20.12.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಮ್ಮನ್ನು ಸರ್ವ ಖಜಾನೆಗಳಿಂದ ಸಂಪನ್ನರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ, ನೀವು ಕೇವಲ ಈಶ್ವರೀಯ ಮತದಂತೆ ನಡೆಯಿರಿ, ಚೆನ್ನಾಗಿ ಪುರುಷಾರ್ಥ ಮಾಡಿ ಆಸ್ತಿಯನ್ನು ತೆಗೆದುಕೊಳ್ಳಿ, ಮಾಯೆಯಿಂದ ಸೋಲನ್ನನುಭವಿಸಬೇಡಿ”

ಪ್ರಶ್ನೆ:
ಈಶ್ವರೀಯ ಮತ - ದೈವೀ ಮತ ಮತ್ತು ಮನುಷ್ಯ ಮತದಲ್ಲಿ ಮುಖ್ಯ ಅಂತರವೇನಿದೆ?

ಉತ್ತರ:
ಈಶ್ವರೀಯ ಮತದಿಂದ ನೀವು ಮಕ್ಕಳು ಹಿಂತಿರುಗಿ ಮನೆಗೆ ಹೋಗುತ್ತೀರಿ ಮತ್ತು ಹೊಸ ಪ್ರಪಂಚದಲ್ಲಿ ಬಂದು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ದೈವೀ ಮತದಿಂದ ನೀವು ಸದಾ ಸುಖಿಯಾಗಿರುತ್ತೀರಿ, ಏಕೆಂದರೆ ಅದೂ ಸಹ ತಂದೆಯ ಮೂಲಕ ಈ ಸಮಯದಲ್ಲಿ ಸಿಕ್ಕಿರುವ ಮತವಾಗಿದೆ. ಆದರೂ ಸಹ ನೀವು ಕೆಳಗೆ ಇಳಿಯುತ್ತೀರಿ. ಮನುಷ್ಯ ಮತವು ದುಃಖಿಯನ್ನಾಗಿ ಮಾಡುತ್ತದೆ. ಈಶ್ವರೀಯ ಮತದಂತೆ ನಡೆಯಲು ಮೊಟ್ಟ ಮೊದಲಿಗೆ ಓದಿಸುವಂತಹ ತಂದೆಯ ಪ್ರತಿ ಪೂರ್ಣ ನಿಶ್ಚಯವಿರಲಿ.

ಓಂ ಶಾಂತಿ.
ತಂದೆಯು ಅರ್ಥವನ್ನಂತೂ ತಿಳಿಸಿದ್ದಾರೆ, ನಾನು ಆತ್ಮ, ಶಾಂತ ಸ್ವರೂಪನಾಗಿದ್ದೇನೆ. ಓಂ ಶಾಂತಿ ಎಂದು ಹೇಳಿದಾಗ ಆತ್ಮಕ್ಕೆ ತನ್ನ ಮನೆಯ ನೆನಪು ಬರುತ್ತದೆ. ನಾನಾತ್ಮ ಶಾಂತ ಸ್ವರೂಪನಾಗಿದ್ದೇನೆ. ಕರ್ಮೇಂದ್ರಿಯಗಳು ಸಿಕ್ಕಿದಾಗ ಆತ್ಮವು ಮಾತಿನಲ್ಲಿ ಬರುತ್ತದೆ. ಮೊದಲು ಕರ್ಮೇಂದ್ರಿಯಗಳು ಚಿಕ್ಕದಾಗಿರುತ್ತದೆ ನಂತರ ದೊಡ್ಡದಾಗುತ್ತದೆ. ಈಗ ಪರಮಪಿತ ಪರಮಾತ್ಮನಂತೂ ನಿರಾಕಾರನಾಗಿದ್ದಾರೆ. ಮಾತನಾಡಲು ಅವರಿಗೂ ಸಹ ರಥವು ಬೇಕು. ಹೇಗೆ ನೀವಾತ್ಮಗಳು ಪರಮಧಾಮದ ನಿವಾಸಿಗಳಾಗಿದ್ದೀರಿ. ಇಲ್ಲಿ ಬಂದು ಮಾತಿನಲ್ಲಿ ಬರುತ್ತೀರಿ. ಹಾಗೆಯೇ ತಂದೆಯೂ ಸಹ ಹೇಳುತ್ತಾರೆ - ನಾನು ನಿಮಗೆ ಜ್ಞಾನವನ್ನು ತಿಳಿಸುವುದಕ್ಕಾಗಿ ಮಾತಿನಲ್ಲಿ ಬರುತ್ತೇನೆ. ತಂದೆಯು ತಮ್ಮ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಪರಿಚಯವನ್ನು ನೀಡುತ್ತಾರೆ. ಇದು ಆತ್ಮಿಕ ವಿದ್ಯೆಯಾಗಿದೆ, ಅದು ಲೌಕಿಕ ವಿದ್ಯೆಯಾಗಿರುತ್ತದೆ. ಅವರು ತಮ್ಮನ್ನು ಶರೀರವೆಂದು ತಿಳಿಯುತ್ತಾರೆ. ನಾನಾತ್ಮ ಕಿವಿಗಳ ಮೂಲಕ ಕೇಳುತ್ತೇನೆಂದು ತಿಳಿಯುವುದಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ತಂದೆಯು ಪತಿತ-ಪಾವನನಾಗಿದ್ದಾರೆ. ಅವರೇ ಬಂದು ನಾನು ಹೇಗೆ ಬರುತ್ತೇನೆಂಬುದನ್ನು ತಿಳಿಸುತ್ತಾರೆ - ನಾನು ನಿಮ್ಮ ಹಾಗೆ ಗರ್ಭದಲ್ಲಿ ಬರುವುದಿಲ್ಲ, ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡುತ್ತೇನೆ. ಮತ್ತ್ಯಾವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಇವರು ರಥವಾಗಿದ್ದಾರೆ, ಇವರಿಗೆ ತಾಯಿಯೆಂದೂ ಹೇಳಲಾಗುತ್ತದೆ. ಎಲ್ಲದಕ್ಕಿಂತ ದೊಡ್ಡ ನದಿಯು ಬ್ರಹ್ಮ ಪುತ್ರ ಆಗಿದೆ, ಅಂದಮೇಲೆ ಇವರು ಎಲ್ಲದಕ್ಕಿಂತ ದೊಡ್ಡ ನದಿಯಾಗಿದ್ದಾರೆ. ನೀರಿನ ಮಾತಿಲ್ಲ, ಇವರು ಮಹಾನದಿ ಅರ್ಥಾತ್ ಎಲ್ಲರಿಗಿಂತ ದೊಡ್ಡ ಜ್ಞಾನ ನದಿಯಾಗಿದ್ದಾರೆ ಅಂದಾಗ ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ - ನಾನು ನಿಮ್ಮ ತಂದೆಯಾಗಿದ್ದೇನೆ, ನೀವು ಹೇಗೆ ಮಾತನಾಡುತ್ತೀರೋ ಹಾಗೆಯೇ ನಾನೂ ಮಾತನಾಡುತ್ತೇನೆ. ನನ್ನ ಪಾತ್ರವು ಎಲ್ಲದಕ್ಕಿಂತ ಅಂತಿಮ ಸಮಯದಲ್ಲಿ ಇರುತ್ತದೆ. ಯಾವಾಗ ನೀವು ಸಂಪೂರ್ಣ ಪತಿತರಾಗುವಿರೋ ಆಗ ನಿಮ್ಮನ್ನು ಪಾವನ ಮಾಡಲು ಬರಬೇಕಾಗುತ್ತದೆ. ಈ ಲಕ್ಷ್ಮಿ-ನಾರಾಯಣರನ್ನು ಹೀಗೆ ಮಾಡುವವರು ಯಾರು? ಈಶ್ವರನ ವಿನಃ ಮತ್ತ್ಯಾರಿಗೂ ಹೇಳಲು ಸಾಧ್ಯವಿಲ್ಲ, ಬೇಹದ್ದಿನ ತಂದೆಯೇ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರಲ್ಲವೆ. ತಂದೆಯೇ ಜ್ಞಾನ ಸಾಗರನಾಗಿದ್ದಾರೆ, ಅವರೇ ತಿಳಿಸುತ್ತಾರೆ - ನಾನು ಈ ಮನುಷ್ಯ ಸೃಷ್ಟಿಯ ಚೈತನ್ಯ ಬೀಜ ರೂಪನಾಗಿದ್ದೇನೆ. ನಾನು ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೇನೆ. ನಾನು ಸತ್ಯ, ಚೈತನ್ಯ ಬೀಜ ರೂಪನಾಗಿದ್ದೇನೆ. ಈ ಸೃಷ್ಟಿರೂಪಿ ವೃಕ್ಷದ ಜ್ಞಾನವು ನನ್ನಲ್ಲಿದೆ, ಇದಕ್ಕೆ ಸೃಷ್ಟಿಚಕ್ರ ಅಥವಾ ನಾಟಕವೆಂದು ಹೇಳಲಾಗುತ್ತದೆ. ಇದು ಸುತ್ತುತ್ತಲೇ ಇರುತ್ತದೆ. ಆ ಹದ್ದಿನ ನಾಟಕವು 2-4 ಗಂಟೆಗಳ ಸಮಯ ನಡೆಯುತ್ತದೆ, ಈ ಬೇಹದ್ದಿನ ನಾಟಕವು 5000 ವರ್ಷಗಳದ್ದಾಗಿದೆ. ಯಾವ ಸಮಯವು ಕಳೆಯುತ್ತಾ ಹೋದಂತೆ 5000 ವರ್ಷಗಳಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ಮೊದಲು ನಾವೇ ದೇವಿ-ದೇವತೆಗಳಾಗಿದ್ದೆವು ನಂತರ ಕಳೆಯುತ್ತಾ-ಕಳೆಯುತ್ತಾ ನಾವು ಕ್ಷತ್ರಿಯ ಕುಲದಲ್ಲಿ ಬಂದು ಬಿಟ್ಟೆವು. ಇದೆಲ್ಲಾ ರಹಸ್ಯವು ಬುದ್ಧಿಯಲ್ಲಿದೆಯಲ್ಲವೆ. ಆದ್ದರಿಂದ ಇದನ್ನು ಸ್ಮರಣೆ ಮಾಡುತ್ತಿರಬೇಕು. ನಾವು ಪ್ರಾರಂಭದಲ್ಲಿ ಪಾತ್ರವನ್ನಭಿನಯಿಸಲು ಬಂದಾಗ ನಾವೇ ದೇವಿ-ದೇವತೆಗಳಾಗಿದ್ದೆವು. 1250 ವರ್ಷಗಳ ಕಾಲ ರಾಜ್ಯಭಾರ ಮಾಡಿದೆವು. ಸಮಯವಂತೂ ಕಳೆಯುತ್ತಾ ಹೋಗುತ್ತದೆಯಲ್ಲವೆ. ಲಕ್ಷಾಂತರ ವರ್ಷಗಳ ಮಾತಿಲ್ಲ. ಲಕ್ಷಾಂತರ ವರ್ಷಗಳ ಬಗ್ಗೆ ಯಾರೂ ಚಿಂತನೆಯೂ ಮಾಡಲು ಸಾಧ್ಯವಿಲ್ಲ.

