04.09.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಧರಣಿಯ ಚೈತನ್ಯ ನಕ್ಷತ್ರಗಳಾಗಿದ್ದೀರಿ, ನೀವು ಇಡೀ ವಿಶ್ವಕ್ಕೆ ಬೆಳಕನ್ನು ನೀಡಬೇಕಾಗಿದೆ.”
ಪ್ರಶ್ನೆ:
ಶಿವ ತಂದೆಯು
ನೀವು ಮಕ್ಕಳ ಶರೀರವನ್ನು ಕಂಚನವನ್ನಾಗಿ ಹೇಗೆ ಮಾಡುತ್ತಾರೆ?
ಉತ್ತರ:
ಬ್ರಹ್ಮಾತಾಯಿಯ
ಮೂಲಕ ನಿಮಗೆ ಜ್ಞಾನದ ಪಾಲನೆ ಕೊಡಿಸಿ ನಿಮ್ಮ ಕಾರ್ಯವನ್ನು ಕಂಚನವನ್ನಾಗಿ ಮಾಡಿ ಬಿಡುತ್ತಾರೆ.
ಆದ್ದರಿಂದ ಅವರ ಮಹಿಮೆಯಲ್ಲಿ ತ್ವಮೇವ ಮಾತಾಶ್ಚಯ ಪಿತಾ... ಎಂದು ಹಾಡುತ್ತಾರೆ. ಈಗ ನೀವು ಬ್ರಹ್ಮಾ
ತಾಯಿಯ ಮೂಲಕ ಜ್ಞಾನದ ಹಾಲನ್ನು ಕುಡಿಯುತ್ತಿದ್ದೀರಿ. ಇದರಿಂದ ನಿಮ್ಮ ಎಲ್ಲಾ ಪಾಪಗಳು
ಪರಿಹಾರವಾಗುತ್ತದೆ. ಕಂಚನವಾಗಿ ಬಿಡುತ್ತೀರಿ.
ಓಂ ಶಾಂತಿ.
ಆತ್ಮಿಕ ತಂದೆಯ ಕುಳಿತು ತಿಳಿಸುತ್ತಾರೆ - ಹೇಗೆ ಆಕಾಶದಲ್ಲಿ ನಕ್ಷತ್ರಗಳಿವೆ ಹಾಗೆಯೇ ನೀವು
ಮಕ್ಕಳಿಗೂ ಧರಣಿಯ ನಕ್ಷತ್ರಗಳೆಂದು ಗಾಯನ ಮಾಡಲಾಗುತ್ತದೆ. ಅವುಗಳನ್ನೂ ನಕ್ಷತ್ರ ದೇವತೆಗಳೆಂದು
ಹೇಳಲಾಗುತ್ತದೆ. ವಾಸ್ತವದಲ್ಲಿ ಅವು ಯಾವುದೇ ದೇವತೆಗಳಲ್ಲ, ನೀವು ಅವುಗಳಿಗಿಂತಲೂ ಮಹಾನ್
ಬಲಶಾಲಿಗಳಾಗಿದ್ದೀರಿ. ಏಕೆಂದರೆ ನೀವು ನಕ್ಷತ್ರಗಳ ಇಡೀ ವಿಶ್ವವನ್ನು ಪ್ರಕಾಶವನ್ನಾಗಿ ಮಾಡುತ್ತೀರಿ.
ನೀವೇ ದೇವತೆಗಳಾಗುವವರಿದ್ದೀರಿ. ನಿಮ್ಮದೇ ಉತ್ಥಾನ ಮತ್ತು ಪಥನವಾಗುತ್ತದೆ. ಆ ನಕ್ಷತ್ರಗಳಂತೂ
ಕೇವಲ ಈ ಸೃಷ್ಟಿ ನಾಟಕದ ರಂಗಮಂಚಕ್ಕೆ ಬೆಳಕನ್ನು ಕೊಡುತ್ತವೆ. ಅದಕ್ಕೆ ದೇವತೆಯೆಂದು ಹೇಳುವುದಿಲ್ಲ.
ನೀವು ದೇವತೆಗಳಾಗುತ್ತಿದ್ದೀರಿ. ನೀವು ಇಡೀ ವಿಶ್ವವನ್ನು ಬೆಳಗುವವರಾಗಿದ್ದೀರಿ. ಈಗ ಇಡೀ
ವಿಶ್ವದಲ್ಲಿ ಘೋರ ಅಂಧಕಾರವಿದೆ. ಪತಿತರಾಗಿ ಬಿಟ್ಟಿದ್ದಾರೆ. ಈಗ ತಂದೆಯು ನೀವು ಮಧುರಾತಿ ಮಧುರ
ಮಕ್ಕಳನ್ನು ದೇವತೆಗಳನ್ನಾಗಿ ಮಾಡುತ್ತಾರೆ. ಮನುಷ್ಯರು ಎಲ್ಲರನ್ನೂ ದೇವತೆಗಳೆಂದು ತಿಳಿಯುತ್ತಾರೆ.
ಸೂರ್ಯನಿಗೂ ದೇವತೆಯೆಂದು ಹೇಳಿ ಬಿಡುತ್ತಾರೆ. ಕೆಲವೊಂದೆಡೆ ಸೂರ್ಯನ ಬಾವುಟವನ್ನೂ ಹಾಕುತ್ತಾರೆ.
ತಮ್ಮನ್ನು ಸೂರ್ಯವಂಶಿಗಳೆಂದು ಕರೆಸಿಕೊಳ್ಳುತ್ತಾರೆ. ವಾಸ್ತವದಲ್ಲಿ ನೀವು
ಸೂರ್ಯವಂಶಿಯರಾಗಿದ್ದೀರಲ್ಲವೆ. ತಂದೆಯು ಬಂದು ತಿಳಿಸುತ್ತಾರೆ - ಭಾರತದಲ್ಲಿ ಘೋರ ಅಂಧಕಾರವಿದೆ.
ಈಗ ಭಾರತದಲ್ಲಿಯೇ ಪ್ರಕಾಶತೆಯು ಬೇಕು. ತಂದೆಯು ನೀವು ಮಕ್ಕಳಿಗೆ ಜ್ಞಾನ ಅಂಜನವನ್ನು ಕೊಟ್ಟಿದ್ದಾರೆ.
