25.01.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಹೇಗೆ
ತಂದೆಯು ತಮ್ಮನ್ನು ಶೃಂಗಾರ ಮಾಡುತ್ತಾರೆಯೋ ಹಾಗೆಯೇ ನೀವು ಅನ್ಯರ ಶೃಂಗಾರ ಮಾಡಬೇಕು. ಇಡೀ ದಿನ
ಸರ್ವೀಸ್ ಮಾಡಿ. ಯಾರೇ ಬಂದರು ಅವರಿಗೂ ತಿಳಿಸಿ, ಚಿಂತೆಯ ಯಾವುದೇ ಮಾತಿಲ್ಲ”
ಪ್ರಶ್ನೆ:
ಈ ಜ್ಞಾನವನ್ನು
ಕೋಟಿಯಲ್ಲಿ ಕೆಲವರೇ ತಿಳಿಯುತ್ತಾರೆ ಹಾಗೂ ಧಾರಣೆ ಮಾಡಿಕೊಳ್ಳುತ್ತಾರೆ - ಈ ರೀತಿ ಏಕೆ?
ಉತ್ತರ:
ಏಕೆಂದರೆ
ತಾವೆಲ್ಲರೂ ಹೊಸ ಮಾತುಗಳನ್ನು ಹೇಳುತ್ತೀರಿ. ಪರಮಾತ್ಮನು ಬಿಂದು ರೂಪವಾಗಿದ್ದಾರೆ ಎಂದು ತಾವು
ಹೇಳುತ್ತೀರಿ. ಕೇಳಿ ತಬ್ಬಿಬ್ಬಾಗುತ್ತಾರೆ. ಶಾಸ್ತ್ರಗಳಲ್ಲಿ ಈ ಎಲ್ಲಾ ಮಾತುಗಳನ್ನು ಕೇಳಿಯೇ ಇಲ್ಲ.
ಇಷ್ಟು ಸಮಯ ಯಾವ ಭಕ್ತಿಯನ್ನು ಮಾಡಿದ್ದಾರೆಯೋ ಅದು ಸೆಳೆಯುತ್ತದೆ ಆದ್ದರಿಂದ ಬೇಗ ಅರ್ಥ
ಮಾಡಿಕೊಳ್ಳುವುದಿಲ್ಲ. ಕೆಲವರಂತೂ ಅಂಥಹ ಪತಂಗಗಳೂ ಸಹ ಬರುತ್ತಾರೆ, ಅವರು ಹೇಳುತ್ತಾರೆ - ಬಾಬಾ,
ನಾವಂತೂ ವಿಶ್ವದ ಮಾಲೀಕರಾಗುತ್ತೇವೆ. ಇಂತಹ ತಂದೆಯು ಸಿಕ್ಕಿದ್ದಾರೆ. ನಾವು ಬಿಡಲು ಹೇಗೆ ಸಾಧ್ಯ!
ಎಲ್ಲವನ್ನೂ ಅರ್ಪಣೆ ಮಾಡಿ ಉತ್ಸಾಹ ಬರುತ್ತದೆ.
ಗೀತೆ:
ದೂರ
ದೇಶದಲ್ಲಿರುವಂತಹವರು ಪರದೇಶದಲ್ಲಿ ಬಂದಿದ್ದಾರೆ..............
ಓಂ ಶಾಂತಿ.
ಮಧುರಾತಿ ಮಧುರ
ಮಕ್ಕಳು ನಾವು ಪ್ರಯಾಣಿಕರಾಗಿದ್ದೇವೆ ಎಂದು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇದು ನಮ್ಮ ದೇಶವಲ್ಲ,
ಇದು ಬೇಹದ್ದಿನ ನಾಟಕವು ಬಹಳ ದೊಡ್ಡ ನಾಟಕವಾಗಿದೆ. ಎಷ್ಟೊಂದು ದೀಪಗಳಿವೆ, ಇವು ಬೆಳಗುತ್ತಲೇ
ಇರುತ್ತದೆ. ಆತ್ಮಕ್ಕೆ ಗೊತ್ತಿದೆ - ನಾವೆಲ್ಲರೂ ಪಾತ್ರಧಾರಿಗಳು, ನಂಬರ್ವಾರ್ ತಮ್ಮ
ಪಾತ್ರದನುಸಾರವಾಗಿ ಸಮಯದಲ್ಲಿ ಬರುತ್ತೇವೆ, ಇಲ್ಲಿ ಪಾತ್ರವನ್ನಭಿನಯಿಸುತ್ತೇವೆ. ಮೊಟ್ಟ ಮೊದಲು
ತಾವು ಮನೆಗೆ ಹೋಗಿ ನಂತರ ಇಲ್ಲಿಗೆ ಬರುತ್ತೀರಿ. ಇದನ್ನು ಚೆನ್ನಾಗಿ ತಿಳಿದು ಮತ್ತು ಧಾರಣೆ
ಮಾಡಿಕೊಳ್ಳುವ ವಿಚಾರವಾಗಿದೆ. ನಾಟಕದ ಪಾತ್ರಧಾರಿಗಳಾಗಿರುತ್ತಾರೆ, ಒಂದು ವೇಳೆ ಪರಸ್ಪರರಲ್ಲಿ
ಕರ್ತವ್ಯವನ್ನು ತಿಳಿಯದಿದ್ದರೆ ಅವರಿಗೆ ಏನೆಂದು ಹೇಳಬಹುದು? ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು
ತಿಳಿಯುವುದರಿಂದ ತಾವು ಇಂತಹವರಾಗುತ್ತೀರಿ. ಈ ವಿದ್ಯೆಯು ಎಲ್ಲದಕ್ಕಿಂತ ಭಿನ್ನವಾಗಿದೆ, ತಂದೆಯು
ಬೀಜರೂಪ, ಜ್ಞಾನಪೂರ್ಣರಾಗಿದ್ದಾರೆ. ಹೇಗೆ ಆ ಸಾಧಾರಣ ಬೀಜ ಹಾಗೂ ವೃಕ್ಷವಿರುತ್ತದೆ ಅದನ್ನಂತೂ
