03.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಸಹೋದರತ್ವವು ನಿಮ್ಮ ಅನಾದಿ ಸಂಬಂಧವಾಗಿದೆ, ನೀವು ಸಾಕಾರದಲ್ಲಿ ಸಹೋದರ ಸಹೋದರಿಯರಾಗಿದ್ದೀರಿ,
ಆದ್ದರಿಂದ ನಿಮ್ಮ ದೃಷ್ಟಿ ಎಂದೂ ವಿಕಾರಿಯಾಗಲು ಸಾಧ್ಯವಿಲ್ಲ”
ಪ್ರಶ್ನೆ:
ವಿಜಯೀ
ಅಷ್ಟರತ್ನಗಳು ಯಾರಾಗಿದ್ದಾರೆ? ಅವರ ಮಹತ್ವ ಏನಿದೆ?
ಉತ್ತರ:
ಯಾರ
ಮನಸ್ಸಿನಲ್ಲಿ ಕೆಟ್ಟ ವಿಚಾರಗಳಿರುವುದಿಲ್ಲವೋ ಪೂರ್ಣ ಪವಿತ್ರ ದೃಷ್ಟಿಯಿರುವುದೋ ಅವರೇ ಅಷ್ಟ
ರತ್ನಗಳಾಗುತ್ತಾರೆ. ಅರ್ಥಾತ್ ಕರ್ಮಾತೀತ ಸ್ಥಿತಿಯನ್ನು ಪಡೆಯುತ್ತಾರೆ. ಅಷ್ಟ ರತ್ನರಿಗೆ ಇಷ್ಟು
ಅಧಿಕ ಮಹತ್ವ ಇರುತ್ತದೆ ಎಂದರೆ ಯಾರ ಮೇಲಾದರೂ ಗ್ರಹಚಾರ ಬಂದರೆ ಅವರಿಗೆ ಅಷ್ಟ ರತ್ನಗಳ,
ಉಂಗುರವನ್ನು ಹಾಕಿಸುತ್ತಾರೆ. ಇದರಿಂದ ಗ್ರಹಚಾರವು ಹೋಗುತ್ತದೆಯೆಂದು ತಿಳಿಯುತ್ತಾರೆ.
ಅಷ್ಟರತ್ನಗಳಾಗಿರುವವರು ದೂರಾಂದೇಶಿಯಾಗಿರುವ ಕಾರಣ ನಿರಂತರ ಸಹೋದರತ್ವದ ಸ್ಮೃತಿಯಲ್ಲಿರುತ್ತಾರೆ.
ಓಂ ಶಾಂತಿ.
ಆತ್ಮಿಕ ಮಕ್ಕಳಿಗೆ ಗೊತ್ತಿದೆ. ಅವರ ಹೆಸರೇನಾಗಿದೆ? ಬ್ರಾಹ್ಮಣರು. ಬ್ರಹ್ಮಾಕುಮಾರ ಕುಮಾರಿಯರು
ಅನೇಕರಿದ್ದಾರೆ. ಇವರು ದತ್ತು ಮಕ್ಕಳೆಂದು ಇದರಿಂದಲೇ ಸಿದ್ಧವಾಗುತ್ತದೆ. ಏಕೆಂದರೆ ಇವರೆಲ್ಲರೂ
ಒಬ್ಬ ತಂದೆಯ ಮಕ್ಕಳಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ದತ್ತು ಮಕ್ಕಳಾಗಿದ್ದಾರೆ. ನೀವು ಬ್ರಹ್ಮಾ
ಕುಮಾರ ಕುಮಾರಿಯರೇ ದತ್ತು ಮಕ್ಕಳಾಗಿದ್ದೀರಿ. ಅನೇಕ ಮಕ್ಕಳಿದ್ದೀರಿ. ಒಂದೆನೆಯದಾಗಿ ಪ್ರಜಾಪಿತ
ಬ್ರಹ್ಮನ ಮಕ್ಕಳಾಗಿದ್ದೀರಿ ಮತ್ತು ಇನ್ನೊಂದು ಪರಮಪಿತ ಪರಮಾತ್ಮ ಶಿವನ ಮಕ್ಕಳಾಗಿದ್ದೀರಿ. ಇವರಿಗೆ
ಶಾರೀರಿಕ ಮಕ್ಕಳಾಗಿದ್ದೀರಿ. ಶಿವ ತಂದೆಯ ಮಕ್ಕಳೆಂದಾಗ ಪರಸ್ಪರ ಸಹೋದರರಾಗುತ್ತೀರಿ. ಪ್ರಜಾಪಿತ
ಬ್ರಹ್ಮನ ಮಕ್ಕಳು ಸಾಕಾರದಲ್ಲಿ ಸಹೋದರ ಸಹೋದರಿಯರಾಗುತ್ತೀರಿ. ಸಹೋದರ ಸಹೋದರಿಯರ ನಡುವೆ ಎಂದೂ
ವಿಕಾರಿ ಸಂಬಂಧವಿರುವುದಿಲ್ಲ. ನಿಮಗೆ ಈ ಮಾತನ್ನು ಹೇಳುತ್ತಾರೆಲ್ಲವೆ - ಇವರು ಎಲ್ಲರನ್ನೂ ಸಹೋದರ
ಸಹೋದರಿಯನ್ನಾಗಿ ಮಾಡುತ್ತಾರೆ ಎಂದು, ಇದರಿಂದ ಶುದ್ಧ ಸಂಬಂಧವಿರಲಿ, ವಿಕಾರಿ ದೃಷ್ಟಿಯು ಆಗದಿರಲಿ
ಎಂದು. ಈ ಒಂದು ಜನ್ಮದಲ್ಲಿ ನಿರ್ವಿಕಾರಿ ದೃಷ್ಟಿಯಾಗುವುದರಿಂದ ಭವಿಷ್ಯದಲ್ಲಿ ವಿಕಾರಿ
ದೃಷ್ಟಿಯಾಗುವುದಿಲ್ಲ. ಹಾಗೆಂದರೆ ಸತ್ಯಯುಗದಲ್ಲಿ ಸಹೋದರ ಸಹೋದರಿಯ ದೃಷ್ಟಿ ಇರುತ್ತದೆ ಎಂದಲ್ಲ.
ಮಹಾರಾಜ ಮಹಾರಾಣಿ ಹೇಗಿರಬೇಕೋ ಹಾಗೆ ಇರುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು
ಪುರುಷೋತ್ತಮ ಸಂಗಮಯುಗದಲ್ಲಿದ್ದೇವೆ ಮತ್ತು ನಾವೆಲ್ಲರೂ ಸಹೋದರ ಸಹೋದರಿಯಾಗಿದ್ದೇವೆ. ಪ್ರಜಾಪಿತ
ಬ್ರಹ್ಮಾ ಎಂದು ಹೆಸರಿದೆಯಲ್ಲವೆ. ಪ್ರಜಾಪಿತ ಬ್ರಹ್ಮಾ ಯಾವಾಗ ಇದ್ದರು,ಇದು ಪ್ರಪಂಚಕ್ಕೆ
ಗೊತ್ತಿಲ್ಲ, ನೀವಿಲ್ಲಿ ಕುಳಿತಿದ್ದೀರಿ, ನಾವು ಪುರುಷೋತ್ತಮ ಸಂಗಮಯುಗೀ
ಬ್ರಹ್ಮಾಕುಮಾರ-ಕುಮಾರಿಯಾಗಿದ್ದೇವೆ ಎನ್ನುವುದು ನಿಮಗೆ ಗೊತ್ತಿದೆ. ಈಗ ಇದನ್ನು ಧರ್ಮವೆಂದು
ಹೇಳುವುದಿಲ್ಲ. ಕುಲದ ಸ್ಥಾಪನೆಯಾಗುತ್ತಿದೆ. ನೀವು ಬ್ರಾಹ್ಮಣ ಕುಲದವರಾಗಿದ್ದಿರಿ. ನಾವು
ಬ್ರಹ್ಮಾಕುಮಾರ-ಕುಮಾರಿಯರು ಅವಶ್ಯವಾಗಿ ಒಬ್ಬ ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದೇವೆಂದು
ಹೇಳಬಹುದು. ಇದು ಹೊಸ ಮಾತಾಗಿದೆಯಲ್ಲವೆ. ನೀವು ಇದನ್ನು ಹೇಳಬಹುದು - ನಾವು
ಬ್ರಹ್ಮಾಕುಮಾರ-ಕುಮಾರಿಯಾಗಿದ್ದೇವೆ, ವಾಸ್ತವದಲ್ಲಿ ನಾವು ಒಬ್ಬ ತಂದೆಯ ಮಕ್ಕಳು ಸಹೋದರರಾಗಿದ್ದೇವೆ.
ಶಿವನ ಮಕ್ಕಳೆಂದಾಗ ದತ್ತು ಮಕ್ಕಳೆಂದು ಹೇಳುವುದಿಲ್ಲ. ನಾವು ಆತ್ಮರು ಅವರ ಅನಾದಿ
ಸಂತಾನರಾಗಿದ್ದೇವೆ, ಅವರು ಪರಮಪಿತ ಪರಮಾತ್ಮ ಆಗಿದ್ದಾರೆ, ಬೇರೆ ಯಾರಿಗೂ ಪರಮ ಎನ್ನುವ ಶಬ್ದವನ್ನು
ಹೇಳುವುದಿಲ್ಲ. ಸಂಪೂರ್ಣ ಪವಿತ್ರರಿಗೆ ಪರಮ ಎಂದು ಹೇಳುತ್ತಾರೆ. ಎಲ್ಲರಲ್ಲಿಯೂ ಪವಿತ್ರತೆಯಿದೆ
ಎಂದು ಹೇಳುವುದಿಲ್ಲ. ಈ ಸಂಗಮ ಯುಗದಲ್ಲಿಯೇ ಪವಿತ್ರತೆಯನ್ನು ಕಲಿಯುತ್ತೀರಿ. ನೀವಂತೂ ಪುರುಷೋತ್ತಮ
ಸಂಗಮಯುಗದ ನಿವಾಸಿಗಳಾಗಿದ್ದೀರಿ. ಕಲಿಯುಗ ನಿವಾಸಿ, ಸತ್ಯಯುಗ ನಿವಾಸಿ ಎಂದು ಹೇಳುತ್ತಾರೆ.
ಸತ್ಯಯುಗ ಮತ್ತು ಕಲಿಯುಗ ಎಲ್ಲರಿಗೂ ಗೊತ್ತಿದೆ. ಒಂದು ವೇಳೆ ದೂರಾಂದೇಶಿ ಬುದ್ಧಿಯಿದ್ದರೆ ಅರ್ಥ
ಮಾಡಿಕೊಳ್ಳುತ್ತಾರೆ. ಕಲಿಯುಗ ಮತ್ತು ಸತ್ಯಯುಗದ ಮಧ್ಯದ ಸಮಯಕ್ಕೆ ಸಂಗಮಯುಗವೆಂದು ಹೇಳುತ್ತಾರೆ.
ಇದನ್ನು ಶಾಸ್ತ್ರಗಳಲ್ಲಿ ಯುಗೇ ಯುಗೆ ಎಂದು ಹೇಳಿ ಬಿಟ್ಟಿದ್ದಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ
- ನಾನು ಯುಗ ಯುಗದಲ್ಲಿ ಬರುವುದಿಲ್ಲ. ನಿಮ್ಮ ಬುದ್ಧಿಯಲ್ಲಿ ಇದು ಇರಬೇಕು - ನಾವು ಪುರುಷೋತ್ತಮ
ಸಂಗಮಯುಗೀ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ನಾವು ಸತ್ಯಯುಗದಲ್ಲಿಯೂ ಇಲ್ಲ, ಕಲಿಯುಗದಲ್ಲಿಯೂ
ಇಲ್ಲ. ಸಂಗಮದ ನಂತರ ಸತ್ಯಯುಗವು ಅವಶ್ಯವಾಗಿ ಬರುತ್ತದೆ.
ಈಗ ನೀವು ಸತ್ಯಯುಗಕ್ಕೆ ಹೋಗಲು ಪುರುಷಾರ್ಥ ಮಾಡುತ್ತಿದ್ದೀರಿ. ಪವಿತ್ರತೆಯಿಲ್ಲದೇ ಯಾರೂ ಸಹ
ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಈ ಸಮಯದಲ್ಲಿ ಪವಿತ್ರರಾಗಲು ನೀವು ಪುರುಷಾರ್ಥ ಮಾಡುತ್ತಿದ್ದೀರಿ,
ಎಲ್ಲರೂ ಪವಿತ್ರರಾಗಿಲ್ಲ. ಕೆಲವರು ಪತಿತರೂ ಇದ್ದಾರೆ. ನಡೆಯುತ್ತಾ-ನಡೆಯುತ್ತಾ ಕೆಳಗೆ ಬೀಳುತ್ತಾರೆ
ಪುನಃ ಮುಚ್ಚಿಟ್ಟುಕೊಂಡು ಬಂದು ಅಮೃತವನ್ನು ಕುಡಿಯುತ್ತಾರೆ. ವಾಸ್ತವದಲ್ಲಿ ಯಾರು ಅಮೃತವನ್ನು
ಬಿಟ್ಟು ವಿಷವನ್ನು ಕುಡಿಯುತ್ತಾರೆ ಅವರಿಗೆ ಸ್ವಲ್ಪ ಸಮಯ ಬರಲು ಅನುಮತಿ ಕೊಡುವುದಿಲ್ಲ. ಆದರೆ ಈಗ
ಏನಾಗಿದೆ - ಯಾವಾಗ ಅಮೃತವನ್ನು ಹಂಚಿದರೋ ಆಗ ವಿಕಾರಿ ಅಸುರರು ಮುಚ್ಚಿಟ್ಟುಕೊಂಡು ಬಂದು
ಕುಳಿತುಕೊಂಡರು. ಇಂದ್ರ ಸಭೆಯಲ್ಲಿ ಇಂತಹ ಅಪವಿತ್ರರು ಬಂದು ಕುಳಿತುಕೊಂಡರೆ ಅವರಿಗೆ ಶಾಪ
ಸಿಗುತ್ತದೆ ಎಂದು ಹೇಳುತ್ತಾರೆ. ಒಂದು ಕಥೆಯನ್ನೂ ಹೇಳುತ್ತಾರೆ - ಒಬ್ಬ ದೇವತೆಯು ವಿಕಾರಿಯನ್ನು
ಕರೆದುಕೊಂಡು ಬಂದರು ನಂತರ ಅವರ ಸ್ಥಿತಿ ಏನಾಯಿತು? ವಿಕಾರಿಗಳು ಅವಶ್ಯವಾಗಿ ಬೀಳುತ್ತಾರೆ. ಇದು
ತಿಳುವಳಿಕೆಯ ಮಾತಾಗಿದೆ. ವಿಕಾರಿಗಳು ಮೇಲೇರಲು ಸಾಧ್ಯವಿಲ್ಲ. ಅವರು ಹೋಗಿ ಕಲ್ಲಾದರು ಎಂದು
ಹೇಳುತ್ತಾರೆ. ಅಂದರೆ ಮನುಷ್ಯರು ಕಲ್ಲು ಅಥವಾ ಮರವಾಗುತ್ತಾರೆ ಎಂದಲ್ಲ, ಕಲ್ಲು
ಬುದ್ಧಿಯವರಾಗುತ್ತಾರೆ. ಇಲ್ಲಿ ಪಾರಸ ಬುದ್ಧಿಯವರಾಗಲು ಬರುತ್ತಾರೆ ಆದರೆ ಮುಚ್ಚಿಟ್ಟುಕೊಂಡು
ವಿಷವನ್ನು ಕುಡಿಯುತ್ತಾರೆಂದರೆ ಇದರಿಂದ ಕಲ್ಲು ಬುದ್ಧಿಯವರಾಗುತ್ತಾರೆಂದು ಸಿದ್ಧವಾಗುತ್ತದೆ.
ಇದನ್ನು ಸನ್ಮುಖದಲ್ಲಿ ತಿಳಿಸಲಾಗುತ್ತದೆ, ಶಾಸ್ತ್ರಗಳಲ್ಲಿ ಹಾಗೆಯೇ ಬರೆದು ಬಿಟ್ಟಿದ್ದಾರೆ.
ಇಂದ್ರ ಸಭೆಯೆಂದು ಹೆಸರಿಟ್ಟಿದ್ದಾರೆ, ಅಲ್ಲಿ ಪುಖರಾಜಪರಿ, ಭಿನ್ನ-ಭಿನ್ನ ಪ್ರಕಾರದ ಪರಿ ಅರ್ಥಾತ್
ದೇವತೆಗಳನ್ನು ತೋರಿಸಿದ್ದಾರೆ. ರತ್ನಗಲ್ಲಿಯೂ ನಂಬರ್ವಾರ್ ಇರುತ್ತವೆಯಲ್ಲವೆ. ಕೆಲವು ಬಹಳ ಒಳ್ಳೆಯ
ರತ್ನಗಳು, ಕೆಲವು ಕಡಿಮೆ, ಕೆಲವುದರ ಬೆಲೆ ಕಡಿಮೆ, ಕೆಲವು ರತ್ನಗಳಿಗೆ ಬಹಳ ಬೆಲೆಯಿರುತ್ತದೆ.
ನವರತ್ನಗಳ ಉಂಗುರವನ್ನು ಮಾಡಿಸುತ್ತಾರೆ. ಜಾಹೀರಾತು ನೀಡುತ್ತಾರೆ. ಹೆಸರಂತೂ ರತ್ನವೇ ಆಗಿದೆ.
ಇಲ್ಲಿ ಕುಳಿತಿದ್ದಾರಲ್ಲವೆ, ಆದರೆ ಅವರಲ್ಲಿಯೂ ಇವರು ವಜ್ರವಾಗಿದ್ದಾರೆ, ಇವರು ಪಗಡೆಯಾಗಿದ್ದಾರೆ,
ಇವರು ಮಾಣಿಕ್ಯವಾಗಿದ್ದಾರೆಂದು ಹೇಳುತ್ತಾರೆ. ರಾತ್ರಿ ಹಗಲಿನ ಅಂತರವಿದೆ. ಆ ರತ್ನಗಳ ಬೆಲೆಯೂ ಸಹ
ಅಂತರವಿರುತ್ತದೆ. ಅದೇ ರೀತಿ ಹೂಗಳನ್ನೂ ಹೋಲಿಕೆ ಮಾಡಲಾಗುತ್ತದೆ. ಹೂಗಳಲ್ಲಿಯೂ ವಿಭಿನ್ನತೆಯಿದೆ.
