17.01.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮಗೆ
ಆಶ್ಚರ್ಯವಾಗಬೇಕಾಗಿದೆ ನಮಗೆ ಎಂಥಹ ಮಧುರವಾದ ತಂದೆಯು ಸಿಕ್ಕಿದ್ದಾರೆ, ಅವರಿಗೆ ಯಾವುದೇ ಆಸೆಯಿಲ್ಲ
ಮತ್ತು ಎಷ್ಟೊಂದು ಭಲಿಷ್ಠ ದಾತನಾಗಿದ್ದಾರೆ, ಸ್ವಲ್ಪವೂ ತೆಗೆದುಕೊಳ್ಳುವಂತಹ ಇಚ್ಛೆಯಿಲ್ಲ”
ಪ್ರಶ್ನೆ:
ತಂದೆಯ
ಅದ್ಭುತವಾದ ಪಾತ್ರವು ಯಾವುದಾಗಿದೆ? 100% ನಿಷ್ಕಾಮಿ ತಂದೆಯು ಯಾವ ಇಚ್ಛೆಯಿಂದ ಸೃಷ್ಟಿಗೆ
ಬಂದಿದ್ದಾರೆ?
ಉತ್ತರ:
ವಿದ್ಯೆಯನ್ನು
ಓದಿಸುವುದು ತಂದೆಯ ಅದ್ಭುತವಾದ ಪಾತ್ರವಾಗಿದೆ. ಅವರು ಸೇವೆ ಮಾಡುವುದಕ್ಕಾಗಿಯೇ ಬರುತ್ತಾರೆ, ಪಾಲನೆ
ಮಾಡುತ್ತಾರೆ. ಮಧುರ ಮಕ್ಕಳೇ - ಇದನ್ನು ಮಾಡಿ ಎಂದು ಪ್ರೀತಿಯಿಂದ ಹೇಳುತ್ತಾರೆ. ಜ್ಞಾನವನ್ನು
ತಿಳಿಸುತ್ತಾರೆ ಆದರೆ ಏನನ್ನೂ ತೆಗೆದುಕೊಳ್ಳುವುದಿಲ್ಲ. 100% ನಿಷ್ಕಾಮಿ ತಂದೆಗೆ ನಾನು ಹೋಗಿ
ನನ್ನ ಮಕ್ಕಳಿಗೆ ಮಾರ್ಗವನ್ನು ತೋರಿಸಬೇಕೆಂಬ ಇಚ್ಛೆಯಾಯಿತು. ಸೃಷ್ಟಿಯ ಆದಿ-ಮಧ್ಯ-ಅಂತ್ಯದ
ಸಮಾಚಾರವನ್ನು ತಿಳಿಸಲೇ ಮಕ್ಕಳು ಗುಣವಂತರಾಗಲಿ ಇದೇ ತಂದೆಯ ಇಚ್ಛೆಯಾಗಿದೆ.
ಓಂ ಶಾಂತಿ.
ಮಧುರಾತಿ ಮಧುರ
ಮಕ್ಕಳಿಗೆ ಏನನ್ನೂ ತೆಗೆದುಕೊಳ್ಳದಿರುವ ಆತ್ಮೀಯ ತಂದೆಯು ಸಿಕ್ಕಿದ್ದಾರೆ. ಏನನ್ನೂ
ತಿನ್ನುವುದಿಲ್ಲ, ಕುಡಿಯುವುದಿಲ್ಲ ಅಂದಾಗ ಅವರಿಗೆ ಯಾವುದೇ ಆಸೆ ಅಥವಾ ಆಕಾಂಕ್ಷೆಗಳಿಲ್ಲ ಮತ್ತು
ಮನುಷ್ಯರಿಗೆ ಒಂದಲ್ಲ ಒಂದು ಆಸೆಯಿದ್ದೇ ಇರುತ್ತದೆ. ಧನವಂತರಾಗಬೇಕು, ಇಂತಹವರಾಗಬೇಕೆನ್ನುವುದು
ಆದರೆ ತಂದೆಗೆ ಯಾವುದೇ ಆಸೆಯಿಲ್ಲ, ಅವರು ಅಭೋಕ್ತನಾಗಿದ್ದಾರೆ. ಒಬ್ಬ ಸಾಧು ನಾನು ಏನನ್ನೂ
ತಿನ್ನುವುದಿಲ್ಲ, ಕುಡಿಯುವುದಿಲ್ಲವೆಂದು ಹೇಳುತ್ತಿದ್ದನು ಅದನ್ನು ನೀವು ಕೇಳಿದ್ದೀರಿ. ಇದನ್ನು
ತಂದೆಯಿಂದ ಕಾಪಿ ಮಾಡುತ್ತಾರೆ. ವಿಶ್ವದಲ್ಲಿ ಏನನ್ನೂ ತೆಗೆದುಕೊಳ್ಳದಿರುವವರು ಒಬ್ಬ ತಂದೆಯೇ
ಆಗಿದ್ದಾರೆ. ಅಂದಾಗ ಮಕ್ಕಳಿಗೆ ನಾನು ಯಾರ ಮಗುವಾಗಿದ್ದೇನೆ! ಎನ್ನುವ ಸಂಕಲ್ಪ ಬರಬೇಕು. ತಂದೆಯು
ಹೇಗೆ ಇವರಲ್ಲಿ (ಬ್ರಹ್ಮಾ) ಬಂದು ಪ್ರವೇಶ ಮಾಡಿದ್ದಾರೆ ಅವರಿಗೆ ತಮ್ಮದೇ ಆದ ಯಾವುದೇ ಇಚ್ಛೆಯಿಲ್ಲ.
ಸ್ವಯಂ ಗುಪ್ತವಾಗಿದ್ದಾರೆ ಅವರ ಜೀವನ ಕಥೆಯನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ತಂದೆಯನ್ನು
ಸಂಪೂರ್ಣವಾಗಿ ತಿಳಿದುಕೊಂಡಿರುವವರು ನಿಮ್ಮಲ್ಲಿಯೂ ಕೆಲವರೇ ಇದ್ದಾರೆ. ನಮಗೆ ಅಂತಹ ತಂದೆಯು
ಸಿಕ್ಕಿದ್ದಾರೆ - ಏನನ್ನೂ ತಿನ್ನುವುದಿಲ್ಲ, ಕುಡಿಯುವುದಿಲ್ಲ, ತೆಗೆದುಕೊಳ್ಳುವುದಿಲ್ಲ. ಅವರಿಗೆ
ಯಾವುದರ ಅವಶ್ಯಕತೆಯೇ ಇಲ್ಲವೆಂದು ನಿಮ್ಮ ಮನಸ್ಸಿನಲ್ಲಿ ಬರಬೇಕಾಗಿದೆ. ಈ ರೀತಿ ಬೇರೆ ಯಾರೂ ಇಲ್ಲ.