ತಿಳಿದುಕೊಂಡಿದ್ದೀರಲ್ಲವೆ. ಮೊಟ್ಟ ಮೊದಲು ಚಿಕ್ಕ-ಚಿಕ್ಕ ಎಲೆಗಳು ಬರುತ್ತವೆ ನಂತರ
ದೊಡ್ಡದಾಗುತ್ತಾ-ಆಗುತ್ತಾ ಎಷ್ಟೊಂದು ವೃದ್ಧಿಯಾಗುತ್ತದೆ, ಎಷ್ಟೊಂದು ಸಮಯ ಹಿಡಿಸುತ್ತದೆ. ನಿಮ್ಮ
ಬುದ್ಧಿಯಲ್ಲಿ ಈ ಜ್ಞಾನವಿದೆ, ತಂದೆಯಂತೂ ಒಮ್ಮೆ ಮಾತ್ರವೇ ಬರುತ್ತಾರೆ. ಮಧುರಾತಿ ಮಧುರ ಮಕ್ಕಳೇ -
ಇದು ಅನಾದಿ-ಅವಿನಾಶಿ ಡ್ರಾಮಾ ಆಗಿದೆ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ, ಸ್ವರ್ಗದ
ಸ್ಥಾಪನೆಯನ್ನು ಮಾಡಲು ತಂದೆಯು ಬರುತ್ತಾರೆ. ಗಾಯನವೂ ಸಹ ಇದೆ - ದೂರ ದೇಶದಲ್ಲಿ ಇರುವವರು..... ಈ
ರಾಜ್ಯವು ಪರ ರಾಜ್ಯವಾಗಿದೆ. ರಾವಣ ರಾಜ್ಯದಲ್ಲಿ ರಾಮ ಬರಬೇಕಾಗುತ್ತದೆ. ನಿಮ್ಮ ಬುದ್ಧಿಯಲ್ಲಿಯೇ
ಜ್ಞಾನವಿದೆ. ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಪ್ರಯಾಣಿಕರಾಗಿದ್ದೀರಿ, ಪಾತ್ರವನ್ನಭಿನಯಿಸಲು
ಒಟ್ಟಿಗೆ ಬರುವುದಿಲ್ಲ. ಮೊದಲು ದೇವತೆಗಳಿರುತ್ತಾರೆ, ಆ ಸಮಯದಲ್ಲಿ ಬೇರೆ ಯಾರೂ ಇರುವುದಿಲ್ಲ
ಎಂಬುದು ನಿಮಗೆ ಗೊತ್ತಿದೆ. ಮೊದಲು ಕಡಿಮೆಯಿರುತ್ತಾರೆ ನಂತರ ವೃದ್ಧಿಯಾಗುತ್ತದೆ. ತಾವಾತ್ಮರು
ಶರೀರವನ್ನು ಬಿಟ್ಟು ಎಲ್ಲರೂ ಅಲ್ಲಿಗೆ ಬರುತ್ತೀರಿ. ಈ ತಿಳುವಳಿಕೆಯನ್ನು ತಂದೆಯೇ ಕೊಡುತ್ತಾರೆ.
ತಾವಾತ್ಮಗಳಿಗೆ ಈಗ ಜ್ಞಾನವು ಸಿಕ್ಕಿದೆ, ನಾವು ಬೀಜ ಹಾಗೂ ವೃಕ್ಷದ ಆದಿ-ಮಧ್ಯ-ಅಂತ್ಯವನ್ನು
ತಿಳಿದುಕೊಂಡಿದ್ದೇವೆ. ಬೀಜವು ಮೇಲಿದೆ, ಕೆಳಗಡೆ ವೃಕ್ಷವು ಹರಡಿದೆ. ಈಗ ವೃಕ್ಷವು ಪೂರ್ಣ
ಟೊಳ್ಳಾಗಿದೆ, ತಾವು ಮಕ್ಕಳು ಈ ವೃಕ್ಷದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಮೊದಲು ಋಷಿ
ಮುನಿಗಳನ್ನು ರಚನೆಯ ಹಾಗೂ ರಚಯಿತನ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಾ ಎಂದರೆ
ಗೊತ್ತಿಲ್ಲ, ಗೊತ್ತಿಲ್ಲವೆಂದು ಹೇಳುತ್ತಿದ್ದರು. ಯಾವಾಗ ಅವರಿಗೇ ಗೊತ್ತಿಲ್ಲವೆಂದ ಮೇಲೆ
ಪರಂಪರೆಯಿಂದ ಇರಲು ಹೇಗೆ ಸಾಧ್ಯ. ಈ ಎಲ್ಲಾ ಮಾತುಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕು.
ವಿದ್ಯೆಯನ್ನಂತೂ ಓದಲೇಬೇಕು. ವಿದ್ಯೆ ಹಾಗೂ ಯೋಗ ಬಲದಿಂದಲೇ ತಾವು ಪದವಿಯನ್ನು ಪಡೆಯುತ್ತೀರಿ.
ಪವಿತ್ರರೂ ಆಗಲೇಬೇಕಾಗಿದೆ. ಪವಿತ್ರರನ್ನಾಗಿ ತಂದೆಯ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ.
ವಿನಾಶಿ ಧನವನ್ನು ದಾನ ಮಾಡಿದರೆ ರಾಜರ ಮನೆತನದಲ್ಲಿ ಅಥವಾ ಒಳ್ಳೆಯ ಕುಲದಲ್ಲಿ ಜನ್ಮ ಪಡೆಯುತ್ತೀರಿ.
