12.03.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಅಂತರ್ಮುಖಿಗಳಾಗಿ ನೆನಪಿನ ಅಭ್ಯಾಸ ಮಾಡಿ, ಪರಿಶೀಲನೆ ಮಾಡಿಕೊಳ್ಳಿ - ಆತ್ಮಾಭಿಮಾನಿ ಮತ್ತು
ಪರಮಾತ್ಮ ಅಭಿಮಾನಿಯಾಗಿ ಎಷ್ಟು ಸಮಯ ಇರುತ್ತೇನೆ.”
ಪ್ರಶ್ನೆ:
ಯಾವ ಮಕ್ಕಳು
ಏಕಾಂತದಲ್ಲಿ ಹೋಗಿ ಆತ್ಮಾಭಿಮಾನಿಯಾಗುವ ಅಭ್ಯಾಸ ಮಾಡುತ್ತಾರೆ, ಅವರ ಲಕ್ಷಣಗಳು ಏನಾಗಿರುತ್ತವೆ?
ಉತ್ತರ:
1. ಅವರ
ಮುಖದಿಂದ ಎಂದೂ ಉಲ್ಟಾ-ಸುಲ್ಟಾ ಮಾತುಗಳು ಹೊರ ಬರುವುದಿಲ್ಲ. 2. ಪರಸ್ಪರರಲ್ಲಿ
ಸಹೋದರ-ಸಹೋದರಿಯಲ್ಲಿ ಬಹಳ ಪ್ರೀತಿಯಿರುತ್ತದೆ. ಸದಾ ಕ್ಷೀರ ಖಂಡವಾಗಿ ಇರುತ್ತಾರೆ. 3. ಧಾರಣೆಯು
ಬಹಳ ಚೆನ್ನಾಗಿ ಆಗುತ್ತದೆ. ಅವರಿಂದ ಎಂದೂ ವಿಕರ್ಮವಾಗುವುದಿಲ್ಲ. 4. ಅವರ ದೃಷ್ಟಿಯು ಬಹಳ
ಮಧುರವಾಗಿರುತ್ತದೆ. ಎಂದೂ ದೇಹಾಭಿಮಾನದಲ್ಲಿ ಬರುವುದಿಲ್ಲ. 5. ಅವರು ಯಾರಿಗೂ ದುಃಖವನ್ನು
ಕೊಡುವುದಿಲ್ಲ.
ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ, ಕೇವಲ ಆತ್ಮ ಎಂದು ಹೇಳಿದರೆ ಮತ್ತೆ ಈ ಜೀವವು ಬಿಟ್ಟು ಹೋಗುತ್ತದೆ.
ಆದ್ದರಿಂದ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು
ತಿಳಿಯಬೇಕು. ನಾವಾತ್ಮರಿಗೆ ತಂದೆಯಿಂದ ಈ ಜ್ಞಾನವು ಸಿಗುತ್ತದೆ. ಮಕ್ಕಳು ದೇಹೀ-ಅಭಿಮಾನಿಯಾಗಿರಬೇಕು.
ತಂದೆಯು ಬರುವುದೇ ಮಕ್ಕಳನ್ನು ಕರೆದುಕೊಂಡು ಹೋಗುವುದಕ್ಕಾಗಿ. ಭಲೇ ನೀವು ಸತ್ಯಯುಗದಲ್ಲಿ
ಆತ್ಮಾಭಿಮಾನಿಯಾಗಿರುತ್ತೀರಿ, ಆದರೆ ಪರಮಾತ್ಮ ಅಭಿಮಾನಿಯಾಗಿರುವುದಿಲ್ಲ. ಇಲ್ಲಿ ನೀವು
ಆತ್ಮಾಭಿಮಾನಿಯೂ ಆಗುತ್ತೀರಿ, ಪರಮಾತ್ಮ ಅಭಿಮಾನಿಯೂ ಆಗುತ್ತೀರಿ ಅರ್ಥಾತ್ ನಾವು ಇಲ್ಲಿ ಪರಮಾತ್ಮ
ತಂದೆಯ ಸಂತಾನರಾಗುತ್ತೇವೆ. ಇಲ್ಲಿಯ ಮತ್ತು ಅಲ್ಲಿಯದರಲ್ಲಿ ಬಹಳ ಅಂತರವಿದೆ. ಇಲ್ಲಿ
ವಿದ್ಯಾಭ್ಯಾಸವಿದೆ ಆದರೆ ಅಲ್ಲಿ ಓದುವ ಮಾತೇ ಇಲ್ಲ. ಇಲ್ಲಿ ಪ್ರತಿಯೊಬ್ಬರೂ ತಮ್ಮನ್ನು ಆತ್ಮನೆಂದು
ತಿಳಿಯುತ್ತಾರೆ, ನಮಗೆ ತಂದೆಯು ಓದಿಸುತ್ತಾರೆ - ಈ ನಿಶ್ಚಯದಲ್ಲಿದ್ದು ಕೇಳಿದರೆ ಬಹಳ
ಧಾರಣೆಯಾಗುತ್ತದೆ, ಆತ್ಮಾಭಿಮಾನಿಯಾಗಿ ಬಿಡುತ್ತೀರಿ. ಈ ಸ್ಥಿತಿಯಲ್ಲಿ ಸ್ಥಿತರಾಗುವ ಗುರಿಯು ಬಹಳ
ಉನ್ನತವಾಗಿದೆ. ಕೇಳುವುದರಲ್ಲಿ ಬಹಳ ಸಹಜವೆನಿಸುತ್ತದೆ. ಮಕ್ಕಳು ಇದೇ ಅನುಭವವನ್ನು ತಿಳಿಸಬೇಕು -
ನಾವು ಹೇಗೆ ಆತ್ಮನೆಂದು ತಿಳಿದು ಅನ್ಯರನ್ನೂ ಆತ್ಮನೆಂದು ತಿಳಿದು ಮಾತನಾಡುತ್ತೇವೆ. ತಂದೆಯೂ
ತಿಳಿಸುತ್ತಾರೆ - ಭಲೇ ನಾನು ಈ ಶರೀರದಲ್ಲಿದ್ದೇನೆ ಆದರೆ ಇದು ನನ್ನ ವಾಸ್ತವಿಕ ಅಭ್ಯಾಸವಾಗಿದೆ,
ನಾನು ಮಕ್ಕಳನ್ನು ಆತ್ಮಗಳೆಂದೇ ತಿಳಿಯುತ್ತೇನೆ, ಆತ್ಮಗಳಿಗೆ ಓದಿಸುತ್ತೇನೆ. ಭಕ್ತಿಮಾರ್ಗದಲ್ಲಿಯೂ
ಸಹ ಆತ್ಮಗಳು ಪಾತ್ರವನ್ನಭಿನಯಿಸುತ್ತಾ ಬಂದಿದ್ದೀರಿ. ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ
ಪತಿತವಾಗಿ ಬಿಟ್ಟಿದ್ದೀರಿ. ಆತ್ಮವು ಈಗ ಮತ್ತೆ ಪವಿತ್ರವಾಗಬೇಕು ಅಂದಾಗ ಎಲ್ಲಿಯವರೆಗೆ ತಂದೆಯನ್ನು
ಪರಮಾತ್ಮನೆಂದು ತಿಳಿದು ನೆನಪು ಮಾಡುವುದಿಲ್ಲವೋ ಅಲ್ಲಿಯವರೆಗೆ ಹೇಗೆ ಪವಿತ್ರವಾಗುತ್ತೀರಿ!
ಇದರಲ್ಲಿ ಮಕ್ಕಳು ಬಹಳ ಅಂತರ್ಮುಖಿಯಾಗಿ ನೆನಪಿನ ಅಭ್ಯಾಸ ಮಾಡಬೇಕಾಗಿದೆ, ಜ್ಞಾನವು ಬಹಳ ಸಹಜವಾಗಿದೆ.
ಬಾಕಿ ಈ ನಿಶ್ಚಯವೂ ಪಕ್ಕಾ ಇರಲಿ - ನಾವಾತ್ಮಗಳು ಓದುತ್ತೇವೆ, ನಮಗೆ ತಂದೆಯು ಓದಿಸುತ್ತಾರೆ.
ಇದರಿಂದ ಧಾರಣೆಯೂ ಆಗುವುದು ಮತ್ತು ಯಾವುದೇ ವಿಕರ್ಮವೂ ಆಗುವುದಿಲ್ಲ. ಈ ಸಮಯದಲ್ಲಿ ನಮ್ಮಿಂದ
ಯಾವುದೇ ವಿಕರ್ಮವಾಗುವುದಿಲ್ಲ ಎಂದು ಹೇಳುವಂತಿಲ್ಲ. ಅಂತ್ಯದಲ್ಲಿಯೇ ವಿಕರ್ಮಾಜೀತರಾಗುತ್ತೀರಿ.
ಸಹೋದರ-ಸಹೋದರ ದೃಷ್ಟಿಯು ಬಹಳ ಮಧುರವಾಗಿರುತ್ತದೆ, ಇದರಲ್ಲಿ ಎಂದೂ ದೇಹಾಭಿಮಾನವು ಬರುವುದಿಲ್ಲ.
ತಂದೆಯ ಈ ಜ್ಞಾನವು ಬಹಳ ಆಳವಾಗಿದೆ ಎಂದು ಮಕ್ಕಳೂ ತಿಳಿಯುತ್ತೀರಿ. ಒಂದು ವೇಳೆ ಶ್ರೇಷ್ಠಾತಿ
ಶ್ರೇಷ್ಠರಾಗಬೇಕೆಂದರೆ ಈ ಅಭ್ಯಾಸವನ್ನು ಬಹಳ ಚೆನ್ನಾಗಿ ಮಾಡಬೇಕು. ಇದರ ಮನನ ಚಿಂತನೆ ಮಾಡಬೇಕು.
ಅಂತರ್ಮುಖಿಯಾಗಲು ಏಕಾಂತವು ಬೇಕು. ಇಲ್ಲಿರುವ ಏಕಾಂತವು ಮನೆಯಲ್ಲಿ ಉದ್ಯೋಗ-ವ್ಯವಹಾರಗಳಲ್ಲಿ ಸಿಗಲು
ಸಾಧ್ಯವಿಲ್ಲ. ಇಲ್ಲಿ ನೀವು ಬಹಳ ಚೆನ್ನಾಗಿ ಅಭ್ಯಾಸವನ್ನು ಮಾಡಬಹುದು. ಆತ್ಮವನ್ನೇ ನೋಡಬೇಕು ಮತ್ತು
ತಮ್ಮನ್ನು ಆತ್ಮನೆಂದು ತಿಳಿಯುವ ಅಭ್ಯಾಸವನ್ನು ಮಾಡುವುದರಿಂದ ಅದೇ ಹವ್ಯಾಸವಾಗಿ ಬಿಡುವುದು ಮತ್ತು
ತಮ್ಮ ಚಾರ್ಟನ್ನೂ ಇಡಬೇಕು. ಎಲ್ಲಿಯವರೆಗೆ ಆತ್ಮಾಭಿಮಾನಿಯಾಗಿದ್ದೇವೆ? ಆತ್ಮಗಳಿಗೇ ನಾನು
ತಿಳಿಸುತ್ತೇನೆ, ಅವರೊಂದಿಗೇ ಮಾತನಾಡುತ್ತೇನೆ. ಇದು ಬಹಳ ಅಭ್ಯಾಸವು ಬೇಕು. ಮಕ್ಕಳೂ ಸಹ ಈ ರೀತಿ
ತಿಳಿದಿರಬೇಕು - ಈ ಮಾತು ಸರಿಯಾಗಿದೆ. ದೇಹಾಭಿಮಾನವು ಹೋಗಬೇಕು ಮತ್ತು ನಾವು ಆತ್ಮಾಭಿಮಾನಿಯಾಗಿ
ಬಿಡಬೇಕು. ಧಾರಣೆ ಮಾಡುತ್ತಾ ಮತ್ತು ಮಾಡಿಸುತ್ತಾ ಹೋಗಬೇಕು. ಪ್ರಯತ್ನ ಪಟ್ಟು ತಮ್ಮನ್ನು
ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದು - ಈ ಚಾರ್ಟ್ ಬಹಳ ಆಳವಾಗಿದೆ. ದೊಡ್ಡ-ದೊಡ್ಡ
ಮಹಾರಥಿಗಳೂ ಸಹ ಹೀಗೆ ತಿಳಿದುಕೊಂಡಿರುತ್ತೀರಿ - ತಂದೆಯು ದಿನ-ಪ್ರತಿದಿನ ವಿಚಾರ ಸಾಗರ ಮಂಥನ ಮಾಡಲು
ಯಾವ ಸಬ್ಜೆಕ್ಟ್ ನ್ನು ಕೊಡುತ್ತಾರೆಯೋ ಇವಂತೂ ಬಹಳ ಒಳ್ಳೆಯ ಅಂಶಗಳಾಗಿವೆ. ಮತ್ತೆಂದೂ ಸಹ ಮುಖದಿಂದ
ಉಲ್ಟಾ-ಸುಲ್ಟಾ ಶಬ್ಧಗಳು ಬರುವುದಿಲ್ಲ. ಸಹೋದರ-ಸಹೋದರರ ನಡುವೆ ಬಹಳ ಪ್ರೀತಿಯಿರುತ್ತದೆ.
