06.05.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ಗೃಹಸ್ಥ
ವ್ಯವಹಾರದಲ್ಲಿದ್ದು ಈ ರೀತಿ ನಿಮಿತ್ತರಾಗಿ, ಯಾರಿಗೆ ಯಾವುದೇ ವಸ್ತುವಿನಲ್ಲಿ ಆಸಕ್ತಿಯಿರಬಾರದು,
ನಮ್ಮದೇನೂ ಇಲ್ಲ- ಈ ರೀತಿ ಬಡವರಾಗಿಬಿಡಿ”
ಪ್ರಶ್ನೆ:
ನೀವು ಮಕ್ಕಳ
ಪುರುಷಾರ್ಥದ ಗುರಿ ಯಾವುದಾಗಿದೆ?
ಉತ್ತರ:
ನೀವು ಸತ್ತರೆ
ಪ್ರಪಂಚವೇ ಸತ್ತಂತೆ- ಇದೇ ನಿಮ್ಮ ಗುರಿಯಾಗಿದೆ. ಶರೀರದೊಂದಿಗೆ ಮಮತ್ವವನ್ನು ತುಂಡರಿಸಬೇಕಾಗಿದೆ.
ಯಾವ ವಸ್ತುವೂ ನೆನಪಿಗೆ ಬರಬಾರದು- ಈ ರೀತಿ ಬಡವರಾಗಿ. ಆತ್ಮ ಅಶರೀರಿಯಾಗಿ ಬಿಡುತ್ತದೆ ಅಷ್ಟೇ!
ನಾವು ಹಿಂತಿರುಗಿ ಹೋಗಬೇಕಾಗಿದೆ. ಇಂತಹ ಪುರುಷಾರ್ಥ ಮಾಡುವವರು ಬೆಗ್ಗರ್ ಟು ಪ್ರಿನ್ಸ್ (ಬಡವರಿಂದ
ರಾಜರು) ಆಗುತ್ತಾರೆ. ನೀವು ಮಕ್ಕಳೇ ಬಡವರಿಂದ ಶ್ರೀಮಂತರು, ಶ್ರೀಮಂತರಿಂದ ಬಡವರು (ಫಕೀರರಿಂದ
ಅಮೀರ, ಅಮೀರರಿಂದ ಫಕೀರರಾಗುತ್ತೀರಿ). ನೀವು ಯಾವಾಗ ಶ್ರೀಮಂತರಾಗಿರುತ್ತೀರಿ ಆಗ ಒಬ್ಬರೂ
ಬಡವರಿರುವುದಿಲ್ಲ.
ಓಂ ಶಾಂತಿ.
ತಂದೆಯು ಮಕ್ಕಳನ್ನು ಕೇಳುತ್ತಾರೆ- ಆತ್ಮವು ಕೇಳುತ್ತದೆಯೋ ಅಥವಾ ಶರೀರ ಕೇಳುತ್ತದೆಯೇ? ಆತ್ಮ.
ಅವಶ್ಯವಾಗಿ ಶರೀರದ ಮೂಲಕ ಆತ್ಮವು ಕೇಳುತ್ತದೆ. ಇಂತಹ ಆತ್ಮವು ಬಾಪ್ದಾದಾರವರನ್ನು ನೆನಪು
ಮಾಡುತ್ತದೆಯೆಂದು ಮಕ್ಕಳು ಬರೆಯುತ್ತಾರೆ. ಇಂತಹ ಆತ್ಮವು ಇಂತಹ ಕಡೆ, ಇಂತಹ ಸ್ಥಾನಕ್ಕೆ ಹೋಗುತ್ತದೆ.
ಇಂತಹ ಅಭ್ಯಾಸವಾಗಿ ಬಿಡಬೇಕು- ನಾವು ಆತ್ಮ ಆಗಿದ್ದೇವೆ ಏಕೆಂದರೆ ಮಕ್ಕಳು ಆತ್ಮಾಭಿಮಾನಿಗಳಾಗಬೇಕು.
ಎಲ್ಲಿಯೇ ನೋಡಿದರೂ ಆತ್ಮ ಹಾಗೂ ಶರೀರವಿದೆಯೆಂದು ತಿಳಿದಿದ್ದೀರಿ ಹಾಗೂ ಇವರಲ್ಲಿ ಎರಡು ಆತ್ಮಗಳಿವೆ.
ಒಬ್ಬರಿಗೆ ಆತ್ಮ ಮತ್ತೊಬ್ಬರಿಗೆ ಪರಮಾತ್ಮ ಎಂದು ಹೇಳುತ್ತಾರೆ. ಪರಮಾತ್ಮ ಸ್ವಯಂ ಹೇಳುತ್ತಾರೆ-
ನಾನು ಈ ಶರೀರದಲ್ಲಿ ಇವರ ಆತ್ಮವೂ ಪ್ರವೇಶ ಮಾಡಿರುತ್ತದೆ, ನಾನೂ ಪ್ರವೇಶಿಸುತ್ತೇನೆ. ಶರೀರದ ವಿನಃ
ಆತ್ಮವು ಇರಲಾರದು. ಈಗ ತಂದೆಯು ತಮ್ಮನ್ನು ಆತ್ಮ ಎಂದು ತಿಳಿದುಕೊಳ್ಳಿ ಎಂದು ತಿಳಿಸುತ್ತಾರೆ.
ತಮ್ಮನ್ನು ಆತ್ಮನೆಂದು ತಿಳಿದುಕೊಂಡಾಗ ತಂದೆಯನ್ನು ನೆನಪು ಮಾಡುತ್ತೀರಿ, ಪವಿತ್ರರಾಗಿ
ಶಾಂತಿಧಾಮಕ್ಕೆ ಹೋಗುತ್ತೀರಿ ಮತ್ತು ದೈವೀ ಗುಣಗಳನ್ನು ಎಷ್ಟು ಧಾರಣೆ ಮಾಡುತ್ತೀರಿ ಮತ್ತು
ಅನ್ಯರಿಗೆ ಮಾಡಿಸುತ್ತೀರಿ, ಸ್ವದರ್ಶನ ಚಕ್ರಧಾರಿಯಾಗಿದ್ದು ಅನ್ಯರನ್ನೂ ಅದೇ ರೀತಿ ಮಾಡುತ್ತೀರಿ
ಅಂದಾಗ ಅಷ್ಟೇ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಇದರಲ್ಲಿ ಯಾರಾದರೂ ಗೊಂದಲಕ್ಕೊಳಗಾದರೆ
ಕೇಳಬಹುದು. ನಾವು ಅವಶ್ಯವಾಗಿ ಆತ್ಮರಂತೂ ಆಗಿದ್ದೇವೆ, ತಂದೆಯು ಬ್ರಾಹ್ಮಣರಾಗಿರುವಂತಹ ಮಕ್ಕಳಿಗೇ
ತಿಳಿಸುತ್ತಾರೆ ಆದರೆ ಅನ್ಯರಿಗೆ ತಿಳಿಸುವುದಿಲ್ಲ, ಅವರಿಗೆ ಮಕ್ಕಳೇ ಪ್ರಿಯರಾಗುತ್ತಾರೆ.
ಪ್ರತಿಯೊಬ್ಬ ತಂದೆಗೂ ಮಕ್ಕಳು ಪ್ರಿಯವಾಗುತ್ತಾರೆ, ಹೊರಗಡೆ ಅನ್ಯರಿಗೆ ಬಾಹ್ಯ ರೂಪದಲ್ಲಿ ಪ್ರೀತಿ
ಮಾಡುತ್ತಾರೆ ಆದರೆ ಇವರು ನಮ್ಮ ಮಕ್ಕಳಲ್ಲವೆಂದು ಅವರ ಬುದ್ಧಿಯಲ್ಲಿರುತ್ತದೆ. ನಾನು ಮಕ್ಕಳೊಂದಿಗೇ
ಮಾತನಾಡುತ್ತೇನೆ ಏಕೆಂದರೆ ಮಕ್ಕಳಿಗೇ ಓದಿಸುತ್ತೇನೆ. ಆದರೆ ಹೊರಗಿನವರಿಗೆ ಓದಿಸುವುದು ನಿಮ್ಮ
ಕರ್ತವ್ಯವಾಗಿದೆ. ಕೆಲವರು ತಕ್ಷಣ ತಿಳಿದುಕೊಳ್ಳುತ್ತಾರೆ, ಇನ್ನೂ ಕೆಲವರು ಸ್ವಲ್ಪ ಮಾತ್ರ
ತಿಳಿದುಕೊಂಡು ಹೊರಟು ಹೋಗುತ್ತಾರೆ. ಮತ್ತೆ ಯಾವಾಗ ಇಲ್ಲಿ ವೃದ್ಧಿಯಾಗಿರುವುದನ್ನು ಕಂಡು
ನೋಡೋಣವೆಂದು ಬರುತ್ತಾರೆ. ನೀವು ಎಲ್ಲರಿಗೂ ಇದನ್ನೇ ತಿಳಿಸುತ್ತೀರಿ- ತಂದೆಯನ್ನು ನೆನಪು ಮಾಡಬೇಕು.
ಎಲ್ಲಾ ಆತ್ಮಗಳನ್ನೂ ತಂದೆಯು ಪಾವನ ಮಾಡುತ್ತಾರೆ. ಅವರು ನನ್ನ ವಿನಃ ಬೇರೆ ಯಾರನ್ನೂ ನೆನಪು
ಮಾಡಬೇಡಿ ಎಂದು ತಿಳಿಸುತ್ತಾರೆ. ನೀವು ನನ್ನನ್ನೇ (ಅವ್ಯಭಿಚಾರಿ ನೆನಪು) ನೆನಪು ಮಾಡಿದಾಗ ನಿಮ್ಮ
ಆತ್ಮವು ಪಾವನವಾಗಿ ಬಿಡುತ್ತದೆ. ನನ್ನ ನೆನಪಿನಿಂದ ಆತ್ಮವು ಪಾವನವಾಗುತ್ತದೆ. ಆದ್ದರಿಂದ ತಂದೆಯು
ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ. ತಂದೆಯೇ ಪತಿತ ರಾಜ್ಯದಿಂದ ಪಾವನ ರಾಜ್ಯವನ್ನು
ಮಾಡುತ್ತಾರೆ, ಬಿಡುಗಡೆ ಮಾಡುತ್ತಾರೆ ಅಂದಾಗ ಬಿಡುಗಡೆ ಮಾಡಿ ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ?
ಶಾಂತಿಧಾಮ ಮತ್ತು ಸುಖಧಾಮ. ಪಾವನರಾಗುವುದೇ ಮುಖ್ಯ ಮಾತಾಗಿದೆ. 84 ಜನ್ಮಗಳ ಚಕ್ರವನ್ನು
ತಿಳಿಸುವುದು ಸಹಜವಾಗಿದೆ. ಚಿತ್ರವನ್ನು ನೋಡುತ್ತಿದ್ದಂತೆಯೇ ನಿಶ್ಚಯವಾಗಿ ಬಿಡುತ್ತದೆ. ಆದ್ದರಿಂದ
ತಂದೆಯು ವಿಜೃಂಭಣೆಯಿಂದ ಮ್ಯೂಜಿಯಂನ್ನು ತೆರೆಯಿರಿ ಎಂದು ಹೇಳುತ್ತಾರೆ. ಮನುಷ್ಯರು ಅದು ಬಹಳ
ಆಕರ್ಷಣೆ ಮಾಡುತ್ತದೆ. ಬಹಳ ಜನ ಬರುತ್ತಾರೆ, ಬಂದು ನಾವು ಶ್ರೀಮತದಂತೆ ಈ ರೀತಿ ಆಗುತ್ತಿದ್ದೇವೆಂದು
ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ ಹಾಗೂ ದೈವೀ ಗುಣಗಳನ್ನು
ಧಾರಣೆ ಮಾಡಿ. ಬ್ಯಾಡ್ಜ್ ಅವಶ್ಯವಾಗಿ ಜೊತೆಯಲ್ಲಿರಬೇಕು. ನಾವೀಗ ಬೆಗ್ಗರ್ ಟು ಪ್ರಿನ್ಸ್
ಆಗುತ್ತಿದ್ದೇವೆಂದು ನೀವು ತಿಳಿದಿದ್ದೀರಿ. ಮೊದಲು ಕೃಷ್ಣನಾಗುತ್ತಾನೆ, ಎಲ್ಲಿಯವರೆಗೆ
