22.03.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಅವಿನಾಶಿ ಜ್ಞಾನ ರತ್ನಗಳು ನಿಮ್ಮನ್ನು(ರಾವ್) ರಾಜರನ್ನಾಗಿ ಮಾಡುತ್ತವೆ, ಇದು ಬೇಹದ್ದಿನ
ಶಾಲೆಯಾಗಿದೆ. ನೀವು ಓದಬೇಕು ಮತ್ತು ಓದಿಸಬೇಕಾಗಿದೆ. ಜ್ಞಾನ ರತ್ನಗಳಿಂದ ಜೋಳಿಗೆಯನ್ನು
ತುಂಬಿಸಿಕೊಳ್ಳಬೇಕಾಗಿದೆ”
ಪ್ರಶ್ನೆ:
ಯಾವ ಮಕ್ಕಳು
ಎಲ್ಲರಿಗೂ ಪ್ರಿಯವಾಗುತ್ತಾರೆ, ಶ್ರೇಷ್ಠ ಪದವಿಗಾಗಿ ಯಾವ ಪುರುಷಾರ್ಥದ ಅವಶ್ಯಕತೆಯಿದೆ?
ಉತ್ತರ:
ಯಾವ ಮಕ್ಕಳು
ತಮ್ಮ ಜೋಳಿಗೆಯನ್ನು ತುಂಬಿಕೊಂಡು ಅನೇಕರಿಗೆ ದಾನ ಮಾಡುತ್ತಾರೆಯೋ ಅವರು ಎಲ್ಲರಿಗೂ
ಪ್ರಿಯವಾಗುತ್ತಾರೆ. ಶ್ರೇಷ್ಠ ಪದವಿಗಾಗಿ ಅನೇಕರ ಆಶೀರ್ವಾದ ಬೇಕು. ಇದರಲ್ಲಿ ಹಣದ ಮಾತಿಲ್ಲ, ಆದರೆ
ಜ್ಞಾನ ಧನದಿಂದ ಅನೇಕರ ಕಲ್ಯಾಣ ಮಾಡುತ್ತಾ ಇರಿ. ಪ್ರಸನ್ನ ಚಿತ್ತ ಮತ್ತು ಯೋಗಿ ಮಕ್ಕಳೇ ತಂದೆಗೆ
ಒಳ್ಳೆಯ ಹೆಸರನ್ನು ತರುತ್ತಾರೆ.
ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳಿಗೂ ಗೊತ್ತಿದೆ, ನಾವೀಗ
ಹಿಂತಿರುಗಿ ಹೋಗಬೇಕಾಗಿದೆ. ಮೊದಲು ಏನೂ ಗೊತ್ತಿರಲಿಲ್ಲ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ, ಇವರು
ತಿಳಿಸುವುದೂ ಸಹ ನಾಟಕದನುಸಾರ ಈಗ ಸರಿಯೆಂದು ಕಾಣಿಸುತ್ತದೆ. ಇದನ್ನು ಮತ್ತ್ಯಾರೂ ತಿಳಿಸಲು
ಸಾಧ್ಯವಿಲ್ಲ. ಈಗ ನಾವು ಹಿಂತಿರುಗಬೇಕಾಗಿದೆ. ಅಪವಿತ್ರರು ಯಾರೂ ಹೋಗಲು ಸಾಧ್ಯವಿಲ್ಲ. ಈ ಜ್ಞಾನವು
ಈ ಸಮಯದಲ್ಲಿಯೇ ಸಿಗುತ್ತದೆ ಮತ್ತು ಒಬ್ಬ ತಂದೆಯೇ ಕೊಡುತ್ತಾರೆ. ಆದ್ದರಿಂದ ಮೊದಲು ಹಿಂತಿರುಗಿ
ಹೋಗಬೇಕೆಂದು ನೆನಪಿಟ್ಟುಕೊಳ್ಳಬೇಕಾಗಿದೆ. ತಂದೆಯನ್ನು ಕರೆಯುತ್ತಾರೆ ಆದರೆ ಏನೂ ಗೊತ್ತಿರಲಿಲ್ಲ,
ಯಾವಾಗ ಆಕಸ್ಮಿಕವಾಗಿ ಸಮಯವು ಬಂದಿತು ಆಗ ತಂದೆಯು ಬಂದು ಬಿಟ್ಟರು. ಈಗ ಹೊಸ-ಹೊಸ ಮಾತುಗಳನ್ನು
ತಿಳಿಸುತ್ತಿರುತ್ತಾರೆ. ಮಕ್ಕಳೂ ಸಹ ತಿಳಿಯುತ್ತೀರಿ - ನಾವೀಗ ಹಿಂತಿರುಗಿ ಹೋಗಬೇಕಾಗಿದೆ.
