31.12.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಮಗೆ ಯಾವುದೆಲ್ಲಾ ಜ್ಞಾನ ರತ್ನಗಳು ಸಿಗುತ್ತವೆಯೋ ಅದರ ವಿಚಾರ ಸಾಗರ ಮಂಥನ ಮಾಡಿ, ಜ್ಞಾನ ಮಂಥನದಿಂದಲೇ ಅಮೃತ ಬರುವುದು”

ಪ್ರಶ್ನೆ:
21 ಜನ್ಮಗಳಿಗಾಗಿ ಸಂಪನ್ನರಾಗುವ ಸಾಧನವೇನು?

ಉತ್ತರ:
ಜ್ಞಾನರತ್ನಗಳು. ಈ ಪುರುಷೋತ್ತಮ ಸಂಗಮಯುಗದಲ್ಲಿ ನೀವು ಎಷ್ಟು ಜ್ಞಾನ ರತ್ನಗಳನ್ನು ಸಂಪಾದನೆ ಮಾಡುತ್ತೀರಿ ಅಷ್ಟು ಸಂಪನ್ನರಾಗುತ್ತೀರಿ. ಈಗಿನ ಜ್ಞಾನ ರತ್ನಗಳೇ ಸತ್ಯಯುಗದಲ್ಲಿ ವಜ್ರ ರತ್ನಗಳಾಗುತ್ತವೆ. ಯಾವಾಗ ಆತ್ಮವು ಜ್ಞಾನ ರತ್ನಗಳ ಧಾರಣೆ ಮಾಡುವುದೋ, ಬಾಯಿಂದ ಜ್ಞಾನ ರತ್ನಗಳೇ ಹೊರ ಬರುವುದೋ, ರತ್ನಗಳನ್ನೇ ಕೇಳಿ ಅನ್ಯರಿಗೂ ತಿಳಿಸುವರೋ ಆಗ ಅವರ ಹರ್ಷಿತ ಮುಖದಿಂದ ತಂದೆಯ ಹೆಸರು ಪ್ರಸಿದ್ಧವಾಗುವುದು. ಆಸುರೀ ಗುಣಗಳನ್ನು ತೆಗೆದು ಹಾಕಿದಾಗಲೇ ಸಂಪನ್ನರಾಗುವಿರಿ.

ಓಂ ಶಾಂತಿ.
ತಂದೆಯು ಮಕ್ಕಳಿಗೆ ಜ್ಞಾನ ಮತ್ತು ಭಕ್ತಿಯನ್ನು ಕುರಿತು ತಿಳಿಸುತ್ತಾರೆ. ಇದಂತೂ ಮಕ್ಕಳು ತಿಳಿದುಕೊಂಡಿದ್ದೀರಿ, ಸತ್ಯಯುಗದಲ್ಲಿ ಭಕ್ತಿಯಿರುವುದಿಲ್ಲ, ಸತ್ಯಯುಗದಲ್ಲಿ ಜ್ಞಾನವೂ ಸಿಗುವುದಿಲ್ಲ. ಕೃಷ್ಣನು ಭಕ್ತಿಯೂ ಮಾಡುವುದಿಲ್ಲ, ಜ್ಞಾನದ ಮುರುಳಿಯನ್ನೂ ನುಡಿಸುವುದಿಲ್ಲ. ಮುರುಳಿ ಎಂದರೆ ಜ್ಞಾನ ತಿಳಿಸುವುದು. ಮುರುಳಿಯಲ್ಲಿ ಜಾದೂ ಇದೆಯೆಂದು ಗಾಯನವಿದೆಯಲ್ಲವೆ. ಅಂದಾಗ ಅವಶ್ಯವಾಗಿ ಯಾವುದೋ ಜಾದುವಿರಬೇಕಲ್ಲವೆ. ಕೇವಲ ಮುರುಳಿ ನುಡಿಸುವುದು ಸಾಮಾನ್ಯ ಮಾತಾಗಿದೆ. ಕಾಡು ಜನರು ಮುರುಳಿಯನ್ನು ಊದುತ್ತಾರೆ, ಆದರೆ ಇಲ್ಲಿ ಜ್ಞಾನದ ಚಮತ್ಕಾರವಿದೆ, ಅಜ್ಞಾನಕ್ಕೆ ಚಮತ್ಕಾರವೆಂದು ಹೇಳುವುದಿಲ್ಲ. ಕೃಷ್ಣನು ಮುರುಳಿಯನ್ನು ನುಡಿಸುತ್ತಿದ್ದನೆಂದು ಮನುಷ್ಯರು ತಿಳಿಯುತ್ತಾರೆ, ಬಹಳ ಮಹಿಮೆ ಮಾಡುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ಕೃಷ್ಣನು ದೇವತೆಯಾಗಿದ್ದನು, ಮನುಷ್ಯರಿಂದ ದೇವತೆ, ದೇವತೆಯಿಂದ ಮನುಷ್ಯ.... ಇದು ನಡೆಯುತ್ತಲೇ ಇರುತ್ತದೆ. ದೈವೀ ಸೃಷ್ಟಿಯಾಗುತ್ತದೆ ನಂತರ ಮನುಷ್ಯ ಸೃಷ್ಟಿಯಾಗುತ್ತದೆ. ಈ ಜ್ಞಾನದಿಂದ ಮನುಷ್ಯರಿಂದ ದೇವತೆಗಳಾಗುತ್ತೀರಿ. ಸತ್ಯಯುಗದಲ್ಲಿ ಈ ಜ್ಞಾನದ ಆಸ್ತಿಯಿರುತ್ತದೆ, ಭಕ್ತಿಯಿರುವುದಿಲ್ಲ. ದೇವತೆಗಳು ಮನುಷ್ಯರಾದಾಗ ಭಕ್ತಿಯು ಪ್ರಾರಂಭವಾಗುತ್ತದೆ. ಮನುಷ್ಯರಿಗೆ ವಿಕಾರಿಗಳು, ದೇವತೆಗಳಿಗೆ ನಿರ್ವಿಕಾರಿಗಳೆಂದು ಕರೆಯಲಾಗುತ್ತದೆ. ದೇವತೆಗಳ ಸೃಷ್ಟಿಗೆ ಪವಿತ್ರ ಪ್ರಪಂಚವೆಂದು ಹೇಳಲಾಗುವುದು. ಈಗ ನೀವು ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ದೇವತೆಗಳಲ್ಲಿ ಈ ಜ್ಞಾನವಿರುವುದಿಲ್ಲ, ಏಕೆಂದರೆ ದೇವತೆಗಳು ಸದ್ಗತಿಯಲ್ಲಿರುತ್ತಾರೆ. ಜ್ಞಾನವು ದುರ್ಗತಿಯಲ್ಲಿರುವವರಿಗೇ ಬೇಕಾಗುವುದು. ಈ ಜ್ಞಾನದಿಂದಲೇ ದೈವೀ ಗುಣಗಳು ಬರುತ್ತವೆ. ಜ್ಞಾನದ ಧಾರಣೆಯಿರುವವರ ಚಲನೆಯು ದೇವತೆಗಳಂತಿರುತ್ತದೆ. ಕಡಿಮೆ ಧಾರಣೆಯಿರುವವರ ಚಲನೆಯು ಬೆರಕೆಯಿರುತ್ತದೆ. ಸಂಪೂರ್ಣ ಆಸುರಿ ಚಲನೆಯೆಂದು ಹೇಳುವುದಿಲ್ಲ. ಧಾರಣೆಯಿಲ್ಲವೆಂದರೆ ನನ್ನ ಮಕ್ಕಳೆಂದು ಹೇಗೆ ಕರೆಸಿಕೊಳ್ಳುತ್ತೀರಿ! ಮಕ್ಕಳು ತಂದೆಯನ್ನು ಅರಿತುಕೊಳ್ಳದಿದ್ದರೆ ತಂದೆಯು ಮಕ್ಕಳನ್ನು ಹೇಗೆ ಅರಿತುಕೊಳ್ಳುವರು? ಎಷ್ಟೊಂದು ಕೆಟ್ಟ-ಕೆಟ್ಟದಾಗಿ ತಂದೆಗೆ ನಿಂದನೆ ಮಾಡುತ್ತಾರೆ. ಭಗವಂತನಿಗೆ ನಿಂದನೆ ಮಾಡುವುದು ಎಷ್ಟು ಕೆಟ್ಟದ್ದಾಗಿದೆ! ನಂತರ ಯಾವಾಗ ಅವರು ಬ್ರಾಹ್ಮಣರಾಗುವರೋ ಆಗ ನಿಂದನೆ ಮಾಡುವುದು ನಿಂತು ಹೋಗುತ್ತದೆ ಅಂದಮೇಲೆ ಈ ಜ್ಞಾನದ ವಿಚಾರ ಸಾಗರ ಮಂಥನ ಮಾಡಬೇಕು. ವಿದ್ಯಾರ್ಥಿಗಳು ವಿಚಾರ ಸಾಗರ ಮಂಥನ ಮಾಡಿ ಜ್ಞಾನವನ್ನು ಉನ್ನತಿಯಲ್ಲಿ ತರುತ್ತಾರೆ. ನಿಮಗೆ ಈ ಜ್ಞಾನವು ಸಿಗುತ್ತದೆಯೆಂದರೆ ಅದರ ಮೇಲೆ ತಮ್ಮ ವಿಚಾರ ಸಾಗರ ಮಂಥನ ಮಾಡುವುದರಿಂದ ಅಮೃತವು ಬರುವುದು. ವಿಚಾರ ಸಾಗರ ಮಂಥನವಿಲ್ಲದಿದ್ದರೆ ಇನ್ನೇನು ಮಂಥನವಿರುವುದು? ಆಸುರೀ ವಿಚಾರ ಮಂಥನ. ಇದರಿಂದ ಕೆಸರೇ ಹೊರ ಬರುತ್ತದೆ. ಈಗ ನೀವು ಈಶ್ವರೀಯ ವಿದ್ಯಾರ್ಥಿಗಳಾಗಿದ್ದೀರಿ, ಮನುಷ್ಯರಿಂದ ದೇವತೆಗಳಾಗುವ ವಿದ್ಯೆಯನ್ನು ತಂದೆಯು ಓದಿಸುತ್ತಿದ್ದಾರೆಂದು ನಿಮಗೆ ತಿಳಿದಿದೆ. ದೇವತೆಗಳಂತೂ ಓದಿಸುವುದಿಲ್ಲ. ದೇವತೆಗಳಿಗೆಂದೂ ಜ್ಞಾನ ಸಾಗರನೆಂದು ಹೇಳಲಾಗುವುದಿಲ್ಲ. ತಂದೆಯೇ ಜ್ಞಾನ ಸಾಗರನಾಗಿದ್ದಾರೆ ಅಂದಾಗ ತಮ್ಮೊಂದಿಗೇ ತಾವು ಕೇಳಿಕೊಳ್ಳಬೇಕು - ನನ್ನಲ್ಲಿ ಎಲ್ಲಾ ದೈವೀ ಗುಣಗಳಿವೆಯೇ? ಒಂದುವೇಳೆ ಆಸುರೀ ಗುಣಗಳಿದ್ದರೆ ಅದನ್ನು ತೆಗೆಯಬೇಕು ಆಗಲೇ ದೇವತೆಗಳಾಗುವಿರಿ.

ಈಗ ನೀವು ಪುರುಷೋತ್ತಮ ಸಂಗಮಯುಗದಲ್ಲಿದ್ದೀರಿ. ಪುರುಷೋತ್ತಮರಾಗುತ್ತಿದ್ದೀರಿ, ಆದ್ದರಿಂದ ವಾತಾವರಣವು ಬಹಳ ಚೆನ್ನಾಗಿರಬೇಕು. ಕೆಟ್ಟ ಮಾತುಗಳು ಬಾಯಿಂದ ಬರಬಾರದು. ಇಲ್ಲವೆಂದರೆ ಅಂತಹವರಿಗೆ ಕಡಿಮೆ ದರ್ಜೆಯವರೆಂದು ಹೇಳಲಾಗುತ್ತದೆ. ವಾತಾವರಣದಿಂದ ಬಹಳ ಬೇಗನೆ ತಿಳಿದುಬರುತ್ತದೆ. ಬಾಯಿಂದ ದುಃಖ ಕೊಡುವಂತಹ ಮಾತುಗಳೇ ಹೊರ ಬರುತ್ತವೆ. ಈಗ ನೀವು ಮಕ್ಕಳು ತಂದೆಯ ಹೆಸರನ್ನು ಪ್ರಸಿದ್ಧಗೊಳಿಸಬೇಕು. ಆದ್ದರಿಂದ ಸದಾ ಮುಖವು ಹರ್ಷಿತವಾಗಿರಲಿ. ಸದಾ ಜ್ಞಾನ ರತ್ನಗಳೇ ಹೊರಬರಲಿ. ಈ ಲಕ್ಷ್ಮೀ-ನಾರಾಯಣರು ಎಷ್ಟೊಂದು ಹರ್ಷಿತಮುಖಿಯಾಗಿದ್ದಾರೆ. ಇವರ ಆತ್ಮವು ಜ್ಞಾನ ರತ್ನಗಳನ್ನು ಧಾರಣೆ ಮಾಡಿತು, ಮುಖದಿಂದ ಜ್ಞಾನರತ್ನಗಳೇ ಹೊರಬಂದಿತ್ತು. ಜ್ಞಾನ ರತ್ನಗಳನ್ನೇ ಕೇಳಿ ಅನ್ಯರಿಗೂ ತಿಳಿಸುತ್ತಿದ್ದರು ಅಂದಾಗ ಎಷ್ಟೊಂದು ಖುಷಿಯಿರಬೇಕು! ಈಗ ನೀವು ಯಾವ ಜ್ಞಾನರತ್ನಗಳನ್ನು ತೆಗೆದುಕೊಳ್ಳುತ್ತೀರಿ ಇವೇ ನಂತರ ಸತ್ಯ ವಜ್ರ-ರತ್ನಗಳಾಗಿ ಬಿಡುತ್ತವೆ. ನವರತ್ನಗಳ ಮಾಲೆಯು ಯಾವುದೇ ಸ್ಥೂಲ ವಜ್ರ-ವೈಡೂರ್ಯಗಳಿಂದ ಮಾಡಿದುದಲ್ಲ, ಇದು ಚೈತನ್ಯ ರತ್ನಗಳ ಮಾಲೆಯಾಗಿದೆ. ಮನುಷ್ಯರು ಈ ರತ್ನಗಳೆಂದು ತಿಳಿದು ನವರತ್ನಗಳ ಉಂಗುರವನ್ನು ಹಾಕಿಕೊಳ್ಳುತ್ತಾರೆ, ಜ್ಞಾನರತ್ನಗಳ ಮಾಲೆಯು ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ಆಗುತ್ತದೆ. ಈ ರತ್ನಗಳೇ 21 ಜನ್ಮಗಳಿಗಾಗಿ ಸಂಪನ್ನರನ್ನಾಗಿ ಮಾಡುತ್ತವೆ. ಇವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇಲ್ಲಂತೂ ಧರಿಸಿದ ತಕ್ಷಣ ಅದನ್ನು ಕಸಿದುಕೊಂಡು ಹೋಗುತ್ತಾರೆ. ಅಂದಾಗ ತಮ್ಮನ್ನು ಬಹಳ-ಬಹಳ ಬುದ್ಧಿವಂತರನ್ನಾಗಿ ಮಾಡಿಕೊಳ್ಳಬೇಕಾಗಿದೆ. ಆಸುರೀ ಗುಣಗಳನ್ನು ತೆಗೆಯಬೇಕಾಗಿದೆ. ಆಸುರೀ ಗುಣವುಳ್ಳವರ ಮುಖದಿಂದಲೇ ತಿಳಿದು ಬರುತ್ತದೆ. ಕ್ರೋಧದಲ್ಲಂತೂ ಕಣ್ಣುಗಳು ತಾಮ್ರದ ಸಮಾನ ಕೆಂಪಗಾಗಿ ಬಿಡುತ್ತವೆ. ಕಾಮ ವಿಕಾರವುಳ್ಳವರು ಒಮ್ಮೆಲೆ ಕಪ್ಪು ಮುಖದವರಾಗಿ ಬಿಡುತ್ತಾರೆ. ಕೃಷ್ಣನನ್ನು ಕಪ್ಪಾಗಿ ತೋರಿಸುತ್ತಾರಲ್ಲವೆ. ವಿಕಾರಗಳ ಕಾರಣವೇ ಪಾವನರಿಂದ ಪತಿತರಾಗಿ ಬಿಟ್ಟರು. ಪ್ರತಿಯೊಂದು ಮಾತಿನ ವಿಚಾರ ಸಾಗರ ಮಂಥನ ಮಾಡಬೇಕು. ಇದು ಬಹಳ ಧನವನ್ನು ಪ್ರಾಪ್ತಿ ಮಾಡಿಕೊಳ್ಳುವ ವಿದ್ಯೆಯಾಗಿದೆ. ನೀವು ಮಕ್ಕಳು ಕೇಳಿರಬಹುದು, ವಿಕ್ಟೋರಿಯಾ ರಾಣಿಯ ಮಂತ್ರಿಯು ಮೊದಲು