11.07.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಬಾಜೋಲಿಯ ಆಟ (ಪಲ್ಟಿ ಆಟ) ವನ್ನು ನೆನಪು ಮಾಡಿ, ಈ ಆಟದಲ್ಲಿ ಇಡೀ ಚಕ್ರದ, ಬ್ರಹ್ಮಾ ಮತ್ತು
ಬ್ರಾಹ್ಮಣರ ರಹಸ್ಯವು ಸಮಾವೇಶವಾಗಿದೆ”
ಪ್ರಶ್ನೆ:
ಸಂಗಮಯುಗದಲ್ಲಿ
ತಂದೆಯಿಂದ ಎಲ್ಲಾ ಮಕ್ಕಳಿಗೆ ಯಾವ ಆಸ್ತಿಯು ಪ್ರಾಪ್ತಿಯಾಗುತ್ತದೆ?
ಉತ್ತರ:
ಈಶ್ವರೀಯ
ಬುದ್ಧಿಯ ಆಸ್ತಿಯು ಪ್ರಾಪ್ತಿಯಾಗುತ್ತದೆ. ಈಶ್ವರನಲ್ಲಿ ಯಾವ ಗುಣಗಳಿವೆಯೋ ಅವನ್ನು ನಮಗೆ
ಆಸ್ತಿಯಲ್ಲಿ ಕೊಡುತ್ತಾರೆ, ನಮ್ಮ ಬುದ್ಧಿಯು ವಜ್ರ ಸಮಾನ ಪಾರಸವಾಗುತ್ತಿದೆ. ಈಗ ನಾವು
ಬ್ರಾಹ್ಮಣರಾಗಿ ತಂದೆಯಿಂದ ಬಹಳ ದೊಡ್ಡ ಖಜಾನೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ, ಸರ್ವ
ಗುಣಗಳಿಂದ ನಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತಿದ್ದೇವೆ.
ಓಂ ಶಾಂತಿ.
ಇಂದು ಸದ್ಗುರುವಾರ, ಬೃಹಸ್ಪತಿ ವಾರವಾಗಿದೆ. ದಿನಗಳಲ್ಲಿಯೂ ಕೆಲವೊಂದು ಉತ್ತಮ ದಿನಗಳಿರುತ್ತವೆ,
ಬೃಹಸ್ಪತಿಯ ದಿನವನ್ನು ಶ್ರೇಷ್ಠವೆಂದು ಹೇಳುತ್ತಾರಲ್ಲವೆ. ಬೃಹಸ್ಪತಿ ಅರ್ಥಾತ್ ವೃಕ್ಷಪತಿ ದಿನದಂದು
ಶಾಲಾ ಕಾಲೇಜುಗಳಲ್ಲಿ ಕುಳಿತುಕೊಳ್ಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ
ಮನುಷ್ಯ ಸೃಷ್ಟಿರೂಪಿ ವೃಕ್ಷದ ಬೀಜರೂಪ ತಂದೆಯಾಗಿದ್ದಾರೆ ಮತ್ತು ಅವರು ಅಕಾಲಮೂರ್ತಿಯಾಗಿದ್ದಾರೆ.
ಅಕಾಲಮೂರ್ತಿ ತಂದೆಗೆ ಅಕಾಲಮೂರ್ತಿ ಮಕ್ಕಳು ಎಷ್ಟು ಸಹಜವಾಗಿದೆ. ಕೇವಲ ಪರಿಶ್ರಮವು ನೆನಪಿನದಾಗಿದೆ.
ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ನೀವು ಪತಿತರಿಂದ ಪಾವನರಾಗುತ್ತೀರಿ. ತಂದೆಯು
ತಿಳಿಸುತ್ತಾರೆ - ನೀವು ಮಕ್ಕಳ ಮೇಲೆ ಅವಿನಾಶಿ ಬೇಹದ್ದಿನ ದೆಶೆಯಿದೆ. ಒಂದು ಹದ್ದಿನ (ಅಲ್ಪಕಾಲ)
ದೆಶೆಯಿರುತ್ತದೆ ಇನ್ನೊಂದು ಬೇಹದ್ದಿನ ದೆಶೆ. ತಂದೆಯು ವೃಕ್ಷಪತಿಯಾಗಿದ್ದಾರೆ, ವೃಕ್ಷದಿಂದ ಮೊಟ್ಟ
ಮೊದಲು ಬ್ರಾಹ್ಮಣರು ಬಂದರು. ತಂದೆಯು ತಿಳಿಸುತ್ತಾರೆ - ನಾನು ವೃಕ್ಷಪತಿಯು ಸತ್ಚಿತ್ ಆನಂದ
ಸ್ವರೂಪನಾಗಿದ್ದೇನೆ. ಮತ್ತೆ ಮಹಿಮೆ ಮಾಡುತ್ತಾರೆ. ಜ್ಞಾನ ಸಾಗರ, ಶಾಂತಿಯ ಸಾಗರ.... ನೀವು
ತಿಳಿದುಕೊಂಡಿದ್ದೀರಿ, ಸತ್ಯಯುಗದಲ್ಲಿ ದೇವಿ-ದೇವತೆಗಳೆಲ್ಲರೂ ಶಾಂತಿಯ, ಪವಿತ್ರತೆಯ
ಸಾಗರರಾಗಿದ್ದಾರೆ. ಭಾರತವು ಸುಖ-ಶಾಂತಿ-ಪವಿತ್ರತೆಯ ಸಾಗರವಾಗಿತ್ತು. ಇದಕ್ಕೆ ವಿಶ್ವದಲ್ಲಿ
ಶಾಂತಿಯೆಂದು ಹೇಳಲಾಗುತ್ತದೆ. ನೀವು ಬ್ರಾಹ್ಮಣರಾಗಿದ್ದೀರಿ, ವಾಸ್ತವದಲ್ಲಿ ನೀವೂ ಸಹ
ಅಕಾಲಮೂರ್ತಿಗಳಾಗಿದ್ದೀರಿ. ಪ್ರತಿಯೊಂದು ಆತ್ಮವು ತನ್ನ ಸಿಂಹಾಸನ ಮೇಲೆ ವಿರಾಜಮಾನವಾಗಿದೆ.
