25.03.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ರಾಯಲ್ ಕುಲದ ರಾಯಲ್ ವಿದ್ಯಾರ್ಥಿಗಳಾಗಿದ್ದೀರಿ, ನಿಮ್ಮ ಚಲನೆ ಬಹಳ ರಾಯಲ್ ಆಗಿರಬೇಕು, ಆಗಲೇ
ತಂದೆಯನ್ನು ಪ್ರತ್ಯಕ್ಷ ಮಾಡಲು ಸಾಧ್ಯ.”
ಪ್ರಶ್ನೆ:
ವಿನಾಶದ
ಸಮಯದಲ್ಲಿ ಅಂತಿಮ ಪೇಪರ್ನಲ್ಲಿ ಯಾರು ಉತ್ತೀರ್ಣರಾಗುತ್ತಾರೆ? ಅದಕ್ಕಾಗಿ ಯಾವ ಪುರುಷಾರ್ಥ ಮಾಡಬೇಕು?
ಉತ್ತರ:
ತಂದೆಯ ವಿನಃ
ಹಳೆಯ ಪ್ರಪಂಚದ ಯಾವುದೇ ವಸ್ತುವೂ ಸಹ ನೆನಪು ಬರದೇ ಇರುವವರೇ ಅಂತಿಮ ಪೇಪರಿನಲ್ಲಿ ೀರ್ಣರಾಗಬಹುದು.
ಒಂದುವೇಳೆ ನೆನಪು ಬಂದರೆ ಅನುತ್ತೀರ್ಣರಾಗುತ್ತೀರಿ. ಇದಕ್ಕಾಗಿ ಬೇಹದ್ದಿನ ಪ್ರಪಂಚದ ಮಮತ್ವವನ್ನು
ತೆಗೆಯಬೇಕು. ಸಹೋದರ-ಸಹೊದರನ ಸ್ಥಿತಿಯು ಪಕ್ಕಾ ಆಗಿರಬೇಕು, ದೇಹಾಭಿಮಾನ ತುಂಡರಿಸಬೇಕು.
ಓಂ ಶಾಂತಿ.
ನಾವೆಷ್ಟು ರಾಯಲ್ ವಿದ್ಯಾರ್ಥಿಗಳಾಗಿದ್ದೇವೆ ಎಂದು ಮಕ್ಕಳಿಗೆ ಸದಾ ಈ ನಶೆಯಿರಬೇಕು. ಬೇಹದ್ದಿನ
ಮಾಲೀಕ ನಮಗೆ ಓದಿಸುತ್ತಿದ್ದಾರೆ. ನೀವೆಷ್ಟು ಶ್ರೇಷ್ಠ ಕುಲದ ರಾಯಲ್ ವಿದ್ಯಾರ್ಥಿಗಳಾಗಿದ್ದೀರಿ,
ಆದ್ದರಿಂದ ರಾಯಲ್ ವಿದ್ಯಾರ್ಥಿಗಳ ಚಲನೆಯೂ ಸಹ ರಾಯಲ್ ಆಗಿರಬೇಕು, ಆಗಲೇ ತಂದೆಯನ್ನು ಪ್ರತ್ಯಕ್ಷ
ಮಾಡಲು ಸಾಧ್ಯ. ನೀವು ಶ್ರೀಮತದ ಆಧಾರದಿಂದ ವಿಶ್ವದಲ್ಲಿ ಶಾಂತಿಯನ್ನು ಸ್ಥಾಪನೆ ಮಾಡುವುದಕ್ಕಾಗಿ
ನಿಮಿತ್ತರಾಗಿದ್ದೀರಿ. ನಿಮಗೆ ಶಾಂತಿಯ ಪುರಸ್ಕಾರ ಸಿಗುತ್ತದೆ. ಅದು ಒಂದು ಜನ್ಮಕ್ಕಾಗಿ ಅಲ್ಲ.
ಜನ್ಮ-ಜನ್ಮಾಂತರಕ್ಕಾಗಿ ಸಿಗುತ್ತದೆ. ಮಕ್ಕಳು ತಂದೆಗೆ ಧನ್ಯವಾದಗಳನ್ನೇನು ಹೇಳುತ್ತೀರಿ! ತಂದೆಯು
ತಾವೇ ಬಂದು ಅಂಗೈಯಲ್ಲಿ ಸ್ವರ್ಗವನ್ನು ಕೊಡುತ್ತಾರೆ. ತಂದೆಯು ಬಂದು ಇದನ್ನು ಕೊಡುತ್ತಾರೆಂದು
ಮಕ್ಕಳಿಗೆ ತಿಳಿದಿತ್ತೆ? ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ. ನೆನಪು
ಮಾಡುವುದಕ್ಕೆ ಹೇಳುತ್ತಾರೆ ಏಕೆಂದರೆ ನೆನಪಿನಿಂದಲೇ ವಿಕರ್ಮ ವಿನಾಶವಾಗಬೇಕು. ಬೇಹದ್ದಿನ ತಂದೆಯ
ಪರಿಚಯ ಸಿಕ್ಕಿತು ಮತ್ತು ನಿಶ್ಚಯವಾಯಿತು. ಕಷ್ಟದ ಯಾವುದೇ ಮಾತಿಲ್ಲ. ಭಕ್ತಿ ಮಾರ್ಗದಲ್ಲಿ
ತಂದೆ-ತಂದೆ ಎಂದು ಹೇಳುತ್ತಿರುತ್ತಾರೆ ಅಂದಾಗ ಅವಶ್ಯವಾಗಿ ತಂದೆಯಿಂದ ಯಾವುದಾದರೂ ಆಸ್ತಿಯು
ಸಿಗುತ್ತದೆಯಲ್ಲವೆ. ನಿಮಗೆ ಪುರುಷಾರ್ಥಕ್ಕೆ ಅವಕಾಶವೂ ಇದೆ. ಶ್ರೀಮತದಂತೆ ಎಷ್ಟು ಪುರುಷಾರ್ಥ
ಮಾಡುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ತಂದೆ, ಶಿಕ್ಷಕ, ಸದ್ಗುರು - ಮೂವರ