ಬಹಳ ಬಡವನಾಗಿದ್ದನು, ದೀಪದ ಬೆಳಕಿನಲ್ಲಿ ಓದುತ್ತಿದ್ದನು, ಆದರೆ ಆ ವಿದ್ಯೆಯೇನು ರತ್ನಗಳಲ್ಲ. ಜ್ಞಾನವನ್ನು ಓದಿ ಪೂರ್ಣ ಸ್ಥಾನ ಮಾನವನ್ನು ಪಡೆಯುತ್ತಾರೆ ಅಂದಾಗ ವಿದ್ಯೆಯು ಕೆಲಸಕ್ಕೆ ಬಂದಿತು, ಹಣವಲ್ಲ. ವಿದ್ಯೆಯೇ ಧನವಾಗಿದೆ. ಅದು ಹದ್ದಿನ ಹಣವಾಗಿದೆ, ಇದು ಬೇಹದ್ದಿನದಾಗಿದೆ. ಈಗ ನೀವು ತಿಳಿದುಕೊಳ್ಳುತ್ತಿದ್ದೀರಿ - ತಂದೆಯು ನಮಗೆ ಓದಿಸಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಸತ್ಯಯುಗದಲ್ಲಂತೂ ಹಣವನ್ನು ಸಂಪಾದಿಸಲು ವಿದ್ಯೆಯನ್ನು ಓದುವುದಿಲ್ಲ. ಅಲ್ಲಂತೂ ಈಗಿನ ಪುರುಷಾರ್ಥದಿಂದಲೇ ಅಪಾರವಾದ ಧನವು ಸಿಗುತ್ತದೆ. ಧನವು ಅವಿನಾಶಿಯಾಗಿ ಬಿಡುತ್ತದೆ. ದೇವತೆಗಳ ಬಳಿ ಬಹಳಷ್ಟು ಧನವಿತ್ತು, ಮತ್ತೆ ವಾಮಮಾರ್ಗ ರಾವಣ ರಾಜ್ಯದಲ್ಲಿ ಬಂದಾಗಲೂ ಸಹ ಎಷ್ಟೊಂದು ಹಣವಿತ್ತು, ಎಷ್ಟೊಂದು ಮಂದಿರಗಳನ್ನು ಕಟ್ಟಿಸಿದರು ನಂತರದಲ್ಲಿ ಮುಸಲ್ಮಾನರು ಎಲ್ಲವನ್ನೂ ಲೂಟಿ ಮಾಡಿದರು. ದ್ವಾಪರ ಯುಗದಲ್ಲಿ ಎಷ್ಟೊಂದು ಧನವಂತರಾಗಿದ್ದರು, ಈಗಿನ ವಿದ್ಯೆಯಿಂದ ಇಷ್ಟೊಂದು ಧನವಂತರಾಗಲು ಸಾಧ್ಯವಿಲ್ಲ ಅಂದಮೇಲೆ ಈ ವಿದ್ಯೆಯಿಂದ ನೋಡಿ ಮನುಷ್ಯರು ಏನಾಗಿ ಬಿಡುತ್ತಾರೆ! ಬಡವರಿಂದ ಸಾಹುಕಾರರಾಗಿ ಬಿಡುತ್ತಾರೆ. ಈಗ ನೋಡಿ, ಭಾರತವು ಎಷ್ಟೊಂದು ಬಡದೇಶವಾಗಿದೆ! ಯಾರು ಈಗ ನಾಮಧಾರಿ ಸಾಹುಕಾರರಿದ್ದಾರೆಯೋ ಅವರಿಗಂತೂ ಬಿಡುವೇ ಇಲ್ಲ. ತಮ್ಮ ಹಣ, ಅಧಿಕಾರದ ಬಹಳ ಅಹಂಕಾರವಿರುತ್ತದೆ. ಇದರಲ್ಲಿಯೇ ಬಹಳ ಅಹಂಕಾರವನ್ನು ಕಳೆಯಬೇಕಾಗಿದೆ. ನಾವಾತ್ಮಗಳಾಗಿದ್ದೇವೆ, ಆತ್ಮನ ಬಳಿ ಹಣ, ಅಧಿಕಾರ, ವಜ್ರ-ರತ್ನಗಳೇನೂ ಇಲ್ಲ.

ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಡಿ. ಆತ್ಮವು ಶರೀರವನ್ನು ಬಿಟ್ಟಾಗ ಶ್ರೀಮಂತಿಕೆ ಇತ್ಯಾದಿಯೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಪುನಃ ಯಾವಾಗ ಹೊಸದಾಗಿ ಓದಿ ಹಣ ಸಂಪಾದಿಸುವರೋ ಆಗಲೇ ಧನವಂತರಾಗುವರು. ಇಲ್ಲವೆ ಒಳ್ಳೆಯ ದಾನ-ಪುಣ್ಯ ಮಾಡಿದರೆ ಸಾಹುಕಾರರ ಮನೆಯಲ್ಲಿ ಜನ್ಮ ಪಡೆಯುತ್ತಾರೆ. ಇದು ಹಿಂದಿನ ಒಳ್ಳೆಯ ಕರ್ಮಗಳ ಫಲವೆಂದು ಹೇಳುತ್ತಾರೆ. ವಿದ್ಯಾ ದಾನ ಮಾಡಿದರೆ ಅಥವಾ ಕಾಲೇಜು-ಧರ್ಮ ಶಾಲೆಗಳನ್ನು ಕಟ್ಟಿಸಿದರೆ ಅದರ ಫಲವು ಸಿಗುತ್ತದೆ ಆದರೆ ಅಲ್ಪಕಾಲಕ್ಕಾಗಿ. ಈ ದಾನ ಪುಣ್ಯ ಇತ್ಯಾದಿಗಳನ್ನು ಇಲ್ಲಿಯೇ ಮಾಡಲಾಗುತ್ತದೆ ಸತ್ಯಯುಗದಲ್ಲಲ್ಲ. ಸತ್ಯಯುಗದಲ್ಲಿ ಒಳ್ಳೆಯ ಕರ್ಮಗಳೇ ಆಗುತ್ತದೆ, ಏಕೆಂದರೆ ಈಗಿನ ಆಸ್ತಿಯು ಅಲ್ಲಿ ಸಿಕ್ಕಿರುತ್ತದೆ. ಸತ್ಯಯುಗದಲ್ಲಿ ಯಾವುದೇ ಕರ್ಮವು ವಿಕರ್ಮವಾಗುವುದಿಲ್ಲ, ಏಕೆಂದರೆ ರಾವಣನೇ ಇರುವುದಿಲ್ಲ. ವಿಕಾರದಲ್ಲಿ ಹೋಗುವುದರಿಂದ ವಿಕಾರಿ ಕರ್ಮಗಳಾಗಿ ಬಿಡುತ್ತವೆ. ವಿಕಾರದಿಂದ ವಿಕರ್ಮಗಳಾಗುತ್ತವೆ. ಸ್ವರ್ಗದಲ್ಲಿ ಯಾವುದೇ ವಿಕರ್ಮಗಳಾಗುವುದಿಲ್ಲ ಎಲ್ಲವೂ ಕರ್ಮದ ಮೇಲೆ ಆಧಾರಿತವಾಗಿದೆ. ಈ ಮಾಯಾ ರಾವಣನು ಅವಗುಣಿಯನ್ನಾಗಿ ಮಾಡಿದ್ದಾನೆ ಮತ್ತೆ ತಂದೆಯು ಬಂದು ಸರ್ವಗುಣ ಸಂಪನ್ನರನ್ನಾಗಿ ಮಾಡುತ್ತಾರೆ. ರಾಮವಂಶಿ ಮತ್ತು ರಾವಣವಂಶಿಯ ಯುದ್ಧವು ನಡೆಯುತ್ತದೆ. ನೀವು ರಾಮನ ಮಕ್ಕಳಾಗಿದ್ದೀರಿ, ಎಷ್ಟೊಂದು ಒಳ್ಳೊಳ್ಳೆಯ ಮಕ್ಕಳೂ ಸಹ ಮಾಯೆಯಿಂದ ಸೋಲನ್ನನುಭವಿಸುತ್ತಾರೆ. ತಂದೆಯು ಹೆಸರನ್ನು ಹೇಳುವುದಿಲ್ಲ, ಆದರೂ ಸಹ ಮತ್ತೆ ಅವರ ಮೇಲೆ ಭರವಸೆಯನ್ನಿಡುತ್ತಾರೆ. ಅಧಮರಿಗಿಂತಲೂ ಅಧಮರ ಉದ್ಧಾರವನ್ನು ತಂದೆಯು ಮಾಡಬೇಕಾಗುತ್ತದೆ. ತಂದೆಯು ಇಡೀ ವಿಶ್ವದ ಉದ್ಧಾರ ಮಾಡಬೇಕಾಗಿದೆ. ರಾವಣ ರಾಜ್ಯದಲ್ಲಿ ಎಲ್ಲರೂ ಕನಿಷ್ಠ ಮಟ್ಟಕ್ಕಿಳಿದಿದ್ದಾರೆ. ತಂದೆಯಂತೂ ಪ್ರತಿನಿತ್ಯವೂ ತಾವೂ ಪಾರಾಗಿ ಅನ್ಯರನ್ನೂ ಪಾರು ಮಾಡುವ ಯುಕ್ತಿಗಳನ್ನು ತಿಳಿಸುತ್ತಿರುತ್ತಾರೆ. ಆದರೂ ಸಹ ಬೀಳುತ್ತಾರೆಂದರೆ ಅದಮರಿಗಿಂತಲೂ ಅಧಮರಾಗಿದ್ದಾರೆ. ಅವರು ಮತ್ತೆ ಇಷ್ಟೊಂದು ಮೇಲೇರಲು ಸಾಧ್ಯವಿಲ್ಲ. ಅವರ ಮೂರ್ಖತನವೇ ಒಳಗೆ ತಿನ್ನುತ್ತಿರುತ್ತದೆ. ಹೇಗೆ ಹೇಳುತ್ತೀರಿ - ಅಂತ್ಯಕಾಲದಲ್ಲಿ ಯಾರು ಯಾವ ಸ್ಮರಣೆ ಮಾಡುವರೋ ಅಂತಹದ್ದೇ ಜನ್ಮ ಪಡೆಯುವರು.... ಹಾಗೆಯೇ ಅವರ ಬುದ್ಧಿಯಲ್ಲಿ ಆ ತಮ್ಮ ಮೂರ್ಖತನವೇ ನೆನಪಿಗೆ ಬರುತ್ತಾ ಇರುತ್ತದೆ.

ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಸೃಷ್ಟಿಚಕ್ರವು ಹೇಗೆ ತಿರುಗುತ್ತದೆಯೆಂದು ಕಲ್ಪ-ಕಲ್ಪವೂ ನೀವೇ ಕೇಳುತ್ತೀರಿ. ಪ್ರಾಣಿಗಳಂತೂ ಅರಿತುಕೊಳ್ಳುವುದಿಲ್ಲ ಅಲ್ಲವೆ! ನೀವೇ ಕೇಳುತ್ತೀರಿ ಮತ್ತು ಅರಿತುಕೊಳ್ಳುತ್ತೀರಿ. ಮನುಷ್ಯರಂತೂ ಮನುಷ್ಯರೇ ಆಗಿದ್ದಾರೆ. ಈ ಲಕ್ಷ್ಮಿ-ನಾರಾಯಣರಿಗೂ ಸಹ ಕಣ್ಣು, ಕಿವಿ, ಮೂಗು ಎಲ್ಲವೂ ಇವೆ. ಮನುಷ್ಯರೇ ಆಗಿದ್ದಾರೆ. ಆದರೆ ದೈವೀ ಗುಣಗಳಿರುವ ಕಾರಣ ಅವರಿಗೆ ದೇವತೆಗಳೆಂದು ಕರೆಯಲಾಗುತ್ತದೆ. ಇವರು ಹೇಗೆ ಇಂತಹ ದೇವತೆಗಳಾಗುತ್ತಾರೆ ಮತ್ತೆ ಹೇಗೆ ಕೆಳಗಿಳಿಯುತ್ತಾರೆ, ಈ ಚಕ್ರದ ಬಗ್ಗೆ ನಿಮಗೆ ತಿಳಿದಿದೆ. ಯಾರು ವಿಚಾರ ಸಾಗರ ಮಂಥನ ಮಾಡುತ್ತಿರುತ್ತಾರೆಯೋ ಅವರಿಗೇ ಧಾರಣೆಯಾಗುತ್ತದೆ. ಯಾರು ವಿಚಾರ ಸಾಗರ ಮಂಥನ ಮಾಡುವುದಿಲ್ಲವೋ ಅವರಿಗೆ ಮಂಧ ಬುದ್ಧಿಯವರೆಂದು ಹೇಳಲಾಗುತ್ತದೆ. ಮುರುಳಿಯನ್ನು ನುಡಿಸುವವರಿಗೆ ಇಂತಹ ವಿಷಯದ ಮೇಲೆ ತಿಳಿಸಬೇಕೆಂದು ವಿಚಾರ ಸಾಗರ ಮಂಥನ ನಡೆಯುತ್ತಿರುತ್ತದೆ. ಭರವಸೆ ನೀಡಬೇಕಾಗಿದೆ, ಈಗಿಲ್ಲದಿದ್ದರೆ ಮುಂದೆಯಾದರೂ ಅವಶ್ಯವಾಗಿ ತಿಳಿದುಕೊಳ್ಳುತ್ತಾರೆ. ಭರವಸೆಯನ್ನಿಟ್ಟು ಸರ್ವೀಸ್ ಮಾಡುವುದೆಂದರೆ ಸರ್ವೀಸಿನ ಮೇಲೆ ಉತ್ಸಾಹವಿದೆ ಎಂದರ್ಥ. ಆದ್ದರಿಂದ ಇದರಲ್ಲಿ ಸುಸ್ತಾಗಬಾರದು. ಭಲೆ ಯಾರಾದರೂ ಮೇಲೇರಿದವರು ಮತ್ತೆ ಅಧಮರಾಗುತ್ತಾರೆ. ಒಂದುವೇಳೆ ಅಧಮರಾಗಿ ಮತ್ತೆ ಬರುತ್ತಾರೆಂದರೆ ಸ್ನೇಹದಿಂದ ಅವರನ್ನು ಕರೆದು ಕುಳ್ಳರಿಸುತ್ತೀರಲ್ಲವೆ ಅಥವಾ ಇಲ್ಲಿಂದ ಹೊರಟು ಹೋಗಿ ಎಂದು ಹೇಳುತ್ತೀರೋ! ಇಷ್ಟು ದಿನ ಎಲ್ಲಿದ್ದಿರಿ, ಏಕೆ ಬರಲಿಲ್ಲ ಎಂದು ಅವರ ಕ್ಷೇಮ ಸಮಾಚಾರವನ್ನು ಕೇಳಬೇಕು. ಆಗ ನಾವು ಮಾಯೆಯಿಂದ ಸೋಲನ್ನನುಭವಿಸಿದೆವು ಎಂದು ಹೇಳುತ್ತಾರೆ. ಜ್ಞಾನವು ಬಹಳ ಒಳ್ಳೆಯದೆಂಬುದನ್ನೂ ತಿಳಿದುಕೊಂಡಿರುತ್ತಾರೆ. ಸ್ಮೃತಿಯಂತೂ ಇರುತ್ತದೆಯಲ್ಲವೆ. ಭಕ್ತಿಯಲ್ಲಿ ಸೋಲುವ-ಗೆಲ್ಲುವ ಮಾತೇ ಇಲ್ಲ. ಇದು ಜ್ಞಾನವಾಗಿದೆ, ಇಲ್ಲಿ ಧಾರಣೆ ಮಾಡಬೇಕಾಗಿದೆ. ನೀವು ಎಲ್ಲಿಯವರೆಗೆ ಬ್ರಾಹ್ಮಣರಾಗುವುದಿಲ್ಲವೋ ಅಲ್ಲಿಯವರೆಗೆ ದೇವತೆಗಳಾಗಲು ಸಾಧ್ಯವಿಲ್ಲ. ಕ್ರಿಶ್ಚಿಯನ್ನರು, ಬೌದ್ಧಿಯರು, ಪಾರಸಿಗಳು ಮೊದಲಾದವರಲ್ಲಿ ಬ್ರಾಹ್ಮಣರಿರುವುದಿಲ್ಲ. ಬ್ರಾಹ್ಮಣರ ಮಕ್ಕಳು ಬ್ರಾಹ್ಮಣರಾಗುತ್ತಾರೆ. ಈ ಮಾತುಗಳನ್ನು ಈಗ ನೀವು ಅರಿತುಕೊಳ್ಳುತ್ತೀರಿ. ತಂದೆಯನ್ನು ನೆನಪು ಮಾಡಬೇಕೆಂದು ನಿಮಗೀಗ ತಿಳಿದಿದೆ. ತಂದೆಯನ್ನು ನೆನಪು ಮಾಡುವುದರಿಂದ ಆಸ್ತಿಯು ಸಿಗುತ್ತದೆ. ಯಾರಾದರೂ ಸಿಕ್ಕಿದರೆ ಅವರಿಗೆ ಹೇಳಿ - ತಂದೆಯನ್ನು ನೆನಪು ಮಾಡಿ, ಪರಮಾತ್ಮನಿಗೆ ಸರ್ವಶ್ರೇಷ್ಠನೆಂದು ಹೇಳಲಾಗುತ್ತದೆ. ಆದ್ದರಿಂದಲೇ ಎಲ್ಲರೂ ಪರಮಾತ್ಮನ ಕಡೆ ಬೆರಳು ತೋರಿಸುತ್ತಾರೆ. ಪರಮಾತ್ಮನಿಗೆ ಮೊದಲಿಗರು (ಒಬ್ಬರು) ಎಂದು ಹೇಳಲಾಗುತ್ತದೆ. ಒಬ್ಬರೇ ಭಗವಂತನಾಗಿದ್ದಾರೆ, ಉಳಿದವರೆಲ್ಲರೂ ಮಕ್ಕಳು. ತಂದೆಗೆ ಭಗವಂತನೆಂದು ಕರೆಯಲಾಗುತ್ತದೆ. ಅವರು ಜ್ಞಾನವನ್ನೂ ಕೊಡುತ್ತಾರೆ, ತನ್ನ ಮಕ್ಕಳನ್ನಾಗಿಯೂ ಮಾಡಿಕೊಳ್ಳುತ್ತಾರೆ ಅಂದಮೇಲೆ ನೀವು ಮಕ್ಕಳು ಎಷ್ಟೊಂದು ಖುಷಿಯಿರಬೇಕು ಏಕೆಂದರೆ ತಂದೆಯು ಎಷ್ಟೊಂದು ಸೇವೆ ಮಾಡುತ್ತಾರೆ, ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಆದರೆ ತಾನು ಮಾತ್ರ ಆ ಪವಿತ್ರ ಪ್ರಪಂಚದಲ್ಲಿ ಬರುವುದಿಲ್ಲ. ಪಾವನ ಪ್ರಪಂಚದಲ್ಲಿ ಅವರನ್ನು ಯಾರೂ ಕರೆಯುವುದಿಲ್ಲ, ಪತಿತ ಪ್ರಪಂಚದಲ್ಲಿಯೇ ಕರೆಯುತ್ತಾರೆ. ಪಾವನಪ್ರಪಂಚದಲ್ಲಿ ಬಂದು ಅವರೇನು ಮಾಡುತ್ತಾರೆ! ಅವರ ಹೆಸರೇ ಆಗಿದೆ - ಪತಿತ-ಪಾವನ ಅಂದಾಗ ಪತಿತ ಪ್ರಪಂಚವನ್ನು ಪಾವನ ಪ್ರಪಂಚವನ್ನಾಗಿ ಮಾಡುವುದು ಅವರ ಕರ್ತವ್ಯವಾಗಿದೆ. ತಂದೆಯ ಹೆಸರಾಗಿದೆ ಶಿವ. ಮಕ್ಕಳಿಗೆ ಸಾಲಿಗ್ರಾಮ ಎಂದು ಕರೆಯಲಾಗುವುದು. ಇಬ್ಬರಿಗೂ ಪೂಜೆ ನಡೆಯುತ್ತದೆ, ಏಕೆಂದರೆ ಪೂಜೆ ಮಾಡುವವರಿಗೆ ಇದೇನೂ ತಿಳಿದಿಲ್ಲ. ಕೇವಲ ಒಂದು ಪೂಜಾ ಪದ್ಧತಿಯನ್ನಾಗಿ ಮಾಡಿ ಬಿಟ್ಟಿದ್ದಾರೆ. ದೇವಿಯರಿಗೂ ಬಹಳ ಸುಂದರವಾದ ವಜ್ರ ರತ್ನಗಳ ಮಹಲುಗಳನ್ನು ಕಟ್ಟಿಸುತ್ತಾರೆ, ಪೂಜೆ ಮಾಡುತ್ತಾರೆ. ಶಿವನಿಗಂತೂ ಮಣ್ಣಿನ ಲಿಂಗ ಮಾಡುವರು ಮತ್ತು ಹೊಡೆದು ಹಾಕುವರು. ಅದನ್ನು ತಯಾರು ಮಾಡುವುದರಲ್ಲಿ ಪರಿಶ್ರಮವಾಗುವುದಿಲ್ಲ. ದೇವಿಯರ ಮೂರ್ತಿಗಳನ್ನು ಮಾಡುವುದರಲ್ಲಿ ಪರಿಶ್ರಮವಾಗುತ್ತದೆ, ಪೂಜೆ ಮಾಡುವುದರಲ್ಲಿ ಪರಿಶ್ರಮವಾಗುವುದಿಲ್ಲ. ಕಲ್ಲು, ನೀರಿನಲ್ಲಿ ಕರಗಿ-ಕರಗಿ ಗೋಲವಾಗಿ ಬಿಡುತ್ತದೆ, ಪೂರ್ಣ ಅಂಡಾಕಾರವನ್ನಾಗಿ ಮಾಡಿ ಬಿಡುತ್ತಾರೆ. ಆತ್ಮವು ಅಂಡಾಕಾರವಾಗಿದೆ, ಇದು ಬ್ರಹ್ಮತತ್ವದಲ್ಲಿರುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಅದಕ್ಕೆ ಬ್ರಹ್ಮಾಂಡವೆಂದು ಹೇಳುತ್ತಾರೆ. ನೀವು ಬ್ರಹ್ಮಾಂಡ ಮತ್ತು ವಿಶ್ವದ ಮಾಲೀಕರಾಗುತ್ತೀರಿ.

ಅಂದಾಗ ಮೊಟ್ಟ ಮೊದಲಿಗೆ ಒಬ್ಬ ತಂದೆಯ ಪರಿಚಯವನ್ನು ಕೊಡಬೇಕಾಗುತ್ತದೆ. ಶಿವನಿಗೆ ತಂದೆಯೆಂದು ಎಲ್ಲರೂ ನೆನಪು ಮಾಡುತ್ತಾರೆ, ಎರಡನೆಯದಾಗಿ ಬ್ರಹ್ಮನಿಗೂ ತಂದೆಯೆಂದು ಹೇಳುತ್ತಾರೆ. ಪ್ರಜಾಪಿತನೆಂದರೆ ಎಲ್ಲಾ ಪ್ರಜೆಗಳ ಪಿತನಾದರಲ್ಲವೇ. ಅವರೇ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದಾರೆ. ಈ ಪೂರ್ಣ ಜ್ಞಾನವು ಈಗ ನೀವು ಮಕ್ಕಳಲ್ಲಿದೆ, ಪ್ರಜಾಪಿತ ಬ್ರಹ್ಮನೆಂದು ಅನೇಕರು ಹೇಳುತ್ತಾರೆ ಆದರೆ ಅವರನ್ನು ಯಥಾರ್ಥ ರೀತಿಯಿಂದ ಯಾರೂ ಅರಿತುಕೊಂಡಿಲ್ಲ. ಬ್ರಹ್ಮನು ಯಾರ ಮಗನಾಗಿದ್ದಾರೆ? ಪರಮಪಿತ ಪರಮಾತ್ಮನ ಮಗು ಎಂದು ಹೇಳುತ್ತೀರಿ. ಶಿವ ತಂದೆಯು ಇವರನ್ನು ದತ್ತು ಮಾಡಿಕೊಂಡಿದ್ದಾರೆಂದರೆ ಇವರು ಶರೀರಧಾರಿಯಾದರಲ್ಲವೆ. ಎಲ್ಲರೂ ಈಶ್ವರನ ಸಂತಾನರಾಗಿದ್ದಾರೆ ನಂತರ ಯಾವಾಗ ಶರೀರ ಸಿಗುವುದೋ ಆಗ ಪ್ರಜಾಪಿತ ಬ್ರಹ್ಮನ ರಚನೆಯೆಂದು ಹೇಳುತ್ತಾರೆ. ಶಿವ ತಂದೆಗಂತೂ ಎಲ್ಲಾ ಆತ್ಮಗಳು ಮಕ್ಕಳಾಗಿಯೇ ಇದ್ದಾರೆ. ತಂದೆಯು ದತ್ತು ಮಾಡಿಕೊಳ್ಳುವ ಮಾತಿಲ್ಲ, ಈಗ ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಶಿವ ತಂದೆಯು ದತ್ತು ಮಾಡಿಕೊಳ್ಳುವ ಮಾತಿಲ್ಲ, ಏಕೆಂದರೆ ಎಲ್ಲಾ ಆತ್ಮಗಳು ಅನಾದಿ-ಅವಿನಾಶಿಯಾಗಿದ್ದಾರೆ. ಎಲ್ಲಾ ಆತ್ಮಗಳಿಗೂ ತಮ್ಮ-ತಮ್ಮ ಶರೀರ, ತಮ್ಮ-ತಮ್ಮ ಪಾತ್ರವು ಸಿಕ್ಕಿದೆ, ಅದನ್ನು ಅಭಿನಯಿಸಲೇಬೇಕಾಗಿದೆ. ಈ ಪಾತ್ರವೇ ಅನಾದಿ-ಅವಿನಾಶಿ, ಪರಂಪರೆಯಿಂದ ನಡೆದು ಬರುತ್ತದೆ ಅದಕ್ಕೆ ಆದಿ-ಅಂತ್ಯವಿದೆಯೆಂದು ಹೇಳುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

 
ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಶ್ರೀಮಂತಿಕೆ, ಸ್ಥಾನ ಮಾನ ಇತ್ಯಾದಿಯ ಅಹಂಕಾರವನ್ನು ಕಳೆಯಬೇಕಾಗಿದೆ. ಅವಿನಾಶಿ ಜ್ಞಾನ ಧನದಿಂದ ಸ್ವಯಂನ್ನು ಸಂಪನ್ನ ಮಾಡಿಕೊಳ್ಳಬೇಕಾಗಿದೆ. ಸರ್ವೀಸಿನಲ್ಲೆಂದೂ ಸುಸ್ತಾಗಬಾರದು.

2. ವಾತಾವರಣವನ್ನು ಚೆನ್ನಾಗಿಟ್ಟುಕೊಳ್ಳಲು ಮುಖದಿಂದ ಸದಾ ರತ್ನಗಳೇ ಹೊರಬರಬೇಕಾಗಿದೆ. ದುಃಖ ಕೊಡುವಂತಹ ಮಾತುಗಳು ಬಾಯಿಂದ ಬರದಂತೆ ಗಮನವಿಡಬೇಕಾಗಿದೆ, ಹರ್ಷಿತಮುಖಿಯಾಗಿರಬೇಕಾಗಿದೆ.

ವರದಾನ:
ಸದಾ ಶ್ರೇಷ್ಠ ಸಮಯ ಪ್ರಮಾಣ ಶ್ರೇಷ್ಠ ಕರ್ಮಮಾಡುತ್ತಾ ವ್ಹಾ!-ವ್ಹಾ! ನ ಗೀತೆ ಹಾಡುವಂತಹ ಭಾಗ್ಯವಾನ್ ಆತ್ಮ ಭವ.

ಈ ಶ್ರೇಷ್ಠ ಸಮಯದಲ್ಲಿ ಸದಾ ಶ್ರೇಷ್ಠ ಕರ್ಮ ಮಾಡುತ್ತಾ “ವ್ಹಾ!-ವ್ಹಾ!” ನ ಗೀತೆ ಮನಸ್ಸಿನಿಂದ ಹಾಡುತ್ತಿರಿ. “ವ್ಹಾ ನನ್ನ ಶ್ರೇಷ್ಠ ಕರ್ಮ ಹಾಗೂ ವ್ಹಾ ಶ್ರೇಷ್ಠ ಕರ್ಮ ಕಲಿಸುವಂತಹ ಬಾಬಾ”. ಆದ್ದರಿಂದ ಸದಾ ವ್ಹಾ-ವ್ಹಾ! ನ ಗೀತೆ ಹಾಡಿ. ಎಂದಾದರೂ ತಪ್ಪಾಗಿಯೂ ದುಃಖದ ದೃಶ್ಯ ನೋಡಿದರೂ ಸಹ ಹಾಯ್ ಎನ್ನುವ ಶಬ್ಧ ಹೊರ ಬರಬಾರದು. ವ್ಹಾ ಡ್ರಾಮಾ ವ್ಹಾ! ಮತ್ತು ವ್ಹಾ ಬಾಬಾ ವ್ಹಾ! ಏನು ಸ್ವಪ್ನದಲ್ಲಿಯೂ ಇರಲಿಲ್ಲ ಆ ಭಾಗ್ಯ ಮನೆಯಲ್ಲಿ ಕುಳಿತಿದ್ದ ಹಾಗೆ ಸಿಕ್ಕಿ ಬಿಟ್ಟಿತು. ಇದೇ ಭಾಗ್ಯದ ನಶೆಯಲ್ಲಿರಿ.

ಸ್ಲೋಗನ್:
ಮನಸ್ಸು-ಬುದ್ಧಿಯನ್ನು ಶಕ್ತಿಶಾಲಿ ಮಾಡಿಕೊಂಡಾಗ ಯಾವುದೇ ಹಲ್-ಚಲ್ ನಲ್ಲಿ ಅಚಲ ಅಡೋಲರಾಗಿರುವಿರಿ.