14.07.19    Avyakt Bapdada     Kannada Murli     31.12.84     Om Shanti     Madhuban


ಹೊಸ ಜ್ಞಾನ ಮತ್ತು ಹೊಸ ಜೀವನದ ಮೂಲಕ ನವೀನತೆಯ ಹೊಳಪನ್ನು ತೋರಿಸಿರಿ


ಇಂದು ನಾಲ್ಕೂ ಕಡೆಯಲ್ಲಿರುವ ಮಕ್ಕಳು ಸಾಕಾರ ರೂಪದಲ್ಲಿ ಅಥವಾ ಆಕಾರ ರೂಪದಲ್ಲಿ ಹೊಸ ಯುಗ, ಹೊಸ ಜ್ಞಾನ, ಹೊಸ ಜೀವನವನ್ನು ಕೊಡುವಂತಹ ಬಾಪ್ದಾದಾರವರೊಂದಿಗೆ ಹೊಸ ವರ್ಷವನ್ನಾಚರಿಸುವುದಕ್ಕಾಗಿ ಈ ಆತ್ಮಿಕ ಹೈಯೆಸ್ಟ್ ಮತ್ತು ಹೋಲಿಯೆಸ್ಟ್ ಹೊಸ ದರ್ಬಾರಿನಲ್ಲಿ ಉಪಸ್ಥಿತರಾಗಿದ್ದಾರೆ. ಬಾಪ್ದಾದಾರವರ ಬಳಿ ಎಲ್ಲಾ ಮಕ್ಕಳ ಹೃದಯದ ಉಮ್ಮಂಗ-ಉತ್ಸಾಹ ಮತ್ತು ಪರಿವರ್ತನೆ ಮಾಡುವ ಪ್ರತಿಜ್ಞೆಗಳ ಶುಭ ಸಂಕಲ್ಪ, ಶುಭ ಭಾವನೆಗಳು, ಶುಭ ಕಾಮನೆಗಳು ತಲುಪಿದೆ. ಬಾಪ್ದಾದಾರವರೂ ಸಹ ಹೊಸ ವಿಶ್ವದ ಎಲ್ಲಾ ನಿರ್ಮಾತರಿಗೆ, ವಿಶ್ವ ಪರಿವರ್ತನೆ ವಿಶೇಷ ಆತ್ಮರಿಗೆ, ಸದಾ ಹಳೆಯ ಪ್ರಪಂಚದ ಹಳೆಯ ಸಂಸ್ಕಾರ, ಹಳೆಯ ಸ್ಮೃತಿಗಳು, ಹಳೆಯ ವೃತ್ತಿಗಳು, ಹಳೆಯ ದೇಹದ ಸ್ಮೃತಿಯ ಪರಿವೆಯಿಂದ ದೂರವಿರುವಂತಹ, ಸರ್ವ ಹಳೆಯ ಮಾತುಗಳಿಗೆ ವಿದಾಯಿ ಕೊಡುವವರಿಗೆ ಸದಾಕಾಲಕ್ಕಾಗಿ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಕಳೆದುದನ್ನು ಕಳೆದು, ಸ್ವರಾಜ್ಯದ ಬಿಂದುವನ್ನಿಡುವವರಿಗೆ ಸ್ವರಾಜ್ಯದ ತಿಲಕದ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಎಲ್ಲಾ ಮಕ್ಕಳಿಗೆ ಈ ವಿದಾಯಿಯ ಶುಭಾಷಯಗಳ ಜೊತೆಗೆ ಹೊಸ ವರ್ಷದ ವಿಶೇಷ ಉಡುಗೊರೆ - "ಸದಾ ಜೊತೆಯಿರಿ" "ಸದಾ ಸಮಾನವಿರಿ" "ಸದಾ ಹೃದಯ ಸಿಂಹಾಸನಾಧಿಕಾರಿ ಶ್ರೇಷ್ಠ ಆತ್ಮಿಕ ನಶೆಯಲ್ಲಿರಿ" ಇದೇ ವರದಾನದ ಉಡುಗೊರೆಯನ್ನು ಕೊಡುತ್ತಿದ್ದೇವೆ.

ಈ ಇಡೀ ವರ್ಷದಲ್ಲಿ ಇದೇ ಸಮರ್ಥ ಸ್ಮೃತಿಯಲ್ಲಿರಿ - ಜೊತೆಯಿದ್ದೇವೆ, ತಂದೆಯ ಸಮಾನರಿದ್ದೇವೆ, ಅಂದಮೇಲೆ ಸ್ವತಹವಾಗಿಯೇ ಪ್ರತಿಯೊಂದು ಸಂಕಲ್ಪದಲ್ಲಿ ವಿದಾಯಿಯ ಅಭಿನಂದನೆಗಳ ಅನುಭವ ಮಾಡುತ್ತಿರುತ್ತೀರಿ. ಹಳೆಯದಕ್ಕೆ ವಿದಾಯಿ(ಬೀಳ್ಕೊಡುಗೆ)ಯಿಲ್ಲವೆಂದರೆ ನವೀನತೆಯ ಅಭಿನಂದನೆಗಳ ಅನುಭವವನ್ನು ಮಾಡಲು ಸಾಧ್ಯವಿಲ್ಲ ಆದ್ದರಿಂದ ಹೇಗೆ ಇಂದು ಹಳೆಯ ವರ್ಷಕ್ಕೆ ವಿದಾಯಿ ಕೊಡುತ್ತಿದ್ದೀರಿ, ಹಾಗೆಯೇ ವರ್ಷದ ಜೊತೆಗೆ ಏನೆಲ್ಲಾ ಹಳೆಯ ಮಾತುಗಳನ್ನು ತಿಳಿಸಿದೆವು, ಆ ಹಳೆಯದಕ್ಕೆ ಸದಾಕಾಲಕ್ಕಾಗಿ ವಿದಾಯಿ ಕೊಡಿ. ಹೊಸ ಯುಗವಾಗಿದೆ, ಹೊಸ ಬ್ರಾಹ್ಮಣರ ಸುಂದರವಾದ ಪ್ರಪಂಚವಿದೆ, ಹೊಸ ಸಂಬಂಧವಿದೆ, ಹೊಸ ಪರಿವಾರವಿದೆ. ಹೊಸ ಪ್ರಾಪ್ತಿಗಳಿವೆ. ಎಲ್ಲವೂ ಹೊಸದೇ ಇದೆ. ನೋಡುತ್ತೀರೆಂದರೆ ಆತ್ಮಿಕ ದೃಷ್ಟಿಯಿಂದ ಆತ್ಮವನ್ನು ನೋಡುತ್ತೀರಿ. ಆತ್ಮಿಕ ಮಾತುಗಳನ್ನೇ ಯೋಚಿಸುತ್ತೀರಿ. ಅಂದಮೇಲೆ ಎಲ್ಲವೂ ಹೊಸದಾಗಿ ಬಿಟ್ಟಿತಲ್ಲವೆ. ರೀತಿ ಹೊಸದು, ಪ್ರೀತಿ ಹೊಸದು ಎಲ್ಲವೂ ಹೊಸದು ಅಂದಮೇಲೆ ಸದಾ ನವೀನತೆಯ ಅಭಿನಂದನೆಗಳಲ್ಲಿರಿ. ಇದಕ್ಕೆ ಹೇಳಲಾಗುತ್ತದೆ - ಆತ್ಮಿಕ ಶುಭಾಷಯಗಳು. ಅದು ಒಂದು ದಿನಕ್ಕಾಗಿ ಅಲ್ಲ ಆದರೆ ಸದಾ ಆತ್ಮಿಕ ಶುಭಾಷಯಗಳಿಂದ ವೃದ್ಧಿಯನ್ನು ಹೊಂದುತ್ತಿರುತ್ತೀರಿ. ಬಾಪ್ದಾದಾ ಹಾಗೂ ಸರ್ವ ಬ್ರಾಹ್ಮಣ ಪರಿವಾರದ ಶುಭಾಷಯಗಳು ಅಥವಾ ಆತ್ಮಿಕ ಆಶೀರ್ವಾದಗಳಿಂದ ಬೆಳೆಯುತ್ತಿರುತ್ತೀರಿ, ನಡೆಯುತ್ತಿದ್ದೀರಿ - ಇಂತಹ ಹೊಸ ವರ್ಷವನ್ನು ವಿಶ್ವದಲ್ಲಿ ಎಲ್ಲಿಯೂ ಆಚರಿಸಲು ಸಾಧ್ಯವಿಲ್ಲ. ಅವರು ಅಲ್ಪಕಾಲಕ್ಕಾಗಿ ಆಚರಿಸುತ್ತಾರೆ. ತಾವು ಅವಿನಾಶಿ ಸದಾಕಾಲಕ್ಕಾಗಿ ಆಚರಿಸುತ್ತೀರಿ, ಆ ಮನುಷ್ಯಾತ್ಮರು ಮನುಷ್ಯರೊಂದಿಗೆ ಆಚರಿಸುತ್ತಾರೆ. ತಾವು ಶ್ರೇಷ್ಠಾತ್ಮರು ಪರಮಾತ್ಮ ತಂದೆಯೊಂದಿಗೆ ಆಚರಿಸುತ್ತೀರಿ. ವಿದಾತ ಮತ್ತು ವರದಾತನಿಂದ ಆಚರಿಸುತ್ತೀರಿ ಆದ್ದರಿಂದ ಆಚರಿಸುವುದು ಅರ್ಥಾತ್ ಖಜಾನೆಗಳಿಂದ, ವರದಾನಗಳಿಂದ ಸದಾಕಾಲಕ್ಕಾಗಿ ಜೋಳಿಗೆಯನ್ನು ತುಂಬಿಸಿಕೊಳ್ಳಿರಿ. ಅವರದಾಗಿದೆ - ಆಚರಿಸುವುದು ಮತ್ತು ಕಳೆಯುವುದು. ಇದಾಗಿದೆ - ಜೋಳಿಗೆ ತುಂಬಿಸಿಕೊಳ್ಳುವುದು. ಆದ್ದರಿಂದಲೇ ಬಾಪ್ದಾದಾರವರೊಂದಿಗೆ ಆಚರಿಸುತ್ತೀರಲ್ಲವೆ. ಅವರುಗಳು ಹ್ಯಾಪಿ ನ್ಯೂ ಇಯರ್ ಹೇಳುತ್ತಾರೆ, ತಾವು ಎವರ್ ಹ್ಯಾಪಿ ನ್ಯೂ ಇಯರ್ ಹೇಳುತ್ತೀರಿ. ಇಂದು ಖುಷಿ ಮತ್ತು ನಾಳೆ ದುಃಖದ ಘಟನೆಯು ದುಃಖಿಯನ್ನಾಗಿ ಮಾಡುವುದಿಲ್ಲ. ಎಂತಹದ್ದೇ ದುಃಖ ಘಟನೆಯಿರಲಿ ಆದರೆ ಇಂತಹ ಸಮಯದಲ್ಲಿಯೂ ಸುಖ, ಶಾಂತಿ ಸ್ವರೂಪ ಸ್ಥಿತಿಯ ಮೂಲಕ ಸರ್ವರಿಗೆ ಸುಖ-ಶಂತಿಯ ಕಿರಣಗಳನ್ನು ಕೊಡುವ ಮಾ||ಸುಖದ ಸಾಗರ ದಾತನ ಪಾತ್ರವನ್ನಭಿನಯಿಸುತ್ತೀರಿ. ಆದ್ದರಿಂದ ಘಟನೆಯ ಪ್ರಭಾವದಿಂದ ಪಾರಾಗಿ ಬಿಡುತ್ತೀರಿ ಮತ್ತು ಎವರ್ ಹ್ಯಾಪಿಯ ಅನುಭವವನ್ನು ಸದಾ ಮಾಡುತ್ತಿರುತ್ತೀರಿ. ಅಂದಮೇಲೆ ಈ ಹೊಸ ವರ್ಷದಲ್ಲಿ ನವೀನತೆಯನ್ನೇನು ಮಾಡುವಿರಿ? ಸಮ್ಮೇಳನ ಮಾಡುವಿರಿ, ಮೇಳಗಳನ್ನು ಮಾಡುವಿರಿ. ಈಗ ಹಳೆಯ ಎಲ್ಲಾ ರೀತಿ-ಪದ್ಧತಿಗಳಿಂದ, ಹಳೆಯ ಚಲನೆ-ವಲನೆಯಿಂದ ಸುಸ್ತಂತು ಆಗಿಯೇ ಇದ್ದೀರಿ. ಎಲ್ಲರೂ ತಿಳಿಯುತ್ತಾರೆ - ಏನಾದರೂ ಹೊಸದಾಗಿ ಆಗಬೇಕು. ಹೊಸದೇನಾಗಲಿ, ಹೇಗಾಗುತ್ತದೆ - ಅದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಇಂತಹ ನವೀನತೆಯ ಇಚ್ಛೆಯನ್ನಿಡುವವರಿಗೆ ಹೊಸ ಜ್ಞಾನದ ಮೂಲಕ, ಹೊಸ ಜೀವನದ ಮೂಲಕ ನವೀನತೆಯ ಹೊಳಪಿನ ಅನುಭವ ಮಾಡಿಸಿರಿ. ಇದು ಚೆನ್ನಾಗಿದೆ ಎನ್ನುವಷ್ಟು ತಿಳಿಯುತ್ತಾರೆ, ಆದರೆ ಹೊಸದಾಗಿದೆ, ಇದೇ ಹೊಸ ಜ್ಞಾನ, ಹೊಸ ಯುಗವನ್ನು ತರುತ್ತಿದೆ - ಈ ಅನುಭವವು ಈಗ ಗುಪ್ತವಿದೆ. ಆಗಬೇಕು ಎಂದು ಹೇಳುತ್ತಾರೆ. ಅವರ ಇಚ್ಚೆಯನ್ನು ಪೂರ್ಣಗೊಳಿಸಲು ಹೊಸ ಜೀವನದ ಪ್ರತ್ಯಕ್ಷ ಉದಾಹರಣೆಯನ್ನು ಅವರ ಮುಂದೆ ಪ್ರತ್ಯಕ್ಷ ರೂಪದಲ್ಲಿ ತನ್ನಿರಿ, ಅದರಿಂದ ಅವರಿಗೆ ಹೊಸ ಹೊಳಪಿನ ಅನುಭವವಾಗಲಿ. ಅಂದಮೇಲೆ ಹೊಸ ಜ್ಞಾನವನ್ನು ಪ್ರತ್ಯಕ್ಷ ಮಾಡಿರಿ. ಪ್ರತಿಯೊಬ್ಬ ಬ್ರಾಹ್ಮಣನ ಜೀವನದಿಂದ ನವೀನತೆಯ ಅನುಭವವಾಗಲಿ ಆಗಲೇ ಹೊಸ ಸೃಷ್ಟಿಯ ಹೊಳಪು ಅವರಿಗೆ ಕಂಡುಬರುತ್ತದೆ. ಯಾವುದೇ ಕಾರ್ಯಕ್ರಮವನ್ನು ಮಾಡಿರಿ, ಅದರಲ್ಲಿ ಲಕ್ಷ್ಯವನ್ನಿಡಿ - ಎಲ್ಲರಿಗೂ ನವೀನತೆಯ ಅನುಭವವಾಗಲಿ. ಇದೂ ಸಹ ಒಳ್ಳೆಯ ಕಾರ್ಯವಾಗುತ್ತಿದೆ, ಈ ರಿಮಾರ್ಕ್ ಕೊಡುವುದಕ್ಕೆ ಬದಲು ಈ ಅನುಭವ ಮಾಡಲಿ - ಈ ಹೊಸ ಜ್ಞಾನವು ಹೊಸ ಪ್ರಪಂಚವನ್ನು ತರುವಂತದ್ದಾಗಿದೆ. ತಿಳಿಯಿತೆ - ಹೊಸ ಸೃಷ್ಟಿಯ ಸ್ಥಾಪನೆಯ ಅನುಭವ ಮಾಡಿಸುವ ಪ್ರಕಂಪನಗಳನ್ನು ಹರಡಿಸಿರಿ. ಹೊಸ ಸೃಷ್ಟಿಯೀಗ ಬಂದಿತೆಂದರೆ ಬಂದಿತು ಅರ್ಥಾತ್ ನಮ್ಮೆಲ್ಲರ ಶುಭ ಭಾವನೆಗಳ ಫಲವು ಸಿಗುವ ಸಮಯವು ಬಂದು ಬಿಟ್ಟಿತು. ಇಂತಹ ಉಮ್ಮಂಗ-ಉತ್ಸಾಹವು ಅವರ ಮನಸ್ಸಿನಲ್ಲಿ ಉತ್ಪನ್ನವಾಗಲಿ. ಎಲ್ಲರ ಮನಸ್ಸಿನಲ್ಲಿ ನಿರಾಶೆಗೆ ಬದಲು ಶುಭ ಭಾವನೆಗಳ ದೀಪವನ್ನು ಬೆಳಗಿಸಿರಿ. ಯಾವುದೇ ಒಳ್ಳೆಯ ದಿನವನ್ನು ಅಚರಿಸುತ್ತೀರೆಂದರೆ ದೀಪವನ್ನೂ ಬೆಳಗಿಸುತ್ತೀರಿ. ಇತ್ತೀಚೆಗಂತು ರಾಯಲ್ ಮೇಣದ ಬತ್ತಿಗಳು ಬಂದು ಬಿಟ್ಟಿದೆ. ಅಂದಮೇಲೆ ಎಲ್ಲರ ಮನಸ್ಸಿನಲ್ಲಿ ಈ ದೀಪವನ್ನು ಬೆಳಗಿಸಿರಿ. ಇಂತಹ ಹೊಸ ವರ್ಷವನ್ನು ಆಚರಿಸಿರಿ. ಶ್ರೇಷ್ಠ ಭಾವನೆಗಳ ಫಲದ ಉಡುಗೊರೆಯನ್ನು ಎಲ್ಲರಿಗೂ ಕೊಡಿ. ಒಳ್ಳೆಯದು.

ಸದಾ ಸರ್ವರಿಗೆ ಹೊಸ ಜೀವನ, ಹೊಸ ಯುಗದ ಹೊಳಪನ್ನು ತೋರಿಸುವಂತಹ, ಹೊಸ ಉಮ್ಮಂಗ-ಉತ್ಸಾಹದ ಶುಭಾಷಯಗಳನ್ನು ಕೊಡುವಂತಹ, ಸರ್ವರನ್ನು ಎವರ್ಹ್ಯಾಪಿ ಮಾಡುವಂತಹ, ವಿಶ್ವಕ್ಕೆ ಹೊಸ ರಚನೆಯ ಅನುಭವ ಮಾಡಿಸುವಂತಹ, ಇಂತಹ ಸರ್ವ ಶ್ರೇಷ್ಠ ಹೊಸ ಯುಗದ ಪರಿವರ್ತಕರು, ವಿಶ್ವ ಕಲ್ಯಾಣಕಾರಿ, ಸದಾ ತಂದೆಯ ಜೊತೆಯ ಅನುಭವ ಮಾಡುವಂತಹ, ತಂದೆಯ ಜೊತೆ ಜೊತೆಗಾರರಾಗಿರುವ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ:- 1. ಹೊಸ ವರ್ಷದ ಹೊಸ ಉಮ್ಮಂಗ, ಹೊಸ ಉತ್ಸಾಹವು ಸದಾಕಾಲಕ್ಕಾಗಿ ಇರಬೇಕು, ಇಂತಹ ಧೃಡಸಂಕಲ್ಪವನ್ನು ಎಲ್ಲರೂ ಮಾಡಿದಿರಾ? ಹೊಸ ಯುಗವಾಗಿದೆ, ಇದರಲ್ಲಿ ಪ್ರತಿಯೊಂದು ಸಂಕಲ್ಪವು ಹೊಸದಕ್ಕಿಂತ ಹೊಸದಾಗಿರಲಿ. ಪ್ರತೀಕರ್ಮವು ಹೊಸದಕ್ಕಿಂತ ಹೊಸದಿರಲಿ. ಇದಕ್ಕೆ ಹೊಸ ಉಮ್ಮಂಗ - ಹೊಸ ಉತ್ಸಾಹ ಎಂದು ಹೇಳಲಾಗುತ್ತದೆ. ಇಂತಹ ಧೃಡ ಸಂಕಲ್ಪವನ್ನು ಮಾಡಿದ್ದೀರಾ? ಹೇಗೆ ಅವಿನಾಶಿ ತಂದೆಯಿದ್ದಾರೆ, ಹಾಗೆಯೇ ತಂದೆಯ ಮೂಲಕ ಪ್ರಾಪ್ತಿಯೂ ಅವಿನಾಶಿಯಿದೆ. ಅಂದಮೇಲೆ ಅವಿನಾಶಿ ಪ್ರಾಪ್ತಿಯ ಧೃಡ ಸಂಕಲ್ಪದ ಮೂಲಕ ಪ್ರಾಪ್ತಿ ಮಾಡಿಕೊಳ್ಳಬಹುದು. ಅಂದಮೇಲೆ ತಮ್ಮ ಕಾರ್ಯ ಸ್ಥಾನದಲ್ಲಿ ಹೋದ ನಂತರ, ಈ ಅವಿನಾಶಿ ಧೃಡ ಸಂಕಲ್ಪವನ್ನು ಮರೆಯಬಾರದು. ಮರೆಯುವುದು ಅರ್ಥಾತ್ ಅಪ್ರಾಪ್ತಿ ಮತ್ತು ಧೃಡ ಸಂಕಲ್ಪವಿರುವುದು ಅರ್ಥಾತ್ ಸರ್ವ ಪ್ರಾಪ್ತಿ.

ಸದಾ ತಮ್ಮನ್ನು ಪದಮಾಪದಮ ಭಾಗ್ಯಶಾಲಿ ಆತ್ಮವೆಂದು ತಿಳಿಯಿರಿ. ಯಾರು ಹೆಜ್ಜೆಯನ್ನು ನೆನಪಿನಿಂದ ಇಡುತ್ತೀರಿ, ಅವರ ಪ್ರತೀ ಹೆಜ್ಜೆಯಲ್ಲಿ ಪದಮಗಳ ಸಂಪಾದನೆಯು ತುಂಬಿದೆ. ಅಂದಮೇಲೆ ಸದಾ ತಮ್ಮನ್ನು ಒಂದು ದಿನದಲ್ಲಿ ಅಪರಿಮಿತ ಸಂಪಾದನೆಯನ್ನು ಮಾಡುವ ಪದಮಾಪದಮ ಭಾಗ್ಯಶಾಲಿ ಆತ್ಮವೆಂದು ತಿಳಿದು, ಇದೇ ಖುಷಿಯಲ್ಲಿ ಸದಾ ಇರಿ - "ವಾಹ್ ನನ್ನ ಶ್ರೇಷ್ಠ ಭಾಗ್ಯವೇ". ಅಂದಮೇಲೆ ತಮ್ಮ ಖುಷಿಯನ್ನು ನೋಡುತ್ತಾ ಅನ್ಯರಿಗೂ ಪ್ರೇರಣೆಯು ಸಿಗುತ್ತಿರುತ್ತದೆ. ಇದೇ ಸೇವೆಯ ಸಹಜ ಸಾಧನವಾಗಿದೆ. ಯಾರು ನೆನಪು ಮತ್ತು ಸೇವೆಯಲ್ಲಿ ಸದಾ ಮಸ್ತರಿರುತ್ತಾರೆಯೋ ಅವರೇ ಸುರಕ್ಷಿತವಾಗಿರುತ್ತಾರೆ, ವಿಜಯಿಯಾಗಿರುತ್ತಾರೆ. ನೆನಪು ಮತ್ತು ಸೇವೆಯು ಇಂತಹ ಶಕ್ತಿಯಾಗಿದೆ, ಅದರಿಂದ ಸದಾ ಬಹಳ ಮುಂದುವರೆಯುತ್ತಿರುತ್ತೀರಿ. ಕೇವಲ ನೆನಪು ಮತ್ತು ಸೇವೆಯ ಬ್ಯಾಲೆನ್ಸನ್ನು ಖಂಡಿತವಾಗಿ ಇಡಬೇಕಾಗಿದೆ. ಸಮತೋಲನವೇ ಆಶೀರ್ವಾದವನ್ನು ಕೊಡಿಸುತ್ತದೆ. ಸಾಹಸವಂತ ಮಕ್ಕಳಿಗೆ ಸಾಹಸವಿರುವ ಕಾರಣದಿಂದ ಸದಾ ಸಹಯೋಗವು ಸಿಗುತ್ತದೆ. ಮಕ್ಕಳು ಸಾಹಸದ ಒಂದು ಹೆಜ್ಜೆಯನ್ನು ಇಡುತ್ತೀರೆಂದರೆ ತಂದೆಯ ಸಹಯೋಗವು ಸಿಕ್ಕಿ ಬಿಡುತ್ತದೆ.

(ರಾತ್ರಿಯ 12 ಗಂಟೆಯ ನಂತರ 1.1.85ನ್ನು ವಿದೇಶಿ ಸಹೋದರ-ಸಹೋದರಿಯರು ಹೊಸ ವರ್ಷದ ಖುಷಿಯಲ್ಲಿ ಹಾಡನ್ನಾಡಿದರು ಹಾಗೂ ಬಾಪ್ದಾದಾರವರು ಎಲ್ಲಾಮಕ್ಕಳಿಗೆ ಅಭಿನಂದನೆಗಳನ್ನು ಕೊಟ್ಟರು.)

ಹೇಗೆ ಮಕ್ಕಳು ತಂದೆಯ ಸ್ನೇಹದಿಂದ ನೆನಪಿನಲ್ಲಿ ಹಾಡನ್ನಾಡುತ್ತಾ ಮತ್ತು ಲವಲೀನರಾಗಿ ಬಿಡುತ್ತಾರೆ, ಹಾಗೆಯೇ ತಂದೆಯೂ ಸಹ ಮಕ್ಕಳ ಸ್ನೇಹದಲ್ಲಿ ಸಮಾವೇಶವಾಗಿದ್ದಾರೆ. ತಂದೆ ಪ್ರಿಯತಮನೂ ಆಗಿದ್ದಾರೆ, ಪ್ರಿಯತಮೆಯೂ ಆಗಿದ್ದಾರೆ. ಪ್ರತಿಯೊಂದು ಮಕ್ಕಳ ವಿಶೇಷತೆಯ ಮೇಲೆ ತಂದೆಯೂ ಸಹ ಪ್ರಿಯತಮೆಯಾಗುತ್ತಾರೆ. ಅಂದಮೇಲೆ ತಮ್ಮ ವಿಶೇಷತೆಯನ್ನು ತಿಳಿದಿದ್ದೀರಾ? ತಂದೆಯು ತಮ್ಮ ಮೇಲೆ ಯಾವ ವಿಶೇಷತೆಯಿಂದ ಆಕರ್ಷಿತವಾದರು, ಈ ತಮ್ಮ ವಿಶೇಷತೆಯು ಪ್ರತಿಯೊಬ್ಬರಿಗೂ ಗೊತ್ತಿದೆಯೇ?

ಇಡೀ ವಿಶ್ವದಲ್ಲಿಂದ ಎಷ್ಟು ಸ್ವಲ್ಪ ಇಂತಹ ತಂದೆಯ ಸ್ನೇಹಿ ಮಕ್ಕಳಿದ್ದಾರೆ. ಅಂದಮೇಲೆ ಬಾಪ್ದಾದಾರವರು ಎಲ್ಲಾ ಸ್ನೇಹಿ ಮಕ್ಕಳಿಗೆ ಹೊಸ ವರ್ಷದ ಬಹಳ-ಬಹಳ ಹೃದಯದಿಂದ ಹಾಗೂ ಪ್ರೀತಿಯಿಂದ ಪದಮಪಟ್ಟು ಶುಭಾಷಯಗಳನ್ನು ಕೊಡುತ್ತಿದ್ದಾರೆ. ತಾವುಗಳು ಹೇಗೆ ಹಾಡನ್ನಾಡಿದಿರಿ, ಅದರಿಂದ ಬಾಪ್ದಾದಾರವರೂ ಸಹ ಮಕ್ಕಳ ಖುಷಿಯ ಹಾಡನ್ನಾಡುತ್ತಾರೆ. ತಂದೆಯ ಗೀತೆಯು ಮನಸ್ಸಿನದಾಗಿದೆ ಮತ್ತು ತಮ್ಮ ಮುಖದ್ದಾಗಿದೆ. ತಮ್ಮದಂತು ಕೇಳಿಬಿಟ್ಟೆವು, ತಂದೆಯದೂ ಸಹ ಕೇಳಿದಿರೇ?

