20.02.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಮ್ಮ
ಸೋಲು ಮತ್ತು ಗೆಲುವಿನ ಇತಿಹಾಸವನ್ನು ನೆನಪು ಮಾಡಿಕೊಳ್ಳಿ, ಇದು ಸುಖ-ದುಃಖದ ಆಟವಾಗಿದೆ, ಇದರಲ್ಲಿ
3/4 ಭಾಗ ಸುಖವಿದೆ, 1/4 ದುಃಖವಿದೆ, ಸಮಾನವಿಲ್ಲ.”
ಪ್ರಶ್ನೆ:
ಈ ಬೇಹದ್ದಿನ
ನಾಟಕವು ಬಹಳ ವಿಚಿತ್ರವಾಗಿದೆ - ಹೇಗೆ?
ಉತ್ತರ:
ಈ ಬೇಹದ್ದಿನ
ನಾಟಕವು ಇಷ್ಟು ವಿಚಿತ್ರವಾಗಿದೆ - ಯಾವುದು ಪ್ರತಿಕ್ಷಣ ಇಡೀ ಸೃಷ್ಟಿಯಲ್ಲಿಯೇ ಆಗುತ್ತಿದೆಯೋ ಅದು
ಪುನಃ ಪುನರಾವರ್ತನೆಯಾಗುತ್ತದೆ. ಈ ನಾಟಕವು ನಿಧಾನವಾಗಿ (ಹೇನಿನ ರೀತಿ) ನಡೆಯುತ್ತಲೇ ಇರುತ್ತದೆ,
ಟಿಕ್-ಟಿಕ್ ಆಗುತ್ತಾ ಇರುತ್ತದೆ. ಒಂದು ಕ್ಷಣವು ಇನ್ನೊಂದು ಕ್ಷಣಕ್ಕೆ ಹೋಲುವುದಿಲ್ಲ, ಆದ್ದರಿಂದ
ಇದು ಬಹಳ ವಿಚಿತ್ರವಾದ ನಾಟಕವಾಗಿದೆ. ಮನುಷ್ಯನ ಯಾವುದೆಲ್ಲಾ ಒಳ್ಳೆಯ ಮತ್ತು ಕೆಟ್ಟ ಪಾತ್ರವು
ನಡೆಯುತ್ತದೆಯೋ ಅದೆಲ್ಲವೂ ನೊಂದಾಯಿಸಲ್ಪಟ್ಟಿದೆ. ಈ ಮಾತನ್ನೂ ಸಹ ನೀವು ಮಕ್ಕಳೇ ತಿಳಿಯುತ್ತೀರಿ.
ಓಂ ಶಾಂತಿ.
ಓಂ ಶಾಂತಿಯ ಅರ್ಥವನ್ನು ಮಕ್ಕಳಿಗೆ ತಿಳಿಸಲಾಗಿದೆ, ಏಕೆಂದರೆ ಈಗ ಆತ್ಮಾಭಿಮಾನಿಗಳಾಗಿದ್ದೀರಿ. ನಾವು
ಆತ್ಮಗಳಾಗಿದ್ದೇವೆ, ಆತ್ಮದ ಸ್ವಧರ್ಮವು ಶಾಂತಿಯಾಗಿದೆ ಎಂದು ಆತ್ಮವು ತನ್ನ ಪರಿಚಯ ಕೊಡುತ್ತದೆ.
ಈಗ ಎಲ್ಲಾ ಆತ್ಮಗಳು ಮನೆಗೆ ಹೋಗುವ ಕಾರ್ಯಕ್ರಮವಿದೆ, ಈಗ ಮನೆಗೆ ಹೋಗುವ ಕಾರ್ಯಕ್ರಮವನ್ನು ಯಾರು
ತಿಳಿಸುತ್ತಾರೆ? ಅವಶ್ಯವಾಗಿ ತಂದೆಯೇ ತಿಳಿಸುತ್ತಾರೆ - ಹೇ ಆತ್ಮಗಳೇ, ಈಗ ಹಳೆಯ ಪ್ರಪಂಚವು
ಸಮಾಪ್ತಿಯಾಗಲಿದೆ. ಎಲ್ಲಾ ಪಾತ್ರಧಾರಿಗಳು ಬಂದು ಬಿಟ್ಟಿದ್ದಾರೆ, ಇನ್ನು ಕೆಲವು ಆತ್ಮರು ಮಾತ್ರವು
ಉಳಿದುಕೊಂಡಿದ್ದಾರೆ, ಈಗ ಎಲ್ಲರೂ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಮತ್ತು ಪಾತ್ರವನ್ನು
ಪುನರಾವರ್ತನೆ ಮಾಡಬೇಕಾಗಿದೆ. ತಾವು ಮಕ್ಕಳು ಮೂಲತಃ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಿರಿ.
ಮೊಟ್ಟ ಮೊದಲು ಸತ್ಯಯುಗದಲ್ಲಿ ಬಂದಿರಿ ನಂತರ ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಪರರಾಜ್ಯದಲ್ಲಿ ಬಂದಿದ್ದೀರಿ. ಇದು ಕೇವಲ
ನೀವಾತ್ಮರಿಗೆ ಗೊತ್ತಿದೆ ಮತ್ತ್ಯಾರಿಗೂ ಗೊತ್ತಿಲ್ಲ. ನೀವು ಒಬ್ಬ ತಂದೆಯ ಮಕ್ಕಳಾಗಿದ್ದೀರಿ.
ಮಧುರಾತಿ ಮಧುರ ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವೀಗ ಪರ ರಾವಣ ರಾಜ್ಯದಲ್ಲಿ
ತಮ್ಮ ರಾಜ್ಯಭಾಗ್ಯವನ್ನು ಕಳೆದುಕೊಂಡು ಕುಳಿತಿದ್ದೀರಿ. ಸತ್ಯಯುಗದಲ್ಲಿ ದೇವಿ-ದೇವತಾ
ಧರ್ಮದವರಾಗಿದ್ದಿರಿ ಯಾವುದಕ್ಕೆ 5000 ವರ್ಷಗಳಾಯಿತು. ಅರ್ಧಕಲ್ಪ ನೀವು ರಾಜ್ಯ ಮಾಡಿದಿರಿ ಏಕೆಂದರೆ
ಅವಶ್ಯವಾಗಿ ಏಣಿಯನ್ನು ಇಳಿಯಲೇಬೇಕಾಗಿದೆ. ಸತ್ಯಯುಗದಿಂದ ತ್ರೇತಾ ನಂತರ ದ್ವಾಪರ-ಕಲಿಯುಗದಲ್ಲಿ
ಬರಬೇಕಾಗಿದೆ - ಇದನ್ನು ಮರೆಯಬೇಡಿ, ತಮ್ಮ ಸೋಲು ಮತ್ತು ಗೆಲುವಿನ ಇತಿಹಾಸವನ್ನು ನೆನಪು
ಮಾಡಿಕೊಳ್ಳಿ. ಮಕ್ಕಳಿಗೆ ಗೊತ್ತಿದೆ, ನಾವು ಸತ್ಯಯುಗದಲ್ಲಿ ಸತೋಪ್ರಧಾನ, ಸುಖಧಾಮವಾಸಿಗಳಾಗಿದ್ದೇವೆ
ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ದುಃಖಧಾಮದಲ್ಲಿ ಜಡಜಡೀಭೂತ
ಸ್ಥಿತಿಯಲ್ಲಿ ಬಂದು ತಲುಪಿದ್ದೇವೆ. ಈಗ ನೀವು ಮಕ್ಕಳಿಗೆ ತಂದೆಯಿಂದ ಶ್ರೀಮತ ಸಿಕ್ಕಿದೆ ಏಕೆಂದರೆ
ಆತ್ಮರು ಪರಮಾತ್ಮನಿಂದ ಬಹಳ ಕಾಲ ಅಗಲಿದ್ದರು...... ನೀವು ಮಕ್ಕಳೇ ಬಹಳ ಕಾಲದಿಂದ ಅಗಲಿದ್ದೀರಿ,
ಮೊಟ್ಟ ಮೊದಲು ನೀವೇ ಅಗಲಿದಿರಿ. ನಂತರ ಸುಖದ ಪಾತ್ರವನ್ನು ಅಭಿನಯಿಸುತ್ತಾ ಬಂದಿರಿ. ಮತ್ತೆ ನಿಮ್ಮ
ರಾಜ್ಯಭಾಗ್ಯವು ನಿಮ್ಮಿಂದ ಕಳೆದು ಹೋಯಿತು, ದುಃಖದ ಪಾತ್ರದಲ್ಲಿ ಬಂದು ಬಿಟ್ಟಿರಿ. ಈಗ ನೀವು
ಮಕ್ಕಳು ಪುನಃ ಸುಖ-ಶಾಂತಿಯ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕಾಗಿದೆ. ವಿಶ್ವದಲ್ಲಿ ಶಾಂತಿ
ಸ್ಥಾಪನೆಯಾಗಲೆಂದು ಆತ್ಮಗಳು ಹೇಳುತ್ತಾರೆ. ಈ ಸಮಯವು ತಮೋಪ್ರಧಾನವಾಗಿರುವ ಕಾರಣ ವಿಶ್ವದಲ್ಲಿ
ಅಶಾಂತಿಯಿದೆ. ಇದೂ ಸಹ ಶಾಂತಿ ಮತ್ತು ಅಶಾಂತಿ, ದುಃಖ ಮತ್ತು ಸುಖದ ಆಟವಾಗಿದೆ. ತಾವು ಮಕ್ಕಳಿಗೆ
ಗೊತ್ತಿದೆ- 5000 ವರ್ಷಗಳ ಹಿಂದೆ ವಿಶ್ವದಲ್ಲಿ ಶಾಂತಿಯಿತ್ತು, ಮೂಲವತನವಂತೂ ಶಾಂತಿಧಾಮವಾಗಿದೆ.
ಎಲ್ಲಿ ಆತ್ಮಗಳಿರುತ್ತಾರೆಯೋ ಅಲ್ಲಂತೂ ಅಶಾಂತಿಯ ಪ್ರಶ್ನೆಯೇ ಇರುವುದಿಲ್ಲ. ಸತ್ಯಯುಗದಲ್ಲಿ
ವಿಶ್ವದಲ್ಲಿ ಶಾಂತಿಯಿತ್ತು ನಂತರ ಇಳಿಯುತ್ತಾ-ಇಳಿಯುತ್ತಾ ಆಶಾಂತಿಯಾಗಿ ಬಿಟ್ಟಿತು. ಈಗ ಇಡೀ
ವಿಶ್ವದಲ್ಲಿ ಶಾಂತಿಯನ್ನೇ ಎಲ್ಲರೂ ಬಯಸುತ್ತಾರೆ. ಬ್ರಹ್ಮ ಮಹಾತತ್ವಕ್ಕೆ ವಿಶ್ವವೆಂದು
ಹೇಳುವುದಿಲ್ಲ. ಅದಕ್ಕೆ ಬ್ರಹ್ಮಾಂಡವೆಂದು ಹೇಳಲಾಗುತ್ತದೆ, ಅಲ್ಲಿ ನೀವಾತ್ಮರು ನಿವಾಸ ಮಾಡುತ್ತೀರಿ.
ಆತ್ಮದ ಸ್ವಧರ್ಮವು ಶಾಂತಿಯಾಗಿದೆ. ಶರೀರದಿಂದ ಆತ್ಮವು ಬೇರೆಯಾದಾಗ ಶಾಂತವಾಗಿ ಬಿಡುತ್ತದೆ ನಂತರ
ಇನ್ನೊಂದು ಶರೀರವನ್ನು ಪಡೆದುಕೊಂಡಾಗಲೇ ಶಬ್ಧದಲ್ಲಿ ಬರುತ್ತದೆ. ಈಗ ನೀವು ಮಕ್ಕಳು ಇಲ್ಲಿಗೆ
ಏತಕ್ಕಾಗಿ ಬಂದಿದ್ದೀರಿ? ತಂದೆಯೇ ನಮ್ಮ ಶಾಂತಿಧಾಮ, ಸುಖಧಾಮಕ್ಕೆ ಕರೆದುಕೊಂಡು ಹೋಗಿ ಎಂದು
ಹೇಳುತ್ತಾರೆ, ಶಾಂತಿ ಅಥವಾ ಮುಕ್ತಿಧಾಮದಲ್ಲಿ ಸುಖ-ದುಃಖದ ಪಾತ್ರವಿರುವುದಿಲ್ಲ. ಸತ್ಯಯುಗವು
ಸುಖಧಾಮವಾಗಿದೆ, ಕಲಿಯುಗವು ದುಃಖಧಾಮವಾಗಿದೆ ಅಂದಾಗ ಹೇಗೆ ಇಳಿಯುತ್ತಾರೆ? ಅದನ್ನಂತೂ ಏಣಿ
ಚಿತ್ರದಲ್ಲಿ ತೋರಿಸಲಾಗಿದೆ. ತಾವು ಏಣಿಯನ್ನು ಇಳಿಯುತ್ತೀರಿ ಮತ್ತೆ ಒಂದೇ ಬಾರಿ ಏರುತ್ತೀರಿ.
