02.02.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ವಿದೇಹಿಯಾಗಿ ತಂದೆಯನ್ನು ನೆನಪು ಮಾಡಿ, ಸ್ವಧರ್ಮದಲ್ಲಿ ಸ್ಥಿತರಾಗಿ ಆಗ ಶಕ್ತಿ ಸಿಗುವುದು,
ಆರೋಗ್ಯ ಮತ್ತು ಖುಷಿ ಇರುವುದು, ಬ್ಯಾಟರಿಯು ತುಂಬುತ್ತಾ ಹೋಗುವುದು”
ಪ್ರಶ್ನೆ:
ಡ್ರಾಮಾದ ಯಾವ
ಪೂರ್ವ ನಿಶ್ಚಿತವನ್ನು ಅರಿತಿರುವ ಕಾರಣ ತಾವು ಮಕ್ಕಳು ಸದಾ ಅಚಲವಾಗಿರುತ್ತೀರಿ?
ಉತ್ತರ:
ನಿಮಗೆ ತಿಳಿದಿದೆ
- ಈ ಅಣು ಬಾಂಬುಗಳನ್ನು ಏನೆಲ್ಲಾ ಮಾಡಿದ್ದಾರೆ ಇವು ಅವಶ್ಯವಾಗಿ ಹಾಕಲ್ಪಡುತ್ತವೆ.
ವಿನಾಶವಾಗುತ್ತದೆ, ಆಗಲೇ ನಮ್ಮ ಹೊಸ ಪ್ರಪಂಚವು ಬರುತ್ತದೆ. ಇದು ನಾಟಕ ಅನಾದಿ ಆಗಿ ನೊಂದಾಯಿಸಿದೆ.
ಎಲ್ಲರೂ ಸಾಯಿಲೇಬೇಕು. ನಾವು ಈ ಹಳೆಯ ಶರೀರವನ್ನು ಬಿಟ್ಟು ಹೊಸ ರಾಜಧಾನಿಯಲ್ಲಿ ಜನ್ಮ ಪಡೆಯುತ್ತೇವೆ
ಎಂದು ನಿಮಗೆ ಖುಷಿ ಇದೆ. ನೀವು ನಾಟಕವನ್ನು ಸಾಕ್ಷಿಯಾಗಿ ನೋಡುತ್ತೀರಿ, ಇದರಲ್ಲಿ ಗಾಬರಿಯಾಗುವ
ಮಾತಿಲ್ಲ, ಅಳುವ ಅಗತ್ಯವಿಲ್ಲ.
ಓಂ ಶಾಂತಿ.
ತಂದೆಯು ಕುಳಿತು
ಮಕ್ಕಳಿಗೆ ತಿಳಿಸುತ್ತಾರೆ, ಆದಿ-ಸನಾತನ ದೇವೀ-ದೇವತಾ ಧರ್ಮವಿದ್ದದ್ದನ್ನು ಹಿಂದೂ ಧರ್ಮದಲ್ಲಿ ಯಾರು
ತಂದರು? ಕಾರಣವನ್ನು ಹುಡುಕಬೇಕು. ಮೊದಲು ಆದಿ-ಸನಾತನ ದೇವೀ-ದೇವತಾ ಧರ್ಮವೇ ಇತ್ತು. ನಂತರ ಯಾವಾಗ
ವಿಕಾರಿಗಳಾದರೋ ಆಗ ತಮ್ಮನ್ನು ದೇವತೆಗಳೆಂದು ಹೇಳಿಕೊಳ್ಳಲು ಆಗಲಿಲ್ಲ, ಆದ್ದರಿಂದ ತಮ್ಮನ್ನು
ಆದಿ-ಸನಾತನ ದೇವೀ ದೇವತೆಗಳ ಬದಲಾಗಿ ಆದಿ ಸನಾತನ ಹಿಂದೂಗಳೆಂದು ಹೇಳಿ ಬಿಟ್ಟರು, ಆದಿ ಸನಾತನ
ಶಬ್ದವನ್ನು ಇಟ್ಟಿದ್ದಾರೆ, ಕೇವಲ ದೇವತೆ ಎಂಬುದರ ಬದಲಾಗಿ ಹಿಂದೂ ಎಂದು ಇಟ್ಟು ಬಿಟ್ಟಿದ್ದಾರೆ, ಆ
ಸಮಯದಲ್ಲಿ ಇಸ್ಲಾಮಿಗಳು ಬಂದಾಗ ಹಿಂದೂ ಧರ್ಮ ಎಂದು ಹೆಸರು ಇಟ್ಟು ಬಿಟ್ಟರು. ಮೊದಲು ಹಿಂದೂ
ಸ್ಥಾನವೆಂಬ ಹೆಸರೂ ಸಹ ಇರಲಿಲ್ಲ ಅಂದಾಗ, ಆದಿ ಸನಾತನ ಹಿಂದೂ ದೇವತಾ ಧರ್ಮದವರೇ ತಿಳಿಯಬೇಕು, ಅವರು
ಬಹಳಷ್ಟು ಧರ್ಮಾತ್ಮರಾಗಿರುತ್ತಾರೆ ಹೊರತು ಎಲ್ಲರೂ ಸನಾತನದವರಲ್ಲ. ಯಾರು ಅಂತ್ಯದಲ್ಲಿ
ಬಂದಿದ್ದಾರೆಯೋ ಅವರಿಗೆ ಆದಿ ಸನಾತನಿಗಳು ಎಂದು ಹೇಳುವುದಿಲ್ಲ. ಹಿಂದೂಗಳಲ್ಲಿಯೂ ಸಹ ತಡವಾಗಿ
ಬರುವವರಿರುತ್ತಾರೆ, ಅಂದಮೇಲೆ ಆದಿ ಸನಾತನ ಹಿಂದೂಗಳಿಗೆ ತಿಳಿಸಬೇಕು. ನಿಮ್ಮದು ಆದಿ ಸನಾತನ ದೇವೀ
ದೇವತಾ ಧರ್ಮವಾಗಿತ್ತು. ನೀವೇ ಸತೋಪ್ರಧಾನರಾಗಿದ್ದಿರಿ, ನಂತರ ಪುನರ್ ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ತಮೋಪ್ರಧಾನರಾಗಿದ್ದೀರಿ ಮತ್ತೆ ನೀವೇ ನೆನಪಿನ
ಯಾತ್ರೆಯಿಂದ ಸತೋಪ್ರಧಾನರಾಗಿರಿ. ಅವರಿಗೆ ಈ ಔಷಧಿ ಇಷ್ಟವಾಗುತ್ತದೆ. ತಂದೆಯು
