11.08.19 Avyakt Bapdada
Kannada
Murli
14.01.85 Om Shanti Madhuban
ಶುಭ ಚಿಂತಕರಾಗುವ ಆಧಾರ
- ಸ್ವ ಚಿಂತನೆ ಮತ್ತು ಶುಭ ಚಿಂತನೆ
ಇಂದು ಬಾಪ್ದಾದಾರವರು
ನಾಲ್ಕೂ ಕಡೆಯ ವಿಶೇಷ ಮಕ್ಕಳನ್ನು ನೋಡುತ್ತಿದ್ದಾರೆ. ಯಾವ ವಿಶೇಷ ಮಕ್ಕಳಿದ್ದಾರೆ, ಅವರು ಸದಾ ಸ್ವ
ಚಿಂತನೆ, ಶುಭ ಚಿಂತನೆಯಲ್ಲಿರುವ ಕಾರಣದಿಂದರ ಸರ್ವರ ಶುಭಚಿಂತಕರಾಗಿದ್ದಾರೆ. ಯಾರು ಸದಾ ಶುಭ
ಚಿಂತನೆಯಲ್ಲಿ ಇರುತ್ತಾರೆ, ಅವರು ಸ್ವತಹವಾಗಿಯೇ ಶುಭಚಿಂತಕರಾಗಿ ಬಿಡುತ್ತಾರೆ. ಶುಭ ಚಿಂತನೆಗೆ
ಆಧಾರವಾಗಿದೆ - ಶುಭ ಚಿಂತಕರಾಗುವುದು. ಮೊದಲ ಹೆಜ್ಜೆಯಾಗಿದೆ - ಸ್ವ-ಚಿಂತನೆ. ಸ್ವ-ಚಿಂತನೆ
ಅರ್ಥಾತ್ ಬಾಪ್ದಾದಾರವರು ‘ನಾನು ಯಾರು' ಎನ್ನುವ ಯಾವ ಒಗಟನ್ನು ಬಿಡಿಸಿ ತಿಳಿಸಿದ್ದಾರೆ, ಅದನ್ನು
ಸದಾ ಸ್ಮೃತಿ ಸ್ವರೂಪದಲ್ಲಿ ಇಟ್ಟುಕೊಳ್ಳುವುದು. ಹೇಗೆ ಬಾಪ್ ಮತ್ತು ದಾದಾರವರು ಯಾರಾಗಿದ್ದಾರೆ,
ಹೇಗಿದ್ದಾರೆಯೋ ಹಾಗೆಯೇ ಅವರನ್ನು ತಿಳಿಯುವುದೇ ಯಥಾರ್ಥವಾಗಿ ತಿಳಿಯುವುದಾಗಿದೆ ಮತ್ತು ಇಬ್ಬರನ್ನೂ
ತಿಳಿಯಲೇಬೇಕು. ಹೀಗೆಯೇ ಸ್ವಯಂನ್ನೂ ಯಾರಾಗಿದ್ದೇನೆ, ಹೇಗಿದ್ದೇನೆ ಅರ್ಥಾತ್ ಆದಿ-ಅನಾದಿ ಶ್ರೇಷ್ಠ
ಸ್ವರೂಪದವನಾಗಿದ್ದೇನೆ, ಆ ರೂಪದಿಂದ ತಮ್ಮನ್ನು ತಾವು ತಿಳಿಯುವುದು ಮತ್ತು ಅದೇ ಸ್ವಚಿಂತನೆಯಲ್ಲಿ
ಇರುವುದಕ್ಕೆ ಹೇಳಲಾಗುತ್ತದೆ - ಸ್ವಚಿಂತನೆ. ನಾನು ಬಲಹೀನನಿದ್ದೇನೆ, ಪುರುಷಾರ್ಥಿ ಆಗಿದ್ದೇನೆ.
ಆದರೆ ಸಫಲತಾ ಸ್ವರೂಪನಲ್ಲ, ಮಾಯಾಜೀತನಲ್ಲ - ಇದನ್ನು ಯೋಚಿಸುವುದು ಸ್ವಚಿಂತನೆಯಲ್ಲ. ಏಕೆಂದರೆ
ಸಂಗಮಯುಗಿ ಪುರುಷೋತ್ತಮ ಬ್ರಾಹ್ಮಣ ಆತ್ಮ ಅರ್ಥಾತ್ ಅಭಿಮಾನಿ, ಈ ಸ್ಥಿತಿಯಲ್ಲಿ ಈ ಬಲಹೀನತೆಯ ಮಾತು
ಬರಲು ಸಾಧ್ಯವಿಲ್ಲ. ಅಂದಮೇಲೆ ಈ ದೇಹಾಭಿಮಾನದ ರಚನೆಯ ಚಿಂತನೆ ಮಾಡುವುದು - ಇದೂ ಸ್ವ ಚಿಂತನೆಯಲ್ಲ.
