20.01.19 Avyakt Bapdada
Kannada
Murli
12.04.84 Om Shanti Madhuban
ಬ್ರಾಹ್ಮಣ ಜೀವನದ ಆಧಾರ
- ಪವಿತ್ರತೆ
ಇಂದು ಬಾಪ್ದಾದಾರವರು
ಎಲ್ಲಾ ಹೋಲಿ ಹಂಸಗಳನ್ನು ನೋಡುತ್ತಿದ್ದಾರೆ. ಪ್ರತಿಯೊಂದು ಹೋಲಿ ಹಂಸಗಳು ಎಲ್ಲಿಯವರೆಗೆ
ಹೋಲಿ(ಪವಿತ್ರ) ಆಗಿದ್ದಾರೆ, ಎಲ್ಲಿಯವರೆಗೆ ಹಂಸವಾಗಿದ್ದಾರೆ? ಪವಿತ್ರತೆ ಅರ್ಥಾತ್ ಹೋಲಿಯಾಗುವ
ಶಕ್ತಿಯು ಜೀವನದಲ್ಲಿ ಎಲ್ಲಿಯವರೆಗೆ ಅರ್ಥಾತ್ ಸಂಕಲ್ಪ, ಮಾತು ಮತ್ತು ಕರ್ಮದಲ್ಲಿ, ಸಂಬಂಧದಲ್ಲಿ,
ಸಂಪರ್ಕದಲ್ಲಿ ತಂದಿದ್ದಾರೆ? ಪ್ರತಿಯೊಂದು ಸಂಕಲ್ಪವು ಹೋಲಿ ಅರ್ಥಾತ್ ಪವಿತ್ರತೆಯ ಶಕ್ತಿಯು
ಸಂಪನ್ನವಾಗಿದೆಯೇ? ಪವಿತ್ರತೆಯ ಸಂಕಲ್ಪದ ಮೂಲಕ ಯಾವುದೇ ಅಪವಿತ್ರ ಸಂಕಲ್ಪವಿರುವ ಆತ್ಮರನ್ನೂ
ಪರಿಶೀಲಿಸಿ ಮತ್ತು ಪರಿವರ್ತನೆ ಮಾಡಬಲ್ಲಿರಾ? ಪವಿತ್ರತೆಯ ಶಕ್ತಿಯಿಂದ ಯಾವುದೇ ಆತ್ಮನ ದೃಷ್ಟಿ,
ವೃತ್ತಿ ಮತ್ತು ಕೃತಿ ಮೂರನ್ನೂ ಬದಲಾಯಿಸಬಲ್ಲಿರಾ. ಈ ಮಹಾನ್ ಶಕ್ತಿಯ ಮುಂದೆ ಅಪವಿತ್ರ ಸಂಕಲ್ಪವೂ
ಸಹ ಯುದ್ಧ ಮಾಡಲು ಸಾಧ್ಯವಿಲ್ಲ. ಆದರೆ ಯಾವಾಗ ಸ್ವಯಂ ಸಂಕಲ್ಪ, ಮಾತು ಅಥವಾ ಕರ್ಮದಲ್ಲಿ
ಸೋಲನ್ನನುಭವಿಸುತ್ತೀರಿ, ಆಗಲೇ ಅನ್ಯ ವ್ಯಕ್ತಿ ಅಥವಾ ಪ್ರಕಂಪನಗಳಿಂದ ಸೋಲುಂಟಾಗುತ್ತದೆ. ಯಾರದೇ
ಸಂಬಂಧ ಅಥವಾ ಸಂಪರ್ಕದಲ್ಲಿ ಸೋಲನ್ನನುಭವಿಸುವುದು - ಇದು ಸಿದ್ಧ ಮಾಡುತ್ತದೆ - ಸ್ವಯಂ
ತಂದೆಯೊಂದಿಗೆ ಸರ್ವ ಸಂಬಂಧವನ್ನು ಜೋಡಿಸುವುದರಲ್ಲಿ ಸೋಲುಂಟಾಗಿದೆ, ಆಗಲೇ ಯಾರದೇ ಸಂಬಂಧ ಅಥವಾ
ಸಂಪರ್ಕದಿಂದ ಸೋಲನ್ನನುಭವಿಸಲಾಗುತ್ತದೆ. ಪವಿತ್ರತೆಯಲ್ಲಿ ಸೋಲನ್ನನುಭವಿಸುವುದರ ಬೀಜವಾಗಿದೆ -
ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಯ ಗುಣ, ಸ್ವಭಾವ, ವ್ಯಕ್ತಿತ್ವ ಅಥವಾ ವಿಶೇಷತೆಯೊಂದಿಗೆ
ಪ್ರಭಾವಿತರಾಗುವುದು. ಈ ವ್ಯಕ್ತಿ ಅಥವಾ ವ್ಯಕ್ತ ಭಾವದಲ್ಲಿ ಪ್ರಭಾವಿತರಾಗುವುದು,
ಪ್ರಭಾವಿತರಾಗುವುದಲ್ಲ ಆದರೆ ಹಾಳಾಗುವುದಾಗಿದೆ. ವ್ಯಕ್ತಿಯ ವ್ಯಕ್ತಿಗತ ವಿಶೇಷತೆ ಅಥವಾ ಗುಣ,
ಸ್ವಭಾವವನ್ನು ತಂದೆಯು ಕೊಟ್ಟಿರುವ ವಿಶೇಷತೆಯಾಗಿದೆ ಅರ್ಥಾತ್ ದಾತನ ಕೊಡುಗೆಯಾಗಿದೆ. ವ್ಯಕ್ತಿಯ
ಮೇಲೆ ಪ್ರಭಾವಿತರಾಗುವುದು - ಇದು ಮೋಸವನ್ನನುಭವಿಸುವುದು. ಮೋಸ ಹೋಗುವುದು ಅರ್ಥಾತ್ ದುಃಖವನ್ನು
ತೆಗೆದುಕೊಳ್ಳುವುದಾಗಿದೆ. ಅಪವಿತ್ರತೆಯ ಶಕ್ತಿಯು ಮರೀಚಿಕೆಯ ಸಮಾನ ಶಕ್ತಿಯಾಗಿದೆ, ಅದು ಸಂಪರ್ಕ
ಅಥವಾ ಸಂಬಂಧದಿಂದ ಬಹಳ ಚೆನ್ನಾಗಿದೆಯೆಂದು ಅನುಭವವಾಗುತ್ತದೆ, ಆಕರ್ಷಣೆ ಮಾಡುತ್ತದೆ.
