31.03.19 Avyakt Bapdada
Kannada
Murli
11.05.84 Om Shanti Madhuban
" ಬ್ರಾಹ್ಮಣರ
ಪ್ರತೀಹೆಜ್ಜೆ, ಸಂಕಲ್ಪ, ಕರ್ಮದಿಂದ ವಿಧಾನದ ನಿರ್ಮಾಣ "
ವಿಶ್ವ ರಚೈತನು ತನ್ನ
ಹೊಸ ವಿಶ್ವದ ನಿರ್ಮಾಣ ಮಾಡುವಂತಹ ಹೊಸ ವಿಶ್ವದ ಅದೃಷ್ಟವಂತ ಮಕ್ಕಳನ್ನು ನೋಡುತ್ತಿದ್ದಾರೆ. ತಾವು
ಶ್ರೇಷ್ಠ ಭಾಗ್ಯಶಾಲಿ ಮಕ್ಕಳ ಅದೃಷ್ಟವು ವಿಶ್ವದ ಅದೃಷ್ಟವಾಗಿದೆ. ಹೊಸ ವಿಶ್ವದ ಆಧಾರ ಸ್ವರೂಪವಾದ
ಶ್ರೇಷ್ಠ ಮಕ್ಕಳಾಗಿದ್ದೀರಿ. ಹೊಸ ವಿಶ್ವದ ರಾಜ್ಯಭಾಗ್ಯದ ಅಧಿಕಾರಿ ವಿಶೇಷ ಆತ್ಮರಾಗಿರುವಿರಿ.
ತಮ್ಮ ಹೊಸ ಜೀವನವು ವಿಶ್ವದ ನವ ನಿರ್ಮಾಣವನ್ನು ಮಾಡುತ್ತದೆ. ವಿಶ್ವವನ್ನು ಶ್ರೇಷ್ಠಾಚಾರಿ ಸುಖಿ,
ಶಾಂತ, ಸಂಪನ್ನಗೊಳಿಸಲೇಬೇಕು, ತಮ್ಮೆಲ್ಲರ ಈ ಶ್ರೇಷ್ಠ ಸಂಕಲ್ಪದ ಬೆರಳಿನಿಂದ ಕಲಿಯುಗೀ-ದುಃಖಿ
ಸಂಸಾರವು ಬದಲಾಗಿ ಸುಖಿ ಸಂಸಾರವಾಗಿ ಬಿಡುತ್ತದೆ. ಏಕೆಂದರೆ ಸರ್ವಶಕ್ತಿವಂತ ತಂದೆಯ ಶ್ರೀಮತದನುಸಾರ
ಸಹಯೋಗಿಯಾಗಿದ್ದೀರಿ ಆದ್ದರಿಂದ ತಂದೆಯ ಜೊತೆಗೆ ತಮ್ಮೆಲ್ಲರ ಸಹಯೋಗ, ಶ್ರೇಷ್ಠ ಯೋಗವು ವಿಶ್ವದ
ವಿಧಾನವಾಗಿ ಬಿಡುತ್ತದೆ. ಬ್ರಾಹ್ಮಣರ ವಿಧಿಯು ಸದಾಕಾಲಕ್ಕಾಗಿ ವಿಧಾನವಾಗಿ ಬಿಡುತ್ತದೆ. ಆದ್ದರಿಂದ
ದಾತಾನ ಮಕ್ಕಳು ದಾತಾ, ವಿದಾತಾ ಮತ್ತು ವಿಧಿ-ವಿದಾತಾ ಆಗಿ ಬಿಡುತ್ತಾರೆ. ಇಂದು ಅಂತಿಮ ಜನ್ಮದವರೆಗೂ
ತಾವು ದಾತಾನ ಮಕ್ಕಳ ಚಿತ್ರಗಳ ಮೂಲಕ ಭಕ್ತರು ಬೇಡುತ್ತಲೇ ಇರುತ್ತಾರೆ. ಇಂತಹ ವಿಧಿ-ವಿದಾತಾ ಆಗಿ
ಬಿಡುತ್ತೀರಿ, ಅದು ಈಗಿನವರೆಗೂ ಮುಖ್ಯ ನ್ಯಾಯಾಧೀಶರೂ ಸಹ ಪ್ರತಿಜ್ಞೆ ಮಾಡಿಸುವ ಸಮಯದಲ್ಲಿ
ಎಲ್ಲರಿಗೂ ಈಶ್ವರನ ಅಥವಾ ಇಷ್ಟ ದೇವನ ಸ್ಮೃತಿ ಸ್ವರೂಪರನ್ನಾಗಿ ಮಾಡಿಕೊಂಡು ಪ್ರತಿಜ್ಞೆಯನ್ನು