ಒಬ್ಬನೇ ನಿರಾಕಾರ, ಸರ್ವಶ್ರೇಷ್ಠ ಭಗವಂತನೆಂದು ಗಾಯನ ಮಾಡುತ್ತಾರೆ, ಅವರನ್ನೇ ಎಲ್ಲರೂ ನೆನಪು
ಮಾಡುತ್ತಾರೆ, ಅವರೇ ನಿಮ್ಮ ತಂದೆ ಅಭೋಕ್ತ, ಶಿಕ್ಷಕ-ಅಭೋಕ್ತ ಅಂದಾಗ ಸದ್ಗುರುವೂ
ಅಭೋಕ್ತನಾಗಿದ್ದಾರೆ. ಏನನ್ನೂ ತೆಗೆದುಕೊಳ್ಳುವುದಿಲ್ಲ. ಅವರು ತೆಗೆದುಕೊಂಡಾದರೂ ಏನು ಮಾಡುತ್ತಾರೆ!
ಇವರು ವಿಚಿತ್ರವಾದ ತಂದೆಯಾಗಿದ್ದಾರೆ. ತಮಗಾಗಿ ಯಾವುದೇ ಆಸೆಯಿಲ್ಲ. ಈ ರೀತಿ ಯಾವುದೇ ಮನುಷ್ಯರೂ
ಸಹ ಇಲ್ಲ. ಮನುಷ್ಯರಿಗೆ ಊಟ, ಬಟ್ಟೆ ಮುಂತಾದವುಗಳೆಲ್ಲವೂ ಬೇಕು ಆದರೆ ತಂದೆಗೆ ಏನೂ ಬೇಡ.
ಪತಿತರಿಂದ ಪಾವನ ಮಾಡಿ ಎಂದು ನನ್ನನ್ನು ಕರೆಯುತ್ತಾರೆ. ನಾನು ನಿರಾಕಾರನಾಗಿದ್ದೇನೆ, ಏನನ್ನೂ
ತೆಗೆದುಕೊಳ್ಳುವುದಿಲ್ಲ. ನನಗೆ ನನ್ನದೇ ಆದ ಆಕಾರವಿಲ್ಲ ಕೇವಲ ಬ್ರಹ್ಮನಲ್ಲಿ ಪ್ರವೇಶ ಮಾಡುತ್ತೇನೆ.
ಬಾಕಿ ತಿನ್ನುವುದು, ಕುಡಿಯುವುದು ಬ್ರಹ್ಮನ ಆತ್ಮವಾಗಿದೆ. ನನಗೆ ಯಾವುದೇ ಆಸೆಯಿಲ್ಲ - ನಾನು
ಸೇವೆಗಾಗಿಯೇ ಬರುತ್ತೇನೆ. ಯೋಚಿಸಬೇಕಾಗಿದೆ. ಎಷ್ಟೊಂದು ವಿಚಿತ್ರವಾದ ಆಟವಾಗಿದೆ. ಒಬ್ಬ ತಂದೆಯು
ಎಲ್ಲರಿಗೂ ಪ್ರಿಯವಾಗಿದ್ದಾರೆ. ಅವರಿಗೆ ಸ್ವಲ್ಪವೂ ಆಸೆಯಿಲ್ಲ ಕೇವಲ ಬಂದು ವಿದ್ಯೆಯನ್ನು
ಓದಿಸುತ್ತಾರೆ ಮತ್ತು ಪಾಲನೆಯನ್ನೂ ಮಾಡುತ್ತಾರೆ. ಮಧುರ ಮಕ್ಕಳೇ ಹೀಗೆ ಮಾಡಿ ಎಂದು ಪ್ರೀತಿಯಿಂದ
ಹೇಳುತ್ತಾರೆ. ಜ್ಞಾನವನ್ನು ತಿಳಿಸುತ್ತಾರೆ ಆದರೆ ಏನನ್ನೂ ತೆಗೆದುಕೊಳ್ಳುವುದಿಲ್ಲ.
ಮಾಡಿ-ಮಾಡಿಸುವವರು ತಂದೆಯಾಗಿದ್ದಾರೆ. ಶಿವ ತಂದೆಗೆ ಏನಾದರೂ ಕೊಟ್ಟರೆ ಅವರು ಏನು ಮಾಡುತ್ತಾರೆ,
ಟೋಲಿಯನ್ನು ತೆಗೆದುಕೊಂಡು ತಿನ್ನುತ್ತಾರೆಯೇ? ಶಿವ ತಂದೆಗೆ ಶರೀರವೇ ಇಲ್ಲ ಅಂದಾಗ
ತೆಗೆದುಕೊಳ್ಳುವುದಾದರೂ ಹೇಗೆ? ಎಷ್ಟೊಂದು ಸರ್ವೀಸ್ ಮಾಡುತ್ತಾರೆ. ಎಲ್ಲರಿಗೂ ಒಳ್ಳೊಳ್ಳೆಯ
ಮತವನ್ನು ಕೊಟ್ಟು ಹೂವನ್ನಾಗಿ ಮಾಡುತ್ತಾರೆ. ಅಂದಾಗ ನೀವು ಮಕ್ಕಳಿಗೆ ಆಶ್ಚರ್ಯವಾಗಬೇಕು. ತಂದೆಯು
ಎಂತಹ ದಾತನಾಗಿದ್ದಾರೆ ಅವರಿಗೆ ಯಾವುದೇ ಇಚ್ಛೆಯಿಲ್ಲ. ಬ್ರಹ್ಮಾರವರಿಗೆ ಭಲೇ ಚಿಂತೆಯಿದೆ -
ಇಷ್ಟೊಂದು ಮಕ್ಕಳನ್ನು ಸಂಭಾಲನೆ ಮಾಡಬೇಕು, ಊಟ-ಪಾನೀಯಗಳನ್ನು ಕೊಡಬೇಕು. ಯಾವ ಹಣ ಬರುತ್ತದೆಯೋ ಅದು
ಶಿವ ತಂದೆಗಾಗಿ ಬರುತ್ತದೆ. ನಾನಂತೂ ಎಲ್ಲವನ್ನೂ ಸ್ವಾಹಾ ಮಾಡಿದೆ. ತಂದೆಯ ಶ್ರೀಮತದಂತೆ ನಡೆದು
ತಮ್ಮೆದೆಲ್ಲವನ್ನೂ ಸಫಲ ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ. ತಂದೆಯಂತೂ 100%
ನಿಷ್ಕಾಮಿಯಾಗಿದ್ದಾರೆ. ಹೋಗಿ ಎಲ್ಲರಿಗೂ ಮಾರ್ಗವನ್ನು ತೋರಿಸಬೇಕು ಎಂಬುದೇ ಚಿಂತೆಯಿರುತ್ತದೆ.
ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಸಮಾಚಾರವನ್ನು ಹೇಳಬೇಕೆನ್ನುವುದು ಬೇರೆ ಯಾರಿಗೂ ಗೊತ್ತಿಲ್ಲ. ತಾವು
ಮಕ್ಕಳು ಮಾತ್ರ ತಿಳಿದುಕೊಂಡಿದ್ದೀರಿ. ತಂದೆಯು ಶಿಕ್ಷಕನ ರೂಪದಲ್ಲಿ ಓದಿಸುತ್ತಾರೆ. ಶುಲ್ಕ
ಇತ್ಯಾದಿಯನ್ನು ತೆಗೆದುಕೊಳ್ಳುವುದಿಲ್ಲ. ತಾವು ಶಿವ ತಂದೆಯ ಹೆಸರಿನಲ್ಲಿ ತೆಗೆದುಕೊಳ್ಳುತ್ತೀರಿ,
ಅಲ್ಲಿ ಅದರ ಫಲವು ಸಿಗುತ್ತದೆ. ತಂದೆಗೆ ನಾನು ನರನಿಂದ ನಾರಾಯಣನಾಗಬೇಕೆಂಬ ಆಸೆಯಿದೆಯೇ? ತಂದೆಯಂತೂ
ಡ್ರಾಮಾನುಸಾರ ಓದಿಸುತ್ತಾರೆ, ನಾನು ಸರ್ವಶ್ರೇಷ್ಠ ಸಿಂಹಾಸನಾಧಿಕಾರಿ ಆಗಬೇಕೆಂಬ ಆಸೆಯಿದೆ ಎಂದಲ್ಲ.
ಪೂರ್ಣ ಆಧಾರವೇ ವಿದ್ಯೆ ಹಾಗೂ ದೈವೀ ಗುಣಗಳ ಮೇಲಿದೆ ಮತ್ತು ಬೇರೆಯವರಿಗೂ ಸಹ ಓದಿಸಬೇಕು.
ಡ್ರಾಮಾನುಸಾರವಾಗಿ ಕಲ್ಪದ ಮೊದಲಿನ ಹಾಗೆ ಇವರ ಯಾವ ಪಾತ್ರವು ನಡೆಯುತ್ತದೆಯೋ ಅದನ್ನು ಸಾಕ್ಷಿಯಾಗಿ
ನೋಡುತ್ತಾ ಮಕ್ಕಳಿಗೂ ಸಹ ತಾವು ಸಾಕ್ಷಿಯಾಗಿ ನೋಡಿ ಎಂದು ಹೇಳುತ್ತಾರೆ. ತಮ್ಮನ್ನೂ ಸಹ ನೋಡಿಕೊಳ್ಳಿ
- ನಾವು ಓದುತ್ತೇವೆಯೋ ಅಥವಾ ಇಲ್ಲವೋ? ಶ್ರೀಮತದಂತೆ ನಡೆಯುತ್ತೇವೆಯೋ ಅಥವಾ ಇಲ್ಲವೋ? ಅನ್ಯರನ್ನು
ತಮ್ಮ ಸಮಾನ ಮಾಡಿಕೊಳ್ಳುವ ಸೇವೆಯನ್ನು ಮಾಡುತ್ತೇವೆಯೋ ಅಥವಾ ಇಲ್ಲವೋ? ತಂದೆಯಂತೂ ಇವರ(ಬ್ರಹ್ಮಾ)
ಮುಖದ ಆಧಾರ ಪಡೆದು ಹೇಳುತ್ತಾರೆ - ಆತ್ಮವಂತೂ ಚೈತನ್ಯವಲ್ಲವೆ. ಶವದಲ್ಲಿ ಬಂದು ಮಾತನಾಡಲು
ಸಾಧ್ಯವಿಲ್ಲ. ಅವಶ್ಯವಾಗಿ ಚೈತನ್ಯ ಶರೀರದಲ್ಲಿಯೇ ಬರುತ್ತಾರೆ. ತಂದೆಯು ಎಷ್ಟೊಂದು
ನಿಷ್ಕಾಮಿಯಾಗಿದ್ದಾರೆ, ಯಾವುದೇ ಆಸೆಯಿಲ್ಲ. ಲೌಕಿಕ ತಂದೆಗೆ ಮಕ್ಕಳು ದೊಡ್ಡವರಾದರೆ ನಂತರ ನನಗೆ
ಊಟ ಹಾಕುತ್ತಾರೆ ಎಂದು ತಿಳಿದುಕೊಂಡಿರುತ್ತಾರೆ. ಇವರಿಗಂತೂ ಯಾವುದೇ ಇಚ್ಛೆಗಳಿಲ್ಲ. ಡ್ರಾಮಾದಲ್ಲಿ
ನನ್ನ ಪಾತ್ರವೇ ಆ ರೀತಿಯಾಗಿದೆ, ಕೇವಲ ಬಂದು ಓದಿಸುತ್ತೇನೆ. ಇದೂ ಸಹ ನಿಶ್ಚಿತವಾಗಿದೆ. ಮನುಷ್ಯರು
ಡ್ರಾಮಾವನ್ನು ಸ್ವಲ್ಪವೂ ತಿಳಿದುಕೊಂಡಿಲ್ಲ. ತಾವು ಮಕ್ಕಳಿಗೆ ತಂದೆಯೇ ನಮಗೆ ಓದಿಸುತ್ತಾರೆಂಬ
ನಿಶ್ಚಯವಿದೆ. ಈ ಬ್ರಹ್ಮಾರವರೂ ಸಹ ಓದುತ್ತಾರೆ ಅವಶ್ಯವಾಗಿ ಇವರು ಎಲ್ಲರಿಗಿಂತ ಚೆನ್ನಾಗಿ
ಓದುತ್ತಿರಬಹುದು. ಶಿವತಂದೆಗೆ ಇವರೂ (ಬ್ರಹ್ಮಾ) ಸಹ ಒಳ್ಳೆಯ ಸಹಯೋಗಿಗಳಾಗಿದ್ದಾರೆ. ನಮ್ಮ ಬಳಿಯಂತೂ
ಸ್ವಲ್ಪವೂ ಹಣವಿಲ್ಲ. ಮಕ್ಕಳೇ ಹಣ ಕೊಡುತ್ತಾರೆ ಮತ್ತೆ ಪಡೆಯುತ್ತಾರೆ. ಎರಡು ಹಿಡಿಯಷ್ಟು
ಕೊಡುತ್ತಾರೆ ಮತ್ತೆ ಭವಿಷ್ಯದಲ್ಲಿ ಪಡೆಯುತ್ತಾರೆ. ಕೆಲವರ ಬಳಿ ಏನೂ ಇಲ್ಲ ಅಂದಮೇಲೆ ಏನನ್ನೂ
