17.02.19 Avyakt Bapdada
Kannada
Murli
22.04.84 Om Shanti Madhuban
" ವಿಚಿತ್ರ ತಂದೆಯ ಮೂಲಕ
ವಿಚಿತ್ರ ವಿದ್ಯೆ ಹಾಗೂ ವಿಚಿತ್ರ ಪ್ರಾಪ್ತಿ"
ಇಂದು ಆತ್ಮಿಕ ತಂದೆಯು
ತನ್ನ ಆತ್ಮಿಕ ಮಕ್ಕಳೊಂದಿಗೆ ಮಿಲನವಾಗಲು ಬಂದಿದ್ದಾರೆ. ಆತ್ಮಿಕ ತಂದೆಯು ಪ್ರತಿಯೊಂದು ಆತ್ಮರನ್ನು
ನೋಡುತ್ತಿದ್ದಾರೆ - ಹೇಗೆಂದರೆ, ಪ್ರತಿಯೊಬ್ಬರಲ್ಲಿಯೂ ಆತ್ಮಿಕ ಶಕ್ತಿಯು ಎಷ್ಟು ಅಡಗಿದೆ!
ಪ್ರತಿಯೊಂದು ಆತ್ಮವು ಎಷ್ಟೊಂದು ಖುಷಿ ಸ್ವರೂಪನಾಗಿದೆ! ಆತ್ಮಿಕ ತಂದೆಯು ಮಕ್ಕಳಿಗೆ ಅವಿನಾಶಿ
ಖುಷಿಯ ಖಜಾನೆಯನ್ನು ಜನ್ಮ ಸಿದ್ಧ ಅಧಿಕಾರದಲ್ಲಿ ಕೊಟ್ಟಿರುವುದನ್ನು ನೋಡುತ್ತಿದ್ದಾರೆ -
ಪ್ರತಿಯೊಬ್ಬರೂ ತನ್ನ ಆಸ್ತಿ, ಅಧಿಕಾರವನ್ನು ಎಲ್ಲಿಯವರೆಗೆ ಜೀವನದಲ್ಲಿ ಪ್ರಾಪ್ತಿ
ಮಾಡಿಕೊಂಡಿದ್ದಾರೆ! ಖಜಾನೆಗೆ ಬಾಲಕರಿಂದ ಮಾಲೀಕನಾಗಿದ್ದಾರೆಯೇ? ತಂದೆಯು ದಾತಾ ಆಗಿದ್ದಾರೆ, ಎಲ್ಲಾ
ಮಕ್ಕಳಿಗೆ ಸಂಪೂರ್ಣವಾಗಿ ಅಧಿಕಾರವನ್ನು ಕೊಟ್ಟಿರುತ್ತಾರೆ. ಆದರೆ ಪ್ರತಿಯೊಂದು ಮಕ್ಕಳು
ತನ್ನ-ತನ್ನ ಧಾರಣೆಯ ಶಕ್ತಿಯನುಸಾರವಾಗಿ ಅಧಿಕಾರಿಯಾಗುತ್ತಾರೆ. ತಂದೆಯಂತು ಎಲ್ಲಾ ಮಕ್ಕಳ ಪ್ರತಿ
ಒಂದೇ ಶುಭ ಸಂಕಲ್ಪವಿದೆ - ಪ್ರತಿಯೊಂದು ಆತ್ಮನೆಂಬ ಮಗುವು ಸದಾ ಸರ್ವ ಖಜಾನೆಗಳಿಂದ ಸಂಪನ್ನರು,
ಅನೇಕ ಜನ್ಮಗಳಿಗಾಗಿ ಸಂಪೂರ್ಣ ಆಸ್ತಿಗೆ ಅಧಿಕಾರಿಯಾಗಿ ಬಿಟ್ಟರು. ಹೀಗೆ ಪ್ರಾಪ್ತಿ ಮಾಡಿಕೊಳ್ಳುವ
ಉಮ್ಮಂಗ-ಉತ್ಸಾಹದಲ್ಲಿರುವ ಮಕ್ಕಳನ್ನು ನೋಡುತ್ತಾ ಬಾಪ್ದಾದಾರವರೂ ಹರ್ಷಿತವಾಗುತ್ತಿದ್ದಾರೆ.
ಪ್ರತಿಯೊಂದು ಚಿಕ್ಕ-ದೊಡ್ಡ, ಮಕ್ಕಳು, ಯುವ ಅಥವಾ ವೃದ್ಧರು, ಮಧುರಾತಿ ಮಧುರ ಮಾತೆಯರು,
ಅವಿದ್ಯಾವಂತರು ಅಥವಾ ವಿದ್ಯಾವಂತರು, ಶರೀರದಿಂದ ನಿರ್ಬಲನಾಗಿದ್ದರೂ ಆತ್ಮರು ಎಷ್ಟೊಂದು
ಶಕ್ತಿಶಾಲಿಯಾಗಿದ್ದಾರೆ! ಪರಮಾತ್ಮನೊಬ್ಬನ ಲಗನ್ನಿನಲ್ಲಿ ಎಷ್ಟಿದ್ದಾರೆ! ಅನುಭವವಿದೆ - ನಾವು
ಪರಮಾತ್ಮ ತಂದೆಯನ್ನು ತಿಳಿದೆವು, ಎಲ್ಲವನ್ನೂ ತಿಳಿದು ಬಿಟ್ಟೆವು. ಬಾಪ್ದಾದಾರವರೂ ಸಹ ಇಂತಹ
ಅನುಭವಿ ಆತ್ಮರಿಗೆ ಇದೇ ವರದಾನವನ್ನು ಸದಾ ಕೊಡುತ್ತಾರೆ - ಹೇ ಲಗನ್ನಲ್ಲಿ ಮಗ್ನರಾಗಿರುವ ಮಕ್ಕಳೇ,
ಸದಾ ನೆನಪಿನಲ್ಲಿ ಜೀವಿಸಿರಿ. ಸದಾ ಸುಖ-ಶಾಂತಿಯ ಪ್ರಾಪ್ತಿಯಲ್ಲಿ ಬೆಳೆಯುತ್ತಿರಿ. ಅವಿನಾಶಿ
ಖುಷಿಯ ಉಯ್ಯಾಲೆಯಲ್ಲಿ ತೂಗುತ್ತಿರಿ ಮತ್ತು ವಿಶ್ವದ ಸರ್ವ ಆತ್ಮರೆಂಬ ತಮ್ಮ ಆತ್ಮಕ ಸಹೋದರರಿಗೆ
ಸುಖ-ಶಾಂತಿಗಾಗಿ ಸಹಜ ಸಾಧನವನ್ನು ತಿಳಿಸುತ್ತಾ, ಅವರಿಗೂ ಆತ್ಮಿಕ ತಂದೆಯ ಆತ್ಮಿಕ ಆಸ್ತಿಗೆ
ಅಧಿಕಾರಿಯನ್ನಾಗಿ ಮಾಡಿರಿ. ಇದೊಂದೇ ಪಾಠವನ್ನು ಎಲ್ಲರಿಗೂ ಓದಿಸಿರಿ - ನಾವೆಲ್ಲಾ ಆತ್ಮರ ಒಂದೇ
ಸ್ವಧರ್ಮವಾಗಿದೆ - ಶಾಂತಿ ಮತ್ತು ಪವಿತ್ರತೆ. ಇದೊಂದೇ ಪಾಠದಿಂದ ಸ್ವಪರಿವರ್ತನೆ ಮತ್ತು ವಿಶ್ವ
ಪರಿವರ್ತನೆಯನ್ನು ಮಾಡುತ್ತೀರಿ ಮತ್ತು ನಿಶ್ಚಿತವಾಗಿ ಆಗಲೇಬೇಕು. ಸಹಜವಾದ ಮಾತಾಗಿದೆಯಲ್ಲವೆ.