ಮಾಡಿಸುತ್ತಾರೆ. ಅಂತಿಮ ಜನ್ಮದಲ್ಲಿಯೂ ವಿಧಾನದಲ್ಲಿ ತಾವು ವಿಧಿ-ವಿದಾತಾ ಮಕ್ಕಳ ಶಕ್ತಿಯು
ನಡೆಯುತ್ತಿದೆ. ತನ್ನ ಮೇಲೆ ಪ್ರತಿಜ್ಞೆಯನ್ನು ಮಾಡಿಸುವುದಿಲ್ಲ, ತಂದೆಯ ಹಾಗೂ ತಾವುಗಳ
ಮಹತ್ವವನ್ನಿಡುತ್ತಾರೆ. ಸದಾ ವರದಾನಿ ಸ್ವರೂಪರೂ ತಾವಾಗಿದ್ದೀರಿ. ಭಿನ್ನ-ಭಿನ್ನ ವರದಾನ,
ಭಿನ್ನ-ಭಿನ್ನ ದೇವತೆಗಳ ಹಾಗೂ ದೇವಿಯರ ಮೂಲಕ ತಮ್ಮ ಚಿತ್ರಗಳ ಮೂಲಕವೇ ಬೇಡುತ್ತಾರೆ. ಕೆಲವರು
ಶಕ್ತಿಯ ದೇವತೆಯಾಗಿದ್ದಾರೆ, ಕೆಲವರು ವಿದ್ಯಾ ದೇವಿಯಾಗಿದ್ದಾರೆ. ವರದಾನಿ ಸ್ವರೂಪದವರು
ತಾವಾಗಿದ್ದೀರಿ, ಆದ್ದರಿಂದ ಈಗಿನವರೆಗೂ ಭಕ್ತಿಯ ಪರಂಪರೆಯು ನಡೆಯುತ್ತಿದೆ. ಸದಾ ಬಾಪ್ದಾದಾರವರ
ಮೂಲಕ ಸರ್ವಪ್ರಾಪ್ತಿ ಸ್ವರೂಪರು ಪ್ರಸನ್ನ ಚಿತ್ತ, ಪ್ರಸನ್ನತೆಯ ಸ್ವರೂಪರಾಗಿದ್ದೀರಿ, ಅದು
ಈಗಿನವರೆಗೂ ತನ್ನನ್ನು ಪ್ರಸನ್ನ ಮಾಡಲು ದೇವಿ-ದೇವತೆಗಳನ್ನು ಪ್ರಸನ್ನಗೊಳಿಸುತ್ತಾರೆ - ಇವರೇ ನಮಗೆ
ಸದಾಕಾಲಕ್ಕಾಗಿ ಪ್ರಸನ್ನಗೊಳಿಸುತ್ತಾರೆ. ಅತೀ ದೊಡ್ಡ ಖಜಾನೆಯಾದ ಸಂತುಷ್ಟತೆಯನ್ನು ತಂದೆಯವರ ಮೂಲಕ
ತಾವೆಲ್ಲರೂ ಪ್ರಾಪ್ತಿ ಮಾಡಿಕೊಂಡಿದ್ದೀರಿ ಆದ್ದರಿಂದ ಸಂತುಷ್ಟತೆಯನ್ನು ತೆಗೆದುಕೊಳ್ಳುವುದಕ್ಕಾಗಿ
ಸಂತೋಷಿ ದೇವಿಯ ಪೂಜೆಯನ್ನು ಮಾಡುತ್ತಿರುತ್ತಾರೆ. ಎಲ್ಲರೂ ಸಂತುಷ್ಟ ಆತ್ಮರು ಸಂತೋಷಿ
ಮಾತೆಯಾಗಿದ್ದೀರಲ್ಲವೆ. ಎಲ್ಲರೂ ಸಂತೋಷಿ ಆಗಿದ್ದೀರಲ್ಲವೆ! ತಾವೆಲ್ಲರೂ ಸಂತುಷ್ಟ ಆತ್ಮರು ಸಂತೋಷಿ
ಮೂರ್ತಿಯಾಗಿದ್ದೀರಿ. ಬಾಪ್ದಾದಾರವರ ಮೂಲಕ ಸಫಲತೆಯು ಜನ್ಮ ಸಿದ್ಧ ಅಧಿಕಾರದ ರೂಪದಲ್ಲಿ
ಪ್ರಾಪ್ತಿಯಾಗುತ್ತದೆ ಆದ್ದರಿಂದ ಸಫಲತೆಯ ದಾನ, ವರದಾನವನ್ನು ತಮ್ಮ ಚಿತ್ರಗಳಿಂದ ಬೇಡುತ್ತಾರೆ.
