28.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈ
ಬ್ರಹ್ಮಾರವರು ಸದ್ಗುರುವಿನ ದರ್ಬಾರ್ (ರಾಜ್ಯಸಭೆ) ಆಗಿದ್ದಾರೆ, ಈ ಭೃಕುಟಿಯಲ್ಲಿ ಸದ್ಗುರುವು
ವಿರಾಜಮಾನನಾಗಿದ್ದಾರೆ, ಅವರೇ ನೀವು ಮಕ್ಕಳ ಸದ್ಗತಿ ಮಾಡುತ್ತಾರೆ”
ಪ್ರಶ್ನೆ:
ತಂದೆಯು ತನ್ನ
ಮಕ್ಕಳನ್ನು ಯಾವ ಅಧೀನತೆಯಿಂದ ಬಿಡಿಸಲು ಬಂದಿದ್ದಾರೆ?
ಉತ್ತರ:
ಈ ಸಮಯದಲ್ಲಿ
ಎಲ್ಲಾ ಮಕ್ಕಳು ಪ್ರಕೃತಿ ಮತ್ತು ಮಾಯೆಗೆ ಗುಲಾಮರಾಗಿ ಬಿಟ್ಟಿದ್ದಾರೆ. ತಂದೆಯು ಈಗ ಈ
ಗುಲಾಮಿತನದಿಂದ ಅಥವಾ ಅಧೀನತೆಯಿಂದ ಬಿಡಿಸುತ್ತಾರೆ. ಈಗ ಮಾಯೆ ಮತ್ತು ಪ್ರಕೃತಿ ಎರಡೂ ತೊಂದರೆ
ಕೊಡುತ್ತದೆ. ಕೆಲವೊಮ್ಮೆ ಬಿರುಗಾಳಿ, ಕೆಲವೊಮ್ಮೆ ಬರಗಾಲವಿದೆ. ಇದರ ನಂತರ ನೀವು ಇಂತಹ ಮಾಲೀಕರಾಗಿ
ಬಿಡುತ್ತೀರಿ. ಇಡೀ ಪ್ರಕೃತಿ ನಿಮ್ಮ ಗುಲಾಮನಾಗಿ ಬಿಡುತ್ತದೆ. ಮಾಯೆಯ ಯುದ್ಧವೂ ಆಗುವುದಿಲ್ಲ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ತಿಳಿದುಕೊಂಡಿದ್ದೀರಿ - ಪಾರಲೌಕಿಕ ತಂದೆಯೂ ಆಗಿದ್ದಾರೆ,
ಪಾರಲೌಕಿಕ ಶಿಕ್ಷಕನೂ ಆಗಿದ್ದಾರೆ. ಅವರು ವಿಶ್ವದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನೂ ತಿಳಿಸುತ್ತಾರೆ
ಮತ್ತು ಪರಮ ಸದ್ಗುರುವೂ ಆಗಿದ್ದಾರೆ ಅಂದಾಗ ಇದು ಸದ್ಗುರುವಿನ ರಾಜ ಸಭೆಯಾಗುತ್ತದೆಯಲ್ಲವೆ. ಇಲ್ಲಿ
ಗುರುವಿನ ಸಭೆಯು ಸೇರುತ್ತದೆ ಆದರೆ ಅದು ಕೇವಲ ಗುರುಗಳ ಸಭೆ, ಸದ್ಗುರುಗಳದಲ್ಲ. ಶ್ರೀ ಶ್ರೀ 108
ಎಂದು ಕರೆಸಿಕೊಳ್ಳುತ್ತಾರೆ. ಸದ್ಗುರು ಎಂದು ಬರೆದಿರುವುದಿಲ್ಲ, ಅವರು ಕೇವಲ ಗುರುಗಳೆಂದೇ
ಹೇಳುತ್ತಾರೆ ಆದರೆ ಇವರು ಸದ್ಗುರುಗಳಾಗಿದ್ದಾರೆ. ಮೊದಲು ತಂದೆ ನಂತರ ಶಿಕ್ಷಕ ಅನಂತರ ಸದ್ಗುರು.
ಸದ್ಗುರುವೇ ಸದ್ಗತಿ ಕೊಡುತ್ತಾರೆ. ಸತ್ಯಯುಗ-ತ್ರೇತಾದಲ್ಲಿ ಮತ್ತೆ ಗುರುಗಳಿರುವುದೇ ಇಲ್ಲ ಏಕೆಂದರೆ
ಎಲ್ಲರೂ ಸದ್ಗತಿಯಲ್ಲಿರುತ್ತಾರೆ. ಒಬ್ಬ ಸದ್ಗುರು ಸಿಕ್ಕಿದ ಮೇಲೆ ಉಳಿದೆಲ್ಲಾ ಗುರುಗಳ ಹೆಸರು
ಸಮಾಪ್ತಿಯಾಗಿ ಬಿಡುತ್ತದೆ. ಸುಪ್ರೀಂ ಎಲ್ಲಾ ಗುರುಗಳಿಗೂ ಗುರು ಆಗಿದ್ದಾರೆ ಹೇಗೆ ಪತಿಯರ ಪತಿ ಎಂದು
ಹೇಳುತ್ತಾರಲ್ಲವೆ. ಎಲ್ಲರಿಗಿಂತ ಶ್ರೇಷ್ಠರಾಗಿರುವ ಕಾರಣ ಹೇಳುತ್ತಾರೆ. ನೀವು ಪರಮ ತಂದೆಯ ಬಳಿ
ಕುಳಿತಿದ್ದೀರಿ. ಏತಕ್ಕಾಗಿ? ಬೇಹದ್ದಿನ ಆಸ್ತಿಯನ್ನು ಪಡೆಯಲು. ಇದು ಬೇಹದ್ದಿನ ಆಸ್ತಿಯಾಗಿದೆ,
ಇವರು ತಂದೆಯೂ ಆಗಿದ್ದಾರೆ ಶಿಕ್ಷಕನೂ ಆಗಿದ್ದಾರೆ ಮತ್ತು ಈ ಆಸ್ತಿಯು ಹೊಸ ಪ್ರಪಂಚ, ಅಮರಲೋಕಕ್ಕಾಗಿ
ನಿರ್ವಿಕಾರಿ ಪ್ರಪಂಚಕ್ಕಾಗಿಯೇ ಇದೆ. ಹೊರ ಪ್ರಪಂಚಕ್ಕೇ ನಿರ್ವಿಕಾರಿ ಪ್ರಪಂಚವೆಂದು, ಹಳೆಯ
ಪ್ರಪಂಚಕ್ಕೆ ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಸತ್ಯಯುಗಕ್ಕೆ ಶಿವಾಲಯವೆಂದು ಹೇಳಲಾಗುತ್ತದೆ,
ಏಕೆಂದರೆ ಇದು ಶಿವ ತಂದೆಯಿಂದ ಸ್ಥಾಪಿಸಲ್ಪಟ್ಟಿದೆ. ನಿರಾಕಾರಿ ಪ್ರಪಂಚವು ಶಿವಾಲಯವೆಂದು
ಹೇಳಲಾಗುತ್ತದೆ, ಏಕೆಂದರೆ ಇದು ಶಿವ ತಂದೆಯಿಂದ ಸ್ಥಾಪಿಸಲ್ಪಟ್ಟಿದೆ. ವಿಕಾರಿ ಪ್ರಪಂಚವು ರಾವಣನ
ಸ್ಥಾಪನೆಯಾಗಿದೆ, ಈಗ ನೀವು ಸದ್ಗುರುವಿನ ದರ್ಬಾರಿನಲ್ಲಿ ಕುಳಿತಿದ್ದೀರಿ. ಇದು ಕೇವಲ ನೀವು
ಮಕ್ಕಳಿಗೆ ಗೊತ್ತಿದೆ, ತಂದೆಯು ಶಾಂತಿಯ ಸಾಗರನಾಗಿದ್ದಾರೆ, ಆ ತಂದೆಯು ಯಾವಾಗ ಬರುತ್ತಾರೆಯೋ ಆಗ
ಶಾಂತಿಯನ್ನು ಕೊಟ್ಟು ಮಾರ್ಗವನ್ನು ತಿಳಿಸುತ್ತಾರೆ. ಬಾಕಿ ಕಾಡಿನಲ್ಲಿ ಶಾಂತಿಯೆಲ್ಲಿಂದ ಸಿಗುವುದು!
ಆದ್ದರಿಂದ ಕಂಠಹಾರದ ಉದಾಹರಣೆಯನ್ನು ಕೊಡುತ್ತಾರೆ. ಶಾಂತಿಯಂತೂ ಆತ್ಮದ ಕೊರಳಿನ ಹಾರವಾಗಿದೆ ನಂತರ
ಯಾವಾಗ ರಾವಣ ರಾಜ್ಯವಾಗುವುದೋ ಆಗ ಅಶಾಂತಿಯಾಗುತ್ತದೆ. ಸತ್ಯಯುಗಕ್ಕಂತೂ ಸುಖಧಾಮ, ಶಾಂತಿಧಾಮವೆಂದು
ಹೇಳಲಾಗುತ್ತದೆ. ಅಲ್ಲಿ ದುಃಖದ ಯಾವುದೇ ಮಾತಿಲ್ಲ. ಮಹಿಮೆಯನ್ನೂ ಸಹ ಸದಾ ಸದ್ಗುರುವಿಗೇ
ಮಾಡುತ್ತಾರೆ. ಗುರುವಿನ ಮಹಿಮೆ ಎಂದೂ ಕೇಳಿರುವುದಿಲ್ಲ. ಜ್ಞಾನಸಾಗರ ಅವರೊಬ್ಬರೇ ತಂದೆಯಾಗಿದ್ದಾರೆ.
ಈ ತಂದೆಯ ತರಹ ಗುರುಗಳ ಮಹಿಮೆಯೆಂದಾದರೂ ಕೇಳಿದ್ದೀರಾ? ಇಲ್ಲ. ಆ ಗುರುಗಳು ಜಗತ್ತಿನ
ಪತಿತ-ಪಾವನರಾಗಲು ಸಾಧ್ಯವಿಲ್ಲ. ಒಬ್ಬ ನಿರಾಕಾರ ಬೇಹದ್ದಿನ ಅತಿ ದೊಡ್ಡ ತಂದೆ ಪತಿತ-ಪಾವನನೆಂದು
ಹೇಳಲಾಗುತ್ತದೆ. ಈಗ ನೀವು ಸಂಗಮಯುಗದಲ್ಲಿ ನಿಂತಿದ್ದೀರಿ. ಒಂದು ಕಡೆ ಪತಿತ ಪ್ರಪಂಚವಿದೆ,
ಇನ್ನೊಂದು ಕಡೆ ಪಾವನ ಪ್ರಪಂಚವಿದೆ. ಪತಿತ ಪ್ರಪಂಚದಲ್ಲಿ ಗುರುಗಳು ಅನೇಕರಿದ್ದಾರೆ, ಮೊದಲು ನಿಮಗೆ
ಈ ಸಂಗಮಯುಗದ ಬಗ್ಗೆ ತಿಳಿದಿರಲಿಲ್ಲ. ಈಗ ತಂದೆಯು ತಿಳಿಸಿದ್ದಾರೆ - ಇದು ಪುರುಷೋತ್ತಮ
ಸಂಗಮಯುಗವಾಗಿದೆ ಇದರ ನಂತರ ಸತ್ಯಯುಗವು ಬರಲಿದೆ, ಚಕ್ರವು ಸುತ್ತುತ್ತಲೇ ಇರುತ್ತದೆ. ಇದು
ಬುದ್ಧಿಯಲ್ಲಿ ನೆನಪಿರಬೇಕು - ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ ಅಂದಮೇಲೆ ಬೇಹದ್ದಿನ ತಂದೆಯ
ಆಸ್ತಿಯು ಅವಶ್ಯವಾಗಿ ಸಿಗುತ್ತದೆ, ಇದು ಯಾರಿಗೂ ತಿಳಿದಿಲ್ಲ. ಎಷ್ಟು ದೊಡ್ಡ-ದೊಡ್ಡ
ಸ್ಥಾನಮಾನವಿರುವ ಮನುಷ್ಯರಿದ್ದಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ
ನಾನಂತೂ ನಿಮ್ಮೆಲ್ಲರ ಸದ್ಗತಿ ಮಾಡುತ್ತೇನೆ. ಈಗ ನೀವು ಬುದ್ಧಿವಂತರಾಗಿದ್ದೀರಿ. ಮೊದಲು ನಿಮಗೇನೂ
ತಿಳಿದಿರಲಿಲ್ಲ, ಈ ದೇವತೆಗಳ ಮುಂದೆ ಹೋಗಿ ನಾವು ಬುದ್ಧಿಹೀನರು, ನಮ್ಮಲ್ಲಿ ಯಾವುದೇ ಗುಣವಿಲ್ಲ
ತಾವೇ ದಯೆ ತೋರಿಸಿ ಎಂದು ಹೇಳುತ್ತಿದ್ದಿರಿ. ಈಗ ಈ ದೇವತೆಗಳ ಚಿತ್ರಗಳು ದಯೆ ತೋರಿಸುತ್ತವೆಯೇ?
