17.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ನೆನಪಿನ ಜೊತೆ ಜೊತೆಗೆ ವಿದ್ಯೆಯ ಮೇಲೂ ಪೂರ್ಣ ಗಮನ ಕೊಡಬೇಕಾಗಿದೆ, ನೆನಪಿನಿಂದ ಪಾವನರಾಗುತ್ತೀರಿ
ಮತ್ತು ವಿದ್ಯೆಯಿಂದ ವಿಶ್ವದ ಮಾಲೀಕರಾಗುತ್ತೀರಿ”
ಪ್ರಶ್ನೆ:
ಸ್ಕಾಲರ್ಶಿಪ್
ತೆಗೆದುಕೊಳ್ಳಲು ಯಾವ ಪುರುಷಾರ್ಥವು ಅವಶ್ಯವಾಗಿ ಬೇಕು?
ಉತ್ತರ:
ಸ್ಕಾಲರ್ಶಿಪ್
ತೆಗೆದುಕೊಳ್ಳಬೇಕೆಂದರೆ ಎಲ್ಲದರಿಂದ ಮಮತ್ವವನ್ನು ತೆಗೆಯಿರಿ. ಹಣ, ಮನೆ, ಮಕ್ಕಳು ಏನೂ ನೆನಪಿಗೆ
ಬರಬಾರದು. ಶಿವ ತಂದೆಯ ನೆನಪಿರಲಿ. ಪೂರ್ಣ ಸ್ವಾಹಾ, ಆಗಲೇ ಶ್ರೇಷ್ಠ ಪದವಿಯು ಪ್ರಾಪ್ತಿಯಾಗುವುದು.
ಬುದ್ಧಿಯಲ್ಲಿ ಈ ನಶೆಯಿರಲಿ - ನಾವು ಎಷ್ಟು ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡುತ್ತೇವೆ. ನಮ್ಮದು
ಎಷ್ಟು ದೊಡ್ಡ ವಿದ್ಯೆಯಾಗಿದೆ ಮತ್ತು ಓದಿಸುವವರು ಸ್ವಯಂ ದುಃಖಹರ್ತ-ಸುಖಕರ್ತ ತಂದೆಯಾಗಿದ್ದಾರೆ.
ಆ ಪ್ರಿಯಾತಿ ಪ್ರಿಯ ತಂದೆಯೇ ನಮಗೆ ಓದಿಸುತ್ತಿದ್ದಾರೆ.
ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ಓದಿಸುತ್ತಾರೆ ಅಂದಮೇಲೆ ಮಕ್ಕಳಿಗೆ ಎಷ್ಟು
ನಶೆಯಿರಬೇಕು! ಆತ್ಮವೇ ಓದುತ್ತದೆಯಲ್ಲವೆ. ಆತ್ಮವು ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ.
ಶರೀರವಂತೂ ಬೂದಿಯಾಗಿ ಬಿಡುತ್ತದೆ. ಅಂದಾಗ ತಂದೆಯು ಮಕ್ಕಳಿಗೆ ಓದಿಸುತ್ತಾರೆ. ಆತ್ಮರೂ
ತಿಳಿಯುತ್ತೀರಿ - ನಾವು ಓದುತ್ತೇವೆ, ಯೋಗವನ್ನು ಕಲಿಯುತ್ತೇವೆ. ತಂದೆಯು ಹೇಳಿದ್ದಾರೆ- ಮಕ್ಕಳೇ,
ನೆನಪಿನಲ್ಲಿರಿ ಆಗಲೇ ನಿಮ್ಮ ಪಾಪಗಳು ಸಮಾಪ್ತಿಯಾಗುತ್ತವೆ. ಪತಿತ-ಪಾವನ ತಂದೆಯೊಬ್ಬರೇ ಆಗಿದ್ದಾರೆ,
ಬ್ರಹ್ಮಾ-ವಿಷ್ಣು-ಶಂಕರನಿಗೆ ಪತಿತ-ಪಾವನರೆಂದು ಹೇಳುವುದಿಲ್ಲ, ಲಕ್ಷ್ಮೀ-ನಾರಾಯಣರಿಗೆ ಹೇಳುವರೇ?
ಇಲ್ಲ. ಪತಿತ-ಪಾವನನು ಒಬ್ಬರೇ ಆಗಿದ್ದಾರೆ. ಇಡೀ ಪ್ರಪಂಚವನ್ನು ಪಾವನವನ್ನಾಗಿ ಮಾಡುವವರು ಒಬ್ಬರೇ,
ಅವರು ನಿಮ್ಮ ತಂದೆಯಾಗಿದ್ದಾರೆ. ಎಷ್ಟು ಪ್ರಿಯವಾದ ಬೇಹದ್ದಿನ ತಂದೆಯಾಗಿದ್ದಾರೆ ಎಂಬುದು ಮಕ್ಕಳಿಗೆ
ಗೊತ್ತಿದೆ. ಅವರನ್ನೇ ಬಾಬಾ ಬನ್ನಿ ನಮ್ಮ ದುಃಖ ದೂರ ಮಾಡಿ, ಸುಖ ಕೊಡಿ ಎಂದು ಭಕ್ತಿಮಾರ್ಗದಲ್ಲಿ
ನೆನಪು ಮಾಡುತ್ತಾ ಬಂದಿದ್ದೀರಿ. ಸೃಷ್ಟಿಯೂ ಅದೇ ಆಗಿದೆ, ಈ ಚಕ್ರದಲ್ಲಿ ಎಲ್ಲರೂ ಬರಲೇಬೇಕಾಗಿದೆ,
84 ಜನ್ಮಗಳ ಚಕ್ರವನ್ನು ತಂದೆಯು ತಿಳಿಸಿದ್ದಾರೆ. ಆತ್ಮವೇ ಸಂಸ್ಕಾರವನ್ನು ತೆಗೆದುಕೊಂಡು
ಹೋಗುತ್ತದೆ. ಆತ್ಮಕ್ಕೆ ಗೊತ್ತಿದೆ, ಈ ಮೃತ್ಯುಲೋಕದಿಂದ ಅಮರಲೋಕಕ್ಕೆ ಅಥವಾ ನರಕದಿಂದ ಸ್ವರ್ಗದಲ್ಲಿ
ಹೋಗುವುದಕ್ಕಾಗಿ ನಾವು ಓದುತ್ತೇವೆ. ತಂದೆಯು ಬರುವುದೇ ನೀವು ಮಕ್ಕಳನ್ನು ಪುನಃ ವಿಶ್ವದ
ಮಾಲೀಕರನ್ನಾಗಿ ಮಾಡಲು. ನೀವು ಎಷ್ಟು ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡುತ್ತಿದ್ದೀರಿ.
ಅತಿದೊಡ್ಡ ತಂದೆಯು ಓದಿಸುತ್ತಿದ್ದಾರೆ. ಯಾವ ಸಮಯದಲ್ಲಿ ತಂದೆಯು ಕುಳಿತು ಓದಿಸುವರೋ ಆಗ
ನಶೆಯೇರುತ್ತದೆ. ತಂದೆಯು ಬಹಳ ಜೋರು-ಜೋರಾಗಿ ನಶೆಯೇರಿಸುತ್ತಾರೆ. ತಂದೆಯು ಬರುವುದೇ ಅಮರಲೋಕಕ್ಕೆ
ಯೋಗ್ಯರನ್ನಾಗಿ ಮಾಡಲು. ಇಲ್ಲಂತೂ ಯಾರೂ ಯೋಗ್ಯರಿಲ್ಲ. ನೀವೂ ತಿಳಿದುಕೊಂಡಿದ್ದೀರಿ - ಮೊದಲು ನಾವು
ಯೋಗ್ಯ ದೇವತೆಗಳ ಮುಂದೆ ಹೋಗಿ ತಲೆ ಬಾಗುತ್ತಿದ್ದೆವು, ಈಗ ತಂದೆಯು ನಮ್ಮನ್ನೇ ಇಡೀ ವಿಶ್ವದ
ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ಆ ನಶೆಯೇರಿರಬೇಕು, ಇಲ್ಲಿ ನಶೆಯೇರಿ ಹೊರಗಡೆ
ಹೋಗುತ್ತಿದ್ದಂತೆಯೇ ಅದು ಕಡಿಮೆಯಾಗಬಾರದು. ಬಾಬಾ ನಾವು ನಿಮ್ಮನ್ನು ಮರೆತು ಹೋಗುತ್ತೇವೆ, ತಾವು
ಪತಿತ ಪ್ರಪಂಚದಲ್ಲಿ ಪತಿತ ಶರೀರದಲ್ಲಿ ಬಂದು ನಮಗೆ ಓದಿಸುತ್ತೀರಿ, ವಿಶ್ವದ ಮಾಲೀಕರನ್ನಾಗಿ
ಮಾಡುತ್ತೀರಿ ಎಂದು ಮಕ್ಕಳು ಹೇಳುತ್ತಾರೆ. ನೀವು ಮಕ್ಕಳು ವಿಶ್ವದ ರಾಜ್ಯಭಾಗ್ಯದ ಬಹಳ ದೊಡ್ಡ
ಲಾಟರಿಯನ್ನು ಪಡೆಯುತ್ತೀರಿ ಆದರೆ ನೀವು ಗುಪ್ತವಾಗಿದ್ದೀರಿ. ಇಂತಹ ಶ್ರೇಷ್ಠ ವಿದ್ಯೆಯ ಮೇಲೆ
ಚೆನ್ನಾಗಿ ಗಮನ ಕೊಡಬೇಕಲ್ಲವೆ. ಕೇವಲ ನೆನಪಿನ ಯಾತ್ರೆಯಿಂದ ಕೆಲಸ ನಡೆಯುವುದಿಲ್ಲ. ವಿದ್ಯೆಯು ಅತಿ
ಅವಶ್ಯಕವಾಗಿದೆ. 84 ಜನ್ಮಗಳ ಚಕ್ರವನ್ನು ಹೇಗೆ ಸುತ್ತುತ್ತೇವೆ ಎಂಬುದು ಬುದ್ಧಿಯಲ್ಲಿ ಬರಬೇಕು.
ನೀವು ತಿಳಿದುಕೊಂಡಿದ್ದೀರಿ - ತಂದೆಯು ಬಹಳ ಜೋರಾಗಿ ನಶೆಯೇರಿಸುತ್ತಾರೆ. ನಿಮ್ಮಂತಹ ದೊಡ್ಡ
ವ್ಯಕ್ತಿಗಳು ಯಾರೂ ಆಗಲು ಸಾಧ್ಯವಿಲ್ಲ. ನೀವು ಮನುಷ್ಯರಿಂದ ದೇವತೆಗಳಾಗಿ ಬಿಡುತ್ತೀರಿ. ನಿಮ್ಮ
ವಿನಃ ಯಾರಾದರೂ ವಿಶ್ವದ ಮಾಲೀಕರಾಗಿದ್ದಾರೆಯೇ? ಕ್ರಿಶ್ಚಿಯನ್ನರು ವಿಶ್ವದ ಮಾಲೀಕರಾಗಬೇಕೆಂದು
ಪರಿಶ್ರಮ ಪಟ್ಟರು. ಆದರೆ ನಿಮ್ಮ ವಿನಃ ಮತ್ತ್ಯಾರೂ ವಿಶ್ವದ ಮಾಲೀಕರಾಗುವುದು ಖಾಯಿದೆಯಿಲ್ಲ. ಆ
ರೀತಿ ಮಾಡುವುದಕ್ಕಾಗಿ ತಂದೆಯೇ ಬೇಕು, ಮತ್ತ್ಯಾರಿಗೂ ಶಕ್ತಿಯಿಲ್ಲ. ಅಂದಮೇಲೆ ನೀವು ಮಕ್ಕಳಿಗೆ
ಬುದ್ಧಿಯು ಬಹಳ ಚೆನ್ನಾಗಿರಬೇಕು. ತಂದೆಯು ಜ್ಞಾನಾಮೃತದ ಡೋಜ್ ಕೊಡುತ್ತಾ ಇರುತ್ತಾರೆ. ನಾವು
ತಂದೆಯನ್ನು ಬಹಳ ನೆನಪು ಮಾಡುತ್ತೇವೆ ಎಂದು ಕೇವಲ ಇದರಲ್ಲಿಯೇ ನಿಂತು ಬಿಡಬೇಡಿ. ನೆನಪಿನಿಂದಲೇ
ಪಾವನರಾಗುತ್ತೀರಿ ಆದರೆ ಪದವಿಯನ್ನೂ ಪಡೆಯಬೇಕಾಗಿದೆ. ಪೆಟ್ಟು ತಿಂದಾದರೂ ಎಲ್ಲರೂ
ಪಾವನರಾಗಲೇಬೇಕಾಗಿದೆ ಆದರೆ ತಂದೆಯು ಬಂದಿರುವುದು ವಿಶ್ವದ ಮಾಲೀಕರನ್ನಾಗಿ ಮಾಡಲು, ಎಲ್ಲರೂ
ಶಾಂತಿಧಾಮಕ್ಕೆ ಹೋಗುತ್ತಾರೆ. ಹೋಗಿ ಅಲ್ಲಿ ಕುಳಿತು ಬಿಡುವುದೇ? ಅಂತಹವರೇನೂ ಪ್ರಯೋಜನಕ್ಕಿಲ್ಲ.