ಶ್ರೀಮತವು ಸಿಗುತ್ತದೆ, ಅವರ ಮತದಂತೆ ನಡೆಯಬೇಕಾಗಿದೆ. ತಮ್ಮ ಮನೆಯಲ್ಲಿಯೇ ಇರಿ ಆದರೆ ಮತದಂತೆ
ನಡೆಯುವುದರಿಂದಲೇ ವಿಘ್ನಗಳು ಬೀಳುತ್ತವೆ. ಮಾಯೆಯ ಮೊದಲ ವಿಘ್ನವೇ ದೇಹಾಭಿಮಾನವಾಗಿದೆ. ಆದ್ದರಿಂದ
ತಂದೆಯು ಹೇಳುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ ಅಂದಮೇಲೆ ಶ್ರೀಮತವನ್ನೇಕೆ
ಒಪ್ಪುವುದಿಲ್ಲ? ಬಾಬಾ, ನಾವು ಪ್ರಯತ್ನ ಪಡುತ್ತೇವೆ ಆದರೆ ಮಾಯೆಯು ಮಾಡಲು ಬಿಡುವುದಿಲ್ಲವೆಂದು
ಮಕ್ಕಳು ಹೇಳುತ್ತಾರೆ. ವಿದ್ಯಾಭ್ಯಾಸದಲ್ಲಿ ವಿಶೇಷ ಪುರುಷಾರ್ಥವಿರಬೇಕು. ಯಾರು ಒಳ್ಳೆಯ
ಮಕ್ಕಳಿರುತ್ತಾರೆಯೋ ಅವರನ್ನು ಅನುಸರಿಸಬೇಕು. ಎಲ್ಲರೂ ಇದೇ ಪುರುಷಾರ್ಥವನ್ನು ಮಾಡುತ್ತೀರಿ - ನಾವು
ತಂದೆಯಿಂದ ಆಸ್ತಿಯನ್ನು ಪಡೆಯಬೇಕು, ಮುಳ್ಳುಗಳಿಂದ ಹೂಗಳಾಗಲು ನೆನಪಿನ ಬಹಳ ಅವಶ್ಯಕತೆಯಿದೆ. ಪಂಚ
ವಿಕಾರಗಳು ಮುಳ್ಳುಗಳು ಹೊರಟು ಹೋದರೆ ಹೂಗಳಾಗಿ ಬಿಡುತ್ತೀರಿ. ಅವು ಯೋಗಬಲದಿಂದಲೇ ಅವು ಹೊರಟು
ಹೋಗುತ್ತವೆ. ಇಂತಹವರು ಹೀಗೆ ಹೊರಟು ಹೋದರು, ಬಹುಷಃ ನಾವು ಹೊರಟು ಹೋಗುತ್ತೇವೇನೋ ಎಂದು ಕೆಲವರು
ಯೋಚಿಸುತ್ತಾರೆ ಆದರೆ ಅವರನ್ನು ನೋಡಿ ಇನ್ನೂ ಹೆಚ್ಚಿನ ಪುರುಷಾರ್ಥವನ್ನು ಮಾಡಬೇಕಲ್ಲವೆ. ಶರೀರ
ಬಿಟ್ಟರೆ ತಂದೆಯ ನೆನಪಿರಲಿ, ವಶೀಕರಣ ಮಂತ್ರ ನೆನಪಿರಲಿ. ಒಬ್ಬ ತಂದೆಯ ವಿನಃ ಮತ್ತೇನೂ
ನೆನಪಿರಬಾರದು ಆಗ ಪ್ರಾಣವು ಶರೀರದಿಂದ ಹೋಗಬೇಕು. ಬಾಬಾ, ನಾವು ತಮ್ಮ ಬಳಿ ಬಂದೆವೆಂದರೆ ಬಂದೆವು.
ಈ ರೀತಿ ತಂದೆಯನ್ನು ನೆನಪು ಮಾಡುವುದರಿಂದ ಯಾವ ಕೊಳಕು ತುಂಬಿದೆಯೋ ಅದೆಲ್ಲವೂ ಭಸ್ಮವಾಗಿ
ಬಿಡುತ್ತದೆ. ಆತ್ಮದಲ್ಲಿದ್ದರೆ ಶರೀರದಲ್ಲೂ ಸಹ ಎಂದು ಹೇಳುತ್ತಾರೆ, ಜನ್ಮ-ಜನ್ಮಾಂತರದ ಕೊಳಕಿದೆ
ಅದೆಲ್ಲವನ್ನೂ ಸುಡಬೇಕಾಗಿದೆ. ಯಾವಾಗ ನಿಮ್ಮ ಪಂಚ ವಿಕಾರಗಳ ಕೊಳಕು ಸುಟ್ಟು ಹೋಗುವುದೋ ಆಗ
ಪ್ರಪಂಚವು ಸ್ವಚ್ಛವಾಗುತ್ತದೆ. ನಿಮಗಾಗಿ ಪ್ರಪಂಚದಿಂದ ಎಲ್ಲಾ ಕೊಳಕು ಸಮಾಪ್ತಿಯಾಗಬೇಕಾಗಿದೆ. ನೀವು
ಕೇವಲ ತಮ್ಮಲ್ಲಿರುವ ಕೊಳಕನ್ನು ಸ್ವಚ್ಛ ಮಾಡಿ ಎಂದೇ ತಂದೆಯನ್ನು ಕರೆಯುತ್ತಾರೆ. ಇಡೀ ವಿಶ್ವವನ್ನು
ಪವಿತ್ರವನ್ನಾಗಿ ಮಾಡಿ ಎನ್ನುತ್ತಾರೆ. ಯಾರಿಗಾಗಿ? ಆ ಪವಿತ್ರ ಪ್ರಪಂಚದಲ್ಲಿ ನೀವು ಮಕ್ಕಳೇ ಮೊಟ್ಟ
ಮೊದಲು ರಾಜ್ಯ ಮಾಡಲು ಬರುತ್ತೀರಿ ಅಂದಮೇಲೆ ತಂದೆಯು ನಿಮಗಾಗಿಯೇ ನಿಮ್ಮ ದೇಶದಲ್ಲಿ ಬಂದಿದ್ದಾರೆ.