ಪಾವನರಾಗಿ ಏರುತ್ತೀರಿ ಮತ್ತು ಪತಿತರಾಗಿ ಇಳಿಯುತ್ತೀರಿ. ಪಾವನರಾಗದ ಹೊರತು ಏರಲು ಸಾಧ್ಯವಿಲ್ಲ.
ಆದ್ದರಿಂದಲೇ ತಂದೆಯೇ ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ನೀವು ಮೊದಲು ಪಾವನ
ಶಾಂತಿಧಾಮಕ್ಕೆ ಹೋಗಿ ನಂತರ ಸುಖಧಾಮದಲ್ಲಿ ಬರುತ್ತೀರಿ. ಮೊದಲು ಸುಖವಿರುತ್ತದೆ ನಂತರ
ದುಃಖವಿರುತ್ತದೆ. ಸುಖದ ಅವಕಾಶವು ಹೆಚ್ಚಿಗೆ ಇದೆ, ಸುಖ-ದುಃಖವು ಸರಿಸಮವಾಗಿದ್ದರೆ ಯಾವುದೇ ಲಾಭವು
ಇರುವುದಿಲ್ಲ. ಹೇಗೆ ವ್ಯರ್ಥವಾಗಿ ಬಿಡುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ಯಾವ ನಾಟಕವು
ಮಾಡಲ್ಪಟ್ಟಿದೆಯೋ ಅದರಲ್ಲಿ 3/4 ಭಾಗ ಸುಖವಿರುತ್ತದೆ, ಇನ್ನು 1/4 ಭಾಗ ಸ್ವಲ್ಪ ದುಃಖವಿರುತ್ತದೆ.
ಆದ್ದರಿಂದ ಸುಖ-ದುಃಖದ ಆಟವೆಂದು ಹೇಳಲಾಗುತ್ತದೆ. ತಂದೆಗೆ ಗೊತ್ತಿದೆ, ನನ್ನನ್ನು ನೀವು ಮಕ್ಕಳು
ಬಿಟ್ಟರೆ ಮತ್ಯ್ತಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ, ನಾನೇ ನಿಮಗೆ ನನ್ನ ಪರಿಚಯವನ್ನು
ಕೊಟ್ಟಿದ್ದೇನೆ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಪರಿಚಯವನ್ನು ಕೊಟ್ಟಿದ್ದೇನೆ. ನಿಮ್ಮನ್ನು
ನಾಸ್ತಿಕರಿಂದ ಆಸ್ತಿಕರನ್ನಾಗಿ ಮಾಡಿದ್ದೇನೆ, ಮೂರೂ ಲೋಕವನ್ನೂ ನೀವೇ ತಿಳಿದುಕೊಂಡಿದ್ದೀರಿ.
ಭಾರತವಾಸಿಗಳು ಕಲ್ಪದ ಆಯಸ್ಸನ್ನೂ ತಿಳಿದುಕೊಂಡಿಲ್ಲ. ಬಾಬಾ ನಮಗೆ ಮತ್ತೆ ಓದಿಸುತ್ತಿದ್ದಾರೆ
ಎಂಬುದನ್ನು ನೀವು ಈಗ ತಿಳಿದುಕೊಂಡಿದ್ದೀರಿ. ತಂದೆಯು ಗುಪ್ತ ವೇಷದಲ್ಲಿ ಪರದೇಶದಲ್ಲಿ ಬಂದಿದ್ದಾರೆ.
ತಂದೆಯೂ ಸಹ ಗುಪ್ತವಾಗಿದ್ದಾರೆ, ಮನುಷ್ಯರು ತನ್ನ ದೇಹವನ್ನು ತಿಳಿದುಕೊಂಡಿದ್ದಾರೆ ಆದರೆ
ಆತ್ಮನನ್ನು ತಿಳಿದುಕೊಂಡಿಲ್ಲ. ಆತ್ಮವು ಅವಿನಾಶಿ, ದೇಹವು ವಿನಾಶಿಯಾಗಿದೆ, ಆತ್ಮ ಮತ್ತು ಆತ್ಮದ
ತಂದೆಯನ್ನು ನೀವು ಎಂದೂ ಸಹ ಮರೆಯಬಾರದು. ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು
ಪಡೆಯುತ್ತಿದ್ದೇವೆ. ಯಾವಾಗ ಪವಿತ್ರರಾಗುತ್ತೇವೆಯೋ ಆಗ ಆಸ್ತಿಯು ಸಿಗುತ್ತದೆ, ಈ ರಾವಣ ರಾಜ್ಯದಲ್ಲಿ
ನೀವು ಪತಿತರಾಗಿದ್ದೀರಿ ಆದ್ದರಿಂದ ತಂದೆಯನ್ನು ಕರೆಯುತ್ತೀರಿ. ನಿಮಗೆ ಇಬ್ಬರು ತಂದೆಯರಿದ್ದಾರೆ -
ಪರಮಪಿತ ಪರಮಾತ್ಮ ಎಲ್ಲಾ ಆತ್ಮರಿಗೂ ಒಬ್ಬರೇ ತಂದೆಯಾಗಿದ್ದಾರೆ, ಸಹೋದರರೆಲ್ಲರೂ ತಂದೆಯಲ್ಲ.
ಯಾವಾಗ ಭಾರತದಲ್ಲಿ ಅತಿಯಾದ ಧರ್ಮಗ್ಲಾನಿಯಾಗುತ್ತದೆಯೋ ಆಗ ಎಲ್ಲಾ ಧರ್ಮಗಳ ಪಾರಲೌಕಿಕ ತಂದೆಯನ್ನು
ಮರೆತು ಬಿಡುತ್ತಾರೆಯೋ ಆಗ ತಂದೆಯು ಬರುತ್ತಾರೆ. ಇದೆಲ್ಲವೂ ಆಟವಾಗಿದೆ. ಏನೆಲ್ಲವೂ ನಡೆಯುತ್ತಿದೆಯೋ
ಇದು ಆಟವಾಗಿದೆ ಮತ್ತೆ ಇದು ಪುನರಾವರ್ತನೆಯಾಗುತ್ತದೆ. ನೀವಾತ್ಮರು ಎಷ್ಟು ಬಾರಿ
ಪಾತ್ರವನ್ನಭಿನಯಿಸಲು ಬರುತ್ತೀರಿ ಮತ್ತೆ ಹೋಗುತ್ತೀರಿ. ಈ ಅನಾದಿ ನಾಟಕವು ಹೇನಿನ ರೀತಿ
ನಡೆಯುತ್ತಿರುತ್ತದೆ, ಎಂದೂ ಸಹ ನಿಲ್ಲುವುದಿಲ್ಲ. ಟಿಕ್-ಟಿಕ್ ಎಂದು ನಡೆಯುತ್ತಲೇ ಇರುತ್ತದೆ. ಒಂದು
ಸೆಕೆಂಡ್ ಇನ್ನೊಂದು ಸೆಕೆಂಡನ್ನು ಹೋಲುವುದಿಲ್ಲ. ಎಂತಹ ವಿಚಿತ್ರ ನಾಟಕವಾಗಿದೆ -
ಸೆಕೆಂಡ್-ಸೆಕೆಂಡ್ ಏನೆಲ್ಲಾ ಈ ಸೃಷ್ಟಿಯಲ್ಲಿ ನಡೆಯುತ್ತದೆಯೋ ಮತ್ತೆ ಅದು ಪುನರಾವರ್ತನೆಯಾಗುತ್ತದೆ.
ಪ್ರತಿಯೊಂದು ಧರ್ಮದ ಮುಖ್ಯ ಪಾತ್ರಧಾರಿಗಳ ಬಗ್ಗೆ ತಿಳಿಸಲಾಗುತ್ತದೆ. ಅವರು ಪ್ರತಿಯೊಬ್ಬರೂ ತಮ್ಮ
ತಮ್ಮದೇ ಆದ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ರಾಜಧಾನಿಯನ್ನು ಸ್ಥಾಪನೆ ಮಾಡುವುದಿಲ್ಲ, ಒಬ್ಬ
ಪರಮಪಿತ ಪರಮಾತ್ಮ ಧರ್ಮವನ್ನೂ ಸ್ಥಾಪನೆ ಮಾಡುತ್ತಾರೆ, ರಾಜಧಾನಿ ಅಥವಾ ಸಾಮ್ರಾಜ್ಯವನ್ನೂ ಸ್ಥಾಪನೆ
ಮಾಡುತ್ತಾರೆ. ಅವರು ಧರ್ಮ ಸ್ಥಾಪನೆ ಮಾಡುತ್ತಾರೆ ಅದರ ನಂತರ ಮೇಲಿಂದ ಎಲ್ಲರೂ ಬರಬೇಕಾಗುತ್ತದೆ.
ಎಲ್ಲರನ್ನು ಮತ್ತೆ ಯಾರು ಕರೆದುಕೊಂಡು ಹೋಗುತ್ತಾರೆ? ತಂದೆ. ಕೆಲವರು ಬಹಳ ಕಡಿಮೆ
ಪಾತ್ರವನ್ನಭಿನಯಿಸುತ್ತಾರೆ ಮತ್ತು ಸಮಾಪ್ತಿಯಾದರು. ಹೇಗೆ ಜೀವ ಜಂತುಗಳು ಜನ್ಮ ಪಡೆಯುತ್ತವೆ ಮತ್ತೆ
ಸಾಯುತ್ತವೆ. ಹೇಗೆ ಡ್ರಾಮಾದಲ್ಲಿ ಅವರ ಮಾತೇ ಇಲ್ಲ, ಗಮನವೆಲ್ಲವೂ ಯಾರ ಕಡೆ ಹೋಗುತ್ತದೆ. ಒಂದು
ರಚಯಿತನ ಕಡೆ ಹೋಗುತ್ತದೆ, ಯಾರನ್ನು ಓ ಪರಮಪಿತ ಎಂದು ಕರೆಯುತ್ತಾರೆ ಅವರೇ ಎಲ್ಲಾ ಆತ್ಮರಿಗೂ
ತಂದೆಯಾಗಿದ್ದಾರೆ. ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಇದೆಷ್ಟು ಬೇಹದ್ದಿನ
ವೃಕ್ಷವಾಗಿದೆ. ಎಷ್ಟು ಮತ-ಮತಾಂತರ, ಎಷ್ಟೊಂದು ವಿವಿಧ ವಸ್ತುಗಳು ಹುಟ್ಟಿಕೊಂಡಿವೆ. ಅದನ್ನು
ಎಣಿಸುವುದೇ ಕಷ್ಟವಾಗುತ್ತದೆ. ವೃಕ್ಷದ ಅಡಿಪಾಯವೇ ಇಲ್ಲ, ಉಳಿದೆಲ್ಲವೂ ನಿಂತಿದೆ. ತಂದೆಯು
ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಯಾವಾಗ ಅನೇಕ ಧರ್ಮಗಳಿದ್ದು ಒಂದು ಧರ್ಮವಿಲ್ಲದಿರುವಾಗ
ನಾನು ಬರುತ್ತೇನೆ. ತಳಪಾಯವು ಪ್ರಾಯಲೋಪವಾಗಿದೆ. ಕೇವಲ ವೃಕ್ಷ ನಿಂತಿದೆ. ಆದಿ ಸನಾತನ ಒಂದೇ
ಧರ್ಮವಿತ್ತು ಬಾಕಿ ಉಳಿದೆಲ್ಲವೂ ಅನಂತರ ಬಂದಿವೆ. ತ್ರೇತಾಯುಗದಲ್ಲಿ ಇರುವುದು ಸ್ವರ್ಗದಲ್ಲಿ
ಇರುವುದಿಲ್ಲ. ತಂದೆಯು ತಿಳಿಸುತ್ತಾರೆ - ಸ್ವರ್ಗದ ಹೊಸ ಪ್ರಪಂಚದಲ್ಲಿ ಹೋಗಲು ನೀವು ಪುರುಷಾರ್ಥ
ಮಾಡುತ್ತಿದ್ದೀರಿ. ನೀವು ಯಾವಾಗ ನನ್ನನ್ನು ನೆನಪು ಮಾಡಿ ಪಾವನರಾಗುತ್ತೀರಿ ಮತ್ತು ದೈವೀ ಗುಣವನ್ನು
ಧಾರಣೆ ಮಾಡುತ್ತೀರಿ ಆಗ ನೀವು ಸ್ವರ್ಗದಲ್ಲಿ ಹೋಗುತ್ತೀರಿ. ವೃಕ್ಷದ ರೆಂಬೆ-ಕೊಂಬೆಗಳು ಅನೇಕ ಇವೆ.