ಆದ್ದರಿಂದ ಈಗ ಪತಿತರಿಂದ ಪಾವನರಾಗಬೇಕಾಗಿದೆ. ಇಲ್ಲವೆಂದರೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ
ಮತ್ತು ಪದವಿಯು ಭ್ರಷ್ಟವಾಗುತ್ತದೆ. ಹೇಗೆ ಇಲ್ಲಿನ ರಾಜಾ ಮತ್ತು ಪ್ರಜೆಯಲ್ಲಿ ಅಂತರವಿದೆಯೋ ಹಾಗೆಯೇ
ಸತ್ಯಯುಗದಲ್ಲಿಯೂ ಸಹ ರಾಜಾ ಮತ್ತು ಪ್ರಜೆಗಳಾಗುತ್ತಾರೆ. ಎಲ್ಲವೂ ಪುರುಷಾರ್ಥದ ಮೇಲೆ
ಆಧಾರಿತವಾಗಿದೆ. ಈಗ ತಂದೆಯು ತಿಳಿಸುತ್ತಾರೆ - ಈಗ ನೀವು ಪತಿತರಾಗಿದ್ದೀರಿ ಆದ್ದರಿಂದಲೇ
ಕರೆಯುತ್ತೀರಿ. ಇದನ್ನೂ ಸಹ ಈಗ ನಿಮಗೆ ತಿಳಿಸಿಕೊಡುತ್ತೇನೆ. ಅಜ್ಞಾನ ಕಾಲದಲ್ಲಿ ಇದು
ಬುದ್ಧಿಯಲ್ಲಿರುವುದಿಲ್ಲ, ತಮೋಪ್ರಧಾನವಾಗಿರುವ ಆತ್ಮವು ಸತೋಪ್ರಧಾನವಾಗಬೇಕಾಗುತ್ತದೆ ಅಂದಮೇಲೆ
ಹೇಗೆ ಸತೋಪ್ರಧಾನರಾಗುವುದು, ಇದೂ ಸಹ ಏಣಿಯ ಚಿತ್ರದಲ್ಲಿ ತಿಳಿಸಿದ್ದಾರೆ, ಇದರೊಂದಿಗೆ ದೈವೀ
ಗುಣಗಳನ್ನೂ ಧಾರಣೆ ಮಾಡಬೇಕು. ಇದು ಬೇಹದ್ದಿನ ಶಾಲೆಯಾಗಿದೆ. ಹೇಗೆ ಶಾಲೆಯಲ್ಲಿ ಸಾಮಾನ್ಯ ಉತ್ತಮ
ಮತ್ತು ಸರ್ವೋತ್ತಮ ಎಂದು ರಿಜಿಸ್ಟರ್ ನ್ನು ಇಡುತ್ತಾರೆ. ಯಾರು ಸೇವಾಧಾರಿ ಮಕ್ಕಳಾಗಿದ್ದಾರೆಯೋ
ಅವರು ಬಹಳ ಮಧುರವಾಗಿದ್ದಾರೆ. ಅವರ ರಿಜಿಸ್ಟರ್ ಬಹಳ ಚೆನ್ನಾಗಿದೆ. ಒಂದು ವೇಳೆ ರಿಜಿಸ್ಟರ್
ಚೆನ್ನಾಗಿಲ್ಲದಿದ್ದರೆ ಅವರು ಉಮ್ಮಂಗ-ಉತ್ಸಾಹದಲ್ಲಿ ಇರುವುದಿಲ್ಲ. ಎಲ್ಲವೂ ವಿದ್ಯೆಯ ಮೇಲೆ
ಆಧಾರಿತವಾಗಿದೆ. ಯೋಗ ಮತ್ತು ದೈವೀ ಗುಣಗಳ ಮೇಲೆ ಆಧಾರಿತವಾಗಿದೆ. ಬೇಹದ್ದಿನ ತಂದೆಯು ನಮಗೆ
ಓದಿಸುತ್ತಾರೆ. ಮೊದಲು ನಾವು ಶೂದ್ರ ವರ್ಣದವರಾಗಿದ್ದೆವು ಈಗ ಬ್ರಾಹ್ಮಣ ವರ್ಣದವರಾಗಿದ್ದೇವೆ ಎಂದು
ಮಕ್ಕಳಿಗೂ ಗೊತ್ತಿದೆ. ಪ್ರಜಾಪಿತ ಬ್ರಹ್ಮಾರವರ ಮಕ್ಕಳು ನಾವು ಬ್ರಾಹ್ಮಣರಾಗಿದ್ದೇವೆ ಎಂಬುದೂ ಸಹ
ಅನೇಕರಿಗೆ ಮರೆತು ಹೋಗುತ್ತದೆ. ಯಾವಾಗ ನೀವು ತಂದೆಯನ್ನು ನೆನಪು ಮಾಡುತ್ತೀರೋ ಆಗ ಬ್ರಹ್ಮಾರವರನ್ನು
ನೆನಪು ಮಾಡಬೇಕಾಗುತ್ತದೆ. ನಾವು ಬ್ರಾಹ್ಮಣ ಕುಲದವರಾಗಿದ್ದೇವೆ ಎಂಬ ನಶೆಯು ಇರಬೇಕಾಗಿದೆ. ಮರೆತು
ಹೋಗುವುದರಿಂದ ನಾವು ಬ್ರಾಹ್ಮಣ ಕುಲದವರಾಗಿದ್ದೇವೆ ಮತ್ತೆ ದೇವತಾ ಕುಲದವರಾಗುತ್ತೇವೆಂದು
ನಶೆಯಿರುವುದಿಲ್ಲ. ಈ ಬ್ರಾಹ್ಮಣ ಕುಲವನ್ನು ಯಾರು ರಚಿಸಿದರು? ಬ್ರಹ್ಮಾರವರ ಮೂಲಕ ನಾನು ನಿಮ್ಮನ್ನು
ಬ್ರಾಹ್ಮಣ ಕುಲದಲ್ಲಿ ತರುತ್ತೇನೆ. ಬ್ರಾಹ್ಮಣರದು ರಾಜಧಾನಿಯಿಲ್ಲ, ಚಿಕ್ಕ ಕುಲವಾಗಿದೆ. ಈಗ
ನಿಮ್ಮನ್ನು ಬ್ರಾಹ್ಮಣರೆಂದು ತಿಳಿಯುತ್ತೀರೆಂದರೆ ದೇವತೆಗಳಾಗುತ್ತೀರಿ. ತಮ್ಮ
ಉದ್ಯೋಗ-ವ್ಯವಹಾರಗಳಲ್ಲಿ ತೊಡಗುವುದರಿಂದ ಎಲ್ಲವನ್ನೂ ಮರೆತು ಬಿಡುತ್ತೀರಿ. ಬ್ರಾಹ್ಮಣರು
ಎನ್ನುವುದೇ ಮರೆತು ಹೋಗುತ್ತಾರೆ. ಆ ವ್ಯವಹಾರದಿಂದ ಹೊರ ಬಂದಾಗ ಮತ್ತೆ ಪುರುಷಾರ್ಥ ಮಾಡಬೇಕು.
ಕೆಲಕೆಲವರಿಗೆ ವ್ಯವಹಾರದಲ್ಲಿಯೇ ಹೆಚ್ಚಿನ ಗಮನ ಕೊಡಬೇಕಾಗುತ್ತದೆ ಅಂದಾಗ ಕಾರ್ಯವು ಮುಗಿಯಿತೆಂದರೆ
ತಮ್ಮ ಮಾತಿನ ಮೇಲೆ ಗಮನ ಕೊಡಿ ಅಂದರೆ ನೆನಪಿನಲ್ಲಿ ಕುಳಿತುಕೊಳ್ಳಿ. ನಿಮ್ಮ ಬಳಿ ಬ್ಯಾಡ್ಜ್ ಬಹಳ
ಚೆನ್ನಾಗಿದೆ, ತ್ರಿಮೂರ್ತಿಗಳ ಚಿತ್ರವೂ ಇದೆ. ತಂದೆಯು ನಮ್ಮನ್ನು ಈ ರೀತಿ ಮಾಡುತ್ತಾರೆ! ಇದೇ
ಮನ್ಮನಾಭವವಾಗಿದೆ. ಕೆಲವರಿಗೆ ಹವ್ಯಾಸವಾಗಿ ಬಿಡುತ್ತದೆ, ಇನ್ನೂ ಕೆಲವರಿಗೆ ಆಗುವುದಿಲ್ಲ.
