01.06.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಲಕ್ಷ್ಯವನ್ನು ಸದಾ ಮುಂದಿಟ್ಟುಕೊಳ್ಳಿ ಆಗ ದೈವೀ ಗುಣಗಳು ಬರುತ್ತವೆ, ಈಗ ತಮ್ಮನ್ನು ಸಂಭಾಲನೆ
ಮಾಡಿಕೊಳ್ಳಬೇಕು, ಆಸುರೀ ಗುಣಗಳನ್ನು ತೆಗೆದು ದೈವೀ ಗುಣಗಳನ್ನು ಧಾರಣೆ ಮಾಡಬೇಕು”
ಪ್ರಶ್ನೆ:
ಆಯುಷ್ಯವಾನ್
ಭವದ ವರದಾನ ಸಿಕ್ಕಿದ್ದರೂ ಸಹ ದೀರ್ಘಾಯಸ್ಸಿಗಾಗಿ ಯಾವ ಶ್ರಮ ಪಡಬೇಕಾಗಿದೆ?
ಉತ್ತರ:
ದೀರ್ಘಾಯುಸ್ಸಿಗಾಗಿ ತಮೋಪ್ರಧಾನರಿಂದ ಸತೋಪ್ರಧಾನರಾಗುವ ಪರಿಶ್ರಮ ಪಡಬೇಕು, ತಂದೆಯನ್ನು ಎಷ್ಟು
ನೆನಪು ಮಾಡುತ್ತೀರಿ ಅಷ್ಟು ಸತೋಪ್ರಧಾನರಾಗುವುದು ಮತ್ತು ದೀರ್ಘಾಯುವಾಗುವಿರಿ ನಂತರ ಮೃತ್ಯುವಿನ
ಭಯವು ಹೊರಟು ಹೋಗುವುದು. ನೆನೆಪಿನಿಂದ ದುಃಖಗಳು ದೂರವಾಗುತ್ತವೆ, ನೀವು ಹೂಗಳಾಗುತ್ತೀರಿ,
ನೆನಪಿನಲ್ಲಿಯೇ ಗುಪ್ತ ಸಂಪಾದನೆಯಿದೆ, ನೆನಪಿನಿಂದ ಪಾಪಗಳು ತುಂಡಾಗುತ್ತವೆ. ಆತ್ಮವು
ಹಗುರವಾಗುತ್ತದೆ. ಆಯುಷ್ಯ ದೀರ್ಘವಾಗುತ್ತದೆ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಿದ್ದಾರೆ, ಓದಿಸುತ್ತಲೂ ಇದ್ದಾರೆ. ಏನು
ತಿಳಿಸುತ್ತಿದ್ದಾರೆ? ಮಧುರ ಮಕ್ಕಳೇ ನಿಮಗೆ ಮೊದಲನೆಯದಾಗಿ ಧೀರ್ಘಾಯಷ್ಯ ಬೇಕು ಏಕೆಂದರೆ ನಿಮ್ಮ
ಆಯುಷ್ಯ ಬಹಳ ದೀರ್ಘವಾಗಿತ್ತು, 150 ವರ್ಷ ಆಯಷ್ಯವಿತ್ತು, ದೀರ್ಘಾಯಸ್ಸು ಹೇಗೆ ಸಿಗುತ್ತದೆ?
ತಮೊಪ್ರಧಾನದಿಂದ ಸತೋಪ್ರಧಾನರಾಗುವುದರಿಂದ, ಯಾವಾಗ ನೀವು ಸತೋಪ್ರಧಾನರಾಗಿದ್ದಿರೋ ಆಗ ನಿಮ್ಮದು
ಬಹಳ ದೀರ್ಘಾಯಸ್ಸಾಗಿತ್ತು, ಈಗ ನೀವು ಮೇಲೇರುತಿದ್ದೀರಿ. ನಿಮಗೆ ಗೊತ್ತಿದೆ, ನಾವು
ತಮೋಪ್ರಧಾನರಾಗಿದ್ದರಿಂದ ನಮ್ಮ ಆಯಸ್ಸು ಚಿಕ್ಕದಾಗಿ ಬಿಟ್ಟಿತು. ಆರೊಗ್ಯವು ಸರಿಯಿರಲಿಲ್ಲ,
ಸಂಪೂರ್ಣ ರೋಗಿಗಳಾಗಿದ್ದೆವು. ಈ ಜೀವನ ಹಳೆಯದಾಗಿದೆ, ಹೊಸದರೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಈಗ
ನಿಮಗೆ ತಿಳಿದಿದೆ - ತಂದೆಯು ನಿಮಗೆ ಆಯಸ್ಸು ದೀರ್ಘವನ್ನಾಗಿ ಮಾಡಿಕೊಳ್ಳುವ ಯುಕ್ತಿಯನ್ನು
ತಿಳಿಸುತ್ತಾರೆ. ಮಧುರಾತಿ ಮಧುರ ಮಕ್ಕಳೇ, ನನ್ನನ್ನು ನೆನಪು ಮಾಡುವಿರೆಂದರೆ ನೀವು ಮೊದಲು ಹೇಗೆ
ಸತೋಪ್ರಧಾನರಾಗಿದ್ದಿರಿ, ದೀರ್ಘಾಯಸ್ಸುಳ್ಳವರು, ಆರೋಗ್ಯವಂತರಾಗಿದ್ದಿರೋ ಅದೇ ರೀತಿ ಪುನಃ ಆಗಿ
ಬಿಡುವಿರಿ, ಕಡಿಮೆ ಆಯಿಸ್ಸಿದ್ದರೆ ಸಾಯುವ ಭಯವಿರುತ್ತದೆ. ನಿಮಗಂತೂ ಗ್ಯಾರಂಟಿ ಸಿಗುತ್ತದೆ -
ಸತ್ಯಯುಗದಲ್ಲಿ ಹೀಗೆ ಆಕಸ್ಮಿಕವಾಗಿ ಎಂದೂ ಸಾಯುವುದಿಲ್ಲ. ತಂದೆಯನ್ನು ನೆನಪು ಮಾಡುತಿದ್ದರೆ
