15.08.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಮಗೆ ಸತ್ಯ ಸ್ವಾತಂತ್ರ್ಯವನ್ನು ಕೊಡಲು, ಯಮಧೂತರ ಶಿಕ್ಷೆಗಳಿಂದ ಮುಕ್ತರನ್ನಾಗಿ ಮಾಡಲು, ರಾವಣನ ಪರತಂತ್ರತೆಯಿಂದ ಬಿಡಿಸಲು ತಂದೆಯು ಬಂದಿದ್ದಾರೆ”

ಪ್ರಶ್ನೆ:
ತಂದೆ ಮತ್ತು ನೀವು ಮಕ್ಕಳು ತಿಳಿಸುವುದರಲ್ಲಿ ಮುಖ್ಯ ಅಂತರ ಏನಿದೆ?

ಉತ್ತರ:
ತಂದೆಯು ತಿಳಿಸುವಾಗ ಮಧುರ ಮಕ್ಕಳೇ ಎಂದು ಹೇಳುತ್ತಾರೆ. ಇದರಿಂದ ತಂದೆಯ ಪ್ರತಿಯೊಂದು ಮಾತುಗಳು ನಾಟುತ್ತವೆ. ನೀವು ಪರಸ್ಪರ ಸಹೋದರರಿಗೆ ತಿಳಿಸುವಿರಿ, ಮಧುರ ಮಕ್ಕಳೇ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ತಂದೆಯು ಹಿರಿಯರಾಗಿದ್ದಾರೆ ಅವರ ಮಾತಿನ ಪ್ರಭಾವ ಆಗುತ್ತದೆ. ನಿಮಗೆ ನಾಚಿಕೆಯಾಗುವುದಿಲ್ಲವೆ, ನೀವು ಪತಿತರಾಗಿದ್ದೀರಿ ಈಗ ಪಾವನರಾಗಿರಿ ಎಂದು ಅವರು ಮಕ್ಕಳಿಗೆ ಅರಿವು ಮೂಡಿಸುತ್ತಾರೆ.

ಓಂ ಶಾಂತಿ.
ಬೇಹದ್ದಿನ ಆತ್ಮಿಕ ತಂದೆಯು ಬೇಹದ್ದಿನ ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ಈಗ ಇದನ್ನು ಬೇಹದ್ದಿನ ತಂದೆ ಮತ್ತು ಬೇಹದ್ದಿನ ಮಕ್ಕಳೇ ತಿಳಿದುಕೊಂಡಿದ್ದೀರಿ, ಬೇರೆ ಯಾರೂ ಬೇಹದ್ದಿನ ತಂದೆಯನ್ನಾಗಲೀ, ತಮ್ಮನ್ನು ಬೇಹದ್ದಿನ ಮಕ್ಕಳೆಂದಾಗಲೀ ತಿಳಿದುಕೊಂಡಿಲ್ಲ. ಬ್ರಹ್ಮಾ ಮುಖ ವಂಶಾವಳಿಗಳೇ ತಿಳಿದುಕೊಳ್ಳುತ್ತಾರೆ ಮತ್ತು ಒಪ್ಪುತ್ತಾರೆ ಅನ್ಯ ಯಾರೂ ಒಪ್ಪುವುದಿಲ್ಲ. ಬ್ರಹ್ಮಾ ಅವಶ್ಯವಾಗಿ ಬೇಕು. ಇವರಿಗೆ ಆದಿ ದೇವನೆಂದು ಹೇಳುತ್ತಾರೆ, ಇವರಲ್ಲಿ ತಂದೆಯು ಪ್ರವೇಶ ಮಾಡಿದ್ದಾರೆ. ತಂದೆಯು ಬಂದು ಏನು ಮಾಡುತ್ತಾರೆ? ಪಾವನರಾಗಬೇಕೆಂದು ಹೇಳುತ್ತಾರೆ. ತಂದೆಯ ಶ್ರೀಮತವಾಗಿದೆ - ನಿಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ. ಮಕ್ಕಳಿಗೆ ಆತ್ಮದ ಪರಿಚಯವನ್ನು ಕೊಟ್ಟಿದ್ದಾರೆ, ಆತ್ಮವು ಭೃಕುಟಿಯ ಮಧ್ಯದಲ್ಲಿ ನಿವಾಸ ಮಾಡುತ್ತದೆ. ತಂದೆಯೇ ತಿಳಿಸಿದ್ದಾರೆ ಆತ್ಮವು ಅವಿನಾಶಿಯಾಗಿದೆ, ಇದರ ಸಿಂಹಾಸನವು ಈ ವಿನಾಶಿ ಶರೀರವಾಗಿದೆ. ನಾವೆಲ್ಲ ಆತ್ಮರು ಪರಸ್ಪರ ಸಹೋದರರು, ಒಬ್ಬ ತಂದೆಯ ಮಕ್ಕಳಾಗಿದ್ದೇವೆಂದು ನಿಮಗೆ ಗೊತ್ತಿದೆ. ಈಶ್ವರ ಸರ್ವವ್ಯಾಪಿ ಎಂದು ಹೇಳುವುದು ತಪ್ಪಾಗಿದೆ. ನೀವಿದನ್ನು ಬಹಳ ಚೆನ್ನಾಗಿ ತಿಳಿಸುತ್ತೀರಿ - ಪ್ರತಿಯೊಬ್ಬರಲ್ಲಿ ಪಂಚ ವಿಕಾರಗಳು ಪ್ರವೇಶವಾಗಿದೆ ಎಂದು, ಅದಕ್ಕೆ ಅವರು, ಇವರು ಸರಿಯಾಗಿ ಹೇಳುತ್ತಿದ್ದಾರೆ, ನಾವು ಸಹೋದರೆಂದಮೇಲೆ ಅವಶ್ಯವಾಗಿ ಆಸ್ತಿ ಸಿಗಬೇಕು ಎಂದು ತಿಳಿದುಕೊಳ್ಳುತ್ತಾರೆ, ಆದರೆ ಇಲ್ಲಿಂದ ಹೊರಗೆ ಹೋದರೆ ಮಾಯೆಯ ಬಿರುಗಾಳಿಯಲ್ಲಿ ಹೋಗಿ ಬಿಡುತ್ತಾರೆ. ಕೆಲವರೇ ನಿಲ್ಲುತ್ತಾರೆ. ಎಲ್ಲ ಸ್ಥಾನಗಳಲ್ಲಿ ಇದೇ ರೀತಿಯಾಗುತ್ತದೆ. ಕೆಲವರು ಸ್ವಲ್ಪ ತಿಳಿದುಕೊಂಡರೂ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಈಗ ನೀವು ಎಲ್ಲರಿಗೂ ತಿಳಿಸಬಹುದಾಗಿದೆ ಒಂದುವೇಳೆ ಯಾರಾದರೂ ಹೆಚ್ಚು ಗಮನ ನೀಡಲಿಲ್ಲವೆಂದಾಗ ತಿಳಿಯಲಾಗುತ್ತೆ ಇವರು ಹಳೆಯ ಭಕ್ತರಲ್ಲ. ಈ ಮಾತುಗಳನ್ನು ಅರ್ಥ ಮಾಡಿಕೊಳ್ಳುವವರೇ ಅರ್ಥ ಮಾಡಿಕೊಳ್ಳುತ್ತಾರೆ ಯಾರಾದರೂ ತಿಳಿದುಕೊಳ್ಳದಿದ್ದರೆ ತಿಳಿಸಲೂ ಸಹ ಸಾಧ್ಯವಿಲ್ಲ. ನಿಮ್ಮಲ್ಲಿಯೂ ನಂಬರವಾರ್ ಇದ್ದಾರೆ. ತಿಳಿದುಕೊಳ್ಳುವವರು ಒಳ್ಳೆಯ ವ್ಯಕ್ತಿಯಾಗಿದ್ದರೆ ತಿಳಿಸಿಕೊಡಲು ಒಳ್ಳೆಯವರನ್ನೇ ಕಳುಹಿಸಲಾಗುತ್ತದೆ. ಇದರಿಂದ ಅವರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇದಂತೂ ಗೊತ್ತಿದೆ ಹಿರಿಯ ವ್ಯಕ್ತಿಗಳು ಅಷ್ಟು ಬೇಗನೆ ತಿಳಿದುಕೊಳ್ಳುವುದಿಲ್ಲ. ಇವರು ತಿಳಿಸುವುದು ಬಹಳ ಚೆನ್ನಾಗಿದೆ, ತಂದೆಯ ಪೂರ್ಣ ಪರಿಚಯವನ್ನು ಕೊಡುತ್ತಾರೆ ಎಂದು ಅಭಿಪ್ರಾಯವನ್ನು ಹೇಳುತ್ತಾರೆ. ಆದರೆ ಅವರಿಗೆ ಬರಲು ಬಿಡುವಾದರೂ ಎಲ್ಲಿದೆ? ನೀವು ಹೇಳುತ್ತೀರಿ, ಬೇಹದ್ದಿನ ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ.

ತಂದೆಯು ಡೈರೆಕ್ಟ್ ನಾವು ಆತ್ಮಗಳೊಂದಿಗೆ ಮಾತನಾಡುತ್ತಾರೆಂದು ಈಗ ನೀವು ಮಕ್ಕಳು ತಿಳಿಯುತ್ತೀರಿ. ಸಮ್ಮುಖದಲ್ಲಿ ಕೇಳಿದಾಗಲೇ ಬಾಣವು ಚೆನ್ನಾಗಿ ನಾಟುತ್ತದೆ. ಅಲ್ಲಿ ಬ್ರಹ್ಮಾ ಕುಮಾರ ಕುಮಾರಿಯರ ಮೂಲಕ ಕೇಳುತ್ತಾರೆ. ಇಲ್ಲಿ ಪರಮಪಿತ ಪರಮಾತ್ಮನು ಬ್ರಹ್ಮಾ ಅವರ ಮೂಲಕ ಡೈರೆಕ್ಟ್ (ಸಮ್ಮುಖದಲ್ಲಿ) ತಿಳಿಸುತ್ತಾರೆ - ಹೇ ಮಕ್ಕಳೇ, ನೀವು ತಂದೆಯು ಹೇಳುವುದನ್ನು ಪಾಲಿಸುವುದಿಲ್ಲವೇ? ನೀವು ಯಾರಿಗೂ ತಂದೆಯು ಹೇಳಿದಂತೆ ಹೇಳಲು ಸಾಧ್ಯವಿಲ್ಲ. ಅಲ್ಲಿ ತಂದೆ ಇಲ್ಲ, ಇಲ್ಲಿ ತಂದೆಯು ಕುಳಿತಿದ್ದಾರೆ. ತಂದೆಯು ಮಾತನಾಡುತ್ತಾರೆ - ಮಕ್ಕಳೇ, ತಂದೆಯು ಹೇಳುವುದನ್ನು ನೀವು ಪಾಲಿಸುವುದಿಲ್ಲವೆ? ಜ್ಞಾನವಿಲ್ಲದಿರುವಾಗಲೂ ತಂದೆಯು ತಿಳಿಸುವುದರಲ್ಲಿ ಮತ್ತು ಸಹೋದರರು ತಿಳಿಸುವುದರಲ್ಲಿ ಅಂತರವಿರುತ್ತದೆ. ತಂದೆ ತಿಳಿಸುವುದರಿಂದ ಎಷ್ಟು ಪ್ರಭಾವ ಆಗುತ್ತದೆ ಅಷ್ಟು ಸಹೋದರರು ತಿಳಿಸುವುದರಲ್ಲಿ ಇಲ್ಲ. ತಂದೆಯಂತೂ ಹಿರಿಯರಾದರಲ್ಲವೆ. ಆದ್ದರಿಂದ ಭಯವಿರುತ್ತದೆ. ನಿಮಗೂ ಸಹ ತಂದೆಯು ತಿಳಿಸುತ್ತಾರೆ ತಂದೆಯಾದ ನನ್ನನ್ನು ನೆನಪು ಮಾಡಿ. ನೀವು ನನ್ನನ್ನು ಪದೇ ಪದೇ ಮರೆಯುತ್ತೀರಿ. ನಿಮಗೆ ನಾಚಿಕೆಯಗುವುದಿಲ್ಲವೆ! ಡೈರೆಕ್ಟ್ ತಂದೆಯು ತಿಳಿಸಿದರೆ ಅದು ಪ್ರಭಾವ ಬೀರುತ್ತದೆ. ಅರೆ! ತಂದೆ ಹೇಳುವುದನ್ನು ಪಾಲಿಸುವುದಿಲ್ಲವೇ? ಬೇಹದ್ದಿನ ತಂದೆಯು ತಿಳಿಸುತ್ತಾರೆ - ಈ ಜನ್ಮದಲ್ಲಿ ನೀವು ನಿರ್ವಿಕಾರಿಗಳಾದರೆ 21 ಜನ್ಮ ನಿರ್ವಿಕಾರಿಗಳಾಗಿ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ಇದನ್ನೇ ಪಾಲಿಸುವುದಿಲ್ಲವೆ! ತಂದೆ ಹೇಳುವುದು ಬಾಣದಂತೆ ಚೆನ್ನಾಗಿ ನಾಟುತ್ತದೆ ಕಠಿಣವೆನಿಸುತ್ತದೆ, ಅಂತರವಂತೂ ಇರುತ್ತದೆ. ಸದಾ ಹೊಸಬರೊಂದಿಗೆ ತಂದೆಯು ಮಿಲನ ಮಾಡುತ್ತಿರುತ್ತಾರೆಂದಲ್ಲ. ಮಿಲನ ಮಾಡುವಾಗ ಅಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಏಕೆಂದರೆ ಇದು ಸಂಪೂರ್ಣ ಹೊಸ ಮಾತಾಗಿದೆ. ಗೀತೆಯಲ್ಲಿ ಕೃಷ್ಣನ ಹೆಸರು ಬರೆದಿದ್ದಾರೆ. ಇದಂತೂ ಸಾಧ್ಯವಿಲ್ಲ. ಈಗ ನಾಟಕದನುಸಾರ ನಾವು ತಂದೆಯ ಬಳಿ ಹೋಗಬೇಕು ಎಂದು ನಿಮ್ಮ ಬುದ್ಧಿಯಲ್ಲಿ ಕುಳಿತಿದೆ. ಡೈರೆಕ್ಟ್ ಮುರಳಿ ಕೇಳಬೇಕು, ಅಲ್ಲಿ ಸಹೋದರರ ಮೂಲಕ ಕೇಳುತ್ತೇವೆ, ಈಗ ನೇರವಾಗಿ ತಂದೆಯ ಮೂಲಕ ಕೇಳಬೇಕೆಂದು ನೀವು ಮಕ್ಕಳು ಓಡಿ ಬರುತ್ತೀರಿ. ತಂದೆಯ ಪ್ರಭಾವ ಬೀರುತ್ತದೆ. ಮಕ್ಕಳೇ, ಮಕ್ಕಳೇ ಎಂದು ಮಾತನಾಡುತ್ತಾರೆ. ಮಕ್ಕಳೇ, ನಿಮಗೆ ನಾಚಿಕೆಯಾಗುವುದಿಲ್ಲವೆ! ತಂದೆಯನ್ನು ನೆನಪೇ ಮಾಡುವುದಿಲ್ಲವೇ! ತಂದೆಯ ಜೊತೆ ನಿಮಗೆ ಪ್ರೀತಿ ಇಲ್ಲವೇ! ಎಷ್ಟು ನೆನಪು ಮಾಡುತ್ತೀರಿ? ಬಾಬಾ, ಒಂದು ಗಂಟೆ. ಅರೇ! ನಿರಂತರ ನೆನಪು ಮಾಡಿದರೆ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಜನ್ಮ ಜನ್ಮಾಂತರದ ಪಾಪದ ಹೊರೆಯು ನಿಮ್ಮ ತಲೆಯ ಮೇಲಿದೆ. ತಂದೆಯು ಸನ್ಮುಖದಲ್ಲಿ ತಿಳಿಸುತ್ತಾರೆ - ನೀವು ತಂದೆಗೆ ಎಷ್ಟು ನಿಂದನೆ ಮಾಡಿದಿರಿ. ನಿಮ್ಮ ಮೇಲೆ ಕೇಸ್ ಹಾಕಬೇಕು. ಪತ್ರಿಕೆಯಲ್ಲಿ ಯಾರ ಬಗ್ಗೆಯಾದರೂ ನಿಂದನೆಯ ಮಾತು ಬರೆದರೆ ಅವರ ವಿರುದ್ಧ ಕೇಸ್ ಹಾಕುತ್ತಾರೆ. ಈಗ ತಂದೆಯು ಸ್ಮೃತಿ ತರಿಸುತ್ತಾರೆ - ನೀವು ಏನೇನು ಮಾಡುತ್ತಿದ್ದಿರಿ, ನಾಟಕದನುಸಾರ ರಾವಣನ ಸಂಗದಲ್ಲಿ ಈ ರೀತಿಯಾಯಿತು. ಈಗ ಭಕ್ತಿಮಾರ್ಗವೆಲ್ಲವೂ ಮುಗಿಯಿತು, ಎಲ್ಲಾ ಕಳೆದುಹೋಯಿತು. ಮಧ್ಯದಲ್ಲಿ ತಡೆಯುವವರು ಯಾರೂ ಇರುವುದಿಲ್ಲ. ದಿನ ಪ್ರತಿದಿನ ಇಳಿಯುತ್ತಾ ಇಳಿಯುತ್ತಾ ತಮೋಪ್ರಧಾನ ಮಂದ ಬುದ್ಧಿಯವರಾಗಿ ಬಿಡುತ್ತಾರೆ. ಯಾರ ಪೂಜೆ ಮಾಡುವರೋ ಅವರನ್ನು ಕಲ್ಲು ಮುಳ್ಳಿನಲ್ಲಿದ್ದಾರೆಂದು ಹೇಳುತ್ತಾರೆ. ಇದಕ್ಕೆ ಮಿತಿ ಮೀರಿದ ಬುದ್ಧಿಹೀನತೆ ಎಂದು ಹೇಳುತ್ತಾರೆ. ಬೇಹದ್ದಿನ ಮಕ್ಕಳ ಬೇಹದ್ದಿನ ಬುದ್ಧಿಹೀನತೆ. ಒಂದು ಕಡೆ ಶಿವ ತಂದೆಯ ಪೂಜೆ ಮಾಡುತ್ತಾರೆ, ಇನ್ನೊಂದು ಕಡೆ ತಂದೆಯನ್ನೇ ಸರ್ವವ್ಯಾಪಿ ಎಂದು ಹೇಳುತ್ತಾರೆ. ಈಗ ನಿಮಗೆ ಸ್ಮೃತಿ ಬಂದಿದೆ - ಎಷ್ಟು ಬುದ್ಧಿಹೀನ ಕಾರ್ಯ ಮಾಡಿದೆವು, ತಂದೆಯ ನಿಂದನೆ ಮಾಡಿದೆವು ಎಂದು. ಈಗ ನೀವು ಮಕ್ಕಳು ತಿಳಿದುಕೊಂಡಿರುವುದರಿಂದ ಭಿಕಾರಿಯಿಂದ ರಾಜಕುಮಾರರಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ಶ್ರೀ ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ. ಕೃಷ್ಣನಿಗೆ 16,108 ರಾಣಿಯರಿದ್ದರು, ಮಕ್ಕಳಿದ್ದರು ಎಂದು ಹೇಳುತ್ತಾರೆ. ಈಗ ನಿಮಗೆ ನಾಚಿಕೆಯಾಗುತ್ತದೆ. ಯಾರಾದರೂ ಪಾಪ ಮಾಡಿದರೆ ಭಗವಂತನ ಮುಂದೆ ಕಿವಿ ಹಿಡಿದುಕೊಂಡು ಹೇ ಭಗವಂತ, ದೊಡ್ಡ ತಪ್ಪಾಯಿತು, ದಯೆ ತೋರಿ, ಕ್ಷಮೆ ಮಾಡಿ ಎಂದು ಹೇಳುತ್ತಾರೆ. ನೀವು ಎಷ್ಟು ದೊಡ್ಡ ತಪ್ಪು ಮಾಡಿದಿರಿ. ತಂದೆಯು ತಿಳಿಸುತ್ತಾರೆ - ನಾಟಕದಲ್ಲಿಯೇ ಹೀಗಿದೆ, ಯಾವಾಗ ನೀವು ಈ ರೀತಿಯಾಗುತ್ತೀರಿ ಆಗ ನಾನು ಬರುತ್ತೇನೆ.

ಈಗ ತಂದೆಯು ತಿಳಿಸುತ್ತಾರೆ - ನೀವು ಎಲ್ಲ ಧರ್ಮದವರ ಕಲ್ಯಾಣ ಮಾಡಬೇಕಾಗಿದೆ. ಯಾವ ತಂದೆ ಸರ್ವರ ಸದ್ಗತಿ ಮಾಡುವರೋ ಅವರನ್ನೇ ಸರ್ವ ಧರ್ಮದವರು ಸರ್ವವ್ಯಾಪಿ ಎಂದು ಹೇಳುತ್ತಾರೆ. ಇದನ್ನು ಎಲ್ಲಿಂದ ಕಲಿತಿರಿ!! ಭಗವಾನುವಾಚ - ನಾನು ಸರ್ವವ್ಯಾಪಿ ಅಲ್ಲ. ನಿಮ್ಮ ಕಾರಣದಿಂದ ಅನ್ಯರದೂ ಇಂತಹ ಸ್ಥಿತಿಯಾಗಿದೆ. ಹೇ ಪತಿತ ಪಾವನ ಎಂದು ಕರೆಯುತ್ತಾರೆ ಆದರೆ ತಿಳಿದುಕೊಂಡಿಲ್ಲ. ಯಾವಾಗ ನಾವು ಮೊಟ್ಟ ಮೊದಲು ಮನೆಯಿಂದ ಬಂದಾಗ ಪತಿತರಾಗಿದ್ದೆವೇನು? ದೇಹಾಭಿಮಾನಿಯಾಗುವ ಕಾರಣ ಪತಿತರಾದೆವು. ಯಾವುದೇ ಧರ್ಮದವರು ಬಂದರೆ ಅವರನ್ನು ಪ್ರಶ್ನಿಸಬೇಕು - ಪರಮಪಿತ ಪರಮಾತ್ಮನ ಪರಿಚಯ ನಿಮಗಿದೆಯೇ? ಅವರು ಯಾರು? ಎಲ್ಲಿ ನಿವಾಸ ಮಾಡುತ್ತಾರೆ? ಎಂದು. ಆಗ ಅವರು ಮೇಲಿದ್ದಾರೆ ಅಥವಾ ಸರ್ವವ್ಯಾಪಿ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನಿಮ್ಮ ಕಾರಣ ಇಡೀ ಪ್ರಪಂಚಕ್ಕೆ ನಷ್ಟವಾಗಿದೆ. ಅದಕ್ಕೆ ನಿಮಿತ್ತರು ನೀವಾಗಿದ್ದೀರಿ. ಎಲ್ಲರಿಗೂ ತಿಳಿಸಬೇಕಾಗಿದೆ. ನಾಟಕದನುಸಾರವಾಗಿಯೇ ಆಗುತ್ತದೆಯಾದರೂ ನೀವು ಪತಿತರಾದಿರಿ ಅಲ್ಲವೆ. ಎಲ್ಲರೂ ಪಾಪಾತ್ಮರಾಗಿದ್ದಾರೆ ಈಗ ಪುಣ್ಯಾತ್ಮರಾಗಲು ಕರೆಯುತ್ತಾರೆ. ಎಲ್ಲ ಧರ್ಮದವರು ಮುಕ್ತಿಧಾಮ, ಮನೆಗೆ ಹೋಗಬೇಕಾಗಿದೆ. ಅಲ್ಲಿ ಪವಿತ್ರತೆಯಿದೆ, ಇದು ನಾಟಕದಲ್ಲಿ ಮಾಡಲ್ಪಟ್ಟಿದೆ. ತಂದೆ ಬಂದು ಅದನ್ನು ತಿಳಿಸುತ್ತಾರೆ. ಈ ಜ್ಞಾನವು ಎಲ್ಲ ಧರ್ಮದವರಿಗೆ ಇದೆ. ತಂದೆಯ ಬಳಿ ಸಮಾಚಾರವು ಬಂದಿತ್ತು ಒಬ್ಬ ಆಚಾರ್ಯರು ಹೇಳಿದರು, ನೀವೆಲ್ಲ ಆತ್ಮರನ್ನು ಪರಮಾತ್ಮನೆಂದು ತಿಳಿದು ನಿಮಗೆ ನಮಸ್ಕಾರ ಮಾಡುತ್ತೇನೆ. ಹಾಗಾದರೆ ಇಷ್ಟೆಲ್ಲ ಪರಮಾತ್ಮರು ಇದ್ದಾರೇನು? ಸ್ವಲ್ಪವೂ ತಿಳಿದಿಲ್ಲ. ಯಾರು ಹೆಚ್ಚು ಭಕ್ತಿ ಮಾಡಿಲ್ಲವೊ ಅವರು ಇಲ್ಲಿ ಉಳಿಯುವುದಿಲ್ಲ. ಸೇವಾಕೇಂದ್ರಗಳಲ್ಲೂ ಕೆಲವರು ಸ್ವಲ್ಪ ಸಮಯವಷ್ಟೇ ಉಳಿಯುತ್ತಾರೆ ಇದರಿಂದ ತಿಳಿದುಕೊಳ್ಳಬೇಕು ಭಕ್ತಿ ಕಡಿಮೆ ಮಾಡಿದ್ದಾರೆ ನಂತರವಾದರೂ ಎಲ್ಲಿಗೆ ಹೋಗುತ್ತಾರೆ! ಬೇರೆ ಯಾವ ಅಂಗಡಿಯೂ ಇಲ್ಲ. ಮನುಷ್ಯರು ಬಹಳ ಬೇಗನೆ ಅರಿತುಕೊಳ್ಳುವಂತಹ ಯುಕ್ತಿಯನ್ನು ರಚಿಸಬೇಕು, ಈಗಂತೂ ಎಲ್ಲರಿಗೂ ಸಂದೇಶವನ್ನು ಕೊಡಬೇಕು. ಇದನ್ನು ತಿಳಿಸಿ - ತಂದೆಯನ್ನು ನೆನಪು ಮಾಡಿ, ನೀವೇ ಪೂರ್ಣ ನೆನಪು ಮಾಡದಿದ್ದರೆ ನಿಮ್ಮ ಬಾಣ ಹೇಗೆ ನಾಟುತ್ತದೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೆನಪಿನ ಚಾರ್ಟ್ ಇಡಿ. ಪಾವನರಾಗುವುದೇ ಮುಖ್ಯವಾದ ಮಾತಾಗಿದೆ. ಎಷ್ಟು ಪಾವನರಾಗುತ್ತೀರಿ ಅಷ್ಟು ಜ್ಞಾನವು ಧಾರಣೆಯಾಗುವುದು, ಖುಷಿಯೂ ಇರುವುದು. ನಾವು ಎಲ್ಲರ ಉದ್ಧಾರ ಮಾಡಬೇಕೆಂದು ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು ಏಕೆಂದರೆ ತಂದೆಯೇ ಬಂದು ಸದ್ಗತಿ ಮಾಡುತ್ತಾರೆ. ತಂದೆಗೆ ಖುಷಿ ಮತ್ತು ಚಿಂತೆಯ ಮಾತಿಲ್ಲ. ನಾಟಕವು ಮಾಡಲ್ಪಟ್ಟಿದೆ ಎಂದಮೇಲೆ ನಿಮಗಂತೂ ಯಾವುದೇ ಚಿಂತೆಯಿರಬಾರದು. ತಂದೆಯು ಸಿಕ್ಕಿದ್ದಾರೆ ಎಂದ ಮೇಲೆ ಇನ್ನೇನು ಬೇಕು! ಕೇವಲ ತಂದೆಯ ಮಾತಿನಂತೆ ನಡೆಯ ಬೇಕು. ಈ ತಿಳುವಳಿಕೆಯೂ ಸಹ ಈಗ ಸಿಗುತ್ತದೆ, ಸತ್ಯಯುಗದಲ್ಲಿ ಸಿಗುವುದಿಲ್ಲ. ಅಲ್ಲಿ ಜ್ಞಾನದ ಮಾತೇ ಇರುವುದಿಲ್ಲ. ಇಲ್ಲಿ ನಿಮಗೆ ಬೇಹದ್ದಿನ ತಂದೆ ಸಿಕ್ಕಿದ್ದಾರೆ ಆದ್ದರಿಂದ ನಿಮಗೆ ಹೆಚ್ಚಿನ ಖುಷಿಯಿರಬೇಕು.

ತಂದೆಯು ತಿಳಿಸುತ್ತಾರೆ - ವಿದೇಶದಲ್ಲಿಯೂ ಸಹ ಹೋಗಿ ನೀವು ಇದನ್ನು ತಿಳಿಸಬೇಕು. ಎಲ್ಲ ಧರ್ಮದವರ ಮೇಲೆ ನಿಮಗೆ ದಯೆ ಬರುತ್ತದೆ. ಹೇ ಭಗವಂತ ದಯೆ ತೋರಿಸು, ಆಶೀರ್ವಾದ ಮಾಡು, ದುಃಖದಿಂದ ಬಿಡಿಸು ಎಂದು ಎಲ್ಲರೂ ಕರೆಯುತ್ತಾರೆ. ಆದರೆ ಏನನ್ನೂ ತಿಳಿದುಕೊಂಡಿಲ್ಲ. ತಂದೆ ಅನೇಕ ಪ್ರಕಾರದ ಯುಕ್ತಿಯನ್ನು ತಿಳಿಸುತ್ತಾರೆ. ಆದ್ದರಿಂದ ಎಲ್ಲರಿಗೂ ಇದನ್ನು ತಿಳಿಸಬೇಕು - ನೀವು ರಾವಣನ ಬಂಧನದಲ್ಲಿದ್ದೀರಿ, ನಮಗೆ ಸ್ವತಂತ್ರ್ಯವು ಸಿಗಬೇಕೆಂದು ಹೇಳುತ್ತಾರೆ. ಆದರೆ ವಾಸ್ತವಿಕವಾಗಿ ಸ್ವಾತಂತ್ರ್ಯವೆಂದು ಯಾವುದಕ್ಕೆ ಹೇಳುತ್ತಾರೆ ಎಂಬುದನ್ನೂ ತಿಳಿದುಕೊಂಡಿಲ್ಲ. ರಾವಣನ ಬಂಧನದಲ್ಲಿ ಎಲ್ಲರೂ ಬಂಧಿತರಾಗಿದ್ದಾರೆ. ಈಗ ಸ್ವಾತಂತ್ರ್ಯವನ್ನು ಕೊಡಲು ತಂದೆ ಬಂದಿದ್ದಾರೆ, ಆದರೂ ಸಹ ರಾವಣನ ರಾಜ್ಯದಲ್ಲಿ ಪರತಂತ್ರರಾಗಿ ಪಾಪ ಮಾಡುತ್ತಿರುತ್ತಾರೆ. ಸತ್ಯ ಸ್ವಾತಂತ್ರ್ಯ ಯಾವುದು? ಇದನ್ನು ಮನುಷ್ಯರಿಗೆ ತಿಳಿಸಬೇಕಾಗಿದೆ. ನೀವು ಪತ್ರಿಕೆಗಳಲ್ಲಿಯೂ ಹಾಕಿಸಬಹುದು ಇಲ್ಲಿ ರಾವಣನ ರಾಜ್ಯದಲ್ಲಿ ಸ್ವಾತಂತ್ರ್ಯವಿಲ್ಲ. ಬಹಳ ಸಾರ ರೂಪದಲ್ಲಿ ಬರೆಯಬೇಕು, ಹೆಚ್ಚು ಬರೆದರೆ ಯಾರೂ ತಿಳಿದುಕೊಳ್ಳುವುದಿಲ್ಲ. ಹೇಳಿ, ನಿಮಗೆ ಸ್ವತಂತ್ರ್ಯ ಎಲ್ಲಿದೆ. ವಿದೇಶದಲ್ಲಿ ಈ ಸಂದೇಶವು ಹರಡಿದಾಗ ಇಲ್ಲಿನವರು ಬೇಗನೆ ತಿಳಿದುಕೊಳ್ಳುತ್ತಾರೆ. ಒಬ್ಬರು ಇನ್ನೊಬ್ಬರ ಮೇಲೆ ಮುತ್ತಿಗೆ ಹಾಕುತ್ತಿರುತ್ತಾರೆ ಅಂದಾಗ ಅದು ಸ್ವಾತಂತ್ರ್ಯವಾಯಿತೆ? ಸ್ವಾತಂತ್ರ್ಯವನ್ನು ನಿಮಗೆ ತಂದೆಯು ಕೊಡುತ್ತಾರೆ ರಾವಣನ ಬಂಧನದಿಂದ ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡುತ್ತಾರೆ. ನಿಮಗೂ ಗೊತ್ತಿದೆ ಅಲ್ಲಿ ನೀವು ಬಹಳ ಸ್ವತಂತ್ರ, ಬಹಳ ಧನವಂತರಾಗಿರುತ್ತೇವೆ. ನಮ್ಮ ಮೇಲೆ ಯಾರದೇ ದೃಷ್ಟಿ ಬೀಳುವುದಿಲ್ಲ. ಅಂತ್ಯದಲ್ಲಿ ಯಾವಾಗ ನಿರ್ಬಲರಾದಿರಿ ಆಗ ನಿಮ್ಮ ಧನದ ಮೇಲೆ ಎಲ್ಲರ ದೃಷ್ಟಿ ಬಿತ್ತು. ಮಹಮ್ಮದ್ ಘಜ್ನಿಯು ಮಂದಿರವನ್ನು ಲೂಟಿ ಮಾಡಿದಾಗ ನಿಮ್ಮ ಸ್ವಾತಂತ್ರ್ಯತೆ ಹೊರಟು ಹೋಯಿತು. ರಾವಣನ ರಾಜ್ಯದಲ್ಲಿ ಪರತಂತ್ರರಾದಿರಿ ಅಂದರೆ ಅಧೀನರಾದಿರಿ. ಈಗ ನೀವು ಪುರುಷೋತ್ತಮ ಸಂಗಮಯುಗದಲ್ಲಿರುವಿರಿ, ಸತ್ಯ ಸ್ವಾತಂತ್ರ್ಯತೆಯನ್ನು ಪಡೆಯುತ್ತೀರುವಿರಿ, ಅವರಂತೂ ಸ್ವಾತಂತ್ರ್ಯತೆಯನ್ನು ತಿಳಿದುಕೊಂಡೇ ಇಲ್ಲ. ಆದ್ದರಿಂದ ಈ ಯುಕ್ತಿಯನ್ನು ತಿಳಿಸಬೇಕು. ಕಲ್ಪದ ಹಿಂದೆ ಯಾರು ಸ್ವತಂತ್ರರಾಗಿದ್ದರೊ ಅವರೇ ಒಪ್ಪುತ್ತಾರೆ. ನೀವು ತಿಳಿಸುವಾಗ ಬುದ್ಧಿಹೀನರಂತೆ ಎಷ್ಟು ವಾದ ಮಾಡುತ್ತಾರೆ ಸಮಯ ವ್ಯರ್ಥ ಮಾಡುವವರ ಜೊತೆ ಮಾತನಾಡಲು ಇಷ್ಟವಾಗುವುದಿಲ್ಲ.