ಭಕ್ತಿ ಮತ್ತು ಜ್ಞಾನದಲ್ಲಿ ಬಹಳ ವ್ಯತ್ಯಾಸವಿದೆ. ಭಕ್ತಿಯಲ್ಲಿ ಎಷ್ಟು ಒಳ್ಳೊಳ್ಳೆಯ ಗೀತೆಗಳನ್ನು
ಹಾಡುತ್ತಾರೆ. ಆದರೆ ಯಾರ ಕಲ್ಯಾಣವನ್ನೂ ಮಾಡುವುದಿಲ್ಲ. ತಮ್ಮ ಸ್ವಧರ್ಮದಲ್ಲಿ ಸ್ಥಿತರಾಗುವುದರಿಂದ
ಮತ್ತು ತಂದೆಯನ್ನು ನೆನಪು ಮಾಡುವುದರಲ್ಲಿಯೇ ಕಲ್ಯಾಣವಿದೆ. ನಿಮ್ಮ ನೆನಪು ಹೀಗಿರಬೇಕು ಹೇಗೆ
ಲೈಟ್ಹೌಸ್ ತಿರುಗುವಂತಿರಬೇಕು. ಸ್ವದರ್ಶನವನ್ನೇ ಲೈಟ್ಹೌಸ್ (ಪ್ರಕಾಶ ಗೃಹ) ಎನ್ನುತ್ತಾರೆ. ನೀವು
ಮಕ್ಕಳು ಆಂತರ್ಯದಲ್ಲಿ ತಿಳಿಯುತ್ತೀರಿ- ಬಾಪ್ದಾದಾರವರಿಂದ ನಮಗೆ ಸ್ವರ್ಗದ ಆಸ್ತಿಯು ಸಿಗುತ್ತದೆ.
ಇದೇ ಸತ್ಯ ನಾರಾಯಣನ ಕಥೆ, ನರನಿಂದ ನಾರಾಯಣನಾಗುವ ಕಥೆಯಾಗಿದೆ. ತಂದೆಯು ತಿಳಿಸುತ್ತಾರೆ - ನಿಮ್ಮ
ಆತ್ಮವು ಯಾವುದು ತಮೋಪ್ರಧಾನವಾಗಿದೆಯೋ ಅದನ್ನು ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ. ಸತ್ಯಯುಗದಲ್ಲಿ
ಸತೋಪ್ರಧಾನರಾಗಿದ್ದೆವು. ಈಗ ಮತ್ತೆ ಸತೋಪ್ರಧಾನರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ತಂದೆಯು
ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದಲೇ ನೀವು ಸತೋಪ್ರಧಾನರಾಗಿ ಬಿಡುತ್ತೀರಿ. ತಂದೆಯೂ
ಗೀತೆಯನ್ನು ತಿಳಿಸಿದ್ದರು, ಈಗ ಮನುಷ್ಯರು ತಿಳಿಸುತ್ತಾರೆ ಅಂದಾಗ ಎಷ್ಟೊಂದು ವ್ಯತ್ಯಾಸವಾಗಿ
ಬಿಟ್ಟಿದೆ. ಭಗವಂತನಂತೂ ಭಗವಂತನೇ ಆಗಿದ್ದಾರೆ ಅವರೇ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ.
ಹೊಸ ಪ್ರಪಂಚದಲ್ಲಿ ಪವಿತ್ರ ದೇವತೆಗಳಿರುತ್ತಾರೆ, ಬೇಹದ್ದಿನ ತಂದೆಯು ಹೊಸ ಪ್ರಪಂಚದ ಆಸ್ತಿಯನ್ನು
ಕೊಡುವವರಾಗಿದ್ದಾರೆ. ತಂದೆಯನ್ನು ನೆನಪು ಮಾಡುತ್ತಾ ಇರಿ ಆಗ ಅಂತ್ ಮತಿ ಸೋ ಗತಿಯಾಗಿ ಬಿಡುವುದು.
ಏಕೆಂದರೆ ನಿಮಗೆ ಗೊತ್ತಿದೆ - ತಂದೆಯು ಸಂಗಮಯುಗದಲ್ಲಿ ಪುರುಷೋತ್ತಮರನ್ನಾಗಿ ಮಾಡಲು ಬರುತ್ತಾರೆ.
ಈಗ ಈ 84 ಜನ್ಮಗಳ ಚಕ್ರವು ಪೂರ್ಣವಾಗುತ್ತದೆ ಮತ್ತೆ ಪ್ರಾರಂಭವಾಗುತ್ತದೆ. ಇದೂ ಸಹ ಖುಷಿಯಿರಬೇಕು.
ಪ್ರದರ್ಶನಿಯಲ್ಲಿ ಯಾರು ಬರುತ್ತಾರೆಯೋ ಅವರನ್ನು ಮೊದಲು ಶಿವ ತಂದೆಯ ಚಿತ್ರದ ಮುಂದೆ ಕರೆ ತನ್ನಿ.
ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನೀವು ಈ ರೀತಿ (ದೇವತೆ) ಆಗಿ
ಬಿಡುತ್ತೀರಿ. ತಂದೆಯಿಂದ ಸತ್ಯಯುಗದ ಆಸ್ತಿಯು ಸಿಗುತ್ತದೆ. ಭಾರತವು ಸತ್ಯಯುಗವಾಗಿತ್ತು ಈಗಿಲ್ಲ.