ಇದನ್ನು ತಿಳಿದುಕೊಂಡೇ ಇಲ್ಲ. ದಯಾಸಾಗರ ಯಾರು? ಓ ಗಾಡ್ ಫಾದರ್ ದಯೆ ತೋರಿಸಿ ಎಂದು ಹೇಳುತ್ತಾರೆ.
ಯಾವುದೇ ದುಃಖದ ಮಾತು ಬಂದಾಗ ತಂದೆಯನ್ನು ಅವಶ್ಯವಾಗಿ ನೆನಪು ಮಾಡುತ್ತಾರೆ. ಈಗ ನೀವು ಈ ರೀತಿ
ಹೇಳುವುದಿಲ್ಲ. ತಂದೆಯಂತೂ ವಿಚಿತ್ರನಾಗಿದ್ದಾರೆ. ಅವರು ಸನ್ಮುಖದಲ್ಲಿ ಕುಳಿತಿದ್ದಾರೆ ಆದ್ದರಿಂದಲೇ
ನಮಸ್ಕಾರ ಮಾಡುತ್ತಾರೆ. ನೀವೆಲ್ಲರೂ ಚಿತ್ರಧಾರಿ (ದೇಹದ) ಗಳಾಗಿದ್ದೀರಿ, ನಾನು
ವಿಚಿತ್ರನಾಗಿದ್ದೇನೆ, ನಾನೆಂದೂ ಚಿತ್ರದ ಧಾರಣೆ ಮಾಡುವುದಿಲ್ಲ. ನನ್ನ ಚಿತ್ರದ ಯಾವುದಾದರೂ
ಹೆಸರನ್ನು ತಿಳಿಸಿ, ಕೇವಲ ಶಿವ ತಂದೆಯೆಂದೇ ಹೇಳುತ್ತಾರೆ. ನಾನು ಇವರ ಶರೀರವನ್ನು ಸಾಲವಾಗಿ
ಪಡೆದಿದ್ದೇನೆ. ಇದು ಹಳೆಯದಕ್ಕಿಂತ ಹಳೆಯ ಪಾದರಕ್ಷೆಯಾಗಿದೆ. ಅದರಲ್ಲಿಯೇ ನಾನು ಬಂದು ಪ್ರವೇಶ
ಮಾಡುತ್ತೇನೆ. ಈ ಶರೀರದ ಮಹಿಮೆಯನ್ನು ಎಲ್ಲಿ ಮಾಡುತ್ತಾರೆ! ಇದಂತೂ ಹಳೆಯ ಶರೀರವಾಗಿದೆ. ದತ್ತು
ಮಾಡಿಕೊಂಡಿದ್ದಾರೆ ಅಂದಮೇಲೆ ಮಹಿಮೆ ಮಾಡುತ್ತಾರೇನು? ಇಲ್ಲ. ತಂದೆಯು ತಿಳಿಸುತ್ತಾರೆ - ಇವರು ಈ
ರೀತಿಯಿದ್ದರು. ಈಗ ಮತ್ತೆ ನನ್ನ ಮುಖಾಂತರ ಸುಂದರನಾಗಿ ಬಿಡುತ್ತಾರೆ. ನಾನು ಏನನ್ನು
ತಿಳಿಸುತ್ತೇನೆಯೋ ಅದರ ವಿಚಾರ ಮಾಡಿ. ಒಂದುವೇಳೆ ನಾನು ಸತ್ಯವಾಗಿದ್ದರೆ ಸತ್ಯವನ್ನು ನೆನಪು ಮಾಡಿ.
ನನ್ನಿಂದಲೇ ಕೇಳಿ, ಅಸತ್ಯವನ್ನು ಕೇಳಬೇಡಿ. ಅಸತ್ಯಕ್ಕೆ ಭೂತವೆಂದು ಹೇಳಲಾಗುತ್ತದೆ. ಥಿಂಕ್ ನೋ
ಈವಿಲ್, ಸೀ ನೋ ಈವಿಲ್..... (ಕೆಟ್ಟದ್ದನ್ನು ಮಾತನಾಡಬೇಡಿ, ಕೆಟ್ಟದ್ದನ್ನು ನೋಡಬೇಡಿ) ಈ
ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರಿ ಅದನ್ನು ಮರೆತು ಬಿಡಿ. ಈಗಂತೂ ತಮ್ಮ ಮನೆಗೆ ಹೋಗಬೇಕಾಗಿದೆ
ನಂತರ ಹಿಂತಿರುಗಿ ಸುಖಧಾಮದಲ್ಲಿ ಬರುತ್ತೀರಿ. ಉಳಿದವರೆಲ್ಲರೂ ಸತ್ತಂತೆ. ತಾತ್ಕಾಲಿಕವಾಗಿದ್ದಾರೆ.
