27.02.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಮ್ಮ ಚಾರ್ಟನ್ನು ಇಡಿ ಆಗ ನಾವು ಮುಂದುವರೆಯುತ್ತಿದ್ದೇವೆಯೇ ಅಥವಾ ಇನ್ನೂ ಹಿಂದೆ ಹೋಗುತ್ತಿದ್ದೇವೆಯೇ ಎಂದು ತಿಳಿಯುತ್ತದೆ, ದೇಹಾಭಿಮಾನವು ಹಿಂದೆ ತರುತ್ತದೆ, ದೇಹೀ ಅಭಿಮಾನಿ ಸ್ಥಿತಿಯು ಮುಂದುವರೆಸುತ್ತದೆ.”

ಪ್ರಶ್ನೆ:
ಸತ್ಯಯುಗದ ಆದಿಯಲ್ಲಿ ಬರುವ ಆತ್ಮ ಮತ್ತು ತಡವಾಗಿ ಬರುವ ಆತ್ಮನಲ್ಲಿ ಮುಖ್ಯ ಅಂತರವೇನಿರುವುದು?

ಉತ್ತರ:
ಆದಿಯಲ್ಲಿ ಬರುವಂತಹ ಆತ್ಮಗಳು ಸುಖದ ಬಯಕೆಯನ್ನಿಟ್ಟುಕೊಳ್ಳುತ್ತಾರೆ. ಏಕೆಂದರೆ ಸತ್ಯಯುಗದ ಆದಿ ಸನಾತನ ದೇವೀ-ದೇವತಾ ಧರ್ಮವು ಬಹಳ ಸುಖವನ್ನು ಕೊಡುವಂತಹದ್ದಾಗಿದೆ. ತಡವಾಗಿ ಬರುವಂತಹ ಆತ್ಮಗಳಿಗೆ ಸುಖವನ್ನು ಬಯಸುವುದು ಬರುವುದೇ ಇಲ್ಲ, ಅವರು ಶಾಂತಿ-ಶಾಂತಿ ಎಂದೇ ಬಯಸುತ್ತಾರೆ. ಬೇಹದ್ದಿನ ತಂದೆಯಿಂದ ಸುಖ ಮತ್ತು ಶಾಂತಿಯ ಆಸ್ತಿಯು ಪ್ರತಿಯೊಂದು ಆತ್ಮಕ್ಕೆ ಪ್ರಾಪ್ತಿಯಾಗುತ್ತದೆ.

ಓಂ ಶಾಂತಿ.
ಭಗವಾನುವಾಚ, ಯಾವಾಗ ಭಗವಾನುವಾಚವೆಂದು ಹೇಳಿದಾಗ ಮಕ್ಕಳಿಗೆ ಬುದ್ಧಿಯಲ್ಲಿ ಕೃಷ್ಣನು ಬರುವುದಿಲ್ಲ, ಶಿವಬಾಬಾರವರೇ ಬರುತ್ತಾರೆ. ಮೂಲ ಮಾತು ತಂದೆಯ ಪರಿಚಯ ಕೊಡುವುದಾಗಿದೆ, ಏಕೆಂದರೆ ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ನಾವು ಶಿವತಂದೆಯ ಅನುಯಾಯಿಗಳಾಗಿದ್ದೇವೆ ಎಂದು ಹೇಳುವುದಿಲ್ಲ, ಶಿವ ತಂದೆಯ ಮಕ್ಕಳಾಗಿದ್ದೇವೆ, ಸದಾ ತಮ್ಮನ್ನು ಮಕ್ಕಳೆಂದು ತಿಳಿಯಿರಿ. ಅವರು ತಂದೆ, ಶಿಕ್ಷಕ ಮತ್ತು ಗುರುವೂ ಆಗಿದ್ದಾರೆಂದು ಮತ್ತ್ಯಾರಿಗೂ ಗೊತ್ತಿಲ್ಲ. ತಾವು ಮಕ್ಕಳಲ್ಲಿಯೂ ಸಹ ಅನೇಕರು ಇದನ್ನು ಮರೆತು ಹೋಗುತ್ತಾರೆ. ಇದು ನೆನಪಿದ್ದರೂ ಸಹ ಅಹೋ ಸೌಭಾಗ್ಯ. ತಂದೆಯನ್ನು ಮರೆತು ಬಿಡುತ್ತಾರೆ ಮತ್ತು ಲೌಕಿಕ ದೇಹದ ಸಂಬಂಧವು ನೆನಪಿಗೆ ಬಂದು ಬಿಡುತ್ತದೆ. ವಾಸ್ತವದಲ್ಲಿ ನಿಮ್ಮ ಬುದ್ಧಿಯಿಂದ ಮತ್ತೆಲ್ಲವೂ ಹೊರಟು ಹೋಗಬೇಕು ಒಬ್ಬ ತಂದೆಯೇ ನೆನಪಿರಬೇಕು. ತ್ವಮೇವ ಮಾತಶ್ಚ ಪಿತಾ... ಎಂದು ನೀವು ಹೇಳುತ್ತೀರಿ. ಒಂದು ವೇಳೆ ಅನ್ಯ ಯಾರಾದರೂ ನೆನಪಿಗೆ ಬರುತ್ತಾರೆಂದರೆ ನಾವು ಸದ್ಗತಿಯಲ್ಲಿ ಹೋಗುತ್ತಿದ್ದೇವೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ದೇಹಾಭಿಮಾನದಲ್ಲಿದ್ದರೆ ದುರ್ಗತಿಯೇ ಆಗುತ್ತದೆ. ದೇಹೀ ಅಭಿಮಾನಿಯಾಗಿದ್ದಾಗ ಸದ್ಗತಿಯಾಗುತ್ತದೆ. ಒಮ್ಮೆ ಕೆಳಗೆ, ಇನ್ನೊಮ್ಮೆ ಮೇಲೆ ಹೀಗೆ ಏರುತ್ತಾ ಇಳಿಯುತ್ತಾ ಇರುತ್ತಾರೆ. ಒಮ್ಮೆ ಮುಂದುವರೆಯುತ್ತಾರೆ, ಇನ್ನೊಮ್ಮೆ ಹಿಂದಕ್ಕೆ ಸರಿಯುತ್ತಾರೆ. ದೇಹಾಭಿಮಾನದಲ್ಲಂತೂ ಅನೇಕರು ಬರುತ್ತಾರೆ. ಆದ್ದರಿಂದ ಸದಾ ತಂದೆಯು ತಿಳಿಸುತ್ತಾರೆ - ಮಕ್ಕಳೇ ಚಾರ್ಟನ್ನು ಇಡಿ ಆಗ ನಾವು ಮುಂದುವರೆಯುತ್ತಿದ್ದೇವೆಯೇ ಅಥವಾ ಇನ್ನೂ ಹಿಂದೆ ಹೋಗುತ್ತಿದ್ದೇವೆಯೇ ಎಂದು ತಿಳಿಯುತ್ತದೆ. ಎಲ್ಲವೂ ನೆನಪಿನ ಮೇಲೆ ಆಧಾರತವಾಗಿದೆ. ಮೇಲೆ-ಕೆಳಗೆ ಆಗುತ್ತಲೇ ಇರುತ್ತದೆ. ಮಕ್ಕಳು ನಡೆಯುತ್ತಾ-ನಡೆಯುತ್ತಾ ಸುಸ್ತಾಗಿ ಬಿಡುತ್ತಾರೆ ಆ ಕಾರಣ ಬಾಬಾ, ಹೀಗಾಗುತ್ತದೆ, ಹಾಗಾಗುತ್ತದೆ ಎಂದು ಕೂಗಾಡುತ್ತಿರುತ್ತಾರೆ ಅಂದಾಗ ನೆನಪೇ ಮರೆತು ಹೋಗುತ್ತಾರೆ. ದೇಹದ ಅಭಿಮಾನದಲ್ಲಿ ಬರುವುದರಿಂದಲೇ ಹಿಂದುಳಿಯುತ್ತಾರೆ. ಯಾವುದಾದರೊಂದು ಪಾಪ ಮಾಡುತ್ತಿರುತ್ತಾರೆ. ಪೂರ್ಣ ಆಧಾರವು ನೆನಪಿನ ಮೇಲಿದೆ. ನೆನಪಿನಿಂದ ಆಯಸ್ಸು ಹೆಚ್ಚುತ್ತದೆ. ಆದ್ದರಿಂದ ಯೋಗವೆಂಬ ಶಬ್ದವು ಪ್ರಸಿದ್ಧವಾಗಿದೆ. ಜ್ಞಾನವಂತೂ ಬಹಳ ಸಹಜವಾದ ಸಬ್ಜೆಕ್ಟ್ ಆಗಿದೆ. ಅನೇಕರಿಗೆ ಜ್ಞಾನವು ಇಲ್ಲ, ಯೋಗವೂ ಇರುವುದಿಲ್ಲ ಇದರಿಂದ ಬಹಳ ನಷ್ಟವಾಗುತ್ತದೆ. ಅನೇಕರು ಶ್ರಮ ಪಡುವುದೇ ಇಲ್ಲ. ವಿದ್ಯೆಯಲ್ಲಿ ನಂಬರವಾರಂತೂ ಇದ್ದೇ ಇರುತ್ತಾರೆ. ವಿದ್ಯೆಯಿಂದಲೇ ಇವರು ಎಲ್ಲಿಯವರೆಗೆ ಮತ್ತು ಯಾರ ಸರ್ವೀಸ್ ಮಾಡುತ್ತಾರೆಂದು ಬೇಹದ್ದಿನ ಆಸ್ತಿಯು ಒಬ್ಬ ಬೇಹದ್ದಿನ ತಂದೆಯಿಂದಲೇ ಸಿಗುತ್ತದೆ. ಮುಖ್ಯವಾಗಿ ಮಾತಾಪಿತ ಮತ್ತು ತಾವು ಮಕ್ಕಳು - ಇದು ಈಶ್ವರೀಯ ಕುಟುಂಬವಾಯಿತು. ನಾವು ಶಿವ ತಂದೆಯ ಸಂತಾನರಾಗಿದ್ದೇವೆ, ಅವರಿಂದಲೇ ಆಸ್ತಿಯನ್ನು ಪಡೆಯಬೇಕು ಎಂದು ನಿಮ್ಮ ವಿನಃ ಮತ್ತ್ಯಾರ ಬುದ್ಧಿಯಲ್ಲಿ ಇರುವುದಿಲ್ಲ. ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ, ಅವರೂ ಸಹ ನಿರಾಕಾರ ಶಿವ ತಂದೆಯಾಗಿದ್ದಾರೆ ಎಂದು ಹೇಗೆ ಹೇಳುತ್ತೀರಿ! ಅವರಿಂದ ಆಸ್ತಿಯನ್ನು ಹೇಗೆ ಪಡೆಯುತ್ತೀರಿ? ಪಾವನರು ಹೇಗಾಗುತ್ತೀರಿ? ಆಗುವುದಕ್ಕೆ ಸಾಧ್ಯವಿಲ್ಲ. ತಂದೆಯು ಪದೇ-ಪದೇ ಹೇಳುತ್ತಾರೆ - ಮಕ್ಕಳೇ, ಮನ್ಮನಾಭವ. ನನ್ನನ್ನು ನೆನಪು ಮಾಡಿ. ಇದನ್ನು ಯಾರೂ ಅರಿತುಕೊಂಡಿಲ್ಲ. ವಾಸ್ತವದಲ್ಲಿ ಕೃಷ್ಣನನ್ನೂ ಸಹ ಎಲ್ಲರೂ ಅರಿತುಕೊಂಡಿಲ್ಲ. ಆ ನವಿಲು ಗರಿಯ ಕಿರೀಟಧಾರಿ ಕೃಷ್ಣನು ಇಲ್ಲಿ ಹೇಗೆ ಬರುವನು? ಇದು ಬಹಳ ಉನ್ನತವಾದ ಜ್ಞಾನವಾಗಿದೆ. ಉನ್ನತವಾದ ಜ್ಞಾನದಲ್ಲಿ ಅವಶ್ಯವಾಗಿ ಸ್ವಲ್ಪ ಶ್ರಮವು ಇರುತ್ತದೆ. ಹೆಸರು ಸಹಜವಾಗಿದೆ, ತಂದೆಯಿಂದ ಆಸ್ತಿಯನ್ನು