ಭಕ್ತಿಯಂತೂ ಈಗ ಮುಗಿಯಿತು, ಈಗ ತಂದೆಯನ್ನು ನೆನಪು ಮಾಡಬೇಕಾಗಿದೆ. ಬೇಹದ್ದಿನ ತಂದೆಯೇ ನಿಮಗೆ
ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ ಆದ್ದರಿಂದ ಖುಷಿಯಾಗುತ್ತದೆ. ಕೆಲವರಿಗೆ ಬಹಳ
ಪ್ರೀತಿಯುಂಟಾಗುತ್ತದೆ, ಇನ್ನೂ ಕೆಲವರಿಗೆ ಕಡಿಮೆ. ಇದು ಬಹಳ ಸಹಜವಾಗಿದೆ. ಗೀತೆಯ
ಆದಿ-ಮಧ್ಯ-ಅಂತ್ಯದಲ್ಲಿ ಮನ್ಮನಾಭವ ಶಬ್ಧವಿದೆ. ಇದು ಅದೇ ಗೀತಾ ಭಾಗವಾಗಿದೆ. ಕೇವಲ ಕೃಷ್ಣನ
ಹೆಸರನ್ನು ಹಾಕಿದ್ದಾರೆ. ಭಕ್ತಿಮಾರ್ಗದಲ್ಲಿ ಯಾವ ದೃಷ್ಟಾಂತಗಳಿವೆಯೋ ಅವು ಈ ಸಮಯದ್ದಾಗಿದೆ.
ಭಕ್ತಿಮಾರ್ಗದಲ್ಲಿ ದೇಹದ ಭಾನವನ್ನು ಬಿಡಿ, ತಮ್ಮನ್ನು ಆತ್ಮನೆಂದು ತಿಳಿಯಿರಿ ಎಂದು ಯಾರೂ
ಹೇಳುವುದಿಲ್ಲ. ಇಲ್ಲಿ ತಂದೆಯು ನಿಮಗೆ ಬರುತ್ತಿದ್ದಂತೆಯೇ ಶಿಕ್ಷಣ ಕೊಡುತ್ತಾರೆ, ಈ ನಿಶ್ಚಯವಿದೆ.
ದೇವಿ-ದೇವತಾ ಧರ್ಮದ ಸ್ಥಾಪನೆಯು ನಮ್ಮ ಮೂಲಕವೇ ಆಗುತ್ತದೆ, ರಾಜಧಾನಿಯು ಸ್ಥಾಪನೆಯಾಗುತ್ತದೆ,
ಇದರಲ್ಲಿ ಯುದ್ಧದ ಮಾತಿಲ್ಲ. ತಂದೆಯು ಈಗ ನಿಮಗೆ ಪವಿತ್ರತೆಯನ್ನು ಕಲಿಸುತ್ತಾರೆ, ಅದೂ ಸಹ
ಅರ್ಧಕಲ್ಪ ಸ್ಥಿರವಾಗಿರುತ್ತದೆ. ಅಲ್ಲಿ ರಾವಣ ರಾಜ್ಯವೇ ಇರುವುದಿಲ್ಲ. ಈಗ ನೀವು ವಿಕಾರಗಳ ಮೇಲೆ
ಜಯ ಗಳಿಸುತ್ತಿದ್ದೀರಿ. ಇದೂ ಸಹ ನಿಮಗೆ ಗೊತ್ತಿದೆ, ನಾವು ಚಾಚೂ ತಪ್ಪದೆ ಕಲ್ಪದ ಹಿಂದೆ
ರಾಜಧಾನಿಯನ್ನು ಸ್ಥಾಪಿಸಿದ್ದೆವೋ ಅದೇ ರೀತಿ ಈಗ ಮಾಡುತ್ತಿದ್ದೇವೆ. ನಮಗಾಗಿ ಈ ಹಳೆಯ ಪ್ರಪಂಚವು
ಸಮಾಪ್ತಿಯಾಗಲಿದೆ. ನಾಟಕದ ಚಕ್ರವು ಸುತ್ತುತ್ತಿರುತ್ತದೆ, ಸತ್ಯಯುಗದಲ್ಲಿ ಚಿನ್ನವೇ
ಚಿನ್ನವಿರುತ್ತದೆ, ಏನಿತ್ತೋ ಮತ್ತೆ ಅದೇ ಆಗುತ್ತದೆ. ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ಮಾಯಾ
ಮಚಂದರ್ ಆಟವನ್ನು ತೋರಿಸುತ್ತಾರೆ. ಸಾಕ್ಷಾತ್ಕಾರದಲ್ಲಿ ಚಿನ್ನದ ಇಟ್ಟಿಗೆಗಳನ್ನು ನೋಡಿದನು ಅಂದರೆ
ನೀವೂ ಸಹ ವೈಕುಂಠದಲ್ಲಿ ಚಿನ್ನದ ಮಹಲುಗಳನ್ನು ನೋಡುತ್ತೀರಿ. ಅಲ್ಲಿನ ವಸ್ತುಗಳನ್ನು ಇಲ್ಲಿಗೆ ತರಲು
ಸಾಧ್ಯವಿಲ್ಲ. ಇದು ಸಾಕ್ಷಾತ್ಕಾರವಾಗಿದೆ. ನೀವು ಈ ಮಾತುಗಳನ್ನು ಭಕ್ತಿಯಲ್ಲಿ
ತಿಳಿದುಕೊಂಡಿರಲಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನಿಮ್ಮನ್ನು ಕರೆದುಕೊಂಡು
ಹೋಗಲು ಬಂದಿದ್ದೇನೆ. ನೀವಿಲ್ಲದೆ ನನಗೆ ಸುಖವೆನಿಸುವುದಿಲ್ಲ. ಯಾವಾಗ ಸಮಯವು ಬರುತ್ತದೆಯೋ ಆಗ ನನಗೆ
ಅವಿಶ್ರಾಂತಿಯಾಗಿ ಬಿಡುತ್ತದೆ - ನಾನು ಹೋಗಿ ಬಿಡಲಿ, ಮಕ್ಕಳು ಬಹಳ ದುಃಖಿಯಾಗಿದ್ದಾರೆ,
ಕೂಗುತ್ತಿದ್ದಾರೆ, ಈಗ ಹೋಗಿ ಬಿಡಲೇ ಎಂದು ದಯೆ ಬರುತ್ತದೆ. ನಾಟಕದಲ್ಲಿ ಯಾವಾಗ ಸಮಯವಿರುತ್ತದೆಯೋ
ಆಗ ಹೋಗಲೇ ಎಂಬ ವಿಚಾರವು ಬರುತ್ತದೆ. ವಿಷ್ಣುವಿನ ಅವತರಣೆಯ ನಾಟಕವನ್ನು ತೋರಿಸುತ್ತಾರೆ ಆದರೆ
