08.08.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಕೆಲಸ ಕಾರ್ಯಗಳನ್ನು ಮಾಡುತ್ತಲೂ ಒಬ್ಬ ತಂದೆಯ ನೆನಪಿನಲ್ಲಿರಿ, ನಡೆಯುತ್ತಾ-ಓಡಾಡುತ್ತಾ ತಂದೆ ಮತ್ತು ಮನೆಯನ್ನು ನೆನಪು ಮಾಡಿ, ಇದೇ ನಿಮ್ಮ ಸಾಹಸವಾಗಿದೆ”

ಪ್ರಶ್ನೆ:
ತಂದೆಯ ಗೌರವ ಮತ್ತು ಅಗೌರವ ಯಾವಾಗ ಮತ್ತು ಹೇಗಾಗುತ್ತದೆ?

ಉತ್ತರ:
ಯಾವಾಗ ನೀವು ಮಕ್ಕಳು ತಂದೆಯನ್ನು ಅರಿತುಕೊಂಡು ನೆನಪು ಮಾಡುತ್ತೀರೋ ಆಗ ಗೌರವ ಕೊಡುತ್ತೀರೆಂದರ್ಥ. ನೆನಪು ಮಾಡಲು ಬಿಡುವಿಲ್ಲವೆಂದು ಹೇಳಿದರೆ ಅಗೌರವ ಮಾಡುತ್ತೀರೆಂದರ್ಥ. ಯಾವ ಮಕ್ಕಳು ಬೆಳಗ್ಗೆ ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡುವುದಿಲ್ಲವೋ ಅವರು ಅಗೌರವ ಮಾಡುತ್ತಾರೆ. ವಾಸ್ತವದಲ್ಲಿ ಇವರು ತಂದೆಗೆ ಅಗೌರವ ಮಾಡುವುದಿಲ್ಲ, ಇದಂತೂ ತಮ್ಮದೇ ಅಗೌರವ ಮಾಡಿಕೊಳ್ಳುತ್ತೀರಿ. ಆದುದರಿಂದ ಕೇವಲ ಭಾಷಣ ಮಾಡುವುದರಲ್ಲಿ ಪ್ರಸಿದ್ಧರಾಗುವುದಲ್ಲ, ನೆನಪಿನ ಯಾತ್ರೆಯಲ್ಲಿ ಪ್ರಸಿದ್ಧರಾಗಿರಿ. ನೆನಪಿನ ಚಾರ್ಟ ಇಡಿ, ನೆನಪಿನಿಂದಲೇ ಆತ್ಮವು ಸತೋಪ್ರಧಾನವಾಗುತ್ತದೆ.

ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಾರೆ, ಈ 84 ಜನ್ಮಗಳ ಚಕ್ರದ ಯಾವ ಜ್ಞಾನವನ್ನು ತಿಳಿಸಲಾಗುತ್ತದೆ ಇದು ಒಂದು ನಾಲೆಜ್ಜ್ ಆಗಿದೆ. ಯಾವುದನ್ನು ನಾವು ಮಕ್ಕಳು ಜನ್ಮ ಜನ್ಮಾಂತರ ಓದಿದ್ದೇವೆ ಮತ್ತು ಧಾರಣೆ ಮಾಡುತ್ತಾ ಬಂದಿದ್ದೇವೆ, ಇದಂತೂ ಸಂಪೂರ್ಣ ಸಹಜವಾಗಿದೆ, ಇದು ಯಾವುದೇ ಹೊಸ ಮಾತಲ್ಲ. ತಂದೆಯು ಕುಳಿತು ತಿಳಿಸುತ್ತಾರೆ - ನೀವು ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೂ ಎಷ್ಟೊಂದು ಪುನರ್ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈ ಜ್ಞಾನವು ಸಹಜವಾಗಿ ಬುದ್ಧಿಯಲ್ಲಿ ಇದ್ದೇ ಇದೆ. ಇದೂ ಸಹ ಒಂದು ವಿದ್ಯೆಯಾಗಿದೆ, ರಚನೆಯ ಆದಿ ಮಧ್ಯ ಅಂತ್ಯವನ್ನು ತಿಳಿದುಕೊಳ್ಳಬೇಕಾಗಿದೆ. ಇದನ್ನು ತಂದೆಯ ವಿನಃ ಬೇರೆ ಯಾರೂ ತಿಳಿಸಲು ಸಾಧ್ಯವಿಲ್ಲ. ಜ್ಞಾನಕ್ಕಿಂತಲೂ ನೆನಪಿನ ಯಾತ್ರೆ ಶ್ರೇಷ್ಠವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಇದಕ್ಕೆ ಯೋಗವೆಂದು ಹೇಳುತ್ತಾರೆ. ಯೋಗ ಶಬ್ದವು ಪ್ರಸಿದ್ಧವಾಗಿದೆ ಆದರೆ ಇದು ನೆನಪಿನ ಯಾತ್ರೆಯಾಗಿದೆ. ಹೇಗೆ ಮನುಷ್ಯರು ತೀರ್ಥ ಯಾತ್ರೆಗೆ ಹೋದಾಗ ಹೇಳುತ್ತಾರೆ ಇಂತಹ ತೀರ್ಥ ಯಾತ್ರೆಗೆ ಹೋಗುತ್ತೇವೆ. ಶ್ರೀನಾಥ ಅಥವಾ ಅಮರನಾಥಕ್ಕೆ ಹೋದಾಗ ಅದು ನೆನಪಿರುತ್ತದೆ. ಈಗ ನಿಮಗೆ ಗೊತ್ತಿದೆ, ಆತ್ಮಿಕ ತಂದೆಯಂತೂ ಬಹಳ ದೊಡ್ಡದಾದ ದೂರದ ಯಾತ್ರೆಯನ್ನು ಕಲಿಸುತ್ತಾರೆ - ನನ್ನನ್ನು ನೆನಪು ಮಾಡಿರಿ. ಆ ಯಾತ್ರೆಯಿಂದ ಪುನಃ ಹಿಂತಿರುಗಿ ಬರುತ್ತಾರೆ, ಆದರೆ ಈ ಯಾತ್ರೆಯು ಮುಕ್ತಿಧಾಮಕ್ಕೆ ಹೋಗಿ ನಿವಾಸ ಮಾಡುವುದಾಗಿದೆ. ಪಾತ್ರ ಮಾಡಲು ಬರಬೇಕು ಆದರೆ ಈ ಹಳೆಯ ಪ್ರಪಂಚದಲ್ಲಿ ಅಲ್ಲ. ಈ ಹಳೆಯ ಪ್ರಪಂಚದ ಮೇಲೆ ನಿಮಗೆ ವೈರಾಗ್ಯವಿದೆ. ಇದು ಛೀ ಛೀ ರಾವಣನ ರಾಜ್ಯವಾಗಿದೆ ಅಂದಾಗ ಮೂಲ ಮಾತು ನೆನಪಿನ ಯಾತ್ರೆಯದಾಗಿದೆ. ಕೆಲವು ಮಕ್ಕಳು ಹೇಗೆ ನೆನಪು ಮಾಡುವುದೆನ್ನುವುದನ್ನು ತಿಳಿದುಕೊಂಡಿಲ್ಲ. ನೆನಪು ಮಾಡುತ್ತಾರೊ ಇಲ್ಲವೊ ಎನ್ನುವುದನ್ನು ನೋಡಲು ಇದು ಸ್ಥೂಲವಾಗಿ ಕಾಣಿಸುವುದಿಲ್ಲ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿದು ನನ್ನನ್ನು ನೆನಪು ಮಾಡಿರಿ. ಸ್ಥೂಲವಾಗಿ ನೋಡುವಂತಹ ವಸ್ತುವಲ್ಲ ಮತ್ತು ತಿಳಿಯುವುದೂ ಇಲ್ಲ. ಆ ಸ್ಥಿತಿಯಲ್ಲಿ ಎಲ್ಲಿಯವರೆಗೆ ನಾನು ನೆನಪಿನ ಯಾತ್ರೆಯಲ್ಲಿ ಸ್ಥಿರವಾಗಿ ಇರುತ್ತೇನೆ ಎನ್ನುವುದನ್ನು ನೀವೇ ತಿಳಿದುಕೊಳ್ಳಬಹುದು. ಯುಕ್ತಿಯಂತೂ ಅನೇಕರಿಗೆ ತಿಳಿಸುತ್ತಾರೆ. ಕಲ್ಯಾಣಕಾರಿ ತಂದೆಯು ತಿಳಿಸಿದ್ದಾರೆ - ತಮ್ಮನ್ನು ಆತ್ಮ ಎಂದು ತಿಳಿದು ಶಿವ ತಂದೆಯನ್ನು ನೆನಪು ಮಾಡಿ. ಭಲೆ ನಿಮ್ಮ ಸೇವೆಯನ್ನು ಮಾಡುತ್ತಿರಿ. ಯಾವ ರೀತಿ ಕಾವಲು ಕಾಯುವ ಮಕ್ಕಳಿದ್ದಾರೆ ಅವರು ತಿರುಗಾಡುತ್ತಿರುತ್ತಾರೆ, ಅವರಿಗೆ ನೆನಪು ಮಾಡುವುದು ಬಹಳ ಸಹಜವಾಗಿದೆ. ತಂದೆಯ ನೆನಪಿನ ವಿನಃ ಬೇರೆ ಏನೂ ನೆನಪಿಗೆ ಬರಬಾರದು. ತಂದೆಯು ಉದಾಹರಣೆ ಕೊಡುತ್ತಾರೆ. ಆ ನೆನಪಿನಲ್ಲಿಯೇ ಬರಬೇಕು ಹೋಗಬೇಕು. ಹೇಗೆ ಪಾದ್ರಿಗಳು ಹೋಗುತ್ತಾರೆ, ಎಷ್ಟು ಶಾಂತಿಯಿಂದ ಹೋಗುತ್ತಾರೆ, ಅಂದಮೇಲೆ ನೀವು ಮಕ್ಕಳೂ ಸಹ ಪ್ರೀತಿಯಿಂದ ತಂದೆ ಮತ್ತು ಮನೆಯ ನೆನಪು ಮಾಡಬೇಕಾಗಿದೆ. ಈ ಗುರಿಯು ಬಹಳ ಉನ್ನತವಾಗಿದೆ. ಭಕ್ತರೂ ಸಹ ಈ ಪುರುಷಾರ್ಥ ಮಾಡುತ್ತಿರುತ್ತಾರೆ ಆದರೆ ಅವರಿಗೆ ನಾವು ಹಿಂತಿರುಗಿ ಹೋಗಬೇಕು ಎನ್ನುವುದು ಗೊತ್ತಿಲ್ಲ. ಯಾವಾಗ ಕಲಿಯುಗವು ಮುಗಿಯುವುದೋ ಆಗ ಹೋಗುತ್ತೇವೆಂದು ಅವರು ತಿಳಿದುಕೊಂಡಿದ್ದಾರೆ. ಅವರಿಗೆ ಈ ರೀತಿ ಕಲಿಸಿಕೊಡುವವರು ಯಾರೂ ಇಲ್ಲ. ನೀವು ಮಕ್ಕಳಿಗೆ ಕಲಿಸಿಕೊಡಲಾಗುತ್ತದೆ. ಹೇಗೆ ಕಾವಲು ಕಾಯುವ ಸೇವೆ ಮಾಡುತ್ತೀರಿ ಆಗ ಏಕಾಂತದಲ್ಲಿ ಎಷ್ಟು ನೆನಪು ಮಾಡುತ್ತೀರೊ ಅಷ್ಟು ಒಳ್ಳೆಯದು. ನೆನಪಿನಿಂದ ಪಾಪಗಳು ತುಂಡಾಗುತ್ತವೆ. ಜನ್ಮ ಜನ್ಮಾಂತರದ ಪಾಪಗಳು ತಲೆಯ ಮೇಲಿದೆ. ಯಾರು ಮೊದಲು ಸತೋಪ್ರಧಾನರಾಗುವರೋ ಅವರೇ ಮೊದಲು ರಾಮ ರಾಜ್ಯದಲ್ಲಿ ಬರುತ್ತಾರೆ ಅಂದಾಗ ಅವರೇ ಎಲ್ಲರಿಗಿಂತ ಹೆಚ್ಚು