22.08.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಈಗ ವಿಕರ್ಮ ಮಾಡುವುದನ್ನು ನಿಲ್ಲಿಸಿ, ಏಕೆಂದರೆ ನೀವೀಗ ವಿಕರ್ಮಾಜೀತ ಸಂವತ್ಸರವನ್ನು ಆರಂಭಿಸಬೇಕಾಗಿದೆ”

ಪ್ರಶ್ನೆ:
ಪ್ರತಿಯೊಬ್ಬ ಬ್ರಾಹ್ಮಣ ಮಗು ಯಾವ ಒಂದು ಮಾತಿನಲ್ಲಿ ತಂದೆಯನ್ನು ಅವಶ್ಯವಾಗಿ ಫಾಲೋ ಮಾಡಬೇಕಾಗಿದೆ?

ಉತ್ತರ:
ಹೇಗೆ ತಂದೆಯು ಸ್ವಯಂ ಟೀಚರ್ ಆಗಿ ನಿಮಗೆ ಓದಿಸುತ್ತಾರೆ ಹಾಗೆಯೇ ತಂದೆಯ ಸಮಾನ ಪ್ರತಿಯೊಬ್ಬರೂ ಟೀಚರ್ ಆಗಬೇಕಾಗಿದೆ. ಏನನ್ನು ಓದುತ್ತೀರೋ ಅದನ್ನು ಅನ್ಯರಿಗೂ ಓದಿಸಬೇಕಾಗಿದೆ. ನೀವು ಟೀಚರ್ನ ಮಕ್ಕಳು ಟೀಚರ್, ಸದ್ಗುರುವಿನ ಮಕ್ಕಳು ಸದ್ಗುರುವಾಗಿದ್ದೀರಿ, ನೀವು ಸತ್ಯ ಖಂಡದ ಸ್ಥಾಪನೆ ಮಾಡಬೇಕಾಗಿದೆ. ನೀವು ಸತ್ಯದ ದೋಣಿಯಲ್ಲಿದ್ದೀರಿ, ನಿಮ್ಮ ದೋಣಿಯು ಅಲುಗಾಡುವುದೇ ಹೊರತು ಮುಳುಗುವುದಿಲ್ಲ.

ಓಂ ಶಾಂತಿ.
ಆತ್ಮಿಕ ತಂದೆಯು ಮಕ್ಕಳ ಜೊತೆ ವಾರ್ತಾಲಾಪ ಮಾಡುತ್ತಾರೆ. ಆತ್ಮರೊಂದಿಗೆ ಕೇಳುತ್ತಾರೆ ಏಕೆಂದರೆ ಇದು ಹೊಸ ಜ್ಞಾನವಲ್ಲವೆ. ಇದು ಮನುಷ್ಯರಿಂದ ದೇವತೆಗಳಾಗುವ ಹೊಸ ಜ್ಞಾನ ಅಥವಾ ಹೊಸ ವಿದ್ಯೆಯಾಗಿದೆ. ಇದನ್ನು ನಿಮಗೆ ಯಾರು ಓದಿಸುತ್ತಾರೆ? ಮಕ್ಕಳಿಗೆ ಗೊತ್ತಿದೆ, ಆತ್ಮಿಕ ತಂದೆಯು ನಾವು ಮಕ್ಕಳಿಗೆ ಬ್ರಹ್ಮಾರವರ ಮೂಲಕ ಓದಿಸುತ್ತಾರೆ. ಇದನ್ನು ಮರೆಯಬಾರದು. ಅವರು ತಂದೆಯೂ ಆಗಿದ್ದಾರೆ ಮತ್ತು ಓದಿಸುವ ಕಾರಣ ಶಿಕ್ಷಕನೂ ಆದರು. ಇದನ್ನೂ ನೀವು ತಿಳಿದುಕೊಂಡಿದ್ದೀರಿ - ನಾವು ಓದುವುದೇ ಹೊಸ ಪ್ರಪಂಚಕ್ಕಾಗಿ ಪ್ರತಿಯೊಂದು ಮಾತಿನಲ್ಲಿ ನಿಶ್ಚಯವಿರಬೇಕು. ಹೊಸ ಪ್ರಪಂಚಕ್ಕಾಗಿ ಓದಿಸುವವರು ತಂದೆಯೇ ಆಗಿದ್ದಾರೆ. ಮೂಲ ಮಾತು ತಂದೆಯದಾಯಿತು. ತಂದೆಯು ನಮಗೆ ಬ್ರಹ್ಮಾರವರ ಮೂಲಕ ಈ ಶಿಕ್ಷಣವನ್ನು ಕೊಡುತ್ತಾರೆ. ಯಾರ ಮೂಲಕವಾದರೂ ಕೊಡಲೇಬೇಕಲ್ಲವೆ. ಭಗವಂತನು ಬ್ರಹ್ಮನ ಮೂಲಕ ರಾಜಯೋಗವನ್ನು ಕಲಿಸುತ್ತಾರೆ ಎಂದು ಗಾಯನವಿದೆ. ಬ್ರಹ್ಮಾರವರ ಮೂಲಕ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ, ಆ ದೇವಿ-ದೇವತಾ ಧರ್ಮವು ಈಗ ಇಲ್ಲ. ಈಗಂತೂ ಕಲಿಯುಗವಾಗಿದೆ. ಇದರಿಂದ ಸ್ವರ್ಗದ ಸ್ಥಾಪನೆಯಾಗುತ್ತಿದೆ ಎಂಬುದು ಸಿದ್ಧವಾಗುತ್ತದೆ. ಸ್ವರ್ಗದಲ್ಲಿ ಕೇವಲ ದೇವಿ-ದೇವತಾ ಧರ್ಮದವರಿದ್ದರು. ಇಷ್ಟೆಲ್ಲಾ ಧರ್ಮಗಳು ಇರುವುದೇ ಇಲ್ಲ ಅರ್ಥಾತ್ ವಿನಾಶವಾಗಿ ಬಿಡುತ್ತದೆ, ಏಕೆಂದರೆ ಸತ್ಯಯುಗದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ಈ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿದೆ. ಈಗ ಅನೇಕ ಧರ್ಮಗಳಿದೆ, ತಂದೆಯು ಪುನಃ ನಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ ಏಕೆಂದರೆ ಈಗ ಸಂಗಮಯುಗವಾಗಿದೆ. ಇದು ತಿಳಿಸಲು ಬಹಳ ಸಹಜ ಮಾತಾಗಿದೆ. ಬ್ರಹ್ಮನ ಮೂಲಕ ಸ್ಥಾಪನೆಯೆಂದು ತ್ರಿಮೂರ್ತಿ ಚಿತ್ರದಲ್ಲಿ ತೋರಿಸುತ್ತಾರೆ. ಯಾರ ಸ್ಥಾಪನೆ? ಅವಶ್ಯವಾಗಿ ಹೊಸ ಪ್ರಪಂಚದ ಸ್ಥಾಪನೆಯಾಗುತ್ತದೆ. ಹಳೆಯದರ ಸ್ಥಾಪನೆಯಲ್ಲ. ಮಕ್ಕಳಿಗೆ ಇದು ನಿಶ್ಚಯವಿದೆ - ಹೊಸ ಪ್ರಪಂಚದಲ್ಲಿ ದೈವೀ ಗುಣವುಳ್ಳ ದೇವತೆಗಳೇ ಇರುತ್ತಾರೆ ಅಂದಮೇಲೆ ಈಗ ನಾವೂ ಸಹ ಗೃಹಸ್ಥ ವ್ಯವಹಾರದಲ್ಲಿರುತ್ತಾ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಮೊಟ್ಟ ಮೊದಲು ಕಾಮವನ್ನು ಗೆದ್ದು ನಿರ್ವಿಕಾರಿಗಳಾಗಬೇಕು. ನೆನ್ನೆಯ ದಿನ ಈ ದೇವಿ-ದೇವತೆಗಳ ಮುಂದೆ ಹೋಗಿ ತಾವು ಸಂಪೂರ್ಣ ನಿರ್ವಿಕಾರಿಗಳು, ನಾವು ವಿಕಾರಿಗಳು ಎಂದು ಹೇಳುತ್ತಿದ್ದಿರಿ, ತಮ್ಮನ್ನು ವಿಕಾರಿಗಳೆಂದು ಅನುಭವ ಮಾಡುತ್ತಿದ್ದಿರಿ ಏಕೆಂದರೆ ವಿಕಾರದಲ್ಲಿ ಹೋಗುತ್ತಿದ್ದಿರಿ. ಈಗ ತಂದೆ ಹೇಳುತ್ತಾರೆ ನೀವೂ ಸಹ ಇಂತಹ ನಿರ್ವಿಕಾರಿಗಳಾಗಬೇಕಾಗಿದೆ, ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಒಂದುವೇಳೆ ಈ ಕಾಮ, ಕ್ರೋಧ ಮೊದಲಾದ ವಿಕಾರಗಳಿದ್ದರೆ ದೈವೀ ಗುಣಗಳೆಂದು ಹೇಳುವುದಿಲ್ಲ. ವಿಕಾರದಲ್ಲಿ ಹೋಗುವುದು, ಕ್ರೋಧ ಮಾಡುವುದು ಇದು ಆಸುರೀ ಗುಣವಾಗಿದೆ, ದೇವತೆಗಳಲ್ಲಿ ಲೋಭವಿರುವುದೇ? ಅಲ್ಲಿ ಐದು ವಿಕಾರಗಳಿರುವುದೇ ಇಲ್ಲ. ಇದು ರಾವಣನ ಪ್ರಪಂಚವಾಗಿದೆ. ರಾವಣನ ಜನ್ಮವಾಗುವುದೇ ತ್ರೇತಾ ಮತ್ತು ದ್ವಾಪರದ ಸಂಗಮದಲ್ಲಿ.

