02.03.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಆಳವಾದ
ಶಾಂತಿಯಲ್ಲಿ ಹೋಗುವ ಅಭ್ಯಾಸ ಮಾಡಿ, ಬುದ್ಧಿಯು ತಂದೆಯ ಕಡೆಯಿದ್ದಾಗ ತಂದೆಯೂ ಸಹ ನಿಮಗೆ
ಅಶರೀರಿಯಾಗಲು ಸಕಾಶ ಕೊಡುತ್ತಾರೆ”
ಪ್ರಶ್ನೆ:
ಯಾವಾಗ ನೀವು
ಮಕ್ಕಳಿಗೆ ಜ್ಞಾನದ ಮೂರನೇ ನೇತ್ರವು ಸಿಗುತ್ತದೆ ಆಗ ಯಾವ ಸಾಕ್ಷಾತ್ಕಾರವಾಗಿ ಬಿಡುತ್ತದೆ?
ಉತ್ತರ:
ಸತ್ಯಯುಗದ
ಆದಿಯಿಂದ ಹಿಡಿದು ಕಲಿಯುಗದ ಅಂತ್ಯದವರೆಗೆ ನಾವು ಹೇಗೆ-ಹೇಗೆ ಪಾತ್ರವನ್ನಭಿನಯಿಸುತ್ತೇವೆ
ಎಂಬುದೆಲ್ಲವೂ ಸಾಕ್ಷಾತ್ಕಾರವಾಗಿ ಬಿಡುತ್ತದೆ. ನೀವು ಇಡೀ ವಿಶ್ವವನ್ನು ಆದಿಯಿಂದ ಅಂತ್ಯದವರೆಗೆ
ಅರಿತುಕೊಂಡು ಬಿಡುತ್ತೀರಿ. ಈ ರೀತಿ ಅರಿಯುವುದನ್ನೇ ಸಾಕ್ಷಾತ್ಕಾರವೆಂದು ಹೇಳಲಾಗುತ್ತದೆ. ಈಗ ನೀವು
ತಿಳಿಯುತ್ತೀರಿ - ನಾವು ದೈವೀ ಗುಣವುಳ್ಳ ದೇವತೆಗಳಾಗಿದ್ದೆವು ಮತ್ತೆ ಆಸುರೀ ಗುಣವುಳ್ಳವರಾದೆವು.
ಈಗ ಮತ್ತೆ ದೈವೀ ಗುಣವುಳ್ಳ ದೇವತೆಗಳಾಗುತ್ತಿದ್ದೇವೆ. ಈಗ ನಾವು ಹೊಸ ಪ್ರಪಂಚ ಹೊಸ ಮನೆಗೆ
ಹೋಗುತ್ತೇವೆ.
ಓಂ ಶಾಂತಿ.
ಮಕ್ಕಳು ನೆನಪಿನ ಯಾತ್ರೆಯಲ್ಲಿ ಕುಳಿತಿದ್ದೀರಿ. ಬೇಹದ್ದಿನ ತಂದೆಯು ಯಾತ್ರೆಯಲ್ಲಿ
ಕುಳಿತುಕೊಂಡಿಲ್ಲ. ಕೇವಲ ಅವರು ಮಕ್ಕಳಿಗೆ ಸಕಾಶದ ಸಹಯೋಗವನ್ನು ಕೊಡುತ್ತಿದ್ದಾರೆ ಅರ್ಥಾತ್ ಈ
ಶರೀರವನ್ನು ಮರೆಸುತ್ತಿದ್ದಾರೆ. ಮಕ್ಕಳು ಈ ಸ್ಥೂಲ ಶರೀರವನ್ನು ಮರೆಯಲೆಂದು ತಂದೆಯ ಸಹಯೋಗ
ಸಿಗುತ್ತದೆ, ಆತ್ಮಗಳಿಗೆ ಸಕಾಶ ಕೊಡುತ್ತಾರೆ ಏಕೆಂದರೆ ತಂದೆಯು ನೋಡುವುದೇ ಆತ್ಮಗಳ ಕಡೆ. ನೀವು
ಪ್ರತಿಯೊಬ್ಬರ ಬುದ್ಧಿಯು ತಂದೆಯ ಕಡೆ ಹೋಗುತ್ತದೆ. ತಂದೆಯ ಬುದ್ಧಿ ಹಾಗೂ ದೃಷ್ಟಿಯು ಮಕ್ಕಳ ಕಡೆ
ಹೋಗುತ್ತದೆ. ಅಂತರವಿದೆಯಲ್ಲವೆ. ಆಳವಾದ ಶಾಂತಿಯ ಅಭ್ಯಾಸ ಮಾಡುತ್ತೀರಿ ಶರೀರವನ್ನು ಬಿಟ್ಟು
ಭಿನ್ನರಾಗಲು ಬಯಸುತ್ತೀರಿ. ಆತ್ಮವು ತಿಳಿಯುತ್ತದೆ - ಎಷ್ಟು ನೆನಪು ಮಾಡುತ್ತಿರುತ್ತೇವೆಯೋ ಅಷ್ಟು
ಈ ಶರೀರದಿಂದ ಹೊರ ಹೋಗುತ್ತೇವೆ. ಹೇಗೆ ಸರ್ಪದ ಉದಾಹರಣೆಯನ್ನು ಕೊಡುತ್ತಾರೆ. ಯಾವ ಉದಾಹರಣೆ
ಕೊಡುತ್ತಾರೆಯೋ ಅದರಲ್ಲಿ ಏನಾದರೂ ವಿಶೇಷತೆಯಿರುತ್ತದೆ. ನಿಮಗೂ ಗೊತ್ತಿದೆ, ನಾವು ಶರೀರವನ್ನು
ಬಿಟ್ಟು ಹಿಂತಿರುಗಿ ಹೋಗುತ್ತೇವೆ ಮತ್ತೆ ಬರುತ್ತೇವೆ - ಈ ಮಾತುಗಳನ್ನು ಮತ್ತ್ಯಾರೂ ಅರಿತಿಲ್ಲ, ಈ
ನಾಟಕವನ್ನು ಯಾರೂ ತಿಳಿದುಕೊಂಡಿಲ್ಲ. ಈ ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ ಎಂಬ
ಗ್ಯಾರಂಟಿಯನ್ನೂ ಯಾರೂ ಕೊಡುವುದಿಲ್ಲ ಮತ್ತು ಈ ಮಾತುಗಳನ್ನು ಯಾರೂ ತಿಳಿಸುವುದಿಲ್ಲ. ಈಗ ನಾವು
ಹಿಂತಿರುಗಿ ಹೋಗಬೇಕಾಗಿದೆ ಎಂದು ಮಕ್ಕಳಿಗೂ ಗೊತ್ತಿದೆ. ಆತ್ಮದ ಬುದ್ಧಿಯೋಗವು ಆ ಕಡೆಯಿದೆ. ಈಗ
ನಾಟಕವು ಮುಕ್ತಾಯವಾಯಿತು, ಮನೆಗೆ ಹೋಗಬೇಕಾಗಿದೆ, ತಂದೆಯನ್ನೇ ನೆನಪು ಮಾಡಬೇಕಾಗಿದೆ ಏಕೆಂದರೆ ಅವರೇ
ಪತಿತ -ಪಾವನ ಆಗಿದ್ದಾರೆ. ಸ್ಥೂಲ ನೀರಿಗಂತೂ ಮುಕ್ತಿದಾತ, ಮಾರ್ಗದರ್ಶಕನೆಂದು ಹೇಳುವುದಿಲ್ಲ.
