02.05.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಆತ್ಮಾಭಿಮಾನಿಗಳಾಗಿ, ನಾನು ಆತ್ಮನಾಗಿದ್ದೇನೆ ಶರೀರವಲ್ಲ - ಇದು ಮೊದಲನೇ ಪಾಠವಾಗಿದೆ, ಈ ಪಾಠವನ್ನು
ಎಲ್ಲರಿಗೂ ಚೆನ್ನಾಗಿ ಓದಿಸಿ”
ಪ್ರಶ್ನೆ:
ಜ್ಞಾನ
ಹೇಳುವಂತಹ ವಿಧಾನವೇನಾಗಿದೆ? ಯಾವ ವಿಧಿಯಿಂದ ಜ್ಞಾನವನ್ನು ತಿಳಿಸಬೇಕು?
ಉತ್ತರ:
ಜ್ಞಾನದ
ಮಾತುಗಳನ್ನು ಬಹಳ ಖುಷಿ-ಖುಷಿಯಿಂದ ಹೇಳಿ, ಉದಾಸೀನರಾಗಿ ಹೇಳಬೇಡಿ. ನೀವು ಪರಸ್ಪರದಲ್ಲಿ ಕುಳಿತು
ಜ್ಞಾನದ ಚರ್ಚೆ ಮಾಡಿ, ಜ್ಞಾನದ ಮನನ ಚಿಂತನೆ ಮಾಡಿ ನಂತರ ಯಾರಿಗಾದರೂ ತಿಳಿಸಿ. ತಮ್ಮನ್ನು
ಆತ್ಮನೆಂದು ತಿಳಿದು ನಂತರ ಆತ್ಮನಿಗೆ ಹೇಳಿದಾಗ ಕೇಳುವವರಿಗೆ ಖುಷಿಯಾಗುತ್ತದೆ.
ಓಂ ಶಾಂತಿ.
ತಂದೆಯು ತಿಳಿಸುತ್ತಾರೆ - ಆತ್ಮಾಭಿಮಾನಿಯಾಗಿ ಅಥವಾ ದೇಹಿ-ಅಭಿಮಾನಿಯಾಗಿ ಕುಳಿತುಕೊಳ್ಳಿ ಏಕೆಂದರೆ
ಆತ್ಮನಲ್ಲಿಯೇ ಉತ್ತಮ ಮತ್ತು ಕನಿಷ್ಠ ಸಂಸ್ಕಾರ ತುಂಬುತ್ತದೆ. ಎಲ್ಲದರ ಪ್ರಭಾವವು ಆತ್ಮದ ಮೇಲೆ
ಬೀಳುತ್ತದೆ. ಆತ್ಮನಿಗೇ ಪತಿತ ಎಂದು ಕರೆಯಲಾಗುತ್ತದೆ, ಪತಿತ ಆತ್ಮನೆಂದು ಹೇಳಲಾಗುತ್ತದೆ,
ಅವಶ್ಯವಾಗಿ ಅವರು ಜೀವಾತ್ಮ ಆಗಿರುತ್ತಾರೆ. ಆತ್ಮವು ಶರೀರದೊಂದಿಗೆ ಇರುತ್ತದೆ. ಮೊಟ್ಟ ಮೊದಲು
ಆತ್ಮನೆಂದು ತಿಳಿದು ಕುಳಿತುಕೊಳ್ಳಿ ಎಂದು ಹೇಳುತ್ತಾರೆ, ತಮ್ಮನ್ನು ಶರೀರವಲ್ಲ ಆತ್ಮನೆಂದು ತಿಳಿದು
ಕುಳಿತುಕೊಳ್ಳಿ. ಆತ್ಮವೇ ಈ ಕರ್ಮೇಂದ್ರಿಯಗಳನ್ನು ನಡೆಸುತ್ತದೆ. ಪದೇ-ಪದೇ ಆತ್ಮನೆಂದು
ತಿಳಿದುಕೊಳ್ಳುವುದರಿಂದ ಪರಮಾತ್ಮನ ನೆನಪು ಬರುತ್ತದೆ. ಒಂದುವೇಳೆ ದೇಹದ ನೆನಪು ಬಂದರೆ ಜನ್ಮ
ಕೊಟ್ಟಿರುವ ತಂದೆಯ ನೆನಪು ಬರುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಆತ್ಮಾಭಿಮಾನಿಗಳಾಗಿ.
ತಂದೆಯು ಓದಿಸುತ್ತಿದ್ದಾರೆ, ಇದು ಮೊದಲನೇ ಪಾಠವಾಗಿದೆ. ನೀವಾತ್ಮ ಅವಿನಾಶಿಯಾಗಿದ್ದೀರಿ, ಈ ಶರೀರ
ವಿನಾಶಿಯಾಗಿದೆ. ನಾನು ಆತ್ಮನಾಗಿದ್ದೇನೆ- ಈ ಮೊದಲನೇ ಶಬ್ಧವು ನೆನಪು ಮಾಡಿಕೊಳ್ಳದಿದ್ದರೆ ಕಚ್ಚಾ
ಆಗಿ ಬಿಡುತ್ತೀರಿ. ನಾನು ಆತ್ಮನಾಗಿದ್ದೇನೆ ಶರೀರವಲ್ಲ- ಈ ಶಬ್ಧವನ್ನು ತಂದೆಯು ಈ ಸಮಯದಲ್ಲಿ
ಓದಿಸುತ್ತಿದ್ದಾರೆ, ಮೊದಲು ಯಾರೂ ಓದಿಸುತ್ತಿರಲಿಲ್ಲ. ಆತ್ಮಾಭಿಮಾನಿಯನ್ನಾಗಿ ಮಾಡಿ ಜ್ಞಾನವನ್ನು
ಕೊಡಲು ತಂದೆಯು ಬಂದಿದ್ದಾರೆ. ಮೊದಲನೇ ದಿನದ ಜ್ಞಾನವಾಗಿದೆ- ಹೇ ಆತ್ಮವೇ ನೀನು ಪತಿತನಾಗಿದ್ದೀಯಾ
ಏಕೆಂದರೆ ಇದು ಹಳೆಯ ಪ್ರಪಂಚವಾಗಿದೆ. ಪ್ರದರ್ಶನಿಯಲ್ಲಿ ನೀವು ಮಕ್ಕಳು ಬಹಳ ಜನಕ್ಕೆ ತಿಳಿಸುತ್ತೀರಿ.
ಪ್ರಶ್ನೋತ್ತರ ಮಾಡುತ್ತೀರಿ. ಹಗಲಿನ ವಿಶ್ರಾಂತಿ ಸಮಯದಲ್ಲಿ ನೀವೆಲ್ಲರೂ ಸೇರಿ ಸಮಾಚಾರವನ್ನು
ಕೇಳಬೇಕು. ಪರಸ್ಪರ ಸಮಾಚಾರವನ್ನು ಕೇಳಬೇಕು. ಯಾರ್ಯಾರು ಯಾವ-ಯಾವ ಪ್ರಶ್ನೆಯನ್ನು ಕೇಳಿದರು, ನಾವು
ಹೇಗೆ ಉತ್ತರ ಕೊಟ್ಟೆವೆ? ನಂತರ ಅವರಿಗೆ ತಿಳಿಸಿ ಕೊಡಬೇಕು - ಆ ಪ್ರಶ್ನೆಗೆ ಇದು ಉತ್ತರವಲ್ಲ, ಇದು
ಉತ್ತರವಾಗಿದೆ. ತಿಳಿಸಿಕೊಡುವ ಯುಕ್ತಿ ಎಲ್ಲರದೂ ಒಂದೇ ಆಗಿರುವುದಿಲ್ಲ. ಮುಖ್ಯ ಮಾತು ತಮ್ಮನ್ನು
ಆತ್ಮನೆಂದು ತಿಳಿದುಕೊಳ್ಳುತ್ತೀರಾ ಅಥವಾ ದೇಹವೆಂದು ತಿಳಿಯುತ್ತೀರಾ? ಎಲ್ಲರಿಗೂ ಇಬ್ಬರು
ತಂದೆಯರಿದ್ದಾರೆ. ದೇಹಧಾರಿಗಳಿಗೆಲ್ಲಾ ಲೌಕಿಕ ತಂದೆಯಿದ್ದಾರೆ, ಪಾರಲೌಕಿಕ ತಂದೆಯೂ ಇದ್ದಾರೆ.
ಅಲ್ಪಕಾಲದ ತಂದೆಯಂತೂ ಸಾಮಾನ್ಯವಾಗಿದ್ದಾರೆ, ಇಲ್ಲಿ ನಿಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ.
ಅವರು ನಾವಾತ್ಮಗಳಿಗೆ ಕುಳಿತು ತಿಳಿಸುತ್ತಾರೆ ಅವರೊಬ್ಬರೇ ತಂದೆಯೂ ಆಗಿದ್ದಾರೆ, ಶಿಕ್ಷಕನೂ
ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ ಇದನ್ನು ಪಕ್ಕಾ ಮಾಡಿಕೊಳ್ಳಬೇಕು. ಯಾವಾಗ ನೀವು ಯಾರಿಗಾದರೂ
ತಿಳಿಸುತ್ತೀರಿ, ಅವರು ಯಾವ-ಯಾವ ಪ್ರಶ್ನೆಗಳನ್ನು ಕೇಳುತ್ತಾರೆಂದು ನೀವು ಪರಸ್ಪರ
ಕುಳಿತುಕೊಳ್ಳಬೇಕು, ಬುದ್ಧಿವಂತರೂ ಸಹ ಕುಳಿತುಕೊಳ್ಳಬೇಕು, ನಿಮಗೆ ಹಗಲಿನ ವೇಳೆಯಲ್ಲಿ ಸಮಯ
ಸಿಗುತ್ತದೆ, ಊಟ ಮಾಡಿದ ನಂತರ ನಿದ್ರೆಯ ನಶೆಯು ಬರುತ್ತದೆಯೆಂದು ತಿಳಿಯಬಾರದು. ಯಾರು ಬಹಳ ಊಟ
ಮಾಡುತ್ತಾರೆಯೋ ಅವರಿಗೆ ನಿದ್ರೆಯು ಆಲಸ್ಯ ಬರುತ್ತದೆ. ಆ ದಿನದಲ್ಲಿ ಯಾರ್ಯಾರು ಯಾವ-ಯಾವ
ಪ್ರಶ್ನೆಗಳನ್ನು ಕೇಳಿದರೆಂಬ ಚರ್ಚೆಯನ್ನು ಮಾಡಬೇಕು. ಪ್ರಶ್ನೆಗಳನ್ನಂತೂ ಭಿನ್ನ-ಭಿನ್ನವಾಗಿ
ಕೇಳುತ್ತಾರೆ ಅದಕ್ಕೆ ಸರಿಯಾದ ಉತ್ತರ ಬೇಕಾಗುತ್ತದೆ. ನೋಡಬೇಕು- ಅವರನ್ನು ತಂದೆಯ ಆಕರ್ಷಣೆಯಲ್ಲಿ
ತಂದಿದ್ದೇವೆಯೇ? ಸಮಾಧಾನವಾಯಿತೇ? ಇಲ್ಲದಿದ್ದರೆ ನಂತರ ತಿದ್ದಬೇಕು. ಯಾರು ಬುದ್ಧಿವಂತರಿದ್ದಾರೆಯೋ
ಅವರು ಕುಳಿತುಕೊಳ್ಳಬೇಕು, ಊಟ ಮಾಡಿ ಬೇಗ ನಿದ್ರೆ ಬಂದಿತೆಂದು ಹೇಳಬಾರದು. ದೇವತೆಗಳು ಬಹಳ ಕಡಿಮೆ
ಊಟ ಮಾಡುತ್ತಾರೆ ಏಕೆಂದರೆ ಖುಷಿಯಿರುತ್ತದೆಯಲ್ಲವೆ ಆದ್ದರಿಂದ ಖುಷಿಯಂತಹ ಔಷಧಿಯಿಲ್ಲವೆಂದು
ಹೇಳಲಾಗುತ್ತದೆ. ನೀವು ಮಕ್ಕಳಿಗೆ ಅಪಾರವಾದ ಖುಷಿಯಾಗಬೇಕು. ಬ್ರಾಹ್ಮಣರಾಗುವುದರಲ್ಲಿ ಬಹಳ
ಖುಷಿಯಿದೆ, ಅವರಿಗೆ ಖುಷಿಯಾದಾಗಲೇ ಬ್ರಾಹ್ಮಣರಾಗುತ್ತಾರೆ. ದೇವತೆಗಳಿಗೆ ಖುಷಿಯಿದೆಯಲ್ಲವೆ
ಆದ್ದರಿಂದ ಅವರ ಬಳಿ ಧನ-ಸಂಪತ್ತೆಲ್ಲವೂ ಬಹಳ ಇರುತ್ತದೆ. ಅವರಿಗೆ ಖುಷಿಯು ಸಾಕಷ್ಟಿರುತ್ತದೆ,
