30.03.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈಗ ಹಿಂತಿರುಗಬೇಕಾಗಿದೆ, ಆದ್ದರಿಂದ ಈ ಹಳೆಯ ದೇಹ ಹಾಗೂ ಹಳೆಯ ಪ್ರಪಂಚದಿಂದ ಉಪರಾಂ ಆಗಿ, ತಮ್ಮ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಲು ಯೋಗದ ಭಟ್ಟಿಯಲ್ಲಿ ಕುಳಿತುಕೊಳ್ಳಿ”

ಪ್ರಶ್ನೆ:
ಯೋಗದಲ್ಲಿ ತಂದೆಯ ಪೂರ್ಣ ಕರೆಂಟ್ (ಶಕ್ತಿ) ಯಾವ ಮಕ್ಕಳಿಗೆ ಸಿಗುತ್ತದೆ?

ಉತ್ತರ:
ಯಾರ ಬುದ್ಧಿಯು ಹೊರಗಡೆ ಅಲೆಯುವುದಿಲ್ಲವೋ ಅವರಿಗೆ ತಂದೆಯಿಂದ ಪೂರ್ಣ ಕರೆಂಟ್ (ಶಕ್ತಿ) ಸಿಗುತ್ತದೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದಾಗ ತಂದೆಯಿಂದ ಶಕ್ತಿಯು ಸಿಗುತ್ತದೆ, ತಂದೆಯು ಮಕ್ಕಳಿಗೆ ಸಕಾಶವನ್ನು ಕೊಡುತ್ತಾರೆ. ಮಕ್ಕಳ ಕಾರ್ಯವಾಗಿದೆ - ತಂದೆಯು ನೀಡುವ ಶಕ್ತಿಯನ್ನು ಕ್ಯಾಚ್ ಮಾಡುವುದು ಏಕೆಂದರೆ ಆ ಶಕ್ತಿಯಿಂದಲೇ ಆತ್ಮರೂಪಿ ಬ್ಯಾಟರಿಯು ಚಾರ್ಜ್ ಆಗುತ್ತದೆ, ಶಕ್ತಿಯು ಬರುತ್ತದೆ, ವಿಕರ್ಮವು ವಿನಾಶವಾಗುತ್ತದೆ. ಇದನ್ನೇ ಯೋಗದ ಅಗ್ನಿಯೆಂದು ಹೇಳಲಾಗುತ್ತದೆ. ಇದರ ಅಭ್ಯಾಸವನ್ನು ಮಾಡಬೇಕು.

ಓಂ ಶಾಂತಿ.
ಭಗವಾನುವಾಚ. ಈಗ ಮಕ್ಕಳಿಗೆ ಮನೆಯೂ ಸಹ ನೆನಪಿಗೆ ಬರುತ್ತದೆ. ತಂದೆಯಂತೂ ಮನೆ ಹಾಗೂ ರಾಜಧಾನಿಯ ಮಾತನ್ನೇ ತಿಳಿಸುತ್ತಾರೆ, ಮಕ್ಕಳೂ ಈ ಮಾತುಗಳನ್ನು ತಿಳಿದುಕೊಂಡಿದ್ದಾರೆ - ನಾವಾತ್ಮರ ಮನೆ ಯಾವುದಾಗಿದೆ? ಆತ್ಮ ಎಂದರೇನು? ತಂದೆಯು ಬಂದು ನಮಗೆ ಓದಿಸುತ್ತಾರೆ ಎಂಬುದನ್ನೂ ಸಹ ಚೆನ್ನಾಗಿ ಅರಿತಿದ್ದೀರಿ. ತಂದೆಯು ಎಲ್ಲಿಂದ ಬರುತ್ತಾರೆ? ಪರಮಧಾಮದಿಂದ. ಪಾವನ ಪ್ರಪಂಚವನ್ನಾಗಿ ಮಾಡಲು ಪಾವನ ಪ್ರಪಂಚದಿಂದ ಬರುತ್ತಾರೆ ಎಂದು ಯಾರೂ ಸಹ ಹೇಳುವುದಿಲ್ಲ. ನಾನು ಸತ್ಯಯುಗೀ ಪಾವನ ಪ್ರಪಂಚದಿಂದ ಬರುವುದಿಲ್ಲ, ನಾನಂತೂ ಯಾವ ಮನೆಯಿಂದ ನೀವು ಮಕ್ಕಳು ಪಾತ್ರವನ್ನಭಿನಯಿಸಲು ಬಂದಿದ್ದೀರೋ ಆ ಮನೆಯಿಂದ ಬಂದಿದ್ದೇನೆ. ಡ್ರಾಮಾದ ಯೋಜನೆಯನುಸಾರ 5000 ವರ್ಷಗಳ ನಂತರ ನಾನೂ ಸಹ ಮನೆಯಿಂದ ಬರುತ್ತೇನೆ. ನಾನಿರುವುದೇ ಮನೆಯಾದ ಪರಮಧಾಮದಲ್ಲಿ. ತಂದೆಯು ಪಟ್ಟಣದಿಂದ ಬಂದಂತೆ ಸಹಜವಾಗಿ ತಿಳಿಸುತ್ತಾರೆ. ಹೇಗೆ ನೀವು ಪಾತ್ರವನ್ನಭಿನಯಿಸಲು ಬಂದಿದ್ದೀರೋ ನಾನೂ ಸಹ ಅದೇ ರೀತಿಯಾಗಿ ಪಾತ್ರವನ್ನಭಿನಯಿಸಲು ಬಂದಿದ್ದೇನೆ. ನಾನು ಜ್ಞಾನಪೂರ್ಣನಾಗಿದ್ದೇನೆ. ಡ್ರಾಮಾನುಸಾರ ನಾನು ಎಲ್ಲವನ್ನೂ ತಿಳಿದುಕೊಂಡಿದ್ದೇನೆ. ಕಲ್ಪ-ಕಲ್ಪವೂ ನಾನು ಇದೇ ಮಾತನ್ನೇ ತಿಳಿಸುತ್ತೇನೆ - ನೀವು ಕಾಮಚಿತೆಯ ಮೇಲೆ ಕುಳಿತು ಕಪ್ಪಾಗಿ ಭಸ್ಮವಾಗಿ ಬಿಡುತ್ತೀರಿ. ಬೆಂಕಿಯಲ್ಲಿ ಮನುಷ್ಯರು ಕಪ್ಪಾಗಿ ಬಿಡುತ್ತಾರೆ ಅಂದಾಗ ತಾವೂ ಸಹ ಕಪ್ಪಾಗಿ ಬಿಟ್ಟಿದ್ದೀರಿ. ಸತೋಪ್ರಧಾನತೆ ಶಕ್ತಿಯೆಲ್ಲವೂ ಹೊರಟು ಹೋಗಿದೆ. ಆದ್ದರಿಂದ ಆತ್ಮದ ಬ್ಯಾಟರಿಯು ಪೂರ್ಣ ಖಾಲಿಯಾಗುವ ಸಮಯ ಬಂದಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾಟಕದನುಸಾರ ಆದಿ ಸನಾತನ ದೇವಿ-ದೇವತಾ ಧರ್ಮದವರ ಬ್ಯಾಟರಿಯು ಖಾಲಿಯಾಗುವ ಸಮಯದಲ್ಲಿ ನಾನು ಬರುತ್ತೇನೆ. ಈಗ ನಿಮ್ಮ ಬ್ಯಾಟರಿಯು ಅವಶ್ಯವಾಗಿ ಚಾರ್ಜ್ ಆಗಬೇಕಾಗಿದೆ. ಕೇವಲ ಇಲ್ಲಿಗೆ ಬಂದು ಕುಳಿತುಕೊಂಡಾಗ ಮಾತ್ರ ಬ್ಯಾಟರಿಯು ತುಂಬಲು ಸಾಧ್ಯ ಎಂದಲ್ಲ. ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಲೂ ನೆನಪಿನಲ್ಲಿದ್ದಾಗ ಬ್ಯಾಟರಿಯು ತುಂಬುತ್ತದೆ. ನೀವು ಮೊದಲು ಪವಿತ್ರ, ಸತೋಪ್ರಧಾನ ಆತ್ಮರಾಗಿದ್ದಿರಿ. ಚಿನ್ನವೂ ಶುದ್ಧ, ಆಭರಣಗಳೂ ಶುದ್ಧವಾಗಿರುತ್ತದೆ (ಆತ್ಮ ಮತ್ತು ಶರೀರ) ಈಗ ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಈಗ ಮತ್ತೆ ಆತ್ಮವು ಸತೋಪ್ರಧಾನವಾಗುತ್ತದೆ ಎಂದರೆ ಶರೀರವೂ ಪವಿತ್ರವಾಗಿರುವುದೇ ಸಿಗುತ್ತದೆ. ಇದು ಬಹಳ ಸಹಜವಾಗಿ ಪವಿತ್ರರಾಗುವ ಭಟ್ಟಿಯಾಗಿದೆ, ಇದಕ್ಕೆ ಯೋಗ ಭಟ್ಟಿಯೆಂದು ಹೇಳಬಹುದು. ಹೇಗೆ ಚಿನ್ನವನ್ನೂ ಸಹ ಭಟ್ಟಿಯಲ್ಲಿ ಹಾಕುತ್ತಾರೆ. ಇದು ಚಿನ್ನವನ್ನು ಶುದ್ಧ ಮಾಡುವ, ತಂದೆಯನ್ನು ನೆನಪು ಮಾಡುವ ಭಟ್ಟಿಯಾಗಿದೆ. ಪವಿತ್ರರಂತೂ ಅವಶ್ಯವಾಗಿ ಆಗಬೇಕಾಗಿದೆ. ನೆನಪೇ ಮಾಡದಿದ್ದರೆ ಇಷ್ಟೊಂದು ಪವಿತ್ರರಾಗುವುದಿಲ್ಲ. ಮತ್ತೆ ಲೆಕ್ಕಾಚಾರಗಳನ್ನೂ ಸಹ ಸಮಾಪ್ತಿ ಮಾಡಲೇಬೇಕಾಗಿದೆ ಏಕೆಂದರೆ ಅಂತಿಮ ಸಮಯವಾಗಿದೆ, ಎಲ್ಲರೂ ಮನೆಗೆ ಹೋಗಬೇಕಾಗಿದೆ. ಬುದ್ಧಿಯಲ್ಲಿ ಮನೆಯ ನೆನಪು ಕುಳಿತಿದೆ, ಮತ್ತ್ಯಾರ ಬುದ್ಧಿಯಲ್ಲಿಯೂ ಇದು ಇರುವುದಿಲ್ಲ. ಅವರಂತೂ ಬ್ರಹ್ಮ್ ತತ್ವವನ್ನೇ ಈಶ್ವರನೆಂದು ಹೇಳಿ ಬಿಡುತ್ತಾರೆ ಅದನ್ನು ಮನೆಯೆಂದು ತಿಳಿಯುವುದಿಲ್ಲ. ನೀವು ಈ ಬೇಹದ್ದಿನ ನಾಟಕದ ಪಾತ್ರಧಾರಿಯಾಗಿದ್ದೀರಿ, ಈ ನಾಟಕವನ್ನಂತೂ ನೀವು ಬಹಳ ಚೆನ್ನಾಗಿ ಅರಿತಿದ್ದೀರಿ. ತಂದೆಯು ತಿಳಿಸಿದ್ದಾರೆ - ಈಗ 84 ಜನ್ಮಗಳ ಚಕ್ರವು ಮುಕ್ತಾಯವಾಗುತ್ತದೆ. ಮನೆಗೆ ಹೋಗಬೇಕಾಗಿದೆ, ಆದರೆ ಆತ್ಮವು ಈಗ ಪತಿತವಾಗಿದೆ ಆದ್ದರಿಂದ ಮನೆಗೆ ಹೋಗುವುದಕ್ಕಾಗಿ ತಂದೆಯೇ ಬಂದು ಪಾವನರನ್ನಾಗಿ ಮಾಡಿ, ಇಲ್ಲದಿದ್ದರೆ ನೀವು ಮನೆಗೆ ಹೋಗಲು ಸಾಧ್ಯವಿಲ್ಲವೆಂದು ಕರೆಯುತ್ತಾರೆ. ತಂದೆಯೇ ಈ ಮಾತುಗಳನ್ನು ಮಕ್ಕಳಿಗೆ ತಿಳಿಸುತ್ತಾರೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ ಆದ್ದರಿಂದಲೇ ಅವರನ್ನು ತಂದೆ, ತಂದೆ ಎಂದು ಹೇಳುತ್ತಿರುತ್ತೀರಿ. ಅವರಿಗೆ ಶಿಕ್ಷಕರೆಂತಲೂ ಹೇಳುತ್ತಾರೆ, ಆ ಮನುಷ್ಯರಂತೂ ಕೃಷ್ಣನನ್ನು ಶಿಕ್ಷಕರೆಂದು