23.06.19    Avyakt Bapdada     Kannada Murli     17.12.84     Om Shanti     Madhuban


“ವ್ಯರ್ಥವನ್ನು ಸಮಾಪ್ತಿಗೊಳಿಸುವ ಸಾಧನ- ಸಮರ್ಥ ಸಂಕಲ್ಪಗಳ ಖಜಾನೆಯಾದ ಜ್ಞಾನ ಮುರುಳಿ”


ಇಂದು ಬಾಪ್ದಾದಾರವರು ಸಂಗಮಯುಗಿ ಅಲೌಕಿಕ ಆತ್ಮರ ಮಹಾಸಭೆಯಲ್ಲಿ ಮಿಲನ ಮಾಡುವುದಕ್ಕಾಗಿ ಬಂದಿದ್ದಾರೆ. ಈ ಆತ್ಮರ ಮಹಾಸಭೆ, ಆತ್ಮಿಕ ಮಿಲನವನ್ನು ಇಡೀ ಕಲ್ಪದಲ್ಲಿಯೂ ಈಗಷ್ಟೇ ಮಾಡಬಹುದು. ಆತ್ಮರೊಂದಿಗೆ ಪರಮ ಆತ್ಮನ ಮಿಲನ, ಈ ಶ್ರೇಷ್ಠ ಮಿಲನವು ಸತ್ಯಯುಗೀ ಸೃಷ್ಟಿಯಲ್ಲಿಯೂ ಆಗುವುದಿಲ್ಲ. ಆದ್ದರಿಂದ ಈ ಯುಗವನ್ನು ಮಹಾನ್ ಯುಗ, ಮಹಾಮಿಲನದ ಯುಗ, ಸರ್ವ ಪ್ರಾಪ್ತಿಗಳ ಯುಗ, ಅಸಂಭವದಿಂದ ಸಂಭವವಾಗುವ ಯುಗ, ಸಹಜ ಮತ್ತು ಶ್ರೇಷ್ಠ ಅನುಭೂತಿಗಳ ಯುಗ, ವಿಶೇಷ ಪರಿವರ್ತನಾ ಯುಗ, ವಿಶ್ವ ಕಲ್ಯಾಣದ ಯುಗ, ಸಹಜ ವರದಾನಗಳ ಯುಗವೆಂದು ಹೇಳಲಾಗುತ್ತದೆ. ಇಂತಹ ಯುಗದಲ್ಲಿ ಮಹಾನ್ ಪಾತ್ರಧಾರಿಗಳು ನೀವಾತ್ಮರಾಗಿದ್ದೀರಿ. ಇಂತಹ ಮಹಾನ್ ನಶೆಯಲ್ಲಿ ಸದಾ ಇರುತ್ತೀರಾ? ಇಡೀ ವಿಶ್ವವು ಯಾವ ತಂದೆಯ ಒಂದು ಸೆಕೆಂಡಿನ ದರ್ಶನವನ್ನು ನೋಡಲು ಚಾತ್ರಕರಿದ್ದಾರೆ, ಆ ತಂದೆಯ ಸೆಕೆಂಡಿನಲ್ಲಿ ಅಧಿಕಾರಿಯಾಗುವ ಶ್ರೇಷ್ಠಾತ್ಮರು ನಾವಾಗಿದ್ದೇವೆ- ಇದು ಸ್ಮೃತಿಯಲ್ಲಿರುತ್ತದೆಯೇ? ಈ ಸ್ಮೃತಿಯು ಸ್ವತಹವಾಗಿಯೇ ಸಮರ್ಥರನ್ನಾಗಿ ಮಾಡುತ್ತದೆ. ಇಂತಹ ಸಮರ್ಥ ಆತ್ಮರಾಗಿದ್ದೀರಾ? ಸಮರ್ಥ ಅರ್ಥಾತ್ ವ್ಯರ್ಥವನ್ನು ಸಮಾಪ್ತಿ ಮಾಡುವವರು. ವ್ಯರ್ಥವಿದೆಯೆಂದರೆ ಸಮರ್ಥತೆಯಿಲ್ಲ. ಒಂದುವೇಳೆ ಮನಸ್ಸಿನಲ್ಲಿ ವ್ಯರ್ಥ ಸಂಕಲ್ಪಗಳಿವೆಯೆಂದರೆ ಸಮರ್ಥ ಸಂಕಲ್ಪವು ನಿಲ್ಲಲು ಸಾಧ್ಯವಿಲ್ಲ. ವ್ಯರ್ಥವು ಮತ್ತೆ-ಮತ್ತೆ ಕೆಳಗೆ ಕರೆ ತರುತ್ತದೆ. ಸಮರ್ಥ ಸಂಕಲ್ಪವು ಸಮರ್ಥ ತಂದೆಯ ಮಿಲನದ ಅನುಭೂತಿಯನ್ನೂ ಮಾಡಿಸುತ್ತದೆ, ಮಾಯಾಜೀತರನ್ನಾಗಿಯೂ ಮಾಡಿಸುತ್ತದೆ. ಸಫಲತಾ ಸ್ವರೂಪ ಸೇವಾಧಾರಿಯನ್ನಾಗಿಯೂ ಮಾಡುತ್ತದೆ. ವ್ಯರ್ಥ ಸಂಕಲ್ಪವು ಉಮ್ಮಂಗ-ಉತ್ಸಾಹವನ್ನು ಸಮಾಪ್ತಿ ಮಾಡುತ್ತದೆ. ಅವರು ಸದಾ ಏಕೆ, ಏನು ಎನ್ನುವ ಗೊಂದಲದಲ್ಲಿರುತ್ತಾರೆ, ಆದ್ದರಿಂದ ಚಿಕ್ಕ ಪುಟ್ಟ ಮಾತುಗಳಲ್ಲಿ ಸ್ವಯಂನಿಂದ ಹೃದಯ ವಿಧೀರ್ಣರಾಗಿರುತ್ತಾರೆ. ವ್ಯರ್ಥ ಸಂಕಲ್ಪವು ಸದಾ ಸರ್ವ ಪ್ರಾಪ್ತಿಗಳ ಖಜಾನೆಗಳ ಅನುಭವ ಮಾಡುವುದರಿಂದ ವಂಚಿತರನ್ನಾಗಿ ಮಾಡಿ ಬಿಡುತ್ತದೆ. ವ್ಯರ್ಥ ಸಂಕಲ್ಪದವರ ಮನಸ್ಸಿನ ಇಚ್ಛೆ ಅಥವಾ ಮನಸ್ಸಿನ ಇಚ್ಛೆಗಳು ಬಹಳ ಶ್ರೇಷ್ಠವಾಗಿರುತ್ತದೆ. ಇದನ್ನು ಮಾಡುತ್ತೇವೆ, ಇದನ್ನು ಮಾಡೋಣ, ಇವರು ಬಹಳ ತೀವ್ರವಾಗಿ ಯೋಜನೆಯನ್ನು ಮಾಡುತ್ತಾರೆ ಅರ್ಥಾತ್ ತೀವ್ರ ಗತಿಯಿಂದ ಮಾಡುತ್ತಾರೆ. ಏಕೆಂದರೆ ವ್ಯರ್ಥ ಸಂಕಲ್ಪಗಳ ಗತಿಯು ತೀವ್ರವಾಗಿರುತ್ತದೆ, ಆದ್ದರಿಂದ ಬಹಳ ಶ್ರೇಷ್ಠಾತಿ ಶ್ರೇಷ್ಠವಾದ ಮಾತುಗಳನ್ನು ಯೋಚಿಸುತ್ತಾರೆ ಆದರೆ ಸಮರ್ಥರಾಗದಿರುವ ಕಾರಣದಿಂದ ಯೋಜನೆ ಮತ್ತು ಪ್ರತ್ಯಕ್ಷವಾಗಿರುವುದರಲ್ಲಿ ಮಹಾನ್ ಅಂತರವಾಗಿ ಬಿಡುತ್ತದೆ ಆದ್ದರಿಂದ ಹೃದಯವಿಧೀರ್ಣರಾಗಿ ಬಿಡುತ್ತಾರೆ. ಸಮರ್ಥ ಸಂಕಲ್ಪದವರು ಸದಾ ಏನು ಯೋಚಿಸುತ್ತಾರೆಯೋ ಅದನ್ನು ಮಾಡುತ್ತಾರೆ. ಯೋಚಿಸುವುದು ಮತ್ತು ಮಾಡುವುದು ಎರಡೂ ಸಮಾನವಾಗಿರುತ್ತದೆ. ಸದಾ ಧೈರ್ಯದಿಂದ ಸಂಕಲ್ಪ ಮತ್ತು ಕರ್ಮದಲ್ಲಿ ಸಫಲರಾಗುತ್ತಾರೆ. ವ್ಯರ್ಥ ಸಂಕಲ್ಪವು ತೀವ್ರವಾಗಿ ಬಿರುಗಾಳಿಗಳಂತೆ ಏರುಪೇರಿನಲ್ಲಿ ತರುತ್ತದೆ. ಸಮರ್ಥ ಸಂಕಲ್ಪವು ಸದಾ ಮಳೆಯ ಸಮಾನ ಹಚ್ಚ ಹಸಿರಾಗಿ ಮಾಡಿ ಬಿಡುತ್ತದೆ. ವ್ಯರ್ಥ ಸಂಕಲ್ಪದ ಶಕ್ತಿ ಅರ್ಥಾತ್ ಆತ್ಮಿಕ ಶಕ್ತಿ ಮತ್ತು ಸಮಯವನ್ನು ಕಳೆಯಲು ನಿಮಿತ್ತವಾಗುತ್ತದೆ. ಸಮರ್ಥ ಸಂಕಲ್ಪಗಳು ಸದಾ ಆತ್ಮಿಕ ಶಕ್ತಿಯನ್ನು ಜಮಾ ಮಾಡುತ್ತದೆ. ಸಮಯವನ್ನು ಸಫಲ ಮಾಡುತ್ತದೆ. ವ್ಯರ್ಥ ಸಂಕಲ್ಪದ ರಚನೆಯಾಗುತ್ತಿದ್ದರೂ, ವ್ಯರ್ಥ ರಚನೆ, ಆತ್ಮ ರಚೈತನನ್ನೂ ಬೇಸರ ಮಾಡಿಸುತ್ತದೆ ಅರ್ಥಾತ್ ಮಾಸ್ಟರ್ ಸರ್ವಶಕ್ತಿವಂತ ಸಮರ್ಥ ಆತ್ಮನ ಗೌರವದಿಂದ ದೂರ ಮಾಡಿ ಬಿಡುತ್ತದೆ. ಸಮರ್ಥ ಸಂಕಲ್ಪದಿಂದ ಸದಾ ಶ್ರೇಷ್ಠ ಗೌರವದ ಸ್ಮೃತಿ ಸ್ವರೂಪರಾಗಿರುತ್ತಾರೆ. ಈ ಅಂತರವನ್ನು ತಿಳಿಯುತ್ತಿರುತ್ತೀರಿ, ಆದರೂ ಕೆಲವು ಮಕ್ಕಳು ವ್ಯರ್ಥ ಸಂಕಲ್ಪದ ಕಾರಣಗಳನ್ನೂ ಈಗಲೂ ಹೇಳುತ್ತಾರೆ. ಈಗಿನವರೆಗೂ ವ್ಯರ್ಥ ಸಂಕಲ್ಪವೇಕೆ ನಡೆಯುತ್ತದೆ, ಇದಕ್ಕೆ ಕಾರಣವೇನು? ಬಾಪ್ದಾದಾರವರೇನು ಸಮರ್ಥ ಸಂಕಲ್ಪಗಳ ಖಜಾನೆಯನ್ನು ಕೊಟ್ಟಿದ್ದಾರೆ- ಅದಾಗಿದೆ ಜ್ಞಾನದ ಮುರುಳಿ. ಮುರುಳಿಯ ಒಂದೊಂದು ಮಹಾವಾಕ್ಯವು ಸಮರ್ಥ ಖಜಾನೆ ಆಗಿದೆ. ಈ ಸಮರ್ಥ ಸಂಕಲ್ಪದ ಖಜಾನೆಯ ಮಹತ್ವವು ಕಡಿಮೆಯಾಗುವ ಕಾರಣದಿಂದ ಸಮರ್ಥ ಸಂಕಲ್ಪವು ಧಾರಣೆಯಾಗುವುದಿಲ್ಲ, ಆದ್ದರಿಂದ ವ್ಯರ್ಥ ಸಂಕಲ್ಪಕ್ಕೆ ಅವಕಾಶ ಸಿಕ್ಕಿ ಬಿಡುತ್ತದೆ. ಪ್ರತೀ ಸಮಯದಲ್ಲಿಯೂ ಒಂದೊಂದು ಮಹಾವಾಕ್ಯವನ್ನು ಮನನ ಮಾಡುತ್ತಿರುತ್ತೀರೆಂದರೆ ಸಮರ್ಥ ಬುದ್ಧಿಯಲ್ಲಿ ವ್ಯರ್ಥವು ಬರಲು ಸಾಧ್ಯವಿಲ್ಲ. ಖಾಲಿ ಬುದ್ಧಿಯಾಗಿ ಬಿಡುತ್ತದೆ, ಆದ್ದರಿಂದ ಖಾಲಿ ಸ್ಥಾನವಿರುವ ಕಾರಣದಿಂದ ವ್ಯರ್ಥವು ಬಂದು ಬಿಡುತ್ತದೆ. ಯಾವಾಗ ಅವಕಾಶವೇ ಇಲ್ಲವೆಂದರೆ ವ್ಯರ್ಥವು ಹೇಗೆ ಬರಲು ಸಾಧ್ಯ. ಸಮರ್ಥ ಸಂಕಲ್ಪಗಳಿಂದ ಬುದ್ಧಿಯನ್ನು ಬ್ಯುಜೀಯಾಗಿಡುವ ಸಾಧನವು ಬರುವುದಿಲ್ಲ ಎಂದರೆ ವ್ಯರ್ಥ ಸಂಕಲ್ಪಗಳ ಆಹ್ವಾನ ಮಾಡುವುದು.

