21.12.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಆತ್ಮರೂಪಿ ಬ್ಯಾಟರಿಯನ್ನು ಜ್ಞಾನ ಮತ್ತು ಯೋಗದಿಂದ ಸಂಪನ್ನ ಮಾಡಿಕೊಂಡು ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ, ನೀರಿನ ಸ್ನಾನದಿಂದಲ್ಲ”

ಪ್ರಶ್ನೆ:
ಈ ಸಮಯದಲ್ಲಿ ಎಲ್ಲಾ ಮನುಷ್ಯಾತ್ಮರನ್ನು ಅಲೆದಾಡಿಸುವವರು ಯಾರು? ಅವರು ಏಕೆ ಅಲೆದಾಡಿಸುತ್ತಾರೆ?

ಉತ್ತರ:
ಎಲ್ಲರನ್ನೂ ಅಲೆದಾಡಿಸುವವನು ರಾವಣನಾಗಿದ್ದಾನೆ, ಏಕೆಂದರೆ ರಾವಣನೂ ಸಹ ಅಲೆದಾಡುತ್ತಾನೆ. ರಾವಣನಿಗೆ ತನ್ನದೇ ಆದ ಯಾವುದೇ ಮನೆಯಿಲ್ಲ, ರಾವಣನನ್ನು ಯಾರೂ ತಂದೆಯೆಂದು ಹೇಳುವುದಿಲ್ಲ. ತಂದೆಯು ಮನೆಯಾದ ಪರಮಧಾಮದಿಂದ ತನ್ನ ಮಕ್ಕಳಿಗೆ ನೆಲೆಯನ್ನು ತೋರಿಸಲು ಬರುತ್ತಾರೆ. ಈಗ ನಿಮಗೆ ಮನೆಯ ದಾರಿಯು ತಿಳಿಯಿತು. ಆದ್ದರಿಂದ ನೀವು ಅಲೆದಾಡುವುದಿಲ್ಲ. ನೀವು ಹೇಳುತ್ತೀರಿ - ನಾವು ತಂದೆಯಿಂದ ಮೊಟ್ಟ ಮೊದಲಿಗೆ ಅಗಲಿದೆವು, ಈಗ ಮತ್ತೆ ಮೊಟ್ಟ ಮೊದಲಿಗೆ ನಾವೇ ಮನೆಗೆ ಹೋಗುತ್ತೇವೆ.

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಇಲ್ಲಿ ಕುಳಿತು ತಿಳಿದುಕೊಳ್ಳುತ್ತೀರಿ. ಇವರಲ್ಲಿ ಯಾವ ಶಿವ ತಂದೆಯು ಬಂದಿದ್ದಾರೆ. ಅವರು ಹೇಗಾದರೂ ಮಾಡಿ ನಮ್ಮನ್ನು ತನ್ನ ಜೊತೆ ಮನೆಗೆ ಅವಶ್ಯವಾಗಿ ಕರೆದುಕೊಂಡು ಹೋಗುತ್ತಾರೆ. ಅದು ಆತ್ಮಗಳ ಮನೆಯಾಗಿದೆ, ಆದ್ದರಿಂದ ಮಕ್ಕಳಿಗೆ ಬೇಹದ್ದಿನ ತಂದೆಯು ಬಂದು ನಮ್ಮನ್ನು ಸುಂದರರನ್ನಾಗಿ ಮಾಡುತ್ತಾರೆ ಎಂದು ಖುಷಿಯಾಗುತ್ತಿರಬಹುದು. ಯಾವುದೇ ವಸ್ತ್ರ ಇತ್ಯಾದಿಗಳನ್ನು ಕೊಡಿಸುವುದಿಲ್ಲ, ಇದಕ್ಕೆ ಯೋಗಬಲ, ನೆನಪಿನ ಬಲವೆಂದು ಕರೆಯಲಾಗುತ್ತದೆ. ಶಿಕ್ಷಕರ ಪದವಿ ಎಷ್ಟಿದೆಯೋ ಅಷ್ಟೇ ಪದವಿಯನ್ನು ಮಕ್ಕಳಿಗೂ ಕೊಡಿಸುತ್ತಾರೆ. ವಿದ್ಯೆಯಿಂದ ವಿದ್ಯಾರ್ಥಿಗಳು ನಾವು ಈ ರೀತಿಯಾಗುತ್ತೇವೆಂದು ತಿಳಿದುಕೊಂಡಿರುತ್ತಾರೆ. ನೀವೂ ಸಹ ತಿಳಿದುಕೊಳ್ಳುತ್ತೀರಿ - ನಮ್ಮ ತಂದೆಯು ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ಇದು ಹೊಸ ಮಾತಾಗಿದೆ. ನಮ್ಮ ತಂದೆಯು ಶಿಕ್ಷಕನಾಗಿದ್ದಾರೆ, ಅವರನ್ನು ನಾವು ನೆನಪು ಮಾಡುತ್ತೇವೆ. ಅವರು ನಮಗೆ ಕಲಿಸಿ ಶ್ರೇಷ್ಠರನ್ನಾಗಿ ಮಾಡುತ್ತಿದ್ದಾರೆ. ನಮ್ಮ ಬೇಹದ್ದಿನ ತಂದೆಯು ನಮ್ಮನ್ನು ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದಾರೆ. ರಾವಣನಿಗೆ ಯಾವುದೇ ಮನೆಯಿರುವುದಿಲ್ಲ, ಮನೆಯು ರಾಮನಿಗಿರುತ್ತದೆ. ಶಿವ ತಂದೆಯು ಎಲ್ಲಿರುತ್ತಾರೆ? ಪರಮಧಾಮದಲ್ಲಿರುತ್ತಾರೆಂದು ನೀವು ತಕ್ಷಣ ಹೇಳುತ್ತೀರಿ. ರಾವಣನಿಗೆ ತಂದೆಯೆಂದು