27.01.19    Avyakt Bapdada     Kannada Murli     15.04.84     Om Shanti     Madhuban


ಸ್ನೇಹಿ , ಸಹಯೋಗಿ , ಶಕ್ತಿಶಾಲಿ ಮಕ್ಕಳ ಮೂರು ಸ್ಥಿತಿಗಳು


ಬಾಪ್ದಾದಾರವರು ಎಲ್ಲಾ ಸ್ನೇಹಿ, ಸಹಯೋಗಿ ಮತ್ತು ಸಹಜಯೋಗಿ ಮಕ್ಕಳನ್ನು ನೋಡುತ್ತಿದ್ದಾರೆ. ಸ್ನೇಹಿ ಮಕ್ಕಳಲ್ಲಿಯೂ ಭಿನ್ನ-ಭಿನ್ನ ಪ್ರಕಾರದ ಸ್ನೇಹವಿರುವವರಿದ್ದಾರೆ. ಒಂದು - ಅನ್ಯರ ಶ್ರೇಷ್ಠ ಜೀವನವನ್ನು ನೋಡುತ್ತಾ, ಅನ್ಯರ ಪರಿವರ್ತನೆಯನ್ನು ನೋಡುತ್ತಾ, ಅವರೊಂದಿಗೆ ಪ್ರಭಾವಿತರಾಗಿ ಸ್ನೇಹಿಯಾಗುವುದು. ಎರಡನೆಯವರು - ಯಾವುದಾದರೊಂದು ಗುಣದ, ಭಲೇ ಸುಖ ಅಥವಾ ಶಾಂತಿಯ ಸ್ವಲ್ಪವೇ ಅನುಭವದ ಹೊಳಪನ್ನು ನೋಡುತ್ತಾ ಸ್ನೇಹಿಯಾಗುವುದು. ಮೂರನೆಯವರು - ಸಂಗ ಅರ್ಥಾತ್ ಸಂಘಟನೆಯ, ಶುದ್ಧ ಆತ್ಮರ ಆಶ್ರಯದ ಅನುಭವವನ್ನು ಮಾಡುವಂತಹ ಸ್ನೇಹಿ ಆತ್ಮರು. ನಾಲ್ಕನೆಯವರು - ಪರಮಾತ್ಮ ಸ್ನೇಹಿ ಆತ್ಮರು. ಸ್ನೇಹಿಯಂತು ಎಲ್ಲರೂ ಆಗಿದ್ದಾರೆ ಆದರೆ ಸ್ನೇಹದಲ್ಲಿಯೂ ನಂಬರ್ ಇದೆ. ಯಥಾರ್ಥ ಸ್ನೇಹಿ ಅರ್ಥಾತ್ ತಂದೆಯನ್ನು ಯಥಾರ್ಥವಾಗಿ ಅರ್ಥ ಮಾಡಿಕೊಂಡು ಸ್ನೇಹಿಯಾಗುವುದು. ಇದೇ ರೀತಿಯೇ ಸಹಯೋಗಿ ಆತ್ಮರಲ್ಲಿಯೂ ಭಿನ್ನ-ಭಿನ್ನ ಪ್ರಕಾರದ ಸಹಯೋಗಿಯಿದ್ದಾರೆ. ಒಬ್ಬರಿದ್ದಾರೆ - ಭಕ್ತಿಯ ಸಂಸ್ಕಾರದನುಸಾರ ಸಹಯೋಗಿ. ಒಳ್ಳೆಯ ಮಾತಿದೆ, ಒಳ್ಳೆಯ ಸ್ಥಾನವಾಗಿದೆ, ಒಳ್ಳೆಯ ಜೀವನವಿರುವವರಿದ್ದಾರೆ, ಒಳ್ಳೆಯ ಸ್ಥಾನದಲ್ಲಿ ಮಾಡುವುದರಿಂದ ಒಳ್ಳೆಯ ಫಲವು ಸಿಗುತ್ತದೆ, ಇದೇ ಆಧಾರದ ಮೇಲೆ, ಇದೇ ಆಕರ್ಷಣೆಯಿಂದ ಸಹಯೋಗಿಯಾಗುವುದು ಅರ್ಥಾತ್ ತಮ್ಮ ಅಲ್ಪ ಸ್ವಲ್ಪ ತನು-ಮನ-ಧನವನ್ನು ಉಪಯೋಗಿಸುವುದು. ಇನ್ನೊಬ್ಬರಿದ್ದಾರೆ - ಜ್ಞಾನ ಹಾಗೂ ಯೋಗದ ಧಾರಣೆಯ ಮೂಲಕ ಸ್ವಲ್ಪ ಪ್ರಾಪ್ತಿ ಮಾಡಿಕೊಳ್ಳುವುದರ ಆಧಾರದ ಮೇಲೆ ಸಹಯೋಗಿಯಾಗುವುದು. ಮೂರನೆಯವರಿದ್ದಾರೆ – ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ. ಒಬ್ಬರೇ ತಂದೆ, ಒಂದೇ ಸರ್ವಪ್ರಾಪ್ತಿಯ ಸ್ಥಾನವಿದೆ. ತಂದೆಯ ಕಾರ್ಯವೇ ನನ್ನ ಕಾರ್ಯವಾಗಿದೆ. ಹೀಗೆ ತಮ್ಮ ತಂದೆ, ತಮ್ಮ ಮನೆ, ತಮ್ಮ ಕಾರ್ಯ, ಶ್ರೇಷ್ಠ ಈಶ್ವರೀಯ ಕಾರ್ಯವೆಂದು ತಿಳಿದುಕೊಂಡು ಸದಾಕಾಲಕ್ಕಾಗಿ ಸಹಯೋಗಿಯಾಗುವುದು. ಅಂದಮೇಲೆ ಅಂತರವಾಯಿತಲ್ಲವೆ! ಇದೇ ರೀತಿಯೇ ಶಕ್ತಿಶಾಲಿ ಆತ್ಮರು, ಇದರಲ್ಲಿಯೂ ಭಿನ್ನ-ಭಿನ್ನ ಸ್ಥಿತಿಯಿರುವವರಿದ್ದಾರೆ - ಕೇವಲ ಜ್ಞಾನದ ಆಧಾರದ ಮೇಲೆ ತಿಳಿಯುವವರು - ನಾನು ಆತ್ಮನು ಶಕ್ತಿ ಸ್ವರೂಪನಾಗಿದ್ದೇನೆ, ಸರ್ವಶಕ್ತಿವಂತ ತಂದೆಯ ಮಗುವಾಗಿದ್ದೇನೆ - ಇದನ್ನು ತಿಳಿದುಕೊಂಡು