ವೈದ್ಯರಾಗಿದ್ದಾರಲ್ಲವೇ! ಯಾರಿಗೆ ಈ ಔಷಧಿ ಇಷ್ಟವಾಗುತ್ತದೋ ಅವರಿಗೇ ಕೊಡಬೇಕು. ಯಾರು ಆದಿ ಸನಾತನ
ದೇವೀ ದೇವತಾ ಧರ್ಮದವರಿದ್ದಾರೋ ಅವರಿಗೆ ಸ್ಮೃತಿ ತರಿಸಬೇಕು. ಹೇಗೆ ತಾವು ಮಕ್ಕಳಿಗೂ ಸಹ ಸ್ಮೃತಿ
ಬಂದಿದೆ, ತಂದೆಯು ತಿಳಿಸಿದ್ದಾರೆ, ಹೇಗೆ ತಾವು ಸತೋಪ್ರಧಾನರಿಂದ ತಮೋಪ್ರಧಾನರಾಗಿದ್ದೀರಿ? ಮತ್ತೆ
ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ನೀವು ಮಕ್ಕಳು ನೆನಪಿನ ಯಾತ್ರೆಯಿಂದ
ಸತೋಪ್ರಧಾನರಾಗುತ್ತಿದ್ದೀರಿ, ಯಾರು ಆದಿ ಸನಾತನ ಹಿಂದೂಗಳಿರುವವರೋ ಅವರೇ ಮೂಲ
ದೇವೀ-ದೇವತೆಗಳಾಗಿರುತ್ತಾರೆ ಮತ್ತು ಅವರೇ ದೇವತೆಗಳನ್ನು ಪೂಜಿಸುವವರೂ ಆಗಿರುತ್ತಾರೆ. ಅವರಲ್ಲಿಯೂ
ಸಹ ಯಾರು ಶಿವನ ಅಥವಾ ಲಕ್ಷ್ಮೀ-ನಾರಾಯಣ, ರಾಧೆ-ಕೃಷ್ಣ, ಸೀತಾ-ರಾಮ ಮೊದಲಾದ ದೇವತೆಗಳ
ಭಕ್ತರಿದ್ದಾರೆಯೋ ಅವರು ದೇವತಾ ಮನೆತನದವರಾಗಿದ್ದಾರೆ. ಈಗ ಸ್ಮೃತಿ ಬಂದಿದೆ. ಯಾರು
ಸೂರ್ಯವಂಶದವರಾಗಿದ್ದಾರೋ ಅವರೇ ಚಂದ್ರವಂಶಿಯರಾಗುತ್ತಾರೆ ಅಂದಾಗ ಇಂತಹ ಭಕ್ತರನ್ನು ಹುಡುಕಬೇಕು.
ಯಾರು ತಿಳಿದುಕೊಳ್ಳಲು ಬರುತ್ತಾರೆಯೋ ಅವರಿಂದ ತಾವು ಫಾರ್ಮ್ನ್ನು ತುಂಬಿಸಿಕೊಳ್ಳಬೇಕು. ಮುಖ್ಯ
ಸೇವಾ ಕೇಂದ್ರಗಳಲ್ಲಿ ಫಾರಂ ಅವಶ್ಯವಾಗಿ ಇರಬೇಕು. ಯಾರೇ ಬರಲಿ ಅವರಿಗೆ ಪಾಠವಂತೂ ಪ್ರಾರಂಭದಿಂದ
ಹೇಳುತ್ತೀರಿ. ಮೊದಲು ಮುಖ್ಯ ಮಾತು ತಂದೆಯನ್ನು ಯಾರು ಅರಿತುಕೊಂಡಿಲ್ಲವೋ ಅವರಿಗೆ
ತಿಳಿಸಬೇಕಾಗುತ್ತದೆ - ನೀವು ತಮ್ಮ ಹಿರಿಯ ತಂದೆಯನ್ನೇ ಅರಿತುಕೊಂಡಿಲ್ಲ, ನೀವು ಮೂಲತಃ ಪಾರಲೌಕಿಕ
ತಂದೆಯ ಮಕ್ಕಳಾಗಿದ್ದೀರಿ, ಇಲ್ಲಿ ಬಂದು ಲೌಕಿಕ ತಂದೆಯ ಮಕ್ಕಳಾಗಿದ್ದೀರಿ, ನೀವು ತಮ್ಮ ಪಾರಲೌಕಿಕ
ತಂದೆಯನ್ನು ಮರೆತು ಹೋಗುತ್ತೀರಿ. ಬೇಹದ್ದಿನ ತಂದೆಯೇ ಸ್ವರ್ಗದ ರಚಯಿತನಾಗಿದ್ದಾರೆ. ಅಲ್ಲಿ ಈ
ಅನೇಕ ಧರ್ಮಗಳಿರುವುದಿಲ್ಲ ಅಂದಾಗ ಫಾರಂನ್ನು ಹೇಗೆ ತುಂಬಿರುತ್ತಾರೆ ಅದರ ಮೇಲೆ ಎಲ್ಲವೂ
ಆಧಾರಿತವಾಗಿರಬೇಕು. ಕೆಲವು ಮಕ್ಕಳು ಬಹಳ ಚೆನ್ನಾಗಿ ತಿಳಿಸುತ್ತಾರೆ ಆದರೆ ಯೋಗವಿರುವುದಿಲ್ಲ,
ಅಶರೀರಿ ಆಗಿ ತಂದೆಯನ್ನು ನೆನಪು ಮಾಡಬೇಕು ಅದೇ ಇರುವುದಿಲ್ಲ. ನೆನಪಿನಲ್ಲಿಯೇ ಉಳಿಯುವುದಿಲ್ಲ,
ನಾವು ಚೆನ್ನಾಗಿ ತಿಳಿಸುತ್ತೇವೆ, ಮ್ಯೂಜಿಯಂ ಮೊದಲಾದವುಗಳನ್ನು ಭಲೇ ತೆರೆಯುತ್ತೇವೆ ಎಂದು
ತಿಳಿಯಬಹುದು ಆದರೆ ನೆನಪು ಬಹಳ ಕಡಿಮೆ ಇದೆ. ತಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು ನೆನಪು
ಮಾಡುತ್ತಿರಬೇಕು. ಇದರಲ್ಲಿಯೇ ಪರಿಶ್ರಮವಿದೆ. ತಂದೆಯು ಮುನ್ನೆಚ್ಚರಿಕೆಯನ್ನು ಕೊಡುತ್ತಾರೆ.
ನಾವಂತೂ ಬಹಳ ಚೆನ್ನಾಗಿ ಮನದಟ್ಟು ಮಾಡಿಸುತ್ತೇವೆ ಎಂದು ತಿಳಿಯಬೇಡಿ. ಇದರಲ್ಲಿ ಲಾಭವಾದರೆ ಏನು?
ಭಲೇ ಅವರು ಸ್ವದರ್ಶನ ಚಕ್ರಧಾರಿಗಳು ಆಗಿ ಬಿಡುತ್ತಾರೆ ಎಂದೇ ತಿಳಿಯಿರಿ ಆದರೆ ಇಲ್ಲಂತೂ
ವಿದೇಹಿಗಳಾಗಬೇಕು. ಕರ್ಮ ಮಾಡುತ್ತಾ ತಮ್ಮನ್ನು ಆತ್ಮ ಎಂದು ತಿಳಿಯಬೇಕು. ಆತ್ಮವು ಈ ಶರೀರದ ಮೂಲಕ
ಕರ್ತವ್ಯವನ್ನು ಮಾಡುತ್ತದೆ ಎಂದು ನೆನಪು ಮಾಡುವುದು ಬರುವುದಿಲ್ಲ. ವಿಚಾರದಲ್ಲೂ
ಬರುವುದಿಲ್ಲವೆಂದರೆ ಅಂತಹವರಿಗೆ ಮಂದ ಬುದ್ಧಿಯವರೆಂದು ಹೇಳಲಾಗುತ್ತದೆ. ತಂದೆಯನ್ನು ನೆನಪೇ
ಮಾಡುವುದಿಲ್ಲ. ಸರ್ವೀಸ್ ಮಾಡುವ ಶಕ್ತಿಯಿಲ್ಲ. ನೆನಪು ಮಾಡದೆ ಆತ್ಮನಲ್ಲಿ ಶಕ್ತಿ ಎಲ್ಲಿಂದ
ಬರುತ್ತದೆ. ಬ್ಯಾಟರಿ ಎಲ್ಲಿಂದ ತುಂಬುತ್ತದೆ? ನಡೆಯುತ್ತಾ-ನಡೆಯುತ್ತಾ ನಿಂತು ಬಿಡುತ್ತದೆ, ಶಕ್ತಿ
ಇರುವುದಿಲ್ಲ. ಧರ್ಮವೇ ಶಕ್ತಿ ಎಂದು ಹೇಳಲಾಗುತ್ತದೆ. ಆತ್ಮವು ಸ್ವಧರ್ಮದಲ್ಲಿ ಸ್ಥಿತವಾದಾಗ ಶಕ್ತಿ
ಸಿಗುತ್ತದೆ. ಅನೇಕರು ಇಂತಹ ಮಕ್ಕಳಿದ್ದಾರೆ, ತಂದೆಯನ್ನು ನೆನಪು ಮಾಡುವುದು ಬರುವುದೇ ಇಲ್ಲ.
ಚೆಹರೆಯಿಂದಲೇ ಗೊತ್ತಾಗಿ ಬಿಡುತ್ತದೆ. ಮತ್ತೆಲ್ಲಾ ನೆನಪಿಗೆ ಬರುತ್ತದೆ. ತಂದೆಯ ನೆನಪೇ
ನಿಲ್ಲುವುದಿಲ್ಲ. ಯೋಗದಿಂದಲೇ ಬಲ ಸಿಗುತ್ತದೆ. ನೆನಪಿನಿಂದ ಬಹಳ ಖುಷಿ ಮತ್ತು ಆರೋಗ್ಯವಿರುತ್ತದೆ,
ಮತ್ತೆ ಇನ್ನೊಂದು ಜನ್ಮದಲ್ಲೂ ಸಹ ತೇಜಸ್ವಿ ಶರೀರವು ಸಿಗುತ್ತದೆ. ಆತ್ಮವು ಪವಿತ್ರವಾದರೆ ಶರೀರವು
ಪವಿತ್ರವಾದದ್ದೇ ಸಿಗುತ್ತದೆ. ಆದರೆ ಇದು 24 ಕ್ಯಾರೆಟ್ ಚಿನ್ನ ಆಗಿರುವ ಕಾರಣ ಆಭರಣವು 24
ಕ್ಯಾರೆಟಿನದ್ದೇ ಆಗಿದೆ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಎಲ್ಲರೂ 9 ಕ್ಯಾರೆಟ್ ಚಿನ್ನದ ಸಮಾನ ಆಗಿ
ಬಿಟ್ಟಿದ್ದಾರೆ. ಸತೋಪ್ರಧಾನಕ್ಕೆ 24 ಕ್ಯಾರೆಟ್, ಸತೋಗುಣಕ್ಕೆ 22 ಕ್ಯಾರೆಟ್ ಎಂದು ಹೇಳಲಾಗುತ್ತದೆ.
ಇವು ಬಹಳ ತಿಳಿದುಕೊಳ್ಳುವ ಮಾತಾಗಿದೆ. ತಂದೆಯು ತಿಳಿಸುತ್ತಾರೆ ಮೊದಲು ಫಾರಂನ್ನು ತುಂಬಿಕೊಳ್ಳಬೇಕು,
ಆಗ ಇವರು ಎಷ್ಟು ಪ್ರತಿಸ್ಪಂದಿಸುತ್ತಾರೆ, ಎಷ್ಟು ಧಾರಣೆ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ
ಮತ್ತು ಎಷ್ಟು ನೆನಪಿನ ಯಾತ್ರೆಯಲ್ಲಿ ಇರುತ್ತಾರೆ ಎಂಬುದೂ ಸಹ ತಿಳಿಯುತ್ತದೆ. ತಮೋಪ್ರಧಾನರಿಂದ
ಸತೋಪ್ರಧಾನದವರು ನೆನಪಿನ ಯಾತ್ರೆಯಿಂದಲೇ ಆಗಬೇಕಾಗಿದೆ. ಅವು ಭಕ್ತಿಯ ಶರೀರಿಕ ಯಾತ್ರೆಗಳು ಆಗಿವೆ,
ಇದು ಆತ್ಮಿಕ ಯಾತ್ರೆಯಾಗಿದೆ. ಆತ್ಮವು ಯಾತ್ರೆ ಮಾಡುತ್ತದೆ, ಅದರಲ್ಲಿ ಆತ್ಮ ಮತ್ತು ಶರೀರ ಎರಡೂ
ಯಾತ್ರೆ ಮಾಡುತ್ತದೆ. ಪತಿತ ಪಾವನ ತಂದೆಯನ್ನು ನೆನಪು ಮಾಡುವುದರಿಂದಲೇ ಆತ್ಮನಲ್ಲಿ ಹೊಳಪು
ಬರುತ್ತದೆ. ಯಾವುದೇ ಜಿಜ್ಞಾಸುಗಳಿಗೆ ಆ ಪ್ರಕಾಶವನ್ನು ತೋರಿಸಬೇಕೆಂದರೆ ತಂದೆಯ ಪ್ರವೇಶತೆಯು ಆಗಿ
ಬಿಡುತ್ತದೆ. ತಂದೆ-ತಾಯಿ (ಬಾಪ್ದಾದಾ) ಇಬ್ಬರೂ ಸಹ ಕೆಲವೊಂದೆಡೆ ಜ್ಞಾನದ, ಕೆಲವೊಂದೆಡೆ ಯೋಗದ
ಸಹಯೋಗ ಕೊಡುತ್ತಾರೆ. ತಂದೆಯಂತೂ ಸದಾ ವಿದೇಹಿ ಆಗಿದ್ದಾರೆ. ಶರೀರದ ಪರಿವೆಯೇ ಇಲ್ಲ, ಆದ್ದರಿಂದ
ತಂದೆಯು ಎರಡು ಶಕ್ತಿಗಳ ಸಹಯೋಗವನ್ನು ಕೊಡಬಲ್ಲರು. ಯೋಗವಿಲ್ಲದಿದ್ದರೆ ಶಕ್ತಿ ಎಲ್ಲಿಂದ ಸಿಗುತ್ತದೆ.
ಇವರು ಯೋಗಿ ಆಗಿದ್ದಾರೆಯೇ ಅಥವಾ ಜ್ಞಾನಿ ಆಗಿದ್ದಾರೆಯೇ ಎಂಬುದನ್ನು ತಿಳಿಯಬಹುದು. ಯೋಗಕ್ಕಾಗಿ
ದಿನ ಪ್ರತಿದಿನ ಹೊಸ-ಹೊಸ ಮಾತುಗಳನ್ನು ತಿಳಿಸುತ್ತಿರುತ್ತಾರೆ. ಮೊದಲು ಇಷ್ಟೊಂದು
ತಿಳಿಸುತ್ತಿರಲಿಲ್ಲ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಈಗ ತಂದೆಯು ಒತ್ತು
ಕೊಟ್ಟು ಹೇಳುತ್ತಾರೆ, ಇದರಿಂದ ಸಹೋದರ-ಸಹೋದರಿಯ ಸಂಬಂಧವೂ ಸಹ ಹೊರಟು ಹೋಗಬೇಕು. ಕೇವಲ
ಸಹೋದರ-ಸಹೋದರ ದೃಷ್ಟಿಯೇ ಇರಬೇಕು. ನಾವು ಆತ್ಮಗಳು ಸಹೋದರ-ಸಹೋದರರಾಗಿದ್ದೇವೆ, ಇದು ಬಹಳ ಶ್ರೇಷ್ಠ
ದೃಷ್ಟಿ ಆಗಿದೆ. ಅಂತ್ಯದವರೆಗೂ ಈ ಪುರುಷಾರ್ಥ ನಡೆಯುತ್ತಿರಬೇಕು. ಸತೋಪ್ರಧಾನರಾದಾಗ ಈ ಶರೀರವನ್ನು
ಬಿಟ್ಟು ಬಿಡುತ್ತೀರಿ, ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಪುರುಷಾರ್ಥವನ್ನು
ಹೆಚ್ಚಿಸಿಕೊಳ್ಳಬೇಕಾಗಿದೆ. ವೃದ್ಧರಿಗಂತೂ ಇದು ಇನ್ನೂ ಸಹಜವಾಗಿದೆ. ಈಗ ನಾವು ಹಿಂತಿರುಗಿ
ಅವಶ್ಯವಾಗಿ ಹೋಗಬೇಕಾಗಿದೆ. ಯುವಕರಿಗಂತೂ ಎಂದೂ ಇಂತಹ ವಿಚಾರ ಬರುವುದಿಲ್ಲ. ವೃದ್ಧರು
ವಾನಪ್ರಸ್ಥಿಯಲ್ಲಿ ಇರುತ್ತಾರೆ, ಈಗ ಹಿಂತಿರುಗಿ ಹೋಗಬೇಕೆಂದು ತಿಳಿಯುತ್ತಾರೆ. ಅಂದಾಗ ಈ ಜ್ಞಾನ
ಮಾತುಗಳೆಲ್ಲಾ ತಿಳಿಯಬೇಕು. ವೃಕ್ಷವು ವೃದ್ಧಿ ಆಗುತ್ತಲೇ ಇರುತ್ತದೆ. ವೃದ್ಧಿ ಆಗುತ್ತಾ-ಆಗುತ್ತಾ
ಪೂರ್ಣ ವೃಕ್ಷವು ತಯಾರಾಗಿ ಬಿಡುತ್ತದೆ. ಮುಳ್ಳುಗಳು ಪರಿವರ್ತನೆ ಆಗಿ ಹೊಸ ಚಿಕ್ಕ ಹೂವಿನ
ಮರವಾಗಬೇಕಾಗಿದೆ. ಹೊಸದಾಗಿ ಮತ್ತೆ ಹಳೆಯದಾಗುತ್ತದೆ. ಮೊದಲು ವೃಕ್ಷವು ಚಿಕ್ಕದಾಗಿರುತ್ತದೆ ಮತ್ತೆ
ಅದು ಬೆಳೆಯುತ್ತಾ ಹೋಗುತ್ತದೆ. ವೃದ್ಧಿ ಆಗುತ್ತಾ-ಆಗುತ್ತಾ ಅಂತ್ಯದಲ್ಲಿ ಮುಳ್ಳಾಗಿ ಬಿಡುತ್ತದೆ.
