19.02.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ವಿದ್ಯೆಯು “ಅತ್ಯುತ್ತಮ” ವಾದ ವಿದ್ಯೆಯಾಗಿದೆ, ಇದನ್ನೇ ಸಂಪಾದನೆಗೆ ಮೂಲಾಧಾರವೆಂದು ಹೇಳಲಾಗುತ್ತದೆ, ವಿದ್ಯೆಯಲ್ಲಿ ಉತ್ತೀರ್ಣರಾಗಬೇಕೆಂದರೆ ಶಿಕ್ಷಕನ ಮತದನುಸಾರ ನಡೆಯಿರಿ”

ಪ್ರಶ್ನೆ:
ತಂದೆಯು ಡ್ರಾಮಾದ ರಹಸ್ಯವನ್ನು ತಿಳಿದಿದ್ದರೂ ಸಹ ತನ್ನ ಮಕ್ಕಳಿಂದ ಯಾವ ಪುರುಷಾರ್ಥವನ್ನು ಮಾಡಿಸುತ್ತಾರೆ?

ಉತ್ತರ:
ತಂದೆಯು ನಂಬರ್ವಾರ್ ಆಗಿ ಎಲ್ಲಾ ಮಕ್ಕಳು ಸತೋಪ್ರಧಾನರಾಗುತ್ತಾರೆಂದು ತಿಳಿದಿದ್ದಾರೆ. ಆದರೂ ಸಹ ಮಕ್ಕಳಿಂದ ಇದೇ ಸದಾ ಪುರುಷಾರ್ಥ ಮಾಡಿಸುತ್ತಾರೆ - ಮಕ್ಕಳೇ, ಇಂತಹ ಪುರುಷಾರ್ಥ ಮಾಡಿ ಯಾವ ಶಿಕ್ಷೆಯನ್ನು ಅನುಭವಿಸಬಾರದು. ಶಿಕ್ಷೆಗಳಿಂದ ಮುಕ್ತರಾಗಲು ಎಷ್ಟು ಸಾಧ್ಯವೋ ಅಷ್ಟು ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು. ನಡೆಯುತ್ತಾ-ತಿರುಗಾಡುತ್ತಾ, ಎದ್ದೇಳುತ್ತಾ-ಕುಳಿತುಕೊಳ್ಳುತ್ತಾ ನೆನಪಿನಲ್ಲಿರಿ, ಆಗ ಬಹಳ ಖುಷಿಯಿರುತ್ತದೆ. ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗುತ್ತದೆ.

ಓಂ ಶಾಂತಿ.
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಬಾಬಾ, ನಮಗೆ ಜ್ಞಾನ ಮತ್ತು ಯೋಗವನ್ನು ಕಲಿಸುತ್ತಾರೆ, ನಮ್ಮ ಯೋಗ ಯಾವುದಾಗಿದೆ ಎಂದು ನೀವು ಮಕ್ಕಳೇ ತಿಳಿದಿದ್ದೀರಿ. ನಾವು ಯಾರು ಪವಿತ್ರರಾಗಿದ್ದೆವೋ ಅವರೇ ಈಗ ಅಪವಿತ್ರರಾಗಿದ್ದೇವೆ. ಏಕೆಂದರೆ 84 ಜನ್ಮಗಳ ಲೆಕ್ಕ ಬೇಕಾಗಿದೆಯಲ್ಲವೆ. ಇದು 84 ಜನ್ಮಗಳ ಚಕ್ರವಾಗಿದೆ. ಯಾರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಯೋ ಅವರೇ ತಿಳಿದುಕೊಳ್ಳುತ್ತಾರೆ. ನೀವು ಮಕ್ಕಳಿಗೆ ತಂದೆಯ ಮೂಲಕ ತಿಳಿದಿದೆ. ಈಗ ಇಂತಹ ತಂದೆಯ ಮಾತನ್ನು ಒಂದು ವೇಳೆ ಒಪ್ಪುವುದಿಲ್ಲವೆಂದರೆ ಬಾಕಿ ಇನ್ನ್ಯಾರ ಮಾತನ್ನು ಒಪ್ಪುತ್ತೀರಾ! ತಂದೆಯ ಮತವೇ ಸಿಗುತ್ತದೆ, ಈ ರೀತಿಯೂ ಬಹಳ ಇದ್ದಾರೆ ಸ್ವಲ್ಪವೂ ಒಪ್ಪುವುದಿಲ್ಲ. ಆದರೆ ಕೋಟಿಯಲ್ಲಿ ಕೆಲವರೇ ಒಪ್ಪುತ್ತಾರೆ. ತಂದೆಯು ಶಿಕ್ಷಣವನ್ನಂತೂ ಎಷ್ಟು ಚೆನ್ನಾಗಿ ಕೊಡುತ್ತಾರೆ. ನೀವು ಮಕ್ಕಳೇ ನಂಬರ್ವಾರ್ ಪುರುಷಾರ್ಥದನುಸಾರ ಒಪ್ಪುತ್ತೀರಿ ಎಲ್ಲರೂ ಏಕರಸವಾಗಿ ಒಪ್ಪುವುದಿಲ್ಲ. ಟೀಚರ್ ನ ವಿದ್ಯೆಯನ್ನು ಎಲ್ಲರೂ ಏಕರಸವಾಗಿ ಒಪ್ಪುವುದಿಲ್ಲ ಮತ್ತು ಓದುವುದಿಲ್ಲ. ನಂಬರ್ವಾರ್ ಆಗಿ ಕೆಲವರು 20 ಅಂಕಗಳನ್ನು ತೆಗೆದುಕೊಳ್ಳುತ್ತಾರೆ, ಕೆಲವರು ಎಷ್ಟೋ ಅಂಕಗಳನ್ನು ತೆಗೆದುಕೊಳ್ಳುತ್ತಾರೆ, ಕೆಲವರಂತೂ ಅನುತ್ತೀರ್ಣರಾಗುತ್ತಾರೆ. ಅನುತ್ತೀರ್ಣರು ಏಕೆ ಆಗುತ್ತಾರೆ? ಏಕೆಂದರೆ ಟೀಚರ್ ನ ಮತದನುಸಾರವಾಗಿ ನಡೆಯುವುದಿಲ್ಲ. ಅಲ್ಲಿ ಅನೇಕ ಮತಗಳು ಸಿಗುತ್ತವೆ, ಇಲ್ಲಿ ಒಂದೇ ಮತ ಸಿಗುತ್ತದೆ. ಇದು ಆಶ್ಚರ್ಯ ಪೂರ್ಣ ಮತವಾಗಿದೆ. ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಮಕ್ಕಳಿಗೆ ತಿಳಿದಿದೆ. ತಂದೆಯು ಹೇಳುತ್ತಾರೆ - ನಾನು ಯಾರಲ್ಲಿ ಪ್ರವೇಶ ಮಾಡುತ್ತೇನೆಂದು ಯಾರು ಹೇಳಿದರು? ಶಿವ ತಂದೆ. ನಾನು ಯಾರಲ್ಲಿ ಪ್ರವೇಶ ಮಾಡುತ್ತೇನೆಯೋ ಅವರಿಗೆ ಭಾಗೀರಥ ಎಂದು ಹೇಳಲಾಗುತ್ತದೆ. ಅವರೂ ತಮ್ಮ ಜನ್ಮವನ್ನು ತಿಳಿದುಕೊಂಡಿರಲಿಲ್ಲ. ನೀವು ಮಕ್ಕಳೂ ತಿಳಿದುಕೊಂಡಿರಲಿಲ್ಲ, ಆದರೆ ನಿಮಗೆ ಈಗ ತಿಳಿಸುತ್ತೇನೆ. ನೀವು ಇಷ್ಟು ಜನ್ಮ ಸತೋಪ್ರಧಾನರಾಗಿದ್ದೀರಿ. ನಂತರ ಸತೋ, ರಜೋ, ತಮೋದಲ್ಲಿ ಕೆಳಗಿಳಿಯುತ್ತಾ ಬಂದಿರಿ. ಈಗ ನೀವಿಲ್ಲಿ ಓದುವ ಸಲುವಾಗಿ ಬಂದಿರುವಿರಿ. ವಿದ್ಯೆಯು ಸಂಪಾದನೆಯಾಗಿದೆ, ಸಂಪಾದನೆಗೆ ಮೂಲಾಧಾರವಾಗಿದೆ. ಈ ವಿದ್ಯೆಯು ಅತ್ಯುತ್ತಮವಾದ ವಿದ್ಯೆಯಾಗಿದೆ. ಆದರೆ ಈ ವಿದ್ಯೆಯಲ್ಲಿ ಐ.ಸಿ.ಎಸ್ ಉನ್ನತ ವಿದ್ಯೆಯಾಗಿದೆ ಎಂದು ಹೇಳುತ್ತಾರೆ, ನೀವು ಯಾರು! 16 ಕಲಾ ಸಂಪೂರ್ಣರಾಗಿದ್ದಿರಿ ಈಗ ಯಾವ ಗುಣವೂ ಇಲ್ಲ. ನಾನು ನಿರ್ಗುಣಹಾರನಲ್ಲಿ ಯಾವ ಗುಣವೂ ಇಲ್ಲವೆಂದು ಹಾಡುತ್ತಾರೆ ಎಂದೂ ಎಲ್ಲರೂ ಹೇಳುತ್ತಾರೆ. ಎಲ್ಲಾ ಕಡೆಯು ಭಗವಂತನಿದ್ದಾನೆಂದು ಹೇಳುತ್ತಾರೆ, ದೇವತೆಗಳಲ್ಲಿಯೂ ಭಗವಂತನಿದ್ದಾನೆಂದು ತಿಳಿದು ನಾನು ನಿರ್ಗುಣವಂತನು, ನೀವೇ ಕರುಣೆ ತೋರಿಸಿ ಎಂದು ಹೇಳುತ್ತಾರೆ. ಗಾಯನವೂ ಇದೆ - ತಂದೆಯು ಆನಂದಪೂರ್ಣ, ಕರುಣಾಳು ಆಗಿದ್ದಾರೆ. ನಮ್ಮ ಮೇಲೆ ದಯೆ ತೋರುತ್ತಾರೆ. ಹೇಳುತ್ತಾರೆ - ಹೇ ಈಶ್ವರ, ದಯೆ ತೋರು ಎಂದು ತಂದೆಯನ್ನೇ ಕರೆಯುತ್ತಾರೆ. ಈಗ ಆ ತಂದೆಯೇ ನಿಮ್ಮ ಮುಂದೆ ಬಂದಿದ್ದಾರೆ. ಇಂತಹ ತಂದೆಯನ್ನು ಯಾರು ತಿಳಿದುಕೊಂಡಿದ್ದಾರೆಯೋ ಅವರಿಗೆ ಎಷ್ಟೊಂದು ಖುಷಿಯಾಗಬೇಕು! ಬೇಹದ್ದಿನ ತಂದೆಯು ನಮಗೆ ಪ್ರತೀ 5000 ವರ್ಷದ ನಂತರ ಪುನಃ ಪೂರ್ಣ ವಿಶ್ವದ ರಾಜ್ಯವನ್ನು ಕೊಡುತ್ತಾರೆ ಎಂದು ಅಪಾರ ಖುಷಿಯಿರಬೇಕು. ನೀವು ತಿಳಿದುಕೊಂಡಿದ್ದೀರಿ - ಶ್ರೀಮತದಂತೆ ನಾವು ಶ್ರೇಷ್ಠಾತಿ ಶ್ರೇಷ್ಠರಾಗುತ್ತಿದ್ದೇವೆ. ಒಂದು ವೇಳೆ ಶ್ರೀಮತದಂತೆ ನಡೆದಾಗ ಶ್ರೇಷ್ಠರಾಗುತ್ತೀರಿ. ಅರ್ಧಕಲ್ಪ ರಾವಣನ ಮತದಂತೆ ನಡೆಯುತ್ತದೆ. ತಂದೆಯು ಇಷ್ಟು ಚೆನ್ನಾಗಿ ತಿಳಿಸುತ್ತಿರುತ್ತಾರೆ - ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, ನೀವೇ ಸತೋಪ್ರಧಾನರಾಗಿದ್ದಿರಿ, ಈಗ ನೀವೇ ಸತೋಪ್ರಧಾನರಾಗಬೇಕು. ಇದು ರಾವಣ ರಾಜ್ಯವಾಗಿದೆ, ಯಾವಾಗ ಈ ರಾವಣನ ಮೇಲೆ ವಿಜಯಿಗಳಾಗುತ್ತೀರೋ ಆಗ ರಾಮ ರಾಜ್ಯವು ಸ್ಥಾಪನೆಯಾಗುತ್ತದೆ. ತಂದೆಯು ಹೇಳುತ್ತಾರೆ, ನೀವು ನನ್ನನ್ನು ನಿಂದನೆ ಮಾಡುತ್ತೀರಿ. ತಂದೆಯ ಹೆಸರಿನ ಕೀರ್ತನೆ ಮಾಡುವ ಬದಲು ನಿಂದನೆ ಮಾಡುತ್ತಾರೆ. ತಂದೆಯು ಹೇಳುತ್ತಾರೆ - ನೀವು ನನಗೆ ಎಷ್ಟೊಂದು ಅಪಕಾರ ಮಾಡಿದಿರಿ ಅಂದಾಗ ಇದು ಡ್ರಾಮಾದಲ್ಲಿ ನಿಗಧಿತವಾಗಿದೆ. ಈಗ ಈ ಮಾತುಗಳಿಂದ ಮುಕ್ತರಾಗಲು ತಂದೆಯು ತಿಳಿಸಿ ಕೊಡುತ್ತಾರೆ - ಒಬ್ಬರನ್ನೇ ನೆನಪು ಮಾಡಿರಿ. ಗಾಯನವೂ ಇದೆ - ಸತ್ಸಂಗ 21 ಜನ್ಮಗಳಿಗೆ ಉನ್ನತರನ್ನಾಗಿ ಮಾಡುತ್ತದೆ. ಹಾಗಾದರೆ ಮುಳುಗಿಸುವವರು ಯಾರು? ನಿಮ್ಮನ್ನು ಸಾಗರದಲ್ಲಿ ಯಾರು ಮುಳುಗಿಸಿದರು? ಮಕ್ಕಳನ್ನೇ ಪ್ರಶ್ನೆ ಮಾಡುತ್ತಾರಲ್ಲವೆ. ನೀವು ತಿಳಿದುಕೊಂಡಿದ್ದೀರಿ - ನನ್ನ ಹೆಸರೇ ತೋಟದ ಮಾಲೀಕ, ಅಂಬಿಗನಾಗಿದೆ. ಅರ್ಥವನ್ನರಿಯದೇ ಇರುವ ಕಾರಣ ಬೇಹದ್ದಿನ ತಂದೆಗೆ ಬಹಳ ನಿಂದನೆ ಮಾಡಿದ್ದಾರೆ ನಂತರ ಬೇಹದ್ದಿನ ತಂದೆಯು ಅವರಿಗೆ ಬೇಹದ್ದಿನ ಸುಖವನ್ನು ಕೊಡುತ್ತಾರೆ. ಅಪಕಾರ ಮಾಡುವವರ ಮೇಲೆ ಉಪಕಾರವನ್ನು ಮಾಡುತ್ತಾರೆ. ನಾವು ಅಪಕಾರ ಮಾಡುತ್ತೇವೆಂದು ಮನುಷ್ಯರಿಗೆ ತಿಳಿದಿಲ್ಲ. ಬಹಳ ಖುಷಿಯಿಂದ ಈಶ್ವರ ಸರ್ವವ್ಯಾಪಿ ಎಂದು ಹೇಳುತ್ತಾರೆ. ಈಗ ಈ ರೀತಿಯಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ತನ್ನತನ್ನದೇ ಆದಂತಹ ಪಾತ್ರವು ದೊರೆತಿದೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ - ಯಾವಾಗ ದೇವಿ-ದೇವತೆಗಳ ರಾಜ್ಯವಿರಲಿಲ್ಲ. ಭಾರತವು ಸತೋಪ್ರಧಾನವಾಗಿತ್ತು ಈಗ ತಮೋಪ್ರಧಾನವಾಗಿದೆ. ತಂದೆಯು ಬರುವುದೇ ಪ್ರಪಂಚವನ್ನು ಸತೋಪ್ರಧಾನ ಮಾಡಲು ಎಂದು ನೀವು ಮಕ್ಕಳಿಗೆ ಗೊತ್ತಿದೆ. ಪೂರ್ಣ ಪ್ರಪಂಚದವರಿಗೆ ಒಂದು ವೇಳೆ ಗೊತ್ತಾದರೆ ಇಲ್ಲಿ ಓದಲು ಹೇಗೆ ಬರುತ್ತಾರೆ ಆ ಕಾರಣ ನೀವು ಮಕ್ಕಳಿಗೆ ಅಪಾರ ಖುಷಿಯಿರಬೇಕಾಗಿದೆ. ಖುಷಿಯಂತಹ ಟಾನಿಕ್ ಇಲ್ಲ. ಸತ್ಯಯುಗದಲ್ಲಿ ನೀವು ಬಹಳ ಖುಷಿಯಲ್ಲಿರುತ್ತೀರಿ. ಅಲ್ಲಿ ತಿಂಡಿ-ತಿನಿಸು ಬಹಳ ಶುದ್ಧವಾಗಿರುತ್ತದೆ, ಬಹಳ ಖುಷಿಯಿರುತ್ತದೆ. ಈಗ ನಿಮಗೆ ಖುಷಿ ಸಿಗುತ್ತದೆ. ನೀವು ತಿಳಿದುಕೊಂಡಿದ್ದೀರಿ ತಾವು ಸತೋಪ್ರಧಾನರಾಗಿದ್ದಿರಿ, ಈಗ ಬಾಬಾ ನಮಗೆ ಇಂತಹ ಫಸ್ಟ್ ಕ್ಲಾಸ್ ಯುಕ್ತಿಗಳನ್ನು ತಿಳಿಸುತ್ತಾರೆ. ಗೀತೆಯಲ್ಲಿಯೂ ಮೊಟ್ಟ ಮೊದಲು ಮನ್ಮಮನಾಭವ ಎನ್ನುವ ಅಕ್ಷರವಿದೆ, ಇದು ಗೀತಾ ಯುಗವಾಗಿದೆ. ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿ ಪೂರ್ಣ ಗೊಂದಲ ಮಾಡಿದ್ದಾರೆ ಅದು ಭಕ್ತಿ ಮಾರ್ಗವಾಗಿದೆ. ತಂದೆಯು ಜ್ಞಾನವನ್ನು ತಿಳಿಸಿಕೊಡುತ್ತಾರೆ, ಇದರಲ್ಲಿ ಯಾವುದೇ ಗೊಂದಲಕ್ಕೊಳಗಾಗುವ ಮಾತಿಲ್ಲ. ಕೇವಲ ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು. ಇದು ತಮೋಪ್ರಧಾನ ಪ್ರಪಂಚವಾಗಿದೆ, ಕಲಿಯುಗದಲ್ಲಿ ಮನುಷ್ಯರ ಸ್ಥಿತಿಯೇನಾಗಿದೆ! ಅನೇಕ ಮನುಷ್ಯರಾಗಿದ್ದಾರೆ. ಸತ್ಯಯುಗದಲ್ಲಿ ಒಂದೇ ಧರ್ಮ, ಒಂದೇ ಭಾಷೆ ಮತ್ತು ಒಂದೇ ಮಗುವಿರುತ್ತದೆ, ಒಂದೇ ರಾಜ್ಯವಿರುತ್ತದೆ - ಈ ಡ್ರಾಮಾ ಮಾಡಲ್ಪಟ್ಟಿದೆ. ಒಂದನೆಯದು ಸೃಷ್ಟಿ ಚಕ್ರದ ಜ್ಞಾನ, ಎರಡನೆಯದು ಯೋಗ. ಜ್ಞಾನದ ದುರಿಯಾ ಮತ್ತು ಹೋಲಿ. ಮುಖ್ಯ ಮಾತನ್ನು ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ಸರ್ವರದೂ ತಮೋಪ್ರಧಾನ, ಜಡ ಜಡೀ ಭೂತ ಸ್ಥಿತಿಯಾಗಿದೆ, ವಿನಾಶ ಮುಂದೆ ನಿಂತಿದೆ. ಈಗ ಬಾಬಾ ಹೇಳುತ್ತಾರೆ - ಈಗ ನೀವು ನನ್ನನ್ನು ಕರೆದಿರುವುದೇ ಪಾವನರನ್ನಾಗಿ ಮಾಡಲು. ನೀವು ಪತಿತರಾಗಿದ್ದೀರಿ, ಪತಿತ-ಪಾವನನೆಂದು ನನಗೆ ಹೇಳಲಾಗುತ್ತದೆ, ಈಗ ನನ್ನ ಜೊತೆ ಯೋಗವನ್ನಿಡಿ ನನ್ನೊಬ್ಬನ ನೆನಪು ಮಾಡಿರಿ. ನಾನು ನಿಮಗೆ ಸರಿಯಾದುದನ್ನೇ ತಿಳಿಸುತ್ತೇನೆ. ಬಾಕಿ ಜನ್ಮ-ಜನ್ಮಾಂತರ ನೀವು ಆಯಥಾರ್ಥ ಮಾಡುತ್ತಾ ಬಂದಿರಿ. ಸತೋಪ್ರಧಾನರಿಂದ ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ತಂದೆಯು ಮಕ್ಕಳೊಂದಿಗೆ ಮಾತನಾಡುತ್ತಾರೆ - ಮಧುರ ಮಕ್ಕಳೇ, ಈಗ ನಿಮ್ಮ ಆತ್ಮವು ತಮೋಪ್ರಧಾನವಾಗಿದೆ, ಈ ರೀತಿ ಯಾರು ಮಾಡಿದರು? ಪಂಚ ವಿಕಾರಗಳು. ಮನುಷ್ಯರಿಗೆ ಇಷ್ಟು ಪ್ರಶ್ನೆ ಕೇಳುತ್ತಾರೆ, ತಲೆಯನ್ನು ಕೆಡಿಸಿ ಬಿಡುತ್ತಾರೆ. ಶಾಸ್ತ್ರಗಳ ಪ್ರಶ್ನೆ ಮಾಡಿ ಪರಸ್ಪರ ಜಗಳವನ್ನೇ ಮಾಡಿಕೊಳ್ಳುತ್ತಾರೆ, ಒಬ್ಬರಿಗೊಬ್ಬರು ಲಾಠಿಯಿಂದಲೇ ಹೊಡೆಯುತ್ತಾರೆ. ಇಲ್ಲಿ ತಂದೆಯು ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಇದರಲ್ಲಿ ಶಾಸ್ತ್ರಗಳು ಏನು ಮಾಡುತ್ತವೆ! ಪಾವನರಾಗಬೇಕಾಗಿದೆ. ಕಲಿಯುಗದ ನಂತರ ಮತ್ತೆ ಅವಶ್ಯವಾಗಿ ಸತ್ಯಯುಗವು ಬರುತ್ತದೆ. ಸತೋಪ್ರಧಾನರು ಅವಶ್ಯವಾಗಿ ಆಗಲೇಬೇಕು. ತಂದೆಯು ಹೇಳುತ್ತಾರೆ - ಸ್ವಯಂನ್ನು ಆತ್ಮನೆಂದು ತಿಳಿಯಿರಿ. ನಿಮ್ಮ ಆತ್ಮವು ತಮೋಪ್ರಧಾನವಾಗಿರುವ ಕಾರಣ ಶರೀರವೂ ತಮೋಪ್ರಧಾನವಾದದ್ದೇ ಸಿಗುತ್ತದೆ. ಚಿನ್ನವು ಎಷ್ಟು ಕ್ಯಾರೇಟ್ನಿದು ಆಗಿರುತ್ತದೆಯೋ ಆಭರಣವೂ ಅದೇ ರೀತಿಯಾಗಿರುತ್ತದೆ. ಅದು ತುಕ್ಕು ಹಿಡಿಯುತ್ತದೆಯಲ್ಲವೆ. ಈಗ ನೀವು 24 ಕ್ಯಾರೇಟ್ ಚಿನ್ನದ ಸಮಾನರಾಗಬೇಕು. ದೇಹೀ-ಅಭಿಮಾನಿ ಭವ, ದೇಹಾಭಿಮಾನದಲ್ಲಿ ಬರುವುದರಿಂದ ನೀವು ಕೊಳಕರಾಗುತ್ತೀರಿ. ಯಾವುದೇ ಖುಷಿಯಿರುವುದಿಲ್ಲ. ಖಾಯಿಲೆ ಮುಂತಾದವೆಲ್ಲವೂ ಈಗ ಇದೆ. ಈಗ ಪತಿತ-ಪಾವನ ನಾನೇ ಆಗಿದ್ದೇನೆ. ನೀವು ನನ್ನನ್ನು ಕರೆದಿರಿ, ನಾನು ಯಾವುದೇ ಸಾಧು-ಸಂತನಲ್ಲ. ಕೆಲವರು ಬಂದು ಗುರೂಜಿಯ ದರ್ಶನ ಮಾಡಬೇಕೆಂದು ಹೇಳುತ್ತಾರೆ. ಅವರಿಗೆ ಹೇಳಬೇಕು - ಗುರೂಜಿ ಯಾರೂ ಇಲ್ಲ, ದರ್ಶನದಿಂದ ಯಾವುದೇ ಲಾಭವಿಲ್ಲ. ತಂದೆಯು ಪ್ರತಿಯೊಂದು ಮಾತನ್ನು ಸಹಜವಾಗಿ ತಿಳಿಸುತ್ತಾರೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ತಮೋಪ್ರಧಾನದಿಂದ ಸತೋಪ್ರಧಾನರಾಗುತ್ತೀರಿ ನಂತರ ದೇವತೆಗಳಾಗುತ್ತೀರಿ. ನೀವು ಇಲ್ಲಿ ಪುನಃ ಸತೋಪ್ರಧಾನ ದೇವತೆಯಾಗಲು ಬಂದಿದ್ದೀರಿ. ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ತುಕ್ಕು ಬಿಟ್ಟು ಹೋಗುತ್ತದೆ, ಸತೋಪ್ರಧಾನರಾಗುತ್ತೀರಿ. ಪುರುಷಾರ್ಥದಿಂದಲೇ ಆಗುತ್ತೀರಿ. ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನು ನೆನಪು ಮಾಡಿರಿ. ಸ್ನಾನ ಮಾಡುತ್ತಾ ತಂದೆಯ ನೆನಪು ಮಾಡಲು ಸಾಧ್ಯವಿಲ್ಲವೇನು? ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ ಆಗ ತುಕ್ಕು ಬಿಟ್ಟು ಹೋಗುತ್ತದೆ ಮತ್ತು ಖುಷಿಯ ನಶೆಯೇರುತ್ತದೆ. ನಿಮಗೆ ಎಷ್ಟು ಧನ ಕೊಡುತ್ತೇನೆ! ನೀವು ವಿಶ್ವದ ಮಾಲೀಕರಾಗಲು ಬಂದಿದ್ದೀರಿ. ಅಲ್ಲಿ ನೀವು ಚಿನ್ನದ ಮಹಲ್ ಕಟ್ಟುತ್ತೀರಿ. ಎಷ್ಟು ವಜ್ರ-ವೈಡೂರ್ಯಗಳು ಇರುತ್ತವೆ! ಭಕ್ತಿಯಲ್ಲಿ ಯಾವ ಮಂದಿರವನ್ನು ಕಟ್ಟಿಸುತ್ತಾರೆಯೋ ಅದರಲ್ಲಿ ಎಷ್ಟು ವಜ್ರ-ವೈಡೂರ್ಯಗಳಿರುತ್ತವೆ. ಅನೇಕ ರಾಜರುಗಳು ಮಂದಿರವನ್ನು ಕಟ್ಟಿಸುತ್ತಾರೆ ಅಂದಮೇಲೆ ಇಷ್ಟೊಂದು ಚಿನ್ನ-ವಜ್ರವು ಎಲ್ಲಿಂದ ಬರುತ್ತದೆ? ಈಗಂತೂ ಇಲ್ಲ. ಈ ಡ್ರಾಮಾ ಚಕ್ರ ಹೇಗೆ ತಿರುಗುತ್ತದೆ ಎಂದು ನೀವು ತಿಳಿದುಕೊಂಡಿದ್ದೀರಿ. ಯಾರು ತುಂಬಾ ಭಕ್ತಿಯನ್ನು ಮಾಡಿದ್ದಾರೆಯೋ ಅವರ ಬುದ್ಧಿಯಲ್ಲಿಯೇ ಇದು ನಿಲ್ಲುತ್ತದೆ, ನಂಬರ್ವಾರ್ ಆಗಿ ತಿಳಿದುಕೊಳ್ಳುತ್ತಾರೆ. ಇದೂ ತಿಳಿದು ಬರುತ್ತದೆ - ಯಾರು ಬಹಳ ಸರ್ವೀಸ್ ಮಾಡುತ್ತಾರೆ, ಅವರು ಬಹಳ ಖುಷಿಯಿಂದ ಇರುತ್ತಾರೆ, ಯೋಗದಲ್ಲಿರುತ್ತಾರೆ ಇದೂ ಕಾಣಿಸುತ್ತದೆ. ಈ ಸ್ಥಿತಿಯು ಅಂತ್ಯದಲ್ಲಿ ಬರುತ್ತದೆ, ಅದಕ್ಕೆ ಸತೋಪ್ರಧಾನರಾಗಲು ಯೋಗದ ಅವಶ್ಯಕತೆಯಿದೆ. ತಂದೆಯು ಬಂದಿದ್ದಾರೆ ಅಂದಾಗ ಅವರಿಂದ ಆಸ್ತಿಯು ತೆಗೆದುಕೊಳ್ಳಬೇಕು. ಇವರೂ (ಬ್ರಹ್ಮಾ) ಹೇಳುತ್ತಾರೆ - ತಂದೆಯು ನನ್ನ ಜೊತೆಯಲ್ಲಿದ್ದಾರೆ, ನಾನೂ ಸಹ ಕೇಳುತ್ತಿದ್ದೇನೆ. ನಿಮಗೆ ತಿಳಿಸುವಾಗ ನಾನೂ ಕೇಳಿಸಿಕೊಳ್ಳುತ್ತೇನೆ. ಜ್ಞಾನಾಮೃತದ ಕಳಸವು ನೀವು ಮಾತೆಯರಿಗೇ ಸಿಗುತ್ತದೆ. ಮಾತೆಯರು ಎಲ್ಲರಿಗೂ ಹಂಚುತ್ತಾರೆ, ಸರ್ವೀಸ್ ಮಾಡುತ್ತಾರೆ. ನೀವೆಲ್ಲರೂ ಸೀತೆಯರಾಗಿದ್ದೀರಿ, ರಾಮ ಒಬ್ಬರೇ ಆಗಿದ್ದಾರೆ. ನೀವೆಲ್ಲಾ ವಧುಗಳಾಗಿದ್ದೀರಿ, ನಾನು ವರನಾಗಿದ್ದೇನೆ. ನಿಮಗೆ ಶೃಂಗಾರ ಮಾಡಿ ಅತ್ತೆಯ ಮನೆಗೆ ಕಳುಹಿಸಿ ಕೊಡುತ್ತೇನೆ. ಅವರು ತಂದೆಯ ತಂದೆ, ಪತಿಯರ ಪತಿಯಾಗಿದ್ದಾರೆ. ಒಂದು ಕಡೆ ಮಹಿಮೆ ಮಾಡುತ್ತಾರೆ, ಮತ್ತೊಂದು ಕಡೆ ನಿಂದನೆ ಮಾಡುತ್ತಾರೆ. ಶಿವ ತಂದೆಯ ಮಹಿಮೆಯೇ ಬೇರೆ, ಕೃಷ್ಣನ ಮಹಿಮೆಯೇ ಬೇರೆಯಾಗಿದೆ. ಇಬ್ಬರ ಪದವಿಯೂ ಬೇರೆ-ಬೇರೆಯಾಗಿದೆ. ಇಲ್ಲಿ ಎಲ್ಲವನ್ನೂ ಸೇರಿಸಿ ಒಂದೇ ಮಾಡಿದ್ದಾರೆ. ಇದು ಅಂಧಕಾರದ ನಗರಿಯಾಗಿದೆ. ನೀವೀಗ ತಂದೆಯ ಮಕ್ಕಳಾಗಿದ್ದೀರಿ. ನೀವು ಶಿವ ತಂದೆಯ ಮೊಮ್ಮಕ್ಕಳಾಗಿದ್ದೀರಿ, ನಿಮ್ಮೆಲ್ಲರಿಗೂ ಅಧಿಕಾರವಿದೆ. ಈ (ಬ್ರಹ್ಮಾ) ತಂದೆಯ ಹತ್ತಿರವಂತೂ ಯಾವುದೇ ಆಸ್ತಿಯಿಲ್ಲ. ಹದ್ದಿನ ಆಸ್ತಿ ಮತ್ತು ಬೇಹದ್ದಿನ ಆಸ್ತಿಯು ಸಿಗುತ್ತದೆ. ಮೂರನೆಯವರಿಂದ ಸಿಗುವುದಿಲ್ಲ. ಬ್ರಹ್ಮಾ ತಂದೆಯೂ ಸಹ ಹೇಳುತ್ತಾರೆ - ನಾನು ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇನೆ. ಪಾರಲೌಕಿಕ ಪರಮಪಿತ ಪರಮಾತ್ಮನನ್ನು ಎಲ್ಲರೂ ನೆನಪು ಮಾಡುತ್ತಾರೆ. ಸತ್ಯಯುಗದಲ್ಲಿ ನೆನಪು ಮಾಡುವುದಿಲ್ಲ. ಸತ್ಯಯುಗದಲ್ಲಿ ಒಬ್ಬರೇ ಲೌಕಿಕ ತಂದೆಯಿರುತ್ತಾರೆ, ರಾವಣ ರಾಜ್ಯದಲ್ಲಿ ಇಬ್ಬರು ತಂದೆಯರಿರುತ್ತಾರೆ, ಆದರೆ ಸಂಗಮಯುಗದಲ್ಲಿ ಮೂವರು ತಂದೆಯರಿರುತ್ತಾರೆ - ಲೌಕಿಕ, ಪಾರಲೌಕಿಕ ಮತ್ತು ಮೂರನೆಯದು ಆಶ್ಚರ್ಯ ಪೂರ್ವ ಅಲೌಕಿಕ ತಂದೆಯಾಗಿದ್ದಾರೆ. ಇವರ (ಬ್ರಹ್ಮಾ) ಮೂಲಕ ತಂದೆಯು ಆಸ್ತಿಯನ್ನು ಕೊಡುತ್ತಾರೆ. ಇವರಿಗೂ ತಂದೆಯಿಂದ ಆಸ್ತಿಯು ಸಿಗುತ್ತದೆ, ಬ್ರಹ್ಮನಿಗೆ ಆದಿ ದೇವನೆಂದು ಹೇಳುತ್ತಾರೆ, ಗ್ರೇಟ್-ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳುತ್ತಾರೆ, ಶಿವನಿಗೆ ತಂದೆಯೆಂದು ಹೇಳುತ್ತಾರೆ. ಮನುಷ್ಯರ ವೃಕ್ಷವು ಬ್ರಹ್ಮನಿಂದಲೇ ಪ್ರಾರಂಭವಾಗುತ್ತದೆ. ಆದ ಕಾರಣ ಅವರಿಗೆ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳಲಾಗುತ್ತದೆ. ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ, ತಿಳಿಸಲು ಚಿತ್ರಗಳೂ ಸಹ ಇವೆ. ಈಗ ಇದರಲ್ಲಿ ಉಲ್ಟಾ-ಸುಲ್ಟಾ ಪ್ರಶ್ನೆ ಮಾಡುವ ಅವಶ್ಯಕತೆಯಿಲ್ಲ. ಋಷಿ-ಮುನಿಗಳನ್ನೂ ಕೇಳಿದರೆ ಅವರೂ ಸಹ ಗೊತ್ತಿಲ್ಲವೆಂದು ಹೇಳುತ್ತಿದ್ದರು. ಈಗ ಬಾಬಾ ಬಂದು ತನ್ನ ಪರಿಚಯವನ್ನು ಕೊಡುತ್ತಾರೆ ಅಂದಾಗ ಇಂತಹ ತಂದೆಯನ್ನು ಎಷ್ಟು ಪ್ರೀತಿಯಿಂದ ನೆನಪು ಮಾಡಬೇಕು. ಈಗ ನಿಧಾನವಾಗಿ ನೀವು ಮಕ್ಕಳು ಡ್ರಾಮಾನುಸಾರ ಉನ್ನತ ಮಟ್ಟಕ್ಕೇರುತ್ತೀರಿ. ಕಲ್ಪ-ಕಲ್ಪವೂ ನಂಬರ್ವಾರ್ ಆಗಿ ಕೆಲವರು ಸತೋಪ್ರಧಾನ, ಸತೋ, ರಜೋ, ತಮೋ ಆಗುತ್ತಾರೆ. ಹಾಗೆಯೇ ಅಲ್ಲಿ ಪದವಿಯು ಸಿಗುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಒಳ್ಳೆಯ ರೀತಿಯಲ್ಲಿ ಪುರುಷಾರ್ಥ ಮಾಡಿ, ಶಿಕ್ಷೆಯನ್ನನುಭವಿಸಬಾರದು. ಪುರುಷಾರ್ಥವನ್ನು ಅವಶ್ಯವಾಗಿ ಮಾಡಿಸುತ್ತಾರೆ. ಯಾರು ಕಲ್ಪದ ಹಿಂದೆ ಆಗಿರುವರೋ ಅವರೇ ಆಗುತ್ತಾರೆಂದು ತಂದೆಗೆ ಗೊತ್ತಿದೆ. ಆದರೂ ಸಹ ಪುರುಷಾರ್ಥವನ್ನು ಅವಶ್ಯವಾಗಿ ಮಾಡಿಸುತ್ತಾರೆ. ಯಾರು ಸಮೀಪದವರಿರುವರೋ ಅವರೇ ಪೂಜೆಯನ್ನು ಚೆನ್ನಾಗಿ ಮಾಡುತ್ತಾರೆ. ಮೊಟ್ಟ ಮೊದಲು ನೀವು ನನ್ನದೇ ಪೂಜೆಯನ್ನು ಮಾಡುತ್ತೀರಿ ನಂತರ ದೇವತೆಗಳ ಪೂಜೆಯನ್ನು ಮಾಡುತ್ತೀರಿ. ಈಗ ನೀವು ದೇವತೆಗಳಾಗಬೇಕಾಗಿದೆ. ನೀವು ಯೋಗಬಲದಿಂದ ತಮ್ಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೀರಿ. ಯೋಗ ಬಲದಿಂದ ನಾವು ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೇವೆ. ಬಾಹುಬಲದಿಂದ ಯಾರೂ ವಿಶ್ವದ ರಾಜ್ಯ ಭಾಗ್ಯವನ್ನು ಪಡೆಯಲು ಸಾಧ್ಯವಿಲ್ಲ ಅವರಂತೂ ಪರಸ್ಪರ ಸಹೋದರರೇ ಹೊಡೆದಾಡುತ್ತಿರುತ್ತಾರೆ. ಎಷ್ಟೊಂದು ಸಿಡಿ ಮದ್ದುಗಳನ್ನು ತಯಾರಿಸುತ್ತಿರುತ್ತಾರೆ. ಉಚಿತವಾಗಿ ಒಬ್ಬರು ಇನ್ನೊಬ್ಬರಿಗೆ ಕೊಡುತ್ತಿರುತ್ತಾರೆ. ಸಿಡಿಮದ್ದುಗಳಿರುವುದೇ ವಿನಾಶಕ್ಕಾಗಿ ಆದರೆ ಇದು ಯಾರಿಗೂ ಬುದ್ಧಿಯಲ್ಲಿ ಬರುವುದಿಲ್ಲ ಏಕೆಂದರೆ ಅವರು ಕಲ್ಪವು ಲಕ್ಷಾಂತರ ವರ್ಷಗಳಾಗಿದೆಯೆಂದು ತಿಳಿಯುತ್ತಾರೆ, ಘೋರ ಅಂಧಕಾರದಲ್ಲಿದ್ದಾರೆ. ವಿನಾಶವಾಗಿ ಬಿಟ್ಟರೂ ಸಹ ಎಲ್ಲರೂ ಕುಂಭಕರ್ಣನ ನಿದ್ರೆಯಲ್ಲಿ ಮಲಗಿರುತ್ತಾರೆ, ಎದ್ದೇಳುವುದೇ ಇಲ್ಲ. ನೀವೀಗ ಜಾಗೃತರಾಗಿದ್ದೀರಿ. ತಂದೆಯಂತೂ ಜಾಗಂತ ಜ್ಯೋತಿ, ಜ್ಞಾನಪೂರ್ಣನಾಗಿದ್ದಾರೆ. ನೀವು