05.05.19    Avyakt Bapdada     Kannada Murli     26.11.84     Om Shanti     Madhuban


"ಸತ್ಯ ಸಹಯೋಗಿಯೇ ಸತ್ಯಯೋಗಿ"


ಇಂದು ಮಕ್ಕಳ ಮಿಲನದ ಸ್ನೇಹವನ್ನು ನೋಡುತ್ತಿದ್ದೇವೆ. ಒಂದು ಬಲ ಒಂದು ಭರವಸೆ, ಇದೇ ಛತ್ರಛಾಯೆಯಲ್ಲಿ ಮಿಲನದ ಉಮ್ಮಂಗ-ಉತ್ಸಾಹದಿಂದ ಸ್ವಲ್ಪವೂ ಏರುಪೇರು, ಲಗನ್ನ್ನು ಅಲುಗಾಡಿಸಲು ಸಾಧ್ಯವಿಲ್ಲ. ಅಡಚಣೆ, ಸುಸ್ತು ಎಲ್ಲವೂ ಬದಲಾಗಿ ಸ್ನೇಹದ ಸಹಜ ಮಾರ್ಗವನ್ನು ಅನುಭವ ಮಾಡುತ್ತಾ ತಲುಪಿ ಬಿಟ್ಟಿದ್ದೀರಿ. ಇದಕ್ಕೆ ಹೇಳಲಾಗುತ್ತದೆ- ಸಾಹಸ ಮಕ್ಕಳದು, ಸಹಯೋಗ ತಂದೆಯದು. ಎಲ್ಲಿ ಸಾಹಸವಿದೆಯೋ ಅಲ್ಲಿ ಉಲ್ಲಾಸವೂ ಇದೆ. ಸಾಹಸವಿಲ್ಲವೆಂದರೆ ಉಲ್ಲಾಸವೂ ಇಲ್ಲ. ಹೀಗೆ ಸದಾ ಸಾಹಸ-ಉಲ್ಲಾಸದಲ್ಲಿ ಇರುವಂತಹ ಮಕ್ಕಳು ಏಕರಸ ಸ್ಥಿತಿಯ ಮೂಲಕ ನಂಬರವನ್ ತೆಗೆದುಕೊಂಡು ಬಿಡುತ್ತಾರೆ. ಎಂತಹ ಅತೀ ಕಠಿಣ ಪರಿಸ್ಥಿತಿಯಿರಬಹುದು ಆದರೆ ಸಾಹಸ ಮತ್ತು ಉಲ್ಲಾಸದ ರೆಕ್ಕೆಗಳ ಮೂಲಕ ಸೆಕೆಂಡಿನಲ್ಲಿ, ಹಾರುವ ಕಲೆಯ ಶ್ರೇಷ್ಠ ಸ್ಥಿತಿಯಿಂದ ಪ್ರತಿಯೊಂದು ದೊಡ್ಡ ಅಥವಾ ಕಠಿಣ ಪರಿಸ್ಥಿತಿಯನ್ನೂ ಚಿಕ್ಕದು ಮತ್ತು ಸಹಜತೆಯ ಅನುಭವವಾಗುವುದು. ಏಕೆಂದರೆ ಹಾರುವ ಕಲೆಯಿರುವವರ ಮುಂದೆ, ಎಲ್ಲವೂ ಚಿಕ್ಕ ಚಿಕ್ಕ ಆಟದ ಆಟಿಕೆಗಳೆಂದು ಅನುಭವವಾಗುವುದು. ಎಷ್ಟೇ ಭಯಾನಕವಾದ ಮಾತು, ಭಯಾನಕದ ಬದಲಾಗಿ ಸ್ವಾಭಾವಿಕದ ಅನುಭವವಾಗುವುದು. ನೋವುಂಟಾಗುವ ಮಾತು ಧೃಡತೆಯನ್ನು ತರಿಸುವಂತಹ ಅನುಭವವಾಗುತ್ತದೆ. ಎಷ್ಟೇ ದುಃಖಮಯ ದೃಶ್ಯಗಳು ಬರಲಿ ಆದರೆ ಖುಷಿಯ ನಗಾರಿ, ದುಃಖದ ದೃಶ್ಯಗಳ ಪ್ರಭಾವವನ್ನು ಬೀರುವುದಿಲ್ಲ, ಇನ್ನೂ ಶಾಂತಿ ಮತ್ತು ಶಕ್ತಿಯಿಂದ ಅನ್ಯರ ದುಃಖ-ನೋವಿನ ಅಗ್ನಿಗೆ ಶೀತಲ ಜಲದಂತೆ ಸರ್ವರಿಗೂ ಸಹಯೋಗಿಯಾಗುವರು. ಇಂತಹ ಸಮಯದಲ್ಲಿ ಚಡಪಡಿಸುತ್ತಿರುವ ಆತ್ಮರಿಗೆ ಸಹಯೋಗದ ಅವಶ್ಯಕತೆಯಿರುತ್ತದೆ. ಇದೇ ಸಹಯೋಗದ ಮೂಲಕವೇ ಶ್ರೇಷ್ಠಯೋಗದ ಅನುಭವವನ್ನು ಮಾಡುವರು. ಎಲ್ಲರೂ ತಮ್ಮ ಈ ಸತ್ಯ ಸಹಯೋಗವನ್ನೇ ಸತ್ಯಯೋಗಿಯೆಂದು ಒಪ್ಪುವರು. ಮತ್ತು ಹಾಗೆಯೇ ಹಾಹಾಕಾರದ ಸಮಯದಲ್ಲಿ "ಸತ್ಯ ಸಹಯೋಗಿಯಿಂದ ಸತ್ಯಯೋಗಿ", ಈ ಪ್ರತ್ಯಕ್ಷತೆಯಿಂದ ಪ್ರತ್ಯಕ್ಷ ಫಲದ ಪ್ರಾಪ್ತಿಯಿಂದಲೇ ಜಯ ಜಯಕಾರವಾಗುವುದು. ಇಂತಹ ಸಮಯದ್ದೇ ಗಾಯನವಿದೆ- ಒಂದು ಹನಿಗಾಗಿ ಬಾಯಾರಿರುವವರು..... ಈ ಶಾಂತಿಯ ಶಕ್ತಿಯ, ಒಂದು ಸೆಕೆಂಡಿನ ಅನುಭೂತಿಯೆಂಬ ಹನಿಯು, ಚಡಪಡಿಸುತ್ತಿರುವ ಆತ್ಮರಿಗೆ ತೃಪ್ತಿಯ ಅನುಭವವನ್ನು ಮಾಡಿಸುತ್ತದೆ. ಇಂತಹ ಸಮಯದಲ್ಲಿ ಒಂದು ಸೆಕೆಂಡಿನ ಪ್ರಾಪ್ತಿಯ ಅನುಭವವನ್ನು ಹೀಗೆ ಮಾಡಿಸುತ್ತದೆ- ಸೆಕೆಂಡಿನಲ್ಲಿ ಅನೇಕ ಜನ್ಮಗಳ ತೃಪ್ತಿ ಅಥವಾ ಪ್ರಾಪ್ತಿಯಾಯಿತು. ಆದರೆ ಆ ಒಂದು ಸೆಕೆಂಡಿನ ಶಕ್ತಿಶಾಲಿ ಸ್ಥಿತಿಯು ಬಹಳ ಕಾಲದಿಂದ ಅಭ್ಯಾಸಿಯಾಗಿರುವ ಆತ್ಮ, ಬಾಯಾರಿರುವ ಆತ್ಮನ ಬಾಯಾರಿಕೆಯನ್ನು ನೀಗಿಸಬಹುದು. ಈಗ ಪರಿಶೀಲನೆ ಮಾಡಿಕೊಳ್ಳಿರಿ- ಇಂತಹ ದುಃಖ-ನೋವು, ನೋವುಂಟು ಮಾಡುವ ಭಯಾನಕ ವಾಯುಮಂಡಲ ಮಧ್ಯೆ, ಸೆಕೆಂಡಿನಲ್ಲಿ ಮಾಸ್ಟರ್ ವಿಧಾತಾ, ಮಾಸ್ಟರ್ ವರದಾತಾ, ಮಾಸ್ಟರ್ ಸಾಗರರಾಗಿ, ಇಂತಹ ಶಕ್ತಿಶಾಲಿ ಸ್ಥಿತಿಯ ಅನುಭವವನ್ನು ಮಾಡಿಸಬಲ್ಲಿರಾ? ಇಂತಹ ಸಮಯದಲ್ಲಿ ಇದೇನಾಗುತ್ತಿದೆ, ಇದನ್ನು ನೋಡುವ ಅಥವಾ ಕೇಳುವುದರಲ್ಲಿ ಮುಳುಗಿ ಬಿಟ್ಟಿರೆಂದರೂ ಸಹಯೋಗಿಯಾಗಲು ಸಾಧ್ಯವಿಲ್ಲ. ಇದನ್ನು ನೋಡುವ ಅಥವಾ ಕೇಳುವ ಅಂಶದಷ್ಟೂ ಇಚ್ಛೆಯೂ ಸಹ ಸರ್ವ ಇಚ್ಛೆಗಳನ್ನು ಪೂರ್ಣಗೊಳಿಸುವ ಶಕ್ತಿಶಾಲಿ ಸ್ಥಿತಿಯನ್ನಾಗಿ ಮಾಡಲು ಬಿಡುವುದಿಲ್ಲ. ಆದ್ದರಿಂದ ಸದಾ ತಮ್ಮ ಅಲ್ಪಕಾಲದ ಇಚ್ಛಾ ಮಾತ್ರಂ ಅವಿದ್ಯಾ- ಈ ಶಕ್ತಿಶಾಲಿ ಸ್ಥಿತಿಯಲ್ಲಿ ಈಗಿನಿಂದ ಅಭ್ಯಾಸಿಯಾಗಿರಿ. ಪ್ರತೀ ಸಂಕಲ್ಪ, ಪ್ರತೀ ಶ್ವಾಸದ ಅಖಂಡ ಸೇವಾಧಾರಿ, ಅಖಂಡ ಸಹಯೋಗಿಯಿಂದ ಯೋಗಿಯಾಗಿರಿ. ಹೇಗೆ ಖಂಡನೆಯಾಗಿರುವ ಮೂರ್ತಿಯ ಮೌಲ್ಯವೇನೂ ಇಲ್ಲ, ಪೂಜ್ಯನೀಯವಾಗುವ ಅಧಿಕಾರವಿಲ್ಲ. ಹಾಗೆಯೇ ಖಂಡನೆಯಾಗಿರುವ ಸೇವಾಧಾರಿಯು ಖಂಡಿತ ಯೋಗಿ, ಇಂತಹ ಸಮಯದಲ್ಲಿ ಅಧಿಕಾರವನ್ನು ಪ್ರಾಪ್ತಿ ಮಾಡಿಸುವ ಅಧಿಕಾರಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ಶಕ್ತಿಶಾಲಿ ಸೇವೆಯ ಸಮಯವು ಸಮೀಪದಲ್ಲಿ ಬರುತ್ತಿದೆ. ಸಮಯದ ಗಂಟೆಯು ಮೊಳಗುತ್ತಿದೆ. ಹೇಗೆ ಭಕ್ತ ಜನರು ತನ್ನ ಇಷ್ಟ ದೇವ ಅಥವಾ ದೇವಿಯರಿಗೆ ಗಂಟೆಯನ್ನು ಮೊಳಗಿಸುತ್ತಾ ಏಳಿಸುತ್ತಾರೆ, ಮಲಗಿಸುತ್ತಾರೆ, ಭೋಗವನ್ನು ಅರ್ಪಿಸುತ್ತಾರೆ. ಅಂದಮೇಲೆ ಈಗಿನ ಸಮಯದಲ್ಲಿ ಗಂಟೆಯನ್ನು ಮೊಳಗಿಸಿ ಇಷ್ಟ ದೇವ, ದೇವಿಯರನ್ನು ಅಲರ್ಟ್ ಮಾಡುತ್ತಿದ್ದಾರೆ. ಜಾಗೃತರಂತು ಆಗಿಯೇ ಇದ್ದೀರಿ, ಆದರೆ ಪವಿತ್ರ ಪ್ರವೃತ್ತಿಯಲ್ಲಿ ಬಹಳ ವ್ಯಸ್ತರಾಗಿ ಬಿಟ್ಟಿದ್ದೀರಿ. ಬಾಯಾರಿರುವ ಆತ್ಮರ ಬಾಯಾರಿಕೆಯನ್ನು ನೀಗಿಸುವ, ಸೆಕೆಂಡಿನಲ್ಲಿ ಅನೇಕ ಜನ್ಮಗಳ ಪ್ರಾಪ್ತಿಯಿರುವ ಶಕ್ತಿಶಾಲಿ ಸ್ಥಿತಿಯ ಅಭ್ಯಾಸಕ್ಕಾಗಿ ತಯಾರಿ ಮಾಡಿಕೊಳ್ಳುವ ಸಮಯದ ಗಂಟೆಯನ್ನು ಮೊಳಗಿಸುತ್ತಿದ್ದಾರೆ. ಪ್ರತ್ಯಕ್ಷತೆಯ ಪರದೆಯನ್ನು ತೆರೆಯುವಂತಹ ಸಮಯದಲ್ಲಿ, ತಾವು ಸಂಪನ್ನ ಇಷ್ಟ ಆತ್ಮರ ಆಹ್ವಾನವನ್ನು ಮಾಡುತ್ತಿದ್ದಾರೆ. ತಿಳಿಯಿತೆ! ಸಮಯದ ಗಂಟೆಯಂತು ತಾವೆಲ್ಲರೂ ಆಲಿಸುತ್ತಿದ್ದೀರಲ್ಲವೆ. ಒಳ್ಳೆಯದು - ಹೀಗೆ ಪ್ರತಿಯೊಂದು ಪರಿಸ್ಥಿತಿಯನ್ನು ಹಾರುವ ಕಲೆಯ ಮೂಲಕ ಸಹಜವಾಗಿ ಪಾರು ಮಾಡುವಂತಹ, ಸೆಕೆಂಡಿನಲ್ಲಿ ಬಹಳ ಕಾಲದ ಪ್ರಾಪ್ತಿಯ ಮೂಲಕ ತೃಪ್ತಗೊಳಿಸುವಂತಹ ಅಖಂಡ ಸೇವಾಧಾರಿ, ಅಖಂಡಯೋಗಿ, ಸದಾ ಮಾಸ್ಟರ್ ದಾತಾ, ವರದಾತಾ ಸ್ವರೂಪ, ಸದಾ ಇಚ್ಛಾ ಮಾತ್ರಂ ಅವಿದ್ಯಾದ ಸ್ಥಿತಿಯಿಂದ ಸರ್ವರ ಇಚ್ಛೆಗಳನ್ನು ಪೂರ್ಣಗೊಳಿಸುವ, ಇಂತಹ ಮಾಸ್ಟರ್ ಸರ್ವಶಕ್ತಿವಂತ ಸಮರ್ಥ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