ನಾವೆಲ್ಲರೂ ಈಶ್ವರನ ಸಂತಾನರಾಗಿದ್ದೇವೆ, ತಂದೆಯ ಮಹಿಮೆಯನ್ನಂತೂ ತಿಳಿದೇ ಇದ್ದೀರಿ. ಕೃಷ್ಣನ
ಮಹಿಮೆಯೇ ಬೇರೆ. ಕೃಷ್ಣನಿಗೆ ಸರ್ವಗುಣ ಸಂಪನ್ನನೆಂದು ಹೇಳುತ್ತಾರೆ. ಆದರೆ ಕೃಷ್ಣನ ಬಳಿ
ಗುಣಗಳೆಲ್ಲಿಂದ ಬಂದಿತು. ಭಲೇ ಅವರ ಮಹಿಮೆಯೇ ಬೇರೆಯಾಗಿದೆ ಆದರೆ ಸರ್ವಗುಣ ಸಂಪನ್ನರಾಗಿರುವುದು
ಜ್ಞಾನ ಸಾಗರ ತಂದೆಯಿಂದಲೇ ಅಲ್ಲವೆ. ಅಂದಾಗ ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು -
ಹೆಜ್ಜೆ-ಹೆಜ್ಜೆಯಲ್ಲಿ ಪೂರ್ಣ ಲೆಕ್ಕವನ್ನಿಡಬೇಕು. ಹೇಗೆ ವ್ಯಾಪಾರಿಗಳು ಇಡೀ ದಿನದ
ಲೆಕ್ಕಾಚಾರವನ್ನು ರಾತ್ರಿಯಲ್ಲಿ ನೋಡುತ್ತಾರೆ, ಹಾಗೆಯೇ ನಿಮ್ಮದೂ ವ್ಯಾಪಾರವಾಗಿದೆಯಲ್ಲವೆ.
ಆದ್ದರಿಂದ ರಾತ್ರಿಯಲ್ಲಿ ನೋಡಿಕೊಳ್ಳಬೇಕು - ನಾನು ಎಲ್ಲರನ್ನೂ ಸಹೋದರ-ಸಹೋದರನೆಂದು ತಿಳಿದು
ಮಾತನಾಡಿದ್ದೇನೆಯೇ? ಯಾರಿಗೂ ದುಃಖ ಕೊಡಲಿಲ್ಲವೇ? ಏಕೆಂದರೆ ನಿಮಗೆ ಗೊತ್ತಿದೆ- ನಾವೆಲ್ಲಾ ಸಹೋದರರು
ಕ್ಷೀರ ಸಾಗರದೆಡೆಗೆ ಹೋಗುತ್ತಿದ್ದೇವೆ. ಇದು ವಿಷಯ ಸಾಗರವಾಗಿದೆ. ನೀವೀಗ ರಾವಣ ರಾಜ್ಯದಲ್ಲಿಯೂ
ಇಲ್ಲ, ರಾಮ ರಾಜ್ಯದಲ್ಲಿಯೂ ಇಲ್ಲ, ಮಧ್ಯದಲ್ಲಿದ್ದೀರಿ. ಆದ್ದರಿಂದ ತಮ್ಮನ್ನು ಆತ್ಮನೆಂದು ತಿಳಿದು
ತಂದೆಯನ್ನು ನೆನಪು ಮಾಡಬೇಕು. ಎಲ್ಲಿಯವರೆಗೆ ಸಹೋದರ-ಸಹೋದರರ ದೃಷ್ಟಿಯು ಸ್ಥಿತಿಯಿತ್ತೆಂದು
ನೋಡಿಕೊಳ್ಳಿ. ನಾವೆಲ್ಲಾ ಆತ್ಮಗಳು ಪರಸ್ಪರ ಸಹೋದರ-ಸಹೋದರರಾಗಿದ್ದೇವೆ, ಈ ಶರೀರದಿಂದ
ಪಾತ್ರವನ್ನಭಿನಯಿಸುತ್ತೇವೆ. ಆತ್ಮ ಅವಿನಾಶಿಯಾಗಿದೆ, ಶರೀರ ವಿನಾಶಿಯಾಗಿದೆ. ನಾವು 84 ಜನ್ಮಗಳ
ಪಾತ್ರವನ್ನಭಿನಯಿಸಿದ್ದೇವೆ, ಈಗ ತಂದೆಯು ಬಂದಿದ್ದಾರೆ ಮತ್ತು ತಿಳಿಸುತ್ತಾರೆ - ನನ್ನೊಬ್ಬನನ್ನೇ
ನೆನಪು ಮಾಡಿ ತಮ್ಮನ್ನು ಆತ್ಮನೆಂದು ತಿಳಿಯಿರಿ. ಆತ್ಮವೆಂದು ತಿಳಿಯುವುದರಿಂದ ಸಹೋದರ-ಸಹೋದರರಾಗಿ
ಬಿಡುತ್ತೇವೆ. ಇದನ್ನು ತಂದೆಯೇ ತಿಳಿಸುತ್ತಾರೆ. ತಿಳಿಸುವುದು ತಂದೆಯ ವಿನಃ ಮತ್ತ್ಯಾರ ಪಾತ್ರವೂ
ಇಲ್ಲ. ಪ್ರೇರಣೆಯ ಮಾತೂ ಇಲ್ಲ. ಹೇಗೆ ಶಿಕ್ಷಕರು ಕುಳಿತು ಮಕ್ಕಳಿಗೆ ತಿಳಿಸುತ್ತಾರೆಯೋ ಹಾಗೆಯೇ
ಇಲ್ಲಿ ನಮಗೆ ತಂದೆಯು ತಿಳಿಸುತ್ತಾರೆ. ಇವು ವಿಚಾರ ಮಾಡುವ ಮಾತಾಗಿದೆ, ಇದರಲ್ಲಿ ಸಮಯ
ಕೊಡಬೇಕಾಗುತ್ತದೆ. ತಂದೆಯು ಉದ್ಯೋಗ-ವ್ಯವಹಾರಗಳನ್ನು ಮಾಡುವುದಕ್ಕೆ ಹೇಳಿದ್ದಾರೆ ಆದರೆ ಇದರಲ್ಲಿ
ನೆನಪಿನ ಯಾತ್ರೆಯೂ ಸಹ ಅವಶ್ಯಕ. ಅದಕ್ಕಾಗಿ ಸಮಯವನ್ನು ತೆಗೆಯಬೇಕು. ಎಲ್ಲರ ಸೇವೆ
ಭಿನ್ನ-ಭಿನ್ನವಾಗಿದೆ, ಕೆಲವರು ಬಹಳ ಸಮಯವನ್ನು ತೆಗೆಯಬಹುದು, ಪತ್ರಿಕೆಯಲ್ಲಿಯೂ ಸಹ ಯುಕ್ತಿಯಿಂದ
ಬರೆಯಬೇಕು - ಇಲ್ಲಿ ತಂದೆಯನ್ನು ನೆನಪು ಮಾಡಲಾಗುತ್ತದೆ ಮತ್ತು ಪರಸ್ಪರ ಸಹೋದರ-ಸಹೋದರನೆಂದು
ತಿಳಿಯಬೇಕಾಗುತ್ತದೆ. ತಂದೆಯು ಬಂದು ಎಲ್ಲಾ ಆತ್ಮಗಳಿಗೆ ಓದಿಸುತ್ತಾರೆ, ಆತ್ಮದಲ್ಲಿ ದೈವೀ ಗುಣಗಳ
ಸಂಸ್ಕಾರವನ್ನು ಈಗಲೇ ತುಂಬಬೇಕಾಗಿದೆ. ಭಾರತದ ಪ್ರಾಚೀನ ಯೋಗವೆಂದರೇನು ಎಂದು ಮನುಷ್ಯರು
ಕೇಳುತ್ತಾರೆ, ಆಗ ನೀವು ತಿಳಿಸಿ. ಆದರೆ ನೀವೀಗ ಕೆಲವರೇ ಇದ್ದೀರಿ. ನಿಮ್ಮ ಹೆಸರು ಇನ್ನೂ
ಪ್ರಸಿದ್ಧವಾಗಿಲ್ಲ. ಈಶ್ವರನು ಯೋಗವನ್ನು ಕಲಿಸುತ್ತಾರೆಂದರೆ ಅವಶ್ಯವಾಗಿ ಅವರ ಮಕ್ಕಳೂ ಇರುತ್ತಾರೆ.
ಅವರೂ ಸಹ ತಿಳಿದುಕೊಂಡಿದ್ದಾರೆ ಮತ್ತ್ಯಾರಿಗೂ ಇದು ಗೊತ್ತಿಲ್ಲ. ನಿರಾಕಾರ ತಂದೆಯು ಹೀಗೆ
ಓದಿಸುತ್ತಾರೆ, ಅವರು ತಾವೇ ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಸಂಗಮಯುಗದಲ್ಲಿ ಬಂದು
ತಿಳಿಸುತ್ತೇನೆ - ನಾನು ಹೇಗೆ ಬರುತ್ತೇನೆ, ಯಾರ ತನುವಿನಲ್ಲಿ ಬರುತ್ತೇನೆ ಎಂದು. ಇದರಲ್ಲಿ
ತಬ್ಬಿಬ್ಬಾಗುವ ಮಾತಿಲ್ಲ. ಇದು ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ, ನಾನು ಒಬ್ಬರಲ್ಲಿಯೇ
ಬರುತ್ತೇನೆ. ಪ್ರಜಾಪಿತ ಬ್ರಹ್ಮಾರವರ ಮೂಲಕ ಸ್ಥಾಪನೆ. ಮೊಟ್ಟ ಮೊದಲು ಇವರೇ ಅನನ್ಯ ಮಗುವಾಗುತ್ತಾರೆ,
ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ಮತ್ತೆ ಅವರೇ ಮೊದಲ ನಂಬರಿನಲ್ಲಿ (ಸತ್ಯಯುಗದಲ್ಲಿ)
ಬರುತ್ತಾರೆ. ಈ ಚಿತ್ರದ ತಿಳುವಳಿಕೆ ಬಹಳ ಇದೆ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ
ಹೇಗಾಗುತ್ತಾರೆ ಎಂಬುದನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ, ತಿಳಿಸುವುದಕ್ಕೂ ಯುಕ್ತಿ ಬೇಕು.
ತಂದೆಯು ಹೇಗೆ ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದಾರೆ, ಹೇಗೆ ಚಕ್ರವು ಸುತ್ತುತ್ತದೆ ಎಂಬುದು
ಈಗ ನೀವು ಮಕ್ಕಳಿಗೆ ಗೊತ್ತಿದೆ. ಈ ಮಾತುಗಳನ್ನು ಮತ್ತ್ಯಾರೂ ಅರಿತುಕೊಳ್ಳಲು ಸಾಧ್ಯವಿಲ್ಲ.
