30.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ದುಃಖಹರ್ತ - ಸುಖಕರ್ತ ತಂದೆಯನ್ನು ನೆನಪು ಮಾಡಿದರೆ ನಿಮ್ಮ ದುಃಖಗಳೆಲ್ಲಾ - ದೂರ ಆಗಿ ಬಿಡುತ್ತವೆ,
ಅಂತಮತಿ ಸೋ ಗತಿ ಆಗಿ ಬಿಡುತ್ತದೆ”
ಪ್ರಶ್ನೆ:
ಬಾಬಾ ನಿಮಗೆ
ನಡೆಯುತ್ತಾ-ಓಡಾಡುತ್ತಾ ನೆನಪಿನಲ್ಲಿ ಇರುವ ಡೈರೆಕ್ಷನ್ ಏಕೆ ಕೊಟ್ಟಿದ್ದಾರೆ?
ಉತ್ತರ:
1. ಏಕೆಂದರೆ
ನೆನಪಿನಿಂದಲೇ ಜನ್ಮ-ಜನ್ಮಾಂತರದ ಪಾಪದ ಹೊರೆ ಇಳಿಯುವುದು. 2. ನೆನಪಿನಿಂದಲೇ
ಸತೋಪ್ರಧಾನರಾಗುತ್ತೇವೆ. 3. ಈಗಿನಿಂದ ನೆನಪಿನಲ್ಲಿ ಇರುವ ಅಭ್ಯಾಸ ಇದ್ದರೆ ಅಂತ್ಯ ಸಮಯದಲ್ಲಿ
ಒಬ್ಬ ತಂದೆಯ ನೆನಪಿನಲ್ಲಿ ಇರಬಹುದು. ಅಂತ್ಯಕಾಲದಲ್ಲಿ ಯಾರು ಸ್ತ್ರೀಯನ್ನು ಸ್ಮರಣೆ ಮಾಡುತ್ತಾರೆ....
ಎಂದು ಅಂತ್ಯ ಸಮಯಕ್ಕಾಗಿ ಗಾಯನವಿದೆ. 4. ತಂದೆಯನ್ನು ನೆನಪು ಮಾಡುವುದರಿಂದ 21 ಜನ್ಮಗಳ ಸುಖ
ಎದುರಿನಲ್ಲಿ ಬಂದು ಬಿಡುತ್ತದೆ. ತಂದೆಯಷ್ಟು ಮಧುರ ವಸ್ತು ಪ್ರಪಂಚದಲ್ಲಿ ಯಾವುದೂ ಇಲ್ಲ,
ಆದ್ದರಿಂದ ತಂದೆಯ ಆದೇಶವಾಗಿದೆ - ನಡೆಯುತ್ತಾ-ಓಡಾಡುತ್ತಾ ನನ್ನನ್ನೇ ನೆನಪು ಮಾಡಿ ಎಂದು.
ಓಂ ಶಾಂತಿ.
ಯಾರ ನೆನಪಿನಲ್ಲಿ ಕುಳಿತಿದ್ದೀರಿ? ಇದು ಅತೀ ಪ್ರಿಯ ಸಂಬಂಧ ಒಬ್ಬರ ಜೊತೆ, ಯಾವುದು ಎಲ್ಲರನ್ನು
ದುಃಖಗಳಿಂದ ಮುಕ್ತರನ್ನಾಗಿ ಮಾಡುವಂತಹದ್ದು. ತಂದೆ ಮಕ್ಕಳನ್ನು ನೋಡುತ್ತಾರೆಂದರೆ ಪಾಪಗಳು ಎಲ್ಲಾ
ಸಮಾಪ್ತಿ ಆಗುತ್ತಾ ಹೋಗುತ್ತದೆ. ಆತ್ಮ ಸತೋಪ್ರಧಾನವಾಗುತ್ತದೆ. ದುಃಖವಂತೂ ಬಹಳ ಇದೆ.
ದುಃಖಹರ್ತ-ಸುಖಕರ್ತ ಎಂಬ ಗಾಯನವಿದೆ. ಈಗ ತಂದೆ ಸತ್ಯವಾಗಿ ನಿಮ್ಮನ್ನು ಎಲ್ಲಾ ದುಃಖಗಳಿಂದ ಬಿಡುಗಡೆ
ಮಾಡಲು ಬಂದಿದ್ದಾರೆ. ಸ್ವರ್ಗದಲ್ಲಿ ದುಃಖದ ಹೆಸರು-ಗುರುತು ಇರುವುದಿಲ್ಲ. ಅಂತಹ ತಂದೆಯನ್ನು
ಅವಶ್ಯವಾಗಿ ನೆನಪು ಮಾಡಬೇಕು. ತಂದೆಗೆ ಮಕ್ಕಳ ಮೇಲೆ ಪ್ರೀತಿ ಇರುತ್ತದೆಯಲ್ಲವೇ, ತಂದೆಗೆ ಯಾವ
ಮಕ್ಕಳ ಮೇಲೆ ಪ್ರೀತಿ ಇದೆ ಎಂದು ನಿಮಗೆ ಗೊತ್ತಿದೆ. ತಮ್ಮನ್ನು ಆತ್ಮ ಎಂದು ತಿಳಿಯಿರಿ, ದೇಹ ಎಂದು
ತಿಳಿಯಬೇಡಿ. ಯಾರು ಒಳ್ಳೆ ರತ್ನಗಳಿದ್ದಾರೆ ಅವರು ತಂದೆಯನ್ನು ನಡೆಯುತ್ತಾ-ಓಡಾಡುತ್ತಾ ನೆನಪು
ಮಾಡುತ್ತಾರೆ, ಇದನ್ನೂ ಸಹ ಏಕೆ ಹೇಳಲಾಗುತ್ತದೆ? ಏಕೆಂದರೆ ನಿಮ್ಮ ಜನ್ಮ-ಜನ್ಮಾಂತರ ಪಾಪದ ಕೊಡ
ತುಂಬಿ ಬಿಟ್ಟಿದೆ. ಅಂದಾಗ ನೆನಪಿನ ಯಾತ್ರೆಯಿಂದಲೇ ಪಾಪಾತ್ಮರಿಂದ ಪ್ಯಣ್ಯಾತ್ಮರಾಗಿ ಬಿಡುತ್ತೀರಿ.
