11.05.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಎಂದಿಗೂ ವಿಘ್ನ ರೂಪವಾಗಬಾರದು, ಆಂತರ್ಯದಲ್ಲಿ ಯಾವುದೇ ಕೊರತೆಗಳಿದ್ದರೆ ಅದನ್ನು ತೆಗೆದು ಬಿಡಿ,
ಇದು ಸತ್ಯ ವಜ್ರವಾಗುವ ಸಮಯವಾಗಿದೆ.”
ಪ್ರಶ್ನೆ:
ಯಾವ ಮಾತಿನ
ನ್ಯೂನತೆ ಬಂದ ತಕ್ಷಣ ಆತ್ಮನ ಬೆಲೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ?
ಉತ್ತರ:
ಅಪವಿತ್ರತೆ -
ಮೊದಲನೇ ನ್ಯೂನತೆ ಬರುತ್ತದೆ. ಯಾವಾಗ ಆತ್ಮವು ಪವಿತ್ರವಾಗಿರುತ್ತದೆ ಆಗ ಅದರ ಸ್ಥಾನ ಬಹಳ
ಶ್ರೇಷ್ಠವಾಗಿರುತ್ತದೆ, ಅಮೂಲ್ಯ ರತ್ನವಾಗಿರುತ್ತದೆ. ನಮಸ್ಕಾರ ಮಾಡಲು ಯೋಗ್ಯವಾಗಿರುತ್ತದೆ.
ಸ್ವಲ್ಪ ಅಪವಿತ್ರತೆಯ ನ್ಯೂನತೆಯು ಆತ್ಮದ ಬೆಲೆಯನ್ನು ಸಮಾಪ್ತಿ ಮಾಡುತ್ತದೆ. ಈಗ ನೀವು ತಂದೆಯ
ಸಮಾನ ಪವಿತ್ರ ವಜ್ರವಾಗಬೇಕು. ತಂದೆಯು ನಿಮ್ಮನ್ನು ತನ್ನ ಸಮಾನ ವಜ್ರವನ್ನಾಗಿ ಮಾಡಲು ಬಂದಿದ್ದಾರೆ.
ಪವಿತ್ರ ಮಕ್ಕಳಿಗೇ ಒಬ್ಬ ತಂದೆಯ ನೆನಪು ಸತಾಯಿಸುತ್ತದೆ. ತಂದೆಯೊಂದಿಗೆ ಮುರಿಯದಂತಹ
ಪ್ರೀತಿಯಿರುತ್ತದೆ. ಎಂದೂ ಯಾರಿಗೂ ದುಃಖ ಕೊಡುವುದಿಲ್ಲ. ಬಹಳ ಮಧುರರಾಗಿರುತ್ತಾರೆ.
ಓಂ ಶಾಂತಿ.
ಡಬಲ್ ಓಂ ಶಾಂತಿ ಎಂದು ಹೇಳಬಹುದು. ಮಕ್ಕಳಿಗೂ ತಿಳಿದಿದೆ ಹಾಗೂ ಬಾಪ್ದಾದಾರವರೂ
ತಿಳಿದುಕೊಂಡಿದ್ದಾರೆ - ನಾನಾತ್ಮ ಶಾಂತ ಸ್ವರೂಪನಾಗಿದ್ದೇನೆ ಎನ್ನುವುದು ಓಂ ಶಾಂತಿಯ ಅರ್ಥವಾಗಿದೆ.
ಅವಶ್ಯವಾಗಿ ಶಾಂತಿಯ ಸಾಗರ, ಸುಖ ಸಾಗರ, ಪವಿತ್ರತೆಯ ಸಾಗರ ತಂದೆಯ ಸಂತಾನನಾಗಿದ್ದೇನೆ. ತಂದೆಯು
ಪವಿತ್ರತೆಯ ಸಾಗರನಾಗಿದ್ದಾರೆ. ಪವಿತ್ರವಾಗುವುದರಲ್ಲಿ ಮನುಷ್ಯರಿಗೆ ಕಷ್ಟವೆನಿಸುತ್ತದೆ ಹಾಗೂ
ಪವಿತ್ರವಾಗುವುದರಲ್ಲಿ ಬಹಳ ಸ್ಥಾನಮಾನವಿದೆ. ಪ್ರತಿಯೊಂದು ಮಗುವು ತಿಳಿದುಕೊಂಡಿದ್ದಾರೆ - ಇದರಿಂದ
ನಮ್ಮ ಸ್ಥಾನ ವೃದ್ಧಿಯಾಗುತ್ತಿದೆ. ಈಗ ನಾವು ಸಂಪೂರ್ಣರಾಗಿಲ್ಲ. ಕೆಲವರಲ್ಲಿ ಒಂದು ಪ್ರಕಾರದ,
ಇನ್ನೂ ಕೆಲವರಲ್ಲಿ ಇನ್ನೊಂದು ಪ್ರಕಾರದ ನ್ಯೂನತೆ ಪವಿತ್ರತೆ ಹಾಗೂ ಯೋಗದಲ್ಲಿ ಅವಶ್ಯವಾಗಿ ಇದೆ.
ದೇಹಾಭಿಮಾನದಲ್ಲಿ ಬರುವುದರಿಂದಲೇ ನ್ಯೂನತೆ ಇರುತ್ತದೆ, ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಡಿಮೆ
ನ್ಯೂನತೆಗಳಿರುತ್ತವೆ. ಭಿನ್ನ-ಭಿನ್ನವಾಗಿರುವ ವಜ್ರಗಳಿರುತ್ತವೆ. ಅದನ್ನು ಮತ್ತೆ ಮ್ಯಾಗ್ನಿಫೈ
ಗ್ಲಾಸ್ (ಭೂತ ಕನ್ನಡಿ) ನಿಂದ ನೋಡಲಾಗುತ್ತದೆ. ಹೇಗೆ ತಂದೆಯು ಆತ್ಮರಿಗೆ ತಿಳಿಸುತ್ತಾರೆಯೋ ಹಾಗೆಯೇ
ಆತ್ಮರೂ (ಮಕ್ಕಳಿಗೆ) ಸಹ ತಿಳಿದುಕೊಳ್ಳಬೇಕಾಗುತ್ತದೆ. ಇದು ರತ್ನವಾಗಿದೆಯಲ್ಲವೆ! ರತ್ನಗಳೇ
ನಮಸ್ತೆಗೆ ಯೋಗ್ಯವಾಗಿರುತ್ತದೆ. ಮುತ್ತು, ಮಾಣಿಕ್ಯ, ಪುಖರಾಜ ಮುಂತಾದವುಗಳೆಲ್ಲವೂ ನಮಸ್ತೆಗೆ
ಯೋಗ್ಯವಾಗಿದೆ. ಆದ್ದರಿಂದ ವಿಭಿನ್ನವಾಗಿರುವ ರತ್ನಗಳನ್ನು ಹಾಕಿರುತ್ತಾರೆ. ನಂಬರವಾರ್
ಪುರುಷಾರ್ಥದನುಸಾರ ಇದೆಯಲ್ಲವೇ! ಬೇಹದ್ದಿನ ತಂದೆಯು ಅವಿನಾಶಿ ಜ್ಞಾನ ರತ್ನಗಳ
ವ್ಯಾಪಾರಿಯಾಗಿದ್ದಾರೆಂದು ಮಕ್ಕಳು ತಿಳಿದಿದ್ದಾರೆ. ವ್ಯಾಪಾರಿಯೆಂದು ಅವರಿಗೇ ಅವಶ್ಯವಾಗಿ
ಹೇಳುತ್ತಾರೆ. ಜ್ಞಾನ ರತ್ನಗಳನ್ನು ಕೊಡುತ್ತಾರಲ್ಲವೆ! ನಂತರ ಅವರ ರಥವೂ ವಜ್ರದ
ವ್ಯಾಪಾರಿಯಾಗಿದ್ದಾರೆ, ಅವರೂ ರತ್ನಗಳ ಬೆಲೆಯನ್ನೂ ತಿಳಿದುಕೊಂಡಿದ್ದಾರೆ. ವಜ್ರಗಳನ್ನು ಬಹಳ
ಚೆನ್ನಾಗಿ ಮ್ಯಾಗ್ನಿಫೈ ಗ್ಲಾಸಿನಲ್ಲಿ ನೋಡಲಾಗುತ್ತದೆ. ಇದರಲ್ಲಿ ಎಷ್ಟು ನ್ಯೂನತೆಯಿದೆ, ಇದು
ಎಂತಹ ರತ್ನವಾಗಿದೆ, ಎಲ್ಲಿಯವರೆಗೆ ಸೇವಾಧಾರಿಯಾಗಿದ್ದಾರೆ? ಎಂದು ರತ್ನಗಳನ್ನು ನೋಡಲು
ಮನಸ್ಸಾಗುತ್ತದೆ. ಒಳ್ಳೆಯ ರತ್ನಗಳಾದರೆ ಅವನ್ನು ಪ್ರೀತಿಯಿಂದ ನೋಡುತ್ತಾರೆ- ಇವು ಬಹಳ ಚೆನ್ನಾಗಿದೆ,
ಇವನ್ನು ಚಿನ್ನದ ಡಬ್ಬಿಯಲ್ಲಿಡುವುದಿಲ್ಲ. ಇಲ್ಲಿಯೂ ಸಹ ಅದೇ ವಿಧವಾಗಿ ಬೇಹದ್ದಿನ ರತ್ನಗಳೂ
ಆಗುತ್ತಾರೆ. ಪ್ರತಿಯೊಬ್ಬರೂ ನಾನು ಎಂತಹ ವಜ್ರವಾಗಿದ್ದೇನೆಂದು ತಮ್ಮ ಮನಸ್ಸಿನಿಂದ
ತಿಳಿದುಕೊಳ್ಳುತ್ತಾರೆ. ನಮ್ಮಲ್ಲಿ ಯಾವುದೇ ಬಲಹೀನತೆಯಿಲ್ಲವೆ? ಹೇಗೆ ವಜ್ರಗಳನ್ನು ಬಹಳ ಚೆನ್ನಾಗಿ
ನೋಡಲಾಗುತ್ತದೆ. ಹಾಗೆಯೇ ಇಲ್ಲಿ ಪ್ರತಿಯೊಬ್ಬರನ್ನೂ ನೋಡಲಾಗುತ್ತದೆ, ಚೈತನ್ಯ ರತ್ನಗಳಾಗಿದ್ದೀರೋ
ಇಲ್ಲವೇ? ನಾವು ಇಲ್ಲಿಯವರೆಗೆ ಸಬ್ಜ್ ಪರಿ, ನೀಲಂಪರಿ ಆಗಿದ್ದೇವೆಂದು ಪ್ರತಿಯೊಬ್ಬರೂ ತಮ್ಮನ್ನು
ತಾವು ನೋಡಿಕೊಳ್ಳಬೇಕು. ಹೇಗೆ ಹೂಗಳಲ್ಲಿ ಕೆಲವು ಸದಾ ಗುಲಾಬಿ, ಕೆಲವು ಗುಲಾಬಿ, ಕೆಲವು ಹೇಗೋ
ಇರುತ್ತವೆ..... ನಿಮ್ಮಲ್ಲಿಯೂ ನಂಬರವಾರ್ ಇದ್ದಾರೆ. ಪ್ರತಿಯೊಬ್ಬರನ್ನೂ ಬಹಳ ಚೆನ್ನಾಗಿ
ತಿಳಿದುಕೊಳ್ಳಬಹುದು. ಇಡೀ ದಿನದಲ್ಲಿ ನಾವು ಏನು ಮಾಡಿದ್ದೇವೆಂದು ನೋಡಿಕೊಳ್ಳಿ. ತಂದೆಯನ್ನು ಎಷ್ಟು
ನೆನಪು ಮಾಡಿದೆವು? ಗೃಹಸ್ಥ ವ್ಯವಹಾರದಲ್ಲಿದ್ದು ತಂದೆಯನ್ನು ನೆನಪು ಮಾಡಬೇಕೆಂದು ತಂದೆಯು
ತಿಳಿಸುತ್ತಾರೆ. ತಂದೆಯು ನಾರದನಿಗೆ ನಿಮ್ಮ ಮುಖವನ್ನು ನೋಡಿಕೋ ಎಂದು ಹೇಳಿದರು. ಇದು ಒಂದು
ಉದಾಹರಣೆಯಾಗಿದೆ. ನೀವು ಮಕ್ಕಳು ಒಬ್ಬೊಬ್ಬರು ತಮ್ಮನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು,
ಪರಿಶೀಲನೆ ಮಾಡಿಕೊಳ್ಳಬೇಕು- ಯಾವ ತಂದೆಯಿಂದ ನಾವು ವಜ್ರ ಸಮಾನ ಆಗುತ್ತಿದ್ದೇವೆಯೋ ಆ ತಂದೆಯ ಜೊತೆ
ಎಷ್ಟು ಪ್ರೀತಿಯಿದೆ? ಬೇರೆ ಕಡೆ ತಮ್ಮ ವೃತ್ತಿಯು ಹೋಗುವುದಿಲ್ಲವೇ? ನನ್ನ ದೈವೀ ಸ್ವಭಾವ ಎಷ್ಟಿದೆ?