ಮೊದಲು ಹೂಗಳು ಇರುತ್ತವೆ, ಹೆಸರೇ ಆಗಿದೆ ಸ್ವರ್ಗ ಆದರೆ ನಂತರ ಆ ಸುಗಂಧ, ಆ ಶಕ್ತಿ ಇರುವುದಿಲ್ಲ.
ಮುಳ್ಳುಗಳಲ್ಲಿ ಸುಗಂಧವಿರುವುದಿಲ್ಲ, ಎಳೆಯ ಹೂಗಳಲ್ಲಿಯೂ ಸಹ ಸುಗಂಧವಿರುವುದಿಲ್ಲ. ತಂದೆಯು ಮಾಲಿಯೂ
ಆಗಿದ್ದಾರೆ, ಅಂಬಿಗನೂ ಆಗಿದ್ದಾರೆ ಎಲ್ಲರ ದೋಣಿಯನ್ನು ಪಾರು ಮಾಡುತ್ತಾರೆ. ದೋಣಿಯನ್ನು ಹೇಗೆ ಪಾರು
ಮಾಡುತ್ತಾರೆ? ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ? ಎಂಬುದನ್ನೂ ಸಹ ಬುದ್ಧಿವಂತ ಮಕ್ಕಳೇ
ತಿಳಿದುಕೊಳ್ಳಲು ಸಾಧ್ಯ. ಯಾರು ತಿಳಿದುಕೊಳ್ಳುವುದಿಲ್ಲವೋ ಅವರು ಪುರುಷಾರ್ಥವನ್ನು ಮಾಡುವುದಿಲ್ಲ.
ನಂಬರ್ವಾರಂತೂ ಇರುತ್ತಾರಲ್ಲವೇ. ಕೆಲವು ವಿಮಾನಗಳಂತೂ ಶಬ್ದಕ್ಕಿಂತಲೂ ತೀಕ್ಷ್ಣವಾಗಿ ಹೋಗುತ್ತದೆ.
ಆತ್ಮವು ಎಷ್ಟು ತೀಕ್ಷ್ಣವಾಗಿ ಹೋಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಆತ್ಮವು ರಾಕೆಟ್ಗಿಂತಲೂ
ತೀಕ್ಷ್ಣವಾಗಿ ಹೋಗುತ್ತದೆ. ಆತ್ಮದಷ್ಟು ತೀಕ್ಷ್ಣ ಮತ್ತ್ಯಾವುದೇ ವಸ್ತು ಇರುವುದಿಲ್ಲ. ರಾಕೆಟ್
ಮೊದಲಾದವುಗಳಲ್ಲಿ ಅದು ತೀವ್ರವಾಗಿ ಹೋಗಲು ಅಂತಹ ಇಂಧನಗಳನ್ನು ಹಾಕುತ್ತಾರೆ. ವಿನಾಶಕ್ಕಾಗಿ
ಎಷ್ಟೊಂದು ಬಾಂಬುಗಳನ್ನು ತಯಾರು ಮಾಡುತ್ತಾರೆ. ಹಡಗು ಮತ್ತು ವಿಮಾನಗಳಲ್ಲಿಯೂ ಬಾಂಬುಗಳನ್ನು
ತೆಗೆದುಕೊಂಡು ಹೋಗುತ್ತಾರೆ. ಇಂದಿನ ದಿನಗಳಲ್ಲಂತೂ ಪೂರ್ಣ ತಯಾರು ಮಾಡಿ ಇಟ್ಟುಕೊಳ್ಳುತ್ತಾರೆ. ಈ
ಅಣು ಬಾಂಬುಗಳು ಕೆಲಸಕ್ಕೆ ಬರುವುದಿಲ್ಲವೆಂದು ಹೇಳಲು ಸಾಧ್ಯವಿಲ್ಲ ಎಂಬುದನ್ನು ಪತ್ರಿಕೆಗಳಲ್ಲಿ
ಬರೆಯುತ್ತಾರೆ. ಯಾವಾಗ ಬೇಕಾದರೂ ಈ ಬಾಂಬುಗಳನ್ನು ಹಾಕಬಹುದು ಎಂದು ಹೇಳುತ್ತಾರೆ, ಇದೆಲ್ಲವೂ
ತಯಾರಾಗುತ್ತಿದೆ. ವಿನಾಶವಂತೂ ಅವಶ್ಯವಾಗಿ ಆಗಲಿದೆ. ಬಾಂಬುಗಳು ಹಾಕುವುದಿಲ್ಲ, ವಿನಾಶವು
ಆಗುವುದಿಲ್ಲ - ಈ ರೀತಿ ಆಗಲು ಸಾಧ್ಯವಿಲ್ಲ. ನಿಮಗಾಗಿ ಹೊಸ ಪ್ರಪಂಚವು ಅವಶ್ಯವಾಗಿ ಬೇಕು, ಇದು
ನಾಟಕದಲ್ಲಿ ನಿಗದಿ ಆಗಿದೆ, ಆದ್ದರಿಂದ ನಿಮಗೆ ಬಹಳ ಖುಷಿ ಇರಬೇಕು. ಬೆಕ್ಕಿಗೆ ಚೆಲ್ಲಾಟ, ಇಲಿಗೆ
ಪ್ರಾಣ ಸಂಕಟ...... ನಾಟಕದನುಸಾರ ಎಲ್ಲರೂ ಸಾಯಲೇ ಬೇಕಾಗಿದೆ. ತಾವು ಮಕ್ಕಳಿಗೆ ನಾಟಕದ ಜ್ಞಾನ
ಇರುವ ಕಾರಣ ನೀವು ಹೆದುರುವುದಿಲ್ಲ, ಸಾಕ್ಷಿಯಾಗಿ ನೋಡುತ್ತೀರಿ, ಅಳುವ ಅವಶ್ಯಕತೆಯೂ ಇಲ್ಲ.
