16.06.19 Avyakt Bapdada
Kannada
Murli
12.12.84 Om Shanti Madhuban
“ವಿಶೇಷ ಆತ್ಮರ ಕರ್ತವ್ಯ”
ಇಂದು ಹೃದಯರಾಮ ತಂದೆಯು
ತನ್ನ ದಿಲ್ಖುಷ್ ಮಕ್ಕಳನ್ನು ಮಿಲನ ಮಾಡಲು ಬಂದಿದ್ದಾರೆ. ಇಡೀ ವಿಶ್ವದಲ್ಲಿ ಸದಾ ದಿಲ್ಖುಷ್ ತಾವು
ಮಕ್ಕಳೇ ಆಗಿದ್ದೀರಿ. ಬಾಕಿ ಮತ್ತೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಒಂದಲ್ಲ ಒಂದು ಹೃದಯದ
ನೋವಿನಲ್ಲಿ ದುಃಖಿಯಾಗಿದ್ದಾರೆ. ಹೀಗೆ ಹೃದಯದ ನೋವನ್ನು ಹರಣ ಮಾಡುವಂತಹ ದುಃಖಹರ್ತ ಸುಖದಾತಾ
ತಂದೆಯ ಸುಖ ಸ್ವರೂಪರು ತಾವು ಮಕ್ಕಳಾಗಿದ್ದೀರಿ. ಮತ್ತೆಲ್ಲರ ಹೃದಯದ ನೋವಿನ ಕೂಗು ಅಯ್ಯೊ-ಅಯ್ಯೊ
ಎನ್ನುವುದು ಬರುತ್ತದೆ ಮತ್ತು ತಾವು ದಿಲ್ಖುಷ್ ಮಕ್ಕಳ ಹೃದಯದಿಂದ ವಾಹ್-ವಾಹ್ನ ಧ್ವನಿಯು ಬರುತ್ತದೆ.
ಹೇಗೆ ಸ್ಥೂಲ ಶರೀರದ ನೋವು ಭಿನ್ನ-ಭಿನ್ನ ಪ್ರಕಾರದ್ದಿದೆ. ಹೀಗೆ ಇಂದಿನ ಮನುಷ್ಯಾತ್ಮರ ಹೃದಯದ
ನೋವುಗಳೂ ಸಹ ಅನೇಕ ಪ್ರಕಾರದ್ದಿದೆ. ಕೆಲವೊಮ್ಮೆ ತನುವಿನ ಕರ್ಮಭೋಗದ ನೋವು, ಕೆಲವೊಮ್ಮೆ
ಸಂಬಂಧ-ಸಂಪರ್ಕದಿಂದ ದುಃಖಿಯಾಗಿರುವ ನೋವು, ಕೆಲವೊಮ್ಮೆ ಹಣವು ಹೆಚ್ಚಾಗಿ ಬಂದಿತು ಅಥವಾ
ಕಡಿಮೆಯಾಯಿತು, ಎರಡರಲ್ಲಿಯೂ ಚಿಂತೆಯ ನೋವು, ಮತ್ತೆ ಕೆಲವೊಮ್ಮೆ ಪ್ರಕೃತಿಯ ಆಪತ್ತುಗಳಿಂದ
ಪ್ರಾಪ್ತಿಯಾದ ದುಃಖದ ನೋವು. ಹೀಗೆ ಒಂದು ನೋವಿನಿಂದ ಅನೇಕ ನೋವುಗಳುಂಟಾಗುತ್ತಿರುತ್ತವೆ. ವಿಶ್ವವೇ
ದುಃಖ ನೋವಿನ ಧ್ವನಿಯನ್ನು ಉಂಟು ಮಾಡುವುದಾಗಿ ಬಿಟ್ಟಿದೆ. ಇಂತಹ ಸಮಯದಲ್ಲಿ ತಾವು ಸುಖ ಕೊಡುವ,
ಸುಖ ಸ್ವರೂಪ ಮಕ್ಕಳ ಕರ್ತವ್ಯವೇನಾಗಿದೇ? ಜನ್ಮ-ಜನ್ಮದ ದುಃಖ-ನೋವಿನ ಸಾಲದಿಂದ ಎಲ್ಲರನ್ನೂ
ಬಿಡಿಸಿರಿ. ಈ ಹಳೆಯ ಸಾಲ, ದುಃಖ-ನೋವಿನ ಚಿಂತೆಯಾಗಿ ಬಿಟ್ಟಿದೆ. ಇಂತಹ ಸಮಯದಲ್ಲಿ ತಮ್ಮೆಲ್ಲರ
ಕರ್ತವ್ಯವಾಗಿದೆ- ದಾತನಾಗಿದ್ದು ಯಾವ ಆತ್ಮನಿಗೆ ಯಾವ ಪ್ರಕಾರದ ಸಾಲದ ಚಿಂತೆಯಾಗಿದೆ, ಅವರಿಗೆ ಆ
ಪ್ರಾಪ್ತಿಯಿಂದ ಸಂಪನ್ನಗೊಳಿಸಿರಿ. ಹೇಗೆ ತನುವಿನ ಕರ್ಮಭೋಗದ ದುಃಖ-ನೋವಿರುವ ಆತ್ಮನು
ಕರ್ಮಯೋಗಿಯಾಗಿದ್ದು ಕರ್ಮಯೋಗಿಯಿಂದ ಕರ್ಮಭೋಗವನ್ನು ಸಮಾಪ್ತಿಗೊಳಿಸಲಿ, ಇಂತಹ ಕರ್ಮಯೋಗಿಯಾಗುವ
ಶಕ್ತಿಯ ಪ್ರಾಪ್ತಿಯು ಮಹಾದಾನದ ರೂಪದಲ್ಲಿ ಕೊಡಿ. ವರದಾನದ ರೂಪದಲ್ಲಿ ಕೊಡಿ, ಸ್ವಯಂತು
ಸಾಲಗಾರರಾಗಿದ್ದಾರೆ ಅರ್ಥಾತ್ ಶಕ್ತಿಹೀನರಾಗಿದ್ದಾರೆ, ಖಾಲಿಯಿದ್ದಾರೆ. ಇಂತಹವರಿಗೆ ತಮ್ಮ
ಕರ್ಮಯೋಗದ ಶಕ್ತಿಯ ಭಾಗವನ್ನು ಕೊಡಿ. ತಮ್ಮ ಖಾತೆಯಿಂದ ಸ್ವಲ್ಪವಾದರೂ ಅವರ ಖಾತೆಯಲ್ಲಿ ಜಮಾ ಮಾಡಿರಿ,
ಆಗ ಅವರು ಸಾಲದ ಚಿಂತೆಯಿಂದ ಮುಕ್ತರಾಗಬಹುದು. ಇಷ್ಟು ಸಮಯದಲ್ಲಿ ಯಾರು ಡೈರೆಕ್ಟ್ ತಂದೆಯ
ವಾರಸುಧಾರರಾಗಿದ್ದು ಸರ್ವ ಶಕ್ತಿಗಳ ಆಸ್ತಿಯನ್ನು ಜಮಾ ಮಾಡಿಕೊಂಡಿದ್ದೀರಿ, ಜಮಾ ಆಗಿರುವ ಆ
ಖಾತೆಯಿಂದ ವಿಶಾಲ ಹೃದಯದಿಂದ ದಾನ ಮಾಡಿರಿ, ಆಗಲೇ ಹೃದಯದ ನೋವಿನ ಸಮಾಪ್ತಿ ಮಾಡಬಹುದು. ಹೇಗೆ
ಅಂತಿಮ ಸಮಯವು ಸಮೀಪಕ್ಕೆ ಬರುತ್ತಿದೆ, ಹಾಗೆಯೇ ಸರ್ವ ಆತ್ಮರ ಭಕ್ತಿಯ ಶಕ್ತಿಯೂ ಸಹ
ಸಮಾಪ್ತಿಯಾಗುತ್ತಿದೆ. ದ್ವಾಪರದಿಂದ ರಜೋಗುಣಿ ಆತ್ಮರಲ್ಲಿಯೂ ಸ್ವಲ್ಪ ದಾನ-ಪುಣ್ಯ, ಭಕ್ತಿಯ
ಶಕ್ತಿಯು ತಮ್ಮ ಖಾತೆಯಲ್ಲಿ ಜಮಾ ಇತ್ತು. ಆದ್ದರಿಂದ ತನ್ನ ಆತ್ಮ ನಿರ್ವಹಣೆಗಾಗಿ ಸ್ವಲ್ಪವಾದರೂ
ಶಾಂತಿಯ ಸಾಧನವು ಪ್ರಾಪ್ತವಾಗಿತ್ತು. ಆದರೆ ಈಗ ತಮೋಗುಣಿ ಆತ್ಮರು, ಈ ಸ್ವಲ್ಪ ಸಮಯದ ಸುಖವು ಆತ್ಮ
ನಿರ್ವಹಣೆಯ ಸಾಧನಗಳಿಂದಲೂ ಖಾಲಿಯಾಗಿ ಬಿಟ್ಟಿದೆ ಅರ್ಥಾತ್ ಭಕ್ತಿಯ ಫಲವನ್ನೂ ತಿಂದು ಖಾಲಿಯಾಗಿ
ಬಿಟ್ಟಿದೆ. ಈಗ ಹೆಸರಿನ ಭಕ್ತರ ಭಕ್ತಿಯಿದೆ. ಫಲ ಸ್ವರೂಪ ಭಕ್ತಿಯಿಲ್ಲ. ಭಕ್ತಿಯ ವೃಕ್ಷವು
ವಿಸ್ತಾರವನ್ನು ಪಡೆದುಕೊಂಡು ಬಿಟ್ಟಿದೆ. ವೃಕ್ಷದ ರಂಗು-ರಂಗಿನಿಂದ ಶೋಭೆಯಂತು ಅವಶ್ಯವಾಗಿ ಇದೆ.
ಆದರೆ ಶಕ್ತಿಹೀನವಾಗಿರುವ ಕಾರಣದಿಂದ ಫಲವು ಸಿಗಲು ಸಾಧ್ಯವಿಲ್ಲ. ಹೇಗೆ ಸ್ಥೂಲ ವೃಕ್ಷವು ಯಾವಾಗ
ಸಂಪೂರ್ಣವಾಗಿ ವಿಸ್ತಾರವನ್ನು ಪ್ರಾಪ್ತಿ ಮಾಡಿಕೊಂಡು ಬಿಡುತ್ತದೆ, ಶಕ್ತಿಹೀನ ಸ್ಥಿತಿಯವರೆಗೂ
ತಲುಪುತ್ತದೆ, ಆಗ ಫಲದಾಯಕವಾಗಲು ಸಾಧ್ಯವಿಲ್ಲ. ಆದರೆ ನೆರಳನ್ನು ಕೊಡುವಂತದ್ದಾಗಿ ಬಿಡುತ್ತದೆ. ಅದೇ
ರೀತಿಯಲ್ಲಿ ಭಕ್ತಿಯ ವೃಕ್ಷವೂ ಸಹ ದಿಲ್ಖುಷ್ ಮಾಡುವ ನೆರಳನ್ನಂತು ಖಂಡಿತವಾಗಿಯೂ ಕೊಡುತ್ತಿದೆ.
ಗುರು ಮಾಡಿಕೊಂಡು ಬಿಟ್ಟೆವು, ಮುಕ್ತಿಯು ಸಿಕ್ಕಿ ಬಿಡುತ್ತದೆ. ತೀರ್ಥ ಯಾತೆ, ದಾನ-ಪುಣ್ಯ
ಮಾಡಿದೆವು, ಪ್ರಾಪ್ತಿಯಾಗಿ ಬಿಡುತ್ತದೆ - ಈ ಹೃದಯ ಖುಷಿ ಪಡಿಸುವಂತಹ ವಿಚಾರಗಳ ನೆರಳು ಈಗ ಇದೆ. "ಈಗಲ್ಲದಿದ್ದರೆ
ಮತ್ತೆಂದಿಗೂ ಸಿಗುವುದಿಲ್ಲ"- ಇದೇ ನೆರಳಿನಲ್ಲಿ ಪಾಪ! ಭೋಲಾ ಭಕ್ತರು ವಿಶ್ರಾಮ
ತೆಗೆದುಕೊಳ್ಳುತ್ತಿದ್ದಾರೆ ಆದರೆ ಫಲವಿಲ್ಲ. ಆದ್ದರಿಂದ ಎಲ್ಲರ ಆತ್ಮ ನಿರ್ವಹಣೆಯ ಖಾತೆಯು
ಖಾಲಿಯಾಗಿದೆ. ಅಂದಮೇಲೆ ಇಂತಹ ಸಮಯದಲ್ಲಿ ತಾವು ಸಂಪನ್ನ ಆತ್ಮರ ಕರ್ತವ್ಯವಿದೆ- ತಮ್ಮಲ್ಲಿ ಜಮಾ
ಆಗಿರುವ ಭಾಗದಿಂದ ಇಂತಹ ಆತ್ಮರಿಗೆ ಸಾಹಸ-ಉಲ್ಲಾಸವನ್ನು ತರಿಸುವುದು. ಜಮಾ ಇದೆಯೇ ಅಥವಾ ತಮಗಾಗಿಯೇ
ಸಂಪಾದಿಸಿದಿರಿ ಮತ್ತು ಸೇವಿಸಿದಿರಾ! ಸಂಪಾದಿಸಿದಿರಿ ಮತ್ತು ಸೇವಿಸಿದಿರಿ, ಅಂತಹವರಿಗೆ ರಾಜಯೋಗಿ
ಎಂದು ಹೇಳುವುದಿಲ್ಲ. ಸ್ವರಾಜ್ಯ ಅಧಿಕಾರಿ ಎಂದು ಹೇಳುವುದಿಲ್ಲ. ರಾಜನ ಭಂಡಾರವು ಸದಾ
ಸಂಪನ್ನವಾಗಿರುತ್ತದೆ. ಪ್ರಜೆಗಳ ಪಾಲನೆಯ ಜವಾಬ್ದಾರಿಯು ರಾಜನ ಮೇಲಿರುತ್ತದೆ. ಸ್ವರಾಜ್ಯಾಧಿಕಾರಿ
ಅರ್ಥಾತ್ ಸರ್ವ ಖಜಾನೆಗಳಿಂದ ಸಂಪನ್ನರು. ಒಂದುವೇಳೆ ಖಜಾನೆಯು ಸಂಪನ್ನವಾಗಿಲ್ಲವೆಂದರೆ ಈಗಲೂ ಪ್ರಜಾ
ಯೋಗಿಯಿದ್ದೀರಿ. ರಾಜಯೋಗಿಗಳಲ್ಲ. ಪ್ರಜೆಯು ಸಂಪಾದಿಸುತ್ತಾನೆ ಮತ್ತು ತಿನ್ನುತ್ತಾನೆ. ಸಾಹುಕಾರ
ಪ್ರಜೆಯು ಅಲ್ಪಸ್ವಲ್ಪವಾದರೂ ಜಮಾ ಇಡುತ್ತಾನೆ. ಆದರೆ ರಾಜರುಗಳು ಖಜಾನೆಯ ಮಾಲೀಕರಿರುತ್ತಾರೆ.