ಹೇಗೆ ಈಗ ಇದು ಹಳೆಯ ಪ್ರಪಂಚ ಮತ್ತು ಹೊಸ ಪ್ರಪಂಚದ ಸಂಗಮವಾಗಿದೆಯಲ್ಲವೆ. ಹಾಗೆಯೇ ಅದು ಸಂಗಮವಾಗುತ್ತದೆ. ಈಗ ರಾವಣ ರಾಜ್ಯದಲ್ಲಿ ಬಹಳ ದುಃಖವಿದೆ, ರೋಗವಿದೆ, ಇದಕ್ಕೆ ರಾವಣ ರಾಜ್ಯವೆಂದು ಹೇಳಲಾಗುತ್ತದೆ. ರಾವಣನನ್ನು ಪ್ರತೀ ವರ್ಷ ಸುಡುತ್ತಾರೆ. ವಾಮ ಮಾರ್ಗದಲ್ಲಿ ಹೋಗುವುದರಿಂದ ವಿಕಾರಿಗಳಾಗಿ ಬಿಡುತ್ತಾರೆ. ನೀವೀಗ ನಿರ್ವಿಕಾರಿಗಳಾಗಬೇಕು. ಇಲ್ಲಿಯೇ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಯಾರು ಎಂತಹ ಕರ್ಮವನ್ನು ಮಾಡುವರೋ ಅಂತಹ ಫಲವನ್ನೇ ಪಡೆಯುತ್ತಾರೆ. ಮಕ್ಕಳಿಂದ ಈಗ ಯಾವುದೇ ವಿಕರ್ಮವಾಗಬಾರದು. ಒಬ್ಬರು ರಾಜ ವಿಕ್ರಮಾಜೀತನಾಗಿದ್ದಾರೆ, ಇನ್ನೊಬ್ಬರು ರಾಜಾ ವಿಕ್ರಮನಾಗಿದ್ದಾರೆ. ಅಂದಮೇಲೆ ಇದು ವಿಕ್ರಮ ಸಂವತ್ಸರವಾಗಿದೆ ಅಂದರೆ ರಾವಣ ವಿಕಾರಿಗಳ ಸಂವತ್ಸರ. ಇದನ್ನು ಯಾರೂ ತಿಳಿದುಕೊಂಡಿಲ್ಲ. ಕಲ್ಪದ ಆಯಸ್ಸೂ ಸಹ ಯಾರಿಗೂ ಗೊತ್ತಿಲ್ಲ. ವಾಸ್ತವದಲ್ಲಿ ದೇವತೆಗಳು ವಿಕರ್ಮಾಜೀತರಾಗಿರುತ್ತಾರೆ. 5000 ವರ್ಷಗಳಲ್ಲಿ 2500 ವರ್ಷಗಳ ರಾಜಾ ವಿಕ್ರಮನದಾಯಿತು, 2500 ವರ್ಷಗಳ ರಾಜಾ ವಿಕರ್ಮಾಜೀತನದು. ಭಲೆ ಅವರು ಹೇಳುತ್ತಾರೆ ಆದರೆ ಅವರಿಗೇನೂ ಗೊತ್ತಿಲ್ಲ. ನೀವು ತಿಳಿಸುತ್ತೀರಿ - ವಿಕರ್ಮಾಜೀತನ ಸಂವತ್ಸರವು ಒಂದನೇ ವರ್ಷದಿಂದ ಆರಂಭವಾಗುತ್ತದೆ ಮತ್ತೆ 2500 ವರ್ಷಗಳ ನಂತರ ವಿಕ್ರಮ ಸಂವತ್ಸರವು ಆರಂಭವಾಗುತ್ತದೆ. ಈಗ ವಿಕ್ರಮ ಸಂವತ್ಸರವು ಮುಕ್ತಾಯವಾಗುವುದು. ಪುನಃ ನೀವು ವಿಕರ್ಮಾಜೀತ ಮಹಾರಾಜ-ಮಹಾರಾಣಿಯಾಗುತ್ತಿದ್ದೀರಿ. ಯಾವಾಗ ಆಗಿ ಬಿಡುತ್ತೀರೋ ಆಗ ವಿಕರ್ಮಾಜೀತ ಸಂವತ್ಸರ ಆರಂಭವಾಗಿ ಬಿಡುವುದು. ಇದೆಲ್ಲವನ್ನೂ ನೀವೇ ತಿಳಿದುಕೊಂಡಿದ್ದೀರಿ. ಬ್ರಹ್ಮನನ್ನು ಏಕೆ ಕೂರಿಸಿದ್ದೀರಿ ಎಂದು ನಿಮ್ಮನ್ನು ಕೇಳುತ್ತಾರೆ - ಅರೆ! ಇದರಿಂದ ನಿಮಗೇನಾಗಿದೆ? ನಮಗೆ ಓದಿಸುವವರು ಇವರೇನಲ್ಲ, ನಾವು ಶಿವ ತಂದೆಯಿಂದ ಓದುತ್ತೇವೆ, ಈ ಬ್ರಹ್ಮಾ ತಂದೆಯು ಅವರಿಂದಲೇ ಓದುತ್ತಾರೆ, ಓದಿಸುವವರು ಜ್ಞಾನ ಸಾಗರನಾಗಿದ್ದಾರೆ, ಅವರು ವಿಚಿತ್ರನಾಗಿದ್ದಾರೆ. ಅವರಿಗೆ ಚಿತ್ರ ಅರ್ಥಾತ್ ಶರೀರವಿಲ್ಲ. ನಿರಾಕಾರನೆಂದು ಹೇಳಲಾಗುತ್ತದೆ, ಅಲ್ಲಿ ಎಲ್ಲರೂ ನಿರಾಕಾರಿ ಆತ್ಮರಿರುತ್ತಾರೆ ನಂತರ ಇಲ್ಲಿ ಬಂದು ಸಾಕಾರಿಯಾಗುತ್ತಾರೆ. ಪರಮಪಿತ ಪರಮಾತ್ಮನನ್ನು ಎಲ್ಲರೂ ನೆನಪು ಮಾಡುತ್ತಾರೆ ಏಕೆಂದರೆ ಅವರು ಆತ್ಮರ ಪಿತನಾಗಿದ್ದಾರೆ. ಲೌಕಿಕ ತಂದೆಗೆ ಪರಮ ಎಂಬ ಶಬ್ಧವನ್ನು ಹೇಳುವುದಿಲ್ಲ. ಇದು ತಿಳುವಳಿಕೆಯ ಮಾತಾಗಿದೆ. ಶಾಲೆಯ ವಿದ್ಯಾರ್ಥಿಗಳು ವಿದ್ಯೆಯ ಮೇಲೆ ಗಮನ ಕೊಡುತ್ತಾರೆ. ಪದವಿ ಪಡೆದ ಮೇಲೆ ವಕೀಲರು ಇತ್ಯಾದಿ ಆದ ನಂತರ ವಿದ್ಯೆಯು ಅಲ್ಲಿಗೆ ನಿಂತು ಹೋಗುತ್ತದೆ ಮತ್ತೇನೂ ಓದುವುದಿಲ್ಲ. ವಿದ್ಯೆಯು ಪೂರ್ಣವಾಯಿತು ಹಾಗೆಯೇ ನೀವೂ ಸಹ ದೇವತೆಗಳಾಗಿ ಬಿಟ್ಟರೆ ಮತ್ತೆ ಓದುವ ಅವಶ್ಯಕತೆಯಿರುವುದಿಲ್ಲ. 2500 ವರ್ಷಗಳು ದೇವತೆಗಳ ರಾಜ್ಯವು ನಡೆಯುತ್ತದೆ, ಈ ಮಾತುಗಳನ್ನು ನೀವೇ ತಿಳಿದುಕೊಂಡಿದ್ದೀರಿ ಅಂದಮೇಲೆ ಅನ್ಯರಿಗೂ ತಿಳಿಸಬೇಕಾಗಿದೆ. ಇದೂ ಗಮನವಿರಲಿ- ಓದಿಸುವುದೇ ಇಲ್ಲವೆಂದರೆ ಹೇಗೆ ಶಿಕ್ಷಕರಾಗುವಿರಿ! ನೀವೆಲ್ಲರೂ ಶಿಕ್ಷಕರಾಗಿದ್ದೀರಿ ಏಕೆಂದರೆ ಶಿಕ್ಷಕನ ಸಂತಾನರಲ್ಲವೆ ಅಂದಮೇಲೆ ನೀವೂ ಶಿಕ್ಷಕರಾಗಬೇಕಾಗಿದೆ. ಓದಿಸುವುದಕ್ಕಾಗಿ ಎಷ್ಟೊಂದು ಶಿಕ್ಷಕರು ಬೇಕಾಗಿದೆ. ಹೇಗೆ ತಂದೆ, ಶಿಕ್ಷಕ ಸದ್ಗುರುವಾಗಿದ್ದಾರೆ ಹಾಗೆಯೇ ನೀವೂ ಶಿಕ್ಷಕರಾಗಿದ್ದೀರಿ. ಸದ್ಗುರುವಿನ ಮಕ್ಕಳು ಸದ್ಗುರುವಾಗಿದ್ದೀರಿ. ಆ ಗುರುಗಳೇನೂ ಸದ್ಗುರುಗಳಲ್ಲ, ಅವರು ಗುರುವಿನ ಮಕ್ಕಳು ಗುರುಗಳು. ಸತ್ ಎಂದರೆ ಸತ್ಯ. ಭಾರತಕ್ಕೆ ಸತ್ಯ ಖಂಡವೆಂದು ಕರೆಯಲಾಗುತ್ತಿತ್ತು. ಈಗ ಅಸತ್ಯ ಖಂಡವಾಗಿದೆ, ಸತ್ಯ ಖಂಡವನ್ನು ತಂದೆಯೇ ಸ್ಥಾಪನೆ ಮಾಡುತ್ತಾರೆ. ಅವರೇ ಸತ್ಯವಾದ ಸಾಯಿಬಾಬಾ ಆಗಿದ್ದಾರೆ. ಸತ್ಯವಾದ ತಂದೆಯು ಬಂದಾಗ ಅನೇಕ ಸುಳ್ಳು ತಂದೆಯರು ಬಂದಿರುತ್ತಾರೆ. ಗಾಯನವಿದೆಯಲ್ಲವೆ- ಸತ್ಯದ ದೋಣಿಯು ಅಲುಗಾಡುವುದು, ಅದಕ್ಕೆ ಬಿರುಗಾಳಿಗಳು ಬರುವುದು ಆದರೆ ಮುಳುಗುವುದಿಲ್ಲ. ಅದಕ್ಕಾಗಿ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಮಾಯೆಯ ಬಿರುಗಾಳಿಯು ಬಹಳ ಬರುತ್ತದೆ, ಅದಕ್ಕೆ ಹೆದರಬಾರದು. ಸನ್ಯಾಸಿಗಳೆಂದೂ ನಿಮಗೆ ಈ ರೀತಿ ಮಾಯೆಯ ಬಿರುಗಾಳಿಗಳು ಬರುತ್ತದೆ ಎಂಬುದನ್ನು ಹೇಳುವುದಿಲ್ಲ. ದೋಣಿಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಎಂಬುದು ಅವರಿಗೆ ಗೊತ್ತೇ ಇಲ್ಲ.