ಖುಷಿಯಿರುವಾಗ ಊಟವನ್ನು ಬಹಳ ಕಡಿಮೆ ತಿನ್ನುತ್ತಾರೆ. ಇದೊಂದು ನಿಯಮವಾಗಿದೆ. ಹೆಚ್ಚು ಊಟ
ಮಾಡುವವರಿಗೆ ಹೆಚ್ಚು ನಿದ್ರೆ ಬರುತ್ತದೆ, ಯಾರಿಗೆ ನಿದ್ರೆಯ ನಶೆಯಿರುತ್ತದೆಯೋ ಅವರು ಯಾರಿಗೂ
ತಿಳಿಸಲು ಸಾಧ್ಯವಾಗುವುದಿಲ್ಲ, ಬಲವಂತವಾಗಿ ಹೇಳುತ್ತಾರೆ ವಿವಶವಾಗಿರುತ್ತಾರೆ. ಈ ಜ್ಞಾನದ
ಅಂಶಗಳನ್ನು ಬಹಳ ಖುಷಿಯಿಂದ ಕೇಳಬೇಕು ಹಾಗೂ ಹೇಳಬೇಕಾಗಿದೆ. ತಿಳಿಸಿಕೊಡಲು ಬಹಳ ಸಹಜವಾಗಿರುತ್ತದೆ.
ಮೂಲ ಮಾತು ತಂದೆಯ ಪರಿಚಯ ಕೊಡುವುದಾಗಿದೆ. ಬ್ರಹ್ಮನನ್ನಂತೂ ಯಾರೂ ಸಹ ತಿಳಿದಿಲ್ಲ. ಪ್ರಜಾಪಿತ
ಬ್ರಹ್ಮನು ಇದ್ದಾರೆ, ಅನೇಕಾನೇಕ ಪ್ರಜೆಗಳಿದ್ದಾರೆ. ಪ್ರಜಾಪಿತ ಬ್ರಹ್ಮಾ ಹೇಗಾಗುತ್ತಾರೆ
ಎನ್ನುವುದರ ಕುರಿತು ಬಹಳ ಚೆನ್ನಾಗಿ ತಿಳಿಸಬೇಕು. ತಂದೆಯು ತಿಳಿಸುತ್ತಾರೆ- ಇವರ ಅನೇಕ ಜನ್ಮಗಳ
ಅಂತ್ಯದ ಜನ್ಮದಲ್ಲಿಯೂ ಅಂತ್ಯದಲ್ಲಿ ವಾನಪ್ರಸ್ಥ ಸ್ಥಿತಿಯಲ್ಲಿ ನಾನು ಪ್ರವೇಶ ಮಾಡುತ್ತೇನೆ.
ಇಲ್ಲದಿದ್ದರೆ ರಥವೆಲ್ಲಿಂದ ಬರಬೇಕು! ರಥವು ಶಿವ ತಂದೆಗಾಗಿಯೇ ಗಾಯನವಿದೆ, ಅವರ ರಥದಲ್ಲಿ ಹೇಗೆ
ಬರುತ್ತಾರೆಂದು ಗೊಂದಲವಾಗುತ್ತಾರೆ. ರಥವಂತೂ ಅವಶ್ಯವಾಗಿ ಬೇಕು. ಕೃಷ್ಣನಂತೂ ಆಗಲು ಸಾಧ್ಯವಿಲ್ಲ
ಆದ್ದರಿಂದ ಅವಶ್ಯವಾಗಿ ಈ ಬ್ರಹ್ಮನ (ರಥ) ಮೂಲಕವೇ ತಿಳಿಸುತ್ತಾರೆ. ಮೇಲಿಂದಂತೂ ಹೇಳುವುದಿಲ್ಲ
ಹಾಗಾದರೆ ಬ್ರಹ್ಮನು ಎಲ್ಲಿಂದ ಬಂದರು? ತಂದೆಯೇ ತಿಳಿಸುತ್ತಾರೆ- ಯಾರು 84 ಜನ್ಮಗಳನ್ನು
ತೆಗೆದುಕೊಂಡಿದ್ದಾರೆಯೋ ಅವರಲ್ಲಿ ನಾನು ಪ್ರವೇಶಿಸುತ್ತೇನೆ. ಅವರು ಸ್ವಯಂನ್ನೂ ತಿಳಿದುಕೊಂಡಿಲ್ಲ
ಆದರೆ ನಾನೇ ತಿಳಿಸುತ್ತೇನೆ. ಕೃಷ್ಣನಿಗೆ ರಥದ ಅವಶ್ಯಕತೆಯಿಲ್ಲ. ಕೃಷ್ಣನೆಂದು ಹೇಳಿದರೆ ಭಗೀರಥನ
ಹೆಸರು ಲೋಪವಾಗಿ ಬಿಡುತ್ತದೆ. ಕೃಷ್ಣನಿಗೆ ಭಗೀರಥನೆಂದು ಹೇಳಲು ಆಗುವುದಿಲ್ಲ. ಕೃಷ್ಣನ ಮೊದಲನೇ
ಜನ್ಮ ರಾಜಕುಮಾರನಾಗುವುದಾಗಿದೆ. ಮಕ್ಕಳ ಆಂತರ್ಯದಲ್ಲಿ ವಿಚಾರಸಾಗರ ಮಂಥನ ನಡೆಯಬೇಕಾಗಿದೆ. ಇದನ್ನು
ಮಕ್ಕಳು ತಿಳಿದುಕೊಂಡಿದ್ದೀರಿ. ಈ ಮಾತುಗಳನ್ನು ಶಾಸ್ತ್ರಗಳಲ್ಲಿ ಬರೆದಿಲ್ಲ. ಉಳಿದಂತೆ ವಿಚಾರಸಾಗರ
ಮಂಥನ ಮಾಡಿದ ಕಳಸವನ್ನು ಲಕ್ಷ್ಮೀಗೆ ಕೊಟ್ಟರೆಂಬ ಮಾತು ಸರಿಯಾಗಿದೆ. ಅವರು ನಂತರ ಅನ್ಯರಿಗೆ
ಅಮೃತವನ್ನು ಕುಡಿಸಿದಾಗ ಸ್ವರ್ಗದ ಬಾಗಿಲು ತೆರೆಯುತ್ತದೆ ಆದರೆ ಪರಮಪಿತ ಪರಮಾತ್ಮನಿಗೆ ವಿಚಾರಸಾಗರ
ಮಂಥನ ಮಾಡುವ ಅವಶ್ಯಕತೆಯಿಲ್ಲ. ಅವರಂತೂ ಬೀಜರೂಪನಾಗಿದ್ದಾರೆ, ಅವರಲ್ಲಿಯೇ ಜ್ಞಾನವಿದೆ. ಅವರೂ
ತಿಳಿದುಕೊಂಡಿದ್ದಾರೆ, ನೀವೂ ತಿಳಿದುಕೊಂಡಿದ್ದೀರಿ. ಇದನ್ನು ನೀವು ಬಹಳ ಚೆನ್ನಾಗಿ ತಿಳಿಸಿಕೊಡಬೇಕು.