ಸ್ವ ಚಿಂತನೆ ಅರ್ಥಾತ್ ತಂದೆಯು ಹೇಗಿದ್ದಾರೆಯೋ ಹಾಗೆಯೇ ನಾನು ಶ್ರೇಷ್ಠ ಆತ್ಮನಿದ್ದೇನೆ. ಇಂತಹ
ಸ್ವ ಚಿಂತನೆಯಿರುವವರು ಶುಭಚಿಂತನೆ ಮಾಡಬಹುದು. ಶುಭಚಿಂತನೆ ಅರ್ಥಾತ್ ಜ್ಞಾನ ರತ್ನಗಳ ಮನನ
ಮಾಡುವುದು. ರಚೈತ ಮತ್ತು ರಚನೆಯ ಗುಹ್ಯ, ರಮಣೀಕ ರಹಸ್ಯಗಳಲ್ಲಿ ರಮಣ ಮಾಡುವುದು. ಒಂದಿದೆ - ಕೇವಲ
ರಿಪೀಟ್ ಮಾಡುವುದು, ಇನ್ನೊಂದು - ಜ್ಞಾನ ಸಾಗರನ ಪ್ರಕಂಪನಗಳಲ್ಲಿ ತೇಲಾಡುವುದು ಅರ್ಥಾತ್ ಜ್ಞಾನದ
ಖಜಾನೆಯ ಮಾಲೀಕತ್ವದ ನಶೆಯಲ್ಲಿದ್ದು, ಸದಾ ಜ್ಞಾನರತ್ನಗಳೊಂದಿಗೆ ಆಟವಾಡುತ್ತಿರುವುದು. ಜ್ಞಾನದ
ಒಂದೊಂದು ಅಮೂಲ್ಯವಾದ ಮತ್ತು ಅನುಭವದಲ್ಲಿ ತರುವುದು ಅರ್ಥಾತ್ ಸ್ವಯಂನ್ನು ಅಮೂಲ್ಯ ರತ್ನಗಳಿಂದ ಸದಾ
ಮಹಾನರನ್ನಾಗಿ ಮಾಡಿಕೊಳ್ಳುವುದು. ಹೀಗೆ ಜ್ಞಾನದ ರಮಣ ಮಾಡುವವರೇ ಶುಭಚಿಂತನೆ ಮಾಡುವವರಾಗಿದ್ದಾರೆ.
ಹೀಗೆ ಶುಭ ಚಿಂತನೆ ಮಾಡುವವರು ಸ್ವತಹವಾಗಿಯೇ ವ್ಯರ್ಥ ಚಿಂತನೆ ಪರಚಿಂತನೆಯಿಂದ ದೂರವಿರುತ್ತಾರೆ.
ಸ್ವಚಿಂತನೆ, ಶುಭಚಿಂತನೆ ಮಾಡುವ ಆತ್ಮವು ಪ್ರತೀ ಸೆಕೆಂಡ್ ತಮ್ಮ ಶುಭ ಚಿಂತನೆಯಲ್ಲಿ ಇಷ್ಟೂ
ಬ್ಯುಜಿಯಿರುತ್ತಾರೆ, ಬೇರೆ ಚಿಂತನೆಯನ್ನು ಮಡುವುದಕ್ಕಾಗಿ ಸೆಕೆಂಡ್ ಅಥವಾ ಶ್ವಾಸವೂ
ಬಿಡುವಿರುವುದಿಲ್ಲ. ಆದ್ದರಿಂದ ಸದಾ ಪರಚಿಂತನೆ ಮತ್ತು ವ್ಯರ್ಥ ಚಿಂತನೆಯಿಂದ ಸಹಜವಾಗಿಯೇ
ಸುರಕ್ಷಿತವಾಗಿರುತ್ತಾರೆ. ಬುದ್ಧಿಯಲ್ಲಿಯೂ ಸ್ಥಾನವಿರುವುದಿಲ್ಲ, ಸಮಯವೂ ಇರುವುದಿಲ್ಲ. ಸಮಯವೂ
ಶುಭಚಿಂತನೆಯಲ್ಲಿ ತೊಡಗಿರುತ್ತದೆ, ಬುದ್ಧಿಯು ಸದಾ ಜ್ಞಾನರತ್ನಗಳಿಂದ ಅರ್ಥಾತ್ ಶುಭ ಸಂಕಲ್ಪದಿಂದ
ಸಂಪನ್ನರಾಗಿದ್ದಾರೆ. ಮತ್ತ್ಯಾವುದೇ ಸಂಕಲ್ಪವು ಬರಲು ಅವಕಾಶವೇ ಇಲ್ಲ, ಇದಕ್ಕೆ ಹೇಳಲಾಗುತ್ತದೆ -
ಶುಭ ಚಿಂತನೆ ಮಾಡುವವರು, ಪ್ರತಿಯೊಂದು ಜ್ಞಾನದ ಮಾತಿನ ರಹಸ್ಯದಲ್ಲಿ ಹೋಗುವವರು. ಕೇವಲ ಸಂಗೀತದ
ಮಜದಲ್ಲಿ ಇರುವವರಲ್ಲ. ಸಂಗೀತ ಅರ್ಥಾತ್ ಮಾತಿನ ರಹಸ್ಯದಲ್ಲಿ ಹೋಗುವವರು. ಹೇಗೆ ಸ್ಥೂಲ ಸಂಗೀತವನ್ನೂ
ಕೇಳುವುದರಲ್ಲಿ ಬಹಳ ಇಷ್ಟವೆನಿಸುತ್ತದೆಯಲ್ಲವೆ. ಹೀಗೆಯೇ ಜ್ಞಾನದ ಮುರುಳಿಯ ಸಂಗೀತವು ಬಹಳ
ಇಷ್ಟವೆನಿಸುತ್ತದೆ. ಆದರೆ ಸಂಗೀತದ ಜೊತೆಗೆ ರಹಸ್ಯವನ್ನು ತಿಳಿದುಕೊಳ್ಳುವವರು ಜ್ಞಾನದ ಖಜಾನೆಯ
ರತ್ನಗಳ ಮಾಲೀಕರಾಗಿದ್ದು ಮನನ ಮಾಡುವುದರಲ್ಲಿ ಮಗ್ನರಾಗಿರುತ್ತಾರೆ. ಮಗ್ನ ಸ್ಥಿತಿಯವರ ಮುಂದೆ
ಯಾವುದೇ ವಿಘ್ನವು ಬರಲು ಸಾಧ್ಯವಿಲ್ಲ. ಇಂತಹ ಶುಭ ಚಿಂತನೆ ಮಾಡುವವರು ಸ್ವತಹವಾಗಿಯೇ ಸರ್ವರ