ತಾವು ಮಕ್ಕಳಿಗೆ ಬಹಳ ದೊಡ್ಡ ಮನೆಯಲ್ಲಿ ಜನ್ಮ ಸಿಗುತ್ತದೆ. ಹೊಸ ಪ್ರಪಂಚವಂತೂ ಬಹಳ
ಚಿಕ್ಕದಾಗಿರುತ್ತದೆ. ಸತ್ಯಯುಗದಲ್ಲಿ ದೇವತೆಗಳದು ಒಂದು ಹಳ್ಳಿಯ ರೀತಿಯಿರುತ್ತದೆ. ಪ್ರಾರಂಭದಲ್ಲಿ
ಬಾಂಬೆಯು ಎಷ್ಟು ಚಿಕ್ಕದಾಗಿತ್ತು, ಈಗ ನೋಡಿ ಎಷ್ಟೊಂದು ವೃದ್ಧಿಯಾಗಿದೆ. ಆತ್ಮರೆಲ್ಲರೂ ತಮ್ಮ
ಪಾತ್ರವನ್ನಭಿನಯಿಸುತ್ತಾರೆ, ಎಲ್ಲರೂ ಪ್ರಯಾಣಿಕರಾಗಿದ್ದಾರೆ. ತಂದೆಯು ಒಂದು ಬಾರಿ ಮಾತ್ರ
ಪ್ರಯಾಣಿಕರಾಗಿದ್ದಾರೆ. ನೀವೂ ಸಹ ಒಂದು ಬಾರಿಯ ಪ್ರಯಾಣಿಕರಾಗಿದ್ದೀರಿ, ತಾವೂ ಒಮ್ಮೆ ಮಾತ್ರ
ಬರುತ್ತೀರಿ. ಮತ್ತೆ ಪುನರ್ ಜನ್ಮವನ್ನು ಪಡೆಯುತ್ತಾ-ಪಡೆಯುತ್ತಾ ಪಾತ್ರವನ್ನಭಿನಯಿಸುತ್ತಲೇ
ಇರುತ್ತೀರಿ. ಈಗ ತಾವು ಅಮರಲೋಕಕ್ಕೆ ಹೋಗಲು ಅಮರ ಕಥೆಯನ್ನು ಕೇಳುತ್ತೀರಿ. ಇದರಿಂದ 21 ಜನ್ಮಗಳು
ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. 21 ಪೀಳಿಗೆ ಎನ್ನುತ್ತಾರಲ್ಲವೆ. ಪೀಳಿಗೆ ಎಂದರೆ
ವೃದ್ಧಾಪ್ಯದ ತನಕವಾಗಿದೆ. ಇನ್ನೊಂದು ಶರೀರವು ತಾನಾಗಿಯೇ ಸಿಗುತ್ತದೆ. ಅಕಾಲ ಮೃತ್ಯುವಿರುವುದಿಲ್ಲ,
ಅದು ಅಮರಲೋಕವಾಗಿದೆ. ಮೃತ್ಯುವಿನ ಹೆಸರಿಲ್ಲ. ಇದ್ದಕ್ಕಿಂದತೆ ಮೃತ್ಯುವಾಗುವುದಿಲ್ಲ. ತಾವು ಒಂದು
ಶರೀರವನ್ನು ಬಿಟ್ಟು ಇನ್ನೊಂದನ್ನು ಪಡೆಯುತ್ತೀರಿ. ದುಃಖದ ಯಾವುದೇ ಮಾತಿಲ್ಲ. ಹಾವಿಗೆ
ದುಃಖವಾಗುತ್ತದೆಯೇನು? ಇನ್ನಷ್ಟು ಖುಷಿಯಾಗುತ್ತದೆ. ಈಗ ತಮಗೆ ಆತ್ಮದ ಜ್ಞಾನವು ಸಿಕ್ಕಿದೆ, ಆತ್ಮವೇ
ಎಲ್ಲವನ್ನೂ ಮಾಡುತ್ತದೆ. ಆತ್ಮದಲ್ಲಿಯೇ ಬುದ್ಧಿಯೂ ಇದೆ, ಶರೀರವಂತೂ ಸಂಪೂರ್ಣ ಬೇರೆಯಾಗಿದೆ.
ಅದರಲ್ಲಿ ಆತ್ಮವು ಇರದಿದ್ದರೆ ಶರೀರವು ನಡೆಯಲು ಸಾಧ್ಯವಿಲ್ಲ. ಶರೀರವು ಹೇಗಾಗುತ್ತದೆ, ಆತ್ಮವು
ಹೇಗೆ ಪ್ರವೇಶ ಮಾಡುತ್ತದೆ, ಪ್ರತಿಯೊಂದು ವಸ್ತುವೂ ಅದ್ಭುತವಾಗಿದೆ. ತಂದೆಯು ತಿಳಿಸುತ್ತಾರೆ -
ಮಧುರಾತಿ ಮಧುರ ಮಕ್ಕಳೇ, ತಮ್ಮ ಸ್ವರ್ಗವು ಅದ್ಭುತ ಪ್ರಪಂಚವಾಗಿದೆ. ರಾವಣ ರಾಜ್ಯದಲ್ಲಿ 7
ಅದ್ಭುತಗಳನ್ನು ತೋರಿಸುತ್ತಾರೆ, ರಾಮ ರಾಜ್ಯದಲ್ಲಿ ತಂದೆಯ ಒಂದೇ ಜಗತ್ತು ಸ್ವರ್ಗವಾಗಿದೆ, ಅದು
ಅರ್ಧಕಲ್ಪ ಖಾಯಂ ಆಗಿರುತ್ತದೆ. ಮನುಷ್ಯರಂತೂ ನೋಡಿಯೇ ಇಲ್ಲ. ಆದರೂ ಎಲ್ಲರ ಮುಖದಿಂದ ಸ್ವರ್ಗ ಎಂಬ
ಹೆಸರು ಬರುತ್ತದೆ. ಈಗ ತಾವು ಬುದ್ಧಿಯಿಂದ ತಿಳಿದುಕೊಂಡಿದ್ದೀರಿ, ಕೆಲವರು ಸಾಕ್ಷಾತ್ಕಾರವನ್ನು
ಮಾಡಿದ್ದಾರೆ. ತಂದೆಯೂ ಸಹ ವಿನಾಶ ಹಾಗೂ ತಮ್ಮ ರಾಜಧಾನಿಯನ್ನು ನೋಡಿದ್ದಾರೆ. ಅರ್ಜುನನಿಗೂ ಸಹ
ಸಾಕ್ಷಾತ್ಕಾರದಲ್ಲಿ ತೋರಿಸಿದ್ದಾರೆ. ಈಗ ಅವಶ್ಯವಾಗಿ ಇದು ಗೀತಾ ಎಪಿಸೋಡ್ ಆಗಿದೆ. ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಇದು ಪುರುಷೋತ್ತಮ ಸಂಗಮಯುಗವಾಗಿದೆ, ಇಲ್ಲಿಯೇ ನಾನು ಬಂದು ಮಕ್ಕಳಿಗೆ
ರಾಜಯೋಗವನ್ನು ಕಲಿಸುತ್ತೇನೆ ಮತ್ತು ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತೇನೆ. ಜಗತ್ತಿನಲ್ಲಿ
ಮನುಷ್ಯರು ಈ ಮಾತುಗಳನ್ನು ತಿಳಿದುಕೊಂಡೇ ಇಲ್ಲ. ತಾವು ಬಹಳ ಆನಂದದಲ್ಲಿರುತ್ತೀರಿ, ಇಲ್ಲಿ
ಮನುಷ್ಯರು ಶರೀರ ಬಿಟ್ಟರೆ ದೀಪ ಹಚ್ಚುತ್ತಾರೆ ಏಕೆಂದರೆ ಆತ್ಮವು ಅಂಧಕಾರದಲ್ಲಿ ಹೋಗಬಾರದು ಎಂದು.
ಸತ್ಯಯುಗದಲ್ಲಿ ಈ ಮಾತುಗಳು ಇರುವುದಿಲ್ಲ. ಅಲ್ಲಿ ಎಲ್ಲರ ಆತ್ಮರ ದೀಪವು ಬೆಳಗಿರುತ್ತದೆ.
