16.08.19         Morning Kannada Murli       Om Shanti           BapDada Madhuban


ಪ್ರಾತಃ ಮುರಳಿ ಓಂ ಶಾಂತಿ ಬಾಪದಾದಾ ಮಧುಬನ

ಪ್ರಶ್ನೆ:
ಮಕ್ಕಳ ಯಾವ ಸ್ಥಿತಿಯನ್ನು ನೋಡುತ್ತಾ ತಂದೆಗೆ ಚಿಂತೆಯಾಗುವುದಿಲ್ಲ, ಏಕೆ?

ಉತ್ತರ:
ಕೆಲವು ಮಕ್ಕಳು ಸುಗಂಧಿತ ಹೂವುಗಳಾಗಿದ್ದಾರೆ, ಇನ್ನು ಕೆಲವರಲ್ಲಿ ಸ್ವಲ್ಪವೂ ಪರಿಮಳವಿಲ್ಲ, ಕೆಲವರ ಸ್ಥಿತಿಯು ಬಹಳ ಚೆನ್ನಾಗಿದೆ, ಇನ್ನೂ ಕೆಲವರು ಮಾಯೆಯ ಬಿರುಗಾಳಿಗಳಿಂದ ಸೋಲನ್ನನುಭವಿಸುತ್ತಾರೆ. ಇವೆಲ್ಲವನ್ನು ನೋಡುತ್ತಿದ್ದರೂ ಸಹ ತಂದೆಗೆ ಚಿಂತೆಯಾಗುವುದಿಲ್ಲ, ಏಕೆಂದರೆ ತಂದೆಗೆ ಗೊತ್ತಿದೆ, ಈಗ ಸತ್ಯಯುಗದ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಆದರೂ ಸಹ ತಂದೆಯು ಶಿಕ್ಷಣ ಕೊಡುತ್ತಾರೆ - ಮಕ್ಕಳೇ ಎಷ್ಟು ಸಾಧ್ಯವೋ ಅಷ್ಟು ನೆನಪಿನಲ್ಲಿರಿ, ಮಾಯೆಯ ಬಿರುಗಾಳಿಗಳಿಗೆ ಹೆದರಬೇಡಿ.

ಓಂ ಶಾಂತಿ.
ಮಧುರಾತಿ ಮಧುರ ಬೇಹದ್ದಿನ ತಂದೆಯು ಮಧುರಾತಿ ಮಧುರ ಬೇಹದ್ದಿನ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಇದು ನಿಮಗೆ ತಿಳಿದಿದೆ ಅಲ್ಲವೆ - ಬಹಳ ಮಧುರಾತಿ ಮಧುರ ತಂದೆಯಾಗಿದ್ದಾರೆ ಮತ್ತು ಶಿಕ್ಷಣ ಕೊಡುವಂತಹ ತಂದೆಯು ಮಧುರಾತಿ ಮಧುರ ಆಗಿದ್ದಾರೆ. ಇಲ್ಲಿ ನೀವು ಕುಳಿತುಕೊಂಡಾಗ ಇದು ನೆನಪಿರಬೇಕು - ತಂದೆಯು ಬಹಳ ಮಧುರಾತಿ ಮಧುರ ಆಗಿದ್ದಾರೆ, ಅವರಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ. ಇಲ್ಲಿ ವೇಶ್ಯಾಲಯದಲ್ಲಿ ಕುಳಿತಿದ್ದೀರಿ. ತಂದೆ ಎಷ್ಟು ಮಧುರ ಆಗಿದ್ದಾರೆ! ಆ ಖುಷಿಯು ಹೃದಯದಲ್ಲಿರಬೇಕು. ತಂದೆಯು ನಮ್ಮನ್ನು ಅರ್ಧ ಕಲ್ಪ ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ದುಃಖ ದೂರ ಮಾಡುವವರಾಗಿದ್ದಾರೆ. ಒಂದನೇಯದಾಗಿ ಅವರು ನಮ್ಮ ತಂದೆಯಾಗಿದ್ದಾರೆ ಮತ್ತು ಅವರೇ ಶಿಕ್ಷಕರೂ ಆಗಿದ್ದಾರೆ. ನಮಗೆ ಇಡೀ ಸೃಷ್ಟಿ ಚಕ್ರದ ರಹಸ್ಯವನ್ನು ತಿಳಿಸುತ್ತಾರೆ. ಅದನ್ನು ಬೇರೆ ಯಾರೂ ತಿಳಿಸಲು ಸಾಧ್ಯವಿಲ್ಲ. ಈ ಚಕ್ರವು ಹೇಗೆ ತಿರುಗುತ್ತದೆ, 84 ಜನ್ಮಗಳನ್ನು ಹೇಗೆ ಪಾರು ಮಾಡುತ್ತೇವೆ? ಇದೆಲ್ಲ ರಹಸ್ಯವನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತಾರೆ ಮತ್ತು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಇಲ್ಲಿ ಬಿಡುವುದಿಲ್ಲ. ಎಲ್ಲ ಆತ್ಮಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಬಹಳಷ್ಟು ಕಳೆಯಿತು ಸ್ವಲ್ಪ ಮಾತ್ರ ಉಳಿದಿದೆ…. ಎಂದು ಹೇಳುತ್ತಾರೆ. ಇನ್ನು ಸ್ವಲ್ಪ ಸಮಯವಿದೆ. ಆದ್ದರಿಂದ ಬೇಗ ಬೇಗನೆ ನನ್ನನ್ನು ನೆನಪು ಮಾಡಿ, ಆಗ ನಿಮ್ಮ ಜನ್ಮ ಜನ್ಮಾಂತರ ಪಾಪಗಳ ಹೊರೆಯ ಲೆಕ್ಕ ಸಮಾಪ್ತಿಯಾಗುತ್ತದೆ. ಮಾಯೆ ಯುದ್ಧ ಮಾಡಿದರೂ ನೀವು ನನ್ನನ್ನು ನೆನಪು ಮಾಡುತ್ತಿರಿ, ಮಾಯೆಯು ನೆನಪು ಮಾಡುವುದರಿಂದ ದೂರ ಮಾಡುತ್ತದೆ. ಇದನ್ನೂ ಸಹ ತಂದೆಯು ತಿಳಿಸುತ್ತಾರೆ, ಆದ್ದರಿಂದ ಎಂದೂ ವಿಚಾರ ಮಾಡಬಾರದು. ಎಷ್ಟೇ ಸಂಕಲ್ಪ-ವಿಕಲ್ಪಗಳು, ಬಿರುಗಾಳಿಗಳು ಬರಲಿ, ಇಡೀ ರಾತ್ರಿ ಸಂಕಲ್ಪಗಳಲ್ಲಿ ನಿದ್ರೆ ಹೊರಟು ಹೋದರೂ ಸಹ ಹೆದರಬಾರದು. ಬಹದ್ದೂರರಾಗಿರಬೇಕು. ತಂದೆಯು ಹೇಳುತ್ತಾರೆ - ಮಕ್ಕಳೇ ಅವಶ್ಯವಾಗಿ ಬರುತ್ತವೆ, ಸ್ವಪ್ನಗಳೂ ಬರುತ್ತವೆ. ಆದರೆ ಈ ಮಾತುಗಳಿಗೆ ಹೆದರಬಾರದು, ಯುದ್ಧದ ಮೈದಾನವಲ್ಲವೆ. ಇದೆಲ್ಲವೂ ವಿನಾಶವಾಗಲಿದೆ. ನೀವು ಯುದ್ಧ ಮಾಡುತ್ತೀರಿ ಮಾಯೆಯನ್ನು ಗೆಲ್ಲುವುದಕ್ಕಾಗಿ ಇದರಲ್ಲೇನು ಶ್ವಾಸವನ್ನು ನಿಲ್ಲಿಸುವ ಅವಶ್ಯಕತೆ ಇಲ್ಲ. ಆತ್ಮವು ಶರೀರದಲ್ಲಿದ್ದಾಗ ಶ್ವಾಸವು ಅವಶ್ಯ ನಡೆಯುತ್ತದೆ. ಇದರಲ್ಲಿ ಶ್ವಾಸವನ್ನು ನಿಲ್ಲಿಸುವ ಪ್ರಯತ್ನ ಮಾಡಬಾರದು. ಹಠಯೋಗ ಮುಂತಾದವುಗಳಲ್ಲಿ ಎಷ್ಟು ಕಷ್ಟ ಪಡುತ್ತಾರೆ. ತಂದೆಗೆ ಅನುಭವವಿದೆ. ಸ್ವಲ್ಪ ಸ್ವಲ್ಪ ಕಲಿಯುತ್ತಿದ್ದರು, ಆದರೆ ಬಿಡುವಿರಬೇಕಲ್ಲವೆ. ಯಾವ ರೀತಿ ನಿಮಗೆ ಇತ್ತೀಚೆಗೆ ಹೇಳುತ್ತಾರಲ್ಲವೆ - ಜ್ಞಾನವಂತೂ ಚೆನ್ನಾಗಿದೆ ಆದರೆ ಬಿಡುವೆಲ್ಲಿ! ಎಷ್ಟೊಂದು ಕಾರ್ಖಾನೆಗಳಿವೆ. ಅದು ಇದೆ, ಇದು ಇದೆ… ನಿಮಗೆ ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಮೊದಲನೇಯದಾಗಿ ತಂದೆಯನ್ನು ನೆನಪು ಮಾಡಿ, ಚಕ್ರವನ್ನು ನೆನಪು ಮಾಡಿ ಸಾಕು. ಇದು ಕಷ್ಟವೇ?

ಸತ್ಯಯುಗ ತ್ರೇತಾಯುಗದಲ್ಲಿ ಇವರ ರಾಜ್ಯವಿತ್ತು. ನಂತರ ಇಸ್ಲಾಮಿ, ಬೌದ್ಧಿ ಮೊದಲಾದವರ ವೃದ್ಧಿಯಾಯಿತು. ಅವರು (ದೇವತೆಗಳು) ತಮ್ಮ ಧರ್ಮವನ್ನು ಮರೆತರು. ತಮ್ಮನ್ನು ದೇವಿ ದೇವತೆಯೆಂದು ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ, ಏಕೆಂದರೆ ಅಪವಿತ್ರರಾದರು. ದೇವತೆಗಳು ಪವಿತ್ರರಾಗಿದ್ದರು, ನಾಟಕದನುಸಾರ ನಂತರದಲ್ಲಿ ಅವರು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ. ವಾಸ್ತವದಲ್ಲಿ ಹಿಂದೂ ಧರ್ಮವಂತೂ ಇಲ್ಲ, ಹಿಂದೂಸ್ಥಾನವೆನ್ನುವ ಹೆಸರು ನಂತರ ಬಂದಿದೆ. ಮೂಲ ಹೆಸರು ಭಾರತವಾಗಿದೆ. ಭಾರತ ಮಾತೆಗೆ ಜಯವಾಗಲಿ ಎನ್ನುತ್ತಾರೆಯೇ ಹೊರತು ಹಿಂದೂಸ್ಥಾನದ ಮಾತೆಯರಿಗೆ ಎಂದು ಹೇಳುತ್ತಾರೆಯೇ! ಭಾರತದಲ್ಲಿಯೇ ಈ ದೇವತೆಗಳ ರಾಜ್ಯವಿತ್ತು, ಭಾರತದ ಮಹಿಮೆಯನ್ನೇ ಹಾಡುತ್ತಾರೆ. ತಂದೆಯನ್ನು ಹೇಗೆ ನೆನಪು ಮಾಡಬೇಕೆಂದು ಕಲಿಸಿಕೊಡುತ್ತಾರೆ. ತಂದೆಯು ಬಂದಿರುವುದೇ ಮನೆಗೆ ಕರೆದುಕೊಂಡು ಹೋಗಲು. ಯಾರನ್ನು? ಆತ್ಮರನ್ನು. ನೀವು ತಂದೆಯನ್ನು ಎಷ್ಟು ನೆನಪು ಮಾಡುತ್ತೀರೊ ಅಷ್ಟು ಪವಿತ್ರರಾಗುತ್ತೀರಿ. ಪವಿತ್ರರಾಗಿ ಹೋದಾಗ ಶಿಕ್ಷೆಯನ್ನು ಅನುಭವಿಸುವುದಿಲ್ಲ. ಶಿಕ್ಷೆ ಅನುಭವಿಸಿದರೆ ಪದವಿ ಕಡಿಮೆಯಾಗುತ್ತದೆ. ಆದ್ದರಿಂದ ನೆನಪು ಮಾಡಿದಷ್ಟು ವಿಕರ್ಮ ವಿನಾಶವಾಗುತ್ತದೆ. ಅನೇಕ ಮಕ್ಕಳು ನೆನಪೇ ಮಾಡುವುದಿಲ್ಲ, ಬೇಸರವಾದಾಗ ಬಿಟ್ಟು ಬಿಡುತ್ತಾರೆ, ಯುದ್ಧ ಮಾಡುವುದೇ ಇಲ್ಲ. ಇಂತಹವರೂ ಇದ್ದಾರೆ. ಆಗ ತಿಳಿದುಕೊಳ್ಳಬೇಕು - ರಾಜಧಾನಿಯು ಸ್ಥಾಪನೆಯಾಗಲಿದೆ, ಅನೇಕರು ಅನುತ್ತೀರ್ಣರಾಗುತ್ತಾರೆ. ಪ್ರಜೆಗಳು ಬೇಕಲ್ಲವೆ. ಅಲ್ಲಿ ದುಃಖವಿರುವುದಿಲ್ಲ ಆದರೆ ಪ್ರತಿಯೊಂದು ಸ್ಥಿತಿಯಲ್ಲಿ ಬಡವರು ಸಾಹುಕಾರರು ಎನ್ನುವ ಅಂತರವಿರುತ್ತದೆಯಲ್ಲವೆ. ಇದು ಕಲಿಯುಗವಾಗಿದೆ, ಇಲ್ಲಿ ಸಾಹುಕಾರ ಮತ್ತು ಬಡವ ಇಬ್ಬರೂ ದುಃಖವನ್ನು ಭೋಗಿಸುತ್ತಾರೆ, ಅಲ್ಲಿ ಇಬ್ಬರೂ ಸುಖಿಯಾಗಿರುತ್ತಾರೆ. ಆದರೆ ಸಾಹುಕಾರ ಹಾಗೂ ಬಡವರೆನ್ನುವ ಭಾವನೆಯಿರುತ್ತದೆ. ದುಃಖದ ಹೆಸರಿರುವುದಿಲ್ಲ. ಆದರೆ ನಂಬರವಾರಂತೂ ಇದ್ದೇ ಇರುತ್ತಾರೆ. ಯಾವುದೇ ರೋಗವಿರುವುದಿಲ್ಲ, ಆಯುಷ್ಯವೂ ದೀರ್ಘವಾಗಿರುತ್ತದೆ. ಈ ದುಃಖಧಾಮವನ್ನು ಮರೆತು ಬಿಡುತ್ತಾರೆ. ಸತ್ಯಯುಗದಲ್ಲಿ ನಿಮಗೆ ದುಃಖದ ನೆನಪೂ ಇರುವುದಿಲ್ಲ. ದುಃಖಧಾಮ ಮತ್ತು ಸುಖಧಾಮದ ನೆನಪನ್ನು ಈಗ ತಂದೆಯು ತರಿಸುತ್ತಾರೆ. ಸ್ವರ್ಗವಿತ್ತೆಂದು ಮನುಷ್ಯರು ಹೇಳುತ್ತಾರೆ, ಆದರೆ ಯಾವಾಗ ಇತ್ತು, ಹೇಗಿತ್ತು? ಏನನ್ನೂ ತಿಳಿದುಕೊಂಡಿಲ್ಲ. ಲಕ್ಷಾಂತರ ವರ್ಷಗಳ ಮಾತಂತೂ ಯಾರಿಗೂ ನೆನಪಿಗೆ ಬರುವುದಿಲ್ಲ. ತಂದೆಯು ತಿಳಿಸುತ್ತಾರೆ - ನಿನ್ನೆ ನಿಮಗೆ ಸುಖವಿತ್ತು, ಪುನಃ ನಾಳೆ ಪುನಃ ಇರುತ್ತದೆ. ಇಲ್ಲಿ ಕುಳಿತು ತಂದೆಯು ಹೂವುಗಳನ್ನು ನೋಡುತ್ತಾರೆ. ಇವರು ಒಳ್ಳೆಯ ಹೂವಾಗಿದ್ದಾರೆ, ಇವರು ಈ ಪ್ರಕಾರದ ಪರಿಶ್ರಮ ಪಡುತ್ತಾರೆ, ಇವರು ಸ್ಥಿರವಾಗಿಲ್ಲ, ಇವರು ಕಲ್ಲು ಬುದ್ಧಿಯರಾಗಿದ್ದಾರೆ ಎಂದು ನೋಡುತ್ತಾರೆ. ಆದರೆ ತಂದೆಗೆ ಯಾವ ಮಾತಿನ ಚಿಂತೆ ಇರುವುದಿಲ್ಲ. ಹಾ! ಮಕ್ಕಳು ಬೇಗ ಓದಿ ಸಾಹುಕಾರರಾಗಲಿ ಆದ್ದರಿಂದ ಓದಿಸಲೂ ಬೇಕೆಂದು ಹೇಳುತ್ತಾರೆ. ಮಕ್ಕಳಂತೂ ಆಗಿದ್ದಾರೆ, ಆದರೆ ಬೇಗನೆ ಓದಿ ಬುದ್ಧಿವಂತರಾಗಲಿ. ಅವರೂ ಸಹ ಎಲ್ಲಿಯವರೆಗೆ ಓದುತ್ತಾರೆ ಮತ್ತು ಓದಿಸುತ್ತಾರೆ, ಎಂತಹ ಹೂಗಳಾಗಿದ್ದಾರೆಂದು ತಂದೆಯು ನೋಡುತ್ತಾರೆ, ಏಕೆಂದರೆ ಇದು ಚೈತನ್ಯ ಹೂಗಳ ಉದ್ಯಾನವನವಾಗಿದೆ. ಹೂಗಳನ್ನು ನೋಡುತ್ತಿದ್ದರೆ ಎಷ್ಟು ಖುಷಿಯಾಗುತ್ತದೆ. ಮಕ್ಕಳು ತಾವೇ ತಿಳಿದುಕೊಳ್ಳುತ್ತಾರೆ - ತಂದೆಯು ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ತಂದೆಯನ್ನು ನೆನಪು ಮಾಡುತ್ತಿದ್ದರೆ ಪಾಪಗಳು ತುಂಡಾಗುತ್ತವೆ. ಇಲ್ಲವಾದರೆ ಶಿಕ್ಷೆಯನ್ನು ಅನುಭವಿಸಿದ ನಂತರ ಪದವಿಯನ್ನು ಪಡೆಯುತ್ತೀರಿ. ಇದಕ್ಕೆ ಪೆಟ್ಟು ತಿಂದು ಅಲ್ಪ ಸ್ವಲ್ಪ ರೊಟ್ಟಿ ಪಡೆಯುವುದು ಎಂದು ಹೇಳುತ್ತಾರೆ. ತಂದೆಯನ್ನು ಆ ರೀತಿ ನೆನಪು ಮಾಡಿ ಅದರಿಂದ ಜನ್ಮ ಜನ್ಮಾಂತರದ ಪಾಪಗಳು ಭಸ್ಮವಾಗಬೇಕು. ಚಕ್ರವನ್ನೂ ಸಹ ಅರಿತುಕೊಳ್ಳಬೇಕು. ಚಕ್ರವು ಸುತ್ತುತ್ತಲೇ ಇರುತ್ತದೆ, ಎಂದೂ ನಿಂತು ಹೋಗುವುದಿಲ್ಲ. ನಿಧಾನವಾಗಿ ಹೇನಿನಂತೆ ನಡೆಯುತ್ತದೆ. ಹೇನು ಎಲ್ಲದಕ್ಕಿಂತ ನಿಧಾನವಾಗಿ ನಡೆಯುತ್ತದೆ. ಈ ಬೇಹದ್ದಿನ ನಾಟಕವೂ ಸಹ ನಿಧಾನವಾಗಿ ನಡೆಯುತ್ತದೆ. ಕ್ಷಣ-ಪ್ರತಿಕ್ಷಣ ಕಳೆಯುತ್ತಾ ಇರುತ್ತದೆ. 5000 ವರ್ಷಗಳಲ್ಲಿ ಸೆಕೆಂಡುಗಳು, ನಿಮಿಷಗಳು ಎಷ್ಟಿರುತ್ತವೆ ಎನ್ನುವುದನ್ನು ಮಕ್ಕಳು ಬರೆದು ಕಳುಹಿಸಿದ್ದಾರೆ. ಲಕ್ಷಾಂತರ ವರ್ಷಗಳ ಲೆಕ್ಕವನ್ನು ಯಾರೂ ತೆಗೆಯಲು ಸಾಧ್ಯವಿಲ್ಲ. ಇಲ್ಲಿ ತಂದೆ ಮತ್ತು ಮಕ್ಕಳು ಕುಳಿತಿದ್ದೀರಿ. ತಂದೆಯು ಕುಳಿತು ಒಬ್ಬೊಬ್ಬರನ್ನು ಇವರು ತಂದೆಯನ್ನು ಎಷ್ಟು ನೆನಪು ಮಾಡುತ್ತಾರೆ, ಎಷ್ಟು ಜ್ಞಾನವನ್ನು ತಿಳಿದುಕೊಂಡಿದ್ದಾರೆ, ಅನ್ಯರಿಗೆ ಎಷ್ಟು ತಿಳಿಸುತ್ತಾರೆಂದು ನೋಡುತ್ತಾರೆ. ಬಹಳ ಸಹಜವಾಗಿದೆ, ಕೇವಲ ತಂದೆಯ ಪರಿಚಯ ಕೊಡಿ. ಮಕ್ಕಳ ಬಳಿ ತಂದೆಯ ಬ್ಯಾಡ್ಜ್ ಅಂತೂ ಇದ್ದೇ ಇರುತ್ತದೆ. ಹೇಳಿ ಇವರು ಶಿವ ತಂದೆಯಾಗಿದ್ದಾರೆ. ಕಾಶಿಗೆ ಹೋಗುವವರೂ ಸಹ ಶಿವ ತಂದೆ, ಶಿವ ತಂದೆ ಎಂದು ಹೇಳುತ್ತಾ ನೆನಪು ಮಾಡುತ್ತಾರೆ, ಕೂಗುತ್ತಾರೆ. ನೀವು ಸಾಲಿಗ್ರಾಮಗಳಾಗಿದ್ದೀರಿ. ಆತ್ಮವಂತೂ ಬಹಳ ಸೂಕ್ಷ್ಮ ನಕ್ಷತ್ರವಾಗಿದೆ, ಅದರಲ್ಲಿ ಎಷ್ಟೊಂದು ಪಾತ್ರ ತುಂಬಿದೆ. ಆತ್ಮವು ಕ್ಷೀಣಿಸುವುದೂ ಇಲ್ಲಾ ಬೆಳೆಯುವುದೂ ಇಲ್ಲ. ಆತ್ಮವು ವಿನಾಶವಾಗುವುದಿಲ್ಲ. ಆತ್ಮವು ಅವಿನಾಶಿಯಾಗಿದೆ. ಅದರಲ್ಲಿ ನಾಟಕದ ಪಾತ್ರವು ತುಂಬಿದೆ. ವಜ್ರವು ಎಲ್ಲದಕ್ಕಿಂದ ಶಕ್ತಿಯುತವಾಗಿರುತ್ತದೆ. ಅದರಂತಹ ಗಟ್ಟಿ ಕಲ್ಲು ಯಾವುದೂ ಇರುವುದಿಲ್ಲ. ಇದು ವಜ್ರದ ವ್ಯಾಪಾರಿಗಳಿಗೆ ತಿಳಿದಿರುತ್ತದೆ. ಆತ್ಮದ ವಿಚಾರ ಮಾಡಿ, ಇಷ್ಟು ಚಿಕ್ಕದಾಗಿದೆ ಅದರಲ್ಲಿ ಎಷ್ಟೊಂದು ಪಾತ್ರವು ತುಂಬಲ್ಪಟ್ಟಿದೆ, ಅದು ಎಂದೂ ಸವೆಯುವುದಿಲ್ಲ. ಇನ್ನೊಂದು ಆತ್ಮವಾಗುವುದಿಲ್ಲ. ಈ ಪ್ರಪಂಚದಲ್ಲಿ ನಾವು ತಂದೆ, ಶಿಕ್ಷಕ, ಸದ್ಗುರು ಎಂದು ಹೇಳುವಂತಹ ಮನುಷ್ಯರ್ಯಾರೂ ಇಲ್ಲ. ಇದು ಒಂದು ಬೇಹದ್ದಿನ ನಾಟಕವಾಗಿದೆ. ಶಿಕ್ಷಕರಿದ್ದಾರೆ, ಎಲ್ಲರಿಗೆ ಶಿಕ್ಷಣ ಕೊಡುತ್ತಾರೆ. ಮನ್ಮನಾಭವ. ನಿಮಗೂ ತಿಳಿಸುತ್ತಾರೆ - ಯಾವುದೇ ಧರ್ಮದವರು ಬಂದರೂ ಅವರಿಗೆ ಹೇಳಿ - ಅಲ್ಲಾನನ್ನು ನೆನಪು ಮಾಡುತ್ತೀರಲ್ಲವೆ. ಆತ್ಮರೆಲ್ಲರೂ ಪರಸ್ಪರ ಸಹೋದರರಾಗಿದ್ದೀರಿ. ತಂದೆಯು ಶಿಕ್ಷಣವನ್ನು ಕೊಡುತ್ತಾರೆ - ನನ್ನೊಬ್ಬನನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆ. ತಂದೆಯು ಪತಿತ ಪಾವನರಾಗಿದ್ದಾರೆ, ಇದನ್ನು ಯಾರು ಹೇಳಿದರು? ಆತ್ಮ. ಮನುಷ್ಯರು ಹಾಡುತ್ತಾರೆ ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ.

ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಸೀತೆಯರಾಗಿದ್ದೀರಿ, ನಾನು ರಾಮನಾಗಿದ್ದೇನೆ. ಎಲ್ಲ ಭಕ್ತರ ಸದ್ಗತಿದಾತ ನಾನಾಗಿದ್ದೇನೆ. ತಂದೆಯು ಎಲ್ಲರ ಸದ್ಗತಿಯನ್ನು ಮಾಡುತ್ತಾರೆ. ಉಳಿದವರೆಲ್ಲರೂ ಮುಕ್ತಿಧಾಮಕ್ಕೆ ಹೊರಟು ಹೋಗುತ್ತಾರೆ. ಸತ್ಯಯುಗದಲ್ಲಿ ಅನ್ಯ ಯಾವುದೇ ಧರ್ಮದವರು ಇರುವುದಿಲ್ಲ. ಕೇವಲ ನಾವೇ ಇರುತ್ತೇವೆ ಏಕೆಂದರೆ ನಾವೇ ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆ. ಇಲ್ಲಿ ನೋಡಿ, ಎಷ್ಟೊಂದು ಮಂದಿರಗಳಿವೆ, ಎಷ್ಟು ದೊಡ್ಡ ಪ್ರಪಂಚವಾಗಿದೆ, ಎಂತೆಂತಹ ವಸ್ತುಗಳಿವೆ. ಅಲ್ಲಿ ಇವು ಇರುವುದಿಲ್ಲ. ಭಾರತ ಮಾತ್ರ ಇರುತ್ತದೆ. ಈ ರೈಲು ಇತ್ಯಾದಿಗಳಿರುವುದಿಲ್ಲ. ಇವೆಲ್ಲವೂ ಸಮಾಪ್ತಿಯಾಗುತ್ತದೆ. ಅಲ್ಲಿ ರೈಲಿನ ಅವಶ್ಯಕತೆ ಇರುವುದೇ ಇಲ್ಲ. ಚಿಕ್ಕ ನಗರವಾಗಿರುತ್ತದೆ. ದೂರ ದೂರದ ಊರುಗಳಿಗೆ ಹೋಗಲು ರೈಲು ಬೇಕು. ತಂದೆಯು ರಿಫ್ರೆಶ್ ಮಾಡುತ್ತಿದ್ದಾರೆ. ಭಿನ್ನ ಭಿನ್ನ ವಿಚಾರಗಳನ್ನು ಮಕ್ಕಳಿಗೆ ತಿಳಿಸುತ್ತಿರುತ್ತಾರೆ, ನೀವಿಲ್ಲಿ ಕುಳಿತಿದ್ದೀರಿ, ಬುದ್ಧಿಯಲ್ಲಿ ಪೂರ್ಣ ಜ್ಞಾನವಿದೆ, ಪರಮಪಿತ ಪರಮಾತ್ಮನಲ್ಲಿ ಜ್ಞಾನ ತುಂಬಿದೆ ಅದನ್ನು ನೀವು ಮಕ್ಕಳಿಗೆ ತಿಳಿಸುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಶಾಂತಿಧಾಮದಲ್ಲಿರುವಂತಹ ಶಾಂತಿ ಸಾಗರ ತಂದೆಯಾಗಿದ್ದಾರೆ. ನಾವು ಆತ್ಮರೂ ಸಹ ಅಲ್ಲಿ ಮಧುರ ಮನೆಯಲ್ಲಿ ಇರುವಂತಹವರಾಗಿದ್ದೇವೆ. ಶಾಂತಿಗಾಗಿ ಮನುಷ್ಯರು ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ, ಮನಸ್ಸಿಗೆ ಶಾಂತಿ ಹೇಗೆ ಸಿಗುತ್ತದೆ ಎಂದು ಸಾಧುಗಳೂ ಕೇಳುತ್ತಾರೆ, ಏನೇನೋ ಯುಕ್ತಿ ರಚಿಸುತ್ತಾರೆ. ಹೇಳಲಾಗುತ್ತದೆ - ಆತ್ಮವೇ ಮನ, ಬುದ್ಧಿ ಸಹಿತವಾಗಿದೆ, ಅದರ ಸ್ವಧರ್ಮವೇ ಶಾಂತಿಯಾಗಿದೆ. ಮುಖವೂ ಇಲ್ಲ, ಕರ್ಮೇಂದ್ರಿಯಗಳೂ ಇಲ್ಲ ಅಂದಮೇಲೆ ಶಾಂತವಾಗಿಯೇ ಇರುತ್ತದೆ. ನಾವು ಆತ್ಮರ ನಿವಾಸ ಸ್ಥಾನವು ಮಧುರ ಮನೆಯಾಗಿದೆ, ಅಲ್ಲಿ ಸಂಪೂರ್ಣ ಶಾಂತಿಯಿರುತ್ತದೆ. ಪುನಃ ನಾವು ಅಲ್ಲಿಂದ ಮೊದಲು ಸುಖಧಾಮಕ್ಕೆ ಬರುತ್ತೇವೆ. ಈಗಂತೂ ಇಲ್ಲಿ ಈ ದುಃಖಧಾಮದಿಂದ ಸುಖಧಾಮಕ್ಕೆ ವರ್ಗಾವಣೆಯಾಗುತ್ತೇವೆ.. ತಂದೆಯು ಪಾವನರನ್ನಾಗಿ ಮಾಡುತ್ತಾರೆ ಎಷ್ಟು ದೊಡ್ಡ ಪ್ರಪಂಚವಾಗಿದೆ, ಇಷ್ಟು ದೊಡ್ಡ ಕಾಡು ಮುಂತಾದವು ಇರುವುದಿಲ್ಲ. ಇಷ್ಟೊಂದು ಪರ್ವತಗಳೂ ಇರುವುದಿಲ್ಲ, ನಮ್ಮ ರಾಜಧಾನಿಯಿರುತ್ತದೆ. ಸ್ವರ್ಗದ ಚಿಕ್ಕ ಚಿಕ್ಕ ಮಾದರಿ ಮಾಡುತ್ತಾರೆ ಅದೇ ರೀತಿ ಸ್ವರ್ಗವು ಚಿಕ್ಕದಾಗಿಯೇ ಇರುತ್ತದೆ. ಏನು ಅದ್ಭುತವಾಗುವುದು ಅದನ್ನು ನೋಡಿ! ಎಷ್ಟು ದೊಡ್ಡ ಸೃಷ್ಟಿಯಿದೆ ಇಲ್ಲಿ ಪರಸ್ಪರ ಹೊಡೆದಾಡುತ್ತಿರುತ್ತಾರೆ. ನಂತರ ಇಷ್ಟೆಲ್ಲ ಪ್ರಪಂಚವು ಸಮಾಪ್ತಿಯಾಗುತ್ತದೆ, ನಮ್ಮ ರಾಜ್ಯವೇ ಉಳಿಯುತ್ತದೆ. ಇಷ್ಟೆಲ್ಲವೂ ಸಮಾಪ್ತಿಯಾಗಿ ಎಲ್ಲಿ ಹೋಗುತ್ತದೆ! ಸಮುದ್ರ, ಧರಣಿ, ಮೊದಲಾದವುದರಲ್ಲಿ ಹೊರಟು ಹೋಗುತ್ತದೆ, ಹೆಸರು, ಗುರುತೂ ಇರುವುದಿಲ್ಲ. ಸಮುದ್ರದೊಳಗೆ ಯಾವುದೇ ವಸ್ತು ಹೋದರೆ ಅದು ಒಳಗೇ ಸಮಾಪ್ತಿಯಾಗುತ್ತದೆ, ಸಾಗರವು ನುಂಗಿ ಬಿಡುತ್ತದೆ. ತತ್ವಗಳು ತತ್ವಗಳಲ್ಲಿ, ಮಣ್ಣು ಮಣ್ಣಿನಲ್ಲಿ ಸೇರಿ ಹೋಗುತ್ತದೆ. ನಂತರ ಪ್ರಪಂಚವು ಸತೋಪ್ರಧಾನವಾಗುತ್ತದೆ. ಆ ಸಮಯಕ್ಕೆ ಹೊಸ ಸತೋಪ್ರಧಾನ ಪ್ರಕೃತಿಯೆಂದು ಹೇಳಲಾಗುತ್ತದೆ. ಅಲ್ಲಿ ನಿಮ್ಮದು ಸ್ವಾಭಾವಿಕ ಸೌಂದರ್ಯವಿರುತ್ತದೆ. ಲಿಪಸ್ಟಿಕ್ ಇತ್ಯಾದಿಗಳೇನೂ ಹಾಕಿಕೊಳ್ಳುವುದಿಲ್ಲ ಅಂದಾಗ ನೀವು ಮಕ್ಕಳಿಗೆ ಖುಷಿಯಿರಬೇಕು. ನೀವೇ ಸ್ವರ್ಗದ ದೇವತೆಗಳಾಗುತ್ತೀರಿ.

