17.07.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು, ಒಳಗೆ ಜ್ಞಾನದ ಸ್ಮರಣೆ ಮಾಡುತ್ತಾ ಇರಿ ಆಗ
ನಿದ್ರಾಜೀತರಾಗುತ್ತೀರಿ, ಆಕಳಿಕೆ ಇತ್ಯಾದಿ ಬರುವುದಿಲ್ಲ”
ಪ್ರಶ್ನೆ:
ನೀವು ಮಕ್ಕಳು
ತಂದೆಗೆ ಏಕೆ ಬಲಿಹಾರಿಯಾಗಿದ್ದೀರಿ? ಬಲಿಹಾರಿಯಾಗುವ ಅರ್ಥವೇನಾಗಿದೆ?
ಉತ್ತರ:
ಬಲಿಹಾರಿಯಾಗುವುದು ಎಂದರೆ ತಂದೆಯ ನೆನಪಿನಲ್ಲಿ ಸಮಾವೇಶವಾಗಿ ಬಿಡುವುದು. ಯಾವಾಗ ತಂದೆಯ
ನೆನಪಿನಲ್ಲಿ ಸಮಾವೇಶವಾಗಿ ಬಿಡುತ್ತೀರೋ ಆಗ ಆತ್ಮರೂಪಿ ಬ್ಯಾಟರಿಯು ಚಾರ್ಜ್ ಆಗುತ್ತಾ ಹೋಗುತ್ತದೆ.
ಆತ್ಮರೂಪಿ ಬ್ಯಾಟರಿಯು ನಿರಾಕಾರ ತಂದೆಯೊಂದಿಗೆ ಜೋಡಿಸಲ್ಪಟ್ಟಾಗ ಬ್ಯಾಟರಿಯು ಚಾರ್ಜ್ ಆಗಿ
ಬಿಡುತ್ತದೆ. ವಿಕರ್ಮಗಳು ವಿನಾಶವಾಗುತ್ತವೆ. ಸಂಪಾದನೆಯು ಜಮಾ ಆಗುತ್ತದೆ.
ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸಿ ಕೊಡುತ್ತಾರೆ. ಈಗ ಇಲ್ಲಿ ನೀವು ಶರೀರದ ಜೊತೆ
ಕುಳಿತಿದ್ದೀರಿ. ನಿಮಗೆ ಗೊತ್ತಿದೆ, ಮೃತ್ಯುಲೋಕದಲ್ಲಿ ಇದು ಅಂತಿಮ ಶರೀರವಾಗಿದೆ, ನಂತರ ಏನಾಗುವುದು?
ತಂದೆಯ ಜೊತೆ ಶಾಂತಿಧಾಮದಲ್ಲಿ ಒಟ್ಟಿಗೆ ಇರುತ್ತೀರಿ. ಈ ಶರೀರವಿರುವುದಿಲ್ಲ. ನಂತರ ಸ್ವರ್ಗದಲ್ಲಿ
ಬಂದಾಗ ನಂಬರ್ವಾರ್ ಪುರುಷಾರ್ಥದನುಸಾರ ಬರುತ್ತೀರಿ, ಎಲ್ಲರೂ ಒಟ್ಟಿಗೆ ಬರುವುದಿಲ್ಲ. ರಾಜಧಾನಿಯು
ಸ್ಥಾಪನೆಯಾಗುತ್ತಿದೆ ಇದೆ, ಹೇಗೆ ತಂದೆಯು ಶಾಂತಿ, ಸುಖದ ಸಾಗರನಾಗಿದ್ದಾರೆ, ಮಕ್ಕಳನ್ನೂ ಸಹ ಇಂತಹ
ಸುಖ-ಶಾಂತಿಯ ಸಾಗರರನ್ನಾಗಿ ಮಾಡುತ್ತಿದ್ದಾರೆ. ಇದರ ನಂತರ ಹೋಗಿ ಶಾಂತಿಧಾಮದಲ್ಲಿ
ವಿರಾಜಮಾನವಾಗಬೇಕಾಗಿದೆ ಆದ್ದರಿಂದ ತಂದೆಯನ್ನು ಮತ್ತು ಮನೆಯನ್ನು, ಸುಖಧಾಮವನ್ನು ನೆನಪು
ಮಾಡಬೇಕಾಗಿದೆ. ಇಲ್ಲಿ ನೀವು ಎಷ್ಟೆಷ್ಟು ಈ ಸ್ಥಿತಿಯಲ್ಲಿ ಕುಳಿತುಕೊಳ್ಳುತ್ತೀರೋ ನಿಮ್ಮ
ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗುತ್ತವೆ, ಇದಕ್ಕೆ ಯೋಗಾಗ್ನಿಯೆಂದು ಹೇಳಲಾಗುತ್ತದೆ.
ಸನ್ಯಾಸಿಗಳು ಸರ್ವಶಕ್ತಿವಂತನೊಂದಿಗೆ ಯೋಗವನ್ನಿಡುವುದಿಲ್ಲ, ಅವರು ಕೇವಲ ಇರುವ ಸ್ಥಾನವಾದ
ಬ್ರಹ್ಮತತ್ವದೊಂದಿಗೆ ಯೋಗವನ್ನಿಡುತ್ತಾರೆ. ಅವರು ತತ್ವಯೋಗಿಗಳು ಬಹ್ಮ್(ಅಥವಾ) ತತ್ವದೊಂದಿಗೆ
ಯೋಗವನ್ನಿಡುವವರಾಗಿದ್ದಾರೆ. ಇಲ್ಲಿ ಜೀವಾತ್ಮರ ಆಟವು ನಡೆಯುತ್ತದೆ, ಅಲ್ಲಿ ಮಧುರ ಮನೆಯಲ್ಲಿ ಕೇವಲ
ಆತ್ಮಗಳೇ ಇರುತ್ತಾರೆ. ಆ ಮಧುರ ಮನೆಯಲ್ಲಿ ಹೋಗುವುದಕ್ಕಾಗಿ ಇಡೀ ಪ್ರಪಂಚದವರು ಪುರುಷಾರ್ಥ
ಮಾಡುತ್ತಾರೆ. ಸನ್ಯಾಸಿಗಳೂ ಸಹ ನಾವು ಬಹ್ಮ್ ತತ್ವದಲ್ಲಿ ಲೀನವಾಗಿ ಬಿಡಬೇಕೆಂದು ಹೇಳುತ್ತಾರೆ ಆದರೆ
ನಾವು ಬಹ್ಮ್ ತತ್ವದಲ್ಲಿ ಹೋಗಿ ನಿವಾಸ ಮಾಡಬೇಕೆಂದು ಹೇಳುವುದಿಲ್ಲ. ಇದನ್ನಂತೂ ಈಗ ಮಕ್ಕಳು
ಅರಿತುಕೊಂಡಿದ್ದೀರಿ. ಭಕ್ತಿಮಾರ್ಗದಲ್ಲಿ ಎಷ್ಟೊಂದು ವಿಸ್ತಾರವಾದ ಮಾತುಗಳನ್ನು ಕೇಳುತ್ತಿರುತ್ತಾರೆ.
