31.05.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ನಿಮಗೀಗ ಅಲ್ಲಾಹ್ (ಪರಮಾತ್ಮ) ಸಿಕ್ಕಿರುವಾಗ ಉತ್ತಮರಾಗಿ ಅರ್ಥಾತ್ ತಮ್ಮನ್ನು ತಾವು ಆತ್ಮನೆಂದು
ತಿಳಿಯಿರಿ, ದೇಹವೆಂದು ತಿಳಿಯುವುದು ಉಲ್ಟಾ ಆಗುವುದಾಗಿದೆ.”
ಪ್ರಶ್ನೆ:
ಯಾವ ಒಂದು
ಮಾತನ್ನು ತಿಳಿದುಕೊಂಡಿರುವವರು ಬೇಹದ್ದಿನ ವೈರಾಗಿಗಳಾಗಬಹುದು?
ಉತ್ತರ:
ಹಳೆಯ ಪ್ರಪಂಚವು
ಈಗ ಹೋಪ್ಲೆಸ್ (ಭರವಸೆಯಿಲ್ಲದಂತೆ) ಆಗಿದೆ. ಇದು ಸ್ಮಶಾನವಾಗಲಿದೆ. ಈ ಮಾತನ್ನು ತಿಳಿದುಕೊಂಡರೆ
ಬೇಹದ್ದಿನ ವೈರಾಗಿಗಳಾಗಬಹುದು. ಈಗ ನಿಮಗೆ ಗೊತ್ತಿದೆ, ಹೊಸ ಪ್ರಪಂಚದ ಸ್ಥಾಪನೆಯಾಗುತ್ತಿದೆ, ಈ
ರುದ್ರ ಜ್ಞಾನ ಯಜ್ಞದಲ್ಲಿ ಇಡೀ ಹಳೆಯ ಪ್ರಪಂಚವು ಸ್ವಾಹಾ ಆಗುತ್ತದೆ. ಇದೊಂದೇ ಮಾತು ನಿಮ್ಮನ್ನು
ಬೇಹದ್ದಿನ ವೈರಾಗಿಯನ್ನಾಗಿ ಮಾಡಿ ಬಿಡುತ್ತದೆ. ನಿಮ್ಮ ಮನಸ್ಸು ಈ ಸ್ಮಶಾನದಿಂದ ದೂರವಾಗಿದೆ.
ಓಂ ಶಾಂತಿ.
ನಮ್ಮದು ಡಬಲ್ ಓಂ ಶಾಂತಿಯಾಗಿದೆ, ಏಕೆಂದರೆ ಎರಡು ಆತ್ಮಗಳಿವೆ. ಎರಡೂ ಆತ್ಮಗಳ ಸ್ವಧರ್ಮವೂ
ಶಾಂತಿಯಾಗಿದೆ, ತಂದೆಯ ಸ್ವಧರ್ಮವೂ ಶಾಂತಿಯಾಗಿದೆ. ಮಕ್ಕಳೂ ಸಹ ಅಲ್ಲಿ ಶಾಂತಿಯಲ್ಲಿರುತ್ತಾರೆ,
ಅದನ್ನು ಶಾಂತಿಧಾಮವೆಂದು ಕರೆಯಲಾಗುವುದು. ತಂದೆಯೂ ಸಹ ಅಲ್ಲಿಯೇ ಇರುತ್ತಾರೆ. ತಂದೆಯು ಸದಾ
ಪಾವನರಾಗಿದ್ದಾರೆ. ಬಾಕಿ ಮನುಷ್ಯ ಮಾತ್ರರೆಲ್ಲರೂ ಪುನರ್ಜನ್ಮವನ್ನು ಪಡೆದು ಅಪವಿತ್ರರಾಗುತ್ತಾರೆ.
ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿಯಿರಿ, ಪರಮಪಿತ
ಪರಮಾತ್ಮ ಜ್ಞಾನ ಸಾಗರ, ಶಾಂತಿಯ ಸಾಗರನಾಗಿದ್ದಾರೆ ಎಂದು ಆತ್ಮವು ತಿಳಿದುಕೊಂಡಿದೆ. ಇದು ಅವರ
ಮಹಿಮೆಯಾಗಿದೆಯಲ್ಲವೆ. ಅವರು ಸರ್ವರಿಗೂ ಪಿತ ಹಾಗೂ ಸರ್ವರ ಸದ್ಗತಿದಾತನೂ ಆಗಿದ್ದಾರೆ ಆದುದರಿಂದ
ಎಲ್ಲರಿಗೂ ತಂದೆಯ ಆಸ್ತಿಯ ಮೇಲೆ ಅಧಿಕಾರವಿರುತ್ತದೆ. ತಂದೆಯಿಂದ ಯಾವ ಆಸ್ತಿಯು ಸಿಗುತ್ತದೆ?
ಮಕ್ಕಳಿಗೆ ತಿಳಿದಿದೆ- ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ಆದ್ದರಿಂದ ಅಗತ್ಯವಾಗಿ ಸ್ವರ್ಗದ
ಆಸ್ತಿಯನ್ನೇ ಕೊಡುತ್ತಾರೆ ಮತ್ತು ಅದನ್ನೂ ನರಕದಲ್ಲಿಯೇ ಕೊಡುತ್ತಾರೆ. ನರಕದ ಆಸ್ತಿಯನ್ನು ರಾವಣನೇ
ಕೊಟ್ಟಿದ್ದಾನೆ, ಈ ಸಮಯದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ ಆದುದರಿಂದ ಅಗತ್ಯವಾಗಿ ರಾವಣನಿಂದ ಈ
ಆಸ್ತಿಯು ಸಿಕ್ಕಿದೆ. ನರಕ ಹಾಗೂ ಸ್ವರ್ಗವೆರಡೂ ಇರುತ್ತವೆ. ಇದನ್ನು ಕೇಳುತ್ತಿರುವವರು ಯಾರು?