ನೆನಪಿನ ಯಾತ್ರೆಯಲ್ಲಿರಬೇಕಾಗಿದೆ. ಕಲ್ಪ ಕಲ್ಪದ ಮಾತಾಗಿದೆ, ಆದ್ದರಿಂದ ಇವರಿಗೆ ನೆನಪಿನ ಯಾತ್ರೆಯಲ್ಲಿರುವ ಒಳ್ಳೆಯ ಅವಕಾಶವಿದೆ. ಇಲ್ಲಿ ಯಾವ ಜಗಳ ಕಲಹದ ಮಾತಿಲ್ಲ. ಬರುತ್ತಾ ಹೋಗುತ್ತಾ ಒಂದೇ ಸಮಯದಲ್ಲಿ ಎರಡು ಕಾರ್ಯಗಳು, ಅಂದರೆ ಕಾವಲು ಕಾಯುವ ಸೇವೆಯನ್ನೂ ಮಾಡಿರಿ ಮತ್ತು ತಂದೆಯ ನೆನಪನ್ನೂ ಮಾಡಿರಿ. ಕರ್ಮ ಮಾಡುತ್ತಾ ತಂದೆಯನ್ನು ನೆನಪು ಮಾಡಿ. ಕಾವಲು ಕಾಯುವವರಿಗೆ ಎಲ್ಲರಿಗಿಂತ ಹೆಚ್ಚಿನ ಲಾಭವಿದೆ. ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ ಮಾಡಬಹುದು, ಅವರಿಗೆ ಲಾಭವಿದೆ - ನೆನಪು ಮಾಡುವ ಅಭ್ಯಾಸವಿದ್ದಾಗ ಮಾತ್ರ. ತಂದೆಯು ಬಹಳ ಒಳ್ಳೆಯ ಸೇವೆಯನ್ನು ಕೊಟ್ಟಿದ್ದಾರೆ. ಕಾವಲು ಮತ್ತು ನೆನಪಿನ ಯಾತ್ರೆ. ಇದರಿಂದಲೂ ನೆನಪಿನಲ್ಲಿರುವ ಅವಕಾಶ ಸಿಗುತ್ತದೆ. ಹೀಗೆ ನೆನಪಿನ ಯಾತ್ರೆಯಲ್ಲಿರುವ ಭಿನ್ನ ಭಿನ್ನ ಯುಕ್ತಿಗಳನ್ನು ತಿಳಿಸುತ್ತಾರೆ. ಇಲ್ಲಿ ನೀವು ಎಷ್ಟು ನೆನಪಿನಲ್ಲಿರುತ್ತೀರಿ ಅಷ್ಟು ಹೊರಗೆ ವ್ಯಾಪಾರ ವ್ಯವಹಾರದಲ್ಲಿ ಇರುವುದಕ್ಕಾಗುವುದಿಲ್ಲ. ಆದ್ದರಿಂದ ಮಧುಬನಕ್ಕೆ ರಿಫ್ರೆಶ್ ಆಗಲು ಬರುತ್ತೀರಿ. ಬೆಟ್ಟದ ಮೇಲೆ ಏಕಾಂತದಲ್ಲಿ ಹೋಗಿ ನೆನಪು ಮಾಡಿ. ಒಬ್ಬರೇ ಹೋಗಿರಿ ಇಲ್ಲವೇ 2-3 ಜನರು ಸೇರಿಕೊಂಡು ಹೋಗಿರಿ. ಇಲ್ಲಿ ಬಹಳ ಒಳ್ಳೆಯ ಅವಕಾಶವಿದೆ. ತಂದೆಯ ನೆನಪೇ ಮುಖ್ಯವಾಗಿದೆ. ಭಾರತದ ಪ್ರಾಚೀನ ಯೋಗವು ಬಹಳ ಪ್ರಸಿದ್ಧವಾಗಿದೆ. ನಿಮಗೆ ಗೊತ್ತಿದೆ ಈ ನೆನಪಿನ ಯಾತ್ರೆಯಿಂದ ಮಾತ್ರ ಪಾಪಗಳು ಭಸ್ಮವಾಗುತ್ತವೆ. ನಾವು ಸತೋಪ್ರಧಾನರಾಗುತ್ತೇವೆ. ಅಂದಮೇಲೆ ಇದರಲ್ಲಿ ಬಹಳ ಒಳ್ಳೆಯ ಪುರುಷಾರ್ಥ ಮಾಡಬೇಕು. ಕೆಲಸ ಕಾರ್ಯ ಮಾಡುತ್ತಾ ತಂದೆಯನ್ನು ನೆನಪು ಮಾಡಿ ತೋರಿಸಿ, ಇದರಲ್ಲಿಯೇ ಸಾಹಸವಿದೆ. ಕರ್ಮವಂತೂ ಮಾಡಲೇಬೇಕಾಗಿದೆ. ಏಕೆಂದರೆ ನಿಮ್ಮದು ಪ್ರವೃತ್ತಿ ಮಾರ್ಗವಾಗಿದೆ. ಗೃಹಸ್ಥ ವ್ಯವಹಾರದಲ್ಲಿದ್ದು ಉದ್ಯೋಗ ವ್ಯವಹಾರ ಮಾಡುತ್ತಾ ಬುದ್ಧಿಯಲ್ಲಿ ಒಬ್ಬ ತಂದೆಯ ನೆನಪಿರಲಿ. ಇನ್ನೂ ಕೆಲವರು ಮಕ್ಕಳ ಬುದ್ಧಿಯಲ್ಲಿ ಬರುವುದಿಲ್ಲ. ಆದ್ದರಿಂದ ತಂದೆಯು ಹೇಳುತ್ತಿರುತ್ತಾರೆ - ಮಕ್ಕಳೇ, ಚಾರ್ಟ್ ಇಡಿ. ಕೆಲವರು ಬರೆಯುತ್ತಾರೆ ತಂದೆಯು ಯುಕ್ತಿಗಳನ್ನಂತೂ ತಿಳಿಸುತ್ತಾರೆ. ತಂದೆಯ ಬಳಿ ಹೋಗಬೇಕೆಂದು ಮಕ್ಕಳು ಬಯಸುತ್ತಾರೆ ಅಂದಮೇಲೆ ಇಲ್ಲಿ ಸಂಪಾದನೆ ಮಾಡಿಕೊಳ್ಳಬಹುದು. ಏಕಾಂತವು ಬಹಳ ಚೆನ್ನಾಗಿದೆ. ತಂದೆಯು ಸನ್ಮುಖದಲ್ಲಿ ಕುಳಿತು ತಿಳಿಸಿಕೊಡುತ್ತಾರೆ - ನನ್ನನ್ನು ನೆನಪು ಮಾಡಿದರೆ ಪಾಪ ಕರ್ಮಗಳು ಭಸ್ಮವಾಗುತ್ತವೆ ಏಕೆಂದರೆ ಜನ್ಮ ಜನ್ಮಾಂತರದ ಪಾಪವು ತಲೆಯ ಮೇಲಿದೆ, ವಿಕಾರಕ್ಕಾಗಿ ಎಷ್ಟು ಜಗಳಗಳು ನಡೆಯುತ್ತವೆ, ವಿಘ್ನಗಳೂ ಬರುತ್ತವೆ. ಬಾಬಾ, ನಮ್ಮನ್ನು ಪವಿತ್ರವಾಗಿರಲು ಬಿಡುವುದಿಲ್ಲವೆಂದು ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ನೆನಪಿನ ಯಾತ್ರೆಯಲ್ಲಿದ್ದು ಜನ್ಮ ಜನ್ಮಾಂತರದ ತಲೆಯ ಮೇಲಿರುವ ಪಾಪದ ಹೊರೆಯನ್ನು ಇಳಿಸಿಕೊಳ್ಳಿ. ಮನೆಯಲ್ಲಿ ಕುಳಿತೇ ಶಿವ ತಂದೆಯ ನೆನಪು ಮಾಡುತ್ತಿರಿ. ನೆನಪು ಯಾವಾಗ ಎಲ್ಲಿಯಾದರೂ ಕುಳಿತು ಮಾಡಬಹುದು, ಎಲ್ಲಿದ್ದರೂ ಈ ಅಭ್ಯಾಸ ಮಾಡಬೇಕು. ಯಾರು ಬಂದರೂ ಅವರಿಗೆ ಸಂದೇಶ ನೀಡಿ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದಕ್ಕೆ ಯೋಗ ಬಲವೆಂದು ಹೇಳಲಾಗುತ್ತದೆ. ಬಲವೆಂದರೆ ತಾಕತ್ತು, ಶಕ್ತಿ. ತಂದೆಗೆ ಸರ್ವಶಕ್ತಿವಂತನೆಂದು ಹೇಳುತ್ತಾರೆ ಅಂದಮೇಲೆ ತಂದೆಯಿಂದ ಆ ಶಕ್ತಿಯು ಹೇಗೆ ಸಿಗುತ್ತದೆ? ಸ್ವಯಂ ತಂದೆಯೇ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ, ನೀವು ಕೆಳಗೆ ಇಳಿಯುತ್ತಾ ತಮೋಪ್ರಧಾನರಾಗಿದ್ದೀರಿ ಆದ್ದರಿಂದ ಆ ಶಕ್ತಿಯು ಸಂಪೂರ್ಣ ಸಮಾಪ್ತಿಯಾಗಿ ಬಿಟ್ಟಿದೆ. ಒಂದು ಪೈಸೆಯಷ್ಟು ಉಳಿದಿಲ್ಲ. ನಿಮ್ಮಲ್ಲಿಯೂ ಕೆಲವರು ಬಹಳ ಚೆನ್ನಾಗಿ ತಿಳಿಸುತ್ತಾರೆ, ತಂದೆಯನ್ನು ನೆನಪು ಮಾಡುತ್ತಾರೆ. ಅಂದಾಗ ತಮ್ಮೊಂದಿಗೆ ಕೇಳಿಕೊಳ್ಳಬೇಕು - ನಮ್ಮ ಚಾರ್ಟ ಹೇಗಿರುತ್ತದೆ? ತಂದೆಯಂತೂ ಎಲ್ಲ ಮಕ್ಕಳಿಗೂ ಹೇಳುತ್ತಾರೆ, ನೆನಪಿನ ಯಾತ್ರೆಯು ಮುಖ್ಯವಾಗಿದೆ. ನೆನಪಿನಿಂದಲೇ ನಿಮ್ಮ ಪಾಪಗಳು ಭಸ್ಮವಾಗುತ್ತವೆ, ಎಚ್ಚರಿಕೆ ಕೊಡುವವರು ಯಾರೂ ಇಲ್ಲದಿದ್ದರೂ ಸಹ ತಂದೆಯನ್ನು ನೆನಪು ಮಾಡಬಹುದಲ್ಲವೆ, ವಿದೇಶದಲ್ಲಿ ಒಂಟಿಯಾಗಿದ್ದೂ ಸಹ ನೆನಪಿನಲ್ಲಿರಬಹುದು. ಯಾರಿಗೆ ವಿವಾಹವಾಗಿ ಸ್ತ್ರೀ ಬೇರೆ ಕಡೆ ಇದ್ದಾರೆ ಎಂದು ತಿಳಿಯಿರಿ, ಅವರಿಗೂ ಸಹ ನೀವು ಬರೆಯಬಹುದು - ನೀವು ಕೇವಲ ಒಂದು ಮಾತನ್ನು ನೆನಪು ಮಾಡಿ ತಂದೆಯನ್ನು ನೆನಪು ಮಾಡಿದರೆ ಜನ್ಮ ಜನ್ಮಾಂತರದ ಪಾಪಗಳು ಭಸ್ಮವಾಗುತ್ತವೆ. ವಿನಾಶವು ಸನ್ಮುಖದಲ್ಲಿ ನಿಂತಿದೆ. ತಂದೆಯು ಬಹಳ ಒಳ್ಳೆಯ ಯುಕ್ತಿಗಳನ್ನು ತಿಳಿಸುತ್ತಾರೆ. ಅದನ್ನು ಮಾಡುವುದು ಬಿಡುವುದು ಅವರವರ ಇಷ್ಟ. ತಂದೆಯು ಬಹಳ ಒಳ್ಳೆಯ ಸಲಹೆಗಳನ್ನು ಕೊಡುತ್ತಾರೆಂದು ಮಕ್ಕಳಿಗೂ ಅನಿಸುತ್ತದೆ. ಮಿತ್ರ ಸಂಬಂಧಿಗಳು ಯಾರೇ ಸಿಗಲಿ ಅವರಿಗೆ ಸಂದೇಶ ಕೊಡುವುದು ನಿಮ್ಮ ಕರ್ತವ್ಯವಾಗಿದೆ. ಸ್ನೇಹಿತರಿರಲಿ ಅಥವಾ ಯಾರೇ ಇರಲಿ, ಸೇವೆಯಲ್ಲಿ ಆಸಕ್ತಿಯಿರಬೇಕು. ನಿಮ್ಮ ಬಳಿ ಚಿತ್ರಗಳಂತೂ ಇವೆ, ಬ್ಯಾಡ್ಜ್ ಇದೆ, ಇದು ಬಹಳ ಒಳ್ಳೆಯ ವಸ್ತುವಾಗಿದೆ. ಈ ಬ್ಯಾಡ್ಜ್ ಯಾರನ್ನಾದರೂ ಲಕ್ಷ್ಮೀ ನಾರಾಯಣರನ್ನಾಗಿ ಮಾಡಲು ಸಾಧ್ಯವಿದೆ. ತ್ರಿಮೂರ್ತಿ ಚಿತ್ರದಲ್ಲಿ ಬಹಳ ಚೆನ್ನಾಗಿ ತಿಳಿಸಿಕೊಡಬೇಕಾಗಿದೆ. ತ್ರಿಮೂರ್ತಿಗಳ ಮೇಲೆ ಶಿವ ಇದ್ದಾರೆ. ಅವರು ತ್ರಿಮೂರ್ತಿ ಚಿತ್ರವನ್ನು ಮಾಡುತ್ತಾರೆ ಆದರೆ ಶಿವನನ್ನು ತೋರಿಸುವುದಿಲ್ಲ. ಶಿವನನ್ನು ಅರಿಯದಿರುವ ಕಾರಣ ಭಾರತದ ದೋಣಿಯು ಮುಳುಗಿ ಹೋಗಿದೆ. ಈಗ ಶಿವ ತಂದೆಯ ಮೂಲಕವೇ ಭಾರತದ ದೋಣಿಯು ಪಾರಾಗುತ್ತದೆ.

ಹೇ ಪತಿತ ಪಾವನ ಬಂದು ನಾವು ಪತಿತರನ್ನು ಪಾವನ ಮಾಡು ಎಂದು ಕರೆಯುತ್ತಾರೆ ಆದರೂ ಪುನಃ ಸರ್ವವ್ಯಾಪಿ ಎಂದು ಹೇಳುತ್ತಾರೆ. ಇದು ಬಹಳ ತಪ್ಪಾಗಿದೆ. ತಂದೆಯು ತಿಳಿಸುತ್ತಾರೆ - ನೀವು ಹೋಗಿ ಭಾಷಣ ಮಾಡಬೇಕು. ಇಂತಹ ಮ್ಯೂಜಿಯಂ ತೆರೆಯಿರಿ. ಸರ್ವೀಸ್ ಮಾಡಿ ಅನೇಕರು ಬರುತ್ತಾರೆ ಎಂದು ತಂದೆಯು ನಿರ್ದೇಶನ ನೀಡುತ್ತಾರೆ. ಹೇಗೆ ದೊಡ್ಡ ದೊಡ್ಡ ನಗರಗಳಲ್ಲಿ ಸರ್ಕಸ್ ಇಡುತ್ತಾರಲ್ಲವೆ. ಅವರ ಬಳಿ ಎಷ್ಟೊಂದು ಸಾಮಾನುಗಳಿರುತ್ತವೆ. ಹಳ್ಳಿ ಹಳ್ಳಿಗಳಿಂದ ಜನರು ನೋಡಲು ಹೋಗುತ್ತಾರೆ. ಆದ್ದರಿಂದ ಬಾಬಾ ಹೇಳುತ್ತಾರೆ ನೀವೂ ಸಹ ಇಂತಹ ಸುಂದರವಾದ ಮ್ಯೂಜಿಯಂ ತೆರೆಯಿರಿ, ಜನರು ನೋಡಿ ಖುಷಿ ಪಡಲಿ ಮತ್ತು ಅನ್ಯರಿಗೂ ಹೋಗಿ ತಿಳಿಸಲಿ. ಇದನ್ನೂ ತಿಳಿಸುತ್ತಾರೆ - ಏನೇನು ಸೇವೆ ನಡೆಯುತ್ತದೆ ಅದು ಕಲ್ಪದ ಹಿಂದಿನಂತೆ ನಡೆಯುತ್ತದೆ. ಆದರೆ ಸತೋಪ್ರಧಾನರಾಗುವ ಚಿಂತೆ ಬಹಳ ಇರಬೇಕಾಗಿದೆ. ಇದರಲ್ಲಿಯೇ ಮಕ್ಕಳು ತಪ್ಪು ಮಾಡುತ್ತಾರೆ. ಮಾಯೆಯೂ ಸಹ ನೆನಪಿನ ಯಾತ್ರೆಯಲ್ಲಿಯೇ ವಿಘ್ನಗಳನ್ನು ತರುತ್ತದೆ. ನಮಗೆ ಇಷ್ಟು ಆಸಕ್ತಿ ಇದೆಯೇ, ಪರಿಶ್ರಮ ಪಡುತ್ತೇವೆಯೇ? ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ. ಜ್ಞಾನವಂತೂ ಸಾಮಾನ್ಯ ಮಾತಾಗಿದೆ. ತಂದೆಯ ವಿನಃ 84ರ ಚಕ್ರದ ಜ್ಞಾನವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ನೆನಪಿನ ಯಾತ್ರೆಯೇ ಬಹಳ ಮುಖ್ಯವಾಗಿದೆ. ಅಂತ್ಯದಲ್ಲಿ ತಂದೆಯ ವಿನಃ ಅನ್ಯ ಯಾರೂ ನೆನಪಾಗಬಾರದು. ತಂದೆಯು ಪೂರ್ಣ ಸಲಹೆ ಕೊಡುತ್ತಿರುತ್ತಾರೆ, ಮುಖ್ಯ ಮಾತು ನೆನಪು ಮಾಡುವುದಾಗಿದೆ. ನೀವು ಯಾರಿಗೆ ಬೇಕು ಅವರಿಗೆ ತಿಳಿಸಬಲ್ಲಿರಿ. ಯಾರೇ ಇರಲಿ ನೀವು ಈ ಬ್ಯಾಡ್ಜ್ ಮೇಲೆ ತಿಳಿಸಿ, ಬೇರೆ ಯಾರ ಬಳಿಯೂ ಇಂತಹ ಅರ್ಥ ಸಹಿತವಾದ ಬ್ಯಾಡ್ಜ್ ಇರಲು ಸಾಧ್ಯವಿಲ್ಲ. ಮಿಲಿಟರಿಯವರು ಒಳ್ಳೆಯ ಕೆಲಸ ಮಾಡಿದಾಗ ಮೆಡಲ್ ಸಿಗುತ್ತದೆ. ರಾವ್ ಸಾಹೇಬ ಮೆಡಲ್, ಇವರಿಗೆ ವೈಸರಾಯರಿಂದ ಬಿರುದು ಸಿಕ್ಕಿದೆ ಎಂದು ಎಲ್ಲರೂ ನೋಡುತ್ತಾರೆ. ಮೊದಲು ವೈಸರಾಯ್ ಇರುತ್ತಿದ್ದರು ಈಗ ಅವರ ಬಳಿ ಯಾವುದೇ ಶಕ್ತಿಯಿಲ್ಲ. ಈಗ ಎಷ್ಟೊಂದು ಜಗಳಗಳಾಗುತ್ತವೆ, ಮನುಷ್ಯರ ಸಂಖ್ಯೆಯು ಹೆಚ್ಚಾಗಿರುವ ಕಾರಣ ಅವರಿಗೆ ನಗರದಲ್ಲಿ ಭೂಮಿಯೂ ಬೇಕು. ಈಗ ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ಇವರೆಲ್ಲರೂ ಸಮಾಪ್ತಿಯಾಗಿ ಕೆಲವರು ಮಾತ್ರ ಉಳಿಯುತ್ತಾರೆ, ಬಹಳಷ್ಟು ಜಮೀನಿರುತ್ತದೆ, ಎಲ್ಲವೂ ಹೊಸದಾಗಿರುತ್ತದೆ. ಅಂತಹ ಹೊಸ ಪ್ರಪಂಚಕ್ಕೆ ಹೋಗಲು ಬಹಳ ಒಳ್ಳೆಯ ರೀತಿಯಲ್ಲಿ ಪುರುಷಾರ್ಥ ಮಾಡಬೇಕಾಗಿದೆ. ಪ್ರತಿಯೊಬ್ಬರೂ ಬಹಳ ಉತ್ತಮ ಪದವಿ ಪಡೆಯ ಬೇಕೆಂದು ಪುರುಷಾರ್ಥ ಮಾಡುತ್ತಾರೆ. ಯಾರಾದರೂ ಪೂರ್ಣ ಪುರುಷಾರ್ಥ ಮಾಡದಿದ್ದರೆ ಅನುತ್ತಿರ್ಣರಾಗುತ್ತಾರೆಂದು ತಿಳಿಯುತ್ತಾರೆ. ನಾವು ಅನುತ್ತೀರ್ಣರಾಗುತ್ತೇವೆಂದು ಅವರಿಗೂ ತಿಳಿಯುತ್ತದೆ ಮತ್ತು ವಿದ್ಯೆಯನ್ನು ಬಿಟ್ಟು ನೌಕರಿಯಲ್ಲಿ ತೊಡಗುತ್ತಾರೆ. ಇತ್ತೀಚೆಗೆ ನೌಕರಿಯಲ್ಲಿಯೂ ಸಹ ಬಹಳ ಕಠಿಣ ನಿಯಮಗಳನ್ನು ಮಾಡುತ್ತಿರುತ್ತಾರೆ. ಮನುಷ್ಯರು ಬಹಳ ದುಃಖಿಯಾಗಿದ್ದಾರೆ. ಈಗ ತಂದೆಯು ನಿಮಗೆ ಇಂತಹ ಮಾರ್ಗವನ್ನು ತಿಳಿಸುತ್ತಾರೆ, ಅದರಿಂದ 21 ಜನ್ಮಗಳವರೆಗೆ ಎಂದೂ ದುಃಖದ ಹೆಸರು ಇರುವುದಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ ಕೇವಲ ನೆನಪಿನ ಯಾತ್ರೆಯಲ್ಲಿರಿ. ಎಷ್ಟು ಸಾಧ್ಯವೋ ಅಷ್ಟು ಮುಂಜಾನೆ ಸಮಯ ಬಹಳ ಚೆನ್ನಾಗಿರುತ್ತದೆ, ಬೇಕಾದರೆ ಮಲಗಿಕೊಂಡೇ ನೆನಪು ಮಾಡಿರಿ. ಕೆಲವರಿಗೆ ನಿದ್ದೆ ಬಂದು ಬಿಡುತ್ತದೆ, ವೃದ್ಧರಾಗಿದ್ದರೆ ಹೆಚ್ಚು ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದಮೇಲೆ ಅವಶ್ಯವಾಗಿ ಮಲಗುತ್ತಾರೆ. ಮಲಗಿರುತ್ತಲೇ ತಂದೆಯನ್ನು - ನೆನಪು ಮಾಡುತ್ತಾರೆ. ಒಳಗೆ ಬಹಳ ಖುಷಿಯಾಗುತ್ತದೆ ಏಕೆಂದರೆ ಬಹಳ ಬಹಳ ಸಂಪಾದನೆಯಿದೆ. ಇನ್ನೂ ಸಮಯವಿದೆ ಎಂದು ತಿಳಿಯುತ್ತಾರೆ. ಆದರೆ ಮೃತ್ಯುವಿಗೆ ಯಾವುದೇ ನೆಲೆಯಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮೂಲವಾದುದು ನೆನಪಿನ ಯಾತ್ರೆಯಾಗಿದೆ. ಹೊರಗೆ ನಗರಗಳಲ್ಲಿ ಬಹಳ ಕಷ್ಟವಾಗುತ್ತದೆ ಆದ್ದರಿಂದ ಇಲ್ಲಿ ಬಂದಾಗ ಬಹಳ ಒಳ್ಳೆಯ ಅವಕಾಶ ಸಿಗುತ್ತದೆ, ಯಾವುದೇ ಚಿಂತೆಯ ಮಾತಿರುವುದಿಲ್ಲ. ಆದ್ದರಿಂದ ಇಲ್ಲಿ ಚಾರ್ಟನ್ನು ಹೆಚ್ಚಿಸಿಕೊಳ್ಳಿ. ಇದರಿಂದ ನಿಮ್ಮ ನಡವಳಿಕೆಯು ಸುಧಾರಣೆಯಾಗುತ್ತದೆ. ಆದರೆ ಮಾಯೆಯು ಬಹಳ ಶಕ್ತಿಶಾಲಿಯಾಗಿದೆ. ಎಷ್ಟು ಹೊರಗಿನವರಿಗೆ ಚಿಂತೆ ಇರುತ್ತದೆ ಅಷ್ಟು ಮನೆಯಲ್ಲಿರುವವರಿಗೆ ಇರುವುದಿಲ್ಲ. ಆದರೂ ಸಹ ಈ ಸಮಯದಲ್ಲಿ ಗೋಪರ ಫಲಿತಾಂಶ ಚೆನ್ನಾಗಿದೆ.

ಮಕ್ಕಳು ಕೆಲವರು ಬರೆಯುತ್ತಾರೆ - ವಿವಾಹಕ್ಕಾಗಿ ಬಹಳ ತೊಂದರೆ ಕೊಡುತ್ತಾರೆ, ಏನು ಮಾಡುವುದು? ಎಂದು ಕೇಳುತ್ತಾರೆ. ಯಾರು ಬುದ್ಧಿವಂತ ಶಕ್ತಿಶಾಲಿ ಮಕ್ಕಳಿರುವರೋ ಅವರು ಎಂದೂ ಈ ರೀತಿ ಬರೆಯುವುದಿಲ್ಲ. ಹೀಗೆ ಬರೆದರೆ ಇವರು ಕುರಿಯಾಗಿದ್ದಾರೆಂದು ತಂದೆಯು ತಿಳಿಯುತ್ತಾರೆ. ತಮ್ಮ ಜೀವನವನ್ನು ರಕ್ಷಿಸಿಕೊಳ್ಳುವುದು ತಮ್ಮ ಕೈಯಲ್ಲಿದೆ. ಈ ಪ್ರಪಂಚದಲ್ಲಿ ಅನೇಕ ಪ್ರಕಾರದ ದುಃಖವಿದೆ, ಈಗ ತಂದೆಯಂತೂ ಸಹಜವಾಗಿ ತಿಳಿಸುತ್ತಾರೆ.

ನೀವು ಮಕ್ಕಳು ಮಹಾನ್ ಭಾಗ್ಯಶಾಲಿಗಳಾಗಿದ್ದೀರಿ, ಬಂದು ಪ್ರಭುವಿನ ಸಂತಾನರಾಗಿದ್ದೀರಿ. ತಂದೆಯು ಎಷ್ಟು ಶ್ರೇಷ್ಠ ಮಾಡುತ್ತಾರೆ. ಆದರೂ ಸಹ ನೀವು ತಂದೆಗೆ ನಿಂದನೆ ಮಾಡುತ್ತೀರಿ. ಅದು ಕಚ್ಚಾ ನಿಂದನೆ. ಎಷ್ಟು ತಮೋಪ್ರಧಾನರಾಗಿದ್ದೀರಿ, ಕೇಳಲೇಬೇಡಿ. ಇದಕ್ಕಿಂತ ಹೆಚ್ಚು ಏನು ಸಹನೆ ಮಾಡುತ್ತೀರಿ! ಹೇಳುತ್ತಾರಲ್ಲವೆ - ಹೆಚ್ಚು ತೊಂದರೆ ಕೊಟ್ಟರೆ ನಾವು ಸಮಾಪ್ತಿ ಮಾಡುತ್ತೇವೆಂದು ಅಂದಾಗ ಇದನ್ನು ತಂದೆಯು ತಿಳಿಸುತ್ತಾರೆ - ಶಾಸ್ತ್ರಗಳಲ್ಲಿ ತಪ್ಪು ಬರೆದಿದ್ದಾರೆ, ತಂದೆಯು ಬಹಳ ಸಹಜವಾಗಿ ಯುಕ್ತಿಗಳನ್ನು ತಿಳಿಸುತ್ತಾರೆ. ಕರ್ಮ ಮಾಡುತ್ತಲೂ ನೆನಪು ಮಾಡಿ, ಇದರಲ್ಲಿ ಬಹಳ ಬಹಳ ಲಾಭವಿದೆ ಬೆಳಗ್ಗೆ ಎದ್ದು ನೆನಪಿನಲ್ಲಿ ಕುಳಿತುಕೊಳ್ಳಿ ಆಗ ಬಹಳ ಮಜಾ ಬರುವುದು. ಆದರೆ ಅಷ್ಟು ಆಸಕ್ತಿ ಇಲ್ಲ. ಇವರು ಅನುತ್ತೀರ್ಣರಾಗುತ್ತಾರೆಂದು ಶಿಕ್ಷಕರು ವಿದ್ಯಾರ್ಥಿಯ ನಡವಳಿಕೆಯಿಂದಲೇ ತಿಳಿದುಕೊಳ್ಳುತ್ತಾರೆ. ತಂದೆಯೂ ಸಹ ತಿಳಿದುಕೊಳ್ಳುತ್ತಾರೆ - ಇವರು ಅನುತ್ತೀರ್ಣರಾಗುತ್ತಾರೆ, ಅದೂ ಕಲ್ಪ ಕಲ್ಪಾಂತರಕ್ಕಾಗಿ. ಭಾಷಣ ಮಾಡುವುದರಲ್ಲಿ ಬಹಳ ಬುದ್ಧಿವಂತರಾಗಿದ್ದಾರೆ, ಪ್ರದರ್ಶನಿಯಲ್ಲಿಯೂ ಬಹಳ ಚೆನ್ನಾಗಿ ತಿಳಿಸುತ್ತಾರೆ ಆದರೆ ನೆನಪು ಮಾಡುವುದಿಲ್ಲ. ಇದರಲ್ಲಿಯೇ ಅನುತ್ತೀರ್ಣರಾಗುತ್ತಾರೆ ಇದೂ ಸಹ ಬಹಳ ಅಗೌರವ ತೋರಿಸುವ ಹಾಗೆ, ಇದರಿಂದ ತಮ್ಮ ಅಗೌರವ ಮಾಡಿಕೊಳ್ಳುತ್ತಾರೆಂದರ್ಥ. ಶಿವ ತಂದೆಗಂತೂ ಅಗೌರವ ಆಗಲು ಸಾಧ್ಯವಿಲ್ಲ. ನನಗೆ ನೆನಪು ಮಾಡಲು ಬಿಡುವುದೇ ಇಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ತಂದೆಯು