02.06.19    Avyakt Bapdada     Kannada Murli     24.12.84     Om Shanti     Madhuban


"ಈಶ್ವರೀಯಸ್ನೇಹದಮಹತ್ವ"


ಇಂದು ಸ್ನೇಹದ ಸಾಗರನು ತನ್ನ ಸ್ನೇಹಿ ಚಾತ್ರಕ ಮಕ್ಕಳೊಂದಿಗೆ ಮಿಲನವಾಗಲು ಬಂದಿದ್ದಾರೆ. ಅನೇಕ ಜನ್ಮಗಳಿಂದ ಈ ಸತ್ಯ ಅವಿನಾಶಿ ಈಶ್ವರೀಯ ಸ್ನೇಹಕ್ಕಾಗಿ ಬಾಯಾರಿದ್ದರು. ಜನ್ಮ-ಜನ್ಮದಿಂದ ಬಾಯಾರಿರುವ ಚಾತ್ರಕ ಆತ್ಮರಿಗೆ ಈಗ ಸತ್ಯ ಸ್ನೇಹ, ಅವಿನಾಶಿ ಸ್ನೇಹದ ಅನುಭವವಾಗುತ್ತಿದೆ. ಭಕ್ತಾತ್ಮರಾಗಿರುವ ಕಾರಣದಿಂದ ತಾವೆಲ್ಲಾ ಮಕ್ಕಳು ಸ್ನೇಹದ ಭಿಕಾರಿಯಾಗಿ ಬಿಟ್ಟಿರಿ. ಈಗ ತಂದೆಯವರು ಭಿಕಾರಿಯಿಂದ ಸ್ನೇಹದ ಸಾಗರನ ಆಸ್ತಿಯ ಅಧಿಕಾರಿಯನ್ನಾಗಿ ಮಾಡುತ್ತಿದ್ದಾರೆ. ಅನುಭವದ ಆಧಾರದಿಂದ ಎಲ್ಲರ ಹೃದಯದಿಂದ ಈಗ ಈ ಧ್ವನಿಯು ಸ್ವತಹವಾಗಿಯೇ ಬರುತ್ತದೆ- ಈಶ್ವರನ ಸ್ನೇಹವು ನಮ್ಮ ಜನ್ಮಸಿದ್ಧ ಅಧಿಕಾರವಾಗಿದೆ. ಅಂದಮೇಲೆ ಭಿಕಾರಿಯಿಂದ ಅಧಿಕಾರಿಯಾಗಿ ಬಿಟ್ಟಿರಿ. ವಿಶ್ವದಲ್ಲಿ ಪ್ರತಿಯೊಂದು ಆತ್ಮನಿಗೆ ಜೀವನದಲ್ಲಿ ಅವಶ್ಯಕವಾಗಿರುವ ವಸ್ತುವೇ ಸ್ನೇಹವಾಗಿದೆ. ಜೀವನದಲ್ಲಿ ಸ್ನೇಹವಿಲ್ಲವೆಂದರೆ ಜೀವನವು ನೀರಸವೆಂದು ಅನುಭವ ಮಾಡುತ್ತಾರೆ. ಸ್ನೇಹವು ಇಷ್ಟು ಶ್ರೇಷ್ಠವಾದ ವಸ್ತುವಾಗಿದೆ, ಅದು ಇಂದಿನ ಸಾಧಾರಣ ಜನರ ಸ್ನೇಹವನ್ನೂ ಸಹ ಭಗವಂತನೆಂದು ಒಪ್ಪುತ್ತಾರೆ. ಪ್ರೀತಿಯೇ ಪರಮಾತ್ಮನಾಗಿದ್ದಾರೆ ಅಥವಾ ಪರಮಾತ್ಮನೇ ಪ್ರೀತಿಯಾಗಿದೆ. ಅಂದಮೇಲೆ ಸ್ನೇಹವು ಇಷ್ಟೂ ಶ್ರೇಷ್ಠವಾದುದಾಗಿದೆ, ಭಗವಂತನನ್ನು ಎಷ್ಟು ಶ್ರೇಷ್ಠವೆಂದು ಒಪ್ಪುತ್ತಾರೆ ಅಷ್ಟು ಸ್ನೇಹವು ಶ್ರೇಷ್ಠವಾಗಿದೆ. ಆದ್ದರಿಂದ ಭಗವಂತನನ್ನು ಸ್ನೇಹ ಹಾಗೂ ಪ್ರೀತಿ ಎಂದು ಹೇಳುವರು. ಹೀಗೇಕೆ ಹೇಳುತ್ತಾರೆ ಎನ್ನುವುದು ಅನುಭವವಿಲ್ಲ. ಆದರೂ ಪರಮಾತ್ಮ ತಂದೆಯು ಯಾವಾಗ ಈ ಸೃಷ್ಟಿಯಲ್ಲಿ ಬರುತ್ತಾರೆಯೋ, ಆಗ ಎಲ್ಲಾ ಮಕ್ಕಳಿಗೆ ಪ್ರತ್ಯಕ್ಷ ಜೀವನದಲ್ಲಿ ಸಾಕಾರ ಸ್ವರೂಪದಿಂದ ಸ್ನೇಹವನ್ನು ಕೊಟ್ಟಿದ್ದಾರೆ, ಕೊಡುತ್ತಿದ್ದಾರೆ. ಆಗ ಅನುಭವವಾಗದಿದ್ದರೂ ಇದನ್ನೇ ತಿಳಿಯುತ್ತಾರೆ- ಸ್ನೇಹವೇ ಪರಮಾತ್ಮನಾಗಿದ್ದಾರೆ. ಅಂದಮೇಲೆ ಪರಮಾತ್ಮ ತಂದೆಯ ಮೊದಲ ಕೊಡುಗೆಯೇ ಸ್ನೇಹವಾಗಿದೆ. ಸ್ನೇಹವು ತಮ್ಮೆಲ್ಲರಿಗೂ ಬ್ರಾಹ್ಮಣ ಜನ್ಮವನ್ನು ಕೊಟ್ಟಿತು. ಸ್ನೇಹದ ಪಾಲನೆಯು ತಮ್ಮೆಲ್ಲರನ್ನು ಈಶ್ವರೀಯ ಸೇವೆಗೆ ಯೋಗ್ಯರನ್ನಾಗಿ ಮಾಡಿದೆ. ಸ್ನೇಹವು ಸಹಜಯೋಗಿ, ಕರ್ಮಯೋಗಿ, ಸ್ವತಹ ಯೋಗಿಯನ್ನಾಗಿ ಮಾಡಿದೆ. ಸ್ನೇಹವು ಅಲ್ಪಕಾಲದ ತ್ಯಾಗವನ್ನು ಭಾಗ್ಯವೆಂದು ಅನುಭವ ಮಾಡಿಸಿದೆ. ತ್ಯಾಗವಲ್ಲ ಭಾಗ್ಯವಾಗಿದೆ. ಈ ಅನುಭವವು ಸತ್ಯ ಸ್ನೇಹವೇ ಮಾಡಿಸಿತಲ್ಲವೆ. ಇದೇ ಸ್ನೇಹದ ಆಧಾರದ ಮೇಲೆ ಪ್ರತಿಯೊಂದು ಪ್ರಕಾರದ ಬಿರುಗಾಳಿಯು ಈಶ್ವರನ ಬಳುವಳಿ(ಕೊಡುಗೆ)ಯೆಂದು ಅನುಭವ ಮಾಡುತ್ತಾರೆ. ಸ್ನೇಹದ ಆಧಾರದಿಂದ ಕಷ್ಟವನ್ನು ಅತಿ ಸಹಜವೆಂದು ಅನುಭವ ಮಾಡುತ್ತಾರೆ. ಇದೇ ಈಶ್ವರನ ಸ್ನೇಹವು ಅನೇಕ ಸಂಬಂಧಗಳಲ್ಲಿ ಜೋಡಣೆಯಾಗಿದೆ, ಅನೇಕ ಭಾಗವಾಗಿರುವ ಹೃದಯವನ್ನು ಒಬ್ಬರೊಂದಿಗೆ ಜೋಡಿಸಲ್ಪಟ್ಟಿದೆ. ಈಗ ಒಂದು ಹೃದಯದ ಒಬ್ಬ ಹೃದಯ ರಾಮನಿದ್ದಾರೆ. ಹೃದಯವು ಭಾಗಗಳಾಗಿಲ್ಲ. ಸ್ನೇಹವು ತಂದೆಯ ಸಮಾನ ಮಾಡಿ ಬಿಟ್ಟಿತು. ಸ್ನೇಹವೇ ಸದಾ ಜೊತೆಯ ಅನುಭವವನ್ನು ಮಾಡುವ ಕಾರಣದಿಂದ ಸದಾ ಸಮರ್ಥವನ್ನಾಗಿ ಮಾಡಿ ಬಿಟ್ಟಿತು. ಸ್ನೇಹವು ಯುಗದ ಪರಿವರ್ತನೆಯನ್ನು ಮಾಡಿ ಬಿಟ್ಟಿತು. ಕಲಿಯುಗಿಯಿಂದ ಸಂಗಮಯುಗಿಯನ್ನಾಗಿ ಮಾಡಿ ಬಿಟ್ಟಿತು. ಸ್ನೇಹವೇ ದುಃಖ-ನೋವಿನ ಪ್ರಪಂಚದಿಂದ ಸುಖದ ಖುಷಿಯ ಪ್ರಪಂಚದಲ್ಲಿ ಪರಿವರ್ತನೆ ಮಾಡಿ ಬಿಟ್ಟಿತು. ಈ ಈಶ್ವರೀಯ ಸ್ನೇಹಕ್ಕೆ ಇಷ್ಟೂ ಮಹತ್ವವಿದೆ. ಯಾರು ಮಹತ್ವವನ್ನು ತಿಳಿಯುತ್ತಾರೆಯೋ ಅವರೇ ಮಹಾನರಾಗಿ ಬಿಡುತ್ತಾರೆ. ಇಂತಹ ಮಹಾನರಾಗಿದ್ದೀರಲ್ಲವೆ. ಎಲ್ಲದಕ್ಕಿಂತಲೂ ಸಹಜ ಪುರುಷಾರ್ಥವೂ ಇದೇ ಆಗಿದೆ. ಸ್ನೇಹದಲ್ಲಿ ಸದಾ ಸಮಾವೇಶವಾಗಿರಿ. ಲವಲೀನ ಆತ್ಮರಿಗೆ ಎಂದಿಗೂ ಸಹ ಸ್ವಪ್ನದಲ್ಲಿಯೂ ಮಾಯೆಯ ಪ್ರಭಾವವು ಬೀರಲು ಸಾಧ್ಯವಿಲ್ಲ. ಏಕೆಂದರೆ ಲವಲೀನ ಸ್ಥಿತಿಯು ಮಾಯಾಪ್ರೂಫ್ ಸ್ಥಿತಿಯಾಗಿದೆ. ಅಂದಮೇಲೆ ಸ್ನೇಹದಲ್ಲಿರುವುದು ಸಹಜವಲ್ಲವೆ. ಸ್ನೇಹವು ಎಲ್ಲರನ್ನೂ ಮಧುಬನ ನಿವಾಸಿಯನ್ನಾಗಿ ಮಾಡಿ ಬಿಟ್ಟಿತು. ಸ್ನೇಹದ ಕಾರಣವೇ ತಲುಪಿದ್ದೀರಲ್ಲವೆ. ಬಾಪ್ದಾದಾರವರೂ ಸಹ ಎಲ್ಲಾ ಮಕ್ಕಳಿಗೆ ಇದೇ ವರದಾನವನ್ನು ಕೊಡುತ್ತಾರೆ "ಸದಾ ಸ್ನೇಹಿ ಭವ". ಸ್ನೇಹವು ಇಂತಹ ಜಾದೂ ಆಗಿದೆ, ಅದರೊಂದಿಗೆ ಏನನ್ನು ಬೇಡುತ್ತೀರೋ ಅದು ಪ್ರಾಪ್ತಿಯಾಗಲು ಸಾಧ್ಯವಿದೆ. ಸತ್ಯ ಸ್ನೇಹದಿಂದ, ಹೃದಯದಿಂದ ಸ್ನೇಹದಿಂದ, ಸ್ವಾರ್ಥಿ ಸ್ನೇಹದಿಂದಲ್ಲ. ಸಮಯದಲ್ಲಿ ಸ್ನೇಹಿಯಾಗುವವರಲ್ಲ. ಯಾವಾಗ ಯಾವುದೇ ಅವಶ್ಯಕತೆಯ ಸಮಯ ಬರಲಿ, ಆ ಸಮಯದಲ್ಲಿ ಮಧುರ ಬಾಬಾ, ಪ್ರಿಯ ಬಾಬಾ ಎಂದು ಹೇಳುತ್ತಾ ನಿಭಾಯಿಸುವವರಲ್ಲ. ಸದಾಕಾಲವೂ ಈ ಸ್ನೇಹದಲ್ಲಿ ಸಮಾವೇಶವಾಗಿರಬೇಕು. ಇಂತಹವರಿಗಾಗಿ ಸದಾ ಬಾಪ್ದಾದಾರವರ ಛತ್ರಛಾಯೆಯಿದೆ. ಸಮಯದಲ್ಲಿ ನೆನಪು ಮಾಡುವವರು ಅಥವಾ ಕಾರಣದಿಂದ ನೆನಪು ಮಾಡುವವರು, ಇವರಿಗೂ ಯಥಾಶಕ್ತಿ, ಯಥಾ ಸ್ನೇಹದ ರಿಟರ್ನ್ನಲ್ಲಿ ಸಹಯೋಗವು ಸಿಗುತ್ತದೆ. ಆದರೆ ಯಥಾಶಕ್ತಿ ಸಂಪನ್ನ ಸಂಪೂರ್ಣವಾದ ಸಫಲತೆಯು ಸಿಗುವುದಿಲ್ಲ. ಅದಕ್ಕಾಗಿ ಸದಾ ಸ್ನೇಹದ ಮೂಲಕ ಸರ್ವಪ್ರಾಪ್ತಿ ಸ್ವರೂಪವನ್ನು ಅನುಭವ ಮಾಡುವುದಕ್ಕಾಗಿ ಸತ್ಯ ಹೃದಯದ ಸ್ನೇಹಿಯಾಗಿರಿ. ತಿಳಿಯಿತೆ!