ದೀರ್ಘಾಯುವಾಗುತ್ತೇವೆ ಮತ್ತು ಎಲ್ಲ ದುಃಖಗಳು ದೂರವಾಗಿ ಬಿಡುತ್ತದೆ. ಯಾವುದೇ ಪ್ರಕಾರದ
ದುಃಖವಿರುವದಿಲ್ಲ. ಅಂದಮೇಲೆ ನಿಮಗೆ ಇನ್ನೇನು ಬೇಕು. ಶ್ರೇಷ್ಠ ಪದವಿಯು ಬೇಕೆಂದು ನೀವು
ಹೇಳುತ್ತೀರಿ. ಇಂತಹ ಪದವಿಯು ಸಿಗುತ್ತದೆಂದು ನಿಮಗೆ ತಿಳಿದಿರಲಿಲ್ಲ. ಈಗ ತಂದೆಯು ಯುಕ್ತಿಯನ್ನು
ತಿಳಿಸುತ್ತಾರೆ- ಮಕ್ಕಳೇ, ಈ ರೀತಿ ಮಾಡಿ ಎಂದು , ಗುರಿ ಉದ್ದೇಶವು ಸನ್ಮುಖದಲ್ಲಿದೆ. ನೀವು ಇಂತಹ
ಪದವಿಯನ್ನು ಪಡೆಯುತ್ತಿದ್ದೀರಿ, ಇಲ್ಲಿಯೇ ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ, ತಮ್ಮನ್ನು
ಕೇಳಿಕೊಳ್ಳಬೇಕು - ನಮ್ಮಲ್ಲಿ ಯಾವುದೇ ಆವಗುಣಗಳಿಲ್ಲವೆ? ಅವಗುಣಗಳು ಅನೇಕ ಪ್ರಕಾರವಾಗಿವೆ.
ಸಿಗರೇಟ್ ಸೇದುವುದು, ಕೊಳಕು ಪದಾರ್ಥಗಳನ್ನು ತಿನ್ನುವದು ಇದು ಅವಗುಣವಾಗಿದೆ. ಎಲ್ಲಕ್ಕಿಂತ ದೊಡ್ದ
ಆವಗುಣವು ವಿಕಾರದ್ದಾಗಿದೆ. ಇದಕ್ಕೆ ಕೆಟ್ಟ ಚಾರಿತ್ರ್ಯವೆಂದು ಹೇಳುತ್ತಾರೆ. ತಂದೆಯು
ತಿಳಿಸುತ್ತಾರೆ- ಮಕ್ಕಳೇ, ನೀವು ವಿಕಾರಿಗಳಾಗಿ ಬಿಟ್ಟದ್ದೀರಿ, ಈಗ ನಿಮಗೆ ನಿರ್ವಿಕಾರಿಗಳಾಗುವ
ಯುಕ್ತಿಯನ್ನು ತಿಳಿಸುತ್ತೇನೆ. ಇದರಲ್ಲಿ ಈ ವಿಕಾರಗಳನ್ನು, ಅವಗುಣಗಳನ್ನು ತೆಗೆದು ಬಿಡಬೇಕಾಗಿದೆ.
ಎಂದೂ ವಿಕಾರಿಗಳಾಗಬಾರದು. ಈ ಜನ್ಮದಲ್ಲಿ ಯಾರು ಸುಧಾರಣೆಯಾಗುವರೊ ಆ ಸುಧಾರಣೆಯು 21 ಜನ್ಮಗಳವರಗೆ
ನಡೆಯುತ್ತದೆ. ಎಲ್ಲದಕ್ಕಿಂತ ಅವಶ್ಯಕ ಮಾತೆಂದರೆ ನಿರ್ವಿಕಾರಿಯಾಗುವುದು, ಜನ್ಮ-ಜನ್ಮಾಂತರದ ಹೊರೆಯು
ಯಾವುದು ತಲೆಯ ಮೇಲೆ ಏರಿದೆಯೊ ಅದು ಯೋಗಬಲದಿಂದಲೇ ಇಳಿಯುತ್ತದೆ. ಮಕ್ಕಳಿಗೂ ಗೊತ್ತಿದೆ - ನಾವು
ಜನ್ಮ ಜನ್ಮಾಂತರದಿಂದ ವಿಕಾರಿಗಳಾಗಿದ್ದೆವು, ಈಗ ತಂದೆಯೊಂದಿಗೆ ನಾವು ಪ್ರತಿಜ್ಞೆ
ಮಾಡುತ್ತೇವೆ-ಮತ್ತೆಂದೂ ವಿಕಾರಿಗಳಾಗುವದಿಲ್ಲ. ತಂದೆಯು ಹೆಳಿದ್ದಾರೆ- ಒಂದು ವೇಳೆ ಪತಿತರಾದರೆ
ಒಂದಕ್ಕೆ ನೂರರಷ್ಟು ಶಿಕ್ಷೆಯನ್ನು ಅನುಭವಿಸಬೇಕಾಗುವುದು, ಪದವಿಯೂ ಭ್ರಷ್ಟವಾಗುವುದು. ಏಕೆಂದರೆ
ನಿಂದನೆ ಮಾಡಿಸಿದಿರಲ್ಲವೆ! ಆಂದರೆ ಆ ಕಡೆ (ವಿಕಾರಿ ಮನುಷ್ಯರ ಕಡೆ) ಹೋದಿರಿ ಎಂದರ್ಥ. ಹೀಗೆ
ಅನೇಕರು ಹೊರಟು ಹೋಗುತ್ತಾರೆ ಅಂದರೆ ಸೋತು ಹೋಗುತ್ತಾರೆ. ಈ ವಿಕಾರದ ವ್ಯವಾಹಾರವನ್ನು ಮಾಡಬಾರದೆಂದು
ನಿಮಗೆ ಮೊದಲು ತಿಳಿದಿರಲಿಲ್ಲ. ಕೆಲ ಕೆಲವರು ಒಳ್ಳೆಯ ಮಕ್ಕಳಿರುತ್ತಾರೆ. ನಾವು
ಬ್ರಹ್ಮಚರ್ಯದಲ್ಲಿರುತ್ತೇವೆಂದು ಹೇಳುತ್ತಾರೆ. ಸನ್ಯಾಸಿಗಳನ್ನು ನೋಡಿ ಪವಿತ್ರತೆಯು ಒಳ್ಳೆಯದೆಂದು
ತಿಳಿಯುತ್ತಾರೆ. ಪವಿತ್ರರು ಮತ್ತು ಅಪವಿತ್ರರು, ಪ್ರಪಂಚದಲ್ಲಿ ಅಪವಿತ್ರರು ಬಹಳ ಇದ್ದಾರೆ.
ಪಾಯಖಾನೆಗೆ ಹೋಗುವುದೂ ಸಹ ಒಂದು ರೀತಿಯ ಅಪವಿತ್ರತೆ ಆದ್ದರಿಂದ ತಕ್ಷಣ ಸ್ನಾನ ಮಾಡಬೇಕು.
ಅಪವಿತ್ರತೆ ಅನೇಕ ಪ್ರಕಾರದಿರುತ್ತದೆ. ಅನ್ಯರಿಗೆ ದುಃಖ ಕೊಡುವುದು, ಹೊಡೆಯುವುದು-ಜಗಳವಾಡುವುದು
ಅಪವಿತ್ರ ಕರ್ತವ್ಯವಾಗಿದೆ. ತಂದೆ ಹೇಳುತ್ತಾರೆ ಜನ್ಮ-ಜನ್ಮಾಂತರದಿಂದಲೂ ನೀವು ಪಾಪ ಮಾಡಿದ್ದೀರಿ.
ಅವೆಲ್ಲ ಹವ್ಯಾಸಗಳು ಈಗ ತೆಗೆಯಬೇಕು. ಈಗ ನೀವು ಸತ್ಯ ಸತ್ಯ ಮಹಾನ್ ಆತ್ಮರಾಗಬೇಕು. ಸತ್ಯ-ಸತ್ಯ
ಮಹಾನ್ ಆತ್ಮರಂತೂ ಲಕ್ಷೀ ನಾರಾಯಣರಾಗಿದ್ದಾರೆ. ಮತ್ಯಾರೂ ಇಲ್ಲಿ ಆಗಲು ಸಾಧ್ಯವಿಲ್ಲ. ಏಕೆಂದರೆ
ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಬಹಳ ನಿಂದನೆಯನ್ನು ಮಾಡುತ್ತಾರಲ್ಲವೆ! ನಾವೇನು ಮಾಡುತ್ತೇವೆಂದು
ಅವರಿಗೆ ತಿಳಿಯುವುದೇ ಇಲ್ಲ. ಒಂದು ಗುಪ್ತ ಪಾಪವಾಗಿದೆ. ಇನ್ನೊಂದು ಪ್ರತ್ಯಕ್ಷ ಪಾಪವಾಗಿದೆ. ಇದು
ತಮೋಪ್ರಧಾನ ಪ್ರಪಂಚವಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆ ನಮ್ಮನ್ನು ಬುದ್ಧಿವಂತರನ್ನಾಗಿ
ಮಾಡುತ್ತಾರೆ. ಆದ್ದರಿಂದ ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ. ಎಲ್ಲರಿಗಿಂತ ಒಳ್ಳೆಯ ತಿಳುವಳಿಕೆ
ನಿಮಗೆ ಸಿಕ್ಕಿದೆ. ಪಾವನರಾಗಬೇಕು ಮತ್ತು ಗುಣಗಳೂ ಬೇಕು. ದೇವತೆಗಳ ಮುಂದೆ ನೀವು ಮಹಿಮೆ ಮಾಡುತ್ತಾ
ಬಂದಿದ್ದೀರಿ. ಈಗ ನೀವು ಅವರಂತೆ ಆಗಬೇಕು. ಮಧುರಾತಿ ಮಧುರ ಮಕ್ಕಳೇ ನೀವು ಎಷ್ಟೊಂದು ಮಧುರ
ಹೂಗಳಾಗಿದ್ದಿರಿ. ನಂತರ ಮುಳ್ಳುಗಳಾದಿರಿ. ಈಗ ತಂದೆಯನ್ನು ನೆನಪು ಮಾಡಿರಿ, ಆ ನೆನಪಿನಿಂದ ನಿಮ್ಮದು
ದೀರ್ಘಾಯುಸ್ಸಾಗುತ್ತದೆ, ಪಾಪಗಳೂ ಭಸ್ಮವಾಗುತ್ತದೆ. ತಲೆಯ ಮೇಲಿರುವ ಹೊರೆಯು ಹಗುರವಾಗುತ್ತದೆ.
ತಮ್ಮನ್ನು ಸಂಭಾಲನೆ ಮಾಡಿಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಏನೇನು ಅವಗುಣಗಳಿವೆಯೋ ಅವನ್ನು
ತೆಗೆಯಬೇಕು. ಹೇಗೆ ನಾರದನ ಉದಾಹರಣೆಯಿದೆ, ನೀನು ಯೋಗ್ಯನಾಗಿರುವೆಯಾ ಎಂದು ಕೇಳಿದರು ಆಗ ನಾರದರು
ಮುಖವನ್ನು ನೋಡಿಕೊಂಡಾಗ ನಾನು ಅವಶ್ಯ ಯೋಗ್ಯನಿಲ್ಲ ಎಂದು ತಿಳಿಯಿತು. ತಂದೆಗೆ ನೀವು
ಮಕ್ಕಳಾಗಿದ್ದೀರಿ ಅಲ್ಲವೆ, ತಂದೆ ರಾಜನಾಗಿದ್ದರೆ ಮಕ್ಕಳು ನಶೆಯಿಂದ ಹೇಳಿಕೊಳ್ಳುತ್ತಾರಲ್ಲವೆ.