ಇಲ್ಲಂತೂ ತಂದೆಯು ಬಂದು ಕೇವಲ ಎರಡು ಶಬ್ಧಗಳನ್ನೇ ತಿಳಿಸುತ್ತಾರೆ. ಹೇಗೆ ಮಂತ್ರವನ್ನು
ಜಪಿಸುತ್ತಾರಲ್ಲವೆ. ಕೆಲವರು ಗುರುಗಳನ್ನು ನೆನಪು ಮಾಡುತ್ತಾರೆ, ಕೆಲವರು ಮತ್ತೊಬ್ಬರನ್ನು ನೆನಪು
ಮಾಡುತ್ತಾರೆ. ವಿದ್ಯಾರ್ಥಿಗಳು ಶಿಕ್ಷಕರನ್ನು ನೆನಪು ಮಾಡುತ್ತಾರೆ. ಈಗ ನೀವು ಮಕ್ಕಳಿಗೆ ಕೇವಲ
ತಂದೆ ಮತ್ತು ಮನೆಯೇ ನೆನಪಿದೆ. ತಂದೆಯಿಂದ ನೀವು ಶಾಂತಿಧಾಮ ಮತ್ತು ಸುಖಧಾಮದ ಆಸ್ತಿಯನ್ನು
ತೆಗೆದುಕೊಳ್ಳುತ್ತೀರಿ. ಅದೇ ಮನಸ್ಸಿನಲ್ಲಿ ನೆನಪಿರುತ್ತದೆ - ಬಾಯಿಂದ ಏನೂ ಹೇಳಬೇಕಾಗಿಲ್ಲ
ಏಕೆಂದರೆ ಬುದ್ಧಿಯಿಂದ ನೀವು ತಿಳಿದುಕೊಂಡಿದ್ದೀರಿ - ಶಾಂತಿಧಾಮದ ನಂತರ ಸುಖಧಾಮವು ಬರುತ್ತದೆ.
ನಾವು ಮೊದಲು ಮುಕ್ತಿಯಲ್ಲಿ ನಂತರ ಜೀವನ್ಮುಕ್ತಿಯಲ್ಲಿ ಹೋಗುತ್ತೇವೆ. ಮುಕ್ತಿ-ಜೀವನ್ಮುಕ್ತಿದಾತ
ಒಬ್ಬ ತಂದೆಯೇ ಆಗಿದ್ದಾರೆ. ತಂದೆಯು ಮಕ್ಕಳಿಗೆ ಪದೇ ಪದೇ ತಿಳಿಸುತ್ತಾರೆ- ಮಕ್ಕಳೇ, ಸಮಯವನ್ನು
ವ್ಯರ್ಥ ಮಾಡಬಾರದು, ಜನ್ಮ-ಜನ್ಮಾಂತರದ ಪಾಪದ ಹೊರೆಯು ತಲೆಯ ಮೇಲಿದೆ, ಈ ಜನ್ಮದ ಪಾಪ ಮೊದಲಾದವುಗಳ
ಸ್ಮೃತಿಯಿರುತ್ತದೆ, ಸತ್ಯಯುಗದಲ್ಲಿ ಈ ಮಾತುಗಳಿರುವುದಿಲ್ಲ, ಇಲ್ಲಿ ಮಕ್ಕಳಿಗೆ ಗೊತ್ತಿದೆ -
ಜನ್ಮ-ಜನ್ಮಾಂತರದ ಪಾಪದ ಹೊರೆಯಿದೆ. ಮೊಟ್ಟ ಮೊದಲನೆಯದು ಕಾಮ ವಿಕಾರದ ವಿಕರ್ಮವಾಗಿದೆ. ಯಾವುದನ್ನು
ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದೀರಿ ಮತ್ತು ತಂದೆಯ ನಿಂದನೆಯನ್ನೂ ಬಹಳ ಮಾಡಿದ್ದೀರಿ,
ತಂದೆಯು ಸರ್ವರ ಸದ್ಗತಿ ಮಾಡುತ್ತಾರೆ. ಅಂತಹವರಿಗೆ ಎಂತಹ ನಿಂದನೆ ಮಾಡಿದ್ದಾರೆ, ಇದೆಲ್ಲವೂ
ಗಮನದಲ್ಲಿಡಬೇಕಾಗಿದೆ. ಈಗ ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು ಮಾಡುವ ಪುರುಷಾರ್ಥ
ಮಾಡಬೇಕಾಗಿದೆ. ವಾಸ್ತವದಲ್ಲಿ ಗುರುವಲ್ಲ. ವಾಹ್! ಸದ್ಗುರುವೆಂದು ಹೇಳಲಾಗುತ್ತದೆ. ವಾಹ್ ಗುರು
ಎಂಬುದಕ್ಕೆ ಏನೂ ಅರ್ಥವಿಲ್ಲ ಆದ್ದರಿಂದ ವಾಹ್ ಸದ್ಗುರು! ಮುಕ್ತಿ-ಜೀವನ್ಮುಕ್ತಿಯನ್ನು ಅವರೇ
ಕೊಡುತ್ತಾರಲ್ಲವೆ. ಆ ಗುರುಗಳಂತೂ ಅನೇಕರಿದ್ದಾರೆ ಆದರೆ ಇವರು ಒಬ್ಬರೇ ಸದ್ಗುರುವಾಗಿದ್ದಾರೆ. ನೀವೂ
ಸಹ ಅನೇಕ ಗುರುಗಳನ್ನು ಮಾಡಿಕೊಂಡಿದ್ದೀರಿ. ಪ್ರತೀ ಜನ್ಮದಲ್ಲಿ 2-4 ಜನ ಗುರುಗಳನ್ನು
ಮಾಡಿಕೊಳ್ಳುತ್ತಾರೆ, ಗುರುಗಳನ್ನಾಗಿ ಮಾಡಿಕೊಂಡು ಅನ್ಯ ಸ್ಥಾನಗಳಿಗೆ ಹೋಗುತ್ತಾರೆ. ಬಹುಷಃ