ಸಂಪರ್ಕದಲ್ಲಿ ಶುಭಚಿಂತಕರಾಗಿ ಬಿಡುತ್ತಾರೆ. ಸ್ವಚಿಂತನೆ, ನಂತರ ಶುಭಚಿಂತನೆ - ಹೀಗಿರುವ ಆತ್ಮರು
ಶುಭಚಿಂತಕರಾಗಿ ಬಿಡುತ್ತಾರೆ. ಏಕೆಂದರೆ ಯಾರು ಸ್ವಯಂ ಹಗಲು-ರಾತ್ರಿ ಶುಭಚಿಂತನೆಯಲ್ಲಿರುತ್ತಾರೆಯೋ,
ಅವರು ಅನ್ಯರ ಬಗ್ಗೆ ಎಂದಿಗೂ ಅಶುಭವನ್ನು ಯೋಚಿಸುವುದಿಲ್ಲ, ಅಶುಭವನ್ನು ನೋಡುವುದಿಲ್ಲ. ಅವರ ನಿಜ
ಸಂಸ್ಕಾರ ಅಥವಾ ಸ್ವಭಾವವು ಶುಭವಾಗಿರುವ ಕಾರಣದಿಂದ ವೃತ್ತಿ, ದೃಷ್ಟಿಯು ಸರ್ವರಲ್ಲಿ ಶುಭವನ್ನು
ನೋಡುವ ಮತ್ತು ಯೋಚಿಸುವ ಹವ್ಯಾಸವು ಸ್ವತಹವಾಗಿಯೇ ಆಗಿ ಬಿಡುತ್ತದೆ. ಆದ್ದರಿಂದ ಪ್ರತಿಯೊಬ್ಬರ
ಪ್ರತಿ ಶುಭಚಿಂತಕರಾಗಿರುತ್ತಾರೆ. ಯಾವುದೇ ಆತ್ಮನ ಬಲಹೀನತೆಯನ್ನು ನೋಡುತ್ತಿದ್ದರೂ, ಆ ಆತ್ಮನ
ಬಗ್ಗೆ - ಇವರಂತು ಹೀಗೆಯೇ ಇದ್ದಾರೆ ಎಂದು ಅಶುಭ ಅಥವಾ ವ್ಯರ್ಥವನ್ನು ಯೋಚಿಸುವುದಿಲ್ಲ. ಆದರೆ
ಇಂತಹ ಬಲಹೀನ ಆತ್ಮರಿಗೆ ಸದಾ ಉಮ್ಮಂಗ-ಉಲ್ಲಾಸದ ರೆಕ್ಕೆಗಳನ್ನು ಕೊಟ್ಟು ಶಕ್ತಿಶಾಲಿ ಮಾಡುತ್ತಾ
ಶ್ರೇಷ್ಠ ಮಟ್ಟಕ್ಕೆ ಹಾರಿಸುತ್ತಾರೆ. ಸದಾ ಆ ಆತ್ಮನ ಬಗ್ಗೆ ಶುಭಭಾವನೆ, ಶುಭಕಾಮನೆಯ ಮೂಲಕ
ಸಹಯೋಗಿಯಾಗುವರು. ಶುಭಚಿಂತಕ ಅರ್ಥಾತ್ ಭರವಸೆಯಿಲ್ಲದವರನ್ನು ಭರವಸೆಯಿರುವವರನ್ನಾಗಿ ಮಾಡುವವರು.
ಶುಭಚಿಂತನೆಯ ಖಜಾನೆಯಿಂದ ಬಲಹೀನರನ್ನೂ ಸಂಪನ್ನರನ್ನಾಗಿ ಮಾಡಿ ಮುಂದುವರೆಸುತ್ತಾರೆ. ಹೀಗೆ
ಯೋಚಿಸುವುದಿಲ್ಲ - ಇವರಲ್ಲಂತು ಜ್ಞಾನವೇ ಇಲ್ಲ. ಇವರು ಜ್ಞಾನಕ್ಕೆ ಪಾತ್ರರಲ್ಲ, ಈ ಜ್ಞಾನದಲ್ಲಿ
ನಡೆಯಲು ಸಾಧ್ಯವಿಲ್ಲ. ಶುಭಚಿಂತಕರು ಬಾಪ್ದಾದಾರವರ ಮೂಲಕ ತೆಗೆದುಕೊಂಡಿರುವ ಶಕ್ತಿಗಳ ಆಶ್ರಯದ
ಆಧಾರವನ್ನು ಕೊಟ್ಟು, ಕುಂಟುತ್ತಿರುವವರನ್ನೂ ನಡೆಸಲು ನಿಮಿತ್ತರಾಗಿ ಬಿಡುತ್ತಾರೆ. ಶುಭಚಿಂತಕ
ಆತ್ಮವು ತನ್ನ ಶುಭಚಿಂತಕ ಸ್ಥಿತಿಯ ಮೂಲಕ ಹೃದಯ ವಿಧೀರ್ಣ ಆತ್ಮರಿಗೆ ದಿಲ್ಖುಷ್ ಮಿಠಾಯಿಯ ಮೂಲಕ
ಆರೋಗ್ಯವಂತರನ್ನಾಗಿ ಮಾಡಿಸುತ್ತಾರೆ. ದಿಲ್ಖುಷ್ ಮಿಠಾಯಿಯನ್ನು ತಿನ್ನುತ್ತೀರಲ್ಲವೆ. ಅಂದಮೇಲೆ
ಅನ್ಯರಿಗೂ ತಿನ್ನಿಸುವುದೂ ಬರುತ್ತದೆಯಲ್ಲವೆ. ಶುಭಚಿಂತಕ ಆತ್ಮವು ಯಾರದೇ ಬಲಹೀನತೆಯು ಗೊತ್ತಿದ್ದರೂ
ಸಹ, ಆ ಆತ್ಮನ ಬಲಹೀನತೆಯನ್ನು ಮರೆಸುತ್ತಾ, ತನ್ನ ವಿಶೇಷತೆಯ ಶಕ್ತಿಯ ಸಮರ್ಥತೆಯನ್ನು ನೆನಪಿಗೆ
ತರಿಸುತ್ತಾ, ಅವರನ್ನೂ ಸಮರ್ಥರನ್ನಾಗಿ ಮಾಡಿ ಬಿಡುವರು. ಯಾರ ಬಗ್ಗೆಯೂ ತಿರಸ್ಕಾರ ದೃಷ್ಟಿಯಿಲ್ಲ.