ಈ ಹೊಸ ವರ್ಷದಲ್ಲಿ ಸದಾ ಪ್ರತೀ ಕರ್ಮದಲ್ಲಿ ಏನಾದರೊಂದು ವಿಶೇಷತೆಯನ್ನು ಖಂಡಿತವಾಗಿ ತೋರಿಸುತ್ತಿರಿ. ಪ್ರತೀ ಸಂಕಲ್ಪವೂ ವಿಶೇಷವಾಗಿರಲಿ, ಸಾಧಾರಣವಾಗಿರಬಾರದು ಏಕೆ? ವಿಶೇಷ ಆತ್ಮರ ಪ್ರತೀ ಸಂಕಲ್ಪ, ಮಾತು ಮತ್ತು ಕರ್ಮವು ವಿಶೇಷವಾದುದೇ ಆಗಿರುತ್ತದೆ. ಸದಾ ಉಮ್ಮಂಗ-ಉತ್ಸಾಹದಲ್ಲಿ ಮುಂದುವರೆಯುತ್ತಿರಿ. ಉಮ್ಮಂಗ-ಉತ್ಸಾಹವು ಇವರ ವಿಶೇಷ ರೆಕ್ಕೆಗಳಾಗಿವೆ, ಈ ರೆಕ್ಕೆಗಳ ಮೂಲಕ ಎಷ್ಟು ಶ್ರೇಷ್ಠ ಮಟ್ಟಕ್ಕೆ ಹಾರಬೇಕು, ಅಷ್ಟೂ ಹಾರಬಲ್ಲಿರಿ. ಇದೇ ರೆಕ್ಕೆಗಳು ಹಾರುವ ಕಲೆಯ ಅನುಭವವನ್ನು ಮಾಡಿಸುತ್ತದೆ. ಈ ರೆಕ್ಕೆಗಳಿಂದ ಹಾರಿಬಿಡುತ್ತೀರೆಂದರೆ ಅಲ್ಲಿಗೆ ವಿಘ್ನವು ತಲುಪುವುದಿಲ್ಲ. ಹೇಗೆ ಆಕಾಶದಲ್ಲಿ ಹೋಗುತ್ತಾರೆಂದರೆ ಧರಣಿಯ ಆಕರ್ಷಣೆಯು ಸೆಳೆಯಲು ಸಾಧ್ಯವಿಲ್ಲ. ಹಾಗೆಯೇ ಹಾರುವ ಕಲೆಯವರಿಗೆ ವಿಘ್ನಗಳೇನೂ ಮಾಡಲು ಸಾಧ್ಯವಿಲ್ಲ. ಸದಾ ಉಮ್ಮಂಗ-ಉತ್ಸಾಹದಿಂದ ಮುಂದುವರೆಯಿರಿ ಮತ್ತು ಮುಂದುವರೆಸುವುದು - ಇದೇ ವಿಶೇಷವಾದ ಸೇವೆಯಾಗಿದೆ. ಸೇವಾಧಾರಿಗಳು ಇದೇ ವಿಶೇಷತೆಯಿಂದ ಸದಾ ಮುಂದುವರೆಯುತ್ತಾ ಸಾಗಬೇಕು.

ವಿಶೇಷವಾಗಿ ಆಯ್ಕೆ ಮಾಡಿರುವ ಅವ್ಯಕ್ತ ಮಹಾವಾಕ್ಯಗಳು - ಲೈಟ್ ಮೈಟ್ ಹೌಸ್ನ ಶ್ರೇಷ್ಠ ಸ್ಥಿತಿಯ ಮೂಲಕ ಪರಮಾತ್ಮನ ಪ್ರತ್ಯಕ್ಷತೆಗೆ ನಿಮಿತ್ತರಾಗಿರಿ:-

ತಂದೆಯನ್ನು ಪ್ರತ್ಯಕ್ಷ ಮಾಡುವುದಕ್ಕೆ ಮೊದಲು ಸ್ವಯಂನಲ್ಲಿ, ಸ್ವಯಂನ ಮಹಿಮೆಯೇನಿದೆ ಅದೆಲ್ಲಾ ಮಾತುಗಳ ಪ್ರತ್ಯಕ್ಷತೆ ಮಾಡಿರಿ, ಆಗ ತಂದೆಯನ್ನು ಪ್ರತ್ಯಕ್ಷ ಮಾಡಬಲ್ಲಿರಿ. ಇದಕ್ಕಾಗಿ ವಿಶೇಷವಾಗಿ ಜ್ವಾಲಾ ಸ್ವರೂಪ ಅರ್ಥಾತ್ ಲೈಟ್ಹೌಸ್ ಮತ್ತು ಮೈಟ್ಹೌಸ್ ಸ್ಥಿತಿಯನ್ನು ತಿಳಿಯುತ್ತಾ, ಇದೇ ಪುರುಷಾರ್ಥದಲ್ಲಿರಿ - ವಿಶೇಷವಾಗಿ ನೆನಪಿನ ಯಾತ್ರೆಯನ್ನು ಶಕ್ತಿಶಾಲಿ ಮಾಡಿಕೊಳ್ಳಿರಿ, ಜ್ಞಾನ ಸ್ವರೂಪದ ಅನುಭವಿಯಾಗಿರಿ.

ಮೆಜಾರಿಟಿ ಭಕ್ತರ ಇಚ್ಛೆಯು ಕೇವಲ ಒಂದು ಸೆಕೆಂಡಿಗಾಗಿ ಲೈಟ್ ನೋಡುವುದಾಗಿದೆ, ಈ ಇಚ್ಛೆಯನ್ನು ಪೂರ್ಣಗೊಳಿಸುವ ಸಾಧನವು ತಾವು ಮಕ್ಕಳ ನಯನಗಳಾಗಿವೆ. ಈ ನಯನಗಳ ಮೂಲಕ ತಂದೆಯ ಜ್ಯೋತಿ ಸ್ವರೂಪದ ಸಾಕ್ಷಾತ್ಕಾರವಾಗಲಿ. ಈ ನಯನ, ನಯನವಾಗಿ ಕಾಣಿಸಬಾರದು, ಲೈಟ್ನ ಗೋಳವಾಗಿ ಕಾಣಿಸಲಿ.