ಇವೆಲ್ಲವೂ (ಶರೀರಗಳು) ಚೈತನ್ಯ ಅಕಾಲ ಸಿಂಹಾಸನಗಳಾಗಿವೆ. ಭೃಕುಟಿಯ ಮಧ್ಯೆ ಅಕಾಲಮೂರ್ತಿ ಆತ್ಮವು
ವಿರಾಜಮಾನವಾಗಿದೆ, ಇದಕ್ಕೆ ನಕ್ಷತ್ರವೆಂದೂ ಹೇಳುತ್ತಾರೆ. ವೃಕ್ಷಪತಿ ಬೀಜರೂಪನನ್ನು
ಜ್ಞಾನಸಾಗರನೆಂದು ಹೇಳುತ್ತಾರೆ ಅಂದಮೇಲೆ ಅವರು ಅವಶ್ಯವಾಗಿ ಬರಬೇಕಾಗುತ್ತದೆ. ಮೊಟ್ಟ ಮೊದಲು
ಬ್ರಾಹ್ಮಣರು, ಪ್ರಜಾಪಿತ ಬ್ರಹ್ಮನ ದತ್ತು ಮಕ್ಕಳು ಬೇಕು ಅಂದಾಗ ಅವಶ್ಯವಾಗಿ ಮಮ್ಮಾರವರೂ ಬೇಕು.
ನೀವು ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸಿಕೊಡುತ್ತಾರೆ, ಹೇಗೆ ಬಾಜೋಲಿ ಆಟವನ್ನು ಆಡುತ್ತಾರಲ್ಲವೆ.
ಅದರ ಅರ್ಥವನ್ನೂ ತಿಳಿಸಿದ್ದಾರೆ. ಬೀಜರೂಪ ಶಿವ ತಂದೆಯಾಗಿದ್ದಾರೆ ನಂತರ ಬ್ರಹ್ಮಾ. ಬ್ರಹ್ಮಾರವರ
ಮೂಲಕ ಬ್ರಾಹ್ಮಣರು ರಚಿಸಲ್ಪಟ್ಟರು. ಈ ಸಮಯದಲ್ಲಿ ನಾವೇ ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆ,
ಮೊದಲು ನಾವು ಶೂದ್ರ ಬುದ್ಧಿಯವರಾಗಿದ್ದೆವು, ಈಗ ಪುನಃ ತಂದೆಯು ಪುರುಷೋತ್ತಮ ಬುದ್ಧಿಯವರನ್ನಾಗಿ
ಮಾಡುತ್ತಾರೆ. ವಜ್ರ ಸಮಾನ, ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆಂದು ನೀವು ಹೇಳುತ್ತೀರಿ. ಈ
ಬಾಜೋಲಿಯ ರಹಸ್ಯವನ್ನು ತಿಳಿಸುತ್ತಾರೆ. ಶಿವ ತಂದೆಯೂ ಇದ್ದಾರೆ, ಪ್ರಜಾಪಿತ ಬ್ರಹ್ಮಾ ಮತ್ತು ದತ್ತು
ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದೀರಿ. ಈಗ ನೀವು ಎಷ್ಟು ವಿಶಾಲ ಬುದ್ಧಿಯವರಾಗಿದ್ದೀರಿ.
ಬ್ರಾಹ್ಮಣರಿಂದ ಮತ್ತೆ ದೇವತೆಗಳಾಗುತ್ತೀರಿ. ಈಗ ನೀವು ಈಶ್ವರೀಯ ಬುದ್ಧಿಯವರಾಗುತ್ತೀರಿ ಅಂದರೆ
ಈಶ್ವರನಲ್ಲಿ ಯಾವ ಗುಣಗಳಿವೆಯೋ ಅವು ನಿಮಗೆ ಆಸ್ತಿಯಲ್ಲಿ ಸಿಗುತ್ತವೆ. ತಿಳಿಸಿಕೊಡುವ ಸಮಯದಲ್ಲಿ
ಇದನ್ನು ಮರೆಯಬೇಡಿ. ತಂದೆಯು ಜ್ಞಾನ ಸಾಗರನು ಮೊದಲಿಗನಾಗಿದ್ದಾರೆ, ಅವರಿಗೆ ಜ್ಞಾನೇಶ್ವರ ಅರ್ಥಾತ್
ಜ್ಞಾನವನ್ನು ತಿಳಿಸುವ ಈಶ್ವರನೆಂದು ಹೇಳಲಾಗುತ್ತದೆ. ಜ್ಞಾನದಿಂದ ಸದ್ಗತಿಯಾಗುತ್ತದೆ. ಜ್ಞಾನ
ಮತ್ತು ಯೋಗದಿಂದ ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಭಾರತದ ಪ್ರಾಚೀನ ರಾಜಯೋಗವು
ಪ್ರಸಿದ್ಧವಾಗಿದೆ ಏಕೆಂದರೆ ಕಲಿಯುಗದಿಂದ ಸ್ವರ್ಣೀಮ ಯುಗವಾಗಿತ್ತು, ಇದನ್ನಂತೂ ತಿಳಿಸಿದ್ದೆನು -
ಎರಡು ಪ್ರಕಾರದ ಯೋಗಗಳಿದೆ ಅದು ಹಠಯೋಗ ಮತ್ತು ಇದು ರಾಜಯೋಗವಾಗಿದೆ. ಅದು ಹದ್ದಿನದಾಗಿದೆ, ಇದು
ಬೇಹದ್ದಿನದಾಗಿದೆ. ಅವರು ಹದ್ದಿನ ಸನ್ಯಾಸಿಗಳು, ನೀವು ಬೇಹದ್ದಿನ ಸನ್ಯಾಸಿಗಳಾಗಿದ್ದೀರಿ. ಅವರು
ಮನೆ-ಮಠವನ್ನು ಬಿಡುತ್ತಾರೆ, ನೀವು ಇಡೀ ಪ್ರಪಂಚದ ಸನ್ಯಾಸ ಮಾಡುತ್ತೀರಿ. ಈಗ ನೀವು ಪ್ರಜಾಪಿತ
ಬ್ರಹ್ಮಾನ ಸಂತಾನರಾಗಿದ್ದೀರಿ. ಇದು ಅತಿ ಚಿಕ್ಕದಾದ ಹೊಸ ವೃಕ್ಷವಾಗಿದೆ. ನೀವೂ
ತಿಳಿದುಕೊಂಡಿದ್ದೀರಿ - ನಾವು ಹಳಬರಿಂದ ಹೊಸಬರಾಗುತ್ತಿದ್ದೇವೆ. ಸಸಿಯು ನಾಟಿಯಾಗುತ್ತಿದೆ.