ಈ ಹಳೆಯ ಶರೀರಗಳೂ ಇರುವುದಿಲ್ಲ, ಈ ಪ್ರಪಂಚವೂ ಇರುವುದಿಲ್ಲ. ನಾವು ಹೊಸ ಪ್ರಪಂಚಕ್ಕಾಗಿ
ಪುರುಷಾರ್ಥ ಮಾಡುತ್ತಿದ್ದೇವೆ. ಮತ್ತೆ ವಿಶ್ವದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುತ್ತದೆ. ನೀವು
ತಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ. ನಿಮಗೆ ಗೊತ್ತಿದೆ - ತಂದೆಯು ರಾಜ್ಯ
ಭಾಗ್ಯವನ್ನು ಕೊಡಲು ಕಲ್ಪ-ಕಲ್ಪವೂ ಬರುತ್ತಾರೆ. ನೀವೂ ಸಹ ಹೇಳುತ್ತೀರಿ - ಬಾಬಾ ಕಲ್ಪದ ಹಿಂದೆಯೂ
ಮಿಲನ ಮಾಡಿದ್ದೆವು, ಆಸ್ತಿಯನ್ನು ಪಡೆದಿದ್ದೆವು, ನರನಿಂದ ನಾರಾಯಣರಾಗಿದ್ದೆವು ಆದರೆ ಎಲ್ಲರೂ ಒಂದೇ
ರೀತಿ ಪದವಿಯನ್ನು ಪಡೆಯಲು ಸಾಧ್ಯವಿಲ್ಲ, ನಂಬರ್ವಾರಂತೂ ಇದ್ದೇ ಇರುತ್ತಾರೆ. ಇದು ಆತ್ಮಿಕ ವಿಶ್ವ
ವಿದ್ಯಾಲಯವಾಗಿದೆ. ಆತ್ಮಿಕ ತಂದೆಯೇ ಓದಿಸುತ್ತಾರೆ, ಮಕ್ಕಳೂ ಓದಿಸುತ್ತಾರೆ. ಯಾರಾದರೂ
ಪ್ರಾಂಶುಪಾಲರ ಮಗನಾಗಿದ್ದರೆ ಸರ್ವೀಸಿನಲ್ಲಿ ತೊಡಗಿ ಬಿಡುತ್ತಾರೆ, ಅವರ ಸ್ತ್ರೀಯೂ ಸಹ ಮಾಡಲು
ತೊಡಗುತ್ತಾರೆ, ಮಗಳೂ ಸಹ ಚೆನ್ನಾಗಿ ಓದುವವರಾಗಿದ್ದರೆ ಅವರೂ ಓದಿಸುತ್ತಾರೆ ಆದರೆ ಅವರು ಇನ್ನೊಂದು
ಮನೆಗೆ ಹೊರಟು ಹೋಗುತ್ತಾರೆ. ಇಲ್ಲಂತೂ ಕನ್ಯೆಯರು ನೌಕರಿ ಮಾಡುವ ಅವಶ್ಯಕತೆಯಿಲ್ಲ. ಹೊಸ
ಪ್ರಪಂಚದಲ್ಲಿ ಪದವಿಯನ್ನು ಪಡೆಯಬೇಕೆಂದರೆ ಎಲ್ಲವೂ ಈ ವಿದ್ಯೆಯ ಮೇಲೆ ಆಧಾರಿತವಾಗಿದೆ. ಈ
ಮಾತುಗಳನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ಬರೆಯಲ್ಪಟ್ಟಿದೆ ಭಗವಾನುವಾಚ - ಹೇ ಮಕ್ಕಳೇ, ನಾನು
ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ. ಯಾವುದೇ ಮಾದರಿಯನ್ನು ಮಾಡುವುದಿಲ್ಲ. ಹೇಗೆ
ದೇವಿಯರ ಚಿತ್ರಗಳನ್ನು ಮಾಡಿಸುವುದಕ್ಕೆ ಮುಂದೆ ಅದರ ಮಾದರಿಯನ್ನು ಬರೆಸುತ್ತಾರೆ ಆದರೆ ನೀವಂತೂ ಓದಿ
ಆ ಪದವಿಯನ್ನುಪಡೆಯುತ್ತೀರಿ. ಮನುಷ್ಯರಂತೂ ಪೂಜೆಗಾಗಿ ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಾರೆ.
ಇಲ್ಲಂತೂ ಆತ್ಮವು ಓದುತ್ತದೆ ನಂತರ ನೀವು ಆ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತೀರಿ, ಹೋಗಿ
ಹೊಸ ಪ್ರಪಂಚದಲ್ಲಿ ಶರೀರವನ್ನು ತೆಗೆದುಕೊಳ್ಳುತ್ತೀರಿ. ಪ್ರಪಂಚವು ಸಮಾಪ್ತಿಯಾಗುವುದಿಲ್ಲ ಕೇವಲ
ಸಮಯವು ಬದಲಾಗುತ್ತದೆ - ಸ್ವರ್ಣೀಮ ಯುಗ, ಬೆಳ್ಳಿಯ ಯುಗ, ತಾಮ್ರದ ಯುಗ, ಕಬ್ಬಿಣದ ಯುಗ. 16
ಕಲೆಗಳಿಂದ 14 ಕಲೆಗಳು. ಪ್ರಪಂಚವಂತೂ ಅದೇ ನಡೆಯುತ್ತಾ ಬರುತ್ತದೆ. ಕೇವಲ ಹೊಸದರಿಂದ
ಹಳೆಯದಾಗುತ್ತದೆ. ತಂದೆಯು ಈ ಶಿಕ್ಷಣದಿಂದ ನಿಮ್ಮನ್ನು ರಾಜರಿಗೂ ರಾಜರನ್ನಾಗಿ ಮಾಡುತ್ತಾರೆ. ಈ
ರೀತಿ ಓದಿಸುವ ತಾಕತ್ತು ಬೇರೆ ಯಾರಿಗೂ ಇಲ್ಲ. ತಂದೆಯು ಎಷ್ಟು ಚೆನ್ನಾಗಿ ಓದಿಸುತ್ತಾರೆ ನಂತರ
ಓದುತ್ತಾ-ಓದುತ್ತಾ ಮಾಯೆ ತನ್ನವರನ್ನಾಗಿ ಮಾಡಿಕೊಳ್ಳುತ್ತದೆ. ಆದರೂ ಸಹ ಯಾರು ಎಷ್ಟೆಷ್ಟು ಓದುವರೋ
ಅವರು ಸ್ವರ್ಗದಲ್ಲಿ ಅವಶ್ಯವಾಗಿ ಬರುತ್ತಾರೆ, ಸಂಪಾದನೆಯು ಹೋಗುವುದಿಲ್ಲ. ಅವಿನಾಶಿ ಜ್ಞಾನದ
ವಿನಾಶವಾಗಲು ಸಾಧ್ಯವಿಲ್ಲ. ಮುಂದೆ ಹೋದಂತೆ ಬಂದೇ ಬರುತ್ತಾರೆ. ಮತ್ತೆಲ್ಲಿಗೆ ಹೋಗುತ್ತಾರೆ?
