27.05.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯಿಂದ ಶಕ್ತಿಯನ್ನು ತೆಗೆದುಕೊಳ್ಳಬೇಕೆಂದರೆ ಸದಾ ಸೇವೆಯಲ್ಲಿ ತೊಡಗಿರಿ, ಯಾವ ಮಕ್ಕಳು ಎಲ್ಲವನ್ನೂ ತ್ಯಾಗ ಮಾಡಿ ತಂದೆಯ ಸೇವೆಯಲ್ಲಿರುತ್ತಾರೆ ಅವರೇ ತಂದೆಗೆ ಪ್ರಿಯರಾಗುತ್ತಾರೆ, ಅವರೇ ತಂದೆಯ ಹೃದಯವನ್ನೇರುತ್ತಾರೆ”

ಪ್ರಶ್ನೆ:
ಮಕ್ಕಳಿಗೆ ಅವಿನಾಶಿ ಖುಷಿಯಿರುವುದಿಲ್ಲ- ಏಕೆ? ಮುಖ್ಯ ಕಾರಣವೇನು?

ಉತ್ತರ:
ನೆನಪಿನ ಸಮಯದಲ್ಲಿ ಬುದ್ಧಿಯು ಅಲೆದಾಡುತ್ತಿರುತ್ತದೆ, ಸ್ಥಿರವಾದ ಬುದ್ಧಿಯಿಲ್ಲದಿರುವ ಕಾರಣ ಖುಷಿಯಿರುವುದಿಲ್ಲ. ಮಾಯೆಯ ಬಿರುಗಾಳಿ ದೀಪಗಳನ್ನು ಅಲುಗಾಡಿಸಿ ಬಿಡುತ್ತದೆ. ಎಲ್ಲಿಯವರೆಗೆ ಕರ್ಮವು ಅಕರ್ಮವಾಗುವುದಿಲ್ಲ. ಅಲ್ಲಿಯವರೆಗೆ ಖುಷಿಯು ಅವಿನಾಶಿಯಾಗಿರಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳು ಇದೇ ಪರಿಶ್ರಮ ಪಡಬೇಕಾಗುತ್ತದೆ.

ಓಂ ಶಾಂತಿ.
ಯಾವಾಗ ಓಂ ಶಾಂತಿ ಹೇಳುತ್ತೀರಿ ಆಗ ಬಹಳ ಉಲ್ಲಾಸದಿಂದ ನಾನು ಆತ್ಮ ಶಾಂತ ಸ್ವರೂಪನೆಂದು ಹೇಳುತ್ತಾರೆ. ಅರ್ಥ ಎಷ್ಟೊಂದು ಸಹಜವಾಗಿದೆ. ತಂದೆಯೂ ಸಹ ಓಂ ಶಾಂತಿ ಎಂದು ಹೇಳುತ್ತಾರೆ. ದಾದಾರವರೂ ಓಂ ಶಾಂತಿ ಎಂದು ಹೇಳುತ್ತಾರೆ. ಅವರು (ಶಿವ ತಂದೆ) ನಾನು ಪರಮಾತ್ಮನೆಂದು ಹೇಳುತ್ತಾರೆ, ಇವರು ನಾನಾತ್ಮ ಎಂದು ಹೇಳುತ್ತಾರೆ. ನೀವೆಲ್ಲರೂ ನಕ್ಷತ್ರಗಳಾಗಿದ್ದೀರಿ. ಎಲ್ಲಾ ನಕ್ಷತ್ರಗಳಿಗೆ ತಂದೆಯೂ ಬೇಕಾಗಿದೆ. ಸೂರ್ಯ, ಚಂದ್ರ ಹಾಗೂ ಅದೃಷ್ಟ ನಕ್ಷತ್ರಗಳೆಂದು ಹೇಳಲಾಗುತ್ತದೆ. ನೀವು ಮಕ್ಕಳು ಅತಿ ಪ್ರಿಯ ಅದೃಷ್ಟ ನಕ್ಷತ್ರಗಳಾಗಿದ್ದೀರಿ, ಅದರಲ್ಲಿಯೂ ನಂಬರ್ವಾರ್ ಇದ್ದಾರೆ. ರಾತ್ರಿಯ ವೇಳೆ ಚಂದ್ರನು ಬೆಳಗುವಾಗ ಕೆಲವು ನಕ್ಷತ್ರಗಳು ಬಹಳ ಕಡಿಮೆ ಪ್ರಕಾಶತೆಯಿರುತ್ತದೆ. ಕೆಲವು ನಕ್ಷತ್ರಗಳು ಪ್ರಕಾಶತೆಯಿಂದ ಕೂಡಿರುತ್ತದೆ. ಕೆಲವು ನಕ್ಷತ್ರಗಳು ಚಂದ್ರನ ಸಮೀಪದಲ್ಲಿರುತ್ತದೆ, ನಕ್ಷತ್ರಗಳಾಗಿದೆಯಲ್ಲವೆ. ನೀವೂ ಸಹ ಜ್ಞಾನ ನಕ್ಷತ್ರಗಳಾಗಿದ್ದೀರಿ. ಭೃಕುಟಿಯ ಮಧ್ಯ ಅದ್ಭುತವಾಗಿ ಬೆಳಗುತ್ತದೆ. ತಂದೆಯು ತಿಳಿಸುತ್ತಾರೆ- ಈ ಆತ್ಮಗಳು ಬಹಳ ವಂಡರ್ಫುಲ್ ಆಗಿವೆ. ಒಂದು ಅತಿ ಸೂಕ್ಷ್ಮ ಬಿಂದುವಾಗಿದೆ, ಇದನ್ನು ಯಾರೂ ಸಹ ತಿಳಿದುಕೊಂಡಿಲ್ಲ. ಆತ್ಮವೇ ಶರೀರದೊಂದಿಗೆ ಪಾತ್ರವನ್ನಭಿನಯಿಸಬೇಕಾಗುತ್ತದೆ. ಇದು ಬಹಳ ಆಶ್ಚರ್ಯವಾಗಿದೆ. ನೀವು ಮಕ್ಕಳಲ್ಲಿಯೂ ನಂಬರ್ವಾರ್ ಇದ್ದಾರೆ. ಕೆಲವರು ಹಾಗೂ-ಹೀಗೂ ಇರುತ್ತಾರೆ. ಯಾವ ನಕ್ಷತ್ರಗಳು ಪ್ರಕಾಶಮಾನವಾಗಿ ಹೊಳೆಯುತ್ತದೆ, ಬಹಳ ಸೇವೆ ಮಾಡುತ್ತಾರೆಯೋ ಅವರನ್ನೇ ತಂದೆಯೂ ನೆನಪು ಮಾಡುತ್ತಾರೆ, ತಂದೆಯಿಂದ ಅವರಿಗೆ ಶಕ್ತಿ ಸಿಗುತ್ತದೆ. ನಿಮ್ಮ ಬ್ಯಾಟರಿಯು ತುಂಬುತ್ತಾ ಹೋಗುತ್ತದೆ. ತಮೋಪ್ರಧಾನರಿಂದ ಸತೋಪ್ರಧಾನರಾಗಲು ನಂಬರ್ವಾರ್ ಪುರುಷಾರ್ಥದನುಸಾರ ಸರ್ಚ್ಲೈಟ್ (ಶಕ್ತಿ) ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ಯಾರು ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿ ಸೇವೆಯಲ್ಲಿ ತೊಡಗುತ್ತಾರೆ ಅವರು ಬಹಳ ಪ್ರಿಯರಾಗುತ್ತಾರೆ ನನ್ನ ಹೃದಯವನ್ನು ಗೆಲ್ಲುತ್ತಾರೆ. ತಂದೆಯು ಹೃದಯವನ್ನು ಗೆಲ್ಲುವವರಾಗಿದ್ದಾರೆ. ದಿಲ್ವಾಡಾ ಮಂದಿರವೂ ಸಹ ಇದೆಯಲ್ಲವೆ! ಈಗ ಅದು ಹೃದಯರಾಮನ ಹಾಗೂ ಹೃದಯವನ್ನು ಪಡೆಯುವವರ ಮಂದಿರವಾಗಿದೆ. ಯಾರ ಹೃದಯವನ್ನು ತೆಗೆದುಕೊಳ್ಳುತ್ತಾರೆ? ನೀವು ನೋಡಿದ್ದೀರಲ್ಲವೆ. ಪ್ರಜಾಪಿತ ಬ್ರಹ್ಮಾರವರೂ ಸಹ ಕುಳಿತಿದ್ದಾರೆ. ಅವಶ್ಯವಾಗಿ ಅವರಲ್ಲಿ ಶಿವ ತಂದೆಯ ಪ್ರವೇಶವಿರುತ್ತದೆ ಹಾಗೂ ನೀವು ಈ ಮಂದಿರದಲ್ಲಿ ಮೇಲೆ ಸ್ವರ್ಗವನ್ನು, ಕೆಳಗೆ ಮಕ್ಕಳು ತಪಸ್ಸಿನಲ್ಲಿ ಕುಳಿತಿರುವುದನ್ನು ನೋಡುತ್ತೀರಿ. ಇದನ್ನಂತೂ ಅತಿ ಚಿಕ್ಕ ಮಾಡಲ್ ರೂಪದಲ್ಲಿ ಮಾಡಲಾಗಿದೆ. ಇದು ಉತ್ತಮ ಸೇವೆ ಮಾಡುವ ಸಹಯೋಗಿಗಳ ಚಿತ್ರವಾಗಿದೆ. ಮಹಾರಥಿ, ಕುದುರೆ ಸವಾರರು, ಕಾಲಾಳುಗಳು ಇದ್ದಾರಲ್ಲವೆ. ಈ ಮಂದಿರದ ನೆನಪಾರ್ಥವು ಬಹಳ ಚೆನ್ನಾಗಿ ಯಥಾರ್ಥವಾಗಿ ಮಾಡಲ್ಪಟ್ಟಿದೆ. ಇದು ನಮ್ಮದೇ ನೆನಪಾರ್ಥವಾಗಿದೆ ಎಂದು ನೀವು ಹೇಳುತ್ತೀರಿ. ಈಗ ನಿಮಗೆ ಜ್ಞಾನದ ಪ್ರಕಾಶ ಸಿಕ್ಕಿದೆ ಹಾಗೂ ಇದು ಬೇರೆ ಯಾರಿಗೂ ಇಲ್ಲ. ಭಕ್ತಿಮಾರ್ಗದಲ್ಲಿ ಮನುಷ್ಯರಿಗೆ ಏನು ಹೇಳುತ್ತಾರೋ ಸತ್ಯ-ಸತ್ಯ ಎಂದು ಹೇಳುತ್ತಾ ಹೋಗುತ್ತಾರೆ ಆದರೆ ವಾಸ್ತವದಲ್ಲಿ ಅದು ಸುಳ್ಳಾಗಿದೆ. ಅದನ್ನು ಸತ್ಯವೆಂದೇ ತಿಳಿಯುತ್ತಾರೆ. ಈಗ ಯಾವ ತಂದೆಯು ಸತ್ಯವಾಗಿದ್ದಾರೆಯೋ ಅವರೇ ಕುಳಿತು ನಿಮಗೆ ಸತ್ಯವನ್ನು ಹೇಳುತ್ತಾರೆ ಅದರಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ. ತಂದೆಯು ಯಾವುದೇ ಕಷ್ಟ ಕೊಡುವುದಿಲ್ಲ. ಇಡೀ ವೃಕ್ಷದ ರಹಸ್ಯವು ನಿಮ್ಮ ಬುದ್ಧಿಯಲ್ಲಿ ಕುಳಿತಿದೆ. ಇದನ್ನು ನಿಮಗೆ ಬಹಳ ಸುಲಭವಾಗಿ ತಿಳಿಸಲಾಗಿದೆ ಆದರೆ ಸಮಯವೇಕೆ ಹಿಡಿಸುತ್ತದೆ? ಜ್ಞಾನ ಹಾಗೂ ಆಸ್ತಿಯನ್ನು ಪಡೆಯಲು ಸಮಯ ಹಿಡಿಯುವುದಿಲ್ಲ. ಪವಿತ್ರರಾಗುವುದರಲ್ಲಿ ಸಮಯ ಹಿಡಿಸುತ್ತದೆ. ನೆನಪಿನ ಯಾತ್ರೆಯೇ ಮುಖ್ಯವಾಗಿದೆ. ನೀವು ಇಲ್ಲಿಗೆ (ಮಧುಬನ) ಬಂದಾಗ ನೆನಪಿನ ಯಾತ್ರೆಯ ಕಡೆ ಗಮನವಿರುತ್ತದೆ. ಮನೆಗೆ ಹಿಂತಿರುಗಿದ ನಂತರ ಅಷ್ಟೊಂದು ಗಮನವಿರುವುದಿಲ್ಲ. ಇಲ್ಲಿ ಎಲ್ಲವೂ ನಂಬರ್ವಾರ್ ಇದೆ. ಕೆಲವರು ಇಲ್ಲಿ ಕುಳಿತಿದ್ದೂ ಸಹ ಅವರ ಬುದ್ಧಿಯಲ್ಲಿ ಇದೇ ನಶೆಯಿರುತ್ತದೆ- ನಾವು ಮಕ್ಕಳು ಅವರು ತಂದೆಯಾಗಿದ್ದಾರೆ. ಬೇಹದ್ದಿನ ತಂದೆ ಹಾಗೂ ನಾವು ಮಕ್ಕಳು ಕುಳಿತಿದ್ದೇವೆ. ತಂದೆಯು ಈ ಶರೀರದಲ್ಲಿ ಬಂದಿದ್ದಾರೆಂದು ನೀವು ತಿಳಿದಿದ್ದೀರಿ, ದಿವ್ಯ ದೃಷ್ಟಿಯನ್ನು ಕೊಡುತ್ತಿದ್ದಾರೆ, ಸೇವೆಯನ್ನು ಮಾಡುತ್ತಿದ್ದಾರೆ. ಆದ್ದರಿಂದ ಅವರೊಬ್ಬರನ್ನೇ ನೆನಪು ಮಾಡಬೇಕು, ಬೇರೆ ಯಾವ ಕಡೆಯೂ ಬುದ್ಧಿಯು ಹೋಗಬಾರದು. ಸಂದೇಶಿ ಮಕ್ಕಳು ಪೂರ್ಣ ಸಮಾಚಾರವನ್ನು ಕೊಡಬಲ್ಲರು. ಯಾವ ಬುದ್ಧಿಯು ಹೊರಗಡೆ ಅಲೆದಾಡುತ್ತಿದೆ, ಯಾರಿಗೆ ತೂಕಡಿಕೆ ಬರುತ್ತಿದೆ ಎಲ್ಲವನ್ನೂ ತಿಳಿಸಬಲ್ಲರು.

ಯಾವ ನಕ್ಷತ್ರಗಳು ಬಹಳ ಒಳ್ಳೆಯ ಸೇವಾಧಾರಿಗಳಾಗಿರುತ್ತಾರೆಯೋ ಅವರನ್ನೇ ನೋಡುತ್ತಿರುತ್ತೇನೆ, ತಂದೆಗೆ ಪ್ರೀತಿಯಿದೆಯಲ್ಲವೆ. ಅವರು ಸ್ಥಾಪನೆಯಲ್ಲಿ ಸಹಯೋಗ ಕೊಡುತ್ತಾರೆ. ಅದೇ ಕಲ್ಪದ ಹಿಂದಿನಂತೆಯೇ ರಾಜಧಾನಿಯು ಸ್ಥಾಪನೆಯಾಗುತ್ತದೆ, ಅನೇಕ ಬಾರಿ ಆಗಿತ್ತು. ಈ ನಾಟಕದ ಚಕ್ರವು ತಿರುಗುತ್ತಲೇ ಇರುತ್ತದೆ. ಇಲ್ಲಿ ಯಾವುದೇ ಚಿಂತೆಯ ಮಾತಿಲ್ಲ. ತಂದೆಯು ಜೊತೆಯಿದ್ದಾರಲ್ಲವೆ! ಅವರ ಸಂಗದ ರಂಗು ಬೀರುತ್ತದೆ. ಚಿಂತೆಯು ಕಡಿಮೆಯಾಗುತ್ತಾ ಹೋಗುತ್ತದೆ. ಹೀಗೆ ನಾಟಕವು ಮಾಡಲ್ಪಟ್ಟಿದೆ. ತಂದೆಯು ಮಕ್ಕಳಿಗಾಗಿ ರಾಜಧಾನಿಯನ್ನು ತಂದಿದ್ದಾರೆ, ಕೇವಲ ಇಷ್ಟನ್ನೇ ಹೇಳುತ್ತಾರೆ- ಮಧುರಾತಿ ಮಧುರ ಮಕ್ಕಳೇ, ಪತಿತರಿಂದ ಪಾವನ ಆಗಲು ತಂದೆಯನ್ನು ನೆನಪು ಮಾಡಿ. ಈಗ ಮಧುರ ಮನೆಗೆ ಹಿಂತಿರುಗಬೇಕಾಗಿದೆ. ಯಾವುದಕ್ಕಾಗಿ ನೀವು ಅರ್ಧಕಲ್ಪ ಭಕ್ತಿಮಾರ್ಗದಲ್ಲಿ ಕಷ್ಟಪಡುತ್ತಾ ಬಂದಿದ್ದೀರಿ ಆದರೆ ಒಬ್ಬರೂ ಸಹ ಹಿಂತಿರುಗಲು ಸಾಧ್ಯವಿಲ್ಲ. ಈಗ ತಂದೆಯನ್ನು ನೆನಪು ಮಾಡುತ್ತಿರಿ ಹಾಗೂ ಸ್ವದರ್ಶನ ಚಕ್ರವನ್ನು ತಿರುಗಿಸುತ್ತಿರಿ. ಅಲ್ಫ್ ಮತ್ತು ಬೆ (ತಂದೆ ಮತ್ತು ಆಸ್ತಿ) ತಂದೆಯನ್ನು ನೆನಪು ಮಾಡಿ, 84 ಜನ್ಮಗಳ ಚಕ್ರವನ್ನು ತಿರುಗಿಸಿ. ಆತ್ಮನಿಗೆ 84 ಜನ್ಮಗಳ ಚಕ್ರದ ಜ್ಞಾನವಿದೆ. ರಚಯಿತ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ನೀವು ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಬೆಳಗ್ಗೆ ಎದ್ದು ನಿಮ್ಮ ಬುದ್ಧಿಯಲ್ಲಿ ಇದನ್ನೇ ನೆನಪಿಟ್ಟುಕೊಳ್ಳಿ - ಈಗ ನಾವು 84 ಜನ್ಮಗಳ ಚಕ್ರವನ್ನು ಪೂರ್ಣ ಮಾಡಿದೆವು, ಈಗ ಮನೆಗೆ ಹಿಂತಿರುಗಬೇಕು. ಆದುದರಿಂದ ಈಗ ನೀವು ತಂದೆಯನ್ನು ನೆನಪು ಮಾಡಿದಾಗ ಚಕ್ರವರ್ತಿ ರಾಜರಾಗುತ್ತೀರಿ. ಇದು ಎಷ್ಟು ಸಹಜವಲ್ಲವೆ ಆದರೆ ಮಾಯೆಯು ನಿಮ್ಮನ್ನು ಮರೆಸುತ್ತದೆ. ಮಾಯೆಯ ಬಿರುಗಾಳಿಯಿದೆಯಲ್ಲವೆ ಈ ದೀಪಗಳನ್ನು ಸತಾಯಿಸಿ ಬಿಡುತ್ತದೆ. ಮಾಯೆಯ ಬಹಳ ಭಯಂಕರವಾಗಿದೆ. ಮಾಯೆಯಲ್ಲಿ ಇಷ್ಟೂ ಶಕ್ತಿಯಿರುವುದರಿಂದ ಮಕ್ಕಳಿಗೆ ತಂದೆಯ ನೆನಪನ್ನು ಮರೆಯುವಂತೆ ಮಾಡಿ ಬಿಡುತ್ತದೆ, ಆಗ ನಿರಂತರ ಖುಷಿಯಿರುವುದಿಲ್ಲ. ನೀವು ತಂದೆಯನ್ನು ನೆನಪು ಮಾಡಲು ಕುಳಿತುಕೊಳ್ಳಿರಿ. ಕುಳಿತು-ಕುಳಿತಿದ್ದಂತೆಯೇ ಬುದ್ಧಿಯು ಬೇರೆ-ಬೇರೆ ಕಡೆ ಹೊರಟು ಹೋಗುತ್ತದೆ. ಇದೆಲ್ಲವೂ ಗುಪ್ತ ಮಾತುಗಳಾಗಿವೆ. ಎಷ್ಟೇ ಪ್ರಯತ್ನ ಪಟ್ಟರೂ ಕೆಲವರ ಬುದ್ಧಿಯು ತಕ್ಷಣ ಸ್ಥಿರವಾಗಿ ಬಿಡುತ್ತದೆ. ಕೆಲವರಿಗೆ ಎಷ್ಟೇ ಕಷ್ಟ ಪಟ್ಟರೂ ಬುದ್ಧಿಯು ಸ್ಥಿರವಾಗುವುದಿಲ್ಲ, ಇದನ್ನು ಮಾಯೆಯ ಯುದ್ಧವೆಂದು ಹೇಳಲಾಗುವುದು. ಕರ್ಮವನ್ನು ಅಕರ್ಮ ಮಾಡಿಕೊಳ್ಳಲು ಎಷ್ಟೊಂದು ಶ್ರಮ ಪಡಬೇಕಾಗುತ್ತದೆ. ಅಲ್ಲಿ ರಾವಣ ರಾಜ್ಯವಿರುವುದಿಲ್ಲ. ಆದ್ದರಿಂದ ಕರ್ಮ ವಿಕರ್ಮವಾಗುವುದಿಲ್ಲ. ಅಲ್ಲಿ ಮಾಯೆಯ ಉಲ್ಟಾ ಕರ್ಮ ಮಾಡಿಸಲು ಇರುವುದೇ ಇಲ್ಲ್ಲ. ಇದು ರಾವಣ ಹಾಗೂ ರಾಮನ ಆಟವಾಗಿದೆ. ಅರ್ಧಕಲ್ಪ ರಾಮ ರಾಜ್ಯ, ಅರ್ಧಕಲ್ಪ ರಾವಣ ರಾಜ್ಯ, ಹಗಲು ಮತ್ತು ರಾತ್ರಿ. ಸಂಗಮಯುಗದಲ್ಲಿ ಬ್ರಾಹ್ಮಣರು ಮಾತ್ರವೇ ಇರುತ್ತಾರೆ. ಈಗ ನೀವು ಬ್ರಾಹ್ಮಣರು ತಿಳಿದುಕೊಂಡಿದ್ದೀರಿ, ರಾತ್ರಿಯು ಸಮಾಪ್ತಿಯಾಗಿ ಹಗಲು ಪ್ರಾರಂಭವಾಗುತ್ತದೆ. ಆ ಶೂದ್ರ ವರ್ಣದವರು ಇದನ್ನೆಲ್ಲವನ್ನೂ ತಿಳಿದುಕೊಳ್ಳುತ್ತಾರೇನು?

