04.08.19    Avyakt Bapdada     Kannada Murli     09.01.85     Om Shanti     Madhuban


ಶ್ರೇಷ್ಠ ಭಾಗ್ಯವಂತ ಆತ್ಮರ ಆತ್ಮಿಕ ವ್ಯಕ್ತಿತ್ವ


ಇಂದು ಭಾಗ್ಯವಿಧಾತ ತಂದೆಯು ತನ್ನ ಶ್ರೇಷ್ಠ ಭಾಗ್ಯಶಾಲಿ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಮಗುವಿನ ಭಾಗ್ಯದ ರೇಖೆಯು ಎಷ್ಟೊಂದು ಶ್ರೇಷ್ಠ ಮತ್ತು ಅವಿನಾಶಿಯಾಗಿದೆ. ಭಾಗ್ಯವಂತರಂತು ಎಲ್ಲಾ ಮಕ್ಕಳೂ ಆಗಿದ್ದಾರೆ ಏಕೆಂದರೆ ಭಾಗ್ಯವಿಧಾತನವರಾದರು. ಆದ್ದರಿಂದ ಭಾಗ್ಯವಂತು ಜನ್ಮಸಿದ್ಧ ಅಧಿಕಾರವಾಗಿದೆ. ಜನ್ಮಸಿದ್ಧ ಅಧಿಕಾರದ ರೂಪದಲ್ಲಿ ಎಲ್ಲರಿಗೂ ತಾನಾಗಿಯೇ ಅಧಿಕಾರವು ಪ್ರಾಪ್ತವಾಗಿದೆ. ಅಧಿಕಾರವಂತು ಎಲ್ಲಾಮಕ್ಕಳಿಗೂ ಇದೆ ಆದರೆ ಆ ಅಧಿಕಾರವನ್ನು ಸ್ವಯಂ ಪ್ರತಿ ಅಥವಾ ಅನ್ಯರ ಪ್ರತಿ ಜೀವನದಲ್ಲಿ ಅನುಭೂತಿ ಮಾಡುವುದು ಮತ್ತು ಮಾಡಿಸುವುದರಲ್ಲಿ ಅಂತರವಿದೆ. ಈ ಭಾಗ್ಯದ ಅಧಿಕಾರವನ್ನು ಅಧಿಕಾರಿಯಾಗಿದ್ದು, ಅದೇ ಖುಷಿ ಮತ್ತು ನಶೆಯಲ್ಲಿರಿ. ಮತ್ತು ಅನ್ಯರಿಗೂ ಭಾಗ್ಯವಿಧಾತನ ಮೂಲಕ ಭಾಗ್ಯವಿಧಾತನವರಾಗುವುದು - ಇದು ಅಧಿಕಾರಿಯಾಗುವ ನಶೆಯಲ್ಲಿರಿ. ಹೇಗೆ ಸ್ಥೂಲ ಸಂಪದ್ಭರಿತರ ಚಲನೆ ಮತ್ತು ಚಹರೆಯಿಂದ ಸಂಪತ್ತಿನ ಅಲ್ಪಕಾಲದ ನಶೆಯು ಕಂಡು ಬರುತ್ತದೆ, ಹಾಗೆಯೇ ಭಾಗ್ಯವಿಧಾತನ ಮೂಲಕ ಅವಿನಾಶಿ ಶ್ರೇಷ್ಠಭಾಗ್ಯದ ಸಂಪತ್ತಿನ ನಶೆಯ ಚಲನೆ ಮತ್ತು ಚಹರೆಯಿಂದ ಸ್ವತಹವಾಗಿಯೇ ಕಂಡುಬರುತ್ತದೆ. ಶ್ರೇಷ್ಠಭಾಗ್ಯದ ಸಂಪತ್ತಿನ ಪ್ರಾಪ್ತಿ ಸ್ವರೂಪವು ಅಲೌಕಿಕ ಮತ್ತು ಆತ್ಮಿಕವಾಗಿದೆ. ಶ್ರೇಷ್ಠ ಭಾಗ್ಯದ ಹೊಳಪು ಮತ್ತು ಆತ್ಮಿಕ ನಶೆಯು ವಿಶ್ವದಲ್ಲಿ ಸರ್ವ ಆತ್ಮರುಗಳಿಗಿಂತ ಶ್ರೇಷ್ಠವಾದುದು, ಭಿನ್ನ ಹಾಗೂ ಪ್ರಿಯವಾಗಿರುವುದಾಗಿದೆ. ಶ್ರೇಷ್ಠ ಭಾಗ್ಯವಂತ ಆತ್ಮರು ಸದಾ ಸಂಪನ್ನ, ನಶೆಯಲ್ಲಿರುವ ಅನುಭವವಾಗುತ್ತದೆ. ದೂರದಿಂದಲೇ ಶ್ರೇಷ್ಠ ಭಾಗ್ಯದ ಸೂರ್ಯನ ಕಿರಣಗಳು ಹೊಳೆಯುತ್ತಿರುವ ಅನುಭವಿಯಾಗಿರುತ್ತಾರೆ. ದೂರದಿಂದಲೇ ಭಾಗ್ಯವಂತನ ಭಾಗ್ಯದ ಆಸ್ತಿಯ ವ್ಯಕ್ತಿತ್ವವು ಅನುಭವವಾಗುವುದು. ಶ್ರೇಷ್ಠ ಭಾಗ್ಯವಂತ ಆತ್ಮರ ದೃಷ್ಠಿಯಿಂದ ಸದಾ ಸರ್ವರಿಗೂ ಆತ್ಮಿಕ ರಾಯಲ್ಟಿಯ ಅನುಭವವಾಗುವುದು. ವಿಶ್ವದಲ್ಲಿ ಎಷ್ಟಾದರೂ ದೊಡ್ಡ-ದೊಡ್ಡ ರಾಯಲ್ಟಿ ಅಥವಾ ವ್ಯಕ್ತಿತ್ವವಿರುವವರಿರಬಹುದು ಆದರೆ ಶ್ರೇಷ್ಠ ಭಾಗ್ಯವಂತ ಆತ್ಮರ ಮುಂದೆ ವಿನಾಶಿ ವ್ಯಕ್ತಿತ್ವವಿರುವವರು ಸ್ವಯಂ ತಾನೇ ಅನುಭವ ಮಾಡುತ್ತಾರೆ- ಏನೆಂದರೆ, ಈ ಆತ್ಮಿಕ ವ್ಯಕ್ತಿತ್ವವು ಅತಿ ಶ್ರೇಷ್ಠ ಹಾಗೂ ವಿಶೇಷವಾಗಿದೆ. ಇಂತಹ ಅನುಭವ ಮಾಡುತ್ತಾರೆ- ಇವರು ಶ್ರೇಷ್ಠ ಭಾಗ್ಯವಂತ ಆತ್ಮರು, ಭಿನ್ನ ಅಲೌಕಿಕ ಪ್ರಪಂಚದವರಾಗಿದ್ದಾರೆ. ಅತಿ ಭಿನ್ನವಾಗಿದ್ದಾರೆ, ಅವರನ್ನು ಅಲಾಹ್ನ ಜನರೆಂದರೆ ಹೇಳುತ್ತಾರೆ. ಹೇಗೆ ಯಾವುದೇ ಹೊಸ ವಸ್ತುವಿರುತ್ತದೆಯೆಂದರೆ ಬಹಳ ಸ್ನೇಹದಿಂದ ನೋಡುತ್ತಲೇ ನಿಂತು ಬಿಡುತ್ತಾರೆ. ಹಾಗೆಯೇ ಶ್ರೇಷ್ಠ ಭಾಗ್ಯವಂತ ಆತ್ಮರನ್ನು ನೋಡುತ್ತಾ-ನೋಡುತ್ತಾ ಅತಿ ಹರ್ಷಿತವಾಗುತ್ತದೆ. ಶ್ರೇಷ್ಠ ಭಾಗ್ಯವಂತ ಆತ್ಮರ ಶ್ರೇಷ್ಠ ವೃತ್ತಿಯ ಮೂಲಕ ವಾಯುಮಂಡಲವು ಹೀಗಾಗುತ್ತದೆ, ಅದನ್ನು ಅನ್ಯರೂ ಸಹ ಅನುಭವ ಮಾಡುತ್ತಾರೆ - ಏನೋ ಪ್ರಾಪ್ತಿಯಾಗುತ್ತಿದೆ ಅರ್ಥಾತ್ ಪ್ರಾಪ್ತಿಯ ವಾತಾವರಣದ ವಾಯುಮಂಡಲವನ್ನು ಅನುಭವ ಮಾಡುತ್ತಾರೆ. ಏನೋ ಪಡೆಯುತ್ತಿದ್ದೇವೆ, ಸಿಗುತ್ತಿದೆ ಎನ್ನುವ ಇದೇ ಅನುಭೂತಿಯಲ್ಲಿ ಮುಳುಗಿ ಬಿಡುತ್ತಾರೆ. ಶ್ರೇಷ್ಠ ಭಾಗ್ಯವಂತ ಆತ್ಮರನ್ನು ನೋಡುತ್ತಾ ಇಂತಹ ಅನುಭವ ಮಡುತ್ತಾರೆ - ಹೇಗೆಂದರೆ, ಬಾಯಾರಿರುವವರ ಮುಂದೆ ಬಾವಿಯೇ ನಡೆದು ಬಂದಂತೆ. ಅಪ್ರಾಪ್ತ ಆತ್ಮರು ಪ್ರಾಪ್ತಿಯ ಭರವಸೆಯ ಅನುಭವ ಮಾಡುತ್ತಾರೆ. ನಾಲ್ಕೂ ಕಡೆಯಲ್ಲಿನ ಭರವಸೆಯಿಲ್ಲದವರ ಅಂಧಕಾರದ ಮಧ್ಯೆ ಶುಭ ಆಶೆಯ ದೀಪವು ಬೆಳಗಿರುವ ಅನುಭವ ಮಾಡುತ್ತಾರೆ. ಹೃದಯ ವಿಧೀರ್ಣ ಆತ್ಮರಿಗೆ ಹೃದಯದ ಖುಷಿಯ ಅನುಭೂತಿಯಾಗುತ್ತದೆ. ಇಂತಹ ಶ್ರೇಷ್ಠ ಭಾಗ್ಯವಂತರಾಗಿದ್ದೀರಾ? ತಮ್ಮ ಈ ಆತ್ಮಿಕ ವಿಶೇಷತೆಗಳನ್ನು ತಿಳಿದಿದ್ದೀರಾ? ಒಪ್ಪುತ್ತೀರಾ? ಅನುಭವ ಮಾಡುತ್ತೀರಾ? ಅಥವಾ ಕೇವಲ ಯೋಚಿಸಿ ಮತ್ತು ಕೇಳುತ್ತೀರಾ? ನಡೆಯುತ್ತಾ-ಸುತ್ತಾಡುತ್ತಾ ಈ ಸಾಧಾರಣ ರೂಪದಲ್ಲಿ ಗುಪ್ತವಾಗಿರುವ ಅಮೂಲ್ಯ ವಜ್ರ, ಶ್ರೇಷ್ಠ ಭಾಗ್ಯವಂತ ಆತ್ಮರೆಂದಿಗೂ ಸಹ ಸ್ವಯಂನ್ನೂ ಮರೆಯುವುದಿಲ್ಲವೇ, ತಮ್ಮನ್ನು ಸಾಧಾರಣ ಆತ್ಮರೆಂದಂತು ತಿಳಿಯುವುದಿಲ್ಲವೇ? ತನುವು ಹಳೆಯದಾಗಿದೆ, ಸಾಧಾರಣವಾಗಿದೆ. ಆದರೆ ಆತ್ಮವು ಮಹಾನ್ ಮತ್ತು ವಿಶೇಷವಾಗಿದೆ. ಇಡೀ ವಿಶ್ವದ ಭಾಗ್ಯದ ಜನ್ಮ ಪತ್ರಿಕೆಯನ್ನು ನೋಡಿರಿ, ತಮ್ಮಂತಹ ಶ್ರೇಷ್ಠ ಭಾಗ್ಯದ ರೇಖೆಯು ಮತ್ತ್ಯಾರದೂ ಆಗಲು ಸಾಧ್ಯವಿಲ್ಲ. ಯಾರೆಷ್ಟೇ ಹಣದಿಂದ ಸಂಪನ್ನವಾಗಿರುವ ಆತ್ಮರಿರಬಹುದು, ಶಾಸ್ತ್ರಗಳ ಆತ್ಮ ಜ್ಞಾನದಿಂದ ಖಜಾನೆಗಳಿಂದ ಸಂಪನ್ನವಾದ ಆತ್ಮರಿರಬಹುದು, ವಿಜ್ಞಾನದ ಜ್ಞಾನದ ಶಕ್ತಿಯಿಂದ ಸಂಪನ್ನವಾದ ಆತ್ಮರಿರಬಹುದು, ಆದರೆ ತಮ್ಮೆಲ್ಲರ ಭಾಗ್ಯದ ಸಂಪನ್ನತೆಯ ಮುಂದೆ ಅದೇನೆನಿಸುತ್ತದೆ? ಈಗ ಅವರೂ ಸಹ ಸ್ವಯಂ ಅನುಭವ ಮಾಡತೊಡಗುತ್ತಾರೆ - ನಾವು ಬಾಹ್ಯದಿಂದ ಸಂಪನ್ನರಿದ್ದೇವೆ ಆದರೆ ಒಳಗೆ ಖಾಲಿಯಿದ್ದೇವೆ ಮತ್ತು ತಾವು ಒಳಗಿನಿಂದ ಸಂಪನ್ನರಿದ್ದೀರಿ, ಬಾಹ್ಯದಲ್ಲಿ ಸಾಧಾರಣರಾಗಿದ್ದೀರಿ ಆದ್ದರಿಂದ ತಮ್ಮ ಶ್ರೇಷ್ಠ ಭಾಗ್ಯವನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳುತ್ತಾ, ಸಮರ್ಥತೆಯ ಆತ್ಮಿಕ ನಶೆಯಲ್ಲಿರಿ. ಹೊರಗಿನಿಂದ ಭಲೆ ಸಾಧಾರಣವಾಗಿ ಕಾಣಿಸಿರಿ ಆದರೆ ಸಾಧಾರಣತೆಯಲ್ಲಿ ಮಹಾನತೆಯು ಕಂಡುಬರಲಿ. ಅಂದಮೇಲೆ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿರಿ- ಪ್ರತೀ ಕರ್ಮದಲ್ಲಿ ಸಾಧಾರಣತೆಯಲ್ಲಿ ಮಹಾನತೆಯ ಅನುಭೂತಿಯಾಗುತ್ತದೆಯೇ? ಯಾವಾಗ ಸ್ವಯಂ, ಸ್ವಯಂನ್ನು ಹೀಗೆ ಅನುಭವ ಮಾಡುತ್ತೀರಿ, ಆಗ ಅನ್ಯರಿಗೂ ಅನುಭವವನ್ನು ಮಾಡಿಸುತ್ತೀರಿ. ಹೇಗೆ ಅನ್ಯ ಜನರು ಕಾರ್ಯವನ್ನು ಮಾಡುತ್ತಾರೆಯೋ, ಹಾಗೆಯೇ ತಾವೂ ಸಹ ಲೌಕಿಕ ಕಾರ್ಯ ವ್ಯವಹಾರವನ್ನೇ ಮಾಡುತ್ತೀರಾ ಅಥವಾ ಅಲೌಕಿಕ ಅಲಾಹ್ನ ಜನರಾಗಿದ್ದು ಕಾರ್ಯವನ್ನು ಮಾಡುತ್ತೀರಾ? ನಡೆಯುತ್ತಾ-ಸುತ್ತಾಡುತ್ತಾ, ಎಲ್ಲರ ಸಂಪರ್ಕದಲ್ಲಿ ಬರುತ್ತಾ, ಇದನ್ನು ಅವಶ್ಯವಾಗಿ ಅನುಭವ ಮಾಡಿಸಿರಿ- ಅವರು ತಿಳಿಯಲಿ, ಇವರ ದೃಷ್ಟಿಯಲ್ಲಿ, ಚಹರೆಯಲ್ಲಿ ಭಿನ್ನತೆಯಿದೆ ಮತ್ತು ನೋಡುತ್ತಿದ್ದರೂ ಸ್ಪಷ್ಟವಾಗಿ ಅರ್ಥವಾಗದೇ ಇರಬಹುದು ಆದರೆ ಇದೇನು? ಇವರು ಯಾರು? ಎನ್ನುವ ಪ್ರಶ್ನೆಯಂತು ಖಂಡಿತವಾಗಿ ಉತ್ಪನ್ನವಾಗುತ್ತದೆ. ಈ ಪ್ರಶ್ನೆಯೆಂಬ ಬಾಣವು ತಂದೆಯ ಸಮೀಪದಲ್ಲಿಯೇ ಕರೆ ತರುತ್ತದೆ. ತಿಳಿಯಿತೆ! ಇಂತಹ ಶ್ರೇಷ್ಠ ಭಾಗ್ಯವಂತ ಆತ್ಮರಾಗಿದ್ದೀರಿ. ಬಾಪ್ದಾದಾರವರು ಕೆಲಕೆಲವೊಮ್ಮೆ ಮಕ್ಕಳ ಮುಗ್ಧತೆಯನ್ನು ನೋಡುತ್ತಾ ಮುಗುಳ್ನಗುತ್ತಾರೆ. ಭಗವಂತನ ಮಕ್ಕಳಾದಿರಿ ಆದರೆ ಇಷ್ಟೂ ಮುಗ್ಧರಾಗಿ ಬಿಡುತ್ತೀರಿ, ಅದರಲ್ಲಿ ತಮ್ಮ ಭಾಗ್ಯವನ್ನೂ ಮರೆತು ಬಿಡುತ್ತೀರಿ. ಯಾವ ಮಾತನ್ನು ಯಾರೂ ಮರೆಯುವುದಿಲ್ಲ, ಅದನ್ನು ಮುಗ್ಧ ಮಕ್ಕಳು ಮರೆತು ಬಿಡುತ್ತಾರೆ, ತಮ್ಮನ್ನು ತಾವೇ ಮರೆತು ಬಿಡುತ್ತೀರಾ? ತಂದೆಯನ್ನು ಯಾರಾದರೂ ಮರೆಯುತ್ತಾರೆಯೇ? ಅಂದಮೇಲೆ ಎಷ್ಟು ಮುಗ್ಧರಾಗಿ ಬಿಟ್ಟಿರಿ! 63 ಜನ್ಮಗಳ ಉಲ್ಟಾ ಪಾಠವನ್ನು ಇಷ್ಟೂ ಪರಿಪಕ್ವ ಮಾಡಿಕೊಂಡಿದ್ದೀರಿ, ಅದಕ್ಕ ಭಗವಂತನೂ ಹೇಳುವರು- ಮರೆಯಿರೆಂದರೂ ಮರೆಯುವುದಿಲ್ಲ ಮತ್ತು ಶ್ರೇಷ್ಠ ಮಾತನ್ನು ಮರೆತು ಬಿಡುತ್ತೀರಿ. ಅಂದಮೇಲೆ ಎಷ್ಟೊಂದು ಮುಗ್ಧರಾದಿರಿ! ತಂದೆಯೂ ಹೇಳುವರು- ಡ್ರಾಮಾದಲ್ಲಿ ಈ ಮುಗ್ಧರೊಂದಿಗೇ ನನ್ನ ಪಾತ್ರವಿದೆ. ಬಹಳ ಸಮಯ ಮುಗ್ದರಾಗಿದ್ದಿರಿ, ಈಗ ತಂದೆಯ ಸಮಾನ ಮಾಸ್ಟರ್ ಜ್ಞಾನಪೂರ್ಣ, ಮಾಸ್ಟರ್ ಶಕ್ತಿಪೂರ್ಣರಾಗಿರಿ. ತಿಳಿಯಿತೆ. ಒಳ್ಳೆಯದು!