ಕಷ್ಟವಂತು ಇಲ್ಲ. ವಿದ್ಯೆಯನ್ನು ಓದದೇ ಇರುವವರೂ ಸಹ ಈ ಪಾಠದಿಂದ ಜ್ಞಾನಪೂರ್ಣರಾಗಿ ಬಿಟ್ಟಿದ್ದಾರೆ
ಏಕೆಂದರೆ ರಚೈತ ಬೀಜವನ್ನು ತಿಳಿದು, ರಚೈತನ ಮೂಲಕ ರಚನೆಯನ್ನು ಸ್ವತಹವಾಗಿಯೇ ತಿಳಿದು ಬಿಡುತ್ತಾರೆ.
ಎಲ್ಲರೂ ಜ್ಞಾನಪೂರ್ಣರಾಗಿದ್ದಾರಲ್ಲವೆ! ರಚೈತ ಮತ್ತು ರಚನೆ ಪೂರ್ಣ ವಿದ್ಯೆಯೇ ಕೇವಲ ಮೂರು
ಶಬ್ಧಗಳಲ್ಲಿ ಓದಿದ್ದೀರಿ. ಆತ್ಮ, ಪರಮಾತ್ಮ ಮತ್ತು ಸೃಷ್ಟಿ ಚಕ್ರ. ಈ ಮೂರು ಶಬ್ಧಗಳಿಂದ ಏನಾಗಿ
ಬಿಟ್ಟಿದ್ದೀರಿ! ಯಾವ ಸರ್ಟಿಫಿಕೇಟ್ ಸಿಕ್ಕಿದೆ? ಬಿ.ಎ., ಎಮ್.ಎ., ಸರ್ಟಿಫಿಕೇಟುಗಳಂತು
ಸಿಕ್ಕಿಲ್ಲ. ಆದರೆ ತ್ರಿಕಾಲದರ್ಶಿ, ಜ್ಞಾನ ಸ್ವರೂಪನ ಬಿರುದಂತು ಸಿಕ್ಕಿದೆಯಲ್ಲವೆ. ಮತ್ತು ಆದಾಯದ
ಮೂಲವೇನಾಗಿದೆ? ಏನು ಸಿಕ್ಕಿದೆ? ಸತ್ಯ ಶಿಕ್ಷಕನ ಮೂಲಕ ಅವಿನಾಶಿ ಜನ್ಮ-ಜನ್ಮದ ಸರ್ವ ಪ್ರಾಪ್ತಿಗಳು
ಗ್ಯಾರಂಟಿಯಾಗಿ ಸಿಕ್ಕಿದೆ. ಹಾಗೆ ನೋಡಿದಾಗ ಸದಾ ಸಂಪಾದಿಸುತ್ತಿರುತ್ತೀರಿ ಅಥವಾ
ಹಣವಂತರಾಗಿರುತ್ತೀರೆಂದು ಗ್ಯಾರಂಟಿ ಕೊಡುವುದಿಲ್ಲ. ಅವರು ಕೇವಲ ಓದಿಸಿ ಯೋಗ್ಯರನ್ನಾಗಿ ಮಾಡಿ
ಬಿಡುತ್ತಾರೆ. ನೀವು ಮಕ್ಕಳಿಗೆ ಅಥವಾ ಈಶ್ವರನ ವಿದ್ಯಾರ್ಥಿಗಳಿಗೆ ತಂದೆ, ಶಿಕ್ಷಕನ ಮೂಲಕ,
ವರ್ತಮಾನದ ಆಧಾರದಿಂದ 21 ಜನ್ಮಗಳು ಸತ್ಯ-ತ್ರೇತಾಯುಗದಲ್ಲಿನ ಸದಾಕಾಲದ ಸುಖ, ಶಾಂತಿ, ಸಂಪತ್ತು,
ಆನಂದ, ಪ್ರೇಮ, ಸುಖ ಕೊಡುವ ಪರಿವಾರವು ಸಿಗಲೇಬೇಕು. ಸಿಗುತ್ತದೆ ಅಲ್ಲ, ಸಿಗಲೇಬೆಕು. ಇದು
ಗ್ಯಾರಂಟಿ ಇದೆ. ಏಕೆಂದರೆ ಅವಿನಾಶಿ ತಂದೆಯಿದ್ದಾರೆ, ಅವಿನಾಶಿ ಶಿಕ್ಷಕನಾಗಿದ್ದಾರೆ. ಅಂದಮೇಲೆ
ಅವಿನಾಶಿಯ ಮೂಲಕ ಪ್ರಾಪ್ತಿಯೂ ಅವಿನಾಶಿಯದೇ ಆಗಿರುತ್ತದೆ. ಇದೇ ಖುಷಿಯ ಗೀತೆಯನ್ನು
ಹಾಡುತ್ತೀರಲ್ಲವೆ - ನಾವು ಸತ್ಯ ತಂದೆ, ಸತ್ಯ ಶಿಕ್ಷಕನ ಮೂಲಕ ಸರ್ವ ಪ್ರಾಪ್ತಿಗಳ ಅಧಿಕಾರವು
ಸಿಕ್ಕಿ ಬಿಟ್ಟಿತು. ಇದಕ್ಕೇ ವಿಚಿತ್ರ ತಂದೆ, ವಿಚಿತ್ರ ವಿದ್ಯಾರ್ಥಿಗಳು ಮತ್ತು ವಿಚಿತ್ರ ವಿದ್ಯೆ
ಹಾಗೂ ವಿಚಿತ್ರ ಪ್ರಾಪ್ತಿ ಎಂದು ಹೇಳಲಾಗುತ್ತದೆ. ಯಾರೆಷ್ಟಾದರೂ ಓದಿರಬಹುದು ಆದರೆ ಈ ವಿಚಿತ್ರ
ತಂದೆ ಮತ್ತು ಶಿಕ್ಷಕನ ವಿದ್ಯೆ ಹಾಗೂ ಆಸ್ತಿಯನ್ನು ತಿಳಿಯಲು ಸಾಧ್ಯವಿಲ್ಲ. ಚಿತ್ರವನ್ನು ಬಿಡಿಸಲೂ
ಸಾಧ್ಯವಿಲ್ಲ. ಅವರು ತಿಳಿದುಕೊಳ್ಳುವುದಾದರೂ ಹೇಗೆ! ಇಷ್ಟು ದೊಡ್ಡ ಶ್ರೇಷ್ಠಾತಿ ಶ್ರೇಷ್ಠ ತಂದೆ,
ಶಿಕ್ಷಕ ಮತ್ತು ಓದಿಸುವುದು ಎಲ್ಲಿ ಮತ್ತು ಯಾರಿಗೆ ಓದಿಸುತ್ತಾರೆ! ಎಷ್ಟು ಸಾಧಾರಣವಿದ್ದಾರೆ!
