾರೆ. ಯಾರು ಸರ್ವೀಸ್
ಮಾಡುವುದಿಲ್ಲವೋ ಅವರ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳುವುದಿಲ್ಲ. ಬಿಂದು ರೂಪವೆಂದು ಹೇಗೆ
ತಿಳಿಯುವುದು? ತಾವು ಯಾರನ್ನಾದರೂ ಕೇಳಿ ಆತ್ಮವು ಎಷ್ಟು ದೊಡ್ಡದು? ಆತ್ಮದ ದೇಶ-ಕಾಲವನ್ನು ಹೇಳಿ
ಎಂದು ಕೇಳಿದರೆ ಎಂದೂ ಯಾರೂ ಹೇಳಲು ಸಾಧ್ಯವಿಲ್ಲ. ಮನುಷ್ಯರು ಪರಮಾತ್ಮನ ನಾಮ-ರೂಪ, ದೇಶ-ಕಾಲವನ್ನು
ಕೇಳುತ್ತಾರೆ. ನೀವು ಆತ್ಮದ ಬಗ್ಗೆ ಕೇಳಿದಾಗ ತಬ್ಬಿಬ್ಬಾಗುತ್ತಾರೆ, ಯಾರಿಗೂ ಗೊತ್ತಿಲ್ಲ. ಆತ್ಮವು
ಇಷ್ಟು ಚಿಕ್ಕ ಬಿಂದುವಾಗಿದೆ, ಅದರಲ್ಲಿ ಇಷ್ಟೆಲ್ಲಾ ಪಾತ್ರವು ತುಂಬಿದೆ. ಇಲ್ಲಿಯೂ ಸಹ
ಅನೇಕರಿದ್ದಾರೆ ಅವರು ಆತ್ಮ ಮತ್ತು ಪರಮಾತ್ಮನನ್ನು ತಿಳಿದುಕೊಂಡೇ ಇಲ್ಲ. ಕೇವಲ ವಿಕಾರಗಳ ಮೇಲೆ
ಸನ್ಯಾಸ ಮಾಡಿದ್ದಾರೆ, ಅದೂ ಸಹ ಚಮತ್ಕಾರವಾಗಿದೆ. ಸನ್ಯಾಸಿಗಳ ಧರ್ಮವೇ ಬೇರೆ, ಈ ಜ್ಞಾನವು
ನಿಮಗಾಗಿಯೇ ಇದೆ. ತಂದೆಯು ತಿಳಿಸುತ್ತಾರೆ - ನೀವು ಪವಿತ್ರರಾಗಿದ್ದಿರಿ, ಮತ್ತೆ ಅಪವಿತ್ರರಾದಿರಿ.
ಈಗ ಪುನಃ ಪವಿತ್ರರಾಗಬೇಕಾಗಿದೆ. ನೀವೇ 84ರ ಚಕ್ರವನ್ನು ಸುತ್ತುತ್ತೀರಿ. ಜಗತ್ತಿನಲ್ಲಿ ಸ್ವಲ್ಪವೂ
ಈ ಮಾತುಗಳನ್ನು ತಿಳಿದುಕೊಂಡೇ ಇಲ್ಲ. ಜ್ಞಾನವೇ ಬೇರೆ, ಭಕ್ತಿಯೇ ಬೇರೆಯಾಗಿದೆ. ಜ್ಞಾನವು ವೃದ್ಧಿ
ಮಾಡುತ್ತದೆ, ಭಕ್ತಿಯು ಬೀಳುವಂತೆ ಮಾಡುತ್ತದೆ, ಹಗಲು-ರಾತ್ರಿಯ ವ್ಯತ್ಯಾಸವಿದೆ. ಮನುಷ್ಯರು ಭಲೆ
ತಮ್ಮನ್ನು ವೇದಶಾಸ್ತ್ರಗಳ ಅಥಾರಿಟಿ ಎಂದು ಎಷ್ಟೇ ತಿಳಿದುಕೊಂಡರೂ ಸಹ ಏನೂ ಗೊತ್ತಿಲ್ಲ. ನಿಮಗೂ ಸಹ
ಈಗ ಎಲ್ಲವೂ ಗೊತ್ತಾಯಿತು. ನಿಮ್ಮಲ್ಲಿಯೂ ನಂಬರ್ವಾರ್ ಇದ್ದೀರಿ. ಮರೆಯುವ ಕಾರಣವೇ ಖುಷಿಯು
