12.05.19 Avyakt Bapdada
Kannada
Murli
05.12.84 Om Shanti Madhuban
"ಸಂಪೂರ್ಣ ಕಾಮಜೀತ
ಅರ್ಥಾತ್ ಅಲ್ಪಕಾಲದ ಕಾಮನೆಗಳಿಂದ ದೂರ"
ಇಂದು ಬಾಪ್ದಾದಾರವರು
ತನ್ನ ಸರ್ವ ಶ್ರೇಷ್ಠ ಭುಜಗಳನ್ನು ನೋಡುತ್ತಿದ್ದಾರೆ. ಎಲ್ಲಾ ಭುಜಗಳು ಸ್ನೇಹ ಮತ್ತು ಶಕ್ತಿಯ ಮೂಲಕ
ವಿಶ್ವವನ್ನು ಪರಿವರ್ತನೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಒಬ್ಬರಿಗೆ ಎಲ್ಲರೂ ಭುಜಗಳಾಗಿದ್ದಾರೆ
ಆದ್ದರಿಂದ ಎಲ್ಲರೊಳಗೆ ಒಂದೇ ಲಗನ್ ಇದೆ- ತಮ್ಮ ಈಶ್ವರೀಯ ಪರಿವಾರವು ತಮ್ಮದೇ ಸಹೋದರ -ಸಹೋದರಿಯರು,
ತನ್ನ ತಂದೆಯನ್ನು ಮತ್ತು ತನ್ನ ಸತ್ಯವಾದ ಪರಿವಾರವನ್ನು ತಿಳಿಯದಿರುವ ಕಾರಣದಿಂದ ಮಕ್ಕಳಾಗಿದ್ದರೂ
ಭಾಗ್ಯವಿದಾತನ ಮೂಲಕ ತಂದೆಯ ಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವುದರಿಂದ ವಂಚಿತರಾಗಿದ್ದಾರೆ-
ಇಂತಹ ಭಾಗ್ಯದಿಂದ ವಂಚಿತರಾದ ಆತ್ಮರನ್ನು ಜಾಗೃತಗೊಳಿಸಿರಿ. ಯಾವುದಾದರೊಂದು ಅಧಿಕಾರದ ಹನಿಯ ಮೂಲಕ
ಅವರನ್ನೂ ತಂದೆಯ ಪರಿಚಯದಿಂದ ಪರಿಚಿತಗೊಳಿಸಿರಿ ಏಕೆಂದರೆ ತಾವೆಲ್ಲರೂ ಇಡೀ ವಂಶಾವಳಿಯ
ಹಿರಿಯರಾಗಿದ್ದೀರಿ. ಅಂದಮೇಲೆ ಹಿರಿ ಮಕ್ಕಳು ತಂದೆಯ ಸಮಾನರಾಗಿ ಬಿಡುತ್ತಾರೆ. ಆದ್ದರಿಂದ ಹಿರಿಯರು
ಕಿರಿಯ ತಿಳಿಯದಿರುವ ಸಹೋದರ-ಸಹೋರಿಯರ ಬಗ್ಗೆ ದಯೆ ಮತ್ತು ಪ್ರೀತಿಯು ಸ್ವತಹವಾಗಿಯೇ ಬರುತ್ತದೆ.
ಹೇಗೆ ಅಲ್ಪಕಾಲದ ಪರಿವಾರದ ಹಿರಿಯರಿಗೆ ಪರಿವಾರದ ಬಗ್ಗೆ ಸದಾ ಗಮನವಿರುತ್ತದೆ, ಹಾಗೆಯೇ ನೀವು
ಬೇಹದ್ದಿನ ಪರಿವಾರದ ಹಿರಿಯರಿಗೂ ಗಮನವಿರುತ್ತದೆಯಲ್ಲವೆ. ಎಷ್ಟೊಂದು ದೊಡ್ಡ ಪರಿವಾರವಿದೆ. ಇಡೀ
ಬೇಹದ್ದಿನ ಪರಿವಾರವು ತಮ್ಮ ಮುಂದಿರುತ್ತದೆಯೇ? ಎಲ್ಲರ ಬಗ್ಗೆ ದಯೆಯ ಕಿರಣಗಳು, ಆತ್ಮಿಕ ಆಶೀರ್ವಾದ
ಕಿರಣಗಳು, ವರದಾನದ ಕಿರಣಗಳನ್ನು ಹರಡುವಂತಹ ಮಾಸ್ಟರ್ ಸೂರ್ಯನಾಗಿದ್ದೀರಲ್ಲವೆ. ಹೇಗೆ ಸೂರ್ಯನು
ತಾನೆಷ್ಟು ಮೇಲಿರುತ್ತದೆಯೋ ಅಷ್ಟು ನಾಲ್ಕೂ ಕಡೆಯಲ್ಲಿ ಕಿರಣಗಳು ಹರಡುತ್ತವೆ. ಕೆಳಗಿರುವುದರಿಂದ
ನಾಲ್ಕೂ ಕಡೆಯಲ್ಲಿ ಕಿರಣಗಳನ್ನು ಹರಡಲು ಸಾಧ್ಯವಿಲ್ಲ. ಹಾಗೆಯೇ ತಾವು ಸರ್ವ ಶ್ರೇಷ್ಠ ತಂದೆಯ ಸಮಾನ
ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿರುತ್ತೀರಿ, ಆಗಲೇ ಬೇಹದ್ದಿನ ಕಿರಣಗಳನ್ನು ಹರಡಿಸಬಹುದು
ಅರ್ಥಾತ್ ಬೇಹದ್ದಿನ ಸೇವಾಧಾರಿಯಾಗಬಹುದು. ಎಲ್ಲರೂ ಇಂತಹ ಬೇಹದ್ದಿನ ಸೇವಾಧಾರಿಯಾಗಿದ್ದೀರಲ್ಲವೆ.
ಸರ್ವ ಆತ್ಮರ ಮನೋಕಾಮನೆಗಳನ್ನು ಪೂರ್ಣಗೊಳಿಸುವ ಕಾಮಧೇನವಾಗಿದ್ದೀರಲ್ಲವೆ! ಸರ್ವರ ಮನೋಕಾಮನೆಗಳನ್ನು
ಪೂರ್ಣಗೊಳಿಸುವವರು ಈಗಿನವರೆಗೂ ತನ್ನ ಮನಸ್ಸಿನ ಕಾಮನೆಗಳನ್ನು ಪೂರ್ಣಗೊಳಿಸುವುದರಲ್ಲಿ ಬ್ಯೂಜಿಯಂತು
ಆಗಿಲ್ಲವೇ? ತಮ್ಮ ಮನಸ್ಸಿನ ಕಾಮನೆಗಳು ಪೂರ್ಣವಾಗಿಲ್ಲವೆಂದರೆ, ಅನ್ಯರ ಮನೋಕಾಮನೆಗಳು ಹೇಗೆ
ಪೂರ್ಣಗೊಳ್ಳುತ್ತವೆ? ಎಲ್ಲದಕ್ಕಿಂತಲೂ ಸರ್ವ ಶ್ರೇಷ್ಠ ಮನೋಕಾಮೆಯನ್ನು ತಂದೆಯನ್ನು
ಪಡೆಯುವುದಾಗಿತ್ತು. ಯಾವಾಗ ಆ ಶ್ರೇಷ್ಠ ಕಾಮನೆಯು ಪೂರ್ಣವಾಗಿ ಬಿಟ್ಟಿತು, ಅಂದಮೇಲೆ ಆ ಶ್ರೇಷ್ಠ
ಕಾಮನೆಯಲ್ಲಿ ಸರ್ವ ಚಿಕ್ಕ-ಚಿಕ್ಕ ಅಲ್ಪಕಾಲದ ಮನೋಕಾಮನೆಗಳು ಸಮಾವೇಶವಾಗಿದೆ. ಶ್ರೇಷ್ಠ ಬೇಹದ್ದಿನ
ಕಾಮನೆಯ ಮುಂದೆ ಮತ್ತ್ಯಾವುದೇ ಅಲ್ಪಕಾಲದ ಕಾಮನೆಗಳಾದರೂ ಉಳಿದುಕೊಳ್ಳುತ್ತವೆಯೇ? ಈ ಅಲ್ಪಕಾಲದ
ಕಾಮನೆಗಳೂ ಸಹ ಮಾಯೆಯೊಂದಿಗೆ ಎದುರಿಸಲು ಸಾಧ್ಯವಾಗುವಂತೆ ಮಾಡಿಸುವುದಿಲ್ಲ. ಈ ಅಲ್ಪಕಾಲದ ಕಾಮನೆಗಳು
ಬೇಹದ್ದಿನ ಸ್ಥಿತಿಯ ಮೂಲಕ ಬೇಹದ್ದಿನ ಸೇವೆಯನ್ನು ಮಾಡಿಸಲು ಸಾಧ್ಯವಿಲ್ಲ. ಅಲ್ಪಕಾಲದ ಕಾಮನೆಗಳನ್ನೂ
ಸಹ ಸೂಕ್ಷ್ಮ ರೂಪದಿಂದ ಪರಿಶೀಲನೆ ಮಾಡಿಕೊಳ್ಳಿರಿ- ಮುಖ್ಯವಾಗಿ ಕಾಮ ವಿಕಾರದ ಅಂಶ ಅಥವಾ ವಂಶವಿದೆಯೇ.
ಆದ್ದರಿಂದ ಕಾಮನೆಗೆ ವಶರಾಗುವುದರಿಂದ ಎದುರಿಸುವುದಕ್ಕಾಗುವುದಿಲ್ಲ. ಬೇಹದ್ದಿನ ಮನೋಕಾಮನೆಗಳನ್ನು
ಪೂರ್ಣಗೊಳಿಸುವವರಾಗಲು ಸಾಧ್ಯವಿಲ್ಲ. ಕಾಮಜೀತ ಅರ್ಥಾತ್ ಅಲ್ಪಕಾಲದ ಕಾಮನೆಗಳ ಜೀತರು. ಇಂತಹ
ಮನೋಕಾಮನೆಗಳನ್ನು ಪೂರ್ಣಗೊಳಿಸುವ ವಿಶೇಷ ಆತ್ಮರಾಗಿದ್ದೀರಿ. ಮನ್ಮನಾಭವದ ಸ್ಥಿತಿಯ ಮೂಲಕ ಮನಸ್ಸಿನ
ಅಲ್ಪಕಾಲದ ಕಾಮನೆಗಳನ್ನು ಪೂರ್ಣಗೊಳಿಸಿ ಅರ್ಥಾತ್ ಸಮಾಪ್ತಿ ಮಾಡುತ್ತಾ, ಅನ್ಯರ ಮನೋಕಾಮನೆಗಳನ್ನು
ಪೂರ್ಣಗೊಳಿಸಲು ಸಾಧ್ಯವಾಗುವುದು. ಈಗ ವಾಣಿಯಿಂದ ದೂರದ ಸ್ಥಿತಿಯಲ್ಲಿ ಇರುವ ವಾನಪ್ರಸ್ಥ
ಸ್ಥಿತಿಯಲ್ಲಿ ಕಾಮನೆಯ ಜೀತ ಅರ್ಥಾತ್ ವಿಶ್ವದ ಮುಂದೆ ಸಂಪೂರ್ಣ ಕಾಮಜೀತನ ಸ್ಯಾಂಪಲ್ ಆಗಿರಿ. ತಮ್ಮ
ಚಿಕ್ಕ-ಚಕ್ಕ ಸಹೋದರ-ಸಹೋದರಿಯರು ಇದೇ ಕಾಮನೆಯನ್ನು ತೆಗೆದುಕೊಂಡು, ತನ್ನ ಹಿರಿಯರ ಕಡೆಗೆ
ನೋಡುತ್ತಿದ್ದಾರೆ. ಕೂಗುತ್ತಿದ್ದಾರೆ- ನಮ್ಮ ಕಾಮನೆಗಳು ಪೂರ್ಣಗೊಳಿಸಿರಿ. ನಮ್ಮ ಸುಖ-ಶಾಂತಿಯ
ಇಚ್ಛೆಗಳನ್ನು ಪೂರ್ಣಗೊಳಿಸಿರಿ. ಅಂದಮೇಲೆ ತಾವೇನು ಮಾಡುವಿರಿ, ತಮ್ಮ ಇಚ್ಛೆಗಳನ್ನು ಪೂರ್ಣ
ಮಾಡಿಕೊಳ್ಳುವಿರಾ ಅಥವಾ ಅವರದನ್ನು ಪೂರ್ಣಗೊಳಿಸುವಿರಾ? ಎಲ್ಲರ ಹೃದಯದಿಂದ, ಹೇಳುವುದರಿಂದ ಅಲ್ಲ
ಅಥವಾ ವಾಯುಮಂಡಲದ ಸಂಘಟನೆಯ ಮರ್ಯಾದೆಯನುಸಾರವಾಗಿ ಅಲ್ಲ, ಹೃದಯದಿಂದ ಈ ಶ್ರೇಷ್ಠ ಧ್ವನಿಯು ಬರಲಿ-
"ಇಚ್ಛಾ ಮಾತ್ರಂ ಅವಿದ್ಯಾ". ಕೆಲ ಮಕ್ಕಳು ಬಹಳ ಚತುರರಿದ್ದಾರೆ. ಚತುರ ಸುಜಾನ್ನೊಂದಿಗೇ
ಚತುರತೆಯನ್ನು ಮಾಡುವರು. ಇರುವುದು ಅಲ್ಪಕಾಲದ ಇಚ್ಛೆ ಮತ್ತು ನಂತರ ಹೇಳುವುದು- ಹೀಗೆ, ಹೀಗೆ, ಇದು
ಶುಭ ಇಚ್ಛೆಯಾಗಿದೆ, ಸೇವಾ ಪ್ರತಿ ಇಚ್ಛೆಯಿದೆ. ಅದಿರುವುದು ತನ್ನ ಇಚ್ಛೆಯಾಗಿದೆ ಆದರೆ ಬಾಹ್ಯ
ರೂಪದಲ್ಲಿ ಸೇವೆಯನ್ನಾಗಿ ಮಾಡಿ ಬಿಡುತ್ತಾರೆ ಆದ್ದರಿಂದ ಬಾಪ್ದಾದಾರವರು ಮುಗುಳ್ನಗುತ್ತಾ,
ತಿಳಿದಿದ್ದರೂ, ನೋಡುತ್ತಿದ್ದರೂ, ಚತುರತೆಯನ್ನು ತಿಳಿದಿದ್ದರೂ ಸಹ ಕೆಲ ಮಕ್ಕಳಿಗೆ ಹೊರಗಿನಿಂದ
ಸೂಚನೆ ಕೊಡುವುದಿಲ್ಲ. ಆದರೆ ಡ್ರಾಮಾನುಸಾರವಾಗಿ ಸೂಚನೆಯು ಖಂಡಿತವಾಗಿಯೂ ಸಿಗುತ್ತದೆ. ಅದು ಹೇಗೆ?
