30.05.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯ
ಸಮಾನ ದಯಾಹೃದಯಿ ಆಗಿ, ದಯಾಹೃದಯಿ ಮಕ್ಕಳೇ ಎಲ್ಲರನ್ನು ದುಃಖದಿಂದ ಬಿಡಿಸಿ ಪತಿತರಿಂದ ಪಾವನ ಮಾಡುವ
ಸೇವೆ ಮಾಡುತ್ತಾರೆ”
ಪ್ರಶ್ನೆ:
ಇಡೀ ಪ್ರಪಂಚದ
ಬೇಡಿಕೆ ಯಾವುದಾಗಿದೆ? ಅದನ್ನು ತಂದೆಯ ವಿನಃ ಬೇರೆ ಯಾರೂ ಪೂರ್ಣ ಮಾಡಲು ಸಾಧ್ಯವಿಲ್ಲ?
ಉತ್ತರ:
ಶಾಂತಿ ಹಾಗೂ
ಸುಖ ಸಿಗಬೇಕೆಂಬುದೇ ಇಡೀ ಪ್ರಪಂಚದ ಬೇಡಿಕೆಯಾಗಿದೆ. ಸರ್ವ ಮಕ್ಕಳ ಕೂಗನ್ನು ಕೇಳಿ ತಂದೆಯು
ಬರುತ್ತಾರೆ. ತಂದೆಯು ಬೇಹದ್ದಿನವರಾಗಿರುವುದರಿಂದ ಅವರಿಗೆ ನನ್ನ ಮಕ್ಕಳೆಲ್ಲರೂ ಹೇಗೆ ದುಃಖಿಗಳಿಂದ
ಸುಖವಾಗುವುದೆಂಬ ಚಿಂತೆಯಿದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಈ ಹಳೆಯ ಪ್ರಪಂಚವು ನನ್ನದೇ
ಆಗಿದೆ, ಎಲ್ಲಾ ಮಕ್ಕಳೂ ನನ್ನವರೇ ಆಗಿದ್ದಾರೆ. ಸರ್ವರನ್ನೂ ದುಃಖದಿಂದ ಬಿಡಿಸಲು ಬಂದಿದ್ದೇನೆ.
ಇದನ್ನು ನಾನೇ ಪತಿತರಿಂದ ಪಾವನ ಮಾಡಬೇಕು.
ಓಂ ಶಾಂತಿ.
ತಂದೆಯು ಮಕ್ಕಳನ್ನು ಪಾವನ ಮಾಡುತ್ತಿದ್ದಾರೆ ಆದ್ದರಿಂದ ಅಗತ್ಯವಾಗಿ ತಂದೆಯೊಂದಿಗೆ
ಪ್ರೀತಿಯಿರಬೇಕಾಗಿದೆ. ಪರಸ್ಪರ ಸಹೋದರ-ಸಹೋದರರಲ್ಲಿಯೂ ಪ್ರೀತಿಯು ಸರಿಯಾಗಿದೆ. ಒಬ್ಬ ತಂದೆಯ
ಮಕ್ಕಳು ಪರಸ್ಪರ ಸಹೋದರ-ಸಹೋದರರಾಗಿದ್ದೇವೆ ಆದರೆ ಪಾವನ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ.
ಆದುದರಿಂದ ಎಲ್ಲಾ ಮಕ್ಕಳಿಗೂ ಒಬ್ಬ ತಂದೆಯ ಮೇಲೆ ಪ್ರೀತಿಯು ಹೊರಟು ಹೋಗುತ್ತದೆ. ತಂದೆಯು
ತಿಳಿಸುತ್ತಾರೆ- ಮಕ್ಕಳೇ, ನನ್ನೊಬ್ಬನನ್ನೆ ನೆನಪು ಮಾಡಿ. ಇದಂತೂ ಸರಿಯಿದೆ- ನೀವಂತೂ
ಸಹೋದರ-ಸಹೋದರರೆಂದಾಗ ಅವಶ್ಯವಾಗಿ ಕ್ಷೀರ ಖಂಡವಾಗಿರುತ್ತೀರಿ. ಒಬ್ಬ ತಂದೆಯ ಮಕ್ಕಳಾಗಿದ್ದೀರಿ,
ಆತ್ಮನಲ್ಲಿಯೇ ಎಷ್ಟೊಂದು ಪ್ರೀತಿಯಿರುತ್ತದೆ. ನೀವು ದೇವತಾ ಪದವಿಯನ್ನು ಪ್ರಾಪ್ತಿ
ಮಾಡಿಕೊಳ್ಳುತ್ತಿದ್ದೀರೆಂದರೆ ಬಹಳ ಪ್ರೀತಿಯಿರಬೇಕಾಗಿದೆ. ನಾವು ಆತ್ಮ ಸಹೋದರ-ಸಹೋದರರಾಗುತ್ತೇವೆ,
ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ತಂದೆಯೇ ಬಂದು ಕಲಿಸಿಕೊಡುತ್ತಾರೆ. ಯಾರು
ತಿಳಿದುಕೊಳ್ಳುವವರಾಗಿದ್ದಾರೆಯೋ ಅವರು ಇದು ಪಾಠಶಾಲೆ ಅಥವಾ ಅತಿ ದೊಡ್ಡ ವಿಶ್ವ ವಿದ್ಯಾಲಯವಾಗಿದೆ
ಎಂದು ತಿಳಿದುಕೊಳ್ಳುತ್ತಾರೆ. ತಂದೆಯು ಎಲ್ಲರಿಗೂ ದೃಷ್ಠಿ ಕೊಡುತ್ತಾರೆ ಅಥವಾ ನೆನಪು ಮಾಡುತ್ತಾರೆ.
ಬೇಹದ್ದಿನ ತಂದೆಯನ್ನು ಇಡೀ ಪ್ರಪಂಚದ ಮನುಷ್ಯ ಮಾತ್ರರೆಲ್ಲಾ ಆತ್ಮರು ನೆನಪು ಮಾಡುತ್ತಾರೆ. ಹಳೆಯ
ಅಥವಾ ಹೊಸ ಪ್ರಪಂಚವೆಲ್ಲವೂ ತಂದೆಯದೇ ಆಗಿದೆ. ಹೊಸ ಪ್ರಪಂಚ ತಂದೆಯದಾದರೆ ಹಳೆಯ ಪ್ರಪಂಚ
ತಂದೆಯದಲ್ಲವೇ? ತಂದೆಯೇ ಎಲ್ಲರನ್ನೂ ಪಾವನ ಮಾಡುತ್ತಾರೆ. ಈ ಹಳೆಯ ಪ್ರಪಂಚವೂ ನನ್ನದೇ ಆಗಿದೆ. ಇಡೀ
ಪ್ರಪಂಚದ ಮಾಲೀಕ ನಾನೇ ಆಗಿದ್ದೇನೆ. ಭಲೆ ನಾನು ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡುವುದಿಲ್ಲ ಆದರೂ
ಅದು ನನ್ನದಾಗಿದೆ. ನನ್ನ ಮಕ್ಕಳು ನನ್ನ ಈ ವಿಶಾಲ ಮನೆಯಲ್ಲಿ ಬಹಳ ಸುಖವಾಗಿದ್ದಾರೆ ಹಾಗೂ ನಂತರ
ದುಃಖವನ್ನೂ ಪಡೆಯುತ್ತಾರೆ. ಇದು ಆಟವಾಗಿದೆ. ಈ ಇಡೀ ಬೇಹದ್ದಿನ ಪ್ರಪಂಚವು ನಮ್ಮ ಮನೆಯಾಗಿದೆ, ಇದು
ಅತಿದೊಡ್ಡ ನಾಟಕದ ಮಂಟಪವಾಗಿದೆ. ಈ ಪೂರ್ಣಮನೆಯಲ್ಲಿ ನನ್ನ ಮಕ್ಕಳಿದ್ದಾರೆಂದು ತಿಳಿದುಕೊಂಡಿದ್ದಾರೆ.
ಇಡೀ ಪ್ರಪಂಚವನ್ನು ನೋಡುತ್ತಾರೆ, ಎಲ್ಲವೂ ಚೈತನ್ಯವಾಗಿದೆ. ಎಲ್ಲಾ ಮಕ್ಕಳು ಈ ಸಮಯದಲ್ಲಿ
ದುಃಖಿಗಳಾಗಿದ್ದಾರೆ ಆದ್ದರಿಂದ ಬಾಬಾ ನಮ್ಮನ್ನು ಈ ಕೊಳಕು ದುಃಖಿಪ್ರಪಂಚದಿಂದ ಶಾಂತಿಯ ಪ್ರಪಂಚಕ್ಕೆ
ಕರೆದುಕೊಂಡು ಹೋಗಿ ಶಾಂತಿದೇವ ಎಂದು ಬೇಡುತ್ತಾರೆ. ತಂದೆಯನ್ನೇ ಬೇಡುತ್ತಾರೆ. ಹೀಗೆ ದೇವತೆಗಳಿಗೆ
ಹೇಳಲು ಸಾಧ್ಯವಿಲ್ಲ. ಎಲ್ಲರಿಗೂ ಆ ತಂದೆಯು ಒಬ್ಬರೇ ಆಗಿದ್ದಾರೆ. ಅವರಿಗೆ ಇಡೀ ಪ್ರಪಂಚದ
ಚಿಂತೆಯಿದೆ. ಇದು ಬೇಹದ್ದಿನ ಮನೆಯಾಗಿದೆ. ತಂದೆಯು ತಿಳಿದುಕೊಂಡಿದ್ದಾರೆ- ಈ ಬೇಹದ್ದಿನ ಮನೆಯಲ್ಲಿ
ಈ ಸಮಯದಲ್ಲಿ ಎಲ್ಲರೂ ದುಃಖಿಗಳಾಗಿದ್ದಾರೆ. ಆದ್ದರಿಂದ ಹೇ ಶಾಂತಿದೇವ, ಸುಖದೇವ ಎಂದು ಕರೆಯುತ್ತಾರೆ.