ವಿಷ್ಣುವಿನ ಅವತರಣೆಯಾಗುವುದೇ ಇಲ್ಲ. ದಿನ ಪ್ರತಿದಿನ ಮನುಷ್ಯರ ಬುದ್ಧಿಯು ಸಮಾಪ್ತಿಯಾಗುತ್ತಾ
ಹೋಗುತ್ತದೆ ಏನೂ ಅರ್ಥವಾಗುವುದಿಲ್ಲ. ಆತ್ಮವು ಪತಿತವಾಗಿ ಬಿಟ್ಟಿದೆ. ಆದ್ದರಿಂದ ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಪಾವನರಾಗಿ ಆಗ ರಾಮರಾಜ್ಯವು ಬರುತ್ತದೆ. ಮನುಷ್ಯರು ರಾಮರಾಜ್ಯದ ಬಗ್ಗೆ
ತಿಳಿದುಕೊಂಡೇ ಇಲ್ಲ. ಶಿವನ ಪೂಜೆಯನ್ನು ಮಾಡಲಾಗುತ್ತದೆ, ಅವನಿಗೆ ರಾಮನೆಂದು ಹೇಳಲಾಗುವುದಿಲ್ಲ,
ಅವರನ್ನು ಶಿವ ತಂದೆಯೆಂದು ಹೇಳುವುದು ಶೋಭಿಸುತ್ತದೆ. ಭಕ್ತಿಯಲ್ಲಿ ಯಾವುದೇ ರಸವಿಲ್ಲ, ಈಗ ನಿಮಗೆ
ಆ ರಸ ಬರುತ್ತದೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ಮಧುರ ಮಕ್ಕಳೇ, ನಾನು ನಿಮ್ಮನ್ನು ಕರೆದುಕೊಂಡು
ಹೋಗಲು ಬಂದಿದ್ದೇನೆ ಮತ್ತೆ ನಿಮ್ಮ ಆತ್ಮವು ಅಲ್ಲಿಂದ ಹಾಗೆಯೇ ಸುಖಧಾಮಕ್ಕೆ ಹೊರಟು ಹೋಗುತ್ತದೆ.
ಅಲ್ಲಿ ನಾನು ನಿಮ್ಮ ಜೊತೆಗಾರನಾಗುವುದಿಲ್ಲ. ತಮ್ಮ ಸ್ಥಿತಿಯನುಸಾರ ನಿಮ್ಮ ಆತ್ಮವೇ ಹೋಗಿ ಇನ್ನೊಂದು
ಗರ್ಭದಲ್ಲಿ ಪ್ರವೇಶ ಮಾಡುತ್ತದೆ. ಸಾಗರದಲ್ಲಿ ಆಲದ ಎಲೆಯ ಮೇಲೆ ಶ್ರೀಕೃಷ್ಣನು ಬಂದನೆಂದು
ತೋರಿಸುತ್ತಾರೆ. ಆದರೆ ಸಾಗರದ ಮಾತೇ ಇಲ್ಲ. ಆತ್ಮವು ಗರ್ಭದಲ್ಲಿ ಬಹಳ ವಿಶ್ರಾಂತಿಯಿಂದ ಇರುತ್ತಾರೆ.
ತಂದೆಯು ತಿಳಿಸುತ್ತಾರೆ - ನಾನು ಗರ್ಭದಲ್ಲಿ ಬರುವುದಿಲ್ಲ, ನಾನಂತೂ ಪ್ರವೇಶ ಮಾಡುತ್ತೇನೆ ನಾನು
ಮಗುವಾಗುವುದಿಲ್ಲ. ನನ್ನ ಬದಲು ಕೃಷ್ಣನನ್ನು ಮಗನೆಂದು ತಿಳಿದು ಖುಷಿ ಪಡುತ್ತಾರೆ. ಕೃಷ್ಣನು
ಜ್ಞಾನವನ್ನು ಕೊಟ್ಟನೆಂದು ತಿಳಿದು ಅವನನ್ನು ಬಹಳ ಪ್ರೀತಿ ಮಾಡುತ್ತಾರೆ. ನಾನು ಎಲ್ಲರನ್ನು
ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ ಮತ್ತು ನಿಮ್ಮನ್ನು ಸತ್ಯಯುಗದಲ್ಲಿ ಕಳುಹಿಸಿ ಕೊಡುತ್ತೇನೆ
ಎಂದರೆ ನನ್ನ ಪಾತ್ರವು ಮುಗಿಯಿತು. ಮತ್ತೆ ಅರ್ಧಕಲ್ಪವು ಯಾವುದೇ ಪಾತ್ರವಿರುವುದಿಲ್ಲ, ನಂತರ ಭಕ್ತಿ
ಮಾರ್ಗದಲ್ಲಿ ನನ್ನ ಪಾತ್ರವು ಆರಂಭವಾಗುತ್ತದೆ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ಈಗ ಮಕ್ಕಳಿಗೆ
ಜ್ಞಾನವನ್ನು ತಿಳಿಯುವುದು ಮತ್ತು ತಿಳಿಸುವುದು ಸಹಜವಾಗಿದೆ. ಅನ್ಯರಿಗೆ ತಿಳಿಸುತ್ತೀರೆಂದರೆ
ಖುಷಿಯೂ ಇರುತ್ತದೆ ಮತ್ತು ಉತ್ತಮ ಪದವಿಯನ್ನು ಪಡೆಯುತ್ತೀರಿ. ಇಲ್ಲಿ ಕುಳಿತು ಕೇಳುತ್ತೀರೆಂದರೆ
ಇಷ್ಟವೆನಿಸುತ್ತದೆ, ಹೊರಗಡೆ ಹೋದಂತೆ ಮರೆತು ಹೋಗುತ್ತಾರೆ. ಹೇಗೆ ಖೈದಿಗಳಿರುತ್ತಾರೆ,
ಯಾವುದಾದರೊಂದು ತಪ್ಪು ಮಾಡುತ್ತಾ ಜೈಲಿಗೆ ಹೋಗುತ್ತಾರೆ. ನಿಮ್ಮದೂ ಸಹ ಇಂತಹ ಸ್ಥಿತಿಯಾಗುತ್ತದೆ.