ಆತ್ಮ. ಅಜ್ಞಾನ ಕಾಲದಲ್ಲಿಯೂ ಎಲ್ಲವನ್ನೂ ಆತ್ಮವೇ ಮಾಡುತ್ತದೆಯಂದು ಹೇಳುತ್ತಾರೆ. ಆದರೆ
ದೇಹಾಭಿಮಾನದ ಕಾರಣ ಶರೀರವೇ ಮಾಡುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ನಮ್ಮ ಸ್ವಧರ್ಮ
ಶಾಂತಿಯಾಗಿದೆ ಎನ್ನುವುದನ್ನು ಮರೆತು ಹೋಗುತ್ತಾರೆ. ನಾವು ಶಾಂತಿಧಾಮದಲ್ಲಿರುವವರಾಗಿದ್ದೇವೆ,
ಸತ್ಯ ಖಂಡವೇ ನಂತರ ಅಸತ್ಯ ಖಂಡವಾಗುತ್ತದೆ ಎಂದು ತಿಳಿಸಬೇಕು. ಭಾರತ ಸತ್ಯ ಖಂಡವಾಗಿತ್ತು ನಂತರ
ಅಸತ್ಯ ಖಂಡವಾಗುತ್ತದೆ. ಇದು ಸಾಮಾನ್ಯ ಮಾತಾಗಿದೆ ಅಂದಾಗ ಮನುಷ್ಯರೇಕೆ ತಿಳಿದುಕೊಳ್ಳುವುದಿಲ್ಲ?
ಏಕೆಂದರೆ ಆತ್ಮವು ತಮೋಪ್ರಧಾನವಾಗಿ ಬಿಟ್ಟಿದೆ, ಅದನ್ನು ಕಲ್ಲು ಬುದ್ಧಿಯಂದು ಹೇಳಲಾಗುತ್ತದೆ. ಯಾರು
ಭಾರತವನ್ನು ಸ್ವರ್ಗವನ್ನಾಗಿ ಮಾಡಿದರು, ಪೂಜ್ಯವನ್ನಾಗಿ ಮಾಡಿದರು ಅವರನ್ನೇ ಪೂಜಾರಿಯನ್ನಾಗಿ ಮಾಡಿ
ಅವರನ್ನು ಅವಹೇಳನ ಮಾಡುತ್ತೇವೆ. ಇದರಲ್ಲಿ ಯಾರ ದೋಷವೂ ಇಲ್ಲ. ಈ ನಾಟಕವು ಹೇಗೆ ಮಾಡಲ್ಪಟ್ಟಿದೆ
ಎಂದು ತಂದೆಯು ಮಕ್ಕಳಿಗೆ ತಿಳಿಸುತ್ತಿದ್ದಾರೆ. ಹೇಗೆ ಪೂಜ್ಯರಿಂದ ಪೂಜಾರಿಯಾದರು. ತಂದೆಯು
ತಿಳಿಸುತ್ತಾರೆ- ಮಕ್ಕಳೇ, ಇಂದಿಗೆ 5000 ವರ್ಷಗಳ ಮೊದಲು ಭಾರತದಲ್ಲಿ ಆದಿ ಸನಾತನ ದೇವಿ-ದೇವತಾ
ಧರ್ಮವಿತ್ತು, ಇದು ನೆನ್ನೆಯ ಮಾತಾಗಿದೆ ಆದರೆ ಮನುಷ್ಯರು ಸಂಪೂರ್ಣವಾಗಿ ಮರೆತಿದ್ದಾರೆ. ಈ
ಶಾಸ್ತ್ರ ಮೊದಲಾದವುಗಳನ್ನು ಭಕ್ತಿಮಾರ್ಗಕ್ಕಾಗಿ ಮಾಡಿದ್ದಾರೆ. ಶಾಸ್ತ್ರಗಳಿರುವುದೇ
ಭಕ್ತಿಮಾರ್ಗಕ್ಕಾಗಿ, ಜ್ಞಾನಮಾರ್ಗಕ್ಕಾಗಿ ಅಲ್ಲ. ತಂದೆಯು ಕಲ್ಪ-ಕಲ್ಪ ಬಂದು ದೇವತಾ ಪದವಿಗಾಗಿ
ಜ್ಞಾನವನ್ನು ಕೊಡುತ್ತಾರೆ. ತಂದೆಯು ವಿದ್ಯೆಯನ್ನು ಓದಿಸುತ್ತಾರೆ ನಂತರ ಈ ಜ್ಞಾನವು ಪ್ರಾಯಲೋಪವಾಗಿ
ಬಿಡುತ್ತದೆ. ಸತ್ಯಯುಗದಲ್ಲಿ ಯಾವುದೇ ಶಾಸ್ತ್ರಗಳಿರುವುದಿಲ್ಲ. ಏಕೆಂದರೆ ಅದು ಜ್ಞಾನಮಾರ್ಗದ
ಪ್ರಾಲಬ್ಧವಾಗಿದೆ. 21 ಜನ್ಮಗಳಿಗಾಗಿ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ ಅದರ
ನಂತರ ಅಲ್ಪಕಾಲಕ್ಕಾಗಿ ರಾವಣನ ಆಸ್ತಿಯು ಸಿಗುತ್ತದೆ ಅದನ್ನು ಸನ್ಯಾಸಿಗಳು ಕಾಗವಿಷ್ಟ ಸಮಾನ
ಸುಖವೆಂದು ಹೇಳಿ ಬಿಡುತ್ತಾರೆ. ದುಃಖವೇ ದುಃಖವಿದೆ, ದುಃಖಧಾಮ ಎಂಬುದು ಇದರ ಹೆಸರಾಗಿದೆ.