ನೀವು ಮಕ್ಕಳಿಗೆ ತಿಳಿದಿದೆ - ಭಕ್ತಿಯಿಂದ ಸದ್ಗತಿಯಾಗುವುದಿಲ್ಲ. ಇನ್ನೂ ಕೆಳಗಿಳಿಯುತ್ತಲೇ ಹೋಗುತ್ತಾರೆ. ಭಲೆ ಹೇಳುತ್ತಾರೆ - ಭಗವಂತನು ಬಂದು ಭಕ್ತರಿಗೆ ಭಕ್ತಿಯ ಫಲ ಕೊಡುತ್ತಾರೆ ಭಕ್ತಿಯನ್ನು ಅವಶ್ಯವಾಗಿ ಮಾಡಬೇಕೆಂದು. ಒಳ್ಳೆಯದು. ಭಕ್ತಿಯ ಫಲವಾಗಿ ಭಗವಂತನು ಏನನ್ನು ಕೊಡುತ್ತಾರೆ? ಅವಶ್ಯವಾಗಿ ಸದ್ಗತಿ ನೀಡುತ್ತಾರೆ. ಹೇಳುತ್ತಾರೆ ಆದರೆ ಯಾವಾಗ ಮತ್ತು ಹೇಗೆ ಕೊಡುವರೆಂಬುದು ಗೊತ್ತಿಲ್ಲ. ನೀವು ಯಾರೊಂದಿಗಾದರೂ ಕೇಳಿರಿ, ಇದು ಅನಾದಿಯಾಗಿ ನಡೆಯುತ್ತಾ ಬರುತ್ತಿದೆ, ಪರಂಪರೆಯಿಂದ ನಡೆಯುತ್ತಾ ಬಂದಿದೆ ಎಂದು ಹೇಳಿ ಬಿಡುತ್ತಾರೆ. ರಾವಣನನ್ನು ಯಾವಾಗಿನಿಂದ ಸುಡುತ್ತಾ ಬಂದಿದ್ದೀರಿ ಎಂದು ಕೇಳಿದರೆ ಪರಂಪರೆಯಿಂದ ಎಂದು ಹೇಳುತ್ತಾರೆ. ನೀವು ತಿಳಿಸುತ್ತೀರೆಂದರೆ ಇವರ ಜ್ಞಾನವೇ ಹೊಸದು ಎಂದು ಹೇಳುತ್ತಾರೆ. ಯಾರು ಕಲ್ಪದ ಹಿಂದೆ ತಿಳಿದುಕೊಂಡಿದ್ದಾರೆಯೋ ಅವರು ಕೂಡಲೇ ತಿಳಿದುಕೊಳ್ಳುತ್ತಾರೆ. ಬ್ರಹ್ಮನ ಮಾತನ್ನೇ ಬಿಟ್ಟು ಬಿಡಿ. ಶಿವಬಾಬನಿಗೆ ಜನ್ಮವಂತೂ ಇದೆಯಲ್ಲವೆ. ಅದಕ್ಕೆ ಶಿವರಾತ್ರಿಯೆಂದು ಹೇಳುತ್ತಾರೆ. ತಂದೆಯು ತಿಳಿಸುವುದೇನೆಂದರೆ ಮಕ್ಕಳೇ, ನನ್ನ ಜನ್ಮವು ದಿವ್ಯ ಮತ್ತು ಅಲೌಕಿಕವಾಗಿದೆ. ಪ್ರಾಕೃತಿಕ ಮನುಷ್ಯರಂತೆ ನನ್ನ ಜನ್ಮವಾಗುವುದಿಲ್ಲ ಏಕೆಂದರೆ ಅವರೆಲ್ಲರೂ ಗರ್ಭದಿಂದ ಜನ್ಮ ಪಡೆಯುತ್ತಾರೆ. ಶರೀರಧಾರಿಗಳಾಗುತ್ತಾರೆ. ನಾನಂತೂ ಗರ್ಭದಲ್ಲಿ ಪ್ರವೇಶ ಮಾಡುವುದಿಲ್ಲ. ಈ ಜ್ಞಾನವನ್ನು ಪರಮಪಿತ ಪರಮಾತ್ಮ, ಜ್ಞಾನಸಾಗರನ ಹೊರತು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಜ್ಞಾನಸಾಗರನೆಂದು ಯಾವುದೇ ಮನುಷ್ಯಾತ್ಮರಿಗೆ ಹೇಳಲಾಗುವುದಿಲ್ಲ. ಇದು ನಿರಾಕಾರನ ಮಹಿಮೆಯಾಗಿದೆ. ನಿರಾಕಾರ ತಂದೆಯು ಆತ್ಮರಿಗೆ ಓದಿಸುತ್ತಾರೆ ಮತ್ತು ತಿಳಿಸುತ್ತಾರೆ- ನೀವು ಮಕ್ಕಳು ಈ ರಾವಣ ರಾಜ್ಯದಲ್ಲಿ ಪಾತ್ರವನ್ನಭಿನಯಿಸುತ್ತಾ ದೇಹಾಭಿಮಾನಿಗಳಾಗಿ ಬಿಟ್ಟಿದ್ದೀರಿ. ಆತ್ಮವೇ ಎಲ್ಲವನ್ನು ಮಾಡುತ್ತದೆ, ಈ ಜ್ಞಾನವು ಹಾರಿ ಹೋಗಿದೆ. ಇವು ಕರ್ಮೇಂದ್ರಿಯಗಳಲ್ಲವೆ, ನಾನಾತ್ಮನಾಗಿದ್ದೇನೆ, ನಾನು ಬೇಕೆಂದರೆ ಕರ್ಮ ಮಾಡಿಸುವೆನು ಇಲ್ಲವೆಂದರೆ ಮಾಡಿಸುವುದಿಲ್ಲ. ನಿರಾಕಾರಿ ಪ್ರಪಂಚದಲ್ಲಿ ಶರೀರ ರಹಿತವಾಗಿಯೇ ಕುಳಿತಿರುತ್ತೀರಿ. ನೀವೀಗ ತಮ್ಮ ಮನೆಯನ್ನು ತಿಳಿದುಕೊಂಡಿದ್ದೀರಿ. ಅವರಂತೂ ಮನೆಯನ್ನೇ ಈಶ್ವರನೆಂದು ತಿಳಿಯುತ್ತಾರೆ. ಬ್ರಹ್ಮ್ ಜ್ಞಾನಿ ತತ್ವಜ್ಞಾನಿಗಳಾಗಿದ್ದಾರೆ. ನಾವು ಬ್ರಹ್ಮ್ ತತ್ವದಲ್ಲಿ ಲೀನವಾಗಿ ಬಿಡುತ್ತೇವೆಂದು ಹೇಳುತ್ತಾರೆ. ಒಂದುವೇಳೆ ಬ್ರಹ್ಮ್ ತತ್ವದಲ್ಲಿ ವಾಸ ಮಾಡುತ್ತೇವೆಂದು ಹೇಳುವುದಾದರೆ ಈಶ್ವರನೇ ಬೇರೆಯಾದರು ಆದರೆ ಅವರು ಬ್ರಹ್ಮ್ ತತ್ವವನ್ನು ಈಶ್ವರನೆಂದು ಹೇಳಿ ಬಿಡುತ್ತಾರೆ. ಇದೂ ಸಹ ಡ್ರಾಮಾದಲ್ಲಿ ನಿಗದಿಯಾಗಿದೆ. ತಂದೆಯನ್ನೂ ಮರೆತು ಹೋಗುತ್ತಾರೆ. ಯಾವ ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನು ನೆನಪು ಮಾಡಬೇಕಲ್ಲವೆ ಏಕೆಂದರೆ ಅವರೇ ಸ್ವರ್ಗದ ರಚಯಿತನಾಗಿದ್ದಾರೆ. ನೀವೀಗ ಪುರುಷೋತ್ತಮ ಸಂಗಮಯುಗೀ ಬ್ರಾಹ್ಮಣರಾಗಿದ್ದೀರಿ. ನೀವು ಉತ್ತಮ ಪುರುಷರಾಗುತ್ತೀರಿ, ಕನಿಷ್ಟ ಪುರುಷರು ಉತ್ತಮರ ಮುಂದೆ ತಲೆ ಬಾಗುತ್ತಾರೆ. ದೇವತೆಗಳ ಮಂದಿರದಲ್ಲಿ ಹೋಗಿ ಎಷ್ಟೊಂದು ಮಹಿಮೆ ಮಾಡುತ್ತಾರೆ. ನಾವೇ ಅಂತಹ ದೇವತೆಗಳಾಗುತ್ತಿದ್ದೇವೆಂದು ಈಗ ನಿಮಗೆ ತಿಳಿದಿದೆ. ಇದು ಬಹಳ ಸಹಜ ಮಾತಾಗಿದೆ. ವಿರಾಟ ರೂಪದ ಬಗ್ಗೆಯೂ ತಿಳಿಸಲಾಗಿದೆ. ವಿರಾಟ ಚಕ್ರವಾಗಿದೆಯಲ್ಲವೆ. ಅವರು ಕೇವಲ ಬ್ರಾಹ್ಮಣ, ದೇವತಾ, ಕ್ಷತ್ರಿಯ.... ಎಂದು ಹಾಡುತ್ತಾರೆ. ಲಕ್ಷ್ಮೀ-ನಾರಾಯಣ ಮೊದಲಾದವರ ಚಿತ್ರಗಳೂ ಇದೆಯಲ್ಲವೆ. ತಂದೆಯು ಬಂದು ಎಲ್ಲರನ್ನೂ ಸರಿ ಪಡಿಸುತ್ತಾರೆ. ನಿಮ್ಮನ್ನೂ ಸಹ ಸರಿ ಪಡಿಸುತ್ತಿದ್ದಾರೆ. ಏಕೆಂದರೆ ಭಕ್ತಿಮಾರ್ಗದಲ್ಲಿ ಜನ್ಮ-ಜನ್ಮಾಂತರದಿಂದ ನೀವು ಏನೆಲ್ಲವನ್ನೂ ಮಾಡುತ್ತಾ ಬಂದಿದ್ದೀರೋ ಅದು ತಪ್ಪಾಗಿದೆ ಆದ್ದರಿಂದ ನೀವು ತಮೋಪ್ರಧಾನರಾಗಿದ್ದೀರಿ. ಈಗ ಇರುವುದೇ ಅಸತ್ಯ ಪ್ರಪಂಚ, ಇದರಲ್ಲಿ ದುಃಖವೇ ದುಃಖವಿದೆ ಏಕೆಂದರೆ ರಾವಣ ರಾಜ್ಯವಾಗಿದೆ. ಎಲ್ಲರೂ ವಿಕಾರಿಗಳಾಗಿದ್ದಾರೆ. ರಾವಣ ರಾಜ್ಯವು ಅಸತ್ಯವಾಗಿದೆ. ರಾಮ ರಾಜ್ಯವು ಸತ್ಯವಾಗಿದೆ. ಇದು ಕಲಿಯುಗ, ಅದು ಸತ್ಯಯುಗ ಇದಂತೂ ತಿಳಿದುಕೊಳ್ಳುವ ಮಾತಾಗಿದೆಯಲ್ಲವೇ. ಶಿವ ತಂದೆಯು ಶಾಸ್ತ್ರಗಳನ್ನು ಹಿಡಿದಿರುವುದು ಎಂದಾದರೂ ನೋಡಿದ್ದೀರಾ? ತಮ್ಮ ಜ್ಞಾನವನ್ನೂ ಕೊಟ್ಟರು, ರಚನೆಯ ತಿಳುವಳಿಕೆಯನ್ನೂ ಕೊಟ್ಟಿದ್ದಾರೆ. ಯಾರು ಓದಿ ಅನ್ಯರಿಗೆ ತಿಳಿಸುವರೋ ಅವರ ಬುದ್ಧಿಯಲ್ಲಿ ಶಾಸ್ತ್ರಗಳಿರುತ್ತವೆ ಅಂದಮೇಲೆ ಎಲ್ಲರ ಸುಖದಾತನು ಒಬ್ಬ ಶಿವ ತಂದೆಯಾಗಿದ್ದಾರೆ, ಅವರೇ ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ, ಅವರಿಗೇ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ. ಬೇಹದ್ದಿನ ತಂದೆಯು ಅವಶ್ಯವಾಗಿ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. 