ಕೃಷ್ಣನಾಗುವುದಿಲ್ಲ ಅಲ್ಲಿಯವರೆಗೆ ನಾರಾಯಣನಾಗುವುದಿಲ್ಲ. ಬಾಲ್ಯದಿಂದ ದೊಡ್ಡವನಾದ ನಂತರ ನಾರಾಯಣ
ಎಂಬ ಹೆಸರು ಸಿಗುತ್ತದೆ. ಆದ್ದರಿಂದ ಇಲ್ಲಿ ಎರಡೂ ಚಿತ್ರಗಳಿವೆ- ನೀವು ಹೀಗಾಗುತ್ತೀರಿ. ಈಗ
ನೀವೆಲ್ಲರೂ ಬಡವರಾಗಿದ್ದೀರಿ, ಈ ಬ್ರಹ್ಮಾಕುಮಾರ-ಕುಮಾರಿಯರೆಲ್ಲರೂ ಬಡವರಾಗಿದ್ದೀರಿ, ಇವರ ಬಳಿ ಏನೂ
ಇಲ್ಲ. ಬಡವರು ಅರ್ಥಾತ್ ಅವರ ಬಳಿ ಏನೂ ಇರಬಾರದು. ಕೆಲಕೆಲವರಿಗೆ ನಾವು ಬಡವರೆಂದು ಹೇಳಲು
ಆಗುವುದಿಲ್ಲ, ಈ ತಂದೆ (ಬ್ರಹ್ಮಾ) ಎಲ್ಲರಿಗಿಂತಲೂ ಅತೀ ಬಡವರಾಗಿದ್ದಾರೆ. ಇಲ್ಲಿ (ಬ್ರಾಹ್ಮಣ
ಜೀವನದಲ್ಲಿ) ಪೂರ್ಣ ಬಡವರಾಗಬೇಕು. ಗೃಹಸ್ಥ ವ್ಯವಹಾದಲ್ಲಿರುತ್ತಾ ಆಸಕ್ತಿಯನ್ನು ದೂರ
ಮಾಡಿಕೊಳ್ಳಬೇಕು. ನೀವು ನಾಟಕದನುಸಾರವಾಗಿ ಆಸಕ್ತಿಯನ್ನು ದೂರ ಮಾಡಿಕೊಂಡಿದ್ದೀರಿ, ನಿಶ್ಚಯ
ಬುದ್ಧಿಯವರು ಇದನ್ನು ತಿಳಿದುಕೊಂಡಿದ್ದಾರೆ. ನಮ್ಮದೆಲ್ಲವನ್ನೂ ತಂದೆಗೆ ಕೊಟ್ಟಿದ್ದೇವೆ. ಹೇ
ಭಗವಂತ, ನೀವು ಏನೂ ಕೊಟ್ಟಿದ್ದೀರಿ ಅದು ನಿಮ್ಮದೇ ಆಗಿದೆ ನಮ್ಮದೇನೂ ಇಲ್ಲ ಎಂದು ಹೇಳುತ್ತೀರಲ್ಲವೆ.
ಇದೆಲ್ಲವೂ ಭಕ್ತಿ ಮಾರ್ಗದಲ್ಲಿ ನಡೆಯುತ್ತದೆ. ಆ ಸಮಯದಲ್ಲಿ ತಂದೆಯು ದೂರವಿದ್ದರು, ಈಗ ತಂದೆಯು
ಬಹಳ ಸಮೀಪವಿದ್ದಾರೆ. ಅವರ ಸನ್ಮುಖದಲ್ಲಿಯೇ ಅವರಿಗೆ ಮಕ್ಕಳಾಗುತ್ತೇವೆ. ಓ ಬಾಬಾ ಎಂದು ನೀವು
ಹೇಳುತ್ತೀರಿ. ತಂದೆಯ (ಬ್ರಹ್ಮಾ) ಶರೀರವನ್ನು ನೋಡಬಾರದು, ಆಗ ಬುದ್ಧಿಯು ಮೇಲೆ ಹೊರಟು ಹೋಗುತ್ತದೆ.
ಇದು ಲೋನ್ ತೆಗೆದುಕೊಂಡಿರುವ ಶರೀರವಾಗಿದೆ, ಆದರೆ ನಿಮ್ಮ ಬುದ್ಧಿಯು ನಾವು ಶಿವ ತಂದೆಯೊಂದಿಗೆ
ಮಾತನಾಡುತ್ತಿದ್ದೇವೆಂದು ಇರುತ್ತದೆ. ಇದಂತೂ ಬಾಡಿಗೆಯಾಗಿ ತೆಗೆದುಕೊಂಡಿರುವ ರಥವಾಗಿದೆ. ಇದು ಶಿವ
ತಂದೆಯ ರಥವಲ್ಲ, ಅಗತ್ಯವಾಗಿ ಎಷ್ಟೆಷ್ಟು ದೊಡ್ಡ ವ್ಯಕ್ತಿಯಾಗಿರುತ್ತಾರೆ, ಬಾಡಿಗೆಯೂ ಸಹ ಅದೇ ರೀತಿ
ಸಿಗುತ್ತದೆ. ಮನೆಯ ಮಾಲೀಕನೂ ಸಹ ನೋಡುತ್ತಾನೆ- ರಾಜನು ಮನೆಯನ್ನು ತೆಗೆದುಕೊಳ್ಳುವುದಾದರೆ 1000
ಬಾಡಿಗೆಯ ಬದಲಾಗಿ 4000 ಬಾಡಿಗೆ ಎಂದು ಹೇಳಿ ಬಿಡುತ್ತಾರೆ. ಏಕೆಂದರೆ ಇವನು ಶ್ರೀಮಂತನೆಂದು
ತಿಳಿದುಕೊಳ್ಳುತ್ತಾರೆ. ರಾಜರೂ ಸಹ ಎಂದಿಗೂ ಹೆಚ್ಚು ಬಾಡಿಗೆ ತೆಗೆದುಕೊಳ್ಳುತ್ತಿದ್ದಾರೆಂದು
ಹೇಳುವುದಿಲ್ಲ, ಏಕೆಂದರೆ ಅವರಿಗೆ ಹಣದ ಕೊರತೆಯಿರುವುದಿಲ್ಲ. ಅವರಿಗಾಗಿಯೇ ಯಾರೊಂದಿಗೂ
ಮಾತನಾಡುವುದಿಲ್ಲ. ಅವರ ಪ್ರತಿಯಾಗಿ ಅವರ ಪ್ರೈವೇಟ್ ಸೆಕ್ರೆಟರಿಯೇ ಮಾತನಾಡುತ್ತಾರೆ. ಇಂದು ಲಂಚ
ಪಡೆಯದೇ ಯಾವುದೇ ಕೆಲಸ ನಡೆಯುವುದಿಲ್ಲ, ಇದರಲ್ಲಿ ಬ್ರಹ್ಮಾ ತಂದೆಯು ಅನುಭವಿಯಾಗಿದ್ದಾರೆ. ರಾಜರು
ಬಹಳ ರಾಯಲ್ ಆಗಿರುತ್ತಾರೆ, ಯಾವುದೇ ವಸ್ತುವನ್ನು ಇಷ್ಟ ಪಟ್ಟ ನಂತರ ಸೆಕ್ರೆಟರಿಗೆ ಹೇಳುತ್ತಾರೆ
ಫೈನಲ್ ಮಾಡಿ ತೆಗೆದುಕೊಂಡು ಬನ್ನಿ ಎನ್ನುತ್ತಾರೆ. ಮಾರಾಟ ಮಾಡುವವರೂ ಸಹ ಇದನ್ನು ನೋಡಿ ರಾಜಾ-ರಾಣಿ
ಬಂದು ಈ ವಸ್ತುವನ್ನು ಇಷ್ಟ ಪಡುತ್ತಾರೆಂದು ತೆರೆದಿಟ್ಟಿರುತ್ತಾರೆ. ರಾಜನು ಕೇವಲ ಕಣ್ಣಿನಿಂದ
ಸನ್ನೆ ಮಾಡುತ್ತಾನೆ, ಆಗ ಸೆಕ್ರೆಟರಿಯೇ ಮಾತನಾಡಿ ಮಧ್ಯದಲ್ಲಿ ತನ್ನ ಪಾಲನ್ನೂ
ತೆಗೆದುಕೊಳ್ಳುತ್ತಾನೆ. ಕೆಲಕೆಲವು ರಾಜರು ತಮ್ಮ ಜೊತೆಯಲ್ಲಿ ಹಣವನ್ನು ತಂದು ಅದನ್ನು ಸೆಕ್ರೆಟರಿಗೆ
ಕೊಡಲು ಒಪ್ಪಿಸುತ್ತಾರೆ. ಬ್ರಹ್ಮಾ ತಂದೆಯು ಇಂತಹ ವ್ಯಕ್ತಿಗಳ ಸಂಬಂಧದಲ್ಲಿ ಬಂದಿದ್ದಾರೆ. ಹೇಗೆ
ಅವರು ನಡೆದುಕೊಳ್ಳುತ್ತಿದ್ದರೆಂದು ಇವರಿಗೆ ತಿಳಿದಿದೆ, ಹೇಗೆ ರಾಜರ ಬಳಿ ಖಜಾಂಚಿಯೂ ಇರುತ್ತಿದ್ದರು
ಹಾಗೆಯೇ ಬ್ರಹ್ಮಾ ತಂದೆಯು ಶಿವ ತಂದೆಯ ಖಜಾಂಚಿಯಾಗಿದ್ದಾರೆ, ಇವರಂತೂ ಟ್ರಸ್ಟಿಯಾಗಿದ್ದಾರೆ.
ಬ್ರಹ್ಮಾ ತಂದೆಗೆ ಈ ಶರೀರದ ಮೇಲೆ ಮೋಹವಿಲ್ಲ. ಇವರು ತಮ್ಮ ಹಣದ ಮೇಲೂ ಮೋಹವನ್ನಿಡಲಿಲ್ಲ ಎಲ್ಲವನ್ನೂ
ಶಿವ ತಂದೆಗೆ ಕೊಟ್ಟು ಬಿಟ್ಟರು. ಆಗ ಶಿವ ತಂದೆಯ ಹಣದ ಮೇಲೆ ಹೇಗೆ ಮೋಹವನ್ನಿಡುತ್ತಾರೆ! ಇವರು
ಟ್ರಸ್ಟಿಯಾಗಿದ್ದಾರೆ. ಇಂದು ಯಾರ ಬಳಿ ಹಣವಿರುವಿದೋ ಅವರನ್ನು ಸರ್ಕಾರವು ಗಮನಿಸುತ್ತದೆ.
ವಿದೇಶದಿಂದ ಬರುವವರನ್ನು ಚೆನ್ನಾಗಿ ಪರಿಶೀಲನೆ ಮಾಡುತ್ತಾರೆ. ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ- ನಾವು ಹೇಗೆ ಬಡವರಾಗಬೇಕು? ಯಾವುದೇ ನೆನಪು ಬರಬಾರದು. ಆತ್ಮವು ಅಶರೀರಿಯಾಗಿ
ಬಿಡಬೇಕು, ತನ್ನದೆಂದು ತಿಳಿಯಬಾರದು. ನಮ್ಮದೇನೂ ಇರಬಾರದು. ತಂದೆಯೂ ಸಹ ತಿಳಿಸುತ್ತಾರೆ- ತಮ್ಮನ್ನು
ಆತ್ಮನೆಂದು ತಿಳಿಯಿರಿ, ಈಗ ನೀವು ಮನೆಗೆ ಹಿಂತಿರುಗಬೇಕಾಗಿದೆ. ನಾವು ಹೇಗೆ ಬಡವರಾಗಬೇಕೆಂದು ನೀವು
ಮಕ್ಕಳಿಗೆ ಗೊತ್ತಿದೆ, ಶರೀರದೊಂದಿಗೂ ಮಮತೆಯಿರಬಾರದು. ನಾವು ಸತ್ತರೆ ನಮ್ಮ ಪಾಲಿಗೆ ಪ್ರಪಂಚವೇ
ಸತ್ತಂತೆ-ಇದೇ ಗುರಿಯಾಗಿದೆ. ತಂದೆಯು ಯಥಾರ್ಥವಾಗಿ ಹೇಳುತ್ತಿದ್ದಾರೆಂದು ತಿಳಿದುಕೊಳ್ಳುತ್ತೀರಿ.