ತಿಳಿಸಿ ಕೊಡದೆ ದೇವತಾ ಪದವಿಯನ್ನು ಹೇಗೆ ಪಡೆಯುತ್ತೀರಿ! ಇದು ಆತ್ಮಗಳಿಗೆ ಉಲ್ಲಾಸ
ಪಡಿಸುವುದಕ್ಕಾಗಿ ತಂದೆಯು ತಿಳಿಸುತ್ತಾರೆ. ಬಾಕಿ ಏನನ್ನೂ ತಿಳಿದುಕೊಂಡಿರಲಿಲ್ಲ, ತಂದೆಯೇ ಬಂದು
ತಿಳಿಸಿಕೊಡುತ್ತಾರೆ. ಈಗ ನಿಮ್ಮ ಲಂಗರು ಭಕ್ತಿ ಮಾರ್ಗದಿಂದ ಹೊರ ಬಂದಿದೆ. ಈ ಜ್ಞಾನ ಮಾರ್ಗದಲ್ಲಿ
ನಡೆಯುತ್ತಿದೆ, ತಂದೆಯು ತಿಳಿಸುತ್ತಾರೆ- ನಾನು ನಿಮಗೆ ಯಾವ ಜ್ಞಾನವನ್ನು ಕೊಡುತ್ತೇನೆಯೋ ಅದು
ಪ್ರಾಯಲೋಪವಾಗಿ ಬಿಡುತ್ತದೆ. ಒಬ್ಬರು ನಿರಾಕಾರ ತಂದೆ, ಇನ್ನೊಬ್ಬರು ಸಾಕಾರಿ ತಂದೆಯಾಗಿದ್ದಾರೆ.
ಚೆನ್ನಾಗಿ ತಿಳಿಸಿಕೊಡಲಾಗುತ್ತದೆ ಆದರೆ ಮಾಯೆಯು ಆಕರ್ಷಣೆ ಮಾಡಿ ಕೊಳಕಿನಲ್ಲಿ ತೆಗೆದುಕೊಂಡು
ಹೋಗುತ್ತದೆ, ಪತಿತರಾಗಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ಕಾಮ ಚಿತೆಯ
ಮೇಲೇರಿ ಒಮ್ಮೆಯೇ ಸ್ಮಶಾನದಲ್ಲಿ ಬಂದು ಬಿಟ್ಟಿದ್ದೀರಿ ನಂತರ ಇಲ್ಲಿಯೇ ಸ್ವರ್ಗವಾಗುತ್ತದೆ.
ಅರ್ಧಕಲ್ಪ ಫರಿಸ್ಥಾನ (ಸ್ವರ್ಗ) ನಡೆಯುತ್ತದೆ, ಇನ್ನರ್ಧ ಕಲ್ಪ ಕಬರಿಸ್ಥಾನ (ಸ್ಮಶಾನ) ನಡೆಯುತ್ತದೆ.
