05.02.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ಮುಳ್ಳುಗಳನ್ನು ಹೂಗಳನ್ನಾಗಿ ಮಾಡಲು ಬಂದಿದ್ದಾರೆ, ತಂದೆಯ ಪ್ರೀತಿಯು ಮುಳ್ಳುಗಳೊಂದಿಗೂ ಇದೆ ಮತ್ತು
ಹೂಗಳೊಂದಿಗೂ ಇದೆ, ಮುಳ್ಳುಗಳನ್ನೇ ಹೂಗಳನ್ನಾಗಿ ಮಾಡುವ ಪರಿಶ್ರಮ ಪಡುತ್ತಾರೆ.”
ಪ್ರಶ್ನೆ:
ಯಾವ ಮಕ್ಕಳಲ್ಲಿ
ಜ್ಞಾನದ ಧಾರಣೆಯಾಗಿರುವುದು? ಅವರ ಚಿಹ್ನೆಗಳನ್ನು ತಿಳಿಸಿ?
ಉತ್ತರ:
ಜ್ಞಾನದ
ಧಾರಣೆಯಾಗಿರುವವರು ಚಮತ್ಕಾರ ಮಾಡಿ ತೋರಿಸುತ್ತಾರೆ, ತಮ್ಮ ಮತ್ತು ಅನ್ಯರ ಕಲ್ಯಾಣ ಮಾಡದ ವಿನಃ ಇರಲು
ಸಾಧ್ಯವಿಲ್ಲ. ಬಾಣವು ನಾಟಿತು ಎಂದರೆ ನಷ್ಟಮೋಹಿಗಳಾಗಿ ಆತ್ಮಿಕ ಸೇವೆಯಲ್ಲಿ ತೊಡಗಿ ಬಿಡುತ್ತಾರೆ.
ಅವರ ಸ್ಥಿತಿಯು ಏಕರಸ ಅಚಲ, ಅಡೋಲವಾಗಿರುತ್ತದೆ. ಎಂದೂ ತಿಳುವಳಿಕೆಹೀನವಾದ ಕಾರ್ಯವನ್ನು
ಮಾಡುವುದಿಲ್ಲ. ಯಾರಿಗೂ ದುಃಖ ಕೊಡುವುದಿಲ್ಲ. ಅವಗುಣ ರೂಪಿ ಮುಳ್ಳುಗಳನ್ನು ತೆಗೆಯುತ್ತಾ
ಹೋಗುತ್ತಾರೆ.
ಓಂ ಶಾಂತಿ.
ಇದಂತೂ ಮಕ್ಕಳಿಗೆ
ತಿಳಿದಿದೆ ತಂದೆಯು ದೊಡ್ಡ ಘಡಿಯಾರ ಆಗಿದ್ದಾರೆ. ಸಂಪೂರ್ಣ ನಿಶ್ಚಿತ ಸಮಯದಲ್ಲಿ ಮುಳ್ಳುಗಳನ್ನು
ಹೂಗಳನ್ನಾಗಿ ಮಾಡಲು ಬರುತ್ತಾರೆ. ಒಂದು ಕ್ಷಣವೂ ಹೆಚ್ಚು-ಕಡಿಮೆ ಆಗುವುದಿಲ್ಲ. ಸ್ವಲ್ಪವೂ
ವ್ಯತ್ಯಾಸವಾಗುವುದಿಲ್ಲ. ಇದೂ ಸಹ ಮಧುರಾತಿ ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ. ಈ ಸಮಯವು
ಕಲಿಯುಗೀ ಮುಳ್ಳಿನ ಕಾಡಾಗಿದೆ, ಆದ್ದರಿಂದ ನಾವು ಹೂಗಳಾಗುವಂತಹವರಿಗೆ ನಾವು ಹೂಗಳಾಗುತ್ತಿದ್ದೇವೆ
ಎಂಬ ಭಾಸನೆ ಆಗಬೇಕು. ಮೊದಲು ನಾವೆಲ್ಲಾ ಮುಳ್ಳುಗಳಾಗಿದ್ದೆವು. ಕೆಲವರು ಚಿಕ್ಕ ಮುಳ್ಳುಗಳು,
ಕೆಲವರು ದೊಡ್ಡ ಮುಳ್ಳುಗಳಾಗಿದ್ದರು. ಕೆಲವರು ಬಹಳ ದುಃಖವನ್ನು ಕೊಡುತ್ತಾರೆ, ಕೆಲವರು ಕಡಿಮೆ. ಈಗ
ತಂದೆಯ ಪ್ರೀತಿಯಂತೂ ಎಲ್ಲರೊಂದಿಗೂ ಇದೆ, ಮುಳ್ಳುಗಳೊಂದಿಗೂ ಪ್ರೀತಿ, ಹೂಗಳೊಂದಿಗೂ ಪ್ರೀತಿ ಎಂದು
ಗಾಯನವಿದೆ. ಮೊದಲು ಯಾರೊಂದಿಗೆ ಪ್ರೀತಿ ಇದೆ? ಅವಶ್ಯವಾಗಿ ಮುಳ್ಳುಗಳೊಂದಿಗೇ ಪ್ರೀತಿ. ಇಷ್ಟೂ
ಪ್ರೀತಿ ಇದೆ, ಆದ್ದರಿಂದಲೇ ಶ್ರಮಪಟ್ಟು ಅವರನ್ನು ಮುಳ್ಳುಗಳಿಂದ ಹೂಗಳನ್ನಾಗಿ ಮಾಡುತ್ತಾರೆ ಅಂದಾಗ
ಅವರು ಬರುವುದೇ ಮುಳ್ಳುಗಳ ಪ್ರಪಂಚದಲ್ಲಿ. ಇದರಲ್ಲಿ ಸರ್ವವ್ಯಾಪಿಯ ಮಾತು ಬರಲು ಸಾಧ್ಯವಿಲ್ಲ.