ತಿಳಿಯುತ್ತಾರೆ ಆದರೆ ನೀವು ಮಕ್ಕಳಿಗೆ ಗೊತ್ತಿದೆ - ಸತ್ಯಯುಗದಲ್ಲಿ ಕೃಷ್ಣನು ಸ್ವಯಂ ಓದುತ್ತಿದ್ದನು ಅಂದಮೇಲೆ ಕೃಷ್ಣನು ಎಂದೂ ಯಾರಿಗೂ ಶಿಕ್ಷಕನಾಗಿಲ್ಲ ಅಥವಾ ಓದಿದ ನಂತರವೂ ಶಿಕ್ಷಕನಾಗಲಿಲ್ಲ. ಕೃಷ್ಣನ ಬಾಲ್ಯದಿಂದ ಹಿಡಿದು ಅಂತ್ಯದವರೆಗಿನ ಕಥೆಯನ್ನು ನೀವು ಮಕ್ಕಳೇ ಅರಿತಿದ್ದೀರಿ. ಮನುಷ್ಯರು ಕೃಷ್ಣನನ್ನು ಭಗವಂತನೆಂದು ತಿಳಿದು ಎಲ್ಲಿ ನೋಡಿದರಲ್ಲಿ ಕೃಷ್ಣನೇ ಕೃಷ್ಣನೆಂದು ಹೇಳಿ ಬಿಡುತ್ತಾರೆ. ರಾಮನ ಭಕ್ತರು ರಾಮನೇ ರಾಮನೆಂದು ಹೇಳುತ್ತಾರೆ ಇದರಿಂದ ಸೂತ್ರವೇ ಗಂಟಾಗಿ ಬಿಟ್ಟಿದೆ. ಈಗ ನಿಮಗೆ ಗೊತ್ತಿದೆ, ಭಾರತದ ಪ್ರಾಚೀನ ಯೋಗ ಮತ್ತು ಜ್ಞಾನವು ಪ್ರಸಿದ್ಧವಾಗಿದೆ ಆದರೆ ಮನುಷ್ಯರು ಇದನ್ನು ತಿಳಿದುಕೊಂಡಿಲ್ಲ - ಜ್ಞಾನಸಾಗರ ಒಬ್ಬರೇ ತಂದೆಯಾಗಿದ್ದಾರೆ, ಅವರು ತಾವು ಮಕ್ಕಳಿಗೆ ಜ್ಞಾನ ನೀಡುತ್ತಾರೆ ಆದ್ದರಿಂದ ನಿಮಗೂ ಸಹ ಜ್ಞಾನಸಾಗರನೆಂದು ಹೇಳಲಾಗುತ್ತದೆ ಆದರೆ ನಂಬರವಾರ್ ಪುರುಷಾರ್ಥದನುಸಾರ. ಸಾಗರನೆಂದು ಹೇಳುವುದೇ ಅಥವಾ ನದಿಗಳೆಂದು ಹೇಳುವುದೇ? ನೀವು ಜ್ಞಾನ ಗಂಗೆಯರಾಗಿದ್ದೀರಿ, ಇದರಲ್ಲಿಯೂ ಸಹ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಆದ್ದರಿಂದ ಮಾ|| ಜ್ಞಾನಸಾಗರನೆಂದು ಕರೆಯುವುದು ಸರಿಯಾದ ಮಾತಾಗಿದೆ. ತಂದೆಯು ಮಕ್ಕಳಿಗೆ ಓದಿಸುತ್ತಾರೆ, ಇದರಲ್ಲಿ ಸ್ತ್ರೀ-ಪುರುಷರೆಂಬ ಮಾತಿಲ್ಲ. ಆಸ್ತಿಯನ್ನೂ ಸಹ ತಾವೆಲ್ಲಾ ಆತ್ಮರು ತೆಗೆದುಕೊಳ್ಳುತ್ತೀರಿ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಆತ್ಮಾಭಿಮಾನಿಗಳಾಗಿ. ಹೇಗೆ ನಾನು ಪರಮ ಆತ್ಮನೋ, ಜ್ಞಾನ ಸಾಗರನಾಗಿದ್ದೇನೆ ಹಾಗೆಯೇ ತಾವೂ ಸಹ ಜ್ಞಾನಸಾಗರ ಆಗಿದ್ದೀರಿ. ನನ್ನನ್ನು ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ, ನನ್ನ ಕರ್ತವ್ಯವೂ ಶ್ರೇಷ್ಠವಾಗಿದೆ. ರಾಜ-ರಾಣಿಯ ಕರ್ತವ್ಯವೂ ಎಲ್ಲದಕ್ಕಿಂತ ಶ್ರೇಷ್ಠವಾಗಿದೆಯಲ್ಲವೆ! ಇಲ್ಲಿ ನೀವು ತಿಳಿದಿದ್ದೀರಿ - ನಾವಾತ್ಮರು ಇಲ್ಲಿ ಓದುತ್ತಿದ್ದೇವೆ, ಪರಮಾತ್ಮ ಓದಿಸುತ್ತಿದ್ದಾರೆ ಆದ್ದರಿಂದ ದೇಹಿ-ಅಭಿಮಾನಿ ಭವ ಅಂದಾಗ ಎಲ್ಲರೂ ಸಹೋದರರಾಗಿ ಬಿಡುತ್ತಾರೆ. ಈಗ ತಾವಾತ್ಮಗಳು ಜ್ಞಾನವನ್ನು ಪಡೆಯುತ್ತಿದ್ದೀರಿ, ಆದ್ದರಿಂದ ಮತ್ತೆ ಸತ್ಯಯುಗಕ್ಕೆ ಹೋಗುತ್ತೀರೆಂದರೆ ಅಲ್ಲಿ ಇಲ್ಲಿನ ಪ್ರಾಲಬ್ಧವು ನಡೆಯುತ್ತದೆ. ಸತ್ಯಯುಗದಲ್ಲಿ ಪರಸ್ಪರ ಸಹೋದರತ್ವದ ಪ್ರೇಮವಿರುತ್ತದೆ. ಎಲ್ಲರಲ್ಲಿಯೂ ಈ ಸಹೋದರತ್ವದ ಪ್ರೇಮವು ಬಹಳ ಚೆನ್ನಾಗಿರಬೇಕು. ಕೆಲವರಿಗೆ ಗೌರವ ಕೊಡುವುದು ಇನ್ನೂ ಕೆಲವರಿಗೆ ಕೊಡದೇ ಇರುವ ರೀತಿ ಆಗಬಾರದು. ಹಿಂದೂ-ಮುಸಲ್ಮಾನರು ಸಹೋದರ-ಸಹೋದರ ಎಂದು