06.09.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ತಂದೆಯ ಸಮಾನ ಈಶ್ವರೀಯ ಸೇವಾಧಾರಿಗಳಾಗಬೇಕಾಗಿದೆ, ಸಂಗಮಯುಗದಲ್ಲಿ ನೀವು ಮಕ್ಕಳ ಸೇವೆ ಮಾಡಲು ತಂದೆಯು ಬರುತ್ತಾರೆ.”

ಪ್ರಶ್ನೆ:
ಈ ಪುರುಷೋತ್ತಮ ಸಂಗಮಯುಗವು ಎಲ್ಲದಕ್ಕಿಂತ ಸುಂದರ ಮತ್ತು ಕಲ್ಯಾಣಕಾರಿಯಾಗಿದೆ - ಹೇಗೆ?

ಉತ್ತರ:
ಇದೇ ಸಮಯದಲ್ಲಿ ನೀವು ಮಕ್ಕಳು ಸ್ತ್ರೀ-ಪುರುಷರಿಬ್ಬರು ಮರಾಗುತ್ತೀರಿ. ಈ ಸಂಗಮಯುಗವು ಕಲಿಯುಗದ ಅಂತ್ಯ ಸತ್ಯಯುಗದ ಆದಿಯ ನಡುವಿನ ಸಮಯವಾಗಿದೆ. ಈ ಸಮಯದಲ್ಲಿಯೇ ತಂದೆಯು ನೀವು ಮಕ್ಕಳಿಗಾಗಿ ಈಶ್ವರೀಯ ವಿಶ್ವ ವಿದ್ಯಾಲಯವನ್ನು ತೆರೆಯುತ್ತಾರೆ. ಇಲ್ಲಿ ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ. ಇಂತಹ ವಿಶ್ವ ವಿದ್ಯಾಲಯವು ಇಡೀ ಕಲ್ಪದಲ್ಲಿಯೇ ಎಂದೂ ಇರುವುದಿಲ್ಲ. ಇದೇ ಸಮಯದಲ್ಲಿ ಎಲ್ಲರ ಸದ್ಗತಿಯಾಗುತ್ತದೆ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಇಲ್ಲಿ ಕುಳಿತು-ಕುಳಿತಿದ್ದಂತೆಯೇ ಮೊದಲನೆಯದಾಗಿ ನೀವು ತಂದೆಯನ್ನು ನೆನಪು ಮಾಡುತ್ತೀರಿ ಏಕೆಂದರೆ ಅವರು ಪತಿತ-ಪಾವನನಾಗಿದ್ದಾರೆ. ಅವರನ್ನು ನೆನಪು ಮಾಡುವುದರಿಂದಲೇ ಪಾವನ, ಸತೋಪ್ರಧಾನರಾಗುವ ಧ್ಯೇಯವು ನಿಮ್ಮದಾಗಿದೆ. ಕೇವಲ ಸತೋ ಆಗುವ ಧ್ಯೇಯವಲ್ಲ. ಸತೋಪ್ರಧಾನರಾಗಬೇಕಾಗಿದೆ. ಆದ್ದರಿಂದ ತಂದೆಯನ್ನೂ ನೆನಪು ಮಾಡಬೇಕು ಮತ್ತು ಮಧುರ ಮನೆಯನ್ನೂ ನೆನಪು ಮಾಡಬೇಕಾಗಿದೆ. ಏಕೆಂದರೆ ಅಲ್ಲಿಗೆ ಹೋಗಬೇಕೆಂದರೆ ಸಕಲ ಸಂಪತ್ತು ಬೇಕು, ಆದ್ದರಿಂದ ತಮ್ಮ ಸ್ವರ್ಗಧಾಮವನ್ನೂ ನೆನಪು ಮಾಡಬೇಕಾಗಿದೆ, ಏಕೆಂದರೆ ಇದು ಪ್ರಾಪ್ತಿಯಾಗುತ್ತದೆ. ಮಕ್ಕಳಿಗೆ ಗೊತ್ತಿದೆ, ನಾವು ತಂದೆಯ ಮಕ್ಕಳಾಗಿದ್ದೇವೆ. ಮನುಷ್ಯರಾಗಿ ತಂದೆಯಿಂದ ಶಿಕ್ಷಣವನ್ನು ತೆಗೆದುಕೊಂಡು ನಾವು ನಂಬರ್ವಾರ್ ಪುರುಷಾರ್ಥದನುಸಾರ ಸ್ವರ್ಗದಲ್ಲಿ ಹೋಗುತ್ತೇವೆ. ಉಳಿದಂತೆ ಯಾರೆಲ್ಲಾ ಜೀವಾತ್ಮರಿದ್ದಾರೆಯೇ ಅವರೆಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುವರು. ಮನೆಗಂತೂ ಅವಶ್ಯವಾಗಿ ಹೋಗಬೇಕಾಗಿದೆ. ಮಕ್ಕಳಿಗೆ ಇದೂ ಸಹ ಅರ್ಥವಾಯಿತು. ಇದು ರಾವಣ ರಾಜ್ಯವಾಗಿದೆ. ಇದರ ಹೋಲಿಕೆಯಲ್ಲಿ ಸತ್ಯಯುಗಕ್ಕೆ ರಾಮ ರಾಜ್ಯವೆಂದು ಹೆಸರು ಕೊಡಲಾಗುತ್ತದೆ. ಎರಡು ಕಲೆಗಳು ಕಡಿಮೆಯಾಗಿ ಬಿಡುತ್ತವೆ. ಸತ್ಯಯುಗಿಗಳಿಗೆ ಸೂರ್ಯವಂಶಿಯವರೆಂದು, ತ್ರೇತಾಯುಗದವರಿಗೆ ಚಂದ್ರವಂಶಿಯರೆಂದು ಹೇಳಲಾಗುತ್ತದೆ. ಕ್ರಿಶ್ಚಿಯನ್ನರ ರಾಜ್ಯವು ಒಂದೇ ನಡೆಯುತ್ತದೆ. ಹಾಗೆಯೇ ಇದೂ ಸಹ ಒಂದೇ ರಾಜ್ಯವಾಗಿದೆ. ಆದರೆ ಅದರಲ್ಲಿ ಸೂರ್ಯವಂಶಿಯರು ಮತ್ತು ಚಂದ್ರವಂಶಿಯರಿರುತ್ತಾರೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ತಂದೆಯು ಕುಳಿತು ತಿಳಿಸಿಕೊಡುತ್ತಾರೆ. ಆದ್ದರಿಂದ ಇದಕ್ಕೆ ಜ್ಞಾನವೆಂದು ಹೇಳಲಾಗುತ್ತದೆ. ಸ್ವರ್ಗ ಸ್ಥಾಪನೆಯಾಗುತ್ತದೆ ಎಂದರೆ ಮತ್ತೆ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ. ಈ ಜ್ಞಾನವನ್ನು ಮಕ್ಕಳಿಗೆ ಪುರುಷೋತ್ತಮ ಸಂಗಮಯುಗದಲ್ಲಿಯೇ ಕಲಿಸಿಕೊಡಲಾಗುತ್ತದೆ. ನಿಮ್ಮ ಸೇವಾಕೇಂದ್ರ ಅಥವಾ ಮ್ಯೂಸಿಯಂನಲ್ಲಿ ಇದನ್ನು ಬಹಳ ದೊಡ್ಡ-ದೊಡ್ಡ ಅಕ್ಷರಗಳಲ್ಲಿ ಬರೆದಿರಬೇಕು - ಸಹೋದರ-ಸಹೋದರಿಯರೇ, ಇದು ಪುರುಷೋತ್ತಮ ಸಂಗಮಯುಗವಾಗಿದೆ. ಇದು ಒಂದೇ ಬಾರಿ ಬರುತ್ತದೆ. ಪುರುಷೋತ್ತಮ ಸಂಗಮಯುಗದ ಅರ್ಥವನ್ನೂ ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ಇದನ್ನೂ ಸಹ ಬರೆಯಬೇಕು - ಇದು ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ಸಂಗಮವಾಗಿದೆ. ಆದ್ದರಿಂದ ಈ ಸಂಗಮಯುಗವು ಎಲ್ಲದಕ್ಕಿಂತ ಸುಂದರ ಕಲ್ಯಾಣಕಾರಿಯಾಗಿ ಬಿಡುತ್ತದೆ. ನಾನು ಪುರುಷೋತ್ತಮ ಸಂಗಮಯುಗದಲ್ಲಿಯೇ ಬರುತ್ತೇನೆಂದು ತಂದೆಯೂ ಸಹ ತಿಳಿಸುತ್ತಾರೆ. ಅಂದಾಗ ಸಂಗಮಯುಗದ ಅರ್ಥವನ್ನೂ ತಿಳಿಸಲಾಗುತ್ತದೆ - ವೇಶ್ಯಾಲಯದ ಅಂತ್ಯ ಶಿವಾಲಯದ ಆದಿಗೆ ಪುರುಷೋತ್ತಮ ಸಂಗಮಯುಗವೆಂದು ಹೇಳಲಾಗುತ್ತದೆ. ಇಲ್ಲಿ ಎಲ್ಲರೂ ವಿಕಾರಿಗಳಾಗಿದ್ದಾರೆ. ಇಲ್ಲಿ ಎಲ್ಲರೂ ನಿರ್ವಿಕಾರಿಗಳಿರುತ್ತಾರೆ. ಅಂದಾಗ ಅವಶ್ಯವಾಗಿ ನಿರ್ವಿಕಾರಿಗಳಿಗೆ ಉತ್ತಮರೆಂದು ಹೇಳುತ್ತಾರಲ್ಲವೆ. ಸ್ತ್ರೀ-ಪುರುಷರಿಬ್ಬರೂ ಉತ್ತಮರಾಗುತ್ತಾರೆ. ಆದ್ದರಿಂದ ಹೆಸರೇ ಆಗಿದೆ- ಪುರುಷೋತ್ತಮ. ಈ ಮಾತುಗಳನ್ನು ತಂದೆ ಮತ್ತು ನೀವು ಮಕ್ಕಳ ವಿನಃ ಮತ್ತ್ಯಾರಿಗೂ ಇದು ಸಂಗಮಯುಗವಾಗಿದೆ ಎಂದು ಗೊತ್ತಿಲ್ಲ. ಪುರುಪೋತ್ತಮ ಸಂಗಮಯುಗವು ಯಾವಾಗ ಬರುತ್ತದೆಯೆಂದು ಯಾರ ವಿಚಾರದಲ್ಲಿಯೂ ಬರುವುದಿಲ್ಲ. ಈಗ ತಂದೆಯು ಬಂದಿದ್ದಾರೆ. ಅವರು ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ. ಅವರದೇ ಇಷ್ಟೊಂದು ಮಹಿಮೆಯಿದೆ, ಅವರು ಜ್ಞಾನ ಸಾಗರ, ಆನಂದ ಸಾಗರ, ಪತಿತ-ಪಾವನನಾಗಿದ್ದಾರೆ. ಜ್ಞಾನದಿಂದ ಸದ್ಗತಿ ಮಾಡುತ್ತಾರೆ. ಭಕ್ತಿಯಿಂದ ಸದ್ಗತಿಯೆಂದು ನೀವು ಎಂದೂ ಹೇಳುವುದಿಲ್ಲ. ಜ್ಞಾನದಿಂದಲೇ ಸದ್ಗತಿಯಾಗುತ್ತದೆ ಮತ್ತು ಸದ್ಗತಿಯಾಗುವುದೇ ಸತ್ಯಯುಗದಲ್ಲಿ ಅಂದಾಗ ಅವಶ್ಯವಾಗಿ ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ಸಂಗಮಯುಗದಲ್ಲಿಯೇ ತಂದೆಯು ಬರುತ್ತಾರೆ. ತಂದೆಯು ಎಷ್ಟು ಸ್ಪಷ್ಟ ಮಾಡಿ ತಿಳಿಸುತ್ತಾರೆ. ಹೊಸಬರು ಬರುತ್ತಾರೆ. ಹೇಗೆ ಕಲ್ಪ-ಕಲ್ಪವೂ ಬಂದಿದ್ದಾರೆಯೋ ಹಾಗೆಯೇ ಬರುತ್ತಿರುತ್ತಾರೆ. ಹೀಗೆಯೇ ರಾಜಧಾನಿಯು ಸ್ಥಾಪನೆಯಾಗಲಿದೆ. ನೀವು ಓದಿಸುವುದಿಲ್ಲ. ಮೊದಲು ಒಬ್ಬರು (ಬ್ರಹ್ಮಾ) ಓದುತ್ತಾರೆ. ನಂತರ ಇವರ ಮೂಲಕ ನೀವು ಓದಿ ಅನ್ಯರಿಗೆ ಓದಿಸುತ್ತೀರಿ. ಆದ್ದರಿಂದ ಇಲ್ಲಿ ದೊಡ್ಡ ಈಶ್ವರೀಯ ವಿಶ್ವವಿದ್ಯಾಲಯವನ್ನು ತೆರೆಯಬೇಕಾಗುತ್ತದೆ. ಇಡೀ ಪ್ರಪಂಚದಲ್ಲಿ ಇಂತಹ ಮತ್ತ್ಯಾವುದೇ ವಿಶ್ವ ವಿದ್ಯಾಲಯವು ಇಲ್ಲವೇ ಇಲ್ಲ ಹಾಗೂ ಇಂತಹ ಈಶ್ವರೀಯ ವಿಶ್ವ ವಿದ್ಯಾಲಯವು ಇರುತ್ತದೆಯೆಂದು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಗೀತೆಯ ಭಗವಂತನಾದ ಶಿವನೇ ಬಂದು ಈ ವಿಶ್ವ ವಿದ್ಯಾಲಯವನ್ನು ತೆರೆಯುತ್ತಾರೆ. ಹೊಸ ಪ್ರಪಂಚದ ಮಾಲೀಕರು, ದೇವಿ-ದೇವತೆಗಳನ್ನಾಗಿ ಮಾಡುತ್ತಾರೆ. ಈ ಸಮಯದಲ್ಲಿ ಆತ್ಮವು ತಮೋಪ್ರಧಾನವಾಗಿ ಬಿಟ್ಟಿದೆ. ಮತ್ತೆ ಅದೇ ಆತ್ಮವು ಸತೋಪ್ರಧಾನವಾಗಬೇಕಾಗಿದೆ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿ ಬಿಟ್ಟಿದ್ದಾರಲ್ಲವೆ. ಭಲೇ ಕೆಲವು ಕುಮಾರರು ಪವಿತ್ರರಾಗಿರುತ್ತಾರೆ. ಕುಮಾರಿಯರು ಪವಿತ್ರರಾಗಿರುತ್ತಾರೆ. ಸನ್ಯಾಸಿಗಳು ಪವಿತ್ರರಾಗಿರುತ್ತಾರೆ. ಆದರೆ ಈಗಿನ ಕಾಲದಲ್ಲಿ ಆ ಪವಿತ್ರತೆಯಿಂದ ಮೊಟ್ಟ ಮೊದಲು ಯಾವಾಗ ಆತ್ಮಗಳು ಬರುತ್ತಾರೆಯೋ ಅವರು ಪವಿತ್ರರಾಗಿರುತ್ತಾರೆ. ನಂತರ ಅಪವಿತ್ರರಾಗಿ ಬಿಡುತ್ತಾರೆ. ಏಕೆಂದರೆ ನಿಮಗೆ ಗೊತ್ತಿದೆ, ಎಲ್ಲರೂ ಸತೋಪ್ರಧಾನ, ಸತೋ, ರಜೋ, ತಮೋದಿಂದ ಪಾರಾಗಲೇಬೇಕಾಗಿದೆ. ಅಂತಿಮದಲ್ಲಿ ಎಲ್ಲರೂ ತಮೋಪ್ರಧಾನರಾಗಿ ಬಿಡುತ್ತಾರೆ. ಈಗ ತಂದೆಯು ಸನ್ಮುಖದಲ್ಲಿ ಕುಳಿತು ತಿಳಿಸುತ್ತಾರೆ - ಈ ವೃಕ್ಷವು ತಮೋಪ್ರಧಾನ, ಜಡಜಡೀಭೂತ ಸ್ಥಿತಿಯನ್ನು ತಲುಪಿದೆ, ಹಳೆಯದಾಗಿ ಬಿಟ್ಟಿದೆ. ಆದ್ದರಿಂದ ಅವಶ್ಯವಾಗಿ ಇದರ ವಿನಾಶವಾಗಬೇಕು. ಇದು ವಿಭಿನ್ನ ಧರ್ಮಗಳ ವೃಕ್ಷವಾಗಿದೆ. ಆದ್ದರಿಂದ ವಿರಾಟ ಲೀಲೆಯೆಂದು ಹೇಳುತ್ತಾರೆ. ಇದು ಎಷ್ಟು ದೊಡ್ಡ ಬೇಹದ್ದಿನ ವೃಕ್ಷವಾಗಿದೆ. ಈ ವೃಕ್ಷಗಳಂತೂ ಜಡವಾಗಿರುತ್ತವೆ. ಯಾವ ಬೀಜವನ್ನು ಹಾಕಿದರೆ ಅಂತಹ ವೃಕ್ಷವು ಬರುತ್ತದೆ. ಆದರೆ ಇದು ವಿಭಿನ್ನ ಧರ್ಮಗಳ ವಿಭಿನ್ನ ಚಿತ್ರವಾಗಿದೆ. ಎಲ್ಲರೂ ಮನುಷ್ಯರೇ ಇದ್ದಾರೆ. ಆದರೆ ಅವರಲ್ಲಿ ಬಹಳ ವಿಭಿನ್ನತೆಯಿದೆ. ಆದ್ದರಿಂದ ವಿರಾಟ ಲೀಲೆಯೆಂದು ಹೇಳಲಾಗುತ್ತದೆ. ಎಲ್ಲಾ ಧರ್ಮದವರು ನಂಬರ್ವಾರ್ ಆಗಿ ಹೇಗೆ ಬರುತ್ತಾರೆ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಎಲ್ಲರೂ ಹೋಗಬೇಕಾಗಿದೆ ಮತ್ತು ಬರಬೇಕಾಗಿದೆ. ಈ ನಾಟಕವು ಮಾಡಲ್ಪಟ್ಟಿದೆ. ಇದು ಸೃಷ್ಟಿಯ ಲೀಲೆಯಾಗಿದೆ. ಇಷ್ಟು ಸೂಕ್ಷ ಪರಮಾತ್ಮನಲ್ಲಿ ಎಷ್ಟೊಂದು ಪಾತ್ರವು ತುಂಬಲ್ಪಟ್ಟಿದೆ. ಪರಮ ಆತ್ಮವನ್ನು ಸೇರಿಸಿ ಪರಮಾತ್ಮನೆಂದು ಹೇಳಲಾಗುತ್ತದೆ. ನೀವು ಅವರಿಗೆ ತಂದೆಯೆಂದು ಹೇಳುತ್ತೀರಿ. ಏಕೆಂದರೆ ಅವರು ಎಲ್ಲಾ ಆತ್ಮಗಳ ಪಾರಲೌಕಿಕ ತಂದೆಯಾಗಿದ್ದಾರಲ್ಲವೆ. ಮಕ್ಕಳಿಗೆ ಗೊತ್ತಿದೆ. ಆತ್ಮವೇ ಪೂರ್ಣ ಪಾತ್ರವನ್ನಭಿನಯಿಸುತ್ತದೆ. ಮನುಷ್ಯರು ಇದನ್ನು ತಿಳಿದುಕೊಂಡಿಲ್ಲ. ಅವರಂತೂ ಆತ್ಮವು ನಿರ್ಲೇಪವೆಂದು ಹೇಳಿ ಬಿಡುತ್ತಾರೆ. ವಾಸ್ತವದಲ್ಲಿ ಈ ಶಬ್ದವು ತಪ್ಪಾಗಿದೆ. ಇದನ್ನೂ ಸಹ ದೊಡ್ಡ-ದೊಡ್ಡ ಅಕ್ಷರಗಳಲ್ಲಿ ಬರೆಯಬೇಕು - ಆತ್ಮವು ನಿರ್ಲೇಪವಲ್ಲ, ಆತ್ಮವೇ ಎಂತಹ ಒಳ್ಳೆಯ ಅಥವಾ ಕೆಟ್ಟ ಕರ್ಮವನ್ನು ಮಾಡುವುದೋ ಅಂತಹ ಫಲವನ್ನು ಪಡೆಯುತ್ತದೆ. ಕೆಟ್ಟ ಸಂಸ್ಕಾರಗಳಿಂದ ಪತಿತವಾಗಿ ಬಿಡುತ್ತದೆ. ಆದ್ದರಿಂದ ದೇವತೆಗಳ ಮುಂದೆ ಹೋಗಿ ಅವರ ಮಹಿಮೆ ಮಾಡುತ್ತಾರೆ. ಈಗ ನಿಮಗೆ 84 ಜನ್ಮಗಳ ಬಗ್ಗೆ ತಿಳಿದಿದೆ. ಮತ್ತ್ಯಾವ ಮನುಷ್ಯರು ತಿಳಿದುಕೊಂಡಿಲ್ಲ. ಈಗ ನೀವು ನಿಮಗೆ 84 ಜನ್ಮಗಳ ಸಿದ್ಧ ಮಾಡಿ ತಿಳಿಸುತ್ತೀರೆಂದರೆ ಈ ಶಾಸ್ತ್ರಗಳೆಲ್ಲವೂ ಅಸತ್ಯವೇ ಎಂದು ಕೇಳುತ್ತಾರೆ. ಏಕೆಂದರೆ ಮನುಷ್ಯರೇ 84 ಲಕ್ಷ ಯೋನಿಗಳನ್ನು ತೆಗೆದುಕೊಳ್ಳುತ್ತಾನೆಂದು ಹೇಳುತ್ತಾರೆ. ಈಗ ತಂದೆಯು ಕುಳಿತು ತಿಳಿಸುತ್ತಾರೆ- ವಾಸ್ತವದಲ್ಲಿ ಸರ್ವ ಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ. ತಂದೆಯು ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ಇದನ್ನು 5000 ವರ್ಷಗಳ ಹಿಂದೆಯೇ ಕಲಿಸಿದ್ದರು.

