17.12.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ಪ್ರತಿನಿತ್ಯವೂ ಯಾವ ವಿದ್ಯೆಯನ್ನು ಓದಿಸುವರೋ ಅದನ್ನೆಂದೂ ತಪ್ಪಿಸಬಾರದು, ಈ ವಿದ್ಯೆಯಿಂದಲೇ
ಒಳಗಿನ ಸಂಶಯವು ದೂರವಾಗುತ್ತದೆ”
ಪ್ರಶ್ನೆ:
ತಂದೆಯ
ಹೃದಯವನ್ನು ಗೆಲ್ಲುವ ಯುಕ್ತಿಯೇನು?
ಉತ್ತರ:
ತಂದೆಯ ಹೃದಯವನ್ನು ಗೆಲ್ಲಬೇಕೆಂದರೆ ಎಲ್ಲಿಯವರೆಗೆ ಸಂಗಮಯುಗವಿರುವುದೋ ಅಲ್ಲಿಯವರೆಗೂ ತಂದೆಯಿಂದ
ಏನನ್ನೂ ಮುಚ್ಚಿಡಬೇಡಿ. ತಮ್ಮ ನಡವಳಿಕೆಯ ಮೇಲೆ ಸಂಪೂರ್ಣ ಗಮನ ಕೊಡಿ. ಒಂದುವೇಳೆ ಯಾವುದೇ ಪಾಪ
ಕರ್ಮವಾದರೆ ಅದನ್ನು ಅವಿನಾಶಿ ವೈದ್ಯನಿಗೆ ತಿಳಿಸಿ ಬಿಡಿ, ಆಗ ಹಗುರರಾಗುವಿರಿ. ತಂದೆಯು ಯಾವ
ಶಿಕ್ಷಣವನ್ನು ಕೊಡುವರೋ ಇದೇ ಅವರ ದಯೆ, ಕೃಪೆ ಅಥವಾ ಆಶೀರ್ವಾದವಾಗಿದೆ. ಆದ್ದರಿಂದ ತಂದೆಯಿಂದ ದಯೆ
ಅಥವಾ ಕೃಪೆಯನ್ನು ಬೇಡುವ ಬದಲು ಸ್ವಯಂನ ಮೇಲೆ ಕೃಪೆ ಮಾಡಿಕೊಳ್ಳಿ. ಇಂತಹ ಪುರುಷಾರ್ಥ ಮಾಡಿ ತಂದೆಯ
ಹೃದಯವನ್ನು ಗೆಲ್ಲಿರಿ.
ಓಂ ಶಾಂತಿ.
ಈಗ ಆತ್ಮೀಯ ಮಕ್ಕಳು ಇದನ್ನು ತಿಳಿದುಕೊಂಡಿದ್ದೀರಿ - ಹೊಸ ಪ್ರಪಂಚದಲ್ಲಿ ಸುಖವಿದೆ, ಹಳೆಯ
ಪ್ರಪಂಚದಲ್ಲಿ ದುಃಖವಿದೆ. ದುಃಖದಲ್ಲಿ ಎಲ್ಲರೂ ದುಃಖದಲ್ಲಿಯೇ ಬಂದು ಬಿಡುತ್ತಾರೆ ಮತ್ತು ಸುಖದಲ್ಲಿ
ಎಲ್ಲರೂ ಸುಖದಲ್ಲಿರುತ್ತಾರೆ. ಸುಖದ ಪ್ರಪಂಚದಲ್ಲಿ ದುಃಖದ ಹೆಸರು - ಗುರುತೂ ಇರುವುದಿಲ್ಲ ಮತ್ತು
ಎಲ್ಲಿ ದುಃಖವಿರುವುದೋ ಅಲ್ಲಿ ಸುಖದ ಹೆಸರು-ಗುರುತು ಇಲ್ಲ. ಎಲ್ಲಿ ಪಾಪವಿದೆಯೋ ಅಲ್ಲಿ ಪುಣ್ಯದ
ಹೆಸರು-ಗುರುತೂ ಇಲ್ಲ, ಎಲ್ಲಿ ಪುಣ್ಯವಿದೆಯೋ ಅಲ್ಲಿ ಪಾಪದ ಹೆಸರು-ಗುರುತೂ ಇಲ್ಲ. ಅದು ಯಾವ ಸ್ಥಾನ?
ಒಂದು ಸತ್ಯಯುಗ, ಇನ್ನೊಂದು ಕಲಿಯುಗ. ಇದಂತೂ ಮಕ್ಕಳ ಬುದ್ಧಿಯಲ್ಲಿ ಅವಶ್ಯವಾಗಿ ಇದ್ದೇ ಇರುತ್ತದೆ.