ಯಾರು ಮತ್ತೆ ಬಂದು ಸ್ವರ್ಗದಲ್ಲಿ ಬಂದು ರಾಜ್ಯಭಾರ ಮಾಡುವರೋ ಅವರೇ ಪ್ರಯೋಜನಕ್ಕೆ ಬರುವವರು.
ನೀವಿಲ್ಲಿ ಬಂದಿರುವುದೇ ಸ್ವರ್ಗದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಲು. ನಿಮಗೆ ರಾಜ್ಯಭಾಗ್ಯವಿತ್ತು
ನಂತರ ಮಾಯೆಯು ಕಸಿದುಕೊಂಡಿತು. ಈಗ ಪುನಃ ಮಾಯಾರಾವಣನ ಮೇಲೆ ಜಯ ಗಳಿಸಬೇಕಾಗಿದೆ. ನೀವೇ ವಿಶ್ವದ
ಮಾಲೀಕರಾಗಬೇಕಾಗಿದೆ. ಈಗ ನಿಮಗೆ ರಾವಣನ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಸುತ್ತೇನೆ. ಏಕೆಂದರೆ
ನೀವು ರಾವಣ ರಾಜ್ಯದಲ್ಲಿ ವಿಕಾರಿಯಾಗಿ ಬಿಟ್ಟಿದ್ದೀರಿ. ಆದ್ದರಿಂದ ಮನುಷ್ಯನನ್ನು ಕೋತಿಗೆ
ಹೋಲಿಸಲಾಗಿದೆ. ಕೋತಿಯಲ್ಲಿ ಹೆಚ್ಚು ವಿಕಾರಗಳಿರುತ್ತವೆ, ದೇವತೆಗಳು ಸಂಪೂರ್ಣ
ನಿರ್ವಿಕಾರಿಗಳಾಗಿದ್ದರು. ಈ ದೇವತೆಗಳೇ 84 ಜನ್ಮಗಳ ನಂತರ ಪತಿತರಾಗಿದ್ದಾರೆ. ತಂದೆಯು
ತಿಳಿಸುತ್ತಾರೆ - ನಿಮ್ಮ ಕೈಯಲ್ಲಿ ಯಾವ ಹಣ, ಮನೆ, ಮಕ್ಕಳು, ಶರೀರ ಇತ್ಯಾದಿಗಳಿವೆಯೋ ಎಲ್ಲದರಿಂದ
ಮಮತ್ವವನ್ನು ತೆಗೆಯಬೇಕಾಗಿದೆ. ಸಾಹುಕಾರರಂತೂ ಹಣದ ಹಿಂದೆ ಸಾಯುತ್ತಾರೆ. ಮುಷ್ಟಿಯಲ್ಲಿ ಹಣವಿದೆ,
ಅದನ್ನು ಬಿಡಲಾಗುವುದಿಲ್ಲ. ರಾವಣನ ಜೈಲಿನಲ್ಲಿಯೇ ಬಿದ್ದಿರುತ್ತಾರೆ. ಕೋಟಿಯಲ್ಲಿ ಕೆಲವರು ಮಾತ್ರವೇ
ಎಲ್ಲಾ ಪದಾರ್ಥಗಳಿಂದ ಮಮತ್ವವನ್ನು ತೆಗೆದು ಮಂಗನಿಂದ ದೇವತೆಯಾಗುತ್ತಾರೆ. ಯಾರೆಲ್ಲಾ ಸಾಹುಕಾರರು,
ದೊಡ್ಡ-ದೊಡ್ಡ ಲಕ್ಷಾಧೀಶ್ವರರಿದ್ದಾರೆಯೋ ಅವರಿಗೆ ಮುಷ್ಟಿಯಲ್ಲಿ ಹಿಡಿದುಕೊಂಡಿರುವ ಹಣದಲ್ಲಿಯೇ
ಪ್ರಾಣವಿದೆ. ಇಡೀ ದಿನ ಮಹಲು, ಮಹಡಿ, ಮಕ್ಕಳು ಇತ್ಯಾದಿಗಳೇ ನೆನಪಿಗೆ ಬರುತ್ತಿರುತ್ತವೆ. ಅದರ
ನೆನಪಿನಲ್ಲಿಯೇ ಶರೀರ ಬಿಡುತ್ತಾರೆ. ತಂದೆಯು ಹೇಳುತ್ತಾರೆ - ಮಕ್ಕಳೇ ಅಂತಿಮದಲ್ಲಿ ಯಾವುದೇ
ಪದಾರ್ಥಗಳು ನೆನಪಿಗೆ ಬರಬಾರದು. ಕೇವಲ ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ಜನ್ಮ-ಜನ್ಮಾಂತರದ
ಪಾಪವು ನಾಶವಾಗುವುದು. ಸಾಹುಕಾರರ ಹಣವೆಲ್ಲವೂ ಮಣ್ಣು ಪಾಲಾಗಲಿದೆ, ಏಕೆಂದರೆ ಪಾಪದ ಹಣವಲ್ಲವೆ. ಇದು
ಕೆಲಸಕ್ಕೆ ಬರುವುದಿಲ್ಲ. ತಂದೆಯು ಹೇಳುತ್ತಾರೆ - ಮಕ್ಕಳೇ, ನಾನು ಬಡವರ ಬಂಧು, ಬಡವರನ್ನು
ಸಾಹುಕಾರರನ್ನಾಗಿ ಸಾಹುಕಾರರನ್ನು ಬಡವರನ್ನಾಗಿ ಮಾಡುತ್ತೇನೆ. ಈ ಪ್ರಪಂಚವನ್ನು ಬದಲಾಯಿಸಬೇಕಲ್ಲವೆ.