ಬಾಪ್ದಾದಾರವರು ಮಧುಬನ ಮನೆಯ ಶೃಂಗಾರವಾಗಿರುವ ಎಲ್ಲಾಮಕ್ಕಳಿಗೆ ವಿಶೇಷವಾಗಿ ಸ್ನೇಹದ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಪ್ರತಿಯೊಂದು ಮಗುವು ತಂದೆಯ ಮನೆಯ ವಿಶೇಷ ಶೃಂಗಾರ ಆಗಿದ್ದಾರೆ. ಈ ಮಧುಬನ ಮನೆಗೆ ಮಕ್ಕಳೇ ಶೋಭೆಯಾಗಿದ್ದಾರೆ. ಹೀಗೆ ತಮ್ಮನ್ನು ತಿಳಿಯುತ್ತೀರಲ್ಲವೆ. ಪ್ರಪಂಚದವರು ಕ್ರಿಸ್ಮಸ್ ಆಚರಿಸುವುದಕ್ಕಾಗಿ ಎಲ್ಲೆಲ್ಲಿಂದ ಹೋಗುತ್ತಾರೆ ಮತ್ತು ವಿಶೇಷವಾಗಿ ಈ ವಿದೇಶಿ ಹಾಗೂ ಭಾರತದ ಮಕ್ಕಳು ಮಧುರ ಮನೆಗೆ ತಲುಪಿದ್ದಾರೆ. ಶ್ರೇಷ್ಠ ದಿನ, ಅತಿ ಶ್ರೇಷ್ಠ ತಂದೆಯೊಂದಿಗೆ ದೊಡ್ಡ ಹೃದಯದಿಂದ ಆಚರಿಸುವುದಕ್ಕಾಗಿ ತಲುಪಿದ್ದಾರೆ.

ಈ ದೊಡ್ಡ ದಿನವು ವಿಶೇಷವಾಗಿ ಬಾಪ್ ಮತ್ತು ದಾದಾ ಇಬ್ಬರ ನೆನಪಾರ್ಥದ ಚಿಹ್ನೆಯ ದಿನವಾಗಿದೆ. 1. ದಾತಾ ರೂಪದಿಂದ ಶಿವ ತಂದೆಯ ಚಿಹ್ನೆ ಮತ್ತು ವೃದ್ಧನ ಸ್ವರೂಪವು ಬ್ರಹ್ಮಾ ತಂದೆಯ ಚಿಹ್ನೆ. ಎಂದಿಗೂ ಯುವಕನ ರೂಪದಿಂದ ತೋರಿಸುವುದಿಲ್ಲ. ಕ್ರಿಸ್ಮಸ್ ಫಾದರ್ನನ್ನು ವೃದ್ಧನಾಗಿಯೇ ತೋರಿಸುತ್ತಾರೆ. ಮತ್ತು ಎರಡು ರಂಗನ್ನೂ ಖಂಡಿತ ತೋರಿಸುತ್ತಾರೆ. ಬಿಳಿ ಮತ್ತು ಕೆಂಪು. ಅಂದಾಗ ಬಾಪ್ ಮತ್ತು ದಾದಾ ಇಬ್ಬರ ಈ ಚಿಹ್ನೆಯಾಗಿದೆ. ಬಾಪ್ದಾದಾರವರು ಚಿಕ್ಕ ಮಕ್ಕಳಿಗೇನು ಇಚ್ಛೆಯಿದೆ, ಅದರಿಂದ ಸಂಪನ್ನಗೊಳಿಸಿ ಬಿಡುತ್ತಾರೆ. ಚಿಕ್ಕ-ಚಿಕ್ಕ ಮಕ್ಕಳು ಬಹಳ ಸ್ನೇಹದಿಂದ ಈ ವಿಶೇಷ ದಿನದಂದು, ತನ್ನ ಮನಸ್ಸಿಗೆ ಪ್ರಿಯವಾಗಿರುವ ವಸ್ತುವನ್ನು ಕ್ರಿಸ್ಮಸ್ ಫಾದರ್ನಿಂದ ಬಯಸುತ್ತಾರೆ ಅಥವಾ ಸಂಕಲ್ಪವನ್ನಿಡುತ್ತಾರೆ. ಮತ್ತು ನಿಶ್ಚಯವನ್ನಿಡುತ್ತಾರೆ- ಅವರು ಖಂಡಿತವಾಗಿಯೂ ಪೂರ್ಣಗೊಳಿಸುತ್ತಾರೆ. ಅಂದಮೇಲೆ ಈ ನೆನಪಾರ್ಥವೂ ಸಹ ತಾವು ಮಕ್ಕಳದಾಗಿದೆ. ಭಲೆ ಹಳೆಯ ಶೂದ್ರ ಜೀವನದಲ್ಲಿ ಎಷ್ಟೇ ವೃದ್ಧನಾಗಿರಬಹುದು ಆದರೆ ಬ್ರಾಹ್ಮಣ ಜೀವನದಲ್ಲಿ ಚಿಕ್ಕ ಮಕ್ಕಳೇ ಆಗಿರುವಿರಿ. ಅಂದಾಗ ಎಲ್ಲಾ ಚಿಕ್ಕ ಮಕ್ಕಳು ಏನೆಲ್ಲಾ ಶ್ರೇಷ್ಠ ಕಾಮನೆಯನ್ನು ಇಟ್ಟುಕೊಳ್ಳುತ್ತಾರೆ, ಅದು ಪೂರ್ಣವಾಗುತ್ತದೆಯಲ್ಲವೆ. ಆದ್ದರಿಂದ ಈ ನೆನಪು, ಚಿಹ್ನೆಗಳು