21.05.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಬೇಹದ್ದಿನ ತಂದೆಯು ನಮ್ಮ ತಂದೆಯೇ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ ಅವರು ಸರ್ವವ್ಯಾಪಿಯಾಗಲು ಸಾಧ್ಯವಿಲ್ಲವೆಂದು ಸಿದ್ಧ ಮಾಡಿ ತಿಳಿಸಿಕೊಡಿ.”

ಪ್ರಶ್ನೆ:
ಈ ಸಮಯ ಪ್ರಪಂಚದಲ್ಲಿ ಅತಿ ದುಃಖ ಏಕೆ ಇದೆ? ದುಃಖಕ್ಕೆ ಕಾರಣವೇನಾಗಿದೆ?

ಉತ್ತರ:
ಇಡೀ ಪ್ರಪಂಚದಲ್ಲಿ ಈ ಸಮಯದಲ್ಲಿ ರಾಹು ದೆಶೆಯಿದೆ - ಈ ಕಾರಣದಿಂದ ದುಃಖವಿದೆ. ಬೃಹಸ್ಪತಿ ತಂದೆಯು ಯಾವಾಗ ಬರುತ್ತಾರೆಯೋ ಆಗ ಎಲ್ಲರ ಮೇಲೂ ಬೃಹಸ್ಪತಿ ದೆಶೆಯು ಕುಳಿತುಕೊಳ್ಳುತ್ತದೆ. ಸತ್ಯ-ತ್ರೇತಾಯುಗದಲ್ಲಿ ಬೃಹಸ್ಪತಿ ದೆಶೆಯಿರುತ್ತದೆ, ರಾವಣನ ಹೆಸರು-ಚಿಹ್ನೆಯಿರುವುದಿಲ್ಲ ಆದುದರಿಂದ ಅಲ್ಲಿ ದುಃಖವಾಗುವುದಿಲ್ಲ. ತಂದೆಯು ಸುಖಧಾಮವನ್ನು ಸ್ಥಾಪನೆ ಮಾಡಲು ಬಂದಿದ್ದಾರೆ, ಅಲ್ಲಿ ದುಃಖವಿರುವುದಿಲ್ಲ.

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳಿಗೆ ಆತ್ಮಿಕ ತಂದೆಯು ಕುಳಿತು ತಿಳಿಸುತ್ತಿದ್ದಾರೆ ಏಕೆಂದರೆ ಎಲ್ಲಾ ಮಕ್ಕಳಿಗೆ ಇದು ಗೊತ್ತಿದೆ - ನಾವಾತ್ಮಾರಾಗಿದ್ದೇವೆ, ನಮ್ಮ ಮನೆಯಿಂದ ನಾವು ಬಹಳ ದೂರದಿಂದ ಇಲ್ಲಿಗೆ ಬಂದಿದ್ದೇವೆ. ಬಂದು ಈ ಶರೀರದಲ್ಲಿ ಪಾತ್ರವನ್ನಭಿನಯಿಸಲು ಪ್ರವೇಶ ಮಾಡುತ್ತೇವೆ. ಆತ್ಮವೇ ಪಾತ್ರವನ್ನಭಿನಯಿಸುತ್ತದೆ. ಇಲ್ಲಿ ಮಕ್ಕಳು ಆತ್ಮನೆಂದು ತಿಳಿದು ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ ಏಕೆಂದರೆ ನೆನಪಿನಿಂದಲೇ ನೀವು ಮಕ್ಕಳ ಜನ್ಮ-ಜನ್ಮಾಂತರ ಪಾಪಗಳು ಭಸ್ಮವಾಗುತ್ತದೆಯಂದು ತಂದೆಯು ತಿಳಿಸುತ್ತಾರೆ. ಇದನ್ನುಯೋಗವೆಂದು ಹೇಳಬಾರದು, ಯೋಗವನ್ನು ಸನ್ಯಾಸಿಗಳು ಕಲಿಸುತ್ತಾರೆ. ವಿದ್ಯಾರ್ಥಿಗೆ ಶಿಕ್ಷಕನೊಂದಿಗೆ ಯೋಗವಿರುತ್ತದೆ, ಮಕ್ಕಳಿಗೆ ತಂದೆಯೊಂದಿಗೆ ಯೋಗವಿರುತ್ತದೆ. ಇದಾಗಿದೆ ಆತ್ಮ ಮತ್ತು ಪರಮಾತ್ಮನ ಅರ್ಥಾತ್ ತಂದೆ ಮತ್ತು ಮಕ್ಕಳ ಮೇಳವಾಗಿದೆ. ಇದು ಕಲ್ಯಾಣಕಾರಿ ಮಿಲನವಾಗಿದೆ ಬೇರೆಲ್ಲವೂ ಅಕಲ್ಯಾಣಕಾರಿಯಾಗಿದೆ. ಪತಿತ ಪ್ರಪಂಚವಾಗಿದೆ ಅಲ್ಲವೆ! ನೀವು ಯಾವಾಗ ಪ್ರದರ್ಶನಿ ಅಥವಾ ಮ್ಯೂಜಿಯಂನಲ್ಲಿ ತಿಳಿಸಿಕೊಡುತ್ತೀರೆಂದಾಗ ಆತ್ಮ ಮತ್ತು ಪರಮಾತ್ಮನ ಪರಿಚಯವನ್ನು ಕೊಡಲು