ಮನೆ-ಮನೆಯಲ್ಲಿ ಬೆಳಕಿರುತ್ತದೆ. ಇಲ್ಲಿ ಮನುಷ್ಯರು ಮನೆ-ಮನೆಯಲ್ಲಿಯೂ ದೀಪವನ್ನು ಹಚ್ಚುತ್ತಾರೆ.
ತಂದೆಯು ಹೇಳುತ್ತಾರೆ - ಈ ಎಲ್ಲಾ ಮಾತುಗಳನ್ನು ಚೆನ್ನಾಗಿ ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕು.
ತಂದೆ ಹಾಗೂ ರಾಜಧಾನಿಯನ್ನು ನೆನಪು ಮಾಡುತ್ತಾ ಇರಿ. ಇಷ್ಟು ಸಮಯ ನಾವು ರಾಜ್ಯಭಾರ ಮಾಡಿದೆವು
ಎಂಬುದು ನಿಮಗೆ ಗೊತ್ತಿದೆ. ಯಾರು ಬಹಳ ಸಮಯ ಅಗಲಿದ್ದೀರೋ ಅವರ ಜೊತೆಯಲ್ಲಿಯೇ ತಂದೆಯು
ಮಾತನಾಡುತ್ತಾರೆ, ಓದಿಸುತ್ತಾರೆ. ಮಕ್ಕಳಿಗೆ ಗೊತ್ತಿದೆ, ಈ ಸಮಯದ ಮಾತುಗಳನ್ನೇ ಹಬ್ಬವಾಗಿ
ಆಚರಿಸುತ್ತಾರೆ. ಶಿವ ಜಯಂತಿಯನ್ನು ಭಾರತದಲ್ಲಿಯೇ ಆಚರಿಸುತ್ತಾರೆ. ಶಿವ ಸರ್ವ ಶ್ರೇಷ್ಠ
ಭಗವಂತನಾಗಿದ್ದಾರೆ. ಅವರು ಭಾರತದಲ್ಲಿ ಹೇಗೆ ಬರುತ್ತಾರೆ, ಅವರು ಸ್ವಯಂ ಹೇಳುತ್ತಾರೆ- ನಾನು
ಪ್ರಕೃತಿಯ ಆಧಾರವನ್ನು ತೆಗೆದುಕೊಂಡು ಬರಬೇಕಾಗುತ್ತದೆ. ಆದ್ದರಿಂದ ಕರೆಯುತ್ತಾರೆ ಇಲ್ಲವಾದರೆ
ಮಕ್ಕಳಿಗೆ ನಾನು ಶೃಂಗಾರ ಮಾಡಬೇಕು? ಈಗ ತಮ್ಮ ಶೃಂಗಾರವಾಗುತ್ತಿದೆ, ಮನುಷ್ಯರಿಂದ ದೇವತೆಗಳನ್ನಾಗಿ
ಮಾಡುವ ಶೃಂಗಾರವನ್ನು ನೀವು ಅನ್ಯರಿಗೂ ಮಾಡುತ್ತಿದ್ದೀರಿ. ಇದು ಬಹಳ ಸಹಜವಾಗಿದೆ. ಆಗಲೇ ಮನುಷ್ಯರ
ಬುದ್ಧಿಯು ಆ ರೀತಿಯಾಗಿದೆ, ಏನನ್ನೂ ಅರ್ಥ ಮಾಡಿಕೊಳ್ಳುವುದಿಲ್ಲ. ಸಮಯ ತೆಗೆದುಕೊಳ್ಳುತ್ತಾರೆ.
ತಾವು ಪ್ರದರ್ಶನಿಯಲ್ಲಿ ಎಲ್ಲಾ ಮಾತುಗಳನ್ನು ತಿಳಿಸುತ್ತೀರಿ. ಯಾರು ಬಂದರು, ಹೇಗೆ ತಿಳಿಸಿದರು,
ಅದೆಲ್ಲವೂ ಡ್ರಾಮಾ. ಚಿಂತೆಯ ಯಾವುದೇ ಮಾತಿಲ್ಲ. ಮಕ್ಕಳು ಹೇಳುತ್ತಾರೆ - ಬಾಬಾ, ಎಷ್ಟು ತಿಳಿಸಿದರೂ,
ಎಷ್ಟು ಕಷ್ಟಪಟ್ಟರೂ ಕೋಟಿಯಲ್ಲಿ ಕೆಲವರು ಮಾತ್ರವೇ ಬರುತ್ತಾರೆ. ಅದಂತೂ ಆಗುತ್ತಿರುತ್ತದೆ ಅಂದಾಗ
ಪರಮಾತ್ಮ ಬಿಂದುವಾಗಿದ್ದಾರೆಂದು ಹೇಳುತ್ತೀರಿ. ಶಾಸ್ತ್ರಗಳಲ್ಲಿ ಅಂತಹ ಮಾತುಗಳಿಲ್ಲ ಆದ್ದರಿಂದ
ತಬ್ಬಿಬ್ಬಾಗುತ್ತಾರೆ. ನೀವೂ ಸಹ ಮೊದಲು ಒಪ್ಪುತ್ತಿರಲಿಲ್ಲ. ಕೆಲವರಿಗಂತೂ ಅರ್ಥ
ಮಾಡಿಕೊಳ್ಳುವುದರಲ್ಲಿ ಎರಡು ವರ್ಷಗಳಾಯಿತು. ಹೊರಟು ಹೋಗುತ್ತಾರೆ ಮತ್ತೆ ಬರುತ್ತಾರೆ. ಇಷ್ಟು
ಸಹಜವಾಗಿ ಭಕ್ತಿಯು ಬಿಡುವುದಿಲ್ಲ. ಅದು ತನ್ನ ಕಡೆಗೆ ಆಕರ್ಷಿಸುತ್ತದೆ. ಇದೂ ಸಹ ಡ್ರಾಮಾದಲ್ಲಿದೆ.
ತಾವು ಬ್ರಾಹ್ಮಣರ ವಿನಃ ಮತ್ತ್ಯಾರಿಗೂ ಗೊತ್ತಿಲ್ಲ. ವಿರಾಟ ರೂಪದ ಅರ್ಥವನ್ನೂ ತಿಳಿದುಕೊಂಡಿದ್ದೀರಿ.
ಇದೂ ಸಹ ಆಟವಾಗಿದೆ. ತಾವು ಸುತ್ತುತ್ತೀರಿ ಆದ್ದರಿಂದ ಇದಕ್ಕೆ ವಿರಾಟ ನಾಟಕವೆಂದು ಹೇಳಲಾಗುತ್ತದೆ.