ಅಂದಮೇಲೆ ರಾಜಯೋಗಿ ಅರ್ಥಾತ್ ಸ್ವರಾಜ್ಯ ಅಧಿಕಾರಿ ಆತ್ಮರು. ಯಾವುದೇ ಖಜಾನೆಯಲ್ಲಿ ಜಮಾದ ಖಾತೆಯು
ಖಾಲಿಯಾಗಲು ಸಾಧ್ಯವಿಲ್ಲ. ಅಂದಾಗ ತಮ್ಮನ್ನು ನೋಡಿಕೊಳ್ಳಿರಿ- ಖಜಾನೆಯು ಸಂಪನ್ನವಿದೆಯೇ! ದಾತಾನ
ಮಕ್ಕಳು ಸರ್ವರಿಗೂ ಕೊಡುವ ಭಾವನೆಯಿದೆಯೇ ಅಥವಾ ತಮ್ಮಲ್ಲಿಯೇ ಮಸ್ತರಿದ್ದೀರಾ! ಸ್ವ-ಪಾಲನೆಯಲ್ಲಿಯೇ
ಸಮಯವು ಕಳೆದು ಹೋಗುತ್ತದೆಯೇ ಅಥವಾ ಅನ್ಯರ ಪಾಲನೆಗಾಗಿಯೂ ಸಮಯ ಮತ್ತು ಖಜಾನೆಯು ಸಂಪನ್ನವಾಗಿದೆಯೇ!
ಇಲ್ಲಿ ಸಂಗಮದಿಂದಲೇ ಆತ್ಮಿಕ ಪಾಲನೆಯ ಸಂಸ್ಕಾರವಿರುವವರು ಭವಿಷ್ಯದಲ್ಲಿ ಪ್ರಜೆಗಳ ಪಾಲನೆ ಮಾಡುವ
ವಿಶ್ವ ಮಹಾರಾಜನಾಗಲು ಸಾಧ್ಯ. ರಾಜಾ ಮತ್ತು ಪ್ರಜೆಯು ಇಲ್ಲಿಂದಲೇ ಸ್ಟಾಂಪ್ ಹಾಕಲಾಗುತ್ತದೆ.
ಸ್ಟೇಟಸ್ ಅಲ್ಲಿ ಸಿಗುತ್ತದೆ. ಒಂದುವೇಳೆ ಇಲ್ಲಿನ ಸ್ಟಾಂಪ್ ಇಲ್ಲವೆಂದರೆ ಸ್ಟೇಟಸ್ ಇಲ್ಲ.
ಸಂಗಮಯುಗವು ಸ್ಟಾಂಪ್ ಆಫೀಸ್ ಆಗಿದೆ. ತಂದೆಯ ಮೂಲಕ ಬ್ರಾಹ್ಮಣ ಪರಿವಾರದ ಮೂಲಕ ಸ್ಟಾಂಪ್ ಸಿಗುತ್ತದೆ.
ಅಂದಮೇಲೆ ತಾವು ತಮ್ಮನ್ನು ಬಹಳ ಚೆನ್ನಾಗಿ ನೋಡಿಕೊಳ್ಳಿರಿ. ಸ್ಟಾಕ್ ಚೆಕ್ ಮಾಡಿರಿ. ಹೀಗಾಗಬಾರದು-
ಸಮಯದಲ್ಲಿ ಒಂದು ಅಪ್ರಾಪ್ತಿಯೂ ಸಹ ಸಂಪನ್ನವಾಗುವುದರಲ್ಲಿ ಮೋಸ ಮಾಡಿ ಬಿಡುತ್ತದೆ. ಹೇಗೆ ಸ್ಥೂಲ
ಸ್ಟಾಕ್ ಜಮಾ ಮಾಡುತ್ತಾರೆ, ಒಂದುವೇಳೆ ಎಲ್ಲಾ ಆಹಾರ ಪದಾರ್ಥಗಳನ್ನೂ ಜಮಾ ಮಾಡಿ ಬಿಟ್ಟಿರಿ. ಆದರೆ
ಚಿಕ್ಕದಾದ ಬೆಂಕಿ ಪೊಟ್ಟಣವು ಇಲ್ಲದಂತಾಯಿತೆಂದರೆ ಅಡಿಗೆಯನ್ನೇನು ಮಾಡುತ್ತೀರಿ! ಅನೇಕ
ಪ್ರಾಪ್ತಿಗಳನ್ನು ಮಾಡಿಕೊಂಡಿದ್ದರೂ ಒಂದು ಅಪ್ರಾಪ್ತಿಯು ಮೋಸವನ್ನು ಮಾಡಿಬಿಡಬಹುದು. ಹಾಗೆ ಒಂದು
ಅಪ್ರಾಪ್ತಿಯೂ ಸಹ ಸಂಪನ್ನತೆಯ ಸ್ಟಾಂಪ್ ಹಾಕುವುದರ ಅಧಿಕಾರಿಯಾಗುವುದರಲ್ಲಿ ಮೋಸ ಮಾಡಿ ಬಿಡುತ್ತದೆ.