ಮಾನವನಿಂದ ದೇವತೆಯನ್ನಾಗಿ ಮಾಡುವ, ಸದಾಕಾಲಕ್ಕಾಗಿ ಚಾರಿತ್ರ್ಯವಂತರನ್ನಾಗಿ ಮಾಡುವ ವಿದ್ಯೆಯಾಗಿದೆ
ಮತ್ತು ಓದಿಸುವವರು ಯಾರಾಗಿದ್ದಾರೆ? ಯಾರಿಗೆ ಯಾರೂ ಓದಿಸಲು ಸಾಧ್ಯವಿಲ್ಲ, ಅವರಿಗೆ ತಂದೆಯು
ಓದಿಸುತ್ತಾರೆ. ಯಾರಿಗೆ ಪ್ರಪಂಚದವರೂ ಓದಿಸಬಹುದು, ತಂದೆಯೂ ಅವರಿಗೇ ಓದಿಸಿದರೆ ದೊಡ್ಡ ಮಾತೇನಾಯಿತು!
ಭರವಸೆಯಿರದಿರುವ ಆತ್ಮರನ್ನೇ ಭರವಸೆಯಿರುವವರನ್ನಾಗಿ ಮಾಡುತ್ತಾರೆ. ಅಸಂಭವವನ್ನು ಸಂಭವ
ಮಾಡಿಸುತ್ತಾರೆ, ಆದ್ದರಿಂದಲೇ ಗಾಯನವಿದೆ - ನಿಮ್ಮ ಗತಿ ಮತ ನಿಮಗೇ ಗೊತ್ತಿದೆ. ಬಾಪ್ದಾದಾರವರು
ಇಂತಹ ಭರವಸೆಯಿರದಿರುವವರಿಂದ ಭರವಸೆಯಿರುವ ಮಕ್ಕಳನ್ನು ನೋಡುತ್ತಾ ಖುಷಿಯಾಗುತ್ತಾರೆ. ಭಲೇ
ಬಂದಿದ್ದೀರಿ. ತಂದೆಯ ಮನೆಯ ಶೃಂಗಾರವು ಭಲೇ ಬನ್ನಿರಿ. ಒಳ್ಳೆಯದು.
ಸದಾ ಸ್ವಯಂನ್ನು ಶ್ರೇಷ್ಠ ಪ್ರಾಪ್ತಿಯ ಅಧಿಕಾರಿಯೆಂದು ಅನುಭವ ಮಾಡುವಂತಹ ಶ್ರೇಷ್ಠಾತ್ಮರಿಗೆ, ಒಂದು
ಜನ್ಮದಲ್ಲಿ ಅನೇಕ ಜನ್ಮಗಳ ಪ್ರಾಪ್ತಿಯನ್ನು ಮಾಡಿಸುವಂತಹ ಜ್ಞಾನ ಸ್ವರೂಪ ಮಕ್ಕಳಿಗೆ, ಸದಾ ಒಂದು
ಪಾಠವನ್ನು ಓದುವ ಮತ್ತು ಓದಿಸುವ ಶ್ರೇಷ್ಠ ಮಕ್ಕಳಿಗೆ, ಸದಾ ವರದಾತಾ ತಂದೆಯ ವರದಾನಗಳಲ್ಲಿ
ಬೆಳೆಯುವ ಭಾಗ್ಯವಂತ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
17/02/19
ಪ್ರಾತಃ ಮುರುಳಿ ಓಂ ಶಾಂತಿ "ಅವ್ಯಕ್ತ-ಬಾಪ್ದಾದಾ" ರಿವೈ ಜ್ -24/04/84 ಮಧುಬನ
" ವರ್ತಮಾನ ಬ್ರಾಹ್ಮಣ ಜನ್ಮ- ವಜ್ರ ಸಮಾನ"
ಇಂದು ಬಾಪ್ದಾದಾರವರು ತನ್ನ ಸರ್ವ ಶ್ರೇಷ್ಠ ಮಕ್ಕಳನ್ನು ನೋಡುತ್ತಿದ್ದಾರೆ. ವಿಶ್ವದ ತಮೋಗುಣಿ
ಅಪವಿತ್ರ ಆತ್ಮರ ಅಂತರದಲ್ಲಿ ತಾವೆಷ್ಟು ಶ್ರೇಷ್ಠಾತ್ಮರಾಗಿದ್ದೀರಿ. ಪ್ರಪಂಚದಲ್ಲಿ ಸರ್ವ ಆತ್ಮರು
ಕರೆಯುವವರಾಗಿದ್ದಾರೆ, ಅಲೆದಾಡುವವರು, ಅಪ್ರಾಪ್ತ ಆತ್ಮರಾಗಿದ್ದರೆ. ವಿನಾಶಿ ಸರ್ವ ಪ್ರಾಪ್ತಿಗಳು
ಎಷ್ಟೇ ಇರಬಹುದು ಆದರೂ ಸಹ ಏನಾದರೊಂದು ಅಪ್ರಾಪ್ತಿಯು ಖಂಡಿತವಾಗಿಯೂ ಇರುತ್ತದೆ. ತಾವು ಬ್ರಾಹ್ಮಣ
ಮಕ್ಕಳಿಗೆ ಸರ್ವ ಪ್ರಾಪ್ತಿಗಳ ದಾತನ ಮಕ್ಕಳಲ್ಲಿ ಯಾವುದೇ ಅಪ್ರಾಪ್ತ ವಸ್ತುವೇ ಇಲ್ಲ. ಸದಾ
ಪ್ರಾಪ್ತಿ ಸ್ವರೂಪರಾಗಿದ್ದೀರಿ. ಅಲ್ಪಕಾಲದ ಸುಖದ ಸಾಧನಗಳು, ಅಲ್ಪಕಾಲದ ವೈಭವ, ಅಲ್ಪಕಾಲದ
ರಾಜ್ಯಾಧಿಕಾರವು ಇಲ್ಲದಿದ್ದರೂ ಸಹ ಕವಡೆಯಿಲ್ಲದೆಯೂ ಚಕ್ರವರ್ತಿಯಾಗಿದ್ದೀರಿ. ನಿಶ್ಚಿಂತ
ಚಕ್ರವರ್ತಿಯಾಗಿದ್ದೀರಿ. ಮಾಯಾಜೀತ, ಪ್ರಕೃತಿ ಜೀತ ಸ್ವರಾಜ್ಯಾಧಿಕಾರಿ ಆಗಿದ್ದೀರಿ. ಸದಾ ಈಶ್ವರನ
ಪಾಲನೆಯಲ್ಲಿ ಬೆಳೆಯುವವರು ಖುಷಿಯ ಉಯ್ಯಾಲೆಯಲ್ಲಿ, ಅತೀಂದ್ರಿಯ ಸುಖದ ಉಯ್ಯಾಲೆಯಲ್ಲಿ