ಈಗ ಎಲ್ಲರೂ ಸ್ಮಶಾನವಾಸಿಗಳಾಗುವವರಾಗಿದ್ದಾರೆ. ಏಣಿ ಚಿತ್ರವನ್ನು ಕುರಿತು ನೀವು ಚೆನ್ನಾಗಿ
ತಿಳಿಸಬಹುದು. ಇದು ಪತಿತ ರಾಜ್ಯವಾಗಿದೆ, ಇದರ ವಿನಾಶವಂತೂ ಅವಶ್ಯವಾಗಿ ಆಗಲಿದೆ. ಈ ಭೂಮಿಯ ಮೇಲೆ
ಈಗ ಸ್ಮಶಾನವಿದೆ ನಂತರ ಇದೇ ಭೂಮಿಯೇ ಪರಿವರ್ತನೆಯಾಗುತ್ತದೆ ಅರ್ಥಾತ್ ಕಬ್ಬಿಣದ ಯುಗದಿಂದ ಚಿನ್ನದ
ಯುಗವುಳ್ಳ ಪ್ರಪಂಚವಾಗುತ್ತದೆ ನಂತರ ಎರಡು ಕಲೆ ಕಡಿಮೆಯಾಗುತ್ತದೆ. ತತ್ವಗಳಲ್ಲಿಯೂ ಕಲೆ
ಕಡಿಮೆಯಾಗುತ್ತಾ ಹೋಗುತ್ತದೆ ಆಗ ಆಪತ್ತುಗಳು ಉಲ್ಬಣಗೊಳ್ಳುತ್ತದೆ. ನೀವು ಎಲ್ಲರಿಗೂ ಬಹಳ ಚೆನ್ನಾಗಿ
ತಿಳಿಸಿಕೊಡುತ್ತೀರಿ. ಒಂದು ವೇಳೆ ಅವರು ತಿಳಿದುಕೊಳ್ಳದಿದ್ದರೆ ಅವರು ಕವಡೆಯಂತೆ ಅವರಿಗೆ ಏನೂ
ಬೆಲೆಯಿರುವುದಿಲ್ಲ. ಇದರ ಬೆಲೆಯನ್ನು ತಂದೆಯೇ ಕುಳಿತು ತಿಳಿಸುತ್ತಾರೆ. ವಜ್ರದಂತಹ ಜನ್ಮವೆಂದು
ಗಾಯನ ಮಾಡಲಾಗುತ್ತದೆ. ನೀವೂ ಸಹ ಮೊದಲು ತಂದೆಯನ್ನರಿಯದ ಕಾರಣ ಕವಡೆಯಂತೆ ಇದ್ದಿರಿ. ಈಗ ತಂದೆಯು
ಬಂದು ವಜ್ರ ಸಮಾನ ಮಾಡುತ್ತಾರೆ ತಂದೆಯಿಂದ ಮಾತ್ರ ವಜ್ರದಂತಹ ಜನ್ಮ ಸಿಗುತ್ತದೆ ನಂತರ ಕವಡೆಯಂತೆ
ಏಕೆ ಆಗುತ್ತೀರಿ? ನೀವೀಗ ಈಶ್ವರೀಯ ಸಂತಾನರಾಗಿದ್ದೀರಿ. ಆತ್ಮಗಳು ಮತ್ತು ಪರಮಾತ್ಮ ಬಹಳ ಕಾಲದಿಂದ
ಅಗಲಿ ಹೋಗಿದ್ದರು..... ಎಂದು ಗಾಯನವಿದೆ. ಶಾಂತಿಧಾಮದಲ್ಲಿರುವ ಮಿಲನದಲ್ಲಿ ಯಾವ ಲಾಭವೂ ಇಲ್ಲ, ಅದು
ಕೇವಲ ಪವಿತ್ರತೆ ಹಾಗೂ ಶಾಂತಿಯ ಸ್ಥಾನವಾಗಿದೆ. ಇಲ್ಲಿ ನೀವು ಜೀವಾತ್ಮಗಳಿದ್ದೀರಿ, ಪರಮಾತ್ಮ
ತಂದೆಗೆ ತಮ್ಮದೇ ಆದ ಶರೀರವಿಲ್ಲ. ಅವರು ಶರೀರ ಧಾರಣೆ ಮಾಡಿ ಮಕ್ಕಳಿಗೆ ಓದಿಸುತ್ತಾರೆ. ನೀವು
ತಂದೆಯನ್ನು ತಿಳಿದುಕೊಂಡಿದ್ದೀರಿ ಮತ್ತು ನೀವು ತಂದೆಯೆಂದು ಹೇಳುತ್ತೀರಿ, ತಂದೆಯು ಓ ಮಕ್ಕಳೇ ಎಂದು
ಹೇಳುತ್ತಾರೆ. ಲೌಕಿಕ ತಂದೆಯೂ ಸಹ ಹೇಳುತ್ತಾರಲ್ಲವೆ- ಹೇ ಮಕ್ಕಳೇ ಬನ್ನಿ, ನಿಮಗೆ ತಿಂಡಿ
ತಿನ್ನುಸುತ್ತೇನೆಂದರೆ ತಕ್ಷಣ ಎಲ್ಲರೂ ಓಡಿ ಬರುತ್ತಾರೆ. ಈ ತಂದೆಯೂ ಹೇಳುತ್ತಾರೆ- ಮಕ್ಕಳೇ ಬನ್ನಿ
ನಿಮಗೆ ವೈಕುಂಠದ ಮಾಲೀಕರನ್ನಾಗಿ ಮಾಡುತ್ತೇನೆ ಆಗ ಎಲ್ಲರೂ ಅಗತ್ಯವಾಗಿ ಓಡಿ ಬರುತ್ತಾರೆ.
ಪತಿತರನ್ನು ಪಾವನ ಮಾಡಿ, ಪಾವನ ಪ್ರಪಂಚ ವಿಶ್ವದ ಮಾಲೀಕರನ್ನಾಗಿ ಮಾಡಲು ಬನ್ನಿ ಎಂದು ಕರೆಯುತ್ತಾರೆ.
