22.04.19 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ಇದು
ಮೇಲೇರುವ ಸತ್ಯ-ಸತ್ಯ ಸತ್ಸಂಗವಾಗಿದೆ, ಈಗ ನೀವು ಸತ್ಯ ತಂದೆಯ ಸಂಗದಲ್ಲಿ ಬಂದಿದ್ದೀರಿ, ಆದ್ದರಿಂದ
ಅಸತ್ಯ ಸಂಗದಲ್ಲಿ ಎಂದೂ ಹೋಗಬಾರದು"
ಪ್ರಶ್ನೆ:
ನೀವು ಮಕ್ಕಳ
ಬುದ್ಧಿಯು ಯಾವ ಆಧಾರದ ಮೇಲೆ ಸದಾ ಬೇಹದ್ದಿನಲ್ಲಿ ಸ್ಥಿತವಾಗಲು ಸಾಧ್ಯ?
ಉತ್ತರ:
ಬುದ್ಧಿಯಲ್ಲಿ
ಸ್ವದಶನ ಚಕ್ರವು ತಿರುಗುತ್ತಿರಲಿ, ನಾಟಕದಲ್ಲಿ ಏನೆಲ್ಲವೂ ನಡೆಯುತ್ತಿದೆಯೋ ಅದೆಲ್ಲವೂ
ನಿಶ್ಚಿತವಾಗಿದೆ. ಒಂದು ಕ್ಷಣವೂ ಸಹ ವ್ಯತ್ಯಾಸವಾಗುವುದಿಲ್ಲ. ವಿಶ್ವದ ಇತಿಹಾಸ-ಭೂಗೋಳವು
ಪುನರಾವರ್ತನೆ ಆಗಬೇಕಾಗಿದೆ. ಈ ಮಾತು ಬುದ್ಧಿಯಲ್ಲಿ ಒಳ್ಳೆಯ ರೀತಿಯಲ್ಲಿ ಬಂದರೆ ಬೇಹದ್ದಿನಲ್ಲಿ
ಸ್ಥಿತರಾಗುತ್ತೀರಿ, ಬೇಹದ್ದಿನಲ್ಲಿ ಸ್ಥಿತರಾಗಲು ಈಗ ವಿನಾಶವಾಗಲಿದೆ, ಈಗ ನಾವು ಹಿಂತಿರುಗಿ ಮನೆಗೆ
ಹೋಗಬೇಕಾಗಿದೆ ಎಂದು ಗಮನದಲ್ಲಿ ಇರಲಿ. ಪಾವನರಾಗಿಯೇ ನಾವು ಮನೆಗೆ ಹೋಗುತ್ತೇವೆ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ - ಯಾರು
ಬುದ್ದಿಹೀನರಾಗಿದ್ದಾರೆಯೋ ಅವರಿಗೆ ತಿಳಿಸುತ್ತಾರೆ. ಶಾಲೆಯಲ್ಲಿ ಶಿಕ್ಷಕರು ಓದಿಸುತ್ತಾರೆ ಏಕೆಂದರೆ
ಮಕ್ಕಳು ಬುದ್ಧಿಹೀನರಾಗಿದ್ದಾರೆ. ಮಕ್ಕಳು ವಿದ್ಯೆಯಿಂದ ಅರಿತುಕೊಳ್ಳುತ್ತಾರೆ. ನೀವು ಮಕ್ಕಳೂ ಸಹ
ಈ ವಿದ್ಯೆಯಿಂದ ಅರಿತುಕೊಳ್ಳುತ್ತೀರಿ. ನಮಗೆ ಓದಿಸುವವರು ಯಾರು! ಇದನ್ನು ಎಂದೂ ಮರೆಯಬೇಡಿ.
ಓದಿಸುವ ಶಿಕ್ಷಕರು ಸುಪ್ರೀಂ ತಂದೆಯಾಗಿದ್ದಾರೆ ಅಂದಮೇಲೆ ಅವರ ಮತದಂತೆ ನಡೆಯಬೇಕಾಗಿದೆ,
ಶ್ರೇಷ್ಠರಾಗಬೇಕಾಗಿದೆ. ಸೂರ್ಯವಂಶಿಯರು ಶ್ರೇಷ್ಠಾತಿ ಶ್ರೇಷ್ಠರಾಗಿರುತ್ತಾರೆ. ಭಲೇ ಚಂದ್ರವಂಶಿಯರೂ
ಶ್ರೇಷ್ಠರಾಗಿದ್ದಾರೆ, ಆದರೆ ಇವರು ಶ್ರೇಷ್ಠಾತಿ ಶ್ರೇಷ್ಠ ಆಗಿದ್ದಾರೆ. ನೀವು ಇಲ್ಲಿ ಶ್ರೇಷ್ಠಾತಿ
ಶ್ರೇಷ್ಠರಾಗಲು ಬಂದಿದ್ದೀರಿ. ನಾವು ಈ ರೀತಿ ಆಗಬೇಕು ಎಂದು ಮಕ್ಕಳಿಗೆ ಗೊತ್ತಿದೆ. ಇಂತಹ ಶಾಲೆಯು
5000 ವರ್ಷಗಳ ನಂತರವೇ ತೆರೆಯುತ್ತದೆ. ಇಲ್ಲಿ ನೀವು ತಿಳಿದುಕೊಂಡು ಕುಳಿತಿದ್ದೀರಿ. ಇದು ಸಂಪೂರ್ಣ
ಸತ್ಸಂಗವಾಗಿದೆ. ಸತ್ಯ ತಂದೆಯು ಶ್ರೇಷ್ಠಾತಿ ಶ್ರೇಷ್ಠ ಆಗಿದ್ದಾರೆ, ನಿಮಗೆ ಅವರ ಸಂಗವು ಸಿಕ್ಕಿದೆ.
ಅವರೇ ಕುಳಿತು ಸತ್ಯಯುಗದ ಶ್ರೇಷ್ಠಾತಿ ಶ್ರೇಷ್ಠ ದೇವತೆಗಳನ್ನಾಗಿ ಮಾಡುತ್ತಾರೆ ಅರ್ಥಾತ್
ಹೂಗಳನ್ನಾಗಿ ಮಾಡುತ್ತಾರೆ. ನೀವು ಮುಳ್ಳುಗಳಿಂದ ಹೂಗಳಾಗುತ್ತಾ ಹೋಗುತ್ತೀರಿ. ಕೆಲವರು ಬಹು ಬೇಗನೇ
ಆಗುತ್ತಾರೆ, ಇನ್ನೂ ಕೆಲವರಿಗೆ ಸಮಯ ಹಿಡಿಸುತ್ತದೆ. ಇದು ಸಂಗಮಯುಗವಾಗಿದೆ ಎಂದು ಮಕ್ಕಳಿಗೆ
ತಿಳಿದಿದೆ. ಅದರಲ್ಲಿಯೂ ಕೇವಲ ಮಕ್ಕಳಿಗೆ ಗೊತ್ತಿದೆ ಮತ್ತು ಇದು ಪುರುಷೋತ್ತಮ ಯುಗವಾಗಿದೆ ಎಂದು
ನಿಶ್ಚಯವಿದೆ. ಯಾವ ಪುರುಷೊತ್ತಮರು? ಶ್ರೇಷ್ಠಾತಿ ಶ್ರೇಷ್ಠ ಆದಿ ಸನಾತನ ದೇವೀ-ದೇವತಾ ಧರ್ಮದ ಯಾವ
ಮಹಾರಾಜಾ-ಮಹಾರಾಣಿ ಇದ್ದಾರೆ, ಆ ರೀತಿ ಆಗಲು ನೀವು ಇಲ್ಲಿ ಬಂದಿದ್ದೀರಿ. ನಾವು ಬೇಹದ್ದಿನ
ತಂದೆಯಿಂದ ಬೇಹದ್ದಿನ ಸತ್ಯಯುಗಿ ಸುಖವನ್ನು ಪಡೆಯಲು ಬಂದಿದ್ದೇವೆ ಎಂದು ನೀವು ತಿಳಿಯುತ್ತೀರಿ.
ಕ್ಷಣಿಕವಾದ ಯಾವುದೆಲ್ಲಾ ಮಾತುಗಳು ಇವೆಯೋ ಅದೆಲ್ಲವೂ ಸಮಾಪ್ತಿ ಆಗುತ್ತದೆ. ಲೌಕಿಕ ತಂದೆ, ಲೌಕಿಕ
ಸಹೋದರ, ಚಿಕ್ಕಪ್ಪ, ದೊಡ್ಡಪ್ಪ, ಮಾಮ, ಹದ್ದಿನ ಬಿಡಿಗಾಸಿನ ಸಂಪತ್ತು, ಮೊದಲಾದ ಯಾವುದರಲ್ಲಿ ಬಹಳ
ಮೋಹವಿರುತ್ತದೆಯೋ ಅದೆಲ್ಲವೂ ಸಮಾಪ್ತಿ ಆಗಿ ಬಿಡಬೇಕಾಗಿದೆ. ಇದೆಲ್ಲವೂ ಹದ್ದಿನ ಸಂಪತ್ತು ಆಗಿದೆ,
ಈಗ ನೀವು ಬೇಹದ್ದಿನಲ್ಲಿ ಹೋಗಬೇಕಾಗಿದೆ. ಬೇಹದ್ದಿನ ಸಂಪತ್ತನ್ನು ಪ್ರಾಪ್ತಿ ಮಾಡಿಕೊಳ್ಳಲು ನೀವು
ಬಂದಿದ್ದೀರಿ, ಮತ್ತೆಲ್ಲವೂ ಹದ್ದಿನ ವಸ್ತುಗಳಾಗಿವೆ. ಶರೀರವೂ ಸಹ ಹದ್ದಿನದಾಗಿದೆ, ರೋಗಿ ಆಗುತ್ತದೆ,
ವಿನಾಶವಾಗಿ ಬಿಡುತ್ತದೆ, ಅಕಾಲ ಮೃತ್ಯು ಆಗಿ ಬಿಡುತ್ತದೆ. ಇತ್ತೀಚಿಗಂತೂ ನೋಡಿ, ಏನೇನೆಲ್ಲವನ್ನು
ಮಾಡುತ್ತಿರುತ್ತಾರೆ! ವಿಜ್ಞಾನವೂ ಸಹ ಚಮತ್ಕಾರ ಮಾಡಿ ಬಿಟ್ಟಿದೆ. ಎಷ್ಟೊಂದು ಮಾಯೆಯ ಆಡಂಬರವಿದೆ.
ವಿಜ್ಞಾನಿಗಳು ಹೆಚ್ಚಿನ ಸಾಹಸ ಮಾಡುತ್ತಿದ್ದಾರೆ. ಯಾರ ಬಳಿ ಬಹಳ ಮಹಲ್, ಮಹಡಿಗಳು ಇವೆಯೋ ಅವರಂತೂ
ನಮಗಾಗಿ ಈಗಲೇ ಸತ್ಯಯುಗವೆಂದು ತಿಳಿಯುತ್ತಾರೆ ಆದರೆ ಸತ್ಯಯುಗದಲ್ಲಿ ಒಂದು ಧರ್ಮವಿರುತ್ತದೆ, ಅದು
ಹೊಸ ಪ್ರಪಂಚವಾಗಿರುತ್ತದೆ ಎಂಬುದನ್ನು ತಿಳಿಯುವುದಿಲ್ಲ. ಸಂಪೂರ್ಣ ಬುದ್ಧಿಹೀನರಾಗಿದ್ದಾರೆ ಎಂದು
ತಂದೆಯು ತಿಳಿಸುತ್ತಾರೆ. ನೀವು ಎಷ್ಟು ಬುದ್ಧಿವಂತರಾಗುತ್ತೀರಿ, ಮೇಲೇರುತ್ತೀರಿ ಮತ್ತೆ ಏಣಿಯನ್ನು
ಕೆಳಗೆ ಇಳಿಯುತ್ತೀರಿ. ಸತ್ಯಯುಗದಲ್ಲಿ ನೀವು ಬುದ್ಧಿವಂತರಾಗಿದ್ದೀರಿ, ನಂತರ 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಬುದ್ಧಿಹೀನರಾಗಿದ್ದೀರಿ ಮತ್ತೆ ತಂದೆಯು ಬಂದು
ಬುದ್ಧಿವಂತರನ್ನಾಗಿ ಮಾಡುತ್ತಾರೆ, ಯಾವುದಕ್ಕೆ ಪಾರಸ ಬುದ್ಧಿ ಎಂದು ಹೇಳುತ್ತಾರೆ. ನಿಮಗೆ
ತಿಳಿದಿದೆ - ನಾವು ಬಹಳ ಪಾರಸ ಬುದ್ಧಿಯವರಾಗಿದ್ದೆವು, ಗೀತೆ ಇದೆಯಲ್ಲವೇ - ಬಾಬಾ ತಾವು ಯಾವ
ಆಸ್ತಿಯನ್ನು ಕೊಡುತ್ತೀರೋ, ಅದರಿಂದ ನಾವು ಇಡೀ ಭೂಮಿ, ಆಕಾಶಕ್ಕೆ ಮಾಲೀಕರಾಗಿ ಬಿಡುತ್ತೇವೆ, ಯಾರೂ
ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾರ ಅಧಿಕಾರವೂ ಇರುವುದಿಲ್ಲ. ತಂದೆಯು ಬಹಳಷ್ಟು
ಕೊಡುತ್ತಾರೆ, ಇದಕ್ಕಿಂತ ಹೆಚ್ಚು ಯಾರೂ ಜೋಳಿಗೆಯನ್ನು ತುಂಬಲು ಸಾಧ್ಯವಿಲ್ಲ. ಇಂತಹ ತಂದೆಯು
ಸಿಕ್ಕಿದ್ದಾರೆ ಯಾರನ್ನು ಅರ್ಧಕಲ್ಪ ನೆನಪು ಮಾಡಿದ್ದೀರಿ. ದುಃಖದಲ್ಲಿ ಸ್ಮರಣೆ ಮಾಡುತ್ತಿರುತ್ತಾರೆ.
