18.04.19 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ಈ
ಪುರುಷೊತ್ತಮ ಯುಗವೇ ಗೀತಾ ಎಪಿಸೋಡ್ (ಧಾರಾವಾಹಿ) ಆಗಿದೆ, ಇದರಲ್ಲಿಯೇ ನೀವು ಪುರುಷಾರ್ಥ ಮಾಡಿ,
ಉತ್ತಮ ಪುರುಷರು ಅರ್ಥಾತ್ ದೇವತೆಗಳಾಗಬೇಕು"
ಪ್ರಶ್ನೆ:
ಸದಾ ಯಾವ ಒಂದು
ಮಾತಿನ ಗಮನವಿದ್ದಾಗ ದೋಣಿಯು ಪಾರಾಗಿ ಬಿಡುತ್ತದೆ?
ಉತ್ತರ:
ನಾವು ಈಶ್ವರೀಯ
ಸಂಗದಲ್ಲಿ ಇರಬೇಕಾಗಿದೆ ಎಂದು ಸದಾ ಗಮನವಿದ್ದರೂ ಸಹ ದೋಣಿಯು ಪಾರಾಗಿ ಬಿಡುತ್ತದೆ. ಒಂದು ವೇಳೆ
ಸಂಗದೋಷದಲ್ಲಿ ಬಂದರೆ, ಸಂಶಯ ಬಂದರೆ ದೋಣಿಯು ವಿಷಯ ಸಾಗರದಲ್ಲಿ ಮುಳುಗಿ ಹೋಗುತ್ತದೆ. ತಂದೆಯು
ಏನನ್ನು ತಿಳಿಸುತ್ತಾರೋ ಅದರಲ್ಲಿ ಮಕ್ಕಳಿಗೆ ಸ್ವಲ್ಪವೂ ಸಂಶಯ ಬರಬಾರದು. ತಂದೆಯು ತಾವು ಮಕ್ಕಳನ್ನು
ತನ್ನ ಸಮಾನ ಪವಿತ್ರರು, ಜ್ಞಾನಪೂರ್ಣರನ್ನಾಗಿ ಮಾಡಲು ಬಂದಿದ್ದಾರೆ. ತಂದೆಯ ಸಂಗದಲ್ಲಿಯೇ
ಇರಬೇಕಾಗಿದೆ.
ಓಂ ಶಾಂತಿ.
ಭಗವಾನುವಾಚ - ಮಕ್ಕಳು ತಿಳಿದುಕೊಂಡಿದ್ದೀರಿ, ಯಾವ ತಂದೆಯು 5000 ವರ್ಷಗಳ ಹಿಂದೆ ತಿಳಿಸಿದರೋ ಈಗ
ಅದೇ ರಾಜಯೋಗವನ್ನು ಕಲಿಸುತ್ತಿದ್ದಾರೆ. ಮಕ್ಕಳಿಗೆ ಗೊತ್ತಿದೆ, ಪ್ರಪಂಚದವರಿಗೆ ಏನೂ ಗೊತ್ತಿಲ್ಲ.
ಆದ್ದರಿಂದ ಅವರನ್ನು ಗೀತೆಯ ಭಗವಂತನು ಯಾವಾಗ ಬಂದರು? ಎಂದು ಕೇಳಬೇಕು. ನಾನು ರಾಜಯೋಗವನ್ನು ಕಲಿಸಿ
ನಿಮ್ಮನ್ನು ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ ಎಂದು ಭಗವಂತನು ಯಾವುದನ್ನು ಹೇಳಿದರು ಆ ಗೀತಾ
ಭಾಗವು ಯಾವಾಗ ನಡೆದಿತ್ತು, ಇದನ್ನು ಕೇಳಬೇಕು. ಈ ಮಾತನ್ನು ಯಾರೂ ತಿಳಿದಿಲ್ಲ. ಈಗ ನೀವು ನೇರವಾಗಿ
ಕೇಳುತ್ತಿದ್ದೀರಿ - ಗೀತಾ ಭಾಗವು ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ನಡುವೆಯೇ ಇರಬೇಕು. ಆದಿ
ಸನಾತನ ದೇವೀ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆಂದರೆ ಅವಶ್ಯವಾಗಿ ಸಂಗಮಯುಗದಲ್ಲಿಯೇ ಬರುತ್ತಾರೆ.
ಪುರುಷೊತ್ತಮ ಸಂಗಮಯುಗವೂ ಅವಶ್ಯವಾಗಿ ಇದೆ. ಭಲೇ ಪುರುಷೊತ್ತಮ ವರ್ಷವೆಂದು ಹೇಳುತ್ತಾರೆ. ಆದರೆ
ಪಾಪ! ಅವರಿಗೆ ಗೊತ್ತಿಲ್ಲ. ನೀವು ಮಧುರಾತಿ ಮಧುರ ಮಕ್ಕಳಿಗೆ ಅರ್ಥವಾಗಿದೆ - ಉತ್ತಮ ಪುರುಷರಾಗಲು
ಅರ್ಥಾತ್ ಮನುಷ್ಯರನ್ನು ಉತ್ತಮ ದೇವತೆಗಳನ್ನಾಗಿ ಮಾಡಲು ತಂದೆಯೇ ಬಂದು ಓದಿಸುತ್ತಾರೆ.
ಮನುಷ್ಯರಲ್ಲಿ ಉತ್ತಮ ಪುರುಷರು ಈ ದೇವತೆಗಳು (ಲಕ್ಷ್ಮೀ-ನಾರಾಯಣ) ಆಗಿದ್ದಾರೆ. ಈ ಸಂಗಮಯುಗದಲ್ಲಿ
ತಂದೆಯು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ, ದೇವತೆಗಳು ಅವಶ್ಯವಾಗಿ ಸತ್ಯಯುಗದಲ್ಲಿಯೇ
ಇರುತ್ತಾರೆ. ಉಳಿದೆಲ್ಲರೂ ಕಲಿಯುಗದಲ್ಲಿ ಇದ್ದಾರೆ. ನಾವು ಸಂಗಮಯುಗಿ ಬ್ರಾಹ್ಮಣರಾಗಿದ್ದೇವೆ ಎಂದು
ನೀವು ತಿಳಿದುಕೊಂಡಿದ್ದೀರಿ, ಇದು ಪಕ್ಕಾ-ಪಕ್ಕಾ ನೆನಪು ಮಾಡಬೇಕು. ಇಲ್ಲವೆಂದರೆ ತಮ್ಮ ಕುಲವನ್ನು
ಎಂದೂ ಯಾರೂ ಮರೆತು ಹೋಗುವುದಿಲ್ಲ, ಆದರೆ ಇಲ್ಲಿ ಮಾಯೆಯು ಮರೆಸಿ ಬಿಡುತ್ತದೆ. ನಾವು ಬ್ರಾಹ್ಮಣ
ಕುಲದವರಾಗಿದ್ದೇವೆ, ನಂತರ ದೇವತಾ ಕುಲದವರಾಗುತ್ತೇವೆ. ಒಂದು ವೇಳೆ ಇದು ನೆನಪಿದ್ದರೂ ಸಹ ಬಹಳ ಖುಷಿ
ಆಗುತ್ತದೆ. ನೀವು ರಾಜಯೋಗವನ್ನು ಓದುತ್ತೀರಿ, ಈಗ ಮತ್ತೆ ಭಗವಂತನು ಗೀತಾ ಜ್ಞಾನವನ್ನು
ತಿಳಿಸುತ್ತಿದ್ದಾರೆ. ಮತ್ತೆ ಭಾರತದ ಪ್ರಾಚೀನ ಯೋಗವನ್ನು ಕಲಿಸುತ್ತಾರೆ. ನಾವು ಮನುಷ್ಯರಿಂದ
ದೇವತೆಗಳಾಗುತ್ತೇವೆ ಎಂದು ತಿಳಿಸುತ್ತೀರಿ. ತಂದೆಯು ಹೇಳುತ್ತಾರೆ - ಕಾಮ ಮಹಾ ಶತ್ರುವಾಗಿದೆ, ಅದರ
ಮೇಲೆ ಜಯ ಗಳಿಸುವುದರಿಂದ ನೀವು ಜಗತ್ಜೀತರಾಗುತ್ತೀರಿ, ಪವಿತ್ರತೆಯ ಮಾತಿನಲ್ಲಿ ಎಷ್ಟೊಂದು ವಾದ
ಮಾಡುತ್ತಾರೆ. ಮನುಷ್ಯರಿಗೆ ವಿಕಾರ ಒಂದು ಖಜಾನೆ ಆಗಿದೆ. ಲೌಕಿಕ ತಂದೆಯಿಂದ ಈ ಆಸ್ತಿಯು ಸಿಕ್ಕಿದೆ.
ಬಾಲಕರಾಗುತ್ತಾರೆಂದರೆ ಮೊಟ್ಟ ಮೊದಲು ತಂದೆಯ ಆಸ್ತಿಯು ಸಿಗುತ್ತದೆ, ವಿವಾಹ ಮಾಡಿಸುತ್ತಾರೆ,
ಬೇಹದ್ದಿನ ತಂದೆ ತಿಳಿಸುತ್ತಾರೆ - ಮಕ್ಕಳೇ, ಕಾಮ ಮಹಾಶತ್ರುವಾಗಿದೆ. ಅಂದಮೇಲೆ ಅವಶ್ಯವಾಗಿ
ಕಾಮವನ್ನು ಜಯಿಸುವುದರಿಂದಲೇ ಜಗತ್ಜೀತರಾಗುತ್ತೀರಿ. ತಂದೆಯು ಅವಶ್ಯವಾಗಿ ಸಂಗಮಯುಗದಲ್ಲಿಯೇ
ಬರುತ್ತಾರೆ. ಮಹಾಭಾರಿ ಮಹಾಭಾರತದ ಯುದ್ಧವು ಇದೆ. ನಾವೂ ಸಹ ಇಲ್ಲಿ ಇದ್ದೇವೆ. ಎಲ್ಲರೂ ಬಹು ಬೇಗನೆ
ಕಾಮದ ಮೇಲೆ ವಿಜಯವನ್ನು ಪಡೆಯುತ್ತಾರೆ ಎಂದಲ್ಲ. ಪ್ರತಿಯೊಂದು ಮಾತಿನಲ್ಲಿ ಸಮಯ ಹಿಡಿಸುತ್ತದೆ,
ಮುಖ್ಯ ಮಾತು ಮಕ್ಕಳು ಇದನ್ನೇ ಬರೆಯುತ್ತಾರೆ - ಬಾಬಾ, ನಾವು ವಿಷಯ ವೈತರಣಿ ನದಿಯಲ್ಲಿ ಬಿದ್ದು
ಹೋದೆವು, ಆದ್ದರಿಂದ ಅವಶ್ಯವಾಗಿ ಆದೇಶವಿದೆ. ಕಾಮವನ್ನು ಜಯಸಿದರೆ ನೀವು ಜಗತ್ಜೀತರಾಗುತ್ತೀರಿ ಎಂದು
ತಂದೆಯ ಆಜ್ಞೆಯಾಗಿದೆ. ಜಗತ್ಜೀತರಾಗಿ ಮತ್ತೆ ವಿಕಾರದಲ್ಲಿ ಹೋಗುತ್ತಿರುತ್ತಾರೆಂದಲ್ಲ. ಈ
ಲಕ್ಷ್ಮೀ-ನಾರಾಯಣರು ಜಗತ್ಜೀತರಾಗಿದ್ದಾರೆ. ಇವರಿಗೆ ಸಂಪೂರ್ಣ ನಿರ್ವಿಕಾರಿಗಳು ಎಂದು
ಹೇಳಲಾಗುತ್ತದೆ. ದೇವತೆಗಳಿಗೆ ಎಲ್ಲರೂ ನಿರ್ವಿಕಾರಿಗಳು ಎಂದು ಹೇಳುತ್ತಾರೆ, ಅದಕ್ಕೆ ನೀವು ರಾಮ
ರಾಜ್ಯವೆಂದು ಹೇಳುತ್ತೀರಿ, ಅದು ನಿರ್ವಿಕಾರಿ ಪ್ರಪಂಚವಾಗಿದೆ, ಇದು ವಿಕಾರಿ ಪ್ರಪಂಚವಾಗಿದೆ.
ಅಪವಿತ್ರ ಗೃಹಸ್ಥ ಆಶ್ರಮವಾಗಿದೆ. ನೀವು ಪವಿತ್ರ ಗೃಹಸ್ಥ ಆಶ್ರಮದ ನಿವಾಸಿಗಳಾಗಿದ್ದೀರಿ ಎಂದು
ತಂದೆಯು ತಿಳಿಸುತ್ತಾರೆ. ಈಗ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ
ಅಪವಿತ್ರರಾಗಿದ್ದೀರಿ, ಇದು 84 ಜನ್ಮಗಳ ಕಥೆಯಾಗಿದೆ. ಹೊಸ ಪ್ರಪಂಚವು ಅವಶ್ಯವಾಗಿ ಇಂತಹ
ನಿರ್ವಿಕಾರಿ ಆಗಿರಬೇಕು. ಭಗವಂತ ಯಾರು ಪವಿತ್ರತಾ ಸಾಗರ ಆಗಿದ್ದಾರೋ ಅವರೇ ಸ್ಥಾಪನೆ ಮಾಡುತ್ತಾರೆ.
ನಂತರ ರಾವಣ ರಾಜ್ಯ ಅವಶ್ಯವಾಗಿ ಬರುತ್ತದೆ. ಹೆಸರೇ ಆಗಿದೆ – ರಾಮ ರಾಜ್ಯ ಮತ್ತು ರಾವಣ ರಾಜ್ಯ.
ರಾವಣ ರಾಜ್ಯವೆಂದರೆ ಆಸುರೀ ರಾಜ್ಯ. ಈಗ ನೀವು ಆಸುರೀ ರಾಜ್ಯದಲ್ಲಿ ಕುಳಿತಿದ್ದೀರಿ. ಈ
ಲಕ್ಷ್ಮೀ-ನಾರಾಯಣರು ದೈವೀ ರಾಜ್ಯದ ಚಿನ್ಹೆ ಆಗಿದ್ದಾರೆ. ನೀವು ಮಕ್ಕಳು ಮುಂಜಾನೆ ಶಾಂತಿ
ಯಾತ್ರೆಯನ್ನು ಮಾಡುತ್ತೀರಿ, ಪ್ರಭಾತವೆಂದು ಮುಂಜಾನೆಗೆ ಹೇಳಲಾಗುತ್ತದೆ, ಆ ಸಮಯದಲ್ಲಿ ಮನುಷ್ಯರು
ಮಲಗಿರುತ್ತಾರೆ. ಆದ್ದರಿಂದ ತಡವಾಗಿ ಮಾಡುತ್ತೀರಿ. ಯಾವಾಗ ಅಲ್ಲಿ ಸೇವಾ ಕೇಂದ್ರವು ಇರುತ್ತದೋ ಆಗ
ಪ್ರದರ್ಶಿನಿಯು ಚೆನ್ನಾಗಿ ಆಗುತ್ತದೆ ಅಲ್ಲಿ ಎಲ್ಲರೂ ಬಂದು ಕಾಮ ಮಹಾಶತ್ರು ಆಗಿದೆ ಎಂದು
ತಿಳಿದುಕೊಳ್ಳಬೇಕು, ಇದರ ಮೇಲೆ ಜಯ ಗಳಿಸುವುದರಿಂದ ಜಗತ್ಜೀತರಾಗುತ್ತಾರೆ. ಲಕ್ಷ್ಮೀ-ನಾರಾಯಣರ
ಟ್ರಾನ್ಸ್ ಲೈಟ್ ಚಿತ್ರವು ಅವಶ್ಯವಾಗಿ ಜೊತೆಯಲ್ಲಿ ಇರಬೇಕು. ಇದನ್ನಂತೂ ಮರೆಯಬಾರದು. ಈ ಚಿತ್ರ
ಮತ್ತೊಂದು ಏಣಿಯ ಚಿತ್ರವಿರಬೇಕು, ಹೇಗೆ ವಾಹನದಲ್ಲಿ ದೇವಿಯರನ್ನು ಮೆರವಣಿಗೆ ಮಾಡುತ್ತಾರೆ, ಹಾಗೆಯೇ
ನೀವು 1-2 ವಾಹನಗಳನ್ನು ಶೃಂಗರಿಸಿ ಅದರಲ್ಲಿ ಮುಖ್ಯ ಚಿತ್ರಗಳನ್ನು ಮೆರವಣಿಗೆ ಮಾಡಿದರೆ ಬಹಳ
ಚೆನ್ನಾಗಿ ಇರುತ್ತದೆ. ದಿನ-ಪ್ರತಿದಿನ ಚಿತ್ರಗಳ ವೃದ್ಧಿಯು ಆಗುತ್ತಿರುತ್ತದೆ. ನಿಮ್ಮ ಜ್ಞಾನವು
ವೃದ್ಧಿ ಆಗುತ್ತಿರುತ್ತದೆ. ಮಕ್ಕಳ ವೃದ್ಧಿಯು ಆಗುತ್ತಿರುತ್ತದೆ, ಅದರಲ್ಲಿ ಬಡವರು, ಸಾಹುಕಾರರು
ಎಲ್ಲರೂ ಬಂದು ಬಿಡುತ್ತಾರೆ. ಶಿವ ತಂದೆಯ ಭಂಡಾರವು ತುಂಬುತ್ತಾ ಹೋಗುತ್ತದೆ. ಯಾರು ಭಂಡಾರವನ್ನು
ತುಂಬುತ್ತಾರೋ ಅವರಿಗೆ ಪ್ರತಿ ಫಲವಾಗಿ ಅಲ್ಲಿ ಬಹಳಷ್ಟು ಹೆಚ್ಚಿಗೆ ಸಿಗುತ್ತದೆ. ಆದ್ದರಿಂದಲೇ
ತಂದೆಯು ಹೇಳುತ್ತಾರೆ – ಮಧುರಾತಿ ಮಧುರ ಮಕ್ಕಳೇ ನೀವು 21 ಜನ್ಮಗಳಿಗಾಗಿ ಪದಮಾ ಪದಮ ಪತಿಗಳು
ಆಗುವವರು ಆಗಿದ್ದೀರಿ. ನೀವು 21 ಪೀಳಿಗೆಗೆ ಜಗತ್ತಿನ ಮಾಲೀಕರಾಗಿ ಬಿಟ್ಟಿದ್ದೀರಿ ಎಂದು ಸ್ವಯಂ
ತಂದೆಯೇ ಹೇಳುತ್ತಾರೆ. ನಾನೇ ಪ್ರತ್ಯಕ್ಷದಲ್ಲಿ ಬಂದಿದ್ದೇನೆ, ನಿಮಗಾಗಿ ಅಂಗೈಯಲ್ಲಿ ಸ್ವರ್ಗವನ್ನು
ತಂದಿದ್ದೇನೆ. ಹೇಗೆ ಮಕ್ಕಳು ಜನಿಸಿದರೋ ತಂದೆಯ ಆಸ್ತಿಯು ಅವರ ಅಂಗೈಯಲ್ಲಿಯೇ ಇದ್ದಂತೆ. ಈ ಮನೆ ಮಠ
ಮೊದಲಾದವುಗಳೆಲ್ಲವೂ ನಿಮ್ಮದೆ ಆಗಿದೆ ಎಂದು ತಂದೆಯು ತಿಳಿಸುತ್ತಾರೆ. ನೀವು ನನ್ನವರಾಗುತ್ತೀರೆಂದರೆ
ಸ್ವರ್ಗದ 21 ಜನ್ಮಗಳ ರಾಜ್ಯವು ನಿಮ್ಮದಾಗುತ್ತದೆ ಏಕೆಂದರೆ ನೀವು ಕಾಲನ ಮೇಲೆ ಜಯ ಪಡೆಯುತ್ತೀರಿ,
ಆದ್ದರಿಂದ ತಂದೆಗೆ ಮಹಾಕಾಲನೆಂದು ಹೇಳಲಾಗುತ್ತದೆ. ಮಹಾಕಾಲನೆಂದರೆ ಸಾಯಿಸುವವರಲ್ಲ. ಹೀಗೆ ಅವರನ್ನು
ಮಹಿಮೆ ಮಾಡಲಾಗುತ್ತದೆ. ಭಗವಂತನು ಯಮ ದೂತರನ್ನು ಕಳುಹಿಸಿ ಕರೆಸಿಕೊಂಡರು ಎಂದು ತಿಳಿಯುತ್ತಾರೆ.
ಇಂತಹ ಯಾವುದೇ ಮಾತಿಲ್ಲ. ಇದೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ, ನಾನು ಕಾಲರ ಕಾಲನಾಗಿದ್ದೇನೆ
ಎಂದು ತಂದೆಯು ಹೇಳುತ್ತಾರೆ. ಗಿರಿ ಜನರು ಮಹಾಕಾಲನನ್ನು ಬಹಳ ಮಾನ್ಯ ಮಾಡುತ್ತಾರೆ, ಮಹಾಕಾಲನ
ಮಂದಿರವು ಇದೆ. ಬಾವುಟಗಳನ್ನು ಹಾಕುತ್ತಾರೆ ಅಂದಾಗ ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ -
ಇದು ಸರಿಯಾದ ಮಾತಾಗಿದೆ ಎಂಬುದನ್ನು ತಿಳಿಯುತ್ತೀರಿ. ತಂದೆಯನ್ನು ನೆನಪು ಮಾಡುವುದರಿಂದ
ಜನ್ಮ-ಜನ್ಮಾಂತರದ ವಿಕರ್ಮಗಳು ಭಸ್ಮವಾಗುತ್ತವೆ ಅಂದಮೇಲೆ ಅದರ ಪ್ರಚಾರ ಮಾಡಬೇಕು. ಕುಂಭ ಮೇಳ
ಮೊದಲಾದವು ಬಹಳಷ್ಟು ಆಗುತ್ತವೆ, ಸ್ನಾನ ಮಾಡುವ ಮಹತ್ವಿಕೆಯನ್ನು ಬಹಳ ತಿಳಿಸಿದ್ದಾರೆ. ಈಗ ನೀವು
ಮಕ್ಕಳಿಗೆ ಈ ಜ್ಞಾನಾಮೃತವು 5000 ವರ್ಷಗಳ ನಂತರ ಸಿಗುತ್ತದೆ. ವಾಸ್ತವದಲ್ಲಿ ಇದರ ಹೆಸರು
ಅಮೃತವಲ್ಲ, ಇದು ವಿದ್ಯೆಯಾಗಿದೆ. ಇವೆಲ್ಲವೂ ಭಕ್ತಿಮಾರ್ಗದ ಹೆಸರುಗಳಾಗಿವೆ. ಅಮೃತ ಎಂಬ ಹೆಸರನ್ನು
ಚಿತ್ರಗಳಲ್ಲಿಯೂ ನೀರನ್ನು ತೋರಿಸಿದ್ದಾರೆ. ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ,
ವಿದ್ಯೆಯಿಂದಲೇ ಶ್ರೇಷ್ಠ ಪದವಿ ಸಿಗುತ್ತದೆ, ಅದರಲ್ಲಿ ನಾನೇ ಓದಿಸುತ್ತೇನೆ ಎಂದು ತಂದೆಯು
ತಿಳಿಸುತ್ತಾರೆ. ಭಗವಂತನಿಗೆ ಯಾವುದೇ ಇಂತಹ ಶೃಂಗರಿಸುವಂತಹ ರೂಪವಂತೂ ಇಲ್ಲ. ತಂದೆಯು ಈ
ಬ್ರಹ್ಮಾರವರಲ್ಲಿ ಬಂದು ಓದಿಸುತ್ತಾರೆ. ಓದಿಸಿ ಆತ್ಮಗಳನ್ನು ತಮ್ಮ ಸಮಾನರನ್ನಾಗಿ
ಮಾಡಿಕೊಳ್ಳುತ್ತಾರೆ. ತಮ್ಮ ಸಮಾನರನ್ನಾಗಿ ಮಾಡಲು ಲಕ್ಷ್ಮೀ-ನಾರಾಯಣರಂತೂ ಇಲ್ಲ. ಆತ್ಮವೇ ಓದುತ್ತದೆ,
ಅವರು ತನ್ನ ಸಮಾನ ಜ್ಞಾನಪೂರ್ಣರನ್ನಾಗಿ ಮಾಡುತ್ತಾರೆ. ಭಗವಾನ್-ಭಗವತಿಗಳನ್ನಾಗಿ
ಮಾಡುತ್ತಾರೆಂದಲ್ಲ. ಅವರು ಕೃಷ್ಣನನ್ನು ತೋರಿಸುತ್ತಾರೆ, ಕೃಷ್ಣನು ಹೇಗೆ ಓದಿಸುತ್ತಾನೆ?