5000 ವರ್ಷಗಳ ಮೊದಲು ನೀವು ಸ್ವರ್ಗವಾಸಿಯಾಗಿದ್ದಿರಿ, ಈಗ ನರಕವಾಸಿಯಾಗಿದ್ದೀರಿ. ರಾಮನೆಂದು ತಂದೆಗೆ ಹೇಳಲಾಗುತ್ತದೆ. ಆ ತ್ರೇತಾಯುಗದ ರಾಮನಲ್ಲ, ಯಾರ ಸೀತೆ ಕಳುವಾಗಿದ್ದಳು ಆ ರಾಮನೇನೂ ಸದ್ಗತಿದಾತನಲ್ಲ, ಆ ರಾಮ ರಾಜನಾಗಿದ್ದನು. ಮಹಾರಾಜನೂ ಅಲ್ಲ. ಮಹಾರಾಜ ಮತ್ತು ರಾಜಾ ಎಂಬುದರ ರಹಸ್ಯವನ್ನು ತಿಳಿಸಲಾಗಿದೆ. 16 ಕಲೆ ಇರುವವರಿಗೆ ಮಹಾರಾಜನೆಂತಲೂ, 14 ಕಲೆಯುಳ್ಳವರಿಗೆ ರಾಜರೆಂತಲೂ ಹೇಳಲಾಗುವುದು. ರಾವಣ ರಾಜ್ಯದಲ್ಲಿಯೂ ರಾಜರು, ಮಹಾರಾಜರಿರುತ್ತಾರೆ. ಅವರು ಬಹಳ ಸಾಹುಕಾರರು, ಇವರು ಬಹಳ ಕಡಿಮೆ ಸಾಹುಕಾರರು, ಅವರಿಗೆ ಸೂರ್ಯವಂಶಿ-ಚಂದ್ರವಂಶಿಯರೆಂದು ಹೇಳುವುದಿಲ್ಲ. ಇವರಲ್ಲಿ ಸಾಹುಕಾರರಿಗೆ ಮಹಾರಾಜನೆಂಬ ಬಿರುದು ಸಿಗುತ್ತದೆ. ಕಡಿಮೆ ಸಾಹುಕಾರರಿಗೆ ರಾಜ ಎನ್ನುತ್ತಾರೆ. ಈಗಂತೂ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಿದೆ, ದಣಿ-ಧೋಣಿ ಯಾರೂ ಇಲ್ಲ. ರಾಜನಿಗೆ ಪ್ರಜೆಗಳು ಅನ್ನದಾತನೆಂದು ಹೇಳುತ್ತಿದ್ದರು. ಈಗಂತೂ ಅವರೂ ಹೋದರು, ಪ್ರಜೆಗಳು ನೋಡಿ ಏನಾಗಿದ್ದಾರೆ! ಜಗಳ-ಕಲಹಗಳು ಎಷ್ಟಿದೆ, ಈಗ ನಿಮ್ಮ ಬುದ್ಧಿಯಲ್ಲಿ ಆದಿಯಿಂದ ಅಂತ್ಯದವರೆಗೆ ಸಂಪೂರ್ಣ ಜ್ಞಾನವಿದೆ, ರಚಯಿತ ತಂದೆಯು ಈಗ ಪ್ರತ್ಯಕ್ಷದಲ್ಲಿದ್ದಾರೆ. ಅವರದೇ ಭಕ್ತಿಮಾರ್ಗದಲ್ಲಿ ಕಥೆಗಳು ರಚಿಸಲ್ಪಡುವುದು. ಈಗ ನೀವೂ ಸಹ ಪ್ರತ್ಯಕ್ಷದಲ್ಲಿದ್ದೀರಿ, ಅರ್ಧಕಲ್ಪ ನೀವು ರಾಜ್ಯ ಮಾಡುತ್ತೀರಿ ನಂತರ ನಿಮ್ಮದು ಚರಿತ್ರೆಯಾಗುವುದು. ಚಿತ್ರಗಳಂತೂ ಇರುತ್ತವೆ. ಇವರು ಯಾವಾಗ ರಾಜ್ಯಭಾರ ಮಾಡುತ್ತಿದ್ದರು ಎಂದು ಯಾರನ್ನಾದರೂ ಕೇಳಿದರೆ ಲಕ್ಷಾಂತರ ವರ್ಷಗಳ ಹಿಂದೆ ಎಂದು ಹೇಳಿ ಬಿಡುತ್ತಾರೆ. ಸನ್ಯಾಸಿಗಳು ನಿವೃತ್ತಿ ಮಾರ್ಗದವರು, ನೀವು ಪವಿತ್ರ ಗೃಹಸ್ಥಾಶ್ರಮದವರಾಗಿದ್ದೀರಿ ನಂತರ ನೀವೇ ಅಪವಿತ್ರ ಗೃಹಸ್ಥಾಶ್ರಮದಲ್ಲಿ ಹೋಗುವಿರಿ. ಸ್ವರ್ಗದ ಸುಖದ ಬಗ್ಗೆ ಯಾರಿಗೂ ಗೊತ್ತಿಲ್ಲ. ನಿವೃತ್ತಿ ಮಾರ್ಗದವರು ಎಂದೂ ಪ್ರವೃತ್ತಿ ಮಾರ್ಗವನ್ನು ಕಲಿಸಲು ಸಾಧ್ಯವಿಲ್ಲ. ಮೊದಲಂತೂ ಕಾಡಿನಲ್ಲಿ ಇರುತ್ತಿದ್ದರು, ಅವರಲ್ಲಿ ಶಕ್ತಿಯಿತ್ತು. ಕಾಡಿನಲ್ಲಿಯೇ ಅವರಿಗೆ ಭೋಜನವನ್ನು ತಲುಪಿಸುತ್ತಿದ್ದರು, ಈಗ ಆ ಶಕ್ತಿಯೇ ಇಲ್ಲ. ಹೇಗೆ ನಿಮ್ಮಲ್ಲಿಯೂ ಅಲ್ಲಿ ರಾಜ್ಯಭಾರ ಮಾಡುವ ಶಕ್ತಿಯಿತ್ತು, ಈಗ ಎಲ್ಲಿದೆ? ಅದೇ ಆತ್ಮರೇ ಆಗಿದ್ದೀರಿ ಆದರೆ ಆ ಶಕ್ತಿಯು ಉಳಿದಿಲ್ಲ. ಭಾರತವಾಸಿಗಳದು ಮೂಲತಃ ಯಾವ ಧರ್ಮವಿತ್ತು ಅದು ಈಗ ಇಲ್ಲ, ಅಧರ್ಮವಾಗಿ ಬಿಟ್ಟಿದೆ. ತಂದೆಯು ತಿಳಿಸುತ್ತಾರೆ - ನಾನು ಬಂದು ಧರ್ಮದ ಸ್ಥಾಪನೆ, ಅಧರ್ಮದ ವಿನಾಶ ಮಾಡುತ್ತೇನೆ. ಅಧರ್ಮಿಗಳನ್ನು ಧರ್ಮದಲ್ಲಿ ಕರೆ ತರುತ್ತೇನೆ. ಯಾರು ಉಳಿಯುವರೋ ಅವರು ವಿನಾಶವಾಗುತ್ತಾರೆ. ಆದರೂ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ ಎಲ್ಲರಿಗೆ ನನ್ನ ಪರಿಚಯವನ್ನು ಕೊಡಿ, ತಂದೆಗೆ ದುಃಖಹರ್ತ-ಸುಖಕರ್ತನೆಂದು ಹೇಳಲಾಗುತ್ತದೆ, ಯಾವಾಗ ಬಹಳ ದುಃಖಿಯಾಗುವರೋ ಆಗಲೇ ತಂದೆಯು ಬಂದು ಸುಖಿಯನ್ನಾಗಿ ಮಾಡುತ್ತಾರೆ. ಇದೂ ಸಹ ಮಾಡಿ-ಮಾಡಲ್ಪಟ್ಟ ಅನಾದಿ ಆಟವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಪುರುಷೋತ್ತಮ ಸಂಗಮಯುಗದಲ್ಲಿ ಉತ್ತಮ ಪುರುಷರಾಗಬೇಕೆಂದರೆ ಆತ್ಮಾಭಿಮಾನಿಯಾಗುವ ಪುರುಷಾರ್ಥ ಮಾಡಬೇಕಾಗಿದೆ. ಸತ್ಯ ತಂದೆಯು ಸಿಕ್ಕಿದ್ದಾರೆ ಅಂದಮೇಲೆ ಯಾವುದೇ ಅಸತ್ಯ ಆಯಥಾರ್ಥ ಕೆಲಸವನ್ನು ಮಾಡಬಾರದು.

2. ಮಾಯೆಯ ಬಿರುಗಾಳಿಗಳಿಗೆ ಹೆದರಬಾರದು. ಸದಾ ನೆನಪಿರಲಿ - ಸತ್ಯದ ದೋಣಿಯು ಅಲುಗಾಡುವುದು ಆದರೆ ಮುಳುಗುವುದಿಲ್ಲ. ಸದ್ಗುರುವಿನ ಮಕ್ಕಳು ಸದ್ಗುರುಗಳಾಗಿ ಎಲ್ಲರ ಜೀವನದ ದೋಣಿಯನ್ನು ಪಾರು ಮಾಡಬೇಕಾಗಿದೆ.

ವರದಾನ:
ಸಮಯ ಪ್ರಮಾಣ ತಮ್ಮ ಭಾಗ್ಯದ ಸ್ಮರಣೆ ಮಾಡುತ್ತಾ ಖುಶಿ ಮತ್ತು ಪ್ರಾಪ್ತಿಗಳಿಂದ ಸಂಪನ್ನರಾಗುವಂತಹ ಸ್ಮೃತಿ ಸ್ವರೂಪ ಭವ.

ಭಕ್ತಿಯಲ್ಲಿ ನೀವು ಸ್ಮೃತಿ ಸ್ವರೂಪ ಆತ್ಮರುಗಳ ನೆನಪಾರ್ಥ ರೂಪದಲ್ಲಿ ಭಕ್ತರು ಇಲ್ಲಿಯವರೆಗೆ ನಿಮ್ಮ ಪ್ರತಿ ಕರ್ಮದ ವಿಶೇಷತೆಯ ಸ್ಮರಣೆ ಮಾಡುತ್ತಾ ಅಲೌಕಿಕ ಅನುಭವಗಳಲ್ಲಿ ಮುಳುಗಿ ಹೋಗುವರು. ಆದ್ದರಿಂದ ನಿಮ್ಮ ಪ್ರಾಕ್ಟಿಕಲ್ ಜೀವನದಲ್ಲಿ ಎಷ್ಟು ಅನುಭವ ಪ್ರಾಪ್ತಿ ಮಾಡಿರಬಹುದು! ಕೇವಲ ಎಂತಹ ಸಮಯ, ಎಂತಹ ಕರ್ಮ ಅಂತಹ ಸ್ವರೂಪದ ಸ್ಮೃತಿ ಇಮರ್ಜ್ ರೂಪದಲ್ಲಿ ಅನುಭವ ಮಾಡಿದಾಗ ಬಹಳ ವಿಚಿತ್ರ ಖುಶಿ, ವಿಚಿತ್ರ ಪ್ರಾಪ್ತಿಗಳ ಭಂಢಾರವಾಗಿ ಬಿಡುವುದು ಮತ್ತು ಹೃದಯದಿಂದ ಇದೇ ನಿರಂತರ ಗೀತೆ ಹೊರ ಬರುವುದು ಏನು ಪಡೆಯ ಬೇಕಿತ್ತೋ ಅದನ್ನು ಪಡೆದೆನು.

ಸ್ಲೋಗನ್:
ನಂಬರ್ಒನ್ ನಲ್ಲಿ ಬರಬೇಕಾದರೆ ಕೇವಲ ಬ್ರಹ್ಮಾ ತಂದೆಯ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಹೋಗಿ.