10.05.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಕರ್ಮಾತೀತರಾಗಿ ಹೋಗಬೇಕು, ಆದ್ದರಿಂದ ಒಳಗಡೆ ಯಾವುದೇ ಕೊರತೆಗಳಿರಬಾರದು, ತಮ್ಮನ್ನು ಪರಿಶೀಲನೆ ಮಾಡಿಕೊಂಡು ಕೊರತೆಗಳನ್ನು ತೆಗೆಯುತ್ತಾ ಹೋಗಿ”

ಪ್ರಶ್ನೆ:
ಯಾವ ಸ್ಥಿತಿಯನ್ನು ಮಾಡಿಕೊಳ್ಳಲು ಶ್ರಮವಾಗುತ್ತದೆ? ಅದಕ್ಕಾಗಿ ಪುರುಷಾರ್ಥವೇನಾಗಿದೆ?

ಉತ್ತರ:
ಈ ಕಣ್ಣಿನಿಂದ ನೋಡುವ ಯಾವುದೇ ವಸ್ತುವು ನಿಮ್ಮ ಮುಂದೆ ಬಾರದೇ ಇರಲಿ, ನೋಡುತ್ತಿದ್ದರೂ ನೋಡಬಾರದು. ದೇಹದಲ್ಲಿರುತ್ತಾ ದೇಹೀ-ಅಭಿಮಾನಿಯಾಗಿರಿ. ಈ ಸ್ಥಿತಿಯನ್ನು ಜಮಾ ಮಾಡಿಕೊಳ್ಳಲು ಸಮಯ ಹಿಡಿಸುತ್ತದೆ. ಬುದ್ಧಿಯಲ್ಲಿ ತಂದೆ ಹಾಗೂ ಮನೆಯ ವಿನಃ ಯಾವುದೇ ವಸ್ತು ನೆನಪಿಗೆ ಬರಬಾರದು. ಅದಕ್ಕಾಗಿ ಅಂತರ್ಮುಖಿಯಾಗಿ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕು, ತಮ್ಮ ದಿನಚರಿಯನ್ನು ಇಡಬೇಕು.

ಓಂ ಶಾಂತಿ.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಆತ್ಮಿಕ ಮಕ್ಕಳಿಗೆ ಇದು ತಿಳಿದಿದೆ- ನಾವು ನಮ್ಮ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ, ಇದರಲ್ಲಿ ರಾಜರೂ ಇರುತ್ತಾರೆಂದಾಗ ಪ್ರಜೆಗಳೂ ಇರುತ್ತಾರೆ. ಪುರುಷಾರ್ಥವಂತೂ ಎಲ್ಲರೂ ಮಾಡಬೇಕಾಗಿದೆ, ಯಾರು ಹೆಚ್ಚು ಪುರುಷಾರ್ಥ ಮಾಡುತ್ತಾರೆಯೋ ಅವರು ಹೆಚ್ಚು ಬಹುಮಾನ ಪಡೆಯುತ್ತಾರೆ. ಇದಂತೂ ಸರ್ವ ಸಾಮಾನ್ಯವಾದ ಕಾಯಿದೆಯಾಗಿದೆ. ಇದು ಹೊಸ ಮಾತೇನಲ್ಲ. ಇದಕ್ಕೆ ದೈವೀ ಹೂದೋಟ ಎಂದು ಹೇಳಿ ಅಥವಾ ರಾಜಧಾನಿ ಎಂದಾದರೂ ಹೇಳಿ. ಈಗ ಇದು ಕಲಿಯುಗೀ ತೋಟ ಅಥವಾ ಮುಳ್ಳುಗಳ ಕಾಡು. ಅದರಲ್ಲಿಯೂ ಕೆಲವು ಬಹಳ ಫಲವನ್ನು ಕೊಡುವ ವೃಕ್ಷಗಳಿರುತ್ತವೆ, ಕೆಲವು ಕಡಿಮೆ ಫಲ ಕೊಡುವ ವೃಕ್ಷಗಳಿರುತ್ತವೆ. ಕೆಲವು ಕಡಿಮೆ ರಸವುಳ್ಳ ಮಾವಿನ ಹಣ್ಣುಗಳಿರುತ್ತವೆ ಹಾಗೆಯೇ ಮಕ್ಕಳಲ್ಲಿಯೂ ನಂಬರವಾರ್ ಪುರುಷಾರ್ಥದನುಸಾರ ಇರುತ್ತಾರೆ. ಕೆಲವು ಒಳ್ಳೆಯ ಫಲವನ್ನು ಕೊಡುತ್ತದೆ, ಕೆಲವು ಹಗುರ ಫಲವನ್ನು ಕೊಡುತ್ತದೆ. ಇದು ಫಲ ಕೊಡುವ ತೋಟವಾಗಿದೆ. ಈ ದೈವೀ ವೃಕ್ಷದ ಸ್ಥಾಪನೆಯಾಗುತ್ತಿದೆ ಅಥವಾ ಕಲ್ಪದ ಹಿಂದಿನಂತೆ ಹೂದೋಟದ ಸ್ಥಾಪನೆಯಾಗುತ್ತಿದೆ. ನಿಧಾನ-ನಿಧಾನವಾಗಿ ನಂಬರವಾರ್ ಪುರುಷಾರ್ಥದನುಸಾರ ಮಧುರ, ಸುವಾಸನಾಭರಿತವುಳ್ಳವರೂ ಆಗುತ್ತಿದ್ದಾರೆ. ಇಲ್ಲಿ ಭಿನ್ನತೆಯಿದೆಯಲ್ಲವೆ! ತಂದೆಯ ಮುಖವನ್ನು ನೋಡಲು ತಂದೆಯ ಬಳಿಗೆ ಬರುತ್ತಾರೆ. ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದಾರೆಂದು ಅವಶ್ಯವಾಗಿ ತಿಳಿದುಕೊಂಡಿದ್ದಾರೆ. ಇದು ಅಗತ್ಯವಾಗಿ ಮಕ್ಕಳಿಗೆ ನಿಶ್ಚಯವಿದೆ. ಬೇಹದ್ದಿನ ತಂದೆಯು ನಮ್ಮನ್ನು ಬೇಹದ್ದಿನ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ಮಾಲೀಕರಾಗುವುದರಲ್ಲಿ ಬಹಳ ಖುಷಿಯಾಗುತ್ತದೆ. ಹದ್ದಿನ ಮಾಲೀಕತನದಲ್ಲಿ ದುಃಖವಿದೆ. ಭಾರತವಾಸಿಗಳಿಗಾಗಿ ಈ ಆಟವೇ ಸುಖ-ದುಃಖದಿಂದ ಮಾಡಲ್ಪಟ್ಟಿದೆ. ತಂದೆಯು ಮಕ್ಕಳಿಗೆ ಮೊದಲು ತಮ್ಮ ಮನೆಯನ್ನು ಸಂಭಾಲನೆ ಮಾಡಿ ಎಂದು ಹೇಳುತ್ತಾರೆ. ಮನೆಯ ಮೇಲೆ ಮಾಲೀಕನ ದೃಷ್ಟಿಯಿರುತ್ತದೆ. ತಂದೆಯು ಕುಳಿತು ಒಂದೊಂದು ಮಗುವನ್ನೂ ನೋಡುತ್ತಾರೆ - ಎಂಥಹ ಗುಣವಿದೆ, ಎಂಥಹ ಅವಗುಣವಿದೆ? ಮಕ್ಕಳೂ ಸಹ ಸ್ವಯಂ ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮ್ಮ ಕೊರತೆಗಳನ್ನು ನೀವೇ ಬರೆದು ತನ್ನಿ ಅಂದಾಗ ಬರೆಯಬಹುದು. ನಾವು ನಮ್ಮಲ್ಲಿರುವ ಅವಗುಣಗಳನ್ನು ತಿಳಿದುಕೊಳ್ಳುತ್ತೇವೆ. ಒಂದಲ್ಲ ಒಂದು ಕೊರತೆಯು ಅಗತ್ಯವಾಗಿ ಇದೆ, ಇನ್ನೂ ಸಂಪೂರ್ಣರಂತೂ ಯಾರೂ ಆಗಿಲ್ಲ. ಅವಶ್ಯವಾಗಿ ಆಗಬೇಕು. ಕಲ್ಪ-ಕಲ್ಪವೂ ಆಗಿದ್ದೇವೆ ಇದರಲ್ಲಿ ಯಾವುದೇ ಸಂಶಯವಿಲ್ಲ ಆದರೆ ಈ ಸಮಯದಲ್ಲಿ ಕೊರತೆಯಿದೆ ಅದನ್ನು ತಿಳಿಸುವುದರಿಂದ ತಂದೆಯು ಅದರ ಬಗ್ಗೆ ತಿಳುವಳಿಕೆ ಕೊಡುತ್ತಾರೆ. ಈ ಸಮಯದಲ್ಲಿ ಬಹಳ ಕೊರತೆಗಳಿವೆ, ಮುಖ್ಯ ಕೊರತೆಗಳಿಗೆ ದೇಹಾಭಿಮಾನವೇ ಕಾರಣವಾಗಿದೆ. ಅದೇ ನಂತರ ಬಹಳ ಕಷ್ಟಕ್ಕೆ ಬೀಳಿಸುತ್ತದೆ. ಸ್ಥಿತಿಯು ಮುಂದುವರೆಯಲು ಬಿಡುವುದಿಲ್ಲ ಆದ್ದರಿಂದ ಈಗ ಸಂಪೂರ್ಣ ಪುರುಷಾರ್ಥ ಮಾಡಬೇಕು. ಈ ಶರೀರವನ್ನು ಈಗ ಬಿಟ್ಟು ಹೋಗಬೇಕು. ಇಲ್ಲಿಯೇ ದೈವೀ ಗುಣಗಳನ್ನು ಧಾರಣೆ ಮಾಡಿ ಹೋಗಬೇಕು. ಕರ್ಮಾತೀತ ಸ್ಥಿತಿಯಲ್ಲಿ ಹೋಗುವುದರ ಅರ್ಥವನ್ನು ತಂದೆಯು ತಿಳಿಸುತ್ತಿದ್ದಾರೆ. ಕರ್ಮಾತೀತರಾಗಿ ಹೋಗಬೇಕೆಂದರೆ ಯಾವುದೇ ಕೊರತೆಯಿರಬಾರದು, ಏಕೆಂದರೆ ನೀವು ವಜ್ರವಾಗುತ್ತೀರಲ್ಲವೆ. ನಮ್ಮಲ್ಲಿ ಏನೇನು ಕೊರತೆಯಿದೆ, ಇದನ್ನು ಪ್ರತಿಯೊಬ್ಬರೂ ತಿಳಿದುಕೊಂಡಿದ್ದೀರಿ, ಏಕೆಂದರೆ ನೀವು ಚೈತನ್ಯವಾಗಿದ್ದೀರಿ, ನೀವು ಈ ಕೊರತೆಗಳನ್ನು ತೆಗೆದು ಹಾಕಬಹುದು. ನೀವು ಕವಡೆಯಿಂದ ವಜ್ರದಂತೆ ಆಗುತ್ತೀರಿ. ನೀವು ತಮ್ಮನ್ನು ಬಹಳ ಚೆನ್ನಾಗಿ ತಿಳಿದಿದ್ದೀರಿ, ಸರ್ಜನ್ ಸಹ ನಿಮ್ಮಲ್ಲಿ ಯಾವ ಕೊರತೆಯಿದೆ ಎಂದು ಕೇಳುತ್ತಾರೆ. ಯಾವುದು ನಿಮ್ಮನ್ನು