ಸತ್ಯಯುಗದಲ್ಲಿ ಪತಿತರು ಇರುವುದಿಲ್ಲ, ಕೃಷ್ಣ ಇರುವುದೇ ಸತ್ಯಯುಗದಲ್ಲಿ ಮತ್ತೆಂದೂ ಕೃಷ್ಣನನ್ನು
ನೀವು ನೋಡುವುದಿಲ್ಲ. ನಾಟಕದಲ್ಲಿ ಪ್ರತಿಯೊಬ್ಬರ ಪುನರ್ಜನ್ಮದ ಚಿತ್ರವು ಸಂಪೂರ್ಣ
ಭಿನ್ನವಾಗಿರುತ್ತದೆ. ನಾಟಕದ ಲೀಲೆಯಾಗಿದೆ. ಮಾಡಿ-ಮಾಡಲ್ಪಟಿರುವುದೇ ನಡೆಯುತ್ತದೆ.... ನೀವು ಚಾಚು
ತಪ್ಪದೆ ಇದೇ ಮುಖ ಲಕ್ಷಣಗಳಿಂದ, ಇದೇ ವಸ್ತ್ರಗಳಲ್ಲಿ ಕಲ್ಪ-ಕಲ್ಪ ನೀವೇ ಓದುತ್ತಾ ಬಂದಿದ್ದೀರಿ,
ಚಾಚು ತಪ್ಪದೆ ಪುನರಾವರ್ತನೆ ಆಗುತ್ತದೆಯಲ್ಲವೇ ಎಂದು ತಂದೆಯು ಹೇಳುತ್ತಾರೆ. ಆತ್ಮವು ಒಂದು
ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ಅಂದರೆ ಯಾವುದನ್ನು ಕಲ್ಪದ ಹಿಂದೆ ತೆಗೆದುಕೊಂಡಿದೆಯೋ
ಅದನ್ನೆ ತೆಗೆದುಕೊಳ್ಳುತ್ತದೆ. ನಾಟಕದಲ್ಲಿ ಸ್ವಲ್ಪವೂ ಅಂತರವಾಗುವುದಿಲ್ಲ. ಅವು ಹದ್ದಿನ
ಮಾತುಗಳಾಗಿವೆ, ಇವು ಬೇಹದ್ದಿನ ಮಾತುಗಳಾಗಿವೆ. ಇದನ್ನು ಬೇಹದ್ದಿನ ತಂದೆಯ ವಿನಃ ಅನ್ಯರು ತಿಳಿಸಲು
ಸಾಧ್ಯವಿಲ್ಲ. ಇದರಲ್ಲಿ ಯಾವುದೇ ಸಂಶಯವಿರಲು ಸಾಧ್ಯವಿಲ್ಲ. ನಿಶ್ಚಯ ಬುದ್ಧಿಯಲ್ಲಿ ಮತ್ತೆ
ಯಾವುದಾದರು ಒಂದು ಸಂಶಯವು ಬಂದು ಬಿಡುತ್ತದೆ. ಕೆಟ್ಟ ಸಂಗವು ಸಿಕ್ಕಿ ಬಿಡುತ್ತದೆ. ಈಶ್ವರೀಯ
ಸಂಗದಲ್ಲಿ ನಡೆಯುತ್ತಾ ಹೋದರೆ ಪಾರಾಗಿ ಬಿಡುತ್ತಾರೆ. ಸಂಗವನ್ನು ಬಿಡುತ್ತಾರೆಂದರೆ ವಿಷಯ
ಸಾಗರದಲ್ಲಿ ಮುಳುಗಿ ಬಿಡುತ್ತಾರೆ. ಒಂದು ಕಡೆ ಕ್ಷೀರ ಸಾಗರವಿದೆ ಮತ್ತೆ ಇನ್ನೊಂದು ಕಡೆ ವಿಷಯ
ಸಾಗರವಿದೆ. ಜ್ಞಾನಾಮೃತವೆಂದು ಹೇಳುತ್ತಾರೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ, ಅವರ ಮಹಿಮೆಯು ಇದೆ.
ಅವರ ಯಾವ ಮಹಿಮೆಯನ್ನೂ ಲಕ್ಷ್ಮೀ-ನಾರಾಯಣರಿಗೆ ಕೊಡಲು ಸಾಧ್ಯವಿಲ್ಲ. ಕೃಷ್ಣನು ಜ್ಞಾನ ಸಾಗರನಲ್ಲ.