ಈ ಎರಡೂ ವಸ್ತುಗಳನ್ನು ಬೇಡುತ್ತಾರಲ್ಲವೆ. ಈಗಂತೂ ನಿಮಗೆ ತಿಳಿದಿದೆ- ನಾವು ಬೇಹದ್ದಿನ ತಂದೆಯಿಂದ
ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ತಂದೆಯು ಬಂದು ನಮಗೆ ಸುಖವನ್ನು ಕೊಡುತ್ತಾರೆ,
ಶಾಂತಿಯನ್ನು ಕೊಡುತ್ತಾರೆ ಬೇರೆ ಯಾರೂ ಸುಖ-ಶಾಂತಿಯನ್ನು ಕೊಡುವವರಿಲ್ಲ. ತಂದೆಗೆ ಮಾತ್ರ ದಯೆ
ಬರುತ್ತದೆ, ಅವರು ಬೇಹದ್ದಿನ ತಂದೆಯಾಗಿದ್ದಾರೆ. ನೀವು ಅಪವಿತ್ರರಾಗುವುದರಿಂದ ದುಃಖಿಗಳಾಗಿ
ಬಿಡುತ್ತೀರಿ. ಕಾಮ ಚಿತೆಯ ಮೇಲೆ ಕುಳಿತು ಪತಿತರಾಗಿ ಬಿಡುತ್ತೇವೆ. ಯಾವ ತಂದೆಯಿಂದ ನಾವು ಇದನ್ನು
ಪಡೆದುಕೊಂಡಿದ್ದೆವು, ಆ ತಂದೆಯನ್ನೇ ಮರೆತು ಬಿಡುತ್ತೇವೆ. ನೀವೇ ತಾಯಿ-ತಂದೆ, ನಿಮ್ಮಿಂದ ಅಪಾರವಾದ
ಸುಖ ಪ್ರಾಪ್ತಿಯಾಗುತ್ತದೆ ಎಂದು ಹಾಡನ್ನು ಹಾಡುತ್ತಾರೆ. ಅದನ್ನೇ ಈಗ ನೀವು
ಪಡೆದುಕೊಳ್ಳುತ್ತಿದ್ದೀರಿ ಏಕೆಂದರೆ ಈಗ ಅಪಾರ ದುಃಖವಿದೆ. ಇದು ತಮೋಪ್ರಧಾನ ಪ್ರಪಂಚವಾಗಿದೆ, ವಿಷಯ
ಸಾಗರದಲ್ಲಿ ಮುಳುಗುತ್ತಿರುತ್ತಾರೆ ಏನನ್ನೂ ತಿಳಿದುಕೊಂಡಿಲ್ಲ. ಈಗ ನಿಮಗೆ ತಿಳುವಳಿಕೆ ಬಂದಿದೆ,
ಇದು ರೌರವ ನರಕವಾಗಿದೆ.
ತಂದೆಯು ಮಕ್ಕಳನ್ನು ಕೇಳುತ್ತಾರೆ- ಈಗ ನೀವು ನರಕವಾಸಿಗಳೋ ಅಥವಾ ಸ್ವರ್ಗವಾಸಿಗಳೋ? ಯಾರಾದರೂ ದೇಹ
ಬಿಟ್ಟರೆ ತಕ್ಷಣ ಸ್ವರ್ಗಸ್ಥರಾದರೆಂದು ಹೇಳಿ ಬಿಡುತ್ತಾರೆ ಅರ್ಥಾತ್ ಎಲ್ಲಾ ದುಃಖಗಳಿಂದ ದೂರವಾದರೆ
ನಂತರ ಅವರಿಗೆ ನರಕದ ವಸ್ತುವನ್ನು ಏಕೆ ತಿನ್ನಿಸುತ್ತೀರಿ? ಇದನ್ನು ತಿಳಿದುಕೊಂಡಿಲ್ಲ. ತಂದೆಯು
ಬಂದು ಸ್ವರ್ಗವನ್ನು ಸ್ಥಾಪನೆ ಮಾಡುತ್ತಾರೆ, ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಾರೆ.
ತಂದೆಯು ತಿಳಿಸುತ್ತಾರೆ- ಮಧುರ ಮಕ್ಕಳೇ, ನಾನು ನಿಮಗೆ ಈ ಜ್ಞಾನವನ್ನು ಹೇಳುತ್ತೇನೆ ನನ್ನಲ್ಲಿಯೇ
ಈ ಜ್ಞಾನವಿದೆ, ನಾನು ಜ್ಞಾನಸಾಗರನಾಗಿದ್ದೇನೆ. ಶಾಸ್ತ್ರಗಳ ಅಥಾರಿಟಿಯಂದು ಹೇಳುತ್ತಾರೆ ಆದರೆ ಆ
ಶಾಸ್ತ್ರಗಳನ್ನು ಬರೆದಿರುವವರೂ ಆತ್ಮಗಳೇ ಆಗಿದ್ದಾರೆಂದು ತಿಳಿದುಕೊಂಡಿಲ್ಲ. ತಂದೆಯನ್ನೇ
ತಿಳಿದುಕೊಂಡಿಲ್ಲ. ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಅವರನ್ನೇ ಕಲ್ಲು-ಮುಳ್ಳು
ಎಲ್ಲದರಲ್ಲಿಯೂ ಇದ್ದಾರೆಂದು ಹೇಳಿ ಬಿಟ್ಟಿದ್ದಾರೆ. ವ್ಯಾಸ ಭಗವಂತನು ಏನೆಲ್ಲಾ ಮಾತುಗಳನ್ನು ಬರೆದು
ಬಿಟ್ಟಿದ್ದಾರೆ. ಮನುಷ್ಯರಿಗಂತೂ ಸ್ವಲ್ಪವೂ ಗೊತ್ತಿಲ್ಲ ಸಂಪೂರ್ಣ ಭಿಕಾರಿಗಳಾಗಿ ಪರಸ್ಪರ ಜಗಳ
ಮಾಡುತ್ತಿರುತ್ತಾರೆ. ತಂದೆ ರಚಯಿತ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯವನ್ನೂ ಯಾರೂ ತಿಳಿದುಕೊಂಡಿಲ್ಲ.
ತಂದೆ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿಸುತ್ತಾರೆ, ಬೇರೆ ಯಾರೂ ತಿಳಿಸಲು ಆಗುವುದಿಲ್ಲ.
ನೀವು ಯಾರನ್ನಾದರೂ ಕೇಳಿ- ಯಾರನ್ನು ನೀವು ಈಶ್ವರ, ಭಗವಾನ್, ರಚಯಿತ ಎಂದು ಹೇಳುತ್ತೀರಿ ಅವರನ್ನು
ನೀವು ತಿಳಿದುಕೊಂಡಿದ್ದೀರಾ? ಈಶ್ವರನನ್ನು ಕಲ್ಲಿನಲ್ಲಿ, ಮುಳ್ಳಿನಲ್ಲಿಯೂ ಇದ್ದಾರೆಂದು ಹೇಳುವುದು
ತಿಳಿದುಕೊಳ್ಳುವುದೇನು? ಮೊದಲಿಗೆ ನಿಮ್ಮನ್ನು ನೀವು ತಿಳಿದುಕೊಳ್ಳಿ. ಮನುಷ್ಯರು ತಮೋಪ್ರಧಾನ
ಆಗಿರುವುದರಿಂದ ಪ್ರಾಣಿ ಮೊದಲಾದವುಗಳೆಲ್ಲವೂ ತಮೋಪ್ರಧಾನವಾಗಿದೆ. ಮನುಷ್ಯರು
ಸತೋಪ್ರಧಾನವಾಗಿದ್ದಾಗ ಎಲ್ಲರೂ ಸುಖಿಯಾಗಿದ್ದರು. ಹೇಗೆ ಮನುಷ್ಯರೋ ಅದರಂತೆಯೇ ವಸ್ತುಗಳಿರುತ್ತವೆ.
ಶ್ರೀಮಂತರು ಉಪಯೋಗಿಸುವ ವಸ್ತುಗಳೂ ಸಹ ಬಹಳ ಚೆನ್ನಾಗಿರುತ್ತವೆ. ಆಹಾ! ನೀವಂತೂ ಸಂಪೂರ್ಣ ಸುಖಿ
ಮತ್ತು ವಿಶ್ವದ ಮಾಲೀಕರಾಗುತ್ತೀರಿ ಆಗ ನಿಮ್ಮ ಬಳಿಯಿರುವ ಪ್ರತಿಯೊಂದು ವಸ್ತುವು
ಸುಖದಾಯಿಯಾಗಿರುತ್ತದೆ, ಅಲ್ಲಿ ದುಃಖದಾಯಿ ವಸ್ತುಗಳು ಯಾವುದೂ ಇಲ್ಲ. ಈ ನರಕವು ಕೊಳಕು
ಪ್ರಪಂಚವಾಗಿದೆ.
ತಂದೆಯು ಬಂದು ತಿಳಿಸುತ್ತಾರೆ- ಭಗವಂತ ಒಬ್ಬರೇ ಆಗಿದ್ದಾರೆ, ಅವರೇ ಪತಿತ-ಪಾವನನೂ ಆಗಿದ್ದಾರೆ.
ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ಸರ್ವಗುಣ ಸಂಪನ್ನ...... ಎಂದು ದೇವತೆಗಳ ಮಹಿಮೆಯನ್ನು
ಹಾಡುತ್ತಾರೆ. ಮಂದಿರಗಳಿಗೆ ಹೋಗಿ ದೇವತೆಗಳೊಂದಿಗೆ ಹೋಲಿಕೆ ಮಾಡುತ್ತಾ ತಮ್ಮನ್ನು ನಿಂದನೆ
ಮಾಡುತ್ತಾರೆ ಏಕೆಂದರೆ ಎಲ್ಲರೂ ಭ್ರಷ್ಟಾಚಾರಿಗಳಾಗಿದ್ದಾರೆ. ಶ್ರೇಷ್ಠಾಚಾರಿ, ಸ್ವರ್ಗವಾಸಿಗಳಂತೂ
ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ ಆದ್ದರಿಂದ ಅವರಿಗೆ ಎಲ್ಲರೂ ಪೂಜೆ ಮಾಡುತ್ತಾರೆ, ಸನ್ಯಾಸಿಗಳೂ ಸಹ
ಮಾಡುತ್ತಾರೆ. ಸತ್ಯಯುಗದಲ್ಲಿ ಈ ರೀತಿಯಾಗುವುದಿಲ್ಲ. ನಿಮ್ಮದು ಬೇಹದ್ದಿನ ಸನ್ಯಾಸವಾಗಿದೆ,
ಬೇಹದ್ದಿನ ತಂದೆಯು ಬಂದು ಬೇಹದ್ದಿನ ಸನ್ಯಾಸವನ್ನು ಮಾಡಿಸುತ್ತಾರೆ. ಅದು ಹಠಯೋಗ, ಹದ್ದಿನ
ಸನ್ಯಾಸವಾಗಿದೆ. ಅದು ಬೇರೆ ಧರ್ಮವಾಗಿದೆ. ತಂದೆಯು ತಿಳಿಸುತ್ತಾರೆ- ನೀವು ನಿಮ್ಮ ಧರ್ಮವನ್ನು
ಮರೆತು ಎಷ್ಟೊಂದು ಧರ್ಮಗಳಲ್ಲಿ ಸೇರಿಕೊಂಡಿದ್ದೀರಿ, ತಮ್ಮ ಭಾರತವನ್ನೇ ಹಿಂದೂ ಸ್ಥಾನವೆಂದು
ಹೆಸರಿಟ್ಟಿದ್ದೀರಿ, ಹಿಂದೂ ಧರ್ಮವೆಂದು ಹೇಳಿ ಬಿಟ್ಟಿದ್ದೀರಿ. ವಾಸ್ತವದಲ್ಲಿ ಹಿಂದೂ ಧರ್ಮವನ್ನು
ಯಾರೂ ಸ್ಥಾಪನೆ ಮಾಡಿಲ್ಲ. ಮುಖ್ಯ ನಾಲ್ಕು ಧರ್ಮಗಳಿವೆ- ದೇವಿ-ದೇವತಾ, ಇಸ್ಲಾಮಿ, ಬೌದ್ಧಿ ಹಾಗೂ
ಕ್ರಿಶ್ಚಿಯನ್. ನಿಮಗೆ ಗೊತ್ತಿದೆ- ಈಗ ಇಡೀ ಪ್ರಪಂಚ ದ್ವೀಪವಾಗಿದೆ, ಇದರಲ್ಲಿ ರಾವಣನ ರಾಜ್ಯವಿದೆ.
