19.03.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಇದು
ಕಲ್ಯಾಣಕಾರಿ ಪುರುಷೋತ್ತಮ ಸಂಗಮಯುಗವಾಗಿದೆ, ಇದರಲ್ಲಿ ಹಳೆಯ ಪ್ರಪಂಚವು ಪರಿವರ್ತನೆಯಾಗಿ
ಹೊಸದಾಗುತ್ತದೆ, ಈ ಯುಗವನ್ನು ನೀವು ಮರೆಯಬಾರದು.”
ಪ್ರಶ್ನೆ:
ತಂದೆಯು
ಚಿಕ್ಕವರು-ದೊಡ್ಡವರು ಎಲ್ಲಾ ಮಕ್ಕಳನ್ನು ತನ್ನ ಸಮಾನರನ್ನಾಗಿ ಮಾಡುವುದಕ್ಕಾಗಿ ಒಂದು ಪ್ರೀತಿಯ
ಶಿಕ್ಷಣವನ್ನು ಕೊಡುತ್ತಾರೆ - ಅದು ಯಾವುದು?
ಉತ್ತರ:
ಮಧುರ ಮಕ್ಕಳೇ,
ಈಗ ತಪ್ಪುಗಳನ್ನು ಮಾಡಬೇಡಿ, ಇಲ್ಲಿ ನೀವು ನರನಿಂದ ನಾರಾಯಣರಾಗಲು ಬಂದಿದ್ದೀರಿ, ಅಂದಮೇಲೆ ದೈವೀ
ಗುಣಗಳನ್ನು ಧಾರಣೆ ಮಾಡಿ. ಯಾರಿಗೂ ದುಃಖವನ್ನು ಕೊಡಬಾರದು. ತಪ್ಪುಗಳನ್ನು ಮಾಡುತ್ತೀರೆಂದರೆ ದುಃಖ
ಕೊಡುತ್ತೀರಿ. ತಂದೆಯು ಮಕ್ಕಳಿಗೆ ಎಂದೂ ದುಃಖ ಕೊಡುವುದಿಲ್ಲ ಹಾಗೂ ಅವರು ನಿಮಗೆ ಆದೇಶ ನೀಡುತ್ತಾರೆ
- ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ. ಯೋಗಿಗಳಾಗಿ ಆಗ ವಿಕರ್ಮ ವಿನಾಶವಾಗಿ ಬಿಡುತ್ತದೆ. ನೀವು
ಬಹಳ ಮಧುರರಾಗಿ ಬಿಡುತ್ತೀರಿ.
ಓಂ ಶಾಂತಿ.
ಯಾವ ಮಕ್ಕಳು ತಮ್ಮನ್ನು ಆತ್ಮನೆಂದು ತಿಳಿದು ಪರಮಪಿತ ಪರಮಾತ್ಮನ ಜೊತೆ ಯೋಗವನ್ನು ಜೋಡಿಸುತ್ತಾರೆಯೋ
ಅವರನ್ನು ಸತ್ಯಯೋಗಿಗಳೆಂದು ಹೇಳಲಾಗುತ್ತದೆ. ಏಕೆಂದರೆ ತಂದೆಯು ಸತ್ಯವಾಗಿದ್ದಾರಲ್ಲವೆ! ಅಂದಾಗ
ನಿಮ್ಮ ಬುದ್ಧಿಯೋಗವು ಸತ್ಯ ತಂದೆಯ ಜೊತೆಯಿದೆ. ಅವರೇನೆಲ್ಲಾ ತಿಳಿಸುತ್ತಾರೆಯೋ ಅದು ಸತ್ಯವೇ ಆಗಿದೆ.
ಯೋಗಿ ಮತ್ತು ಭೋಗಿ ಎರಡು ಪ್ರಕಾರದವರಿರುತ್ತಾರೆ. ಭೋಗಿಗಳಲ್ಲಿಯೂ ಅನೇಕ ಪ್ರಕಾರದವರಿರುತ್ತಾರೆ,
ಯೋಗಿಗಳಲ್ಲಿಯೂ ಅನೇಕ ಪ್ರಕಾರದವರು ಇರುತ್ತಾರೆ. ನಿಮ್ಮ ಯೋಗವು ಒಂದೇ ಪ್ರಕಾರದ್ದಾಗಿದೆ. ಅವರ
ಸನ್ಯಾಸವೇ ಬೇರೆಯಾಗಿದೆ, ನಿಮ್ಮ ಸನ್ಯಾಸವೇ ಬೇರೆಯಾಗಿದೆ. ನೀವು ಪುರುಷೋತ್ತಮ ಸಂಗಮಯುಗದ
ಯೋಗಿಗಳಾಗಿದ್ದೀರಿ ಮತ್ತೆ ಯಾರಿಗೂ ಸಹ ನಾವು ಪಾವನ ಯೋಗಿಗಳಾಗಿದ್ದೇವೆಯೇ ಅಥವಾ ಪತಿತ
ಭೋಗಿಗಳಾಗಿದ್ದೇವೆಯೇ ಎಂಬುದನ್ನು ಅರಿಯಲು ಈ ಯೋಗದ ಬಗ್ಗೆ ಗೊತ್ತೇ ಇಲ್ಲ. ಇದನ್ನೂ ಸಹ ಮಕ್ಕಳು
ತಿಳಿದುಕೊಂಡಿಲ್ಲ. ತಂದೆಯಂತೂ ಎಲ್ಲರನ್ನು ಮಗು, ಮಗು ಎಂದು ಹೇಳುತ್ತಾರೆ ಏಕೆಂದರೆ ತಂದೆಗೆ
ಗೊತ್ತಿದೆ - ನಾನು ಸರ್ವ ಆತ್ಮಗಳ ಪಿತನಾಗಿದ್ದೇನೆ ಮತ್ತು ನೀವೂ ಸಹ ಇದನ್ನು ತಿಳಿಯುತ್ತೀರಿ -
ನಾವಾತ್ಮಗಳೆಲ್ಲರೂ ಪರಸ್ಪರ ಸಹೋದರ-ಸಹೋದರನಾಗಿದ್ದೇವೆ ಅವರು ನಮ್ಮ ತಂದೆಯಾಗಿದ್ದಾರೆ. ನೀವು
ತಂದೆಯ ಜೊತೆ ಯೋಗವನ್ನಿಡುವುದರಿಂದ ಪವಿತ್ರರಾಗುತ್ತೀರಿ. ಅವರು ಭೋಗಿಗಳಾಗಿದ್ದಾರೆ, ನೀವು
ಯೋಗಿಗಳಾಗಿದ್ದೀರಿ. ತಂದೆಯು ನಿಮಗೆ ತಮ್ಮ ಪರಿಚಯವನ್ನು ಕೊಡುತ್ತಾರೆ. ಇದೂ ಸಹ ನಿಮಗೆ ತಿಳಿದಿದೆ
- ಇದು ಪುರುಷೋತ್ತಮ ಸಂಗಮಯುಗವಾಗಿದೆ, ಆದ್ದರಿಂದ ಪುರುಷೋತ್ತಮ ಎಂಬ ಶಬ್ಧವನ್ನೆಂದೂ ಮರೆಯಬಾರದು.
ಇದು ಪುರುಷೋತ್ತಮರಾಗುವ ಯುಗವಾಗಿದೆ. ಪುರುಷೋತ್ತಮರೆಂದು ಶ್ರೇಷ್ಠ ಮತ್ತು ಪವಿತ್ರ ಮನುಷ್ಯರಿಗೆ
ಹೇಳಲಾಗುತ್ತದೆ. ಆ ಶ್ರೇಷ್ಠ ಮತ್ತು ಪವಿತ್ರರು ಈ ಲಕ್ಷ್ಮೀ-ನಾರಾಯಣರಾಗಿದ್ದರು. ಈಗ ನಿಮಗೆ ಸಮಯವೂ
ಸಹ ತಿಳಿದಿದೆ. ಈ ಪ್ರಪಂಚವು 5000 ವರ್ಷಗಳ ನಂತರ ಹಳೆಯದಾಗುತ್ತದೆ. ಮತ್ತೆ ಇದನ್ನು ಹೊಸದನ್ನಾಗಿ
ಮಾಡಲು ತಂದೆಯು ಬರುತ್ತಾರೆ. ಈಗ ನಾವು ಸಂಗಮಯುಗೀ ಬ್ರಾಹ್ಮಣ ಕುಲದವರಾಗಿದ್ದೇವೆ. ಶ್ರೇಷ್ಠಾತಿ
ಶ್ರೇಷ್ಠ ಬ್ರಹ್ಮನಾಗಿದ್ದಾರೆ ಆದರೆ ಬ್ರಹ್ಮನನ್ನು ಶರೀರಧಾರಿಯಾಗಿ ತೋರಿಸುತ್ತಾರೆ. ಶಿವ ತಂದೆಯಂತೂ
ಅಶರೀರಿಯಾಗಿದ್ದಾರೆ. ಮಕ್ಕಳು ಇದನ್ನು ಅರಿತುಕೊಂಡಿದ್ದೀರಿ, ಅಶರೀರಿ ಮತ್ತು ಶರೀರಧಾರಿಗಳ
ಮಿಲನವಾಗುತ್ತದೆ. ಅವರಿಗೆ ನೀವು ತಂದೆಯೆಂದು ಹೇಳುತ್ತೀರಿ. ಇದು ವಿಚಿತ್ರವಾದ ಪಾತ್ರವಾಗಿದೆಯಲ್ಲವೆ!
ಇವರ ಗಾಯನವೂ ಇದೆ, ಮಂದಿರವೂ ಇದೆ. ಕೆಲ ಕೆಲವರು ಕೆಲಕೆಲವು ರೀತಿಯಿಂದ ರಥವನ್ನು ಶೃಂಗರಿಸುತ್ತಾರೆ.
ಇದನ್ನೂ ಸಹ ತಂದೆಯು ತಿಳಿಸುತ್ತಾರೆ - ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿಯೂ ಅಂತಿಮದಲ್ಲಿ ನಾನು
ಪ್ರವೇಶ ಮಾಡುತ್ತೇನೆ. ತಂದೆಯು ಎಷ್ಟು ಸ್ಪಷ್ಟವಾಗಿ ತಿಳಿಸುತ್ತಾರೆ - ಮೊಟ್ಟ ಮೊದಲು ಭಗವಾನುವಾಚ
ಎಂದು ಹೇಳಬೇಕಾಗುತ್ತದೆ. ನಾನು ಬಹಳ ಜನ್ಮಗಳ ಅಂತ್ಯದಲ್ಲಿ ಎಲ್ಲಾ ರಹಸ್ಯವನ್ನು ಮಕ್ಕಳಿಗೇ
ತಿಳಿಸುತ್ತೇನೆ ಮತ್ತ್ಯಾರೂ ಅರಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ನೀವು ಮಕ್ಕಳೂ ಸಹ ಕೆಲವೊಮ್ಮೆ
ಮರೆತು ಹೋಗುತ್ತೀರಿ. ಪುರುಷೋತ್ತಮ ಶಬ್ಧವನ್ನು ಬರೆಯುವುದರಿಂದ ಈ ಪುರುಷೋತ್ತಮ ಯುಗವೇ ಕಲ್ಯಾಣಕಾರಿ
ಯುಗವಾಗಿದೆ ಎಂದು ತಿಳಿಯುತ್ತಾರೆ. ಒಂದು ವೇಳೆ ಯುಗವು ನೆನಪಿದ್ದರೆ ನಾವೀಗ ಹೊಸ ಪ್ರಪಂಚಕ್ಕಾಗಿ
ಪರಿವರ್ತನೆಯಾಗುತ್ತಿದ್ದೇವೆ ಎಂಬುದನ್ನು ತಿಳಿಯುತ್ತಾರೆ. ಹೊಸ ಪ್ರಪಂಚದಲ್ಲಿ ದೇವತೆಗಳಿರುತ್ತಾರೆ,
ಈಗ ನಿಮಗೆ ಯುಗಗಳ ಬಗ್ಗೆಯೂ ಅರ್ಥವಾಗಿದೆ. ತಂದೆಯು ತಿಳಿಸಿ ಕೊಡುತ್ತಾರೆ - ಮಧುರ ಮಕ್ಕಳೇ,
ಸಂಗಮಯುಗವನ್ನೆಂದೂ ಮರೆಯಬಾರದು. ಇದನ್ನು ಮರೆಯುವುದರಿಂದ ಪೂರ್ಣ ಜ್ಞಾನವೇ ಮರೆತು ಹೋಗುತ್ತದೆ.
ನೀವು ಮಕ್ಕಳಿಗೆ ಗೊತ್ತಿದೆ - ನಾವೀಗ ಪರಿವರ್ತನೆಯಾಗುತ್ತಿದ್ದೇವೆ. ಹಳೆಯ ಪ್ರಪಂಚವೂ ಸಹ ಬದಲಾಗಿ
ಹೊಸದಾಗುತ್ತದೆ. ತಂದೆಯು ಬಂದು ಜಗತ್ತನ್ನೂ ಪರಿವರ್ತನೆ ಮಾಡುತ್ತಾರೆ, ಮಕ್ಕಳನ್ನೂ ಪರಿವರ್ತನೆ
ಮಾಡುತ್ತಾರೆ. ಮಕ್ಕಳೇ-ಮಕ್ಕಳೇ ಎಂದು ಎಲ್ಲರಿಗೂ ಹೇಳುತ್ತಾರೆ. ಇಡೀ ಪ್ರಪಂಚದ ಎಲ್ಲಾ ಆತ್ಮಗಳೂ ಸಹ
ಮಕ್ಕಳಾಗಿದ್ದಾರೆ, ಎಲ್ಲರ ಪಾತ್ರವು ಈ ಡ್ರಾಮದಲ್ಲಿದೆ. ಚಕ್ರವನ್ನೂ ಸಹ ಸಿದ್ಧ ಮಾಡಬೇಕಾಗಿದೆ.
ಪ್ರತಿಯೊಬ್ಬರೂ ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ. ಈ ದೇವಿ-ದೇವತಾ ಧರ್ಮವನ್ನು ತಂದೆಯ ವಿನಃ
ಯಾರೂ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಈ ಧರ್ಮವನ್ನು ಬ್ರಹ್ಮಾರವರು ಸ್ಥಾಪನೆ ಮಾಡುವುದಿಲ್ಲ. ಹೊಸ
ಪ್ರಪಂಚದಲ್ಲಿ ದೇವಿ-ದೇವತಾ ಧರ್ಮವಿರುತ್ತದೆ. ಹಳೆಯ ಪ್ರಪಂಚದಲ್ಲಿ ಎಲ್ಲರೂ ಮನುಷ್ಯರೇ
ಮನುಷ್ಯರಿದ್ದಾರೆ. ಅಲ್ಲಿ ದೇವಾದಿ ದೇವತೆಗಳಿರುತ್ತಾರೆ. ದೇವತೆಗಳು ಪವಿತ್ರರಾಗಿರುತ್ತಾರೆ, ಅಲ್ಲಿ
ರಾವಣ ರಾಜ್ಯವೇ ಇರುವುದಿಲ್ಲ. ಈಗ ತಂದೆಯು ಮಕ್ಕಳಿಗೆ ರಾವಣನ ಮೇಲೆ ವಿಜಯ ಪ್ರಾಪ್ತಿ ಮಾಡಿಸುತ್ತಾರೆ.
ರಾವಣನ ಮೇಲೆ ವಿಜಯ ಪ್ರಾಪ್ತಿಯಾಗುತ್ತಿದ್ದಂತೆಯೇ ರಾಮ ರಾಜ್ಯವು ಪ್ರಾರಂಭವಾಗಿ ಬಿಡುತ್ತದೆ. ರಾಮ
ರಾಜ್ಯವೆಂದು ಹೊಸ ಪ್ರಪಂಚಕ್ಕೂ ಮತ್ತು ರಾವಣ ರಾಜ್ಯವೆಂದು ಹಳೆಯ ಪ್ರಪಂಚಕ್ಕೂ ಹೇಳಲಾಗುತ್ತದೆ. ಆ
ರಾಮ ರಾಜ್ಯವು ಹೇಗೆ ಸ್ಥಾಪನೆಯಾಗುತ್ತದೆ ಎಂಬುದನ್ನೂ ಸಹ ನೀವು ಮಕ್ಕಳ ವಿನಃ ಯಾರಿಗೂ ತಿಳಿದಿಲ್ಲ.
ರಚಯಿತ ತಂದೆಯು ಕುಳಿತು ನೀವು ಮಕ್ಕಳಿಗೆ ರಚನೆಯ ರಹಸ್ಯವನ್ನು ತಿಳಿಸುತ್ತಾರೆ. ತಂದೆಯು ರಚಯಿತ,
ಬೀಜರೂಪನಾಗಿದ್ದಾರೆ. ಬೀಜಕ್ಕೆ ವೃಕ್ಷಪತಿಯೆಂದು ಹೇಳಲಾಗುತ್ತದೆ ಆದರೆ ಅದು ಜಡ ಬೀಜವಾಗಿದೆ, ಆ
ಬೀಜಕ್ಕೆ ಈ ರೀತಿ ತಿಳಿಯುವುದಿಲ್ಲ - ಬೀಜದಿಂದಲೇ ಪೂರ್ಣ ವೃಕ್ಷವು ಬರುತ್ತದೆ ಎಂದು ನಿಮಗೆ
ಗೊತ್ತಿದೆ. ಇಡೀ ವಿಶ್ವದ ಎಷ್ಟು ದೊಡ್ಡ ವೃಕ್ಷವಾಗಿದೆ, ಅದು ಜಡ ವೃಕ್ಷ, ಇದು ಚೈತನ್ಯವಾಗಿದೆ.
ಸತ್ಚಿತ್ ಆನಂದ ಸ್ವರೂಪ, ಮನುಷ್ಯ ಸೃಷ್ಟಿಯ ಬೀಜರೂಪ ತಂದೆಯಾಗಿದ್ದಾರೆ. ಅವರಿಂದ ಎಷ್ಟು ದೊಡ್ಡ
ವೃಕ್ಷವು ಬರುತ್ತದೆ. ಮಾದರಿಯನ್ನಂತೂ ಚಿಕ್ಕದಾಗಿ ಮಾಡುತ್ತಾರೆ. ಮನುಷ್ಯ ಸೃಷ್ಟಿಯ ವೃಕ್ಷವು
ಎಲ್ಲದಕ್ಕಿಂತ ದೊಡ್ಡದಾಗಿದೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯು ಜ್ಞಾನಪೂರ್ಣನಾಗಿದ್ದಾರೆ. ಹೇಗೆ ಆ
ವೃಕ್ಷಗಳ ಜ್ಞಾನವು ಅನೇಕರಿಗಿರುತ್ತದೆ. ಆದರೆ ಈ ಮನುಷ್ಯ ವೃಕ್ಷದ ಜ್ಞಾನವನ್ನು ಒಬ್ಬ ತಂದೆಯೇ
ಕೊಡುತ್ತಾರೆ. ಈಗ ತಂದೆಯು ನಿಮ್ಮ ಬುದ್ಧಿಯನ್ನು ಹದ್ದಿನಿಂದ ಬದಲಾಯಿಸಿ ಬೇಹದ್ದಿನ ಬುದ್ಧಿಯನ್ನು
ಕೊಟ್ಟಿದ್ದಾರೆ. ನೀವು ಈ ಬೇಹದ್ದಿನ ವೃಕ್ಷವನ್ನು ತಿಳಿದುಕೊಂಡಿದ್ದೀರಿ. ಈ ವೃಕ್ಷಕ್ಕೆ ಎಷ್ಟು
ದೊಡ್ಡ ಆಕಾಶವು ಸಿಕ್ಕಿದೆ. ತಂದೆಯು ಮಕ್ಕಳನ್ನು ಬೇಹದ್ದಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಈಗ
ಇಡೀ ಪ್ರಪಂಚವೇ ಪತಿತವಾಗಿದೆ. ಇಡೀ ಸೃಷ್ಟಿಯೇ ಹಿಂಸಕವಾಗಿದೆ. ಒಬ್ಬರು ಇನ್ನೊಬ್ಬರನ್ನು ಹಿಂಸೆ
ಮಾಡುವವರಾಗಿದ್ದಾರೆ. ಈಗ ನೀವು ಮಕ್ಕಳಿಗೆ ಜ್ಞಾನವು ಸಿಕ್ಕಿದೆ. ಸತ್ಯಯುಗದಲ್ಲಿ ಕೇವಲ ಒಂದೇ
ಅಹಿಂಸಕ ದೇವತಾ ಧರ್ಮವಿರುತ್ತದೆ. ಸತ್ಯಯುಗದಲ್ಲಿ ಎಲ್ಲರೂ ಸುಖ, ಶಾಂತಿ, ಪವಿತ್ರತೆಯಲ್ಲಿರುತ್ತಾರೆ,
ಎಲ್ಲರ ಮನೋಕಾಮನೆಗಳು 21 ಜನ್ಮಗಳಿಗಾಗಿ ಪೂರ್ಣವಾಗುತ್ತದೆ ಅಂದಾಗ ಸತ್ಯಯುಗದಲ್ಲಿ ಯಾವುದೇ
ಕಾಮನೆಗಳಿರುವುದಿಲ್ಲ. ಆಹಾರ, ಧಾನ್ಯ ಮುಂತಾದವೆಲ್ಲವೂ ಯಥೇಚ್ಛವಾಗಿ ಸಿಗುತ್ತದೆ. ಈ ಬಾಂಬೆಯು
ಮೊದಲು ಇರಲಿಲ್ಲ, ದೇವತೆಗಳು ಉಪ್ಪಿನ ಭೂಮಿಯ ಮೇಲಿರುವುದಿಲ್ಲ. ಎಲ್ಲಿ ಸಿಹಿ ನೀರಿನ ನದಿಗಳು
ಹರಿಯುತ್ತಿದ್ದವೋ ಅಲ್ಲಿ ದೇವತೆಗಳಿದ್ದರು. ಕೆಲವರೇ ಮನುಷ್ಯರಿದ್ದರು, ಒಬ್ಬೊಬ್ಬರಿಗೂ ಬಹಳ
ಜಮೀನಿರುತ್ತದೆ. ಸತ್ಯಯುಗವು ನಿರ್ವಿಕಾರಿ ಪ್ರಪಂಚವಾಗಿರುತ್ತದೆ, ನೀವು ಯೋಗ ಬಲದಿಂದ ವಿಶ್ವದ
ರಾಜ್ಯಭಾಗ್ಯವನ್ನು ಪಡೆಯುತ್ತೀರಿ, ಅದನ್ನೇ ರಾಮ ರಾಜ್ಯವೆಂದು ಹೇಳಲಾಗುತ್ತದೆ. ಮೊದಲು ಹೊಸ
ವೃಕ್ಷವು ಬಹಳ ಚಿಕ್ಕದಾಗಿರುತ್ತದೆ, ಬುಡದಲ್ಲಿ ಮೊದಲು ಒಂದೇ ಧರ್ಮವಿತ್ತು ನಂತರ ಅದರಿಂದ 3
ಕೊಂಬೆಗಳು ಹೊರ ಬರುತ್ತವೆ. ದೇವಿ-ದೇವತಾ ಧರ್ಮವು ಒಂದೇ ಬುನಾದಿಯಾಗಿದೆ ನಂತರ ಕಾಂಡದಿಂದ
ಚಿಕ್ಕ-ಚಿಕ್ಕ ರೆಂಬೆ-ಕೊಂಬೆಗಳು ಹೊರಡುತ್ತವೆ. ಈಗಂತೂ ಇಡೀ ವೃಕ್ಷಕ್ಕೆ ಬುಡವೇ ಇಲ್ಲದಂತಾಗಿದೆ, ಈ
ರೀತಿ ಮತ್ತ್ಯಾವುದೂ ಇರುವುದಿಲ್ಲ. ಇದರ ಉದಾಹರಣೆಯು ಆಲದ ಮರಕ್ಕೆ ಹೋಲಿಕೆಯಾಗುತ್ತದೆ. ಆಲದ ಮರವು
ನಿಂತಿದೆ ಆದರೆ ಅದಕ್ಕೆ ಬುಡವೇ ಕಾಣಿಸುವುದಿಲ್ಲ, ಒಣಗುವುದೂ ಇಲ್ಲ. ಇಡೀ ವೃಕ್ಷವು ಹಚ್ಚ ಹಸಿರಾಗಿ
ನಿಂತಿದೆ, ಬಾಕಿ ದೇವಿ-ದೇವತಾ ಧರ್ಮದ ಬುನಾದಿಯೇ ಇಲ್ಲ, ಇದೇ ಬುಡವಾಗಿದೆಯಲ್ಲವೆ! ರಾಮರಾಜ್ಯ ಅಥವಾ
ದೇವಿ-ದೇವತಾ ಧರ್ಮವು ಬುಡದಲ್ಲಿಯೇ ಬರುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಮೂರು ಧರ್ಮಗಳನ್ನು
ಸ್ಥಾಪನೆ ಮಾಡುತ್ತೇನೆ, ಇವೆಲ್ಲಾ ಮಾತುಗಳನ್ನು ನೀವು ಸಂಗಮಯುಗೀ ಬ್ರಾಹ್ಮಣರೇ ತಿಳಿಯುತ್ತೀರಿ.
ನೀವು ಬ್ರಾಹ್ಮಣರದು ಚಿಕ್ಕ ಕುಲವಾಗಿದೆ. ಚಿಕ್ಕ-ಚಿಕ್ಕ ಮಠ-ಪಂಥಗಳಿರುತ್ತವೆಯಲ್ಲವೆ.
ಅರವಿಂದಾಶ್ರಮವಿದೆ, ಅವು ಎಷ್ಟು ಬೇಗ-ಬೇಗ ವೃದ್ಧಿಯನ್ನು ಹೊಂದುತ್ತದೆ, ಏಕೆಂದರೆ ಅದರಲ್ಲಿ
ವಿಕಾರಕ್ಕೆ ಯಾವುದೇ ನಿಷೇಧವಿಲ್ಲ. ಇಲ್ಲಿ ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ, ಇದರ
ಮೇಲೆ ಜಯ ಗಳಿಸಬೇಕು. ಹೀಗೆ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಇಲ್ಲವೆಂದರೆ ಅವರ ಬಳಿಯೂ ಸಹ
ಏರುಪೇರಾಗಿ ಬಿಡುತ್ತದೆ. ಇಲ್ಲಂತೂ ಇರುವುದೇ ಪತಿತ ಮನುಷ್ಯರು. ಆದ್ದರಿಂದ ಪಾವನರಾಗುವ ಮಾತುಗಳನ್ನೇ
ಕೇಳುವುದಿಲ್ಲ. ಆದ್ದರಿಂದ ವಿಕಾರವಿಲ್ಲದೆ ಮಕ್ಕಳು ಹೇಗೆ ಜನಿಸುತ್ತಾರೆಂದು ಕೇಳುತ್ತಾರೆ. ಪಾಪ!
ಅವರದೇನೂ ದೋಷವಿಲ್ಲ, ಗೀತಾಪಾಠಿಗಳೂ ಹೇಳುತ್ತಾರೆ - ಭಗವಾನುವಾಚ, ಕಾಮ ಮಹಾಶತ್ರುವಾಗಿದೆ ಇದರ ಮೇಲೆ
ಜಯ ಗಳಿಸಬೇಕು. ಜಯಿಸುವುದರಿಂದಲೇ ಜಗಜ್ಜೀತರಾಗುತ್ತಾರೆ, ಆದರೆ ಇದನ್ನು ತಿಳಿದುಕೊಂಡಿಲ್ಲ. ಅವರು
ಯಾವಾಗ ಈ ಶಬ್ಧವನ್ನು ತಿಳಿಸುವರೋ ಆಗ ಅವರಿಗೆ ತಿಳಿಸಬೇಕು. ಇದರ ಬಗ್ಗೆ ತಂದೆಯು ತಿಳಿಸುತ್ತಾರೆ -
ಹೇಗೆ ಹನುಮಂತನು ಪಾದರಕ್ಷೆಗಳ ಬಳಿ ಕುಳಿತುಕೊಳ್ಳುತ್ತಿದ್ದನು, ತಂದೆಯೂ ಸಹ ಹೇಳುತ್ತಾರೆ - ಹೋಗಿ
ದೂರದಲ್ಲಿ ಕುಳಿತು ಕೇಳಿ ಬನ್ನಿ. ಮತ್ತೆ ಯಾವಾಗ ಈ ಶಬ್ಧವನ್ನು ಹೇಳುವರೋ ಆಗ ಕೇಳಿ ಇದರ ರಹಸ್ಯವೇನು,
ಜಗತ್ಜೀತರಂತೂ ದೇವತೆಗಳಾಗಿದ್ದರು, ದೇವತೆಗಳಾಗಲು ಈ ವಿಕಾರಗಳನ್ನು ಬಿಡಬೇಕಾಗಿದೆ. ಇದನ್ನೂ ಸಹ
ನೀವು ಹೇಳಬಹುದು ಏಕೆಂದರೆ ನಿಮಗೆ ಗೊತ್ತಿದೆ, ಈಗ ರಾಮರಾಜ್ಯದ ಸ್ಥಾಪನೆ ಮಾಡಲಾಗುತ್ತಿದೆ. ನೀವೇ
ಮಹಾವೀರರಾಗಿದ್ದೀರಿ, ಇದರಲ್ಲಿ ಭಯ ಪಡುವ ಮಾತಿಲ್ಲ. ಬಹಳ ಪ್ರೀತಿಯಿಂದ ಕೇಳಬೇಕು - ಸ್ವಾಮೀಜಿ, ಈ
ವಿಕಾರಗಳ ಮೇಲೆ ಜಯ ಗಳಿಸುವುದರಿಂದ ವಿಶ್ವದ ಮಾಲೀಕರಾಗುತ್ತೀರಿ ಎಂದು ತಾವು ಹೇಳಿದಿರಿ, ಆದರೆ ಹೇಗೆ
ಪವಿತ್ರರಾಗುವುದು ಎಂಬ ಮಾತನ್ನಂತೂ ತಾವು ತಿಳಿಸಲಿಲ್ಲ. ಈಗ ನೀವು ಮಕ್ಕಳು ಪವಿತ್ರತೆಯಲ್ಲಿರುವ
ಮಹಾವೀರರಾಗಿದ್ದೀರಿ. ಮಹಾವೀರರೇ ವಿಜಯ ಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ, ಮನುಷ್ಯರ ಕಿವಿಗಳಂತೂ
ಅಸತ್ಯ ಮಾತುಗಳನ್ನೇ ಕೇಳುವುದರಲ್ಲಿ ಸಿಕ್ಕಿಕೊಂಡಿದೆ. ನಿಮಗೆ ಈಗ ಅಸತ್ಯ ಮಾತುಗಳನ್ನು ಕೇಳುವುದು
ಇಷ್ಟವಾಗುವುದಿಲ್ಲ. ಸತ್ಯ ಮಾತುಗಳು ನಿಮ್ಮ ಕಿವಿಗಳಿಗೆ ಇಷ್ಟವಾಗುತ್ತದೆ. ಕೆಟ್ಟದ್ದನ್ನು