ಅವಶ್ಯವಾಗಿ ನಾವು ಬಾಜೋಲಿಯನ್ನು ಆಡುತ್ತೇವೆ. ನಾವೇ ಬ್ರಾಹ್ಮಣರು ನಂತರ ನಾವೇ ಸೋ ದೇವತೆಗಳು. ಈ
ಸೋ ಎಂಬ ಅಕ್ಷರವನ್ನು ಅವಶ್ಯವಾಗಿ ಹಾಕಬೇಕಾಗಿದೆ. ಕೇವಲ ನಾವು ಎಂಬುದಷ್ಟೇ ಅಲ್ಲ. ನಾವೇ ಸೋ
ಶೂದ್ರರಾಗಿದ್ದೆವು, ನಾವೇ ಸೋ ದೇವತೆಗಳಾಗಿದ್ದೆವು.... ಈ ಬಾಜೋಲಿಯನ್ನು ಖಂಡಿತ ಮರೆಯಲೇಬಾರದು,
ಇದಂತೂ ಬಹಳ ಸಹಜವಾಗಿದೆ. ಚಿಕ್ಕ-ಚಿಕ್ಕ ಮಕ್ಕಳೂ ಸಹ ತಿಳಿಸಬಹುದು - ನಾವು 84 ಜನ್ಮಗಳನ್ನು ಹೇಗೆ
ತೆಗೆದುಕೊಳ್ಳುತ್ತೇವೆ, ಏಣಿಯನ್ನು ಹೇಗೆ ಕೆಳಗಿಳಿದಿದ್ದೇವೆ, ನಂತರ ಬ್ರಾಹ್ಮಣರಾಗಿ ಏರುತ್ತೇವೆ.
ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆ.
ಈಗ ಬ್ರಾಹ್ಮಣರಾಗಿ ಬಹಳ ದೊಡ್ಡ ಖಜಾನೆಯನ್ನು ತೆಗೆದುಕೊಳ್ಳುತ್ತಿದ್ದೀರಿ, ಜೋಳಿಗೆಯನ್ನು
ತುಂಬಿಕೊಳ್ಳುತ್ತಿದ್ದೀರಿ, ಜ್ಞಾನಸಾಗರನೆಂದು ಶಂಕರನಿಗೆ ಹೇಳಲಾಗುವುದಿಲ್ಲ ಅವರು ಜೋಳಿಗೆಯನ್ನು
ತುಂಬುವುದಿಲ್ಲ. ಇದನ್ನು ಕೇವಲ ಚಿತ್ರಕಾರರು ಮಾಡಿ ಬಿಟ್ಟಿದ್ದಾರೆ. ಶಂಕರನ ಮಾತೇ ಇಲ್ಲ, ಈ ವಿಷ್ಣು
ಮತ್ತು ಬ್ರಹ್ಮಾ ಇಲ್ಲಿಯವರಾಗಿದ್ದಾರೆ. ಲಕ್ಷ್ಮೀ-ನಾರಾಯಣರ ಜೋಡಿ ರೂಪವನ್ನು ಮೇಲೆ ತೋರಿಸಿದ್ದಾರೆ,
ಇದು ಬ್ರಹ್ಮಾರವರ ಅಂತಿಮ ಜನ್ಮವಾಗಿದೆ. ಮೊಟ್ಟ ಮೊದಲಿಗೆ ಇವರು ವಿಷ್ಣುವಾಗಿದ್ದರು, ಮತ್ತೆ 84
ಜನ್ಮಗಳ ನಂತರ ಇವರು ಬ್ರಹ್ಮನಾಗಿದ್ದಾರೆ. ಇವರ ಹೆಸರನ್ನು ನಾನು ಬ್ರಹ್ಮಾ ಎಂದು ಇಟ್ಟಿದ್ದೇನೆ,
ಎಲ್ಲರ ಹೆಸರನ್ನು ನಾನು ಬದಲಾಯಿಸಿದೆನು ಏಕೆಂದರೆ ಸನ್ಯಾಸ ಮಾಡಿದಿರಲ್ಲವೆ. ಶೂದ್ರರಿಂದ
ಬ್ರಾಹ್ಮಣರಾದ್ದರಿಂದ ಹೆಸರನ್ನು ಬದಲಾಯಿಸಿದೆವು, ತಂದೆಯು ಬಹಳ ರಮಣೀಕ ಹೆಸರುಗಳನ್ನಿಟ್ಟಿದ್ದಾರೆ
ಅಂದಾಗ ಈಗ ನೀವು ತಿಳಿದುಕೊಳ್ಳುತ್ತೀರಿ, ನೋಡುತ್ತೀರಿ, ವೃಕ್ಷಪತಿಯು ಈ ರಥದಲ್ಲಿ ಕುಳಿತಿದ್ದಾರೆ.
ಇದು (ಬ್ರಹ್ಮನ ರಥ) ಅವರ ಅಕಾಲ ಸಿಂಹಾಸನವಾಗಿದೆ. ಇವರಿಗೂ (ಬ್ರಹ್ಮಾ) ಅಕಾಲ ಸಿಂಹಾಸನವಾಗಿದೆ.
ಶಿವ ತಂದೆಯೇ ಈ ಅಕಾಲ ಸಿಂಹಾಸನವನ್ನು ಲೋನ್ ಆಗಿ ತೆಗೆದುಕೊಂಡಿದ್ದಾರೆ. ಅವರಿಗೆ ತಮ್ಮ
ಸಿಂಹಾಸನವಂತೂ ಸಿಗುವುದಿಲ್ಲ. ತಿಳಿಸುತ್ತಾರೆ - ನಾನು ಈ ರಥದಲ್ಲಿ ವಿರಾಜಮಾನನಾಗುತ್ತೇನೆ,
ಪರಿಚಯವನ್ನು ಕೊಡುತ್ತೇನೆ. ನಾನು ನಿಮ್ಮ ತಂದೆಯಾಗಿದ್ದೇನೆ, ಕೇವಲ ಜನನ-ಮರಣದಲ್ಲಿ ಬರುವುದಿಲ್ಲ.