ಇದರ ಜ್ಞಾನವೂ ಸಹ ತಮಗಿದೆ. ಆ ಕಾಲೇಜುಗಳಲ್ಲಿ ಏನೇನು ಓದುತ್ತಿರುತ್ತಾರೆ. ಇಲ್ಲಿ ಅಂತಹ ಯಾವುದೇ
ಮಾತಿಲ್ಲ. ವಿಜ್ಞಾನವು ವೃದ್ಧಿಯಾಗುತ್ತಾ ಇರುತ್ತದೆ ಆದ್ದರಿಂದ ವಿನಾಶವಾಗಬೇಕು. ಈಗ ಭಲೇ ತಾವು
ತಿಳಿಸುತ್ತೀರಿ ಆದರೆ ಇದು ಬಹಳ ಚೆನ್ನಾಗಿರುವ ವಿಚಾರವಾಗಿದೆ ಎಂದು ಹೇಳುವವರು ಕೆಲವರು ಮಾತ್ರವೇ
ಸಿಗುತ್ತಾರೆ. ಇದಂತೂ ಪ್ರತಿನಿತ್ಯ ತಿಳಿಸಬೇಕು - ಎಷ್ಟೇ ಕೆಲಸವಿರಲಿ ಆದರೆ ನಾವು ತಂದೆಯಿಂದ
ಅವಶ್ಯವಾಗಿ ಆಸ್ತಿಯನ್ನು ಪಡೆಯಲೇಬೇಕೆಂದು ಹೇಳುತ್ತಾರೆ. ಇದಂತೂ ಅಪರಮಪಾರವಾದ ಎಣಿಸಲಾಗದ
ಸಂಪಾದನೆಯಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನ ಬುದ್ಧಿಯಲ್ಲಿ ಪೂರ್ಣ ವೃಕ್ಷದ
ಜ್ಞಾನವಿದೆ, ಅದನ್ನೇ ತಾವೀಗ ತಿಳಿದುಕೊಳ್ಳುತ್ತಿದ್ದೀರಿ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದು
ಬಹಳ ಸ್ಪಷ್ಟವಾಗಿದೆ. ಒಂದು ಸೆಕೆಂಡ್ ಸಹ ಇನ್ನೊಂದು ಸೆಕೆಂಡಿನಂತೆ ಇರುವುದಿಲ್ಲ ಅಂದಾಗ ಎಷ್ಟೊಂದು
ಸೂಕ್ಷ್ಮವಾಗಿದೆ. ಈ ಡ್ರಾಮಾವು ಹೇನಿನಂತೆ ನಡೆಯುತ್ತದೆ. ಒಂದು ಚಕ್ರಕ್ಕೆ 5000 ವರ್ಷಗಳು
ಹಿಡಿಯುತ್ತದೆ. ಅದರಲ್ಲಿ ಪೂರ್ಣ ಆಟವು ನಡೆಯುತ್ತದೆ. ಅದನ್ನೇ ತಿಳಿದುಕೊಳ್ಳಬೇಕು. ಅಲ್ಲಿ ಹಸುಗಳೂ
ಸಹ ಬಹಳ ಚೆನ್ನಾಗಿರುತ್ತದೆ. ಹೇಗೆ ನಿಮ್ಮ ಪದವಿಯೋ ಹಾಗೆಯೇ ನಿಮ್ಮ ಪೀಠೋಪಕರಣಗಳು ಹಾಗೂ ನಿಮ್ಮ
ಮನೆಯಿರುತ್ತದೆ. ಅದು ಆಕರ್ಷಣೆಯಿಂದ ಕೂಡಿರುತ್ತದೆ. ಖುಷಿಯೂ ಸಹ ಆತ್ಮಕ್ಕೇ ಆಗುತ್ತದೆ. ಆತ್ಮ
ತೃಪ್ತಿ ಎನ್ನಲಾಗುತ್ತದೆ, ಪರಮಾತ್ಮ ತೃಪ್ತಿ ಎನ್ನಲಾಗುವುದಿಲ್ಲ. ನಿಮ್ಮ ಆತ್ಮವು ತೃಪ್ತಿಯಾಯಿತೆ
ಎಂದು ಕೇಳುತ್ತಾರೆ, ಹೌದು ಬಾಬಾ ತೃಪ್ತಿಯಾಯಿತು. ಅಂದಮೇಲೆ ಈ ಎಲ್ಲಾ ಆಟವು ನಡೆಯುತ್ತಾ ಬಂದಿದೆ.
ತಂದೆಯು ಏನನ್ನು ತಿಳಿಸುತ್ತಾರೆಯೋ ಇದೂ ಸಹ ಡ್ರಾಮಾದ ಆಟವಾಗಿದೆ. ಈಗ ನಿಮ್ಮಲ್ಲಿ ಹೊಸ ಶಕ್ತಿಯನ್ನು
ತುಂಬುತ್ತಾರೆ. ತಮ್ಮ ಶರೀರವು ಕಲ್ಪವೃಕ್ಷದ ಸಮಾನವಾಗುತ್ತದೆ. ಹೆಸರೇ ಅಮರ ಲೋಕವಾಗಿದೆ. ಆತ್ಮವೂ
ಅಮರವಾಗಿದೆ ಅಂದಾಗ ಮೃತ್ಯುವು ಕಬಳಿಸಲು ಸಾಧ್ಯವಿಲ್ಲ. ತಂದೆಯು ನೀವಾತ್ಮರ ಜೊತೆ ಮಾತನಾಡುತ್ತಾರೆ.
ಅಕಾಲ ಆತ್ಮವು ಯಾವ ಸಿಂಹಾಸನದ ಮೇಲೆ ಕುಳಿತಿದೆಯೋ ಅದರ ಜೊತೆ ಮಾತನಾಡುತ್ತದೆ. ಆತ್ಮವು ಈ
ಕಿವಿಗಳಿಂದ ಕೇಳಿಸಿಕೊಳ್ಳುತ್ತದೆ. ನಾವಾತ್ಮರಿಗೆ ತಂದೆಯು ಓದಿಸಲು ಬಂದಿದ್ದಾರೆ. ತಂದೆಯ ದೃಷ್ಟಿಯು
ಸದಾ ಆತ್ಮಗಳ ಮೇಲಿರುತ್ತದೆ. ತಮಗೂ ಸಹ ತಂದೆಯು ತಿಳಿಸುತ್ತಾರೆ - ಸದಾ ಸಹೋದರ-ಸಹೋದರನ
ದೃಷ್ಟಿಯನ್ನಿಟ್ಟುಕೊಳ್ಳಿ. ಸಹೋದರನ ಜೊತೆ ನಾವು ಮಾತನಾಡುತ್ತೇವೆ ಮತ್ತೆ ವಿಕಾರ ದೃಷ್ಟಿ ಹೋಗಬಾರದು.