ಈಗ ನಿಶ್ಚಯವಿದೆ ಅಂದಾಗ ಒಪ್ಪಿಕೊಳ್ಳಬೇಕು. ಕರೆದವರು ಮಕ್ಕಳಲ್ಲವೆ! ನಾವು ಮಕ್ಕಳಿಗಾಗಿಯೇ
ಬರುತ್ತೇನೆ. ನೀವೇ ನನ್ನನ್ನು ಕರೆದಿದ್ದೀರಿ ಎಂದು ಮಕ್ಕಳಿಗೆ ತಿಳಿಸುತ್ತಾರೆ. ನಾನು ಬಂದಿದ್ದೇನೆ,
ಪತಿತ-ಪಾವನ ಎಂದು ತಂದೆಗೇ ಹೇಳಲಾಗುತ್ತದೆ. ಗಂಗೆ ಮುಂತಾದವುಗಳಿಂದ ನೀವು ಪಾವನರಾಗುವುದಿಲ್ಲ. ನೀವು
ಅರ್ಧಕಲ್ಪ ತಪ್ಪಾಗಿ ನಡೆದಿದ್ದೀರಿ. ಭಗವಂತನನ್ನು ಹುಡುಕುತ್ತೀರಿ ಆದರೆ ಯಾರ ಅರಿವಿಗೂ
ಬರುವುದಿಲ್ಲ. ತಂದೆಯು ತಿಳಿಸುತ್ತಾರೆ- ಹೇ ಮಕ್ಕಳೇ ಎಂದರೆ ಮಕ್ಕಳೂ ಸಹ ಬಹಳ ಉಲ್ಲಾಸದಿಂದ ಹೇ
ತಂದೆಯೇ ಎಂದು ಹೇಳಬೇಕು ಆದರೆ ಅಷ್ಟು ಉಲ್ಲಾಸದಿಂದ ಮಕ್ಕಳು ಹೇಳುವುದಿಲ್ಲ. ಇದನ್ನು ದೇಹಾಭಿಮಾನ
ಎಂದು ಹೇಳಲಾಗುವುದು. ಇದಕ್ಕೆ ದೇಹೀ-ಅಭಿಮಾನಿಯೆಂದು ಕರೆಯುವುದಿಲ್ಲ. ಈಗ ನೀವು ತಂದೆಯ
ಸನ್ಮುಖದಲ್ಲಿ ಕುಳಿತಿದ್ದೀರಿ. ನೀವು ಬೇಹದ್ದಿನ ತಂದೆಯನ್ನು ನೆನಪು ಮಾಡುವುದರಿಂದ ಬೇಹದ್ದಿನ
ರಾಜ್ಯಭಾಗ್ಯವೂ ಅಗತ್ಯವಾಗಿ ನೆನಪಿಗೆ ಬರುತ್ತದೆ. ಇಂತಹ ತಂದೆಗೆ ಎಷ್ಟೊಂದು ಪ್ರೀತಿಯಿಂದ
ಉತ್ತರವನ್ನು ಕೊಡಬೇಕು. ತಂದೆಯು ನಿಮ್ಮ ಕೂಗನ್ನು ಕೇಳಿ ಬಂದಿದ್ದಾರೆ. ತಂದೆಯ ಆಗಮನವೂ
ನಾಟಕದನುಸಾರ ಒಂದು ಸೆಕೆಂಡ್, ಒಂದು ಘಳಿಗೆಯೂ ಹೆಚ್ಚು-ಕಡಿಮೆಯಾಗುವುದಿಲ್ಲ. ಎಲ್ಲರೂ ಓ ಫಾದರ್,
ದಯೆ ತೋರಿ, ಮುಕ್ತ ಮಾಡಿ, ನಾವೆಲ್ಲರೂ ರಾವಣನ ಸಂಕೋಲೆಯಲ್ಲಿದ್ದೇವೆ. ನೀವು ನಮ್ಮ ಮಾರ್ಗದರ್ಶಕರಾಗಿ
ತಂದೆ ಗೈಡ್ ಸಹ ಆಗುತ್ತಾರೆ ಎಲ್ಲರೂ ಅವರನ್ನು ಕರೆಯುತ್ತಾರೆ. ಓ ಲಿಬರೇಟರ್, ಓ ಗೈಡ್ ಬಂದು ನಮ್ಮ
ಮಾರ್ಗದರ್ಶಕರಾಗಿ ನಮ್ಮನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಈಗ ನೀವು
ಸಂಗಮಯುಗದಲ್ಲಿ ನಿಂತಿದ್ದೀರಿ, ತಂದೆಯು ಸತ್ಯಯುಗದ ಸ್ಥಾಪನೆಯನ್ನು ಮಾಡುತ್ತಿದ್ದಾರೆ, ಇದು
ಕಲಿಯುಗವಾಗಿದೆ, ಕೋಟ್ಯಾಂತರ ಮನುಷ್ಯರಿದ್ದಾರೆ, ಸತ್ಯಯುಗದಲ್ಲಿ ಕೇವಲ ದೇವಿ-ದೇವತೆಗಳು ಮಾತ್ರ
ಇರುತ್ತಾರೆ. ಹಾಗಾದರೆ ಅವಶ್ಯವಾಗಿ ವಿನಾಶವಾಗಿರಬೇಕು! ವಿನಾಶವೂ ನಮ್ಮ ಮುಂದೆ ನಿಂತಿದೆ.
ಅದಕ್ಕಾಗಿಯೇ ಗಾಯನವಿದೆ- ವಿಜ್ಞಾನದ ಬಲದಿಂದ ಎಷ್ಟು ಬುದ್ಧಿಯನ್ನು ಉಪಯೋಗಿಸುತ್ತಿರುತ್ತಾರೆ. ಅದು
ಯಾದವ ಸಂಪ್ರದಾಯವಾಗಿದೆ. ಮತ್ತೆ ಚರಿತ್ರೆಯು ಪುನರಾವರ್ತನೆಯಾಗಬೇಕಾಗಿದೆ. ಈಗ ಸತ್ಯಯುಗದ ಚರಿತ್ರೆ
ಪುನರಾವರ್ತನೆಯಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ- ನಾವು ಹೊಸ ಪ್ರಪಂಚದಲ್ಲಿ ಶ್ರೇಷ್ಠ
ಪದವಿಗಾಗಿ ಪುರುಷಾರ್ಥ ಮಾಡುತ್ತಿದ್ದೇವೆ ಆದ್ದರಿಂದ ಅಗತ್ಯವಾಗಿ ಪವಿತ್ರರಾಗಬೆಕು. ಈ ಪತಿತ
ಪ್ರಪಂಚದ ವಿನಾಶವೂ ಸಹ ಆಗಲೇಬೇಕೆಂದು ನೀವು ತಿಳಿದಿದ್ದೀರಿ. ನಿಮ್ಮ ಮಕ್ಕಳು-ಮರಿಗಳು ಯಾರೂ
ಉಳಿಯುವುದಿಲ್ಲ. ಯಾರೂ ಸಹ ನಿಮ್ಮ ಆಸ್ತಿಗೆ ವಾರಸುದಾರರಾಗುವುದಿಲ್ಲ, ಮದುವೆ-ಮುಂಜಿಯನ್ನು
ಮಾಡಿಕೊಳ್ಳುವುದಿಲ್ಲ. ಬಹಳಷ್ಟು ಕಳೆದು ಹೋಗಿದೆ ಸ್ವಲ್ಪವೇ ಉಳಿದಿದೆ. ಆ ಸ್ವಲ್ಪ ಸಮಯಕ್ಕೂ
ಲೆಕ್ಕವಿದೆ. ಮೊದಲು ಈ ರೀತಿ ಹೇಳುತ್ತಿರಲಿಲ್ಲ, ಈಗ ಬಹಳ ಕಡಿಮೆ ಸಮಯವಿದೆ. ಮೊದಲು ಶರೀರ ಬಿಟ್ಟು
ಹೋದವರೆಲ್ಲಾ ನಂಬರವಾರ್ ಪುರುಷಾರ್ಥನುಸಾರ ಜನ್ಮ ಪಡೆದಿದ್ದಾರೆ. ಕೆಲವರಂತೂ ಇಲ್ಲಿಗೆ ಬಂದಿರಬೇಕು.