ಕೇಳಬಾರದು.... ಮನುಷ್ಯರನ್ನು ಅವಶ್ಯವಾಗಿ ಜಾಗೃತರನ್ನಾಗಿ ಮಾಡಬೇಕಾಗಿದೆ. ಭಗವಂತನು ತಿಳಿಸುತ್ತಾರೆ
- ಪವಿತ್ರರಾಗಿ, ಸತ್ಯಯುಗದಲ್ಲಿ ಎಲ್ಲರೂ ಪವಿತ್ರರಿದ್ದರು ಈಗ ಎಲ್ಲರೂ ಅಪವಿತ್ರರಾಗಿದ್ದಾರೆ. ಈ
ರೀತಿ ತಿಳಿಸಬೇಕು - ಹೇಳಿ, ನಮ್ಮ ಬಳಿ ಸತ್ಸಂಗವಾಗುತ್ತದೆ, ಅದರಲ್ಲಿ ಕಾಮ ಮಹಾಶತ್ರುವಾಗಿದೆ ಎಂದು
ತಿಳಿಸಲಾಗುತ್ತದೆ. ಈಗ ಪವಿತ್ರರಾಗಬೇಕೆಂದರೆ ಒಂದು ಯುಕ್ತಿಯಿಂದ ಆಗಿ. ತಮ್ಮನ್ನು ಆತ್ಮನೆಂದು
ತಿಳಿದು ಸಹೋದರ-ಸಹೋದರ ದೃಷ್ಟಿಯನ್ನು ಪಕ್ಕಾ ಮಾಡಿಕೊಳ್ಳಿ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಮೊಟ್ಟ ಮೊದಲು ಈ ಭಾರತವು ಸಂಪದ್ಭರಿತವಾದ ಖಂಡವಾಗಿತ್ತು,
ಈಗ ಖಾಲಿಯಾಗಿರುವ ಕಾರಣ ಹಿಂದೂಸ್ಥಾನ ಎಂಬ ಹೆಸರನ್ನು ಇಟ್ಟು ಬಿಟ್ಟಿದ್ದಾರೆ. ಮೊದಲು ಭಾರತವು
ಆಸ್ತಿ, ಅಂತಸ್ತು, ಪವಿತ್ರತೆ, ಸುಖ, ಶಾಂತಿ ಎಲ್ಲದರಿಂದ ಸಂಪನ್ನವಾಗಿತ್ತು. ಈಗ ದುಃಖದಿಂದ
ತುಂಬಿದೆ. ಆದ್ದರಿಂದಲೇ ಹೇ ದುಃಖಹರ್ತ-ಸುಖಕರ್ತನೆಂದು ಕರೆಯುತ್ತಾರೆ. ನೀವು ತಂದೆಯಿಂದ ಎಷ್ಟು
ಖುಷಿಯಿಂದ ಓದುತ್ತೀರಿ, ಇಂತಹ ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು ಪಡೆಯದೇ
ಇರುವವರು ಯಾರಾದರೂ ಇರುವರೇ! ಮೊದಲು ತಂದೆಯನ್ನು ಅರಿತುಕೊಳ್ಳಬೇಕು, ತಂದೆಯನ್ನೇ
ಅರಿತುಕೊಳ್ಳದಿದ್ದರೆ ಯಾವುದೇ ರಹಸ್ಯವು ಬುದ್ಧಿಯಲ್ಲಿ ಬರುವುದೇ ಇಲ್ಲ. ಅಂದಾಗ ಬೇಹದ್ದಿನ ತಂದೆಯು
ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಈ ನಿಶ್ಚಯವು ಕುಳಿತುಕೊಂಡಾಗಲೇ ಮುಂದುವರೆಯುತ್ತೀರಿ.
ಮಕ್ಕಳೇ, ತಂದೆಯೊಂದಿಗೆ ಯಾವುದೇ ಪ್ರಶ್ನೆಯನ್ನು ಕೇಳುವ ಅವಶ್ಯಕತೆಯಿಲ್ಲ. ಏಕೆಂದರೆ ತಂದೆಯು
ಪತಿತ-ಪಾವನನಾಗಿದ್ದಾರೆ. ಅವರನ್ನು ನೆನಪು ಮಾಡುತ್ತೀರಿ. ಅವರ ನೆನಪಿನಿಂದಲೇ ನೀವು
ಪಾವನರಾಗುತ್ತೀರಿ ಮತ್ತು ನನ್ನನ್ನು ಕರೆದದ್ದೂ ಸಹ ಇದಕ್ಕಾಗಿಯೇ. ಜೀವನ್ಮುಕ್ತಿಯು
ಸೆಕೆಂಡಿನದಾಗಿದೆ ಆದರೂ ಸಹ ನೆನಪಿನ ಯಾತ್ರೆಯು ಸಮಯ ತೆಗೆದುಕೊಳ್ಳುತ್ತದೆ. ಮುಖ್ಯವಾಗಿ ನೆನಪಿನ
ಯಾತ್ರೆಯಲ್ಲಿಯೇ ವಿಘ್ನಗಳು ಬರುತ್ತವೆ, ಅರ್ಧಕಲ್ಪ ದೇಹಾಭಿಮಾನದಲ್ಲಿದ್ದೀರಿ, ಈಗ ಒಂದು ಜನ್ಮ
ದೇಹೀ-ಅಭಿಮಾನಿಯಾಗುವುದರಲ್ಲಿಯೇ ಪರಿಶ್ರಮವಿದೆ. ಇವರಿಗಾಗಿ (ಬ್ರಹ್ಮಾ ತಂದೆ) ಬಹಳ ಸಹಜವಾಗಿದೆ.