ತಂದೆಯು ಬಂದು ಸ್ವಾತಂತ್ರ್ಯವನ್ನು ನೀಡುತ್ತಾರೆ, ರಾವಣ ಅಧೀನತೆಯಲ್ಲಿ ದುಃಖವಿದೆ, ಅಪಾರವಾದ ದುಃಖವಿದೆ. ತಂದೆಯ ರಾಜ್ಯದಲ್ಲಿ ನಾವು ಎಷ್ಟು ಸ್ವತಂತ್ರರಾಗಿರುತ್ತೇವೆ, ಯಾವಾಗ ನಾವು ಪವಿತ್ರ ದೇವತೆಗಳಾಗುತ್ತೇವೆ. ಆಗ ನಾವು ರಾವಣ ರಾಜ್ಯದಿಂದ ಮುಕ್ತರಾಗುತ್ತೇವೆ, ಅದಕ್ಕೆ ಸ್ವಾತಂತ್ರ್ಯವೆಂದು ಹೇಳುತ್ತಾರೆ. ಸತ್ಯವಾದ ಸ್ವಾತಂತ್ರ್ಯವನ್ನು ತಂದೆಯೇ ಬಂದು ಕೊಡುತ್ತಾರೆ. ಈಗಂತೂ ಪರರಾಜ್ಯದಲ್ಲಿ ಎಲ್ಲರೂ ದುಃಖಿಯಾಗಿದ್ದಾರೆ. ಇದು ಸ್ವಾತಂತ್ರ್ಯ ಸಿಗುವ ಪುರುಷೋತ್ತಮ ಸಂಗಮಯುಗವಾಗಿದೆ. ವಿದೇಶಿ ಸರ್ಕಾರ ಹೋದರೆ ನಾವು ಸ್ವತಂತ್ರರು ಎಂದು ತಿಳಿಯುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ಎಲ್ಲಿಯವರೆಗೆ ಪಾವನರಾಗುವುದಿಲ್ಲ ಆಲ್ಲಿಯವರೆಗೆ ಸ್ವತಂತ್ರರೆಂದು ಹೇಳುವುದಿಲ್ಲ. ಪುನಃ ಯಮಧೂತರ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಪದವಿಯೂ ಭ್ರಷ್ಟವಾಗುತ್ತದೆ. ತಂದೆಯು ಮನೆಗೆ ಕರೆದುಕೊಂಡು ಹೋಗಲು ಬರುತ್ತಾರೆ. ಅಲ್ಲಿ ಎಲ್ಲರೂ ಸ್ವತಂತ್ರರಿರುತ್ತಾರೆ. ನೀವು ಎಲ್ಲ ಧರ್ಮದವರಿಗೆ ತಿಳಿಸಿ - ನೀವು ಆತ್ಮ ಆಗಿರುವಿರಿ, ಮುಕ್ತಿಧಾಮದಿಂದ ಪಾತ್ರ ಮಾಡಲು ಬಂದಿರುವಿರಿ. ಸುಖಧಾಮದಿಂದ ಪುನಃ ದುಃಖಧಾಮಕ್ಕೆ, ತಮೋಪ್ರಧಾನ ಪ್ರಪಂಚಕ್ಕೆ ಬಂದು ಬಿಟ್ಟಿದ್ದೀರಿ. ತಂದೆಯು ತಿಳಿಸುತ್ತಾರೆ - ನೀವು ನನ್ನ ಸಂತಾನರಾಗಿದ್ದೀರಿ, ರಾವಣನ ಸಂತಾನರೇನು! ನಾನು ನಿಮಗೆ ರಾಜ್ಯಭಾಗ್ಯವನ್ನು ಕೊಟ್ಟು ಹೋಗಿದ್ದೆನು, ನೀವು ನಿಮ್ಮ ರಾಜ್ಯದಲ್ಲಿ ಎಷ್ಟು ಸ್ವತಂತ್ರರಾಗಿದ್ದಿರಿ. ಈಗ ಮತ್ತೆ ಅಲ್ಲಿಗೆ ಹೋಗಲು ಪಾವನರಾಗಬೇಕು. ನೀವು ಎಷ್ಟು ಧನವಂತರಾಗುತ್ತೀರಿ, ಅಲ್ಲಿ ಹಣದ ಚಿಂತೆಯೇ ಇರುವುದಿಲ್ಲ. ಬಡವರಾಗಿದ್ದರೂ ಚಿಂತೆ ಇರುವುದಿಲ್ಲ. ಸುಖಿಯಾಗಿರುತ್ತೀರಿ. ಚಿಂತೆಯು ಇಲ್ಲಿರುತ್ತದೆ, ಬಾಕಿ ರಾಜಧಾನಿಯಲ್ಲಿ ನಂಬರವಾರ್ ಪದವಿಗಳಿರುತ್ತವೆ. ಸೂರ್ಯವಂಶಿ ರಾಜರ ತರಹ ಎಲ್ಲರೂ ಆಗುವುದಿಲ್ಲ, ಎಷ್ಟು ಪರಿಶ್ರಮವೋ ಅಷ್ಟು ದೊಡ್ಡ ಪದವಿ ಸಿಗುತ್ತದೆ. ನೀವು ಎಲ್ಲ ಧರ್ಮದವರ ಸೇವೆ ಮಾಡುವವರಾಗಿರುವಿರಿ. ವಿದೇಶಿಯರಿಗೂ ತಿಳಿಸಬೇಕು - ನೀವು ಸಹೋದರ ಸಹೋದರರಾಗಿದ್ದೀರಲ್ಲವೆ. ಎಲ್ಲರೂ ಶಾಂತಿಧಾಮದಲ್ಲಿರುತ್ತೇವೆ, ಈಗ ರಾವಣ ರಾಜ್ಯದಲ್ಲಿದ್ದೀರಿ. ಈಗ ಮನೆಗೆ ಹೋಗುವ ಮಾರ್ಗವನ್ನು ತಮಗೆ ತಿಳಿಸುತ್ತೇವೆ. ತಮ್ಮನ್ನು ಆತ್ಮವೆಂದು ತಿಳಿದು ನನ್ನನ್ನು ನೆನಪು ಮಾಡಿ, ಭಗವಂತ ಎಲ್ಲರನ್ನೂ ಬಿಡುಗಡೆ ಮಾಡುತ್ತಾರೆಂದು ಹೇಳುತ್ತಾರೆ, ಆದರೆ ಹೇಗೆ ಬಿಡಿಸುತ್ತಾರೆಂದು