ತೂಗುವವರಾಗಿದ್ದೀರಿ. ವಿನಾಶಿ ಸಂಪತ್ತಿಗೆ ಬದಲಾಗಿ ಅವಿನಾಶಿ ಸಂಪತ್ತಿರುವವರಾಗಿದ್ದೀರಿ. ರತ್ನ
ಜಡಿತ ಕಿರೀಟವಿಲ್ಲ, ಆದರೆ ಪರಮಾತ್ಮ ತಂದೆಯ ತಲೆಯ ಕಿರೀಟವಾಗಿದ್ದೀರಿ. ರತ್ನ ಜಡಿತ ಶೃಂಗಾರವಿಲ್ಲ
ಆದರೆ ಜ್ಞಾನ ರತ್ನಗಳು, ಗುಣಗಳೆಂಬ ರತ್ನಗಳ ಶೃಂಗಾರದಿಂದ ಸದಾ ಶೃಂಗರಿತರಾಗಿದ್ದೀರಿ. ವಿನಾಶಿಯಾದ
ಎಷ್ಟೇ ದೊಡ್ಡ ಸರ್ವ ಶ್ರೇಷ್ಟ ವಜ್ರವೇ ಇರಲಿ, ಅಮೂಲ್ಯವೇ ಆಗಿರಲಿ ಆದರೆ ಒಂದು ಜ್ಞಾನರತ್ನ, ಗುಣದ
ರತ್ನದ ಮುಂದೆ ಅದರ ಮೌಲ್ಯವೇನಿದೆ? ಈ ರತ್ನಗಳ ಮುಂದೆ ಅದು ಕಲ್ಲಿನ ಸಮಾನವಾಗಿದೆ ಏಕೆಂದರೆ
ವಿನಾಶಿಯಾಗಿದೆ. 9 ಲಕ್ಷದ ಹಾರದ ಮುಂದೆಯೂ ತಾವು ಸ್ವಯಂ ತಂದೆಯ ಕೊರಳಿನ ಹಾರವಾಗಿ ಬಿಟ್ಟಿರಿ.
ಪ್ರಭುವಿನ ಕೊರಳಿನ ಹಾರದ ಮುಂದೆ 9 ಲಕ್ಷವೆಂದಾದರೂ ಹೇಳಿ ಅಥವಾ 9 ಪದಮವೆಂದಾದರೂ ಹೇಳಿ ಅಥವಾ
ಅಪರಿಮಿತ ಪದಮದ ಮೌಲ್ಯದ ಹಾರವೂ ಏನೂ ಇಲ್ಲ. 36 ಪ್ರಕಾರದ ಭೋಜನವೂ ಸಹ ಈ ಬ್ರಹ್ಮಾ ಭೋಜನದ ಮುಂದೆ
ಏನೂ ಇಲ್ಲ, ಏಕೆಂದರೆ ಡೈರೆಕ್ಟ್ ಬಾಪ್ದಾದಾರವರಿಗೆ ಭೋಗವನ್ನಿಟ್ಟು, ಈ ಭೋಜನವನ್ನು ಪರಮಾತ್ಮನ
ಪ್ರಸಾದವನ್ನಾಗಿ ಮಾಡಿ ಬಿಡುತ್ತೀರಿ. ಪ್ರಸಾದದ ಮೌಲ್ಯವಂತು ಇಂದು ಅಂತಿಮ ಜನ್ಮದಲ್ಲಿಯೂ
ಭಕ್ತಾತ್ಮರ ಬಳಿ ಎಷ್ಟಿದೆ? ತಾವು ಸಾಧಾರಣವಾದ ಭೋಜನವನ್ನು ಸೇವಿಸುತ್ತಿಲ್ಲ. ಪ್ರಭು ಪ್ರಸಾದವನ್ನು
ಸೇವಿಸುತ್ತಿದ್ದೀರಿ. ಆ ಒಂದೊಂದು ಕಾಳಿನಲ್ಲಿ ಪದಮಗಳಿಗಿಂತಲೂ ಶ್ರೇಷ್ಠವಿದೆ. ಇಂತಹ ಸರ್ವ
ಶ್ರೇಷ್ಠ ಆತ್ಮರಾಗಿದ್ದೀರಿ. ಹೀಗೆ ಅಂತಿಮ ಶ್ರೇಷ್ಠ ನಶೆಯಿರುತ್ತದೆಯೇ. ನಡೆಯುತ್ತಾ-ನಡೆಯುತ್ತಾ
ತಮ್ಮ ಶ್ರೇಷ್ಠತೆಯನ್ನಂತು ಮರೆತು ಹೋಗುವುದಿಲ್ಲವೇ? ತಮ್ಮನ್ನು ಸಾಧಾರಣವೆಂದಂತು ತಿಳಿಯುವುದಿಲ್ಲವೇ?
ಕೇವಲ ಕೇಳುವವರೇ ಅಥವಾ ತಿಳಿಸುವವರಂತು ಅಲ್ಲವೇ! ಸ್ವಮಾನವಿರುವವರಾಗಿದ್ದೀರಾ?
ಕೇಳುವವರು-ಹೇಳುವವರಂತು ಅನೇಕಾನೇಕರಿದ್ದಾರೆ. ಸ್ವಮಾನದವರು ಕೋಟಿಯಲ್ಲಿ ಕೆಲವರಿದ್ದಾರೆ. ತಾವು
ಯಾರಾಗಿದ್ದೀರಿ? ಅನೇಕರಲ್ಲಿದ್ದೀರಾ ಅಥವಾ ಕೋಟಿಯಲ್ಲಿ ಕೆಲವರಲ್ಲಿದ್ದೀರಾ? ಪ್ರಾಪ್ತಿಯ ಸಮಯದಲ್ಲಿ
ಹುಡುಗಾಟಿಕೆಯಿರುವವರಾಗುವುದು, ಅಂತಹವರನ್ನು ಬಾಪ್ದಾದಾರವರು ಎಂತಹ ಬುದ್ಧಿವಂತ ಮಕ್ಕಳೆಂದು
ಹೇಳುವರು? ಪಡೆದಿರುವ ಭಾಗ್ಯವನ್ನು, ಸಿಕ್ಕಿರುವ ಭಾಗ್ಯವನ್ನು ಅನುಭವದಲ್ಲಿ ತಂದಿಲ್ಲ ಅರ್ಥಾತ್ ಈಗ
ಮಹಾನ್ ಭಾಗ್ಯವಂತರಾಗಲಿಲ್ಲ, ಮತ್ತೆ ಯಾವಾಗ ಆಗುವಿರಿ? ಸಂಗಮಯುಗದ ಪ್ರತೀ ಹೆಜ್ಜೆಯಲ್ಲಿ ಈ
ಶ್ರೇಷ್ಠ ಪ್ರಾಪ್ತಿಯ ಈ ಸ್ಲೋಗನ್ನ್ನು ಸದಾ ನೆನಪಿಟ್ಟುಕೊಳ್ಲಿರಿ - "ಈಗಿಲ್ಲದಿದ್ದರೆ ಮತ್ತೆಂದಿಗೂ
ಇಲ್ಲ" ತಿಳಿಯಿತೆ! ಒಳ್ಳೆಯದು.