ನೀವು ಬಾಪ್ದಾದಾ ಎಂದು ಕರೆಯುತ್ತೀರಿ, ಇದನ್ನೂ ಸಹ ಇವರು ತಿಳಿಯುತ್ತಾರೆ. ತಂದೆಯ ಸವಾರಿಯು ನನ್ನ
ತಲೆಯ ಮೇಲಿದೆ. ನಾನು ಅವರ ಮಹಿಮೆಯನ್ನೂ ಬಹಳ ಮಾಡುತ್ತೇನೆ. ತುಂಬಾ ಪ್ರೀತಿ ಮಾಡುತ್ತೇನೆ. ಬಾಬಾ,
ತಾವು ಎಷ್ಟೊಂದು ಮಧುರವಾಗಿದ್ದೀರಿ. ನಮಗೆ ಕಲ್ಪ-ಕಲ್ಪವೂ ಎಷ್ಟೊಂದು ಕಲಿಸಿ ಕೊಡುತ್ತೀರಿ ಆದರೆ
ಅರ್ಧಕಲ್ಪ ತಮ್ಮನ್ನು ನೆನಪೇ ಮಾಡುವುದಿಲ್ಲ. ಈಗಂತೂ ಬಹಳ ನೆನಪು ಮಾಡುತ್ತೇವೆ. ನೆನ್ನೆಯ ದಿನ ಏನೂ
ಜ್ಞಾನವಿರಲಿಲ್ಲ, ಯಾರ ಪೂಜೆ ಮಾಡುತ್ತಿದ್ದೇವೆಯೋ ನಾವೇ ಆ ರೀತಿಯಾಗುತ್ತೇವೆ ಎಂಬುದು
ಗೊತ್ತಿರಲಿಲ್ಲ, ಈಗಂತೂ ಆಶ್ಚರ್ಯವೆನಿಸುತ್ತದೆ. ಯೋಗಿಗಳಾಗುವುದರಿಂದ ಮತ್ತೆ ಈ ದೇವಿ-ದೇವತೆಗಳಾಗಿ
ಬಿಡುತ್ತೀರಿ. ಎಲ್ಲಾ ಮಕ್ಕಳೂ ಸಹ ನನ್ನವರೇ ಆಗಿದ್ದಾರೆ, ಈ ಬಾಬಾರವರು ಬಹಳ ಪ್ರೀತಿಯಿಂದ
ಮಕ್ಕಳನ್ನು ಸಂಭಾಲನೆ ಮಾಡುತ್ತಾರೆ, ಇವರು ಪಾಲನೆ ಮಾಡುತ್ತಾರೆ. ಇವರೂ ಸಹ ನರನಿಂದ ನಾರಾಯಣ
ಆಗುತ್ತಾರೆ. ಇಲ್ಲಿ ನೀವು ಬಂದಿರುವುದೇ ದೇವತೆಯಾಗಲು ಅಂದಾಗ ಎಷ್ಟೊಂದು ತಿಳಿಸುತ್ತೇನೆ - ಮಕ್ಕಳೇ,
ತಂದೆಯನ್ನು ನೆನಪು ಮಾಡಿ, ದೈವೀ ಗುಣಗಳನ್ನು ಧಾರಣೆ ಮಾಡಿ. ಆಹಾರ ಪದಾರ್ಥಗಳ ವ್ರತವನ್ನಿಡಿ,
ಮಾಡುವುದಿಲ್ಲವೆಂದರೆ ಬಹುಷಃ ಇನ್ನೂ ಸಮಯವಿದೆಯೆಂದು ತಿಳಿಯುತ್ತೇನೆ. ಒಂದಲ್ಲ ಒಂದು ತಪ್ಪುಗಳು
ಆಗುತ್ತಿರುತ್ತವೆ, ಆದ್ದರಿಂದ ಹಿರಿಯರು-ಕಿರಿಯರು ಎಲ್ಲಾ ಮಕ್ಕಳಿಗೂ ಪ್ರೀತಿಯಿಂದ ತಿಳಿಸುತ್ತೇನೆ
- ಮಕ್ಕಳೇ, ತಪ್ಪುಗಳನ್ನು ಮಾಡಬಾರದು, ಯಾರಿಗೂ ದುಃಖ ಕೊಡಬಾರದು. ತಪ್ಪು ಮಾಡುತ್ತೀರೆಂದರೆ ದುಃಖ
ಕೊಡುತ್ತೀರೆಂದರ್ಥ. ತಂದೆಯೂ ಸಹ ಎಂದೂ ದುಃಖವನ್ನು ಕೊಡುವುದಿಲ್ಲ, ಅವರಂತೂ ಸೂಚನೆ ನೀಡುತ್ತಾರೆ.
ನನ್ನೊಬ್ಬನನ್ನೇ ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಬಹಳ ಮಧುರರಾಗುತ್ತೀರಿ. ಇಂತಹ
ಮಧುರರಾಗಬೇಕು, ದೈವೀ ಗುಣಗಳನ್ನೂ ಧಾರಣೆ ಮಾಡಬೇಕಾಗಿದೆ ಮತ್ತು ಪವಿತ್ರರೂ ಆಗಬೇಕು. ಇಲ್ಲಿ
ಅಪವಿತ್ರರು ಬರಲು ಅನುಮತಿಯಿಲ್ಲ. ಕೆಲ ಕೆಲವೊಮ್ಮೆ ಬರಲು ಬಿಡಬೇಕಾಗುತ್ತದೆ, ಅದೂ ಈಗ. ಯಾವಾಗ ಬಹಳ
ವೃದ್ಧಿಯಾಗುವುದೋ ಆಗ ಇದು ಶಾಂತಿಯ ಶಿಖರವಾಗಿದೆ, ಪವಿತ್ರತೆಯ ಶಿಖರವಾಗಿದೆ ಎಂದು ಹೇಳುತ್ತಾರೆ.
ತಮ್ಮನ್ನು ಆತ್ಮನೆಂದು ತಿಳಿದು ತಂದೆಯ ನೆನಪಿನಲ್ಲಿರುವುದು ಉನ್ನತ ಶಕ್ತಿಯಾಗಿದೆ. ಸತ್ಯಯುಗದಲ್ಲಿ
ಬಹಳ ಶಾಂತಿಯಿರುತ್ತದೆ, ಅರ್ಧಕಲ್ಪ ಯಾವುದೇ ಜಗಳ, ಕಲಹಗಳಿರುವುದಿಲ್ಲ. ಇಲ್ಲಿ ಎಷ್ಟೊಂದು
ಜಗಳವಾಗುತ್ತದೆ, ಆದ್ದರಿಂದ ಶಾಂತಿಯಿರಲು ಸಾಧ್ಯವಿಲ್ಲ. ಶಾಂತಿಧಾಮವು ಮೂಲವತನವಾಗಿದೆ, ನಂತರ ಶರೀರ
ಧಾರಣೆ ಮಾಡಿ ವಿಶ್ವದಲ್ಲಿ ಪಾತ್ರವನ್ನಭಿನಯಿಸಲು ಬಂದಾಗ ಅಲ್ಲಿಯೂ ಶಾಂತಿಯಿರುತ್ತದೆ. ಆತ್ಮದ
ಸ್ವಧರ್ಮವೇ ಶಾಂತಿಯಾಗಿದೆ, ಅಶಾಂತಿ ಮಾಡಿಸುವವನು ರಾವಣನಾಗಿದ್ದಾನೆ, ನೀವು ಶಾಂತಿಯ ಶಿಕ್ಷಣವನ್ನು
ಪಡೆಯುತ್ತೀರಿ. ಯಾರಾದರೂ ಕ್ರೋಧದಲ್ಲಿದ್ದರೆ ಎಲ್ಲರನ್ನೂ ಅಶಾಂತಿ ಮಾಡಿ ಬಿಡುತ್ತಾರೆ. ಈ ಯೋಗ
ಬಲದಿಂದ ನಿಮ್ಮ ಎಲ್ಲಾ ಕೊಳಕು ಬಿಟ್ಟು ಹೋಗುತ್ತದೆ. ಜ್ಞಾನದಿಂದ ಹೋಗುವುದಿಲ್ಲ, ನೆನಪಿನಿಂದಲೇ
ಕೊಳಕೆಲ್ಲವೂ ಭಸ್ಮವಾಗುತ್ತದೆ, ತುಕ್ಕು ಬಿಟ್ಟು ಹೋಗುತ್ತದೆ. ತಂದೆಯು ತಿಳಿಸುತ್ತಾರೆ - ನೆನ್ನೆ
ನಿಮಗೆ ಶಿಕ್ಷಣ ಕೊಟ್ಟಿದ್ದೇನೆ, ನೀವು ಮರೆತು ಹೋದಿರಾ? 5000 ವರ್ಷಗಳ ಮಾತಾಗಿದೆ. ಆದರೆ ಅವರು
ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಈಗ ನಿಮಗೆ ಸತ್ಯ ಮತ್ತು ಅಸತ್ಯದ ಅಂತರವು ತಿಳಿದಿದೆ.