ಕೇವಲ ಅಲ್ಪ ಬುದ್ಧಿಯವರಾದ ಕಾರಣದಿಂದ, ನಿರ್ಬಲ ಆತ್ಮರಾಗಿರುವ ಕಾರಣದಿಂದ, ಭಿಕಾರಿ ಆತ್ಮರಾಗಿರುವ
ಕಾರಣದಿಂದ ಅಲ್ಪಕಾಲದ ಸಫಲತೆಯನ್ನೇ ಬೇಡುತ್ತಾರೆ. ಹೇಗೆ ಭಿಕಾರಿಗಳೆಂದಿಗೂ ಸಹ ಹೀಗೆ ಹೇಳುವುದಿಲ್ಲ
- ಸಾವಿರ ರೂಪಾಯಿಗಳನ್ನು ಕೊಡಿ. ಇಷ್ಟೇ ಹೇಳುತ್ತಾರೆ- ಸ್ವಲ್ಪ ಪೈಸೆಯನ್ನು ಕೊಟ್ಟು ಬಿಡಿ. ಒಂದು
ರೂಪಾಯಿ, ಎರಡು ರೂಪಾಯಿಯನ್ನು ಕೊಡಿ, ಹೀಗೆಯೇ ಈ ಆತ್ಮರೂ ಸಹ ಸುಖ-ಶಾಂತಿ, ಪವಿತ್ರತೆಯ ಭಿಕಾರಿಗಳು
ಅಲ್ಪಕಾಲದ ಸಫಲತೆಯನ್ನು ಬೇಡುತ್ತಾರೆ. ಈ ನನ್ನ ಕಾರ್ಯವಾಗಿ ಬಿಡಲಿ, ಇದರಲ್ಲಿ ಸಫಲತೆಯಾಗಿ ಬಿಡಲಿ
ಅಷ್ಟೇ. ಆದರೆ ಬೇಡುವುದಂತು ತಾವು ಸಫಲತಾ ಸ್ವರೂಪ ಆತ್ಮರಿಂದಲೇ ಬೇಡುತ್ತಾರೆ. ತಾವು ಹೃದಯರಾಮ
ತಂದೆಯ ಮಕ್ಕಳು ದಿಲ್ವಾಲಾ ತಂದೆಯವರಿಗೆ, ಹೃದಯದ ಎಲ್ಲಾ ಸ್ಥಿತಿ ಗತಿಯನ್ನು ತಿಳಿಸುತ್ತೀರಿ,
ಹೃದಯದ ಮಾತುಗಳನ್ನಾಡುತ್ತೀರಿ. ಯಾವುದನ್ನು ಯಾವುದೇ ಆತ್ಮರೊಂದಿಗೆ ಮಾಡಲು ಸಾಧ್ಯವಿಲ್ಲ. ಅದನ್ನು
ತಂದೆಯೊಂದಿಗೆ ಮಾತನಾಡುತ್ತೀರಿ. ಸತ್ಯ ತಂದೆಯ ಸತ್ಯ ಮಕ್ಕಳಾಗುತ್ತೀರಿ. ಈಗಲೂ ತಮ್ಮ ಚಿತ್ರಗಳ
ಮುಂದೆ ಎಲ್ಲರೂ ಹೃದಯದ ಸ್ಥಿತಿ ಗತಿಯನ್ನು ಹೇಳಿಕೊಳ್ಳುತ್ತಿರುತ್ತಾರೆ. ತನ್ನ ಯಾವುದೇ ಬಚ್ಚಿಡುವ
ಮಾತೇ ಆಗಿರಲಿ, ತನ್ನ ಸ್ನೇಹಿ-ಸಂಬಂಧಿಗಳಿಂದ ಬಚ್ಚಿಡುತ್ತಾರೆ ಆದರೆ ದೇವಿ-ದೇವತೆಗಳಿಂದ
ಬಚ್ಚಿಡುವುದಿಲ್ಲ. ಪ್ರಪಂಚದವರ ಮುಂದೆ ಹೇಳುತ್ತಾರೆ- ನಾನು ಹೀಗಿದ್ದೇನೆ, ಸತ್ಯವಾಗಿದ್ದೇನೆ,
ಮಹಾನ್ ಆಗಿದ್ದೇನೆ, ಆದರೆ ದೇವತೆಗಳ ಮುಂದೆ ಏನು ಹೇಳುವರು? ನಾನು ಯಾರಾಗಿದ್ದೇನೆಯೋ ಅದು ಇದೇ
ಆಗಿದ್ದೇನೆ. ಕಾಮಿಯೂ ಆಗಿದ್ದೇನೆ, ಕಪಟಿಯೂ ಆಗಿದ್ದೇನೆ. ಅಂದ ಮೇಲೆ ಇಂತಹ ಹೊಸ ವಿಶ್ವದ
ಅದೃಷ್ಟವಂತರಾಗಿದ್ದೀರಿ. ಪ್ರತಿಯೊಬ್ಬರ ಅದೃಷ್ಟದಲ್ಲಿ ಪಾವನ ವಿಶ್ವದ ರಾಜ್ಯಭಾಗ್ಯವಿದೆ. ಇಂತಹ
ವಿದಾತಾ, ವರದಾತಾ, ವಿಧಿ-ವಿದಾತಾ ಸರ್ವಶ್ರೇಷ್ಠ ಆತ್ಮರಾಗಿದ್ದೀರಿ. ಪ್ರತಿಯೊಬ್ಬರ ಶ್ರೇಷ್ಠ
ಮತವೆಂಬ ಕೈಗಳಲ್ಲಿ ಸ್ವರ್ಗದ ಸ್ವರಾಜ್ಯದ ಚಕ್ರವಿದೆ. ಇದೇ ಬೆಣ್ಣೆಯೂ ಆಗಿದೆ. ರಾಜ್ಯಭಾಗ್ಯದ
ಬೆಣ್ಣೆಯಾಗಿದೆ. ಪ್ರತಿಯೊಬ್ಬರ ತಲೆಯ ಮೇಲೆ ಪವಿತ್ರತೆಯ ಮಹಾನತೆಯ, ಪ್ರಕಾಶತೆಯ ಕಿರೀಟವಿದೆ. ಹೃದಯ
ಸಿಂಹಾಸನ ಅಧಿಕಾರಿ ಆಗಿದ್ದೀರಿ. ಸ್ವರಾಜ್ಯದ ತಿಲಕಧಾರಿ ಆಗಿದ್ದೀರಿ. ಅಂದಮೇಲೆ ನಾನು ಯಾರು
ಎನ್ನುವುದು ತಿಳಿಯಿತೆ? ನಾನು ಯಾರು ಎನ್ನುವ ಒಗಟನ್ನು ತಿಳಿದುಕೊಳ್ಳುವುದಕ್ಕಾಗಿ ಬಂದಿದ್ದೀರಲ್ಲವೆ?