ಗರ್ಭದಲ್ಲಿ ಹೋಗಿ ಪಶ್ಚಾತ್ತಾಪ ಪಟ್ಟು ಅಲ್ಲಿಯದು ಅಲ್ಲಿಗೇ ಉಳಿಯುತ್ತದೆ. ಇವೆಲ್ಲಾ ಮಾತುಗಳನ್ನು
ಮನುಷ್ಯರು ಯಾವುದೇ ಪಾಪ ಕರ್ಮಗಳನ್ನು ಮಾಡದಿರಲಿ ಎಂದು ರಚಿಸಿದ್ದಾರೆ. ಆತ್ಮವನ್ನು ತನ್ನ ಜೊತೆ
ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ಆದ್ದರಿಂದಲೇ ಕೆಲವರು ಚಿಕ್ಕಂದಿನಿಂದಲೇ ಪಂಡಿತರಾಗಿ
ಬಿಡುತ್ತಾರೆ. ಆತ್ಮವು ನಿರ್ಲೇಪವೆಂದು ಕೆಲವರು ತಿಳಿಯುತ್ತಾರೆ ಆದರೆ ಆತ್ಮವು ನಿರ್ಲೇಪವಲ್ಲ.
ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವನ್ನು ಆತ್ಮವೇ ತೆಗೆದುಕೊಂಡು ಆಗುತ್ತದೆ. ಆದ್ದರಿಂದಲೇ ಕರ್ಮ
ಭೋಗವಿರುತ್ತದೆ. ಈಗ ನೀವು ಪವಿತ್ರ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತೀರಿ. ನೀವು ಓದಿ ಮತ್ತೆ
ಪದವಿಯನ್ನು ಪಡೆಯುತ್ತೀರಿ. ತಂದೆಯಂತೂ ಎಲ್ಲಾ ಆತ್ಮಗಳ ಸಮೂಹವನ್ನು ಹಿಂತಿರುಗಿ ಕರೆದುಕೊಂಡು
ಹೋಗುತ್ತಾರೆ. ಕೆಲವರಷ್ಟೇ ಉಳಿಯುತ್ತಾರೆ. ಇವರೂ ಸಹ ಅಂತಿಮದಲ್ಲಿ ಬರುತ್ತಿರುತ್ತಾರೆ.ಯಾರು
ಕೊನೆಯಲ್ಲಿ ಬರಬೇಕಾಗಿದೆಯೋ ಅವರು ಉಳಿಯುತ್ತಾರೆ, ಮಾಲೆಯಾಗಿದೆಯಲ್ಲವೆ. ನಂಬರವಾರ್ ಆಗುತ್ತಾ
ಹೋಗುತ್ತಾರೆ. ಉಳಿದಂತೆ ಯಾರೆಲ್ಲಾ ಆಗುತ್ತಾರೆ ಅವರು ಸ್ವರ್ಗದಲ್ಲೂ ಕೊನೆಯಲ್ಲಿ ಬರುತ್ತಾರೆ.
ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ, ಇದು ಕೆಲವರಿಗೆ ಧಾರಣೆಯಾಗುತ್ತದೆ, ಕೆಲವರಿಗೆ
ಆಗುವುದಿಲ್ಲ. ಎಂತಹ ಸ್ಥಿತಿಯಿರುತ್ತದೆಯೋ ಅಂತಹ ಪದವಿಯೇ ಸಿಗುತ್ತದೆ. ನೀವು ಮಕ್ಕಳು ದಯಾ
ಹೃದಯಿಗಳು, ಕಲ್ಯಾಣಕಾರಿ ಆಗಬೇಕಾಗಿದೆ. ನಾಟಕವೇ ಹಾಗೆ ಮಾಡಲ್ಪಟ್ಟಿದೆ. ಯಾರಿಗೂ ದೋಷಿಗಳನ್ನಾಗಿ
ಮಾಡಲು ಸಾಧ್ಯವಿಲ್ಲ. ಏಕೆಂದರೆ ಕಲ್ಪದ ಹಿಂದೆ ಎಷ್ಟು ವಿದ್ಯಾಭ್ಯಾಸವು ಮಾಡಿದ್ದಾರೆಯೋ ಅಷ್ಟೇ
ಆಗುತ್ತದೆ, ಹೆಚ್ಚಿಗೆ ಆಗಲು ಸಾಧ್ಯವಿಲ್ಲ. ಎಷ್ಟೇ ಪುರುಷಾರ್ಥ ಮಾಡಿಸಲಿ ಅದರಲ್ಲಿ ಏನೂ
ಅಂತರವಾಗುವುದಿಲ್ಲ. ಅಂತರವು ಅನ್ಯರಿಗೆ ತಿಳಿಸುವಾಗ ಆಗುತ್ತದೆ. ನಂಬರವಾರ೦ತೂ ಇರುತ್ತಾರೆ.
ರಾಜನೆಲ್ಲಿ! ಪ್ರಜೆಯಲ್ಲಿ! ಈ ಅವಿನಾಶಿ ಜ್ಞಾನ ರತ್ನಗಳು ರಾಜನನ್ನಾಗಿ ಮಾಡುತ್ತವೆ. ಒಂದು ವೇಳೆ
ಪುರುಷಾರ್ಥ ಮಾಡದಿದ್ದರೆ ಪ್ರಜೆಗಳಾಗಿ ಬಿಡುತ್ತಾರೆ. ಇದು ಬೇಹದ್ದಿನ ಶಾಲೆಯಾಗಿದೆ, ಇದರಲ್ಲಿ
ಪ್ರಥಮ, ದ್ವಿತೀಯ, ತೃತೀಯ ದರ್ಜೆಗಳಿರುತ್ತವೆ. ಭಕ್ತಿಯಲ್ಲಿ ವಿದ್ಯೆಯ ಮಾತಿರುವುದಿಲ್ಲ, ಅಲ್ಲಿ
ಇಳಿಯುವ ಮಾತಾಗಿದೆ. ಬಹಳ ಆಡಂಬರವಿದೆ, ಮಹಿಮೆ ಬಹಳ ಮಾಡುತ್ತಾರೆ. ಭಜನೆ ಮಾಡುತ್ತಾರೆ ಆದರೆ
ಇಲ್ಲಂತೂ ಶಾಂತಿಯಲ್ಲಿರಬೇಕಾಗಿದೆ. ಭಜನೆ ಇತ್ಯಾದಿಗಳೇನೂ ಇಲ್ಲ. ನೀವು ಅರ್ಧಕಲ್ಪ ಭಕ್ತಿ ಮಾಡಿದಿರಿ,
ಭಕ್ತಿಯದು ಎಷ್ಟೊಂದು ಶೋ ಇದೆ, ಎಲ್ಲರದು ತಮ್ಮ-ತಮ್ಮ ಪಾತ್ರವಾಗಿದೆ. ಕೆಲವರು ಬೀಳುತ್ತಾರೆ,
ಕೆಲವರು ಏಳುತ್ತಾರೆ. ಕೆಲವರದು ಅದೃಷ್ಟ ಚೆನ್ನಾಗಿದೆ, ಕೆಲವರದು ಕಡಿಮೆ. ತಂದೆಯಂತೂ ಎಲ್ಲರಿಂದ
ಏಕರಸ ಪುರುಷಾರ್ಥ ಮಾಡಿಸುತ್ತಾರೆ, ವಿದ್ಯೆಯೂ ಸಹ ಎಲ್ಲರಿಗೂ ಏಕರಸ ಸಮಾನವಾಗಿದೆ ಅಂದಮೇಲೆ
ಶಿಕ್ಷಕರು ಒಬ್ಬರೇ ಆಗಿದ್ದಾರೆ, ಉಳಿದವರೆಲ್ಲರೂ ಮಾಸ್ಟರ್ ಆಗಿದ್ದಾರೆ. ಯಾರಾದರೂ ಹಿರಿಯ ವ್ಯಕ್ತಿ
ನಮಗೆ ಬಿಡುವಿಲ್ಲವೆಂದು ಹೇಳಿದರೆ ಕೇಳಿ ಮನೆಗೆ ಬಂದು ಓದಿಸುವುದೇ? ಏಕೆಂದರೆ ಅವರಿಗಂತೂ ತಮ್ಮ
ಅಹಂಕಾರವಿರುತ್ತದೆ. ಒಬ್ಬರಿಗೆ ತಿಳಿಸುವುದರಿಂದ ಅನ್ಯರ ಮೇಲೂ ಪ್ರಭಾವ ಬೀರುತ್ತದೆ. ಒಂದು ವೇಳೆ
ಅವರೂ ಸಹ ಈ ಜ್ಞಾನವು ಚೆನ್ನಾಗಿದೆ ಎಂದು ಅನ್ಯರಿಗೆ ಹೇಳಿದರೆ ಅವರಿಗೂ ಬ್ರಹ್ಮಾಕುಮಾರಿಯ ಸಂಗದ
ರಂಗು ಅಂಟಿತೆಂದು ಹೇಳುತ್ತಾರೆ. ಆದ್ದರಿಂದ ಕೇವಲ ಚೆನ್ನಾಗಿದೆ ಎಂದು ಹೇಳಿ ಬಿಡುತ್ತಾರೆ.
ಮಕ್ಕಳಲ್ಲಿ ಯೋಗದ ಶಕ್ತಿಯು ಚೆನ್ನಾಗಿರಬೇಕು, ಜ್ಞಾನದ ಖಡ್ಗದಲ್ಲಿ ಯೋಗದ ಹರಿತವಿರಬೇಕು.
ಪ್ರಸನ್ನಚಿತ್ತರು ಮತ್ತು ಯೋಗಿಗಳೇ ತಂದೆಯ ಹೆಸರನ್ನು ಪ್ರಸಿದ್ಧಗೊಳಿಸುತ್ತಾರೆ, ನಂಬರವಾರ್ ಇದೆ.
ರಾಜಧಾನಿಯು ಸ್ಥಾಪನೆಯಾಗುವುದಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಧಾರಣೆಯಂತೂ ಬಹಳ
ಸಹಜವಾಗಿದೆ, ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪ್ರೀತಿಯಿರುತ್ತದೆ, ಆಕರ್ಷಣೆ
ಆಗುತ್ತದೆ. ಸೂಜಿ ಸ್ವಚ್ಛವಾಗಿದ್ದರೆ ಅಯಸ್ಕಾಂತವು ತನ್ನ ಕಡೆ ಆಕರ್ಷಿಸುತ್ತದೆ, ಒಂದು ವೇಳೆ
ತುಕ್ಕಿದ್ದರೆ ಆಕರ್ಷಿಸುವುದಿಲ್ಲ. ಇಲ್ಲಿಯೂ ಹಾಗೆಯೇ ನೀವು ಸ್ವಚ್ಛವಾಗುತ್ತೀರೆಂದರೆ ಮೊದಲ
ನಂಬರಿನಲ್ಲಿ ಹೊರಟು ಹೋಗುತ್ತೀರಿ. ತಂದೆಯ ನೆನಪಿನಿಂದ ತುಕ್ಕು ಬಿಟ್ಟು ಹೋಗುತ್ತದೆ. ಗಾಯನವಿದೆ -
ತಮಗೆ ಬಲಿಹಾರಿಯಾಗುವೆ.... ಆದ್ದರಿಂದಲೇ ಗುರು ಬ್ರಹ್ಮಾ, ಗುರು ವಿಷ್ಣು ಎಂದು ಹೇಳುತ್ತಾರೆ. ಆ
ವಿವಾಹ ಮಾಡಿಸುವಂತಹ ಗುರುಗಳು ಮನುಷ್ಯರಾಗಿದ್ದಾರೆ. ನೀವು ನಿಶ್ಚಿತಾರ್ಥವನ್ನು ಶಿವನೊಂದಿಗೆ
ಮಾಡಿಕೊಂಡಿದ್ದೀರಾ ಹೊರತು ಬ್ರಹ್ಮಾರವರೊಂದಿಗಲ್ಲ. ಅಂದಾಗ ಶಿವ ತಂದೆಯನ್ನೇ ನೆನಪು ಮಾಡಬೇಕು.
ದಲ್ಲಾಳಿಯ ಚಿತ್ರದ ಅವಶ್ಯಕತೆಯಿಲ್ಲ. ನಿಶ್ಚಿತಾರ್ಥ ಆಯಿತೆಂದರೆ ಒಬ್ಬರು ಇನ್ನೊಬ್ಬರನ್ನು ನೆನಪು
ಮಾಡುತ್ತಿರುತ್ತಾರೆ ಆಗ ಇವರಿಗೂ ಸಹ ದಲ್ಲಾಳಿಯು ಸಿಕ್ಕಿ ಬಿಡುತ್ತದೆ. ನಿಶ್ಚಿತಾರ್ಥಕ್ಕೂ
ಸಿಗುತ್ತದೆಯಲ್ಲವೆ! ತಂದೆಯು ಇವರಲ್ಲಿ ಪ್ರವೇಶ ಮಾಡುತ್ತಾರೆ, ಆಧಾರವಾಗಿ ಪಡೆಯುತ್ತಾರೆಂದರೆ ಅವರು
ಆಕರ್ಷಣೆ ಮಾಡುತ್ತಾರೆ. ಆದ್ದರಿಂದಲೇ ಮಕ್ಕಳಿಗೂ ತಿಳಿಸುತ್ತಾರೆ - ನೀವು ಎಷ್ಟು ಆತ್ಮಗಳ ಕಲ್ಯಾಣ
ಮಾಡುತ್ತೀರೋ ಅಷ್ಟು ನಿಮಗೆ ಕಮಿಷನ್ ಸಿಗುತ್ತದೆ. ಇವು ಜ್ಞಾನದ ಮಾತುಗಳಾಗಿವೆ. ಅನ್ಯರಿಗೆ ಜ್ಞಾನ
ಕೊಡುತ್ತೀರೆಂದರೆ ಆಶೀರ್ವಾದ ಸಿಕ್ಕಿ ಬಿಡುವುದು. ಹಣದ ಮಾತೇ ಇಲ್ಲ. ಮಮ್ಮಾರವರ ಬಳಿ ಭಲೇ
ಹಣವಿರಲಿಲ್ಲ ಆದರೆ ಅನೇಕರ ಕಲ್ಯಾಣ ಮಾಡಿದರು. ನಾಟಕದಲ್ಲಿ ಪ್ರತಿಯೊಬ್ಬರದೂ ಪಾತ್ರವಿದೆ.
ಕೆಲಕೆಲವರದು ಧನವಂತರು ಹಣವನ್ನು ಕೊಡುತ್ತಾರೆ, ಸಂಗ್ರಹಾಲಯವನ್ನು ಮಾಡಿಸುತ್ತಾರೆಂದರೆ ಅವರಿಗೆ
ಅನೇಕರ ಆಶೀರ್ವಾದ ಸಿಗುತ್ತವೆ, ಒಳ್ಳೆಯ ಸಾಹುಕಾರನ ಪದವಿಯು ಸಿಗುತ್ತದೆ. ಸಾಹುಕಾರನ ಬಳಿ ಅನೇಕ
ದಾಸ-ದಾಸಿಯರಿರುತ್ತಾರೆ. ಪ್ರಜೆಗಳ ಬಳಿಯೂ ಸಹ ಸಾಹುಕಾರರು ಅರ್ಥಾತ್ ಸಾಹುಕಾರ ಪ್ರಜೆಗಳ ಬಳಿ ಬಹಳ
ಹಣವಿರುತ್ತದೆ ಮತ್ತೆ ಅವರಿಂದ ಲೋನ್ ಪಡೆಯುತ್ತಾರೆ ಅಂದಾಗ ಸಾಹುಕಾರರಾಗುವುದೂ ಒಳ್ಳೆಯದಾಗಿದೆ.
ಅದರಲ್ಲಿ ಬಡವರೇ ಸಾಹುಕಾರರಾಗುತ್ತಾರೆ, ಉಳಿದ ಸಾಹುಕಾರರಲ್ಲಿ ಸಾಹಸವೆಲ್ಲಿದೆ! ಈ ಬ್ರಹ್ಮಾರವರು
ತಕ್ಷಣ ಎಲ್ಲವನ್ನು ಬಿಟ್ಟು ಬಿಟ್ಟರು. ಯಾರ ಕೈ ದಾನ ಮಾಡುವ ಹಾಗೆ ಇರುತ್ತದೆಯೋ.... ಬಾಬಾ ಪ್ರವೇಶ
ಮಾಡಿದರು, ಎಲ್ಲವನ್ನೂ ಬಿಡಿಸಿ ಬಿಟ್ಟರು, ಕರಾಚಿಯಲ್ಲಿ ನೀವು ಹೇಗಿದ್ದಿರಿ, ದೊಡ್ಡ-ದೊಡ್ಡ ಮನೆ,
ಮೋಟಾರು, ಬಸ್ಸು ಎಲ್ಲವೂ ಇತ್ತು. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಗಳಾಗಿ.
ನಮಗೆ ಭಗವಂತನೇ ಓದಿಸುತ್ತಾರೆ ಎಂದು ಎಷ್ಟೊಂದು ನಶೆಯಿರಬೇಕು. ತಂದೆಯು ನಿಮಗೆ ಅಪಾರವಾದ
ಖಜಾನೆಯನ್ನು ಕೊಡುತ್ತಾರೆ. ನೀವು ಧಾರಣೆ ಮಾಡುವುದಿಲ್ಲವೆಂದರೆ ಪಡೆಯುವುದಕ್ಕೆ ಧೈರ್ಯವಿಲ್ಲ.
ಶ್ರೀಮತದಂತೆ ನಡೆಯುವುದಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಮ್ಮ ಜೋಳಿಗೆಯನ್ನು
ತುಂಬಿಸಿಕೊಳ್ಳಿ. ಅವರು ಹೋಗಿ ಶಂಕರನ ಮುಂದೆ ಜೋಳಿಗೆ ತುಂಬಿಸು ಎಂದು ಹೇಳುತ್ತಾರೆ. ಆದರೆ ತಂದೆಯು
ಬಂದು ಅನೇಕರ ಜೋಳಿಗೆಯನ್ನು ತುಂಬುತ್ತಾರೆ. ಹೊರಗೆ ಹೋದಾಗ ಖಾಲಿಯಾಗಿ ಬಿಡುತ್ತದೆ. ಆದ್ದರಿಂದ
ತಂದೆಯು ತಿಳಿಸುತ್ತಾರೆ - ನಿಮಗೆ ಬಹಳ ದೊಡ್ಡ ಖಜಾನೆಯನ್ನು ಕೊಡುತ್ತೇನೆ. ಜ್ಞಾನ ರತ್ನಗಳಿಂದ
ಜೋಳಿಗೆಯನ್ನು ತುಂಬಿ-ತುಂಬಿ ಕೊಡುತ್ತೇನೆ ಆದರೂ ಸಹ ನಂಬರವಾರ್ ಆಗಿಯೇ ತಮ್ಮ ಜೋಳಿಗೆಯನ್ನು
ತುಂಬಿಸಿಕೊಳ್ಳುತ್ತಾರೆ. ಯಾರು ತುಂಬಿಸಿಕೊಳ್ಳುವರೋ ಅವರು ಮತ್ತೆ ದಾನವನ್ನು ಕೊಡುತ್ತಾರೆ.