ಯಾವಾಗ ಸುಖ ಸಿಗುತ್ತದೆಯೋ ಆಗ ಸ್ಮರಣೆ ಮಾಡುವ ಅವಶ್ಯಕತೆ ಇಲ್ಲ. ದುಃಖದಲ್ಲಿ ಎಲ್ಲರೂ ಅಯ್ಯೋ ರಾಮನೇ.....
ಎಂದು ಸ್ಮರಣೆ ಮಾಡುತ್ತಾರೆ. ಹೀಗೆ ಅನೇಕ ಪ್ರಕಾರದ ಶಬ್ದಗಳನ್ನು ಹೇಳುತ್ತಾರೆ. ಸತ್ಯಯುಗದಲ್ಲಿ
ಇಂತಹ ಶಬ್ದಗಳು ಇರುವುದಿಲ್ಲ, ನೀವು ಮಕ್ಕಳು ಓದಲು ಸನ್ಮುಖದಲ್ಲಿ ಬಂದಿದ್ದೀರಿ, ತಂದೆಯ ಡೈರೆಕ್ಟ್
ಮಹಾವಾಕ್ಯಗಳನ್ನು ಕೇಳುತ್ತೀರಿ. ಇಂಡೈರೆಕ್ಟ್ ಜ್ಞಾನವನ್ನು ಕೊಡುವುದಿಲ್ಲ. ಜ್ಞಾನವು ನೇರವಾಗಿಯೇ
ಸಿಗುತ್ತದೆ, ತಂದೆಯೇ ಬರಬೇಕಾಗುತ್ತದೆ. ಮಧುರಾತಿ ಮಧುರ ಮಕ್ಕಳ ಬಳಿ ಬಂದಿದ್ದೇನೆ, ಓ ಬಾಪ್ದಾದಾ
ಎಂದು ನನ್ನನ್ನು ಕರೆಯುತ್ತೀರಿ ಎಂದು ತಂದೆಯು ತಿಳಿಸುತ್ತಾರೆ. ಓ ಮಕ್ಕಳೇ ಈಗ ನನ್ನನ್ನು ಚೆನ್ನಾಗಿ
ನೆನಪು ಮಾಡಿ, ಮರೆಯಬೇಡಿ ಎಂದು ತಂದೆಯು ಪ್ರತ್ಯುತ್ತರ ನೀಡುತ್ತಾರೆ. ಮಾಯೆಯ ವಿಘ್ನಗಳಂತೂ ಬಹಳ
ಬರುತ್ತವೆ. ನಿಮ್ಮನ್ನು ವಿದ್ಯಾಭ್ಯಾಸದಿಂದ ಬಿಡಿಸಿ ದೇಹಾಭಿಮಾನದಲ್ಲಿ ತರುತ್ತವೆ ಆದ್ದರಿಂದ
ಎಚ್ಚರವಾಗಿರಿ. ಇದು ಮೇಲೇರುವ ಸತ್ಯ-ಸತ್ಯವಾದ ಸತ್ಸಂಗವಾಗಿದೆ. ಆ ಸತ್ಸಂಗಗಳೆಲ್ಲವೂ
ಇಳಿಯುವಂತದ್ದಾಗಿದೆ. ಸತ್ಯ ತಂದೆಯ ಸಂಗವು ಒಂದೇ ಬಾರಿ ಸಿಗುತ್ತದೆ, ಅಸತ್ಯ ಸಂಗಗಳು
ಜನ್ಮ-ಜನ್ಮಾಂತರ ಅನೇಕ ಬಾರಿ ಸಿಗುತ್ತವೆ. ಇದು ನಿಮ್ಮ ಅಂತಿಮ ಜನ್ಮವಾಗಿದೆ. ಎಲ್ಲಿ ಯಾವುದೇ
ಅಪ್ರಾಪ್ತ ವಸ್ತುವಿರುವುದಿಲ್ಲವೋ ಈಗ ಅಲ್ಲಿಗೆ ಹೋಗಬೇಕಾಗಿದೆ ಅದಕ್ಕಾಗಿಯೇ ನೀವು ಪುರುಷಾರ್ಥ
ಮಾಡುತ್ತಿದ್ದೀರಿ. ತಂದೆಯು ಯಾವುದನ್ನು ಹೇಳುತ್ತಾರೆಯೋ ಇದನ್ನು ಈಗಲೇ ಕೇಳುತ್ತೀರಿ.
ಸತ್ಯಯುಗದಲ್ಲಿ ಇದೇನೂ ತಿಳಿದಿರುವುದಿಲ್ಲ. ಈಗ ನೀವು ಎಲ್ಲಿಗೆ ಹೋಗುತ್ತೀರಿ? ತಮ್ಮ ಸುಖಧಾಮದಲ್ಲಿ.