ನಾವೆಲ್ಲರೂ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು ಎಂಬುದನ್ನು ನೀವು ಮಕ್ಕಳು ವೃಕ್ಷದ
ಮೂಲಕ ತಿಳಿದುಕೊಂಡಿದ್ದೀರಿ. ಈಗ ಸ್ವರ್ಗವಿಲ್ಲ ಆದರೆ ನರಕವಿದೆ. ತಂದೆಯು ಪ್ರಶ್ನಾವಳಿಯನ್ನು
ಮಾಡಿದ್ದರು, ನಿಮ್ಮ ಹೃದಯದೊಂದಿಗೆ ಕೇಳಿಕೊಳ್ಳಿ - ನಾವು ಸತ್ಯಯುಗೀ ಸ್ವರ್ಗವಾಸಿಗಳಾಗಿದ್ದೇವೆಯೋ
ಅಥವಾ ಕಲಿಯುಗೀ ನರಕವಾಸಿಗಳಾಗಿದ್ದೇವೆಯೋ? ಸತ್ಯಯುಗದಿಂದ ಕೆಳಗೆ ಕಲಿಯುಗದಲ್ಲಿ ಬರುತ್ತೇವೆಯೇ?
ಮತ್ತೆ ಮೇಲೆ ಹೇಗೆ ಹೋಗುತ್ತೇವೆ? ತಂದೆಯು ಶಿಕ್ಷಣವನ್ನು ಕೊಡುತ್ತಾರೆ, ನೀವು ತಮೋಪ್ರಧಾನರಿಂದ
ಸತೋಪ್ರಧಾನರು ಹೇಗಾಗುತ್ತೀರಿ? ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿದ್ದೇ ಆದರೆ
ಯೋಗಾಗ್ನಿಯಿಂದ ನಿಮ್ಮ ಪಾಪಗಳೆಲ್ಲವೂ ಸಮಾಪ್ತಿಯಾಗಿ ಬಿಡುವುದು. ಕಲ್ಪದ ಹಿಂದೆಯೂ ಸಹ ನಿಮಗೆ
ಜ್ಞಾನವನ್ನು ಕಲಿಸಿ ದೇವತೆಗಳನ್ನಾಗಿ ಮಾಡಿದ್ದೆವು, ಈಗ ನೀವು ತಮೋಪ್ರಧಾನರಾಗಿ ಬಿಟ್ಟಿದ್ದೀರಿ.
ಮತ್ತೆ ಅವಶ್ಯವಾಗಿ ಸತೋಪ್ರಧಾನರನ್ನಾಗಿ ಮಾಡುವವರು ಬೇಕಲ್ಲವೆ. ಪತಿತ-ಪಾವನ ಯಾವುದೇ ಮನುಷ್ಯನಾಗಲು
ಸಾಧ್ಯವಿಲ್ಲ. ಹೇ ಪತಿತ-ಪಾವನ, ಹೇ ಭಗವಂತ ಎಂದು ಕರೆದಾಗ ಎಲ್ಲರ ಬುದ್ಧಿಯು ಮೇಲಕ್ಕೆ ಹೋಗುತ್ತದೆ.
ಅವರು ನಿರಾಕಾರನಾಗಿದ್ದಾರೆ, ಉಳಿದವರೆಲ್ಲರೂ ಪಾತ್ರಧಾರಿಗಳಾಗಿದ್ದಾರೆ. ಎಲ್ಲರೂ ಪುನರ್ ಜನ್ಮವನ್ನು
ಪಡೆಯುತ್ತಿರುತ್ತಾರೆ. ನಾನು ಪುನರ್ ಜನ್ಮ ರಹಿತನಾಗಿದ್ದೇನೆ, ಇದು ಡ್ರಾಮಾದಲ್ಲಿ ನೊಂದಣಿಯಾಗಿದೆ.
ಇದನ್ನು ಯಾರೂ ಸಹ ತಿಳಿದುಕೊಂಡಿಲ್ಲ, ನೀವೂ ಸಹ ತಿಳಿದುಕೊಂಡಿರಲಿಲ್ಲ. ಈಗ ನಿಮ್ಮನ್ನು ಸ್ವದರ್ಶನ
ಚಕ್ರಧಾರಿಗಳೆಂದು ಕರೆಯಲಾಗುತ್ತದೆ. ನೀವು ನಿಮ್ಮ ಸ್ವಯಂ ಆತ್ಮನ ಧರ್ಮದಲ್ಲಿ ಸ್ಥಿತರಾಗಿ ತನ್ನನ್ನು
ಆತ್ಮನೆಂದು ನಿಶ್ಚಯ ಮಾಡಿಕೊಳ್ಳಿ. ಸೃಷ್ಟಿ ಚಕ್ರವು ಹೇಗೆ ಸುತ್ತುತ್ತದೆಯೆಂದು ತಂದೆಯು ತಿಳಿಸಿ
ಕೊಡುತ್ತಾರೆ. ಆದ್ದರಿಂದ ನಿಮ್ಮ ಹೆಸರಾಗಿದೆ - ಸ್ವದರ್ಶನ ಚಕ್ರಧಾರಿ, ನಿಮ್ಮಲ್ಲಿಯೇ ಈ ಜ್ಞಾನವಿದೆ
ಮತ್ತ್ಯಾರಿಗೂ ಈ ಜ್ಞಾನವಿಲ್ಲ. ನಿಮಗೆ ಬಹಳ ಖುಷಿಯಾಗಬೇಕು ತಂದೆಯು ನಮಗೆ ಶಿಕ್ಷಕನಾಗಿದ್ದಾರೆ,
ಬಹಳ ಮಧುರ ತಂದೆಯಾಗಿದ್ದಾರೆ, ತಂದೆಯಂತಹ ಮಧುರರು ಮತ್ತ್ಯಾರೂ ಇಲ್ಲ. ನೀವು ಪಾರಲೌಕಿಕ ತಂದೆಯ
ಮಕ್ಕಳು ಪರಲೋಕದಲ್ಲಿ ಇರುವಂತಹ ಆತ್ಮಗಳಾಗಿದ್ದೀರಿ. ತಂದೆಯೂ ಸಹ ಪರಮಧಾಮದಲ್ಲಿರುತ್ತಾರೆ. ಹೇಗೆ
ಲೌಕಿಕ ತಂದೆ ಮಕ್ಕಳಿಗೆ ಜನ್ಮವನ್ನು ಕೊಟ್ಟು ಪಾಲನೆ ಮಾಡಿ ಕೊನೆಯಲ್ಲಿ ಎಲ್ಲವನ್ನೂ ಕೊಟ್ಟು
ಹೋಗುತ್ತಾರೆ. ಏಕೆಂದರೆ ಮಕ್ಕಳು ವಾರಸುಧಾರರಾಗಿರುತ್ತಾರೆ - ಈ ಕಾನೂನು ಸಹ ಇದೆ. ಬೇಹದ್ದಿನ
ತಂದೆಯ ಮಕ್ಕಳಾಗುತ್ತೀರಿ. ನೀವೆಲ್ಲರೂ ಶಬ್ಧದಿಂದ ದೂರ ಮನೆಗೆ ಹೋಗಬೇಕಾಗಿದೆ ಎಂದು ತಂದೆಯು