ತಿಳಿಯುತ್ತಾರೆ - ನಾನು ಒಳ್ಳೆಯದರ ಕಡೆ ಪ್ರಭಾವಿತನಾಗುತ್ತಿದ್ದೇನೆ. ಆದ್ದರಿಂದ ಶಬ್ಧವೂ ಸಹ
ಇದನ್ನೇ ಮಾತನಾಡುತ್ತಾರೆ ಅಥವಾ ಯೋಚಿಸುತ್ತಾರೆ - ಇವರು ಬಹಳ ಒಳ್ಳೆಯವರೆನಿಸುತ್ತಾರೆ ಅಥವಾ
ಒಳ್ಳೆಯದೆನಿಸುತ್ತದೆ ಅಥವಾ ಇವರ ಗುಣ ಅಥವಾ ಸ್ವಭಾವವು ಚೆನ್ನಾಗಿದೆಯೆನಿಸುತ್ತದೆ. ಜ್ಞಾನವು
ಇಷ್ಟವಾಗುತ್ತದೆ, ಯೋಗವನ್ನು ಮಾಡುವುದು ಇಷ್ಟವೆನಿಸುತ್ತದೆ. ಇದರಿಂದ ಶಕ್ತಿ ಸಿಗುತ್ತದೆ, ಸಹಯೋಗವು
ಸಿಗುತ್ತದೆ, ಸ್ನೇಹವು ಸಿಗುತ್ತದೆ. ಅಲ್ಪಕಾಲದ ಪ್ರಾಪ್ತಿಯಾಗುತ್ತದೆ ಆದರೆ
ಮೋಸವನ್ನನುಭವಿಸುತ್ತಾರೆ. ಕೊಡುವವರು ದಾತಾ ಅರ್ಥಾತ್ ಬೀಜವನ್ನು, ಆಧಾರವನ್ನೇ ಸಮಾಪ್ತಿ ಮಾಡಿ
ಬಿಡಲಾಯಿತು ಮತ್ತು ರಂಗು-ರಂಗಿನ ರೆಂಬೆಗಳನ್ನಿಡಿದು ತೂಗುತ್ತಿದ್ದರೆ ಅವರ ಗತಿಯೇನಾಗುತ್ತದೆ?
ಆಧಾರವಿಲ್ಲದೆ ರೆಂಬೆಗಳು ತೂಗುತ್ತದೆಯೇ ಅಥವಾ ಬೀಳಿಸುತ್ತದೆಯೇ? ಎಲ್ಲಿಯವರೆಗೆ ಬೀಜ ಅರ್ಥಾತ್ ದಾತಾ,
ವಿದಾತನಿಂದ ಸರ್ವ ಸಂಬಂಧ, ಸರ್ವ ಪ್ರಾಪ್ತಿಯ ಅನುಭವವಿಲ್ಲ, ಅಲ್ಲಿಯವರೆಗೆ ಕೆಲವೊಮ್ಮೆ
ವ್ಯಕ್ತಿಯಿಂದ, ಕೆಲವೊಮ್ಮೆ ವೈಭವದಿಂದ, ಕೆಲವೊಮ್ಮೆ ಪ್ರಕಂಪನ ವಾಯುಮಂಡಲ ಮುಂತಾದ ಭಿನ್ನ-ಭಿನ್ನ
ರೆಂಬೆಗಳಿಂದ ಅಲ್ಪಕಾಲದ ಪ್ರಾಪ್ತಿಯು ಮೃಗತೃಷ್ಣದಂತೆ ಮೋಸವನ್ನನುಭವಿಸುತ್ತಿರುತ್ತಾರೆ. ಹೀಗೆ
ಪ್ರಭಾವಿತರಾಗುವುದು ಅರ್ಥಾತ್ ಅವಿನಾಶಿ ಪ್ರಾಪ್ತಿಯಿಂದ ವಂಚಿತರಾಗುವುದು. ಪವಿತ್ರತೆಯ ಶಕ್ತಿಯನ್ನು
ಯಾವಾಗ ಬೇಕು, ಯಾವ ಸ್ಥಿತಿ ಬೇಕು, ಯಾವ ಪ್ರಾಪ್ತಿ ಬೇಕು, ಯಾವ ಕಾರ್ಯದಲ್ಲಿ ಸಫಲತೆಯು ಬೇಕು,
ಅದೆಲ್ಲವೂ ತಮ್ಮ ಮುಂದೆ ದಾಸಿಯಂತೆ ಹಾಜಿರ್ ಆಗಿ ಬಿಡುತ್ತದೆ. ಯಾವಾಗ ಕಲಿಯುಗದ ಅಂತ್ಯದಲ್ಲಿಯೂ
ರಜೋಪ್ರಧಾನ ಪವಿತ್ರತೆಯ ಶಕ್ತಿಯನ್ನು ಧಾರಣೆ ಮಾಡಿಕೊಳ್ಳುವ, ನಾಮಧಾರಿ ಮಹಾತ್ಮರದು ಈಗ
ಅಂತಿಮದವರೆಗೂ ಪ್ರಕೃತಿಯ ದಾಸಿಯಾಗಿರುವ ಪ್ರಮಾಣವನ್ನು ನೋಡುತ್ತಿದ್ದೀರಿ. ಈಗಿನವರೆಗೂ ಹೆಸರು
ಮಹಾತ್ಮನೆಂದು ನಡೆಯುತ್ತಿದೆ, ಈಗಿನವರೆಗೂ ಪೂಜ್ಯರಾಗಿದ್ದಾರೆ. ಅಪವಿತ್ರ ಆತ್ಮರು ಬಾಗುತ್ತಾರೆ.
ಅಂದಮೇಲೆ ಯೋಚಿಸಿರಿ - ಅಂತ್ಯದವರೆಗೂ ಪವಿತ್ರತೆಯ ಶಕ್ತಿಯ ಮಹಾನತೆಯು ಎಷ್ಟೊಂದಿದೆ ಮತ್ತು
ಪರಮಾತ್ಮನ ಮೂಲಕ ಪ್ರಾಪ್ತಿಯಾಗಿರುವ ಸತೋಪ್ರಧಾನ ಪವಿತ್ರತೆಯು ಎಷ್ಟೊಂದು ಶಕ್ತಿಶಾಲಿಯಾಗಿರುತ್ತದೆ.
ಈ ಶ್ರೇಷ್ಠವಾದ ಪವಿತ್ರತೆಯ ಶಕ್ತಿಯ ಮುಂದೆ ಅಪವಿತ್ರತೆಯು ಬಾಗಿರುವುದೇ ಅಲ್ಲ. ಆದರೆ ತಮ್ಮ ಕಾಲಿನ
ಕೆಳಗಿದೆ. ಅಪವಿತ್ರತೆಯೆಂಬ ಆಸುರಿ ಶಕ್ತಿ, ಶಕ್ತಿ ಸ್ವರೂಪರ ಕಾಲಿನ ಕೆಳಗಿರುವುದು ತೋರಿಸಲಾಗಿದೆ.