ತಂದೆಯು ಬಹಳ ಸುಖ ನೀಡುವವರಾಗಿದ್ದಾರೆ. ಯಾರು ಒಳ್ಳೆಯ ಸ್ವಭಾವದ ಮಹಾರಾಜರಿರುತ್ತಾರೆ ಅವರಿಗೆ ಎಂದೂ
ಕ್ರೋಧ ಬರುವುದಿಲ್ಲ. ಈಗಂತೂ ಇಳಿಯುತ್ತಾ ಹೋದಂತೆ ಎಲ್ಲರ ಕಲೆಗಳು ನಿಧಾನ ನಿಧಾನವಾಗಿ ಕಡಿಮೆಯಾಗಿವೆ.
ಎಲ್ಲ ಅವಗುಣಗಳು ಪ್ರವೇಶವಾಗಿವೆ, ಕಲೆಗಳೂ ಕಡಿಮೆಯಾಗಿವೆ. ತಮೋ ಆಗುತ್ತಾ ಹೋಗಿದ್ದಾರೆ.
ತಮೋಪ್ರಧಾನತೆಯೂ ಸಹ ಅಂತ್ಯವನ್ನು ತಲುಪಿದೆ. ಎಷ್ಟೊಂದು ದುಃಖಿಯಾಗಿದ್ದಾರೆ. ನೀವು ಎಷ್ಟೊಂದು ಸಹನೆ
ಮಾಡಬೇಕಾಗುತ್ತದೆ. ಈಗ ಅವಿನಾಶಿ ಸರ್ಜನ್ ಮೂಲಕ ನಿಮ್ಮ ಚಿಕಿತ್ಸೆಯಾಗುತ್ತಿದೆ. ತಂದೆ
ತಿಳಿಸುತ್ತಾರೆ - ಮಕ್ಕಳೇ, ಈ ಪಂಚ ವಿಕಾರಗಳಂತೂ ಪದೇ ಪದೇ ನಿಮ್ಮನ್ನು ಸತಾಯಿಸುತ್ತವೆ. ನೀವು
ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಮಾಯೆ ನಿಮ್ಮನ್ನು ಕೆಳಗಿಳಿಸುವ ಪ್ರಯತ್ನ ಮಾಡುತ್ತದೆ.
ನಿಮ್ಮ ಸ್ಥಿತಿ ಇನ್ನೂ ಶಕ್ತಿಶಾಲಿಯಾಗಬೇಕು, ಯಾವ ಮಾಯೆಯ ಬಿರುಗಾಳಿ ಅಲುಗಾಡಿಸಲು
ಸಾಧ್ಯವಾಗಿರಬಾರದು. ರಾವಣನು ಯಾವುದೇ ವಸ್ತುವಲ್ಲ ಅಥವಾ ಯಾವ ಮನುಷ್ಯನಲ್ಲ, ಪಂಚ ವಿಕಾರರೂಪಿ
ರಾವಣನಿಗೆ ಮಾಯೆಯೆಂದು ಹೇಳುತ್ತಾರೆ. ಆಸುರೀ ರಾವಣ ಸಂಪ್ರದಾಯದವರು ನಿಮ್ಮನ್ನು ಅರ್ಥವೇ
ಮಾಡಿಕೊಳ್ಳುವುದಿಲ್ಲ. ಕೊನೆಗೂ ಇವರು ಯಾರು? ಈ ಬ್ರಹ್ಮಾ ಕುಮಾರ-ಕುಮಾರಿಯರು ಏನು ಹೇಳುತ್ತಾರೆ?
ಸ್ಪಷ್ಟ ರೀತಿಯಲ್ಲಿ ಯಾರೂ ತಿಳಿದುಕೊಂಡಿಲ್ಲ, ಇವರು ಬಿ.ಕೆ.ಗಳೆಂದು ಏಕೆ ಕರೆಸಿಕೊಳ್ಳುತ್ತಾರೆ,
ಬ್ರಹ್ಮಾರವರು ಯಾರ ಸಂತಾನರಾಗಿದ್ದಾರೆ. ಈಗ ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ, ನಾವು ಈಗ
ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಈಗ ತಂದೆಯು ಕುಳಿತು ನೀವು ಮಕ್ಕಳಿಗೆ ಶಿಕ್ಷಣ ಕೊಡುತ್ತಾರೆ
ಆಯುಷ್ಯವಾನ್ ಭವ, ಧನ್ವಾನ್ ಭವ..... ನಿಮ್ಮ ಎಲ್ಲಾ ಕಾಮನೆಗಳನ್ನು ಪೂರ್ಣ ಮಾಡುತ್ತಾರೆ ವರದಾನ
ಕೊಡುತ್ತಾರೆ. ಆದರೆ ಕೇವಲ ವರದಾನದಿಂದ ಏನೂ ಕೆಲಸವಾಗುವುದಿಲ್ಲ. ಶ್ರಮ ಪಡಬೇಕಾಗುತ್ತದೆ.
