18.12.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಮಾಯೆಯು ಬಹಳ ಬಲಶಾಲಿಯಾಗಿದೆ, ಇದರಿಂದ ಎಚ್ಚರವಾಗಿರಬೇಕು, ಎಂದೂ ಸಹ ಈ ವಿಚಾರವು ಬರಬಾರದು - ನಾವು ಬ್ರಹ್ಮಾರವರನ್ನು ಒಪ್ಪುವುದಿಲ್ಲ, ನಮಗೆ ಡೈರೆಕ್ಟ್ ಶಿವ ತಂದೆಯೊಂದಿಗೆ ಸಂಬಂಧವಿದೆ”

ಪ್ರಶ್ನೆ:
ಯಾವ ಮಕ್ಕಳ ಪ್ರತಿ ಎಲ್ಲರಿಗೆ ಸ್ವತಃ ಪ್ರೀತಿಯುಂಟಾಗುತ್ತದೆ?

ಉತ್ತರ:
ಯಾರು ಮೊದಲು ಪ್ರತಿಯೊಂದು ಮಾತನ್ನು ಸ್ವಯಂನಲ್ಲಿ ಧಾರಣೆ ಮಾಡಿಕೊಂಡು ನಂತರ ಅನ್ಯರಿಗೆ ಹೇಳುವರೋ ಅವರ ಮೇಲೆ ಸ್ವತಹವಾಗಿ ಎಲ್ಲರ ಪ್ರೀತಿಯಿರುತ್ತದೆ. ಜ್ಞಾನವನ್ನು ಸ್ವಯಂನಲ್ಲಿ ಧಾರಣೆ ಮಾಡಿಕೊಂಡು ನಂತರ ಅನೇಕರ ಸೇವೆ ಮಾಡಬೇಕು, ಆಗ ಎಲ್ಲರ ಪ್ರೀತಿಯು ಸಿಗುತ್ತದೆ. ಒಂದುವೇಳೆ ತಾವು ಮಾಡದೇ ಕೇವಲ ಅನ್ಯರಿಗೆ ಹೇಳುತ್ತಾರೆಂದರೆ ಅಂತಹವರನ್ನು ಯಾರು ಒಪ್ಪುತ್ತಾರೆ? ಅವರು ಪಂಡಿತರಿದ್ದಂತೆ.

ಓಂ ಶಾಂತಿ.
ತಂದೆಯು ಮಕ್ಕಳನ್ನು ಕೇಳುತ್ತಾರೆ ಅಥವಾ ಪರಮಾತ್ಮನು ಆತ್ಮಗಳೊಂದಿಗೆ ಕೇಳುತ್ತಾರೆ - ನೀವು ಇದನ್ನು ಕೇಳಿದ್ದೀರಿ, ನಾವು ಪರಮಪಿತ ಪರಮಾತ್ಮನ ಸಮೀಪ ಕುಳಿತಿದ್ದೇವೆ. ತಂದೆಗೆ ತನ್ನ ರಥವಿಲ್ಲ, ಇದಂತೂ ನಿಶ್ಚಯವಿದೆಯಲ್ಲವೆ? ಈ ಭೃಕುಟಿಯ ಮಧ್ಯದಲ್ಲಿ ತಂದೆಯ ನಿವಾಸ ಸ್ಥಾನವಾಗಿದೆ. ತಂದೆಯು ಸ್ವಯಂ ಹೇಳುತ್ತಾರೆ - ನಾನು ಇವರ ಭೃಕುಟಿಯ ಮಧ್ಯದಲ್ಲಿ ಕುಳಿತುಕೊಳ್ಳುತ್ತೇನೆ. ಇವರ ಶರೀರವನ್ನು ಲೋನ್ ತೆಗೆದುಕೊಳ್ಳುತ್ತೇನೆ. ಆತ್ಮವು ಭೃಕುಟಿಯ ಮಧ್ಯದಲ್ಲಿ ಕುಳಿತುಕೊಳ್ಳುತ್ತದೆಯೆಂದರೆ ತಂದೆಯೂ ಸಹ ಇಲ್ಲಿಯೇ ಬಂದು ಕುಳಿತುಕೊಳ್ಳುತ್ತಾರೆ. ಬ್ರಹ್ಮನೂ ಸಹ ಇದ್ದಾರೆ ಅಂದಾಗ ಶಿವ ತಂದೆಯೂ ಇದ್ದಾರೆ. ಒಂದುವೇಳೆ ಈ ಬ್ರಹ್ಮನಿಲ್ಲದಿದ್ದರೆ ಶಿವ ತಂದೆಯೂ ಇರುವುದಿಲ್ಲ. ಒಂದುವೇಳೆ ಯಾರಾದರೂ ನಾವು ಶಿವ ತಂದೆಯನ್ನೇ ನೆನಪು ಮಾಡುತ್ತೇವೆ, ಬ್ರಹ್ಮನನ್ನಲ್ಲ ಎಂದು ಹೇಳುವುದಾದರೆ ಶಿವ ತಂದೆಯು ಬ್ರಹ್ಮನಿಲ್ಲದೆ ಹೇಗೆ ಮಾತನಾಡುತ್ತಾರೆ? ಮೇಲಂತೂ ಸದಾ ಶಿವ ತಂದೆಯನ್ನು ನೆನಪು ಮಾಡಿ ಬರಬಹುದು. ಈಗ ನೀವು ಮಕ್ಕಳಿಗೆ ತಿಳಿದಿದೆ - ಈ ಸಮಯದಲ್ಲಿ ನಾವು ತಂದೆಯ ಬಳಿ ಕುಳಿತಿದ್ದೇವೆ, ತಂದೆಯು ಮೇಲೆ ಕುಳಿತಿದ್ದಾರೆಂದಲ್ಲ. ಹೇಗೆ ಭಕ್ತಿಮಾರ್ಗದಲ್ಲಿ ಶಿವ ತಂದೆಯು ಮೇಲಿದ್ದಾರೆ, ಅವರ ಪ್ರತಿಮೆಗೆ ಇಲ್ಲಿ ಪೂಜಿಸಲಾಗುತ್ತದೆ ಎಂದು ಹೇಳುತ್ತಿದ್ದಿರಿ. ಇವು ಬಹಳ ತಿಳಿದುಕೊಳ್ಳುವಂತಹ ಮಾತುಗಳಾಗಿವೆ. ನೀವು ತಿಳಿದುಕೊಂಡಿದ್ದೀರಿ - ತಂದೆಯು ಜ್ಞಾನ ಸಾಗರ, ಜ್ಞಾನ ಪೂರ್ಣನಾಗಿದ್ದಾರೆ ಅಂದಮೇಲೆ ಜ್ಞಾನವನ್ನು ಎಲ್ಲಿಂದ ತಿಳಿಸುತ್ತಾರೆ? ಬ್ರಹ್ಮಾರವರ ತನುವಿನಿಂದ ತಿಳಿಸುತ್ತಾರೆ. ನಾವು ಬ್ರಹ್ಮನನ್ನು ಒಪ್ಪುವುದಿಲ್ಲವೆಂದು ಕೆಲವರು ಹೇಳುತ್ತಾರೆ ಆದರೆ ನಾನು ಇವರ ಮೂಲಕವೇ ಹೇಳುತ್ತೇನೆ, ನನ್ನನ್ನು ನೆನಪು ಮಾಡಿ ಎಂದು ಶಿವ ತಂದೆಯು ತಿಳಿಸುತ್ತಾರೆ. ಇದು ತಿಳುವಳಿಕೆಯ ಮಾತಾಗಿದೆಯಲ್ಲವೆ. ಈ ಬ್ರಹ್ಮಾರವರೂ ಸಹ ಶಿವ ತಂದೆಯನ್ನು ನೆನಪು ಮಾಡಿ ಎಂದೇ ಹೇಳುತ್ತಾರೆ, ನನ್ನನ್ನು ನೆನಪು ಮಾಡಿ ಎಂದು ಹೇಳುವುದಿಲ್ಲ. ಇವರ ಮೂಲಕ ಶಿವ ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ. ಈ ಮಂತ್ರವನ್ನು ನಾನು ಇವರ ಮುಖದಿಂದ ಹೇಳುತ್ತೇನೆ. ಬ್ರಹ್ಮಾರವರಿಲ್ಲದಿದ್ದರೆ ನಾನು ಮಂತ್ರವನ್ನು ಹೇಗೆ ಕೊಡುವೆ? ಮತ್ತು ನೀವು ನನ್ನನ್ನು ಹೇಗೆ ಮಿಲನ ಮಾಡುತ್ತೀರಿ? ನನ್ನ ಬಳಿ ಹೇಗೆ ಕುಳಿತುಕೊಳ್ಳುತ್ತೀರಿ. ಒಳ್ಳೊಳ್ಳೆಯ ಮಕ್ಕಳಿಗೂ ಸಹ ಈ ವಿಚಾರಗಳು ಬಂದು ಬಿಡುತ್ತವೆ. ಮಾಯೆಯು ನನ್ನಿಂದ ಮುಖವನ್ನು ತಿರುಗಿಸಿ ಬಿಡುತ್ತದೆ. ನಾವು ಬ್ರಹ್ಮಾರವರನ್ನು ಒಪ್ಪುವುದಿಲ್ಲ ಎಂದು ಹೇಳುತ್ತಾರೆ ಅಂದಮೇಲೆ ಅವರ ಗತಿ ಏನಾಗುವುದು? ಮಾಯೆಯು ಎಷ್ಟು ಬಲಶಾಲಿಯಾಗಿದೆ! ಅದು ಒಮ್ಮೆಲೆ ಮುಖವನ್ನು ತಿರುಗಿಸಿ ಬಿಡುತ್ತದೆ. ಈಗ ನಿಮ್ಮ ಮುಖವನ್ನು ಶಿವ ತಂದೆಯು ತನ್ನ ಕಡೆ ಮಾಡಿಕೊಂಡಿದ್ದಾರೆ. ನೀವು ಸಮ್ಮುಖದಲ್ಲಿ ಕುಳಿತಿದ್ದೀರಿ, ಬ್ರಹ್ಮಾರವರಂತೂ ಏನೂ ಇಲ್ಲ ಎಂದು ಯಾರು ತಿಳಿಯುತ್ತಾರೆಯೋ ಅವರ ಗತಿ ಏನಾಗುವುದು? ದುರ್ಗತಿಯನ್ನು ಹೊಂದುತ್ತಾರೆ. ಓ ಗಾಡ್ ಫಾದರ್ ಎಂದು ಮನುಷ್ಯರು ಕರೆಯುತ್ತಾರೆ ಅಂದಮೇಲೆ ಗಾಡ್ ಫಾದರ್ ಕೇಳಿಸಿಕೊಳ್ಳುತ್ತಾರೆಯೇ? ಓ ಮುಕ್ತಿದಾತ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಮುಕ್ತಿದಾತನು ಅಲ್ಲಿಂದಲೇ ಮುಕ್ತರನ್ನಾಗಿ ಮಾಡುವರೇ? ಕಲ್ಪ-ಕಲ್ಪದ ಸಂಗಮಯುಗದಲ್ಲಿಯೇ ತಂದೆಯು ಬರುತ್ತಾರೆ. ಯಾರಲ್ಲಿ ಅವರು ಬರುತ್ತಾರೆಯೋ ಅವರನ್ನೇ ಹಾರಿಸಿ ಬಿಟ್ಟರೆ? ಅದಕ್ಕೇನು ಹೇಳುವುದು? ಮಾಯೆಯಲ್ಲಿ ಇಷ್ಟೊಂದು ಬಲವಿದೆ, ಅದು ಒಮ್ಮೆಲೆ ಕನಿಷ್ಟರನ್ನಾಗಿ ಮಾಡಿ ಬಿಡುತ್ತದೆ. ಕೆಲವೊಂದು ಸೇವಾಕೇಂದ್ರಗಳಲ್ಲಿ ಇಂತಹವರೂ ಇದ್ದಾರೆ, ಆದ್ದರಿಂದಲೇ ಎಚ್ಚರಿಕೆಯಿಂದಿರಿ ಎಂದು ತಂದೆಯು ತಿಳಿಸುತ್ತಾರೆ. ಭಲೆ ತಂದೆಯು ತಿಳಿಸಿರುವ ಜ್ಞಾನವನ್ನು ಅನ್ಯರಿಗೂ ತಿಳಿಸುತ್ತಾರೆ, ಆದರೆ ಪಂಡಿತರಂತೆ. ಹೇಗೆ ತಂದೆಯು ಪಂಡಿತನ ಕಥೆಯನ್ನು ತಿಳಿಸುತ್ತಾರೆ..... ಈ ಸಮಯದಲ್ಲಿ ನೀವು ತಂದೆಯ ನೆನಪಿನಿಂದ ವಿಷಯ ಸಾಗರವನ್ನು ಪಾರು ಮಾಡಿ ಕ್ಷೀರ ಸಾಗರದಲ್ಲಿ ಹೋಗುತ್ತೀರಲ್ಲವೆ. ಭಕ್ತಿಮಾರ್ಗದಲ್ಲಿ ಅನೇಕ ಕಥೆಗಳನ್ನು ಬರೆದು ಬಿಟ್ಟಿದ್ದಾರೆ. ರಾಮ ನಾಮವನ್ನು ಹೇಳುವುದರಿಂದ ನೀವು ಪಾರಾಗಿ ಬಿಡುತ್ತೀರಿ ಎಂದು ಪಂಡಿತನು ಅನ್ಯರಿಗೆ ಹೇಳುತ್ತಿದ್ದನು, ಆದರೆ ತಾನು ಮಾತ್ರ ಮುಳುಗುವ ಸ್ಥಿತಿಯಲ್ಲಿದ್ದನು. ತಾವೇ ವಿಕಾರಗಳಲ್ಲಿ ಹೋಗುತ್ತಾ ಅನ್ಯರಿಗೆ ನಿರ್ವಿಕಾರಿಗಳಾಗಿ ಎಂದು ಹೇಳಿದರೆ ಅವರ ಪ್ರಭಾವವೇನಾಗುವುದು? ಇಲ್ಲಿಯೂ ಸಹ ಹೇಳುವವರಿಗಿಂತಲೂ ಕೆಲವರು ಕೇಳುವವರು ಬಹಳ ತೀಕ್ಷ್ಣವಾಗಿ ಹೊರಟು ಹೋಗುತ್ತಾರೆ. ಯಾರು ಅನೇಕರ ಸೇವೆ ಮಾಡುತ್ತಾರೆಯೋ ಅವರು ಸರ್ವರಿಗೆ ಪ್ರಿಯರಾಗುತ್ತಾರೆ. ಪಂಡಿತನ ಸುಳ್ಳು ಹೊರ ಬಂದರೆ ಮತ್ತೆ ಅವರನ್ನು ಯಾರು ಪ್ರೀತಿ ಮಾಡುತ್ತಾರೆ? ಮತ್ತೆ ಯಾರು ಅದನ್ನು ಪ್ರಯೋಗದಲ್ಲಿ ತರುತ್ತಾರೆಯೋ ಅವರ ಮೇಲೆ ಪ್ರೀತಿಯು ಹೋಗುತ್ತದೆ. ಒಳ್ಳೊಳ್ಳೆಯ ಮಕ್ಕಳನ್ನೂ ಸಹ ಮಾಯೆಯು ನುಂಗಿ ಬಿಡುತ್ತದೆ.