ತಿಳಿಸುತ್ತಾರೆ. ಶಾಂತಿಧಾಮದಲ್ಲಿ ಶಾಂತಿಯಿರುತ್ತದೆ, ಸೂಕ್ಷ್ಮ ಲೋಕದಲ್ಲಿ ಸನ್ನೆಯಿಂದಲೂ
ಕೂಡಿರುತ್ತದೆ, ಸಾಕಾರ ಲೋಕದಲ್ಲಿ ಶಬ್ಧದಿಂದ ಕೂಡಿರುತ್ತದೆ. ಮಕ್ಕಳು ಸೂಕ್ಷ್ಮವತನದಲ್ಲಿ ಹೋದಾಗ
ಸಾಕ್ಷಾತ್ಕಾರವಾಗುತ್ತದೆ ಆಗ ಆತ್ಮವು ಶರೀರದಿಂದೇನೂ ಬಿಟ್ಟು ಹೋಗಿರುವುದಿಲ್ಲ. ಡ್ರಾಮಾದಲ್ಲಿ
ಯಾವುದೆಲ್ಲವೂ ನೊಂದಣಿಯಾಗಿದೆ ಅದು ಸೆಕೆಂಡ್-ಸೆಕೆಂಡ್ ಪುನರಾವರ್ತನೆಯಾಗುತ್ತದೆ. ಒಂದು ಸೆಕೆಂಡ್
ಮತ್ತೊಂದು ಸೆಕೆಂಡನ್ನು ಹೋಲುವುದಿಲ್ಲ. ಮನುಷ್ಯರದು ಏನೆಲ್ಲಾ ಪಾತ್ರವಿದೆ ಅದು ಒಳ್ಳೆಯದಾಗಿರಲಿ
ಅಥವಾ ಕೆಟ್ಟದಾಗಿರಲಿ ಎಲ್ಲವೂ ನೊಂದಾಯಿಸಲ್ಪಟ್ಟಿದೆ. ಸತ್ಯಯುಗದಲ್ಲಿ ಒಳ್ಳೆಯದು, ಕಲಿಯುಗದಲ್ಲಿ
ಕೆಟ್ಟ ಪಾತ್ರವು ಆಗಿರುತ್ತದೆ. ಕಲಿಯುಗದಲ್ಲಿ ಮನುಷ್ಯನು ದುಃಖಿಯಾಗಿರುತ್ತಾನೆ, ರಾಮರಾಜ್ಯದಲ್ಲಿ
ಕೊಳಕು ಮಾತುಗಳಿರುವುದಿಲ್ಲ. ರಾಮ ರಾಜ್ಯ ಮತ್ತು ರಾವಣ ರಾಜ್ಯ ಒಟ್ಟಾಗಿ ಇರುವುದಿಲ್ಲ. ಡ್ರಾಮವನ್ನು
ತಿಳಿಯದೇ ಇರುವ ಕಾರಣ ಸುಖ-ದುಃಖ ಎಲ್ಲವನ್ನೂ ಪರಮಾತ್ಮನೇ ಕೊಡುತ್ತಾರೆ ಎಂದು ಹೇಳುತ್ತಾರೆ. ಹೇಗೆ
ಶಿವ ತಂದೆಯನ್ನು ಯಾರು ತಿಳಿದುಕೊಂಡಿಲ್ಲವೋ ಹಾಗೆಯೇ ರಾವಣನನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಶಿವ
ಜಯಂತಿಯನ್ನು ಪ್ರತೀ ವರ್ಷವೂ ಆಚರಿಸುತ್ತಾರೆ, ರಾವಣನನ್ನು ಸುಡುವುದನ್ನೂ ಸಹ ಪ್ರತೀವರ್ಷ
ಆಚರಿಸುತ್ತಾರೆ. ಬೇಹದ್ದಿನ ತಂದೆಯು ತನ್ನ ಪರಿಚಯವನ್ನು ಕೊಡುತ್ತಿದ್ದಾರೆ - ಮಕ್ಕಳೇ, ತನ್ನನ್ನು
ಆತ್ಮನೆಂದು ತಿಳಿದು ನಾನು ತಂದೆಯನ್ನು ನೆನಪು ಮಾಡಿ. ತಂದೆಯು ಬಹಳ ಮಧುರರಾಗಿದ್ದಾರೆ, ತಂದೆಯು
ತನ್ನ ಮಹಿಮೆಯನ್ನು ತಾನೇ ಮಾಡಿಕೊಳ್ಳುತ್ತಾರೇನು! ಯಾರಿಗೆ ಸುಖ ಸಿಗುತ್ತದೆಯೋ ಅವರು ಮಹಿಮೆ
ಮಾಡುತ್ತಾರೆ. ನೀವು ಮಕ್ಕಳಿಗೆ ತಂದೆಯಿಂದ ಆಸ್ತಿಯು ಸಿಗುತ್ತದೆ, ತಂದೆಯು ಪ್ರೀತಿಯ
ಸಾಗರನಾಗಿದ್ದಾರೆ. ನಂತರ ಸತ್ಯಯುಗದಲ್ಲಿ ನೀವು ಮಧುರರು ಮತ್ತು ಪ್ರಿಯರಾಗುತ್ತೀರಿ. ಯಾರಾದರೂ
ಅಲ್ಲಿಯೂ ಸಹ ವಿಕಾರ ಮುಂತಾದವು ಇರುತ್ತದೆಯೆಂದರೆ ಅವರಿಗೆ ಅಲ್ಲಿ ರಾವಣ ರಾಜ್ಯವಿರುವುದಿಲ್ಲ ಎಂದು
ಹೇಳಿ. ರಾವಣ ರಾಜ್ಯವು ದ್ವಾಪರ ಯುಗದಿಂದ ಇರುತ್ತದೆ. ಇದನ್ನು ತಂದೆಯು ಎಷ್ಟು ಚೆನ್ನಾಗಿ ತಿಳಿಸಿ
ಕೊಡುತ್ತಾರೆ. ಸೃಷ್ಟಿಯ ಚರಿತ್ರೆ-ಭೂಗೋಳವನ್ನು ಯಾರೂ ಸಹ ತಿಳಿದುಕೊಂಡಿಲ್ಲ. ಈ ಸಮಯದಲ್ಲಿ ನಿಮಗೆ
ತಿಳಿಸಿ ಕೊಡುತ್ತಾರೆ ಮತ್ತೆ ನೀವು ದೇವತೆಗಳಾಗಿ ಬಿಡುತ್ತೀರಿ. ದೇವತೆಗಳಿಗಿಂತಲೂ ಶ್ರೇಷ್ಠ ಬೇರೆ
ಯಾರೂ ಇಲ್ಲ. ಆದ್ದರಿಂದ ಅಲ್ಲಿ ಗುರುಗಳನ್ನೂ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಇಲ್ಲಂತೂ ಅನೇಕ
ಗುರುಗಳಿದ್ದಾರೆ, ಸದ್ಗುರು ಒಬ್ಬರೇ ಆಗಿದ್ದಾರೆ. ಸಿಖ್ಖರೂ ಸಹ ಸದ್ಗುರು ಅಕಾಲ್ ಎಂದು ಹೇಳುತ್ತಾರೆ.
ಸದ್ಗುರುವು ಅಕಾಲಮೂರ್ತಿಯಾಗಿದ್ದಾರೆ, ಅವರು ಕಾಲರ ಕಾಲ ಮಹಾಕಾಲನಾಗಿದ್ದಾರೆ. ಆ ಕಾಲನಂತೂ
ಒಬ್ಬರನ್ನು ಕರೆದುಕೊಂಡು ಹೋಗುತ್ತಾನೆ, ನಾನಂತೂ ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆಂದು ತಂದೆಯು
ಹೇಳುತ್ತಾರೆ. ಪವಿತ್ರರನ್ನಾಗಿ ಮಾಡಿ ಮೊದಲು ಶಾಂತಿಧಾಮದಲ್ಲಿ ಮತ್ತೆ ಸುಖಧಾಮದಲ್ಲಿ ಕರೆದುಕೊಂಡು
ಹೋಗುತ್ತೇನೆ. ಒಂದು ವೇಳೆ ನನ್ನವರಾಗಿ ಮತ್ತೆ ಮಾಯೆಗೆ ವಶೀಭೂತರಾದರೆ ಅವರಿಗೆ ಗುರುವಿನ ನಿಂಧಕರು
ಎಂದೂ ಸಹ ಶ್ರೇಷ್ಠ ಪದವಿಯನ್ನು ಪಡೆಯಲು ಆಗುವುದಿಲ್ಲವೆಂದು ಹೇಳಲಾಗುತ್ತದೆ. ಸ್ವರ್ಗದ ಸಂಪೂರ್ಣ
ಸುಖವನ್ನು ಪಡೆಯಲು ಸಾಧ್ಯವಿಲ್ಲ. ಪ್ರಜೆಗಳಲ್ಲಿ ಹೊರಟು ಹೋಗುತ್ತಾರೆ. ಮಕ್ಕಳೇ, ನನ್ನ
ನಿಂದನೆಯನ್ನು ಮಾಡಿಸಬೇಡಿ ಎಂದು ತಂದೆಯು ಹೇಳುತ್ತಾರೆ. ನಾನು ನಿಮ್ಮನ್ನು ಸ್ವರ್ಗಕ್ಕೆ
ಮಾಲೀಕರನ್ನಾಗಿ ಮಾಡುತ್ತೇನೆ ಅಂದಾಗ ದೈವೀ ಗುಣವನ್ನೂ ಧಾರಣೆ ಮಾಡಬೇಕು, ಯಾರಿಗೂ ದುಃಖವನ್ನು
ಕೊಡಬಾರದು. ನಾನು ನಿಮ್ಮನ್ನು ಸುಖಧಾಮದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆಂದು ತಂದೆಯು
ಹೇಳುತ್ತಾರೆ. ತಂದೆಯು ಪ್ರೀತಿಯ ಸಾಗರನಾಗಿದ್ದಾರೆ, ಮನುಷ್ಯರು ದುಃಖವನ್ನು ಕೊಡುವ
ಸಾಗರರಾಗಿದ್ದಾರೆ. ಕಾಮ ಕಟಾರಿಯಿಂದ ಒಬ್ಬರಿಗೊಬ್ಬರು ದುಃಖವನ್ನು ಕೊಡುತ್ತಾರೆ, ಅಲ್ಲಂತೂ ಈ
ಮಾತುಗಳಿರುವುದಿಲ್ಲ. ಅದು ರಾಮ ರಾಜ್ಯವಾಗಿದೆ. ಯೋಗ ಬಲದಿಂದ ಮಕ್ಕಳ ಜನ್ಮವಾಗುತ್ತದೆ. ಈ ಯೋಗ
ಬಲದಿಂದ ನೀವು ಇಡೀ ವಿಶ್ವವನ್ನು ಪವಿತ್ರವನ್ನಾಗಿ ಮಾಡುತ್ತೀರಿ. ನೀವು ಗುಪ್ತ ಸೇನೆಯಾಗಿದ್ದೀರಿ.
ನೀವು ಬಹಳ ಪ್ರಸಿದ್ಧರಾಗುತ್ತೀರಿ ನಂತರ ಭಕ್ತಿ ಮಾರ್ಗದಲ್ಲಿ ನೀವು ದೇವಿಯರ ಅನೇಕ
ಮಂದಿರಗಳಾಗುತ್ತವೆ. ಅಮೃತದ ಕಳಶವನ್ನು ಮಾತೆಯರ ತಲೆಯ ಮೇಲೆ ಇಡಲಾಯಿತು ಎಂದು ಹೇಳುತ್ತಾರೆ. ಗೋಮಾತೆ
ಎಂದು ಹೇಳುತ್ತಾರೆ. ಇದು ಜ್ಞಾನವಾಗಿದೆ, ನೀರಿನ ಮಾತಲ್ಲ. ನೀವು ಶಿವಶಕ್ತಿ ಸೇನೆಯಾಗಿದ್ದೀರಿ. ಆ
ಜನರು ನಿಮ್ಮನ್ನು ಕಾಪಿ ಮಾಡಿ ಅನೇಕ ಗುರುಗಳನ್ನು ಮಾಡಿದ್ದಾರೆ. ನೀವು ಸತ್ಯವಾದ ದೋಣಿಯಲ್ಲಿ
ಕುಳಿತಿದ್ದೀರಿ, ಹಾಡುತ್ತಾರೆ - ಅಂಬಿಗ ನನ್ನನ್ನು ಪಾರು ಮಾಡು. ಈಗ ಪಾರು ಮಾಡುವ ಸಲುವಾಗಿ ಅಂಬಿಗ
ಸಿಕ್ಕಿದ್ದಾರೆ. ವೇಶ್ಯಾಲಯದಿಂದ ಶಿವಾಲಯದಲ್ಲಿ ಕರೆದುಕೊಂಡು ಹೋಗುತ್ತಾರೆ. ಮುಳ್ಳಿನ ಕಾಡನ್ನು
ಹೂದೋಟವನ್ನಾಗಿ ಮಾಡುತ್ತಾರೆ. ಅಲ್ಲಿ ಸುಖವೇ ಸುಖವಿರುತ್ತದೆ, ಇಲ್ಲಿ ದುಃಖವೇ ದುಃಖವಿದೆ. ತಂದೆಯ