ಈಗ ಗುಜರಾತ್ ಜೋನ್ನವರು ಬಂದಿದ್ದಾರೆ. ಗುಜರಾತಿನ ವಿಶೇಷತೆಯೇನಾಗಿದೆ? ಗುಜರಾತಿನ ವಿಶೇಷತೆಯು
ಇದಾಗಿದೆ - ಕಿರಿಯರು-ಹಿರಿಯರೆಲ್ಲರೂ ಖುಷಿಯಲ್ಲಿ ಖಂಡಿತ ನರ್ತಿಸುತ್ತಾರೆ. ತನ್ನ ಸಣ್ಣ ಅಥವಾ
ದಪ್ಪಗಿರುವ (ದೇಹದ ಭಾರ) ಎಲ್ಲವನ್ನೂ ಮರೆತು ಬಿಡುತ್ತಾರೆ. ರಾಸ್ನ ಲಗನ್ನಿನಲ್ಲಿ ಮಗ್ನರಾಗಿ
ಬಿಡುತ್ತಾರೆ. ಇಡೀ ರಾತ್ರಿಯೂ ಮಗ್ನರಾಗಿರುತ್ತಾರೆ. ಅಂದಮೇಲೆ ಹೇಗೆ ರಾಸ್ನ ಲಗನ್ನಿನಲ್ಲಿ
ಮಗ್ನರಾಗಿರುತ್ತೀರಿ, ಹಾಗೆಯೇ ಸದಾ ಜ್ಞಾನದ ಖುಷಿಯ ರಾಸ್ನಲ್ಲಿಯೂ ಮಗ್ನರಾಗಿರುತ್ತೀರಲ್ಲವೆ! ಈ
ಅವಿನಾಶಿ ಲಗನ್ನಿನಲ್ಲಿ ಮಗ್ನರಾಗಿರುವುದರಲ್ಲಿಯೂ ನಂಬರವನ್ ಅಭ್ಯಾಸಿ ಆಗಿದ್ದೀರಲ್ಲವೆ! ವಿಸ್ತಾರವೂ
ಸಹ ಬಹಳ ಚೆನ್ನಾಗಿದೆ. ಈ ಬಾರಿ ಮುಖ್ಯ ಸ್ಥಾನ(ಮಧುಬನ)ದ ಸಮೀಪದ ಜೊತೆಗಾರರ ಎರಡೂ ಜೋನ್ನವರೂ
ಬಂದಿದ್ದಾರೆ. ಒಂದು ಕಡೆಯಿದೆ - ಗುಜರಾತ್, ಇನ್ನೊಂದು ಕಡೆ - ರಾಜಾಸ್ಥಾನ. ಎರಡೂ
ಸಮೀಪದಲ್ಲಿದೆಯಲ್ಲವೆ. ಎಲ್ಲಾ ಕಾರ್ಯಗಳ ಸಂಬಂಧವು ರಾಜಸ್ಥಾನ ಮತ್ತು ಗುಜರಾತಿನೊಂದಿಗಿದೆ. ಅಂದ
ಮೇಲೆ ಡ್ರಾಮಾನುಸಾರವಾಗಿ ಎರಡೂ ಸ್ಥಾನಗಳಿಗೆ ಸಹಯೋಗಿಯಾಗುವ ಸುವರ್ಣಾವಕಾಶವು ಸಿಕ್ಕಿದೆ. ಇಬ್ಬರೂ
ಪ್ರತಿಯೊಂದು ಕಾರ್ಯದಲ್ಲಿ ಸಮೀಪ ಮತ್ತು ಸಹಯೋಗಿಯಾಗಿದ್ದೀರಿ. ಸಂಗಮಯುಗದ ಸ್ವರಾಜ್ಯದ ರಾಜ
ಗದ್ದುಗೆಯಂತು ರಾಜಾಸ್ಥಾನದವರಿಗೆ ಇದೆಯಲ್ಲವೆ! ಎಷ್ಟು ರಾಜರನ್ನು ತಯಾರು ಮಾಡಿದ್ದೀರಿ?
ರಾಜಸ್ಥಾನದ ರಾಜರ ಗಾಯನವಿದೆ. ಅಂದ ಮೇಲೆ ರಾಜರು ತಯಾರಾಗಿ ಬಿಟ್ಟರೆ ಅಥವಾ ಆಗುತ್ತಿದ್ದಾರೆಯೇ?
ರಾಜಸ್ಥಾನದಲ್ಲಿ ರಾಜರುಗಳ ಸವಾರಿಯು ಬರುತ್ತದೆ. ಅಂದ ಮೇಲೆ ರಾಜಸ್ಥಾನದವರಿಗೆ ಇಂತಹ ಸಂಪೂರ್ಣ
ಸವಾರಿಯನ್ನು ತಯಾರು ಮಾಡಿಕೊಂಡು ತರಬೇಕಾಗಿದೆ, ಆಗಲೇ ಎಲ್ಲರೂ ಪುಷ್ಫಗಳ ಸುರಿಮಳೆ
ಸುರಿಸುತ್ತಾರಲ್ಲವೆ. ಬಹಳ ಘನತೆಯಿಂದ ಸವಾರಿಯು ಬರುತ್ತದೆ. ಅಂದಮೇಲೆ ಎಷ್ಟು ರಾಜರುಗಳ ಸವಾರಿಯು
ಬರುತ್ತದೆ? ಕೊನೆ ಪಕ್ಷದಲ್ಲಿ ಎಲ್ಲಿ ಸೇವಾ ಕೇಂದ್ರವಿದೆ, ಅಲ್ಲಿನ ಒಬ್ಬೊಬ್ಬ ರಾಜರು
ಬರುತ್ತಾರೆಂದರೆ ಎಷ್ಟೊಂದು ರಾಜರುಗಳಾಗಿ ಬಿಡುತ್ತಾರೆ! 25 ಸ್ಥಾನಗಳಿಂದ 25 ರಾಜರುಗಳು ಬಂದರೆ
ಸವಾರಿಯು ಸುಂದರವಾಗಿ ಬಿಡುತ್ತದೆಯಲ್ಲವೆ! ಡ್ರಾಮಾನುಸಾರವಾಗಿ ರಾಜಸ್ಥಾನದಲ್ಲಿಯೇ ಸೇವೆಯ
ಗದ್ದುಗೆಯಾಗಿದೆ. ಅಂದಮೇಲೆ ರಾಜಸ್ಥಾನದ್ದೂ ವಿಶೇಷವಾದ ಪಾತ್ರವಿದೆ. ರಾಜಸ್ಥಾನದಿಂದಲೇ ವಿಶೇಷ
ಸೇವೆಯ ಕುದುರೆಯೂ ಬಂದಿದೆಯಲ್ಲವೆ. ಡ್ರಾಮಾದಲ್ಲಿ ಪಾತ್ರವಿದೆ, ಕೇವಲ ಇದನ್ನು ಪುನರಾವರ್ತಿಸಬೇಕು.