ತಂದೆಯು ತಿಳಿಸುತ್ತಾರೆ - ಈಗಿನ್ನೂ ಕರ್ಮಾತೀತ ಸ್ಥಿತಿಯಾಗಿಲ್ಲ. ಎಲ್ಲಿಯವರೆಗೆ ಯುದ್ಧದ ತಯಾರಿಗಳಾಗುವುದಿಲ್ಲವೋ ಅಲ್ಲಿಯವರೆಗೆ ಕರ್ಮಾತೀತ ಸ್ಥಿತಿಯು ಬರುವುದಿಲ್ಲ. ಒಂದುವೇಳೆ ಯುದ್ಧದ ತಯಾರಿಯಾಗಿರುವುದು, ಇನ್ನೊಂದು ಕಡೆ ಕರ್ಮಾತೀತ ಸ್ಥಿತಿಯಾಗುವುದು. ಪೂರ್ಣ ಸಂಬಂಧವಿದೆ ನಂತರ ಯುದ್ಧವು ಮುಕ್ತಾಯವಾದಾಗ ಇಲ್ಲಿಂದ ವರ್ಗಾಯಿತರಾಗುತ್ತೀರಿ. ಮೊದಲು ರುದ್ರ ಮಾಲೆಯಾಗುತ್ತದೆ, ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಈ ಪ್ರಪಂಚವು ಪರಿವರ್ತನೆಯಾಗಲಿದೆ ಎಂದು ನೀವು ತಿಳಿದುಕೊಂಡಿದ್ದೀರಿ. ಇನ್ನೂ 40 ಸಾವಿರ ವರ್ಷಗಳಿವೆ ಎಂದು ಅವರು ತಿಳಿಯುತ್ತಾರೆ. ಈಗ ನಿಮಗೆ ತಿಳಿದಿದೆ - ವಿನಾಶವು ಸಮ್ಮುಖದಲ್ಲಿ ನಿಂತಿದೆ. ನೀವು ಕೆಲವರೇ ಇದ್ದೀರಿ, ಅವರ ಸಂಖ್ಯೆಯು ಹೆಚ್ಚಿನದಾಗಿದೆ. ಆದ್ದರಿಂದ ನಿಮ್ಮ ಮಾತನ್ನು ಯಾರು ಒಪ್ಪುತ್ತಾರೆ? ನಿಮ್ಮ ವೃದ್ಧಿಯಾದಾಗ ನಿಮ್ಮ ಯೋಗ ಬಲದಿಂದ ಅನೇಕರು ಬರುತ್ತಾರೆ. ಎಷ್ಟು ಆತ್ಮದಲ್ಲಿರುವ ತುಕ್ಕು ಕಳೆಯುತ್ತಾ ಹೋಗುವುದೋ ಅಷ್ಟು ಶಕ್ತಿಯು ತುಂಬುತ್ತಾ ಹೋಗುತ್ತದೆ. ತಂದೆಯು ಎಲ್ಲರ ಹೃದಯವನ್ನು ಅರಿತಿದ್ದಾರೆಂದಲ್ಲ. ಎಲ್ಲರ ಸ್ಥಿತಿಗಳನ್ನು ಅರಿತುಕೊಂಡಿದ್ದಾರೆ. ತಂದೆಯು ಮಕ್ಕಳ ಸ್ಥಿತಿಯನ್ನು ತಿಳಿದುಕೊಳ್ಳುವುದಿಲ್ಲವೆ? ಎಲ್ಲವೂ ತಿಳಿದಿರುತ್ತದೆ. ಈಗಂತೂ ಕರ್ಮಾತೀತ ಸ್ಥಿತಿಯಾಗಲು ಸಾಧ್ಯವಿಲ್ಲ. ಬಹಳ ಕಠಿಣವಾದ ತಪ್ಪುಗಳೂ ಆಗುವ ಸಂಭವವಿದೆ. ಒಳ್ಳೊಳ್ಳೆಯ ಮಕ್ಕಳಿಂದಲೂ ಆಗುತ್ತದೆ. ಮಾತುಕತೆ, ಚಲನ-ವಲನ ಇತ್ಯಾದಿಯೆಲ್ಲವೂ ಪ್ರಸಿದ್ಧವಾಗಿ ಬಿಡುತ್ತದೆ. ಆದ್ದರಿಂದ ಈಗ ತಮ್ಮ ನಡವಳಿಕೆಯನ್ನು ದೈವೀ ನಡವಳಿಕೆಯನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ದೇವತೆಗಳು ಸರ್ವಗುಣ ಸಂಪನ್ನರಲ್ಲವೆ. ಹಾಗೆಯೇ ತಾವೂ ಆಗಬೇಕಾಗಿದೆ ಆದರೆ ಮಾಯೆಯು ಯಾರನ್ನೂ ಬಿಡುವುದಿಲ್ಲ. ಮುಟ್ಟಿದರೆ ಮುನಿಯನ್ನಾಗಿ ಮಾಡಿ ಬಿಡುತ್ತದೆ. ಐದು ಮೆಟ್ಟಿಲುಗಳಿವೆಯಲ್ಲವೆ. ದೇಹಾಭಿಮಾನವು ಬರುವುದರಿಂದ ಒಮ್ಮೆಲೆ ಮೇಲಿನಿಂದ ಕೆಳಗೆ ಬೀಳುತ್ತಾರೆ. ಬಿದ್ದರೆಂದರೆ ಸತ್ತರು. ಈಗಿನ ದಿನಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಳ್ಳಲು ಏನೇನೋ ಉಪಾಯಗಳನ್ನು ಮಾಡುತ್ತಾರೆ. 