ಹೇಳುವುದಿಲ್ಲ, ಅಂದಾಗ ರಾವಣನು ಎಲ್ಲಿರುತ್ತಾನೆ? ಗೊತ್ತಿಲ್ಲ. ರಾವಣನು ಪರಮಧಾಮದಲ್ಲಿರುತ್ತಾನೆಂದು ಹೇಳುವುದಿಲ್ಲ. ಅವನಿಗೆ ನೆಲೆಯೇ ಇಲ್ಲ, ಅಲೆದಾಡುತ್ತಿರುತ್ತಾನೆ ಮತ್ತೆ ನಿಮ್ಮನ್ನೂ ಅಲೆದಾಡಿಸುತ್ತಾನೆ. ನೀವು ರಾವಣನನ್ನು ನೆನಪು ಮಾಡುತ್ತೀರೇನು? ಇಲ್ಲ. ನಿಮ್ಮನ್ನು ಎಷ್ಟೊಂದು ಅಲೆದಾಡಿಸುತ್ತಾನೆ! ಶಾಸ್ತ್ರಗಳನ್ನು ಓದಿ, ಭಕ್ತಿ ಮಾಡಿ, ಇದನ್ನು ಮಾಡಿ ಅದನ್ನು ಮಾಡಿ ಎಂದು. ತಂದೆಯು ತಿಳಿಸುತ್ತಾರೆ - ಇದಕ್ಕೆ ಭಕ್ತಿಮಾರ್ಗ, ರಾವಣ ರಾಜ್ಯವೆಂದು ಹೇಳಲಾಗುತ್ತದೆ. ರಾಮ ರಾಜ್ಯವು ಬೇಕೆಂದು ಮಹಾತ್ಮ ಗಾಂಧೀಜಿಯೂ ಹೇಳುತ್ತಿದ್ದರು. ಈ ರಥದಲ್ಲಿ ನಮ್ಮ ಶಿವ ತಂದೆಯು ಬಂದಿದ್ದಾರೆ, ಅವರು ದೊಡ್ಡ ತಂದೆಯಾಗಿದ್ದಾರಲ್ಲವೆ. ಅವರು ಆತ್ಮಗಳೊಂದಿಗೆ ಮಕ್ಕಳೇ, ಮಕ್ಕಳೇ ಎಂದು ಮಾತನಾಡುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿ ಆತ್ಮಿಕ ತಂದೆಯಿದ್ದಾರೆ ಮತ್ತು ಆತ್ಮಿಕ ತಂದೆಯ ಬುದ್ಧಿಯಲ್ಲಿ ನೀವು ಆತ್ಮೀಯ ಮಕ್ಕಳಿದ್ದೀರಿ ಏಕೆಂದರೆ ನಮ್ಮ ಸಂಬಂಧವೇ ಮೂಲವತನದೊಂದಿಗಿದೆ. ಆತ್ಮಗಳು ಪರಮಾತ್ಮನಿಂದ ಬಹಳ ಕಾಲ ಅಗಲಿದ್ದರು...... ಪರಮಧಾಮದಲ್ಲಂತೂ ಆತ್ಮಗಳು ತಂದೆಯ ಜೊತೆ ಒಟ್ಟಿಗೆ ಇರುತ್ತೇವೆ. ನಂತರ ತಮ್ಮ-ತಮ್ಮ ಪಾತ್ರವನ್ನಭಿನಯಿಸಲು ಬೇರೆ-ಬೇರೆಯಾಗುತ್ತೇವೆ. ಬಹಳ ಕಾಲದ ಲೆಕ್ಕವು ಬೇಕಲ್ಲವೆ. ಆ ತಂದೆಯು ಕುಳಿತು ತಿಳಿಸುತ್ತಾರೆ, ನೀವೀಗ ವಿದ್ಯೆಯನ್ನು ಓದುತ್ತಿದ್ದೀರಿ. ನಿಮ್ಮಲ್ಲಿಯೂ ಸಹ ಒಳ್ಳೆಯ ರೀತಿಯಲ್ಲಿ ಓದುವವರು ನಂಬರ್ವಾರ್ ಇದ್ದಾರೆ. ಅವರೇ ಮೊಟ್ಟ ಮೊದಲಿಗೆ ನನ್ನಿಂದ ಅಗಲಿ ಹೋಗಿದ್ದಾರೆ. ಅವರೇ ಮತ್ತೆ ನಮ್ಮನ್ನು ಬಹಳ ನೆನಪು ಮಾಡುತ್ತಾರೆ, ಆದ್ದರಿಂದ ಮೊದಲಿಗೇ ನನ್ನ ಬಳಿ ಬಂದು ಬಿಡುತ್ತಾರೆ.

ತಂದೆಯು ಮಕ್ಕಳಿಗೆ ಇಡೀ ಸೃಷ್ಟಿಚಕ್ರದ ಗುಹ್ಯ ರಹಸ್ಯವನ್ನು ತಿಳಿಸುತ್ತಾರೆ. ಇದನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಇದನ್ನು ಬಹಳ ಗುಹ್ಯವೆಂದೂ ಹೇಳಲಾಗುತ್ತದೆ. ಈಗ ನೀವು ತಿಳಿದುಕೊಂಡಿದ್ದೀರಿ - ತಂದೆಯು ಮೇಲೆ ಕುಳಿತು ತಿಳಿಸುವುದಿಲ್ಲ. ಇಲ್ಲಿ ಬಂದೇ ತಿಳಿಸುತ್ತಾರೆ - ನಾನು ಈ ಕಲ್ಪವೃಕ್ಷದ ಬೀಜರೂಪನಾಗಿದ್ದೇನೆ, ಈ ಮನುಷ್ಯ ಸೃಷ್ಟಿರೂಪಿ ವೃಕ್ಷಕ್ಕೆ ಕಲ್ಪವೆಂದು ಹೇಳಲಾಗುವುದು. ಪ್ರಪಂಚದ ಮನುಷ್ಯರಂತೂ ಏನನ್ನೂ ಅರಿತುಕೊಂಡಿಲ್ಲ, ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ. ಆದ್ದರಿಂದ ಮತ್ತೆ ತಂದೆಯು ಬಂದು ಜಾಗೃತಗೊಳಿಸುತ್ತಾರೆ. ಈಗ ನೀವು ಮಕ್ಕಳನ್ನು ಜಾಗೃತ ಮಾಡಿದ್ದಾರೆ ಮತ್ತೆಲ್ಲರೂ ಮಲಗಿದ್ದಾರೆ. ನೀವೂ ಸಹ ಕುಂಭಕರ್ಣನ ಅಸುರೀ ನಿದ್ರೆಯಲ್ಲಿ ಮಲಗಿದ್ದಿರಿ, ತಂದೆಯೇ ಬಂದು ಮಕ್ಕಳೇ ಎದ್ದೇಳಿ, ನೀವು ಎಚ್ಚರವಿಲ್ಲದೆ ಮಲಗಿ ಬಿಟ್ಟಿದ್ದೀರಿ ಎಂದು ಜಾಗೃತ ಮಾಡಿದ್ದಾರೆ. ಇದಕ್ಕೆ ಅಜ್ಞಾನ ನಿದ್ರೆಯೆಂದು ಕರೆಯಲಾಗುತ್ತದೆ. ಆ ನಿದ್ರೆಯನ್ನಂತೂ ಎಲ್ಲರೂ ಮಾಡುತ್ತಾರೆ. ಸತ್ಯಯುಗದಲ್ಲಿಯೂ ಮಾಡುತ್ತಾರೆ. ಈಗ ಎಲ್ಲರೂ ಅಜ್ಞಾನ ನಿದ್ರೆಯಲ್ಲಿದ್ದಾರೆ, ತಂದೆಯು ಬಂದು ಜ್ಞಾನವನ್ನು ತಿಳಿಸಿ ಎಲ್ಲರನ್ನೂ ಏಳಿಸುತ್ತಾರೆ. ಈಗ ನೀವು ಜಾಗೃತರಾಗಿದ್ದೀರಿ, ನಮ್ಮ ತಂದೆಯು ಬಂದಿದ್ದಾರೆ, ನಮ್ಮನ್ನು ಕರೆದುಕೊಂಡು ಹೋಗುತ್ತಾರೆಂದು ನೀವು ತಿಳಿದುಕೊಂಡಿದ್ದೀರಿ. ಈಗಂತೂ ಈ ಶರೀರ ಮತ್ತು ಆತ್ಮ ಎರಡೂ ಕೆಲಸಕ್ಕೆ ಬರುವುದಿಲ್ಲ, ಎರಡೂ ಪತಿತವಾಗಿ ಬಿಟ್ಟಿದೆ. ಒಮ್ಮೆಲೆ ತುಕ್ಕು ಹಿಡಿದು ಬಿಟ್ಟಿದೆ. ಇದಕ್ಕೆ 9 ಕ್ಯಾರೇಟ್ ಎಂದಾದರೂ ಹೇಳಿ ಅರ್ಥಾತ್ ಬಹಳ ಕಡಿಮೆ ಮಟ್ಟದ ಚಿನ್ನವಾಗಿದೆ. ಅಪ್ಪಟ ಚಿನ್ನವು 24 ಕ್ಯಾರೇಟಿನದಾಗಿರುತ್ತದೆ. ಈಗ ತಂದೆಯು ನೀವು ಮಕ್ಕಳನ್ನು 24 ಕ್ಯಾರೇಟ್ನಲ್ಲಿ ತೆಗೆದುಕೊಂಡು ಹೋಗಲು ಇಚ್ಛಿಸುತ್ತಾರೆ. ಈಗ ನೀವಾತ್ಮಗಳನ್ನು ಸತ್ಯ-ಸತ್ಯವಾದ ಚಿನ್ನವನ್ನಾಗಿ ಮಾಡುತ್ತಾರೆ. ಭಾರತಕ್ಕೆ ಚಿನ್ನದ ಪಕ್ಷಿಯೆಂದು ಹೇಳುತ್ತಿದ್ದರು, ಈಗಂತೂ ಇದಕ್ಕೆ ಲೋಹದ ಕಲ್ಲು - ಮುಳ್ಳುಗಳ ಪಕ್ಷಿಯೆಂದು ಹೇಳುತ್ತಾರೆ. ಚೈತನ್ಯವಾಗಿಯಂತೂ ಇದೆಯಲ್ಲವೆ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಹೇಗೆ ಆತ್ಮವನ್ನು ತಿಳಿದುಕೊಳ್ಳುವಿರೋ ಹಾಗೆಯೇ ಪರಮ ಆತ್ಮವನ್ನು ತಿಳಿದುಕೊಳ್ಳುತ್ತೀರಿ. ಹೇಗೆ ಆತ್ಮವನ್ನು ಹೊಳೆಯುವ ನಕ್ಷತ್ರವೆಂದು ಹೇಳುತ್ತಾರೆ, ಬಹಳ ಸೂಕ್ಷ್ಮ ನಕ್ಷತ್ರವಾಗಿದೆ. ವೈದ್ಯರು ಮೊದಲಾದವರು ಇದನ್ನು ನೋಡಲು ಬಹಳ ಪ್ರಯತ್ನ ಪಟ್ಟಿದ್ದಾರೆ. ಆದರೆ ದಿವ್ಯ ದೃಷ್ಟಿಯಿಲ್ಲದೆ ನೋಡಲು ಸಾಧ್ಯವಿಲ್ಲ, ಬಹಳ ಸೂಕ್ಷ್ಮವಾಗಿದೆ. ಆತ್ಮವು ಕಣ್ಣುಗಳಿಂದ ಹೊರ ಹೋಯಿತು, ಬಾಯಿಯಿಂದ ಹೊರ ಹೋಯಿತೆಂದು ಕೆಲವರು ಹೇಳುತ್ತಾರೆ. ಆತ್ಮವು ಎಲ್ಲಿಗೆ ಹೋಗುತ್ತದೆ? ಇನ್ನೊಂದು ತನುವಿನಲ್ಲಿ ಹೋಗಿ ಪ್ರವೇಶ ಮಾಡುತ್ತದೆ. ಈಗ ನೀವಾತ್ಮಗಳು ಶಾಂತಿಧಾಮಕ್ಕೆ ಹೊರಟು ಹೋಗುವಿರಿ. ತಂದೆಯು ಬಂದು ಮನೆಗೆ ಕರೆದುಕೊಂಡು ಹೋಗುವರೆಂದು ನಿಮಗೆ ಪಕ್ಕಾ ತಿಳಿದಿದೆ. ಒಂದು ಕಡೆ ಕಲಿಯುಗವಿದೆ, ಇನ್ನೊಂದು ಕಡೆ ಸತ್ಯಯುಗವಿದೆ. ಈಗ ನಾವು ಸಂಗಮದಲ್ಲಿ ನಿಂತಿದ್ದೇವೆ. ವಿಚಿತ್ರವೇನೆಂದರೆ ಇಲ್ಲಿ ಕೋಟ್ಯಾಂತರ ಮನುಷ್ಯರಿದ್ದಾರೆ ಮತ್ತು ಸತ್ಯಯುಗದಲ್ಲಿ ಕೇವಲ 9 ಲಕ್ಷ ಜನಸಂಖ್ಯೆ ಮಾತ್ರ! ಅಂದಮೇಲೆ ಉಳಿದವರೆಲ್ಲರೂ ಏನಾದರು? ವಿನಾಶವಾಗಿ ಬಿಡುತ್ತದೆ. ತಂದೆಯು ಬರುವುದೇ ಹೊಸ ಪ್ರಪಂಚದ ಸ್ಥಾಪನೆ ಮಾಡಲು. ಬ್ರಹ್ಮನ ಮೂಲಕ ಸ್ಥಾಪನೆಯಾಗುತ್ತದೆ ಮತ್ತೆ ಪಾಲನೆಯೂ ಸಹ ಎರಡು ರೂಪಗಳಲ್ಲಾಗುತ್ತದೆ. ನಾಲ್ಕು ಭುಜಗಳುಳ್ಳ ಮನುಷ್ಯರು ಯಾರೂ ಇಲ್ಲ, ಹಾಗೆ ಇದ್ದರೆ ಶೋಭಿಸುವುದೂ ಇಲ್ಲ. ಮಕ್ಕಳಿಗೂ ಸಹ ತಿಳಿಸುತ್ತಾರೆ - ಚತುರ್ಭುಜವೆಂದರೆ ಶ್ರೀ ಲಕ್ಷ್ಮಿ-ಶ್ರೀ ನಾರಾಯಣರ ಕಂಬೈಂಡ್ ರೂಪವಾಗಿದೆ. ಶ್ರೀ ಎಂದರೆ ಶ್ರೇಷ್ಠ. ತ್ರೇತಾಯುಗದಲ್ಲಿ ಎರಡು ಕಲೆಗಳು ಕಡಿಮೆಯಾಗುತ್ತವೆ ಅಂದಾಗ ಮಕ್ಕಳಿಗೆ ಈ ಜ್ಞಾನವು ಈ ಸಮಯದಲ್ಲಿಯೇ ಸಿಗುತ್ತದೆ. ಆದ್ದರಿಂದ ಇದರ ಸ್ಮೃತಿಯಲ್ಲಿರಬೇಕಾಗುತ್ತದೆ. ಮುಖ್ಯವಾದುದು ಎರಡೇ ಶಬ್ಧಗಳಾಗಿವೆ - ತಂದೆಯನ್ನು ನೆನಪು ಮಾಡಿ. ಮತ್ತ್ಯಾರಿಗೂ ಇದು ಅರ್ಥವಾಗುವುದಿಲ್ಲ. ತಂದೆಯೇ ಪತಿತ-ಪಾವನ, ಸರ್ವಶಕ್ತಿವಂತನಾಗಿದ್ದಾರೆ. ತಂದೆಯೇ ನಮಗೆ ತಾವು ಇಡೀ ಆಕಾಶ, ಭೂಮಿ ಎಲ್ಲವನ್ನೂ ಕೊಟ್ಟಿರಿ. ತಾವು ಕೊಡದೇ ಇರುವಂತಹ ವಸ್ತುವೇ ಇಲ್ಲ. ಇಡೀ ವಿಶ್ವದ ರಾಜ್ಯವನ್ನು ಕೊಟ್ಟಿದ್ದೀರೆಂದು ಹಾಡುತ್ತಾರೆ.

ನೀವು ತಿಳಿದುಕೊಂಡಿದ್ದೀರಿ - ಈ ಲಕ್ಷ್ಮಿ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು, ಮತ್ತೆ ಈ ನಾಟಕದ ಚಕ್ರವು ಸುತ್ತುತ್ತದೆ. ಆದ್ದರಿಂದ ನಂಬರ್ವಾರ್ ಪುರುಷಾರ್ಥದನುಸಾರ ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ - ವಿಕಾರಿಗಳಿಂದ ನಿರ್ವಿಕಾರಿಗಳು, ನಿರ್ವಿಕಾರಿಗಳಿಂದ ವಿಕಾರಿಗಳು. ಈ 84 ಜನ್ಮಗಳ ಪಾತ್ರವನ್ನು ಲೆಕ್ಕವಿಲ್ಲದಷ್ಟು ಬಾರಿ ಅಭಿನಯಿಸಿದ್ದೀರಿ. ಅದನ್ನು ಎಣಿಕೆ ಮಾಡಲು ಸಾಧ್ಯವಿಲ್ಲ. ಭಲೆ ಜನಸಂಖ್ಯೆಯನ್ನು ಎಣಿಕೆ ಮಾಡುತ್ತಾರೆ ಆದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರು, ಸತೋಪ್ರಧಾನರಿಂದ ತಮೋಪ್ರಧಾನರು ಎಷ್ಟು ಬಾರಿ ಆಗಿದ್ದೀರೆಂದು ಎಣಿಕೆ ಮಾಡಲು ಸಾಧ್ಯವಿಲ್ಲ. ಇದು 5000 ವರ್ಷಗಳ ಚಕ್ರವೆಂದು ತಂದೆಯು ತಿಳಿಸುತ್ತಾರೆ. ಇದಂತೂ ಸರಿಯಾಗಿದೆ ಬಾಕಿ ಲಕ್ಷಾಂತರ ವರ್ಷಗಳ ಮಾತು ಆದರೆ ಯಾರಿಗೂ ನೆನಪಿರುವುದಕ್ಕೂ ಸಾಧ್ಯವಿಲ್ಲ. ಈಗ ನಿಮ್ಮಲ್ಲಿ ಗುಣಗಳ ಧಾರಣೆಯಾಗುತ್ತದೆ. ಜ್ಞಾನದ ಮೂರನೆಯ ನೇತ್ರವು ಸಿಗುತ್ತದೆ. ಈ ಸ್ಥೂಲ ಕಣ್ಣುಗಳಿಂದ ಹಳೆಯ ಪ್ರಪಂಚವನ್ನು ನೋಡುತ್ತೀರಿ, ಮೂರನೆಯ ನೇತ್ರದಿಂದ ಹೊಸ ಪ್ರಪಂಚವನ್ನು ನೋಡಬೇಕಾಗಿದೆ. ಈ ಪ್ರಪಂಚವಂತೂ ಏನೂ ಪ್ರಯೋಜನಕ್ಕಿಲ್ಲ, ಹಳೆಯ ಪ್ರಪಂಚವಾಗಿದೆ. ಹೊಸ ಮತ್ತು ಹಳೆಯ ಪ್ರಪಂಚದಲ್ಲಿ ಎಷ್ಟೊಂದು ವ್ಯತ್ಯಾಸವಿದೆ ನೋಡಿ! ನೀವು ತಿಳಿದುಕೊಂಡಿದ್ದೀರಿ - ನಾವೇ ಹೊಸ ಪ್ರಪಂಚದ ಮಾಲೀಕರಾಗಿದ್ದೆವು ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತರಾಗಿದ್ದೇವೆ. ನಾವು ಈ ರೀತಿ ಹೇಗಾಗುತ್ತೇವೆ ಎಂಬುದನ್ನು ಬಹಳ ಚೆನ್ನಾಗಿ ನೆನಪಿಡಬೇಕು ಮತ್ತು ಅನ್ಯರಿಗೂ ತಿಳಿಸಬೇಕಾಗಿದೆ. ಬ್ರಹ್ಮನಿಂದ ವಿಷ್ಣು ಮತ್ತು ವಿಷ್ಣುವಿನಿಂದ ಬ್ರಹ್ಮನಾಗುತ್ತಾರೆ. ಬ್ರಹ್ಮ ಮತ್ತು ವಿಷ್ಣುವಿನ ಅಂತರವನ್ನು ನೋಡುತ್ತೀರಲ್ಲವೆ. ವಿಷ್ಣುವು ಹೇಗೆ ಶೃಂಗರಿಸಲ್ಪಟ್ಟಿದ್ದಾರೆ ಮತ್ತು ಈ ಬ್ರಹ್ಮಾರವರು ಎಷ್ಟು ಸಾಧಾರಣ ರೂಪದಲ್ಲಿ ಕುಳಿತಿದ್ದಾರೆ ಎನ್ನುವುದು ನಿಮಗೆ ತಿಳಿದಿದೆ. ಈ ಬ್ರಹ್ಮನೇ ವಿಷ್ಣುವಾಗುವವರಿದ್ದಾರೆ, ಇದನ್ನು ಅನ್ಯರಿಗೆ ತಿಳಿಸುವುದು ಬಹಳ ಸಹಜವಾಗಿದೆ. ಬ್ರಹ್ಮಾ-ವಿಷ್ಣು-ಶಂಕರನ ನಡುವೆ ಇರುವ ಸಂಬಂಧವೇನು? ಈ ವಿಷ್ಣುವಿನ ಎರಡು ರೂಪಗಳು ಲಕ್ಷ್ಮಿ-ನಾರಾಯಣರಾಗಿದ್ದಾರೆ. ಇದೇ ವಿಷ್ಣು ದೇವತೆಯು ನಂತರ ಈ ಸಾಧಾರಣ ಮನುಷ್ಯ ಬ್ರಹ್ಮನಾಗುತ್ತಾರೆ. ವಿಷ್ಣು ಸತ್ಯಯುಗದಲ್ಲಿರುತ್ತಾರೆ. ಬ್ರಹ್ಮನು ಇಲ್ಲಿದ್ದಾರೆ. ತಂದೆಯು ತಿಳಿಸಿದ್ದಾರೆ - ಬ್ರಹ್ಮನಿಂದ ವಿಷ್ಣುವಾಗುವುದು ಸೆಕೆಂಡಿನಲ್ಲಿ ಆದರೆ ವಿಷ್ಣುವಿನಿಂದ ಬ್ರಹ್ಮನಾಗುವುದರಲ್ಲಿ 5000 ವರ್ಷಗಳು ಹಿಡಿಸುತ್ತವೆ, ತತ್ತ್ವಂ. ಬ್ರಹ್ಮನೊಬ್ಬರೇ ಹೀಗೆ ಮನುಷ್ಯರಿಂದ ದೇವತೆಯಾಗುವುದಿಲ್ಲ. ಈ ಮಾತುಗಳನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ, ಇಲ್ಲಿ ಮನುಷ್ಯ ಗುರುವಿನ ಮಾತಿಲ್ಲ. ಇವರಿಗೂ ಗುರು ಶಿವ ತಂದೆ ಮತ್ತು ನೀವು ಬ್ರಾಹ್ಮಣರಿಗೂ ಗುರು ಶಿವ ತಂದೆಯಾಗಿದ್ದಾರೆ. ಅವರಿಗೆ ಸತ್ಯ ಸದ್ಗುರುವೆಂದು ಹೇಳಲಾಗುತ್ತದೆ. ಆದ್ದರಿಂದ ಮಕ್ಕಳು ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಶಿವ ತಂದೆಯನ್ನು ನೆನಪು ಮಾಡಿ ಎಂದು ಯಾರಿಗಾದರೂ ತಿಳಿಸುವುದು ಬಹಳ ಸಹಜವಾಗಿದೆ. ಶಿವ ತಂದೆಯು ಸ್ವರ್ಗ, ಹೊಸ ಪ್ರಪಂಚವನ್ನು ರಚಿಸುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನು ಶಿವನಾಗಿದ್ದಾರೆ, ಅವರು ನಾವಾತ್ಮಗಳ ತಂದೆಯಾಗಿದ್ದಾರೆ. ಅಂದಾಗ ಭಗವಂತನು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ತಂದೆಯಾದ ನನ್ನನ್ನು ನೆನಪು ಮಾಡುವುದು ಎಷ್ಟು ಸಹಜವಾಗಿದೆ! ಮಗುವು ಜನಿಸುತ್ತದೆ ಮತ್ತು ತಕ್ಷಣ ಅಮ್ಮ, ಅಮ್ಮ ಎಂದು ಅದರ ಬಾಯಿಂದ ತಾನಾಗಿಯೇ ಬರುತ್ತದೆ. ತಂದೆ-ತಾಯಿಯ ವಿನಃ ಮತ್ತ್ಯಾರ ಬಳಿಯೂ ಹೋಗುವುದಿಲ್ಲ. ತಾಯಿ ಶರೀರ ಬಿಟ್ಟರೆ ಅದು ಬೇರೆ ಮಾತು. ಆದರೆ ಮೊದಲು ತಾಯಿ ನಂತರ ತಂದೆ ಅನಂತರ ಮಿತ್ರ ಸಂಬಂಧಿಗಳಿರುತ್ತಾರೆ.