ಸದಾಕಾಲವೂ ಬಿದ್ದಿರುವ ಆತ್ಮರನ್ನು ಶ್ರೇಷ್ಠ ಮಟ್ಟಕ್ಕೆ ಹಾರಿಸುವ ದೃಷ್ಟಿಯಿರುತ್ತದೆ. ಕೇವಲ ಸ್ವಯಂ
ಶುಭ ಚಿಂತನೆಯಲ್ಲಿರಿ ಹಾಗೂ ಶಕ್ತಿಶಾಲಿ ಆತ್ಮರಾಗುವುದು - ಇದೂ ಸಹ ಮೊದಲ ಸ್ಟೇಜ್ ಅಲ್ಲ. ಇದಕ್ಕೂ
ಶುಭಚಿಂತಕರೆಂದು ಹೇಳುವುದಿಲ್ಲ. ಶುಭಚಿಂತಕ ಅರ್ಥಾತ್ ತಮ್ಮ ಖಜಾನೆಗಳನ್ನು ಮನಸ್ಸಾ ಮೂಲಕ, ವಾಚಾ
ಮೂಲಕ, ತಮ್ಮ ಆತ್ಮಿಕ ಸಂಬಂಧ-ಸಂಪರ್ಕದ ಮೂಲಕ ಅನ್ಯ ಆತ್ಮರ ಬಗ್ಗೆ ಸೇವೆಯಲ್ಲಿ ತೊಡಗುವುದು.
ಶುಭಚಿಂತಕ ಆತ್ಮರು ನಂಬರ್ವನ್ ಸೇವಾಧಾರಿ, ಸತ್ಯ ಸೇವಾಧಾರಿಯಾಗಿದ್ದಾರೆ, ಇಂತಹ
ಶುಭಚಿಂತಕರಾಗಿದ್ದೀರಾ? ಸದಾ ವೃತ್ತಿ ಶುಭ, ದೃಷ್ಟಿಯು ಶುಭ. ಅಂದಮೇಲೆ ಶ್ರೇಷ್ಠ ಬ್ರಾಹ್ಮಣರ
ಸೃಷ್ಟಿಯೂ ಸಹ ಶುಭವಾಗಿ ಕಾಣಿಸುತ್ತದೆ. ಹಾಗೆ ನೋಡಿದರೆ ಸಾಧಾರಣ ರೂಪದಲ್ಲಿ ಹೇಳಲಾಗುತ್ತದೆ - ಶುಭ
ನುಡಿಯಿರಿ. ಬ್ರಾಹ್ಮಣ ಆತ್ಮರಂತು ಇರುವುದೇ ಶುಭ ಜನ್ಮದವರು. ಶುಭ ಸಮಯದಲ್ಲಿ ಜನ್ಮ ಪಡೆದಿದ್ದೀರಿ.
ಬ್ರಾಹ್ಮಣರ ಜನ್ಮದ ಗಳಿಗೆ ಅರ್ಥಾತ್ ವೇಳೆಯು ಶುಭವಾಗಿದೆಯಲ್ಲವೆ. ಭಾಗ್ಯದ ದೆಶೆಯೂ ಸಹ ಶುಭವಾಗಿದೆ.
ಸಂಬಂಧವೂ ಶುಭವಿದೆ. ಸಂಕಲ್ಪ, ಕರ್ಮವೂ ಶುಭವಿದೆ. ಆದ್ದರಿಂದ ಬ್ರಾಹ್ಮಣ ಆತ್ಮರು ಸಾಕಾರದಲ್ಲೇನು,
ಆದರೆ ಸ್ವಪ್ನದಲ್ಲಿಯೂ ಅಶುಭದ ಹೆಸರು-ಚಿಹ್ನೆಯಿರುವುದಿಲ್ಲ - ಇಂತಹ ಶುಭಚಿಂತಕ
ಆತ್ಮರಾಗಿದ್ದೀರಲ್ಲವೆ. ಸ್ಮೃತಿ ದಿನದಂತು ವಿಶೇಷವಾಗಿ ಬಂದಿದ್ದೀರಿ - ಸ್ಮೃತಿ ದಿನ ಅರ್ಥಾತ್
ಸಮರ್ಥ ದಿನ. ಅಂದಮೇಲೆ ವಿಶೇಷ ಸಮರ್ಥ ಆತ್ಮರಾಗಿದ್ದೀರಲ್ಲವೆ. ಬಾಪ್ದಾದಾರವರೂ ಹೇಳುತ್ತಾರೆ - ಸದಾ
ಸಮರ್ಥ ಆತ್ಮರು ಸಮರ್ಥ ದಿನವನ್ನು ಆಚರಿಸುವವರು ಭಲೆ ಬನ್ನಿರಿ. ಸಮರ್ಥ ಬಾಪ್ದಾದಾರವರು ಸಮರ್ಥ
ಮಕ್ಕಳಿಗೆ ಸದಾಕಾಲವೂ ಸ್ವಾಗತ ಮಾಡುತ್ತಾರೆ. ತಿಳಿಯಿತೆ! ಒಳ್ಳೆಯದು.