ಈಗ ನಾವು ಮನೆಗೆ ಹಿಂತಿರುಗಬೇಕಾಗಿದೆ. ನೀವು ಶಿವ ತಂದೆಗೆ ಕೊಡುವುದು ಮುಂದಿನ ಜನ್ಮದಲ್ಲಿ ಅದು
ರಿಟರ್ನ್ ಸಿಗುತ್ತದೆ. ಆದ್ದರಿಂದ ಇವರು ಎಲ್ಲವನ್ನೂ ಈಶ್ವರನಿಗೆ ಕೊಟ್ಟು ಬಿಟ್ಟರು. ಅವರ ಹಿಂದಿನ
ಜನ್ಮದಲ್ಲಿಯೂ ಅಂತಹ ಕರ್ಮ ಮಾಡಿರುವ ಕಾರಣ ಅವರಿಗೆ ಇಂತಹ ಫಲ ದೊರಕಿದೆ. ಶಿವ ತಂದೆಯು ಯಾರದನ್ನೂ
ಇಟ್ಟುಕೊಳ್ಳುವುದಿಲ್ಲ. ದೊಡ್ಡ-ದೊಡ್ಡ ರಾಜರು, ಜಮೀನ್ದಾರರು ಮುಂತಾದವರಿಗೆ ಕಾಣಿಕೆಯನ್ನು
ನೀಡುತ್ತಾರೆ. ಕೆಲವರು ಕಾಣಿಕೆಯನ್ನು ತೆಗೆದುಕೊಳ್ಳುತ್ತಾರೆ ಕೆಲವರು ತೆಗೆದುಕೊಳ್ಳುವುದಿಲ್ಲ.
ಅಲ್ಲಿ ನೀವು ದಾನ-ಪುಣ್ಯ ಸ್ವಲ್ಪವೂ ಮಾಡುವುದಿಲ್ಲ ಏಕೆಂದರೆ ಅಲ್ಲಿ ನಿಮ್ಮ ಬಳಿ ಬಹಳ ಹಣವಿರುತ್ತದೆ
ಅಂದಾಗ ಯಾರಿಗೆ ದಾನ ಮಾಡುತ್ತೀರಿ? ಅಲ್ಲಿ ಬಡವರಿರುವುದಿಲ್ಲ. ನೀವೇ ಬಡವರಿಂದ ಶ್ರೀಮಂತರು ಹಾಗೂ
ಶ್ರೀಮಂತರಿಂದ ಬಡವರಾಗುತ್ತೀರಿ. ಇವರಿಗೆ ಆರೋಗ್ಯ ಭಾಗ್ಯ ಸಿಗಲಿ, ಕೃಪೆ ತೋರಿಸಿ ಎಂದು
ಹೇಳುತ್ತಾರಲ್ಲವೆ! ಮೊದಲೆಲ್ಲಾ ಶಿವ ತಂದೆಯಿಂದಲೇ ಬೇಡುತ್ತಿದ್ದರು ನಂತರ ಭಕ್ತಿಯು ವ್ಯಭಿಚಾರಿ
ಆದಕಾರಣ ಎಲ್ಲರ ಮುಂದೆ ಹೋಗಿ ನನ್ನ ಜೋಳಿಗೆಯನ್ನು ತುಂಬಿ ಎಂದು ಬೇಡುತ್ತಾರೆ. ಎಷ್ಟೊಂದು ಕಲ್ಲು
ಬುದ್ಧಿಯವರಾಗಿದ್ದಾರೆ! ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆಂದು
ತಿಳಿಸುತ್ತಾರೆ. ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ಏಕೆಂದರೆ ಅತೀಂದ್ರಿಯ ಸುಖವನ್ನು
ಕೇಳಬೇಕೆಂದರೆ ಗೋಪಿವಲ್ಲಭನ ಗೋಪ-ಗೋಪಿಯರನ್ನು ಕೇಳಿ ಎಂಬ ಗಾಯನವಿದೆ. ಯಾರಿಗಾದರೂ ಬಹಳ ಲಾಭವಾದರೆ
ಖುಷಿಯಾಗುತ್ತದೆ. ಆದ್ದರಿಂದ ಮಕ್ಕಳೂ ಸಹ ಬಹಳ ಖುಷಿಯಲ್ಲಿರಬೇಕು. ನಿಮಗೆ 100% ಖುಷಿಯಿತ್ತು ನಂತರ
ಕಡಿಮೆಯಾಗುತ್ತಾ ಹೋಯಿತು, ಈಗಂತೂ ಸ್ವಲ್ಪವೂ ಇಲ್ಲ. ಮೊದಲು ಬೇಹದ್ದಿನ ರಾಜ್ಯ ಭಾಗ್ಯವಿತ್ತು ನಂತರ
ಹದ್ದಿನ ರಾಜ್ಯಭಾಗ್ಯವು ಅಲ್ಪಕಾಲಕ್ಕಾಗಿ ಇರುತ್ತದೆ. ಈಗ ಬಿರ್ಲಾನ ಬಳಿ ಎಷ್ಟೊಂದು ಸಂಪತ್ತಿದೆ.
ಮಂದಿರಗಳನ್ನು ಕಟ್ಟಿಸುತ್ತಾನೆ ಅದರಿಂದ ಲಾಭವೇನೂ ಇಲ್ಲ. ಬಡವರಿಗೇನಾದರೂ ಕೊಡುತ್ತಾನೇನು? ಮಂದಿರ
ಮಾಡಿದರೆ ಅಲ್ಲಿಗೆ ಮನುಷ್ಯರು ಹೋಗಿ ತಲೆ ಬಾಗುತ್ತಾರೆ. ಬಡವರಿಗೆ ಕೊಟ್ಟರೆ ಅದಕ್ಕೆ ರಿಟರ್ನ್
ದೊರೆಯುತ್ತದೆ. ಧರ್ಮ ಶಾಲೆಯನ್ನು ಕಟ್ಟಿಸಿದರೆ ಅಲ್ಲಿಗೆ ಅನೇಕ ಮನುಷ್ಯರು ಹೋಗಿ ವಿಶ್ರಾಂತಿಯನ್ನು
ತೆಗೆದುಕೊಳ್ಳುತ್ತಾರೆ. ಅದಕ್ಕೆ ರಿಟರ್ನ್ ಮುಂದಿನ ಜನ್ಮದಲ್ಲಿ ಅಲ್ಪಕಾಲದ ಸುಖ ಸಿಗುತ್ತದೆ.
