07.05.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೆನಪಿನ ಯಾತ್ರೆಯಲ್ಲಿದ್ದಾಗ ನಿಮ್ಮ ಪಾಪ ನಾಶವಾಗುತ್ತದೆ, ಏಕೆಂದರೆ ನೆನಪು ಖಡ್ಗದ ಹರಿತವಾಗಿದೆ, ಇದರಲ್ಲಿ ನಿಮಗೆ ನೀವು ಮೋಸ ಮಾಡಿಕೊಳ್ಳಬಾರದು”

ಪ್ರಶ್ನೆ:
ಮಕ್ಕಳ ನಡತೆಯು ಸುಧಾರಣೆಯಾಗಲು ತಂದೆಯು ಯಾವ ಮಾರ್ಗವನ್ನು ತೋರಿಸುತ್ತಾರೆ?

ಉತ್ತರ:
ಮಕ್ಕಳೇ, ತಮ್ಮ ಸತ್ಯ-ಸತ್ಯ ಚಾರ್ಟನ್ನು ಇಡಿ. ಚಾರ್ಟ್ ಇಡುವುದರಿಂದ ನಿಮ್ಮ ನಡತೆಯು ಸುಧಾರಣೆಯಾಗುತ್ತದೆ. ಇಡೀ ದಿನ ನಮ್ಮ ನಡತೆಯು ಹೇಗಿತ್ತು ಎಂದು ನೋಡಿಕೊಳ್ಳಬೇಕು. ಯಾರಿಗೂ ದುಃಖ ಕೊಡಲಿಲ್ಲವೆ? ವ್ಯರ್ಥ ಮಾತುಗಳನ್ನು ಮಾತನಾಡಲಿಲ್ಲವೆ? ಆತ್ಮ ಎಂದು ತಿಳಿದು ತಂದೆಯನ್ನು ಎಷ್ಟು ಸಮಯ ನೆನಪು ಮಾಡಿದೆವು? ಎಷ್ಟು ಜನರನ್ನು ತನ್ನ ಸಮಾನ ಮಾಡಿದೆವು?ಯಾರು ಹೀಗೆ ದಿನಚರಿಯನ್ನು ಇಡುವರೋ ಅವರ ನಡತೆಯೂ ಸುಧಾರಣೆಯಾಗುತ್ತಾ ಹೋಗುತ್ತದೆ. ಯಾರು ಏನು ಮಾಡುತ್ತಾರೆಯೋ ಅದರಂತೆ ಪಡೆಯುತ್ತಾರೆ, ಮಾಡದಿದ್ದರೆ ಪಶ್ಚಾತ್ತಾಪ ಪಡುತ್ತಾರೆ.

ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ತಂದೆಯು ಕುಳಿತು ತಿಳಿಸುತ್ತಾರೆ, ಏಕೆಂದರೆ ಇಲ್ಲಿ ಸನ್ಮುಖದಲ್ಲಿದ್ದಾರೆ. ಎಲ್ಲಾ ಮಕ್ಕಳು ತಮ್ಮ ಸ್ವಧರ್ಮದಲ್ಲಿದ್ದು ತಂದೆಯನ್ನು ನೆನಪು ಮಾಡುತ್ತಾರೆಂದು ಹೇಳಲಾಗುವುದಿಲ್ಲ. ಬುದ್ಧಿಯು ಎಲ್ಲಿಯಾದರೂ ಅಗತ್ಯವಾಗಿ ಹೋಗುತ್ತಿರುತ್ತದೆ. ಇದನ್ನು ಪ್ರತಿಯೊಬ್ಬರೂ ತಮಗೆ ತಾವೇ ತಿಳಿದುಕೊಳ್ಳಬಹುದು. ಮುಖ್ಯ ಮಾತು ಸತೋಪ್ರಧಾನ ಆಗುವುದಾಗಿದೆ. ಅದೂ ಸಹ ನೆನಪಿನ ಯಾತ್ರೆಯ ವಿನಃ ಆಗಲು ಸಾಧ್ಯವಿಲ್ಲ. ಭಲೇ ತಂದೆಯು ಅಮೃತ ವೇಳೆಯ ಸಮಯದಲ್ಲಿ ಮಕ್ಕಳನ್ನು ಸೆಳೆಯುತ್ತಾರೆ ಆಕರ್ಷಿಸುತ್ತಾರೆ, ಆದರೆ ನಂಬರವಾರ್ ಆಕರ್ಷಿಸಲ್ಪಡುತ್ತಾರೆ. ನೆನಪಿನಲ್ಲಿ ಶಾಂತಿಯಲ್ಲಿರುತ್ತಾರೆ. ಪ್ರಪಂಚವೇ ಮರೆಯುತ್ತಾರೆ, ಆದರೆ ಇಡೀ ದಿನ ಏನು ಮಾಡುತ್ತಾರೆಂಬ ಸವಾಲು ಉಳಿಯುತ್ತದೆ. ಅದಾಯಿತು ಬೆಳಿಗ್ಗೆ 1/2 ಘಂಟೆ ನೆನಪಿನ ಯಾತ್ರೆ, ಇದರಿಂದ ಆತ್ಮ ಪವಿತ್ರವಾಗುತ್ತದೆ, ಆಯಸ್ಸು ಹೆಚ್ಚುತ್ತದೆ. ಆದರೆ ಇಡೀ ದಿನ ಎಷ್ಟು ನೆನಪು ಮಾಡುತ್ತಾರೆ, ಎಷ್ಟು ಸ್ವದರ್ಶನ ಚಕ್ರಧಾರಿಯಾಗುತ್ತಾರೆ. ತಂದೆಯು ಎಲ್ಲವನ್ನೂ ತಿಳಿದುಕೊಂಡಿರುತ್ತಾರೆಂದು ತಿಳಿಯಬಾರದು. ಆದ್ದರಿಂದ ಇಡೀ ದಿನ ನಾವು ಏನು ಮಾಡಿದೆವೆಂದು ನಮ್ಮ ಮನಸ್ಸನ್ನು ನಾವು ಕೇಳಿಕೊಳ್ಳಬೇಕು. ಈಗ ನೀವು ಮಕ್ಕಳು ಚಾರ್ಟ್ ಬರೆಯುತ್ತೀರಿ - ಕೆಲವರು ಸತ್ಯವಾಗಿ ಬರೆಯುತ್ತಾರೆ, ಇನ್ನೂ ಕೆಲವರು ಅಸತ್ಯವನ್ನು ಬರೆಯುತ್ತಾರೆ. ನಾವು ಶಿವ ತಂದೆಯ ಜೊತೆಯಲ್ಲಿಯೇ ಇದ್ದೇವೆಂದು ತಿಳಿದುಕೊಂಡಿರುತ್ತಾರೆ. ಶಿವ ತಂದೆಯನ್ನು ನೆನಪು ಮಾಡುತ್ತಿದ್ದೆವು ಆದರೆ ಸತ್ಯವಾಗಿಯೂ ನೆನಪಿನಲ್ಲಿದ್ದೇವೆಯೇ? ಸಂಪೂರ್ಣ ಶಾಂತಿಯಲ್ಲಿದ್ದಾಗ ಪ್ರಪಂಚವೇ ಮರೆತು ಹೋಗುತ್ತದೆ. ನಾವು ಶಿವ ತಂದೆಯ ನೆನಪಿನಲ್ಲಿಯೇ ಇದ್ದೇವೆಂದು ತಮಗೆ ತಾವು ಮೋಸ ಮಾಡಿಕೊಳ್ಳಬಾರದು, ದೇಹದ ಎಲ್ಲಾ ಧರ್ಮಗಳನ್ನು ಮರೆಯಬೇಕು. ನಮ್ಮನ್ನು ಶಿವ ತಂದೆಯು ಆಕರ್ಷಣೆ ಮಾಡಿ ಪ್ರಪಂಚವನ್ನೇ ಮರೆಸುತ್ತಾರೆ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಎಲ್ಲಾ ಆತ್ಮಗಳು ಬೇರೆ ಯಾರನ್ನೂ ನೆನಪು ಮಾಡದೇ ತಂದೆಯನ್ನೇ ನೆನಪು ಮಾಡಲಿ ಎಂದು ತಂದೆಯು ಆಕರ್ಷಣೆ ಮಾಡುತ್ತಾರೆ. ಆದರೆ ನಿಜವಾಗಿಯೂ ತಂದೆಯ ನೆನಪು ಬರುತ್ತದೆಯೋ ಅಥವಾ ಇಲ್ಲವೆ ತಮ್ಮ ದಿನಚರಿಯನ್ನು ತೆಗೆಯಬೇಕು. ತಂದೆಯನ್ನು ಎಷ್ಟು ನಾವು ನೆನಪು ಮಾಡುತ್ತೇವೆ? ಹೇಗೆ ಪ್ರಿಯತಮ ಹಾಗೂ ಪ್ರಿಯತಮೆಯ ಉದಾಹರಣೆಯಿದೆ, ನಾವು ಆತ್ಮಿಕ ಪ್ರಿಯತಮ -ಪ್ರಿಯತಮೆಯರಾಗಿದ್ದೇವೆ. ಈ ಮಾತುಗಳು ಬಹಳ ಭಿನ್ನವಾಗಿದೆ, ಅದು ಶಾರೀರಿಕವಾಗಿದೆ, ಇದು ಆತ್ಮಿಕವಾಗಿದೆ. ನಮ್ಮನ್ನು ನಾವು ಎಷ್ಟು ಸಮಯ ದೈವೀ ಗುಣಗಳನ್ನು ಧಾರಣೆ ಮಾಡಿದ್ದೇವೆಂದು ನೋಡಿಕೊಳ್ಳಬೇಕು. ಎಷ್ಟು ಸಮಯ ತಂದೆಯ ಸೇವೆಯಲ್ಲಿದ್ದೆವು? ಹಾಗೂ ಅನ್ಯರಿಗೂ ನೆನಪು ತರಿಸಬೇಕು. ಹಾಗೂ ಆತ್ಮದಲ್ಲಿರುವ ಪಾಪವು ನೆನಪಿನ ವಿನಃ ನಾಶವಾಗುವುದಿಲ್ಲ. ಭಕ್ತಿಯಲ್ಲಿ ಅನೇಕರನ್ನು ನೆನಪು ಮಾಡುತ್ತಿದ್ದೆವು, ಇಲ್ಲಿ ಒಬ್ಬರನ್ನೇ ನೆನಪು ಮಾಡಬೇಕು. ಆತ್ಮ ಅತೀ ಸೂಕ್ಷ್ಮ ಬಿಂದುವಾಗಿದೆ, ಈ ಜ್ಞಾನವು ಬಹಳ ವಿಸ್ತಾರವಾಗಿದೆ. ಲಕ್ಷ್ಮೀ-ನಾರಾಯಣರಾಗಬೇಕು. ಇದೇನೂ ಚಿಕ್ಕಮ್ಮನ ಮನೆಯಂತಲ್ಲ. ತಂದೆಯು ತಿಳಿಸುತ್ತಾರೆ- ತಮ್ಮನ್ನು ತಾವು ಬುದ್ಧಿವಂತನೆಂದು ತಿಳಿದು ತಮ್ಮನ್ನು ಮೋಸ ಮಾಡಿಕೊಳ್ಳಬಾರದು. ಪಾಪ ನಾಶವಾಗುವಂತೆ ಇಡೀ ದಿನ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ಎಷ್ಟು ಸಮಯ ನೆನಪು ಮಾಡಿದೆವು? ಎಷ್ಟು ಜನರನ್ನು ನನ್ನ ಸಮಾನ ಮಾಡಿದೆನು? ಈ ದಿನಚರಿಯನ್ನು ಪ್ರತಿಯೊಬ್ಬರೂ ಇಡಬೇಕು. ಯಾರು ಮಾಡುತ್ತಾರೆ ಅವರು ಪಡೆದುಕೊಳ್ಳುತ್ತಾರೆ, ಮಾಡದವರು ಪಶ್ಚಾತ್ತಾಪ ಪಡುತ್ತಾರೆ. ಇಡೀ ದಿನ ನಮ್ಮ ನಡತೆ ಹೇಗಿತ್ತು? ಯಾರಿಗೂ ದುಃಖ ಕೊಡಲಿಲ್ಲವೆ ಅಥವಾ ವ್ಯರ್ಥ ಮಾತುಗಳನ್ನು ಮಾತನಾಡಲಿಲ್ಲವೆ? ಚಾರ್ಟ್ ಇಡುವುದರಿಂದ ನಡತೆಯು ಸುಧಾರಣೆಯಾಗುತ್ತದೆ. ತಂದೆಯಂತೂ ಮಾರ್ಗವನ್ನು ತೋರಿಸಿದ್ದಾರೆ. ಪ್ರಿಯತಮ -ಪ್ರಿಯತಮೆಯು ಪರಸ್ಪರ ನೆನಪು ಮಾಡುತ್ತಾರೆ. ನೆನಪು ಮಾಡುತ್ತಲೇ ಅವರೇ ಬಂದು ನಿಂತು ಬಿಡುತ್ತಾರೆ. ಇಬ್ಬರು ಸ್ತ್ರೀಯರಿದ್ದಾಗಲೂ ಸಾಕ್ಷಾತ್ಕಾರವಾಗುತ್ತದೆ. ಇಬ್ಬರೂ ಪುರುಷರಿದ್ದಾಗಲೂ ಸಾಕ್ಷಾತ್ಕಾರವಾಗುತ್ತದೆ. ಕೆಲವು ಮಿತ್ರರು ಒಡ ಹುಟ್ಟಿದ ಸಹೋದರರಿಗಿಂತಲೂ ಬಹಳ ಸ್ನೇಹದಿಂದಿರುತ್ತಾರೆ. ಮಿತ್ರರಲ್ಲಿ ಪರಸ್ಪರ ಇಷ್ಟೊಂದು ಪ್ರೀತಿಯಿರುತ್ತದೆ, ಅದು ತನ್ನ ಸಹೋದರನೊಂದಿಗೂ ಇರುವುದಿಲ್ಲ. ಪರಸ್ಪರ ಬಹಳ ಪ್ರೀತಿಯನ್ನು ಕೊಟ್ಟು ಮೇಲೆತ್ತುತ್ತಾರೆ. ತಂದೆಯು ಅನುಭವಿಯಾಗಿದ್ದಾರಲ್ಲವೆ. ಆದ್ದರಿಂದ ತಂದೆಯು ಅಮೃತವೇಳೆ ಬಹಳ ಆಕರ್ಷಣೆ ಮಾಡುತ್ತಾರೆ. ಅಯಸ್ಕಾಂತವಾಗಿದ್ದಾರೆ, ಸದಾ ಪವಿತ್ರವಾಗಿದ್ದಾರೆ, ಆದುದರಿಂದ ಅವರು ಆಕರ್ಷಿಸುತ್ತಾರೆ. ತಂದೆಯು ಬೇಹದ್ದಿನವರಾಗಿದ್ದಾರಲ್ಲವೆ. ಇವರು ಬಹಳ ಪ್ರೀತಿಯ ಮಕ್ಕಳೆಂದು ತಿಳಿದುಕೊಳ್ಳುತ್ತಾರೆ. ಬಹಳಷ್ಟು ಆಕರ್ಷಣೆ ಮಾಡುತ್ತಾರೆ ಆದರೆ ನೆನಪಿನ ಯಾತ್ರೆಯು ಬಹಳ ಬೇಕಾಗಿದೆ. ಎಲ್ಲಿಗಾದರೂ ಹೋಗಬಹುದು, ಪ್ರಯಾಣವನ್ನೂ ಮಾಡುತ್ತಿರಿ, ನಡೆಯುತ್ತಾ-ತಿರುಗಾಡುತ್ತಾ ನೆನಪು ಮಾಡುತ್ತಿರಬಹುದು. ಪ್ರಿಯತಮ-ಪ್ರಿಯತಮೆಯರು ಎಲ್ಲಿ ಬೇಕಾದರೂ ನೆನಪು ಮಾಡುತ್ತಾರಲ್ಲವೆ. ಇದೂ ಸಹ ಅದೇ ರೀತಿಯಾಗಿಯೇ ಇದೆ. ತಂದೆಯನ್ನಂತೂ ನೆನಪು ಮಾಡಬೇಕು. ಇಲ್ಲವೆಂದರೆ ವಿಕರ್ಮ ಹೇಗೆ ವಿನಾಶವಾಗುತ್ತದೆ! ಬೇರೆ ಉಪಾಯವೇ ಇಲ್ಲ. ಇದು ಬಹಳ ಸೂಕ್ಷ್ಮವೇ ಆಗಿದೆ. ಖಡ್ಗದ ಹರಿತದ ಮೇಲೆ ನಡೆಯಬೇಕಾಗುತ್ತದೆ. ನೆನಪೇ ಖಡ್ಗದ ಹರಿತವಾಗಿದೆ. ಪದೇ-ಪದೇ ನೆನಪು ಮರೆತು ಹೋಗುತ್ತದೆ ಎಂದು ಹೇಳುತ್ತಾರೆ. ಖಡ್ಗವೆಂದು ಏಕೆ ಹೇಳುತ್ತಾರೆ? ಏಕೆಂದರೆ ಇದರಿಂದ ಪಾಪ ಕತ್ತರಿಸುತ್ತದೆ, ನೀವು ಪಾವನರಾಗುತ್ತೀರಿ. ಇದು ಬಹಳ ಸೂಕ್ಷ್ಮವಾಗಿದೆ. ಹೇಗೆ ಜನರು ಅಗ್ನಿಯಿಂದ ಪಾರಾಗುತ್ತಾರೆ, ನಿಮ್ಮ ಬುದ್ಧಿಯೋಗ ತಂದೆಯ ಬಳಿ ಹೊರಟು ಹೋಗುತ್ತದೆ. ತಂದೆಯು ಇಲ್ಲಿ ಬಂದಿದ್ದಾರೆ ಅಂದಾಗ ಆಸ್ತಿಯನ್ನು ಕೊಡುತ್ತಾರೆ. ತಂದೆಯು ಮೇಲಿಲ್ಲ ಇಲ್ಲಿಗೆ ಬಂದಿದ್ದಾರೆ. ನಾನು ಸಾಧಾರಣ ತನುವಿನಲ್ಲಿ ಬರುತ್ತೇನೆಂದು ತಿಳಿಸುತ್ತಾರೆ. ನಿಮಗೂ ಸಹ ಗೊತ್ತಿದೆ- ಮೇಲಿಂದ ಕೆಳಗೆ ಬಂದಿದ್ದಾರೆ. ಚೈತನ್ಯ ವಜ್ರವು ಈ ಡಬ್ಬ (ಶರೀರ) ದಲ್ಲಿ ಕುಳಿತಿದ್ದಾರೆ. ಕೇವಲ ತಂದೆಯ ಜೊತೆ ಕುಳಿತಿದ್ದೇವೆಂದು ಇಷ್ಟಕ್ಕೆ ಖುಷಿಯಾಗಬಾರದು. ಇದನ್ನು ತಂದೆಯೂ ತಿಳಿದುಕೊಂಡಿರುತ್ತಾರೆ, ಬಹಳ ಆಕರ್ಷಣೆ ಮಾಡುತ್ತಾರೆ ಆದರೆ ಇದು ಕೇವಲ ಅರ್ಧ-ಮುಕ್ಕಾಲು ಗಂಟೆ ಮಾತ್ರ ಇರುತ್ತದೆ, ದಿನದಲ್ಲಿ ಉಳಿದ ಸಮಯ ವ್ಯರ್ಥವಾಯಿತೆಂದರೆ ಲಾಭವೇನು! ಮಕ್ಕಳಿಗೆ ತಮ್ಮ ಚಾರ್ಟಿನ ಚಿಂತೆಯಿರಬೇಕು. ನಾವು ಭಾಷಣ ಮಾಡುತ್ತೇವೆ, ಚಾರ್ಟ್ ಇಡುವ ಅವಶ್ಯಕತೆಯಿಲ್ಲವೆಂದು ತಿಳಿದು ತಪ್ಪನ್ನು ಮಾಡುತ್ತಾರೆ. ಮಹಾರಥಿಗಳೂ ಸಹ ಚಾರ್ಟ್ ಇಡಬೇಕು. ಮಹಾರಥಿಗಳು ಬಹಳಷ್ಟು ಇಲ್ಲ. ಲೆಕ್ಕವಿಡುವಷ್ಟು