ಅಲ್ಪಕಾಲದ ಇಚ್ಛೆಗಳು ಪೂರ್ಣವಾಗುತ್ತಿರುವ ರೂಪವು ಪ್ರಾಪ್ತಿಯದಾಗಿರುತ್ತದೆ. ಆದರೆ ಒಳಗೆ ಒಂದು
ಇಚ್ಛೆಯು ಇನ್ನೂ ಇಚ್ಛೆಗಳನ್ನು ಉತ್ಪನ್ನ ಮಾಡುತ್ತಿರುತ್ತದೆ. ಆದ್ದರಿಂದ ಮನಸ್ಸಿನ ತೊಡಕುಗಳ
ರೂಪದಲ್ಲಿ ಸೂಚನೆಯು ಸಿಗುತ್ತಿರುತ್ತದೆ. ಹೊರಗಿನಿಂದ ಯಾವುದೆಷ್ಟೇ ಅಲ್ಪಕಾಲದ ಪ್ರಾಪ್ತಿಯಲ್ಲಿ
ತಿನ್ನುತ್ತಾ, ಕುಡಿಯುತ್ತಾ, ಹಾಡುತ್ತಿರಬಹುದು ಆದರೆ ಮನಸ್ಸಿನ ಗೊಂದಲವನ್ನು ಮುಚ್ಚಿಡುವ
ಸಾಧನವನ್ನಾಗಿ ಇದನ್ನು ಮಾಡುತ್ತಾರೆ. ಒಳಗೆ ಮನಸ್ಸು ತೃಪ್ತವಾಗಿರುವುದಿಲ್ಲ. ಅಲ್ಪಕಾಲಕ್ಕಾಗಿ
ಇರುತ್ತದೆ ಆದರೆ ಸದಾಕಾಲದ ತೃಪ್ತಾವಸ್ಥೆ ಅಥವಾ ಈ ಹೃದಯದ ಹಾಡು- ತಂದೆಯು ಸಿಕ್ಕಿದರು, ಪ್ರಪಂಚವೇ
ಸಿಕ್ಕಿತು, ಇದನ್ನು ಹಾಡಲು ಸಾಧ್ಯವಿಲ್ಲ. ಅವರು ತಂದೆಗೂ ಹೇಳುತ್ತಾರೆ- ತಾವಂತು ಸಿಕ್ಕಿದಿರಿ ಆದರೆ
ಇದೂ ಸಹ ಅವಶ್ಯವಾಗಿರಬೇಕು. ಇದು ಬೇಕು, ಬೇಕು ಎಂಬ ಇಚ್ಛೆಯ ತೃಪ್ತಿಯಾಗುವುದಿಲ್ಲ. ಸಮಯದನುಸಾರವಾಗಿ
ಈಗ ಎಲ್ಲರ ಒಂದು - "ಇಚ್ಛಾ ಮಾತ್ರಂ ಅವಿದ್ಯಾ"ದ ಧ್ವನಿಯಿರಲಿ, ಆಗಲೇ ಅನ್ಯರ ಇಚ್ಛೆಗಳನ್ನು
ಪೂರ್ಣಗೊಳಿಸಲು ಸಾಧ್ಯವಾಗುವುದು. ಈಗ ಸ್ವಲ್ಪ ಸಮಯದಲ್ಲಿ ತಾವೊಬ್ಬಬ್ಬರೂ ಶ್ರೇಷ್ಠಾತ್ಮರನ್ನು
ವಿಶ್ವ ಚೈತನ್ಯ ಭಂಡಾರವೆಂದು ಅನುಭವ ಮಾಡುವರು. ಭಿಕಾರಿಯಾಗಿ ಬರುವರು. ಈ ಧ್ವನಿಯು ಬರುತ್ತದೆ-
ತಾವೇ ಸಂಪನ್ನ ಭಂಡಾರವಾಗಿದ್ದೀರಿ. ಈಗಿನವರೆಗೂ ಹುಡುಕುತ್ತಿದ್ದೇವೆ- ಯಾರೋ ಇದ್ದಾರೆ, ಆದರೆ ಅವರು
ಎಲ್ಲಿದ್ದಾರೆ, ಅವರು ಯಾರು ಎಂಬ ಸ್ಪಷ್ಟ ತಿಳುವಳಿಕೆಯಿರಲು ಸಾಧ್ಯವಿಲ್ಲ. ಆದರೆ ಈಗ ಸಮಯದ ಬಾಣ
ನಾಟುವುದು. ಹೇಗೆ ಮಾರ್ಗ ತೋರಿಸುವ ಚಿಹ್ನೆಯಿರುತ್ತದೆ(ದಿಕ್ಸೂಚಿ)ಯಲ್ಲವೆ. ಅದರಲ್ಲಿರುವ ಬಾಣವು
ತೋರಿಸುತ್ತದೆ- ಇಲ್ಲಿಗೆ ಹೋಗಿರಿ. ಹಾಗೆ ಎಲ್ಲರಿಗೂ ಈ ಅನುಭೂತಿಯಾಗುವುದು- ಇಲ್ಲಿ ಹೋಗಿರಿ. ಹೇಗೆ
ಸಂಪನ್ನ ಭಂಡಾರವಾಗಿದ್ದೀರಿ? ಸಮಯವೂ ಸಹ ತಮ್ಮ ಸಹಯೋಗಿಯಾಗುತ್ತದೆ. ಶಿಕ್ಷಕನಲ್ಲ, ಸಹಯೋಗಿಯಾಗುವುದು.
ಬಾಪ್ದಾದಾರವರು ಸಮಯಕ್ಕೆ ಮೊದಲೇ ಎಲ್ಲಾ ಮಕ್ಕಳನ್ನು ಸಂಪನ್ನ ಸ್ವರೂಪದಲ್ಲಿ, ಸಂಪನ್ನ ಭಂಡಾರದ
ರೂಪದಲ್ಲಿ, ಇಚ್ಛಾ ಮಾತ್ರಂ ಅವಿದ್ಯಾ, ತೃಪ್ತ ಸ್ವರೂಪದಲ್ಲಿ ನೋಡ ಬಯಸುತ್ತಾರೆ. ಏಕೆಂದರೆ
ಈಗಿನಿಂದ ಸಂಸ್ಕಾರವನ್ನು ತುಂಬಿಕೊಳ್ಳುವುದಿಲ್ಲವೆಂದರೆ, ಅಂತ್ಯದಲ್ಲಿ ಸಂಸ್ಕಾರವನ್ನು
ತುಂಬುಕೊಳ್ಳುವವರು ಬಹಳ ಕಾಲದ ಪ್ರಾಪ್ತಿಯ ಅಧಿಕಾರಿಯಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ
ವಿಶ್ವಕ್ಕಾಗಿ ವಿಶ್ವದ ಆಧಾರ ಮೂರ್ತಿಯಾಗಿದ್ದೀರಿ. ವಿಶ್ವದ ಮುಂದೆ ಜಗತ್ತಿನ ಕಣ್ಮಣಿಯಾಗಿದ್ದೀರಿ.
ಜಗತ್ತಿನ ಕುಲ ದೀಪವಾಗಿದ್ದೀರಿ. ಏನೆಲ್ಲಾ ಶ್ರೇಷ್ಠ ಮಹಿಮೆಗಳಿವೆ, ಸರ್ವ ಶ್ರೇಷ್ಠ ಮಹಿಮೆಯ
ಅಧಿಕಾರಿ ಆತ್ಮರೀಗ ವಿಶ್ವದ ಮುಂದೆ ತನ್ನ ಸಂಪನ್ನ ರೂಪದಲ್ಲಿ ಪ್ರತ್ಯಕ್ಷವಾಗಿ ತೋರಿಸಿರಿ.
ತಿಳಿಯಿತೆ- ಬಂದಿರುವ ಎಲ್ಲಾ ವಿಶೇಷ ಸೇವಾಧಾರಿ ಮಕ್ಕಳಿಗೆ ವಿಶೇಷ ಸ್ನೇಹ ಸ್ವರೂಪದಿಂದ
ಬಾಪ್ದಾದಾರವರು ಸ್ನೇಹದ ಸ್ವಾಗತವನ್ನು ಮಾಡುತ್ತಿದ್ದಾರೆ. ಬಲ ಭುಜಗಳಾಗಿರುವ ಮಕ್ಕಳಿಗೆ ಸಮಾನತೆಯ
ಹ್ಯಾಂಡ್ ಶೇಕ್ ಮಾಡುತ್ತಿದ್ದಾರೆ. ಭಲೇ ಬನ್ನಿರಿ. ಒಳ್ಳೆಯದು - ವಿಶ್ವದ ಎಲ್ಲಾ ಮನೋಕಾಮನೆಗಳನ್ನು
ಪೂರ್ಣಗೊಳಿಸುವವರು, ಸದಾ ಸಂಪನ್ನ ತೃಪ್ತಾತ್ಮರಿಗೆ, ವಿಶ್ವದ ಆಧಾರಮೂರ್ತಿ, ಪ್ರತೀ ಸಮಯದಲ್ಲಿ
ವಿಶ್ವ ಕಲ್ಯಾಣದ ಶ್ರೇಷ್ಠ ಕಾಮನೆಯಲ್ಲಿ ಸ್ಥಿತರಾಗಿರುವಂತಹ, ವಿಶ್ವದ ಮುಂದೆ ಮಾಸ್ಟರ್ ವಿಶ್ವ
ರಕ್ಷಕರಾಗಿದ್ದು ಸರ್ವರ ರಕ್ಷಣೆ ಮಾಡುವಂತಹ, ಸರ್ವ ಶ್ರೇಷ್ಠ ಮಹಾನ್ ಆತ್ಮರಿಗೆ ಬಾಪ್ದಾದಾರವರ
ನೆನಪು-ಪ್ರೀತಿ ಹಾಗೂ ನಮಸ್ತೆ.
ಮೀಟಿಂಗ್ನಲ್ಲಿ
ಬಂದಿರುವ ಸಹೋದರ-ಸಹೋದರಿಯರೊಂದಿಗೆ -
ಸೇವಾಧಾರಿ ಮಕ್ಕಳ ಸೇವೆಯ ಯೋಜನೆಗಳನ್ನಂತು ತಮ್ಮ ಮನಸ್ಸಿನಲ್ಲಿ ಮಾಡಿಟ್ಟುಕೊಂಡಿರಬಹುದು, ಉಳಿದಂತೆ
ಮೀಟಿಂಗ್ನ ಸಂಘಟನೆಯಲ್ಲಿ ಸಾಕಾರದಲ್ಲಿ ತರುವುದಕ್ಕಾಗಿ ವರ್ಣನೆ ಮಾಡುವಿರಿ. ಏನೆಲ್ಲಾ ಸೇವೆಗಳು
ನಡೆಯುತ್ತಿದೆ, ಪ್ರತಿಯೊಂದು ಸೇವೆಗಳು ಬಹಳ ಚೆನ್ನಾಗಿರುವುದೆಂದು ಹೇಳುತ್ತೇವೆ. ಹೇಗೆ ಸಮಯವು
ಸಮೀಪದಲ್ಲಿ ಬರುತ್ತಿದೆ, ಸಮಯವು ಎಲ್ಲರ ಬುದ್ಧಿಗಳನ್ನು ಏರುಪೇರಿನಲ್ಲಿ ತರುತ್ತಿದೆ. ಅಂತಹ ಸಮಯದ
ಪ್ರಮಾಣ ಇಂತಹ ಶಕ್ತಿಶಾಲಿ ಯೋಜನೆ ಮಾಡಿರಿ, ಅದರಿಂದ ಧರಣಿಯಲ್ಲಿಯೂ ನೇಗಿಲು ಮಾಡುವುದಾಗಲಿ, ಸದಾ
ಬೀಜದ ಬಿತ್ತನೆಗೆ ಮೊದಲು ನೇಗಿಲು ನಡೆಸುತ್ತಾರಲ್ಲವೆ. ಅದರಲ್ಲೇನಾಗುತ್ತದೆ? ಹಲ್ಚಲ್ (ಮೇಲೆ ಕೆಳಗೆ)
ಆಗುತ್ತದೆ ಮತ್ತು ಅದರ ನಂತರ ಬೀಜ ಬಿತ್ತನೆಯೇನಾಗುತ್ತದೆ, ಅದು ಸಹಜವಾಗಿ ಸಫಲತೆಯನ್ನು
ಪಡೆದುಕೊಳ್ಳುತ್ತದೆ. ಹೀಗೆ ಈಗ ಈ ಹಲ್ಚಲ್ನ ಹಲ್(ನೇಗಿಲು) ಮಾಡಿರಿ. ಯಾವ ಹಲ್ಚಲ್? ಹೇಗೆ ಇಂದು
ತಿಳಿಸಿದೆವು- "ಯಾರೋ ಇದ್ದಾರೆ" ಇದನ್ನಂತು ಎಲ್ಲರೂ ತಿಳಿಯುತ್ತಾರೆ ಆದರೆ ಇವರೇ ಆಗಿದ್ದಾರೆ ಮತ್ತು
ಇವರೊಬ್ಬರೇ ಆಗಿದ್ದಾರೆ ಎಂಬ ಹಲ್ಚಲ್ನ ಹಲ್ ಮಾಡಿಲ್ಲ. ಈಗ ಅನ್ಯರೂ ಇದ್ದಾರೆ, ಇವರೂ ಇದ್ದಾರೆ,
ಇಲ್ಲಿಯವರೆಗೆ ತಲುಪಿದ್ದಾರೆ. ಆದರೆ ಇವರೊಬ್ಬರೇ ಆಗಿದ್ದಾರೆ, ಈಗ ಇಂತಹ ಬಾಣವನ್ನು ಹೊಡೆಯಿರಿ. ಈ
ಟಚಿಂಗ್ನ ಜೊತೆಗೆ ಇಂತಹ ಆತ್ಮರು ತಮ್ಮ ಮುಂದೆ ಬರಲಿ. ಯಾವಾಗ ಇಂತಹ ಹಲ್ಚಲ್ ಆಗುತ್ತದೆಯೋ ಆಗಲೇ
ಪ್ರತ್ಯಕ್ಷತೆಯಾಗುವುದು. ಇದರ ವಿಧಿಯೇನಾಗಿದೆ? ಹೇಗೆ ಎಲ್ಲಾ ವಿಧಿಗಳು ನಡೆಯುತ್ತಿರುತ್ತದೆ,
ಭಿನ್ನ-ಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತೀರಿ. ಸಮ್ಮೇಳನಗಳನ್ನೂ ಮಾಡುತ್ತೀರೆಂದರೆ,
ಅನ್ಯರ ಸ್ಟೇಜಿನಲ್ಲಿಯೂ ಹೋಗುತ್ತೀರಿ, ತಮ್ಮ ಸ್ಟೇಜ್ನ್ನೂ(ಮನಸ್ಸಿನ ಸ್ಥಿತಿ) ಸಹ
ಮಾಡಿಕೊಳ್ಳುತ್ತೀರಿ. ಯೋಗ ಶಿಬಿರವನ್ನೂ ಮಾಡಿಸುತ್ತೀರಿ. ಇದೆಲ್ಲಾ ಸಾಧನವು ಸಮೀಪವಂತು ತಂದಿದ್ದೀರಿ
ಮತ್ತು ಏನೆಲ್ಲಾ ಅನುಮಾನವಿತ್ತು, ಆ ಎಲ್ಲಾ ಅನುಮಾನಗಳ ನಿವೃತ್ತಿಯೂ ಆಗಿದೆ. ಸಮೀಪವೂ ಬಂದು
ಬಿಟ್ಟಿದ್ದಾರೆ ಆದರೆ ಈಗ ಆಸ್ತಿಯ ಅಧಿಕಾರದ ಸಮೀಪಕ್ಕೆ ಬರಲಿ. ವಾಹ್-ವಾಹ್ ಮಾಡುವವರಂತು ಆಗಲಿ, ಈಗ
ವಾರಸುಧಾರರಾಗಲಿ. ಈಗ ಇಂತಹ ಯಾವುದಾದರೂ ಧ್ವನಿ ಮೊಳಗಲಿ- ಇವರೇ ಸತ್ಯ ಮಾರ್ಗವನ್ನು
ತೋರಿಸುವವರಾಗಿದ್ದಾರೆ, ತಂದೆಯೊಂದಿಗೆ ಮಿಲನ ಮಾಡಿಸುವವರಾಗಿದ್ದಾರೆ. ಪಾರು ಮಾಡುವವರಾಗಿದ್ದಾರೆ,
ಓಡಿಸುವವರಲ್ಲ. ಅಂದಮೇಲೆ ಈಗ ಅದರ ವಿಧಿ, ವಾತಾವರಣವು ಹೀಗಾಗಲಿ. ಸ್ಥಿತಿಯ ರೂಪ ರೇಖೆಯೂ ಸಹ
ಹೀಗಾಗಲಿ ಮತ್ತು ಎಲ್ಲರ ಸಂಕಲ್ಪವೂ ಸಹ ಒಂದೇ ಇರಲಿ. ವಾತಾವರಣದ ಪ್ರಭಾವವು ಶಕ್ತಿಶಾಲಿಯಾಗಬೇಕು.
ಪ್ರೀತಿಯಂತು ಇರುತ್ತದೆ ಆದರೆ ಶಾಂತಿ ಮತ್ತು ಶಕ್ತಿ, ಅದರಲ್ಲಿ ಇನ್ನೂ ಸ್ವಲ್ಪ ಸೇರ್ಪಡೆಯನ್ನು
ಮಾಡಿರಿ. ಪ್ರಪಂಚದವರ ಲೆಕ್ಕದಿಂದಂತು ಶಾಂತಿಯ ಅನುಭವವನ್ನೂ ಮಾಡುತ್ತಾರೆ. ಆದರೆ ಇಂತಹ ಶಾಂತಿಯ
ಬಾಣವನ್ನು ಹೊಡೆಯಿರಿ, ಅವರು ಶಾಂತಿಯ ಸಾಗರನಿಲ್ಲದೆ ಇರಲು ಸಾಧ್ಯವಿಲ್ಲ. ಈ ತಮ್ಮ ಸಂಗದ ರಂಗಂತು
ಅಷ್ಟೂ ಸಮಯದವರೆಗೆ ಚೆನ್ನಾಗಿದೆಯೆನಿಸುತ್ತದೆ, ಆದರೆ ರಂಗಿನಲ್ಲಿ ರಂಗಿತರಾಗಿ ಬಿಡಲಿ ಮತ್ತು ಇದೇ
ರಂಗು ಅವರನ್ನು ಸೆಳೆಯುತ್ತಿರಲಿ, ಸಮೀಪದಲ್ಲಿ ತರುತ್ತಿರಲಿ, ಸಂಬಂಧದಲ್ಲಿ ತರುತ್ತಿರಲಿ- ಆ
ಪರಿಪಕ್ವವಾದ ರಂಗನ್ನಾಕಿರಿ. ತಿಳಿಸಿದೆವಲ್ಲವೆ- ಈಗಿನವರೆಗೂ ಏನು ಮಾಡಲಾಯಿತು, ಅದು ಬಹಳ
ಒಳ್ಳೆಯದನ್ನೇ ಮಾಡಿದಿರಿ ಆದರೆ ಈಗ ಚಿನ್ನವನ್ನು ತಯಾರು ಮಾಡಿದಿರಿ, ಈಗ ಚಿಹ್ನೆಯನ್ನು ಹಾಕಬೇಕು.
ಇಂದಿನ ಪ್ರಪಂಚದಲ್ಲಿ ಪ್ರತ್ಯಕ್ಷ ಪ್ರಮಾಣವು ಬೇಕಾಗಿದೆ. ಅಂದಮೇಲೆ ಪ್ರತ್ಯಕ್ಷ ಪ್ರಮಾಣದಲ್ಲಿ
ಶಾಂತಿ ಮತ್ತು ಶಕ್ತಿಯ ಅನುಭವವಾಗಲಿ. ಭಲೇ ಒಂದು ಗಳಿಗೆಗಾಗಿ ಇರಬಹುದು ಆದರೆ ಅನುಭವವು ಇಂತಹ
ವಸ್ತುವಾಗಿದೆ, ಆ ಅನುಭವದ ಶಕ್ತಿಯು ಸಮೀಪ ಸಂಬಂಧದಲ್ಲಿ ಖಂಡಿತ ಕರೆ ತರುತ್ತದೆ. ಅಂದಮೇಲೆ
ಯೋಜನೆಯನ್ನಂತು ಮಾಡಿಯೇ ಮಾಡುವಿರಿ. ಬಾಕಿ ಬಾಪ್ದಾದಾರವರು ಮಕ್ಕಳ ಸಾಹಸ, ಉಮ್ಮಂಗ-ಉತ್ಸಾಹದಲ್ಲಿ
ಖುಷಿಯಾಗಿದ್ದಾರೆ. ಸೇವೆಯ ಆಸಕ್ತಿಯಲ್ಲಿ ಇರುವಂತಹ ಮಕ್ಕಳಾಗಿದ್ದಾರೆ. ಸೇವೆಯ ಲಗನ್ ಚೆನ್ನಾಗಿದೆ.