ನೀವು ಅಜ್ಞಾನ ನಿದ್ರೆಯಲ್ಲಿ ಮಲಗಿ ಬಿಟ್ಟಿದ್ದೀರಿ. ಈಗ ತಂದೆಯು ಬಂದು ಪುನಃ ಜಾಗೃತಗೊಳಿಸುತ್ತಾರೆ
ಮತ್ತು ತಿಳಿಸುತ್ತಾರೆ - ನಾಟಕದ ಪ್ಲಾನಿನುಸಾರ ಕಲ್ಪ-ಕಲ್ಪ ಪುರುಷೋತ್ತಮ ಸಂಗಮಯುಗದಲ್ಲಿ ನಾನು
ಪುನಃ ಬರುತ್ತೇನೆ. ಈ ಪುರುಷೋತ್ತಮ ಸಂಗಮಯುಗವು ಯಾವುದೇ ಶಾಸ್ತ್ರದಲ್ಲಿಲ್ಲ. ಈ ಯುಗವನ್ನು ಈಗ ನೀವು
ಮಕ್ಕಳೇ ಅರಿತುಕೊಂಡಿದ್ದೀರಿ. ಈಗ ನೀವು ನಕ್ಷತ್ರಗಳು ನಂತರ ನೀವೇ ದೇವತೆಗಳಾಗುತ್ತೀರಿ. ನಕ್ಷತ್ರ
ದೇವತಾಯ ನಮಃ ಎಂದು ನಿಮಗೆ ಹೇಳುತ್ತಾರೆ. ಈಗ ನೀವು ಪೂಜಾರಿಗಳಿಂದ ಪೂಜ್ಯರಾಗುತ್ತೀರಿ.
ಸತ್ಯಯುಗದಲ್ಲಿ ನೀವು ಪೂಜ್ಯರಾಗುತ್ತೀರಿ. ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆಯಲ್ಲವೆ. ಇದಕ್ಕೆ
ಆತ್ಮಿಕ ವಿದ್ಯೆಯೆಂದು ಹೇಳಲಾಗುತ್ತದೆ. ಎಂದೂ ಯಾರದೂ ಜಗಳವಾಗುವುದಿಲ್ಲ. ಯುದ್ಧವಾಗುವುದಿಲ್ಲ.
ಶಿಕ್ಷಕರು ಸಾಧಾರಣ ರೀತಿಯಿಂದ ಓದಿಸುತ್ತಾರೆ. ಮಕ್ಕಳೂ ಸಹ ಸಾಧಾರಣ ರೀತಿಯಲ್ಲಿ ಓದುತ್ತೀರಿ.
ಇದರಲ್ಲಿ ಎಂದೂ ಯಾರಿಗೂ ಜಗಳ-ಕಲಹದ ಮಾತಿಲ್ಲ. ನಾನು ಭಗವಂತನಾಗಿದ್ದೇನೆ ಎಂಬುದನ್ನು ಈ
ಬ್ರಹ್ಮಾರವರೂ ಸಹ ಹೇಳುವುದಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಓದಿಸುವವರು ನಿರಾಕಾರ
ಶಿವ ತಂದೆಯಾಗಿದ್ದಾರೆ. ಇವರಿಗೆ ತಮ್ಮ ಶರೀರವಿಲ್ಲ. ನಾನು ಈ ರಥವನ್ನು ಲೋನ್ ಆಗಿ ಪಡೆಯುತ್ತೇನೆಂದು
ಹೇಳುತ್ತಾರೆ. ಇವರಿಗೆ ಭಗೀರಥನೆಂದೂ ಏಕೆ ಹೇಳುತ್ತಾರೆ? ಏಕೆಂದರೆ ಬಹಳ-ಬಹಳ ಭಾಗ್ಯಶಾಲಿ
ರಥವಾಗಿದ್ದಾರೆ. ಇವರೇ ಮತ್ತೆ ವಿಶ್ವದ ಮಾಲೀಕರನಾಗುತ್ತಾರೆಂದರೆ ಭಗೀರಥನಾದರಲ್ಲವೆ. ಆದುದರಿಂದ
ಎಲ್ಲದರ ಅರ್ಥವನ್ನು ತಿಳಿಯಬೇಕಲ್ಲವೆ. ಇದು ಎಲ್ಲದಕ್ಕಿಂತ ದೊಡ್ಡ ವಿದ್ಯೆಯಾಗಿದೆ. ಪ್ರಪಂಚದಲ್ಲಂತೂ
ಅಸತ್ಯವೇ ಅಸತ್ಯವಿದೆ. ಗಾದೆ ಮಾತಿದೆಯಲ್ಲವೆ - ಸತ್ಯದ ದೋಣಿಯು ಅಲುಗಾಡುತ್ತದೆ. ಆದರೆ
ಮುಳುಗುವುದಿಲ್ಲ.... ಇತ್ತೀಚೆಗಂತೂ ಅನೇಕ ಪ್ರಕಾರದ ಭಗವಂತರಾಗಿ ಬಿಟ್ಟಿದ್ದಾರೆ. ತಮ್ಮನ್ನು
ಭಗವಂತನೆಂದು ಹೇಳಿಕೊಳ್ಳುವುದು. ಬಿಡಿ ಆದರೆ ಕಲ್ಲು-ಮುಳ್ಳೂ ಎಲ್ಲದಕ್ಕೂ ಹೇಳಿ ಬಿಡುತ್ತಾರೆ.
ಭಗವಂತನನ್ನು ಎಷ್ಟೊಂದು ಅಲೆಸಿದ್ದಾರೆ. ತಂದೆಯು ಕುಳಿತು ತಿಳಿಸುತ್ತಾರೆ - ಹೇಗೆ ಲೌಕಿಕ ತಂದೆಯೂ
ಸಹ ಮಕ್ಕಳಿಗೆ ತಿಳಿಸುತ್ತಾರೆ. ಆದರೆ ಆ ಲೌಕಿಕ ತಂದೆಯು ತಂದೆ, ಶಿಕ್ಷಕ ಮತ್ತು ಸದ್ಗುರು ಒಬ್ಬರೇ
ಆಗಿರುವುದಿಲ್ಲ. ಮೊದಲು ತಂದೆಯ ಬಳಿ ಜನ್ಮ ಪಡೆಯುತ್ತಾರೆ. ನಂತರ ಸ್ವಲ್ಪ ದೊಡ್ಡವರಾದ ಮೇಲೆ ಓದಿಸಲು
ಶಿಕ್ಷಕರು ಬೇಕು ಮತ್ತು ಓದಿದ ನಂತರ ಗುರುಗಳು ಬೇಕು ಆದರೆ ಇಲ್ಲಂತೂ ಒಬ್ಬರೇ ತಂದೆ, ಶಿಕ್ಷಕ,
ಸದ್ಗುರುವಾಗಿದ್ದಾರೆ. ನಾನು ನೀವಾತ್ಮಗಳ ತಂದೆಯಾಗಿದ್ದೇನೆಂದು ಹೇಳುತ್ತಾರೆ. ಆತ್ಮನೇ ಓದುತ್ತದೆ.
ಆತ್ಮಕ್ಕೆ ಆತ್ಮವೆಂದು ಹೇಳಲಾಗುತ್ತದೆ. ಬಾಕಿ ಶರೀರಗಳಿಗೆ ಅನೇಕ ಹೆಸರುಗಳಿವೆ. ವಿಚಾರ ಮಾಡಿ - ಇದು
ಬೇಹದ್ದಿನ ನಾಟಕವಾಗಿದೆ. ಏನು ಮಾಡಿ-ಮಾಡಲ್ಪಟ್ಟಿದೆಯೋ ಅದೇ ನಡೆಯುತ್ತಿದೆ. ಯಾವುದೇ ಹೊಸ ಮಾತಿಲ್ಲ.
ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಸುತ್ತುತ್ತಲೇ ಇರುತ್ತದೆ. ಆತ್ಮಗಳು
ಪಾತ್ರಧಾರಿಗಳಾಗಿದ್ದಾರೆ. ಆತ್ಮಗಳು ಎಲ್ಲಿರುತ್ತಾರೆ? ನಾವು ನಮ್ಮ ಮನೆ ಪರಮಧಾಮದಲ್ಲಿರುತ್ತೇವೆ.
ನಂತರ ನಾವಿಲ್ಲಿ ಬೇಹದ್ದಿನ ಪಾತ್ರವನ್ನಭಿನಯಿಸಲು ಬರುತ್ತೇವೆಂದು ಹೇಳುತ್ತೀರಿ. ತಂದೆಯಂತೂ ಸದಾ
ಪರಮ ಧರ್ಮದಲ್ಲಿಯೇ ಇರುತ್ತಾರೆ. ಅವರು ಪುನರ್ಜನ್ಮದಲ್ಲಿ ಬರುವುದಿಲ್ಲ, ಈಗ ನಿಮಗೆ ರಚಯಿತ ತಂದೆಯು
ತನ್ನ ಮತ್ತು ರಚನೆಯ ಸಾರವನ್ನು ತಿಳಿಸಿ ಕೊಡುತ್ತಾರೆ. ಸ್ವದರ್ಶನ ಚಕ್ರಧಾರಿ ಮಕ್ಕಳೇ ಎಂದು ನಿಮಗೆ
ಹೇಳುತ್ತಾರೆ. ಇದರ ಅರ್ಥವನ್ನು ಮತ್ತ್ಯಾರು ಅರಿತುಕೊಳ್ಳುವುದಿಲ್ಲ. ಏಕೆಂದರೆ ಸ್ವದರ್ಶನ
ಚಕ್ರಧಾರಿಯು ವಿಷ್ಣುವಾಗಿದ್ದಾರೆ. ಇವರು ಮತ್ತೆ ಮನುಷ್ಯರಿಗೆ ಏಕೆ ಹೇಳುತ್ತಾರೆ ಎಂದು
ತಿಳಿಯುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ಶೂದ್ರರಾಗಿದ್ದಾಗಲೇ ಮನುಷ್ಯರಾಗಿದ್ದೀರಿ. ಈಗ
ಬ್ರಾಹ್ಮಣರಾಗಿದ್ದೀರಿ. ಮನುಷ್ಯರೇ ಆಗಿದ್ದೀರಿ ಮತ್ತೆ ದೇವತೆಗಳಾಗುತ್ತೀರೆಂದರೂ ಸಹ ಮನುಷ್ಯರಾಗಿಯೇ
ಇರುತ್ತೀರಿ ಆದರೆ ಗುಣಗಳು ಬದಲಾಗುತ್ತವೆ. ರಾವಣನು ಬಂದಾಗ ನಿಮ್ಮ ನಡುವಳಿಕೆಯು ಎಷ್ಟು ಕೆಟ್ಟು
ಹೋಗುತ್ತದೆ. ಸತ್ಯಯುಗದಲ್ಲಿ ಈ ವಿಕಾರಗಳು ಇರುವುದಿಲ್ಲ.
ಶಿವ ತಂದೆಯು ಅಮರ ಕಥೆಯನ್ನು ತಿಳಿಸುತ್ತಿದ್ದಾರೆ. ಭಕ್ತಿಮಾರ್ಗದಲ್ಲಿ ನೀವು ಎಷ್ಟೊಂದು ಕಥೆಗಳನ್ನು
ಕೇಳಿರುತ್ತೀರಿ. ಅಮರನಾಥನು ಪಾರ್ವತಿಗೆ ಕಥೆಯನ್ನು ತಿಳಿಸಿದರೆಂದು ಹೇಳುತ್ತಾರೆ. ಈಗ ಆ
ಮನುಷ್ಯರಿಗಂತೂ ಶಂಕರನು (ಮನುಷ್ಯ) ತಿಳಿಸುತ್ತಾರಲ್ಲವೆ, ಶಿವನು ಹೇಗೆ ತಿಳಿಸುತ್ತಾರೆ? ಅದನ್ನು
ಕೇಳಲು ಎಷ್ಟೊಂದು ಮನುಷ್ಯರು ಹೋಗುತ್ತಾರೆ. ಈ ಭಕ್ತಿಮಾರ್ಗದ ಮಾತುಗಳನ್ನು ತಂದೆಯು ಕುಳಿತು
ತಿಳಿಸುತ್ತಾರೆ. ಭಕ್ತಿಯು ಕೆಟ್ಟದ್ದೆಂದು ತಂದೆಯು ಹೇಳುವುದಿಲ್ಲ. ಇದಂತೂ ನಾಟಕವು ಅನಾದಿಯಾಗಿದೆ.
ಇದರ ಬಗ್ಗೆ ತಿಳಿಸಲಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ಮೊದಲನೆಯದಾಗಿ, ತನ್ನನ್ನು
ಆತ್ಮನೆಂದು ತಿಳಿಯಿರಿ. ಮೂಲ ಮಾತೇ ಇದಾಗಿದೆ - ಭಗವಾನುವಾಚ, ಮನ್ಮನಾಭವ. ಇದರ ಅರ್ಥವೇನು? ಇದನ್ನು
ತಂದೆಯು ಕುಳಿತು ಮುಖದಿಂದ ತಿಳಿಸುತ್ತಾರೆ. ಆದ್ದರಿಂದ ಇದು ಗೋಮುಖವಾಗಿದೆ. ಇದನ್ನೂ ತಿಳಿಸಿದ್ದಾರೆ
- ತ್ವಮೇವ ಮಾತಾಶ್ಚ ಪಿತಾ.... ಅವರಿಗೇ ಹೇಳುತ್ತಾರೆ ಅಂದಾಗ ತಂದೆಯು ಈ ಬ್ರಹ್ಮಾ ತಾಯಿಯ ಮೂಲಕ
ನಿಮ್ಮನ್ನು ದತ್ತು ಮಾಡಿಕೊಂಡಿದ್ದಾರೆ. ಶಿವ ತಂದೆಯು ತಿಳಿಸುತ್ತಾರೆ - ನಾನು ಈ ಮುಖದ ಮೂಲಕ ನೀವು
ಮಕ್ಕಳಿಗೆ ಜ್ಞಾನದ ಹಾಲನ್ನು ಕುಡಿಸುತ್ತೇನೆ. ಇದರಿಂದ ನಿಮ್ಮ ಪಾಪಗಳೆಲ್ಲವೂ ಭಸ್ಮವಾಗಿ ನಿಮ್ಮ
ಆತ್ಮವು ಕಂಚನವಾಗುತ್ತದೆ. ಆಗ ಕಾಯವೂ ಕಂಚನವಾದುದೇ ಸಿಗುತ್ತದೆ. ಆತ್ಮಗಳು ಸಂಪೂರ್ಣ ಪವಿತ್ರ
ಕಂಚನವಾಗಿ ಬಿಡುತ್ತಾರೆ. ನಂತರ ನಿಧಾನ-ನಿಧಾನವಾಗಿ ಏಣಿಯನ್ನಿಳಿಯುತ್ತಾರೆ. ಈಗ ನೀವು
ಅರಿತುಕೊಂಡಿದ್ದೀರಿ, ನಾವಾತ್ಮಗಳೂ ಸಹ ಕಂಚನವಾಗಿದ್ದೇವು. ಶರೀರವೂ ಕಂಚನವಾಗಿತ್ತು, ಮತ್ತೆ
ಡ್ರಾಮಾನುಸಾರ ನಾವು 84 ಜನ್ಮಗಳ ಚಕ್ರದಲ್ಲಿ ಬಂದಿದ್ದೇವೆ. ಈಗ ಕಂಚನವಿಲ್ಲ. ಈಗಂತೂ ಆತ್ಮವು ಕೇವಲ
9 ಕ್ಯಾರೇಟ್ನಷ್ಟು ಶಕ್ತಿಯಿದೆ ಎಂದು ಹೇಳಬಹುದು. ಇನ್ನು ಸ್ವಲ್ಪ ಪರ್ಸೆಂಟ್ ಮಾತ್ರವೇ ಉಳಿದಿದೆ.