ರಾವಣನನ್ನು ನೋಡಿದ್ದೀರಾ? ಆ ರಾವಣನನ್ನು ಪದೇ-ಪದೇ ಸುಡುತ್ತಾರೆ. ಈ ರಾವಣ ಎಲ್ಲರಿಗಿಂತ ಹಳೆಯ
ಶತ್ರುವಾಗಿದ್ದಾನೆ. ನಾವು ರಾವಣನನ್ನು ಏಕೆ ಸುಡುತ್ತೇವೆಂದೂ ಸಹ ತಿಳಿದುಕೊಂಡಿಲ್ಲ. ಇವನು ಯಾರು
ಎಂಬ ತಿಳುವಳಿಕೆ ಬೇಕಲ್ಲವೆ. ಇವನನ್ನು ಎಂದಿನಿಂದ ಸುಡುತ್ತಾ ಬಂದಿದ್ದೇವೆ? ಪರಂಪರೆಯಿಂದ ಎಂದು
ತಿಳಿದುಕೊಂಡಿದ್ದಾರೆ. ಅರೆ! ಆ ಪರಂಪರೆಗೂ ಲೆಕ್ಕಾಚಾರ ಬೇಕಲ್ಲವೆ. ನಿಮ್ಮನ್ನು ಯಾರೂ
ತಿಳಿದುಕೊಂಡಿಲ್ಲ. ನೀವು ಬ್ರಹ್ಮನ ಮಕ್ಕಳಾಗಿದ್ದೀರಿ. ನಿಮನ್ನು ನೀವು ಯಾರ ಮಕ್ಕಳು? ಎಂದು
ಯಾರಾದರೂ ಕೇಳಿದರೆ ಅರೆ! ನಾವು ಬ್ರಹ್ಮಾಕುಮಾರ-ಕುಮಾರಿಯರು, ಬ್ರಹ್ಮನ ಮಕ್ಕಳಾಗಿದ್ದೇವೆ. ಬ್ರಹ್ಮಾ
ಯಾರ ಮಗುವಾಗಿದ್ದಾನೆ? ಶಿವ ತಂದೆಯ ಮಗು. ನಾವು ಅವರ ಮೊಮ್ಮಕ್ಕಳಾಗಿದ್ದೇವೆ. ಎಲ್ಲಾ ಆತ್ಮಗಳು
ಅವರಿಗೆ ಮಕ್ಕಳಾಗಿದ್ದಾರೆ. ಮತ್ತೆ ಶರೀರದಲ್ಲಿ ಮೊದಲು ಬ್ರಾಹ್ಮಣರಾಗುತ್ತೇವೆ, ಪ್ರಜಾಪಿತ
ಇದ್ದಾರಲ್ಲವೆ. ಇಷ್ಟೊಂದು ಪ್ರಜೆಗಳನ್ನು ಹೇಗೆ ರಚಿಸಲಾಯಿತು, ಇದನ್ನು ನೀವು ತಿಳಿದುಕೊಂಡಿದ್ದೀರಿ.
ಇದು ದತ್ತು ತೆಗೆದುಕೊಳ್ಳುವುದಾಗಿದೆ, ಶಿವ ತಂದೆಯು ಬ್ರಹ್ಮನ ಮೂಲಕ ದತ್ತು ತೆಗೆದುಕೊಳ್ಳುತ್ತಾರೆ.
ಮೇಳ ನಡೆಯುತ್ತದೆ, ವಾಸ್ತವದಲ್ಲಿ ಈ ಮೇಳ ಎಲ್ಲಿ ಬ್ರಹ್ಮಾಪುತ್ರ ದೊಡ್ಡ ನದಿಯು ಸಾಗರದಲ್ಲಿ ಹೋಗಿ
ಸೇರುತ್ತದೆಯೋ ಅಲ್ಲಿ ನಡೆಯಬೇಕಾಗಿದೆ. ಆ ಸಂಗಮದಲ್ಲಿ ಮೇಳ ನಡೆಯಬೇಕಾಗಿದೆ. ಈ ಮೇಳವು ಇಲ್ಲಿದೆ,
ಬ್ರಹ್ಮಾರವರೂ ಸಹ ಕುಳಿತಿದ್ದಾರೆ. ಅವರೂ ನಮ್ಮ ತಂದೆಯಾಗಿದ್ದಾರೆ ಹಾಗೂ ಹಿರಿಯ ತಾಯಿ ಇವರೇ (ಬ್ರಹ್ಮಾ)
ಆಗಿದ್ದಾರೆಂದು ನಿಮಗೆ ತಿಳಿದಿದೆ. ಆದರೆ ಪುರುಷನಾಗಿರುವುದರಿಂದ ಮಮ್ಮಾರವರನ್ನು, ಮಾತೆಯರ
ಪಾಲನೆಗಾಗಿ ನಿಮಿತ್ತ ಮಾಡಲಾಯಿತು. ತಂದೆಯು ತಿಳಿಸುತ್ತಾರೆ- ನಾನು ನಿಮಗೆ ಸದ್ಗತಿ ಕೊಡುತ್ತೇನೆ,
ಈ ದೇವತೆಗಳು ಡಬಲ್ ಅಹಿಂಸಕರಾಗಿರುತ್ತಾರೆ. ಏಕೆಂದರೆ ಅಲ್ಲಿ ರಾವಣನಿರುವುದಿಲ್ಲವೆಂದು ನಿಮಗೆ
ತಿಳಿದಿದೆ. ಭಕ್ತಿಯು ರಾತ್ರಿಯಾಗಿದೆ, ಜ್ಞಾನ ಹಗಲಾಗಿದೆ. ಜ್ಞಾನಸಾಗರ ತಂದೆಯು ಒಬ್ಬರೇ ಆಗಿದ್ದಾರೆ.
ಅವರಿಗಾಗಿ ಸರ್ವವ್ಯಾಪಿ ಎಂದು ಹೇಳಿ ಬಿಟ್ಟಿದ್ದಾರೆ. ತಂದೆಯೇ ಬಂದು ಮಕ್ಕಳಿಗೇ ತಿಳಿಸುತ್ತಾರೆ.
ಶಿವ ಭಗವಾನುವಾಚ ಇದೆಯಲ್ಲವೆ. ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಅವಶ್ಯವಾಗಿ ಅವರು ಯಾರಲ್ಲಿಯಾದರೂ
ಬರುತ್ತಾರೆ. ನಾನು ಪ್ರಕೃತಿಯ ಆಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ನಾನು ಯಾವುದೇ
ಚಿಕ್ಕ ಮಗುವಿನ ಆಧಾರವನ್ನು ತೆಗೆದುಕೊಳ್ಳುವುದಿಲ್ಲ. ಕೃಷ್ಣ ಮಗುವಾಗಿದ್ದಾನೆ ಅಲ್ಲವೆ. ನಾನಂತೂ
ಕೃಷ್ಣನ ಅನೇಕ ಜನ್ಮಗಳ ಅಂತ್ಯದಲ್ಲಿ, ಅದರಲ್ಲಿ ಅವರ ವಾನಪ್ರಸ್ಥ ಸ್ಥಿತಿಯಲ್ಲಿ ಪ್ರವೇಶ
ಮಾಡುತ್ತೇನೆ. ವಾನಪ್ರಸ್ಥ ಸ್ಥಿತಿಯ ನಂತರ ಮನುಷ್ಯರು ಭಗವಂತನನ್ನು ಸ್ಮರಿಸುತ್ತಾರೆ ಆದರೆ
ಭಗವಂತನನ್ನೇ ಯಥಾರ್ಥವಾಗಿ ಯಾರೂ ತಿಳಿದುಕೊಂಡಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಯಧಾಯಧಾಹಿ...
ನಾನು ಭಾರತದಲ್ಲಿಯೇ ಬರುತ್ತೇನೆ. ಭಾರತದ ಮಹಿಮೆಯು ಅಪರಮಪಾರವಾಗಿದೆ.
ಮನುಷ್ಯರನ್ನು ನೋಡಿ, ಎಷ್ಟೊಂದು ದೇಹದ ಅಹಂಕಾರವಿದೆ. ನಾನು ಇಂತಹವನಾಗಿದ್ದೇನೆ! ನಾನು
ಇದಾಗಿದ್ದೇನೆ! ತಂದೆಯು ಬಂದು ನಿಮ್ಮನ್ನು ದೇಹೀ-ಅಭಿಮಾನಿಯನ್ನಾಗಿ ಮಾಡುತ್ತಾರೆ. ಮಧುರಾತಿ ಮಧುರ
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ಕುಳಿತು ಎಲ್ಲಾ ರಹಸ್ಯಗಳನ್ನು ತಿಳಿಸುತ್ತಾರೆ. ಇದು ಹಳೆಯ
ಪ್ರಪಂಚವಾಗಿದೆ, ಸತ್ಯಯುಗ ಹೊಸ ಪ್ರಪಂಚವಾಗಿದೆ. ಸತ್ಯಯುಗದಲ್ಲಿ ಆದಿ ಸನಾತನ ದೇವಿ-ದೇವತಾ
ಧರ್ಮವಿತ್ತು, ಇದು 5000 ವರ್ಷಗಳ ಮಾತಾಗಿದೆ ಆದರೆ ಶಾಸ್ತ್ರಗಳಲ್ಲಿ ವ್ಯಾಸನ ಹೆಸರನ್ನು ಬರೆದು
ಕಲ್ಪದ ಆಯಸ್ಸನ್ನು ಲಕ್ಷಾಂತರ ಸಾವಿರಾರು ವರ್ಷಗಳೆಂದು ಹೇಳಿ ಬಿಟ್ಟಿದ್ದಾರೆ. ವಾಸ್ತವದಲ್ಲಿ
ಕಲ್ಪದ ಆಯಸ್ಸು 5000 ವರ್ಷಗಳಾಗಿವೆ. ಮನುಷ್ಯರು ಸಂಪೂರ್ಣ ಅಜ್ಞಾನದ ಕುಂಭಕರ್ಣನ ನಿದ್ರೆಯಲ್ಲಿ
ಮಲಗಿದ್ದಾರೆ. ಈಗ ಈ ನಿಮ್ಮ ಮಾತುಗಳನ್ನು ಯಾರಾದರೂ ಕೇಳಿದರೆ ತಿಳಿದುಕೊಳ್ಳಲು ಆಗುವುದಿಲ್ಲ.