ಯಾರು ಯಾರು ಹೂವಿನ ಸಮಾನ ಇದ್ದಾರೆ ಎನ್ನುವುದು ಮಕ್ಕಳಿಗೆ ಗೊತ್ತಿದೆ, ಬ್ರಾಹ್ಮಣಿಯರು
ಮಾರ್ಗದರ್ಶಕರಾಗಿ ಬರುತ್ತಾರೆ, ಅವರು ಒಳ್ಳೆಯ ಹೂವಾಗಿದ್ದಾರೆ. ಮತ್ತೆ ಕೆಲವರು
ವಿದ್ಯಾರ್ಥಿಗಳಲ್ಲಿಯೂ ಸಹ ತಿಳಿಸಿಕೊಡುವುದರಲ್ಲಿ ಬಹಳ ತೀಕ್ಷ್ಣವಾಗಿರುತ್ತಾರೆ. ಆಗ ತಂದೆಯು
ಹೂವನ್ನು ಬ್ರಾಹ್ಮಣಿಯರಿಗೆ ಕೊಡದೆ ಅವರಿಗೆ ಕೊಡುತ್ತಾರೆ. ಕಲಿಸುವವರಿಗಿಂತಲೂ ಅವರಲ್ಲಿ ಬಹಳ
ಒಳ್ಳೆಯ ಗುಣಗಳಿರುತ್ತವೆ. ಯಾವುದೇ ವಿಕಾರಗಳಿರುವುದಿಲ್ಲ. ಕೆಲ ಕೆಲವರಲ್ಲಿ ಕ್ರೋಧ ಲೋಭದ
ಭೂತವಿರುತ್ತದೆ, ಅಂದಾಗ ತಂದೆಗೆ ಗೊತ್ತಿದೆ - ಇವರು ಬಹಳ ಪ್ರಿಯವಾದ ಮಾರ್ಗದರ್ಶಕರಾಗಿದ್ದಾರೆ,
ಇವರು ಎರಡನೆಯ ಮಾರ್ಗದರ್ಶಕರಾಗಿದ್ದಾರೆ, ಕೆಲವು ಮಾರ್ಗದರ್ಶಕರು ಅಷ್ಟು ಪ್ರಿಯವಾಗಿರುವುದಿಲ್ಲ.
ಯಾರು ಎಷ್ಟು ಜಿಜ್ಞಾಸುಗಳನ್ನು ಕರೆದುಕೊಂಡು ಬರುತ್ತಾರೆ ಅವರು ಅಷ್ಟು ಪ್ರಿಯರಾಗುತ್ತಾರೆ. ಈ
ರೀತಿಯೂ ಇರುತ್ತಾರೆ - ಕಲಿಸುವವರು ಮಾಯೆಗೆ ವಶರಾಗಿ ವಿಕಾರದಲ್ಲಿ ಹೋಗುತ್ತಾರೆ. ಅನೇಕರನ್ನು
ಕೆಸರಿನಿಂದ ತೆಗೆದು ತಾವೇ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡು ಸಾಯುವವರು ಅನೇಕರಿದ್ದಾರೆ. ಮಾಯೆ
ಬಹಳ ಶಕ್ತಿಶಾಲಿಯಾಗಿದೆ. ವಿಕಾರಿ ದೃಷ್ಟಿಯು ಬಹಳ ಮೋಸ ಮಾಡುತ್ತದೆ ಎಂದು ಮಕ್ಕಳು
ತಿಳಿದುಕೊಂಡಿದ್ದೀರಿ. ಎಲ್ಲಿಯವರೆಗೆ ವಿಕಾರಿ ದೃಷ್ಟಿಯಿರುತ್ತದೊ ಅಲ್ಲಿಯವರೆಗೆ ಸಹೋದರ ಸಹೋದರಿಯ
ಆದೇಶವೂ ಉಪಯೋಗವಾಗುವುದಿಲ್ಲ. ಪವಿತ್ರ ದೃಷ್ಟಿಯ ಬದಲು ವಿಕಾರಿ ದೃಷ್ಟಿಯಾಗುತ್ತದೆ. ವಿಕಾರಿ
ದೃಷ್ಟಿ ಹೋಗಿ ಪಕ್ಕಾ ನಿರ್ವಿಕಾರಿ ದೃಷ್ಟಿಯಾಗುವುದು ಆಗ ಅದಕ್ಕೆ ಕರ್ಮಾತೀತ ಸ್ಥಿತಿಯೆಂದು
ಹೇಳುತ್ತಾರೆ. ತಮ್ಮನ್ನು ಇಷ್ಟು ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. ಜೊತೆಯಲ್ಲಿದ್ದರೂ ವಿಕಾರಿ
ದೃಷ್ಟಿಯಿರಬಾರದು. ಇಲ್ಲಿ ನೀವು ಸಹೋದರ ಸಹೋದರಿಯಾಗುತ್ತೀರಿ. ಜ್ಞಾನದ ಕತ್ತಿಯ ನಡುವೆ
ನಿಂತಿದ್ದೀರಿ. ನಾವಂತೂ ಪವಿತ್ರವಾಗಿರುವ ಪಕ್ಕಾ ಪ್ರತಿಜ್ಞೆ ಮಾಡಬೇಕು. ಆಗ ತಂದೆಯ
ಆಕರ್ಷಣೆಯಾಗುತ್ತದೆ, ಅಷ್ಟು ಇನ್ನೂ ಸ್ಥಿತಿ ಪಕ್ಕಾ ಆಗಿಲ್ಲ ಎಂದು ಬರೆಯುತ್ತಾರೆ. ಪುರುಷಾರ್ಥ
ಮಾಡುತ್ತಿರುತ್ತಾರೆಂದಲ್ಲ, ಒಮ್ಮೆಲೆ ನಿರ್ವಿಕಾರಿ ದೃಷ್ಟಿಯಾದಾಗಲೇ ವಿಜಯವನ್ನು ಪಡೆಯಲು ಸಾಧ್ಯ.
ಯಾವುದೇ ವಿಕಾರಿ ಸಂಕಲ್ಪವೂ ಬರದಂತಹ ಸ್ಥಿತಿ ಇರಬೇಕು. ಇದಕ್ಕೆ ಕರ್ಮಾತೀತ ಸ್ಥಿತಿಯೆಂದು
ಹೇಳುತ್ತಾರೆ.
ಎಷ್ಟು ಅಧ್ಬುತವಾದ ಮಾಲೆಯಾಗುತ್ತದೆ. ಎಂಟು ರತ್ನಗಳ ಮಾಲೆಯೂ ಆಗುತ್ತದೆ. ಮಕ್ಕಳಂತೂ ಅನೇಕರಿದ್ದಾರೆ.