ಪೂರ್ಣ ಪ್ರಾಯಲೋಪವೆಂದು ಹೇಳುವುದಿಲ್ಲ. ಅಲ್ಪಸ್ವಲ್ಪ ಶಾಂತಿಯಿರುತ್ತದೆ. ತಂದೆಯು ಈ ಚಿಹ್ನೆಯನ್ನು
ತೋರಿಸಿದ್ದಾರೆ. ಲಕ್ಷ್ಮೀ-ನಾರಾಯಣರ ಚಿತ್ರವು ನಂಬರ್ವನ್ ಆಗಿದೆ. ಈಗ ನಿಮ್ಮ ಬುದ್ಧಿಯಲ್ಲಿ ಪೂರ್ಣ
ಚಕ್ರವು ಬಂದು ಬಿಟ್ಟಿದೆ. ತಂದೆಯ ಪರಿಚಯವೂ ಬಂದು ಬಿಟ್ಟಿದೆ. ಈಗ ನಿಮ್ಮ ಕಾಯವು ಪೂರ್ಣ
ಕಂಚನವಾಗಿಲ್ಲ. ಆದರೆ ತಂದೆಯ ಪರಿಚಯವಂತೂ ಬುದ್ಧಿಯಲ್ಲಿದೆಯಲ್ಲವೆ. ತಂದೆಯು ಕಂಚನವಾಗುವ
ಯುಕ್ತಿಯನ್ನು ತಿಳಿಸುತ್ತಾರೆ. ಆತ್ಮದಲ್ಲಿ ಇರುವಂತಹ ತುಕ್ಕು ಹೇಗೆ ಬಿಟ್ಟು ಹೋಗುವುದು? ಅದಕ್ಕಾಗಿ
ನೆನಪಿನ ಯಾತ್ರೆಯು ಬೇಕು. ಇದಕ್ಕೆ ಯುದ್ಧದ ಮೈದಾನವೆಂದು ಹೇಳಲಾಗುತ್ತದೆ. ನೀವು ಪ್ರತಿಯೊಬ್ಬರೂ
ಒಂಟಿಯಾಗಿ ಯುದ್ಧದ ಮೈದಾನದಲ್ಲಿ ಸಿಪಾಯಿಗಳಾಗಿದ್ದೀರಿ. ಈಗ ಪ್ರತಿಯೊಬ್ಬರೂ ಎಷ್ಟು ಸಾಧ್ಯವೋ ಅಷ್ಟು
ಪುರುಷಾರ್ಥ ಮಾಡಿ, ಪುರುಷಾರ್ಥ ಮಾಡುವುದಂತೂ ವಿದ್ಯಾರ್ಥಿಯ ಕೆಲಸವಾಗಿದೆ. ಎಲ್ಲಿಗೆ ಹೋಗಿ ಪರಸ್ಪರ
ಪ್ರತಿಯೊಬ್ಬರೂ ಮನ್ಮನಾಭವದ ಎಚ್ಚರಿಕೆಯನ್ನು ನೀಡುತ್ತಾ ಇರಿ. ಶಿವ ತಂದೆಯ ನೆನಪಿದೆಯೇ, ಒಬ್ಬರು
ಇನ್ನೊಬ್ಬರಿಗೆ ಇದೇ ನೆನಪು ತರಿಸಬೇಕಾಗಿದೆ. ತಂದೆಯ ವಿದ್ಯೆಯು ಚಮತ್ಕಾರವಿದೆ. ಆದ್ದರಿಂದ ಒಂದು
ಸೆಕೆಂಡಿನಲ್ಲಿ ಕಾಯವು ಕಂಚನವಾಗಿ ಬಿಡುತ್ತದೆ. ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ. ತಂದೆಯ
ಮಕ್ಕಳಾದಿರೆಂದರೆ ವಿಶ್ವದ ಮಾಲೀಕರಾಗಿ ಬಿಟ್ಟಿರಿ. ನಂತರ ವಿಶ್ವದ ರಾಜ್ಯಭಾಗ್ಯ. ಅದರಲ್ಲಿ
ಶ್ರೇಷ್ಠ ಪದವಿಯನ್ನು ಪಡೆಯುವುದೇ ಪುರುಷಾರ್ಥ ಮಾಡುವುದಾಗಿದೆ ಆದರೆ ಸೆಕೆಂಡಿನಲ್ಲಿ ಜೀವನ್ಮುಕ್ತಿ
ಸರಿಯಲ್ಲವೆ. ಪುರುಷಾರ್ಥ ಮಾಡುವುದು ಪ್ರತಿಯೊಬ್ಬರ ಮೇಲಿದೆ. ನೀವು ತಂದೆಯನ್ನು ನೆನಪು ಮಾಡುತ್ತಾ
ಇರಿ ಆಗ ಆತ್ಮವು ಪವಿತ್ರವಾಗಿ ಬಿಡುವುದು. ಸತೋಪ್ರಧಾನರಾಗಿ ಸತೋಪ್ರಧಾನ ಪ್ರಪಂಚದ ಮಾಲೀಕರಾಗಿ
ಬಿಡುತ್ತೀರಿ. ನೀವು ಎಷ್ಟು ಬಾರಿ ತಮೋಪ್ರಧಾನದಿಂದ ಸತೋಪ್ರಧಾನರಾಗಿದ್ದೀರಿ. ಈ ಚಕ್ರವು
ಸುತ್ತುತ್ತಾ ಇರುತ್ತದೆ. ಇದಕ್ಕೆಂದೂ ಅಂತ್ಯವು ಬರುವುದಿಲ್ಲ. ತಂದೆಯು ಎಷ್ಟು ಚೆನ್ನಾಗಿ
ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಬರುತ್ತೇನೆ. ನೀವು ಮಕ್ಕಳೇ ನಮಗೆ ಛೀ ಛೀ ಪ್ರಪಂಚದಲ್ಲಿ
ನಿಮಂತ್ರಣ ಕೊಡುತ್ತೀರಿ. ನಿಮಂತ್ರಣ ಕೊಡುತ್ತೀರಾ? ನಾವು ಪತಿತರಾಗಿ ಬಿಟ್ಟಿದ್ದೇವೆ. ನಮ್ಮನ್ನು
ಬಂದು ಪಾವನ ಮಾಡಿ ಎಂದು ಹೇಳುತ್ತೀರಿ. ವಾಹ್ ನಿಮ್ಮ ನಿಮಂತ್ರಣವೇ! ನಮ್ಮನ್ನು ಶಾಂತಿಧಾಮ,
ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತೀರೆಂದರೆ ನಾನು ನಿಮ್ಮ ವಿಧೇಯ ಸೇವಕನಾಗಿದ್ದೇನೆ. ಇದೂ ಸಹ