ಕಲಿಯುಗಕ್ಕೆ ಮೊದಲು ದ್ವಾಪರಯುಗವಿದೆ ಅದನ್ನು ಸೆಮಿ-ದುಃಖಧಾಮವೆಂದು ಕರೆಯಲಾಗುವುದು, ಇದು ಅಂತಿಮದ
ದುಃಖಧಾಮವಾಗಿದೆ. ಆತ್ಮವೇ 84 ಜನ್ಮಗಳನ್ನು ತೆಗೆದುಕೊಂಡು ಕೆಳಗಡೆ ಇಳಿಯುತ್ತದೆ. ತಂದೆಯು ಮೇಲೆ
ಹತ್ತಿಸುತ್ತಾರೆ ಏಕೆಂದರೆ ಚಕ್ರವು ಅವಶ್ಯವಾಗಿ ಸುತ್ತಲೇಬೇಕಾಗಿದೆ. ಹೊಸ ಪ್ರಪಂಚವಿತ್ತು,
ದೇವಿ-ದೇವತೆಗಳ ರಾಜ್ಯವಿತ್ತು ಆಗ ದುಃಖದ ಹೆಸರು-ಚಿಹ್ನೆಯೂ ಇರಲಿಲ್ಲ. ಆದ್ದರಿಂದ ಹುಲಿ-ಕುರಿ
ಜೊತೆಯಾಗಿ ನೀರು ಕುಡಿಯುವುದನ್ನು ತೋರಿಸುತ್ತಾರೆ. ಅಲ್ಲಿ ಯಾವುದೇ ಹಿಂಸೆಯ ಮಾತಿರುವುದಿಲ್ಲ.
ಅದನ್ನು ಅಹಿಂಸಾ ಪರಮೋ ಧರ್ಮವೆಂದು ಕರೆಯಲಾಗುವುದು. ಇಲ್ಲಿ ಹಿಂಸೆಯಿದೆ, ಮೊಟ್ಟ ಮೊದಲನೇ ಹಿಂಸೆ
ಕಾಮ ವಿಕಾರದ್ದಾಗಿದೆ. ಸತ್ಯಯುಗದಲ್ಲಿ ಯಾರೂ ವಿಕಾರಿಗಳಿರುವುದಿಲ್ಲ. ಆದ್ದರಿಂದ ಅವರ ಮಹಿಮೆಯನ್ನು
ಹಾಡುತ್ತಾರೆ. ಲಕ್ಷ್ಮೀ-ನಾರಾಯಣರ ಮಹಿಮೆಯನ್ನು ಸಂಪೂರ್ಣ ನಿರ್ವಿಕಾರಿ...... ಎಂದು ಹಾಡುತ್ತಾರೆ.
ಈ ಕಲಿಯುಗ ಕಬ್ಬಿಣದ ಯುಗವಾಗಿದೆ. ಇದನ್ನು ಯಾರೂ ಸಹ ಸ್ವರ್ಣೀಮ ಯುಗವೆಂದು ಹೇಳಲು ಸಾಧ್ಯವಿಲ್ಲ.
ನಾಟಕವೇ ಈ ರೀತಿ ಮಾಡಲ್ಪಟ್ಟಿದೆ. ಸತ್ಯಯುಗ ಶಿವಾಲಯವಾಗಿದೆ, ಅಲ್ಲಿ ಎಲ್ಲರೂ ಪಾವನವಾಗಿರುತ್ತಾರೆ,
ಅವರ ಚಿತ್ರಗಳೂ ಇವೆ. ಶಿವಾಲಯವನ್ನಾಗಿ ಮಾಡುವ ಶಿವ ತಂದೆಯ ಚಿತ್ರವೂ ಆಗಿದೆ. ತಂದೆಗೆ ಅವರದೇ ಆದ
ಶರೀರವಿಲ್ಲ. ನಾನು ನನ್ನ ಪರಿಚಯವನ್ನು ನೀಡಲು ಅಥವಾ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು
ತಿಳಿಸಲು ಸ್ವಯಂ ಬರಬೇಕಾಗುತ್ತದೆ. ನಾನು ಬಂದು ನಿಮ್ಮ ಸೇವೆ ಮಾಡಬೇಕಾಗುವುದು. ಹೇ ಪತಿತ-ಪಾವನ
ಬನ್ನಿ ಎಂದು ನೀವು ಕರೆಯುತ್ತೀರಿ. ನೀವು ಸತ್ಯಯುಗದಲ್ಲಂತೂ ಕರೆಯುವುದಿಲ್ಲ. ವಿನಾಶವು ಮುಂದೆ
ನಿಂತಿರುವ ಕಾರಣ ಈ ಸಮಯದಲ್ಲಿ ಎಲ್ಲರೂ ಕರೆಯುತ್ತಾರೆ. ಇದು ಅದೇ ಮಹಾಭಾರತ ಯುದ್ಧವಾಗಿದೆ ಎಂದು
ಭಾರತವಾಸಿಗಳು ತಿಳಿದುಕೊಂಡಿದ್ದಾರೆ. ಈ ಯುದ್ಧದ ನಂತರ ಆದಿ ಸನಾತನ ದೇವಿ-ದೇವತಾ ಧರ್ಮದ
ಸ್ಥಾಪನೆಯಾಗುತ್ತದೆ. ತಂದೆಯು ತಿಳಿಸುತ್ತಾರೆ- ನಾನು ರಾಜರಿಗೂ ರಾಜರನ್ನಾಗಿ ಮಾಡಲು ಬಂದಿದ್ದೇನೆ.
ಇಂದಿನ ಸಮಯದಲ್ಲಿ ಮಹಾರಾಜ-ಚಕ್ರವರ್ತಿ ಮೊದಲಾದವರಿಲ್ಲ. ಈಗ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಾಗಿದೆ.
ನಾವು ಭಾರತವಾಸಿಗಳು ಸಂಪದ್ಭರಿತವಾಗಿದ್ದು ವಜ್ರ-ವೈಡೂರ್ಯಗಳ ಮಹಲಿನಲ್ಲಿದ್ದೆವು. ಹೊಸ
ಪ್ರಪಂಚವಾಗಿತ್ತು ಮತ್ತೆ ಹೊಸ ಪ್ರಪಂಚವೇ ಹಳೆಯ ಪ್ರಪಂಚವಾಗಿದೆ ಎಂದು ಮಕ್ಕಳು ತಿಳಿದುಕೊಂಡಿದ್ದೀರಿ.
ಪ್ರತಿಯೊಂದು ವಸ್ತುವು ಹಳೆಯದಾಗಲೇಬೇಕಾಗಿದೆ. ಹೇಗೆ ಮನೆಯು ಹೊಸದಾಗಿ ಮಾಡಿದ ನಂತರ ಅಂತ್ಯದಲ್ಲಿ
ಅದರ ಆಯಸ್ಸು ಕಡಿಮೆಯಾಗುತ್ತಾ ಹೋಗುತ್ತದೆ. ಆಗ ಇದು ಹೊಸ ಮನೆಯಾಗಿತ್ತು, ಈಗ ಅರ್ಧ ಹಳೆಯದು, ಈಗ
ಮಧ್ಯಮ ಸ್ಥಿತಿಯಲ್ಲಿದೆ ಎಂದು ಹೇಳಲಾಗುತ್ತದೆ. ಪ್ರತಿಯೊಂದು ವಸ್ತು ಸತೋ, ರಜೋ, ತಮೋ ಆಗುತ್ತದೆ.