ಒಬ್ಬ ತಂದೆಯೇ ಮುಕ್ತಿದಾತ ಮತ್ತು ಮಾರ್ಗದರ್ಶಕನಾಗಲು ಸಾಧ್ಯ. ಇವೂ ಸಹ ಬಹಳ ತಿಳಿದುಕೊಳ್ಳುವ ಮತ್ತು
ತಿಳಿಸುವ ಮಾತುಗಳಾಗಿವೆ. ಅವರದಂತೂ ಭಕ್ತಿಯಾಗಿದೆ, ಅದರಿಂದ ಯಾರ ಕಲ್ಯಾಣವೂ ಆಗುವುದಿಲ್ಲ.
ಮಕ್ಕಳಿಗೂ ಗೊತ್ತಿದೆ - ನೀರು ಸ್ನಾನಕ್ಕಾಗಿ ಇದೆ, ಈ ಸ್ಥೂಲ ನೀರು ಎಂದೂ ಪಾವನರನ್ನಾಗಿ ಮಾಡಲು
ಸಾಧ್ಯವಿಲ್ಲ. ಆದರೆ ಅವರ ಭಾವನೆಗೆ ಫಲ ಸಿಗುತ್ತದೆ ಎಂದಲ್ಲ. ಭಕ್ತಿಮಾರ್ಗದಲ್ಲಿ ಅದರ
ಮಹತ್ವವನ್ನಿಟ್ಟಿದ್ದಾರೆ. ಇವೆಲ್ಲಾ ಮಾತುಗಳಿಗೆ ಅಂಧಶ್ರದ್ಧೆಯೆಂದು ಹೇಳಲಾಗುತ್ತದೆ. ಇಂತಹ
ಅಂಧಶ್ರದ್ಧೆಯನ್ನು ಇಟ್ಟುಕೊಳ್ಳುತ್ತಾ-ಇಟ್ಟುಕೊಳ್ಳುತ್ತಾ ಮನುಷ್ಯರಿಗೆ ಕುರುಡರ ಮಕ್ಕಳು
ಕುರುಡರೆಂದು ಬಿರುದು ಸಿಕ್ಕಿ ಬಿಡುತ್ತದೆ. ಭಗವಾನುವಾಚ ಇದೆಯಲ್ಲವೆ. ಅಂಧರು ಮತ್ತು ಕಣ್ಣಿರುವವರು
ಯಾರು ಎಂಬುದೂ ಸಹ ನಿಮಗೆ ಗೊತ್ತಿದೆ. ಈಗ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಂದೆಯ ಮೂಲಕ
ಅರಿತುಕೊಂಡಿದ್ದೀರಿ, ನೀವು ತಂದೆಯನ್ನು ಅರಿತಿದ್ದೀರಿ ಅಂದಮೇಲೆ ಸೃಷ್ಟಿಯ ಆದಿ-ಮಧ್ಯ-ಅಂತ್ಯ ಮತ್ತು
ಅದರ ಆಯಸ್ಸನ್ನೂ ಅರಿತಿದ್ದೀರಿ. ಒಂದೊಂದು ವಿಚಾರದ ಬಗ್ಗೆ ವಿಚಾರಸಾಗರ ಮಂಥನ ಮಾಡಿ ತಮಗೆ ತಾವೇ
ನಿರ್ಣಯ ತೆಗೆದುಕೊಳ್ಳಬೇಕು. ಭಕ್ತಿ ಮತ್ತು ಜ್ಞಾನದ ವ್ಯತ್ಯಾಸವಿದೆ, ಜ್ಞಾನವು ಸಂಪೂರ್ಣ
ಭಿನ್ನವಾಗಿದೆ, ಈ ಜ್ಞಾನವು ಪ್ರಸಿದ್ಧವಾಗಿದೆ. ರಾಜಯೋಗದ ವಿದ್ಯೆಯಲ್ಲವೆ. ಮಕ್ಕಳಿಗೆ ಇದೂ ಸಹ
ತಿಳಿದಿದೆ ದೇವತೆಗಳು ಸಂಪೂರ್ಣ ನಿರ್ವಿಕಾರಿಗಳಾಗಿದ್ದರು, ರಚಯಿತ ತಂದೆಯೇ ಕುಳಿತು ತಮ್ಮ
ಪರಿಚಯವನ್ನು ಕೊಡುತ್ತಾರೆ. ಅವರು ಪರಮ ಆತ್ಮನಾಗಿದ್ದಾರೆ. ಪರಮ ಆತ್ಮನನ್ನೇ ಪರಮಾತ್ಮನೆಂದು
ಹೇಳುತ್ತಾರೆ. ಆಂಗ್ಲ ಭಾಷೆಯಲ್ಲಿ ಸುಪ್ರೀಂ ಸೋಲ್ ಎಂದು ಹೇಳಲಾಗುತ್ತದೆ. ಸೋಲ್ ಅರ್ಥಾತ್ ಆತ್ಮ
ಎಂದಾಗಿದೆ. ತಂದೆಯ ಆತ್ಮವು ದೊಡ್ಡ ಗಾತ್ರದಲ್ಲಿರುವುದಿಲ್ಲ. ಹೇಗೆ ನೀವು ಆತ್ಮರಿದ್ದೀರೋ ತಂದೆಯೂ
ಸಹ ಹಾಗೆಯೇ ಇದ್ದಾರೆ. ನಿಮ್ಮ ಗಾತ್ರ ಚಿಕ್ಕದು, ತಂದೆಯು ದೊಡ್ಡ ಗಾತ್ರದಲ್ಲಿರುವುದಿಲ್ಲ. ಈ
ಜ್ಞಾನಸಾಗರ ತಂದೆಯು ಬಹಳ ಪ್ರೀತಿಯಿಂದ ಮಕ್ಕಳಿಗೆ ತಿಳಿಸುತ್ತಿರುತ್ತಾರೆ. ಪಾತ್ರವನ್ನಭಿನಯಿಸುವುದು
ಆತ್ಮವಾಗಿದೆ, ಅವಶ್ಯವಾಗಿ ಶರೀರ ಧಾರಣೆ ಮಾಡಿ ಪಾತ್ರವನ್ನಭಿನಯಿಸುತ್ತದೆ. ಆತ್ಮವಿರುವ ಸ್ಥಾನವು
ಶಾಂತಿಧಾಮವಾಗಿದೆ. ಮಕ್ಕಳಿಗೂ ತಿಳಿದಿದೆ, ಆತ್ಮಗಳು ಬ್ರಹ್ಮ ಮಹಾತತ್ವದಲ್ಲಿರುತ್ತಾರೆ. ಹೇಗೆ
ಹಿಂದೂಸ್ತಾನದಲ್ಲಿರುವವರು ತಮ್ಮನ್ನು ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ ಹಾಗೆಯೇ
ಬ್ರಹ್ಮಾಂಡದಲ್ಲಿರುವವರು ಬ್ರಹ್ಮ ತತ್ವವನ್ನೇ ಈಶ್ವರನೆಂದು ತಿಳಿದುಕೊಂಡಿದ್ದಾರೆ. ನಾಟಕದಲ್ಲಿ
ಕೆಳಗಿಳಿಯುವ ಉಪಾಯವು ನೊಂದಾವಣೆಯಾಗಿದೆ. ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಭಲೇ ಯಾರೆಷ್ಟೇ
ಪರಿಶ್ರಮ ಪಡಲಿ ಯಾವಾಗ ನಾಟಕ ಮುಕ್ತಾಯವಾಗುತ್ತದೆಯೋ ಆಗ ಎಲ್ಲಾ ಪಾತ್ರಧಾರಿಗಳು ಒಟ್ಟಿಗೆ
ಸೇರುತ್ತಾರೆ. ರಚಯಿತ, ಮುಖ್ಯ ಪಾತ್ರಧಾರಿಗಳೂ ಸಹ ಎದ್ದು ನಿಲ್ಲುತ್ತಾರೆ. ಈಗ ಈ ನಾಟಕವು
ಮುಕ್ತಾಯವಾಗುತ್ತದೆ ಎಂದು ಮಕ್ಕಳಿಗೆ ಗೊತ್ತಿದೆ, ಈ ಮಾತುಗಳನ್ನು ಯಾವುದೇ ಸಾಧು-ಸಂತ ಮೊದಲಾದವರು
ಅರಿತುಕೊಳ್ಳಲು ಸಾಧ್ಯವಿಲ್ಲ. ಈ ಆತ್ಮದ ಜ್ಞಾನವು ಯಾರಿಗೂ ಇಲ್ಲ. ಪರಮಾತ್ಮ ತಂದೆಯು ಇಲ್ಲಿ ಒಂದೇ
ಬಾರಿ ಬಂದಿದ್ದಾರೆ ಮತ್ತೆಲ್ಲರೂ ಇಲ್ಲಿ ಪಾತ್ರವನ್ನಭಿನಯಿಸಲೇಬೇಕಾಗಿದೆ. ವೃದ್ಧಿಯಾಗುತ್ತಾ
ಇರುತ್ತದೆಯಲ್ಲವೆ. ಆತ್ಮಗಳೆಲ್ಲರೂ ಎಲ್ಲಿಂದ ಬಂದರು? ಒಂದು ವೇಳೆ ಯಾರಾದರೂ ಹಿಂತಿರುಗಿ
ಹೋಗುವಂತಿದ್ದರೆ ಮತ್ತೆ ಅದೇ ಸಂಪ್ರದಯವಾಗಿ ಬಿಡುತ್ತಿತ್ತು. ಅಂದರೆ ಒಬ್ಬರು ಬಂದರು ಇನ್ನೊಬ್ಬರು
ಹೋದರು ಮತ್ತೆ ಅದರಲ್ಲಿ ಪುನರ್ಜನ್ಮವೆಂದು ಹೇಳುವುದಕ್ಕೆ ಆಗುತ್ತಿರಲಿಲ್ಲ. ಪುನರ್ಜನ್ಮವಂತೂ
ಪ್ರಾರಂಭದಿಂದಲೇ ನಡೆದು ಬರುತ್ತದೆ. ಮೊದಲ ನಂಬರಿನಲ್ಲಿ ಈ ಲಕ್ಷ್ಮೀ-ನಾರಾಯಣರಿದ್ದಾರೆ.
ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಯಾವಾಗ ಅಂತ್ಯದಲ್ಲಿ ಬಂದು ಬಿಡುತ್ತಾರೆ ಆಗ ಮತ್ತೆ ಮೊದಲ
ನಂಬರಿಗೆ ಹೋಗಬೇಕಾಗುತ್ತದೆ. ಇದರಲ್ಲಿ ಸಂಶಯದ ಮಾತಿರಲು ಸಾಧ್ಯವಿಲ್ಲ. ಸ್ವಯಂ ಆತ್ಮಗಳ ತಂದೆಯೇ
ಬಂದು ಆತ್ಮಗಳಿಗೆ ತಿಳಿಸುತ್ತಾರೆ. ಏನು ತಿಳಿಸುತ್ತಾರೆ - ತಮ್ಮ ಪರಿಚಯವನ್ನು ಕೊಡುತ್ತಾರೆ.
