08.06.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೆನಪು
ಮತ್ತು ವಿದ್ಯೆಯಿಂದಲೇ ಡಬಲ್ ಕಿರೀಟವು ಸಿಗುತ್ತದೆ ಆದ್ದರಿಂದ ಗುರಿ-ಉದ್ದೇಶವನ್ನು (ಲಕ್ಷ್ಯ)
ಸಮ್ಮುಖದಲ್ಲಿ ಇಟ್ಟುಕೊಂಡು ದೈವೀ ಗುಣಗಳನ್ನು ಧಾರಣೆ ಮಾಡಿ.”
ಪ್ರಶ್ನೆ:
ವಿಶ್ವ ರಚಯಿತ
ತಂದೆಯು ನೀವು ಮಕ್ಕಳಿಗೆ ಯಾವ ಸೇವೆ ಮಾಡುತ್ತಾರೆ?
ಉತ್ತರ:
1. ಮಕ್ಕಳಿಗೆ
ಬೇಹದ್ದಿನ ಆಸ್ತಿಯನ್ನು ಕೊಟ್ಟು ಸುಖಿಗಳನ್ನಾಗಿ ಮಾಡುವುದು, ಇದು ಸೇವೆಯಾಗಿದೆ. ತಂದೆಯ ಹಾಗೆ
ನಿಷ್ಕಾಮ ಸೇವೆಯನ್ನು ಯಾರೂ ಮಾಡಲು ಸಾಧ್ಯವಿಲ್ಲ. 2. ಬೇಹದ್ದಿನ ತಂದೆಯು ಬಾಡಿಗೆಯ ಸಿಂಹಾಸನವನ್ನು
ತೆಗೆದುಕೊಂಡು ನಿಮ್ಮನ್ನು ವಿಶ್ವದ ಸಿಂಹಾಸನಾಧೀಶರನ್ನಾಗಿ ಮಾಡಿ ಬಿಡುತ್ತಾರೆ. ಸ್ವಯಂ ಮಯೂರ
ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಿಲ್ಲ. ಆದರೆ ಮಕ್ಕಳನ್ನು ಮಯೂರ ಸಿಂಹಾಸನದ ಮೇಲೆ ಕೂರಿಸುತ್ತಾರೆ.
ತಂದೆಯ ಜಡ ಮಂದಿರಗಳನ್ನು ಕಟ್ಟುತ್ತಾರೆ ಆದರೆ ಅದರಲ್ಲಿ ಅವರಿಗೆ ರುಚಿಯೇನು ಬರುತ್ತದೆ! ಸ್ವರ್ಗದ
ರಾಜ್ಯಭಾಗ್ಯವನ್ನು ಪಡೆಯುವ ಮಕ್ಕಳಿಗೇ ಮಜಾ ಬರುತ್ತದೆ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿದು
ತಂದೆಯನ್ನು ನೆನಪು ಮಾಡಿ. ಓಂ ಶಾಂತಿಯ ಅರ್ಥವನ್ನಂತೂ ತಂದೆಯು ತಿಳಿಸಿದ್ದಾರೆ. ಓಂ ಶಾಂತಿಯನ್ನು
ತಂದೆಯೂ ಹೇಳುತ್ತಾರೆ ಮತ್ತು ಮಕ್ಕಳೂ ಹೇಳುತ್ತೀರಿ ಏಕೆಂದರೆ ಆತ್ಮದ ಸ್ವಧರ್ಮವು ಶಾಂತಿಯಾಗಿದೆ.
ನೀವೀಗ ಅರಿತುಕೊಂಡಿದ್ದೀರಿ - ನಾವು ಶಾಂತಿಧಾಮದಿಂದ ಬರುತ್ತೇವೆ. ಮೊಟ್ಟ ಮೊದಲು ಸುಖಧಾಮದಲ್ಲಿ
ನಂತರ 84 ಪುನರ್ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ದುಃಖಧಾಮದಲ್ಲಿ ಬರುತ್ತೇವೆ.
ಇದಂತೂ ನೆನಪಿದೆಯಲ್ಲವೆ. ಮಕ್ಕಳು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಜೀವಾತ್ಮರಾಗುತ್ತೀರಿ.
ತಂದೆಯು ಜೀವಾತ್ಮನಾಗುವುದಿಲ್ಲ. ತಿಳಿಸುತ್ತಾರೆ - ನಾನು ತತ್ಕಾಲಕ್ಕಾಗಿ ಇವರ (ಬ್ರಹ್ಮಾ)
ಶರೀರವನ್ನು ಆಧಾರವಾಗಿ ತೆಗೆದುಕೊಳ್ಳುತ್ತೇನೆ, ಇಲ್ಲವೆಂದರೆ ಹೇಗೆ ಓದಿಸುವುದು! ಮಕ್ಕಳಿಗೆ
ಪದೇ-ಪದೇ ಹೇಗೆ ತಿಳಿಸುತ್ತಾರೆ - ಮನ್ಮನಾಭವ. ತಮ್ಮ ರಾಜಧಾನಿಯನ್ನು ನೆನಪು ಮಾಡಿ. ಇದಕ್ಕೆ
ಸೆಕೆಂಡಿನಲ್ಲಿ ವಿಶ್ವದ ರಾಜ್ಯಭಾಗ್ಯವೆಂದು ಹೇಳಲಾಗುತ್ತದೆ. ಬೇಹದ್ದಿನ ತಂದೆಯಾಗಿದ್ದಾರಲ್ಲವೆ
ಆದ್ದರಿಂದ ಅವಶ್ಯವಾಗಿ ಬೇಹದ್ದಿನ ಆಸ್ತಿ ಮತ್ತು ಬೇಹದ್ದಿನ ಖುಷಿಯನ್ನೇ ಕೊಡುತ್ತಾರೆ. ತಂದೆಯು
ಬಹಳ ಸಹಜವಾದ ಮಾರ್ಗವನ್ನು ತಿಳಿಸುತ್ತಾರೆ- ಮಕ್ಕಳೇ, ಈಗ ಈ ದುಃಖಧಾಮವನ್ನು ಬುದ್ಧಿಯಿಂದ ತೆಗೆದು
ಹಾಕಿ, ಯಾವ ಹೊಸ ಪ್ರಪಂಚ ಸ್ವರ್ಗವನ್ನು ಸ್ಥಾಪನೆ ಮಾಡುತ್ತಿದ್ದೇನೆಯೋ ಅದರ ಮಾಲೀಕರಾಗಲು ನನ್ನನ್ನು
ನೆನಪು ಮಾಡಿ ಅದರಿಂದ ನಿಮ್ಮ ಪಾಪಗಳು ತುಂಡಾಗುವವು. ನೀವು ಮತ್ತೆ ಸತೋಪ್ರಧಾನರಾಗಿ ಬಿಡುತ್ತೀರಿ.