ಮತ್ತೆ ಆಗಬೇಕಾಗಿದೆ ಆದ್ದರಿಂದ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಆಗ ಅಂತ್ ಮತಿ ಸೋ
ಗತಿಯಾಗುವುದು. ಇವರು ಸತ್ಯ ತಂದೆಯಾಗಿದ್ದಾರೆ, ಇವರ ಮಕ್ಕಳಾಗುವುದರಿಂದಲೇ ನೀವು ಸತ್ಯ ಖಂಡ
ಮಾಲೀಕರಾಗುತ್ತೀರಿ. ಮೊಟ್ಟ ಮೊದಲು ತಂದೆಯನ್ನು ಪಕ್ಕಾ ಮಾಡಿಸಿ. ತಂದೆ ಮತ್ತು ಆಸ್ತಿ. ತಂದೆಯನ್ನು
ನೆನಪು ಮಾಡಿ, ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಸ್ವರ್ಗದಲ್ಲಿ
ಹೋಗುತ್ತೀರಿ. ಇದು ಎಷ್ಟೊಂದು ಸಹಜವಾದ ಮಾತಾಗಿದೆ. ಜನ್ಮ-ಜನ್ಮಾಂತರದಿಂದ ನೀವು ಭಕ್ತಿಯ
ಮಾತುಗಳನ್ನು ಕೇಳುತ್ತಾ-ಕೇಳುತ್ತಾ ಬುದ್ಧಿಗೆ ಮಾಯೆಯ ಬೀಗ ಹಾಕಲ್ಪಟ್ಟಿದೆ. ತಂದೆಯೇ ಬಂದು ಬೀಗದ
ಕೈಯಿಂದ ಬೀಗವನ್ನು ತೆರೆಯುತ್ತಾರೆ. ಈ ಸಮಯದಲ್ಲಿ ಎಲ್ಲರ ಕಿವಿಗಳು ಮುಚ್ಚಿ ಹೋಗಿವೆ, ಕಲ್ಲು
ಬುದ್ಧಿಯವರಾಗಿದ್ದಾರೆ. ನೀವು ಬರೆಯುತ್ತೀರಿ - ಶಿವ ತಂದೆಯ ನೆನಪಿದೆಯೇ? ಸ್ವರ್ಗದ ಆಸ್ತಿಯ
ನೆನಪಿದೆಯೇ? ರಾಜ್ಯಭಾಗ್ಯವನ್ನು ನೆನಪು ಮಾಡುವುದರಿಂದ ಮುಖವು ಮಧುರವಾಗುತ್ತದೆಯಲ್ಲವೆ. ತಂದೆಯು
ತಿಳಿಸುತ್ತಾರೆ - ನಾನು ನೀವು ಮಕ್ಕಳಿಗೆ ಎಷ್ಟೊಂದು ಉಪಕಾರ ಮಾಡುತ್ತೇನೆ ಆದರೆ ನೀವು ಅಪಕಾರ
ಮಾಡುತ್ತಲೇ ಬಂದಿದ್ದೀರಿ. ಇದೂ ನಾಟಕದಲ್ಲಿ ನಿಗಧಿಯಾಗಿದೆ ಯಾರದೂ ದೋಷವಿಲ್ಲ. ನೀವು ಮಕ್ಕಳ ಈ
ಯಂತ್ರವು ಕಲ್ಲು ಬುದ್ಧಿಯವರನ್ನು ಪಾರಸ ಬುದ್ಧಿಯವರನ್ನಾಗಿ, ಮುಳ್ಳುಗಳನ್ನು ಹೂಗಳನ್ನಾಗಿ
ಮಾಡುವುದಕ್ಕಾಗಿ ಇದೆ. ಈ ನಿಮ್ಮ ಯಂತ್ರವು ಆರಂಭವಾಗಿದೆ. ಎಲ್ಲರೂ ಒಬ್ಬರು ಇನ್ನೊಬ್ಬರನ್ನು
ಮುಳ್ಳುಗಳಿಂದ ಹೂಗಳನ್ನಾಗಿ ಮಾಡುತ್ತಿದ್ದಾರೆ. ಅವರನ್ನೂ ಈ ರೀತಿ ಮಾಡುವಂತಹ ಸುಗಂಧ ರಾಜ ಹೂವಿನ
ರಾಜನಿರಬೇಕು. ಸ್ವರ್ಗದ ಸ್ಥಾಪನೆ ಮಾಡುವವರು ಅಥವಾ ಹೂದೋಟವನ್ನು ಮಾಡುವವರು ಒಬ್ಬರೇ
ತಂದೆಯಾಗಿದ್ದಾರೆ. ನೀವು ಈಶ್ವರೀಯ ಸೇವಾಧಾರಿಗಳಾಗಿದ್ದೀರಿ. ತಮೋಪ್ರಧಾನರನ್ನು ಸತೋಪ್ರಧಾನರನ್ನಾಗಿ
ಮಾಡುವುದೇ ಸೇವೆಯಾಗಿದೆ, ಮತ್ತ್ಯಾವುದೇ ತೊಂದರೆಯನ್ನು ಕೊಡುವುದಿಲ್ಲ. ಬಹಳ ಸಹಜವಾಗಿ
ತಿಳಿಸಬೇಕಾಗಿದೆ. ಕಲಿಯುಗದಲ್ಲಿ ತಮೋಪ್ರಧಾನರಿದ್ದಾರೆ. ಒಂದು ವೇಳೆ ಕಲಿಯುಗದ ಆಯಸ್ಸನ್ನು
ಹೆಚ್ಚಿಸಿದರೆ ಇನ್ನೂ ತಮೋಪ್ರಧಾನರಾಗುತ್ತಾರೆ. ನಿಮಗೆ ಗೊತ್ತಿದೆ - ಈಗ ನಮ್ಮನ್ನು ಹೂಗಳನ್ನಾಗಿ
ಮಾಡುವ ತಂದೆಯು ಬಂದಿದ್ದಾರೆ, ಮುಳ್ಳುಗಳನ್ನಾಗಿ ಮಾಡುವುದು ರಾವಣನ ಕೆಲಸವಾಗಿದೆ. ತಂದೆಯು
ಹೂಗಳನ್ನಾಗಿ ಮಾಡುತ್ತಾರೆ. ಯಾರಿಗೆ ಶಿವ ತಂದೆಯ ನೆನಪಿರುವುದೋ ಅವರಿಗೆ ಅವಶ್ಯವಾಗಿ ಸ್ವರ್ಗವು
ನೆನಪಿರುತ್ತದೆ. ಶಾಂತಿ ಯಾತ್ರೆಯನ್ನು ಮಾಡುತ್ತೀರೆಂದರೆ ಅದರಲ್ಲಿಯೂ ನಾವು ಪ್ರಜಾಪಿತ
ಬ್ರಹ್ಮಾಕುಮಾರ ಮತ್ತು ಕುಮಾರಿಯರು ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವನ್ನು ಸ್ಥಾಪನೆ