ನಮಗೆ ಇಷ್ಟು ಹಣವಿದೆ, ಇಷ್ಟು ವಾಹನಗಳಿವೆ, ವಿಮಾನಗಳಿವೆ, ಮಹಲುಗಳಿವೆ.... ಎಂದು ಎಷ್ಟು ಹಣದ
ನಶೆಯಿರುತ್ತದೆ. ಅಂತಹವರು ನಾವು ತಂದೆಯನ್ನು ನೆನಪು ಮಾಡಬೇಕೆಂದು ಎಷ್ಟೇ ತಲೆ ಕೆಡಿಸಿಕೊಂಡರೂ
ನೆನಪು ನಿಲ್ಲುವುದಿಲ್ಲ. ಕೋಟಿಯಲ್ಲಿ ಕೆಲವರೇ ಬರುತ್ತಾರೆ, ಎಲ್ಲರೂ ಬರುವುದು ನಿಯಮವಿಲ್ಲ.
ಉಳಿದವರಂತೂ ಹಣವನ್ನೇ ನೆನಪು ಮಾಡುತ್ತಾ ಇರುತ್ತಾರೆ. ಆದ್ದರಿಂದ ತಂದೆಯು ಹೇಳುತ್ತಾರೆ - ದೇಹ
ಸಹಿತವಾಗಿ ಏನೆಲ್ಲವನ್ನೂ ನೋಡುತ್ತೀರೋ ಅದೆಲ್ಲವನ್ನೂ ಮರೆತು ಬಿಡಿ, ಇದರಲ್ಲಿಯೇ ಸಿಲುಕಿಕೊಂಡರೆ
ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ತಂದೆಯು ಪುರುಷಾರ್ಥವನ್ನಂತೂ ಮಾಡಿಸುತ್ತಾರೆ.
ನೀವಿಲ್ಲಿ ನರನಿಂದ ನಾರಾಯಣನಾಗಲು ಬಂದಿದ್ದೀರಿ ಅಂದಮೇಲೆ ಇದರಲ್ಲಿ ಯೋಗವೂ ಬೇಕಾಗಿದೆ. ಶಿವ ತಂದೆಯ
ವಿನಃ ಯಾವುದೇ ವಸ್ತು, ಹಣ, ಮಕ್ಕಳು, ಇತ್ಯಾದಿಯೇನೂ ನೆನಪಿಗೆ ಬರಬಾರದು, ಆಗಲೇ ನೀವು ಶ್ರೇಷ್ಠ
ಸ್ಕಾಲರ್ಶಿಪ್ನ್ನು ತೆಗೆದುಕೊಳ್ಳುವಿರಿ. ಶ್ರೇಷ್ಠ ಬಹುಮಾನವನ್ನು ಪಡೆಯುವಿರಿ. ಅವರು ವಿಶ್ವದಲ್ಲಿ
ಶಾಂತಿಯ ಸಲಹೆ ನೀಡುತ್ತಾರೆಂದರೆ ಕೆಲವೊಂದು ಮೆಡಲ್ ಸಿಕ್ಕಿ ಬಿಡುತ್ತದೆ. ಅದರಲ್ಲಿಯೇ ಖುಷಿ
ಪಡುತ್ತಾರೆ. ಈಗ ನಿಮಗೆ ಯಾವ ಬಹುಮಾನ ಸಿಗುತ್ತದೆ? ನೀವು ವಿಶ್ವದ ಮಾಲೀಕರಾಗುತ್ತೀರಿ. ನಾವು 5-6
ಗಂಟೆಗಳ ಕಾಲ ನೆನಪಿನಲ್ಲಿರುತ್ತೇವೆ ಅಂದಮೇಲೆ ಲಕ್ಷ್ಮೀ-ನಾರಾಯಣರಾಗಿ ಬಿಡುತ್ತೇವೆ ಎಂದಲ್ಲ. ಶ್ರಮ
ಪಡಬೇಕಾಗಿದೆ. ಒಬ್ಬ ಶಿವ ತಂದೆಯ ನೆನಪೇ ಇರಲಿ, ಮತ್ತೇನೂ ಅಂತಿಮದಲ್ಲಿ ನೆನಪಿಗೆ ಬರಬಾರದು. ನೀವು
ಬಹಳ-ಬಹಳ ದೊಡ್ಡ ದೇವತೆಗಳಾಗುತ್ತಿದ್ದೀರಿ.
ತಂದೆಯು ತಿಳಿಸುತ್ತಾರೆ - ನೀವೇ ಪೂಜ್ಯರಾಗಿದ್ದಿರಿ, ನಂತರ ಮಾಯೆಯು ನಿಮ್ಮನ್ನು ಪೂಜಾರಿ,
ಪತಿತರನ್ನಾಗಿ ಮಾಡಿ ಬಿಟ್ಟಿದೆ. ನೀವು ಬ್ರಹ್ಮನನ್ನು ದೇವತೆಯೆನ್ನುತ್ತೀರೋ ಅಥವಾ
ಭಗವಂತನೆನ್ನುತ್ತೀರೋ ಎಂದು ಮನುಷ್ಯರು ಕೇಳುತ್ತಾರೆ. ಆಗ ಹೇಳಿ, ಬ್ರಹ್ಮನೇ ಭಗವಂತನೆಂದು ನಾವು
ಹೇಳುವುದಿಲ್ಲ. ನೀವು ಬಂದು ತಿಳಿದುಕೊಳ್ಳಿರಿ, ನಿಮ್ಮ ಬಳಿ ಒಳ್ಳೊಳ್ಳೆಯ ಚಿತ್ರಗಳಿವೆ.
ತ್ರಿಮೂರ್ತಿ, ಗೋಲ (ಚಕ್ರ) ಮತ್ತು ವೃಕ್ಷದ ಚಿತ್ರವು ಎಲ್ಲದಕ್ಕಿಂತ ನಂಬರ್ವನ್ ಆಗಿದೆ. ಆರಂಭದ
ಚಿತ್ರಗಳು ಇವೆರಡೇ ಆಗಿದೆ. ಇವೇ ನಿಮಗೆ ಬಹಳ ಕೆಲಸಕ್ಕೆ ಬರುವವು. ಲಕ್ಷ್ಮೀ-ನಾರಾಯಣರ ಚಿತ್ರವನ್ನು
ನೀವು ವಿದೇಶಕ್ಕೆ ತೆಗೆದುಕೊಂಡು ಹೋಗಿ, ಅದರಿಂದ ಅವರಿಗೆ ಏನೂ ಅರ್ಥವಾಗುವುದಿಲ್ಲ. ಎಲ್ಲದಕ್ಕಿಂತ
ಮುಖ್ಯವಾದುದು ತ್ರಿಮೂರ್ತಿ, ಗೋಲ ಮತ್ತು ವೃಕ್ಷದ ಚಿತ್ರವಾಗಿದೆ. ಇದರಲ್ಲಿ ತೋರಿಸಲಾಗಿದೆ -
ಯಾರ್ಯಾರು ಯಾವಾಗ ಬರುತ್ತಾರೆ. ಆದಿ ಸನಾತನ ದೇವಿ-ದೇವತಾ ಧರ್ಮವು ಯಾವಾಗ ಸಮಾಪ್ತಿಯಾಗುತ್ತದೆ.
ನಂತರ ಒಂದು ಧರ್ಮದ ಸ್ಥಾಪನೆಯನ್ನು ಯಾರು ಮಾಡುತ್ತಾರೆ? ಮತ್ತೆಲ್ಲಾ ಧರ್ಮಗಳು ಸಮಾಪ್ತಿಯಾಗುತ್ತವೆ.
ಎಲ್ಲರಿಗಿಂತ ಮೇಲೆ ಶಿವ ತಂದೆಯಿದ್ದಾರೆ ನಂತರ ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮಾ - ಇದು
ತಿಳುವಳಿಕೆಯಾಗಿದೆಯಲ್ಲವೆ. ಇದಕ್ಕಾಗಿಯೇ ಚಿತ್ರಗಳನ್ನು ಮಾಡಲಾಗಿದೆ. ಬಾಕಿ ಸೂಕ್ಷ್ಮವತನವು ಕೇವಲ
ಸಾಕ್ಷಾತ್ಕಾರಕ್ಕಾಗಿ ಮಾತ್ರ ಇದೆ. ತಂದೆಯು ರಚಯಿತನಾಗಿದ್ದಾರೆ. ಮೊದಲು ಸೂಕ್ಷ್ಮವತನ ನಂತರ
ಸ್ಥೂಲವತನದ ರಚಯಿತನಾಗಿದ್ದಾರೆ. ಬ್ರಹ್ಮನು ದೇವತೆಯಲ್ಲ, ವಿಷ್ಣು ದೇವತಾ ಆಗಿದ್ದಾರೆ. ನಿಮಗೆ
ತಿಳಿಸುವುದಕ್ಕಾಗಿ ಮಾತ್ರ ಸಾಕ್ಷಾತ್ಕಾರವಾಗುತ್ತದೆ. ಪ್ರಜಾಪಿತ ಬ್ರಹ್ಮನು ಇಲ್ಲಿಯೇ ಇದ್ದಾರಲ್ಲವೆ.
ಬ್ರಹ್ಮನ ಜೊತೆ ಬ್ರಾಹ್ಮಣರು, ಇವರೇ ದೇವತೆಗಳಾಗುವವರು. ದೇವತೆಗಳು ಶೃಂಗರಿಸಲ್ಪಟ್ಟಿರುತ್ತಾರೆ.
ಇವರಿಗೆ ಫರಿಶ್ತೆಗಳೆಂದು ಹೇಳಲಾಗುತ್ತದೆ. ಫರಿಶ್ತೆಗಳಾದ ನಂತರ ದೇವತಾ ಪದವಿಯನ್ನು ಪಡೆಯುತ್ತಾರೆ.
ಗರ್ಭಮಹಲಿನಲ್ಲಿ ಜನ್ಮ ತೆಗೆದುಕೊಳ್ಳುತ್ತಾರೆ. ಪ್ರಪಂಚವು ಬದಲಾಗುತ್ತಾ ಇರುತ್ತದೆ. ಮುಂದೆ ಹೋದಂತೆ
ನೀವು ಎಲ್ಲವನ್ನೂ ನೋಡುತ್ತಾ ಇರುತ್ತೀರಿ. ಬಹಳ ಶಕ್ತಿಶಾಲಿಗಳಾಗಿ ಬಿಡುತ್ತೀರಿ, ಇನ್ನು ಸ್ವಲ್ಪವೇ
ಸಮಯವಿದೆ, ನೀವು ನರನಿಂದ ನಾರಾಯಣನಾಗುವುದಕ್ಕಾಗಿ ಬಂದಿದ್ದೀರಿ. ಅನುತ್ತೀರ್ಣರಾದರೆ
ಪ್ರಜೆಗಳಾಗುತ್ತೀರಿ. ಸನ್ಯಾಸಿಗಳು ಈ ಮಾತುಗಳನ್ನು ತಿಳಿಸಲು ಸಾಧ್ಯವಿಲ್ಲ. ರಾಮನಿಗಂತೂ ಗೌರವವನ್ನೇ
ಕಳೆದು ಬಿಟ್ಟಿದ್ದಾರೆ. ರಾಮರಾಜ, ರಾಮಪ್ರಜಾ..... ಎಂದು ಹಾಡುತ್ತಾರೆಂದರೆ ಅಲ್ಲಿ ಇಂತಹ ಅಧರ್ಮದ
ಮಾತಿರಲು ಹೇಗೆ ಸಾಧ್ಯ! ಇವೆಲ್ಲಾ ಭಕ್ತಿಮಾರ್ಗದ ಮಾತುಗಳಾಗಿವೆ. ಆದ್ದರಿಂದ ಸುಳ್ಳು ಮಾಯೆ, ಸುಳ್ಳು
ಕಾಯವೆಂದು ಗಾಯನವಿದೆ. ಐದು ವಿಕಾರಗಳಿಗೆ ಮಾಯೆಯೆಂದು ಹೇಳಲಾಗುತ್ತದೆಯೇ ಹೊರತು ಹಣಕ್ಕಲ್ಲ. ಹಣಕ್ಕೆ
ಸಂಪತ್ತೆಂದು ಹೇಳಲಾಗುತ್ತದೆ. ಮಾಯೆಯೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದೇ ಮನುಷ್ಯರಿಗೆ
ಗೊತ್ತಿಲ್ಲ. ಇದನ್ನು ತಂದೆಯು ಮಧುರಾತಿ ಮಧುರ ಮಕ್ಕಳಿಗೆ ತಿಳಿಸುತ್ತಾರೆ.
ತಂದೆಯು ಹೇಳುತ್ತಾರೆ - ನಾನು ಪರಮ ಆತ್ಮ, ನಿಮ್ಮನ್ನು ನನಗಿಂತಲೂ ಶ್ರೇಷ್ಠ ವಿಶ್ವದ ಮಾಲೀಕರನ್ನಾಗಿ
ಮಾಡುತ್ತೇನೆ. ನೀವು ಓದುತ್ತಿದ್ದೀರಿ, ಎಷ್ಟು ಶ್ರೇಷ್ಠ ವಿದ್ಯೆಯಾಗಿದೆ. ಮನುಷ್ಯರನ್ನು
ದೇವತೆಗಳನ್ನಾಗಿ ಮಾಡಿದರೆಂದು ಹೇಳುತ್ತಾರೆ. ದೇವತೆಗಳು ಸತ್ಯಯುಗದಲ್ಲಿಯೂ, ಮನುಷ್ಯರು
ಕಲಿಯುಗದಲ್ಲಿಯೂ ಇರುತ್ತಾರೆ. ನೀವೀಗ ಸಂಗಮದಲ್ಲಿ ಕುಳಿತು ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ.
ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ. ಪವಿತ್ರರು ಅವಶ್ಯವಾಗಿ ಆಗಬೇಕಾಗಿದೆ ಮತ್ತು
ಪ್ರಜೆಗಳನ್ನೂ ಮಾಡಿಕೊಳ್ಳಬೇಕಾಗಿದೆ. ಸತ್ಯಯುಗದಲ್ಲಿ ಎಷ್ಟು ಮಂದಿಯಿದ್ದರು, ಕಲ್ಪ-ಕಲ್ಪವೂ ಅಷ್ಟೆ
ಪ್ರಜೆಗಳನ್ನು ತಯಾರು ಮಾಡುತ್ತೀರಿ. ಸತ್ಯಯುಗವಿತ್ತು, ಈಗ ಇಲ್ಲ ಅದು ಮತ್ತೆ ಬರುವುದು. ಈ
ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗುವರು, ಚಿತ್ರಗಳಿದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಈ
ಜ್ಞಾನವನ್ನು ನಾನು ಈಗ ನಿಮಗೆ ಕೊಡುತ್ತೇನೆ ಮತ್ತೆ ಇದು ಪ್ರಾಯಃಲೋಪವಾಗಿ ಬಿಡುತ್ತದೆ. ನಂತರ
ದ್ವಾಪರದಿಂದ ಭಕ್ತಿ ಆರಂಭವಾಗುತ್ತದೆ, ರಾವಣ ರಾಜ್ಯವು ಬಂದು ಬಿಡುತ್ತದೆ. ಈ ಸೃಷ್ಟಿಚಕ್ರವು ಹೇಗೆ
ಸುತ್ತುತ್ತದೆ ಎಂಬುದನ್ನು ನೀವು ವಿದೇಶದಲ್ಲಿಯೂ ತಿಳಿಸಬಲ್ಲಿರಿ. ಲಕ್ಷ್ಮೀ-ನಾರಾಯಣರ
ಚಿತ್ರಗಳೊಂದಿಗೆ ಅನ್ಯ ಧರ್ಮದವರಿಗೆ ಸಂಬಂಧವೇ ಇಲ್ಲ. ಆದ್ದರಿಂದ ತಂದೆಯು ಹೇಳುತ್ತಾರೆ - ಈ
ತ್ರಿಮೂರ್ತಿ ಮತ್ತು ವೃಕ್ಷ ಮುಖ್ಯ ಚಿತ್ರಗಳಾಗಿವೆ. ಬಹಳ ಫಸ್ಟ್ ಕ್ಲಾಸ್ ಆಗಿವೆ. ವೃಕ್ಷ ಮತ್ತು
ಗೋಲದ ಚಿತ್ರದಿಂದ ಯಾವ-ಯಾವ ಧರ್ಮಗಳು ಯಾವಾಗ ಬರುವವು, ಕ್ರೈಸ್ಟ್ ಯಾವಾಗ ಬರುವರು ಎಂಬುದನ್ನು
ಸ್ಪಷ್ಟವಾಗಿ ತಿಳಿದುಕೊಳ್ಳುವರು. ಅರ್ಧದಲ್ಲಿ ಅವೆಲ್ಲಾ ಧರ್ಮಗಳು ಇನ್ನರ್ಧದಲ್ಲಿ ನೀವು ಸೂರ್ಯವಂಶಿ,
ಚಂದ್ರವಂಶಿಯರಿರುತ್ತೀರಿ, 5000 ವರ್ಷಗಳ ಆಟವಾಗಿದೆ. ಜ್ಞಾನ, ಭಕ್ತಿ ಮತ್ತು ವೈರಾಗ್ಯ. ಜ್ಞಾನವು
ದಿನ, ಭಕ್ತಿಯು ರಾತ್ರಿಯಾಗಿದೆ. ನಂತರ ಬೇಹದ್ದಿನ ವೈರಾಗ್ಯವು ಬರುತ್ತದೆ. ನಿಮಗೆ ಗೊತ್ತಿದೆ, ಈ
ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ಆದ್ದರಿಂದ ಇದನ್ನು ಮರೆಯಬೇಕಾಗಿದೆ. ಪತಿತ-ಪಾವನ
ಯಾರೆಂಬುದನ್ನು ಸಿದ್ಧ ಮಾಡಬೇಕಾಗಿದೆ. ಪತಿತ-ಪಾವನ ಸೀತಾರಾಂ ಎಂದು ದಿನ-ರಾತ್ರಿ
ಹಾಡುತ್ತಿರುತ್ತಾರೆ. ಗಾಂಧಿಯೂ ಸಹ ಗೀತೆಯನ್ನು ಓದುತ್ತಿದ್ದರು. ಹೇ ಪತಿತ-ಪಾವನ ಸೀತಾರಾಂ ಎಂದು
ಹಾಡುತ್ತಿದ್ದರು. ಏಕೆಂದರೆ ನೀವೆಲ್ಲರೂ ಸೀತೆಯರು ವಧುಗಳಾಗಿದ್ದೀರಲ್ಲವೆ. ತಂದೆಯು ವರನಾಗಿದ್ದಾರೆ
ಮತ್ತೆ ರಘುಪತಿ ರಾಘವ ರಾಜಾರಾಂ ಎಂದು ಹೇಳುತ್ತಾರೆ. ಅವರಂತೂ ತ್ರೇತಾದ ರಾಜನಾಗಿದ್ದಾರೆ. ಎಲ್ಲಾ
ಮಾತುಗಳನ್ನು ಗೊಂದಲಕ್ಕೀಡು ಮಾಡಿದ್ದಾರೆ. ಇದನ್ನು ಕೇಳಿ-ಕೇಳಿ ತಾಳ ಹಾಕುತ್ತಾ ಹಾಡುತ್ತಿರುತ್ತಾರೆ.