ಯಾರು ಕಾಲಿನ ಕೆಳಗೆ ಸೋತಿದ್ದಾರೆ, ಸೋಲನ್ನು ಹೇಗೆ ಅನುಭವಿಸವಂತೆ ಮಾಡಬಹುದು! ಬ್ರಾಹ್ಮಣ ಜೀವನ
ಮತ್ತು ಸೋಲನ್ನನುಭವಿಸುವುದು - ಇವರಿಗೆ ಹೇಳಲಾಗುತ್ತದೆ ನಾಮಧಾರಿ ಬ್ರಾಹ್ಮಣ, ಇದರಲ್ಲಿ
ಹುಡುಗಾಟಿಕೆ ಮಾಡಬೇಡಿ. ಬ್ರಾಹ್ಮಣ ಜೀವನದ ಆಧಾರವಾಗಿದೆ - ಪವಿತ್ರತೆಯ ಶಕ್ತಿ. ಒಂದು ವೇಳೆ ಆಧಾರವು
ಬಲಹೀನವಾಗಿದೆಯೆಂದರೆ ಪ್ರಾಪ್ತಿಗಳ 21 ಅಂತಸ್ತುಳ್ಳ ಮನೆಯು ಹೇಗೆ ನಿಂತಿರಲು ಸಾಧ್ಯ! ಒಂದು ವೇಳೆ
ತಳಪಾಯವೇ ಅಲುಗಾಡುತ್ತಿದೆಯೆಂದರೆ, ಪ್ರಾಪ್ತಿಯ ಅನುಭವವು ಸದಾಕಾಲವಿರಲು ಸಾಧ್ಯವಿಲ್ಲ ಅರ್ಥಾತ್
ಅಚಲವಾಗಿರಲು ಸಾಧ್ಯವಿಲ್ಲ ಮತ್ತು ವರ್ತಮಾನ ಯುಗವನ್ನು ಅಥವಾ ಜನ್ಮದ ಮಹಾನ್ ಪ್ರಾಪ್ತಿಯ
ಅನುಭವವನ್ನೂ ಮಾಡುವುದಕ್ಕಾಗುವುದಿಲ್ಲ. ಯುಗದ, ಶ್ರೇಷ್ಠ ಜನ್ಮದ ಮಹಿಮೆಯನ್ನು ಹಾಡುವಂತಹ ಜ್ಞಾನಿ
ಭಕ್ತರಾಗಿ ಬಿಡುತ್ತೀರಿ ಅರ್ಥಾತ್ ತಿಳುವಳಿಕೆಯಿದೆ. ಆದರೆ ಅದರಂತೆ ಸ್ವಯಂ ಇಲ್ಲ, ಇವರಿಗೆ ಜ್ಞಾನಿ
ಭಕ್ತ ಎಂದು ಹೇಳಲಾಗುತ್ತದೆ. ಒಂದು ವೇಳೆ ಬ್ರಾಹ್ಮಣರಾಗಿದ್ದು ಸರ್ವ ಪ್ರಾಪ್ತಿಗಳ, ಸರ್ವ ಶಕ್ತಿಗಳ
ವರದಾನ ಅಥವಾ ಆಸ್ತಿಯ ಅನುಭವವನ್ನು ಮಾಡಲಿಲ್ಲವೆಂದರೆ, ಅವರಿಗೇನೆಂದು ಹೇಳುತ್ತಾರೆ? ವಂಚಿತ ಆತ್ಮ
ಅಥವಾ ಬ್ರಾಹ್ಮಣ ಆತ್ಮನೆಂದೇ? ಪವಿತ್ರತೆಯ ಭಿನ್ನ-ಭಿನ್ನ ರೂಪಗಳನ್ನು ಬಹಳ ಚೆನ್ನಾಗಿ
ತಿಳಿದುಕೊಳ್ಳಿರಿ, ಸ್ವಯಂ ಪ್ರತಿ ಕಠಿಣ ದೃಷ್ಟಿಯನ್ನಿಡಿ. ನಡೆಸಬಾರದು, ನಿಮಿತ್ತರಾಗಿರುವ
ಆತ್ಮರಿಗೆ, ತಂದೆಯನ್ನೂ ಚಲಾಯಿಸುವ ಪ್ರಯತ್ನ ಪಡುತ್ತಾರೆ. ಇದಂತು ಆಗಿಯೇ ಆಗುತ್ತದೆ, ಹೀಗೆ
ಯಾರಾಗಿದ್ದಾರೆ! ಅಥವಾ ಹೇಳುತ್ತಾರೆ - ಇದು ಅಪವಿತ್ರತೆಯಲ್ಲ, ಮಹಾನತೆಯಾಗಿದೆ, ಇದಂತು ಸೇವೆಯ
ಸಾಧನವಾಗಿದೆ. ಪ್ರಭಾವಿತರಾಗಿಲ್ಲ, ಸಹಯೋಗವನ್ನು ತೆಗೆದುಕೊಳ್ಳುತ್ತೇವೆ. ಸಹಯೋಗಿಯಾಗಿದ್ದಾರೆ
ಆದ್ದರಿಂದ ಪ್ರಭಾವಿತನಾಗಿದ್ದಾರೆ. ತಂದೆಯನ್ನು ಮರೆತರು ಮತ್ತು ಮಾಯೆಯ ಗೋಲಿ ಬಿದ್ದಿತು,
ಇಲ್ಲವೆಂದರೆ ತನ್ನನ್ನು ಬಿಡಿಸಿಕೊಳ್ಳುವುದಕ್ಕಾಗಿ ಹೇಳುತ್ತಾರೆ - ನಾನು ಮಾಡುತ್ತಿಲ್ಲ, ಇವರು
ಮಾಡುತ್ತಾರೆ. ಆದರೆ ತಂದೆಯನ್ನು ಮರೆತಿರೆಂದರೆ ಧರ್ಮರಾಜನ ರೂಪದಲ್ಲಿಯೇ ತಂದೆಯು ಸಿಗುತ್ತಾರೆ.
ತಂದೆಯ ಸುಖವೆನ್ನಿಂದಿಗೂ ಪಡೆಯುವುದಕ್ಕಾಗುವುದಿಲ್ಲ ಆದ್ದರಿಂದ ಮುಚ್ಚಿಡಬಾರದು, ಚಲಾಯಿಸಬಾರದು.
ಅನ್ಯರನ್ನು ದೋಷಿಯನ್ನಾಗಿ ಮಾಡಬಾರದು, ಅಲ್ಪಕಾಲದರ ಹಿಂದೆ ಆಕರ್ಷಣೆಯಲ್ಲಿ ಮೋಸವನ್ನನುಭವಿಸಬಾರದು.