ಸರಿಯಿರುತ್ತದೆ. ಆತ್ಮಗಳೆಲ್ಲರೂ ಮಕ್ಕಳಾಗಿದ್ದಾರೆ ಹಾಗೂ ಪರಮಪಿತ ಪರಮಾತ್ಮ ಪರಮಧಾಮದಲ್ಲಿರುವವರಾಗಿದ್ದಾರೆ. ಯಾವ ಮಕ್ಕಳೂ ಸಹ ತಮ್ಮ ಲೌಕಿಕ ತಂದೆಯನ್ನು ಪರಮಪಿತನೆಂದು ಹೇಳುವುದಿಲ್ಲ. ಪರಮಪಿತನನ್ನು - ಹೇ ಪರಮಪಿತ ಪರಮಾತ್ಮ ಎಂದು ದುಃಖದಲ್ಲಿರುವಾಗಲೇ ನೆನಪು ಮಾಡುತ್ತಾರೆ. ಪರಮಾತ್ಮ ಪರಮಧಾಮದಲ್ಲಿರುತ್ತಾರೆ. ಈಗ ನೀವು ಆತ್ಮ ಹಾಗೂ ಪರಮಾತ್ಮನ ಜ್ಞಾನವನ್ನೂ ತಿಳಿಸುತ್ತೀರಿ. ಕೇವಲ ಇಬ್ಬರು ತಂದೆಯರದ್ದಷ್ಟೇ ತಿಳಿಸಬಾರದು, ಅವರು ತಂದೆ ಹಾಗೂ ಶಿಕ್ಷಕನೂ ಆಗಿದ್ದಾರೆಎಂಬುದನ್ನು ಅಗತ್ಯವಾಗಿ ತಿಳಿಸಬೇಕು. ನಾವೆಲ್ಲರೂ ಸಹೋದರ-ಸಹೋದರಿಯಾಗಿದ್ದೇವೆ, ಅವರು ಸರ್ವ ಆತ್ಮಗಳ ತಂದೆಯಾಗಿದ್ದಾರೆ. ಭಕ್ತಿಮಾರ್ಗದಲ್ಲಿ ಎಲ್ಲರೂ ಭಗವಂತ ತಂದೆಯನ್ನು ನೆನಪು ಮಾಡುತ್ತಾರೆ. ಏಕೆಂದರೆ ಭಗವಂತನಿಂದ ಭಕ್ತಿಯ ಫಲ ಸಿಗುತ್ತದೆ ಅಥವಾ ತಂದೆಯಿಂದ ಮಕ್ಕಳು ಆಸ್ತಿಯನ್ನು ಪಡೆಯುತ್ತಾರೆ. ಭಗವಂತ ಮಕ್ಕಳಿಗೆ ಭಕ್ತಿಯ ಫಲವನ್ನೂ ಕೊಡುತ್ತಾರೆ. ಏನು ಕೊಡುತ್ತಾರೆ? ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಆದರೆ ನೀವು ಕೇವಲ ತಂದೆಯನ್ನು ಮಾತ್ರ ಸಿದ್ಧ ಮಾಡಬಾರದು. ಅವರು ತಂದೆಯೂ ಆಗಿದ್ದಾರೆ, ಶಿಕ್ಷಣ ಕೊಡುವ ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ಹೀಗೆ ತಿಳಿಸಿ ಕೊಟ್ಟಾಗ ಸರ್ವವ್ಯಾಪಿಯ ವಿಚಾರವು ಹೊರಟು ಹೋಗುತ್ತದೆ. ಆದ್ದರಿಂದ ಇದನ್ನೂ ಸೇರಿಸಿಕೊಳ್ಳಿ- ಅವರು ಜ್ಞಾನಸಾಗರನಾಗಿದ್ದಾರೆ ಅವರೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ನೀವೇ ಹೇಳಿ- ಅವರು ಶಿಕ್ಷಣ ಕೊಡುವಂತಾ ಶಿಕ್ಷಕರೂ ಆಗಿದ್ದಾರೆಂದಾಗ ಸರ್ವವ್ಯಾಪಿ ಹೇಗಾಗುತ್ತಾರೆ? ಶಿಕ್ಷಕ ಹಾಗೂ ವಿದ್ಯಾರ್ಥಿ ಅಗತ್ಯವಾಗಿ ಬೇರೆ-ಬೇರೆಯಾಗಿರುತ್ತಾರೆ. ಹೇಗೆ ತಂದೆ ಮತ್ತು ಮಕ್ಕಳು ಬೇರೆ-ಬೇರೆಯಾಗಿದ್ದಾರೆ. ಆತ್ಮಗಳು ಪರಮಾತ್ಮ ತಂದೆಯನ್ನುನೆನಪು ಮಾಡುತ್ತಾರೆ, ಅವರ ಮಹಿಮೆಯನ್ನು ಮಾಡುತ್ತಾರೆ, ತಂದೆಯೇ ಮನುಷ್ಯ ಸೃಷ್ಟಿಯ ಬೀಜರೂಪವಾಗಿದ್ದಾರೆ. ಅವರೇ ಬಂದು ನಮಗೆ ಮನುಷ್ಯ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನುತಿಳಿಸುತ್ತಾರೆ. ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ನಾವು ಸ್ವರ್ಗವಾಸಿಗಳಾಗುತ್ತೇವೆ. ಆಗ ಜೊತೆ ಜೊತೆಯಲ್ಲಿ ಇಬ್ಬರು ತಂದೆಯರಿದ್ದಾರೆಂದು ತಿಳಿಸಿಕೊಡಿ. ಲೌಕಿಕ ತಂದೆಯು ಪಾಲನೆ ಮಾಡಿ ನಂತರ ಶಿಕ್ಷಕನ ಬಳಿ ವಿದ್ಯಾಭ್ಯಾಸ ಮಾಡಬೇಕಾಗುತ್ತದೆ. ನಂತರ ವಾನಪ್ರಸ್ಥ ಸ್ಥಿತಿಯಲ್ಲಿ ಗುರುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ರೀತಿಯಾಗಿ ತಂದೆ, ಶಿಕ್ಷಕ, ಗುರು ಬೇರೆ-ಬೇರೆಯಾಗಿರುತ್ತಾರೆ. ಈ ಬೇಹದ್ದಿನ ತಂದೆಯಂತೂ ಸರ್ವ ಆತ್ಮಗಳ ತಂದೆಯಾಗಿದ್ದಾರೆ, ಜ್ಞಾನಸಾಗರನಾಗಿದ್ದಾರೆ, ಮನುಷ್ಯ ಸೃಷ್ಟಿಯ ಬೀಜರೂಪ, ಸತ್ಚಿತ್ ಆನಂದ ಸ್ವರೂಪನಾಗಿದ್ದಾರೆ. ಸುಖದ ಸಾಗರ, ಶಾಂತಿಯ ಸಾಗರನಾಗಿದ್ದಾರೆ. ಹೀಗೆ ಅವರ ಮಹಿಮೆಯನ್ನು ಆರಂಭ ಮಾಡಿ ಏಕೆಂದರೆ ಪ್ರಪಂಚದಲ್ಲಿ ಅನೇಕ ಮತಭೇದಗಳಿವೆ. ಒಂದುವೇಳೆ ಸರ್ವವ್ಯಾಪಿಯಾದಲ್ಲಿ ಶಿಕ್ಷಕನಾಗಿ ಹೇಗೆ ಓದಿಸುತ್ತಾರೆ! ಮತ್ತೆ ಅವರೇ ಸದ್ಗುರುವಾಗಿದ್ದಾರೆ, ಸರ್ವರ ಮಾರ್ಗದರ್ಶಕನಾಗಿ ಕರೆದೊಯ್ಯುತ್ತಾರೆ. ಶಿಕ್ಷಣ ಕೊಡುವುದೆಂದರೆ ನೆನಪನ್ನು ಕಲಿಸಿ ಕೊಡುತ್ತಾರೆ. ಭಾರತದ ಪ್ರಾಚೀನ ರಾಜಯೋಗವೆಂದು ಗಾಯನವಿದೆ. ಈ ಸಂಗಮಯುಗ ಬಹಳ ಹಳೆಯ ಯುಗವಾಗಿದೆ. ಇದು ಹಳೆಯ ಹಾಗೂ ಹೊಸದರ ಮಧ್ಯದಲ್ಲಿದೆ. ಇಂದಿಗೆ 5000 ವರ್ಷದ ಮೊದಲು ತಂದೆಯೇ ಬಂದು ತನ್ನವರನ್ನಾಗಿ ಮಾಡಿಕೊಂಡು ನಮ್ಮ ಶಿಕ್ಷಕ ಸದ್ಗುರುವು ಆಗಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಅವರು ಕೇವಲ ತಂದೆ ಮಾತ್ರವಲ್ಲ, ಅವರು ಜ್ಞಾನ ಸಾಗರ ಅರ್ಥಾತ್ ಶಿಕ್ಷಕನಾಗಿದ್ದಾರೆ. ನಮಗೆ ಶಿಕ್ಷಣವನ್ನು ಕೊಡುತ್ತಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನೂ ತಿಳಿಸುತ್ತಾರೆ ಏಕೆಂದರೆ ಅವರು ಬೀಜರೂಪ, ವೃಕ್ಷಪತಿಯಾಗಿದ್ದಾರೆ. ಅವರು ಯಾವಾಗ ಬರುತ್ತಾರೆ ಆಗ ಭಾರತದ ಮೇಲೆ ಬೃಹಸ್ಪತಿ ದೆಶೆಯು ಕುಳಿತುಕೊಳ್ಳುತ್ತದೆ. ಸತ್ಯಯುಗದಲ್ಲಿ ಎಲ್ಲರೂ ದೇವಿ-ದೇವತೆಗಳಿರುತ್ತಾರೆ. ಎಲ್ಲರ ಮೇಲೆ ಬೃಹಸ್ಪತಿ ದೆಶೆಯು ಕುಳಿತುಕೊಂಡಿರುತ್ತದೆ ಮತ್ತೆ ಯಾವಾಗ ಪ್ರಪಂಚವು ತಮೋಪ್ರಧಾನವಾಗಿ ಬಿಡುತ್ತದೆ ಆಗ ಎಲ್ಲರ ಮೇಲೆ ರಾಹು ದೆಶೆ ಕುಳಿತು ಬಿಡುತ್ತದೆ. ವೃಕ್ಷಪತಿಯನ್ನು ಯಾರೂ ತಿಳಿದುಕೊಂಡಿಲ್ಲ. ತಿಳಿದುಕೊಳ್ಳದ ಕಾರಣ ಆಸ್ತಿಯು ಹೇಗೆ ಸಿಗುತ್ತದೆ?