ಈಗ ದುಃಖದ ಸಮಯವು ಮುಕ್ತಾಯವಾಗುತ್ತದೆ ಮತ್ತು ಸತ್ಯಯುಗಕ್ಕಾಗಿ ತಯಾರಾಗುತ್ತಿದೆ. ನಾವೀಗ ಈ ಪತಿತ,
ಕೊಳಕು ಪ್ರಪಂಚದಿಂದ ದೂರ ಸತ್ಯಯುಗ ಅರ್ಥಾತ್ ರಾಮರಾಜ್ಯದಲ್ಲಿ ಹೋಗುತ್ತಿದ್ದೇವೆ. ಹೊಸ
ಪ್ರಪಂಚದಲ್ಲಿ ಸುಖವಿರುತ್ತದೆ, ಹಳೆಯ ಪ್ರಪಂಚದಲ್ಲಿ ದುಃಖವಿದೆ. ಯಾರು ಸುಖ ಕೊಡುವರೋ ಅವರೇ
ದುಃಖವನ್ನು ಕೊಡುತ್ತಾರೆಂದಲ್ಲ. ಸುಖವನ್ನು ತಂದೆಯು ಕೊಡುತ್ತಾರೆ, ದುಃಖವನ್ನು ಮಾಯಾ ರಾವಣನು
ಕೊಡುತ್ತಾನೆ. ಆದ್ದರಿಂದಲೇ ಆ ಶತ್ರುವಿನ ಪ್ರತಿಮೆ ಮಾಡಿ ಪ್ರತೀ ವರ್ಷವು ಸುಡುತ್ತಾರೆ. ಯಾವಾಗಲೂ
ದುಃಖ ಕೊಡುವವರನ್ನೇ ಸುಡಲಾಗುತ್ತದೆ. ಮಕ್ಕಳಿಗೆ ಗೊತ್ತಿದೆ, ಯಾವಾಗ ರಾವಣನ ರಾಜ್ಯವು
ಮುಕ್ತಾಯವಾಗುವುದೋ ಆಗ ಸದಾಕಾಲಕ್ಕಾಗಿ ರಾವಣನು ಸಮಾಪ್ತಿಯಾಗುತ್ತಾನೆ. ಪಂಚ ವಿಕಾರಗಳೇ ಎಲ್ಲರಿಗೆ
ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುತ್ತಾ ಬಂದಿವೆ. ನೀವಿಲ್ಲಿ ಕುಳಿತಿದ್ದೀರೆಂದರೆ ನಿಮ್ಮ
ಬುದ್ಧಿಯಲ್ಲಿ ಇದೇ ಇದೆ - ನಾವು ತಂದೆಯ ಬಳಿ ಹೋಗಬೇಕಾಗಿದೆ. ರಾವಣನನ್ನು ನೀವು ತಂದೆ ಎಂದು
ಹೇಳುವುದಿಲ್ಲ. ಎಂದಾದರೂ ಕೇಳಿದ್ದೀರಾ - ರಾವಣನನ್ನು ಪರಮಪಿತ ಪರಮಾತ್ಮನೆಂದು ಯಾರಾದರೂ
ಹೇಳುತ್ತಾರೆಯೇ? ಎಂದೂ ಇಲ್ಲ. ಲಂಕೆಯಲ್ಲಿ ರಾವಣನಿದ್ದನೆಂದು ಕೆಲವರು ಹೇಳುತ್ತಾರೆ. ತಂದೆಯು
ತಿಳಿಸುತ್ತಾರೆ - ಈ ಪೂರ್ಣ ಪ್ರಪಂಚವೇ ಲಂಕೆಯಾಗಿದೆ. ವಾಸ್ಕೋಡಿಗಾಮನು ಹಡಗಿನ ಮೂಲಕ ಅನ್ವೇಷಣೆ
ನಡೆಸಿದನೆಂದು ಹೇಳುತ್ತಾರೆ. ಯಾವ ಸಮಯದಲ್ಲಿ ವಾಸ್ಕೋಡಿಗಾಮನು ಕಂಡುಹಿಡಿಯಲು ಹೋದನೋ ಆ ಸಮಯದಲ್ಲಿ
ವಿಮಾನಗಳಿರಲಿಲ್ಲ. ರೈಲು ಸಹ ಕಲ್ಲಿದ್ದಲಿನಿಂದ ನಡೆಯುತ್ತಿತ್ತು. ವಿದ್ಯುತ್ ಬೇರೆ ವಸ್ತುವಾಗಿದೆ.
ಈಗ ತಂದೆಯು ತಿಳಿಸುತ್ತಾರೆ - ಪ್ರಪಂಚವು ಒಂದೇ ಆಗಿದೆ, ಅದು ಹೊಸದರಿಂದ ಹಳೆಯದು, ಹಳೆಯದರಿಂದ
ಹೊಸದಾಗುತ್ತದೆ. ಸ್ಥಾಪನೆ, ಪಾಲನೆ, ವಿನಾಶವೆಂದು ಹೇಳುವುದಿಲ್ಲ. ಮೊದಲು ಸ್ಥಾಪನೆ ನಂತರ ವಿನಾಶ,
ಅನಂತರ ಪಾಲನೆ - ಈ ಶಬ್ಧವು ಸರಿಯಾಗಿದೆ. ನಂತರದಲ್ಲಿ ರಾವಣನ ಪಾಲನೆಯು ಆರಂಭವಾಗುತ್ತದೆ, ಅದು
ಸುಳ್ಳು-ವಿಕಾರಿ, ಪತಿತರಾಗುವ ಪಾಲನೆಯಾಗಿದೆ ಅದರಿಂದ ಎಲ್ಲರೂ ದುಃಖಿಯಾಗುತ್ತಾರೆ. ತಂದೆಯಂತೂ ಎಂದೂ
ಯಾರಿಗೂ ದುಃಖವನ್ನು ಕೊಡುವುದಿಲ್ಲ. ಇಲ್ಲಂತೂ ತಮೋಪ್ರಧಾನರಾಗುವ ಕಾರಣ ತಂದೆಯನ್ನೇ ಸರ್ವವ್ಯಾಪಿ
ಎಂದು ಹೇಳಿ ಬಿಡುತ್ತಾರೆ. ನೋಡಿ ಏನಾಗಿ ಬಿಟ್ಟಿದ್ದಾರೆ! ಇದು ನೀವು ಮಕ್ಕಳಿಗೆ
ನಡೆಯುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿರಬೇಕು - ಇದು ಬಹಳ ಸಹಜ, ಕೇವಲ ತಂದೆಯ ಮಾತಾಗಿದೆ.