ಇದು ಹಳೆಯ ಶರೀರವಾಗಿದೆ ಎಂದು ತಾವು ಮಕ್ಕಳು ತಿಳಿದುಕೊಂಡಿದ್ದೀರಿ. ಆತ್ಮಕ್ಕೆ ದುಃಖ ಸಿಗುತ್ತದೆ.
ಶರೀರಕ್ಕೆ ಪೆಟ್ಟು ಆದಾಗ ಆತ್ಮಕ್ಕೆ ದುಃಖ ಆಗುತ್ತದೆ. ಆತ್ಮನೇ ನಾನು ದುಃಖಿ, ರೋಗಿ ಆಗಿದ್ದೇನೆ
ಎಂದು ಹೇಳುವುದು. ಇದು ದುಃಖದ ಪ್ರಪಂಚವಾಗಿದೆ. ಎಲ್ಲಿ ನೋಡಿದರೂ ದುಃಖವೇ ದುಃಖವಿದೆ, ಸುಖಧಾಮದಲ್ಲಿ
ದುಃಖವಿರಲು ಸಾಧ್ಯವಿಲ್ಲ. ದುಃಖದ ಹೆಸರನ್ನು ತೆಗೆದುಕೊಳ್ಳುತ್ತೀರೆಂದರೆ ನೀವು
ದುಃಖಧಾಮದಲ್ಲಿರುವಿರಿ ಎಂದರ್ಥ. ಸುಖಧಾಮದಲ್ಲಿ ಸ್ವಲ್ಪವೂ ದುಃಖವಿರುವುದಿಲ್ಲ. ಸಮಯವು ಬಹಳ ಕಡಿಮೆ
ಇದೆ, ಇದರಲ್ಲಿ ತಂದೆಯ ನೆನಪು ಮಾಡುವ ಪೂರ್ಣ ಪುರುಷಾರ್ಥ ಮಾಡಬೇಕು. ಎಷ್ಟು ನೆನಪು ಮಾಡುತ್ತಾ
ಇರುತ್ತೀರೋ ಅಷ್ಟು ಸತೋಪ್ರಧಾನರಾಗುತ್ತೀರಿ. ಪುರುಷಾರ್ಥ ಮಾಡಿ ಅಂತ್ಯದಲ್ಲಿ ಒಬ್ಬ ತಂದೆಯ ವಿನಃ
ಏನೂ ನೆನಪಿಗೆ ಬರದಂತಹ ಸ್ಥಿತಿಯನ್ನು ಮಾಡಿಕೊಳ್ಳಬೇಕು. ಒಂದು ಗೀತೆಯೂ ಇದೆ - ಅಂತ್ಯಕಾಲದಲ್ಲಿ
ಯಾರು ಸ್ತ್ರೀಯನ್ನು ಸ್ಮರಣೆ ಮಾಡಿದರೋ..... ಇದು ಅಂತ್ಯಕಾಲವಾಗಿದೆಯಲ್ಲವೇ. ಹಳೆಯ ಪ್ರಪಂಚ
ದುಃಖಧಾಮದ ಅಂತ್ಯವಾಗಿದೆ. ಈಗ ನೀವು ಸುಖಧಾಮಕ್ಕೆ ಹೋಗುವ ಪುರುಷಾರ್ಥ ಮಾಡುತ್ತಿದ್ದೀರಿ. ಈಗ
ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ. ಇದಂತೂ ನೆನಪಿರಬೇಕಲ್ಲವೆ - ಶೂದ್ರರಿಗೆ ದುಃಖವಿದೆ, ನಾವು
ದುಃಖದಿಂದ ಹೊರಬಂದು ಈಗ ತುತ್ತ ತುದಿಯನ್ನೇರುತ್ತಿದ್ದೇವೆ. ಅಂದಮೇಲೆ ಒಬ್ಬ ತಂದೆಯ ನೆನೆಪು
ಮಾಡಬೇಕು. ತಂದೆಯು ಅತ್ಯಂತ ಪ್ರಿಯರಾಗಿದ್ದಾರೆ. ಅವರಿಗಿಂತಲೂ ಮಧುರವಾದವರು ಯಾರಿರಲು ಸಾಧ್ಯ?
ಆತ್ಮವು ಆ ಪರಮಪಿತ ಪರಮಾತ್ಮನನ್ನೇ ನೆನಪು ಮಾಡುತ್ತದೆಯಲ್ಲವೆ. ಅವರು ಎಲ್ಲಾ ಆತ್ಮಗಳ
ತಂದೆಯಾಗಿದ್ದಾರೆ. ಅವರಿಗಿಂತ ಮಧುರವಾಗಿರುವವರು ಯಾರೂ ಈ ಪ್ರಪಂಚದಲ್ಲಿ ಇರಲು ಸಾಧ್ಯವಿಲ್ಲ.
ಇಷ್ಟೆಲ್ಲಾ ಮಕ್ಕಳಿದ್ದಾರೆ ಅಂದಮೇಲೆ ಎಷ್ಟು ಸಮಯದಲ್ಲಿ ನೆನಪಿಗೆ ಬರಬಹುದು - ಸೆಕೆಂಡಿನಲ್ಲಿ.