ಇದಕ್ಕೇ ಸಹಜ ನೆನಪು ಎಂದು ಹೇಳಲಾಗುವುದು. ಹೇಗೆ ಮಕ್ಕಳು ಲೌಕಿಕ ತಂದೆಯನ್ನು ಎಷ್ಟೊಂದು ಸಹಜವಾಗಿ
ನೆನಪು ಮಾಡುತ್ತಾರೆ ಹಾಗೆಯೇ ನೀವು ಮಕ್ಕಳು ಬೇಹದ್ದಿನ ತಂದೆಯನ್ನು ನೆನಪು ಮಾಡಬೇಕು ಏಕೆಂದರೆ
ತಂದೆಯೇ ದುಃಖದಿಂದ ಬಿಡಿಸಿ ಸುಖಧಾಮದಲ್ಲಿ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ದುಃಖದ ಹೆಸರು,
ಗುರುತೂ ಇರುವುದಿಲ್ಲ. ಬಹಳ ಸಹಜ ಮಾತನ್ನು ತಿಳಿಸುತ್ತಾರೆ - ತಮ್ಮ ಶಾಂತಿಧಾಮವನ್ನು ನೆನಪು ಮಾಡಿ
ಯಾವುದು ತಂದೆಯ ಮನೆಯೋ ಅದು ನಿಮ್ಮ ಮನೆಯಾಗಿದೆ, ಮತ್ತು ಹೊಸ ಪ್ರಪಂಚವನ್ನು ನೆನಪು ಮಾಡಿ ಅದು
ನಿಮ್ಮ ರಾಜಧಾನಿಯಾಗಿದೆ. ತಂದೆಯು ನೀವು ಮಕ್ಕಳ ಎಷ್ಟೊಂದು ನಿಷ್ಕಾಮ ಸೇವೆಯನ್ನು ಮಾಡುತ್ತಾರೆ.
ನೀವು ಮಕ್ಕಳನ್ನು ಸುಖಿಯನ್ನಾಗಿ ಮಾಡಿ ಮತ್ತೆ ವಾನಪ್ರಸ್ಥ ಪರಮಧಾಮದಲ್ಲಿ ಹೋಗಿ
ಕುಳಿತುಕೊಳ್ಳುತ್ತಾರೆ. ನೀವೂ ಸಹ ಪರಮಧಾಮದ ನಿವಾಸಿಗಳಾಗಿದ್ದಿರಿ ಅದಕ್ಕೆ ನಿರ್ವಾಣಧಾಮ,
ವಾನಪ್ರಸ್ಥವೆಂದೂ ಹೇಳಲಾಗುತ್ತದೆ. ತಂದೆಯು ಮಕ್ಕಳ ಸೇವೆ ಮಾಡಲು ಅರ್ಥಾತ್ ಆಸ್ತಿಯನ್ನು ಕೊಡಲು
ಬರುತ್ತಾರೆ. ಈ ಬ್ರಹ್ಮಾರವರೂ ಸಹ ತಂದೆಯಿಂದ ಆಸ್ತಿಯನ್ನು ಪಡೆಯುತ್ತಾರೆ. ಶಿವ ತಂದೆಯಂತೂ ಸರ್ವ
ಶ್ರೇಷ್ಠ ಭಗವಂತನಾಗಿದ್ದಾರೆ, ಶಿವನ ಮಂದಿರವೂ ಇದೆ. ಅವರಿಗೆ ಯಾರೂ ತಂದೆ ಅಥವಾ ಶಿಕ್ಷಕರಿಲ್ಲ.
ಅವರ ಬಳಿ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ ಅಂದಾಗ ಅದು ಎಲ್ಲಿಂದ ಬಂದಿತು? ಯಾವುದೇ
ವೇದಶಾಸ್ತ್ರಗಳನ್ನು ಓದಿದರೆ? ಇಲ್ಲ. ತಂದೆಯಂತೂ ಜ್ಞಾನ ಸಾಗರ, ಸುಖ-ಶಾಂತಿಯ ಸಾಗರನಾಗಿದ್ದಾರೆ.
ತಂದೆಯ ಮಹಿಮೆ ಹಾಗೂ ದೈವೀಗುಣವುಳ್ಳ ಮನುಷ್ಯರ ಮಹಿಮೆಯಲ್ಲಿ ವ್ಯತ್ಯಾಸವಿದೆ. ನೀವು ದೈವೀ
ಗುಣಗಳನ್ನು ಧಾರಣೆ ಮಾಡಿ ಈ ದೇವತೆಗಳಾಗುತ್ತೀರಿ. ಮೊದಲು ಅಸುರೀ ಗುಣಗಳಿತ್ತು, ಅಸುರರಿಂದ
ದೇವತೆಗಳನ್ನಾಗಿ ಮಾಡುವುದು ತಂದೆಯ ಕರ್ತವ್ಯವೇ ಆಗಿದೆ, ಗುರಿ-ಉದ್ದೇಶವು ನಿಮ್ಮ ಸನ್ಮುಖದಲ್ಲಿದೆ
ಅಂದಾಗ ಅವಶ್ಯವಾಗಿ ಇಂತಹ ಶ್ರೇಷ್ಠ ಕರ್ಮವನ್ನು ಮಾಡಿರುತ್ತಾರೆ. ಕರ್ಮ-ಅಕರ್ಮ-ವಿಕರ್ಮದ ಗತಿ ಅಥವಾ
ಪ್ರತಿಯೊಂದು ಮಾತನ್ನು ತಿಳಿಸುವುದರಲ್ಲಿ ಒಂದು ಸೆಕೆಂಡ್ ಹಿಡಿಸುತ್ತದೆ.
ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳಿಗೆ, ಪಾತ್ರವನ್ನಭಿನಯಿಸಲೇಬೇಕಾಗಿದೆ. ಇದು ನಿಮಗೆ
ಅನಾದಿ-ಅವಿನಾಶಿ ಪಾತ್ರವು ಸಿಕ್ಕಿದೆ. ನೀವು ಎಷ್ಟು ಬಾರಿ ಸುಖ-ದುಃಖದ ಆಟದಲ್ಲಿ ಬಂದಿರಿ.
ಎಷ್ಟೊಂದು ಬಾರಿ ನೀವು ವಿಶ್ವದ ಮಾಲೀಕರಾಗಿದ್ದಿರಿ. ತಂದೆಯು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ!
ಸುಪ್ರಿಂ ಸೋಲ್ ಅಂದರೆ ಪರಮಾತ್ಮನೂ ಸಹ ಇಷ್ಟು ಸೂಕ್ಷ್ಮವಾಗಿದ್ದಾರೆ, ಆ ತಂದೆಯು ಜ್ಞಾನದ
ಸಾಗರನಾಗಿದ್ದಾರೆ. ಆದ್ದರಿಂದ ಆತ್ಮಗಳನ್ನು ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ನೀವು ಪ್ರೇಮದ
ಸಾಗರ, ಸುಖದ ಸಾಗರರಾಗಿದ್ದೀರಿ. ದೇವತೆಗಳಲ್ಲಿ ಪರಸ್ಪರ ಎಷ್ಟೊಂದು ಪ್ರೀತಿಯಿರುತ್ತದೆ, ಎಂದೂ
ಜಗಳವಾಡುವುದಿಲ್ಲ. ಅಂದಾಗ ತಂದೆಯು ಬಂದು ನಿಮ್ಮನ್ನು ತನ್ನ ಸಮಾನರನ್ನಾಗಿ ಮಾಡುತ್ತಾರೆ ಮತ್ತ್ಯಾರೂ
ಹೀಗೆ ಮಾಡಲು ಸಾಧ್ಯವಿಲ್ಲ. ನಾಟಕವು ಸ್ಥೂಲವತನದಲ್ಲಿ ನಡೆಯುತ್ತದೆ, ಆದಿ ಸನಾತನ ದೇವಿ-ದೇವತಾ
ಧರ್ಮ ನಂತರ ಇಸ್ಲಾಮಿ, ಬೌದ್ಧಿ ಮುಂತಾದವರು ನಂಬರ್ವಾರ್ ಆಗಿ ಈ ನಾಟಕ ಮಂಟಪದಲ್ಲಿ ಬರತೊಡಗುತ್ತಾರೆ.
84 ಜನ್ಮಗಳನ್ನು ನೀವು ತೆಗೆದುಕೊಳ್ಳುತ್ತೀರಿ, ಆತ್ಮರು ಮತ್ತು ಪರಮಾತ್ಮ ಬಹಳ ಕಾಲ ಅಗಲಿ
ಹೋಗಿದ್ದರು..... ಎಂಬ ಗಾಯನವೂ ಸಹ ಇದೆ. ಮಧುರಾತಿ ಮಧುರ ಮಕ್ಕಳೇ, ಮೊಟ್ಟ ಮೊದಲು ವಿಶ್ವದಲ್ಲಿ
ಪಾತ್ರವನ್ನಭಿನಯಿಸಲು ನೀವು ಬಂದಿರಿ ಎಂದು ತಂದೆಯು ತಿಳಿಸುತ್ತಾರೆ. ನಾನು ಸ್ವಲ್ಪ ಸಮಯಕ್ಕಾಗಿ
ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡುತ್ತೇನೆ. ಇದು ಹಳೆಯ ಚಪ್ಪಲಿಯಾಗಿದೆ, ಪುರುಷನಿಗೆ ಒಬ್ಬ ಸ್ತ್ರೀ
ಸತ್ತು ಹೋಗುತ್ತಾಳೆಂದರೆ ಹಳೆಯ ಚಪ್ಪಲಿ ಹೋಯಿತೆಂದು ಮತ್ತೊಬ್ಬರನ್ನು ವಿವಾಹ ಮಾಡಿಕೊಳ್ಳುತ್ತಾರೆ.
ಇವರದೂ ಸಹ ಹಳೆಯ ತನುವಾಗಿದೆ. 84 ಜನ್ಮಗಳ ಚಕ್ರವನ್ನು ಸುತ್ತಿ ಬಂದಿದ್ದಾರೆ. ತತ್ತ್ವಂ ನಾನು ಬಂದು
ಈ ರಥದ ಆಧಾರವನ್ನು ತೆಗೆದುಕೊಳ್ಳುತ್ತೇನೆ. ಪಾವನ ಪ್ರಪಂಚದಲ್ಲಿ ಎಂದೂ ನಾನು ಬರುವುದಿಲ್ಲ. ನೀವು
ಪತಿತರಾಗಿದ್ದೀರಿ, ಆದ್ದರಿಂದ ನನ್ನನ್ನು ಬಂದು ಪಾವನ ಮಾಡಿ ಎಂದು ಕರೆಯುತ್ತೀರಿ. ಕೊನೆಗೂ ನಿಮ್ಮ
ನೆನಪು ಫಲದಾಯಕವಾಗಿದೆಯಲ್ಲವೆ! ಯಾವಾಗ ಹಳೆಯ ಪ್ರಪಂಚ ಸಮಾಪ್ತಿಯಾಗುವ ಸಮಯ ಬರುತ್ತದೆಯೋ ಆಗ ನಾನು
ಬರುತ್ತೇನೆ. ಬ್ರಹ್ಮಾರವರ ಮೂಲಕ ಸ್ಥಾಪನೆ, ಬ್ರಹ್ಮಾ ಮೂಲಕ ಅರ್ಥಾತ್ ಬ್ರಾಹ್ಮಣರ ಮೂಲಕ. ಮೊದಲು
ಶಿಖೆಗೆ ಸಮಾನ ಬ್ರಾಹ್ಮಣರು, ದೇವತಾ, ಕ್ಷತ್ರಿಯ..... ಇದು ಬಾಜೋಲಿ(ಚಕ್ರದ ಆಟ) ಆಟವಾಗಿದೆ. ಈಗ
ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಗಳಾಗಬೇಕಾಗಿದೆ. ನೀವು 84 ಜನ್ಮಗಳನ್ನು ಪಡೆಯುತ್ತೀರಿ.
ನಾನು ಒಂದೇ ಬಾರಿ ಕೇವಲ ಇವರ ಶರೀರವನ್ನು ಬಾಡಿಗೆಯಾಗಿ ತೆಗೆದುಕೊಳ್ಳುತ್ತೇನೆ. ನಾನು ಈ ಮನೆಯ (ಬ್ರಹ್ಮಾ)
ಮಾಲಿಕನಲ್ಲ. ಇದನ್ನಂತೂ ನಾನು ಬಿಡಬೇಕಾಗುತ್ತದೆ. ಇದಕ್ಕೆ ನಾನು ಬಾಡಿಗೆ ಕೊಡಬೇಕಾಗುತ್ತದೆ.
ತಂದೆಯು ಸಹ ಹೇಳುತ್ತಾರೆ ನಾನು ಬಾಡಿಗೆಯನ್ನು ಕೊಡುತ್ತೇನೆ ಬೇಹದ್ದಿನ ತಂದೆಯಲ್ಲವೇ, ಏನಾದರೂ
ಬಾಡಿಗೆ ಕೊಡುತ್ತಾರಲ್ಲವೇ. ಈ ಸಿಂಹಾಸನವನ್ನು ನಿಮಗೆ ತಿಳುವಳಿಕೆ ನೀಡಲು ತೆಗೆದುಕೊಳ್ಳುತ್ತೇನೆ.
ಈ ರೀತಿ ತಿಳುವಳಿಕೆ ಕೊಡುತ್ತೇನೆ ಅದರಿಂದ ನೀವು ಸಿಂಹಾಸನಾಧೀಶರಾಗಿ ಬಿಡುತ್ತೀರಿ. ನಾನು
ಸಿಂಹಾಸನಾಧಿಕಾರಿ ಆಗುವುದಿಲ್ಲ ಎಂದು ಸ್ವಯಂ ತಂದೆಯೇ ಹೇಳುತ್ತಾರೆ. ಸಿಂಹಾಸನಾಧಿಕಾರಿಗಳೆಂದರೆ
ಮಯೂರ ಸಿಂಹಾಸನದ ಮೇಲೆ ಕೂರಿಸುತ್ತಾರೆ. ಶಿವ ತಂದೆಯ ನೆನಪಿನಲ್ಲಿಯೇ ಸೋಮನಾಥ ಮಂದಿರವನ್ನು
ಮಾಡುತ್ತಾರೆ. ಇದರಿಂದ ನನಗೇನು ರುಚಿ ಬರುತ್ತದೆ! ಜಡ ಪ್ರತಿಮೆಯನ್ನು ಮಾಡಿಡುತ್ತಾರೆ. ಖುಷಿಯಂತೂ
ನೀವು ಮಕ್ಕಳಿಗೆ ಸ್ವರ್ಗದಲ್ಲಿರುತ್ತದೆ, ನಾನು ಸ್ವರ್ಗದಲ್ಲಿ ಬರುವುದೇ ಇಲ್ಲ ಎಂದು ತಂದೆಯು
ಹೇಳುತ್ತಾರೆ. ಭಕ್ತಿಮಾರ್ಗವು ಯಾವಾಗ ಪ್ರಾರಂಭವಾಗುವುದೋ ಆಗ ಈ ಮಂದಿರ ಮೊದಲಾದವುಗಳನ್ನು
ಕಟ್ಟಿಸುತ್ತೀರಿ, ಎಷ್ಟೊಂದು ಖರ್ಚು ಮಾಡುತ್ತೀರಿ ಆದರೂ ಸಹ ಅದನ್ನು ಕಳ್ಳರು ಲೂಟಿ ಮಾಡಿ
ತೆಗೆದುಕೊಂಡು ಹೋದರು. ರಾವಣ ರಾಜ್ಯದಲ್ಲಿ ನಿಮ್ಮ ಹಣ-ಅಧಿಕಾರ ಎಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ.
ಈಗ ಆ ಮಯೂರ ಸಿಂಹಾಸನವಿದೆಯೇ? ತಂದೆಯು ತಿಳಿಸುತ್ತಾರೆ - ಯಾವ ನನ್ನ ಮಂದಿರವನ್ನು ಕಟ್ಟಿಸಿದ್ದಿರೋ
ಅದನ್ನು ಘಜನಿ ಮಹಮ್ಮದ್ ಬಂದು ಲೂಟಿ ಮಾಡಿ ತೆಗೆದುಕೊಂಡು ಹೋದನು.
ಭಾರತದಂತಹ ಶ್ರೀಮಂತ ದೇಶವು ಮತ್ತ್ಯಾವ ದೇಶವೂ ಇಲ್ಲ, ಇದರಂತಹ ತೀರ್ಥಸ್ಥಾನ ಮತ್ತ್ಯಾವುದೂ ಆಗಲು
ಸಾಧ್ಯವಿಲ್ಲ. ಆದರೆ ಇತ್ತೀಚೆಗಂತೂ ಹಿಂದೂ ಧರ್ಮದ ಅನೇಕ ತೀರ್ಥ ಸ್ಥಾನಗಳಾಗಿವೆ. ವಾಸ್ತವದಲ್ಲಿ
ಯಾವ ತಂದೆಯು ಸರ್ವರ ಸದ್ಗತಿ ಮಾಡುವರೋ ಅವರ ತೀರ್ಥ ಸ್ಥಾನವಾಗಬೇಕಲ್ಲವೆ. ಇದೂ ಸಹ ಡ್ರಾಮಾದಲ್ಲಿ
ನಿಗಧಿತವಾಗಿದೆ. ತಿಳಿಸುವುದರಲ್ಲಿ ಬಹಳ ಸಹಜವಾಗಿದೆ ಆದರೆ ನಂಬರ್ವಾರ್ ಆಗಿಯೇ
ತಿಳಿದುಕೊಳ್ಳುತ್ತಾರೆ. ಏಕೆಂದರೆ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಸ್ವರ್ಗದ ಮಾಲೀಕರು ಈ
ಲಕ್ಷ್ಮೀ-ನಾರಾಯಣರಾಗಿದ್ದಾರೆ. ಇವರು ಉತ್ತಮರಿಗಿಂತ ಉತ್ತಮ ಪುರುಷರು ಅವರನ್ನೇ ದೇವತೆಗಳೆಂದು
ಕರೆಯಲಾಗುತ್ತದೆ. ದೈವೀಗುಣವುಳ್ಳವರನ್ನು ದೇವತೆ ಎಂದು ಕರೆಯಲಾಗುತ್ತದೆ. ಈ ಶ್ರೇಷ್ಠ ದೇವತಾ
ಧರ್ಮದವರು ಪ್ರವೃತ್ತಿ ಮಾರ್ಗದಲ್ಲಿದ್ದರು. ಆ ಸಮಯ ನಿಮ್ಮದೇ ಪ್ರವೃತ್ತಿ ಮಾರ್ಗವಿರುತ್ತದೆ.
ತಂದೆಯು ನಿಮ್ಮನ್ನು ಡಬಲ್ ಕಿರೀಟಧಾರಿಗಳನ್ನಾಗಿ ಮಾಡಿದ್ದರು. ರಾವಣನು ನಂತರ ಎರಡೂ ಕಿರೀಟಗಳನ್ನು
ಇಳಿಸಿ ಬಿಟ್ಟಿದ್ದಾನೆ. ನಂತರ ತಂದೆಯು ಬಂದು ನಿಮಗೆ ಈ ನೆನಪು ಮತ್ತು ವಿದ್ಯೆಯಿಂದ ಎರಡೂ
ಕಿರೀಟಗಳನ್ನು ಕೊಡುತ್ತಾರೆ, ಆದ್ದರಿಂದ ಹೇಳುತ್ತಾರೆ - ಓ ಗಾಡ್ ಫಾದರ್! ನಮಗೆ ಮಾರ್ಗವನ್ನು
ತೋರಿಸಿ, ಮುಕ್ತರನ್ನಾಗಿ ಮಾಡಿ. ಅಂದಾಗ ನಿಮ್ಮ ಹೆಸರನ್ನು ಮಾರ್ಗದರ್ಶಕರೆಂದು ಇಡಲಾಗಿದೆ. ಪಾಂಡವರು,
ಕೌರವರು, ಯಾದವರು ಏನು ಮಾಡಿ ಹೋದರು? ಬಾಬಾ, ನಮ್ಮನ್ನು ದುಃಖದ ರಾಜ್ಯದಿಂದ ಬಿಡಿಸಿ, ನಿಮ್ಮ ಜೊತೆ
ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ತಂದೆಯೇ ಸತ್ಯ ಖಂಡದ ಸ್ಥಾಪನೆ ಮಾಡುತ್ತಾರೆ ಅದಕ್ಕೆ
ಸ್ವರ್ಗವೆಂದು ಹೇಳಲಾಗುತ್ತದೆ ನಂತರ ರಾವಣನು ಅಸತ್ಯ ಖಂಡವನ್ನಾಗಿ ಮಾಡುತ್ತಾರೆ. ಅವರು ಕೃಷ್ಣ
ಭಗವಾನುವಾಚ ಎಂದು ಹೇಳುತ್ತಾರೆ, ಆದರೆ ತಂದೆಯು ತಿಳಿಸುತ್ತಾರೆ- ಶಿವ ಭಗವಾನುವಾಚ. ಭಾರತವಾಸಿಗಳ
ಹೆಸರು ಬದಲಾಯಿಸಿದ್ದರಿಂದ ಇಡೀ ಪ್ರಪಂಚವೇ ಬದಲಾಯಿತು. ಕೃಷ್ಣನಂತೂ ದೇಹಧಾರಿಯಾಗಿದ್ದಾನೆ.
ವಿದೇಹಿಯಂತೂ ಒಬ್ಬ ಶಿವ ತಂದೆಯಾಗಿದ್ದಾರೆ. ಈಗ ತಂದೆಯ ಮೂಲಕ ನೀವು ಮಕ್ಕಳಿಗೆ ಶಕ್ತಿ ಸಿಗುತ್ತದೆ.
ನೀವು ಇಡೀ ವಿಶ್ವದ ಮಾಲೀಕರಾಗುತ್ತೀರಿ. ಆಕಾಶ, ಭೂಮಿ ಎಲ್ಲವೂ ನಿಮಗೆ ಸಿಕ್ಕಿ ಬಿಡುತ್ತದೆ.
ಮುಕ್ಕಾಲು ಕಲ್ಪದವರೆಗೆ ಅದನ್ನು ನಿಮ್ಮಿಂದ ಕಸಿದುಕೊಳ್ಳಲು ಯಾರಿಗೂ ಶಕ್ತಿಯಿರುವುದಿಲ್ಲ. ಯಾವಾಗ
ಅವರ ವೃದ್ಧಿಯಾಗಿ ಕೋಟ್ಯಾಂತರ ಅಂದಾಜಿನಲ್ಲಿ ಜನಸಂಖ್ಯೆಯಾಗುವುದೋ ಆಗ ಸೈನ್ಯವನ್ನು ತೆಗೆದುಕೊಂಡು
ಬಂದು ನಿಮ್ಮನ್ನು ಗೆಲ್ಲುತ್ತಾರೆ. ತಂದೆಯು ಮಕ್ಕಳಿಗೆ ಎಷ್ಟೊಂದು ಸುಖ ಕೊಡುತ್ತಾರೆ. ಅವರ ಗಾಯನವೂ
ಇದೆ - ದುಃಖಹರ್ತ-ಸುಖಕರ್ತ..... ಈ ಸಮಯದಲ್ಲಿ ತಂದೆಯು ನಿಮಗೆ ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು
ಕುಳಿತು ತಿಳಿಸುತ್ತಾರೆ. ರಾವಣ ರಾಜ್ಯದಲ್ಲಿ ಕರ್ಮಗಳು ವಿಕರ್ಮಗಳಾಗಿ ಬಿಡುತ್ತವೆ. ಸತ್ಯಯುಗದಲ್ಲಿ
ಕರ್ಮ ಅಕರ್ಮವಾಗುತ್ತದೆ. ಈಗ ನಿಮಗೆ ಒಬ್ಬ ಸದ್ಗುರು ಸಿಕ್ಕಿದ್ದಾರೆ, ಅವರನ್ನು ಪತಿಯರ ಪತಿಯೆಂದೂ
ಹೇಳುತ್ತಾರೆ. ಏಕೆಂದರೆ ಆ ಪತಿಯರೂ ಸಹ ಅವರನ್ನು ನೆನಪು ಮಾಡುತ್ತಾರೆ ಆದ್ದರಿಂದ ಇದು ಎಷ್ಟು
ವಿಚಿತ್ರವಾದ ನಾಟಕವಾಗಿದೆ. ಇಷ್ಟು ಸೂಕ್ಷ್ಮ ಆತ್ಮದಲ್ಲಿ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ ಅದು
ಎಂದೂ ಅಳಿಸಿ ಹೋಗುವುದಿಲ್ಲ. ಇದಕ್ಕೆ ಅನಾದಿ-ಅವಿನಾಶಿ ನಾಟಕವೆಂದು ಹೇಳಲಾಗುತ್ತದೆ. ದೇವರೊಬ್ಬನೆ
(ಗಾಡ್ ಈಜ್ ಒನ್) ರಚನೆ ಅಥವಾ ಏಣಿ ಮತ್ತು ಚಕ್ರ ಎಲ್ಲವೂ ಒಂದೇ ಆಗಿದೆ. ಯಾರು ರಚನೆಯನ್ನಾಗಲಿ,
ರಚಯಿತನನ್ನಾಗಲಿ ತಿಳಿದುಕೊಂಡಿಲ್ಲ. ಋಷಿ-ಮುನಿಗಳೂ ನಮಗೆ ಗೊತ್ತಿಲ್ಲವೆಂದು ಹೇಳಿ ಬಿಡುತ್ತಾರೆ.
ಈಗ ನೀವು ಸಂಗಮದಲ್ಲಿ ಕುಳಿತಿದ್ದೀರಿ. ನಿಮ್ಮ ಯುದ್ಧವು ಮಾಯೆಯೊಂದಿಗಿದೆ. ಅದು ನಿಮ್ಮನ್ನು
ಬಿಡುವುದಿಲ್ಲ. ಮಕ್ಕಳು ಹೇಳುತ್ತಾರೆ ಬಾಬಾ, ಮಾಯೆಯ ಏಟು ಬಿದ್ದಿತು. ಅದಕ್ಕೆ ತಂದೆಯು ಹೇಳುತ್ತಾರೆ
- ಮಕ್ಕಳೇ, ಮಾಡಿಕೊಂಡಿರುವ ಸಂಪಾದನೆಯನ್ನು ಸಮಾಪ್ತಿ ಮಾಡಿಕೊಂಡಿರಿ! ನಿಮಗೆ ಸ್ವಯಂ ಭಗವಂತನೇ
ಓದಿಸುತ್ತಾರೆ ಅಂದಮೇಲೆ ಬಹಳ ಚೆನ್ನಾಗಿ ಓದಬೇಕು. ಇಂತಹ ವಿದ್ಯೆಯು ಮತ್ತೆ 5000 ವರ್ಷಗಳ ನಂತರವೇ
ಸಿಗುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಈ
ದುಃಖಧಾಮದಿಂದ ಬುದ್ಧಿಯೋಗವನ್ನು ತೆಗೆದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವ ತಂದೆಯನ್ನು ನೆನಪು
ಮಾಡಬೇಕು, ಸತೋಪ್ರಧಾನರಾಗಬೇಕು.
2. ತಂದೆಯ ಸಮಾನ ಪ್ರೇಮದ ಸಾಗರ, ಶಾಂತಿ ಮತ್ತು ಸುಖದ ಸಾಗರರಾಗಬೇಕಾಗಿದೆ. ಕರ್ಮ-ಅಕರ್ಮ-ವಿಕರ್ಮದ
ಗತಿಯನ್ನು ತಿಳಿದು ಸದಾ ಶ್ರೇಷ್ಠ ಕರ್ಮವನ್ನು ಮಾಡಬೇಕಾಗಿದೆ.