ಇದೊಂದೇ ಅಂಗಡಿಯಿದೆಯಲ್ಲವೆ. ಬರುತ್ತಾ ಇರುತ್ತಾರೆ. ಮನುಷ್ಯರು ಸ್ಮಶಾನಕ್ಕೆ ಹೋದಾಗ ಬಹಳ
ವೈರಾಗ್ಯವು ಬರುತ್ತದೆ. ಸಾಕು, ಎಷ್ಟು ಮಾಡಿದರೂ ಈ ಶರೀರವನ್ನು ಹೀಗೆಯೇ ಬಿಡಬೇಕಾಗುತ್ತದೆ ಅಂದಮೇಲೆ
ನಾವೇಕೆ ಪಾಪ ಮಾಡಬೇಕು. ಪಾಪ ಮಾಡುತ್ತಾ-ಮಾಡುತ್ತಾ ನಾವು ಹೀಗೆ ಸತ್ತು ಹೋಗುತ್ತೇವೆ! ಎಂದು ಹೇಳಿ
ಇಂತಹ ವಿಚಾರಗಳು ಬರುತ್ತವೆ. ಅದಕ್ಕೆ ಸ್ಮಶಾನ ವೈರಾಗ್ಯವೆಂದು ಹೇಳಲಾಗುತ್ತದೆ. ಹೋಗಿ ಇನ್ನೊಂದು
ಶರೀರವನ್ನು ತೆಗೆದುಕೊಳ್ಳುತ್ತಾರೆಂಬುದನ್ನೂ ತಿಳಿದಿದ್ದಾರೆ ಆದರೆ ಜ್ಞಾನವಂತೂ ಇಲ್ಲವಲ್ಲವೆ.
ಇಲ್ಲಂತೂ ನೀವು ಮಕ್ಕಳಿಗೆ ತಿಳಿಸಲಾಗುತ್ತದೆ, ಈ ಸಮಯದಲ್ಲಿ ವಿಶೇಷವಾಗಿ ಸಾಯುವುದಕ್ಕೆ ತಯಾರಿ
ಮಾಡಿಕೊಳ್ಳುತ್ತಿದ್ದೀರಿ. ಇಲ್ಲಂತೂ ನೀವು ತಾತ್ಕಾಲಿಕವಾಗಿದ್ದೀರಿ. ಹಳೆಯ ಶರೀರವನ್ನು ಬಿಟ್ಟು
ಮತ್ತೆ ಹೊಸಪ್ರಪಂಚದಲ್ಲಿ ಹೋಗುತ್ತೀರಿ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ನನ್ನನ್ನು ಎಷ್ಟು ನೆನಪು ಮಾಡುವಿರೋ ಅಷ್ಟು ಪಾಪಗಳು
ನಾಶವಾಗುತ್ತವೆ. ಇದು ಸಹಜಕ್ಕಿಂತ ಸಹಜವೂ ಆಗಿದೆ ಮತ್ತು ಕಷ್ಟವೂ ಆಗಿದೆ. ಮಕ್ಕಳು ಪುರುಷಾರ್ಥ
ಮಾಡಲು ತೊಡಗಿದಾಗ ಮಾಯೆಯ ಬಹಳ ಯುದ್ಧವು ನಡೆಯುತ್ತದೆ ಎಂದು ತಿಳಿಯುತ್ತಾರೆ. ತಂದೆಯು
ತಿಳಿಸುತ್ತಾರೆ - ಮಕ್ಕಳೇ ಸಹಜವಾಗಿದೆ, ಆದರೆ ಮಾಯೆಯು ದೀಪವನ್ನೇ ನಂದಿಸಿ ಬಿಡುತ್ತದೆ ಗುಲೇಬಿ
ಕಾವಲಿಯ ಕಥೆಯೂ ಇದೆಯಲ್ಲವೆ - ಮಾಯಾ ಬೆಕ್ಕು ದೀಪವನ್ನು ನಂದಿಸಿ ಬಿಡುತ್ತದೆ. ಇಲ್ಲಿ ಎಲ್ಲರೂ
ಮಾಯೆಗೆ ಗುಲಾಮರಾಗಿದ್ದಾರೆ. ಮತ್ತೆ ನೀವು ಮಾಯೆಯನ್ನೂ ಗುಲಾಮನನ್ನಾಗಿ ಮಾಡಿಕೊಳ್ಳುತ್ತೀರಿ. ಇಡೀ
ಪ್ರಕೃತಿಯೇ ನಿಮ್ಮ ಅಧೀನತೆಯಲ್ಲಿರುತ್ತದೆ. ಯಾವುದೇ ಬಿರುಗಾಳಿಯಿಲ್ಲ, ಬರಗಾಲವಿಲ್ಲ.
ಪ್ರಕೃತಿಯನ್ನು ಗುಲಾಮನನ್ನಾಗಿ ಮಾಡಿಕೊಳ್ಳಬೇಕಾಗಿದೆ. ಅಲ್ಲಿ ಎಂದೂ ಮಾಯೆಯ ಯುದ್ಧವಾಗುವುದಿಲ್ಲ.
ಈಗಂತೂ ಎಷ್ಟು ತೊಂದರೆ ಕೊಡುತ್ತದೆ. ಗಾಯನವಿದೆಯಲ್ಲವೆ. ನಾನು ನಿಮ್ಮ ಗುಲಾಮನಾಗಿದ್ದೇನೆ....
