29.03.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಶರೀರ ಸಹಿತವಾಗಿ ಎಲ್ಲಾ ವಸ್ತುಗಳೊಂದಿಗೆ ಮಮತ್ವವನ್ನು ತೆಗೆಯಬೇಕು, ಯಾವಾಗ ನೀವಾತ್ಮರು ಪಾವನ ಕರ್ಮಾತೀತರಾಗುತ್ತೀರಿ ಆಗ ಮನೆಗೆ ಹೋಗಲು ಸಾಧ್ಯ.”

ಪ್ರಶ್ನೆ:
ಆತ್ಮನಿಗೆ ಯಾವ ಮಾತಿನೊಂದಿಗೆ ಬಹಳ ಭಯವಾಗುತ್ತದೆ ಮತ್ತು ಏಕೆ ಆ ಭಯವಾಗುತ್ತದೆ?

ಉತ್ತರ:
ಆತ್ಮನಿಗೆ ಶರೀರ ಬಿಡಲು ಬಹಳ ಭಯವಾಗುತ್ತದೆ, ಏಕೆಂದರೆ ಶರೀರದೊಂದಿಗೆ ಮಮತ್ವವಿದೆ. ಒಂದು ವೇಳೆ ಯಾರಾದರೂ ದುಃಖದ ಕಾರಣ ಶರೀರವನ್ನು ಬಿಡಲು ಬಯಸಿದರೆ ಅವರು ಪಾಪಕರ್ಮದ ಶಿಕ್ಷೆಯನ್ನು ಭೋಗಿಸಲೇಬೇಕಾಗುತ್ತದೆ. ಸಂಗಮದಲ್ಲಿ ನೀವು ಮಕ್ಕಳಿಗೆ ಯಾವುದೇ ಭಯವಿಲ್ಲ ಏಕೆಂದರೆ ನಾವು ಹಳೆಯ ಶರೀರವನ್ನು ಬಿಟ್ಟು ತಂದೆಯ ಬಳಿ ಹೋಗುತ್ತೇವೆಂದು ಇನ್ನೂ ಹೆಚ್ಚಿನ ಖುಷಿಯಾಗುತ್ತದೆ.

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳಿಗೆ ಒಂದನೆಯದು ಜ್ಞಾನ, ಎರಡನೆಯದು ಭಕ್ತಿಯೆಂದು ತಿಳಿಸಲಾಗಿದೆ. ಡ್ರಾಮಾದಲ್ಲಿ ಇದು ನೊಂದಣಿಯಾಗಿದೆ ಮತ್ತು ಇದರ ಆದಿ-ಮಧ್ಯ-ಅಂತ್ಯವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಆದರೆ ನೀವು ಮಕ್ಕಳು ತಿಳಿದಿದ್ದೀರಿ - ಸತ್ಯಯುಗದಲ್ಲಿ ಮೃತ್ಯುವಿನ ಭಯವಿಲ್ಲ. ನಾವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕಾಗಿದೆ ಎಂಬುದು ತಿಳಿದಿರುತ್ತದೆ. ದುಃಖ ಪಡುವ, ಅಳುವ ಮಾತೇ ಇರುವುದಿಲ್ಲ ಆದರೆ ಇಲ್ಲಿ ಮೃತ್ಯುವಿನ ಭಯವಿರುತ್ತದೆ. ಆತ್ಮವು ಶರೀರವನ್ನು ಬಿಡುವುದರಿಂದ ದುಃಖವಾಗುತ್ತದೆ. ಏಕೆಂದರೆ ಮತ್ತೆ ಮತ್ತೊಂದು ಜನ್ಮವನ್ನು ಪಡೆದು ದುಃಖವನ್ನೇ ಭೋಗಿಸಬೇಕೆಂದು ಹೆದರುತ್ತದೆ. ನೀವಂತೂ ಸಂಗಮಯುಗದವರಾಗಿದ್ದೀರಿ, ನೀವೀಗ ಹಿಂತಿರುಗಿ ಹೋಗಬೇಕೆಂದು ತಿಳಿಸಿದ್ದಾರೆ. ಎಲ್ಲಿಗೆ? ಮನೆಗೆ. ಅದು ಭಗವಂತನ ಮನೆಯಲ್ಲವೆ! ಇದೇನೂ ಮನೆಯಲ್ಲ, ಎಲ್ಲಿ ಭಗವಂತನಿದ್ದಾರೆ ಮತ್ತು ನೀವು ಮಕ್ಕಳು ಆತ್ಮರಿರುತ್ತೀರೋ ಅದನ್ನೇ ಮನೆಯೆಂದು ಕರೆಯಲಾಗುತ್ತದೆ. ಅಲ್ಲಿ ಈ ಶರೀರವಿರುವುದಿಲ್ಲ. ಹೇಗೆ ಮನುಷ್ಯರು ನಾವು ಭಾರತದಲ್ಲಿರುತ್ತೇವೆ, ಮನೆಯಲ್ಲಿರುತ್ತೇವೆ ಎಂದು ಹೇಳುತ್ತಾರೆ. ಹಾಗೆಯೇ ನೀವೂ ಸಹ ಹೇಳುತ್ತೀರಿ - ನಾವೆಲ್ಲರೂ ಅರ್ಥಾತ್ ನಾವಾತ್ಮಗಳು ಅಲ್ಲಿ ನಮ್ಮ ಮನೆಯಲ್ಲಿ ಇರುತ್ತೇವೆ ಹಾಗೆಯೇ ನಿಮ್ಮ ಮನೆಯಲ್ಲಿರುತ್ತೀರಿ. ಅದು ಆತ್ಮಗಳ ಮನೆಯಾಗಿದೆ, ಇದು ಜೀವಾತ್ಮರ ಮನೆಯಾಗಿದೆ. ಅದಕ್ಕೆ ಮುಕ್ತಿಧಾಮವೆಂದು ಕರೆಯಲಾಗುತ್ತದೆ ಮನುಷ್ಯರು ಭಗವಂತನೊಂದಿಗೆ ಮಿಲನ ಮಾಡಲು ಅಲ್ಲಿಗೆ ಹೋಗಲು ಪುರುಷಾರ್ಥ ಮಾಡುತ್ತಾರೆ. ಭಗವಂತನ ಜೊತೆ ಮಿಲನ ಮಾಡಲು ಬಹಳ ಖುಷಿಯಿರಬೇಕು. ಆತ್ಮಕ್ಕೆ ಶರೀರವೇನಿದೆ, ಇದರ ಜೊತೆ ಆತ್ಮನಿಗೆ ಬಹಳ ಮೋಹ ಬಂದು ಬಿಟ್ಟಿದೆ ಆದ್ದರಿಂದ ಸ್ವಲ್ಪವೇನಾದರೂ ಕಾಯಿಲೆ ಮುಂತಾದವು ಬಂದಿತೆಂದರೆ ಭಯವಾಗುತ್ತದೆ - ಎಲ್ಲಿ ಶರೀರ ಬಿಡುತ್ತೇನೆಯೋ ಎಂದು. ಅಜ್ಞಾನ ಕಾಲದಲ್ಲಿಯೂ ಸಹ ಭಯವಿರುತ್ತದೆ. ಈ ಸಮಯ ಯಾವಾಗ ಸಂಗಮಯುಗವಿದೆ, ನಾವು ಈಗ ಹಿಂತಿರುಗಿ ತಂದೆಯ ಬಳಿ ಹೋಗಬೇಕಾಗಿದೆ ಎಂಬುದನ್ನೂ ತಿಳಿದಿದ್ದೀರಿ ಅಂದಾಗ ಇಲ್ಲಿ ಭಯದ ಮಾತೇನಿಲ್ಲ. ತಂದೆಯು ಬಹಳ ಒಳ್ಳೆಯ ಯುಕ್ತಿಯನ್ನು ತಿಳಿಸಿದ್ದಾರೆ. ಪತಿತ ಆತ್ಮಗಳಂತೂ ನನ್ನ ಬಳಿ ಮುಕ್ತಿಧಾಮದಲ್ಲಿ ಬರಲು ಸಾಧ್ಯವಿಲ್ಲ. ಅದು ಪವಿತ್ರ ಆತ್ಮರ ಮನೆಯಾಗಿದೆ, ಇದು ಮನುಷ್ಯರ ಮನೆಯಾಗಿದೆ. ಈ ಶರೀರವು ಪಂಚ ತತ್ವಗಳಿಂದ ಮಾಡಲ್ಪಟ್ಟಿರುವುದಾಗಿದೆ ಅಂದಾಗ ಪಂಚತತ್ವಗಳೂ ಇಲ್ಲಿಯೇ ಇರಲು ಆಕರ್ಷಿಸುತ್ತದೆ. ಇಲ್ಲಿರುವ ಆಕಾಶ, ಜಲ, ವಾಯು..... ಅಲ್ಲಿ ಈ ತತ್ವಗಳಿರುವುದಿಲ್ಲ. ಇದು ವಿಚಾರ ಸಾಗರ ಮಂಥನ ಮಾಡಲು ಯುಕ್ತಿಯಾಗಿದೆ. ಆತ್ಮವು ಈ ಎಲ್ಲಾ ಆಸ್ತಿಯನ್ನು ಹೊಂದಿರುವುದರಿಂದ ಈ ಶರೀರದ ಮೇಲೆ ಮೋಹ ಬಂದು ಬಿಟ್ಟಿದೆ ಇಲ್ಲವೆಂದರೆ ನಾವು ಆತ್ಮಗಳು ಅಲ್ಲಿ ಇರುವವರಾಗಿದ್ದೇವೆ. ಮತ್ತೆ ಅಲ್ಲಿಗೆ ಹೋಗಲು ಈಗ ಪುರುಷಾರ್ಥ ಮಾಡುತ್ತಿದ್ದೇವೆ. ಯಾವಾಗ ನೀವು ಪವಿತ್ರ ಆತ್ಮಗಳು ಆಗಿ ಬಿಡುತ್ತೀರೋ ಆಗ ಮತ್ತೆ ನಿಮಗೆ ಸುಖ ಸಿಗುತ್ತದೆ ದುಃಖದ ಮಾತೇ ಇರುವುದಿಲ್ಲ. ಈ ಸಮಯವು ಇದು ದುಃಖಧಾಮವಾಗಿದೆ. ಮೇಲಿನಿಂದ ಕೆಳಗೆ ಬಂದು ಪಾತ್ರವನ್ನಭಿನಯಿಸಲು ಪಂಚ ತತ್ವಗಳೂ ಸೆಳೆಯುತ್ತವೆ. ಶರೀರವನ್ನಂತೂ ಅವಶ್ಯವಾಗಿ ಪಡೆಯಬೇಕಾಗಿದೆ ಇಲ್ಲವೆಂದರೆ ಆಟವು ನಡೆಯಲು ಸಾಧ್ಯವಿಲ್ಲ. ಈ ದುಃಖ ಮತ್ತು ಸುಖದ ಆಟವು ಮಾಡಲ್ಪಟ್ಟಿದೆ. ಯಾವಾಗ ನೀವು ಸುಖದಲ್ಲಿರುತ್ತೀರೋ ಆಗ ಪಂಚತತ್ವದ ಶರೀರದೊಂದಿಗೆ ಮಮತ್ವವಿರುವುದಿಲ್ಲ. ಅಲ್ಲಂತೂ ಪವಿತ್ರರಾಗಿರುತ್ತೀರಿ. ಶರೀರದಲ್ಲಿ ಇಷ್ಟೊಂದು ಮಮತ್ವವಿರುವುದಿಲ್ಲ. ಈ ಪಂಚತತ್ವದ ಮಮತ್ವವನ್ನೂ ಸಹ ಬಿಟ್ಟು ಬಿಡುತ್ತೀರಿ. ನಾವು ಪವಿತ್ರರಾದಾಗ ಅಲ್ಲಿ ಶರೀರವೂ ಸಹ ಯೋಗ ಬಲದಿಂದ ಆಗುತ್ತದೆ ಆದ್ದರಿಂದ ಮಾಯೆಯು ಆಕರ್ಷಿಸುವುದಿಲ್ಲ. ನಮ್ಮ ಆ ಶರೀರ ಯೋಗ ಬಲದಿಂದ ಪಡೆದಂತಾಗಿರುವುದಾಗಿದೆ, ಆದ್ದರಿಂದ ದುಃಖವೇ ಇರುವುದಿಲ್ಲ. ಡ್ರಾಮಾ ಹೇಗೆ ಅದ್ಭುತವಾಗಿ ಮಾಡಲ್ಪಟ್ಟಿದೆ ಇದೂ ಸಹ ಬಹಳ ಸೂಕ್ಷ್ಮವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಯಾರು ಒಳ್ಳೆಯ ಬುದ್ಧಿವಂತರಿದ್ದಾರೆ ಮತ್ತು ಸೇವೆಯಲ್ಲಿ ತತ್ಪರರಾಗಿರುತ್ತಾರೆಯೋ ಅವರೇ ಚೆನ್ನಾಗಿ ತಿಳಿಸಲು ಸಾಧ್ಯ. ತಂದೆಯು ತಿಳಿಸುತ್ತಾರೆ- ಧನವನ್ನು ಕೊಟ್ಟರೆ ಧನವು ಕಡಿಮೆಯಾಗುವುದಿಲ್ಲ, ದಾನ ಮಾಡುತ್ತೀರೆಂದರೆ ಧಾರಣೆಯೂ ಸಹ ಆಗುವುದು ಇಲ್ಲವೆಂದರೆ ಧಾರಣೆಯಾಗುವುದು ಕಷ್ಟವಾಗುತ್ತದೆ. ಬರೆಯುವುದರಿಂದ ಧಾರಣೆಯಾಗುತ್ತದೆ ಎಂದು ತಿಳಿಯಬೇಡಿ. ಹಾ! ಬರೆದುಕೊಂಡು ಅನ್ಯರ ಕಲ್ಯಾಣಕ್ಕಾಗಿ ಕಳುಹಿಸಿಕೊಡುತ್ತೀರಿ ಅಂದಾಗ ಅದು ಬೇರೆ ಮಾತಾಗಿದೆ. ತನಗಂತೂ ಯಾವುದೇ ಕೆಲಸಕ್ಕೆ ಬರುವುದಿಲ್ಲ. ಕೆಲವರಂತೂ ಕಾಗದದಲ್ಲಿ ಬರೆದುಕೊಂಡು ವ್ಯರ್ಥವಾಗಿ ಎಸೆಯುತ್ತಾರೆ. ನಾನು ಬರೆದುಕೊಳ್ಳುತ್ತೇನೆ ಆದರೆ ಅದು ಮತ್ತೆ ಕೆಲಸಕ್ಕೆ ಬರುತ್ತದೆಯೇ? ಎಂಬುದು ತನ್ನಲ್ಲಿ ತಿಳುವಳಿಕೆಯಿರಬೇಕು. ಬರೆದುಕೊಂಡು ಎಸೆಯುತ್ತೀರೆಂದರೆ ಅದರಿಂದಾಗುವ ಲಾಭವೇನಿದೆ? ಇದರಿಂದಲೂ ಸಹ ಆತ್ಮವು ತನ್ನನ್ನು ಮೋಸ ಮಾಡಿಕೊಂಡ ಹಾಗೆ. ಇದು ಧಾರಣೆ ಮಾಡಿಕೊಳ್ಳಬೇಕಾಗಿದೆ. ತಂದೆಯು ಬರೆದಿರುವುದನ್ನು ಕಂಠ ಪಾಠ ಮಾಡುತ್ತಾರೇನು! ತಂದೆಯಂತೂ ನಿತ್ಯವೂ ತಿಳಿಸಿಕೊಡುತ್ತಿರುತ್ತಾರೆ. ಮೊಟ್ಟ ಮೊದಲು ನಿಮ್ಮ ತಂದೆಯ ಜೊತೆ ನಿಮ್ಮ ಸಂಬಂಧವಿರಲಿ, ತಂದೆಯ ನೆನಪಿನಿಂದಲೇ ನಿಮ್ಮ ಆತ್ಮವು ಪವಿತ್ರವಾಗಿ ಬಿಡುತ್ತದೆ. ಮತ್ತೆ ಅಲ್ಲಿಯೂ ಸಹ ನೀವು ಪವಿತ್ರರಾಗಿರುತ್ತೀರಿ. ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿರುತ್ತದೆ ನಂತರ ಆ ಶಕ್ತಿಯು ಸಮಾಪ್ತಿಯಾಗಿ ಬಿಡುತ್ತದೆಯೆಂದರೆ ಪಂಚ ತತ್ವಗಳ ಶಕ್ತಿ ಆತ್ಮನನ್ನು ಸೆಳೆಯುತ್ತದೆ. ಆತ್ಮವು ಮನೆಗೆ ಹೋಗಲು ಶರೀರವನ್ನು ಬಿಡುವ ಮನಸ್ಸಾಗುತ್ತದೆ. ನೀವು ಪಾವನರಾಗಿ ಬೆಣ್ಣೆಯಿಂದ ಕೂದಲನ್ನು ತೆಗೆದ ಹಾಗೆ ಶರೀರವನ್ನು ನೀವು ಬಿಡುತ್ತೀರಿ. ನೀವು ಮಕ್ಕಳು ಶರೀರ ಸಹಿತವಾಗಿ ಎಲ್ಲಾ ವಸ್ತುಗಳೊಂದಿಗೆ ಮಮತ್ವವನ್ನು ತೆಗೆದು ಹಾಕಬೇಕು. ನಾವು ಆತ್ಮಗಳು ಶರೀರವಿಲ್ಲದೆ ಬಂದಿದ್ದೆವು, ನಾವು ಪವಿತ್ರರಾಗಿದ್ದೆವು, ಈ ಪ್ರಪಂಚದ ಜೊತೆ ಮಮತ್ವವಿರಲಿಲ್ಲ. ಅಲ್ಲಿ ಶರೀರವನ್ನು ಬಿಟ್ಟರೆ ಯಾರೂ ಅಳುವುದೇ ಇಲ್ಲ, ಯಾವುದೇ ಕಷ್ಟವಿರುವುದಿಲ್ಲ, ಕಾಯಿಲೆಯೂ ಇರುವುದಿಲ್ಲ. ಶರೀರದೊಂದಿಗೆ ಮಮತ್ವವಿರುವುದಿಲ್ಲ. ಹೇಗೆ ಆತ್ಮವು ಪಾತ್ರವನ್ನಭಿನಯಿಸುತ್ತದೆ, ಒಂದು ಶರೀರಕ್ಕೆ ವಯಸ್ಸಾದರೆ ಮತ್ತೆ ಮತ್ತೊಂದನ್ನು ಪಾತ್ರವನ್ನಭಿನಯಿಸಲು ತೆಗೆದುಕೊಳ್ಳುತ್ತದೆ. ತಂದೆಯು ನನ್ನನ್ನು ನೆನಪು ಮಾಡಿರಿ ಎಂದು ಹೇಳುತ್ತಾರೆ, ಈ ಜ್ಞಾನವು ಬುದ್ಧಿಯಲ್ಲಿದೆ. ಪವಿತ್ರರಾಗಿ ಬರಬೇಕೆಂದು ತಂದೆಯು ತಿಳಿಸುತ್ತಾರೆ. ಈಗಂತೂ ಎಲ್ಲರೂ ಪತಿತರಾಗಿದ್ದಾರೆ ಆದ್ದರಿಂದ ಪಂಚತತ್ವದ ಶರೀರದೊಂದಿಗೆ ಮೋಹವಿದೆ, ಇದನ್ನು ಬಿಟ್ಟು ಹೋಗಲು