ಸದಾ ಶ್ರೇಷ್ಠ ಭಾಗ್ಯವಂತ, ಸರ್ವರಿಗೂ ತಮ್ಮ ಶ್ರೇಷ್ಠ ಭಾಗ್ಯದ ಮೂಲಕ ಭಾಗ್ಯವಂತರಾಗುವ ಶಕ್ತಿಯನ್ನು ಕೊಡುವವರು, ಸಾಧಾರಣತೆಯಲ್ಲಿ ಮಹಾನತೆಯ ಅನುಭವ ಮಾಡಿಸುವವರು, ಮುಗ್ಧರಿಂದ ಭಾಗ್ಯವಂತರಾಗುವವರು, ಸದಾ ಭಾಗ್ಯದ ಅಧಿಕಾರದ ನಶೆಯಲ್ಲಿ ಮತ್ತು ಖುಷಿಯಲ್ಲಿರುವವರು, ವಿಶ್ವದಲ್ಲಿ ಭಾಗ್ಯದ ನಕ್ಷತ್ರಗಳಾಗಿ ಹೊಳೆಯುವವರು, ಇಂತಹ ಶ್ರೇಷ್ಠ ಭಾಗ್ಯವಂತ ಆತ್ಮರಿಗೆ ಭಾಗ್ಯವಿಧಾತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಮಧುಬನ ನಿವಾಸಿ ಸಹೋದರ-ಸಹೋದರಿಯರೊಂದಿಗೆ:-
ಮಧುಬನ ನಿವಾಸಿ ಅರ್ಥಾತ್ ಸದಾ ತಮ್ಮ ಮಧುರತೆಯಿಂದ ಸರ್ವರನ್ನೂ ಮಧುರರನ್ನಾಗಿ ಮಾಡುವವರು ಮತ್ತು ಸದಾ ತಮ್ಮ ಬೇಹದ್ದಿನ ವೃತ್ತಿಯ ಮೂಲಕ ಬೇಹದ್ದಿನ ವೈರಾಗ್ಯವನ್ನು ತರಿಸುವವರು - ಇದೇ ಮಧುಬನ ನಿವಾಸಿಗಳ ವಿಶೇಷತೆಯಾಗಿದೆ. ಮಧುರತೆಯೂ ಸಹ ಅತಿಯಾಗಿರುವುದು ಮತ್ತು ವೈರಾಗ್ಯವೂ ಅತಿಯಾಗಿರುವುದು. ಹೀಗೆ ಬ್ಯಾಲೆನ್ಸ್ ಇಡುವವರು ಸದಾಕಾಲವೂ ಸಹಜ ಮತ್ತು ಸ್ವತಹವಾಗಿ ಮುಂದುವರೆಯುವ ಅನುಭವ ಮಾಡುತ್ತಾರೆ. ಮಧುಬನದ ಈ ಎರಡು ವಿಶೇಷತೆಗಳ ಪ್ರಭಾವವು ವಿಶ್ವದಲ್ಲಿ ಬೀರುತ್ತದೆ. ಭಲೆ ಅಜ್ಞಾನಿ ಆತ್ಮರೇ ಇರಲಿ ಆದರೆ ಮಧುಬನವು ಲೈಟ್ಹೌಸ್, ಮೈಟ್ಹೌಸ್ ಆಗಿದೆ. ಅಲ್ಲಿ ತಿಳಿಯುತ್ತಾರೆ- ಇದು ಸ್ವಲ್ಪ ಭಿನ್ನವಾಗಿದೆ. ಭಲೆ ಸಮಸ್ಯೆಗಳ ಕಾರಣದಿಂದ ಇರಬಹುದು, ಭಲೆ ಸಂದರ್ಭದ ಕಾರಣದಿಂದಿರಬಹುದು, ಭಲೆ ಪ್ರಾಪ್ತಿಯ ಕಾರಣದಿಂದಿರಬಹುದು ಆದರೆ ಅಲ್ಪಕಾಲದ ವೈರಾಗ್ಯ ವೃತ್ತಿಯ ಪ್ರಭಾವವು ಅವಶ್ಯವಾಗಿ ಬೀರುತ್ತದೆ. ಯಾವಾಗ ತಾವು ಇಲ್ಲಿ ಶಕ್ತಿಶಾಲಿ ಆಗುತ್ತೀರೆಂದರೆ, ಅಲ್ಲಿಯೂ ಯಾವುದಾದರೊಂದು ಶಕ್ತಿಶಾಲಿ ವಿಶೇಷ ಮಾತಾಗುತ್ತದೆ. ಇಲ್ಲಿನ ಪ್ರಕಂಪನಗಳು ಬ್ರಾಹ್ಮಣರ ಜೊತೆ ಜೊತೆಗೆ ಪ್ರಪಂಚದವರ ಮೇಲೂ ಬೀಳುತ್ತದೆ. ಒಂದುವೇಳೆ ವಿಶೇಷವಾಗಿ ನಿಮಿತ್ತವಾಗಿರುವವರು ಸ್ವಲ್ಪ ಉಮ್ಮಂಗದಲ್ಲಿ ಬರುತ್ತಾರೆ ಮತ್ತೆ ನಂತರ ಸಾಧಾರಣರಾಗಿ ಬಿಡುತ್ತಾರೆಂದರೆ, ಅಲ್ಲಿಯೂ ಉಮ್ಮಂಗದಲ್ಲಿ ಬರುತ್ತಾರೆ ನಂತರ ಸಾಧಾರಣರಾಗಿ ಬಿಡುತ್ತಾರೆ. ಅಂದಮೇಲೆ ಮಧುಬನವು ಒಂದು ವಿಶೇಷ ಸ್ಟೇಜ್ ಆಗಿದೆ. ಹೇಗೆ ಆ ಸ್ಟೇಜಿನ ಮೇಲೆ ಯಾರೇ ಭಾಷಣ ಮಾಡುವವರಿದ್ದಾರೆ ಅಥವಾ ಸ್ಟೇಜ್ ಸೆಕ್ರೆಟರಿ ಇದ್ದಾರೆ, ಆಗ ಗಮನವಂತು ಸ್ಟೇಜಿನ ಮೇಲಿರುತ್ತದೆಯಲ್ಲವೆ, ಅಥವಾ ತಿಳೀಯುತ್ತಾರೆ- ಇವರಂತು