ಅಂತ್ಯದ ಧರ್ಮದಲ್ಲಿಯೂ ನಡೆಯುತ್ತಾ ಬರುತ್ತಿದೆ. ತಮ್ಮೆಲ್ಲರಿಗೂ ಇದು ಸಂಗಮಯುಗದ ಅತಿ ಶ್ರೇಷ್ಠ ದಿನದಂದು ಬಹಳ-ಬಹಳ ಉಡುಗೊರೆಗಳು ಬಾಪ್ದಾದಾರವರಿಂದ ಸಿಕ್ಕಿ ಬಿಟ್ಟಿದೆಯಲ್ಲವೆ. ವಿಶೇಷವಾಗಿ ಈ ಶ್ರೇಷ್ಠ ದಿನವು ಉಡುಗೊರೆಗಳ ದಿನವಾಗಿದೆ. ಅಂದಮೇಲೆ ಬಾಪ್ದಾದಾರವರು ಎಲ್ಲದಕ್ಕಿಂತಲೂ ಶ್ರೇಷ್ಠವಾದ ಉಡುಗೊರೆಯಾಗಿ ಸ್ವರಾಜ್ಯ ಮತ್ತು ಸ್ವರ್ಗದ ರಾಜ್ಯವನ್ನು ಕೊಡುತ್ತಾರೆ. ಅದರಲ್ಲಿ ಅಪ್ರಾಪ್ತಿಯೇನೂ ಇರುವುದಿಲ್ಲ. ಸರ್ವಪ್ರಾಪ್ತಿ ಸ್ವರೂಪರಾಗಿ ಬಿಡುತ್ತೀರಿ. ಅಂದಮೇಲೆ ಶ್ರೇಷ್ಠ ದಿನವನ್ನು ಆಚರಿಸುವವವರು ದೊಡ್ಡ ಹೃದಯದವರಾಗಿದ್ದಾರೆ. ವಿಶ್ವಕ್ಕೆ ಕೊಡುವವರಂತು ದೊಡ್ಡ ಹೃದಯ(ವಿಶಾಲ ಹೃದಯ)ದವರಾದರಲ್ಲವೆ. ಅಂದಮೇಲೆ ಎಲ್ಲರಿಗೂ ಸಂಗಮಯುಗದ ಶ್ರೇಷ್ಠ ದಿನಕ್ಕಾಗಿ ದೊಡ್ಡ ಹೃದಯದಿಂದ, ಅತಿ ದೊಡ್ಡ ಬಪ್ದಾದಾರವರು ಶುಭಾಷಯಗಳನ್ನು ಕೊಡುತ್ತಿದ್ದಾರೆ. ಆ ಜನರು 12 ಗಂಟೆಯ ನಂತರ ಆಚರಿಸುತ್ತಾರೆ, ತಾವು ಎಲ್ಲರಿಗಿಂತ ಮೊದಲ ನಂಬರವರಲ್ಲವೆ. ಅಂದಮೇಲೆ ಮೊದಲು ತಾವು ಆಚರಿಸುತ್ತೀರಿ. ನಂತರ ಪ್ರಪಂಚದವರು ಆಚರಿಸುತ್ತಾರೆ. ವಿಶೇಷ ರೂಪದಲ್ಲಿ ಡಬಲ್ ವಿದೇಶಿಗಳು ಇಂದು ಬಹಳ ಉಮ್ಮಂಗ-ಉತ್ಸಾಹದಿಂದ ನೆನಪು-ಉಡುಗೊರೆಗಳನ್ನು ತಂದೆಗೆ ಸ್ಥೂಲ-ಸೂಕ್ಷ್ಮ ರೂಪದಲ್ಲಿ ಕೊಡುತ್ತಿದ್ದಾರೆ. ಬಾಪ್ದಾದಾರವರೂ ಸಹ ಎಲ್ಲಾ ಡಬಲ್ ವಿದೇಶಿ ಮಕ್ಕಳಿಗೆ ಸ್ನೇಹದ ಉಡುಗೊರೆಯನ್ನು ರಿಟರ್ನ್ನಲ್ಲಿ ಪದಮದಷ್ಟು, ಸದಾ ಸ್ನೇಹಿ-ಜೊತೆಗಾರರಾಗಿರುತ್ತಾರೆ, ಸದಾ ಸ್ನೇಹದ ಸಾಗರನಲ್ಲಿ ಸಮಾವೇಶವಾಗಿದ್ದು ಲವಲೀನ ಸ್ಥಿತಿಯ ಅನುಭವವನ್ನು ಮಾಡುತ್ತೀರಿ- ಇಂತಹ ವರದಾನದಿಂದ ಕೂಡಿರುವ ನೆನಪು ಮತ್ತು ಅಮರ ಪ್ರೀತಿಯ ರಿಟರ್ನ್ನಲ್ಲಿ ಉಡುಗೊರೆಯನ್ನು ಕೊಡುತ್ತಿದ್ದಾರೆ. ಸದಾ ಹಾಡುತ್ತಾ ಮತ್ತು ಖುಷಿಯಲ್ಲಿ ನರ್ತಿಸುತ್ತಾ ಇರುತ್ತೀರಿ. ಸದಾ ಮುಖ ಮಧುರವಾಗಿರುತ್ತದೆ. ಇಂತಹ ಸ್ನೇಹಿಗಳೇ ಭಾರತದ ಮಕ್ಕಳಿಗೂ ವಿಶೇಷವಾಗಿ ಸಹಜಯೋಗಿ, ಸ್ವತಹ ಯೋಗಿಯ ವರದಾನದ ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ.