ಹೇಗೆ ಆಕಾಶದಲ್ಲಿ ಹೊಳೆಯುತ್ತಿರುವ ನಕ್ಷತ್ರಗಳು ಕಾಣಿಸುತ್ತವೆ, ಹಾಗೆಯೇ ಈ ಕಣ್ಣುಗಳ ತಾರೆಯು ನಕ್ಷತ್ರದಂತೆ ಹೊಳೆಯುತ್ತಿರುವಂತೆ ಕಾಣಿಸಲಿ. ಆದರೆ ಯಾವಾಗ ಸ್ವಯಂ ಲೈಟ್ ಸ್ವರೂಪದಲ್ಲಿ ಸ್ಥಿತರಾಗಿರುತ್ತೀರಿ ಆಗಲೇ ಅದು ಕಾಣಿಸುತ್ತದೆ. ಕರ್ಮದಲ್ಲಿಯೂ ಲೈಟ್ ಅರ್ಥಾತ್ ಹಗುರತೆ ಮತ್ತು ಸ್ವರೂಪವು ಲೈಟ್, ಸ್ಥಿತಿಯೂ ಲೈಟ್ ಆಗಿರಲಿ. ಯಾವಾಗ ಇಂತಹ ಪುರುಷಾರ್ಥ ಅಥವಾ ಸ್ಥಿತಿಯು ತಾವು ವಿಶೇಷ ಆತ್ಮರದಾಗಿರುತ್ತದೆ ಆಗಲೇ ಪ್ರತ್ಯಕ್ಷತೆಯಾಗುತ್ತದೆ. ಕರ್ಮದಲ್ಲಿ ಬರುತ್ತಾ, ವಿಸ್ತಾರದಲ್ಲಿ ಬರುತ್ತಾ, ರಮಣೀಕತೆಯಲ್ಲಿ ಬರುತ್ತಾ, ಸಂಬಂಧ-ಸಂಪರ್ಕದಲ್ಲಿ ಬರುತ್ತಾ, ಭಿನ್ನರಾಗುವ ಅಭ್ಯಾಸ ಮಾಡಿರಿ. ಹೇಗೆ ಸಂಬಂಧ ಹಾಗೂ ಕರ್ಮದಲ್ಲಿ ಬರುವುದು ಸಹಜವಿದೆ, ಹಾಗೆಯೇ ಭಿನ್ನರಾಗುವುದೂ ಸಹಜವಿರಲಿ. ಇಂತಹ ಅಭ್ಯಾಸವಿರಬೇಕು. ಅತಿಯ ಸಮಯದಲ್ಲಿ ಒಂದು ಸೆಕೆಂಡಿನಲ್ಲಿ ಅಂತ್ಯವಾಗಿ ಬಿಡಲಿ - ಇದು ಅಂತಿಮ ಸ್ಥಿತಿಯ ಪುರುಷಾರ್ಥವಾಗಿದೆ. ಈಗೀಗ ಅತಿ ಸಂಬಂಧದಲ್ಲಿ ಮತ್ತು ಈಗೀಗ ಎಷ್ಟು ಸಂಪರ್ಕವೋ ಅಷ್ಟೋ ಭಿನ್ನ. ಹೇಗೆ ಲೈಟ್ಹೌಸ್ನಲ್ಲಿ ಸಮಾವೇಶವಾಗಿರುವಂತೆ. ಇದೇ ಅಭ್ಯಾಸದಿಂದ ಲೈಟ್ಹೌಸ್, ಮೈಟ್ಹೌಸ್ ಸ್ಥಿತಿಯಾಗುತ್ತದೆ ಮತ್ತು ಅನೇಕ ಆತ್ಮರಿಗೆ ಸಾಕ್ಷಾತ್ಕಾರವಾಗುತ್ತದೆ - ಇದೇ ಪ್ರತ್ಯಕ್ಷತೆಯ ಸಾಧನವಾಗಿದೆ.

ಇದೇ ಈಗ ಲಾಸ್ಟ್ ಸೀಜನ್ ಉಳಿದುಕೊಂಡಿದೆ, ಇದರಲ್ಲಿ ಪ್ರತ್ಯಕ್ಷತೆಯ ನಗಾರಿಯು ಮೊಳಗುತ್ತದೆ, ಶಾಂತವಾಗುತ್ತದೆ. ಆದರೆ ಸೈಲೆನ್ಸ್ ನ ಮೂಲಕವೇ ನಗಾರಿ ಮೊಳಗುತ್ತದೆ. ಎಲ್ಲಿಯವರೆಗೆ ಮುಖದ ನಗಾರಿಯು ಹೆಚ್ಚಾಗಿರುತ್ತದೆ, ಅಲ್ಲಿಯವರೆಗೆ ಪ್ರತ್ಯಕ್ಷತೆಯಾಗುವುದಿಲ್ಲ. ಯಾವಾಗ ಪ್ರತ್ಯಕ್ಷತೆಯ ನಗಾರಿಯು ಮೊಳಗುತ್ತದೆಯೋ ಆಗ ಮುಖದ ನಗಾರಿಯು ಬಂದ್ ಆಗಿ ಬಿಡುತ್ತದೆ. ಗಾಯನವೂ ಇದೆ - `ಸೈನ್ಸ್ ನ ಮೇಲೆ ಸೈಲೆನ್ಸ್ ನ ವಿಜಯ', ವಾಣಿಯದಲ್ಲ. ಈಗ ಪ್ರತ್ಯಕ್ಷತೆಯ ವಿಶೇಷತೆಯು ಮೋಡಗಳೊಳಗೆ ಇದೆ. ಮೋಡಗಳು ಹರಡುತ್ತಿರಲಿ ಆದರೆ ದೂರವಾಗಬಾರದು. ಎಷ್ಟೆಷ್ಟು ಶಕ್ತಿಶಾಲಿ ಮಾಸ್ಟರ್ ಜ್ಞಾನಸೂರ್ಯ ಅಥವಾ ಲೈಟ್ಮೈಟ್ ಹೌಸ್ನ ಸ್ಥಿತಿಯಲ್ಲಿ ತಲುಪುತ್ತಾರೆ, ಹಾಗೆಯೇ ಈ ಮೋಡಗಳು ಎಲ್ಲಾ ಕಡೆ ಹರಡುತ್ತವೆ. ಮೋಡಗಳು ಸಮಾಪ್ತಿಯಾಗಿ ಬಿಡುತ್ತವೆಂದರೆ ಸೆಕೆಂಡಿನಲ್ಲಿ ನಗಾರಿ ಮೊಳಗುತ್ತದೆ.

ಹೇಗೆ ನಾಲ್ಕೂ ಕಡೆಯಲ್ಲೇನಾದರೂ ಬೆಂಕಿ ಹತ್ತಿಕೊಂಡಿದೆ ಮತ್ತು ಒಂದು ಮೂಲೆಯಲ್ಲಾದರೂ ಶೀತಲ ಕುಂಡವಿದೆಯೆಂದರೆ, ಎಲ್ಲರೂ ಅದೇ ಕಡೆಗೆ ಓಡುತ್ತಾರೆ. ಹಾಗೆಯೇ ಶಾಂತಿ ಸ್ವರೂಪರಾಗಿದ್ದು ಶಾಂತಿ ಕುಂಡದ ಅನುಭವ ಮಾಡಿಸಿರಿ. ಮನಸ್ಸಾ ಸೇವೆಯ ಮೂಲಕ ಶಾಂತಿ ಕುಂಡದ ಪ್ರತ್ಯಕ್ಷತೆ ಮಾಡಬಹುದು. ಎಲ್ಲಿಯೇ ಶಾಂತಿ ಸಾಗರನ ಮಕ್ಕಳಿರುತ್ತಾರೆ, ಅವರ ಸ್ಥಾನವು ಶಾಂತಿ ಕುಂಡವಾಗಿರಲಿ.