ಪರಮಾತ್ಮ ಯಾರೆಂಬುದು ಮೊದಲು ಗೊತ್ತಿರಲಿಲ್ಲ. ಕೇವಲ ಶಿವನ ಮಂದಿರಕ್ಕೆ ಹೋಗುತ್ತಿದ್ದೆವು ಇಲ್ಲಂತೂ
ಅನೇಕಾನೇಕ ಮಂದಿರಗಳಿವೆ. ಆದರೆ ಶಿವ ಯಾರೆಂಬುದು ಗೊತ್ತಿರಲಿಲ್ಲ. ಸತ್ಯಯುಗದಲ್ಲಿ ಮಂದಿರ, ಪೂಜೆ
ಮೊದಲಾದವುಗಳು ಇರುವುದೇ ಇಲ್ಲ. ಅಲ್ಲಿ ನೀವು ಪೂಜ್ಯ ದೇವಿ-ದೇವತೆಗಳಾಗಿದ್ದಿರಿ ಅರ್ಧಕಲ್ಪದ ನಂತರ
ಪೂಜಾರಿಗಳಾಗುತ್ತೀರಿ. ಆಗ ಅವರನ್ನು ದೇವಿ-ದೇವತೆಗಳೆಂದು ಹೇಳುವುದಿಲ್ಲ ಮತ್ತೆ ತಂದೆಯು ಬಂದು
ಪೂಜ್ಯರನ್ನಾಗಿ ಮಾಡುತ್ತಾರೆ ಮತ್ತ್ಯಾವ ದೇಶದಲ್ಲಿಯೂ ಈ ಗಾಯನವಿಲ್ಲ. ರಾಮ ರಾಜ್ಯ, ರಾವಣ
ರಾಜ್ಯವನ್ನು ಈಗ ನೀವು ತಿಳಿದುಕೊಂಡಿದ್ದೀರಿ. ರಾಮ ರಾಜ್ಯದ ಕಾಲಾವಧಿ ಎಷ್ಟೆಂಬುದನ್ನು ಸಿದ್ಧ
ಮಾಡಬೇಕು. ಇದು ನಾಟಕದವಾಗಿದೆ, ಇದನ್ನೂ ತಿಳಿಯಬೇಕು ಮತ್ತು ತಂದೆಯು ಸರ್ವಶ್ರೇಷ್ಠ ಆಗಿದ್ದಾರೆ,
ಅವರು ಜ್ಞಾನಸಾಗರ ಆಗಿದ್ದಾರೆ. ನಾವೂ ಅವರ ಮೂಲಕ ಶ್ರೇಷ್ಠಾತಿ ಶ್ರೇಷ್ಠರಾಗುತ್ತೇವೆ. ಶ್ರೇಷ್ಠ
ಪದವಿಯು ಸಿಗುತ್ತದೆ. ತಂದೆಯು ನಮಗೆ ಓದಿಸುತ್ತಾರೆಂದಮೇಲೆ ದೈವೀ ಗುಣಗಳನ್ನು ಧಾರಣೆ ಮಾಡಬೇಕು.
ಬಾಬಾ, ತಾವು ಹೀಗಿದ್ದೀರಿ ನಾವು ಹೀಗೆ ಇದ್ದೇವೆಂದು ಮಕ್ಕಳು ವರ್ಣನೆ ಮಾಡುತ್ತಾರೆ. ಈ ಸಮಯದಲ್ಲಿ
ನಿಮಗೆ ಗೊತ್ತಿದೆ, ನಾವು ಇವರಂತಹ ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ. ತಂದೆಯನ್ನು ನೆನಪು ಮಾಡದ
ವಿನಃ ಮತ್ತ್ಯಾವ ಉಪಾಯವಿಲ್ಲ. ಒಂದು ವೇಳೆ ಯಾರಿಗಾದರೂ ಬೇರೆ ಉಪಾಯ ಗೊತ್ತಿದ್ದರೆ ತಿಳಿಸಲಿ.
ಆತ್ಮವೇ ನಿರ್ವಿಕಾರಿಯಾಗುತ್ತದೆ, ಬ್ರಹ್ಮ ತತ್ವಕ್ಕೆ ಆತ್ಮವೆಂದು ಹೇಳಲು ಆಗುವುದಿಲ್ಲ ಅದು ಕೇವಲ
ಇರುವಂತಹ ಸ್ಥಾನವಾಗಿದೆ. ಮಕ್ಕಳಿಗೆ ತಿಳಿಸಲಾಗುತ್ತದೆ - ಆತ್ಮದಲ್ಲಿಯೇ ಬುದ್ಧಿಯಿದೆ, ಅದು ಯಾವಾಗ
ತಮೋಪ್ರಧಾನವಾಗಿ ಬಿಡುತ್ತದೆ ಆಗ ಬುದ್ಧಿಹೀನವಾಗಿ ಬಿಡುತ್ತದೆ. ಬುದ್ಧಿವಂತ ಮತ್ತು
ಬುದ್ಧಿಹೀನವಾಗುತ್ತದೆಯಲ್ಲವೆ! ನಿಮ್ಮ ಬುದ್ಧಿಯು ಸ್ವಚ್ಛವಾಗುತ್ತದೆ ಮತ್ತೆ ಕೊಳಕಾಗುತ್ತದೆ.
ನಿಮಗೆ ಪವಿತ್ರತೆ ಮತ್ತು ಅಪವಿತ್ರತೆಯ ಅಂತರವೂ ತಿಳಿದಿದೆ. ಅಪವಿತ್ರ ಆತ್ಮವು ಹಿಂತಿರುಗಿ ಹೋಗಲು
ಸಾಧ್ಯವಿಲ್ಲ. ಈಗ ಅಪವಿತ್ರರಿಂದ ಪವಿತ್ರರಾಗುವುದಕ್ಕಾಗಿಯೇ ಕೂಗುತ್ತಿರುತ್ತಾರೆ. ಇದೂ ನಾಟಕದಲ್ಲಿ
ನಿಗಧಿಯಾಗಿದೆ. ಈಗ ನಿಮಗೆ ಗೊತ್ತಿದೆ- ಇದು ಸಂಗಮಯುಗವಾಗಿದೆ. ತಂದೆಯು ಒಂದೇ ಬಾರಿ ಕರೆದುಕೊಂಡು
ಹೋಗಲು ಬರುತ್ತಾರೆ, ಎಲ್ಲರೂ ಹೊಸ ಪ್ರಪಂಚದಲ್ಲಿ ಹೋಗುವುದಿಲ್ಲ. ಯಾರ ಪಾತ್ರವಿಲ್ಲವೋ ಅವರು
ಶಾಂತಿಧಾಮದಲ್ಲಿರುತ್ತಾರೆ. ಆದ್ದರಿಂದ ಚಿತ್ರಗಳಲ್ಲಿಯೂ ತೋರಿಸುತ್ತಾರೆ. ಬಾಕಿ ಅನ್ಯ ಯಾವುದೆಲ್ಲಾ
ಚಿತ್ರಗಳಿವೆಯೋ ಅವು ಭಕ್ತಿಮಾರ್ಗವಾಗಿದೆ, ಇವು ಜ್ಞಾನಮಾರ್ಗವಾಗಿದೆ. ಇದರಿಂದ ಸೃಷ್ಟಿ ಚಕ್ರವು
ಹೇಗೆ ತಿರುಗುತ್ತದೆ, ನಾವು ಹೇಗೆ ಕೆಳಗಿಳಿಯುತ್ತೇವೆ 16 ಕಲೆಯಿಂದ 12 ಕಲೆಗೆ ಬರುತ್ತೇವೆ
ಎಂಬುದನ್ನು ತಿಳಿಸಲಾಗುತ್ತದೆ. ಈಗಂತೂ ಯಾವುದೇ ಕೆಲಗಳು ಉಳಿದಿಲ್ಲ. ನಂಬರ್ ವಾರಂತೂ ಇದೆಯಲ್ಲವೆ!