ಒಳ್ಳೆಯದು ಇಡೀ ಸೃಷ್ಟಿಯ ಚಕ್ರವು ಹೇಗೆ ತಿರುಗುತ್ತದೆ - ಅದೂ ಸಹ ನೀವು ಮಕ್ಕಳ ಬುದ್ಧಿಯಲ್ಲಿ
ಅರ್ಥ ಸಹಿತವಾಗಿ ತಿಳಿದಿದೆ. ಹೇಗೆ ಯಾರಾದರೂ ನಾಟಕವನ್ನು ನೋಡಿಕೊಂಡು ಬಂದರೆ, ನಾಟಕವು ನೆನೆಪಿದೆಯೇ
ಎಂದು ಯಾರಾದರೂ ಅವರನ್ನು ಕೇಳಿದಾಗ ಹೌದು ಎಂದು ಹೇಳಿದ ತಕ್ಷಣ ಪ್ರಾರಂಭದಿಂದ ಅಂತ್ಯದವರೆಗೆ ಎಲ್ಲವೂ
ಬುದ್ಧಿಯಲ್ಲಿ ಬಂದು ಬಿಡುತ್ತದೆ. ಬಾಕಿ ಇದನ್ನು ವರ್ಣನೆ ಮಾಡಿ ತಿಳಿಸುವುದರಲ್ಲಿ ಸಮಯ
ಹಿಡಿಯುತ್ತದೆ. ಬಾಬಾ ಬೇಹದ್ದಿನ ತಂದೆಯಾಗಿದ್ದಾರೆ, ಅವರನ್ನು ನೆನಪು ಮಾಡುವುದರಿಂದ 21 ಜನ್ಮಗಳ
ಸುಖವು ನಿಮ್ಮ ಸನ್ಮುಖದಲ್ಲಿ ಬರುತ್ತದೆ. ತಂದೆಯಿಂದ ಈ ಸುಖವು ಸಿಗುತ್ತದೆ. ಸೆಕೆಂಡಿನಲ್ಲಿ
ಮಕ್ಕಳಿಗೆ ತಂದೆಯ ಆಸ್ತಿಯು ಸನ್ಮುಖದಲ್ಲಿ ಬರುತ್ತದೆ. ಮಗುವಿನ ಜನ್ಮವಾಯಿತೆಂದರೆ ವಾರಸುದಾರ ಜನ್ಮ
ಪಡೆದನೆಂದು ತಂದೆಯು ತಿಳಿಯುತ್ತಾರೆ. ಸಂಪತ್ತೆಲ್ಲವೂ ನೆನಪಿಗೆ ಬರುತ್ತದೆ. ನೀವು ಒಬ್ಬೊಬ್ಬರು
ಬೇರೆ ಬೇರೆ ಮಗುವಾಗಿದ್ದಿರಿ ಬೇರೆ ಬೇರೆಯಾಗಿ ಆಸ್ತಿಯು ಸಿಗುತ್ತದೆಯಲ್ಲವೆ! ಎಲ್ಲರೂ ಬೇರೆ
ಬೇರೆಯಾಗಿಯೇ ನೆನಪು ಮಾಡುತ್ತೀರಿ. ನಾವು ಬೇಹದ್ದಿನ ತಂದೆಗೆ ವಾರಸುದಾರರಾಗುತ್ತೇವೆ,
ಸತ್ಯಯುಗದಲ್ಲಿಯಂತೂ ಒಂದೆ ಗಂಡು ಮಗುವಾಗುತ್ತದೆ. ಅದು ಪೂರ್ಣ ಆಸ್ಥಿಗೆ ವಾರಸುದಾರ ಆಯಿತು.
ಮಕ್ಕಳಿಗೆ ತಂದೆ ಸಿಕ್ಕಿದರೆಂದರೆ ಸೆಕೆಂಡಿನಲ್ಲಿ ವಿಶ್ವದ ಮಾಲೀಕರಾದರು, ತಡವಾಗುವುದಿಲ್ಲ. ತಂದೆಯು
ತಿಳಿಸುತ್ತಾರೆ - ನೀವು ನಿಮ್ಮನ್ನು ಆತ್ಮವೆಂದು ತಿಳಿಯಿರಿ. ಆತ್ಮಗಳೆಲ್ಲರೂ ಸಹೋದರರಾಗಿದ್ದಾರೆ.
ಯಾವ ಯಾವ ಧರ್ಮದವರು ಬರುತ್ತಾರೆ ಆ ಎಲ್ಲಾ ಧರ್ಮದವರೂ ಸಹೋದರರೆಂದು ಹೇಳುತ್ತಾರೆ ಆದರೆ
ತಿಳಿದುಕೊಳ್ಳುವುದಿಲ್ಲ. ಈಗ ನಿಮಗೆ ಗೊತ್ತಿದೆ, ನಾವು ತಂದೆಯ ಅತೀ ಪ್ರೀತಿಯ ಮಕ್ಕಳಾಗಿದ್ದೇವೆ.
ತಂದೆಯಿಂದ ಪೂರ್ಣ ಬೇಹದ್ದಿನ ಆಸ್ತಿಯು ಅವಶ್ಯವಾಗಿ ಸಿಗುವುದು. ಹೇಗೆ ತೆಗೆದುಕೊಳ್ಳುತ್ತೀರಿ? ಅದೂ
ಸಹ ನಿಮಗೆ ಮಕ್ಕಳಿಗೆ ಸೆಕೆಂಡಿನಲ್ಲಿ ನೆನಪಿಗೆ ಬರುತ್ತದೆ. ನಾವು ಸತೋಪ್ರಧಾನರಾಗಿದ್ದೇವೆ, ನಂತರ
ತಮೋಪ್ರಧಾನರಾದೆವು. ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ. ನಿಮಗೆ ಗೊತ್ತಿದೆ, ತಂದೆಯಿಂದ ನೀವು
ಸ್ವರ್ಗದ ಸುಖದ ಆಸ್ತಿಯನ್ನು ಪಡೆಯಬೇಕಾಗಿದೆ.
ತಂದೆಯ ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿಯಿರಿ. ದೇಹವಂತೂ ವಿನಾಶಿಯಾಗಿದೆ. ಆತ್ಮವೇ
ಶರೀರವನ್ನು ಬಿಟ್ಟು ಹೊರಟು ಹೋಗುತ್ತದೆ. ಹೋಗಿ ಇನ್ನೊಂದು ಹೊಸ ಶರೀರವನ್ನು ಗರ್ಭದಲ್ಲಿ
ತೆಗೆದುಕೊಳ್ಳುತ್ತದೆ. ಯಾವಾಗ ಪಂಚ ತತ್ವಗಳ ಗೊಂಬೆಯು ತಯಾರಾಗುವುದೋ ಆಗ ಅದರಲ್ಲಿ ಆತ್ಮವು
ಪ್ರವೇಶವಾಗುತ್ತದೆ ಆದರೆ ಅದಂತೂ ರಾವಣನ ವಶವಾಗಿದೆ. ವಿಕಾರಗಳಿಗೆ ವಶವಾಗಿ ಜೈಲಿಗೆ ಹೋಗುತ್ತಾರೆ.
ಸತ್ಯಯುಗದಲ್ಲಿ ರಾವಣನು ಇರುವುದೇ ಇಲ್ಲ. ದುಃಖದ ಮಾತೇ ಇರುವುದಿಲ್ಲ. ವೃದ್ಧರಾದಾಗ ಈ ಶರೀರವನ್ನು
ಬಿಟ್ಟು ಈಗ ನಾವು ಇನ್ನೊಂದು ಶರೀರದಲ್ಲಿ ಹೋಗಿ ಪ್ರವೇಶ ಮಾಡುತ್ತೇವೆಂದು ತಿಳಿಯುತ್ತದೆ. ಅಲ್ಲಿ
ಹೆದರಿಕೆಯ ಮಾತೇ ಇರುವುದಿಲ್ಲ, ಇಲ್ಲಿ ಎಷ್ಟು ಹೆದರುತ್ತಾರೆ. ಅಲ್ಲಿ ನಿರ್ಭಯರಾಗಿರುತ್ತಾರೆ.