ಎಲ್ಲಾಮಕ್ಕಳಿಗೂ ದಾತಾ ಮತ್ತು ವಿದಾತಾ ಬಾಪ್ದಾದಾರವರು, ಅವಿನಾಶಿ ಸ್ನೇಹ ಸಂಪನ್ನ ಸದಾ ಸಮರ್ಥ ಸ್ವರೂಪದಿಂದ ಸಹಜ ಅನುಭವವನ್ನು ಮಾಡುವಂತಹ ನೆನಪು ಪ್ರೀತಿಯನ್ನು ಕೊಡುತ್ತಿದ್ದಾರೆ. ಎಲ್ಲರಿಗೂ ನೆನಪು-ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ - 1. ಸದಾ ತಮ್ಮನ್ನು ಈ ಹಳೆಯ ಪ್ರಪಂಚದ ಆಕರ್ಷಣೆಗಳಿಂದ ಭಿನ್ನ ಹಾಗೂ ತಂದೆಗೆ ಪ್ರಿಯ, ಇಂತಹ ಅನುಭವ ಮಾಡುತ್ತೀರಾ? ಎಷ್ಟು ಪ್ರಿಯರಾಗುತ್ತೀರಿ ಅಷ್ಟು ಸ್ವತಹವಾಗಿಯೇ ಪ್ರಿಯರಾಗುತ್ತೀರಿ. ಭಿನ್ನರಾಗಿಲ್ಲವೆಂದರೆ ಪ್ರಿಯರಾಗಿಲ್ಲ. ಅದಕ್ಕಾಗಿ ಭಿನ್ನ ಹಾಗೂ ಪ್ರಿಯರಾಗಿದ್ದೀರಾ ಅಥವಾ ಕೆಲವೊಂದೆಡೆ ಸೆಳೆತವಿದೆಯೋ? ಯಾವಾಗ ಯಾರೊಂದಿಗೇ ಸೆಳೆತವಿಲ್ಲವೆಂದರೆ ಒಬ್ಬ ತಂದೆಯ ಕಡೆಗೇ ಬುದ್ಧಿಯು ಸ್ವತಹವಾಗಿ ಹೋಗುತ್ತದೆ. ಬೇರೆ ಕಡೆಗೆ ಹೋಗಲು ಸಾಧ್ಯವಿಲ್ಲ. ಸಹಜ ಮತ್ತು ನಿರಂತರ ಯೋಗಿಯ ಸ್ಥಿತಿಯು ಅನುಭವವಾಗುವುದು. ಈಗ ಸಹಜಯೋಗಿ ಆಗಲಿಲ್ಲವೆಂದರೆ ಯಾವಾಗ ಆಗುವಿರಿ? ಇಷ್ಟು ಸಹಜ ಪ್ರಾಪ್ತಿಯಿದೆ, ಸತ್ಯಯುಗದಲ್ಲಿಯೂ ಸಹ ಈಗಿನ ಪ್ರಾಪ್ತಿಯ ಫಲವಿರುತ್ತದೆ. ಅಂದಮೇಲೆ ಈಗ ಸಹಜಯೋಗಿ ಮತ್ತು ಸದಾಕಾಲದ ರಾಜ್ಯಭಾಗ್ಯದ ಅಧಿಕಾರಿ ಸಹಜಯೋಗಿ ಮಕ್ಕಳು ಸದಾ ತಂದೆಯ ಸಮಾನ ಸಮೀಪವಿರುತ್ತಾರೆ. ಅಂದಮೇಲೆ ತಮ್ಮನ್ನು ತಂದೆಯ ಸಮೀಪದಲ್ಲಿ ಜೊತೆಯಿರುವವರೆಂದು ಅನುಭವ ಮಾಡುವಿರಾ? ಯಾರು ಜೊತೆಯಿದ್ದಾರೆಯೋ ಅವರಿಗೆ ಆಶ್ರಯವು ಸದಾ ಇರುತ್ತದೆ. ಜೊತೆಯಿರುವುದಿಲ್ಲವೆಂದರೆ ಆಶ್ರಯವೂ ಸಿಗುವುದಿಲ್ಲ. ಯಾವಾಗ ತಂದೆಯ ಆಶ್ರಯವು ಸಿಕ್ಕಿ ಬಿಟ್ಟಿತೆಂದರೆ, ಯಾವುದೇ ವಿಘ್ನವು ಬರಲು ಸಾಧ್ಯವಿಲ್ಲ. ಎಲ್ಲಿ ಸರ್ವಶಕ್ತಿವಂತ ತಂದೆಯ ಆಶ್ರಯವಿದೆ, ಆಗ ಮಾಯೆಯೂ ತಾನಾಗಿಯೇ ದೂರವಾಗಿ ಬಿಡುತ್ತದೆ. ಶಕ್ತಿಯಿರುವವರ ಮುಂದೆ ನಿರ್ಬಲನು ಏನು ಮಾಡುವನು? ದೂರವಾಗುತ್ತಾರಲ್ಲವೆ. ಹಾಗೆಯೇ ಮಾಯೆಯೂ ಸಹ ದೂರವಾಗಿ ಬಿಡುತ್ತದೆ, ಎದುರಿಸುವುದಿಲ್ಲ. ಅಂದಮೇಲೆ ಎಲ್ಲರೂ ಮಾಯಾಜೀತರಾಗಿದ್ದೀರಾ? ಭಿನ್ನ-ಭಿನ್ನ ಪ್ರಕಾರದಿಂದ, ಹೊಸ-ಹೊಸ ರೂಪದಿಂದ ಮಾಯೆಯು ಬರುತ್ತದೆ. ಆದರೆ ಜ್ಞಾನಪೂರ್ಣ ಆತ್ಮರು ಮಾಯೆಯಿಂದ ಗಾಬರಿಗೊಳ್ಳುವುದಿಲ್ಲ. ಅವರು ಮಾಯೆಯ ಎಲ್ಲಾರೂಪಗಳನ್ನು ತಿಳಿದುಕೊಂಡಿರುತ್ತಾರೆ ಮತ್ತು ತಿಳಿದ ನಂತರ ದೂರ ಮಾಡಿ ಬಿಡುತ್ತಾರೆ. ಯಾವಾಗ ಮಾಯಾಜೀತರಾಗಿ ಬಿಟ್ಟಿರಿ, ಮತ್ತೆಂದಿಗೂ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಯಾರೆಷ್ಟೇ ಪ್ರಯತ್ನ ಪಡಲಿ ಆದರೆ ತಾವು ಅಲುಗಾಡದಿರಿ.

ಅಮೃತವೇಳೆಯಿಂದ ರಾತ್ರಿಯವರೆಗೆ ತಂದೆ ಮತ್ತು ಸೇವೆ, ಇದನ್ನು ಬಿಟ್ಟು ಮತ್ತ್ಯಾವುದೇ ಲಗನ್ ಇರಬಾರದು. ತಂದೆಯು ಸಿಕ್ಕಿದರು ಮತ್ತು ಸೇವಾಧಾರಿಯಾದಿರಿ, ಏಕೆಂದರೆ ಏನು ಸಿಕ್ಕಿದೆಯೋ ಅದನ್ನೆಷ್ಟು ಹಂಚುವಿರಿ ಅಷ್ಟು ಹೆಚ್ಚಾಗುತ್ತದೆ. ಒಂದು ಕೊಡಿ ಮತ್ತು ಪದಮವನ್ನು ಪಡೆಯಿರಿ. ಇದನ್ನೇ ನೆನಪಿಟ್ಟುಕೊಳ್ಳಿರಿ- ನಾವು ಸರ್ವ ಭಂಡಾರಗಳ ಮಾಲೀಕರಿದ್ದೇವೆ, ಸಂಪನ್ನ ಭಂಡಾರವಿದ್ದೇವೆ. ಯಾರನ್ನು ಪ್ರಪಂಚದವರು ಹುಡುಕುತ್ತಿದ್ದಾರೆ, ಅವರ ಮಕ್ಕಳಾಗಿ ಬಿಟ್ಟಿದ್ದೇವೆ. ದುಃಖದ ಪ್ರಪಂಚದಿಂದ ದೂರವಾಗಿ ಬಿಟ್ಟೆವು. ಸುಖದ ಪ್ರಪಂಚದಲ್ಲಿ ತಲುಪಿಬಿಟ್ಟೆವು. ಅಂದಮೇಲೆ ಸದಾ ಸುಖದ ಸಾಗರದಲ್ಲಿ ತೇಲಾಡುತ್ತಾ, ಎಲ್ಲರನ್ನೂ ಸುಖದ ಖಜಾನೆಯಿಂದ ಸಂಪನ್ನಗೊಳಿಸಿರಿ. ಒಳ್ಳೆಯದು.