ಬ್ಯುಸಿಯಿಡುವ ಬ್ಯುಸಿನೆಸ್ಮೆನ್ ಆಗಿರಿ. ಹಗಲು-ರಾತ್ರಿ ಈ ಜ್ಞಾನರತ್ನಗಳ ಬ್ಯುಸಿನೆಸ್ಮೆನ್ ಆಗಿರಿ. ಆಗ ಬಿಡುವೂ ಇರುವುದಿಲ್ಲ, ವ್ಯರ್ಥ ಸಂಕಲ್ಪಗಳಿಗೆ ಅವಕಾಶವಿರುವುದಿಲ್ಲ. ಅಂದಮೇಲೆ ವಿಶೇಷ ಮಾತು "ಬುದ್ಧಿಯನ್ನು ಸಮರ್ಥ ಸಂಕಲ್ಪಗಳಿಂದ ಸದಾ ಸಂಪನ್ನವಾಗಿಡಿ". ಅದರ ಆಧಾರವಾಗಿದೆ- ಪ್ರತಿನಿತ್ಯವೂ ಮುರುಳಿ ಕೇಳುವುದು, ಸಮಾವೇಶ ಮಾಡಿಕೊಳ್ಳುವುದು ಮತ್ತು ಸ್ವರೂಪರಾಗುವುದು ಈ ಮೂರು ಹಂತಗಳಿವೆ. ಕೇಳುವುದು ಬಹಳ ಇಷ್ಟವಾಗುತ್ತದೆ. ಕೇಳದೇ ಇರಲು ಸಾಧ್ಯವಾಗುವುದಿಲ್ಲ. ಇದೂ ಸಹ ಹಂತವಾಗಿದೆ. ಇಂತಹ ಹಂತದಲ್ಲಿರುವವರು ಕೇಳುವ ಸಮಯದವರೆಗೂ ಕೇಳುವ ಇಚ್ಛೆ, ಕೇಳುವ ರುಚಿಯಿರುವ ಕಾರಣದಿಂದ, ಆ ಸಮಯದವರೆಗೂ ಅದೇ ರುಚಿಯ ಮೋಜಿನಲ್ಲಿರುತ್ತಾರೆ. ಕೇಳುವುದರಲ್ಲಿ ಮಸ್ತರೂ ಇರುತ್ತಾರೆ, ಬಹಳ ಒಳ್ಳೆಯದು, ಬಹಳ ಒಳ್ಳೆಯದು.... ಈ ಹಾಡನ್ನೂ ಖುಷಿಯಿಂದ ಹಾಡುತ್ತಾರೆ. ಆದರೆ ಕೇಳುವುದು ಸಮಾಪ್ತಿಯಾಯಿತೆಂದರೆ ಆ ರುಚಿಯೂ ಸಮಾಪ್ತಿಯಾಗಿ ಬಿಡುತ್ತದೆ, ಏಕೆಂದರೆ ಸಮಾವೇಶ ಮಾಡಿಕೊಳ್ಳಲಿಲ್ಲ. ಸಮಾವೇಶದ ಶಕ್ತಿಯ ಮೂಲಕ ಬುದ್ಧಿಯನ್ನು ಸಮರ್ಥ ಸಂಕಲ್ಪಗಳಿಂದ ಸಂಪನ್ನ ಮಾಡಲಿಲ್ಲವೆಂದರೆ ವ್ಯರ್ಥವು ಬರುತ್ತಿರುತ್ತದೆ. ಸಮಾವೇಶ ಮಾಡಿಕೊಳ್ಳುವವರು ಸದಾ ಸಂಪನ್ನವಾಗಿರುತ್ತಾರೆ. ಆದ್ದರಿಂದ ವ್ಯರ್ಥ ಸಂಕಲ್ಪಗಳಿಂದ ದೂರವಾಗಿರುತ್ತಾರೆ. ಆದರೆ ಸ್ವರೂಪವಾಗುವವರು ಶಕ್ತಿಶಾಲಿಯಾಗಿದ್ದು ಅನ್ಯರನ್ನೂ ಶಕ್ತಿಶಾಲಿಯನ್ನಾಗಿ ಮಾಡುತ್ತಾರೆ. ಆಗ ಆ ಕೊರತೆಯು ಉಳಿದು ಬಿಡುತ್ತದೆ.