ಕೊಡುವುದಿಲ್ಲ. ಬಾಕಿ ಚೆನ್ನಾಗಿ ಓದಿದರೆ ಭವಿಷ್ಯದಲ್ಲಿ ಒಳ್ಳೆಯ ಪದವಿಯನ್ನು ಪಡೆಯುತ್ತಾರೆ. ನಾವು
ಹೊಸ ಪ್ರಪಂಚಕ್ಕಾಗಿ ಓದುತ್ತಿದ್ದೇವೆ ಎಂದು ಕೆಲವರಿಗೆ ಮಾತ್ರ ನೆನಪಿರುತ್ತದೆ. ಇದು ನೆನಪಿದ್ದರೂ
ಸಹ ಮನ್ಮನಾಭವವೇ ಆಗಿದೆ. ಬಹಳ ಮಂದಿ ಪ್ರಪಂಚದ ಮಾತುಗಳಲ್ಲಿಯೇ ಸಮಯವನ್ನು ವ್ಯರ್ಥ
ಮಾಡುತ್ತಿರುತ್ತಾರೆ. ಬಾಬಾ ಏನು ಓದಿಸುತ್ತಿದ್ದಾರೆ, ಹೇಗೆ ಓದಿಸುತ್ತಿದ್ದಾರೆ, ಎಷ್ಟು ಶ್ರೇಷ್ಠ
ಪದವಿಯನ್ನು ಪಡೆಯಬೇಕಿದೆ ಎಂಬುದೆಲ್ಲವನ್ನೂ ಮರೆತು ಬಿಡುತ್ತಾರೆ. ಪರಸ್ಪರ ಜಗಳ, ಹೊಡೆದಾಟಗಳಲ್ಲೇ
ಸಮಯ ವ್ಯರ್ಥ ಮಾಡುತ್ತಿರುತ್ತಾರೆ. ಯಾರು ದೊಡ್ಡ ಪರೀಕ್ಷೆಯನ್ನು ಉತ್ತೀರ್ಣ ಮಡುತ್ತಾರೆಯೋ ಅವರು
ಎಂದೂ ಸಹ ತಮ್ಮ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಚೆನ್ನಾಗಿ ಓದಿ, ಶ್ರೀಮತದಂತೆಯೇ ನಡೆಯುತ್ತಾರೆ.
ಶ್ರೀಮತದಂತೆ ನಡೆಯಬೇಕಲ್ಲವೆ. ತಂದೆಯು ಹೇಳುತ್ತಾರೆ - ನೀವಂತೂ ಆಜ್ಞೆಯಂತೆ ನಡೆಯುವವರಲ್ಲ,
ತಂದೆಯನ್ನು ನೆನಪು ಮಾಡಿ ಎಂದು ಶ್ರೀಮತ ಕೊಡುತ್ತೇನೆ ಆದರೆ ನೀವು ಮರೆತು ಹೋಗುತ್ತೀರಿ ಇದಕ್ಕೆ
ಬಲಹೀನತೆ ಎಂದು ಹೇಳಬಹುದು. ಮಾಯೆಯು ಒಂದೇ ಸಲ ಮೂಗನ್ನು ಹಿಡಿದು ಪೆಟ್ಟು ಕೊಟ್ಟು ಬೀಳಿಸಿ ತಲೆಯ
ಮೇಲೆ ಕುಳಿತುಕೊಂಡು ಬಿಡುತ್ತದೆ. ಇದು ಯುದ್ಧದ ಮೈದಾನವಾಗಿದೆಯಲ್ಲವೆ ಅಂದಾಗ ಒಳ್ಳೊಳ್ಳೆಯ ಮಕ್ಕಳ
ಮೇಲೆ ಮಾಯೆಯು ಜಯ ಗಳಿಸಿ ಬಿಡುತ್ತದೆ ಆಗ ಯಾರ ಹೆಸರು ಕೆಟ್ಟು ಹೋಗುತ್ತದೆ? ಶಿವ ತಂದೆಯದು.
ಗುರುವಿನ ನಿಂಧಕರು ಪದವಿಯನ್ನು ಪಡೆಯುವುದಿಲ್ಲ ಎನ್ನುವುದು ಗಾಯನವಿದೆ. ಈ ರೀತಿ ಮಾಯೆಯಿಂದ
ಸೋಲುವವರು ನಂತರ ಪದವಿಯನ್ನು ಹೇಗೆ ಪಡೆಯುತ್ತಾರೆ! ನಾವು ಹೇಗೆ ಪುರುಷಾರ್ಥವನ್ನು ಮಾಡಿ ತಂದೆಯಿಂದ
ಆಸ್ತಿ ತೆಗೆದುಕೊಳ್ಳಲಿ ಎಂದು ತಮ್ಮ ಕಲ್ಯಾಣಕ್ಕಾಗಿ ಬುದ್ಧಿಯಲ್ಲಿ ವಿಚಾರ ಮಾಡಬೇಕು. ಒಳ್ಳೊಳ್ಳೆಯ
ಮಹಾರಥಿಗಳ ಹಾಗೆ ಎಲ್ಲರಿಗೂ ಮಾರ್ಗವನ್ನು ತಿಳಿಸಬೇಕು ಎಂದು ವಿಚಾರ ಮಾಡಬೇಕು. ತಂದೆಯಂತೂ
ಸರ್ವೀಸಿನ ಯುಕ್ತಿಗಳನ್ನು ಬಹಳ ಸಹಜವಾಗಿ ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ - ತಾವು ನನ್ನನ್ನು
ಕರೆಯುತ್ತಾ ಬಂದಿದ್ದೀರಿ, ಈಗ ನಾನು ತಿಳಿಸುತ್ತೇನೆ - ನನ್ನನ್ನು ನೆನಪು ಮಾಡಿದರೆ
ಪಾವನರಾಗುತ್ತೀರಿ. ಪಾವನ ಪ್ರಪಂಚದ ಚಿತ್ರವಿದೆಯಲ್ಲವೆ ಅಂದಾಗ ಇದೇ ಮುಖ್ಯವಾದುದಾಗಿದೆ. ಇಲ್ಲಿ
ಗುರಿಯನ್ನು ಇಡಲಾಗಿದೆ. ವೈದ್ಯರಾಗುವ ವಿದ್ಯೆಯನ್ನು ಓದುತ್ತಿದ್ದಾಗ ಅವರು ಸರ್ಜನ್ನ್ನು
ವಕೀಲರಾಗುವ ವಿದ್ಯೆಯನ್ನು ಓದುವಾಗ ಅವರ ಪ್ರಾಧ್ಯಾಪಕರನ್ನು ನೆನಪು ಮಾಡಬೇಕೆನ್ನುವುದೂ ಇಲ್ಲ.