ಪಾತ್ರಧಾರಿಗಳೂ ಸಹ ನಂಬರ್ವಾರ್ ಆಗಿರುತ್ತಾರೆ. ಕೆಲವರ ಸಂಬಳ ಒಂದು ಸಾವಿರ, ಕೆಲವರದು 1500,
ಕೆಲವರ 100 ರೂ.ಗಳು ಎಷ್ಟೊಂದು ಅಂತರವಾಯಿತು. ವಿದ್ಯೆಯಲ್ಲಿಯೂ ಸಹ ಎಷ್ಟೊಂದು ರಾತ್ರಿ-ಹಗಲಿನ
ಅಂತರವಿದೆ. ಆ ಶಾಲೆಯಲ್ಲಿ ಯಾರೇ ಅನುತ್ತೀರ್ಣರಾದರೆ ಪುನಃ ಓದಬೇಕಾಗುತ್ತದೆ. ಆದರೆ ಇಲ್ಲಿ ಪುನಃ
ಓದುವ ಮಾತೇ ಇಲ್ಲ, ಪದವಿಯು ಕಡಿಮೆಯಾಗಿ ಬಿಡುತ್ತದೆ ಮತ್ತೆಂದೂ ವಿದ್ಯಾಭ್ಯಾಸವು ನಡೆಯುವುದಿಲ್ಲ.
ಒಂದೇ ಬಾರಿ ವಿದ್ಯಾಭ್ಯಾಸವಿರುತ್ತದೆ. ತಂದೆಯು ಒಂದೇ ಬಾರಿ ಬರುತ್ತಾರೆ, ಮಕ್ಕಳಿಗೂ ಗೊತ್ತಿದೆ
ಮೊಟ್ಟ ಮೊದಲು ಒಂದೇ ರಾಜಧಾನಿಯಿತ್ತು, ಇದನ್ನು ನೀವು ಯಾರಿಗೆ ತಿಳಿಸಿದರೂ ಸಹ ಒಪ್ಪುತ್ತಾರೆ.
ಕ್ರಿಶ್ಚಿಯನ್ನರು ವಿಜ್ಞಾನದಲ್ಲಿಯೂ ಬಹಳ ತೀಕ್ಷ್ಣವಾಗಿದ್ದಾರೆ ಮತ್ತೆಲ್ಲರೂ ಅವರಿಂದಲೇ
ಕಲಿತಿದ್ದಾರೆ. ಅವರದು ಅಷ್ಟು ಪಾರಸಬುದ್ಧಿಯೂ ಅಲ್ಲ, ಅಷ್ಟು ಕಲ್ಲು ಬುದ್ಧಿಯೂ ಆಗಿರುವುದಿಲ್ಲ. ಈ
ಸಮಯದಲ್ಲಿ ಅವರ ಬುದ್ಧಿಯು ಚಮತ್ಕಾರ ಮಾಡುತ್ತಿದೆ. ವಿಜ್ಞಾನದ ಪ್ರಚಾರವೆಲ್ಲವೂ ಈ
ಕ್ರಿಶ್ಚಿಯನ್ನರಿಂದಲೇ ಹೊರ ಬಂದಿದೆ ಅದೂ ಸುಖಕ್ಕಾಗಿಯೇ ಇದೆ. ನಿಮಗೆ ಗೊತ್ತಿದೆ - ಈ ಹಳೆಯ
ಪ್ರಪಂಚದ ವಿನಾಶವಂತೂ ಆಗಲೇಬೇಕು. ಮತ್ತೆ ನೀವು ಶಾಂತಿಧಾಮ - ಸುಖಧಾಮಕ್ಕೆ ಹೊರಟು ಹೋಗುತ್ತೀರಿ
ಇಲ್ಲವೆಂದರೆ ಇಷ್ಟೆಲ್ಲಾ ಮನುಷ್ಯಾತ್ಮರು ಹಿಂತಿರುಗಿ ಮನೆಗೆ ಹೇಗೆ ಹೋಗುವುದು? ವಿಜ್ಞಾನದಿಂದ
ವಿನಾಶವಾಗಿ ಬಿಡುತ್ತದೆ, ಎಲ್ಲಾ ಆತ್ಮಗಳು ಶರೀರವನ್ನು ಬಿಟ್ಟು ಮನೆಗೆ ಹೊರಟು ಹೋಗುತ್ತಾರೆ. ಈ
ವಿನಾಶದಲ್ಲಿ ಮುಕ್ತಿಯು ಅಡಗಿದೆ ಅರ್ಧಕಲ್ಪ ಮುಕ್ತಿಗಾಗಿಯೇ ಪರಿಶ್ರಮ ಪಡುತ್ತಾ ಬಂದಿದ್ದೀರಲ್ಲವೆ.