ಆಯ್ಕೆ ಮಾಡಿರುವ ಅವ್ಯಕ್ತ ಮಹಾವಾಕ್ಯಗಳು:
ಬ್ರಾಹ್ಮಣ ಜೀವನದಲ್ಲಿ ಸಭ್ಯತೆಯೆಂಬ ಸಂಸ್ಕೃತಿಯನ್ನು ತಮ್ಮದಾಗಿಸಿಕೊಳ್ಳಿರಿ.

ಬ್ರಾಹ್ಮಣ ಪರಿವಾರದಲ್ಲಿ ಮೊದಲ ನಂಬರಿನ ಸಂಸ್ಕೃತಿಯಾಗಿದೆ- "ಸಭ್ಯತೆ". ಅಂದಮೇಲೆ ಪ್ರತಿಯೊಬ್ಬರ ಮುಖ ಮತ್ತು ಚಲನೆಯಲ್ಲಿ ಈ ಬ್ರಾಹ್ಮಣನ ಸಂಸ್ಕೃತಿಯು ಪ್ರತ್ಯಕ್ಷವಾಗಲಿ. ಪ್ರತಿಯೊಬ್ಬ ಬ್ರಾಹ್ಮಣನು ಮುಗುಳ್ನಗುತ್ತಾ, ಪ್ರತಿಯೊಬ್ಬರ ಸಂಪರ್ಕದಲ್ಲಿ ಬರಲಿ. ಯಾರು ಹೇಗಾದರೂ ಇರಲಿ, ತಾವು ತಮ್ಮ ಈ ಸಂಸ್ಕೃತಿಯನ್ನೆಂದಿಗೂ ಬಿಡಬಾರದು. ಈಗ ತಮ್ಮ ಜೀವನದಲ್ಲಿ ಹೊಸ ಸಭ್ಯತೆಯ ಸಂಸ್ಕಾರವು ಕಂಡುಬರಲಿ. ಕಡಿಮೆ ಮಾತನಾಡಿರಿ, ನಿಧಾನವಾಗಿ ಮಾತನಾಡಿರಿ ಮತ್ತು ಮಧುರವಾಗಿ ಮಾತನಾಡಿರಿ. ಒಂದುವೇಳೆ ಬಯಸದಿದ್ದರೂ ಸಹ ಎಂದಿಗೂ ಕ್ರೋಧ ಅಥವಾ ಕಿರಿ ಕಿರಿಯು ಬರುತ್ತದೆಯೆಂದರೆ ಹೃದಯದಿಂದ ಹೇಳಿರಿ "ಮಧುರ ಬಾಬಾ", ಆಗ ವಿಶೇಷವಾದ ಸಹಯೋಗವು ಸಿಕ್ಕಿ ಬಿಡುತ್ತದೆ. ಆಂತರ್ಯದಿಂದ ಶುಭ ಭಾವ ಮತ್ತು ಪ್ರೇಮ ಭಾವವನ್ನು ಇಮರ್ಜ್ ಮಾಡಿಕೊಳ್ಳುತ್ತೀರೆಂದರೆ ಕ್ರೋಧ ಮಹಾ ಶತ್ರುವಿನ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ.

ಕೆಲ ಮಕ್ಕಳು ಇತ್ತೀಚೆಗೆ ಒಂದು ವಿಶೇಷ ಭಾಷೆಯನ್ನು ಬಳಸುತ್ತಾರೆ- ನಮ್ಮಿಂದ ಅಸತ್ಯವನ್ನು ನೋಡುವುದಕ್ಕಾಗುವುದಿಲ್ಲ, ಅಸತ್ಯ ಕೇಳುವುದಕ್ಕಾಗುವುದಿಲ್ಲ. ಆದ್ದರಿಂದ ಅಸತ್ಯವನ್ನು ನೋಡಿ, ಅಸತ್ಯವನ್ನು ಕೇಳಿಸಿಕೊಂಡು, ಒಳಗೆ ಜೋಷ್ ಬಂದು ಬಿಡುತ್ತದೆ. ಆದರೆ ಒಂದುವೇಳೆ ಅದು ಅಸತ್ಯವಿದೆ ಮತ್ತು ಅಸತ್ಯವನ್ನು ನೋಡುತ್ತಾ ತಮ್ಮಲ್ಲಿ ಜೋಷ್ ಬರುತ್ತದೆಯೆಂದರೆ, ಆ ಜೋಷ್(ಉಮ್ಮಂಗ) ಸಹ ಅಸತ್ಯವಲ್ಲವೆ! ಅಸತ್ಯವನ್ನು ಸಮಾಪ್ತಿ ಮಾಡುವುದಕ್ಕಾಗಿ ಸ್ವಯಂನಲ್ಲಿ ಅಸತ್ಯದ ಶಕ್ತಿಯನ್ನು ಧಾರಣೆ ಮಾಡಿಕೊಳ್ಳಿರಿ. ಸತ್ಯತೆಯ ಚಿಹ್ನೆಯಾಗಿದೆ- ಸಭ್ಯತೆ. ಒಂದುವೇಳೆ ತಾವು ಸತ್ಯವಾಗಿದ್ದೀರಿ, ಸತ್ಯತೆಯ ಶಕ್ತಿಯು ತಮ್ಮಲ್ಲಿದೆಯೆಂದರೆ ಸಭ್ಯತೆಯನ್ನೆಂದಿಗೂ ಬಿಡಬೇಡಿ, ಸತ್ಯತೆಯನ್ನು ಸಿದ್ಧ ಮಾಡಿರಿ ಆದರೆ ಸಭ್ಯತೆಯಿಂದ ಕೂಡಿರಲಿ. ಒಂದುವೇಳೆ ಸಭ್ಯತೆಯನ್ನು ಬಿಟ್ಟು ಅಸಭ್ಯತೆಯಲ್ಲಿ ಬಂದು ಸತ್ಯವನ್ನು ಸಿದ್ಧ ಮಾಡಲು ಬಯಸುತ್ತೀರೆಂದರೆ, ಆ ಸತ್ಯವು ಸಿದ್ಧವಾಗುವುದಿಲ್ಲ. ಅಸಭ್ಯತೆಯ ಚಿಹ್ನೆಯಾಗಿದೆ- ಹಠ ಮಾಡುವುದು ಮತ್ತು ಸಭ್ಯತೆಯ ಚಿಹ್ನೆಯಾಗಿದೆ- ನಿರ್ಮಾಣತೆ. ಸಭ್ಯತೆಯನ್ನು ಸಿದ್ಧ ಮಾಡುವವರು ಸದಾ ಸ್ವಯಂ ನಿರ್ಮಾಣರಾಗಿದ್ದು ಸಭ್ಯತೆಯಿಂದ ವ್ಯವಹಾರವನ್ನು