ಈ ಪವಿತ್ರತೆಯ ತಳಪಾಯದಲ್ಲಿ ಬಾಪ್ದಾದಾರವರು ಧರ್ಮರಾಜನ ಮೂಲಕ 100 ಪಟ್ಟು, ಪದಮದಷ್ಟು ಶಿಕ್ಷೆಯನ್ನು
ಕೊಡಿಸುತ್ತಾರೆ. ಇದರಲ್ಲಿ ರಿಯಾಯಿತಿಯೆಂದಿಗೂ ಇರಲು ಸಾಧ್ಯವಿಲ್ಲ, ಇದರಲ್ಲಿ ದಯಾಹೃದಯಿಯಾಗಲು
ಸಾಧ್ಯವಿಲ್ಲ. ಏಕೆಂದರೆ ತಂದೆಯೊಂದಿಗಿನ ಸಂಬಂಧವನ್ನು ಮುರಿದು ಬಿಟ್ಟಿರಿ ಆದ್ದರಿಂದಲೇ ಯಾರ ಮೇಲೆಯೋ
ಪ್ರಭಾವಿತರಾದಿರಿ. ಪರಮಾತ್ಮನ ಪ್ರಭಾವದಿಂದ ಹೊರ ಬಂದು ಆತ್ಮರ ಪ್ರಭಾವದಲ್ಲಿ ಬರುವುದು ಅರ್ಥಾತ್
ತಂದೆಯನ್ನು ತಿಳಿದುಕೊಳ್ಳಲಿಲ್ಲ, ಗುರುತಿಸಲಿಲ್ಲ. ಇಂತಹವರ ಮುಂದೆ ತಂದೆಯು ತಂದೆಯ ರೂಪದಲ್ಲಲ್ಲ
ಆದರೆ ಧರ್ಮರಾಜನ ರೂಪದಲ್ಲಿದ್ದಾರೆ. ಎಲ್ಲಿ ಪಾಪವಿದೆ ಅಲ್ಲಿ ತಂದೆಯಿಲ್ಲ. ಅಂದಮೇಲೆ
ಹುಡುಗಾಟಿಕೆಯಿರುವವರಾಗಬಾರದು. ಇದನ್ನು ಚಿಕ್ಕ ಮಾತೆಂದು ತಿಳಿಯಬಾರದು. ಅದೂ ಸಹ ಯಾರ ಪ್ರತಿಯಾದರೂ
ಪ್ರಭಾವಿತರಾಗುವುದು, ಕಾಮನೆ ಅರ್ಥಾತ್ ಕಾಮ ವಿಕಾರದ ಅಂಶವಿದೆ. ಕಾಮನೆಯಿಲ್ಲದೆ ಪ್ರಭಾವಿತರಾಗಲು
ಸಾಧ್ಯವಿಲ್ಲ. ಆ ಕಾಮನೆಯೂ ಕಾಮ ವಿಕಾರವಾಗಿದೆ, ಮಹಾ ಶತ್ರುವಾಗಿದೆ. ಈ ಎರಡು ರೂಪದಲ್ಲಿ ಬರುತ್ತದೆ
- ಕಾಮನೆಯು ಪ್ರಭಾವಿತ ಮಾಡುತ್ತದೆ ಇಲ್ಲವೆಂದರೆ ಬೇಸರ ಪಡಿಸುತ್ತದೆ, ಆದ್ದರಿಂದ ಹೇಗೆ ಡಂಗುರ
ಸಾರುತ್ತೀರಿ - ಕಾಮ ವಿಕಾರವು ನರಕದ ದ್ವಾರವಾಗಿದೆ. ಹೀಗೆ ಈಗ ತಮ್ಮ ಜೀವನಕ್ಕಾಗಿ ಈ ಧಾರಣೆಯನ್ನು
ಮಾಡಿಕೊಳ್ಳಿರಿ - ಯಾವುದೇ ಪ್ರಕಾರದ ಅಲ್ಪಕಾಲದ ಕಾಮನೆಯು ಮೃಗ ತೃಷ್ಣದಂತೆ ಮೋಸಗಾರನಾಗಿದೆ. ಕಾಮನೆ
ಅರ್ಥಾತ್ ಮೋಸವನ್ನನುಭವಿಸುವುದು. ಇಂತಹ ಕಠಿಣ ದೃಷ್ಟಿಯಿರುವ ಈ ಕಾಮ ಅರ್ಥಾತ್ ಕಾಮನೆಯ ಮೇಲೆ ಕಾಳಿ
ರೂಪರಾಗಿರಿ. ಸ್ನೇಹಿ ರೂಪದವರಾಗಬಾರದು, ಪಾಪ ಒಳ್ಳೆಯದು, ಸ್ವಲ್ಪ-ಸ್ವಲ್ಪವಿದೆ, ಸರಿಯಾಗಿ
ಬಿಡುತ್ತಾರೆ, ಇಲ್ಲ! ವಿಕರ್ಮದ ಮೇಲೆ ಭಯಾನಕ ರೂಪವನ್ನು ಧಾರಣೆ ಮಾಡಿರಿ. ಅನ್ಯರ ಪ್ರತಿಯಲ್ಲ,
ತಮ್ಮ ಪ್ರತಿ, ಆಗಲೇ ವಿಕರ್ಮವನ್ನು ವಿನಾಶ ಮಾಡಿಕೊಂಡು ಫರಿಶ್ಥೆಯಾಗಲು ಸಾಧ್ಯ. ಯೋಗ
ಜೋಡಣೆಯಾಗುತ್ತಿಲ್ಲವೆಂದರೆ ಪರಿಶೀಲನೆ ಮಾಡಿರಿ - ಅವಶ್ಯವಾಗಿ ಬಚ್ಚಿಟ್ಟುಕೊಂಡಿರುವ ಯಾವುದೋ
ವಿಕರ್ಮವು ತನ್ನ ಕಡೆಗೆ ಎಳೆಯುತ್ತಿದೆಯೇ! ಬ್ರಾಹ್ಮಣ ಆತ್ಮ ಮತ್ತು ಯೋಗ ಜೋಡಣೆಯಾಗುತ್ತಿಲ್ಲ -
ಹೀಗಾಗಲು ಸಾಧ್ಯವೇ ಇಲ್ಲ. ಬ್ರಾಹ್ಮಣನೆಂದರೆ ಒಬ್ಬರವನು, ಒಬ್ಬನೇ ಇದ್ದಾರೆ. ಅಂದಮೇಲೆ ಅವರೆಲ್ಲಿಗೆ
ಹೋಗುತ್ತಾರೆ? ಏನೂ ಇಲ್ಲವೇ ಇಲ್ಲವೆಂದರೆ ಎಲ್ಲಿಗೆ ಹೋಗುತ್ತಾರೆ? ಒಳ್ಳೆಯದು! ಕೇವಲ
ಬ್ರಹ್ಮಚರ್ಯವಲ್ಲ, ಆದರೆ ಕಾಮ ವಿಕಾರದ ಜೊತೆ ಇನ್ನೂ ಮರಿ ಮಕ್ಕಳಿದ್ದಾರೆ. ಬಾಪ್ದಾದಾರವರಿಗೆ ಒಂದು
ಮಾತಿನ ಬಗ್ಗೆ ಬಹಳ ಆಶ್ಚರ್ಯವೆನಿಸುತ್ತದೆ. ಬ್ರಾಹ್ಮಣನೆಂದು ಹೇಳುತ್ತಾರೆ, ಬ್ರಾಹ್ಮಣ ಆತ್ಮನ ಮೇಲೆ
ವ್ಯರ್ಥದ ವಿಕಾರಿ ದೃಷ್ಟಿ, ವೃತ್ತಿಯುಂಟಾಗುತ್ತದೆ. ಇದು ಕುಲ ಕಳಂಕಿತದ ಮಾತಾಗಿದೆ. ಹೇಳುವುದು -
ಅಕ್ಕವರೇ ಅಥವಾ ಅಣ್ಣವರೇ ಎಂದು ಮತ್ತು ಮಾಡುವುದೇನು! ಲೌಕಿಕ ಸಹೋದರಿಯ ಮೇಲೇನಾದರೂ ಯಾರಿಗೇ ಕೆಟ್ಟ
ದೃಷ್ಟಿ ಹೋಯಿತು, ಸಂಕಲ್ಪದಲ್ಲಿಯೇ ಬಂದಿತೆಂದರೆ ಅವರನ್ನು ಕುಲ ಕಳಂಕಿತನೆಂದು ಹೇಳಲಾಗುತ್ತದೆ.