ಅಂದಾಗ ಇದರಲ್ಲಿ ಬಹಳ ಚೆನ್ನಾಗಿ ಅಭ್ಯಾಸವಿರಬೇಕು. ನಾನಾತ್ಮ, ಇಷ್ಟು ಜನ್ಮಗಳ ಪಾತ್ರವನ್ನು
ಅಭಿನಯಿಸಿದೆನು, ನಾನು ಪುಣ್ಯಾತ್ಮನಾಗಿದ್ದೆನು, ನಾನೇ ಪವಿತ್ರ ಆತ್ಮನಾಗಿದ್ದೆನು, ಚಿನ್ನದಲ್ಲಿಯೇ
ತುಕ್ಕು ಬೀಳುತ್ತದೆ. ಯಾವ ಆತ್ಮರು ಕೊನೆಯಲ್ಲಿ ಬರುತ್ತಾರೆಯೋ ಅವರಿಗೆ ಏನು ಹೇಳಬಹುದು. ಅದರಲ್ಲಿ
ಸ್ವಲ್ಪವೇ ಚಿನ್ನವಿರುತ್ತದೆ. ಭಲೇ ಪವಿತ್ರರಾಗಿ ಹೋಗುತ್ತಾರೆ, ಆದರೆ ಶಕ್ತಿಯಂತೂ ಕಡಿಮೆಯಲ್ಲವೆ.
ಒಂದೆರಡು ಜನ್ಮಗಳನ್ನು ಪಡೆಯುತ್ತಾರೆ, ಅಂದಾಗ ಇದರಲ್ಲಿ ಏನಾಯಿತು? ತಂದೆಯು ಯಾವ ಮುರುಳಿಯನ್ನು
ನುಡಿಸುತ್ತಾರೆಯೋ ಅದು ಖಜಾನೆಯಾಗಿದೆ. ಎಲ್ಲಿಯವರೆಗೆ ತಂದೆಯ ಕೊಡುತ್ತಾರೆ ಅಲ್ಲಿಯವರೆಗೆ ತಾವು
ತಂದೆಯನ್ನು ನೆನಪು ಮಾಡುತ್ತೀರಿ. ನೆನಪಿನಿಂದಲೇ ತಾವು ಸದಾಕಾಲಕ್ಕೆ ಆರೋಗ್ಯವಂತರಾಗುತ್ತೀರಿ.
ಸುಮ್ಮನೆ ಕುಳಿತುಕೊಳ್ಳುವುದರಿಂದ ಬಹಳ ಲಾಭವಿದೆ. ಮನ್ಮನಾಭವದ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ.
ತಂದೆಯು ಪ್ರತಿಯೊಂದು ಮಾತಿನ ಅರ್ಥವನ್ನು ತಿಳಿಸುತ್ತಾರೆ. ಇಲ್ಲಂತೂ ಅನರ್ಥವಾಗಿದೆ. ಎಲ್ಲದಕ್ಕಿಂತ
ದೊಡ್ಡ ಅನರ್ಥವೆಂದರೆ ಕಾಮ ವಿಕಾರತೆ, ಇದರಿಂದ ಆದಿ-ಮಧ್ಯ-ಅಂತ್ಯ ದುಃಖ ಪಡೆಯುತ್ತಾರೆ.
ಎಲ್ಲದಕ್ಕಿಂತ ಕೊಳಕು ಹಿಂಸೆಯಾಗಿದೆ ಆದ್ದರಿಂದ ಇದಕ್ಕೆ ನರಕವೆನ್ನಲಾಗುತ್ತದೆ. ಸ್ವರ್ಗ ಹಾಗೂ
ನರಕದ ಯಾವುದೇ ಅರ್ಥವನ್ನು ತಿಳಿದುಕೊಂಡಿಲ್ಲ. ಅದು ನಂಬರ್ವನ್ ಇದು ಕೊನೆಯ ನಂಬರಿನದ್ದಾಗಿದೆ. ತಮಗೆ
ಗೊತ್ತಿದೆ - ನಾವು ವಿಶ್ವ ನಾಟಕದ ಪಾತ್ರಧಾರಿಗಳಾಗಿದ್ದೇವೆ. ತಾವು ಗೊತ್ತಿಲ್ಲವೆಂದು
ಹೇಳುವುದಿಲ್ಲ. ತಾವು ಶ್ರೀಮತದಿಂದ ಎಷ್ಟು ಒಳ್ಳೆಯ ಚಿತ್ರವನ್ನು ಮಾಡುತ್ತೀರಿ, ಅದನ್ನು ಮನುಷ್ಯರು
ನೋಡುತ್ತಿದ್ದಂತೆಯೇ ಖುಷಿಯಾಗಬೇಕು ಹಾಗೂ ಸಹಜವಾಗಿ ಅರ್ಥ ಮಾಡಿಕೊಳ್ಳಬೇಕು. ಈ ಚಿತ್ರವನ್ನು
ಮಾಡುವುದೂ ಸಹ ಡ್ರಾಮಾದಲ್ಲಿ ನಿಶ್ಚಿತವಾಗಿದೆ. ಅಂತಿಮದಲ್ಲಿ ತಾವು ನೆನಪಿನಲ್ಲಿಯೆ ಇರುತ್ತೀರಿ.
ಸೃಷ್ಟಿ ಚಕ್ರವೂ ಸಹ ಬುದ್ಧಿಯಲ್ಲಿ ಬರುತ್ತದೆ. ಹೊಸ ಪ್ರಪಂಚವನ್ನಾಗಿ ಯಾರು ಮಾಡುತ್ತಾರೆ ಹಾಗೂ
ಹಳೆಯ ಪ್ರಪಂಚವನ್ನಾಗಿ ಯಾರು ಮಾಡುತ್ತಾರೆ ಎಂಬುದನ್ನು ತಾವೇ ತಿಳಿದುಕೊಂಡಿದ್ದೀರಿ. ಸತೋ, ರಜೋ,
ತಮೋದಲ್ಲಿ ಎಲ್ಲರೂ ಬರಲೇಬೇಕು. ಈಗ ಕಲಿಯುಗವಾಗಿದೆ, ತಂದೆಯು ಬಂದು ನಮ್ಮನ್ನು ಸ್ವರ್ಗದ
ಮಾಲೀಕರನ್ನಾಗಿ ಮಾಡುತ್ತಾರೆಂಬುದು ಯಾರಿಗೂ ಗೊತ್ತಿಲ್ಲ, ಯಾರ ಯೋಚನೆಗೂ ಬರುವುದಿಲ್ಲ. ನಿಮಗಂತೂ
ಈಗ ಪೂರ್ಣ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ರಚಯಿತ ತಂದೆಯು ಇದರಲ್ಲಿ (ಬ್ರಹ್ಮಾ) ಕುಳಿತು
ತಿಳಿಸುತ್ತಿದ್ದಾರೆ. ನಾನು ನೀವಾತ್ಮರ ತಂದೆಯಾಗಿದ್ದೇನೆ, ಶಿಕ್ಷಕನಾಗಿದ್ದೇನೆ. ಈ ಸಂಗಮಯುಗ
ಪುರುಷೋತ್ತಮ ಯುಗವಾಗಿದೆ. ಸತ್ಯಯುಗ ಹಾಗೂ ಕಲಿಯುಗಕ್ಕೆ ಪುರುಷೋತ್ತಮ ಎನ್ನುವುದಿಲ್ಲ.