ಮನುಷ್ಯರಿಗೆ ಸ್ವಭಾವವು ಬಹಳ ಸತಾಯಿಸುತ್ತದೆ. ಪ್ರತಿಯೊಬ್ಬರಿಗೂ ಮೂರನೆಯ ನೇತ್ರವು ಸಿಕ್ಕಿದೆ
ಅದರಿಂದ ನಮ್ಮನ್ನು ನಾವು ಪರಿಶೀಲನೆ ಮಾಡಿಕೊಳ್ಳಬೇಕು. ನಾನು ತಂದೆಯ ನೆನಪಿನಲ್ಲಿ ಎಷ್ಟು ಸಮಯ
ಇರುತ್ತೇನೆ? ನನ್ನ ನೆನಪು ಅವರಿಗೆ ಎಷ್ಟು ತಲುಪುತ್ತದೆ? ಅವರ ನೆನಪಿನಲ್ಲಿದ್ದು ಒಮ್ಮೆಯೇ
ರೋಮಾಂಚನವಾಗಬೇಕು ಆದರೆ ಸ್ವಯಂ ತಂದೆಯೇ ತಿಳಿಸುತ್ತಾರೆ- ಮಾಯೆಯ ವಿಘ್ನವು ಖುಷಿಯಲ್ಲಿ ಬರಲು
ಬಿಡುವುದಿಲ್ಲ. ನಾವೀಗ ಪುರುಷಾರ್ಥಿಗಳಾಗಿದ್ದೇವೆಂದು ಮಕ್ಕಳಿಗೆ ಗೊತ್ತಿದೆ. ಫಲಿತಾಂಶವಂತೂ
ಕೊನೆಯಲ್ಲಿ ತಿಳಿಯುತ್ತದೆ. ನಮ್ಮನ್ನು ನಾವು ಪರಿಶೀಲನೆ ಮಾಡಿಕೊಳ್ಳಬೇಕು. ಕೊರತೆಗಳನ್ನು ನೀವು
ಈಗಲೇ ತೆಗೆಯಬಹುದು. ಸಂಪೂರ್ಣ ಪವಿತ್ರ ವಜ್ರವಾಗಬೇಕು. ಒಂದು ವೇಳೆ ಸ್ವಲ್ಪ ನ್ಯೂನತೆಯಿದ್ದರೆ
ನಮ್ಮ ಬೆಲೆ ಕಡಿಮೆಯಾಗುತ್ತಿದೆ ಎಂದು ತಿಳಿದುಕೊಳ್ಳುತ್ತಾರೆ. ಆತ್ಮವು ರತ್ನವಾಗಿದೆಯಲ್ಲವೆ.
ತಂದೆಯು ತಿಳಿಸುತ್ತಾರೆ- ಮಕ್ಕಳೇ, ಸದಾ ಪವಿತ್ರ ಬೆಲೆಯುಳ್ಳ ವಜ್ರವಾಗಬೇಕಾಗಿದೆ. ಹೀಗೆ
ಪುರುಷಾರ್ಥ ಮಾಡಿಸಲು ಭಿನ್ನ-ಭಿನ್ನ ರೀತಿಯಾಗಿ ತಂದೆಯು ತಿಳಿಸುತ್ತಾರೆ. (ಇಂದು ಯೋಗದ ಸಮಯದ
ಮಧ್ಯದಲ್ಲಿ ಬಾಪ್ದಾದಾರವರು ಗದ್ದುಗೆಯಿಂದ ಇಳಿದು ಸಭೆಯಲ್ಲಿ ಮಧ್ಯದಲ್ಲಿ ಸುತ್ತು ಹಾಕಿ ಒಂದೊಂದು
ಮಗುವಿನೊಂದಿಗೆ ನಯನಗಳಿಂದ ಮಿಲನ ಮಾಡುತ್ತಿದ್ದರು) ಇಂದು ತಂದೆಯು ಸಭೆಯ ಮಧ್ಯದಲ್ಲಿ ಏಕೆ
ಏಳಬೇಕಾಯಿತು? ಯಾರ್ಯಾರು ಸೇವಾಧಾರಿ ಮಕ್ಕಳಿದ್ದಾರೆಂದು ನೋಡಲು. ಏಕೆಂದರೆ ಒಬ್ಬೊಬ್ಬರು ಒಂದೊಂದು
ಕಡೆ ಕುಳಿತಿರುತ್ತಾರೆ. ಆದ್ದರಿಂದ ಎದ್ದು ಇವರಲ್ಲಿ ಯಾವ ಗುಣವಿದೆ? ಇವರಿಗೆ ಎಷ್ಟು ಪ್ರೀತಿಯಿದೆ?
ಎಂದು ನೋಡಿದರು. ಎಲ್ಲಾ ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದಾರೆ. ಆದ್ದರಿಂದ ಎಲ್ಲರೂ
ಪ್ರಿಯರಾಗಿರುತ್ತಾರೆ, ಆದರೂ ಸಹ ನಂಬರವಾರ್ ಪುರುಷಾರ್ಥದನುಸಾರ ಪ್ರಿಯರಾಗಿರುತ್ತಾರೆ. ತಂದೆಯೂ ಸಹ
ತಿಳಿದುಕೊಂಡಿದ್ದಾರೆ- ಯಾರಲ್ಲಿ ಯಾವ-ಯಾವ ನ್ಯೂನತೆಯಿದೆ? ಏಕೆಂದರೆ ತಂದೆಯು ಯಾರ ಶರೀರದಲ್ಲಿ
ಪ್ರವೇಶ ಮಾಡಿದ್ದಾರೆಯೋ ಅವರೂ ಸಹ ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳುತ್ತಾರೆ. ಬಾಪ್ದಾದಾ
ಇಬ್ಬರೂ ಜೊತೆಯಿದ್ದಾರೆ. ಎಷ್ಟೆಷ್ಟು ಅನ್ಯರಿಗೆ ಸುಖ ಕೊಡುತ್ತಾರೆ, ಯಾರಿಗೂ ದುಃಖ ಕೊಡುವುದಿಲ್ಲವೋ
ಅಂತಹ ಮಕ್ಕಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಗುಲಾಬಿ, ಮಲ್ಲಿಗೆ ಹೂವನ್ನು ಎಂದಿಗೂ ಮುಚ್ಚಿಡಲು
ಆಗುವುದಿಲ್ಲ. ತಂದೆಯು ಎಲ್ಲವನ್ನೂ ಮಕ್ಕಳಿಗೆ ತಿಳಿಸಿ ನಂತರ ಹೇಳುತ್ತಾರೆ- ನನ್ನೊಬ್ಬನನ್ನೇ ನೆನಪು
ಮಾಡಿದಾಗ ನಿಮ್ಮಲ್ಲಿರುವ ಕಲಬೆರಕೆಯು ಬಿಟ್ಟು ಹೋಗುತ್ತದೆ. ಇಡೀ ದಿನ ನೆನಪಿನಲ್ಲಿದ್ದು ಏನೇನು
ಮಾಡಿದೆ ಎಂದು ನೋಡಿಕೊಳ್ಳಬೇಕು. ನನ್ನಲ್ಲಿ ಯಾವ ಅವಗುಣವಿದೆ, ಅದರಿಂದ ತಂದೆಯ ಹೃದಯವನ್ನು ಗೆಲ್ಲಲು
ಸಾಧ್ಯವಾಗುತ್ತಿಲ್ಲ. ತಂದೆಯ ಹೃದಯವನ್ನು ಗೆಲ್ಲುವುದು ಸಿಂಹಾಸನವನ್ನು ಪಡೆಯುವುದಾಗಿದೆ.