ಮರೆಯಾಗುತ್ತದೆ ಇಲ್ಲದಿದ್ದರೆ ಬಹಳ ಖುಷಿಯಾಗಬೇಕು. ತಂದೆಯಿಂದ ನಮಗೆ ಈ ಆಸ್ತಿಯು ಸಿಗುತ್ತಿದೆ,
ತಂದೆಯು ಸಾಕ್ಷಾತ್ಕಾರ ಮಾಡಿಸಿದ್ದಾರೆ. ಅದರ ಸಾಕ್ಷಾತ್ಕಾರವಾಗಿ, ಶ್ರೀಮತದಂತೆ ನಡೆಯದಿದ್ದರೆ
ಲಾಭವೇನು! ತಂದೆಯನ್ನು ದುಃಖದಲ್ಲಿ ಸ್ಮರಿಸುತ್ತಾರೆ, ತಂದೆಗೆ ಮುಕ್ತೇಶ್ವರ, ಹೇ ರಾಮ, ಹೇ ಪ್ರಭು
ಎನ್ನುತ್ತಾರೆ ಆದರೆ ಅವರು ಯಾರು ಎಂಬುದು ಗೊತ್ತಿಲ್ಲ. ಭಕ್ತಿಯಲ್ಲಿ ತಮ್ಮನ್ನು ಆತ್ಮನೆಂದು ತಿಳಿದು
ತಂದೆಯನ್ನು ನೆನಪು ಮಾಡಿ ಎಂದು ಯಾರೂ ಸಹ ಹೇಳುವುದಿಲ್ಲ. ಒಂದುವೇಳೆ ಹೇಳಿದರೆ ಪರಂಪರೆಯಿಂದ ನಡೆದು
ಬರುತ್ತಿತ್ತು, ಭಕ್ತಿಯು ನಡೆದು ಬಂದಿದೆಯಲ್ಲವೆ. ಭಕ್ತಿಯು ಅಪಾರವಾಗಿದೆ, ಜ್ಞಾನವು ಒಂದೇ ಆಗಿದೆ.
ಭಕ್ತಿಯಿಂದ ಭಗವಂತ ಸಿಗುತ್ತಾರೆಂದು ಮನುಷ್ಯರು ತಿಳಿದುಕೊಂಡಿದ್ದಾರೆ ಆದರೆ ಹೇಗೆ, ಯಾವಾಗ? ಇದು
ತಿಳಿದುಕೊಂಡಿಲ್ಲ. ಭಕ್ತಿಯು ಯಾವಾಗ ಪ್ರಾರಂಭವಾಗುತ್ತದೆ, ಯಾರು ಹೆಚ್ಚು ಭಕ್ತಿಯನ್ನು ಮಾಡುತ್ತಾರೆ
- ಇದನ್ನು ಯಾರೂ ತಿಳಿದುಕೊಂಡಿಲ್ಲ. ಏನು ಇನ್ನೂ 40 ಸಾವಿರ ವರ್ಷಗಳು ಭಕ್ತಿ ಮಾಡುತ್ತಿರುತ್ತಾರೇನು?
ಒಂದು ಕಡೆ ಮನುಷ್ಯರು ಭಕ್ತಿ ಮಾಡುತ್ತಿದ್ದಾರೆ, ಇನ್ನೊಂದು ಕಡೆ ತಾವು ಜ್ಞಾನವನ್ನು
ಪಡೆಯುತಿದ್ದೀರಿ. ಮನುಷ್ಯರಿಂದ ಎಷ್ಟೊಂದು ತಲೆ ಕೆಡಿಸಿಕೊಳ್ಳಬೇಕು. ಇಷ್ಟೊಂದು ಪ್ರದರ್ಶನಿಯನ್ನು
ಮಾಡುತ್ತೀರಿ ಆದರೆ ಕೋಟಿಯಲ್ಲಿ ಕೆಲವರು ಮಾತ್ರ ಬರುತ್ತಾರೆ. ಎಷ್ಟು ಜನರನ್ನು ತಮ್ಮ ಸಮಾನ
ಮಾಡಿಕೊಂಡು ಬರುತ್ತಾರೆ, ಸತ್ಯ-ಸತ್ಯ ಬ್ರಾಹ್ಮಣರು ಎಷ್ಟು ಜನರಿದ್ದಾರೆ - ಈ ಲೆಕ್ಕವನ್ನು ಈಗ
ತೆಗೆಯಲು ಸಾಧ್ಯವಿಲ್ಲ. ಬ್ರಾಹ್ಮಣರು ಕಥೆ ಹೇಳುತ್ತಾರೆ, ತಂದೆಯು ಗೀತೆಯ ಕಥೆಯನ್ನು ಹೇಳುತ್ತಾರೆ.