20 ಅಂತಸ್ತಿನ ಮಹಡಿಯಿಂದ ಬಿದ್ದು ಸಮಾಪ್ತಿಯಾಗುತ್ತಾರೆ. ಆಸ್ಪತ್ರೆಯಲ್ಲಿದ್ದು ದುಃಖವನ್ನು ಭೋಗಿಸುವಂತಾಗಬಾರದು. ಕೆಲವರು ತಮಗೆ ತಾವು ಬೆಂಕಿಯನ್ನಿಟ್ಟುಕೊಳ್ಳುತ್ತಾರೆ. ಅದರಿಂದ ಯಾರು ಉಳಿಯುವರೋ ಅವರು ಎಷ್ಟೊಂದು ದುಃಖವನ್ನನುಭವಿಸುತ್ತಾರೆ! ಒಂದುವೇಳೆ ಸುಟ್ಟು ಹೋದರೆ ಆತ್ಮವು ಇಲ್ಲಿಂದ ಹೊರಟುಹೋಗುತ್ತದೆ ಆದ್ದರಿಂದ ಜೀವಘಾತವನ್ನು ಮಾಡಿಕೊಳ್ಳುತ್ತಾರೆ. ಜೀವಘಾತ ಮಾಡಿಕೊಂಡರೆ ದುಃಖದಿಂದ ಮುಕ್ತರಾಗುತ್ತೇವೆ ಎಂದು ತಿಳಿಯುತ್ತಾರೆ. ಇದರಿಂದ ಆವೇಶವು ಬಂದು ಬಿಡುತ್ತದೆಯೆಂದರೆ ಮಾಡಿಕೊಂಡು ಬಿಡುತ್ತಾರೆ. ಕೆಲವರಂತೂ ಆಸ್ಪತ್ರೆಯಲ್ಲಿ ಎಷ್ಟೊಂದು ದುಃಖವನ್ನನುಭವಿಸುತ್ತಾರೆ. ವೈದ್ಯರು ತಿಳಿಯುತ್ತಾರೆ - ಇವರು ದುಃಖದಿಂದ ಮುಕ್ತರಾಗಲು ಸಾಧ್ಯವಿಲ್ಲ. ಇದಕ್ಕಿಂತಲೂ ಒಂದು ಮಾತ್ರೆಯನ್ನು ಕೊಟ್ಟರೆ ಇವರು ಸಮಾಪ್ತಿಯಾಗಿ ಬಿಡುವರು. ಆದರೆ ಇಂತಹ ಔಷಧಿಯನ್ನು ಕೊಡುವುದೂ ಸಹ ಮಹಾ ಪಾಪವೆಂದು ತಿಳಿಯುತ್ತಾರೆ. ಈ ದುಃಖವನ್ನು ಭೋಗಿಸುವುದಕ್ಕಿಂತಲೂ ಶರೀರವನ್ನು ಬಿಟ್ಟು ಬಿಡುವುದು ಒಳ್ಳೆಯದೆಂದು ಆತ್ಮವೇ ಹೇಳುತ್ತದೆ. ಅಂದಮೇಲೆ ಈಗ ಶರೀರದಿಂದ ಮುಕ್ತರನ್ನಾಗಿ ಯಾರು ಮಾಡುವರು? ಇದು ಅಪಾರ ದುಃಖದ ಪ್ರಪಂಚವಾಗಿದೆ. ಸತ್ಯಯುಗದಲ್ಲಿ ಅಪಾರ ಸುಖವಿರುತ್ತದೆ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವೀಗ ಹಿಂತಿರುಗುತ್ತೇವೆ. ದುಃಖಧಾಮದಿಂದ ಸುಖಧಾಮಕ್ಕೆ ಹೋಗುತ್ತೇವೆ ಅಂದಮೇಲೆ ಅದನ್ನು ನೆನಪು ಮಾಡಬೇಕಾಗಿದೆ. ತಂದೆಯೂ ಸಹ ಸಂಗಮಯುಗದಲ್ಲಿಯೇ ಬರುತ್ತಾರೆ, ಯಾವಾಗ ಪ್ರಪಂಚವು ಪರಿವರ್ತನೆಯಾಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳನ್ನು ಸರ್ವ ದುಃಖಗಳಿಂದ ಬಿಡಿಸಿ ಹೊಸ ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ. ಪಾವನ ಪ್ರಪಂಚದಲ್ಲಿ ಕೆಲವರಷ್ಟೇ ಇರುತ್ತಾರೆ. ಇಲ್ಲಂತೂ ಬಹಳಷ್ಟು ಜನಸಂಖ್ಯೆಯಿದೆ, ಪತಿತರಾಗಿದ್ದಾರೆ. ಆದ್ದರಿಂದಲೇ ಹೇ ಪತಿತ-ಪಾವನ...... ನಮ್ಮನ್ನು ಈ ಛೀ ಛೀ ಪ್ರಪಂಚದಿಂದ ಮನೆಗೆ ಕರೆದುಕೊಂಡು ಹೋಗಿ ಎಂದು ಮಹಾಕಾಲನಿಗೆ ಹೇಳುತ್ತಿದ್ದೆವು ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ಅವಶ್ಯವಾಗಿ ತಂದೆಯು ಬರುವರು, ಎಲ್ಲರೂ ಶರೀರವನ್ನು ಬಿಡುತ್ತಾರೆ, ಆಗಲೇ ಸಂಪೂರ್ಣ ಶಾಂತಿಯಾಗುವುದಲ್ಲವೆ. ಶಾಂತಿ-ಶಾಂತಿ ಎಂದು ಹೇಳುತ್ತಿರುತ್ತಾರೆ. ಸಂಪೂರ್ಣ ಶಾಂತಿಯಂತೂ ಶಾಂತಿಧಾಮದಲ್ಲಿರುವುದು, ಆದರೆ ಈ ಪ್ರಪಂಚದಲ್ಲಿ ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ? ಏಕೆಂದರೆ ಇಲ್ಲಿ ಬಹಳಷ್ಟು ಜನಸಂಖ್ಯೆಯಿದೆ, ಸತ್ಯಯುಗದಲ್ಲಿ ಸುಖ-ಶಾಂತಿಯಿತ್ತು, ಈಗಂತೂ ಕಲಿಯುಗದಲ್ಲಿ ಅನೇಕ ಧರ್ಮಗಳಿವೆ. ಯಾವಾಗ ಅವೆಲ್ಲವೂ ಸಮಾಪ್ತಿಯಾಗಿ ಒಂದು ಧರ್ಮದ ಸ್ಥಾಪನೆಯಾಗುವುದೋ ಆಗಲೇ ಸುಖ-ಶಾಂತಿಯ ಸ್ಥಾಪನೆಯಾಗುತ್ತದೆ. ಹಾಹಾಕಾರದ ನಂತರ ಜಯ ಜಯಕಾರವಾಗುತ್ತದೆ. ಮುಂದೆ ಹೋದಂತೆ ನೋಡುವಿರಿ ಮೃತ್ಯುವಿನ ಮಾರುಕಟ್ಟೆಯೇ ಇರುತ್ತದೆ, ಹೇಗೆ-ಹೇಗೆ ಶರೀರವನ್ನು ಬಿಡುತ್ತಾರೆ. ಬಾಂಬುಗಳಿಂದಲೂ ಬೆಂಕಿ ಬೀಳುತ್ತದೆ. ಮುಂದೆ ಹೋದಂತೆ ನೋಡುವಿರಿ - ಅವಶ್ಯವಾಗಿ ವಿನಾಶವಂತೂ ಆಗಿಯೇ ಆಗುವುದೆಂದು ಅನೇಕರು ಹೇಳುತ್ತಾ ಹೋಗುತ್ತಾರೆ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ? ವಿನಾಶವಂತೂ ಆಗಲೇಬೇಕಾಗಿದೆ. ತಂದೆಯು ಒಂದು ಧರ್ಮದ ಸ್ಥಾಪನೆ ಮಾಡಿಸುತ್ತಾರೆ. ರಾಜಯೋಗವನ್ನೂ ಕಲಿಸುತ್ತಾರೆ. ಉಳಿದೆಲ್ಲಾ ಅನೇಕ ಧರ್ಮಗಳು ಸಮಾಪ್ತಿಯಾಗುತ್ತದೆ. ಗೀತೆಯಲ್ಲಿ ಏನನ್ನೂ ತೋರಿಸಿಲ್ಲ ಅಂದಮೇಲೆ ಗೀತೆಯನ್ನು ಓದುವ ಫಲಿತಾಂಶವೇನು? ಪ್ರಳಯವಾಯಿತೆಂದು ತೋರಿಸುತ್ತಾರೆ. ಭಲೆ ಜಲಮಯವಾಗುತ್ತದೆ ಆದರೆ ಇಡೀ ಪ್ರಪಂಚ ಜಲಮಯವಾಗುವುದಿಲ್ಲ. ಭಾರತವು ಅವಿನಾಶಿ ಪವಿತ್ರ ಖಂಡವಾಗಿದೆ ಅದರಲ್ಲಿಯೂ ಅಬು ಪರ್ವತವು ಎಲ್ಲದಕ್ಕಿಂತ ಪವಿತ್ರ ತೀರ್ಥ ಸ್ಥಾನವಾಗಿದೆ, ಎಲ್ಲಿ ತಂದೆಯು ಬಂದು ಸರ್ವರ ಸದ್ಗತಿ ಮಾಡುತ್ತಾರೆ. ದಿಲ್ವಾಡಾ ಮಂದಿರವು ಎಷ್ಟು ಒಳ್ಳೆಯ ನೆನಪಾರ್ಥವಾಗಿದೆ, ಎಷ್ಟು ಅರ್ಥ ಸಹಿತವಾಗಿದೆ. ಆದರೆ ಯಾರು ಇದನ್ನು ಮಾಡಿಸಿದರೋ ಅವರು ಇದನ್ನು ತಿಳಿದುಕೊಂಡಿಲ್ಲ. ಆದರೂ ಸಹ ಅವರು ಬಹಳ ಬುದ್ಧಿವಂತರಾಗಿರಬೇಕಲ್ಲವೆ. ದ್ವಾಪರದಲ್ಲಿ ಅವಶ್ಯವಾಗಿ ಬುದ್ಧಿವಂತರೇ ಇರುತ್ತಾರೆ, ಕಲಿಯುಗದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಎಲ್ಲಾ ಮಂದಿರಗಳಿಗಿಂತಲೂ ಇದು ಶ್ರೇಷ್ಠವಾಗಿದೆ. ಇಲ್ಲಿ ನೀವು ಕುಳಿತಿದ್ದೀರಿ, ನಿಮಗೆ ತಿಳಿದಿದೆ-ನಾವು ಚೈತನ್ಯವಾಗಿದ್ದೇವೆ. ಆ ಮಂದಿರವು ನಮ್ಮದೇ ಜಡ ನೆನಪಾರ್ಥವಾಗಿದೆ. ಇನ್ನೂ ಸ್ವಲ್ಪ ಸಮಯ ಈ ಮಂದಿರ ಇತ್ಯಾದಿ ಇನ್ನೂ ಆಗುತ್ತಿರುತ್ತವೆ ನಂತರ ಇವೆಲ್ಲವೂ ಬೀಳುವ ಸಮಯವು ಬರುತ್ತದೆ. ಎಲ್ಲಾ ಮಂದಿರ ಇತ್ಯಾದಿಗಳು ಬಿದ್ದು