ಆದ್ದರಿಂದ ತಂದೆಯು ಬಂದು ಮಕ್ಕಳನ್ನು ನೋಡುತ್ತಾರೆ- ನನ್ನ ಸಿಂಹಾಸನಕ್ಕೆ ಯಾರು-ಯಾರು
ಯೋಗ್ಯರಾಗುತ್ತಿದ್ದಾರೆ. ಯಾವಾಗ ಸಮಯ ಸಮೀಪಕ್ಕೆ ಬರುತ್ತದೆಯೋ ಆಗ ಮಕ್ಕಳಿಗೆ ನಾವು ಎಷ್ಟು
ಉತ್ತೀರ್ಣರಾಗಿದ್ದೇವೆಂದು ತಕ್ಷಣ ತಿಳಿದು ಬಿಡುತ್ತದೆ. ಅನುತ್ತೀರ್ಣರಾಗುವವರಿಗೂ ಮೊದಲೇ
ತಿಳಿಯುತ್ತದೆ- ನಮ್ಮ ಅಂಕಗಳು ಕಡಿಮೆಯಿದೆ. ನೀವು ತಿಳಿದುಕೊಂಡಿದ್ದೀರಿ- ನಮಗೆ ಒಳ್ಳೆಯ ಅಂಕಗಳು
ಸಿಗುತ್ತದೆ, ನಾವು ಯಾರಿಗೆ ವಿದ್ಯಾರ್ಥಿಗಳಾಗಿದ್ದೇವೆ? ಭಗವಂತನಿಗೆ. ಅವರು ಈ ದಾದಾರವರ ಮೂಲಕ
ಓದಿಸುತ್ತಾರೆಂದು ತಿಳಿದಿದ್ದೀರಿ. ಅಂದಾಗ ಎಷ್ಟೊಂದು ಖುಷಿಯಿರಬೇಕು. ಬಾಬಾ ನಮ್ಮನ್ನು ಎಷ್ಟೋಂದು
ಪ್ರೀತಿ ಮಾಡುತ್ತಾರೆ, ಎಷ್ಟು ಸಿಹಿಯಾಗಿದ್ದಾರೆ, ಕಷ್ಟವಂತೂ ಏನೂ ಕೊಡುವುದಿಲ್ಲ. ಈ ಚಕ್ರವನ್ನು
ನೆನಪು ಮಾಡಿ ಎಂದಷ್ಟೇ ಹೇಳುತ್ತಾರೆ. ವಿದ್ಯೆ ಏನೂ ಹೆಚ್ಚಿಲ್ಲಾ, ಗುರಿ ಉದ್ಧೇಶ ಸಮ್ಮುಖದಲ್ಲಿದೆ.
ನಾವು ಹಾಗೆ ಆಗಬೇಕಾಗಿದೆ ದೈವೀ ಗುಣಗಳೇ ಗುರಿ ಉದ್ಧೇಶವಾಗಿದೆ. ನೀವು ದೈವೀ ಗುಣ ಧಾರಣೆ ಮಾಡಿಕೊಂಡು
ಇವರ ಹಾಗೆ ಪವಿತ್ರರಾದಾಗ ಮಾಲೆಯಲ್ಲಿ ಪೋಣಿಸಲ್ಪಡುವಿರಿ. ಬೇಹದ್ದಿನ ತಂದೆ ನಮಗೆ ಓದಿಸುತ್ತಿದ್ದಾರೆ
ಅಂದಾಗ ಖುಷಿಯಾಗುತ್ತದೆಯಲ್ಲವೆ. ತಂದೆ ಅವಶ್ಯವಾಗಿ ತನ್ನ ಸಮಾನ ಪವಿತ್ರ ಜ್ಞಾನ ಸಂಪೂರ್ಣರನ್ನಾಗಿ
ಮಾಡುತ್ತಾರೆ. ಇದರಲ್ಲಿ ಪವಿತ್ರತೆ ಸುಖ,ಶಾಂತಿ ಎಲ್ಲವೂ ಬಂದು ಬಿಡುತ್ತದೆ. ಈಗ ಯಾರೂ
ಪರಿಪೂರ್ಣರಾಗಿಲ್ಲ ಅಂತ್ಯದಲ್ಲಿ ಆಗಬೇಕಿದೆ. ಅದಕ್ಕಾಗಿ ಪುರುಷಾರ್ಥ ಮಾಡಬೇಕು. ತಂದೆಯನ್ನಂತೂ
ಎಲ್ಲರೂ ಪ್ರೀತಿ ಮಾಡುತ್ತಾರೆ. ತಂದೆ ಎಂದು ಹೇಳಿದಾಗ ಹೃದಯ ಅರಳಿ ಬಿಡುತ್ತದೆ. ತಂದೆಯಿಂದ ಎಷ್ಟು
ದೊಡ್ಡ ಆಸ್ತಿಯು ಸಿಗುತ್ತಿದೆ ಆದ್ದರಿಂದ ತಂದೆಯ ವಿನಃ ಬೇರೆಲ್ಲಿಗೂ ನಮ್ಮ ಮನಸ್ಸು ಹೋಗುವುದಿಲ್ಲ.