ಮುಸಲ್ಮಾನರೂ ಸಹ ಎದ್ದು ಅಲ್ಲಾಹ್ ನನ್ನು ನೆನಪು ಮಾಡುತ್ತಾರೆ. ಅವರೂ ಸಹ ಮುಂಜಾನೆಯೇಳುತ್ತಾರೆ,
ಅಲ್ಲಾಹ್ ಅಥವಾ ಖುದಾನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಅಲ್ಲಾಹ್ ತಂದೆಯನ್ನು ನೆನಪು ಮಾಡಿ
ಎಂದು ನೀವು ಹೇಳುತ್ತೀರಿ. ಬಾಬಾ ಶಬ್ಧವು ಎಷ್ಟು ಮಧುರವಾಗಿದೆ. ಅಲ್ಲಾಹ್ ಎಂದು ಹೇಳುವುದರಿಂದ
ಆಸ್ತಿಯ ನೆನಪು ಬರುವುದಿಲ್ಲ. ತಂದೆ ಎಂದು ಹೇಳುವುದರಿಂದ ಆಸ್ತಿಯ ನೆನಪು ಬಂದು ಬಿಡುತ್ತದೆ.
ಮುಸಲ್ಮಾನರು ತಂದೆ ಎಂದು ಹೇಳುವುದಿಲ್ಲ, ಅವರು ಅಲ್ಲಾಹ್-ಮಿಯಾ ಎಂದು ಹೇಳುತ್ತಾರೆ. ಮಿಯಾ-ಬೀಬಿ
ಎಂದು ಹೇಳುತ್ತಾರೆ. ಇವೆಲ್ಲಾ ಶಬ್ಧಗಳು ಭಾರತದಲ್ಲಿವೆ. ಪರಮಪಿತ ಪರಮಾತ್ಮ ಎಂದು ಹೇಳಿದ ತಕ್ಷಣವೇ
ಶಿವಲಿಂಗವು ನೆನಪಿಗೆ ಬಂದು ಬಿಡುತ್ತದೆ. ಯೂರೋಪಿಯನ್ನರು ಗಾಡ್ ಫಾದರ್ ಎಂದು ಹೇಳುತ್ತಾರೆ.
ಭಾರತದಲ್ಲಂತೂ ಕಲ್ಲು-ಮುಳ್ಳನ್ನೂ ಭಗವಂತನೆಂದು ತಿಳಿಯುತ್ತಾರೆ. ಶಿವಲಿಂಗವು ಕಲ್ಲಿನದಾಗಿರುತ್ತದೆ.
ಈ ಕಲ್ಲಿನಲ್ಲಿ ಭಗವಂತನು ಕುಳಿತಿದ್ದಾರೆಂದು ತಿಳಿಯುತ್ತಾರೆ. ಭಗವಂತನನ್ನು ನೆನಪು ಮಾಡಿದಾಗ ಆ
ಕಲ್ಲೇ ಸಮೀಪ ಬಂದು ಬಿಡುತ್ತದೆ. ಕಲ್ಲನ್ನು ಭಗವಂತನೆಂದು ತಿಳಿದು ಪೂಜಿಸುತ್ತಾರೆ. ಆ ಕಲ್ಲು
ಎಲ್ಲಿಂದ ಬರುತ್ತದೆ? ಪರ್ವತದ ಕಲ್ಲುಗಳು ಒಂದಕ್ಕೊಂದು ಉಜ್ಜಿ ಗೋಲಾಕಾರವಾಗಿರುತ್ತದೆ. ಮತ್ತೆ ಅದು
ಹೇಗೆ ಸ್ವಾಭಾವಿಕವೆನ್ನುವಂತೆ ತಯಾರಾಗಿ ಬಿಡುತ್ತದೆ. ದೇವಿ-ದೇವತೆಗಳ ಮೂರ್ತಿಗಳು ಈ
ರೀತಿಯಾಗುವುದಿಲ್ಲ. ಕಲ್ಲನ್ನು ಕೆತ್ತಿ-ಕೆತ್ತಿ ಕಿವಿ, ಮೂಗು, ಕಣ್ಣು, ಬಾಯಿ ಮುಂತಾದವುಗಳನ್ನು
ಬಹಳ ಸುಂದರವಾಗಿ ಮಾಡುತ್ತಾರೆ, ಬಹಳಷ್ಟು ಖರ್ಚು ಮಾಡುತ್ತಾರೆ. ಶಿವ ತಂದೆಯ ಮೂರ್ತಿಗೆ ಯಾವುದೇ
ಖರ್ಚಿನ ಮಾತಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವೇ ಚೈತನ್ಯದಲ್ಲಿ
ದೇವಿ-ದೇವತೆಗಳಾಗುತ್ತಿದ್ದೇವೆ. ಚೈತನ್ಯದಲ್ಲಿದ್ದಾಗ ಪೂಜೆಯು ನಡೆಯುವುದಿಲ್ಲ. ಯಾವಾಗ ಕಲ್ಲು
ಬುದ್ಧಿಯವರಾಗುವರೋ ಆಗ ಕಲ್ಲಿನ ಪೂಜೆಯಾಗುತ್ತದೆ. ಚೈತನ್ಯದಲ್ಲಿದ್ದಾಗ ಪೂಜ್ಯರಾಗಿರುತ್ತಾರೆ ನಂತರ
ಪೂಜಾರಿಗಳಾಗಿ ಬಿಡುತ್ತಾರೆ. ಅಲ್ಲಿ ಪೂಜಾರಿಗಳೂ ಇರುವುದಿಲ್ಲ, ಯಾವುದೇ ಕಲ್ಲಿನ ಮೂರ್ತಿಯೂ
ಇರುವುದಿಲ್ಲ. ಅಲ್ಲಿ ಅದರ ಅವಶ್ಯಕತೆಯೇ ಇಲ್ಲ. ಯಾರು ಚೈತನ್ಯದಲ್ಲಿದ್ದರೋ ಅವರ ನೆನಪಾರ್ಥವಾಗಿ