ಆದುದರಿಂದ ತಂದೆಯು ತಿಳಿಸುತ್ತಾರೆ- ನಾನು ನನ್ನ ಮಕ್ಕಳೊಂದಿಗೇ ಮಾತನಾಡುತ್ತೇನೆ. ಭಕ್ತಿಯನ್ನೂ ಸಹ
ನೀವೇ ಆರಂಭಿಸುತ್ತೀರಿ. ತಮಗೆ ತಾವೇ ನಷ್ಟ ಮಾಡಿಕೊಂಡಿದ್ದೀರಿ. ತಂದೆಯು ನಿಮ್ಮನ್ನು ಪೂಜ್ಯರನ್ನಾಗಿ
ಮಾಡಿದ್ದರು ನಂತರ ನೀವು ಪೂಜಾರಿಯಾಗಿ ಬಿಡುತ್ತೀರಿ. ಇದೂ ಸಹ ಆಟವಾಗಿದೆ. ಕೆಲವು ಮನುಷ್ಯರ ಮನಸ್ಸು
ಮೃದುವಾಗಿರುವುದರಿಂದ ಆಟವನ್ನು ನೋಡುತ್ತಾ ಅಳುವುದಕ್ಕೆ ಪ್ರಾರಂಭಿಸುತ್ತಾರೆ. ತಂದೆಯು
ತಿಳಿಸುತ್ತಾರೆ - ಯಾರು ಅಳುತ್ತಾರೆಯೋ ಅವರು ಕಳೆದುಕೊಳ್ಳುತ್ತಾರೆ. ಸತ್ಯಯುಗದಲ್ಲಿ ಅಳುವ ಮಾತು
ಇರುವುದಿಲ್ಲ. ಅಳಬಾರದೆಂದು ತಂದೆಯು ಇಲ್ಲಿ ತಿಳಿಸುತ್ತಾರೆ. ದ್ವಾಪರ ಕಲಿಯುಗದಲ್ಲಿ ಅಳುತ್ತಾರೆ
ಸತ್ಯಯುಗದಲ್ಲಿ ಎಂದಿಗೂ ಅಳುವುದಿಲ್ಲ, ಅಂತ್ಯದಲ್ಲಿ ಯಾರಿಗೂ ಅಳಲು ಸಮಯಾವಕಾಶ ಇರುವುದಿಲ್ಲ.
ಆಕಸ್ಮಿಕವಾಗಿ ಸಾಯುತ್ತಿರುತ್ತಾರೆ. ಅಯ್ಯೊ ರಾಮ ಎಂದೂ ಸಹ ಹೇಳಲು ಆಗುವುದಿಲ್ಲ. ವಿನಾಶ ಈ
ರೀತಿಯಾಗುತ್ತದೆ- ಸ್ವಲ್ಪವೂ ದುಃಖವಾಗುವುದಿಲ್ಲ. ಏಕೆಂದರೆ ಆಸ್ಪತ್ರೆ ಮೊದಲಾದವುಗಳಿರುವುದಿಲ್ಲ.
ಆದುದರಿಂದ ಅಂತಹ ವಸ್ತುಗಳನ್ನೇ ಮಾಡುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ- ರಾವಣನ ಮೇಲೆ ಜಯ
ಗಳಿಸಲು ನಿಮ್ಮ ಮಂಗಗಳ ಸೈನ್ಯವನ್ನು ನಾನು ತೆಗೆದುಕೊಳ್ಳುತ್ತೇನೆ. ಈಗ ನಿಮಗೆ ತಂದೆಯು ರಾವಣನ ಮೇಲೆ
ಹೇಗೆ ವಿಜಯಿಗಳಾಗಬೇಕೆಂದು ಉಪಾಯ ತಿಳಿಸುತ್ತಾರೆ. ಎಲ್ಲಾ ಸೀತೆಯರನ್ನು ರಾವಣನ ಬಂಧನದಿಂದ
ಬಿಡಿಸಬೇಕು. ಇದೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಭಗವಾನುವಾಚ- ತಂದೆಯು ಮಕ್ಕಳಿಗೇ
ಹೇಳುತ್ತಾರೆ- ಹಿಯರ್ ನೋ ಈವಿಲ್...... ಯಾವ ಮಾತುಗಳಿಂದ ನಿಮಗೆ ಲಾಭವಿಲ್ಲವೋ ಅಂತಹ ಮಾತುಗಳಿಂದ
ನಿಮ್ಮ ಕಿವಿಗಳನ್ನು ಮುಚ್ಚಿಕೊಳ್ಳಿ. ಈಗ ನಿಮಗೆ ಶ್ರೀಮತ ಸಿಗುತ್ತದೆ, ನೀವೇ ಶ್ರೇಷ್ಠರಾಗುತ್ತೀರಿ.