ಇಲ್ಲಿಂದ ಒಳ್ಳೆಯ ಮಾರ್ಗವು ಸಿಗುತ್ತದೆ ಎಂದು ಹೇಳಿ ಬೇರೆ-ಬೇರೆ ಗುರುಗಳಿಂದ ಪ್ರಯತ್ನ
ಪಡುತ್ತಿರುತ್ತಾರೆ ಆದರೆ ಏನೂ ಸಿಗುವುದಿಲ್ಲ. ಈಗ ನೀವು ಮಕ್ಕಳಿಗೆ ಗೊತ್ತಿದೆ - ಈಗ ಇಲ್ಲಂತೂ
ಇರುವಂತಿಲ್ಲ, ಎಲ್ಲರೂ ಶಾಂತಿಧಾಮಕ್ಕೆ ಹೋಗಬೇಕಾಗಿದೆ. ತಂದೆಯು ನಿಮ್ಮ ನಿಮಂತ್ರಣದನುಸಾರ
ಬಂದಿದ್ದಾರೆ, ನಿಮಗೆ ನೆನಪು ತರಿಸುತ್ತಾರೆ. ಮಕ್ಕಳೇ, ನೀವು ನನಗೆ ಪತಿತರಿಂದ ಪಾವನರನ್ನಾಗಿ ಮಾಡಲು
ಬನ್ನಿ ಎಂದು ಹೇಳಿದ್ದಿರಿ. ಪಾವನ ಶಾಂತಿಧಾಮವೂ ಆಗಿದೆ, ಸುಖಧಾಮವೂ ಆಗಿದೆ. ನಮ್ಮನ್ನು ಮನೆಗೆ
ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ. ಎಲ್ಲರಿಗೆ ಮನೆಯ ನೆನಪಿದೆ, ನಮ್ಮ ನಿವಾಸ ಸ್ಥಾನವೂ
ಪರಮಧಾಮ, ಪರಮಪಿತ ಪರಮಾತ್ಮನು ಪರಮಧಾಮದಲ್ಲಿರುತ್ತಾರೆ. ನಾವೂ ಸಹ ಪರಮಧಾಮದಲ್ಲಿರುತ್ತೇವೆಂದು
ಆತ್ಮವು ತಕ್ಷಣ ಹೇಳಿ ಬಿಡುತ್ತದೆ.
ಈಗ ತಂದೆಯು ತಿಳಿಸಿಕೊಡುತ್ತಾರೆ - ನಿಮ್ಮ ಮೇಲೆ ಬೃಹಸ್ಪತಿ ದೆಶೆಯು ಕುಳಿತಿದೆ. ಇದು ಬೇಹದ್ದಿನ
ಮಾತಾಗಿದೆ. ಬೇಹದ್ದಿನ ದೆಶೆಯು ಎಲ್ಲರ ಮೇಲೆ ಕುಳಿತಿದೆ, ಚಕ್ರವು ತಿರುಗುತ್ತಲೇ ಇರುತ್ತದೆ. ನಾವೇ
ಸುಖದಿಂದ ದುಃಖದಲ್ಲಿ ಮತ್ತೆ ದುಃಖದಿಂದ ಸುಖದಲ್ಲಿ ಬರುತ್ತೇವೆ, ಶಾಂತಿಧಾಮ-ಸುಖಧಾಮ ಮತ್ತೆ ಈ
ದುಃಖಧಾಮ. ಇದನ್ನೂ ಸಹ ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಮನುಷ್ಯರ ಬುದ್ಧಿಯಲ್ಲಂತೂ
ಕುಳಿತುಕೊಳ್ಳುವುದೇ ಇಲ್ಲ. ಈಗ ತಂದೆಯು ಜೀವಿಸಿದ್ದಂತೆಯೇ ಸಾಯುವುದನ್ನು ಕಲಿಸುತ್ತಿದ್ದಾರೆ.
ಪತಂಗಗಳು ಜ್ಯೋತಿಗೆ ಬಲಿಹಾರಿಯಾಗಿ ಬಿಡುತ್ತವೆ, ಕೆಲವರು ಕೇವಲ ಪ್ರದಕ್ಷಿಣೆ ಹಾಕಿ ಹೊರಟು
ಹೋಗುತ್ತವೆ. ಇದೂ ಸಹ ಬ್ಯಾಟರಿಯಾಗಿದೆಯಲ್ಲವೆ, ಎಲ್ಲರ ಬುದ್ಧಿಯೋಗವು ಆ ಒಬ್ಬ ತಂದೆಯೊಂದಿಗಿದೆ.
ಹೇಗೆ ನಿರಾಕಾರಿ ತಂದೆಯೊಂದಿಗೆ ಬ್ಯಾಟರಿಯ ಜೋಡಣೆಯಾಗಿದೆ, ಈ ಆತ್ಮಕ್ಕಂತೂ (ಬ್ರಹ್ಮಾ) ಬಹಳ
ಸಮೀಪವಿರುವುದರಿಂದ ಬಹಳ ಸಹಜವೂ ಆಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ನಿಮ್ಮ ಬ್ಯಾಟರಿಯು
ಚಾರ್ಜ್ ಆಗುತ್ತಾ ಹೋಗುತ್ತದೆ. ನೀವು ಮಕ್ಕಳಿಗೆ ಸ್ವಲ್ಪ ಕಷ್ಟವೆನಿಸುತ್ತದೆ ಅಥವಾ
ಪರಿಶ್ರಮವಾಗುತ್ತದೆ ಆದರೆ ಇವರಿಗೆ ಸಹಜವೆನಿಸುತ್ತದೆ ಆದರೂ ಸಹ ಇವರೂ ಪುರುಷಾರ್ಥ ಮಾಡಬೇಕಾಗುತ್ತದೆ.