ಮಾತೇಶ್ವರೀಜೀಯವರ ಮಧುರ
ಮಹಾವಾಕ್ಯ -
“ ಜೀವನದ ಆಶೆ
ಪೂರ್ಣವಾಗುವ ಸುವರ್ಣ ಸಮಯ ”
ನಾವೆಲ್ಲಾ ಆತ್ಮರಿಗೆ ಬಹಳ ಸಮಯದಿಂದ ಇದೇ ಆಶೆ ಇತ್ತು ಜೀವನದಲ್ಲಿ ಸದಾ ಸುಖ ಶಾಂತಿ ಸಿಗಲಿ ಎಂದು,
ಈಗ ಬಹಳ ಸಮಯದ ಆಶೆ ಎಂದು ಪೂರ್ಣವಾಗುವುದು?. ಈಗ ಇದಾಗಿದೆ ನಮ್ಮ ಅಂತಿಮ ಜನ್ಮ, ಆ ಅಂತಿಮ
ಜನ್ಮದಲ್ಲಿಯೂ ಅಂತ್ಯವಾಗಿದೆ. ನಾನಿನ್ನೂ ಚಿಕ್ಕವನಾಗಿದ್ದೇನೆ, ಚಿಕ್ಕವರಿಗಾಗಲಿ ದೊಡ್ಡವರಿಗಾಗಲಿ
ಸುಖವಂತೂ ಬೇಕಿದೆಯಲ್ಲವೇ, ಆದರೆ ದುಃಖ ಯಾವುದರಿಂದ ಸಿಗುತ್ತದೆ ಎಂಬುದರ ಬಗ್ಗೆಯೂ ಮೊದಲು
ತಿಳುವಳಿಕೆ ಬೇಕಾಗಿದೆ. ಈಗ ನಿಮಗೆ ಜ್ಞಾನ ಸಿಕ್ಕಿದೆ, ಈ ಐದು ವಿಕಾರಗಳಲ್ಲಿ ಸಿಕ್ಕಿಕೊಂಡ ಕಾರಣ ಈ
ಕರ್ಮಬಂಧನವಾಗಿದೆ ಎಂದು, ಅದನ್ನು ಪರಮಾತ್ಮನ ನೆನಪಿನ ಅಗ್ನಿಯಿಂದ ಭಸ್ಮ ಮಾಡಬೇಕಾಗಿದೆ, ಕರ್ಮ
ಬಂಧನದಿಂದ ಬಿಡಿಸಿಕೊಳ್ಳಲು ಇದೇ ಸಹಜ ಉಪಾಯ. ಇಂತಹ ಸರ್ವಶಕ್ತಿವಂತ ಬಾಬಾರವರ ನೆನಪು ನಡೆಯುತ್ತಾ
ತಿರುಗಾಡುತ್ತಾ ಶ್ವಾಸ-ಶ್ವಾಸದಲ್ಲಿ ಇರಬೇಕು. ಈಗ ಈ ಉಪಾಯವನ್ನು ತಿಳಿಸುವ ಸಹಾಯ ಸ್ವಯಂ ಪರಮಾತ್ಮ
ಬಂದು ಮಾಡುತ್ತಿದ್ದಾರೆ, ಅದರೆ ಇದರಲ್ಲಿ ಪುರುಷಾರ್ಥವಂತೂ ಪ್ರತಿಯೊಂದು ಆತ್ಮವೂ ಮಾಡಬೇಕು.
ಪರಮಾತ್ಮನಂತೂ ತಂದೆ, ಶಿಕ್ಷಕ, ಗುರುವಿನ ರೂಪದಲ್ಲಿ ಬಂದು ನಮಗೆ ಆಸ್ತಿ ಕೊಡುತ್ತಾರೆ, ಅಂದಾಗ
ಮೊದಲು ಆ ತಂದೆಯ ಮಗು ಆಗಬೇಕಿದೆ, ನಂತರ ಶಿಕ್ಷಕನಿಂದ ಓದಬೇಕು ಯಾವ ವಿದ್ಯೆಯಿಂದ ಜನ್ಮ-ಜನ್ಮಾಂತರ
ಸುಖದ ಪ್ರಾಲಬ್ಧವಾಗುವುದು ಅರ್ಥಾತ್ ಜೀವನ್ಮುಕ್ತಿ ಪದವಿಯಲ್ಲಿ ಪುರುಷಾರ್ಥದ ಅನುಸಾರ ಪದವಿ
ಸಿಗುತ್ತದೆ ಮತ್ತು ಗುರು ರೂಪದಲ್ಲಿ ಪವಿತ್ರರನ್ನಾಗಿ ಮಾಡಿ ಮುಕ್ತಿ ಕೊಡುತ್ತಾರೆ, ಅಂದರೆ ಈ
ರಹಸ್ಯ ತಿಳಿದು ಅಂತಹ ಪುರುಷಾರ್ಥ ಮಾಡಬೇಕಾಗಿದೆ. ಹಳೆಯ ಖಾತೆ ಸಮಾಪ್ತಿ ಮಾಡಿ ಹೊಸ ಜೀವನ ಮಾಡಲು
ಇದೇ ಸಮಯವಾಗಿದೆ, ಈ ಸಮಯದಲ್ಲಿ ಎಷ್ಟು ಪುರುಷಾರ್ಥ ಮಾಡಿ ತಮ್ಮ ಆತ್ಮನನ್ನು ಪವಿತ್ರವನ್ನಾಗಿ
ಮಾಡಿಕೊಳ್ಳುವಿರಿ ಅಷ್ಟೇ ಶುದ್ಧವಾದ ರೆಕಾರ್ಡ್ ತುಂಬಿಕೊಳ್ಳುವಿರಿ ನಂತರ ಇಡೀ ಕಲ್ಪ ನಡೆಯುತ್ತದೆ,
ಅಂದರೆ ಇಡೀ ಕಲ್ಪ ಈ ಸಮಯದ ಸಂಪಾದನೆಯ ಮೇಲೆ ಅವಲಂಬಿತವಾಗಿದೆ. ನೋಡಿ, ಈ ಸಮಯದಲ್ಲೇ ನಿಮಗೆ ಆದಿ,
ಮಧ್ಯೆ, ಅಂತ್ಯದ ಜ್ಞಾನ ಸಿಗುತ್ತದೆ. ನಮಗೆ ದೇವತೆಗಳಾಗಬೇಕಾಗಿದೆ ಮತ್ತು ನಮ್ಮ ಏರುವ ಕಲೆಯಾಗಿದೆ
ನಂತರ ಅಲ್ಲಿ ಹೋಗಿ ಪ್ರಾಲಬ್ಧವನ್ನು ಭೋಗಿಸುತ್ತೇವೆ. ಅಲ್ಲಿ ದೇವತೆಗಳಿಗೆ ನಂತರದ ವಿಚಾರ ನಾವು
ಕೆಳಗೆ ಬೀಳುತ್ತೇವೆ ಎಂದು ತಿಳಿದಿರುವುದಿಲ್ಲ, ಒಂದುವೇಳೆ ನಾವು ಸುಖವನ್ನು ಭೋಗಿಸಿ ನಂತರ ಕೆಳಗೆ
ಬೀಳಬೇಕಾಗುತ್ತದೆ ಎಂದು ತಿಳಿದಿದ್ದರೆ ಕೆಳಗೆ ಇಳಿಯುವ ಚಿಂತೆಯಲ್ಲಿ ಸುಖವನ್ನು ಭೋಗಿಸುವುದೇ ಇಲ್ಲ.