ಬ್ರಹ್ಮಾ ತಂದೆಯ ಸಮಾನ ಬೇಹದ್ದಿನ ಕಿರೀಟ ಧರಿಸಿರುವವರಾಗಿ ನಾಲ್ಕೂ ಕಡೆಯ ಪ್ರತ್ಯಕ್ಷತೆಯ ಲೈಟ್ ಮತ್ತು ಮೈಟ್ ಹರಡಿಸಿರಿ, ಅದರಿಂದ ಸರ್ವಆತ್ಮರಿಗೆ ನಿರಾಶೆಯಿಂದ ಆಶಾಕಿರಣವು ಕಾಣಿಸಲಿ. ಎಲ್ಲರಬೆರಳು ಆ ವಿಶೇಷಸ್ಥಾನದ ಕಡೆಯಿರಲಿ. ಯಾರು ಆಕಾಶಕ್ಕಿಂತಲೂ ಮೇಲೆ ಬೆರಳುಮಾಡಿ ಹುಡುಕುತ್ತಿದ್ದಾರೆ, ಅವರಿಗೆ ಈ ಅನುಭವವಾಗಲಿ- ಈ ಧರಣಿಯಲ್ಲಿ, ವರದಾನ ಭೂಮಿಯಲ್ಲಿ ಧರಣಿಯ ನಕ್ಷತ್ರವು ಪ್ರತ್ಯಕ್ಷವಾಗಿಬಿಡಲಿ. ಈ ಸೂರ್ಯ, ಚಂದ್ರಮ ಮತ್ತು ತಾರಾಮಂಡಲವು ಇಲ್ಲಿ ಅನುಭವವಾಗಲಿ. ಸಂಘಟಿತ ರೂಪದಲ್ಲಿ ಶಕ್ತಿಶಾಲಿ ಲೈಟ್ಹೌಸ್, ಮೈಟ್ಹೌಸ್ ಪ್ರಕಂಪನಗಳನ್ನು ಹರಡಿಸುವ ಸೇವೆಯನ್ನು ಮಾಡಿರಿ. ಈಗ ಎಲ್ಲರೂ ನಿರೀಕ್ಷಿಸುತ್ತಿದ್ದಾರೆ - ಯಾವಾಗ ನಮ್ಮ ರಚೈತ ಮತ್ತು ಮಾಸ್ಟರ್ ರಚೈತ್ ಸಂಪನ್ನ ಹಾಗೂ ಸಂಪೂರ್ಣರಾಗಿ, ನಮ್ಮಿಂದ ತಮ್ಮ ಸ್ವಾಗತವನ್ನು ಮಾಡಿಸುತ್ತಾರೆ. ಪ್ರಕೃತಿಯಂತು ಸ್ವಾಗತ ಮಾಡುತ್ತದೆ. ಅಂದಮೇಲೆ ಆ ಸಫಲತೆಯ ಮಾಲೆಯಿಂದ ಸ್ವಾಗತ ಮಾಡಲಿ - ಆ ದಿನವೂ ಬರಲೇಬೇಕು. ಯಾವಾಗ ಸಫಲತೆಯ ನಗಾರಿ ಮೊಳಗುತ್ತದೆ ಆಗಲೇ ಪ್ರತ್ಯಕ್ಷತೆಯ ನಗಾರಿ ಮೊಳಗುತ್ತದೆ. ಅವಶ್ಯವಾಗಿ ಮೊಳಗುತ್ತದೆ.

ಭಾರತವು ತಂದೆಯ ಅವತರಣೆಯ ಭೂಮಿಯಾಗಿದೆ ಮತ್ತು ಭಾರತವು ಪ್ರತ್ಯಕ್ಷತೆಯ ಧ್ವನಿ ಮೊಳಗಿಸಲು ನಿಮಿತ್ತವಾದ ಭೂಮಿಯಾಗಿದೆ. ವಿದೇಶದ ಸಹಯೋಗವು ಭಾರತದಲ್ಲಿ ಪ್ರತ್ಯಕ್ಷತೆಯನ್ನು ಮಾಡಿಸುತ್ತದೆ ಮತ್ತು ಭಾರತದ ಪ್ರತ್ಯಕ್ಷತೆಯ ಧ್ವನಿಯು ವಿದೇಶದವರೆಗೂ ತಲುಪುತ್ತದೆ. ವಾಣಿಯಿಂದ ಪ್ರಭಾವವನ್ನು ಬೀರುವವರು ಪ್ರಪಂಚದಲ್ಲಿಯೂ ಅನೇಕರಿದ್ದಾರೆ. ಆದರೆ ತಮ್ಮ ವಾಣಿಯ ವಿಶೇಷತೆಯು ಇದೇ ಆಗಿದೆ - ತಮ್ಮ ಮಾತು ತಂದೆಯ ನೆನಪನ್ನು ತರಿಸಲಿ. ತಂದೆಯನ್ನು ಪ್ರತ್ಯಕ್ಷ ಮಾಡುವ ಸಿದ್ಧಿ ಆತ್ಮರಿಗೆ ಸದ್ಗತಿಯ ದಾರಿ ತೋರಿಸಲಿ - ಇದೇ ಭಿನ್ನತೆಯಾಗಿದೆ. ಹೇಗೆ ಈಗಿನವರೆಗೆ ಇದು ಪ್ರಸಿದ್ಧವಾಯಿತು - ಇವರು ರಾಜಯೋಗಿ ಆತ್ಮರು ಶ್ರೇಷ್ಠರಿದ್ದಾರೆ, ರಾಜಯೋಗವು ಶ್ರೇಷ್ಠವಾಗಿದೆ, ಕರ್ತವ್ಯವು ಶ್ರೇಷ್ಠವಾಗಿದೆ, ಪರಿವರ್ತನೆಯು ಶ್ರೇಷ್ಠವಾಗಿದೆ. ಇಂತಹದ್ದನ್ನು ಇವರಿಗೆ ಕಲಿಸುವವರು ಡೈರೆಕ್ಟ್ ಸರ್ವಶಕ್ತಿವಂತನಾಗಿದ್ದಾರೆ- ಜ್ಞಾನ ಸೂರ್ಯನು ಸಾಕಾರ ಸೃಷ್ಟಿಯಲ್ಲಿ ಉದಯವಾಗಿದ್ದಾನೆ - ಇದನ್ನೀಗ ಪ್ರತ್ಯಕ್ಷಗೊಳಿಸಿರಿ.