ಪಡೆಯುವುದೂ ಸಹಜವಾಗಿದೆಯಲ್ಲವೇ ಅಂದಮೇಲೆ ಮಕ್ಕಳು ಇದನ್ನು ಕಷ್ಟ ಎಂದು ಏಕೆ ತಿಳಿಯುತ್ತೀರಿ? ಏಕೆಂದರೆ ತಂದೆಯನ್ನು ನೆನಪು ಮಾಡುವುದಿಲ್ಲ. ತಂದೆಯು ಮಕ್ಕಳಿಗೆ ದುರ್ಗತಿ ಮತ್ತು ಸದ್ಗತಿಯ ರಹಸ್ಯವನ್ನು ತಿಳಿಸಿದ್ದಾರೆ. ಈ ಸಮಯದಲ್ಲಿ ಎಲ್ಲರೂ ದುರ್ಗತಿಯಲ್ಲಿ ಹೋಗುತ್ತಿದ್ದಾರೆ. ಏಕೆಂದರೆ ಮನುಷ್ಯರ ಮತವು ದುರ್ಗತಿ ಕಡೆಗೆ ಕರೆದುಕೊಂಡು ಹೋಗುತ್ತದೆ. ಇದು ಈಶ್ವರೀಯ ಮತವಾಗಿದೆ, ಆದ್ದರಿಂದ ತಂದೆಯು ಅಂತರವನ್ನು ಬರೆಸುತ್ತಾರೆ. ಪ್ರತಿಯೊಬ್ಬ ಮನುಷ್ಯನು ಕೂಡ ತನ್ನೊಂದಿಗೆ ಕೇಳಿಕೊಳ್ಳಬೇಕು - ನಾವು ನರಕವಾಸಿ ಆಗಿದ್ದೇವೆಯೇ ಅಥವಾ ಸ್ವರ್ಗವಾಸಿ ಆಗಿದ್ದೇವೆಯೇ? ಈಗ ಸತ್ಯಯುಗ ಎಲ್ಲಿದೆ? ಆದರೆ ಮನುಷ್ಯರು ಏನನ್ನೂ ಅರಿತುಕೊಂಡಿಲ್ಲ. ಸತ್ಯಯುಗವನ್ನೂ ಸಹ ಕಲ್ಪನೆ ಎಂದು ತಿಳಿಯುತ್ತಾರೆ. ಅನೇಕ ಮತಗಳಿವೆ, ಅನೇಕ ಮತಗಳಿಂದ ದುರ್ಗತಿ ಆಗುತ್ತದೆ. ಒಂದು ಮತದಿಂದ ಸದ್ಗತಿ ಆಗುತ್ತದೆ. ಇದು ಬಹಳ ಒಳ್ಳೆಯ ಘೋಷಣೆ ಆಗಿದೆ - ಮನುಷ್ಯರು ಮನುಷ್ಯರನ್ನು ದುರ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ, ಒಬ್ಬ ಈಶ್ವರನೇ ಎಲ್ಲರಿಗೆ ಸದ್ಗತಿಯನ್ನು ನೀಡುತ್ತಾರೆ ಅಂದಾಗ ತಾವು ಶುಭವನ್ನೇ ಹೇಳುತ್ತೀರಲ್ಲವೇ. ತಂದೆಯ ಮಹಿಮೆಯನ್ನು ಮಾಡುತ್ತೀರಿ, ಅವರು ಸರ್ವರ ತಂದೆ ಆಗಿದ್ದಾರೆ, ಸರ್ವರ ಸದ್ಗತಿಯನ್ನು ಮಾಡುತ್ತಾರೆ. ಮಕ್ಕಳಿಗೆ ತಂದೆಯು ಬಹಳ ತಿಳಿಸಿದ್ದಾರೆ. ಭಲೇ ಶಾಂತಿ ಯಾತ್ರೆಯನ್ನು ಮಾಡಿ, ತಿಳಿಸಿ ಸ್ವರ್ಗದ ರಚಯಿತ ನಮಗೆ ಈ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಿದ್ದಾರೆ ಎಂದು. ಈಗ ನರಕದ ಅಂತ್ಯವು ಬರಲಿದೆ, ತಿಳಿಸುವುದರಲ್ಲಿ ಶ್ರಮವಂತೂ ಪಡಬೇಕಾಗುತ್ತದೆ. ವಿಮಾನದಿಂದಲೂ ಸಹ ಸಂದೇಶ ಪತ್ರಗಳನ್ನು ಹಾಕಬಹುದು. ನಾವಂತೂ ಒಬ್ಬ ತಂದೆಯ ಮಹಿಮೆಯನ್ನು ಮಾಡುತ್ತೇವೆ. ಅವರೇ ಸರ್ವರ ಸದ್ಗತಿದಾತನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನಿಮಗೆ ಸದ್ಗತಿ ನೀಡುತ್ತೇನೆ ಮತ್ತೆ ನಿಮಗೆ ದುರ್ಗತಿಯನ್ನು ಮಾಡುವವರು ಯಾರು? ಅರ್ಧಕಲ್ಪ ಸ್ವರ್ಗ ಮತ್ತೆ ಅರ್ಧಕಲ್ಪ ನರಕವೆಂದು ಹೇಳಲಾಗುತ್ತದೆ. ರಾವಣ ರಾಜ್ಯವೆಂದರೇನೇ ಅಸುರೀ ರಾಜ್ಯ. ರಾವಣನ ವಿರುದ್ಧವಾದ ಮತದಿಂದ ಕೆಳಗೆ ಬೀಳುತ್ತಲೇ ಬರುತ್ತಾರೆ. ಪತಿತಪಾವನ ಒಬ್ಬರೇ ತಂದೆಯಾಗಿದ್ದಾರೆ. ನಾವು ತಂದೆಯಿಂದ ವಿಶ್ವಕ್ಕೆ ಮಾಲೀಕರಾಗುತ್ತಿದ್ದೇವೆ. ಈ ಶರೀರದಿಂದಲೂ ಸಹ ಮೋಹವನ್ನು ತೆಗೆಯಬೇಕಾಗಿದೆ. ಒಂದು ವೇಳೆ ಹಂಸ-ಕೊಕ್ಕರೆಗಳು ಒಟ್ಟಿಗೆ ಇದ್ದರೆ ಮೋಹವು ಹೇಗೆ ಬಿಟ್ಟು ಹೋಗುತ್ತದೆ? ಪ್ರತಿಯೊಬ್ಬರ ಪರಿಸ್ಥಿತಿಯನ್ನು ನೋಡಲಾಗುತ್ತದೆ. ತಮ್ಮ ಶರೀರದ ನಿರ್ವಾಹಣೆಯನ್ನು ತಾವೇ ಮಾಡಿಕೊಳ್ಳುವ ಸಾಹಸವಿದ್ದರೆ ಮತ್ತೆ ಹೆಚ್ಚಿನ ಜಂಜಾಟಗಳಲ್ಲಿ ಹೇಗೆ ಸಿಕ್ಕಿಕೊಳ್ಳುತ್ತೀರಿ. ಹೊಟ್ಟೆಯು ಹೆಚ್ಚಿಗೆ ಕೇಳುವುದಿಲ್ಲ. ಎರಡು ರೊಟ್ಟಿಯನ್ನು ತಿನ್ನಿ ಮತ್ತ್ಯಾವುದೇ ಚಿಂತೆ ಇಲ್ಲ. ಆದರೂ ಸಹ ತಮ್ಮೊಂದಿಗೆ ಪ್ರತಿಜ್ಞೆ ಮಾಡಿಕೊಳ್ಳಬೇಕು, ತಂದೆಯನ್ನೇ ನೆನಪು ಮಾಡಬೇಕು, ಇದರಿಂದ ವಿಕರ್ಮಗಳು ವಿನಾಶವಾಗಿ ಬಿಡುತ್ತವೆ. ಇದರ ಅರ್ಥ-ಬುದ್ಧಿಯೋಗ ವ್ಯವಹಾರಗಳನ್ನು ಮಾಡಬಾರದು ಎಂದಲ್ಲ. ಬುದ್ಧಿಯೋಗ ಮಾಡಲಿಲ್ಲವೆಂದರೆ ಹಣ ಎಲ್ಲಿಂದ ಬರುತ್ತದೆ? ಭಿಕ್ಷೆಯನ್ನಂತೂ ಬೇಡಬಾರದು, ಇದೆಯಂತೂ ಮನೆಯಾಗಿದೆ, ಶಿವ ತಂದೆಯ ಭಂಡಾರದಿಂದ ಸೇವಿಸುತ್ತೀರಿ, ಒಂದು ವೇಳೆ ಸರ್ವೀಸ್ ಮಾಡದೆ ಹಾಗೆಯೇ ತಿನ್ನುತ್ತಾರೆ ಅಂದರೆ ಭಿಕ್ಷೆಯಿಂದ ಬದುಕುತ್ತೀರಿ ಎಂದಾಗುತ್ತದೆ. ಮತ್ತೆ 21 ಜನ್ಮಗಳು ಸೇವೆ ಮಾಡಬೇಕಾಗುತ್ತದೆ. ರಾಜರಿಂದ ಗುಲಾಮರವರೆಗೂ ಎಲ್ಲರೂ ಇಲ್ಲಿಯೇ ಇದ್ದಾರೆ. ಅಲ್ಲಿಯೂ ಇರುತ್ತಾರೆ ಆದರೆ ಅಲ್ಲಿ ಸದಾ ಸುಖವಿರುತ್ತದೆ. ಇಲ್ಲಿ ಸದಾ ದುಃಖವಿದೆ. ಪದವಿಗಳಂತೂ ಇರುತ್ತದೆಯಲ್ಲವೇ. ತಂದೆಯೊಂದಿಗೆ ಪೂರ್ಣ ಯೋಗವನ್ನು ಇಡಬೇಕು, ಸರ್ವೀಸ್ ಮಾಡಬೇಕು. ಹೃದಯದಿಂದ ಕೇಳಿಕೊಳ್ಳಬೇಕು - ನಾವು ಎಷ್ಟು ಯಜ್ಞದ ಸೇವೆ ಮಾಡುತ್ತೇವೆ, ಈಶ್ವರನ ಬಳಿ ಎಲ್ಲಾ ಲೆಕ್ಕವೂ ಮಾಡಿ-ಮಾಡಲ್ಪಟ್ಟಿದೆ ಎಂದು ಹೇಳುತ್ತಾರೆ. ಈ ಚಲನೆಯಿಂದ ಇವರು ಏನು ಪದವಿಯನ್ನು ಪಡೆಯುತ್ತಾರೆ ಎಂದು ಸಾಕ್ಷಿಯಾಗಿ ನೋಡಬೇಕು. ಶ್ರೀಮತದಂತೆ ನಡೆಯುವುದರಿಂದ ಎಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆ, ನಡೆಯದಿರುವುದರಿಂದ ಪದವಿಯು ಎಷ್ಟು ಕಡಿಮೆ ಆಗುತ್ತದೆ ಎಂಬುದನ್ನೂ ಸಹ ತಿಳಿದುಕೊಳ್ಳಬಹುದು. ಇದೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ನಿಮ್ಮ ಬಳಿ ಪ್ರದರ್ಶಿನಿಯಲ್ಲಿ ಯಾವುದೇ ಧರ್ಮದವರು ಬರುತ್ತಾರೆ ಎಂದರೆ ತಿಳಿಸಿ - ಬೇಹದ್ದಿನ ತಂದೆಯಿಂದ ಅಪರಿಮಿತವಾದ ಸುಖ-ಶಾಂತಿಯ ಆಸ್ತಿಯು ಸಿಗುತ್ತದೆ. ಬೇಹದ್ದಿನ ತಂದೆಯು ಶಾಂತಿ ದಾತನಾಗಿದ್ದಾರೆ. ಅವರಿಗೆ ಶಾಂತಿ ದೇವನೆಂದು ಹೇಳುತ್ತಾರೆ. ಈಗ ಯಾವುದೇ ಜಡ ಚಿತ್ರವು ಶಾಂತಿಯನ್ನು ಕೊಡಲು ಸಾಧ್ಯವೇ! ತಂದೆಯು ತಿಳಿಸುತ್ತಾರೆ - ನಿಮ್ಮ ಸ್ವಧರ್ಮ ಶಾಂತಿಯಾಗಿದೆ, ನೀವು ಶಾಂತಿಧಾಮಕ್ಕೆ ಹೋಗಲು ಇಚ್ಚಿಸುತ್ತೀರಿ. ಶಿವಬಾಬಾ ಶಾಂತಿಯನ್ನು ಕೊಡಿ ಎಂದು ಕೇಳುತ್ತೀರೆಂದರೆ ತಂದೆ ಏಕೆ ಕೊಡುವುದಿಲ್ಲ. ತಂದೆಯು ಮಕ್ಕಳಿಗೆ ಆಸ್ತಿಯನ್ನು ಕೊಡುವುದಿಲ್ಲವೇ? ಶಿವ ತಂದೆಯೇ ಸುಖ ಕೊಡಿ ಎಂದು ಕೇಳುತ್ತಾರೆ. ತಂದೆಯಂತೂ ಸ್ವರ್ಗ ಸ್ಥಾಪನೆ ಮಾಡುವವರಾಗಿದ್ದಾರೆಂದ ಮೇಲೆ ಸುಖವನ್ನು ಏಕೆ ಕೊಡುವುದಿಲ್ಲ. ಅವರನ್ನು ನೆನಪೇ ಮಾಡುವುದಿಲ್ಲ, ಅವರನ್ನು ಕೇಳುವುದೇ ಇಲ್ಲವೆಂದಾಗ ಅವರು ಕೊಡುವುದಾದರೂ ಏನು? ಶಾಂತಿಯ ಸಾಗರನಂತೂ ತಂದೆಯೇ ಆಗಿದ್ದಾರಲ್ಲವೇ. ನೀವು ಸುಖವನ್ನು ಬಯಸುತ್ತೀರಿ. ತಂದೆಯು ತಿಳಿಸುತ್ತಾರೆ ಶಾಂತಿಯ ನಂತರ ಮತ್ತೆ ಸುಖದಲ್ಲಿ ಬರಬೇಕಾಗಿದೆ. ಮೊಟ್ಟ ಮೊದಲು ಯಾರು ಬರುತ್ತಾರೆಯೋ ಅವರು ಸುಖವನ್ನು ಪಡೆಯುತ್ತಾರೆ. ತಡವಾಗಿ ಬರುವವರಿಗೆ ಸುಖ ಬಯಸುವುದೂ ಬರುವುದೇ ಇಲ್ಲ. ಅವರು ಮುಕ್ತಿಯನ್ನು ಕೇಳುತ್ತಾರೆ. ಮೊದಲು ಎಲ್ಲರೂ ಮುಕ್ತಿಯಲ್ಲಿ ಹೋಗುತ್ತಾರೆ. ಅಲ್ಲಂತೂ ದುಃಖವಿರುವುದೇ ಇಲ್ಲ. ನಿಮಗೆ ಗೊತ್ತಿದೆ - ನಾವು ಮುಕ್ತಿಧಾಮದಲ್ಲಿ ಹೋಗಿ ನಂತರ ಜೀವನ್ಮುಕ್ತಿಯಲ್ಲಿ ಬರುತ್ತೇವೆ, ಉಳಿದವರೆಲ್ಲಾ ಮುಕ್ತಿಯಲ್ಲಿ ಹೊರಟು ಹೋಗುತ್ತಾರೆ. ಇದಕ್ಕೆ ಅಂತಿಮ ಸಮಯ ಎಂದು ಹೇಳಲಾಗುತ್ತದೆ. ಎಲ್ಲಾ ಲೆಕ್ಕಾಚಾರವು ಸಮಾಪ್ತಿ ಆಗಲಿದೆ. ಪ್ರಾಣಿಗಳಿಗೂ ಲೆಕ್ಕಾಚಾರವಿರುತ್ತದೆಯಲ್ಲವೇ. ಕೆಲವೊಂದು ಪ್ರಾಣಿಗಳು ರಾಜರ ಬಳಿ ಇದ್ದರೆ ಅವರಿಗೆ ಎಷ್ಟು ಪಾಲನೆ ಆಗುತ್ತದೆ! ರೇಸ್ ಕುದುರೆಗಳದ್ದು ಎಷ್ಟೊಂದು ಸಂಭಾಲನೆ ಆಗುತ್ತದೆ. ಏಕೆಂದರೆ ಕುದುರೆ ತೀಕ್ಷ್ಣವಾಗಿದ್ದರೆ ಒಳ್ಳೆಯ ಸಂಪಾದನೆ ಆಗುತ್ತದೆ. ಆದ್ದರಿಂದ ಮಾಲೀಕರು ಅವಶ್ಯವಾಗಿ ಪ್ರೀತಿ ಮಾಡುತ್ತಾರೆ, ಇದೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಅಲ್ಲಿ ಇದು ಇರುವುದೇ ಇಲ್ಲ, ಈ ರೇಸ್ ಮುಂತಾದುವುಗಳು ನಂತರದಲ್ಲಿ ಆರಂಭವಾಗಿದೆ. ಇದೆಲ್ಲವೂ ಮಾಡಿ-ಮಾಡಲ್ಪಟ್ಟಂತಹ ಆಟವಾಗಿದೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನೂ ನೀವು ಅರಿತುಕೊಂಡಿದ್ದೀರಿ. ಆದಿಯಲ್ಲಿ ಬಹಳ ಕಡಿಮೆ ಮನುಷ್ಯರಿರುತ್ತಾರೆ, ನಾವು ವಿಶ್ವದ ರಾಜ್ಯವನ್ನು ಮಾಡುತ್ತಿರುತ್ತೇವೆ. ಪ್ರತಿಯೊಬ್ಬರೂ ಸಹ ನಾವು ಆಗುತ್ತೇವೆಯೇ ಅಥವಾ ಇಲ್ಲವೆ, ನಾವು ಅನೇಕರ ಕಲ್ಯಾಣ ಮಾಡುತ್ತಿದ್ದೇವೆಯೇ ಎಂದು ಅರಿತುಕೊಳ್ಳಬಹುದು. ಯಾವಾಗ ತಂದೆಯು ಸಿಕ್ಕಿದ್ದಾರೆಂದ ಮೇಲೆ ಇದರಲ್ಲಿ ಶ್ರಮ ಪಡಬೇಕಾಗುತ್ತದೆ. ಪ್ರಪಂಚದವರಂತೂ ಪರಸ್ಪರ ಬೆಂಕಿ ಹತ್ತಿಕೊಳ್ಳಲೆಂದು ಎಂತೆಂತಹ ಬಾಂಬುಗಳನ್ನು ತಯಾರಿಸುತ್ತಾರೆ. ಈ ಬಿದಿರಿನ ಕಾಡಿಗೆ ಕಡಿಮೆ ಬೆಂಕಿ ಬೀಳುವುದೆ! ಇದನ್ನು ಆರಿಸುವವರು ಯಾರೂ ಇರುವುದೇ ಇಲ್ಲ. ಬಹಳಷ್ಟು ಬಾಂಬುಗಳನ್ನು ತಯಾರಿಸುತ್ತಿರುತ್ತಾರೆ ಅದರಲ್ಲಿ ವಿಷಾನಿಲವನ್ನು ಹಾಕುತ್ತಿರುತ್ತಾರೆ. ಆ ಅನಿಲವು ಹರಡುತ್ತಿದ್ದಂತೆಯೇ ಎಲ್ಲರೂ ಸಮಾಪ್ತಿಯಾಗುತ್ತಿರುತ್ತಾರೆ. ಮೃತ್ಯುವಂತೂ ಸಮ್ಮುಖದಲ್ಲಿ ನಿಂತಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ ಆಸ್ತಿಯನ್ನು ಪಡೆಯಬೇಕೆಂದಿದ್ದರೆ ಪಡೆಯಿರಿ, ಶ್ರಮ ಪಡಿ. ಅತೀ ಹೆಚ್ಚಿನದಾಗಿ ಉದ್ಯೋಗ-ವ್ಯವಹಾರಗಳಲ್ಲಿ ಹೋಗಬೇಡಿ. ಎಷ್ಟು ಚಿಂತನೆಯನ್ನಿಟ್ಟುಕೊಳ್ಳಬೇಕಾಗುತ್ತದೆ. ತಂದೆಯು ಇವರನ್ನಂತೂ ಬಿಡಿಸಿದರು, ಈಗ ಇದಂತೂ ಛೀ-ಛೀ ಪ್ರಪಂಚವಾಗಿದೆ. ನೀವು ಮಕ್ಕಳು ತಂದೆಯನ್ನು ನೆನಪು ಮಾಡಬೇಕು. ಅದರಿಂದ ನಿಮ್ಮ ವಿಕರ್ಮ ವಿನಾಶವಾಗಬೇಕು ಮತ್ತು ತಂದೆಯಿಂದ ಆಸ್ತಿಯನ್ನು ಪಡೆಯಬೇಕು. ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಲಕ್ಷ್ಮೀ-ನಾರಾಯಣರ ಚಿತ್ರವನ್ನು ನೋಡುತ್ತಿದ್ದಂತೆಯೇ ಹೃದಯ ಖುಷಿಯಾಗಿ ಬಿಡುತ್ತದೆ. ಇದು ನಮ್ಮ ಗುರಿ-ಧ್ಯೇಯವಾಗಿದೆ. ಭಲೇ ಪೂಜೆ ಮಾಡುತ್ತಿದ್ದೆವು ಆದರೆ ನಾವೇ ಈ ರೀತಿ ಆಗುತ್ತೇವೆ. ನೆನ್ನೆ ಪೂಜಾರಿಯಾಗಿದ್ದೆವು ಇಂದು ಪೂಜ್ಯರಾಗುತ್ತಿದ್ದೇವೆ ಎಂಬುದು ಗೊತ್ತಿರಲಿಲ್ಲ. ತಂದೆಯು ಬಂದರು ಆಗ ಪೂಜೆಯನ್ನು ಬಿಟ್ಟೆವು. ತಂದೆಯು ವಿನಾಶ ಮತ್ತು ಸ್ಥಾಪನೆಯ ಸಾಕ್ಷಾತ್ಕಾರವನ್ನು ಮಾಡಿಸಿದರಲ್ಲವೆ. ನಾವು ವಿಶ್ವದ ಮಾಲೀಕರಾಗುತ್ತೇವೆ, ಇದೆಲ್ಲವೂ ಸಮಾಪ್ತಿಯಾಗಲಿದೆ ಅಂದಮೇಲೆ ನಾವು ತಂದೆಯನ್ನೇಕೆ ನೆನಪು ಮಾಡಬಾರದು! ಬಾಬಾ ತಾವು ಎಷ್ಟು ಮಧುರರಾಗಿದ್ದೀರಿ ಎಂದು ಆಂತರ್ಯದಲ್ಲಿ ಒಬ್ಬ ತಂದೆಯದೇ ಮಹಿಮೆ ಮಾಡುತ್ತಿರುತ್ತೇನೆ. ನಿಮಗೆ ಗೊತ್ತಿದೆ, ನಾವೆಲ್ಲಾ ಆತ್ಮಗಳ ತಂದೆಯು ಅವರೊಬ್ಬರೇ ಆಗಿದ್ದಾರೆ, ಅವರಿಂದಲೇ ಆಸ್ತಿಯು ಸಿಗುತ್ತದೆ. ನಾವು ಭಕ್ತಿ ಮಾರ್ಗದಲ್ಲಿ ಅವರನ್ನು ನೆನಪು ಮಾಡುತ್ತಿದ್ದೆವು, ಅವರು ಪರಮಧಾಮದ ನಿವಾಸಿ ಆಗಿದ್ದಾರೆ. ಆದ್ದರಿಂದಲೇ ಅವರ ಚಿತ್ರವಿದೆ. ಒಂದು ವೇಳೆ ಅವರು ಬರದಿದ್ದರೆ ಅವರ ಚಿತ್ರವೇಕೆ ಇರುತ್ತಿತ್ತು? ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಅವರಿಗೆ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ. ಉಳಿದಂತೆ ಎಲ್ಲರಿಗೂ ಮನುಷ್ಯರು ಅಥವಾ ದೇವತೆಗಳೆಂದು ಹೇಳಲಾಗುತ್ತದೆ. ಎಲ್ಲದಕ್ಕಿಂತ ಮೊದಲು ಆದಿ ಸನಾತನ ದೇವೀ-ದೇವತಾ ಧರ್ಮವಿತ್ತು ನಂತರ ಅನ್ಯ ಧರ್ಮಗಳಾಗಿವೆ ಅಂದಮೇಲೆ ಇಂತಹ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕು. ಭಕ್ತಿಮಾರ್ಗದಲ್ಲಂತೂ ಬಹಳ ಕರೆಯುತ್ತಾರೆ, ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಏನು ಬಂದರೆ ಅದನ್ನು ಮಹಿಮೆ ಮಾಡುತ್ತಿರುತ್ತಾರೆ. ಅನೇಕ ಮಹಿಮೆಗಳಿವೆ. ತಂದೆಯ ಮಹಿಮೆಯೇನು ಮಾಡುತ್ತಾರೆ. ನೀವೇ ಕೃಷ್ಣ, ನೀವೇ ವ್ಯಾಸ, ನೀವೇ ಇಂತಹವರಾಗಿದ್ದೀರಿ........ ಇದಂತೂ ನಿಂಧನೆಯಾಯಿತಲ್ಲವೆ. ತಂದೆಗೆ ಎಷ್ಟೊಂದು ಅಪಕಾರ ಮಾಡುತ್ತಾರೆ. ಆದ್ದರಿಂದ ತಂದೆಯೇ ತಿಳಿಸುತ್ತಾರೆ - ಇವರೆಲ್ಲರೂ ನನ್ನ ಅಪಕಾರ ಮಾಡುತ್ತಾರೆ ಮತ್ತೆ ನಾನೇ ಬಂದು ಸರ್ವರಿಗೆ ಉಪಕಾರ, ಸರ್ವರ ಸದ್ಗತಿ ಮಾಡುತ್ತೇನೆ. ನಾನು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ಬರುತ್ತೇನೆ. ಇದೇ ಸೋಲು-ಗೆಲುವಿನ ಆಟವಾಗಿದೆ. 5000 ವರ್ಷಗಳ ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ. ಇದರಲ್ಲಿ ಸ್ವಲ್ಪವೂ ಅಂತರವಾಗುವುದಿಲ್ಲ. ಈ ನಾಟಕದ ರಹಸ್ಯವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮನುಷ್ಯ ಮತಗಳಂತೂ ಅನೇಕವು ಬಿಡುಗಡೆಯಾಗುತ್ತಿರುತ್ತವೆ. ದೇವತೆಗಳ ಮತವಂತೂ ಸಿಗುವುದೇ ಇಲ್ಲ, ಎಲ್ಲವೂ ಮನುಷ್ಯರ ಮತಗಳಾಗಿವೆ. ಪ್ರತಿಯೊಬ್ಬರು ತಮ್ಮ ಬುದ್ಧಿವಂತಿಕೆಯನ್ನು ತೋರಿಸುತ್ತಿರುತ್ತಾರೆ. ಈಗ ತಾವು ಮತ್ತ್ಯಾರನ್ನೂ ನೆನಪು ಮಾಡಬಾರದು. ಆತ್ಮವು ಕೇವಲ ತಂದೆಯನ್ನೇ ನೆನಪು ಮಾಡುತ್ತಿರಲಿ, ಇದರಲ್ಲಿ ಶ್ರಮ ಪಡಬೇಕಾಗಿದೆ. ಹೇಗೆ ಭಕ್ತರೂ ಶ್ರಮ ಪಡುತ್ತಾರಲ್ಲವೆ. ಬಹಳ ಶ್ರದ್ಧೆಯಿಂದ ಭಕ್ತಿ ಮಾಡುತ್ತಾರೆ. ಹೇಗೆ ಅದು ಭಕ್ತಿಯಾಗಿದೆ ಆದರೆ ನಿಮ್ಮದು ಇದು ಜ್ಞಾನದ ಪರಿಶ್ರಮವಾಗಿದೆ. ಭಕ್ತಿಯಲ್ಲಿ ಕಡಿಮೆ ಪರಿಶ್ರಮ ಮಾಡುತ್ತಾರೆಯೇ? ಗುರುಗಳು ಹೇಳುತ್ತಾರೆ - ಪ್ರತಿನಿತ್ಯವು 100 ಮಾಲೆಗಳನ್ನು ಜಪಿಸಿ, ಮತ್ತೆ ಕುಟೀರದಲ್ಲಿ ಕುಳಿತು ಬಿಡುತ್ತಾರೆ. ಮಾಲೆಯನ್ನು ಜಪಿಸುತ್ತಾ-ಜಪಿಸುತ್ತಾ ಘಂಟೆಗಳು ಹಿಡಿಸುತ್ತದೆ. ಬಹಳಷ್ಟು ಜನ ರಾಮ-ರಾಮನೆಂದೇ ಜಪಿಸುತ್ತಾರೆ. ಇಲ್ಲಂತೂ ತಾವು ತಂದೆಯ ನೆನಪಿನಲ್ಲಿರಬೇಕಾಗಿದೆ. ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಎಷ್ಟೊಂದು ಮಧುರಾತಿ ಮಧುರ ತಂದೆಯಾಗಿದ್ದಾರೆ, ಕೇವಲ ನನ್ನನ್ನು ನೆನಪು ಮಾಡಿ ಮತ್ತು ದೈವೀ ಗುಣಗಳನ್ನು ಧಾರಣೆ ಮಾಡಿ ಎಂದು ಹೇಳುತ್ತಾರೆ. ತಾವು ಮಾಡಿದಾಗಲೇ ಅನ್ಯರಿಗೂ ಮಾರ್ಗವನ್ನು ತಿಳಿಸುತ್ತಿರಿ. ತಂದೆಯಂಥಹ ಮಧುರರು ಮತ್ತ್ಯಾರೂ ಇಲ್ಲ. ಕಲ್ಪದ ನಂತರ ನಿಮಗೆ ಮಧುರ ತಂದೆಯು ಸಿಗುತ್ತಾರೆ. ಆದರೆ ಇಂತಹ ಮಧುರ ತಂದೆಯನ್ನು ಏಕೆ ಮರೆತು ಬಿಡುತ್ತೀರೋ ಗೊತ್ತಿಲ್ಲ! ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ತಾವೂ ಅವಶ್ಯವಾಗಿ ಸ್ವರ್ಗದ ಮಾಲೀಕರಾಗುತ್ತೀರಿ. ಆದರೆ ತುಕ್ಕನ್ನು ಇಳಿಸಿಕೊಳ್ಳಲು ತಂದೆಯನ್ನು ನೆನಪು ಮಾಡಿ. ನೆನಪು ಮಾಡಲು ಆಗದೇ ಇರುವಂತಹ ಕಷ್ಟವೇನು ಬರುತ್ತದೆ, ಕಾರಣವನ್ನು ತಿಳಿಸಿ - ತಂದೆಯನ್ನು ನೆನಪು ಮಾಡಲು ಕಷ್ಟವೇ? ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
೧. ಶರೀರ ನಿರ್ವಹಣೆಗಾಗಿ ಕರ್ಮವನ್ನು ಅವಶ್ಯವಾಗಿ ಮಾಡಿ ಆದರೆ ಅತಿಯಾದ ಜಂಜಾಟದಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ತಂದೆಯ ನೆನಪೇ ಮರೆತು ಹೋಗುವ ಉದ್ಯೋಗ-ವ್ಯವಹಾರದ ಚಿಂತನೆಯು ಬೇಡ.

೨. ಅನೇಕ ಮನುಷ್ಯರ ಮತಗಳನ್ನು ಬಿಟ್ಟು ಒಬ್ಬ ತಂದೆಯ ಮತದಂತೆ ನಡೆಯಬೇಕು. ಒಬ್ಬ ತಂದೆಯ ಮಹಿಮೆಯನ್ನು ಹಾಡಬೇಕು. ಒಬ್ಬ ತಂದೆಯನ್ನೇ ಪ್ರೀತಿ ಮಾಡಬೇಕು ಉಳಿದವರೆಲ್ಲರಿಂದ ಮೋಹವನ್ನು ತೆಗೆಯಬೇಕು.


ವರದಾನ:
ಜ್ಞಾನದ ಬೆಳಕು ಹಾಗೂ ಶಕ್ತಿಯಿಂದ ತಪ್ಪನ್ನು ಸರಿಯಲ್ಲಿ ಪರಿವರ್ತನೆ ಮಾಡುವಂತಹ ಜ್ಞಾನಿತ್ವ ಆತ್ಮ ಭವ.

ಜ್ಞಾನವನ್ನು ಬೆಳಕು ಹಾಗೂ ಶಕ್ತಿ ಎಂದು ಹೇಳಲಾಗುವುದು, ಎಲ್ಲಿ ಬೆಳಕು ಅರ್ಥಾತ್ ಪ್ರಕಾಶವಿದೆ ಅಲ್ಲಿ ಇದು ತಪ್ಪಾಗಿದೆ, ಇದು ಸರಿಯಾಗಿದೆ, ಇದು ಅಂಧಕಾರವಾಗಿದೆ, ಇದು ಪ್ರಕಾಶವಾಗಿದೆ, ಇದು ವ್ಯರ್ಥವಾಗಿದೆ, ಇದು ಸಮರ್ಥವಾಗಿದೆ - ಆದ್ದರಿಂದ ತಪ್ಪು ಎಂದು ತಿಳಿಯುವವರು ತಪ್ಪು ಕರ್ಮ ಅಥವಾ ಸಂಕಲ್ಪಕ್ಕೆ ವಶೀಭೂತರಾಗಲು ಸಾಧ್ಯವಿಲ್ಲ. ಜ್ಞಾನಿತ್ವ ಆತ್ಮ ಅರ್ಥಾತ್ ತಿಳುವಳಿಕೆ ಉಳ್ಳವರು, ಜ್ಞಾನ ಸ್ವರೂಪರು ಎಂದೂ ಹೀಗೆ ಹೇಳಲು ಸಾಧ್ಯವಿಲ್ಲ. ಹೀಗೆ ಆಗ ಬೇಕಿತ್ತು..... ಆದರೆ ಅವರ ಬಳಿ ತಪ್ಪನ್ನು ಸರಿಯಾಗಿ ಪರಿವರ್ತನೆ ಮಾಡುವ ಶಕ್ತಿ ಇರುವುದು.

ಸ್ಲೋಗನ್:
ಯಾರು ಸದಾ ಶುಭಚಿಂತಕ ಮತ್ತು ಶುಭ-ಚಿಂತನೆಯಲ್ಲಿರುತ್ತಾರೆ ಅವರು ವ್ಯರ್ಥ ಚಿಂತನೆಯಿಂದ ಮುಕ್ತರಾಗಿರುತ್ತಾರೆ.