ಸಮಯದಲ್ಲಿ ಶರೀರವಂತೂ ಬಿಡಲೇಬೇಕಾಗುತ್ತದೆ. ನೀವು ಆತ್ಮಗಳಿಗೆ ಗೊತ್ತಿದೆ ನಾವು ಇನ್ನೊಂದು
ಜನ್ಮವನ್ನು ಹೊಸ ರಾಜಧಾನಿಯಲ್ಲಿ ಪಡೆಯುತ್ತೇವೆ. ನಾನು ರಾಜಕುಮಾರನಾಗುತ್ತೇನೆ ಎಂದು ಆತ್ಮನಿಗೆ
ಗೊತ್ತಿದೆ. ಆದ್ದರಿಂದ ಆತ್ಮ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ.
ಸರ್ಪದಲ್ಲಿಯೂ ಆತ್ಮವಿದೆಯಲ್ಲವೇ. ನಾನು ಒಂದು ಪೊರೆಯನ್ನು ಬಿಟ್ಟು ಇನ್ನೊಂದನ್ನು
ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತದೆಯಲ್ಲವೇ. ಎಂದಾದರೂ ಅದೂ ಸಹ ಶರೀರ ಬಿಡುತ್ತದೆ ಮತ್ತು ಮರಿ
ಆಗುತ್ತದೆ. ಮರಿಗಳಂತೂ ಜನಿಸುತ್ತವೆಯಲ್ಲವೇ. ಎಲ್ಲರೂ ಪುನರ್ಜನ್ಮಗಳನ್ನು ತೆಗೆದುಕೊಳ್ಳಬೇಕು.
ಇದೆಲ್ಲವನ್ನು ವಿಚಾರ ಸಾಗರ ಮಂಥನ ಮಾಡಬೇಕಾಗುತ್ತದೆ. ಎಲ್ಲದಕ್ಕಿಂತ ಮುಖ್ಯ ತಂದೆಯನ್ನು ಬಹಳ
ಪ್ರೀತಿಯಿಂದ ನೆನಪು ಮಾಡಬೇಕು. ಹೇಗೆ ಮಕ್ಕಳು ತಂದೆ-ತಾಯಿಯನ್ನು ಒಮ್ಮೆಯೇ ಹಿಡಿದುಕೊಳ್ಳುತ್ತಾರೆ,
ಹಾಗೆಯೇ ಬಹಳ ಪ್ರೀತಿಯಿಂದ ಬುದ್ಧಿಯೋಗದ ಮೂಲಕ ತಂದೆಯನ್ನು ಹಿಡಿದುಕೊಳ್ಳಬೇಕು ಹಾಗೂ ನಾವು ಎಷ್ಟು
ಧಾರಣೆ ಮಾಡುತ್ತಿದ್ದೇವೆ ಎಂದು ತಮ್ಮನ್ನು ನೋಡಿಕೊಳ್ಳಬೇಕು. (ನಾರದನ ಉದಾಹರಣೆಯಂತೆ) ಭಕ್ತರು
ಎಲ್ಲಿಯ ತನಕ ಜ್ಞಾನವನ್ನು ಪಡೆಯುವುದಿಲ್ಲವೋ ಅಲ್ಲಿಯ ತನಕ ದೇವತೆಗಳಾಗಲು ಸಾಧ್ಯವಿಲ್ಲ. ಇದು ಕೇವಲ
ಲಕ್ಷ್ಮೀಯನ್ನು ವರಿಸುವ ಮಾತಲ್ಲ. ಇದು ತಿಳಿದುಕೊಳ್ಳುವ ಮಾತಾಗಿದೆ. ನಾವು ಸತೋಪ್ರಧಾನರದಾಗ
ವಿಶ್ವದಲ್ಲಿ ರಾಜ್ಯ ಮಾಡುತ್ತಿದ್ದೆವು ಎಂದು ತಾವು ಮಕ್ಕಳಿಗೆ ಗೊತ್ತಿದೆ. ಈಗ ಮತ್ತೆ
ಸತೋಪ್ರಧಾನರಾಗಲು ತಂದೆಯನ್ನು ನೆನಪು ಮಾಡಬೇಕು. ಈ ಪರಿಶ್ರಮವನ್ನು ಕಲ್ಪ-ಕಲ್ಪವು ನೀವು ಯಥಾ ಯೋಗ,
ಯಥಾ ಶಕ್ತಿ ಮಾಡುತ್ತಲೇ ಬಂದಿದ್ದೀರಿ. ನಾವು ಅನ್ಯರಿಗೆ ಎಷ್ಟು ತಿಳಿಸಬಲ್ಲೆವು? ನಾವು
ದೇಹಭಾನದಿಂದ ಎಷ್ಟು ದೂರ ಆಗುತ್ತಿದ್ದೇವೆ ಎಂದು ಪ್ರತಿಯೊಬ್ಬರು ತಮ್ಮನ್ನು ತಾವು
ಅರಿತುಕೊಳ್ಳಬಹುದು. ನಾನು ಆತ್ಮ, ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ಪಡೆಯುತ್ತೇನೆ. ನಾನು
ಆತ್ಮ ಈ ಕರ್ಮೇಂದ್ರಿಯಗಳಿಂದ ಕಾರ್ಯ ಮಾಡುತ್ತೇನೆ, ಇವು ನನ್ನ ಕರ್ಮೇಂದ್ರಿಯಗಳಾಗಿದೆ, ನಾವೆಲ್ಲರೂ
ಪಾತ್ರಧಾರಿಗಳಾಗಿದ್ದೇವೆ, ಇದು ಬೇಹದ್ದಿನ ದೊಡ್ಡ ನಾಟಕವಾಗಿದೆ. ಅದರಲ್ಲಿ ಎಲ್ಲರೂ ನಂಬರ್ವಾರ್
ಪಾತ್ರಧಾರಿಗಳಾಗಿದ್ದಾರೆ, ಇದರಲ್ಲಿ ಯಾರು-ಯಾರು ಮುಖ್ಯ ಪಾತ್ರಧಾರಿಗಳಾಗಿದ್ದಾರೆ? ಮತ್ತು ಯಾರು