ಯಾರಿಗೂ ತಿಳಿದಿಲ್ಲ. ಮಕ್ಕಳು ಎಲ್ಲಾದರೂ ತಬ್ಬಿಬ್ಬಾದಾಗ ಬಾಬಾ ನಮ್ಮನ್ನು ಮುಕ್ತ ಮಾಡಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಹೇಗೆ ನೀವು ಹಿಮದಲ್ಲಿ, ಕಾಡಿನಲ್ಲಿ ಸಿಕ್ಕಿಹಾಕಿಕೊಂಡಿದ್ದಿರಿ, ದಾರಿಯೇ ತಿಳಿಯುತ್ತಿರಲಿಲ್ಲ. ನಂತರ ಮುಕ್ತಿದಾತ ಸಿಕ್ಕಿದರು, ದಾರಿ ತೋರಿಸಿದರು, ಬೇಹದ್ದಿನ ತಂದೆಗೂ ಸಹ ಹೇಳುತ್ತಾರೆ ಬಾಬಾ ನಮ್ಮನ್ನು ಬಿಡಿಸಿರಿ. ತಾವು ನಡೆಯಿರಿ, ನಾವು ತಮ್ಮ ಹಿಂದೆ ಬರುತ್ತೇವೆ. ತಂದೆಯ ವಿನಃ ಬೇರೆ ಯಾರೂ ಮಾರ್ಗವನ್ನು ತಿಳಿಸುವುದಿಲ್ಲ. ಎಷ್ಟೊಂದು ಶಾಸ್ತ್ರಗಳನ್ನು ಓದುತ್ತಿದ್ದಿರಿ. ತೀರ್ಥ ಸ್ಥಾನಗಳಿಗೆ ಹೋಗುತ್ತಿದ್ದಿರಿ. ಆದರೆ ಭಗವಂತನನ್ನೇ ತಿಳಿದುಕೊಂಡಿರಲಿಲ್ಲ ಎಂದ ಮೇಲೆ ಹುಡುಕುವುದಾದರೂ ಎಲ್ಲಿ! ಸರ್ವವ್ಯಾಪಿಯಾಗಿದ್ದರೆ ಹೇಗೆ ಸಿಗುತ್ತಾರೆ? ಎಷ್ಟು ಅಜ್ಞಾನದಲ್ಲಿದ್ದಾರೆ. ಸರ್ವರ ಸದ್ಗತಿದಾತ ಒಬ್ಬ ತಂದೆ ಮಾತ್ರ ಆಗಿದ್ದಾರೆ. ಅವರೇ ಬಂದು ನೀವು ಮಕ್ಕಳನ್ನು ಅಜ್ಞಾನ ಅಂಧಕಾರದಿಂದ ಹೊರ ತೆಗೆಯುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ತಂದೆಯು ಸಿಕ್ಕಿದ್ದಾರೆ ಆದ್ದರಿಂದ ಯಾವ ಮಾತಿನ ಚಿಂತೆ ಮಾಡಬಾರದು. ಅವರ ಮತದಂತೆ ನಡೆದು ಬೇಹದ್ದಿನ ಬುದ್ಧಿವಂತರಾಗಿ ಖುಷಿ ಖುಷಿಯಿಂದ ಎಲ್ಲರ ಉದ್ಧಾರ ಮಾಡಲು ನಿಮಿತ್ತರಾಗಬೇಕು.

2. ಯಮದೂತರ ಶಿಕ್ಷೆಗಳಿಂದ ಪಾರಾಗಲು ಹಾಗೂ ಸತ್ಯ ಸ್ವಾತಂತ್ರ್ಯವನ್ನು ಪಡೆಯಲು ಅವಶ್ಯವಾಗಿ ಪಾವನರಾಗಬೇಕು. ಜ್ಞಾನವು ಆದಾಯದ ಮೂಲವಾಗಿದೆ. ಇದನ್ನು ಧಾರಣೆ ಮಾಡಿ ಧನವಂತರಾಗಬೇಕು.

ವರದಾನ:
ಸೇವೆಯಲ್ಲಿರುತ್ತಾ ಕರ್ಮಾತೀತ ಸ್ಥಿತಿಯ ಅನುಭವ ಮಾಡುವಂತಹ ತಪಸ್ವೀ ಮೂರ್ತಿ ಭವ.

ಸಮಯ ಕಡಿಮೆಯಿದೆ ಮತ್ತು ಸೇವೆ ಇನ್ನೂ ಬಹಳ ಇದೆ. ಸೇವೆಯಲ್ಲಿಯೇ ಮಾಯೆ ಬರಲು ಆಸ್ಪದವಿರುವುದು. ಸೇವೆಯಲ್ಲಿಯೇ ಸ್ವಭಾವ, ಸಂಬಂಧದ ವಿಸ್ತಾರವಾಗುವುದು, ಸ್ವಾರ್ಥವೂ ಸಹ ಸಮಾವೇಶವಾಗಿರುವುದು, ಅದರಲ್ಲಿ ಏನಾದರೂ ಸ್ವಲ್ಪ ಬ್ಯಾಲೆನ್ಸ್ ಕಡಿಮೆಯಾದರೆ ಮಾಯೆ ಹೊಸ-ಹೊಸ ರೂಪ ಧಾರಣೆ ಮಾಡಿ ಬರುವುದು. ಆದ್ದರಿಂದ ಸೇವೆ ಮತ್ತು ಸ್ವ-ಸ್ಥಿತಿಯ ಬ್ಯಾಲೆನ್ಸ್ ನ ಅಭ್ಯಾಸ ಮಾಡಿ. ಮಾಲೀಕರಾಗಿ ಕರ್ಮೇಂದ್ರಿಯ ರೂಪಿ ಕರ್ಮಚಾರಿಗಳಿಂದ ಸೇವೆಯನ್ನು ತೆಗೆದುಕೊಳ್ಳಿ, ಮನಸ್ಸಿನಲ್ಲಿ ಕೇವಲ ಒಬ್ಬ ಬಾಬಾನ ವಿನಹ ಬೇರೆ ಯಾರೂ ಇಲ್ಲ - ಈ ಸ್ಮೃತಿ ಇಮರ್ಜ್ ಇರಲಿ ಆಗ ಹೇಳಲಾಗುವುದು ಕರ್ಮಾತೀತ ಸ್ಥಿತಿಯ ಅನುಭವಿ, ತಪಸ್ವೀಮೂರ್ತಿ.

ಸ್ಲೋಗನ್:
ಕಾರಣ ರೂಪಿ ನಕಾರಾತ್ಮಕತೆಯನ್ನು ಸಮಾಧಾನ ರೂಪದ ಸಕಾರಾತ್ಮಕತೆಯನ್ನಾಗಿ ಮಾಡಿ.