ಆದ್ದರಿಂದ ವಿಕೋಪಗಳು ಆಗುತ್ತವೆ. ಇವೂ ಆಗಬೇಕು ಅಂದರೆ ಈ ಯುದ್ಧವು ಮುಕ್ತಿಧಾಮಕ್ಕೆ ಕರೆದುಕೊಂಡು
ಹೋಗಲು ನಿಮಿತ್ತವಾಗುತ್ತದೆ ಎಂದು ತಿಳಿಯಬೇಕು. ಇಷ್ಟೆಲ್ಲರೂ ಮುಕ್ತಿಧಾಮಕ್ಕೆ ಹೋಗಬೇಕಾಗಿದೆ. ನೀವು
ಭಲೆ ಎಷ್ಟು ಪರಿಶ್ರಮ ಪಟ್ಟಿರಿ, ಗುರುಗಳನ್ನು ಮಾಡಿಕೊಂಡಿರಿ, ಹಠಯೋಗವನ್ನು ಕಲಿತಿರಿ. ಆದರೆ ಯಾರೂ
ಮುಕ್ತಿಧಾಮಕ್ಕೆ ಹೋಗಲು ಸಾಧ್ಯವಾಗಲಿಲ್ಲ. ವಿಜ್ಞಾನದ ಇಷ್ಟೆಲ್ಲಾ ಸಿಡಿಮದ್ದುಗಳು ತಯಾರಾಗಿವೆ
ಅಂದಮೇಲೆ ತಿಳಿಯಬೇಕು - ಇದರಿಂದ ಅವಶ್ಯವಾಗಿ ವಿನಾಶವಾಗುತ್ತದೆ. ಹೊಸ ಪ್ರಪಂಚದಲ್ಲಿ ಕೆಲವರೇ
ಬರುತ್ತಾರೆ. ಉಳಿದೆಲ್ಲರೂ ಮುಕ್ತಿಧಾಮಕ್ಕೆ ಹೊರಟು ಹೋಗುತ್ತಾರೆ. ಜೀವನ್ಮುಕ್ತಿಗೆ ವಿದ್ಯೆಯ
ಶಕ್ತಿಯಿಂದ ಬರುತ್ತಾರೆ. ನೀವು ಅಡೋಲ-ಅಟಲ, ಅಖಂಡ ರಾಜ್ಯ ಮಾಡುತ್ತೀರಿ. ಇಲ್ಲಂತೂ ನೋಡಿ, ಎಲ್ಲಾ
ಖಂಡಗಳು ತುಂಡು-ತುಂಡಾಗಿವೆ. ತಂದೆಯು ನಿಮ್ಮನ್ನು ಅಖಂಡ, ಅಟಲ, ಇಡೀ ವಿಶ್ವದ ರಾಜಧಾನಿಯ
ಮಾಲೀಕರನ್ನಾಗಿ ಮಾಡುತ್ತಾರೆ, ಬೇಹದ್ದಿನ ತಂದೆಯ ಆಸ್ತಿಯು ಬೇಹದ್ದಿನ ರಾಜ್ಯಭಾಗ್ಯವಾಗಿದೆ. ಈ
ಆಸ್ತಿಯು ಯಾವಾಗ ಮತ್ತು ಯಾರು ಕೊಟ್ಟರು? ಇದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಕೇವಲ ನಿಮಗೆ
ಮಾತ್ರ ಗೊತ್ತಿದೆ. ಆತ್ಮಕ್ಕೆ ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ. ಆತ್ಮವು ಜ್ಞಾನ
ಸ್ವರೂಪವಾಗುತ್ತದೆ ಅದೂ ಸಹ ಜ್ಞಾನಸಾಗರ ತಂದೆಯಿಂದಲೇ ಆಗಬೇಕಾಗುತ್ತದೆ. ತಂದೆಯೇ ಬಂದು ರಚಯಿತ
ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಿದ್ದಾರೆ. ಇದು ತಂದೆಯೇ ಬಂದು ರಚಯಿತ
ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಿದ್ದಾರೆ. ಇದು ಕೇವಲ ಸೆಕೆಂಡಿನ ಮಾತಾಗಿದೆ.
ಸೆಕೆಂಡಿನಲ್ಲಿ ಜೀವನ್ಮುಕ್ತಿ, ಉಳಿದವರೆಲ್ಲರಿಗೆ ಮುಕ್ತಿ ಸಿಗುತ್ತದೆ, ಇದೂ ಸಹ ನಾಟಕದಲ್ಲಿ
ಮಾಡಲ್ಪಟ್ಟಿದೆ. ಎಲ್ಲರೂ ರಾಮನ ಬಂಧನದಿಂದ ಮುಕ್ತರಾಗಿ ಬಿಡುತ್ತಾರೆ. ವಿಶ್ವದಲ್ಲಿ ಶಾಂತಿಗಾಗಿ
ಅವರು ಎಷ್ಟೊಂದು ಪರಿಶ್ರಮಪಡುತ್ತಾರೆ ಆದರೆ ವಿಶ್ವದಲ್ಲಿ ಮತ್ತು ಬ್ರಹ್ಮಾಂಡದಲ್ಲಿ ಯಾವಾಗ
ಶಾಂತಿಯಿರುತ್ತದೆ ಎಂಬುದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಬ್ರಹ್ಮಾಂಡದಲ್ಲಿ ಶಾಂತಿಯಿದೆ
ಎಂದು ಹೇಳಲಾಗುತ್ತದೆ ಮತ್ತು ವಿಶ್ವದಲ್ಲಿ ಶಾಂತಿ ಮತ್ತು ಸುಖ ಎರಡೂ ಇರುತ್ತದೆ. ವಿಶ್ವ ಬೇರೆ