ನಿಮ್ಮದೇ ಸುಖಧಾಮವಾಗಿತ್ತು. ನೀವು ಸುಖಧಾಮದಲ್ಲಿದ್ದಿರಿ ಈಗ ದುಃಖಧಾಮದಲ್ಲಿದ್ದೀರಿ. ತಂದೆಯು
ಬಹಳ-ಬಹಳ ಸಹಜ ಮಾರ್ಗವನ್ನು ತಿಳಿಸಿದ್ದಾರೆ, ಅದನ್ನೇ ನೆನಪು ಮಾಡಿ. ನಮ್ಮ ಮನೆಯು ಶಾಂತಿಧಾಮವಾಗಿದೆ
ಅಲ್ಲಿಂದ ನಾವು ಸತ್ಯಯುಗದಲ್ಲಿ ಬರುತ್ತೇವೆ. ನಿಮ್ಮ ವಿನಃ ಬೇರೆ ಯಾರೂ ಸ್ವರ್ಗದಲ್ಲಿ ಬರುವುದೇ
ಇಲ್ಲ ಆದ್ದರಿಂದ ನೀವೇ ಸ್ಮರಣೆ ಮಾಡುತ್ತೀರಿ. ಮೊದಲು ಸುಖದಲ್ಲಿ ಹೋಗುತ್ತೀರಿ ನಂತರ ದುಃಖದಲ್ಲಿ
ಬರುತ್ತೀರಿ, ಕಲಿಯುಗದಲ್ಲಿ ಸುಖಧಾಮವಿರುವುದೇ ಇಲ್ಲ, ಸುಖ ಸಿಗುವುದೇ ಇಲ್ಲ ಆದ್ದರಿಂದ ಸುಖವು
ಕಾಗವಿಷ್ಟ ಸಮಾನ ಎಂದು ಸನ್ಯಾಸಿಗಳೂ ಹೇಳುತ್ತಾರೆ. ತಂದೆಯೇ ನಮ್ಮನ್ನು ಮನೆಗೆ ಕರೆದುಕೊಂಡು ಹೋಗಲು
ಬಂದಿದ್ದಾರೆ ಎಂದು ಈಗ ಮಕ್ಕಳು ತಿಳಿಯುತ್ತಾರೆ. ನಾವು ಪತಿತರನ್ನು ಪಾವನ ಮಾಡಿ ಕರೆದುಕೊಂಡು
ಹೋಗುತ್ತಾರೆ. ನೆನಪಿನ ಯಾತ್ರೆಯಿಂದಲೇ ಪಾವನರಾಗುತ್ತೇವೆ, ಯಾತ್ರೆಯಲ್ಲಿ ಬಹಳ ಏರುಪೇರಾಗುತ್ತದೆ.
ಕೆಲವರು ರೋಗಿಗಳಾಗಿ ಬಿಡುತ್ತಾರೆ ಮತ್ತೆ ಹಿಂತಿರುಗಿ ಬಂದು ಬಿಡುತ್ತಾರೆ. ಇದೂ ಸಹ ಹಾಗೆಯೇ. ಇದು
ನೆನಪಿನ ಯಾತ್ರೆಯಾಗಿದೆ. ಅಂತ್ ಮತಿ ಸೋ ಗತಿ ಆಗಿ ಬಿಡುತ್ತದೆ. ನಾವು ನಮ್ಮ ಶಾಂತಿಧಾಮಕ್ಕೆ
ಹೋಗುತ್ತಿದ್ದೇವೆ, ಇದು ಬಹಳ ಸಹಜವಾಗಿದೆ ಆದರೆ ಮಾಯೆಯು ಬಹಳ ಮರೆಸುತ್ತದೆ. ನಿಮ್ಮ ಯುದ್ಧವು
ಮಾಯೆಯೊ೦ದಿಗೆ ಇದೆ. ತಂದೆಯು ಬಹಳ ಸಹಜವಾಗಿ ತಿಳಿಸುತ್ತಾರೆ. ನಾವು ಈಗ ಶಾಂತಿಧಾಮಕ್ಕೆ ಹೋಗುತ್ತೇವೆ.
ತಂದೆಯನ್ನೇ ನೆನಪು ಮಾಡುತ್ತೀರಿ. ದೈವೀ ಗುಣಗಳನ್ನು ಧಾರಣೆ ಮಾಡುತ್ತೀರಿ. ಪವಿತ್ರರಾಗುತ್ತೀರಿ.
3-4 ಮಾತುಗಳು ಮುಖ್ಯವಾಗಿವೆ ಅದನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ - ವಿನಾಶವಂತೂ
ಅವಶ್ಯವಾಗಿ ಆಗುತ್ತದೆ, 5000 ವರ್ಷಗಳ ಹಿಂದೆಯೂ ನಾವೇ ಹೋಗಿದ್ದೆವು ಮತ್ತು ಮೊಟ್ಟ ಮೊದಲು ನಾವೇ
ಬರುತ್ತೇವೆ. ರಾಮನೂ ಹೋದ, ರಾವಣನೂ ಹೋದ ಎಂದು ಗಾಯನವಿದೆಯಲ್ಲವೇ. ಹೋಗುವುದಂತೂ ಎಲ್ಲರೂ
ಶಾಂತಿಧಾಮಕ್ಕೆ ಹೋಗಬೇಕಾಗಿದೆ. ನೀವು ಏನನ್ನು ಓದುತ್ತೀರೋ ಆ ವಿದ್ಯಾಭ್ಯಾಸದ ಅನುಸಾರ ಪದವಿಯನ್ನು
ಪಡೆಯುತ್ತೀರಿ. ನಿಮ್ಮ ಗುರಿ-ಉದ್ದೇಶವೂ ಸಮ್ಮುಖದಲ್ಲಿ ಇದೆ. ನಾವು ಸಾಕ್ಷಾತ್ಕಾರವನ್ನು ನೋಡಬೇಕು
ಎಂದು ಹೇಳಿದರೆ ಈ ಚಿತ್ರವು (ಲಕ್ಷ್ಮೀ-ನಾರಾಯಣರು) ಸಾಕ್ಷಾತ್ಕಾರವಲ್ಲದೆ ಇನ್ನೇನು! ಇದಲ್ಲದೆ
ಇನ್ಯಾರ ಸಾಕ್ಷಾತ್ಕಾರ ಮಾಡಬೇಕು? ಬೇಹದ್ದಿನ ತಂದೆಯದೇ? ಮತ್ತ್ಯಾವ ಸಾಕ್ಷಾತ್ಕಾರವೂ ಕೆಲಸಕ್ಕೆ
ಬರುವುದಿಲ್ಲ. ಕೆಲ-ಕೆಲವರು ತಂದೆಯ ಸಾಕ್ಷಾತ್ಕಾರವಾಗಲಿ ಎಂದು ಇಚ್ಛಿಸುತ್ತಾರೆ. ತಂದೆಗಿಂತ ಮಧುರ