ಅಂದಮೇಲೆ ಇಲ್ಲಿ ಏನು ಹೇಳಲಾಗುತ್ತದೆ? ಒಂದು ಜನ್ಮಕ್ಕಲ್ಲ ಆದರೆ ಜನ್ಮ-ಜನ್ಮಕ್ಕೆ ಕಳಂಕವನ್ನು
ಹಾಕುವವರು. ರಾಜ್ಯಭಾಗ್ಯಕ್ಕೆ ಕಾಲಿನಿಂದ ಹೊಡೆಯುವವರು. ಹೀಗೆ ಪದಮದಷ್ಟು ವಿಕರ್ಮವನ್ನೆಂದಿಗೂ
ಮಾಡಬೇಡಿ. ಇದು ವಿಕರ್ಮವಲ್ಲ, ಮಹಾ ವಿಕರ್ಮವಾಗಿದೆ. ಆದ್ದರಿಂದ ಯೋಚಿಸಿರಿ, ತಿಳಿಯಿರಿ, ಸಂಭಾಲನೆ
ಮಾಡಿಕೊಳ್ಳಿರಿ. ಇದೇ ಪಾಪವು ಯಮದೂತರಂತೆ ಹಿಡಿದು ಬಿಡುತ್ತದೆ. ಈಗ ಭಲೇ ತಿಳಿಯುತ್ತಾರೆ - ಬಹಳ
ಮಜಾದಲ್ಲಿ ಇರುತ್ತಿದ್ದೇವೆ, ಯಾರು ನೋಡುತ್ತಾರೆ, ಯಾರಿಗೆ ಗೊತ್ತಾಗುತ್ತದೆ ಎಂದು. ಆದರೆ ಪಾಪದ
ಮೇಲೆ ಪಾಪವು ಏರಿ ಬಿಡುತ್ತದೆ ಮತ್ತು ಇದೇ ಪಾಪವು ತಿನ್ನಲು(ಅನುಭವಿಸುವುದು) ಬರುತ್ತದೆ.
ಬಾಪ್ದಾದಾರವರಿಗೆ ಗೊತ್ತಿದೆ - ಇದರ ಫಲಿತಾಂಶವು ಎಷ್ಟು ಕಠಿಣವಾಗಿದೆ ಎಂದು. ಹೇಗೆ ಶರೀರದಿಂದ
ಯಾರಾದರೂ ಅನುಭವಿಸಿ-ಅನುಭವಿಸಿ ಶರೀರ ಬಿಡುತ್ತಾರೆ, ಹಾಗೆಯೇ ಬುದ್ಧಿಯು ಪಾಪಗಳಲ್ಲಿ
ಭೋಗಿಸಿ-ಭೋಗಿಸಿ ಶರೀರವನ್ನು ಬಿಡುತ್ತದೆ. ಸದಾ ಈ ಪಾಪಗಳ ಯಮದೂತರು ಮುಂದಿರುತ್ತಾರೆ. ಇಷ್ಟೂ
ಕಠಿಣವಾದ ಅಂತ್ಯವಿರುತ್ತದೆ. ಆದ್ದರಿಂದ ವರ್ತಮಾನದಲ್ಲಿ ಮರೆತೂ ಸಹ ಇಂತಹ ಪಾಪವನ್ನೆಂದಿಗೂ ಮಾಡದಿರಿ.
ಬಾಪ್ದಾದಾರವರು ಕೇವಲ ಸನ್ಮುಖದಲ್ಲಿ ಕುಳಿತು ಮಕ್ಕಳಿಗೆ ಹೇಳುತ್ತಿಲ್ಲ ಆದರೆ ನಾಲ್ಕೂ
ಕಡೆಯಲ್ಲಿರುವ ಮಕ್ಕಳನ್ನು ಸಮರ್ಥರನ್ನಾಗಿ ಮಾಡುತ್ತಿದ್ದಾರೆ. ಸಾವಧಾನ, ಬುದ್ಧಿವಂತರನ್ನಾಗಿ
ಮಾಡುತ್ತಿದ್ದಾರೆ. ತಿಳಿಯಿತೆ - ಈಗಿನವರೆಗೂ ಈ ಮಾತಿನಲ್ಲಿ ಬಹಳ ಬಲಹೀನತೆಯಿದೆ. ಒಳ್ಳೆಯದು.
ಎಲ್ಲರೂ ಸ್ವಯಂ ಪ್ರತಿ ಸೂಚನೆಗಳಿಂದ ತಿಳಿಯುವವರು, ಸದಾ ತಮ್ಮನ್ನು ವಿಕಲ್ಪ ಮತ್ತು ವಿಕರ್ಮದ ಮೇಲೆ
ಕಾಳಿ ರೂಪವನ್ನು ಧಾರಣೆ ಮಾಡಿಕೊಳ್ಳುವವರು, ಸದಾ ಭಿನ್ನ-ಭಿನ್ನ ಮೋಸಗಳಿಂದ ಪಾರಾಗುವವರು,
ದುಃಖಗಳಿಂದ ಪಾರಾಗುವವರು, ಶಕ್ತಿಶಾಲಿ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಆಯ್ಕೆ ಮಾಡಿರುವ
ವಿಶೇಷವಾದ ಅವ್ಯಕ್ತ ಮಹಾವಾಕ್ಯಗಳು -
ಬ್ರಹ್ಮಾ ತಂದೆಯ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುವ ಬ್ರಹ್ಮಾ ಚಾ ರಿ ಆಗಿರಿ :- ಬ್ರಹ್ಮಾಚಾರಿ
ಅರ್ಥಾತ್ ಬ್ರಹ್ಮಾ ತಂದೆಯ ಆಚರಣೆಯಂತೆ ನಡೆಯುವವರು. ಸಂಕಲ್ಪ, ಮಾತು ಮತ್ತು ಕರ್ಮವೆಂಬ ಹೆಜ್ಜೆಯು
ಸ್ವಾಭಾವಿಕವಾಗಿ ಬ್ರಹ್ಮಾ ತಂದೆಯ ಹೆಜ್ಜೆಯ ಮೇಲೆ ಹೆಜ್ಜೆಯಿರಲಿ, ಇದಕ್ಕೆ ಫೂಟ್ಸ್ಟೆಪ್ ಎಂದು
ಹೇಳಲಾಗುತ್ತದೆ. ಪ್ರತೀ ಹೆಜ್ಜೆಯಲ್ಲಿ ಬ್ರಹ್ಮಾ ತಂದೆಯ ಆಚರಣೆಯು ಕಾಣಿಸಲಿ ಅರ್ಥಾತ್ ಈ
ಮನ-ವಾಣಿ-ಕರ್ಮದ ಹೆಜ್ಜೆಯು ಬ್ರಹ್ಮಾಚಾರಿಯಾಗಿರಲಿ, ಹೀಗೆ ಯಾರು ಬ್ರಹ್ಮಾಚಾರಿಯಾಗಿರುತ್ತಾರೆ,
ಅವರ ಚಹರೆ ಮತ್ತು ಚಲನೆಯು ಸದಾ ಅಂತರ್ಮುಖಿ ಮತ್ತು ಅತೀಂದ್ರಿಯ ಸುಖದ ಅನುಭವವನ್ನು ಮಾಡಿಸುತ್ತದೆ.
ಬ್ರಹ್ಮಾಚಾರಿಯೆಂದರೆ ಅವರಾಗಿದ್ದಾರೆ - ಯಾರ ಪ್ರತೀ ಕರ್ಮದಿಂದ ಬ್ರಹ್ಮಾ ತಂದೆಯ ಕರ್ಮವು ಕಾಣಿಸಲಿ.