ಆದ್ದರಿಂದ ತಂದೆಯು ತಿಳಿಸುತ್ತಾರೆ - ಹೀಗೀಗೆ ಯುಕ್ತಿಯಿಂದ ಬರೆಯಿರಿ, ಯಥಾರ್ಥ ಯೋಗವನ್ನು ಯಾರು
ಕಲಿಸುತ್ತಾರೆಂದು ಅರ್ಥವಾಗಿದ್ದೇ ಆದರೆ ನಿಮ್ಮ ಬಳಿ ಅನೇಕರು ಬಂದು ಬಿಡುತ್ತಾರೆ. ಯಾವ
ದೊಡ್ಡ-ದೊಡ್ಡ ಆಶ್ರಮಗಳಿರುತ್ತವೆಯೋ ಅವು ಅಲುಗಾಡುತ್ತವೆ, ಇದು ಅಂತಿಮದಲ್ಲಾಗುತ್ತದೆ. ಆಗ ಎಲ್ಲರೂ
ಆಶ್ಚರ್ಯಚಕಿತರಾಗುತ್ತಾರೆ. ಇಷ್ಟೆಲ್ಲಾ ಸಂಸ್ಥೆಗಳು ಭಕ್ತಿಮಾರ್ಗದ್ದಾಗಿದೆ, ಜ್ಞಾನ ಮಾರ್ಗದ್ದು
ಒಂದೂ ಇಲ್ಲವೆಂದು. ಆಗ ತಿಳಿಯುತ್ತದೆ ಆಗಲೇ ನಿಮ್ಮ ವಿಜಯವಾಗುತ್ತದೆ. ಇದೂ ಸಹ ನೀವು
ತಿಳಿದುಕೊಂಡಿದ್ದೀರಿ - ಪ್ರತೀ 5000 ವರ್ಷಗಳ ನಂತರ ತಂದೆಯು ಬರುತ್ತಾರೆ. ತಂದೆಯ ಮೂಲಕ ನೀವು
ಕಲಿಯುತ್ತಿದ್ದೀರಿ, ಅನ್ಯರಿಗೂ ಕಲಿಸುತ್ತೀರಿ. ಯಾರಿಗೆ ಹೇಗೆ ಬರವಣಿಗೆಯಲ್ಲಿ ತಿಳಿಸಬೇಕು ಎಂಬ
ಎಲ್ಲಾ ಯುಕ್ತಿಗಳು ಕಲ್ಪ-ಕಲ್ಪವೂ ರಚಿಸಲ್ಪಡುತ್ತದೆ. ಇದರಿಂದ ಅನೇಕರಿಗೆ ತಿಳಿಯುತ್ತದೆ - ತಂದೆಯ
ವಿನಃ ಮತ್ತ್ಯಾರೂ ಒಂದು ಸ್ವದ್ಧರ್ಮದ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಇದು ನಿಮಗೂ ಗೊತ್ತಿದೆ - ಆ
ಕಡೆ ರಾವಣನಿದ್ದಾನೆ ಮತ್ತು ಇತ್ತ ಕಡೆ ರಾಮನಿದ್ದಾನೆ. ರಾವಣನ ಮೇಲೆ ನೀವು ಜಯ ಗಳಿಸುತ್ತೀರಿ.
ಅದೆಲ್ಲವೂ ರಾವಣನ ಸಂಪ್ರದಾಯವಾಗಿದೆ. ನೀವು ಈಶ್ವರೀಯ ಸಂಪ್ರದಾಯದವರು ಕೆಲವರೇ ಇದ್ದೀರಿ. ಭಕ್ತಿಯ
ಆಡಂಬರವು ಬಹಳ ಇದೆ. ಎಲ್ಲೆಲ್ಲಿ ನೀರು ಇರುತ್ತದೆಯೋ ಅಲ್ಲಿ ಮೇಳವಾಗುತ್ತದೆ, ಎಷ್ಟೊಂದು ಖರ್ಚು
ಮಾಡುತ್ತಾರೆ, ಅನೇಕರು ಮುಳುಗಿ ಸಾಯುತ್ತಾರೆ. ಇಲ್ಲಂತೂ ಆ ಮಾತಿಲ್ಲ ಆದರೂ ತಂದೆಯು ತಿಳಿಸುತ್ತಾರೆ
- ಇಲ್ಲಿ ಮಕ್ಕಳು ಆಶ್ಚರ್ಯವೆನಿಸುವಂತೆ ಬರುತ್ತಾರೆ. ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ,
ಚೆನ್ನಾಗಿ ಕೇಳುತ್ತಾರೆ ಅನ್ಯರಿಗೂ ತಿಳಿಸುತ್ತಾರೆ, ಪವಿತ್ರರಾಗಿರುತ್ತಾರೆ ಆದರೂ ಅಹೋ ಮಾಯೆ
ಸೋಲನ್ನನುಭವಿಸುತ್ತಾರೆ. ಕಲ್ಪ-ಕಲ್ಪವೂ ಹೀಗೆಯೇ ಆಗುತ್ತದೆ. ಮಾಯೆಗೆ ಸೋತು ಹೋಗುತ್ತಾರೆ. ಇದು
ಮಾಯೆಯೊಂದಿಗೆ ಯುದ್ಧವಾಗಿದೆ. ಮಾಯೆಯದೂ ಪ್ರಭಾವವಿದೆ. ಭಕ್ತಿಯಂತೂ ಅಲುಗಾಡುತ್ತದೆ. ಅರ್ಧಕಲ್ಪ
ನೀವು ಪ್ರಾಲಬ್ಧವನ್ನು ಭೋಗಿಸುತ್ತೀರಿ ಮತ್ತೆ ರಾವಣ ರಾಜ್ಯದಿಂದ ಭಕ್ತಿಯು ಪ್ರಾರಂಭವಾಗುತ್ತದೆ
ಅದರ ಚಿಹ್ನೆಗಳೂ ಇವೆ. ವಿಕಾರದಲ್ಲಿ ಹೋಗುತ್ತಾರೆಂದರೆ ಮತ್ತೆ ದೇವತೆಗಳಾಗಿಯಂತೂ ಉಳಿಯಲಿಲ್ಲ. ಅವರು
ಹೇಗೆ ವಿಕಾರಿಯಾಗುತ್ತಾರೆ ಎಂಬುದನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಕೇವಲ ವಾಮ
ಮಾರ್ಗದಲ್ಲಿ ಹೋದರೆಂಬುದನ್ನು ಶಾಸ್ತ್ರಗಳಲ್ಲಿ ಬರೆದಿದ್ದಾರೆ. ಆದರೆ ಯಾವಾಗ ಹೋದರೆಂಬುದನ್ನು
ತಿಳಿದುಕೊಂಡಿಲ್ಲ. ಇವೆಲ್ಲಾ ಮಾತುಗಳು ಬಹಳ ಚೆನ್ನಾಗಿ ತಿಳಿದುಕೊಳ್ಳುವ ಮತ್ತು
ತಿಳಿಸುವಂತದ್ದಾಗಿದೆ. ಇದನ್ನೂ ಸಹ ನಿಶ್ಚಯ ಬುದ್ಧಿಯಿದ್ದಾಗ ಮಾತ್ರ ತಿಳಿಯುತ್ತದೆ. ಅಂತಹವರಿಗೆ
ತಂದೆಯ ಕಡೆ ಆಕರ್ಷಣೆಯಾಗುತ್ತದೆ. ತಂದೆಯೊಂದಿಗೆ ನಮ್ಮನ್ನು ಮಿಲನ ಮಾಡಿಸಿ ಎಂದು ಹೇಳುತ್ತಾರೆ.