ಶಕ್ತಿಶಾಲಿ ಸ್ಥಿತಿಯಲ್ಲಿ ಸ್ಥಿತರಾಗಲು ಪ್ರಯತ್ನ ಪಡುತ್ತಾರೆ. ಆದರೆ ಕೇವಲ ತಿಳಿದುಕೊಳ್ಳುವವರೆಗೆ ಇರುವ ಕಾರಣದಿಂದ, ಯಾವಾಗ ಜ್ಞಾನದ ಈ ಪಾಯಿಂಟ್ ಸ್ಮೃತಿಯಲ್ಲಿ ಬರುತ್ತದೆಯೋ ಆ ಸಮಯದಲ್ಲಿ ಶಕ್ತಿಶಾಲಿ ಪಾಯಿಂಟ್ ಆಗಿರುವ ಕಾರಣದಿಂದ ಸ್ವಲ್ಪ ಸಮಯದವರೆಗೆ ಅವರು ಶಕ್ತಿಶಾಲಿಯಾಗುತ್ತಾರೆ, ನಂತರ ಪಾಯಿಂಟ್ ಮರೆತು ಹೋಯಿತು, ಶಕ್ತಿಯು ಹೋಯಿತು. ಸ್ವಲ್ಪವೇನಾದರೂ ಮಾಯೆಯ ಪ್ರಭಾವ, ಜ್ಞಾನವನ್ನು ಮರೆಸಿ ನಿರ್ಬಲರನ್ನಾಗಿ ಮಾಡಿ ಬಿಡುತ್ತದೆ. ಇನ್ನೊಬ್ಬರಿದ್ದಾರೆ - ಜ್ಞಾನದ ಚಿಂತನೆಯನ್ನೂ ಮಾಡುತ್ತಾ, ವರ್ಣನೆಯನ್ನೂ ಮಾಡುತ್ತಾ, ಅನ್ಯರಿಗೂ ಶಕ್ತಿಶಾಲಿ ಮಾತುಗಳನ್ನು ತಿಳಿಸುತ್ತಾ, ಆ ಸಮಯದಲ್ಲಿ ಸೇವೆಯ ಫಲವು ಸಿಗುವ ಕಾರಣದಿಂದ, ಅಷ್ಟೂ ಸಮಯದಲ್ಲಿ ತನ್ನನ್ನು ಶಕ್ತಿಶಾಲಿಯೆಂದು ಅನುಭವ ಮಾಡುತ್ತಾರೆ ಆದರೆ ಚಿಂತನೆಯ ಸಮಯದವರೆಗೆ ಅಥವಾ ವರ್ಣನೆ ಮಾಡುವ ಸಮಯದವರೆಗಷ್ಟೇ, ಸದಾ ಇರುವುದಿಲ್ಲ. ಮೊದಲನೆಯವರು ಚಿಂತನೆಯ ಸ್ಥಿತಿ, ಎರಡನೆಯವರು ವರ್ಣನೆಯ ಸ್ಥಿತಿ. ಮೂರನೆಯವರಿದ್ದಾರೆ - ಸದಾ ಶಕ್ತಿಶಾಲಿ ಆತ್ಮರು. ಕೇವಲ ಚಿಂತನೆ ಮತ್ತು ವರ್ಣನೆ ಮಾಡುವುದಿಲ್ಲ ಆದರೆ ಮಾಸ್ಟರ್ ಸರ್ವಶಕ್ತಿವಂತ ಸ್ವರೂಪನಾಗಿ ಬಿಡುತ್ತಾರೆ. ಸ್ವರೂಪರಾಗುವುದು ಅರ್ಥಾತ್ ಸಮರ್ಥರಾಗುವುದು. ಅವರ ಪ್ರತೀ ಹೆಜ್ಜೆ, ಪ್ರತೀ ಕರ್ಮವು ಸ್ವತಹವಾಗಿಯೇ ಶಕ್ತಿಶಾಲಿಯಾಗಿರುತ್ತದೆ. ಸ್ಮೃತಿ ಸ್ವರೂಪವಿದೆ ಆದ್ದರಿಂದ ಸದಾ ಶಕ್ತಿಶಾಲಿ ಸ್ಥಿತಿಯಿದೆ. ಶಕ್ತಿಶಾಲಿ ಆತ್ಮವು ಸದಾ ತನ್ನನ್ನು ಸರ್ವಶಕ್ತಿವಂತ ತಂದೆಯ ಜೊತೆ, ಕಂಬೈಂಡ್ ಎಂದು ಅನುಭವ ಮಾಡುತ್ತದೆ ಮತ್ತು ಸದಾ ಶ್ರೀಮತದ ಕೈ(ಹಸ್ತವು) ಛತ್ರ ಛಾಯೆಯ ರೂಪದಲ್ಲಿ ಅನುಭವವಾಗುತ್ತದೆ. ಶಕ್ತಿಶಾಲಿ ಆತ್ಮವು ಸದಾ ಧೃಡತೆಯ ಬೀಗದ ಕೈನ ಅಧಿಕಾರಿಯಾಗಿರುವ ಕಾರಣದಿಂದ ಸಫಲತೆಯ ಖಜಾನೆಯ ಮಾಲೀಕನೆಂದು ಅನುಭವವನ್ನು ಮಾಡುತ್ತಾರೆ. ಸದಾ ಸರ್ವ ಪ್ರಾಪ್ತಿಗಳ ಉಯ್ಯಾಲೆಯಲ್ಲಿ ತೂಗುತ್ತಿರುತ್ತಾರೆ. ಸದಾ ತನ್ನ ಶ್ರೇಷ್ಠ ಭಾಗ್ಯದ ಗೀತೆಯನ್ನು ಮನಸ್ಸಿನಲ್ಲಿ ಹಾಡುತ್ತಿರುತ್ತಾರೆ. ಸದಾ ಆತ್ಮಿಕ ನಶೆಯಲ್ಲಿರುವ ಕಾರಣದಿಂದ, ಹಳೆಯ ಪ್ರಪಂಚದ ಆಕರ್ಷಣೆಯಿಂದ ಸಹಜವಾಗಿ ಪಾರಾಗಿರುತ್ತಾರೆ. ಪರಿಶ್ರಮ ಪಡಬೇಕಾಗಿರುವುದಿಲ್ಲ. ಶಕ್ತಿಶಾಲಿ ಆತ್ಮನ ಪ್ರತೀ ಕರ್ಮ, ಮಾತು ಸ್ವತಹವಾಗಿ ಹಾಗೂ ಸಹಜವಾಗಿಯೇ ಸೇವೆಯನ್ನು ಮಾಡಿಸುತ್ತಿರುತ್ತದೆ. ಸ್ವ ಪರಿವರ್ತನೆ ಅಥವಾ ವಿಶ್ವ ಪರಿವರ್ತನೆಯು ಶಕ್ತಿಶಾಲಿಯಾಗಿರುವ ಕಾರಣದಿಂದ ಸಫಲತೆಯಾಗಿರುತ್ತದೆ, ಈ ಅನುಭವವು ಸದಾಕಾಲದಲ್ಲಿಯೂ ಇರುತ್ತದೆ. ಯಾವುದೇ ಕಾರ್ಯದಲ್ಲಿ ಏನು ಮಾಡಲಿ, ಏನಾಗುತ್ತದೆ ಎನ್ನುವುದು ಸಂಕಲ್ಪದಲ್ಲಿಯೂ ಇರುವುದಿಲ್ಲ. ಸಫಲತೆಯ ಮಾಲೆಯು ಸದಾ ಜೀವನದಲ್ಲಿ ಪ್ರಾಪ್ತಿಯಾಗಿರುತ್ತದೆ. ವಿಜಯಿಯಾಗಿದ್ದೇನೆ, ವಿಜಯ ಮಾಲೆಯಲ್ಲಿದ್ದೇನೆ, ವಿಜಯವು ಜನ್ಮಸಿದ್ಧ ಅಧಿಕಾರವಾಗಿದೆ - ಈ ಅಟಲ ನಿಶ್ಚಯವು ಸ್ವತಹ ಹಾಗೂ ಸದಾಕಾಲವೂ ಇದ್ದೇ ಇರುತ್ತದೆ. ತಿಳಿಯಿತೆ! ಈಗ ತಮ್ಮೊಂದಿಗೆ ತಾವು ಕೇಳಿಕೊಳ್ಳಿರಿ - ನಾನು ಯಾರು? ಶಕ್ತಿಶಾಲಿ ಆತ್ಮರು ಮೈನಾರಿಟಿಯಲ್ಲಿದ್ದಾರೆ. ಸ್ನೇಹಿ, ಸಹಯೋಗಿ, ಅದರಲ್ಲಿಯೂ ಭಿನ್ನ-ಭಿನ್ನವಾಗಿ ವಿಭಿನ್ನವಾಗಿರುವವರು ಮೆಜಾರಿಟಿಯಲ್ಲಿದ್ದಾರೆ. ಅಂದಮೇಲೆ ಈಗೇನು ಮಾಡುವಿರಿ? ಶಕ್ತಿಶಾಲಿ ಆಗಿರಿ. ಸಂಗಮಯುಗದ ಶ್ರೇಷ್ಠ ಸುಖದ ಅನುಭವವನ್ನು ಮಾಡಿರಿ. ತಿಳಿಯಿತೆ! ಕೇವಲ ತಿಳಿಯುವವರಲ್ಲ, ಪಡೆಯುವವರಾಗಿರಿ. ಒಳ್ಳೆಯದು - ತಮ್ಮ ಮನೆಯಲ್ಲಿ ಬಂದಿದ್ದೀರಿ ಅಥವಾ ತಂದೆಯ ಮನೆಯಲ್ಲಿ ಬಂದಿದ್ದೀರಿ. ತಲುಪಿದ್ದೀರಿ, ಇದನ್ನು ನೋಡುತ್ತಾ ಬಾಪ್ದಾದಾರವರಿಗೆ ಖುಷಿಯಾಗುತ್ತದೆ. ತಾವೂ ಸಹ ಬಹಳ ಖುಷಿಯಾಗಿದ್ದೀರಲ್ಲವೆ. ಈ ಖುಷಿಯು ಸದಾಕಾಲವಿರಲಿ. ಕೇವಲ ಮಧುಬನದವರೆಗಲ್ಲ, ಸಂಗಮಯುಗವೇ ಜೊತೆಯಿರಲಿ. ಮಕ್ಕಳ ಖುಷಿಯಲ್ಲಿ ತಂದೆಯದೂ ಖುಷಿಯಿದೆ. ಎಲ್ಲೆಲ್ಲಿಂದ ನಡೆದು ಬಂದು, ಸಹನೆ ಮಾಡಿಕೊಂಡು ತಲುಪಿ ಬಿಟ್ಟಿದ್ದೀರಲ್ಲವೆ. ಬಿಸಿಲು-ಚಳಿ, ಆಹಾರ ಪಾನೀಯ ಎಲ್ಲವನ್ನೂ ಸಹನೆ ಮಾಡಿಕೊಂಡು ತಲುಪಿದ್ದೀರಿ. ಧೂಳು ಮಣ್ಣಿನ ಮಳೆಯೂ ಸುರಿಯಿತು. ಇದೆಲ್ಲವೂ ಹಳೆಯ ಪ್ರಪಂಚದಲ್ಲಂತು ಆಗುತ್ತಲೇ ಇರುತ್ತದೆ. ಆದರೂ ಆರಾಮ ಸಿಕ್ಕಿತಲ್ಲವೆ. ವಿಶ್ರಾಂತಿ ಮಾಡಿದಿರಾ? ಮೂರು ಅಡಿ ಇಲ್ಲವೆಂದರೆ ಎರಡು ಅಡಿಯಾದರೂ ಜಾಗವು ಸಿಕ್ಕಿತು. ಆದರೂ ತಮ್ಮ ಮನೆ, ದಾತಾನ ಮನೆಯು ಮಧುರವೆನಿಸುತ್ತದೆಯಲ್ಲವೆ. ಭಕ್ತಿ ಮಾರ್ಗದ ಯಾತ್ರೆಗಳಿಗಿಂತಲೂ ಒಳ್ಳೆಯ ಸ್ಥಾನವಾಗಿದೆ. ಛತ್ರ ಛಾಯೆಯೊಳಗೆ ಬಂದು ಬಿಟ್ಟಿರಿ. ಪ್ರೀತಿಯ ಪಾಲನೆಯಲ್ಲಿ ಬಂದು ಬಿಟ್ಟಿರಿ. ಯಜ್ಞದ ಶ್ರೇಷ್ಠ ಧರಣಿಯಲ್ಲಿ ತಲುಪುವುದು, ಯಜ್ಞದ ಪ್ರಸಾದದ ಅಧಿಕಾರಿಯಾಗುವುದು, ಎಷ್ಟೊಂದು ಮಹತ್ವವಿದೆ. ಒಂದು ಕಣ, ಅನೇಕದರಷ್ಟು ಸಮಾನವಾಗಿದೆ. ಇದಂತು ಎಲ್ಲರೂ ತಿಳಿದಿದ್ದೀರಲ್ಲವೆ! ಅವರಂತು ಪ್ರಸಾದ ಒಂದು ಕಣವು ಸಿಗಬೇಕೆಂದು ಬಯಸುತ್ತಾರೆ ಮತ್ತು ತಮಗಂತು ಬ್ರಹ್ಮಾ ಭೋಜನವಂತು ಹೊಟ್ಟೆ ತುಂಬುವಷ್ಟು ಸಿಗುತ್ತದೆ. ಅಂದಮೇಲೆ ಎಷ್ಟೊಂದು ಭಾಗ್ಯಶಾಲಿಯಾಗಿದ್ದೀರಿ. ಈ ಮಹತ್ವದಿಂದ ಬ್ರಹ್ಮಾ ಭೋಜನವನ್ನು ಸೇವನೆ ಮಾಡಿದರೆಂದರೆ ಸದಾಕಾಲಕ್ಕಾಗಿ ಮನಸ್ಸೂ ಸಹ ಮಹಾನ್ ಆಗಿ ಬಿಡುತ್ತದೆ.