ಮಾಡುವರು. ಉಮ್ಮಂಗದಲ್ಲಿ ಬಂದು ಒಂದುವೇಳೆ ಯಾವುದೇ ಸತ್ಯವನ್ನು ಸಿದ್ಧ ಮಾಡಿದರೆ, ಅವಶ್ಯವಾಗಿ ಅದರಲ್ಲಿ ಒಂದಲ್ಲ ಒಂದು ಅಸತ್ಯತೆಯು ಸಮಾವೇಶವಾಗಿರುತ್ತದೆ. ಕೆಲ ಮಕ್ಕಳ ಭಾಷೆಯಾಗಿ ಬಿಟ್ಟಿದೆ- ನಾನು ಸಂಪೂರ್ಣವಾಗಿ ಸತ್ಯವನ್ನೇ ಹೇಳುತ್ತೇನೆ, 100% ಸತ್ಯವನ್ನು ಹೇಳುತ್ತೇನೆ. ಆದರೆ ಸತ್ಯವನ್ನು ಸಿದ್ಧ ಮಾಡುವ ಅವಶ್ಯಕತೆಯಿಲ್ಲ. ಸತ್ಯವು ಸೂರ್ಯನಂತೆ, ಅದು ಗುಪ್ತವಾಗಿರಲು ಸಾಧ್ಯವಿಲ್ಲ. ಭಲೆ ಯಾರೆಷ್ಟೇ ಅಡಚಣೆಗಳನ್ನು ತರಲಿ ಆದರೆ ಸತ್ಯತೆಯ ಪ್ರಕಾಶತೆಯೆಂದಿಗೂ ಸಹ ಗುಪ್ತವಾಗಿರಲು ಸಾಧ್ಯವಿಲ್ಲ. ಸಭ್ಯತೆಯಿಂದ ಇರುವ ಮಾತು, ಸಭ್ಯತೆಯಿಂದ ಕೂಡಿದ ಚಲನೆ, ಇದರಲ್ಲಿಯೂ ಸಫಲತೆಯಾಗುತ್ತದೆ.

ಯಾವಾಗ ಯಾವುದೇ ಅಸತ್ಯ ಮಾತನ್ನು ನೋಡುತ್ತೀರಿ, ಕೇಳಿಸಿಕೊಳ್ಳುತ್ತೀರಿ, ಆಗ ಅಸತ್ಯದ ವಾಯುಮಂಡಲವನ್ನು ಹರಡಿಸದಿರಿ. ಕೆಲವರು ಹೇಳುತ್ತಾರೆ- ಇದು ಪಾಪ ಕರ್ಮವಾಗಿದೆ ಅಲ್ಲವೆ, ಪಾಪ ಕರ್ಮವನ್ನು ನೋಡಲಾಗುವುದಿಲ್ಲ. ಆದರೆ ವಾಯುಮಂಡಲದಲ್ಲಿ ಅಸಭ್ಯತೆಯ ಮಾತನ್ನು ಹರಡಿಸುವುದೂ ಸಹ ಪಾಪವಾಗಿದೆ. ಲೌಕಿಕ ಪರಿವಾರದಲ್ಲಿಯೂ ಸಹ ಒಂದುವೇಳೆ ಯಾವುದೇ ಅಂತಹ ಮಾತನ್ನು ನೋಡಿದಿರಿ ಅಥವಾ ಕೇಳಿದಿರಿ, ಆಗ ಅದನ್ನು ಹರಡಿಸುವುದಿಲ್ಲ. ಕಿವಿಯಲ್ಲಿ ಕೇಳಿಸಿತು ಮತ್ತು ಹೃದಯದಲ್ಲಿ ಅಡಗಿಸಿಟ್ಟುಕೊಳ್ಳುತ್ತಾರೆ. ಒಂದುವೇಳೆ ಯಾರೇ ವ್ಯರ್ಥ ಮಾತುಗಳನ್ನು ಹರಡಿಸುತ್ತಾರೆಂದರೆ, ಇದೂ ಸಹ ಪಾಪದ ಅಂಶವಾಗಿದೆ. ಇಂತಹ ಚಿಕ್ಕ ಚಿಕ್ಕ ಪಾಪಗಳು ಹಾರುವ ಕಲೆಯ ಅನುಭವವನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಆದ್ದರಿಂದ ಈ ಕರ್ಮಗಳ ಗುಹ್ಯ ಗತಿಯನ್ನು ತಿಳಿದುಕೊಂಡು ಸಭ್ಯತಾ ಪೂರ್ವಕವಾಗಿ ವ್ಯವಹಾರವನ್ನು ಮಾಡಿರಿ. ತಾವು ಬ್ರಾಹ್ಮಣ ಮಕ್ಕಳು ಬಹಳ-ಬಹಳ ರಾಯಲ್ ಇರುವವರು. ತಮ್ಮ ಮುಖ ಮತ್ತು ಚಲನೆಯೆರಡೂ ಸತ್ಯತೆಯ ಸಭ್ಯತೆಯನ್ನು ಅನುಭವ ಮಾಡಿಸಲಿ. ಹಾಗೆ ನೋಡಿದರೆ ರಾಯಲ್ ಆತ್ಮರನ್ನು ಸಭ್ಯತೆಯ ದೇವಿ ಎಂದು ಹೇಳಲಾಗುತ್ತದೆ. ಅವರ ಮಾತು, ನೋಡುವುದು, ನಡೆಯುವುದು, ತಿನ್ನುವ-ಕುಡಿಯುವ, ಏಳುವ-ಕುಳಿತುಕೊಳ್ಳುವ, ಪ್ರತೀ ಕರ್ಮದಲ್ಲಿಯೂ ಸಭ್ಯತೆ ಸತ್ಯತೆಯು ಸ್ವತಹವಾಗಿಯೇ ಕಂಡುಬರುತ್ತದೆ. ಹೀಗಿರಬಾರದು- ನಾನಂತು ಸತ್ಯವನ್ನು ಸಿದ್ಧ ಮಾಡುತ್ತಿದ್ದೇನೆ ಮತ್ತು ಸಭ್ಯತೆಯೇ ಇಲ್ಲ. ಇದು ಸರಿಯಲ್ಲ. ಕೆಲವರು ಹೇಳುತ್ತಾರೆ- ಹಾಗೆ ನೋಡಿದರೆ ಕ್ರೋಧ ಬರುವುದಿಲ್ಲ, ಆದರೆ ಯಾರೇ ಸುಳ್ಳು ಹೇಳುತ್ತಾರೆಂದರೆ ಕ್ರೋಧ ಬಂದು ಬಿಡುತ್ತದೆ. ಅವರು