ಭಾಷಣ ಮಾಡುವುದಕ್ಕಿದಾರೆ. ಯಾರೇ ಚಿಕ್ಕದಾದ ಹಾಡನ್ನಾಡುವವರು ಅಥವಾ ಹೂಗುಚ್ಛವನ್ನು ಕೊಡುವವರೇ ಇದ್ದಾರೆಂದರೂ, ಯಾವ ಸಮಯದಲ್ಲಿ ಅವರು ಸ್ಟೇಜಿನ ಮೇಲೆ ಬರುತ್ತಾರೆಂದರೆ, ಅದೇ ವಿಶೇಷತೆಯಿಂದ, ಗಮನವನ್ನಿಟ್ಟು ಬರುತ್ತಾರೆ. ಅಂದಮೇಲೆ ಮಧುಬನದಲ್ಲಿ ಯಾವುದೇ ಡ್ಯೂಟಿಯಲ್ಲಿರಬಹುದು, ತಮ್ಮನ್ನು ಚಿಕ್ಕವರೆಂದಾದರೂ ತಿಳಿಯಿರಿ ಅಥವಾ ದೊಡ್ಡವರೆಂದಾದರೂ ತಿಳಿಯಿರಿ, ಆದರೆ ಮಧುಬನದ ವಿಶೇಷವಾದ ಸ್ಟೇಜಿನಲ್ಲಿದ್ದೀರಿ. ಮಧುಬನ ಅಂದರೆ ಮಹಾನ್ ಸ್ಟೇಜ್. ಅಂದಮೇಲೆ ಮಹಾನ್ ಸ್ಟೇಜಿನ ಮೇಲೆ ಪಾತ್ರವನ್ನಭಿನಯಿಸುವವರು ಮಹಾನರಾದರಲ್ಲವೆ. ಎಲ್ಲರೂ ತಮ್ಮನ್ನು ಶ್ರೇಷ್ಠ ದೃಷ್ಟಿಯಿಂದ ನೋಡುತ್ತಾರಲ್ಲವೆ, ಏಕೆಂದರೆ ಮಧುಬನದ ಮಹಿಮೆ ಅರ್ಥಾತ್ ಮಧುಬನ ನಿವಾಸಿಗಳ ಮಹಿಮೆಯಾಗಿದೆ.

ಅಂದಮೇಲೆ ಮಧುಬನದವರ ಪ್ರತೀ ಮಾತು ಮಾಣಿಕ್ಯವಾಗಿದೆ. ಮಾತಲ್ಲ ಆದರೆ ಮಾಣಿಕ್ಯವಾಗಿದ್ದೀರಿ. ಹೇಗೆ ಮುತ್ತು ರತ್ನಗಳ ಸುರಿಮಳೆಯಾಗುತ್ತಿದೆ, ಮಾತಾಡುತ್ತಿಲ್ಲ, ಮುತ್ತು ರತ್ನಗಳು ಮಳೆಯುತ್ತಿದೆ. ಇದಕ್ಕೆ ಹೇಳಲಾಗುತ್ತದೆ- ಮಧುರತೆ. ಇಂತಹ ಮಾತನ್ನು ಮಾತನಾಡಿರಿ, ಅದನ್ನು ಕೇಳುವವರು ಯೋಚಿಸಲಿ- ಇಂತಹ ಮಾತನ್ನು ನಾವೂ ಸಹ ಮಾತನಾಡುತ್ತೇವೆ. ಎಲ್ಲರೂ ಕೇಳಿಸಿಕೊಂಡು ಕಲಿಯುವ ಪ್ರೇರಣೆ ಸಿಗಲಿ, ಫಾಲೋ ಮಾಡುವ ಪ್ರೇರಣೆ ಸಿಗಲಿ. ಯಾವುದೇ ಮಾತು ಬರುತ್ತದೆ, ಅದು ಹೀಗಿರಲಿ- ಹೇಗೆಂದರೆ ಅದನ್ನು ರೆಕಾರ್ಡ್ ಮಾಡಿ, ನಂತರ ರಿಪೀಟ್ ಮಾಡಿ ಕೇಳಿಸಿಕೊಳ್ಳಲ್ಲಿ. ಒಳ್ಳೆಯ ಮಾತು ಎನಿಸುತ್ತದೆ, ಆಗಲೇ ಮತ್ತೆ ಮತ್ತೆ ಕೇಳಬೇಕೆಂದು ರೆಕಾರ್ಡ್ ಮಾಡುತ್ತಾರಲ್ಲವೆ. ಅಂದಮೇಲೆ ಇಂತಹ ಮಧುರತೆಯ ಮಾತಿರಲಿ. ಇಂತಹ ಮಧುರ ಮಾತಿನ ಪ್ರಕಂಪನಗಳು ವಿಶ್ವದಲ್ಲಿ ಸ್ವತಹವಾಗಿಯೇ ಹರಡುತ್ತದೆ. ಈ ವಾಯುಮಂಡಲವು ಪ್ರಕಂಪನಗಳನ್ನು ಸ್ವತಹವಾಗಿಯೇ ಸೆಳೆಯುತ್ತದೆ. ಅಂದಮೇಲೆ ತಮ್ಮ ಪ್ರತೀ ಮಾತು ಮಹಾನ್ ಆಗಿರಲಿ. ಪ್ರತಿಯೊಂದು ಮನಸ್ಸಾ ಸಂಕಲ್ಪವು, ಪ್ರತಿಯೊಂದು ಆತ್ಮನ ಪ್ರತಿ ಮಧುರವಾಗಿರಲಿ, ಮಹಾನ್ ಆಗಿರಲಿ. ಮತ್ತೊಂದು ಮಾತು- ಮಧುಬನದಲ್ಲಿ ಭಂಡಾರವೆಷ್ಟು ತುಂಬಿರುತ್ತದೆಯೋ, ಅಷ್ಟೇ ಬೇಹದ್ದಿನ ವೈರಾಗಿ. ಪ್ರಾಪ್ತಿಯೂ ಹೆಚ್ಚು ಮತ್ತು ವೈರಾಗ್ಯ ವೃತ್ತಿಯೂ ಅಷ್ಟೇ ಇರಲಿ, ಆಗಲೇ ಹೇಳಲಾಗುತ್ತದೆ- ಬೇಹದ್ದಿನ ವೈರಾಗ್ಯ ವೃತ್ತಿಯಿದೆ ಎಂದು. ಅದಲ್ಲವೇ ಅಲ್ಲ ಎಂದಾಗ ಬೇಹದ್ದಿನ ವೈರಾಗ್ಯ ವೃತ್ತಿ ಹೇಗಿರುತ್ತದೆ. ಪ್ರಾಪ್ತಿಯಿದೆ ಮತ್ತು ಇದ್ದರೂ ಸಹ ವೈರಾಗ್ಯ ವೃತ್ತಿಯಿರಲಿ, ಇದಕ್ಕೆ ಹೇಳಲಾಗುತ್ತದೆ- ಬೇಹದ್ದಿನ ವೈರಾಗಿ. ಅಂದಮೇಲೆ ಯಾರೆಷ್ಟು ಮಾಡುತ್ತಾರೆಯೋ, ಅಷ್ಟು ವರ್ತಮಾನವೂ ಫಲವನ್ನು ಪಡೆಯುತ್ತಾರೆ ಮತ್ತು ಭವಿಷ್ಯದಲ್ಲಂತು ಸಿಗಲೇಬೇಕು. ವರ್ತಮಾನದಲ್ಲಿ ಸತ್ಯ ಸ್ನೇಹ ಅಥವಾ ಈಗ ಎಲ್ಲರ ಹೃದಯದ ಆಶೀರ್ವಾದಗಳು ಪ್ರಾಪ್ತವಾಗುತ್ತಿದೆ. ಮತ್ತು ಈ ಪ್ರಾಪ್ತಿಯು ಸ್ವರ್ಗದ ರಾಜ್ಯಭಾಗ್ಯಕ್ಕಿಂತಲೂ ಹೆಚ್ಚು. ಈಗ ಗೊತ್ತಾಗುತ್ತದೆ- ಎಲ್ಲರ ಸ್ನೇಹ ಮತ್ತು ಆಶೀರ್ವಾದಗಳು ಎಷ್ಟು ಮುಂದುವರೆಸುತ್ತದೆ ಎಂದು. ಅಂದಮೇಲೆ ಅವರೆಲ್ಲರ ಹೃದಯದ ಆಶೀರ್ವಾದಗಳ ಖುಷಿ ಮತ್ತು ಸುಖದ ಅನುಭೂತಿಯು ಒಂದು ವಿಚಿತ್ರವಾಗಿದೆ. ಇಂತಹ ಅನುಭವ ಮಾಡುತ್ತೀರಿ, ಹೇಗೆಂದರೆ ಯಾರೋ ಸಹಜವಾಗಿ ಕೈಗಳಲ್ಲಿ ಹಾರಿಸಿಕೊಂಡು ಹೋಗುತ್ತಿದ್ದಾರೆ ಎಂಬಂತೆ. ಸರ್ವರ ಈ ಸ್ನೇಹ ಮತ್ತು ಸರ್ವರ ಆಶೀರ್ವಾದಗಳು ಇಷ್ಟೂ ಅನುಭವ ಮಾಡಿಸುವಂತದ್ದಾಗಿದೆ. ಒಳ್ಳೆಯದು!

ಈ ಹೊಸ ವರ್ಷದಲ್ಲಿ ಎಲ್ಲರೂ ಹೊಸ ಉಮ್ಮಂಗ-ಉತ್ಸಾಹವಿರುವ ಸಂಕಲ್ಪವನ್ನು ಮಾಡಿದ್ದೀರಲ್ಲವೆ. ಅದರಲ್ಲಿ ಧೃಡತೆಯಿದೆಯಲ್ಲವೆ! ಒಂದುವೇಳೆ ಯಾವುದೇ ಸಂಕಲ್ಪವನ್ನು ಪ್ರತಿನಿತ್ಯವೂ ರಿವೈಜ್ ಮಾಡುತ್ತಿರುತ್ತೀರೆಂದರೆ, ಹೇಗೆ ಯಾವುದೇ ವಸ್ತುವು ಪರಿಪಕ್ವ ಮಾಡುತ್ತಾ ಸಾಗಿರಿ, ಆಗ ಪರಿಪಕ್ವವಾಗಿ ಬಿಡುತ್ತದೆ. ಅಂದಮೇಲೆ ಯಾವ ಸಂಕಲ್ಪವನ್ನು ಮಾಡಿದ್ದೀರಿ, ಅದನ್ನು ಬಿಡಬಾರದು. ಪ್ರತಿನಿತ್ಯವೂ ಆ ಸಂಕಲ್ಪವನ್ನು ರಿವೈಜ್ ಮಾಡುತ್ತಾ ಧೃಡ ಮಾಡಿಕೊಳ್ಳಿರಿ, ನಂತರ ಇದೇ ಧೃಡತೆಯು ಸದಾ ಕೆಲಸಕ್ಕೆ ಬರುತ್ತದೆ. ಕೆಲಕೆಲವೊಮ್ಮೆ ಏನು ಸಂಕಲ್ಪವನ್ನು ಮಾಡಿದ್ದೆವು ಎಂದು ಯೋಚಿಸುತ್ತೀರಾ ಅಥವಾ ನಡೆಯುತ್ತಾ-ನಡೆಯುತ್ತಾ ಸಂಕಲ್ಪವನ್ನೂ ಮರೆತು ಬಿಟ್ಟರೆ, ಆಗ ಬಲಹೀನತೆಯು ಬರುತ್ತದೆ. ಪ್ರತಿನಿತ್ಯವೂ ರಿವೈಜ್ ಮಾಡಿರಿ ಮತ್ತು ಪ್ರತಿನಿತ್ಯವೂ ತಂದೆಯ ಮುಂದೆ ರಿಪೀಟ್ ಮಾಡುತ್ತೀರೆಂದರೆ ಪರಿಪಕ್ವವಾಗಿ ಬಿಡುತ್ತದೆ ಮತ್ತು ಸಫಲತೆಯೂ ಸಹಜವಾಗಿ ಸಿಗುತ್ತದೆ. ಎಲ್ಲರೂ ಯಾವ ಸ್ನೇಹದಿಂದ ಮಧುಬನದಲ್ಲಿ ಒಂದೊಂದು ಆತ್ಮವನ್ನು ನೋಡುತ್ತೀರಿ, ಅದನ್ನು ತಂದೆಯವರಿಗೆ ಗೊತ್ತಿದೆ. ಮಧುಬನ ನಿವಾಸಿ ಆತ್ಮರ ವಿಶೇಷತೆಯ ಮಹತ್ವಿಕೆಯೇನು ಕಡಿಮೆಯಿಲ್ಲ. ಒಂದುವೇಳೆ ಯಾವುದೊಂದು ಚಿಕ್ಕದಾದ ವಿಶೇಷ ಕಾರ್ಯವನ್ನೂ ಮಾಡುತ್ತಾರೆಂದರೆ, ಒಂದು ಸ್ಥಾನದಲ್ಲಿ ಆ ಕಾರ್ಯವಾಗುತ್ತದೆ ಮತ್ತು ಎಲ್ಲರಿಗೂ ಪ್ರೇರಣೆಯು ಸಿಗುತ್ತದೆ ಅಂದಮೇಲೆ ಆ ಎಲ್ಲಾ ವಿಶೇಷತೆಯ ಲಾಭದ ಪಾಲು, ಆ ಆತ್ಮನಿಗೆ ಸಿಕ್ಕಿ ಬಿಡುತ್ತದೆ. ಅಂದಮೇಲೆ ಮಧುಬನದವರು ಯಾವುದೇ ಶ್ರೇಷ್ಠ ಸಂಕಲ್ಪವನ್ನು ಮಾಡುತ್ತಾರೆ, ಯೋಜನೆಯನ್ನು ಮಾಡುತ್ತಾರೆ, ಕರ್ಮವನ್ನು ಮಾಡುತ್ತಾರೆ ಅದು ಎಲ್ಲರಿಗೂ ಕಲಿಯುವ ಉತ್ಸಾಹವಾಗುತ್ತದೆ. ಅಂದಮೇಲೆ ಎಲ್ಲರ ಉತ್ಸಾಹವನ್ನು ಹೆಚ್ಚಿಸುವ ಆತ್ಮರಿಗೆ ಎಷ್ಟೊಂದು ಲಾಭವಾಗುತ್ತದೆ! ತಮ್ಮೆಲ್ಲರ ಮಹತ್ವಿಕೆಯು ಇಷ್ಟೊಂದಿದೆ. ಒಂದು ಮೂಲೆಯಲ್ಲಿ ಮಾಡುತ್ತೀರಿ ಮತ್ತು ಎಲ್ಲಾ ಜಾಗಗಳಲ್ಲಿಯೂ ಹರಡುತ್ತದೆ. ಒಳ್ಳೆಯದು!

ಈ ವರ್ಷಕ್ಕಾಗಿ ಹೊಸ ಯೋಜನೆ:-
ಈ ವರ್ಷದಲ್ಲಿ ಇಂತಹ ಗ್ರೂಪ್ ಮಾಡಿರಿ, ಆ ಗ್ರೂಪ್ನ ವಿಶೇಷತೆಯನ್ನು ಪ್ರತ್ಯಕ್ಷದಲ್ಲಿ ನೋಡುತ್ತಾ ಅನ್ಯರಿಗೂ ಪ್ರೇರಣೆ ಸಿಗಲಿ ಮತ್ತು ಪ್ರಕಂಪನಗಳು ಹರಡಲಿ. ಹೇಗೆ ಸರ್ಕಾರವೂ ಹೇಳುತ್ತದೆ - ತಾವು ಯಾವುದಾದರೂ ಸ್ಥಾನವನ್ನು ತೆಗೆದುಕೊಂಡು, ಒಂದು ಹಳ್ಳಿಯನ್ನು ಮೇಲೆತ್ತಿ ಇಂತಹ ಉದಾಹರಣೆಯನ್ನು ತೋರಿಸಿರಿ, ಅದರಿಂದ ಅರ್ಥವಾಗಿ ಬಿಡಲಿ - ತಾವು ಪ್ರತ್ಯಕ್ಷವಾಗಿ ಮಾಡುತ್ತಿದ್ದೀರಿ. ಆಗಲೇ ಅದರ ಪ್ರಭಾವವು ಹರಡುತ್ತದೆ. ಇಂತಹದ್ದೇ ಯಾವುದಾದರೂ ಗ್ರೂಪ್ ಆಗಲಿ, ಅದರಿಂದ ಅನ್ಯರಿಗೂ ಪ್ರೇರಣೆ ಸಿಗಲಿ. ಒಂದುವೇಳೆ ಯಾರೇ ಗುಣವೆಂದರೇನು, ಶಕ್ತಿಯು ಏನಾಗಿರುತ್ತದೆ, ಜ್ಞಾನವೆಂದರೇನು, ನೆನಪು ಎಂದರೇನು ಎಂದು ನೋಡಬೇಕೆಂದರೆ, ಅದು ಪ್ರತ್ಯಕ್ಷ ಸ್ವರೂಪದಲ್ಲಿ ಕಂಡುಬರಲಿ. ಹೀಗೇನಾದರೂ ಚಿಕ್ಕ-ಚಿಕ್ಕ ಗ್ರೂಪ್ ಪ್ರತ್ಯಕ್ಷ ಪ್ರಮಾಣವಾಗಿ ಬಿಡಲಿ, ಆಗ ಆ ಶ್ರೇಷ್ಠವಾದ ಪ್ರಕಂಪನಗಳು ಸ್ವತಹವಾಗಿಯೇ ವಾಯುಮಂಡಲದಲ್ಲಿ ಹರಡುತ್ತದೆ. ಇತ್ತೀಚೆಗೆ ಎಲ್ಲಾ ಜನರು ಪ್ರತ್ಯಕ್ಷದಲ್ಲಿ ನೋಡಲು ಬಯಸುತ್ತಾರೆ, ಕೇಳಲು ಬಯಸುವುದಿಲ್ಲ. ಪ್ರತ್ಯಕ್ಷದ ಪ್ರಭಾವವು ಬಹಳ ಬೇಗನೆ ತಲುಪುತ್ತದೆ. ಅಂದಮೇಲೆ ಇಂತಹ ಯಾವುದಾದರೂ ತೀವ್ರ ಉಮ್ಮಂಗ-ಉತ್ಸಾಹದ ಪ್ರತ್ಯಕ್ಷ ರೂಪವಿರಲಿ, ಗ್ರೂಪ್ ಇರಲಿ, ಅದನ್ನು ಎಲ್ಲರೂ ನೋಡಿ ಸಹಜವಾಗಿ ಪ್ರೇರಣೆ ತೆಗೆದುಕೊಳ್ಳಲಿ ಮತ್ತು ನಾಲ್ಕೂ ಕಡೆಯಲ್ಲಿ ಆ ಪ್ರೇರಣೆಯು ತಲುಪಿ ಬಿಡಲಿ. ಅಂದಮೇಲೆ ಒಬ್ಬರಿಂದ ಇಬ್ಬರು, ಇಬ್ಬರಿಂದ ಮೂವರು, ಹೀಗೆ ಹರಡುತ್ತಾ ಹೋಗುತ್ತದೆ. ಆದ್ದರಿಂದ ಇಂತಹ ಯಾವುದಾದರೂ ವಿಶೇಷತೆಯನ್ನು