ಈಗ ನಿಮಗೆ ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಸಹೋದರರಾಗಿದ್ದೀರಿ ಮತ್ತೆಲ್ಲಾ ಸಂಬಂಧಗಳು ರದ್ದು ಮಾಡುತ್ತಾರೆ. ಸಹೋದರ-ಸಹೋದರರೆಂದು ತಿಳಿದರೆ ಒಬ್ಬ ತಂದೆಯನ್ನು ನೆನಪು ಮಾಡುತ್ತೀರಿ. ತಂದೆಯೂ ಸಹ ಹೇಳುತ್ತಾರೆ - ಮಕ್ಕಳೇ, ತಂದೆಯಾದ ನನ್ನೊಬ್ಬನನ್ನೇ ನೆನಪು ಮಾಡಿ. ಎಷ್ಟು ದೊಡ್ಡ ಬೇಹದ್ದಿನ ತಂದೆಯಾಗಿದ್ದಾರೆ. ಆ ದೊಡ್ಡ ತಂದೆಯು ನಿಮಗೆ ಆಸ್ತಿಯನ್ನು ನೀಡಲು ಬಂದಿದ್ದಾರೆ. ಪದೇ-ಪದೇ ತಿಳಿಸುತ್ತಾರೆ - ಮನ್ಮನಾಭವ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದನ್ನು ಮರೆಯಬೇಡಿ. ದೇಹಾಭಿಮಾನದಲ್ಲಿ ಬರುವುದರಿಂದಲೇ ಮರೆತು ಹೋಗುತ್ತೀರಿ. ಮೊಟ್ಟ ಮೊದಲಿಗೆ ತಮ್ಮನ್ನು ಆತ್ಮನೆಂದು ತಿಳಿಯಬೇಕಾಗಿದೆ. ನಾವಾತ್ಮಗಳು ಸಾಲಿಗ್ರಾಮಗಳಾಗಿದ್ದೇವೆ ಮತ್ತು ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸಿದ್ದಾರೆ - ನಾನು ಪತಿತ-ಪಾವನನಾಗಿದ್ದೇನೆ, ನನ್ನನ್ನು ನೆನಪು ಮಾಡುವುದರಿಂದ ಖಾಲಿಯಾಗಿರುವ ನಿಮ್ಮ ಬ್ಯಾಟರಿಯು ಮತ್ತೆ ತುಂಬುವುದು, ನೀವು ಸತೋಪ್ರಧಾನರಾಗಿ ಬಿಡುತ್ತೀರಿ. ನೀರಿನ ಗಂಗೆಯಲ್ಲಂತೂ ಜನ್ಮ-ಜನ್ಮಾಂತರದಿಂದಲೂ ಮುಳುಗುತ್ತಾ ಬಂದಿದ್ದೀರಿ, ಆದರೆ ಪಾವನರಾಗಲಿಲ್ಲ. ನೀವು ಪತಿತ-ಪಾವನನಾಗಲು ಹೇಗೆ ಸಾಧ್ಯ? ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಈ ಸಮಯದಲ್ಲಿ ಪಾಪಾತ್ಮರ ಸುಳ್ಳು ಪ್ರಪಂಚವಾಗಿದೆ, ಕಾರ್ಯ ವ್ಯವಹಾರವೂ ಸಹ ಪಾಪಾತ್ಮರೊಂದಿಗೇ ಇದೆ. ಮನಸಾ-ವಾಚಾ-ಕರ್ಮಣಾ ಪಾಪಾತ್ಮರೇ ಆಗುತ್ತಾರೆ. ಈಗ ನೀವು ಮಕ್ಕಳಿಗೆ ತಿಳುವಳಿಕೆ ಸಿಕ್ಕಿದೆ. ನಾವು ಈ ಲಕ್ಷ್ಮಿ-ನಾರಾಯಣರಾಗಲು ಪುರುಷಾರ್ಥ ಮಾಡುತ್ತಿದ್ದೇವೆಂದು ನೀವು ಹೇಳುತ್ತೀರಿ. ಈಗ ನೀವು ಭಕ್ತಿ ಮಾಡುವುದು ನಿಂತು ಹೋಗಿದೆ. ಜ್ಞಾನದಿಂದ ಸದ್ಗತಿಯಾಗುತ್ತದೆ. ಈ ದೇವತೆಗಳು ಸದ್ಗತಿಯಲ್ಲಿದ್ದರಲ್ಲವೆ! ತಂದೆಯು ತಿಳಿಸಿದ್ದರಲ್ಲವೆ - ಇವರು (ಬ್ರಹ್ಮಾ) ಬಹಳ ಜನ್ಮಗಳ ಅಂತಿಮದಲ್ಲಿದ್ದಾರೆ, ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ! ನೀವು ಮಕ್ಕಳು ಎಷ್ಟೊಂದು ಪರಿಶ್ರಮ ಪಡುತ್ತೀರಿ, ಕಲ್ಪ-ಕಲ್ಪವೂ ಪಡುತ್ತೀರಿ. ಹಳೆಯ ಪ್ರಪಂಚವನ್ನು ಪರಿವರ್ತಿಸಿ ಹೊಸ ಪ್ರಪಂಚವನ್ನಾಗಿ ಮಾಡಬೇಕಾಗಿದೆ. ಭಗವಂತನು ಜಾದೂಗರ, ರತ್ನಾಗರ, ಸೌಧಾಗರನಾಗಿದ್ದಾನೆಂದು ಹೇಳುತ್ತಾರೆ, ಜಾದೂಗರನಂತೂ ಆಗಿದ್ದಾರಲ್ಲವೆ! ಹಳೆಯ ಪ್ರಪಂಚವನ್ನು ನರಕದಿಂದ ಪರಿವರ್ತನೆ ಮಾಡಿ ಸ್ವರ್ಗವನ್ನಾಗಿ ಮಾಡುತ್ತಾರೆ. ಎಷ್ಟೊಂದು ಚಮತ್ಕಾರವಾಗಿದೆ, ಈಗ ನೀವು ಸ್ವರ್ಗವಾಸಿಗಳಾಗುತ್ತಿದ್ದೀರಿ. ಈಗ ನೀವು ನರಕದ ನಿವಾಸಿಗಳಾಗಿದ್ದೇವೆಂದು ತಿಳಿದುಕೊಂಡಿದ್ದೀರಿ. ಸ್ವರ್ಗ ಮತ್ತು ನರಕ ಬೇರೆ-ಬೇರೆಯಾಗಿದೆ, 5000 ವರ್ಷಗಳ ಚಕ್ರವಾಗಿದೆ. ಲಕ್ಷಾಂತರ ವರ್ಷಗಳ ಮಾತಿಲ್ಲ, ಈ ಮಾತುಗಳನ್ನು ಮರೆಯಬಾರದು. ಯಾರೋ ಒಬ್ಬರು ಅವಶ್ಯವಾಗಿ ಪುನರ್ಜನ್ಮ ರಹಿತನಾಗಿದ್ದಾರೆಂದು ಭಗವಾನುವಾಚ ಇದೆಯಲ್ಲವೆ. ಕೃಷ್ಣನಿಗಂತೂ ಶರೀರವಿದೆ, ಶಿವನಿಗಿಲ್ಲ ಅಂದಮೇಲೆ ಅವರಿಗೆ ಮುಖವು ಅವಶ್ಯವಾಗಿ ಬೇಕು. ನಿಮಗೆ ತಿಳಿಸುವುದಕ್ಕಾಗಿ, ಬಂದು ಓದಿಸುತ್ತಾರಲ್ಲವೆ. ನಾಟಕದನುಸಾರ ಪೂರ್ಣ ಜ್ಞಾನವೇ ಅವರ ಬಳಿಯಿದೆ. ಅವರು ಇಡೀ ಕಲ್ಪದಲ್ಲಿ ಒಂದೇ ಬಾರಿ ದುಃಖಧಾಮವನ್ನು ಸುಖಧಾಮವನ್ನಾಗಿ ಮಾಡಲು ಬರುತ್ತಾರೆ. ಸುಖ-ಶಾಂತಿಯ ಆಸ್ತಿಯು ಅವಶ್ಯವಾಗಿ ತಂದೆಯಿಂದಲೇ ಸಿಕ್ಕಿದೆ, ಆದ್ದರಿಂದಲೇ ಮನುಷ್ಯರು ಬಯಸುತ್ತಾರೆ, ತಂದೆಯನ್ನು ನೆನಪು ಮಾಡುತ್ತಾರೆ.

ತಂದೆಯು ನೋಡಿ, ಜ್ಞಾನವನ್ನು ಎಷ್ಟು ಸಹಜ ರೀತಿಯಲ್ಲಿ ತಿಳಿಸುತ್ತಾರೆ. ಇಲ್ಲಿ ಕುಳಿತಿದ್ದರೂ ತಂದೆಯನ್ನು ನೆನಪು ಮಾಡಿ, ಚಕ್ರವನ್ನು ನೆನಪು ಮಾಡಿದರೂ ಸಹ ಮನ್ಮನಾಭವವೇ ಆಗಿದೆ. ತಂದೆಯು ಇದೆಲ್ಲಾ ಜ್ಞಾನವನ್ನು ಕೊಡುವವರಾಗಿದ್ದಾರೆ. ನಾವು ಬೇಹದ್ದಿನ ತಂದೆಯ ಬಳಿ ಹೋಗುತ್ತೇವೆ. ತಂದೆಯು ನಮಗೆ ಶಾಂತಿಧಾಮ, ಸುಖಧಾಮಕ್ಕೆ ಕರೆದುಕೊಂಡು ಹೋಗುವ ಮಾರ್ಗವನ್ನು ತಿಳಿಸುತ್ತಾರೆಂದು ನೀವು ಹೇಳುತ್ತೀರಿ. ಇಲ್ಲಿ ಕುಳಿತೇ ಮನೆಯನ್ನು ನೆನಪು ಮಾಡಬೇಕಾಗಿದೆ. ತಮ್ಮನ್ನು ಆತ್ಮವೆಂದು ತಿಳಿದು ತಂದೆ, ಮನೆ ಮತ್ತು ಹೊಸ ಪ್ರಪಂಚವನ್ನು ನೆನಪು ಮಾಡಬೇಕು. ಈ ಹಳೆಯ ಪ್ರಪಂಚವಂತೂ ಸಮಾಪ್ತಿಯಾಗಲೇಬೇಕಾಗಿದೆ. ಮುಂದೆ ಹೋದಂತೆ ನೀವು ವೈಕುಂಠವನ್ನೂ ಬಹಳ ನೆನಪು ಮಾಡುತ್ತೀರಿ. ಪದೇ-ಪದೇ ವೈಕುಂಠದಲ್ಲಿ ಹೋಗುತ್ತಿರುತ್ತೀರಿ. ಆರಂಭದಲ್ಲಿ ಮಕ್ಕಳು ಪದೇ-ಪದೇ ಪರಸ್ಪರ ಕುಳಿತು ವೈಕುಂಠದಲ್ಲಿ ಹೋಗುತ್ತಿದ್ದರು. ಇದನ್ನು ನೋಡಿ ದೊಡ್ಡ-ದೊಡ್ಡ ಮನೆಯವರು ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದರು. ಓಂ ನಿವಾಸ ಎಂದೇ ಹೆಸರನ್ನಿಡಲಾಗಿತ್ತು. ಎಷ್ಟು ಮಂದಿ ಮಕ್ಕಳು ಬಂದರು! ಮತ್ತೆ ಎಷ್ಟು ಏರುಪೇರುಗಳಾಯಿತು. ಮಕ್ಕಳಿಗೆ ಓದಿಸುತ್ತಿದ್ದೆವು, ತಾವಾಗಿಯೇ ಧ್ಯಾನದಲ್ಲಿ ಹೊರಟು ಹೋಗುತ್ತಿದ್ದರು. ಈಗ ಧ್ಯಾನ, ಸಾಕ್ಷಾತ್ಕಾರದ ಪಾತ್ರವನ್ನು ನಿಲ್ಲಿಸಿದ್ದೇವೆ. ಧ್ಯಾನದಿಂದ ಇಲ್ಲಿಯೂ ಸ್ಮಶಾನವನ್ನಾಗಿ ಮಾಡಿ ಬಿಡುತ್ತಿದ್ದರು. ಎಲ್ಲರನ್ನೂ ಮಲಗಿಸಿ ಬಿಡುತ್ತಿದ್ದರು. ಈಗ ಶಿವ ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಿದ್ದರು, ಆಗ ಅವರು ಧ್ಯಾನದಲ್ಲಿ ಹೊರಟು ಹೋಗುತ್ತಿದ್ದರು. ಈಗ ಮಕ್ಕಳೂ ಸಹ ಜಾದೂಗರರಾಗಿದ್ದೀರಿ, ಯಾರನ್ನೇ ನೋಡಿದರೂ ಸಹ ಅವರು ಧ್ಯಾನದಲ್ಲಿ ಹೊರಟು ಹೋಗುತ್ತಾರೆ. ಈ ಜಾದೂ ಎಷ್ಟು ಒಳ್ಳೆಯದಾಗಿದೆ! ನೌಧಾ ಭಕ್ತಿಯಲ್ಲಂತೂ ಅವರು ಪ್ರಾಣವನ್ನು ಕೊಡುವುದಕ್ಕೂ ತಯಾರಾಗುತ್ತಾರೆ. ಆದ್ದರಿಂದ ಆಗ ಅವರಿಗೆ ಸಾಕ್ಷಾತ್ಕಾರವಾಗುತ್ತದೆ. ಇಲ್ಲಂತೂ ಸ್ವಯಂ ತಂದೆಯೇ ಬಂದಿದ್ದಾರೆ, ನೀವು ಮಕ್ಕಳಿಗೆ ಓದಿಸಿ ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ. ಮುಂದೆ ಹೋದಂತೆ ನೀವು ಮಕ್ಕಳು ಬಹಳ ಸಾಕ್ಷಾತ್ಕಾರವನ್ನು ನೋಡುತ್ತಿರುತ್ತೀರಿ. ತಂದೆಯನ್ನು ಈಗಲೂ ಸಹ ಯಾರಾದರೂ ಕೇಳಿದರೆ ತಂದೆಯು ಯಾರು ಗುಲಾಬಿ ಹೂಗಳಾಗಿದ್ದಾರೆ, ಯಾರು ಮಲ್ಲಿಗೆ, ಯಾರು ಸಂಪಿಗೆಯಾಗಿದ್ದಾರೆ ಎಂಬುದನ್ನು ತಿಳಿಸುತ್ತಾರೆ. ಕೆಲವರು ಎಕ್ಕದ ಹೂಗಳೂ ಇರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

 
ಧಾರಣೆಗಾಗಿ ಮುಖ್ಯಸಾರ-
1. ದೇಹದ ಎಲ್ಲಾ ಸಂಬಂಧಗಳನ್ನು ರದ್ದುಗೊಳಿಸಿ ಆತ್ಮವು ಸಹೋದರ-ಸಹೋದರನಾಗಿದೆ ಎಂಬ ನಿಶ್ಚಯ ಮಾಡಿಕೊಳ್ಳಬೇಕು ಮತ್ತು ತಂದೆಯನ್ನು ನೆನಪು ಮಾಡಿ ಪೂರ್ಣ ಆಸ್ತಿಗೆ ಅಧಿಕಾರಿಗಳಾಗಬೇಕಾಗಿದೆ.

2. ಈಗ ಪಾಪಾತ್ಮರ ಜೊತೆ ಕಾರ್ಯ ವ್ಯವಹಾರ ಮಾಡಬಾರದಾಗಿದೆ. ಅಜ್ಞಾನ ನಿದ್ರೆಯಿಂದ ಎಲ್ಲರನ್ನೂ ಜಾಗೃತಗೊಳಿಸಬೇಕು, ಶಾಂತಿಧಾಮ-ಸುಖಧಾಮಕ್ಕೆ ಹೋಗುವ ಮಾರ್ಗವನ್ನು ತಿಳಿಸಬೇಕಾಗಿದೆ.

ವರದಾನ:
ಕಮಲ ಪುಷ್ಪದ ಚಿನ್ಹೆ (ಸಿಂಬಲ್) ಬುದ್ಧಿಯಲ್ಲಿಟ್ಟು, ತಮ್ಮನ್ನು ಮಾದರಿ(ಸ್ಯಾಂಪಲ್) ಎಂದು ತಿಳಿಯುವಂತಹ ನ್ಯಾರಾ ಮತ್ತು ಪ್ಯಾರಾ ಭವ.

ಪ್ರವೃತ್ತಿಯಲ್ಲಿರುವವರ ಚಿನ್ಹೆಯಾಗಿದೆ “ಕಮಲದ ಹೂ”. ಅಂದರೆ ಕಮಲ ಆಗಿ ನಂತರ ಜಾರಿಯಲ್ಲಿ ತನ್ನಿ. ಒಂದುವೇಳೆ ಜಾರಿಯಲ್ಲಿ ತರದೇ ಹೋದರೆ ಕಮಲ ಆಗಲು ಸಾಧ್ಯವಿಲ್ಲ. ಆದ್ದರಿಂದ ಕಮಲದ ಹೂವಿನ ಚಿನ್ಹೆಯನ್ನು ಬುದ್ಧಿಯಲ್ಲಿಟ್ಟು ಸ್ವಯಂಗೆ ಮಾದರಿ ಎಂದು ತಿಳಿದು ನಡೆಯಿರಿ. ಸೇವೆ ಮಾಡುತ್ತಾ ನ್ಯಾರಾ ಮತ್ತು ಪ್ಯಾರಾ ಆಗಿ. ಕೇವಲ ಪ್ಯಾರಾ ಆಗಬಾರದು, ಆದರೆ ನ್ಯಾರೆ ಆಗಿ ಪ್ಯಾರಾ ಆಗಬೇಕು. ಏಕೆಂದರೆ ಒಮ್ಮೊಮ್ಮೆ ಪ್ಯಾರಾ (ಪ್ರೀತಿ) ಸೆಳೆತದ ರೂಪದಲ್ಲಿ ಬದಲಾವಣೆಯಾಗಿ ಬಿಡುತ್ತದೆ, ಆದ್ದರಿಂದ ಯಾವುದೇ ಸೇವೆ ಮಾಡುತ್ತಾ ನ್ಯಾರೆ ಮತ್ತು ಪ್ಯಾರೆ ಆಗಿ.

ಸ್ಲೋಗನ್:
ಸ್ನೇಹದ ಛತ್ರಛಾಯೆಯ ಒಳಗೆ ಮಾಯೆ ಬರಲು ಸಾಧ್ಯವಿಲ್ಲ.