ಪ್ರಥಮ, ಮಧ್ಯಮ, ತೃತಿಯ ದರ್ಜಿಯವರಾಗಿದ್ದಾರೆ ಎಂಬುದನ್ನೂ ಸಹ ನಾವು ಅರಿತುಕೊಳ್ಳಬಹುದು. ತಂದೆಯ
ಮೂಲಕ ನಾಟಕದ ಆದಿ-ಮಧ್ಯ-ಅಂತ್ಯವನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ರಚಯಿತನ ಮೂಲಕ ರಚನೆಯ
ಜ್ಞಾನವು ಸಿಗುತ್ತದೆ. ರಚಯಿತನೇ ಬಂದು ತನ್ನ ಹಾಗೂ ರಚನೆಯ ರಹಸ್ಯವನ್ನು ತಿಳಿಸುತ್ತಾರೆ. ಇದು (ಬ್ರಹ್ಮಾ)
ಅವರ ರಥವಾಗಿದೆ, ಇವರಲ್ಲಿ ಪ್ರವೇಶ ಮಾಡಿ ಬಂದಿದ್ದಾರೆ. ಹೇಳುತ್ತಾರೆ ಅಂದಮೇಲೆ ಎರಡು ಆತ್ಮಗಳಿವೆ
ಎಂದರ್ಥ. ಇದು ಸಾಮಾನ್ಯ ಮಾತಾಗಿದೆ. ಹೇಗೆ ಪಿತೃಗಳಿಗೆ ತಿನ್ನಿಸುವಾಗ ಆತ್ಮವು ಬರುತ್ತದೆಯಲ್ಲವೇ.
ಮೊದಲು ಬಹಳ ಬರುತ್ತಿದ್ದವು, ಆ ಆತ್ಮಗಳೊಂದಿಗೆ ಮಾತನಾಡುತ್ತಿದ್ದರು. ಈಗಂತೂ ತಮೋಪ್ರಧಾನರಾಗಿ
ಬಿಟ್ಟಿದ್ದಾರೆ, ಈಗಲೂ ಸಹ ಕೆಲ-ಕೆಲವರು ನಾವು ಹಿಂದಿನ ಜನ್ಮದಲ್ಲಿ ಇಂತಹವರು ಆಗಿದ್ದೆವು ಎಂದು
ತಿಳಿಸುತ್ತಾರೆ ಆದರೆ ಭವಿಷ್ಯದ್ದನ್ನು ತಿಳಿಸುವುದಿಲ್ಲ. ಹಿಂದಿನದ್ದನ್ನು ತಿಳಿಸುತ್ತಾರೆ. ತಂದೆಯು
ಎಲ್ಲ ತಿಳಿಸುತ್ತಾರೆ - ಮಧುರ ಮಕ್ಕಳೇ ಈಗ ನೀವು ಶಾಂತಿಯಲ್ಲಿ ಇರಬೇಕಾಗಿದೆ. ನೀವು ಎಷ್ಟೆಷ್ಟು
ಜ್ಞಾನ-ಯೋಗದಲ್ಲಿ ಶಕ್ತಿಶಾಲಿ ಆಗುತ್ತೀರೋ ಅಷ್ಟು ದೃಢ ನಿಶ್ಚಯದವರಾಗುತ್ತೀರಿ. ಈಗಂತೂ ಬಹಳ ಮಕ್ಕಳು
ಮುಗ್ಧರಾಗಿದ್ದಾರೆ, ಭಾರತವಾಸಿ, ದೇವೀ-ದೇವತೆಗಳು ಎಷ್ಟು ಬುದ್ಧಿವಂತರಾಗಿದ್ದರು? ಎಷ್ಟು ಹಣದಿಂದಲೂ
ಸಂಪನ್ನರಾಗಿದ್ದರು, ಈಗಂತೂ ಖಾಲಿ ಆಗಿದ್ದಾರೆ. ಆದರೂ ಅವರು ಧನವಂತರು ನೀವು ಬಡವರಾಗಿದ್ದೀರಿ,
ಆದ್ದರಿಂದಲೇ ತಮಗೂ ಸಹ ಗೊತ್ತಿದೆ, ಭಾರತವು ಹೇಗಿತ್ತು, ಇದೇ ಭಾರತ ಏನಾಗಿ ಬಿಟ್ಟಿದೆ.
ಹಸಿವಿನಿಂದಲೂ ಸಾಯಲೇ ಬೇಕಾಗುತ್ತದೆ. ಧವಸ-ಧಾನ್ಯ, ನೀರು ಏನೂ ಸಿಗುವುದಿಲ್ಲ. ಕೆಲವೊಂದೆಡೆ
ಪ್ರವಾಹ ಉಕ್ಕಿ ಬರುತ್ತಿದ್ದರೆ, ಇನ್ನೂ ಕೆಲವೊಂದೆಡೆ ನೀರೇ ಸಿಗುವುದಿಲ್ಲ. ಈ ಸಮಯದಲ್ಲಿ ದುಃಖದ
ಮೋಡಗಳು ಇದೆ. ಸತ್ಯಯುಗದಲ್ಲಿ ಸುಖದ ಮೋಡಗಳು ಇರುತ್ತವೆ. ಈ ಆಟವನ್ನು ನೀವು ಮಕ್ಕಳೇ
ತಿಳಿದುಕೊಂಡಿದ್ದೀರಿ, ಮತ್ಯಾರಿಗೂ ಗೊತ್ತಿಲ್ಲ. ಬ್ಯಾಡ್ಜಿನ ಮೇಲೂ ಸಹ ತಿಳಿಸಲು ಬಹಳ
ಚೆನ್ನಾಗಿರುತ್ತದೆ. ಅವರು ಲೌಕಿಕ ತಂದೆ, ಇವರು ಪಾರಲೌಕಿಕ ತಂದೆ ಆಗಿದ್ದಾರೆ. ಈ ತಂದೆಯು
ಸಂಗಮಯುಗದಲ್ಲಿ ಒಂದೇ ಬಾರಿ ಬೇಹದ್ದಿನ ಆಸ್ತಿಯನ್ನು ನೀಡುತ್ತಾರೆ. ಹೊಸ ಪ್ರಪಂಚವಾಗಿ ಬಿಡುತ್ತದೆ.