ಮತ್ತೆ ಅದು ಹೇಳುತ್ತದೆ - ನೀವು ನನ್ನ ಗುಲಾಮನೆಂದು. ತಂದೆಯು ತಿಳಿಸುತ್ತಾರೆ - ಈಗ ನಾನು
ನಿಮ್ಮನ್ನು ಆ ಅಧೀನತೆಯಿಂದ ಬಿಡಿಸಲು ಬಂದಿದ್ದೇನೆ. ನೀವು ಮಾಲೀಕರಾಗಿ ಬಿಡುತ್ತೀರಿ ಅದು
ಗುಲಾಮನಾಗಿ ಬಿಡುತ್ತದೆ. ಸ್ವಲ್ಪವೂ ನಿಮ್ಮನ್ನು ಕೆರಳುವುದಿಲ್ಲ. ಇದೂ ಸಹ ನಾಟಕದಲ್ಲಿ
ನಿಗದಿಯಾಗಿದೆ. ಬಾಬಾ, ಮಾಯೆಯು ಬಹಳ ತೊಂದರೆ ಕೊಡುತ್ತದೆಯೆಂದು ನೀವು ಹೇಳುತ್ತೀರಿ, ಮಕ್ಕಳೇ ಏಕೆ
ಕೊಡುವುದಿಲ್ಲ. ಇದಕ್ಕೆ ಯುದ್ಧದ ಮೈದಾನವೆಂದು ಹೇಳಲಾಗುತ್ತದೆ. ಮಾಯೆಯನ್ನು ಗುಲಾಮನನ್ನಾಗಿ
ಮಾಡಿಕೊಳ್ಳಲು ನೀವು ಪ್ರಯತ್ನಿಸುತ್ತೀರಿ ಆಗ ಮಾಯೆಯೂ ನಿಮ್ಮ ಹಿಂದೆ ಬೀಳುತ್ತದೆ. ಎಷ್ಟು ತೊಂದರೆ
ಕೊಡುತ್ತದೆ, ಎಷ್ಟು ಜನರನ್ನು ಸೋಲಿಸುತ್ತದೆ, ಕೆಲವರನ್ನು ಒಮ್ಮೆಲೆ ತಿಂದು ಬಿಡುತ್ತದೆ, ನುಂಗಿ
ಹಾಕುತ್ತದೆ. ಭಲೆ ಸ್ವರ್ಗದ ಮಾಲೀಕರಾಗುತ್ತಾರೆ ಆದರೆ ಮಾಯೆಯಂತೂ ತಿನ್ನುತ್ತಿರುತ್ತದೆ. ಅದರ
ಹೊಟ್ಟೆಯಲ್ಲಿ ಬಿದ್ದಂತೆ. ಕೇವಲ ಬಾಲವಷ್ಟೇ ಉಳಿದಿದೆ. ಉಳಿದೆಲ್ಲವೂ ಅದರ ಒಳಗಿದೆ ಇದಕ್ಕೆ ಕೆಸರು
ಗುಂಡಿ ಎಂದು ಹೇಳುತ್ತಾರೆ. ಎಷ್ಟೊಂದು ಮಕ್ಕಳು ಕೆಸರಿನಲ್ಲಿ ಬಿದ್ದಿದ್ದಾರೆ, ಸ್ವಲ್ಪವೂ ನೆನಪೇ
ಮಾಡುವುದಿಲ್ಲ. ಹೇಗೆ ಆಮೆ ಮತ್ತು ಭ್ರಮರಿಯ ಉದಾಹರಣೆಯಿದೆ. ಹಾಗೆಯೇ ನೀವು ಸಹ ಕೀಟಗಳಿಗೆ ಜ್ಞಾನದ
ಭೂ ಭೂ ಮಾಡಿ ಹೇಗಿದ್ದ ಕೀಟಗಳನ್ನು ಹೇಗೆ ತಯಾರು ಮಾಡುತ್ತೀರಿ! ಒಮ್ಮೆಲೇ ಸ್ವರ್ಗದ ಮಾಲೀಕರನ್ನಾಗಿ
ಮಾಡುತ್ತೀರಿ. ಸನ್ಯಾಸಿಗಳು ಭಲೆ ಭ್ರಮರಿಯ ಉದಾಹರಣೆ ಕೊಡುತ್ತಾರೆ ಆದರೆ ಅವರು ಭೂ ಭೂ ಮಾಡಿ
ಯಾರಾದರೂ ಪರಿವರ್ತನೆಯಾಗುತ್ತಾರೆಯೇ? ಸಂಗಮಯುಗದಲ್ಲಿಯೇ ಪರಿವರ್ತನೆಯಾಗುತ್ತದೆ. ಈಗ ಇದು
ಸಂಗಮಯುಗವಾಗಿದೆ. ನೀವು ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ. ಆದ್ದರಿಂದ ಯಾರು ವಿಕಾರಿ
ಮನುಷ್ಯರಿದ್ದಾರೆಯೋ ಅವರನ್ನು ನೀವು ಕರೆ ತರುತ್ತೀರಿ. ಕೀಟಗಳಲ್ಲಿಯೂ ಸಹ ಕೆಲವು ಭ್ರಮರಿಯಾಗಿ
ಬಿಡುತ್ತವೆ, ಕೆಲವು ಹಾಗೆಯೇ ಸತ್ತು ಹೋಗುತ್ತವೆ. ಇನ್ನೂ ಕೆಲವು ಅರ್ಧಂಬರ್ಧವಾಗಿ ಹಾಗೆಯೇ
ಉಳಿಯುತ್ತದೆ. ತಂದೆಯು ಇದನ್ನು ಬಹಳ ನೋಡಿದ್ದಾರೆ. ಇಲ್ಲಿಯೂ ಸಹ ಕೆಲವರು ಒಳ್ಳೆಯ ರೀತಿಯಲ್ಲಿ
ಓದುತ್ತಾರೆ, ಜ್ಞಾನದ ರೆಕ್ಕೆಗಳನ್ನು ಧಾರಣೆ ಮಾಡುತ್ತಾರೆ. ಕೆಲವರನ್ನಂತೂ ಮಾಯೆಯು ಅರ್ಧದಲ್ಲಿಯೇ
ಹಿಡಿದುಕೊಂಡು ಬಿಡುತ್ತದೆ. ಆಗ ಅವರು ಅರ್ಧಂಬರ್ಧವಾಗಿಯೇ ಉಳಿಯುತ್ತಾರೆ ಅಂದಾಗ ಈ ಉದಾಹರಣೆಯು
ಈಗಿನದಾಗಿದೆ, ಆಶ್ಚರ್ಯವಾಗಿದೆಯಲ್ಲವೆ! ಭ್ರಮರಿಯು ಕೀಟವನ್ನು ತೆಗೆದುಕೊಂಡು ಬಂದು ತನ್ನ ಸಮಾನ
ಮಾಡಿಕೊಳ್ಳುತ್ತದೆ. ಇದೊಂದೇ ಆಗಿದೆ ಅನ್ಯ ಕೀಟಗಳನ್ನು ತನ್ನ ಸಮಾನ ಮಾಡಿಕೊಳ್ಳುತ್ತದೆ,
ಎರಡನೆಯದಾಗಿ ಸರ್ಪದ ಉದಾಹರಣೆಯನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ಒಂದು ಪೋರೆ (ಶರೀರ) ಯನ್ನು
ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಈಗ ಈ ಶರೀರವನ್ನು ಬಿಡುವವರಿದ್ದೇವೆಂದು ತಕ್ಷಣ
ಸಾಕ್ಷಾತ್ಕಾರವಾಗುತ್ತದೆ. ಆಗ ಆ ಶರೀರದಿಂದ ಹೊರ ಬಂದು ಇನ್ನೊಂದು ಗರ್ಭ ಮಹಲಿನಲ್ಲಿ
ಕುಳಿತುಕೊಳ್ಳುತ್ತದೆ. ಇದೂ ಸಹ ಒಂದು ಉದಾಹರಣೆ ಕೊಡುತ್ತಾರೆ - ಗರ್ಭ ಮಹಲಿನಲ್ಲಿ ಕುಳಿತಿದ್ದರೂ
ಅವರಿಗೆ ಹೊರ ಬರಲು ಮನಸ್ಸೇ ಇರಲಿಲ್ಲ ಆದರೂ ಸಹ ಅವಶ್ಯವಾಗಿ ಹೊರಬರಲೇಬೇಕಾಯಿತು. ಈಗ ನೀವು ಮಕ್ಕಳು
ಸಂಗಮಯುಗದಲಿದ್ದೀರಿ, ಜ್ಞಾನದಿಂದ ಇಂತಹ ಪುರುಷೋತ್ತಮರಾಗುತ್ತೀರಿ. ಭಕ್ತಿಯನ್ನಂತೂ
ಜನ್ಮ-ಜನ್ಮಾಂತರದಿಂದ ಮಾಡಿದ್ದೀರಿ ಅಂದಾಗ ಯಾರು ಹೆಚ್ಚಿನ ಭಕ್ತಿ ಮಾಡಿದ್ದಾರೆಯೋ ಅವರೇ ಬಂದು
ನಂಬರ್ವಾರ್ ಪುರುಷಾರ್ಥದನುಸಾರ ಪದವಿಯನ್ನು ಪಡೆಯುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿ ಪೂರ್ಣ
ಜ್ಞಾನವಿದೆ. ಬಾಕಿ ಶಾಸ್ತ್ರಗಳ ಜ್ಞಾನವು ಯಾವುದೇ ಜ್ಞಾನವಲ್ಲ, ಅದಂತೂ ಭಕ್ತಿಯಾಗಿದೆ, ಅದರಿಂದ
ಯಾವುದೇ ಸದ್ಗತಿಯಾಗುವುದಿಲ್ಲ. ಸದ್ಗತಿಯೆಂದರೆ ಹಿಂತಿರುಗಿ ಮನೆಗೆ ಹೋಗುವುದು. ಮನೆಗೆ ಯಾರೂ
ಹೋಗುವುದಿಲ್ಲ. ಸ್ವಯಂ ತಂದೆಯೇ ಹೇಳುತ್ತಾರೆ - ಭಕ್ತಿಯಲ್ಲಿ ನನ್ನ ಜೊತೆ ಯಾರೂ ಮಿಲನ
ಮಾಡುವುದಿಲ್ಲ, ಓದಿಸುವವರು ಮತ್ತು ಜೊತೆಯಲ್ಲಿ ಕರೆದುಕೊಂಡು ಹೋಗುವವರು ಬೇಕಲ್ಲವೆ. ತಂದೆಗೆ ಎಷ್ಟು
ಗಮನವಿರುತ್ತದೆ! 5000 ವರ್ಷಗಳಲ್ಲಿ ತಂದೆಯು ಒಂದೇ ಬಾರಿ ಬಂದು ಓದಿಸುತ್ತಾರೆ. ನೀವು ಪದೇ-ಪದೇ
ನಾವಾತ್ಮರಾಗಿದ್ದೇವೆ ಎಂಬುದನ್ನು ಮರೆತು ಹೋಗುತ್ತೇವೆ. ನಾವಾತ್ಮಗಳಿಗೆ ಓದಿಸಲು ತಂದೆಯು
ಬಂದಿದ್ದಾರೆ ಎಂಬ ಮಾತನ್ನು ಒಮ್ಮೆಲೆ ಪಕ್ಕಾ ಮಾಡಿಕೊಳ್ಳಿ. ಇದಕ್ಕೆ ಆಧ್ಯಾತ್ಮಿಕ ಜ್ಞಾನ ಎಂದು
ಹೇಳಲಾಗುತ್ತದೆ. ಪರಮ ಆತ್ಮನು ನಾವಾತ್ಮಗಳಿಗೆ ಜ್ಞಾನವನ್ನು ಕೊಡುತ್ತಾರೆ, ಸಂಸ್ಕಾರವೂ
ಆತ್ಮದಲ್ಲಿಯೇ ಇರುತ್ತದೆ, ಶರೀರವಂತೂ ಸಮಾಪ್ತಿಯಾಗಿ ಬಿಡುತ್ತದೆ ಆದರೆ ಆತ್ಮವು ಅವಿನಾಶಿಯಾಗಿದೆ.
ಅಂದಾಗ ಈ ಬ್ರಹ್ಮಾರವರ ಭೃಕುಟಿಯು ಸದ್ಗುರುವಿನ ದರ್ಬಾರ್ ಆಗಿದೆ. ಇದು ಈ ಬ್ರಹ್ಮಾರವರ ಆತ್ಮಕ್ಕೂ
ದರ್ಬಾರ್ ಆಗಿದೆ ಮತ್ತು ಸದ್ಗುರುವೂ ಸಹ ಬಂದು ಇದರಲ್ಲಿ ಪ್ರವೇಶ ಮಾಡಿದ್ದಾರೆ. ಇದಕ್ಕೆ ರಥವೆಂದೂ
ಹೇಳುತ್ತಾರೆ, ದರ್ಬಾರ್ ಎಂದೂ ಹೇಳುತ್ತಾರೆ. ನೀವು ಮಕ್ಕಳು ಶ್ರೀಮತದನುಸಾರ ಸ್ವರ್ಗದ ಬಾಗಿಲನ್ನು
ತೆರೆಯುತ್ತಿದ್ದೀರಿ. ಎಷ್ಟು ಚೆನ್ನಾಗಿ ಓದುವಿರೋ ಅಷ್ಟು ಚೆನ್ನಾಗಿರುವ ಶ್ರೇಷ್ಠ ಪದವಿಯನ್ನು
ಸತ್ಯಯುಗದಲ್ಲಿ ಪಡೆಯುವಿರಿ ಅಂದಾಗ ಓದಬೇಕಲ್ಲವೆ. ಶಿಕ್ಷಕರ ಮಕ್ಕಳಂತೂ ಬಹಳ
ಬುದ್ಧಿವಂತರಾಗಿರುತ್ತಾರೆ. ಆದರೆ ಮನೆಯ ಗಂಗೆಗೆ ಬೆಲೆಯಿರುವುದಿಲ್ಲವೆಂದು ಹೇಳುತ್ತಾರಲ್ಲವೆ.