ಪ್ರತಿಯೊಂದು ಮಾತು ಅರಿತುಕೊಳ್ಳುವುದಾಗಿದೆ. ತಮಗೆ ರಾಜ ತಿಲಕ ಕೊಟ್ಟುಕೊಳ್ಳಲು
ಅಧಿಕಾರಿಗಳಾಗಬೇಕಾಗಿದೆ. ತಂದೆಯು ಅಧಿಕಾರಿಗಳನ್ನಾಗಿ ಮಾಡುತ್ತಾರೆ. ಮಕ್ಕಳೇ ಹೀಗೆ ಹೀಗೆ ಮಾಡಿರಿ
ಎಂದು ನೀವು ಮಕ್ಕಳಿಗೆ ಶಿಕ್ಷಣ ಕೊಡುತ್ತಾರೆ. ಮೊಟ್ಟ ಮೊದಲಿನ ಶಿಕ್ಷಣ ಆಗಿದೆ - ನನ್ನೊಬ್ಬನನ್ನು
ನೆನಪು ಮಾಡಿ, ಮನುಷ್ಯರು ನೆನಪು ಮಾಡುವುದೇ ಇಲ್ಲ ಏಕೆಂದರೆ ಅವರಿಗೆ ಗೊತ್ತೇ ಇಲ್ಲ ಆದ್ದರಿಂದ ಅವರು
ಮಾಡುವ ನೆನಪು ತಪ್ಪಾಗಿದೆ. ಈಶ್ವರ ಸರ್ವವ್ಯಾಪಿ ಎಂದು ಹೇಳುತ್ತಾರೆ ಅಂದಮೇಲೆ ಶಿವಬಾಬಾನನ್ನು
ನೆನಪು ಹೇಗೆ ಮಾಡುತ್ತಾರೆ? ಶಿವನ ಮಂದಿರಕ್ಕೆ ಹೋಗಿ ಪೂಜೆ ಮಾಡುತ್ತಾರೆ. ನೀವು ಅವರನ್ನು ಕೇಳಿ -
ಇವರ ಬಗ್ಗೆ ನಿಮಗೆ ತಿಳಿದಿದಿಯೇ? ಅದಕ್ಕೆ ಭಗವಂತನು ಸರ್ವವ್ಯಾಪಿ ಎಂದು ಹೇಳುತ್ತಾರೆ. ಪೂಜೆ
ಮಾಡುತ್ತಾರೆ ಅವರಿಂದ ಕೃಪೆ ಬೇಡುತ್ತಾರೆ. ಬೇಡುತ್ತಿದ್ದರೂ ಪರಮಾತ್ಮ ಎಲ್ಲಿದ್ದಾರೆ ಎಂದರೆ
ಸರ್ವವ್ಯಾಪಿ ಎಂದು ಹೇಳುತ್ತಾರೆ. ಭಕ್ತಿಯಲ್ಲಿ ಎಷ್ಟು ತಪ್ಪುಗಳನ್ನು ಮಾಡುತ್ತಾರೆ. ಆದರೂ
ಭಕ್ತಿಯೆಂದರೆ ಪ್ರೀತಿ ಇದೆ. ಕೃಷ್ಣನಿಗಾಗಿ ನಿರ್ಜಲ ಉಪವಾಸ, ವ್ರತಗಳನ್ನು ಮಾಡುತ್ತಾರೆ. ನೀವಿಲ್ಲಿ
ಭಗವಂತನಿಂದ ಓದುತ್ತಿದ್ದೀರಿ. ನಿಮಗೀಗ ನಗು ಬರುತ್ತದೆ. ನಾಟಕದನುಸಾರ ಭಕ್ತಿಯನ್ನು ಮಾಡುತ್ತಾ
ಇಳಿಯುತ್ತಲೇ ಬಂದಿದ್ದಾರೆ. ಮೇಲಂತೂ ಏರಲು ಯಾರಿಂದಲೂ ಸಾಧ್ಯವಿಲ್ಲ.
ಈಗ ಇದು ಪುರುಷೋತ್ತಮ ಸಂಗಮಯುಗವಾಗಿದೆ, ಇದರ ಬಗ್ಗೆ ಯಾರಿಗೂ ತಿಳಿದಿಲ್ಲ. ಈಗ ನೀವು
ಪುರುಷೋತ್ತಮರಾಗಲು ಪುರುಷಾರ್ಥ ಮಾಡುತ್ತಿರುವಿರಿ. ಹೇಗೆ ಶಿಕ್ಷಕರು ವಿದ್ಯಾರ್ಥಿಯ
ಸೇವಕರಾಗಿರುತ್ತಾರಲ್ಲವೆ, ವಿದ್ಯಾರ್ಥಿಗಳ ಸೇವೆ ಮಾಡುತ್ತಾರೆ. ಸರ್ಕಾರಿ ಸೇವಕರಾಗಿದ್ದಾರೆ,
ಹಾಗೆಯೇ ತಂದೆಯೂ ಹೇಳುತ್ತಾರೆ - ನಾನು ನಿಮ್ಮ ಸೇವೆ ಮಾಡುತ್ತೇವೆ, ಓದಿಸುತ್ತೇನೆ ಎಲ್ಲಾ ಆತ್ಮಗಳ
ತಂದೆಯಾಗಿದ್ದಾರೆ, ಶಿಕ್ಷರೂ ಆಗುತ್ತಾರೆ ಸೃಷ್ಟಿಯ ಆದಿ, ಮಧ್ಯ, ಅಂತ್ಯದ ಜ್ಞಾನವನ್ನು
ತಿಳಿಸುತ್ತಾರೆ. ಈ ಜ್ಞಾನವು ಮತ್ತ್ಯಾವ ಮನುಷ್ಯರಲ್ಲಿ ಇಲ್ಲ. ಯಾರೂ ಕಲಿಸಲು ಸಾಧ್ಯವೂ ಇಲ್ಲ. ನಾವು
ದೇವತೆಗಳಾಗಬೇಕೆಂದು ಪುರುಷಾರ್ಥ ಮಾಡುತ್ತೀರಿ. ಪ್ರಪಂಚದಲ್ಲಿ ಮನುಷ್ಯರು ಎಷ್ಟು ತಮೋ
ಬುದ್ಧಿಯವರಾಗಿದ್ದಾರೆ, ಇದು ಬಹಳ ಭಯಾನಕ ಪ್ರಪಂಚವಾಗಿದೆ. ಮನುಷ್ಯರು ಯಾವುದನ್ನು ಮಾಡಬಾರದೋ
ಅದನ್ನೇ ಮಾಡುತ್ತಾರೆ, ಎಷ್ಟೊಂದು ಕೊಲೆ, ಸುಲಿಗೆ ಮೊದಲಾದುದನ್ನು ಮಾಡುತ್ತಾರೆ. ಏನು ತಾನೇ