ಭಗವಾನುವಾಚ ಆಗಿದೆಯಲ್ಲವೆ. ಭಗವಂತ ಅಂದರೆ ಭಗವಂತನಾಗಿದ್ದಾರೆ. ಭಗವಂತನೆಂದು ಯಾರಿಗೆ
ಕರೆಯಲಾಗುವುದೆಂದು ತಿಳಿದುಕೊಂಡಿಲ್ಲ. ಇಲ್ಲಿ ರಾಜ-ರಾಣಿ ಯಾರೂ ಇಲ್ಲದಂತಾಗಿದೆ. ಇಲ್ಲಿ
ರಾಷ್ಟ್ರಾಧ್ಯಕ್ಷ, ಪ್ರಧಾನಮಂತ್ರಿ ಮತ್ತು ಅವರಿಗೆ ಅನೇಕ ಮಂತ್ರಿಗಳಿದ್ದಾರೆ...... ಸತ್ಯಯುಗದಲ್ಲಿ
ಯಥಾ ರಾಜ-ರಾಣಿ ತಥಾ ಪ್ರಜೆಗಳಿರುತ್ತಾರೆ, ಈ ಅಂತರವನ್ನು ತಂದೆಯೇ ತಿಳಿಸಿದ್ದಾರೆ. ಸತ್ಯಯುಗದಲ್ಲಿ
ಯಾರು ಮಾಲೀಕರಾಗಿರುತ್ತಾರೆ ಅವರಿಗೆ ಮಂತ್ರಿಗಳಾಗಲಿ, ಸಲಹೆಗಾರರ ಅವಶ್ಯಕತೆಯಿರುವುದಿಲ್ಲ. ಈ
ಸಮಯದಲ್ಲಿಯೇ ಶಿವ ತಂದೆಯಿಂದ ಶಕ್ತಿಯನ್ನು ಪ್ರಾಪ್ತಿ ಮಾಡಿಕೊಂಡು ಅಂತಹ ಪದವಿಯನ್ನು ಪಡೆಯುತ್ತಾರೆ.
ಈ ಸಮಯ ತಂದೆಯಿಂದ ಉನ್ನತವಾದ ಸಲಹೆ ಸಿಗುತ್ತದೆ ಅದರಿಂದ ಅಂತಹ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ.
ನಂತರ ಯಾವುದೇ ಸಲಹೆಯನ್ನು ತೆಗೆದುಕೊಳ್ಳುವುದಿಲ್ಲ, ಅಲ್ಲಿ ಮಂತ್ರಿಗಳಿರುವುದಿಲ್ಲ. ಯಾವಾಗ ವಾಮ
ಮಾರ್ಗದಲ್ಲಿ ಹೋಗುತ್ತಾರೆ ಆಗ ಮಂತ್ರಿಯಿರುತ್ತಾರೆ ಏಕೆಂದರೆ ಬುದ್ಧಿಯು ಕನಿಷ್ಟ ಬುದ್ಧಿಯಾಗಿ
ಬಿಡುತ್ತದೆ. ಮುಖ್ಯ ಮಾತು ವಿಕಾರದ್ದಾಗಿದೆ. ದೇಹಾಭಿಮಾನದಲ್ಲಿ ಬರುವುದರಿಂದ ವಿಕಾರವು
ಉತ್ಪನ್ನವಾಗುತ್ತದೆ. ಅದರಲ್ಲಿ ಕಾಮ ವಿಕಾರವು ನಂಬರ್ವನ್ ಆಗಿದೆ. ತಂದೆಯು ತಿಳಿಸುತ್ತಾರೆ- ಈ ಕಾಮ
ವಿಕಾರವು ಮಹಾಶತ್ರುವಾಗಿದೆ, ಅದರ ಮೇಲೆ ವಿಜಯ ಪಡೆಯಬೇಕು. ಅದಕ್ಕಾಗಿ ತಂದೆಯು ತಮ್ಮನ್ನು
ಆತ್ಮನೆಂದು ತಿಳಿದುಕೊಳ್ಳಿ ಎಂದು ಬಹಳಷ್ಟು ಬಾರಿ ತಿಳಿಸಿದ್ದಾರೆ. ಉತ್ತಮ ಹಾಗೂ ಕನಿಷ್ಟ
ಸಂಸ್ಕಾರವು ಆತ್ಮದಲ್ಲಿಯೇ ಆಗುತ್ತದೆ. ಇಲ್ಲಿಯೇ ಕರ್ಮ ಹಳೀಯುವುದಾಗಿದೆ, ಅದು ಸತ್ಯಯುಗದಲ್ಲಿ
ಆಗುವುದಿಲ್ಲ. ಅದು ಸುಖಧಾಮವಾಗಿದೆ. ತಂದೆಯು ಬಂದು ಸುಖಧಾಮ-ಶಾಂತಿಧಾಮದ ನಿವಾಸಿಯನ್ನಾಗಿ
ಮಾಡುತ್ತಾರೆ. ತಂದೆಯು ನೇರವಾಗಿ ಆತ್ಮಗಳೊಂದಿಗೇ ಮಾತನಾಡುತ್ತಾರೆ. ಎಲ್ಲರೂ ಆತ್ಮ ನಿಶ್ಚಯ
ಮಾಡಿಕೊಂಡು ಕುಳಿತುಕೊಳ್ಳಿ, ದೇಹಾಭಿಮಾನವನ್ನು ಬಿಡಿ ಎಂದು ಹೇಳುತ್ತಾರೆ. ಈ ದೇಹ ವಿನಾಶಿಯಾಗಿದೆ,
ನೀವಾತ್ಮರು ಅವಿನಾಶಿಯಾಗಿದ್ದೀರಿ. ಈ ಜ್ಞಾನವು ಬೇರೆ ಯಾರಲ್ಲಿಯೂ ಇರಲು ಸಾಧ್ಯವೇ ಇಲ್ಲ.