ಕರ್ನಾಟಕದ ವಿಸ್ತಾರವೂ ಬಹಳಷ್ಟಾಗಿ ಬಿಟ್ಟಿದೆ. ಈಗ ಕರ್ನಾಟಕದವರು ವಿಸ್ತಾರದಿಂದ ಆಚೆಗೆ
ಬರಬೇಕಾಗುತ್ತದೆ. ಯಾವಾಗ ಬೆಣ್ಣೆಯನ್ನು ತೆಗೆಯುತ್ತಾರೆ, ಅದಕ್ಕೆ ಮೊದಲು ವಿಸ್ತಾರವಾಗುತ್ತದೆ.
ನಂತರ ಅದರಿಂದ ಬೆಣ್ಣೆಯ ಸಾರವನ್ನು ತೆಗೆಯುತ್ತಾರೆ. ಅಂದಮೇಲೆ ಕರ್ನಾಟಕದವರೂ ಸಹ ವಿಸ್ತಾರದಿಂದ ಈಗ
ಬೆಣ್ಣೆಯನ್ನು ತೆಗೆಯಬೇಕಾಗಿದೆ. ಸಾರ ಸ್ವರೂಪರಾಗಬೇಕು ಮತ್ತು ಮಾಡಬೇಕಾಗಿದೆ. ಒಳ್ಳೆಯದು.
ತಮ್ಮ ಶ್ರೇಷ್ಠ ಸ್ವಮಾನದಲ್ಲಿ ಸ್ಥಿತರಾಗಿರುವಂತಹ, ಸರ್ವ ಪ್ರಾಪ್ತಿಗಳ ಭಂಡಾರವು ಸದಾ ಸಂಗಮಯುಗಿ
ಶ್ರೇಷ್ಠ ಸ್ವರಾಜ್ಯ ಮತ್ತು ಮಹಾನ್ ಭಾಗ್ಯದ ಅಧಿಕಾರಿ ಆತ್ಮರಿಗೆ, ಸದಾ ಆತ್ಮಿಕ ನಶೆ ಮತ್ತು ಖುಷಿ
ಸ್ವರೂಪ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ :- ಎಲ್ಲರೂ ತಮ್ಮನ್ನು ಸ್ವರಾಜ್ಯ ಅಧಿಕಾರಿ ಶ್ರೇಷ್ಠಾತ್ಮರೆಂದು ತಿಳಿಯುತ್ತೀರಾ?
ಸ್ವರಾಜ್ಯದ ಅಧಿಕಾರವು ಸಿಕ್ಕಿ ಬಿಟ್ಟಿತೆ? ಇಂತಹ ಅಧಿಕಾರಿ ಆತ್ಮರು ಶಕ್ತಿಶಾಲಿಯಾಗಿರುತ್ತಾರಲ್ಲವೆ.
ರಾಜ್ಯಕ್ಕೆ ಶಕ್ತಿ ಎಂದು ಹೇಳಲಾಗುತ್ತದೆ. ಶಕ್ತಿ ಅರ್ಥಾತ್ ಶಕ್ತಿ. ವರ್ತಮಾನದ ಸರ್ಕಾರಕ್ಕೂ
ಹೇಳುತ್ತಾರೆ - ರಾಜ್ಯ ಶಕ್ತಿಯಿರುವ ಪಾರ್ಟಿಯಿದೆ. ಅಂದಮೇಲೆ ರಾಜ್ಯಶಕ್ತಿ ಅರ್ಥಾತ್ ಶಕ್ತಿಯಾಗಿದೆ.
ಅಂದಮೇಲೆ ಸ್ವರಾಜ್ಯವು ಎಷ್ಟು ದೊಡ್ಡ ಶಕ್ತಿಯಾಗಿದೆ? ಇಂತಹ ಶಕ್ತಿಯು ಪ್ರಾಪ್ತಿಯಾಗಿದೆಯೇ? ಎಲ್ಲಾ
ಕರ್ಮೇಂದ್ರಿಯಗಳು ತಮ್ಮ ಶಕ್ತಿಯನುಸಾರವಾಗಿ ಕಾರ್ಯವನ್ನು ನಿರ್ವಹಿಸುತ್ತಿದೆಯೇ? ರಾಜನು ಸದಾ ತನ್ನ
ರಾಜ್ಯ ಸಭೆಯನ್ನು, ರಾಜ್ಯ ದರ್ಬಾರನ್ನು ಕರೆದು ಕೇಳುತ್ತಾನೆ - ರಾಜ್ಯವು ಹೇಗೆ ನಡೆಯುತ್ತಿದೆ?
ಅಂದಮೇಲೆ ತಾವು ಸ್ವರಾಜ್ಯ ಅಧಿಕಾರಿ ರಾಜರುಗಳ ಕಾರ್ಯ ವ್ಯವಹಾರವು ಸರಿಯಾಗಿ ನಡೆಯುತ್ತಿದೆಯೇ? ಅಥವಾ
ಎಲ್ಲಿಯಾದರೂ ಹೆಚ್ಚು ಕಡಿಮೆ ಆಗುತ್ತಿದೆಯೇ? ಎಂದಾದರೂ ಯಾವುದೇ ರಾಜ್ಯ ಕಾರ್ಯ ವ್ಯವಹಾರ ಮಾಡುವವರು
ಮೋಸವನ್ನಂತು ಮಾಡುತ್ತಿಲ್ಲವೆ! ಕೆಲವೊಮ್ಮೆ ಕಣ್ಣು ಮೋಸ ಮಾಡಿ ಬಿಟ್ಟಿತೆ, ಕೆಲವೊಮ್ಮೆ ಕಿವಿ,
ಕೆಲವೊಮ್ಮೆ ಕೈ, ಕೆಲವೊಮ್ಮೆ ಕಾಲು ಮೋಸ ಮಾಡಿತೆ! ಹೀಗಂತು ಮೋಸವನ್ನನುಭವಿಸುತ್ತಿಲ್ಲವೆ! ಒಂದು
ವೇಳೆ ರಾಜ್ಯ ಶಕ್ತಿಯು ಸರಿಯಿದೆಯೆಂದರೆ ಪ್ರತೀ ಸಂಕಲ್ಪ, ಪ್ರತೀ ಸೆಕೆಂಡಿನಲ್ಲಿ ಪದಮಗಳ
ಸಂಪಾದನೆಯಿದೆ. ಒಂದು ವೇಳೆ ರಾಜ್ಯ ಶಕ್ತಿಯು ಸರಿಯಿಲ್ಲವೆಂದರೆ ಪ್ರತೀ ಸೆಕೆಂಡಿನಲ್ಲಿ ಪದಮಗಳಷ್ಟು
ಕಳೆದುಕೊಳ್ಳುವುದಾಗುತ್ತದೆ. ಪ್ರಾಪ್ತಿಯೂ ಒಂದಕ್ಕೆ ಪದಮಪಟ್ಟು ಮತ್ತು ಒಂದು ವೇಳೆ ಅದನ್ನೇ
ಕಳೆಯುತ್ತೀರೆಂದರೆ ಒಂದಕ್ಕೆ ಪದಮದಷ್ಟು ಕಳೆಯುತ್ತೀರಿ. ಎಷ್ಟು ಸಿಗುತ್ತದೆಯೋ ಅಷ್ಟೇ ಹೋಗುತ್ತದೆ.