ಮಾತು, ಬ್ರಹ್ಮಾ ತಂದೆಯ ಮಾತಿನಂತಿರಲಿ, ಏಳುವುದು -ಕುಳಿತುಕೊಳ್ಳುವುದು, ನೋಡುವುದು, ನಡೆಯುವುದು
- ಎಲ್ಲವೂ ಸಮಾನವಾಗಿರಲಿ. ಬ್ರಹ್ಮಾ ತಂದೆಯವರು ಹೇಗೆ ತನ್ನ ಸಂಸ್ಕಾರವನ್ನು ಮಾಡಿಕೊಂಡಿದ್ದರು
ಮತ್ತು ಶರೀರದ ಅಂತ್ಯದಲ್ಲಿಯೂ ನೆನಪು ತರಿಸಿದರು - ನಿರಾಕಾರಿ, ನಿರ್ವಿಕಾರಿ, ನಿರಹಂಕಾರಿ -
ಬ್ರಾಹ್ಮಣರ ಸಂಸ್ಕಾರವು ಸ್ವಾಭಾವಿಕವಾಗಿ ಇದೇ ಆಗಿರಲಿ, ಆಗ ಬ್ರಹ್ಮಾಚಾರಿ ಎಂದು ಹೇಳಲಾಗುತ್ತದೆ.
ಸ್ವಭಾವ-ಸಂಸ್ಕಾರದಲ್ಲಿ ತಂದೆಯ ಸಮಾನತೆಯ ನವೀನತೆಯಿರಲಿ. ನನ್ನ ಸ್ವಭಾವವಲ್ಲ ಆದರೆ ತಂದೆಯ
ಸ್ವಭಾವವೇನಿದೆಯೋ ಅದೇ ನನ್ನ ಸ್ವಭಾವವಾಗಿದೆ.ಪವಿತ್ರತೆಯ ವ್ರತವು ಕೇವಲ ಬ್ರಹ್ಮಚರ್ಯದ ವ್ರತವಲ್ಲ
ಆದರೆ ಬ್ರಹ್ಮಾರವರ ಸಮಾನ ಪ್ರತೀ ಮಾತಿನಲ್ಲಿ ಪವಿತ್ರತೆಯ ಪ್ರಕಂಪನಗಳು ಸಮಾವೇಶವಾಗಿರಲಿ, ಒಂದೊಂದು
ಮಾತು ಮಹಾವಾಕ್ಯವಾಗಿರಲಿ, ಸಾಧಾರಣವಲ್ಲ, ಅಲೌಕಿಕವಾಗಿರಲಿ. ಪ್ರತೀ ಸಂಕಲ್ಪದಲ್ಲಿ ಪವಿತ್ರತೆಯ
ಮಹತ್ವವಿರಲಿ, ಪ್ರತೀ ಕರ್ಮದಲ್ಲಿ ಕರ್ಮ ಮತ್ತು ಯೋಗ ಅರ್ಥಾತ್ ಕರ್ಮಯೋಗಿಯ ಅನುಭವವಿರಲಿ - ಇದಕ್ಕೆ
ಬ್ರಹ್ಮ್ಚಾರಿ ಮತ್ತು ಬ್ರಹ್ಮಾಚಾರಿ ಎಂದು ಹೇಳಲಾಗುತ್ತದೆ. ಹೇಗೆ ಬ್ರಹ್ಮಾ ತಂದೆಯು ಸಾಧಾರಣ
ತನುವಿನಲ್ಲಿದ್ದರೂ ಸಹ ಪುರುಷೋತ್ತಮನ ಅನುಭವವಾಗುತ್ತಿತ್ತು. ಎಲ್ಲರೂ ನೋಡಿದ್ದೀರಿ ಅಥವಾ
ಕೇಳಿದ್ದೀರಿ. ಈಗ ಅವ್ಯಕ್ತ ರೂಪದಲ್ಲಿಯೂ ಸಾಧಾರಣದಲ್ಲಿ ಪುರುಷೋತ್ತಮನ ಹೊಳಪನ್ನು ನೋಡುತ್ತೀರಿ.
ಹೀಗೆ ಫಾಲೋ ಫಾದರ್ ಮಾಡಿರಿ. ಕಾರ್ಯವು ಭಲೇ ಸಾಧಾರಣವಾದುದೇ ಇರಲಿ ಆದರೆ ಸ್ಥಿತಿಯು ಮಹಾನ್ ಆಗಿರಲಿ.
ಚಹರೆಯಲ್ಲಿ ಶ್ರೇಷ್ಠ ಜೀವನದ ಪ್ರಭಾವವಿರಲಿ. ಪ್ರತೀ ಚಲನೆಯಿಂದ ತಂದೆಯ ಅನುಭವವಾಗಲಿ - ಇದಕ್ಕೆ
ಬ್ರಹ್ಮಾಚಾರಿ ಆಗಿರುವುದೆಂದು ಹೇಳಲಾಗುತ್ತದೆ. ಹೇಗೆ ಬ್ರಹ್ಮಾ ತಂದೆಯವರ ಸ್ನೇಹವು ವಿಶೇಷವಾಗಿ
ಮುರುಳಿಯೊಂದಿಗೆ ಇತ್ತು ಆದ್ದರಿಂದ ಮುರುಳೀಧರನಾದರು. ಭವಿಷ್ಯ ಶ್ರೀ ಕೃಷ್ಣನ ರೂಪದಲ್ಲಿಯೂ `ಮುರುಳಿ'ಯನ್ನೇ(ಕೊಳಲು)
ಚಿಹ್ನೆಯಾಗಿ ತೋರಿಸುತ್ತಾರೆ. ಅಂದಮೇಲೆ ಯಾವುದರೊಂದಿಗೆ ತಂದೆಯ ಪ್ರೀತಿಯಿದ್ದಿತು, ಅದರೊಂದಿಗೆ
ಪ್ರೀತಿಯಿರುವುದೇ ಪ್ರೀತಿಯ ಚಿಹ್ನೆಯಾಗಿದೆ. ಇವರಿಗೇ ಬ್ರಹ್ಮಾ ತಂದೆಯ ಪ್ರೀಯರು ಅರ್ಥಾತ್
ಬ್ರಹ್ಮಾಚಾರಿ ಎಂದು ಹೇಳಲಾಗುತ್ತದೆ. ಯಾವುದೇ ಕರ್ಮವನ್ನು ಮಾಡಿರಿ, ಕರ್ಮಕ್ಕೆ ಮೊದಲು, ಮಾತಿಗೆ
ಮೊದಲು, ಸಂಕಲ್ಪದ ಮೊದಲು ಪರಿಶೀಲನೆ ಮಾಡಿರಿ - ಇದು ಬ್ರಹ್ಮಾ ತಂದೆಯ ಸಮಾನವಿದೆಯೇ? ನಂತರ
ಸಂಕಲ್ಪವನ್ನು ಸ್ವರೂಪದಲ್ಲಿ ತನ್ನಿರಿ, ಮಾತನ್ನು ಮುಖದಿಂದ ಮಾತನಾಡಿರಿ, ಕರ್ಮವನ್ನು
ಕರ್ಮೇಂದ್ರಿಯಗಳಿಂದ ಮಾಡಿರಿ. ಹೀಗಲ್ಲ - ಇದನ್ನು ಯೋಚಿಸಿಯೇ ಇರಲಿಲ್ಲ ಆದರೆ ಆಗಿ ಬಿಟ್ಟಿತು.
ಬ್ರಹ್ಮಾ ತಂದೆಯ ವಿಶೇಷತೆಯು ವಿಶೇಷವಾಗಿ ಇದೇ ಆಗಿದೆ - ಏನನ್ನು ಯೋಚಿಸಿದರು, ಅದನ್ನು ಮಾಡಿದರು.