ಒಬ್ಬರದೇ ಮಹಿಮೆ ಆಗುತ್ತದೆ. ಆತ್ಮದ ಮಹಿಮೆ ಆಗುತ್ತದೆ. ಆತ್ಮವು ಶರೀರವನ್ನು ಧಾರಣೆ ಮಾಡಿ
ಪಾತ್ರವನ್ನು ಅಭಿನಯಿಸುತ್ತದೆ ಆಗ ಅದಕ್ಕೆ ಮಹಿಮೆ ಆಗುತ್ತದೆ. ಆತ್ಮವೇ ಶ್ರೇಷ್ಠಾಚಾರಿ ಆಗುತ್ತದೆ,
ಭ್ರಷ್ಟಾಚಾರಿಯೂ ಆತ್ಮವೇ ಆಗುತ್ತದೆ. ಆತ್ಮವು ಶರೀರ ಧಾರಣೆ ಮಾಡಿ ಎಂತೆಂತಹ ಕರ್ಮವನ್ನು ಮಾಡುತ್ತದೆ
ಅದರ ಅನುಸಾರವಾಗಿ ಇವರು ಕುಕರ್ಮಿ, ಇವರು ಸುಕರ್ಮಿ ಆಗಿದ್ದಾರೆ ಎಂದು ಹೇಳಲಾಗುತ್ತದೆ. ಆತ್ಮವೇ
ಒಳ್ಳೆಯ ಹಾಗೂ ಕೆಟ್ಟ ಕರ್ಮವನ್ನು ಮಾಡುತ್ತದೆ. ಸತ್ಯಯುಗಿ ದೈವೀ ಹೂವಾಗಿದ್ದೀರಾ ಅಥವಾ ಕಲಿಯುಗಿ
ಆಸುರೀ ಮುಳ್ಳಾಗಿದ್ದೀರಾ? ಎಂದು ಈಗ ತಮ್ಮೊಂದಿಗೆ ಕೇಳಿಕೊಳ್ಳಿ. ಸತ್ಯಯುಗ ಎಲ್ಲಿ, ಕಲಿಯುಗ ಎಲ್ಲಿ!
ದೇವತೆಗಳೆಲ್ಲಿ, ಅಸುರರೆಲ್ಲಿ! ಬಹಳ ಅಂತರವಿದೆ, ಯಾರು ಮುಳ್ಳುಗಳಾಗಿರುತ್ತಾರೆಯೋ ಅವರು ತಮ್ಮನ್ನು
ಹೂಗಳು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಹೂಗಳು ಸತ್ಯಯುಗದಲ್ಲಿ ಇರುತ್ತಾರೆ, ಕಲಿಯುಗದಲ್ಲಿ
ಇರುವುದಿಲ್ಲ. ಇದು ಸಂಗಮಯುಗವಾಗಿದೆ, ಈಗಲೇ ನೀವು ಮುಳ್ಳುಗಳಿಂದ ಹೂಗಳಾಗುತ್ತೀರಿ, ಪಾಠವನ್ನು
ಶಿಕ್ಷಕರು ಓದಿಸುತ್ತಾರೆ, ಅದನ್ನು ರಿವೈಸ್ ಮಾಡಿ ತಿಳಿಸುವುದು ಮಕ್ಕಳ ಕರ್ತವ್ಯವಾಗಿದೆ. ಅದರಲ್ಲಿ
ಇದನ್ನೂ ಸಹ ಬರೆಯಿರಿ – ಒಂದು ವೇಳೆ ಹೂಗಳಾಗಲು ಬಯಸುತ್ತೀರೆಂದರೆ ತಮ್ಮನ್ನು ಆತ್ಮನೆಂದು ತಿಳಿಯಿರಿ
ಮತ್ತು ಹೂಗಳನ್ನಾಗಿ ಮಾಡುವ ಪರಮಪಿತ ಪರಮಾತ್ಮನನ್ನು ನೆನಪು ಮಾಡಿ, ಆಗ ನಿಮ್ಮಲ್ಲಿ ಇರುವ ಅವಗುಣಗಳು
ಹೊರಟು ಹೋಗುತ್ತದೆ ಮತ್ತು ಸತೋಪ್ರಧಾನವಾಗಿ ಬಿಡುತ್ತೀರಿ ತಂದೆಯು ಪ್ರಬಂಧವನ್ನು ಕೊಡುತ್ತಾರೆ,
ಅದನ್ನು ಸರಿಪಡಿಸಿ ಮುದ್ರಿಸುವುದು ಮಕ್ಕಳ ಕರ್ತವ್ಯವಾಗಿದೆ, ಎಲ್ಲಾ ಮನುಷ್ಯರು ವಿಚಾರದಲ್ಲಿ ತೊಡಗಿ
ಬಿಡಬೇಕು. ಇದು ವಿದ್ಯೆಯಾಗಿದೆ, ತಂದೆಯು ನಿಮಗೆ ಬೇಹದ್ದಿನ ಇತಿಹಾಸ, ಭೂಗೋಳವನ್ನು ತಿಳಿಸುತ್ತಾರೆ.
ಆ ಶಾಲೆಗಳಲ್ಲಿ ಅಂತೂ ಹಳೆಯ ಪ್ರಪಂಚದ ಇತಿಹಾಸ, ಭೂಗೋಳವನ್ನು ಓದಿಸಲಾಗುತ್ತದೆ. ಹೊಸ ಪ್ರಪಂಚದ
ಇತಿಹಾಸ, ಭೂಗೋಳವಂತೂ ಯಾರಿಗೂ ಗೊತ್ತೇ ಇಲ್ಲ. ಅಂದಾಗ ಇದು ವಿದ್ಯೆಯು ಆಗಿದೆ, ತಿಳುವಳಿಕೆಯು ಆಗಿದೆ.
ಯಾವುದೇ ಛೀ-ಛೀ ಕೆಲಸ ಮಾಡುವುದು ಬುದ್ಧಿಹೀನತೆಯಾಗಿದೆ. ದುಃಖವನ್ನು ಕೊಡುವ ಈ ವಿಕಾರಿ ಕೆಲಸವನ್ನು
ಮಾಡಬೇಡಿ ಎಂದು ಅವರಿಗೆ ಹೇಳಲಾಗುತ್ತದೆ. ದುಃಖಹರ್ತ-ಸುಖಕರ್ತ ತಂದೆಯ ಮಹಿಮೆ ಆಗಿದೆಯಲ್ಲವೇ. ಇಲ್ಲಿ
ನೀವೂ ಸಹ ಯಾರಿಗೂ ದುಃಖವನ್ನು ಕೊಡಬಾರದು ಎಂಬುದನ್ನು ಕಲಿಯುತ್ತಿದ್ದೀರಿ. ಸದಾ ಸುಖವನ್ನೇ
ಕೊಡುತ್ತಿರಿ ಎಂದು ತಂದೆಯು ಶಿಕ್ಷಣವನ್ನು ಕೊಡುತ್ತಾರೆ ಆದರೆ ಈ ಸ್ಥಿತಿಯು ಬೇಗನೆ ಬರುವುದಿಲ್ಲ.