ನಾವೂ (ಬ್ರಹ್ಮಾ) ಹಾಡುತ್ತಿದ್ದೆವು. ಒಂದು ವರ್ಷ ಖಾದಿ ಬಟ್ಟೆಯನ್ನು ಧರಿಸಿದೆನು. ತಂದೆಯು
ತಿಳಿಸುತ್ತಾರೆ - ಈ ಬ್ರಹ್ಮನೂ ಸಹ ಗಾಂಧೀಜಿಯ ಅನುಯಾಯಿಯಾಗಿದ್ದರು. ಇವರಂತೂ ಎಲ್ಲವನ್ನೂ ಅನುಭವ
ಮಾಡಿದ್ದಾರೆ. ಮೊದಲಿನವರೇ ಕೊನೆಗೆ ಬಂದಿದ್ದಾರೆ. ಈಗ ಪುನಃ ಮೊದಲಿಗನಾಗುವರು. ಎಲ್ಲಿ ನೋಡಿದರೂ
ಬ್ರಹ್ಮನನ್ನು ಕೂರಿಸಿದ್ದೀರೆಂದು ಕೆಲವರು ಹೇಳುತ್ತಾರೆ, ಆಗ ತಿಳಿಸಬೇಕು - ಅರೆ! ಬ್ರಹ್ಮನು
ವೃಕ್ಷದ ಮೇಲೆ ನಿಂತಿದ್ದಾರೆ, ಎಷ್ಟು ಸ್ಪಷ್ಟವಾಗಿದೆ. ಇವರು ಪತಿತ ಪ್ರಪಂಚದ ಅಂತ್ಯದಲ್ಲಿ
ನಿಂತಿದ್ದಾರೆ. ಶ್ರೀಕೃಷ್ಣನನ್ನು ಮೇಲೆ ತೋರಿಸಲಾಗಿದೆ. ಎರಡು ಬೆಕ್ಕುಗಳು ಹೊಡೆದಾಡಿದಾಗ
ಬೆಣ್ಣೆಯನ್ನು ಶ್ರೀಕೃಷ್ಣನು ತಿನ್ನುತ್ತಾನೆ. ಮಾತೆಯರಿಗೆ ಸಾಕ್ಷಾತ್ಕಾರವಾದಾಗ ಕೃಷ್ಣನ ಬಾಯಲ್ಲಿ
ಬೆಣ್ಣೆಯಿತ್ತು ಅಥವಾ ಚಂದ್ರನಿದ್ದನೆಂದು ತಿಳಿಯುತ್ತಾರೆ. ವಾಸ್ತವದಲ್ಲಿ ಇದು ವಿಶ್ವದ
ರಾಜ್ಯಭಾಗ್ಯವನ್ನು ಬಾಯಲ್ಲಿ ತೋರಿಸಲಾಗಿದೆ. ಎರಡು ಬೆಕ್ಕುಗಳು ಪರಸ್ಪರ ಹೊಡೆದಾಡಿ ಬೆಣ್ಣೆಯು ತಾವು
ದೇವತೆಗಳಿಗೆ ಸಿಕ್ಕಿ ಬಿಡುತ್ತದೆ. ಇದು ವಿಶ್ವದ ರಾಜ್ಯರೂಪಿ ಬೆಣ್ಣೆಯಾಗಿದೆ. ಬಾಂಬುಗಳನ್ನು
ತಯಾರಿಸುವವರೂ ಸಹ ಬಹಳ ಅಭಿವೃದ್ಧಿ ಮಾಡುತ್ತಿದ್ದಾರೆ. ಇಂತಹ ವಸ್ತುಗಳನ್ನು ತಯಾರು
ಮಾಡುತ್ತಿದ್ದಾರೆ ಆದ್ದರಿಂದ ಕ್ಷಣಗಳಲ್ಲಿಯೇ ಮನುಷ್ಯರು ಶರೀರ ಬಿಡಬೇಕು. ಚೀರಾಡುತ್ತಿರುವಂತೆ
ಆಗಬಾರದು. ಹೇಗೆ ಹಿರೋಶಿಮಾದಲ್ಲಿ ಇಲ್ಲಿಯವರೆಗೂ ರೋಗಿಗಳಾಗಿಯೇ ಇದ್ದಾರೆ. ಆದ್ದರಿಂದ ತಂದೆಯು
ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಅರ್ಧಕಲ್ಪ ನೀವು ಸುಖಿಯಾಗಿರುತ್ತೀರಿ, ಯಾವುದೇ
ಪ್ರಕಾರದ ಯುದ್ಧ ಇತ್ಯಾದಿಗಳ ಹೆಸರಿರುವುದಿಲ್ಲ. ಇವೆಲ್ಲವೂ ನಂತರದಲ್ಲಿ ಆರಂಭವಾಗಿದೆ. ಇವೆಲ್ಲವೂ
ಇರಲೂ ಇಲ್ಲ, ಮುಂದೆ ಇರುವುದೂ ಇಲ್ಲ. ಚಕ್ರವು ಪುನರಾವರ್ತನೆಯಾಗುತ್ತದೆ ಅಲ್ಲವೆ. ತಂದೆಯು
ಎಲ್ಲವನ್ನು ಚೆನ್ನಾಗಿ ತಿಳಿಸುತ್ತಾರೆ. ಇದನ್ನು ಮಕ್ಕಳು ಚೆನ್ನಾಗಿ ಧಾರಣೆ ಮಾಡಿಕೊಂಡು ಈಶ್ವರೀಯ