ಸುಳ್ಳು ಹೇಳಿದರು, ತಾವು ಕ್ರೋಧದಿಂದ ಮಾತನಾಡಿದಿರೆಂದರೆ ಇಬ್ಬರಲ್ಲಿ ಸರಿಯಾಗಿರುವವರು ಯಾರು? ಕೆಲವರು ಚತುರತೆಯಿಂದ ಹೇಳುತ್ತಾರೆ- ನಾವು ಕ್ರೋಧ ಮಾಡುವುದಿಲ್ಲ, ನಮ್ಮ ಧ್ವನಿಯೇ ಹಾಗಿರುತ್ತದೆ, ಧ್ವನಿಯೇ ಜೋರಿರುತ್ತದೆ. ಆದರೆ ಯಾವಾಗ ವಿಜ್ಞಾನದ ಸಾಧನಗಳಿಂದ ಧ್ವನಿಯನ್ನು ಕಡಿಮೆ ಮತ್ತು ಹೆಚ್ಚು ಮಾಡಬಹುದು, ಅಂದಮೇಲೆ ಶಾಂತಿಯ ಶಕ್ತಿಯಿಂದ ತಮ್ಮ ಧ್ವನಿಯ ಗತಿಯನ್ನು ಕಡಿಮೆ ಮತ್ತು ಹೆಚ್ಚು ಮಾಡಲು ಸಾಧ್ಯವಿಲ್ಲವೇ? ಹೇಗೆ ಕ್ರೋಧವು ಅಜ್ಞಾನದ ಶಕ್ತಿಯಾಗಿದೆ, ಹಾಗೆಯೇ ಜ್ಞಾನದ ಶಕ್ತಿಯು ಶಾಂತಿಯಾಗಿದೆ, ಸಹನಾಶಕ್ತಿಯಾಗಿದೆ. ಅಂದಮೇಲೆ ಅಜ್ಞಾನದ ಶಕ್ತಿಯಾದ ಕ್ರೋಧವನ್ನು ಬಹಳ ಚೆನ್ನಾಗಿ ಸಂಸ್ಕಾರವನ್ನಾಗಿ ಮಾಡಿಕೊಂಡು ಬಿಟ್ಟಿದ್ದೀರಿ ಮತ್ತು ಉಪಯೋಗವನ್ನೂ ಮಾಡುತ್ತಿರುತ್ತೀರಿ, ನಂತರ ಕ್ಷಮೆಯನ್ನೂ ಕೇಳುತ್ತಿರುತ್ತೀರಿ. ಅದೇ ರೀತಿ ಈಗ ಪ್ರತೀ ಗುಣವನ್ನು, ಪ್ರತೀ ಜ್ಞಾನದ ಮಾತನ್ನು ಸಂಸ್ಕಾರದ ರೂಪವನ್ನಾಗಿ ಮಾಡಿಕೊಳ್ಳಿರಿ. ಆಗ ಸಭ್ಯತೆಯು ಬರುತ್ತಿರುತ್ತದೆ.

ಕೆಲ ಕೆಲವರು ತಿಳಿಯುತ್ತಾರೆ- ಬಹುಷಃ ಕ್ರೋಧವೇನೂ ವಿಕಾರವಲ್ಲ, ಇದು ಶಸ್ತ್ರವಾಗಿದೆ, ವಿಕಾರವಲ್ಲ. ಆದರೆ ಕ್ರೋಧವು ಜ್ಞಾನಿ ಆತ್ಮನಿಗಾಗಿ ಮಹಾ ಶತ್ರುವಾಗಿದೆ. ಏಕೆಂದರೆ ಕ್ರೋಧವು ಅನೇಕ ಆತ್ಮರ ಸಂಬಂಧ, ಸಂಪರ್ಕದಲ್ಲಿ ಬರುವುದರಿಂದ ಪ್ರಸಿದ್ಧವಾಗಿ ಬಿಡುತ್ತದೆ ಮತ್ತು ಕ್ರೋಧವನ್ನು ನೋಡುತ್ತಾ ತಂದೆಯ ಹೆಸರಿಗೆ ಬಹಳ ಗ್ಲಾನಿಯಾಗುತ್ತದೆ. ಹೇಳುವವರು ಇದನ್ನೇ ಹೇಳುವರು, ಜ್ಞಾನಿ ಆತ್ಮ ಮಕ್ಕಳನ್ನು ನೋಡಿ ಬಿಟ್ಟೆವು. ಆದ್ದರಿಂದ ಇದರ ಅಂಶವನ್ನೂ ಸಮಾಪ್ತಿ ಮಾಡಿರಿ. ಬಹಳ-ಬಹಳ ಸಭ್ಯತೆಯಿಂದ ವ್ಯವಹಾರವನ್ನು ಮಾಡಿರಿ.

ವರದಾನ:
ಡೈರೆಕ್ಟ್ ಪರಮಾತ್ಮ ಲೈಟ್ನ ಸಂಬಂಧದ ಮೂಲಕ ಅಂಧಕಾರವನ್ನು ಓಡಿಸುವಂತಹ ಲೈಟ್ಹೌಸ್ ಭವ.

ತಾವು ಮಕ್ಕಳ ಬಳಿ ಡೈರೆಕ್ಟ್ ಪರಮಾತ್ಮ ಲೈಟ್ನ ಸಂಬಂಧವಿದೆ. ಕೇವಲ ಸ್ವಮಾನದ ಸೃತಿಯ ಸ್ವಿಚ್ನ್ನು ಡೈರೆಕ್ಟ್ ಲೈನ್ನಿಂದ ಆನ್ ಮಾಡಿರಿ, ಆಗ ಲೈಟ್ ಬಂದು ಬಿಡುತ್ತದೆ ಮತ್ತು ಸೂರ್ಯನ ಪ್ರಕಾಶತೆಯನ್ನು ಬಚ್ಚಿಡುವಂತಹ ಎಂತಹದ್ದೇ ಕಪ್ಪು ಮೋಡಗಳೇ ಇರಲಿ, ಅದೂ ಸಹ ಓಡಿ ಹೋಗುತ್ತದೆ. ಇದರಿಂದ ಸ್ವಯಂ ಲೈಟ್ನಲ್ಲಿ ಇದ್ದೇ ಇರುತ್ತೀರಿ, ಆದರೆ ಅನ್ಯರಿಗಾಗಿಯೂ ಸಹ ಲೈಟ್ಹೌಸ್ ಆಗಿ ಬಿಡುತ್ತೀರಿ.

ಸ್ಲೋಗನ್:
ಸ್ವ ಪುರುಷಾರ್ಥದಲ್ಲಿ ತೀವ್ರವಾಗುತ್ತೀರೆಂದರೆ ತಮ್ಮ ಪ್ರಕಂಪನಗಳಿಂದ ಅನ್ಯರ ಮಾಯೆಯು ಸಹಜವಾಗಿ ಓಡಿ ಹೋಗುತ್ತದೆ.