ನಾಟಕದ ಆಟವಾಗಿದೆ. ನಾವು ಕಲ್ಪ-ಕಲ್ಪವೂ ಅದನ್ನೇ ಓದುತ್ತೇವೆ. ಪಾತ್ರವನ್ನಭಿನಯಿಸುತ್ತೇವೆಂದು
ತಿಳಿಯುತ್ತೀರಿ. ಆತ್ಮವೇ ಪಾತ್ರವನ್ನಭಿನಯಿಸುತ್ತದೆ. ಇಲ್ಲಿ ಕುಳಿತಿದ್ದರೂ ಸಹ ತಂದೆಯು
ಆತ್ಮಗಳನ್ನೇ ನೋಡುತ್ತಾರೆ, ನಕ್ಷತ್ರಗಳನ್ನೇ ನೋಡುತ್ತಾರೆ. ಹೇಗೆ ನಕ್ಷತ್ರಗಳು ಚಂದ್ರನ
ಹತ್ತಿರದಲ್ಲಿರುತ್ತವೆ. ನೀವೂ ಸಹ ಯೋಗಬಲದಿಂದ ಚೆನ್ನಾಗಿ ಪವಿತ್ರರಾಗುತ್ತೀರೆಂದರೆ ಮಿನುಗುತ್ತೀರಿ.
ತಂದೆಯೂ ಸಹ ಹೇಳುತ್ತಾರೆ - ಮಕ್ಕಳಲ್ಲಿ ಯಾರು ಬಹಳ ಒಳ್ಳೆಯ ನಕ್ಷತ್ರವಾಗಿದ್ದಾರೆಯೋ ಅವರಿಗೆ
ಹೂಗಳನ್ನು ಕೊಡಿ. ಮಕ್ಕಳೂ ಸಹ ಒಬ್ಬರು ಇನ್ನೊಬ್ಬರನ್ನು ಅರಿತುಕೊಂಡಿರುತ್ತಾರಲ್ಲವೆ. ಅವಶ್ಯವಾಗಿ
ಕೆಲವು ನಕ್ಷತ್ರಗಳು ಬಹಳ ತೀಕ್ಷ್ಣವಾಗಿರುತ್ತವೆ. ಕೆಲವು ಕಡಿಮೆ. ಆ ನಕ್ಷತ್ರಗಳಿಗೆ ದೇವತೆಗಳೆಂದು
ಹೇಳುವುದಿಲ್ಲ. ನೀವು ಮನುಷ್ಯರಾಗಿದ್ದೀರಿ. ಆದರೆ ತಂದೆಯು ನೀವಾತ್ಮಗಳನ್ನು ಪವಿತ್ರರನ್ನಾಗಿ ಮಾಡಿ
ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯು ಆಸ್ತಿಯಲ್ಲಿ ಎಷ್ಟೊಂದು ಶಕ್ತಿಯನ್ನು ಕೊಡುತ್ತಾರೆ.
ಸರ್ವಶಕ್ತಿವಂತ ಅಲ್ಲವೆ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳಿಗೆ ಎಷ್ಟೊಂದು ಶಕ್ತಿಯನ್ನು
ಕೊಡುತ್ತೇನೆ. ಗಾಯನವೂ ಮಾಡುತ್ತೀರಲ್ಲವೆ - ಬಾಬಾ ವಿದ್ಯೆಯಿಂದ ನಮ್ಮನ್ನು ಮನುಷ್ಯರಿಂದ
ದೇವತೆಗಳನ್ನಾಗಿ ಮಾಡುತ್ತೀರಿ, ವಾಹ್! ಈ ರೀತಿ ಮತ್ತ್ಯಾರೂ ಮಾಡುವುದಿಲ್ಲ. ವಿದ್ಯೆಯು ಆದಾಯದ
ಮೂಲವಾಗಿದೆಯಲ್ಲವೆ. ಇಡೀ ಆಕಾಶ, ಧರಣಿ ಎಲ್ಲವೂ ನಮ್ಮದಾಗಿ ಬಿಡುತ್ತದೆ. ಯಾರು ಕಸಿದುಕೊಳ್ಳಲು
ಸಾಧ್ಯವಿಲ್ಲ. ಅದಕ್ಕೆ ಅಡೋಲ ರಾಜ್ಯವೆಂದು ಹೇಳಲಾಗುತ್ತದೆ. ಯಾರೂ ಖಂಡಿಸಲು ಸಾಧ್ಯವಿಲ್ಲ. ಯಾರೂ
ಸುಡಲೂ ಸಾಧ್ಯವಿಲ್ಲ. ಅಂದಮೇಲೆ ಇಂತಹ ತಂದೆಯ ಶ್ರೀಮತದಂತೆ ನಡೆಯಬೇಕಲ್ಲವೆ. ಪ್ರತಿಯೊಬ್ಬರೂ ತನ್ನ
ಪುರುಷಾರ್ಥ ಮಾಡಬೇಕಾಗಿದೆ. ಮಕ್ಕಳು ಚಿತ್ರದ ಮೂಲಕ ತಮ್ಮ ಜೊತೆಗಾರರಿಗೆ ತಿಳಿಸಬೇಕೆಂದು ಮ್ಯೂಸಿಯಂ
ಇತ್ಯಾದಿಗಳನ್ನು ಮಾಡಿಸುತ್ತೀರಿ. ತಂದೆಯು ಸಲಹೆ ನೀಡುತ್ತಿರುತ್ತಾರೆ. ಯಾವ ಚಿತ್ರಗಳು ಬೇಕೋ ಭಲೆ
ಮಾಡಿಸಿ, ಎಲ್ಲರ ಬುದ್ಧಿಯು ಕೆಲಸ ಮಾಡುತ್ತದೆ. ಮನುಷ್ಯರ ಕಲ್ಯಾಣಕ್ಕಾಗಿಯೇ ಇವುಗಳನ್ನು
ಮಾಡಿಸಲಾಗುತ್ತದೆ. ನಿಮಗೆ ಗೊತಿದೆ. ಸೇವಾಕೇಂದ್ರಕ್ಕೆ ಯಾರಾದರೂ ಬಂದರೆ ಇಂತಹ ಯಾವ ಯುಕ್ತಿಯನ್ನು
ರಚಿಸಬೇಕು. ಅವರು ತಾವೇ ಮಿಠಾಯಿಯನ್ನು ತೆಗೆದುಕೊಳ್ಳಲು ಬರುವಂತಿರಬೇಕು. ಯಾರಾದರೂ ಮಿಠಾಯಿಯು ಬಹಳ
ಚೆನ್ನಾಗಿರುತ್ತದೆಯೆಂದರೆ ಅದರ ಜಾಹೀರಾತು ಬಂದು ಬಿಡುತ್ತದೆ. ಇಂತಹವರ ಅಂಗಡಿಗೆ ಹೋಗಿ ಎಂದು.
ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ಹೇಳುತ್ತಾರೆ. ಇದಂತೂ ಬಹಳ ಒಳ್ಳೆಯ ನಂಬರ್ವನ್ ಮಿಠಾಯಿಯಾಗಿದೆ.
ಇಂತಹ ಮಿಠಾಯಿಯನ್ನು ಯಾರೂ ಕೊಡಲು ಸಾಧ್ಯವಿಲ್ಲ. ಒಬ್ಬರು ನೋಡಿಕೊಂಡು ಹೋಗುತ್ತಾರೆಂದರೆ ಅನ್ಯರಿಗೂ
ತಿಳಿಸುತ್ತಾರೆ. ಇಡೀ ಭಾರತವನ್ನು ಹೇಗೆ ಸ್ವರ್ಣೀಮ ಯುಗದಲ್ಲಿ ತರುವುದು ಎಂದು ವಿಚಾರವಂತೂ
ನಡೆಯುತ್ತದೆ. ಅದಕ್ಕಾಗಿ ಎಷ್ಟೊಂದು ತಿಳಿಸುತ್ತಾರೆ. ಆದರೆ ಕಲ್ಲು ಬುದ್ಧಿಯರಾಗಿದ್ದರೆ
ಪರಿಶ್ರಮವಾಗುತ್ತದೆಯಲ್ಲವೆ. ಬೇಟೆ ಮಾಡುವುದನ್ನು ಕಲಿಯಬೇಕಾಗುತ್ತದೆಯಲ್ಲವೆ. ಮೊಟ್ಟ ಮೊದಲು
ಚಿಕ್ಕ-ಚಿಕ್ಕ ಬೇಟೆಯಾಡುವುದನ್ನು ಕಲಿಯಲಾಗುತ್ತದೆ. ದೊಡ್ಡ ಬೇಟೆಗಂತೂ ಶಕ್ತಿಯು ಬೇಕಲ್ಲವೆ. ಎಷ್ಟು
ದೊಡ್ಡ-ದೊಡ್ಡ ವಿದ್ವಾಂಸ ಪಂಡಿತರಿದ್ದಾರೆ. ವೇದಶಾಸ್ತ್ರ ಗಳನ್ನು ಓದಿದ್ದಾರೆ. ತಮ್ಮನ್ನು ಎಷ್ಟು
ದೊಡ್ಡ ಅಥಾರಿಟಿಯೆಂದು ತಿಳಿಯುತ್ತಾರೆ. ಕಾಶಿಯಲ್ಲಿ ಅವರಿಗೆ ಎಷ್ಟು ದೊಡ್ಡ-ದೊಡ್ಡ ಬಿರುದುಗಳು
ಸಿಗುತ್ತವೆ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಮೊಟ್ಟ ಮೊದಲು ಕಾಶಿಯಲ್ಲಿ ಸೇವೆಯ ಮುತ್ತಿಗೆ
ಹಾಕಿ ದೊಡ್ಡ-ದೊಡ್ಡ ವ್ಯಕ್ತಿಗಳ ಬಾಯಿಂದ ಬಂದಾಗ ಅನ್ಯರು ಕೇಳುತ್ತಾರೆ. ಚಿಕ್ಕವರ ಮಾತನ್ನು ಯಾರೂ
ಕೇಳುವುದಿಲ್ಲ. ತಮ್ಮನ್ನು ಶಾಸ್ತ್ರಗಳ ಅಥಾರಿಟಿಯೆಂದು ತಿಳಿದುಕೊಳ್ಳುವಂತಹ ಹುಲಿಗಳಿಗೆ ತಿಳಿಸಬೇಕು.
ಶಿವ ತಂದೆಗೂ ಇಷ್ಟು ದೊಡ್ಡ ಬಿರುದುಗಳಿಲ್ಲ. ಅಷ್ಟು ದೊಡ್ಡ-ದೊಡ್ಡ ಬಿರುದುಗಳನ್ನು ಅವರಿಗೆ
ಕೊಡುತ್ತಾರೆ. ಈಗ ಭಕ್ತಿಮಾರ್ಗ ರಾಜ್ಯವಿದೆಯಲ್ಲವೆ. ಈಗ ಜ್ಞಾನಮಾರ್ಗದ ರಾಜ್ಯವಾಗುತ್ತದೆ.
ಜ್ಞಾನದಲ್ಲಿ ಭಕ್ತಿಯಿರುವುದಿಲ್ಲ. ಭಕ್ತಿಯಲ್ಲಿ ಮತ್ತೆ ಜ್ಞಾನ ಸ್ವಲ್ಪವೂ ಇರುವುದಿಲ್ಲ.
ಆದ್ದರಿಂದ ಇದನ್ನು ತಂದೆಯು ತಿಳಿಸುತ್ತಾರೆ - ತಂದೆಯು ನಕ್ಷತ್ರಗಳು ಕುಳಿತ್ತಿದ್ದಾರೆ ಎನ್ನುವ
ರೀತಿಯಲ್ಲಿ ನೋಡುತ್ತಾರೆ. ದೇಹದ ಪರಿವೆಯನ್ನು ಬಿಟ್ಟು ಬಿಡಬೇಕಾಗಿದೆ. ಹೇಗೆ ಮೇಲೆ ನಕ್ಷತ್ರಗಳು
ಮಿನುಗುತ್ತಿರುತ್ತವೆಯೋ ಹಾಗೆಯೇ ಇಲ್ಲಿಯೂ ಸಹ ಆತ್ಮರೂಪಿ ನಕ್ಷತ್ರಗಳು ಮಿನುಗುತ್ತೀದ್ದೀರಿ.