ಕರ ಪತ್ರಗಳನ್ನು (ಪಾಂಪ್ಲೇಟ್) ಮುದ್ರಿಸಲು ತಿಳಿಸಿದ್ದಾರೆ ಅದರಲ್ಲಿ ನಿಮ್ಮ ಮನಸ್ಸಿನೊಂದಿಗೆ ನೀವೇ
ಕೇಳಿಕೊಳ್ಳಿ - ನಾನು ಸ್ವರ್ಗವಾಸಿಯಾಗಿದ್ದೇನೆಯೋ ಅಥವಾ ನರಕವಾಸಿಯಾಗಿದ್ದೇನೆಯೋ? ಈ ರೀತಿ ಅನೇಕ
ಪ್ರಶ್ನೆಗಳನ್ನು ಕೇಳಿಕೊಳ್ಳಬಹುದಾಗಿದೆ. ಇಲ್ಲಿ ಭ್ರಷ್ಟಾಚಾರವಿದೆ ಎಂದು ಎಲ್ಲರೂ ಹೇಳುತ್ತಾರೆ
ಅಂದಾಗ ಶ್ರೇಷ್ಠಾಚಾರಿಗಳು ಯಾವುದೋ ಸಮಯದಲ್ಲಿ ಇದ್ದಿರಬಹುದು. ಅವರು ದೇವತೆಗಳಾಗಿದ್ದರು ಆದರೆ ಅವರು
ಈಗಿಲ್ಲ. ಯಾವಾಗ ದೇವಿ-ದೇವತಾ ಧರ್ಮವು ಪ್ರಾಯಲೋಪವಾಗುತ್ತದೆಯೋ ಆಗ ಭಗವಂತನು ಒಂದು ಧರ್ಮವನ್ನು
ಸ್ಥಾಪನೆ ಮಾಡಲು ಬರಬೇಕಾಗುತ್ತದೆ. ನೀವು ತಮಗಾಗಿ ಶ್ರೀಮತದಂತೆ ಸ್ವರ್ಗವನ್ನು ಸ್ಥಾಪನೆ
ಮಾಡುತ್ತಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
೧. ತಂದೆಯ ಸಮಾನ
ಪ್ರೀತಿಯ ಸಾಗರನಾಗಬೇಕಾಗಿದೆ, ದುಃಖದ ಸಾಗರನಲ್ಲ. ತಂದೆಯನ್ನು ನಿಂದನೆ ಮಾಡಿಸುವಂತಹ ಯಾವುದೇ
ಕರ್ಮವನ್ನು ಮಾಡಬಾರದು. ಬಹಳ ಮಧುರರು, ಪ್ರಿಯರಾಗಬೇಕಾಗಿದೆ.
೨. ಯೋಗ ಬಲದಿಂದ ಪವಿತ್ರರಾಗಿ ನಂತರ ಅನ್ಯರನ್ನೂ ಸಹ ಪವಿತ್ರರನ್ನಾಗಿ ಮಾಡಬೇಕಾಗಿದೆ. ಮುಳ್ಳಿನ
ಕಾಡನ್ನು ಹೂದೋಟವನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಸದಾ ಖುಷಿಯಾಗಿರಬೇಕು. ತಮ್ಮ ಮಧುರ ತಂದೆಯೂ
ಸಹ ಆಗಿದ್ದಾರೆ, ಶಿಕ್ಷಕನೂ ಸಹ ಆಗಿದ್ದಾರೆ ಅವರಂತಹ ಮಧುರರು ಬೇರೆ ಯಾರೂ ಸಹ ಇಲ್ಲ.
ವರದಾನ:
ವಿಶೇಷತೆಗಳ
ಸಂಸ್ಕಾರವನ್ನು ನಿಮ್ಮ ಸ್ವಾಭಾವಿಕ ಸ್ವಭಾವ ಮಾಡಿಕೊಂಡು ಸಾಧಾರಣತೆಯನ್ನು ಸಮಾಪ್ತಿ ಮಾಡುವಂತಹ ಮರ್
ಜೀವಾ ಭವ.
ಸ್ವಭಾವ ಏನು ಇರುತ್ತೆ
ಅದು ಸ್ವತಃ ತನ್ನ ಕಾರ್ಯ ಮಾಡುತ್ತದೆ, ಯೋಚಿಸುವುದು, ಆಗುವುದು ಅಥವಾ ಮಾಡುವುದಲ್ಲಿದರ ಅವಶ್ಯಕತೆ
ಇರುವುದಿಲ್ಲ ಆದರೆ ಸ್ವತಃವಾಗಿ ಆಗಿ ಬಿಡುವುದು. ಇಂತಹ ಮರ್ ಜೀವಾ ಜನ್ಮಧಾರಿ ಬ್ರಾಹಣ ಆತ್ಮರ
ಸ್ವಭಾವವೇ ವಿಶೇಷ ಆತ್ಮರ ವಿಶೇಷತೆಯದಾಗಿದೆ. ಈ ವಿಶೇಷತೆಯ ಸಂಸ್ಕಾರ ಸ್ವಾಭಾವಿಕ ಸ್ವಭಾವ ಆಗಿ
ಬಿಡಬೇಕು. ಪ್ರತಿಯೊಬ್ಬರ ಹೃದಯದಿಂದ ಬರಬೇಕು ಇದು ನನ್ನ ಸ್ವಭಾವವಾಗಿದೆ. ಸಾಧಾರಣತೆ ಹಳೆಯ ಜನ್ಮದ
ಸ್ವಭಾವಾಗಿದೆ, ಈಗಿನದಲ್ಲ. ಏಕೆಂದರೆ ಹೊಸ ಜನ್ಮ ಪಡೆದುಕೊಂಡಿರುವೆನು. ಆದ್ದರಿಂದ ಹೊಸ ಜನ್ಮದ
ಸ್ವಭಾವ ವಿಸೇಷತೆಯದಾಗಿದೆ ಸಾಧಾರಣತೆಯಿಲ್ಲ.
ಸ್ಲೋಗನ್:
ರಾಯಲ್ ಇವರೇ
ಅಗಿದ್ದಾರೆ ಯಾರು ಜ್ಞಾನ ರತ್ನಗಳ ಜೊತೆಯೇ ಆಡುತ್ತಾರೆ, ಕಲ್ಲುಗಳ ಜೊತೆ ಅಲ್ಲ.