ಅಂದರೆ ಇದು ಈಶ್ವರೀಯ ಕಾಯಿದೆ ರಚಿಸಲ್ಪಟ್ಟಿದೆ ಮನುಷ್ಯ ಸದಾ ಏರುವ ಪುರುಷಾರ್ಥ ಮಾಡುತ್ತಾನೆ
ಅರ್ಥಾತ್ ಸುಖಕ್ಕಾಗಿ ಸಂಪಾದನೆ ಮಾಡುತ್ತಾನೆ. ಆದರೆ ಡ್ರಾಮದಲ್ಲಿ ಅರ್ಧ-ಅರ್ಧ ಪಾತ್ರ
ಮಾಡಲ್ಪಟ್ಟಿದೆ ಯಾವ ರಹಸ್ಯವನ್ನು ನಾವು ತಿಳಿದಿದ್ದೇವೆ, ಆದರೆ ಯಾವ ಸಮಯದಲ್ಲಿ ಸುಖದ ಸರದಿ
ಇದ್ದಾಗ ಪುರುಷಾರ್ಥ ಮಾಡಿ ಸುಖವನ್ನು ಪಡೆಯಬೇಕು, ಇದೇ ಪುರುಷಾರ್ಥದ ಸುಂದರತೆ. ನಟನ ಕೆಲಸ ಆಗಿದೆ
ನಟನೆ ಮಾಡುವುದು. ಸಂಪೂರ್ಣ ಸಮಯ ಸುಂದರತೆಯಿಂದ ಪಾತ್ರವನ್ನು ಅಭಿನಯಿಸಬೇಕು, ಯಾರು ನೋಡುತ್ತಾರೆ
ಅವರು ವ್ಹಾ! ವ್ಹಾ! ಎನ್ನುವಂತಿರಬೇಕು. ಆದ್ದರಿಂದ ನಾಯಕ, ನಾಯಕಿಯ ಪಾತ್ರ ದೇವತೆಗಳಿಗೆ ಸಿಕ್ಕಿದೆ.
ಯಾರ ನೆನಪಾರ್ಥ ಚಿತ್ರಗಳ ಗಾಯನ ಮತ್ತು ಪೂಜೆ ಮಾಡಲಾಗುತ್ತದೆ. ನಿರ್ವಿಕಾರಿ ಪ್ರವೃತ್ತಿಯಲ್ಲಿದ್ದು
ಕಮಲದ ಹೂವಿನ ಅವಸ್ಥೆ ಮಾಡಿಕೊಳ್ಳಬೇಕು, ಇದೇ ದೇವತೆಗಳ ಸುಂದರತೆ. ಈ ಸುಂದರತೆಯನ್ನು
ಮರೆಯುವುದರಿಂದಲೇ ಭಾರತಕ್ಕೆ ಇಂತಹ ರ್ದುದಶೆ ಬಂದಿದೆ, ಈಗ ಮತ್ತೆ ಇಂತಹ ಜೀವನ ಮಾಡಿಸುವಂತಹ ಸ್ವಯಂ
ಪರಮಾತ್ಮ ಬಂದಿದ್ದಾರೆ, ಈಗ ಅವರ ಕೈ ಹಿಡಿಯುವುದರಿಂದ ಜೀವನದ ದೋಣಿ ಪಾರಾಗುವುದು.
ವರದಾನ:
ಎಂತಹದೇ
ವಾಯುಮಂಡಲದಲ್ಲಿ ಮನಸ್ಸು-ಬುದ್ಧಿಯನ್ನು ಸೆಕೆಂಡ್ ನಲ್ಲಿ ಏಕಾಗ್ರ ಮಾಡುವಂತಹ ಸರ್ವ ಶಕ್ತಿ ಸಂಪನ್ನ
ಭವ.
ಬಾಪ್ದಾದಾರವರು
ಎಲ್ಲಾ ಮಕ್ಕಳಿಗೂ ಸರ್ವ ಶಕ್ತಿಗಳನ್ನು ಆಸ್ತಿಯ ರೂಪದಲ್ಲಿ ಕೊಟ್ಟಿದ್ದಾರೆ. ನೆನಪಿನ ಶಕ್ತಿಯ
ಅರ್ಥವೇ ಆಗಿದೆ - ಮನಸ್ಸು-ಬುದ್ಧಿಯನ್ನು ಎಲ್ಲಿ ಸ್ಥಿರ ಮಾಡಲು ಇಚ್ಚಿಸುವಿರೊ ಅಲ್ಲಿ
ಸ್ಥಿರವಾಗಬೇಕು. ಎಂತಹದೇ ವಾಯುಮಂಡಲದ ಮಧ್ಯೆ ತಮ್ಮ ಮನಸ್ಸು-ಬುದ್ಧಿಯನ್ನು ಒಂದು ಸೆಕೆಂಡಿನಲ್ಲಿ
ಏಕಾಗ್ರ ಮಾಡಿಕೊಳ್ಳಿ. ಪರಿಸ್ಥಿತಿ ಹಲ್- ಚಲ್ನದಾಗಿರಬಹುದು, ವಾಯುಮಂಡಲ ತಮೋಗುಣಿಯದಾಗಿರಬಹುದು,
ಮಾಯೆ ತನ್ನವರನ್ನಾಗಿ ಮಾಡಿಕೊಳ್ಳುವ ಪ್ರಯತ್ನದಲ್ಲಿರಬಹುದು. ಆದರೂ ಸಹಾ ಸೆಕೆಂಡ್ ನಲ್ಲಿ ಏಕಾಗ್ರ
ಆಗಿ ಬಿಡಿ - ಇಂತಹ ಕಂಟ್ರೋಲಿಂಗ್ ಪವರ್ ಇರಬೇಕು, ಆಗ ಹೇಳಲಾಗುವುದು ಸರ್ವ ಶಕ್ತಿ ಸಂಪನ್ನ.
ಸ್ಲೋಗನ್:
ವಿಶ್ವ ಕಲ್ಯಾಣದ
ಜವಾಬ್ದಾರಿ ಮತ್ತು ಪವಿತ್ರತೆಯ ಬೆಳಕಿನ ಕಿರೀಟ ಧರಿಸುವಂತಹವರೆ ಡಬ್ಬಲ್ ಕಿರೀಟಧಾರಿಗಳಾಗುವರು.