ಆದರೆ ಮೊದಲೂ ನೋಡಿ, ಮನೆಗೆ ಹೋದ ನಂತರ ಆ ನಶೆಯಿರುತ್ತದೆಯೇ? ನಿಶ್ಚಯ ಬುದ್ಧಿಯಿರುತ್ತದೆಯೇ? ಭಲೇ
ನೆನಪು ಸತಾಯಿಸುತ್ತದೆ ಆದರೆ ಪತ್ರವನ್ನು ಬರೆಯುತ್ತಾ ಇರಬೇಕು - ಬಾಬಾ, ತಾವು ನಮ್ಮ ಸತ್ಯ
ತಂದೆಯಾಗಿದ್ದೀರಿ, ತಮ್ಮಿಂದ ಶ್ರೇಷ್ಠ ಆಸ್ತಿಯು ಸಿಗುತ್ತದೆ, ತಮ್ಮನ್ನು ಮಿಲನ ಮಾಡದೇ ಇರುವುದು
ನಮ್ಮಿಂದ ಆಗುವುದಿಲ್ಲ. ನಿಶ್ಚಿತಾರ್ಥದ ನಂತರ ಮಿಲನವಾಗುತ್ತದೆ, ನಿಶ್ಚಿತಾರ್ಥವಾದ ನಂತರ
ಚಡಪಡಿಸುತ್ತಾರೆ. ಅಂದಮೇಲೆ ನಿಮಗೆ ಗೊತ್ತಿದೆ - ನಮ್ಮ ಬೇಹದ್ದಿನ ತಂದೆಯು ಶಿಕ್ಷಕ, ಪ್ರಿಯತಮ
ಎಲ್ಲವೂ ಆಗಿದ್ದಾರೆ ಮತ್ತೆಲ್ಲರಿಂದಲೂ ದುಃಖವೇ ಸಿಕ್ಕಿತು. ಅದರ ಲೆಕ್ಕದಲ್ಲಿ ತಂದೆಯು ಸುಖವನ್ನೇ
ಕೊಡುತ್ತಾರೆ. ಸತ್ಯಯುಗದಲ್ಲಿಯೂ ಸಹ ಎಲ್ಲರೂ ಸುಖವನ್ನೇ ಕೊಡುತ್ತಾರೆ, ಈ ಸಮಯದಲ್ಲಿ ನೀವು ಸುಖದ
ಸಂಬಂಧದಲ್ಲಿ ಬಂಧಿತರಾಗುತ್ತಿದ್ದೀರಿ. ಇದು ಪುರುಷೋತ್ತಮರಾಗುವ ಪುರುಷೋತ್ತಮ ಯುಗವಾಗಿದೆ. ಮೂಲ
ಮಾತೇನೆಂದರೆ ತಮ್ಮನ್ನು ಆತ್ಮ ಎಂದು ತಿಳಿಯಬೇಕು. ತಂದೆಯನ್ನು ಪ್ರೀತಿಯಿಂದ ನೆನಪು ಮಾಡಬೇಕು.
ನೆನಪಿನಿಂದಲೇ ಖುಷಿಯ ನಶೆಯೇರುತ್ತದೆ. ನಾವೇ ಎಲ್ಲರಿಗಿಂತ ಹೆಚ್ಚಿನ ಭಕ್ತಿ ಮಾಡಿದ್ದೇವೆ, ಬಹಳ
ಪೆಟ್ಟು ಅನುಭವಿಸಿದ್ದೇವೆ. ಈಗ ತಂದೆಯು ಹಿಂತಿರುಗಿ ಕರೆದುಕೊಂಡು ಹೋಗಲು ಬಂದಿದ್ದಾರೆ ಅಂದಮೇಲೆ
ಅವಶ್ಯವಾಗಿ ಪವಿತ್ರರಾಗಬೇಕು ಮತ್ತು ದೈವೀ ಗುಣ ಧಾರಣೆ ಮಾಡಬೇಕು. ಇಡೀ ದಿನದಲ್ಲಿ ಎಷ್ಟು ಜನರಿಗೆ
ತಂದೆಯ ಪರಿಚಯ ಕೊಟ್ಟೆನೆಂದು ಲೆಕ್ಕವನ್ನಿಡಬೇಕು. ತಂದೆಯ ಪರಿಚಯ ಕೊಡದ ವಿನಃ ಸುಖದ ಅನುಭವವೇ
ಆಗುವುದಿಲ್ಲ, ಚಡಪಡಿಸುವಂತೆ ಆಗಿ ಬಿಡುತ್ತದೆ. ಯಜ್ಞದಲ್ಲಿ ಬಹಳ ವಿಘ್ನಗಳೂ ಬರುತ್ತವೆ. ಪೆಟ್ಟು
ತಿನ್ನುತ್ತಾರೆ, ಪವಿತ್ರತೆಯ ಮಾತಿರುವ ಮತ್ತ್ಯಾವುದೇ ಸತ್ಸಂಗಗಳಿಲ್ಲ. ಇಲ್ಲಿ ನೀವು
ಪವಿತ್ರರಾಗುತ್ತೀರೆಂದರೆ ಅಸುರರು ವಿಘ್ನಗಳನ್ನು ಹಾಕುತ್ತಾರೆ. ಪಾವನರಾಗಿ ಮನೆಗೆ ಹೋಗಬೇಕಾಗಿದೆ.
ಆತ್ಮವು ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ಯುದ್ಧದ ಮೈದಾನದಲ್ಲಿ ಸತ್ತರೆ ಸ್ವರ್ಗಕ್ಕೆ
ಹೋಗುತ್ತಾರೆಂದು ಹೇಳುತ್ತಾರೆ. ಆದ್ದರಿಂದ ಖುಷಿ-ಖುಷಿಯಿಂದ ಯುದ್ಧಕ್ಕೆ ಹೋಗುತ್ತಾರೆ. ನಿಮ್ಮ ಬಳಿ
ದಂಡ ನಾಯಕ, ಸಿಪಾಯಿ, ಮೊದಲಾದವರೂ ಎಲ್ಲೆಲ್ಲಿಂದಲೋ ಬರುತ್ತಾರೆ. ಸ್ವರ್ಗದಲ್ಲಿ ಹೇಗೆ ಹೋಗುತ್ತಾರೆ?
ಯುದ್ಧದ ಮೈದಾನದಲ್ಲಿ ಮಿತ್ರ ಸಂಬಂಧಿಗಳು ನೆನಪಿಗೆ ಬರುತ್ತಾರೆ. ಈಗ ತಂದೆಯು ತಿಳಿಸುತ್ತಾರೆ -
ಮಕ್ಕಳೇ, ಈಗ ಎಲ್ಲರೂ ಹಿಂತಿರುಗಬೇಕು. ಆದ್ದರಿಂದ ತಮ್ಮನ್ನು ಆತ್ಮನೆಂದು ತಿಳಿಯಿರಿ.