ವಸ್ತು ಮತ್ತ್ಯಾವುದೂ ಇಲ್ಲ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ಮೊದಲು ತಂದೆಯ
ಸಾಕ್ಷಾತ್ಕಾರ ಮಾಡುತ್ತೀರಾ? ಆತ್ಮವು ಬಾಬಾನ ಸಾಕ್ಷಾತ್ಕಾರವನ್ನು ನೋಡಬೇಕೆಂದು ಹೇಳುತ್ತದೆ ಆದರೆ
ತಮ್ಮ ಸಾಕ್ಷಾತ್ಕಾರವನ್ನು ಮಾಡಿಕೊಂಡಿದ್ದೀರಾ? ಇದಂತೂ ತಾವು ಮಕ್ಕಳು ಅರಿತುಕೊಂಡಿದ್ದೀರಿ. ಈಗ
ಅರಿವಾಗಿದೆ - ನಾವು ಆತ್ಮಗಳು ಆಗಿದ್ದೇವೆ. ನಮ್ಮ ಮನೆಯು ಶಾಂತಿಧಾಮವಾಗಿದೆ. ಅಲ್ಲಿಂದ ನಾವು
ಆತ್ಮಗಳು ಪಾತ್ರವನ್ನು ಅಭಿನಯಿಸಲು ಬರುತ್ತೇವೆ. ನಾಟಕದನುಸಾರ ಮೊಟ್ಟ ಮೊದಲು ಸತ್ಯಯುಗದ ಆದಿಯಲ್ಲಿ
ನಾವು ಬರುತ್ತೇವೆ. ಇದು ಆದಿ ಮತ್ತು ಅಂತ್ಯದ ಮಧ್ಯದ ಪುರುಷೊತ್ತಮ ಸಂಗಮಯುಗವಾಗಿದೆ. ಇದರಲ್ಲಿ
ಕೇವಲ ಬ್ರಾಹ್ಮಣರೇ ಇರುತ್ತಾರೆ, ಮತ್ತ್ಯಾರೂ ಇರುವುದಿಲ್ಲ. ಕಲಿಯುಗದಲ್ಲಂತೂ ಅನೇಕ ಧರ್ಮ, ಅನೇಕ
ಕುಲಗಳಿವೆ. ಸತ್ಯಯುಗದಲ್ಲಿ ಒಂದೇ ರಾಜಧಾನಿ ಇರುತ್ತದೆ, ಇದು ಸಹಜವಾಗಿದೆಯಲ್ಲವೇ. ನೀವು ಸಂಗಮಯುಗೀ
ಈಶ್ವರೀಯ ಪರಿವಾರದವರಾಗಿದ್ದೀರಿ. ನೀವು ಸತ್ಯಯುಗಿಗಳಲ್ಲ, ಕಲಿಯುಗಿಗಳೂ ಅಲ್ಲ. ಇದೂ ಸಹ ನಿಮಗೆ
ಗೊತ್ತಿದೆ - ಕಲ್ಪ-ಕಲ್ಪವು ತಂದೆಯು ಬಂದು ಇಂತಹ ವಿದ್ಯೆಯನ್ನು ಓದಿಸುತ್ತಾರೆ. ನೀವು
ಕುಳಿತಿದ್ದೀರಿ ಅಂದಮೇಲೆ ಇದೇ ಸ್ಮೃತಿಯಲ್ಲಿ ಬರಬೇಕು. ಶಾಂತಿಧಾಮ, ಸುಖಧಾಮ ಮತ್ತು ಇದು
ದುಃಖಧಾಮವಾಗಿದೆ. ಈ ದುಃಖಧಾಮವನ್ನು ಬುದ್ಧಿಯಿಂದ ಸನ್ಯಾಸ ಮಾಡಿ. ಆ ಸನ್ಯಾಸಿಗಳ ಬುದ್ಧಿಯಿಂದ
ಸನ್ಯಾಸ ಮಾಡುವುದಿಲ್ಲ, ಕೇವಲ ಮನೆ-ಮಠವನ್ನು ಬಿಟ್ಟು ಸನ್ಯಾಸ ಮಾಡುತ್ತಾರೆ. ನಿಮಗೆ ಎಂದೂ ಸಹ
ತಂದೆಯು ಮನೆ-ಮಠವನ್ನು ಬಿಡಿ ಎಂದು ಹೇಳುವುದಿಲ್ಲ. ಆದರೆ ಇಷ್ಟಂತೂ ಅವಶ್ಯಕವಾಗಿದೆ, ಭಾರತದ ಸೇವೆ
ಮಾಡಬೇಕಾಗಿದೆ ಮತ್ತು ತಮ್ಮ ಸೇವೆ ಮಾಡಬೇಕಾಗಿದೆ. ಸೇವೆಯನ್ನಂತೂ ಮನೆಯಲ್ಲಿಯೂ ಮಾಡಬಲ್ಲಿರಿ. ಓದಲು
ಸಮಯವಂತೂ ಬಹಳ ಕಡಿಮೆ ಇದೆ. ಬಹಳಷ್ಟು ಕಳೆದು ಹೋಯಿತು, ಸ್ವಲ್ಪ ಉಳಿಯಿತು ಎಂಬ ಗಾಯನವೂ ಸಹ
ಇದೆಯಲ್ಲವೇ. ಪ್ರಪಂಚದ ಮನುಷ್ಯರಂತೂ ಸಂಪೂರ್ಣ ಘೋರ ಅಂಧಕಾರದಲ್ಲಿ ಇದ್ದಾರೆ. ಇನ್ನೂ 40,000
ವರ್ಷಗಳಿವೆ ಎಂದು ತಿಳಿಯುತ್ತಾರೆ. ಮಕ್ಕಳೇ ಇನ್ನೂ ಸ್ವಲ್ಪ ಸಮಯ ಮಾತ್ರ ಇದೆ ಎಂದು ತಂದೆಯು
ತಿಳಿಸುತ್ತಾರೆ. ನೀವು ಬೇಹದ್ದಿನಲ್ಲಿ ಸ್ಥಿತರಾಗಬೇಕಾಗಿದೆ. ಇಡೀ ಪ್ರಪಂಚದಲ್ಲಿ ಏನೆಲ್ಲವೂ
ನಡೆಯುತ್ತವೋ, ಎಲ್ಲವೂ ನಿಗದಿಯಾಗಿದೆ. ನಾಟಕವು ನಿಧಾನವಾಗಿ ನಡೆಯುತ್ತದೆ (ಹೇನಿನಂತೆ). ವಿಶ್ವದ
ಇತಿಹಾಸ-ಭೂಗೋಳವು ಪುನರಾವರ್ತನೆ ಆಗಲಿದೆ. ಸತ್ಯಯುಗದಲ್ಲಿ ಯಾರು ಹೋಗುವವರೋ ಅವರೇ ಬಂದು ಓದುತ್ತಾರೆ.