ಕೆಲಕೆಲವರು ಬಹಳ ತೀಕ್ಷ್ಣವನ್ನು ಹೊಂದಿದ್ದೀರಿ. ಇವರು ಧರಣಿಯ ನಕ್ಷತ್ರಗಳು, ಇವರಿಗೇ ದೇವತೆಗಳೆಂದು
ಹೇಳಲಾಗುತ್ತದೆ. ಇದು ಎಷ್ಟು ದೊಡ್ಡ ಬೇಹದ್ದಿನ ರಂಗಮಂಟಪವಾಗಿದೆ. ತಂದೆಯು ತಿಳಿಸುತ್ತಾರೆ - ಅದು
ಹದ್ದಿನ ದಿನ ಮತ್ತು ರಾತ್ರಿಯಾಗಿದೆ. ಇದು ಅರ್ಧಕಲ್ಪದ ರಾತ್ರಿ, ಅರ್ಧಕಲ್ಪದ ಬೇಹದ್ದಿನ ದಿನ
ಮಾತಾಗಿದೆ. ದಿನದಲ್ಲಿ ಸುಖವೇ ಸುಖವಿರುತ್ತದೆ. ಇಲ್ಲಿ ಎಲ್ಲಿಯೂ ಪೆಟ್ಟನ್ನು ತಿನ್ನುವ
ಅವಶ್ಯಕತೆಯಿಲ್ಲ. ಜ್ಞಾನದಲ್ಲಿ ಸುಖವಿದೆ. ಭಕ್ತಿಯಲ್ಲಿ ದುಃಖವಿದೆ. ಸತ್ಯಯುಗದಲ್ಲಿ ದುಃಖದ
ಹೆಸರಿರುವುದಿಲ್ಲ. ಅಲ್ಲಿ ಮೃತ್ಯವಿರುವುದಿಲ್ಲ. ನೀವು ಕಾಲನ ಮೇಲೆ ಜಯ ಗಳಿಸುತ್ತೀರಿ. ಮೃತ್ಯವಿನ
ಹೆಸರೇ ಇರುವುದಿಲ್ಲ. ಅದು ಅಮರಲೋಕವಾಗಿದೆ. ನಿಮಗೆ ತಿಳಿದಿದೆ - ತಂದೆಯು ನಮಗೆ ಅಮರಲೋಕಕ್ಕಾಗಿ
ಅಮರಕಥೆಯನ್ನು ತಿಳಿಸುತ್ತಿದ್ದಾರೆ. ಈಗ ನೀವು ಮಧುರಾತಿ ಮಕ್ಕಳಿಗೆ ಮೇಲಿನಿಂದ ಹಿಡಿದು ಪೂರ್ಣ
ಚಕ್ರದ ಜ್ಞಾನವಿದೆ. ನಾವಾತ್ಮಗಳ ಮನೆಯು ಬ್ರಹ್ಮಲೋಕವಾಗಿದೆ. ಅಲ್ಲಿಂದ ನಂಬರ್ವಾರ್
ಪಾತ್ರವನ್ನಭಿನಯಿಸಲು ಇಲ್ಲಿಗೆ ಬಂದಿದ್ದೇವೆಂದು ತಿಳಿದುಕೊಂಡಿದ್ದೀರಿ. ಅನೇಕ ಆತ್ಮಗಳಿದ್ದಾರೆ.
ಒಬ್ಬೊಬ್ಬರನ್ನೂ ಕುಳಿತು ತಿಳಿಸಲಾಗುವುದಿಲ್ಲ. ಆದ್ದರಿಂದ ಸಾರ ರೂಪದಲ್ಲಿ ತಿಳಿಸುತ್ತಾರೆ.
ಎಷ್ಟೊಂದು ರೆಂಬೆ-ಕೊಂಬೆಗಳಿವೆ. ಬೆಳೆಯುತ್ತಾ-ಬೆಳೆಯುತ್ತಾ ವೃಕ್ಷವು ವೃದ್ಧಿಯನ್ನು ಹೊಂದುತ್ತದೆ.
ಅನೇಕರಿಗೆ ತಮ್ಮ ಧರ್ಮದ ಬಗ್ಗೆಯೂ ಸಹ ಗೊತ್ತಿಲ್ಲ. ತಂದೆಯು ಬಂದು ತಿಳಿಸುತ್ತಾರೆ - ನೀವು ಮೂಲತಃ
ದೇವಿ-ದೇವತಾ ಧರ್ಮದವರಾಗಿದ್ದೀರಿ. ಆದರೆ ಈಗ ಧರ್ಮ ಭ್ರಷ್ಟ ಕರ್ಮ ಭ್ರಷ್ಟರಾಗಿ ಬಿಟ್ಟಿದ್ದೀರಿ.
ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ - ನಾವು ಮೂಲತಃ ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ಮತ್ತೆ
ಇಲ್ಲಿಗೆ ಪಾತ್ರವನ್ನಭಿನಯಿಸಲು ಬರುತ್ತೇವೆ. ಈ ಲಕ್ಷ್ಮೀ-ನಾರಾಯಣ ರಾಜ್ಯವಿತ್ತು. ಇವರ
ವಂಶಾವಳಿಯಿತ್ತು ನಂತರ ಈ ಸಂಗಮಯುಗದಲ್ಲಿ ನಿಂತಿದ್ದೀರಿ. ತಂದೆಯು ತಿಳಿಸುತ್ತಾರೆ - ನೀವು
ಸೂರ್ಯವಂಶಿಯರಾಗಿದ್ದೀರಿ. ನಂತರ ಚಂದ್ರವಂಶಿಯರಾದಿರಿ. ಬಾಕಿ ಈ ಮಧ್ಯದಲ್ಲಂತೂ ಬಹಳಷ್ಟು ಶಾಖೆಗಳಿವೆ.