ಕಲ್ಲುಗಳ ಮೂರ್ತಿಗಳನ್ನು ಮಾಡುತ್ತಾರೆ. ಈಗ ಈ ದೇವತೆಗಳ ಕಥೆಯು ನಿಮಗೆ ತಿಳಿದಿದೆ - ಈ ದೇವತೆಗಳ
ಜೀವನ ಕಥೆಯೇನಾಗಿತ್ತು? ಅದೇ ಮತ್ತೆ ಪುನರಾವರ್ತನೆಯಾಗುತ್ತದೆ. ಮೊದಲು ಈ ಜ್ಞಾನ ನೇತ್ರವಿರಲಿಲ್ಲ,
ಆಗ ಕಲ್ಲು ಬುದ್ಧಿಯವರಾಗಿದ್ದಿರಿ. ಈಗ ತಂದೆಯ ಮೂಲಕ ಯಾವ ಜ್ಞಾನವು ಸಿಕ್ಕಿದೆಯೋ ಇದು ಒಂದೇ ಆಗಿದೆ
ಆದರೆ ಅದನ್ನು ತೆಗೆದುಕೊಳ್ಳುವವರಲ್ಲಿ ನಂಬರ್ವಾರ್ ಇದ್ದಾರೆ.
ನಿಮ್ಮ ರುದ್ರ ಮಾಲೆಯೂ ಸಹ ಈ ಧಾರಣೆಯನುಸಾರವೇ ತಯಾರಾಗುತ್ತದೆ. ಒಂದು ರುದ್ರ ಮಾಲೆ, ಮತ್ತೊಂದು
ರುಂಡ ಮಾಲೆಯಾಗಿದೆ. ಒಂದು ಸಹೋದರರ ಮಾಲೆ, ಇನ್ನೊಂದು ಸಹೋದರ-ಸಹೋದರಿಯರ ಮಾಲೆ. ಬುದ್ಧಿಯಲ್ಲಿ
ಬರುತ್ತದೆ - ನಾವಾತ್ಮಗಳು ಬಹಳ ಚಿಕ್ಕ-ಚಿಕ್ಕ ಬಿಂದು ರೂಪದಲ್ಲಿದೇವೆ. ಗಾಯನವೂ ಇದೆ - ಭೃಕುಟಿಯ
ಮಧ್ಯದಲ್ಲಿ ಹೊಳೆಯುವಂತಹ ನಕ್ಷತ್ರ ಎಂದು. ಈಗ ನೀವು ತಿಳಿದುಕೊಂಡಿದ್ದೀರಿ - ನಾವಾತ್ಮಗಳು
ಚೈತನ್ಯವಾಗಿದ್ದೇವೆ, ಒಂದು ಸೂಕ್ಷ್ಮ ನಕ್ಷತ್ರದ ಸಮಾನರಾಗಿದ್ದೇವೆ ನಂತರ ಯಾವಾಗ ಗರ್ಭದಲ್ಲಿ
ಬಂದಾಗ ಮೊದಲು ಬಹಳ ಚಿಕ್ಕ ಪಿಂಡವಾಗಿರುತ್ತದೆ ನಂತರ ಎಷ್ಟೊಂದು ದೊಡ್ಡದಾಗಿ ಬಿಡುತ್ತದೆ. ಅದೇ
ಆತ್ಮವು ತನ್ನ ಶರೀರದ ಮೂಲಕ ಅವಿನಾಶಿ ಪಾತ್ರವನ್ನಭಿನಯಿಸುತ್ತಾ ಇರುತ್ತದೆ. ನಂತರ ಈ ಶರೀರವನ್ನೇ
ಎಲ್ಲರೂ ನೆನಪು ಮಾಡಲು ತೊಡಗುತ್ತಾರೆ. ಈ ಶರೀರವೇ ಒಳ್ಳೆಯದು-ಕೆಟ್ಟದ್ದಾಗುವ ಕಾರಣ ಎಲ್ಲರನ್ನೂ
ಆಕರ್ಷಣೆ ಮಾಡುತ್ತದೆ. ಸತ್ಯಯುಗದಲ್ಲಿ ಆತ್ಮಾಭಿಮಾನಿಯಾಗಿ, ತನ್ನನ್ನು ಆತ್ಮವೆಂದು ತಿಳಿಯಿರಿ ಎಂದು
ಹೇಳುವುದಿಲ್ಲ. ಈ ಜ್ಞಾನವು ನಿಮಗೆ ಇಲ್ಲಿಯೇ ಸಿಗುತ್ತದೆ ಏಕೆಂದರೆ ನಿಮಗೆ ತಿಳಿದಿದೆ - ಈಗ ಆತ್ಮವು
ಪತಿತವಾಗಿ ಬಿಟ್ಟಿದೆ. ಪತಿತನಾಗುವ ಕಾರಣ ಯಾವುದೇ ಕಾರ್ಯವನ್ನು ಮಾಡಿದರೂ ಅದೆಲ್ಲವೂ ವಿರುದ್ಧವಾಗಿ
ಬಿಡುತ್ತದೆ. ತಂದೆಯು ಸರಿಯಾದ ಕರ್ತವ್ಯವನ್ನು ಕಲಿಸುತ್ತಾರೆ, ಮಾಯೆಯು ವಿರುದ್ಧ ಕೆಲಸವನ್ನು
ಮಾಡಿಸುತ್ತದೆ. ಎಲ್ಲದಕ್ಕಿಂತ ವಿರುದ್ಧವಾದ ಕೆಲಸವೆಂದರೆ ತಂದೆಯನ್ನು ಸರ್ವವ್ಯಾಪಿ ಎಂದು
ಹೇಳುವುದಾಗಿದೆ. ಆತ್ಮವು ಯಾವ ಪಾತ್ರವನ್ನಭಿನಯಿಸುತ್ತದೆಯೋ ಅದು ಅವಿನಾಶಿಯಾದುದು, ಅದನ್ನು ಸುಡಲು
ಸಾಧ್ಯವಿಲ್ಲ, ಅದರ ಪೂಜೆ ಮಾಡಲಾಗುತ್ತದೆ. ಶರೀರವನ್ನು ಸುಡಲಾಗುತ್ತದೆ. ಆತ್ಮವು ಶರೀರ ಬಿಟ್ಟಾಗ ಆ
ಶರೀರವನ್ನು ಸುಡುತ್ತಾರೆ. ಆತ್ಮವು ಹೋಗಿ ಇನ್ನೊಂದು ಶರೀರದಲ್ಲಿ ಪ್ರವೇಶ ಮಾಡುತ್ತದೆ.