ಅನೇಕ ಬಾರಿ ನೀವು ಓದಿದ್ದೀರಿ. ಶ್ರೀಮತದಂತೆ ನೀವು ತಮ್ಮ ಸ್ವರ್ಗ ಸ್ಥಾಪನೆ ಮಾಡುತ್ತೀರಿ. ಇದೂ ಸಹ
ನಿಮಗೆ ಗೊತ್ತಿದೆ – ಶ್ರೇಷ್ಟಾತಿ ಶ್ರೇಷ್ಠ ಭಗವಂತ ಭಾರತದಲ್ಲಿಯೇ ಬರುತ್ತಾರೆ. ಕಲ್ಪದ ಹಿಂದೆಯೂ
ಬಂದಿದ್ದರು. ಕಲ್ಪ-ಕಲ್ಪವು ತಂದೆ ಹೀಗೆ ಬರುತ್ತಾರೆ ಎಂದು ನೀವು ಹೇಳುತ್ತೀರಿ. ನಿಮ್ಮ
ಬುದ್ಧಿಯಲ್ಲಿ ಎಲ್ಲವೂ ಕುಳಿತುಕೊಳ್ಳುತ್ತಾ ಹೋಗುತ್ತದೆ. ಸ್ಥಾಪನೆ-ವಿನಾಶ ಮತ್ತು ಪಾಲನೆಯ
ಕರ್ತವ್ಯವು ಹೇಗಾಗುತ್ತದೆ ಎಂಬುದನ್ನು ನೀವು ತಿಳಿಯಬೇಕು ಮತ್ತು ಅನ್ಯರಿಗೆ ತಿಳಿಸಬೇಕು. ಮೊದಲು
ಏನನ್ನೂ ತಿಳಿದಿರಲಿಲ್ಲ. ತಂದೆಯನ್ನು ಅರಿತಿರುವುದರಿಂದ ತಂದೆಯ ಮೂಲಕ ನೀವು ಎಲ್ಲವನ್ನು
ಅರಿತುಕೊಳ್ಳುತ್ತೀರಿ. ವಿಶ್ವದ ಇತಿಹಾಸ-ಭೂಗೋಳವನ್ನು ಯಥಾರ್ಥ ರೀತಿಯಲ್ಲಿ ನೀವು
ತಿಳಿದುಕೊಂಡಿದ್ದೀರಿ. ಮನುಷ್ಯರು ಹೇಗೆ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತಾರೆ ಎಂಬುದನ್ನು
ತಂದೆಯು ನಿಮಗೆ ತಿಳಿಸಿದ್ದಾರೆ. ನೀವು ಅನ್ಯರಿಗೆ ತಿಳಿಸಬೇಕಾಗಿದೆ. ತಾವು ಮಕ್ಕಳು ಈಗ ಪಾರಸ
ಬುದ್ಧಿಯವರಾಗುತ್ತಿದ್ದೀರಿ. ಸತ್ಯಯುಗದಲ್ಲಿ ಪಾರಸ ಬುದ್ಧಿಯವರೇ ಇರುತ್ತಾರೆ. ಇದು ಪುರುಷೊತ್ತಮ
ಸಂಗಮಯುಗವಾಗಿದೆ, ಇದಕ್ಕೆ ಗೀತಾ ಭಾಗವೆಂದು ಹೇಳಲಾಗುತ್ತದೆ, ಈಗ ನೀವು ಕಲ್ಲು ಬುದ್ಧಿಯವರಿಂದ
ಪಾರಸ ಬುದ್ಧಿಯವರಾಗುತ್ತೀರಿ. ಗೀತೆಯನ್ನು ತಿಳಿಸುವವರಂತೂ ಸ್ವಯಂ ಭಗವಂತನಾಗಿದ್ದಾರೆ. ಮನುಷ್ಯರು
ತಿಳಿಸುವುದಿಲ್ಲ, ನೀವು ಆತ್ಮಗಳು ಕೇಳುತ್ತೀರಿ ಮತ್ತು ಅನ್ಯರಿಗೆ ತಿಳಿಸುತ್ತೀರಿ. ಇದಕ್ಕೆ
ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ, ಇದನ್ನು ನೀವು ಆತ್ಮಿಕ ಸಹೋದರರಿಗೆ ತಿಳಿಸುತ್ತೀರಿ,
ವೃದ್ಧಿಯನ್ನು ಹೊಂದುತ್ತಿರುತ್ತೀರಿ. ತಂದೆಯು ಬಂದು ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯನ್ನು
ಸ್ಥಾಪನೆ ಮಾಡುತ್ತಾರೆಂದು ನಿಮಗೆ ತಿಳಿದಿದೆ - ಯಾರ ಮುಖಾಂತರ? ಬ್ರಹ್ಮಾಮುಖವಂಶಾವಳಿ ಕುಲಭೂಷಣರ
ಮೂಲಕ ತಿಳಿಸುತ್ತಾರೆ. ತಂದೆಯು ಶ್ರೀಮತವನ್ನು ಕೊಡುತ್ತಾರೆ, ಇದು ತಿಳಿದುಕೊಳ್ಳುವ ಮಾತುಗಳಾಗಿವೆ,
ಇವನ್ನು ಹೃದಯದಲ್ಲಿ ನೋಟ್ ಮಾಡಿಕೊಳ್ಳಬೇಕು. ಇದು ಬಹಳ ಸಹಜವಾಗಿದೆ, ಇದು ದುಃಖಧಾಮವಾಗಿದೆ, ಈಗ
ನೀವು ಮನೆಗೆ ಹೋಗಬೇಕಾಗಿದೆ. ಕಲಿಯುಗದ ನಂತರ ಸತ್ಯಯುಗ, ಮಾತಂತೂ ಬಹಳ ಚಿಕ್ಕದು ಹಾಗೂ ಸಹಜವಾಗಿದೆ.
ಭಲೇ ಅವಿದ್ಯಾವಂತರಾಗಿದ್ದರೂ ಸಹ ಪರವಾಗಿಲ್ಲ. ಯಾರು ಓದುವುದನ್ನು ಅರಿತಿದ್ದಾರೆಯೋ ಅವರಿಂದ
ಕೇಳಬೇಕು. ಶಿವತಂದೆ ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಈಗ ಅವರಿಂದ ಆಸ್ತಿಯನ್ನು ಪಡೆಯಬೇಕಾಗಿದೆ.