ಮಕ್ಕಳನ್ನು ತನ್ನ ಸಮಾನರನ್ನಾಗಿ ಮಾಡಿಕೊಳ್ಳುತ್ತಾರೆ. ಅದು ಭಕ್ತಿ, ಇದು ಜ್ಞಾನವಾಗಿದೆ. ಜ್ಞಾನದಿಂದ ನೀವು ಸುಖಿಯಾಗುತ್ತೀರಿ. ಈಗ ನಿಮ್ಮಲ್ಲಿ ಬರಬೇಕು - ನಾವು ಪುನಃ ಸತೋಪ್ರಧಾನರಾಗುತ್ತಿದ್ದೇವೆ. ತಂದೆಯನ್ನು ನೆನಪು ಮಾಡಬೇಕಾಗಿದೆ. ಇದಕ್ಕೆ ಬೇಹದ್ದಿನ ಸನ್ಯಾಸವೆಂದು ಹೇಳಲಾಗುತ್ತದೆ. ಈ ಹಳೆಯ ಪ್ರಪಂಚವಂತೂ ವಿನಾಶವಾಗಲಿದೆ. ಪ್ರಾಕೃತಿಕ ವಿಕೋಪಗಳೂ ಸಹ ಸಹಾಯ ಮಾಡುತ್ತವೆ. ಆ ಸಮಯದಲ್ಲಿ ನಿಮಗೆ ಪೂರ್ಣ ಊಟವೂ ಸಿಗುವುದಿಲ್ಲ. ಆಗ ನಾವು ನಮ್ಮ ಖುಷಿಯ ಔಷಧಿಯಲ್ಲಿರುತ್ತೇವೆ. ನಿಮಗೆ ಗೊತ್ತಿದೆ, ಇದೆಲ್ಲವೂ ಸಮಾಪ್ತಿಯಾಗಲಿದೆ ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ನಾನು ಬರುವುದೇ ನೀವು ಮಕ್ಕಳನ್ನು ಪುನಃ ಸತೋಪ್ರಧಾನರನ್ನಾಗಿ ಮಾಡಲು. ಇದಂತೂ ಕಲ್ಪ-ಕಲ್ಪದ ನನ್ನ ಕರ್ತವ್ಯವೇ ಆಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
೧. ಸ್ವಯಂ ಭಗವಂತನು ನಮ್ಮ ಮೇಲೆ ದಯೆ ತೋರಿಸಿದ್ದಾರೆ, ಅವರು ನಮಗೆ ಓದಿಸುತ್ತಿದ್ದಾರೆ - ಈ ನಶೆಯಲ್ಲಿರಬೇಕಾಗಿದೆ. ವಿದ್ಯೆಯು ಸಂಪಾದನೆಗೆ ಮೂಲವಾಗಿದೆ, ಆದ್ದರಿಂದ ವಿದ್ಯೆಯನ್ನು ತಪ್ಪಿಸಬಾರದು.

೨. ಅಪಾರ ಖುಷಿಯ ಅನುಭವ ಮಾಡಬೇಕು ಮತ್ತು ಮಾಡಿಸಬೇಕಾಗಿದೆ. ನಡೆಯುತ್ತಾ-ತಿರುಗಾಡುತ್ತಾ ಆತ್ಮಾಭಿಮಾನಿಗಳಾಗಿ ತಂದೆಯ ನೆನಪಿನಲ್ಲಿದ್ದು ಆತ್ಮವನ್ನು ಅವಶ್ಯವಾಗಿ ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ.


ವರದಾನ:
ತಮ್ಮ ಶ್ರೇಷ್ಠ ವೃತ್ತಿಯಿಂದ ವಿಶ್ವದ ವಾತಾವರಣವನ್ನು ಪರಿವರ್ತನೆ ಮಾಡುವಂತಹ ಆಧಾರ ಮೂರ್ತಿ ಭವ.

ನೀವು ಮಕ್ಕಳು ಕೇವಲ ನಿಮ್ಮ ಜೀವನಕ್ಕಾಗಿ ಆಧಾರ ಅಲ್ಲ ಆದರೆ ವಿಶ್ವದ ಸರ್ವ ಆತ್ಮಗಳಿಗೆ ಆಧಾರ ಮೂರ್ತಿಯಾಗಿರುವಿರಿ. ನಿಮ್ಮ ಶ್ರೇಷ್ಠ ವೃತ್ತಿಯಿಂದ ವಿಶ್ವದ ವಾತಾವರಣ ಪರಿವರ್ತನೆಯಾಗುತ್ತಿದೆ. ನಿಮ್ಮ ಪವಿತ್ರ ದೃಷ್ಠಿಯಿಂದ ವಿಶ್ವದ ಆತ್ಮಗಳು ಹಾಗೂ ಪ್ರಕೃತಿ ಎರಡೂ ಪವಿತ್ರವಾಗುತ್ತಿದೆ. ದೃಷ್ಠಿಯಿಂದ ಸೃಷ್ಠಿ ಬದಲಾಗುತ್ತಿದೆ. ನಿಮ್ಮ ಶ್ರೇಷ್ಠ ಕರ್ಮದಿಂದ ಶ್ರೇಷ್ಠಾಚಾರಿ ಪ್ರಪಂಚ ತಯಾರಾಗುತ್ತಿದೆ. ಈಗ ನೀವು ಇಷ್ಟು ದೊಡ್ಡ ಜವಾಬ್ಧಾರಿಯ ಕಿರೀಟಧಾರಿಗಳಾಗುವಿರಿ ನಂತರ ಭವಿಷ್ಯದಲ್ಲಿ ಕಿರೀಟ ಸಿಂಹಾಸನ ಸಿಗುವುದು.

ಸ್ಲೋಗನ್:
ಸರ್ವಶಕ್ತಿವಾನ್ ತಂದೆಯನ್ನು ನಿಮ್ಮ ಜೊತೆಗಾರರನ್ನಾಗಿ ಮಾಡಿಕೊಂಡಲ್ಲಿ ಯಾವುದೇ ವಿಘ್ನ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ.