29.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ದೊಡ್ಡ
ತಂದೆಯು ನೀವು ದೊಡ್ಡ ಮನುಷ್ಯರಿಗೆ ಹೆಚ್ಚು ಕಷ್ಟ ಕೊಡುವುದಿಲ್ಲ, ಕೇವಲ ಎರಡು ಶಬ್ದಗಳನ್ನು ನೆನಪು
ಮಾಡಿ - ತಂದೆ ಮತ್ತು ಆಸ್ತಿ”
ಪ್ರಶ್ನೆ:
ಆತ್ಮಿಕ ತಂದೆಯ
ಮುಖ್ಯ ಕರ್ತವ್ಯ ಯಾವುದು, ಅದರಲ್ಲಿಯೇ ತಂದೆಗೆ ಮಜಾ ಬರುತ್ತದೆ?
ಉತ್ತರ:
ಪತಿತರನ್ನು
ಪಾವನ ಮಾಡುವುದು ಆತ್ಮಿಕ ತಂದೆಯ ಮುಖ್ಯ ಕರ್ತವ್ಯವಾಗಿದೆ. ತಂದೆಗೆ ಪಾವನರನ್ನಾಗಿ ಮಾಡುವುದರಲ್ಲಿಯೇ
ಬಹಳ ಮಜಾ ಬರುತ್ತದೆ. ತಂದೆ ಬರುವುದೇ ಮಕ್ಕಳ ಸದ್ಗತಿ ಮಾಡಲು, ಎಲ್ಲರನ್ನೂ ಸತೋಪ್ರಧಾನರನ್ನಾಗಿ
ಮಾಡಲು ಏಕೆಂದರೆ ಈಗ ಮನೆಗೆ ಹೋಗಬೇಕಾಗಿದೆ. ಆದ್ದರಿಂದ ಕೇವಲ ಒಂದು ಪಾಠವನ್ನು ಪಕ್ಕಾ ಮಾಡಿಕೊಳ್ಳಿ
- ನಾನು ದೇಹವಲ್ಲ, ಆತ್ಮನಾಗಿದ್ದೇನೆ. ಇದೇ ಪಾಠದಿಂದ ತಂದೆಯ ನೆನಪಿರುವುದು ಮತ್ತು ಪಾವರಾಗುತ್ತೀರಿ.
ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ತಂದೆಗೂ ಸಹ ನೀವು ಮಕ್ಕಳನ್ನು
ಪವಿತ್ರರನ್ನಾಗಿ ಮಾಡುವುದರಲ್ಲಿಯೇ ಮಜಾ ಬರುತ್ತದೆ. ಆದ್ದರಿಂದ ಹೇಳುತ್ತಾರೆ - ಪತಿತ ಪಾವನ
ತಂದೆಯನ್ನು ನೆನಪು ಮಾಡಿ, ಸರ್ವರ ಸದ್ಗತಿದಾತ ಅವರೊಬ್ಬರೇ ಆಗಿದ್ದಾರೆ, ಬೇರೆ ಯಾರೂ ಅಲ್ಲ. ಇದನ್ನೂ
ಸಹ ನೀವು ತಿಳಿದುಕೊಂಡಿದ್ದೀರಿ ಈಗ ಅವಶ್ಯವಾಗಿ ಮನೆಗೆ ಹೋಗಬೇಕಾಗಿದೆ. ಹೆಚ್ಚಿನ ಪುರುಷಾರ್ಥ ಮಾಡಲು
ತಂದೆಯು ತಿಳಿಸುತ್ತಾರೆ - ನೆನಪಿನ ಯಾತ್ರೆಯು ಬಹಳ ಅವಶ್ಯಕ. ನೆನಪಿನಿಂದಲೇ ಪಾವನರಾಗುತ್ತೀರಿ.
ನಂತರ ವಿದ್ಯೆಯಾಗಿದೆ. ಮೊದಲು ತಂದೆಯನ್ನು ನೆನಪು ಮಾಡಿರಿ, ನಂತರ ರಾಜ್ಯ ಭಾಗ್ಯ. ಇದಕ್ಕಾಗಿಯೇ
ನಿಮಗೆ ಸೂಚನೆ ನೀಡುತ್ತಾರೆ. 84 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತೇವೆ, ಸತೋಪ್ರಧಾನರಿಂದ
ತಮೋಪ್ರಧಾನರಾಗುತ್ತೇವೆ, ಏಣಿಯನ್ನು ಕೆಳಗೆ ಇಳಿಯುತ್ತೇವೆಂದು ನಿಮಗೆ ಗೊತ್ತಿದೆ. ಈಗ ಪುನಃ
ಸತೋಪ್ರಧಾನರಾಗಬೇಕಾಗಿದೆ. ಸತ್ಯಯುಗವು ಪಾವನ ಪ್ರಪಂಚವಾಗಿದೆ, ಸತ್ಯಯುಗದಲ್ಲಿ ಒಬ್ಬರೂ
ಪತಿತರಿರುವುದಿಲ್ಲ. ಸತ್ಯಯುಗದಲ್ಲಿ ಈ ಮಾತುಗಳಿರುವುದಿಲ್ಲ. ಪಾವನರಾಗುವುದು ಮೂಲ ಮಾತಾಗಿದೆ. ಈಗ
ಪವಿತ್ರರಾಗಿರಿ ಆಗಲೇ ಹೊಸ ಪ್ರಪಂಚದಲ್ಲಿ ಬರುತ್ತೀರಿ ಮತ್ತು ರಾಜ್ಯಭಾರ ಮಾಡಲು ಯೋಗ್ಯರಾಗುತ್ತೀರಿ.
ಎಲ್ಲರೂ ಪಾವನರಾಗಲೇ ಬೇಕು, ಅಲ್ಲಿ ಯಾರೂ ಪತಿತರಿರುವುದಿಲ್ಲ. ಮೂಲ ಮಾತು ಒಂದೇ ಆಗಿದೆ. ತಂದೆಯನ್ನು
ನೆನಪು ಮಾಡುವುದರಿಂದ ಸತೋಪ್ರಧಾನ ಆಗುತ್ತೀರಿ. ತಂದೆಯು ಹೆಚ್ಚಿನ ಪರಿಶ್ರಮ ಕೊಡುವುದಿಲ್ಲ. ಕೇವಲ
ನಿಮ್ಮನ್ನು ಆತ್ಮರೆಂದು ತಿಳಿಯಿರಿ ಎಂದು ಹೇಳುತ್ತಾರೆ. ಪದೇ ಪದೇ ತಿಳಿಸುತ್ತಾರೆ - ಮೊದಲು ಈ
ಪಾಠವನ್ನು ಪಕ್ಕಾ ಮಾಡಿಕೊಳ್ಳಿ - ನಾನು ದೇಹವಲ್ಲ ಆತ್ಮನಾಗಿದ್ದೇನೆ. ಹಿರಿಯ ವ್ಯಕ್ತಿಗಳು
ಹೆಚ್ಚಿನದಾಗಿ ಓದುವುದಿಲ್ಲ, ಎರಡು ಶಬ್ದಗಳಲ್ಲಿಯೇ ತಿಳಿಸಿ ಬಿಡುತ್ತಾರೆ. ಹಿರಿಯ ವ್ಯಕ್ತಿಗಳಿಗೆ
ಕಷ್ಟ ಕೊಡುವುದಿಲ್ಲ. ನಿಮಗೆ ಗೊತ್ತಿದೆ, ಸತೋಪ್ರಧಾನರಿಂದ ತಮೋಪ್ರಧಾನರಾಗುವುದರಲ್ಲಿ ಎಷ್ಟು
ಜನ್ಮಗಳು ಹಿಡಿಸುತ್ತವೆ? 63 ಜನ್ಮಗಳೆಂದು ಹೇಳುವುದಿಲ್ಲ. 84 ಜನ್ಮಗಳು ಹಿಡಿದವು. ಇದಂತೂ
ನಿಶ್ಚಯವಿದೆಯಲ್ಲವೇ. ನಾವು ಸತೋಪ್ರಧಾನರಾಗಿದ್ದೆವು. ಸ್ವರ್ಗವಾಸಿ ಅರ್ಥಾತ್ ಸುಖಧಾಮದ
ಮಾಲೀಕರಾಗಿದ್ದೆವು, ಸುಖಧಾಮವಿತ್ತು ಅದನ್ನೇ ಆದಿ ಸನಾತನ ದೇವಿ ದೇವತಾ ಧರ್ಮವೆಂದು ಹೇಳಲಾಗುತ್ತದೆ.
ಅವರೂ ಮನುಷ್ಯರೇ ಆದರೆ ದೈವೀ ಗುಣವಂತರಾಗಿದ್ದರು. ಈ ಸಮಯದಲ್ಲಿ ಆಸುರೀ ಗುಣವುಳ್ಳ
ಮನುಷ್ಯರಾಗಿದ್ದಾರೆ. ಇದನ್ನು ಶಾಸ್ತ್ರಗಳಲ್ಲಿ ಬರೆಯಲಾಗಿದೆ - ಅಸುರರು ಮತ್ತು ದೇವತೆಗಳು ನಡುವೆ
ಯುದ್ಧ ನಡೆಯಿತು, ಆಗ ದೇವತೆಗಳ ರಾಜ್ಯವು ಸ್ಥಾಪನೆಯಾಯಿತು. ತಂದೆಯು ತಿಳಿಸುತ್ತಾರೆ - ನೀವು ಮೊದಲು
ಅಸುರರಾಗಿದ್ದಿರಿ, ತಂದೆಯು ಬಂದು ಬ್ರಾಹ್ಮಣರನ್ನಾಗಿ ಮಾಡಿ ಬ್ರಾಹ್ಮಣರಿಂದ ದೇವತೆಯನ್ನಾಗಿ ಮಾಡುವ
ಯುಕ್ತಿ ತಿಳಿಸುತ್ತಾರೆ. ಆದರೆ ಅಸುರರ ಮತ್ತು ದೇವತೆಗಳ ಯುದ್ಧದ ಮಾತೇ ಇಲ್ಲ. ದೇವತೆಗಳಿಗೆ ಅಹಿಂಸಾ
ಪರಮೋಧರ್ಮಿಯೆಂದು ಹೇಳುತ್ತಾರೆ. ದೇವತೆಗಳಂತೂ ಎಂದೂ ಯುದ್ಧ ಮಾಡುವುದಿಲ್ಲ, ಹಿಂಸೆಯ ಮಾತಿರಲು
ಸಾಧ್ಯವಿಲ್ಲ. ಸತ್ಯಯುಗದಲ್ಲಿ ದೈವೀ ರಾಜ್ಯದಲ್ಲಿ ಯುದ್ಧವೆಲ್ಲಿಂದ ಬರುತ್ತದೆ! ಸತ್ಯಯುಗದ
ದೇವತೆಗಳು ಇಲ್ಲಿ ಬಂದು ಅಸುರರ ಜೊತೆ ಹೊಡೆದಾಡುತ್ತಾರೆಯೇ? ಅಥವಾ ಅಸುರರು ಅಲ್ಲಿ ದೇವತೆಗಳ ಬಳಿ
ಹೋಗಿ ಹೊಡೆದಾಡುತ್ತರೆಯೇ? ಇದು ಸಾಧ್ಯವೇ ಇಲ್ಲ. ಇದು ಹಳೆಯ ಪ್ರಪಂಚವಾಗಿದೆ ಮತ್ತು ಅದು ಹೊಸ
ಪ್ರಪಂಚವಾಗಿದೆ, ಅಂದಮೇಲೆ ಯುದ್ಧವಾಗಲು ಹೇಗೆ ಸಾಧ್ಯ! ಭಕ್ತಿಮಾರ್ಗದಲ್ಲಿ ಮನುಷ್ಯರು ಏನು
ಕೇಳುತ್ತಾರೆ ಅದು ಸತ್ಯ ಸತ್ಯ ಎಂದು ಹೇಳುತ್ತಾರೆ. ಕೆಲವರ ಬುದ್ಧಿ ಕೆಲಸ ಮಾಡುವುದೇ ಇಲ್ಲ,
ಸಂಪೂರ್ಣ ಕಲ್ಲು ಬುದ್ಧಿಯವರಾಗಿದ್ದಾರೆ. ಕಲಿಯುಗದಲ್ಲಿ ಕಲ್ಲು ಬುದ್ಧಿಯವರು ಮತ್ತು ಸತ್ಯಯುಗದಲ್ಲಿ
ಪಾರಸ ಬುದ್ಧಿಯವರಿರುತ್ತಾರೆ. ರಾಜ್ಯವೇ ಪಾರಸನಾಥನದಾಗಿದೆ? ಇಲ್ಲಿ ರಾಜ್ಯವೇ ಇಲ್ಲ. ದ್ವಾಪರದ
ರಾಜರೂ ಸಹ ಅಪವಿತ್ರ ರಾಜರಾಗಿದ್ದರು. ರತ್ನ ಜಡಿತ ಕಿರೀಟವಿತ್ತು, ಪ್ರಕಾಶದ ಅರ್ಥಾತ್ ಪವಿತ್ರತೆಯ
ಕಿರೀಟವಿರಲಿಲ್ಲ. ಸತ್ಯಯುಗದಲ್ಲಿ ಎಲ್ಲರೂ ಪವಿತ್ರರಾಗಿದ್ದರು. ಅಂದರೆ ಅವರ ಮೇಲೆ ಪ್ರಕಾಶದ
ದೀಪವಿರುತ್ತದೆ ಎಂದಲ್ಲ. ಚಿತ್ರದಲ್ಲಿ ಪವಿತ್ರತೆಯ ಸಂಕೇತವಾಗಿ ಪ್ರಕಾಶವನ್ನು ತೋರಿಸುತ್ತಾರೆ. ಈ
ಸಮಯದಲ್ಲಿ ನೀವೂ ಪವಿತ್ರರಾಗುತ್ತೀರಿ, ನಿಮ್ಮ ಪ್ರಕಾಶ ಎಲ್ಲಿದೆ? ಇದು ನಿಮಗೂ ಗೊತ್ತಿದೆ,
ತಂದೆಯೊಂದಿಗೆ ಯೋಗವನ್ನಿಟ್ಟು ಪವಿತ್ರರಾಗುತ್ತೇವೆ. ಸತ್ಯಯುಗದಲ್ಲಿ ವಿಕಾರದ ಹೆಸರಿರುವುದಿಲ್ಲ.
ವಿಕಾರಿ ರಾವಣನ ರಾಜ್ಯವೇ ಸಮಾಪ್ತಿ ಆಗುತ್ತದೆ. ಇದು ರಾವಣನ ರಾಜ್ಯವೆನ್ನುವುದನ್ನು ಸಿದ್ಧ ಮಾಡಲು
ಇಲ್ಲಿ ರಾವಣನನ್ನು ತೋರಿಸುತ್ತಾರೆ. ರಾವಣನನ್ನು ಪ್ರತಿ ವರ್ಷವೂ ಸುಡುತ್ತಾರೆ. ಆದರೆ ಸುಟ್ಟು
ಹೊಗುವುದೇ ಇಲ್ಲ. ನೀವು ರಾವಣನ ಮೇಲೆ ವಿಜಯವನ್ನು ಹೊಂದುತ್ತೀರಿ ನಂತರ ಈ ರಾವಣ ಇರುವುದೇ ಇಲ್ಲ.
ನೀವು ಅಹಿಂಸಕರಾಗಿದ್ದೀರಿ, ಯೋಗಬಲದಿಂದ ನಿಮ್ಮ ವಿಜಯವಾಗುತ್ತದೆ. ನೆನಪಿನ ಯಾತ್ರೆಯಿಂದ ನಿಮ್ಮ
ಜನ್ಮ ಜನ್ಮಾಂತರದ ಎಲ್ಲಾ ವಿಕರ್ಮಗಳು ವಿನಾಶವಾಗುತ್ತವೆ, ಜನ್ಮ ಜನ್ಮಾಂತರದ ಎಂದರೆ ಯಾವಾಗಿನಿಂದ?
ಯಾವಾಗ ವಿಕರ್ಮಗಳು ವಿನಾಶವಾಗುತ್ತವೆ? ಮೊಟ್ಟ ಮೊದಲು ನೀವು ಆದಿ ಸನಾತನ ದೇವಿ ದೇವತಾ ಧರ್ಮದವರೇ
ಬಂದಿದ್ದಿರಿ, ಸೂರ್ಯವಂಶದವರು ನಂತರ ಚಂದ್ರವಂಶದವರು ಎರಡು ಕಲೆಗಳು ಕಡಿಮೆಯಾಗಿ ಬಿಡುತ್ತವೆ. ನಂತರ
ನಿಧಾನ ನಿಧಾನವಾಗಿ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಈಗ ಮೂಲ ಮಾತು ತಂದೆಯನ್ನು ನೆನಪು ಮಾಡಿ
ಸತೋಪ್ರಧಾನವಾಗುವುದು. ಯಾರು ಕಲ್ಪದ ಹಿಂದೆ ಸತೋಪ್ರಧಾನರಾಗಿದ್ದರೋ ಅವರೇ ಆಗುತ್ತಾರೆ. ನಂಬರ್ವಾರ್
ಅಂತೂ ಇರುತ್ತಾರೆ ನಂತರ ಡ್ರಾಮಾನುಸಾರ ಬರುತ್ತಾರೆಂದರೂ ಸಹ ನಂಬರ್ವಾರಾಗಿಯೇ ಬರುತ್ತಾರೆ. ಬಂದು
ಜನ್ಮ ತೆಗೆದುಕೊಳ್ಳುತ್ತಾರೆ. ನಾಟಕವು ಎಷ್ಟು ವಿಚಿತ್ರವಾಗಿ ಮಾಡಲ್ಪಟ್ಟಿದೆ, ಇದನ್ನು
ಅರಿತುಕೊಳ್ಳುವುದಕ್ಕೂ ತಿಳುವಳಿಕೆ ಬೇಕು. ಹೇಗೆ ನೀವು ಕೆಳಗೆ ಇಳಿದಿದ್ದೀರಿ ಈಗ ಪುನಃ ಏರಬೇಕು.
ನಂಬರ್ವಾರಾಗಿಯೇ ಉತ್ತೀರ್ಣರಾಗುತ್ತೀರಿ ನಂತರ ನಂಬರ್ವಾರಾಗಿ ಕೆಳಗಿಳಿಯುತ್ತೀರಿ.
ಸತೋಪ್ರಧಾನರಾಗುವುದು ನಿಮ್ಮ ಗುರಿ ಉದ್ದೇಶವಾಗಿದೆ. ಎಲ್ಲರೂ ಪೂರ್ಣ ಅಂಕಗಳನ್ನು ಪಡೆಯುವುದಿಲ್ಲ.
100 ಅಂಕಗಳಿಂದ ಹಿಡಿದು ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ಬಹಳ ಪುರುಷಾರ್ಥ ಮಾಡಬೇಕಾಗಿದೆ.
ಈ ಸಮಯದಲ್ಲಿಯೇ ಅನುತ್ತೀರ್ಣರಾಗುತ್ತಾರೆ. ಸೇವೆ ಮಾಡುವುದಂತೂ ಸಹಜವಾಗಿದೆ. ಮ್ಯೂಜಿಯಂನಲ್ಲಿ ನೀವು
ಯಾವ ರೀತಿ ತಿಳಿಸಿಕೊಡುತ್ತೀರಿ ಅದರಿಂದ ಪ್ರತಿಯೊಬ್ಬರ ವಿದ್ಯಾಭ್ಯಾಸದ ಬಗ್ಗೆ ತಿಳಿಯುತ್ತದೆ. ಹೇಗೆ
ಇವರು ಸರಿಯಾಗಿ ತಿಳಿಸುತ್ತಾರೋ ಇಲ್ಲವೋ ಎಂದು ಮುಖ್ಯೋಪಾಧ್ಯಾಯರು ನೋಡುತ್ತಾರೆ,
ತಿಳಿಸಲಿಲ್ಲವೆಂದರೆ ತಾವೇ ಬಂದು ತಿಳಿಸುತ್ತಾರೆ. ಸಹಾಯ ಮಾಡುತ್ತಾರೆ. ಒಬ್ಬರು ಅಥವಾ ಇಬ್ಬರು
ಮಾರ್ಗದರ್ಶಕರನ್ನು ಇಡುತ್ತಾರೆ, ಇವರು ಸರಿಯಾಗಿ ತಿಳಿಸಿ ಕೊಡುತ್ತಾರೆಯೇ ಎಂದು ನೋಡುತ್ತಾರೆ.
ಯಾರಾದರೂ ಯಾವುದೇ ಪ್ರಶ್ನೆ ಕೇಳಿದಾಗ ತಬ್ಬಿಬ್ಬಾಗುವುದಿಲ್ಲ ತಾನೇ ಎನ್ನುವುದನ್ನೂ ಸಹ
ತಿಳಿದುಕೊಳ್ಳುತ್ತಾರೆ. ಸೇವಾ ಕೇಂದ್ರದ ಸೇವೆಗಿಂತ ಪ್ರದರ್ಶನದ ಸೇವೆ ಚೆನ್ನಾಗಿ ನಡೆಯುತ್ತದೆ.
ಪ್ರದರ್ಶನದ ಸೇವೆಗಿಂತ ಮ್ಯೂಜಿಯಂನ ಸೇವೆ ಚೆನ್ನಾಗಿರುತ್ತದೆ. ಮ್ಯೂಜಿಯಂನಲ್ಲಿ ಬಹಳ ಒಳ್ಳೆಯ ಶೋ
ಇರುತ್ತದೆ, ಅದನ್ನು ನೋಡಿದವರು ಹೋಗಿ ಅನ್ಯರಿಗೂ ತಿಳಿಸುತ್ತಾರೆ, ಇದಂತೂ ಅಂತಿಮದವರೆಗೆ ನಡೆಯುತ್ತಾ
ಇರುತ್ತದೆ.
ಈ ಈಶ್ವರೀಯ ವಿಶ್ವ ವಿದ್ಯಾಲಯದ ಹೆಸರು ಚೆನ್ನಾಗಿದೆ, ಇದರಲ್ಲಿ ಮನುಷ್ಯರ ಹೆಸರು ಇಲ್ಲ. ಇದರ
ಉದ್ಘಾಟನೆ ಯಾರು ಮಾಡುತ್ತಾರೆ? ತಂದೆಯು ತಿಳಿಸುತ್ತಾರೆ - ನೀವು ಗಣ್ಯ ವ್ಯಕ್ತಿಗಳಿಂದ ಮಾಡಿಸಿದಾಗ
ದೊಡ್ಡವರ ಹೆಸರನ್ನು ಕೇಳಿ ಅನೇಕರು ಬರುತ್ತಾರೆ. ಒಬ್ಬರ ಹಿಂದೆ ಅನೇಕರು ಬರುತ್ತಾರೆ. ಆದ್ದರಿಂದ
ತಂದೆಯು ದೆಹಲಿಯಲ್ಲಿ ಹೇಳಿದರು - ದೊಡ್ಡ ದೊಡ್ಡ ವ್ಯಕ್ತಿಗಳ ಅಭಿಪ್ರಾಯ ಮುದ್ರಿಸಿ, ಅದನ್ನು
ಮನುಷ್ಯರು ನೋಡಿ, ಇವರ ಬಳಿ ಎಷ್ಟು ದೊಡ್ಡ ದೊಡ್ಡ ವ್ಯಕ್ತಿಗಳು ಹೋಗುತ್ತಾರೆ ಎನ್ನುವುದನ್ನು
ತಿಳಿದುಕೊಳ್ಳಲಿ. ಬಹಳ ಒಳ್ಳೆಯ ಅಭಿಪ್ರಾಯಗಳನ್ನು ಬರೆಯುತ್ತಾರೆಂದರೆ ಅದನ್ನು ಮುದ್ರಿಸುವುದು
ಒಳ್ಳೆಯದು. ಇದರಲ್ಲಿ ಯಾವ ಜಾದುವಿನ ಮಾತಿಲ್ಲ ಆದ್ದರಿಂದ ತಂದೆಯು ಬರೆಯುತ್ತಿರುತ್ತಾರೆ. ಅವರ
ಅಭಿಪ್ರಾಯವನ್ನು ಮುದ್ರಿಸಿ ಇಲ್ಲಿಯೂ ಹಂಚಬೇಕು. ಸುಳ್ಳು ಮಾಯೆ ಸುಳ್ಳು ಶರೀರ.... ಎನ್ನುವ
ಗಾಯನವಿದೆ. ಇದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ಇದು ರಾವಣನ ರಾಜ್ಯ, ಆಸುರೀ ರಾಜ್ಯ ಎಂದು ಅನೇಕರು
ಹೇಳುತ್ತಾರೆ. ಮೊದಲು ಇದು ಯಾರ ರಾಜ್ಯ ಎನ್ನುವ ವಿಚಾರ ಅವರಿಗೆ ಬರಬೇಕು. ನಾವು ಪತಿತರನ್ನು ಪಾವನ
ಮಾಡಿ ಎಂದು ಹೇಳುತ್ತಾರೆಂದರೆ ಆ ಪತಿತತನದಲ್ಲಿ ಎಲ್ಲವೂ ಬಂದು ಬಿಟ್ಟಿತು. ಹೇ ಪತಿತ ಪಾವನ ಬನ್ನಿ
ಎಂದು ಎಲ್ಲರೂ ಹೇಳುತ್ತಾರೆಂದಾಗ ಅವಶ್ಯವಾಗಿ ಪತಿತರಾದರಲ್ಲವೆ.
ನೀವೂ ಈ ಚಿತ್ರವನ್ನು ಸರಿಯಾಗಿ ಮಾಡಿಸಿದ್ದೀರಿ - ಪತಿತ ಪಾವನ ಪರಮಪಿತ ಪರಮಾತ್ಮನಾಗಿದ್ದಾರೆಯೋ
ಅಥವಾ ಎಲ್ಲ ನದಿ, ಸರೋವರಗಳೋ? ಅಮೃತಸರದಲ್ಲಿ ಒಂದು ಸರೋವರವಿದೆ. ನೀರೆಲ್ಲವೂ ಮೈಲಿಗೆಯಾಗಿ
ಬಿಡುತ್ತದೆ, ಅದನ್ನು ಅಮೃತದ ಸರೋವರವೆಂದು ತಿಳಿಯುತ್ತಾರೆ. ದೊಡ್ಡ ದೊಡ್ಡ ರಾಜರು ಅಮೃತವೆಂದು
ತಿಳಿದು ಸರೋವರವನ್ನು ಸ್ವಚ್ಛ ಮಾಡುತ್ತಾರೆ. ಹೆಸರೇ ಆಗಿದೆ ಅಮೃತಸರ. ಗಂಗೆಗೂ ಅಮೃತವೆಂದು
ಹೇಳುತ್ತಾರೆ. ನೀರು ಎಷ್ಟು ಕೊಳಕಾಗಿರುತ್ತದೆ, ಮಾತೇ ಕೇಳಬೇಡಿ. ಬ್ರಹ್ಮಾರವರು ಮೊದಲು ಈ
ನದಿಗಳಲ್ಲಿ ಸ್ನಾನ ಮಾಡಿದ್ದಾರೆ. ನೀರು ಬಹಳ ಕೊಳಕಾಗಿರುತ್ತದೆ, ಮತ್ತೆ ಮಣ್ಣನ್ನು ತೆಗೆದುಕೊಂಡು
ಉಜ್ಜಿ ಸ್ನಾನ ಮಾಡುತ್ತಾರೆ. ಬಾಬಾ ಅವರು ಅನುಭವಿ ಆಗಿದ್ದಾರಲ್ಲವೆ! ತಂದೆಯು ಹಳೆಯ ಅನುಭವೀ
ಶರೀರವನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆ. ಇವರಂತಹ ಅನುಭವಿ ಬೇರೆ ಯಾರೂ ಇಲ್ಲ. ದೊಡ್ಡ ದೊಡ್ಡ
ವೈಸರಾಯ, ರಾಜ ಮೊದಲಾದವರ ಜೊತೆ ಭೇಟಿ ಮಾಡಿರುವ ಅನುಭವವಿದೆ. ಮೊದಲು ಜೋಳ, ಸಜ್ಜೆಯನ್ನೂ
ಮಾರುತ್ತಿದ್ದರು ಬಾಲ್ಯದಲ್ಲಿ 4-6 ಆಣೆ ಸಂಪಾದನೆಯಾದರೂ ಖುಷಿಯಾಗುತಿದ್ದರು. ಈಗಂತೂ ನೋಡಿ, ಎಲ್ಲಿ
ಹೋಗಿ ಬಿಟ್ಟರು. ಹಳ್ಳಿಯ ಬಾಲಕ ಈಗ ಏನಾಗುವವರಿದ್ದಾರೆ. ತಂದೆಯು ತಿಳಿಸುತ್ತಾರೆ, ನಾನು ಸಾಧಾರಣ
ತನುವಿನಲ್ಲಿ ಬರುತ್ತೇನೆ, ಇವರು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ಇವರು ಹೇಗೆ 84 ಜನ್ಮಗಳನ್ನು
ತೆಗೆದುಕೊಂಡು ಕೊನೆಗೆ ಹಳ್ಳಿಯ ಬಾಲಕನಾದರು ಎನ್ನುವುದನ್ನು ತಂದೆಯು ತಿಳಿಸುತ್ತಾರೆ. ಚರಿತ್ರೆಯು
ಕೃಷ್ಣನದೂ ಇಲ್ಲ, ಕಂಸನದೂ ಇಲ್ಲ. ಮಡಕೆ ಒಡೆಯುವುದು ಮುಂತಾದವುವನ್ನು ಕೃಷ್ಣನ ಬಗ್ಗೆ ಸುಳ್ಳು
ಹೇಳುತ್ತಾರೆ. ತಂದೆಯನ್ನು ನೋಡಿ ಎಷ್ಟು ಸಹಜವಾಗಿ ತಿಳಿಸಿಕೊಡುತ್ತಾರೆ - ಮಧುರಾತಿ ಮಧುರ ಮಕ್ಕಳೇ
ಏಳುತ್ತಾ ಕುಳಿತುಕೊಳ್ಳುತ್ತಾ ನೀವು ನನ್ನೊಬ್ಬನನ್ನೇ ನೆನಪು ಮಾಡಿರಿ. ನಾನು ಶ್ರೇಷ್ಠಾತಿ
ಶ್ರೇಷ್ಠ ಸರ್ವ ಆತ್ಮಗಳ ತಂದೆಯಾಗಿದ್ದೇನೆ. ನಾವೆಲ್ಲರೂ ಸಹೋದರರಾಗಿದ್ದೇವೆ, ಅವರು
ತಂದೆಯಾಗಿದ್ದಾರೆ. ನಾವೆಲ್ಲಾ ಸಹೋದರರು ಒಬ್ಬ ತಂದೆಯನ್ನು ನೆನಪು ಮಾಡುತ್ತೇವೆಂದು ನಿಮಗೆ
ಗೊತ್ತಿದೆ. ಮನುಷ್ಯರು ಹೇ ಭಗವಂತ, ಹೇ ಈಶ್ವರ ಎಂದು ಕರೆಯುತ್ತಾರೆ, ಆದರೆ ಏನನ್ನೂ
ತಿಳಿದುಕೊಂಡಿಲ್ಲ. ತಂದೆಯು ಈಗ ಪರಿಚಯ ಕೊಟ್ಟಿದ್ದಾರೆ. ನಾಟಕದನುಸಾರ ಇದಕ್ಕೆ ಗೀತಾಯುಗವೆಂದು
ಹೇಳುತ್ತಾರೆ ಏಕೆಂದರೆ ತಂದೆ ಬಂದು ಜ್ಞಾನ ತಿಳಿಸುತ್ತಾರೆ. ಇದರಿಂದ ನೀವು ಶ್ರೇಷ್ಠರಾಗುತ್ತೀರಿ.
ಆತ್ಮ ಶರೀರ ಧಾರಣೆ ಮಾಡಿ ಮಾತನಾಡುತ್ತದೆ. ತಂದೆ ಸಹ ದಿವ್ಯ ಅಲೌಕಿಕ ಕರ್ತವ್ಯ
ಮಾಡಬೇಕಾಗಿರುವುದರಿಂದ ಶರೀರದ ಆಧಾರ ತೆಗೆದುಕೊಳ್ಳುತ್ತಾರೆ. ಅರ್ಧ ಕಲ್ಪ ಮನುಷ್ಯರು
ದುಃಖಿಯಾಗುತ್ತಾರೆ ಆದ್ದರಿಂದ ತಂದೆಯನ್ನು ಕರೆಯುತ್ತಾರೆ. ತಂದೆಯು ಕಲ್ಪದಲ್ಲಿ ಒಮ್ಮೆ ಮಾತ್ರ
ಬರುತ್ತಾರೆ. ಆದರೆ ನೀವು ಪದೇ ಪದೇ ಪಾತ್ರ ಅಭಿನಯಿಸುತ್ತೀರಿ. ಆದಿ ಸನಾತನ ಧರ್ಮವಾಗಿದೆ, ಈಗ ಅದರ
ಬುನಾದಿಯು ಇಲ್ಲದಂತಾಗಿದೆ. ಕೇವಲ ಅವರ ಚಿತ್ರಗಳಷ್ಟೇ ಉಳಿದಿವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ
- ನೀವು ಈ ಲಕ್ಷ್ಮೀ ನಾರಾಯಣರಾಗಬೇಕು. ಗುರಿ ಧ್ಯೇಯವಂತೂ ಸನ್ಮುಖದಲ್ಲಿದೆ. ಇದು ಆದಿ ಸನಾತನ ದೇವಿ
ದೇವತಾ ಧರ್ಮವಾಗಿದೆ ಇನ್ನು ಹಿಂದೂ ಧರ್ಮವಂತು ಯಾವುದೂ ಇಲ್ಲ. ಹಿಂದೂ ಎನ್ನುವುದು ಹಿಂದೂಸ್ಥಾನದ
ಹೆಸರಾಗಿದೆ. ಹೇಗೆ ಸನ್ಯಾಸಿಗಳು, ಇರುವಂತಹ ಸ್ಥಾನವಾದ ಬಹ್ಮ ತತ್ವವನ್ನೇ ಭಗವಂತನೆಂದು ಹೇಳುತ್ತಾರೆ.
ಹಾಗೆಯೇ ಇಲ್ಲಿ ಇರುವಂತಹ ಸ್ಥಾನವನ್ನು ಧರ್ಮವೆಂದು ಹೇಳಿ ಬಿಡುತ್ತಾರೆ. ಆದರೆ ಆದಿ ಸನಾತನ ಹಿಂದೂ
ಧರ್ಮವೆಂದು ಯಾವುದೂ ಇರಲಿಲ್ಲ. ಹಿಂದೂಗಳು ದೇವತೆಗಳ ಮುಂದೆ ಹೋಗಿ ಅವರಿಗೆ ನಮಸ್ಕಾರ ಮಾಡುತ್ತಾರೆ,
ಮಹಿಮೆ ಮಾಡುತ್ತಾರೆ. ಯಾರು ದೇವತೆಗಳಾಗಿದ್ದರೋ ಅವರೇ ಹಿಂದೂಗಳಾಗಿ ಬಿಟ್ಟರು. ಧರ್ಮ ಭ್ರಷ್ಟರು,
ಕರ್ಮ ಭ್ರಷ್ಟರಾಗಿದ್ದಾರೆ. ಇನ್ನುಳಿದ ಧರ್ಮಗಳು ಸ್ಥಿರವಾಗಿವೆ. ಈ ದೇವತಾ ಧರ್ಮವೇ
ಪ್ರಾಯಲೋಪವಾಗಿದೆ. ನೀವೇ ಪೂಜ್ಯರಾಗಿದ್ದಿರಿ ನಂತರ ನೀವೇ ಪೂಜಾರಿಗಳಾಗಿ ದೇವತೆಗಳ ಪೂಜೆ
ಮಾಡುತ್ತೀರಿ. ಎಷ್ಟೊಂದು ತಿಳಿಸಬೇಕಾಗುತ್ತದೆ. ಕೃಷ್ಣನ ಬಗ್ಗೆ ಸಹ ಏನೆಲ್ಲಾ ಹೇಳುತ್ತಾರೆ.