ಸೆಕೆಂಡಿನಲ್ಲಿ ತಂದೆಯ ಆಸ್ತಿಯನ್ನು ಪಡೆಯಬಹುದು ಆದರೆ ಯೋಗ್ಯರಾಗುವುದರಲ್ಲಿ ಸಮಯ ಹಿಡಿಸುತ್ತದೆ.
ಬೇಹದ್ದಿನ ತಂದೆಯ ಆಸ್ತಿಯು ಸ್ವರ್ಗದ ರಾಜ್ಯಭಾಗ್ಯವಾಗಿದೆ ಎಂದು ತಿಳಿಯುತ್ತಾರೆ. ನೀವೂ ಸಹ
ತಿಳಿಸುತ್ತಿರಬಹುದು. ಪಾರಲೌಕಿಕ ತಂದೆಯಿಂದ ಭಾರತಕ್ಕೆ ವಿಶ್ವದ ರಾಜ್ಯಭಾಗ್ಯ ಸಿಕ್ಕಿತು.
ನೀವೆಲ್ಲರೂ ವಿಶ್ವದ ಮಾಲೀಕರಾಗಿದ್ದವರು. ಇದಂತೂ ತಾವು ಮಕ್ಕಳಿಗೆ ಒಳಗೆ ಖುಷಿ ಇರಬೇಕು. ಇದು
ನಿನ್ನೆಯ ಮಾತಾಗಿದೆ. ನಿನ್ನೆ ನೀವು ಸ್ವರ್ಗದ ಮಾಲೀಕರಾಗಿದ್ದಿರಿ. ಮನುಷ್ಯರು ಇದನ್ನು ಲಕ್ಷಾಂತರ
ವರ್ಷಗಳು ಎಂದು ಹೇಳಿ ಬಿಡುತ್ತಾರೆ. ಎಲ್ಲಿ ಇಡೀ ಕಲ್ಪದ ಆಯಸ್ಸು 5000 ವರ್ಷಗಳು ಆಗಿದೆ ಆದರೆ ಅವರು
ಒಂದೊಂದು ಯುಗದ ಆಯಸ್ಸನ್ನು ಲಕ್ಷಾಂತರ ವರ್ಷಗಳು ಎಂದು ಹೇಳಿ ಬಿಡುತ್ತಾರೆ ಅಂದಾಗ ಬಹಳ ಅಂತರವಿದೆ.
ಜ್ಞಾನಸಾಗರ ಒಬ್ಬರೇ ಬೇಹದ್ದಿನ ತಂದೆಯಾಗಿದ್ದಾರೆ. ಅವರಿಂದ ದೈವೀ ಗುಣಗಳನ್ನು ಧಾರಣೆ ಮಾಡಬೇಕು. ಈ
ಪ್ರಪಂಚದ ಮನುಷ್ಯರು ದಿನ ಪ್ರತಿ ದಿನ ತಮೋಪ್ರಧಾನರಾಗುತ್ತಾ ಹೋಗುತ್ತಾರೆ. ಹೆಚ್ಚಿನ ಅವಗುಣಗಳನ್ನು
ತೆಗೆಯುತ್ತಾ ಹೋಗುತ್ತಾರೆ. ಮೊದಲು ಇಷ್ಟೊಂದು ಲಂಚ, ಕಲಬೆರಕೆ, ಭ್ರಷ್ಟಾಚಾರವಿರಲಿಲ್ಲ. ಈಗ
ಹೆಚ್ಚುತ್ತಾ ಹೋಗುತ್ತಿದೆ. ನೀವು ತಂದೆಯ ನೆನಪಿನ ಬಲದಿಂದ ಸತೋಪ್ರಧಾನವಾಗುತ್ತಾ ಹೋಗುತ್ತೀರಿ.
ಹೇಗೆ ಇಳಿಯುತ್ತೀರೋ ಮತ್ತೆ ಹಾಗೆಯೇ ಹೋಗಲೇಬೇಕು. ಮೊದಲಂತೂ ತಂದೆಯು ಸಿಕ್ಕಿರುವುದರಿಂದ ಖುಷಿ
ಇರುತ್ತದೆ. ಸಂಬಂಧವು ಜೋಡಣೆ ಆದ ಮೇಲೆ ನೆನಪಿನ ಯಾತ್ರೆಯಾಗುತ್ತದೆ. ಯಾರು ಹೆಚ್ಚಿನ ಭಕ್ತಿ
ಮಾಡಿರುವವರೋ ಅವರದು ಅಷ್ಟು ಹೆಚ್ಚಿನ ನೆನಪಿನ ಯಾತ್ರೆ ಆಗುವುದು. ಬಾಬಾ ನೆನಪೇ
ನಿಲ್ಲುವುದಿಲ್ಲವೆಂದು ಅನೇಕ ಮಕ್ಕಳು ಹೇಳುತ್ತಿರುತ್ತಾರೆ. ಭಕ್ತಿಯಲ್ಲಿಯೂ ಈ ರೀತಿಯೇ ಆಗುತ್ತದೆ.