ಯಾರಾದರೂ ಆಸ್ಪತ್ರೆಯನ್ನು ಕಟ್ಟಿಸಿದರೆ ಒಂದು ಜನ್ಮಕ್ಕೆ ಅಲ್ಪಕಾಲದ ಸುಖ ಸಿಗುತ್ತದೆ. ಬೇಹದ್ದಿನ
ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಈ ಪುರುಷೋತ್ತಮ ಸಂಗಮಯುಗಕ್ಕೆ ಬಹಳ ಮಹಿಮೆಯಿದೆ, ನಿಮಗೂ ಸಹ
ಬಹಳ ಮಹಿಮೆಯಿರುವುದರಿಂದ ಪುರುಷೋತ್ತಮರಾಗುತ್ತೀರಿ. ನೀವು ಬ್ರಾಹ್ಮಣರಿಗೆ ಮಾತ್ರ ಭಗವಂತ ಬಂದು
ಓದಿಸುತ್ತಾರೆ, ಅವರೇ ಜ್ಞಾನಸಾಗರನಾಗಿದ್ದಾರೆ, ಅವರು ಮನುಷ್ಯ ಸೃಷ್ಟಿರೂಪಿ ವೃಕ್ಷಕ್ಕೆ
ಬೀಜರೂಪನಾಗಿದ್ದಾರೆ. ನಾಟಕದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ನಿಮಗೆ ಯಾರು
ಓದಿಸುತ್ತಿದ್ದಾರೆಂದು ಯಾರಾದರೂ ಕೇಳಿದರೆ - ನೀವು ಇದನ್ನು ಮರೆತು ಬಿಟ್ಟಿದ್ದೀರಿ, ಗೀತೆಯಲ್ಲಿ
ಭಗವಾನುವಾಚ ಇದೆಯಲ್ಲವೆ- ನಾನು ರಾಜರಿಗೂ ರಾಜರನ್ನಾಗಿ ಮಾಡಲು ಓದಿಸುತ್ತೇನೆ. ಇದರ ಅರ್ಥವನ್ನು
ನೀವು ಈಗ ತಿಳಿದಿದ್ದೀರಿ. ಪತಿತ ರಾಜರು ಪಾವನ ರಾಜರಿಗೆ ಪೂಜೆ ಮಾಡುತ್ತಾರೆ ಆದ್ದರಿಂದ ತಂದೆಯು
ತಿಳಿಸುತ್ತಾರೆ- ನಾನು ನಿಮ್ಮನ್ನು ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ಈ ಲಕ್ಷ್ಮೀ-ನಾರಾಯಣರು
ಸ್ವರ್ಗದ ಮಾಲೀಕರಾಗಿದ್ದರು. ಸ್ವರ್ಗದ ದೇವತೆಗಳನ್ನು ದ್ವಾಪರ-ಕಲಿಯುಗದಲ್ಲಿ ಎಲ್ಲರೂ ನಮನ ಹಾಗೂ
ಪೂಜೆ ಮಾಡುತ್ತಾರೆ. ಈ ಎಲ್ಲಾ ಮಾತುಗಳನ್ನು ಈಗ ನೀವು ತಿಳಿದಿದ್ದೀರಿ. ಭಕ್ತರು ಏನಾದರೂ
ತಿಳಿದುಕೊಂಡಿದ್ದಾರೆಯೇ! ಅವರು ಕೇವಲ ಶಾಸ್ತ್ರಗಳ ಕಥೆಯನ್ನು ಓದುತ್ತಾ, ಕೇಳುತ್ತಾ ಇರುತ್ತಾರೆ.
ತಂದೆಯು ತಿಳಿಸುತ್ತಾರೆ- ನೀವು ಯಾವ ಗೀತೆಯನ್ನು ಅರ್ಧಕಲ್ಪದಿಂದ ಓದುತ್ತಾ-ಕೇಳುತ್ತಾ ಬಂದಿದ್ದೀರಿ
ಅದರಿಂದ ನಿಮಗೆ ಏನಾದರೂ ಪ್ರಾಪ್ತಿಯಾಗಿದೆಯೇ? ಸ್ವಲ್ಪವೂ ಹೊಟ್ಟೆಯು ತುಂಬಲಿಲ್ಲ, ಈಗ ನಿಮ್ಮ
ಹೊಟ್ಟೆ ತುಂಬುತ್ತಿದೆ. ಈ ಪಾತ್ರವು ಒಮ್ಮೆಯೇ ನಡೆಯುತ್ತದೆಯೆಂದು ನೀವು ತಿಳಿದಿದ್ದೀರಿ. ನಾನು
ಇವರ ತನುವಿನಲ್ಲಿ ಪ್ರವೇಶ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ತಂದೆ ಇವರ ಮೂಲಕ
ಹೇಳುತ್ತಾರೆಂದರೆ ಅವಶ್ಯವಾಗಿ ಇವರಲ್ಲಿ ಮಾಡುತ್ತಾರೆ ಮೇಲಿಂದ ಆದೇಶ ಕೊಡುತ್ತಾರೇನು! ತಂದೆಯು
ತಿಳಿಸುತ್ತಾರೆ- ನಾನು ಸನ್ಮುಖದಲ್ಲಿ ಬರುತ್ತೇನೆ. ಈಗ ನೀವು ಸನ್ಮುಖದಲ್ಲಿ ಕೇಳುತ್ತಿದ್ದೀರಿ. ಈ
ಬ್ರಹ್ಮನೂ ಸಹ ಏನೂ ತಿಳಿದುಕೊಂಡಿರಲಿಲ್ಲ, ಈಗ ತಿಳಿದುಕೊಳ್ಳುತ್ತಿದ್ದಾರೆ ಆದರೆ ಗಂಗೆಯ ನೀರು
ಪಾವನ ಮಾಡುವುದಿಲ್ಲ. ಇದು ಜ್ಞಾನದ ಮಾತಾಗಿದೆ. ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆಂದು ನೀವು
ತಿಳಿದಿದ್ದೀರಿ. ನಿಮ್ಮ ಬುದ್ಧಿಯು ಈಗ ಪರಮಧಾಮಕ್ಕೆ ಹೋಗುವುದಿಲ್ಲ, ಇದು ಇವರ ರಥವಾಗಿದೆ. ತಂದೆಯು
ಇದನ್ನು ಬೂಟ್ ಎಂದೂ ಹೇಳುತ್ತಾರೆ, ಡಬ್ಬ ಎಂದೂ ಹೇಳುತ್ತಾರೆ. ಈ ಡಬ್ಬದಲ್ಲಿ ಆ ವಜ್ರವಿದೆ.