ಮಾಡುತ್ತಿದ್ದೇವೆಂದು ತೋರಿಸಿ. ನಾವು ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆ. ದೇವತೆಗಳಿಂದ ಮತ್ತೆ
ಕ್ಷತ್ರಿಯ, ವೈಶ್ಯ....... ಇದು ಬಾಜೋಲಿ ಆಟವಾಗಿದೆ. ಅನ್ಯರಿಗೆ ತಿಳಿಸಲು ಬಹಳ ಸಹಜವಾಗಿದೆ. ನಾವು
ಬ್ರಾಹ್ಮಣರಾಗಿದ್ದೇವೆ. ಬ್ರಾಹ್ಮಣರಿಗೆ ಶಿಖೆಯಿರುತ್ತದೆ. ನೀವೂ ಸಹ ಈಗ ತಿಳಿಯುತ್ತೀರಿ - ನಾವು
84 ಜನ್ಮಗಳ ಚಕ್ರವನ್ನು ಸುತ್ತಿದೆವು. ಮಕ್ಕಳಿಗೆ ಎಷ್ಟು ಒಳ್ಳೆಯ ಜ್ಞಾನ ಸಿಗುತ್ತದೆ, ಮತ್ತೆಲ್ಲವೂ
ಭಕ್ತಿಯಾಗಿದೆ. ಜ್ಞಾನವನ್ನು ಒಬ್ಬ ತಂದೆಯೇ ತಿಳಿಸುತ್ತಾರೆ. ಸರ್ವರ ಸದ್ಗತಿದಾತ ತಂದೆಯೊಬ್ಬರೇ
ಆಗಿದ್ದಾರೆ. ಹಾಗೆಯೇ ಪುರುಷೋತ್ತಮ ಸಂಗಮಯುಗವೂ ಒಂದೇ ಆಗಿದೆ. ಈ ಸಮಯದಲ್ಲಿ ತಂದೆಯು ನೀವು
ಮಕ್ಕಳಿಗೆ ಓದಿಸುತ್ತಾರೆ ಮತ್ತೆ ಭಕ್ತಿಯಲ್ಲಿ ಇದರ ನೆನಪಾರ್ಥವು ನಡೆಯುತ್ತದೆ. ತಂದೆಯು ನೀವು
ಮಕ್ಕಳಿಗೆ - ಮಕ್ಕಳೇ ನೀವು ಈ ಪುರುಷಾರ್ಥ ಮಾಡುವುದರಿಂದ ಇಂತಹ ಆಸ್ತಿಯನ್ನು ಪಡೆಯಬಲ್ಲಿರಿ ಎಂದು
ಮಾರ್ಗವನ್ನು ತಿಳಿಸಿದ್ದಾರೆ. ಈ ವಿದ್ಯೆಯು ಬಹಳ ಸಹಜವಾಗಿದೆ. ನರನಿಂದ ನಾರಾಯಣನಾಗುವ
ವಿದ್ಯೆಯಾಗಿದೆ. ಇದಕ್ಕೆ ಕಥೆಯೆಂದು ಹೇಳುವುದು ತಪ್ಪಾಗಿದೆ ಏಕೆಂದರೆ ಕಥೆಯಲ್ಲಿ
ಗುರಿ-ಉದ್ದೇಶವಿರುವುದಿಲ್ಲ. ವಿದ್ಯೆಯಲ್ಲಿ ಒಂದು ಗುರಿಯಿರುತ್ತದೆ. ಅಂದಮೇಲೆ ಇಲ್ಲಿ ನಿಮಗೆ ಯಾರು
ಓದಿಸುತ್ತಾರೆ? ಜ್ಞಾನ ಸಾಗರ ನಾನು ಬಂದು ರತ್ನಗಳಿಂದ ನಿಮ್ಮ ಜೋಳಿಗೆಯನ್ನು ತುಂಬಿಸುತ್ತೇನೆ ಎಂದು
ತಂದೆಯು ಹೇಳುತ್ತಾರೆ. ಅಂದಮೇಲೆ ಇಂತಹ ಬೇಹದ್ದಿನ ತಂದೆಯೊಂದಿಗೆ ಪ್ರಶ್ನೆಗಳನ್ನು ಏನು ಕೇಳುತ್ತೀರಿ
- ಈ ಸಮಯದಲ್ಲಿ ಎಲ್ಲರೂ ಕಲ್ಲು ಬುದ್ಧಿಯವರಾಗಿದ್ದಾರೆ. ರಾವಣನನ್ನೇ ಅರಿತುಕೊಂಡಿಲ್ಲ.
ಮನುಷ್ಯರನ್ನು ಕೇಳಲು ನಿಮಗೆ ಈಗ ತಿಳುವಳಿಕೆ ಸಿಗುತ್ತದೆ. ಅಂದಾಗ ಕೇಳಿ - ಕೊನೆಗೂ ಈ ರಾವಣನು ಯಾರು?
ಇವರ ಜನ್ಮ ಯಾವಾಗ ಆಯಿತು? ಯಾವಾಗಿನಿಂದ ಸುಡುತ್ತೀರಿ? ಇದಕ್ಕೆ ಅವರು ಅನಾದಿಯಾಗಿದೆ ಎಂದು
ಕೇಳುತ್ತಾರೆ. ನೀವು ಅನೇಕ ಪ್ರಕಾರದ ಪ್ರಶ್ನೆಗಳನ್ನು ಕೇಳಬಹುದು. ಅಂತಹ ಸಮಯವು ಬರುತ್ತದೆ. ನೀವು
ಯಾರೂ ಅದಕ್ಕೆ ಪ್ರತ್ಯುತ್ತರ ನೀಡಲು ಆಗುವುದಿಲ್ಲ. ನೀವು ಆತ್ಮಗಳು ನೆನಪಿನ ಯಾತ್ರೆಯಲ್ಲಿ
ತತ್ಪರರಾಗುತ್ತೀರಿ ಅಂದಮೇಲೆ ತಮ್ಮೊಂದಿಗೆ ಕೇಳಿಕೊಳ್ಳಿ - ನಾವು ಸತೋಪ್ರಧಾನರಾಗಿದ್ದೇವೆಯೇ? ನಮ್ಮ
ಹೃದಯವು ಇದಕ್ಕೆ ಸಾಕ್ಷಿ ಕೊಡುತ್ತದೆಯೇ? ಇನ್ನೂ ಕರ್ಮಾತೀತ ಸ್ಥಿತಿಯಂತೂ ಆಗಿಲ್ಲ, ಆಗಬೇಕಾಗಿದೆ.
ಈ ಸಮಯದಲ್ಲಿ ನೀವು ಕೆಲವರೇ ಇದ್ದೀರಿ. ಆದ್ದರಿಂದ ನಿಮ್ಮ ಮಾತನ್ನು ಯಾರೂ ಕೇಳುವುದಿಲ್ಲ ಮತ್ತು
ನಿಮ್ಮ ಮಾತೇ ಭಿನ್ನವಾಗಿದೆ. ಮೊಟ್ಟ ಮೊದಲು ತಿಳಿಸಿ - ತಂದೆಯು ಸಂಗಮಯುಗದಲ್ಲಿ ಬರುತ್ತಾರೆ.