ಕಥೆಯನ್ನು ಕೇಳಲು ಕುಳಿತುಕೊಂಡರೆ ಬುದ್ಧಿಯು ಆ ಕಡೆ, ಈ ಕಡೆ ಓಡುತ್ತದೆ. ಕಥೆಯನ್ನು ಹೇಳುವವರು
ನೋಡುತ್ತಿರುತ್ತಾರೆ ಮತ್ತೆ ಅಕಸ್ಮಿಕವಾಗಿ ನಾವು ಏನು ತಿಳಿಸಿದೆವು ಎಂದು ಕೇಳಿದರೆ ತಬ್ಬಿಬ್ಬಾಗಿ
ಬಿಡುತ್ತಾರೆ. ಕೆಲವರು ತಕ್ಷಣ ತಿಳಿಸುತ್ತಾರೆ, ಎಲ್ಲರೂ ಒಂದೇ ರೀತಿ ಇರುವುದಿಲ್ಲ, ಭಲೇ ಇಲ್ಲೇ
ಕುಳಿತಿದ್ದಾರೆ ಆದರೆ ಧಾರಣೆ ಏನೂ ಇಲ್ಲ. ಒಂದು ವೇಳೆ ಧಾರಣೆ ಆಗಿದ್ದರೆ ಚಮತ್ಕಾರ ಮಾಡಿ
ತೋರಿಸುತ್ತಾರೆ. ಅಂತಹವರು ತಮ್ಮ ಮತ್ತು ಅನ್ಯರ ಕಲ್ಯಾಣ ಮಾಡದೆ ಇರಲು ಸಾಧ್ಯವಿಲ್ಲ. ಭಲೇ
ಯಾರಿಗಾದರೂ ಮನೆಯಲ್ಲಿ ಬಹಳ ಸುಖವಿದೆ, ಮಹಲ್ಗಳು ಇವೆ, ವಾಹನ ಮೊದಲಾದವುಗಳು ಇರುತ್ತವೆ ಆದರೆ ಒಂದು
ಬಾರಿ ಬಾಣವು ನಾಟಿತು ಎಂದರೆ ಸಾಕು ನಾವು ಈ ಆತ್ಮಿಕ ಸೇವೆ ಮಾಡಲು ಇಚ್ಛಿಸುತ್ತೇವೆ ಎಂದು ಪತಿಗೂ
ಸಹ ಹೇಳಿ ಬಿಡುತ್ತಾರೆ, ಆದರೆ ಮಾಯೆಯು ಬಹಳ ಶಕ್ತಿಶಾಲಿ ಆಗಿದೆ, ಮಾಡಲು ಬಿಡುವುದಿಲ್ಲ.
ಮೋಹವಿರುತ್ತದೆಯಲ್ಲವೇ. ಇಷ್ಟೊಂದು ಮಹಲ್, ಸುಖವನ್ನು ಹೇಗೆ ಬಿಡುವುದು? ಅರೇ ಮೊದಲು ಯಾರೆಲ್ಲಾ ಓಡಿ
ಬಂದರೂ ಅವರು ದೊಡ್ಡ-ದೊಡ್ಡ ಲಕ್ಷಾಧಿಪತಿ, ಕೋಟ್ಯಾಧಿಪತಿಯ ಮನೆಯವರಾಗಿದ್ದರು, ಎಲ್ಲವನ್ನು ಬಿಟ್ಟು
ಹೊರಟು ಬಂದರು. ಇದೆಲ್ಲವನ್ನು ಬಿಡಲು ಅಷ್ಟು ಶಕ್ತಿ ಇಲ್ಲ ಎಂಬುದನ್ನು ಅದೃಷ್ಟವೇ ತೋರಿಸುತ್ತದೆ.
ರಾವಣನ ಸಂಕೋಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇದು ಬುದ್ಧಿಯ ಸಂಕೋಲೆಯಾಗಿದೆ. ತಂದೆಯು
ತಿಳಿಸುತ್ತಾರೆ ಅರೇ ನೀವು ಸ್ವರ್ಗದ ಮಾಲೀಕರು ಪೂಜ್ಯರಾಗುತ್ತೀರಿ. 21 ಜನ್ಮಗಳು ನೀವು ಎಂದೂ ರೋಗಿ
ಆಗುವುದಿಲ್ಲವೆಂದು ತಂದೆ ಗ್ಯಾರೆಂಟಿ ಕೊಡುತ್ತಾರೆ. 21 ಜನ್ಮಗಳವರೆಗೆ ಸದಾ ಆರೋಗ್ಯವಂತರಾಗುತ್ತೀರಿ.
ನೀವು ಭಲೇ ಪತಿಯ ಬಳಿಯೇ ಇರಿ ಕೇವಲ ಪವಿತ್ರವಾಗಿರುತ್ತೇನೆ ಅನ್ಯರನ್ನು ಮಾಡುತ್ತೇನೆ ಎಂದು ಅವರಿಂದ
ಅನುಮತಿಯನ್ನು ಪಡೆಯಿರಿ. ತಂದೆಯನ್ನು ನೆನಪು ಮಾಡುವುದು ನಿಮ್ಮ ಕರ್ತವ್ಯವಾಗಿದೆ, ಅದರಿಂದ
ಅಪಾರವಾದ ಸುಖವು ಸಿಗುತ್ತದೆ, ನೆನಪು ಮಾಡುತ್ತಾ ಮಾಡುತ್ತಾ ತಮೋಪ್ರಧಾನರಿಂದ
ಸತೋಪ್ರಧಾನರಾಗುತ್ತೀರಿ, ಇದು ಎಷ್ಟು ತಿಳುವಳಿಕೆಯ ಮಾತಾಗಿದೆ. ಶರೀರದ ಮೇಲೆ ಯಾವುದೇ ಭರವಸೆ ಇಲ್ಲ.
ಆದ್ದರಿಂದ ತಂದೆಯ ಮಕ್ಕಳಾಗಿ ಬಿಡಿ ಅವರಂತಹ ಪ್ರಿಯ ವಸ್ತು ಮತ್ಯಾವುದೂ ಇಲ್ಲ. ತಂದೆಯು ವಿಶ್ವದ
ಮಾಲೀಕರನ್ನಾಗಿ ಮಾಡುತ್ತಾರೆ. ಎಷ್ಟು ಬೇಕೋ ಅಷ್ಟು ಸತೋಪ್ರಧಾನರಾಗಿ ಎಂದು ಹೇಳುತ್ತಾರೆ. ನೀವು
ಅಪಾರ ಸುಖವನ್ನು ನೋಡುತ್ತೀರಿ. ತಂದೆಯು ಸ್ವರ್ಗದ ದ್ವಾರವನ್ನು ಈ ನಾರಿಯರಿಂದ ತೆರೆಸುತ್ತಾರೆ.
ಮಾತೆಯರ ಮೇಲೆ ಜ್ಞಾನ ಕಳಶವನ್ನು ಇಡಲಾಗುತ್ತದೆ, ಎಲ್ಲವನ್ನು ತಾವು ಮಾತೆಯರೇ ಸಂಭಾಲನೆ ಮಾಡಿ ಎಂದು
ತಂದೆ ಮಾತೆಯರನ್ನು ನಿಮಿತ್ತರನ್ನಾಗಿ ಮಾಡಿದ್ದಾರೆ. ಇವರ ಮೂಲಕ ಕಲಶವನ್ನು ಇಟ್ಟರಲ್ಲವೇ. ಇದನ್ನು
ಅವರು ಸಾಗರದ ಮಂಥನ ಮಾಡಿದರು, ಅಮೃತದ ಕಲಶವನ್ನು ಲಕ್ಷ್ಮೀಗೆ ಕೊಟ್ಟರು ಎಂದು ಬರೆದಿದ್ದಾರೆ. ಈಗ
ನಿಮಗೆ ತಿಳಿದಿದೆ - ತಂದೆಯು ಸ್ವರ್ಗದ ದ್ವಾರವನ್ನು ತೆರೆಯುತ್ತಿದ್ದಾರೆ ಅಂದಮೇಲೆ ನಾವು
ತಂದೆಯಿಂದ ಆಸ್ತಿಯನ್ನೇಕೆ ಪಡೆಯಬಾರದು? ವಿಜಯ ಮಾಲೆಯಲ್ಲಿ ಏಕೆ ಪೋಣಿಸಲ್ಪಡಬಾರದು? ಏಕೆ
ಮಹಾವೀರರಾಗಬಾರದು. ಬೇಹದ್ದಿನ ತಂದೆಯು ಮಕ್ಕಳನ್ನು ಮಡಿಲಿಗೆ ತೆಗೆದುಕೊಳ್ಳುತ್ತಾರೆ ಏತಕ್ಕಾಗಿ?
ಸ್ವರ್ಗದ ಮಾಲೀಕರನ್ನಾಗಿ ಮಾಡುವುದಕ್ಕೋಸ್ಕರ. ಸಂಪೂರ್ಣ ಮುಳ್ಳುಗಳಿಗೆ ಶಿಕ್ಷಣವನ್ನು ಕೊಡುತ್ತಾರೆ
ಅಂದಾಗ ಮುಳ್ಳುಗಳ ಮೇಲೂ ಪ್ರೀತಿ ಇದೆಯಲ್ಲವೇ ಅಂದಾಗ ಅವರನ್ನೂ ಹೂಗಳನ್ನಾಗಿ ಮಾಡುತ್ತಾರೆ.
ನಿರ್ವಾಣಧಾಮವನ್ನು ಬಿಟ್ಟು ಇಲ್ಲಿ ಪತಿತ ಪ್ರಪಂಚ ಮತ್ತು ಪತಿತ ಶರೀರದಲ್ಲಿ ಬನ್ನಿ ಎಂದು
ತಂದೆಯನ್ನು ಕರೆಯುತ್ತಾರೆ. ನಾಟಕದನುಸಾರ ನಾನು ಮುಳ್ಳುಗಳ ಪ್ರಪಂಚದಲ್ಲಿಯೇ ಬರಬೇಕಾಗುತ್ತದೆ ಎಂದು
ತಂದೆ ಹೇಳುತ್ತಾರೆ ಅಂದಾಗ ಅವಶ್ಯವಾಗಿ ಪ್ರೀತಿ ಇದೆಯಲ್ಲವೇ. ಪ್ರೀತಿ ಇಲ್ಲದೆ ಹೇಗೆ ಹೂಗಳನ್ನಾಗಿ
ಮಾಡುತ್ತಾರೆ. ಈಗ ನೀವು ಕಲಿಯುಗೀ ಮುಳ್ಳುಗಳಿಂದ ಸತ್ಯಯುಗಿ ದೇವತಾ ಸತೋಪ್ರಧಾನ ವಿಶ್ವದ ಮಾಲೀಕರಾಗಿ
ಎಂದು ಎಷ್ಟು ಪ್ರೀತಿಯಿಂದ ತಿಳಿಸಿಕೊಡುತ್ತಾರೆ. ಕುಮಾರಿಯರು ಹೂಗಳ ಸಮಾನರಾಗಿದ್ದಾರೆ, ಆದ್ದರಿಂದಲೇ
ಅವರ ಚರಣಗಳಿಗೆ ನಮಿಸುತ್ತಾರೆ. ಅವರು ಯಾವಾಗ ಮುಳ್ಳುಗಳಾಗುತ್ತಾರೆಯೋ (ಪತಿತ) ಆಗ ಎಲ್ಲರಿಗೆ ತಲೆ
ಬಾಗಬೇಕಾಗುತ್ತದೆ ಎಂದಮೇಲೆ ಏನು ಮಾಡಬೇಕು? ಹೂಗಳಾಗಿದ್ದವರು ಹೂಗಳು ಆಗಿಯೇ ಇರಬೇಕು ಆಗ ಸದಾ
ಹೂಗಳಾಗಿ ಬಿಡುತ್ತಾರೆ. ಕುಮಾರಿಯಂತೂ ನಿರ್ವಿಕಾರಿಯಾಗಿರುತ್ತಾರಲ್ಲವೇ. ಭಲೇ ಜನ್ಮವನ್ನು
ವಿಕಾರದಿಂದ ತೆಗೆದುಕೊಂಡಿರಬಹುದು ಹೇಗೆ ಸನ್ಯಾಸಿಗಳು ವಿಕಾರದಿಂದ ಜನ್ಮ ಪಡೆಯುತ್ತಾರಲ್ಲವೇ.
ವಿವಾಹ ಆದಮೇಲೆ ಮನೆ-ಮಠಕ್ಕೆ ವಿದಾಯಿ ಕೊಡುತ್ತಾರೆ ಮತ್ತೆ ಅವರನ್ನು ಮಹಾತ್ಮರೆಂದು ಹೇಳುತ್ತಾರೆ.