ಕೃಷ್ಣನು ಸ್ವರ್ಗದ ಮೊದಲ ರಾಜಕುಮಾರನಾಗಿದ್ದನೆಂದರೆ 84 ಜನ್ಮಗಳು ಅವರಿಂದಲೇ ಪ್ರಾರಂಭವಾಗುತ್ತವೆ.
ತಂದೆಯು ತಿಳಿಸುತ್ತಾರೆ, ನಾನು ಅನೇಕ ಜನ್ಮಗಳ ಅಂತಿಮ ಜನ್ಮದಲ್ಲಿಯೂ ಅಂತಿಮದಲ್ಲಿ ಪ್ರವೇಶ
ಮಾಡುತ್ತೇನೆ. ಅಂದಮೇಲೆ ಅದರ ಲೆಕ್ಕವನ್ನೂ ಅವಶ್ಯವಾಗಿ ತಿಳಿಸುತ್ತೇನಲ್ಲವೆ. ಈ ಲಕ್ಷ್ಮೀ ನಾರಾಯಣರೇ
ಮೊಟ್ಟ ಮೊದಲು ಬಂದರು. ಯಾರು ಮೊಟ್ಟ ಮೊದಲು ಬಂದರೋ ಅವರೇ ಪುನಃ ಕೊನೆಯಲ್ಲಿ ಬರುತ್ತಾರೆ. ಕೇವಲ
ಒಬ್ಬ ಕೃಷ್ಣ ಮಾತ್ರ ಇರಲಿಲ್ಲ. ವಿಷ್ಣು ವಂಶಾವಳಿಯೂ ಇತ್ತು. ಈ ಮಾತುಗಳನ್ನು ನೀವೇ ಚೆನ್ನಾಗಿ
ಅರಿತುಕೊಂಡಿದ್ದೀರಿ ಅಂದಮೇಲೆ ನೀವು ಇದನ್ನು ಮರೆಯಬಾರದು. ಈ ಮ್ಯೂಜಿಯಂಗಳನ್ನು ತೆರೆಯುತ್ತಾ
ಇರುತ್ತಾರೆ. ಮುಂದೆ ಅನೇಕರು ಬರುತ್ತಾರೆ. ಹೇಗೆ ಮಂದಿರಗಳಿಗೆ ಹೋಗಿ ತಲೆ ಬಾಗುತ್ತಾರೆ, ನಿಮ್ಮ
ಬಳಿಯೂ ಬರುತ್ತಾರೆ. ಲಕ್ಷ್ಮೀ ನಾರಾಯಣರ ಚಿತ್ರವಿದೆ ಅಂದರೆ ಭಕ್ತರು ಅದರ ಮುಂದೆ ಹಣವನ್ನು
ಇಡುತ್ತಾರೆ. ನೀವು ಹೇಳುತ್ತೀರಿ - ಇಲ್ಲಿ ತಿಳಿದುಕೊಳ್ಳುವ ಮಾತಿದೆ, ಹಣವನ್ನಿಡುವ ಮಾತಲ್ಲ.
ನೀವೀಗ ಶಿವನ ಮಂದಿರಕ್ಕೆ ಹೋದರೆ ಹಣವನ್ನಿಡುತ್ತೀರೇನು? ನೀವು ತಿಳಿಸುವ ಉದ್ದೇಶದಿಂದ ಹೋಗುತ್ತೀರಿ
ಏಕೆಂದರೆ ಇವರೆಲ್ಲರ ಚರಿತ್ರೆಯನ್ನು ತಿಳಿದುಕೊಂಡಿದ್ದೀರಿ. ಮಂದಿರಗಳು ಬಹಳ ಇವೆ, ಮುಖ್ಯವಾದುದು
ಶಿವನ ಮಂದಿರ. ಅಲ್ಲಿ ಅನ್ಯರ ಮೂರ್ತಿಗಳನ್ನು ಏಕೆ ಇಡುತ್ತಾರೆ? ಎಲ್ಲರ ಮುಂದೆ ಹಣವನ್ನಿಡುತ್ತಾ
ಹೋದರೆ ಏಷ್ಟೊಂದಾಗುವುದು! ಅಂದಮೇಲೆ ಅದನ್ನು ಶಿವನ ಮಂದಿರವೆಂದು ಹೇಳುವುದೇ ಅಥವಾ ಶಿವನ ಪರಿವಾರದ
ಮಂದಿರವೆಂದು ಹೇಳುವುದೇ! ಶಿವ ತಂದೆಯು ಈ ಪರಿವಾರವನ್ನು ಸ್ಥಾಪನೆ ಮಾಡಿದರು. ಸತ್ಯ ಸತ್ಯವಾದ
ಪರಿವಾರವು ನೀವು ಬ್ರಾಹ್ಮಣರದಾಗಿದೆ. ಶಿವ ತಂದೆಯ ಪರಿವಾರವು ಸಾಲಿಗ್ರಾಮಗಳಾಗಿವೆ. ನಂತರ ನಾವು
ಸಹೋದರ ಸಹೋದರಿಯರ ಪರಿವಾರದವರಾಗುತ್ತದೆ. ನೀವು ಸತ್ಯಯುಗದಲ್ಲಿ ಬಂದಾಗ ಪರಿವಾರವು ದೊಡ್ಡದಾಗುತ್ತದೆ.