ಸದಾ ಸ್ವಚಿಂತನೆಯ ಆತ್ಮಿಕ ನಶೆಯಲ್ಲಿರುವ, ಶುಭಚಿಂತನೆಯ ಖಜಾನೆಯಿಂದ ಸಂಪನ್ನರಾಗಿರುವವರು,
ಶುಭಚಿಂತಕರಾಗಿ ಸರ್ವ ಆತ್ಮರನ್ನೂ ಹಾರುತ್ತಾ ಹಾರಿಸುವವರು, ಸದಾ ತಂದೆಯ ಸಮಾನ ದಾತಾ ವರದಾತನಾಗಿ
ಎಲ್ಲರನ್ನೂ ಶಕ್ತಿಶಾಲಿ ಮಾಡುವಂತಹ, ಇಂತಹ ಸಮರ್ಥ ಸಮಾನ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ
ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ
- ಮಾತೆಯರ ಗ್ರೂಪ್ನೊಂದಿಗೆ:-
1. ಮಾತೆಯರು ಸದಾ
ತಮ್ಮ ಶ್ರೇಷ್ಠ ಭಾಗ್ಯವನ್ನು ನೋಡುತ್ತಾ ಹರ್ಷಿತರಾಗುತ್ತಿದ್ದೀರಲ್ಲವೆ. ಚರಣಗಳ ದಾಸಿಯಿಂದ ಶಿರದ
ಕಿರೀಟವಾಗಿ ಬಿಟ್ಟೆವು - ಈ ಖುಷಿಯು ಸದಾ ಇರುತ್ತದೆಯೇ? ಕೆಲವೊಮ್ಮೆ ಖುಷಿಯ ಖಜಾನೆಯು
ಕಳ್ಳತನವಾಗುವುದಿಲ್ಲವೇ? ಮಾಯೆಯು ಕಳ್ಳತನ ಮಾಡುವುದರಲ್ಲಿ ಬುದ್ಧಿವಂತನಿದೆ. ಒಂದುವೇಳೆ ಸದಾ
ಬಹದ್ದೂರ್ ಆಗಿದ್ದೀರಿ, ಬುದ್ಧಿವಂತರಾಗಿದ್ದೀರೆಂದರೆ ಮಾಯೆಯೇನೂ ಸಹ ಮಾಡಲು ಸಾಧ್ಯವಿಲ್ಲ, ಇನ್ನೂ
ಅದೇ ದಾಸಿಯಾಗಿ ಬಿಡುತ್ತದೆ, ಶತ್ರುವಿನಿಂದ ಸೇವಾಧಾರಿ ಆಗಿ ಬಿಡುತ್ತದೆ. ಅಂದಮೇಲೆ ಹೀಗೆ
ಮಾಯಾಜೀತರಾಗಿದ್ದೀರಾ? ತಂದೆಯ ನೆನಪಿದೆ ಅರ್ಥಾತ್ ಸದಾ ಸಂಗದಲ್ಲಿರುವವರು. ಆತ್ಮಿಕ ರಂಗೇರಿರುತ್ತದೆ.
ತಂದೆಯ ಸಂಗವಿಲ್ಲವೆಂದರೆ ಆತ್ಮಿಕ ರಂಗಿಲ್ಲ. ಅಂದಮೇಲೆ ಎಲ್ಲರೂ ತಂದೆಯ ಸಂಗದ ರಂಗಿನಲ್ಲಿ
ರಂಗಿತರಾಗಿರುವ ನಷ್ಟಮೋಹಿಯಾಗಿದ್ದೀರಾ? ಅಥವಾ ಸ್ವಲ್ಪ-ಸ್ವಲ್ಪ ಮೋಹವಿದೆಯೇ? ಮಕ್ಕಳಲ್ಲಿ
ಇರದಿರಬಹುದು, ಆದರೆ ಮೊಮ್ಮಕ್ಕಳು, ಮರಿ ಮಕ್ಕಳಲ್ಲಿರುತ್ತದೆ. ಮಕ್ಕಳ ಸೇವೆಯು ಪೂರ್ಣವಾಯಿತು,
ಅನ್ಯರ ಸೇವೆಯು ಪ್ರಾರಂಭವಾಯಿತು. ಕಡಿಮೆಯಾಗುವುದಿಲ್ಲ. ಒಂದರ ಹಿಂದೆ ಒಂದು ಸಾಲಾಗಿ ಬಿಡುತ್ತದೆ.
ಅಂದಮೇಲೆ ಇದರಿಂದ ಬಂಧನಮುಕ್ತರಾಗಿದ್ದೀರಾ? ಮಾತೆಯರದು ಎಷ್ಟು ಶ್ರೇಷ್ಠವಾದ ಪ್ರಾಪ್ತಿಯಾಯಿತು.
ಯಾರು ಸಂಪೂರ್ಣವಾಗಿ ಖಾಲಿ ಕೈ ಆಗಿ ಬಿಟ್ಟಿದ್ದಿರಿ, ಅವರೀಗ ಸಂಪನ್ನರಾಗಿ ಬಿಟ್ಟರು. ಎಲ್ಲವನ್ನೂ
ಕಳೆದಿರಿ, ಈಗ ಮತ್ತೆ ತಂದೆಯ ಮೂಲಕ ಸರ್ವ ಖಜಾನೆಗಳು ಪ್ರಾಪ್ತಿ ಮಾಡಿಕೊಂಡಿರಿ, ಅಂದಮೇಲೆ ಮಾತೆಯರು
ಎಂತಹವರಿಂದ ಏನಾಗಿ ಬಿಟ್ಟಿರಿ? ನಾಲ್ಕು ಗೋಡೆಗಳ ಮಧ್ಯದಲ್ಲಿರುವವರು ವಿಶ್ವದ ಮಾಲೀಕರಾಗಿ ಬಿಟ್ಟಿರಿ.
ಈ ನಶೆಯಿರುತ್ತದೆಯಲ್ಲವೆ - ತಂದೆಯು ನಮ್ಮನ್ನು ತನ್ನವರನ್ನಾಗಿ ಮಾಡಿಕೊಂಡರೆಂದರೆ ಎಷ್ಟೊಂದು
ಭಾಗ್ಯವಿದೆ? ಭಗವಂತನು ಬಂದು ತನ್ನವರನ್ನಾಗಿ ಮಾಡಿಕೊಂಡರು, ಇಂತಹ ಶ್ರೇಷ್ಠ ಭಾಗ್ಯವಂತು ಎಂದಿಗೂ
ಆಗಲು ಸಾಧ್ಯವಿಲ್ಲ. ಅಂದಮೇಲೆ ತಮ್ಮನ್ನು ಭಾಗ್ಯವನ್ನು ನೋಡುತ್ತಾ ಸದಾ ಖುಷಿಯಿರುತ್ತದೆಯಲ್ಲವೆ.
