23.01.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಸದಾ
ಇದೇ ನಶೆಯಲ್ಲಿರಿ, ಭಗವಂತ ನಮಗೆ ಓದಿಸುತ್ತಾರೆ, ನಮ್ಮ ಈ ವಿದ್ಯಾರ್ಥಿ ಜೀವನ ಉತ್ತಮವಾಗಿದೆ, ನಮ್ಮ
ಮೇಲೆ ಬೃಹಸ್ಪತಿ ದೆಶೆಯಿದೆ”
ಪ್ರಶ್ನೆ:
ಯಾವ ಮಕ್ಕಳಿಗೆ
ಎಲ್ಲರ ಪ್ರೀತಿಯು ಪ್ರಾಪ್ತಿಯಾಗುತ್ತದೆ?
ಉತ್ತರ:
ಯಾರು ಅನೇಕರ
ಕಲ್ಯಾಣಕ್ಕೆ ನಿಮಿತ್ತರಾಗುವರೋ, ಯಾರ ಕಲ್ಯಾಣವಾಗಿದೆಯೋ ಅವರು ತಾವಂತೂ ನಮ್ಮ ತಾಯಿಯಾಗಿದ್ದೀರಿ
ಎಂದು ಹೇಳತೊಡಗುತ್ತಾರೆ. ಅಂದಾಗ ತಮ್ಮನ್ನು ತಾವು ನೋಡಿಕೊಳ್ಳಿರಿ - ನಾವು ಎಷ್ಟು ಜನರ ಕಲ್ಯಾಣ
ಮಾಡುತ್ತೇವೆ? ಎಷ್ಟು ಆತ್ಮರಿಗೆ ತಂದೆಯ ಸಂದೇಶ ನೀಡುತ್ತೇವೆ ಎಂದು. ತಂದೆಯೂ ಸಹ
ಸಂದೇಶವಾಹಕನಾಗಿದ್ದಾರೆ. ನೀವು ಮಕ್ಕಳೂ ಸಹ ತಂದೆಯ ಸಂದೇಶ ಕೊಡಬೇಕಾಗಿದೆ. ಎಲ್ಲರಿಗೂ ತಿಳಿಸಿರಿ,
ನಮ್ಮೆಲ್ಲರಿಗೆ ಇಬ್ಬರು ತಂದೆಯಿರಿದ್ದಾರೆ. ಬೇಹದ್ದಿನ ತಂದೆ ಹಾಗೂ ಆಸ್ತಿಯನ್ನು ನೆನಪು ಮಾಡಿರಿ.
ಗೀತೆ:
ನೀವು ಪ್ರೀತಿಯ
ಸಾಗರನಾಗಿದ್ದೀರಿ................
ಓಂ ಶಾಂತಿ.
ಆತ್ಮಿಕ ತಂದೆಯು
ಕುಳಿತು ಆತ್ಮಿಕ ಮಕ್ಕಳಿಗೆ ಪ್ರತಿನಿತ್ಯವೂ ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಯಾಗಿ
ಕುಳಿತುಕೊಳ್ಳಿರಿ. ಬುದ್ಧಿಯು ಹೊರಗಡೆ ಅಲೆದಾಡದಿರಲಿ, ಒಬ್ಬ ತಂದೆಯನ್ನೇ ನೆನಪು ಮಾಡಿರಿ. ಅವರೇ
ಜ್ಞಾನಸಾಗರ, ಪ್ರೇಮಸಾಗರನಾಗಿದ್ದಾರೆ. ಒಂದು ಜ್ಞಾನದ ಹನಿ ಸಿಕ್ಕಿದರೂ ಸಾಕು ಎಂದು ಹೇಳುತ್ತಾರೆ
ಬಂದರು. ಈಗ ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಆತ್ಮಿಕ ತಂದೆಯಾದ ನನ್ನನ್ನು
ನೆನಪು ಮಾಡಿರಿ. ಆಗ ನಿಮಗೆ ಈ ಆಸ್ತಿಯು ಸಿಗುವುದು, ಅಮರಪುರಿ ವೈಕುಂಠದಲ್ಲಿ ಹೋಗುವಿರಿ ಬಾಕಿ ಈ
ಸಮಯದಲ್ಲಿ ತಲೆಯ ಮೇಲಿರುವ ಪಾಪದ ಹೊರೆಯನ್ನು ಸಮಾಪ್ತಿ ಮಾಡಿಕೊಳ್ಳಿರಿ. ನಿಯಮ ಪ್ರಮಾಣ
ವಿವೇಕದನುಸಾರ ನೀವು ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ. ಯಾರು ಶ್ರೇಷ್ಠಾತಿ ಶ್ರೇಷ್ಠರಾಗಿದ್ದರೋ
ಅವರೇ ಈಗ ಅಂತ್ಯದಲ್ಲಿ ಕೆಳಗಡೆ ತಪಸ್ಸು ಮಾಡುತ್ತಿದ್ದಾರೆ. ರಾಜಯೋಗ ತಪಸ್ಸನ್ನು ತಂದೆಯೊಬ್ಬರೇ
ಕಲಿಸುತ್ತಾರೆ. ಹಠಯೋಗವು ಸಂಪೂರ್ಣವಾಗಿ ಬೇರೆಯಾಗಿದೆ, ಅದು ಹದ್ದಿನದು ಇದು ಬೇಹದ್ದಿನದು. ಅದು
ನಿವೃತ್ತಿ ಮಾರ್ಗ, ಇದು ಪ್ರವೃತ್ತಿ ಮಾರ್ಗವಾಗಿದೆ. ತಂದೆ ತಿಳಿಸುತ್ತಾರೆ ನೀವು ವಿಶ್ವದ
ಮಾಲೀಕರಾಗಿದ್ದಿರಿ, ಯಥಾ ರಾಜ-ರಾಣಿ ತಥಾ ಪ್ರಜಾ...... ಪ್ರವೃತ್ತಿ ಮಾರ್ಗದಲ್ಲಿ ಪವಿತ್ರ
ದೇವಿ-ದೇವತೆಗಳಿದ್ದರು ನಂತರ ದೇವತೆಗಳು ವಾಮ ಮಾರ್ಗದಲ್ಲಿ ಹೋದರು. ಆ ಚಿತ್ರಗಳೂ ಇವೆ. ಬಹಳ ಕೊಳಕು
ಚಿತ್ರಗಳನ್ನು ಮಾಡಿದ್ದಾರೆ, ನೋಡುವುದಕ್ಕೂ ನಾಚಿಕೆಯಾಗುತ್ತದೆ ಏಕೆಂದರೆ ಬುದ್ಧಿಯೇ ಭ್ರಷ್ಟವಾಗಿ
ಬಿಡುತ್ತದೆ. ನೀವು ಪ್ರೀತಿಯ ಸಾಗರನಾಗಿದ್ದೀರಿ ಎಂದು ತಂದೆಯದೇ ಗಾಯನವಿದೆ. ಹಾಗೆ ನೋಡಿದರೆ
ಪ್ರೀತಿಯ ಹನಿ ಇರುವುದಿಲ್ಲ, ವಾಸ್ತವದಲ್ಲಿ ಇದು ಜ್ಞಾನದ ಹನಿಯ ಮಾತಾಗಿದೆ. ನೀವು ತಂದೆಯನ್ನರಿತು
ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಲು ಬರುತ್ತೀರಿ. ತಂದೆಯು ಸದ್ಗತಿಯ ಜ್ಞಾನವನ್ನೇ ಕೊಡುತ್ತಾರೆ.
ಇದನ್ನು ಸ್ವಲ್ಪ ಕೇಳಿದರೂ ಸಹ ಸದ್ಗತಿಯಲ್ಲಿ ಬಂದು ಬಿಡುವರು. ನೀವೀಗ ಇಲ್ಲಿಂದ ಹೊಸ ಪ್ರಪಂಚಕ್ಕೆ
ಹೋಗಬೇಕಾಗಿದೆ. ನಾವು ವೈಕುಂಠದ ಮಾಲೀಕರಾಗುತ್ತೇವೆಂದು ನಿಮಗೆ ಗೊತ್ತಿದೆ. ಈ ಸಮಯದಲ್ಲಿ ಇಡೀ
ವಿಶ್ವದಲ್ಲಿ ರಾವಣ ರಾಜ್ಯವಿದೆ. ತಂದೆಯು ವಿಶ್ವದ ರಾಜ್ಯ ಭಾಗ್ಯವನ್ನು ಕೊಡಲು ಬಂದಿದ್ದಾರೆ.
ನೀವೆಲ್ಲರೂ ವಿಶ್ವದ ಮಾಲೀಕರಾಗಿದ್ದಿರಿ, ಇಲ್ಲಿಯವರೆಗೂ ಆ ಚಿತ್ರಗಳಿವೆ ಆದರೆ ಲಕ್ಷಾಂತರ ವರ್ಷಗಳ
ಮಾತಿಲ್ಲ. ಲಕ್ಷಾಂತರ ವರ್ಷಗಳೆಂದು ಹೇಳುವುದು ತಪ್ಪಾಗಿದೆ. ತಂದೆಯನ್ನೇ ಸದಾ ಸತ್ಯ ಎಂದು
ಹೇಳಲಾಗುತ್ತದೆ. ತಂದೆಯ ಮುಖಾಂತರ ಇಡೀ ವಿಶ್ವವೇ ಸತ್ಯ ಖಂಡವಾಗುತ್ತದೆ. ಈಗ ಅಸತ್ಯ ಖಂಡವಾಗಿದೆ.
ಈಗ ನೀವು ಮಕ್ಕಳು ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೀರಿ ಆದರೆ ಇದೂ ಸಹ ಡ್ರಾಮಾದಲ್ಲಿ
ನಿಶ್ಚಿತವಾಗಿದೆ. ಯಾರು ಜ್ಞಾನವನ್ನು ಕೇಳುತ್ತಾ-ಕೇಳುತ್ತಾ ಆಶ್ಚರ್ಯವಾಗಿ ಕೇಳಿ ಅನ್ಯರಿಗೂ ತಿಳಿಸಿ,
ನಂತರ ಬಿಟ್ಟು ಹೋಗುವರೋ ಅಂತಹವರನ್ನು ನೋಡಿ ತಂದೆಯು ಹೇಳುತ್ತಾರೆ - ಓಹೋ ಮಾಯೆ ನೀನು ಎಷ್ಟು
ಪ್ರಬಲವಾಗಿದ್ದೀಯೇ, ತಂದೆಯಿಂದಲೂ ನೀನು ವಿಮುಖರನ್ನಾಗಿ ಮಾಡಿಸುತ್ತೀಯಾ? ಅರ್ಧ ಕಲ್ಪದವರೆಗೆ
ಮಾಯೆಯ ರಾಜ್ಯ ಮಾಡುವ ಕಾರಣ ಅದೇಕೆ ಪ್ರಬಲನಾಗಿರುವುದಿಲ್ಲ. ರಾವಣನೆಂದರೆ ಏನು ಎಂಬುದನ್ನು ನೀವೀಗ
ತಿಳಿದುಕೊಂಡಿದ್ದೀರಿ. ಇಲ್ಲಿಯೂ ಕೆಲವು ಮಕ್ಕಳು ಕೆಲವರು ಬುದ್ಧಿವಂತರು, ಕೆಲವರು
ಬುದ್ಧಿಹೀನರಾಗಿದ್ದಾರೆ. ಈಗ ನಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ. ಆದ್ದರಿಂದ ನಾವು ಸ್ವರ್ಗದಲ್ಲಿ
ಹೋಗುವ ಪುರುಷಾರ್ಥ ಮಾಡುತ್ತಿದ್ದೇವೆ ಎಂದು ನಿಮಗೆ ತಿಳಿದಿದೆ. ಮನುಷ್ಯರು ಶರೀರ ಬಿಟ್ಟರೆ ಅವರೇನು
ಸ್ವರ್ಗದಲ್ಲಿ ಹೋಗುವ ಪುರುಷಾರ್ಥ ಮಾಡುವುದಿಲ್ಲ. ಸ್ವರ್ಗಕ್ಕೆ ಹೋದರೆಂದು ಹಾಗೆಯೇ ಹೇಳಿ
ಬಿಡುತ್ತಾರೆ. ನಿಮಗೆ ಗೊತ್ತಿದೆ - ನಿಜವಾಗಿಯೂ ಸ್ವರ್ಗದಲ್ಲಿ ಹೋಗುವ ಪುರುಷಾರ್ಥವನ್ನು ನಾವು
ಮಾಡುತ್ತಿದ್ದೇವೆ ಅಥವಾ ಸ್ವರ್ಗದ ಮಾಲೀಕರಾಗುವ ಪುರುಷಾರ್ಥ ಮಾಡುತ್ತಿದ್ದೇವೆ. ಇವರು ಸ್ವರ್ಗಕ್ಕೆ
ಹೋಗುತ್ತಿದ್ದಾರೆಂದು ಯಾರೂ ಹೇಳುವುದಿಲ್ಲ, ಹಾಗೆ ಹೇಳಿದರೆ ಇದೇನು ಹೇಳುತ್ತೀರಿ ಸುಮ್ಮನಿರಿ,
ಮನುಷ್ಯರಂತೂ ಹದ್ದಿನ ಮಾತುಗಳನ್ನೇ ತಿಳಿಸುತ್ತಾರೆ. ತಂದೆಯು ನಮಗೆ ಬೇಹದ್ದಿನ ಮಾತುಗಳನ್ನು
ತಿಳಿಸುತ್ತಾರೆ. ನೀವು ಮಕ್ಕಳು ಬಹಳ ಪುರುಷಾರ್ಥ ಮಾಡಬೇಕು, ಬಹಳ ನಶೆಯೇರಬೇಕಾಗಿದೆ. ಯಾರು ಕಲ್ಪದ
ಮೊದಲು ಪುರುಷಾರ್ಥ ಮಾಡಿದ್ದರೋ, ಯಾರು ಪದವಿಯನ್ನು ಪಡೆದಿದ್ದರೋ ಅವರೇ ಪಡೆಯುವರು. ಅನೇಕ ಬಾರಿ
ನೀವು ಮಕ್ಕಳು ಮಾಯೆಯ ಮೇಲೆ ಜಯ ಗಳಿಸಿದ್ದಿರಿ, ಮತ್ತೆ ನೀವು ಸೋಲನ್ನೂ ಅನುಭವಿಸಿದ್ದೀರಿ. ಇದೂ ಸಹ
ಡ್ರಾಮಾದಲ್ಲಿ ಮಾಡಲ್ಪಟ್ಟಿದೆ. ನೀವೀಗ ಮೃತ್ಯು ಲೋಕದಿಂದ ಅಮರಲೋಕಕ್ಕೆ ಹೋಗುತ್ತಿದ್ದೀರಿ.
ಆದ್ದರಿಂದ ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ವಿದ್ಯಾರ್ಥಿ ಜೀವನವು ಅತ್ಯುತ್ತಮವಾಗಿದೆ. ಈ
ಸಮಯದಲ್ಲಿ ನಿಮ್ಮದು ಶ್ರೇಷ್ಠ ಜೀವನವಾಗಿದೆ, ಇದನ್ನು ಯಾವ ಮನುಷ್ಯರೂ ತಿಳಿದುಕೊಂಡಿಲ್ಲ. ಸ್ವಯಂ
ಭಗವಂತನೇ ಬಂದು ಓದಿಸುತ್ತಾರೆ ಅಂದಮೇಲೆ ಈ ವಿದ್ಯಾರ್ಥಿ ಜೀವನವು ಶ್ರೇಷ್ಠ ಜೀವನವಾಗಿದೆ. ಆತ್ಮವೇ
ಓದಿಸುತ್ತದೆ ನಂತರ ಇವರ ಹೆಸರು ಇಂತಹದ್ದು ಎಂದು ಹೇಳುತ್ತಾರೆ. ಆತ್ಮವೇ ಶಿಕ್ಷಕನಾಗಿದೆಯಲ್ಲವೆ,
ಆತ್ಮವೇ ಕೇಳಿಸಿಕೊಂಡು ಧಾರಣೆ ಮಾಡುತ್ತದೆ, ಆತ್ಮವೇ ಕೇಳುತ್ತದೆ ಆದರೆ ದೇಹಾಭಿಮಾನದ ಕಾರಣ ಅರ್ಥ
ಮಾಡಿಕೊಳ್ಳುವುದಿಲ್ಲ. ನಾವಾತ್ಮರಿಗೆ ಈ ಶರೀರವು ಸಿಕ್ಕಿದೆ. ಈಗ ಈ ಶರೀರದ ವೃದ್ಧಾವಸ್ಥೆಯಾಗಿದೆ
ಎಂದು ಸತ್ಯಯುಗದಲ್ಲಿ ತಿಳಿದುಕೊಳ್ಳುತ್ತಾರೆ. ನಾವೀಗ ಈ ಹಳೆಯ ವಸ್ತ್ರವನ್ನು ಬಿಟ್ಟು ಹೊಸದನ್ನು
ತೆಗೆದುಕೊಳ್ಳುತ್ತೇವೆಂದು ತಕ್ಞಣ ಸಾಕ್ಷಾತ್ಕಾರವಾಗುತ್ತದೆ. ಭ್ರಮರಿಯ ಉದಾಹರಣೆಯೂ ಈಗಿನದ್ದೇ
ಆಗಿದೆ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಬ್ರಾಹ್ಮಣಿಯರಾಗಿದ್ದೇವೆ. ಡ್ರಾಮಾನುಸಾರ ಯಾರೆಲ್ಲರೂ
ನಿಮ್ಮ ಬಳಿ ಬರುವರೋ ಅವರಿಗೆ ಜ್ಞಾನದ ಧ್ವನಿ ಮಾಡುತ್ತೀರಿ. ಅವರಲ್ಲಿಯೂ ಕೆಲವರು ಕಚ್ಚಾ ಆಗಿಯೇ
ಉಳಿದುಕೊಳ್ಳುತ್ತಾರೆ. ಸನ್ಯಾಸಿಗಳು ಈ ಉದಾಹರಣೆಯನ್ನು ಕೊಡಲು ಸಾಧ್ಯವಿಲ್ಲ. ಅವರು ಅನ್ಯರನ್ನು
ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವುದಿಲ್ಲ. ನಿಮ್ಮ ಬಳಿಯಂತೂ ಗುರಿ-ಧ್ಯೇಯವಿದೆ, ಈ ಸತ್ಯ ನಾರಾಯಣನ
ಕಥೆ, ಅಮರ ಕಥೆ...... ಇದೆಲ್ಲವೂ ನಿಮ್ಮದೇ ಆಗಿದೆ. ತಂದೆಯೊಬ್ಬರೇ ಸತ್ಯವನ್ನು ತಿಳಿಸುತ್ತಾರೆ.
ಉಳಿದೆಲ್ಲವೂ ಅಸತ್ಯವಾಗಿದೆ. ಅಲ್ಲಿ ಸತ್ಯ ನಾರಾಯಣನ ಕಥೆಯನ್ನು ತಿಳಿಸಿ ಪ್ರಸಾದವನ್ನು ಕೊಡುತ್ತಾ
ಇರುತ್ತಾರೆ ಆದರೆ ಆ ಹದ್ದಿನ ಮಾತುಗಳೆಲ್ಲಿ ಈ ಬೇಹದ್ದಿನ ಮಾತುಗಳೆಲ್ಲಿ! ತಂದೆಯು ನಿಮಗೆ ಸಲಹೆ
ನೀಡುತ್ತಾರೆ. ನೀವು ಅದನ್ನು ಬರೆದಿಡುತ್ತೀರಿ, ಬಾಕಿ ಎಲ್ಲಾ ಗ್ರಂಥಗಳು, ಶಾಸ್ತ್ರಗಳು ಎಲ್ಲವೂ
ಸಮಾಪ್ತಿಯಾಗುವವು. ಯಾವ ಹಳೆಯ ವಸ್ತುಗಳೂ ಉಳಿಯುವುದಿಲ್ಲ. ಮನುಷ್ಯರು ಕಲಿಯುಗ ಇನ್ನೂ 40 ಸಾವಿರ
ವರ್ಷಗಳಿದೆಯೆಂದು ತಿಳಿದುಕೊಂಡಿರುವ ಕಾರಣ ದೊಡ್ಡ-ದೊಡ್ಡ ಬಂಗಲೆಗಳನ್ನು ಕಟ್ಟಿಸುತ್ತಿರುತ್ತಾರೆ,
ಖರ್ಚು ಮಾಡುತ್ತಿರುತ್ತಾರೆ. ಇವೆಲ್ಲವನ್ನೂ ಸಮುದ್ರ ಬಿಡುತ್ತದೆಯೇ? ಒಂದೇ ಅಲೆಯು ಇದೆಲ್ಲವನ್ನು
ನುಂಗಿ ಬಿಡುವುದು. ಈ ಬಾಂಬೆಯು ಮೊದಲೂ ಇರಲಿಲ್ಲ. ಮುಂದೆಯೂ ಇರುವುದಿಲ್ಲ. ಈಗ ನೂರು ವರ್ಷಗಳಲ್ಲಿ
ಏನೇನು ತಯಾರಾಗಿದೆ! ಮೊದಲು ವೈಸರಾಯ್ರು ನಾಲ್ಕು ಕುದುರೆಗಳ ರಥದಲ್ಲಿ ಬರುತ್ತಿದ್ದರು, ಈಗ
ಸ್ವಲ್ಪವೇ ಸಮಯದಲ್ಲಿ ಏನೇನು ಬಂದು ಬಿಟ್ಟಿದೆ. ಸ್ವರ್ಗವಂತೂ ಬಹಳ ಚಿಕ್ಕದಾಗಿರುವುದು, ನದಿಯ
ತೀರದಲ್ಲಿ ನಿಮ್ಮ ಮಹಲುಗಳಿರುವವು. ಈಗ ನೀವು ಮಕ್ಕಳ ಮೇಲೆ ಬೃಹಸ್ಪತಿ ದೆಶೆಯಿದೆ, ನಾವು ಎಷ್ಟು
ಸಾಹುಕಾರರಾಗುತ್ತೇವೆಂದು ಮಕ್ಕಳಿಗೆ ಖುಷಿಯಿರಬೇಕು. ಯಾರಾದರೂ ದಿವಾಳಿಯಾದರೆ ಅದು ರಾಹುವಿನ
ದೆಶೆಯೆಂದು ಹೇಳಲಾಗುತ್ತದೆ. ನೀವೀಗ ತಮ್ಮ ದೆಶೆಯ ಮೇಲೆ ಹರ್ಷಿತರಾಗಿರಿ. ಭಗವಂತ ತಂದೆಯೇ ನಮಗೆ
ಓದಿಸುತ್ತಾರೆ, ಹಾಗೆ ನೋಡಿದರೆ ಭಗವಂತ ಯಾರಿಗಾದರೂ ಓದಿಸುತ್ತಾರೇನು? ಆದರೆ ನೀವೀಗ
ತಿಳಿದುಕೊಂಡಿದ್ದೀರಿ - ನಮ್ಮ ಈ ವಿದ್ಯಾರ್ಥಿ ಜೀವನವು ಅತ್ಯುತ್ತಮವಾಗಿದೆ. ನಾವು ನರನಿಂದ ನಾರಾಯಣ
ವಿಶ್ವದ ಮಾಲೀಕರಾಗುತ್ತೇವೆ. ಇಲ್ಲಿ ನಾವು ರಾವಣರಾಜ್ಯದಲ್ಲಿ ಬಂದು ಸಿಕ್ಕಿಹಾಕಿಕೊಂಡಿದ್ದೇವೆ. ಈಗ
ಪುನಃ ಸುಖಧಾಮದಲ್ಲಿ ಹೋಗುತ್ತೇವೆ. ನೀವು ಸಂಗಮಯುಗಿ ಬ್ರಾಹ್ಮಣರಾಗಿದ್ದೀರಿ, ಬ್ರಹ್ಮಾರವರ
ಮುಖಾಂತರ ಸ್ಥಾಪನೆಯಾಗುತ್ತದೆ ಅಂದಮೇಲೆ ಕೇವಲ ಒಬ್ಬರಿಂದ ಆಗುವುದೇ? ಅನೇಕರಿರುವರಲ್ಲವೆ. ನೀವು
ಈಶ್ವರನ ಸೇವಾಧಾರಿಗಳಾಗುತ್ತೀರಿ. ತಂದೆಯು ಯಾವ ಸ್ವರ್ಗ ಸ್ಥಾಪನೆ ಮಾಡುವ ಸೇವೆ ಮಾಡುವರೋ ಅದರಲ್ಲಿ
ನೀವು ಸಹಯೋಗ ನೀಡುತ್ತೀರಿ. ಯಾರು ಹೆಚ್ಚು ಸಹಯೋಗಿಯಾಗುವರೋ ಅವರು ಹೆಚ್ಚು ಶ್ರೇಷ್ಠ ಪದವಿಯನ್ನು
ಪಡೆಯುವರು. ಯಾರೂ ಹಸಿವಿನಿಂದ ನರಳುವುದಿಲ್ಲ. ಇಲ್ಲಿ ಭಿಕ್ಷುಕರ ಬಳಿಯೂ ಸಹ ಹುಡುಕಿ ನೋಡಿದರೆ
ಸಾವಿರಾರು ರೂಪಾಯಿಗಳಿರುತ್ತವೆ, ಯಾರೂ ಹಸಿವಿನಿಂದ ಇರುವುದಿಲ್ಲ. ನೀವಂತೂ ತಂದೆಯ ಮಕ್ಕಳಾಗಿದ್ದೀರಿ.
ಭಲೆ ತಂದೆಯು ಬಡವರಾಗಿದ್ದರೂ ಮಕ್ಕಳಿಗೆ ಊಟ ಕೊಡುವ ತನಕ ತಾವು ಸೇವಿಸುವುದಿಲ್ಲ. ಏಕೆಂದರೆ ಮಕ್ಕಳು
ವಾರಸುಧಾರರಾಗಿರುತ್ತಾರೆ, ಅವರ ಮೇಲೆ ಪ್ರೀತಿಯಿರುತ್ತದೆ. ಸತ್ಯಯುಗದಲ್ಲಂತೂ ಬಡವರ ಮಾತಿಲ್ಲ.
ಯಥೇಚ್ಛವಾಗಿ ದವಸ-ಧಾನ್ಯಗಳಿರುತ್ತವೆ, ಬೇಹದ್ದಿನ ಶ್ರೀಮಂತಿಕೆಯಿರುತ್ತದೆ, ಅಲ್ಲಿನ
ಉಡುಗೆ-ತೊಡುಗೆಗಳು ಎಷ್ಟು ಸುಂದರವಾಗಿವೆ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಬಿಡುವು
ಸಿಕ್ಕಿದಾಗಲೆಲ್ಲಾ ಲಕ್ಷ್ಮೀ-ನಾರಾಯಣರ ಚಿತ್ರದ ಮುಂದೆ ಹೋಗಿ ಕುಳಿತುಕೊಳ್ಳಿರಿ. ರಾತ್ರಿಯ
ಸಮಯದಲ್ಲಿಯೂ ಕುಳಿತುಕೊಳ್ಳಬಹುದು. ಈ ಲಕ್ಷ್ಮೀ-ನಾರಾಯಣರನ್ನು ನೋಡುತ್ತಾ-ನೋಡುತ್ತಾ ಹಾಗೆಯೇ ಮಲಗಿ
ಬಿಡಿ. ಓಹೋ ಬಾಬಾ ನಮ್ಮನ್ನು ಈ ರೀತಿ ಮಾಡುತ್ತಾರೆ! ಹೀಗೆ ನೀವು ಅಭ್ಯಾಸ ಮಾಡಿ ನೋಡಿರಿ, ಎಷ್ಟು
ಮಜಾ ಬರುತ್ತದೆ! ನಂತರ ಬೆಳಗ್ಗೆ ಎದ್ದು ಅನುಭವವನ್ನು ತಿಳಿಸಿರಿ. ಲಕ್ಷ್ಮೀ-ನಾರಾಯಣರ ಚಿತ್ರ, ಹಾಗೂ
ಏಣಿಯ ಚಿತ್ರವು ಎಲ್ಲರ ಬಳಿಯಿರಲಿ. ನಮಗೆ ಯಾರು ಓದಿಸುತ್ತಾರೆಂದು ವಿದ್ಯಾರ್ಥಿಗಳಿಗೆ ಗೊತ್ತಿದೆ.
ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ಸ್ವರ್ಗದ ಮಾಲೀಕರಂತೂ ಆಗುವಿರಿ ಆದರೆ ಪದವಿಯ ಆಧಾರವು
ವಿದ್ಯೆಯ ಮೇಲಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಪುರುಷಾರ್ಥ ಮಾಡಿರಿ,
ನಾನಾತ್ಮನಾಗಿದ್ದೇನೆ ಶರೀರವಲ್ಲ. ನಾನು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇನೆ, ಯಾವುದೇ
ಕಷ್ಟವಿಲ್ಲ. ಮಾತೆಯರಿಗಂತೂ ಬಹಳ ಸಹಜವಾಗಿದೆ. ಪುರುಷರಾದರೂ ಉದ್ಯೋಗ-ವ್ಯವಹಾರಗಳ ಕಡೆ ಹೊರಟು
ಹೋಗುತ್ತಾರೆ. ಈ ಗುರಿ-ಧ್ಯೇಯದ ಚಿತ್ರದ ಬಗ್ಗೆ ನೀವು ಬಹಳ ಸರ್ವೀಸ್ ಮಾಡಬಹುದು. ಅನೇಕರ ಕಲ್ಯಾಣ
ಮಾಡುತ್ತೀರೆಂದರೆ ನಿಮ್ಮನ್ನು ಬಹಳ ಪ್ರೀತಿ ಮಾಡುತ್ತಾರೆ. ನೀವಂತೂ ನಮಗೆ ತಾಯಿಯಾಗಿದ್ದೀರಿ ಎಂದು
ಹೇಳುತ್ತಾರೆ. ಜಗತ್ತಿನ ಕಲ್ಯಾಣಕ್ಕಾಗಿ ನೀವು ಮಾತೆಯರು ನಿಮಿತ್ತರಾಗಿದ್ದೀರಿ. ತಮ್ಮನ್ನು
ನೋಡಿಕೊಳ್ಳಿ - ನಾವು ಎಷ್ಟು ಜನರ ಕಲ್ಯಾಣ ಮಾಡಿದ್ದೇವೆ, ಎಷ್ಟು ಮಂದಿಗೆ ತಂದೆಯ ಸಂದೇಶ
ಕೊಟ್ಟಿದ್ದೇವೆ. ತಂದೆಯೂ ಸಹ ಸಂದೇಶವಾಹಕನಾಗಿದ್ದಾರೆ, ಮತ್ತ್ಯಾರಿಗೂ ಸಂದೇಶವಾಹಕರೆಂದು
ಹೇಳುವುದಿಲ್ಲ. ತಂದೆಯು ನಿಮಗೆ ಸಂದೇಶ ಕೊಡುತ್ತಾರೆ, ಅದನ್ನು ನೀವು ಎಲ್ಲರಿಗೂ ತಿಳಿಸಿರಿ.
ಬೇಹದ್ದಿನ ತಂದೆ ಹಾಗೂ ಆಸ್ತಿಯನ್ನು ನೆನಪು ಮಾಡಿರಿ. 84 ಜನ್ಮಗಳ ಚಕ್ರವನ್ನು ನೆನಪು ಮಾಡಿರಿ.
ನೀವು ಸಂದೇಶವಾಹಕ ತಂದೆಯ ಮಕ್ಕಳು ಸಂದೇಶ ನೀಡುವವರಾಗಿದ್ದೀರಿ. ಎಲ್ಲರಿಗೂ ಹೇಳಿರಿ -
ನಮ್ಮೆಲ್ಲರಿಗೆ ಇಬ್ಬರು ತಂದೆಯರಿದ್ದಾರೆ. ಬೇಹದ್ದಿನ ತಂದೆಯು ಸುಖ ಹಾಗೂ ಶಾಂತಿಯ ಆಸ್ತಿಯನ್ನು
ಕೊಟ್ಟಿದ್ದಾರೆ. ನಾವು ಸುಖಧಾಮದಲ್ಲಿದ್ದಾಗ ಉಳಿದವರೆಲ್ಲರೂ ಶಾಂತಿಧಾಮದಲ್ಲಿದ್ದರು, ನಂತರ ನಾವು
ಜೀವನ್ಮುಕ್ತಿಯಲ್ಲಿ ಬರುತ್ತೇವೆ. ನಾವೀಗ ಹಿಂತಿರುಗಿ ಹೋಗಬೇಕಾಗಿದೆ, ಪುನಃ ಸತ್ಯಯುಗದಲ್ಲಿ ನಾವೇ
ವಿಶ್ವದ ಮಾಲೀಕರಾಗುತ್ತೇವೆ. ಒಂದು ಗೀತೆಯೂ ಇದೆ - ಬಾಬಾ, ನಿಮ್ಮಿಂದ ನಮಗೆ ಇಡೀ ವಿಶ್ವದ
ರಾಜ್ಯಭಾಗ್ಯ ಸಿಗುತ್ತದೆ. ಇಡೀ ಧರಣಿ, ಸಮುದ್ರ, ಆಕಾಶ ಎಲ್ಲವೂ ನಮ್ಮ ಕೈಯಲ್ಲಿರುತ್ತವೆ. ಈ
ಸಮಯದಲ್ಲಿ ನಾವು ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯುತ್ತಿದ್ದೇವೆ. ನಾವು ಗುಪ್ತ ಸೈನಿಕರು,
ಗುಪ್ತ ಯೋಧರು, ಶಿವಶಕ್ತಿ ಸೇನೆ. ಇದು ಜ್ಞಾನದ ಖಡ್ಗ ಜ್ಞಾನ ಬಾಣವಾಗಿದೆ. ಇದಕ್ಕಾಗಿ ಅವರು
ದೇವಿಯರಿಗೆ ಸ್ಥೂಲ ಆಯುಧಗಳನ್ನು ತೋರಿಸಿದ್ದಾರೆ. ಭಕ್ತಿ ಮಾರ್ಗದಲ್ಲಿ ಎಷ್ಟೊಂದು ಮಂದಿರ,
ಎಷ್ಟೊಂದು ಚಿತ್ರಗಳಿವೆ. ಆದ್ದರಿಂದ ತಂದೆಯು ಹೇಳುತ್ತಾರೆ - ಭಕ್ತಿ ಮಾರ್ಗದಲ್ಲಿ ನೀವು ಎಲ್ಲಾ
ಹಣವನ್ನು ಮುಗಿಸಿದಿರಿ. ಈಗ ಈ ಮಂದಿರ ಮುಂತಾದವುಗಳೆಲ್ಲವೂ ಸಮಾಪ್ತಿಯಾಗಲಿವೆ, ಮುಳುಗಿ ಹೋಗುತ್ತವೆ.
ನಿಮಗೂ ಸಾಕ್ಷಾತ್ಕಾರ ಮಾಡಿಸಿದ್ದರು - ಸತ್ಯಯುಗದಲ್ಲಿ ಹೇಗೆ ಗಣಿಗಳಿಂದ ವಜ್ರ ರತ್ನಗಳನ್ನು
ತೆಗೆದುಕೊಂಡು ಬರುತ್ತಾರೆ ಏಕೆಂದರೆ ಇಲ್ಲಿನ ಸಂಪತ್ತೆಲ್ಲವೂ ಒಳಗಡೆ ಹೊರಟು ಹೋಗುತ್ತದೆ.
ದೊಡ್ಡ-ದೊಡ್ಡ ರಾಜರ ಬಳಿ ಕಣಜಗಳಿರುತ್ತವೆ. ಅದೆಲ್ಲವೂ ಮಣ್ಣಲ್ಲಿ ಸೇರಿ ಬಿಡುತ್ತದೆ ನಂತರ ನಿಮ್ಮ
ಶಿಲ್ಪಿಗಳು ಹೋಗಿ ತೆಗೆದುಕೊಂಡು ಬರುತ್ತಾರೆ, ಇಲ್ಲದಿದ್ದರೆ ಇಷ್ಟೊಂದು ಚಿನ್ನ ಇತ್ಯಾದಿ ಎಲ್ಲಿಂದ
ಬರುವುದು! ಸ್ವರ್ಗದ ಚಿತ್ರವನ್ನು ಅಜ್ಮೀರಿನಲ್ಲಿ ನೋಡುತ್ತೀರಲ್ಲವೆ. ತಂದೆಯು ತಿಳಿಸಿದ್ದರು - ಇದೇ
ರೀತಿ ಮ್ಯೂಜಿಯಂ ಮಾಡಿರಿ, ಸ್ವರ್ಗದ ಸುಂದರ ಮಾದರಿಗಳನ್ನು ಮಾಡಿಸಿ. ನಿಮಗೆ ಗೊತ್ತಿದೆ - ನಾವೀಗ
ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ, ಮೊದಲು ಏನೂ ತಿಳಿದಿರಲಿಲ್ಲ. ಈಗ
ತಿಳಿದುಕೊಳ್ಳುತ್ತಾ ಹೋಗುತ್ತಿದ್ದೇವೆ. ನಾವು ಪ್ರತಿಯೊಬ್ಬರ ಆಂತರ್ಯವನ್ನು ತಿಳಿದುಕೊಂಡಿದ್ದೇವೆ
ಎಂದಲ್ಲ. ಕೆಲ ಕೆಲವರು ವಿಕಾರಿಗಳು ಬರುತ್ತಿದ್ದರು ಆಗ ಏಕೆ ಬರುತ್ತೀರಿ ಎಂದು ಕೇಳಿದಾಗ ನಾವು
ಇಲ್ಲಿಗೆ ಬಂದಾಗಲೇ ವಿಕಾರಗಳಿಂದ ಮುಕ್ತರಾಗುತ್ತೇವೆ ತಾನೆ. ನಾನು ಬಹಳ ಪಾಪಾತ್ಮನಾಗಿದ್ದೇನೆ.
ಆದ್ದರಿಂದ ಬಂದಿದ್ದೇನೆಂದು ಹೇಳುತ್ತಿದ್ದರು. ಆಗ ತಂದೆಯು ಒಳ್ಳೆಯದು, ಕಲ್ಯಾಣವಾಗಲಿ ಎಂದು
ಹೇಳುತ್ತಿದ್ದರು. ಮಾಯೆಯು ಬಹಳ ಪ್ರಬಲವಾಗಿದೆ. ತಂದೆಯು ಹೇಳುತ್ತಾರೆ - ಮಕ್ಕಳೇ, ನೀವು ಈ
ವಿಕಾರಗಳ ಮೇಲೆ ಜಯಗಳಿಸಿದಾಗಲೇ ಜಗತ್ಜೀತರಾಗುತ್ತೀರಿ, ಮಾಯೆಯೂ ಕಡಿಮೆಯೇನಿಲ್ಲ. ನೀವೀಗ
ಪುರುಷಾರ್ಥ ಮಾಡಿ ಈ ಲಕ್ಷ್ಮೀ-ನಾರಾಯಣರಂತೆ ಆಗುತ್ತೀರಿ. ಇವರಂತಹ ಸೌಂದರ್ಯ ಬೇರೆ ಯಾರಿಗೂ
ಇರುವುದಿಲ್ಲ. ಇದು ಸ್ವಾಭಾವಿಕ ಸೌಂದರ್ಯವಾಗಿದೆ. ಪ್ರತೀ 5000 ವರ್ಷಗಳ ನಂತರ ಸ್ವರ್ಗದ
ಸ್ಥಾಪನೆಯಾಗುತ್ತದೆ. ನಂತರ 84 ಜನ್ಮಗಳ ಚಕ್ರದಲ್ಲಿ ಬರುತ್ತಾರೆ. ಇದು ವಿಶ್ವವಿದ್ಯಾಲಯ ಹಾಗೂ
ಆಸ್ಪತ್ರೆಯಾಗಿದೆ ಎಂದು ನೀವು ಬರೆಯಬಹುದು. ಆರೋಗ್ಯಕ್ಕಾಗಿ ಆಸ್ಪತ್ರೆ, ಐಶ್ವರ್ಯಕ್ಕಾಗಿ ವಿಶ್ವ
ವಿದ್ಯಾಲಯ. ಆರೋಗ್ಯ, ಭಾಗ್ಯ, ಸಂತೋಷ - 21 ಜನ್ಮಗಳಿಗಾಗಿ ಬಂದು ಪ್ರಾಪ್ತಿ ಮಾಡಿಕೊಳ್ಳಿರಿ. ಹೇಗೆ
ವ್ಯಾಪಾರಿಗಳು ತಮ್ಮ ಬೋರ್ಡನ್ನು ಹಾಕುತ್ತಾರೆ, ಮನೆಗಳಲ್ಲಿಯೂ ಬೋರ್ಡ್ ಹಾಕಿಕೊಂಡಿರುತ್ತಾರೆ.
ಇಲ್ಲಿಯೂ ಯಾರು ನಶೆಯಲ್ಲಿರುವರೋ ಅವರೇ ಈ ರೀತಿ ಬರೆಯುತ್ತಾರೆ. ಯಾರೇ ಬರಲಿ ಅವರಿಗೆ ತಿಳಿಸಿರಿ -
ನೀವು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆದುಕೊಂಡಿದ್ದೀರಿ ನಂತರ 84 ಜನ್ಮಗಳನ್ನು ಪಡೆದು ನೀವು
ಪತಿತರಾಗಿದ್ದೀರಿ, ಈಗ ಪಾವನರಾಗಿ. ತಮ್ಮನ್ನು ಆತ್ಮನೆಂದು ತಿಳಿಯಿರಿ, ತಂದೆಯನ್ನು ನೆನಪು ಮಾಡಿರಿ.
ಈ ಬ್ರಹ್ಮಾ ತಂದೆಯು ಹಾಗೆಯೇ ಮಾಡುತ್ತಾರೆ, ಇವರು ಮೊದಲನೇ ನಂಬರಿನ ಪುರುಷಾರ್ಥಿಯಾಗಿದ್ದಾರೆ. ಬಾಬಾ,
ಬಹಳ ಬಿರುಗಾಳಿಗಳು ಬರುತ್ತವೆಯೆಂದು ಕೆಲವು ಮಕ್ಕಳು ಪತ್ರ ಬರೆಯುತ್ತಾರೆ. ನಾನು ಬರೆಯುತ್ತೇನೆ (ಬ್ರಹ್ಮಾ
ತಂದೆ) ನನ್ನ ಬಳಿಯಂತೂ ಎಲ್ಲಾ ಬಿರುಗಾಳಿಗಳು ಮೊದಲು ಬರುತ್ತವೆ. ನಾನು ಮೊದಲು ಅನುಭವಿಯಾದಾಗಲೇ
ತಿಳಿಸುವೆನಲ್ಲವೆ. ಇದಂತೂ ಮಾಯೆಯ ಉದ್ಯೋಗವಾಗಿದೆ. ಈಗ ತಂದೆಯು ತಿಳಿಸುತ್ತಾರೆ - ಮಧುರ ಮುದ್ದಾದ
ಮಕ್ಕಳೇ, ಈಗ ನಿಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ. ನೀವು ಯಾರಿಗೂ ತಮ್ಮ ಜನ್ಮ ಪತ್ರಿಕೆಯನ್ನು
ತೋರಿಸುವ ಅವಶ್ಯಕತೆಯಿಲ್ಲ. ತಂದೆಯು ಎಲ್ಲವನ್ನೂ ತಿಳಿಸಿ ಬಿಡುತ್ತಾರೆ. ಅಲ್ಲಿ ಧೀರ್ಘಾಯಸ್ಸು
ಇರುತ್ತದೆ. ಕೃಷ್ಣನಿಗೂ ಯೋಗೇಶ್ವರನೆಂದು ಹೇಳುತ್ತಾರೆ. ಇವರಿಗೆ ಯೋಗೇಶ್ವರನೇ ಯೋಗವನ್ನು ಕಲಿಸಿದರು.
ಆದ್ದರಿಂದ ಈ ರೀತಿ ಆದರು. ಯಾವುದೇ ಮನುಷ್ಯ ಮಾತ್ರರು ಸನ್ಯಾಸಿ ಮೊದಲಾದವರಿಗೂ ಯೋಗೇಶ್ವರನೆಂದು
ಹೇಳಲು ಸಾಧ್ಯವಿಲ್ಲ. ನಿಮಗೆ ಈಶ್ವರನೇ ಯೋಗವನ್ನು ಕಲಿಸುತ್ತಾರೆ. ಆದ್ದರಿಂದ ಯೋಗೇಶ್ವರ-ಯೋಗೇಶ್ವರಿ
ಎಂಬ ಹೆಸರನ್ನು ಇಡಲಾಗಿದೆ. ಈ ಸಮಯದಲ್ಲಿ ಜ್ಞಾನ-ಜ್ಞಾನೇಶ್ವರಿಯು ನೀವೇ ಆಗಿದ್ದೀರಿ. ಮತ್ತೆ ಹೋಗಿ
ರಾಜ-ರಾಜೇಶ್ವರಿಯೂ ನೀವೇ ಆಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
೧ . ಗುರಿ-ಧ್ಯೇಯವನ್ನು
ಮುಂದಿಟ್ಟುಕೊಂಡು ಪುರುಷಾರ್ಥ ಮಾಡಿರಿ. ಲಕ್ಷ್ಮೀ-ನಾರಾಯಣರ ಚಿತ್ರವನ್ನು ಸನ್ಮುಖದಲ್ಲಿ ನೋಡುತ್ತಾ
ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಿರಿ - ಓಹೋ, ತಂದೆಯು ನಮ್ಮನ್ನು ಈ ರೀತಿ ಮಾಡುತ್ತಾರೆ! ಈಗ
ನಮ್ಮ ಮೇಲೆ ಬೃಹಸ್ಪತಿ ದೆಶೆ ಕುಳಿತಿದೆ.
೨ . ತಮ್ಮ ಸಮಾನರನ್ನಾಗಿ ಮಾಡಿಕೊಳ್ಳಲು ಭ್ರಮರಿಯ ತರಹ ಜ್ಞಾನದ ಧ್ವನಿ ಮಾಡಿರಿ. ಈಶ್ವರೀಯ
ಸೇವಾಧಾರಿಗಳಾಗಿ ಸ್ವರ್ಗ ಸ್ಥಾಪನೆಯಲ್ಲಿ ತಂದೆಗೆ ಸಹಯೋಗ ನೀಡಿರಿ.
ವರದಾನ:
ದೇಹ-ಭಾನವನ್ನು
ದೇಹೀ-ಅಭಿಮಾನಿ ಸ್ಥಿತಿಯಲ್ಲಿ ಪರಿವರ್ತನೆ ಮಾಡುವಂತಹ ಬೇಹದ್ಧಿನ ವೈರಾಗಿ ಭವ.
ನಡೆಯುತ್ತಾ-ನಡೆಯುತ್ತಾ
ಒಂದು ವೇಳೆ ವೈರಾಗ್ಯ ತುಂಡಾದರೆ ಅದರ ಮುಖ್ಯ ಕಾರಣವಾಗಿದೆ - ದೇಹ-ಭಾನ. ಎಲ್ಲಿಯವರೆಗೆ ದೇಹ-ಭಾನದ
ವೈರಾಗ್ಯ ಇರುವುದಿಲ್ಲ ಅಲ್ಲಿಯವರೆಗೆ ಯಾವುದೇ ಮಾತಿನ ವೈರಾಗ್ಯ ಸದಾಕಾಲ ಇರಲು ಸಾಧ್ಯವಿಲ್ಲ.
ಸಂಬಂಧದಿಂದ ವೈರಾಗ್ಯ - ಇದು ಏನು ದೊಡ್ಡ ಮಾತಲ್ಲ, ಅದಂತೂ ಪ್ರಪಂಚದ ಅನೇಕರಿಗೆ ವೈರಾಗ್ಯ ಬಂದು
ಬಿಡುವುದು ಆದರೆ ಇಲ್ಲಿ ದೇಹ-ಭಾನದ ಭಿನ್ನ-ಭಿನ್ನ ರೂಪವಿದೆ, ಅದನ್ನು ತಿಳಿದು, ದೇಹ-ಭಾನವನ್ನು
ದೇಹೀ-ಅಭಿಮಾನಿ ಸ್ಥಿತಿಯಲ್ಲಿ ಪರಿವರ್ತನೆ ಮಾಡುವುದು - ಈ ವಿಧಿಯಾಗಿದೆ ಬೇಹದ್ಧಿನ ವೈರಾಗಿಗಳಾಗಲು.
ಸ್ಲೋಗನ್:
ಸಂಕಲ್ಪರೂಪಿ ಕಾಲು ಗಟ್ಟಿಯಾಗಿದ್ದಾಗ ಕಪ್ಪು ಮೋಡಗಳ ರೀತಿ ಮಾತುಗಳೂ ಸಹಾ ಪರಿವರ್ತನೆಯಾಗಿ
ಬಿಡುವುದು.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ -
ಯಾವುದೇ ಲೆಕ್ಕಾಚಾರ ಇಲ್ಲಾ ಈ ಜನ್ಮದ್ದಿರಬಹುದು ಇಲ್ಲಾ ಹಿಂದಿನ ಜನ್ಮದ್ದಿರಬಹುದು, ಲಗನ್ನಿನ
ಅಗ್ನಿ-ಸ್ವರೂಪ ಸ್ಥಿತಿಯ ವಿನಃ ಭಸ್ಮ ಆಗುವುದಿಲ್ಲ. ಈಗ ಬ್ರಹ್ಮಾ ತಂದೆ ಸಮಾನ ಸದಾ ಅಗ್ನಿ-ಸ್ವರೂಪ
ಶಕ್ತಿಶಾಲಿ ನೆನಪಿನ ಸ್ಥಿತಿ, ಬೀಜರೂಪ, ಲೈಟ್ ಹೌಸ್, ಮೈಟ್ ಹೌಸ್ ಸ್ಥಿತಿಯ ಮೇಲೆ ವಿಶೇಷ
ಗಮನಕೊಟ್ಟು ಎಲ್ಲಾ ಲೆಕ್ಕಾಚಾರ ಭಸ್ಮ ಮಾಡಿ.