ಸಂಗಮದಲ್ಲಿಯೇ ತಾವು ಪುರುಷೋತ್ತಮರಾಗುತ್ತೀರಿ. ಆಗಲೇ ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ.
ದಿನ-ಪ್ರತಿ ದಿನ ತಾವು ಮಕ್ಕಳಿಗೆ ತಿಳಿಸುವುದರಲ್ಲಿ ಬಹಳ ಸಹಜವಾಗುತ್ತದೆ. ವೃಕ್ಷವು
ವೃದ್ಧಿಯಾಗುತ್ತಾ ಇರುತ್ತದೆ. ಪರಂಜ್ಯೋತಿಗೆ ಅರ್ಪಣೆಯಾಗಲು ಅನೇಕ ಪತಂಗಗಳು ಬರುತ್ತಾರೆ. ಇಂತಹ
ತಂದೆಯನ್ನು ಯಾರು ಬಿಡುತ್ತಾರೆ! ಬಾಬಾ, ನಾವಂತೂ ನಿಮ್ಮ ಬಳಿಯೇ ಕುಳಿತಿರಬೇಕು ಎಂದು ಹೇಳುತ್ತಾರೆ.
ಇದೆಲ್ಲವೂ ನಿಮ್ಮದಾಗಿದೆ, ಇಂತಹ ಶ್ರೇಷ್ಠ ತಂದೆಯನ್ನು ನಾವೇಕೆ ಬಿಡಬೇಕು. ಅನೇಕರಿಗೆ ನಶೆ
ಬರುತ್ತದೆ. ತಂದೆಯಿಂದ ವಿಶ್ವದ ಚಕ್ರಾಧಿಪತ್ಯವು ಸಿಗುತ್ತದೆ ಅಂದಮೇಲೆ ನಾವೇಕೆ ಬಿಟ್ಟು ಹೋಗಬೇಕು.
ಇಲ್ಲಂತೂ ನಾವು ಸ್ವರ್ಗದಲ್ಲಿ ಕುಳಿತಿದ್ದೇವೆ, ಇಲ್ಲಿ ಯಾವುದೇ ಮೃತ್ಯುವು ಬರಲು ಸಾಧ್ಯವಿಲ್ಲ ಆದರೆ
ತಂದೆಯ ಶ್ರೀಮತವನ್ನು ಪಡೆಯಬೇಕಾಗುತ್ತದೆ. ಈ ರೀತಿ ಮಾಡಬಾರದೆಂದು ತಂದೆಯು ಹೇಳುತ್ತಾರೆ,
ಉತ್ಸಾಹವಂತೂ ಬರುತ್ತದೆ ಆದರೆ ಡ್ರಾಮಾದಲ್ಲಿ ಎಲ್ಲರೂ ಇಲ್ಲಿಯೇ ಕುಳಿತುಕೊಳ್ಳುವಂತಿಲ್ಲ. ನಶೆಯಂತೂ
ಬರುತ್ತದೆ ಏಕೆಂದರೆ ಯಾರ ಪಾತ್ರವಿದೆಯೋ ಅವರು ಕೇಳುತ್ತಿರುತ್ತಾರೆ. ಅಂದೆಯು ಹೇಳುತ್ತಾರೆ - ತಾವು
ಎಲ್.ಎಲ್.ಬಿ., ಐ.ಸಿ.ಎಸ್., ಓದುತ್ತೀರೆಂದರೆ ಏನು ಸಿಗುತ್ತದೆ? ನಾಳೆ ಶರೀರ ಬಿಟ್ಟರೆ ಏನು
ಸಿಗುತ್ತದೆ? ಏನೂ ಇಲ್ಲ. ಅದು ವಿನಾಶಿ ವಿದ್ಯೆಯಾಗಿದೆ. ಇದು ಅವಿನಾಶಿ ವಿದ್ಯೆಯಾಗಿದೆ. ಇದನ್ನು
ಅವಿನಾಶಿ ತಂದೆಯೇ ಕೊಡುತ್ತಾರೆ. ಸಮಯವು ಬಹಳ ಕಡಿಮೆಯಿದೆ. ತಾವು ಈ ಜನ್ಮದಲ್ಲಿಯೇ ತಮೋಪ್ರಧಾನರಿಂದ
ಸತೋಪ್ರಧಾನರಾಗಬೇಕು. ನೆನಪಿನಿಂದಲೇ ಸತೋಪ್ರಧಾನರಾಗುತ್ತೀರಿ. ಬೇರೆ ಎಲ್ಲಾ ದೇವತೆಗಳನ್ನು ಬಿಟ್ಟು
ನನ್ನೊಬ್ಬನನ್ನೇ ನೆನಪು ಮಾಡಿ. ಶರೀರದ ಮೇಲೆ ಭರವಸೆಯಿಲ್ಲ. ಓದುತ್ತಾ-ಓದುತ್ತಾ ಶರೀರ ಬಿಡುತ್ತಾರೆ
ಅಂದಮೇಲೆ ತಿಳಿಸುವುದೇ ತಂದೆಯ ಕೆಲಸವಾಗಿದೆ. ಆ ವಿದ್ಯೆಯಲ್ಲಿ ಏನು ಸಂಪಾದನೆಯಿದೆ ಹಾಗೂ ಈ
ವಿದ್ಯೆಯಲ್ಲಿ ಏನು ಸಂಪಾದನೆಯಿದೆ ಇದೂ ಸಹ ನಮಗೆ ಗೊತ್ತಿದೆ. ಶಿವತಂದೆಯ ಭಂಡಾರ ಸದಾ ತುಂಬಿದೆ.