ಹೇಗೆ ಇಲ್ಲಿಂದ ಅಗಲಿ ಹೋಗಿದ್ದಾರೆಂದು ತಿಳಿಯುತ್ತದೆ ಅವರಿಗೆ ಜ್ಞಾನದ ವಿನಃ ಮಜಾ ಎನಿಸುವುದಿಲ್ಲ.
ನಾವಂತೂ ಅಲ್ಲಿಗೆ ಹೋಗುತ್ತೇವೆಂದು ತಂದೆ-ತಾಯಿಗೂ ಹೇಳುತ್ತಾರೆ. ಇದ್ಲೆಲವೂ ಸಹಜವಾಗಿ
ತಿಳಿದುಕೊಳ್ಳುವ ಮಾತುಗಳಾಗಿವೆ. ಅವಶ್ಯವಾಗಿ ವಿನಾಶವಾಗಲೇಬೇಕು. ಯುದ್ಧದ ತಯಾರಿಯನ್ನು
ನೋಡುತ್ತಿದ್ದೀರಿ. ಇವರ ಯುದ್ಧದ ಸಾಮಾನುಗಳಿಗಾಗಿ ಅರ್ಧ ಖರ್ಚಾಗಿ ಬಿಡುತ್ತದೆ. ಹೇಗೆ ವಿಮಾನಗಳನ್ನು
ತಯಾರಿಸುತ್ತಾರೆ, ಮನೆಯಲ್ಲಿಯೇ ಕುಳಿತೇ ನಾಶ ಮಾಡುತ್ತೇವೆಂದು ಹೇಳುತ್ತಾರೆ. ಅಂಥಹ ವಸ್ತುಗಳನ್ನು
ಮಾಡುತ್ತಿರುತ್ತಾರೆ. ಏಕೆಂದರೆ ಆಸ್ಪತ್ರೆ ಮೊದಲಾದುವುಗಳು ಇರುವುದಿಲ್ಲ. ಡ್ರಾಮದಲ್ಲಿ ತಂದೆಯಿಂದ
ಇದೆಲ್ಲದರ ಸೂಚನೆ ಸಿಗುತ್ತಿರುತ್ತದೆ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ರೋಗಿಗಳಾಗಿ
ಬಿಡಬಾರದು, ಎಲ್ಲರೂ ಅವಶ್ಯವಾಗಿ ಸಾಯಲೇಬೇಕು. ರಾಮನೂ ಹೋದ, ರಾವಣನೂ ಹೋದ...... ಯಾರು
ಯೋಗದಲ್ಲಿರುತ್ತಾರೆ ಅವರ ಆಯಸ್ಸು ವೃದ್ಧಿಯಾಗುತ್ತದೆ. ಖುಷಿಯಿಂದ ಶರೀರ ಬಿಡುತ್ತಾರೆ. ಹೇಗೆ ಈ
ರೀತಿ ಉದಾಹರಣೆ ಕೊಡುತ್ತಾರೆ- ಬ್ರಹ್ಮ್ ತತ್ವದಲ್ಲಿ ಹೋಗುವುದರಿಂದ ಖುಷಿಯಿಂದ ಶರೀರ ಬಿಡುತ್ತೇವೆ
ಆದರೆ ಬ್ರಹ್ಮ್ ತತ್ವದಲ್ಲಿ ಯಾರೂ ಹೋಗುವುದಿಲ್ಲ, ಪಾಪವೂ ನಾಶವಾಗುವುದಿಲ್ಲ. ಇಲ್ಲಿಯೇ
ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಪಾಪ ನಾಶ ಮಾಡುವ ಉಪಾಯವನ್ನು ತಂದೆಯೇ ತಿಳಿಸುತ್ತಾರೆ-
ನನ್ನೊಬ್ಬನನ್ನೇ ನೆನಪು ಮಾಡಿ ಬೇರೆ ಯಾರನ್ನೂ ನೆನಪು ಮಾಡಬೇಡಿ, ಲಕ್ಷ್ಮೀ-ನಾರಾಯಣರನ್ನೂ ನೆನಪು
ಮಾಡಬೇಡಿ. ನಿಮಗೆ ತಿಳಿದಿದೆ- ಈ ಪುರುಷಾರ್ಥದಿಂದ ನಾವು ಇಂತಹ ಪದವಿಯನ್ನು ಪಡೆಯುತ್ತೇವೆ.
ಸ್ವರ್ಗದ ಸ್ಥಾಪನೆಯಾಗುತ್ತಿದೆ, ನಂಬರವಾರ್ ಪುರುಷಾರ್ಥದನುಸಾರ ಪದವಿಯನ್ನು ಪಡೆಯಲು
ಓದುತ್ತಿದ್ದೇವೆ. ಅವರ ರಾಜಧಾನಿಯನ್ನು ತಂದೆಯು ಸಂಗಮಯುಗದಲ್ಲಿ ಸ್ಥಾಪನೆ ಮಾಡುತ್ತಿದ್ದಾರೆ.