ಕೆಲವೊಮ್ಮೆ ಈ ಖಜಾನೆಯನ್ನು ಮಾಯೆಯು ಕಳ್ಳತನ ಮಾಡಬಾರದು.
2. ಎಲ್ಲರೂ ಪುಣ್ಯಾತ್ಮರಾಗಿದ್ದೀರಾ? ಎಲ್ಲದಕ್ಕಿಂತಲೂ ಶ್ರೇಷ್ಠ ಪುಣ್ಯವಾಗಿದೆ - ಅನ್ಯರಿಗೆ
ಶಕ್ತಿಯನ್ನು ಕೊಡುವುದು. ಅಂದಮೇಲೆ ಸದಾ ಸರ್ವ ಆತ್ಮರ ಬಗ್ಗೆ ಪುಣ್ಯಾತ್ಮ ಅರ್ಥಾತ್ ತಮಗೆ
ಸಿಕ್ಕಿರುವ ಖಜಾನೆಯ ಮಹಾದಾನಿಯಾಗಿರಿ. ಇಂತಹ ದಾನ ಮಾಡುವವರು ಅನ್ಯರಿಗೆಷ್ಟು ಕೊಡುತ್ತಾರೆಯೋ ಅಷ್ಟೂ
ಪದಮದಷ್ಟು ವೃದ್ಧಿಯಾಗುತ್ತದೆ. ಅಂದಮೇಲೆ ಇದನ್ನು ಕೊಡುವುದು ಅರ್ಥಾತ್ ತೆಗೆದುಕೊಳ್ಳುವುದಾಗಿ
ಬಿಡುತ್ತದೆ. ಇಂತಹ ಉಮ್ಮಂಗವಿರುತ್ತದೆಯೇ? ಈ ಉಮ್ಮಂಗದ ಪ್ರತ್ಯಕ್ಷ ಸ್ವರೂಪವಾಗಿದೆ - ಸೇವೆಯಲ್ಲಿ
ಸದಾ ಮುಂದುವರೆಯುತ್ತಿರುವುದು. ಸೇವೆಯಲ್ಲಿ ಎಷ್ಟಾದರೂ ತನು-ಮನ-ಧನವನ್ನು ತೊಡಗಿಸುತ್ತೀರಿ, ಅಷ್ಟು
ವರ್ತಮಾನದಲ್ಲಿಯೂ ಮಹಾದಾನಿ ಪುಣ್ಯಾತ್ಮರಾಗುತ್ತೀರಿ ಮತ್ತು ಭವಿಷ್ಯದಲ್ಲಿಯೂ ಸದಾಕಾಲಕ್ಕಾಗಿ ಜಮಾ
ಮಾಡಿಕೊಳ್ಳುತ್ತೀರಿ. ತಮ್ಮೆದೆಲ್ಲವನ್ನೂ ಜಮಾ ಮಾಡಿಕೊಳ್ಳುವ ಅವಕಾಶವು ಯಾರಿಗೆ ಸಿಗುತ್ತದೆಯೋ, ಇದೂ
ಸಹ ಡ್ರಾಮಾದಲ್ಲಿ ಭಾಗ್ಯವಿದೆ. ಅಂದಮೇಲೆ ಈ ಸುವರ್ಣಾವಕಾಶವನ್ನು ತೆಗೆದುಕೊಳ್ಳುವವರಾಗಿದ್ದೀರಲ್ಲವೆ.
ಯೋಚಿಸಿ ಮಾಡಿದಿರೆಂದರೆ ಸಿಲ್ವರ್ ಚಾನ್ಸ್, ವಿಶಾಲ ಹೃದಯಿಯಾಗಿ ಮಾಡಿದಿರೆಂದರೆ ಗೋಲ್ಡನ್ ಚಾನ್ಸ್,
ಅಂದಾಗ ಎಲ್ಲರೂ ನಂಬರ್ವನ್ ಚಾನ್ಸ್ ಲರ್ ಆಗಿರಿ.
ಡಬಲ್ ವಿದೇಶಿ
ಮಕ್ಕಳೊಂದಿಗೆ:-
ಬಾಪ್ದಾದಾರವರು
ಪ್ರತಿನಿತ್ಯವೂ ಸ್ನೇಹಿ ಮಕ್ಕಳಿಗೆ ಸ್ನೇಹದ ರಿಟರ್ನ್ ಕೊಡುತ್ತಾರೆ. ತಂದೆಗೆ ಮಕ್ಕಳೊಂದಿಗೆ ಇಷ್ಟೂ
ಸ್ನೇಹವಿದೆ, ಮಕ್ಕಳು ಯಾವ ಸಂಕಲ್ಪವನ್ನೇ ಮಾಡುತ್ತಾರೆ, ಮುಖದವರೆಗೂ ಬರುವುದಿಲ್ಲ ಮತ್ತು ತಂದೆಯು
ಅದರ ರಿಟರ್ನ್ನ್ನು ಮುಂಚಿತವಾಗಿಯೇ ಕೊಟ್ಟು ಬಿಡುತ್ತಾರೆ. ಸಂಗಮಯುಗದಲ್ಲಿ ಇಡೀ ಕಲ್ಪಕ್ಕಾಗಿ
ನೆನಪು-ಪ್ರೀತಿಯನ್ನು ಕೊಟ್ಟು ಬಿಡುತ್ತಾರೆ. ಇಷ್ಟೂ ನೆನಪು-ಪ್ರೀತಿಯನ್ನು ಕೊಡುತ್ತಾರೆ, ಅವರದು
ಜನ್ಮ-ಜನ್ಮಾಂತರಕ್ಕಾಗಿ ನೆನಪು-ಪ್ರೀತಿಯಿಂದ ಜೋಳಿಗೆಯನ್ನು ತುಂಬಿರುತ್ತದೆ. ಬಾಪ್ದಾದಾರವರು
ಸ್ನೇಹಿ ಆತ್ಮರಿಗೆ ಸದಾ ಸಹಯೋಗವನ್ನು ಕೊಡುತ್ತಾ ಮುಂದುವರೆಸುತ್ತಿರುತ್ತಾರೆ. ತಂದೆಯವರು ಯಾವ
ಸ್ನೇಹವನ್ನು ಕೊಟ್ಟಿದ್ದಾರೆ, ಆ ಸ್ನೇಹದ ಸ್ವರೂಪರಾಗಿದ್ದು ಯಾರನ್ನೇ ಸ್ನೇಹಿಯನ್ನಾಗಿ
ಮಾಡುತ್ತೀರೆಂದರೆ, ಅವರು ತಂದೆಯ ಮಗುವಾಗಿ ಬಿಡುತ್ತಾರೆ. ಸ್ನೇಹಿಯೇ ಎಲ್ಲರನ್ನೂ ಆಕರ್ಷಿತ
ಮಾಡುವಂತದ್ದಾಗಿದೆ. ಎಲ್ಲಾ ಮಕ್ಕಳ ಸ್ನೇಹವು ತಂದೆಯ ಬಳಿ ತಲುಪುತ್ತಿರುತ್ತದೆ. ಒಳ್ಳೆಯದು!