ಎಷ್ಟು ನೀವು ಮಕ್ಕಳು ಮಾಡಬೇಕಾಗುತ್ತದೆಯೋ ಅಷ್ಟನ್ನು ಇವರೂ ಮಾಡುತ್ತಾರೆ. ಇವರು ತಂದೆಗೆ ಎಷ್ಟು
ಸಮೀಪವಿದ್ದಾರೆಯೋ ಅಷ್ಟು ಹೆಚ್ಚಿನ ಹೊರೆಯೂ ಇದೆ. ಗಾಯನವೂ ಇದೆ - ಯಾರ ತಲೆಯ ಮೇಲೆ ಜವಾಬ್ದಾರಿಯ
ಹೊರೆಯಿರುವುದೋ....... ಇವರಿಗಂತೂ ಬಹಳ ಜವಾಬ್ದಾರಿಯಿದೆಯಲ್ಲವೆ. ತಂದೆಯಂತೂ ಸಂಪೂರ್ಣರಾಗಿದ್ದಾರೆ
ಆದರೆ ಇವರು (ಬ್ರಹ್ಮಾ) ಸಂಪೂರ್ಣರಾಗಬೇಕಾಗಿದೆ ಮತ್ತೆ ಇವರು ಎಲ್ಲರ ಕ್ಷೇಮ ಸಮಾಚಾರವನ್ನು
ನೋಡಿಕೊಳ್ಳಬೇಕಾಗುತ್ತದೆ. ಭಲೆ ಇಬ್ಬರೂ ಒಟ್ಟಿಗೆ ಇದ್ದರೂ ಸಹ ಎಲ್ಲರ ಬಗ್ಗೆ ಗಮನವಂತೂ
ಕೊಡಬೇಕಾಗುತ್ತದೆಯಲ್ಲವೆ. ಬಂಧನದಲ್ಲಿರುವ ಮಕ್ಕಳಿಗೆ ಬಹಳ ಕಷ್ಟವಾದಾಗ ಅರ್ಥಾತ್ ಪೆಟ್ಟು ಬಿದ್ದಾಗ
ಹೇಗೆ ಇವರಿಗೆ ದುಃಖವಾಗುತ್ತದೆ. ಕರ್ಮಾತೀತ ಸ್ಥಿತಿಯಂತೂ ಅಂತಿಮದಲ್ಲಾಗುವುದು ಅಂದಮೇಲೆ
ಅಲ್ಲಿಯವರೆಗೂ ವಿಚಾರವಂತೂ ಬರುತ್ತದೆ. ದೂರದ ಮಕ್ಕಳ ಪತ್ರವು ಬರಲಿಲ್ಲವೆಂದರೂ ಸಹ
ಖಾಯಿಲೆಗೊಳಗಾಗಲಿಲ್ಲವೆ ಎಂದು ವಿಚಾರವು ಬರುತ್ತದೆ. ಸರ್ವೀಸಿನ ಸಮಾಚಾರವು ಬಂದಾಗ ತಂದೆಯು
ಅವಶ್ಯವಾಗಿ ಅವರನ್ನು ನೆನಪು ಮಾಡುತ್ತಾರೆ. ತಂದೆಯು ಈ ಶರೀರದಿಂದ ಸರ್ವೀಸ್ ಮಾಡುತ್ತಾರೆ.
ಕೆಲವೊಮ್ಮೆ ಸ್ವಲ್ಪ ಮುರುಳಿಯಷ್ಟೇ ನುಡಿಸಲಾಗುತ್ತದೆ ಹಾಗೆಂದರೆ ಭಲೆ 2-4 ದಿನಗಳು ಮುರುಳಿ
ಬರದಿದ್ದರೂ ಸಹ ನಿಮ್ಮ ಬಳಿ ಜ್ಞಾನ ಬಿಂದುಗಳಂತೂ ಇರುತ್ತವೆ. ನೀವೂ ಸಹ ತಮ್ಮ ದಿನಚರಿಯ
ಪುಸ್ತಕವನ್ನು ನೋಡಿಕೊಳ್ಳಬೇಕು. ಈ ಬ್ಯಾಡ್ಜ್ ನ ಮೇಲೂ ಸಹ ನೀವು ಬಹಳ ಚೆನ್ನಾಗಿ ತಿಳಿಸಿ ಕೊಡಬಹುದು.
ಯಾವಾಗ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತೋ ಆಗ ಮತ್ತ್ಯಾವುದೇ ಧರ್ಮವಿರಲಿಲ್ಲ. ಕಲ್ಪವೃಕ್ಷದ
ಚಿತ್ರವೂ ಸಹ ಅವಶ್ಯವಾಗಿ ಜೊತೆಯಲ್ಲಿರಬೇಕು. ವಿಭಿನ್ನ ಧರ್ಮಗಳ ರಹಸ್ಯವನ್ನು ತಿಳಿಸಬೇಕಾಗುತ್ತದೆ.
ಮೊಟ್ಟ ಮೊದಲು ಒಂದು ಅದ್ವೈತ ಧರ್ಮವಿತ್ತು, ವಿಶ್ವದಲ್ಲಿ ಸುಖ-ಶಾಂತಿ-ಪವಿತ್ರತೆಯಿತ್ತು,
ತಂದೆಯಿಂದಲೇ ಆ ಆಸ್ತಿಯು ಸಿಗುತ್ತದೆ ಏಕೆಂದರೆ ತಂದೆಯು ಸುಖದ ಸಾಗರ, ಶಾಂತಿಯ
ಸಾಗರನಾಗಿದ್ದಾರಲ್ಲವೆ. ಮೊದಲು ನೀವೂ ಸಹ ಏನನ್ನೂ ತಿಳಿದುಕೊಂಡಿರಲಿಲ್ಲ, ಈಗಂತೂ ಇದೆಲ್ಲವೂ ತಂದೆಯ
ಬುದ್ಧಿಯಲ್ಲಿ ಹೇಗಿದೆಯೋ ಅದೇ ರೀತಿ ನೀವೂ ಆಗುತ್ತೀರಿ. ಸುಖ-ಶಾಂತಿಯ ಸಾಗರರು ನೀವೂ ಆಗುತ್ತೀರಿ
ಅಂದಮೇಲೆ ತಮ್ಮ ಲೆಕ್ಕವನ್ನು ನೋಡಿಕೊಳ್ಳಬೇಕು - ಯಾವ ಮಾತಿನಲ್ಲಿ ಕೊರತೆಯಿದೆ? ನಾನು ಪ್ರೇಮ
ಸಾಗರನಾಗಿದ್ದೇನೆಯೇ, ನನ್ನಿಂದ ಯಾರಿಗೂ ಬೇಸರವಾಗುವಂತಹ ನಡುವಳಿಕೆಯಂತೂ ಇಲ್ಲವೆ? ತಮ್ಮ ಮೇಲೆ ತಾವು
ಗಮನವನ್ನಿಟ್ಟುಕೊಳ್ಳಬೇಕಾಗಿದೆ. ತಂದೆಯು ಆಶೀರ್ವಾದ ಮಾಡಿ ಬಿಟ್ಟರೆ ನೀವು ಆ ರೀತಿ ಆಗಿ
ಬಿಡುತ್ತೀರಿ ಎಂದಲ್ಲ. ತಂದೆಯು ತಿಳಿಸುತ್ತಾರೆ - ನಾನು ಡ್ರಾಮಾದನುಸಾರ ನನ್ನ ಸಮಯದಲ್ಲಿ
ಬರುತ್ತೇನೆ, ಇದು ನನ್ನ ಕಲ್ಪ-ಕಲ್ಪದ ಕಾರ್ಯಕ್ರಮವಾಗಿದೆ. ಈ ಜ್ಞಾನವನ್ನು ಮತ್ತ್ಯಾರೂ ಕೊಡಲು
ಸಾಧ್ಯವಿಲ್ಲ. ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರು ಒಬ್ಬರೇ ಆಗಿದ್ದಾರೆ. ಇದು ಪಕ್ಕಾ
ನಿಶ್ಚಯವಿದ್ದರೂ ಸಹ ನಿಮ್ಮ ವಿಜಯವಾಗುತ್ತದೆ. ಅನೇಕ ಧರ್ಮಗಳು ಯಾವುದೆಲ್ಲವೂ ಇವೆಯೋ ಅವೆಲ್ಲದರ
ವಿನಾಶವಾಗಲಿದೆ, ಯಾವಾಗ ಸತ್ಯಯುಗೀ ಸೂರ್ಯವಂಶಿ ಮನೆತನವಿತ್ತೋ ಆಗ ಮತ್ತ್ಯಾವುದೇ ಮನೆತನವಿರಲಿಲ್ಲ.
