02.09.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಇದು ವಿಚಿತ್ರವಾದ ಸತ್ಸಂಗವಾಗಿದೆ, ಇಲ್ಲಿ ನಿಮಗೆ ಜೀವಿಸಿದ್ದಂತೆಯೇ ಸಾಯುವುದನ್ನು ಕಲಿಸಲಾಗುತ್ತದೆ, ಜೀವಿಸಿದ್ದಂತೆಯೇ ಸಾಯುವವರೇ ಹಂಸಗಳಾಗುತ್ತಾರೆ.”

ಪ್ರಶ್ನೆ:
ನೀವು ಮಕ್ಕಳಿಗೆ ಈಗ ಯಾವ ಚಿಂತೆಯಿದೆ?

ಉತ್ತರ:
ನಾವು ವಿನಾಶಕ್ಕೆ ಮೊದಲೇ ಸಂಪನ್ನರಾಗಬೇಕಾಗಿದೆ. ಯಾವ ಮಕ್ಕಳು ಜ್ಞಾನ ಮತ್ತು ಯೋಗದಲ್ಲಿ ಶಕ್ತಿಶಾಲಿಗಳಾಗುತ್ತಾ ಹೋಗುತ್ತಾರೆಯೋ ಅವರಿಗೆ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಹವ್ಯಾಸವಾಗುತ್ತಾ ಹೋಗುತ್ತದೆ. ಅವರು ಸರ್ವಿಸ್ ಇಲ್ಲದೇ ಇರಲು ಸಾಧ್ಯವೇ ಇಲ್ಲ. ಜಿನ್ನ ತರಹ ಓಡುತ್ತಿರುತ್ತಾರೆ. ಸರ್ವೀಸಿನ ಜೊತೆ ಜೊತೆಗೆ ಸ್ವಯಂನ್ನು ಸಂಪನ್ನ ಮಾಡಿಕೊಳ್ಳುವ ಚಿಂತೆಯಿರುವುದು.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಆತ್ಮಗಳು ಈಗ ಸಾಕಾರದಲ್ಲಿದ್ದೀರಿ ಮತ್ತು ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದೀರಿ. ಏಕೆಂದರೆ ದತ್ತು ಮಾಡಲ್ಪಟ್ಟಿದ್ದೀರಿ. ಇವರು ಸಹೋದರ -ಸಹೋದರಿಯನ್ನಾಗಿ ಮಾಡುತ್ತಾರೆಂದು ನಿಮ್ಮ ಬಗ್ಗೆ ಎಲ್ಲರೂ ಹೇಳುತ್ತಾರೆ. ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ - ಮೂಲತಃ ನೀವಾತ್ಮಗಳು ಸಹೋದರ-ಸಹೋದರಿಯರಾಗಿದ್ದೀರಿ. ಈಗ ಹೊಸ ಸೃಷ್ಟಿಯ ಸ್ಥಾಪನೆಯಾಗುತ್ತದೆಯಲ್ಲವೆ. ಮೊಟ್ಟ ಮೊದಲು ಬ್ರಾಹ್ಮಣ ಶಿಖೆಯು ಬೇಕು. ನೀವು ಶೂದ್ರರಾಗಿದ್ದೀರಿ. ಈಗ ಬದಲಾಗಿದ್ದೀರಿ. ಬ್ರಾಹ್ಮಣರಂತೂ ಅವಶ್ಯವಾಗಿ ಬೇಕು, ಪ್ರಜಾಪಿತ ಬ್ರಹ್ಮನ ಹೆಸರಂತೂ ಪ್ರಸಿದ್ಧವಾಗಿದೆ. ಈ ಲೆಕ್ಕದಿಂದ ನೀವು ತಿಳಿಯುತ್ತೀರಿ - ನಾವೆಲ್ಲಾ ಮಕ್ಕಳು ಸಹೋದರ-ಸಹೋದರರಾದೆವು. ಯಾರೆಲ್ಲಾ ತಮ್ಮನ್ನು ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯೆಂದು ಕರೆಸಿಕೊಳ್ಳುವರೋ ಅವರು ಅವಶ್ಯವಾಗಿ ಸಹೋದರ-ಸಹೋದರಿಯಾದರು. ಎಲ್ಲರೂ ಪ್ರಜಾಪಿತ ಬ್ರಹ್ಮನ ಸಂತಾನರೆಂದಮೇಲೆ ಅವಶ್ಯವಾಗಿ ಸಹೋದರ-ಸಹೋದರಿಯರಾಗಬೇಕು. ಇದನ್ನು ಯಾರಿಗೆ ತಿಳುವಳಿಕೆಯಿಲ್ಲವೋ ಅವರಿಗೆ ತಿಳಿಸಬೇಕು. ತಿಳುವಳಿಕೆಯಿಲ್ಲದವರೂ ಇದ್ದಾರೆ ಮತ್ತು ಅಂಧಶ್ರದ್ಧೆಯಿರುವವರೂ ಇದ್ದಾರೆ. ಲಕ್ಷ್ಮೀ-ನಾರಾಯಣರ ಪೂಜೆ ಮಾಡುತ್ತಾರೆ. ಆದರೆ ಅವರು ಯಾವಾಗ ಬಂದರು, ಹೇಗೆ ಆದರು ಮತ್ತೆ ಎಲ್ಲಿಗೆ ಹೋದರು? ಎಂಬುದೇನನ್ನೂ ತಿಳಿದುಕೊಂಡಿಲ್ಲ. ಯಾರೆಲ್ಲಾ ಮನುಷ್ಯರು ನೆಹರು ಮೊದಲಾದವರನ್ನು ತಿಳಿದುಕೊಂಡಿದ್ದಾರೆಯೋ ಅವರಿಗೆ ಆ ವ್ಯಕ್ತಿಗಳ ಇತಿಹಾಸ, ಭೂಗೋಳ ಎಲ್ಲವೂ ಗೊತ್ತಿದೆ. ಒಂದುವೇಳೆ ಇವರ ಇತಿಹಾಸವನ್ನೇ ತಿಳಿದುಕೊಂಡಿಲ್ಲವೆಂದರೆ ಅವರಿಂದೇನು ಪ್ರಯೋಜನ? ಪೂಜೆ ಮಾಡುತ್ತಾರೆ. ಆದರೆ ಅವರ ಜೀವನ ಚರಿತ್ರೆಯನ್ನು ತಿಳಿದುಕೊಂಡಿಲ್ಲ. ಮನುಷ್ಯರ ಜೀವನ ಚರಿತ್ರೆಯನ್ನಂತೂ ತಿಳಿದುಕೊಂಡಿದ್ದಾರೆ. ಆದರೆ ಯಾರು ಹಿರಿಯರು ಬಂದು ಹೋಗಿದ್ದಾರೆಯೋ ಅವರೊಬ್ಬರ ಜೀವನ ಕಥೆಯೂ ಗೊತ್ತಿಲ್ಲ. ಶಿವನಿಗೆ ಎಷ್ಟೊಂದು ಮಂದಿ ಪೂಜಾರಿಗಳಿದ್ದಾರೆ, ಪೂಜೆ ಮಾಡುತ್ತಾರೆ ಮತ್ತೆ ತಮ್ಮ ಬಾಯಿಂದಲೇ ಈಶ್ವರನು ಕಲ್ಲು-ಮುಳ್ಳಿನಲ್ಲಿದ್ದಾರೆ, ಕಣ-ಕಣದಲ್ಲಿದ್ದಾರೆಂದು ಹೇಳುತ್ತಾರೆ. ಅಂದಮೇಲೆ ಇದು ಜೀವನ ಕಥೆಯಾಯಿತೇ! ಇದು ಬುದ್ಧಿವಂತಿಕೆಯ ಮಾತಾಗಲಿಲ್ಲ. ತಮ್ಮನ್ನೂ ಸಹ ಪತಿತರೆಂದು ಹೇಳಿಕೊಳ್ಳುತ್ತಾರೆ. ಪತಿತ ಎಂಬ ಶಬ್ಧವು ಎಷ್ಟು ಕೆಟ್ಟದಾಗಿದೆ. ಪತಿತರೆಂದರೆ ವಿಕಾರಿಗಳು, ನೀವಿದನ್ನು ತಿಳಿಸಬಹುದು, ನಾವು ಬ್ರಹ್ಮಾಕುಮಾರ-ಕುಮಾರಿಯರೆಂದು ಏಕೆ ಕರೆಸಿಕೊಳ್ಳುತ್ತೇವೆ? ಏಕೆಂದರೆ ಬ್ರಹ್ಮನ ಸಂತಾನರಾಗಿದ್ದೇವೆ, ದತ್ತು ಮಕ್ಕಳಾಗಿದ್ದೇವೆ. ನಾವು ಕುಖವಂಶಾವಳಿಯಲ್ಲ ಮುಖವಂಶಾವಳಿ ಆಗಿದ್ದೇವೆ. ಬ್ರಾಹ್ಮಣ-ಬ್ರಾಹ್ಮಣಿಯರೆಂದರೆ ಸಹೋದರ-ಸಹೋದರಿಯರಾದರಲ್ಲವೆ ಅಂದಮೇಲೆ ಸಹೋದರ-ಸಹೋದರಿಯ ನಡುವೆ ಕುದೃಷ್ಟಿಯಿರಲು ಸಾಧ್ಯವಿಲ್ಲ. ಕೆಟ್ಟ ವಿಕಾರಗಳೂ ಮುಖ್ಯವಾಗಿ ಕಾಮ ವಿಕಾರದ್ದಾಗಿದೆ. ನಾವು ಪ್ರಜಾಪಿತ ಬ್ರಹ್ಮನ ಸಂತಾನರು ಸಹೋದರ-ಸಹೋದರಿಯಾಗುತ್ತೇವೆ ಎಂದು ನೀವು ಹೇಳುತ್ತೀರಿ ಮತ್ತು ತಿಳಿದುಕೊಳ್ಳುತ್ತೀರಿ - ನಾವೆಲ್ಲರೂ ಶಿವ ತಂದೆಯ ಸಂತಾನರು ಪರಸ್ಪರ ಸಹೋದರರಾಗಿದ್ದೇವೆ. ಇದೂ ಸಹ ಪಕ್ಕಾ ಇದೆ. ಪ್ರಪಂಚದವರಿಗೆ ಇದೇನೂ ಗೊತ್ತಿಲ್ಲ. ಹಾಗೆಯೇ ಕೇವಲ ಹೇಳಿ ಬಿಡುತ್ತಾರಷ್ಟೇ. ನೀವು ಇದನ್ನು ತಿಳಿಸಬಹುದು - ಎಲ್ಲಾ ಆತ್ಮಗಳ ತಂದೆಯು ಅವರೊಬ್ಬರೇ ಆಗಿದ್ದಾರೆ, ಅವರನ್ನೇ ಎಲ್ಲರೂ ಕರೆಯುತ್ತಾರೆ. ನೀವು ಚಿತ್ರಗಳನ್ನು ತೋರಿಸಿದ್ದೀರಿ, ದೊಡ್ಡ-ದೊಡ್ಡ ಧರ್ಮದವರೂ ಸಹ ಈ ನಿರಾಕಾರ ತಂದೆಯನ್ನು ಒಪ್ಪುತ್ತಾರೆ. ಅವರು ನಿರಾಕಾರ ಆತ್ಮಗಳ ತಂದೆಯಾಗಿದ್ದಾರೆ ಮತ್ತೆ ಸಾಕಾರದಲ್ಲಿ ಎಲ್ಲರ ತಂದೆ ಪ್ರಜಾಪಿತ ಬ್ರಹ್ಮನಾಗಿದ್ದಾರೆ, ಬ್ರಾಹ್ಮಣರು ವೃದ್ಧಿ ಹೊಂದುತ್ತಿರುತ್ತಾರೆ, ಭಿನ್ನ-ಭಿನ್ನ ಧರ್ಮಗಳಲ್ಲಿ ಬರುತ್ತಾ ಹೋಗುತ್ತಿರುತ್ತಾರೆ. ಆತ್ಮವಂತೂ ಈ ಶರೀರದಿಂದ ಭಿನ್ನವಾಗಿದೆ, ಶರೀರವನ್ನು ನೋಡಿ ಅವರು ಅಮೇರಿಕನ್ನರು, ಇವರು ಇಂತಹವರೆಂದು ಹೇಳುತ್ತಾರೆ. ಆತ್ಮಕ್ಕಂತೂ ಹೇಳುವುದಿಲ್ಲ. ಆತ್ಮಗಳೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ, ಅಲ್ಲಿಂದ ಪಾತ್ರವನ್ನಭಿನಯಿಸಲು ಬರುತ್ತಾರೆ. ನೀವು ಯಾವುದೇ ಧರ್ಮದವರಿಗೆ ತಿಳಿಸಿ, ಪುನರ್ಜನ್ಮವನ್ನಂತೂ ಎಲ್ಲರೂ ತೆಗೆದುಕೊಳ್ಳುತ್ತಾರೆ ಮತ್ತು ಮೇಲಿನಿಂದಲೂ ಹೊಸ ಆತ್ಮರು ಬರುತ್ತಿರುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನೀವೂ ಸಹ ಮನುಷ್ಯರಾಗಿದ್ದೀರಿ, ಮನುಷ್ಯರಿಗೆ ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಇದರ ರಚಯಿತ ಯಾರು, ಈ ಚಕ್ರವು ಸುತ್ತುವುದರಲ್ಲಿ ಎಷ್ಟು ಸಮಯ ಹಿಡಿಸುತ್ತದೆ ಎಂಬ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಬಗ್ಗೆ ತಿಳಿದಿರಬೇಕು. ಇದು ನಿಮಗಷ್ಟೇ ಗೊತ್ತಿದೆ. ದೇವತೆಗಳಿಗೂ ಸಹ ಗೊತ್ತಿಲ್ಲ. ಮನುಷ್ಯರು ಇದನ್ನರಿತುಕೊಂಡು ನಂತರ ದೇವತೆಗಳಾಗುತ್ತಾರೆ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವವರು ತಂದೆಯಾಗಿದ್ದಾರೆ. ತಂದೆಯು ತನ್ನ ಮತ್ತು ರಚನೆಯ ಪರಿಚಯವನ್ನು ಕೊಡುತ್ತಾರೆ. ನೀವೂ ಸಹ ತಿಳಿದುಕೊಂಡಿದ್ದೀರಿ - ನಾವು ಬೀಜರೂಪ ತಂದೆಯ ಬೀಜರೂಪ ಮಕ್ಕಳಾಗಿದ್ದೇವೆ. ಹೇಗೆ ತಂದೆಯು ಈ ಉಲ್ಟಾ ವೃಕ್ಷದ ಬಗ್ಗೆ ತಿಳಿದುಕೊಂಡಿದ್ದಾರೆಯೋ ಹಾಗೆಯೇ ನಾವೂ ಸಹ ತಿಳಿದಿದ್ದೇವೆ. ಇದನ್ನು ಮನುಷ್ಯರು ಮನುಷ್ಯರಿಗೆಂದೂ ತಿಳಿಸಲು ಸಾಧ್ಯವಿಲ್ಲ. ನಿಮಗೆ ತಂದೆಯೇ ತಿಳಿಸಿದ್ದಾರೆ.

ಎಲ್ಲಿಯವರೆಗೆ ನೀವು ಬ್ರಹ್ಮನಿಗೆ ಮಕ್ಕಳಾಗುವುದಿಲ್ಲವೋ ಅಲ್ಲಿಯವರೆಗೆ ಇಲ್ಲಿ ಬರಲು ಸಾಧ್ಯವಿಲ್ಲ. ಎಲ್ಲಿಯ ತನಕ ಸಾಪ್ತಾಯಿಕ ಶಿಕ್ಷಣವನ್ನು ತೆಗೆದುಕೊಂಡು ಇದನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯ ತನಕ ನೀವು ಬ್ರಾಹ್ಮಣರ ಸಭೆಯಲ್ಲಿ ಕುಳಿತುಕೊಳ್ಳಲು ಹೇಗೆ ಸಾಧ್ಯ! ಇದಕ್ಕೆ ಇಂದ್ರ ಸಭೆಯೆಂದೂ ಹೇಳುತ್ತಾರೆ. ಇಂದ್ರನೆಂದರೆ ಅವರೇನು ಸ್ಥೂಲ ಮಳೆಯನ್ನು ಸುರಿಸುವುದಿಲ್ಲ. ಇದಕ್ಕೆ ಇಂದ್ರ ಸಭೆ ಎಂದು ಹೇಳಲಾಗುತ್ತದೆ. ದೇವತೆಗಳೂ ಸಹ ನೀವೇ ಆಗಬೇಕು. ಅನೇಕ ಪ್ರಕಾರದ ದೇವತೆಗಳ ಗಾಯನವಿದೆ. ಕೆಲ ಮಕ್ಕಳು ಬಹಳ ಸುಂದರವಾಗಿರುತ್ತಾರೆಂದರೆ ಅವರಂತೂ ದೇವತೆಯಂತಿದ್ದಾರೆಂದು ಹೇಳುತ್ತಾರಲ್ಲವೆ. ಆದರೆ ಇಲ್ಲಂತೂ ಪೌಡರ್ ಇತ್ಯಾದಿಗಳನ್ನು ಹಚ್ಚಿಕೊಂಡು ಸುಂದರವಾಗಿ ಬಿಡುತ್ತಾರೆ. ಸತ್ಯಯುಗದಲ್ಲಿ ನೀವು ಸ್ವಾಭಾವಿಕವಾಗಿ ಸುಂದರರಾಗುತ್ತೀರಿ, ರಾಜಕುಮಾರ-ಕುಮಾರಿಯರಾಗುತ್ತೀರಿ. ಈಗ ನೀವು ಜ್ಞಾನ ಸಾಗರದಲ್ಲಿ ಜ್ಞಾನ ಸ್ನಾನ ಮಾಡುವುದರಿಂದ ದೇವಿ-ದೇವತೆಗಳಾಗಿ ಬಿಡುತ್ತೀರಿ. ನಾವೀಗ ಹೇಗಿದ್ದವರು ಏನಾಗುತ್ತಿದ್ದೇವೆಂದು ನಿಮಗೆ ತಿಳಿದಿದೆ. ಯಾರು ಸದಾ ಪಾವನ ತಂದೆಯಿದ್ದಾರೆಯೋ, ಸದಾ ಸುಂದರನಾಗಿದ್ದಾರೆ, ಆ ಯಾತ್ರಿಕನೇ ನಿಮ್ಮನ್ನು ಈ ರೀತಿ ಸುಂದರರನ್ನಾಗಿ ಮಾಡಲು ಕಪ್ಪಾದ (ಪತಿತ) ಶರೀರದಲ್ಲಿ ಪ್ರವೇಶ ಮಾಡುತ್ತಾರೆ. ಸುಂದರರನ್ನಾಗಿ ಯಾರು ಮಾಡುವರು? ತಂದೆಯೇ ಮಾಡಬೇಕಾಗುತ್ತದೆಯಲ್ಲವೆ. ಸೃಷ್ಟಿಚಕ್ರವಂತೂ ಸುತ್ತಬೇಕಾಗಿದೆ. ಈಗ ನೀವಂತೂ ಸುಂದರರಾಗಬೇಕಾಗಿದೆ. ಓದಿಸುವವರು ಒಬ್ಬ ಜ್ಞಾನಸಾಗರ ತಂದೆಯೇ ಆಗಿದ್ದಾರೆ. ಅವರು ಜ್ಞಾನ ಸಾಗರ, ಪ್ರೇಮದ ಸಾಗರನಾಗಿದ್ದಾರೆ. ಆ ತಂದೆಯ ಯಾವ ಮಹಿಮೆ ಗಾಯನವಿದೆಯೋ ಅದು ಲೌಕಿಕ ತಂದೆಗಿರಲು ಸಾಧ್ಯವಿಲ್ಲ. ಇದು ಪಾರಲೌಕಿಕ ತಂದೆಯ ಗಾಯನವೇ ಇದೆ. ತಮ್ಮನ್ನು ಮಹಿಮಾವಂತರನ್ನಾಗಿ ಮಾಡಿ ಎಂದು ಎಲ್ಲರೂ ಕರೆಯುತ್ತಾರೆ. ಈಗ ನೀವು ಈ ರೀತಿ ನಂಬರ್ವಾರ್ ಪುರುಷಾರ್ಥದನುಸಾರ ಆಗುತ್ತಿದ್ದೀರಲ್ಲವೆ. ವಿದ್ಯೆಯಲ್ಲಿ ಎಲ್ಲರೂ ಏಕರಸವಾಗಿರುವುದಿಲ್ಲ, ರಾತ್ರಿ-ಹಗಲಿನ ಅಂತರವಿರುತ್ತದೆ. ನಿಮ್ಮ ಬಳಿಯೂ ಅನೇಕರು ಬರುತ್ತಾರೆ. ಅವಶ್ಯವಾಗಿ ಮೊದಲು ಬ್ರಾಹ್ಮಣರಾಗಬೇಕಾಗಿದೆ ಮತ್ತೆ ಕೆಲವರು ಚೆನ್ನಾಗಿ ಓದುತ್ತಾರೆ. ಇನ್ನೂ ಕೆಲವರು ಕಡಿಮೆ ಓದುತ್ತಾರೆ, ಯಾರು ವಿದ್ಯಾಭ್ಯಾಸದಲ್ಲಿ ಎಲ್ಲರಿಗಿಂತ ಮುಂದಿರುವರೋ ಅವರು ಅನ್ಯರಿಗೂ ಓದಿಸಲು ಸಾಧ್ಯ. ನೀವು ತಿಳಿದುಕೊಳ್ಳಬಹುದು - ಇಷ್ಟೆಲ್ಲಾ ಕಾಲೇಜುಗಳು ತೆರೆಯುತ್ತಾ ಹೋಗುತ್ತವೆ. ತಂದೆಯೂ ಸಹ ತಿಳಿಸುತ್ತಾರೆ- ಮಕ್ಕಳೇ, ಇಂತಹ ಕಾಲೇಜನ್ನು ತೆರೆಯಿರಿ, ಎಲ್ಲಿ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವು ಸಿಗುತ್ತದೆಯೆಂದು ಯಾರೇ ಆಗಲಿ ಬಹು ಬೇಗನೆ ಅರಿತುಕೊಳ್ಳುವಂತಿರಬೇಕು. ತಂದೆಯು ಭಾರತದಲ್ಲಿಯೇ ಬರುತ್ತಾರೆ. ಆದ್ದರಿಂದ ಭಾರತದಲ್ಲಿಯೇ ಈ ಈಶ್ವರೀಯ ವಿಶ್ವ ವಿದ್ಯಾಲಯವು ತೆರೆಯುತ್ತಿರುತ್ತದೆ. ಮುಂದೆ ಹೋದಂತೆ ವಿದೇಶದಲ್ಲಿಯೂ ತೆರೆಯಲ್ಪಡುತ್ತಾ ಹೋಗುತ್ತದೆ. ಬಹಳಷ್ಟು ವಿದ್ಯಾಲಯಗಳು ಬೇಕು, ಎಲ್ಲಿ ಅನೇಕರು ಬಂದು ಹೋಗುತ್ತಾರೆ. ಮತ್ತೆ ಯಾವ ವಿದ್ಯಾಭ್ಯಾಸವು ಪೂರ್ಣವಾಗುವುದೋ ಆಗ ಎಲ್ಲರೂ ದೇವಿ-ದೇವತಾ ಧರ್ಮಕ್ಕೆ ವರ್ಗಾಯಿತರಾಗುತ್ತಾರೆ. ಅರ್ಥಾತ್ ಮನುಷ್ಯರಿಂದ ದೇವತೆಗಳಾಗುತ್ತಾರೆ. ನೀವು ಮನುಷ್ಯರಿಂದ ದೇವತೆಗಳಾಗುತ್ತೀರಲ್ಲವೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರೆಂಬ ಗಾಯನವಿದೆ. ಇಲ್ಲಿ ಇದು ಮನುಷ್ಯರ ಪ್ರಪಂಚವಾಗಿದೆ. ಸತ್ಯಯುಗವು ದೇವತೆಗಳ ಪ್ರಪಂಚವಾಗಿದೆ, ದೇವತೆಗಳು ಮತ್ತು ಮನುಷ್ಯರಲ್ಲಿ ರಾತ್ರಿ-ಹಗಲಿನ ಅಂತರವಿದೆ. ದಿನ (ಸತ್ಯ-ತ್ರೇತಾಯುಗ)ದಲ್ಲಿ ದೇವತೆಗಳು, ರಾತ್ರಿ(ದ್ವಾಪರ-ಕಲಿಯುಗ)ಯಲ್ಲಿ ಮನುಷ್ಯರಿರುತ್ತಾರೆ. ಈಗ ಎಲ್ಲರೂ ಭಕ್ತರೇ ಭಕ್ತರಿದ್ದಾರೆ. ಪೂಜಾರಿಗಳಾಗಿದ್ದಾರೆ. ಈಗ ನೀವು ಪೂಜಾರಿಗಳಿಂದ ಪೂಜ್ಯರಾಗುತ್ತೀರಿ. ಸತ್ಯಯುಗದಲ್ಲಿ ಶಾಸ್ತ್ರ, ಭಕ್ತಿ ಮೊದಲಾದವುಗಳ ಹೆಸರೇ ಇರುವುದಿಲ್ಲ. ಅಲ್ಲಿ ಎಲ್ಲರೂ ದೇವತೆಗಳಿರುತ್ತಾರೆ. ಮನುಷ್ಯರು ಭಕ್ತರಾಗಿದ್ದಾರೆ. ಮನುಷ್ಯರೇ ನಂತರ ದೇವತೆಗಳಾಗುತ್ತಾರೆ. ಅದು ದೈವೀ ಪ್ರಪಂಚವಾಗಿದೆ, ಇದಕ್ಕೆ ಆಸುರೀ ಪ್ರಪಂಚವೆಂದು ಹೇಳುತ್ತಾರೆ. ರಾಮ ರಾಜ್ಯ ಮತ್ತು ರಾವಣ ರಾಜ್ಯ. ರಾವಣ ರಾಜ್ಯವೆಂದು ಯಾವುದಕ್ಕೆ ಹೇಳಲಾಗುತ್ತದೆ. ರಾವಣನು ಯಾವಾಗ ಬಂದನು ಎಂಬುದೇನೂ ನಿಮ್ಮ ಬುದ್ಧಿಯಲ್ಲಿರಲಿಲ್ಲ, ಏನೂ ತಿಳಿದಿರಲಿಲ್ಲ. ಲಂಕೆಯು ಸಮುದ್ರದಲ್ಲಿ ಮುಳುಗಿ ಹೋಯಿತೆಂದು ಹೇಳುತ್ತಾರೆ. ಅದೇ ರೀತಿ ದ್ವಾರಿಕಾದ ಬಗ್ಗೆಯೂ ಹೇಳುತ್ತಾರೆ. ಈಗ ನಿಮ್ಮ ಬುದ್ಧಿಯಿಲ್ಲಿದೆ - ಈ ಇಡೀ ಲಂಕೆಯು ಮುಳುಗಲಿದೆ. ಈ ಇಡೀ ಪ್ರಪಂಚವೇ ಬೇಹದ್ದಿನ ಲಂಕೆಯಾಗಿದೆ. ಇದೆಲ್ಲವೂ ಮುಳುಗಿ ಹೋಗುತ್ತದೆ. ಇಲ್ಲಿ ನೀರು ಆವರಿಸಿ ಬಿಡುತ್ತದೆ. ಬಾಕಿ ಸ್ವರ್ಗವೇನೂ ಮುಳುಗುವುದಿಲ್ಲ. ಅಲ್ಲಿ ಎಷ್ಟೊಂದು ಅಪಾರ ಧನವಿತ್ತು, ತಂದೆಯು ತಿಳಿಸಿದ್ದಾರೆ, ಒಂದೇ ಸೋಮನಾಥ ಮಂದಿರವನ್ನು ಮುಸಲ್ಮಾನರು ಎಷ್ಟೊಂದು ಲೂಟಿ ಮಾಡಿದರು, ಈಗ ನೋಡಿ ಏನೂ ಉಳಿದಿಲ್ಲ. ಭಾರತದಲ್ಲಿ ಯಥೇಚ್ಛವಾಗಿ ಹಣವಿತ್ತು. ಭಾರತವನ್ನೇ ಸ್ವರ್ಗವೆಂದು ಹೇಳಲಾಗುತ್ತಿತ್ತು. ಈಗ ಇದನ್ನು ಸ್ವರ್ಗವೆಂದು ಹೇಳಲಾಗುತ್ತದೆಯೇ? ಈಗಂತೂ ನರಕವಾಗಿದೆ ಮತ್ತೆ ಸ್ವರ್ಗವಾಗುವುದು. ಸ್ವರ್ಗವನ್ನು ಯಾರು ಸ್ಥಾಪಿಸುತ್ತಾರೆ. ನರಕವನ್ನಾಗಿ ಯಾರು ಮಾಡುತ್ತಾರೆ? ಇದನ್ನು ನೀವೀಗ ಅರಿತುಕೊಂಡಿದ್ದೀರಿ. ರಾವಣ ರಾಜ್ಯವು ಎಷ್ಟು ಸಮಯ ನಡೆಯುತ್ತದೆ ಎಂಬುದನ್ನು ತಂದೆಯು ತಿಳಿಸುತ್ತಾರೆ. ರಾವಣ ರಾಜ್ಯದಲ್ಲಿ ಅನೇಕ ಧರ್ಮಗಳಾಗಿ ಬಿಡುತ್ತದೆ. ಆದರೆ ರಾಮ ರಾಜ್ಯದಲ್ಲಿ ಕೇವಲ ಸೂರ್ಯವಂಶಿ, ಚಂದ್ರವಂಶಿಯರೇ ಇರುತ್ತಾರೆ. ಈಗ ನೀವು ಓದುತ್ತಿದ್ದೀರಿ. ಈ ವಿದ್ಯೆಯು ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ಏಕೆಂದರೆ ಮನುಷ್ಯರಂತೂ ರಾವಣ ರಾಜ್ಯದಲ್ಲಿದ್ದಾರೆ. ರಾಮ ರಾಜ್ಯವು ಸತ್ಯಯುಗದಲ್ಲಿರುತ್ತದೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಯೋಗ್ಯರನ್ನಾಗಿ ಮಾಡುತ್ತೇನೆ ಮತ್ತೆ ನೀವು ಅಯೋಗ್ಯರಾಗಿ ಬಿಡುತ್ತೀರಿ. ಅಯೋಗ್ಯರೆಂದು ಏಕೆ ಹೇಳುತ್ತಾರೆ? ಏಕೆಂದರೆ ಪತಿತರಾಗಿ ಬಿಡುತ್ತೀರಿ. ದೇವತೆಗಳ ಯೋಗ್ಯತೆಯ ಮಹಿಮೆ ಮತ್ತು ಅಯೋಗ್ಯತೆಯ ಮಹಿಮೆಯನ್ನು ಹಾಡುತ್ತಾರೆ.