ಯಾವಾಗ ಒಂದೊಂದು ಮಾತನ್ನು ತಿಳಿದುಕೊಳ್ಳುತ್ತಾರೆಯೋ ಆಗ ನಿಮ್ಮ ಮಾತುಗಳನ್ನು ಮುಂದುವರೆಸಿ. ಬಹಳ
ತಾಳ್ಮೆಯಿಂದ ಪ್ರೀತಿಯಿಂದ ತಿಳಿಸಿ ಕೊಡಬೇಕು - ನಿಮಗೆ ಇಬ್ಬರು ತಂದೆಯರಿದ್ದಾರೆ, ಲೌಕಿಕ ಮತ್ತು
ಪಾರಲೌಕಿಕ. ಯಾವಾಗ ಸತೋಪ್ರಧಾನರಾಗುತ್ತೀರೋ ಆಗ ಪಾರಲೌಕಿಕ ತಂದೆಯಿಂದ ಅಪರಿಮಿತವಾದ ಆಸ್ತಿಯು
ಸಿಗುತ್ತದೆ. ತಂದೆಯ ನೆನಪಿದ್ದರೆ ಖುಷಿಯ ನಶೆಯೇರುತ್ತದೆ. ನೀವು ಮಕ್ಕಳಲ್ಲಿ ಬಹಳಷ್ಟು ಗುಣಗಳನ್ನು
ತುಂಬಲಾಗುತ್ತದೆ. ನೀವು ಮಕ್ಕಳಿಗೆ ತಂದೆಯೇ ಬಂದು ವಿದ್ಯಾರ್ಹತೆಯನ್ನು ಕೊಡುತ್ತಾರೆ. ಆರೋಗ್ಯ
ಭಾಗ್ಯವನ್ನೂ ಕೊಡುತ್ತಾರೆ. ಗುಣಗಳನ್ನು ತುಂಬುತ್ತಾರೆ. ಶಿಕ್ಷಣವನ್ನು ಕೊಡುತ್ತಾರೆ ಮತ್ತು ಜೈಲಿನ
ಶಿಕ್ಷೆಗಳಿಂದಲೂ ಬಿಡಿಸುತ್ತಾರೆ. ನೀವು ಮಂತ್ರಿಗಳಿಗೂ ಸಹ ಬಹಳ ಚೆನ್ನಾಗಿ ತಿಳಿಸಬಹುದು. ಈ ರೀತಿ
ತಿಳಿಸಿಕೊಡಬೇಕು - ಅವರು ನೀರಿನಂತೆ ಕರಗಿ ಬಿಡಬೇಕು. ನಿಮ್ಮ ಜ್ಞಾನವು ಬಹಳ ಮಧುರವಾಗಿದೆ ಎಂದು
ಹೇಳಿ. ಪ್ರೇಮದಿಂದ ಕುಳಿತು ಕೇಳಿದರೆ ಪ್ರೇಮದ ಕಣ್ಣೀರು ಬಂದು ಬಿಡಬೇಕು. ಯಾವಾಗಲೂ ನಾವು ನಮ್ಮ
ಸಹೋದರಿಗೆ ಮಾರ್ಗವನ್ನು ತಿಳಿಸುತ್ತಿದ್ದೇವೆ ಎಂಬ ದೃಷ್ಟಿಯಿಂದ ನೋಡಿ. ತಿಳಿಸಿ, ನಾವು
ಶ್ರೀಮತದಿಂದ ಭಾರತದ ಸತ್ಯ ಸೇವೆಯನ್ನು ಮಾಡುತ್ತಿದ್ದೇವೆ. ಭಾರತದ ಸೇವೆಯಲ್ಲಿಯೇ ಹಣ
ತೊಡಗಿಸುತ್ತೇವೆ. ತಂದೆಯೇ ತಿಳಿಸುತ್ತಾರೆ. ದೆಹಲಿಯಲ್ಲಿ ಸೇವೆಯ ಮುತ್ತಿಗೆ ಹಾಕಿ, ವಿಸ್ತಾರ ಮಾಡಿ
ಆದರೆ ಇಲ್ಲಿಯವರೆಗೂ ಯಾರಿಗೂ ಜ್ಞಾನದ ಬಾಣವನ್ನು ಹಾಕಿಲ್ಲ. ಅವರನ್ನು ಜ್ಞಾನದ ಬಾಣದಿಂದ ಹೊಡೆಯಲು
ಯೋಗಬಲ ಬೇಕು. ಯೋಗ ಬಲದಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ. ಜೊತೆ-ಜೊತೆಯಲ್ಲಿ ಜ್ಞಾನವು ಇದೆ.
ಯೋಗದಿಂದಲೇ ನೀವು ಅನ್ಯರನ್ನು ಆಕರ್ಷಿಸಲು ಸಾಧ್ಯ. ಈಗ ಮಕ್ಕಳು ಭಾಷಣವನ್ನು ಬಹಳ ಚೆನ್ನಾಗಿ
ಮಾಡುತ್ತೀರಿ ಆದರೆ ಯೋಗದ ಆಕರ್ಷಣೆ ಕಡಿಮೆಯಿದೆ. ಮುಖ್ಯ ಮಾತು ಯೋಗವಾಗಿದೆ. ನೀವು ಮಕ್ಕಳು
ಯೋಗದಿಂದ ತಮ್ಮನ್ನು ಪವಿತ್ರರನ್ನಾಗಿ ಮಾಡಿಕೊಳ್ಳುತ್ತೀರಿ. ಅಂದಮೇಲೆ ಯೋಗಬಲವು ಬಹಳ ಬೇಕಲ್ಲವೆ
ಆದರೆ ಅದರಲ್ಲಿಯೇ ಬಹಳ ಕಡಿಮೆಯಿದೆ. ಖುಷಿಯಲ್ಲಿ ನರ್ತಿಸಬೇಕು, ಇದು ಖುಷಿಯ ನರ್ತನವಾಗಿದೆ. ಈ
ಜ್ಞಾನ-ಯೋಗದಿಂದ ನಿಮ್ಮಲ್ಲಿ ನರ್ತನವಾಗುತ್ತದೆ. ತಂದೆಯ ನೆನಪಿನಲ್ಲಿ ಇರುತ್ತಾ-ಇರುತ್ತಾ ನೀವು
ಅಶರೀರಿಗಳಾಗಿ ಬಿಡುತ್ತೀರಿ. ಜ್ಞಾನದಿಂದ ಅಶರೀರಿ ಆಗಬೇಕಾಗಿದೆ. ಇದರಲ್ಲಿ ಮರೆಯಾಗುವ ಮಾತಿಲ್ಲ.
ಬುದ್ಧಿಯಲ್ಲಿ ಜ್ಞಾನವಿರಬೇಕು. ಈಗ ಮನೆಗೆ ಹೋಗಬೇಕಾಗಿದೆ. ಮತ್ತೆ ರಾಜಧಾನಿಯಲ್ಲಿ ಬರುತ್ತೇವೆ.