ಮನುಷ್ಯರು ಬಹಳ ಶಬ್ಧದಲ್ಲಿ ಭಕ್ತಿ ಮುಂತಾದವುಗಳ ಹಾಡನ್ನು ಹಾಡುತ್ತಾರೆ ಆದರೆ ನೀವೀಗ ಶಬ್ಧದಿಂದ ದೂರ ಹೋಗಬೇಕಾಗಿದೆ. ನೀವು ತಂದೆಯ ನೆನಪಿನಲ್ಲಿ ಮಸ್ತರಾಗಿರುತ್ತೀರಿ, ಆತ್ಮನಿಗೆ ಜ್ಞಾನದ ಮೂರನೆಯ ನೇತ್ರ ಸಿಕ್ಕಿದೆ, ಈಗ ಆತ್ಮವು ತಿಳಿದುಕೊಂಡಿದೆ - ತಂದೆಯನ್ನು ನೆನಪು ಮಾಡಬೇಕು. ಭಕ್ತಿಮಾರ್ಗದಲ್ಲಿ ಶಿವ ತಂದೆ, ಶಿವ ತಂದೆ ಎಂದು ಹೇಳುತ್ತಾ ಬಂದಿದ್ದೀರಿ. ಶಿವನ ಮಂದಿರದಲ್ಲಿ ಶಿವ ತಂದೆ ಎಂದು ಅಗತ್ಯವಾಗಿ ಹೇಳುತ್ತಾರೆ. ಅವರಂತೂ ಲಿಂಗವೆಂದೇ ತಿಳಿದಿದ್ದಾರೆ. ಈಗ ನಿಮಗೆ ಆ ಜ್ಞಾನವು ಸಿಕ್ಕಿದೆ, ಅವರು ಲಿಂಗದ ಮೇಲೆ ಅಭಿಷೇಕ ಮಾಡುತ್ತಾರೆ! ಸಾಕಾರವಾಗಿದ್ದಲ್ಲಿ ಸ್ವೀಕಾರ ಮಾಡುತ್ತಿದ್ದರು. ನಿರಾಕಾರನ ಮೇಲೆ ಹಾಲನ್ನೆರೆದರೆ ಅವರು ಏನು ಮಾಡುತ್ತಾರೆ! ತಂದೆಯು ತಿಳಿಸುತ್ತಾರೆ - ಹಾಲು ಮುಂತಾದವುಗಳನ್ನು ನೀವು ಅರ್ಪಿಸುತ್ತೀರಿ ಅದನ್ನೂ ನೀವೇ ಕುಡಿಯುತ್ತೀರಿ, ನೈವೇದ್ಯ ಮುಂತಾದವನ್ನು ನೀವೇ ತಿನ್ನುತ್ತೀರಿ. ಈಗಂತೂ ನಾನು ಸನ್ಮುಖದಲ್ಲಿದ್ದೇನೆ. ಮೊದಲಂತೂ ಅಪರೋಕ್ಷವಾಗಿದ್ದೆನು ಈಗ ಪ್ರತ್ಯಕ್ಷವಾಗಿ ಕೆಳಗಿಳಿದು ಪಾತ್ರವನ್ನಭಿನಯಿಸುತ್ತಿದ್ದೇನೆ, ಶಕ್ತಿಯನ್ನೂ ಕೊಡುತ್ತಿದ್ದೇನೆ ಆದ್ದರಿಂದ ಮಕ್ಕಳೂ ಸಹ ತಂದೆಯ ಬಳಿಗೆ ಹೋಗಬೇಕು ಎಂದು ಮಧುಬನಕ್ಕೆ ಹೋಗುತ್ತಾರೆ. ಅಲ್ಲಿ ನಮ್ಮ ಬ್ಯಾಟರಿಯು ಚೆನ್ನಾಗಿ ಚಾರ್ಜ್ ಆಗುತ್ತದೆ. ಮನೆಯಲ್ಲಂತೂ ನಿರಂತರ ಕೆಲಸ-ಕಾರ್ಯದ ಮಧ್ಯದಲ್ಲಿ ಅಶಾಂತಿಯೇ ಅಶಾಂತಿಯಿರುತ್ತದೆ. ಈ ಸಮಯದಲ್ಲಿ ಇಡೀ ವಿಶ್ವದಲ್ಲಿ ಅಶಾಂತಿಯಿದೆ. ನಾವೀಗ ಯೋಗಬಲದಿಂದ ಶಾಂತಿ ಸ್ಥಾಪನೆ ಮಾಡುತ್ತಿದ್ದೇವೆಂದು ನೀವು ತಿಳಿದಿದ್ದೀರಿ. ಬಾಕಿ ವಿದ್ಯೆಯಿಂದ ರಾಜ್ಯ ಸಿಗುತ್ತದೆ. ಕಲ್ಪದ ಹಿಂದೆ ಇದನ್ನು ನೀವೆ ಕೇಳಿದ್ದಿರಿ, ಈಗಲೂ ಕೇಳುತ್ತಿದ್ದೀರಿ. ಈಗ ಯಾವ ಪಾತ್ರವು ನಡೆಯುತ್ತದೆ ಅದು ಪುನಃ ನಡೆಯುತ್ತದೆ. ತಂದೆಯು ತಿಳಿಸುತ್ತಾರೆ- ಎಷ್ಟೊಂದು ಮಕ್ಕಳು ಆಶ್ಚರ್ಯವಾಗಿ ಹೊರಟು ಹೋದರು. ನಾನು ಪ್ರಿಯತಮನನ್ನು ಎಷ್ಟೊಂದು ನೆನಪು ಮಾಡುತ್ತಿದ್ದರು, ಈಗ ನಾನು ಬಂದಿದ್ದೇನೆ ಆದರೂ ನನ್ನನ್ನು ಬಿಟ್ಟು ಹೊರಟು ಹೋಗುತ್ತಾರೆ. ಮಾಯೆಯು ದೊಡ್ಡ ಪೆಟ್ಟನ್ನು ಕೊಟ್ಟು ಬಿಡುತ್ತದೆ. ಬ್ರಹ್ಮಾ ಅನುಭವಿಯಾಗಿದ್ದಾರಲ್ಲವೆ. ತಂದೆಗೆ ತಮ್ಮ ಇಡೀ ಚರಿತ್ರೆಯೇ ನೆನಪಿದೆ. ತಲೆಯ ಮೇಲೆ ಒಂದು ಟೋಪಿಯನ್ನು ಇಟ್ಟುಕೊಂಡು ಬರಿಗಾಲಿನಲ್ಲಿ ನಡೆಯುತ್ತಿದ್ದರು.... ಮುಸಲ್ಮಾನರು ಅವರನ್ನು ಬಹಳ ಪ್ರೀತಿ ಮಾಡುತ್ತಿದ್ದರು. ಬಹಳ ವಿಚಾರಿಸಿಕೊಳ್ಳುತ್ತಿದ್ದರು. ಮಾಸ್ಟರ್ಜಿನ ಮಗ ಬಂದಿದ್ದಾರೆ, ಬಂದಿದ್ದಾರೆ.... ಅಂದರೆ ಗುರುಗಳ ಮಗ ಬಂದಿದ್ದಾರೆಂದು ಅಲ್ಲಿರುವ ತಿಂಡಿ (ನವಣೆಯ ರೊಟ್ಟಿ) ಯನ್ನು ತಿನ್ನಿಸುತ್ತಿದ್ದರು. ಯಜ್ಞದಲ್ಲಿಯೂ ಬಾಬಾ 15 ದಿನಗಳು ನವಣೆ ರೊಟ್ಟಿ ಹಾಗೂ ಮಜ್ಜಿಗೆಯನ್ನು ತಿನ್ನಲು ಕಾರ್ಯಕ್ರಮ ಕೊಟ್ಟರು. ಬೇರೇನೂ ಅಡಿಗೆಯು ತಯಾರಾಗುತ್ತಿರಲಿಲ್ಲ. ಆರೋಗ್ಯವು ಇಲ್ಲದವರಿಗೂ ಇದೇ ತಯಾರಾಗುತ್ತಿತ್ತು ಆದರೆ ಯಾರಿಗೂ ತೊಂದರೆಯಾಗಲಿಲ್ಲ. ಇನ್ನೂ ಆರೋಗ್ಯವಿಲ್ಲದವರು ಇಮ್ಮಡಿಯಷ್ಟು ಆರೋಗ್ಯವಂತರಾದರು. ಆಗ ತಂದೆಯು ಮಕ್ಕಳಲ್ಲಿ ಆಸಕ್ತಿಯು ಮುರಿದಿದೆಯೇ ಎಂದು ಪರೀಕ್ಷೆ ಮಾಡುತ್ತಿದ್ದರು. ಇದು ಬೇಕು ಇದು ಬೇಡ ಎನ್ನುತ್ತಾರೆಯೇ ಎಂದು ನೋಡುತ್ತಿದ್ದರು. ಇಚ್ಛೆಗೆ ಜಮಾದಾರ್ (ಕಾವಲುಗಾರ) ಎಂದು ಹೇಳುತ್ತಾರೆ. ಇಲ್ಲಿ ಬೇಡುವುದಕ್ಕಿಂತ ಸಾಯುವುದು ಲೇಸು ಎಂದು ತಂದೆಯು ಹೇಳುತ್ತಾರೆ. ಮಕ್ಕಳಿಗೆ ಏನು ಕೊಡಬೇಕೆಂದು ತಂದೆಗೆ ಗೊತ್ತಿದೆ. ಅವಶ್ಯಕತೆಯಿರುವುದನ್ನು ತಾನೇ ಕೊಡುತ್ತಾರೆ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ.