ಸೂರ್ಯವಂಶಿ, ಚಂದ್ರವಂಶಿ ಮನೆತನಗಳು ಇಲ್ಲಿಯೇ ಸ್ಥಾಪನೆಯಾಗುತ್ತವೆ, ಅವರೆಲ್ಲರನ್ನೂ ಸೇರಿಸಿ
ಪೂರ್ಣ ಅಂಕಗಳು, ವಿದ್ಯಾರ್ಥಿ ವೇತನವನ್ನು ತೆಗೆದುಕೊಳ್ಳಲು ಎಂಟು ರತ್ನಗಳೇ ಯೋಗ್ಯರಾಗುತ್ತಾರೆ.
ಮಧ್ಯದಲ್ಲಿ ಇವರನ್ನು ಈ ರೀತಿ ರತ್ನಗಳನ್ನಾಗಿ ಮಾಡುವ ವಜ್ರ ಶಿವನನ್ನು ಹಾಕುತ್ತಾರೆ. ಗ್ರಹಚಾರ
ಕಾಡಿದಾಗಲೂ ಅಷ್ಟ ರತ್ನಗಳ ಉಂಗುರವನ್ನು ಹಾಕಿಕೊಳ್ಳುತ್ತಾರೆ. ಈ ಸಮಯದಲ್ಲಿ ಭಾರತದ ಮೇಲೆ ರಾಹುವಿನ
ಗ್ರಹಚಾರವಿದೆ. ಮೊದಲು ವೃಕ್ಷಪತಿ ಅರ್ಥಾತ್ ಬೃಹಸ್ಪತಿಯ ದೆಶೆ ಇತ್ತು. ನೀವು ಸತ್ಯಯುಗೀ
ದೇವತೆಗಳಾಗಿದ್ದಿರಿ, ವಿಶ್ವದ ಮೇಲೆ ರಾಜ್ಯಭಾರ ಮಾಡುತ್ತಿದ್ದಿರಿ, ನಂತರ ರಾಹುವಿನ ದೆಶೆಯು
ಕುಳಿತುಕೊಂಡಿತು. ಈಗ ನಿಮಗೆ ತಿಳಿದಿದೆ - ನಮ್ಮ ಮೇಲೆ ಬೃಹಸ್ಪತಿಯ ದೆಶೆ ಇತ್ತು, ಹೆಸರಾಗಿದೆ
ವೃಕ್ಷಪತಿ. ಸಂಕ್ಷಿಪ್ತವಾಗಿ ಬೃಹಸ್ಪತಿ ಎಂದು ಹೇಳಲಾಗುತ್ತದೆ. ನಮ್ಮ ಮೇಲೆ ಸಂಪೂರ್ಣವಾಗಿ
ಬೃಹಸ್ಪತಿ ದಶೆ ಇತ್ತು ಆಗ ನಾವು ವಿಶ್ವದ ಮಾಲೀಕರಾಗಿದ್ದೆವು, ಈಗ ರಾಹುವಿನ ದೆಶೆಯಿಂದ ಕವಡೆಯ
ಸಮಾನರಾಗಿದ್ದೇವೆ, ಇದನ್ನಂತೂ ಪ್ರತಿಯೊಬ್ಬರು ಅರಿತುಕೊಳ್ಳಬಹುದು. ಕೇಳುವ ಮಾತೂ ಇಲ್ಲ.
ಗುರುಗಳೊಂದಿಗೆ ಕೇಳುತ್ತಾರೆ - ಈ ಪರೀಕ್ಷೆಯಲ್ಲಿ ಪಾಸಾಗುತ್ತೇವೆಯೇ? ಇಲ್ಲಿಯೂ ಸಹ ತಂದೆಗೆ
ಕೇಳುತ್ತಾರೆ - ನಾವು ಪಾಸಾಗುತ್ತೇವೆಯೇ? ಆಗ ತಂದೆಯು ಹೇಳುತ್ತಾರೆ - ಇದೇ ರೀತಿ ಪುರುಷಾರ್ಥ
ಮಾಡುತ್ತಿದ್ದರೆ ಏಕಾಗುವುದಿಲ್ಲ. ಆದರೆ ಮಾಯೆಯು ಬಹಳ ಪ್ರಬಲವಾಗಿದೆ. ಬಿರುಗಾಳಿಗಳನ್ನು ತರುತ್ತದೆ.
ಈ ಸಮಯವಂತೂ ಸರಿಯಾಗಿದೆ ಆದರೆ ಮುಂದೆ ಹೋದಂತೆ ಬಹಳ ಬಿರುಗಾಳಿಗಳು ಬಂದರೆ? ಈಗ ನೀವು ಯುದ್ಧದ
ಮೈದಾನದಲ್ಲಿದ್ದೀರಿ, ಅಂದಮೇಲೆ ನಾವು ನಿಮ್ಮ ಮೇಲೆ ಹೇಗೆ ಭರವಸೆಯಿಡಬೇಕು? ಮೊದಲು ಮಾಲೆ
ಮಾಡುತ್ತಿದ್ದೆವು, ಯಾರನ್ನು 2-3ನೇ ನಂಬರಿನಲ್ಲಿಡುತ್ತಿದ್ದೆವು ಅವರು ಇಲ್ಲವೇ ಇಲ್ಲ,
ಮುಳ್ಳುಗಳಾಗಿ ಬಿಟ್ಟರು. ಆದ್ದರಿಂದ ತಂದೆಯು ತಿಳಿಸಿದರು - ಬ್ರಾಹ್ಮಣರ ಮಾಲೆಯಾಗಲು ಸಾಧ್ಯವಿಲ್ಲ.