ಜ್ಞಾನವಿಲ್ಲದ ಕಾರಣ ಭಕ್ತಿಯನ್ನೇ ಜ್ಞಾನವೆಂದು ತಿಳಿದುಕೊಂಡಿದ್ದಾರೆ. ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ- ಭಕ್ತಿಯೇ ಬೇರೆಯಾಗಿದೆ, ಜ್ಞಾನದಿಂದ ಸದ್ಗತಿ ಸಿಗುತ್ತದೆ. ಭಕ್ತಿಯ ಸುಖ
ಅಲ್ಪಕಾಲದ್ದು ಏಕೆಂದರೆ ಪಾಪಾತ್ಮರಾಗಿ ಬಿಡುತ್ತಾರೆ, ವಿಕಾರದಲ್ಲಿ ಹೋಗಿ ಬಿಡುತ್ತಾರೆ.
ಅರ್ಧಕಲ್ಪಕ್ಕಾಗಿ ಬೇಹದ್ದಿನ ಆಸ್ತಿ ದೊರೆತು ಅದು ಪೂರ್ಣವಾಗಿ ಬಿಟ್ಟಿದೆ ಮತ್ತೆ ತಂದೆಯು
ಆಸ್ತಿಯನ್ನು ಕೊಡಲು ಬಂದಿದ್ದಾರೆ. ಅದರಲ್ಲಿ ಪವಿತ್ರತೆ, ಸುಖ, ಶಾಂತಿ ಎಲ್ಲವೂ ಸೇರಿರುತ್ತದೆ.
ಮಕ್ಕಳೇ, ನಿಮಗೆ ಗೊತ್ತಿದೆ- ಈ ಹಳೆಯ ಪ್ರಪಂಚವು ಸ್ಮಶಾನವಾಗಿಯೇ ಆಗುತ್ತದೆ. ಈಗ ಈ ಸ್ಮಶಾನದಿಂದ
ಮನಸ್ಸನ್ನು ತೆಗೆದು ಸ್ವರ್ಗವಾದ ಹೊಸ ಪ್ರಪಂಚದೊಂದಿಗೆ ಮಮತೆಯನ್ನಿಡಿ. ಹೇಗೆ ಲೌಕಿಕ ತಂದೆಯು ಹೊಸ
ಮನೆಯನ್ನು ಕಟ್ಟುವಾಗ ಮಕ್ಕಳಿಗೆ ಹಳೆಯ ಮನೆಯಿಂದ ಮನಸ್ಸು ದೂರವಾಗಿ ಹೊಸ ಮನೆಯಲ್ಲಿ ತೊಡಗಿಸುತ್ತಾರೆ.
ಒಂದುವೇಳೆ ಕಛೇರಿಯಲ್ಲಿ ಕುಳಿತಿದ್ದರೂ ಸಹ ಬುದ್ಧಿಯಲ್ಲಿ ಹೊಸ ಮನೆಯೇ ಇರುತ್ತದೆ. ಅದು ಹದ್ದಿನ
ಮಾತಾಗಿದೆ. ಬೇಹದ್ದಿನ ತಂದೆಯಂತೂ ಹೊಸ ಪ್ರಪಂಚದ ಸ್ವರ್ಗವನ್ನು ರಚನೆ ಮಾಡುತ್ತಿದ್ದಾರೆ. ಈಗ ಅವರು
ಈ ಹಳೆಯ ಪ್ರಪಂಚದ ಸಂಬಂಧವನ್ನು ಬಿಟ್ಟು ನನ್ನೊಬ್ಬನಲ್ಲಿ ಜೋಡಿಸುವಂತೆ ತಿಳಿಸುತ್ತಿದ್ದಾರೆ.
ನಿಮಗಾಗಿ ನಾನು ಹೊಸ ಪ್ರಪಂಚ ಸ್ವರ್ಗವನ್ನು ಸ್ಥಾಪನೆ ಮಾಡಲು ಬಂದಿದ್ದೇನೆ. ಈಗ ಈ ಎಲ್ಲಾ ಹಳೆಯ
ಪ್ರಪಂಚವು ಸ್ವಾಹಾ ಆಗುವುದಿದೆ. ಈಗ ಇಡೀ ವೃಕ್ಷವು ತಮೋಪ್ರಧಾನ, ನಿಸ್ಸಾರವಾಗಿ ಬಿಟ್ಟಿದೆ, ಈಗ
ಪುನಃ ಹೊಸದಾಗುತ್ತದೆ. ಆದುದರಿಂದ ತಂದೆಯು ತಿಳಿಸುತ್ತಾರೆ- ಇದು ಹೊಸ ಪ್ರಪಂಚದ ಮಾತುಗಳಾಗಿವೆ.
ಮನುಷ್ಯರು ಹೇಗೆ ಖಾಯಿಲೆಯ ಸಮಯದಲ್ಲಿ ಭರವಸೆಯನ್ನು ಕಳೆದುಕೊಳ್ಳುತ್ತಾರೆ, ಇವರು ಇನ್ನು
ಬದುಕುಳಿಯುವುದು ಕಷ್ಟವೆಂದು ತಿಳಿದುಕೊಳ್ಳುತ್ತಾರೆ, ಹಾಗೆಯೇ ಈ ಪ್ರಪಂಚವು ಈಗ
ಭರವಸೆಯಿಲ್ಲದಂತಾಗಿದೆ. ಇದು ಸ್ಮಶಾನವಾಗುವುದರಿಂದ ಇದನ್ನು ಏಕೆ ನೆನಪು ಮಾಡಬೇಕು. ಇದು ಬೇಹದ್ದಿನ
ಸನ್ಯಾಸವಾಗಿದೆ. ಆ ಹಠಯೋಗಿ ಸನ್ಯಾಸಿಗಳು ಕೇವಲ ಮನೆ-ಮಠವನ್ನು ಬಿಟ್ಟು ಹೋಗುತ್ತಾರೆ. ನೀವು ಈ
ಹಳೆಯ ಪ್ರಪಂಚದಿಂದ ಸನ್ಯಾಸ ಮಾಡುತ್ತೀರಿ ಆಗ ಈ ಹಳೆಯ ಪ್ರಪಂಚವು ಹೊಸ ಪ್ರಪಂಚವಾಗಿ ಬಿಡುವುದು.