(ಕಾನ್ಪುರದ ಸಮಾಚಾರವನ್ನು ಗಂಗೆದಾದಿಯವರು ಬಾಪ್ದಾದಾರವರಿಗೆ ತಿಳಿಸಿದರು) -ಸದಾ ಅಚಲ ಅಡೋಲ ಆತ್ಮ. ಪ್ರತಿಯೊಂದು ಪರಿಸ್ಥಿತಿಯಲ್ಲಿ ತಂದೆಯ ಛತ್ರಛಾಯೆಯ ಅನುಭವಿಯಾಗಿದ್ದೀರಲ್ಲವೆ? ಬಾಪ್ದಾದಾರವರು ಮಕ್ಕಳನ್ನು ಸದಾ ಸುರಕ್ಷಿತವಾಗಿ ಇಡುತ್ತಾರೆ. ಸುರಕ್ಷತೆಯ ಸಾಧನವು ಸದಾಕಾಲಕ್ಕಾಗಿ ತಂದೆಯ ಮೂಲಕ ಸಿಕ್ಕಿದೆ. ಆದ್ದರಿಂದ ಸದಾಕಾಲವೂ ತಂದೆಯ ಸ್ನೇಹದ ಕೈ ಮತ್ತು ಜೊತೆಯಿದೆ. "ಹೊಸದೇನಲ್ಲ"- ಇದರ ಅಭ್ಯಾಸಿಯಾಗಿ ಬಿಟ್ಟಿದ್ದೀರಲ್ಲವೆ! ಏನು ಆಯಿತು ಹೊಸದೇನಲ್ಲ. ಏನಾಗುತ್ತಿದೆ ಹೊಸದೇನಲ್ಲ. ಸ್ವತಹವಾಗಿಯೇ ಟಚಿಂಗ್ ಆಗುತ್ತಿರುತ್ತದೆ, ಈ ರಿಹರ್ಸಲ್ ಆಗುತ್ತಿದೆ. ಇಂತಹ ಸಮಯದಲ್ಲಿ ಸುರಕ್ಷತೆಯ, ಸೇವೆಯ ಸಾಧನವೇನಿರಬೇಕು? ಯಾವ ಸ್ವರೂಪವಿರಬೇಕು? ಇದರ ರಿಹರ್ಸಲ್ ಆಗುತ್ತಿದೆ. ಫೈನಲ್ನಲ್ಲಿ ಹಾಹಾಕಾರದ ಮಧ್ಯೆ ಜಯ ಜಯಕಾರವಾಗುವುದಿದೆ. ಅತೀಯ ನಂತರ ಅಂತ್ಯ ಮತ್ತು ಹೊಸ ಯುಗದ ಆರಂಭವಾಗಿ ಬಿಡುತ್ತದೆ. ಇಂತಹ ಸಮಯದಲ್ಲಿ ಬಯಸದಿದ್ದರೂ ಎಲ್ಲರ ಮನಸ್ಸಿನಿಂದ ಈ ಪ್ರತ್ಯಕ್ಷತೆಯ ನಗಾರಿಯು ಮೊಳಗುತ್ತದೆ. ದೃಶ್ಯವು ಸೂಕ್ಷ್ಮದ್ದಾಗಿರುತ್ತದೆ ಆದರೆ ಪ್ರತ್ಯಕ್ಷತೆಯ ನಗಾರಿಯು ಮೊಳಗುತ್ತದೆ. ಅಂದಮೇಲೆ ರಿಹರ್ಸಲ್ನಿಂದ ಪಾರಾಗಿ ಬಿಟ್ಟಿರಿ. ನಿಶ್ಚಿಂತ ಚಕ್ರವರ್ತಿಯ ಪಾತ್ರವನ್ನಭಿನಯಿಸಿದಿರಿ. ಬಹಳ ಒಳ್ಳೆಯದನ್ನು ಮಾಡಿದಿರಿ, ತಲುಪಿ ಬಿಟ್ಟಿರಿ - ಇದೇ ಸ್ನೇಹದ ಸ್ವರೂಪವಾಗಿದೆ. ಒಳ್ಳೆಯದು- ಯೋಚಿಸುವುದರಿಂದಲೂ ಅಸೋಚ್ ಆಗಿಯೇ ಇದ್ದೀರಿ, ಏನಾಯಿತು ವಾಹ್ ವಾಹ್! ಇದರಲ್ಲಿಯೂ ಕೆಲವರ ಕಲ್ಯಾಣವಂತು ಆಗುತ್ತದೆ. ಆದ್ದರಿಂದ ಸುಡುವುದರಲ್ಲಿಯೂ ಕಲ್ಯಾಣ, ಅದರಿಂದ ಪಾರಾಗುವುದರಲ್ಲಿಯೂ ಕಲ್ಯಾಣ. ಅಯ್ಯೊ ಎನ್ನಬಾರದು, ಅಯ್ಯೊ ಸುಟ್ಟು ಹೋಯಿತು, ಅಲ್ಲ. ಇದರಲ್ಲಿಯೂ ಕಲ್ಯಾಣವಿದೆ. ಪಾರಾದ ಸಮಯದಲ್ಲಿ ಹೇಗೆ ವಾಹ್-ವಾಹ್ ಮಾಡುತ್ತಾರೆ, ವಾಹ್ ಪಾರಾಗಿ ಬಿಟ್ಟರು. ಹಾಗೆಯೇ ಸುಡುವ ಸಮಯವೂ ಸಹಾ ವಾಹ್-ವಾಹ್! ಇದನ್ನೇ ಏಕರಸ ಸ್ಥಿತಿ ಎಂದು ಹೇಳಲಾಗುತ್ತದೆ. ಪಾರು ಮಾಡುವುದು ತಮ್ಮ ಕರ್ತವ್ಯವಾಗಿದೆ ಆದರೆ ಸುಡುವಂತಹ ವಸ್ತುವು ಸುಡಲೇಬೇಕು. ಇದರಲ್ಲಿಯೂ ಕೆಲವು ಲೆಕ್ಕಾಚಾರಗಳಿರುತ್ತವೆ. ತಾವಂತು ಇರುವುದೇ ನಿಶ್ಚಿಂತ ಚಕ್ರವರ್ತಿ. ಒಂದು ಹೋಯಿತೆಂದರೆ ಲಕ್ಷ ಪಡೆಯಲಾಗುವುದು- ಇದು ಬ್ರಾಹ್ಮಣರ ಸ್ಲೋಗನ್ ಆಗಿದೆ. ಹೋಗಲಿಲ್ಲ ಆದರೆ ಪಡೆಯಲಾಯಿತು ಆದ್ದರಿಂದ ನಿಶ್ಚಿಂತ. ಮತ್ತು ಏನಾದರೂ ಒಳ್ಳೆಯದು ಸಿಗಬೇಕು ಆದ್ದರಿಂದ ಸುಡುವುದೂ ಸಹ ಆಟ, ಪಾರಾಗುವುದೂ ಸಹ ಆಟ, ಎರಡೂ ಸಹ ಆಟವಾಗಿದೆ. ಇದನ್ನೇ ನೋಡುವಿರಿ- ಇವರೆಷ್ಟು ನಿಶ್ಚಿಂತ ಚಕ್ರವರ್ತಿಯಿದ್ದಾರೆ, ಸುಡುತ್ತಿದ್ದಾರೆ ಆದರೆ ಇವರು ಚಕ್ರವರ್ತಿಯಿದ್ದಾರೆ. ಏಕೆಂದರೆ ಛತ್ರಛಾಯೆಯೊಳಗಿದ್ದಾರೆ. ಅವರು ಚಿಂತೆಯಲ್ಲಿ ಮುಳುಗಿ ಬಿಡುತ್ತಾರೆ, ಏನಾಗುತ್ತದೆಯೋ, ಹೇಗಾಗುತ್ತದೆಯೋ, ಎಲ್ಲಿಂದ ತಿನ್ನುವುದು, ಎಲ್ಲಿಂದ ನಡೆಯುವುದು ಮತ್ತು ಮಕ್ಕಳಿಗೆ ಈ ಚಿಂತೆಯೇ ಇರುವುದಿಲ್ಲ. ಒಳ್ಳೆಯದು - ಈಗ ತಯಾರಿಯಂತು ಮಾಡಿಕೊಳ್ಳಬೇಕಾಗುತ್ತದೆಯಲ್ಲವೆ! ಹೋಗುತ್ತೇವೆ ಎಂದು ಯೋಚಿಸಬಾರದು ಆದರೆ ಎಲ್ಲರನ್ನೂ ಕರೆದುಕೊಂಡು ಹೋಗುತ್ತೇವೆ- ಇದನ್ನು ಯೋಚಿಸಿರಿ. ಎಲ್ಲರಿಗೂ ಸಾಕ್ಷಾತ್ಕಾರವನ್ನು ಮಾಡಿಸುತ್ತಾ, ತೃಪ್ತರನ್ನಾಗಿ ಮಾಡುತ್ತಾ, ಪ್ರತ್ಯಕ್ಷತೆಯ ನಗಾರಿಯನ್ನು ಮೊಳಗಿಸುತ್ತಾ ನಂತರ ಹೋಗುತ್ತೇವೆ. ಮೊದಲೇ ಏಕೆ ಹೋಗುವುದು! ತಾವಂತು ತಂದೆಯ ಜೊತೆ ಜೊತೆಯಲ್ಲಿ ಹೋಗುವಿರಿ. ಪ್ರತ್ಯಕ್ಷತೆಯ ಅದ್ಭುತವಾದ ದೃಶ್ಯದ ಅನುಭವ ಮಾಡಿ ಹೋಗುತ್ತೀರಲ್ಲವೆ! ಇದೂ ಸಹ ಏಕೆ ಉಳಿದುಕೊಳ್ಳಬೇಕು! ಈ ಮಾನಸಿಕ ಭಕ್ತಿ, ಮಾನಸಿಕ ಪೂಜೆ, ಪ್ರೇಮದ ಪುಷ್ಪ.... ಈ ಅಂತಿಮ ದೃಶ್ಯವು ಬಹಳ ಅದ್ಭುತವಾಗಿದೆ. ಅಡ್ವಾನ್ಸ್ ಪಾರ್ಟಿಯಲ್ಲಿ ಯಾರ ಪಾತ್ರವಿದೆ ಎನ್ನುವುದು ಬೇರೆ ಮಾತಾಗಿದೆ. ಬಾಕಿ ಈ ದೃಶ್ಯವನ್ನು ನೋಡುವುದಂತು ಬಹಳ ಅವಶ್ಯಕವಿದೆ. ಯಾರು ಅಂತ್ಯ ಮಾಡಿದರು ಅವರು ಎಲ್ಲವನ್ನೂ ಮಾಡಿದರು ಆದ್ದರಿಂದ ತಂದೆಯು ಅಂತ್ಯದಲ್ಲಿ ಬರುತ್ತಾರೆಂದರೆ, ಎಲ್ಲವನ್ನೂ ಮಾಡಿ ಬಿಟ್ಟರಲ್ಲವೆ. ಅಂದಮೇಲೆ ಏಕೆ ತಂದೆಯ ಜೊತೆ ಜೊತೆಗೆ ಈ ಅದ್ಭುತವಾದ ದೃಶ್ಯವನ್ನು ನೋಡುತ್ತಾ ಜೊತೆಯಲ್ಲಿ ನಡೆಯಬಾರದು! ಇದೂ ಸಹ ಕೆಲಕೆಲವರ ಪಾತ್ರವಿದೆ. ಅಂದಮೇಲೆ ಹೋಗುವ ಸಂಕಲ್ಪವನ್ನು ಮಾಡಬಾರದು. ಹೊರಟು ಹೋದರೂ ಒಳ್ಳೆಯದು, ಉಳಿದುಕೊಂಡರೂ ಬಹಳ ಒಳ್ಳೆಯದು - ಒಬ್ಬರೇ ಹೋದರೂ ಸಹ ಅಡ್ವಾನ್ಸ್ ಪಾರ್ಟಿಯಲ್ಲಿ ಸೇವೆಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ಹೋಗುವ ವಿಚಾರ ಮಾಡಬಾರದು, ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗಬೇಕು ಎನ್ನುವುದನ್ನು ಯೋಚಿಸಿರಿ. ಒಳ್ಳೆಯದು- ಇದೂ ಸಹ ಒಂದು ಅನುಭವವು ಹೆಚ್ಚಾಯಿತು. ಏನಾಗುತ್ತದೆಯೋ, ಅದರಿಂದ ಅನುಭವದ ಡಿಗ್ರಿಯು ಹೆಚ್ಚಾಗುತ್ತದೆ. ಹೇಗೆ ವಿದ್ಯಾರ್ಹತೆಯಲ್ಲಿ ಅನ್ಯರ ಡಿಗ್ರಿಯು ಹೆಚ್ಚುತ್ತದೆ, ಇದೂ ಸಹ ಅನುಭವ ಮಾಡಿದಿರೆಂದರೆ ಡಿಗ್ರಿ ಹೆಚ್ಚಾಯಿತು.

ಪಾರ್ಟಿಯೊಂದು ವಾರ್ತಾಲಾಪ :-
ಎಲ್ಲರೂ ತಮ್ಮನ್ನು ಸ್ವರಾಜ್ಯ ಅಧಿಕಾರಿಯೆಂದು ತಿಳಿಯುತ್ತೀರಾ? ಸ್ವರಾಜ್ಯವು ಈಗ ಸಂಗಮಯುಗದಲ್ಲಿ, ವಿಶ್ವದ ರಾಜ್ಯವು ಭವಿಷ್ಯದ ಮಾತಾಗಿದೆ. ಸ್ವರಾಜ್ಯ ಅಧಿಕಾರಿಯೇ ವಿಶ್ವ ರಾಜ್ಯ ಅಧಿಕಾರಿಯಾಗುವರು. ಸದಾ ತಮ್ಮನ್ನು ಸ್ವರಾಜ್ಯ ಅಧಿಕಾರಿ ಎಂದು ತಿಳಿದುಕೊಂಡು, ಈ ಕರ್ಮೇಂದ್ರಿಯಗಳನ್ನು ಕರ್ಮಚಾರಿಯೆಂದು ತಿಳಿದು, ತಮ್ಮನ್ನು ಅಧಿಕಾರದಿಂದ ನಡೆಸುತ್ತೀರಾ ಅಥವಾ ಕೆಲವೊಮ್ಮೆ ಕೆಲವು ಕರ್ಮೇಂದ್ರಿಯಗಳು ರಾಜನಾಗಿ ಬಿಡುತ್ತದೆಯೇ. ತಾವು ಸ್ವಯಂ ರಾಜನೇ ಅಥವಾ ಕೆಲವೊಮ್ಮೆ ಕೆಲವು ಕರ್ಮೇಂದ್ರಿಯಗಳು ರಾಜನಾಗಿ ಬಿಡುತ್ತದೆಯೇ? ಕೆಲವೊಮ್ಮೆ ಕೆಲವು ಕರ್ಮೇಂದ್ರಿಯಗಳು ಮೋಸವನ್ನಂತು ಮಾಡುವುದಿಲ್ಲವೇ? ಒಂದು ವೇಳೆ ಯಾರಿಂದಲಾದರೂ ಮೋಸವನ್ನನುಭವಿಸಿದಿರೆಂದರೆ ದುಃಖ ಪಡೆದಿರಿ. ಮೋಸವು ದುಃಖವನ್ನು ಪ್ರಾಪ್ತಿ ಮಾಡಿಸುತ್ತದೆ. ಮೋಸವಿಲ್ಲವೆಂದರೆ ದುಃಖವಿಲ್ಲ. ಅಂದಮೇಲೆ ಸ್ವರಾಜ್ಯದ ಖುಷಿಯಲ್ಲಿ, ನಶೆಯಲ್ಲಿ, ಶಕ್ತಿಯಲ್ಲಿ ಇರುವವರು. ಸ್ವರಾಜ್ಯದ ನಶೆಯು ಹಾರುವ ಕಲೆಯಲ್ಲಿ ತೆಗೆದುಕೊಂಡು ಹೋಗುವ ನಶೆಯಾಗಿದೆ. ಅಲ್ಪಕಾಲದ ನಶೆಯು ನಷ್ಟವನ್ನು ಪ್ರಾಪ್ತಿ ಮಾಡಿಸುತ್ತದೆ, ಇದು ಬೇಹದ್ದಿನ ನಶೆ, ಅಲೌಕಿಕ ಆತ್ಮಿಕ ನಶೆಯು ಸುಖದ ಪ್ರಾಪ್ತಿಯನ್ನು ಮಾಡಿಸುವುದಾಗಿದೆ. ಅಂದಮೇಲೆ ರಾಜನದು ಯಥಾರ್ಥವಾದ ರಾಜ್ಯವಿದೆ, ಪ್ರಜೆಯ ರಾಜ್ಯವು ಗಲಾಟೆಯ ರಾಜ್ಯವಾಗಿದೆ. ಆದಿಯಿಂದ ರಾಜರುಗಳ ರಾಜ್ಯವಿದ್ದಿತು. ಈಗ ಅಂತಿಮ ಜನ್ಮದಲ್ಲಿ ಪ್ರಜೆಗಳ ರಾಜ್ಯವು ನಡೆಯುತ್ತಿದೆ. ಅಂದಮೇಲೆ ತಾವೀಗ ರಾಜ್ಯ ಅಧಿಕಾರಿಯಾಗಿ ಬಿಟ್ಟಿರಿ. ಅನೇಕ ಜನ್ಮಗಳು ಭಿಕಾರಿಯಾಗಿದ್ದಿರಿ ಮತ್ತು ಈಗ ಭಿಕಾರಿಯಿಂದ ಅಧಿಕಾರಿಯಾಗಿ ಬಿಟ್ಟಿರಿ. ಬಾಪ್ದಾದಾರವರು ಸದಾ ಹೇಳುವರು- ಮಕ್ಕಳೇ, ಖುಷಿಯಾಗಿರಿ, ಸ್ವತಂತ್ರವಾಗಿರಿ. ತಮ್ಮನ್ನೆಷ್ಟು ಶ್ರೇಷ್ಠಾತ್ಮನೆಂದು ತಿಳಿದು, ಶ್ರೇಷ್ಠ ಕರ್ಮ, ಶ್ರೇಷ್ಠ ಮಾತು, ಶ್ರೇಷ್ಠ ಸಂಕಲ್ಪವನ್ನು ಮಾಡುವಿರಿ, ಈ ಶ್ರೇಷ್ಠ ಸಂಕಲ್ಪದಿಂದ ಶ್ರೇಷ್ಠ ಪ್ರಪಂಚದ ಅಧಿಕಾರಿಯಾಗಿ ಬಿಡುತ್ತೀರಿ. ಈ ಸ್ವರಾಜ್ಯವು ತಮ್ಮ ಜನ್ಮಸಿದ್ಧ ಅಧಿಕಾರವಾಗಿದೆ, ಇದೇ ತಮಗೆ ಜನ್ಮ-ಜನ್ಮಕ್ಕಾಗಿ ಅಧಿಕಾರಿಯನ್ನಾಗಿ ಮಾಡುವಂತದ್ದಾಗಿದೆ. ಒಳ್ಳೆಯದು.

