10.08.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ – ಇಡೀ ಕಲ್ಪದಲ್ಲಿ ಆಲ್ರೌಂಡ್ ಪಾತ್ರವನ್ನು ಅಭಿನಯಿಸಿದಿರಿ, ಈಗ ಪಾತ್ರವು ಸಂಪೂರ್ಣವಾಯಿತು, ಮನೆಗೆ ಹೋಗಬೇಕಾಗಿದೆ"

ಪ್ರಶ್ನೆ:
ನೀವು ಮಕ್ಕಳು ತಮ್ಮ ಭಾಗ್ಯದ ಮಹಿಮೆಯನ್ನು ಯಾವ ಶಬ್ಧಗಳಲ್ಲಿ ಮಾಡುತ್ತೀರಿ?

ಉತ್ತರ:
ನಾವಾಗಿದ್ದೇವೆ ಬ್ರಾಹ್ಮಣರು ಶಿಖೆಯ ಸಮಾನ. ನಮಗೆ ನಿರಾಕಾರನಾದ ಭಗವಂತನು ಕುಳಿತು ಓದಿಸುತ್ತಾನೆ. ಪ್ರಪಂಚದಲ್ಲಿ ಮನುಷ್ಯರು, ಮನುಷ್ಯರಿಗೆ ಓದಿಸುತ್ತಾರೆ ಆದರೆ ನಮಗೆ ಸ್ವಯಂ ಭಗವಂತನೇ ಓದಿಸುತ್ತಾರೆ, ಅಂದಮೇಲೆ ಎಷ್ಟೊಂದು ಭಾಗ್ಯಶಾಲಿಯಾದೆವು.

ಓಂ ಶಾಂತಿ.
ಆತ್ಮಿಕ ಮಕ್ಕಳೊಂದಿಗೆ ಆತ್ಮಿಕ ತಂದೆಯು ಕೇಳುತ್ತಿದ್ದಾರೆ - ಮಧುರಾತಿ ಮಧುರ ಮಕ್ಕಳೇ, ತಮ್ಮ ಮನೆ ಶಾಂತಿಧಾಮದ ನೆನಪಿದೆಯೇ? ಮರೆತು ಹೋಗಿಲ್ಲ ಅಲ್ಲವೇ? ಈಗ 84 ಜನ್ಮಗಳ ಚಕ್ರವು ಪೂರ್ಣಗೊಂಡಿತು, ಹೇಗೆ ಪೂರ್ಣವಾಯಿತು ಎನ್ನುವುದನ್ನೂ ನೀವು ತಿಳಿದು ಬಿಟ್ಟಿದ್ದೀರಿ. ಸತ್ಯಯುಗದಿಂದ ಕಲಿಯುಗದ ಅಂತ್ಯದವರೆಗೂ ಹೀಗೆ ಮತ್ತ್ಯಾರೂ ಕೇಳಲು ಸಾಧ್ಯವಿಲ್ಲ. ಮಧುರಾತಿ ಮಧುರ ಮುದ್ದಾದ ಮಕ್ಕಳೊಂದಿಗೆ ಬಾಬಾ ಕೇಳುತ್ತಾರೆ - ಈಗ ಮನೆಗೆ ನಡೆಯಬೇಕಲ್ಲವೇ? ಮನೆಗೆ ನಡೆದು ನಂತರ ಸುಖಧಾಮದಲ್ಲಿ ಬರಬೇಕಾಗಿದೆ. ಇದು ಸುಖಧಾಮವಂತು ಅಲ್ಲ. ಇದು ಹಳೆಯ ಪ್ರಪಂಚ, ದುಃಖಧಾಮ ಆಗಿದೆ. ಅದಾಗಿದೆ ಶಾಂತಿಧಾಮ, ಸುಖಧಾಮ. ಈಗ ಈ ದುಃಖದಿಂದ ಮುಕ್ತರಾಗಿ ಮುಕ್ತಿಧಾಮದಲ್ಲಿ ಹೋಗಬೇಕಾಗಿದೆ. ಮುಕ್ತಿಧಾಮ ಅಥವಾ ಶಾಂತಿಧಾಮವು ಹೇಗೆಂದರೆ ಸನ್ಮುಖದಲ್ಲಿಯೇ ನಿಂತಿದೆ. ಅದಾಗಿದೆ ಮನೆ. ನಂತರ ನೀವು ಹೊಸ ವಿಶ್ವದಲ್ಲಿ ಬರುತ್ತೀರಿ, ಎಲ್ಲಿ ಪವಿತ್ರತೆ-ಶಾಂತಿ-ಸುಖವೂ ಇರುತ್ತದೆ. ಇದಂತು ತಿಳಿಯುತ್ತೀರಲ್ಲವೆ - ಮಹಿಮೆಯೂ ಸಹ ಇದೇ ಆಗಿದೆ. ತಂದೆಯನ್ನೂ ಕರೆಯುತ್ತಾರೆ - ಹೇ ಪತಿತ-ಪಾವನ, ಈ ಪತಿತ ಪ್ರಪಂಚದಿಂದ ನಮ್ಮನ್ನು ಕರೆದುಕೊಂಡು ನಡೆಯಿರಿ, ಇದರಲ್ಲಿ ಬಹಳ ದುಃಖವಿದೆ. ನಮ್ಮನ್ನು ಸುಖದಲ್ಲಿ ಕರೆದುಕೊಂಡು ನಡೆಯಿರಿ. ಸ್ಮೃತಿಯಲ್ಲಿ ಬರುತ್ತದೆ. ಸ್ವರ್ಗವನ್ನು ಎಲ್ಲರೂ ನೆನಪು ಮಾಡುವರು. ಶರೀರ ಬಿಡುತ್ತಾರೆಂದರೆ ಹೇಳುತ್ತಾರೆ- ಸ್ವರ್ಗಸ್ಥರಾದರು. ನಿರ್ವಾಣ ಗೈದರು. ಯಾರು ಹೋದರು? ಆತ್ಮ. ಶರೀರವಂತು ಹೋಗುವುದಿಲ್ಲ, ಆತ್ಮವೇ ಹೋಗುತ್ತದೆ. ಈಗ ನೀವು ಮಕ್ಕಳೇ ಶಾಂತಿಧಾಮ, ಸುಖಧಾಮವನ್ನು ತಿಳಿದಿದ್ದೀರಿ, ಮತ್ತ್ಯಾರೂ ತಿಳಿದುಕೊಂಡಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಜ್ಞಾನವಿದೆ - ಶಾಂತಿಧಾಮವೆಂದರೆ ಏನಾಗಿದೆ ಮತ್ತು ಸುಖಧಾಮವು ಏನಾಗಿದೆ ಎಂದು. ನೀವು ಸುಖಧಾಮದಲ್ಲಿ ಇದ್ದಿರಿ, ಈಗ ಮತ್ತೆ ದುಃಖಧಾಮದಲ್ಲಿ ಬಂದಿದ್ದೀರಿ. ಸೆಕೆಂಡ್, ನಿಮಿಷ, ಗಂಟೆ, ದಿನ, ವರ್ಷವು ಕಳೆದು ಹೋಯಿತು. ಈಗ 5 ಸಾವಿರ ವರ್ಷಗಳಲ್ಲಿ ಬಾಕಿ ಸ್ವಲ್ಪ ದಿನಗಳಿರುತ್ತೇವೆ. ತಂದೆಯು ಮಕ್ಕಳಿಗೆ ಈ ಸ್ಮೃತಿಯನ್ನು ತರಿಸುತ್ತಿರುತ್ತಾರೆ. ಬಹಳ ಸಹಜ ಮಾತಾಗಿದೆ, ಇದರಲ್ಲಿ ತಬ್ಬಿಬ್ಬಾಗುವ ಅವಶ್ಯಕತೆಯೇ ಇಲ್ಲ. ಆತ್ಮವು 84 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತದೆ, ಇದೂ ಸಹ ಯಾರಿಗೂ ಗೊತ್ತಿಲ್ಲ. ಲಕ್ಷಾಂತರ ವರ್ಷಗಳ ಮಾತನ್ನಂತು ಯಾರಲ್ಲಿಯೇ ನೆನಪಿರುವುದು ಕಷ್ಟವಿದೆ. ಇದಿರುವುದೇ 5 ಸಾವಿರ ವರ್ಷಗಳ ಮಾತು. ವ್ಯಾಪಾರಿ ಜನರೂ ಸಹ ಲೆಕ್ಕದ ಪುಸ್ತಕದಲ್ಲಿ ಸ್ವಸ್ತಿಕವನ್ನು ಬಿಡಿಸುತ್ತಾರೆ, ಅದನ್ನು ಗಣೇಶ ಎಂದು ಹೇಳಿ ಬಿಡುತ್ತಾರೆ. ಗಣೇಶನಿಗೆ ಆನೆಯ ಸೊಂಡಿಲನ್ನು ತೋರಿಸುತ್ತಾರೆ. ಮನುಷ್ಯರು ಹಣವನ್ನು ಖರ್ಚು ಮಾಡುತ್ತಾರೆ, ಚಿತ್ರ ಮುಂತಾದವನ್ನು ಮಾಡಿಸುತ್ತಾರೆ, ಇದಕ್ಕೆ ಹೇಳಲಾಗುತ್ತದೆ - ಸಮಯ ವ್ಯರ್ಥ ಮಾಡುವುದು ಎಂದು. ನಿಮ್ಮಲ್ಲಿ ಎಷ್ಟೊಂದು ಶಕ್ತಿಯಿತ್ತು, ಅದು ದಿನ ಕಳೆದಂತೆ ಕಡಿಮೆಯಾಗುತ್ತಾ ಹೋಯಿತು. ಹೇಗೆ ಮೋಟಾರು ಗಾಡಿಯಿಂದ ಪೆಟ್ರೋಲ್ ಕಡಿಮೆಯಾಗುತ್ತಾ ಹೋಗುತ್ತದೆ. ಈಗಂತು ನೀವು ಬಹಳ ಬಲಹೀನರಾಗಿ ಬಿಟ್ಟಿದ್ದೀರಿ. ಐದು ಸಾವಿರ ವರ್ಷಗಳ ಮೊದಲು ಭಾರತವು ಏನಾಗಿತ್ತು, ಅಪಾರ ಸುಖಿಯಾಗಿತ್ತು. ಎಷ್ಟೊಂದು ಅಪಾರ ಹಣವಿತ್ತು, ಈ ರಾಜ್ಯವನ್ನು ಅವರು ಹೇಗೆ ಪಡೆದರು? ರಾಜಯೋಗವನ್ನು ಕಲಿತಿದ್ದರು. ಇದರಲ್ಲಿ ಯುದ್ಧ ಮುಂತಾದ ಮಾತೇ ಇಲ್ಲ. ಇದಕ್ಕೆ ಜ್ಞಾನದ ಅಸ್ತ್ರ-ಶಸ್ತ್ರವೆಂದು ಹೇಳಲಾಗುತ್ತದೆ, ಮತ್ತ್ಯಾವುದೇ ಸ್ಥೂಲ ಮಾತಲ್ಲ. ಜ್ಞಾನದ ಅಸ್ತ್ರ-ಶಸ್ತ್ರವಿದೆ. ಜ್ಞಾನ, ವಿಜ್ಞಾನ, ನೆನಪು ಮತ್ತು ಜ್ಞಾನದ ಬಹಳ ಶಕ್ತಿಶಾಲಿ ಅಸ್ತ್ರ-ಶಸ್ತ್ರಗಳಿವೆ. ಇಡೀ ವಿಶ್ವದಲ್ಲಿ ನೀವು ರಾಜ್ಯಾಡಳಿತ ಮಾಡುತ್ತಿದ್ದಿರಿ, ದೇವತೆಗಳಿಗೆ ಅಹಿಂಸಕ ಎಂದು ಹೇಳಲಾಗುತ್ತದೆ.