ತಂದೆಯು ತಿಳಿಸುತ್ತಾರೆ- ನಾವಂತೂ ವಿಧೇಯ ಸೇವಕರಾಗಿದ್ದೇವೆ, ನಾನು ಮಕ್ಕಳ ಸೇವೆಯಲ್ಲಿ
ಆಗಮಿಸಿದ್ದೇನೆ. ಈ ಪತಿತ ಪ್ರಪಂಚದಲ್ಲಿ, ಪತಿತರಾಗಿರುವವರನ್ನು ಪಾವನ ಮಾಡು, ಪತಿತ ಶರೀರದಲ್ಲಿ ಬಾ
ಎಂದು ನನ್ನನ್ನು ಕರೆದಿದ್ದಿರಿ, ನೋಡಿ! ತಂದೆಗೆ ಎಂತಹ ಆಮಂತ್ರಣವನ್ನು ಕೊಡುತ್ತೀರಿ. ಪತಿತ
ಮಾಡುವವನು ರಾವಣನಾಗಿದ್ದಾನೆ, ಅವನನ್ನು ಸುಡುತ್ತಿರುತ್ತೀರಿ, ಈ ರಾವಣ ಅತಿ ದೊಡ್ಡ
ಶತ್ರುವಾಗಿದ್ದಾನೆ. ಎಂದಿನಿಂದ ರಾವಣನು ಬರುತ್ತಾನೆಯೋ ಅಂದಿನಿಂದ ನಿಮಗೆ ಆದಿ-ಮಧ್ಯ-ಅಂತ್ಯ ದುಃಖವು
ಪ್ರಾಪ್ತಿಯಾಗಿದೆ. ವಿಷಯ ಸಾಗರದಲ್ಲಿ ಮುಳುಗುತ್ತಿರುತ್ತಾರೆ. ಈಗ ತಂದೆಯು ತಿಳಿಸುತ್ತಿರುತ್ತಾರೆ-
ವಿಷವನ್ನು ಬಿಟ್ಟು ಜ್ಞಾನಾಮೃತವನ್ನು ಕುಡಿಯಿರಿ. ಅರ್ಧಕಲ್ಪ ರಾವಣ ರಾಜ್ಯದಲ್ಲಿ ನೀವು ವಿಕಾರಗಳ
ಕಾರಣ ಎಷ್ಟೊಂದು ದುಃಖಿಯಾಗಿ ಬಿಟ್ಟಿರಿ. ನೀವು ಅನೇಕ ಮತವುಳ್ಳವರಾಗಿ ಕುಳಿತು ನಿಂದನೆ ಮಾಡುತ್ತೀರಿ.
ನಿಂದನೆಯನ್ನೂ ಇಷ್ಟೊಂದು ಮಾಡುತ್ತೀರಿ, ನಿಮ್ಮನ್ನು ಪಾವನ ವಿಶ್ವದ ಮಾಲೀಕರನ್ನಾಗಿ ಮಾಡುವ
ತಂದೆಯನ್ನೇ ಎಲ್ಲದಕ್ಕಿಂತ ಹೆಚ್ಚು ನಿಂದನೆ ಮಾಡುವುದು ನಿಮ್ಮ ಕಮಾಲ್ ಆಗಿದೆ. ಮನುಷ್ಯರಿಗಾಗಿ
ಕೇವಲ 84 ಲಕ್ಷ ಯೋನಿಗಳೆಂದು ಹೇಳುತ್ತಾರೆ, ಆದರೆ ನನ್ನನ್ನು ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ.
ಇದೂ ಸಹ ನಾಟಕವಾಗಿದೆ. ಇದನ್ನು ನಿಮಗೆ ತಮಾಷೆಗಾಗಿ ತಿಳಿಸುತ್ತಿದ್ದೇನೆ. ಉತ್ತಮ ಹಾಗೂ ಕನಿಷ್ಟ
ಸ್ವಭಾವ-ಸಂಸ್ಕಾರಗಳು ಆತ್ಮದಲ್ಲಿಯೇ ಆಗುತ್ತದೆ. ಆತ್ಮವೇ ಹೇಳುತ್ತದೆ- ನಾವು 84 ಜನ್ಮಗಳನ್ನು
ಪಡೆಯುತ್ತೇವೆ, ಆತ್ಮವೇ ಬಂದು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ಪಡೆಯುತ್ತದೆ. ಇದನ್ನೂ ಸಹ
ಈಗ ತಂದೆಯು ತಿಳಿಸಿಕೊಟ್ಟಿದ್ದಾರೆ. ನಾಟಕದನುಸಾರ ಮತ್ತೆ ತಂದೆಯು ಬಂದು ಉಲ್ಟಾ ಆಗಿರುವವರನ್ನು
ಸುಲ್ಟಾ ಮಾಡುತ್ತಾರೆ. ಮಧುರಾತಿ ಮಧುರ ಮಕ್ಕಳಿಗೆ ತಂದೆಯು ತಿಳಿಸುತ್ತಾರೆ- ನೀವಿಲ್ಲಿ ಉಲ್ಟಾ (ದೇಹಾಭಿಮಾನ)
ಆಗಿ ಕುಳಿತುಕೊಳ್ಳಬೇಡಿ, ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಿ. ಈಗ ನಿಮಗೆ ಭಗವಂತ ಸಿಕ್ಕಿದ್ದಾರೆ
ಅವರು ಸುಲ್ಟಾ ಮಾಡುತ್ತಾರೆ, ರಾವಣನು ಉಲ್ಟಾ ಮಾಡುತ್ತಾನೆ ನಂತರ ನೀವು ಸುಲ್ಟಾ ಆಗುವುದರಿಂದ
ಸರಿಯಾಗಿ ಬಿಡುತ್ತೀರಿ (ದೇವತೆ). ಇದು ಒಂದು ನಾಟಕವಾಗಿದೆ. ಈ ಜ್ಞಾನವನ್ನು ತಂದೆಯೇ ಬಂದು
ತಿಳಿಸುತ್ತಾರೆ. ಭಕ್ತಿಯು ಭಕ್ತಿಯೇ ಆಗಿದೆ, ಜ್ಞಾನವು ಜ್ಞಾನವೇ ಆಗಿದೆ. ಭಕ್ತಿಯು ಸಂಪೂರ್ಣ
ಭಿನ್ನವಾಗಿದೆ. ಒಂದು ಕೊಳ ಇದೆ, ಅಲ್ಲಿ ಸ್ನಾನ ಮಾಡುವುದರಿಂದ ದೇವತೆಯಾಗುತ್ತೇವೆಂದು ಹೇಳುತ್ತಾರೆ
ನಂತರ ಪಾರ್ವತಿಗೆ ಅಮರ ಕಥೆಯನ್ನೂ ಹೇಳಿದರೆಂದು ಹೇಳಿ ಬಿಡುತ್ತಾರೆ ಅಂದಾಗ ಈಗ ನೀವು ಅಮರ ಕಥೆಯನ್ನು
ಕೇಳುತ್ತಿದ್ದೀರಿ. ಕೇವಲ ಪಾರ್ವತಿಗೆ ಮಾತ್ರ ಕಥೆಯನ್ನು ಹೇಳಿದರೇನು! ಇದು ಬೇಹದ್ದಿನ ಮಾತಾಗಿದೆ.