ಆತ್ಮವಿಲ್ಲದೆ ಶರೀರವನ್ನು 2-4 ದಿನಗಳೂ ಸಹ ಇಡಲು ಸಾಧ್ಯವಿಲ್ಲ. ಕೆಲವರಂತೂ ಆ ಶರೀರಕ್ಕೆ
ಔಷಧಿಗಳನ್ನು ಹಚ್ಚಿ ಇಟ್ಟುಕೊಳ್ಳುತ್ತಾರೆ ಆದರೆ ಅದರಿಂದ ಪ್ರಯೋಜನವೇನು? ಕ್ರಿಶ್ಚಿಯನ್ನರಲ್ಲಿ
ಒಬ್ಬರು ಸೇಂಟ್ ಜೆವಿಯರ್ ಇದ್ದಾರೆ. ಅವರ ಶರೀರವನ್ನು ಈಗಲೂ ಸಹ ಇಡಲಾಗಿದೆ ಎಂದು ಹೇಳುತ್ತಾರೆ.
ಅದಕ್ಕೆ ಹೇಗೆ ಮಂದಿರವನ್ನೂ ಕಟ್ಟಿದ್ದಾರೆ. ಯಾರಿಗೂ ತೋರಿಸುವುದಿಲ್ಲ, ಕೇವಲ ಅವರ ಕಾಲನ್ನು
ತೋರಿಸುತ್ತಾರೆ. ಯಾರಾದರೂ ಅವರ ಪಾದಗಳಿಗೆ ನಮಸ್ಕಾರ ಮಾಡುವರೋ ಅವರಿಗೆ ರೋಗ ನಿವಾರಣೆಯಾಗುತ್ತದೆ
ಎಂದು ಹೇಳುತ್ತಾರೆ. ಪಾದಗಳಿಗೆ ನಮಸ್ಕರಿಸುವುದರಿಂದ ಖಾಯಿಲೆಯಿಂದ ಮುಕ್ತರಾಗುತ್ತಾರೆಂದರೆ ಇದು
ಅವರ ಕೃಪೆಯೆಂದು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ - ಇದು ಭಾವನೆಯ ಫಲವಾಗಿ ಸಿಗುತ್ತದೆ,
ನಿಶ್ಚಯ ಬುದ್ಧಿಯವರಾಗಿ ಮಾಡುವ ಕಾರಣ ಅಲ್ಪ ಸ್ವಲ್ಪ ಫಲವು ಸಿಗುತ್ತದೆ. ಬಾಕಿ ಈ ರೀತಿ
ತಿಳಿದುಕೊಂಡು ಅಲ್ಲಿ ಅನೇಕರು ಹೋದರೆ ಅಲ್ಲಿ ಮೇಳವಾಗಿ ಬಿಡುತ್ತದೆ. ತಂದೆಯೇ ಇಲ್ಲಿ
ಬಂದಿದ್ದಾರೆಂದರೂ ಸಹ ಇಷ್ಟೊಂದು ಜನ ಬರುವುದಿಲ್ಲ. ಅವರು ಬಂದರೂ ಸಹ ಇಲ್ಲಿ ಸ್ಥಾನವೂ ಇಲ್ಲ.
ಯಾವಾಗ ಅನೇಕಾನೇಕರು ಬರುವ ಸಮಯವು ಬರುತ್ತದೆಯೋ ಆಗ ವಿನಾಶವಾಗಿ ಬಿಡುತ್ತದೆ. ಇದೂ ಸಹ ನಾಟಕದಲ್ಲಿ
ಮಾಡಲ್ಪಟ್ಟಿದೆ. ಇದಕ್ಕೆ ಆದಿ ಅಥವಾ ಅಂತ್ಯವಿಲ್ಲ. ಹಾ! ವೃಕ್ಷದ ಜಡಜಡೀಭೂತ ಸ್ಥಿತಿಯಾಗುತ್ತದೆ
ಅರ್ಥಾತ್ ತಮೋಪ್ರಧಾನವಾದಾಗ ಈ ವೃಕ್ಷವು ಪರಿವರ್ತನೆಯಾಗುತ್ತದೆ. ಇದು ಬೇಹದ್ದಿನ ದೊಡ್ಡ
ವೃಕ್ಷವಾಗಿದೆ. ಯಾರು ಮೊದಲ ನಂಬರಿನಲ್ಲಿ ಹೋಗಬೇಕಾಗಿದೆಯೋ ಅವರೇ ಮೊದಲಿಗೆ ಬರುತ್ತಾರೆ.