ಎಲ್ಲರಿಗೆ ಪ್ರಿಯರೂ ಆಗುತ್ತಾರೆ ಅವರ ಬಳಿಯೂ ಇಲ್ಲವೆಂದರೆ ಕೊಡುವುದಾದರೂ ಏನು? ನೀವು 84ರ
ಚಕ್ರವನ್ನು ಚೆನ್ನಾಗಿ ತಿಳಿಯಬೇಕು ಮತ್ತು ತಿಳಿಸಬೇಕು. ಬಾಕಿ ಪರಿಶ್ರಮವು ಯೋಗದ್ದಾಗಿದೆ. ಈಗ ನೀವು
ಯುದ್ಧದ ಮೈದಾನದಲ್ಲಿದ್ದೀರಿ. ಮಾಯೆಯ ಮೇಲೆ ಜಯ ಗಳಿಸಲು ಹೋರಾಡುತ್ತೀರಿ. ಅನುತ್ತೀರ್ಣರಾದರೆ
ಚಂದ್ರವಂಶದಲ್ಲಿ ಹೊರಟು ಹೋಗುತ್ತೀರಿ ಇದು ತಿಳುವಳಿಕೆಯ ಮಾತಾಗಿದೆ. ಮಕ್ಕಳಿಗೆ ಬಹಳ ಖುಷಿಯಿರಬೇಕು
- ಬಾಬಾ, ತಾವು ಎಷ್ಟೊಂದು ಆಸ್ತಿಯನ್ನು ಕೊಡುತ್ತೀರಿ. ಏಳುತ್ತಾ-ಕುಳಿತುಕೊಳ್ಳುತ್ತಾ ಇಡೀ ದಿನ ಇದು
ಬುದ್ಧಿಯಲಿದ್ದರೆ ಧಾರಣೆಯೂ ಆಗುತ್ತದೆ. ಯೋಗವು ಮುಖ್ಯವಾಗಿದೆ, ಯೋಗದಿಂದಲೇ ನೀವು ವಿಶ್ವವನ್ನು
ಪವಿತ್ರವನ್ನಾಗಿ ಮಾಡುತ್ತೀರಿ. ಜ್ಞಾನದನುಸಾರ ನೀವು ರಾಜ್ಯವನ್ನು ಮಾಡುತ್ತೀರಿ. ಈ ಹಣ
ಮೊದಲಾದವೆಲ್ಲವೂ ಮಣ್ಣು ಪಾಲಾಗುತ್ತದೆ. ಬಾಕಿ ಈ ಅವಿನಾಶಿ ಸಂಪಾದನೆಯು ಜೊತೆ ನಡೆಯುತ್ತದೆ. ಯಾರು
ಬುದ್ಧಿವಂತರಿರುತ್ತಾರೆಯೋ ಅವರು ನಾವು ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯುತ್ತೇವೆಂದು
ಹೇಳುತ್ತಾರೆ. ಅದೃಷ್ಟದಲ್ಲಿಲ್ಲವೆಂದರೆ ನಯಾ ಪೈಸೆ ಬೆಲೆಯಿರುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ತಮ್ಮ ವಿದ್ಯೆ
ಮತ್ತು ದೈವೀ ಗುಣಗಳ ರಿಜಿಸ್ಟರ್ ನ್ನು ಸರಿಯಾಗಿಡಬೇಕಾಗಿದೆ. ಬಹಳ-ಬಹಳ ಮಧುರರಾಗಬೇಕಾಗಿದೆ. ನಾವು
ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗಿದ್ದೇವೆ - ಈ ನಶೆಯಲ್ಲಿರಬೇಕಾಗಿದೆ.
2. ಸರ್ವರ ಪ್ರೀತಿ ಹಾಗೂ
ಆಶೀರ್ವಾದವನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕೆ ಜ್ಞಾನರತ್ನಗಳಿಂದ ತಮ್ಮ ಜೋಳಿಗೆಯನ್ನು
ತುಂಬಿಸಿಕೊಂಡು ದಾನ ಮಾಡಬೇಕಾಗಿದೆ. ಅನೇಕರ ಕಲ್ಯಾಣಕ್ಕೆ ನಿಮಿತ್ತರಾಗಬೇಕಾಗಿದೆ.
ವರದಾನ:
ತಂದೆಯ
ಪ್ರೀತಿಯಲ್ಲಿ ತನ್ನ ಮೂಲ ಬಲಹೀನತೆಯನ್ನು ಬಲಿಹಾರಿ ಮಾಡುವಂತಹ ಜ್ಞಾನಿತ್ವ ಆತ್ಮ ಭವ.
ಬಾಪ್ದಾದಾ ನೋಡುತ್ತಾರೆ
ಇಲ್ಲಿಯವರೆಗೂ ಐದು ವಿಕಾರಗಳ ವ್ಯರ್ಥ ಸಂಕಲ್ಪ ಮೆಜಾರಿಟಿಯವರಲ್ಲಿ ನಡೆಯುತ್ತಿದೆ. ಜ್ಞಾನಿತ್ವ
ಆತ್ಮಗಳಲ್ಲಿಯೂ ಕೆಲವೊಮ್ಮೆ ತಮ್ಮ ಗುಣ ಅಥವಾ ವಿಶೇಷತೆಯ ಅಭಿಮಾನ ಬಂದು ಬಿಡುವುದು, ಪ್ರತಿಯೊಬ್ಬರು
ತಮ್ಮ ಮೂಲ ಬಲಹೀನತೆ ಅಥವಾ ಮೂಲ ಸಂಸ್ಕಾರವನ್ನು ತಿಳಿದುಕೊಂಡು ಇದ್ದಾರೆ, ಆ ಬಲಹೀನತೆಯನ್ನು ತಂದೆಯ
ಪ್ರೀತಿಯಲ್ಲಿ ಅರ್ಪಣೆ ಮಾಡಿ ಬಿಡಿ ಇದೇ ಪ್ರೀತಿಯ ನಿದರ್ಶನವಾಗಿದೆ. ಸ್ನೇಹಿ ಅಥವಾ ಜ್ಞಾನಿತ್ವ
ಆತ್ಮಗಳು ತಂದೆಯ ಪ್ರೀತಿಯಲ್ಲಿ ವ್ಯರ್ಥ ಸಂಕಲ್ಪಗಳನ್ನು ಸಹಾ ಅರ್ಪಣೆ ಮಾಡಿ ಬಿಡುತ್ತಾರೆ.
ಸ್ಲೋಗನ್:
ಸ್ವಮಾನದ ಸೀಟ್
ಮೆಲೆ ಸ್ಥಿತರಾಗಿ ಸರ್ವರಿಗೆ ಸನ್ಮಾನ ಕೊಡುವಂತಹ ಮಾನನೀಯ ಆತ್ಮ ಆಗಿ.