ಪುನಃ ಹೀಗೆಯೇ ಆಗುತ್ತದೆ. ಇಡೀ ದಿನ ಹೀಗೀಗೆ ತಮ್ಮೊಂದಿಗೆ ಮಾತನಾಡಿಕೊಳ್ಳುತ್ತಾ ಇರಿ, ಜ್ಞಾನ
ಬಿಂದುಗಳು ಒಳಗೆ ಹನಿಯುತ್ತಿರಬೇಕು, ಖುಷಿಯಿರಬೇಕು. ತಂದೆಯಲ್ಲಿ ಜ್ಞಾನವಿದೆ, ಅದು ಈಗ ನಿಮಗೆ
ಸಿಗುತ್ತಿದೆ ಅಂದಮೇಲೆ ಅದನ್ನು ಧಾರಣೆ ಮಾಡಬೇಕು. ಇದರಲ್ಲಿ ಸಮಯ ವ್ಯರ್ಥ ಮಾಡಬಾರದು.
ರಾತ್ರಿಯಲ್ಲಿಯೂ ಸಮಯ ಸಿಗುತ್ತದೆ, ನೋಡುತ್ತೇವೆ - ಆತ್ಮವು ಕರ್ಮೇಂದ್ರಿಯಗಳಿಂದ ಕೆಲಸ
ಮಾಡುತ್ತಾ-ಮಾಡುತ್ತಾ ಸುಸ್ತಾಗಿ ಬಿಡುತ್ತದೆಯೆಂದರೆ ಮತ್ತೆ ಮಲಗಿ ಬಿಡುತ್ತದೆ. ತಂದೆಯು ನಿಮ್ಮ
ಭಕ್ತಿಮಾರ್ಗದ ಎಲ್ಲಾ ದಣಿವನ್ನು ದೂರ ಮಾಡಿ ಅವಿಶ್ರಾಂತರನ್ನಾಗಿ ಮಾಡುತ್ತಾರೆ. ಹೇಗೆ ಆತ್ಮವು
ರಾತ್ರಿಗೆ ಸುಸ್ತಾಗಿ ಬಿಡುತ್ತದೆಯೆಂದರೆ ಶರೀರದಿಂದ ಬೇರೆಯಾಗಿ ಬಿಡುತ್ತದೆ, ಇದಕ್ಕೆ ನಿದ್ರೆಯೆಂದು
ಹೇಳಲಾಗುತ್ತದೆ. ಅಂದಾಗ ಮಲಗುವವರು ಯಾರು? ಆತ್ಮದ ಜೊತೆ ಕರ್ಮೇಂದ್ರಿಯಗಳೂ ಮಲಗಿ ಬಿಡುತ್ತದೆ
ಅಂದಾಗ ರಾತ್ರಿ ಮಲಗುವ ಸಮಯದಲ್ಲಿ ತಂದೆಯನ್ನು ನೆನಪು ಮಾಡುತ್ತ ಈ ರೀತಿ ವಿಚಾರಗಳನ್ನು ಮಾಡುತ್ತ
ಮಲಗಿ ಬಿಡಬೇಕು. ಅಂತಿಮದಲ್ಲಿ ದಿನ-ರಾತ್ರಿ ನಿದ್ರೆಯನ್ನು ಗೆಲ್ಲವವರೂ ಸಹ ಆಗಲು ಸಾಧ್ಯತೆಯಿದೆ.
ನಂತರ ನೆನಪಿನಲ್ಲಿಯೇ ಇರುತ್ತೀರಿ ನಂತರ ಖುಷಿಯಿರುತ್ತದೆ. ಆಗ 84 ಜನ್ಮಗಳ ಚಕ್ರವನ್ನು
ತಿರುಗಿಸುತ್ತಾ ಇರುತ್ತೀರಿ. ಆಕಳಿಕೆ ಅಥವಾ ತೂಕಡಿಕೆ ಬರುವುದಿಲ್ಲ. ಹೇ ನಿದ್ರೆಯನ್ನು ಗೆಲ್ಲುವ
ಮಕ್ಕಳೇ, ಸಂಪಾದನೆಯಲ್ಲೆಂದೂ ನಿದ್ರಿಸಬಾರದು. ಯಾವಾಗ ಜ್ಞಾನದಲ್ಲಿ ಮಸ್ತರಾಗಿ ಬಿಡುತ್ತೀರಿ ಆಗ
ನಿಮ್ಮ ಆ ಸ್ಥಿತಿಯಿರುವುದು. ಇಲ್ಲಿ ನೀವು ಸ್ವಲ್ಪ ಸಮಯ ಕುಳಿತುಕೊಳ್ಳುತ್ತೀರೆಂದರೂ ಸಹ ಎಂದೂ
ಆಕಳಿಕೆ ಅಥವಾ ತೂಕಡಿಕೆಯು ಬರಬಾರದು. ಬೇರೆ-ಬೇರೆ ಕಡೆ ಗಮನ ಹೋಗುವುದರಿಂದ ಆಕಳಿಕೆ ಬರುತ್ತದೆ.