ಲೆಕ್ಕವಿದೆ. ಅಂದಮೇಲೆ ಇಡೀ ದಿನದ ರಾಜ್ಯ ಕಾರ್ಯ ವ್ಯವಹಾರವನ್ನು ನೋಡಿರಿ. ಕಣ್ಣೆಂಬ ಮಂತ್ರಿಯು
ಸರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದೆಯೇ? ಕಿವಿಯೆಂಬ ಮಂತ್ರಿಯು ಸರಿಯಾಗಿ ಕಾರ್ಯವನ್ನು
ನಿರ್ವಹಿಸುತ್ತಿದೆಯೇ? ಎಲ್ಲಾ ವಿಭಾಗಗಳು ಸರಿಯಾಗಿ ನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ? ಇದನ್ನು
ಪರಿಶೀಲಿಸುತ್ತೀರಾ ಅಥವಾ ಸುಸ್ತಾಗಿ ಮಲಗಿ ಬಿಡುತ್ತೀರಾ? ಹಾಗೆಯೇ ಕರ್ಮವನ್ನು ಮಾಡುವುದಕ್ಕೆ ಮೊದಲೇ
ಪರಿಶೀಲನೆ ಮಾಡಿ ನಂತರ ಕರ್ಮವನ್ನು ಮಾಡಬೇಕು. ಮೊದಲು ಯೋಚಿಸಬೇಕು ನಂತರ ಮಾಡಬೇಕು. ಮೊದಲು
ಮಾಡುವುದು ನಂತರ ಯೋಚಿಸುವುದು – ಹೀಗಲ್ಲಾ. ಸಂಪೂರ್ಣವಾಗಿ ಫಲಿತಾಂಶವನ್ನು ತೆಗೆಯುವುದು ಬೇರೆ
ಮಾತಾಗಿದೆ. ಆದರೆ ಜ್ಞಾನಿ ಆತ್ಮನು ಮೊದಲು ಯೋಚಿಸುವನು ನಂತರ ಮಾಡುವನು. ಅಂದಮೇಲೆ
ಯೋಚಿಸಿ-ತಿಳಿದುಕೊಂಡು ಪ್ರತಿಯೊಂದು ಕರ್ಮವನ್ನು ಮಾಡುತ್ತೀರಾ? ಮೊದಲು ಯೋಚಿಸುವವರೇ ಅಥವಾ ನಂತರ
ಯೋಚಿಸುವವರೇ? ಒಂದು ವೇಳೆ ಜ್ಞಾನಿಯು ನಂತರ ಯೋಚಿಸುತ್ತಾನೆಂದರೆ, ಅವನಿಗೆ ಜ್ಞಾನಿ ಎಂದು
ಹೇಳುವುದಿಲ್ಲ. ಆದ್ದರಿಂದ ಸದಾ ಸ್ವರಾಜ್ಯ ಅಧಿಕಾರಿ ಆತ್ಮರಾಗಿದ್ದೇವೆ ಮತ್ತು ಇದೇ ಸ್ವರಾಜ್ಯದ
ಅಧಿಕಾರದಿಂದ ವಿಶ್ವದ ರಾಜ್ಯಾಧಿಕಾರಿ ಆಗಲೇಬೇಕು. ಆಗುತ್ತೇವೆ ಅಥವಾ ಇಲ್ಲವೇ ಎನ್ನುವ ಪ್ರಶ್ನೆಯೇ
ಇಲ್ಲ. ಸ್ವರಾಜ್ಯವಿದೆಯೆಂದರೆ ವಿಶ್ವದ ರಾಜ್ಯವು ಇದ್ದೇ ಇದೆ. ಅಂದಮೇಲೆ ಸ್ವರಾಜ್ಯದಲ್ಲಿ
ಗಡಿಬಿಡಿಯಂತು ಇಲ್ಲವಲ್ಲವೆ? ದ್ವಾಪರದಿಂದಂತು ಗಡಿಬಿಡಿ ಶಾಲೆಗಳಲ್ಲಿ ಸುತ್ತಾಡುತ್ತಿದ್ದಿರಿ. ಈಗ
ಅದರಿಂದ ಆಚೆ ಬಂದಿದ್ದೀರಿ, ಈಗ ಮತ್ತೆಂದೂ ಯಾವುದೇ ಪ್ರಕಾರದ ಗಡಿಬಿಡಿ ಮಾಡುವ ಶಾಲೆಯಲ್ಲಿ
ಕಾಲನ್ನಿಡಬಾರದು. ಇದು ಅಂತಹ ಗಡಿಬಿಡಿ ಮಾಡುವ ಶಾಲೆಯಾಗಿದೆ, ಒಂದು ಬಾರಿ ಕಾಲನ್ನಿಟ್ಟಿರೆಂದರೆ
ಕಣ್ಣು ಮುಚ್ಚಾಲೆ ಆಟವಾಗಿರುತ್ತದೆ. ನಂತರ ಅದರಿಂದ ಹೊರ ಬರುವುದು ಕಷ್ಟವಾಗಿ ಬಿಡುತ್ತದೆ.
ಆದ್ದರಿಂದ ಸದಾ ಒಂದು ಮಾರ್ಗ, ಒಂದರಲ್ಲಿ ಗಡಿಬಿಡಿ(ಗೊಂದಲ) ಇರುವುದಿಲ್ಲ. ಒಂದು ಮಾರ್ಗದಲ್ಲಿ
ನಡೆಯುವವರು ಸದಾ ಖುಷಿಯಾಗಿರುತ್ತಾರೆ, ಸದಾ ಸಂತುಷ್ಟವಾಗಿರುತ್ತಾರೆ.