ಎಷ್ಟೊಂದು ಫಸ್ಟ್ ಕ್ಲಾಸ್ ವಸ್ತುವಾಗಿದೆ! ಇದನ್ನು ಚಿನ್ನದ ಡಬ್ಬದಲ್ಲಿಡಬೇಕಾಗಿದೆ. ತಂದೆಯು
ಸತೋಪ್ರಧಾನ ಡಬ್ಬ (ಶರೀರ) ವನ್ನಾಗಿ ಮಾಡುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ- ಛೂ ಎಂದ ತಕ್ಷಣ
ದೋಬಿ (ಅಗಸ) ಮನೆಯಿಂದ ಹೊರಟು ಹೋಯಿತು. ಇದನ್ನು ಛೂ ಮಂತ್ರವೆಂದು ಕರೆಯಲಾಗುವುದು. ಒಂದು
ಸೆಕೆಂಡಿನಲ್ಲಿ ಜೀವನ್ಮುಕ್ತಿ ಆದ್ದರಿಂದ ಅವರನ್ನು ಜಾದೂಗಾರ್ ಎಂದು ಹೇಳಲಾಗುತ್ತದೆ. ಒಂದು
ಸೆಕೆಂಡಿನಲ್ಲಿ ನಾವು ಹೀಗಾಗುತ್ತೇವೆಂದು ನಿಶ್ಚಯವಾಗಿ ಬಿಡುತ್ತದೆ. ಈ ಮಾತುಗಳನ್ನು ನೀವೀಗ
ಪ್ರತ್ಯಕ್ಷದಲ್ಲಿ ಕೇಳುತ್ತಿದ್ದೀರಿ. ಮೊದಲು ಸತ್ಯ ನಾರಾಯಣನ ಕಥೆಯನ್ನು ಕೇಳುವಾಗ ಇದೆಲ್ಲವೂ
ತಿಳಿದಿತ್ತೇ? ಆ ಸಮಯದಲ್ಲಿ ಕಥೆ ಕೇಳುವಾಗ ವಿದೇಶ, ಹಡಗು ಮೊದಲಾದವು ನೆನಪಿರುತ್ತಿತ್ತು. ಸತ್ಯ
ನಾರಾಯಣನ ಕಥೆಯನ್ನು ಕೇಳಿ ನಂತರ ಯಾತ್ರೆಯಲ್ಲಿ ಹೋಗುತ್ತಿದ್ದರು, ಅವರು ಪುನಃ ಹಿಂತಿರುಗಿ
ಬರುತ್ತಿದ್ದರು. ತಂದೆಯು ತಿಳಿಸುತ್ತಾರೆ- ನೀವು ಈ ಛೀ! ಛೀ! ಪ್ರಪಂಚಕ್ಕೆ ಹಿಂತಿರುಗಬಾರದು.
ಭಾರತದಲ್ಲಿ ಅಮರಲೋಕ, ಸ್ವರ್ಗ, ದೇವಿ-ದೇವತೆಗಳ ರಾಜ್ಯವಿತ್ತು, ಈ ಲಕ್ಷ್ಮೀ-ನಾರಾಯಣರು ವಿಶ್ವದ
ಮಾಲೀಕರಾಗಿದ್ದರಲ್ಲವೆ! ಅವರ ರಾಜ್ಯದಲ್ಲಿ ಸುಖ-ಶಾಂತಿ-ಪವಿತ್ರತೆಯಿತ್ತು. ಪ್ರಪಂಚವೂ ಸಹ
ವಿಶ್ವದಲ್ಲಿ ಶಾಂತಿ ಬೇಕು, ಎಲ್ಲರೂ ಒಂದಾಗಬೇಕು ಎಂದು ಬೇಡುತ್ತಿದೆ. ಎಲ್ಲರೂ ಸೇರಿ ಒಂದಾಗಬೇಕೆಂದು
ಇಷ್ಟ ಪಡುತ್ತದೆ. ಈಗ ಈ ಎಲ್ಲಾ ಧರ್ಮಗಳು ಸೇರಿ ಒಂದಾಗುತ್ತದೆಯೇ? ಪ್ರತಿಯೊಬ್ಬರ ಧರ್ಮವೂ
ಬೇರೆಯಾಗಿದೆ, ಲಕ್ಷಣಗಳೂ ಬೇರೆ-ಬೇರೆಯಾಗಿದ್ದು ಒಂದಾಗಿರಲು ಹೇಗೆ ಸಾಧ್ಯ. ಅದು ಶಾಂತಿಧಾಮ,
ಸುಖಧಾಮವಾಗಿದೆ. ಅಲ್ಲಿ ಒಂದೇ ಧರ್ಮ, ಒಂದೇ ರಾಜ್ಯವಿರುತ್ತದೆ, ಅಲ್ಲಿ ಪರಸ್ಪರ ಜಗಳವಾಗುವ ಬೇರೆ
ಯಾವುದೇ ಧರ್ಮವಿರುವುದಿಲ್ಲ. ಅದನ್ನೇ ವಿಶ್ವದಲ್ಲಿ ಶಾಂತಿಯೆಂದು ಹೇಳಲಾಗುವುದು. ಈಗ ಮಕ್ಕಳಿಗೆ
ತಂದೆಯು ಓದಿಸುತ್ತಿದ್ದಾರೆ. ಈಗ ಮಕ್ಕಳು ತಿಳಿದುಕೊಂಡಿದ್ದೀರಿ- ಎಲ್ಲಾ ಮಕ್ಕಳು ಏಕರಸವಾಗಿ
ಓದುವುದಿಲ್ಲ, ನಂಬರವಾರ್ ಆಗಿರುತ್ತಾರೆ. ಈ ರಾಜಧಾನಿಯೂ ಸಹ ಸ್ಥಾಪನೆಯಾಗುತ್ತಿದೆ. ಮಕ್ಕಳನ್ನು
ಎಷ್ಟೊಂದು ಬುದ್ಧಿವಂತರನ್ನಾಗಿ ಮಾಡಲಾಗುವುದು. ಇದು ಈಶ್ವರೀಯ ವಿಶ್ವವಿದ್ಯಾಲಯವಾಗಿದೆ, ಆದರೆ
ಇದನ್ನು ಭಕ್ತರು ತಿಳಿದುಕೊಂಡಿಲ್ಲ. ಅನೇಕ ಬಾರಿ ಭಗವಾನುವಾಚ ಎಂದು ಕೇಳಿದ್ದಾರೆ. ಗೀತೆಗೆ