ತಂದೆಯ ಮೇಲೆ ನಿಶ್ಚಯವಿದ್ದರೆ ಸ್ವರ್ಗದ ಆಸ್ತಿಯು ಸಿಗುತ್ತದೆ. ಆಂತರ್ಯದಲ್ಲಿ ಅಜಪಾಜಪವಾಗಿ ತಂದೆಯ
ಸ್ಮೃತಿ ನಡೆಯುತ್ತಿರಲಿ. ಶಿವ ತಂದೆಯಿಂದ ಬೇಹದ್ದಿನ ಸುಖ, ಸ್ವರ್ಗದ ಆಸ್ತಿಯು ಸಿಗುತ್ತದೆ
ಆದ್ದರಿಂದ ಶಿವ ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕಾಗಿದೆ. ಎಲ್ಲರಿಗೆ ಬೇಹದ್ದಿನ ತಂದೆಯಿಂದ
ಆಸ್ತಿಯನ್ನು ಪಡೆಯುವ ಹಕ್ಕಿದೆ. ಹೇಗೆ ಲೌಕಿಕ ತಂದೆಯಿಂದ ಹದ್ದಿನ ಅಧಿಕಾರವೂ ಸಿಗುತ್ತದೆಯೋ ಹಾಗೆಯೇ
ಇದು ಬೇಹದ್ದಿನದಾಗಿದೆ. ಶಿವ ತಂದೆಯಿಂದ ನಮಗೆ ಇಡೀ ವಿಶ್ವದ ರಾಜ್ಯವು ಸಿಗುತ್ತದೆ. ಚಿಕ್ಕ-ಚಿಕ್ಕ
ಮಕ್ಕಳಿಗೂ ಸಹ ಇದನ್ನು ತಿಳಿಸಬೇಕು. ಪ್ರತಿಯೊಂದು ಆತ್ಮನಿಗೂ ತಂದೆಯಿಂದ ಆಸ್ತಿಯನ್ನು ಪಡೆಯುವ
ಹಕ್ಕಿದೆ. ಕಲ್ಪ-ಕಲ್ಪವೂ ಅವಶ್ಯವಾಗಿ ಪಡೆಯುತ್ತಾರೆ. ನೀವು ಜೀವನ್ಮುಕ್ತಿಯ ಆಸ್ತಿಯನ್ನು
ಪಡೆಯುತ್ತೀರಿ. ಯಾರಿಗೆ ಮುಕ್ತಿಯ ಆಸ್ತಿಯು ಸಿಗುತ್ತದೆಯೋ ಅವರೂ ಸಹ ಜೀವನ್ಮುಕ್ತಿಯಲ್ಲಿ
ಅವಶ್ಯವಾಗಿ ಬರುತ್ತಾರೆ ಅಂದರೆ ಮೊದಲ ಜನ್ಮವಂತೂ ಸುಖವಾಗಿಯೇ ಇರುತ್ತಾರೆ. ನಿಮ್ಮದು ಇದು 84ನೇ
ಜನ್ಮವಾಗಿದೆ. ಈ ಪೂರ್ಣ ಜ್ಞಾನವು ನಿಮ್ಮ ಬುದ್ಧಿಯಲ್ಲಿ ಇರಬೇಕು. ಬೇಹದ್ದಿನ ತಂದೆಯು ನಮಗೆ
ಓದಿಸುತ್ತಿದ್ದಾರೆ ಎಂಬುದನ್ನು ಮರೆಯಬೇಡಿ. ದೇಹಧಾರಿಗಳು ಎಂದೂ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ.
ಅವರಲ್ಲಿ ಆತ್ಮಿಕ ಜ್ಞಾನವು ಇರುವುದಿಲ್ಲ. ಸಹೋದರ-ಸಹೋದರರೆಂದು ತಿಳಿಯಿರಿ ಎನ್ನುವುದು ನಿಮಗೆ
ತಿಳಿಸಲಾಗುತ್ತದೆ. ಯಾರೆಲ್ಲಾ ಮನುಷ್ಯಾತ್ಮರು ಇದ್ದಾರೆಯೋ ಅವರ್ಯಾರಿಗೂ ಈ ಶಿಕ್ಷಣವು
ಸಿಗುವುದಿಲ್ಲ. ಭಲೇ ಭಗವಾನುವಾಚ - ಕಾಮ ಮಹಾಶತ್ರುವಾಗಿದೆ, ಅದರ ಮೇಲೆ ಜಯ ಗಳಿಸಿದರೆ
ಜಗತ್ಜೀತರಾಗುತ್ತೀರಿ ಎಂದು ಗೀತೆಯಲ್ಲಿ ಸಹ ತಿಳಿಸುತ್ತಾರೆ ಆದರೆ ತಿಳಿದುಕೊಂಡೇ ಇಲ್ಲ. ಭಗವಂತನು
ಸತ್ಯವಾಗಿದ್ದಾರೆ, ದೇವತೆಗಳೂ ಸಹ ಭಗವಂತನಿಂದ ಸತ್ಯತೆಯನ್ನು ಕಲಿತಿದ್ದಾರೆ. ಕೃಷ್ಣನೂ ಸಹ ಈ
ಪದವಿಯನ್ನು ಎಲಿಂದ ಪಡೆದನು? ಲಕ್ಷ್ಮೀ-ನಾರಾಯಣರು ಹೇಗಾದರು? ಅಂತಹ ಯಾವ ಕರ್ಮ ಮಾಡಿದರು? ಯಾರಾದರೂ
ತಿಳಿಸಲು ಸಾಧ್ಯವೇ? ನಿರಾಕಾರ ತಂದೆ ಬ್ರಹ್ಮಾ ತಂದೆಯ ಮೂಲಕ ಅವರಿಗೆ ಇಂತಹ ಕರ್ಮವನ್ನು ಕಲಿಸಿದರು
ಎಂದು ಈಗ ನಿಮಗೇ ತಿಳಿದಿದೆ. ಇದು ಸೃಷ್ಟಿಯಾಗಿದೆಯಲ್ಲವೇ. ಈಗ ನೀವು ಪ್ರಜಾಪಿತ
ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ನಿಮ್ಮ ಬಳಿ ಆತ್ಮಿಕ ಜ್ಞಾನವಿದೆ. ನಾವು ಭಗವಂತನನ್ನು
ಅರಿತಿದ್ದೇವೆಂದು ನೀವು ತಿಳಿಯುತ್ತೀರಿ. ಆ ನಿರಾಕಾರ ತಂದೆ ಸರ್ವ ಶ್ರೇಷ್ಠ ಆಗಿದ್ದಾರೆ, ಅವರಿಗೆ
ಸಾಕಾರ ರೂಪವಿಲ್ಲ ಉಳಿದಂತೆ ಯಾರೆಲ್ಲರನ್ನೂ ನೋಡುತ್ತೀರೆಯೋ ಅವರೆಲ್ಲರೂ ಸಾಕಾರಿ ಆಗಿದ್ದಾರೆ.
