20.03.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ವಿಚಾರ ಸಾಗರ ಮಂಥನ ಮಾಡುವ ಅಭ್ಯಾಸ ಇಟ್ಟುಕೊಳ್ಳಿ, ಬೆಳಗ್ಗೆ-ಬೆಳಗ್ಗೆ ಏಕಾಂತದಲ್ಲಿ ವಿಚಾರ ಸಾಗರ ಮಂಥನ ಮಾಡಿ ಅನೇಕ ಹೊಸ ಹೊಸ ಅಂಶಗಳು ಬುದ್ಧಿಯಲ್ಲಿ ಬರುತ್ತವೆ.”

ಪ್ರಶ್ನೆ:
ಮಕ್ಕಳು ತಮ್ಮ ಸ್ಥಿತಿಯನ್ನು ಫಸ್ಟ್ ಕ್ಲಾಸ್ ಮಾಡಿಕೊಳ್ಳಬೇಕೆಂದರೆ ಸದಾ ಯಾವ-ಯಾವ ಮಾತುಗಳಲ್ಲಿ ಗಮನವಿರಬೇಕು?

ಉತ್ತರ:
1. ಒಬ್ಬ ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನೇ ಕೇಳಿ, ಬಾಕಿ ಈ ಪ್ರಪಂಚದ್ದೇನೂ ಕೇಳಬಾರದು. 2. ಸಂಗದ ಸಂಭಾಲನೆಯನ್ನು ಮಾಡಿ. ಯಾರು ಚೆನ್ನಾಗಿ ಓದುತ್ತಾರೆ, ಧಾರಣೆ ಮಾಡುತ್ತಾರೆ, ಅವರ ಸಂಗವನ್ನೇ ಮಾಡಿದಾಗ ಸ್ಥಿತಿಯು ಫಸ್ಟ್ ಕ್ಲಾಸ್ ಆಗಿ ಬಿಡುತ್ತದೆ. ಕೆಲವು ಮಕ್ಕಳ ಸ್ಥಿತಿಯನ್ನು ನೋಡಿ ತಂದೆಗೆ ವಿಚಾರ ಬರುತ್ತದೆ - ಡ್ರಾಮಾದಲ್ಲಿ ಸ್ವಲ್ಪ ಪರಿವರ್ತನೆಯಾಗುತ್ತದೆ. ಆದರೆ ನಂತರ ಹೇಳುತ್ತಾರೆ, ಇದೂ ರಾಜಧಾನಿಯು ಸ್ಥಾಪನೆಯಾಗುತ್ತದೆ ಇದೆ.

ಓಂ ಶಾಂತಿ.
ಒಬ್ಬರೇ ಬೇಹದ್ದಿನ ತಂದೆ ಬೇಹದ್ದಿನ ಮಕ್ಕಳಿಗೆ ಓದಿಸುತ್ತಾರೆ. ಬಾಕಿ ಮನುಷ್ಯರು ಏನೆಲ್ಲವನ್ನೂ ಓದಿಸುತ್ತಾರೆಯೋ, ತಿಳಿಸುತ್ತಾರೆಯೋ ಅದನ್ನು ನೀವು ಕೇಳುವ ಅಥವಾ ಹೇಳುವ ಅವಶ್ಯಕತೆಯಿಲ್ಲ. ಏಕೆಂದರೆ ಇದೊಂದೇ ಈಶ್ವರೀಯ ವಿದ್ಯಾಭ್ಯಾಸವಾಗಿದೆ ಎಂದು ನೀವು ತಿಳಿದಿದ್ದೀರಿ ಅದನ್ನೇ ಈಗ ಓದಬೇಕಾಗಿದೆ. ನೀವು ಒಬ್ಬ ಈಶ್ವರನಿಂದ ಮಾತ್ರ ಓದಬೇಕು. ತಂದೆಯು ಏನನ್ನು ಓದಿಸುತ್ತಾರೆಯೋ, ಅದನ್ನು ಈ ಬಾಯಿನಿಂದ ಓದಬೇಕು. ಅವರಂತೂ ಅನೇಕ ಪ್ರಕಾರದ ಪುಸ್ತಕಗಳನ್ನು ಬರೆಯುತ್ತಾರೆ, ಅದನ್ನು ಇಡೀ ಪ್ರಪಂಚವು ಓದುತ್ತದೆ. ಎಷ್ಟೆಲ್ಲಾ ಪುಸ್ತಕಗಳನ್ನು ಓದಬಹುದು. ನೀವು ಮಕ್ಕಳು ಮಾತ್ರ ಹೇಳುತ್ತೀರಿ - ಒಬ್ಬ ತಂದೆಯಿಂದ ಕೇಳಿ, ಅದನ್ನು ಅನ್ಯರಿಗೆ ತಿಳಿಸಿ. ಏಕೆಂದರೆ ಅವರಿಂದ ಏನೆಲ್ಲವನ್ನೂ ಕೇಳುತ್ತೇವೆಯೋ ಅದರಲ್ಲಿಯೇ ಕಲ್ಯಾಣವಿದೆ. ಬಾಕಿ ಅನೇಕ ಪುಸ್ತಕಗಳಿವೆ ಮತ್ತೆ ಹೊಸ-ಹೊಸದು ಬರುತ್ತಿರುತ್ತವೆ. ನೀವು ತಿಳಿದಿದ್ದೀರಿ - ಸರಿಯಾಗಿರುವುದನ್ನು ಒಬ್ಬ ತಂದೆಯೇ ತಿಳಿಸುತ್ತಾರೆ ಅಂದಾಗ ಅವರಿಂದಲೇ ಕೇಳಬೇಕಾಗಿದೆ. ತಂದೆಯಂತೂ ಮಕ್ಕಳಿಗೆ ಬಹಳ ಕಡಿಮೆ ತಿಳಿಸಿ ಕೊಡುತ್ತಾರೆ, ಅದನ್ನು ನಂತರ ವಿಸ್ತಾರವನ್ನು ತಿಳಿದ ನಂತರ ಮತ್ತೆ ಒಂದೇ ಮಾತಿನ ಬಳಿ ಬರುತ್ತಾರೆ. ಭಲೇ ಮನ್ಮನಾಭವ ಅಕ್ಷರವನ್ನು ತಂದೆಯು ಸರಿಯೆಂದು ಹೇಳುತ್ತಾರೆ. ಆದರೆ ತಂದೆಯು ಇದನ್ನು ಹೇಳಲೇ ಇಲ್ಲ. ತಂದೆಯಂತೂ ಹೇಳುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಏನು ತಿಳಿಸುತ್ತೇನೆಯೋ ಅದನ್ನು ಧಾರಣೆ ಮಾಡಿ ಮತ್ತು ನಾವೇನು ದೇವತೆಗಳಾಗುತ್ತೇವೆಯೋ ನಂತರ ಅದೇ ವೃದ್ಧಿಯಾಗುತ್ತದೆ ಎಂದು ನೀವೂ ಸಹ ತಿಳಿದಿದ್ದೀರಿ. ಮಕ್ಕಳಿಗೆ ಮೂಲವತನದ ನೆನಪು ಹಾಗೂ ಹೊಸ ಪ್ರಪಂಚದ ನೆನಪೂ ಸಹ ಇದೆ. ಮೊದಲು ಸರ್ವಶ್ರೇಷ್ಠ ತಂದೆಯಾಗಿದ್ದಾರೆ ನಂತರ ಈ ಹೊಸ ಪ್ರಪಂಚ ಯಾವುದರಲ್ಲಿ ಈ ಲಕ್ಷ್ಮೀ-ನಾರಾಯಣರು ಶ್ರೇಷ್ಠಾತಿ ಶ್ರೇಷ್ಠ ರಾಜ್ಯವನ್ನು ನಡೆಸುತ್ತಾರೆ. ಚಿತ್ರವಂತೂ ಖಂಡಿತ ಬೇಕು ಅಂದಾಗ ಚಿಹ್ನೆಗಳಷ್ಟೇ ಉಳಿದಿದೆ. ಇದೊಂದೇ ಸತ್ಯವಾದ ಚಿತ್ರವಾಗಿದೆ, ರಾಮನ ಚಿತ್ರವೂ ಇದೆ ಆದರೆ ರಾಮ ರಾಜ್ಯವನ್ನು ಸ್ವರ್ಗವೆಂದು ಹೇಳಲಾಗುವುದಿಲ್ಲ. ಅದು ಸೆಮಿ-ಸ್ವರ್ಗವಾಗಿದೆ. ಈಗ ಶ್ರೇಷ್ಠಾತಿ ಶ್ರೇಷ್ಠ ತಂದೆಯು ಓದಿಸುತ್ತಿದ್ದಾರೆ ಇದರಲ್ಲಿ ಪುಸ್ತಕ ಮುಂತಾದವುಗಳ ಅವಶ್ಯಕತೆಯಿಲ್ಲ. ಇನ್ನೊಂದು ಜನ್ಮದಲ್ಲಿ ಈ ಪುಸ್ತಕಗಳು ನಡೆಯುವುದಿಲ್ಲ. ಈ ವಿದ್ಯಾಭ್ಯಾಸವು ಈ ಜನ್ಮಕ್ಕಾಗಿಯೇ ಇದೆ. ಇದು ಅಮರಕಥೆಯಾಗಿದೆ, ನರನಿಂದ ನಾರಾಯಣನಾಗುವ ಶಿಕ್ಷಣವನ್ನೂ ಸಹ ಹೊಸ ಪ್ರಪಂಚಕ್ಕೆ ತಂದೆಯೇ ನೀಡುತ್ತಾರೆ. ಮಕ್ಕಳು 84 ಜನ್ಮಗಳ ಚಕ್ರವನ್ನೂ ತಿಳಿದಿದ್ದೀರಿ. ಇದು ವಿದ್ಯಾಭ್ಯಾಸದ ಸಮಯವಾಗಿದೆ. ಆದ್ದರಿಂದ ಬುದ್ಧಿಯಲ್ಲಿ ಮಂಥನ ನಡೆಯುತ್ತಿರಬೇಕು, ಅನ್ಯರಿಗೂ ಸಹ ಓದಿಸಬೇಕು. ಮುಂಜಾನೆ ಎದ್ದು ವಿಚಾರ ಸಾಗರ ಮಂಥನ ಮಾಡಬೇಕು. ಮುಂಜಾನೆಯ ವಿಚಾರ ಸಾಗರ ಮಂಥನ ಬಹಳ ಚೆನ್ನಾಗಿರುತ್ತದೆ. ಯಾರು ತಿಳಿಸಿಕೊಡುತ್ತಾರೆಯೋ ಅವರದೇ ಮಂಥನವಿರುತ್ತದೆ ಆಗ ಟಾಪಿಕ್ (ಪ್ರಬಂಧದ ವಿಷಯ) ಪಾಯಿಂಟ್ಸ್ ಎಲ್ಲವೂ ತಿಳಿಯುತ್ತದೆ. ಭಕ್ತಿಯ ಮಾತುಗಳನ್ನು