ನೀವು ಮಕ್ಕಳು ಇದನ್ನೂ ಸಹ ಗಮನದಲ್ಲಿಡಬೇಕು - ನಾವು ಅನ್ಯರನ್ನೂ ಸಹ ನಮ್ಮ ಸಮಾನ
ಮಾಡಿಕೊಳ್ಳಬೇಕಾಗಿದೆ, ಪ್ರಜೆಗಳಂತೂ ಬೇಕಲ್ಲವೆ ಇಲ್ಲವೆಂದರೆ ಹೇಗೆ ರಾಜರಾಗುತ್ತೀರಿ. ಧನ ದಾನ
ಮಾಡಿದರೆ ಧನವು ಖಾಲಿಯಾಗುವುದಿಲ್ಲ..... ದಾನ ಮಾಡುತ್ತಾ ಇದ್ದರೆ ಎಂದೂ ಮುಗಿಯುವುದಿಲ್ಲವೆಂದು
ಅನ್ಯರಿಗೆ ತಿಳಿಸುತ್ತೀರಿ. ದಾನ ಮಾಡದಿದ್ದರೆ ಜಮಾ ಆಗುವುದಿಲ್ಲ. ಮನುಷ್ಯರಂತೂ ಬಹಳ
ಜಿಪುಣರಾಗಿರುತ್ತಾರೆ, ಹಣವನ್ನು ಕುರಿತು ಜಗಳ-ಕಲಹಗಳಾಗಿ ಬಿಡುತ್ತದೆ. ಇಲ್ಲಿ ತಂದೆಯು
ತಿಳಿಸುತ್ತಾರೆ - ನಾನು ನಿಮಗೆ ಈ ಅವಿನಾಶಿ ಧನವನ್ನು ಕೊಡುತ್ತೇನೆ, ನೀವು ಮತ್ತೆ ಅನ್ಯರಿಗೆ
ಕೊಡುತ್ತಾ ಇರಿ. ಇದರಲ್ಲಿ ಜಿಪುಣರಾಗಬಾರದು. ದಾನ ನೀಡುವುದಿಲ್ಲವೆಂದರೆ ಅರ್ಥ ನಿಮ್ಮಲ್ಲಿಯೇ
ಇಲ್ಲವೆಂದರ್ಥ. ಈ ಸಂಪಾದನೆಯೇ ಹೀಗಿದೆ, ಇದರಲ್ಲಿ ಯುದ್ಧ ಮೊದಲಾದ ಮಾತಿಲ್ಲ. ಇದಕ್ಕೆ ಗುಪ್ತವೆಂದು
ಹೇಳಲಾಗುತ್ತದೆ. ನೀವು ಗುಪ್ತ ಸೈನಿಕರಾಗಿದ್ದೀರಿ. ಪಂಚ ವಿಕಾರಗಳ ಜೊತೆ ನೀವು ಹೋರಾಡುತ್ತೀರಿ.
ನಿಮಗೆ ಗುಪ್ತ ಸೈನಿಕರೆಂದು ಹೇಳಲಾಗುತ್ತದೆ. ಕಾಲಾಳುಗಳ ಸಂಖ್ಯೆಯು ಹೆಚ್ಚಿನದಾಗಿರುತ್ತದೆ,
ಇಲ್ಲಿಯೂ ಹಾಗೆಯೇ ಪ್ರಜೆಗಳು ಅನೇಕರಿದ್ದಾರೆ. ಕ್ಯಾಪ್ಟನ್, ಮೇಜರ್ ಮೊದಲಾದವರೆಲ್ಲರೂ ಇದ್ದಾರೆ,
ನೀವು ಸೈನ್ಯವಾಗಿದ್ದೀರಿ ಅದರಲ್ಲಿಯೂ ನಂಬರ್ವಾರ್ ಇದೆ. ಬಾಬಾ ತಿಳಿಯುತ್ತಾರೆ, ಇವರು ಕಮಾಂಡರ್,
ಇವರು ಮೇಜರ್ ಆಗಿದ್ದಾರೆ. ಮಹಾರಥಿ, ಕುದುರೆ ಸವಾರರಿದ್ದಾರಲ್ಲವೆ. ಇದಂತೂ ತಂದೆಗೆ ಗೊತ್ತಿದೆ,
ಇವರು ತಿಳಿಸಿಕೊಡುವವರಲ್ಲಿ ಮೂರು ಪ್ರಕಾರದವರಿದ್ದಾರೆ. ನೀವು ಅವಿನಾಶಿ ಜ್ಞಾನರತ್ನಗಳ ವ್ಯಾಪಾರ
ಮಾಡುತ್ತೀರಿ. ಹೇಗೆ ಅವರೂ ಸಹ ವ್ಯಾಪಾರವನ್ನು ಕಲಿಸಿ ಕೊಡುತ್ತಾರೆ, ಗುರುಗಳು ಹೊರಟು
ಹೋಗುತ್ತಾರೆಂದರೆ ಅವರ ನಂತರ ಶಿಷ್ಯರು ಕಲಿಸುತ್ತಾರಲ್ಲವೆ. ಅದು ಸ್ಥೂಲವಾಗಿದೆ ಮತ್ತು ಇದು
ಸೂಕ್ಷ್ಮವಾದ ಮಾತಾಗಿದೆ. ಅನೇಕ ಪ್ರಕಾರದ ಧರ್ಮಗಳಿವೆ, ಪ್ರತಿಯೊಬ್ಬರದೂ ತಮ್ಮ-ತಮ್ಮದೇ ಮತವಿದೆ.