ಮನಸ್ಸೇ ಬರುವುದಿಲ್ಲ. ಇಲ್ಲವೆಂದರೆ ವಿವೇಕವು ಹೇಳುತ್ತದೆ - ಶರೀರವನ್ನು ಬಿಟ್ಟು ನಾವು ತಂದೆಯ ಬಳಿಗೆ ಹೋಗಬೇಕು. ನಾವು ಪಾವನರಾಗಿ ತಂದೆಯ ಬಳಿ ಹೋಗಬೇಕೆಂದು ಪುರುಷಾರ್ಥವನ್ನು ಮಾಡುತ್ತೇವೆ. ತಂದೆಯು ನೀವು ನನ್ನವರಾಗಿದ್ದಿರಿ, ಈಗ ಮತ್ತೆ ನನ್ನನ್ನು ನೆನಪು ಮಾಡಿದ್ದೇ ಆದರೆ ಆತ್ಮವು ಪವಿತ್ರವಾಗುತ್ತದೆ ಮತ್ತೆ ಈ ಶರೀರವನ್ನು ಧಾರಣೆ ಮಾಡುವುದರಲ್ಲಿಯೂ ಸಹ ಕಷ್ಟವಾಗುವುದಿಲ್ಲವೆಂದು ತಂದೆಯು ತಿಳಿಸುತ್ತಾರೆ. ಹೇಗೆ ಶರೀರದೊಂದಿಗೆ ಮೋಹವಿದೆಯೆಂದರೆ ವೈದ್ಯರನ್ನು ಕರೆಯುತ್ತಾರೆ. ನಾವು ತಂದೆಯ ಬಳಿಗೆ ಹೋಗುತ್ತೇವೆಂದು ನಿಮಗೆ ಖುಷಿಯಾಗಬೇಕು. ಈ ಶರೀರದೊಂದಿಗೆ ನಮ್ಮದು ಯಾವುದೇ ಸಂಬಂಧವಿಲ್ಲ. ಈ ಶರೀರವಂತೂ ಪಾತ್ರವನ್ನಭಿನಯಿಸಲು ಸಿಕ್ಕಿದೆ. ಅಲ್ಲಿಯಾದರೂ ಆತ್ಮ ಮತ್ತು ಶರೀರವೆರಡೂ ಸಹ ಬಹಳ ಆರೋಗ್ಯವಾಗಿರುತ್ತದೆ. ದುಃಖದ ಹೆಸರೇ ಇರುವುದಿಲ್ಲ ಅಂದಾಗ ಮಕ್ಕಳು ಎಷ್ಟೊಂದು ಪುರುಷಾರ್ಥವನ್ನು ಮಾಡಬೇಕು. ಈಗ ನಾವು ತಂದೆಯ ಬಳಿಗೆ ಹೋಗುತ್ತೇವೆ ಅಂದಾಗ ಈ ಶರೀರವನ್ನೇಕೆ ಬಿಟ್ಟು ಹೋಗಬಾರದು. ಆದರೆ ಎಲ್ಲಿಯವರೆಗೂ ಬುದ್ಧಿಯನ್ನು ಜೋಡಿಸಿ ಪವಿತ್ರರಾಗುವುದಿಲ್ಲವೋ, ಕರ್ಮಾತೀತ ಸ್ಥಿತಿಯಿಲ್ಲವೆಂದರೆ ಹೋಗಲು ಸಾಧ್ಯವಿಲ್ಲ. ಈ ವಿಚಾರವು ಅಜ್ಞಾನಿ ಮನುಷ್ಯರಿಗೆ ಬರಲು ಸಾಧ್ಯವಿಲ್ಲ. ಆದರೆ ನಾವು ಈಗ ಹೋಗಬೇಕಾಗಿದೆ ಎಂಬುದು ನೀವು ಮಕ್ಕಳಿಗೆ ಬರುತ್ತದೆ. ಮೊದಲು ಆತ್ಮನಲ್ಲಿ ಶಕ್ತಿಯಿತ್ತು, ಖುಷಿಯಿತ್ತು, ಎಂದೂ ಸಹ ಭಯವಿರಲಿಲ್ಲ, ಇಲ್ಲಿ ದುಃಖವಿದೆ ಆದ್ದರಿಂದ ಮನುಷ್ಯರು ಭಕ್ತಿಯನ್ನು ಮಾಡುತ್ತಾರೆ ಆದರೆ ಹಿಂತಿರುಗಿ ಹೋಗುವ ದಾರಿಯನ್ನಂತೂ ತಿಳಿದುಕೊಂಡಿಲ್ಲ. ಹೋಗುವ ದಾರಿಯನ್ನು ಒಬ್ಬ ತಂದೆಯೇ ತಿಳಿಸುತ್ತಾರೆ. ನಾವು ತಂದೆಯ ಬಳಿಗೆ ಹೋಗುತ್ತೇವೆಂದು ಖುಷಿಯಾಗುತ್ತದೆ. ತಂದೆಯು ತಿಳಿಸುತ್ತಾರೆ- ಇಲ್ಲಿ ನಿಮಗೆ ಶರೀರದೊಂದಿಗೆ ಮೋಹವಿದೆ. ಈ ಮೋಹವನ್ನು ತೆಗೆದುಹಾಕಿ, ಈ ಶರೀರವು ಪಂಚತತ್ವಗಳಿಂದ ಕೂಡಿದೆ, ಇದೆಲ್ಲವೂ ಮಾಯೆಯಾಗಿದೆ. ಈ ಕಣ್ಣಿನಿಂದ ಆತ್ಮವು ಏನೆಲ್ಲವನ್ನೂ ನೋಡುತ್ತದೆಯೋ ಅದು ಮಾಯೆಯ ಮಾಯೆಯಾಗಿದೆ. ಇಲ್ಲಿ ಪ್ರತಿಯೊಂದು ವಸ್ತುವಿನಿಂದಲೂ ದುಃಖವಿದೆ, ಎಷ್ಟೊಂದು ಕೊಳಕಿದೆ, ಸ್ವರ್ಗದಲ್ಲಂತೂ ಶರೀರವೂ ಫಸ್ಟ್ ಕ್ಲಾಸ್, ಮಹಲ್ ಸಹ ಫಸ್ಟ್ ಕ್ಲಾಸ್ ಆಗಿರುವಂತದ್ದೇ ಸಿಗುತ್ತದೆ ಅಂದಾಗ ಅಲ್ಲಿ ದುಃಖದ ಮಾತೇ ಇರುವುದಿಲ್ಲ. ಹೇಗೆ ಮಾಡಲ್ಪಟ್ಟಂತಹ ಆಟವಾಗಿದೆಯೋ ಇದೆಲ್ಲಾ ವಿಚಾರಗಳು ಬರಬೇಕಲ್ಲವೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಬೇರೆ ಏನನ್ನೂ ತಿಳಿದುಕೊಳ್ಳಲಿಲ್ಲವೆಂದರೆ ತಂದೆಯನ್ನು ನೆನಪು ಮಾಡಿದ್ದೇ ಆದರೆ ವಿಕರ್ಮ ವಿನಾಶವಾಗುತ್ತದೆ, ಸ್ವರ್ಗದಲ್ಲಿ ಹೋಗುತ್ತೀರಿ. ನಾವಂತೂ ಆತ್ಮರಾಗಿದ್ದೇವೆ, ಈ ಶರೀರರೂಪಿ ವಸ್ತ್ರವು ನಂತರದಲ್ಲಿ ಸಿಕ್ಕಿದೆ ಅಂದಾಗ ಈ ಶರೀರದೊಂದಿಗೆ ಏಕೆ ಸಿಲುಕಿಕೊಳ್ಳಬೇಕು? ಇದಕ್ಕೆ ರಾವಣರಾಜ್ಯವೆಂದು ಕರೆಯಲಾಗುತ್ತದೆ. ರಾವಣ ರಾಜ್ಯದಲ್ಲಿ ದುಃಖವೇ ದುಃಖವಿರುತ್ತದೆ, ಸತ್ಯಯುಗದಲ್ಲಿ ದುಃಖದ ಮಾತೇ ಇರುವುದಿಲ್ಲ. ತಂದೆಯ ನೆನಪಿನಿಂದ ನಾವು ಶಕ್ತಿಯನ್ನು ಪಡೆದುಕೊಳ್ಳುತ್ತೇವೆ ಏಕೆಂದರೆ ಬಲಹೀನರಾಗಿ ಬಿಟ್ಟಿದ್ದೇವೆ. ದೇಹಾಭಿಮಾನವು ಎಲ್ಲದಕ್ಕಿಂತಲೂ ನಿರ್ಬಲನನ್ನಾಗಿ ಮಾಡುವಂತದ್ದಾಗಿದೆ ಅಂದಾಗ ತಂದೆಯು ತಿಳಿಸುತ್ತಾರೆ, ಈ ಡ್ರಾಮಾ ಮಾಡಲ್ಪಟ್ಟಿರುವುದಾಗಿದೆ, ಇದಂತೂ ನಿಂತು ಹೋಗಲು ಸಾಧ್ಯವಿಲ್ಲ. ಮೋಕ್ಷ ಮುಂತಾದವುದರ ಮಾತೇ ಇಲ್ಲ. ಇದು ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ. ಏತಕ್ಕಾಗಿ ಚಿಂತಿಸಬೇಕು.....! ಎಂದೂ ಸಹ ಹೇಳುತ್ತಾರೆ. ಯಾವುದು ಕಳೆದುಹೋಯಿತು ಅದು ಮತ್ತೆ ಆಗಲೇಬೇಕಾಗಿದೆ ಚಿಂತೆಯ ಮಾತೇ ಇಲ್ಲ. ಸತ್ಯಯುಗದಲ್ಲಿ ಕೆಟ್ಟದ್ದು ಯಾವುದೂ ಇರುವುದಿಲ್ಲ. ಇಲ್ಲಂತೂ ಚಿಂತೆಯಿಂದೆ, ಇದು ಡ್ರಾಮಾ ಎಂದು ತಂದೆಯು ತಿಳಿಸುತ್ತಾರೆ. ನೀವು ಹೀಗೆ ನನ್ನ ಬಳಿ ತಲುಪುತ್ತೀರಿ ಎಂದು ತಂದೆಯು ದಾರಿಯನ್ನು ತೋರಿಸಿದ್ದಾರೆ. ಬೆಣ್ಣೆಯಲ್ಲಿನ ಕೂದಲನ್ನು ತೆಗೆದ ಹಾಗೆ. ಕೇವಲ ನೀವು ನನ್ನನ್ನು ನೆನಪು ಮಾಡಿದ್ದೇ ಆದರೆ ಪವಿತ್ರರಾಗುತ್ತೀರಿ. ಪಾವನರಾಗುವ ಯುಕ್ತಿ ಮತ್ತೇನೂ ಇಲ್ಲ. ನಾವು ರಾವಣ ರಾಜ್ಯದಲ್ಲಿ ಕುಳಿತಿದ್ದೇವೆಂದು ನೀವು ತಿಳಿದಿದ್ದೀರಿ. ಅದು ಈಶ್ವರೀಯ ರಾಜ್ಯವಾಗಿದೆ. ಈಶ್ವರೀಯ ರಾಜ್ಯ ಮತ್ತು ರಾವಣ ರಾಜ್ಯದ ಆಟವು ಇದಾಗಿದೆ. ಈಶ್ವರನು ಹೇಗೆ ಬಂದು ಸ್ಥಾಪನೆಯನ್ನು ಮಾಡುತ್ತಾನೆಂದು ಯಾರಿಗೂ ಸಹ ತಿಳಿದಿಲ್ಲ. ತಂದೆಗೆ ಜ್ಞಾನಸಾಗರನೆಂದು ಹೇಳಲಾಗುತ್ತದೆ, ಅವರೇ ಬಂದು ಎಲ್ಲವನ್ನೂ ತಿಳಿಸುತ್ತಾರೆ. ಈಗ ನೀವು ಎಲ್ಲದರ ಜ್ಞಾನವನ್ನು ತಿಳಿದುಕೊಳ್ಳುತ್ತಿದ್ದೀರಿ ಮತ್ತೆ ಎಲ್ಲಾ ಜ್ಞಾನವನ್ನು ಮರೆತು ಬಿಡುತ್ತೀರಿ. ಯಾವ ವಿದ್ಯೆಯಿಂದ ನಾವು ಪದವಿಯನ್ನು ಪಡೆಯುತ್ತೇವೆಯೋ ಅದೆಲ್ಲವೂ ಮರೆತು ಹೋಗುತ್ತದೆ. ಸ್ವರ್ಗದಲ್ಲಿ ಹೋದಿರಿ ಮತ್ತು ಈ ಎಲ್ಲಾ ಜ್ಞಾನವು ಮರೆತು ಹೋಗುತ್ತದೆ. ಭಗವಂತ ಹೇಗೆ ಡಬಲ್ ಕೀರೀಟಧಾರಿಯನ್ನಾಗಿ ಮಾಡಿದರು ಅದನ್ನೂ ಸಹ ತಿಳಿದಿರುವುದಿಲ್ಲ. ಇವರೇ ತಿಳಿದುಕೊಂಡಿರಲಿಲ್ಲ ಅಂದಾಗ ಶಾಸ್ತ್ರ ಮುಂತಾದವುಗಳನ್ನು ಓದುವಂತಹವರೂ ಸಹ ಹೇಗೆ ತಿಳಿದುಕೊಳ್ಳುತ್ತಾರೆ? ಅವರಿಗೆ ಪ್ರೇರಣೆಯೂ ಸಹ ಬರುವುದಿಲ್ಲ. ನೀವು ಬಂದು ಕೇಳುತ್ತೀರೆಂದರೆ ನಿಮಗೆ ತಕ್ಷಣ ಅರ್ಥವಾಗುತ್ತದೆ. ಇದೆಲ್ಲವೂ ಗುಪ್ತವಾಗಿದೆ. ತಂದೆಯು ಹೇಳುತ್ತಾರೆ ಕಾಣಿಸುತ್ತದೆಯೇನು! ತಿಳಿದುಕೊಳ್ಳಲು ಸಾಧ್ಯ. ಆತ್ಮನನ್ನು ನೋಡಿದ್ದೀರೇನು? ದಿವ್ಯ ದೃಷ್ಟಿಯಿಂದ ನೋಡಲು ಸಾಧ್ಯವಿದೆ. ನೋಡುವುದರಿಂದ ತಿಳಿದುಕೊಳ್ಳುವುದಾದರೂ ಏನು ಎಂದು ತಂದೆಯು ಕೇಳುತ್ತಾರೆ. ಆತ್ಮವು ಅತೀ ಸೂಕ್ಷ್ಮ ಬಿಂದುವಾಗಿದೆ, ಆತ್ಮಗಳಂತೂ ಬಹಳಷ್ಟಿದೆ. 10-20 ಸಾಕ್ಷಾತ್ಕಾರಗಳನ್ನೂ ಮಾಡಿಸುತ್ತೇವೆ ಆದರೆ ಒಂದರಿಂದಲೂ ಸ್ವಲ್ಪವೂ ತಿಳಿಯುವುದಿಲ್ಲ, ಗೊತ್ತಾಗುವುದೂ ಇಲ್ಲ. ಅನೇಕರಿಗೆ ಸಾಕ್ಷಾತ್ಕಾರವಾಗುತ್ತದೆ ಆದರೆ ಇದು ಆತ್ಮವೇ ಅಥವಾ ಪರಮಾತ್ಮನೇ ಎಂದು ಹೇಗೆ ತಿಳಿದು ಬರುತ್ತದೆ? ವ್ಯತ್ಯಾಸದ ಮಾತುಗಳು ತಿಳಿದು ಬರುವುದಿಲ್ಲ. ಕುಳಿತು-ಕುಳಿತಿದ್ದಂತೆಯೇ ಚಿಕ್ಕ-ಚಿಕ್ಕ ಆತ್ಮಗಳು ಕಾಣಿಸುತ್ತವೆ. ಇದು ಆತ್ಮವೇ ಅಥವಾ ಪರಮಾತ್ಮನೇ ಎಂದು ತಿಳಿಯಲು ಆಗುವುದಿಲ್ಲ. ಇಷ್ಟು ಚಿಕ್ಕ ಆತ್ಮದಲ್ಲಿ ಎಷ್ಟೊಂದು ಶಕ್ತಿಯಿದೆಯೆಂದು ಈಗ ನೀವು ತಿಳಿದಿದ್ದೀರಿ. ಆತ್ಮನಂತೂ ಮಾಲೀಕನಾಗಿದೆ ಅಲ್ಲವೆ! ಪಾತ್ರವನ್ನಭಿನಯಿಸಲು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಎಷ್ಟೊಂದು ಆಶ್ಚರ್ಯಕರವಾದ ಮಾತಲ್ಲವೆ! ಶರೀರಕ್ಕೆ ಕಾಯಿಲೆ ಬಂದಲ್ಲಿ ಅಥವಾ ಯಾರೇ ದಿವಾಳಿಯಾದರೆ ತಿಳಿಯುತ್ತಾರೆ - ಇದಕ್ಕಿಂತಲೂ ಶರೀರ ಬಿಡುವುದೇ ಲೇಸು, ಆತ್ಮವು ಹೊರಟು ಹೋಯಿತೆಂದರೆ ದುಃಖದ ಬಿಡುಗಡೆಯಾಗುತ್ತದೆ ಆದರೆ ಪಾಪಗಳ ಹೊರೆ ತಲೆಯ ಮೇಲೇನಿದೆ ಅದು ಹೇಗೆ ಬಿಡುಗಡೆಯಾಗುತ್ತದೆ? ನೆನಪಿನಿಂದ ವಿಕರ್ಮ ವಿನಾಶ ಮಾಡಿಕೊಳ್ಳಲೆಂದೇ ನೀವು ಪುರುಷಾರ್ಥ ಮಾಡುತ್ತೀರಿ. ರಾವಣನ ಕಾರಣದಿಂದ ಅನೇಕ ಪಾಪಗಳು ಮಾಡುತ್ತೀರಿ ಆದರೆ ತಂದೆಯು ಇದರಿಂದ ಮುಕ್ತರಾಗುವ ಯುಕ್ತಿಗಳನ್ನು ತಿಳಿಸುತ್ತಾರೆ. ನನ್ನನ್ನು ನೆನಪು ಮಾಡುತ್ತಾ ಇರಿ ಎಂದಷ್ಟೇ ಹೇಳುತ್ತಾರೆ. ನೆನಪು ಮಾಡುತ್ತಾ-ಮಾಡುತ್ತಾ ಶರೀರವನ್ನು ಬಿಡಬೇಕಾಗಿದೆ ಆಗ ನಿಮ್ಮ ಪಾಪಗಳೆಲ್ಲವೂ ಸಮಾಪ್ತಿಯಾಗುತ್ತದೆ. ನೆನಪು ಮಾಡುವುದೂ ಸಹ ಚಿಕ್ಕಮ್ಮನ ಮನೆಯಂತಲ್ಲ. ನನ್ನನ್ನು ನೆನಪು ಮಾಡುವಾಗ ಮಾಯೆಯು ನಿಮ್ಮನ್ನು ಬಹಳ ಸತಾಯಿಸುತ್ತದೆ, ಗಳಿಗೆ-ಗಳಿಗೆಯೂ ಮರೆಸಿ ಬಿಡುತ್ತದೆ. ತಂದೆಯೂ (ಬ್ರಹ್ಮಾ) ಸಹ ಇದರ ಅನುಭವವನ್ನು ತಿಳಿಸುತ್ತಾರೆ- ನಾನೂ ಬಹಳ ಪ್ರಯತ್ನ ಪಡುತ್ತೇನೆ ಆದರೆ ಮಾಯೆಯು ಬಹಳ ಅಡ್ಡಿಯುಂಟು ಮಾಡುತ್ತದೆ. ಇರುವುದೂ ಸಹ ಇಬ್ಬರೂ ಜೋಡಿಯಾಗಿ, ಜೊತೆಯಲ್ಲಿದ್ದರೂ ಸಹ ಗಳಿಗೆ-ಗಳಿಗೆ ಮರೆತು ಹೋಗುತ್ತೇನೆ, ನೆನಪು ಮಾಡುವುದು ಬಹಳ ಪರಿಶ್ರಮವಾಗಿದೆ. ಕ್ಷಣ-ಕ್ಷಣವೂ ಅವರೂ-ಇವರೂ ನೆನಪಿಗೆ ಬರುತ್ತಿರುತ್ತಾರೆ ನೀವಂತೂ ಬಹಳ ಚೆನ್ನಾಗಿ ಪುರುಷಾರ್ಥ ಮಾಡುತ್ತೀರಿ. ಕೆಲವರಂತೂ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಾರೆ. 