ತಾವೂ ಸಹ ಹೇಳುತ್ತೀರಿ - ತಂದೆಯು ಹೇಗಿದ್ದಾರೆಯೋ ಹಾಗೆಯೇ ಮಕ್ಕಳು. ಸತ್ಯ-ಸತ್ಯ ಗೀತೆಯನ್ನು
ಹೇಳುವುದೂ ಸಹ ಮಕ್ಕಳ ಕೆಲಸವಾಗಿದೆ. ಎಲ್ಲರದೂ ಶಾಸ್ತ್ರಗಳಿವೆ. ವಾಸ್ತವದಲ್ಲಿ ಯಾವುದೆಲ್ಲಾ
ಶಾಸ್ತ್ರ ಇತ್ಯಾದಿಗಳಿವೆಯೋ ಅವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಜ್ಞಾನದ ಪುಸ್ತಕವು ಗೀತೆ ಒಂದೇ
ಆಗಿದೆ. ಗೀತೆಯು ತಾಯಿ-ತಂದೆಯಾಗಿದೆ. ತಂದೆಯೇ ಬಂದು ಸರ್ವರ ಸದ್ಗತಿ ಮಾಡುತ್ತಾರೆ. ನಂತರ ಮನುಷ್ಯರು
ಅಂತಹ ತಂದೆಯನ್ನೇ ನಿಂದನೆ ಮಾಡುತ್ತಾರೆ. ಶಿವ ತಂದೆಯ ಜಯಂತಿಯು ವಜ್ರ ಸಮಾನವಾಗಿದೆ. ಸರ್ವ
ಶ್ರೇಷ್ಠ ಭಗವಂತನೇ ಸದ್ಗತಿದಾತನಾಗಿದ್ದಾರೆ. ಬಾಕಿ ಯಾರದೇ ಮಹಿಮೆಯು ಹೇಗೆ ಆಗಲು ಸಾಧ್ಯ?
ದೇವತೆಗಳನ್ನು ಮಹಿಮೆ ಮಾಡುತ್ತಾರೆ. ಆದರೆ ದೇವತೆಗಳನ್ನಾಗಿ ಮಾಡುವವರು ಒಬ್ಬ ತಂದೆಯಾಗಿದ್ದಾರೆ.
ನಮ್ಮದು ಸ್ಥಾಪನೆಯಾಗುತ್ತದೆ ಅಂದಾಗ ವಿನಾಶವೂ ಆಗುತ್ತದೆ. ಅನೇಕರಿದ್ದಾರೆ ಏನೂ ತಿಳಿಸಲು
ಆಗದಿದ್ದರೆ ಸ್ಥೂಲ ಕರ್ಮವನ್ನು ಮಾಡಿ. ಮಿಲಿಟರಿಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುವವರು ಇರುತ್ತಾರೆ.
ವಿದ್ಯಾವಂತರ ಮುಂದೆ ಅವಿದ್ಯಾವಂತರು ತಲೆ ಬಾಗಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಮಮ್ಮಾ-ಬಾಬಾ
ಏನು ಮಾಡುತ್ತಾರೆಯೋ ಅವರಿಂದ ಕಲಿಯಿರಿ. ತಾವೂ ಸಹ ಅನನ್ಯ ಮಕ್ಕಳು ಯಾರೆಂದು ತಿಳಿದುಕೊಳ್ಳಬಹುದು.
ತಂದೆಯನ್ನು ಕೇಳಿದರೆ ಆಗ ತಂದೆಯೂ ಸಹ ತಿಳಿಸುತ್ತಾರೆ - ಇಂತವರನ್ನು ಅನುಸರಿಸಿ. ಯಾರು
ಸೇವಾಧಾರಿಗಳಲ್ಲವೋ ಅವರು ಏನನ್ನು ಕಲಿಸುತ್ತಾರೆ. ಅವರು ಇನ್ನಷ್ಟು ಸಮಯವನ್ನು ವ್ಯರ್ಥ ಮಾಡುತ್ತಾರೆ.