ಹೇಳುತ್ತಾರೆ ಆದರೆ ಒಬ್ಬರು ಇನ್ನೊಬ್ಬರಿಗೆ ಗೌರವ ಕೊಡುವುದಿಲ್ಲ. ಇಲ್ಲಿ ಸಹೋದರ-ಸಹೋದರಿಯಲ್ಲ, ಸಹೋದರ-ಸಹೋದರರೆಂದು ಹೇಳುವುದು ಸರಿಯಾಗಿದೆ, ವಿಶ್ವಭ್ರಾತೃತ್ವವಾಗಿದೆ. ಆತ್ಮವು ಇಲ್ಲಿ ಪಾತ್ರವನ್ನಭಿನಯಿಸಲು ಬಂದಿದೆ, ಅಲ್ಲಿಯೂ ಸಹೋದರ-ಸಹೋದರನಾಗಿಯೇ ಇರುತ್ತಾರೆ. ಎಲ್ಲರೂ ಮನೆ (ಪರಮಧಾಮ)ಯಲ್ಲಿ ಸಹೋದರ-ಸಹೋದರರಾಗಿರುತ್ತಾರೆ, ಸಹೋದರ-ಸಹೋದರಿ, ಈ ಸಂಬಂಧವನ್ನು ಇಲ್ಲಿಯೇ ಬಿಡಬೇಕಾಗುತ್ತದೆ. ಈ ಸಹೋದರ-ಸಹೋದರ ಎಂಬ ಸಂಬಂಧವನ್ನು ತಂದೆಯೇ ಕೊಡುತ್ತಾರೆ. ಆತ್ಮವು ಭೃಕುಟಿಯ ಮಧ್ಯದಲ್ಲಿರುತ್ತದೆ ಅಂದಮೇಲೆ ತಮ್ಮ ದೃಷ್ಟಿಯೂ ಸಹ ಭೃಕುಟಿಯಲ್ಲಿರಬೇಕು. ನಾನಾತ್ಮ ಶರೀರರೂಪಿ ಸಿಂಹಾಸನದಲ್ಲಿ ಕುಳಿತಿದ್ದೇನೆ, ಇದು ಆತ್ಮದ ಸಿಂಹಾಸನ ಅಥವಾ ಅಕಾಲ ಸಿಂಹಾಸನವಾಗಿದೆ. ಆತ್ಮವನ್ನೆಂದೂ ಮೃತ್ಯುವು ಕಬಳಿಸುವುದಿಲ್ಲ. ಎಲ್ಲರ ಸಿಂಹಾಸನವು ಈ ಭೃಕುಟಿಯ ಮಧ್ಯವಾಗಿದೆ. ಈ ಅಕಾಲ ಆತ್ಮವು ಕುಳಿತಿದೆ. ಇದು ಎಷ್ಟೊಂದು ತಿಳಿದುಕೊಳ್ಳುವ ಮಾತುಗಳಾಗಿವೆ. ಚಿಕ್ಕ ಮಕ್ಕಳಲ್ಲಿಯೂ ಆತ್ಮವು ಭೃಕುಟಿಯ ಮಧ್ಯದಲ್ಲಿ ಕುಳಿತುಕೊಂಡಿದೆ, ಈ ಚಿಕ್ಕ ಭೃಕುಟಿ ಸಿಂಹಾಸನವು ದೊಡ್ಡದಾಗುತ್ತಾ ಹೋಗುತ್ತದೆ. ಗರ್ಭದಲ್ಲಿ ಆತ್ಮವು ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ ಆದ್ದರಿಂದಲೇ ನಾವೆಂದೂ ಪಾಪಾತ್ಮರಾಗುವುದಿಲ್ಲ ಎಂದು ಗರ್ಭದಲ್ಲಿದ್ದಾಗ ಪಶ್ಚಾತ್ತಾಪ ಪಡುತ್ತದೆ. ಅರ್ಧಕಲ್ಪ ಪಾಪಾತ್ಮರಾಗುತ್ತೀರಿ, ಈಗ ತಂದೆಯ ಮೂಲಕ ಪಾವನ ಆತ್ಮರಾಗುತ್ತೀರಿ. ತನು-ಮನ-ಧನ ಸರ್ವಸ್ವವನ್ನೂ ತಂದೆಗೆ ಕೊಡುತ್ತೀರಿ. ಈ ದಾನವನ್ನು ಯಾರೂ ಅರಿತುಕೊಂಡಿಲ್ಲ. ದಾನ ಕೊಡುವುದು ಮತ್ತು ತೆಗೆದುಕೊಳ್ಳುವವರೂ ಸಹ ಭಾರತದಲ್ಲಿಯೇ ಇದೆ, ಇವೆಲ್ಲವೂ ಅರಿತುಕೊಳ್ಳುವ ಆಳವಾದ ಮಾತುಗಳಾಗಿವೆ. ಭಾರತವು ಎಷ್ಟು ಅವಿನಾಶಿ ಖಂಡವಾಗಿದೆ. ಮತ್ತೆಲ್ಲಾ ಖಂಡಗಳು ಸಮಾಪ್ತಿಯಾಗುತ್ತವೆ. ಇದು ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ ಅಂದಾಗ ಇದು ನಿಮ್ಮ ಬುದ್ಧಿಯಲ್ಲಿಯೇ ಇದೆ. ಇದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ಇದಕ್ಕೆ ಜ್ಞಾನವೆಂದು ಹೇಳುವುದು ಚೆನ್ನಾಗಿದೆ. ಜ್ಞಾನವು ಆದಾಯದ ಮೂಲವಾಗಿದೆ, ಇದರಿಂದ ಬಹಳ ಸಂಪಾದನೆಯಾಗುತ್ತದೆ. ತಂದೆಯನ್ನು ನೆನಪು ಮಾಡಿ. ಈ ಜ್ಞಾನವನ್ನೂ ಕೊಡುತ್ತಾರೆ ಮತ್ತು ಸೃಷ್ಟಿ ಚಕ್ರದ ಜ್ಞಾನವನ್ನೂ ಸಹ ತಂದೆ ಕೊಡುತ್ತಾರೆ, ಇದರಲ್ಲಿ ಪರಿಶ್ರಮವಿದೆ. ನಾವಾತ್ಮರು ಈಗ ಹಿಂತಿರುಗಬೇಕಾಗಿದೆ ಆದ್ದರಿಂದ ಈ ಹಳೆಯ ಪ್ರಪಂಚ ಹಾಗೂ ಹಳೆಯ ಶರೀರದಿಂದ ಭಿನ್ನವಾಗಿರಬೇಕಾಗಿದೆ. ದೇಹ ಸಹಿತ ಏನೆಲ್ಲವನ್ನೂ ನೋಡುತ್ತೀರೋ ಇದೆಲ್ಲವೂ ಸಮಾಪ್ತಿಯಾಗುವುದಿದೆ. ಈಗ ನಾವು ವರ್ಗಾವಣೆಯಾಗುತ್ತೇವೆ, ಇದನ್ನು ತಂದೆಯೇ ತಿಳಿಸಲು ಸಾಧ್ಯ. ಇದು ಅತೀ ದೊಡ್ಡ ಪರೀಕ್ಷೆಯಾಗಿದೆ, ಇದನ್ನು ತಂದೆಯೇ ಓದಿಸುತ್ತಾರೆ. ಇದರಲ್ಲಿ ಯಾವುದೇ ಗ್ರಂಥ ಪುಸ್ತಕಗಳ ಅವಶ್ಯಕತೆಯಿಲ್ಲ ಕೇವಲ ತಂದೆಯನ್ನು ನೆನಪು ಮಾಡಬೇಕು. ತಂದೆಯು 84 ಜನ್ಮಗಳ ಚಕ್ರವನ್ನು ತಿಳಿಸುತ್ತಾರೆ. ಈ ನಾಟಕದ ಆಯಸ್ಸನ್ನು ಯಾರೂ ತಿಳಿದುಕೊಂಡಿಲ್ಲ ಎಲ್ಲರೂ ಅಂಧಕಾರದಲ್ಲಿದ್ದಾರೆ. ತಾವಂತೂ ಈಗ ಜಾಗೃತರಾಗಿದ್ದೀರಿ ಆದರೆ ಮನುಷ್ಯರಂತೂ ಇನ್ನೂ ಜಾಗೃತರಾಗಿಲ್ಲ ಅವರನ್ನು ಜಾಗೃತಗೊಳಿಸಲು ನೀವು ಎಷ್ಟು ಪರಿಶ್ರಮ ಪಡುತ್ತೀರಿ. ಆದರೆ ಭಗವಂತನು ಬಂದು ಇವರಿಗೆ ಓದಿಸುತ್ತಾರೆಂದು ವಿಶ್ವಾಸವಿಡುವುದಿಲ್ಲ. ಅವಶ್ಯವಾಗಿ ಯಾರಲ್ಲಿಯೇ ಆದರೂ ಭಗವಂತನು ಬರುತ್ತಾರಲ್ಲವೆ, ಈಗ ಆ ತಂದೆಯು ಆತ್ಮಗಳಿಗೆ ಸಲಹೆ ಕೊಡುತ್ತಾರೆ - ಮಕ್ಕಳೇ, ಹೀಗೆ ಹೀಗೆ ಮಾಡಿ, ಮನುಷ್ಯರು ಇದರಿಂದ ಅರಿತುಕೊಳ್ಳಲಿ. ನಿಮಗೆ ಇದು ಸಹಜವಾಗಿದೆ. ನಂಬರವಾರ್ ಅಂತೂ ಇದ್ದೇ ಇದೆ. ಶಾಲೆಯಲ್ಲಿಯೂ ಸಹ ನಂಬರವಾರ್ ಇರುತ್ತಾರೆ, ವಿದ್ಯೆಯಲ್ಲಿಯೂ ನಂಬರವಾರ್ ಇರುತ್ತಾರೆ ಅಂದಾಗ ಈ ವಿದ್ಯೆಯಿಂದ ಅತೀ ದೊಡ್ಡ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಅಂದಮೇಲೆ ನಾವು ರಾಜರಾಗುವ ಪುರುಷಾರ್ಥ ಮಾಡಬೇಕು. ಈ ಸಮಯದಲ್ಲಿ ನೀವು ಎಂತಹ ಪುರುಷಾರ್ಥ ಮಾಡುತ್ತೀರೋ ಅದನ್ನೇ ಕಲ್ಪ-ಕಲ್ಪಾಂತರವು ಮಾಡುತ್ತೀರಿ ಇದಕ್ಕೆ ಈಶ್ವರೀಯ ಲಾಟರಿ ಎಂದು ಹೇಳಲಾಗುತ್ತದೆ. ಕೆಲವರಿಗೆ ಚಿಕ್ಕ ಲಾಟರಿ, ಕೆಲವರಿಗೆ ದೊಡ್ಡ ಲಾಟರಿಯಿರುತ್ತದೆ ಹಾಗೆಯೇ ರಾಜಧಾನಿಯದೂ ಲಾಟರಿಯಾಗಿದೆ. ಆತ್ಮವು ಎಂತಹ ಕರ್ಮ ಮಾಡುವುದೋ ಅಂತಹ ಲಾಟರಿ ಸಿಗುತ್ತದೆ. ಕೆಲವರು ಬಡವರಾಗುತ್ತಾರೆ, ಕೆಲವರು ಸಾಹುಕಾರರಾಗುತ್ತಾರೆ, ಈ ಸಮಯದಲ್ಲಿ ತಾವು ಮಕ್ಕಳಿಗೆ ತಂದೆಯಿಂದ ಪೂರ್ಣ ಲಾಟರಿಯು ಸಿಗುತ್ತದೆ. ಈ ಸಮಯದ ಪುರುಷಾರ್ಥದ ಮೇಲೆ ಬಹಳ ಆಧಾರಿತವಾಗಿದೆ. ನಂಬರವನ್ ಪುರುಷಾರ್ಥ ಆಗಿದೆ - ನೆನಪು. ಅಂದಮೇಲೆ ಮೊದಲು ಯೋಗ ಬಲದಿಂದ ಸ್ವಚ್ಛವಾಗಬೇಕು. ನಿಮಗೂ ಗೊತ್ತಿದೆ, ನಾವೆಷ್ಟು ತಂದೆಯನ್ನು ನೆನಪು ಮಾಡುತ್ತೇವೆಯೋ ಅಷ್ಟು ಜ್ಞಾನದ ಧಾರಣೆಯಾಗುವುದು ಮತ್ತು ಅನ್ಯರನ್ನೂ ತಮ್ಮ ಪ್ರಜೆಗಳನ್ನಾಗಿ ಮಾಡಿಕೊಳ್ಳಬಹುದು. ಭಲೇ ಯಾವುದೇ ಧರ್ಮದವರಿರಬಹುದು, ಪರಸ್ಪರ ಮಿಲನ ಮಾಡುತ್ತೀರೆಂದರೆ ತಂದೆಯ ಪರಿಚಯ ಕೊಡಿ. ಮುಂದೆ ಹೋದಂತೆ ಅವರೂ ನೋಡುತ್ತಾರೆ - ವಿನಾಶವು ಸನ್ಮುಖದಲ್ಲಿ ನಿಂತಿದೆ. ವಿನಾಶದ ಸಮಯದಲ್ಲಿ ಮನುಷ್ಯರಿಗೆ ವೈರಾಗ್ಯ ಬರುತ್ತದೆ. ನಾವಂತೂ ಕೇವಲ ಇಷ್ಟನ್ನು ತಿಳಿಸಬೇಕು - ತಾವು ಆತ್ಮರಾಗಿದ್ದೀರಿ. ಹೇ ಭಗವಂತನೇ ಎಂದು ಯಾರು ಹೇಳಿದರು? ಆತ್ಮ. ಈಗ ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ - ನಾನು ನಿಮ್ಮ ಮಾರ್ಗದರ್ಶಕನಾಗಿ ನಿಮ್ಮನ್ನು ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗುವೆನು ಬಾಕಿ ಆತ್ಮವೆಂದೂ ವಿನಾಶವಾಗುವುದಿಲ್ಲ ಅಥವಾ ಮೋಕ್ಷದ ಪ್ರಶ್ನೆಯೂ ಇಲ್ಲ. ಪ್ರತಿಯೊಬ್ಬರೂ ಸಹ ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸಬೇಕು. ಆತ್ಮಗಳೆಲ್ಲವೂ ಅವಿನಾಶಿಯಾಗಿದೆ, ಎಂದೂ ವಿನಾಶವಾಗುವುದಿಲ್ಲ. ಆದರೆ ಅಲ್ಲಿಗೆ ಹೋಗುವುದಕ್ಕಾಗಿ ತಂದೆಯನ್ನು ನೆನಪು ಮಾಡಿ ಆಗ ವಿಕರ್ಮ ವಿನಾಶವಾಗುತ್ತದೆ, ಮನೆಗೆ ಹೊರಟು ಹೋಗುತ್ತೀರಿ. ಕೊನೆಯಲ್ಲಿ ಎಲ್ಲರೂ ಹಿಂತಿರುಗಿ ಹೋಗಬೇಕೆಂದು ದೊಡ್ಡ-ದೊಡ್ಡ ಸನ್ಯಾಸಿಗಳೂ ತಿಳಿಯುತ್ತಾರೆ. ನಿಮ್ಮ ಸಂದೇಶವು ಎಲ್ಲರ ಬುದ್ಧಿಯಲ್ಲಿಯೂ ನಾಟುತ್ತದೆ ಆದ್ದರಿಂದಲೇ ಅಹೋ ಪ್ರಭು! ನಿಮ್ಮ ಗತಿ-ಮತ ನಿಮಗೇ ಗೊತ್ತು ಎಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಯಾರಿಗೆ ಮತ ಕೊಡುತ್ತಾರೆ? ಅಥವಾ ತಮ್ಮ ಬಳಿ ಇಟ್ಟುಕೊಳ್ಳುವರೇ? ಅವರ ಮತದಿಂದ ಸದ್ಗತಿ ಹೇಗಾಗುವುದು ಎಂಬುದನ್ನು ಅವಶ್ಯವಾಗಿ ತಿಳಿಸುತ್ತಾರಲ್ಲವೆ. ಆದರೆ ಮನುಷ್ಯರು ಇದನ್ನು ನಿಮ್ಮ ಗತಿ-ಮತ ನಿಮಗೇ ಗೊತ್ತಿದೆ, ನಮಗೆ ಗೊತ್ತಿಲ್ಲವೆಂದು ಹೇಳುತ್ತಾರೆ. ಈ ಮಾತು ಸರಿಯಾಗಿದೆಯೇ! ತಂದೆಯು ತಿಳಿಸುತ್ತಾರೆ - ಈ ಶ್ರೀಮತದಿಂದ ನಿಮ್ಮ ಗತಿ (ಮುಕ್ತಿ) ಯಾಗುತ್ತದೆ. ಈಗ ನಿಮಗೆ ತಿಳಿದಿದೆ - ತಂದೆಗೆ ಏನು ತಿಳಿದಿದೆಯೋ ಅದನ್ನು ನಿಮಗೆ ಕಲಿಸುತ್ತಾರೆ. ನಾವು ತಂದೆಯನ್ನು ಅರಿತಿದ್ದೇವೆಂದು ನೀವು ಹೇಳುತ್ತೀರಿ, ಆದರೆ ನಿಮ್ಮ ಗತಿಮತ ನಿಮಗೇ ಗೊತ್ತೆಂದು ಮನುಷ್ಯರು ಹೇಳುತ್ತಾರೆ ಆದರೆ ನೀವು ಈ ರೀತಿ ಹೇಳುವುದಿಲ್ಲ - ಬುದ್ಧಿಯಲ್ಲಿ ಪೂರ್ಣ ಜ್ಞಾನವು ಕುಳಿತುಕೊಳ್ಳುವುದರಲ್ಲಿಯೂ ಸಹ ಸಮಯ ಹಿಡಿಸುತ್ತದೆ. ಇನ್ನೂ ಯಾರೂ ಸಂಪೂರ್ಣರಾಗಿಲ್ಲ. ಸಂಪೂರ್ಣರಾಗಿ ಬಿಟ್ಟರೆ ಇಲ್ಲಿಂದ ಹೊರಟು ಹೋಗುವರು ಆದರೆ ಯಾರೂ ಹೋಗುವಂತಿಲ್ಲ. ಏಕೆಂದರೆ ಇನ್ನೂ ಪುರುಷಾರ್ಥ ಮಾಡುತ್ತಿದ್ದಾರೆ. ಬ್ರಹ್ಮಾ ತಂದೆಗೆ ಭಲೇ ವೈರಾಗ್ಯ ಬಂದಿತು, ನಾನು ಡಬಲ್ ಕಿರೀಟಧಾರಿಯಾಗುತ್ತೇನೆ ಎಂಬುದನ್ನು ನೋಡಿದರೆ ಇದನ್ನೂ ಸಹ ನಾಟಕರದನುಸಾರ ತಂದೆಯು ತೋರಿಸಿದರು. ನಾನಂತೂ (ಬ್ರಹ್ಮಾ) ತಕ್ಷಣ ಖುಷಿಯಾಗಿ ಬಿಟ್ಟೆನು, ಆ ಖುಷಿಯಲ್ಲಿ ಎಲ್ಲರನ್ನು ಬಿಟ್ಟೆನು. ವಿನಾಶವನ್ನೂ ನೋಡಿದೆನು, ಚತುರ್ಭುಜ ವಿಷ್ಣುವನ್ನೂ ನೋಡಿದೆನು ಈಗ ರಾಜ್ಯಭಾಗ್ಯವು ಸಿಗುತ್ತದೆ, ಸ್ವಲ್ಪ ದಿನಗಳಲ್ಲಿಯೇ ವಿನಾಶವಾಗಿ ಬಿಡುತ್ತದೆ ಎಂದು