ಮಾಡುವುದಿಲ್ಲ? 100% ತಮೋಪ್ರಧಾನರಾಗಿದ್ದಾರೆ, ಈಗ ನೀವು 100% ಸತೋಪ್ರಧಾನರಾಗುತ್ತಿದ್ದೀರಿ,
ಅದಕ್ಕಾಗಿ ತಂದೆ ಯುಕ್ತಿಯನ್ನು ತಿಳಿಸಿದ್ದಾರೆ - ನೆನಪಿನ ಯಾತ್ರೆ. ನೆನಪಿನಿಂದಲೇ ವಿಕರ್ಮಗಳು
ವಿನಾಶ ಆಗುತ್ತವೆ. ತಂದೆಯೊಂದಿಗೆ ಮಿಲನ ಮಾಡುತ್ತೀರಿ. ಭಗವಂತ ತಂದೆ ಹೇಗೆ ಬರುತ್ತಾರೆ
ಎನ್ನುವುದನ್ನು ನೀವೀಗ ತಿಳಿದುಕೊಂಡಿದ್ದೀರಿ. ತಂದೆಯು ಈ ರಥದಲ್ಲಿ ಬಂದಿದ್ದಾರೆ. ಬ್ರಹ್ಮಾರವರ
ಮೂಲಕ ತಿಳಿಸುತ್ತಾರೆ ಇದನ್ನು ನೀವು ಧಾರಣೆ ಮಾಡಿ ಅವರಿಗೆ ತಿಳಿಸಿದಾಗ ಅವರಿಗೆ ನಾವೂ ನೇರವಾಗಿ
ಕೇಳೋಣ, ತಂದೆಯ ಪರಿವಾರದಲ್ಲಿ ಹೋಗೋಣ ಎನ್ನುವ ಮನಸ್ಸಾಗುತ್ತದೆ. ಇಲ್ಲಿ ತಂದೆಯೂ ಇದ್ದಾರೆ, ತಾಯಿಯೂ
ಇದ್ದಾರೆ, ಮಕ್ಕಳೂ ಇದ್ದಾರೆ. ಪರಿವಾರದಲ್ಲಿ ಬಂದು ಬಿಡುತ್ತಾರೆ. ಅದಂತೂ ಆಸುರೀ ಪ್ರಪಂಚವಾಗಿದೆ
ಆದ್ದರಿಂದ ಆಸುರೀ ಪರಿವಾರದಿಂದ ನೀವು ಬೇಸತ್ತು ಹೋಗುತ್ತೀರಿ. ಆ ಕಾರಣ ಉದ್ಯೋಗ ವ್ಯವಹಾರ ಬಿಟ್ಟು
ತಂದೆಯ ಬಳಿ ರಿಫ್ರೆಶ್ ಆಗಲು ಬರುತ್ತೀರಿ. ಇಲ್ಲಿ ಬ್ರಾಹ್ಮಣರೇ ಇರುತ್ತಾರೆ. ಅದರಿಂದ ಈ
ಪರಿವಾರದಲ್ಲಿ ಬಂದು ಕುಳಿತುಕೊಳ್ಳುತ್ತೀರಿ. ಮನೆಗೆ ಹೋದಾಗ ಇಂತಹ ಪರಿವಾರವಿರುವುದಿಲ್ಲ. ಅಲ್ಲಿ
ದೇಹಧಾರಿಗಳಾಗಿ ಬಿಡುತ್ತಾರೆ. ವ್ಯಾಪಾರ ವ್ಯವಹಾರ ಜಂಜಾಟದಿಂದ ಬಿಡಿಸಿಕೊಂಡು ನೀವು ಇಲ್ಲಿಗೆ
ಬರುತ್ತೀರಿ. ಈಗ ತಂದೆ ತಿಳಿಸುತ್ತಾರೆ - ಮಕ್ಕಳೇ, ದೇಹದ ಎಲ್ಲಾ ಸಂಬಂಧಗಳನ್ನು ಬಿಡಿ. ನೀವೀಗ
ಸುಗಂಧ ಭರಿತ ಹೂಗಳಾಗಬೇಕಾಗಿದೆ. ಹೂಗಳಲ್ಲಿ ಸುಗಂಧವಿರುತ್ತದೆ. ಎಲ್ಲರೂ ಅದನ್ನು ತೆಗೆದುಕೊಂಡು
ಅದರ ಸುವಾಸನೆಯನ್ನು ನೋಡುತ್ತಾರೆ, ಎಕ್ಕದ ಹೂವನ್ನು ಯಾರೂ ತೆಗೆದುಕೊಳ್ಳುವುದಿಲ್ಲ, ಅಂದಾಗ
ಹೂಗಳಾಗಲು ಪುರುಷಾರ್ಥ ಮಾಡಬೇಕು. ಆದ್ದರಿಂದ ಬಾಬಾರವರೂ ಸಹ ಹೂಗಳನ್ನು ತೆಗೆದುಕೊಂಡು ಬರುತ್ತಾರೆ.
ಈ ಹೂವಿನ ಸಮಾನ ಆಗಬೇಕು. ಗೃಹಸ್ಥದಲ್ಲಿದ್ದು ಒಬ್ಬ ತಂದೆಯನ್ನು ನೆನಪು ಮಾಡಬೇಕು. ನಿಮಗೆ ಗೊತ್ತಿದೆ,
ಈ ದೇಹದ ಸಂಬಂಧಿಗಳಂತೂ ಸಮಾಪ್ತಿಯಾಗುವವರಾಗಿದ್ದಾರೆ. ನೀವಿಲ್ಲಿ ಗುಪ್ತ ಸಂಪಾದನೆ
ಮಾಡಿಕೊಳ್ಳುತ್ತಿರುವಿರಿ. ನೀವು ಶರೀರವನ್ನು ಬಿಡಬೇಕಾಗಿದೆ. ಸಂಪಾದನೆ ಮಾಡಿ ಬಹಳ ಖುಷಿಯಿಂದ
ಹರ್ಷಿತ ಮುಖರಾಗಿ ಶರೀರ ಬಿಡಬೇಕು. ನಡೆದಾಡುತ್ತಾ ತಿರುಗಾಡುತ್ತಲೂ ತಂದೆಯ ನೆನಪಿನಲ್ಲಿದ್ದರೆ
ನಿಮಗೆ ಎಂದೂ ಸುಸ್ತಾಗುವುದಿಲ್ಲ. ತಂದೆಯ ನೆನಪಿನಲ್ಲಿ ಅಶರೀರಿ ಆಗಿ ಎಷ್ಟೇ ಸುತ್ತಾಡಿದರೂ,
ಇಲ್ಲಿಂದ ಅಬು ರೋಡಿನವರೆಗೆ ನಡೆದುಕೊಂಡು ಹೋದರೂ ಸಹ ಸುಸ್ತಾಗುವುದಿಲ್ಲ. ಪಾಪಗಳು ತುಂಡಾಗುತ್ತವೆ.