ಮತ್ತು ಬ್ರಹ್ಮಾಂಡವೇ ಬೇರೆಯಾಗಿದೆ. ಸೂರ್ಯ, ಚಂದ್ರ, ನಕ್ಷತ್ರಗಳಿಗಿಂತಲೂ ಮೇಲೆ ಬ್ರಹ್ಮಾಂಡವಿದೆ
ಅಲ್ಲಿ ಇದೇನೂ ಇರುವುದಿಲ್ಲ. ಅದಕ್ಕೆ ಶಾಂತಿಧಾಮವೆಂದು ಹೇಳಲಾಗುತ್ತದೆ. ಶರೀರವನ್ನು ಬಿಟ್ಟು
ಶಾಂತಿಯಲ್ಲಿ ಹೊರಟು ಹೋಗುತ್ತಾರೆ. ತಾವು ಮಕ್ಕಳಿಗೆ ಅದೂ ನೆನಪಿದೆ. ನೀವು ಈ ಸಮಯದಲ್ಲಿ ಅಲ್ಲಿಗೆ
ಹೋಗುವ ತಯಾರಿ ಮಾಡಿಕೊಳ್ಳುತ್ತಿದ್ದೀರಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ನಿಮ್ಮಿಂದ ತಯಾರಿ
ಮಾಡಿಸಲಾಗುತ್ತದೆ ಬಾಕಿ ಈ ಯುದ್ಧವು ಕಲ್ಯಾಣಕಾರಿಯಾಗಿದೆ. ಏಕೆಂದರೆ ಎಲ್ಲರ ಲೆಕ್ಕಾಚಾರಗಳು
ಸಮಾಪ್ತಿಯಾಗಲಿದೆ, ಎಲ್ಲರೂ ಪವಿತ್ರರಾಗಿ ಬಿಡುತ್ತಾರೆ, ಯೋಗ ಅಗ್ನಿಯಾಗಿದೆಯಲ್ಲವೆ. ಅಗ್ನಿಯಿಂದ
ಪ್ರತಿಯೊಂದು ವಸ್ತುವು ಪವಿತ್ರವಾಗುತ್ತದೆ. ಹೇಗೆ ತಂದೆಯು ನಾಟಕದ ಆದಿ-ಮಧ್ಯ-ಅಂತ್ಯವನ್ನು
ತಿಳಿದುಕೊಂಡಿದ್ದಾರೆಯೋ ಹಾಗೆಯೇ ನೀವೂ ಪಾತ್ರಧಾರಿಗಳೂ ಸಹ ನಾಟಕದ ಆದಿ-ಮಧ್ಯ-ಅಂತ್ಯವನ್ನು
ತಿಳಿಯಬೇಕಾಗಿದೆ. ಈ ರೀತಿ ತಿಳಿಯುವುದನ್ನೇ ಸಾಕ್ಷಾತ್ಕಾರವೆಂದು ಹೇಳಲಾಗುತ್ತದೆ. ಈಗ ನಿಮ್ಮ
ಜ್ಞಾನದ ಮೂರನೆಯ ನೇತ್ರವು ತೆರೆದಿದೆ. ಅವಶ್ಯವಾಗಿ ನಾವು ಇಡೀ ವಿಶ್ವವನ್ನೇ ಸತ್ಯಯುಗದ ಆದಿಯಿಂದ
ಕಲಿಯುಗದ ಅಂತ್ಯದವರೆಗೆ ಪೂರ್ಣ ಅರಿತುಕೊಂಡಿದ್ದೇವೆ ಯಾವುದೇ ಮನುಷ್ಯ ಮಾತ್ರರು ತಿಳಿದುಕೊಂಡಿಲ್ಲ.
ನಾವು ಯಾವ ದೈವೀಗುಣವಂತರಾಗಿದ್ದೆವೆಯೋ ಅವರೇ ನಂತರ ಆಸುರೀ ಗುಣವುಳ್ಳವರಾಗುತ್ತೇವೆ. ತಂದೆಯು ಮತ್ತೆ
ಬಂದು ದೈವೀಗುಣವಂತರನ್ನಾಗಿ ಮಾಡುತ್ತಾರೆ. ತಂದೆಯು ಬರುವುದೇ ಪತಿತರನ್ನು ಪಾವನ ಮಾಡಲು. ಈ
ದೇವಿ-ದೇವತಾ ಮನೆತನದವರೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು
ಪ್ರಪಂಚದಲ್ಲಿರುವವರಿಗೆ ಗೊತ್ತಿಲ್ಲ. ಪಾವನರೂ ಆಗುತ್ತೀರಿ, ಪತಿತರೂ ಆಗುತ್ತೀರಿ. ಇದು ಯಾರ
ಬುದ್ಧಿಯಲ್ಲಿಯೂ ಇಲ್ಲ. ಈಗ ನೀವು ತಿಳಿಯುತ್ತೀರಿ ಇವಂತೂ ಜಡ ಚಿತ್ರಗಳಾಗಿವೆ. ನಿಖರವಾಗಿ ದೇವತೆಗಳ
ಭಾವಚಿತ್ರಗಳನ್ನಂತೂ ತೆಗೆಯಲು ಸಾಧ್ಯವಿಲ್ಲ. ಅವರು ಸ್ವಾಭಾವಿಕ ಸೌಂದರ್ಯವುಳ್ಳವರಾಗಿರುತ್ತಾರೆ.
ಪವಿತ್ರ ಪ್ರಕೃತಿಯಿಂದ ಶರೀರವೂ ಪವಿತ್ರವಾಗಿರುತ್ತದೆ, ಇಲ್ಲಂತೂ ಅಪವಿತ್ರವಾಗಿದೆ. ಈ ರಂಗು-ರಂಗಿನ
ಪ್ರಪಂಚವು ಸತ್ಯಯುಗದಲ್ಲಿರುವುದಿಲ್ಲ. ಕೃಷ್ಣನಿಗೆ ಶ್ಯಾಮ ಸುಂದರನೆಂದು ಹೇಳಲಾಗುತ್ತದೆ.