ಯುದ್ಧದ ಮೈದಾನದಲ್ಲಿದ್ದಾರಲ್ಲವೆ. ಇಂದು ಬ್ರಾಹ್ಮಣರು ನಾಳೆ ಶೂದ್ರರಾಗುತ್ತಾರೆ. ವಿಕಾರದಲ್ಲಿ
ಹೋದರೆ ಶೂದ್ರರಾದರೆಂದರ್ಥ, ರಾಹುವಿನ ದೆಶೆ ಕುಳಿತುಕೊಂಡಿದೆ. ಬೃಹಸ್ಪತಿಯ ದೆಶೆಗಾಗಿ ಪುರುಷಾರ್ಥ
ಮಾಡುತ್ತಿದ್ದೆವು. ವೃಕ್ಷಪತಿ ಓದಿಸುತ್ತಿದ್ದರು ನಡೆಯುತ್ತಾ ನಡೆಯುತ್ತಾ ಮಾಯೆಯ ಹೊಡೆತವು
ಬಿದ್ದಿತು, ಮತ್ತೆ ರಾಹುವಿನ ದೆಶೆ ಕುಳಿತಿತು ಆಗ ದ್ರೋಹಿಗಳಾಗಿಬಿಡುತ್ತಾರೆ. ಈ ರೀತಿ ಎಲ್ಲ
ಸ್ಥಾನಗಳಲ್ಲಿಯೂ ಇರುತ್ತಾರೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗಿ ಆಶ್ರಯ ಪಡೆಯುತ್ತಾರೆ.
ಆಗ ಅವರೂ ಸಹ ಇವರು ನಮಗೆ ಉಪಯೋಗವಾಗುತ್ತಾರೆಯೇ ಎಂದು ನೋಡಿ ಆಶ್ರಯ ಕೊಡುತ್ತಾರೆ. ಹೀಗೆ ಅನೇಕರು
ದ್ರೋಹಿಗಳಾಗುತ್ತಾರೆ. ವಿಮಾನ ಸಹಿತವಾಗಿ ಇನ್ನೊಂದು ರಾಜ್ಯದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ.
ಮತ್ತೆ ಅವರು ಅವರಿಗೆ ಆಶ್ರಯ ಕೊಟ್ಟು ವಿಮಾನವನ್ನು ಹಿಂತಿರುಗಿಸುತ್ತಾರೆ. ವಿಮಾನಕ್ಕೆ ಆಶ್ರಯ
ಕೊಡುವುದಿಲ್ಲ. ಏಕೆಂದರೆ ಅದು ಅವರ ಸಂಪತ್ತಾಗಿದೆಯಲ್ಲವೆ. ಅವರ ವಸ್ತುವನ್ನು ಅವರಿಗೆ
ಹಿಂತಿರುಗಿಸುತ್ತಾರೆ. ಬಾಕಿ ಮನುಷ್ಯರು ಮನುಷ್ಯರಿಗೆ ಆಶ್ರಯ ಕೊಡುತ್ತಾರೆ.
ಈಗ ನೀವು ಮಕ್ಕಳು ತಂದೆಯ ಬಳಿ ಆಶ್ರಯಕ್ಕಾಗಿ ಬಂದಿದ್ದೀರಿ. ಬಾಬಾ, ನಮ್ಮ ಮರ್ಯಾದೆ ಕಾಪಾಡು ಎಂದು
ಹೇಳುತ್ತೀರಿ. ಇವರು ನನ್ನನ್ನು ವಿವಸ್ತ್ರ ಮಾಡುತ್ತಾರೆ, ಪತಿತರಾಗುವುದರಿಂದ ರಕ್ಷಣೆ ಮಾಡಿ ಎಂದು
ದ್ರೌಪದಿ ಕರೆದಳಲ್ಲವೆ. ಸತ್ಯಯುಗದಲ್ಲಿ ಎಂದೂ ವಿವಸ್ತ್ರರಾಗುವುದಿಲ್ಲ. ಅವರಿಗೆ ಸಂಪೂರ್ಣ
ನಿರ್ವಿಕಾರಿಯೆಂದು ಹೇಳುತ್ತಾರೆ. ಚಿಕ್ಕ ಮಕ್ಕಳಂತೂ ನಿರ್ವಿಕಾರಿಯಾಗಿಯೇ ಇರುತ್ತಾರೆ. ಇವರು
ಗೃಹಸ್ಥ ವ್ಯವಹಾರದಲ್ಲಿರುತ್ತಾ ಸಂಪೂರ್ಣ ನಿರ್ವಿಕಾರಿಯಾಗಿರುತ್ತಾರೆ. ಸ್ತ್ರೀ ಪುರುಷರು
ಜೊತೆಯಲ್ಲಿದ್ದರೂ ನಿರ್ವಿಕಾರಿಯಾಗಿರುತ್ತಾರೆ. ಆದ್ದರಿಂದಲೇ ನಾವು ನರನಿಂದ ನಾರಾಯಣ, ನಾರಿಯಿಂದ
ಲಕ್ಷ್ಮೀ ಆಗುತ್ತೇವೆಂದು ಹೇಳುತ್ತೇವೆ. ಅದು ನಿರ್ವಿಕಾರಿ ಪ್ರಪಂಚವಾಗಿದೆ. ಅಲ್ಲಿ ರಾವಣನ
ಹೆಸರಿರುವುದಿಲ್ಲ. ಅದಕ್ಕೆ ರಾಮರಾಜ್ಯವೆಂದು ಹೇಳುತ್ತಾರೆ. ರಾಮನೆಂದು ಶಿವ ತಂದೆಗೆ ಹೇಳುತ್ತಾರೆ.