ತಿಳಿದ ಕೂಡಲೇ ಇಷ್ಟೂ ನಶೆಯೇರಿ ಬಿಟ್ಟಿತು. ಈಗಂತು ತಿಳಿಯುತ್ತದೆಯಲ್ಲವೆ. ಇದು ಸರಿಯಾಗಿದೆ, ರಾಜಧಾನಿಯೂ ಆಗುತ್ತದೆ, ಅನೇಕರಿಗೆ ರಾಜ್ಯಭಾಗ್ಯವೂ ಸಿಗುತ್ತದೆ, ನಾವೊಬ್ಬರೇ ಹೋಗಿ ಏನು ಮಾಡುವುದು? ಈ ಜ್ಞಾನವು ಈಗ ಸಿಗುತ್ತದೆ. ಮೊದಲು ಖುಷಿಯ ನಶೆಯೇರಿ ಬಿಟ್ಟಿತು. ಈಗಂತೂ ಎಲ್ಲರೂ ಪುರುಷಾರ್ಥ ಮಾಡಬೇಕೆಂದಾಗ ನೀವು ಪುರುಷಾರ್ಥಕ್ಕಾಗಿಯೇ ಕುಳಿತಿದ್ದೀರಿ. ಮುಂಜಾನೆ ನೆನಪಿನಲ್ಲಿ ಕುಳಿತುಕೊಳ್ಳುತ್ತೀರಿ. ಹೀಗೆ ಕುಳಿತುಕೊಳ್ಳುವುದು ಒಳ್ಳೆಯದಾಗಿದೆ. ನಿಮಗೆ ಗೊತ್ತಿದೆ - ತಂದೆಯು ಬಂದಿದ್ದಾರೆ ಆದರೆ ತಂದೆಯು ಬಂದರೋ ಅಥವಾ ಈ ದಾದಾರವರು ಬಂದರೋ ಎಂದು ಬೆಲ್ಲಕ್ಕೆ ಗೊತ್ತು, ಬೆಲ್ಲದ ಚೀಲಕ್ಕೆ ಗೊತ್ತು. ಕೆಲವರಿಗೆ ಇದೂ ಗೊತ್ತಾಗುವುದಿಲ್ಲ. ತಂದೆಯು ಒಬ್ಬೊಬ್ಬ ಮಗುವನ್ನೂ ನೋಡುತ್ತಿರುತ್ತಾರೆ, ಒಬ್ಬೊಬ್ಬರಿಗು ನೋಡಿ ಸಕಾಶ ಕೊಡುತ್ತಿರುತ್ತಾರೆ. ಯೋಗ ಅಗ್ನಿಯಾಗಿದೆಯಲ್ಲವೆ. ಯೋಗಾಗ್ನಿಯಿಂದ ವಿಕರ್ಮಗಳು ಭಸ್ಮವಾಗಿ ಬಿಡುತ್ತವೆ. ಹೇಗೆ ಕುಳಿತು ಸಕಾಶವನ್ನು ಕೊಡುತ್ತಾರೆ, ಒಂದೊಂದು ಆತ್ಮಕ್ಕೂ ಸರ್ಚ್ಲೈಟ್ ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ- ನಾನು ಪ್ರತಿಯೊಂದು ಆತ್ಮಕ್ಕೂ ಕರೆಂಟ್ ಕೊಡುತ್ತೇನೆ ಅದರಿಂದ ಶಕ್ತಿಯು ತುಂಬುತ್ತಾ ಹೋಗುತ್ತದೆ. ಒಂದು ವೇಳೆ ಯಾರ ಬುದ್ಧಿಯಾದರೂ ಹೊರಗಡೆ ಅಲೆದಾಡುತ್ತಿದ್ದರೆ ಅಂತಹವರು ಕರೆಂಟನ್ನು ಕ್ಯಾಚ್ ಮಾಡಲು ಸಾಧ್ಯವಿಲ್ಲ. ಬುದ್ಧಿಯು ಅಲ್ಲಿ-ಇಲ್ಲಿ ಅಲೆದಾಡುತ್ತಿರುತ್ತದೆ ಮತ್ತೆ ಅಂತಹವರಿಗೆ ಸಿಗುವುದಾದರೂ ಏನು? ನೀವು ಪ್ರೀತಿ ಮಾಡುತ್ತೀರೆಂದರೆ ಪ್ರೀತಿಯನ್ನು ಪಡೆಯುತ್ತೀರಿ. ಬುದ್ಧಿಯು ಹೊರಗಡೆ ಅಲೆಯುತ್ತಿದ್ದರೆ ಬ್ಯಾಟರಿಯು ಚಾರ್ಜ್ ಆಗುವುದಿಲ್ಲ. ತಂದೆಯು ಬ್ಯಾಟರಿಯನ್ನು ಚಾರ್ಜ್ ಮಾಡಲು ಬರುತ್ತಾರೆ, ಅವರ ಕರ್ತವ್ಯವೇ ಸೇವೆ ಮಾಡುವುದಾಗಿದೆ. ಆದರೆ ಮಕ್ಕಳು ಆ ಸೇವೆಯನ್ನು ಸ್ವೀಕಾರ ಮಾಡುತ್ತಾರೆಯೇ ಅಥವಾ ಇಲ್ಲವೆ ಎಂಬುದು ಅವರ ಆತ್ಮಕ್ಕೆ ಗೊತ್ತು. ಯಾವ-ಯಾವ ವಿಚಾರಗಳಲ್ಲಿ ಕುಳಿತಿರುತ್ತಾರೆ ಎಂಬುದನ್ನು ತಂದೆಯು ತಿಳಿಸುತ್ತಾರೆ. ನಾನೂ ಪರಮ ಆತ್ಮನಾಗಿದ್ದೇನೆ, ನಾನು ಬ್ಯಾಟರಿಯ ಜೊತೆ ಯೋಗವನ್ನಿಡುತ್ತೀರಿ. ನಾನೂ ಸಹ ಸಕಾಶ ನೀಡುತ್ತೇನೆ. ಬಹಳ ಪ್ರೀತಿಯಿಂದ ಒಬ್ಬೊಬ್ಬರಿಗೂ ಸಕಾಶ ಕೊಡುತ್ತೇನೆ, ನೀವು ತಂದೆಯನ್ನು ನೆನಪು ಮಾಡಲು ಕುಳಿತುಕೊಳ್ಳುತ್ತೀರಿ ಅಂದಮೇಲೆ ತಂದೆಯೂ ಸಹ ಹೇಳುತ್ತಾರೆ - ನಾನು ಒಂದೊಂದು ಆತ್ಮಕ್ಕೂ ಸಹ ಸಕಾಶ ಕೊಡುತ್ತೇನೆ. ಸನ್ಮುಖದಲ್ಲಿ ಕುಳಿತು ಸಕಾಶವನ್ನು ಕೊಡುತ್ತೇನೆ. ನೀವಂತೂ ಈ ರೀತಿ ಹೇಳುವುದಿಲ್ಲ, ಯಾರು ಇದನ್ನು ಸ್ವೀಕರಿಸುತ್ತಾರೆಯೋ ಅವರ ಬ್ಯಾಟರಿಯು ತುಂಬುತ್ತಾ ಹೋಗುವುದು. ತಂದೆಯು ದಿನ-ಪ್ರತಿದಿನ ಯುಕ್ತಿಗಳನ್ನಂತೂ ತಿಳಿಸುತ್ತಿರುತ್ತಾರೆ ಆದರೆ ಅದನ್ನು ತಿಳಿಯುವುದು, ತಿಳಿಯದೇ ಇರುವುದು, ಇದು ನಂಬರವಾರ್ ವಿದ್ಯಾರ್ಥಿಗಳ ಮೇಲೆ ಆಧಾರಿತವಾಗಿರುತ್ತದೆ. ನಿಮಗೆ ಹಸಿ ಶಕ್ತಿಶಾಲಿ ಪದಾರ್ಥಗಳು ಸಿಗುತ್ತಿರುತ್ತವೆ ಅಂದಾಗ ನಿಮಗೆ ಜೀರ್ಣಿಸಿಕೊಳ್ಳುವ ಶಕ್ತಿಯು ಬೇಕಲ್ಲವೆ! ಇದು ದೊಡ್ಡ ಲಾಟರಿಯಾಗಿದೆ, ಇದು ಜನ್ಮ-ಜನ್ಮಾಂತರ, ಕಲ್ಪ-ಕಲ್ಪಾಂತರದ ನಾಟಕವಾಗಿದೆ, ಇದರ ಮೇಲೆ ಪೂರ್ಣ ಗಮನ ನೀಡಬೇಕಾಗಿದೆ. ತಂದೆಯಿಂದ ನಾವು ಶಕ್ತಿಯನ್ನು ಪಡೆಯುತ್ತಿದ್ದೇವೆ. ತಂದೆಯೂ ಸಹ ಇವರ ಭೃಕುಟಿಯ ಮಧ್ಯಭಾಗದಲ್ಲಿ ಇವರ ಆತ್ಮದ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ. ನೀವೂ ಸಹ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು, ಈ ಬ್ರಹ್ಮಾರವರನ್ನಲ್ಲ. ನಾವು ಆ ತಂದೆಯೊಂದಿಗೆ ಯೋಗವನ್ನಿಟ್ಟು ಕುಳಿತಿದ್ದೇವೆ. ಇವರನ್ನು ನೋಡುತ್ತಿದ್ದರೂ ಸಹ ಆ ತಂದೆಯನ್ನು ನೋಡುತ್ತೇವೆ. ಇದು ಆತ್ಮದ ಮಾತೇ ಆಗಿದೆಯಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಆತ್ಮವನ್ನು ಸ್ವಚ್ಛ ಮಾಡಿಕೊಳ್ಳಲು ಬೆಳಗ್ಗೆ-ಬೆಳಗ್ಗೆ ತಂದೆಯಿಂದ ಸರ್ಚ್ಲೈಟ್ ತೆಗೆದುಕೊಳ್ಳಬೇಕಾಗಿದೆ. ಬುದ್ಧಿಯೋಗವನ್ನು ಹೊರಗಿನ ಎಲ್ಲದರಿಂದ ತೆಗೆದು ಒಬ್ಬ ತಂದೆಯೊಂದಿಗೆ ಜೋಡಿಸಬೇಕಾಗಿದೆ. ತಂದೆಯ ಶಕ್ತಿಯನ್ನು ಕ್ಯಾಚ್ ಮಾಡಬೇಕಾಗಿದೆ.

2. ಪರಸ್ಪರ ಸಹೋದರ-ಸಹೋದರ ಎಂಬ ಸತ್ಯ ಪ್ರೀತಿಯಿಂದ ಇರಬೇಕಾಗಿದೆ. ಎಲ್ಲರಿಗೆ ಗೌರವ ಕೊಡಬೇಕಾಗಿದೆ. ಸಹೋದರ ಆತ್ಮವು ಅಕಾಲ ಸಿಂಹಾಸನದ ಮೇಲೆ ವಿರಾಜಮಾನವಾಗಿದೆ ಆದ್ದರಿಂದ ಭೃಕುಟಿಯಲ್ಲಿಯೇ ನೋಡಿ ಮಾತನಾಡಬೇಕಾಗಿದೆ.


ವರದಾನ:
ತಂದೆಯ ಸಂಸ್ಕಾರವನ್ನು ತನ್ನ ಮೂಲ ಸಂಸ್ಕಾರವನ್ನಾಗಿ ಮಾಡಿಕೊಳ್ಳುವಂತಹ ಶುಭ ಭಾವನೆ, ಶುಭ ಕಾಮನಾಧಾರಿ ಭವ.

ಇಲ್ಲಿಯವರೆಗೂ ಎಷ್ಟೋ ಮಕ್ಕಳಲ್ಲಿ ಫೀಲಿಂಗ್ನ, ಪಕ್ಕದಲ್ಲಿಡುವಂತಹ, ಪರಚಿಂತನೆ ಮಾಡುವ ಅಥವಾ ಕೇಳುವ ಭಿನ್ನ-ಭಿನ್ನ ಸಂಸ್ಕಾರವಿದೆ, ಅವುಗಳಿಗೆ ಹೇಳುವಿರಿ ಏನು ಮಾಡುವುದು ಇದು ನನ್ನ ಸಂಸ್ಕಾರವಾಗಿದೆ..... ಈ ನನ್ನ ಎನ್ನುವ ಶಬ್ಧವೇ ಪುರುಷಾರ್ಥವನ್ನು ಸಡಿಲ ಮಾಡಿ ಬಿಡುತ್ತದೆ. ಇದು ರಾವಣನ ವಸ್ತುವಾಗಿದೆ, ನನ್ನದಲ್ಲ. ಆದರೆ ಯಾವುದು ತಂದೆಯ ಸಂಸ್ಕಾರವಾಗಿದೆ ಅದೇ ಬ್ರಾಹ್ಮಣರ ಮೂಲ ಸಂಸ್ಕಾರವಾಗಿದೆ ವಿಶ್ವ ಕಲ್ಯಾಣಕಾರಿ, ಶುಭ ಚಿಂತನಧಾರಿ, ಎಲ್ಲರ ಪ್ರತಿ ಶುಭ ಭಾವನೆ, ಶುಭ ಕಾಮನಾಧಾರಿ.

ಸ್ಲೋಗನ್:
ಯಾರಲ್ಲಿ ಸಮರ್ಥತೆಯಿದೆ ಅವರೇ ಸರ್ವ ಶಕ್ತಿಗಳ ಖಜಾನೆಯ ಅಧಿಕಾರಿಯಾಗಿದ್ದಾರೆ.