ನೀವು ಬರುತ್ತೀರಿ, ಒಂದುವೇಳೆ ನಾನು ಜನನ-ಮರಣದಲ್ಲಿ ಬರುವುದಾದರೆ ನಿಮ್ಮನ್ನು ತಮೋಪ್ರಧಾನರಿಂದ
ಸತೋಪ್ರಧಾನರನ್ನಾಗಿ ಯಾರು ಮಾಡುತ್ತಾರೆ? ಮಾಡುವವರಂತೂ ಬೇಕಲ್ಲವೆ ಆದ್ದರಿಂದಲೇ ನನ್ನದು ಇಂತಹ
ಪಾತ್ರವಿದೆ. ಹೇ ಪತಿತ-ಪಾವನ ಬನ್ನಿ ಎಂದೇ ನನ್ನನ್ನು ಕರೆಯುತ್ತೀರಿ. ನಿರಾಕಾರ ಶಿವ ತಂದೆಯನ್ನು
ಆತ್ಮಗಳು ಕರೆಯುತ್ತಾರೆ ಏಕೆಂದರೆ ಆತ್ಮರಿಗೆ ದುಃಖವಿದೆ. ಭಾರತವಾಸಿ ಆತ್ಮಗಳು ವಿಶೇಷವಾಗಿ
ಕರೆಯುತ್ತಾರೆ. ಪತಿತ-ಪಾವನನೇ ಬಂದು ಪತಿತರನ್ನು ಪಾವನ ಮಾಡಿ ಎಂದು. ಸತ್ಯಯುಗದಲ್ಲಿ ನೀವು ಬಹಳ
ಪವಿತ್ರ, ಸುಖಿಯಾಗಿದ್ದಿರಿ ಎಂದೂ ಕರೆಯುತ್ತಿರಲಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ -
ನಿಮ್ಮನ್ನು ಸುಖಿಯನ್ನಾಗಿ ಮಾಡಿ ನಾನು ವಾನಪ್ರಸ್ಥದಲ್ಲಿ ಹೋಗಿ ಬಿಡುತ್ತೇನೆ, ಅಲ್ಲಿ ನನ್ನ
ಅವಶ್ಯಕತೆಯೇ ಇರುವುದಿಲ್ಲ. ಭಕ್ತಿಮಾರ್ಗದಲ್ಲಿ ನನ್ನ ಪಾತ್ರವಿರುತ್ತದೆ ನಂತರ ಇನ್ನು ಅರ್ಧಕಲ್ಪ
ನನ್ನ ಪಾತ್ರವಿರುವುದಿಲ್ಲ. ಇದಂತೂ ಬಹಳ ಸಹಜವಾಗಿದೆ. ಇದರಲ್ಲಿ ಯಾರದೇ ಪ್ರಶ್ನೆಯು ಉದ್ಭವಿಸಲು
ಸಾಧ್ಯವಿಲ್ಲ. ಗಾಯನವೂ ಇದೆ - ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ....
ಸತ್ಯಯುಗ-ತ್ರೇತಾಯುಗದಲ್ಲಿ ಭಕ್ತಿಮಾರ್ಗವೇ ಇರುವುದಿಲ್ಲ, ಜ್ಞಾನ ಮಾರ್ಗವೆಂದೂ ಹೇಳುವುದಿಲ್ಲ.
ಜ್ಞಾನವು ಸಂಗಮಯುಗದಲ್ಲಿಯೇ ಸಿಗುತ್ತದೆ. ಇದರಿಂದ ನೀವು 21 ಜನ್ಮಗಳು ಪ್ರಾಲಬ್ಧವನ್ನು
ಪಡೆಯುತ್ತೀರಿ. ನಂಬರ್ವಾರ್ ತೇರ್ಗಡೆಯಾಗುತ್ತಾರೆ. ಅನುತ್ತೀರ್ಣರೂ ಆಗುತ್ತಾರೆ, ಈಗ ನಿಮ್ಮಈ
ಯುದ್ಧವು ನಡೆಯುತ್ತಿದೆ. ನೀವು ನೋಡುತ್ತೀರಿ - ಯಾವ ರಥದಲ್ಲಿ ತಂದೆಯು ವಿರಾಜಮಾನರಾಗಿದ್ದಾರೆಯೋ
ಅವರಂತೂ ಜಯ ಗಳಿಸಿ ಬಿಡುತ್ತಾರೆ. ಮತ್ತೆ ಅನನ್ಯ ಮಕ್ಕಳೂ ಸಹ ಗೆಲ್ಲುತ್ತಾರೆ. ಹೇಗೆ ಕುಮಾರಿಕಾ (ಪ್ರಕಾಶಮಣಿ)
ಇದ್ದಾರೆ, ಇನ್ನೂ ಕೆಲಕೆಲವರಿದ್ದಾರೆ, ಇವರು ಅವಶ್ಯವಾಗಿ ವಿಜಯ ಗಳಿಸುತ್ತಾರೆ. ಅನೇಕರನ್ನು ತನ್ನ
ಸಮಾನರನ್ನಾಗಿ ಮಾಡುತ್ತಾರೆ. ಅಂದಾಗ ಮಕ್ಕಳಿಗೆ ಇದು ಬುದ್ಧಿಯಲ್ಲಿಟ್ಟುಕೊಳ್ಳಬೇಕು - ಇದು ಬಾಜೋಲಿ
ಆಟವಾಗಿದೆ. ಚಿಕ್ಕ ಮಕ್ಕಳೂ ಸಹ ಇದನ್ನು ತಿಳಿದುಕೊಳ್ಳುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ
- ಮಕ್ಕಳಿಗೂ ಕಲಿಸಿಕೊಡಿ, ಅವರಿಗೂ ತಂದೆಯಿಂದ ಆಸ್ತಿಯನ್ನು ಪಡೆಯುವ ಹಕ್ಕಿದೆ. ಹೆಚ್ಚಿನ ಮಾತಿಲ್ಲ.
ಈ ಜ್ಞಾನವನ್ನು ಸ್ವಲ್ಪ ತಿಳಿದುಕೊಂಡರೂ ಸಹ ಜ್ಞಾನದ ವಿನಾಶವಾಗುವುದಿಲ್ಲ. ಆದ್ದರಿಂದ ಸ್ವರ್ಗದಲ್ಲಿ
ಅವಶ್ಯವಾಗಿ ಬಂದು ಬಿಡುತ್ತಾರೆ. ಹೇಗೆ ಕ್ರಿಸ್ತನು ಸ್ಥಾಪನೆ ಮಾಡಿರುವ ಕ್ರಿಶ್ಚಿಯನ್ ಧರ್ಮವು
ಎಷ್ಟು ದೊಡ್ಡದಾಗಿದೆ ಹಾಗೆಯೇ ಈ ದೇವಿ-ದೇವತಾ ಧರ್ಮವಂತೂ ಎಲ್ಲದಕ್ಕಿಂತ ಮೊದಲಿನ ಮತ್ತು ದೊಡ್ಡ
ಧರ್ಮವಾಗಿದೆ. ಇದು ಎರಡು ಯುಗಗಳ ಕಾಲ ನಡೆಯುತ್ತದೆಯೆಂದರೆ ಅವಶ್ಯವಾಗಿ ಅದರ ಸಂಖ್ಯೆಯೂ
ದೊಡ್ಡದಿರಬೇಕು, ಆದರೆ ಹಿಂದೂಗಳೆಂದು ಕರೆಸಿಕೊಂಡಿದ್ದಾರೆ. 33 ಕೋಟಿ ದೇವತೆಗಳೆಂದು ಹೇಳುತ್ತಾರೆ
ಅಂದಮೇಲೆ ಮತ್ತೆ ಹಿಂದೂಗಳೆಂದು ಏಕೆ ಹೇಳುತ್ತಾರೆ! ಮಾಯೆಯು ಬುದ್ಧಿಯನ್ನು ಸಂಪೂರ್ಣ ನಾಶಗೊಳಿಸಿದೆ,
ಆದ್ದರಿಂದ ಈ ಸ್ಥಿತಿಯಾಗಿ ಬಿಟ್ಟಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮಾಯೆಯನ್ನು
ಗೆಲ್ಲುವುದು ಯಾವುದೇ ಕಠಿಣವಾದ ಮಾತಲ್ಲ. ನೀವು ಪ್ರತೀ ಕಲ್ಪವೂ ಜಯ ಗಳಿಸುತ್ತೀರಿ.