ಆ ಸತ್ಯಯುಗದ ಮಹಾನ್ ಆತ್ಮ ವಿಶ್ವದ ಮಾಲೀಕರೆಲ್ಲಿ, ಈ ಕಲಿಯುಗದವರೆಲ್ಲಿ! ಆದ್ದರಿಂದ ತಂದೆಯು
ಹೇಳಿದರು ಪ್ರಶ್ನೆಗಳನ್ನು ಬರೆಯಿರಿ ಕಲಿಯುಗಿ ಮುಳ್ಳುಗಳಾಗಿದ್ದೀರಾ ಅಥವಾ ಸತ್ಯಯುಗಿ
ಹೂಗಳಾಗಿದ್ದೀರಾ? ಭ್ರಷ್ಟಾಚಾರಿಗಳಾಗಿದ್ದೀರಾ ಅಥವಾ ಶ್ರೇಷ್ಠಾಚಾರಿಗಳಾಗಿದ್ದೀರಾ?. ಇದು
ಭ್ರಷ್ಟಾಚಾರಿ ಪ್ರಪಂಚವಾಗಿದೆ, ಈಗ ರಾವಣ ರಾಜ್ಯವಿದೆ ಇದಕ್ಕೆ ಅಸುರೀ ರಾಜ್ಯ, ರಾಕ್ಷಸರ
ರಾಜ್ಯವೆಂದು ಹೇಳುತ್ತಾರೆ ಆದರೆ ತಮ್ಮನ್ನು ಹಾಗೆ ಯಾರೂ ತಿಳಿಯುವುದಿಲ್ಲ. ಈಗ ತಾವು ಮಕ್ಕಳು
ಯುಕ್ತಿಯಿಂದ ಪ್ರಶ್ನೆಗಳನ್ನು ಕೇಳಿದಾಗ ಅವರು ತಾವಾಗಿಯೇ ಅವಶ್ಯವಾಗಿ ನಾವು ಕಾಮಿ, ಕ್ರೋಧಿ,
ಲೋಭಿಯಾಗಿದ್ದೇವೆಂಬುದನ್ನು ತಿಳಿಯುತ್ತಾರೆ. ಪ್ರದರ್ಶಿನಿಯಲ್ಲಿಯೂ ಸಹ ಈ ರೀತಿ ಬರೆಯಿರಿ ಆಗ
ಅವರಿಗೆ ನಾನಂತೂ ಕಲಿಯುಗೀ ಮುಳ್ಳಾಗಿದ್ದೇನೆಂದು ಭಾಸವಾಗಬೇಕು. ಈಗ ನೀವು ಹೂಗಳಾಗುತ್ತಿದ್ದೀರಿ,
ತಂದೆಯಂತೂ ಸದಾ ಹೂವಾಗಿದ್ದಾರೆ ಅವರೆಂದೂ ಮುಳ್ಳಾಗುವುದಿಲ್ಲ ಉಳಿದವರೆಲ್ಲರೂ ಮುಳ್ಳಾಗುತ್ತಾರೆ. ಆ
(ತಂದೆ) ಹೂ ಹೇಳುತ್ತಾರೆ - ನಿಮ್ಮನ್ನೂ ಸಹ ಮುಳ್ಳುಗಳಿಂದ ಹೂವನ್ನಾಗಿ ಮಾಡುತ್ತೇನೆ ನೀವು
ನನ್ನನ್ನು ನೆನಪು ಮಾಡಿ. ಮಾಯೆಯು ಎಷ್ಟೊಂದು ಪ್ರಬಲವಾಗಿದೆ ಅಂದಮೇಲೆ ನೀವು ಮಾಯೆಯುವರಾಗಬೇಕೇನು?
ತಂದೆಯು ತಮ್ಮನ್ನು ತನ್ನ ಕಡೆ ಎಳೆಯುತ್ತಾರೆ, ಮಾಯೆಯೂ ತನ್ನ ಕಡೆ ಎಳೆಯುತ್ತದೆ. ಇದು ಹಳೆಯ
ಪಾದರಕ್ಷೆಯಾಗಿದೆ, ಆತ್ಮಕ್ಕೆ ಮೊದಲು ಹೊಸ ಪಾದರಕ್ಷೆ ಸಿಗುತ್ತದೆ ಮತ್ತೆ ಹಳೆಯದಾಗುತ್ತದೆ ಈ
ಸಮಯದಲ್ಲಿ ಎಲ್ಲಾ ಪಾದರಕ್ಷೆಗಳು ತಮೋಪ್ರಧಾನವಾಗಿದೆ. ನಾನು ನಿಮ್ಮನ್ನು ರೇಷ್ಮೆಯ ಸಮಾನ ಮಾಡಿ
ಬಿಡುತ್ತೇನೆ. ಸತ್ಯಯುಗದಲ್ಲಿ ಆತ್ಮವು ಪವಿತ್ರವಾಗಿರುವ ಕಾರಣ ಶರೀರವೂ ಸಹ ರೇಷ್ಮೆಯ
ಸಮಾನವಾಗುತ್ತದೆ. ಯಾವುದೇ ಲೋಪ ದೋಷಗಳಿರುವುದಿಲ್ಲ ಆದರೆ ಇಲ್ಲಂತೂ ಬಹಳ ಲೋಪ ದೋಷಗಳಿವೆ. ಅಲ್ಲಿನ
ಮುಖ ಲಕ್ಷಣಗಳನ್ನು ನೋಡಿ ಎಷ್ಟು ಸುಂದರವಾಗಿದೆ. ಅಲ್ಲಿನ ಲಕ್ಷಣಗಳನ್ನು ಇಲ್ಲಿ ಯಾರೂ ಸಹ ಬರೆಯಲು
ಸಾಧ್ಯವಿಲ್ಲ. ಈಗ ತಂದೆಯೂ ಹೇಳುತ್ತಾರೆ - ನಾನು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತೇನೆ,
ಗೃಹಸ್ಥದಲ್ಲಿ ಕಮಲದ ಸಮಾನ ಪವಿತ್ರರಾಗಿ ಮತ್ತು ಜನ್ಮ-ಜನ್ಮಾಂತರದಿಂದ ಏರಿರುವ ತುಕ್ಕನ್ನು
ತೆಗೆಯುವುದಕ್ಕಾಗಿ ಯೋಗಾಗ್ನಿಯಿದೆ. ಇದರಲ್ಲಿ ಎಲ್ಲಾ ಪಾಪವೂ ಭಸ್ಮವಾಗಿ ಬಿಡುತ್ತದೆ. ನೀವು ಪಕ್ಕಾ
ಚಿನ್ನವಾಗಿ ಬಿಡುತ್ತೀರಿ. ತುಕ್ಕನ್ನು ತೆಗೆಯಲು ಬಹಳ ಒಳ್ಳೆಯ ಯುಕ್ತಿಗಳನ್ನು ತಿಳಿಸುತ್ತಾರೆ -
ನನ್ನೊಬ್ಬನನ್ನೇ ನೆನಪು ಮಾಡಿ. ನಿಮ್ಮ ಬುದ್ಧಿಯಲ್ಲಿ ಈ ಜ್ಞಾನವಿದೆ, ಆತ್ಮವು ಸೂಕ್ಷ್ಮವಾಗಿದೆ.
ದೊಡ್ಡ ಗಾತ್ರದಲ್ಲಿದ್ದರೆ ಇವರಲ್ಲಿ ಪ್ರವೇಶ ಮಾಡಲು ಸಾಧ್ಯವಿಲ್ಲ, ಹೇಗೆ ಮಾಡಲಾಗುತ್ತದೆ?