ಕ್ರಮೇಣವಾಗಿ ಬರುತ್ತಾರಲ್ಲವೆ! ಸೂರ್ಯವಂಶಿಗಳೆಲ್ಲರೂ ಒಟ್ಟಿಗೆ ಬರುವುದಿಲ್ಲ ಹಾಗೆಯೇ
ಚಂದ್ರವಂಶಿಗಳೆಲ್ಲರೂ ಒಟ್ಟಿಗೆ ಬರುವುದಿಲ್ಲ. ಕ್ರಮೇಣವಾಗಿ ಮಾಲೆಯನುಸಾರವೇ ಬರುತ್ತಾರೆ.
ಪಾತ್ರಧಾರಿಗಳೆಲ್ಲರೂ ಒಟ್ಟಿಗೆ ಹೇಗೆ ಬರುತ್ತಾರೆ. ಹಾಗೆ ಬಂದರೆ ಆಟವೇ ಕೆಟ್ಟು ಹೋಗುತ್ತದೆ. ಈ
ಆಟವು ಬಹಳ ನಿಖರವಾಗಿ ಮಾಡಲ್ಪಟ್ಟಿದೆ. ಇದರಲ್ಲಿ ಏನೂ ಬದಲಾಗಲು ಸಾಧ್ಯವಿಲ್ಲ.
ಮಧುರಾತಿ ಮಧುರ ಮಕ್ಕಳು ಇಲ್ಲಿ ಕುಳಿತುಕೊಂಡಾಗ ಬುದ್ಧಿಯಲ್ಲಿ ಇದೇ ನೆನಪಿರಬೇಕು. ಅನ್ಯ
ಸತ್ಸಂಗಗಳಲ್ಲಿ ಬೇರೆ-ಬೇರೆ ಮಾತುಗಳು ಬುದ್ಧಿಯಲ್ಲಿ ಬರುತ್ತವೆ. ಇಲ್ಲಂತೂ ಇದೊಂದೇ ವಿದ್ಯೆಯಾಗಿದೆ.
ಇದರಿಂದ ನಿಮ್ಮ ಸಂಪಾದನೆಯಾಗುತ್ತದೆ. ಆ ಶಾಸ್ತ್ರಗಳನ್ನು ಓದುವುದರಿಂದ ಸಂಪಾದನೆಯಾಗುವುದಿಲ್ಲ.
ಹಾ! ಒಂದಲ್ಲ ಒಂದು ಒಳ್ಳೆಯ ಗುಣಗಳಿರುತ್ತವೆ. ಗ್ರಂಥವನ್ನು ಓದಲು ಕುಳಿತುಕೊಳ್ಳುತ್ತಾರೆಂದರೆ
ಎಲ್ಲರೂ ನಿರ್ವಿಕಾರಿಗಳಾಗಿರುತ್ತಾರೆ ಎಂದಲ್ಲ. ತಂದೆಯು ತಿಳಿಸುತ್ತಾರೆ - ಈ ಪ್ರಪಂಚದಲ್ಲಿ ಎಲ್ಲರೂ
ಭ್ರಷ್ಟಾಚಾರದಿಂದಲೇ ಜನ್ಮ ಪಡೆಯುತ್ತಾರೆ. ನೀವು ಮಕ್ಕಳನ್ನು ಯಾರಾದರೂ ಅಲ್ಲಿ (ಸತ್ಯಯುಗ) ಹೇಗೆ
ಜನ್ಮವಾಗುವುದೆಂದು ಕೇಳಿದರೆ ತಿಳಿಸಿ, ಅಲ್ಲಂತೂ ಪಂಚ ವಿಕಾರಗಳೇ ಇರುವುದಿಲ್ಲ, ಯೋಗಬಲದಿಂದ ಮಕ್ಕಳು
ಜನ್ಮ ಪಡೆಯುತ್ತಾರೆ. ಮಗುವು ಜನಿಸಲಿದೆ ಎಂದು ಮೊದಲೇ ಸಾಕ್ಷಾತ್ಕಾರವಾಗುತ್ತದೆ. ಅಲ್ಲಿ ವಿಕಾರದ
ಮಾತೇ ಇಲ್ಲ. ಇಲ್ಲಂತೂ ಮಕ್ಕಳನ್ನೂ ಸಹ ಮಾಯೆಯು ಬೀಳಿಸುತ್ತದೆ. ಕೆಲವರಂತೂ ತಂದೆಗೆ ಬಂದು
ತಿಳಿಸುತ್ತಾರೆ, ತಿಳಿಸದಿದ್ದರೆ ನೂರರಷ್ಟು ಶಿಕ್ಷೆಯಾಗುತ್ತದೆ. ತಂದೆಯು ಎಲ್ಲಾ ಮಕ್ಕಳಿಗೆ
ತಿಳಿಸುತ್ತಾರೆ - ಯಾವುದೇ ಪಾಪ ಕರ್ಮವಾದರೆ ಅದನ್ನು ತಕ್ಷಣ ತಂದೆಗೆ ತಿಳಿಸಬೇಕು. ತಂದೆಯು ಅವಿನಾಶಿ
ವೈದ್ಯನಾಗಿದ್ದಾರೆ, ವೈದ್ಯನಿಗೆ ತಿಳಿಸುವುದರಿಂದ ನೀವು ಹಗುರರಾಗುತ್ತೀರಿ. ಎಲ್ಲಿಯವರೆಗೆ
ಸಂಗಮಯುಗವಿರುವುದೋ ಅಲ್ಲಿಯವರೆಗೆ ತಂದೆಯಿಂದ ಏನನ್ನೂ ಮುಚ್ಚಿಡಬಾರದು. ಯಾರಾದರೂ
ಮುಚ್ಚಿಡುತ್ತಾರೆಂದರೆ ಅವರು ತಂದೆಯ ಹೃದಯವನ್ನು ಗೆಲ್ಲಲು ಸಾಧ್ಯವಿಲ್ಲ. ಎಲ್ಲವೂ ಪುರುಷಾರ್ಥದ
ಮೇಲೆ ಆಧಾರಿತವಾಗಿದೆ. ಶಾಲೆಗೆ ಬರುವುದೇ ಇಲ್ಲವೆಂದರೆ ನಡವಳಿಕೆಯು ಹೇಗೆ ಸುಧಾರಣೆಯಾಗುತ್ತದೆ? ಈ
ಸಮಯದಲ್ಲಿ ಎಲ್ಲರ ನಡವಳಿಕೆಯು ಹಾಳಾಗಿದೆ. ವಿಕಾರವೇ ಮೊಟ್ಟ ಮೊದಲನೆಯ ಕೆಟ್ಟ ನಡವಳಿಕೆಯಾಗಿದೆ.
ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕಾಮ ವಿಕಾರವು ನಿಮ್ಮ ಮಹಾ ಶತ್ರುವಾಗಿದೆ. ಮೊದಲೂ
ಸಹ ಈ ಗೀತೆಯ ಜ್ಞಾನವನ್ನು ಕೇಳಿದಾಗ ಇವೆಲ್ಲಾ ಮಾತುಗಳು ಅರ್ಥವಾಗುತ್ತಿರಲಿಲ್ಲ. ಈಗ ತಂದೆಯೇ
ನೇರವಾಗಿ ಗೀತೆಯನ್ನು ತಿಳಿಸುತ್ತಾರೆ. ಈಗಲೂ ಸಹ ತಂದೆಯು ನೀವು ಮಕ್ಕಳಿಗೆ ದಿವ್ಯ ಬುದ್ಧಿಯನ್ನು
ನೀಡಿದ್ದಾರೆ. ಆದ್ದರಿಂದ ಭಕ್ತಿಯ ಹೆಸರನ್ನು ಕೇಳಿದಾಗ ಏನೇನು ಮಾಡುತ್ತಿದ್ದರೆಂದು ನಗು ಬರುತ್ತದೆ.
ಈಗಂತೂ ತಂದೆಯು ಶಿಕ್ಷಣವನ್ನು ಕೊಡುತ್ತಾರೆ. ಇದರಲ್ಲಿ ದಯೆ, ಕೃಪೆ ಅಥವಾ ಆಶೀರ್ವಾದದ ಮಾತಿಲ್ಲ.
ತಮಗೆ ತಾವೇ ದಯೆ, ಕೃಪೆ ಅಥವಾ ಆಶೀರ್ವಾದ ಮಾಡಿಕೊಳ್ಳಬೇಕು. ತಂದೆಯಂತೂ ಪ್ರತಿಯೊಬ್ಬ ಮಗುವಿನಿಂದ
ಪುರುಷಾರ್ಥ ಮಾಡಿಸುತ್ತಾರೆ. ಕೆಲವರಂತೂ ಪುರುಷಾರ್ಥ ಮಾಡಿ ತಂದೆಯ ಹೃದಯವನ್ನು ಗೆಲ್ಲುತ್ತಾರೆ,
ಇನ್ನೂ ಕೆಲವರು ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಸತ್ತು ಹೋಗುತ್ತಾರೆ (ಜ್ಞಾನವನ್ನು ಬಿಟ್ಟು
ಹೋಗುತ್ತಾರೆ) ತಂದೆಯಂತೂ ಪ್ರತಿಯೊಬ್ಬ ಮಗುವಿಗೆ ಒಂದೇ ಸಮನಾಗಿ ಓದಿಸುತ್ತಾರೆ ಮತ್ತು ಕೆಲವೊಂದು
ಸಮಯದಲ್ಲಿ ಇಂತಹ ಗುಹ್ಯ ಮಾತುಗಳನ್ನು ತಿಳಿಸುತ್ತಾರೆ. ಅದರಿಂದ ಹಳೆಯ ಸಂಶಯವೆಲ್ಲವೂ ಹಾರಿ
ಹೋಗುತ್ತದೆ, ಆಗ ಮತ್ತೆ ಎದ್ದು ನಿಲ್ಲುತ್ತಾರೆ. ಆದ್ದರಿಂದ ತಂದೆಯ ವಿದ್ಯೆಯನ್ನು ಎಂದೂ
ತಪ್ಪಿಸಬಾರದು. ಮುಖ್ಯವಾದುದು ತಂದೆಯ ನೆನಪಾಗಿದೆ. ದೈವೀ ಗುಣಗಳನ್ನೂ ಸಹ ಧಾರಣೆ ಮಾಡಬೇಕಾಗಿದೆ.
ಯಾರೇನಾದರೂ ಕೆಟ್ಟ ಮಾತುಗಳನ್ನು ಮಾತನಾಡಿದರೆ ಕೇಳಿಯೂ ಕೇಳದಂತಿರಬೇಕು. ಕೆಟ್ಟದ್ದನ್ನು ಕೇಳಬೇಡಿ.......
ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ಮಾನ-ಅಪಮಾನ, ಸುಖ-ದುಃಖ, ಸೋಲು-ಗೆಲುವು ಎಲ್ಲವನ್ನೂ ಖಂಡಿತ
ಸಹನೆ ಮಾಡಬೇಕಾಗಿದೆ. ತಂದೆಯು ಎಷ್ಟೊಂದು ಯುಕ್ತಿಗಳನ್ನು ತಿಳಿಸುತ್ತಾರೆ! ಆದರೂ ಸಹ ಮಕ್ಕಳು
ತಂದೆಯು ಹೇಳಿದ್ದನ್ನು ಕೇಳಿ ಬಿಟ್ಟು ಬಿಡುತ್ತಾರೆಂದರೆ ಅವರು ಯಾವ ಪದವಿಯನ್ನು ಪಡೆಯಬಹುದು?
ತಂದೆಯು ತಿಳಿಸುತ್ತಾರೆ - ಎಲ್ಲಿಯವರೆಗೆ ಅಶರೀರಿಯಾಗುವುದಿಲ್ಲವೋ ಅಲ್ಲಿಯವರೆಗೆ ಮಾಯೆಯಿಂದ
ಒಂದಲ್ಲ ಒಂದು ಪೆಟ್ಟು ಬೀಳುತ್ತಿರುತ್ತದೆ. ತಂದೆಯು ಹೇಳಿದಂತೆ ಪಾಲಿಸದಿದ್ದರೆ ತಂದೆಗೆ ಅಗೌರವ
ನೀಡುತ್ತೀರಿ. ಆದರೂ ಸಹ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸದಾ ಅಮರರಾಗಿರಿ ಮತ್ತು ತಂದೆಯನ್ನು
ನೆನಪು ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಿರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಾರಾದರೂ
ಉಲ್ಟಾ-ಸುಲ್ಟಾ ಮಾತುಗಳನ್ನಾಡಿದರೆ ಅದನ್ನು ಕೇಳಿಯೂ ಕೇಳದಂತಿರಬೇಕು. ಕೆಟ್ಟದ್ದನ್ನು ಕೇಳಬೇಡಿ......
ಸುಖ-ದುಃಖ, ಮಾನ-ಅಪಮಾನ ಎಲ್ಲವನ್ನೂ ಸಹನೆ ಮಾಡಬೇಕಾಗಿದೆ.
2. ತಂದೆಯು ಏನನ್ನು ತಿಳಿಸುವರೋ ಅದನ್ನು ಕೇಳಿಯೂ ಕೇಳದಂತೆ ತಂದೆಗೆ ಅಗೌರವ ಮಾಡಬಾರದು. ಮಾಯೆಯ
ಏಟಿನಿಂದ ಪಾರಾಗಲು ಅಶರೀರಿಯಾಗುವ ಅಭ್ಯಾಸವನ್ನು ಅವಶ್ಯವಾಗಿ ಮಾಡಬೇಕಾಗಿದೆ.
ವರದಾನ:
ಹದ್ಧಿನ ರಾಯಲ್
ಇಚ್ಛೆಗಳಿಂದ ಮುಕ್ತವಾಗಿರುತ್ತಾ ಸೇವೆ ಮಾಡುವಂತಹ ನಿಸ್ವಾರ್ಥ ಸೇವಾಧಾರಿ ಭವ.
ಹೇಗೆ ಬ್ರಹ್ಮಾ ತಂದೆ
ಕರ್ಮದ ಬಂಧನಗಳಿಂದ ಮುಕ್ತ, ನ್ಯಾರಾ ಆಗುವಂತಹ ಸಾಕ್ಷಿ ಕೊಟ್ಟರು. ಸೇವೆಯ ಸ್ನೇಹವಲ್ಲದೆ ಬೇರೆ
ಯಾವುದೇ ಬಂಧನ ಇಲ್ಲ. ಸೇವೆಯಲ್ಲಿ ಏನು ಹದ್ಧಿನ ರಾಯಲ್ ಇಚ್ಛೆಗಳು ಇರುತ್ತವೆ, ಅವೂ ಸಹ
ಲೆಕ್ಕಾಚಾರದಲ್ಲಿ ಬಂಧಿತವಾಗಿದೆ, ಸತ್ಯ ಸೇವಾಧಾರಿ ಈ ಲೆಕ್ಕಾಚಾರಗಳಿಂದಲೂ ಸಹ ಮುಕ್ತರಾಗಿರುತ್ತಾರೆ.
ಹೇಗೆ ದೇಹದ ಬಂಧನ, ದೇಹದ ಸಂಬಂಧದ ಬಂದನವಾಗಿದೆ, ಇಂತಹ ಸೇವೆಯಲ್ಲಿ ಸ್ವಾರ್ಥ - ಇದೂ ಸಹ
ಬಂಧನವಾಗಿದೆ. ಈ ಬಂಧನದಿಂದ ಹಾಗೂ ರಾಯಲ್ ಲೆಕ್ಕಾಚಾರದಿಂದಲೂ ಸಹ ಮುಕ್ತ ನಿಸ್ವಾರ್ಥ
ಸೇವಾಧಾರಿಗಳಾಗಿ.
ಸ್ಲೋಗನ್:
ವಾಯಿದೆಗಳನ್ನು ಫೈಲ್
ನಲ್ಲಿ ಇಟ್ಟುಕೊಳ್ಳಬೇಡಿ, ಫೈನಲ್ ಮಾಡಿ ತೋರಿಸಿ.