ಈಗ ನೀವು ಮಕ್ಕಳಿಗೆ ಮನುಷ್ಯನಿಂದ ದೇವತೆಯಾಗುವ ಶಿಕ್ಷಣವು ಸಿಗುತ್ತಿದೆ. ನೀವು ತಿಳಿದಿದ್ದೀರಿ - ನಾವು ಪ್ರತೀ 5 ಸಾವಿರ ವರ್ಷಗಳ ನಂತರ ಬೇಹದ್ದಿನ ತಂದೆಯಿಂದ, ಈ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಇದು ಆತ್ಮದ ಮಾತಾಯಿತು. ಇದರಲ್ಲಿ ಸ್ಥೂಲ ಯುದ್ಧ ಮುಂತಾದವುದರ ಮಾತೇ ಇಲ್ಲ. ಆತ್ಮವು ಪತಿತವಾಗಿದೆ, ಆದ್ದರಿಂದ ಅದು ಪಾವನವಾಗುವುದಕ್ಕಾಗಿ ತಂದೆಯನ್ನು ಕರೆಯುತ್ತದೆ. ಈಗ ತಂದೆಯು ಹೇಳುವರು - ಮಧುರಾತಿ ಮಧುರ ಮಕ್ಕಳೇ, ಈಗಂತು ಮನೆಗೆ ಹೋಗಬೇಕಾಗಿದೆ. ಇದಾಗಿದೆ - ಜೀವಾತ್ಮರ ಪ್ರಪಂಚ. ಅದಾಗಿದೆ - ಆತ್ಮರ ಪ್ರಪಂಚ. ಅದನ್ನು ಜೀವಾತ್ಮರ ಪ್ರಪಂಚವೆಂದು ಹೇಳುವುದಿಲ್ಲ. ಇದನ್ನು ಗಳಿಗೆ-ಗಳಿಗೆಯೂ ಸ್ಮೃತಿಯಲ್ಲಿ ತಂದುಕೊಳ್ಳಬೇಕು - ನಾವು ದೂರ ದೇಶದಲ್ಲಿರುವವರು. ನಾವಾತ್ಮರ ಮನೆಯಾಗಿದೆ - ಬ್ರಹ್ಮಾಂಡ. ಇದೂ ಸಹ ಬುದ್ಧಿಯಲ್ಲಿರಲಿ - ನಾವು ಅಲ್ಲಿರುತ್ತೇವೆ, ಈ ಆಕಾಶ ತತ್ವಕ್ಕಿಂತಲೂ ಆಚೆ, ಎಲ್ಲಿ ಸೂರ್ಯ-ಚಂದ್ರನೂ ಇರುವುದಿಲ್ಲ. ಅಲ್ಲಿ ನಾವು ಇರುವವರು, ಇಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೇವೆ. 84ರ ಪಾತ್ರವನ್ನು ಅಭಿನಯಿಸುತ್ತೇವೆ. ಎಲ್ಲರಂತು 84 ಜನ್ಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಿಧಾನ-ನಿಧಾನವಾಗಿ ಮೇಲಿಂದ ಇಳಿದು ಬರುತ್ತಾರೆ. ನಾವು ಆಲ್ರೌಂಡರ್ ಇದ್ದೇವೆ. ಎಲ್ಲಾ ಕಾರ್ಯವನ್ನೂ ಮಾಡುವವರನ್ನು ಆಲ್ರೌಂಡರ್ ಎಂದು ಹೇಳಲಾಗುತ್ತದೆ. ನೀವೂ ಸಹ ಆಲ್ರೌಂಡರ್ ಆಗಿದ್ದೀರಿ. ಆದಿಯಿಂದ ಅಂತ್ಯದವರೆಗೂ ನಿಮ್ಮ ಪಾತ್ರವಿದೆ. ಈಗ ಈ ಚಕ್ರದ ಅಂತಿಮ ಸಮಯವಾಗಿದೆ, ಆದರೂ ಮೇಲಿಂದ ಬರುತ್ತಿರುತ್ತಾರೆ. ಬಹಳ ಮಕ್ಕಳು ಉಳಿದುಕೊಂಡಿದ್ದಾರೆ, ಅವರು ಮೇಲಿಂದ ಬರುತ್ತಿರುತ್ತಾರೆ. ವೃದ್ಧಿ ಹೊಂದುತ್ತಿರುತ್ತದೆ. ಬಾಬಾರವರು ನೀವು ಮಕ್ಕಳಿಗೆ "ಹಮ್ ಸೊ"ನ ಅರ್ಥವನ್ನೂ ತಿಳಿಸಿದ್ದಾರೆ. ಅವರುಗಳಂತು ಹೇಳುತ್ತಾರೆ - ನಾವು ಆತ್ಮವೇ ಪರಮಾತ್ಮ ಆಗಿದ್ದೇವೆ. ಅವರಿಗಂತು ಡ್ರಾಮಾದ ಆದಿ-ಮಧ್ಯ-ಅಂತ್ಯ, ಆಯಸ್ಸಿನ ಮುಂತಾದವೇನೂ ಗೊತ್ತಿಲ್ಲ. ನಿಮಗಂತು ತಂದೆಯು ತಿಳಿಸಿದ್ದಾರೆ - ಈ ಶರೀರದಲ್ಲಿ ನೀವೀಗ ಬ್ರಾಹ್ಮಣರಾಗಿದ್ದೀರಿ. ಪ್ರಜಾಪಿತ ಬ್ರಹ್ಮಾರವರ ಮೂಲಕ ಶಿವ ತಂದೆಯು ನಿಮ್ಮನ್ನು ದತ್ತು ಮಾಡಿಕೊಂಡಿದ್ದಾರೆ, ಓದಿಸುತ್ತಾರೆ. ತಂದೆಯು ನಮಗೆ ಓದಿಸುತ್ತಿದ್ದಾರೆ ಎನ್ನುವುದಂತು ನೆನಪಿರಬೇಕಲ್ಲವೆ. ಅವರು ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ. ಎಲ್ಲಾ ಆತ್ಮರು ಈ ಡ್ರಾಮಾದ ದಾರದಲ್ಲಿ ಪೋಣಿಸಲ್ಪಟ್ಟಿದ್ದಾರೆ. ಈಗ ನೀವು ತಿಳಿದಿದ್ದೀರಿ - ನಾವು ಪ್ರಾರಂಭದಲ್ಲಿ ದೇವತೆಗಳಿದ್ದೆವು, ನಂತರ ನಾವೇ ಕ್ಷತ್ರಿಯ ಧರ್ಮದಲ್ಲಿ ಬಂದೆವು ಅರ್ಥಾತ್ ಸೂರ್ಯವಂಶಿಯಿಂದ ಚಂದ್ರವಂಶಿಯಲ್ಲಿ ಬಂದೆವು, ಇದು ವರ್ಣಗಳ ಆಟವಾಗಿದೆ. ಈಗ ಮತ್ತೆ ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ, ಬ್ರಾಹ್ಮಣರಿಂದ ನಂತರ ದೇವತೆಗಳಾಗುತ್ತೀರಿ. ವಿರಾಟ ರೂಪವನ್ನು ತೋರಿಸುತ್ತಾರಲ್ಲವೆ. ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ- ನಾವು ಹೇಗೆ ಕೆಳಗಿಳಿದೆವು, ನಂತರ ಬ್ರಾಹ್ಮಣ ಕುಲದಲ್ಲಿ ಬಂದೆವು ನಂತರ ದೈವೀ ರಾಜಧಾನಿಯಲ್ಲಿ ಬರುತ್ತೇವೆ. ಈಗ ನೀವು ಬ್ರಾಹ್ಮಣರು ಶಿಖೆಗೆ ಸಮಾನರು. ಶಿಖೆಯು ಎಲ್ಲದಕ್ಕಿಂತ ಮೇಲಿರುತ್ತದೆ. ನಿಮ್ಮಂತೆ ಶ್ರೇಷ್ಠ ಕುಲದವರೆಂದು ಯಾರು ಕರೆಸಿಕೊಳ್ಳುವರು! ಭಗವಂತ ತಂದೆಯು ಬಂದು ನಿಮಗೆ ಓದಿಸುತ್ತಿದ್ದಾರೆ. ನೀವೆಷ್ಟು ಭಾಗ್ಯಶಾಲಿಯಾಗಿದ್ದೀರಿ! ತಮ್ಮ ಭಾಗ್ಯದ ಮಹಿಮೆಯನ್ನಾದರೂ ಸ್ವಲ್ಪ ಮಾಡಿರಿ. ಹೊರಗಂತು ಎಲ್ಲಾ ಮನುಷ್ಯರು ಮನುಷ್ಯರಿಗೆ ಓದಿಸುತ್ತಾರೆ. ಇವರಂತು ಇರುವುದೇ ನಿರಾಕಾರ ತಂದೆ. ಈ ತಂದೆಯು ಕಲ್ಪ-ಕಲ್ಪವೂ ಒಂದೇ ಬಾರಿ ಬಂದು ಜ್ಞಾನವನ್ನು ಕೊಡುತ್ತಾರೆ. ವಿದ್ಯೆಯನ್ನಂತು ಪ್ರತಿಯೊಬ್ಬರೂ ಓದುತ್ತಾರಲ್ಲವೆ. ಮನುಷ್ಯರನ್ನಂತು ಎಂದಿಗೂ ಸಹ ಭಗವಂತನೆಂದು ಹೇಳಲಾಗುವುದಿಲ್ಲ. ಭಗವಂತನಂತು ಇರುವುದೇ ನಿರಾಕಾರನಾಗಿ. ಇಲ್ಲಿಗೆ ಬಂದು ನೀವು ಮಕ್ಕಳಿಗೆ ಓದಿಸುತ್ತಾರೆ. ವಿದ್ಯೆಯನ್ನು ಸೂಕ್ಷ್ಮವತನದಲ್ಲಿಯೂ ಓದುವುದಿಲ್ಲ, ಮೂಲವತನದಲ್ಲಿಯೂ ಓದಲಾಗುವುದಿಲ್ಲ. ವಿದ್ಯೆಯನ್ನು ಓದುವುದೇ ಇಲ್ಲಿ. ಇದರಲ್ಲಿ ತಬ್ಬಿಬ್ಬಾಗುವ ಮಾತೇ ಇಲ್ಲ. ಶಾಲೆಯಲ್ಲೆಂದಿಗೂ ಸಹ ವಿದ್ಯಾರ್ಥಿಯು ಹೇಳುತ್ತಾರೆಯೇ- ನಾವು ತಬ್ಬಿಬ್ಬಾಗುತ್ತೇವೆ. ನಮಗೆ ನಿಶ್ಚಯವಿಲ್ಲ. ವಿದ್ಯೆಯನ್ನು ಓದಿ ತನ್ನ ಸ್ಟೇಟಸ್ ತೆಗೆದುಕೊಳ್ಳುತ್ತಾರೆ. ಈ ಲಕ್ಷ್ಮೀ-ನಾರಾಯಣ ಸತ್ಯಯುಗದ ಆದಿಯಲ್ಲಿ ವಿಶ್ವದ ಮಾಲೀಕನಾದದ್ದು ಹೇಗೆ? ಅವಶ್ಯವಾಗಿ ತಂದೆಯ ಮೂಲಕ ಆದರು. ತಂದೆಯಂತು ಸತ್ಯವನ್ನು ತಿಳಿಸುತ್ತಾರೆ. ಭಗವಂತನೇನಾದರೂ ತಪ್ಪಾಗಿ ತಿಳಿಸುವುದಕ್ಕೆ ಸಾಧ್ಯವೇ! ಬಹಳ ಶ್ರೇಷ್ಠವಾದ ಪರೀಕ್ಷೆಯಾಗಿದೆ. ಈ ಸಮಯದಲ್ಲಂತು ಇರುವುದೇ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯ. ರಾಜಾ-ರಾಣಿಯಂತು ಇಲ್ಲ. ಸತ್ಯಯುಗದಲ್ಲಿ ಇದ್ದರು, ಈಗ ಕಲಿಯುಗದ ಅಂತ್ಯದಲ್ಲಿಲ್ಲ. ಇದಕ್ಕೆ ಪಂಚಾಯಿತಿ ರಾಜ್ಯವೆಂದು ಹೇಳಲಾಗುತ್ತದೆ. ಗೀತೆಯಲ್ಲಿ ಬರೆದು ಬಿಟ್ಟಿದ್ದಾರೆ - ಕೌರವರು ಮತ್ತು ಪಾಂಡವರು. ಆತ್ಮಿಕ ಪಂಡಾ ನೀವಾಗಿದ್ದೀರಲ್ಲವೆ. ಎಲ್ಲರಿಗೂ ಆತ್ಮಿಕ ಮನೆಯ ಮಾರ್ಗವನ್ನು ತಿಳಿಸುತ್ತೀರಿ. ಅದು ನೀವಾತ್ಮರ ಆತ್ಮಿಕ ಮನೆಯಾಗಿದೆ. ಆತ್ಮವು ಜನ್ಮವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತದೆ. ಈ ಮಾತುಗಳನ್ನು ನಿಮ್ಮ ಹೊರತು ಮತ್ತ್ಯಾರೂ ತಿಳಿದುಕೊಂಡಿಲ್ಲ. ಋಷಿ-ಮನಿ ಮುಂತಾದವರ್ಯಾರೂ ಸಹ ರಚೈತನನ್ನಾಗಲಿ, ರಚನೆಯ ಆದಿ-ಮಧ್ಯ-ಅಂತ್ಯವನ್ನಾಗಲಿ ತಿಳಿದುಕೊಂಡಿಲ್ಲ. ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ. ಆದರೆ ಅದರ ಸಂಪೂರ್ಣ ಲೆಕ್ಕವೂ ಸಹ ಇಲ್ಲ. ಅರ್ಧ-ಅರ್ಧವೂ ಆಗಲು ಸಾಧ್ಯವಿಲ್ಲ. ಇದಿರುವುದೇ ಪತಿತ ಪ್ರಪಂಚ ವಿಕಾರಿ ಮತ್ತು ಅದು ನಿರ್ವಿಕಾರಿ.

ತಂದೆಯು ಎಷ್ಟು ಶ್ರೇಷ್ಠಾತಿ ಶ್ರೇಷ್ಠನಿದ್ದಾರೆ, ಆದರೆ ಎಷ್ಟು ಸಾಧಾರಣವಾಗಿದ್ದಾರೆ. ಯಾರೇ ಗಣ್ಯ ವ್ಯಕ್ತಿಯು ಆಫೀಸರುಗಳೊಂದಿಗೆ ಭೇಟಿಯಾಗುತ್ತಾರೆಂದರೆ ಎಷ್ಟು ಗೌರವವನ್ನು ಕೊಡುತ್ತಾರೆ. ಪತಿತ ಪ್ರಪಂಚದಲ್ಲಿ ಪತಿತ ಮನುಷ್ಯರೇ ಪತಿತರನ್ನು ಮಹಿಮೆ ಮಾಡುತ್ತಾರೆ. ಪಾವನರಂತು ಇರುವುದೇ ಗುಪ್ತವಾಗಿದೆ. ಹೊರಗಿನಿಂದ ಏನೂ ಕಾಣಿಸುವುದಿಲ್ಲ. ತಂದೆಗೆ ಹೇಳಲಾಗುತ್ತದೆ - ನಾಲೆಡ್ಜ್ ಫುಲ್, ಬ್ಲಿಸ್ಫುಲ್. ಎಲ್ಲಾ ಮಾತುಗಳು ತಂದೆಯಲ್ಲಿ ಫುಲ್ ಇದೆ ಆದ್ದರಿಂದ ಅವರನ್ನು ಜ್ಞಾನದ ಸಾಗರನೆಂದು ಹೇಳಲಾಗುತ್ತದೆ. ಪ್ರತಿಯೊಬ್ಬ ಮನುಷ್ಯನ ಸ್ಥಾನದ ಮಹಿಮೆಯು ಬೇರೆ-ಬೇರೆಯಿದೆ. ಮಂತ್ರಿಯನ್ನು ಮಂತ್ರಿ, ಪ್ರಧಾನಮಂತ್ರಿಯನ್ನು ಪ್ರಧಾನಮಂತ್ರಿ ಎಂದು ಹೇಳುತ್ತಾರೆ. ಇವರು ಶ್ರೇಷ್ಠಾತಿ ಶ್ರೇಷ್ಠ, ಭಗವಂತನಿದ್ದಾರೆ. ಎಲ್ಲರಿಗಿಂತಲೂ ದೊಡ್ಡ ಸ್ಥಾನವಿರುವುದು ನಿರಾಕಾರ ತಂದೆಯದು, ಅವರಿಗೆ ನಾವೆಲ್ಲರೂ ಮಕ್ಕಳಾಗಿದ್ದೇವೆ. ಅಲ್ಲಿ ನಾವೆಲ್ಲರೂ ತಂದೆಯ ಜೊತೆಯಲ್ಲಿ ಪರಮಧಾಮದಲ್ಲಿರುತ್ತೇವೆ. ಅದು ಮನೆ. ಇಲ್ಲಿ ಎಲ್ಲರಿಗೂ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ. ಕೆಲವರು ಒಂದು ಜನ್ಮವಾದರೂ ಪಾತ್ರವನ್ನಭಿನಯಿಸಿ ಹಿಂತಿರುಗಿ ಹೊರಟು ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ- ಇದು ಮನುಷ್ಯ ಸೃಷ್ಟಿಯ ವೆರೈಟಿ ವೃಕ್ಷವಾಗಿದೆ. ಒಬ್ಬರೊಂದಿಗೆ ಇನ್ನೊಬ್ಬರು ಹೋಲುವುದಿಲ್ಲ. ಆತ್ಮವಂತು ಒಂದೇ ರೀತಿಯಿದೆ. ಬಾಕಿ ಶರೀರವಂತು ಒಬ್ಬರದು ಇನ್ನೊಬ್ಬರೊಂದಿಗೆ ಹೋಲುವುದಿಲ್ಲ. ನಾಟಕವೂ ತೋರಿಸುತ್ತಾರೆ, ಅದರಲ್ಲಿ ಒಬ್ಬರಂತೆ ಇಬ್ಬರ ಮುಖ ಮಾಡುತ್ತಾರೆ, ಅವರಲ್ಲಿ ತಬ್ಬಿಬ್ಬಾಗಿ ಬಿಡುತ್ತಾರೆ- ನಮ್ಮ ಪತಿ ಯಾರು ಅಥವಾ ಇವರು ಯಾರು ಎಂದು ಗೊತ್ತಾಗುವುದಿಲ್ಲ? ಇದಂತು ಬೇಹದ್ದಿನ ಆಟವಾಗಿದೆ. ಇದರಲ್ಲಿ ಒಬ್ಬರು ಇನ್ನೊಬ್ಬರೊಂದಿಗೆ ಹೋಲುವುದಿಲ್ಲ. ಪ್ರತಿಯೊಬ್ಬರ ಲಕ್ಷಣಗಳೂ ಬೇರೆ-ಬೇರೆಯಿರುತ್ತದೆ. ಆಯಸ್ಸು ಭಲೆ ಎಲ್ಲರದೂ ಒಂದೇ ರೀತಿಯಿರಲಿ ಆದರೆ ಲಕ್ಷಣಗಳು ಒಂದೇ ರೀತಿಯಿರಲು ಸಾಧ್ಯವಿಲ್ಲ. ಪ್ರತೀ ಜನ್ಮದಲ್ಲಿ ಲಕ್ಷಣಗಳು ಬದಲಾಗುತ್ತದೆ. ಎಷ್ಟೊಂದು ದೊಡ್ಡ ಬೇಹದ್ದಿನ ನಾಟಕವಾಗಿದೆ! ಅಂದಮೇಲೆ ಅದನ್ನು ತಿಳಿದುಕೊಳ್ಳಬೇಕಲ್ಲವೆ. ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಪ್ರತಿಯೊಬ್ಬರದೂ ಡ್ರಾಮಾದಲ್ಲಿ ಪಾತ್ರವೇನಿದೆಯೋ ಅದನ್ನೇ ಅಭಿನಯಿಸುತ್ತಾರೆ. ಡ್ರಾಮಾದಲ್ಲಿ ಯಾರದೂ ರಿಪ್ಲೇಸ್ ಆಗಲು ಸಾಧ್ಯವಿಲ್ಲ. ಬೇಹದ್ದಿನ ಡ್ರಾಮಾ ಅಲ್ಲವೆ. ಜನ್ಮವನ್ನು ತೆಗೆದುಕೊಳ್ಳುತ್ತಿರುತ್ತಾರೆ. ಎಲ್ಲರ ಲಕ್ಷಣಗಳು ಬೇರೆ-ಬೇರೆಯಿರುತ್ತದೆ. ಎಷ್ಟೊಂದು ವಿಭಿನ್ನವಾದ ಲಕ್ಷಣಗಳಿವೆ! ಈ ಸಂಪೂರ್ಣ ಜ್ಞಾನವು ಬುದ್ಧಿಯಿಂದ ತಿಳಿದುಕೊಳ್ಳುವಂತಾಗಿದೆ. ಯಾವುದೇ ಪುಸ್ತಕ ಮುಂತಾದವೂ ಇಲ್ಲ. ಗೀತೆಯ ಭಗವಂತನು ಕೈಯಲ್ಲಿ ಗೀತೆಯನ್ನು ತೆಗೆದುಕೊಂಡು ಬರುತ್ತಾರೇನು? ಅವರಂತು ಜ್ಞಾನದ ಸಾಗರ, ಪುಸ್ತಕವನ್ನೇಕೆ ಕೈಯಲ್ಲಿ ಹಿಡಿದು ಬರುತ್ತಾರೆ. ಪುಸ್ತಕವಂತು ಭಕ್ತಿಮಾರ್ಗದಲ್ಲಿ ಮಾಡುತ್ತಾರೆ. ಅಂದಮೇಲೆ ಇದೆಲ್ಲವೂ ಡ್ರಾಮಾದಲ್ಲಿ ನೊಂದಣಿಯಾಗಿದೆ. ಒಂದು ಸೆಕೆಂಡ್ ಇನ್ನೊಂದು ಸೆಕೆಂಡಿಗೆ ಹೋಲುವುದಿಲ್ಲ. ನೀವು ಮಕ್ಕಳಿಗಂತು ಎಲ್ಲವನ್ನೂ ತಿಳಿಸಿದ್ದೇವೆ. ಚಕ್ರವು ಪೂರ್ಣವಾಗಿ ಮತ್ತೆ ಹೊಸದಾಗಿ ಪ್ರಾರಂಭವಾಗುವುದು, ಈಗ ನೀವು ಓದುತ್ತಿದ್ದೀರಿ. ತಂದೆಯನ್ನೂ ತಿಳಿದು ಬಿಟ್ಟಿರಿ, ರಚನೆಯನ್ನೂ ತಿಳಿದು ಬಿಟ್ಟಿರಿ. ಮೂಲವತನದಿಂದ ಇಲ್ಲಿಗೆ ಪಾತ್ರವನ್ನಭಿನಯಿಸಲು ಬರುತ್ತೀರಿ. ಸ್ಟೇಜ್ ಬಹಳ ದೊಡ್ಡದಿದೆ, ಇದರ ಮಾಪನವನ್ನಂತು ಮಾಡಲು ಸಾಧ್ಯವಿಲ್ಲ. ಯಾರೂ ಸಹ ತಲುಪಲೂ ಸಾಧ್ಯವಿಲ್ಲ.

ಸಾಗರ ಮತ್ತು ಆಕಾಶದ ಅಂತ್ಯವನ್ನು ಪಡೆಯಲು ಸಾಧ್ಯವಿದೆಯೇ! ಆದ್ದರಿಂದ ಬೇಅಂತ್ ಎಂದು ಗಾಯನ ಮಾಡಲಾಗುತ್ತದೆ. ಮುಂಚೆ ಇಷ್ಟೊಂದು ಪ್ರಯತ್ನ ಪಡುತ್ತಿರಲಿಲ್ಲ, ಈಗ ಪ್ರಯತ್ನ ಪಡುತ್ತಾರೆ. ವಿಜ್ಞಾನವೂ ಸಹ ಈಗಿದೆ, ನಂತರ ಯಾವಾಗ ಪ್ರಾರಂಭವಾಗುತ್ತದೆ? ಯಾವಾಗ ಅವರ ಪಾತ್ರವಿರುತ್ತದೆ. ಅಂದಮೇಲೆ ಇಷ್ಟೆಲ್ಲಾ ಮಾತುಗಳು ಶಾಸ್ತಗಳಲ್ಲಿದೆಯೇ! ತಿಳಿಸುವವರಿಗೆ ಬದಲಾಗಿ ಕೇಳುವವರ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಇದು ಕಪ್ಪಾಗಿರುವ ಆತ್ಮ, ಅದು ಸುಂದರವಾದ ಆತ್ಮ. ಕಪ್ಪಾಗಿರುವ ಆತ್ಮವು ಇವರ ಮೂಲಕ ಕೇಳಿ ಸುಂದರವಾಗಿದೆ. ಜ್ಞಾನದಿಂದ ಎಷ್ಟೊಂದು ಶ್ರೇಷ್ಠ ಪದವಿಯು ಸಿಗುತ್ತದೆ.

ಇದಾಗಿದೆ - ಗೀತಾ ಪಾಠಶಾಲೆ. ಯಾರು ಓದಿಸುತ್ತಾರೆ? ಭಗವಂತನು ರಾಜಯೋಗವನ್ನು ಕಲಿಸುತ್ತಾರೆ ಅಮರ ಪುರಿಗಾಗಿ, ಇದಕ್ಕೆ ಅಮರ ಕಥೆಯೆಂದೂ ಸಹ ಹೇಳಲಾಗುತ್ತದೆ. ಅವಶ್ಯವಾಗಿ ಸಂಗಮಯುಗದಲ್ಲಿಯೇ ತಿಳಿಸಲಾಗುತ್ತದೆ. ಯಾರು ಕಲ್ಪದ ಮೊದಲು ಓದಿದ್ದರು, ಅವರೇ ಬಂದು ಮತ್ತೆ ಓದುತ್ತಾರೆ ಮತ್ತು ನಂಬರ್ವಾರ್ ಪದವಿಯನ್ನು ಪಡೆಯುತ್ತಾರೆ. ನೀವು ಇಲ್ಲಿಗೆ ಎಷ್ಟು ಬಾರಿ ಬಂದಿದ್ದೀರಿ? ಲೆಕ್ಕವಿಲ್ಲದಷ್ಟು ಬಾರಿ. ಯಾರೇ ಕೇಳುತ್ತಾರೆ - ಈ ನಾಟಕವು ಯಾವಾಗ ಪ್ರಾರಂಭವಾಯಿತು? ನೀವು ಹೇಳುತ್ತೀರಿ - ಇದಂತು ಅನಾದಿ ನಡೆಯುತ್ತಾ ಬರುತ್ತಿದೆ. ಲೆಕ್ಕದ ಮಾತಾಗಲು ಸಾಧ್ಯವಿಲ್ಲ, ಕೇಳುವ ವಿಚಾರವೂ ಸಹ ಬರುವುದಿಲ್ಲ.

ಶಾಸ್ತ್ರಗಳಲ್ಲಿ ಎಲ್ಲವೂ ಭಕ್ತಿಮಾರ್ಗದ ಕಥೆಗಳಿವೆ, ಅದನ್ನೇ ಓದುತ್ತಿರುತ್ತಾರೆ. ಇಲ್ಲಂತು ಅನೇಕ ಭಾಷೆಗಳಿವೆ, ಸತ್ಯಯುಗದಲ್ಲಿ ಅನೇಕ ಭಾಷೆ ಮುಂತಾದವುಗಳಾಗುವುದಿಲ್ಲ. ಒಂದು ಧರ್ಮ, ಒಂದು ರಾಜ್ಯದ ಸ್ಥಾಪನೆಯನ್ನು ನೀವು ಮಾಡುತ್ತಿದ್ದೀರಿ. ಅವರುಗಳಂತು ಶಾಂತಿ ಸ್ಥಾಪನೆ ಮಾಡುವ ಸಲಹೆ ಕೊಡುವವರಿಗೆ ಬಹುಮಾನವನ್ನು ಕೊಡುತ್ತಿರುತ್ತಾರೆ. ಶಿವ ತಂದೆಯು ನಿಮಗೆ ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುವ ಸಲಹೆಯನ್ನು ಕೊಡುತ್ತಾರೆ. ಅವರಿಗೆ ನೀವು ಯಾವ ಬಹುಮಾನವನ್ನು ಕೊಡುವಿರಿ? ಅವರಂತು ಇನ್ನೂ ನಿಮಗೆ ಬಹುಮಾನವನ್ನು ಕೊಡುತ್ತಾರೆ, ತೆಗೆದುಕೊಳ್ಳುವುದಿಲ್ಲ. ಇದು ತಿಳಿದುಕೊಳ್ಳುವ ಮಾತಾಗಿದೆ. ನೆನ್ನೆಯ ಮಾತು, ಯಾವಾಗ ಇವರ ರಾಜ್ಯವಿತ್ತು(ಲಕ್ಷ್ಮೀ-ನಾರಾಯಣ). ಈಗಂತು ಇರುವುದಕ್ಕೂ ಜಾಗವಿಲ್ಲ. ಅಲ್ಲಂತು ಎರಡು-ಮೂರು ಅಂತಸ್ತುಗಳನ್ನು ಕಟ್ಟುವ ಅವಶ್ಯಕತೆಯೂ ಇರುವುದಿಲ್ಲ. ಕಟ್ಟಿಗೆ ಮುಂತಾದುವುಗಳ ಅವಶ್ಯಕತೆಯೂ ಇರುವುದಿಲ್ಲ. ಅಲ್ಲಂತು ಚಿನ್ನ-ಬೆಳ್ಳಿಯ ಮನೆಯಾಗುತ್ತದೆ. ವಿಜ್ಞಾನದ ಅನ್ವೇಷಣೆಯಿಂದ ತಕ್ಷಣದಲ್ಲಿಯೇ ಮನೆಯಾಗಿ ಬಿಡುತ್ತದೆ. ಇಲ್ಲಂತು ವಿಜ್ಞಾನದಿಂದ ಸುಖವೂ ಇದೆ, ದುಃಖವೂ ಇದೆ. ಇದರಿಂದ ಇಡೀ ಪ್ರಪಂಚವೇ ಸಮಾಪ್ತಿಯಾಗಿ ಬಿಡುತ್ತದೆ, ಇದಕ್ಕೆ ಫಾಲ್ ಪಾಂಪ್ ಎಂದು ಹೇಳಲಾಗುತ್ತದೆ. ಮಾಯೆಯ ಶೋ ಎಷ್ಟೊಂದಿದೆ! ಸಾಹುಕಾರರಿಗಂತು ಹೇಗೆಂದರೆ ಸ್ವರ್ಗವೇ ಇಲ್ಲಿದೆ ಆದ್ದರಿಂದ ಅವರು ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುವುದೇ ಇಲ್ಲ. ಮುಂಚೆ ನೀವು ತಿಳಿದುಕೊಂಡಿರಲಿಲ್ಲ. ಇಲ್ಲಂತು ತಂದೆಯು ಬಂದು ಡೈರೆಕ್ಟ್ ಆಗಿ ನಿಮಗೆ ಓದಿಸುತ್ತಾರೆ. ಹೊರಗಂತು ಮಕ್ಕಳು ಓದಿಸುತ್ತಾರೆ. ಮಿತ್ರ ಸಂಬಂಧಿ ಮುಂತಾದವರೂ ಸಹ ನೆನಪಿಗೆ ಬರುತ್ತಿರುತ್ತಾರೆ. ಇಲ್ಲಂತು ತಂದೆಯು ಕುಳಿತು ತಿಳಿಸುತ್ತಾರೆ. ದಿನ ಕಳೆದಂತೆ ನೀವು ನೆನಪಿನ ಯಾತ್ರೆಯಲ್ಲಿ ಪರಿಪಕ್ವವಾಗುತ್ತಾ ಸಾಗುತ್ತೀರಿ. ನಂತರ ನಿಮಗೆ ಯಾವುದೇ ನೆನಪಿಗೆ ಬರುವುದಿಲ್ಲ. ಕೇವಲ ಮನೆ ಮತ್ತು ರಾಜಧಾನಿಯಷ್ಟೇ ನೆನಪು ಬರುತ್ತದೆ. ನಂತರ ಈ ನೌಕರಿ ಮುಂತಾದವುದರ ನೆನಪು ಬರುವುದಿಲ್ಲ. ಸಾಯುವುದೂ ಸಹ ಹಾಗೆ, ಹೇಗೆಂದರೆ ಕುಳಿತು-ಕುಳಿತಿದ್ದಂತೆಯೇ ಹೃದಯಾಘಾತವಾಗುತ್ತದೆ. ದುಃಖದ ಮಾತಿರುವುದಿಲ್ಲ. ಆಸ್ಪತ್ರೆ ಮುಂತಾದವಂತು ಏನೂ ಇರುವುದಿಲ್ಲ. ತಂದೆಯನ್ನು ತಿಳಿದು ಬಿಟ್ಟಿರಿ ಮತ್ತು ಸ್ವರ್ಗದ ಮಾಲೀಕರಾದಿರಿ. ನಿಮಗಂತು ಹಕ್ಕಿದೆ, ಎಲ್ಲರಿಗೂ ಇಲ್ಲ ಏಕೆಂದರೆ ಸ್ವರ್ಗದಲ್ಲಂತು ಎಲ್ಲರೂ ಬರುವುದಿಲ್ಲವಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ. ಅತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಆತ್ಮಿಕ ಮಾರ್ಗದರ್ಶಿಯಾಗಿದ್ದು ಎಲ್ಲರಿಗೂ ಆತ್ಮಿಕ ಮನೆಯ ಮಾರ್ಗವನ್ನು ತಿಳಿಸಬೇಕಾಗಿದೆ. ಜ್ಞಾನ ಮತ್ತು ಯೋಗದ ಅಸ್ತ್ರ-ಶಸ್ತ್ರದಿಂದ ಇಡೀ ವಿಶ್ವದಲ್ಲಿ ರಾಜ್ಯಾಡಳಿತ ಮಾಡಬೇಕಾಗಿದೆ. ಡಬಲ್ ಅಹಿಂಸಕರಾಗಬೇಕಾಗಿದೆ.

2. 84 ಜನ್ಮಗಳ ಆಲ್ರೌಂಡರ್ ಪಾತ್ರವನ್ನಭಿನಯಿಸುವವರು ಈಗ ಆಲ್ರೌಂಡರ್ ಆಗಬೇಕಾಗಿದೆ. ಎಲ್ಲಾ ಕಾರ್ಯವನ್ನೂ ಮಾಡಬೇಕಾಗಿದೆ. ಬೇಹದ್ದಿನ ವೆರೈಟಿ ಡ್ರಾಮಾದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯ ಪಾತ್ರವನ್ನು ನೋಡುತ್ತಾ ಹರ್ಷಿತವಾಗಿರಬೇಕಾಗಿದೆ.

ವರದಾನ:
ಪರಿಶೀಲನೆ ಮಾಡುವ ಶಕ್ತಿಯ ಮೂಲಕ ತಂದೆಯನ್ನು ಗುರುತಿಸಿ ಅಧಿಕಾರಿಯಾಗುವಂತಹ ವಿಶೇಷ ಆತ್ಮ ಭವ.

ಬಾಪ್ದಾದಾರವರು ಪ್ರತಿಯೊಂದು ಮಕ್ಕಳ ವಿಶೇಷತೆಯನ್ನು ನೋಡುತ್ತಾರೆ, ಭಲೆ ಸಂಪೂರ್ಣರಾಗಿಲ್ಲದೇ ಇರಬಹುದು, ಪುರುಷಾರ್ಥಿಯಾಗಿದ್ದಾರೆ. ಆದರೆ ಇಂತಹ ಒಂದು ಮಗುವೂ ಇಲ್ಲ, ಯಾರಲ್ಲಿ ಒಂದು ವಿಶೇಷತೆಯೂ ಇಲ್ಲ. ಎಲ್ಲದಕ್ಕಿಂತಲೂ ಮೊದಲ ವಿಶೇಷತೆಯಂತು ಕೋಟಿಯಲ್ಲಿ ಕೆಲವರ ಪಟ್ಟಿಯಲ್ಲಿದ್ದೀರಿ. ತಂದೆಯನ್ನು ಗುರುತಿಸಿ ನನ್ನ ಬಾಬಾ ಎಂದು ಹೇಳುವುದು ಮತ್ತು ಅಧಿಕಾರಿಯಾಗುವುದು - ಇದೂ ಸಹ ಬುದ್ಧಿಯ ವಿಶೇಷತೆಯಾಗಿದೆ, ಪರಿಶೀಲಿಸುವ ಶಕ್ತಿಯಿದೆ. ಈ ಶ್ರೇಷ್ಠ ಶಕ್ತಿಯೇ ವಿಶೇಷ ಆತ್ಮರನ್ನಾಗಿ ಮಾಡಿ ಬಿಟ್ಟಿತು.

ಸ್ಲೋಗನ್:
ಶ್ರೇಷ್ಠ ಭಾಗ್ಯದ ರೇಖೆಯನ್ನೆಳೆಯುವ ಲೇಖನಿಯಾಗಿದೆ - ಶ್ರೇಷ್ಠ ಕರ್ಮ, ಆದ್ದರಿಂದ ಎಷ್ಟು ಬೇಕೋ ಅಷ್ಟು ಭಾಗ್ಯವನ್ನು ರೂಪಿಸಿಕೊಂಡುಬಿಡಿ.