ಹಗುರರಾಗಿ ಬಿಡುತ್ತೀರಿ. ನೀವು ಮಕ್ಕಳಿಗೆ ಏಷ್ಟು ಲಾಭವಿದೆ. ಇದನ್ನು ಮತ್ತ್ಯಾರೂ ತಿಳಿಯಲಾರರು.
ಇಡೀ ಪ್ರಪಂಚದ ಮನುಷ್ಯರು ಪತಿತ ಪಾವನ ತಂದೆಯೇ ಬಂದು ಪಾವನ ಮಾಡಿ ಎಂದು ಕರೆಯುತ್ತಾರೆ. ಅಂದಮೇಲೆ
ಅವರಿಗೆ ಮಹಾತ್ಮರೆಂದು ಹೇಗೆ ಹೇಳುತ್ತೀರಿ. ಹಾಗಿರುವಾಗ ಪತಿತರಿಗೆ ತಲೆ ಬಾಗುತ್ತಾರೇನು ಪಾವನರ
ಮುಂದೆಯೇ ತಲೆ ಬಾಗುತ್ತಾರೆ. ಕನ್ಯೆಯ ಉದಾಹರಣೆಯೂ ಇದೆ. ಯಾವಾಗ ಕನ್ಯೆಯು ವಿಕಾರಿಯಾಗುತ್ತಾಳೋ ಆಗ
ಎಲ್ಲರ ಮುಂದೆ ತಲೆ ಬಾಗುತ್ತಾಳೆ. ನಂತರ ಹೇ ಪತಿತ ಪಾವನ ಬನ್ನಿ ಎಂದು ಕೂಗುತ್ತಾಳೆ. ಅರೆ!
ಪತಿತರಾಗಿ ಪರಮಾತ್ಮನನ್ನು ಕರೆಯುವುದಾದರೂ ಎಕೆ! ಎಲ್ಲರ ಶರೀರಗಳು ವಿಕಾರದಿಂದಲೇ ರಚನೆಯಾಗಿವೆ.
ಏಕೆಂದರೆ ರಾವಣನ ರಾಜ್ಯವಿದೆ. ಈಗ ನೀವು ರಾವಣನಿಂದ ಬಿಡಿಸಿಕೊಂಡು ಬಂದಿದ್ದೀರಿ. ಇದಕ್ಕೆ
ಪುರುಷೋತ್ತಮ ಸಂಗಮಯುಗವೆಂದು ಹೇಳುತ್ತಾರೆ. ಈಗ ನೀವು ರಾಮ ರಾಜ್ಯಕ್ಕೆ ಹೋಗುವ ಪುರುಷಾರ್ಥ
ಮಾಡುತ್ತಿದ್ದೀರಿ. ಸತ್ಯಯುಗವು ರಾಮರಾಜ್ಯವಾಗಿದೆ. ತ್ರೇತಾಯುಗವನ್ನು ಮಾತ್ರ ರಾಮ ರಾಜ್ಯವೆಂದು
ಹೇಳುವುದಾದರೆ ಸೂರ್ಯವಂಶಿ ಲಕ್ಷ್ಮೀ ನಾರಾಯಣರ ರಾಜ್ಯ ಎಲ್ಲಿಗೆ ಹೋಯಿತು! ಈಗ ಈ ಎಲ್ಲ ಜ್ಞಾನ ನೀವು
ಮಕ್ಕಳಿಗೆ ಸಿಗುತ್ತಿದೆ. ಹೊಸ ಹೊಸ ಮಕ್ಕಳು ಬರುತ್ತಾರೆ ಅವರಿಗೆ ನೀವು ಜ್ಞಾನವನ್ನು ತಿಳಿಸುತ್ತೀರಿ,
ಯೋಗ್ಯರನ್ನಾಗಿ ಮಾಡುತ್ತೀರಿ ಕೆಲವರಿಗೆ ಈ ರೀತಿ ಸಂಗವು ಸಿಗುತ್ತದೆ, ಅದರಿಂದ ಯೋಗ್ಯರಾದವರೂ ಸಹ
ಯೋಗ್ಯತೆ ಕಳೆದುಕೊಳ್ಳುತ್ತಾರೆ. ತಂದೆಯು ಪಾವನರನ್ನಾಗಿ ಮಾಡುತ್ತಾರೆ. ಅಂದಾಗ ಈಗ ಪತಿತರಾಗಲೇಬಾರದು.
ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆ. ಮಾಯೆ ಎಷ್ಟು ಶಕ್ತಿಶಾಲಿ ಆಗಿದೆ, ಅದು ಪತಿತರನ್ನಾಗಿ
ಮಾಡುತ್ತದೆ. ಸೋಲಿಸಿ ಬಿಡುತ್ತದೆ. ಆಗ ಬಾಬಾ ರಕ್ಷಣೆ ಮಾಡಿ ಎಂದು ಕರೆಯುತ್ತಾರೆ. ವಾಹ! ಯುದ್ಧದ
ಮೈದಾನದಲ್ಲಿ ಅನೇಕರು ಸಾವನ್ನಪ್ಪುತ್ತಾರೆ ಅಂದಮೇಲೆ ರಕ್ಷಣೆ ಮಾಡಲಾಗುತ್ತದೆಯೇನು! ಈ ಮಾಯೆಯ ಗುಂಡು
ಬಂದೂಕಿನ ಗುಂಡಿಗಿಂತಲೂ ಗಟ್ಟಿಯಾಗಿದೆ. ಕಾಮದ ಪೆಟ್ಟನ್ನು ತಿಂದರೆ ಮೇಲಿಂದ ಬೀಳುತ್ತಾರೆ.