ನೀವಿಲ್ಲಿ ಕುಳಿತುಕೊಂಡಾಗ ಅಶರೀರಿಯಾಗಿ ಕುಳಿತುಕೊಳ್ಳಿ. ಆತ್ಮವೇ ಬೇರೆಯಾಗಿದೆ, ಮನೆಯೇ ಬೇರೆಯಾಗಿದೆ ಎಂಬ ಜ್ಞಾನವು ಸಿಕ್ಕಿದೆ, ಪಂಚತತ್ವಗಳಿಂದ ಶರೀರವು ರಚಿಸಲ್ಪಡುತ್ತದೆ ಅದರಲ್ಲಿ ಆತ್ಮವು ಪ್ರವೇಶಿಸುತ್ತದೆ. ಎಲ್ಲರ ಪಾತ್ರವು ನಿಗಧಿಯಾಗಿದೆ. ಮೊಟ್ಟ ಮೊದಲು ತಂದೆ ಸುಪ್ರೀಂ ತಂದೆಯಾಗಿದ್ದಾರೆ, ಸುಪ್ರೀಂ ಶಿಕ್ಷಕನಾಗಿದ್ದಾರೆಂದು ತಿಳಿಸಬೇಕು. ಲೌಕಿಕ ತಂದೆ, ಶಿಕ್ಷಕ, ಗುರುವಿನ ಅಂತರವನ್ನು ತಿಳಿಸಿ ಕೊಡುವುದರಿಂದ ತಕ್ಷಣ ತಿಳಿದುಕೊಳ್ಳುತ್ತಾರೆ, ವಾದ-ವಿವಾದ ಮಾಡುವುದಿಲ್ಲ. ಆತ್ಮಗಳ ತಂದೆಯಲ್ಲಿಯೇ ಎಲ್ಲಾ ಜ್ಞಾನವಿದೆ, ಇದು ಅವರ ವಿಶೇಷತೆಯಾಗಿದೆ. ಅವರೇ ನಮಗೆ ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಮೊದಲು ಋಷಿ-ಮುನಿ ಮೊದಲಾದವರೂ ಸಹ ನಾವು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ ಎಂದು ಹೇಳುತ್ತಿದ್ದರು. ಏಕೆಂದರೆ ಆ ಸಮಯದಲ್ಲಿ ಅವರು ಸತೋ ಸ್ಥಿತಿಯಲ್ಲಿದ್ದರು, ಪ್ರತಿಯೊಂದು ವಸ್ತು ಸತೋಪ್ರಧಾನ, ಸತೋ, ರಜೋ, ತಮೋದಲ್ಲಿ ಬಂದೇ ಬರುತ್ತದೆ. ಹೊಸದರಿಂದ ಅಗತ್ಯವಾಗಿ ಹಳೆಯದಾಗುತ್ತದೆ. ನಿಮಗೆ ಈ ಸೃಷ್ಟಿಚಕ್ರದ ಆಯಸ್ಸೂ ಸಹ ಗೊತ್ತಾಗಿದೆ. ಈ ಸೃಷ್ಟಿಚಕ್ರದ ಆಯಸ್ಸನ್ನು ಮನುಷ್ಯರು ಮರೆತು ಬಿಟ್ಟಿದ್ದಾರೆ ಉಳಿದಂತೆ ಈ ವೇದಶಾಸ್ತ್ರ ಮೊದಲಾದವುಗಳೆಲ್ಲವನ್ನೂ ಭಕ್ತಿಮಾರ್ಗಕ್ಕಾಗಿಯೇ ಮಾಡಿದ್ದಾರೆ, ಅದರಲ್ಲಿ ಬಹಳಷ್ಟು ಅಸತ್ಯವನ್ನು ಬರೆದು ಬಿಟ್ಟಿದ್ದಾರೆ. ಸರ್ವರಿಗೂ ತಂದೆಯೊಬ್ಬರೇ ಆಗಿದ್ದಾರೆ, ಸದ್ಗತಿದಾತನೂ ಸಹ ಒಬ್ಬರೇ ಆಗಿದ್ದಾರೆ. ಗುರುಗಳು ಅನೇಕರಿದ್ದಾರೆ, ಸದ್ಗತಿ ಮಾಡುವ ಸದ್ಗತಿದಾತ ಒಬ್ಬರೇ ಆಗಿರುತ್ತಾರೆ. ಸದ್ಗತಿ ಹೇಗೆ ಆಗುತ್ತದೆಯಂದು ನಿಮ್ಮ ಬುದ್ಧಿಯಲ್ಲಿದೆ. ಆದಿ ಸನಾತನ ದೇವಿ-ದೇವತಾ ಧರ್ಮಕ್ಕೆ ಸದ್ಗತಿಯೆಂದು ಕರೆಯಲಾಗುವುದು. ಅಲ್ಲಿ ಬಹಳ ಕಡಿಮೆ ಜನ ಇರುತ್ತಾರೆ, ಈಗಂತೂ ಅನೇಕ ಮನುಷ್ಯರಿದ್ದಾರೆ. ಅಲ್ಲಿ ಕೇವಲ ದೇವತೆಗಳ ರಾಜ್ಯವಿದ್ದು ನಂತರ ವೃದ್ಧಿ ಹೊಂದುತ್ತದೆ. ಲಕ್ಷ್ಮೀ-ನಾರಾಯಣ ದಿ ಫಸ್ಟ್, ಸೆಕೆಂಡ್, ಥರ್ಡ್...... ಹೀಗೆ ನಡೆಯುತ್ತದೆ. ಯಾವಾಗ ಫಸ್ಟ್ ಲಕ್ಷ್ಮೀ-ನಾರಾಯಣರಿರುತ್ತಾರೆ ಆಗ ಎಷ್ಟು ಕಡಿಮೆ ಜನಸಂಖ್ಯೆಯಿರುತ್ತದೆ. ಇವೆಲ್ಲಾ ವಿಚಾರಗಳು ಕೇವಲ ನಿಮ್ಮಲ್ಲಿಯೇ ನಡೆಯುತ್ತದೆ. ನೀವು ಮಕ್ಕಳು ಮಾತ್ರ ತಿಳಿದುಕೊಂಡಿದ್ದೀರಿ- ಭಗವಂತ ಸರ್ವ ಆತ್ಮಗಳ ತಂದೆಯಾಗಿದ್ದಾರೆ. ಅವರೇ ಬೇಹದ್ದಿನ ತಂದೆಯೂ ಆಗಿದ್ದಾರೆ. ಹದ್ದಿನ ತಂದೆಯಿಂದ ಹದ್ದಿನ ಆಸ್ತಿಯು ಸಿಗುತ್ತದೆ, ಬೇಹದ್ದಿನ ತಂದೆಯಿಂದ 21 ಜನ್ಮಗಳಿಗೆ ಸ್ವರ್ಗದ ರಾಜ್ಯಭಾಗ್ಯದ ರೂಪದಲ್ಲಿ ಬೇಹದ್ದಿನ ಆಸ್ತಿಯು ಸಿಗುತ್ತದೆ. 