ಜನ್ಮ-ಜನ್ಮಾಂತರವೂ ಕೇಳಿದ್ದೇವೆ, ಈ ಜ್ಞಾನವನ್ನು ಜನ್ಮ-ಜನ್ಮಾಂತರವೂ ಕೇಳುವುದಿಲ್ಲ. ಭಕ್ತಿಮಾರ್ಗದಲ್ಲಿ ಅನೇಕ ಪುಸ್ತಕಗಳು ಇವೆ, ವಿದೇಶದಿಂದಲೂ ಅನೇಕ ಪುಸ್ತಕಗಳು ಬರುತ್ತವೆ. ಇದೆಲ್ಲವೂ ನಾಶವಾಗುವುದಿದೆ. ಸತ್ಯಯುಗದಲ್ಲಂತೂ ಯಾವುದೇ ಪುಸ್ತಕದ ಅವಶ್ಯಕತೆಯಿಲ್ಲ. ಇವೆಲ್ಲವೂ ಕಲಿಯುಗೀ ಸಾಮಗ್ರಿಗಳಾಗಿವೆ. ಇಲ್ಲಿ ನೀವು ಏನೆಲ್ಲವನ್ನೂ ನೋಡುತ್ತೀರೋ - ಆಸ್ಪತ್ರೆ, ಜೈಲು, ನ್ಯಾಯಾಧೀಶ ಮುಂತಾದವೆಲ್ಲವೂ ಅಲ್ಲಿರುವುದಿಲ್ಲ. ಆ ಪ್ರಪಂಚವೇ ಬೇರೆಯದಾಗಿರುತ್ತದೆ. ಇದೇ ಪ್ರಪಂಚವೇ ಆದರೆ ಹೊಸ ಪ್ರಪಂಚಕ್ಕೂ, ಹಳೆಯ ಪ್ರಪಂಚಕ್ಕೂ ವ್ಯತ್ಯಾಸವಿರುತ್ತದೆ. ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ ಅದೇ ಪ್ರಪಂಚವು ನರಕವಾಗುತ್ತದೆ. ಇಂತಹವರು ಸ್ವರ್ಗವಾಸಿಯಾದರೆಂದು ಬಾಯಿಂದ ಹೇಳುತ್ತಾರೆ. ಬ್ರಹ್ಮ ಮಹಾತತ್ವದಲ್ಲಿ ಲೀನರಾದರು, ನಿರ್ವಾಣಕ್ಕೆ ಹೋದರೆಂದು ಸನ್ಯಾಸಿಗಳಿಗೆ ಹೇಳುತ್ತಾರೆ ಆದರೆ ನಿರ್ವಾಣಕ್ಕೆ ಯಾರೂ ಹೋಗುವುದಿಲ್ಲ. ಈ ರುದ್ರ ಮಾಲೆಯು ಹೇಗೆ ರಚನೆಯಾಗಿದೆ ಎಂದು ನೀವು ತಿಳಿದಿದ್ದೀರಿ. ರುಂಡ ಮಾಲೆಯೂ ಇದೆ, ವಿಷ್ಣುವಿನ ಮಾಲೆಯೂ ತಯಾರಾಗಿದೆ. ಈ ಮಾಲೆಯ ರಹಸ್ಯವನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ನಂಬರ್ವಾರ್ ವಿದ್ಯಾಭ್ಯಾಸನುಸಾರವೇ ಮಾಲೆಯಲ್ಲಿ ಪೋಣಿಸಲ್ಪಡುತ್ತೀರಿ. ಮೊಟ್ಟ ಮೊದಲು ಈ ನಿಶ್ಚಯವಿರಬೇಕಾಗಿದೆ. ಇದು ಈಶ್ವರೀಯ ವಿದ್ಯಾಭ್ಯಾಸವಾಗಿದೆ. ಅವರು ಪರಮ ತಂದೆ, ಪರಮ ಶಿಕ್ಷಕನೂ ಆಗಿದ್ದಾರೆ. ನಿಮ್ಮ ಬುದ್ಧಿಯಲ್ಲಿ ಯಾವ ಜ್ಞಾನವಿದೆಯೋ ಅದನ್ನೇ ಅನ್ಯರಿಗೂ ಕೊಡಬೇಕಾಗಿದೆ, ತಮ್ಮ ಸಮಾನರನ್ನಾಗಿ ಮಾಡಿಕೊಳ್ಳಬೇಕು. ವಿಚಾರ ಸಾಗರ ಮಥನ ಮಾಡಬೇಕು. ಪತ್ರಿಕೆಗಳು ಮುಂಜಾನೆಯೇ ಹೊರ ಬರುತ್ತದೆ, ಇದಂತೂ ಸಾಮಾನ್ಯ ಮಾತಾಗಿದೆ. ಈ ಮಾತುಗಳು ಲಕ್ಷ ರೂಪಾಯಿಗಳಷ್ಟಾಗಿದೆ. ಕೆಲವರು ಇದನ್ನು ಚೆನ್ನಾಗಿ ತಿಳಿಯುತ್ತಾರೆ, ಇನ್ನೂ ಕೆಲವರು ಕಡಿಮೆ ತಿಳಿಯುತ್ತಾರೆ. ತಿಳಿದು ಮತ್ತು ತಿಳಿಸುವುದರನುಸಾರವಾಗಿ ಹೊಸ ಪ್ರಪಂಚದಲ್ಲಿ ಪದವಿ ಸಿಗುತ್ತದೆ. ವಿಚಾರ ಸಾಗರ ಮಂಥನ ಮಾಡುವುದರಲ್ಲಿ ಬಹಳ ಏಕಾಂತವಿರಬೇಕು. ರಾಮ ತೀರ್ಥರ ಬಗ್ಗೆ ಏನು ಹೇಳುತ್ತಾರೆ, ಅವರೂ ಬರೆಯುವಾಗ ಅವರ ಶಿಷ್ಯರಿಗೆ ಹೇಳುತ್ತಿದ್ದರು - ನಿನ್ನ ವೈಬ್ರೇಷನ್ ನನಗೆ ಬರುತ್ತದೆ. ಆದ್ದರಿಂದ ನೀನು 2 ಮೈಲಿ ದೂರ ಹೋಗು. ನೀವೀಗ ಪರ್ಫೆಕ್ಟ್ ಆಗುತ್ತಿದ್ದೀರಿ. ಇಡೀ ಪ್ರಪಂಚದ ಬುದ್ಧಿಯು ಡಿಫೆಕ್ಟೀವ್ ಆಗಿದೆ, ನೀವು ಈ ವಿದ್ಯಾಭ್ಯಾಸದಿಂದ ಈ ಲಕ್ಷ್ಮೀ-ನಾರಾಯಣರಾಗುತ್ತೀರಿ. ಎಷ್ಟು ಶ್ರೇಷ್ಠ ವಿದ್ಯಾಭ್ಯಾಸವಾಗಿದೆ! ಆದರೆ ನಂಬರ್ವಾರ್ ಕುಳ್ಳರಿಸಲು ಸಾಧ್ಯವಿಲ್ಲ. ಹಿಂದೆ ಕುಳಿತುಕೊಂಡರೆ ಬೇಸರಗೊಳ್ಳುತ್ತಾರೆ, ಆಲಸ್ಯದಿಂದ ತೂಗಡಿಸುತ್ತಾ ವಾಯುಮಂಡಲವನ್ನು ಹಾಳು ಮಾಡುತ್ತಾರೆ. ಕಾನೂನು ಹೇಳುತ್ತದೆ - ನಂಬರ್ವಾರ್ ಆಗಿ ಕುಳ್ಳರಿಸಬೇಕು, ಆದರೆ ಇವೆಲ್ಲಾ ಮಾತುಗಳು ಬೆಲ್ಲಕ್ಕೆ ಗೊತ್ತು, ಬೆಲ್ಲದ ಚೀಲಕ್ಕೆ ಗೊತ್ತು. ಇದು ಬಹಳ ಶ್ರೇಷ್ಠ ಜ್ಞಾನವಾಗಿದೆ. ಬೇರೆ-ಬೇರೆ ಕ್ಲಾಸ್ ಮಾಡಲು ಸಾಧ್ಯವಿಲ್ಲ. ವಾಸ್ತವದಲ್ಲಿ ನೀವು ಕ್ಲಾಸಿನಲ್ಲಿ ಪರಸ್ಪರ ಒಬ್ಬರು ಇನ್ನೊಬ್ಬರನ್ನು ತಾಗುವಂತೆ ಕುಳಿತುಕೊಳ್ಳಬಾರದು. ಧ್ವನಿವರ್ಧಕ (ಮೈಕ್) ದಿಂದ ದೂರ ಕುಳಿತಿದ್ದರೂ ಕೇಳಿಸುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಪ್ರಪಂಚದ್ದನ್ನು ಏನೂ ಕೇಳಬಾರದು. ಏನನ್ನೂ ಓದಬಾರದು, ಅಂತಹವರ ಸಂಗವನ್ನು ಮಾಡಬಾರದು. ಯಾರು ಚೆನ್ನಾಗಿ ಓದುತ್ತಾರೆಯೋ ಅವರ ಸಂಗವನ್ನೇ ಮಾಡಬೇಕು. ಎಲ್ಲಿ ಒಳ್ಳೆಯ ಸರ್ವೀಸಿದೆಯೋ ಉದಾ: ಮ್ಯೂಜಿಯಂ ಮುಂತಾದೆಲ್ಲದಕ್ಕೆ ಬಹಳ ಬುದ್ಧಿವಂತರೂ ಯೋಗಯುಕ್ತ ಮಕ್ಕಳು ಬೇಕಾಗಿದೆ. ಈ ನಾಟಕವು ಇದೇ ರೀತಿಯಾಗಿ ರಚನೆಯಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಕೆಲವೊಮ್ಮೆ ತಂದೆಯು ವಿಚಾರ ಮಾಡುತ್ತಾರೆ - ಡ್ರಾಮಾದಲ್ಲಿ ಸ್ವಲ್ಪ ಬದಲಾವಣೆ ಆಗಲಿ ಎಂದು, ಆದರೆ ಬದಲಾವಣೆಯಾಗುವುದೇ ಇಲ್ಲ. ಇದು ಮಾಡಿ-ಮಾಡಲ್ಪಟ್ಟ ಆಟವಾಗಿದೆ. ಮಕ್ಕಳ ಸ್ಥಿತಿಯನ್ನು ನೋಡಿ ಸ್ವಲ್ಪ ಬದಲಾವಣೆಯಾಗಲಿ ಎಂದು ತಂದೆಗೆ ವಿಚಾರ ಬರುತ್ತದೆ. ತಂದೆ ಇದನ್ನು ಒಂದೇ ಬಾರಿ ತಿಳಿಸುವರು ನಂತರ ಈ ಜ್ಞಾನವು