ತಂದೆಯು ನೀವು ಮಕ್ಕಳನ್ನು ಅಪಾರ ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆ. ಸತ್ಯಯುಗದಲ್ಲಿ ಅಪಾರ
ಸುಖವಿತ್ತು, ಕಲಿಯುಗದಲ್ಲಿ ಅಪಾರ ದುಃಖವಿದೆ, ಆದ್ದರಿಂದ ಇದನ್ನು ದುಃಖಧಾಮವೆಂದು ಕರೆಯುತ್ತಾರೆ.
ತಂದೆಯು ಯಾವುದೇ ಕಷ್ಟವನ್ನು ಕೊಡುವುದಿಲ್ಲ. ಭಲೆ ಗ್ರಹಸ್ಥ ವ್ಯವಹಾರದಲ್ಲಿದ್ದು ಮಕ್ಕಳನ್ನು
ಸಂಭಾಲನೆ ಮಾಡಿ ಆದರೆ ಕೇವಲ ತಂದೆಯನ್ನು ನೆನಪು ಮಾಡಿ, ಗುರು-ಗೋಸಾಯಿಗಳನ್ನು ಬಿಡಿ. ನಾನು ಎಲ್ಲಾ
ಗುರುಗಳಿಗಿಂತ ಹಿರಿಯನಾಗಿದ್ದೇನಲ್ಲವೆ. ಅವರೆಲ್ಲರೂ ನನ್ನ ರಚನೆಯಾಗಿದ್ದಾರೆ. ನನ್ನ ವಿನಃ ಬೇರೆ
ಯಾರಿಗೂ ಪತಿತ ಪಾವನ ಎಂದು ಹೇಳುವುದಿಲ್ಲ. ಬ್ರಹ್ಮಾ-ವಿಷ್ಣು-ಶಂಕರರಿಗೆ ಪತಿತ ಪಾವನ ಎಂದು
ಹೇಳುತ್ತೀರಾ? ನನ್ನ ವಿನಃ ದೇವತೆಗಳಿಗೂ ಹೇಳಲು ಸಾಧ್ಯವಿಲ್ಲ. ಈಗ ನೀವು ಮಕ್ಕಳು ಗಂಗೆಯನ್ನು ಪತಿತ
ಪಾವನಿ ಎಂದು ಹೇಳುತ್ತೀರಾ? ಈ ನೀರಿನ ನದಿಗಳಂತೂ ಸದಾ ಹರಿಯುತ್ತವೆ. ಗಂಗಾ, ಬ್ರಹ್ಮಪುತ್ರ
ಮುಂತಾದವುಗಳೂ ಹರಿದು ಬರುತ್ತವೆ. ಇದರಲ್ಲಿ ಸ್ನಾನ ಮಾಡುತ್ತಲೇ ಇರುತ್ತಾರೆ. ಮಳೆಯು ಬಂದಾಗ
ಪ್ರವಾಹ ಬರುತ್ತದೆ. ಇದೂ ದುಃಖವಾಯಿತಲ್ಲವೆ, ಅಪಾರ ದುಃಖವಿದೆ, ಪ್ರವಾಹದಲ್ಲಿ ನೋಡಿ ಎಷ್ಟು ಜನ
ಸತ್ತು ಹೋದರು, ಎಷ್ಟೊಂದು ಮನುಷ್ಯರು ಶರೀರ ಬಿಟ್ಟರು. ಸತ್ಯಯುಗದಲ್ಲಿ ದುಃಖದ ಮಾತಿಲ್ಲ.
ಪ್ರಾಣಿಗಳಿಗೂ ಸಹ ದುಃಖವಾಗುವುದಿಲ್ಲ. ಅವುಗಳಿಗೂ ಅಕಾಲ ಮೃತ್ಯು ಇರುವುದಿಲ್ಲ. ಈ ನಾಟಕವೇ ಹೀಗೆ
ಮಾಡಲ್ಪಟ್ಟಿದೆ. ಬಾಬಾ, ತಾವು ಬಂದರೆ ನಾವು ನಿಮಗೆ ಬಲಿಹಾರಿಯಾಗುತ್ತೇವೆಂದು ಭಕ್ತಿಯಲ್ಲಿ
ಹಾಡುತ್ತಾರೆ. ತಂದೆಯು ಬಂದೇ ಬರುತ್ತಾರಲ್ಲವೇ. ದುಃಖಧಾಮದ ಅಂತ್ಯ ಮತ್ತು ಸುಖಧಾಮದ ಪ್ರಾರಂಭದ
ಮಧ್ಯದ ಸಮಯದಲ್ಲಿ ಬರುತ್ತಾರೆ. ಆದರೆ ಇದು ಯಾರಿಗೂ ತಿಳಿದಿಲ್ಲ. ಸೃಷ್ಟಿಯ ಆಯುಷ್ಯ ಎಷ್ಟಿರುತ್ತದೆ
ಎನ್ನುವುದೂ ಗೊತ್ತಿಲ್ಲ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ. ಸೃಷ್ಟಿಯ ಆಯುಷ್ಯ 5000
ವರ್ಷಗಳೆಂದು ಮೊದಲು ನಿಮಗೆ ಗೊತ್ತಿತ್ತೇ? ಮನುಷ್ಯರು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಈಗ
ತಂದೆಯು ತಿಳಿಸಿದ್ದಾರೆ ಪ್ರತಿ ಯುಗದ ಕಾಲಾವಧಿ 1250 ವರ್ಷಗಳು. ಸ್ವಸ್ತಿಕದಲ್ಲಿ ಪೂರ್ಣ ನಾಲ್ಕು
ಭಾಗಗಳನ್ನು ತೋರಿಸುತ್ತಾರೆ. ಸ್ವಲ್ಪವೂ ಅಂತರವಿರುವುದಿಲ್ಲ. ವಿವೇಕ ಹೇಳುತ್ತದೆ, ಲೆಕ್ಕವು
ನಿಖರವಾಗಿರಬೇಕು. ಜಗನ್ನಾಥ ಪುರಿಯಲ್ಲಿ ಅನ್ನದ ಭೋಗವನ್ನಿಡುತ್ತಾರೆ, ಆಗ ಅದರಲ್ಲಿ ತಾನಾಗಿಯೇ
ನಾಲ್ಕು ಭಾಗಗಳಾಗುತ್ತವೆ. ಎಂತಹ ಯುಕ್ತಿಯನ್ನು ಮಾಡುತ್ತಾರೆ. ಅಲ್ಲಿ ಅನ್ನ ಬಹಳ ಉಣ್ಣುತ್ತಾರೆ.