ಈ ಆಟವು ಬೇಹದ್ದಿನದ್ದಾಗಿದೆ. ಇದು ಎಷ್ಟು ಚಿಕ್ಕ ವೃಕ್ಷವಾಗಿದೆ. ಬ್ರಾಹ್ಮಣರ ಕುಲವಾಗಿದೆ. ಇದು
ಮತ್ತೆ ಎಷ್ಟು ದೊಡ್ಡ ವೃಕ್ಷವಾಗಿ ಬಿಡುತ್ತದೆ. ಎಲ್ಲರನ್ನೂ ನೋಡಿ ಮಿಲನ ಮಾಡುವುದಕ್ಕೂ
ಆಗುವುದಿಲ್ಲ. ಎಲ್ಲೆಂದರಲ್ಲಿ ಮುತ್ತಿಗೆ ಹಾಕುತ್ತಾ ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ. ದೆಹಲಿ
ಮತ್ತು ಕಾಶಿಯನ್ನು ಸೇವೆಯ ಮುತ್ತಿಗೆ ಹಾಕಿ ಇಡೀ ಪ್ರಪಂಚಕ್ಕೆ ನೀವು ಮುತ್ತಿಗೆ ಹಾಕುವವರಾಗಿದ್ದೀರಿ
ಎಂದು ಹೇಳುತ್ತಾರೆ. ನೀವು ಯೋಗಬಲದಿಂದ ಇಡೀ ಪ್ರಪಂಚದಲ್ಲಿ ಒಂದು ರಾಜ್ಯವನ್ನು ಸ್ಥಾಪನೆ
ಮಾಡುತ್ತೀರಿ. ಎಷ್ಟೊಂದು ಖುಷಿಯಾಗುತ್ತದೆ! ಕೆಲಕೆಲವರು ಕೆಲಕೆಲವೊಂದೆಡೆ ಹೋಗುತ್ತಾರೆ. ನಿಮ್ಮ
ಮಾತನ್ನು ಯಾರೂ ಕೇಳುವುದಿಲ್ಲ. ಯಾವಾಗ ದೊಡ್ಡ-ದೊಡ್ಡವರು ಬರುತ್ತಾರೆ. ಪತ್ರಿಕೆಗಳಲ್ಲಿ ಬರುವುದೋ
ಆಗ ತಿಳಿಯುತ್ತಾರೆ. ಈಗಿನ್ನೂ ಚಿಕ್ಕ-ಚಿಕ್ಕ ಬೇಟೆಯಾಗುತ್ತಿದೆ. ದೊಡ್ಡ-ದೊಡ್ಡ ಸಾಹುಕಾರರಂತೂ
ನಮಗಾಗಿ ಇಲ್ಲಿಯೇ ಸ್ವರ್ಗವಿದೆ ಎಂದು ತಿಳಿಯುತ್ತಾರೆ. ಬಡವರೇ ಬಂದು ಆಸ್ತಿಯನ್ನು
ತೆಗೆದುಕೊಳ್ಳುತ್ತಾರೆ. ಬಾಬಾ, ನನ್ನವರು ನಿಮ್ಮ ವಿನಃ ಮತ್ತ್ಯಾರೂ ಇಲ್ಲ ಎಂದು ಹೇಳುತ್ತಾರೆ. ಆದರೆ
ಮೋಹ-ಮಮತ್ವವು ಇಡೀ ಪ್ರಪಂಚದಿಂದ ಕಳೆಯಬೇಕಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ
ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಆತ್ಮವನ್ನು
ಕಂಚನವನ್ನಾಗಿ ಮಾಡಿಕೊಳ್ಳಲು ಒಬ್ಬರು ಇನ್ನೊಬರಿಗೆ ಎಚ್ಚರಿಸಬೇಕು. ಮನ್ಮನಾಭವದ ಸೂಚನೆ
ಕೊಡಬೇಕಾಗಿದೆ. ಯೋಗಬಲದಿಂದ ಪವಿತ್ರರಾಗಿ ಮಿನುಗುತ್ತಿರುವ ನಕ್ಷತ್ರಗಳಾಗಬೇಕಾಗಿದೆ.
2. ಈ ಬೇಹದ್ದಿನ ಮಾಡಿ-ಮಾಡಲ್ಪಟ್ಟಂತಹ ನಾಟಕವನ್ನು ಬಹಳ ಚೆನ್ನಾಗಿ ಅರಿತುಕೊಂಡು ಸ್ವದರ್ಶನ
ಚಕ್ರಧಾರಿಗಳಾಗಬೇಕು. ಜ್ಞಾನದ ಅಂಜನವನ್ನು ಕೊಟ್ಟು ಮನುಷ್ಯರನ್ನು ಅಜ್ಞಾನ ಘೋರ ಅಂಧಕಾರದಿಂದ
ಬಿಡಿಸಬೇಕಾಗಿದೆ.
ವರದಾನ:
ತಮ್ಮ
ಪ್ರಾಕ್ಟಿಕಲ್ ಜೀವನದ ನಿದರ್ಶನ ಮುಖಾಂತರ ಶಾಂತಿಯ ಶಕ್ತಿಯ ವಿಚಾರ ಹರಡುವಂತಹ ವಿಶೇಷ ಸೇವಾಧಾರಿ ಭವ.
ಪ್ರತಿಯೊಬ್ಬರಿಗೂ
ಶಾಂತಿಯ ಶಕ್ತಿಯ ಅನುಭವ ಮಾಡಿಸುವುದು - ಇದು ವಿಶೇಷ ಸೇವೆಯಾಗಿದೆ. ಹೇಗೆ ವಿಜ್ಞಾನದ ಶಕ್ತಿ
ಹೆಸರುವಾಸಿಯಾಗಿದೆ ಹಾಗೆ ಶಾಂತಿಯ ಶಕ್ತಿ ಹೆಸರುವಾಸಿಯಾಗುವುದು. ಎಲ್ಲರ ಮುಖದಿಂದ ಕೂಗು ಹೊರಡಲಿ
ಶಾಂತಿಯ ಶಕ್ತಿ ವಿಜ್ಞಾನದ ಶಕ್ತಿಗಿಂತಲೂ ಶ್ರೇಷ್ಠವಾಗಿದೆ ಎಂದು. ಆ ದಿನವೂ ಸಹ ಬರಲಿದೆ. ಶಾಂತಿಯ
ಶಕ್ತಿಯ ಪ್ರತ್ಯಕ್ಷತೆ ಅರ್ಥಾತ್ ತಂದೆಯ ಪ್ರತ್ಯಕ್ಷತೆ. ಶಾಂತಿಯ ಶಕ್ತಿಯ ಪ್ರಾಕ್ಟಿಕಲ್
ನಿದರ್ಶನವಾಗಿದೆ ನಿಮ್ಮಲ್ಲರ ಜೀವನ. ಪ್ರತಿಯೊಬ್ಬರೂ ನಡೆಯುತ್ತಾ-ತಿರುಗಾಡುತ್ತಾ ಶಾಂತಿಯ ಮಾಡೆಲ್
ಕಂಡು ಬಂದಲ್ಲಿ ವಿಜ್ಞಾನದವರ ದೃಷ್ಟಿಯೂ ಸಹ ಶಾಂತಿಯ ಶಕ್ತಿಯವರ ಮೇಲೆ ಹೋಗುವುದು. ಇಂತಹ ಸೇವೆ ಮಾಡಿ
ಆಗ ಹೇಳಲಾಗುವುದು ವಿಶೇಷ ಸೇವಾಧಾರಿ.
ಸ್ಲೋಗನ್:
ಸೇವೆ ಮತ್ತು
ಸ್ಥಿತಿಯ ಬ್ಯಾಲೆನ್ಸ್ ಇಟ್ಟಾಗ ಸರ್ವರಿಂದ ಬ್ಲೆಸ್ಸಿಂಗ್ಸ್ ಸಿಗುತ್ತಿರುವುದು.