ಮೊದಲ ದಿನದ ಪಾಠದಲ್ಲಿ ಇದನ್ನು ಓದಿದಿರಲ್ಲವೆ. ನಾನು ಯಾರು? ನಾನು ಇದಲ್ಲ, ನಾನು ಇದು ಆಗಿದ್ದೇನೆ.
ಇದರಲ್ಲಿಯೇ ಸಂಪೂರ್ಣ ಜ್ಞಾನಸಾಗರನ ಜ್ಞಾನವು ಸಮಾವೇಶವಾಗಿದೆ. ಎಲ್ಲರೂ ತಿಳಿದಿದ್ದೀರಲ್ಲವೆ. ಇದೇ
ಆತ್ಮಿಕ ನಶೆಯು ಸದಾ ಜೊತೆಯಿರಲಿ. ಇಷ್ಟೂ ಶ್ರೇಷ್ಠ ಆತ್ಮರಾಗಿದ್ದೀರಿ. ಇಷ್ಟೂ ಮಹಾನರಾಗಿದ್ದೀರಿ.
ಪ್ರತೀ ಹೆಜ್ಜೆ, ಪ್ರತೀ ಸಂಕಲ್ಪ, ಪ್ರತೀ ಕರ್ಮವು ನೆನಪಾರ್ಥವಾಗುತ್ತಿದೆ, ವಿಧಾನವಾಗುತ್ತಿದೆ, ಇದೇ
ಶ್ರೇಷ್ಠ ಸ್ಮೃತಿಯಿಂದ ಮೇಲೆತ್ತಿರಿ(ಶ್ರೇಷ್ಠಗೊಳಿಸಿರಿ). ತಿಳಿಯಿತೆ- ಇಡೀ ವಿಶ್ವದ ದೃಷ್ಟಿಯು
ತಾವಾತ್ಮರ ಕಡೆಯಿದೆ. ನಾನು ಏನು ಮಾಡುವೆನು, ಅದು ವಿಶ್ವಕ್ಕಾಗಿ ವಿಧಾನ ಮತ್ತು
ನೆನಪಾರ್ಥವಾಗುತ್ತದೆ. ನಾನು ಏರುಪೇರಿನಲ್ಲಿ ಬರುತ್ತೇನೆಂದರೆ ಪ್ರಪಂಚವು ಏರುಪೇರಿನಲ್ಲಿ ಬರುತ್ತದೆ.
ನಾನು ಸಂತುಷ್ಟತೆ, ಪ್ರಸನ್ನತೆಯಲ್ಲಿರುತ್ತೇನೆಂದರೆ ಪ್ರಪಂಚವು ಸಂತುಷ್ಟ ಮತ್ತು
ಪ್ರಸನ್ನವಾಗುತ್ತದೆ. ಇಷ್ಟೂ ಜವಾಬ್ದಾರಿಯು ಪ್ರತಿಯೊಬ್ಬ ವಿಶ್ವನವ ನಿರ್ಮಾಣಕ್ಕೆ ನಿಮಿತ್ತವಾಗಿ
ಆತ್ಮರದಾಗಿದೆ. ಆದರೆ ಎಷ್ಟು ದೊಡ್ಡದಾಗಿದೆಯೋ ಅಷ್ಟೇ ಹಗುರತೆಯಿದೆ ಏಕೆಂದರೆ ಸರ್ವಶಕ್ತಿವಂತ
ತಂದೆಯು ಜೊತೆಯಿದ್ದಾರೆ. ಒಳ್ಳೆಯದು.