ಆತ್ಮವನ್ನು ನೋಡಲು ವೈಧ್ಯರು ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ ಆದರೆ ಕಾಣಿಸುವುದಿಲ್ಲ.
ಸಾಕ್ಷಾತ್ಕಾರವಾಗುತ್ತದೆ ಆದರೆ ಸಾಕ್ಷಾತ್ಕಾರದಿಂದ ಯಾವುದೇ ಲಾಭವಿಲ್ಲ. ತಿಳಿಯಿರಿ - ನಿಮಗೆ
ವೈಕುಂಠದ ಸಾಕ್ಷಾತ್ಕಾರವೇ ಆಯಿತು, ಇದರಿಂದ ಲಾಭವೇನು? ಯಾವಾಗ ಹಳೆಯ ಪ್ರಪಂಚವು
ಸಮಾಪ್ತಿಯಾಗುತ್ತದೆಯೋ ಆಗ ವೈಕುಂಠವಾಸಿಗಳಾಗುತ್ತೀರಿ. ಇದಕ್ಕಾಗಿ ನೀವು ಯೋಗದ ಅಭ್ಯಾಸ ಮಾಡಿ.
ಅಂದಮೇಲೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮೊದಲು ಮುಳ್ಳುಗಳೊಂದಿಗೆ ಪ್ರೀತಿಯಿರುತ್ತದೆ.
ಎಲ್ಲರಿಗಿಂತ ಹೆಚ್ಚಿನ ಪ್ರೀತಿಯ ಸಾಗರ ತಂದೆಯಾಗಿದ್ದಾರೆ. ತಾವು ಮಕ್ಕಳೂ ಸಹ ಮಧುರರಾಗುತ್ತಾ
ಹೋಗುತ್ತೀರಿ. ತಂದೆಯು ತಿಳುಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ಸಹೋದರ-ಸಹೋದರರನ್ನು ನೋಡಿ.
ಆಗ ಕೆಟ್ಟ ದೃಷ್ಟಿಯು ಹೊರಟು ಹೋಗುತ್ತದೆ ಸಹೋದರ ಸಹೋದರಿ ಸಂಬಂಧದಲ್ಲೂ ದೃಷ್ಠಿ ಚಂಚಲವಾಗುತ್ತದೆ.
ಆದ್ದರಿಂದ ಸಹೋದರ-ಸಹೋದರರಾಗಿ ನೋಡಿ. ಅಲ್ಲಂತೂ ಶರೀರದ ಪರಿವೆಯಿರಲು ಅಥವಾ ಮೋಹವುಂಟಾಗಲು ಶರೀರವೇ
ಇರುವುದಿಲ್ಲ. ತಂದೆಯು ಆತ್ಮಗಳಿಗೇ ಓದಿಸುತ್ತಾರೆ ಅಂದಮೇಲೆ ತಾವೂ ಸಹ ತಮ್ಮನ್ನು ಆತ್ಮನೆಂದು
ತಿಳಿಯಿರಿ. ಈ ಶರೀರವು ವಿನಾಶಿಯಾಗಿದೆ, ಇದರೊಂದಿಗೆ ಮನಸ್ಸನ್ನು ಏನಿಡುವುದು! ಸತ್ಯಯುಗದಲ್ಲಿ
ಇದರೊಂದಿಗೆ ಪ್ರೀತಿ ಇರುವುದಿಲ್ಲ. ಮೋಹಜೀತ ರಾಜನ ಕಥೆಯನ್ನು ಕೇಳಿದ್ದೀರಲ್ಲವೇ. ಹೇಳಿದರು ಆತ್ಮವು
ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುವುದು. ಪಾತ್ರವು ಸಿಕ್ಕಿದೆ
ಅಂದಮೇಲೆ ಮೋಹವನ್ನು ಏಕೆ ಇಟ್ಟುಕೊಳ್ಳಬೇಕು. ಆದ್ದರಿಂದ ತಂದೆಯೂ ಹೇಳುತ್ತಾರೆ - ಮಕ್ಕಳೇ,
ಎಚ್ಚರಿಕೆಯಿಂದಿರಿ. ತಾಯಿ ಸತ್ತರೂ, ಹೆಂಡತಿ ಸತ್ತರೂ ಸಹ ಹಲ್ವ ತಿನ್ನಿ ಯಾರೇ ಸತ್ತರೂ
ಅಳುವುದಿಲ್ಲವೆಂದು ಪ್ರತಿಜ್ಞೆ ಮಾಡಿ, ನೀವು ನಿಮ್ಮ ತಂದೆಯನ್ನು ನೆನಪು ಮಾಡಿ ಸತೋಪ್ರಧಾನರಾಗಿ.
ಸತೋಪ್ರಧಾನರಾಗಲು ಮತ್ತ್ಯಾವುದೇ ಮಾರ್ಗವಿಲ್ಲ. ಪುರುಷಾರ್ಥದಿಂದಲೇ ವಿಜಯ ಮಾಲೆಯ ಮಣಿಯಾಗುತ್ತೀರಿ.
ಪುರುಷಾರ್ಥದಿಂದ ಏನು ಬೇಕೋ ಅದಾಗಬಹುದು. ತಂದೆಯು ತಿಳಿಯುತ್ತಾರೆ, ಕಲ್ಪದ ಹಿಂದೆ ಯಾರೆಷ್ಟು
ಪುರುಷಾರ್ಥ ಮಾಡಿದ್ದಾರೆಯೋ ಅಷ್ಟೇ ಮಾಡುತ್ತಾರೆ. ತಂದೆಯು ಬಡವರ ಬಂಧುವಾಗಿದ್ದಾರೆ, ದಾನವನ್ನು
ಬಡವರಿಗೇ ಕೊಡಲಾಗುತ್ತದೆ. ತಂದೆಯು ಸ್ವಯಂ ಹೇಳುತ್ತಾರೆ - ನಾನೂ ಸಹ ಸಾಧಾರಣ ಶರೀರದಲ್ಲಿ
ಬರುತ್ತೇನೆ, ಬಡವರೂ ಅಲ್ಲ ಸಾಹುಕಾರರೂ ಅಲ್ಲ. ತಾವು ಮಕ್ಕಳೇ ತಂದೆಯನ್ನು ಅರಿತಿದ್ದೀರಿ ಬಾಕಿ ಇಡೀ
ಪ್ರಪಂಚದವರಂತೂ ಸರ್ವವ್ಯಾಪಿಯೆಂದು ಹೇಳುತ್ತಾರೆ. ತಂದೆಯು ಇಂತಹ ಧರ್ಮ ಸ್ಥಾಪನೆ ಮಾಡುತ್ತಾರೆ,
ಅಲ್ಲಿ ದುಃಖದ ಹೆಸರೇ ಇರುವುದಿಲ್ಲ. ಭಕ್ತಿ ಮಾರ್ಗದಲ್ಲಿ ಮನುಷ್ಯರು ಅಶೀರ್ವಾದವನ್ನು ಬೇಡುತ್ತಾರೆ.