ಒಳ್ಳೆಯದು - ಎಲ್ಲರಿಗಿಂತಲೂ ಹೆಚ್ಚು ಪಂಜಾಬಿನವರು ಬಂದಿದ್ದಾರೆ. ಈ ಬಾರಿ ಹೆಚ್ಚಾಗಿ ಏಕೆ ಓಡಿದ್ದೀರಿ? ಇಷ್ಟೊಂದು ಸಂಖ್ಯೆಯಲ್ಲಂತು ಎಂದೂ ಬಂದಿಲ್ಲ. ಜಾಗ್ರತೆಯಲ್ಲಿ ಬಂದು ಬಿಟ್ಟಿರಿ! ಆದರೂ ಬಾಪ್ದಾದಾರವರು ಇದೇ ಶ್ರೇಷ್ಠ ವಿಶೇಷತೆಯನ್ನು ನೋಡುತ್ತಾರೆ- ಪಂಜಾಬಿನಲ್ಲಿ ಸತ್ಸಂಗ ಮತ್ತು ಅಮೃತ ವೇಳೆಯ ಮಹತ್ವವಿದೆ. ಬರಿಗಾಲಿನಲ್ಲಿಯೂ ಅಮೃತ ವೇಳೆಯಲ್ಲಿ ತಲುಪಿ ಬಿಡುತ್ತಾರೆ. ಬಾಪ್ದಾದಾರವರು ಪಂಜಾಬ್ ನಿವಾಸಿ ಮಕ್ಕಳನ್ನು ಇದೇ ಮಹತ್ವವನ್ನೇ ತಿಳಿದುಕೊಂಡಿರುವವರೆನ್ನುವ ಮಹಾನತೆಯಿಂದ ನೋಡುತ್ತಾರೆ. ಪಂಜಾಬ್ ನಿವಾಸಿ ಅರ್ಥಾತ್ ಸದಾ ಸಂಗದ ಆತ್ಮಿಕ ರಂಗಿನಲ್ಲಿ ರಂಗಿತರಾಗಿರುವವರು. ಸದಾ ಸತ್ಯನ ಸಂಗದಲ್ಲಿರುವವರು. ಹೀಗಿದ್ದೀರಲ್ಲವೆ? ಪಂಜಾಬಿನವರೆಲ್ಲರೂ ಅಮೃತ ವೇಳೆಯಲ್ಲಿ ಸಮರ್ಥರಾಗಿ ಮಿಲನವನ್ನಾಚರಿಸುತ್ತೀರಾ? ಪಂಜಾಬಿನವರಲ್ಲಿ ಅಮೃತ ವೇಳೆಯ ಆಲಸ್ಯವಂತು ಇಲ್ಲವಲ್ಲವೇ? ತೂಕಡಿಕೆಯಂತು ಬರುವುದಿಲ್ಲವೇ? ಅಂದಮೇಲೆ ಪಂಜಾಬಿನ ವಿಶೇಷತೆಯನ್ನು ಸದಾ ನೆನಪಿಟ್ಟುಕೊಳ್ಳಿರಿ. ಒಳ್ಳೆಯದು - ಈಸ್ಟರ್ನ್ ಜೋನಿನವರೂ ಬಂದಿದ್ದಾರೆ, ಈಸ್ಟರ್ನ್ ವಿಶೇಷತೆಯೇನಾಗಿರುತ್ತದೆ? (ಸನ್ರೈಸ್) ಸೂರ್ಯನು ಸದಾ ಉದಯವಾಗುತ್ತಾನೆ. ಸೂರ್ಯ ಅರ್ಥಾತ್ ಪ್ರಕಾಶತೆಯ ಪುಂಜ. ಅಂದಮೇಲೆ ಈಸ್ಟರ್ನ್ ಜೋನಿನವರೆಲ್ಲರೂ ಮಾಸ್ಟರ್ ಜ್ಞಾನ ಸೂರ್ಯನಾಗಿದ್ದಾರೆ. ಸದಾ ಅಂಧಕಾರವನ್ನು ಅಳಿಸುವವರು, ಪ್ರಕಾಶತೆಯನ್ನು ಕೊಡುವವರಾಗಿದ್ದೀರಲ್ಲವೆ! ಇದೇ ವಿಶೇಷತೆಯಿದೆಯಲ್ಲವೆ. ಎಂದಿಗೂ ಮಾಯೆಯ ಅಂಧಕಾರದಲ್ಲಿ ಬರುವವರಲ್ಲ. ಅಂಧಕಾರವನ್ನು ದೂರ ಮಾಡುವಂತಹ ಮಾಸ್ಟರ್ ದಾತಾ ಆಗಿ ಬಿಟ್ಟಿದ್ದೀರಲ್ಲವೆ! ಸೂರ್ಯನು ದಾತಾ ಆಗಿದ್ದಾನಲ್ಲವೆ. ಅಂದಮೇಲೆ ಎಲ್ಲರೂ ಮಾಸ್ಟರ್ ಸೂರ್ಯ ಅರ್ಥಾತ್ ಮಾಸ್ಟರ್ ದಾತನಾಗಿದ್ದು, ವಿಶ್ವಕ್ಕೆ ಪ್ರಕಾಶತೆಯನ್ನು ಕೊಡುವ ಕಾರ್ಯದಲ್ಲಿ ಬ್ಯುಜಿಯಾಗಿರುತ್ತೀರಲ್ಲವೆ. ಯಾರು ಸ್ವಯಂ ಬ್ಯುಜಿಯಾಗಿರುತ್ತಾರೆ, ಬಿಡುವಿರುವುದಿಲ್ಲ, ಅವರಿಗಾಗಿ ಮಾಯೆಗೂ ಸಹ ಬಿಡುವಿರುವುದಿಲ್ಲ. ಅಂದಮೇಲೆ ಈಸ್ಟರ್ನ್ ಜೋನಿನವರು ಏನು ತಿಳಿಯುತ್ತೀರಿ? ಈಸ್ಟರ್ನ್ ಜೋನಿನಲ್ಲಿ ಮಾಯೆಯು ಬರುತ್ತದೆಯೇ? ಬರುತ್ತದೆ, ನಮಸ್ಕಾರ ಮಾಡಲು ಬರುತ್ತದೆಯೋ ಅಥವಾ ಮಿಕ್ಕಿ ಮೌಸ್ ಮಾಡಿ ಬಿಡುತ್ತದೆಯೇ? ಮಿಕ್ಕಿ ಮೌಸ್ ಆಟವು ಇಷ್ಟವಾಗುತ್ತದೆಯೇ? ಈಸ್ಟರ್ನ್ ಜೋನಿನವರ ಗದ್ದುಗೆಯಿದೆ, ತಂದೆಯ ಗದ್ದುಗೆ. ಅಂದಮೇಲೆ ರಾಜ ಗದ್ದುಗೆಯಾಯಿತಲ್ಲವೆ. ರಾಜ ಗದ್ದುಗೆಯವರು ರಾಜರಾಗುತ್ತಾರೆಯೋ ಅಥವಾ ಮಿಕ್ಕಿ ಮೌಸ್ ಆಗುವರೇ? ಅಂದಮೇಲೆ ಎಲ್ಲರೂ ಮಾಸ್ಟರ್ ಜ್ಞಾನಸೂರ್ಯನಾಗಿದ್ದೀರಾ? ಜ್ಞಾನಸೂರ್ಯನ ಉದಯವೂ ಸಹ ಅಲ್ಲಿಂದಲೇ ಆಯಿತಲ್ಲವೆ. ಈಸ್ಟರ್ನ್ನಿಂದಲೇ ಉದಯವಾಯಿತು. ತಮ್ಮ ವಿಶೇಷತೆಯು ತಿಳಿಯಿತೆ! ಪ್ರವೇಶತೆಯ ಶ್ರೇಷ್ಠ ಗದ್ದುಗೆಯ ಅರ್ಥಾತ್ ವರದಾನಿ ಸ್ಥಾನದ ಶ್ರೇಷ್ಠಾತ್ಮರಾಗಿದ್ದೀರಿ. ಈ ವಿಶೇಷತೆಯು ಮತ್ತ್ಯಾವ ಜೋನಿನಲ್ಲಿಯೂ ಇಲ್ಲ. ಅಂದಮೇಲೆ ಸದಾ ತಮ್ಮ ವಿಶೇಷತೆಯನ್ನು ವಿಶ್ವದ ಸೇವೆಯಲ್ಲಿ ಉಪಯೋಗಿಸಿರಿ. ವಿಶೇಷತೆಯೇನು ಮಾಡುವಿರಿ? ಸದಾ ಮಾಸ್ಟರ್ ಜ್ಞಾನಸೂರ್ಯ. ಸದಾ ಪ್ರಕಾಶತೆಯನ್ನು ಕೊಡುವಂತಹ ಮಾಸ್ಟರ್ ದಾತಾ. ಒಳ್ಳೆಯದು - ಎಲ್ಲರೂ ಮಿಲನವಾಗಲು ಬಂದಿದ್ದೀರಿ, ಸದಾ ಶ್ರೇಷ್ಠ ಮಿಲನವನ್ನು ಆಚರಿಸುತ್ತಿರಿ. ಮೇಳ ಅರ್ಥಾತ್ ಮಿಲನವಾಗುವುದು. ಒಂದು ಸೆಕೆಂಡ್ ಸಹ ಮಿಲನದ ಮೇಳದಿಂದ ವಂಚಿತರಾಗಬಾರದು. ನಿರಂತರ ಯೋಗಿಯ ಅನುಭವವನ್ನು ಪರಿಪಕ್ವವನ್ನಾಗಿ ಮಾಡಿಕೊಂಡು ಹೋಗಬೇಕು. ಒಳ್ಳೆಯದು.

ಸದಾ ಒಬ್ಬ ತಂದೆಯ ಸ್ನೇಹದಲ್ಲಿರುವಂತಹ ಸ್ನೇಹಿ ಆತ್ಮರಿಗೆ, ಪ್ರತೀ ಹೆಜ್ಜೆಯಲ್ಲಿ ಈಶ್ವರನ ಕಾರ್ಯದ ಸಹಯೋಗಿ ಆತ್ಮರಿಗೆ, ಸದಾ ಶಕ್ತಿಶಾಲಿ ಸ್ವರೂಪದ ಶ್ರೇಷ್ಠಾತ್ಮರಿಗೆ, ಸದಾ ವಿಜಯದ ಅಧಿಕಾರವನ್ನು ಅನುಭವ ಮಾಡುವಂತಹ ವಿಜಯಿ ಮಕ್ಕಳಿಗೆ, ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ :- ಒಂದು ಬಲ ಮತ್ತು ಒಂದು ಭರವಸೆಯಿಂದ ಸದಾ ಉನ್ನತಿಯನ್ನು ಪಡೆಯುತ್ತಿರಿ. ಸದಾ ಒಬ್ಬ ತಂದೆಯವರಾಗಿದ್ದೀರಿ, ಒಬ್ಬ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ಇದೇ ಪುರುಷಾರ್ಥದಿಂದ ಮುಂದೆ ಸಾಗುತ್ತಿರಿ. ಅನುಭವ ಮಾಡಿರಿ - ಶ್ರೇಷ್ಠ ಜ್ಞಾನದ ಸ್ವರೂಪರಾಗುವ ಅನುಭವ. ಮಹಾನ್ ಯೋಗಿಯಾಗುವ ಅನುಭವದಲ್ಲಿ ಆಳದಲ್ಲಿ ಹೋಗಿರಿ. ಜ್ಞಾನದ ಆಳದಲ್ಲಿ ಎಷ್ಟು ಹೋಗುತ್ತೀರಿ, ಅಷ್ಟೂ ಅಮೂಲ್ಯ ಅನುಭವದ ರತ್ನಗಳು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಏಕಾಗ್ರ ಬುದ್ಧಿಯವರಾಗಿರಿ. ಎಲ್ಲಿ ಏಕಾಗ್ರತೆಯಿದೆ ಅಲ್ಲಿ ಸರ್ವಪ್ರಾಪ್ತಿಗಳ ಅನುಭವವಿದೆ. ಅಲ್ಪಕಾಲದ ಪ್ರಾಪ್ತಿಯ ಹಿಂದೆ ಹೋಗದಿರಿ. ಅವಿನಾಶಿ ಪ್ರಾಪ್ತಿಯನ್ನು ಮಾಡಿಕೊಳ್ಳಿರಿ. ವಿನಾಶಿ ಮಾತುಗಳಲ್ಲಿ ಆಕರ್ಷಿತರಾಗಬಾರದು. ಸದಾ ತಮ್ಮನ್ನು ಅವಿನಾಶಿ ಖಜಾನೆಗಳ ಮಾಲೀಕನೆಂದು ತಿಳಿದು ಬೇಹದ್ದಿನಲ್ಲಿ ಹೋಗಿರಿ. ಹದ್ದಿನಲ್ಲಿ ಬರಬಾರದು. ಬೇಹದ್ದಿನ ಮಜಾ ಮತ್ತು ಅಲ್ಪಕಾಲದರ ಆಕರ್ಷಣೆಯ ಮಜಾ - ಇದರಲ್ಲಿ ಹಗಲು-ರಾತ್ರಿಯ ಅಂತರವಿದೆ. ಆದ್ದರಿಂದ ಬುದ್ಧಿವಂತರಾಗಿದ್ದು ತಿಳುವಳಿಕೆಯಿಂದ ಕೆಲಸವನ್ನು ತೆಗೆದುಕೊಳ್ಳಿರಿ ಮತ್ತು ವರ್ತಮಾನ ಹಾಗೂ ಭವಿಷ್ಯವನ್ನು ಶ್ರೇಷ್ಠಗೊಳಿಸಿರಿ.

ಆಯ್ಕೆ ಮಾಡಿಕೊಂಡಿರುವ ವಿಶೇಷ ಅವ್ಯಕ್ತ ಮಹಾವಾಕ್ಯಗಳು – ಪ್ರೀತಿ ಬುದ್ಧಿ ವಿಜಯಿರತ್ನವಾಗಿರಿ

ಪ್ರೀತಿ ಬುದ್ಧಿ ಅರ್ಥಾತ್ ಸದಾ ಅಲೌಕಿಕ ಅವ್ಯಕ್ತ ಸ್ಥಿತಿಯಲ್ಲಿರುವ ಅಲ್ಲಾಹ್ನ ಜನರು. ಯಾರ ಪ್ರತೀ ಸಂಕಲ್ಪ, ಪ್ರತೀ ಕಾರ್ಯವು ಅಲೌಕಿಕವಾಗಿರುತ್ತದೆ, ವ್ಯಕ್ತ ದೇಶ ಮತ್ತು ಕರ್ತವ್ಯದಲ್ಲಿರುತ್ತಿದ್ದರೂ ಕಮಲ ಪುಷ್ಪದಂತೆ ಭಿನ್ನ ಹಾಗೂ ಒಬ್ಬ ತಂದೆಗೆ ಸದಾ ಪ್ರಿಯರಾಗಿರುವುದು ಪ್ರೀತಿ ಬುದ್ಧಿಯವರಾಗುವುದು. ಪ್ರೀತಿ ಬುದ್ಧಿ ಅರ್ಥಾತ್ ವಿಜಯಿ. ತಮ್ಮ ಸ್ಲೋಗನ್ ಸಹ ಇದೆ - ವಿನಾಶಕಾಲೇ ಪ್ರೀತಿ ಬುದ್ಧಿ ವಿಜಯಂತಿ ಮತ್ತು ವಿನಾಶಕಾಲದಲ್ಲಿ ವಿಪರೀತ ಬುದ್ಧಿ ವಿನಃಶ್ಯಂತಿ. ಯಾವಾಗ ಈ ಸ್ಲೋಗನ್ನ್ನು ಅನ್ಯರಿಗೆ ತಿಳಿಸುತ್ತೀರಿ - ವಿನಾಶ ಕಾಲದಲ್ಲಿ ವಿಪರೀತ ಬುದ್ಧಿಯವರಾಗದಿರಿ, ಪ್ರೀತಿ ಬುದ್ಧಿಯವರಾಗಿರಿ ಅಂದಮೇಲೆ ತಮ್ಮನ್ನು ನೋಡಿಕೊಳ್ಳಿರಿ – ಪ್ರತೀ ಸಮಯದಲ್ಲಿ ಪ್ರೀತಿ ಬುದ್ಧಿಯವನಾಗಿರುತ್ತೇನೆಯೇ? ಎಂದೂ ಸಹ ವಿಪರೀತ ಬುದ್ಧಿಯವನಂತು ಆಗುವುದಿಲ್ಲವೇ?