ಮಕ್ಕಳಿಗೆ ಗೊತ್ತಿದೆ - ನಾವು ಪವಿತ್ರರಾಗಿದ್ದೇವು. ಪವಿತ್ರ ಗೃಹಸ್ಥ ಧರ್ಮವಿತ್ತು. ಈಗ ಇದಕ್ಕೆ ಧರ್ಮವೆಂದು ಹೇಳುವುದಿಲ್ಲ. ಏಕೆಂದರೆ ಅಧರ್ಮಗಳಾಗಿ ಬಿಟ್ಟಿದ್ದಾರೆ. ಅರ್ಥಾತ್ ವಿಕಾರಿಗಳಾಗಿ ಬಿಟ್ಟಿದ್ದಾರೆ. ಆ ಆಟವು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಇದು ಬೇಹದ್ದಿನ ನಾಟಕವಾಗಿದೆ. ಪ್ರತಿ 5000 ವರ್ಷಗಳ ನಂತರ ಪುನರಾವರ್ತನೆಯಾಗುತ್ತಿರುತ್ತದೆ. ಲಕ್ಷಾಂತರ ವರ್ಷಗಳ ಮಾತನ್ನು ಯಾರೂ ಅರಿತುಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇದಂತೂ ನೆನ್ನೆಯ ಮಾತಾಗಿದೆ. ನೀವು ಶಿವಾಲಯದಲ್ಲಿದ್ದೀರಿ. ಈಗ ವೇಶ್ಯಾಲಯದಲ್ಲಿದ್ದೀರಿ ಮತ್ತೆ ನಾಳೆ ಶಿವಾಲಯದಲ್ಲಿರುತ್ತೀರಿ. ಸತ್ಯಯುಗಕ್ಕೆ ಶಿವಾಲಯವೆಂದು ತ್ರೇತಾಯುಗಕ್ಕೆ ಸೆಮಿ - ಶಿವಾಲಯವೆಂದು ಹೇಳಲಾಗುತ್ತದೆ. ಇಷ್ಟೊಂದು ವರ್ಷಗಳು ಅಲ್ಲಿರುತ್ತೀರಿ. ಪುನರ್ಜನ್ಮದಲ್ಲಂತೂ ಬರಲೇಬೇಕಾಗಿದೆ. ಈಗ ಇದಕ್ಕೆ ರಾವಣ ರಾಜ್ಯವೆಂದು ಹೇಳಲಾಗುತ್ತದೆ. ನೀವು ಅರ್ಧಕಲ್ಪ ಪತಿತರಾದಿರಿ, ಈಗ ತಂದೆಯು ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಪ ಸಮಾನ ಪವಿತ್ರರಾಗಿ ಕುಮಾರ-ಕುಮಾರಿಯರಂತೂ ಪವಿತ್ರರಾಗಿಯೇ ಇರುತ್ತಾರೆ. ಅವರಿಗೆ ತಿಳಿಸಲಾಗುತ್ತದೆ. ನೀವು ಮತ್ತೆ ಗೃಹಸ್ಥದಲ್ಲಿ ಹೋಗಬಾರದು. ಯಾವುದರಿಂದ ಪುನಃ ಪವಿತ್ರರಾಗುವ ಪುರುಷಾರ್ಥ ಮಾಡಬೇಕಾಗುತ್ತದೆ. ಭಗವಾನುವಾಚವಿದೆ- ಮಕ್ಕಳೇ, ಪಾವನರಾಗಿ ಅಂದಾಗ ಬೇಹದ್ದಿನ ಮಾತನ್ನು ಪಾಲಿಸಬೇಕಲ್ಲವೆ. ನೀವು ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಪ ಸಮಾನವಾಗಿರಬೇಕು. ಮತ್ತೆ ತಮ್ಮ ಮಕ್ಕಳಿಗೆ ಪತಿತರಾಗುವ ಹವ್ಯಾಸವನ್ನು ಏಕೆ ಮಾಡಿಸುತ್ತೀರಿ? ಯಾವಾಗ ತಂದೆಯು 21 ಜನ್ಮಗಳಿಗಾಗಿ ಪತಿತರಾಗುವುದರಿಂದ ಬಿಡಿಸುತ್ತಾರೆಂದರೆ ನೀವೇಕೆ ಪವಿತ್ರರಾಗಿಯೇ ಇರಲು ಬಿಡಬಾರದು. ಇದರಲ್ಲಿ ಹದ್ದಿನ ಕುಲ ಮರ್ಯಾದೆ, ಲೋಕ ಮರ್ಯಾದೆಗಳನ್ನು ಬಿಡಬೇಕಾಗುತ್ತದೆ. ಇದು ಬೇಹದ್ದಿನ ಮಾತಾಗಿದೆ. ಕುಮಾರರಂತೂ ಎಲ್ಲಾ ಧರ್ಮಗಳಲ್ಲಿ ಬಹಳಷ್ಟು ಮಂದಿ ಇರುತ್ತಾರೆ. ಆದರೆ ಸುರಕ್ಷಿತರಾಗಿರುವುದು ಕಷ್ಟವಾಗುತ್ತದೆ. ಏಕೆಂದರೆ ರಾವಣ ರಾಜ್ಯದಲ್ಲಿರುತ್ತಾರಲ್ಲವೆ. ವಿದೇಶದಲ್ಲಿಯೂ ಸಹ ಅನೇಕರು ವಿವಾಹ ಮಾಡಿಕೊಳ್ಳುವುದಿಲ್ಲ, ನಂತರ ಕೊನೆಯಲ್ಲಿ ಬಾಳ ಸಂಗಾತಿಗಾಗಿ ವಿವಾಹ ಮಾಡಿಕೊಂಡು ಬಿಡುತ್ತಾರೆ. ಅವರೇನೂ ವಿಕಾರದ ದೃಷ್ಟಿಯಿಂದ ಮಾಡಿಕೊಳ್ಳುವುದಿಲ್ಲ. ಪ್ರಪಂಚದಲ್ಲಿ ಇಂತಹವರು ಅನೇಕರಿರುತ್ತಾರೆ. ಅವರನ್ನು ಸಂಭಾಲನೆ ಮಾಡಿ ನಂತರ ಶರೀರ ಬಿಡುವಾಗ ಅವರಿಗೆ ತಮ್ಮ ಸಂಪತ್ತನ್ನು ಸ್ವಲ್ಪ ಕೊಟ್ಟು ಹೋಗುತ್ತಾರೆ. ಇನ್ನೂ ಸ್ವಲ್ಪ ಧರ್ಮ ಸಂಸ್ಥೆಗೆ ಕೊಟ್ಟು ಹೋಗುತ್ತಾರೆ. ವಿದೇಶದಲ್ಲಿಯೂ ಸಹ ದೊಡ್ಡ-ದೊಡ್ಡ ಧರ್ಮ ಸಂಸ್ಥೆಗಳಿರುತ್ತವೆ. ಅವರು ಮತ್ತೆ ಇಲ್ಲಿಯೂ ಸಹಯೋಗ ಕೊಡುತ್ತಾರೆ. ಇಲ್ಲಿಂದ ವಿದೇಶಕ್ಕೂ ಸಹಯೋಗ ನೀಡುವಂತಹ ಧರ್ಮ ಸಂಸ್ಥೆಗಳು ಇಲ್ಲಿಲ್ಲ. ಇಲ್ಲಂತೂ ಬಡವರಾಗಿದ್ದಾರೆ. ಅಂದಾಗ ಇನ್ನೇನು ಸಹಯೋಗ ಕೊಡುತ್ತಾರೆ! ವಿದೇಶದಲ್ಲಂತೂ ಅವರ ಬಳಿ ಬಹಳ ಹಣವಿದೆ. ಇದು ಬಡ ಭಾರತವಾಗಿದೆಯಲ್ಲವೆ. ಭಾರತವಾಸಿಗಳ ಸ್ಥಿತಿ ಏನಾಗಿದೆ! ಭಾರತವು ಎಷ್ಟು ಸಂಪನ್ನವಾಗಿತ್ತು, ಇದು ನೆನ್ನೆಯ ಮಾತಾಗಿದೆ. 3000 ವರ್ಷಗಳ ಹಿಂದೆ ಇದು ಸ್ವರ್ಗವಾಗಿತ್ತೆಂದು ಹೇಳುತ್ತಾರೆ. ಸ್ವರ್ಗವನ್ನಾಗಿ ತಂದೆಯೇ ಮಾಡುತ್ತಾರೆ. ತಂದೆಯು ಹೇಗೆ ಮೇಲಿಂದ ಪತಿತರನ್ನು ಪಾವನರನ್ನಾಗಿ ಮಾಡಲು ಕೆಳಗೆ ಬರುತ್ತಾರೆಂದು ನೀವು ತಿಳಿದುಕೊಂಡಿದ್ದೀರಿ. ಅವರು ಜ್ಞಾನ ಸಾಗರ, ಪತಿತ-ಪಾವನ, ಸರ್ವರ ಸದ್ಗತಿದಾತ ಅರ್ಥಾತ್ ಎಲ್ಲರನ್ನೂ ಪಾವನ ಮಾಡುವವರಾಗಿದ್ದಾರೆ. ನೀವು ಮಕ್ಕಳಿಗೂ ಸಹ ಗೊತ್ತಿದೆ. ನನ್ನ (ತಂದೆಯ) ಮಹಿಮೆಯನ್ನು ಎಲ್ಲರೂ ಹಾಡುತ್ತಾರೆ. ನಾನಿಲ್ಲಿ ನಿಮ್ಮನ್ನು ಪಾವನ ಮಾಡಲು ಪತಿತ ಪ್ರಪಂಚದಲ್ಲಿಯೇ ಬರುತ್ತೇನೆ. ನೀವು ಪಾವನರಾಗಿ ಬಿಡುತ್ತೀರಿ. ನಂತರ ಮೊಟ್ಟ ಮೊದಲಿಗೆ ಪಾವನ ಪ್ರಪಂಚದಲ್ಲಿ ಹೋಗುತ್ತೀರಿ. ಬಹಳ ಸುಖವನ್ನನುಭವಿಸುತ್ತೀರಿ. ನಂತರ ರಾವಣ ರಾಜ್ಯದಲ್ಲಿ ಕೆಳಗಿಳಿಯುತ್ತೀರಿ. ಪರಮಪಿತ ಪರಮಾತ್ಮನು ಜ್ಞಾನಸಾಗರ, ಶಾಂತಿಯ ಸಾಗರ, ಪತಿತ-ಪಾವನನಾಗಿದ್ದಾನೆಂದು ಭಲೆ ಮಹಿಮೆ ಮಾಡುತ್ತಾರೆ. ಆದರೆ ಪಾವನರನ್ನಾಗಿ ಮಾಡಲು ಯಾವಾಗ ಬರುತ್ತಾರೆಂಬುದನ್ನು ತಿಳಿದುಕೊಂಡೇ ಇಲ್ಲ. ತಂದೆಯು ತಿಳಿಸುತ್ತಾರೆ- ನೀವು ನನ್ನ ಮಹಿಮೆ ಮಾಡುತ್ತೀರಲ್ಲವೆ. ಈಗ ನಾನು ಬಂದಿದ್ದೇನೆ. ತಂದೆಯು ತಮ್ಮ ಪರಿಚಯವನ್ನು ಕೊಡುತ್ತಿದ್ದಾರೆ. ನಾನು ಪ್ರತಿ 5000 ವರ್ಷಗಳ ನಂತರ ಈ ಪುರುಷೋತ್ತಮ ಸಂಗಮಯುಗದಲ್ಲಿ ಬರುತ್ತೇನೆ. ಹೇಗೆ ಬರುತ್ತೇನೆಂಬುದನ್ನೂ ಸಹ ತಿಳಿಸುತ್ತೇನೆ. ಚಿತ್ರಗಳೂ ಇವೆ. ಬ್ರಹ್ಮನು ಯಾವುದೇ ಸೂಕ್ಷ್ಮವತನದಲ್ಲಿರುವುದಿಲ್ಲ. ಬ್ರಹ್ಮಾರವರೂ ಇಲ್ಲಿಯೇ ಇದ್ದಾರೆ ಮತ್ತು ಬ್ರಾಹ್ಮಣರೂ ಇಲ್ಲಿಯೇ ಇದ್ದೀರಿ. ಇವರಿಗೆ (ಬ್ರಹ್ಮಾ) ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ ಎಂದು ಹೇಳಲಾಗುತ್ತದೆ. ಇವರದು ವಂಶಾವಳಿಯಾಗುತ್ತದೆ. ಮನುಷ್ಯ ಸೃಷ್ಟಿಯ ವಂಶಾವಳಿಯಂತೂ ಪ್ರಜಾಪಿತ ಬ್ರಹ್ಮನಿಂದಲೇ ನಡೆಯುತ್ತದೆಯಲ್ಲವೆ. ಪ್ರಜಾಪಿತನಿದ್ದಾರೆಂದರೆ ಅವಶ್ಯವಾಗಿ ಅವರ ಪ್ರಜೆಗಳೂ ಇದ್ದಾರೆ. ಕುಖವಂಶಾವಳಿಯಾಗಿರಲು ಸಾಧ್ಯವಿಲ್ಲ. ಅವಶ್ಯವಾಗಿ ದತ್ತು ಮಕ್ಕಳೇ ಇರುತ್ತಾರೆ. ಇವರು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದಾರೆಂದು ಅವಶ್ಯವಾಗಿ ದತ್ತು ಮಾಡಿಕೊಂಡವರೇ ಇರುತ್ತಾರೆ. ನೀವೆಲ್ಲರೂ ದತ್ತು ಮಕ್ಕಳಾಗಿದ್ದೀರಿ. ಈಗ ನೀವು ಬ್ರಾಹ್ಮಣರಾಗಿದ್ದೀರಿ. ನಂತರ ನೀವೇ ದೇವತೆಗಳಾಗಬೇಕಾಗಿದೆ. ಶೂದ್ರರಿಂದ ಬ್ರಾಹ್ಮಣರು ಮತ್ತೆ ಬ್ರಾಹ್ಮಣರಿಂದ ದೇವತೆಗಳು - ಇದು ಬಾಜೋಲಿಯ ಆಟವಾಗಿದೆ. ವಿರಾಟರೂಪದ ಚಿತ್ರವೂ ಇದೆಯಲ್ಲವೆ. ಅಲ್ಲಿಂದ ಎಲ್ಲರೂ ಇಲ್ಲಿಗೆ ಬರಲೇಬೇಕಾಗಿದೆ. ಯಾವಾಗ ಎಲ್ಲರೂ ಬಂದು ಬಿಡುವರೋ ಆಗ ರಚಯಿತನು ಬರುತ್ತಾರೆ. ಅವರು ರಚಯಿತ ನಿರ್ದೇಶಕನಾಗಿದ್ದಾರೆ. ಪಾತ್ರವನ್ನೂ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಹೇ ಆತ್ಮಗಳೇ, ನೀವು ನನ್ನನ್ನು ಅರಿತುಕೊಂಡಿದ್ದೀರಿ ನೀವಾತ್ಮಗಳೆಲ್ಲರೂ ನನ್ನ ಮಕ್ಕಳಾಗಿದ್ದೀರಲ್ಲವೆ. ನೀವು ಮೊದಲು ಸತ್ಯಯುಗದಲ್ಲಿ ಶರೀರಧಾರಿಗಳಾಗಿ ಎಷ್ಟು ಒಳ್ಳೆಯ ಸುಖದ ಪಾತ್ರವನ್ನಭಿನಯಿಸಿದಿರಿ ಮತ್ತೆ 84 ಜನ್ಮಗಳ ನಂತರ ನೀವು ಎಷ್ಟು ದುಃಖದಲ್ಲಿ ಬಂದು ಬಿಟ್ಟಿದ್ದೀರಿ. ನಾಟಕದಲ್ಲಿ ರಚಯಿತ, ನಿರ್ದೇಶಕ, ನಿರ್ಮಾಪಕರಿರುತ್ತಾರಲ್ಲವೆ. ಇದು ಬೇಹದ್ದಿನ ನಾಟಕವಾಗಿದೆ. ಈ ಬೇಹದ್ದಿನ ನಾಟಕವನ್ನು ಯಾರೂ ತಿಳಿದುಕೊಂಡಿಲ್ಲ. ಭಕ್ತಿಮಾರ್ಗದಲ್ಲಿ ಇಂತಿಂತಹ ಮಾತುಗಳನ್ನು ತಿಳಿಸುತ್ತಾರೆ. ಇವೇ ಮನುಷ್ಯರ ಬುದ್ಧಿಯಲ್ಲಿ ಕುಳಿತು ಬಿಟ್ಟಿವೆ.

ಈಗ ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಇವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ. ಬಹಳಷ್ಟು ಭಕ್ತಿಮಾರ್ಗದ ಸಾಮಗ್ರಿಯಿದೆ. ಇಷ್ಟು ಚಿಕ್ಕ ಬೀಜದಿಂದ ಎಷ್ಟು ದೊಡ್ಡ ವೃಕ್ಷವು ಆಗುತ್ತದೆ! ಭಕ್ತಿಯದೂ ಸಹ ಎಷ್ಟು ವಿಸ್ತಾರವಿದೆ! ಜ್ಞಾನವು ಬೀಜಾಗಿದೆ. ಅದರಲ್ಲಿ ಯಾವುದೇ ಸಾಮಗ್ರಿಯ ಅವಶ್ಯಕತೆಯಿರುವುದಿಲ್ಲ. ತಂದೆಯು ಹೇಳುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ ಮತ್ತ್ಯಾವುದೇ ಮಾತಿನ ಅವಶ್ಯಕತೆಯಿಲ್ಲ. ನೀವೇ ಬಹಳ ಭಕ್ತಿಯನ್ನು ಮಾಡಿದ್ದೀರಿ. ನಿಮಗೆ ಅದರ ಫಲವನ್ನು ಕೊಡುವುದಕ್ಕಾಗಿಯೇ ಬಂದಿದ್ದೇನೆ. ನೀವು ದೇವತೆಗಳು ಶಿವಾಲಯದಲ್ಲಿದ್ದೀರಲ್ಲವೆ. ಆದ್ದರಿಂದಲೇ ಮಂದಿರದಲ್ಲಿ ಹೋಗಿ ಅವರ ಮಹಿಮೆಯನ್ನು ಹಾಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ನಾನು 5000 ವರ್ಷಗಳ ಮೊದಲೂ ತಿಳಿಸಿದ್ದೆನು. ತನ್ನನ್ನು ಆತ್ಮನೆಂದು ತಿಳಿದು ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ನನ್ನೊಬ್ಬನನ್ನು ನೆನಪು ಮಾಡಿ. ಆಗ ಈ ಯೋಗಾಗ್ನಿಯಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ತಂದೆಯು ಏನೆಲ್ಲವನ್ನೂ ಈಗ ತಿಳಿಸುತ್ತಾರೆಯೋ ಕಲ್ಪ-ಕಲ್ಪವೂ ತಿಳಿಸುತ್ತಾ ಬಂದಿದ್ದಾರೆ. ಗೀತೆಯಲ್ಲಿಯೂ ಸಹ ಕೆಲಕೆಲವು ಶಬ್ದಗಳು ಚೆನ್ನಾಗಿದೆ. ಮನ್ಮನಾಭವ ಅರ್ಥಾತ್ ನನ್ನನ್ನು ನೆನಪು ಮಾಡಿ. ಶಿವ ತಂದೆಯೇ ತಿಳಿಸುತ್ತಾರೆ - ನಾನಿಲ್ಲಿ ಬಂದಿದ್ದೇನೆ, ಬ್ರಹ್ಮನ ತನುವಿನಲ್ಲಿ ಬರುತ್ತೇನೆಂದು ಅದನ್ನೂ ಸಹ ತಿಳಿಸುತ್ತೇನೆ. ಬ್ರಹ್ಮಾರವರ ಮೂಲಕ ಎಲ್ಲಾ ವೇದ-ಶಾಸ್ತ್ರಗಳ ಸಾರವನ್ನು ನಿಮಗೆ ತಿಳಿಸುತ್ತೇನೆ. ಚಿತ್ರಗಳನ್ನೂ ಸಹ ತೋರಿಸುತ್ತಾರೆ. ಆದರೆ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ. ಹೇಗೆ ಶಿವ ತಂದೆಯು ಬ್ರಹ್ಮಾರವರ ತನುವಿನ ಮೂಲಕ ನಿಮಗೆ ತಿಳಿಸುತ್ತೇನೆ. ಇವರದೇ ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ಬರುತ್ತೇನೆ. ಇವರೇ ಮತ್ತೆ ಸತ್ಯಯುಗದ ಮೊದಲ ರಾಜಕುಮಾರನಾಗುತ್ತಾರೆ. ನಂತರ 84 ಜನ್ಮಗಳಲ್ಲಿ ಬರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ರಾವಣ ರಾಜ್ಯದಲ್ಲಿರುತ್ತಾ ಪತಿತ, ಲೋಕ ಮರ್ಯಾದೆ - ಕುಲ ಮರ್ಯಾದೆಯನ್ನು ಬಿಟ್ಟು ಬೇಹದ್ದಿನ ತಂದೆಯ ಮಾತನ್ನು ಪಾಲಿಸಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಪ ಸಮಾನವಾಗಿರಬೇಕು.

2. ಈ ವಿಭಿನ್ನ ವಿರಾಟ ರೂಪದ ಲೀಲೆಯನ್ನು ಬಹಳ ಚೆನ್ನಾಗಿ ಅರಿತುಕೊಳ್ಳಬೇಕಾಗಿದೆ. ಇದರಲ್ಲಿ ಪಾತ್ರವನ್ನಭಿಯಿಸುವಂತಹ ಆತ್ಮವು ನಿರ್ಲೇಪವಲ್ಲ. ಅದು ಒಳ್ಳೆಯ - ಕೆಟ್ಟ ಕರ್ಮ ಮಾಡುತ್ತದೆ ಮತ್ತು ಅದರ ಫಲವನ್ನು ಪಡೆಯುತ್ತದೆ. ಈ ರಹಸ್ಯವನ್ನು ಅರಿತುಕೊಂಡು ಶ್ರೇಷ್ಠ ಕರ್ಮವನ್ನು ಮಾಡಬೇಕಾಗಿದೆ.

ವರದಾನ:
ಆತ್ಮೀಯ ಶಕ್ತಿಯ ಜೊತೆ ನಿರಹಂಕಾರಿಗಳಾಗಿ ಸತ್ಯ ಜ್ಞಾನದ ಪ್ರತ್ಯಕ್ಷ ಸ್ವರೂಪ ತೋರಿಸುವಂತಹ ಸತ್ಯ ಸೇವಾಧಾರಿ ಭವ.

ಹೇಗೆ ವೃಕ್ಷದಲ್ಲಿ ಯಾವಾಗ ಸಂಪೂರ್ಣ ಫಲ ಕೊಡುವ ಶಕ್ತಿ ಬರುತ್ತದೆ ಆಗ ವೃಕ್ಷ ಬಾಗುತ್ತದೆ ಅರ್ಥಾತ್ ನಿರ್ಮಾಣವಾಗುವ ಸೇವೆ ಮಾಡುತ್ತದೆ. ಇಂತಹ ಆತ್ಮೀಯ ಶಕ್ತಿವುಳ್ಳಂತ ಮಕ್ಕಳು ಎಷ್ಟು ದೊಡ್ಡ ಶಕ್ತಿ ಅಷ್ಟು ದೊಡ್ಡ ನಿರ್ಮಾಣತೆ ಮತ್ತು ಸರ್ವರ ಸ್ನೇಹಿಯಾಗಿರುತ್ತಾರೆ. ಅಲ್ಪಕಾಲದ ಶಕ್ತಿಯುಳ್ಳವರು ಅಹಂಕಾರಿಗಳಾಗಿರುತ್ತಾರೆ ಆದರೆ ಸತ್ಯತೆಯ ಶಕ್ತಿವುಳ್ಳವರು ಶಕ್ತಿಯ ಜೊತೆ ನಿರಹಂಕಾರಿಗಳಾಗುತ್ತಾರೆ - ಇದೇ ಸತ್ಯ ಜ್ಞಾನದ ಪ್ರತ್ಯಕ್ಷ ಸ್ವರೂಪವಾಗಿದೆ. ಸತ್ಯ ಸೇವಾಧಾರಿಯ ವೃತ್ತಿಯಲ್ಲಿ ಎಷ್ಟು ಶಕ್ತಿ ಇರುತ್ತದೆ ಅವರ ವಾಣಿಯಲ್ಲಿ ಅಷ್ಟೇ ಸ್ನೇಹ ಮತ್ತು ನಮ್ರತೆ ಇರುವುದು.

ಸ್ಲೋಗನ್:
ತ್ಯಾಗವಿಲ್ಲದೆ ಭಾಗ್ಯ ಸಿಗುವುದಿಲ್ಲ.