ತಂದೆಯ ನೆನಪು ಬಹಳ ಸತಾಯಿಸಬೇಕು. ಬಾಬಾ, ಬಾಬಾ, ಬಾಬಾ.... ಎಂದು ಬಹಳ ಪ್ರೀತಿಯಿಂದ ನೆನಪು
ಮಾಡಬೇಕು. ರಾಜನ ಮಗನಾದರೆ ಅವನಿಗೆ ರಾಜ್ಯದ ನಶೆಯಿರುತ್ತದೆ. ಈಗಂತೂ ರಾಜರಿಗೆ ಗೌರವವೇ ಇಲ್ಲ.
ಯಾವಾಗ ಬ್ರಿಟೀಷ್ ಸರ್ಕಾರವಿತ್ತು ಆಗ ಬಹಳ ಗೌರವವಿತ್ತು, ವೈಸರಾಯ್ ಬಿಟ್ಟು ಎಲ್ಲರೂ ಅವರಿಗೆ
ನಮಸ್ಕಾರ ಮಾಡುತ್ತಿದ್ದರು. ಈಗ ಅವರ ಸ್ಥಿತಿ ಏನಾಗಿ ಬಿಟ್ಟಿದೆ! ಇದನ್ನು ನೀವೂ
ತಿಳಿದುಕೊಂಡಿದ್ದೀರಿ. ಅವರ್ಯಾರೂ ಬಂದು ರಾಜ ಪದವಿಯನ್ನು ತೆಗೆದುಕೊಳ್ಳುವುದಿಲ್ಲ. ತಂದೆಯು
ತಿಳಿಸುತ್ತಾರೆ- ನಾನು ಬಡವರ ಬಂಧುವಾಗಿದ್ದೇನೆ, ಬಡವರು ತಂದೆಯನ್ನು ತಕ್ಷಣ ತಿಳಿದುಕೊಂಡು
ಬಿಡುತ್ತಾರೆ. ಇದೆಲ್ಲವೂ ತಂದೆಯದೇ ಎಂದು ತಿಳಿದುಕೊಳ್ಳುತ್ತಾರೆ. ಅವರ ಶ್ರೀಮತದಂತೆಯೇ ಎಲ್ಲವನ್ನೂ
ಮಾಡುತ್ತೇವೆ. ಶ್ರೀಮಂತರಿಗಂತೂ ತಮ್ಮ ಹಣದ ನಶೆಯಿರುತ್ತದೆ, ಅವರು ಎಲ್ಲವನ್ನೂ ತಂದೆಗೆ ಅರ್ಪಣೆ
ಮಾಡುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ- ನಾನು ಬಡವರ ಬಂಧುವಾಗಿದ್ದೇನೆ ಬಾಕಿ ಹಾ!
ಶ್ರೀಮಂತರನ್ನು ಮೇಲೆತ್ತಬೇಕಾಗುವುದು ಏಕೆಂದರೆ ಅಂತಹವರು ಬರುವ ಕಾರಣ ಬಡವರು ತಕ್ಷಣ ಬರುತ್ತಾರೆ.
ಗಣ್ಯ ವ್ಯಕ್ತಿಗಳು ಬರುವ ಕಾರಣ ಬಡವರು ಬಂದು ಬಿಡುತ್ತಾರೆ, ಆದರೆ ಬಡವರು ಬಹಳ ಭಯ ಪಡುತ್ತಾರೆ.
ಒಂದು ದಿನ ಅವರೆಲ್ಲರೂ ನಿಮ್ಮ ಬಳಿ ಬರುತ್ತಾರೆ, ಅಂಥಹ ದಿನವೂ ಬರುತ್ತದೆ. ನಂತರ ನೀವು ಅವರಿಗೆ
ತಿಳಿಸಿದರೆ ಬಹಳ ಖುಷಿಯಾಗುತ್ತದೆ. ಒಮ್ಮೆಲೆ ತಂದೆಗೆ ಅರ್ಪಣೆಯಾಗಿ ಬಿಡುತ್ತಾರೆ, ಅವರಿಗಾಗಿ ನೀವು
ವಿಶೇಷ ಸಮಯ ಕೊಡುತ್ತೀರಿ. ಮಕ್ಕಳ ಮನಸ್ಸಿನಲ್ಲಿ ನಾವು ಎಲ್ಲರನ್ನೂ ಉದ್ಧಾರ ಮಾಡಬೇಕು ಎಂದಿದೆ.
ಅವರೂ (ಬಡವರು) ಸಹ ಓದಿ ದೊಡ್ಡ-ದೊಡ್ಡ ಅಧಿಕಾರಿಗಳಾಗಿ ಬಿಡುತ್ತಾರಲ್ಲವೆ. ಇದು ಈಶ್ವರೀಯ ಮಿಷನ್ (ಸಂಸ್ಥೆ)
ಆಗಿದೆ. ನೀವು ಎಲ್ಲರ ಉದ್ಧಾರ ಮಾಡಬೇಕು. ಭಿಲ್ಲಣಿಯ ಮನೆಯಲ್ಲಿ ಬೇರ್ ಹಣ್ಣನ್ನು ತಿಂದರು.......
ಎಂಬ ಗಾಯನವಿದೆ ವಿವೇಕವೂ ಹೇಳುತ್ತದೆ- ದಾನವನ್ನೂ ಸಹ ಬಡವರಿಗೆ ಕೊಡಲಾಗುತ್ತದೆ ಆದರೆ ಶ್ರೀಮಂತರಿಗೆ
ದಾನ ಮಾಡುವುದಿಲ್ಲ. ಮುಂದೆ ಹೋದಂತೆ ಎಲ್ಲವನ್ನೂ ಮಾಡಬೇಕು ಆದರೆ ಇದರಲ್ಲಿ ಯೋಗ ಬಲ ಬೇಕಾಗಿದೆ.
ಯೋಗ ಬಲದಿಂದ ಆಕರ್ಷಣೆಯಾಗುತ್ತದೆ. ಯೋಗ ಬಲ ಕಡಿಮೆಯಿರಲು ದೇಹಾಭಿಮಾನವೇ ಕಾರಣವಾಗಿದೆ.
ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಕೇಳಿಕೊಳ್ಳಿ- ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆ? ನಾವು
ಎಲ್ಲಿಯೂ ಸಿಕ್ಕಿಹಾಕಿಕೊಳ್ಳುವುದಿಲ್ಲವೆ? ಯಾರನ್ನೇ ನೋಡಿದರೂ ಚಂಚಲವಾಗದಂತೆ ನಮ್ಮ
ಸ್ಥಿತಿಯಿರಬೇಕಾಗಿದೆ. ತಂದೆಯ ಆಜ್ಞೆಯಾಗಿದೆ- ದೇಹಾಭಿಮಾನಿ ಆಗಬಾರದು. ಆತ್ಮನಿಗೆ ನಾವು
ಸಹೋದರ-ಸಹೋದರಾಗಿದ್ದೇವೆಂದು ತಿಳಿದಿದೆ. ದೇಹದ ಎಲ್ಲಾ ಧರ್ಮಗಳನ್ನು ಬಿಡಬೇಕಾಗಿದೆ. ಅಂತ್ಯದಲ್ಲಿ
ಯಾರದೇ ನೆನಪು ಬಂದಿತೆಂದರೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಸ್ಥಿತಿಯನ್ನು ಬಹಳ
ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಬೇಕು ಹಾಗೂ ಸೇವೆಯನ್ನೂ ಮಾಡಬೇಕು. ಇಂಥಹ ಸ್ಥಿತಿಯನ್ನು
ಮಾಡಿಕೊಂಡಾಗ ಪದವಿಯು ಸಿಗುತ್ತದೆಯೆಂದು ಮನಸ್ಸಿನಲ್ಲಿ ತಿಳಿದುಕೊಳ್ಳಬೇಕು. ತಂದೆಯಂತೂ ಬಹಳ
ಚೆನ್ನಾಗಿ ತಿಳಿಸುತ್ತಾರೆ. ಸೇವೆಯೂ ಸಹ ಬಹಳ ಇದೆ. ನಿಮ್ಮಲ್ಲಿಯೂ ಶಕ್ತಿಯಿದ್ದಾಗ ಅವರಿಗೆ
ಆಕರ್ಷಣೆಯಾಗುತ್ತದೆ. ಅನೇಕ ಜನ್ಮಗಳ ತುಕ್ಕು ಹಿಡಿದಿದೆ ಎಂಬ ಚಿಂತೆಯು ಬ್ರಾಹ್ಮಣರಿಗಿರಬೇಕು.
ಎಲ್ಲಾ ಆತ್ಮರನ್ನೂ ಪಾವನ ಮಾಡಬೇಕು. ಮನುಷ್ಯರಂತೂ ತಿಳಿದುಕೊಂಡಿಲ್ಲ, ನೀವು ನಂಬರವಾರ್
ಪುರುಷಾರ್ಥದನುಸಾರ ತಿಳಿದಿದ್ದೀರಿ. ತಂದೆಯು ಎಲ್ಲಾ ಮಾತುಗಳನ್ನೂ ತಿಳಿಸುತ್ತಾರೆ. ನಾವು ನಮ್ಮನ್ನು
ಪರಿಶೀಲನೆ ಮಾಡಿಕೊಳ್ಳಬೇಕು. ಹೇಗೆ ತಂದೆಯು ಬೇಹದ್ದಿನಲ್ಲಿದ್ದಾರೆ ಹಾಗೆಯೇ ಮಕ್ಕಳೂ ಸಹ ಬೇಹದ್ದಿನ
ಚಿಂತೆ ಮಾಡಬೇಕು. ತಂದೆಗೆ ಆತ್ಮಗಳೊಂದಿಗೆ ಎಷ್ಟೊಂದು ಪ್ರೀತಿಯಿದೆ! ಇಷ್ಟೂ ದಿನ ಇಷ್ಟೊಂದು
ಪ್ರೀತಿಯು ಏಕೆ ಇರಲಿಲ್ಲ? ಏಕೆಂದರೆ ನ್ಯೂನತೆ ಉಳ್ಳವರಾಗಿದ್ದರು. ಪತಿತ ಆತ್ಮರನ್ನು ಏನು ಪ್ರೀತಿ
ಮಾಡುತ್ತೀರಿ? ಈಗಂತೂ ತಂದೆಯು ಎಲ್ಲರನ್ನೂ ಪತಿತರಿಂದ ಪಾವನರನ್ನಾಗಿ ಮಾಡಲು ಬಂದಿದ್ದಾರೆ,
ಆದ್ದರಿಂದ ಅವಶ್ಯವಾಗಿ ಲವ್ಲೀ ಆಗಬೇಕು. ತಂದೆಯು ಅತೀ ಪ್ರಿಯರಾಗಿದ್ದಾರೆ, ಮಕ್ಕಳನ್ನು ತುಂಬಾ
ಆಕರ್ಷಣೆ ಮಾಡುತ್ತಾರೆ. ದಿನೇ-ದಿನೇ ಎಷ್ಟೊಂದು ಪವಿತ್ರರಾಗುತ್ತಾ ಹೋಗುತ್ತೀರಿ, ನಿಮಗೆ ಬಹಳ
ಪ್ರೀತಿ ಸಿಗುತ್ತದೆ. ತಂದೆಯಲ್ಲಿ ಬಹಳ ಪ್ರೀತಿಯಿದೆ, ತಂದೆಯ ಪ್ರೀತಿ ಇಷ್ಟೊಂದು ಆಕರ್ಷಣೆ
ಮಾಡುತ್ತದೆ ಅದು ಇಲ್ಲಿರಲು ಬಿಡುವುದಿಲ್ಲ. ನಿಮ್ಮ ಸ್ಥಿತಿಯು ನಂಬರವಾರ್ ಪುರುಷಾರ್ಥದನುಸಾರ ಹೀಗೆ
ಆಗಿ ಬಿಡುತ್ತದೆ, ಇಲ್ಲಿ ತಂದೆಯನ್ನು ನೀವು ನೋಡುತ್ತಿರುವಂತೆ ಸಾಕು!...... ನಾನು ಈಗಲೇ ಹೋಗಿ
ತಂದೆಯನ್ನು ಮಿಲನ ಮಾಡಬೇಕು. ಇಂತಹ ತಂದೆಯಿಂದ ಎಂದಿಗೂ ದೂರವಾಗಬಾರದು. ಹಾಗೆಯೇ ತಂದೆಗೆ ಮಕ್ಕಳ
ಆಕರ್ಷಣೆಯಾಗುತ್ತದೆ, ಈ ಮಗುವಿನದಂತೂ ಚಮತ್ಕಾರವಿದೆ, ಇವರು ಬಹಳ ಸೇವೆ ಮಾಡುತ್ತಾರೆ. ಹಾ! ಸ್ವಲ್ಪ
ಬಲಹೀನತೆಯೂ ಇದೆ ಆದರೆ ಸ್ಥಿತಿಗನುಗುಣವಾಗಿ ಸಮಯದಲ್ಲಿ ಸೇವೆಯನ್ನು ಚೆನ್ನಾಗಿ ಮಾಡುತ್ತಾರೆ.
ಯಾರಿಗಾದರೂ ದುಃಖ ಕೊಡುವಂತಹ ವ್ಯಕ್ತಿಯ ಹಾಗೆ ಕಾಣುತ್ತಿಲ್ಲ, ಖಾಯಿಲೆ ಮೊದಲಾದವುಗಳು ನಮ್ಮ ಕರ್ಮ
ಭೋಗವಾಗಿದೆ. ಸ್ವಯಂ ಸಹ ತಿಳಿದುಕೊಳ್ಳುತ್ತೇವೆ- ಇಲ್ಲಿ ಇರುವ ತನಕ ಒಂದಲ್ಲ ಒಂದು ಆಗುತ್ತಿರುತ್ತದೆ.
ಇವರು ತಂದೆಯ ರಥವಾಗಿದ್ದರೂ ಸಹ ಅಂತ್ಯದವರೆಗೂ ಕರ್ಮ ಭೋಗವನ್ನು ಭೋಗಿಸಬೇಕು. ಇವರ ಮೇಲೆ ಆಶೀರ್ವಾದ
ಮಾಡಬಹುದಲ್ಲ ಎಂದು ನಿರ್ಣಯ ತೆಗೆದುಕೊಳ್ಳಬಾರದು. ಇವರೂ ಸಹ ಪುರುಷಾರ್ಥವನ್ನು ಮಾಡಬೇಕು.
ಹಾ!..... ರಥವನ್ನು ಕೊಟ್ಟಿರುವ ಕಾರಣ ಅವರನ್ನು ಸ್ವಲ್ಪ ಮುಂದಿಡುತ್ತೇನೆ. ಬಹಳ ಬಂಧನದಲ್ಲಿರುವವರು
ಹೇಗೆ ಬರುತ್ತಾರೆ! ಹೇಗೆ ಯುಕ್ತಿಯಿಂದ ಬಿಡುಗಡೆ ಹೊಂದಿ ಬರುತ್ತಾರೆ, ಅವರಿಗೆ ಎಷ್ಟು
ಪ್ರೀತಿಯಿರುತ್ತದೆಯೆಂದರೆ ಅಷ್ಟು ಪ್ರೀತಿ ಬೇರೆ ಯಾರಿಗೂ ಇರುವುದಿಲ್ಲ. ಕೆಲವರಿಗಂತೂ ಸ್ವಲ್ಪವೂ
ಪ್ರೀತಿಯಿಲ್ಲ. ಆ ಬಂಧನದಲ್ಲಿರುವವರ ಪ್ರೀತಿಯನ್ನು ಯಾರಿಗೂ ಹೋಲಿಸಲು ಸಾಧ್ಯವಿಲ್ಲ.
ಬಂಧನದಲ್ಲಿರುವವರ ಯೋಗ ಎಂದೂ ಕಡಿಮೆಯೆ೦ದು ತಿಳಿಯಬಾರದು. ನೆನಪಿನಲ್ಲಿ ಬಹಳ ಅಳುತ್ತಾರೆ. ಬಾಬಾ ಓ
ಬಾಬಾ ನಾವು ನಿಮ್ಮೊಂದಿಗೆ ಯಾವಾಗ ಮಿಲನ ಮಾಡುತ್ತೇವೆ? ಬಾಬಾ ವಿಶ್ವದ ಮಾಲೀಕರನ್ನಾಗಿ ಮಾಡುವ ಬಾಬಾ
ನಾವು ನಿಮ್ಮನ್ನು ಹೇಗೆ ಮಿಲನ ಮಾಡುವುದು? ಈ ರೀತಿ ಬಂಧನದಲ್ಲಿರುವವರು ಆನಂದ ಬಾಷ್ಫಗಳನ್ನು
ಸುರಿಸುತ್ತಾರೆ. ಅದು ಅವರ ದುಃಖದ ಕಣ್ಣೀರಲ್ಲ, ಅದು ಪ್ರೀತಿಯ ಕಣ್ಣೀರು ಮುತ್ತುಗಳಾಗಿ ಬಿಡುತ್ತವೆ.
ಅಂತಹ ಬಂಧನದಲ್ಲಿರುವವರ ಯೋಗ ಕಡಿಮೆಯಿರುತ್ತದೆಯೇನು? ನೆನಪಿನಲ್ಲಿ ಬಹಳ ಚಡಪಡಿಸುತ್ತಾರೆ- ಓ ಬಾಬಾ
ನಾವು ನಿಮ್ಮ ಜೊತೆ ಯಾವಾಗ ಮಿಲನ ಮಾಡುತ್ತೇವೆ? ಎಲ್ಲರ ದುಃಖವನ್ನು ದೂರ ಮಾಡುವ ತಂದೆಯೇ! ತಂದೆಯು
ತಿಳಿಸುತ್ತಾರೆ- ನೀವು ಎಷ್ಟು ಸಮಯ ನೆನಪಿನಲ್ಲಿರುತ್ತೀರಿ ಆಗ ಸೇವೆಯನ್ನೂ ಮಾಡುತ್ತೀರಿ. ಭಲೇ
ಯಾವುದೇ ಬಂಧನದಲ್ಲಿರಬಹುದು, ಸ್ವಯಂ ಸೇವೆ ಮಾಡದೇ ಇರಬಹುದು ಆದರೆ ನೆನಪಿನಲ್ಲಿಯೇ ಅವರಿಗೆ ಶಕ್ತಿ
ಸಿಗುತ್ತದೆ, ನೆನಪಿನಲ್ಲಿಯೇ ಎಲ್ಲವೂ ತುಂಬಿದೆ. ಚಡಪಡಿಸುತ್ತಾರೆ, ಓ ಬಾಬಾ ನಿಮ್ಮೊಂದಿಗೆ ಮಿಲನ
ಮಾಡುವ ಅವಕಾಶ ಯಾವಾಗ ಸಿಗುತ್ತದೆ? ಎಷ್ಟೊಂದು ನೆನಪಿನಲ್ಲಿರುತ್ತಾರೆ. ಮುಂದೆ ಹೋದಂತೆ
ದಿನ-ಪ್ರತಿದಿನ ನಿಮಗೆ ಬಹಳ ಆಕರ್ಷಣೆಯಾಗುತ್ತಿರುತ್ತದೆ. ಸ್ನಾನ ಮಾಡುತ್ತಾ, ಕೆಲಸ ಮಾಡುತ್ತಾ
ನೆನಪಿನಲ್ಲಿರುತ್ತೀರಿ. ಓ ಬಾಬಾ, ಬಂಧನ ಸಮಾಪ್ತಿಯಾಗುವ ದಿನ ಯಾವಾಗ ಬರುತ್ತದೆ? ಅಸಹಾಯಕರು
ಕೇಳುತ್ತಿರುತ್ತಾರೆ- ಬಾಬಾ, ಇವರು ನನಗೆ ಬಹಳ ಕಷ್ಟವನ್ನು ಕೊಡುತ್ತಿರುತ್ತಾರೆ, ಏನು ಮಾಡಲಿ?
ಮಕ್ಕಳನ್ನು ಬೈಯಬಹುದೇ? ಪಾಪವಾಗುವುದಿಲ್ಲವೇ? ತಂದೆಯು ತಿಳಿಸುತ್ತಾರೆ- ಇಂದಿನ ಮಕ್ಕಳು ಈ
ರೀತಿಯಿದ್ದಾರೆ ಅದನ್ನು ಕೇಳಲೇಬೇಡಿ. ಕೆಲವರಿಗೆ ಪತಿಯಿಂದ ದುಃಖವಾಗುತ್ತದೆ ಆಗ ಮನಸ್ಸಿನಲ್ಲಿ
ಯೋಚಿಸುತ್ತಾರೆ- ಯಾವಾಗ ಇದರಿಂದ ಬಿಡುಗಡೆಯಾಗಿ ಮುಕ್ತರಾಗಿ ತಂದೆಯೊಂದಿಗೆ ಮಿಲನ ಮಾಡುತ್ತೇವೆ?
ಸಾಕು, ಬಾಬಾ-ಬಾಬಾ ಎಂದು ಹೇಳುತ್ತಿರುತ್ತಾರೆ ಅಂದಾಗ ಅವರೊಂದಿಗೆ ಆಕರ್ಷಣೆಯಾಗುತ್ತದೆಯಲ್ಲವೆ.
ಅಬಲೆಯರು ಬಹಳ ಸಹನೆ ಮಾಡಿಕೊಳ್ಳುತ್ತಿರುತ್ತಾರೆ. ತಂದೆಯು ಮಕ್ಕಳಿಗೆ ಧೈರ್ಯ ಕೊಡುತ್ತಾರೆ- ಮಕ್ಕಳೇ,
ನೀವು ತಂದೆಯನ್ನು ನೆನಪು ಮಾಡುತ್ತೀರಿ, ಆಗ ನಿಮ್ಮ ಬಂಧನಗಳು ಸಮಾಪ್ತಿಯಾಗುತ್ತವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ತಮ್ಮನ್ನು
ತಾವು ಪರಿಶೀಲನೆ ಮಾಡಿಕೊಳ್ಳಬೇಕು- ನಮ್ಮಲ್ಲಿ ಯಾವುದೇ ಅವಗುಣವಿಲ್ಲವೆ? ನಮ್ಮ ನೆನಪು ತಂದೆಯವರಿಗೆ
ಎಷ್ಟು ತಲುಪುತ್ತದೆ? ನಮ್ಮ ಸ್ವಭಾವ ದೈವೀ ಸ್ವಭಾವವಾಗಿದೆಯೇ? ವೃತ್ತಿ ಬೇರೆ ಕಡೆ
ಅಲೆದಾಡುವುದಿಲ್ಲವೇ?
2. ತಂದೆಗೆ ಆಕರ್ಷಣೆಯಾಗುವಷ್ಟು ನಾವು ಪ್ರಿಯರಾಗಬೇಕು. ಎಲ್ಲರಿಗೂ ಸುಖ ಕೊಡಬೇಕು. ಪ್ರೀತಿಯಿಂದ
ತಂದೆಯನ್ನು ನೆನಪು ಮಾಡಬೇಕು.
ವರದಾನ:
ವ್ಯರ್ಥ
ಸಂಕಲ್ಪರೂಪಿ ಕಂಬಗಳನ್ನು ಆಧಾರ ಮಾಡಿಕೊಳ್ಳುವ ಬದಲು ಸರ್ವ ಸಂಬಂಧದ ಅನುಭವವನ್ನು
ಹೆಚ್ಚಿಸಿಕೊಳ್ಳುವಂತಹ ಸತ್ಯ ಸ್ನೇಹಿ ಭವ.
ಮಾಯೆ ಬಲಹೀನ
ಸಂಕಲ್ಪಗಳನ್ನು ಶಕ್ತಿಶಾಲಿ ಮಾಡುವುದಕ್ಕಾಗಿ ಬಹಳ ರಾಯಲ್ ಕಂಬವನ್ನು ಹಾಕುವುದು, ಪದೇ-ಪದೇ ಇದೇ
ಸಂಕಲ್ಪ ಕೊಡುವುದು ಹೀಗಂತೂ ಆಗೇ ಆಗುವುದು, ದೊಡ್ಡ-ದೊಡ್ಡವರೂ ಸಹ ಹೀಗೆ ಮಾಡುತ್ತಾರೆ,
ಸಂಪೂರ್ಣವಂತು ಇನ್ನೂ ಯಾರೂ ಆಗಿಲ್ಲ, ಖಂಡಿತ ಯಾವುದಾದರೂ ಒಂದು ಬಲಹೀನತೆ ಇದ್ದೇ ಇರುತ್ತದೆ.....ಈ
ವ್ಯರ್ಥ ಸಂಕಲ್ಪರೂಪಿ ಕಂಬ ಬಲಹೀನತೆಯನ್ನು ಇನ್ನೂ ಶಕ್ತಿಶಾಲಿಯಾಗಿ ಮಾಡುವುದು. ಈಗ ಇಂತಹ ಕಂಬದ
ಆಧಾರವನ್ನು ಪಡೆಯುವುದರ ಬದಲು ಸರ್ವ ಸಂಬಂಧಗಳ ಅನುಭವವನ್ನು ಹೆಚ್ಚಿಸಿಕೊಳ್ಳಿ. ಸಾಕಾರ ರೂಪದಲ್ಲಿ
ಜೊತೆಯ ಅನುಭವ ಮಾಡುತ್ತಾ ಸತ್ಯ ಸ್ನೇಹಿಯಾಗಿ.
ಸ್ಲೋಗನ್:
ಸಂತುಷ್ಠತೆ
ಎಲ್ಲಕ್ಕಿಂತ ದೊಡ್ಡ ಗುಣವಾಗಿದೆ, ಯಾರು ಸದಾ ಸಂತುಷ್ಠರಾಗಿರುತ್ತಾರೆ ಅವರೇ ಪ್ರಭು ಪ್ರೀಯ, ಲೋಕ
ಪ್ರೀಯ ಹಾಗೂ ಸ್ವಯಂ ಪ್ರೀಯ ಆಗುತ್ತಾರೆ.