ಪ್ರೀತಿ ಬುದ್ಧಿಯವರು ಎಂದಿಗೂ ಶ್ರೀಮತಕ್ಕೆ ವಿಪರೀತವಾಗಿ ಒಂದು ಸಂಕಲ್ಪವೂ ಉತ್ಪನ್ನವಾಗಲು ಸಾಧ್ಯವಿಲ್ಲ. ಒಂದು ವೇಳೆ ಶ್ರೀಮತಕ್ಕೆ ವಿಪರೀತವಾದ ಸಂಕಲ್ಪ, ವಚನ ಅಥವಾ ಕರ್ಮವಾಗುತ್ತದೆಯೆಂದರೆ ಅವರಿಗೆ ಪ್ರೀತಿ ಬುದ್ಧಿಯವರೆಂದು ಹೇಳುವುದಿಲ್ಲ. ಅಂದಮೇಲೆ ಪರಿಶೀಲನೆ ಮಾಡಿಕೊಳ್ಳಿರಿ – ಪ್ರತೀ ಸಂಕಲ್ಪ ಅಥವಾ ವಚನವು ಶ್ರೀಮತದನುಸಾರವಾಗಿ ಇದೆಯೇ? ಪ್ರೀತಿ ಬುದ್ಧಿ ಅರ್ಥಾತ್ ಬುದ್ಧಿಯ ಲಗನ್ ಅಥವಾ ಪ್ರೀತಿಯು ಒಬ್ಬ ಪ್ರಿಯತಮನ ಜೊತೆ ಸದಾ ಜೋಡಣೆಯಾಗಿರುವುದು. ಯಾವಾಗ ಒಬ್ಬರ ಜೊತೆ ಸದಾ ಪ್ರೀತಿಯಿದೆಯೆಂದರೆ ಬೇರೆ ಯಾರೊಂದಿಗೂ ವ್ಯಕ್ತಿ ಅಥವಾ ವೈಭವದ ಜೊತೆಯೂ ಜೋಡಣೆಯಾಗಲು ಸಾಧ್ಯವಿಲ್ಲ. ಏಕೆಂದರೆ ಪ್ರೀತಿ ಬುದ್ಧಿ ಅರ್ಥಾತ್ ಸದಾ ಬಾಪ್ದಾದಾರವರನ್ನು ತಮ್ಮ ಸನ್ಮುಖದಲ್ಲಿರುವ ಅನುಭವ ಮಾಡುವವರು. ಹೀಗೆ ಸನ್ಮುಖದಲ್ಲಿರುವವರು ಎಂದಿಗೂ ವಿಮುಖರಾಗಲು ಸಾಧ್ಯವಿಲ್ಲ. ಪ್ರೀತಿ ಬುದ್ಧಿಯವರ ಮುಖದಿಂದ, ಅವರ ಹೃದಯದಿಂದ ಸದಾ ಇದೇ ಮಾತು ಬರುತ್ತದೆ - ನಿಮ್ಮೊಂದಿಗೇ ತಿನ್ನುವೆನು, ನಿಮ್ಮೊಂದಿಗೇ ಕುಳಿತುಕೊಳ್ಳುವೆನು, ನಿಮ್ಮೊಂದಿಗೇ ಮಾತನಾಡುವೆನು, ನಿಮ್ಮೊಂದಿಲೇ ಕೇಳುವೆನು, ನಿಮ್ಮೊಂದಿಗೇ ಸರ್ವ ಸಂಬಂಧವನ್ನು ನಿಭಾಯಿಸುವೆನು, ನಿಮ್ಮೊಂದಿಗೇ ಸರ್ವ ಪ್ರಾಪ್ತಿ ಮಾಡಿಕೊಳ್ಳುವೆನು, ಅವರ ಮುಖವು ಮಾತನಾಡದಿದ್ದರೂ ಮಾತನಾಡುತ್ತದೆ. ಅಂದಮೇಲೆ ಪರಿಶೀಲನೆ ಮಾಡಿರಿ - ಹೀಗೆ ವಿನಾಶಕಾಲೇ ಪ್ರೀತಿ ಬುದ್ಧಿಯವನಾಗಿದ್ದೇನೆಯೇ ಅರ್ಥಾತ್ ಒಬ್ಬರದೇ ಲಗನ್ನಿನಲ್ಲಿ ಏಕರಸ ಸ್ಥಿತಿಯವನಾಗಿದ್ದೇನೆಯೇ? ಹೇಗೆ ಸೂರ್ಯನ ಮುಂದೆ ಹೋಗಿ ನೋಡುವುದರಿಂದ ಕಿರಣಗಳು ಅವಶ್ಯವಾಗಿ ಬರುತ್ತದೆ - ಇದೇ ಪ್ರಕಾರದಲ್ಲಿ ಒಂದು ವೇಳೆ ಜ್ಞಾನಸೂರ್ಯ ತಂದೆಯ ಸನ್ಮುಖದಲ್ಲಿ ಸದಾ ಇರುತ್ತೀರಿ ಅರ್ಥಾತ್ ಸತ್ಯ ಪ್ರೀತಿ ಬುದ್ಧಿಯಿದೆಯೆಂದರೆ ಜ್ಞಾನಸೂರ್ಯನ ಸರ್ವ ಗುಣಗಳ ಕಿರಣಗಳನ್ನು ತಮ್ಮಲ್ಲಿ ಅನುಭವ ಮಾಡುತ್ತೀರಿ. ಇಂತಹ ಪ್ರೀತಿ ಬುದ್ಧಿ ಮಕ್ಕಳ ಚಹರೆಯಲ್ಲಿ ಅಂತರ್ಮುಖತೆಯ ಹೊಳಪು ಮತು ಜೊತೆ ಜೊತೆಗೆ ಸಂಗಮಯುಗದ ಅಥವಾ ಭವಿಷ್ಯದ ಸರ್ವ ಸ್ವಮಾನದ ನಶೆಯಿರುತ್ತದೆ. ಒಂದು ವೇಳೆ ಸದಾ ಈ ಸ್ಮೃತಿಯಿದೆ - ಈ ತನುವು ಯಾವ ಸಮಯದಲ್ಲಾದರೂ ವಿನಾಶವಾಗಬಹುದು, ಅಂದಮೇಲೆ ಈ ವಿನಾಶಕಾಲವು ಸ್ಮೃತಿಯಲ್ಲಿರುವುದರಿಂದ ಪ್ರೀತಿ ಬುದ್ಧಿಯವರಾಗಿ ಸ್ವತಹವಾಗಿಯೇ ಆಗಿ ಬಿಡುತ್ತೀರಿ. ಹೇಗೆ ವಿನಾಶಕಾಲವು ಬರುತ್ತದೆಯೆಂದರೆ ಅಜ್ಞಾನಿಯೂ ಸಹ ತಂದೆಯನ್ನು ನೆನಪು ಮಾಡುವ ಪ್ರಯತ್ನವನ್ನು ಅವಶ್ಯವಾಗಿ ಮಾಡುತ್ತಾರೆ. ಆದರೆ ಪರಿಚಯವಿಲ್ಲದೆ ಪ್ರೀತಿಯು ಜೋಡಣೆಯಾಗುವುದಿಲ್ಲ. ಒಂದು ವೇಳೆ ಸದಾ ಇದನ್ನು ಸ್ಮೃತಿಯಿಟ್ಟುಕೊಳ್ಳುತ್ತೀರಿ - ಇದು ಅಂತಿಮ ಗಳಿಗೆಯಾಗಿದೆ, ಈ ನೆನಪಿರುವುದರಿಂದ ಮತ್ತೇನೂ ನೆನಪು ಬರುವುದಿಲ್ಲ. ಯಾರು ಸದಾ ಪ್ರೀತಿ ಬುದ್ಧಿಯವರಾಗಿರುತ್ತಾರೆಯೋ ಅವರ ಮನಸ್ಸಿನಲ್ಲಿಯೂ ಶ್ರೀಮತಕ್ಕೆ ವಿಪರೀತವಾದ ವ್ಯರ್ಥ ಸಂಕಲ್ಪ ಅಥವಾ ವಿಕಲ್ಪವು ಬರಲು ಸಾಧ್ಯವಿಲ್ಲ. ಇಂತಹ ಪ್ರೀತಿ ಬುದ್ಧಿಯವರೇ ವಿಜಯಿ ರತ್ನಗಳಾಗುತ್ತಾರೆ. ಎಲ್ಲಿ ಯಾವುದೇ ಪ್ರಕಾರದಿಂದ ಯಾವುದೇ ದೇಹಧಾರಿಯೊಂದಿಗೆ ಪ್ರೀತಿಯಿರಬಾರದು, ಇಲ್ಲವೆಂದರೆ ವಿಪರೀತ ಬುದ್ಧಿಯವರ ಪಟ್ಟಿಯಲ್ಲಿ ಬಂದು ಬಿಡುವಿರಿ. ಯಾವ ಮಕ್ಕಳು ಪ್ರೀತಿ ಬುದ್ಧಿಯವರಾಗಿದ್ದು ಸದಾ ಪ್ರೀತಿಯ ರೀತಿಯನ್ನು ನಿಭಾಯಿಸುತ್ತಾರೆ, ಅವರಿಗೆ ಸದಾ ಕಾಲಕ್ಕಾಗಿ ಇಡೀ ವಿಶ್ವದ ಸರ್ವ ಸುಖಗಳ ಪ್ರಾಪ್ತಿಯು ಆಗುತ್ತದೆ. ಬಾಪ್ದಾದಾರವರು ಹೀಗೆ ಪ್ರೀತಿಯನ್ನು ನಿಭಾಯಿಸುವ ಮಕ್ಕಳ ಗುಣಗಾನವನ್ನು ಹಗಲು-ರಾತ್ರಿ ಮಾಡುತ್ತಾರೆ. ಉಳಿದೆಲ್ಲರನ್ನು ಮುಕ್ತಿಧಾಮದಲ್ಲಿ ಕೂರಿಸಿ, ಪ್ರೀತಿಯ ರೀತಿಯನ್ನು ನಿಭಾಯಿಸುವ ಮಕ್ಕಳಿಗೆ ವಿಶ್ವದ ರಾಜ್ಯಭಾಗ್ಯದ ಪ್ರಾಪ್ತಿಯನ್ನು ಮಾಡಿಸುತ್ತಾರೆ. ಒಬ್ಬ ತಂದೆಯ ಜೊತೆಗೆ ಹೃದಯದ ಸತ್ಯ ಪ್ರೀತಿ ಇರುತ್ತದೆಯೆಂದರೆ ಮಾಯೆಯೆಂದಿಗೂ ತೊಂದರೆ ಮಾಡುವುದಿಲ್ಲ. ಅದರ ವಿನಾಶವಾಗಿ ಬಿಡುತ್ತದೆ. ಆದರೆ ಒಂದು ವೇಳೆ ಸತ್ಯ ಹೃದಯದ ಪ್ರೀತಿಯಿಲ್ಲ, ಕೇವಲ ತಂದೆಯ ಕೈಯನ್ನು ಹಿಡಿದಿದ್ದೀರಿ, ಜೊತೆ ತೆಗೆದುಕೊಂಡಿಲ್ಲವೆಂದರೆ ಮಾಯೆಯ ಮೂಲಕ ಘಾತವಾಗುತ್ತಿರುತ್ತದೆ. ಯಾವಾಗ ಮರುಜೀವಿ ಆದಿರಿ, ಹೊಸ ಜನ್ಮ, ಹೊಸ ಸಂಸ್ಕಾರಗಳನ್ನು ಧಾರಣೆ ಮಾಡಿಕೊಂಡಿರೆಂದರೆ, ಹಳೆಯ ಸಂಸ್ಕಾರವೆಂಬ ವಸ್ತ್ರದೊಂದಿಗೆ ಪ್ರೀತಿಯೇಕೆ? ಯಾವ ವಸ್ತುವು ತಂದೆಗೆ ಪ್ರಿಯವಲ್ಲ, ಅದು ಮಕ್ಕಳಿಗೇಕೆ? ಆದ್ದರಿಂದ ಪ್ರೀತಿ ಬುದ್ಧಿಯವರಾಗಿದ್ದು ಒಳಗಿನ ಬಲಹೀನತೆ, ಕೊರತೆ, ನಿರ್ಬಲತೆ ಮತ್ತು ಕೋಮಲತೆಯ ಹಳೆಯ ಖಾತೆಯನ್ನು ಸದಾಕಾಲಕ್ಕಾಗಿ ಸಮಾಪ್ತಿ ಮಾಡಿ ಬಿಡಿ. ರತ್ನಜಡಿತ ವಸ್ತ್ರವನ್ನು ಬಿಟ್ಟು ಜಡಜಡೀಭೂತವಾಗಿರುವ ವಸ್ತ್ರದೊಂದಿಗೆ ಪ್ರೀತಿಯನ್ನಿಡಬಾರದು. ಕೆಲ ಮಕ್ಕಳು ಪ್ರೀತಿಯನ್ನಿಟ್ಟು ಬಿಡುತ್ತಾರೆ ಆದರೆ ನಿಭಾಯಿಸುವುದರಲ್ಲಿ ನಂಬರ್ವಾರ್ ಇದ್ದಾರೆ. ನಿಭಾಯಿಸುವುದರಲ್ಲಿ ಲೈನ್ ಬದಲಾಗಿ ಬಿಡುತ್ತದೆ. ಲಕ್ಷ್ಯವು ಒಂದಿರುತ್ತದೆ, ಲಕ್ಷಣವು ಇನ್ನೊಂದಾಗಿ ಬಿಡುತ್ತದೆ. ಯಾವುದೇ ಒಂದು ಸಂಬಂಧದಲ್ಲಿಯೂ ಒಂದು ವೇಳೆ ನಿಭಾಯಿಸುವುದರಲ್ಲಿ ಕೊರತೆಯಾಯಿತು, ಉದಾ: 75% ಸಂಬಂಧವು ತಂದೆಯೊಂದಿಗಿದೆ ಮತ್ತು 25% ಸಂಬಂಧವು ಯಾವುದೋ ಆತ್ಮದೊಂದಿಗೆ ಇದೆ, ಇಷ್ಟಿದ್ದರೂ ನಿಭಾಯಿಸುವವರ ಪಟ್ಟಿಯಲ್ಲಿ ಬರಲು ಸಾಧ್ಯವಿಲ್ಲ. ನಿಭಾಯಿಸುವುದು ಎಂದರೆ ನಿಭಾಯಿಸುವುದು. ಎಂತಹ ಪರಿಸ್ಥಿತಿಯೇ ಇರಲಿ, ಭಲೇ ಮನಸ್ಸಿನದಿರಲಿ, ತನುವಿನದೇ ಇರಲಿ ಅಥವಾ ಸಂಪರ್ಕದ್ದು, ಆದರೆ ಯಾವುದೇ ಆತ್ಮವು