ರಾಮ ನಾಮವನ್ನು ಜಪಿಸುವ ಅರ್ಥವಾಗಿದೆ ತಂದೆಯನ್ನು ನೆನಪು ಮಾಡುವುದು. ರಾಮ ರಾಮ ಎಂದು ಹೇಳುವಾಗ
ನಿರಾಕಾರನೇ ಬುದ್ಧಿಯಲ್ಲಿರುತ್ತಾರೆ. ರಾಮ ರಾಮ ಎಂದು ಹೇಳುತ್ತಾರೆ ಸೀತೆಯನ್ನು ಬಿಟ್ಟು
ಬಿಡುತ್ತಾರೆ. ಇಲ್ಲಿ ತಂದೆಯೊಬ್ಬರೇ ಇದ್ದಾರೆ, ಆದ್ದರಿಂದ ನನ್ನೊಬ್ಬನನ್ನು ನೆನಪು ಮಾಡಿ ಎಂದು
ಹೇಳುತ್ತಾರೆ. ಕೃಷ್ಣನಿಗೆ ಪತಿತ ಪಾವನನೆಂದು ಹೇಳುವುದಿಲ್ಲ. ಬಾಲ್ಯದಲ್ಲಿ ರಾಧಾ ಕೃಷ್ಣರು ಸಹೋದರ
ಸಹೋದರಿಯರಾಗಿರಲಿಲ್ಲ. ಬೇರೆ ಬೇರೆ ರಾಜಧಾನಿಯವರಾಗಿದ್ದರು. ಮಕ್ಕಳು ಶುದ್ಧವಾಗಿರುತ್ತಾರೆ. ತಂದೆಯೂ
ಹೇಳುತ್ತಾರೆ - ಮಕ್ಕಳು ಹೂವಾಗಿದ್ದಾರೆ. ಇವರಲ್ಲಿ ವಿಕಾರದ ದೃಷ್ಟಿ ಇರುವುದಿಲ್ಲ. ದೊಡ್ಡವರಾದಾಗ
ದೃಷ್ಟಿ ಕೆಡುತ್ತದೆ. ಆದ್ದರಿಂದ ಬಾಲಕರನ್ನು ಮಹಾತ್ಮರಿಗೆ ಸಮಾನ ಎಂದು ಹೇಳುತ್ತಾರೆ. ಅಂದರೆ ಮಗು
ಮಹಾತ್ಮರಿಗಿಂತ ಶ್ರೇಷ್ಠ. ಮಹಾತ್ಮರಿಗಾದರೆ ನಾನು ಭ್ರಷ್ಠಾಚಾರದಿಂದ ಜನ್ಮ ಪಡೆದಿದ್ದೇನೆ ಎಂದು
ಗೊತ್ತಿರುತ್ತದೆ. ಚಿಕ್ಕ ಮಕ್ಕಳಿಗೆ ಇದೂ ಸಹ ಗೊತ್ತಿರುವುದಿಲ್ಲ. ತಂದೆಯ ಮಗುವಾದರೆಂದರೆ ಆಸ್ತಿಯು
ಸಿಕ್ಕಿ ಬಿಡುತ್ತದೆ. ನೀವು ವಿಶ್ವದ ರಾಜಧಾನಿಗೆ ಮಾಲೀಕರಾಗುತ್ತೀರಿ. ನೀವು ವಿಶ್ವದ
ಮಾಲೀಕರಾಗಿದ್ದಿರಿ ಇದು ನೆನ್ನೆಯ ಮಾತಾಗಿದೆ. ಈಗ ಪುನಃ ನೀವು ಆಗುತ್ತೀರಿ. ಎಷ್ಟೊಂದು
ಪ್ರಾಪ್ತಿಯಾಗುತ್ತದೆ! ಅಂದಾಗ ಸ್ತ್ರೀ ಪುರುಷರು ಸಹೋದರ ಸಹೋದರಿಯಾಗಿ ಪವಿತ್ರವಾಗಿದ್ದರೆ ಇದು
ದೊಡ್ಡ ಮಾತೇನಲ್ಲ! ಪರಿಶ್ರಮವಂತೂ ಬೇಕಲ್ಲವೆ. ಹಾ! ನಂಬರ್ವಾರ್ ಪುರುಷಾರ್ಥದನುಸಾರ ಈಗ ಬೃಹಸ್ಪತಿಯ
ದೆಶೆಯಲ್ಲಿ ಹೋಗುತ್ತೀರಿ. ಸ್ವರ್ಗದಲ್ಲಿಯಂತೂ ಹೋಗುತ್ತಾರೆ ಆದರೆ ವಿದ್ಯಾಭ್ಯಾಸದ ಅನುಸಾರ ಕೆಲವರು
ಶ್ರೇಷ್ಠ ಪದವಿ ಪಡೆಯುತ್ತಾರೆ, ಕೆಲವರು ಮಧ್ಯಮ, ಕೆಲವರು ಹೂವಾಗುತ್ತಾರೆ, ಕೆಲವರು ಹಾಗೆಯೇ
ಉಳಿಯುತ್ತಾರೆ, ಇದು ಉದ್ಯಾನವನವಾಗಿದೆಯಲ್ಲವೆ. ಮತ್ತೆ ಅಂತಹ ಪದವಿಯನ್ನೇ ಪಡೆಯುತ್ತಾರೆ. ಇಂತಹ
ಹೂಗಳಾಗಲು ಹೆಚ್ಚಿನ ಪುರುಷಾರ್ಥ ಮಾಡಬೇಕು. ಆದ್ದರಿಂದ ತಂದೆಯು ಮಕ್ಕಳಿಗೆ ತೋರಿಸಲು ಹೂಗಳನ್ನು
ತೆಗೆದುಕೊಂಡು ಬರುತ್ತಾರೆ. ಅನೇಕ ಪ್ರಕಾರದ ಹೂಗಳಿರುತ್ತವೆ. ಸತ್ಯಯುಗವು ಹೂದೋಟವಾಗಿದೆ, ಇದು
ಮುಳ್ಳುಗಳ ಕಾಡಾಗಿದೆ. ಈಗ ನೀವು ಮುಳ್ಳುಗಳಿಂದ ಹೂಗಳಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ಒಬ್ಬರು
ಇನ್ನೊಬ್ಬರಿಗೆ ಮುಳ್ಳಾಗಿ ಚುಚ್ಚುವುದರಿಂದ ಪಾರಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ಯಾರು ಎಷ್ಟು
ಪುರುಷಾರ್ಥ ಮಾಡುವರೋ ಅಷ್ಟು ಜಯ ಪಡೆಯುವರು. ಮೂಲ ಮಾತಾಗಿದೆ, ಕಾಮ ವಿಕಾರದ ಮೇಲೆ ಜಯ ಗಳಿಸುವುದು,
ಇದರಿಂದಲೇ ಜಗತ್ಜೀತರಾಗುತ್ತೀರಿ. ಇದಂತೂ ಮಕ್ಕಳ ಮೇಲೆ ಆಧಾರಿತವಾಗಿದೆ. ಯುವಕರು ಬಹಳ ಪರಿಶ್ರಮ
ಪಡಬೇಕಾಗುತ್ತದೆ, ವೃದ್ಧರು ಕಡಿಮೆ. ವಾನಪ್ರಸ್ಥಿಯವರಿಗೆ ಇನ್ನೂ ಕಡಿಮೆ. ಮಕ್ಕಳಿಗೆ ಬಹಳಷ್ಟು
ಕಡಿಮೆ.
ನೀವು ತಿಳಿದುಕೊಂಡಿದ್ದೀರಿ, ನಮಗೆ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ. ಅದಕ್ಕಾಗಿ ಒಂದು ಜನ್ಮ
ಪವಿತ್ರವಾಗಿರುವುದರಲ್ಲಿ ಏನಿದೆ? ಅಂತಹವರಿಗೆ ಬಾಲಬ್ರಹ್ಮಚಾರಿಗಳೆಂದು ಹೇಳುತ್ತಾರೆ.
