22.12.19    Avyakt Bapdada     Kannada Murli     24.03.85     Om Shanti     Madhuban


ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ


ಇಂದು ಲವ್ಫುಲ್ ಮತ್ತು ಲಾಫುಲ್ ಬಾಪ್ದಾದಾರವರು ಎಲ್ಲಾ ಮಕ್ಕಳ ಖಾತೆಯನ್ನು ನೋಡುತ್ತಿದ್ದರು. ಪ್ರತಿಯೊಬ್ಬರ ಜಮಾದ ಖಾತೆಯು ಎಷ್ಟಿದೆ! ಬ್ರಾಹ್ಮಣರಾಗುವುದು ಅರ್ಥಾತ್ ಖಾತೆಯನ್ನು ಜಮಾ ಮಾಡುವುದು ಏಕೆಂದರೆ ಈ ಜನ್ಮದಲ್ಲಿ ಜಮಾ ಆಗಿರುವ ಖಾತೆಯನುಸಾರವಾಗಿ 21 ಜನ್ಮಗಳ ಪ್ರಾಲಬ್ಧವನ್ನು ಪಡೆಯುತ್ತಿರುತ್ತೀರಿ. ಕೇವಲ 21 ಜನ್ಮಗಳ ಪ್ರಾಲಬ್ಧವಷ್ಟೇ ಅಲ್ಲ. ಆದರೆ ಎಷ್ಟು ಪೂಜ್ಯರಾಗುತ್ತೀರಿ ಅರ್ಥಾತ್ ರಾಜ್ಯ ಪದವಿಯ ಅಧಿಕಾರಿಯಾಗುತ್ತೀರಿ, ಅದರ ಲೆಕ್ಕದನುಸಾರವಾಗಿ ಅರ್ಧ ಕಲ್ಪ ಭಕ್ತಿಮಾರ್ಗದಲ್ಲಿ ಪೂಜೆಯೂ ಸಹ, ರಾಜ್ಯಭಾಗ್ಯದ ಅಧಿಕಾರದ ಲೆಕ್ಕದಿಂದ ಆಗುತ್ತದೆ. ರಾಜ್ಯ ಪದವಿಯು ಶ್ರೇಷ್ಠವಿದೆಯೆಂದರೆ ಪೂಜ್ಯ ಸ್ವರೂಪವೂ ಇಷ್ಟೇ ಶ್ರೇಷ್ಠವಾಗುತ್ತದೆ. ಇಷ್ಟು ಸಂಖ್ಯೆಯಲ್ಲಿ ಪ್ರಜೆಗಳೂ ಆಗುವರು. ಪ್ರಜೆಗಳು ತಮ್ಮ ರಾಜ್ಯಾಧಿಕಾರಿ ವಿಶ್ವ ಮಹಾರಾಜ ಅಥವಾ ರಾಜನನ್ನು ಮಾತ್ಪಿತಾನ ರೂಪದಿಂದ ಪ್ರೀತಿ ಮಾಡುವರು. ಭಕ್ತಾತ್ಮರೂ ಸಹ ಇಂತಹ ರೂಪದಿಂದಲೇ ಆ ಶ್ರೇಷ್ಠಾತ್ಮನನ್ನು ಅಥವಾ ರಾಜ್ಯಾಧಿಕಾರಿ ಮಹಾನ್ ಆತ್ಮನನ್ನು ತನ್ನ ಪ್ರಿಯ ಇಷ್ಟ ದೇವನೆಂದು ತಿಳಿದು ಪೂಜೆ ಮಾಡುವರು. ಯಾರು ಅಷ್ಟ ರತ್ನದವರಾಗುತ್ತಾರೆ ಅವರು ಇಷ್ಟ ದೇವನೂ, ಇಷ್ಟೇ ಮಹಾನ್ ಸಹ ಆಗುತ್ತಾರೆ. ಈ ಲೆಕ್ಕದನುಸಾರವಾಗಿ ಇದೇ ಬ್ರಾಹ್ಮಣ ಜೀವನದಲ್ಲಿ ರಾಜ್ಯ ಪದವಿ ಮತ್ತು ಪೂಜ್ಯ ಪದವಿಯನ್ನು ಪಡೆಯುತ್ತೀರಿ. ಅರ್ಧ ಕಲ್ಪದ ರಾಜ್ಯ ಪದವಿಯವರಾಗುತ್ತೀರಿ ಮತ್ತು ಅರ್ಧ ಕಲ್ಪ ಪೂಜ್ಯ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಅಂದಮೇಲೆ ಈ ಜನ್ಮ ಅಥವಾ ಜೀವನ ಅಥವಾ ಯುಗವು ಇಡೀ ಕಲ್ಪದ ಖಾತೆಯನ್ನು ಜಮಾ ಮಾಡುವ ಯುಗ ಅಥವಾ ಜೀವನವಾಗಿದೆ. ಆದ್ದರಿಂದ ತಮ್ಮೆಲ್ಲರ ಒಂದು ಸ್ಲೋಗನ್ ಮಾಡಲಾಗಿದೆ, ನೆನಪಿದೆಯೇ? ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ. ಇದು ಈ ಸಮಯದ ಇದೇ ಜೀವನಕ್ಕಾಗಿಯೇ ಗಾಯನವಾಗಿದೆ. ಬ್ರಾಹ್ಮಣರಿಗಾಗಿಯೂ ಈ ಸ್ಲೋಗನ್ ಇದೆ, ಅಂದಮೇಲೆ ಅಜ್ಞಾನಿ ಆತ್ಮರಾಗಿಯೂ ಜಾಗೃತಗೊಳಿಸುವ ಸ್ಲೋಗನ್ ಇದಾಗಿದೆ. ಒಂದುವೇಳೆ ಬ್ರಾಹ್ಮಣ ಆತ್ಮರು ಪ್ರತೀ ಶ್ರೇಷ್ಠ ಕರ್ಮವನ್ನು ಮಾಡುವುದಕ್ಕೆ ಮೊದಲು ಶ್ರೇಷ್ಠ ಸಂಕಲ್ಪವನ್ನು ಮಾಡುತ್ತಾ, ಈ ಸ್ಲೋಗನ್ನ್ನು ಸದಾ ನೆನಪಿಟ್ಟುಕೊಳ್ಳಿರಿ- ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ, ಆಗ ಏನಾಗುವುದು? ಸದಾ ಪ್ರತೀ ಶ್ರೇಷ್ಠ ಕಾರ್ಯದಲ್ಲಿ ತೀವ್ರವಾಗಿ ಮುಂದುವರೆಯುತ್ತೀರಿ. ಜೊತೆ ಜೊತೆಗೆ ಈ ಸ್ಲೋಗನ್ ಸದಾ ಉಮ್ಮಂಗ-ಉತ್ಸಾಹವನ್ನು ತರಿಸುವುದಾಗಿದೆ. ಆತ್ಮಿಕ ಜಾಗೃತಿಯು ಸ್ವತಹವಾಗಿಯೇ ಬಂದು ಬಿಡುತ್ತದೆ. ಮತ್ತೆ ಮಾಡಿ ಬಿಡುತ್ತೇವೆ, ನೋಡೋಣ, ಮಾಡುವುದಂತು ಮಾಡಲೇಬೇಕು, ಆಗಲೇಬೇಕು - ಈ ಸಾಧಾರಣ ಪುರುಷಾರ್ಥದ ಸಂಕಲ್ಪವು ಸ್ವತಹವಾಗಿಯೇ ಸಮಾಪ್ತಿಯಾಗಿ ಬಿಡುತ್ತದೆ ಏಕೆಂದರೆ ಸ್ಮೃತಿ ಬಂದು ಬಿಟ್ಟಿತು - ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ. ಏನು ಮಾಡಬೇಕೋ ಅದನ್ನೀಗ ಮಾಡಿ ಬಿಡಬೇಕು, ಇದಕ್ಕೆ ಹೇಳಲಾಗುತ್ತದೆ - ತೀವ್ರ ಪುರುಷಾರ್ಥ.

ಸಮಯ ಬದಲಾಗುವುದರಿಂದ ಶುಭ ಸಂಕಲ್ಪವೂ ಬದಲಾಗಿ ಬಿಡುತ್ತದೆ. ಶುಭ ಕಾರ್ಯವನ್ನು ಯಾವ ಉಮ್ಮಂಗದಿಂದ ಮಾಡಬೇಕೆಂದು ಯೋಚಿಸಿದಿರಿ, ಅದೂ ಸಹ ಬದಲಾಗಿ ಬಿಡುತ್ತದೆ. ಆದ್ದರಿಂದ ಬ್ರಹ್ಮಾ ತಂದೆಯವರು ನಂಬರ್ವನ್ನಲ್ಲಿ ಹೋಗುವ ವಿಶೇಷತೆಯನ್ನೇನು ನೋಡಿದಿರಿ? ಎಂದೋ ಅಲ್ಲ, ಆದರೆ ಈಗ ಮಾಡಬೇಕು. ತಕ್ಷಣದಲ್ಲಿಯೇ ದಾನ ಮಾಡುವುದು ಮಹಾ ಪುಣ್ಯ ಎಂದು ಹೇಳಲಾಗುತ್ತದೆ. ಒಂದುವೇಳೆ ಅದೇ ಕ್ಷಣದಲ್ಲಿ ದಾನ ಮಾಡಲಿಲ್ಲ, ಯೋಚಿಸಿದಿರಿ, ಸಮಯ ತೊಡಗಿಸಿದಿರಿ, ಯೋಜನೆ ಮಾಡಲಾಯಿತು ನಂತರ ಪ್ರತ್ಯಕ್ಷದಲ್ಲಿ ತರಲಾಯಿತೆಂದರೆ, ಇದಕ್ಕೆ ತಕ್ಷಣವೇ ದಾನ ಮಾಡುವುದೆಂದು ಹೇಳಲಾಗುವುದಿಲ್ಲ. ದಾನವೆಂದು ಹೇಳಲಾಗುತ್ತದೆ. ತಕ್ಷಣ ದಾನ ಮತ್ತು ದಾನದಲ್ಲಿ ಅಂತರವಿದೆ. ತಕ್ಷಣವೇ ದಾನವಾಗುವುದು ಮಹಾದಾನವಾಗಿದೆ. ಮಹಾದಾನದ ಫಲವು ಮಹಾನ್ ಆಗಿರುತ್ತದೆ ಏಕೆಂದರೆ ಎಲ್ಲಿಯವರೆಗೆ ಸಂಕಲ್ಪವನ್ನು ಪ್ರತ್ಯಕ್ಷದಲ್ಲಿ ತರುವುದರಲ್ಲಿ ಯೋಚಿಸುತ್ತಾರೆ - ಒಳ್ಳೆಯದನ್ನು ಮಾಡಬೇಕು, ಮಾಡುತ್ತೇನೆ, ಈಗಲ್ಲ, ಸ್ವಲ್ಪ ಸಮಯದ ನಂತರ ಮಾಡುವೆನು ಎಂದು. ಈಗ ಇಷ್ಟು ಮಾಡಿ ಬಿಡುತ್ತೇನೆ, ಇದನ್ನು ಯೋಚಿಸಲಾಯಿತು ಮತ್ತು ಮಾಡುವುದರ ಮಧ್ಯದಲ್ಲಿ ಸಮಯವೇನು ತೊಡಗಿಸಲಾಗುತ್ತದೆ, ಅದರಲ್ಲಿ ಮಾಯೆಗೆ ಅವಕಾಶವು ಸಿಕ್ಕಿ ಬಿಡುತ್ತದೆ. ಬಾಪ್ದಾದಾರವರು ಮಕ್ಕಳ ಖಾತೆಯಲ್ಲಿ ಕೆಲವೊಮ್ಮೆ ನೋಡುತ್ತಾರೆ - ಯೋಚಿಸುವುದು ಮತ್ತು ಮಾಡುವುದರ ಮಧ್ಯೆ ಸಮಯವೇನು ಉಂಟಾಗುತ್ತದೆ, ಆ ಸಮಯದಲ್ಲಿ ಮಾಯೆಯು ಬಂದು ಬಿಡುತ್ತದೆಯೆಂದರೆ ಮಾತೂ ಸಹ ಬದಲಾಗಿ ಬಿಡುತ್ತದೆ. ತಿಳಿದುಕೊಳ್ಳಿ - ಕೆಲವೊಮ್ಮೆ ತನುವಿನಿಂದ, ಮನಸ್ಸಿನಿಂದ ಇದನ್ನು ಮಾಡೋಣವೆಂದು ಯೋಚಿಸುತ್ತೀರಿ. ಆದರೆ ಸಮಯ ತೆಗೆದುಕೊಳ್ಳುವುದರಿಂದ 100% ಏನು ಯೋಚಿಸುತ್ತೀರಿ ಮಾಡುವ ಸಮಯದಲ್ಲಿ ಅದು ಬದಲಾಗಿ ಬಿಡುತ್ತದೆ. ಸಮಯವನ್ನು ತೊಡಗಿಸುವುದರಿಂದ ಮಾಯೆಯ ಪ್ರಭಾವವಾಗುವ ಕಾರಣದಿಂದ ತಿಳಿಯಿರಿ - 8 ಗಂಟೆ ತೊಡಗಿಸುವವರು 6 ಗಂಟೆಗಳಷ್ಟೇ ತೊಡಗಿಸುತ್ತೀರಿ. 2 ಗಂಟೆಗಳು ಕಟ್ ಆಗಿ ಬಿಡುತ್ತದೆ. ಸಂದರ್ಭವೇ ಹಾಗಾಗಿ ಬಿಡುತ್ತದೆ. ಇದೇ ಪ್ರಕಾರದಿಂದ ಧನದಲ್ಲಿ ಯೋಚಿಸುತ್ತಾರೆ - 100 ಮಾಡಬೇಕು ಮತ್ತು ಮಾಡುವುದು 50, ಇಷ್ಟೂ ಅಂತರವಾಗಿ ಬಿಡುತ್ತದೆ. ಏಕೆಂದರೆ ಮಧ್ಯದಲ್ಲಿ ಮಾಯೆ ಬರುವುದಕ್ಕೆ ಅವಕಾಶವು ಸಿಕ್ಕಿ ಬಿಡುತ್ತದೆ. ನಂತರ ಕೆಲವು ಸಂಕಲ್ಪಗಳು ಬರುತ್ತದೆ. ಒಳ್ಳೆಯದು. 50 ಈಗ ಮಾಡಿ ಬಿಡುತ್ತೇವೆ, 50 ನಂತರದಲ್ಲಿ ಮಾಡಿ ಬಿಡುತ್ತೇವೆ. ಇರುವುದಂತು ತಂದೆಯದೇ ಇದೆ, ಆದರೆ ತನು-ಮನ-ಧನ ಎಲ್ಲದರ ತಕ್ಷಣದಾನವೇನಿರುತ್ತದೆ, ಅದು ಮಹಾಪುಣ್ಯವಾಗುತ್ತದೆ. ನೋಡಿದಿರಲ್ಲವೆ - ಬಲಿಯನ್ನೂ ಕೊಡುತ್ತಾರೆಂದರೆ ಮಹಾಪ್ರಸಾದವು ಅದೇ ಆಗುತ್ತದೆ, ಯಾವುದು ತಕ್ಷಣದಲ್ಲಾಗುತ್ತದೆ. ಒಂದೇ ಏಟಿಗೆ ಬಲಿಯಾಗುತ್ತದೆಯೋ ಅದಕ್ಕೆ ಮಹಾಪ್ರಸಾದ ಎಂದು ಹೇಳಲಾಗುತ್ತದೆ. ಯಾವ ಬಲಿಯು ಚೀರಾಡುತ್ತಾ-ಚೀರಾಡುತ್ತಾ, ಯೋಚಿಸುತ್ತಾ-ಯೋಚಿಸುತ್ತಾ ಉಳಿದು ಬಿಡುತ್ತದೆಯೋ ಅದು ಮಹಾ ಪ್ರಸಾದವಲ್ಲ. ಹೇಗೆ ಅವರು ಕುರಿಯನ್ನು ಬಲಿ ಕೊಡುತ್ತಾರೆ, ಅದು ಬಹಳ ಚೀರಾಡುತ್ತದೆ. ಇಲ್ಲಿ ಏನು ಮಾಡುತ್ತಾರೆ? ಯೋಚಿಸುತ್ತಾರೆ - ಹೀಗೆ ಮಾಡಲೇ ಅಥವಾ ಮಾಡುವುದು ಬೇಡವೇ. ಇದಾಯಿತು ಯೋಚಿಸುವುದು. ಚೀರಾಡುವವರೆಂದಿಗೂ ಸಹ ಮಹಾಪ್ರಸಾದದ ರೂಪದಲ್ಲಿ ಸ್ವೀಕರಿಸುವುದಿಲ್ಲ. ಹಾಗೆಯೇ ಇಲ್ಲಿಯೂ ತಕ್ಷಣ ದಾನ ಮಹಾಪುಣ್ಯ.....ಇದೇನು ಗಾಯನವಿದೆ, ಅದು ಈ ಸಮಯದ್ದಾಗಿದೆ ಅರ್ಥಾತ್ ಯೋಚಿಸುವುದು ಮತ್ತು ಮಾಡುವುದು ತಕ್ಷಣವಿರಲಿ. ಯೋಚಿಸುತ್ತಾ-ಯೋಚಿಸುತ್ತಾ ಉಳಿದುಕೊಂಡು ಬಿಡಬಾರದು. ಕೆಲವೊಮ್ಮೆ ಇಂತಹ ಅನುಭವವನ್ನೂ ತಿಳಿಸುತ್ತಾರೆ. ಇದನ್ನೂ ನಾನೂ ಸಹ ಯೋಚಿಸಿದ್ದೆನು ಆದರೆ ಇವರು ಮಾಡಿ ಬಿಟ್ಟರು, ನಾನು ಮಾಡಲಿಲ್ಲ. ಹಾಗಾದರೆ ಯಾರು ಮಾಡಿ ಬಿಡುತ್ತಾರೆ ಅವರು ಪಡೆದು ಬಿಡುತ್ತಾರೆ. ಯಾರು ಯೋಚಿಸುತ್ತಾ-ಯೋಚಿಸುತ್ತಾ ಉಳಿದುಕೊಂಡು ಬಿಡುತ್ತಾರೆ, ಅವರು ಯೋಚಿಸುತ್ತಾ-ಯೋಚಿಸುತ್ತಾ ತ್ರೇತಾಯುಗದವರೆಗೆ ತಲುಪಿ ಬಿಡುತ್ತಾರೆ. ಯೋಚಿಸುತ್ತಾ-ಯೋಚಿಸುತ್ತಾ ಉಳಿದುಕೊಂಡು ಬಿಡುತ್ತಾರೆ. ಯಾವುದನ್ನು ತಕ್ಷಣ ಮಾಡಲಿಲ್ಲ, ಅದೇ ವ್ಯರ್ಥ ಸಂಕಲ್ಪವೂ ಆಗಿದೆ. ಶುಭ ಕಾರ್ಯ ಶುಭ ಸಂಕಲ್ಪಕ್ಕಾಗಿ ಗಾಯನವಿದೆ- "ತಕ್ಷಣ ದಾನ ಮಹಾ ಪುಣ್ಯ'' ಕೆಲವೊಮ್ಮೆ ಕೆಲವು ಮಕ್ಕಳು ಬಹಳ ಆಟವನ್ನು ತೋರಿಸುತ್ತಾರೆ. ವ್ಯರ್ಥ ಸಂಕಲ್ಪವು ಇಷ್ಟೂ ಫೋರ್ಸ್ ನಿಂದ ಬರುತ್ತದೆ, ಅದನ್ನು ನಿಯಂತ್ರಣ ಮಾಡಲೂ ಆಗುವುದಿಲ್ಲ. ನಂತರ ಆ ಸಮಯದಲ್ಲಿ ಹೇಳುತ್ತಾರೆ - ಏನು ಮಾಡಲಿ ಆಗಿ ಹೋಯಿತಲ್ಲವೆ. ನಿಲ್ಲಿಸಲು ಸಾಧ್ಯವಿಲ್ಲ, ಮನಸ್ಸಿಗೇನು ಬಂದಿತು ಅದನ್ನು ಮಾಡಿ ಬಿಟ್ಟೆನು, ಆದರೆ ವ್ಯರ್ಥ ಸಂಕಲ್ಪಕ್ಕಾಗಿ ನಿಯಂತ್ರಣಾ ಶಕ್ತಿಯಿರಬೇಕು. ಒಂದು ಸಮರ್ಥ ಸಂಕಲ್ಪದ ಫಲವು ಪದಮದಷ್ಟು ಸಿಗುತ್ತದೆ. ಹಾಗೆಯೇ ಒಂದು ವ್ಯರ್ಥ ಸಂಕಲ್ಪದ ಲೆಕ್ಕಾಚಾರವು - ಉದಾಸೀನರಾಗುವುದು, ಬೇಸರಗೊಳ್ಳುವುದು ಅಥವಾ ಖುಷಿ ಮಾಯವಾಗುವುದು ಅಥವಾ ನಾನೇನಾಗಿದ್ದೇನೆ ಅರ್ಥವಾಗದಿರುವುದು, ತನ್ನನ್ನೇ ತಿಳಿಯದಿರುವುದು - ಇದೂ ಸಹ ಒಂದಕ್ಕೆ ಬಹಳ ಪಟ್ಟು ಲೆಕ್ಕದಿಂದ ಅನುಭವವಾಗುತ್ತದೆ. ನಂತರ ಯೋಚಿಸುತ್ತಾರೆ - ಇದ್ದಿದ್ದಂತು ಏನೂ ಇಲ್ಲ. ಖುಷಿಯೇಕೆ ಮಾಯವಾಯಿತೆಂದು ಗೊತ್ತಿಲ್ಲ. ಮಾತಂತು ದೊಡ್ಡದಿರಲಿಲ್ಲ ಆದರೆ ಬಹಳ ದಿನಗಳಾಯಿತು, ಖುಷಿಯು ಕಡಿಮೆಯಾಯಿತು. ಗೊತ್ತಿಲ್ಲ, ಏಕೆ ಒಂಟಿಯಾಗಿರುವು ಇಷ್ಟವಾಗುತ್ತದೆ! ಎಲ್ಲಿಗಾದರೂ ಹೊರಟು ಹೋಗೋಣ, ಆದರೆ ಹೋಗುವುದಾದರೂ ಎಲ್ಲಿಗೆ? ಒಂಟಿ ಅರ್ಥಾತ್ ತಂದೆಯ ಜೊತೆಯಿಲ್ಲದೆ, ಒಂಟಿಯಾಗಿ ಹೋಗಬಾರದಲ್ಲವೆ. ಭಲೆ ಆ ರೀತಿ ಒಂಟಿಯಾಗಿ ಬಿಡಿ. ಆದರೆ ತಂದೆಯ ಜೊತೆಯಿಂದ ಎಂದಿಗೂ ಒಂಟಿಯಾಗಬಾರದು. ಒಂದುವೇಳೆ ತಂದೆಯ ಜೊತೆಯಿಂದ ಒಂಟಿಯಾದಿರಿ, ವೈರಾಗಿ, ಉದಾಸಿಯಾದಿರಿ, ಇದಂತು ಇನ್ನೊಂದು ಮಠವಾಗಿದೆ. ಬ್ರಾಹ್ಮಣ ಜೀವನದವರಲ್ಲ. ಕಂಬೈಂಡ್ ಆಗಿದ್ದೀರಲ್ಲವೆ. ಸಂಗಮಯುಗವು ಕಂಬೈಂಡ್ ಆಗಿರುವ ಯುಗವಾಗಿದೆ. ಇಂತಹ ಅದ್ಭುತವಾದ ಜೋಡಿಯಂತು ಇಡೀ ಕಲ್ಪದಲ್ಲಿಯೂ ಸಿಗುವುದಿಲ್ಲ. ಭಲೆ ಲಕ್ಷ್ಮೀ-ನಾರಾಯಣನೂ ಆಗಿ ಬಿಡಬಹುದು. ಆದರೆ ಇಂತಹ ಜೋಡಿಯಂತು ಆಗುವುದಿಲ್ಲವಲ್ಲವೆ. ಆದ್ದರಿಂದ ಸಂಗಮಯುಗದ ಕಂಬೈಂಡ್ ರೂಪವೇನಿದೆ, ಒಂದು ಸೆಕೆಂಡಿಗೂ ಬೇರೆಯಾಗಲು ಸಾಧ್ಯವಿಲ್ಲ. ಬೇರೆಯಾದರು ಮತ್ತು ಹೋದರು, ಇಂತಹ ಅನುಭವವಿದೆಯಲ್ಲವೆ! ನಂತರ ಏನು ಮಾಡುವರು? ಕೆಲವೊಮ್ಮೆ ಸಾಗರದ ದಡಕ್ಕೆ ಹೊರಟು ಹೋಗುತ್ತಾರೆ, ಕೆಲವೊಮ್ಮೆ ಮೇಲ್ಛಾವಣಿಯಲ್ಲಿ, ಕೆಲವೊಮ್ಮೆ ಬೆಟ್ಟಗಳ ಮೇಲೆ ಹೊರಟು ಹೋಗುತ್ತಾರೆ. ಮನನ ಮಾಡುವುದಕ್ಕಾಗಿ ಹೋಗುವುದು ಬೇರೆ ಮಾತಾಗಿದೆ. ಆದರೆ ತಂದೆಯವರಿಲ್ಲದೆ ಒಂಟಿಯಾಗಬಾರದು. ಎಲ್ಲಿಯೇ ಹೋಗಿರಿ ಜೊತೆ ಹೋಗಿರಿ - ಇದು ಬ್ರಾಹ್ಮಣ ಜೀವನ ಪ್ರತಿಜ್ಞೆಯಾಗಿದೆ. ಜನ್ಮವಾಗುತ್ತಿದ್ದಂತೆಯೇ ಈ ಪ್ರತಿಜ್ಞೆಯನ್ನು ಮಾಡಿದಿರಲ್ಲವೆ - ಜೊತೆಯಿರುತ್ತೇವೆ, ಜೊತೆಯಲ್ಲಿ ನಡೆಯುತ್ತೇವೆ. ಈ ರೀತಿಯಂತು ಇಲ್ಲ, ಕಾಡಿನಲ್ಲಿ ಅಥವಾ ಸಾಗರದಲ್ಲಿ ಹೊರಟು ಹೋಗಬೇಕು, ಅಲ್ಲ. ಜೊತೆಯಿರಬೇಕು, ಜೊತೆಯಲ್ಲಿ ನಡೆಯಬೇಕು. ಇದು ಎಲ್ಲರಲ್ಲಿಯೂ ಪರಿಪಕ್ವ ಪ್ರತಿಜ್ಞೆಯಿದೆಯಲ್ಲವೆ. ಧೃಡ ಸಂಕಲ್ಪದವರು ಸದಾ ಸಫಲತೆಯನ್ನು ಪಡೆಯುತ್ತಾರೆ. ಧೃಡತೆಯು ಸಫಲತೆಯ ಬೀಗದ ಕೈ ಆಗಿದೆ. ಅಂದಮೇಲೆ ಈ ಪ್ರತಿಜ್ಞೆಯೂ ಸಹ ಧೃಡವಾಗಿ ಪರಿಪಕ್ವವಾಗಿ ಮಾಡಿದಿರಲ್ಲವೆ. ಎಲ್ಲಿ ಧೃಡತೆ ಸದಾ ಇದೆಯೋ ಅಲ್ಲಿ ಸಫಲತೆಯು ಸದಾ ಇದೆ. ಧೃಡತೆಯು ಕಡಿಮೆಯಿದೆಯೆಂದರೆ ಸಫಲತೆಯೂ ಕಡಿಮೆಯಿರುತ್ತದೆ.

ಬ್ರಹ್ಮಾ ತಂದೆಯ ವಿಶೇಷತೆಯನ್ನು ನೋಡಿದಿರಾ! ಇದನ್ನೇ ನೋಡಿದಿರಲ್ಲವೆ ತಕ್ಷಣದಲ್ಲಿ ದಾನ...... ಏನಾಗುತ್ತದೆಯೋ ಎಂದು ಎಂದಾದರೂ ಯೋಚಿಸಿದರೇ? ಮೊದಲು ಯೋಚಿಸುವೆನು ನಂತರ ಮಾಡುವೆನು ಅಲ್ಲ. ತಕ್ಷಣ ದಾನ ಮಹಾ ಪುಣ್ಯದ ಕಾರಣದಿಂದ ನಂಬರ್ವನ್ ಮಹಾನ್ ಆತ್ಮನಾದರು. ಆದ್ದರಿಂದ ನೋಡಿರಿ - ನಂಬರ್ವನ್ ಮಹಾನ್ ಆತ್ಮನಾಗುವ ಕಾರಣದಿಂದ ಕೃಷ್ಣನ ರೂಪದಲ್ಲಿ ನಂಬರ್ವನ್ ಪೂಜೆಯಾಗುತ್ತಿದೆ. ಇದೊಂದೇ ಮಹಾನ್ ಆತ್ಮನಿದೆ, ಯಾರ ಬಾಲ್ಯ ರೂಪದಲ್ಲಿಯೂ ಪೂಜೆಯಿದೆ. ಬಾಲ್ಯ ರೂಪವನ್ನೂ ನೋಡಿದ್ದೀರಲ್ಲವೆ ಮತ್ತು ಯುವ ರೂಪದಲ್ಲಿಯೂ ರಾಧೆ-ಕೃಷ್ಣನ ರೂಪದಲ್ಲಿಯೂ ಪೂಜೆಯಾಗುತ್ತದೆ ಮತ್ತು ಮೂರನೆಯದು - ಗೋಪ-ಗೋಪಿಕೆಯರ ರೂಪದಲ್ಲಿಯೂ ಗಾಯನ, ಪೂಜೆಯಾಗುತ್ತದೆ. ನಾಲ್ಕನೆಯದಾಗಿ - ಲಕ್ಷ್ಮೀ-ನಾರಾಯಣನ ರೂಪದಲ್ಲಿ. ಇದೊಂದೇ ಆತ್ಮವಿದೆ, ಯಾರ ಭಿನ್ನ-ಭಿನ್ನ ಆಯಸ್ಸಿನ ರೂಪದಲ್ಲಿ, ಭಿನ್ನ-ಭಿನ್ನ ಚರಿತ್ರೆಯ ರೂಪದಲ್ಲಿ ಗಾಯನ ಮತ್ತು ಪೂಜೆಯಿದೆ. ರಾಧೆಯ ಗಾಯನವಿದೆ ಆದರೆ ರಾಧೆಯನ್ನು ಬಾಲ್ಯ ರೂಪದಲ್ಲೆಂದಿಗೂ ಉಯ್ಯಾಲೆಯಲ್ಲಿ ತೂಗುವುದಿಲ್ಲ. ಕೃಷ್ಣನನ್ನು ತೂಗುತ್ತಾರೆ. ಕೃಷ್ಣನನ್ನು ಪ್ರೀತಿ ಮಾಡುತ್ತಾರೆ. ರಾಧೆಗೆ ಜೊತೆಯ ಕಾರಣ ಹೆಸರು ಪ್ರಸಿದ್ಧವಿದೆ. ಆದರೂ ಎರಡನೇ ನಂಬರ್ ಮತ್ತು ಮೊದಲನೇ ನಂಬರಿನಲ್ಲಿ ಅಂತರವಂತು ಆಯಿತಲ್ಲವೆ. ಅಂದಮೇಲೆ ನಂಬರ್ವನ್ ಆಗುವ ಕಾರಣ ಏನಾಯಿತು? ಮಹಾಪುಣ್ಯ. ಮಹಾನ್ ಪುಣ್ಯಾತ್ಮನಿಂದ ಮಹಾನ್ ಪೂಜ್ಯಾತ್ಮನಾಗಿ ಬಿಟ್ಟರು. ಮುಂಚೆಯೂ ತಿಳಿಸಿದ್ದೇವಲ್ಲವೆ - ತಮ್ಮ ಪೂಜೆಯಲ್ಲಿಯೂ ಅಂತರವಾಗುತ್ತದೆ. ಕೆಲವು ದೇವಿ-ದೇವತೆಗಳ ಪೂಜೆಯು ವಿಧಿಪೂರ್ವಕವಾಗಿ ಆಗುತ್ತದೆ ಮತ್ತು ಕೆಲವರದು ಹೇಗೆಂದರೆ ಕೆಲಸವಾಗಬೇಕು ಎನ್ನುವಂತೆ ಆಗುತ್ತದೆ. ಇದರ ಬಗ್ಗೆ ಮತ್ತೆ ಬಹಳ ವಿಸ್ತಾರವಿದೆ. ಪೂಜೆಯದೂ ಬಹಳ ವಿಸ್ತಾರವಿದೆ ಆದರೆ ಇಂದಿನ ದಿನವಂತು ಎಲ್ಲರ ಜಮಾದ ಖಾತೆಯನ್ನು ನೋಡುತ್ತಿದ್ದರು. ಜ್ಞಾನದ ಖಜಾನೆ, ಶಕ್ತಿಗಳ ಖಜಾನೆ, ಶ್ರೇಷ್ಠ ಸಂಕಲ್ಪಗಳ ಖಜಾನೆಯು ಎಲ್ಲಿಯವರೆಗೆ ಜಮಾ ಮಾಡಿಕೊಂಡಿದ್ದಾರೆ ಮತ್ತು ಸಮಯದ ಖಜಾನೆಯನ್ನು ಎಲ್ಲಿಯವರೆಗೆ ಜಮಾ ಮಾಡಿಕೊಂಡಿದ್ದಾರೆ. ಈ ನಾಲ್ಕೂ ಖಜಾನೆಗಳನ್ನು ಎಲ್ಲಿಯವರೆಗೆ ಜಮಾ ಮಾಡಿಕೊಂಡಿದ್ದಾರೆ - ಈ ಖಾತೆಯನ್ನು ನೋಡುತ್ತಿದ್ದರು. ಅಂದಮೇಲೆ ಈಗ ತಮ್ಮ ಈ ನಾಲ್ಕೂ ಮಾತುಗಳ ಖಾತೆಯನ್ನು ಪರಿಶೀಲನೆ ಮಾಡಿಕೊಳ್ಳಬೇಕು. ನಂತರ ಬಾಪ್ದಾದಾರವರೂ ಸಹ ತಿಳಿಸುತ್ತಾರೆ - ಇದರ ಫಲಿತಾಂಶವೇನನ್ನು ನೋಡಿದೆವು ಮತ್ತು ಪ್ರತಿಯೊಂದು ಖಜಾನೆಯ ಜಮಾ ಮಾಡುವ, ಪ್ರಾಪ್ತಿಯ ಸಂಬಂಧವೇನಿದೆ ಮತ್ತು ಹೇಗೆ ಜಮಾ ಮಾಡಬೇಕು, ಇವೆಲ್ಲಾ ಮಾತುಗಳ ಮೇಲೆ ನಂತರ ತಿಳಿಸುತ್ತೇವೆ. ತಿಳಿಯಿತೆ.

ಸಮಯವಂತು ಮಿತಿಯದಾಗಿದೆಯಲ್ಲವೆ. ಬರುವುದೂ ಸಹ ಮಿತಿಯಲ್ಲಿ, ನಮ್ಮ ಶರೀರವೂ ಅಲ್ಲ. ಲೋನ್ ತೆಗೆದುಕೊಂಡಿರುವ ಶರೀರಿ ಮತ್ತು ಇರುವುದೂ ಸಹ ತತ್ಕಾಲದ ಪಾತ್ರದ ಶರೀರ, ಆದ್ದರಿಂದ ಸಮಯವನ್ನೂ ನೋಡಬೇಕಾಗುತ್ತದೆ. ಬಾಪ್ದಾದಾರವರಿಗೂ ಸಹ ಪ್ರತಿಯೊಂದು ಮಕ್ಕಳೊಂದಿಗೆ ಮಿಲನವಾಗುವುದರಲ್ಲಿ, ಪ್ರತಿಯೊಂದು ಮಕ್ಕಳ ಮಧುರಾತಿ ಮಧುರ ಆತ್ಮಿಕ ಸುಗಂಧವನ್ನು ತೆಗೆದುಕೊಳ್ಳುವುದರಲ್ಲಿ ಮಜಾ ಬರುತ್ತದೆ. ಬಾಪ್ದಾದಾರವರಂತು ಪ್ರತಿಯೊಂದು ಮಕ್ಕಳ ಮೂರೂ ಕಾಲಗಳನ್ನು ತಿಳಿದಿದ್ದಾರಲ್ಲವೆ ಮತ್ತು ಮಕ್ಕಳು ಕೇವಲ ತಮ್ಮ ವರ್ತಮಾನವನ್ನು ಹೆಚ್ಚಾಗಿ ತಿಳಿದುಕೊಂಡಿದ್ದಾರೆ. ಆದ್ದರಿಂದ ಕೆಲವೊಮ್ಮೆ ಹೇಗೋ, ಕೆಲವೊಮ್ಮೆ ಹೇಗೋ ಆಗಿ ಬಿಡುತ್ತಾರೆ. ಆದರೆ ಬಾಪ್ದಾದಾರವರು ಮೂರೂ ಕಾಲಗಳನ್ನು ತಿಳಿದುಕೊಂಡಿರುವ ಕಾರಣ, ಅದೇ ದೃಷ್ಟಿಯಿಂದ ನೋಡುತ್ತಾರೆ - ಇವರು ಕಲ್ಪದ ಮೊದಲಿನ ಹಕ್ಕುದಾರರಾಗಿದ್ದಾರೆ. ಅಧಿಕಾರಿಯಾಗಿದ್ದಾರೆ. ಈಗ ಕೇವಲ ಸ್ವಲ್ಪ ಯಾವುದೋ ಹಲ್ಚಲ್ನಲ್ಲಿದ್ದಾರೆ ಆದರೆ ಈಗೀಗ ಹಲ್ಚಲ್, ಈಗೀಗ ಅಚಲರಾಗಲೇಬೇಕು. ಭವಿಷ್ಯವನ್ನು ಶ್ರೇಷ್ಠವನ್ನಾಗಿ ನೋಡುತ್ತಾರೆ. ಆದ್ದರಿಂದ ವರ್ತಮಾನವನ್ನು ನೋಡುತ್ತಿದ್ದರೂ ನೋಡುವುದಿಲ್ಲ. ಪ್ರತಿಯೊಂದು ಮಕ್ಕಳ ವಿಶೇಷತೆಯನ್ನು ನೋಡುತ್ತಾರೆ. ಯಾರಲ್ಲಿ ಯಾವುದೇ ವಿಶೇಷತೆಯಿಲ್ಲ ಎನ್ನುವವರು ಯಾರಾದರೂ ಇದ್ದೀರಾ! ಮೊದಲ ವಿಶೇಷತೆಯಂತು ಇದೇ ಇದೆ, ಅದರಿಂದ ಇಲ್ಲಿಗೆ ತಲುಪಿದ್ದೀರಿ. ಮತ್ತೇನೂ ಇಲ್ಲದಿರಬಹುದು, ಆದರೂ ಸಮ್ಮುಖದಲ್ಲಿ ಮಿಲನವಾಗುವ ಭಾಗ್ಯವೇನೂ ಕಡಿಮೆಯಲ್ಲ. ಇದಂತು ವಿಶೇಷತೆಯಾಗಿದೆಯಲ್ಲವೆ. ಇದು ವಿಶೇಷ ಆತ್ಮರ ಸಭೆಯಾಗಿದೆ, ಆದ್ದರಿಂದ ವಿಶೇಷ ಆತ್ಮರ ವಿಶೇಷತೆಯನ್ನು ನೋಡುತ್ತಾ ಬಾಪ್ದಾದಾರವರು ಹರ್ಷಿತರಾಗುತ್ತಾರೆ. ಒಳ್ಳೆಯದು! ಸದಾ ತಕ್ಷಣ ದಾನ ಮಹಾ ಪುಣ್ಯದ ಶ್ರೇಷ್ಠ ಸಂಕಲ್ಪವುಳ್ಳವರು, ಸದಾ ಯಾವಾಗ ಎನ್ನುವುದನ್ನು ಈಗ ಎನ್ನುವುದರಲ್ಲಿ ಪರಿವರ್ತನೆ ಮಾಡುವವರು, ಸದಾ ಸಮಯದ ವರದಾನವನ್ನು ತಿಳಿದು ವರದಾನಗಳಿಂದ ಜೋಳಿಗೆಯನ್ನು ತುಂಬಿಕೊಳ್ಳುವವರು, ಸದಾ ಬ್ರಹ್ಮಾ ತಂದೆಯನ್ನು ಅನುಸರಿಸುತ್ತಾ, ಬ್ರಹ್ಮಾ ತಂದೆಯ ಜೊತೆ ರಾಜ್ಯಾಧಿಕಾರಿ ಮತ್ತು ಶ್ರೇಷ್ಠ ಪದವಿಯ ಅಧಿಕಾರಿಯಾಗುವವರು, ಸದಾ ತಂದೆಯ ಜೊತೆ ಕಂಬೈಂಡ್ ಇರುವವರು, ಹೀಗೆ ಸದಾ ಜೊತೆಗಾರರಾಗಿರುವ ಮಕ್ಕಳಿಗೆ, ಸದಾ ಜೊತೆ ನಿಭಾಯಿಸುವ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ವಿದಾಯಿಯ ಸಮಯದಲ್ಲಿ ಎಲ್ಲಾ ಮಕ್ಕಳಿಗೂ ನೆನಪು-ಪ್ರೀತಿಯನ್ನು ಕೊಡುತ್ತಾ:-