ಸಂಕಲ್ಪದಲ್ಲಿಯೂ ನೆನಪು ಬರಬಾರದು. ಸಂಕಲ್ಪದಲ್ಲಿಯೂ ಯಾವುದೇ ಆತ್ಮನ ಸ್ಮೃತಿಯು ಬಂದಿತೆಂದರೆ, ಅದೇ ಸೆಕೆಂಡಿನ ಲೆಕ್ಕವಾಗಿ ಬಿಡುತ್ತದೆ, ಇದು ಕರ್ಮದ ಗುಹ್ಯ ಗತಿಯಾಗಿದೆ. ಕೆಲ ಕೆಲವು ಮಕ್ಕಳು ಈಗಿನವರೆಗೂ ಪ್ರೀತಿಯನ್ನಿಡುವುದರಲ್ಲಿಯೇ ತೊಡಗಿದ್ದಾರೆ, ಆದ್ದರಿಂದ ಹೇಳಲಾಗುತ್ತದೆ - ಯೋಗ ಜೋಡಣೆಯಾಗುವುದಿಲ್ಲ. ಯಾರಿಗೆ ಸ್ವಲ್ಪ ಸಮಯ ಯೋಗವಾಗುತ್ತದೆ ಮತ್ತು ಕಟ್ ಆಗುತ್ತದೆ - ಇಂತಹವರಿಗೆ ಹೇಳಲಾಗುತ್ತದೆ - ಪ್ರೀತಿಯನ್ನಿಡುವವರು. ಯಾರು ಪ್ರೀತಿಯನ್ನು ನಿಭಾಯಿಸುವವರಾಗುತ್ತಾರೆ, ಅವರು ಪ್ರೀತಿಯಲ್ಲಿ ಮುಳುಗಿರುವವರಾಗಿರುತ್ತಾರೆ. ಅವರಿಗೆ ದೇಹದ ಮತ್ತು ದೇಹದ ಸಂಬಂಧಿಗಳ ನೆನಪು ಸಂಪೂರ್ಣವಾಗಿ ಮರೆತು ಹೋಗಿರುತ್ತದೆ ಅಂದಮೇಲೆ ತಾವೂ ಸಹ ತಂದೆಯ ಜೊತೆ ಇಂತಹ ಪ್ರೀತಿಯನ್ನು ನಿಭಾಯಿಸುತ್ತೀರೆಂದರೆ, ಮತ್ತೆ ದೇಹ ಮತ್ತು ದೇಹದ ಸಂಬಂಧಿಯು ನೆನಪಿಗೆ ಬರಲು ಸಾಧ್ಯವಿಲ್ಲ.
 

ವರದಾನ:
ಸಮಯ ಮತ್ತು ಸಂಕಲ್ಪವೆಂಬ ಖಜಾನೆಯ ಬಗ್ಗೆ ಗಮನವನ್ನಿಟ್ಟುಕೊಂಡು, ಜಮಾದ ಖಾತೆಯನ್ನು ವೃದ್ಧಿ ಮಾಡಿಕೊಳ್ಳುವಂತಹ ಪದಮಾಪದಮಪತಿ ಭವ.

ಹಾಗೆ ನೋಡಿದಾಗ ಖಜಾನೆಗಳಂತು ಬಹಳಷ್ಟಿದೆ ಆದರೆ ಸಮಯ ಮತ್ತು ಸಂಕಲ್ಪ- ವಿಶೇಷವಾಗಿ ಇವೆರಡು ಖಜಾನೆಗಳ ಮೇಲೆ ಗಮನವನ್ನು ಕೊಡಿ. ಪ್ರತೀ ಸಮಯ ಸಂಕಲ್ಪವು ಶ್ರೇಷ್ಠ ಮತ್ತು ಶುಭವಾಗಿರುತ್ತದೆಯೆಂದರೆ ಜಮಾದ ಖಾತೆಯು ವೃದ್ಧಿಯಾಗುತ್ತದೆ. ಈ ಸಮಯದಲ್ಲಿ ಒಂದು ಜಮಾ ಮಾಡುತ್ತೀರೆಂದರೆ ಪದಮದಷ್ಟು ಸಿಗುತ್ತದೆ, ಲೆಕ್ಕವಿದೆ. ಒಂದಕ್ಕೆ ಪದಮದಷ್ಟು ಮಾಡಿಕೊಡುವ ಬ್ಯಾಂಕ್ ಇದಾಗಿದೆ. ಆದ್ದರಿಂದ ಏನೇ ಇರಲಿ ತ್ಯಾಗ ಮಾಡಬೇಕಾಗುತ್ತದೆ, ತಪಸ್ಸು ಮಾಡಬೇಕಾಗುತ್ತದೆ, ನಿರಹಂಕಾರಿಯಾಗಬೇಕಾಗುತ್ತದೆ, ಏನಾದರೂ ಆಗಲಿ...... ಇವೆರಡು ಮಾತುಗಳಲ್ಲಿ ಗಮನವಿದೆಯೆಂದರೆ ಪದಮಾಪದಮಪತಿ ಆಗಿ ಬಿಡುತ್ತೀರಿ.

ಸ್ಲೋಗನ್:
ಮನೋಬಲದಿಂದ ಸೇವೆಯನ್ನು ಮಾಡುತ್ತೀರೆಂದರೆ ಅದರ ಪ್ರಾಲಬ್ಧವು ಬಹಳಷ್ಟು ಜಾಸ್ತಿ ಸಿಗುತ್ತದೆ.


ಬ್ರಹ್ಮಾ ತಂದೆಯ ಸಮಾನರಾಗುವುದಕ್ಕಾಗಿ ವಿಶೇಷ ಪುರುಷಾರ್ಥ -
ಹೇಗೆ ಬ್ರಹ್ಮಾ ತಂದೆಯು ನೆನಪಿನ ಶಕ್ತಿ ಹಾಗೂ ಅವ್ಯಕ್ತ ಶಕ್ತಿಯ ಮೂಲಕ ಮನಸ್ಸು ಮತ್ತು ಬುದ್ಧಿಯೆರಡನ್ನೂ ನಿಯಂತ್ರಣಗೊಳಿಸಿದರು. ಶಕ್ತಿಶಾಲಿ ಬ್ರೇಕ್ನ ಮೂಲಕ ಮನಸ್ಸು ಮತ್ತು ಬುದ್ಧಿಯನ್ನು ನಿಯಂತ್ರಣ ಮಾಡುತ್ತಾ, ಬೀಜರೂಪದ ಸ್ಥಿತಿಯನ್ನು ಅನುಭವ ಮಾಡಿದರು. ಅದೇ ರೀತಿ ತಾವು ಮಕ್ಕಳೂ ಸಹ ಬ್ರೇಕ್ ಹಾಕುವ ಮತ್ತು ತಿರುಗಿಸುವ ಶಕ್ತಿಯನ್ನು ಧಾರಣೆ ಮಾಡಿಕೊಂಡು ಬಿಡುತ್ತೀರೆಂದರೆ, ಬುದ್ಧಿಯ ಶಕ್ತಿಯು ವ್ಯರ್ಥವಾಗುವುದಿಲ್ಲ. ಎಷ್ಟು ಶಕ್ತಿಯು ಜಮಾ ಆಗುತ್ತದೆಯೋ ಅಷ್ಟೇ ಪರಿಶೀಲನೆಯ, ನಿರ್ಣಯ ಮಾಡುವ ಶಕ್ತಿಯು ಹೆಚ್ಚುತ್ತದೆ.