ತಂದೆಯು ತಿಳಿಸುತ್ತಾರೆ - ನೀವು ಯಾವಾಗ ಪೂಜ್ಯರಾಗುತ್ತೀರೋ ಆಗ ಹೊಸ ಪ್ರಪಂಚವಿತ್ತು. ಜನಸಂಖ್ಯೆ ಕಡಿಮೆಯಿತ್ತು, ನೀವೇ ಇಡೀ ವಿಶ್ವದ ಮಾಲೀಕರಾಗಿದ್ದೀರಿ, ಈಗ ನಿಮಗೆ ಬಹಳ ಖುಷಿಯಿರಬೇಕು. ಸಹೋದರ-ಸಹೋದರಿಯರಂತೂ ಆಗುತ್ತೀರಲ್ಲವೆ. ಇವರು ಮನೆ ಬಿಡಿಸುತ್ತಾರೆ ಎಂದು ಮನುಷ್ಯರು ಹೇಳುತ್ತಾರೆ ಮತ್ತೆ ಅವರೇ ಬಂದು ಶಿಕ್ಷಣವನ್ನು ನಿಮಗೆ ಕೊಡುತ್ತಾರೆ. ಇಲ್ಲಿ ಬಂದಾಗ ಜ್ಞಾನವು ಬಹಳ ಚೆನ್ನಾಗಿದೆಯೆಂದು ತಿಳಿದುಕೊಳ್ಳುತ್ತಾರೆ. ಅರ್ಥವನ್ನು ತಿಳಿಯುತ್ತಾರಲ್ಲವೆ. ಸಹೋದರ-ಸಹೋದರಿಯರಾಗಲು ಪವಿತ್ರತೆಯೆಲ್ಲಿಂದ ಬರುವುದು! ಎಲ್ಲವೂ ಪವಿತ್ರತೆಯ ಮೇಲೆ ಆಧಾರಿತವಾಗಿದೆ. ತಂದೆಯು ಬರುವುದೇ ಮಗಧ ದೇಶದಲ್ಲಿ ಅಂದರೆ ಯಾವುದು ಬಹಳ ಅವನತಿಯನ್ನು ಹೊಂದಿದ ದೇಶವಾಗಿದೆ. ಬಹಳ ಪತಿತರಾಗಿದ್ದಾರೆ. ಆಹಾರ-ಪಾನೀಯಗಳು ಕೊಳಕಾಗಿದೆಯೋ ಅಂತಹ ದೇಶದಲ್ಲಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಬಹಳ ಜನ್ಮಗಳ ಅಂತಿಮದ ಶರೀರದಲ್ಲಿಯೇ ಪ್ರವೇಶ ಮಾಡುತ್ತೇನೆ. ಇವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಲಾಸ್ಟ್ ಸೋ ಫಾಸ್ಟ್, ಫಾಸ್ಟ್ ಸೋ ಫಸ್ಟ್. ಒಬ್ಬರ ಉದಾಹರಣೆಯನ್ನೇ ತಿಳಿಸುತ್ತಾರಲ್ಲವೆ. ನಿಮ್ಮದು ರಾಜ್ಯ ಸ್ಥಾಪನೆ ಆಗಲಿದೆ. ಎಷ್ಟು ಚೆನ್ನಾಗಿ ಅರಿತುಕೊಳ್ಳುತ್ತಾ ಹೋಗುತ್ತಾರೆ. ಆಗ ನಿಮ್ಮ ಬಳಿ ಅನೇಕರು ಬರುತ್ತಾರೆ. ಈಗ ಇದು ಬಹಳ ಚಿಕ್ಕ ವೃಕ್ಷವಾಗಿದೆ. ಬಹಳಷ್ಟು ಬಿರುಗಾಳಿಗಳು ಬರುತ್ತವೆ. ಸತ್ಯಯುಗದಲ್ಲಿ ಬಿರುಗಾಳಿಯ ಮಾತೇ ಇರುವುದಿಲ್ಲ. ಮೇಲಿಂದ ಹೊಸ-ಹೊಸ ಆತ್ಮಗಳು ಬರುತ್ತಿರುತ್ತಾರೆ. ಇಲ್ಲಿ ಬಿರುಗಾಗಳಿ ಬರುತ್ತಿದ್ದಂತೆಯೇ ಕೆಳಗೆ ಬೀಳುತ್ತಾರೆ. ಸತ್ಯಯುಗದಲ್ಲಿ ಮಾಯೆಯ ಬಿರುಗಾಳಿಗಳಿರುವುದೇ ಇಲ್ಲ. ಇಲ್ಲಂತೂ ಕುಳಿತು-ಕುಳಿತಿದ್ದಂತೆಯೇ ಶರೀರ ಬಿಡುತ್ತಾರೆ ಮತ್ತು ನಿಮ್ಮದು ಮಾಯೆಯ ಜೊತೆ ಯುದ್ಧವಿದೆ. ಆದ್ದರಿಂದ ಅದೂ ಸಹ ಬಹಳ ತೊಂದರೆ ಕೊಡುತ್ತದೆ. ಸತ್ಯಯುಗದಲ್ಲಿ ಇದು ಇರುವುದಿಲ್ಲ. ಅನ್ಯ ಯಾವುದೇ ಧರ್ಮದಲ್ಲಿ ಇಂತಹ ಮಾತಿರುವುದಿಲ್ಲ. ರಾವಣ ರಾಜ್ಯ ಮತ್ತು ರಾಮ ರಾಜ್ಯವನ್ನು ಮತ್ತ್ಯಾರೂ ಅರಿತುಕೊಂಡಿಲ್ಲ. ಭಲೆ ಸತ್ಸಂಗಕ್ಕೆ ಹೋಗುತ್ತಾರೆ. ಅಲ್ಲಿ ಸಾಯುವ ಹಾಗೂ ಬದುಕುವ ಮಾತಿರುವುದಿಲ್ಲ. ಇಲ್ಲಂತೂ ಮಕ್ಕಳು ದತ್ತಾಗುತ್ತೀರಿ. ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ. ಅವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತೀರಿ. ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳತ್ತಾ ಮತ್ತೆ ಕೆಳಗೆ ಬೀಳುತ್ತೀರೆಂದರೆ ಆಸ್ತಿಯು ಸಮಾಪ್ತಿ. ಹಂಸಗಳಾಗಿದ್ದವರು ಬದಲಾಗಿ ಕೊಕ್ಕರೆಗಳಾಗಿ ಬಿಡುತ್ತಾರೆ. ಆದರೂ ಸಹ ತಂದೆಯು ದಯಾಹೃದಯಿ ಆಗಿರುವುದರಿಂದ ತಿಳಿಸುತ್ತಲೇ ಇರುತ್ತಾರೆ. ಕೆಲವರು ಮತ್ತೆ ಮೇಲೇರುತ್ತಾರೆ. ಯಾರು ಸ್ಥಿರವಾಗಿ ನಿಲ್ಲುತ್ತಾರೆಯೇ ಅವರಿಗೆ ಮಹಾವೀರ, ಹನುಮಾನ್ ಎಂದು ಹೇಳಲಾಗುತ್ತದೆ. ನೀವು ಮಹಾವೀರ-ಮಹಾವೀರಿಣಿಯರಾಗಿದ್ದೀರಿ. ನಂಬರ್ವಾರಂತೂ ಇದ್ದೇ ಇರುತ್ತಾರೆ. ಎಲ್ಲರಿಗಿಂತ ಶಕ್ತಿಶಾಲಿಯನ್ನು ಮಹಾವೀರನೆಂದು ಹೇಳುತ್ತಾರೆ. ಆದಿ ದೇವನಿಗೂ ಮಹಾವೀರನೆಂದು ಹೇಳುತ್ತಾರೆ. ಇವರಿಂದಲೇ ಈ ಮಹಾವೀರರು ಜನ್ಮ ಪಡೆಯುತ್ತಾರೆ. ಯಾರು ವಿಶ್ವದ ಮೇಲೆ ರಾಜ್ಯ ಮಾಡುತ್ತಾರೆ. ನಂಬರ್ವಾರ್ ಪುರುಷಾರ್ಥದನುಸಾರ ರಾವಣನ ಮೇಲೆ ವಿಜಯ ಪಡೆಯಲು ಪುರುಷಾರ್ಥ ಮಾಡುತ್ತಿರುತ್ತಾರೆ. ರಾವಣನೇ ಪಂಚ ವಿಕಾರಗಳಾಗಿದೆ, ಇದಂತೂ ತಿಳುವಳಿಕೆಯ ಮಾತಾಗಿದೆ. ಈಗ ನಿಮ್ಮ ಬುದ್ಧಿಯ ಬೀಗವನ್ನು ತಂದೆಯು ತೆರೆಯುತ್ತಾರೆ. ಮತ್ತೆ ಬುದ್ಧಿಯ ಬೀಗವು ಒಮ್ಮೆಲೆ ಬಂದ್ ಆಗಿ ಬಿಡುತ್ತದೆ. ಇಲ್ಲಿಯೂ ಸಹ ಇಂತಹವರಿದ್ದಾರೆ, ಯಾರ ಬುದ್ಧಿಯ ಬೀಗವು ತೆರೆಯುತ್ತದೆಯೋ ಅವರು ಹೋಗಿ ಸರ್ವೀಸ್ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ ಹೋಗಿ ಸರ್ವೀಸ್ ಮಾಡಿ, ಯಾರು ಕೆಸರಿನಲ್ಲಿ ಬಿದ್ದಿದ್ದಾರೆಯೋ ಅವರನ್ನು ಹೊರ ತೆಗೆಯಿರಿ, ಹಾಗೆಂದು ಹೇಳಿ ನೀವು ಅದರಲ್ಲಿ ಹೋಗಿ ಬೀಳುವುದಲ್ಲ. ನೀವೂ ಹೊರ ಬಂದು ಅನ್ಯರನ್ನೂ ಹೊರ ತೆಗೆಯಿರಿ. ವಿಷಯ ವೈತರಣೀ ನದಿಯಲ್ಲಿ ಅಪರಮಪಾರವಾದ ದುಃಖವಿದೆ. ಈಗ ಅಪರಮಪಾರ ಸುಖದಲ್ಲಿ ಹೋಗಬೇಕಾಗಿದೆ. ಯಾರು ಅಪರಮಪಾರ ಸುಖವನ್ನು ಕೊಡುತ್ತಾರೆಯೋ ಅವರ ಮಹಿಮೆಯನ್ನು ಹಾಡಲಾಗುತ್ತದೆ. ತಂದೆಯೂ ಹೇಳುತ್ತಾರೆ - ನೀವು ರಾವಣ ರಾಜ್ಯದಲ್ಲಿದ್ದಿರಿ. ಈಗ ಅಪಾರ ಸುಖವನ್ನು ಪಡೆಯಲು ನೀವಿಲ್ಲಿ ಬಂದಿದ್ದೀರಿ. ನಿಮಗೆ ಅಪಾರ ಸುಖವು ಸಿಗುತ್ತದೆ. ಅಂದಮೇಲೆ ಎಷ್ಟೊಂದು ಖುಷಿಯಿರಬೇಕು. ಎಚ್ಚರಿಕೆಯಿಂದಲೂ ಇರಬೇಕು. ಪದವಿಗಳಂತೂ ನಂಬರ್ವಾರ್ ಇರುತ್ತವೆ. ಪ್ರತಿಯೊಬ್ಬ ಪಾತ್ರಧಾರಿಯ ಪದವಿಯೇ ಬೇರೆಯಾಗಿದೆ. ಎಲ್ಲರಲ್ಲಿ ಈಶ್ವರನಿರಲು ಸಾಧ್ಯವಿಲ್ಲ. ತಂದೆಯು ಪ್ರತಿಯೊಂದು ಮಾತನ್ನು ತಿಳಿಸುತ್ತಾರೆ. ನೀವು ತಂದೆಯನ್ನು ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ನಂಬರ್ವಾರ್ ಪುರುಷಾರ್ಥದನುಸಾರ ಅರಿತುಕೊಳ್ಳುತ್ತೀರಿ. ನಂಬರ್ವಾರ್ ವಿದ್ಯಾಭ್ಯಾಸದನುಸಾರವೇ ಅಂಕಗಳು ಸಿಗುತ್ತವೆ. ಇದು ಬೇಹದ್ದಿನ ವಿದ್ಯೆಯಾಗಿದೆ. ಇದರಲ್ಲಿ ಮಕ್ಕಳಿಗೆ ಬಹಳ ಗಮನವಿರಬೇಕು. ಒಂದು ದಿನವೂ ವಿದ್ಯಾಭ್ಯಾಸವನ್ನು ತಪ್ಪಿಸಬಾರದು. ನಾವು ವಿದ್ಯಾರ್ಥಿಗಳಾಗಿದ್ದೇವೆ, ಭಗವಂತನು ಓದಿಸುತ್ತಾರೆ ಎಂಬ ನಶೆಯು ಮಕ್ಕಳಿಗೆ ಏರಿರಬೇಕು. ಭಗವಾನುವಾಚ, ಕೇವಲ ಅವರು ಈ ಹೆಸರನ್ನು ಬದಲಾಯಿಸಿ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ತಪ್ಪಾಗಿ ಕೃಷ್ಣ ಭಗವಾನುವಾಚ ಎಂದು ತಿಳಿದಿದ್ದಾರೆ. ಕೃಷ್ಣನು ಭಗವಂತನ ನಂತರದವರಾಗಿದ್ದಾರೆ (ನೆಕ್ಟ್ಸ್ ಟು ಗಾಡ್) ತಂದೆಯು ಯಾವ ಸ್ವರ್ಗದ ಸ್ಥಾಪನೆ ಮಾಡುತ್ತಾರೆಯೋ ಅದರಲ್ಲಿ ಮೊದಲನೆಯವರು ಕೃಷ್ಣನಾಗಿದ್ದಾರಲ್ಲವೆ. ಈ ಜ್ಞಾನವು ನಿಮಗೆ ಈಗ ಸಿಕ್ಕಿದೆ. ನಂಬರ್ವಾರ್ ಪುರುಷಾರ್ಥದನುಸಾರ ತಮ್ಮ ಕಲ್ಯಾಣವನ್ನೂ ಮಾಡಿಕೊಳ್ಳುತ್ತಾರೆ ಮತ್ತು ಅನ್ಯರ ಕಲ್ಯಾಣವನ್ನೂ ಮಾಡುತ್ತಿರುತ್ತಾರೆ. ಅವರಿಗೆ ಸರ್ವೀಸ್ ಮಾಡದೇ ಸುಖದ ಅನುಭವವಾಗುವುದಿಲ್ಲ. ನೀವು ಮಕ್ಕಳು ಜ್ಞಾನ ಮತ್ತು ಯೋಗದಲ್ಲಿ ಶಕ್ತಿಶಾಲಿಗಳಾಗಿ ಬಿಡುತ್ತೀರೆಂದರೆ ಜಿನ್ನನ ತರಹ ಕೆಲಸ ಮಾಡುತ್ತೀರಿ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಹವ್ಯಾಸವಾಗಿ ಬಿಡುತ್ತದೆ. ಮೃತ್ಯುವಿನ ಮೊದಲೇ ತೇರ್ಗಡೆಯಾಗಬೇಕಾಗಿದೆ. ಬಹಳ ಸರ್ವೀಸ್ ಮಾಡಬೇಕಾಗಿದೆ. ಕೊನೆಯಲ್ಲಂತೂ ಯುದ್ಧಗಳು ನಡೆಯುತ್ತವೆ. ಪ್ರಾಕೃತಿಕ ವಿಕೋಪಗಳೂ ಆಗುತ್ತವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಲಾಸ್ಟ್ ಸೋ ಫಸ್ಟ್ ಬರುವುದಕ್ಕಾಗಿ ಮಹಾವೀರರಾಗಿ ಪುರುಷಾರ್ಥ ಮಾಡಬೇಕಾಗಿದೆ. ಮಾಯೆಯ ಬಿರುಗಾಳಿಗಳಿಗೆ ಅಲುಗಾಡಬಾರದು. ತಂದೆಯ ಸಮಾನ ದಯಾಹೃದಯಿಯಾಗಿ ಮನುಷ್ಯರ ಬುದ್ಧಿಯ ಬೀಗವನ್ನು ತೆರೆಯುವ ಸೇವೆ ಮಾಡಬೇಕಾಗಿದೆ.

2. ಜ್ಞಾನ ಸಾಗರನಲ್ಲಿ ಪ್ರತಿನಿತ್ಯವೂ ಜ್ಞಾನ ಸ್ನಾನ ಮಾಡಿ ದೇವತೆಗಳಾಗಬೇಕಾಗಿದೆ. ಒಂದು ದಿನವೂ ಸಹ ವಿದ್ಯಾಭ್ಯಾಸವನ್ನು ತಪ್ಪಿಸಬಾರದು. ನಾವು ಭಗವಂತನ ವಿದ್ಯಾರ್ಥಿಗಳಾಗಿದ್ದೇವೆಂಬ ನಶೆಯಲ್ಲಿರಬೇಕಾಗಿದೆ.

ವರದಾನ:
ಹೃದಯದಿಂದ “ನನ್ನ ಬಾಬಾ” ಎಂದು ಹೇಳುತ್ತಾ ಸತ್ಯವಾದ ವ್ಯಾಪಾರ ಮಾಡುವಂತಹ ಬಲಿಹಾರಿ ಅಥವಾ ಮರ್ಜೀವಾ ಭವ.

ಬ್ರಹ್ಮಾಕುಮಾರ ಕುಮಾರಿ ಆಗುವುದು ಎಂದರೆ ಬಲಿಹಾರಿಯಾಗುವುದು. ಯಾವಾಗ ಹೃದಯದಿಂದ ಹೇಳುವಿರಿ “ನನ್ನ ಬಾಬಾ” ಆಗ ಬಾಬಾ ಸಹ ಹೇಳುತ್ತಾರೆ, ಮಕ್ಕಳೇ ಎಲ್ಲಾ ನಿಮ್ಮದು ಎಂದು. ಇಲ್ಲಾ ಪ್ರವೃತ್ತಿಯಲ್ಲಿರಲಿ, ಇಲ್ಲ ಸೆಂಟರ್ ನಲ್ಲಿರಲಿ ಆದರೆ ಯಾರು ಹೃದಯದಿಂದ ಹೇಳುತ್ತಾರೆ ನನ್ನ ಬಾಬಾ, ಎಂದಾಗ ತಂದೆಯು ತನ್ನವರನ್ನಾಗಿ ಮಾಡಿಕೊಂಡರು, ಇದು ಹೃದಯದ ವ್ಯಾಪಾರವಾಗಿದೆ, ಮುಖದ ಸ್ಥೂಲ ವ್ಯಾಪಾರವಲ್ಲ. ಬಲಿಹಾರಿ ಎಂದರೆ ಶ್ರೀಮತದ ಗೆರೆಯ ಒಳಗೆ ಇರುವಂತಹವರು. ಈ ರೀತಿ ಬಲಿಹಾರಿಯಾಗುವವರೇ ಮರ್ಜೀವಾ ಬ್ರಾಹ್ಮಣರಾಗಿದ್ದಾರೆ.

ಸ್ಲೋಗನ್:
ಒಂದುವೇಳೆ ನನ್ನದು ಎನ್ನುವ ಶಬ್ದದ ಜೊತೆ ಪ್ರೀತಿಯಿದ್ದಲ್ಲಿ ಅನೇಕ ನನ್ನದು ಎನ್ನುವುದು ಬಾಬಾ ಎನ್ನುವುದರಲ್ಲಿ ಸಮಾವೇಶವಾಗಿ ಬಿಡುವುದು.