ತಂದೆಯೇ ವಿನಾಶ ಮತ್ತು ಸ್ಥಾಪನೆಯ ಸಾಕ್ಷಾತ್ಕಾರವನ್ನು ಮಾಡಿಸುತ್ತಾರೆ. ಈ ಪ್ರಪಂಚವೆಲ್ಲವೂ ಸುಟ್ಟು
ಹೋಗಿದೆ, ನಾವು ಹೊಸ ಪ್ರಪಂಚಕ್ಕೆ ಯೋಗ್ಯರಾಗುತ್ತಿದ್ದೇವೆ. ಈಗ ಮನೆಗೆ ಹೋಗಬೇಕಾಗಿದೆ ಆದ್ದರಿಂದ
ಶರೀರದಲ್ಲಿಯೂ ಯಾವುದೇ ಮಮತ್ವವಿರಬಾರದು. ಈ ಶರೀರದಿಂದ, ಪ್ರಪಂಚದಿಂದ ಭಿನ್ನರಾಗಿರಬೇಕು. ಕೇವಲ
ತಮ್ಮ ಮನೆಯನ್ನು ಮತ್ತು ರಾಜಧಾನಿಯನ್ನು ನೆನಪು ಮಾಡಬೇಕು. ಯಾವುದೇ ವಸ್ತುವಿನಲ್ಲಿ
ಆಸಕ್ತಿಯಿರಬಾರದು. ವಿನಾಶವೂ ಸಹ ಬಹಳ ಕಠಿಣವಾಗಿ ಆಗುವುದಿದೆ. ಯಾವಾಗ ವಿನಾಶವಾಗಲು
ಪ್ರಾರಂಭವಾಗುವುದೋ ಆಗ ನಾವೀಗ ಇಲ್ಲಿಂದ ಹೋದೆವೆಂದರೆ ಹೋದೆವು ಬಹಳ ಖುಷಿಯಿರುತ್ತದೆ. ಒಂದು ವೇಳೆ
ಹಳೆಯ ಪ್ರಪಂಚದ ಯಾವುದೇ ಪದಾರ್ಥವು ನೆನಪಿಗೆ ಬಂದಿತೆಂದರೆ ಅನುತ್ತೀರ್ಣರಾಗುತ್ತೀರಿ. ಮಕ್ಕಳ ಬಳಿ
ಏನೂ ಇಲ್ಲವೆಂದರೆ ನೆನಪಿಗೆ ಬರುವುದಾದರೂ ಏನು? ಬೇಹದ್ದಿನ ಇಡೀ ಪ್ರಪಂಚದಿಂದ ಮಮತ್ವವನ್ನು
ಕಳೆಯಬೇಕು. ಇದರಲ್ಲಿಯೇ ಪರಿಶ್ರಮವಿದೆ. ಯಾವಾಗ ದೇಹದ ಅಭಿಮಾನವು ದೂರವಾಗುವುದೋ ಆಗಲೇ
ಸಹೋದರ-ಸಹೋದರನೆಂಬ ಸ್ಥಿತಿಯು ಪಕ್ಕ ಇರುತ್ತದೆ. ದೇಹದ ಅಭಿಮಾನದಲ್ಲಿ ಬರುವುದರಿಂದಲೇ
ಯಾವುದಾದರೊಂದು ನಷ್ಟವಾಗುತದೆ. ಆತ್ಮಾಭಿಮಾನಿ ಆಗುವುದರಿಂದ ನಷ್ಟವಾಗುವುದಿಲ್ಲ. ನಾವು ಸಹೋದರರಿಗೆ
ಓದಿಸುತ್ತೇವೆ, ಸಹೋದರರೊಂದಿಗೆ ಮಾತನಾಡುತ್ತೇವೆ. ಇದು ಪಕ್ಕಾ ಸ್ವಭಾವವಾಗಿ ಬಿಡಬೆಕು. ಒಂದು ವೇಳೆ
ವಿದ್ಯಾರ್ಥಿ ವೇತನವನ್ನು ಪಡೆಯಬೇಕೆಂದರೆ ಇಷ್ಟೊಂದು ಪುರುಷಾರ್ಥವನ್ನು ಮಾಡಬೇಕಾಗಿದೆ. ಅನ್ಯರಿಗೆ
ತಿಳಿಸುವ ಸಮಯದಲ್ಲಿಯೂ ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ ಎಂಬ ನೆನಪಿರಲಿ. ಎಲ್ಲಾ ಆತ್ಮಗಳು
ಒಬ್ಬ ತಂದೆಯ ಮಕ್ಕಳಾಗಿದ್ದೇವೆ, ಎಲ್ಲಾ ಸಹೋದರರಿಗೆ ತಂದೆಯ ಆಸ್ತಿಯ ಮೇಲೆ ಅಧಿಕಾರವಿದೆ. ಸಹೋದರಿ
ಎಂಬ ಪರಿವೆಯು ಬರಬಾರದು. ಇದಕ್ಕೇ ಆತ್ಮಾಭಿಮಾನಿ ಸ್ಥಿತಿ ಎಂದು ಹೇಳಲಾಗುತ್ತದೆ. ಆತ್ಮಕ್ಕೆ ಈ
ಶರೀರವು ಸಿಕ್ಕಿದೆ ಅದರಲ್ಲಿ ಕೆಲವರದು ಪುರುಷರ ಹೆಸರು ಕೆಲವರದು ಸ್ತ್ರೀಯರ ಹೆಸರು ಬಂದಿದೆ.