ತಂದೆಯು ಕೇಳಿದ್ದರು - ಯಾರು ತಂದೆಯನ್ನು ತಂದೆ ಹಾಗೂ ಮಗ ಎಂದು ತಿಳಿದುಕೊಳ್ಳುತ್ತೀರಿ ಅವರು ಕೈಯತ್ತಿ. ಎಲ್ಲರೂ ಕೈಯತ್ತಿದರು. ಕೈಯನ್ನೇನೋ ಎತ್ತುತ್ತೀರಿ ಹಾಗೆಯೇ ಲಕ್ಷ್ಮೀ-ನಾರಾಯಣ ಯಾರಾಗುತ್ತೀರೆಂದು ಕೇಳಿದರೆ ಎಲ್ಲರೂ ಕೈಯತ್ತುತ್ತಾರೆ. ಹಾಗೆಯೇ ಪಾರಲೌಕಿಕ ಮಗನನ್ನೂ ಜೊತೆಯಲ್ಲಿ ಸೇರಿಸಿಕೊಳ್ಳುತ್ತೀರಿ! ಅವರಂತೂ ತಾಯಿ-ತಂದೆಗೆ ಬಹಳ ಸೇವೆ ಮಾಡುತ್ತಾರೆ, 21 ಜನ್ಮಗಳಿಗೆ ಆಸ್ತಿಯನ್ನು ಕೊಡುತ್ತಾರೆ. ಯಾವಾಗ ತಂದೆಯು ವಾನಪ್ರಸ್ಥದಲ್ಲಿ ಹೋಗುತ್ತಾರೆಯೋ ಆಗ ತಂದೆಯನ್ನು ಸಂಭಾಲನೆ ಮಾಡುವುದು ಮಕ್ಕಳ ಕರ್ತವ್ಯವಾಗಿರುತ್ತದೆ. ಆಗ ತಂದೆ-ತಾಯಿಯು ಸನ್ಯಾಸಿಯಂತೆ ಆಗಿ ಬಿಡುತ್ತಾರೆ. ಹೇಗೆ ಇವರ (ಬ್ರಹ್ಮಾ) ಲೌಕಿಕ ತಂದೆಯಿದ್ದರು, ವಾನಪ್ರಸ್ಥ ಸ್ಥಿತಿಯಾದಾಗ ನಮ್ಮನ್ನು ಕಾಶಿಗೆ ಕರೆದುಕೊಂಡು ಹೋಗು ಅಲ್ಲಿ ಹೋಗಿ ಸತ್ಸಂಗ ಮಾಡೋಣ ಎಂದು ಕೇಳಿದ್ದರು. (ಯಜ್ಞದ ಚರಿತ್ರೆ ತಿಳಿಸಿ) ನೀವು ಬ್ರಾಹ್ಮಣರು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಪ್ರಜಾಪಿತ ಬ್ರಹ್ಮಾ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದಾರೆ. ಅವರು ಸೃಷ್ಟಿರೂಪಿ ವೃಕ್ಷಕ್ಕೆ ಎಲ್ಲದಕ್ಕಿಂತ ಮೊದಲ ಎಲೆಯಾಗಿದ್ದಾರೆ. ಅವರಿಗೆ ಜ್ಞಾನ ಸಾಗರನೆಂದು ಹೇಳಲಾಗುವುದಿಲ್ಲ. ಬ್ರಹ್ಮಾ-ವಿಷ್ಣು-ಶಂಕರರು ಜ್ಞಾನ ಸಾಗರರಲ್ಲ. ಶಿವ ತಂದೆಯು ಬೇಹದ್ದಿನ ತಂದೆಯಾಗಿದ್ದಾರೆ, ಅವರಿಂದ ಆಸ್ತಿಯು ಸಿಗುತ್ತದೆ. ಆ ನಿರಾಕಾರ ಪರಮಪಿತ ಪರಮಾತ್ಮ ಹೇಗೆ ಬಂದರು ಅವರ ಜಯಂತಿಯನ್ನು ಆಚರಿಸುತ್ತಾರೆ ಆದರೆ ಇದು ಯಾರಿಗೂ ಗೊತ್ತಿಲ್ಲ. ಅವರು ಗರ್ಭದಲ್ಲಿ ಬರುವುದಿಲ್ಲ, ನಾನು ಇವರ ಅನೇಕ ಜನ್ಮಗಳ ಅಂತ್ಯದಲ್ಲಿ, ವಾನಪ್ರಸ್ಥ ಸ್ಥಿತಿಯಲ್ಲಿ ನಾನು ಪ್ರವೇಶ ಮಾಡುತ್ತೇನೆಂದು ಹೇಳುತ್ತಾರೆ. ಯಾವಾಗ ಮನುಷ್ಯರು ಸನ್ಯಾಸ ಮಾಡುತ್ತಾರೆ, ಆಗ ಅವರಿಗೆ ವಾನಪ್ರಸ್ಥ ಸ್ಥಿತಿಯಂದು ಹೇಳಲಾಗುವುದು. ಅದೇ ರೀತಿ ಈಗ ತಂದೆಯು ನಿಮಗೆ ತಿಳಿಸುತ್ತಾರೆ- ಮಕ್ಕಳೇ, ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಇದರ ಲೆಕ್ಕವನ್ನಂತೂ ತೆಗೆದುಕೊಂಡಿದ್ದೀರಲ್ಲವೆ. ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ. ಪ್ರವೇಶ ಮಾಡಿ ಎಲ್ಲಿ ಬಂದು ಕುಳಿತುಕೊಳ್ಳುತ್ತೇನೆ. ಇವರ ಆತ್ಮವು ಎಲ್ಲಿ ಕುಳಿತಿದೆಯೋ ಅಲ್ಲಿ ಬಂದು ಪಕ್ಕದಲ್ಲಿ ಕುಳಿತುಕೊಳ್ಳುತ್ತೇನೆ. ಹೇಗೆ ಗುರುಗಳು ತಮ್ಮ ಪಕ್ಕ ಶಿಷ್ಯರನ್ನು ಗದ್ದುಗೆಯಲ್ಲಿ ಕುಳ್ಳರಿಸುತ್ತಾರೆಯೋ ಹಾಗೆಯೇ ಇವರ ಸ್ಥಾನವೂ ಸಹ ಇದಾಗಿದೆ, ನನ್ನದೂ ಸಹ ಇದೇ ಸ್ಥಾನವಾಗಿದೆ. ಹೇಳುತ್ತೇನೆ- ಹೇ ಆತ್ಮಗಳೇ, ನನ್ನೊಬ್ಬನನ್ನೆ ನೆನಪು ಮಾಡಿ ಆಗ ಪಾಪವು ನಾಶವಾಗುತ್ತದೆ. ಮನುಷ್ಯರಿಂದ ದೇವತೆಯಾಗಬೇಕಲ್ಲವೆ. ಇದು ರಾಜಯೋಗವಾಗಿದೆ. ಹೊಸ ಪ್ರಪಂಚಕ್ಕಾಗಿ ರಾಜಯೋಗದ ಅವಶ್ಯಕತೆಯಿದೆ. ತಂದೆಯು ತಿಳಿಸುತ್ತಾರೆ - ನಾನು ಆದಿ ಸನಾತನ ದೇವಿ-ದೇವತಾ ಧರ್ಮದ ತಳಹದಿಯನ್ನು ಹಾಕಲು ಬಂದಿದ್ದೇನೆ. ಗುರುಗಳು ಅನೇಕರಿದ್ದಾರೆ, ಸದ್ಗುರುವು ಒಬ್ಬರೇ ಇದ್ದಾರೆ ಉಳಿದೆಲ್ಲವೂ ಅಸತ್ಯವಾಗಿದೆ.

ನೀವು ತಿಳಿದುಕೊಂಡಿದ್ದೀರಿ- ಒಂದು ರುದ್ರ ಮಾಲೆ, ಮತ್ತೊಂದು ವಿಷ್ಣುವಿನ ವೈಜಯಂತಿ ಮಾಲೆಯಾಗಿದೆ. ಅದಕ್ಕಾಗಿ ನೀವು ಪುರುಷಾರ್ಥ ಮಾಡುತ್ತಿದ್ದೀರಿ. ತಂದೆಯ ನೆನಪು ಮಾಡಿದಾಗ ಮಾಲೆಯ ಮಣಿಯಾಗುತ್ತೀರಿ. ಆ ಮಾಲೆಯನ್ನು ನೀವು ಭಕ್ತಿಮಾರ್ಗದಲ್ಲಿ ಸ್ಮರಣೆ ಮಾಡುತ್ತೀರಿ ಆದರೆ ಈ ಮಾಲೆಯು ಯಾರದಾಗಿದೆ, ಮೇಲಿರುವ ಹೂ ಯಾರು? ಹೂ ಯಾರಾಗಿದ್ದಾರೆ? ಮಣಿಗಳು ಯಾರಾಗಿದ್ದಾರೆ? ಎನ್ನುವುದನ್ನೆಲ್ಲಾ ತಿಳಿದುಕೊಂಡಿಲ್ಲ. ಯಾರ ಮಾಲೆಯನ್ನು ಜಪ ಮಾಡುತ್ತೇವೆಯೋ ಅದರ ಬಗ್ಗೆ ಸ್ವಲ್ಫವೂ ತಿಳಿದಿಲ್ಲ. ಹಾಗೆಯೇ ರಾಮ-ರಾಮ ಎಂದು ಹೇಳುತ್ತಾ ಜಪ ಮಾಡುತ್ತಿರುತ್ತಾರೆ. ರಾಮ-ರಾಮ ಎಂದು ಹೇಳುವುದರಿಂದ ಎಲ್ಲೆಲ್ಲಿಯೂ ರಾಮನೇ ರಾಮನಿದ್ದಾನೆ ಎಂದು ತಿಳಿದುಕೊಳ್ಳುತ್ತಾರೆ. ಸರ್ವವ್ಯಾಪಿಯ ಮಾತಿನ ಅಂಧಕಾರ ಇದರಿಂದ ಬಂದಿದೆ. ಮಾಲೆಯ ಅರ್ಥವನ್ನೂ ತಿಳಿದುಕೊಂಡಿಲ್ಲ. ಯಾರೋ 100 ಬಾರಿ ಜಪ ಮಾಡಿ ಎಂದು ಹೇಳಿದರೆ ಅವರು ಮಾಲೆಯನ್ನು ಜಪಮಾಡಲು ತೊಡಗುತ್ತಾರೆ. ತಂದೆಯಂತೂ ಅನುಭವಿಯಲ್ಲವೆ! ಇವರು 12 ಗುರುಗಳ ಅನುಭವ ಮಾಡಿದ್ದಾರೆ. ಇಂತಹವರೂ ಬಹಳ ಜನರಿದ್ದಾರೆ. ತಮ್ಮ ಗುರುಗಳಿದ್ದರೂ ಸಹ ಇನ್ನೂ ಹೆಚ್ಚಿನದಾಗಿ ಅನುಭವಕ್ಕಾಗಿ ಅನ್ಯರ ಬಳಿ ಹೋಗುತ್ತಾರೆ. ಮಾಲೆ ಮುಂತಾದವುಗಳನ್ನು ಜಪ ಮಾಡುತ್ತಾರೆ. ಇದು ಖಂಡಿತ ಅಂಧಶ್ರದ್ಧೆಯಾಗಿದೆ. ಮಾಲೆಯು ಮುಗಿದ ನಂತರ ಹೂವಿಗೆ ನಮಸ್ಕಾರ ಮಾಡುತ್ತಾರೆ. ಇಲ್ಲಂತೂ ತಂದೆಯೇ ಹೂವಾಗಿದ್ದಾರೆ, ಮಾಲೆಯ ಮಣಿ ನೀವು ಅನನ್ಯ ಮಕ್ಕಳೇ ಆಗುತ್ತಿರಿ ನಂತರ ನಿಮ್ಮ ಸ್ಮರಣೆ ಮಾಡುತ್ತಾರೆ. ಕೆಲವರು ರಾಮನೆಂದು, ಕೆಲವರು ಕೃಷ್ಣನೆಂದು ನೆನಪು ಮಾಡುತ್ತಾರೆ ಆದರೆ ಅರ್ಥವನ್ನಂತೂ ತಿಳಿದುಕೊಂಡೇ ಇಲ್ಲ. ಶ್ರೀಕೃಷ್ಣ ಶರಣಂ ಎಂದು ಹೇಳಿ ಬಿಡುತ್ತಾರೆ....... ಅವನು ಸತ್ಯಯುಗದ ರಾಜಕುಮಾರನಾಗಿದ್ದನು. ಅವನ ಶರಣವನ್ನು ಹೇಗೆ ತೆಗೆದುಕೊಳ್ಳುತ್ತಾರೆ. ನೀವೇ ಪೂಜ್ಯರಿಂದ ಪೂಜಾರಿಗಳಾಗುತ್ತೀರಿ. ನೀವೇ 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿದ್ದೀರಿ. ಆದ್ದರಿಂದ ಶಿವ ತಂದೆಗೆ ತಿಳಿಸುತ್ತಾರೆ- ಹೇ ಹೂವೇ, ನಮ್ಮನ್ನು ನಿಮ್ಮ ಸಮಾನ ಮಾಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಯಾವುದೇ ಪ್ರಕಾರದ ಇಚ್ಛೆಯನ್ನಿಟ್ಟುಕೊಳ್ಳಬಾರದು. ಆಸಕ್ತಿಯನ್ನು ಸಮಾಪ್ತಿ ಮಾಡಿಕೊಳ್ಳಬೇಕು. ತಂದೆಯು ಏನನ್ನು ತಿನ್ನಿಸುತ್ತಾರೆ..... ತಂದೆಯ ಆದೇಶವಾಗಿದೆ- ಬೇಡುವುದಕ್ಕಿಂತ ಸಾಯುವುದು ಲೇಸು.

2. ತಂದೆಯಿಂದ ಸರ್ಚ್ಲೈಟ್ ತೆಗೆದುಕೊಳ್ಳಲು ಒಬ್ಬ ತಂದೆಯೊಂದಿಗೆ ಸತ್ಯ ಪ್ರೀತಿ ಇಡಬೇಕು. ಬುದ್ಧಿಯಲ್ಲಿ ನಶೆಯಿರಲಿ- ನಾವು ಮಕ್ಕಳು, ಅವರು ತಂದೆಯಾಗಿದ್ದಾರೆ. ಅವರ ಸರ್ಚ್ಲೈಟ್ನಿಂದ ನಾವು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು.


ವರದಾನ:
ಶ್ರೇಷ್ಠ ಪ್ರಾಪ್ತಿಗಳ ಪ್ರತ್ಯಕ್ಷ ಫಲದ ಮೂಲಕ ಸದಾ ಖುಷಿಯಾಗಿರುವ ಸದಾ ಆರೋಗ್ಯವಂತ (ಎವರಹೆಲ್ದೀ) ಭವ.

ಸಂಗಮಯುಗದಲ್ಲಿ ಈಗೇಗ ಮಾಡಿದಿವಿ ಮತ್ತೆ ಈಗೀಗ ಶ್ರೇಷ್ಠ ಪ್ರಾಪ್ತಿಯ ಅನುಭೂತಿ ಆಯಿತು – ಇದೇ ಪ್ರತ್ಯಕ್ಷ ಫಲ ಆಗಿದೆ. ಎಲ್ಲದಕ್ಕಿಂತ ಶ್ರೇಷ್ಠ ಫಲ ಸಮೀಪತೆಯ ಅನುಭವ ಆಗುವುದು. ಈಗಿನ ಸಮಯದಲ್ಲಿ ಸಾಕಾರ ಪ್ರಪಂಚದಲ್ಲಿ ಹಣ್ಣು ತಿಂದಾಗ ಆರೋಗ್ಯವಂತರಾಗಿರುತ್ತಾರೆ ಎಂದು ಹೇಳುತ್ತಾರೆ. ಆರೋಗ್ಯವಾಗಿರಲು ಸಾಧನೆ ಫಲ ಎಂದು ಹೇಳುತ್ತಾರೆ, ತಾವು ಮಕ್ಕಳು ಪ್ರತಿಯೊಂದು ಸೆಕೆಂಡ್ ಪ್ರತ್ಯಕ್ಷ ಫಲವನ್ನು ತಿನ್ನುತ್ತಲೇ ಇರುತ್ತೀರಿ. ಆದ್ದರಿಂದ ಎವರಹೆಲ್ದೀ ಆಗಿಯೇ ಇದ್ದೀರಿ. ಒಂದುವೇಳೆ ಯಾರಾದರೂ ತಮ್ಮ ಕ್ಷೇಮ ಸಮಾಚಾರ ಕೇಳಿದಾಗ ಹೇಳಿ ಸದಾ ಖುಷಿಯಾಗಿರುತ್ತೇವೆ ಹಾಗೂ ಫರಿಸ್ಥಾ ಆಗಿದ್ದೇವೆ ಎಂದು.

ಸ್ಲೋಗನ್:
ಸರ್ವರ ಆಶೀರ್ವಾದದ ಖಜಾನೆಯಿಂದ ಸಂಪನ್ನರಾದಾಗ ಪುರುಷಾರ್ಥದಲ್ಲಿ ಪರಿಶ್ರಮ ಮಾಡಬೇಕಾಗಿಲ್ಲ.