ಹೀಗೆ ಯೋಚಿಸಬಾರದು- ನೆನಪಿನ ಶಕ್ತಿಯಂತು ಇದೆ, ಯಾವುದೇ ಗುಣದ ಕೊರತೆಯಿದೆಯೆಂದರೆ ಪರವಾಗಿಲ್ಲ.
ನೆನಪಿನ ಶಕ್ತಿಯು ಮಹಾನ್ ಆಗಿದೆ, ನಂಬರ್ವನ್ ಆಗಿದೆ, ಇದು ಸರಿಯಾಗಿದೆ ಆದರೆ ಯಾವುದೇ ಒಂದು ಗುಣದ
ಕೊರತೆಯೂ ಸಹ ಸಮಯದಲ್ಲಿ ಫುಲ್ಪಾಸ್ ಆಗುವುದರಲ್ಲಿ ಫೇಲ್ ಮಾಡಿ ಬಿಡುತ್ತದೆ. ಇದನ್ನು ಚಿಕ್ಕ
ಮಾತಲ್ಲವೆ ಎಂದು ತಿಳಿಯಬೇಡಿ. ಒಂದೊಂದು ಗುಣದ ಮಹತ್ವಿಕೆ ಮತ್ತು ಸಂಬಂಧವೇನಾಗಿದೆ, ಇದರದೂ ಸಹ
ದೊಡ್ಡ ಲೆಕ್ಕವೇ ಇದೆ, ಅದನ್ನೆಂದಾದರೂ ತಿಳಿಸುತ್ತೇವೆ.
ತಾವು ವಿಶೇಷ ಆತ್ಮರ ಕರ್ತವ್ಯ-ಪಾಲನೆಯೇ ಆಗಿದೆ. ಇಂದು ಈ ವಿಶೇಷವಾದ ಸ್ಮೃತಿಯನ್ನು ತರಿಸಿದೆವು.
ತಿಳಿಯಿತೆ. ಈ ಸಮಯದಲ್ಲಿ ದೆಹಲಿ ರಾಜಧಾನಿಯವರು ಬಂದಿದ್ದಾರಲ್ಲವೆ. ಅಂದಮೇಲೆ ರಾಜ್ಯಾಧಿಕಾರಿಯ
ಮಾತುಗಳನ್ನು ತಿಳಿಸಿದೆವು. ಹಾಗೆಯೇ ರಾಜಧಾನಿಯಲ್ಲಿ ಮಹಲುಗಳು ಸಿಗುವುದಿಲ್ಲ. ಪಾಲನೆ ಮಾಡುತ್ತಾ
ಪ್ರಜೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ದೆಹಲಿಯವರಂತು ಬಹಳ ಉಮ್ಮಂಗದಿಂದ ತಯಾರು
ಮಾಡುತ್ತಿರಬಹುದಲ್ಲವೆ. ರಾಜಧಾನಿಯಲ್ಲಿ ಇರಬೇಕಲ್ಲವೆ, ದೂರವಂತು ಹೋಗುವುದಿಲ್ಲ ಅಲ್ಲವೆ.
ಗುಜರಾತಿನವರಂತು ಈಗಲೂ ಜೊತೆಯಿದ್ದಾರೆ. ಸಂಗಮದಲ್ಲಿ ಮಧುಬನದ ಜೊತೆಯಿದ್ದಾರೆಂದರೆ, ರಾಜ್ಯದಲ್ಲಿಯೂ
ಜೊತೆಯಿರುತ್ತಾರಲ್ಲವೆ. ಜೊತೆಯಲ್ಲಿರುವ ಧೃಡ ಸಂಕಲ್ಪವನ್ನು ಮಾಡಿದ್ದೀರಲ್ಲವೆ. ಮೂರನೆಯವರು ಇಂದೋರ್.
ಇನ್-ಡೋರ್ ಅರ್ಥಾತ್ ಮನೆಯಲ್ಲಿರುವವರು. ಅಂದಮೇಲೆ ಇಂದೋರ್ ಜೋನಿನವರು ರಾಜ್ಯದ
ಮನೆಯಲ್ಲಿರುತ್ತೀರಲ್ಲವೆ. ಈಗಲೂ ತಂದೆಯ ಹೃದಯವೆಂಬ ಮನೆಯಲ್ಲಿರುವವರು. ಅಂದಮೇಲೆ ಮೂವರ ಸಮೀಪತೆಯ
ರಾಶಿ ಸೇರುತ್ತದೆ. ಸದಾ ಹೀಗೆಯೇ ಈ ಭಾಗ್ಯದ ರೇಖೆಯನ್ನು ಸ್ಪಷ್ಟ ಮತ್ತು ವಿಸ್ತಾರವನ್ನು ಪ್ರಾಪ್ತಿ
ಮಾಡಿಕೊಳ್ಳುತ್ತಿರಿ. ಒಳ್ಳೆಯದು.
ಹೀಗೆ ಸದಾ ಸಂಪನ್ನತೆಯ ಕರ್ತವ್ಯ-ಪಾಲನೆಯನ್ನು ಪಾಲನೆ ಮಾಡುವಂತಹ, ತಮ್ಮ ದಾತಾ ಗುಣದ ಶ್ರೇಷ್ಠ
ಸಂಸ್ಕಾರಗಳಿಂದ ಸರ್ವರ ದುಃಖವನ್ನು ಸಮಾಪ್ತಿಗೊಳಿಸುವಂತಹ, ಸದಾ ಸ್ವರಾಜ್ಯ ಅಧಿಕಾರಿಯಾಗಿದ್ದು
ಆತ್ಮಿಕ ಪಾಲನೆ ಮಾಡುವಂತಹ, ಸರ್ವ ಖಜಾನೆಗಳಿಂದ ಸಂಪನ್ನ ಭಂಡಾರ ಮಾಡುವಂತಹ, ಮಾಸ್ಟರ್ ದಾತಾ-ವರದಾತಾ,
ಇಂತಹ ರಾಜಯೋಗಿ ಶ್ರೇಷ್ಠಾತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ
ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ:-
1. ಸದಾ
ತಮ್ಮನ್ನು ಸಾಕ್ಷಿ ಸ್ಥಿತಿಯ ಸ್ಥಾನದಲ್ಲಿ ಸ್ಥಿತರಾಗಿರುವ ಆತ್ಮರೆಂದು ಅನುಭವ ಮಾಡುತ್ತೀರಾ? ಈ
ಸಾಕ್ಷಿ ಸ್ಥಿತಿಯು ಎಲ್ಲದಕ್ಕಿಂತಲೂ ಶ್ರೇಷ್ಠವಾದ ಸ್ಥಿತಿಯಾಗಿದೆ. ಈ ಸ್ಥಿತಿಯಲ್ಲಿ ಕುಳಿತು ಕರ್ಮ
ಮಾಡುವ ಹಾಗೂ ನೋಡುವುದರಲ್ಲಿ ಬಹಳ ಮಜಾ ಬರುತ್ತದೆ. ಹೇಗೆ ಸ್ಥಾನವು ಚೆನ್ನಾಗಿರುತ್ತದೆಯೆಂದರೆ
ಕುಳಿತುಕೊಳ್ಳುವುದರಲ್ಲಿ ಮಜಾ ಬರುತ್ತದೆಯಲ್ಲವೆ. ಸೀಟ್ ಚೆನ್ನಾಗಿರುವುದಿಲ್ಲವೆಂದರೆ
ಕುಳಿತುಕೊಳ್ಳುವುದರಲ್ಲಿಯೂ ಮಜಾ ಇರುವುದಿಲ್ಲ. ಈ ಸಾಕ್ಷಿ ಸ್ಥಿತಿಯ ಸ್ಥಾನವು ಎಲ್ಲದಕ್ಕಿಂತಲೂ
ಶ್ರೇಷ್ಠವಾದ ಸ್ಥಾನವಾಗಿದೆ. ಈ ಸ್ಥಾನದಲ್ಲಿ ಸದಾ ಇರುತ್ತೀರಾ? ಪ್ರಪಂಚದಲ್ಲಿಯೂ ವರ್ತಮಾನದಲ್ಲಿ
ಸ್ಥಾನದ ಹಿಂದೆ ಓಡುತ್ತಿರುತ್ತಾರೆ. ತಮಗೆ ಎಷ್ಟು ಶ್ರೇಷ್ಠವಾದ ಸ್ಥಾನವು ಸಿಕ್ಕಿದೆ. ಆ
ಸ್ಥಾನದಿಂದ ಯಾರೂ ಸಹ ತಮ್ಮನ್ನಿಳಿಸಲು ಸಾಧ್ಯವಿಲ್ಲ. ಅವರಲ್ಲಿ ಎಷ್ಟೊಂದು ಭಯವಿರುತ್ತದೆ, ಇಂದು
ಸ್ಥಾನವಿದೆ ನಾಳೆಯಿರುವುದಿಲ್ಲ ಎಂದು. ತಮ್ಮದು ಅವಿನಾಶಿಯಾಗಿದೆ, ನಿರ್ಭಯವಾಗಿದ್ದು
ಕುಳಿತುಕೊಳ್ಳಬಹುದು. ಅಂದಮೇಲೆ ಸಾಕ್ಷಿ ಸ್ಥಿತಿಯ ಸ್ಥಾನದಲ್ಲಿ ಸದಾ ಇರುತ್ತೀರಾ? ಅಪ್ಸೆಟ್
ಆಗುವವರು ಸೆಟ್ ಆಗಲು ಸಾಧ್ಯವಿಲ್ಲ. ಸದಾ ಈ ಸ್ಥಾನದಲ್ಲಿ ಸೆಟ್ ಆಗಿರಿ. ಇದು ಇಂತಹ ಆರಾಮದ
ಸ್ಥಾನವಾಗಿದೆ, ಅದರಲ್ಲಿ ಕುಳಿತು ಏನನ್ನು ನೋಡಬೇಕೆಂದು ಬಯಸುತ್ತೀರಿ, ಏನನ್ನು ಅನುಭವ ಮಾಡಬೇಕೆಂದು
ಬಯಸುತ್ತೀರಿ, ಅದನ್ನು ಅನುಭವ ಮಾಡಬಹುದು.
2. ತಮ್ಮನ್ನು ಈ ಸೃಷ್ಟಿಯಲ್ಲಿ ಕೋಟಿಯಲ್ಲಿ ಕೆಲವರು ಮತ್ತು ಕೆಲವರಲ್ಲಿಯೂ ಕೆಲವರು...... ಇಂತಹ
ವಿಶೇಷ ಆತ್ಮನೆಂದು ತಿಳಿಯುತ್ತೀರಾ? ಕೋಟಿಯಲ್ಲಿ ಕೆಲವರು ತಂದೆಯ ಮಕ್ಕಳಾಗುವರು ಎಂದು ಗಾಯನವೇನಿದೆ,
ಅದು ನಾವಾಗಿದ್ದೇವೆ. ಈ ಖುಷಿಯು ಸದಾ ಇರುತ್ತದೆಯೇ? ವಿಶ್ವದ ಅನೇಕ ಆತ್ಮರು ತಂದೆಯನ್ನು ಪಡೆಯುವ
ಪ್ರಯತ್ನವನ್ನು ಮಾಡುತ್ತಿದ್ದಾರೆ ಮತ್ತು ನಾವು ಪಡೆದು ಬಿಟ್ಟೆವು! ತಂದೆಯ ಮಕ್ಕಳಾಗುವುದು ಅರ್ಥಾತ್
ತಂದೆಯನ್ನು ಪಡೆಯುವುದು. ಪ್ರಪಂಚದವರು ಹುಡುಕುತ್ತಿದ್ದಾರೆ ಮತ್ತು ನಾವು ಅವರ ಮಕ್ಕಳಾಗಿ ಬಿಟ್ಟೆವು.
ಭಕ್ತಿಮಾರ್ಗ ಮತ್ತು ಜ್ಞಾನ ಮಾರ್ಗದ ಪ್ರಾಪ್ತಿಯಲ್ಲಿ ಬಹಳ ಅಂತರವಿದೆ. ಜ್ಞಾನವಾಗಿದೆ ವಿದ್ಯೆ,
ಭಕ್ತಿಯು ವಿದ್ಯೆಯಲ್ಲ. ಅದು ಸ್ವಲ್ಪ ಸಮಯಕ್ಕಾಗಿ ಆಧ್ಯಾತ್ಮಿಕ ಮನೋರಂಜನೆಯಾಗಿದೆ. ಆದರೆ ಸದಾಕಾಲದ
ಪ್ರಾಪ್ತಿಯ ಸಾಧನವು ಜ್ಞಾನವಾಗಿದೆ. ಅಂದಾಗ ಸದಾ ಇದೇ ಸ್ಮೃತಿಯಲ್ಲಿದ್ದು ಅನ್ಯರನ್ನೂ
ಸಮರ್ಥರನ್ನಾಗಿ ಮಾಡಿರಿ. ಯಾವುದು ಸ್ವಪ್ನ-ಯೋಚನೆಯಲ್ಲಿಯೂ ಇರಲಿಲ್ಲ, ಅದನ್ನು ಪ್ರತ್ಯಕ್ಷದಲ್ಲಿ
ಪಡೆದು ಬಿಟ್ಟೆವು. ತಂದೆಯವರು ಪ್ರತೀ ಮೂಲೆಯಿಂದಲೂ ಮಕ್ಕಳನ್ನು ಕರೆ ತಂದು ತನ್ನವರನ್ನಾಗಿ
ಮಾಡಿಕೊಂಡರು. ಅಂದಮೇಲೆ ಇದೇ ಖುಷಿಯಲ್ಲಿರಿ.
3. ಎಲ್ಲರೂ ತಮ್ಮನ್ನು ಒಬ್ಬರೇ ತಂದೆಯ, ಒಂದೇ ಮತದಲ್ಲಿ ನಡೆಯುವಂತಹ ಏಕರಸ ಸ್ಥಿತಿಯಲ್ಲಿ
ಸ್ಥಿತರಾಗುವ ಅನುಭವ ಮಾಡುತ್ತೀರಾ? ಯಾವಾಗ ಒಬ್ಬ ತಂದೆಯಿದ್ದಾರೆ, ಇನ್ನೊಬ್ಬರಿಲ್ಲವೇ ಇಲ್ಲ,
ಅಂದಮೇಲೆ ಸಹಜವಾಗಿಯೇ ಏಕರಸ ಸ್ಥಿತಿಯಾಗಿ ಬಿಡುತ್ತದೆ. ಇಂತಹ ಅನುಭವವಿದೆಯೇ? ಯಾವಾಗ
ಇನ್ನೊಬ್ಬರಿಲ್ಲವೇ ಇಲ್ಲ, ಮತ್ತೆ ಬುದ್ಧಿಯೆಲ್ಲಿಗೆ ಹೋಗುತ್ತದೆ ಮತ್ತು ಎಲ್ಲಿಗೂ ಹೋಗುವ ಅವಕಾಶವೇ
ಇಲ್ಲ. ಇರುವುದೇ ಒಬ್ಬರು. ಎಲ್ಲಿ ಎರಡು ನಾಲ್ಕು ಮಾತುಗಳಿರುತ್ತವೆ ಅಲ್ಲಿ ಯೋಚಿಸಲು
ಅವಕಾಶವಿರುತ್ತದೆ. ಯಾವಾಗ ಇರುವುದೇ ಒಂದು ಮಾರ್ಗ, ಮತ್ತೆಲ್ಲಿಗೆ ಹೋಗುತ್ತಾರೆ. ಅಂದಮೇಲೆ ಇಲ್ಲಿ
ಮಾರ್ಗವನ್ನು ತಿಳಿಸುವುದಕ್ಕಾಗಿ ಸಹಜ ವಿಧಿಯಿದೆ- ಒಬ್ಬ ತಂದೆ, ಒಂದು ಮಾರ್ಗ, ಏಕರಸ, ಒಂದೇ
ಪರಿವಾರ. ಅಂದಮೇಲೆ ಒಂದೇ ಮಾತನ್ನು ನೆನಪಿಟ್ಟುಕೊಳ್ಳುತ್ತೀರೆಂದರೆ ವನ್ನಂಬರ್ ಆಗಿ ಬಿಡುತ್ತೀರಿ.
ಒಂದರ ಲೆಕ್ಕವನ್ನು ತಿಳಿಯಿರಿ, ಅಷ್ಟೇ. ಎಲ್ಲಿಯೇ ಇರಿ ಆದರೆ ಒಬ್ಬರ ನೆನಪಿದೆಯೆಂದರೆ ಸದಾ
ಜೊತೆಯಿದ್ದೀರಿ, ದೂರವಿಲ್ಲ. ಎಲ್ಲಿ ತಂದೆಯ ಜೊತೆಯಿದೆ ಅಲ್ಲಿ ಮಾಯೆಯ ಜೊತೆಯಾಗಲು ಸಾಧ್ಯವಿಲ್ಲ.
ತಂದೆಯಿಂದ ದೂರವಾದಿರೆಂದರೆ ಮತ್ತೆ ಮಾಯೆಯು ಬರುತ್ತದೆ. ಹಾಗೆಯೇ ಬರುವುದಿಲ್ಲ, ದೂರವಾಗದಿರಿ
ಮಾಯೆಯು ಬರುವುದಿಲ್ಲ. ಒಂದರದೇ ಮಹತ್ವವಿದೆ.
ಅಧರ್-ಕುಮಾರರೊಂದಿಗೆ ಬಾಪ್ದಾದಾರವರ ವಾರ್ತಾಲಾಪ:
ಸದಾ
ಪ್ರವೃತ್ತಿಯಲ್ಲಿರುತ್ತಾ ಅಲೌಕಿಕ ವೃತ್ತಿಯಲ್ಲಿರುತ್ತೀರಾ? ಗೃಹಸ್ಥಿ ಜೀವನದಿಂದ ದೂರವಿರುವವರು,
ಸದಾ ನಿಮಿತ್ತ ರೂಪದಲ್ಲಿರುವವರು. ಹೀಗೆ ಅನುಭವ ಮಾಡುತ್ತೀರಾ? ನಿಮಿತ್ತ ಅಂದರೆ ಸದಾ ಸುಖಿ ಮತ್ತು
ಗೃಹಸ್ಥಿ ಎಂದರೆ ಸದಾ ದುಃಖಿ, ತಾವು ಯಾರು? ಸದಾ ಸುಖಿ. ಈಗ ದುಃಖದ ಪ್ರಪಂಚವನ್ನು ಬಿಟ್ಟಿದ್ದೀರಿ.
ಅದರಿಂದ ಹೊರಬಂದು ಬಿಟ್ಟಿದ್ದೀರಿ. ಈಗ ಸಂಗಮಯುಗಿ ಸುಖಗಳ ಪ್ರಪಂಚದಲ್ಲಿದ್ದೀರಿ. ಅಲೌಕಿಕ
ಪ್ರವೃತ್ತಿಯವರು, ಲೌಕಿಕ ಪ್ರವೃತ್ತಿಯವರಲ್ಲ. ಪರಸ್ಪರದಲ್ಲಿಯೂ ಅಲೌಕಿಕ ವೃತ್ತಿ, ಅಲೌಕಿಕ
ದೃಷ್ಟಿಯಿರಲಿ.
ನಿಮಿತ್ತವಾಗಿರುವ ಚಿಹ್ನೆಯಾಗಿದೆ- ಸದಾ ಭಿನ್ನ ಹಾಗೂ ತಂದೆಗೆ ಪ್ರಿಯ. ಒಂದುವೇಳೆ
ಭಿನ್ನ-ಪ್ರಿಯರಲ್ಲವೆಂದರೆ ನಿಮಿತ್ತರಲ್ಲ. ಗೃಹಸ್ಥಿ ಜೀವನ ಅರ್ಥಾತ್ ಬಂಧನವಿರುವ ಜೀವನ. ನಿಮಿತ್ತ
ಜೀವನ ನಿರ್ಬಂಧನವಾಗಿದೆ. ನಿಮಿತ್ತರಾಗುವುದರಿಂದ ಎಲ್ಲಾ ಬಂಧನಗಳು ಸಹಜವಾಗಿಯೇ ಸಮಾಪ್ತಿಯಾಗಿ
ಬಿಡುತ್ತದೆ. ಬಂಧನ ಮುಕ್ತರಿದ್ದರೆ ಸದಾ ಸುಖಿಯಾಗಿರುತ್ತೀರಿ. ಅವರ ಬಳಿ ದುಃಖದ ಪ್ರಕಂಪನವೂ ಬರಲು
ಸಾಧ್ಯವಿಲ್ಲ. ಒಂದುವೇಳೆ ಸಂಕಲ್ಪದಲ್ಲಿಯೂ ಸಹ ನನ್ನ ಮನೆ, ನನ್ನ ಪರಿವಾರ, ನನ್ನದು ಈ ಕಾರ್ಯವಾಗಿದೆ
ಎನ್ನುವ ಸ್ಮೃತಿಯೂ ಬಂದಿತೆಂದರೂ ಮಾಯೆಯ ಆಹ್ವಾನ ಮಾಡುತ್ತದೆ. ಅಂದಮೇಲೆ ನನ್ನದನ್ನು ನಿನ್ನದೆಂದು
ಮಾಡಿ ಬಿಡಿ. ಎಲ್ಲಿ ನಿನ್ನದು ಎನ್ನುವುದಿದೆ ಅಲ್ಲಿ ದುಃಖವು ಸಮಾಪ್ತಿ. ನನ್ನದೆಂದು ಹೇಳುವುದು
ಮತ್ತು ತಬ್ಬಿಬ್ಬಾಗುವುದು, ನಿನ್ನದು ಹೇಳುವುದು ಮತ್ತು ಮೋಜಿನಲ್ಲಿರುವುದು. ಈಗ
ಮೋಜಿನಲ್ಲಿರುವುದಿಲ್ಲವೆಂದರೆ ಯಾವಾಗ ಇರುತ್ತೀರಿ. ಸಂಗಮಯುಗವೇ ಮೋಜಿನ ಯುಗವಾಗಿದೆ, ಆದ್ದರಿಂದ ಸದಾ
ಮೋಜಿನಲ್ಲಿರಿ. ಸ್ವಪ್ನ ಮತ್ತು ಸಂಕಲ್ಪದಲ್ಲಿಯೂ ವ್ಯರ್ಥವಿರಬಾರದು. ಅರ್ಧ ಕಲ್ಪದಲ್ಲಿ ಎಲ್ಲವೂ
ವ್ಯರ್ಥವಾಗಿ ಕಳೆದು ಬಿಟ್ಟಿರಿ, ಈಗ ಕಳೆದುಕೊಳ್ಳುವ ಸಮಯವು ಪೂರ್ಣವಾಯಿತು, ಈಗ ಸಂಪಾದನೆಯ
ಸಮಯವಾಗಿದೆ. ಎಷ್ಟು ಸಮರ್ಥರಾಗಿರುತ್ತೀರಿ ಅಷ್ಟೂ ಸಂಪಾದನೆ ಮಾಡುತ್ತಾ ಜಮಾ ಮಾಡಿಕೊಳ್ಳಬಹುದು.
ಇಷ್ಟೂ ಜಮಾ ಮಾಡಿಕೊಳ್ಳಿರಿ, ಅದರಿಂದ 21 ಜನ್ಮಗಳವರೆಗೆ ಆರಾಮದಿಂದ ಭೋಗಿಸುತ್ತಿರಿ. ಇಷ್ಟೂ ಸ್ಟಾಕ್
ಇರುತ್ತದೆಯೆಂದರೆ, ಅದರಿಂದ ಅನ್ಯರಿಗೂ ಕೊಡಬಹುದು ಏಕೆಂದರೆ ದಾತಾನ ಮಕ್ಕಳಿದ್ದೀರಿ. ಎಷ್ಟು ಜಮಾ
ಆಗುತ್ತದೆಯೋ ಅಷ್ಟು ಅವಶ್ಯವಾಗಿ ಖುಷಿಯಿರುತ್ತದೆ.
ಸದಾ ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ, ಇದೇ ಲಗನ್ನಿನಲ್ಲಿ ಮಗ್ನರಾಗಿ ಇರಿ. ಎಲ್ಲಿ ಲಗನ್
ಇದೆಯೋ ಅಲ್ಲಿ ವಿಘ್ನವಿರಲು ಸಾಧ್ಯವಿಲ್ಲ. ದಿನವಿದೆಯೆಂದರೆ ರಾತ್ರಿಯಿಲ್ಲ, ರಾತ್ರಿಯಿದೆಯೆಂದರೆ
ದಿನವಿರುವುದಿಲ್ಲ. ಹಾಗೆಯೇ ಈ ಲಗನ್ ಮತ್ತು ವಿಘ್ನವಿದೆ. ಲಗನ್ ಇಷ್ಟು ಶಕ್ತಿಶಾಲಿಯಿದೆ, ಅದು
ವಿಘ್ನಗಳನ್ನೂ ಭಸ್ಮ ಮಾಡಿ ಬಿಡುತ್ತದೆ. ಇಂತಹ ಲಗನ್ ಇರುವ ನಿರ್ವಿಘ್ನ ಆತ್ಮರಾಗಿದ್ದೀರಾ? ಎಷ್ಟೇ
ದೊಡ್ಡ ವಿಘ್ನವಿರಲಿ, ಮಾಯೆಯು ವಿಘ್ನ ರೂಪವಾಗಿ ಬರಲಿ ಆದರೆ ಲಗನ್ ಇರುವವರು, ಅದನ್ನು ಹೀಗೆ ಪಾರು
ಮಾಡುತ್ತಾರೆ, ಹೇಗೆಂದರೆ ಬೆಣ್ಣೆಯಿಂದ ಕೂದಲು ತೆಗೆದಂತೆ. ಲಗನ್ ಸರ್ವ ಪ್ರಾಪ್ತಿಗಳ ಅನುಭವವನ್ನು
ಮಾಡಿಸುತ್ತದೆ. ಎಲ್ಲಿ ತಂದೆಯಿದ್ದಾರೆ ಅಲ್ಲಿ ಅವಶ್ಯವಾಗಿ ಪ್ರಾಪ್ತಿಗಳಿದೆ, ತಂದೆಯ
ಖಜಾನೆಯೇನಿದೆಯೋ ಅದು ಮಕ್ಕಳದಾಗಿದೆ.
ಮಾತೆಯರೊಂದಿಗೆ:-
ಶಕ್ತಿದಳ ಆಗಿದ್ದೀರಲ್ಲವೆ. ಮಾತೆಯರು, ಜಗತ್ತಿನ ಮಾತೆಯರಾಗಿ ಬಿಟ್ಟಿರಿ. ಈಗ ಅಲ್ಪಕಾಲದ
ಮಾತೆಯರಲ್ಲ, ಸದಾ ತಮ್ಮನ್ನು ಜಗನ್ಮಾತೆ ಎಂದು ತಿಳಿಯಿರಿ. ಅಲ್ಪಕಾಲದ ಗೃಹಸ್ಥಿಯಲ್ಲಿ
ಸಿಲುಕುವವರಲ್ಲ. ಬೇಹದ್ದಿನ ಸೇವೆಯಲ್ಲಿ ಸದಾ ಖುಷಿಯಾಗಿರುವವರು. ಎಷ್ಟು ಶ್ರೇಷ್ಠವಾದ ಪದವಿಯನ್ನು
ತಂದೆಯು ಕೊಡಿಸಿ ಬಿಟ್ಟರು. ದಾಸಿಯಿಂದ ಶಿರದ ಕಿರೀಟವನ್ನಾಗಿ(ಶ್ರೇಷ್ಠ) ಮಾಡಿಬಿಟ್ಟರು. ವಾಹ್
ನನ್ನ ಶ್ರೇಷ್ಠ ಭಾಗ್ಯವೇ! ಇಷ್ಟೇ. ಇದೇ ಗೀತೆಯನ್ನು ಹಾಡುತ್ತಿರಿ. ಇದೊಂದೇ ಕಾರ್ಯವನ್ನು ತಂದೆಯವರು
ಮಾತೆಯರಿಗೆ ಕೊಟ್ಟಿದ್ದಾರೆ. ಏಕೆಂದರೆ ಮಾತೆಯರು ಬಹಳ ಅಲೆದಾಡಿ-ಹುಡುಕಾಡಿ ಸುಸ್ತಾಗಿದ್ದಾರೆ.
ಅಂದಮೇಲೆ ತಂದೆಯು ಮಾತೆಯರ ಸುಸ್ತನ್ನು ನೋಡಿ, ಅವರನ್ನು ಸುಸ್ತಿನಿಂದ ಮುಕ್ತ ಮಾಡುವುದಕ್ಕಾಗಿ
ಬಂದಿದ್ದಾರೆ. 63 ಜನ್ಮಗಳ ಸುಸ್ತು ಒಂದು ಜನ್ಮದಲ್ಲಿ ಸಮಾಪ್ತಿ ಮಾಡಿ ಬಿಟ್ಟರು. ಒಂದು
ಸೆಕೆಂಡಿನಲ್ಲಿ ಸಮಾಪ್ತಿ ಮಾಡಿ ಬಿಟ್ಟರು. ತಂದೆಯ ಮಕ್ಕಳಾದಿರಿ ಮತ್ತು ಸುಸ್ತು ಸಮಾಪ್ತಿ.
ಮಾತೆಯರಿಗೆ ತೂಗುವುದು ಮತ್ತು ತೂಗಿಸಿಕೊಳ್ಳುವುದು ಇಷ್ಟವಾಗುತ್ತದೆ. ಆದ್ದರಿಂದ ತಂದೆಯು
ಮಾತೆಯರಿಗೆ ಖುಷಿಯ, ಅತೀಂದ್ರಿಯ ಸುಖದ ಉಯ್ಯಾಲೆಯನ್ನು ಕೊಟ್ಟಿದ್ದಾರೆ. ಅದೇ ಉಯ್ಯಾಲೆಯಲ್ಲಿ
ತೂಗುತ್ತಿರಿ. ಸದಾ ಸುಖಿ, ಸದಾ ಸೌಭಾಗ್ಯವತಿ ಆಗಿ ಬಿಟ್ಟಿರಿ. ಅಮರ ತಂದೆಯ ಅಮರ ಮಕ್ಕಳಾಗಿ
ಬಿಟ್ಟಿರಿ. ಬಾಪ್ದಾದಾರವರೂ ಸಹ ಮಕ್ಕಳನ್ನು ನೋಡುತ್ತಾ ಖುಷಿಯಾಗುತ್ತಾರೆ. ಒಳ್ಳೆಯದು.
ವರದಾನ:
ಸಂಪನ್ನತೆಯ
ಮೂಲಕ ಸದಾ ಸಂತುಷ್ಟತೆಯ ಅನುಭವ ಮಾಡುವಂತಹ ಸಂಪದ್ಭರಿತ ಭವ.
ಸ್ವರಾಜ್ಯದ ಸಂಪತ್ತಾಗಿದೆ-
ಜ್ಞಾನ, ಗುಣ ಮತ್ತು ಶಕ್ತಿಗಳು. ಯಾರು ಈ ಸರ್ವ ಶಕ್ತಿಗಳಿಂದ ಸಂಪನ್ನ ಸ್ವರಾಜ್ಯ
ಅಧಿಕಾರಿಯಾಗಿರುತ್ತಾರೆ ಅವರು ಸದಾ ಸಂತುಷ್ಟವಾಗಿರುತ್ತಾರೆ. ಅವರ ಬಳಿ ಅಪ್ರಾಪ್ತಿಯ
ಹೆಸರು-ಚಿಹ್ನೆಯಿರುವುದಿಲ್ಲ. ಅಲ್ಪಕಾಲದ ಇಚ್ಛೆಗಳ ಅವಿದ್ಯಾ- ಇವರಿಗೆ ಸಂಪದ್ಭರಿತರೆಂದು
ಹೇಳಲಾಗುತ್ತದೆ. ಅವರು ಸದಾ ದಾತಾ ಆಗಿರುತ್ತಾರೆ, ಬೇಡುವುದಿಲ್ಲ. ಅವರು ಅಖಂಡ ಸುಖ-ಶಾಂತಿಯಿರುವ
ಸ್ವರಾಜ್ಯದ ಅಧಿಕಾರಿಯಾಗಿರುತ್ತಾರೆ. ಯಾವುದೇ ಪ್ರಕಾರದ ಪರಿಸ್ಥಿತಿಯು ಅವರ ಅಖಂಡ ಶಾಂತಿಯನ್ನು
ಖಂಡನೆ ಮಾಡಲು ಸಾಧ್ಯವಿಲ್ಲ.
ಸ್ಲೋಗನ್:
ಜ್ಞಾನ
ನೇತ್ರದಿಂದ ಮೂರೂ ಕಾಲಗಳ ಮತ್ತು ಮೂರೂ ಲೋಕಗಳನ್ನು ತಿಳಿದುಕೊಳ್ಳುವವರು ಮಾಸ್ಟರ್ ಜ್ಞಾನ
ಸಾಗರನಾಗಿದ್ದಾರೆ.