ಮೊರಿಷೀಯಸ್
ಪಾರ್ಟಿಯೊಂದಿಗೆ:-
ಎಲ್ಲರೂ ಅದೃಷ್ಟ
ನಕ್ಷತ್ರಗಳಾಗಿದ್ದೀರಲ್ಲವೆ? ಎಷ್ಟೊಂದು ಭಾಗ್ಯದ ಪ್ರಾಪ್ತಿ ಮಾಡಿಕೊಂಡು ಬಿಟ್ಟಿರಿ. ಇದರಂತಹ
ಶ್ರೇಷ್ಠ ಭಾಗ್ಯವು ಮತ್ತ್ಯಾವುದೂ ಆಗಲು ಸಾಧ್ಯವಿಲ್ಲ, ಏಕೆಂದರೆ ಭಾಗ್ಯವಿದಾತ ತಂದೆಯೇ ತಮ್ಮವರಾಗಿ
ಬಿಟ್ಟರು. ಅವರ ಮಕ್ಕಳಾಗಿ ಬಿಟ್ಟಿರಿ. ಯಾವಾಗ ಭಾಗ್ಯವಿದಾತನು ತಮ್ಮವರಾಗಿಬಿಟ್ಟರೆಂದರೆ,
ಇದಕ್ಕಿಂತ ಶ್ರೇಷ್ಠ ಭಾಗ್ಯವೇನಾಗಲು ಸಾಧ್ಯ! ಅಂದಮೇಲೆ ಇಂತಹ ಶ್ರೇಷ್ಠ ಭಾಗ್ಯವಂತರು ಹೊಳೆಯುವಂತಹ
ನಕ್ಷತ್ರವಾಗಿದ್ದೀರಿ. ಅನ್ಯರೆಲ್ಲರನ್ನೂ ಭಾಗ್ಯವಂತರನ್ನಾಗಿ ಮಾಡುವವರಾಗಿದ್ದೀರಿ. ಏಕೆಂದರೆ
ಯಾರಿಗೆ ಯಾವುದೇ ಒಳ್ಳೆಯ ವಸ್ತುವು ಸಿಕ್ಕಿತೆಂದರೆ, ಅದನ್ನು ಅನ್ಯರಿಗೆ ಕೊಡದೇ ಇರಲು ಸಾಧ್ಯವಿಲ್ಲ.
ಹೇಗೆ ನೆನಪು ಮಾಡದೇ ಇಲ್ಲದಿರಲು ಸಾಧ್ಯವಿಲ್ಲ ಹಾಗೆಯೇ ಸೇವೆಯೂ ಸಹ ಇಲ್ಲದೇ ಇರಲು
ಸಾಧ್ಯವಾಗುವುದಿಲ್ಲ. ಒಂದೊಂದು ಮಗುವು ಅನೇಕರ ದೀಪವನ್ನು ಬೆಳಗಿಸುತ್ತಾ ದೀಪಾವಳಿ
ಮಾಡುವವರಾಗಿದ್ದಾರೆ. ದೀಪಾವಳಿಯು ರಾಜತಿಲಕ ಸಂಕೇತ(ಗುರುತು)ವಾಗಿದೆ. ಅಂದಮೇಲೆ ದೀಪಾವಳಿ
ಮಾಡುವವರಿಗೆ ರಾಜ್ಯ ತಿಲಕವು ಸಿಕ್ಕಿ ಬಿಡುತ್ತದೆ. ಸೇವೆ ಮಾಡುವುದು ಅರ್ಥಾತ್ ರಾಜ್ಯ ತಿಲಕಧಾರಿ
ಆಗುವುದಾಗಿದೆ. ಸೇವೆಯ ಉಮ್ಮಂಗ-ಉತ್ಸಾಹದಲ್ಲಿರುವವರು ಅನ್ಯರಿಗೂ ಉಮ್ಮಂಗ-ಉತ್ಸಾಹದ ರೆಕ್ಕೆಗಳನ್ನು
ಕೊಡಲು ಸಾಧ್ಯವಾಗುವುದು.
ಪ್ರಶ್ನೆ:-
ಯಾವ ಮುಖ್ಯವಾದ
ಧಾರಣೆಯ ಆಧಾರದಿಂದ ಸಹಜವಾಗಿಯೇ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಬಹುದು?