ಮಾತ್ರವೇ ಇದ್ದಾರೆ. ಬಹಳ ಮಕ್ಕಳು ನಾಮ-ರೂಪದಲ್ಲಿ ಸಮಯ ವ್ಯರ್ಥ ಮಾಡುತ್ತಾರೆ. ಗುರಿ ತುಂಬಾ ಶ್ರೇಷ್ಠವಾಗಿದೆ. ತಂದೆಯು ಎಲ್ಲವನ್ನೂ ತಿಳಿಸಿ ಬಿಡುತ್ತಾರೆ. ವಿದ್ಯಾರ್ಥಿಗಳು ಎಂದಿಗೂ ತಂದೆಯು ಇಂತಹ ಮಾತನ್ನು ತಿಳಿಸಿಲ್ಲವೆಂದು ತಿಳಿದುಕೊಳ್ಳಬಾರದು. ನೆನಪು ಹಾಗೂ ಸೃಷ್ಟಿ ಚಕ್ರದ ಜ್ಞಾನವು ಅತೀ ಮುಖ್ಯವಾಗಿದೆ. ಈ ಸೃಷ್ಟಿ ಚಕ್ರದಲ್ಲಿ 84 ಜನ್ಮಗಳನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ವೈರಾಗ್ಯವೂ ನಿಮಗೆ ಮಾತ್ರವೇ ಬರುತ್ತದೆ. ಈ ಮೃತ್ಯು ಲೋಕದಲ್ಲಿ ನಾವು ಇರಲು ಸಾಧ್ಯವಿಲ್ಲವೆಂದು ನೀವು ತಿಳಿದಿದ್ದೀರಿ. ಈ ಪ್ರಪಂಚದಿಂದ ಹೋಗಲು ಮೊದಲು ಪವಿತ್ರರಾಗಬೇಕು, ಅಗತ್ಯವಾಗಿ ದೈವೀ ಗುಣಗಳನ್ನು ಧಾರಣೆ ಮಾಡಬೇಕು. ನಂಬರವಾರ್ ಮಾಲೆಯಲ್ಲಿ ಬರುತ್ತೇವೆ ನಂತರ ನಂಬರವಾರ್ ರಾಜಧಾನಿಯಲ್ಲಿ ಬರಬೇಕಾಗುತ್ತದೆ. ಹಾಗೂ ನಂಬರವಾರ್ ಆಗಿ ನಿಮ್ಮ ಪೂಜೆಯೂ ನಡೆಯುತ್ತದೆ. ಅನೇಕ ದೇವತೆಗಳ ಪೂಜೆಯೂ ನಡೆಯುತ್ತದೆ, ದೇವತೆಗಳಿಗೂ ಎಂತೆಂತಹ ಹೆಸರುಗಳನ್ನಿಟ್ಟಿದ್ದಾರೆ, ಚಂಡಿಕಾ ದೇವಿಯ ಜಾತ್ರೆಯಾಗುತ್ತದೆ. ಯಾರು ದಿನಚರಿಯನ್ನಿಡದೆ ಸುಧಾರಣೆಯಾಗುವುದಿಲ್ಲ ಅವರನ್ನು ಚಂಡಿಕಾ ಎಂದು ಹೇಳಲಾಗುತ್ತದೆ. ಇದು ಬೇಹದ್ದಿನ ಮಾತಾಗಿದೆ. ಪುರುಷಾರ್ಥ ಮಾಡಿಲ್ಲವೆಂದರೆ ಇವರು ತಂದೆಗೂ ಸಹ ಮಾನ್ಯತೆ ಕೊಡುವವರಲ್ಲ ಎಂದು ತಂದೆ ಹೇಳುತ್ತಾರೆ, ಇವರ ಪದವಿಯು ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಆದುದರಿಂದ ತಂದೆಯು ತಮ್ಮ ಮೇಲೆ ತಾವೇ ಬಹಳ ಗಮನ ಇಟ್ಟುಕೊಳ್ಳುಬೇಕು ಎಂದು ತಿಳಿಸುತ್ತಾರೆ. ತಂದೆಯು ಅಮೃತವೇಳೆ ನೆನಪಿನ ಯಾತ್ರೆಯಲ್ಲಿರಲು ಎಷ್ಟೊಂದು ಪುರುಷಾರ್ಥ ಮಾಡಿಸುತ್ತಾರೆ. ಜ್ಞಾನವಂತೂ ಸಹಜವಾದ ಸಬ್ಜೆಕ್ಟ್ ಎಂದು ಹೇಳಬಹುದು. 84 ಜನ್ಮಗಳ ಚಕ್ರವನ್ನು ನೆನಪು ಮಾಡುವುದು ದೊಡ್ಡ ಮಾತೇನಲ್ಲ. ಆದರೆ ಬೆಲೆಯುಳ್ಳ ವಸ್ತು ನೆನಪಿನ ಯಾತ್ರೆಯಾಗಿದೆ. ಇದರಲ್ಲಿಯೇ ಬಹಳಷ್ಟು ಅನುತ್ತೀರ್ಣರಾಗುತ್ತಾರೆ. ಇದರಲ್ಲಿಯೇ ನಿಮ್ಮ ಯುದ್ಧವೂ ನಡೆಯುತ್ತದೆ. ನೀವು ನೆನಪು ಮಾಡುತ್ತೀರಿ, ಮಾಯೆಯು ಹಿಂದೆ ಬೀಳುತ್ತದೆ. ಜ್ಞಾನದಲ್ಲಿ ಯುದ್ಧದ ಮಾತಿಲ್ಲ ಅದು ಸಂಪಾದನೆಗೆ ಮೂಲಾಧಾರವಾಗಿದೆ. ಇಲ್ಲಿ ನೀವು ಪವಿತ್ರರಾಗಬೇಕು, ಆದ್ದರಿಂದ ತಂದೆಯೇ ಬಂದು ನಮ್ಮನ್ನು ಪಾವನ ಮಾಡು ಎಂದು ಕರೆಯುತ್ತೀರಿ. ಬಂದು ಓದಿಸಿ ಎಂದು ಕರೆಯುವುದಿಲ್ಲ, ಬಂದು ಪಾವನ ಮಾಡಿ ಎಂದು ಕರೆಯುತ್ತೇವೆ. ಈ ಎಲ್ಲಾ ಮಾತುಗಳನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕು, ಸಂಪೂರ್ಣ ರಾಜಯೋಗಿಯಾಗಬೇಕು. ಜ್ಞಾನವು ಬಹಳ ಸರಳವಾಗಿದೆ, ಕೇವಲ ಯುಕ್ತಿಯಿಂದ ತಿಳಿಸಬೇಕು. ಮಾತು ಬಹಳ ಮಧುರವಾಗಿರಬೇಕು. ನಿಮಗೆ ಈ ಜ್ಞಾನ ಸಿಗುವುದೂ ಸಹ ಕರ್ಮಕ್ಕನುಗುಣವಾಗಿಯೇ ಎಂದು ಹೇಳಬಹುದು. ಆರಂಭದಿಂದ ಭಕ್ತಿ ಮಾಡಿದವರಿಗೆ ಒಳ್ಳೆಯ ಕರ್ಮವನ್ನು ಮಾಡಿದ್ದಾರೆಂದು ಹೇಳಬಹುದು. ಆದ್ದರಿಂದ ಶಿವ ತಂದೆಯು ಕುಳಿತು ಚೆನ್ನಾಗಿ ತಿಳಿಸಿಕೊಡುತ್ತಿದ್ದಾರೆ. ಎಷ್ಟು ಭಕ್ತಿ ಮಾಡಿರುತ್ತಾರೆ, ಶಿವ ತಂದೆಯನ್ನು ತೃಪ್ತಿ ಪಡಿಸಿರುತ್ತಾರೆಯೋ ಅಂತಹವರು ಬೇಗನೆ ಜ್ಞಾನವನ್ನು ಪಡೆಯುತ್ತಾರೆ. ಮಹಾರಥಿಗಳ ಬುದ್ಧಿಯಲ್ಲಿ ಇವೆಲ್ಲಾ ಮಾತುಗಳಿರುತ್ತವೆ. ಬರೆಯುತ್ತಿದ್ದು ಒಳ್ಳೊಳ್ಳೆಯ ಅಂಶಗಳನ್ನು ಪಟ್ಟಿ ಮಾಡುತ್ತಿರಬೇಕು ನಂತರ ಆ ಜ್ಞಾನದ ಮಾತುಗಳಿಗೆ ಗೌರವಿಸಬೇಕು. ಆದರೆ ಈ ರೀತಿಯ ಶ್ರಮವನ್ನು ಯಾರೂ ಮಾಡುವುದಿಲ್ಲ. ಕೆಲವರು ಬಹಳ ಶ್ರಮದಿಂದ ಪುಸ್ತಕದಲ್ಲಿ ಬರೆದುಕೊಳ್ಳುತ್ತಾರೆ ಹಾಗೂ ಒಳ್ಳೊಳ್ಳೆಯ ಅಂಶಗಳನ್ನು ತೆಗೆದು ಬೇರೆಯಾಗಿ ಬರೆದಿಡುತ್ತಾರೆ. ತಂದೆಯು ಭಾಷಣ ಮಾಡುವವರಿಗೆ ಮೊದಲು ಬರೆದು ನಂತರ ಅದನ್ನು ಪರಿಶೀಲನೆ ಮಾಡಿ ಎಂದು ಸದಾ ಹೇಳುತ್ತಿರುತ್ತಾರೆ. ಆದರೆ ಈ ರೀತಿ ಶ್ರಮ ಪಡುವುದಿಲ್ಲ. ಎಲ್ಲಾ ಜ್ಞಾನದ ಪಾಯಿಂಟ್ಸ್ ಗಳು ಯಾರಿಗೂ ಬ್ಯಾರಿಸ್ಟರ್ ಗಳೂ ಮುಖ್ಯ ಪಾಯಿಂಟ್ಸ್ ಗಳನ್ನು ಡೈರಿಯಲ್ಲಿ ನೋಟ್ ಮಾಡಿಕೊಳ್ಳುತ್ತಾರೆ ನಿಮಗಂತೂ ಇದು ಬಹಳ ಅವಶ್ಯಕತೆಯಿದೆ. ವಿಷಯಗಳನ್ನು ಬರೆದು ಓದಿ ತಿದ್ದುಕೊಳ್ಳಬೇಕು. ಇಷ್ಟೊಂದು ಶ್ರಮ ಪಡದಿದ್ದರೆ ಉಮ್ಮಂಗವಿರುವುದಿಲ್ಲ. ಏಕೆಂದರೆ ನಿಮ್ಮ ಬುದ್ಧಿಯೋಗವು ಬೇರೆ-ಬೇರೆ ಕಡೆ ಅಲೆದಾಡುತ್ತಿರುತ್ತದೆ. ಬಹಳಷ್ಟು ಕಡಿಮೆ ಮಕ್ಕಳು ಸರಳತೆಯಿಂದ ನಡೆಯುತ್ತಿರುತ್ತಾರೆ, ಅವರಿಗೆ ಸೇವೆಯ ವಿನಃ ಏನೂ ತೋಚುವುದಿಲ್ಲ. ಮಾಲೆಯಲ್ಲಿ ಬರಬೇಕಾದರೆ ಶ್ರಮ ಪಡಬೇಕು. ತಂದೆಯಂತೂ ಮತ ಕೊಡುತ್ತಾರೆ ಅದು ಮನಸ್ಸಿಗೆ ನಾಟುತ್ತದೆಯೇ? ನೆನಪು ಇಲ್ಲವೆಂದರೆ ಅದು ಸ್ವಯಂಗೆ ಗೊತ್ತಾಗುತ್ತದೆ. ಭಲೇ ವ್ಯಾಪಾರ-ವ್ಯವಹಾರ ಮಾಡಿ ಆದರೆ ಜೇಬಿನಲ್ಲಿ ನೋಟ್ ಮಾಡಿಕೊಳ್ಳಲು ಒಂದು ಚಿಕ್ಕ ಪುಸ್ತಕವನ್ನಂತೂ (ಡೈರಿ) ಸದಾ ಇಟ್ಟುಕೊಳ್ಳಬೇಕು. ಹುಡುಗಾಟಿಕೆಯಲ್ಲಿದ್ದು ತಮ್ಮನ್ನು ತಾವು ಬುದ್ಧಿವಂತನೆಂದು ತಿಳಿದುಕೊಂಡರೆ ಮಾಯೆಯೇನೂ ಕಡಿಮೆಯಿಲ್ಲ, ಪೆಟ್ಟು ಕೊಡುತ್ತಿರುತ್ತದೆ. ಲಕ್ಷ್ಮೀ-ನಾರಾಯಣರಾಗುವುದು ಚಿಕ್ಕಮ್ಮನ ಮನೆಯಂತಲ್ಲ. ದೊಡ್ಡ ರಾಜಧಾನಿಯು ಸ್ಥಾಪನೆಯಾಗುತ್ತಾ ಇದೆ. ಕೋಟಿಯಲ್ಲಿ ಕೆಲವರು ಮಾತ್ರವೇ ಬರುತ್ತಾರೆ. ಬಾಬಾ (ಬ್ರಹ್ಮಾ) ರವರೂ ಸಹ 2 ಗಂಟೆಗೆ ಎದ್ದು ಬರೆಯುತ್ತಿದ್ದರು ನಂತರ ಓದುತ್ತಿದ್ದರು. ಜ್ಞಾನದ ಅಂಶಗಳನ್ನು ಮರೆತು ಹೋದರೆ ನಿಮಗೆ ತಿಳಿಸುವ ಸಲುವಾಗಿ ಮತ್ತೆ ಎಚ್ಚರವಹಿಸಿ ನೋಡುತ್ತಿದ್ದರು, ನೆನಪಿನ ಯಾತ್ರೆ ಎಷ್ಟರ ಮಟ್ಟಿಗೆ ಇದೆ, ಕರ್ಮಾತೀತ ಸ್ಥಿತಿ ಎಷ್ಟಿದೆ ಎಂದು ತಿಳಿಯಲಾಗುತ್ತಿದೆ ಆದುದರಿಂದ ಸುಮ್ಮನೆ ಯಾರ ಮಹಿಮೆಯನ್ನೂ ಮಾಡುವುದಿಲ್ಲ. ಬಹಳ ಶ್ರಮವಿದೆ, ಕರ್ಮಭೋಗವೂ ಇರುತ್ತದೆ ಆದರೂ ನೆನಪು ಮಾಡಬೇಕಾಗುತ್ತದೆ. ಒಳ್ಳೆಯದು - ತಿಳಿಯಿರಿ ಮುರುಳಿಯನ್ನು ಬ್ರಹ್ಮಾ ತಂದೆಯು ನುಡಿಸುವುದಿಲ್ಲ ಶಿವ ತಂದೆಯು ನುಡಿಸುತ್ತಾರೆ. ಬ್ರಹ್ಮಾ ತಂದೆಯೂ ಸಹ ಮಕ್ಕಳಿಗೆ ಸದಾ ಶಿವ ತಂದೆಯೇ ತಿಳಿಸುತ್ತಾರೆಂದು ಹೇಳುತ್ತಾರೆ. ಒಮ್ಮೊಮ್ಮೆ ಮಧ್ಯದಲ್ಲಿ ಈ ಮಗನೂ ಮಾತನಾಡುತ್ತಾರೆ. ತಂದೆಯಂತೂ ಸಂಪೂರ್ಣ ಸರಿಯಾದದ್ದನ್ನೇ ತಿಳಿಸುತ್ತಾರೆ. ಇವರಂತೂ (ಬ್ರಹ್ಮಾ ತಂದೆ) ಇಡೀ ದಿನ ಚಿಂತನೆ ಮಾಡಬೇಕಾಗುತ್ತದೆ, ಅನೇಕ ಮಕ್ಕಳ ಜವಾಬ್ದಾರಿಯು ಅವರಿಗಿರುತ್ತದೆ. ಮಕ್ಕಳು ನಾಮ-ರೂಪದಲ್ಲಿ ಸಿಕ್ಕಿಕೊಂಡು ಹೊರಟು ಹೋಗುತ್ತಾರೆ. ಬಹಳ ಮಕ್ಕಳ ಬಗ್ಗೆ ಚಿಂತೆ ಮಾಡುತ್ತಾರೆ- ಮಕ್ಕಳಿಗಾಗಿ ಮನೆ ಮಾಡುತ್ತಾರೆ. ಇನ್ನೂ ಬಹಳ ಪ್ರಬಂಧಗಳನ್ನು ಮಾಡಬೇಕಾಗುತ್ತದೆ ಎಂಬ ಚಿಂತೆಯು ತಂದೆಗೆ ನಾಟಕದನುಸಾರವಾಗಿ ನಡೆಯುತ್ತಿರುತ್ತದೆ. ಶಿವ ತಂದೆಯೂ ಸಹ ನಾಟಕದಲ್ಲಿ ಪಾತ್ರವನ್ನು ಅಭಿನಯಿಸಬೇಕು, ಬ್ರಹ್ಮಾ ತಂದೆಯೂ ಸಹ ಪಾತ್ರ ಮಾಡಬೇಕು, ನೀವೂ ಸಹ ಮಾಡಬೇಕು. ನಾಟಕದ ವಿನಃ ಯಾವುದೇ ವಸ್ತುವು ಇರಲು ಸಾಧ್ಯವಿಲ್ಲ. ಒಂದೊಂದು ಸೆಕೆಂಡ್ ನಾಟಕ ನಡೆಯುತ್ತಿರುತ್ತದೆ. ನಾಟಕವನ್ನು ನೆನಪು ಮಾಡುವುದರಿಂದ ಅಲುಗಾಡುವುದಿಲ್ಲ. ಅಚಲ, ಅಡೋಲ ಸ್ಥಿರಯಾಗಿರುತ್ತೀರಿ. ಕೆಲವು ಮಕ್ಕಳು ಸತ್ಯವನ್ನು ಹೇಳುವುದಿಲ್ಲ, ಸ್ವಪ್ನದಲ್ಲಿಯೂ ಮಾಯೆಯ ಬಿರುಗಾಳಿಗಳು ಬಹಳ ಬರುತ್ತಿರುತ್ತವೆ. ಮಾಯೆಯಲ್ಲವೆ! ಯಾರಿಗೆ ಮೊದಲೆಲ್ಲಾ ಬರುತ್ತಿರಲಿಲ್ಲವೋ ಅವರಿಗೂ ಬರುತ್ತದೆ. ತಂದೆಯೂ ತಿಳಿದುಕೊಳ್ಳುತ್ತಾರೆ - ಮಕ್ಕಳು ಆಸ್ತಿಯನ್ನು ಪಡೆಯಲು ನೆನಪಿನಲ್ಲಿರುವ ಶ್ರಮ ಪಡಬೇಕಾಗುತ್ತದೆ. ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಆದ್ದರಿಂದ ಪರಿಶ್ರಮವನ್ನೂ ಪಡಬೇಕಾಗುತ್ತದೆ. ಕೆಲಕೆಲವರು ಪರಿಶ್ರಮ ಪಡುತ್ತಾ ಪಡುತ್ತಾ ಸುಸ್ತಾಗಿ ಬಿಡುತ್ತಾರೆ ಗುರಿ ಬಹಳ ದೊಡ್ಡದಾಗಿದೆ 21 ಪೀಳಿಗೆಗೆ ವಿಶ್ವದ ಮಾಲಿಕರನ್ನಾಗಿ ಮಾಡುತ್ತಾರೆಂದಾಗ ಪರಿಶ್ರಮವೂ ಪಡಬೇಕಾಗುತ್ತದೆ ಅತೀ ಪ್ರಿಯ ತಂದೆಯನ್ನು ನೆನಪು ಮಾಡಬೇಕಾಗುತ್ತದೆ. ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಿದ್ದಾರೆಂದು ಹೃದಯದಲ್ಲಿರುತ್ತದೆ ಅಂಥಹ ತಂದೆಯನ್ನು ಕ್ಷಣ-ಕ್ಷಣ ನೆನಪು ಮಾಡಬೇಕಾಗಿದೆ ಎಲ್ಲರಿಗಿಂತ ಅತೀ ಪ್ರಿಯ ತಂದೆಯಾಗಿದ್ದಾರೆ. ತಂದೆಯಂತೂ ಚಮತ್ಕಾರ ಮಾಡುತ್ತಾರೆ, ವಿಶ್ವದ ಜ್ಞಾನವನ್ನು ಕೊಡುತ್ತಾರೆ. ಬಾಬಾ, ಬಾಬಾ, ಬಾಬಾ...... ಎಂದು ಹೇಳುತ್ತಾ ಆಂತರ್ಯದಲ್ಲಿ ಮಹಿಮೆ ಮಾಡುತ್ತಿರಬೇಕು. ಯಾರು ಹೀಗೆ ನೆನಪು ಮಾಡುತ್ತಿರುತ್ತಾರೆ ಅವರಿಗೆ ತಂದೆಯ ಆಕರ್ಷಣೆಯಾಗುತ್ತಿರುತ್ತದೆ. ಇಲ್ಲಿಗೆ ತಂದೆಯಿಂದ ರಿಫ್ರೆಷ್ ಆಗಲು ಬರುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ಉದಾಸೀನ ಮಾಡಬಾರದು. ಎಲ್ಲಾ ಸೇವಾಕೇಂದ್ರಗಳಿಂದ ಬರುವ ಮಕ್ಕಳನ್ನು ತಂದೆಯು ನೋಡುತ್ತಾರೆ, ವಿಚಾರಿಸುತ್ತಾರೆ. ನಿಮಗೆ ಯಾವ ರೀತಿಯ ಖುಷಿಯಿದೆ ಎಂದು ತಂದೆಯು ಪರಿಶೀಲಿಸುತ್ತಾರಲ್ಲವೆ! ಚಹರೆಯಿಂದಲೂ ನೋಡುತ್ತಾರೆ - ಇವರಿಗೆ ತಂದೆಯೊಂದಿಗೆ ಎಷ್ಟು ಪ್ರೀತಿಯಿದೆ? ತಂದೆಯ ಸನ್ಮುಖದಲ್ಲಿ ಬಂದಾಗ ತಂದೆಯೂ ಆಕರ್ಷಣೆ ಮಾಡುತ್ತಾರೆ. ಇಲ್ಲಿ ಕುಳಿತು-ಕುಳಿತಿದ್ದಂತೆಯೇ ಎಲ್ಲವೂ ಮರೆತು ಹೋಗುತ್ತದೆ. ತಂದೆಯನ್ನು ಬಿಟ್ಟರೆ ಬೇರೆನೂ ಇಲ್ಲ, ಇಡೀ ಪ್ರಪಂಚವನ್ನೇ ಮರೆಯಬೇಕಾಗಿದೆ. ಈ ಸ್ಥಿತಿಯು ಬಹಳ ಮಧುರ, ಅಲೌಕಿಕವಾಗಿರುತ್ತದೆ. ತಂದೆಯ ನೆನಪಿನಲ್ಲಿ ಬಂದು ಕುಳಿತುಕೊಂಡರೆ ಆ ಪ್ರೀತಿಯ ಭಾಷ್ಪಗಳು ಬರುತ್ತವೆ. ಭಕ್ತಿಮಾರ್ಗದಲ್ಲೂ ಕಣ್ಣೀರು ಬರುತ್ತದೆ ಅದರೆ ಭಕ್ತಿಮಾರ್ಗ ಬೇರೆಯಾಗಿದೆ, ಜ್ಞಾನ ಮಾರ್ಗವೇ ಬೇರೆಯಿದೆ. ಇದು ಸತ್ಯ ತಂದೆಯ ಜೊತೆ ಸತ್ಯ ಜ್ಞಾನವಾಗಿದೆ. ಇಲ್ಲಿಯ ಮಾತೇ ಭಿನ್ನವಾಗಿದೆ. ಇಲ್ಲಿ ನೀವು ಶಿವ ತಂದೆಯ ಬಳಿ ಬರುತ್ತೀರಿ ಅವರು ಅಗತ್ಯವಾಗಿ ಇವರ ರಥದಲ್ಲಿರಬೇಕು. ಶರೀರವಿಲ್ಲದೆ ಆತ್ಮ ಅಲ್ಲಿ ಮಾತ್ರ ಮಿಲನ ಮಾಡಬಹುದು, ಇಲ್ಲಿ ಎಲ್ಲರೂ ಶರೀರಧಾರಿಗಳೇ ಇದ್ದಾರೆ. ಇವರು ಬಾಪ್ದಾದಾ ಆಗಿದ್ದಾರೆಂದು ತಿಳಿದಿದ್ದೇವೆ. ಆದ್ದರಿಂದ ತಂದೆಯನ್ನು ನೆನಪು ಮಾಡಬೇಕು, ಬಹಳ ಪ್ರೀತಿಯಿಂದ ನೆನಪು ಮಾಡಬೇಕು. ತಂದೆಯು ನಮಗೆ ಏನು ಕೊಡುತ್ತಾರೆ! ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಈ ಕಾಡಿನಿಂದ ನಿಮ್ಮನ್ನು ಕರೆದೊಯ್ಯಲು ಬಂದಿದ್ದಾರೆ. ಮಂಗಳಂ ಭಗವಾನ್ ವಿಷ್ಣು ಎಂದು ಹೇಳಲಾಗುತ್ತದೆ. ಅವರು ಸರ್ವರ ಮಂಗಳ ಮಾಡುವವರು, ಸರ್ವರ ಕಲ್ಯಾಣ ಆಗುತ್ತದೆ. ತಂದೆಯೊಬ್ಬರೇ ಆಗಿರುವುದರಿಂದ ಅವರನ್ನು ನೆನಪು ಮಾಡಬೇಕು. ನಾವು ಏಕೆ ಯಾರ ಕಲ್ಯಾಣವನ್ನಾದರೂ ಮಾಡಬಾರದು! ಅಗತ್ಯವಾಗಿ ಏನಾದರೂ ಬಲಹೀನತೆಯಿರುತ್ತದೆ. ತಂದೆಯು ತಿಳಿಸುತ್ತಾರೆ - ನೆನಪಿನ ಶಕ್ತಿಯಿಲ್ಲದಿರುವ ಕಾರಣ ವಾಣಿಯಲ್ಲಿ ಆಕರ್ಷಣೆಯಿರುವುದಿಲ್ಲ. ಇದೂ ಸಹ ನಾಟಕವಾಗಿದೆ. ಈಗ ಮತ್ತೆ ಉತ್ತಮ ಯೋಗದ ಹರಿತವನ್ನು ಧಾರಣೆ ಮಾಡಬೇಕು. ನೆನಪಿನ ಯಾತ್ರೆಯಲ್ಲಿ ಶ್ರಮವಿದೆ. ನಾವು ಸಹೋದರನಿಗೆ ಜ್ಞಾನವನ್ನು ಕೊಡುತ್ತೇವೆ, ತಂದೆಯ ಪರಿಚಯ ಕೊಡುತ್ತೇವೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು. ತಂದೆಗೂ ಅನಿಸುತ್ತದೆ (ಬ್ರಹ್ಮಾರವರೂ) ಪದೇ-ಪದೇ ನೆನಪು ಮರೆತು ಹೋಗುತ್ತಿರಬಹುದು. ತಂದೆಯಂತೂ ಎಲ್ಲರೂ ಮಕ್ಕಳೆಂದೇ ತಿಳಿದಿದ್ದಾರೆ ಆದ್ದರಿಂದ ಮಕ್ಕಳೇ, ಮಕ್ಕಳೇ ಎಂದು ಕರೆಯುತ್ತಾರೆ. ಇವರು ಎಲ್ಲರಿಗೂ ತಂದೆಯಾಗಿದ್ದಾರೆ, ಅದ್ಭುತವಾದ ಪಾತ್ರವು ಇವರದಾಗಿದೆ. ಕೆಲವು ಮಕ್ಕಳ ಮಾತ್ರ ಇದನ್ನು ಯಾರು ಹೇಳುತ್ತಿದ್ದಾರೆಂದು ತಿಳಿದುಕೊಳ್ಳುತ್ತಾರೆ. ತಂದೆಯಂತೂ ಮಕ್ಕಳೇ, ಮಕ್ಕಳೇ ಎಂದು ಹೇಳುತ್ತಿರುತ್ತಾರೆ. ತಂದೆಯು ಮಕ್ಕಳಿಗೆ ಆಸ್ತಿಯನ್ನು ಕೊಡುವ ಸಲುವಾಗಿ ಬಂದಿದ್ದಾರೆ. ತಂದೆಯು ಎಲ್ಲವನ್ನೂ ಹೇಳಿ ಬಿಡುತ್ತಾರೆ. ನಾನು ಮಕ್ಕಳಿಂದ ಎಲ್ಲಾ ಕೆಲಸವನ್ನು ಮಾಡಿಸುತ್ತೇನೆ, ಇದು ಬಹಳ ವಂಡರ್ ಫುಲ್ ಶ್ರೇಷ್ಠ ಜ್ಞಾನವಾಗಿದೆ. ಈ ಜ್ಞಾನವು ಚಡಪಡಿಸುವಂತಹ ಹಾಗೂ ಪೇಚಾಟದ ಜ್ಞಾನವೂ ಆಗಿದೆ. ವೈಕುಂಠದ ಮಾಲೀಕರಾಗಲು ಇಂತಹ ಜ್ಞಾನವೇ ಬೇಕಾಗಿದೆ. ಒಳ್ಳೆಯದು. ಪ್ರತಿಯೊಬ್ಬರೂ ತಂದೆಯನ್ನು ನೆನಪು ಮಾಡಬೇಕು, ದೈವೀ ಗುಣಗಳನ್ನು ಧಾರಣೆ ಮಾಡಬೇಕು. ಮುಖದಿಂದ ಎಂದಿಗೂ ಉಲ್ಟಾ-ಸುಲ್ಟಾ ಮಾತನಾಡಬಾರದು, ಮಧುರ ಮಾತುಗಳನ್ನೇ ಮಾತನಾಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಬೆಳಗ್ಗೆ - ಬೆಳಗ್ಗೆ ಕುಳಿತು ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು. ಇಡೀ ಪ್ರಪಂಚವನ್ನೇ ಮರೆತು ಬಿಡಬೇಕು.

2. ತಂದೆಯ ಸಮಾನ ಸರ್ವರ ಕಲ್ಯಾಣಕಾರಿಯಾಗಬೇಕು. ಬಲಹೀನತೆಗಳನ್ನು ತೆಗೆಯಬೇಕು, ತಮ್ಮ ಮೇಲೆ ತಾವೇ ಗಮನವನ್ನಿಟ್ಟುಕೊಳ್ಳಬೇಕು. ತಮ್ಮ ರಿಜಿಸ್ಟರ್ ನ್ನು ತಾವೇ ನೋಡಿಕೊಳ್ಳಬೇಕು.


ವರದಾನ:
ಮೂರು ಸ್ಮೃತಿಗಳ ತಿಲಕದ ಮೂಲಕ ಶ್ರೇಷ್ಠ ಸ್ಥಿತಿ ಮಾಡಿಕೊಳ್ಳುವಂತಹ ಅಚಲ-ಅಡೋಲ ಭವ.

ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ಮೂರು ಸ್ಮೃತಿಯ ತಿಲಕವನ್ನು ನೀಡಿದ್ದಾರೆ, ಒಂದು ಸ್ವಯಂನ ಸ್ಮೃತಿ, ನಂತರ ತಂದೆಯ ಸ್ಮೃತಿ ಮತ್ತು ಶ್ರೇಷ್ಠ ಕರ್ಮಕ್ಕಾಗಿ ಡ್ರಾಮದ ಸ್ಮೃತಿ. ಯಾರಿಗೆ ಈ ಮೂರೂ ಸ್ಮೃತಿಗಳು ಸದಾ ಇರುವುದು ಅವರ ಸ್ಥಿತಿಯೂ ಸಹಾ ಶ್ರೇಷ್ಠವಾಗಿರುವುದು. ಆತ್ಮದ ಸ್ಮೃತಿಯ ಜೊತೆಗೆ ತಂದೆಯ ಸ್ಮೃತಿ ಮತ್ತು ತಂದೆಯ ಜೊತೆ ಡ್ರಾಮಾದ ಸ್ಮೃತಿ ಅತೀ ಅವಶ್ಯಕವಾಗಿದೆ. ಏಕೆಂದರೆ ಕರ್ಮದಲ್ಲಿ ಒಂದು ವೇಳೆ ಡ್ರಾಮದ ಜ್ಞಾನ ಇದ್ದಲ್ಲಿ ಮೇಲೆ ಕೆಳಗೆ ಆಗುವುದಿಲ್ಲ. ಯಾವುದೇ ಭಿನ್ನ-ಭಿನ್ನ ಪರಿಸ್ಥಿತಿಗಳು ಬಂದರೂ, ಅದರಲ್ಲಿ ಅಚಲ-ಅಡೋಲರಾಗಿರುವಿರಿ.

ಸ್ಲೋಗನ್:
ದೃಷ್ಠಿಯನ್ನು ಅಲೌಕಿಕ, ಮನಸ್ಸನ್ನು ಶೀತಲ ಮತ್ತು ಬುದ್ಧಿಯನ್ನು ದಯಾಹೃದಯಿಯಾಗಿ ಮಾಡಿಕೊಳ್ಳಿ.