ಅಲ್ಲಿಯೂ ವಿವಾಹವಾದಾಗ ಪರಿವಾರವು ಇನ್ನೂ ವೃದ್ಧಿಯಾಗುತ್ತದೆ. ಮನೆ ಅರ್ಥಾತ್
ಶಾಂತಿಧಾಮದಲ್ಲಿದ್ದಾಗ ತಂದೆ ಮತ್ತು ನಾವು ಸಹೋದರರಿರುತ್ತೇವೆ. ನಂತರ ಇಲ್ಲಿ ಪ್ರಜಾಪಿತ ಬ್ರಹ್ಮನ
ಸಂತಾನರು ಸಹೋದರ ಸಹೋದರಿಯರಿರುತ್ತೇವೆ, ಇಲ್ಲಿ ಇನ್ನಾವ ಸಂಬಂಧವಿಲ್ಲ. ರಾವಣನ ರಾಜ್ಯದಲ್ಲಿ ಬಹಳ
ವೃದ್ಧಿಯಾಗುತ್ತದೆ. ತಂದೆಯು ಎಲ್ಲಾ ರಹಸ್ಯಗಳನ್ನು ತಿಳಿಸುತ್ತಾರೆ. ಪುನಃ ಹೇಳುತ್ತಾರೆ - ಮಧುರಾತಿ
ಮಧುರ ಮಕ್ಕಳೇ, ತಂದೆಯನ್ನು ನೆನಪು ಮಾಡಿದರೆ ಜನ್ಮ ಜನ್ಮಾಂತರದ ಪಾಪಗಳ ಹೊರೆ ಇಳಿಯುತ್ತದೆ.
ವಿದ್ಯೆಯಿಂದ ಪಾಪ ನಾಶವಾಗುವುದಿಲ್ಲ. ತಂದೆಯ ನೆನಪೇ ಮುಖ್ಯವಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾ ಅವರ ನೆನಪು, ಪ್ರೀತಿ ಹಾಗೂ
ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಪೂರ್ಣ
ಅಂಕಗಳಿಂದ ಉತ್ತೀರ್ಣರಾಗಲು ತಮ್ಮ ಬುದ್ಧಿಯನ್ನು ಸತೋಪ್ರಧಾನ, ಪಾರಸವನ್ನಾಗಿ ಮಾಡಿಕೊಳ್ಳಬೇಕು.
ಮಂದ ಬುದ್ಧಿಯವರಿಂದ ಸೂಕ್ಷ್ಮ ಬುದ್ಧಿಯವರಾಗಿ ನಾಟಕದ ವಿಚಿತ್ರ ರಹಸ್ಯವನ್ನು ತಿಳುದುಕೊಳ್ಳಬೇಕು.
2. ಈಗ ತಂದೆಯ ಸಮಾನ ದಿವ್ಯ ಮತು ಅಲೌಕಿಕ ಕರ್ಮ ಮಾಡಬೇಕಾಗಿದೆ. ಡಬಲ್ ಅಹಿಂಸಕರಾಗಿ ಯೋಗಬಲದಿಂದ
ತಮ್ಮ ವಿಕರ್ಮಗಳನ್ನು ವಿನಾಶ ಮಾಡಿಕೊಳ್ಳಬೇಕಾಗಿದೆ.
ವರದಾನ:
ಈ ಬ್ರಾಹ್ಮಣ
ಜೀವನದಲ್ಲಿ ಪರಮಾತ್ಮನ ಆಶೀರ್ವಾದದ ಪಾಲನೆ ಪ್ರಾಪ್ತಿ ಮಾಡಿಕೊಳ್ಳುವಂತಹ ಮಹಾನ್ ಆತ್ಮ ಭವ.
ಈ ಬ್ರಾಹ್ಮಣ ಜೀವನದಲ್ಲಿ
ಪರಮಾತ್ಮನ ಆಶೀರ್ವಾದ ಮತ್ತು ಬ್ರಾಹ್ಮಣ ಪರಿವಾರದ ಆಶೀರ್ವಾದ ಪ್ರಾಪ್ತಿಯಾಗುವುದು. ಈ ಒಂದು ಚಿಕ್ಕ
ಯುಗ ಸರ್ವ ಪ್ರಾಪ್ತಿಗಳ ಮತ್ತು ಸದಾಕಾಲದ ಪ್ರಾಪ್ತಿಗಳನ್ನು ಮಾಡುವ ಯುಗವಾಗಿದೆ. ಸ್ವಯಂ ತಂದೆ
ಪ್ರತಿ ಶ್ರೇಷ್ಠ ಕರ್ಮ, ಶ್ರೇಷ್ಠ ಸಂಕಲ್ಪದ ಆಧಾರದ ಮೇಲೆ ಪ್ರತಿಯೊಬ್ಬ ಬ್ರಾಹಣ ಮಗುವಿಗೆ ಪ್ರತಿ
ಸಮಯ ಹೃದಯದಿಂದ ಆಶೀರ್ವಾದ ಕೊಡುತ್ತಿರುತ್ತಾರೆ. ಆದರೆ ಈ ಎಲ್ಲಾ ಆಶೀರ್ವಾದ ಪಡೆಯಲು ಆಧಾರ ನೆನಪು
ಮತ್ತು ಸೇವೆಯ ಬ್ಯಾಲೆನ್ಸ್ ಆಗಿದೆ. ಈ ಮಹತ್ವವನ್ನು ತಿಳಿದು ಮಹಾನ್ ಆತ್ಮ ಆಗಿ.
ಸ್ಲೋಗನ್:
ವಿಶಾಲ
ಹೃದಯಿಯಾಗಿ ಚೆಹರೆ ಮತ್ತು ಚಲನೆಯಿಂದ ಗುಣ ಹಾಗೂ ಶಕ್ತಿಗಳ ಉಡುಗೊರೆ ಹಂಚುವುದೇ ಶುಭ ಭಾವನೆ, ಶುಭ
ಕಾಮನೆಯಾಗಿದೆ.