ಇದನ್ನು ಒಪ್ಪುವುದಿಲ್ಲ. ಸ್ನಾನ ಮಾಡುವಾಗ ನೆನಪು ಮಾಡಬಹುದು, ಭೋಜನ ಸ್ವೀಕರಿಸುವ ಸಮಯದಲ್ಲಿ ತಂದೆಯನ್ನು ನೆನಪು ಮಾಡಿ. ಇದರಲ್ಲಿ ಬಹಳ ಬಹಳ ಸಂಪಾದನೆ ಇದೆ. ಕೆಲವು ಮಕ್ಕಳು ಭಾಷಣ ಮಾಡುವುದರಲ್ಲಿ ಪ್ರಸಿದ್ಧರಾಗಿದ್ದಾರೆ, ಆದರೆ ಯೋಗವಿಲ್ಲ. ಆ ಅಹಂಕಾರವೂ ಸಹ ಬೀಳಿಸಿ ಬಿಡುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾ ಅವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸರ್ವಶಕ್ತಿವಂತ ತಂದೆಯಿಂದ ಶಕ್ತಿಯನ್ನು ತೆಗೆದುಕೊಳ್ಳಲು ನೆನಪಿನ ಚಾರ್ಟನ್ನು ಹೆಚ್ಚಿಸಿಕೊಳ್ಳಬೇಕು. ನೆನಪಿನ ಭಿನ್ನ ಭಿನ್ನ ಯುಕ್ತಿಗಳನ್ನು ರಚಿಸಬೇಕು. ಏಕಾಂತದಲ್ಲಿ ಕುಳಿತು ವಿಶೇಷ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕು.

2. ಸತೋಪ್ರಧಾನರಾಗುವ ಚಿಂತೆಯನ್ನಿಟ್ಟುಕೊಳ್ಳಬೇಕು. ಹುಡುಗಾಟಿಕೆ ಮಾಡಬಾರದು, ಅಹಂಕಾರದಲ್ಲಿ ಬರಬಾರದು. ಸೇವೆಯಲ್ಲಿ ಆಸಕ್ತಿಯಿರಬೇಕು ಜೊತೆ ಜೊತೆಯಲ್ಲಿ ನೆನಪಿನ ಯಾತ್ರೆಯಲ್ಲಿಯೂ ಇರಬೇಕು.

ವರದಾನ:
ಬುದ್ಧಿಯನ್ನು ನನ್ನತನವೆಂಬ ಸುಳಿಯಿಂದ ಹೊರಬಂದು ಸಮಸ್ಯೆಗಳಿಂದ ಮುಕ್ತರಾಗಿರುವಂತಹ ಭಿನ್ನ, ಟ್ರಸ್ಟಿ ಭವ.

ಯಾವಾಗ ಬುದ್ಧಿಯಲ್ಲಿ ಏನಾದರೂ ಜಂಜಾಟ ಇರುತ್ತೆ ಎಂದರೆ ತಿಳಿಯಿರಿ ಖಂಡಿತವಾಗಿ ಯಾವುದಾದರೂ ಒಂದು ನನ್ನತನವಿದೆ. ಎಲ್ಲಿ ನನ್ನದು ಎಂದು ಬರುವುದು ಅಲ್ಲಿ ಬುದ್ಧಿಯು ಸುಳಿಯಲ್ಲಿ ಸಿಲುಕುವುದು. ಗೃಹಸ್ಥಿಯಾಗಿ ಯೋಚಿಸುವುದರಿಂದ ಅವ್ಯವಸ್ತೆಯಾಗುವುದು ಆದ್ದರಿಂದ ಪೂರ್ತಿ ಭಿನ್ನ ಮತ್ತು ಟ್ರಸ್ಟಿ ಆಗಿಬಿಡಿ. ಈ ನನ್ನತನ-ನನ್ನ ಹೆಸರು ಕೆಡುತ್ತೆ, ನನ್ನ ನಿಂದನೆಯಾಗುವುದು..... ಈ ರೀತಿ ಯೋಚಿಸುವುದೇ ಸಮಸ್ಯೆಯಾಗಿದೆ. ನಂತರ ಎಷ್ಟು ಸರಿ ಪಡಿಸಲು ಪ್ರಯತ್ನ ಪಡುವಿರೋ ಅಷ್ಟು ಸಮಸ್ಯೆ ತೀವ್ರವಾಗುತ್ತಾ ಹೋಗುವುದು. ಆದ್ದರಿಂದ ಟ್ರಸ್ಟಿಯಾಗಿ ಈ ಸಮಸ್ಯೆಗಳಿಂದ ಮುಕ್ತರಾಗಿಬಿಡಿ. ಭಗವಂತನ ಮಕ್ಕಳು ಎಂದೂ ಸಮಸ್ಯೆಗಳಲ್ಲಿ ಸಿಕ್ಕಿಕೊಳ್ಳುವುದಿಲ್ಲ.

ಸ್ಲೋಗನ್:
ದೊಡ್ಡ ತಂದೆಯ ಮಕ್ಕಳಾಗಿರುವಿರಿ ಆದ್ದರಿಂದ ಸಣ್ಣ ಹೃದಯದವರಾಗಬೇಡಿ ಮತ್ತು ಸಣ್ಣ ಮಾತುಗಳಲ್ಲಿ ಗಾಬರಿಯಾಗಬೇಡಿ.