ಅವ್ಯಕ್ತ-ಬಾಪ್ದಾದಾರವರ ಪ್ರೇರಣಾದಾಯಕ ಅಮೂಲ್ಯವಾದ ಮಹಾವಾಕ್ಯಗಳು :-
1. ಎಲ್ಲರಿಗೂ ಒಂದು ಮಾತಿನ ನಿರೀಕ್ಷಣೆಯಿದೆ, ಅದು ಯಾವ ಮಾತಾಗಿದೆ? ಯಾವುದು ಪ್ರಾರಂಭದಲ್ಲಿನ ಒಗಟಿದೆ - ನಾನು ಯಾರು? ಅದೇ ಅಂತ್ಯದವರೆಗೂ ಇದೆ. ಎಲ್ಲರಿಗೂ ನಿರೀಕ್ಷಣೆಯಿದೆ - ಕೊನೆಗೂ ಭವಿಷ್ಯದಲ್ಲಿ ಯಾರು ಮತ್ತು ಮಾಲೆಯಲ್ಲಿ ಎಲ್ಲಿ? ಈಗ ಈ ನಿರೀಕ್ಷಣೆಯು ಯಾವಾಗ ಪೂರ್ಣವಾಗುತ್ತದೆ? ಎಲ್ಲರೂ ಒಬ್ಬರಿನ್ನೊಬ್ಬರಲ್ಲಿ ವಾರ್ತಾಲಾಪವನ್ನೂ ಮಾಡುತ್ತಾರೆ, 8ರಲ್ಲಿ ಯಾರಿರುತ್ತಾರೆ, 100ರಲ್ಲಿ ಯಾರಿರುತ್ತಾರೆ, 16000ದಲ್ಲಂತು ಯಾವುದೇ ಪ್ರಶ್ನೆಯಿಲ್ಲ. ಕೊನೆಗೂ 8ರಲ್ಲಿ ಅಥವಾ 100ರಲ್ಲಿ ಯಾರಿರುತ್ತಾರೆ? ವಿದೇಶದವರು ಯೋಚಿಸುತ್ತಾರೆ- ನಾವು ಯಾವ ಮಾಲೆಯಲ್ಲಿರುತ್ತೇವೆ ಮತ್ತು ಪ್ರಾರಂಭದಲ್ಲಿ ಬರುವವರು ಮತ್ತೆ ಯೋಚಿಸುತ್ತಾರೆ- ಲಾಸ್ಟ್ ಸೋ ಫಾಸ್ಟ್ ಇದ್ದಾರೆ. ನಮ್ಮ ಸ್ಥಾನವಿದೆಯೇ ಅಥವಾ ಅಂತ್ಯದಲ್ಲಿರುವವರದು ಇದೆಯೇ ಗೊತ್ತಿಲ್ಲ? ಕೊನೆಗೆ ಇದರ ಲೆಕ್ಕವೇನಾಗಿದೆ? ಲೆಕ್ಕವಂತು ತಂದೆಯ ಬಳಿಯಿದೆಯಲ್ಲವೆ. ನಿಗಧಿಗೊಳಿಸಿಲ್ಲ. ತಾವುಗಳೂ ಸಹ ಆರ್ಟ್ ಕಾಂಪಿಟೇಷನ್ನ ಚಿತ್ರವನ್ನು ಹೇಗೆ ಆಯ್ಕೆ ಮಾಡಿದಿರಿ? ಮೊದಲು ಸ್ವಲ್ಪ ಬೇರೆ ಮಾಡಿದಿರಿ, ನಂತರ ಅದರಲ್ಲಿಂದ ಒಂದು, ಎರಡು, ಮೂರನೇ ನಂಬರನ್ನು ಹಾಕಿದಿರಿ. ಮೊದಲು ಆಯ್ಕೆ ಮಾಡಲಾಗುತ್ತದೆ ನಂತರ ನಂಬರವಾರ್ ಫಿಕ್ಸ್ ಆಗುತ್ತಾರೆ. ಅಂದಮೇಲೆ ಈಗ ಆಯ್ಕೆಯಾಗಿ ಬಿಟ್ಟಿದ್ದೀರಿ ಆದರೆ ನಿಗಧಿಗಳಿಲ್ಲ. ಅಂತ್ಯದಲ್ಲಿ ಬರುವವರದೇನಾಗುತ್ತದೆ? ಸದಾ ಕೆಲವು ಸಿಸ್ಟಮ್ ಅಂತ್ಯದವರೆಗೂ ಇರುತ್ತದೆ. ರಿಸರ್ವೇಶನ್ ಇರುತ್ತದೆ, ಆದರೂ ಅಂತ್ಯದವರೆಗೂ ಸ್ವಲ್ಪ ಕೋಟಾ ಇಟ್ಟಿರುತ್ತಾರೆ. ಆದರೆ ಅವರು ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರಾಗಿರುತ್ತಾರೆ. ಒಳ್ಳೆಯದು - ತಾವೆಲ್ಲರೂ ಯಾವ ಮಾಲೆಯಲ್ಲಿ ಇದ್ದೀರಿ? ತಮ್ಮಲ್ಲಿ ಭರವಸೆಯನ್ನಿಡಿರಿ. ಯಾವುದಾದರೊಂದು ಅದ್ಭುತವಾದ ಮಾತಾಗುತ್ತದೆ, ಅದರ ಆಧಾರದ ಮೇಲೆ ತಮ್ಮೆಲ್ಲರ ಭರವಸೆಗಳು ಪೂರ್ಣವಾಗಿ ಬಿಡುತ್ತವೆ. ಅಷ್ಟ ರತ್ನಗಳ ವಿಶೇಷತೆಯು ಒಂದು ವಿಶೇಷ ಮಾತಿನೊಂದಿಗಿದೆ. ಅಷ್ಟ ರತ್ನಗಳು ಪ್ರತ್ಯಕ್ಷದಲ್ಲಿ ಹೇಗೆ ನೆನಪಾರ್ಥವಾಗಿದೆ, ವಿಶೇಷವಂತು ಅಷ್ಟಶಕ್ತಿಗಳದೇನಿದೆ, ಆ ಪ್ರತಿಯೊಂದು ಶಕ್ತಿಯು ಅವರ ಜೀವನದಲ್ಲಿ ಪ್ರತ್ಯಕ್ಷವಾಗಿ ಕಾಣಿಸುತ್ತದೆ. ಒಂದು ವೇಳೆ ಒಂದು ಶಕ್ತಿಯೂ ಸಹ ಪ್ರತ್ಯಕ್ಷ ಜೀವನದಲ್ಲಿ ಕಡಿಮೆ ಕಾಣಿಸುತ್ತದೆಯೆಂದರೆ, ಹೇಗೆ ಒಂದು ವೇಳೆ ಮೂರ್ತಿಯ ಒಂದು ಭುಜವು ಖಂಡನೆಯಾಗಿದ್ದರೆ ಪೂಜ್ಯನೀಯನಾಗುವುದಿಲ್ಲ, ಅದೇ ರೀತಿಯಿಂದ ಒಂದು ವೇಳೆ ಒಂದು ಶಕ್ತಿಯ ಕೊರತೆ ಕಾಣಿಸುತ್ತದೆಯೆಂದರೆ, ಈಗಿನವರೆಗೂ ಅಷ್ಟಶಕ್ತಿಗಳ ಪಟ್ಟಿಯಲ್ಲಿ ಫಿಕ್ಸ್ ಆಗಿದ್ದೀರೆಂದರೆ ಹೇಳಲಾಗುವುದಿಲ್ಲ. ಇನ್ನೊಂದು ಮಾತು – ಅಷ್ಟ ದೇವತೆಗಳು ಭಕ್ತರಿಗಾಗಿ ವಿಶೇಷ ಇಷ್ಟ ದೇವತೆಗಳೆಂದು ಒಪ್ಪುತ್ತಾರೆ. ಇಷ್ಟ ಅರ್ಥಾತ್ ಮಹಾನ್ ಪೂಜ್ಯ. ಇಷ್ಟನ ಮೂಲಕ ಪ್ರತಿಯೊಬ್ಬ ಭಕ್ತನಿಗೂ ಪ್ರತಿಯೊಂದು ಪ್ರಕಾರದ ವಿಧಿ ಮತ್ತು ಸಿದ್ಧಿಗಳ ಪ್ರಾಪ್ತಿಯಾಗುತ್ತದೆ. ಇಲ್ಲಿಯೂ ಸಹ ಯಾರು ಇಷ್ಟ ರತ್ನವಾಗುತ್ತಾರೆಯೋ ಅವರು ಸರ್ವ ಬ್ರಾಹ್ಮಣ ಪರಿವಾರದ ಮುಂದೆ, ಈಗಲೂ ಇಷ್ಟ ಅರ್ಥಾತ್ ಪ್ರತೀ ಸಂಕಲ್ಪ ಮತ್ತು ಚಲನೆಯ ಮೂಲಕ ವಿಧಿ ಮತ್ತು ಸಿದ್ಧಿಯ ಮಾರ್ಗದರ್ಶನ ಮಾಡುವವರು, ಈಗಲೂ ಎಲ್ಲರ ಮುಂದೆ ಇದೇ ರೀತಿಯೇ ಮಹಾನ್ ಮೂರ್ತಿಯೆಂದು ಮಾನ್ಯತೆ ಕೊಡಲಾಗುತ್ತದೆ. ಅಂದಮೇಲೆ ಅಷ್ಟ ಶಕ್ತಿಗಳೂ ಇರುತ್ತವೆ ಮತ್ತು ಪರಿವಾರದವರ ಮುಂದೆ ಇಷ್ಟ ಅರ್ಥಾತ್ ಶ್ರೇಷ್ಠಾತ್ಮ, ಮಹಾನ್ ಆತ್ಮ, ವರದಾನಿ ಆತ್ಮನ ರೂಪದಲ್ಲಿರುತ್ತಾರೆ. ಇದು ಅಷ್ಟ ರತ್ನಗಳ ವಿಶೇಷತೆಯಾಗಿದೆ. ಒಳ್ಳೆಯದು.