ಮಂದಿರಗಳಲ್ಲಿಯೂ ಸಹ ಲಿಂಗವನ್ನು ನೋಡುತ್ತೀರಿ ಅಂದರೆ ಅವರಿಗೆ ಶರೀರವಿಲ್ಲ ಆದರೆ ನಾಮ, ರೂಪದಿಂದ
ಭಿನ್ನವಾಗಿದ್ದಾರೆ ಎಂದಲ್ಲ. ಮತ್ತೆಲ್ಲಾ ದೇಹಧಾರಿಗಳಿಗೆ ಹೆಸರನ್ನು ಇಡುತ್ತಾರೆ, ಅವರ ಜನ್ಮ ಪತ್ರಿ
ಇರುತ್ತದೆ. ಶಿವ ತಂದೆಯು ನಿರಾಕಾರನಾಗಿದ್ದಾರೆ, ಅವರಿಗೆ ಜನ್ಮ ಪತ್ರವಿಲ್ಲ. ಕೃಷ್ಣನದು ನಂಬರವನ್
ಆಗಿದೆ. ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಶಿವ ತಂದೆಯು ನಿರಾಕಾರಿ, ಕಲ್ಯಾಣಕಾರಿಯಾಗಿದ್ದಾರೆ.
ತಂದೆಯು ಬರುತ್ತಾರೆಂದರೆ ಅವಶ್ಯವಾಗಿ ಆಸ್ತಿಯನ್ನು ಕೊಡುತ್ತಾರೆ. ತಂದೆ, ಶಿಕ್ಷಕ, ಸದ್ಗುರು ಮೂವರೂ
ಒಬ್ಬರೇ ಆಗಿದ್ದಾರೆ. ಬಹಳ ಚೆನ್ನಾಗಿ ಓದಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಬುದ್ಧಿಯಿಂದ
ಈ ದುಃಖಧಾಮದ ಸನ್ಯಾಸ ಮಾಡಿ ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಇಟ್ಟುಕೊಳ್ಳಬೇಕು. ತಮ್ಮ ಹಾಗೂ
ಭಾರತದ ಸತ್ಯ ಸೇವೆ ಮಾಡಬೇಕಾಗಿದೆ. ಎಲ್ಲರಿಗೆ ಆತ್ಮಿಕ ಜ್ಞಾನವನ್ನು ತಿಳಿಸಬೇಕು.
2. ತಮ್ಮ ಸತ್ಯಯುಗೀ ಜನ್ಮಸಿದ್ಧ ಅಧಿಕಾರವನ್ನು ಪಡೆಯಲು ಒಬ್ಬರೊಂದಿಗೆ ಪೂರ್ಣ ನಿಶ್ಚಯವನ್ನು
ಇಡಬೇಕು. ಆಂತರಿಕವಾಗಿ ಅಜಪಾಜಪ ಅರ್ಥಾತ್ ನಿರಂತರ ತಂದೆಯ ನೆನಪನ್ನು ಮಾಡಬೇಕಾಗಿದೆ. ವಿದ್ಯೆಯನ್ನು
ಪ್ರತಿನಿತ್ಯವೂ ಅವಶ್ಯವಾಗಿ ಓದಬೇಕಾಗಿದೆ.
ವರದಾನ:
ಸೈಲೆನ್ಸ್ ನ
ಶಕ್ತಿಯ ಮೂಲಕ ಆತ್ಮ ಶಕ್ತಿಯ ವಿಮಾನವನ್ನು ತೀವ್ರ ಗತಿ ಮಾಡುವಂತಹ ವಿಶ್ವ ಪರಿವರ್ತಕ್ ಭವ.
ಸೈನ್ಸ್ ನ ಸಾಧನಗಳ ವೇಗವನ್ನು ಸೈನ್ಸ್ ಮೂಲಕ ಕಡಿಮೆ ಮಾಡಲೂಬಹುದು, ಹಿಡಿದುಕೊಳ್ಳಲೂಬಹುದು ಆದರೆ
ಆತ್ಮದ ಗತಿಯನ್ನು ಇದುವರೆಗೂ ಯಾರೂ ಹಿಡಿಯಲೂ ಇಲ್ಲ. ಹಿಡಿಯಲು ಸಾಧ್ಯವೂ ಇಲ್ಲ, ಇದರಲ್ಲಿ ವಿಜ್ಞಾನ
ತನ್ನ ಸೋಲನ್ನು ಒಪ್ಪಿಕೊಂಡಿದೆ. ಎಲ್ಲಿ ವಿಜ್ಞಾನ ಸೋತಿದೆ ಅಲ್ಲಿ ಸೈಲೆನ್ಸ್ ನ ಶಕ್ತಿಯಿಂದ ಏನು
ಇಚ್ಛೆ ಪಡುವಿರೊ ಅದನ್ನು ಮಾಡಬಹುದಾಗಿದೆ. ಆದ್ದರಿಂದ ಆತ್ಮ ಶಕ್ತಿಯ ವಿಮಾನವನ್ನು ತೀವ್ರ ಗತಿಯಲ್ಲಿ
ಮಾಡಿ, ಈ ಶಕ್ತಿಯಿಂದ ಸ್ವ ಪರಿವರ್ತನೆ, ಇಲ್ಲ ಯಾರದೇ ವೃತ್ತಿಯ ಪರಿವರ್ತನೆ, ವಾಯುಮಂಡಲದ
ಪರಿವರ್ತನೆ ಮಾಡಿ ವಿಶ್ವ ಪರಿವರ್ತಕರಾಗಲು ಸಾಧ್ಯ. ತೀವ್ರಗತಿಯ ನಿಶಾನಿ ಆಗಿದೆ ನೀವು ಏನು
ಯೋಚಿಸುವಿರಿ ಅದರಂತೆ ಆಗುವುದು.
ಸ್ಲೋಗನ್:
ಶಿಕ್ಷದಾತಾನ
ಜೊತೆ ದಯಾಹೃದಯಿಯಾಗಿ ಸಹಯೋಗಿಗಳಾಗಿ.