ನೀವೂ ಸಹ ಹೋಗಿ ಅವರು ಏನು ಕಲಿಸುತ್ತಾರೆ, ಏನು ತಿಳಿಸುತ್ತಾರೆಂದು ನೋಡಬಹುದು. ತಂದೆಯಂತೂ ನಿಮಗೆ
84 ಜನ್ಮಗಳ ಚಕ್ರದ ಕಥೆಯನ್ನೂ ತಿಳಿಸುತ್ತಾರೆ. ತಂದೆಯು ನೀವು ಮಕ್ಕಳಿಗೆ ಬಂದು ಆಸ್ತಿಯನ್ನು
ಕೊಡುತ್ತಾರೆ, ಇದು ನಾಟಕದಲ್ಲಿ ನಿಗದಿಯಾಗಿದೆ, ಈಗ ಕಲಿಯುಗದ ಅಂತ್ಯದವರೆಗೂ ಆತ್ಮಗಳು ಬರುತ್ತಾ
ಇರುತ್ತಾರೆ, ವೃದ್ಧಿಯಾಗುತ್ತಾ ಇರುತ್ತದೆ. ಎಲ್ಲಿಯವರೆಗೆ ತಂದೆಯು ಇಲ್ಲಿರುತ್ತಾರೆಯೋ ಅಲ್ಲಿಯ
ತನಕ ಸಂಖ್ಯೆಯು ಹೆಚ್ಚುತ್ತಲೇ ಹೋಗುತ್ತದೆ ಅಂದಮೇಲೆ ಮತ್ತೆ ಇಷ್ಟೆಲ್ಲಾ ಜನಸಂಖ್ಯೆಯು
ಎಲ್ಲಿರುತ್ತದೆ? ಎಲ್ಲಿ ತಿನ್ನುತ್ತಾರೆ? ಎಲ್ಲವನ್ನೂ ಲೆಕ್ಕವನ್ನಿಡಬೇಕಾಗುತ್ತದೆಯಲ್ಲವೆ. ಅಲ್ಲಂತೂ
ಇಷ್ಟೊಂದು ಜನಸಂಖ್ಯೆಯಿರುವುದಿಲ್ಲ. ತಿನ್ನುವವರೂ ಸಹ ಕೆಲವರೇ ಇರುತ್ತಾರೆ. ಎಲ್ಲರಿಗೂ ತಮ್ಮ-ತಮ್ಮ
ಜಮೀನು ಇರುತ್ತದೆ, ಆಹಾರ-ಧಾನ್ಯಗಳನ್ನು ಹೆಚ್ಚಿನದಾಗಿಟ್ಟುಕೊಂಡು ಏನು ಮಾಡುತ್ತಾರೆ. ಅಲ್ಲಿ
ಮಳೆಗಾಗಿಯೂ ಸಹ ಇಲ್ಲಿನ ತರಹ ಯಜ್ಞ ಮಾಡಬೇಕಾಗಿಲ್ಲ. ಈಗ ತಂದೆಯು ಯಜ್ಞವನ್ನು ರಚಿಸಿದ್ದಾರೆ ಇಡೀ
ಹಳೆಯ ಸೃಷ್ಟಿಯು ಯಜ್ಞದಲ್ಲಿ ಸ್ವಾಹಾ ಆಗಬೇಕಾಗಿದೆ. ಇದು ಬೇಹದ್ದಿನ ಯಜ್ಞವಾಗಿದೆ. ಅಲ್ಲಿ
ಮನುಷ್ಯರು ಮಳೆಗಾಗಿ ಸ್ಥೂಲ ಯಜ್ಞಗಳನ್ನು ರಚಿಸುತ್ತಾರೆ. ಮಳೆ ಬಂದಿತೆಂದರೆ ಖುಷಿಯಾಯಿತು, ಯಜ್ಞದ
ಸಫಲತೆಯಾಯಿತು, ಆಗಲಿಲ್ಲವೆಂದರೆ ದವಸ-ಧಾನ್ಯಗಳಿಲ್ಲ, ಬರಗಾಲವು ಬಂದು ಬಿಡುತ್ತದೆ. ಭಲೆ ಯಜ್ಞ
ಮೊದಲಾದುದನ್ನು ರಚಿಸುತ್ತಾರೆ ಆದರೆ ಮಳೆಯು ಬರದಿದ್ದರೆ ಏನು ಮಾಡಲು ಸಾಧ್ಯ! ಆಪತ್ತುಗಳಂತೂ ಎಲ್ಲವೂ
ಬರಲಿವೆ. ಧಾರಾಕಾರ ಮಳೆ, ಭೂಕಂಪ ಇದೆಲ್ಲವೂ ಆಗಲಿದೆ. ನಾಟಕದ ಚಕ್ರವನ್ನಂತೂ ನೀವು ಮಕ್ಕಳು
ತಿಳಿದಿದ್ದೀರಿ. ಈ ಚಕ್ರವು ಬಹಳ ದೊಡ್ಡದಾಗಿರಬೇಕು. ಜಾಹೀರಾತುಗಳನ್ನು ದೊಡ್ಡ-ದೊಡ್ಡ ಸ್ಥಾನಗಳಲ್ಲಿ
ಹಾಕಿದರೆ ದೊಡ್ಡ-ದೊಡ್ಡವರು ಓದುತ್ತಾರೆ ಅದರಿಂದ ಈಗ ಅವಶ್ಯವಾಗಿ ಪುರುಷೋತ್ತಮ ಸಂಗಮಯುಗವಾಗಿದೆ
ಎಂದು ತಿಳಿಯುತ್ತಾರೆ. ಕಲಿಯುಗದಲ್ಲಿ ಜನಸಂಖ್ಯೆ ಬಹಳ ಇದೆ, ಸತ್ಯಯುಗದಲ್ಲಿ ಕೆಲವರೇ ಇರುತ್ತಾರೆ
ಅಂದಾಗ ಉಳಿದವರೆಲ್ಲರೂ ಸಹ ಅವಶ್ಯವಾಗಿ ಸಮಾಪ್ತಿಯಾಗಿ ಬಿಡುತ್ತಾರೆ. ಶಿವ ಜಯಂತಿ ಅಂದರೇನೆ
ಸ್ವರ್ಗದ ಜಯಂತಿ, ಲಕ್ಷ್ಮೀ-ನಾರಾಯಣರ ಜಯಂತಿ. ಇದು ಬಹಳ ಸಹಜವಾದ ಮಾತಾಗಿದೆ. ಶಿವ ಜಯಂತಿಯನ್ನು
ಆಚರಿಸಲಾಗುತ್ತದೆ. ಶಿವ ಬೇಹದ್ದಿನ ತಂದೆಯಾಗಿದ್ದಾರೆ, ಅವರೇ ಸ್ವರ್ಗದ ಸ್ಥಾಪನೆ ಮಾಡಿದ್ದರು. ನೀವು
ಸ್ವರ್ಗವಾಸಿಗಳಾಗಿದ್ದಿರಿ, ಇದು ನೆನ್ನೆಯ ಮಾತಾಗಿದೆ. ಇದಂತೂ ಬಹಳ ಸಹಜವಾದ ಮಾತಾಗಿದೆ. ಮಕ್ಕಳಂತೂ
ಬಹಳ ಚೆನ್ನಾಗಿ ತಿಳಿದುಕೊಂಡು ಅನ್ಯರಿಗೆ ತಿಳಿಸಬೇಕಾಗಿದೆ, ಖುಷಿಯಲ್ಲಿರಬೇಕು - ಈಗ ನಾವು