ಇದು ಕಬ್ಬಿಣ ಸಮಾನವಾದ ಪ್ರಪಂಚವಾಗಿದೆ, ಮತ್ತೆ ಇದೇ ಸ್ವರ್ಣಿಮ ಪ್ರಪಂಚವಾಗಬೇಕಾಗಿದೆ. ನೀವು ಈಗ
ಸಂಗಮಯುಗದಲ್ಲಿ ಇದ್ದೀರಿ, ಹೃದಯ ಸ್ವಚ್ಛವಾಗಿದ್ದರೆ ಎಲ್ಲಾ ಮನೋಕಾಮನೆಗಳು ಪೂರ್ಣ ಆಗುತ್ತವೆ.
ಪ್ರತಿನಿತ್ಯ ತಮ್ಮೊಂದಿಗೆ ಕೇಳಿಕೊಳ್ಳಿ – ಕೆಟ್ಟ ಕಾರ್ಯಗಳಂತೂ ಮಾಡಲಿಲ್ಲವೇ. ಯಾರಿಗಾಗಿಯೂ
ನನ್ನಲ್ಲಿ ವಿಕಾರಿ ವಿಚಾರವಂತೂ ಬರಲಿಲ್ಲವೇ. ನನ್ನ ಮಸ್ತಿಯಲ್ಲಿ ಇದ್ದೇನೆಯೇ ಅಥವಾ ಅಲ್ಲ-ಸಲ್ಲದ
ಮಾತುಗಳಲ್ಲಿ ಸಮಯವನ್ನು ಕಳೆದಿದ್ದೇನೆಯೇ? ತಂದೆಯ ಆಜ್ಞೆಯಾಗಿದೆ ನನ್ನೊಬ್ಬನನ್ನೇ ನೆನಪು ಮಾಡಿ.
ಒಂದು ವೇಳೆ ನೆನಪು ಮಾಡದಿದ್ದರೆ ಅವಜ್ಞೆ ಮಾಡುವವರಾಗಿ ಬಿಡುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
೧. ಜ್ಞಾನ-ಯೋಗದ
ನಶೆಯಲ್ಲಿ ಇರಬೇಕು, ಹೃದಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಾಗಿದೆ. ಅಲ್ಲ-ಸಲ್ಲದ (ವ್ಯರ್ಥ
ಚಿಂತನೆ) ವಿಚಾರಗಳಲ್ಲಿ ತಮ್ಮ ಸಮಯವನ್ನು ಕಳೆಯಬಾರದು.
೨. ನಾವು ಆತ್ಮಗಳು ಸಹೋದರ-ಸಹೋದರರಾಗಿದ್ದೇವೆ, ಈಗ ಮನೆಗೆ ಹಿಂತಿರುಗಿ ಹೋಗಬೇಕಾಗಿದೆ - ಈ
ಅಭ್ಯಾಸವನ್ನು ಪಕ್ಕಾ ಮಾಡಿಕೊಳ್ಳಬೇಕು. ವಿದೇಹಿ ಆಗಿ ಸ್ವಧರ್ಮದಲ್ಲಿ ಸ್ಥಿತರಾಗಿ ತಂದೆಯನ್ನು
ನೆನಪು ಮಾಡಬೇಕಾಗಿದೆ.
ವರದಾನ:
ಅಕಲ್ಯಾಣದ
ಸಂಕಲ್ಪವನ್ನು ಸಮಾಪ್ತಿ ಮಾಡಿ ಅಪಕಾರಿಗಳ ಮೇಲೂ ಉಪಕಾರ ಮಾಡುವಂತಹ ಜ್ಞಾನಿತ್ವ ಆತ್ಮ ಭವ.
ಯಾರಾದರೂ ಪ್ರತೀ ದಿನ
ನಿಮಗೆ ಗ್ಲಾನಿ ಮಾಡಲಿ, ಅಕಲ್ಯಾಣ ಮಾಡಲಿ, ಬೈಗುಳ ಕೊಡಲಿ - ಆದರೂ ಸಹಾ ಅವರ ಪ್ರತಿ ಮನಸ್ಸಿನಲ್ಲಿ
ತಿರಸ್ಕಾರ ಭಾವ ಬರದೇ ಇರಲಿ, ಅಪಕಾರಿಗಳ ಮೇಲೂ ಸಹಾ ಉಪಕಾರ - ಇದೇ ಜ್ಞಾನಿತ್ವ ಆತ್ಮನ
ಕರ್ತವ್ಯವಾಗಿದೆ. ಹೆಗೆ ನೀವು ಮಕ್ಕಳು ತಂದೆಗೆ 63 ಜನ್ಮ ಬೈಯುತ್ತ ಬಂದಿರಿ ಆದರೂ ಸಹಾ ತಂದೆ
ಕಲ್ಯಾಣಕಾರಿ ದೃಷ್ಠಿಯಿಂದ ನೋಡಿದರು, ಹಾಗೆಯೇ ತಂದೆಯನ್ನು ಫಾಲೋ ಮಾಡಿ. ಜ್ಞಾನಿತ್ವ ಆತ್ಮನ ಅರ್ಥವೇ
ಆಗಿದೆ ಸರ್ವರ ಪ್ರತಿ ಕಲ್ಯಾಣದ ಭಾವನೆ. ಅಕಲ್ಯಾಣ ಸಂಕಲ್ಪ ಮಾತ್ರದಲ್ಲಿಯೂ ಇರಬಾರದು.
ಸ್ಲೋಗನ್:
ಮನ್ಮನಾಭವದ ಸ್ಥಿತಿಯಲ್ಲಿ ಸ್ಥಿತರಾಗಿದ್ದಾಗ ಬೇರೆಯವರ ಮನಸ್ಸಿನ ಭಾವನೆಯನ್ನು ತಿಳಿದು ಬಿಡುವಿರಿ.