26.02.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ಶರೀರದಲ್ಲಿ ಜೀವಿಸಿದ್ದಂತೆಯೇ ಸಾಯುವುದಕ್ಕಾಗಿ ಅಭ್ಯಾಸ ಮಾಡಿ - ನಾನೂ ಆತ್ಮ, ನೀವೂ ಆತ್ಮ, ಈ ಅಭ್ಯಾಸದಿಂದ ಮಮತ್ವವು ಕಳೆಯುವುದು.”

ಪ್ರಶ್ನೆ:
ಎಲ್ಲದಕ್ಕಿಂತ ಶ್ರೇಷ್ಠ ಗುರಿ ಯಾವುದು? ಆ ಗುರಿಯನ್ನು ಪ್ರಾಪ್ತಿ ಮಾಡಿಕೊಳ್ಳುವವರ ಚಿಹ್ನೆಗಳೇನಾಗಿರುವುದು?

ಉತ್ತರ:
ಎಲ್ಲಾ ದೇಹಧಾರಿಗಳಿಂದ ಮಮತ್ವವು ಕಳೆಯಲಿ, ಸದಾ ಸಹೋದರ-ಸಹೋದರರೆಂಬ ಸ್ಮೃತಿಯಿರಲಿ - ಇದೇ ಶ್ರೇಷ್ಠ ಗುರಿಯಾಗಿದೆ. ಯಾರು ನಿರಂತರ ದೇಹೀ-ಅಭಿಮಾನಿಯಾಗುವ ಅಭ್ಯಾಸ ಮಾಡುತ್ತಾರೆಯೋ ಅವರೇ ಈ ಗುರಿಯನ್ನು ತಲುಪಲು ಸಾಧ್ಯ. ಒಂದು ವೇಳೆ ಆತ್ಮಾಭಿಮಾನಿಯಾಗಿಲ್ಲವೆಂದರೆ ಒಂದಲ್ಲ, ಒಂದು ಕಡೆ ಸಿಕ್ಕಿಹಾಕಿಕೊಳ್ಳುತ್ತಾ ಇರುತ್ತಾರೆ, ಇಲ್ಲವೆ ತಮ್ಮ ಶರೀರದಲ್ಲಿ, ಇಲ್ಲವೆ ಯಾವುದೇ ಮಿತ್ರ ಸಂಬಂಧಿಗಳ ಶರೀರದಲ್ಲಿ ಸಿಕ್ಕಿಕೊಂಡಿರುತ್ತಾರೆ. ಅವರಿಗೆ ಅನ್ಯರ ಮಾತು ಇಷ್ಟವಾಗುತ್ತದೆ, ಇಲ್ಲವೆ ಅನ್ಯರ ಶರೀರ ಇಷ್ಟವಾಗುತ್ತದೆ. ಶ್ರೇಷ್ಠ ಗುರಿಯನ್ನು ತಲುಪುವವರು ದೇಹವನ್ನು ಪ್ರೀತಿ ಮಾಡುವುದಿಲ್ಲ, ಅವರ ಶರೀರದ ಪರಿವೆಯೂ ದೂರವಾಗಿರುತ್ತದೆ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಹೇಳುತ್ತಾರೆ - ಮಕ್ಕಳೇ ನೋಡಿ, ನಾನು ನೀವೆಲ್ಲಾ ಮಕ್ಕಳನ್ನು ನನ್ನ ಸಮಾನ ಮಾಡಿಕೊಳ್ಳಲು ಬಂದಿದ್ದೇನೆ. ತಂದೆಯು ತನ್ನ ಸಮಾನರನ್ನಾಗಿ ಮಾಡಿಕೊಳ್ಳಲು ಈಗ ಹೇಗೆ ಬರುತ್ತಾರೆ? ಅವರು ನಿರಾಕಾರನಾಗಿದ್ದಾರೆ, ತಿಳಿಸುತ್ತಾರೆ - ನಾನು ನಿರಾಕಾರನಾಗಿದ್ದೇನೆ, ತಾವು ಮಕ್ಕಳನ್ನು ನನ್ನ ಸಮಾನ ಅರ್ಥಾತ್ ನಿರಾಕಾರಿಗಳನ್ನಾಗಿ ಮಾಡಲು, ಜೀವಿಸಿದ್ದಂತೆಯೇ ಸಾಯುವುದನ್ನು ಕಲಿಸಲು ಬಂದಿದ್ದೇನೆ. ತಂದೆಯು ತನ್ನನ್ನೂ ಸಹ ಆತ್ಮನೆಂದು ತಿಳಿಯುತ್ತಾರಲ್ಲವೆ. ಅವರಿಗೆ ಶರೀರದ ಪರಿವೆಯಿಲ್ಲ, ಶರೀರದಲ್ಲಿದ್ದರೂ ಸಹ ಶರೀರದ ಪರಿವೆಯಿಲ್ಲ. ಈ ಶರೀರವು ಅವರದಂತೂ ಅಲ್ಲ. ನೀವು ಮಕ್ಕಳೂ ಸಹ ಈ ಶರೀರದ ಪರಿವೆಯನ್ನು ತೆಗೆದು ಹಾಕಿ ನೀವಾತ್ಮರೇ ನನ್ನ ಜೊತೆ ಬರಬೇಕಾಗಿದೆ. ಈ ಶರೀರವನ್ನು ಹೇಗೆ ನಾನು ಲೋನ್ ಆಗಿ ಪಡೆದಿದ್ದೇನೆಯೋ ಹಾಗೆಯೇ ಆತ್ಮರೂ ಸಹ ಪಾತ್ರವನ್ನಭಿನಯಿಸುವುದಕ್ಕಾಗಿ ಆಧಾರ ತೆಗೆದುಕೊಳ್ಳುತ್ತೀರಿ. ನೀವು ಜನ್ಮ-ಜನ್ಮಾಂತರದಿಂದ ಶರೀರವನ್ನು ತೆಗೆದುಕೊಳ್ಳುತ್ತಾ ಬಂದಿದ್ದೀರಿ. ಈಗ ನಾನು ಹೇಗೆ ಜೀವಿಸಿದ್ದಂತೆಯೇ ಈ ಶರೀರದಲ್ಲಿದ್ದೇನೆ ಆದರೆ ಭಿನ್ನವಾಗಿದ್ದೇನೆ ಅರ್ಥಾತ್ ಸತ್ತಂತೆ. ಸಾಯುವುದು ಎಂದು ಶರೀರ ಬಿಡುವುದಕ್ಕೆ ಹೇಳಲಾಗುತ್ತದೆ. ನೀವೂ ಸಹ ಜೀವಿಸಿದ್ದಂತೆಯೇ ಈ ಶರೀರದಿಂದ ಸಾಯಬೇಕಾಗಿದೆ. ನಾನೂ ಆತ್ಮ, ನೀವೂ ಆತ್ಮ. ನೀವೂ ಸಹ ನನ್ನ ಜೊತೆ ನಡೆಯಬೇಕಾಗಿದೆ ಅಥವಾ ಇಲ್ಲಿಯೇ ಕುಳಿತುಕೊಳ್ಳಬೇಕೆ? ಈ ಶರೀರದಲ್ಲಿ ಜನ್ಮ-ಜನ್ಮಾಂತರದ ಮೋಹವಿದೆ. ಹೇಗೆ ನಾನು ಅಶರೀರಿಯಾಗಿದ್ದೇನೆಯೋ ನೀವೂ ಸಹ ಜೀವಿಸಿದ್ದಂತೆಯೇ ತನ್ನನ್ನು ಅಶರೀರಿಯೆಂದು ತಿಳಿಯಿರಿ. ನಾವೀಗ ತಂದೆಯ ಜೊತೆ ಹೋಗಬೇಕಾಗಿದೆ. ಹೇಗೆ ತಂದೆಯದು ಹಳೆಯ ಶರೀರವಾಗಿದೆಯೋ ಹಾಗೆಯೇ ತಾವಾತ್ಮಗಳಿಗೂ ಸಹ ಇದು ಹಳೆಯ ಅಶರೀರವಾಗಿದೆ. ಈ ಹಳೆಯ ಪಾದರಕ್ಷೆಗಳನ್ನು ಬಿಡಬೇಕಾಗಿದೆ. ಹೇಗೆ ನನಗೆ ಇದರಲ್ಲಿ ಮಮತ್ವವಿಲ್ಲವೋ ಹಾಗೆಯೇ ನೀವೂ ಸಹ ಈ ಹಳೆಯ ಪಾದರಕ್ಷೆಗಳಿಂದ ಮಮತ್ವವನ್ನು ತೆಗೆಯಿರಿ. ನಿಮಗೆ ಮಮತ್ವವನ್ನು ಇಟ್ಟುಕೊಳ್ಳುವ ಹವ್ಯಾಸವಾಗಿ ಬಿಟ್ಟಿದೆ, ನನಗೆ ಈ ಹವ್ಯಾಸವಿಲ್ಲ. ನಾನು ಜೀವಿಸಿದ್ದಂತೆಯೇ ಸತ್ತಿದ್ದೇನೆ. ನೀವೂ ಸಹ ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ನನ್ನ ಜೊತೆ ಮನೆಗೆ ನಡೆಯಬೇಕಾಗಿದೆ. ಆದ್ದರಿಂದ ಈಗ ಈ ಅಭ್ಯಾಸ ಮಾಡಿ. ಶರೀರದ ಇಷ್ಟೊಂದು ಪರಿವೆಯಿರುತ್ತದೆ, ಅದರ ಮಾತೇ ಕೇಳಬೇಡಿ! ಶರೀರವು ರೋಗಿಯಾಗಿ ಬಿಟ್ಟರೂ ಸಹ ಆತ್ಮವು ಅದನ್ನು ಬಿಡುವುದೇ ಇಲ್ಲ. ಈಗ ಇದರ ಮಮತ್ವವನ್ನು ತೆಗೆಯಬೇಕಾಗುತ್ತದೆ. ನಾವಂತೂ ತಂದೆಯ ಬಳಿ ಅವಶ್ಯವಾಗಿ ಹೋಗಬೇಕಾಗಿದೆ. ತಮ್ಮನ್ನು ಶರೀರದಿಂದ ಭಿನ್ನವೆಂದು ತಿಳಿಯಬೇಕು. ಇದಕ್ಕೆ ಜೀವಿಸಿದ್ದಂತೆಯೇ ಸಾಯುವುದು ಎಂದು ಹೇಳಲಾಗುತ್ತದೆ, ಮನೆಯ ನೆನಪಿರುತ್ತದೆ. ನೀವು ಜನ್ಮ-ಜನ್ಮಾಂತರದಿಂದ ಈ ಶರೀರದಲ್ಲಿರುತ್ತಾ ಬಂದಿದ್ದೀರಿ. ಆದ್ದರಿಂದ ನೀವು ಶ್ರಮ ಪಡಬೇಕಾಗುತ್ತದೆ, ಜೀವಿಸಿದ್ದಂತೆಯೇ ಸಾಯಬೇಕಾಗುತ್ತದೆ. ನಾನಂತೂ ಇವರಲ್ಲಿ ತಾತ್ಕಾಲಿಕವಾಗಿ ಬರುತ್ತೇನೆ ಅಂದಾಗ ಸತ್ತು ನಡೆಯುವುದರಿಂದ ಅರ್ಥಾತ್ ತಮ್ಮನ್ನು ಆತ್ಮನೆಂದು ತಿಳಿದು ನಡೆಯುವುದರಿಂದ ಯಾವುದೇ ದೇಹಧಾರಿಯಲ್ಲಿ ಮಮತ್ವವಿರುವುದಿಲ್ಲ. ಬಹಳಷ್ಟು ಜನರಿಗೆ ಯಾರಾದರೊಬ್ಬರಲ್ಲಿ ಮೋಹವಿರುತ್ತದೆಯೆಂದರೆ ಹಾರಿಸಿಬಿಡಬೇಕಾಗಿದೆ. ಇದು ಬಹಳ ದೊಡ್ಡ ಗುರಿಯಾಗಿದೆ. ತಿನ್ನುತ್ತಾ-ಕುಡಿಯುತ್ತಾ ಹೇಗೆ ಈ ಶರೀರದಲ್ಲಿ ಇಲ್ಲವೇ ಇಲ್ಲ - ಈ ಸ್ಥಿತಿಯನ್ನು ಪಕ್ಕಾ ಮಾಡಿಕೊಳ್ಳಬೇಕು. ಆಗ ಅಷ್ಟ ರತ್ನಗಳ ಮಾಲೆಯಲ್ಲಿ ಬರಲು ಸಾಧ್ಯ. ಪರಿಶ್ರಮವಿಲ್ಲದೆ ಶ್ರೇಷ್ಠ ಪದವಿಯು ಸಿಗುವುದಿಲ್ಲ. ಜೀವಿಸಿದ್ದಂತೆಯೇ ಎಲ್ಲವನ್ನೂ ನೋಡುತ್ತಿದ್ದರೂ ಸಹ ತಿಳಿಯಬೇಕು- ನಾನು ಅಲ್ಲಿನ ನಿವಾಸಿಯಾಗಿದ್ದೇನೆ, ಹೇಗೆ ತಂದೆಯು ಇವರಲ್ಲಿ ಸ್ವಲ್ಪ ಸಮಯಕ್ಕಾಗಿ ಅರ್ಥಾತ್ ತಾತ್ಕಾಲಿಕವಾಗಿ ಕುಳಿತಿದ್ದಾರೆಯೋ ಹಾಗೆಯೇ ನಾವೂ ಸಹ ಈಗ ಮನೆಗೆ ಹೋಗಬೇಕಾಗಿದೆ. ಹೇಗೆ ತಂದೆಗೆ ಮಮತ್ವವಿಲ್ಲವೋ ಹಾಗೆಯೇ ನಮಗೂ ಸಹ ಇದರಲ್ಲಿ ಮಮತ್ವವನ್ನು ಇಟ್ಟುಕೊಳ್ಳಬಾರದು. ತಂದೆಯಂತೂ ನೀವು ಮಕ್ಕಳಿಗೆ ತಿಳಿಸುವುದಕ್ಕಾಗಿ ಈ ಶರೀರದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಈಗ ನೀವು ಹಿಂತಿರುಗಿ ಹೋಗಬೇಕಾಗಿದೆ ಆದ್ದರಿಂದ ಯಾವುದೇ ದೇಹಧಾರಿಗಳಲ್ಲಿ ಮಮತ್ವವಿರಬಾರದು. ಇಂತಹವರು ಬಹಳ ಚೆನ್ನಾಗಿದ್ದಾರೆ, ಮಧುರರಾಗಿದ್ದಾರೆ ಎಂದು ಆತ್ಮದ ಬುದ್ಧಿಯು ಹೋಗುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಆತ್ಮವನ್ನು ನೋಡಿ ಆದರೆ ಶರೀರವನ್ನಲ್ಲ. ಶರೀರವನ್ನು ನೋಡುವುದರಿಂದ ನೀವು ಸಿಕ್ಕಿಹಾಕಿಕೊಂಡು ಸಾಯುತ್ತೀರಿ. ಇದು ಉನ್ನತ ಗುರಿಯಾಗಿದೆ. ನಿಮ್ಮದು ಜನ್ಮ-ಜನ್ಮಾಂತರ ಹಳೆಯ ಮಮತ್ವವಾಗಿದೆ. ತಂದೆಗೆ ಮಮತ್ವವಿಲ್ಲ, ಆದ್ದರಿಂದಲೇ ನೀವು ಮಕ್ಕಳಿಗೆ ತಿಳಿಸಲು ಬಂದಿದ್ದೇನೆ. ಸ್ವಯಂ ತಂದೆಯೇ ತಿಳಿಸುತ್ತಾರೆ, ನಾನಂತೂ ಈ ಶರೀರದಲ್ಲಿ ಸಿಕ್ಕಿಕೊಳ್ಳುವುದಿಲ್ಲ. ನೀವು ಬಂಧನಕ್ಕೊಳಗಾಗಿದ್ದೀರಿ, ನಾನು ನಿಮ್ಮನ್ನು ಬಿಡಿಸಲು ಬಂದಿದ್ದೇನೆ. ನಿಮ್ಮ 84 ಜನ್ಮಗಳು ಮುಕ್ತಾಯವಾಯಿತು. ಈಗ ಶರೀರದಿಂದ ಪರಿವೆಯನ್ನು ತೆಗೆಯಿರಿ, ಆತ್ಮಾಭಿಮಾನಿಯಾಗಿ ಇಲ್ಲದೇ ಇರುವುದರಿಂದಲೇ ನೀವು ಒಂದಲ್ಲ ಒಂದು ಕಡೆ ಸಿಕ್ಕಿಕೊಳ್ಳುತ್ತಿರುತ್ತೀರಿ. ಕೆಲವರ ಮಾತು ಇಷ್ಟವಾಗುತ್ತಿರುತ್ತದೆ, ಕೆಲವರ ಶರೀರ ಇಷ್ಟವಾಗುತ್ತದೆ, ಆಗ ಮನೆಯಲ್ಲಿಯೂ ಸಹ ಅವರ ನೆನಪು ಬರುತ್ತಾ ಇರುತ್ತದೆ. ಶರೀರದ ಮೇಲೆ ಪ್ರೀತಿಯಿದ್ದರೆ ಸೋಲನ್ನನುಭವಿಸುತ್ತಾರೆ. ಹೀಗೆ ಅನೇಕರು ಹಾಳಾಗಿ ಬಿಡುತ್ತಾರೆ. ಆದ್ದರಿಂದ ತಂದೆಯೂ ಹೇಳುತ್ತಾರೆ - ಸ್ತ್ರೀ-ಪುರುಷರ ಸಂಬಂಧವನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯಿರಿ. ಇವರೂ ಆತ್ಮ ನಾವು ಆತ್ಮ. ಆತ್ಮನೆಂದು ತಿಳಿಯುತ್ತಾ-ತಿಳಿಯುತ್ತಾ ದೇಹದ ಪರಿವೆಯು ಬಿಟ್ಟು ಹೋಗುವುದು. ತಂದೆಯ ನೆನಪಿನಿಂದಲೇ ವಿಕರ್ಮ ವಿನಾಶವಾಗುತ್ತದೆ. ಈ ಮಾತಿನ ಮೇಲೆ ಚೆನ್ನಾಗಿ ವಿಚಾರ ಸಾಗರ ಮಂಥನ ಮಾಡಬಹುದು. ವಿಚಾರ ಸಾಗರ ಮಂಥನ ಮಾಡದ ವಿನಃ ನೀವು ಅಪಾರ ಖುಷಿಯಲ್ಲಿರಲು ಸಾಧ್ಯವಿಲ್ಲ. ನಾವೀಗ ತಂದೆಯ ಬಳಿ ಅವಶ್ಯವಾಗಿ ಹೋಗಲೇಬೇಕೆಂಬುದು ಪರಿಪಕ್ವವಾಗಬೇಕು. ಮೂಲ ಮಾತು ನೆನಪಿನದಾಗಿದೆ. 84ರ ಚಕ್ರವು ಮುಕ್ತಾಯವಾಯಿತು ಮತ್ತೆ ಆರಂಭವಾಗಬೇಕಾಗಿದೆ. ಈ ಹಳೆಯ ದೇಹದೊಂದಿಗಿನ ಮಮತ್ವವನ್ನು ಕಳೆಯಲಿಲ್ಲವೆಂದರೆ ತಮ್ಮ ಶರೀರದಲ್ಲಿ, ಇಲ್ಲವೆ ಯಾವುದೇ ಮಿತ್ರ ಸಂಬಂಧಿಗಳ ಶರೀರದಲ್ಲಿ, ಅಥವಾ ನಾಮ-ರೂಪದಲ್ಲಿ ಬಂಧಿತರಾಗುತ್ತೀರಿ. ತಾವಂತೂ ಯಾರಲ್ಲಿಯೂ ಮನಸ್ಸಿಡಬಾರದು. ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು. ನಾವಾತ್ಮರು ನಿರಾಕಾರಿ, ತಂದೆಯೂ ನಿರಾಕಾರ. ಅರ್ಧಕಲ್ಪ ನೀವು ಭಕ್ತಿಮಾರ್ಗದಲ್ಲಿ ತಂದೆಯನ್ನು ನೆನಪು ಮಾಡುತ್ತಲೇ ಬಂದಿದ್ದೀರಲ್ಲವೆ. ಹೇ ಪ್ರಭು ಎಂದು ಹೇಳಿದಾಗ ಶಿವಲಿಂಗವೇ ಮುಂದೆಬರುತ್ತದೆ. ಯಾವುದೇ ದೇಹಧಾರಿಗೆ ಹೇ ಪ್ರಭು ಎಂದು ಹೇಳಲು ಸಾಧ್ಯವಿಲ್ಲ, ಎಲ್ಲರೂ ಶಿವನ ಮಂದಿರದಲ್ಲಿ ಹೋಗುತ್ತಾರೆ. ಅವರನ್ನೇ ಪರಮಾತ್ಮನೆಂದು ತಿಳಿದು ಪೂಜಿಸುತ್ತಾರೆ. ಸರ್ವ ಶ್ರೇಷ್ಠ ಭಗವಂತನೊಬ್ಬರೇ ಆಗಿದ್ದಾರೆ. ಅತೀ ಶ್ರೇಷ್ಠ ಅರ್ಥಾತ್ ಪರಮಧಾಮದಲ್ಲಿ ಇರುವವರಾಗಿದ್ದಾರೆ. ಭಕ್ತಿಯೂ ಸಹ ಮೊದಲು ಒಬ್ಬರ ಅವ್ಯಭಿಚಾರಿ ಭಕ್ತಿಯಿರುತ್ತದೆ. ಅದೇ ಮತ್ತೆ ವ್ಯಭಿಚಾರಿಯಾಗಿ ಬಿಡುತ್ತದೆ ಅಂದಾಗ ತಂದೆಯು ಪದೇ-ಪದೇ ಮಕ್ಕಳಿಗೆ ತಿಳಿಸುತ್ತಾರೆ - ನೀವು ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ಈ ಅಭ್ಯಾಸ ಮಾಡಿ - ದೇಹದ ಪರಿವೆಯನ್ನು ಬಿಡಿ. ಸನ್ಯಾಸಿಗಳೂ ಸಹ ತಮೋಪ್ರಧಾನವಾಗಿ ಬಿಟ್ಟಿದ್ದಾರೆ. ಸತೋಪ್ರಧಾನ ಆತ್ಮವು ಆಕರ್ಷಣೆ ಮಾಡುತ್ತದೆ, ಅಪವಿತ್ರ ಆತ್ಮಗಳನ್ನು ಸೆಳೆಯುತ್ತದೆ. ಏಕೆಂದರೆ ಆತ್ಮವು ಪವಿತ್ರವಾಗಿರುತ್ತದೆ. ಭಲೇ ಪುನರ್ಜನ್ಮದಲ್ಲಿ ಬರುತ್ತಾರೆ. ಆದರೂ ಸಹ ಪವಿತ್ರರಾಗಿರುವ ಕಾರಣ ಸೆಳೆಯುತ್ತಾರೆ. ಅನೇಕರು ಅವರ ಅನುಯಾಯಿಗಳಾಗುತ್ತಾರೆ. ಎಷ್ಟು ಹೆಚ್ಚಿನ ಪವಿತ್ರತೆಯ ಶಕ್ತಿಯು ಇರುತ್ತದೆಯೋ ಅಷ್ಟು ಹೆಚ್ಚಿನದಾಗಿ ಅನುಯಾಯಿಗಳಾಗುತ್ತಾರೆ. ಈ ತಂದೆಯಂತೂ ಸದಾ ಪಾವನರಾಗಿದ್ದಾರೆ ಮತ್ತು ಇರುವುದೂ ಸಹ ಗುಪ್ತವಾಗಿದೆ. ಡಬಲ್ ಇದ್ದಾರಲ್ಲವೆ. ಶಕ್ತಿಯೆಲ್ಲವೂ ಅವರದಾಗಿದೆ, ಇವರದಲ್ಲ (ಬ್ರಹ್ಮಾ) ಪ್ರಾರಂಭದಲ್ಲಿಯೂ ಸಹ ನಿಮ್ಮನ್ನು ಶಿವ ತಂದೆಯು ಆಕರ್ಷಣೆ ಮಾಡಿದರು, ಈ ಬ್ರಹ್ಮಾರವರಲ್ಲ. ಏಕೆಂದರೆ ತಂದೆಯು ಸದಾ ಪಾವನರಾಗಿದ್ದಾರೆ. ನೀವೇನೂ ಇವರ (ಬ್ರಹ್ಮಾ) ಹಿಂದೆ ಓಡಿ ಬರಲಿಲ್ಲ, ಈ ಬ್ರಹ್ಮಾರವರು ಹೇಳುತ್ತಾರೆ - ನಾನಂತೂ ಎಲ್ಲರಿಗಿಂತಲೂ ಜಾಸ್ತಿ 84 ಜನ್ಮಗಳು ಪ್ರವೃತ್ತಿ ಮಾರ್ಗದಲ್ಲಿದ್ದೆನು. ಅಂದಮೇಲೆ ಈ ಬ್ರಹ್ಮಾರವರು ನಿಮ್ಮನ್ನು ಸೆಳೆಯಲು ಸಾಧ್ಯವಿಲ್ಲ. ನಾನೇ ನಿಮ್ಮನ್ನು ಸೆಳೆದೆನು ಎಂದು ತಂದೆಯು ತಿಳಿಸುತ್ತಾರೆ. ಭಲೇ ಸನ್ಯಾಸಿಗಳು ಪವಿತ್ರರಾಗಿರುತ್ತಾರೆ. ಆದರೆ ನನ್ನಷ್ಟು ಪವಿತ್ರರು ಯಾರೂ ಇರುವುದಿಲ್ಲ. ಅವರೆಲ್ಲರೂ ಭಕ್ತಿಮಾರ್ಗದ ಶಾಸ್ತ್ರಗಳನ್ನು ತಿಳಿಸುತ್ತಾರೆ. ನಾನು ಬಂದು ಎಲ್ಲಾ ವೇದ-ಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ. ಚಿತ್ರದಲ್ಲಿಯೂ ಸಹ ವಿಷ್ಣುವಿನ ನಾಭಿಯಿಂದ ಬ್ರಹ್ಮಾ ಹೊರ ಬಂದರೆಂದು ಮತ್ತೆ ಬ್ರಹ್ಮನ ಕೈಯಲ್ಲಿ ಶಾಸ್ತ್ರಗಳನ್ನು ತೋರಿಸಿದ್ದಾರೆ. ಈಗ ವಿಷ್ಣುವಂತೂ ಬ್ರಹ್ಮಾರವರ ಮೂಲಕ ಶಾಸ್ತ್ರಗಳ ರಹಸ್ಯವನ್ನು ತಿಳಿಸುವುದಿಲ್ಲ. ಮನುಷ್ಯರಂತೂ ವಿಷ್ಣುವನ್ನೂ ಸಹ ಭಗವಂತನೆಂದು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಈ ಬ್ರಹ್ಮಾರವರ ಮೂಲಕ ತಿಳಿಸುತ್ತೇನೆಯೇ ವಿನಃ ವಿಷ್ಣುವಿನ ಮೂಲಕ ತಿಳಿಸುವುದಿಲ್ಲ. ಬ್ರಹ್ಮನೆಲ್ಲಿ, ವಿಷ್ಣುವೆಲ್ಲಿ! ಬ್ರಹ್ಮಾರವರೇ ವಿಷ್ಣುವಾಗುತ್ತಾರೆ ಮತ್ತೆ 84 ಜನ್ಮಗಳ ನಂತರ ಈ ಸಂಗಮವಾಗುವುದು. ಇವೆಲ್ಲವೂ ಹೊಸ ಮಾತುಗಳಾಗಿವೆ ಅಲ್ಲವೆ, ಇವು ತಿಳಿಸುವ ಎಷ್ಟು ವಿಚಿತ್ರ ಮಾತುಗಳಾಗಿವೆ. ನಿಮಗಂತೂ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವಂತೂ ಜೀವಿಸಿದ್ದಂತೆಯೇ ಸಾಯಬೇಕು, ನೀವು ಶರೀರದಲ್ಲಿ ಜೀವಿಸುತ್ತೀರಲ್ಲವೆ. ನಾವಾತ್ಮಗಳಾಗಿದ್ದೇವೆ, ತಂದೆಯ ಜೊತೆ ಮನೆಗೆ ಹೋಗುತ್ತೇವೆ. ಈ ಶರೀರ ಮೊದಲಾದುದೇನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಈಗ ತಂದೆಯು ಬಂದಿದ್ದಾರೆ, ಅಂದಮೇಲೆ ಏನನ್ನಾದರೂ ಹೊಸ ಪ್ರಪಂಚದಲ್ಲಿ ವರ್ಗಾವಣೆ ಮಾಡುತ್ತಾರೆ. ಮನುಷ್ಯರು ದಾನ-ಪುಣ್ಯ ಮೊದಲಾದುದನ್ನು ಇನ್ನೊಂದು ಜನ್ಮದಲ್ಲಿ ಪಡೆಯುವುದಕ್ಕಾಗಿ ಮಾಡುತ್ತಾರೆ. ನಿಮಗೂ ಸಹ ಹೊಸ ಪ್ರಪಂಚದಲ್ಲಿ ಸಿಗುತ್ತದೆ. ಯಾರು ಕಲ್ಪದ ಹಿಂದೆ ಮಾಡಿರುವರೋ ಅವರೇ ಈಗಲೂ ಮಾಡುತ್ತಾರೆ. ಇದರಲ್ಲಿ ಸ್ವಲ್ಪವೂ ಹೆಚ್ಚು-ಕಡಿಮೆಯಾಗುವುದಿಲ್ಲ. ನೀವು ಸಾಕ್ಷಿಯಾಗಿ ನೋಡುತ್ತಾ ಇರುತ್ತೀರಿ, ಏನನ್ನೂ ಹೇಳುವ ಅವಶ್ಯಕತೆಯಿರುವುದಿಲ್ಲ. ನಂತರವೂ ತಂದೆಯು ಹೇಳುತ್ತಾರೆ - ಏನೂ ಮಾಡುತ್ತೀರೋ ಅದರಲ್ಲಿಯೂ ಅಹಂಕಾರವು ಬರಬಾರದು. ನಾವಾತ್ಮರು ಈ ಶರೀರವನ್ನು ಬಿಟ್ಟು ಹೋಗುತ್ತೇವೆ. ಹೊಸ ಪ್ರಪಂಚದಲ್ಲಿ ಹೊಸ ಶರೀರವನ್ನು ತೆಗೆದುಕೊಳ್ಳುತ್ತೇವೆ. ರಾಮನೂ ಹೋದ, ರಾವಣನೂ ಹೋದ.... ಎಂಬ ಗಾಯನವೂ ಇದೆ. ರಾವಣನ ಪರಿವಾರವು ಎಷ್ಟು ದೊಡ್ಡದಾಗಿದೆ. ನೀವಂತೂ ಕೇವಲ ಬೆರಳನ್ನು ಎಣಿಸುವಷ್ಟಿದ್ದೀರಿ. ಇದೆಲ್ಲವೂ ರಾವಣ ಸಂಪ್ರದಾಯವಾಗಿದೆ. ನಿಮ್ಮ ರಾಮ ಸಂಪ್ರದಾಯವು ಬಹಳ ಕಡಿಮೆಯಿರುತ್ತದೆ - 9 ಲಕ್ಷ. ನೀವು ಧರಣಿಯ ನಕ್ಷತ್ರಗಳಾಗಿದ್ದೀರಿ, ತಂದೆ-ತಾಯಿ ಮತ್ತು ನೀವು ಮಕ್ಕಳು. ಅಂದಮೇಲೆ ತಂದೆಯು ಪದೇ-ಪದೇ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ ಮರುಜೀವಿಗಳಾಗುವ ಪ್ರಯತ್ನ ಪಡಿ. ಒಂದು ವೇಳೆ ಯಾರನ್ನೇ ನೋಡಿದಾಗ ಇವರು ಬಹಳ ಚೆನ್ನಾಗಿದ್ದಾರೆ, ಬಹಳ ಮಧುರವಾಗಿ ತಿಳಿಸುತ್ತಾರೆ ಎಂದು ಬುದ್ಧಿಯಲ್ಲಿ ಬರುತ್ತದೆಯೆಂದರೆ ಇದೂ ಸಹ ಮಾಯೆಯ ಯುದ್ಧವಾಗುತ್ತದೆ, ಮಾಯೆಯು ಆಸಕ್ತಿಯಲ್ಲಿ ತರುತ್ತದೆ. ಅವರ ಅದೃಷ್ಟದಲ್ಲಿಲ್ಲವೆಂದರೆ ಮಾಯೆಯೂ ಮುಂದೆ ಬಂದು ಬಿಡುತ್ತದೆ. ಎಷ್ಟೇ ತಿಳಿಸಿದರೂ ಸಹ ಕ್ರೋಧವು ಆವೇಶವು ಬಂದು ಬಿಡುತ್ತದೆ. ಈ ದೇಹಾಭಿಮಾನವೇ ಕೆಲಸ ಮಾಡಿಸುತ್ತಿದೆ ಎಂದು ಅವರಿಗೆ ತಿಳಿಯುವುದಿಲ್ಲ. ಒಂದು ವೇಳೆ ಹೆಚ್ಚಿಗೆ ತಿಳಿಸಿದರೆ ಮುನಿಸಿಕೊಳ್ಳುತ್ತಾರೆ. ಆದ್ದರಿಂದ ಅವರನ್ನು ಪ್ರೀತಿಯಿಂದ ನಡೆಸಬೇಕಾಗುತ್ತದೆ. ಮಾಯೆಯು ಒಂದು ಸಲ ಬುದ್ಧಿಹೀನರನ್ನಾಗಿ ಮಾಡಿ ಬಿಡುತ್ತದೆ. ಆದ್ದರಿಂದ ಎಂದಿಗೂ ಯಾರ ನಾಮ-ರೂಪದಲ್ಲಿಯೂ ಸಿಕ್ಕಿಹಾಕಿಕೊಳ್ಳಬೇಡಿ. ನಾನು ಆತ್ಮನಾಗಿದ್ದೇನೆ ಮತ್ತು ಒಬ್ಬ ತಂದೆ, ಯಾರು ವಿದೇಹಿಯಾಗಿದ್ದಾರೆ ಅವರೊಂದಿಗೆ ಪ್ರೀತಿಯನ್ನಿಟ್ಟುಕೊಳ್ಳಬೇಕು. ಇದೇ ಪರಿಶ್ರಮವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಯಾವುದೇ ದೇಹದಲ್ಲಿ ಮಮತ್ವವಿರಬಾರದು. ಈ ರೀತಿಯೂ ಅಲ್ಲ ಮನೆಯಲ್ಲಿ ಕುಳಿತಿದ್ದರೂ ಸಹ ಅವರು ಬಹಳ ಮಧುರರಾಗಿದ್ದಾರೆ, ಬಹಳ ಚೆನ್ನಾಗಿ ತಿಳಿಸುತ್ತಾರೆ. ಜ್ಞಾನ ಕೊಡುವವರ ನೆನಪು ಬರುತ್ತಿರುವುದಲ್ಲ. ಜ್ಞಾನವು ಮಧುರವಾಗಿದೆ, ಆತ್ಮವು ಮಧುರವಾಗಿದೆ, ಶರೀರವು ಮಧುರವೇ? ಮಾತನಾಡುವುದೂ ಸಹ ಆತ್ಮವೇ ಆಗಿದೆ ಎಂದು ಶರೀರಕ್ಕೆ ಮೋಹಿತರಾಗಬಾರದು. ಇತ್ತೀಚೆಗಂತೂ ಭಕ್ತಿಮಾರ್ಗವು ಬಹಳವೇ ಇದೆ. ಆನಂದಮಯಿ ಅಮ್ಮನನ್ನೂ ಸಹ ಅಮ್ಮ, ಅಮ್ಮ ಎಂದು ಹೇಳಿ ನೆನಪು ಮಾಡುತ್ತಿರುತ್ತಾರೆ ಅಂದಮೇಲೆ ತಂದೆಯಲ್ಲಿ? ಆಸ್ತಿಯು ತಂದೆಯಿಂದ ಸಿಗಬೇಕೋ ಅಥವಾ ತಾಯಿಯಿಂದಲೋ? ತಾಯಿಗೂ ಸಹ ಹಣವೆಲ್ಲಿಂದ ಸಿಗುತ್ತದೆ? ಕೇವಲ ಅಮ್ಮ, ಅಮ್ಮ ಎಂದು ಹೇಳುವುದರಿಂದ ಪಾಪವು ಸ್ವಲ್ಪವೂ ಸಹ ಪರಿಹಾರವಾಗುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ನಾಮ-ರೂಪದಲ್ಲಿ ಸಿಕ್ಕಿಕೊಳ್ಳಬಾರದು. ಇನ್ನೂ ಪಾಪವು ಹೆಚ್ಚಾಗುತ್ತಾ ಹೋಗುವುದು, ಏಕೆಂದರೆ ತಂದೆಗೆ ಅವಿಧೇಯರಾಗುತ್ತೀರಿ. ಬಹಳ ಮಕ್ಕಳು ಮರೆತು ಹೋಗಿದ್ದಾರೆ, ತಂದೆಯು ತಿಳಿಸುತ್ತಾರೆ - ನಾನು ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ ಅಂದಮೇಲೆ ಅವಶ್ಯವಾಗಿ ಕರೆದುಕೊಂಡು ಹೋಗುತ್ತೇನೆ. ಆದ್ದರಿಂದ ನನ್ನನ್ನು ನೆನಪು ಮಾಡಿ. ನನ್ನೊಬ್ಬನನ್ನು ನೆನಪು ಮಾಡುವುದರಿಂದಲೇ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಭಕ್ತಿಮಾರ್ಗದಲ್ಲಿ ಅನೇಕರನ್ನು ನೆನಪು ಮಾಡುತ್ತಾ ಬಂದಿದ್ದೀರಿ. ಆದರೆ ತಂದೆಯಿಲ್ಲದೇ ಯಾವುದೇ ಕೆಲಸವು ಹೇಗಾಗುತ್ತದೆ? ತಾಯಿಯನ್ನು ನೆನಪು ಮಾಡಿ ಎಂದು ತಂದೆಯೇನೂ ಹೇಳುವುದಿಲ್ಲ. ತಂದೆಯಂತೂ ನನ್ನನ್ನು ನೆನಪು ಮಾಡಿ, ನಾನೇ ಪತಿತ-ಪಾವನನಾಗಿದ್ದೇನೆ ಎಂದು ತಿಳಿಸುತ್ತಾರೆ. ತಂದೆಯ ಆದೇಶದಂತೆ ನಡೆಯಿರಿ ಮತ್ತು ತಂದೆಯ ಆದೇಶದಂತೆ ಅನ್ಯರಿಗೂ ತಿಳಿಸುತ್ತಾ ಇರಿ. ನೀವೇನೂ ಪತಿತ-ಪಾವನರಲ್ಲ. ನೆನಪಂತೂ ಒಬ್ಬರನ್ನೇ ಮಾಡಬೇಕಾಗಿದೆ. ನಮಗೆ ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ. ಬಾಬಾ, ನಾವು ತಮಗೆ ಬಲಿಹಾರಿಯಾಗುತ್ತೇವೆ. ಬಲಿಹಾರಿಯಾಗುವುದಂತೂ ಶಿವತಂದೆಗೆ ಅಂದಮೇಲೆ ಮತ್ತೆಲ್ಲರ ನೆನಪು ಬಿಟ್ಟು ಹೋಗಬೇಕು. ಭಕ್ತಿಮಾರ್ಗದಲ್ಲಂತೂ ಅನೇಕರನ್ನು ನೆನಪು ಮಾಡುತ್ತಿರುತ್ತಾರೆ. ಇಲ್ಲಿ ಒಬ್ಬ ಶಿವ ತಂದೆಯ ವಿನಃ ಬೇರೆ ಯಾರೂ ಇಲ್ಲ. ಆದರೂ ಸಹ ಕೆಲವರು ತಮ್ಮ ಮತವನ್ನು ನಡೆಸುತ್ತಾರೆಂದರೆ ಅವರಿಗೆ ಗತಿ-ಸದ್ಗತಿಯೇನಾಗುವುದು! ಬಿಂದುವನ್ನು ಹೇಗೆ ನೆನಪು ಮಾಡುವುದೆಂದು ಗೊಂದಲಕ್ಕೊಳಗಾಗುತ್ತಾರೆ. ಅರೆ! ನಿಮಗೆ ನಾನಾತ್ಮ ಆಗಿದ್ದೇನೆಂದು ತಮ್ಮ ನೆನಪಿದೆಯಲ್ಲವೆ ಅಂದಮೇಲೆ ಅದು ಬಿಂದುರೂಪವೇ ಆಗಿದೆ. ಹಾಗೆಯೇ ತಂದೆಯೂ ಬಿಂದುವಾಗಿದ್ದಾರೆ, ತಂದೆಯಿಂದ ಆಸ್ತಿಯು ಸಿಗುತ್ತದೆ. ತಾಯಿಯೂ ಸಹ ದೇಹಧಾರಿಯಾಗಿ ಬಿಡುತ್ತಾರೆ. ಅಂದಮೇಲೆ ವಿದೇಹಿ ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ಆದ್ದರಿಂದ ಮತ್ತೆಲ್ಲಾ ಮಾತುಗಳನ್ನು ಬಿಟ್ಟು ಒಬ್ಬರೊಂದಿಗೆ ಬುದ್ಧಿಯೋಗವನ್ನಿಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
೧. ಶರೀರದ ಪರಿವೆಯನ್ನು ಸಮಾಪ್ತಿ ಮಾಡಲು ನಡೆಯುತ್ತಾ-ತಿರುಗಾಡುತ್ತಾ ಈ ಅಭ್ಯಾಸ ಮಾಡಬೇಕು - ಹೇಗೆ ಈ ಶರೀರದಿಂದ ಸತ್ತಿದ್ದೇವೆ, ಭಿನ್ನವಾಗಿದ್ದೇವೆ, ಶರೀರದಲ್ಲಿ ಇಲ್ಲವೇ ಇಲ್ಲ. ಶರೀರವನ್ನು ಬಿಟ್ಟು ಆತ್ಮವನ್ನು ನೋಡಿ.

೨. ಎಂದೂ ಯಾರ ಶರೀರದ ಮೇಲೆ ನೀವು ಮೋಹಿತರಾಗಬಾರದು. ಒಬ್ಬ ವಿದೇಹಿಯೊಂದಿಗೇ ಪ್ರೀತಿಯನ್ನಿಡಬೇಕು. ಒಬ್ಬರೊಂದಿಗೆ ಬುದ್ಧಿಯೋಗವನ್ನಿಡಬೇಕು.


ವರದಾನ:
ಬ್ರಾಹ್ಮಣ ಜೀವನದಲ್ಲಿ ಸರ್ವ ಖಜಾನೆಗಳನ್ನು ಸಫಲ ಮಾಡಿಕೊಂಡು ಸದಾ ಪ್ರಾಪ್ತಿ ಸಂಪನ್ನ ಆಗುವಂತಹ ಸಂತುಷ್ಠ ಮಣಿ ಭವ.

ಬ್ರಾಹ್ಮಣ ಜೀವನದಲ್ಲಿ ಎಲ್ಲದಕ್ಕಿಂತಲೂ ದೊಡ್ಡದರಲ್ಲಿ ದೊಡ್ಡ ಖಜಾನೆಯಾಗಿದೆ ಸಂತುಷ್ಠರಾಗಿರುವುದು. ಎಲ್ಲಿ ಸರ್ವ ಪ್ರಾಪ್ತಿಗಳಿವೆ, ಅಲ್ಲಿ ಸಂತುಷ್ಠತೆ ಇದೆ ಮತ್ತು ಎಲ್ಲಿ ಸಂತುಷ್ಠತೆ ಇದೆ ಅಲ್ಲಿ ಎಲ್ಲವೂ ಇದೆ. ಯಾರು ಸಂತುಷ್ಠತೆಯ ರತ್ನ ಆಗಿದ್ದಾರೆ ಅವರು ಎಲ್ಲಾ ಪ್ರಾಪ್ತಿ ಸ್ವರೂಪರಾಗಿದ್ದಾರೆ, ಅವರ ಗೀತೆಯಾಗಿದೆ ಏನು ಪಡೆಯ ಬೇಕಿತ್ತೊ ಅದನ್ನು ಪಡೆದೆನು..... ಈ ರೀತಿ ಸರ್ವ ಪ್ರಾಪ್ತಿ ಸಂಪನ್ನರಾಗಲು ವಿಧಿಯಾಗಿದೆ - ಸಿಕ್ಕಿರುವ ಸರ್ವ ಖಜಾನೆಗಳನ್ನು ಉಪಯೋಗಿಸುವುದು. ಏಕೆಂದರೆ ಎಷ್ಟು ಸಫಲ ಮಾಡುವಿರಿ ಅಷ್ಟೂ ಖಜಾನೆ ವೃದ್ಧಿಯಾಗುತ್ತಾ ಹೋಗುವುದು.

ಸ್ಲೋಗನ್:
ಹೋಲಿ ಹಂಸಗಳೆಂದು ಯಾರಿಗೆ ಹೇಳಲಾಗುವುದೆಂದರೆ ಯಾರು ಸದಾ ಒಳ್ಳೆಯದೆನ್ನುವ ಮುತ್ತುಗಳನ್ನೇ ಆರಿಸಿಕೊಳ್ಳುತ್ತಾರೆ, ಅವಗುಣ ರೂಪಿ ಕಲ್ಲುಗಳನ್ನಲ್ಲ.