ಬೆಂಗಳೂರಿನ
ಹೈಕೋರ್ಟ್ ನ್ಯಾಯಾಧೀಶರವರೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ :-
ಯಾವ ಸ್ಥಾನದಲ್ಲಿ ಮತ್ತು ಯಾವ ಅನುಭವವನ್ನು ಮಾಡುತ್ತಿದ್ದೀರಿ? ಅನುಭವವು ಅತೀ ದೊಡ್ಡ
ಅಥಾರಿಟಿಯಾಗಿದೆ. ಮೊಟ್ಟ ಮೊದಲ ಅನುಭವವಾಗಿದೆ - ಆತ್ಮಾಭಿಮಾನಿಯಾಗುವ ಅನುಭವ. ಯಾವಾಗ
ಆತ್ಮಾಭಿಮಾನಿಯ ಅನುಭವವಾಗಿ ಬಿಡುತ್ತದೆ, ಆಗ ಪರಮಾತ್ಮನ ಪ್ರೀತಿ, ಪರಮಾತ್ಮನ ಪ್ರಾಪ್ತಿಯ ಅನುಭವವೂ
ಸಹ ಸ್ವತಹವಾಗಿಯೇ ಆಗಿ ಬಿಡುತ್ತದೆ. ಎಷ್ಟು ಅನುಭವವೋ ಅಷ್ಟು ಶಕ್ತಿಶಾಲಿ. ಜನ್ಮ-ಜನ್ಮಾಂತರದ
ದುಃಖಗಳಿಂದ ಮುಕ್ತಗೊಳಿಸಲು ನ್ಯಾಯವನ್ನು ಕೊಡುವವರಾಗಿದ್ದೀರಲ್ಲವೆ! ಅಥವಾ ಒಂದೇ ಜನ್ಮದ
ದುಃಖಗಳಿಂದ ಮುಕ್ತಗೊಳಿಸುವ ನ್ಯಾಯಾಧೀಶನಾಗಿದ್ದೀರಾ? ಅದಂತು ಆಯಿತು ಹೈಕೋರ್ಟ್ ಅಥವಾ
ಸುಪ್ರೀಂಕೋರ್ಟ್ ನ್ಯಾಯಾಧೀಶ. ಇದಾಗಿದೆ ಆಧ್ಯಾತ್ಮಿಕ ನ್ಯಾಯಾಧೀಶ. ಇದರ ನ್ಯಾಯಾಧೀಶನಾಗುವುದರಲ್ಲಿ
ಓದುವ ಅಥವಾ ಸಮಯದ ಅವಶ್ಯಕತೆಯಿಲ್ಲ. ಎರಡು ಅಕ್ಷರಗಳನ್ನಷ್ಟೇ ಓದಬೇಕು - ಆತ್ಮ ಮತ್ತು ಪರಮಾತ್ಮ.
ಅಷ್ಟೇ ಇದರ ಅನುಭವಿಯಾಗಿ ಬಿಟ್ಟಿರಿ ಅಂದಮೇಲೆ ಆಧ್ಯಾತ್ಮಿಕ ನ್ಯಾಯಾಧೀಶನಾಗಿ ಬಿಟ್ಟಿರಿ. ಹೇಗೆ
ತಂದೆಯು ಜನ್ಮ-ಜನ್ಮದ ದುಃಖಗಳಿಂದ ಬಿಡಿಸುವವರಾಗಿದ್ದಾರೆ. ಆದ್ದರಿಂದ ತಂದೆಗೆ ಸುಖದ ದಾತಾ ಎಂದು
ಹೇಳಲಾಗುತ್ತದೆ. ಅಂದಮೇಲೆ ತಂದೆಯಂತು ಮಕ್ಕಳು. ಡಬಲ್ ನ್ಯಾಯಾಧೀಶನಾಗುವುದರಿಂದ ಅನೇಕ ಆತ್ಮರ
ಕಲ್ಯಾಣಕ್ಕೆ ನಿಮಿತ್ತರಾಗಿ ಬಿಡುತ್ತೀರಿ. ಬರುತ್ತೀರಿ ಒಂದು ಕೇಸ್ಗಾಗಿ ಮತ್ತು ಜನ್ಮ ಜನ್ಮದ
ಕೇಸ್ಗಳನ್ನು ಗೆದ್ದು ಹೋಗುವರು. ಬಹಳ ಖುಷಿಯಾಗುತ್ತಾರೆ. ಅಂದಮೇಲೆ ತಂದೆಯ ಆಜ್ಞೆಯಾಗಿದೆ -
ಆಧ್ಯಾತ್ಮಿಕ ನ್ಯಾಯಾಧೀಶನಾಗಿರಿ. ಒಳ್ಳೆಯದು.
ವರದಾನ:
ಸರ್ವಶಕ್ತಿವಂತ
ತಂದೆಯನ್ನು ಕಂಬೈಂಡ್ ರೂಪದಲ್ಲಿ ಜೊತೆಯಲ್ಲಿಟ್ಟುಕೊಳ್ಳುವ ಸಫಲತಾ ಮೂರ್ತಿ ಭವ.
ಯಾವ ಮಕ್ಕಳ ಜೊತೆ
ಸರ್ವಶಕ್ತಿವಂತ ತಂದೆಯು ಕಂಬೈಂಡ್ ಆಗಿದ್ದಾರೆ - ಅವರ ಸರ್ವಶಕ್ತಿಗಳ ಮೇಲೆ ಅಧಿಕಾರವಿದೆ ಮತ್ತು
ಎಲ್ಲಿ ಸರ್ವಶಕ್ತಿಗಳಿವೆ ಅಲ್ಲಿ ಸಫಲತೆಯಾಗುವುದಿಲ್ಲ ಎನ್ನುವುದು ಅಸಂಭವವಾಗಿದೆ. ಒಂದು ವೇಳೆ ಸದಾ
ತಂದೆಯೊಂದಿಗೆ ಕಂಬೈಂಡ್ ಆಗಿರುವುದರಲ್ಲಿ ಕೊರತೆಯಿದೆಯೆಂದರೆ ಸಫಲತೆಯೂ ಕಡಿಮೆಯಿರುತ್ತದೆ. ಸದಾ
ಜೊತೆಯನ್ನು ನಿಭಾಯಿಸುವವರು ಅವಿನಾಶಿ ಜೊತೆಗಾರನನ್ನು ಕಂಬೈಂಡ್ ಆಗಿಟ್ಟುಕೊಳ್ಳುತ್ತೀರೆಂದರೆ
ಸಫಲತೆಯು ಜನ್ಮ ಸಿದ್ಧ ಅಧಿಕಾರವಾಗಿದೆ. ಏಕೆಂದರೆ ಸಫಲತೆಯು ಮಾಸ್ಟರ್ ಸರ್ವಶಕ್ತಿವಂತನ
ಮುಂದೆ-ಹಿಂದೆ ಸುತ್ತಾಡುತ್ತದೆ.
ಸ್ಲೋಗನ್:
ಯಾರು
ವಿಕಾರಗಳೆಂಬ ಕೊಳಕನ್ನು ಸ್ಪರ್ಶವೂ ಮಾಡುವುದಿಲ್ಲವೋ ಅವರೇ ಸತ್ಯ ವೈಷ್ಣವರಾಗಿದ್ದಾರೆ.