ಬಾಬಾರವರು ನೋಡಿದ್ದಾರೆ - ಇಡೀ ನಗರದ ಕೊಳಕೆಲ್ಲವೂ ಗಂಗೆಯಲ್ಲಿ ಬೀಳುತ್ತದೆ ಅಂದಮೇಲೆ ಅದಕ್ಕೆ
ಪತಿತ-ಪಾವನಿ ಎಂದು ಹೇಳುತ್ತಾರೆಯೇ. ಮನುಷ್ಯರ ಬುದ್ಧಿಯು ನೋಡಿ ಹೇಗಾಗಿ ಬಿಟ್ಟಿದೆ! ದೇವಿಯರನ್ನು
ಶೃಂಗಾರ ಮಾಡಿ, ಪೂಜೆ ಮಾಡಿ ನಂತರ ಮುಳುಗಿಸಿ ಬಿಡುತ್ತಾರೆ. ಕೃಷ್ಣನನ್ನೂ ಸಹ ಮುಳುಗಿಸುತ್ತಾರಲ್ಲವೆ.
ಅದೂ ಬಹಳ ಅಗೌರವದಿಂದ ಮುಳುಗಿಸುತ್ತಾರೆ. ಬಂಗಾಳದ ಕಡೆ ಮುಳುಗಿಸುತ್ತಾರೆ, ಅದೂ ಮೂರ್ತಿಯ ಮೇಲೆ
ಕಾಲಿಟ್ಟು ಮುಳುಗಿಸುತ್ತಾರೆ. ಬಂಗಾಳದಲ್ಲಿ ಮೊದಲು ಈ ಪದ್ಧತಿಯಿತ್ತು, ಯಾರಾದರೂ ಪ್ರಾಣ ಬಿಡುವ
ಸ್ಥಿತಿಯಲ್ಲಿದ್ದರೆ ಅವರನ್ನು ತಕ್ಷಣ ಗಂಗೆಯ ಬಳಿ ತೆಗೆದುಕೊಂಡು ಹೋಗುತ್ತಿದ್ದರು. ಅಲ್ಲೂ
ನೀರಿನಲ್ಲಿ ಹಾಕಿ ‘ಹರಿ ಹೇಳು’‘ಹರಿ ಹೇಳು’ ಎಂದು ಹೇಳುತ್ತಾ ಬಾಯಲ್ಲಿ ನೀರು ಹಾಕುತ್ತಿರುತ್ತಾರೆ
ಹೀಗೆಯೇ ಪ್ರಾಣ ತೆಗೆದು ಬಿಡುತ್ತಿದ್ದರು. ಆಶ್ಚರ್ಯವಾಗಿದೆಯಲ್ಲವೆ! ಈಗ ನೀವು ಮಕ್ಕಳ ಬುದ್ಧಿಯಲ್ಲಿ
ಉತ್ಥಾನ ಮತ್ತು ಪಥನದ ಪೂರ್ಣ ಜ್ಞಾನವಿದೆ ನಂಬರ್ವಾರ್ ಪುರುಷಾರ್ಥದನುಸಾರ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯು
ಏನನ್ನು ತಿಳಿಸುವರೋ ಅದನ್ನೇ ಕೇಳಬೇಕು ಮತ್ತು ಯಾವುದು ಸತ್ಯವೆಂದು ಪರಿಶೀಲನೆ ಮಾಡಬೇಕು.
ಸತ್ಯವನ್ನೇ ನೆನಪು ಮಾಡಬೇಕು. ಅಸತ್ಯ ಮಾತನ್ನು ಕೇಳಬಾರದು, ಮಾತನಾಡಲೂಬಾರದು, ನೋಡಲೂಬಾರದು.
2. ವಿದ್ಯೆಯನ್ನು ಬಹಳ ಚೆನ್ನಾಗಿ ಓದಿ ತಮ್ಮನ್ನು ರಾಜಾಧಿರಾಜರನ್ನಾಗಿ ಮಾಡಿಕೊಳ್ಳಬೇಕು. ಈ ಹಳೆಯ
ಶರೀರ ಮತ್ತು ಹಳೆಯ ಪ್ರಪಂಚದಲ್ಲಿ ತಮ್ಮನ್ನು ತಾತ್ಕಾಲಿಕವೆಂದು ತಿಳಿಯಬೇಕು.
ವರದಾನ:
ಜ್ಞಾನ
ಅಮೃತದಿಂದ ಬಾಯಾರಿರುವ ಆತ್ಮಗಳ ಬಾಯಾರಿಕೆ ಹೋಗಲಾಡಿಸಿ ತೃಪ್ತಿ ಮಾಡುವಂತಹ ಮಹಾನ್ ಪುಣ್ಯ ಆತ್ಮ ಭವ.
ಯಾರೇ ಬಾಯರಿರುವವರ
ಬಾಯಾರಿಕೆಯನ್ನು ದೂರ ಮಾಡುವುದು ಮಹಾನ್ ಪುಣ್ಯದ ಕೆಲಸವಾಗಿದೆ. ಹೇಗೆ ನೀರು ಸಿಗದೇ ಹೋದಾಗ
ಬಾಯಾರಿಕೆಯಿಂದ ಚಡಪಡಿಸುತ್ತಾರೆ ಇಂತಹ ಜ್ಞಾನ ಅಮೃತ ಸಿಗದ ಕಾರಣ ಆತ್ಮಗಳು ದುಃಖ ಅಶಾಂತಿಯಲ್ಲಿ
ಚಡಪಡಿಸುತ್ತಿದ್ದಾರೆ, ಆಗ ಅವರಿಗೆ ಜ್ಞಾನ ಅಮೃತ ಕೊಟ್ಟು ಬಾಯಾರಿಕೆಯನ್ನು ನೀಗಿಸುವಂತಹವರಾಗಿ.
ಹೇಗೆ ಊಟ ಮಾಡಲು ಸಮಯ ತೆಗೆಯುತ್ತೀರಿ ಏಕೆಂದರೆ ಆವಶ್ಯಕವಾಗಿದೆ, ಅದೇ ರೀತಿ ಈ ಪುಣ್ಯದ ಕಾರ್ಯ
ಮಾಡುವುದೂ ಸಹ ಆವಶ್ಯಕವಾಗಿದೆ ಆದ್ದರಿಂದ ಈ ಚಾನ್ಸ್ ತೆಗೆದುಕೊಳ್ಳಬೇಕು, ಸಮಯ ತೆಗೆಯಬೇಕು - ಆಗ
ಹೇಳಲಾಗುವುದು ಮಹಾನ್ ಪುಣ್ಯ ಆತ್ಮ.
ಸ್ಲೋಗನ್:
ಕಳೆದು ಹೋದದಕ್ಕೆ
ಬಿಂದು ಹಾಕಿ ಸಾಹಸದಿಂದ ಮುಂದುವರೆಯಿರಿ, ಆಗ ತಂದೆಯಿಂದ ಸಹಾಯ ಸಿಗುತ್ತಿರುವುದು.