ಇಲ್ಲಂತೂ ಶ್ರೀ ಶ್ರೀ ಎಂಬ ಬಿರುದನ್ನು ಎಲ್ಲರಿಗೂ ನೀಡಿದ್ದಾರೆ. ಒಳ್ಳೆಯದು. ಮತ್ತೆ ತಂದೆಯು
ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದು ಎಷ್ಟೊಂದು
ಅದ್ಭುತವಾದ ಸೋಲು-ಗೆಲುವಿನ ಬೇಹದ್ದಿನ ನಾಟಕವಾಗಿದೆ, ಅದನ್ನು ತಂದೆಯೇ ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ತಂದೆಯ ಸಮಾನ
ದಯಾಹೃದಯಿ ಆಗಬೇಕು. ಎಲ್ಲರನ್ನೂ ದುಃಖದಿಂದ ಬಿಡಿಸಿ ಪಾವನ ಮಾಡುವ ಸೇವೆ ಮಾಡಬೇಕು. ಪಾವನರಾಗಲು
ಒಬ್ಬ ತಂದೆಯೊಂದಿಗೆ ಬಹಳ-ಬಹಳ ಪ್ರೀತಿಯನ್ನಿಡಬೇಕು.
2. ತಂದೆಯು ತಿಳಿಸುತ್ತಾರೆ- ಯಾರು ಅಳುತ್ತಾರೆ ಅವರು ಕಳೆದುಕೊಳ್ಳುತ್ತಾರೆ ಆದ್ದರಿಂದ ಎಂಥಹ
ಪರಿಸ್ಥಿತಿಯಲ್ಲಿಯೂ ಅಳಬಾರದು.
ವರದಾನ:
ಪರಮ ಪೂಜ್ಯರಾಗಿ
ಪರಮಾತ್ಮನ ಪ್ರೀತಿಯ ಅಧಿಕಾರವನ್ನು ಪ್ರಾಪ್ತಿ ಮಾಡುವಂತಹ ಸಂಪೂರ್ಣ ಸ್ವಚ್ಛ ಆತ್ಮ ಭವ.
ನಾನು ಪೂಜ್ಯ
ಆತ್ಮನಾಗಿದ್ದೇನೆ, ಈ ಶರೀರರೂಪಿ ಮಂದಿರದಲ್ಲಿ ವಿರಾಜಮಾನವಾಗಿದ್ದೇನೆ - ಸದಾ ಈ ಸ್ಮೃತಿ ಜೀವನದಲ್ಲಿ
ತೆಗೆದುಕೊಂಡು ಬರಬೇಕು. ಇಂತಹ ಪೂಜ್ಯ ಆತ್ಮರೇ ಸರ್ವರಿಗೆ ಪ್ರಿಯರಾಗಿದ್ದಾರೆ. ಅವರ ಜಡ ಮೂರ್ತಿಯೂ
ಸಹ ಎಲ್ಲರಿಗೆ ಪ್ರಿಯವಾಗುತ್ತದೆ. ಕೆಲವರು ಪರಸ್ಪರ ಜಗಳ ಮಾಡುತ್ತಾರೆ. ಆದರೆ ಮೂರ್ತಿಯನ್ನು ಪ್ರೀತಿ
ಮಾಡುತ್ತಾರೆ ಏಕೆಂದರೆ ಅದರಲ್ಲಿ ಪವಿತ್ರತೆ ಇದೆ. ಅಂದಾಗ ತಮ್ಮೊಂದಿಗೆ ತಾವೇ ಕೇಳಿಕೊಳ್ಳಿ –
ಮನಸ್ಸು-ಬುದ್ಧಿ ಸಂಪೂರ್ಣ ಸ್ವಚ್ಛವಾಗಿದೆಯೇ, ಸ್ವಲ್ಪನಾದರೂ ಅಸ್ವಚ್ಛತೆ ಮಿಕ್ಸ್ ಆಗಿಲ್ಲ ತಾನೇ?
ಯಾರು ಹಾಗೆ ಸಂಪೂರ್ಣ ಸ್ವಚ್ಛವಾಗಿರುತ್ತಾರೆ ಅವರೇ ಪರಮಾತ್ಮನ ಪ್ರೀತಿಗೆ ಅಧಿಕಾರಿ ಆಗಿದ್ದಾರೆ.
ಸ್ಲೋಗನ್:
ಜ್ಞಾನದ
ಖಜಾನೆಯನ್ನು ಸ್ವಯಂನಲ್ಲಿ ಧಾರಣೆ ಮಾಡಿ ಸದಾ ಪ್ರತಿಯೊಂದು ಕರ್ಮ ತಿಳುವಳಿಕೆಯಿಂದ ಮಾಡುವವರೇ
ಜ್ಞಾನಿ ಆತ್ಮರಾಗಿದ್ದಾರೆ.