ತಂದೆಯು ತಿಳಿಸುತ್ತಾರೆ - ತಮ್ಮ ಉನ್ನತಿಯನ್ನು ಮಾಡಿಕೊಳ್ಳಬೇಕಾದರೆ ಇಲ್ಲಿ ಮಾಡಿಕೊಳ್ಳಬಹುದು.
ನಾವು 84 ಜನ್ಮಗಳನ್ನು ಹೇಗೆ ಪಡೆದೆವು ಎಂಬ ಚಿತ್ರವನ್ನು ಇಡಲಾಗಿದೆ, ಇದನ್ನು ನೀವು ಈಗ
ತಿಳಿದುಕೊಂಡಿದ್ದೀರಿ ಅಂದಮೇಲೆ ಈಗ ತಿಳಿಸಿ. ಎಷ್ಟು ಸಹಜ ಈ ರೀತಿ ಆಗಬೇಕು. ನೆನ್ನೆ ಇವರ
ಭಕ್ತಿಯನ್ನು ಮಾಡುತ್ತಿದ್ದಿರಿ, ಇಂದು ಇಲ್ಲ. ಜ್ಞಾನವು ಸಿಕ್ಕಿತು, ಈ ರೀತಿ ಅನೇಕರು ಬಂದು
ಜ್ಞಾನವನ್ನು ತಿಳಿದುಕೊಳ್ಳುತ್ತಾರೆ. ಕೇಳುತ್ತಿದ್ದಂತೆಯೇ ಅವರಿಗೆ ಖುಷಿಯ ನಶೆಯೇರುತ್ತದೆ.
ನರನಿಂದ ನಾರಾಯಣನಾಗಬೇಕು, ಇದು ಸತ್ಯ ನಾರಾಯಣನ ಕಥೆಯಾಗಿದೆ, ಭಕ್ತಿಯಿಂದ ಬೀಳುತ್ತಲೇ ಹೋಗುತ್ತೀರಿ.
ಜ್ಞಾನವು ಎಂತಹ ವಸ್ತುವೆಂದು ಅವರಿಗೆ ಗೊತ್ತೇ ಆಗುವುದಿಲ್ಲ. ನಿಮಗೆ ಬೇಹದ್ದಿನ ತಂದೆಯು
ಯಥಾರ್ಥವಾಗಿ ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನೆನ್ನೆ ನಿಮಗೆ ರಾಜ್ಯವನ್ನು
ಕೊಟ್ಟಿದ್ದೆನು ಮತ್ತೆ ನಿಮ್ಮರಾಜ್ಯವು ಎಲ್ಲಿ ಹೋಯಿತು, ಇದಂತೂ ನಿಮಗೆ ಗೊತ್ತಿದೆ. ಇದಂತೂ
ಆಟವಾಗಿದೆ. ಒಬ್ಬ ತಂದೆಯೇ ಪೂರ್ಣ ಆಟದ ರಹಸ್ಯವನ್ನು ತಿಳಿಸುತ್ತಾರೆ. ನಾವು ಹೇಳುತ್ತೇವೆ, ಬಾಬಾ
ತಾವು ಡ್ರಾಮಾದಲ್ಲಿ ಬಂಧಿತರಾಗಿದ್ದೀರಿ, ತಾವು ಬರಲೇಬೇಕು ಪತಿತ ಜಗತ್ತು, ಪತಿತ ಶರೀರದಲ್ಲಿ.
ಈಶ್ವರನ ಮಹಿಮೆಯನ್ನು ಬಹಳ ಮಾಡುತ್ತಾರೆ. ಮಕ್ಕಳು ಹೇಳುತ್ತಾರೆ - ನಾವು ನಿಮ್ಮನ್ನು ಕರೆದಿದ್ದೇವೆ
ಅಂದಮೇಲೆ ತಾವು ಬರಲೇಬೇಕು - ನಮ್ಮ ಸರ್ವೀಸ್ ಮಾಡಲು ಅಥವಾ ನಮ್ಮನ್ನು ಪತಿತರಿಂದ ಪಾವನ ಮಾಡಲು.