ಮರೆತು ಹೋಗುತ್ತದೆ. ಸ್ವರ್ಗಕ್ಕೆ ಇದೇ ರೀತಿ ಹೋಗುತ್ತೀರಾ, ನಂತರ ಸ್ವರ್ಗದಲ್ಲಂತೂ ಇಡೀ ರಾಜಧಾನಿಯೇ ಬೇಕಾಗಿದೆ ಎಂದು ವಿಚಾರ ಬರುತ್ತದೆ. ಕೆಲವರು ದಾಸ-ದಾಸಿಯರು, ಚಂಡಾಲರು ಇರುತ್ತಾರೆ. ಡ್ರಾಮಾದಲ್ಲಿ ಏನೂ ಬದಲಾವಣೆಯಾಗುವುದಿಲ್ಲ. ಭಗವಾನುವಾಚ - ಈ ಡ್ರಾಮಾ ಮಾಡಿ-ಮಾಡಿಸಲ್ಪಟ್ಟಂತಹದ್ದು ಇದನ್ನು ನಾನೂ ಸಹ ಬದಲಾವಣೆ ಮಾಡಲು ಸಾಧ್ಯವಿಲ್ಲ. ಭಗವಂತನಿಗಿಂತಲೂ ಶ್ರೇಷ್ಠರಾದವರು ಬೇರೆ ಯಾರೂ ಇಲ್ಲ. ಮನುಷ್ಯರು ಹೇಳುತ್ತಾರೆ - ಭಗವಂತನು ಏನು ತಾನೇ ಮಾಡುವುದಕ್ಕೆ ಸಾಧ್ಯವಿಲ್ಲ! ಆದರೆ ಸ್ವಯಂ ಭಗವಂತನೇ ಹೇಳುತ್ತಾರೆ - ನಾನು ಏನು ಮಾಡಲು ಸಾಧ್ಯವಿಲ್ಲ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ ವಿಘ್ನಗಳು ಬರುತ್ತವೆ ಆದರೆ ಅದಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಡ್ರಾಮಾದಲ್ಲಿ ಇದೇ ರೀತಿ ನಿಗಧಿಯಾಗಿದೆ. ನಾನು ಏನು ಮಾಡಲು ಸಾಧ್ಯ? ನಮ್ಮನ್ನು ಅಪವಿತ್ರರಾಗುವುದರಿಂದ ರಕ್ಷಿಸಿ ಎಂದು ಅನೇಕರು ಮೊರೆಯಿಡುತ್ತಾರೆ, ಅದಕ್ಕೆ ತಂದೆಯು ಏನು ಮಾಡುತ್ತಾರೆ. ತಂದೆಯು ಪುನಃ ಹೇಳುತ್ತಾರೆ - ಇದಂತೂ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದು ಭಗವಂತನ ಇಚ್ಛೆಯೆಂದು ತಿಳಿಯಬಾರದು. ಒಂದು ವೇಳೆ ಇದೆಲ್ಲವೂ ಭಗವಂತನ ಕೈಯಲ್ಲಿ ಇದ್ದಿದ್ದರೆ ಯಾರಾದರೂ ಪ್ರಿಯರಾಗಿರುವವರು ಶರೀರ ಬಿಟ್ಟರೆ ಅವರನ್ನು ರಕ್ಷಿಸುತ್ತಿದ್ದರು. ಅನೇಕರಿಗೆ ಸಂಶಯ ಬರುತ್ತದೆ - ಭಗವಂತನೇ ಓದಿಸುತ್ತಿದ್ದಾರೆ, ಒಂದು ವೇಳೆ ಭಗವಂತನ ಮಕ್ಕಳಾದರೆ ಭಗವಂತನು ತನ್ನ ಮಕ್ಕಳನ್ನು ರಕ್ಷಿಸುವುದಿಲ್ಲವೇ! ಅನೇಕರು ಈ ರೀತಿ ಬಹಳ ದೂರುತ್ತಾರೆ. ಸಾಧುಗಳು ಯಾರಾದರೂ ಪ್ರಾಣ ರಕ್ಷಿಸಿ ಮರಳಿ ಜೀವಂತವಾಗುವಂತೆ ಮಾಡುತ್ತಾರೆಂದು ಹೇಳುತ್ತಾರೆ. ಚಿತೆಯಿಂದಲೂ ಎದ್ದು ನಿಲ್ಲುತ್ತಾರೆ, ಮತ್ತೆ ಹೇಳುತ್ತಾರೆ - ಈಶ್ವರನು ಪುನಃ ಹಿಂತಿರುಗಿ ಕಳುಹಿಸಿದರು, ಕಾಲವು ತೆಗೆದುಕೊಂಡು ಹೋಯಿತು, ಅವರ ಮೇಲೆ ಪ್ರಭು ದಯೆ ತೋರಿಸಿದರು. ತಂದೆಯು ತಿಳಿಸುತ್ತಾರೆ - ನಾಟಕದಲ್ಲಿ ಏನೆಲ್ಲವೂ ನಿಗಧಿಯಾಗಿದೆಯೋ ಅದೇ ಆಗುತ್ತದೆ. ತಂದೆಯೂ ಸಹ ಏನು ಮಾಡಲು ಸಾಧ್ಯವಿಲ್ಲ. ಇದಕ್ಕೆ ನಾಟಕದ ಪೂರ್ವ ನಿಶ್ಚಿತವೆಂದು ಹೇಳಲಾಗುತ್ತದೆ. ನಾಟಕ ಶಬ್ಧವನ್ನು ನೀವು ತಿಳಿದುಕೊಂಡಿದ್ದೀರಿ. ಏನಾಗಬೇಕಿತ್ತೋ ಅದು ಆಯಿತು, ಚಿಂತೆಯೇಕೆ! ಎಂದು ತಂದೆಯು ಹೇಳುತ್ತಾರೆ. ನಿಮ್ಮನ್ನು ನಿಶ್ಚಿಂತರನ್ನಾಗಿ ಮಾಡುತ್ತಾರೆ. ಕ್ಷಣ-ಪ್ರತಿ ಕ್ಷಣ ಏನೆಲ್ಲವೂ ಆಗುತ್ತದೆಯೋ ಅದನ್ನು ನಾಟಕವೆಂದು ತಿಳಿಯಿರಿ. ಆತ್ಮವು ಶರೀರವನ್ನು ಬಿಟ್ಟು ಹೋಗಿ ಇನ್ನೊಂದು ಪಾತ್ರವನ್ನಭಿನಯಿಸಿತು. ಅನಾದಿ ಪಾತ್ರವನ್ನು ಬದಲಾಯಿಸಲು ಹೇಗೆ ಸಾಧ್ಯ! ಭಲೇ ಈಗ ಸ್ಥಿತಿಯು ಇನ್ನೂ ಪರಿಪಕ್ವವಾಗಿಲ್ಲ. ಕೆಲವೊಂದು ವಿಚಾರಗಳು ಬಂದು ಬಿಡುತ್ತವೆ. ಆದರೆ ಅದು ನಾಟಕದ ನಿಶ್ಚಿತವಾಗಿರುವ ಕಾರಣ ಏನೂ ಮಾಡಲು ಸಾಧ್ಯವಿಲ್ಲ. ಭಲೇ ಮನುಷ್ಯರು ಏನಾದರೂ ಹೇಳಲಿ ಆದರೆ ನಮ್ಮ ಬುದ್ಧಿಯಲ್ಲಿ ನಾಟಕದ ರಹಸ್ಯವಿದೆ. ಪಾತ್ರವನ್ನು ಅಭಿನಯಿಸಬೇಕಾಗಿದೆ, ಚಿಂತೆಯ ಮಾತಿಲ್ಲ. ಎಲ್ಲಿಯವರೆಗೆ ಸ್ಥಿತಿಯು ಪರಿಪಕ್ವವಾಗುವುದಿಲ್ಲವೋ ಅಲ್ಲಿಯವರೆಗೆ ಕೆಲವೊಂದು ಅಲೆಗಳು ಬರುತ್ತವೆ. ಈ ಸಮಯದಲ್ಲಿ ನೀವೆಲ್ಲರೂ ಓದುತ್ತಿದ್ದೀರಿ. ನೀವೆಲ್ಲರೂ ದೇಹಧಾರಿಗಳಾಗಿದ್ದೀರಿ, ನಾನೊಬ್ಬನೇ ವಿದೇಹಿಯಾಗಿದ್ದೇನೆ. ಎಲ್ಲಾ ದೇಹಧಾರಿಗಳಿಗೆ ಕಲಿಸುತ್ತೇನೆ. ಕೆಲವೊಂದು ಸಮಯದಲ್ಲಿ ನೀವು ಮಕ್ಕಳಿಗೆ ಈ ಬ್ರಹ್ಮಾರವರೂ ಸಹ ಕುಳಿತು ತಿಳಿಸುತ್ತಾರೆ - ತಂದೆಯ ಪಾತ್ರ ಮತ್ತು ಪ್ರಜಾಪಿತ ಬ್ರಹ್ಮಾರವರ ಪಾತ್ರವು ವಿಚಿತ್ರವಾಗಿದೆ. ಈ ತಂದೆಯು ವಿಚಾರ ಸಾಗರ ಮಂಥನ ಮಾಡಿ ನಿಮಗೆ ತಿಳಿಸುತ್ತಿರುತ್ತಾರೆ. ಇದು ಎಷ್ಟು ಅದ್ಭುತವಾದ ಜ್ಞಾನವಾಗಿದೆ. ಇದರಲ್ಲಿ ಬುದ್ಧಿಯಿಂದ ಎಷ್ಟೊಂದು ಕೆಲಸ ತೆಗೆದು ಕೊಳ್ಳಬೇಕಾಗುತ್ತದೆ. ತಂದೆಗೆ ಬೆಳಗಿನ ಸಮಯದಲ್ಲಿ ವಿಚಾರ ಸಾಗರ ಮಂಥನ ನಡೆಯುತ್ತದೆ. ಶಿಕ್ಷಕರು ಹೇಗೋ ಹಾಗೆಯೇ ನೀವು ಆಗಬೇಕಾಗಿದೆ. ಆದರೂ ಸಹ ವ್ಯತ್ಯಾಸವಂತೂ ಆವಶ್ಯವಾಗಿ ಇರುತ್ತದೆ. ಶಿಕ್ಷಕರು ವಿದ್ಯಾರ್ಥಿಗೆ 100 ಅಂಕಗಳನ್ನೆಂದೂ ಕೊಡುವುದಿಲ್ಲ, ಸ್ವಲ್ಪ ಕಡಿಮೆ ಕೊಡುತ್ತಾರೆ. ಅವರು ಸರ್ವಶ್ರೇಷ್ಠನಾಗಿದ್ದಾರೆ, ನಾವು