ಸೈನ್ಯವಾಗಿದ್ದೀರಲ್ಲವೆ. ಈ ವಿಕಾರರೂಪಿ ರಾವಣನ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಸಲು ತಂದೆಯು
ಸಿಕ್ಕಿದ್ದಾರೆ.
ನಿಮ್ಮ ಮೇಲೆ ಈಗ ಬೃಹಸ್ಪತಿ ದೆಶೆಯಿದೆ. ಭಾರತದ ಮೇಲೆ ದೆಶೆ ಬರುತ್ತದೆ, ಈಗ ರಾಹುವಿನ ದೆಶೆಯಿದೆ.
ವೃಕ್ಷಪತಿ ತಂದೆಯು ಬರುತ್ತಾರೆಂದರೆ ಅವಶ್ಯವಾಗಿ ಭಾರತದ ಮೇಲೆ ಬೃಹಸ್ಪತಿ ದೆಶೆಯು
ಕುಳಿತುಕೊಳ್ಳುತ್ತದೆ. ಇದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ಮಕ್ಕಳೂ ತಿಳಿದುಕೊಂಡಿದ್ದೀರಿ, ನಮಗೆ
ನಿರೋಗಿ ಶರೀರವು ಸಿಗುತ್ತದೆ. ಅಲ್ಲಿ ಮೃತ್ಯುವಿನ ಹೆಸರಿರುವುದಿಲ್ಲ, ಅಮರ ಲೋಕವಲ್ಲವೆ. ಇಂತಹವರು
ಸತ್ತು ಹೋದರೆಂದು ಹೇಳುವುದಿಲ್ಲ, ಸಾಯುವ ಹೆಸರೇ ಇರುವುದಿಲ್ಲ. ಒಂದು ಶರೀರವನ್ನು ಬಿಟ್ಟು
ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಶರೀರವನ್ನು ತೆಗೆದುಕೊಳ್ಳುವಾಗ ಮತ್ತು ಬಿಡುವಾಗ ಖುಷಿಯೇ
ಇರುತ್ತದೆ, ಚಿಂತೆಯ ಹೆಸರಿರುವುದಿಲ್ಲ. ಈಗ ನಿಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ. ಎಲ್ಲರ ಮೇಲೂ
ಬೃಹಸ್ಪತಿ ದೆಶೆಯಿರಲು ಸಾಧ್ಯವಿಲ್ಲ. ಶಾಲೆಯಲ್ಲಿಯೂ ಸಹ ಕೆಲವರು ಉತ್ತೀರ್ಣರಾಗುತ್ತಾರೆ, ಇನ್ನೂ
ಕೆಲವರು ಅನುತ್ತೀರ್ಣರಾಗುತ್ತಾರೆ ಹಾಗೆಯೇ ಇದೂ ಪಾಠಶಾಲೆಯಾಗಿದೆ. ನಾವು ರಾಜಯೋಗವನ್ನು
ಕಲಿಯುತ್ತೇವೆಂದು ನೀವು ಹೇಳುತ್ತೀರಿ. ಕಲಿಸುವವರು ಯಾರು? ಬೇಹದ್ದಿನ ತಂದೆ. ಅಂದಮೇಲೆ ಎಷ್ಟೊಂದು
ಖುಷಿಯಿರಬೇಕು, ಇದರಲ್ಲಿ ಯಾವುದೇ ಬೇರೆ ಮಾತಿಲ್ಲ. ಪವಿತ್ರತೆಯದು ಮುಖ್ಯ ಮಾತಾಗಿದೆ.
ಬರೆಯಲ್ಪಟ್ಟಿದೆ - ಹೇ ಮಕ್ಕಳೇ! ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ನನ್ನೊಬ್ಬನನ್ನೇ
ನೆನಪು ಮಾಡಿ. ಇದು ಗೀತೆಯ ಅಕ್ಷರಗಳಾಗಿವೆ ಈಗ ಗೀತಾಭಾಗವು ನಡೆಯುತ್ತಿದೆ, ಅದರಲ್ಲಿಯೂ ಮನುಷ್ಯರು
ಅದಲು ಬದಲು ಮಾಡಿ ಬಿಟ್ಟಿದ್ದಾರೆ. ಹಿಟ್ಟಿನಲ್ಲಿ ಉಪ್ಪಿನಷ್ಟು ಸತ್ಯವಿದೆ. ಮಾತು ಎಷ್ಟು
ಸಹಜವಾಗಿದೆ, ಅದನ್ನು ಮಕ್ಕಳೂ ತಿಳಿದುಕೊಳ್ಳಬಹುದು. ಆದರೂ ಸಹ ಏಕೆ ಮರೆಯುತ್ತೀರಿ?
ಭಕ್ತಿಮಾರ್ಗದಲ್ಲಿಯೂ ಸಹ ಬಾಬಾ ತಾವು ಬಂದರೆ ನಾವು ನಿಮ್ಮವರೇ ಆಗುತ್ತೇವೆ. ಬೇರೆ ಯಾರೂ ಇಲ್ಲ,
ನಾವು ತಮ್ಮವರಾಗಿ ತಮ್ಮಿಂದ ಪೂರ್ಣ ಆಸ್ತಿಯನ್ನು ಪಡೆಯುತ್ತೇವೆಂದು ಹೇಳುತ್ತಿದ್ದಿರಿ. ಆಸ್ತಿಯನ್ನು
ಪಡೆಯುವುದಕ್ಕಾಗಿಯೇ ತಂದೆಯ ಮಕ್ಕಳಾಗುತ್ತಾರೆ. ದತ್ತು ಮಾಡಲ್ಪಡುತ್ತಾರೆ, ತಂದೆಯಿಂದ ನಮಗೆ ಏನು
ಸಿಗುತ್ತದೆಯೆಂದು ಗೊತ್ತಿದೆ. ನೀವೂ ಸಹ ದತ್ತು ಮಾಡಲ್ಪಟ್ಟಿದ್ದೀರಿ. ನಿಮಗೂ ಗೊತ್ತಿದೆ, ನಾವು
ತಂದೆಯಿಂದ ವಿಶ್ವ ರಾಜ್ಯ ಭಾಗ್ಯ, ಬೇಹದ್ದಿನ ಆಸ್ತಿಯನ್ನು ಪಡೆಯುತ್ತೇವೆ ಮತ್ತ್ಯಾರಲ್ಲಿಯೂ
ಮಮತ್ವವನ್ನಿಡುವುದಿಲ್ಲ, ತಿಳಿದುಕೊಳ್ಳಿ - ಯಾರಿಗಾದರೂ ಲೌಕಿಕ ತಂದೆಯಿದ್ದಾರೆ, ಅವರ ಬಳಿ
ಏನಿರುವುದು? ಹೆಚ್ಚೆಂದರೆ ಎರಡು ಲಕ್ಷ ಹಣವಿರಬಹುದು, ಆದರೆ ಈ ಬೇಹದ್ದಿನ ತಂದೆಯು ನಿಮಗೆ
ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ನೀವು ಮಕ್ಕಳು ಅರ್ಧಕಲ್ಪದಿಂದ ಸುಳ್ಳು ಕಥೆಗಳನ್ನು
ಕೇಳುತ್ತಾ ಬಂದಿದ್ದೀರಿ. ಈಗ ಸತ್ಯ ಕಥೆಯನ್ನು ತಂದೆಯಿಂದ ಕೇಳುತ್ತೀರಿ ಅಂದಮೇಲೆ ಇಂತಹ ತಂದೆಯನ್ನು
ನೆನಪು ಮಾಡಬೇಕಲ್ಲವೆ. ಗಮನವಿಟ್ಟು ಕೇಳಬೇಕು. ಹಮ್ ಸೋ, ಸೋ ಹಮ್ನ ಅರ್ಥವನ್ನೂ ತಿಳಿಸಬೇಕಾಗಿದೆ.
ಮನುಷ್ಯರಂತೂ ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ಈ 84 ಜನ್ಮಗಳ ಕಥೆಯನ್ನು ಯಾರೂ ತಿಳಿಸಲು
ಸಾಧ್ಯವಿಲ್ಲ. ನಾಯಿ, ಬೆಕ್ಕು ಎಲ್ಲದರಲ್ಲಿ ಪರಮಾತ್ಮನಿದ್ದಾರೆಂದು ಹೇಳುತ್ತಾರೆ. ತಂದೆಯ ನಿಂದನೆ
ಮಾಡುತ್ತಾರಲ್ಲವೆ. ಇದೂ ಸಹ ನಾಟಕದಲ್ಲಿ ನಿಗದಿಯಾಗಿದೆ. ಯಾರ ಮೇಲೂ ದೋಷ ಹಾಕುವಂತಿಲ್ಲ. ನಾಟಕವೇ
ಹೀಗೆ ಮಾಡಲ್ಪಟ್ಟಿದೆ. ನಿಮ್ಮನ್ನು ಯಾರು ಜ್ಞಾನದಿಂದ ದೇವತೆಗಳನ್ನಾಗಿ ಮಾಡುತ್ತಾರೆಯೋ ಅವರಿಗೇ
ನಿಂದನೆ ಮಾಡತೊಡಗುತ್ತೀರಿ, ನೀವು ಹೀಗೆ ಬಾಜೋಲಿ ಆಟವನ್ನು ಆಡುತ್ತೀರಿ, ಈ ನಾಟಕವು ಮಾಡಲ್ಪಟ್ಟಿದೆ.
ನಾನು ಪುನಃ ಬಂದು ನಿಮಗೂ ಉಪಕಾರ ಮಾಡುತ್ತೇನೆ ಏಕೆಂದರೆ ನನಗೆ ಗೊತ್ತಿದೆ, ನಿಮ್ಮದೂ ಸಹ ದೋಷವಿಲ್ಲ,
ಇದು ಆಟವಾಗಿದೆ. ನಾನು ನಿಮಗೆ ಕಥೆಯನ್ನು ತಿಳಿಸುತ್ತೇನೆ, ಇದು ಸತ್ಯ-ಸತ್ಯವಾದ ಕಥೆಯಾಗಿದೆ
ಇದರಿಂದ ನೀವು ದೇವತೆಗಳಾಗುತ್ತೀರಿ. ಭಕ್ತಿಮಾರ್ಗದಲ್ಲಿ ಅನೇಕ ಕಥೆಗಳನ್ನು ಬರೆದು ಬಿಟ್ಟಿದ್ದಾರೆ,
ಗುರಿ-ಉದ್ದೇಶಗಳೇನೂ ಇಲ್ಲ. ಅವೆಲ್ಲವೂ ಬೀಳುವುದಕ್ಕಾಗಿದೆ. ಆ ಪಾಠಶಾಲೆಯಲ್ಲಿ ವಿದ್ಯೆಯನ್ನು
ಓದಿಸುತ್ತಾರೆ. ಆದರೆ ಅದು ಶರೀರ ನಿರ್ವಹಣೆಗೋಸ್ಕರ ಗುರಿ ಇದೆ. ಪಂಡಿತರು ತಮ್ಮ ಶರೀರ
ನಿರ್ವಹಣೆಗಾಗಿ ಕುಳಿತು ಕಥೆಯನ್ನು ತಿಳಿಸುತ್ತಾರೆ. ಜನರು ಅವರ ಮುಂದೆ ಹಣವನ್ನಿಡುತ್ತಾ
ಹೋಗುತ್ತಾರೆ, ಪ್ರಾಪ್ತಿಯೇನೂ ಇಲ್ಲ. ನಿಮಗಂತೂ ಈಗ ಜ್ಞಾನ ರತ್ನಗಳು ಸಿಗುತ್ತವೆ, ಇದರಿಂದ ನೀವು
ಹೊಸ ಪ್ರಪಂಚದ ಮಾಲೀಕರಾಗಿ ಬಿಡುತ್ತೀರಿ. ಅಲ್ಲಿ ಪ್ರತಿಯೊಂದು ವಸ್ತುವು ಹೊಸದೇ ಸಿಗುತ್ತದೆ. ಹೊಸ
ಪ್ರಪಂಚದಲ್ಲಿ ಎಲ್ಲವೂ ಹೊಸದಿರುತ್ತದೆ, ವಜ್ರ-ವೈಡೂರ್ಯಗಳೆಲ್ಲವೂ ಹೊಸದಾಗಿರುತ್ತವೆ. ಈಗ ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಮತ್ತೆಲ್ಲಾ ಮಾತುಗಳನ್ನು ಬಿಟ್ಟು ನೀವು ಬಾಜೋಲಿಯನ್ನು ನೆನಪು ಮಾಡಿ.
ಸಾಧುಗಳು ಬಾಜೋಲಿಯನ್ನು ಆಡುತ್ತಾ ತೀರ್ಥ ಸ್ಥಾನಗಳಿಗೆ ಹೋಗುತ್ತಾರೆ. ಕೆಲವರು ಪಾದ ಯಾತ್ರೆಯನ್ನು
ಮಾಡುತ್ತಾರೆ. ಈಗಂತೂ ಮೋಟಾರು ವಾಹನ, ವಿಮಾನಗಳು ಬಂದಿವೆ. ಬಡವರಂತೂ ಅದರಲ್ಲಿ ಹೋಗಲು ಸಾಧ್ಯವಿಲ್ಲ.