ಕಲ್ಪ-ಕಲ್ಪವೂ ನಮ್ಮನ್ನು ದೇವತೆಗಳನ್ನಾಗಿ ಮಾಡಿ ತಾವು ಹೊರಟು ಹೋಗುತ್ತೀರಿ. ಇದು ಒಂದು ರೀತಿಯ
ಕಥೆಯಾಗಿದೆ, ಯಾರು ಬುದ್ಧಿವಂತರೋ ಅವರಿಗೆ ಇದು ಕಥೆಯೆನಿಸುತ್ತದೆ. ತಾವು ಮಕ್ಕಳು
ಪ್ರಸನ್ನರಾಗಿರಬೇಕು. ತಂದೆಯೂ ಸಹ ಡ್ರಾಮಾನುಸಾರ ಸೇವಕರಾಗಿದ್ದಾರೆ, ತಂದೆಯು ಹೇಳುತ್ತಾರೆ - ನನ್ನ
ಮತದಂತೆ ನಡೆಯಿರಿ, ತಮ್ಮನ್ನು ಆತ್ಮನೆಂದು ತಿಳಿಯಿರಿ, ದೇಹಾಭಿಮಾನವನ್ನು ಬಿಡಿ. ಹೊಸ ಪ್ರಪಂಚದಲ್ಲಿ
ನಿಮಗೆ ಹೊಸ ಶರೀರವು ಸಿಗುತ್ತದೆ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಚೆನ್ನಾಗಿ ಮಂಥನ
ಮಾಡಿ. ನಾನು ಇವರಂತೆ ಆಗಲು ಬಂದಿದ್ದೇನೆಂದು ನೀವು ಬುದ್ದಿಯಿಂದ ತಿಳಿಯುತ್ತೀರಿ. ಗುರಿಯಂತೂ
ಸನ್ಮುಖದಲ್ಲಿ ನಿಂತಿದೆ. ಭಗವಾನುವಾಚ - ಅವರು ಭಗವಂತನನ್ನು ಮನುಷ್ಯರೆಂದು ತಿಳಿಯುತ್ತಾರೆ ಅಥವಾ
ನಿರಾಕಾರನೆಂದು ತಿಳಿಯುತ್ತಾರೆ. ತಾವಾತ್ಮರೆಲ್ಲರೂ ನಿರಾಕಾರಿಗಳಾಗಿದ್ದೀರಿ, ಶರೀರವನ್ನು ಪಡೆದು
ಪಾತ್ರವನ್ನಭಿನಯಿಸುತ್ತೀರಿ, ತಂದೆಯೂ ಸಹ ಪಾತ್ರವನ್ನಭಿನಯಿಸುತ್ತಾರೆ. ಯಾರು ಚೆನ್ನಾಗಿ ಸರ್ವೀಸ್
ಮಾಡುತ್ತಾರೆಯೋ ಅವರಿಗೆ ನಾವು ಮಾಲೆಯ ಮಣಿಗಳು ಅವಶ್ಯವಾಗಿ ಆಗುತ್ತೇವೆಂದು ನಿಶ್ಚಯವಿದೆ. ನರನಿಂದ
ನಾರಾಯಣರಾಗಬೇಕು. ನಾಪಾಸ್ ಆದರೆ ಸ್ವತಃವಾಗಿಯೇ ರಾಮ-ಸೀತೆಯರಾಗುತ್ತಾರೆ. ಭಗವಂತನೇ
ಓದಿಸುತ್ತಾರೆಂದಮೇಲೆ ಚೆನ್ನಾಗಿ ಓದಬೇಕು. ಆದರೆ ಮಾಯೆಯದು ಬಹಳ ವಿರೋಧವಿದೆ. ಮಾಯೆಯು
ಬಿರುಗಾಳಿಯಲ್ಲಿ ತರುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಪಿತ ಬಾಪ್ದಾದಾರವರ ನೆನಪು-ಪ್ರೀತಿ
ಹಾಗೂ ಗುಡ್ಮಾರ್ನಿಂಗ್. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ವಿಚಾರಸಾಗರ ಮಂಥನ
ಮಾಡಿ ಅಪಾರ ಖುಷಿಯ ಅನುಭವ ಮಾಡಬೇಕು. ಅನ್ಯರಿಗೂ ಸಹ ಮಾರ್ಗವನ್ನು ಹೇಳುವ ಕೃಪೆ ತೋರಬೇಕಾಗಿದೆ.