ಸತ್ಯಯುಗ ಅಮರ ಲೋಕವಾಗಿದೆ, ಇದು ಮೃತ್ಯುಲೋಕವಾಗಿದೆ ಮತ್ತು ಇದನ್ನು ಮುಳ್ಳುಗಳ ಕಾಡು ಎಂದೂ
ಕರೆಯುತ್ತಾರೆ. ತಂದೆಯನ್ನು ತಿಳಿದುಕೊಂಡೇ ಇಲ್ಲ. ನೀವೂ ಸಹ ತಿಳಿದುಕೊಂಡಿರಲಿಲ್ಲ, ನಿಮಗೆ ತಂದೆಯೇ
ಬಂದು ಸುಲ್ಟಾ ಮಾಡಿದ್ದಾರೆ. ಭಗವಂತನಿಗೆ ಅಲ್ಲಾ ಎಂದು ಕರೆಯಲಾಗುವುದು. ಅಲ್ಲಾಹ್ ನಮಗೆ ಓದಿಸಿ
ಅಲ್ಲಾಹ್ ಪದವಿಯನ್ನು ಕೊಡುತ್ತಾರಲ್ಲವೆ ಆದರೆ ಪರಮಾತ್ಮ ಒಬ್ಬರೇ ಆಗಿದ್ದಾರೆ. ಇವರನ್ನು (ಲಕ್ಷ್ಮೀ-ನಾರಾಯಣ)
ಭಗವಾನ್-ಭಗವತಿಯೆಂದು ಹೇಳಲಾಗುವುದಿಲ್ಲ. ಇವರು ಪುನರ್ಜನ್ಮದಲ್ಲಿ ಬರುತ್ತಾರಲ್ಲವೆ, ನಾನೇ ಇವರಿಗೆ
ಓದಿಸಿ ದೈವೀಗುಣವುಳ್ಳವರನ್ನಾಗಿ ಮಾಡಿದ್ದೇನೆ.
ನೀವೆಲ್ಲರೂ ಸಹೋದರರಾಗಿದ್ದೀರಿ. ತಂದೆಯ ಆಸ್ತಿಗೆ ಹಕ್ಕುದಾರರಾಗಿದ್ದೀರಿ, ಮನುಷ್ಯರಂತೂ ಘೋರ
ಅಂಧಕಾರದಲ್ಲಿ ಮುಳುಗಿದ್ದಾರೆ. ಆಸುರೀ ಸಂಪ್ರದಾಯವಲ್ಲವೆ! ಕಲಿಯುಗ ಇನ್ನೂ ಚಿಕ್ಕ ಮಗುವಾಗಿದೆ ಎಂದು
ಹೇಳುತ್ತಾರೆ, ಇನ್ನೂ ಬಹಳ ವರ್ಷಗಳು ಉಳಿದಿವೆ ಎಂದು ಹೇಳುತ್ತಾರೆ. ಎಷ್ಟೊಂದು ಅಜ್ಞಾನ
ಅಂಧಕಾರದಲ್ಲಿ ಮಲಗಿ ಬಿಟ್ಟಿದ್ದಾರೆ! ಇದೂ ಸಹ ನಾಟಕವಾಗಿದೆ. ಬೆಳಕಿನಲ್ಲಿ ದುಃಖವಿರುವುದಿಲ್ಲ,
ಕತ್ತಲಾದ ರಾತ್ರಿಯಲ್ಲಿ ದುಃಖವಿರುತ್ತದೆ. ಇದನ್ನು ನೀವು ಮಾತ್ರ ತಿಳಿದುಕೊಂಡಿದ್ದೀರಿ ಹಾಗೂ
ತಿಳಿಸಿ ಕೊಡುತ್ತೀರಿ. ಮೊಟ್ಟ ಮೊದಲು ಪ್ರತಿಯೊಬ್ಬ ಮನುಷ್ಯನಿಗೂ ತಂದೆಯ ಪರಿಚಯವನ್ನು ಕೊಡಬೇಕು.