ಸಹೋದರ-ಸಹೋದರನೆಂದು ತಿಳಿಯಿರಿ ಮತ್ತು ತಂದೆಯನ್ನು ನೆನಪು ಮಾಡಿ. ಯಾರೆಷ್ಟು ಪುರುಷಾರ್ಥ
ಮಾಡುತ್ತೀರೋ ಅಷ್ಟು ಶ್ರೇಷ್ಠ ಪದವಿ ಪಡೆಯುತ್ತೀರಿ. ಹೇಗೆ ನಾವು ಸಹೋದರ-ಸಹೋದರನಾಗಿದ್ದೇವೆ ಎಂದು
ಅವರೂ ಹೇಳುತ್ತಾರೆ. ಆದರೆ ಅರ್ಥವೇ ಗೊತ್ತಿಲ್ಲ, ತಂದೆಯನ್ನೂ ತಿಳಿದುಕೊಂಡಿಲ್ಲ. ನಾವು ನಿಷ್ಕಾಮ
ಸೇವೆ ಮಾಡುತ್ತೇವೆ, ನಮಗೆ ಫಲದ ಇಚ್ಛೆಯಿಲ್ಲ ಎಂದು ಮನುಷ್ಯರು ತಿಳಿಯುತ್ತಾರೆ. ಆದರೆ ಫಲವು
ಅವಶ್ಯವಾಗಿ ಸಿಗುತ್ತದೆ. ಕೇವಲ ಒಬ್ಬ ತಂದೆಯೇ ನಿಷ್ಕಾಮ ಸೇವೆ ಮಾಡುತ್ತಾರೆ. ಮಕ್ಕಳಿಗೆ ಗೊತ್ತಿದೆ,
ಅಂತಹ ತಂದೆಗೆ ನಾವು ಎಷ್ಟು ನಿಂದನೆ ಮಾಡಿದ್ದೇವೆ, ದೇವತೆಗಳ ನಿಂದನೆಯನ್ನೂ ಮಾಡಿದ್ದೇವೆ.
ದೇವತೆಗಳು ಯಾರಿಗೂ ಹಿಂಸೆ ಮಾಡಲು ಸಾಧ್ಯವಿಲ್ಲ. ಇಲ್ಲಿ ನೀವು ಡಬಲ್ ಅಹಿಂಸಕರಾಗುತ್ತೀರಿ. ಕಾಮದ
ಕತ್ತಿಯನ್ನೂ ನಡೆಸಬಾರದು, ಕ್ರೋಧವನ್ನೂ ಮಾಡಬಾರದು. ಕ್ರೋಧವೂ ಸಹ ದೊಡ್ಡ ವಿಕಾರವಾಗಿದೆ. ಮಕ್ಕಳ
ಮೇಲೆ ಕ್ರೋಧ ಮಾಡಿದೆವೆಂದು ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳಿಗೆ
ಪೆಟ್ಟನ್ನೆಂದೂ ಕೊಡಬಾರದು, ಅವರೂ ಸಹ ನಿಮ್ಮ ಸಹೋದರನಾಗಿದ್ದಾರೆ. ಅವರಲ್ಲಿಯೂ ಆತ್ಮವಿದೆ, ಆತ್ಮದ
ಗಾತ್ರವು ಚಿಕ್ಕದು-ದೊಡ್ಡದು ಇರುವುದಿಲ್ಲ. ಇವರು ಮಕ್ಕಳಲ್ಲ ನಿಮ್ಮ ಸಹೋದರನಾಗಿದ್ದಾರೆ.
ಆತ್ಮವೆಂದು ತಿಳಿಯಬೇಕು, ಸಹೋದರ ಆತ್ಮನಿಗೆಂದೂ ಹೊಡೆಯಬಾರದು. ಆದ್ದರಿಂದ ಕೃಷ್ಣನಿಗಾಗಿ ಕಟ್ಟಿ
ಹಾಕಿದರೆಂದು ತೋರಿಸಿದ್ದಾರೆ, ವಾಸ್ತವದಲ್ಲಿ ಇಂತಹ ಮಾತುಗಳಿಲ್ಲ. ಇವು ಭಿನ್ನ-ಭಿನ್ನ
ಶಿಕ್ಷಣಗಳಾಗಿವೆ. ಬಾಕಿ ಕೃಷ್ಣನಿಗೆ ಬೆಣ್ಣೆಯನ್ನು ಕದಿಯಲು ಅವನಿಗೇನು ಕಡಿಮೆಯಿತ್ತು?
ಬೆಣ್ಣೆಯನ್ನು ಕದ್ದ, ಅದನ್ನು ಕದ್ದ ಎಂದು ಅವನ ಉಲ್ಟಾ ಮಹಿಮೆಯನ್ನು ಮಾಡುತ್ತಾರೆ. ಆದರೆ ನೀವು
ಸುಲ್ಟಾ ಮಹಿಮೆಯನ್ನು ಮಾಡುತ್ತೀರಿ. ಅವನು ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣನೆಂದು ಹೇಳುತ್ತೀರಿ,
ಆದರೆ ಈ ನಿಂದನೆಯೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಈಗ ಎಲ್ಲರೂ ತಮೋಪ್ರಧಾನರಾಗಿ ಬಿಟ್ಟಿದ್ದಾರೆ.
ತಂದೆಯು ಬಂದು ಸತೋಪ್ರಧಾನರನ್ನಾಗಿ ಮಾಡುತ್ತಾರೆ. ಓದಿಸುವಂತಹ ತಂದೆಯು ಬೇಹದ್ದಿನ ತಂದೆಯಾಗಿದ್ದಾರೆ.
ಅವರ ಮತದಂತೆ ನಡೆಯಬೇಕಾಗಿದೆ. ಕ್ಲಿಷ್ಟವಾದ ಸಬ್ಜೆಕ್ಟ್ ಇದಾಗಿದೆ. ಪದವಿಯೂ ಸಹ ಎಷ್ಟು
ಶ್ರೇಷ್ಠವಾದುದನ್ನು ಪಡೆಯುತ್ತೀರಿ! ಒಂದು ವೇಳೆ ಸಹಜವಾಗಿತ್ತೆಂದರೆ ಎಲ್ಲರೂ ಇದರಲ್ಲಿ ತೊಡಗಿ
ಬಿಡುತ್ತಿದ್ದರು. ಇದರಲ್ಲಿ ಬಹಳ ಪರಿಶ್ರಮವಿದೆ. ಶಿಕ್ಷಣವಂತೂ ಎಲ್ಲರಿಗೂ ಕೊಡಲಾಗಿದೆ, ಅದರ
ನಂತರದಲ್ಲಿ ಗೀತೆಯು ಮಾಡಲ್ಪಟ್ಟಿದೆ. ಗರುಡ ಪುರಾಣದಲ್ಲಿ ರೋಚಕವಾದ ಮಾತುಗಳನ್ನು ಬರೆದಿದ್ದಾರೆ.
ಅದರಿಂದ ಮನುಷ್ಯರು ಭಯ ಪಡುತ್ತಾರೆ. ರಾವಣ ರಾಜ್ಯದಲ್ಲಿ ಪಾಪಗಳಂತೂ ಆಗುತ್ತಲೇ ಇರುತ್ತವೆ. ಏಕೆಂದರೆ
ಇದು ಮುಳ್ಳಿನ ಕಾಡೇ ಆಗಿದೆ. ತಂದೆಯು ತಿಳಿಸುತ್ತಾರೆ - ದೃಷ್ಟಿಯೂ ಸಹ ಬದಲಾಗುತ್ತದೆ. ಬಹಳ
ಸಮಯದಿಂದ ಶರೀರದ ಅಭಿಮಾನದಲ್ಲಿಯೇ ಅಂಟಿಕೊಂಡಿದ್ದಾರೆ, ಆದ್ದರಿಂದ ಶರೀರದ ಕಡೆ ಪ್ರೀತಿಯು
ಹೋಗುತ್ತದೆ. ವಿನಾಶಿ ವಸ್ತುಗಳೊಂದಿಗೆ ಪ್ರೀತಿಯನ್ನಿಡುವುದರಿಂದ ಲಾಭವೇನು?
ಅವಿನಾಶಿಯಾಗಿರುವುದರೊಂದಿಗೆ ಪ್ರೀತಿಯನ್ನಿಡುವುದರಲ್ಲಿ ಅವಿನಾಶಿಯಾಗಿ ಬಿಡುತ್ತದೆ. ಮಕ್ಕಳಿಗೆ ಇದೇ
ಡೈರೆಕ್ಷನ್ ಕೊಡಲಾಗಿದೆ - ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು
ನೆನಪು ಮಾಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಶರೀರ
ವಿನಾಶಿಯಾಗಿದೆ, ಅದರೊಂದಿಗೆ ಪ್ರೀತಿಯನ್ನು ತೆಗೆದು ಅವಿನಾಶಿ ಆತ್ಮನೊಂದಿಗೆ
ಪ್ರೀತಿಯನ್ನಿಡಬೇಕಾಗಿದೆ. ಅವಿನಾಶಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಆತ್ಮ ಸಹೋದರ-ಸಹೋದರ ಆಗಿದೆ,
ನಾವು ಸಹೋದರ ಆತ್ಮನೊಂದಿಗೆ ಮಾತನಾಡುತ್ತಿದ್ದೇವೆ - ಈ ಅಭ್ಯಾಸ ಮಾಡಬೇಕಾಗಿದೆ.
2. ವಿಚಾರ ಸಾಗರ ಮಂಥನ
ಮಾಡಿ ಈ ರೀತಿ ತಮ್ಮ ಸ್ಥಿತಿಯನ್ನು ರೂಪಿಸಿಕೊಳ್ಳಬೇಕಾಗಿದೆ - ಯಾರ ಮುಖದಿಂದಲೂ ಉಲ್ಟಾ-ಸುಲ್ಟಾ
ಮಾತುಗಳು ಹೊರಬರಬಾರದು. ಹೆಜ್ಜೆ-ಹೆಜ್ಜೆಯಲ್ಲಿಯೂ ತಮ್ಮ ಲೆಕ್ಕವನ್ನು ಪರಿಶೀಲನೆ
ಮಾಡಿಕೊಳ್ಳಬೇಕಾಗಿದೆ.
ವರದಾನ:
ಈಶ್ವರೀಯ
ಸಂಗದಲ್ಲಿರುತ್ತಾ ಉಲ್ಟಾ ಸಂಗದ ಯುದ್ಧದಿಂದ ರಕ್ಷಿಸಲ್ಪಡುವ ಸದಾಕಾಲದ ಸತ್ಸಂಗಿ ಭವ.
ಎಂತಹದೇ ಕೆಟ್ಟ ಸಂಗವಿರಲಿ
ಆದರೆ ನಿಮ್ಮ ಶ್ರೇಷ್ಠ ಸಂಗ ಅವುಗಳ ಮುಂದೆ ಬಹಳಷ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಈಶ್ವರೀಯ ಸಂಗದ
ಮುಂದೆ ಆ ಸಂಗ ಏನೂ ಇಲ್ಲ. ಎಲ್ಲ ಶಕ್ತಿಹೀನವಾಗಿದೆ. ಆದರೆ ಯಾವಾಗ ಸ್ವಯಂ ಬಲಹೀನರಾಗುವಿರಿ ಆಗ
ಉಲ್ಟಾ ಸಂಗ ಯುದ್ಧ ಮಾಡುವುದು. ಯಾರು ಸದಾ ಒಬ್ಬ ತಂದೆಯ ಸಂಗದಲ್ಲಿರುತ್ತಾರೆ ಅರ್ಥಾತ್ ಸದಾ
ಸತ್ಸಂಗಿಗಳಾಗಿರುತ್ತಾರೆ ಅವರಿಗೆ ಬೇರೆ ಯಾವುದೇ ಸಂಗದ ರಂಗಿನ ಮೆಲೆ ಫ್ರಭಾವಿತರಾಗಲು ಸಾಧ್ಯವಿಲ್ಲ.
ವ್ಯರ್ಥ ಮಾತು, ವ್ಯರ್ಥ ಸಂಗ ಅರ್ಥಾತ್ ಕುಸಂಗ ಅವರನ್ನು ಆಕರ್ಷಣೆ ಮಾಡಲು ಸಾಧ್ಯವಿಲ್ಲ.
ಸ್ಲೋಗನ್:
ಕೆಟ್ಟದ್ದನ್ನೂ
ಸಹಾ ಒಳ್ಳೆಯದರಲ್ಲಿ ಪರಿವರ್ತನೆ ಮಾಡುವಂತಹವರೇ ಪ್ರಸನ್ನ ಚಿತ್ತರಾಗಿರಲು ಸಾಧ್ಯ.