ಜಗನ್ನಾಥನೆಂದಾದರೂ ಹೇಳಿ ಶ್ರೀನಾಥನೆಂದಾದರೂ ಹೇಳಿ ಒಂದೇ ಮಾತಾಗಿದೆ. ಇಬ್ಬರನ್ನೂ ಕಪ್ಪಾಗಿ
ತೋರಿಸಿದ್ದಾರೆ. ಶ್ರೀನಾಥನ ಮಂದಿರದಲ್ಲಿ ತುಪ್ಪದ ಭಂಡಾರವಿರುತ್ತದೆ. ತುಪ್ಪದಿಂದ ಮಾಡಿದ
ಒಳ್ಳೊಳ್ಳೆಯ ಪಧಾರ್ಥಗಳು ಸಿಗುತ್ತವೆ. ಹೊರಗೆ ಅಂಗಡಿಗಳನ್ನಿಟ್ಟು ಮಾರುತ್ತಾರೆ. ಎಷ್ಟೊಂದು
ನೈವೇಧ್ಯವನ್ನಿಡಬಹುದು ಎಲ್ಲಾ ಯಾತ್ರಿಕರು ಆ ಪದಾರ್ಥಗಳನ್ನು ತೆಗೆದುಕೊಂಡು ತಿನ್ನುತ್ತಾರೆ.
ಜಗನ್ನಾಥ ಪುರಿಯಲ್ಲಿ ಅನ್ನವೇ ಅನ್ನವಿರುತ್ತದೆ. ಇವರು ಜಗನ್ನಾಥ, ಅವರು ಶ್ರೀನಾಥ. ಸುಖಧಾಮ ಮತ್ತು
ದುಃಖಧಾಮದವರು. ಈ ಸಮಯದಲ್ಲಿಯೇ ಕಾಮಚಿತೆಯನ್ನೇರಿ ಕಪ್ಪಾಗಿದ್ದಾರೆ. ಜಗನ್ನಾಥನಿಗೆ ಕೇವಲ ಅನ್ನದ
ಭೋಗವನ್ನಿಡುತ್ತಾರೆ. ಜಗನ್ನಾಥನನ್ನು ಬಡವನನ್ನಾಗಿ ಮತ್ತು ಶ್ರೀನಾಥನನ್ನು ಸಾಹುಕಾರನನ್ನಾಗಿ
ತೋರಿಸುತ್ತಾರೆ ಅಂದರೆ ಸತ್ಯಯುಗದ ಚಿನ್ಹೆ ಶ್ರೀನಾಥ(ಕೃಷ್ಣ), ಕಲಿಯುಗದ ಚಿನ್ಹೆ
ಜಗನ್ನಾಥನನ್ನು(ಬ್ರಹ್ಮಾ) ತೋರಿಸಿದ್ದಾರೆ. ಜ್ಞಾನಸಾಗರ ಒಬ್ಬ ತಂದೆಯೇ ಆಗಿದ್ದಾರೆ. ಭಕ್ತಿಗೆ
ಅಜ್ಞಾನವೆಂದು ಹೇಳಲಾಗುತ್ತದೆ, ಅದರಿಂದ ಏನೂ ಸಿಗುವುದಿಲ್ಲ. ಅಲ್ಲಿ ಕೇವಲ ಗುರುಗಳಿಗೆ
ಸಂಪಾದನೆಯಾಗುತ್ತದೆ, ಬುದ್ಧಿವಂತರಾಗಿದ್ದಾರೆ. ಅವರಿಂದ ಯಾರಾದರೂ ಕಲಿತರೆ ಇವರು ನಮ್ಮ
ಗುರುವಾಗಿದ್ದಾರೆ, ಅವರೇ ನಮಗೆ ಇದನ್ನು ಕಲಿಸಿದ್ದಾರೆಂದು ಹೇಳುತ್ತಾರೆ. ಅವರೆಲ್ಲರೂ ಜನ್ಮವನ್ನು
ತೆಗೆದುಕೊಳ್ಳುವಂತಹ ದೇಹಧಾರಿಯಾಗಿದ್ದಾರೆ.
ಈಗ ನಿಮ್ಮ ಜೊತೆಯಾರಿದ್ದಾರೆ? ವಿಚಿತ್ರ ತಂದೆ. ತಂದೆಯು ತಿಳಿಸುತ್ತಾರೆ - ಇದು ನನ್ನ ಶರೀರವಲ್ಲ,
ನಿಮ್ಮ ಈ ದಾದಾರವರ ಶರೀರವಾಗಿದೆ, ಇವರೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ, ಇವರ ಬಹಳ
ಜನ್ಮಗಳ ಅಂತಿಮ ಜನ್ಮದಲ್ಲಿ ನಿಮ್ಮನ್ನು ಸುಖಧಾಮಕ್ಕೆ ಕರೆದುಕೊಂಡು ಹೋಗಲು ನಾನು ಇವರಲ್ಲಿ ಪ್ರವೇಶ
ಮಾಡುತ್ತೇನೆ. ಇವರಿಗೆ ಗೋಮುಖವೆಂದು ಹೇಳುತ್ತಾರೆ. ಗೋಮುಖ ನೋಡಲು ಎಷ್ಟು ದೂರ ದೂರದಿಂದ ಬರುತ್ತಾರೆ.
ಇಲ್ಲಿಯೂ ಗೋಮುಖವಿದೆ. ಪರ್ವತದಿಂದ ನೀರು ಅವಶ್ಯವಾಗಿ ಬರುತ್ತದೆ. ಬಾವಿಯಲ್ಲಿಯೂ ಸಹ ಪ್ರತಿ ದಿನ
ಪರ್ವತದಿಂದ ನೀರು ಹರಿದು ಬರುತ್ತದೆ. ಅದು ಎಂದೂ ನಿಂತು ಹೋಗುವುದಿಲ್ಲ. ನೀರು ಬರುತ್ತಲೇ ಇರುತ್ತದೆ.
ಎಲ್ಲಿಂದಲಾದರೂ ಕಾಲುವೆ ಬಂದರೆ ಅದಕ್ಕೆ ಗಂಗಾ ಜಲವೆಂದು ಹೇಳಿ ಬಿಡುತ್ತಾರೆ. ಅಲ್ಲಿ ಹೋಗಿ ಸ್ನಾನ
ಮಾಡುತ್ತಾರೆ. ಗಂಗಾಜಲವೆಂದು ತಿಳಿಯುತ್ತಾರೆ. ಆದರೆ ಈ ನೀರಿನಿಂದೇನಾದರೂ ಪಾವನರಾಗುತ್ತಾರೆಯೇ!
ತಂದೆಯು ತಿಳಿಸುತ್ತಾರೆ - ನಾನು ಪತಿತ ಪಾವನನಾಗಿದ್ದೇನೆ, ಹೇ ಆತ್ಮಗಳೇ, ನನ್ನೊಬ್ಬನನ್ನೇ ನೆನಪು
ಮಾಡಿರಿ. ದೇಹ ಸಹಿತ ದೇಹದ ಎಲ್ಲ ಸಂಬಂಧಗಳನ್ನು ಬಿಟ್ಟು ತಮ್ಮನ್ನು ಆತ್ಮವೆಂದು ತಿಳಿದು ನನ್ನನ್ನು
ನೆನಪು ಮಾಡಿ ಆಗ ನಿಮ್ಮ ಜನ್ಮ ಜನ್ಮಾಂತರದ ಪಾಪಗಳು ಭಸ್ಮವಾಗುತ್ತವೆ. ತಂದೆಯು ನಿಮ್ಮನ್ನು ಜನ್ಮ
ಜನ್ಮಾಂತರದ ಪಾಪಗಳಿಂದ ಬಿಡಿಸುತ್ತಾರೆ. ಈ ಸಮಯದಲ್ಲಿಯಂತೂ ಪ್ರಪಂಚದಲ್ಲಿ ಎಲ್ಲರೂ ಪಾಪ
ಮಾಡುತ್ತಿರುತ್ತಾರೆ, ಕರ್ಮಭೋಗವಿದೆಯಲ್ಲವೆ. ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದಾರೆ. 63 ಜನ್ಮಗಳ
ಲೆಕ್ಕಾಚಾರವಿದೆಯಲ್ಲವೆ. ಸ್ವಲ್ಪ ಸ್ವಲ್ಪವಾಗಿ ಕಲೆಗಳು ಕಡಿಮೆಯಾಗುತ್ತವೆ, ಚಂದ್ರನ ಕಲೆಗಳು ಕಡಿಮೆ
ಆಗುವಂತೆ. ಇದು ಬೇಹದ್ದಿನ ಹಗಲು ರಾತ್ರಿಯಾಗಿದೆ. ಈಗ ಇಡೀ ಪ್ರಪಂಚದಲ್ಲಿ ರಾಹುವಿನ ದೆಶೆ ಇದೆ.
ರಾಹುವಿನ ಗ್ರಹಣವು ಹಿಡಿದಿದೆ. ಈಗ ನೀವು ಮಕ್ಕಳು ಶ್ಯಾಮದಿಂದ ಸುಂದರ ಆಗುತ್ತಿರುವಿರಿ. ಆದ್ದರಿಂದ
ಕೃಷ್ಣನಿಗೆ ಶ್ಯಾಮ ಸುಂದರ ಎಂದು ಹೇಳುತ್ತಾರೆ. ಕಪ್ಪಾಗಿಯೇ ಮಾಡುತ್ತಾರೆ. ಕಾಮ
ಚಿತೆಯನ್ನೇರಿರುವುದರಿಂದ ಈ ಗುರುತನ್ನು ತೋರಿಸಿ ಬಿಟ್ಟಿದ್ದಾರೆ. ಆದರೆ ಮನುಷ್ಯರ ಬುದ್ಧಿ ಓಡುವುದೇ
ಇಲ್ಲ. ಒಬ್ಬರನ್ನು ಕಪ್ಪು ಇನ್ನೊಬ್ಬರನ್ನು ಬಿಳಿಯಾಗಿ ತೋರಿಸಿದ್ದಾರೆ. ಈಗ ನೀವು ಸುಂದರರಾಗುವ
ಪುರುಷಾರ್ಥ ಮಾಡುತ್ತಿರುವಿರಿ. ಸತೋಪ್ರಧಾನರಾಗುವ ಪುರುಷಾರ್ಥ ಮಾಡಿದಾಗಲೇ ಆಗುತ್ತೀರಿ. ಇದರಲ್ಲಿ
ಕಷ್ಟದ ಮಾತಿಲ್ಲ. ಈ ಜ್ಞಾನವನ್ನು ನೀವೀಗ ಕೇಳುತ್ತೀರಿ, ನಂತರ ಪ್ರಾಯಲೋಪವಾಗುತ್ತದೆ. ಭಲೇ
ಗೀತೆಯನ್ನು ಓದಿ ತೋರಿಸುತ್ತಾರೆ ಆದರೆ ಈ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ. ಅದು ಭಕ್ತಿಮಾರ್ಗದ
ಪುಸ್ತಕವಾಯಿತು. ಭಕ್ತಿಮಾರ್ಗದಲ್ಲಿ ಬಹಳ ಸಾಮಗ್ರಿಗಳಿವೆ. ಬಹಳ ಶಾಸ್ತ್ರಗಳಿವೆ. ಒಬ್ಬೊಬ್ಬರು
ಒಂದೊಂದನ್ನು ಓದುತ್ತಾರೆ. ರಾಮನ ಮಂದಿರಕ್ಕೆ ಹೊಗುತ್ತಾರೆ, ರಾಮನನ್ನೂ ಕಪ್ಪಾಗಿ ತೋರಿಸಿದ್ದಾರೆ.
ಅಂದಾಗ ವಿಚಾರ ಮಾಡಬೇಕು, ಏಕೆ ಕಪ್ಪಾಗಿ ತೋರಿಸಿದ್ದಾರೆ? ಕಲ್ಕತ್ತಾದ ಕಾಳಿಯ ಮಂದಿರವೂ ಇದೆ. ಅಮ್ಮ,
ಅಮ್ಮ ಎಂದು ಅವರು ಬಹಳ ಅಳುತ್ತಾರೆ. ಎಲ್ಲರಿಗಿಂತ ಕಪ್ಪು ಹಾಗೂ ಎಲ್ಲರಿಗಿಂತ ಭಯಂಕರವಾಗಿ
ತೋರಿಸಿದ್ದಾರೆ, ಅವರನ್ನು ಮತ್ತೆ ತಾಯಿಯೆಂದು ಹೇಳುತ್ತಾರೆ. ನಿಮ್ಮದು ಜ್ಞಾನ ಬಾಣ, ಜ್ಞಾನ
ಕತ್ತಿಯಾಗಿದೆ. ಅದನ್ನು ಅವರು ಆಯುಧಗಳನ್ನಾಗಿ ತೋರಿಸಿದ್ದಾರೆ. ವಾಸ್ತವವಾಗಿ ಕಾಳಿಗೆ ಮೊದಲು
ಮನುಷ್ಯರ ಬಲಿ ಕೊಡುತ್ತಿದ್ದರು. ಈಗ ಸರಕಾರವು ನಿಷೇಧಿಸಿದೆ. ಮೊದಲು ಸಿಂಧನಲ್ಲಿ ದೇವಿಯ
ಮಂದಿರವಿರಲಿಲ್ಲ. ಯಾವಾಗ ಬಾಂಬು ಸ್ಫೋಟವಾಯಿತು ಆಗ ಒಬ್ಬ ಬ್ರಾಹ್ಮಣ ಹೇಳಿದ - ಕಾಳಿಯು ನನ್ನ
ಮಂದಿರವಿಲ್ಲ, ಆದ್ದರಿಂದ ಬೇಗ ಕಟ್ಟಿಸಿ ಎಂದು ನಮಗೆ ದೇವಿಯು ಈ ರೀತಿ ಸೂಚನೆ ಕೊಟ್ಟಿದ್ದಾರೆ.
ಇಲ್ಲದಿದ್ದರೆ ಇನ್ನೂ ಬಾಂಬುಗಳು ಸ್ಫೋಟವಾಗುತ್ತವೆ ಎಂದಾಗ ಬೇಗ ಬೇಗ ಹಣವು ಸೇರಿತು, ಮಂದಿರವಾಗಿ
ಬಿಟ್ಟಿತು. ಈಗ ನೋಡಿ ಎಷ್ಟೊಂದು ಮಂದಿರಗಳಿವೆ! ಎಷ್ಟೊಂದು ಸ್ಥಾನಗಳಲ್ಲಿ ಅಲೆಯುತ್ತಾರೆ. ತಂದೆಯು
ನಿಮ್ಮನ್ನು ಈ ಎಲ್ಲ ಮಾತುಗಳಿಂದ ಬಿಡಿಸಲು ತಿಳಿಸುತ್ತಾರೆ. ಯಾರ ನಿಂದನೆಯನ್ನೂ ಮಾಡುತ್ತಿಲ್ಲ.
ತಂದೆ ನಾಟಕವನ್ನು ತಿಳಿಸುತ್ತಾರೆ. ಈ ಸೃಷ್ಟಿಚಕ್ರವು ಹೇಗೆ ಮಾಡಲ್ಪಟ್ಟಿದೆ, ನೀವು ಏನೆಲ್ಲಾ
ನೋಡಿರುವಿರಿ ಅದು ಪುನಃ ನಡೆಯುವುದು. ಯಾವ ವಸ್ತುವಿಲ್ಲವೋ ಅದು ತಯಾರಾಗುತ್ತದೆ. ನಿಮಗೂ -
ಗೊತ್ತಿದೆ ನಮ್ಮ ರಾಜ್ಯವಿತ್ತು, ಅದನ್ನು ನಾವು ಕಳೆದುಕೊಂಡೆವು. ಈಗ ತಂದೆ ಪುನಃ ತಿಳಿಸುತ್ತಾರೆ,
ಮಕ್ಕಳೇ ನರನಿಂದ ನಾರಾಯಣನಾಗಬೇಕಾದರೆ ಪುರುಷಾರ್ಥ ಮಾಡಿರಿ. ಭಕ್ತಿಮಾರ್ಗದಲ್ಲಿ ನೀವು ಬಹಳ
ಕಥೆಯನ್ನು ಕೇಳಿದ್ದೀರಿ. ಅಮರ ಕಥೆಯನ್ನೂ ಕೇಳಿದಿರಿ, ಆದರೆ ಯಾರಾದರೂ ಅಮರರಾದರೆ? ಯಾರಿಗಾದರೂ
ಜ್ಞಾನದ ಮೂರನೇ ನೇತ್ರ ಸಿಕ್ಕಿತೆ? ಇದನ್ನು ತಂದೆಯು ತಿಳಿಸುತ್ತಾರೆ. ಈ ಕಣ್ಣುಗಳಿಂದ
ಕೆಟ್ಟದ್ದನ್ನು ನೋಡಬೇಡಿ. ಪವಿತ್ರ ದೃಷ್ಟಿಯಿಂದ ನೋಡಿ. ವಿಕಾರೀ ದೃಷ್ಟಿಯಿಂದಲ್ಲ. ಈ ಹಳೆಯ
ಪ್ರಪಂಚವನ್ನು ನೋಡಬೇಡಿ. ಇದಂತೂ ಸಮಾಪ್ತಿ ಅಗುತ್ತದೆ. ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ
ಮಕ್ಕಳೇ, ನಾನು ನಿಮಗೆ 21 ಜನ್ಮಗಳಿಗಾಗಿ ರಾಜ್ಯವನ್ನು ಕೊಟ್ಟು ಹೋಗುತ್ತೇನೆ. ಅಲ್ಲಿ ಬೇರೆ ಯಾರ
ರಾಜ್ಯವೂ ಇರುವುದಿಲ್ಲ. ದುಃಖದ ಹೆಸರೂ ಇರುವುದಿಲ್ಲ. ನೀವು ಬಹಳ ಸುಖಿ ಮತ್ತು ಧನವಂತರಾಗುತ್ತೀರಿ.