ಸದಾಕಾಲಕ್ಕಾಗಿ ಖಾಯಿಲೆಗಳಿಂದ ಮುಕ್ತರಾಗಿ 100% ಆರೋಗ್ಯವಂತರು-ಐಶ್ವರ್ಯವಂತರಾಗುತ್ತೇವೆ. ಇನ್ನು
ಸ್ವಲ್ಪವೇ ಸಮಯವಿದೆ, ಭಲೆ ಎಷ್ಟೇ ದುಃಖ, ಮೃತ್ಯು ಮೊದಲಾದವುಗಳಿರಬಹುದು, ನೀವು ಆ ಸಮಯದಲ್ಲಿ ಬಹಳ
ಖುಷಿಯಲ್ಲಿರುತ್ತೀರಿ. ನಿಮಗೆ ಗೊತ್ತಿದೆ - ಮೃತ್ಯುವಂತೂ ಬಂದೇ ಬರುತ್ತದೆ, ಇದು ಕಲ್ಪ-ಕಲ್ಪದ
ಆಟವಾಗಿದೆ. ಯಾವುದೇ ಚಿಂತೆಯಾಗುವುದಿಲ್ಲ, ಯಾರು ಪಕ್ಕಾ ಆಗಿರುವರೋ ಅವರೆಂದೂ ಹಾಯ್, ಹಾಯ್
ಎನ್ನುವುದಿಲ್ಲ. ಮನುಷ್ಯರು ಯಾರದೇ ಆಪರೇಷನ್ ಇತ್ಯಾದಿಯನ್ನು ನೋಡುತ್ತಾರೆಂದರೆ ಅವರಿಗೆ ತಲೆ
ಸುತ್ತು ಬಂದು ಬಿಡುತ್ತದೆ. ಈಗಂತೂ ಎಷ್ಟು ದೊಡ್ಡ ಮೃತ್ಯುವಾಗುವುದಿದೆ. ನೀವು ಮಕ್ಕಳು
ತಿಳಿಯುತ್ತೀರಿ - ಇದೆಲ್ಲವೂ ಆಗಲೇಬೇಕಾಗಿದೆ. ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣ ಸಂಕಟವೆಂಬ
ಗಾಯನವಿದೆ. ಈ ಹಳೆಯ ಪ್ರಪಂಚದಲ್ಲಂತೂ ಬಹಳ ದುಃಖವನ್ನನುಭವಿಸಿದ್ದೀರಿ ಈಗ ಹೊಸ ಪ್ರಪಂಚದಲ್ಲಿ
ಹೋಗಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯಿಂದ
ಅವಿನಾಶಿ ಜ್ಞಾನ ಧನವನ್ನು ಪಡೆದು ಅನ್ಯರಿಗೂ ದಾನ ಮಾಡಬೇಕಾಗಿದೆ. ಜ್ಞಾನ ದಾನ ಮಾಡುವುದರಲ್ಲಿ
ಜಿಪುಣರಾಗಬಾರದು. ಜ್ಞಾನದ ವಿಚಾರಗಳು ಒಳಗೆ ಹನಿಯುತ್ತಿರಲಿ. ರಾಜರಾಗುವುದಕ್ಕಾಗಿ ಪ್ರಜೆಗಳನ್ನು
ಅವಶ್ಯವಾಗಿ ಮಾಡಿಕೊಳ್ಳಬೇಕಾಗಿದೆ.
2. ತಮ್ಮ ಚಾರ್ಟನ್ನು ನೋಡಿಕೊಳ್ಳಬೇಕು - ಅ) ನಾನು ತಂದೆಯ ಸಮಾನ ಪ್ರೇಮ ಸಾಗರನಾಗಿದ್ದೇನೆಯೇ? ಆ)
ಎಂದೂ ಯಾರಿಗೂ ಬೇಸರ ಪಡಿಸುತ್ತಿಲ್ಲವೆ? ಇ) ನನ್ನ ನಡುವಳಿಕೆಯ ಮೇಲೆ ಪೂರ್ಣ ಗಮನವಿದೆಯೇ?
ವರದಾನ:
ಪ್ರತಿ ಸಮಯ
ತಮ್ಮ ದೃಷ್ಟಿ, ವೃತ್ತಿ, ಕೃತಿಯ ಮೂಲಕ ಸೇವೆ ಮಾಡುವಂತಹ ಪಕ್ಕಾ ಸೇವಾಧಾರಿ ಭವ.
ಸೇವಾಧಾರಿ ಅರ್ಥಾತ್
ಪ್ರತಿ ಸಮಯ ಶ್ರೇಷ್ಠ ದೃಷ್ಠಿಯಿಂದ, ವೃತ್ತಿಯಿಂದ, ಕೃತಿಯಿಂದ ಸೇವೆ ಮಾಡುವಂತಹ, ಯಾರನ್ನೇ ಆದರೂ
ಶ್ರೇಷ್ಠ ದೃಷ್ಠಿಯಿಂದ ನೋಡುವಿರಾದರೆ ಆ ದೃಷ್ಠಿಯೂ ಸಹಾ ಸೇವೆ ಮಾಡುವುದು. ವೃತ್ತಿಯಿಂದ ವಾಯುಮಂಡಲ
ರಚನೆಯಾಗುವುದು. ಯಾವುದೇ ಕಾರ್ಯ ನೆನಪಿನಲ್ಲಿರುತ್ತಾ ಮಾಡಿದಿರಾದರೆ ವಾಯುಮಂಡಲ ಶುದ್ಧವಾಗುವುದು.
ಬ್ರಾಹ್ಮಣ ಜೀವನದ ಶ್ವಾಸವೇ ಆಗಿದೆ ಸೇವೆ, ಹೇಗೆ ಶ್ವಾಸ ನಡೆಯದೇ ಇದ್ದರೆ ಮೂರ್ಚಿತರಾಗುವರು ಅದೇ
ರೀತಿ ಬ್ರಾಹ್ಮಣ ಆತ್ಮ ಸೇವೆಯಲ್ಲಿ ಬ್ಯುಸಿಯಾಗಿರದಿದ್ದರೆ ಮೂರ್ಚಿತರಾಗಿ ಬಿಡುತ್ತಾರೆ ಆದ್ದರಿಂದ
ಎಷ್ಟು ಸ್ನೇಹಿ, ಅಷ್ಟೂ ಸಹಯೋಗಿ, ಅಷ್ಟೇ ಸೇವಾಧಾರಿಗಳಾಗಿ.
ಸ್ಲೋಗನ್:
ಸೇವೆಯನ್ನು ಆಟ
ಎಂದು ತಿಳಿದಾಗ ಆಯಾಸವಾಗುವುದಿಲ್ಲ, ಸದಾ ಹಗುರರಾಗಿರುವಿರಿ.