ಹೀಗೆ ಸದಾ ಪ್ರಸನ್ನಚಿತ್ತರಾಗಿರುವ ಆತ್ಮರಿಗೆ, ಸದಾ ಮಾಸ್ಟರ್ ವಿದಾತಾ, ವರದಾತಾ ಮಕ್ಕಳಿಗೆ, ಸದಾ
ಸರ್ವಪ್ರಾಪ್ತಿ ಸ್ವರೂಪ ಸಂತುಷ್ಟ ಆತ್ಮರಿಗೆ, ಸದಾ ನೆನಪಿನ ಮೂಲಕ ಪ್ರತೀಕರ್ಮದ ನೆನಪಾರ್ಥವನ್ನಾಗಿ
ಮಾಡುವಂತಹ ಪೂಜ್ಯ-ಮಹಾನ್ ಆತ್ಮರಿಗೆ ವಿದಾತಾ-ವರದಾತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಕುಮಾರರ
ಬೇರೆ-ಬೇರೆ ಗ್ರೂಪ್ನವರೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ
1. ಎಲ್ಲರೂ ಶ್ರೇಷ್ಠ ಕುಮಾರರಾಗಿದ್ದೀರಲ್ಲವೆ? ಸಾಧಾರಣ ಕುಮಾರರಲ್ಲ, ಶ್ರೇಷ್ಠ ಕುಮಾರರು. ತನುವಿನ
ಶಕ್ತಿ, ಮನಸ್ಸಿನ ಶಕ್ತಿಯೆಲ್ಲವೂ ಶ್ರೇಷ್ಠ ಕಾರ್ಯದಲ್ಲಿ ಉಪಯೋಗಿಸುವವರು. ಯಾವುದೇ ಶಕ್ತಿಯನ್ನು
ವಿನಾಶಿ ಕಾರ್ಯದಲ್ಲಿ ಉಪಯೋಗಿಸುವವರಲ್ಲ. ವಿಕಾರಿ ಕಾರ್ಯವಾಗಿದೆ- ವಿನಾಶಕಾರಿ ಕಾರ್ಯ ಮತ್ತು
ಶ್ರೇಷ್ಠ ಕಾರ್ಯವಾಗಿದೆ-ಈಶ್ವರೀಯ ಕಾರ್ಯ. ಅಂದಮೇಲೆ ಸರ್ವಶಕ್ತಿಗಳನ್ನು ಈಶ್ವರನ ಕಾರ್ಯದಲ್ಲಿ
ಉಪಯೋಗಿಸುವಂತಹ ಶ್ರೇಷ್ಠ ಕುಮಾರರು. ಎಲ್ಲಿ ವ್ಯರ್ಥದ ಖಾತೆಯಲ್ಲಂತು ಯಾವುದೇ ಶಕ್ತಿಯನ್ನೂ
ತೊಡಗಿಸುವುದಿಲ್ಲವೇ? ಈಗ ತಮ್ಮ ಶಕ್ತಿಗಳನ್ನು ಎಲ್ಲಿ ಉಪಯೋಗಿಸಬೇಕು ಎನ್ನುವ ತಿಳುವಳಿಕೆ ಸಿಕ್ಕಿ
ಬಿಟ್ಟಿದೆ. ಇದೇ ತಿಳುವಳಿಕೆಯ ಮೂಲಕ ಸದಾ ಶ್ರೇಷ್ಠ ಕಾರ್ಯವನ್ನು ಮಾಡಿರಿ. ಇಂತಹ ಶ್ರೇಷ್ಠ
ಕಾರ್ಯದಲ್ಲಿ ಸದಾ ಇರುವವರು ಶ್ರೇಷ್ಠ ಪ್ರಾಪ್ತಿಯ ಅಧಿಕಾರಿಯಾಗಿ ಬಿಡುತ್ತಾರೆ. ಇಂತಹ
ಅಧಿಕಾರಿಯಾಗಿದ್ದೀರಾ? ಅನುಭವ ಮಾಡುತ್ತೀರಾ- ಶ್ರೇಷ್ಠ ಪ್ರಾಪ್ತಿಯಾಗುತ್ತದೆ? ಅಥವಾ ಆಗಬೇಕಾಗಿದೆಯೇ?
ಪ್ರತೀ ಹೆಜ್ಜೆಯಲ್ಲಿ ಪದಮಗಳ ಸಂಪಾದನೆಯು ಜಮಾ ಆಗುತ್ತದೆ ಎನ್ನುವ ಅನುಭವವಿದೆಯಲ್ಲವೆ? ಯಾರ ಒಂದು
ಹೆಜ್ಜೆಯಲ್ಲಿ ಪದಮಗಳ ಸಂಪಾದನೆಯು ಜಮಾ ಆಗುತ್ತದೆ, ಅವರೆಷ್ಟು ಶ್ರೇಷ್ಠರಾದರು! ಇಷ್ಟೂ ಜಮಾ
ಆಗಿರುವ ಸಂಪತ್ತು ಯಾರದಿದೆಯೋ, ಅವರಿಗೆಷ್ಟು ಖುಷಿಯಿರುತ್ತದೆ! ಇತ್ತೀಚಿನ ಲಕ್ಷಾಧಿಪತಿ,
ಕೋಟ್ಯಾಧಿಪತಿಗೂ ವಿನಾಶಿ ಖುಷಿಯಿರುತ್ತದೆ, ತಮಗೆ ಅವಿನಾಶಿ ಸಂಪತ್ತಿದೆ. ಶ್ರೇಷ್ಠ ಕುಮಾರನೆಂದರೆ
ಪರಿಭಾಷೆಯನ್ನು ತಿಳಿದಿದ್ದೀರಾ? ಸದಾ ಪ್ರತಿಯೊಂದು ಶಕ್ತಿಯನ್ನು ಶ್ರೇಷ್ಠ ಕಾರ್ಯದಲ್ಲಿ
ಉಪಯೋಗಿಸುವವರು. ವ್ಯರ್ಥದ ಖಾತೆಯು ಸದಾಕಾಲಕ್ಕಾಗಿ ಸಮಾಪ್ತಿಯಾಯಿತು, ಶ್ರೇಷ್ಠ ಖಾತೆಯು ಜಮಾ ಆಯಿತೆ
ಅಥವಾ ಎರಡೂ ನಡೆಯುತ್ತದೆಯೇ? ಒಂದು ಸಮಾಪ್ತಿಯಾಯಿತು. ಈಗ ಎರಡನ್ನೂ ನಡೆಸುವ ಸಮಯವಲ್ಲ. ಈಗ ಅದು
ಸದಾಕಾಲಕ್ಕಾಗಿ ಸಮಾಪ್ತಿ. ಎರಡೂ ಇರುತ್ತದೆಯೆಂದರೆ ಜಮಾ ಎಷ್ಟಾಗಬೇಕು, ಅಷ್ಟು ಆಗುವುದಿಲ್ಲ.
ಕಳೆಯುವುದಿಲ್ಲ, ಜಮಾ ಆಯಿತೆಂದರೆ ಎಷ್ಟು ಜಮಾ ಆಯಿತು! ಅಂದ ಮೇಲೆ ವ್ಯರ್ಥದ ಖಾತೆಯು
ಸಮಾಪ್ತಿಯಾಯಿತು, ಸಮರ್ಥ ಖಾತೆಯು ಜಮಾ ಆಯಿತು.
2. ಕುಮಾರ ಜೀವನವು ಶಕ್ತಿಶಾಲಿಯಾದ ಜೀವನವಾಗಿದೆ. ಕುಮಾರ ಜೀವನದಲ್ಲಿ ಏನು ಬೇಕು ಅದನ್ನು ಮಾಡಬಹುದು.
ಭಲೇ ತನ್ನನ್ನು ಶ್ರೇಷ್ಠರನ್ನಾಗಿ ಮಾಡಿಕೊಳ್ಳಿರಿ, ಭಲೇ ತಮ್ಮನ್ನು ಕೆಳಗೆ ಬೀಳಿಸಿಕೊಳ್ಳಬಹುದು. ಈ
ಕುಮಾರ ಜೀವನವೇ ಶ್ರೇಷ್ಠ ಹಾಗೂ ಕನಿಷ್ಟ ಮಾಡಿಕೊಳ್ಳುವ ಜೀವನವಾಗಿದೆ. ಇಂತಹ ಜೀವನದಲ್ಲಿ ತಾವು
ತಂದೆಯ ಮಕ್ಕಳಾಗಿ ಬಿಟ್ಟಿರಿ. ವಿನಾಶಿ ಜೀವನದ ಜೊತೆಗಾರರ ಕರ್ಮ ಬಂಧನದಲ್ಲಿ ಬಂಧಿತರಾಗುವ ಬದಲು
ಸತ್ಯ ಜೀವನದ ಜೊತೆಗಾರನನ್ನು ತೆಗೆದುಕೊಂಡಿರಿ. ಎಷ್ಟೊಂದು ಭಾಗ್ಯಶಾಲಿ ಆಗಿದ್ದೀರಿ! ಈಗ
ಬಂದಿದ್ದೀರೆಂದರೆ ಒಬ್ಬರೇ ಬಂದಿದ್ದೀರಾ ಅಥವಾ ಕಂಬೈಂಡ್ ಆಗಿ ಬಂದಿದ್ದೀರಾ? (ಕಂಬೈಂಡ್) ಟಿಕೇಟಿನ