2. ಪ್ರಪಂಚದವರ ಪ್ರಕಂಪನಗಳಿಂದ ಅಥವಾ ಮಾಯೆಯಿಂದ ಸುರಕ್ಷಿತವಾಗಿರುವ ಸಾಧನ - ಸದಾ "ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ", ಯಾರು ಇದೇ ಲಗನ್ನಿನಲ್ಲಿ ಮಗ್ನರಾಗಿರುತ್ತಾರೆಯೋ, ಅವರು ಮಾಯೆಯ ಪ್ರತಿಯೊಂದು ಪ್ರಕಾರದ ಯುದ್ಧದಿಂದ ಪಾರಾಗಿರುತ್ತಾರೆ. ಹೇಗೆ ಯಾವಾಗ ಯುದ್ಧದ ಸಮಯದಲ್ಲಿ ಬಾಂಬುಗಳನ್ನು ಹಾಕುತ್ತಾರೆ, ಆಗ ಅಂಡರ್ ಗ್ರೌ೦ಡ್ನಲ್ಲಿ ಹೋಗಿ ಬಿಡುತ್ತಾರೆ, ಅಂದರೆ ಅದರ ಪ್ರಭಾವವು ಅವರಿಗಾಗುವುದಿಲ್ಲ, ಹಾಗೆಯೇ ಯಾವಾಗ ಒಂದು ಲಗನ್ನಿನಲ್ಲಿ ಮಗ್ನರಾಗಿರುತ್ತೀರೆಂದರೆ, ಪ್ರಪಂಚದ ಪ್ರಕಂಪನಗಳಿಂದ, ಮಾಯೆಯಿಂದ ಪಾರಾಗಿರುತ್ತೀರಿ, ಸದಾ ಸುರಕ್ಷಿತವಾಗಿರುತ್ತೀರಿ. ಅದು ಯುದ್ಧ ಮಾಡುವುದಕ್ಕೆ ಮಾಯೆಯ ಸಾಹಸವೇ ಇರುವುದಿಲ್ಲ. ಲಗನ್ನಿನಲ್ಲಿ ಮಗ್ನರಾಗಿರಿ, ಇದೇ ಸುರಕ್ಷತೆಯ ಸಾಧನವಾಗಿದೆ.

3. ತಂದೆಯ ಸಮೀಪರತ್ನಗಳ ಲಕ್ಷಣ- ತಂದೆಯ ಸಮೀಪವಿರುವವರ ಮೇಲೆ ತಂದೆಯ ಸತ್ಸಂಗದ ರಂಗೇರಿರುತ್ತದೆ. ಸತ್ಯನ ಸಂಗದ ರಂಗಾಗಿದೆ- ಆತ್ಮೀಯತೆ. ಅಂದಮೇಲೆ ಸಮೀಪ ರತ್ನಗಳು ಸದಾ ಆತ್ಮಿಕ ಸ್ಥಿತಿಯಲ್ಲಿ ಸ್ಥಿತರಾಗಿರುತ್ತಾರೆ. ಶರೀರದಲ್ಲಿರುತ್ತಾ ಭಿನ್ನ, ಆತ್ಮೀಯತೆಯಲ್ಲಿ ಸ್ಥಿತರಾಗಿರುತ್ತಾರೆ. ಶರೀರವನ್ನು ನೋಡುತ್ತಿದ್ದರೂ ನೋಡದಿರುವುದು ಮತ್ತು ಆತ್ಮವೇನು ಕಾಣಿಸದಿರುವ ವಸ್ತುವಾಗಿದೆ- ಅದು ಪ್ರತ್ಯಕ್ಷವಾಗಿ ಕಾಣಿಸುವುದು, ಇದೇ ತಾನೇ ಚಮತ್ಕಾರವಾಗಿದೆ. ಆತ್ಮಿಕ ಮಸ್ತಿಯಲ್ಲಿ ಇರುವವರೇ ತಂದೆಯನ್ನು ಜೊತೆಗಾರರನ್ನಾಗಿ ಮಾಡಿಕೊಳ್ಳಲು ಸಾಧ್ಯ ಏಕೆಂದರೆ ತಂದೆಯು ಆತ್ಮವಾಗಿದ್ದಾರೆ.

4. ಹಳೆಯ ಪ್ರಪಂಚದ ಸರ್ವಆಕರ್ಷಣೆಗಳಿಂದ ಆಚೆಯಿರುವ ಸಹಜಯುಕ್ತಿ - ಸದಾ ನಶೆಯಲ್ಲಿರಿ- ನಾವು ಅವಿನಾಶಿ ಖಜಾನೆಯ ಮಾಲೀಕರಿದ್ದೇವೆ. ತಂದೆಯ ಖಜಾನೆಯೇನಿದೆಯೋ, ಜ್ಞಾನ, ಸುಖ, ಶಾಂತಿ ಆನಂದವೇನಿದೆ.... ಆ ಸರ್ವ ಗುಣಗಳು ನಮ್ಮದಾಗಿದೆ. ಮಗುವು ತಂದೆಯ ಆಸ್ತಿಗೆ ಸ್ವತಹವಾಗಿಯೇ ಮಾಲೀಕನಾಗಿರುತ್ತಾನೆ. ಅಧಿಕಾರಿ ಆತ್ಮನಿಗೆ ತನ್ನ ಅಧಿಕಾರದ ನಶೆಯಿರುತ್ತದೆ, ನಶೆಯಲ್ಲಿ ಎಲ್ಲವೂ ಮರೆತು ಹೋಗುತ್ತದೆಯಲ್ಲವೆ. ಯಾವುದೇ ಸ್ಮೃತಿಯಿರುವುದಿಲ್ಲ, ಒಂದೇ ಸ್ಮೃತಿ ಇರುತ್ತದೆ- ತಂದೆ ಮತ್ತು ನಾನು- ಇದೇ ಸ್ಮೃತಿಯಿಂದ ಹಳೆಯ ಪ್ರಪಂಚದ ಆಕರ್ಷಣೆಯಿಂದ ಸ್ವತಹವಾಗಿ ಪಾರಾಗಿ ಬಿಡುತ್ತಾರೆ. ನಶೆಯಲ್ಲಿರುವವರ ಮುಂದೆ ಸದಾ ಗುರಿಯೂ ಸಹ ಸ್ಪಷ್ಟವಾಗಿರುತ್ತದೆ. ಗುರಿಯಾಗಿರುತ್ತದೆ- ಫರಿಶ್ತೆಯಾಗುವ ಹಾಗೂ ದೇವತೆಯಾಗುವ ಗುರಿ.

5. ಒಂದು ಸೆಕೆಂಡಿನಲ್ಲಿ ಅದ್ಭುತವಾದ ಆಟ, ಅದರಿಂದ ಪಾಸ್-ವಿತ್-ಆನರ್ ಆಗಿ ಬಿಡಬಹುದು – ಒಂದು ಸೆಕೆಂಡಿನ ಆಟವಾಗಿದೆ- ಈಗೀಗ ಶರೀರದಲ್ಲಿ ಬರುವುದು ಮತ್ತು ಈಗೀಗ ಶರೀರದಿಂದ ಅವ್ಯಕ್ತ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡುವುದು. ಒಂದು ಸೆಕೆಂಡಿನ ಆಟದ ಅಭ್ಯಾಸವಿದೆಯೇ? ಯಾವಾಗಬೇಕು, ಹೇಗೆ ಬೇಕು ಅದೇ ಸ್ಥಿತಿಯಲ್ಲಿ ಸ್ಥಿತರಾಗಿರಲು ಸಾಧ್ಯವಾಗಬೇಕು. ಅಂತಿಮ ಪರೀಕ್ಷೆಯು ಸೆಕೆಂಡಿನದೇ ಆಗಿರುತ್ತದೆ, ಆ ಸೆಕೆಂಡಿನ ಏರುಪೇರಿನಲ್ಲಿ ಬಂದರೆಂದರೆ ಫೇಲ್, ಅಚಲರಾಗಿದ್ದರೆ ಪಾಸ್. ಇಂತಹ ನಿಯಂತ್ರಣಾ ಶಕ್ತಿಯಿದೆಯೇ? ಈಗ ಇಂತಹ ಅಭ್ಯಾಸವು ತೀವ್ರ ರೂಪದಲ್ಲಾಗಬೇಕು. ಎಷ್ಟು ಗಲಾಟೆಯಾಗುವುದೋ ಅಷ್ಟೂ ಸ್ವಯಂನ ಸ್ಥಿತಿಯೂ ಅತೀ ಶಾಂತ. ಹೇಗೆ ಸಾಗರವು ಹೊರಗೆ ಶಬ್ಧದಿಂದ ಕೂಡಿರುತ್ತದೆ, ಒಳಗೆ ಸಂಪೂರ್ಣವಾಗಿ ಶಾಂತ, ಇಂತಹ ಅಭ್ಯಾಸವಾಗಬೇಕು. ನಿಯಂತ್ರಣಾ ಶಕ್ತಿಯಿರುವವರೇ ವಿಶ್ವವನ್ನು ನಿಯಂತ್ರಣಗೊಳಿಸಬಲ್ಲರು. ಯಾರು ಸ್ವಯಂನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ, ಅವರು ವಿಶ್ವ ರಾಜ್ಯಾಡಳಿತವನ್ನು ಹೇಗೆ ಮಾಡುವರು. ಸಂಕ್ಷಿಪ್ತಗೊಳಿಸುವ ಶಕ್ತಿಯಿರಬೇಕು. ಒಂದು ಸೆಕೆಂಡಿನಲ್ಲಿ ವಿಸ್ತಾರದಿಂದ ಸಾರದಲ್ಲಿ ಹೊರಟು ಹೋಗಬೇಕು ಮತ್ತು ಒಂದು ಸೆಕೆಂಡಿನಲ್ಲಿ ಸಾರದಿಂದ ವಿಸ್ತಾರದಲ್ಲಿ ಬಂದು ಬಿಡಬೇಕು, ಇದೇ ಅದ್ಭುತವಾದ ಆಟವಾಗಿದೆ.

6. ಅತೀಂದ್ರಿಯ ಸುಖದ ಉಯ್ಯಾಲೆಯಲ್ಲಿ ತೂಗುತ್ತಿರಿ - ತಮ್ಮನ್ನು ಎಲ್ಲಾ ಆತ್ಮರು ಸುಖದಲ್ಲಿ ತೂಗುತ್ತಿರುವುದನ್ನು ನೋಡುತ್ತಾ, ದುಃಖಿಯಿಂದ ಸುಖಿಯಾಗಿ ಬಿಡಲಿ. ತಮ್ಮ ನಯನ, ಮುಖ ಚಹರೆಯೆಲ್ಲವೂ ಸುಖ ಕೊಡಲಿ, ಇಂತಹ ಸುಖದಾಯಿಯಾಗಿರಿ. ಇಂತಹ ಸುಖದಾಯಿಗಳು ಯಾರಾಗುತ್ತಾರೆಯೋ, ಅವರ ಸಂಕಲ್ಪದಲ್ಲಿಯೂ ದುಃಖದ ಪ್ರಕಂಪನಗಳು ಬರಲು ಸಾಧ್ಯವಿಲ್ಲ. ಒಳ್ಳೆಯದು.

ವರದಾನ:
ಮನ-ಬುದ್ಧಿಯ ಏಕಾಗ್ರತೆಯ ಮೂಲಕ ಸರ್ವ ಸಿದ್ಧಿಗಳ ಪ್ರಾಪ್ತಿ ಮಾಡಿಕೊಳ್ಳುವ ಸದಾ ಸಮರ್ಥ ಆತ್ಮಾ ಭವ.

ಸರ್ವ ಸಿದ್ಧಿಗಳನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸಿಕೊಳ್ಳಿರಿ. ಈ ಏಕಾಗ್ರತೆಯ ಶಕ್ತಿಯು ಸಹಜವಾಗಿ ನಿರ್ವಿಘ್ನವನ್ನಾಗಿ ಮಾಡಿ ಬಿಡುತ್ತದೆ, ಪರಿಶ್ರಮ ಪಡುವ ಅವಶ್ಯಕತೆಯಿರುವುದಿಲ್ಲ. ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ- ಇದರ ಸಹಜವಾದ ಅನುಭವವಾಗುತ್ತದೆ, ಸಹಜ ಏಕರಸ ಸ್ಥಿತಿಯಾಗಿ ಬಿಡುತ್ತದೆ. ಸರ್ವರ ಪ್ರತಿ ಕಲ್ಯಾಣದ ವೃತ್ತಿ, ಸಹೋದರ-ಸಹೋದರನ ದೃಷ್ಟಿಯಿರುತ್ತದೆ. ಆದರೆ ಏಕಾಗ್ರರಾಗುವುದಕ್ಕಾಗಿ ಇಷ್ಟೂ ಸಮರ್ಥರಾಗಿರಿ, ಅದರಿಂದ ಮನಸ್ಸು-ಬುದ್ಧಿಯು ಸದಾ ತಮ್ಮ ಆದೇಶದನುಸಾರವಾಗಿ ನಡೆಯಲಿ. ಸ್ವಪ್ನದಲ್ಲಿಯೂ ಸೆಕೆಂಡಿಗಾಗಿಯೂ ಏರುಪೇರಾಗಬಾರದು.

ಸ್ಲೋಗನ್:
ಕಮಲಪುಷ್ಪ ಸಮಾನ ಭಿನ್ನವಾಗಿರುತ್ತೀರೆಂದರೆ ಪ್ರಭು ಪ್ರೀತಿಗೆ ಪಾತ್ರರಾಗಿ ಬಿಡುತ್ತೀರಿ.