ಇಲ್ಲಿ ಮನುಷ್ಯರು ಎಷ್ಟು ಹಸಿವಿನಿಂದ ಬಳಲುತ್ತಾರೆ. ಸತ್ಯಯುಗದಲ್ಲಿ ನೀವು ಇಡೀ ವಿಶ್ವದ ಮೇಲೆ
ರಾಜ್ಯ ಮಾಡುತ್ತೀರಿ. ಎಷ್ಟು ಚಿಕ್ಕ ಭೂಮಿಬೇಕು. ಚಿಕ್ಕ ತೋಟವು ವೃದ್ಧಿಯನ್ನು ಹೊಂದುತ್ತಾ
ಹೊಂದುತ್ತಾ ಕಲಿಯುಗದ ಅಂತ್ಯದವರೆಗೆ ಎಷ್ಟು ದೊಡ್ಡದಾಗುತ್ತದೆ, ಪುನಃ ಪಂಚ ವಿಕಾರಗಳು
ಪ್ರವೇಶವಾಗುವ ಕಾರಣ ಅದು ಮುಳ್ಳಿನ ಕಾಡಾಗುತ್ತದೆ. ತಂದೆಯೇ ತಿಳಿಸುತ್ತಾರೆ - ಕಾಮ
ಮಹಾಶತ್ರುವಾಗಿದೆ. ಇದರಿಂದ ನೀವು ಆದಿ, ಮಧ್ಯ, ಅಂತ್ಯ ದುಃಖವನ್ನು ಪಡೆಯುತ್ತೀರಿ. ಜ್ಞಾನ ಮತ್ತು
ಭಕ್ತಿಯನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ವಿನಾಶವು ಸನ್ಮುಖದಲ್ಲಿ ನಿಂತಿದೆ. ಆದ್ದರಿಂದ ಬೇಗ
ಬೇಗ ಪುರುಷಾರ್ಥ ಮಾಡಬೇಕು. ಇಲ್ಲವಾದರೆ ಪಾಪಗಳು ಭಸ್ಮವಾಗುವುದಿಲ್ಲ. ಪತಿತ ಪಾವನ ಒಬ್ಬ ತಂದೆ
ಮಾತ್ರ ಆಗಿದ್ದಾರೆ. ಕಲ್ಪದ ಮೊದಲು ಪುರುಷಾರ್ಥ ಮಾಡಿದವರು ಮಾಡಿಯೇ ತೋರಿಸುತ್ತಾರೆ. ಸದಾ ಸುಖ
ಕೊಡುವವರನ್ನೇ ನೆನಪು ಮಾಡಿರಿ. ಇದರಲ್ಲಿ ಹುಡುಗಾಟಿಕೆ ಮಾಡಬೇಡಿ. ನೆನಪು ಮಾಡದಿದ್ದರೆ ಹೇಗೆ
ಪಾವನರಾಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾ ಅವರ ನೆನಪು, ಪ್ರೀತಿ ಹಾಗೂ
ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ
ಕಣ್ಣುಗಳಿಂದ ಕೆಟ್ಟದ್ದನ್ನು ನೋಡಬಾರದು, ತಂದೆಯು ಕೊಟ್ಟಿರುವ ಜ್ಞಾನದ ಮೂರನೇ ಪವಿತ್ರ ನೇತ್ರದಿಂದ
ಮಾತ್ರ ನೋಡಬೇಕು. ಸತೋಪ್ರಧಾನರಾಗುವ ಪೂರ್ಣ ಪುರುಷಾರ್ಥ ಮಾಡಬೇಕು.
2. ಗೃಹಸ್ಥ ವ್ಯವಹಾರವನ್ನು ಸಂಭಾಲನೆ ಮಾಡುತ್ತಾ ಅತ್ಯಂತ ಪ್ರಿಯರಾದ ತಂದೆಯನ್ನು ನೆನಪು ಮಾಡಬೇಕು.
ಅಂತ್ಯಕಾಲದಲ್ಲಿ ಒಬ್ಬ ತಂದೆಯ ವಿನಃ ಅನ್ಯ ಯಾರ ನೆನಪೂ ಬರದಂತಹ ಸ್ಥಿತಿಯನ್ನು ಮಾಡಿಕೊಳ್ಳಬೇಕು.
ವರದಾನ:
ಎಚ್ಚರಿಕೆ ಮತ್ತು
ಚೆಕ್ಕಿಂಗ್ ಮೂಲಕ ಸ್ವ-ಸೇವೆ ಮಾಡುವಂತಹ ಸಂಪನ್ನ ಮತ್ತು ಸಂಪೂರ್ಣ ಭವ.
ಸ್ವಯಂನ ಸೇವೆ ಅರ್ಥಾತ್
ಸ್ವಯಂನ ಮೇಲೆ ಸಂಪನ್ನ ಮತ್ತು ಸಂಪೂರ್ಣ ಆಗಲು ಸದಾ ಎಚ್ಚರಿಕೆ ಇಟ್ಟುಕೊಳ್ಳಬೇಕು. ವಿದ್ಯೆಯ ಮುಖ್ಯ
ವಿಷಯದಲ್ಲಿ ತಮ್ಮನ್ನು ಪಾಸ್ ವಿತ್ ಆನರ್ ಮಾಡಬೇಕು. ಜ್ಞಾನ ಸ್ವರೂಪ, ನೆನಪಿನ ಸ್ವರೂಪ ಮತ್ತು
ಧಾರಣಾ ಸ್ವರೂಪ ಆಗುವುದು - ಈ ಸ್ವ-ಸೇವೆ ಸದಾ ಬುದ್ಧಿಯಲ್ಲಿದ್ದಾಗ, ಈ ಸ್ವ-ಸೇವೆ ಸ್ವತಃ ನಿಮ್ಮ
ಸಂಪನ್ನ ಸ್ವರೂಪದ ಮೂಲಕ ಅನೇಕರ ಸೇವೆಯನ್ನು ಮಾಡಿಸುತ್ತಿರುವುದು ಆದರೆ ಇದರ ವಿಧಿಯಾಗಿದೆ -
ಎಚ್ಚರಿಕೆ ಮತ್ತು ಚೆಕ್ಕಿಂಗ್. ಸ್ವಯಂನ ಚೆಕ್ಕಿಂಗ್ ಮಾಡುವುದು - ಬೇರೆಯವರದಲ್ಲ.
ಸ್ಲೋಗನ್:
ಹೆಚ್ಚು
ಮಾತನಾಡುವುದರಿಂದ ಬುದ್ಧಿಯ ಶಕ್ತಿ ಕಡಿಮೆಯಾಗಿ ಬಿಡುವುದು, ಆದ್ದರಿಂದ ಸ್ವಲ್ಪವೇ ಆದರೂ ಮಧುರವಾಗಿ
ಮಾತನಾಡಿ.