ಖರ್ಚನ್ನಂತು ಮಾಡಲಿಲ್ಲವೆ? ಅಂದಮೇಲೆ ಇದೂ ಸಹ ಉಳಿತಾಯವಾಯಿತು. ಹಾಗೆ ನೋಡಿದರೆ ಒಂದು ವೇಳೆ ಶರೀರದ
ಜೊತೆಗಾರರನ್ನು ಕರೆತರುತ್ತೀರೆಂದರೆ ಟಿಕೇಟಿನ ಖರ್ಚನ್ನು ಮಾಡುತ್ತೀರಿ, ಅವರ ಸಾಮಗ್ರಿಗಳನ್ನೂ
ಹೊರಬೇಕಾಗುತ್ತದೆ ಮತ್ತು ಸಂಪಾದನೆ ಮಾಡಿ ಪ್ರತಿನಿತ್ಯವೂ ತಿನ್ನಿಸಬೇಕಾಗುತ್ತದೆ. ಈ ಜೊತೆಗಾರನಂತು
ತಿನ್ನುವುದೂ ಇಲ್ಲ, ಕೇವಲ ಅದರಲ್ಲಿ ಭಾಸನೆಯನ್ನು ತೆಗೆದುಕೊಳ್ಳುತ್ತಾರೆ. ರೊಟ್ಟಿಯು ಕಡಿಮೆಯಾಗಿ
ಬಿಡುವುದಿಲ್ಲ, ಇನ್ನೂ ಶಕ್ತಿಯನ್ನು ತುಂಬಿ ಬಿಡುತ್ತದೆ. ಅಂದಾಗ ಖರ್ಚಿಲ್ಲದೆ, ಪರಿಶ್ರಮವಿಲ್ಲದೆ
ಮತ್ತು ಜೊತೆಗಾರನೂ ಅವಿನಾಶಿ, ಸಹಯೋಗವೂ ಸಂಪೂರ್ಣವಾಗಿ ಸಿಗುತ್ತದೆ. ಪರಿಶ್ರಮ
ತೆಗೆದುಕೊಳ್ಳುವುದಿಲ್ಲ ಮತ್ತು ಸಹಯೋಗವನ್ನು ಕೊಡುತ್ತಾರೆ. ಯಾವುದೇ ಕಷ್ಟದ ಕಾರ್ಯವು ಬಂದಿತೆಂದರೆ
ನೆನಪು ಮಾಡಿದರು ಮತ್ತು ಸಹಯೋಗ ಸಿಕ್ಕಿತು. ಇಂತಹ ಅನುಭವಿ ಆಗಿದ್ದೀರಲ್ಲವೆ! ಯಾವಾಗ ಭಕ್ತರಿಗೂ
ಭಕ್ತಿಯ ಫಲವನ್ನು ಕೊಡುವವರಾಗಿದ್ದಾರೆ, ಅಂದಮೇಲೆ ಯಾರು ಜೀವನದ ಜೊತೆಗಾರರಾಗಿರುವರು, ಅವರಿಗೆ ಜೊತೆ
ಕೊಡುವುದಿಲ್ಲವೇ? ಕುಮಾರರು ಕಂಬೈಂಡ್ ಆದರು ಆದರೆ ಈ ಕಂಬೈಂಡಿನಲ್ಲಿ ನಿಶ್ಚಿಂತ ಚಕ್ರವರ್ತಿಯಾಗಿ
ಬಿಟ್ಟಿರಿ. ಯಾವುದೇ ಜಂಜಾಟವಿಲ್ಲ, ನಿಶ್ಚಿಂತವಿದೆ. ಇಂದು ಮಗು ರೋಗಿಯಾಯಿತು, ಇಂದು ಮಗುವು ಶಾಲೆಗೆ
ಹೋಗಲಿಲ್ಲ.... ಇದ್ಯಾವುದೇ ಹೊರೆಯಿಲ್ಲ. ಸದಾ ನಿರ್ಬಂಧನರು. ಒಬ್ಬರ ಬಂಧನದಲ್ಲಿ
ಬಂಧಿಸಿಕೊಳ್ಳುವುದರಿಂದ ಅನೇಕ ಬಂಧನಗಳಿಂದ ಮುಕ್ತರಾಗಿ ಬಿಟ್ಟಿರಿ. ತಿನ್ನಿ, ಕುಡಿಯಿರಿ, ಮೋಜು
ಮಾಡಿರಿ ಮತ್ತೇನು ಕೆಲಸ! ತಮ್ಮ ಕೈಗಳಿಂದ ಮಾಡಿದಿರಿ ಮತ್ತು ತಿಂದಿರಿ, ಏನು ಬೇಕೋ ಅದನ್ನು
ಸೇವಿಸಿರಿ, ಸ್ವತಂತ್ರರಾಗಿರುವಿರಿ. ಎಷ್ಟೊಂದು ಶ್ರೇಷ್ಠರಾಗಿ ಬಿಟ್ಟಿರಿ. ಪ್ರಪಂಚದ ಲೆಕ್ಕದಿಂದಲೂ
ಒಳ್ಳೆಯವರಾಗಿದ್ದೀರಿ. ಪ್ರಪಂಚದ ಜಂಜಾಟಗಳಿಂದ ಪಾರಾಗಿ ಬಿಟ್ಟೆವು ಎಂದು ತಿಳಿಯುತ್ತೀರಲ್ಲವೆ.