ತಂದೆಯು ಹೇಳುತ್ತಾರೆ - ಕೇವಲ ನನ್ನೊಬ್ಬನನ್ನೇ ನೆನಪು ಮಾಡಿ. ಅಷ್ಟೇ ಸಾಕು ನಾನು ನಿಮ್ಮ ಎಲ್ಲಾ
ಮನೋಕಾಮನೆಗಳನ್ನು ಪೂರ್ಣ ಮಾಡುವವನಾಗಿದ್ದೇನೆ. ತಾವು ಕೇವಲ ನನ್ನನ್ನು ನೆನಪು ಮಾಡಿ. ಭಲೇ ಮಾಯೆಯು
ನಿಮ್ಮನ್ನು ಎಷ್ಟೇ ಸತಾಯಿಸಲಿ, ಯುದ್ಧದ ಮೈದಾನವಲ್ಲವೆ. ತಕ್ಷಣ ಜಯ ಗಳಿಸುತ್ತೇವೆ ಎಂದೇನಿಲ್ಲ.
ಇಲ್ಲಿಯ ತನಕ ಒಬ್ಬರೂ ಸಹ ಮಾಯೆಯ ಮೇಲೆ ವಿಜಯಿಗಳಾಗಿಲ್ಲ, ವಿಜಯಿಗಳಾದರೆ ಜಗತ್ಜೀತರಾಗಬೇಕು. ನಾನು
ನಿನ್ನ ಗುಲಾಮ.... ಎಂದು ಹಾಡುತ್ತಾರೆ. ಇಲ್ಲಿ ಮಾಯೆಯನ್ನು ಗುಲಾಮನನ್ನಾಗಿ ಮಾಡಿಕೊಳ್ಳಬೇಕು.
ಅಲ್ಲಿ ಮಾಯೆಯು ಎಂದೂ ಸಹ ದುಃಖವನ್ನು ಕೊಡುವುದಿಲ್ಲ. ಈಗಂತೂ ಪ್ರಪಂಚವು ಬಹಳ ಕೊಳಕಾಗಿದೆ.
ಪರಸ್ಪರದಲ್ಲಿ ದುಃಖವನ್ನೇ ಕೊಡುತ್ತಿರುತ್ತಾರೆ ಅಂದಮೇಲೆ ಎಷ್ಟು ಮಧುರ ತಂದೆ, ಇವರಿಗೆ ತಮ್ಮದೇ ಆದ
ಯಾವುದೇ ಇಚ್ಛೆಯಿಲ್ಲ. ಅಂತಹ ತಂದೆಯನ್ನು ನೆನಪು ಮಾಡುವುದಿಲ್ಲ ಅಥವಾ ಕೆಲವರು ಹೇಳುತ್ತಾರೆ - ನಾವು
ಶಿವ ತಂದೆಯನ್ನು ಒಪ್ಪುತ್ತೇವೆ, ಬ್ರಹ್ಮಾ ತಂದೆಯನ್ನಲ್ಲ ಆದರೆ ಇವರಿಬ್ಬರೂ ಒಟ್ಟಿಗೆ ಇದ್ದಾರೆ.
ದಲ್ಲಾಳಿಯಿಲ್ಲದೆ ವ್ಯಾಪಾರವಾಗಲು ಸಾಧ್ಯವೇ ಇಲ್ಲ. ತಂದೆಯ ರಥವಾಗಿದ್ದಾರೆ ಅಂದಾಗ ಇವರ ಹೆಸರೇ
ಭಾಗ್ಯಶಾಲಿ ರಥವಾಗಿದೆ. ಇದೂ ಸಹ ನಿಮಗೆ ತಿಳಿದಿದೆ ಎಲ್ಲರಿಗಿಂತ ನಂಬರ್ವನ್ ಶ್ರೇಷ್ಠರು
ಇವರಾಗಿದ್ದಾರೆ. ಶಾಲೆಯಲ್ಲಿ ಮಾನೀಟರ್ಗೆ ಮಾನ್ಯತೆಯಿರುತ್ತದೆ, ಗೌರವವನ್ನಿಡುತ್ತಾರೆ. ನಂಬರ್ವನ್
ಅಗಲಿ ಸಿಕ್ಕಿರುವ ಮಗು ಇವರಲ್ಲವೆ. ಅಲ್ಲಿಯೂ ಸಹ ಎಲ್ಲಾ ರಾಜರು ಇವರಿಗೆ (ಶ್ರೀ ನಾರಾಯಣ) ಗೌರವ
ಕೊಡಬೇಕು. ಇದು ಯಾವಾಗ ಅರ್ಥ ಮಾಡಿಕೊಳ್ಳುತ್ತಾರೆಯೋ ಆಗಲೇ ಗೌರವ ಕೊಡಬೇಕೆಂಬ ಬುದ್ಧಿ ಬರುತ್ತದೆ.
ಇಲ್ಲಿ ಯಾವಾಗ ಗೌರವ ಕೊಡುವುದನ್ನು ಕಲಿಯುತ್ತಾರೆಯೋ ಅಲ್ಲಿಯೂ ಕೊಡುತ್ತಾರೆ. ಇಲ್ಲವೆಂದರೆ ಏನು
ಸಿಗುತ್ತದೆ? ಶಿವ ತಂದೆಯನ್ನು ನೆನಪು ಮಾಡಲೂ ಸಹ ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ -
ನೆನಪಿನಿಂದಲೇ ನಿಮ್ಮ ದೋಣಿಯು ಪಾರಾಗುತ್ತದೆ. ಬೇಹದ್ದಿನ ರಾಜ್ಯವನ್ನು ಕೊಡುತ್ತಾರೆ ಅಂದಾಗ ಅಂತಹ
ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕು, ಆಂತರ್ಯದಲ್ಲಿ ಎಷ್ಟೊಂದು ಪ್ರೀತಿಯಿರಬೇಕು! ತಂದೆಯ ಜೊತೆ
ಇವರಿಗೆ (ಬ್ರಹ್ಮಾ) ಎಷ್ಟೊಂದು ಪ್ರೀತಿಯಿದೆ ನೋಡಿ, ಪ್ರೀತಿಯಿದೆ ಅದಕ್ಕಾಗಿಯೇ ಚಿನ್ನದ
ಪಾತ್ರೆಯಾದರು. ಯಾರ ಪಾತ್ರೆಯು ಚಿನ್ನದ್ದಾಗುತ್ತದೆಯೋ ಅವರ ನಡವಳಿಕೆಯು ಬಹಳ ಚೆನ್ನಾಗಿರುತ್ತದೆ.