10-15 ದಿನ ಚಾರ್ಟ್ನ್ನು ಬರೆದು ಬಿಟ್ಟು ಬಿಡುತ್ತಾರೆ. ಇದರಲ್ಲಿ ಬಹಳ ಎಚ್ಚರದಿಂದಿರಬೇಕಾಗಿದೆ. ಯಾವಾಗ ಪವಿತ್ರರಾಗುತ್ತೀರೋ ಆಗ ಕರ್ಮಾತೀತ ಸ್ಥಿತಿಯನ್ನು ತಲುಪಿ ಜಯಿಸುತ್ತೇವೆಂದು ತಿಳಿದಿದ್ದೀರಿ. ಇದು ಈಶ್ವರೀಯ ಲಾಟರಿಯಾಗಿದೆ. ತಂದೆಯನ್ನು ನೆನಪು ಮಾಡುವುದು- ಇದೇ ನೆನಪಿನ ಸಂಬಂಧವಾಗಿದೆ, ಇದು ಬುದ್ಧಿಯಿಂದ ತಿಳಿಯುವ ಮಾತಾಗಿದೆ. ನಾವು ತಂದೆಯನ್ನು ನೆನಪು ಮಾಡುತ್ತೇವೆಂದು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ- ಇವರಿಗೆ ನೆನಪು ಮಾಡುವುದೇ ಬರುವುದಿಲ್ಲ. ಪದವಿಯಲ್ಲಿಯೂ ವ್ಯತ್ಯಾಸವಾಗುತ್ತದೆ ಅಲ್ಲವೆ. ರಾಜ್ಯ ಸ್ಥಾಪನೆಯಾಗಿದೆ ಎಂದು ನೀವು ತಿಳಿದಿದ್ದೀರಿ. ನೀವು ಅನೇಕ ಬಾರಿ ರಾಜ್ಯವನ್ನು ಮಾಡಿದ್ದೀರಿ ನಂತರ ಕಳೆದುಕೊಂಡಿದ್ದೀರಿ. ತಂದೆಯು ಪ್ರತೀ 5000 ವರ್ಷದ ನಂತರ ಓದಿಸುತ್ತಾರೆ ನಂತರ ರಾವಣ ರಾಜ್ಯದಲ್ಲಿ ವಾಮ ಮಾರ್ಗದಲ್ಲಿ ನೀವು ಹೋಗುತ್ತೀರಿ. ಯಾರು ದೇವತೆಗಳಾಗಿದ್ದರೋ ಅವರೇ ನಂತರ ವಾಮ ಮಾರ್ಗದಲ್ಲಿ ಬೀಳುತ್ತಾರೆ ಆದ್ದರಿಂದ ತಂದೆಯು ಗುಹ್ಯವಾದ ಮಾತುಗಳನ್ನು ತಿಳಿಸುತ್ತಾರೆ- ತಂದೆಯನ್ನು ನೆನಪು ಮಾಡಿ. ಇದಂತೂ ಬಹಳ ಸಹಜವಾಗಿದೆ. ಶರೀರವನ್ನು ತ್ಯಜಿಸಿ ತಂದೆಯನ್ನು ನೆನಪು ಮಾಡಬೇಕಾಗಿದೆ, ತಂದೆಯನ್ನು ತಿಳಿದಾಗಲೇ ಯೋಗ ಬಲದಿಂದ ವಿಕರ್ಮ ವಿನಾಶವಾಗುತ್ತದೆ. ಇದಂತೂ ಅಂತಿಮ ಸಮಯದಲ್ಲಿಯೇ ಆಗುತ್ತದೆ ಆದರೆ ಯಾರೂ ಸಹ ಹಿಂತಿರುಗಿ ಬರಲು ಸಾಧ್ಯವಿಲ್ಲ. ಭಲೇ ಯಾರೇ ಏನೇ ಮಾಡಲಿ ಯಥಾರ್ಥ ಯೋಗವನ್ನಂತೂ ನಾನೇ ಬಂದು ಕಲಿಸಿಕೊಡುತ್ತೇನೆ ನಂತರ ಅರ್ಧಕಲ್ಪ ಯೋಗ ಬಲದಿಂದ ನಡೆಯುತ್ತದೆ. ಅಲ್ಲಂತೂ ಅಪಾರ ಸುಖವನ್ನು ಭೋಗಿಸುತ್ತೀರಿ. ಭಕ್ತಿ ಮಾರ್ಗದಲ್ಲಿ ಮನುಷ್ಯರು ಏನೆಲ್ಲಾ ಮಾಡುತ್ತಾರೆ ಅಂದಾಗ ತಂದೆಯು ಬಂದು ಜ್ಞಾನವನ್ನು ತಿಳಿಸಿದಾಗ ಭಕ್ತಿಯಿರುವುದಿಲ್ಲ. ಜ್ಞಾನದಿಂದ ದಿನ (ಬೆಳಕು)ವಾಗಿ ಬಿಡುತ್ತದೆ ನಂತರ ಇಲ್ಲಿ ಯಾವುದೇ ಕಷ್ಟವಿರುವುದಿಲ್ಲ. ಭಕ್ತಿಯು ರಾತ್ರಿಯಾಗಿರುವ ಕಾರಣ ಅಲೆಯುತ್ತಾ ಇರುತ್ತೇವೆ. ಅಲ್ಲಂತೂ ದುಃಖದ ಮಾತೇ ಇಲ್ಲ. ಈ ಎಲ್ಲಾ ಮಾತುಗಳು ಯಾರು ಇಲ್ಲಿಯವರಾಗಿರುತ್ತಾರೆಯೋ ಅವರ ಬುದ್ಧಿಯಲ್ಲಿ ಈ ಮಾತುಗಳು ಬರುತ್ತವೆ. ಇದು ಬಹಳ ಸೂಕ್ಷ್ಮ ಮಾತುಗಳಾಗಿವೆ, ಅದ್ಭುತವಾದ ಜ್ಞಾನವಾಗಿದೆ. ಇದನ್ನು ತಂದೆಯ ವಿನಃ ಬೇರೆ ಯಾರೂ ತಿಳಿಸಲು