ದೇಹಧಾರಿಗಳಾಗಿದ್ದೇವೆ ಅಂದಮೇಲೆ ತಂದೆಯ ತರಹ 100% ಹೇಗಾಗುತ್ತೀರಿ? ಇವು ಬಹಳ ಗುಹ್ಯ ಮಾತುಗಳಾಗಿವೆ. ಇದನ್ನು ಕೆಲವರು ಕೇಳಿ ಧಾರಣೆ ಮಾಡುತ್ತಾರೆ, ಖುಷಿಯಾಗುತ್ತದೆ. ಇನ್ನೂ ಕೆಲವರು ಹೇಳುತ್ತಾರೆ - ಬಾಬಾರವರದು ಒಂದೇ ವಾಣಿಯು ನಡೆಯುತ್ತದೆ ಅದೇ ಪುನರಾವರ್ತನೆಯಾಗುತ್ತದೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ಹೊಸ-ಹೊಸ ಮಕ್ಕಳು ಬರುತ್ತಾರೆಂದರೆ ನಾನು ಮೊದಲಿನ ವಿಷಯವನ್ನೇ ತೆಗೆದುಕೊಳ್ಳಬೇಕಾಗುತ್ತದೆ. ಹೊಸ ವಿಷಯಗಳನ್ನು ನಾನು ಅನ್ಯರಿಗೆ ತಿಳಿಸಲು ಹೇಳುತ್ತೇನೆ. ಇದರಲ್ಲಿ ಮಕ್ಕಳು ತಂದೆಗೆ ಸಹಯೋಗ ಕೊಡಬೇಕಾಗುತ್ತದೆ. ಯಾವ ಪತ್ರಿಕೆಗಳನ್ನು ಬರೆಯುತ್ತೀರಿ, ಇವು ಕಲ್ಪದ ಹಿಂದೆಯೂ ಹೀಗೆ ಬರೆದಿದ್ದಿರಿ. ಒಂದು ವೇಳೆ ಪತ್ರಿಕೆ ಬಿಡುಗಡೆ ಮಾಡಿದರೆ ಅದರ ಬಗ್ಗೆ ಬಹಳ ಗಮನ ಕೊಡಬೇಕಾಗುತ್ತದೆ ಏಕೆಂದರೆ ಅದರಲ್ಲಿ ಮನುಷ್ಯರು ಓದಿ ಯಾವುದೇ ಬೇಸರ ಪಡುವಂತಹ ಮಾತು ಇರಬಾರದು. ನೀವು ಪತ್ರಿಕೆಗಳನ್ನಂತೂ ಓದುತ್ತೀರಿ. ಯಾವುದಾದರೂ ಕಚ್ಚಾ, ಪಕ್ಕಾ ಮಾತಿದ್ದರೆ ಇಲ್ಲಿಯವರೆಗೆ ಸಂಪೂರ್ಣರಾಗಿಲ್ಲವೆಂದು ಹೇಳುತ್ತೀರಿ. 16 ಕಲಾಸಂಪೂರ್ಣ ಆಗುವುದರಲ್ಲಿ ಸಮಯವಂತೂ ಹಿಡಿಸುತ್ತದೆ. ಈಗ ಬಹಳ ಸರ್ವೀಸ್ ಮಾಡಬೇಕಾಗಿದೆ, ಬಹಳ ಪ್ರಜೆಗಳನ್ನು ತಯಾರು ಮಾಡಬೇಕಾಗಿದೆ. ಇದನ್ನೂ ಸಹ ತಂದೆಯು ತಿಳಿಸಿದ್ದಾರೆ - ಅನೇಕ ಪ್ರಕಾರದ ಅಂಕಗಳಿವೆ. ಕೆಲವರು ನಿಮಿತ್ತರಾಗಿದ್ದಾರೆ, ಅನೇಕರು ಜ್ಞಾನವನ್ನು ಪಡೆಯಲು ವ್ಯವಸ್ಥೆ ಮಾಡುತ್ತಾರೆಂದರೆ ಅವರಿಗೂ ಸಹ ಫಲ ಸಿಗುತ್ತದೆ. ಈಗಂತೂ ಹಳೆಯ ಪ್ರಪಂಚವೇ ಸಮಾಪ್ತಿಯಾಗಲಿದೆ. ಇಲ್ಲಿ ಅಲ್ಪಕಾಲದ ಸುಖವಿದೆ. ಖಾಯಿಲೆ ಇತ್ಯಾದಿಯಂತೂ ಎಲ್ಲರಿಗೂ ಇರುತ್ತದೆ. ಬ್ರಹ್ಮಾರವರು ಎಲ್ಲಾ ಮಾತುಗಳ ಅನುಭವಿಯಾಗಿದ್ದಾರೆ. ಪ್ರಪಂಚದ ಮಾತುಗಳನ್ನೂ ತಿಳಿಸುತ್ತಾರೆ. ಬಾಬಾರವರು ಇದನ್ನೂ ಹೇಳಿದ್ದರು - ಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಇಂತಹ ವಿಚಿತ್ರವಾದ ಮಾತುಗಳನ್ನು ಬರೆಯಿರಿ. ಅದರಿಂದ ಮನುಷ್ಯರು ಬ್ರಹ್ಮಾಕುಮಾರಿಯರು ಈ ಮಾತನ್ನು ಸರಿಯಾಗಿ ಬರೆದಿದ್ದಾರೆಂದು ತಿಳಿಯಲಿ. ಈ ಯುದ್ಧವು 5000 ವರ್ಷಗಳ ಹಿಂದೆ ಚಾಚೂ ತಪ್ಪದೆ ನಡೆದಿತ್ತು. ಅದು ಹೇಗೆ? ಎಂಬುದನ್ನು ಬಂದು ತಿಳಿದುಕೊಳ್ಳಿ. ನಿಮ್ಮ ಹೆಸರು ಪ್ರಸಿದ್ಧವಾಗಿದೆ. ಮನುಷ್ಯರು ಕೇಳಿ ಖುಷಿಯೂ ಆಗುತ್ತಾರೆ. ಬಹಳ ದೊಡ್ಡ ಮಾತಾಗಿದೆ! ಆದರೆ ಅದು ಅನ್ಯರ ಬುದ್ಧಿಯಲ್ಲಿ ಕುಳಿತುಕೊಳ್ಳಬೇಕಷ್ಟೆ. ಯಾರು ಬರೆಯುತ್ತಾರೆಯೋ ಅವರು ಮತ್ತೆ ತಿಳಿಸಲೂ ಬೇಕು. ತಿಳಿಸುವುದಕ್ಕೆ ಬರುವುದಿಲ್ಲವೆಂದರೆ ಮತ್ತೆ ಬರೆಯುವುದೂ ಇಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಒಬ್ಬ ತಂದೆಯು ಏನನ್ನು ತಿಳಿಸುತ್ತಾರೆ ಹಾಗೂ ಓದಿಸುತ್ತಾರೆಯೋ ಅದನ್ನೇ ಕೇಳಿ ಹಾಗೂ ಓದಿ. ಇನ್ನೇನನ್ನೂ ಓದುವ, ಕೇಳುವ ಅವಶ್ಯಕತೆಯಿಲ್ಲ. ಸಂಗದಿಂದ ಬಹಳ-ಬಹಳ ಸಂಭಾಲನೆ ಮಾಡಿಕೊಳ್ಳಿ. ಬೆಳಗ್ಗೆ-ಬೆಳಗ್ಗೆ ಏಕಾಂತದಲ್ಲಿ ಕುಳಿತು ವಿಚಾರ ಸಾಗರ ಮಂಥನ ಮಾಡಿ.

2. ನಾಟಕದ ಲೀಲೆಯು ನಿಶ್ಚಿತವಾಗಿ ಬಿಟ್ಟಿದೆ. ಆದ್ದರಿಂದ ಸದಾ ನಿಶ್ಚಿಂತವಾಗಿರಿ, ಯಾವುದೇ ಮಾತಿನಲ್ಲಿ ಸಂಶಯದಲ್ಲಿ ಬರಬಾರದು. ಮನುಷ್ಯರು ಭಲೇ ಏನೇ ಹೇಳಲಿ ಆದರೆ ನೀವು ನಾಟಕದ ಮೇಲೆ ಅಟಲವಾಗಿರಿ.


ವರದಾನ:
ಹೋಲಿ ಶಬ್ಧದ ಅರ್ಥ ಸ್ವರೂಪದಲ್ಲಿ ಸ್ಥಿತರಾಗಿರುತ್ತಾ ಸತ್ಯ ಹೋಲಿ ಆಚರಿಸುವಂತಹ ತೀವ್ರ ಪುರುಷಾರ್ಥಿ ಭವ.

ಹೋಲಿ ಆಚರಿಸುವುದು ಅರ್ಥಾತ್ ಯಾವ ಮಾತು ಕಳೆದುಹೋಯಿತು, ಆಗಿ ಹೋಯಿತು ಅದನ್ನು ಪೂರ್ತಿಯಾಗಿ ಸಮಾಪ್ತಿ ಮಾಡುವ ಪ್ರತಿಜ್ಞೆ ಮಾಡಬೇಕು. ಕಳೆದು ಹೋದ ಮಾತು ಈ ರೀತಿ ಅನುಭೂತಿ ಆಗಲಿ ಹೇಗೆ ಬಹಳ ಹಳೆಯ ಯಾವುದೋ ಜನ್ಮದ ಮಾತಾಗಿದೆ ಎಂದು. ಯಾವಾಗ ಇಂತಹ ಸ್ಥಿತಿಯಾಗುವುದು ಆಗ ಪುರುಷಾರ್ಥದ ವೇಗ ತೀವ್ರವಾಗುವುದು. ನಿಮ್ಮ ಅಥವಾ ಅನ್ಯರ ಕಳೆದು ಹೋದ ಮಾತುಗಳನ್ನು ಚಿಂತನೆಯಲ್ಲಿಯೂ ತರಬಾರದು, ಇಲ್ಲ ಚಿತ್ತದಲ್ಲಿಯೂ ಇಟ್ಟುಕೊಳ್ಳಬಾರದು - ಇದೆ ಆಗಿದೆ ಸತ್ಯ ಹೋಲಿ ಆಚರಿಸುವುದು ಅರ್ಥಾತ್ ಪಕ್ಕಾ ಬಣ್ಣ ಹಾಕಿಕೊಳ್ಳುವುದು.

ಸ್ಲೋಗನ್:
ಲ್ಲರಿಗಿಂತ ಶ್ರೇಷ್ಠ ಭಾಗ್ಯ ಇವರದೇ ಆಗಿದೆ ಯಾರಿಗೆ ಭಗವಂತನಿಂದ ನೇರ ಪಾಲನೆ, ವಿದ್ಯೆ ಮತ್ತು ಶ್ರೇಷ್ಠ ಜೀವನದ ಶ್ರೀಮತ ಸಿಗುವುದು.