ತಂದೆಯು ಪವಿತ್ರತೆಯ ಸಾಗರನಾಗಿದ್ದಾರೆ. ಭಲೇ ಆ ದೇವತೆಗಳು ಸತ್ಯಯುಗ-ತ್ರೇತಾಯುಗದಲ್ಲಿ
ಪವಿತ್ರರಾಗಿರುತ್ತಾರೆ. ಆದರೆ ಸದಾಕಾಲಕ್ಕಾಗಿ ಇರುವುದಿಲ್ಲ. ಅರ್ಧಕಲ್ಪದ ನಂತರ ಮತ್ತೆ
ಇಳಿಯುತ್ತಾರೆ, ನಾನು ಬಂದು ಎಲ್ಲರ ಸದ್ಗತಿ ಮಾಡುತ್ತೇನೆ. ಸದ್ಗತಿದಾತ ನಾನೊಬ್ಬನೇ ಆಗಿದ್ದೇನೆ,
ನೀವು ಸದ್ಗತಿಯಲ್ಲಿ ಹೋಗುತ್ತೀರಿ ನಂತರ ಮಾತುಗಳು ಇರುವುದಿಲ್ಲ. ಈಗ ನೀವು ಮಕ್ಕಳು ಸನ್ಮುಖದಲ್ಲಿ
ಕುಳಿತಿದ್ದೀರಿ, ಶಿವ ತಂದೆಯಿಂದ ಓದಿ ಶಿಕ್ಷಕರಾಗಿದ್ದೀರಿ, ಮುಖ್ಯ ಪ್ರಾಂಶುಪಾಲರು ಶಿವ ತಂದೆ
ಆಗಿದ್ದಾರೆ. ನೀವು ಅವರ ಬಳಿ ಬರುತ್ತೀರಿ, ನಾವು ಶಿವ ತಂದೆಯ ಬಳಿ ಬಂದಿದ್ದೇವೆ ಎಂದು ಹೇಳುತ್ತಾರೆ.
ಅರೇ! ಅವರಂತೂ ನಿರಾಕಾರನಾಗಿದ್ದಾರೆ. ಹಾ! ಇವರ (ಬ್ರಹ್ಮಾ) ತನುವಿನಲ್ಲಿ ಬರುತ್ತಾರೆ, ಆದ್ದರಿಂದ
ಬಾಪ್ದಾದಾರವರ ಬಳಿ ಹೋಗುತ್ತೇವೆ ಎಂದು ಹೇಳುತ್ತಾರೆ. ಈ ಬ್ರಹ್ಮಾರವರು ತಂದೆಯ ರಥವಾಗಿದ್ದಾರೆ,
ಇವರ ಮೇಲೆ ಶಿವ ತಂದೆಯ ಸವಾರಿ ಆಗುತ್ತದೆ. ಬ್ರಹ್ಮಾರವರನ್ನು ರಥ, ಕುದುರೆ, ಅಶ್ವವೆಂದು
ಹೇಳುತ್ತಾರೆ. ದಕ್ಷ ಪ್ರಜಾಪತಿಯು ಯಜ್ಞವನ್ನು ರಚಿಸಿದರೆಂದು ಇದರ ಮೇಲೆ ಒಂದು ಕಥೆ ಇದೆ, ಕಥೆಯನ್ನು
ಬರೆದು ಬಿಟ್ಟಿದ್ದಾರೆ ಆದರೆ ಆ ರೀತಿಯಂತೂ ಇಲ್ಲ. ಶಿವ ಭಗವಾನುವಾಚ - ಯಾವಾಗ ಭಾರತದಲ್ಲಿ ಅತೀ
ಧರ್ಮ ನಿಂದನೆ ಆಗುವುದೋ ಆಗ ನಾನು ಬರುತ್ತೇನೆ. ಗೀತಾವಾದಿಗಳು ಯಧಾಃ ಯಧಾಹಿಃ ಧರ್ಮಸ್ಯ.... ಎಂದು
ಹೇಳುತ್ತಾರೆ ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ನಿಮ್ಮದು ಬಹಳ ಚಿಕ್ಕ ವೃಕ್ಷವಾಗಿದೆ (ಬ್ರಾಹ್ಮಣ
ವೃಕ್ಷ) ಇದಕ್ಕೆ ಬಿರುಗಾಳಿಗಳು ಬರುತ್ತವೆ. ಇದು ಹೊಸ ವೃಕ್ಷವಾಗಿದೆಯಲ್ಲವೇ ಮತ್ತು ತಳಪಾಯವೂ ಆಗಿದೆ.
ಇಷ್ಟು ಅನೇಕ ಧರ್ಮಗಳ ಮಧ್ಯ ಒಂದು ಆದಿ ಸನಾತನ ದೇವೀ-ದೇವತಾ ಧರ್ಮದ ಸಸಿಯನ್ನು ನೆಡುತ್ತಾರೆ.
ಅಂದಾಗ ಎಷ್ಟೊಂದು ಶ್ರಮವಿದೆ. ಅನ್ಯರಿಗೆ ಶ್ರಮ ಎನಿಸುವುದಿಲ್ಲ, ಅವರು ಮೇಲಿನಿಂದ
ಬರುತ್ತಿರುತ್ತಾರೆ. ಇಲ್ಲಂತೂ ಯಾರೂ ಸತ್ಯಯುಗ-ತ್ರೇತಾಯುಗದಲ್ಲಿ ಬರುವವರಾಗಿದ್ದಾರೋ ಆ ಆತ್ಮಗಳು
ಕುಳಿತು ಓದುತ್ತಾರೆ. ಯಾರು ಪತಿತರಾಗಿದ್ದಾರೋ ಅವರನ್ನು ಪಾವನ ದೇವತೆಗಳನ್ನಾಗಿ ಮಾಡಲು ತಂದೆಯು
ಕುಳಿತು ಓದಿಸುತ್ತಾರೆ. ಗೀತೆಯನ್ನಂತೂ ಇವರು (ಬ್ರಹ್ಮಾ) ಬಹಳ ಓದುತ್ತಿದ್ದರು. ಹೇಗೆ ಈಗ
ಆತ್ಮಗಳನ್ನು ನೆನಪು ಮಾಡಿ ಪಾಪವು ಪರಿಹಾರ ಆಗಲಿ ಎಂದು ದೃಷ್ಟಿ ಕೊಡಲಾಗುತ್ತದೆ, ಇದನ್ನು ಭಕ್ತಿ
ಮಾರ್ಗದಲ್ಲಿ ಗೀತೆಯ ಮುಂದೆ ನೀರನ್ನು ಇಟ್ಟು ಕುಳಿತು ಓದುತ್ತಾರೆ. ಇದರಿಂದ ಪಿತೃಗಳ ಉದ್ಧಾರ
ಆಗುವುದು ಎಂದು ತಿಳಿಯುತ್ತಾರೆ, ಆದ್ದರಿಂದ ಪಿತೃಗಳನ್ನು ನೆನಪು ಮಾಡುತ್ತಾರೆ. ಭಕ್ತಿಯಲ್ಲಿ
ಗೀತೆಗೆ ಬಹಳ ಮಾನ್ಯತೆ ಕೊಡುತ್ತಾರೆ. ಅರೇ! ಈ ಬ್ರಹ್ಮಾ ಕಡಿಮೆ ಭಕ್ತರಾಗಿದ್ದರೇನು ರಾಮಾಯಣ