ಅಂತ್ಯದವೆರೆಗೆ ಪವಿತ್ರರಾಗಿರುತ್ತಾರೆ. ಯಾರು ಪವಿತ್ರರಾಗಿದ್ದಾರೆ ಅವರಿಗೆ ತಂದೆಯ
ಆಕರ್ಷಣೆಯಾಗುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿ ಜ್ಞಾನವು ಸಿಕ್ಕಿದರೆ ಎಲ್ಲದರಿಂದ ಪಾರಾಗುತ್ತಾರೆ.
ಚಿಕ್ಕ ಮಕ್ಕಳು ಮುಗ್ಧರಾಗಿರುತ್ತಾರೆ ಆದರೆ ಹೊರಗೆ ಶಾಲೆ, ಇತ್ಯಾದಿಗಳಲ್ಲಿ ಸಂಗದ ರಂಗು ಬರುತ್ತದೆ.
ಕೆಟ್ಟ ಸಂಗವು ಬೀಳಿಸುತ್ತದೆ, ಒಳ್ಳೆಯ ಸಂಗವು ಮೇಲೆತ್ತುತ್ತದೆ. ತಂದೆಯು ತಿಳಿಸುತ್ತಾರೆ - ನಾನು
ನಿಮ್ಮನ್ನು ದೂರವಿರುವ ಶಿವಾಲಯಕ್ಕೆ ಕರೆದುಕೊಂಡು ಹೋಗುತ್ತೇನೆ, ಸತ್ಯಯುಗವು ಸಂಪೂರ್ಣ ಹೊಸ
ಪ್ರಪಂಚವಾಗಿದೆ. ಅಲ್ಲಿ ಕೆಲವರೇ ಮನುಷ್ಯರಿರುತ್ತಾರೆ, ನಂತರ ವೃದ್ಧಿಯಾಗುತ್ತದೆ. ಅಲ್ಲಿ ಬಹಳ
ಕಡಿಮೆ ದೇವತೆಗಳಿರುತ್ತಾರೆ. ಅಂದಮೇಲೆ ಹೊಸ ಪ್ರಪಂಚಕ್ಕೆ ಹೋಗುವ ಪುರುಷಾರ್ಥ ಮಾಡಬೇಕಾಗಿದೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾ ಅವರ ನೆನಪು, ಪ್ರೀತಿ ಹಾಗೂ
ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಗೆ
ಪ್ರಿಯರಾಗಲು, ಗುಣವಂತರಾಗಬೇಕು. ಒಳ್ಳೊಳ್ಳೆಯ ಗುಣಗಳನ್ನು ಧಾರಣೆ ಮಾಡಿ ಹೂಗಳಾಗಬೇಕು,
ಅವಗುಣಗಳನ್ನು ತೆಗೆದು ಹಾಕಬೇಕು. ಯಾರಿಗೂ ಮುಳ್ಳಾಗಿ ಚುಚ್ಚಬಾರದು.
2. ಪೂರ್ಣ ಉತ್ತೀರ್ಣರಾಗಲು ಮತ್ತು ವಿದ್ಯಾರ್ಥಿ ವೇತನವನ್ನು ತೆಗೆದುಕೊಳ್ಳಲು ಸ್ಥಿತಿಯನ್ನು ಈ
ರೀತಿ ಮಾಡಿಕೊಳ್ಳಬೇಕು - ಏನೂ ನೆನಪಿಗೆ ಬರಬಾರದು, ಸಂಪೂರ್ಣ ಪವಿತ್ರ ದೃಷ್ಟಿ ಇರಬೇಕು. ಸದಾ
ಬೃಹಸ್ಪತಿಯ ದೆಶೆಯಿರಲಿ.
ವರದಾನ:
ಸ್ವ-ಸ್ವರೂಪ
ಮತ್ತು ತಂದೆಯ ಸತ್ಯ ಸ್ವರೂಪವನ್ನು ಗುರುತಿಸಿ ಸತ್ಯತೆಯ ಶಕ್ತಿಯನ್ನು ಧಾರಣೆ ಮಾಡುವಂತಹ ದಿವ್ಯತಾ
ಸಂಪನ್ನ ಭವ.
ಯಾವ ಮಕ್ಕಳು ತಮ್ಮ
ಸ್ವ-ಸ್ವರೂಪವನ್ನು ಹಾಗೂ ತಂದೆಯ ಸತ್ಯ ಪರಿಚಯವನ್ನು ಯಥಾರ್ತವಾಗಿ ಅರಿತುಕೊಂಡು ಬಿಡುತ್ತಾರೆ ಮತ್ತು
ಅದೇ ಸ್ವರೂಪದ ಸ್ಮೃತಿಯಲ್ಲಿರುತ್ತಾರೆ, ಅವರಲ್ಲಿ ಸತ್ಯತೆಯ ಶಕ್ತಿ ಬಂದು ಬಿಡುವುದು. ಅವರ ಪ್ರತಿ
ಸಂಕಲ್ಪ ಸದಾ ಸತ್ಯತೆ ಹಾಗೂ ದಿವ್ಯತಾ ಸಂಪನ್ನವಾಗಿರುವುದು. ಸಂಕಲ್ಪ, ಮಾತು, ಕರ್ಮ ಮತ್ತು
ಸಂಬಂಧ-ಸಂಪರ್ಕ ಎಲ್ಲದರಲ್ಲಿಯೂ ದಿವ್ಯತೆಯ ಅನುಭೂತಿಯಾಗುವುದು. ಸತ್ಯತೆಯನ್ನು ಸಿದ್ಧ ಮಾಡುವ
ಅವಶ್ಯಕತೆ ಇರುವುದಿಲ್ಲ. ಒಂದುವೇಳೆ ಸತ್ಯತೆಯ ಶಕ್ತಿಯಿದ್ದಲ್ಲಿ ಖುಶಿಯಲ್ಲಿ
ನಾಟ್ಯವಾಡುತ್ತಿರುತ್ತಾರೆ.
ಸ್ಲೋಗನ್:
ಸಕಾಶ ಕೊಡುವಂತಹ
ಸೇವೆ ಮಾಡಿ ಆಗ ಸಮಸ್ಯೆಗಳು ಸಹಜವಾಗಿ ಓಡಿ ಹೋಗುವುವು.