ಬಾಪ್ದಾದಾರವರು ನಾಲ್ಕೂ ಕಡೆಯ ಎಲ್ಲಾ ಮಕ್ಕಳಿಗೆ ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ಪ್ರತಿಯೊಂದು ಸ್ಥಾನದ ಸ್ನೇಹಿ ಮಕ್ಕಳು, ಸ್ನೇಹದಿಂದ ಸೇವೆಯಲ್ಲಿಯೂ ಮುಂದುವರೆಯುತ್ತಿದ್ದಾರೆ ಮತ್ತು ಸ್ನೇಹವು ಸದಾ ಮುಂದುವರೆಸುತ್ತಿರುತ್ತದೆ. ಸ್ನೇಹದಿಂದ ಸೇವೆ ಮಾಡುತ್ತೀರಿ ಆದ್ದರಿಂದ ಯಾರ ಸೇವೆಯನ್ನು ಮಾಡುತ್ತೀರಿ, ಅವರೂ ಸಹ ತಂದೆಯ ಸ್ನೇಹಿಯಾಗಿ ಬಿಡುತ್ತಾರೆ. ಎಲ್ಲಾ ಮಕ್ಕಳಿಗೆ ಸೇವೆಯ ಶುಭಾಷಯಗಳೂ ಇದೆ ಮತ್ತು ಪರಿಶ್ರಮವೂ ಇಲ್ಲ. ಆದರೆ ಪ್ರೀತಿಯ ಶುಭಾಷಯಗಳು. ಏಕೆಂದರೆ ಹೆಸರು ಪರಿಶ್ರಮ ಎನ್ನುವುದಿದೆ ಆದರೆ ಇರುವುದಂತು ಪ್ರೀತಿ. ಆದ್ದರಿಂದ ಯಾರು ನೆನಪಿನಲ್ಲಿದ್ದು ಸೇವೆಯನ್ನು ಮಾಡುತ್ತಾರೆಯೋ, ಅವರು ತಮ್ಮ ವರ್ತಮಾನ ಮತ್ತು ಭವಿಷ್ಯವನ್ನು ಜಮಾ ಮಾಡುತ್ತಾರೆ ಆದ್ದರಿಂದ ಈಗಲೂ ಸಹ ಸೇವೆಯ ಖುಷಿಯು ಸಿಗುತ್ತದೆ ಮತ್ತು ಭವಿಷ್ಯಕ್ಕಾಗಿಯೂ ಜಮಾ ಆಗುತ್ತದೆ. ಸೇವೆಯನ್ನು ಮಾಡಲಿಲ್ಲ ಆದರೆ ಅವಿನಾಶಿ ಬ್ಯಾಂಕಿನಲ್ಲಿ ತಮ್ಮ ಖಾತೆಯನ್ನು ಜಮಾ ಮಾಡಿಕೊಂಡಿರಿ. ಸ್ವಲ್ಪ ಸೇವೆ ಮತ್ತು ಸದಾಕಾಲಕ್ಕಾಗಿ ಖಾತೆಯು ಜಮಾ ಆಗಿ ಬಿಟ್ಟಿತು. ಅಂದಮೇಲೆ ಅದು ಸೇವೆಯಾಯಿತೇನು? ಜಮಾ ಆಯಿತಲ್ಲವೆ! ಆದ್ದರಿಂದ ಎಲ್ಲಾ ಮಕ್ಕಳಿಗೂ ಸಹ ಬಾಪ್ದಾದಾರವರು ನೆನಪು-ಪ್ರೀತಿಯನ್ನು ಕಳುಹಿಸುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮನ್ನು ಸಮರ್ಥ ಆತ್ಮನೆಂದು ತಿಳಿದು ಮುಂದುವರೆಯುತ್ತೀರೆಂದರೆ, ಸಮರ್ಥ ಆತ್ಮರ ಸಫಲತೆಯಂತು ಸದಾ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ತಮ್ಮ-ತಮ್ಮ ಹೆಸರಿನಿಂದ ವಿಶೇಷವಾಗಿ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ. (ದಿಲ್ಲಿ ಪಾಂಡವ ಭವನದಲ್ಲಿ ಸೇವೆಯು ಆಗಿದೆ) ದೆಹಲಿಯ ನಿವಾಸಿ ಪಾಂಡವ ಭವನದ ಎಲ್ಲಾ ಮಕ್ಕಳಿಗೂ ವಿಶೇಷವಾಗಿ ಸೇವೆಯ ಶುಭಾಷಯಗಳು. ಏಕೆಂದರೆ ಈ ಸಾಧನವೂ ಸಹ ಸೇವೆಗಾಗಿಯೇ ಆಗಿದೆ. ಸಾಧನಗಳಿಗಾಗಿ ಶುಭಾಷಯಗಳಲ್ಲ, ಸೇವೆಗಾಗಿ ಶುಭಾಷಯಗಳು. ಸದಾ ಈ ಸಾಧನಗಳ ಮೂಲಕ ಬೇಹದ್ದಿನ ಸೇವೆಯನ್ನು ಅವಿನಾಶಿಯಾಗಿ ಮಾಡುತ್ತಿರುತ್ತೀರಿ. ಖುಷಿ-ಖುಷಿಯಿಂದ ವಿಶ್ವದಲ್ಲಿ ಈ ಸಾಧನದ ಮೂಲಕ ತಂದೆಯ ಸಂದೇಶವನ್ನು ತಲುಪಿಸುತ್ತಿರುತ್ತೀರಿ. ಆದ್ದರಿಂದ ಬಾಪ್ದಾದಾರವರು ನೋಡುತ್ತಿದ್ದಾರೆ - ಮಕ್ಕಳಲ್ಲಿ ಸೇವೆಯ ಉಮ್ಮಂಗ-ಉತ್ಸಾಹವು ಎಷ್ಟೊಂದಿದೆ. ಇದೇ ಖುಷಿಯಿಂದ ಸದಾ ಮುಂದುವರೆಯುತ್ತಿರಿ. ಪಾಂಡವ ಭವನಕ್ಕಾಗಿ ಎಲ್ಲಾ ವಿದೇಶಿಗಳು ಖುಷಿಯ ಸರ್ಟಿಫಿಕೇಟನ್ನು ಕೊಡುತ್ತಾರೆ, ಇದಕ್ಕೆ ಹೇಳಲಾಗುತ್ತದೆ - ತಂದೆಯ ಸಮಾನ ಅತಿಥಿ - ಸತ್ಕಾರದಲ್ಲಿ ಸದಾ ಮುಂದುವರೆಯುತ್ತಿರಿ. ಹೇಗೆ ಬ್ರಹ್ಮಾ ತಂದೆಯವರು ಎಷ್ಟೊಂದು ಅತಿಥಿ ಸತ್ಕಾರವನ್ನು ಮಾಡಿ ತೋರಿಸಿದರು. ಅಂದಮೇಲೆ ಅತಿಥಿ ಸತ್ಕಾರದಲ್ಲಿ ಫಾಲೋ ಮಾಡುವವರು ತಂದೆಯ ಪ್ರತ್ಯಕ್ಷ ಮಾಡುವರು. ತಂದೆಯ ಹೆಸರನ್ನು ಪ್ರತ್ಯಕ್ಷಗೊಳಿಸುವರು, ಆದ್ದರಿಂದ ಬಾಪ್ದಾದಾರವರು ಎಲ್ಲಾ ಕಡೆಗಳಿಂದ ನೆನಪು ಪ್ರೀತಿಯನ್ನು ಕೊಡುತ್ತಿದ್ದಾರೆ.