ಸತ್ಯಯುಗದಲ್ಲಿ ಕೃಷ್ಣನು ಸುಂದರನಾಗಿರುತ್ತಾನೆ, ಕಲಿಯುಗದಲ್ಲಿ ಶ್ಯಾಮನಾಗಿದ್ದಾನೆ. ಸತ್ಯಯುಗದಿಂದ
ಕಲಿಯುಗಕ್ಕೆ ಹೇಗೆ ಬರುತ್ತಾರೆಂದು ನಿಮಗೆ ಮೊದಲಿನಿಂದ ಹಿಡಿದು ಪೂರ್ಣವಾಗಿ ತಿಳಿದಿದೆ. ಕೃಷ್ಣನಂತೂ
ಗರ್ಭದಿಂದ ಹೊರ ಬಂದನು, ಹೆಸರು ಸಿಕ್ಕಿತು. ಹೆಸರಂತೂ ಅವಶ್ಯವಾಗಿ ಬೇಕಲ್ಲವೆ. ಆದ್ದರಿಂದ ನೀವು
ಹೇಳುತ್ತೀರಿ - ಕೃಷ್ಣನ ಆತ್ಮವು ಸುಂದರವಾಗಿತ್ತು ಮತ್ತೆ ಶ್ಯಾಮ ಆಯಿತು. ಆದ್ದರಿಂದ ಶ್ಯಾಮ ಮತ್ತು
ಸುಂದರನೆಂದು ಹೇಳಲಾಗುತ್ತದೆ. ಅವರ ಜನ್ಮ ಪತ್ರಿಯು ಸಿಕ್ಕಿ ಬಿಟ್ಟಿತೆಂದರೆ ಪೂರ್ಣ ಚಕ್ರವೇ ಸಿಕ್ಕಿ
ಬಿಟ್ಟಿತು. ಎಷ್ಟೊಂದು ರಹಸ್ಯವು ತುಂಬಿದೆ, ಇದನ್ನು ನೀವೇ ತಿಳಿದುಕೊಳ್ಳುತ್ತೀರಿ ಮತ್ತ್ಯಾರಿಗೂ
ಗೊತ್ತಿಲ್ಲ. ನಿಮಗೆ ಈಗ ಹೊಸ ಪ್ರಪಂಚ, ಹೊಸ ಮನೆಗೆ ಹೋಗಬೇಕಾಗಿದೆ. ಯಾರು ಬಹಳ ಚೆನ್ನಾಗಿ
ವಿದ್ಯೆಯನ್ನು ಓದುತ್ತಾರೆಯೋ ಅವರೇ ಹೊಸ ಪ್ರಪಂಚದಲ್ಲಿ ಹೋಗುತ್ತಾರೆ. ತಂದೆಯು ಬೇಹದ್ದಿನ ಇಡೀ
ಪ್ರಪಂಚದ ಮಾಲೀಕ ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ತಂದೆಗೆ ಮಾಲೀಕನೆಂದು ಹೇಳಲಾಗುತ್ತದೆ. ಇದು
ವಿದ್ಯೆಯಾಗಿದೆ, ಇದರಲ್ಲಿ ಯಾವುದೇ ಸಂಶಯ ಅಥವಾ ಪ್ರಶ್ನೆಯು ಉದ್ಭವಿಸಲು ಸಾಧ್ಯವಿಲ್ಲ. ಇದರಲ್ಲಿ
ಶಾಸ್ತ್ರವಾದ ಮಾಡುವ ಅವಶ್ಯಕತೆಯಿಲ್ಲ. ಒಬ್ಬ ಶಿಕ್ಷಕನೇ ಎಲ್ಲರಿಗಿಂತ ಶ್ರೇಷ್ಠ ಅವರೇ ಕುಳಿತು
ಓದಿಸುತ್ತಾರೆ, ಅವರೇ ಸತ್ಯವಾಗಿದ್ದಾರೆ. ಸತ್ಯ ನಾರಾಯಣನ ಸತ್ಯ ಕಥೆಯನ್ನು ಶಿಕ್ಷಣದ ರೂಪದಲ್ಲಿ
ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ತಮ್ಮ ಎಲ್ಲಾ
ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿ ಶಾಂತಿಧಾಮದಲ್ಲಿ ಹೋಗುವ ತಯಾರಿ ಮಾಡಿಕೊಳ್ಳಬೇಕಾಗಿದೆ. ನೆನಪಿನ
ಬಲದಿಂದ ಆತ್ಮವನ್ನು ಸಂಪೂರ್ಣ ಪಾವನ ಮಾಡಿಕೊಳ್ಳಬೇಕಾಗಿದೆ.
2. ಜ್ಞಾನ ಸಾಗರನ ಜ್ಞಾನವನ್ನು ಸ್ವರೂಪದಲ್ಲಿ ತರಬೇಕಾಗಿದೆ. ವಿಚಾರ ಸಾಗರ ಮಂಥನ ಮಾಡಿ ತಮ್ಮ
ನಿರ್ಣಯವನ್ನು ತಾವೇ ತೆಗೆದುಕೊಳ್ಳಬೇಕಾಗಿದೆ. ಜೀವನ್ಮುಕ್ತಿಯಲ್ಲಿ ಶ್ರೇಷ್ಠ ಪದವಿಯನ್ನು ಪ್ರಾಪ್ತಿ
ಮಾಡಿಕೊಳ್ಳಲು ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ.
ವರದಾನ:
ಸಮಯದ
ಮಹತ್ವಿಕೆಯನ್ನು ತಿಳಿದು ಫಾಸ್ಟ್ ಸೋ ಫಸ್ಟ್ ನಲ್ಲಿ ಬರುವಂತಹ ತೀವ್ರಗತಿಯ ಪುರುಷಾರ್ಥಿ ಭವ.
ಅವ್ಯಕ್ತ
ಪಾತ್ರದಲ್ಲಿ ಬಂದಿರುವಂತಹ ಆತ್ಮಗಳಿಗೆ ಲಾಸ್ಟ್ ಸೋ ಫಾಸ್ಟ್, ಫಾಸ್ಟ್ ಸೋ ಫಸ್ಟ್ ನಲ್ಲಿ ಬರುವಂತಹ
ವರದಾನ ಪ್ರಾಪ್ತಿಯಾಗಿದೆ. ಆದ್ದರಿಂದ ಸಮಯದ ಮಹತ್ವಿಕೆಯನ್ನು ಅರಿತು ಸಿಕ್ಕಿರುವಂತಹ ವರದಾನವನ್ನು
ಸ್ವರೂಪದಲ್ಲಿ ತನ್ನಿ. ಈ ಅವ್ಯಕ್ತ ಪಾಲನೆ ಸಹಜವಾಗಿಯೇ ಶಕ್ತಿಶಾಲಿಗಳನ್ನಾಗಿ ಮಾಡುವುದಾಗಿದೆ.
ಆದ್ದರಿಂದ ಎಷ್ಟು ಮುಂದೆ ಹೋಗಲು ಇಚ್ಛಿಸುವಿರೊ, ಅಷ್ಟು ಮುಂದುವರೆಯಬಹುದು. ಬಾಪ್ದಾದಾ ಮತ್ತು
ನಿಮಿತ್ತ ಆತ್ಮರಿಂದ ಸರ್ವರ ಪ್ರತಿ ಸದಾ ಮುಂದೆ ಹಾರಲು ಆಶೀರ್ವಾದ ಇರುವ ಕಾರಣ ತೀವ್ರಗತಿಯ
ಪುರುಷಾರ್ಥದ ಭಾಗ್ಯ ಸಹಜವಾಗಿ ದೊರಕಿದೆ.
ಸ್ಲೋಗನ್:
“ನಿರಾಕಾರ ಸೋ
ಸಾಕಾರ್” ಈ ಮಹಾ ಮಂತ್ರದ ಸ್ಮೃತಿಯಿಂದ ನಿರಂತರ ಯೋಗಿಗಳಾಗಿ.