ಇಲ್ಲಂತೂ ಕೃಪೆಯ ಮಾತಿಲ್ಲ. ಯಾರಿಗೆ ತಲೆಬಾಗುತ್ತೀರಿ? ತಂದೆಯು ಬಿಂದುವಾಗಿದ್ದಾರಲ್ಲವೆ. ದೊಡ್ಡ
ವಾರಸುದಾರರಾಗಿದ್ದರೆ ತಲೆ ಬಾಗಿ ನಮಸ್ಕರಿಸಬಹುದಾಗಿತ್ತು. ಚಿಕ್ಕ ವಸ್ತುವಿಗೆ ತಲೆ ಬಾಗಿಸಲು
ಸಾಧ್ಯವಿಲ್ಲ. ಯಾರಿಗೆ ಕೈ ಜೋಡಿಸುತ್ತೀರಿ ಈ ಭಕ್ತಿಮಾರ್ಗದ ಲಕ್ಷಣಗಳೆಲ್ಲವೂ ಮರೆಯಾಗಿ ಬಿಡುತ್ತವೆ.
ಕೈ ಜೋಡಿಸುವುದು ಭಕ್ತಿ ಮಾರ್ಗವಾಗಿ ಬಿಡುತ್ತದೆ. ಸಹೋದರ-ಸಹೋದರಿಯರಿರುತ್ತಾರೆಂದರೆ ಮನೆಯಲ್ಲಿ ಕೈ
ಜೋಡಿಸುತ್ತಾರೆಯೇ? ಮಕ್ಕಳನ್ನು ಬೇಡುವುದೇ ತಮ್ಮ ವಾರಸುಧಾರರನ್ನಾಗಿ ಮಾಡಿಕೊಳ್ಳುವುದಕ್ಕಾಗಿ.
ಮಕ್ಕಳು ಮಾಲೀಕರಾದರಲ್ಲವೆ. ಆದ್ದರಿಂದ ತಂದೆಯು ಮಕ್ಕಳಿಗೆ ನಮಸ್ತೆ ಮಾಡುತ್ತಾರೆ. ತಂದೆಯಂತೂ
ಮಕ್ಕಳ ಸೇವಕನಾಗಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
೧. ವಿನಾಶಿ
ಶರೀರದೊಂದಿಗೆ ಮನಸ್ಸನ್ನು ಇಡಬಾರದು. ಮೋಹಜೀತರಾಗಬೇಕಾಗಿದೆ, ಪ್ರತಿಜ್ಞೆ ಮಾಡಿ - ಯಾರೇ ಶರೀರ
ಬಿಡಲಿ, ನಾವು ಎಂದೂ ಅಳುವುದಿಲ್ಲ.
೨. ತಂದೆಯ ಸಮಾನ
ಮಧುರರಾಗಬೇಕಾಗಿದೆ, ಎಲ್ಲರಿಗೂ ಸುಖವನ್ನೇ ಕೊಡಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬಾರದು.
ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ತಮ್ಮ ಹಾಗೂ ಅನ್ಯರ ಕಲ್ಯಾಣ
ಮಾಡಬೇಕಾಗಿದೆ.
ವರದಾನ:
ದೇಹ-ಭಾನದಿಂದ
ನ್ಯಾರಾ ಆಗಿ ಪರಮಾತ್ಮನ ಪ್ರೀತಿಯ ಅನುಭವ ಮಾಡುವಂತಹ ಕಮಲ ಆಸನಧಾರಿ ಭವ.
ಕಮಲ ಆಸನ ಬ್ರಾಹ್ಮಣ
ಆತ್ಮಗಳ ಶ್ರೇಷ್ಠ ಸ್ಥಿತಿಯ ಗುರುತಾಗಿದೆ. ಇಂತಹ ಕಮಲ ಆಸನಧಾರಿ ಆತ್ಮಗಳು ಈ ದೇಹಭಾನದಿಂದ ಸ್ವತಃ
ನ್ಯಾರಾ ಆಗಿರುತ್ತಾರೆ. ಅವರಿಗೆ ಶರೀರದ ಭಾನ ತನ್ನ ಕಡೆ ಆಕರ್ಷಣೆ ಮಾಡುವುದಿಲ್ಲ. ಹೇಗೆ ಬ್ರಹ್ಮಾ
ತಂದೆಗೆ ನಡೆದಾಡುತ್ತಾ ತಿರುಗಾಡುತ್ತಾ ಫರಿಶ್ಥಾ ರೂಪ ಅಥವಾ ದೇವತಾರೂಪ ಸದಾ ಸ್ಮೃತಿಯಲ್ಲಿತ್ತು.
ಅದೇ ರೀತಿ ದೇಹೀ ಅಭಿಮಾನಿ ಸ್ಥಿತಿ ಸ್ವಾಭಾವಿಕವಾಗಿ ಸದಾ ಇರಬೇಕು ಇದಕ್ಕೆ ಹೇಳಲಾಗುವುದು
ದೇಹ-ಭಾನದಿಂದ ನ್ಯಾರ. ಈ ರೀತಿ ದೇಹಭಾನದಿಂದ ನ್ಯಾರಾ ಇರುವಂತಹವರೇ ಪರಮಾತ್ಮನಿಗೆ ಪ್ರಿಯವಾಗಿ
ಬಿಡುತ್ತಾರೆ.
ಸ್ಲೋಗನ್:
ನಿಮ್ಮ ವಿಶೇಷತೆಗಳು ಅಥವಾ ಗುಣ ಫ್ರಭು ಪ್ರಸಾದವಾಗಿದೆ. ಅದನ್ನು ನನ್ನದು ಎಂದು ತಿಳಿದುಕೊಳ್ಳುವುದೇ
ದೇಹ-ಅಭಿಮಾನವಾಗಿದೆ.