ನೀವು ಮಕ್ಕಳು ತಿಳಿದುಕೊಂಡಿದ್ದಿರಿ, ನಾವೇ ದೇವಿ-ದೇವತೆಗಳಾಗಿದ್ದೆವು ನಂತರ ನಾವೇ ಪಾತ್ರವನ್ನಭಿನಯಿಸುತ್ತೇವೆ. ವರ್ಷದ ಹಿಂದೆ ವರ್ಷವನ್ನು ಕಳೆಯುತ್ತಾ-ಕಳೆಯುತ್ತಾ ಈಗ ಎಷ್ಟೊಂದು ವರ್ಷಗಳನ್ನು ಕಳೆದಿದ್ದೇವೆ. ಕಳೆಯುತ್ತಾ-ಕಳೆಯುತ್ತಾ ಸುಖವೂ ಸಹ ಕಡಿಮೆಯಾಗುತ್ತಾ ಹೋಗುತ್ತದೆ. ಪ್ರತಿಯೊಂದು ಮೊದಲು ಸತೋಪ್ರಧಾನ, ಸತೋ, ರಜೋ, ತಮೋದಲ್ಲಿ ಬರುತ್ತದೆ. ಅವಶ್ಯವಾಗಿ ಹಳೆಯದಾಗುತ್ತಾ ಹೋಗುತ್ತದೆ. ಇಲ್ಲಿ ಇದು ಬೇಹದ್ದಿನ ಮಾತಾಗಿದೆ. ಇವೆಲ್ಲಾ ಮಾತುಗಳನ್ನು ಚೆನ್ನಾಗಿ ಬುದ್ಧಿಯಲ್ಲಿ ಧಾರಣೆ ಮಾಡಿಕೊಂಡು ಅನ್ಯರಿಗೆ ತಿಳಿಸಬೇಕಾಗಿದೆ. ಎಲ್ಲರೂ ಒಂದೇ ಸಮನಾಗಿರುವುದಿಲ್ಲ. ಅವಶ್ಯವಾಗಿ ಭಿನ್ನ-ಭಿನ್ನ ರೀತಿಯಲ್ಲಿ ಚಕ್ರದ ಬಗ್ಗೆ ತಿಳಿಸುವುದು ಬಹಳ ಸಹಜ. ನಾಟಕ ಮತ್ತು ವೃಕ್ಷ - ಇವೆರಡೂ ಚಿತ್ರಗಳು ಮುಖ್ಯವಾಗಿದೆ. ಕಲ್ಪವೃಕ್ಷವೆಂದು ಹೆಸರಿದೆಯಲ್ಲವೆ. ಕಲ್ಪದ ಆಯಸ್ಸು ಎಷ್ಟು ವರ್ಷಗಳೆಂದು ಯಾರೂ ತಿಳಿದುಕೊಂಡಿಲ್ಲ. ಮನುಷ್ಯರದು ಅನೇಕ ಮತಗಳಿವೆ. ಕೆಲವರು ಕೆಲಕೆಲವೊಂದು ರೀತಿಯಲ್ಲಿ ಹೇಳುತ್ತಾರೆ. ಈಗ ನೀವು ಅನೇಕ ಮನುಷ್ಯ ಮತಗಳನ್ನೂ ತಿಳಿದುಕೊಂಡಿದ್ದೀರಿ ಮತ್ತು ಒಂದು ಈಶ್ವರೀಯ ಮತವನ್ನೂ ತಿಳಿದುಕೊಂಡಿದ್ದೀರಿ. ಎಷ್ಟೊಂದು ಅಂತರವಿದೆ. ಈಶ್ವರೀಯ ಮತದಿಂದ ನೀವು ಪುನಃ ಹೊಸ ಪ್ರಪಂಚದಲ್ಲಿ ಹೋಗಬೇಕಾಗುತ್ತದೆ ಮತ್ತ್ಯಾವುದೇ ಮತ, ದೈವೀ ಮತ ಮತ್ತು ಮನುಷ್ಯ ಮತದಿಂದ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ದೈವೀ ಮತದಿಂದ ನೀವು ಕೆಳಗೆ ಇಳಿಯುತ್ತೀರಿ. ಏಕೆಂದರೆ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಅಸುರೀ ಮತದಿಂದಲೂ ಇಳಿಯುತ್ತೀರಿ. ಆಸುರೀ ಮತದಲ್ಲಿ ದುಃಖವಿದೆ, ದೈವೀ ಮತದಲ್ಲಿ ಸುಖವಿದೆ. ದೈವೀ ಮತವೂ ಸಹ ಈ ಸಮಯದಲ್ಲಿ ತಂದೆಯು ಕೊಟ್ಟಿರುವುದೇ ಆಗಿದೆ, ಆದ್ದರಿಂದ ನೀವು ಸುಖಿಯಾಗಿರುತ್ತೀರಿ. ಬೇಹದ್ದಿನ ತಂದೆಯು ಎಷ್ಟು ದೂರ-ದೂರದಿಂದ ಬರುತ್ತಾರೆ. ಮನುಷ್ಯರು ಸಂಪಾದನೆ ಮಾಡಲು ಹೊರಗೆ ಹೋಗುತ್ತಾರೆ. ಯಾವಾಗ ಬಹಳ ಹಣವು ಬರುವುದೋ ಆಗ ಹಿಂತಿರುಗಿ ಬರುತ್ತಾರೆ. ತಂದೆಯೂ ಸಹ ಹೇಳುತ್ತಾರೆ - ನಾನು ನೀವು ಮಕ್ಕಳಿಗಾಗಿ ಬಹಳ ಖಜಾನೆಗಳನ್ನು ತೆಗೆದುಕೊಂಡು ಬರುತ್ತೇನೆ ಏಕೆಂದರೆ ನನಗೆ ಗೊತ್ತಿದೆ, ನಿಮಗೆ ಸಂಪತ್ತನ್ನು ಕೊಟ್ಟಿದ್ದೆನು ಅದೆಲ್ಲವನ್ನೂ ನೀವು ಕಳೆದುಕೊಂಡಿದ್ದೀರಿ, ನಿಮ್ಮೊಂದಿಗೇ ಮಾತನಾಡುತ್ತೇನೆ. ನೀವೇ ಪ್ರತ್ಯಕ್ಷದಲ್ಲಿ ಕಳೆದುಕೊಂಡಿದ್ದೀರಿ. 5000 ವರ್ಷದ ಮಾತು ನಿಮಗೆ ನೆನಪಿದೆಯಲ್ಲವೆ. ಹೌದು ಬಾಬಾ, 5000 ವರ್ಷಗಳ ಮೊದಲು ನಿಮ್ಮೊಂದಿಗೆ ಮಿಲನ ಮಾಡಿದ್ದೆನು, ನೀವು ಆಸ್ತಿಯನ್ನು ಕೊಟ್ಟಿದ್ದಿರಿ ಎಂದು ಹೇಳುತ್ತೀರಿ. ಈಗ ನಿಮಗೆ ಸ್ಮೃತಿಯು ಬಂದಿದೆ - ಅವಶ್ಯವಾಗಿ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆದುಕೊಂಡಿದ್ದೆವು. ಬಾಬಾ, ತಮ್ಮಿಂದ ಹೊಸ ಪ್ರಪಂಚದ ರಾಜ್ಯಭಾಗ್ಯದ ಆಸ್ತಿಯನ್ನು ತೆಗೆದುಕೊಂಡಿದ್ದೆವು. ಅದಕ್ಕೆ ತಂದೆಯು ಒಳ್ಳೆಯದು ಮಕ್ಕಳೇ, ಮತ್ತೆ ಪುರುಷಾರ್ಥ ಮಾಡಿ. ಬಾಬಾ, ಮಾಯೆಯ ಭೂತವು ಸೋಲಿಸಿ ಬಿಟ್ಟಿತೆಂದು ಹೇಳಬೇಡಿ. ದೇಹಾಭಿಮಾನದ ನಂತರವೇ ನೀವು ಮಾಯೆಯಿಂದ ಸೋಲುತ್ತೀರಿ. ಲೋಭಕ್ಕೆ ವಶರಾಗಿ ಲಂಚವನ್ನು ತಿಂದಿರಿ, ಜೀವನೋಪಾಯದ ಮಾತೇ ಬೇರೆಯಾಗಿದೆ. ತಂದೆಗೆ ಗೊತ್ತಿದೆ, ಲೋಭವಿಲ್ಲದೆ ಹೊಟ್ಟೆ ಪಾಡು ನಡೆಯುವುದಿಲ್ಲ. ಪರವಾಗಿಲ್ಲ, ಭಲೆ ತಿನ್ನಿ ಆದರೆ ಎಲ್ಲಿಯೂ ಸಿಲುಕಿ ಸಾಯಬೇಡಿ ಮತ್ತೆ ನಿಮಗೇ ದುಃಖವಾಗುವುದು. ಹಣ ಸಿಕ್ಕಿದರೆ ಖುಷಿಯಾಗಿ ಬಿಡುತ್ತೀರಿ, ಎಲ್ಲಿಯಾದರೂ ಪೋಲಿಸರು ಹಿಡಿದುಕೊಂಡರೆ ಜೈಲಿಗೆ ಹೋಗಬೇಕಾಗುತ್ತದೆ. ಇಂತಹ ಕೆಲಸವನ್ನು ಮಾಡಬೇಡಿ ಮತ್ತೆ ಅದಕ್ಕೆ ನಾನು ಜವಾಬ್ದಾರನಲ್ಲ. ಪಾಪ ಮಾಡಿದರೆ ಜೈಲಿಗೆ ಹೋಗುತ್ತಾರೆ. ಸತ್ಯಯುಗದಲ್ಲಂತೂ ಜೈಲು ಇತ್ಯಾದಿಗಳಿರುವುದೇ ಇಲ್ಲ, ಅಂದಾಗ ನಾಟಕದ ಯೋಜನೆಯನುಸಾರ ಕಲ್ಪದ ಹಿಂದೆ ನಿಮಗೆ ಯಾವ ಆಸ್ತಿಯು ಸಿಕ್ಕಿತೋ ಅದೇ ರೀತಿ 21 ಜನ್ಮಗಳಿಗಾಗಿ ಈಗ ಪುನಃ ತೆಗೆದುಕೊಳ್ಳುತ್ತೀರಿ. ಇಡೀ ರಾಜಧಾನಿಯು ಈಗ ಸ್ಥಾಪನೆಯಾಗುತ್ತದೆ ಅಂದರೆ ಬಡವರು, ಪ್ರಜೆಗಳು, ಸಾಹುಕಾರ ಪ್ರಜೆಗಳು, ರಾಜ-ರಾಣಿ, ಆದರೆ ಅಲ್ಲಿ ದುಃಖವಿರುವುದಿಲ್ಲ. ತಂದೆಯು ಗ್ಯಾರಂಟಿ ಕೊಡುತ್ತಾರೆ - ಎಲ್ಲರೂ ಒಂದೇ ಸಮಾನ ಪದವಿಯನ್ನು ಪಡೆಯಲು ಸಾಧ್ಯವಿಲ್ಲ, ಸೂರ್ಯವಂಶಿ-ಚಂದ್ರವಂಶಿ ರಾಜ್ಯದಲ್ಲಿ ಎಲ್ಲರೂ ಬೇಕಲ್ಲವೆ. ಮಕ್ಕಳಿಗೆ ತಿಳಿದಿದೆ - ಹೇಗೆ ತಂದೆಯು ನಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ, ಮತ್ತೆ ನಾವು ಕೆಳಗಿಳಿಯುತ್ತೇವೆ. ಸ್ಮೃತಿಯಲ್ಲಿ ಬಂದಿತಲ್ಲವೆ - ಶಾಲೆಯಲ್ಲಿ ವಿದ್ಯೆಯು ಸ್ಮೃತಿಯಲ್ಲಿರುತ್ತದೆಯಲ್ಲವೆ. ಇಲ್ಲಿಯೂ ಸಹ ತಂದೆಯು ಸ್ಮೃತಿ ತರಿಸುತ್ತಾರೆ. ಈ ಆತ್ಮೀಯ ವಿದ್ಯೆಯನ್ನು ಪ್ರಪಂಚದಲ್ಲಿ ಮತ್ತ್ಯಾರೂ ಓದಿಸಲು ಸಾಧ್ಯವಿಲ್ಲ. ಗೀತೆಯಲ್ಲಿಯೂ ಬರೆಯಲಾಗಿದೆ - ಮನ್ಮನಾಭವ. ಈ ಮಹಾಮಂತ್ರವನ್ನು ವಶೀಕರಣ ಮಂತ್ರವೆಂದು ಹೇಳಲಾಗುತ್ತದೆ ಅರ್ಥಾತ್ ಮಾಯೆಯ ಮೇಲೆ ಜಯ ಗಳಿಸುವ ಮಂತ್ರವಾಗಿದೆ. ಮಾಯಾಜೀತರೇ ಜಗಜ್ಜೀತರು. ಪಂಚ ವಿಕಾರಗಳಿಗೆ ಮಾಯೆಯೆಂದು ಹೇಳಲಾಗುತ್ತದೆ. ರಾವಣನ ಚಿತ್ರವು ಸಂಪೂರ್ಣ ಸ್ಪಷ್ಟವಾಗಿದೆ - 5 ವಿಕಾರಗಳು ಸ್ತ್ರೀಯಲ್ಲಿ, 5 ವಿಕಾರಗಳು ಪುರುಷನಲ್ಲಿವೆ. ಇದರಿಂದ ಕತ್ತೆಯ ಸಮಾನರಾಗಿ ಬಿಡುತ್ತಾರೆ. ಆದ್ದರಿಂದ ರಾವಣನಿಗೆ ತಲೆಯ ಮೇಲೆ ಕತ್ತೆಯ ತಲೆಯನ್ನು ತೋರಿಸುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ಜ್ಞಾನವಿಲ್ಲದೆ ನಾವೂ ಸಹ ಇದೇ ರೀತಿಯಾಗಿದ್ದೆವು. ತಂದೆಯು ಎಷ್ಟು ರಮಣೀಕವಾಗಿ ಓದಿಸುತ್ತಾರೆ. ಅವರು ಪರಮ ಶಿಕ್ಷಕನಾಗಿದ್ದಾರೆ, ಅವರಿಂದ ನಾವೇನು ಓದುತ್ತೇವೆಯೋ ಅದನ್ನು ಮತ್ತೆ ಅನ್ಯರಿಗೆ ತಿಳಿಸುತ್ತೇವೆ. ಮೊದಲಿಗೆ ಓದಿಸುವವರಲ್ಲಿ ನಿಶ್ಚಯ ಮಾಡಿಸಬೇಕು. ತಿಳಿಸಿ, ತಂದೆಯು ನಮಗೆ ಇದನ್ನು ತಿಳಿಸಿದ್ದಾರೆ, ಈಗ ಇದನ್ನು ಒಪ್ಪಿ ಅಥವಾ ಬಿಡಿ. ಇವರು ಬೇಹದ್ದಿನ ತಂದೆಯಂತೂ ಆಗಿದ್ದಾರಲ್ಲವೆ. ಶ್ರೀಮತವೇ ಶ್ರೇಷ್ಠರನ್ನಾಗಿ ಮಾಡುತ್ತದೆ ಅಂದಮೇಲೆ ಶ್ರೇಷ್ಠ, ಹೊಸ ಪ್ರಪಂಚವು ಅವಶ್ಯವಾಗಿ ಬೇಕಲ್ಲವೆ. ಈಗ ನೀವು ತಿಳಿದುಕೊಂಡಿದ್ದೀರಿ - ನಾವು ಕೊಳಕಿನ ಪ್ರಪಂಚದಲ್ಲಿ ಕುಳಿತಿದ್ದೇವೆ, ಇದನ್ನು ಮತ್ತ್ಯಾರೂ ಅರಿತುಕೊಳ್ಳಲು ಸಾಧ್ಯವಿಲ್ಲ. ಸತ್ಯಯುಗ, ಸ್ವರ್ಗದಲ್ಲಿ ನಾವು ಸದಾ ಸುಖಿಯಾಗಿರುತ್ತೇವೆ. ಇಲ್ಲಿ ನರಕದಲ್ಲಿ ಎಷ್ಟೊಂದು ದುಃಖಿಯಾಗಿದ್ದೇವೆ, ಇದಕ್ಕೆ ನರಕವೆಂದಾದರೂ ಹೇಳಿ ಅಥವಾ ವಿಷಯ ವೈತರಣೀ ನದಿಯೆಂದಾದರೂ ಹೇಳಿ. ಇದು ಹಳೆಯ ಛೀ ಛೀ ಪ್ರಪಂಚವಾಗಿದೆ. ಈಗ ನೀವು ಅನುಭವ ಮಾಡುತ್ತೀರಿ. ಸತ್ಯಯುಗ ಸ್ವರ್ಗವೆಲ್ಲಿ, ಕಲಿಯುಗ ನರಕವೆಲ್ಲಿ! ಸತ್ಯಯುಗ, ಸ್ವರ್ಗಕ್ಕೆ ವಂಡರ್ ಆಫ್ ವಲ್ರ್ಡ್ (ಪ್ರಪಂಚದ ಅದ್ಭುತ) ಎಂದು ಹೇಳುತ್ತಾರೆ. ತ್ರೇತಾಯುಗಕ್ಕೂ ಈ ರೀತಿ ಹೇಳುವುದಿಲ್ಲ. ಇಲ್ಲಿ ಈ ಕೊಳಕು ಪ್ರಪಂಚದಲ್ಲಿರುವುದರಲ್ಲಿ ಮನುಷ್ಯರಿಗೆ ಎಷ್ಟೊಂದು ಖುಷಿಯಾಗುತ್ತದೆ. ಕೀಟವನ್ನು ಭ್ರಮರಿಯು ಭೂ ಭೂ ಮಾಡಿ ತನ್ನ ಸಮಾನ ಮಾಡಿಕೊಳ್ಳುತ್ತದೆ. ನೀವೂ ಸಹ ಕೆಸರಿನಲ್ಲಿ ಬಿದ್ದಿದ್ದಿರಿ. ನಾನು ಬಂದು ಜ್ಞಾನದ ಭೂ ಭೂ ಮಾಡಿ ಕೀಟಗಳಿಂದ ಅರ್ಥಾತ್ ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡಿದ್ದೇನೆ. ಈಗ ನೀವು ಡಬಲ್ ಕಿರೀಟಧಾರಿಗಳಾಗುತ್ತೀರಿ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು ಮತ್ತು ಸಂಪೂರ್ಣ ಪುರುಷಾರ್ಥವನ್ನೂ ಮಾಡಬೇಕು. ಬೇಹದ್ದಿನ ತಂದೆಯು ಬಹಳ ಸಹಜ ತಿಳುವಳಿಕೆಯನ್ನೂ ಕೊಡುತ್ತಾರೆ. ತಂದೆಯು ಸತ್ಯವನ್ನೇ ಹೇಳುತ್ತಾರೆಂದು ಹೃದಯವು ಹೇಳುತ್ತದೆ. ಈ ಸಮಯದಲ್ಲಿ ಎಲ್ಲರೂ ಮಾಯೆಯ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಹೊರಗಿನ ಶೋ ಎಷ್ಟೊಂದಿದೆ. ತಂದೆಯು ತಿಳಿಸುತ್ತಾರೆ - ನಾನು ಬಂದು ಕೆಸರಿನಿಂದ ಪಾರು ಮಾಡುತ್ತೇನೆ. ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತೇನೆ. ಸ್ವರ್ಗದ ಹೆಸರನ್ನು ಕೇಳಿದ್ದೀರಿ, ಈಗಂತೂ ಸ್ವರ್ಗವಿಲ್ಲ ಕೇವಲ ಚಿತ್ರಗಳಿವೆ. ಈ ಸ್ವರ್ಗದ ಮಾಲೀಕರು ಎಷ್ಟೊಂದು ಧನವಂತರಾಗಿದ್ದರು, ಭಕ್ತಿಮಾರ್ಗದಲ್ಲಿ ಪ್ರತಿನಿತ್ಯ ಭಲೆ ಮಂದಿರಗಳಿಗೆ ಹೋಗುತ್ತಿದ್ದಿರಿ, ಆದರೆ ಈ ಜ್ಞಾನವೇನೂ ಇರಲಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ - ಈ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಇವರ ರಾಜ್ಯವು ಯಾವಾಗ ಇತ್ತು ಎಂಬುದೇನೂ ತಿಳಿದಿಲ್ಲ. ದೇವಿ-ದೇವತಾ ಧರ್ಮಕ್ಕೆ ಬದಲು ಈಗ ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ಹಿಂದೂ ಮಹಾಸಭೆಯ ಅಧ್ಯಕ್ಷರು ಬಂದಿದ್ದರು, ನಾವು ವಿಕಾರಿ ಅಸುರರಾಗಿದ್ದೇವೆ, ನಮ್ಮನ್ನು ದೇವತೆಗಳೆಂದು ಹೇಗೆ ಕರೆಸಿಕೊಳ್ಳುವುದು ಎಂದು ಅವರು ಹೇಳಿದರು. ನಾವು ತಿಳಿಸಿದೆವು - ಒಳ್ಳೆಯದು, ಬಂದರೆ ನಾವು ನಿಮಗೆ ತಿಳಿಸುತ್ತೇವೆ, ದೇವಿ-ದೇವತಾ ಧರ್ಮದ ಸ್ಥಾಪನೆ ಪುನಃ ಆಗುತ್ತಿದೆ, ಈಗ ನಾವು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿ ಬಿಡುತ್ತೇವೆ. ಈ ರಾಜಯೋಗವನ್ನು ಕಲಿಯಿರಿ. ಅದಕ್ಕೆ ಅವರು ದಾದಾಜೀ ನಮಗೆ ಬಿಡುವಿಲ್ಲವೆಂದರು. ಬಿಡುವೇ ಇಲ್ಲದಿದ್ದರೆ ಮತ್ತೆ ದೇವತೆಗಳು ಹೇಗಾಗುವಿರಿ! ಇದು ವಿದ್ಯೆಯಲ್ಲವೆ. ಪಾಪ! ಅವರ ಅದೃಷ್ಟದಲ್ಲಿರಲಿಲ್ಲ ಶರೀರ ಬಿಟ್ಟರು. ಅವರು ಪ್ರಜೆಗಳಲ್ಲಿ ಬರುತ್ತಾರೆಂದು ಹೇಳುವಂತಿಲ್ಲ. ಸುಮ್ಮನೆ ಏತಕ್ಕಾಗಿಯೋ ಬಂದಿದ್ದರು, ಇಲ್ಲಿ ಪವಿತ್ರತೆಯ ಜ್ಞಾನವು ಸಿಗುತ್ತದೆ ಎಂದು ಕೇಳಿದರು. ಆದರೆ ಅವರು ಸತ್ಯಯುಗದಲ್ಲಿ ಬರಲು ಸಾಧ್ಯವಿಲ್ಲ, ಪುನಃ ಹಿಂದೂ ಧರ್ಮದಲ್ಲಿಯೇ ಬರುತ್ತಾರೆ.

ಮಕ್ಕಳು ತಿಳಿದುಕೊಂಡಿದ್ದೀರಿ - ಮಾಯೆಯು ಪ್ರಬಲವಾಗಿದೆ, ಯಾವುದಾದರೊಂದು ತಪ್ಪುಗಳನ್ನು ಮಾಡಿಸುತ್ತಿರುತ್ತದೆ. ಎಂದಾದರೂ ಯಾವುದೇ ಉಲ್ಟಾ-ಸುಲ್ಟಾ ಪಾಪವಾಗಿ ಬಿಟ್ಟರೆ ಅದನ್ನು ತಂದೆಗೆ ಸತ್ಯ ಹೃದಯದಿಂದ ತಿಳಿಸಬೇಕಾಗಿದೆ. ರಾವಣನ ಪ್ರಪಂಚದಲ್ಲಿ ಪಾಪಗಳಾಗುತ್ತಲೇ ಇರುತ್ತವೆ. ನಾವು ಜನ್ಮ-ಜನ್ಮಾಂತರದ ಪಾಪಿಗಳಾಗಿದ್ದೇವೆಂದು ಹೇಳುತ್ತಿರುತ್ತಾರೆ. ಇದನ್ನು ಯಾರು ಹೇಳಿದರು? ತಂದೆಯ ಮುಂದೆ ಅಥವಾ ದೇವತೆಗಳ ಮುಂದೆ ಆತ್ಮವೇ ಹೇಳುತ್ತದೆ. ಈಗಂತೂ ನೀವು ಅನುಭವ ಮಾಡುತ್ತೀರಿ - ಅವಶ್ಯವಾಗಿ ನಾವು ಜನ್ಮ-ಜನ್ಮಾಂತರದ ಪಾಪಿಗಳಾಗಿದ್ದೆವು, ರಾವಣ ರಾಜ್ಯದಲ್ಲಿ ಅವಶ್ಯವಾಗಿ ಪಾಪಗಳನ್ನು ಮಾಡಿದ್ದೇವೆ, ಅನೇಕ ಜನ್ಮಗಳ ಪಾಪಗಳನ್ನಂತೂ ವರ್ಣನೆ ಮಾಡಲು ಸಾಧ್ಯವಿಲ್ಲ. ಈ ಜನ್ಮದ್ದನ್ನು ತಿಳಿಸಬಹುದು, ಅದನ್ನು ತಿಳಿಸುವುದರಿಂದಲೂ ಹಗುರರಾಗಿ ಬಿಡುತ್ತೀರಿ. ಅವಿನಾಶಿ ವೈದ್ಯರ ಮುಂದೆ ಇಂತಿಂತಹವರಿಗೆ ಹೊಡೆದೆವು, ಕಳ್ಳತನ ಮಾಡಿದೆವು...... ಹೀಗೆ ತಮ್ಮ ಖಾಯಿಲೆಯನ್ನು ತಿಳಿಸಬೇಕು. ತಿಳಿಸುವುದರಲ್ಲಿ ಸಂಕೋಚವಾಗುವುದಿಲ್ಲ. ವಿಕಾರದ ಮಾತನ್ನು ತಿಳಿಸುವುದರಲ್ಲಿ ಸಂಕೋಚವಾಗಬೇಕು. ವೈದ್ಯರೊಂದಿಗೆ ಸಂಕೋಚ ಪಡುತ್ತೀರೆಂದರೆ ಖಾಯಿಲೆಯು ಹೋಗುವುದಾದರೂ ಹೇಗೆ? ಮತ್ತೆ ಒಳಗೆ ಹೃದಯವನ್ನು ತಿನ್ನುತ್ತಿರುತ್ತದೆ. ತಂದೆಯನ್ನು ನೆನಪು ಮಾಡಲು ಆಗುವುದಿಲ್ಲ. ಸತ್ಯವನ್ನು ತಿಳಿಸಿದರೆ ತಂದೆಯನ್ನು ನೆನಪು ಮಾಡಬಲ್ಲಿರಿ. ತಂದೆಯು ತಿಳಿಸುತ್ತಾರೆ - ವೈದ್ಯನಾದ ನಾನು ನಿಮಗೆ ಎಷ್ಟೊಂದು ಚಿಕಿತ್ಸೆ ನೀಡುತ್ತೇನೆ, ನಿಮ್ಮ ಕಾಯವು ಸದಾ ಕಂಚನವಾಗಿರುವುದು. ವೈದ್ಯರಿಗೆ ತಿಳಿಸುವುದರಿಂದ ಹಗುರರಾಗಿ ಬಿಡುತ್ತೀರಿ. ಕೆಲವರು ಬಾಬಾ, ನಾವು ಜನ್ಮ-ಜನ್ಮಾಂತರದಿಂದ ಪಾಪ ಮಾಡಿದ್ದೇವೆ, ಪಾಪಾತ್ಮರ ಪ್ರಪಂಚದಲ್ಲಿ ಪಾಪಾತ್ಮರೇ ಆಗಿದ್ದೇವೆ ಎಂದು ತಾವಾಗಿಯೇ ಬರೆಯುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಪಾಪಾತ್ಮರೊಂದಿಗೆ ಯಾವುದೇ ಕಾರ್ಯವನ್ನು ಮಾಡಬಾರದು. ಸತ್ಯವಾದ ಸದ್ಗುರು, ಅಕಾಲಮೂರ್ತಿ ತಂದೆಯಾಗಿದ್ದಾರೆ, ಅವರೆಂದೂ ಪುನರ್ಜನ್ಮದಲ್ಲಿ ಬರುವುದಿಲ್ಲ. ಇದಕ್ಕೆ ಅವರು ಅಕಾಲ ಸಿಂಹಾಸನವೆಂದು ಹೆಸರನ್ನಿಟ್ಟಿದ್ದಾರೆ. ಆದರೆ ಅವರು ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಇದು (ಭೃಕುಟಿ) ಆತ್ಮನ ಸಿಂಹಾಸನವಾಗಿದೆ. ಶೋಭಿಸುವುದೂ ಸಹ ಇಲ್ಲಿಯೇ. ತಿಲಕವನ್ನೂ ಸಹ ಭೃಕುಟಿಯಲ್ಲಿಯೇ ಇಟ್ಟುಕೊಳ್ಳುತ್ತಾರಲ್ಲವೆ. ಮೂಲತಃ ತಿಲಕವನ್ನು ಬಿಂದುವಿನ ತರಹ ಇಟ್ಟುಕೊಳ್ಳುತ್ತಿದ್ದರು, ಈಗ ನೀವು ತಮಗೆ ತಾವೇ ತಿಲಕವನ್ನಿಟ್ಟುಕೊಳ್ಳಬೇಕು, ಅಂದರೆ ತಂದೆಯನ್ನು ನೆನಪು ಮಾಡುತ್ತಾ ಇರಿ. ಯಾರು ಬಹಳ ಸರ್ವೀಸ್ ಮಾಡುವರೋ ಅವರು ದೊಡ್ಡ ಮಹಾರಾಜನಾಗುತ್ತಾರೆ. ಹೊಸ ಪ್ರಪಂಚದಲ್ಲಿ ಹಳೆಯ ಪ್ರಪಂಚದ ವಿದ್ಯೆಯನ್ನು ಓದುತ್ತೇವೆಯೇ! ಅಂದಮೇಲೆ ಇಷ್ಟು ಶ್ರೇಷ್ಠ ವಿದ್ಯೆಯ ಮೇಲೆ ಬಹಳ ಗಮನವಿಡಬೇಕು. ಇಲ್ಲಿ ಕುಳಿತುಕೊಳ್ಳುತ್ತೀರೆಂದರೂ ಸಹ ಕೆಲವರ ಬುದ್ಧಿಯೋಗವು ಬಹಳ ಚೆನ್ನಾಗಿರುತ್ತದೆ, ಇನ್ನೂ ಕೆಲವರದು ಎಲ್ಲೆಲ್ಲಿಯೋ ಹೊರಟು ಹೋಗುತ್ತದೆ. ಕೆಲವರು 10 ನಿಮಿಷಗಳೆಂದು ಬರೆಯುತ್ತಾರೆ ಇನ್ನೂ ಕೆಲವರು 15 ನಿಮಿಷಗಳ ಚಾರ್ಟನ್ನು ಬರೆಯುತ್ತಾರೆ. ಯಾರ ನೆನಪಿನ ಚಾರ್ಟ್ ಚೆನ್ನಾಗಿರುವುದೋ ಅವರಿಗೆ ಬಾಬಾ, ನಾನು ಇಷ್ಟು ಸಮಯ ತಮ್ಮ ನೆನಪಿನಲ್ಲಿದ್ದೇವೆಂದು ನಶೆಯೇರುತ್ತದೆ. 15 ನಿಮಿಷಕ್ಕಿಂತಲೂ ಹೆಚ್ಚಿನದಾಗಿ ಯಾರೂ ಬರೆಯುವುದಿಲ್ಲ, ಬುದ್ಧಿಯು ಅಲ್ಲಿ-ಇಲ್ಲಿ ಓಡುತ್ತದೆ. ಒಂದುವೇಳೆ ಎಲ್ಲರೂ ಏಕರಸವಾಗಿ ಬಿಟ್ಟರೆ ಕರ್ಮಾತೀತ ಸ್ಥಿತಿಯು ಬಂದು ಬಿಡುತ್ತದೆ. ತಂದೆಯು ಎಷ್ಟೊಂದು ಮಧುರಾತಿ ಮಧುರ ಪ್ರಿಯವಾದ ಮಾತುಗಳನ್ನು ತಿಳಿಸುತ್ತಾರೆ ಅಂದರೆ ಇದನ್ನು ಯಾವುದೇ ಗುರುಗಳು ಕಲಿಸಿಲ್ಲ. ಗುರುಗಳಿಂದ ಕೇವಲ ಒಬ್ಬರೇ ಕಲಿಯುವರೇ? ಗುರುಗಳಿಂದಂತೂ ಸಾವಿರಾರು ಮಂದಿ ಕಲಿಯುವರಲ್ಲವೆ? ಸದ್ಗುರುವಿನಿಂದ ನೀವು ಎಷ್ಟೊಂದು ಕಲಿಯುತ್ತೀರಿ, ಇದು ಮಾಯೆಯನ್ನು ವಶ ಪಡಿಸಿಕೊಳ್ಳುವ ಮಂತ್ರವಾಗಿದೆ. ಪಂಚ ವಿಕಾರಗಳಿಗೆ ಮಾಯೆಯೆಂದು ಕರೆಯಲಾಗುತ್ತದೆ. ಹಣಕ್ಕೆ ಸಂಪತ್ತು ಎಂದು ಹೇಳಲಾಗುತ್ತದೆ. ಲಕ್ಷ್ಮಿ-ನಾರಾಯಣರ ಬಳಿ ಬಹಳ ಸಂಪತ್ತು ಇತ್ತೆಂದು ಹೇಳುತ್ತಾರೆ. ಲಕ್ಷ್ಮಿ-ನಾರಾಯಣರಿಗೆಂದೂ ಮಾತಾಪಿತಾ ಎಂದು ಹೇಳುವುದಿಲ್ಲ. ಆದಿ ದೇವ - ಆದಿ ದೇವಿಗೆ ಜಗತ್ಪಿತ-ಜಗದಂಬಾ ಎಂದು ಹೇಳುತ್ತಾರೆ, ಇವರಿಗಲ್ಲ (ದೇವತೆಗಳು). ಇವರು ಸ್ವರ್ಗದ ಮಾಲೀಕರಾಗಿದ್ದಾರೆ. ಅವಿನಾಶಿ ಜ್ಞಾನ ಧನವನ್ನು ತೆಗೆದುಕೊಂಡು ನಾವು ಇಷ್ಟೊಂದು ಧನವಂತರಾಗಿದ್ದೇವೆ. ಜಗದಂಬೆಯ ಬಳಿ ಅನೇಕ ಆಸೆಗಳನ್ನಿಟ್ಟುಕೊಂಡು ಹೋಗುತ್ತಾರೆ. ಲಕ್ಷ್ಮಿಯ ಬಳಿ ಕೇವಲ ಹಣವನ್ನು ಬೇಡಲು ಹೋಗುತ್ತಾರೆ ಮತ್ತೇನೂ ಇಲ್ಲ ಅಂದಮೇಲೆ ಯಾರು ದೊಡ್ಡವರಾದರು? ಜಗದಂಬೆಯಿಂದ ಏನು ಸಿಗುತ್ತದೆ? ಲಕ್ಷ್ಮಿಯಿಂದ ಏನು ಸಿಗುತ್ತದೆ? ಇದು ಯಾರಿಗೂ ತಿಳಿದಿಲ್ಲ. ಲಕ್ಷ್ಮಿಯೊಂದಿಗೆ ಕೇವಲ ಹಣವನ್ನು ಬೇಡುತ್ತಾರೆ. ಜಗದಂಬೆಯಿಂದ ನಿಮಗೆ ಎಲ್ಲವೂ ಸಿಗುತ್ತದೆ. ಜಗದಂಬೆಯ ಹೆಸರು ಪ್ರಸಿದ್ಧವಾಗಿದೆ, ಏಕೆಂದರೆ ಮಾತೆಯರು ಬಹಳ ದುಃಖವನ್ನು ಸಹನೆ ಮಾಡಬೇಕು. ಆದ್ದರಿಂದ ಮಾತೆಯರ ಹೆಸರು ಪ್ರಸಿದ್ಧವಾಗುತ್ತದೆ, ಒಳ್ಳೆಯದು. ಆದರೂ ಸಹ ಮತ್ತೆ ತಂದೆಯು ಹೇಳುತ್ತಾರೆ - ಮಕ್ಕಳೇ, ತಂದೆಯನ್ನು ನೆನಪು ಮಾಡಿದರೆ ಪಾವನರಾಗಿ ಬಿಡುತ್ತೀರಿ. ಚಕ್ರವನ್ನೂ ನೆನಪು ಮಾಡಿ, ದೈವೀ ಗುಣಗಳನ್ನು ಧಾರಣೆ ಮಾಡಿ, ಅನೇಕರನ್ನು ತಮ್ಮ ಸಮಾನ ಮಾಡಿಕೊಳ್ಳಿ. ನೀವು ಭಗವಂತನ ವಿದ್ಯಾರ್ಥಿಗಳಾಗಿದ್ದೀರಿ, ಕಲ್ಪದ ಹಿಂದೆಯೂ ಆಗಿದ್ದಿರಿ ಈಗಲೂ ಸಹ ಅದೇ ಲಕ್ಷ್ಯವಿದೆ. ಇದು ನರನಿಂದ ನಾರಾಯಣನಾಗುವ ಸತ್ಯ ಕಥೆಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

 
ಧಾರಣೆಗಾಗಿ ಮುಖ್ಯಸಾರ-
1. ತಮ್ಮ ರೋಗವನ್ನು ಅವಿನಾಶಿ ವೈದ್ಯರಿಂದ ಎಂದೂ ಮುಚ್ಚಿಡಬಾರದು. ಮಾಯೆಯ ಭೂತಗಳಿಂದ ಸ್ವಯಂನ್ನು ರಕ್ಷಣೆ ಮಾಡಿಕೊಳ್ಳಬೇಕು. ತಮಗೆ ರಾಜ ತಿಲಕವನ್ನು ಕೊಟ್ಟುಕೊಳ್ಳಲು ಅವಶ್ಯವಾಗಿ ಸರ್ವೀಸ್ ಮಾಡಬೇಕಾಗಿದೆ.

2. ಸ್ವಯಂನ್ನು ಅವಿನಾಶಿ ಜ್ಞಾನ ಧನದಿಂದ ಧನವಂತರನ್ನಾಗಿ ಮಾಡಿಕೊಳ್ಳಬೇಕಾಗಿದೆ. ಈಗ ಪಾಪಾತ್ಮರೊಂದಿಗೆ ಲೇವಾದೇವಿ ಮಾಡಬಾರದು. ವಿದ್ಯಾಭ್ಯಾಸದ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ.

ವರದಾನ:
ಗೀತೆಯ ಪಾಠ ಓದುವ ಹಾಗೂ ಓದಿಸುವ ನಷ್ಠ ಮೋಹ ಸ್ಮೃತಿ ಸ್ವರೂಪ ಭವ.

ಗೀತಾ ಜ್ಞಾನದ ಮೊದಲ ಪಾಠವಾಗಿದೆ - ಅಶರೀರಿ ಆತ್ಮ ಆಗಿ ಮತ್ತು ಅಂತಿಮ ಪಾಠವಾಗಿದೆ ನಷ್ಠ ಮೋಹ ಸ್ಮೃತಿ ಸ್ವರೂಪರಾಗಿರಿ. ಮೊದಲ ಪಾಠ ವಿಧಿಯಾಗಿದೆ ಮತ್ತು ಅಂತಿಮ ಪಾಠವಾಗಿದೆ ವಿಧಿಯಿಂದ ಸಿದ್ಧಿ. ಅಂದರೆ ಪ್ರತಿ ಸಮಯ ಮೊದಲು ಸ್ವಯಂ ಈ ಪಾಠ ಓದಿ ನಂತರ ಬೇರೆಯವರಿಗೆ ಓದಿಸಿ. ಇಂತಹ ಶ್ರೇಷ್ಠ ಕರ್ಮ ಮಾಡಿ ತೋರಿಸಿ ಯಾವ ನಿಮ್ಮ ಶ್ರೇಷ್ಠ ಕರ್ಮ ನೋಡಿ ಅನೇಕ ಆತ್ಮರು ಶ್ರೇಷ್ಠ ಕರ್ಮ ಮಾಡಿ ತಮ್ಮ ಭಾಗ್ಯದ ರೇಖೆ ಶ್ರೇಷ್ಠ ಮಾಡಿಕೊಳ್ಳಬೇಕು.

ಸ್ಲೋಗನ್:
ಪರಮಾತ್ಮನ ಸ್ನೆಹದಲ್ಲಿ ಸಮಾವೇಶರಾಗಿದ್ದಾಗ ಪರಿಶ್ರಮದಿಂದ ಮುಕ್ತರಾಗಿ ಬಿಡುವಿರಿ.