ಒಂದುವೇಳೆ ತಾವು ತಿಳಿಯುತ್ತೀರಿ - ಬೇಗ ಬೇಗನೆ ತಂದೆಯ ಪ್ರತ್ಯಕ್ಷತೆಯಾಗಲಿ, ಆದ್ದರಿಂದ ತೀವ್ರ ಗತಿಯ ಪ್ರಯತ್ನವಿದೆ - ಎಲ್ಲರೂ ತಮ್ಮ ವೃತ್ತಿಯನ್ನು ತಮಗಾಗಿ, ಅನ್ಯರಿಗಾಗಿ ಸಕಾರಾತ್ಮಕತೆಯ ಧಾರಣೆ ಮಾಡಿಕೊಳ್ಳಿರಿ. ಭಲೆ ಜ್ಞಾನಪೂರ್ಣರಾಗಿರಿ ಆದರೆ ತಮ್ಮ ಮನಸ್ಸಿನಲ್ಲಿ ನಕಾರಾತ್ಮಕದ ಧಾರಣೆ ಮಾಡಿಕೊಳ್ಳದಿರಿ. ನಕಾರಾತ್ಮಕದ ಅರ್ಥವಾಗಿದೆ - ಕೊಳಕು. ಅಂದಮೇಲೆ ವೃತ್ತಿಯನ್ನು ಶಕ್ತಿಶಾಲಿ ಮಾಡಿಕೊಳ್ಳಿರಿ, ಪ್ರಕಂಪನವನ್ನು ಶಕ್ತಿಶಾಲಿ ಮಾಡಿಕೊಳ್ಳಿರಿ, ವಾಯುಮಂಡಲವನ್ನು ಶಕ್ತಿಶಾಲಿ ಮಾಡಿರಿ. ಯಾವಾಗ ನಾಲ್ಕೂ ಕಡೆಯ ವಾಯುಮಂಡಲವು ಸಂಪೂರ್ಣ ನಿರ್ವಿಘ್ನ, ದಯಾಹೃದಯಿ, ಶುಭ ಭಾವನೆ, ಶುಭ ಕಾಮನೆಯಿರುವಂತದ್ದಾಗುತ್ತದೆ, ಆಗಲೇ ತಮ್ಮ ಇದೇ ಲೈಟ್ಮೈಟ್ ಪ್ರತ್ಯಕ್ಷತೆಗೆ ನಿಮಿತ್ತವಾಗುತ್ತದೆ. ನಿರಂತರ ಸೇವೆ ಮತ್ತು ತಪಸ್ಸು ಇವೆರಡರ ಸಮತೋಲನದಿಂದ ಪ್ರತ್ಯಕ್ಷತೆಯಾಗುತ್ತದೆ. ಹೇಗೆ ಸೇವೆಯ ಡೈಲಾಗ್ ಮಾಡುತ್ತೀರಿ, ಹಾಗೆಯೇ ತಪಸ್ಸನ್ನೂ ಸಹ ಇದೇ ರೀತಿ ಮಾಡಿ, ಅದರಿಂದ ಎಲ್ಲಾ ಪತಂಗಗಳು ಬಾಬಾ, ಬಾಬಾ ಎನ್ನುತ್ತಾ ತಮ್ಮ ವಿಶೇಷ ಸ್ಥಾನಗಳಲ್ಲಿ ತಲುಪಿ ಬಿಡಲಿ. ಪತಂಗಗಳು ಬಾಬಾ-ಬಾಬಾ ಎನ್ನುತ್ತಾ ಬರಲಿ ಆಗ ಪ್ರತ್ಯಕ್ಷತೆಯೆಂದು ಹೇಳಲಾಗುತ್ತದೆ.

ಮೈಕ್ ಸಹ ಹೀಗೆ ತಯಾರು ಮಾಡಿರಿ, ಅದು ಮೀಡಿಯಾದಂತೆ ಪ್ರತ್ಯಕ್ಷತೆಯ ಧ್ವನಿ ಹರಡಲಿ. ತಾವು ಹೇಳುತ್ತೀರಿ - ಭಗವಂತ ಬಂದು ಬಿಟ್ಟರು, ಭಗವಂತ ಬಂದು ಬಿಟ್ಟರು..... ಅವರಂತು ಸಾಮಾನ್ಯ ರೀತಿಯಿಂದ ತಿಳಿಯುತ್ತಾರೆ. ಆದರೆ ತಮ್ಮ ಕಡೆಯಿಂದ ಅನ್ಯರು ಹೇಳಲಿ, ಅಥಾರಿಟಿಯವರು ಹೇಳಲಿ, ಮೊದಲು ತಮ್ಮನ್ನು ಶಕ್ತಿಯರ ರೂಪದಲ್ಲಿ ಪ್ರತ್ಯಕ್ಷ ಮಾಡಲಿ. ಯಾವಾಗ ಶಕ್ತಿಯರು ಪ್ರತ್ಯಕ್ಷವಾಗುವರು ಆಗಲೇ ಶಿವ ತಂದೆಯು ಪ್ರತ್ಯಕ್ಷವಾಗಿ ಬಿಡುತ್ತಾರೆ. ಒಳ್ಳೆಯದು. ಓಂ ಶಾಂತಿ.

ವರದಾನ:
ವರದಾನ: ಯೋಗ ಮಾಡುವ ಮತ್ತು ಮಾಡಿಸುವ ಯೋಗ್ಯತೆಯ ಜೊತೆ ಜೊತೆಗೆ ಪ್ರಯೋಗಿ ಆತ್ಮ ಭವ.

ಬಾಪ್ದಾದಾರವರು ನೋಡಿದರು - ಮಕ್ಕಳು ಯೋಗ ಮಾಡುವ ಮತ್ತು ಮಾಡಿಸುವ - ಎರಡರಲ್ಲಿಯೂ ಬುದ್ಧಿವಂತರಿದ್ದಾರೆ. ಅಂದಮೇಲೆ ಹೇಗೆ ಯೋಗ ಮಾಡುವ-ಮಾಡಿಸುವುದರಲ್ಲಿ ಯೋಗ್ಯವಿದ್ದೀರಿ, ಹಾಗೆಯೇ ಪ್ರಯೋಗ ಮಾಡುವುದರಲ್ಲಿ ಯೋಗ್ಯರಾಗಿರಿ ಮತ್ತು ಅನ್ಯರನ್ನೂ ಮಾಡಿರಿ. ಈಗ ಪ್ರಯೋಗಿ ಜೀವನದ ಅವಶ್ಯಕತೆಯಿದೆ. ಮೊಟ್ಟ ಮೊದಲು ಪರಿಶೀಲನೆ ಮಾಡಿಕೊಳ್ಳಿರಿ - ನನ್ನ ಸಂಸ್ಕಾರದ ಪರಿವರ್ತನೆಯಲ್ಲಿ ಎಲ್ಲಿಯವರೆಗೆ ಪ್ರಯೋಗಿಯಾಗಿರುವೆನು? ಏಕೆಂದರೆ ಶ್ರೇಷ್ಠ ಸಂಸ್ಕಾರವೇ ಶ್ರೇಷ್ಠ ಸಂಸಾರದ ರಚನೆಯ ಆಧಾರವಾಗಿದೆ. ಒಂದುವೇಳೆ ಆಧಾರವು ಶಕ್ತಿಶಾಲಿಯಾಗಿದೆಯೆಂದರೆ ಅನ್ಯ ಎಲ್ಲಾಮಾತುಗಳು ಸ್ವತಹವಾಗಿ ಶಕ್ತಿಶಾಲಿಯಾಗಿರುತ್ತದೆ.

ಸ್ಲೋಗನ್:
ಅನುಭವಿ ಆತ್ಮರೆಂದಿಗೂ ವಾಯುಮಂಡಲ ಅಥವಾ ಸಂಗದ ರಂಗಿನಲ್ಲಿ ಬರಲು ಸಾಧ್ಯವಿಲ್ಲ.