ಸತ್ಯಯುಗದಲ್ಲಿ ಎಲ್ಲರೂ ಪವಿತ್ರ, ಗೃಹಸ್ಥ ಧರ್ಮದವರಾಗಿರುತ್ತಾರೆ, ಅವರಿಗೆ ದೇವತೆಗಳೆಂದು
ಹೇಳುತ್ತಾರೆ. ಈಗ ನಿಮಗೆ ಗೊತ್ತಿದೆ, ತಂದೆಯು ಹೇಗೆ ಬಂದಿದ್ದಾರೆ, ಎಲ್ಲಿರುತ್ತಾರೆ, ಹೇಗೆ ಬಂದು
ರಾಜಯೋಗವನ್ನು ಕಲಿಸುತ್ತಾರೆ? ಅರ್ಜುನನ ರಥದಲ್ಲಿ ಕುಳಿತು ಜ್ಞಾನವನ್ನು ಕೊಟ್ಟರು ಎಂದು
ತಿಳಿಸುತ್ತಾರೆ. ಅಂದಮೇಲೆ ಅವರನ್ನು ಸರ್ವವ್ಯಾಪಿಯೆಂದು ಹೇಗೆ ಹೇಳುತ್ತಾರೆ? ಸ್ವರ್ಗ ಸ್ಥಾಪನೆ
ಮಾಡುವ ತಂದೆಯನ್ನೇ ಮರೆತಿದ್ದಾರೆ. ಈಗ ಸ್ವಯಂ ತಂದೆ ತಮ್ಮ ಪರಿಚಯ ಕೊಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಮಹಾನ್
ಆತ್ಮರಾಗುವುದಕ್ಕಾಗಿ ಯಾವ ಯಾವ ಅಪವಿತ್ರ ಕೆಟ್ಟ ಚಟಗಳಿವೆ ಅವುಗಳನ್ನು ಅಳಿಸಿ ಹಾಕಬೇಕು. ದುಃಖ
ಕೊಡುವುದು, ಹೊಡೆಯುವುದು, ಜಗಳಾಡುವುದು.... ಇದೆಲ್ಲವೂ ಅಪವಿತ್ರ ಕರ್ತವ್ಯವಾಗಿವೆ, ಯಾವುದನ್ನು
ನೀವು ಮಾಡಬಾರದು. ನಿಮಗೆ ನೀವು ರಾಜ ತಿಲಕವನ್ನು ಕೊಟ್ಟುಕೊಳ್ಳಲು ಅಧಿಕಾರಿಗಳನ್ನಾಗಿ
ಮಾಡಿಕೊಳ್ಳಬೇಕು.
2. ಬುದ್ಧಿಯನ್ನು ಎಲ್ಲ ಉದ್ಯೋಗ ವ್ಯವಾಹಾರಗಳ ಜಂಜಾಟದಿಂದ, ದೇಹಧಾರಿಗಳಿಂದ ತೆಗೆದು ಸುಗಂಧ ಭರಿತ
ಹೂಗಳಾಗಬೇಕು. ಗುಪ್ತ ಸಂಪಾದನೆ ಜಮಾ ಮಾಡಿಕೊಳ್ಳಲು ನಡೆಯುತ್ತಾ ತಿರುಗಾಡುತ್ತಾ ಅಶರೀರಿಯಾಗಿರುವ
ಅಭ್ಯಾಸ ಮಾಡಬೇಕು.
ವರದಾನ:
ಬೇಹದ್ದಿನ
ದೃಷ್ಠಿ, ವೃತ್ತಿ ಮತ್ತು ಸ್ಥಿತಿಯ ಮೂಲಕ ಸರ್ವರ ಪ್ರೀಯ ಆಗುವಂತಹ ಡಬ್ಬಲ್ ಲೈಟ್ ಫರಿಶ್ತಾ ಭವ.
ಫರಿಶ್ತೆಗಳು
ಎಲ್ಲರಿಗೂ ಪ್ರೀಯರೆನಿಸುತ್ತಾರೆ ಏಕೆಂದರೆ ಫರಿಶ್ತೆ ಎಲ್ಲರಿಗೂ ಬೇಕಾದವರಾಗಿರುತ್ತಾರೆ, ಒಬ್ಬರು
ಇಬ್ಬರಿಗಲ್ಲ. ಬೇಹದ್ದಿನ ದೃಷ್ಠಿ,ವೃತ್ತಿ ಮತ್ತು ಬೇಹದ್ದಿನ ಸ್ಥಿತಿಯುಳ್ಳ ಫರಿಶ್ತಾ ಸರ್ವ ಆತ್ಮರ
ಪ್ರತಿ ಪರಮಾತ್ಮನ ಸಂದೇಶವಾಹಕರಾಗಿದ್ದಾರೆ. ಫರಿಶ್ತಾ ಅಂದರೆ ಡಬ್ಬಲ್ ಲೈಟ್, ಸರ್ವರ ಸಂಬಂಧ ಒಬ್ಬ
ತಂದೆಯ ಜೊತೆ ಜೋಡಿಸುವಂತಹವರು, ದೇಹ ಮತ್ತು ದೇಹದ ಸಂಬಂಧದಿಂದ ನ್ಯಾರಾ, ಸ್ವಯಂ ಅನ್ನು ಮತ್ತು
ಸರ್ವರನ್ನು ತಮ್ಮ ಚಲನೆ ಮತ್ತು ಮುಖದ ಮೂಲಕ ತಂದೆ ಸಮಾನರನ್ನಾಗಿ ಮಾಡುವಂತಹ, ಸರ್ವರ ಪ್ರತಿ
ಕಲ್ಯಾಣಕಾರಿ. ಇಂತಹ ಫರಿಶ್ತೆಗಳೇ ಎಲ್ಲರಿಗೂ ಪ್ರೀಯರಾಗಿದ್ದಾರೆ.
ಸ್ಲೋಗನ್:
ಯಾವಾಗ ನಿಮ್ಮ
ಮುಖದಿಂದ ತಂದೆಯ ಚರಿತ್ರೆ ಕಂಡುಬರುವುದು, ಆಗ ಸಮಾಪ್ತಿಯಾಗುವುದು.