ಹೋಗುತ್ತವೆ. ಸಾಮೂಹಿಕ ಮೃತ್ಯುವಾಗುತ್ತದೆ! ಮಹಾಬಾರಿ - ಮಹಾ ಭಾರತದ ಯುದ್ಧದ ಗಾಯನವಿದೆಯಲ್ಲವೆ ಇದರಲ್ಲಿ ಎಲ್ಲರೂ ಸಮಾಪ್ತಿಯಾಗಿ ಬಿಡುತ್ತಾರೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ - ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ, ತಂದೆಗೆ ರಥವಂತೂ ಬೇಕಲ್ಲವೆ. ಆತ್ಮವು ಶರೀರದಲ್ಲಿ ಪ್ರವೇಶ ಮಾಡಿದಾಗ ಅದು ಭ್ರೂಣದಲ್ಲಿ ಕದಲುತ್ತದೆ, ಆತ್ಮವು ಶರೀರದಿಂದ ಹೊರ ಹೋದಾಗ ಶರೀರವು ಜಡವಾಗಿ ಬಿಡುತ್ತದೆ ಅಂದಾಗ ತಂದೆಯು ತಿಳಿಸುವುದೇನೆಂದರೆ ಈಗ ನೀವು ಮನೆಗೆ ಹೋಗುತ್ತೀರಿ. ನೀವು ಲಕ್ಷ್ಮಿ-ನಾರಾಯಣರ ತರಹ ಆಗಬೇಕಾಗಿದೆ. ಅಂದಮೇಲೆ ಆ ರೀತಿಯ ಗುಣಗಳೂ ಬೇಕಲ್ಲವೆ. ನೀವು ಮಕ್ಕಳು ಈ ಆಟವನ್ನು ತಿಳಿದುಕೊಂಡಿದ್ದೀರಿ. ಈ ಆಟವು ಎಷ್ಟು ವಿಚಿತ್ರವಾಗಿ ಮಾಡಲ್ಪಟ್ಟಿದೆ. ಇದರ ರಹಸ್ಯವನ್ನು ತಂದೆಯು ತಿಳಿಸುತ್ತಾರೆ. ತಂದೆಯು ಜ್ಞಾನಪೂರ್ಣ, ಬೀಜ ರೂಪನಾಗಿದ್ದಾರಲ್ಲವೆ. ತಂದೆಯೇ ಬಂದು ಇದರಲ್ಲಿ ಏನೇನಾಗುತ್ತದೆ, ನೀವು ಇದರಲ್ಲಿ ಎಷ್ಟು ಪಾತ್ರವನ್ನಭಿನಯಿಸಿದಿರಿ ಎಂದು ಇಡೀ ವೃಕ್ಷದ ಜ್ಞಾನವನ್ನು ತಿಳಿಸುತ್ತಾರೆ. ಅರ್ಧಕಲ್ಪ ದೈವೀ ರಾಜ್ಯ ಇನ್ನು ಅರ್ಧ ಕಲ್ಪ ಅಸುರೀ ರಾಜ್ಯವಿರುತ್ತದೆ. ಒಳ್ಳೊಳ್ಳೆಯ ಮಕ್ಕಳ ಬುದ್ಧಿಯಲ್ಲಿಯೇ ಈ ಜ್ಞಾನವಿರುತ್ತದೆ. ತಂದೆಯು ತಮ್ಮ ಸಮಾನ ಶಿಕ್ಷಕರನ್ನಾಗಿ ಮಾಡುತ್ತಾರೆ. ಶಿಕ್ಷಕರಲ್ಲಿ ನಂಬರ್ವಾರ್ ಇರುತ್ತಾರೆ. ಕೆಲವರಂತೂ ಶಿಕ್ಷಕರಾಗಿ ಮತ್ತೆ ಕೆಟ್ಟು ಹೋಗುತ್ತಾರೆ. ಅನೇಕರಿಗೆ ಕಲಿಸಿ ಮತ್ತೆ ತಾವೇ ಸಮಾಪ್ತಿಯಾಗುತ್ತಾರೆ. ಚಿಕ್ಕ-ಚಿಕ್ಕ ಮಕ್ಕಳಲ್ಲಿ ಭಿನ್ನ-ಭಿನ್ನ ಸಂಸ್ಕಾರಗಳಿರುತ್ತವೆ. ಇಲ್ಲಿಯೂ ಯಾರು ಜ್ಞಾನವನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳುವುದಿಲ್ಲವೋ, ನಡವಳಿಕೆಯನ್ನು ಸುಧಾರಣೆ ಮಾಡಿಕೊಳ್ಳುವುದಿಲ್ಲವೋ ಅವರು ಅನೇಕರಿಗೆ ದುಃಖ ಕೊಡಲು ನಿಮಿತ್ತರಾಗುತ್ತಾರೆ. ಅಸುರರು ಮುಚ್ಚಿಟ್ಟುಕೊಂಡು ಕುಳಿತಿದ್ದರು ಮತ್ತೆ ಹೊರಗೆ ಹೋಗಿ ವಿರೋಧಿಗಳಾಗಿ ಎಷ್ಟು ತೊಂದರೆ ಕೊಡುತ್ತಿದ್ದರೆಂದು ಶಾಸ್ತ್ರಗಳಲ್ಲಿಯೂ ತೋರಿಸಿದ್ದಾರೆ. ಇದೆಲ್ಲವೂ ಆಗುತ್ತಲೇ ಇರುತ್ತದೆ. ಸರ್ವ ಶ್ರೇಷ್ಠ ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆಂದರೆ ಅದಕ್ಕೆ ಎಷ್ಟೊಂದು ಮಂದಿ ವಿಘ್ನ ರೂಪವಾಗುತ್ತಾರೆ.

ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ಸುಖ-ಶಾಂತಿಯ ಶಿಖರವಾಗಿದ್ದೀರಿ. ನೀವು ಬಹಳ ಘನತೆಯಿಂದ ಕೂಡಿದ ವ್ಯಕ್ತಿಗಳಾಗಿದ್ದೀರಿ. ನಿಮ್ಮಂತಹ ವ್ಯಕ್ತಿಗಳು ಈ ಸಮಯದಲ್ಲಿ ಯಾರೂ ಇರುವುದಿಲ್ಲ. ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಎಷ್ಟೊಂದು ಮಧುರರಾಗಿ ನಡೆಯಬೇಕು, ಯಾರಿಗೂ ದುಃಖವನ್ನು ಕೊಡಬಾರದು ಇಲ್ಲವೆಂದರೆ ಅದು ಅಂತಿಮದಲ್ಲಿ ನೆನಪಿಗೆ ಬರುವುದು ಮತ್ತೆ ಶಿಕ್ಷೆಗಳನ್ನೂ ಅನುಭವಿಸಬೇಕಾಗುವುದು. ಆದ್ದರಿಂದ ತಂದೆಯು ತಿಳಿಸುತ್ತಾರೆ - ಈಗಂತೂ ಮನೆಗೆ ಹೋಗಬೇಕಾಗಿದೆ. ಸೂಕ್ಷ್ಮವತನದಲ್ಲಿ ಮಕ್ಕಳಿಗೆ ಬ್ರಹ್ಮಾರವರ ಸಾಕ್ಷಾತ್ಕಾರವಾಗುತ್ತದೆ. ಆದ್ದರಿಂದ ನೀವೂ ಸಹ ಇಂತಹ ಸೂಕ್ಷ್ಮವತನವಾಸಿಯಾಗಿ ಮೌನದ ಅಭ್ಯಾಸ ಮಾಡಬೇಕಾಗಿದೆ. ಬಹಳ ಕಡಿಮೆ ಮತ್ತು ಮಧುರವಾಗಿ ಮಾತನಾಡಬೇಕಾಗಿದೆ. ಇಂತಹ ಪುರುಷಾರ್ಥ ಮಾಡುತ್ತಾ-ಮಾಡುತ್ತಾ ನೀವು ಶಾಂತಿಯ ಶಿಖರವಾಗಿ ಬಿಡುತ್ತೀರಿ. ನಿಮಗೆ ಕಲಿಸುವವರು ತಂದೆಯಾಗಿದ್ದಾರೆ ಮತ್ತೆ ನೀವು ಅನ್ಯರಿಗೂ ಕಲಿಸಬೇಕಾಗಿದೆ. ಭಕ್ತಿಮಾರ್ಗವು ಶಬ್ಧದಲ್ಲಿ ಬರುವುದಾಗಿದೆ. ಈಗ ನೀವು ಶಾಂತಿಯಲ್ಲಿರಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
 
ಧಾರಣೆಗಾಗಿ ಮುಖ್ಯಸಾರ-
1. ಬಹಳ ಘನತೆಯಿಂದ ಬಹಳ ಮಧುರರಾಗಿ ನಡೆಯಬೇಕಾಗಿದೆ. ಶಾಂತಿ ಮತ್ತು ಸುಖದ ಶಿಖರವಾಗಲು ಬಹಳ ಕಡಿಮೆ ಮತ್ತು ಮಧುರವಾಗಿ ಮಾತನಾಡಬೇಕಾಗಿದೆ. ಮೌನದ ಅಭ್ಯಾಸ ಮಾಡಬೇಕು, ಶಬ್ಧದಲ್ಲಿ ಬರಬಾರದು.

2. ಸ್ವಯಂನ ಚಲನೆಯನ್ನು ದೈವೀ ಚಲನೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ಮುಟ್ಟಿದರೆ ಮುನಿಯಾಗಬಾರದು. ಯುದ್ಧಕ್ಕೆ ಮೊದಲೇ ಕರ್ಮಾತೀತ ಸ್ಥಿತಿಯನ್ನು ತಲುಪಬೇಕಾಗಿದೆ. ನಿರ್ವಿಕಾರಿಗಳಾಗಿ ಅನ್ಯರನ್ನೂ ಮಾಡುವ ಸೇವೆ ಮಾಡಬೇಕಾಗಿದೆ.

ವರದಾನ:
ಕರ್ಮ ಮತ್ತು ಸಂಬಂಧ ಎರಡರಲ್ಲಿ ಸ್ವಾರ್ಥ ಭಾವದಿಂದ ಮುಕ್ತರಾಗಿರುವಂತಹ ತಂದೆ ಸಮಾನ ಕರ್ಮಾತೀತ ಭವ.

ತಾವು ಮಕ್ಕಳ ಸೇವೆಯಾಗಿದೆ, ಎಲ್ಲರನ್ನೂ ಮುಕ್ತರನ್ನಾಗಿ ಮಾಡುವುದು. ಆದ್ದರಿಂದ ಬೇರೆಯವರನ್ನು ಮುಕ್ತ ಮಾಡುತ್ತಾ ಸ್ವಯಂ ಅನ್ನು ಬಂಧನದಲ್ಲಿ ಬಂದಿಸಲ್ಪಡಬೇಡಿ. ಯಾವಾಗ ಹದ್ದಿನ ನನ್ನದು-ನನ್ನದರಿಂದ ಮುಕ್ತರಾಗುವಿರಿ ಆಗ ಅವ್ಯಕ್ತ ಸ್ಥಿತಿಯ ಅನುಭವ ಮಾಡಲು ಸಾಧ್ಯ. ಯಾವ ಮಕ್ಕಳು ಲೌಕಿಕ ಮತ್ತು ಅಲೌಕಿಕ, ಕರ್ಮ ಮತ್ತು ಸಂಬಂಧ ಎರಡರಲ್ಲಿಯೂ ಸ್ವಾರ್ಥ ಭಾವದಿಂದ ಮುಕ್ತರಾಗಿದ್ದಾರೆ ಅವರೇ ತಂದೆ ಸಮಾನ ಕರ್ಮಾತೀತ ಸ್ಥಿತಿಯ ಅನುಭವವನ್ನು ಮಾಡಲು ಸಾಧ್ಯ. ಆದ್ದರಿಂದ ಚೆಕ್ ಮಾಡಿಕೊಳ್ಳಿ, ಎಲ್ಲಿಯವರೆಗೆ ಕರ್ಮಗಳ ಬಂಧನದಿಂದ ನ್ಯಾರಾ ಆಗಿರುವೆನು? ವ್ಯರ್ಥ ಸ್ವಭಾವ-ಸಂಸ್ಕಾರದ ವಶ ಆಗುವುದರಿಂದ ಮುಕ್ತ ಆಗಿರುವೆನಾ? ಎಂದಾದರೂ ಯಾವುದಾದರೂ ಹಳೆಯ ಸಂಸ್ಕಾರ-ಸ್ವಭಾವಕ್ಕೆ ವಶೀಭೂತ ಅಂತೂ ಆಗುತ್ತಿಲ್ಲ ತಾನೆ?

ಸ್ಲೋಗನ್:
ಸಮಾನ ಮತ್ತು ಸಂಪೂರ್ಣರಾಗಬೇಕಾದರೆ ಸ್ನೇಹ ಸಾಗರನಲ್ಲಿ ಸಮಾವೇಶ ಆಗಿ ಬಿಡಿ.