ಯಾರಾದರೂ ಬಹಳ ಶ್ರದ್ಧೆಯುಳ್ಳವರಾಗಿ ಇರುತ್ತಾರೆಂದರೆ ಪಾದಯಾತ್ರೆಯಲ್ಲಿಯೂ ಹೋಗುತ್ತಾರೆ.
ದಿನ-ಪ್ರತಿದಿನ ವಿಜ್ಞಾನದಿಂದ ಬಹಳ ಸುಖವು ಸಿಗುತ್ತಾ ಹೋಗುತ್ತದೆ. ಇದು ಅಲ್ಪಕಾಲದ ಸುಖವಾಗಿದೆ.
ಬೀಳುತ್ತದೆಯೆಂದರೆ ಎಷ್ಟೊಂದು ನಷ್ಟವಾಗಿ ಬಿಡುತ್ತದೆ. ಈ ವಸ್ತುಗಳಲ್ಲಿ ಅಲ್ಪಕಾಲಕ್ಕಾಗಿ ಸುಖವಿದೆ
ಬಾಕಿ ಅಂತಿಮ ಮೃತ್ಯುವು ತುಂಬಿದೆ. ಅದು ಸೈನ್ಸ್ (ವಿಜ್ಞಾನ) ಆಗಿದೆ. ನಿಮ್ಮದು ಸೈಲೆನ್ಸ್ ಆಗಿದೆ.
ತಂದೆಯನ್ನು ನೆನಪು ಮಾಡುವುದರಿಂದ ಎಲ್ಲಾ ರೋಗಗಳು ಸಮಾಪ್ತಿಯಾಗಿ ಬಿಡುತ್ತವೆ. ನಿರೋಗಿಗಳಾಗಿ
ಬಿಡುತ್ತೀರಿ. ಈಗ ನೀವು ತಿಳಿಯುತ್ತೀರಿ, ಸತ್ಯಯುಗದಲ್ಲಿ ಸಂಪೂರ್ಣ ಆರೋಗ್ಯವಂತರಾಗಿದ್ದೆವು, ಈ 84
ಜನ್ಮಗಳ ಚಕ್ರವು ತಿರುಗುತ್ತಲೇ ಇರುತ್ತದೆ. ತಂದೆಯು ಒಂದೇ ಬಾರಿ ಬಂದು ತಿಳಿಸುತ್ತಾರೆ - ನೀವು
ನನ್ನನ್ನು ನಿಂದನೆ ಮಾಡಿದ್ದೀರಿ, ತಮಗೆ ಪೆಟ್ಟು ಕೊಟ್ಟು ಕೊಂಡಿದ್ದೀರಿ. ನಿಂದನೆ
ಮಾಡುತ್ತಾ-ಮಾಡುತ್ತಾ ನೀವು ಶೂದ್ರ ಬುದ್ಧಿಯವರಾಗಿ ಬಿಟ್ಟಿದ್ದೀರಿ. ಸಿಖ್ಖರೂ ಸಹ ಹೇಳುತ್ತಾರೆ -
ಸಾಹೇಬನನ್ನು ಜಪಿಸಿದರೆ ಸುಖ ಸಿಗುತ್ತದೆ ಅರ್ಥಾತ್ ಮನ್ಮನಾಭವ. ಎರಡು ಅಕ್ಷರಗಳೇ ಇವೆ,
ಹೆಚ್ಚಿನದಾಗಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ. ಇದನ್ನೂ ತಂದೆಯೇ ಬಂದು ತಿಳಿಸುತ್ತಾರೆ-
ಈಗ ನೀವೂ ಸಹ ತಿಳಿದುಕೊಳ್ಳುತ್ತೀರಿ - ಸಾಹೇಬನನ್ನು ನೆನಪು ಮಾಡುವುದರಿಂದ 21 ಜನ್ಮಗಳಿಗೆ ಸುಖವು
ಸಿಗುತ್ತದೆ, ಅವರೂ ಸಹ ಅದರ ಮಾರ್ಗವನ್ನು ತಿಳಿಸುತ್ತಾರೆ ಆದರೆ ಪೂರ್ಣ ಮಾರ್ಗವನ್ನು ತಿಳಿದುಕೊಂಡೇ
ಇಲ್ಲ. ಸ್ಮರಣೆ ಮಾಡಿ-ಮಾಡಿ ಸುಖ ಪಡೆಯಿರಿ. ನೀವು ಮಕ್ಕಳಿಗೆ ಗೊತ್ತಿದೆ ಸತ್ಯಯುಗದಲ್ಲಿರೋಗ
ಮೊದಲಾದುವುಗಳ, ದುಃಖದ ಯಾವುದೇ ಮಾತುಗಳೂ ಇರುವುದಿಲ್ಲ ಇದಂತೂ ಸಾಮಾನ್ಯ ಮಾತಾಗಿದೆ. ಅದಕ್ಕೆ
ಸತ್ಯಯುಗ, ಸ್ವರ್ಣಿಮ ಯುಗವೆಂದು ಹೇಳಲಾಗುತ್ತದೆ. ಇದಕ್ಕೆ ಕಲಿಯುಗ, ಕಬ್ಬಿಣ ಯುಗವೆಂದು
ಹೇಳಲಾಗುತ್ತದೆ. ಸೃಷ್ಟಿಚಕ್ರವು ತಿರುಗುತ್ತಾ ಇರುತ್ತದೆ. ತಿಳುವಳಿಕೆಯು ಎಷ್ಟು ಚೆನ್ನಾಗಿದೆ,
ಬಾಜೋಲಿ ಆಟವಾಗಿದೆ. ಈಗ ನೀವು ಬ್ರಾಹ್ಮಣರು ನಂತರ ದೇವತೆಗಳಾಗುತ್ತೀರಿ. ನೀವು ಇವೆಲ್ಲಾ
ಮಾತುಗಳನ್ನು ಮರೆತು ಹೋಗುತ್ತೀರಿ, ಬಾಜೋಲಿಯು ನೆನಪಿದ್ದರೆ ಇವೆಲ್ಲಾ ಜ್ಞಾನವು ನೆನಪಿರುತ್ತದೆ.
ರಾತ್ರಿಯಲ್ಲಿ ಇಂತಹ ತಂದೆಯನ್ನು ನೆನಪು ಮಾಡಿ ಮಲಗಿ ಬಿಡಬೇಕು ಆದರೂ ಸಹ ಬಾಬಾ ಮರೆತು
ಹೋಗುತ್ತೇವೆಂದು ಹೇಳುತ್ತಾರೆ. ಮಾಯೆಯು ಪದೇ-ಪದೇ ಮರೆಸಿ ಬಿಡುತ್ತದೆ. ನಿಮ್ಮದು ಮಾಯೆಯ ಜೊತೆ
ಯುದ್ಧವಾಗಿದೆ ನಂತರ ಅರ್ಧಕಲ್ಪ ನೀವು ಅದರ ಮೇಲೆ ರಾಜ್ಯ ಮಾಡುತ್ತೀರಿ. ತಂದೆಯು ಸಹಜವಾದ
ಮಾತುಗಳನ್ನು ತಿಳಿಸುತ್ತಾರೆ. ಹೆಸರೇ ಆಗಿದೆ - ಸಹಜ ಜ್ಞಾನ, ಸಹಜ ನೆನಪು. ತಂದೆಯನ್ನು ಕೇವಲ ನೆನಪು
ಮಾಡಿ, ಏನು ಕಷ್ಟ ಕೊಡುತ್ತಾರೆ! ಭಕ್ತಿಮಾರ್ಗದಲ್ಲಂತೂ ನೀವು ಬಹಳ ಕಷ್ಟವನ್ನನುಭವಿಸಿದ್ದೀರಿ.
ದರ್ಶನಕ್ಕಾಗಿ ಕೊರಳನ್ನೇ ಕತ್ತರಿಸಿಕೊಳ್ಳುವುದಕ್ಕೂ ತಯಾರಾಗಿ ಬಿಡುತ್ತಾರೆ. ಕಾಶಿಯಲ್ಲಿ
ಬಲಿಹಾರಿಯಾಗುತ್ತಾರೆ, ಹಾ! ಯಾರು ನಿಶ್ಚಯಬುದ್ಧಿಯವರಾಗಿ ಮಾಡುತ್ತಾರೆಯೋ ಅವರ ವಿಕರ್ಮಗಳು
ವಿನಾಶವಾಗುತ್ತವೆ ನಂತರ ಹೊಸದಾಗಿ ಲೆಕ್ಕಾಚಾರವು ಆರಂಭವಾಗುವುದು ಆದರೆ ನನ್ನ ಬಳಿಯಂತೂ
ಬರುವುದಿಲ್ಲ. ನನ್ನ ನೆನಪಿನಿಂದ ವಿಕರ್ಮ ವಿನಾಶ ಆಗುತ್ತದೆಯೇ ಹೊರತು ಜೀವಘಾತದಿಂದಲ್ಲ. ನನ್ನ
ಬಳಿಯಂತೂ ಯಾರೂ ಬರುವುದಿಲ್ಲ. ಎಷ್ಟು ಸಹಜ ಮಾತಾಗಿದೆ. ಈ ಬಾಜೋಲಿ ಆಟವು ವೃದ್ಧರಿಗೂ ಸಹ
ನೆನಪಿರಬೇಕು, ಮಕ್ಕಳಿಗೂ ನೆನಪಿರಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ವೃಕ್ಷಪತಿ
ತಂದೆಯಿಂದ ಸುಖ-ಶಾಂತಿ-ಪವಿತ್ರತೆಯನ್ನು ತೆಗೆದುಕೊಳ್ಳಲು ತನ್ನನ್ನು ತಾನು ಅಕಾಲಮೂರ್ತಿ ಆತ್ಮನೆಂದು
ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ, ಈಶ್ವರೀಯ ಬುದ್ಧಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ.
2. ತಂದೆಯಿಂದ ಸತ್ಯ ಕಥೆಯನ್ನು ಕೇಳಿ ಅನ್ಯರಿಗೂ ತಿಳಿಸಬೇಕಾಗಿದೆ. ಮಾಯಾಜೀತರಾಗಲು ಅನ್ಯರನ್ನು
ತಮ್ಮ ಸಮಾನರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಬುದ್ಧಿಯಲ್ಲಿರಲಿ - ನಾವು ಕಲ್ಪ-ಕಲ್ಪ
ವಿಜಯಿಗಳಾಗಿದ್ದೇವೆ. ತಂದೆಯು ನಮ್ಮ ಜೊತೆಯಿದ್ದಾರೆ.
ವರದಾನ:
ನಿರುತ್ಸಾಹದ
ಅಲೆಗೆ ವಿಧಾಯಿ ಕೊಟ್ಟು ಸದಾ ಉಮಂಗ-ಉತ್ಸಾಹದಲ್ಲಿರುವಂತಹ ಬುದ್ಧಿಶಾಲಿ ಆತ್ಮ ಭವ.
ಕೆಲವು ಮಕ್ಕಳು
ಬೇರೆಯವರನ್ನು ನೋಡಿ ಸ್ವಯಂ ನಿರುತ್ಸಾಹಿಗಳಾಗಿ ಬಿಡುತ್ತಾರೆ. ಇದಂತೂ ಆಗುತ್ತಿರುತ್ತೆ ಎಂದು
ಯೋಚಿಸುತ್ತಾರೆ...... ನಡೆಯುತ್ತಿರುತ್ತೆ..... ಒಬ್ಬರು ಎಡವಿ ಬಿದ್ದರೆ ಅವರನ್ನು ನೋಡಿ
ಹುಡುಗಾಟಿಕೆಯಲ್ಲಿ ಬಂದು ಖುದ್ದು ಎಡವಿ ಬೀಳುವುದು ಇದು ಬುದ್ಧಿವಂತರ ಲಕ್ಷಣವೇ? ಬಾಪ್ದಾದಾರವರಿಗೆ
ದಯೆ ಬರುತ್ತೆ ಈ ರೀತಿ ಹುಡುಗಾಟಿಕೆಯಲ್ಲಿರುವವರಿಗೆ ಪಶ್ಚಾತ್ತಾಪದ ಆ ಘಳಿಗೆ ಎಷ್ಟು ಕಠಿಣವಿರಬಹುದು,
ಆದ್ದರಿಂದ ಬುದ್ಧಿವಂತರಾಗಿ ಹುಡುಗಾಟಿಕೆಯ ಅಲೆಗೆ, ಬೇರೆಯವರನ್ನು ನೋಡುವ ಅಲೆಗೆ ಮನಸ್ಸಿನಿಂದ
ವಿದಾಯ ಕೊಟ್ಟು ಬಿಡಿ. ಬೇರೆಯವರನ್ನು ನೋಡಬೇಡಿ, ತಂದೆಯನ್ನು ನೋಡಿ.
ಸ್ಲೋಗನ್:
ವಾರಿಸ್
ಕ್ವಾಲಿಟಿ ತಯಾರು ಮಾಡಿ ಆಗ ಪ್ರತ್ಯಕ್ಷತೆಯ ನಗಾರಿ ಬಾರಿಸುತ್ತದೆ.