ಡ್ರಾಮಾನುಸಾರವಾಗಿ ರಾಜಧಾನಿಯು ಸ್ಥಾಪನೆಯಾಗಬೇಕು, ಅದರಲ್ಲಿ ಎಲ್ಲಾ ಪ್ರಕಾರದವರು ಬೇಕಾಗಿದೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಮಗೆ ಎಂದೂ ಸಹ ಕೋಪ ಬರಬಾರದು. ನಾವು ಒಂದು ವೇಳೆ ಸರ್ವೀಸ್
ಮಾಡದಿದ್ದರೆ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿದ್ದೇವೆಂದು ತಿಳಿದುಕೊಳ್ಳಬೇಕು. ಶಿವ ತಂದೆಯ
ಯಜ್ಞದಲ್ಲಿ ಯಾವ ಸೇವೆಯನ್ನೂ ಮಾಡಲಿಲ್ಲವೆಂದರೆ ಏನು ಸಿಗುತ್ತದೆ? ಸೇವಾಧಾರಿಗಳೇ ಶ್ರೇಷ್ಠ
ಪದವಿಯನ್ನು ಪಡೆಯುತ್ತಾರೆ. ತಮ್ಮ ಕಲ್ಯಾಣಕ್ಕಾಗಿ ಆಸಕ್ತಿಯಿಟ್ಟುಕೊಳ್ಳಬೇಕು ಇಲ್ಲವೆಂದರೆ
ಪದವಿಯನ್ನು ಭ್ರಷ್ಟ ಮಾಡಿಕೊಳ್ಳುತ್ತೀರಿ. ವಿದ್ಯಾರ್ಥಿಯು ಚೆನ್ನಾಗಿ ಓದಿದರೆ ಶಿಕ್ಷಕರಿಗೆ
ಖುಷಿಯಾಗುತ್ತದೆ - ಇವರು ನನ್ನ ಹೆಸರನ್ನು ಪ್ರಸಿದ್ಧ ಮಾಡುತ್ತಾರೆಂದು ತಿಳಿಯುತ್ತಾರೆ. ಇವರ
ಕಾರಣದಿಂದ ನನಗೆ ಬಹುಮಾನ ಸಿಗುತ್ತದೆ. ತಂದೆ, ಶಿಕ್ಷಕ ಎಲ್ಲರೂ ಖುಷಿಯಾಗುತ್ತಾರೆ. ಒಳ್ಳೆಯ
ಸುಪುತ್ರ ಮಕ್ಕಳ ಮೇಲೆ ಮಾತಾಪಿತ ಎಲ್ಲರೂ ಅರ್ಪಣೆಯಾಗುತ್ತಾರೆ. ಯಾರು ಚೆನ್ನಾಗಿ ಸೇವೆ
ಮಾಡುತ್ತಾರೆಯೋ ಅದನ್ನು ಕೇಳಿ ತಂದೆಯು ಖುಷಿಯಾಗುತ್ತಾರೆ. ಯಾರು ಬಹಳ ಜನರಿಗೆ ಚೆನ್ನಾಗಿ ಸರ್ವೀಸ್
ಮಾಡುತ್ತಾರೆಯೋ, ಅವಶ್ಯವಾಗಿ ಅವರ ಹೆಸರು ಪ್ರಸಿದ್ಧವಾಗುತ್ತದೆ. ಅವರೇ ಶ್ರೇಷ್ಠ ಪದವಿಯನ್ನು
ಪಡೆಯಲು ಸಾಧ್ಯ. ಹಗಲು-ರಾತ್ರಿ ಅವರಿಗೆ ಸರ್ವೀಸಿನದೇ ಚಿಂತೆಯಿರುತ್ತದೆ. ಆಹಾರ-ಪಾನೀಯವನ್ನು
ಲೆಕ್ಕಿಸುವುದೇ ಇಲ್ಲ. ತಿಳಿಸುತ್ತಾ-ತಿಳಿಸುತ್ತಾ ಗಂಟಲು ಕಟ್ಟಿ ಹೋಗುತ್ತದೆ. ಅಂತಹ ಅಗಲಿ
ಸಿಕ್ಕಿರುವ ಸೇವಾಧಾರಿ ಮಕ್ಕಳೇ ಉತ್ತಮ ಪದವಿಯನ್ನು ಪಡೆಯುತ್ತಾರೆ. ಇದು ಕಲ್ಪ-ಕಲ್ಪಾಂತರಕ್ಕಾಗಿ,
21 ಜನ್ಮಗಳ ವಿಚಾರವಾಗಿದೆ. ಯಾರು ಎಷ್ಟು ಸರ್ವೀಸ್ ಮಾಡಿದರು, ಎಷ್ಟು ಆತ್ಮರಿಗೆ ಮಾರ್ಗವನ್ನು
ತೋರಿಸಿದ್ದಾರೆ ಎಂಬುದು ಕೊನೆಯಲ್ಲಿ ಫಲಿತಾಂಶವು ಬಂದಾಗ ತಿಳಿಯುತ್ತದೆ. ನಡವಳಿಕೆಗಳನ್ನು
ಅವಶ್ಯವಾಗಿ ಸುಧಾರಿಸಿಕೊಳ್ಳಬೇಕು, ಮಹಾರಥಿ, ಕುದುರೆ ಸವಾರ, ಕಾಲಾಳುಗಳು ಎಂದು ಹೆಸರಿದೆಯಲ್ಲವೆ.