ಜ್ಞಾನ ಸ್ನಾನ ಮಾಡದಿದ್ದರೆ ನೀವು ದೇವತೆಯಾಗುವುದಿಲ್ಲ, ಬೇರೆ ಯಾವ ಉಪಾಯವಿಲ್ಲ. ತಂದೆಯಂತೂ ಸದಾ ಸುಂದರರಾಗಿದ್ದಾರೆ, ನೀವಾತ್ಮರು ಕಪ್ಪಾಗಿ ಬಿಟ್ಟಿದ್ದೀರಿ. ಪ್ರಿಯತಮನಂತೂ ಬಹಳ ಸುಂದರ ಯಾತ್ರಿಕನಾಗಿದ್ದಾರೆ, ಬಂದು ನಿಮ್ಮನ್ನು ಸುಂದರರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಬಂದು ಈ ಬ್ರಹ್ಮಾರವರಲ್ಲಿ ಪ್ರವೇಶ ಮಾಡಿದ್ದೇನೆ, ನಾನೆಂದೂ ಕಪ್ಪಾಗುವುದಿಲ್ಲ. ನೀವೇ ಶ್ಯಾಮನಿಂದ ಸುಂದರರಾಗುತ್ತೀರಿ, ಸದಾ ಸುಂದರನು ಒಬ್ಬ ಯಾತ್ರಿಕ ಮಾತ್ರ ಆಗಿದ್ದಾರೆ. ಇವರು (ಬ್ರಹ್ಮಾ) ಶ್ಯಾಮ ಮತ್ತು ಸುಂದರ ಆಗುತ್ತಾರೆ. ನಿಮ್ಮೆಲ್ಲರನ್ನೂ ಸುಂದರರನ್ನಾಗಿ ಮಾಡಿ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ ಅಂದಾಗ ಈಗ ತಾವು ಮಕ್ಕಳು ಸುಂದರರಾಗಿ ಎಲ್ಲರನ್ನೂ ಸುಂದರ ಮಾಡಬೇಕಾಗಿದೆ. ತಂದೆಯು ಶ್ಯಾಮ-ಸುಂದರನಾಗುವುದಿಲ್ಲ. ಗೀತೆಯಲ್ಲಿ ತಂದೆಯ ಬದಲಾಗಿ ಕೃಷ್ಣನ ಹೆಸರನ್ನು ಹಾಕಿ ತಪ್ಪು ಮಾಡಿದ್ದಾರೆ. ಇದಕ್ಕೆ ನಂಬರ ಒನ್ ತಪ್ಪು ಎಂದು ಹೇಳಲಾಗುತ್ತದೆ. ಇಡೀ ವಿಶ್ವವನ್ನು ಸುಂದರ ಮಾಡುವವರು ಶಿವಬಾಬಾ. ಅವರ ಬದಲಾಗಿ ಸ್ವರ್ಗದ ಮೊದಲನೇ ಸುಂದರ ರಾಜಕುಮಾರನ ಹೆಸರನ್ನು ಹಾಕಿದ್ದಾರೆ. ಇದನ್ನು ತಿಳಿದುಕೊಳ್ಳುವುದೇ ಇಲ್ಲ. ಶ್ಯಾಮನಿಂದ ಪುನಃ ಸುಂದರ ಆಗಬೇಕು. ಇನ್ನೂ 40 ಸಾವಿರ ವರ್ಷಗಳ ನಂತರ ಸ್ವರ್ಗವಾಗುವುದೆಂದು, ಮನುಷ್ಯರು ತಿಳಿದುಕೊಂಡಿದ್ದಾರೆ ಮತ್ತು ನೀವು ತಿಳಿಸುತ್ತೀರಿ - ಇಡೀ ಕಲ್ಪವೇ 5000 ವರ್ಷಗಳದಾಗಿದೆ ಅಂದಾಗ ತಂದೆಯು ಆತ್ಮರೊಂದಿಗೆ ಮಾತನಾಡುತ್ತಾರೆ. ಹೇಳುತ್ತಾರೆ - ನಾನು ಅರ್ಧ ಕಲ್ಪದ ಪ್ರಿಯತಮನಾಗಿದ್ದೇನೆ. ಹೇ ಪತಿತ ಪಾವನ ಬನ್ನಿ, ಬಂದು ನಾವು ಆತ್ಮರನ್ನು, ಪ್ರಿಯತಮೆಯರನ್ನು ಪಾವನ ಮಾಡಿ ಎಂದು ನೀವು ನನ್ನನ್ನು ಕರೆಯುತ್ತಾ ಬಂದಿದ್ದೀರಿ, ಅಂದಮೇಲೆ ನೀವು ಈಗ ನನ್ನ ಮತದಂತೆ ನಡೆಯಬೇಕಲ್ಲವೆ. ಪರಿಶ್ರಮ ಪಡಬೇಕು. ನೀವು ಉದ್ಯೋಗ ವ್ಯವಹಾರವನ್ನು ಮಾಡಬೇಡಿ ಎಂದು ಹೇಳುತ್ತಿಲ್ಲ, ಅದೆಲ್ಲವನ್ನೂ ಮಾಡಲೇಬೇಕು. ಗೃಹಸ್ಥ ವ್ಯವಹಾರದಲ್ಲಿದ್ದು ಕೇವಲ ತಮ್ಮನ್ನು ಆತ್ಮವೆಂದು ತಿಳಿದು ನನ್ನನ್ನು ನೆನಪು ಮಾಡಿ. ಏಕೆಂದರೆ ನಾನು ಪತಿತ ಪಾವನನಾಗಿದ್ದೇನೆ. ಭಲೇ ಮಕ್ಕಳ ಸಂಭಾಲನೆ ಮಾಡಿ, ಆದರೆ ಈಗ ಮಕ್ಕಳಿಗೆ ಜನ್ಮ ಕೊಡುವ ಕೆಲಸ ಮಾಡಬೇಡಿ. ಇಲ್ಲವಾದರೆ ಅವರು ನೆನಪಿಗೆ ಬರುತ್ತಾರೆ. ಇವರೆಲ್ಲರೂ ಇರುತ್ತಲೂ ಅವರನ್ನು ಮರೆಯಬೇಕಾಗಿದೆ. ನೀವು ನೋಡುತ್ತಿರುವುದೆಲ್ಲವೂ ಸಮಾಪ್ತಿಯಾಗುತ್ತದೆ, ಶರೀರವು ಸಮಾಪ್ತಿಯಾಗುತ್ತದೆ. ತಂದೆಯ ನೆನಪಿನಿಂದ ಆತ್ಮವು ಪವಿತ್ರವಾಗುತ್ತದೆ. ಆಗ ಪುನಃ ಹೊಸ ಶರೀರ ಸಿಗುತ್ತದೆ. ಇದೇ ಬೇಹದ್ದಿನ ಸನ್ಯಾಸವಾಗಿದೆ. ತಂದೆಯು ಹೊಸ ಮನೆಯನ್ನು ಮಾಡುತ್ತಾರೆಂದರೆ ಹಳೆಯ ಮನೆಯಿಂದ ಬುದ್ಧಿ ದೂರವಾಗುತ್ತದೆ. ಸ್ವರ್ಗದಲ್ಲಿ ಏನು ತಾನೇ ಇರುವುದಿಲ್ಲ! ಅಪಾರ ಸುಖವಿರುತ್ತದೆ. ಇಲ್ಲಿಯೇ ಸ್ವರ್ಗವಿರುತ್ತದೆ. ದಿಲ್ವಾಡಾ ಮಂದಿರವು ಪೂರ್ಣ ನೆನಪಾರ್ಥವಾಗಿದೆ, ಕೆಳಗೆ ತಪಸ್ಸು ಮಾಡುತ್ತಿದ್ದಾರೆ ಮತ್ತೆ ಸ್ವರ್ಗವನ್ನು ಎಲ್ಲಿ ತೋರಿಸಬೇಕು? ಅವರು ಅದನ್ನು ಮೇಲೆ ತೋರಿಸಿದ್ದಾರೆ. ಕೆಳಗೆ ರಾಜಯೋಗದ ತಪಸ್ಸು ಮಾಡುತ್ತಿದ್ದಾರೆ. ಮೇಲೆ ರಾಜ್ಯ ಪದವಿಯು ನಿಂತಿದೆ. ಎಷ್ಟು ಒಳ್ಳೆಯ ಮಂದಿರವಾಗಿದೆ. ಬೆಟ್ಟದ ಮೇಲೆ ಅಚಲಗಢವಿದೆ, ಚಿನ್ನದ ಮೂರ್ತಿಗಳಿವೆ. ಅದಕ್ಕಿಂತಲೂ ಮೇಲೆ ಗುರು ಶಿಖರವಿದೆ. ಗುರುವು ಎಲ್ಲರಿಗಿಂತ ಮೇಲೆ ಕುಳಿತಿದ್ದಾರೆ. ಸದ್ಗುರು ಶ್ರೇಷ್ಠಾತಿ ಶ್ರೇಷ್ಠ ಆಗಿದ್ದಾರೆ. ಮತ್ತೆ ನಡುವೆ ಸ್ವರ್ಗವನ್ನು ತೋರಿಸಿದ್ದಾರೆ ಅಂದಾಗ ಈ ದಿಲ್ವಾಡಾ ಮಂದಿರವು ಪೂರ್ಣ ನೆನಪಾರ್ಥವಾಗಿದೆ. ನೀವು ರಾಜಯೋಗವನ್ನು ಕಲಿಯುತ್ತಿದ್ದೀರಿ, ಸ್ವರ್ಗವು ಇಲ್ಲಿರುತ್ತದೆ. ದೇವತೆಗಳು ಇಲ್ಲಿಯೇ ಇದ್ದರಲ್ಲವೆ. ಆದರೆ ಅವರಿಗಾಗಿ ಪಾವನ ಪ್ರಪಂಚವು ಈಗ ಸ್ಥಾಪನೆಯಾಗುತ್ತಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಕಣ್ಣುಗಳಿಂದ ಎಲ್ಲವನ್ನೂ ನೋಡುತ್ತಿದ್ದರೂ ಇದನ್ನು ಮರೆಯುವ ಅಭ್ಯಾಸ ಮಾಡಬೇಕು. ಹಳೆಯ ಮನೆಯಿಂದ, ಪ್ರಪಂಚದಿಂದ ಬುದ್ಧಿಯನ್ನು ತೆಗೆಯಬೇಕಾಗಿದೆ. ಹೊಸ ಮನೆಯನ್ನು ನೆನಪು ಮಾಡಬೇಕು.

2. ಜ್ಞಾನ ಸ್ನಾನ ಮಾಡಿ ಸುಂದರ ದೇವತೆಯಾಗಬೇಕು. ತಂದೆಯು ಸುಂದರ ಯಾತ್ರಿಕರಾಗಿದ್ದಾರೆ, ಹಾಗೆಯೇ ಅವರ ನೆನಪಿನಿಂದ ಆತ್ಮವನ್ನು ಶ್ಯಾಮನಿಂದ ಸುಂದರ ಮಾಡಿಕೊಳ್ಳಬೇಕಾಗಿದೆ. ಮಾಯೆಯ ಯುದ್ಧಕ್ಕೆ ಹೆದರಬಾರದು, ವಿಜಯಿಯಾಗಿ ತೋರಿಸಬೇಕು.

ವರದಾನ:
ಬೇಹದ್ದಿನ ವೈರಾಗ್ಯ ವೃತ್ತಿಯ ಮೂಲಕ ಹಳೆಯ ಸಂಸ್ಕಾರಗಳ ಯುದ್ಧದಿಂದ ಸುರಕ್ಷಿತರಾಗಿರುವಂತಹ ಮಾಸ್ಟರ್ ಜ್ಞಾನಸಂಪನ್ನ ಭವ.

ಹಳೆಯ ಸಂಸ್ಕಾರಗಳ ಕಾರಣ ಸೇವೆಯಲ್ಲಿ ಹಾಗೂ ಸಂಬಂಧ ಸಂಪರ್ಕಗಳಲ್ಲಿ ವಿಘ್ನ ಉಂಟಾಗುವುದು. ಸಂಸ್ಕಾರವೇ ಭಿನ್ನ-ಭಿನ್ನ ರೂಪದಿಂದ ತನ್ನ ಕಡೆ ಆಕರ್ಷಣೆ ಮಾಡುವುದು. ಎಲ್ಲಿ ಯಾವುದಾದರೂ ಒಂದು ಕಡೆ ಆಕರ್ಷಣೆ ಇದ್ದಲ್ಲಿ ಅಲ್ಲಿ ವೈರಾಗ್ಯವಿರಲು ಸಾಧ್ಯವಿಲ್ಲ. ಮುಚ್ಚಿಕೊಂಡಿರುವ ಸಂಸ್ಕಾರಗಳ ಅಂಶವೂ ಸಹ ಸಮಯ ಪ್ರಮಾಣ ವಂಶದ ರೂಪ ತೆಗೆದುಕೊಂಡು ಬಿಡುವುದು, ಪರವಶರನ್ನಾಗಿ ಮಾಡುವುದು. ಆದ್ದರಿಂದ ಜ್ಞಾನ ಸಂಪನ್ನರಾಗಿ, ಬೇಹದ್ಧಿನ ವೈರಾಗ್ಯ ವೃತ್ತಿಯ ಮೂಲಕ ಹಳೆಯ ಸಂಸ್ಕಾರಗಳು, ಸಂಬಂಧಗಳು, ಪಧಾರ್ಥಗಳ ಯುದ್ಧದಿಂದ ಮುಕ್ತರಾದಾಗ ಸುರಕ್ಷಿತರಾಗಿರುವಿರಿ.

ಸ್ಲೋಗನ್:
ಮಾಯೆಯಿಂದ ನಿರ್ಭಯರಾಗಿರಿ ಮತ್ತು ಪರಸ್ಪರ ಸಂಬಂಧಗಳಲ್ಲಿ ನಿರ್ಮಾಣರಾಗಿರಿ.