ಅದಕ್ಕಿಂತ ಮೇಲೆ ಹೋದಾಗ ಆತ್ಮವೇ ಉಳಿಯುತ್ತದೆ ಅಂದಮೇಲೆ ವಿಚಾರ ಮಾಡಬೇಕು - ತಂದೆಯು ಯಾವ
ಮಾರ್ಗವನ್ನು ತಿಳಿಸುತ್ತಾರೆಯೋ ಅದು ಸರಿಯಾಗಿದೆ. ಇಲ್ಲಿ ಮಕ್ಕಳು ಅಭ್ಯಾಸ ಮಾಡುವುದಕ್ಕಾಗಿಯೇ
ಬರುತ್ತೀರಿ. ರೈಲಿನಲ್ಲಿಯೂ ಸಹ ಬ್ಯಾಡ್ಜ್ ನ ಬಗ್ಗೆ ತಿಳಿಸಬಹುದು. ಪರಸ್ಪರ ಕೇಳಿ - ನಿಮಗೆ ಎಷ್ಟು
ಜನ ತಂದೆಯರಿದ್ದಾರೆ? ನಂತರ ಉತ್ತರ ಹೇಳಿ. ಇದು ಅನ್ಯರ ಗಮನವನ್ನು ಸೆಳೆಯುವ ಯುಕ್ತಿಯಾಗಿದೆ. ನಿಮಗೆ
ಇಬ್ಬರು ತಂದೆಯರಿದ್ದಾರೆ, ನಮಗೆ ಮೂರು ಜನ ತಂದೆಯರಿದ್ದಾರೆ. ಈ ಅಲೌಕಿಕ ತಂದೆಯ ಮೂಲಕ ನಮಗೆ
ಆಸ್ತಿಯು ಸಿಗುತ್ತದೆ. ನಿಮ್ಮ ಬಳಿ ಬಹಳ ಸುಂದರವಾದ ವಸ್ತುವಿದೆ. ಇದರಿಂದ ನಮಗೇನು ಲಾಭ ಎಂದು
ಯಾರಾದರೂ ಕೇಳಿದರೆ ತಿಳಿಸಿ, ಕುರುಡರಿಗೆ ಊರುಗೋಲಾಗಿ ಎಲ್ಲರಿಗೂ ಮಾರ್ಗ ತೋರಿಸುವುದೇ ನಮ್ಮ
ಕರ್ತವ್ಯವಾಗಿದೆ. ಹೇಗೆ ನನ್ಸ್ ಸರ್ವೀಸ್ ಮಾಡುತ್ತಾರೆಯೋ ಹಾಗೆಯೇ ನೀವೂ ಮಾಡಿ. ನೀವು ಬಹಳ
ಪ್ರಜೆಗಳನ್ನು ಮಾಡಿಕೊಳ್ಳಬೇಕಾಗಿದೆ. ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಪುರುಷಾರ್ಥ ಮಾಡಿ.
ನೀವು ಎಲ್ಲರಿಗೆ ಏರುವ ಕಲೆಯ ಮಾರ್ಗವನ್ನು ತಿಳಿಸುತ್ತೀರಿ. ಒಬ್ಬ ತಂದೆಯನ್ನು ನೆನಪು
ಮಾಡುತ್ತಿದ್ದರೂ ಸಹ ಬಹಳ ಖುಷಿಯಿರುತ್ತದೆ ಮತ್ತು ವಿಕರ್ಮವು ವಿನಾಶವಾಗುತ್ತದೆ. ತಂದೆಯಿಂದ
ಆಸ್ತಿಯನ್ನು ಪಡೆಯುವುದು ಬಹಳ ಸಹಜ ಆದರೆ ಅನೇಕ ಮಕ್ಕಳು ಹುಡುಗಾಟಿಕೆ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಅಂತಿಮ
ಸಮಯದಲ್ಲಿ ಉತ್ತೀರ್ಣರಾಗಲು ಈ ಶರೀರ ಮತ್ತು ಪ್ರಪಂಚದಿಂದ ಉಪರಾಂ ಆಗಿರಬೇಕಾಗಿದೆ. ಯಾವುದೇ
ವಸ್ತುವಿನಲ್ಲಿ ಆಸಕ್ತಿಯನ್ನು ಇಡಬಾರದು. ಬುದ್ಧಿಯಲ್ಲಿರಲಿ - ಈಗ ನಾವು ಇಲ್ಲಿಂದ ಹೋದೆವೆಂದರೆ
ಹೋದೆವು.
2. ಬಹಳ ತಾಳ್ಮೆ ಮತ್ತು ಪ್ರೀತಿಯಿಂದ ಎಲ್ಲರಿಗೆ ಇಬ್ಬರು ತಂದೆಯರ ಪರಿಚಯವನ್ನು ಕೊಡಬೇಕು.
ಜ್ಞಾನರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಂಡು ದಾನ ಮಾಡಬೇಕಾಗಿದೆ. ಮುಳ್ಳುಗಳನ್ನು ಹೂಗಳನ್ನಾಗಿ
ಮಾಡುವ ಸೇವೆಯನ್ನು ಅವಶ್ಯವಾಗಿ ಮಾಡಬೇಕಾಗಿದೆ.
ವರದಾನ:
ಸೇವೆಯ
ಉಮಂಗ-ಉತ್ಸಾಹದ ಮೂಲಕ ಸುರಕ್ಷತೆಯ ಅನುಭವ ಮಾಡುವಂತಹ ಮಾಯಾಜೀತ್ ಭವ.
ಯಾವ ಮಕ್ಕಳು ಸ್ಥೂಲ
ಕಾರ್ಯದ ಜೊತೆ-ಜೊತೆಗೆ ಆತ್ಮೀಯ ಸೇವೆಗಾಗಿ ಓಡುತ್ತಾರೆ, ಎವರೆಡಿಯಾಗಿರುತ್ತಾರೆ ಅಂತಹವರಿಗೆ ಈ
ಸೇವೆಯ ಉಮಂಗ-ಉತ್ಸಾಹ ಸಹಾ ಸುರಕ್ಷತೆಯ ಸಾಧನವಾಗಿ ಬಿಡುವುದು. ಯಾರು ಸೇವೆಯಲ್ಲಿಯೇ ತೊಡಗಿರುತ್ತಾರೆ
ಅವರು ಮಾಯೆಯಿಂದ ಸುರಕ್ಷಿತರಾಗಿರುತ್ತಾರೆ. ಮಾಯೆ ಸಹಾ ನೋಡುತ್ತೆ ಇವರಿಗೆ ಬಿಡುವಿಲ್ಲದಿದ್ದರೆ ಅದು
ಸಹಾ ವಾಪಸ್ಸು ಹೋಗಿ ಬಿಡುವುದು. ಯಾವ ಮಕ್ಕಳಿಗೆ ತಂದೆ ಮತ್ತು ಸೇವೆಯೊಂದಿಗೆ ಪ್ರೀತಿಯಿದೆ ಅವರಿಗೆ
ಅಧಿಕ ಸಾಹಸದ ಸಹಯೋಗ ಸಿಗುವುದು, ಯಾವುದರಿಂದ ಸಹಜವಾಗಿ ಮಾಯಾಜೀತ್ ಆಗಿ ಬಿಡುವರು.
ಸ್ಲೋಗನ್:
ಜ್ಞಾನ ಮತ್ತು
ಯೋಗವನ್ನು ನಿಮ್ಮ ಜೀವನದ ಸ್ವಭಾವವನ್ನಾಗಿ ಮಾಡಿಕೊಳ್ಳಿ, ಆಗ ಹಳೆಯ ಸ್ವಭಾವ ಬದಲಾಗಿ ಬಿಡುವುದು.