25.08.19    Avyakt Bapdada     Kannada Murli     18.01.85     Om Shanti     Madhuban


ಪ್ರತಿಜ್ಞೆಯ ಮೂಲಕ ಪ್ರತ್ಯಕ್ಷತೆ


ಇಂದು ಸಮರ್ಥ ದಿವಸದಂದು ಸಮರ್ಥ ತಂದೆಯು ತನ್ನ ಸಮರ್ಥ ಮಕ್ಕಳನ್ನು ನೋಡುತ್ತಿದ್ದಾರೆ. ಇಂದಿನ ದಿನವು ವಿಶೇಷವಾಗಿ ಬ್ರಹ್ಮಾ ತಂದೆಯ ಮೂಲಕ ವಿಶೇಷ ಮಕ್ಕಳಿಗೆ ಸಮರ್ಥತೆಯ ವರದಾನವನ್ನು ಅರ್ಪಣೆ ಮಾಡಿರುವ ದಿನವಾಗಿದೆ. ಇಂದಿನ ದಿನವು ಬಾಪ್ದಾದಾರವರು ತನ್ನ ಶಕ್ತಿ ಸೇನೆಯನ್ನು ವಿಶ್ವದ ಸ್ಟೇಜಿನ ಮೇಲೆ ತರುತ್ತಾರೆ - ಅಂದಮೇಲೆ ಸಾಕಾರ ಸ್ವರೂಪದಲ್ಲಿ ಶಿವಶಕ್ತಿಯರು ಪ್ರತ್ಯಕ್ಷ ರೂಪದಲ್ಲಿ ಪಾತ್ರವನ್ನಭಿನಯಿಸುವ ದಿನವಾಗಿದೆ. ಶಕ್ತಿಯರ ಮೂಲಕ ತಂದೆಯು ಪ್ರತ್ಯಕ್ಷವಾಗಿ, ಸ್ವಯಂ ಗುಪ್ತ ರೂಪದಲ್ಲಿ ಪಾತ್ರವನ್ನಭಿನಯಿಸುತ್ತಿರುತ್ತಾರೆ. ಶಕ್ತಿಯರನ್ನು ಪ್ರತ್ಯಕ್ಷ ರೂಪದಲ್ಲಿ ವಿಶ್ವದ ಮುಂದೆ ವಿಜಯಿಯಾಗಿ ಪ್ರತ್ಯಕ್ಷ ಮಾಡುತ್ತಾರೆ. ಇಂದಿನ ದಿನವು ಮಕ್ಕಳಿಗೆ ಬಾಪ್ದಾದಾರವರ ಮೂಲಕ ಸಮಾನ ಭವದ ವರದಾನದ ದಿನವಾಗಿದೆ. ಇಂದಿನ ದಿನ ವಿಶೇಷವಾಗಿ ಸ್ನೇಹಿ ಮಕ್ಕಳನ್ನು ನಯನಗಳಲ್ಲಿ ಸ್ನೇಹ ಸ್ವರೂಪದಿಂದ ಸಮಾವೇಶ ಮಾಡಿಕೊಂಡ ದಿನವಾಗಿದೆ. ಇಂದಿನ ದಿನವು ಬಾಪ್ದಾದಾರವರ ವಿಶೇಷ ಸಮರ್ಥ ಮತ್ತು ಸ್ನೇಹಿ ಮಕ್ಕಳಿಗೆ ಮಧುರ ಮಿಲನದ ಮೂಲಕ ಅವಿನಾಶಿ ಮಿಲನದ ವರದಾನವನ್ನು ಕೊಡುತ್ತಾರೆ. ಇಂದಿನ ದಿನವು ಅಮೃತವೇಳೆಯಿಂದ ನಾಲ್ಕೂ ಕಡೆಯ ಸರ್ವ ಮಕ್ಕಳ ಹೃದಯದ ಸಂಕಲ್ಪವಿರುತ್ತದೆ - ಮಧುರ ಮಿಲನವನ್ನಾಚರಿಸುವ, ಮಧುರಾತಿ ಮಧುರ ಮಹಿಮೆಯ ಹೃದಯದ ಗೀತೆಯನ್ನಾಡುವ, ವಿಶೇಷ ಸ್ನೇಹದ ಪ್ರಕಂಪನದ ದಿನವಾಗಿದೆ. ಇಂದಿನ ದಿನವು ಅಮೃತವೇಳೆಯಲ್ಲಿಯೇ ಅನೇಕ ಮಕ್ಕಳ ಸ್ನೇಹದ ಮುತ್ತು ರತ್ನಗಳ ಮಾಲೆಗಳು, ಪ್ರತಿಯೊಂದು ರತ್ನದ ಮಧ್ಯೆ ಬಾಬಾ, ಮಧುರ ಬಾಬಾ ಎನ್ನುವ ಮಾತು ಹೊಳೆಯುತ್ತಿರುವಂತೆ ಕಂಡು ಬರುತ್ತಿತ್ತು. ಎಷ್ಟೊಂದು ಮಾಲೆಗಳಿರಬಹುದು! ಈ ಹಳೆಯ ಪ್ರಪಂಚದಲ್ಲಿ ನವರತ್ನಗಳ ಮಾಲೆಯೆಂದು ಹೇಳುತ್ತಾರೆ ಆದರೆ ಬಾಪ್ದಾದಾರವರ ಬಳಿ ಅನೇಕ ಅಲೌಕಿಕ ಅಮೂಲ್ಯ ರತ್ನಗಳ ಮಾಲೆಗಳಿದ್ದವು. ಇಂತಹ ಮಾಲೆಗಳನ್ನು ಸತ್ಯಯುಗದಲ್ಲಿಯೂ ಧರಿಸುವುದಿಲ್ಲ. ಈ ಮಾಲೆಗಳನ್ನು ಕೇವಲ ಬಾಪ್ದಾದಾರವರೇ ಈ ಸಮಯದಲ್ಲಿ ಮಕ್ಕಳ ಮೂಲಕ ಧಾರಣೆ ಮಾಡುತ್ತಾರೆ. ಇಂದಿನ ದಿನದಲ್ಲಿ ಅನೇಕ ಬಂಧನವಿರುವ ಗೋಪಿಕೆಯರ ಹೃದಯದ ವಿಯೋಗ ಮತ್ತು ಸ್ನೇಹದಿಂದ ಸಂಪನ್ನ, ಮಧುರ ಗೀತೆಯನ್ನು ಕೇಳಿಸಿಕೊಳ್ಳುವ ದಿನವಾಗಿದೆ. ಬಾಪ್ದಾದಾರವರು ಇಂತಹ ಲಗನ್ನಿನಲ್ಲಿ ಮಗ್ನರಾಗಿರುವ ಸ್ನೇಹಿ, ಅಗಲಿ ಮರಳಿ ಸಿಕ್ಕಿರುವ ಆತ್ಮರಿಗೆ ರಿಟರ್ನ್ನಲ್ಲಿ, ಇದೇ ಖುಷಿಯ ಸಮಾಚಾರವನ್ನು ತಿಳಿಸುತ್ತಾರೆ - ಈಗ ಪ್ರತ್ಯಕ್ಷತೆಯ ನಗಾರಿ ಮೊಳಗುವ ದಿನವೇ ಆಗಿದೆ, ಆದ್ದರಿಂದ ಹೇಗೆ ಸಹಜಯೋಗಿ ಮತ್ತು ಮಿಲನದ ವಿಯೋಗಿ ಮಕ್ಕಳೇ, ಈ ಸ್ವಲ್ಪ ದಿನಗಳಿನ್ನು ಸಮಾಪ್ತಿಯಾಯಿತೆಂದರೆ ಆಯಿತು. ಸಾಕಾರ ಮಧುರ ಮನೆಯಲ್ಲಿ ಮಧುರ ಮಿಲನವಾಗುತ್ತಲೇ ಇರುತ್ತದೆ. ಆ ಶುಭ ದಿನಗಳು ಸಮೀಪದಲ್ಲಿ ಬರುತ್ತಿದೆ.

ಇಂದಿನ ದಿನವು ಪ್ರತಿಯೊಬ್ಬ ಮಗುವೂ ಹೃದಯದಿಂದ ಧೃಡಸಂಕಲ್ಪವನ್ನು ಮಾಡುವುದರಿಂದ, ಸಹಜ ಸಫಲತೆಯ ಪ್ರತ್ಯಕ್ಷ ಫಲವನ್ನು ಪಡೆಯುವ ದಿನವಾಗಿದೆ. ಇಂದಿನ ದಿನವು ಎಷ್ಟೊಂದು ಮಹಾನ್ ದಿನವಾಗಿದೆ ಎಂದು ಕೇಳಿಸಿಕೊಂಡಿರಾ! ಇಂತಹ ಮಹಾನ್ ದಿನದಂದು ಮಕ್ಕಳು ಎಲ್ಲಿಯೇ ಇರಬಹುದು, ದೂರವಿದ್ದರೂ ಸಹ ಹೃದಯಕ್ಕೆ ಸಮೀಪವಿದ್ದಾರೆ. ಬಾಪ್ದಾದಾರವರೂ ಸಹ ಪ್ರತಿಯೊಂದು ಮಕ್ಕಳಿಗೆ ಸ್ನೇಹದ ಹಾಗೂ ಬಾಪ್ದಾದಾರವರನ್ನು ಪ್ರತ್ಯಕ್ಷ ಮಾಡುವ ಸೇವೆಯ ಉಮ್ಮಂಗ-ಉತ್ಸಾಹದ ರಿಟರ್ನ್ನಲ್ಲಿ ಸ್ನೇಹ ತುಂಬಿರುವ ಶುಭಾಶಯಗಳನ್ನು ಕೊಡುತ್ತಾರೆ. ಏಕೆಂದರೆ ಮೆಜಾರಿಟಿ ಮಕ್ಕಳ ವಾರ್ತಾಲಾಪದಲ್ಲಿ ಸ್ನೇಹ ಮತ್ತು ಸೇವೆಯ ಉಮ್ಮಂಗದ ಪ್ರಕಂಪನಗಳು ವಿಶೇಷವಾಗಿದ್ದವು. ಪ್ರತಿಜ್ಞೆ ಮತ್ತು ಪ್ರತ್ಯಕತೆಯೆರಡೂ ಮಾತುಗಳು ವಿಶೇಷವಾಗಿತ್ತು. ಅದನ್ನು ಕೇಳುತ್ತಾ-ಕೇಳುತ್ತಾ ಬಾಪ್ದಾದಾರವರು ಏನು ಮಾಡುತ್ತಾರೆ? ಹೇಳುವವರೆಷ್ಟೊಂದು ಮಂದಿಯಿರುತ್ತಾರೆ ಆದರೆ ಹೃದಯದ ಧ್ವನಿಯು ಹೃದಯರಾಮ ತಂದೆಗೆ, ಒಂದೇ ಸಮಯದಲ್ಲಿ ಅನೇಕರದನ್ನು ಕೇಳಿಸಿಕೊಳ್ಳಬಹುದು. ಪ್ರತಿಜ್ಞೆ ಮಾಡುವವರಿಗೆ ಬಾಪ್ದಾದಾರವರು ಶುಭಾಶಯಗಳನ್ನು ಕೊಡುತ್ತಾರೆ. ಆದರೆ ಸದಾ ಈ ಪ್ರತಿಜ್ಞೆಯನ್ನು ಅಮೃತವೇಳೆಯಲ್ಲಿ ರಿವೈಜ್ ಮಾಡುತ್ತಿರಿ. ಪ್ರತಿಜ್ಞೆಯನ್ನು ಮಾಡಿ ಬಿಟ್ಟು ಬಿಡಬಾರದು. ಮಾಡಲೇಬೇಕು, ಆಗಲೇಬೇಕು ಎನ್ನುವುದಿರಬೇಕು. ಈ ಉಮ್ಮಂಗ-ಉತ್ಸಾಹವನ್ನು ಸದಾ ಜೊತೆಯಲ್ಲಿಟ್ಟುಕೊಳ್ಳಿರಿ. ಜೊತೆ ಜೊತೆಗೆ ಕರ್ಮವನ್ನು ಮಾಡುತ್ತಾ, ಯಾವ ರೀತಿ ಟ್ರಾಫಿಕ್ ಕಂಟ್ರೋಲ್ನ ವಿಧಿಯ ಮೂಲಕ ನೆನಪಿನ ಸ್ಥಿತಿಯನ್ನು ನಿರಂತರ ಮಾಡಿಕೊಳ್ಳುವುದರಲ್ಲಿ ಸಫಲತೆಯನ್ನು ಪಡೆಯುತ್ತಿದ್ದೀರಿ. ಹಾಗೆಯೇ ಕರ್ಮವನ್ನು ಮಾಡುತ್ತಿದ್ದರೂ ತಮ್ಮ ಬಗ್ಗೆ ತಾವು ಪರಿಶೀಲನೆ ಮಾಡಿಕೊಳ್ಳುವುದಕ್ಕಾಗಿ ಸಮಯವನ್ನು ನಿಶ್ಚಿತ ಮಾಡಿಕೊಳ್ಳಿರಿ. ಅದರಿಂದ ನಿಶ್ಚಿತ ಸಮಯದಲ್ಲಿ ಪ್ರತಿಜ್ಞೆಯು ಸಫಲತಾ ಸ್ವರೂಪರನ್ನಾಗಿ ಮಾಡುತ್ತಿರುತ್ತದೆ.

ಪ್ರತ್ಯಕ್ಷತೆಯ ಉಮ್ಮಂಗ-ಉತ್ಸಾಹವಿರುವ ಮಕ್ಕಳನ್ನು ಬಾಪ್ದಾದಾರವರು ತನ್ನ ಬಲ ಭುಜಗಳೆನ್ನುವ ಸ್ನೇಹದ ಹ್ಯಾಂಡ್ಶೇಕ್ ಮಾಡುತ್ತಿದ್ದಾರೆ. ಸದಾ ಮುದ್ದಾದ ಮಕ್ಕಳು ಸೋ ತಂದೆಯ ಸಮಾನರಾಗಿ, ಉಮ್ಮಂಗದ ಸಾಹಸದಿಂದ ಪದಮ ಪಟ್ಟು ಬಾಪ್ದಾದಾರವರ ಸಹಯೋಗಕ್ಕಂತು ಪಾತ್ರರಾಗಿಯೇ ಇದ್ದೀರಿ. ಸುಪಾತ್ರ ಅರ್ಥಾತ್ ಪಾತ್ರರಾಗಿದ್ದೀರಿ.

ಮೂರನೇ ಪ್ರಕಾರದ ಮಕ್ಕಳು - ಹಗಲು-ರಾತ್ರಿ ಸ್ನೇಹದಲ್ಲಿ ಸಮಾವೇಶವಾಗಿದ್ದಾರೆ. ಸ್ನೇಹವನ್ನೇ ಸೇವೆಯೆಂದು ತಿಳಿಯುತ್ತಾರೆ. ಮೈದಾನದಲ್ಲಿ ಬರುವುದಿಲ್ಲ ಆದರೆ ನನ್ನ ಬಾಬಾ, ನನ್ನ ಬಾಬಾ ಎನ್ನುವ ಗೀತೆಯನ್ನಂತು ಅವಶ್ಯವಾಗಿ ಹಾಡುತ್ತಾರೆ. ತಂದೆಯನ್ನೂ ಮಧುರ ರೂಪದಿಂದ ಮುದ್ದಾಡುತ್ತಾರೆ. ನಾನು ಯಾರಾಗಿದ್ದೇನೆ, ಹೇಗಿದ್ದೇನೆಯೋ, ತಮ್ಮವನಾಗಿದ್ದೇನೆ - ಇಂತಹ ವಿಶೇಷ ಸ್ನೇಹೀ ಆತ್ಮರೂ ಇದ್ದಾರೆ. ಇಂತಹ ಸ್ನೇಹಿ ಮಕ್ಕಳಿಗೆ ಬಾಪ್ದಾದಾರವರು ಸ್ನೇಹದ ರಿಟರ್ನ್ನಲ್ಲಿ ಸ್ನೇಹವನ್ನಂತು ಅವಶ್ಯವಾಗಿ ಕೊಡುತ್ತಾರೆ. ಆದರೆ ಈ ಧೈರ್ಯವನ್ನೂ ಕೊಡುತ್ತಾರೆ - ರಾಜ್ಯಾಧಿಕಾರಿ ಆಗಬೇಕಾಗಿದೆ. ರಾಜ್ಯದಲ್ಲಿ ಬರುವವರಾಗಬೆಕು - ಮತ್ತೆ ಸ್ನೇಹಿಯಾಗಿದ್ದೀರೆಂದರೂ ಸರಿಯೇ. ರಾಜ್ಯಾಧಿಕಾರಿ ಆಗಬೇಕೆಂದರೆ ಸ್ನೇಹದ ಜೊತೆಗೆ ವಿದ್ಯೆಯ ಶಕ್ತಿ ಅರ್ಥಾತ್ ಜ್ಞಾನದ ಶಕ್ತಿ, ಸೇವೆಯ ಶಕ್ತಿ - ಇದೂ ಸಹ ಅವಶ್ಯಕತೆಯಿದೆ. ಆದ್ದರಿಂದ ಧೈರ್ಯ ಮಾಡಿರಿ. ತಂದೆಯ ಸಹಯೋಗಿಯಂತು ಆಗಿಯೇ ಇದ್ದೀರಿ. ಸ್ನೇಹದ ರಿಟರ್ನ್ನಲ್ಲಿ ಸಹಯೋಗವು ಸಿಗಲೇಬೇಕು. ಸ್ವಲ್ಪ ಸಾಹಸದಿಂದ, ಗಮನದಿಂದ ರಾಜ್ಯಾಧಿಕಾರಿ ಆಗಬೇಕು. ಕೇಳಿದಿರೆ - ಇಂದಿನ ಆತ್ಮಿಕ ವಾರ್ತಾಲಾಪದ ಪ್ರತ್ಯುತ್ತರವನ್ನು? ವತನದಲ್ಲಿ ದೇಶ-ವಿದೇಶದ ನಾಲ್ಕೂ ಕಡೆಯಲ್ಲಿರುವ ಮಕ್ಕಳ ಶೋಭೆಯನ್ನು ನೋಡಿದರು. ವಿದೇಶಿ ಮಕ್ಕಳು ಸಹ ಲಾಸ್ಟ್ ಸೋ ಫಾಸ್ಟ್ ಹೋಗಿ, ಫಸ್ಟ್ ಬರುವ ಉಮ್ಮಂಗ-ಉತ್ಸಾಹದಲ್ಲಿ ಬಹಳ ಚೆನ್ನಾಗಿ ಮುಂದುವರೆಯುತ್ತಿದ್ದಾರೆ. ಅವರು ತಿಳಿಯುತ್ತಾರೆ - ವಿದೇಶದ ಲೆಕ್ಕದಿಂದ ಎಷ್ಟೇ ದೂರವಿರಬಹುದು, ಅಷ್ಟೇ ಹೃದಯದಲ್ಲಿ ಸಮೀಪವಿರುತ್ತಾರೆ. ಅಂದಮೇಲೆ ಇಂದಿನ ದಿನವೂ ಸಹ ಒಳ್ಳೊಳ್ಳೆಯ ಉಮ್ಮಂಗ-ಉತ್ಸಾಹದ ಆತ್ಮಿಕ ವಾರ್ತಾಲಾಪವನ್ನು ಮಾಡುತ್ತಿದ್ದರು. ಕೆಲವು ಮಕ್ಕಳು ಬಹಳ ಮಧುರರಿದ್ದಾರೆ. ತಂದೆಯನ್ನೂ ಮಧುರಾತಿ ಮಧುರ ಮಾತುಗಳಿಂದ ಒಲಿಸಿಕೊಳ್ಳುತ್ತಿರುತ್ತಾರೆ. ಹೇಳುತ್ತಾರೆ - ಬಹಳ ಭೋಲಾ ರೂಪದಿಂದ ಆದರೆ ಚತುರರಿದ್ದಾರೆ. ಹೇಳುತ್ತಾರೆ - ತಾವು ಮಾಡಿರಿ. ಹೀಗೆ ಒಲಿಸುತ್ತಾರೆ. ತಂದೆಯವರು ಏನು ಹೇಳುತ್ತಾರೆ? ಖುಷಿಯಾಗಿರಿ, ಸ್ವತಂತ್ರವಾಗಿ ಇರಿ, ವೃದ್ಧಿಯಾಗಿರಿ. ಮಾತುಗಳಂತು ಬಹಳ ಉದ್ದಗಲವಿದೆ, ಎಷ್ಟೆಂದು ತಿಳಿಸುವುದು! ಆದರೆ ಮಾತುಗಳನ್ನಂತು ಎಲ್ಲರೂ ಮಜಾದಿಂದ ಬಹಳ ಚೆನ್ನಾಗಿ ಮಾತನಾಡುತ್ತಾರೆ. ಒಳ್ಳೆಯದು.

ಸದಾ ಸ್ನೇಹ ಮತ್ತು ಸೇವೆಯ ಉಮ್ಮಂಗ-ಉತ್ಸಾಹದಲ್ಲಿರುವ, ಸದಾ ಸುಪಾತ್ರರಾಗಿ ಸರ್ವ ಪ್ರಾಪ್ತಿಗಳ ಪಾತ್ರರಾಗುವ, ಸದಾ ಸ್ವಯಂನ ಕರ್ಮಗಳ ಮೂಲಕ ಬಾಪ್ದಾದಾರವರ ಶ್ರೇಷ್ಠ ದಿವ್ಯ ಕರ್ಮವನ್ನು ಪ್ರತ್ಯಕ್ಷಗೊಳಿಸುವ, ತಮ್ಮ ದಿವ್ಯ ಜೀವನದ ಮೂಲಕ ಬ್ರಹ್ಮಾ ತಂದೆಯ ಜೀವನ ಕಥೆಯನ್ನು ಸ್ಪಷ್ಟ ಮಾಡುವ - ಇಂತಹ ಸದಾ ಜೊತೆಗಾರರಾಗಿರುವ ಸರ್ವ ಮಕ್ಕಳಿಗೂ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ದಾದೀಜಿ ಹಾಗೂ ದಾದಿ ಜಾನಕಿಜೀಯವರು ಬಾಪ್ದಾದಾರವರ ಸನ್ಮುಖದಲ್ಲಿ ಕುಳಿತಿದ್ದಾರೆ:

ಇಂದು ನಿಮ್ಮ ಸಖಿ(ದೀದಿ)ಯವರೂ ಸಹ ವಿಶೇಷವಾಗಿ ನೆನಪು-ಪ್ರೀತಿಯನ್ನು ಕೊಟ್ಟಿದ್ದಾರೆ. ಅವರೂ ಸಹ ವತನದಲ್ಲಿ ಇಮರ್ಜ್ ಆಗಿದ್ದರು. ಅವರೂ ಸಹ ಎಲ್ಲರಿಗೂ ನೆನಪು ಕೊಟ್ಟರು. ಅವರೂ ಸಹ (ಅಡ್ವಾನ್ಸ್ ಪಾರ್ಟಿಯಲ್ಲಿ) ತಮ್ಮ ಸಂಘಟನೆಯನ್ನು ಶಕ್ತಿಶಾಲಿಗೊಳಿಸುತ್ತಿದ್ದಾರೆ. ಅವರ ಕಾರ್ಯವೂ ಸಹ ತಮ್ಮೆಲ್ಲರ ಜೊತೆ ಜೊತೆಗೆ ಪ್ರತ್ಯಕ್ಷವಾಗುತ್ತಾ ಹೋಗುತ್ತದೆ. ಈಗಂತು ಸಂಬಂಧ ಮತ್ತು ದೇಶದ ಸಮೀಪವಿದ್ದಾರೆ, ಆದ್ದರಿಂದ ಅವರಲ್ಲಿಯೂ ಚಿಕ್ಕ-ಚಿಕ್ಕ ಗ್ರೂಪ್ ಕಾರಣ-ಅಕಾರಣದಿಂದ, ಬಯಸದಿದ್ದರೂ ಪರಸ್ಪರದಲ್ಲಿ ಗೊತ್ತಿಲ್ಲದಿದ್ದರೂ ಸೇರುತ್ತಿರುತ್ತಾರೆ. ಇದರ ಸಂಪೂರ್ಣ ಸ್ಮೃತಿಯಿಲ್ಲ ಆದರೆ ಅವರ ಬುದ್ಧಿಯಲ್ಲಿ ಟಚಿಂಗ್ ಇದೆ - ನಾವು ಸೇರಿ ಏನೋ ಹೊಸ ಕಾರ್ಯವನ್ನು ಮಾಡಬೇಕಾಗಿದೆ. ಪ್ರಪಂಚದ ಯಾವ ಸ್ಥಿತಿಯಿದೆ, ಅದರನುಸಾರವಾಗಿ ಏನನ್ನು ಯಾರೂ ಮಾಡಲು ಸಾಧ್ಯವಿಲ್ಲವೋ, ಅದನ್ನು ನಾವು ಒಟ್ಟಿಗೆ ಸೇರಿ ಮಾಡಬೇಕಾಗಿದೆ. ಈ ಟಚಿಂಗ್ನಿಂದ ಪರಸ್ಪರದಲ್ಲಿ ಅವಶ್ಯವಾಗಿ ಭೇಟಿಯಾಗುತ್ತಾರೆ. ಆದರೆ ಈಗಿನ್ನೂ ಕೆಲವು ಚಿಕ್ಕ, ಕೆಲವು ದೊಡ್ಡ ಗ್ರೂಪ್ ಹೀಗಿದೆ. ಆದರೆ ಎಲ್ಲಾ ಪ್ರಕಾರದವರೂ ಹೋಗಿದ್ದಾರೆ. ಕರ್ಮಣಾದವರೂ ಹೋಗಿದ್ದಾರೆ, ರಾಜ್ಯ ಸ್ಥಾಪನೆ ಮಾಡುವ ಪ್ಲಾನಿಂಗ್ ಬುದ್ಧಿಯವರೂ ಹೋಗಿದ್ದಾರೆ. ಜೊತೆ ಜೊತೆಗೆ ಸಾಹಸ, ಉಲ್ಲಾಸವನ್ನು ಹೆಚ್ಚಿಸುವವರೂ ಹೋಗಿದ್ದಾರೆ. ಇಂದು ಇಡೀ ಗ್ರೂಪ್ನಲ್ಲಿ ಈ ಮೂರೂ ಪ್ರಕಾರದ ಮಕ್ಕಳನ್ನು ನೋಡಿದೆವು ಮತ್ತು ಮೂರೂ ಪ್ರಕಾರದವರ ಅವಶ್ಯಕತೆಯಿದೆ. ಕೆಲವರು ಪ್ಲಾನಿಂಗ್ ಬುದ್ಧಿಯವರಿದ್ದಾರೆ, ಕೆಲವರು ಕರ್ಮದಲ್ಲಿ ತರುವವರಾಗಿದ್ದಾರೆ ಮತ್ತು ಕೆಲವರು ಸಾಹಸವನ್ನು ಹೆಚ್ಚಿಸುವವರಾಗಿದ್ದಾರೆ. ಗ್ರೂಪಂತು ಬಹಳ ಚೆನ್ನಾಗಿ ಆಗುತ್ತಿದೆ. ಆದರೆ ಎರಡೂ ಗ್ರೂಪ್ ಜೊತೆ ಜೊತೆಗೆ ಪ್ರತ್ಯಕ್ಷವಾಗುವುದು. ಈಗ ಪ್ರತ್ಯಕ್ಷತೆಯ ವಿಶೇಷತೆಯ ಮೋಡಗಳೊಳಗೆ ಇದ್ದಾರೆ. ಮೋಡಗಳು ಚದುರುತ್ತಿವೆ ಆದರೆ ದೂರವಾಗಿಲ್ಲ. ಎಷ್ಟೆಷ್ಟು ಶಕ್ತಿಶಾಲಿ, ಮಾಸ್ಟರ್ ಜ್ಞಾನಸೂರ್ಯನ ಸ್ಥಿತಿಯಲ್ಲಿ ತಲುಪಿ ಬಿಡುತ್ತಾರೆ, ಹಾಗೆಯೇ ಈ ಮೋಡಗಳು ಚದುರುತ್ತಿವೆ. ಸಮಾಪ್ತಿಯಾಗಿ ಬಿಡುತ್ತದೆಯೆಂದರೆ ಸೆಕೆಂಡಿನಲ್ಲಿ ನಗಾರಿ ಮೊಳಗಿ ಬಿಡುತ್ತದೆ. ಈಗ ಚದುರುತ್ತಿವೆ ಅಷ್ಟೆ. ಆ ಪಾರ್ಟಿಯೂ ಸಹ ತಮ್ಮ ತಯಾರಿಯನ್ನು ಬಹಳ ಚೆನ್ನಾಗಿ ಮಾಡುತ್ತಿದ್ದಾರೆ. ಹೇಗೆ ತಾವುಗಳು ಯೂಥ್ರ್ಯಾಲಿಯ ಪ್ಲಾನಿಂಗ್ ಮಾಡುತ್ತಿದ್ದೀರಲ್ಲವೆ, ಅಂದಮೇಲೆ ಅವರೂ ಸಹ ಈಗ ಯೂಥ್ ಆಗಿದ್ದಾರೆ. ಅವರೂ ಸಹ ಪರಸ್ಪರದಲ್ಲಿ ತಯಾರಿ ಮಾಡುತ್ತಿದ್ದಾರೆ. ಹೇಗೆ ಈಗ ಭಾರತದಲ್ಲಿ ಅನೇಕ ಪಾರ್ಟಿಗಳ ವಿಶೇಷತೆಯೇನಿತ್ತು, ಅದು ಕಡಿಮೆಯಿದೆ, ಆದರೂ ಒಂದು ಪಾರ್ಟಿಯು ಮುಂದುವರೆಯುತ್ತಿದೆಯಲ್ಲವೆ. ಅಂದಮೇಲೆ ಬಾಹ್ಯದ ಏಕತೆಯ ರಹಸ್ಯವೂ ಇದೆ. ಅನೇಕತೆಯು ಬಲಹೀನವಾಗುತ್ತಿದೆ ಮತ್ತು ಒಂದು ಶಕ್ತಿಶಾಲಿಯಾಗುತ್ತಿದೆ. ಈ ಸ್ಥಾಪನೆಯ ರಹಸ್ಯದಲ್ಲಿ ಸಹಯೋಗದ ಪಾತ್ರವಿದೆ. ಮನಸ್ಸಿನಿಂದ ಸಿಕ್ಕಿರುವುದಲ್ಲ, ವಿವಶತೆಯಿಂದ ಸಿಕ್ಕಿರುವುದಾಗಿದೆ. ಆದರೆ ವಿವಶತೆಯ ಮಿಲನದ ರಹಸ್ಯವೂ ಇದೆ. ಈಗ ಸ್ಥಾಪನೆಯ ಗುಹ್ಯ ರೀತಿಯ ಪದ್ಧತಿಯು ಸ್ಪಷ್ಟವಾಗುವ ಸಮಯವು ಸಮೀಪದಲ್ಲಿ ಬರುತ್ತಿದೆ. ನಂತರ ತಾವುಗಳಿಗೆ ಗೊತ್ತಾಗುತ್ತದೆ- ಅಡ್ವಾನ್ಸ್ ಪಾರ್ಟಿಯವರು ಏನು ಮಾಡುತ್ತಿದ್ದಾರೆ ಮತ್ತು ನಾವೇನು ಮಾಡುತ್ತಿದ್ದೇವೆ ಎಂದು. ಈಗ ತಾವೂ ಸಹ ಪ್ರಶ್ನೆ ಮಾಡುತ್ತೀರಿ - ಅವರೇನು ಮಾಡುತ್ತಿದ್ದಾರೆ ಎಂದು ಮತ್ತು ಅವರೂ ಪ್ರಶ್ನೆ ಮಾಡುತ್ತಾರೆ ಇವರೇನು ಮಾಡುತ್ತಿದ್ದಾರೆ ಎಂದು. ಆದರೆ ಇಬ್ಬರೂ ಡ್ರಾಮಾನುಸಾರವಾಗಿ ವೃದ್ಧಿ ಹೊಂದುತ್ತಿದ್ದಾರೆ.

ಜಗದಂಬಾರವರಂತು ಇರುವುದು ಚಂದ್ರಮನಾಗಿ. ಅಂದಮೇಲೆ ಚಂದ್ರಮನು ಜಗದಂಬಾರವರ ಜೊತೆಗೆ ದೀದಿಯವರ ಪಾತ್ರವು ವಿಶೇಷವಾಗಿ ಪ್ರಾರಂಭದಿಂದಲೂ ಇದೆ. ಕಾರ್ಯದಲ್ಲಿ ಜೊತೆಯ ಪಾತ್ರವಿತ್ತು. ಅವರು ಚಂದ್ರಮ(ಶೀತ)ನಿದ್ದಾರೆ ಮತ್ತು ಅವರು(ದೀದಿ) ತೀವ್ರವಾಗಿದ್ದಾರೆ. ಇಬ್ಬರ ಹೋಲಿಕೆಯಿದೆ. ಈಗ ಅವರನ್ನು ಸ್ವಲ್ಪ ದೊಡ್ಡವಾಗಲು ಬಿಡಿ, ಜಗದಂಬಾರವರಂತು ಈಗಲೂ ಶೀತಲತೆಯ ಸಕಾಶವನ್ನು ಕೊಡುತ್ತಿದ್ದಾರೆ. ಆದರೆ ಪ್ಲಾನಿಂಗ್ನಲ್ಲಿ, ಮುಂದೆ ಬರುವುದರಲ್ಲಿ ಜೊತೆಗಾರರೂ ಇರಬೇಕಲ್ಲವೆ. ಪುಷ್ಫಶಾಂತ ಮತ್ತು ದೀದಿ, ಇವರಿಬ್ಬರೂ ಸಹ ಪ್ರಾರಂಭದಲ್ಲಿ ಪರಸ್ಪರದಲ್ಲಿನ ಲೆಕ್ಕವಿದೆ. ಇಲ್ಲಿಯೂ ಇಬ್ಬರ ಲೆಕ್ಕದಿಂದ ಪರಸ್ಪರದಲ್ಲಿ ಸಮೀಪದವರಿದ್ದಾರೆ. ಬಾವು (ವಿಶ್ವಕಿಶೋರ್)ರವರಂತು ಬೆನ್ನೆಲುಬಾಗಿದ್ದಾರೆ. ಇವರಲ್ಲಿಯೂ ಪಾಂಡವರು ಬೆನ್ನೆಲುಬಾಗಿದ್ದಾರೆ, ಶಕ್ತಿಯರು ಮುಂದಿದ್ದಾರೆ. ಅಂದಮೇಲೆ ಅವರೂ ಸಹ ಉಮ್ಮಂಗ-ಉತ್ಸಾಹದಲ್ಲಿ ತರುವಂತಹ ಗ್ರೂಪ್ ಇದ್ದಾರೆ. ಈಗ ಪ್ಲಾನಿಂಗ್ ಮಾಡುವವರು ಸ್ವಲ್ಪ ಮಂದಿ ಮೈದಾನದಲ್ಲಿ ಹೋಗುತ್ತಾರೆ, ನಂತರ ಪ್ರತ್ಯಕ್ಷತೆಯಾಗುತ್ತದೆ. ಒಳ್ಳೆಯದು.

ವಿದೇಶಿ ಸಹೋದರ-ಸಹೋದರಿಯರೊಂದಿಗೆ:- ಎಲ್ಲರೂ ಲಾಸ್ಟ್ ಸೋ ಫಾಸ್ಟ್ ಹೋಗುವವರು ಮತ್ತು ಫಸ್ಟ್ ಬರುವಂತಹ ಉಮ್ಮಂಗ-ಉತ್ಸಾಹವಿರುವವರಲ್ಲವೆ. ಸೆಕೆಂಡ್ ನಂಬರಿನವರಂತು ಯಾರೂ ಇಲ್ಲ. ಲಕ್ಷವು ಶಕ್ತಿಶಾಲಿಯಾಗಿದೆ ಅಂದಮೇಲೆ ಲಕ್ಷಣವೂ ಸ್ವತಹವಾಗಿಯೇ ಶಕ್ತಿಶಾಲಿಯಾಗಿರುತ್ತದೆ. ಎಲ್ಲರೂ ಮುಂದುವರೆಯುವುದರಲ್ಲಿ ಉಮ್ಮಂಗ-ಉತ್ಸಾಹದವರಿದ್ದಾರೆ. ಬಾಪ್ದಾದಾರವರೂ ಸಹ ಪ್ರತಿಯೊಂದು ಮಕ್ಕಳಿಗೂ ಇದನ್ನೇ ಹೇಳುತ್ತಾರೆ - ಸದಾ ಡಬಲ್ಲೈಟ್ ಆಗಿರುತ್ತಾ, ಹಾರುವ ಕಲೆಯಿಂದ ನಂಬರ್ವನ್ ಬರಲೇಬೇಕು. ಹೇಗೆ ತಂದೆಯು ಶ್ರೇಷ್ಠಾತಿ ಶ್ರೇಷ್ಠ ಇದ್ದಾರೆ, ಹಾಗೆಯೇ ಪ್ರತಿಯೊಂದು ಮಗುವೂ ಸಹ ಶ್ರೇಷ್ಠಾತಿ ಶ್ರೇಷ್ಠವಾಗಿದೆ.

ಸದಾ ಉಮ್ಮಂಗ-ಉತ್ಸಾಹದ ರೆಕ್ಕೆಗಳಿಂದ ಹಾರುವವರೇ ಹಾರುವ ಕಲೆಯ ಅನುಭವವನ್ನು ಮಾಡುತ್ತಾರೆ. ಈ ಸ್ಥಿತಿಯಲ್ಲಿ ಸ್ಥಿತರಾಗಿರುವ ಸಹಜ ಸಾಧನವಿದೆ - ಏನೇ ಸೇವೆಯನ್ನು ಮಾಡುತ್ತೀರಿ, ಅದನ್ನು ತಂದೆಯು ಮಾಡಿ-ಮಾಡಿಸುವವರು ಮಾಡಿಸುತ್ತಿದ್ದಾರೆ, ನಾನು ನಿಮಿತ್ತನಿದ್ದೇನೆ, ಮಾಡಿಸುವವರು ಮಾಡಿಸುತ್ತಿದ್ದಾರೆ, ನಡೆಸುತ್ತಿದ್ದಾರೆ. ಈ ಸ್ಮೃತಿಯಿಂದ ಸದಾ ಹಗುರವಾಗಿದ್ದು ಹಾರುತ್ತಿರುತ್ತೀರಿ. ಇದೇ ಸ್ಥಿತಿಯನ್ನು ಸದಾ ಮುಂದುವರೆಸುತ್ತಿರಿ.

ಬೀಳ್ಕೊಡುಗೆಯ ಸಮಯದಲ್ಲಿ:- ಈ ಸಮರ್ಥ ದಿನವು ಸದಾ ಸಮರ್ಥರನ್ನಾಗಿ ಮಾಡುತ್ತಿರುತ್ತದೆ. ಈ ಸಮರ್ಥ ದಿನದಂದು ಯಾರೆಲ್ಲರೂ ಬಂದಿದ್ದೀರಿ, ಅವರು ವಿಶೇಷವಾಗಿ ಸಮರ್ಥ ಭವದ ವರದಾನವನ್ನು ಸದಾ ಜೊತೆಯಿಟ್ಟುಕೊಳ್ಳಿರಿ. ಯಾವುದೇ ಅಂತಹ ಮಾತುಗಳು ಬರುತ್ತದೆಯೆಂದರೆ, ಈ ದಿನ ಮತ್ತು ಈ ವರದಾನವನ್ನು ನೆನಪು ಮಾಡಿಕೊಳ್ಳುತ್ತೀರೆಂದರೆ ಸ್ಮೃತಿಯು ಸಮರ್ಥತೆಯನ್ನು ತರುತ್ತದೆ. ಸೆಕೆಂಡಿನಲ್ಲಿ ಬುದ್ಧಿಯ ವಿಮಾನದ ಮೂಲಕ ಮಧುಬನದಲ್ಲಿ ತಲುಪಿಬಿಡಿ. ಏನಾಗಿದ್ದೆವು, ಹೇಗಿದ್ದೆವು ಮತ್ತು ವರದಾನವೇನು ಸಿಕ್ಕಿತ್ತು ಎನ್ನುವುದು ನೆನಪಿರಲಿ. ಸೆಕೆಂಡಿನಲ್ಲಿ ಮಧುಬನ ನಿವಾಸಿಯಾಗುವುದರಿಂದ ಸಮರ್ಥತೆಯು ಬಂದು ಬಿಡುತ್ತದೆ. ಮಧುಬನದಲ್ಲಿ ತಲುಪುವುದಕ್ಕಂತು ಬರುತ್ತದೆಯಲ್ಲವೆ. ಇದಂತು ಸಹಜವಿದೆ, ಸಾಕಾರದಲ್ಲಿ ನೋಡಿದ್ದೀರಿ. ಪರಮಧಾಮದಲ್ಲಿ ಹೋಗುವುದು ಕಷ್ಟವೆನಿಸಬಹುದು, ಮಧುಬನದಲ್ಲಿ ತಲುಪುವುದಂತು ಕಷ್ಟವಿಲ್ಲ. ಅಂದಮೇಲೆ ಸೆಕೆಂಡಿನಲ್ಲಿ ಟಿಕೆಟ್ ಇಲ್ಲದೆಯೂ, ಖರ್ಚು ಮಾಡದೇ ಮಧುಬನ ನಿವಾಸಿಯಾಗಿಬಿಡಿ. ಹಾಗಾದರೆ ಮಧುಬನವು ಸದಾಕಾಲವೂ ಸಾಹಸ-ಉಲ್ಲಾಸವನ್ನು ಕೊಡುತ್ತಿರುತ್ತದೆ. ಹೇಗೆ ಇಲ್ಲಿ ಎಲ್ಲರೂ ಸಾಹಸ-ಉಲ್ಲಾಸದಲ್ಲಿದ್ದೀರಿ, ಯಾರ ಬಳಿಯೂ ಬಲಹೀನತೆಯಿಲ್ಲ ಅಲ್ಲವೆ. ಅಂದಮೇಲೆ ಇದೇ ಸ್ಮೃತಿಯು ಮತ್ತೆ ಸಮರ್ಥರನ್ನಾಗಿ ಮಾಡಿ ಬಿಡುತ್ತದೆ. ಒಳ್ಳೆಯದು.

ವರದಾನ:  
ವರದಾನ: ಪರಮಾತ್ಮನ ಕಾರ್ಯದಲ್ಲಿ ಸಹಯೋಗಿಯಾಗಿದ್ದು ಸರ್ವರ ಸಹಯೋಗವನ್ನು ಪ್ರಾಪ್ತಿ ಮಾಡಿಕೊಳ್ಳುವ ಸಫಲತಾ ಸ್ವರೂಪ ಭವ.

ಎಲ್ಲಿ ಸರ್ವರ ಉಮ್ಮಂಗ-ಉತ್ಸಾಹವಿದೆಯೋ ಅಲ್ಲಿ ಸಫಲತೆಯು ತಾನಾಗಿಯೇ ಸಮೀಪಕ್ಕೆ ಬಂದು, ಕೊರಳಿನ ಮಾಲೆಯಾಗಿ ಬಿಡುತ್ತದೆ. ಯಾವುದೇ ವಿಶಾಲ ಕಾರ್ಯದಲ್ಲಿ ಪ್ರತಿಯೊಬ್ಬರ ಸಹಯೋಗದ ಬೆರಳು ಇರಬೇಕು. ಸೇವೆಯ ಅವಕಾಶವು ಪ್ರತಿಯೊಬ್ಬರಿಗೂ ಇದೆ, ಯಾವುದೇ ಕಾರಣಗಳನ್ನೂ ಕೊಡಲು ಸಾಧ್ಯವಿಲ್ಲ, ಏನೆಂದರೆ - ನಾನು ಮಾಡಲು ಸಾಧ್ಯವಿಲ್ಲ, ಸಮಯವಿಲ್ಲ ಎಂದು. ಏಳುತ್ತಾ-ಕುಳಿತುಕೊಳ್ಳುತ್ತಾ 10-10 ನಿಮಿಷವೂ ಸೇವೆಯನ್ನು ಮಾಡಿರಿ. ಆರೋಗ್ಯವು ಸರಿಯಿಲ್ಲವೆಂದರೆ ಮನೆಯಲ್ಲಿ ಕುಳಿತು ಮಾಡಿರಿ. ಮನಸ್ಸಾದಿಂದ, ಸುಖದ ವೃತ್ತಿ, ಸುಖಮಯ ಸ್ಥಿತಿಯಿಂದ ಸುಖಮಯ ಸಂಸಾರವನ್ನು ತಯಾರು ಮಾಡಿರಿ. ಪರಮಾತ್ಮನ ಕಾರ್ಯದಲ್ಲಿ ಸಹಯೋಗಿಯಾಗುತ್ತೀರೆಂದರೆ ಸರ್ವರ ಸಹಯೋಗವು ಸಿಗುತ್ತದೆ.

ಸ್ಲೋಗನ್:
ಸ್ಲೋಗನ್: ಪ್ರಕೃತಿ ಪತಿಯ ಸ್ಥಾನದಲ್ಲಿ ಸ್ಥಿತರಾಗಿರುತ್ತೀರೆಂದರೆ ಪರಿಸ್ಥಿತಿಗಳಲ್ಲಿ ಅಪ್ಸೆಟ್ ಆಗುವುದಿಲ್ಲ.