ಪ್ರತಿಯೊಬ್ಬರಿಗೂ ಇಬ್ಬರು ತಂದೆಯರಿರುತ್ತಾರೆ, ಹದ್ದಿನ ತಂದೆಯು ಹದ್ದಿನ ಸುಖ ಕೊಡುತ್ತಾರೆ,
ಬೇಹದ್ದಿನ ತಂದೆಯು ಬೇಹದ್ದಿನ ಸುಖವನ್ನು ಕೊಡುತ್ತಾರೆ. ಶಿವರಾತ್ರಿಯನ್ನು ಆಚರಿಸುವಾಗ ಅಗತ್ಯವಾಗಿ
ತಂದೆಯು ಸ್ವರ್ಗ ಸ್ಥಾಪನೆ ಮಾಡಲು ಬರುತ್ತಾರೆ. ಸ್ವರ್ಗವು ಹಿಂದೆ ಆಗಿ ಹೋಗಿತ್ತು, ಈಗ ಪುನಃ
ಸ್ಥಾಪನೆ ಮಾಡುತ್ತಿದ್ದಾರೆ. ಈಗ ಇದು ತಮೋಪ್ರಧಾನ ಪ್ರಪಂಚ, ನರಕವಾಗಿದೆ. ನಾಟಕದನುಸಾರವಾಗಿ ಎಲ್ಲವೂ
ತನ್ನದೇ ಆದಂತಹ ಸಮಯದಲ್ಲಾಗುತ್ತದೆ. ಆಗ ನಾನು ಬಂದು ನನ್ನ ಪಾತ್ರವನ್ನಭಿನಯಿಸುತ್ತೇನೆ. ನಾನು
ನಿರಾಕಾರನಾಗಿದ್ದೇನೆ, ನನಗೆ ಅಗತ್ಯವಾಗಿ ಮುಖ ಬೇಕಾಗುತ್ತದೆ. ಹಾಗಾದರೆ ನಂದಿಯ ಮುಖವಿರಲು ಸಾಧ್ಯವೇ!
ನಾನು ಇವರ ಮುಖವನ್ನು ತೆಗೆದುಕೊಳ್ಳುತ್ತೇನೆ, ಆಗ ಅವರು ಅನೇಕ ಜನ್ಮಗಳ ಅಂತ್ಯದಲ್ಲಿ ವಾನಪ್ರಸ್ಥ
ಸ್ಥಿತಿಯಲ್ಲಿರುತ್ತಾರೆ. ಯಾರು ತನ್ನ ಜನ್ಮಗಳನ್ನು ತಿಳಿದುಕೊಂಡಿರುವುದಿಲ್ಲವೋ ಇವರ ಶರೀರದಲ್ಲಿ
ನಾನು ಪ್ರವೇಶ ಮಾಡುತ್ತೇನೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಹೇಗೆ ತಂದೆಯು
ಆತ್ಮಗಳೊಂದಿಗೆ ನೇರವಾಗಿ ಮಾತನಾಡುತ್ತಾರೆಯೋ ಹಾಗೆಯೇ ಆತ್ಮ ನಿಶ್ಚಯ ಮಾಡಿಕೊಳ್ಳಬೇಕು. ಈ
ಸ್ಮಶಾನದಿಂದ ಮಮತ್ವವನ್ನು ತೆಗೆಯಬೇಕು. ಎಂದೂ ಕನಿಷ್ಟ ಕರ್ಮವಾಗದೇ ಇರುವಂತೆ ಸಂಸ್ಕಾರವನ್ನು ಧಾರಣೆ
ಮಾಡಬೇಕು.
2. ತಂದೆಗೆ ಡ್ರಾಮಾದ ಮೇಲೆ ನಿಶ್ಚಯವಿರುವ ಕಾರಣ ಯಾರಿಗೂ ದೋಷವನ್ನು ಹೊರಿಸುವುದಿಲ್ಲ. ನಿಂದನೆ
ಮಾಡುವ ಅಪಕಾರಿಗಳ ಮೇಲೂ ಉಪಕಾರ ಮಾಡುತ್ತಾರೆ. ಈ ರೀತಿ ತಂದೆಯ ಸಮಾನರಾಗಬೇಕು. ಈ ನಾಟಕದಲ್ಲಿ ಯಾರ
ದೋಷವೂ ಇಲ್ಲ, ಇದು ನಿಖರವಾಗಿ ಮಾಡಲ್ಪಟ್ಟಿದೆ.
ವರದಾನ:
ಸರ್ವ ಆತ್ಮರ
ಮೇಲೆ ತಮ್ಮ ಶುಭ ಭಾವನೆಯ ಬೀಜ ಹಾಕುವಂತಹ ಮಾಸ್ಟರ್ ದಾತ ಭವ.
ಫಲಕ್ಕೋಸ್ಕರ
ಕಾಯುವುದರ ಬದಲಾಗಿ ತಾವು ತಮ್ಮ ಶುಭ ಭಾವನೆಯ ಬೀಜ ಪ್ರತಿಯೊಂದು ಆತ್ಮನಲ್ಲಿ ಹಾಕುತ್ತಾ ಹೋಗಿ.
ಸಮಯದಲ್ಲಿ ಸರ್ವ ಆತ್ಮರನ್ನು ಜಾಗೃತ ಮಾಡಲೇಬೇಕು. ಯಾರಾದರೂ ವಿರುದ್ಧ ಮಾಡಿದರೂ ತಾವು ತಮ್ಮ ದಯಾ
ಭಾವನೆಯನ್ನು ಬಿಡಬಾರದು, ಈ ವಿರುದ್ಧತೆ, ಅಪಮಾನ, ನಿಂದನೆ ಗೊಬ್ಬರದ ಹಾಗೆ ಕೆಲಸ ಮಾಡುತ್ತದೆ ಮತ್ತು
ಒಳ್ಳೆಯ ಫಲ ಬರುತ್ತದೆ. ಎಷ್ಟು ನಿಂದನೆ ಮಾಡುತ್ತಾರೆ ಅಷ್ಟು ಮಹಿಮೆ ಮಾಡುತ್ತಾರೆ, ಆದ್ದರಿಂದ
ಪ್ರತಿಯೊಂದು ಆತ್ಮನನ್ನು ತಮ್ಮ ವೃತ್ತಿ, ವೈಬ್ರೇಶನ್ಸ್, ವಾಣಿ ಮೂಲಕ ಮಾಸ್ಟರ್ ದಾತನಾಗಿ ಕೊಡುತ್ತಾ
ಹೋಗಿ.
ಸ್ಲೋಗನ್:
ಸದಾ ಪ್ರೀತಿ,
ಸುಖ, ಶಾಂತಿ ಮತ್ತು ಆನಂದದ ಸಾಗರದಲ್ಲಿ ಸಮಾವೇಶ ಆಗುವ ಮಕ್ಕಳೇ ಸತ್ಯ ತಪಸ್ವಿ ಆಗಿದ್ದಾರೆ.