ಮಾಡಿ ತೋರಿಸಿರಿ. ಹೇಗೆ ವಿಶೇಷವಾಗಿ ನಿಮಿತ್ತವಾಗಿರುವ ಆತ್ಮರ ಪ್ರತಿ ಎಲ್ಲರೂ ತಿಳಿಯುತ್ತಾರೆ- ಇದು ಪ್ರಮಾಣವಾಗಿದೆ ಮತ್ತು ಪ್ರೇರಣೆ ಸಿಗುತ್ತದೆ. ಇಂತಹ ಇನ್ನೂ ಪ್ರೂಫ್ ತಯಾರು ಮಾಡಿರಿ. ಅದನ್ನು ನೋಡುತ್ತಾ ಎಲ್ಲರೂ ಹೇಳಲಿ- ಹಾ, ಪ್ರತ್ಯಕ್ಷದಲ್ಲಿ ಜ್ಞಾನದ ಸ್ವರೂಪವು ಅನುಭವವಾಗುತ್ತಿದೆ. ಈ ಶುಭ ಶ್ರೇಷ್ಠ ಕರ್ಮ, ಶ್ರೇಷ್ಠ ಸಂಕಲ್ಪದ ವೃತ್ತಿಯಿಂದ ವಾಯುಮಂಡಲವನ್ನು ತಯಾರು ಮಾಡಿರಿ. ಹೀಗೆ ಏನಾದರೂ ಮಾಡಿ ತೋರಿಸಿರಿ. ಇತ್ತೀಚೆಗೆ ಮನಸ್ಸಾದ ಪ್ರಭಾವವೆಷ್ಟು ಬೀಳುತ್ತದೆಯೋ, ಅಷ್ಟು ವಾಣಿಯದಾಗುವುದಿಲ್ಲ. ವಾಣಿಯ ಒಂದು ಶಬ್ಧವನ್ನು ಹೇಳಿರಿ ಮತ್ತು ವೈಬ್ರೇಷನ್ 100 ಶಬ್ಧಗಳದಷ್ಟು ಹರಡಿಸಿರಿ, ಆಗಲೇ ಪ್ರಭಾವ ಬೀರುತ್ತದೆ. ಶಬ್ಧವಂತು ಸಾಮಾನ್ಯವಾಗಿ ಬಿಟ್ಟಿದೆಯಲ್ಲವೆ. ಆದರೆ ಶಬ್ಧದ ಜೊತೆಗೆ ಯಾವ ಪ್ರಕಂಪನವು ಶಕ್ತಿಶಾಲಿಯಾಗಿದೆಯೋ, ಅದು ಮತ್ತೆಲ್ಲಿಯೂ ಆಗುವುದಿಲ್ಲ, ಅದು ಇಲ್ಲಿಯೇ ಆಗುತ್ತದೆ. ಈ ವಿಶೇಷತೆಯನ್ನು ಮಾಡಿ ತೋರಿಸಿ. ಉಳಿದಂತೆ ಸಮ್ಮೇಳನಗಳನ್ನು ಮಾಡುತ್ತೀರಿ, ಯುವ ವರ್ಗದ ಕಾರ್ಯಕ್ರಮವು ಆಗುತ್ತಿರುತ್ತದೆ ಮತ್ತು ಆಗಲೇಬೇಕು. ಇದರಿಂದಲೂ ಉಮ್ಮಂಗ-ಉತ್ಸಾಹವು ಹೆಚ್ಚುತ್ತದೆ. ಆದರೆ ಈಗ ಆತ್ಮಿಕ ಶಕ್ತಿಯ ಅವಶ್ಯಕತೆಯಿದೆ. ಇದು ವೃತ್ತಿಯಿಂದ ಪ್ರಕಂಪನಗಳನ್ನು ಹರಡಿಸುವುದು. ಅದು ಶಕ್ತಿಶಾಲಿಯಾಗಿರುವುದಾಗಿದೆ. ಒಳ್ಳೆಯದು.

ವರದಾನ:  
ವರದಾನ: ಸಹನಶಕ್ತಿಯ ಧಾರಣೆಯ ಮೂಲಕ ಸತ್ಯತೆಯನ್ನು ತಮ್ಮದಾಗಿಸಿಕೊಳ್ಳುವ ಸದಾಕಾಲದ ವಿಜಯಿ ಭವ.

ಪ್ರಪಂಚದವರು ಹೇಳುತ್ತಾರೆ - ಇತ್ತೀಚೆಗೆ ಸತ್ಯ ಜನರು ನಡೆಯುವುದೇ ಕಷ್ಟವಿದೆ, ಸುಳ್ಳು ಹೇಳಲೇಬೇಕಾಗುತ್ತದೆ, ಕೆಲ ಬ್ರಾಹ್ಮಣ ಆತ್ಮರೂ ತಿಳಿಯುತ್ತಾರೆ - ಕೆಲವು ಕಡೆ ಚತುರತೆಯಿಂದ ನಡೆಯಲೇಬೇಕಾಗುತ್ತದೆ, ಆದರೆ ಬ್ರಹ್ಮಾ ತಂದೆಯವರನ್ನು ನೋಡಿದಿರಿ - ಸತ್ಯತೆ ಮತ್ತು ಪವಿತ್ರತೆಗಾಗಿ ಎಷ್ಟೊಂದು ವಿರೋಧವಾಯಿತು ಆದರೂ ಗಾಬರಿಯಾಗಲಿಲ್ಲ. ಸತ್ಯತೆಗಾಗಿ ಸಹನಶಕ್ತಿಯ ಅವಶ್ಯಕತೆಯಿರುತ್ತದೆ. ಸಹನೆ ಮಾಡಬೇಕಾಗುತ್ತದೆ, ಬಾಗಬೇಕಾಗುತ್ತದೆ, ಸೋಲನ್ನನೊಪ್ಪಬೇಕಾಗುತ್ತದೆ ಆದರೆ ಅದು ಸೋಲಲ್ಲ, ಸದಾಕಾಲದ ವಿಜಯವಾಗಿದೆ.

ಸ್ಲೋಗನ್:
ಪ್ರಸನ್ನರಾಗುವುದು ಮತ್ತು ಪ್ರಸನ್ನಗೊಳಿಸುವುದು - ಇದು ಆಶೀರ್ವಾದ ಕೊಡುವುದು ಮತ್ತು ಆಶೀರ್ವಾದವನ್ನು ತೆಗೆದುಕೊಳ್ಳುವುದಾಗಿದೆ.