ಏನನ್ನು ಹೇಳಿದರು ಅದನ್ನು ಮಾಡಿದರು, ಹೀಗೆ ಫಾಲೋ ಫಾದರ್ ಮಾಡುವವರೇ
ಬ್ರಹ್ಮಾಚಾರಿಯಾಗಿದ್ದಾರೆ.ಹೇಗೆ ಬ್ರಹ್ಮಾ ತಂದೆಯವರು ನಿಶ್ಚಯದ ಆಧಾರದ ಮೇಲೆ, ಆತ್ಮಿಕ ನಶೆಯ
ಆಧಾರದ ಮೇಲೆ ಪೂರ್ವ ನಿಶ್ಚಿತದ ಜ್ಞಾನಿಯಾಗಿದ್ದು, ಸೆಕೆಂಡಿನಲ್ಲಿ ಎಲ್ಲವನ್ನೂ ಸಫಲ ಮಾಡಿ ಬಿಟ್ಟರು.
ತನಗಾಗಿ ಏನನ್ನೂ ಇಡಲಿಲ್ಲ, ಸಫಲ ಮಾಡಿದರು. ಇವರ ಪ್ರತ್ಯಕ್ಷ ಪ್ರಮಾಣವನ್ನೇ ನೋಡಿದಿರಿ – ಅಂತಿಮ
ದಿನದವರೆಗೂ ತನುವಿನಿಂದ ಪತ್ರ ವ್ಯವಹಾರದ ಮೂಲಕ ಸೇವೆಯನ್ನು ಮಾಡಿದರು, ಮುಖದಿಂದ ಮಹಾವಾಕ್ಯಗಳನ್ನು
ಉಚ್ಛಾರಣೆ ಮಾಡಿದರು. ಅಂತಿಮ ದಿನದವರೆಗೂ ಸಮಯ, ಸಂಕಲ್ಪ, ಶರೀರವನ್ನು ಸಫಲ ಮಾಡಿದರು. ಅಂದಮೇಲೆ
ಬ್ರಹ್ಮಾಚಾರಿ ಎಂದರೆ ಎಲ್ಲವನ್ನೂ ಸಫಲ ಮಾಡುವವರು. ಸಫಲ ಮಾಡುವುದರ ಅರ್ಥವೇ ಆಗಿದೆ - ಶ್ರೇಷ್ಠದ
ಕಡೆ ಉಪಯೋಗಿಸುವುದು. ಹೇಗೆ ಬ್ರಹ್ಮಾ ತಂದೆಯು ಸದಾ ಹರ್ಷಿತ ಮತ್ತು ಗಂಭೀರ - ಎರಡರಲ್ಲಿಯೂ
ಬ್ಯಾಲೆನ್ಸ್ನ ಏಕರಸ ಸ್ಥಿತಿಯಲ್ಲಿದ್ದರು, ಹೀಗೆ ಫಾಲೋ ಫಾದರ್ ಮಾಡಿರಿ. ಎಂದಿಗೂ ಯಾವುದೇ
ಮಾತಿನಲ್ಲಿ ತಬ್ಬಿಬ್ಬಾಗಬಾರದು ಮತ್ತು ಎಂದೂ ಯಾವುದೇ ಮಾತಿನಿಂದ ಮೂಡ್ ಬದಲಾಯಿಸಿಕೊಳ್ಳದಿರಿ. ಸದಾ
ಪ್ರತೀ ಕರ್ಮದಲ್ಲಿ ಬ್ರಹ್ಮಾ ತಂದೆಯನ್ನು ಫಾಲೋ ಮಾಡಿದಾಗ ಹೇಳಲಾಗುತ್ತದೆ - ಬ್ರಹ್ಮಾಚಾರಿ.
ಬ್ರಹ್ಮಾ ತಂದೆಗೆ ಅತೀ ಪ್ರಿಯವಾದ ಸ್ಲೋಗನ್ ಇತ್ತು - "ಕಡಿಮೆ ಖರ್ಚಿನಲ್ಲಿ ಹೆಚ್ಚು ಪ್ರಸಿದ್ಧಿ".
ಅಂದಮೇಲೆ ಕಡಿಮೆ ಖರ್ಚಿನಲ್ಲಿಯೂ ಹೆಚ್ಚು ಪ್ರಸಿದ್ಧಿಯಾಗಿ ತೋರಿಸಿರಿ. ಖರ್ಚು ಕಡಿಮೆಯಿರಲಿ ಆದರೆ
ಅದರಿಂದ ಯಾವ ಪ್ರಾಪ್ತಿಯಿದೆ, ಅದು ಬಹಳ ಗೌರವಯುತವಾಗಿರಲಿ. ಕಡಿಮೆ ಖರ್ಚಿನಲ್ಲಿ ಕಾರ್ಯವು
ಹೆಚ್ಚಾಗಿ ಆಗಲಿ. ಶಕ್ತಿ ಅಥವಾ ಸಂಕಲ್ಪವು ಹೆಚ್ಚು ಖರ್ಚಾಗದಿರಲಿ. ಕಡಿಮೆ ಮಾತಿರಲಿ ಆದರೆ ಆ ಕಡಿಮೆ
ಮಾತಿನಲ್ಲಿ ಸ್ಪಷ್ಟೀಕರಣವು ಹೆಚ್ಚಾಗಿರಲಿ, ಸಂಕಲ್ಪವು ಕಡಿಮೆಯಿರಲಿ. ಆದರೆ ಶಕ್ತಿಶಾಲಿಯಾಗಿರಲಿ-
ಇದಕ್ಕೆ ಹೇಳಲಾಗುತ್ತದೆ - `ಕಡಿಮೆ ಖರ್ಚಿನಲ್ಲಿ ಹೆಚ್ಚು ಪ್ರಸಿದ್ಧಿ', ಅಥವಾ ಉಳಿತಾಯದ ಅವತಾರ.
ಹೇಗೆ ಬ್ರಹ್ಮಾ ತಂದೆಯು - ಒಬ್ಬ ತಂದೆಯಲ್ಲದೆ ಮತ್ತ್ಯಾರೂ ಇಲ್ಲ - ಇದನ್ನು ಪ್ರತ್ಯಕ್ಷದಲ್ಲಿ
ಕರ್ಮವನ್ನು ಮಾಡಿ ತೋರಿಸಿದರು. ಹೀಗೆ ತಂದೆಯ ಸಮಾನರಾಗುವವರನ್ನೇ ಫಾಲೋ ಮಾಡಬೇಕಾಗಿದೆ. ಬ್ರಹ್ಮಾ
ತಂದೆಯವರಂತೆ ಇದೇ ಧೃಡ ಸಂಕಲ್ಪವನ್ನು ಮಾಡಿರಿ- ಎಂದಿಗೂ ಹೃದಯ ವಿಧೀರ್ಣನಾಗುವುದಿಲ್ಲ, ಸದಾ
ದಿಲ್ಖುಶ್ ಇರುತ್ತೇನೆ. ಮಾಯೆಯು ಅಲುಗಾಡಿಸಿದರೂ ಅಲುಗಾಡಬಾರದು. ಒಂದು ವೇಳೆ ಮಾಯೆಯು ಹಿಮಾಲಯ
ಪರ್ವತದಂತೆ ದೊಡ್ಡ ರೂಪದಿಂದಲೇ ಬರಲಿ, ಆದರೂ ಆ ಸಮಯದಲ್ಲಿ ನಡೆಯುವ ಮಾರ್ಗವನ್ನು ಬಿಡಬಾರದು,
ಹಾರಬೇಕು. ಸೆಕೆಂಡಿನಲ್ಲಿ ಹಾರುವ ಕಲೆಯವರಿಗಾಗಿ ಪರ್ವತವೂ ಹತ್ತಿಯ ಸಮಾನವಾಗಿ ಬಿಡುತ್ತದೆ.