ತಂದೆಯು ಬಂದು ನಿಮಗೆ ತಿಳಿಸುತ್ತಾರೆ. ಸತ್ಯವೇನು ಮತ್ತು ಅಸತ್ಯವೇನು, ಜ್ಞಾನವೇನು ಮತ್ತು
ಭಕ್ತಿಯೇನು, ಭ್ರಷ್ಟಾಚಾರ ಮತ್ತು ಶ್ರೇಷ್ಠಾಚಾರವೆಂದು ಯಾವುದಕ್ಕೆ ಹೇಳಲಾಗುತ್ತದೆ?
ಭ್ರಷ್ಟಾಚಾರಿಗಳು ವಿಕಾರದಿಂದ ಜನ್ಮ ಪಡೆಯುತ್ತಾರೆ. ಅಲ್ಲಿ ವಿಕಾರವೇ ಇರುವುದಿಲ್ಲ. ನೀವು ಸ್ವತಃ
ಹೇಳುತ್ತೀರಿ ದೇವತೆಗಳು ಸಂಪೂರ್ಣ ನಿರ್ವಿಕಾರಿಗಳು, ರಾವಣ ರಾಜ್ಯವೇ ಇರುವುದಿಲ್ಲ, ಇದಂತೂ ಸಹಜ
ಹಾಗೂ ತಿಳಿದುಕೊಳ್ಳುವ ಮಾತುಗಳಾಗಿವೆ. ಆದ್ದರಿಂದ ಏನು ಮಾಡಬೇಕಾಗಿದೆ? ಒಂದು ತಂದೆಯನ್ನು ನೆನಪು
ಮಾಡಬೇಕು, ಇನ್ನೊಂದು ಪವಿತ್ರರಾಗಲೇಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1.
ಪವಿತ್ರರಾಗುವುದರಲ್ಲಿ ಮಹಾವೀರರಾಗಬೇಕು. ನೆನಪಿನ ಯಾತ್ರೆಯಿಂದ ಒಳಗಿರುವ ಕೊಳಕನ್ನು ತೆಗೆಯಬೇಕು.
ತಮ್ಮ ಶಾಂತಿ ಸ್ವಧರ್ಮದಲ್ಲಿ ಸ್ಥಿತರಾಗಬೇಕು. ಅಶಾಂತಿಯನ್ನು ಹರಡಬಾರದು.
2. ತಂದೆಯು ಸರಿಯಾದ ಮಾತುಗಳನ್ನೇ ಹೇಳುತ್ತಾರೆ ಅದನ್ನೇ ಕೇಳಬೇಕು. ಹಿಯರ್ ನೋ ಈವಿಲ್..... ತಪ್ಪು
ಮಾತುಗಳನ್ನು ಕೇಳಬಾರದು, ಎಲ್ಲರನ್ನೂ ಜಾಗೃತಗೊಳಿಸಬೇಕು. ಪುರುಷೋತ್ತಮ ಯುಗದಲ್ಲಿ ಪುರುಷೋತ್ತಮರಾಗಿ
ಎಲ್ಲರನ್ನೂ ಪುರುಷೋತ್ತಮರನ್ನಾಗಿ ಮಾಡಿ.
ವರದಾನ:
ವಿಸ್ಮೃತಿಯ
ಪ್ರಪಂಚದಿಂದ ಹೊರ ಬಂದು ಸ್ಮೃತಿ ಸ್ವರೂಪರಾಗಿರುತ್ತಾ ಹೀರೋ ಪಾತ್ರ ಅಭಿನಯಿಸುವಂತಹ ವಿಶೇಷ ಆತ್ಮ
ಭವ.
ಈ ಸಂಗಮಯುಗ ಸ್ಮೃತಿಯ
ಯುಗವಾಗಿದೆ ಮತ್ತು ಕಲಿಯುಗ ವಿಸ್ಮೃತಿಯ ಯುಗವಾಗಿದೆ. ನೀವೆಲ್ಲರೂ ವಿಸ್ಮೃತಿಯ ಜಗತ್ತಿನಿಂದ ಹೊರ
ಬನ್ನಿರಿ.. ಯಾರು ಸ್ಮೃತಿ ಸ್ವರೂಪರಾಗಿದ್ದಾರೆ ಅವರೇ ಹೀರೋ ಪಾತ್ರ ಅಭಿನಯಿಸುವಂತಹ ವಿಶೇಷ
ಆತ್ಮರಾಗಿದ್ದಾರೆ. ಈ ಸಮಯದಲ್ಲಿ ಡಬಲ್ ಹೀರೋ ಆಗಿರುವಿರಿ, ಒಂದು ವಜ್ರ ಸಮಾನ ಬೆಲೆ
ಬಾಳುವವರಾಗಿರುವಿರಿ, ಇನ್ನೊಂದು ಹೀರೋ ಪಾತ್ರವಾಗಿದೆ. ಆದ್ದರಿಂದ ಈ ಹೃದಯದ ಗೀತೆ ಸದಾ
ನುಡಿಯುತ್ತಿರಲಿ ವಾಹ್ ನನ್ನ ಶ್ರೇಷ್ಠ ಭಾಗ್ಯ. ಹೇಗೆ ದೇಹದ ವೃತ್ತಿ ನೆನಪಿನಲ್ಲಿರುವುದು ಅದೇ ರೀತಿ
ಈ ಅವಿನಾಶಿ ವೃತ್ತಿಯಾದ “ನಾನು ಶ್ರೇಷ್ಠ ಆತ್ಮನಾಗಿದ್ದೇನೆ”ಎನ್ನುವುದು ನೆನಪಿನಲ್ಲಿರಲಿ. ಆಗ
ಹೇಳಲಾಗುವುದು ವಿಶೇಷ ಆತ್ಮ.
ಸ್ಲೋಗನ್:
ಸಾಹಸದ ಮೊದಲನೇ
ಹೆಜ್ಜೆ ಮುಂದಿಡಿ, ಆಗ ತಂದೆಯ ಸಂಪೂರ್ಣ ಸಹಯೋಗ ಸಿಗುವುದು.