ಮುಂದುವರೆಯದಂತೆ ಮಾಡುತ್ತಿದೆ? ಕಲೆ ರಹಿತರಾಗಿ ಕೊನೆಯಲ್ಲಿ ಆಗಬೇಕು. ಈಗ ಇವೆಲ್ಲವನ್ನೂ ತೆಗೆಯುತ್ತಾ ಹೋಗಬೇಕು. ಒಂದು ವೇಳೆ ಬಲಹೀನತೆಯನ್ನು ತೆಗೆಯದೇ ಹೋದರೆ ವಜ್ರದ ಬೆಲೆಯು ಕಡಿಮೆಯಾಗಿ ಬಿಡುತ್ತದೆ. ಇವರೂ ಸಹ ಪಕ್ಕಾ ವಜ್ರದ ವ್ಯಾಪಾರಿಯಾಗಿದ್ದಾರಲ್ಲವೆ. ಇಡೀ ಆಯಸ್ಸು ಈ ಕಣ್ಣಿನಿಂದ ವಜ್ರಗಳನ್ನು ನೋಡಿದ್ದಾರೆ. ಇಷ್ಟೊಂದು ವಜ್ರಗಳನ್ನು ಪರೀಕ್ಷಿಸುವ ಆಸಕ್ತಿಯುಳ್ಳ ವಜ್ರದ ವ್ಯಾಪಾರಿಗಳು ಯಾರೂ ಇರಲಾರರು. ನೀವೂ ಸಹ ವಜ್ರವಾಗುತ್ತಿದ್ದೀರಿ. ಒಂದಲ್ಲ ಒಂದು ಕೊರತೆಗಳು ಅಗತ್ಯವಾಗಿ ಇದೆಯೆಂದು ತಿಳಿದಿದ್ದೀರಿ. ಸಂಪೂರ್ಣರಂತೂ ಇನ್ನೂ ಆಗಿಲ್ಲ. ಚೈತನ್ಯವಾಗಿರುವ ಕಾರಣ ನೀವು ಪುರುಷಾರ್ಥದಿಂದ ಬಲಹೀನತೆಯನ್ನು ತೆಗೆಯಬಹುದು. ಅವಶ್ಯವಾಗಿ ವಜ್ರದಂತೆ ಆಗಬೇಕಾಗಿದೆ. ಯಾವಾಗ ಪೂರ್ಣ ಪುರುಷಾರ್ಥ ಮಾಡುತ್ತೀರಿ ಆಗ ವಜ್ರ ಸಮಾನ ಆಗುತ್ತೀರಿ. ತಂದೆಯು ತಿಳಿಸುತ್ತಾರೆ- ಈ ಶರೀರವನ್ನು ಬಿಡುವ ಸಮಯದ ಅಂತ್ಯದಲ್ಲಿ ಯಾರ ನೆನಪೂ ಬಾರದಂತಹ ಪಕ್ಕಾ ಸ್ಥಿತಿಯನ್ನು ಮಾಡಿಕೊಳ್ಳಬೇಕು. ಇದಂತೂ ಸ್ಪಷ್ಟವಾಗಿದೆ- ಮಿತ್ರ ಸಂಬಂಧಿ ಮೊದಲದವರನ್ನು ಮರೆಯಬೇಕು. ಒಬ್ಬ ತಂದೆಯೊಂದಿಗೇ ಸಂಬಂಧವನ್ನಿಟ್ಟುಕೊಳ್ಳಬೇಕು. ಈಗ ನೀವು ವಜ್ರ ಸಮಾನ ಆಗುತ್ತಿದ್ದೀರಿ, ಇದು ವಜ್ರದ ಅಂಗಡಿಯೂ ಆಗಿದೆ, ನೀವು ಪ್ರತಿಯೊಬ್ಬರೂ ವಜ್ರದ ವ್ಯಾಪಾರಿಗಳಾಗಿದ್ದೀರಿ. ಈ ಮಾತುಗಳನ್ನು ನೀವು ಮಕ್ಕಳು ಮಾತ್ರ ತಿಳಿದುಕೊಂಡಿದ್ದೀರಿ. ಪ್ರತಿಯೊಬ್ಬರ ಮನಸ್ಸಿನಲ್ಲಿ ನಾವು ಪುರುಷಾರ್ಥದನುಸಾರ ವಿಶ್ವದ ಮಾಲೀಕರಾಗುತ್ತಿದ್ದೇವೆ ಎಂದು ತಿಳಿದುಕೊಂಡಿದ್ದೀರಿ. ಯಾರಿಗೆ ಶ್ರೇಷ್ಠ ಪದವಿಯು ಸಿಕ್ಕಿದೆಯೋ ಅವರು ಅವಶ್ಯವಾಗಿ ಪುರುಷಾರ್ಥ ಮಾಡಿದ್ದಾರೆ. ಅವರು ನಿಮ್ಮಲ್ಲಿಯೇ ಯಾರಾದರೂ ಇರಬೇಕಲ್ಲವೆ. ನೀವು ಮಕ್ಕಳೇ ಇಷ್ಟೊಂದು ಪುರುಷಾರ್ಥ ಮಾಡಬೇಕು. ಆದ್ದರಿಂದ ಒಂದೊಂದು ಮಗುವನ್ನೂ ನೋಡುತ್ತಿರುತ್ತಾರೆ. ಹೂಗಳನ್ನು ಇದು ಎಷ್ಟು ಸುಗಂಧಭರಿತವಾದ ಹೂ! ಇದರಲ್ಲಿ ಏನು ಕಡಿಮೆಯಿದೆ? ಎಂದು ನೋಡಲಾಗುತ್ತದೆ, ಏಕೆಂದರೆ ನೀವು ಚೈತನ್ಯವಾಗಿದ್ದೀರಿ. ತಂದೆಯಿಂದ ಬುದ್ಧಿಯೋಗವನ್ನು ತೆಗೆದು ಅಲೆದಾಡಿಸುವಂತಹ ಬಲಹೀನತೆಗಳು ನಮ್ಮಲ್ಲಿ ಏನೇನಿವೆ ಎಂದು ಚೈತನ್ಯ ವಜ್ರಗಳು ತಿಳಿದುಕೊಳ್ಳಬಹುದಲ್ಲವೆ! ತಂದೆಯು ತಿಳಿಸುತ್ತಾರೆ- ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ಬೇರೆ ಯಾರೂ ನೆನಪಿಗೆ ಬರಬಾರದು. ಗೃಹಸ್ಥ ವ್ಯವಹಾರದಲ್ಲಿರುತ್ತಾ ಒಬ್ಬ ತಂದೆಯನ್ನು ನೆನಪು ಮಾಡಬೇಕು. ಇವರಿಗಾಗಿ ಭಟ್ಟಿಯಾಗಬೇಕಿತ್ತು, ಯಾರು ಸೇವೆಗಾಗಿ ಹೊರಟು ಬಂದರು, ಯಾರು ಹಳೆಯ ಮಕ್ಕಳು ಬಹಳ ಚೆನ್ನಾಗಿ ಸೇವೆ ಮಾಡುತ್ತಿದ್ದಾರೆಯೋ ಅವರನ್ನು ನೋಡುತ್ತಾರೆ. ಸ್ವಲ್ಪ ಹೊಸಬರೊಂದಿಗೆ ಸೇರುತ್ತಾ ಹೋಗುತ್ತಾರೆ. ಹಳೆಯ ಮಕ್ಕಳಿಗೆ ಭಟ್ಟಿಯಾಗಬೇಕಿತ್ತು. ಭಲೇ ಹಳೆಯ ಮಕ್ಕಳಲ್ಲಿ ಬಲಹೀನತೆಗಳಿವೆ. ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿ ತಿಳಿದುಕೊಳ್ಳುತ್ತೀರಿ- ತಂದೆಯು ಯಾವ ಸ್ಥಿತಿಯನ್ನು ಮಾಡಿಕೊಳ್ಳಿ ಎಂದು ಹೇಳುತ್ತಾರೆ ಅದು ಇನ್ನೂ ಆಗಿಲ್ಲ, ಗುರಿ-ಉದ್ದೇಶವಂತೂ ತಂದೆಯು ತಿಳಿಸುತ್ತಾರೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ದೇಹಾಭಿಮಾನವೇ ಕೊಳಕಾಗಿದೆ. ಆದ್ದರಿಂದ ದೇಹದ ಕಡೆ ಬುದ್ಧಿಯು ಹೊರಟು ಹೋಗುತ್ತದೆ. ದೇಹದಲ್ಲಿರುತ್ತಾ ದೇಹೀ-ಅಭಿಮಾನಿಯಾಗಬೇಕು. ಈ ಕಣ್ಣುಗಳಿಂದ ನೋಡುವಂತಹ ವಸ್ತು ಮುಂದೆ ಸನ್ಮುಖದಲ್ಲಿ ಬಾರದಂತೆ ಸ್ಥಿತಿಯನ್ನು ಜಮಾ ಮಾಡಿಕೊಳ್ಳಬೇಕು. ನಮ್ಮ ಬುದ್ಧಿಯಲ್ಲಿ ತಂದೆ ಹಾಗೂ ಶಾಂತಿಧಾಮದ ವಿನಃ ಯಾವುದೇ ವಸ್ತು ಬರಬಾರದು, ಏನನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ಮೊಟ್ಟ ಮೊದಲು ನಾವು ಹೊಸ ಸಂಬಂಧದಲ್ಲಿ ಬರುತ್ತೇವೆ, ಈಗ ಹಳೆಯ ಸಂಬಂಧವಿದೆ. ಹಳೆಯ ಸಂಬಂಧವು ಸ್ವಲ್ಪವೂ ನೆನಪಿಗೆ ಬರಬಾರದು. ಅಂತ್ಯಕಾಲ....... ಎಂದು ಗಾಯನವಿದೆ ಅಂದಾಗ ಇದು ಈ ಸಮಯದ ಮಾತಾಗಿದೆ. ಈ ಹಾಡನ್ನು ಕಲಿಯುಗೀ ಮನುಷ್ಯರು ಮಾಡಿದ್ದಾರೆ ಆದರೆ ಅವರು ಏನೂ ತಿಳಿದುಕೊಂಡಿಲ್ಲ. ಮುಖ್ಯ ಮಾತನ್ನು ತಂದೆಯು ತಿಳಿಸುತ್ತಾರೆ- ಒಬ್ಬ ತಂದೆಯ ವಿನಃ ಬೇರೆ ಏನೂ ನೆನಪಿಗೆ ಬರಬಾರದು. ಒಬ್ಬ ತಂದೆಯ ನೆನಪಿನಿಂದ ಪಾಪವು ನಾಶವಾಗುತ್ತದೆ ಹಾಗೂ ಪವಿತ್ರ ವಜ್ರಗಳಾಗುತ್ತೀರಿ. ಕೆಲವು ಕಲ್ಲುಗಳು ಬೆಲೆಯುಳ್ಳದ್ದಾಗಿರುತ್ತದೆ, ಮಾಣಿಕ್ಯವೂ ಬೆಲೆಯುಳ್ಳದ್ದಾಗಿದೆ. ತಂದೆಯು ತನಗಿಂತಲೂ ಬೆಲೆಯುಳ್ಳಂತಹ ಶ್ರೇಷ್ಠರನ್ನಾಗಿ ಮಾಡುತ್ತಿದ್ದಾರೆ. ನಮ್ಮನ್ನು ನಾವು ಪರಿಶೀಲನೆ ಮಾಡಿಕೊಳ್ಳಬೇಕು. ತಂದೆಯು ತಿಳಿಸುತ್ತಾರೆ- ಅಂತರ್ಮುಖಿಯಾಗಿ ತಮ್ಮನ್ನು ತಮ್ಮಲ್ಲಿ ಯಾವ ದೋಷವಿದೆ ಎಂದು ನೋಡಿಕೊಳ್ಳಿ. ಎಲ್ಲಿಯವರೆಗೆ ದೇಹಾಭಿಮಾನವಿದೆ? ಪುರುಷಾರ್ಥಕ್ಕಾಗಿ ತಂದೆಯು ಭಿನ್ನ-ಭಿನ್ನ ಯುಕ್ತಿಗಳನ್ನು ತಿಳಿಸುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ತಂದೆಯ ನೆನಪಿರಲಿ. ಒಂದು ವೇಳೆ ಎಷ್ಟೇ ಪ್ರಿಯರಾಗಿರಬಹುದು, ಸುಂದರವಾಗಿರುವ ಮಕ್ಕಳು ಬಹಳ ಪ್ರಿಯರಾಗಿರುತ್ತಾರೆ ಆದರೂ ಸಹ ಯಾರ ನೆನಪೂ ಬರಬಾರದು. ಇಲ್ಲಿನ ಯಾವುದೇ ವಸ್ತುಗಳು ನೆನಪಿಗೆ ಬರಬಾರದು. ಕೆಲವು ಮಕ್ಕಳಲ್ಲಿ ಬಹಳ ಮೋಹವಿರುತ್ತದೆ. ತಂದೆಯು ತಿಳಿಸುತ್ತಾರೆ- ಎಲ್ಲರಿಂದ ಮೋಹವನ್ನು ಅಳಿಸಿ ಒಬ್ಬರ ನೆನಪಿಟ್ಟುಕೊಳ್ಳಿ. ಒಬ್ಬ ಪ್ರೀತಿಯ ತಂದೆಯ ಜೊತೆ ಯೋಗವಿಡಬೇಕು, ಅವರಿಂದ ಎಲ್ಲವೂ ಪ್ರಾಪ್ತಿಯಾಗುತ್ತದೆ. ಯೋಗದಿಂದ ನೀವು ಪ್ರಿಯರಾಗುತ್ತೀರಿ, ಆತ್ಮವೇ ಪ್ರಿಯವಾಗುತ್ತದೆ. ತಂದೆಯು ಪ್ರಿಯ ಹಾಗೂ ಪವಿತ್ರವಾಗಿದ್ದಾರಲ್ಲವೆ! ಆತ್ಮನನ್ನು ಪ್ರಿಯ-ಪವಿತ್ರ ಮಾಡುವ ಸಲುವಾಗಿ ತಿಳಿಸುತ್ತಾರೆ- ಮಕ್ಕಳೇ, ನೀವು ಎಷ್ಟು ನನ್ನನ್ನು ನೆನಪು ಮಾಡುತ್ತೀರೋ ಅಷ್ಟು ನೀವು ಬಹಳ ಪ್ರಿಯರಾಗುತ್ತೀರಿ. ಇಷ್ಟೊಂದು ಪ್ರಿಯರಾಗುತ್ತೀರಿ ಅದರಿಂದ ನೀವು ದೇವಿ-ದೇವತೆಗಳಿಗೆ ಇದುವರೆಗೂ ಪೂಜೆ ನಡೆಯುತ್ತಿದೆ. ಬಹಳ ಪ್ರಿಯರಾಗುತ್ತೀರಲ್ಲವೆ! ಅರ್ಧಕಲ್ಪ ನೀವು ರಾಜ್ಯಭಾರ ಮಾಡುತ್ತೀರಿ. ಅರ್ಧಕಲ್ಪ ನೀವೇ ಪೂಜೆಗೆ ಯೋಗ್ಯರಾಗುತ್ತೀರಿ. ನೀವೇ ಸ್ವಯಂ ಪೂಜಾರಿಗಳಾಗಿ ನಿಮ್ಮ ಚಿತ್ರಕ್ಕೆ ಪೂಜೆ ಮಾಡುತ್ತೀರಿ. ನೀವು ಎಲ್ಲರಿಗಿಂತ ಪ್ರಿಯರಾಗುವವರಾಗಿದ್ದೀರಿ ಆದರೆ ಯಾವಾಗ ಪ್ರೀತಿಯ ತಂದೆಯನ್ನು ನೆನಪು ಮಾಡುತ್ತೀರಿ ಆಗ ಪ್ರಿಯರಾಗುತ್ತೀರಿ. ಒಬ್ಬ ತಂದೆಯ ವಿನಃ ಬೇರೆ ಯಾರೂ ನೆನಪಿಗೆ ಬರಬಾರದು. ನಮ್ಮನ್ನು ನಾವು ಪರಿಶೀಲನೆ ಮಾಡಿಕೊಳ್ಳಬೇಕು- ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡುತ್ತೇವೆಯೇ? ತಂದೆಯ ಪ್ರೀತಿಯಲ್ಲಿ ಆನಂದ ಬಾಷ್ಫಗಳು ಬರಬೇಕು. ಹೇ ತಂದೆಯೇ, ನನಗೆ ನಿಮ್ಮ ವಿನಃ ಬೇರೆ ಯಾರೂ ಇಲ್ಲ. ಅನ್ಯರ್ಯಾರೂ ನೆನಪಿಗೆ ಬರಬಾರದು. ಮಾಯೆಯ ಬಿರುಗಾಳಿಯೂ ಬರಬಾರದು ಆದರೆ ಬಹಳ ಬರುತ್ತದೆ. ನಮ್ಮ ಮೇಲೆ ನಾವೇ ಬಹಳ ಗಮನ ಇಟ್ಟುಕೊಳ್ಳಬೇಕು. ನಮ್ಮ ಪ್ರೀತಿ ಒಬ್ಬ ತಂದೆಯ ವಿನಃ ಬೇರೆ ಕಡೆ ಹೋಗುವುದಿಲ್ಲವೆ! ಎಷ್ಟೇ ಪ್ರೀತಿಯ ವಸ್ತುವಾಗಿರಬಹುದು ಆದರೂ ಸಹ ಒಬ್ಬ ತಂದೆಯ ನೆನಪೇ ಬರಬೇಕು. ನೀವೆಲ್ಲರೂ ಒಬ್ಬ ಪ್ರಿಯತಮನಿಗೆ ಪ್ರಿಯತಮೆಯರಾಗಿದ್ದೀರಿ. ಪ್ರಿಯತಮೆಯರು ಒಮ್ಮೆ ಪರಸ್ಪರ ನೋಡಿದರೆ ಸಾಕು, ವಿವಾಹವು ಆಗದಿದ್ದರೂ ಬುದ್ಧಿಯಲ್ಲಿ ಅವರದೇ ನೆನಪಿರುತ್ತದೆ. ಈಗ ನೀವು ತಿಳಿದಿದ್ದೀರಿ- ನಾವೆಲ್ಲರೂ ಒಬ್ಬ ಪ್ರಿಯತಮನಿಗೆ ಪ್ರೇಮಿಕೆಯರಾಗಿದ್ದೇವೆ, ಆ ಪ್ರಿಯತಮನನ್ನು ಭಕ್ತಿಮಾರ್ಗದಲ್ಲಿ ಬಹಳ ನೆನಪು ಮಾಡುತ್ತಾ ಬಂದಿದ್ದೀರಿ. ಇಲ್ಲಿಯೂ ಸಹ ನೀವು ಸನ್ಮುಖದಲ್ಲಿರುವಾಗ ಬಹಳ ನೆನಪು ಮಾಡಬೇಕು. ತಂದೆಯು ತಿಳಿಸುತ್ತಾರೆ - ನನ್ನ ನೆನಪು ಮಾಡುತ್ತಿದ್ದರೆ ನಿಮ್ಮ ಹಡಗು ಪಾರಾಗುತ್ತದೆ, ಇದರಲ್ಲಿ ಸಂಶಯದ ಮಾತಿಲ್ಲ. ಭಗವಂತನ ಜೊತೆ ಮಿಲನ ಮಾಡಲು ಎಲ್ಲರೂ ಭಕ್ತಿ ಮಾಡುತ್ತಾರೆ. ಇಲ್ಲಿ ಕೆಲವು ಮಕ್ಕಳು ಬಹಳ ಸೇವೆಯಲ್ಲಿ ವ್ಯಸ್ತರಾಗಿರುತ್ತಾರೆ. ಸೇವೆಗಾಗಿಯೇ ಸಂಪೂರ್ಣ ಚಡಪಡಿಸುತ್ತಾರೆ, ತುಂಬಾ ಪರಿಶ್ರಮ ಪಡುತ್ತಾರೆ. ಇದನ್ನು ನೀವು ಮಾತ್ರ ತಿಳಿದಿದ್ದೀರಿ, ಗಣ್ಯ ವ್ಯಕ್ತಿಗಳು ಅಷ್ಟೊಂದು ತಿಳಿದುಕೊಳ್ಳುವುದಿಲ್ಲ. ಆದರೆ ನೀವು ಶ್ರಮ ಪಡುವುದು ವ್ಯರ್ಥವಾಗುವುದಿಲ್ಲ. ಕೆಲವರು ತಿಳಿದುಕೊಂಡು ಯೋಗ್ಯರಾಗುತ್ತಾರೆ ನಂತರ ತಂದೆಯ ಮುಂದೆ ಬರುತ್ತಾರೆ. ನೀವು ತಿಳಿದುಕೊಳ್ಳಬಲ್ಲಿರಿ - ಅವರು ಯೋಗ್ಯರಾಗಿದ್ದಾರೆಯೇ ಅಥವಾ ಇಲ್ಲವೇ? ನೀವು ಮಕ್ಕಳೊಂದಿಗೆ ತಂದೆಯ ದೃಷ್ಟಿಯ ಮಿಲನವಾಗುತ್ತದೆ. ಶೃಂಗಾರ ಮಾಡುವವರೂ ನೀವು ಮಕ್ಕಳೇ ಆಗಿದ್ದೀರಿ. ಇಲ್ಲಿಗೆ ಬಂದಿರುವವರಿಗೆಲ್ಲಾ ನೀವು ಮಕ್ಕಳು ಶೃಂಗರಿಸಿದ್ದೀರಿ. ತಂದೆಯು ನಿಮಗೆ ಶೃಂಗರಿಸಿದ್ದಾರೆ, ನೀವು ಅನ್ಯರಿಗೆ ಶೃಂಗಾರ ಮಾಡಿ ಕರೆದುಕೊಂಡು ಬರುತ್ತೀರಿ. ತಂದೆಯು ಮಕ್ಕಳಿಗೆ ಅವಕಾಶ ಕೊಡುತ್ತಾರೆ. ಹೇಗೆ ನಿಮಗೆ ಶೃಂಗಾರ ಮಾಡಿದ್ದಾರೆ ಅನ್ಯರಿಗೂ ಮಾಡಿಸುತ್ತಾರೆ. ತಮಗಿಂತಲೂ ಅನ್ಯರಿಗೆ ಬಹಳ ಚೆನ್ನಾಗಿ ಶೃಂಗಾರ ಮಾಡಿಸಬಹುದು. ಎಲ್ಲರಿಗೂ ತಮ್ಮ-ತಮ್ಮ ಅದೃಷ್ಟವಿದೆಯಲ್ಲವೆ. ಕೆಲವರು ತಿಳಿಸುವವರಿಗಿಂತಲೂ ಮುಂದೆ ಹೊರಟು ಹೋಗುತ್ತಾರೆ. ನಾವು ಇವರಿಗಿಂತ ಚೆನ್ನಾಗಿ ತಿಳಿಸುತ್ತೇವೆಂದು ತಿಳಿದುಕೊಳ್ಳುತ್ತಾರೆ. ತಿಳಿಸುವ ನಶೆಯೇರಿದಾಗ ಸೇವೆಯಲ್ಲಿ ತೊಡಗುತ್ತಾರೆ. ಅವರು ಬಾಪ್ದಾದಾರವರ ಮನಸ್ಸನ್ನೇರುತ್ತಾರೆ. ಬಹಳಷ್ಟು ಹೊಸ-ಹೊಸ ಮಕ್ಕಳು ಹಳಬರಿಗಿಂತ ಮುಂದಿದ್ದಾರೆ. ಮುಳ್ಳುಗಳಿಂದ ಒಳ್ಳೆಯ ಹೂಗಳಾಗಿದ್ದಾರೆ, ಆದ್ದರಿಂದ ತಂದೆಯು ಒಂದೊಂದು ಹೂವನ್ನು ನೋಡುತ್ತಾರೆ - ಇವರಲ್ಲಿ ಏನು ಕೊರತೆಗಳಿವೆ? ಈ ಕೊರತೆಯು ಇವರಿಂದ ಹೊರಟು ಹೋದರೆ ಬಹಳ ಸೇವೆ ಮಾಡಬಲ್ಲರು. ತಂದೆಯು ತೋಟದ ಮಾಲೀಕರಾಗಿದ್ದಾರಲ್ಲವೆ, ಸಭೆಗೆ ಬಂದು ಹಿಂದೆ ಇರುವಂತಹ ಒಂದೊಂದು ಹೂವನ್ನು ನೋಡಬೇಕೆಂದು ಮನಸ್ಸಾಗುತ್ತದೆ. ಏಕೆಂದರೆ ಒಳ್ಳೊಳ್ಳೆಯ ಮಕ್ಕಳು ಹಿಂದೆ ಕುಳಿತಿರುತ್ತಾರೆ. ಒಳ್ಳೊಳ್ಳೆಯ ಮಹಾರಥಿ ಮಕ್ಕಳು ಮುಂದೆ ಕುಳಿತುಕೊಳ್ಳಬೇಕಾಗಿದೆ, ಇದರಲ್ಲಿ ಯಾರಿಗೂ ಸಹ ಕಷ್ಟವೆನಿಸುವ ಮಾತಿಲ್ಲ. ಒಂದು ವೇಳೆ ಬೇಸರವಾಗಿ ಮುನಿಸಿಕೊಂಡರೆ ತಮ್ಮ ಅದೃಷ್ಟದೊಂದಿಗೆ ಮುನಿಸಿಕೊಳ್ಳುತ್ತಾರೆ. ಮುಂದಿರುವಂತಹ ಮಕ್ಕಳನ್ನು ನೋಡಿ-ನೋಡಿ ಅಪಾರ ಖುಷಿಯಾಗುತ್ತದೆ. ಇವರು ಬಹಳ ಚೆನ್ನಾಗಿದ್ದಾರೆ, ಇವರಲ್ಲಿ ಸ್ವಲ್ಪ ಬಲಹೀನತೆಯಿದೆ, ಇವರು ಬಹಳ ಸ್ವಚ್ಛವಾಗಿದ್ದಾರೆ. ಇವರಲ್ಲಿ ಸ್ವಲ್ಪ ತುಕ್ಕಿದೆ - ಈ ಎಲ್ಲಾ ಅಪವಿತ್ರತೆಯನ್ನು ತೆಗೆಯಬೇಕು. ತಂದೆಯಂತೆ ಪ್ರೀತಿ ಮಾಡುವವರು ಯಾರೂ ಇಲ್ಲ! ಸ್ತ್ರೀಗೆ ತನ್ನ ಪತಿಯೊಂದಿಗೆ ಪ್ರೀತಿಯಿರುತ್ತದೆ, ಆದರೆ ಪತಿಗೆ ಅಷ್ಟೊಂದು ಪ್ರೀತಿಯಿರುವುದಿಲ್ಲ. ಅವರು ಎರಡನೆ, ಮೂರನೇ ಪತ್ನಿಯನ್ನು ಮಾಡಿಕೊಳ್ಳುತ್ತಾರೆ. ಪತ್ನಿಗೆ ತನ್ನ ಪತಿ ದೇಹ ಬಿಟ್ಟರೆ ಸಾಕು ಬಹಳ ದುಃಖಿಯಾಗಿ ಬಿಡುತ್ತಾಳೆ. ಆದರೆ ಪುರುಷರು ಒಂದು ಚಪ್ಪಲಿ ಹೋದರೆ ಮತ್ತೊಂದನ್ನು ಮಾಡಿಕೊಂಡು ಬಿಡುತ್ತಾರೆ. ಶರೀರಕ್ಕೆ ಚಪ್ಪಲಿ ಎಂದು ಹೇಳಲಾಗುತ್ತದೆ. ಶಿವ ತಂದೆಗೂ ಲಾಂಗ್ಬೂಟ್ (ಬ್ರಹ್ಮಾ) ಇದೆಯಲ್ಲವೆ! ನಾವು ನೆನಪು ಮಾಡುತ್ತೇವೆ, ಫಸ್ಟ್ ಕ್ಲಾಸ್ ಆಗುತ್ತೇವೆ ಎಂದು ಈಗ ನೀವು ತಿಳಿದಿದ್ದೀರಿ - ಕೆಲಕೆಲವರು ಫ್ಯಾಷನ್ ಮಾಡುವವರಾಗಿರುತ್ತಾರೆ. ಆದ್ದರಿಂದ 4-5 ಜೊತೆ ಚಪ್ಪಲಿಯನ್ನಿಟ್ಟುಕೊಂಡಿರುತ್ತಾರೆ. ಆದರೆ ಆತ್ಮನಿಗೆ ಒಂದೇ ಚಪ್ಪಲಿಯಾಗಿದೆ ಹಾಗೆಯೇ ಕಾಲಿನ ಚಪ್ಪಲಿಯೂ ಒಂದೇ ಇರಬೇಕು ಆದರೆ ಇದು ಫ್ಯಾಷನ್ ಆಗಿ ಬಿಟ್ಟಿದೆ. ತಂದೆಯಿಂದ ಯಾವ ಆಸ್ತಿಯನ್ನು ಪಡೆಯುತ್ತೇವೆಂದು ಈಗ ನೀವು ತಿಳಿದಿದ್ದೀರಿ. ನಾವು ಆ ಸ್ವರ್ಗಕ್ಕೆ ಮಾಲೀಕರಾಗುತ್ತಿದ್ದೇವೆ, ಸ್ವರ್ಗಕ್ಕೆ ವಂಡರ್ ಆಫ್ ದಿ ವರ್ಲ್ಡ್ ಎಂದು ಹೇಳುತ್ತಾರೆ. ಅವಶ್ಯವಾಗಿ ಸ್ವರ್ಗ ಸ್ಥಾಪಕ ತಂದೆಯೇ ಸ್ವರ್ಗ ಸ್ಥಾಪನೆಯನ್ನು ಮಾಡುತ್ತಾರೆ. ಈಗ ನೀವು ಪ್ರತ್ಯಕ್ಷವಾಗಿ ಶ್ರೀಮತದಂತೆ ನಡೆದು ತಮಗಾಗಿ ಸ್ವರ್ಗ ಸ್ಥಾಪನೆ ಮಾಡುತ್ತಿದ್ದೀರಿ. ಇಲ್ಲಿ ಎಷ್ಟೊಂದು ದೊಡ್ಡ-ದೊಡ್ಡ ಮಹಲುಗಳನ್ನು ಕಟ್ಟುತ್ತಾರೆ ಆದರೆ ಇದೆಲ್ಲವೂ ವಿನಾಶವಾಗುತ್ತದೆ. ನೀವು ಅಲ್ಲಿ ಏನು ಮಾಡುತ್ತೀರಿ! ಇಲ್ಲಿ ನಮ್ಮ ಬಳಿ ಏನೂ ಇಲ್ಲವೆಂದು ಮನಸ್ಸಿನಲ್ಲಿ ಬರಬೇಕಾಗಿದೆ ಹಾಗೆಯೇ ಹೊರಗೆ ಗೃಹಸ್ಥದಲ್ಲಿರುತ್ತಾ ಎಲ್ಲವೂ ತಂದೆಯದ್ದಾಗಿದೆ, ನಮ್ಮದೇನೂ ಇಲ್ಲ, ನಾವು ನಿಮಿತ್ತರಾಗಿದ್ದೇವೆಂದು ಅವರೂ ತಿಳಿದುಕೊಳ್ಳುತ್ತಾರೆ, ನಿಮಿತ್ತರು ಏನೂ ಇಟ್ಟುಕೊಳ್ಳುವುದಿಲ್ಲ. ತಂದೆಯು ಮಾಲೀಕರಾಗಿದ್ದಾರೆ, ಇದೆಲ್ಲವೂ ತಂದೆಯದಾಗಿದೆ. ಮನೆಯಲ್ಲಿದ್ದೂ ಸಹ ಈ ರೀತಿ ತಿಳಿದುಕೊಳ್ಳಿ- ಶ್ರೀಮಂತರ ಬುದ್ಧಿಯಲ್ಲಿ ಈ ಮಾತುಗಳು ಬರುವುದಿಲ್ಲ. ತಂದೆಯು ತಿಳಿಸುತ್ತಾರೆ - ಟ್ರಸ್ಟಿಯಾಗಿರಿ. ಏನೇ ಮಾಡುತ್ತಿದ್ದರೂ ತಂದೆಗೆ ತಿಳಿಸಿ. ಬಾಬಾ, ಮನೆಯನ್ನು ಕಟ್ಟಲೇ ಎಂದು ಬರೆಯುತ್ತಾರೆ? ತಂದೆಯು ತಿಳಿಸುತ್ತಾರೆ - ಹಾ! ಭಲೇ ಕಟ್ಟಿ ಆದರೆ ಟ್ರಸ್ಟಿಯಾಗಿರಿ. ತಂದೆಯು ಕುಳಿತಿದ್ದಾರಲ್ಲವೆ. ತಂದೆಯು ಹಿಂತಿರುವಾಗ ಎಲ್ಲರೂ ಒಟ್ಟಿಗೆ ಹಿಂತಿರುಗುತ್ತಾರೆ. ತಮ್ಮ ಮನೆಗೆ ಹಿಂತಿರುಗುತ್ತೀರಿ. ನಂತರ ನೀವು ನಿಮ್ಮ ರಾಜಧಾನಿಯಲ್ಲಿ ಹೊರಟು ಹೋಗುತ್ತೀರಿ. ತಂದೆಯು ಕಲ್ಪ-ಕಲ್ಪ ನಮ್ಮನ್ನು ಪಾವನರನ್ನಾಗಿ ಮಾಡಲು ಬರಬೇಕು. ನಾನು ನನ್ನ ಸಮಯದಲ್ಲಿ ಬರುತ್ತೇನೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಎಲ್ಲದರಿಂದ ಮಮತ್ವವನ್ನು ತೆಗೆದು ಒಬ್ಬ ಪ್ರಿಯ ತಂದೆಯನ್ನು ನೆನಪು ಮಾಡಬೇಕಾಗಿದೆ. ಅಂತರ್ಮುಖಿಯಾಗಿ ತಮ್ಮ ಕೊರತೆಗಳನ್ನು ಪರಿಶೀಲನೆ ಮಾಡಿ ತೆಗೆಯಬೇಕಾಗಿದೆ. ಬೆಲೆಯುಳ್ಳಂತಹ ವಜ್ರವಾಗಬೇಕಾಗಿದೆ.

2. ಹೇಗೆ ತಂದೆಯು ನಾವು ಮಕ್ಕಳಿಗೆ ಶೃಂಗರಿಸಿದ್ದಾರೆ ಹಾಗೆಯೇ ನಾವು ಸರ್ವರ ಶೃಂಗಾರ ಮಾಡಬೇಕು. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆಯಲ್ಲಿ ತೊಡಗಬೇಕು. ಟ್ರಸ್ಟಿಯಾಗಿರಬೇಕಾಗಿದೆ.


ವರದಾನ:
ಸದಾ ಒಬ್ಬರ ಸ್ನೇಹದಲ್ಲಿ ಸಮಾವೇಶವಾಗಿರುತ್ತಾ ಒಬ್ಬ ತಂದೆಯನ್ನು ಆಶ್ರಯ ಮಾಡಿಕೊಂಡಿರುವ ಸರ್ವ ಆಕರ್ಷಣೆಗಳಿಂದ ಮುಕ್ತ ಭವ.

ಯಾವ ಮಕ್ಕಳು ಒಬ್ಬ ತಂದೆಯ ಸ್ನೇಹದಲ್ಲಿ ಸಮಾವೇಶವಾಗಿರುತ್ತಾರೆ ಅವರು ಸರ್ವ ಪ್ರಾಪ್ತಿಗಳಿಂದ ಸಂಪನ್ನ ಮತ್ತು ಸಂತುಷ್ಠರಾಗಿರುತ್ತಾರೆ. ಅವರನ್ನು ಯಾವುದೇ ಪ್ರಕಾರದ ಆಶ್ರಯ ಆಕರ್ಷಣೆ ಮಾಡಲು ಸಾಧ್ಯವಿಲ್ಲ. ಅವರು ಸಹಜವಾಗಿ ಒಬ್ಬ ತಂದೆಯ ವಿನಹ ಬೇರೆ ಯಾರೂ ಇಲ್ಲ- ಈ ಅನುಭೂತಿಯಾಗುವುದು. ಅವರಿಗೆ ಒಬ್ಬ ತಂದೆಯೇ ಸಂಸಾರವಾಗಿರುತ್ತಾರೆ, ಒಬ್ಬ ತಂದೆಯ ಮೂಲಕವೇ ಸರ್ವ ಸಂಬಂಧದ ರಸದ ಅನುಭವವಾಗುವುದು. ಅವರಿಗೆ ಸರ್ವ ಪ್ರಾಪ್ತಿಗಳ ಆಧಾರ ಒಬ್ಬ ತಂದೆಯೇ ಆಗಿದ್ದಾರೆ ವಿನಹ ವೈಭವ ಅಥವಾ ಸಾಧನಗಳಿಂದ ಸಹಜವಾಗಿ ಆಕರ್ಷಣೆಗಳಿಂದ ಮುಕ್ತವಾಗಿರುತ್ತಾರೆ.

ಸ್ಲೋಗನ್:
ತಮ್ಮನ್ನು ನಿಮಿತ್ತ ಎಂದು ತಿಳಿದು ಸದಾ ಡಬಲ್ ಲೈಟ್ ಆಗಿದ್ದಾಗ ಖುಷಿಯ ಅನುಭೂತಿಯಾಗುತ್ತಿರುವುದು.