ಇಷ್ಟೆಲ್ಲಾ ಮಕ್ಕಳಿದ್ದಾರೆ ಯಾವುದೇ ಚಿಂತೆಯ ಮಾತಿಲ್ಲ. ಹಸಿವಿನಿಂದ ಸಾಯಲು ಸಾಧ್ಯವಿಲ್ಲ. ಲೌಕಿಕ
ತಂದೆಯೂ ಸಹ ನೋಡುತ್ತಾರೆ - ಮಕ್ಕಳಿಗೆ ಊಟ ಸಿಗದಿದ್ದರೆ ತಾವೂ ಸಹ ಊಟ ಮಾಡುವುದಿಲ್ಲ. ಮಕ್ಕಳ
ದುಃಖವನ್ನು ತಂದೆಯು ಸಹನೆ ಮಾಡಲು ಸಾಧ್ಯವಿಲ್ಲ. ಮೊದಲು ಮಕ್ಕಳು ನಂತರ ತಂದೆ. ತಾಯಿಯು
ಎಲ್ಲರಿಗಿಂತ ಕೊನೆಯಲ್ಲಿ ಊಟ ಮಾಡುತ್ತಾರೆ. ಒಣ ರೊಟ್ಟಿಯು ಉಳಿದರೆ ಅದನ್ನೇ ತಿನ್ನುತ್ತಾರೆ. ನಮ್ಮ
ಭಂಡಾರಿಯೂ ಸಹ ಅದೇ ರೀತಿಯಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
೧. ಸಹೋದರ-ಸಹೋದರನ
ದೃಷ್ಟಿಯನ್ನು ಅರ್ಥ ಮಾಡಿಕೊಳ್ಳಬೇಕು. ನಾನಾತ್ಮ ಸಹೋದರ ಆತ್ಮನ ಜೊತೆ ಮಾತನಾಡುತ್ತಿದ್ದೇನೆ, ಈ
ಅಭ್ಯಾಸ ಮಾಡಿ ವಿಕಾರಿ ದೃಷ್ಟಿಯನ್ನು ಪರಿವರ್ತನೆ ಮಾಡಿಕೊಳ್ಳಬೇಕು.
೨. ತಂದೆಯು ಯಾವ ಖಜಾನೆ ಕೊಡುತ್ತಾರೆ ಆಗ ನೆನಪಿನಲ್ಲಿ ಕುಳಿತು ಬುದ್ಧಿ ರೂಪಿ ಜೋಳಿಗೆಯಿಂದ
ಖಜಾನೆಯನ್ನು ತುಂಬಿಕೊಳ್ಳಬೇಕಾಗಿದೆ. ಸುಮ್ಮನೆ ಕುಳಿತು ಅವಿನಾಶಿ ಸಂಪಾದನೆಯನ್ನು ಜಮಾ
ಮಾಡಿಕೊಳ್ಳಬೇಕು.
ವರದಾನ:
ತ್ರಿಕಾಲದರ್ಶಿಯ
ಸೀಟ್ ಮೆಲೆ ಸೆಟ್ ಆಗಿ, ಪ್ರತಿ ಕರ್ಮ ಮಾಡುವಂತಹ ಶಕ್ತಿಶಾಲಿ ಆತ್ಮ ಭವ.
ಯಾವ ಮಕ್ಕಳು
ತ್ರಿಕಾಲದರ್ಶಿಯ ಸೀಟ್ ಮೇಲೆ ಸೆಟ್ ಆಗಿ ಪ್ರತಿ ಸಮಯ, ಪ್ರತಿ ಕರ್ಮ ಮಾಡುತ್ತಾರೆ, ಅವರು
ತಿಳಿದಿದ್ದಾರೆ, ಮಾತುಗಳು ಅನೇಕ ಬರುತ್ತವೆ ಅವು ಬರಲೇ ಬೇಕು, ಆಗಲೇ ಬೇಕು, ಇಲ್ಲಾ ಸ್ವಯಂ ಮೂಲಕ,
ಇಲ್ಲ ಅನ್ಯರ ಮೂಲಕ, ಇಲ್ಲಾ ಮಾಯೆ ಅಥವಾ ಪ್ರಕೃತಿಯ ಮೂಲಕ ಎಲ್ಲಾ ಪ್ರಕಾರದಲ್ಲಿ ಪರಿಸ್ಥಿತಿಗಳಂತೂ
ಬರುತ್ತವೆ, ಬರಲೇಬೇಕು ಆದರೆ ಸ್ವ-ಸ್ಥಿತಿ ಶಕ್ತಿಶಾಲಿಯಾಗಿದ್ದಾಗ ಪರ-ಸ್ಥಿತಿ ಅದರ ಮುಂದೆ ಏನೂ
ಇಲ್ಲ. ಕೇವಲ ಪ್ರತಿ ಕರ್ಮ ಮಾಡುವ ಮೊದಲು ಅದರ ಆದಿ-ಮಧ್ಯೆ-ಅಂತ್ಯ ಮೂರೂ ಕಾಲ ಚೆಕ್ ಮಾಡಿ,
ತಿಳಿದುಕೊಂಡು ನಂತರ ಏನಾದರೂ ಮಾಡಿ ಆಗ ಶಕ್ತಿಶಾಲಿಗಳಾಗಿ ಪರಿಸ್ಥಿತಿಗಳನ್ನು ಪಾರು ಮಾಡುವಿರಿ.
ಸ್ಲೋಗನ್:
ಸರ್ವ ಶಕ್ತಿ ಹಾಗೂ ಜ್ಞಾನ ಸಂಪನ್ನರಾಗುವುದೇ ಸಂಗಮಯುಗದ ಪ್ರಾಲಭ್ಧವಾಗಿದೆ.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ -
ಹೇಗೆ ಬ್ರಹ್ಮಾ ತಂದೆಯು ವಿಸ್ತಾರವನ್ನು ಸಾರದಲ್ಲಿ ಸಂಕ್ಷಿಪ್ತ ಮಾಡಿ ಸ್ವಯಂ ಅನ್ನು ಸಂಪನ್ನ
ಮಾಡಿಕೊಂಡರು. ಅದೇ ರೀತಿ ಸಾರ ಸ್ವರೂಪ ಸ್ಥಿತಿಯಲ್ಲಿರುತ್ತಾ ವ್ಯರ್ಥದಿಂದ ಮುಕ್ತರಾಗಿ. ಬೀಜ ರೂಪ
ಸ್ಥಿತಿಯಲ್ಲಿ ಸ್ಥಿತರಾಗಿದ್ದು ಅನೇಕ ಆತ್ಮರುಗಳಲ್ಲಿ ಸಮಯವನ್ನು ಗುರುತಿಸುವ ಮತ್ತು ತಂದೆಯನ್ನು
ಗುರುತಿಸುವ ಬೀಜವನ್ನು ಬಿತ್ತಿ, ಆಗ ಆ ಬೀಜದ ಫಲ ಬಹಳ ಚೆನ್ನಾಗಿರುತ್ತದೆ ಮತ್ತು ಸಹಜವಾಗಿ
ಬರುತ್ತದೆ.