ಸಂಕಲ್ಪವೂ ಸಹ ಎಲ್ಲರಲ್ಲಿಯೂ ಖಂಡಿತವಾಗಿಯೂ ನಡೆಯುತ್ತದೆ- ಈಗ ಏನಾದರೂ ನವೀನತೆಯಾಗಬೇಕು. ನವೀನತೆ
ತರುವುದಕ್ಕಾಗಿ, ಮೊದಲಂತು ಎಲ್ಲರ ಸಂಕಲ್ಪವು ಒಂದಾಗಬೇಕು. ಒಬ್ಬರು ತಿಳಿಸಿದರು ಮತ್ತು ಎಲ್ಲರೂ
ಸ್ವೀಕರಿಸಿದರು- ಒಂದು ಸಂಕಲ್ಪದಲ್ಲಿ ಸದಾ ಧೃಡವಾಗಿರಿ. ಒಂದು ವೇಳೆ ಒಂದು ಇಟ್ಟಿಗೆ
ಅಲುಗಾಡುತ್ತದೆಯೆಂದರೂ ಸಹ ಇಡೀ ಗೋಡೆಯೇ ಅಲುಗಾಡಿ ಬಿಡುತ್ತದೆ. ಒಬ್ಬರದೇನಾದರೂ ಸಂಕಲ್ಪದಲ್ಲಿ -
ಇದರಲ್ಲಿ ಸ್ವಲ್ಪವೇ ಕಾರಣ-ಅಕಾರಣದ ಸಂದರ್ಭಕ್ಕನುಸಾರವಾಗಿ ಹಗುರವಾಗಿರುತ್ತದೆಯೆಂದರೆ, ಇಡೀ
ಕಾರ್ಯಕ್ರಮವೇ ಹಗುರವಾಗಿ ಬಿಡುತ್ತದೆ. ಅಂದಮೇಲೆ ಹೀಗೆ ತಮ್ಮನ್ನು ಧೃಡ ಸಂಕಲ್ಪದಲ್ಲಿ ತಂದುಕೊಂಡು
ಮಾಡಲೇಬೇಕು, ಎಲ್ಲರ ಸಹಯೋಗವು ಸಿಗಲೇಬೇಕು ಎನ್ನುವುದಿರಲಿ, ನಂತರ ಟ್ರಯಲ್ ಮಾಡಿರಿ. ಹಾಗೇ ನೋಡಿದರೆ
ಬಾಪ್ದಾದಾರವರು ಸೇವೆಯಿಂದ ಖುಷಿಯಿದ್ದಾರೆ. ಅಂತಹ ಯಾವುದೇ ಮಾತೂ ಇಲ್ಲ ಆದರೆ ಈಗ ಚಿನ್ನದಲ್ಲಿ
ರತ್ನವನ್ನು ತುಂಬುತ್ತೀರೆಂದರೆ ದೂರದಿಂದ ಆಕರ್ಷಿಸುತ್ತದೆ. ವಿದೇಶದಲ್ಲಿಯೂ ಮಕ್ಕಳು ಬಹಳ ಚೆನ್ನಾಗಿ
ಸಾಹಸವನ್ನಿಡುತ್ತಿದ್ದಾರೆ. ಅವರು ಸ್ವಯಂ ಸಹ ಪರಸ್ಪರದಲ್ಲಿ ನಗುತ್ತಿರುತ್ತಾರೆ- ನಮ್ಮ ಮೈಕ್
ತಲುಪಿದರು, ಧ್ವನಿಯು ಮೊಳಗಿತು ಆದರೆ ಸ್ವಲ್ಪ ಧ್ವನಿ ಮಾಡುವವರು ಬಂದರು. ದೊಡ್ಡ ಧ್ವನಿಯವರಲ್ಲ.
ಆದರೂ ಇಲ್ಲಿಯವರೆಗಂತು ತಲುಪಿದ್ದೀರಿ. ಸಾಹಸವನ್ನಂತು ಬಹಳ ಚೆನ್ನಾಗಿ ಇಡುತ್ತೀರಿ. ಒಳ್ಳೆಯದು -
ಈಗ ತಮ್ಮ ಪೂಜ್ಯ ಸ್ವರೂಪವು ಪ್ರತ್ಯಕ್ಷವಾಗಬೇಕು. ಪೂಜ್ಯರಾಗಿದ್ದಾರೆ, ಪೂಜೆ ಮಾಡಿಸುವವರಲ್ಲ, ಇವರೇ
ನಮ್ಮ ಇಷ್ಟ ದೇವ ಆಗಿದ್ದಾರೆ, ಪೂರ್ವಜ ಆಗಿದ್ದಾರೆ, ಪೂಜ್ಯ ಆಗಿದ್ದಾರೆ, ಇಲ್ಲಿಂದಲೇ ಸರ್ವ
ಮನೋಕಾಮನೆಗಳು ಪೂರ್ಣವಾಗಲಿದೆ, ಈಗ ಈ ಅನುಭೂತಿಯಾಗಲಿ. ತಿಳಿಸಿದೆವಲ್ಲವೆ- ಈಗ ತಮ್ಮ ಅಲ್ಪಕಾಲದ
ಸಂಕಲ್ಪ ಅಥವಾ ಕಾಮನೆಗಳು ಸಮಾಪ್ತಿಯಾಗಬೇಕು, ಆಗಲೇ ಈ ಪ್ರಕಂಪನವು ಹರಡುವುದು. ಈಗಲೂ
ಸ್ವಲ್ಪ-ಸ್ವಲ್ಪ ನನ್ನದು-ನನ್ನದು ಎನ್ನುವುದಿದೆ. ನನ್ನ ಸಂಸ್ಕಾರ, ನನ್ನ ಸ್ವಭಾವ- ಇದೂ
ಸಮಾಪ್ತಿಯಾಗಿ ಬಿಡಲಿ. ತಂದೆಯ ಸಂಸ್ಕಾರವು ನನ್ನ ಸಂಸ್ಕಾರವಾಗಿದೆ. ಸತ್ಯ ಸಂಸ್ಕಾರವಂತು ಅದೇ
ಆಗಿದೆಯಲ್ಲವೆ. ಬ್ರಾಹ್ಮಣರ ಪರಿವರ್ತನೆಯೇ ವಿಶ್ವ ಪರಿವರ್ತನೆಗೆ ಆಧಾರವಾಗಿದೆ. ಅಂದಮೇಲೆ ಈಗ ಏನು
ಮಾಡುವಿರಿ? ಭಾಷಣವನ್ನಂತು ಖಂಡಿತವಾಗಿಯೂ ಮಾಡಬೇಕು ಆದರೆ ತಾವು ಭಾಷೆಯಲ್ಲಿ ಬನ್ನಿರಿ ಮತ್ತು ಆ
ಭಾಷೆಯಿಂದ ಆಚೆ ಹೋಗಿ ಬಿಡಲಿ. ಇಂತಹ ಭಾಷಣವಿರಲಿ, ಮಾತನಾಡಬೇಕಾಗುತ್ತದೆಯಲ್ಲವೆ. ತಾವು ಶಬ್ಧದಲ್ಲಿ
ಬನ್ನಿರಿ, ಅವರು ಶಬ್ಧದಿಂದ ಆಚೆ ಹೋಗಿ ಬಿಡಲಿ. ಮಾತಿರಬಾರದು ಆದರೆ ಅನುಭವ ತುಂಬಿರುವ ಮಾತಿರಲಿ.
ಎಲ್ಲರಲ್ಲಿ ಪ್ರಕಂಪನಗಳು ಹರಡಲಿ. ಹೇಗೆ ಕೆಲವೊಮ್ಮೆ ಯಾವುದೇ ಅಂತಹ ಮಾತನ್ನು ತಿಳಿಸುತ್ತೀರೆಂದರೆ,
ಕೆಲವೊಮ್ಮೆ ನಗುವ, ಕೆಲವೊಮ್ಮೆ ಅಳುವ, ಕೆಲವೊಮ್ಮೆ ವೈರಾಗ್ಯದ ಪ್ರಕಂಪನಗಳು ಹರಡಿ ಬಿಡುತ್ತದೆ, ಅದು
ತತ್ಕಾಲಕ್ಕಾಗಿ ಇರುತ್ತದೆ ಆದರೆ ಅದೂ ಸಹ ಹರಡುತ್ತದೆಯಲ್ಲವೆ. ಇಂತಹ ಅನುಭೂತಿಯಾಗುವ ಪ್ರಕಂಪನಗಳು
ಹರಡಿ ಬಿಡಲಿ. ಆಗುವುದಂತು ಇದೇ ಆಗುತ್ತದೆ, ಹೇಗೆ ಪ್ರಾರಂಭದಲ್ಲಿ ಸ್ಥಾಪನೆಯ ಆದಿಯಲ್ಲಿ ಒಂದು ಓಂ
ಧ್ವನಿಯು ಪ್ರಾರಂಭವಾಗುತ್ತಿತ್ತು ಮತ್ತು ಎಷ್ಟೊಂದು ಮಂದಿ ಸಾಕ್ಷಾತ್ಕಾರದಲ್ಲಿ ಹೊರಟು
ಹೋಗುತ್ತಿದ್ದರು. ಪ್ರಕಂಪನಗಳು ಹರಡುತ್ತಿದ್ದವು. ಅದೇ ರೀತಿ ಸಭೆಯಲ್ಲಿ ಅನುಭೂತಿಗಳ ಪ್ರಕಂಪನಗಳು
ಹರಡಿ ಬಿಡಲಿ. ಕೆಲವರಿಗೆ ಶಾಂತಿಯ, ಕೆಲವರಿಗೆ ಶಕ್ತಿಯ ಅನುಭೂತಿಯಾಗಲಿ- ಈ ಪ್ರಕಂಪನವು ಹರಡಲಿ.
ಕೇವಲ ಕೇಳುವವರಾಗಬಾರದು ಆದರೆ ಅನುಭವದ ಪ್ರಕಂಪನವಿರಲಿ. ಹೇಗೆ ಜಲಪಾತವು ಹರಿಯುತ್ತಿದೆಯೆಂದರೆ,
ಯಾರೆಲ್ಲರೂ ಜಲಪಾತದ ಕೆಳಗೆ ಬರುತ್ತಾರೆ ಅವರಿಗೆ ಶೀತಲತೆಯ, ಫ್ರೆಶ್ ಆಗುವ ಅನುಭವವಾಗುವುದಲ್ಲವೆ.
ಹಾಗೆಯೇ ಅವರೂ ಸಹ ಶಾಂತಿ, ಶಕ್ತಿ, ಪ್ರೇಮ, ಆನಂದ, ಅತೀಂದ್ರಿಯ ಸುಖದ ಅನುಭೂತಿಯನ್ನು ಮಾಡಿ ಹೋಗಲಿ.
ಇಂದೂ ಸಹ ವಿಜ್ಞಾನದ ಸಾಧನಗಳು ಬಿಸಿ, ತಂಪಿನ ಅನುಭೂತಿಯನ್ನು ಮಾಡಿಸುತ್ತದೆಯಲ್ಲವೆ. ಇಡೀ
ಕೊಠಡಿಯಲ್ಲಿಯೇ ಆ ಪ್ರಕಂಪನವು ಹರಡಿ ಬಿಡುತ್ತದೆ. ಅಂದಮೇಲೆ ಇಷ್ಟೆಲ್ಲಾ ಶಿವ ಶಕ್ತಿಯರು, ಪಾಂಡವರು,
ಮಾಸ್ಟರ್ ಶಾಂತಿ, ಶಕ್ತಿ, ಎಲ್ಲದರ ಸಾಗರ...... ಈ ಪ್ರಕಂಪನಗಳನ್ನು ಹರಡಲು ಸಾಧ್ಯವಿಲ್ಲವೇ!
ಒಳ್ಳೆಯದು - ಎಷ್ಟೊಂದು ವಿಶಾಲ ಬುದ್ಧಿಯವರು ಒಟ್ಟಿಗೆ ಸೇರಿದ್ದೀರಿ. ಶಕ್ತಿ ಸೇನೆಯೂ ಸಹ ಬಹಳ
ಇದ್ದಾರೆ. ಮಧುಬನದಲ್ಲಿ ಒಂದೇ ಸಮಯದಲ್ಲಿ ಇಷ್ಟೂ ಶ್ರೇಷ್ಠಾತ್ಮರು ಬಂದು ಬಿಟ್ಟರು, ಇದೇನೂ ಕಡಿಮೆ
ಮಾತಲ್ಲ. ಈಗಂತು ಪರಸ್ಪರದಲ್ಲಿಯೂ ಸಾಧಾರಣವಾಗಿದ್ದೀರಿ, ಅಂದಮೇಲೆ ಸಾಧಾರಣ ಮಾತೆನಿಸುತ್ತದೆ.