ಉತ್ತರ:-
ಸ್ವಯಂನ್ನು
ನಮ್ರಚಿತ, ನಿರ್ಮಾಣ ಮತ್ತು ಪ್ರತೀ ಮಾತಿನಲ್ಲಿ ತಮಗೆ ತಾವೇ ಗುಣಗ್ರಾಹಕರನ್ನಾಗಿ ಮಾಡಿಕೊಂಡು
ಬಿಡುತ್ತೀರೆಂದರೆ, ಸಹಜವಾಗಿಯೇ ಸಿದ್ಧಿಯನ್ನು ಪಡೆದುಕೊಂಡು ಬಿಡುತ್ತೀರಿ. ಯಾರು ಸ್ವಯಂನ್ನು
ಸಿದ್ಧ ಮಾಡುತ್ತಾರೆಯೋ, ಅವರು ಜಿದ್ದು(ಹಠ) ಮಾಡುತ್ತಾರೆ. ಆದ್ದರಿಂದ ಅವರೆಂದಿಗೂ ಪ್ರಸಿದ್ಧರಾಗಲು
ಸಾಧ್ಯವಿಲ್ಲ. ಜಿದ್ದು ಮಾಡುವವರೆಂದಿಗೂ ಸಹ ಸಿದ್ಧಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅವರು
ಪ್ರಸಿದ್ಧರಾಗುವುದಕ್ಕೆ ಬದಲು ಇನ್ನೂ ದೂರವಾಗಿ ಬಿಡುತ್ತಾರೆ.
ಪ್ರಶ್ನೆ:-
ಯಾವಾಗ ವಿಶ್ವದ
ಅಥವಾ ಈಶ್ವರೀಯ ಪರಿವಾರದ ಪ್ರಶಂಸೆಗೆ ಹಕ್ಕುದಾರರಾಗುವರು?
ಉತ್ತರ:-
ಯಾವಾಗ ಸ್ವಯಂ
ಪ್ರತಿ ಅಥವಾ ಅನ್ಯರ ಪ್ರತಿ ಎಲ್ಲಾ ಪ್ರಶ್ನೆಗಳೂ ಸಮಾಪ್ತಿಯಾಗುತ್ತವೆ. ಹೇಗೆ
ಒಬ್ಬರಿನ್ನೊಬ್ಬರಿಮ್ದ ಸ್ವಯಂನ್ನು ಕಡಿಮೆಯೆಂದು ತಿಳಿಯುವುದಿಲ್ಲ, ತಿಳಿಯುವುದರಿಂದ ತಮ್ಮನ್ನು
ಅಥಾರಿಟಿಯೆಂದು ತಿಳಿಯುತ್ತೀರಿ. ಹೀಗೆ ತಿಳಿಯುವ ಮತ್ತು ಮಾಡುವ - ಇವೆರಡರಲ್ಲಿ ಹಕ್ಕುದಾರರಾಗಿರಿ,
ಆಗಲೇ ವಿಶ್ವದ ಅಥವಾ ಈಶ್ವರೀಯ ಪರಿವಾರದ ಪ್ರಶಂಸೆಗೆ ಹಕ್ಕುದಾರರಾಗುತ್ತೀರಿ. ಯಾವುದೇ ಮಾತಿನಲ್ಲಿ
ಬೇಡುವವರಲ್ಲ, ದಾತಾ ಆಗಿರಿ. ಒಳ್ಳೆಯದು. ಓಂ ಶಾಂತಿ.
ವರದಾನ:
ಶ್ರೀಮತದನುಸಾರವಾಗಿ ಸೇವೆಯಲ್ಲಿ ಸಂತುಷ್ಟತೆಯ ವಿಶೇಷತೆಯನ್ನು ಅನುಭವ ಮಾಡುವಂತಹ ಸಫಲತಾಮೂರ್ತ ಭವ.
ಯಾವುದೇ
ಸೇವೆಯನ್ನು ಮಾಡಿರಿ, ಯಾವುದೇ ಜಿಜ್ಞಾಸು(ವಿದ್ಯಾರ್ಥಿ) ಬರಲಿ ಅಥವಾ ಬರದಿರಲಿ, ಆದರೆ ಸ್ವಯಂ
ಸ್ವಯಂನಿಂದ(ತಾವು ತಮ್ಮಿಂದ) ಸಂತುಷ್ಟವಾಗಿ ಇರಿ. ನಿಶ್ಚಯವನ್ನಿಟ್ಟುಕೊಳ್ಳಿರಿ- ಒಂದುವೇಳೆ ನಾನು
ಸಂತುಷ್ಟನಾಗಿದ್ದೇನೆಂದರೆ ಅವಶ್ಯವಾಗಿ ಸಂದೇಶ ಕೊಡುವ ಕಾರ್ಯವನ್ನು ಮಾಡುತ್ತಾರೆ, ಇದರಲ್ಲಿ
ಬೇಸರವಾಗಬಾರದು. ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚುತ್ತಿಲ್ಲವೆಂದರೆ ಪರವಾಗಿಲ್ಲ, ತಮ್ಮ
ಲೆಕ್ಕಾಚಾರದಲ್ಲಂತು ಜಮಾ ಆಗಿ ಬಿಟ್ಟಿತು ಮತ್ತು ಅವರಿಗೆ ಸಂದೇಶವು ಸಿಕ್ಕಿ ಬಿಟ್ಟಿತು. ಒಂದುವೇಳೆ
ಸ್ವಯಂ ಸಂತುಷ್ಟವಾಗಿದ್ದೀರೆಂದರೆ ಖರ್ಚು ಸಫಲವಾಯಿತು. ಶ್ರೀಮತದನುಸಾರವಾಗಿ ಕಾರ್ಯವನ್ನು
ಮಾಡಿದಿರೆಂದರೆ ಶ್ರೀಮತವನ್ನು ಒಪ್ಪಿಕೊಳ್ಳುವುದೂ ಸಹ ಸಫಲತಾಮೂರ್ತಿ ಆಗುವುದಾಗಿದೆ.
ಸ್ಲೋಗನ್:
ಅಸಮರ್ಥ
ಆತ್ಮರಿಗೆ ಸಮರ್ಥತೆಯನ್ನು ಕೊಡಿ, ಆಗ ಅವರ ಆಶೀರ್ವಾದಗಳು ಸಿಗುತ್ತವೆ.