ಹೇಗೆ ಸಾಕಾರ ಬ್ರಹ್ಮಾ ತಂದೆಯಿಂದ ಪವಿತ್ರತೆಯ ವ್ಯಕ್ತಿತ್ವವು ಸ್ಪಷ್ಟವಾಗಿ ಅನುಭವ
ಮಾಡುತ್ತಿದ್ದಿರಿ. ಇದು ತಪಸ್ಸಿನ ಅನುಭವದ ಚಿಹ್ನೆಯಾಗಿದೆ. ಹೀಗೆ ಈ ವ್ಯಕ್ತಿತ್ವವು ಈಗ ತಮ್ಮ ಚಹರೆ
ಮತ್ತು ಚಲನೆಯ ಮೂಲಕ ಅನ್ಯರಿಗೂ ಅನುಭವವಾಗಲಿ. ಬ್ರಹ್ಮಾ ತಂದೆಯು ಸಾಕಾರ ಕರ್ಮಯೋಗಿಯ
ಸಂಕೇತವಾಗಿದ್ದಾರೆ. ಯಾರೆಷ್ಟೇ ಬ್ಯುಜಿಯಾಗಿರಬಹುದು ಆದರೆ ಬ್ರಹ್ಮಾ ತಂದೆಗಿಂತ ಹೆಚ್ಚು
ಬ್ಯುಜಿಯಂತು ಮತ್ತ್ಯಾರೂ ಆಗಲು ಸಾಧ್ಯವಿಲ್ಲ. ಎಷ್ಟೇ ಜವಾಬ್ದಾರಿಯಿರಬಹುದು ಆದರೆ ಬ್ರಹ್ಮಾ
ತಂದೆಯಷ್ಟು ಜವಾಬ್ದಾರಿಯು ಮತ್ತ್ಯಾರ ಮೇಲೂ ಇಲ್ಲ. ಅಂದಮೇಲೆ ಹೇಗೆ ಬ್ರಹ್ಮಾ ತಂದೆಯವರು
ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರೂ ಕರ್ಮಯೋಗಿಯಾಗಿದ್ದರು, ಸ್ವಯಂನ್ನು ಮಾಡುವವನೆಂದು ತಿಳಿದು
ಕರ್ಮವನ್ನು ಮಾಡಿದರು, ಮಾಡಿಸುವವನೆಂದು ತಿಳಿಯಲಿಲ್ಲ. ಹೀಗೆಯೇ ಫಾಲೋ ಫಾದರ್ ಮಾಡಿರಿ. ಎಷ್ಟೇ
ದೊಡ್ಡ ಕಾರ್ಯವನ್ನೇ ಮಾಡಿರಿ ಆದರೆ ಹೀಗೆ ತಿಳಿಯಿರಿ - ಹೇಗೆಂದರೆ ನರ್ತನ ಮಾಡಿಸುವವರು
ಮಾಡಿಸುತ್ತಿದ್ದಾರೆ ಮತ್ತು ನಾವು ನರ್ತಿಸುತ್ತಿದ್ದೇವೆ, ಆಗ ಸುಸ್ತಾಗುವುದಿಲ್ಲ.
ತಬ್ಬಿಬ್ಬಾಗುವುದಿಲ್ಲ, ಎವರ್ ಹ್ಯಾಪಿ ಆಗಿರುತ್ತೀರಿ.
ವರದಾನ:
ಸತ್ಯತೆಯ
ಶಕ್ತಿಯ ಮೂಲಕ ಸದಾ ಖುಷಿಯಲ್ಲಿ ನರ್ತಿಸುವಂತಹ ಶಕ್ತಿಶಾಲಿ ಮಹಾನ್ ಆತ್ಮ ಭವ.
ಹೇಳಲಾಗುತ್ತದೆ - "ಸತ್ಯವಿದೆಯೆಂದರೆ
ನರ್ತಿಸುತ್ತಿರುತ್ತಾರೆ". ಸತ್ಯತೆ ಅರ್ಥಾತ್ ಸತ್ಯತೆಯ ಶಕ್ತಿಯಿರುವವರು ಸದಾ
ನರ್ತಿಸುತ್ತಿರುತ್ತಾರೆ, ಎಂದು ಮುದುಡಿರುವುದಿಲ್ಲ, ಗೊಂದಲದಲ್ಲಿರುವುದಿಲ್ಲ, ಗಾಬರಿಯಾಗುವುದಿಲ್ಲ,
ಬಲಹೀನರಾಗುವುದಿಲ್ಲ. ಅವರು ಖುಷಿಯಲ್ಲಿ ಸದಾ ನರ್ತಿಸುತ್ತಿರುತ್ತಾರೆ. ಶಕ್ತಿಶಾಲಿ ಆಗಿರುತ್ತಾರೆ,
ಅವರಲ್ಲಿ ಎದುರಿಸುವ ಶಕ್ತಿಯಿರುತ್ತದೆ, ಸತ್ಯತೆಯೆಂದಿಗೂ ಅಲುಗಾಡುವುದಿಲ್ಲ, ಅಚಲವಾಗಿರುತ್ತದೆ.
ಸತ್ಯತೆಯ ದೋಣಿಯು ಅಲುಗಾಡುತ್ತದೆ ಆದರೆ ಮುಳುಗುವುದಿಲ್ಲ. ಅಂದಮೇಲೆ ಸತ್ಯತೆಯ ಶಕ್ತಿಯನ್ನು ಧಾರಣೆ
ಮಾಡುವ ಆತ್ಮರೇ ಮಹಾನರಾಗಿದ್ದಾರೆ.
ಸ್ಲೋಗನ್:
ಬ್ಯುಜಿಯಾಗಿರುವ ಮನಸ್ಸು-ಬುದ್ಧಿಯನ್ನು ಸೆಕೆಂಡಿನಲ್ಲಿ ಸ್ಟಾಪ್ ಮಾಡಿ ಬಿಡುವುದೇ ಸರ್ವ ಶ್ರೇಷ್ಠ
ಅಭ್ಯಾಸವಾಗಿದೆ.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ -
ಹೇಗೆ ಬ್ರಹ್ಮಾ
ತಂದೆಯು ಸದಾ ಪರಮಾತ್ಮನ ಪ್ರೀತಿಯಲ್ಲಿ ಲವಲೀನರಾಗಿದ್ದರು. ಇದೇ ರೀತಿ ತಮ್ಮ ಬ್ರಾಹ್ಮಣ ಜೀವನದ
ಆಧಾರವು ಪರಮಾತ್ಮನ ಪ್ರೀತಿಯಾಗಿದೆ. ಪ್ರಭು ಪ್ರೀತಿಯೇ ತಮ್ಮ ಆಸ್ತಿಯಾಗಿದೆ. ಇದೇ ಪ್ರೀತಿಯು
ಬ್ರಾಹ್ಮಣ ಜೀವನದಲ್ಲಿ ಮುಂದುವರೆಸುತ್ತದೆ. ಆದ್ದರಿಂದ ಸದಾ ಪ್ರೀತಿಯ ಸಾಗರನಲ್ಲಿ ಲವಲೀನರಾಗಿ ಇರಿ.