21 ಪೀಳಿಗೆ ಎಂದರೆ 21 ಜನ್ಮಗಳ ವೃದ್ಧಾಪ್ಯದ ಶರೀರ ಬಿಡುವ ತನಕ. ಅಲ್ಲಿ ತಮ್ಮನ್ನು ಆತ್ಮನೆಂದು ತಿಳಿದಿರುತ್ತಾರೆ ಇಲ್ಲಿ ದೇಹಾಭಿಮಾನದ ಕಾರಣ ನಾವಾತ್ಮ ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ತೆಗೆದುಕೊಳ್ಳುತ್ತೇವೆಂದು ತಿಳಿದುಕೊಂಡಿಲ್ಲ. ಈ ದೇಹಾಭಿಮಾನಿಗಳನ್ನು ಆತ್ಮಾಭಿಮಾನಿಗಳನ್ನಾಗಿ ಯಾರು ಮಾಡುತ್ತಾರೆ? ಈ ಸಮಯದಲ್ಲಿ ಒಬ್ಬರೂ ಆತ್ಮಾಭಿಮಾನಿಗಳಿಲ್ಲ, ಈಗ ತಂದೆಯು ಬಂದು ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಾರೆ. ಅಲ್ಲಿ ಆತ್ಮವು ಒಂದು ದೊಡ್ಡ ಶರೀರವನ್ನು ಬಿಟ್ಟು ಚಿಕ್ಕ ಮಗುವಾಗುತ್ತೇವೆಂದು ತಿಳಿದುಕೊಂಡಿರುತ್ತಾರೆ. ಸರ್ಪವು ಪೊರೆಯನ್ನು ಬಿಡುವ ಉದಾಹರಣೆಯಿದೆಯಲ್ಲವೆ. ಈ ಸರ್ಪ, ಭ್ರಮರಿಯ ಉದಾಹರಣೆಗಳೆಲ್ಲವೂ ಇಲ್ಲಿಯದಾಗಿದ್ದೂ ಹಾಗೂ ಈ ಸಮಯದ್ದಾಗಿದೆ. ಅದು ಭಕ್ತಿಮಾರ್ಗದಲ್ಲಿ ಉಪಯೋಗದಲ್ಲಿ ಬರುತ್ತದೆ. ವಾಸ್ತವದಲ್ಲಿ ನೀವು ಬ್ರಾಹ್ಮಣಿಯರು ಕನಿಷ್ಟ ಕೀಟವನ್ನು ಭೂ ಭೂ ಮಾಡಿ ಮನುಷ್ಯರಿಂದ ದೇವತೆಯನ್ನಾಗಿ ಮಾಡಿ ಬಿಡುತ್ತೀರಿ. ತಂದೆಯಲ್ಲಿಯೇ ಈ ಜ್ಞಾನವಿದೆಯಲ್ಲವೆ! ಅವರೇ ಜ್ಞಾನ ಸಾಗರ, ಶಾಂತಿಯ ಸಾಗರನಾಗಿದ್ದಾರೆ, ಎಲ್ಲರೂ ಶಾಂತಿಯನ್ನು ಬೇಡುತ್ತಿರುತ್ತಾರೆ. ಶಾಂತಿ ದೇವ..... ಎಂದು ಯಾರನ್ನು ಕರೆಯುತ್ತಾರೆ? ಆದರೆ ಅರ್ಥ ರಹಿತವಾಗಿ ಯಾರೂ ಶಾಂತಿಯದಾತ ಅಥವಾ ಸಾಗರನಾಗಿದ್ದಾರೆ ಅವರ ಮಹಿಮೆಯನ್ನು ಮಾಡುತ್ತಾರೆ. 63 ಜನ್ಮ ಭಕ್ತಿ ಮಾಡಲೇಬೇಕು. ಎಷ್ಟೊಂದು ಶಾಸ್ತ್ರಗಳಿವೆ, ಯಾವುದೇ ಶಾಸ್ತ್ರಗಳನ್ನು ಓದುವುದರಿಂದ ನಾನು ಸಿಗುವುದಿಲ್ಲ. ನನ್ನನ್ನು ಬಂದು ಪಾವನ ಮಾಡು ಎಂದು ಕರೆಯುತ್ತಾರೆ. ಇದು ಯಾವ ಕೆಲಸಕ್ಕೂ ಬಾರದಂತಹ ತಮೋಪ್ರಧಾನ, ಅಪವಿತ್ರ ಕೊಳಕಿನ ಪ್ರಪಂಚವಾಗಿದೆ, ಎಷ್ಟೊಂದು ದುಃಖವಿದೆ! ದುಃಖವೆಲ್ಲಿಂದ ಬಂದಿತು? ತಂದೆಯಂತೂ ನಿಮಗೆ ಬಹಳ ಸುಖ ಕೊಟ್ಟಿದ್ದರು ನಂತರ ನೀವು ಹೇಗೆ ಜನ್ಮಗಳನ್ನು ಪಡೆಯುತ್ತಾ ಇಳಿದು ಬಂದಿರಿ? ಜ್ಞಾನ ಹಾಗೂ ಭಕ್ತಿಯೆಂದು ಹೇಳಲಾಗುತ್ತದೆ. ತಂದೆಯು ಜ್ಞಾನವನ್ನು ತಿಳಿಸುತ್ತಾರೆ, ರಾವಣನು ಭಕ್ತಿಯನ್ನು ಕಲಿಸುತ್ತಾನೆ. ನೋಡಲು ತಂದೆಯೂ ಕಾಣಿಸುವುದಿಲ್ಲ, ರಾವಣನೂ ಕಾಣಿಸುವುದಿಲ್ಲ- ಇಬ್ಬರನ್ನೂ ಈ ಸ್ಥೂಲ ಕಣ್ಣುಗಳಿಂದ ನೋಡಲು ಆಗುವುದಿಲ್ಲ. ಆತ್ಮವನ್ನು ತಿಳಿದುಕೊಳ್ಳಬಹುದು- ನಾವು ಆತ್ಮರಾಗಿದ್ದೇವೆ ಹಾಗಾದರೆ ಆತ್ಮನ ತಂದೆಯೂ ಅಗತ್ಯವಾಗಿ ಇರುತ್ತಾರೆ. ತಂದೆಯೇ ನಂತರ ಶಿಕ್ಷಕನೂ ಆಗುತ್ತಾರೆ. ಅನ್ಯರ್ಯಾರೂ ಹೀಗಿರಲು ಸಾಧ್ಯವಿಲ್ಲ.