ವ್ಯರ್ಥದಿಂದಂತು ಪಾರಾಗುತ್ತಾರೆ, ಶುದ್ಧ ಸಂಕಲ್ಪಗಳಲ್ಲಿರುತ್ತಾರೆ ಆದರೆ ಶಕ್ತಿಸ್ವರೂಪರಾಗಲು ಸಾಧ್ಯವಿಲ್ಲ. ಸ್ವರೂಪವಾಗುವವರು ಸದಾ ಸಂಪನ್ನ, ಸದಾ ಸಮರ್ಥ, ಶಕ್ತಿಶಾಲಿ ಕಿರಣಗಳ ಮೂಲಕ ಅನ್ಯರ ವ್ಯರ್ಥವನ್ನೂ ಸಮಾಪ್ತಿ ಮಾಡುವವರಾಗುತ್ತಾರೆ. ಅಂದಮೇಲೆ ತಮ್ಮನ್ನು ತಾವು ಕೇಳಿಕೊಳ್ಳಿರಿ- ನಾನು ಯಾರಾಗಿದ್ದೇನೆ. ಕೇಳುವವರೇ ಅಥವಾ ಸಮಾವೇಶ ಮಾಡುವವರೇ ಅಥವಾ ಸ್ವರೂಪರಾಗುವವರೇ? ಶಕ್ತಿಶಾಲಿ ಆತ್ಮವು ಸೆಕೆಂಡಿನಲ್ಲಿ ವ್ಯರ್ಥವನ್ನು ಸಮರ್ಥತೆಯಲ್ಲಿ ಪರಿವರ್ತನೆ ಮಾಡಿ ಬಿಡುತ್ತಾರೆ. ಅಂದಮೇಲೆ ಶಕ್ತಿಶಾಲಿ ಆತ್ಮರಾಗಿದ್ದೀರಲ್ಲವೆ? ಅಂದಾಗ ವ್ಯರ್ಥವನ್ನು ಪರಿವರ್ತನೆ ಮಾಡಿರಿ. ಈಗಿನವರೆಗೂ ವ್ಯರ್ಥದಲ್ಲಿ ಶಕ್ತಿ ಮತ್ತು ಸಮಯವನ್ನು ಕಳೆಯುತ್ತಾ ಇರುತ್ತೀರೆಂದರೆ ಯಾವಾಗ ಸಮರ್ಥರಾಗುತ್ತೀರಿ? ಬಹಳ ಕಾಲದ ಸಮರ್ಥರೇ ಬಹಳ ಕಾಲದ ಸಂಪನ್ನರಾಜ್ಯವನ್ನು ಮಾಡಬಹುದು. ತಿಳಿಯಿತೆ.

ಈಗ ತಮ್ಮ ಸಮರ್ಥ ಸ್ವರೂಪದ ಮೂಲಕ ಅನ್ಯರನ್ನು ಸಮರ್ಥರನ್ನಾಗಿ ಮಾಡುವ ಸಮಯವಾಗಿದೆ. ಸ್ವಯಂನ ವ್ಯರ್ಥವನ್ನು ಸಮಾಪ್ತಿ ಮಾಡಿರಿ. ಸಾಹಸವಿದೆಯಲ್ಲವೆ? ಹೇಗೆ ಮಹಾರಾಷ್ಟ್ರವಿದೆ ಅದೇ ರೀತಿ ಮಹಾನರಾಗಿದ್ದೀರಲ್ಲವೆ. ಮಹಾ ಸಂಕಲ್ಪವನ್ನು ಮಾಡುವವರಾಗಿದ್ದೀರಲ್ಲವೆ. ಬಲಹೀನ ಸಂಕಲ್ಪದವರಲ್ಲ. ಸಂಕಲ್ಪವನ್ನು ಮಾಡಿದಿರಿ ಮತ್ತು ಆಯಿತು. ಇದಕ್ಕೆ ಮಹಾನ್ ಸಂಕಲ್ಪವೆಂದು ಹೇಳಲಾಗುತ್ತದೆ. ಇಂತಹ ಮಹಾನ್ ಆತ್ಮರಾಗಿದ್ದೀರಲ್ಲವೆ ಮತ್ತು ಪಂಜಾಬಿನವರು ಏನು ಯೋಚಿಸುತ್ತೀರಿ? ಪಂಜಾಬಿನವರು ಬಹದ್ದೂರರಾಗಿದ್ದೀರಲ್ಲವೆ. ಮಾಯೆಯ ಶಕ್ತಿಯವರು ಸರ್ಕಾರಕ್ಕೆ ಘರ್ಜನೆ ಮಾಡುತ್ತಿದ್ದಾರೆ. ಈಶ್ವರೀಯ ಶಕ್ತಿಯಿರುವವರು ಮಾಯೆಗೆ ಘರ್ಜನೆ ಮಾಡುತ್ತಿದ್ದಾರೆ. ಮಾಯೆಗೆ ಘರ್ಜನೆ ಮಾಡುವವರಾಗಿದ್ದೀರಲ್ಲವೆ. ಗಾಬರಿಯಾಗುವವರಂತು ಆಗಿಲ್ಲವಲ್ಲವೆ. ಹೇಗೆ ಅವರು ಹೇಳುತ್ತಾರೆ- ನಮ್ಮ ರಾಜ್ಯವಾಗಲಿ, ತಾವೂ ಮಾಯೆಗೆ ಘರ್ಜನೆ ಮಾಡುತ್ತೀರಿ, ಘರ್ಜನೆಯಿಂದ ಹೇಳುತ್ತೀರಿ- ಈಗ ನಮ್ಮ ರಾಜ್ಯವು ಬರುವುದಿದೆ. ಇಂತಹ ಬಹದ್ದೂರರಲ್ಲವೆ. ಪಂಜಾಬಿನವರೂ ಸಹ ಬಹದ್ದೂರರಾಗಿದ್ದಾರೆ. ಮಹಾರಾಷ್ಟ್ರದವರೂ ಮಹಾನರಿದ್ದಾರೆ ಮತ್ತು ಕರ್ನಾಟಕದವರ ವಿಶೇಷತೆಯಾಗಿದೆ- ಮಹಾನ್ ಭಾವನೆ. ಭಾವನೆಯ ಕಾರಣದಿಂದ ಭಾವನೆಯ ಫಲವು ಸಹಜವಾಗಿ ಸಿಗುತ್ತಿರುತ್ತದೆ. ಕರ್ನಾಟಕದವರು ಭಾವನೆಯ ಮೂಲಕ ಮಹಾನ್ ಫಲವನ್ನು ಸೇವಿಸುವವರು ಆದ್ದರಿಂದ ಸದಾ ಖುಷಿಯಲ್ಲಿ ನರ್ತಿಸುತ್ತಿರುತ್ತಾರೆ. ಅಂದಮೇಲೆ ಖುಶಿಯ ಫಲವನ್ನು ಸೇವಿಸುವ ಅದೃಷ್ಟವಂತ ಆತ್ಮರಾಗಿದ್ದಾರೆ. ಹಾಗಾದರೆ ಮಹಾರಾಷ್ಟ್ರದವರು ಮಹಾನ್ ಸಂಕಲ್ಪವುಳ್ಳವರು ಮತ್ತು ಪಂಜಾಬಿನವರು ಮಹಾನ್ ಘರ್ಜನೆ ಮಾಡುವ ಮಹಾನ್ ರಾಜ್ಯಾಧಿಕಾರಿಗಳು ಮತ್ತು ಕರ್ನಾಟಕದವರು ಮಹಾನ್ ಫಲವನ್ನು ಅನುಭವಿಸುವವರು. ಮೂವರೂ ಮಹಾನರಾಗಿ ಬಿಟ್ಟರಲ್ಲವೆ.

ಮಹಾರಾಷ್ಟ್ರ ಅರ್ಥಾತ್ ಎಲ್ಲದರಲ್ಲಿ ಮಹಾನ್. ಪ್ರತೀ ಸಂಕಲ್ಪ ಮಹಾನ್, ಸ್ವರೂಪವು ಮಹಾನ್, ಕರ್ಮವು ಮಹಾನ್, ಸೇವೆಯೂ ಮಹಾನ್. ಎಲ್ಲದರಲ್ಲಿ ಮಹಾನ್. ಅಂದಮೇಲೆ ಇಂದು ಮಹಾನತೆಯ ಮೂರು ನದಿಗಳು ಸೇರಿದೆ. ಮಹಾನ್ ನದಿಗಳ ಮಿಲನವಾಗಿ ಬಿಟ್ಟಿದೆಯಲ್ಲವೆ. ಮಹಾನ್ ನದಿಗಳ ಮಹಾ ಸಾಗರನೊಂದಿಗೆ ಮಿಲನವಾಗಿದೆ. ಆದ್ದರಿಂದ ಮಿಲನದ ಮಹಾಸಭೆಯಲ್ಲಿ ಬಂದಿದ್ದಾರೆ. ಇಂದು ಮಹಾಸಭೆಯನ್ನೂ ಆಚರಿಸಿದರಲ್ಲವೆ. ಒಳ್ಳೆಯದು. ಹೀಗೆ ಸದಾ ಸಮರ್ಥ, ಸದಾ ಪ್ರತೀ ಮಹಾವಾಕ್ಯದ ಸ್ವರೂಪರಾಗುವ, ಬಹಳ ಕಾಲದ ಸಮರ್ಥ ಆತ್ಮರಿಗೆ ಸಮರ್ಥರನ್ನಾಗಿ ಮಾಡುವಂತಹ ಬಾಪ್ದಾದಾರವರ ಸರ್ವ ಸಮರ್ಥತೆಯಿಂದ ಸಂಪನ್ನವಾದ ನೆನಪು-ಪ್ರೀತಿ ಹಾಗೂ ನಮಸ್ತೆ.

ದಾದಿಯವರೊಂದಿಗೆ:- ಈ ಮಹಾಮಂಡಲಿ ಕುಳಿತಿದೆ. ಆದಿಯಲ್ಲಿ ಓಂ ಮಂಡಲಿಯಿತ್ತು ಮತ್ತು ಅಂತ್ಯದಲ್ಲಿ ಮಹಾಮಂಡಲಿ ಆಗಿ ಬಿಟ್ಟಿದೆ. ಎಲ್ಲಾ ಮಹಾನ್ ಆತ್ಮರ ಮಂಡಲಿಯಾಗಿದೆಯಲ್ಲವೆ. ಅವರು ತನ್ನನ್ನು ಮಹಾಮಂಡಲೇಶ್ವರನೆಂದು ಕರೆಸಿಕೊಳ್ಳುತ್ತಾರೆ ಮತ್ತು ತಾವು ತಮ್ಮನ್ನು ಮಹಾ ಸೇವಾಧಾರಿ ಎಂದು ಕರೆಸಿಕೊಳ್ಳುತ್ತೀರಿ. ಸೇವಾಧಾರಿ ಅರ್ಥಾತ್ ಪ್ರತೀ ಸಂಕಲ್ಪದಿಂದ ಸ್ವತಹವಾಗಿಯೇ ಸೇವೆಗೆ ನಿಮಿತ್ತರಾಗಿರುವವರು. ಪ್ರತೀ ಸಂಕಲ್ಪದ ಮೂಲಕ ಸೇವೆಯಾಗುತ್ತಿರುತ್ತದೆ. ಯಾರು ಸ್ವತಹ ಯೋಗಿ ಆಗಿದ್ದಾರೆ ಅವರು ಸ್ವತಹ ಸೇವಾಧಾರಿ ಆಗಿದ್ದಾರೆ. ಕೇವಲ ಪರಿಶೀಲನೆ ಮಾಡಿಕೊಳ್ಳಿರಿ- ನನ್ನಿಂದ ಸ್ವತಹ ಸೇವೆಯಾಗುತ್ತಿರುತ್ತದೆಯೇ? ಅನುಭವ ಮಾಡುತ್ತೀರಿ- ಸೇವೆಯಿಲ್ಲದೆ ಸೆಕೆಂಡ್ ಮತ್ತು ಸಂಕಲ್ಪವೂ ಸಹ ಹಾಗೆಯೇ ವ್ಯರ್ಥವಾಗಲು ಸಾಧ್ಯವಿಲ್ಲ. ನಡೆಯುತ್ತಾ-ಸುತ್ತಾಡುತ್ತಾ ಪ್ರತಿಯೊಂದು ಕಾರ್ಯವನ್ನೂ ಮಾಡುತ್ತಾ ಸೇವೆಯು ಶ್ವಾಸ-ಶ್ವಾಸ, ಸೆಕೆಂಡ್-ಸೆಕೆಂಡಿನಲ್ಲಿಯೂ ಸೇವೆಯು ಸಮಾವೇಶವಾಗಿದೆ, ಇವರಿಗೆ ಹೇಳಲಾಗುತ್ತದೆ- ಸ್ವತಹ ಸೇವಾಧಾರಿಗಳು. ಹೀಗಿದ್ದೀರಲ್ಲವೆ. ಈಗ ವಿಶೇಷವಾದ ಕಾರ್ಯಕ್ರಮದಿಂದ ಸೇವೆಯನ್ನು ಮಾಡುವ ಸ್ಥಿತಿಯು ಸಮಾಪ್ತಿಯಾಯಿತು. ಸ್ವತಹ ಸೇವೆಗೆ ನಿಮಿತ್ತರಾಗಿ ಬಿಟ್ಟಿರಿ. ಈಗ ಅನ್ಯರಿಗೂ ಅವಕಾಶವನ್ನು ಕೊಡಲಾಗಿದೆ. ಆ ಕಾರ್ಯಕ್ರಮಗಳನ್ನೂ ಮಾಡುತ್ತೀರಿ, ಪ್ರತ್ಯಕ್ಷದಲ್ಲಿ ಮಾಡುವಿರಿ ಆದರೆ ತಾವುಗಳ ಸೇವೆಯು ಈಗ ಸ್ವತಹ ಸೇವಾಧಾರಿಗಳದಾಗಿದೆ. ಕಾರ್ಯಕ್ರಮದ ಸಮಯದವರೆಗೆ ಅಲ್ಲ ಆದರೆ ಸದಾ ಕಾರ್ಯಕ್ರಮವಿದೆ. ಸದಾಕಾಲವೂ ಸೇವೆಯ ಸ್ಟೇಜಿನ ಮೇಲೆ ಇದ್ದೀರಿ. ಇಂತಹ ಮಂಡಲಿಯಾಗಿದೆಯಲ್ಲವೆ. ಹೇಗೆ ಶರೀರವು ಶ್ವಾಸವಿಲ್ಲದೆ ನಡೆಯಲು ಸಾಧ್ಯವಿಲ್ಲ, ಹಾಗೆಯೇ ಆತ್ಮವು ಸೇವೆಯಿಲ್ಲದೆ ಇರಲು ಸಾಧ್ಯವಿಲ್ಲ. ಈ ಶ್ವಾಸವು ಸ್ವತಹವಾಗಿ ನಡೆಯುತ್ತಲೇ ಇರುತ್ತದೆಯಲ್ಲವೆ. ಹಾಗೆಯೇ ಸೇವೆಯು ಸ್ವತಹವಾಗಿ ನಡೆಯುತ್ತದೆ. ಸೇವೆಯು ಹೇಗೆಂದರೆ ಆತ್ಮದ ಶ್ವಾಸದಂತೆ. ಹೀಗಿದೆಯಲ್ಲವೆ? ಎಷ್ಟು ಗಂಟೆಗಳು ಸೇವೆಯನ್ನು ಮಾಡಿದಿರಿ, ಈ ಲೆಕ್ಕವನ್ನು ತೆಗೆಯಬಹುದೇ? ಧರ್ಮ ಕರ್ಮವೇ ಸೇವೆಯಾಗಿದೆ. ನಡೆಯುವುದೂ ಸೇವೆ, ಮಾತನಾಡುವುದೂ ಸೇವೆ, ಮಾಡುವುದೂ ಸೇವೆ ಅಂದಮೇಲೆ ಸ್ವತಹ ಸೇವಾಧಾರಿ, ಸದಾ ಸೇವಾಧಾರಿ. ಯಾವುದೇ ಸಂಕಲ್ಪವು ಉತ್ಪನ್ನವಾಗುತ್ತದೆ, ಅದರಲ್ಲಿ ಸೇವೆಯು ಸಮಾವೇಶವಾಗಿದೆ. ಪ್ರತೀ ಮಾತಿನಲ್ಲಿ ಸೇವೆಯು ಸಮಾವೇಶವಾಗಿದೆ ಏಕೆಂದರೆ ವ್ಯರ್ಥವಂತು ಸಮಾಪ್ತಿಯಾಗಿ ಬಿಟ್ಟಿತು. ಅಂದಮೇಲೆ ಸಮರ್ಥ ಎಂದರೆ ಸೇವೆ. ಇಂತಹವರಿಗೆ ಮಹಾಮಂಡಲಿಯವರು ಮಹಾನ್ ಆತ್ಮರೆಂದು ಹೇಳಲಾಗುತ್ತದೆ. ಒಳ್ಳೆಯದು.

ತಮ್ಮ ಎಲ್ಲಾ ಜೊತೆಗಾರರೂ ಸಹ ಬಾಪ್ದಾದಾರವರ ಸಮ್ಮುಖದಲ್ಲಿದ್ದಾರೆ. ಓಂ ಮಂಡಲಿಯವರು ಎಲ್ಲಾ ಮಹಾ ಮಂಡಲಿಯವರು ಮುಂತಾದವರ ಸೇವಾಧಾರಿ, ಸದಾಕಾಲದ ಸೇವಾಧಾರಿ ಆಗಿದ್ದಾರೆ. ಬಾಪ್ದಾದಾರವರ ಮುಂದೆ ಎಲ್ಲರೂ ಮಹಾಮಂಡಲಿಯ ಮಹಾನ್ ಆತ್ಮರಾಗಿದ್ದಾರೆ. ನಂತರ ಪ್ರತಿಜ್ಞೆಯನ್ನು ಮಾಡುವವರಂತು ಮಹಾನ್ ಮಂಡಲಿಯವರೇ ಆಗಿದ್ದಾರಲ್ಲವೆ. ಪ್ರತಿಜ್ಞೆಯ ಹೆಜ್ಜೆಯನ್ನಿಟ್ಟಿದ್ದೀರಲ್ಲವೆ. ಯೋಚನೆ ಮಾಡದೇ, ಸಂಕಲ್ಪವನ್ನು ಮಾಡುವ ಧೃಡ ಸಂಕಲ್ಪ ಮಾಡಿದಿರಿ ಮತ್ತು ನಿಮಿತ್ತರಾಗಿ ಬಿಟ್ಟಿರಿ. ಇವರಿಗೆ ಮಹಾನ್ ಆತ್ಮರೆಂದು ಹೇಳಲಾಗುತ್ತದೆ. ಮಹಾನ್ ಕರ್ತವ್ಯದ ನಿಮಿತ್ತರಾಗಿದ್ದೀರಿ. ಉದಾಹರಣೆಯಂತು ಆದಿರಿ. ಉದಾಹರಣೆಯನ್ನೂ ನೋಡದೆ ವಿಶ್ವಕ್ಕಾಗಿ ಉದಾಹರಣೆ ಆಗಿ ಬಿಟ್ಟಿರಿ. ತುರಂತ್ ದಾನ್ ಮಹಾ ಪುಣ್ಯ. ಇಂತಹ ಮಹಾನ್ ಆತ್ಮರಾಗಿದ್ದೀರಿ. ಒಳ್ಳೆಯದು.

ಪಾರ್ಟಿಯೊಂದಿಗೆ:- 1. ಮಹಾರಾಷ್ಟ್ರ ಹಾಗೂ ಪಂಜಾಬ್ ಗ್ರೂಪ್
ತಾವೆಲ್ಲಾ ಮಕ್ಕಳು ನಿರ್ಭಯರಾಗಿದ್ದೀರಲ್ಲವೆ. ಏಕೆ? ಏಕೆಂದರೆ ತಾವು ಸದಾ ನಿರ್ವೈರರಾಗಿದ್ದೀರಿ. ತಮಗೆ ಯಾರೊಂದಿಗೂ ವೈರವಿಲ್ಲ. ಎಲ್ಲಾಆತ್ಮರ ಪ್ರತಿ ಸಹೋದರ-ಸಹೋದರನ ಶುಭ ಭಾವನೆ, ಶುಭ ಕಾಮನೆಯಿದೆ. ಇಂತಹ ಶುಭ ಭಾವನೆ, ಕಾಮನೆಯಿರುವ ಆತ್ಮರು ಸದಾ ನಿರ್ಭಯರಾಗಿರುತ್ತಾರೆ. ಭಯಭೀತರಾಗುವವರಲ್ಲವೆ. ಸ್ವಯಂ ಯೋಗಯುಕ್ತ ಸ್ಥಿತಿಯಲ್ಲಿ ಸ್ಥಿತರಾಗಿರುತ್ತೀರೆಂದರೆ, ಎಂತಹ ಪರಿಸ್ಥಿತಿಯಲ್ಲಿಯೂ ಅವಶ್ಯವಾಗಿ ಸುರಕ್ಷಿತವಾಗಿರುತ್ತೀರಿ. ಅಂದಮೇಲೆ ಸದಾ ಸುರಕ್ಷಿತವಾಗಿರುವವರಲ್ಲವೆ? ತಂದೆಯ ಛತ್ರಛಾಯೆಯಲ್ಲಿರುವವರು ಸದಾ ಸೇಫ್ ಆಗಿರುತ್ತಾರೆ. ಛತ್ರಛಾಯೆಯಿಂದ ಹೊರಗೆ ಬಂದಿರೆಂದರೆ ಮತ್ತೆ ಭಯವಿದೆ. ಛತ್ರಛಾಯೆಯೊಳಗೆ ನಿರ್ಭಯವಿದೆ. ಯಾರೇನಾದರೂ ಮಾಡಲಿ ಆದರೆ ತಂದೆಯ ನೆನಪು ಒಂದು ಕೋಟೆಯಾಗಿದೆ. ಹೇಗೆ ಕೋಟೆಯೊಳಗೆ ಯಾರೂ ಸಹ ಬರಲು ಸಾಧ್ಯವಿಲ್ಲ. ಹಾಗೆಯೇ ನೆನಪಿನ ಕೋಟೆಯೊಳಗೆ ಸುರಕ್ಷತೆಯಿದೆ, ಹಲ್ಚಲ್ನಲ್ಲಿ ಅಚಲ.ಗಾಬರಿಯಾಗುವವರಲ್ಲ. ಇದು ರಿಹರ್ಸಲ್ ಆಗಿದೆ, ರಿಯಲ್ ಆಗಿರುವುದಂತು ಬೇರೆಯಿದೆ. ರಿಹರ್ಸಲ್ ಪರಿಪಕ್ವ ಮಾಡಿಸುವುದಕ್ಕಾಗಿ ಮಾಡಿಸಲಾಗುತ್ತದೆ. ಅಂದಮೇಲೆ ಪರಿಪಕ್ವವಾಗಿ ಬಿಟ್ಟಿರಾ, ಬಹದ್ದೂರರಾಗಿ ಬಿಟ್ಟಿರಾ? ತಂದೆಯೊಂದಿಗೆ ಲಗನ್ ಇದೆಯೆಂದರೆ ಎಂತಹ ಸಮಸ್ಯೆಗಳಲ್ಲಿಯೂ ತಲುಪಿ ಬಿಟ್ಟಿರಿ. ಸಮಸ್ಯಾಜೀತರಾಗಿ ಬಿಟ್ಟಿರಿ. ಲಗನ್ ನಿರ್ವಿಘ್ನರಾಗುವ ಶಕ್ತಿಯನ್ನು ಕೊಡುತ್ತದೆ. ಕೇವಲ `ನನ್ನ ಬಾಬಾ' ಅಷ್ಟೇ, ಈ ಮಹಾಮಂತ್ರವು ನೆನಪಿರಲಿ. ಇದನ್ನೇ ಮರೆತುಬಿಟ್ಟಿರಿ, ಇದೇ ನೆನಪಿದ್ದಿತೆಂದರೆ ಸದಾ ಸುರಕ್ಷಿತವಾಗಿರುತ್ತೀರಿ.

2. ಸದಾ ತಮ್ಮನ್ನು ಅಚಲ ಅಡೋಲ ಆತ್ಮರೆಂದು ಅನುಭವ ಮಾಡುತ್ತೀರಾ? ಯಾವುದೇ ಪ್ರಕಾರದ ಏರುಪೇರುಗಳು ಅಚಲ-ಅಡೋಲ ಸ್ಥಿತಿಯಲ್ಲಿ ವಿಘ್ನವನ್ನು ಹಾಕುವುದಿಲ್ಲ. ಇಂತಹ ವಿಘ್ನ ವಿನಾಶ ಅಚಲ-ಅಡೋಲ ಆತ್ಮರಾಗಿದ್ದೀರಿ. ವಿಘ್ನ ವಿನಾಶಕ ಆತ್ಮರು ಪ್ರತಿಯೊಂದು ವಿಘ್ನವನ್ನು ಹೀಗೆ ಪಾರು ಮಾಡುತ್ತಾರೆ, ಹೇಗೆಂದರೆ ವಿಘ್ನವಲ್ಲ ಅದು ಆಟವಾಗಿದೆ ಎಂಬಂತೆ. ಅಂದಮೇಲೆ ಆಟವಾಡುವುದರಲ್ಲಿ ಸದಾ ಮಜಾ ಬರುತ್ತದೆಯಲ್ಲವೆ. ಯಾವುದೇ ಪರಿಸ್ಥಿತಿಯನ್ನು ಪಾರು ಮಾಡುವುದು ಮತ್ತು ಆಟವಾಡುವುದರಲ್ಲಿ ಅಂತರವಾಗುತ್ತದೆಯಲ್ಲವೆ. ಒಂದುವೇಳೆ ವಿಘ್ನ ವಿನಾಶಕ ಆತ್ಮರಾಗಿದ್ದೀರೆಂದರೆ, ಪರಿಸ್ಥಿತಿಯು ಆಟವೆಂದು ಅನುಭವವಾಗುತ್ತದೆ. ಪರ್ವತವೂ ಸಾಸಿವೆಯ ಸಮಾನ ಅನುಭವವಾಗುತ್ತದೆ. ಇಂತಹ ವಿಘ್ನ ವಿನಾಶಕರಾಗಿದ್ದೀರಿ, ಗಾಬರಿಯಾಗುವವರಂತು ಅಲ್ಲ. ಜ್ಞಾನಪೂರ್ಣ ಆತ್ಮರು ಮುಂಚೆಯೇ ತಿಳಿದಿರುತ್ತಾರೆ- ಇದೆಲ್ಲವಂತು ಬರಲೇಬೇಕು, ಆಗಲೇಬೇಕು. ಯಾವಾಗ ಮುಂಚೆಯೇ ಗೊತ್ತಾಗುತ್ತದೆಯೆಂದರೆ ಮತ್ತ್ಯಾವುದೇ ಮಾತು ದೊಡ್ಡದೆನಿಸುವುದಿಲ್ಲ. ಇದ್ದಕ್ಕಿದ್ದಂತೆ ಏನೇ ಆಗುತ್ತದೆಯೆಂದರೆ ಚಿಕ್ಕ ಮಾತೂ ದೊಡ್ಡದೆನಿಸುತ್ತದೆ, ಮುಂಚೆಯೇ ಗೊತ್ತಿರುತ್ತದೆಯೆಂದರೆ ದೊಡ್ಡ ಮಾತು ಚಿಕ್ಕದೆನಿಸುತ್ತದೆ. ತಾವೆಲ್ಲರೂ ಜ್ಞಾನ ಪೂರ್ಣರಾಗಿದ್ದೀರಲ್ಲವೆ. ಹಾಗೆ ನೋಡಿದಾಗ ಜ್ಞಾನಪೂರ್ಣರಾಗಿದ್ದೀರಿ ಆದರೆ ಯಾವಾಗ ಪರಿಸ್ಥಿತಿಗಳ ಸಮಯವಿರುತ್ತದೆ, ಆ ಸಮಯದಲ್ಲಿ ಜ್ಞಾನ ಪೂರ್ಣನ ಸ್ಥಿತಿಯನ್ನು ಮರೆಯಬಾರದು, ಅನೇಕ ಬಾರಿ ಮಾಡಿರುವುದೀಗ ಪುನರಾವರ್ತನೆ ಮಾಡುತ್ತಿದ್ದೀರಿ. ಯಾವಾಗ ಹೊಸದೇನಲ್ಲ ಅಂದಮೇಲೆ ಎಲ್ಲವೂ ಸಹಜವಿದೆ. ತಾವೆಲ್ಲರೂ ಕೋಟೆಯ ಪರಿಪಕ್ವವಾದ ಇಟ್ಟಿಗೆಯಾಗಿದ್ದೀರಿ. ಒಂದೊಂದು ಇಟ್ಟಿಗೆಯ ಮಹತ್ವಿಕೆಯಿದೆ. ಒಂದು ಇಟ್ಟಿಗೆಯು ಅಲುಗಾಡಿತೆಂದರೆ ಇಡೀ ಗೋಡೆಯೇ ಅಲುಗಾಡಿ ಬಿಡುತ್ತದೆ. ಅಂದಮೇಲೆ ತಾವು ಇಟ್ಟಿಗೆಗಳು ಅಚಲರಾಗಿದ್ದೀರಿ, ವಿಘ್ನ ವಿನಾಶಕ ಆತ್ಮರಿಗೆ ಬಾಪ್ದಾದಾರವರು ಪ್ರತಿನಿತ್ಯವೂ ಶುಭಾಷಯಗಳನ್ನು ಕೊಡುತ್ತಾರೆ. ಇಂತಹ ಮಕ್ಕಳೇ ತಂದೆಯ ಶುಭಾಷಯಗಳ ಅಧಿಕಾರಿಯಾಗಿದ್ದಾರೆ. ಇಂತಹ ಅಚಲ-ಅಡೋಲ ಮಕ್ಕಳನ್ನು ನೋಡುತ್ತಾ ತಂದೆಯವರು ಹಾಗೂ ಇಡೀ ಪರಿವಾರವು ಖುಷಿಯಾಗುತ್ತದೆ. ಒಳ್ಳೆಯದು.

ವರದಾನ:
ಸಮರ್ಥ ಸ್ಥಿತಿಯ ಸ್ವಿಚ್ ಆನ್ ಮಾಡಿಕೊಂಡು ವ್ಯರ್ಥದ ಅಂಧಕಾರವನ್ನು ಸಮಾಪ್ತಿಗೊಳಿಸುವಂತಹ ಅವ್ಯಕ್ತ ಫರಿಶ್ತಾ ಭವ.

ಹೇಗೆ ಸ್ಥೂಲ ಲೈಟ್ನ ಸ್ವಿಚ್ ಆನ್ ಮಾಡುವುದರಿಂದ ಅಂಧಕಾರವು ಸಮಾಪ್ತಿಯಾಗಿ ಬಿಡುತ್ತದೆ. ಹಾಗೆಯೇ ಸಮರ್ಥ ಸ್ಥಿತಿಯಾಗಿದೆ- ಸ್ವಿಚ್. ಈ ಸ್ವಿಚ್ನ್ನು ಆನ್ ಮಾಡುತ್ತೀರೆಂದರೆ ವ್ಯರ್ಥದ ಅಂಧಕಾರವು ಸಮಾಪ್ತಿಯಾಗಿ ಬಿಡುತ್ತದೆ. ಒಂದೊಂದು ವ್ಯರ್ಥ ಸಂಕಲ್ಪವನ್ನು ಸಮಾಪ್ತಿ ಮಾಡುವ ಪರಿಶ್ರಮದಿಂದ ಮುಕ್ತರಾಗಿ ಬಿಡುತ್ತೀರಿ. ಯಾವಾಗ ಸ್ಥಿತಿಯು ಸಮರ್ಥವಾಗಿರುತ್ತದೆಯೆಂದರೆ ಮಹಾದಾನಿ-ವರದಾನಿ ಆಗಿಬಿಡುತ್ತೀರಿ. ಏಕೆಂದರೆ ದಾತಾನ ಅರ್ಥವೇ ಆಗಿದೆ- ಸಮರ್ಥ. ಸಮರ್ಥರೇ ಕೊಡಲು ಸಾಧ್ಯವಾಗುವುದು ಮತ್ತು ಎಲ್ಲಿ ಸಮರ್ಥತೆಯಿದೆ ಅಲ್ಲಿ ವ್ಯರ್ಥವು ಸಮಾಪ್ತಿಯಾಗಿ ಬಿಡುತ್ತದೆ. ಅಂದಮೇಲೆ ಅವ್ಯಕ್ತ ಫರಿಶ್ತೆಗಳ ಶ್ರೇಷ್ಠ ಕಾರ್ಯವು ಇದೇ ಆಗಿದೆ.

ಸ್ಲೋಗನ್:
ಸತ್ಯತೆಯ ಆಧಾರದಿಂದ ಸರ್ವ ಆತ್ಮರ ಹೃದಯದ ಆಶೀರ್ವಾದಗಳನ್ನು ಪ್ರಾಪ್ತಿ ಮಾಡಿಕೊಳ್ಳುವವರೇ ಭಾಗ್ಯವಂತ ಆತ್ಮರಾಗಿದ್ದಾರೆ.