ಬುದ್ಧಿಗೆ ನಾಟುವಂತೆ ಭಾಷಣ ಮಾಡಬೇಕು. ನಾವು ಈ ಸಮಯದಲ್ಲಿ ಈಶ್ವರೀಯ ಸಂಪ್ರದಾಯ ಹಾಗೂ ಪ್ರಜಾಪಿತ
ಬ್ರಹ್ಮನ ಮುಖವಂಶಾವಳಿ ಸಹೋದರ-ಸಹೋದರಿಯಾಗಿದ್ದೇವೆ. ನಾವಾತ್ಮಗಳೆಲ್ಲರೂ
ಸಹೋದರ-ಸಹೋದರಿಯರಾಗಿದ್ದೇವೆ. ಬ್ರಹ್ಮಾಕುಮಾರ-ಕುಮಾರಿಯರ ವಿವಾಹವಾಗುವುದಿಲ್ಲ. ತಂದೆಯು ಇದನ್ನೂ
ತಿಳಿಸುತ್ತಾರೆ- ಹೇಗೆ ಕೆಳಗೆ ಬೀಳುತ್ತಾರೆ? ಕಾಮಾಗ್ನಿ ಸುಡುತ್ತದೆ. ಆದರೂ ಒಮ್ಮೆ ಕೆಳಗೆ ಬಿದ್ದರೆ
ಸಂಪಾದನೆ ನಷ್ಟವಾಗುತ್ತದೆಯೆಂದು ಭಯವಿರುತ್ತದೆ. ಕಾಮ ವಿಕಾರಕ್ಕೆ ಸೋತರೆ ಪದವಿ ಭ್ರಷ್ಟವಾಗಿ
ಬಿಡುತ್ತದೆ. ಇದು ಎಷ್ಟೊಂದು ದೊಡ್ಡ ಸಂಪಾದನೆಯಾಗಿದೆ! ಮನುಷ್ಯರಂತೂ ಪದಮ-ಕೋಟಿಗಳಷ್ಟು ಸಂಪಾದನೆ
ಮಾಡುತ್ತಾರೆ. ಅವರಿಗೆ ಇದೆಲ್ಲವೂ ಸ್ವಲ್ಪ ಸಮಯದಲ್ಲಿಯೇ ನಾಶವಾಗುತ್ತದೆ ಎಂದು ತಿಳಿದಿದೆಯೇನು?
ಬಾಂಬುಗಳನ್ನು ತಯಾರಿಸುವವರು ಈ ಪ್ರಪಂಚವು ವಿನಾಶವಾಗಿ ಬಿಡುತ್ತದೆ, ನಮಗೆ ಯಾರೋ ಪ್ರೇರಣೆ
ಕೊಡುತ್ತಿದ್ದಾರೆ, ನಾವು ಮಾಡುತ್ತಿರುತ್ತೇವೆ ಎಂದು ತಿಳಿದುಕೊಂಡಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಜ್ಞಾನವನ್ನು
ಆಂತರ್ಯದಲ್ಲಿ ಅಭ್ಯಾಸ ಮಾಡಿ ಅರ್ಥಾತ್ ವಿಚಾರ ಸಾಗರ ಮಂಥನ ಮಾಡಬೇಕು. ಪರಸ್ಪರ ಜ್ಞಾನದ ವಾರ್ತಾಲಾಪ
ಮಾಡಿ ಅನ್ಯರಿಗೆ ತಿಳಿಸಬೇಕು. ಸುಸ್ತು ಅಥವಾ ಆಲಸ್ಯವನ್ನು ಬಿಡಬೇಕು.
2. ದೇಹೀ-ಅಭಿಮಾನಿಯಾಗಿ ಬಹಳ ಉಲ್ಲಾಸದಿಂದ ತಂದೆಯನ್ನು ನೆನಪು ಮಾಡಬೇಕು. ಸದಾ ನಶೆ ಇರಬೇಕು ನಾವು
ಕವಡೆಯಿಂದ ವಜ್ರವಾಗಲು ತಂದೆಯ ಬಳಿಗೆ ಬಂದಿದ್ದೇವೆ, ನಾವು ಈಶ್ವರನ ಸಂತಾನರಾಗಿದ್ದೇವೆ
ವರದಾನ:
ಮನಸ್ಸು-ಬುದ್ಧಿಯ ಮೂಲಕ ಶ್ರೇಷ್ಠ ಸ್ಥಿತಿ ರೂಪಿ ಆಸನದ ಮೇಲೆ ಸ್ಥಿತರಾಗಿರುವಂತಹ ತಪಸ್ವೀ ಮೂರ್ತಿ
ಭವ.
ತಪಸ್ವಿ ಸದಾ ಯಾವುದಾದರೂ
ಒಂದು ಆಸನದ ಮೇಲೆ ಕುಳಿತು ತಪಸ್ಸು ಮಾಡುತ್ತಾರೆ. ನೀವು ತಪಸ್ವಿ ಆತ್ಮರ ಆಸನವಾಗಿದೆ ಏಕರಸ ಸ್ಥಿತಿ,
ಫರಿಶ್ಥಾ ಸ್ಥಿತಿ....ಇವೇ ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗುವುದು ಅರ್ಥಾತ್ ಆಸನದ ಮೇಲೆ
ಕುಳಿತುಕೊಳ್ಳುವುದು. ಸ್ಥೂಲ ಆಸನದ ಮೇಲಂತೂ ಸ್ಥೂಲ ಶರೀರ ಕುಳಿತುಕೊಳ್ಳುವುದು ಆದರೆ ನೀವು ಈ
ಶ್ರೇಷ್ಠ ಆಸನದ ಮೇಲೆ ಮನಸ್ಸು ಬುದ್ಧಿಯನ್ನು ಕೂರಿಸುವಿರಿ. ಆ ತಪಸ್ವಿಗಳು ಒಂದು ಕಾಲಿನ ಮೇಲೆ
ನಿಂತು ಬಿಡುವರು ಮತ್ತು ನೀವು ಏಕರಸ ಸ್ಥಿತಿಯಲ್ಲಿ ಏಕಾಗ್ರರಾಗಿ ಬಿಡುವಿರಿ. ಅವರದಾಗಿದೆ ಹಠಯೋಗ
ಮತ್ತು ನಿಮ್ಮದಾಗಿದೆ ಸಹಜಯೋಗ.
ಸ್ಲೋಗನ್:
ಪ್ರೀತಿಯ ಸಾಗರ
ತಂದೆಯ ಮಕ್ಕಳು ಪ್ರೇಮದಿಂದ ತುಂಬಿರುವ ಗಂಗಾ ಆಗಿರಿ.