ಸೇವೆಯಲ್ಲಿ ತೊಡಗಬೇಕಾಗಿದೆ, ಇದು ಛೀ ಛೀ ಪ್ರಪಂಚವಾಗಿದೆ, ಇದಕ್ಕೆ ವಿಷಯ ವೈತರಣೀ ನದಿಯೆಂದು
ಹೇಳಲಾಗುತ್ತದೆ ಅಂದಾಗ ತಂದೆಯು ಮಕ್ಕಳಿಗೆ ತಿಳಿಸುವುದೇನೆಂದರೆ ನಾನು ನಿಮ್ಮನ್ನು ಎಷ್ಟು
ಶ್ರೇಷ್ಠರೆಂದು ತಿಳಿಯುತ್ತೇನೆಯೋ ಅಷ್ಟು ನಿಮ್ಮನ್ನು ನೀವು ತಿಳಿದುಕೊಳ್ಳುವುದಿಲ್ಲ. ನೀವು
ಮಕ್ಕಳಿಗೆ ಬಹಳ ನಶೆಯಿರಬೇಕು ಏಕೆಂದರೆ ನೀವು ಶ್ರೇಷ್ಠಕುಲದವರಾಗಿದ್ದೀರಿ. ಒಳ್ಳೆಯದು.
ಧಾರಣೆಗಾಗಿ ಮುಖ್ಯಸಾರ-
1. ತಮ್ಮ
ಬುದ್ಧಿಯನ್ನು ಶುದ್ಧ ಮಾಡಿಕೊಳ್ಳಲು ನಿತ್ಯವೂ ಜ್ಞಾನಾಮೃತದ ಡೋಜನ್ನು ಕೊಡಬೇಕು. ನೆನಪಿನ ಜೊತೆ
ಜೊತೆಗೆ ವಿದ್ಯೆಯ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ, ಏಕೆಂದರೆ ವಿದ್ಯೆಯಿಂದಲೇ ಶ್ರೇಷ್ಠ ಪದವಿ
ಸಿಗುತ್ತದೆ.
2. ನಾವು ಶ್ರೇಷ್ಠಾತಿ ಶ್ರೇಷ್ಠ ಕುಲದವರಾಗಿದ್ದೇವೆ, ಸ್ವಯಂ ಭಗವಂತನೇ ನಮಗೆ ಓದಿಸುತ್ತಾರೆ ಎಂಬ
ನಶೆಯಲ್ಲಿರಬೇಕು. ಜ್ಞಾನ ಧಾರಣೆ ಮಾಡಿಕೊಂಡು ಈಶ್ವರೀಯ ಸೇವೆಯಲ್ಲಿ ತೊಡಗಬೇಕಾಗಿದೆ.
ವರದಾನ:
ಸೇವೆಯ
ಜೊತೆ-ಜೊತೆ ಬೇಹದ್ಧಿನ ವೈರಾಗ್ಯ ವೃತ್ತಿಯ ಸಾಧನೆಯನ್ನು ಇಮರ್ಜ್ ಮಾಡುವಂತಹ ಸಫಲತಾ ಮೂರ್ತಿ ಭವ.
ಸೇವೆಯಿಂದ ಖುಶಿ ಹಾಗೂ
ಶಕ್ತಿ ಸಿಗುವುದು, ಆದರೆ ಸೇವೆಯಲ್ಲಿಯೇ ವೈರಾಗ್ಯ ವೃತ್ತಿಯೂ ಸಹ ಸಮಾಪ್ತಿಯಾಗಿ ಬಿಡುವುದು.
ಆದ್ದರಿಂದ ನಿಮ್ಮ ಒಳಗಿರುವ ವೈರಾಗ್ಯ ವೃತ್ತಿಯನ್ನು ಜಾಗೃತ ಮಾಡಿ. ಹೇಗೆ ಸೇವೆಯ ರೂಪು ರೇಖೆಯನ್ನು
ಕಾರ್ಯ ರೂಪದಲ್ಲಿ ಇಮರ್ಜ್ ಮಾಡುವಿರಿ. ಆಗ ಸಫಲತೆ ಸಿಗುವುದು. ಅದೇರೀತಿ ಈಗ ಬೇಹದ್ದಿನ ವೈರಾಗ್ಯ
ವೃತ್ತಿಯನ್ನು ಇಮರ್ಜ್ ಮಾಡಿಕೊಳ್ಳಿ. ಎಷ್ಟೇ ಸಾಧನ ಪ್ರಾಪ್ತಿಯಾಗಲಿ. ಆದರೆ ಬೇಹದ್ದಿನ ವೈರಾಗ್ಯ
ವೃತ್ತಿಯ ಸಾಧನೆ ಮರ್ಜ್ ಆಗದಿರಲಿ. ಸಾಧನೆ ಮತ್ತು ಸಾಧನ ಎರಡರ ಬ್ಯಾಲೆನ್ಸ್ ಇರಬೇಕು ಆಗ ಸಫಲತಾ
ಮೂರ್ತಿಗಳಾಗುವಿರಿ.
ಸ್ಲೋಗನ್:
ಅಸಂಭವವನ್ನು
ಸಂಭವವನ್ನಾಗಿ ಮಾಡುವುದೇ ಪರಮಾತ್ಮನ ಪ್ರೀತಿಯ ಚಿನ್ಹೆಯಾಗಿದೆ.