ಈಗ ನೀವು 21 ಜನ್ಮಗಳಿಗಾಗಿ ಸದ್ಗತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ ನಂತರ ಗುರುಗಳ ಅವಶ್ಯಕತೆಯೇ ಇರುವುದಿಲ್ಲ. ತಂದೆಯು ಸರ್ವರ ಪಿತ ಹಾಗೂ ಓದಿಸುವಂತಹ ಶಿಕ್ಷಕನೂ ಆಗಿದ್ದಾರೆ. ಸರ್ವರಿಗೂ ಸದ್ಗತಿ ಮಾಡುವಂತಹ ಸದ್ಗುರು, ಸುಪ್ರೀಂ ಗುರುವಾಗಿದ್ದಾರೆ. ಈ ಮೂವರಿಗೂ ಸರ್ವವ್ಯಾಪಿ ಎಂದು ಹೇಳಲು ಸಾಧ್ಯವಿಲ್ಲ. ಅವರಂತೂ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಮನುಷ್ಯರು ನೆನಪು ಮಾಡುವಾಗ ಹೀಗೆ ಹೇಳುತ್ತಾರೆ - ಹೇ ಪತಿತ-ಪಾವನ ಬನ್ನಿ, ಸರ್ವರ ಸದ್ಗತಿದಾತ ಬನ್ನಿ, ಸರ್ವರ ದುಃಖವನ್ನು ದೂರ ಮಾಡಿ ಸುಖವನ್ನು ಕೊಡು, ಹೇ ಗಾಡ್ಫಾದರ್, ಹೇ ಮುಕ್ತಿದಾತ, ನಂತರ ನೀವು ಕರೆದೊಯ್ಯಲು ಮಾರ್ಗದರ್ಶಕರಾಗಿ, ಈ ರಾವಣ ರಾಜ್ಯದಿಂದ ಬಿಡುಗಡೆ ಮಾಡಿ. ರಾವಣ ರಾಜ್ಯವು ಯಾವುದೇ ಲಂಕೆಯಲ್ಲಿಲ್ಲ. ಇಂದಿನ ಸಂಪೂರ್ಣ ವಿಶ್ವದಲ್ಲಿ ರಾವಣ ರಾಜ್ಯವಿದೆ. ರಾಮ ರಾಜ್ಯ ಕೇವಲ ಸತ್ಯಯುಗದಲ್ಲಿ ಮಾತ್ರ ಇರುತ್ತದೆ. ಭಕ್ತಿಮಾರ್ಗದಲ್ಲಿ ಮನುಷ್ಯರು ಎಷ್ಟೊಂದು ಗೊಂದಲಕ್ಕೊಳಗಾಗಿದ್ದಾರೆ.

ಈಗ ನೀವು ಶ್ರೇಷ್ಠರಾಗಲು ಶ್ರೀಮತ ಸಿಗುತ್ತಿದೆ. ಭಾರತವು ಸತ್ಯಯುಗದಲ್ಲಿದ್ದಾಗ ಪೂಜ್ಯತೆ, ಶ್ರೇಷ್ಠಾಚಾರಿಯಾಗಿತ್ತು. ಇದುವರೆಗೂ ಅವರನ್ನು ಪೂಜಿಸುತ್ತಲೇ ಇದ್ದಾರೆ. ಸತ್ಯಯುಗವಿದ್ದಾಗ ಭಾರತದ ಮೇಲೆ ಬೃಹಸ್ಪತಿ ದೆಶೆಯಿರುತ್ತದೆ. ಈಗ ರಾಹುದೆಶೆಯಲ್ಲಿ ನೋಡಿ, ಭಾರತವು ಏನಾಗಿ ಬಿಟ್ಟಿದೆ! ಎಲ್ಲರೂ ಅಸತ್ಯವಂತರಾಗಿ ಬಿಟ್ಟಿದ್ದಾರೆ. ಎಲ್ಲರೂ ಬಡವರಾಗಿ ಬಿಟ್ಟಿದ್ದಾರೆ, ತಂದೆಯು ಬಂದು ಎಲ್ಲರನ್ನೂ ಶ್ರೀಮಂತರನ್ನಾಗಿ ಮಾಡುತ್ತಾರೆ, ರಾವಣನು ಬಡವರನ್ನಾಗಿ ಮಾಡುತ್ತಾನೆ. ರಾಮ ರಾಜ್ಯಬೇಕೆಂದೂ ಸಹ ಹೇಳುತ್ತಾರೆ ಹಾಗಾದರೆ ಈಗ ರಾವಣ ರಾಜ್ಯದಲ್ಲಿದ್ದಾರಲ್ಲವೆ! ನರಕವಾಸಿಗಳಾಗಿದ್ದಾರೆ. ರಾವಣ ರಾಜ್ಯಕ್ಕೆ ನರಕವೆಂದು ಹೇಳಲಾಗುವುದು, ನರಕ ಹಾಗೂ ಸ್ವರ್ಗ ಸಹ ಅರ್ಧ-ಅರ್ಧ ಇದೆ. ರಾಮ ರಾಜ್ಯ ಹಾಗೂ ರಾವಣ ರಾಜ್ಯವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಮೊಟ್ಟ ಮೊದಲು ಈ ರೀತಿಯಾಗಿ ನಿಶ್ಚಯಬುದ್ಧಿಯವರನ್ನಾಗಿ ಮಾಡಬೇಕು. ಅವರು ನಮ್ಮ ತಂದೆಯಾಗಿದ್ದಾರೆ, ನಾವೆಲ್ಲಾ ಆತ್ಮಗಳು ಸಹೋದರರಾಗಿದ್ದೇವೆ, ತಂದೆಯಿಂದ ಎಲ್ಲರಿಗೂ ಆಸ್ತಿ ಪಡೆಯುವ ಅಧಿಕಾರವಿದೆ. ಒಮ್ಮೆ ದೊರಕಿತ್ತು, ತಂದೆಯೇ ರಾಜಯೋಗವನ್ನು ಕಲಿಸಿ ಸುಖಧಾಮದ ಮಾಲೀಕರನ್ನಾಗಿ ಮಾಡಿದ್ದರು. ಉಳಿದವರೆಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ವೃಕ್ಷಪತಿ ಚೈತನ್ಯ, ಸತ್-ಚಿತ್ ಆನಂದ ಸ್ವರೂಪರಾಗಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಆತ್ಮವು ಸತ್ಯವೂ ಆಗಿದೆ, ಚೈತನ್ಯವೂ ಆಗಿದೆ. ತಂದೆಯು ಸತ್ಯ-ಚೈತನ್ಯವಾಗಿದ್ದು ವೃಕ್ಷಪತಿಯೂ ಆಗಿದ್ದಾರೆ. ಇದು ಉಲ್ಟಾ ವೃಕ್ಷವಾಗಿದೆ, ಇದರ ಬೀಜ ಮೇಲಿದೆ. ಇದನ್ನು ತಂದೆಯೇ ಬಂದು ತಿಳಿಸಿಕೊಡುತ್ತಾರೆ. ನೀವುಯಾವಾಗತಮೋಪ್ರಧಾನರಾಗುತ್ತೀರಿಆಗತಂದೆಯುಸತೋಪ್ರಧಾನರನ್ನಾಗಿಮಾಡಲುಬರುತ್ತಾರೆ. ಚರಿತ್ರೆ-ಭೂಗೋಳಪುನರಾವರ್ತನೆಯಾಗುತ್ತದೆ. ನಿಮಗೆಹಿಸ್ಟ್ರಿ-ಜಿಯಾಗ್ರಫಿ ಎಂದು ಆಂಗ್ಲ ಭಾಷೆಯಲ್ಲಿ ಹೇಳಬೇಡಿ ಎಂದು ಹೇಳಲಾಗುತ್ತದೆ. ಹಿಂದಿಯಲ್ಲಿ ಇತಿಹಾಸ - ಭೂಗೋಳವೆಂದು ಹೇಳಲಾಗುತ್ತದೆ. ಆಂಗ್ಲ ಭಾಷೆಯನ್ನಂತೂ ಎಲ್ಲಾ ಜನರು ಓದಿಯೇ ಓದುತ್ತಾರೆ. ಭಗವಂತನು ಗೀತೆಯನ್ನು ಸಂಸ್ಕೃತದಲ್ಲಿ ಹೇಳಿದರೆಂದು ತಿಳಿದುಕೊಳ್ಳುತ್ತಾರೆ. ಈಗ ಶ್ರೀಕೃಷ್ಣ ಸತ್ಯಯುಗದ ರಾಜಕುಮಾರನಾಗಿದ್ದನು. ಅಲ್ಲಿ ಈ ಭಾಷೆಯಿತ್ತು ಎಂದು ಎಲ್ಲಿಯೂ ಬರೆಯಲ್ಪಟ್ಟಿಲ್ಲ. ಭಾಷೆಯೇನೋ ಅವಶ್ಯವಾಗಿರುತ್ತದೆ. ಯಾವ ಯಾವ ರಾಜರು ಬರುತ್ತಾ ಹೋಗುತ್ತಾರೆ ಅವರಿಗೆ ಅವರದೇ ಭಾಷೆಯಿರುತ್ತದೆ. ಹಾಗೆಯೇ ಸತ್ಯಯುಗೀ ರಾಜರ ಭಾಷೆ ಅವರದೇ ಆಗಿದೆ. ಅಲ್ಲಿ ಸಂಸ್ಕೃತವಿರುವುದಿಲ್ಲ. ಸತ್ಯಯುಗದ ಪದ್ಧತಿಯೇ ಬೇರೆಯಾಗಿರುತ್ತದೆ. ಮನುಷ್ಯರ ಪದ್ಧತಿಯೇ ಬೇರೆಯಾಗಿದೆ. ನೀವೆಲ್ಲರೂ ಮೀರಾ ಆಗಿದ್ದೀರಿ, ಯಾವ ಕಲಿಯುಗೀ ಲೋಕ ಮರ್ಯಾದೆಯನ್ನು ನೀವು ಇಷ್ಟ ಪಡುವುದಿಲ್ಲ. ನೀವು ಕಲಿಯುಗೀ ಲೋಕ ಮರ್ಯಾದೆಯನ್ನು ಬಿಡುವುದರಿಂದ ಎಷ್ಟೊಂದು ಜಗಳವಾಗುತ್ತದೆ. ನಿಮಗೆ ತಂದೆಯು ಶ್ರೀಮತ ಕೊಟ್ಟಿದ್ದಾರೆ - ಕಾಮ ಮಹಾಶತ್ರುವಾಗಿದೆ, ಇದರ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಳ್ಳಿ. ಜಗತ್ಜೀತ್ ಆಗುವವರಿಗೆ ಈ ಚಿತ್ರವು ಮುಂದೆ ಇದೆ. ವಿಶ್ವದಲ್ಲಿ ಶಾಂತಿಯು ಹೇಗೆ ಸ್ಥಾಪನೆಯಾಗುವುದು ಎಂಬ ಸಲಹೆಯು ನಿಮಗೆ ಬೇಹದ್ದಿನ ತಂದೆಯಿಂದ ಸಿಗುತ್ತದೆ. ಶಾಂತಿದೇವ ಎಂದು ಹೇಳುವುದರಿಂದ ತಂದೆಯ ನೆನಪು ಬರುತ್ತದೆ. ತಂದೆಯೇ ಬಂದು ಕಲ್ಪ-ಕಲ್ಪ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುತ್ತಾರೆ. ಕಲ್ಪದ ಆಯಸ್ಸನ್ನು ಬಹಳ ಧೀರ್ಘವಾಗಿ ಮಾಡಿರುವುದರಿಂದ ಮನುಷ್ಯರೆಲ್ಲರೂ ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ. ಮೊಟ್ಟ ಮೊದಲು ಮನುಷ್ಯರಿಗೆ ಇವರು ನಮ್ಮ ತಂದೆ, ಶಿಕ್ಷಕನೂ ಆಗಿದ್ದಾರೆಂದು ಪಕ್ಕಾ ನಿಶ್ಚಯ ಮಾಡಿಸಬೇಕು. ಶಿಕ್ಷಕನಿಗೆ ಸರ್ವವ್ಯಾಪಿ ಎಂದು ಹೇಗೆ ಹೇಳುತ್ತೀರಿ? ತಂದೆಯು ಬಂದು ನಮಗೆ ಹೇಗೆ ಓದಿಸುತ್ತಿದ್ದಾರೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನೀವು ಅವರ ಜೀವನ ಚರಿತ್ರೆಯನ್ನು ತಿಳಿದಿದ್ದೀರಿ. ತಂದೆಯು ನರಕವನ್ನು ಸ್ವರ್ಗವನ್ನಾಗಿ ಮಾಡಲು ಬರುತ್ತಾರೆ. ಶಿಕ್ಷಕನೂ ಆಗಿದ್ದು ನಂತರ ಜೊತೆಯಲ್ಲಿಯೂ ಕರೆದೊಯ್ಯುತ್ತಾರೆ. ಆತ್ಮಗಳು ಅವಿನಾಶಿಯಾಗಿದ್ದಾರೆ, ಅವರು ತಮ್ಮ ಪಾತ್ರವನ್ನು ಪೂರ್ಣವಾಗಿ ಅಭಿನಯಿಸಿ ಮನೆಗೆ ಹೋಗುತ್ತಾರೆ. ಮನೆಗೆ ಕರೆದೊಯ್ಯುವ ಮಾರ್ಗದರ್ಶಕನೂ ಬೇಕಲ್ಲವೆ. ದುಃಖದಿಂದ ಬಿಡಿಸುವುದರ ಜೊತೆ ಮಾರ್ಗದರ್ಶಕನಾಗಿ ಎಲ್ಲರನ್ನೂ ಮನೆಗೆ ಕರೆದೊಯ್ಯುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1.ಕಲಿಯುಗೀ ಕುಲ ಲೋಕ ಮರ್ಯಾದೆಯನ್ನು ಬಿಟ್ಟು ಈಶ್ವರೀಯ ಕುಲ ಮರ್ಯಾದೆಯನ್ನು ಧಾರಣೆ ಮಾಡಬೇಕು. ಅಶರೀರ ತಂದೆಯು ಏನು ಹೇಳುತ್ತಾರೆ ಅದನ್ನು ಅಶರೀರಿಯಾಗಿ ಕೇಳುವಂತಹ ಅಭ್ಯಾಸ ಮಾಡಿಕೊಳ್ಳಬೇಕು.

2. ಬೇಹದ್ದಿನ ತಂದೆಯು - ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ಈ ಅಂತರವನ್ನು ಎಲ್ಲರಿಗೂ ತಿಳಿಸಬೇಕು. ಬೇಹದ್ದಿನ ತಂದೆಯು ಸರ್ವವ್ಯಾಪಿಯಲ್ಲ ಎಂದು ಸಿದ್ಧ ಮಾಡಬೇಕು.


ವರದಾನ:
ಲೌಕಿಕ ಅಲೌಕಿಕ ಜೀವನದಲ್ಲಿ ಸದಾ ನ್ಯಾರಾ ಆಗಿ ಪರಮಾತ್ಮನ ಜೊತೆಯ ಅನುಭವದ ಮೂಲಕ ನಷ್ಟಾಮೋಹ ಭವ.

ಸದಾ ನ್ಯಾರಾ ಇರುವ ನಿಶಾನಿಯಾಗಿದೆ ಪ್ರಭು ಪ್ರೀತಿಯ ಅನುಭೂತಿ ಮತ್ತು ಎಷ್ಟು ಪ್ರೀತಿಯಿರುವುದು ಅಷ್ಟು ಜೊತೆ ಇರುವಿರಿ, ಬೇರೆಯಾಗುವುದಿಲ್ಲ. ಪ್ರೀತಿ ಎಂದು ಅವರಿಗೆ ಹೇಳಲಾಗುವುದು ಯಾರು ಜೊತೆಯಲ್ಲಿರುತ್ತಾರೆ. ಯಾವಾಗ ತಂದೆ ಜೊತೆ ಇರುತ್ತಾರೆ ಆಗ ಎಲ್ಲಾ ಹೊರೆಯನ್ನು ತಂದೆಗೆ ಕೊಟ್ಟು ಖುದ್ದು ನೀವು ಹಗುರವಾಗಿ ಬಿಡಿ. ಇದೇ ವಿಧಿಯಾಗಿದೆ ನಷ್ಠಾಮೋಹಿಳಾಗುವುದು. ಆದರೆ ಪುರುಷಾರ್ಥದ ಸಬ್ಜೆಕ್ಟ್ನಲ್ಲಿ ಸದಾ ಶಬ್ದವನ್ನು ಅಂಡರ್ಲೈನ್ ಮಾಡಿ. ಲೌಕಿಕ ಮತ್ತು ಅಲೌಕಿಕ ಜೀವನದಲ್ಲಿ ಸದಾ ನ್ಯಾರೆ ಆಗಿರಿ ಆಗ ಸದಾ ಜೊತೆಯ ಅನುಭವವಾಗುವುದು.

ಸ್ಲೋಗನ್:
ವಿಕಾರ ರೂಪಿ ಸರ್ಪವನ್ನು ತಮ್ಮ ಶಯ್ಯೆಯನ್ನಾಗಿ ಮಾಡಿಕೊಂಡಾಗ ಸಹಜಯೋಗಿಗಳಾಗಿ ಬಿಡುವಿರಿ.