ಮೊದಲಾದವುಗಳನ್ನು ಓದುತ್ತಿದ್ದರು, ಬಹಳ ಖುಷಿ ಆಗುತ್ತಿತ್ತು, ಅದೆಲ್ಲವೂ ಕಳೆದು ಹೋಯಿತು. ಈಗ
ತಂದೆಯು ತಿಳಿಸುತ್ತಾರೆ - ಕಳೆದು ಹೋಗಿರುವುದಕ್ಕೆ ಚಿಂತಿಸಬೇಡಿ. ಬುದ್ಧಿಯಿಂದ ಎಲ್ಲವನ್ನು ತೆಗೆದು
ಹಾಕಿ. ತಂದೆಯು ಸ್ಥಾಪನೆ, ವಿನಾಶ ಮತ್ತು ರಾಜಧಾನಿಯ ಸಾಕ್ಷಾತ್ಕಾರ ಮಾಡಿಸಿರುವುದರಿಂದ ಅದು ಪಕ್ಕಾ
ಆಗಿದೆ. ಇದೆಲ್ಲವೂ ಸಮಾಪ್ತಿ ಆಗುತ್ತದೆ ಎಂದು ಗೊತ್ತಿರಲಿಲ್ಲ. ಇದೆಲ್ಲವೂ ಆಗುವುದು ಎಂದು ತಂದೆಯು
(ಬ್ರಹ್ಮಾ) ತಿಳಿದರು. ತಡವಾಗುವುದೇನು ನಾನು ಹೋಗಿ ಇಂತಹ ರಾಜನಾಗುತ್ತೇನೆ ಎಂದು ಬಾಬಾರವರು ಏನೇನೋ
ತಿಳಿಯುತ್ತಿದ್ದರು. ನೀವು ಮಕ್ಕಳು ತಂದೆಯ ಪ್ರವೇಶತೆ ಹೇಗಾಯಿತು ಎಂದು ತಿಳಿದಿದ್ದೀರಿ. ಈ
ಮಾತುಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ. ಬ್ರಹ್ಮಾ-ವಿಷ್ಣು-ಶಂಕರರ ಹೆಸರನ್ನಂತೂ
ತೆಗೆದುಕೊಳ್ಳುತ್ತಾರೆ ಆದರೆ ಈ ಮೂವರಲ್ಲಿಯೂ ಭಗವಂತ ಯಾರಲ್ಲಿ ಪ್ರವೇಶ ಮಾಡುತ್ತಾರೆ ಎಂಬ
ಅರ್ಥವನ್ನು ತಿಳಿದುಕೊಂಡಿಲ್ಲ. ಅವರು ವಿಷ್ಣುವಿನ ಹೆಸರನ್ನು ತೆಗೆದುಕೊಳ್ಳುತ್ತಾರೆ ಅಂದರೆ ವಿಷ್ಣು
ದೇವತೆ ಆಗಿದ್ದಾರೆ ಅಂದಮೇಲೆ ಹೇಗೆ ಓದಿಸುತ್ತಾರೆ! ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ ಎಂದು
ಸ್ವಯಂ ತಂದೆಯೇ ತಿಳಿಸುತ್ತಾರೆ. ಆದ್ದರಿಂದ ಬ್ರಹ್ಮನ ಮೂಲಕ ಸ್ಥಾಪನೆ ಎಂದು ತೋರಿಸಿದ್ದಾರೆ. ಒಂದು
ಪಾಲನೆ ಮತ್ತು ಇನ್ನೊಂದು ವಿನಾಶವಾಗಿದೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಭಗವಾನುವಾಚ -
ನಾನು ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದೇನೆ, ರಾಜಯೋಗವನ್ನು ಕಲಿಸಿ ರಾಜ್ಯ ಪದವಿಯನ್ನು ಕೊಡಿಸಲು
ಆ ಭಗವಂತನು ಯಾವಾಗ ಬಂದರು? ಇದನ್ನು ಈಗ ತಿಳಿಯುತ್ತೀರಿ. ಮಕ್ಕಳಿಗೆ 84 ಜನ್ಮಗಳ ರಹಸ್ಯವನ್ನು
ತಿಳಿಸಿದ್ದಾರೆ, ಪೂಜ್ಯ-ಪೂಜಾರಿಗಳ ರಹಸ್ಯವನ್ನು ತಿಳಿಸಿದ್ದಾರೆ. ವಿಶ್ವದಲ್ಲಿ ಶಾಂತಿ ರಾಜ್ಯವು ಈ
ಲಕ್ಷ್ಮೀ-ನಾರಾಯಣರದ್ದಾಗಿದೆಯಲ್ಲವೇ. ಅದನ್ನು ಇಡೀ ಪ್ರಪಂಚವೇ ಬಯಸುತ್ತದೆ, ಯಾವಾಗ
ಲಕ್ಷ್ಮೀ-ನಾರಾಯಣರ ರಾಜ್ಯ ಇತ್ತೋ ಆ ಸಮಯದಲ್ಲಿ ಎಲ್ಲರೂ ಶಾಂತಿಧಾಮದಲ್ಲಿ ಇದ್ದರು. ನಾವು
ಶ್ರೀಮತದನುಸಾರ ಈಗ ಈ ಕಾರ್ಯವನ್ನು ಮಾಡುತ್ತಿದ್ದೇವೆ. ಇದನ್ನು ಅನೇಕ ಬಾರಿ ಮಾಡಿದ್ದೇವೆ ಮತ್ತು
ಮಾಡುತ್ತೇವೆ. ಕೋಟಿಯಲ್ಲಿ ಕೆಲವರೇ ಬರುತ್ತಾರೆ - ಇದೂ ಸಹ ನಿಮಗೆ ತಿಳಿದಿದೆ. ದೇವೀ-ದೇವತಾ
ಧರ್ಮದವರಿಗೆ ಹಿಡಿಸುತ್ತದೆ. ಭಾರತದ್ದೇ ಮಾತಾಗಿದೆ. ಯಾರು ಈ ಕುಲದವರಾಗಿದ್ದಾರೋ ಅವರು ಮತ್ತೆ
ಬರುತ್ತಿದ್ದಾರೆ ಮತ್ತು ಬರುತ್ತಿರುತ್ತಾರೆ. ಹೇಗೆ ನೀವು ಬಂದಿದ್ದೀರೋ ಹಾಗೆಯೇ ಅನ್ಯ ಪ್ರಜೆಗಳು
ತಯಾರಾಗುತ್ತಿರುತ್ತಾರೆ. ಯಾರು ಚೆನ್ನಾಗಿ ಓದುತ್ತಾರೆಯೋ ಅವರು ಒಳ್ಳೆಯ ಪದವಿಯನ್ನು ಪಡೆಯುತ್ತಾರೆ.