ಒಬ್ಬೊಬ್ಬರೂ ಎಷ್ಟೊಂದು ಮಹಾನ್ ಆತ್ಮರಾಗಿದ್ದೀರಿ. ಇಷ್ಟೂ ಮಹಾನ್ ಆತ್ಮರ ಸಂಘಟನೆಯಂತು ಇಡೀ
ಕಲ್ಪದಲ್ಲಿಯೂ ಹೀಗಾಗಲು ಸಾಧ್ಯವಿಲ್ಲ. ಒಬ್ಬೊಬ್ಬರ ಮಹತ್ವಿಕೆಯೇನೂ ಕಡಿಮೆಯಿಲ್ಲ. ಈಗಂತು
ಪರಸ್ಪರದಲ್ಲಿಯೂ ಒಬ್ಬರಿನ್ನೊಬ್ಬರನ್ನು ಸಾಧಾರಣರೆಂದು ತಿಳಿಯುತ್ತೀರಿ, ಮುಂದೆ ನಡೆದಂತೆ
ಒಬ್ಬರಿನ್ನೊಬ್ಬರ ವಿಶೇಷತೆಯನುಸಾರವಾಗಿ ವಿಶೇಷ ಆತ್ಮನೆಂದು ತಿಳಿಯುವಿರಿ. ಈಗ ಹಗುರ-ಹಗುರವಾದ
ಮಾತುಗಳನ್ನು ಹೆಚ್ಚಾಗಿ ನೋಟ್ ಆಗುತ್ತದೆ, ವಿಶೇಷತೆಗಳು ಕಡಿಮೆ. ಕುಳಿತು ಯೋಚಿಸಿದರೆ ಒಬ್ಬೊಬ್ಬರು
ಎಷ್ಟೊಂದು ಭಕ್ತರ ಪೂರ್ವಜರಾಗಿದ್ದೀರಿ. ಎಲ್ಲರೂ ಇಷ್ಟ ದೇವ ಮತ್ತು ದೇವಿಯರಾಗಿದ್ದೀರಲ್ಲವೆ.
ಒಬ್ಬೊಬ್ಬರು ಇಷ್ಟ ದೇವತೆಗಳ ಭಕ್ತರು ಎಷ್ಟಿರುತ್ತಾರೆ? ಕಡಿಮೆ ಹಸ್ತಿಗಳಂತು ಇರುವುದಿಲ್ಲವಲ್ಲವೆ!
ಒಂದು ಮೂರ್ತಿಯೂ ಸಹ ಇಷ್ಟೂ ಮಹತ್ವದ್ದಾಗಿರುತ್ತದೆ, ಇಷ್ಟೊಂದು ಇಷ್ಟ ದೇವತೆಗಳು ಒಟ್ಟಿಗೆ ಸೇರಿ
ಬಿಟ್ಟರೆ ಏನಾಗಿ ಬಿಡುತ್ತದೆ! ಶಕ್ತಿಶಾಲಿ ಆಗಿದ್ದೀರಿ ಆದರೆ ಪರಸ್ಪರದಲ್ಲಿಯೂ
ಬಚ್ಚಿಟ್ಟಿದ್ದೀರೆಂದರೆ, ವಿಶ್ವದಿಂದಲೂ ಗುಪ್ತವಾಗಿದ್ದೀರಿ. ಹಾಗೆ ನೋಡಿದರೆ ಒಬ್ಬೊಬ್ಬರ ಮೌಲ್ಯವು
ಲೆಕ್ಕವಿಲ್ಲದಷ್ಟಿದೆ. ಬಾಪ್ದಾದಾರವರಂತು ಯಾವಾಗ ಮಕ್ಕಳ ಮಹತ್ವವನ್ನು ನೋಡುತ್ತಾರೆ, ಆಗ
ಹೆಮ್ಮೆಯಾಗುತ್ತದೆ- ಒಂದೊಂದು ಮಗುವು ಎಷ್ಟೊಂದು ಮಹಾನ್ ಆಗಿದೆ. ತಮ್ಮನ್ನೂ ಸಹ ಕೆಲವೊಮ್ಮೆ
ತಿಳಿಯುತ್ತೀರಿ, ಕೆಲವೊಮ್ಮೆ ಇಲ್ಲ. ಹಾಗೆ ನೋಡಿದರೆ ಇರುವುದು ಬಹಳ ಮಹಾನ್. ಸಾಧಾರಣ ಹಸ್ತಿಯಲ್ಲ!
ಸ್ವಲ್ಪ ಪ್ರತ್ಯಕ್ಷತೆಯಾಗುತ್ತದೆ ನಂತರ ತಮಗೂ ಗೊತ್ತಾಗುತ್ತದೆ- ನಾವು ಯಾರಾಗಿದ್ದೇವೆ! ತಂದೆಯನ್ನು
ಅದೇ ಮಹಾನತೆಯಿಂದ ನೋಡುತ್ತಾರೆ. ತಂದೆಯ ಮುಂದೆಯಂತು ಎಲ್ಲರೂ ಪ್ರತ್ಯಕ್ಷವಾಗಿದ್ದೀರಲ್ಲವೆ.
ಒಳ್ಳೆಯದು. ಒಬ್ಬೊಬ್ಬರ ಮಹಾನತೆಯೇನಾಗಿದೆ ಎನ್ನುವ ಕ್ಲಾಸ್ ಸಹ ಮಾಡಬೇಕು. ಒಳ್ಳೆಯದು.
ವರದಾನ:
ಅವಿನಾಶಿ
ನಶೆಯಲ್ಲಿದ್ದು ಆತ್ಮಿಕ ಮಜಾ ಮತ್ತು ಮೋಜಿನ ಅನುಭವ ಮಾಡುವಂತಹ ಬ್ರಾಹ್ಮಣರಿಂದ ಫರಿಶ್ತಾ ಭವ.
ತಾವು
ಬ್ರಾಹ್ಮಣರಿಂದ ಫರಿಶ್ತೆ, ದೇವತೆಗಳಿಗಿಂತಲೂ ಶ್ರೇಷ್ಠರಿದ್ದೀರಿ, ದೇವತೆಗಳ ಜೀವನದಲ್ಲಿ ತಂದೆಯ
ಜ್ಞಾನವು ಇಮರ್ಜ್ ಆಗಿರುವುದಿಲ್ಲ. ಪರಮಾತ್ಮನ ಮಿಲನದ ಅನುಭವವೂ ಆಗುವುದಿಲ್ಲ. ಆದ್ದರಿಂದ ಈಗ ಸದಾ
ಈ ನಶೆಯಿರಲಿ - ನಾವು ದೇವತೆಗಳಿಗಿಂತಲೂ ಶ್ರೇಷ್ಠವಾದ ಬ್ರಾಹ್ಮಣರಿಂದ ಫರಿಶ್ತೆಯಿದ್ದೇವೆ. ಈ
ಅವಿನಾಶಿ ನಶೆಯೇ ಆತ್ಮಿಕ ಮಜಾ ಮೋಜಿನ ಅನುಭವ ಮಾಡಿಸುವಂತದ್ದಾಗಿದೆ. ಒಂದು ವೇಳೆ ನಶೆಯು ಸದಾ
ಇರುವುದಿಲ್ಲವೆಂದರೆ ಕೆಲವೊಮ್ಮೆ ಮಜದಲ್ಲಿರುತ್ತೀರಿ, ಕೆಲವೊಮ್ಮೆ ಗೊಂದಲವಾಗುತ್ತೀರಿ.
ಸ್ಲೋಗನ್:
ತಮ್ಮ ಸೇವೆಯನ್ನೂ
ಸಹ ತಂದೆಯ ಮುಂದೆ ಅರ್ಪಣೆ ಮಾಡಿಬಿಡಿ, ಆಗಲೇ ಸಮರ್ಪಿತ ಆತ್ಮನೆಂದು ಹೇಳಲಾಗುತ್ತದೆ.