ಅಮೃತವೇಳೆ 6 ಗಂಟೆಗೆ ಬಾಪ್ದಾದಾರವರು ಪುನಃ ಮುರುಳಿಯನ್ನು ನುಡಿಸಿದಿರು ಹಾಗೂ ನೆನಪು-ಪ್ರೀತಿಯನ್ನು ಕೊಟ್ಟರು - 25/03/85

ಇಂದಿನ ದಿನ ಸದಾ ತಮ್ಮನ್ನು ಡಬಲ್ಲೈಟ್ ಎಂದು ತಿಳಿದುಕೊಂಡು ಹಾರುವ ಕಲೆಯ ಅನುಭವ ಮಾಡುತ್ತಿರಿ. ಕರ್ಮ ಯೋಗಿಯ ಪಾತ್ರವನ್ನಭಿನಯಿಸುತ್ತಿದ್ದರೂ ಕರ್ಮ ಮತ್ತು ಯೋಗದ ಬ್ಯಾಲೆನ್ಸ್ನ್ನು ಪರಿಶೀಲನೆ ಮಾಡಿರಿ - ಕರ್ಮ ಮತ್ತು ನೆನಪು ಅರ್ಥಾತ್ ಯೋಗವೆರಡೂ ಶಕ್ತಿಶಾಲಿಯಾಗಿ ಇದೆಯೇ? ಒಂದುವೇಳೆ ಕರ್ಮವು ಶಕ್ತಿಶಾಲಿಯಾಗಿತ್ತು ಮತ್ತು ನೆನಪು ಕಡಿಮೆಯಿದೆಯೆಂದರೆ ಬ್ಯಾಲೆನ್ಸ್ ಆಗಲಿಲ್ಲ ಮತ್ತು ನೆನಪು ಶಕ್ತಿಶಾಲಿಯಾಗಿದ್ದಿತು, ಕರ್ಮವು ಶಕ್ತಿಶಾಲಿಯಿಲ್ಲವೆಂದರೆ ಬ್ಯಾಲೆನ್ಸ್ ಆಗಲಿಲ್ಲ. ಹಾಗಾದರೆ ಕರ್ಮ ಮತ್ತು ನೆನಪಿನ ಬ್ಯಾಲೆನ್ಸ್ ಇಡುತ್ತಿರಬೇಕು. ಇಡೀ ದಿನದಲ್ಲಿ ಇದೇ ಶ್ರೇಷ್ಠ ಸ್ಥಿತಿಯಲ್ಲಿರುವುದರಿಂದ ತಮ್ಮ ಕರ್ಮಾತೀತ ಸ್ಥಿತಿಯು ಸಮೀಪ ಬರುವ ಅನುಭವ ಮಾಡುತ್ತೀರಿ. ಇಡೀ ದಿನದಲ್ಲಿ ಕರ್ಮಾತೀತ ಸ್ಥಿತಿ ಅಥವಾ ಅವ್ಯಕ್ತ ಫರಿಶ್ತಾ ಸ್ವರೂಪದ ಸ್ಥಿತಿಯಲ್ಲಿ ನಡೆಯುತ್ತ-ತಿರುಗಾಡುತ್ತಿರಬೇಕು ಮತ್ತು ಕೆಳಗಿನ ಸ್ಥಿತಿಯಲ್ಲಿ ಬರಬಾರದು. ಇಂದು ಕೆಳಗೆ ಬರಬಾರದು, ಮೇಲೆಯೇ ಇರಬೇಕು. ಒಂದುವೇಳೆ ಯಾವುದೇ ಬಲಹೀನತೆಯಿಂದ ಕೆಳಗೆ ಬಂದು ಬಿಡುತ್ತೀರೆಂದರೂ ಸಹ, ಒಬ್ಬರಿನ್ನೊಬ್ಬರಿಗೆ ಸ್ಮೃತಿ ತರಿಸುತ್ತಾ ಸಮರ್ಥರನ್ನಾಗಿ ಮಾಡುತ್ತಾ, ಎಲ್ಲರೂ ಶ್ರೇಷ್ಠ ಸ್ಥಿತಿಯ ಅನುಭವ ಮಾಡುತ್ತಿರಿ. ಇದು ಇಂದಿನ ವಿದ್ಯೆಯ ಹೋಮ್ವರ್ಕ್ ಆಗಿದೆ. ಹೋಮ್ವರ್ಕ್ ಹೆಚ್ಚಾಗಿದೆ, ಓದುವುದು ಕಡಿಮೆಯಿದೆ.

ಹೀಗೆ ಸದಾ ತಂದೆಯನ್ನು ಫಾಲೋ ಮಾಡುವವರು, ಸದಾ ತಂದೆಯ ಸಮಾನರಾಗುವ ಲಕ್ಷ್ಯವನ್ನು ಧಾರಣೆ ಮಾಡಿಕೊಂಡು ಮುಂದುವರೆಯುವ, ಹಾರುವ ಕಲೆಯ ಅನುಭವಿ ಮಕ್ಕಳಿಗೆ ಬಾಪ್ದಾದಾರವರ ಮನಃಪೂರ್ವಕವಾಗಿ, ಪ್ರೀತಿಯಿಂದ ನೆನಪು-ಪ್ರೀತಿ ಹಾಗೂ ನಮಸ್ತೆ.

ವರದಾನ:  
ಮಧುರತೆಯ ಮೂಲಕ ತಂದೆಯ ಸಮೀಪತೆಯ ಸಾಕ್ಷಾತ್ಕಾರ ಮಾಡಿಸುವಂತಹ ಮಹಾನ್ ಆತ್ಮ ಭವ.

ಯಾವ ಮಕ್ಕಳ ಸಂಕಲ್ಪದಲ್ಲಿ ಮಧುರತೆ, ಮಾತಿನಲ್ಲಿಯೂ ಮಧುರತೆ ಮತ್ತು ಕರ್ಮದಲ್ಲಿಯೂ ಮಧುರತೆಯಿದೆ, ಅವರೇ ತಂದೆಯ ಸಮೀಪವಿದ್ದಾರೆ. ಆದ್ದರಿಂದ ತಂದೆಯೂ ಸಹ ಅವರಿಗೆ ಪ್ರತಿನಿತ್ಯವೂ ಹೇಳುತ್ತಾರೆ - ಮಧುರಾತಿ ಮಧುರ ಮಕ್ಕಳೇ ಮತ್ತು ಮಕ್ಕಳೂ ಸಹ ಪ್ರತ್ಯುತ್ತರ ಕೊಡುತ್ತಾರೆ - ಮಧುರಾತಿ ಮಧುರವಾದ ಬಾಬಾ. ಅಂದಮೇಲೆ ಪ್ರತಿನಿತ್ಯದ ಈ ಮಾತು ಮಧುರತಾ ಸಂಪನ್ನರನ್ನಾಗಿ ಮಾಡಿ ಬಿಡುತ್ತದೆ. ಹೀಗೆ ಮಧುರತೆಯನ್ನು ಪ್ರತ್ಯಕ್ಷಗೊಳಿಸುವ ಶ್ರೇಷ್ಠಾತ್ಮರೇ ಮಹಾನ್ ಆಗಿದ್ದಾರೆ. ಮಧುರತೆಯೇ ಮಹಾನತೆಯಾಗಿದೆ. ಮಧುರತೆಯಿಲ್ಲದಿದ್ದರೆ ಮಹಾನತೆಯ ಅನುಭವವಾಗುವುದಿಲ್ಲ.

ಸ್ಲೋಗನ್:
ಯಾವುದೇ ಕಾರ್ಯದಲ್ಲಿ ಡಬಲ್ಲೈಟ್ ಆಗಿದ್ದು ಮಾಡುತ್ತೀರೆಂದರೆ ಮನೋರಂಜನೆಯ ಅನುಭವ ಮಾಡುವಿರಿ.