ಸರ್ವೀಸ್ ಮಾಡದಿದ್ದರೆ ನಾವು ಕಾಲಾಳುಗಳೆಂದು ತಿಳಿದುಕೊಳ್ಳಬೇಕು. ನಾವು ಹಣದಿಂದ ಸಹಯೋಗ
ಕೊಟ್ಟಿದ್ದೇವೆ ಆದ್ದರಿಂದ ನಮ್ಮ ಪದವಿ ಉತ್ತಮವಾಗಿರುತ್ತದೆ ಎಂದು ತಿಳಿಯಬೇಡಿ. ಇದು ಸಂಪೂರ್ಣ
ತಪ್ಪಾಗಿದೆ. ಎಲ್ಲಾ ಆಧಾರವು ಸರ್ವೀಸ್ ಹಾಗೂ ವಿದ್ಯೆಯ ಮೇಲಿದೆ. ಮಕ್ಕಳು ಓದಿ ಉತ್ತಮ ಪದವಿಯನ್ನು
ಪಡೆಯಲೆಂದು ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಲೇ ಇರುತ್ತಾರೆ. ಮಕ್ಕಳು ಕಲ್ಪ-ಕಲ್ಪಕ್ಕೂ ನಷ್ಟ
ಮಾಡಿಕೊಳ್ಳಬಾರದು. ನಾವು ಹಣವನ್ನು ಕೊಟ್ಟಿದ್ದೇವೆ ಆದ್ದರಿಂದ ಮಾಲೆಯಲ್ಲಿ ಸಮೀಪ ಬರುತ್ತೇವೆಂದು
ತಿಳಿದು ಅದರಲ್ಲಿಯೇ ಖುಷಿಯಾಗುತ್ತಾರೆ, ಇವರಿಗೆ ಗೊತ್ತೇ ಆಗುವುದಿಲ್ಲ ಸುಮ್ಮನೇ ನಷ್ಟ
ಮಾಡಿಕೊಳ್ಳುತ್ತಿರುತ್ತಾರೆ ಎಂದು ತಂದೆಯು ನೋಡುತ್ತಿರುತ್ತಾರೆ. ಭಲೇ ಹಣ ಕೊಟ್ಟಿದ್ದೀರಿ ಆದರೆ
ಜ್ಞಾನವನ್ನು ಧಾರಣೆ ಮಾಡಿಲ್ಲ, ಯೋಗದಲ್ಲಿ ಇಲ್ಲದಿದ್ದರೆ ಅದು ಯಾವ ಕೆಲಸಕ್ಕೆ! ಒಂದು ವೇಳೆ ದಯೆ
ತೋರಿಸದಿದ್ದರೆ ತಂದೆಯನ್ನು ಅನುಸರಣೆ ಏನು ಮಾಡುತ್ತೀರಿ. ತಂದೆಯು ಬಂದಿರುವುದೆ ಮಕ್ಕಳನ್ನು
ಹೂಗಳನ್ನಾಗಿ ಮಾಡಲು. ಯಾರು ಅನೇಕರನ್ನು ಹೂಗಳನ್ನಾಗಿ ಮಾಡುತ್ತಾರೆಯೋ ಅವರ ಮೇಲೆ ತಂದೆಯೂ
ಬಲಿಹಾರಿಯಾಗುತ್ತಾರೆ. ಸ್ಥೂಲ ಸೇವೆಯಂತೂ ಬಹಳಷ್ಟಿದೆ. ಹೇಗೆ ಬಾಬಾ ಭಂಡಾರಿಯ ಬಹಳ ಮಹಿಮೆಯನ್ನು
ಮಾಡುತ್ತಾರೆ, ಅವರಿಗೆ ಅನೇಕರ ಆಶೀರ್ವದವು ಸಿಗುತ್ತದೆ. ಯಾರೆಷ್ಟು ಸರ್ವೀಸ್ ಮಾಡುತ್ತಾರೆ, ತಮ್ಮ
ಮೂಳೆಯನ್ನು ಸವೆಸುತ್ತಾರೆ ಅವರು ತಮ್ಮದೇ ಕಲ್ಯಾಣವನ್ನು ಮಾಡಿಕೊಳ್ಳುತ್ತಾರೆ. ತಮ್ಮ ಸಂಪಾದನೆಯನ್ನು
ಮಾಡಿಕೊಳ್ಳುತ್ತಾರೆ ಅವರು ಬಹಳ ಪ್ರೀತಿಯಿಂದ ಸರ್ವೀಸ್ ಮಾಡುತ್ತಾರೆ. ಯಾರು ಕಿರಿಕಿರಿ
ಮಾಡುತ್ತಾರೆಯೋ ಅವರು ತಮ್ಮದೇ ಆದ ಅದೃಷ್ಟವನ್ನು ಹಾಳು ಮಾಡಿಕೊಳ್ಳುತ್ತಾರೆ. ಯಾರಲ್ಲಿ
ಲೋಭವಿರುತ್ತದೆಯೋ ಅವರಿಗೆ ಅದು ಸತಾಯಿಸುತ್ತದೆ. ತಾವೆಲ್ಲರೂ ವಾನಪ್ರಸ್ಥದಲ್ಲಿದ್ದೀರಿ, ತಾವೆಲ್ಲರೂ
ಶಬ್ಧದಿಂದ ದೂರವಾಗಬೇಕು. ತಮ್ಮನ್ನು ಕೇಳಿಕೊಳ್ಳಬೇಕು - ಇಡೀ ದಿನದಲ್ಲಿ ನಾವೆಷ್ಟು ಸರ್ವೀಸ್
ಮಾಡುತ್ತೇವೆ? ಕೆಲವು ಮಕ್ಕಳಿಗೆ ಸರ್ವೀಸಿಲ್ಲದೆ ಆನಂದವೇ ಇರುವುದಿಲ್ಲ. ಕೆಲವರಿಗೆ ಈ ವಿದ್ಯೆ ಅಥವಾ
ಬುದ್ಧಿಯ ಮೇಲೆ ಗ್ರಹಚಾರ ಕೂರುತ್ತದೆ. ತಂದೆಯಂತೂ ತಮಗೆ ಒಂದೇ ರೀತಿ ಓದಿಸುತ್ತಾರೆ. ಬುದ್ಧಿಯು
ಕೆಲವರದು ಹೇಗೋ ಆಗುತ್ತದೆ, ಇನ್ನೂ ಕೆಲವರದು ಹೇಗೋ ಆಗುತ್ತದೆ ಆದರೂ ಸಹ ಪುರುಷಾರ್ಥ ಮಾಡಬೇಕು.
ಇಲ್ಲವೆಂದರೆ ಕಲ್ಪ-ಕಲ್ಪದಲ್ಲಿಯೂ ಪದವಿ ಅದೇ ರೀತಿಯಾಗುತ್ತದೆ. ಅಂತಿಮದಲ್ಲಿ ಯಾವಾಗ ಫಲಿತಾಂಶವು
ಬರುತ್ತದೆ ಆಗ ಎಲ್ಲರಿಗೂ ಸಾಕ್ಷಾತ್ಕಾರವಾಗುತ್ತದೆ. ಸಾಕ್ಷಾತ್ಕಾರದ ನಂತರ ವರ್ಗಾವಣೆ ಆಗುತ್ತೀರಿ.
ಸುಮ್ಮನೆ ಸಮಯವನ್ನು ವ್ಯರ್ಥ ಮಾಡಿದರೂ ನಂತರ ಅಂತಿಮದಲ್ಲಿ ಬಹಳ ಪಶ್ಚಾತ್ತಾಪ ಪಡುತ್ತಾರೆ ಎಂದು
ಶಾಸ್ತ್ರಗಳಲ್ಲಿದೆ. ಕಲ್ಪ-ಕಲ್ಪಾಂತರಕ್ಕೆ ಬಹಳ ಮೋಸ ಹೋಗುತ್ತಾರೆ. ತಂದೆಯಂತೂ ಎಚ್ಚರ ನೀಡುತ್ತಲೇ
ಇರುತ್ತಾರೆ. ಶಿವ ತಂದೆಗಂತೂ ಮಕ್ಕಳು ಓದಿ ಉತ್ತಮ ಪದವಿಯನ್ನು ಪಡೆಯಿಲಿ ಎನ್ನುವ ಆಸೆಯೊಂದೇ ಇದೆ.
ತಮಗಾಗಿ ಯಾವುದೇ ಇಚ್ಛೆಯಿಲ್ಲ. ಅವರಿಗೆ ಯಾವ ವಸ್ತುವೂ ಕೆಲಸಕ್ಕೆ ಬರುವುದಿಲ್ಲ. ಮಕ್ಕಳೇ,
ಅಂತರ್ಮುಖಿಯಾಗಿ ಎಂದು ಹೇಳುತ್ತಿರುತ್ತಾರೆ. ಪ್ರಪಂಚದಲ್ಲಿ ಎಲ್ಲರೂ ಬಾಹರ್ಮುಖಿಗಳಾಗಿದ್ದಾರೆ,
ತಾವು ಅಂತರ್ಮುಖಿಗಳಾಗಿದ್ದೀರಿ. ತಮ್ಮ ಸ್ಥಿತಿಯನ್ನು ನೋಡಿಕೊಳ್ಳಬೇಕು ಹಾಗೂ ಸುಧಾರಣೆಯಾಗುವ
ಪುರುಷಾರ್ಥ ಮಾಡಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾರವರ ನೆನಪು-ಪ್ರೀತಿ
ಹಾಗೂ ಗುಡ್ಮಾರ್ನಿಂಗ್. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
೧. ಸಾಕ್ಷಿಯಾಗಿ ಸ್ವಯಂನ
ಪಾತ್ರವನ್ನು ನೋಡಿಕೊಳ್ಳಿ - ನಾವು ಚೆನ್ನಾಗಿ ಓದಿ ಹಾಗೂ ಅನ್ಯರಿಗೂ ಓದಿಸುತ್ತೇವೆಯೋ ಅಥವಾ ಇಲ್ಲವೇ?
ತಮ್ಮ ಸಮಾನ ಮಾಡಿಕೊಳ್ಳುವ ಸೇವೆ ಮಾಡುತ್ತೇವೆಯೇ? ತಮ್ಮ ಸಮಯವನ್ನು ಪ್ರಪಂಚದ ಮಾತುಗಳಲ್ಲಿ ವ್ಯರ್ಥ
ಮಾಡಬಾರದು.
೨. ಅಂತರ್ಮುಖಿಗಳಾಗಿ
ತಮ್ಮನ್ನು ತಾವು ಸುಧಾರಿಸಿಕೊಳ್ಳಬೇಕು. ತಮ್ಮ ಕಲ್ಯಾಣದ ಆಸಕ್ತಿಯನ್ನಿಟ್ಟುಕೊಳ್ಳಬೇಕು.
ಸರ್ವಿಸಿನಲ್ಲಿ ವ್ಯಸ್ತರಾಗಿರಬೇಕು. ಅವಶ್ಯವಾಗಿ ತಂದೆಯ ಸಮಾನ ದಯಾ ಹೃದಯಿಗಳಾಗಬೇಕು.
ವರದಾನ:
ಸಫಲ ಮಾಡುವಂತಹ
ವಿಧಿಯಿಂದ ಸಫಲತೆಯ ಪ್ರಾಪ್ತಿ ಮಾಡಿಕೊಳ್ಳುವಂತಹ ಿ ಮೂರ್ತಿ ಭವ.
ಸಂಗಮಯುಗದಲ್ಲಿ ನೀವು
ಮಕ್ಕಳಿಗೆ ಆಸ್ತಿಯ ಜೊತೆ ವರದಾನವೂ ಸಹಾ ಇದೆ “ ಸಫಲ ಮಾಡಿ ಮತ್ತು ಸಫಲತೆಯನ್ನು ಪಡೆದುಕೊಳ್ಳಿ”.
ಸಫಲ ಮಾಡುವುದು ಬೀಜ ಮತ್ತು ಸಫಲತೆ ಆಗಿದೆ ಫಲ. ಒಂದು ವೇಳೆ ಬೀಜ ಚೆನ್ನಾಗಿದ್ದೂ ಫಲ ಸಿಗಲ್ಲಾ ಈ
ರೀತಿ ಆಗಲು ಸಾಧ್ಯವೇ ಇಲ್ಲ. ಹಾಗೆ ನೀವು ಬೇರೆಯವರಿಗೆ ಹೇಳುವಿರಿ ಸಮಯ, ಸಂಕಲ್ಪ, ಸಂಪತ್ತು
ಎಲ್ಲವನ್ನೂ ಸಫಲ ಮಾಡಿಕೊಳ್ಳಿ ಎಂದು. ಅದೇ ರೀತಿ ನಿಮ್ಮ ಎಲ್ಲಾ ಖಜಾನೆಗಳ ಪಟ್ಟಿಯನ್ನು ಚೆಕ್
ಮಾಡಿಕೊಳ್ಳಿ ಯಾವ ಖಜಾನೆ ಸಫಲವಾಯಿತು ಯಾವುದು ವ್ಯರ್ಥವಾಯಿತು ಎಂದು. ಸಫಲ ಮಾಡುತ್ತಿದ್ದಾಗ ಸರ್ವ
ಖಜಾನೆಗಳಿಂದ ಸಂಪನ್ನ ವರದಾನಿ ಮೂರ್ತಿಗಳಾಗಿ ಬಿಡುವಿರಿ.
ಸ್ಲೋಗನ್:
ಪರಮಾತ್ಮನಿಂದ ಬಹುಮಾನ ಪಡೆಯಲು ವ್ಯರ್ಥ ಮತ್ತು ನಕಾರಾತ್ಮಕವನ್ನು ತಪ್ಪಿಸಿ.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ -
ಬ್ರಹ್ಮಾ ತಂದೆಯ ಸಮಾನ ಯಾವುದೇ ಮಾತಿನ ವಿಸ್ತಾರದಲ್ಲಿ ಹೋಗದೆ, ವಿಸ್ತಾರಕ್ಕೆ ಬಿಂದು ಹಾಕಿ
ಬಿಂದುವಿನಲ್ಲಿ ಸಮಾವೇಶ ಮಾಡಿ ಬಿಡಿ, ಬಿಂದು ಆಗಿ ಬಿಡಿ, ಬಿಂದು ಹಾಕಿ ಬಿಡಿ, ಬಿಂದುವಿನಲ್ಲಿ
ಸಮಾವೇಶ ಆಗಿ ಬಿಡಿ ಆಗ ಇಡೀ ವಿತಾರ, ಇಡೀ ಜಾಲ ಸೆಕೆಂಡ್ ನಲ್ಲಿ ಸಮಾವೇಶವಾಗಿ ಬಿಡುವುದು ಮತ್ತು
ಸಮಯವೂ ಸಹಾ ಉಳಿತಾಯವಾಗಿ ಬಿಡುವುದು, ಪರಿಶ್ರಮದಿಂದ ಬಿಡಿಸಿಕೊಳ್ಳುವಿರಿ ಬಿಂದಿ ಆಗಿ
ಬಿಂದುವಿನಲ್ಲಿ ಲವಲೀನರಾಗಿ ಬಿಡುವಿರಿ.