ಅಪರಮಪಾರವಾದ ಮಹಿಮೆಯಿದೆ. ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ. ಶಿರೋಮಣಿ ಅರ್ಥಾತ್ ಸರ್ವ
ಶ್ರೇಷ್ಠವಾಗಿದೆ. ಪತಿತ-ಪಾವನ ಸದ್ಗತಿದಾತ ಒಬ್ಬ ಭಗವಂತ ಆಗಿದ್ದಾರೆ, ಅವರೇ ಸರ್ವರಿಗೂ
ಸದ್ಗತಿದಾತನಾಗಿದ್ದಾರೆ. ಭಾರತವಾಸಿ ಎಂಬುದರ ಅರ್ಥವನ್ನು ತಿಳಿದುಕೊಂಡಿಲ್ಲ. ಅರಿವಿಲ್ಲದೆ ನಾವು
ಸಹೋದರ-ಸಹೋದರನೆಂದು ಹೇಳಿ ಬಿಡುತ್ತಾರೆ. ಈಗ ತಂದೆಯು ತಿಳಿಸಿದ್ದಾರೆ- ನಾವು
ಸಹೋದರ-ಸಹೋದರರಾಗಿದ್ದೇವೆ, ಶಾಂತಿಧಾಮದಲ್ಲಿ ಇರುವವರಾಗಿದ್ದೇವೆ. ಇಲ್ಲಿ
ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ತಂದೆಯನ್ನು ಮರೆತು ಹೋಗಿದ್ದೇವೆ, ಮನೆಯನ್ನೂ ಮರೆತು
ಹೋಗಿದ್ದೇವೆ. ತಂದೆಯು ಭಾರತಕ್ಕೆ ಯಾವ ವಿಶ್ವ ರಾಜ್ಯಭಾಗ್ಯವನ್ನು ಕೊಡುತ್ತಾರೆ ಅದನ್ನು ಎಲ್ಲರೂ
ಮರೆತು ಹೋಗಿದ್ದಾರೆ. ಈ ಎಲ್ಲಾ ರಹಸ್ಯಗಳನ್ನು ತಂದೆಯು ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಅತೀಂದ್ರಿಯ
ಸುಖದ ಅನುಭವ ಮಾಡಲು ಇದೇ ಪುರುಷೋತ್ತಮ ಸಂಗಮಯುಗವಾಗಿದೆ. ಈಗ ತಂದೆಯೇ ಓದಿಸುತ್ತಿದ್ದಾರೆ, ನಾವು
ರಾಜರಿಗೂ ರಾಜರಾಗುತ್ತಿದ್ದೇವೆಂದು ಸದಾ ಸ್ಮೃತಿಯಿರಬೇಕು. ಈಗ ಮಾತ್ರ ನಮಗೆ ನಾಟಕದ
ಆದಿ-ಮಧ್ಯ-ಅಂತ್ಯದ ಜ್ಞಾನವಿದೆ.
2. ಈಗ ಮನೆಗೆ ಹಿಂತಿರುಗಬೇಕಾಗಿದೆ, ಆದ್ದರಿಂದ ಈ ಶರೀರದಿಂದಲೂ ಬಡವರಾಗಬೇಕು ಇದನ್ನು ಮರೆತು
ತಮ್ಮನ್ನು ಅಶರೀರಿ ಆತ್ಮನೆಂದು ತಿಳಿಯಬೇಕು.
ವರದಾನ:
ತಂದೆಯ ಸಮಾನ
ದಯಾಹೃದಯಿಯಾಗಿ ಎಲ್ಲರಿಗೂ ಕ್ಷಮೆ ಮಾಡುತ್ತ ಸ್ನೇಹವನ್ನು ನೀಡುವಂತಹ ಮಾಸ್ಟರ್ ದಾತಾ ಭವ.
ಹೇಗೆ ತಂದೆಯನ್ನು
ದಯಾಹೃದಯಿ, ಕರುಣಾಮಯಿ ಎಂದು ಕರೆಯುತ್ತಾರೆ, ಅದೇ ರೀತಿ ನೀವು ಮಕ್ಕಳೂ ಸಹ ಮಾಸ್ಟರ್ ದಯಾ ಹೃದಯಿ
ಆಗಿರುವಿರಿ. ಯಾರು ದಯಾ ಹೃದಯಿ ಆಗಿರುವಿರಿ ಅವರೇ ಕಲ್ಯಾಣ ಮಾಡಲು ಸಾಧ್ಯ, ಅಕಲ್ಯಾಣ ಮಾಡುವವರಿಗೂ
ಸಹಾ ಕ್ಷಮೆ ಮಾಡಬಲ್ಲಿರಿ. ಅವರು ಮಾಸ್ಟರ್ ಸ್ನೇಹ ಸಾಗರರಾಗಿರುತ್ತಾರೆ, ಅವರ ಬಳಿ ಸ್ನೇಹದ ವಿನಃ
ಬೇರೆ ಏನೂ ಇರುವುದೆ ಇಲ್ಲ. ವರ್ತಮಾನ ಸಮಯ ಸಂಪತ್ತಿಗಿಂತಲೂ ಹೆಚ್ಚು ಸ್ನೇಹದ ಅವಶ್ಯಕತೆಯಿದೆ.
ಆದ್ದರಿಂದ ಮಾಸ್ಟರ್ ದಾತಾ ಆಗಿ ಎಲ್ಲರಿಗೂ ಸ್ನೇಹ ಕೊಡುತ್ತಾ ಹೋಗಿ. ಯಾರೂ ಸಹಾ ಕಾಲಿ ಕೈಯಲ್ಲಿ
ಹೋಗಬಾರದು.
ಸ್ಲೋಗನ್:
ತೀವ್ರ
ಪುರುಷಾರ್ಥಿ ಆಗಲು ಇಚ್ಛೆ ಇದ್ದಾಗ ಎಲ್ಲಿ ಇಚ್ಛೆಯಿರುವುದೊ ಅಲ್ಲಿ ಮಾರ್ಗ ಸಿಕ್ಕಿ ಬಿಡುವುದು.