ಜ್ಞಾನ ಯೋಗ ಮುಖ್ಯವಾಗಿದೆ. ಯೋಗಕ್ಕೂ ಸಹಾ ಜ್ಞಾನವು ಬೇಕಾಗುತ್ತದೆ ಮತ್ತು ಶಕ್ತಿ ಗೃಹದ (ಪವರ್ಹೌಸ್)
ಜೊತೆ ಯೋಗವು ಬೇಕು. ಯೋಗದಿಂದ ವಿಕರ್ಮಗಳು ವಿನಾಶ ಆಗುತ್ತವೆ ಮತ್ತು ಆರೋಗ್ಯವಂತರು-ಐಶ್ವರ್ಯವಂತರು
ಆಗುತ್ತೀರಿ, ಪಾಸ್ ವಿತ್ ಆನರ್ ಆಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಯಾವ ಮಾತು
ಕಳೆದು ಹೋಗಿದೆ ಅದರ ಚಿಂತನೆ ಮಾಡಬಾರದು. ಇದುವರೆಗೆ ಏನೆಲ್ಲಾ ಓದಿದ್ದೀರೋ ಅದನ್ನು ಮರೆಯಬೇಕು.
ಒಬ್ಬ ತಂದೆಯಿಂದ ಕೇಳಬೇಕಾಗಿದೆ ಮತ್ತು ತಮ್ಮ ಬ್ರಾಹ್ಮಣ ಕುಲವನ್ನು ಸದಾ ನೆನಪು
ಇಟ್ಟುಕೊಳ್ಳಬೇಕಾಗಿದೆ.
2. ಪೂರ್ಣ ನಿಶ್ಚಯ ಬುದ್ಧಿಯವರಾಗಿರಬೇಕಾಗಿದೆ. ಯಾವುದೇ ಮಾತಿನಲ್ಲಿ ಸಂಶಯದಲ್ಲಿ ಬರಬಾರದಾಗಿದೆ.
ಈಶ್ವರೀಯ ಸಂಗ ಮತ್ತು ವಿದ್ಯೆಯನ್ನೆಂದೂ ಬಿಡಬಾರದು.
ವರದಾನ:
ವರದಾತನ
ಮುಖಾಂತರ ಸರ್ವ ಶ್ರೇಷ್ಠ ಸಂಪತ್ತಿಯ ಪ್ರಾಪ್ತಿ ಮಾಡಿಕೊಳ್ಳುವಂತಹ ಸಂಪತ್ತಿವಾನ್ ಭವ.
ಯಾರ ಬಳಿಯಾದರೂ
ಒಂದು ವೇಳೆ ಸ್ಥೂಲ ಸಂಪತ್ತು ಇದ್ದರೂ ಸಹಾ ಸದಾ ಸಂತುಷ್ಠರಾಗಿ ಇರುವುದು ಸಾಧ್ಯವಿಲ್ಲ. ಸ್ಥೂಲ
ಸಂಪತ್ತಿನ ಜೊತೆ ಒಂದು ವೇಳೆ ಸರ್ವ ಗುಣಗಳ ಸಂಪತ್ತು, ಸರ್ವ ಶಕ್ತಿಗಳ ಸಂಪತ್ತು ಮತ್ತು ಜ್ಞಾನದ
ಶ್ರೇಷ್ಠ ಸಂಪತ್ತು ಇಲ್ಲದೇ ಹೋದರೆ ಸಂತುಷ್ಠತೆ ಸದಾ ಇರಲು ಸಾಧ್ಯವಿಲ್ಲ. ನಿಮ್ಮೆಲ್ಲರ ಬಳಿಯಂತೂ ಈ
ಎಲ್ಲಾ ಶ್ರೇಷ್ಠ ಸಂಪತ್ತುಗಳಿವೆ. ಪ್ರಪಂಚದವರು ಕೇವಲ ಸ್ಥೂಲ ಸಂಪತ್ತುಳ್ಳವರನ್ನು ಸಂಪತ್ತಿವಾನ್
ಎಂದು ತಿಳಿಯುತ್ತಾರೆ. ಆದರೆ ವರದಾತಾ ತಂದೆಯ ಮೂಲಕ ನೀವು ಮಕ್ಕಳಿಗೆ ಸರ್ವ ಶ್ರೇಷ್ಠ ಸಂಪತ್ತಿವಾನ್
ಭವದ ವರದಾನ ಸಿಕ್ಕಿದೆ.
ಸ್ಲೋಗನ್:
ಸತ್ಯ ಸಾಧನೆಯ
ಮೂಲಕ ಹಾಯ್-ಹಾಯ್ ಅನ್ನು ವಾಹ್-ವಾಹ್ ಎನ್ನುವುದರಲ್ಲಿ ಪರಿವರ್ತನೆ ಮಾಡಿ.