ಸಾಧ್ಯವಿಲ್ಲ. ಬಹಳ ಕಡಿಮೆ ಮಂದಿ ತಿಳಿದುಕೊಳ್ಳುವವರು ಇರುತ್ತಾರೆ ಅಂದಾಗ ಇದೂ ಸಹ ಡ್ರಾಮಾದಲ್ಲಿ ನೊಂದಣಿಯಾಗಿದೆ. ಅದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಮನುಷ್ಯನಂತೂ ತಿಳಿಯುತ್ತಾನೆ- ಪರಮಾತ್ಮ ಏನು ಮಾಡಲು ಸಾಧ್ಯವಿಲ್ಲ! ಆದರೆ ಭಗವಂತನಂತೂ ಬರುವುದೇ ಒಂದು ಬಾರಿ, ಬಂದು ನಿಮಗೆ ಸ್ವರ್ಗಕ್ಕೆ ಹೋಗುವ ಮಾರ್ಗವನ್ನು ತಿಳಿಸುತ್ತಾರೆ. ಈಗ ನೀವು ಮಕ್ಕಳು ಎಷ್ಟೊಂದು ವಿಶಾಲ ಬುದ್ಧಿಯವರಾಗಿದ್ದೀರಿ. ಇಲ್ಲಿ ಇಬ್ಬರೂ ಜೊತೆಯಲ್ಲಿದ್ದಾರೆ. ಇವರೂ (ಬ್ರಹ್ಮಾ) ಸಹ ಯಾರನ್ನೇ ನೋಡುತ್ತಾರೆಂದರೆ, ಶಾಂತಿಯ ದಾನವನ್ನು ಮಾಡುವುದೇ ಎಂದು ತಿಳಿಯುತ್ತಾರೆ. ನೋಡುವುದರಿಂದ ತಿಳಿಯುತ್ತಾರೆ- ಇವರು ನಮ್ಮ ಕುಲದವರೇ ಅಥವಾ ಇಲ್ಲವೇ? ಸೇವಾಧಾರಿ ಮಕ್ಕಳ ಕೆಲಸವೇ ಆಗಿದೆ- ನಾಡಿ ನೋಡುವುದು. ಒಂದು ವೇಳೆ ನಮ್ಮ ಕುಲದವರಾಗಿದ್ದಾರೆಂದರೆ ಶಾಂತವಾಗಿ ಬಿಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಪಾವನರಾಗಿ ತಂದೆಯ ಜೊತೆ ಮನೆಗೆ ಹೋಗಲು ಈ ಪಂಚತತ್ವಗಳ ಶರೀರ(ಗೊಂಬೆ) ದೊಂದಿಗೆ ಮಮತ್ವವನ್ನಿಡಬಾರದು. ಶರೀರವನ್ನು ಬಿಡುವ ಭಯವನ್ನು ಬಿಡಬೇಕಾಗಿದೆ.

2. ನೆನಪಿನ ಯಾತ್ರೆಯ ಚಾರ್ಟನ್ನು ಬಹಳ ಬುದ್ಧಿವಂತಿಕೆಯಿಂದ ವೃದ್ಧಿ ಮಾಡಿಕೊಳ್ಳುತ್ತಿರಬೇಕಾಗಿದೆ. ಯೋಗ ಬಲದಿಂದ ಆತ್ಮವನ್ನು ಪಾವನವನ್ನಾಗಿ ಮಾಡಿ, ಕರ್ಮಾತೀತರಾಗಿ ಈಶ್ವರೀಯ ಲಾಟರಿಯನ್ನು ಗೆಲ್ಲಬೇಕಾಗಿದೆ.


ವರದಾನ:
ಮನಸ್ಸು ಮತ್ತು ಬುದ್ಧಿಯನ್ನು ವ್ಯರ್ಥದಿಂದ ಮುಕ್ತವಾಗಿರಿಸಿ ಬ್ರಾಹ್ಮಣ ಸಂಸ್ಕಾರ ಮಾಡಿಕೊಳ್ಳುವಂತಹ ರೂಲರ್ (ಆಡಳಿತಾಧಿಕಾರಿ) ಭವ.

ಯಾವುದೇ ಸಣ್ಣ ವ್ಯರ್ಥ ಮಾತು, ವ್ಯರ್ಥ ವಾತಾವರಣ ಹಾಗೂ ವ್ಯರ್ಥ ದೃಷ್ಯದ ಫ್ರಭಾವ ಮೊದಲು ಮನಸ್ಸಿನ ಮೇಲೆ ಬೀಳುವುದು ನಂತರ ಬುದ್ಧಿ ಅದಕ್ಕೆ ಸಹಯೋಗ ನೀಡುವುದು. ಮನಸ್ಸು ಮತ್ತು ಬುದ್ಧಿ ಒಂದು ವೇಳೆ ಅದೇ ಪ್ರಕಾರದಲ್ಲಿ ನಡೆಯುತ್ತಿದ್ದರೆ ಅದರಿಂದ ಸಂಸ್ಕಾರವಾಗಿ ಬಿಡುವುದು. ನಂತರ ಭಿನ್ನ-ಭಿನ್ನ ಸಂಸ್ಕಾರಗಳು ಕಂಡು ಬರುವುದು, ಯಾವುದೂ ಬ್ರಾಹ್ಮಣ ಸಂಸ್ಕಾರವೇ ಅಲ್ಲ. ಯಾವುದೇ ವ್ಯರ್ಥ ಸಂಸ್ಕಾರದ ವಶ ಆಗುವುದು, ತಮ್ಮಲ್ಲಿಯೇ ಯುದ್ಧ ಮಾಡುವುದು, ಗಳಿಗೆ-ಗಳಿಗೆ ಖುಷಿ ಕಳೆದುಕೊಳ್ಳುವುದು-ಇದು ಕ್ಷತ್ರಿಯತನದ ಸಂಸ್ಕಾರವಾಗಿದೆ. ಬ್ರಾಹ್ಮಣ ಅರ್ಥಾತ್ ರೂಲರ್( ಸ್ವಯಂ ನ ರಾಜ) ವ್ಯರ್ಥ ಸಂಸ್ಕಾರಗಳಿಂದ ಮುಕ್ತರಾಗುವಿರಿ, ಪರವಶ ಅಲ್ಲ.

ಸ್ಲೋಗನ್:
ಮಾಸ್ಟರ್ ಸರ್ವಶಕ್ತಿವಾನ್ ಅವರೇ ಆಗಿದ್ದಾರೆ ಯಾರು ದೃಢ ಪ್ರತಿಜ್ಞೆಯಿಂದ ಸರ್ವ ಸಮಸ್ಯೆಗಳನ್ನು ಸಹಜವಾಗಿ ಪಾರು ಮಾಡುವವರು.