ಸಂಗದ ರಂಗಿನಲ್ಲಿ ಬಂದು ಯಾವುದೇ ಪಾಪ ಕರ್ಮವನ್ನು ಮಾಡಬಾರದು.
2. ಮಾಯೆಯ ದುಃಖದ ಪರ್ವತವನ್ನು ಎತ್ತಲು ಎಲ್ಲರೂ ಸೇರಿ ಭುಜವನ್ನು ಕೊಡಬೇಕಾಗಿದೆ.
ಸೇವಾಕೇಂದ್ರಗಳನ್ನು ತೆರೆದು ಅನೇಕರ ಕಲ್ಯಾಣಕ್ಕೆ ನಿಮಿತ್ತರಾಗಬೇಕಾಗಿದೆ.
ವರದಾನ:
ಬ್ರಾಹ್ಮಣ
ಜೀವನದಲ್ಲಿ ಸದಾ ಹರ್ಷಚಿತ್ತ ಮತ್ತು ಎಚ್ಚರಿಕೆಯ ಮೂಡ್ ನಲ್ಲಿರುವಂತಹ ಕಂಭೈಂಡ್ ರೂಪಧಾರಿ ಭವ.
ಒಂದುವೇಳೆ ಯಾವುದೇ
ಪರಿಸ್ಥಿತಿಯಲ್ಲಿ ಪ್ರಸನ್ನತೆಯ ಮೂಡ್ ಪರಿವರ್ತನೆಯಾಗುತ್ತೆ ಎಂದಾಗ ಅದನ್ನು ಸದಾಕಾಲದ ಪ್ರಸನ್ನತೆ
ಎಂದು ಹೇಳಲಾಗುವುದಿಲ್ಲ. ಬ್ರಾಹ್ಮಣ ಜೀವನದಲ್ಲಿ ಸದಾ ಹರ್ಷಚಿತ್ತ ಮತ್ತು ಎಚ್ಚರಿಕೆ ಮೂಡ್ ಇರಬೇಕು.
ಮೂಡ್ ಬದಲಾಗುತ್ತಿರಬಾರದು. ಯಾವಾಗ ಮೂಡ್ ಬದಲಾಗುತ್ತೆ ಆಗ ಹೇಳುತ್ತಾರೆ ನಾನು ಏಕಾಂತದಲ್ಲಿರಬೇಕು
ಎಂದು. ಇಂದು ನನ್ನ ಮೂಡ್ ಹೀಗಿದೆ. ಮೂಡ್ ಯಾವಾಗ ಬದಲಾಗುವುದೆಂದರೆ ಯಾವಾಗ ಒಂಟಿಯಾಗಿರುವಿರಿ ಆಗ,
ಸದಾ ಕಂಭೈಂಡ್ ರೂಪದಲ್ಲಿದ್ದಾಗ ಮೂಡ್ ಬದಲಾಗುವುದಿಲ್ಲ.
ಸ್ಲೋಗನ್:
ಯಾವುದೇ ಉತ್ಸವ ಆಚರಿಸುವುದು ಎಂದರೆ ನೆನಪು ಮತ್ತು ಸೇವೆಯ ಉತ್ಸಾಹದಲ್ಲಿರುವುದು.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ -
ಈಗ ತೀವ್ರ ಪುರುಷಾರ್ಥದ ಇದೇ ಲಕ್ಷ್ಯ ಇಟ್ಟುಕೊಳ್ಳಿ ನಾನು ಡಬ್ಬಲ್ ಲೈಟ್ ಫರಿಶ್ಥಾ ಆಗಿರುವೆನು,
ನಡೆಯುತ್ತಾ-ತಿರುಗಾಡುತ್ತಾ ಫರಿಶ್ಥಾ ಸ್ವರೂಪದ ಅನುಭೂತಿಯನ್ನು ಹೆಚ್ಚಿಸಿಕೊಳ್ಳಿ. ಅಶರೀರಿತನದ
ಅಭ್ಯಾಸ ಮಾಡಿ. ಒಂದು ಸೆಕೆಂಡ್ ನಲ್ಲಿ ಯಾವುದೇ ಸಂಕಲ್ಪವನ್ನು ಸಮಾಪ್ತಿ ಮಾಡುವಲ್ಲಿ, ನಮಸ್ಕಾರ
ಸ್ವಭಾವದ ಮೇಲೆ ಡಬಲ್ ಲೈಟ್ ಆಗಿರಿ.