ಆತ್ಮದ ಮಾತನ್ನು ಬಿಡಿ, ಶರೀರದ ಕರ್ಮ ಬಂಧನದ ಲೆಕ್ಕದಿಂದಲೂ ಪಾರಾಗಿ ಬಿಟ್ಟಿರಿ, ಇಷ್ಟು
ಸುರಕ್ಷಿತವಾಗಿದ್ದೀರಿ. ಎಂದಿಗಾದರೂ ಮನಸ್ಸಾಗುವುದಿಲ್ಲವೆ- ಯಾರಾದರೂ ಜ್ಞಾನಿಗಳನ್ನು
ಜೊತೆಗಾರರನ್ನಾಗಿ ಮಾಡಿ ಬಿಡಿ? ಯಾವುದಾದರೂ ಕುಮಾರಿಯ ಕಲ್ಯಾಣ ಮಾಡಿಬಿಡಲೇ, ಹೀಗೆ
ಮನಸ್ಸಾಗುತ್ತದೆಯೇ? ಇದು ಕಲ್ಯಾಣವಲ್ಲ, ಅಕಲ್ಯಾಣವಾಗಿದೆ, ಏಕೆ? ಒಂದು ಬಂಧನವನ್ನು ಬಂಧಿಸಿದಿರಿ
ಮತ್ತು ಅನೇಕ ಬಂಧನಗಳು ಪ್ರಾರಂಭವಾಯಿತು. ಈ ಒಂದು ಬಂಧನವು ಅನೇಕ ಬಂಧನವನ್ನು ಉತ್ಪನ್ನಗೊಳಿಸುತ್ತದೆ,
ಆದ್ದರಿಂದ ಸಹಯೋಗವು ಸಿಗುವುದಿಲ್ಲ. ಹೊರೆಯಾಗುತ್ತದೆ. ನೋಡುವುದರಲ್ಲಿ ಸಹಯೋಗವೆನಿಸುತ್ತದೆ ಆದರೆ
ಅನೇಕ ಮಾತುಗಳ ಹೊರೆಯಿದೆ. ಅಂದಮೇಲೆ ಅನೇಕ ಹೊರೆಗಳಿಂದ ಪಾರಾಗಿ ಬಿಟ್ಟಿರಿ. ಎಂದಿಗೂ
ಸ್ವಪ್ನದಲ್ಲಿಯೂ ಯೋಚಿಸಬೇಡಿ. ಇಲ್ಲವೆಂದರೆ ಹೀಗೆ ಹೊರೆಯ ಅನುಭವವನ್ನು ಮಾಡುತ್ತೀರಿ, ಅದನ್ನು
ಹೊರುವುದೇ ಕಷ್ಟವಿದೆ. ಸ್ವತಂತ್ರರಾಗಿದ್ದು ಬಂಧನದಲ್ಲಿ ಬಂಧಿಸಿಕೊಳ್ಳುತ್ತೀರೆಂದರೆ, ಪದಮದಷ್ಟು
ಹೊರೆಯಾಗುತ್ತದೆ. ಅವರು ಬುದ್ಧಿಹೀನತೆಯಿಂದ ಪಾಪ! ಬಂಧಿತರಾಗಿ ಬಿಟ್ಟರು, ತಾವು ಎಲ್ಲವನ್ನೂ
ತಿಳಿದುಕೊಂಡಿದ್ದೂ ಬಂಧಿತರನ್ನಾಗಿ ಮಾಡಿಕೊಳ್ಳುತ್ತೀರೆಂದರೆ ಪಶ್ಚಾತ್ತಾಪದ ಹೊರೆಯಾಗುತ್ತದೆ. ಯಾರೂ
ಕಚ್ಚಾ ಅಂತು ಇಲ್ಲವೇ? ಕಚ್ಚಾ ಇರುವವರದು ಗತಿಯಾಗುವುದಿಲ್ಲ. ಇಲ್ಲಿಯವರೂ ಆಗಿರುವುದಿಲ್ಲ,
ಅಲ್ಲಿಯವರೂ ಆಗಿರುವುದಿಲ್ಲ. ತಮ್ಮದಂತು ಸದ್ಗತಿಯಾಯಿತಲ್ಲವೆ. ಸದ್ಗತಿ ಎಂದರೆ ಶ್ರೇಷ್ಠ ಗತಿ.
ಸ್ವಲ್ಪ ಸಂಕಲ್ಪವೇನಾದರೂ ಬರುತ್ತದೆಯೇ? ಭಾವ ಚಿತ್ರವನ್ನು ತೆಗೆದುಕೊಳ್ಳುತ್ತಿದ್ದಾರೆ. ಒಂದು ವೇಳೆ
ಏನಾದರೂ ಹೆಚ್ಚು ಕಡಿಮೆಯಾಯಿತೆಂದರೆ ಭಾವಚಿತ್ರವು ಬರುತ್ತದೆ. ಎಷ್ಟು ಪರಿಪಕ್ವವಾಗುತ್ತೀರಿ ಅಷ್ಟೂ
ವರ್ತಮಾನ ಮತ್ತು ಭವಿಷ್ಯವು ಶ್ರೇಷ್ಠವಿದೆ.
3. ಎಲ್ಲರೂ ಸಮರ್ಥ ಕುಮಾರರಾಗಿದ್ದೀರಲ್ಲವೆ! ಸಮರ್ಥರಾಗಿದ್ದೀರಾ? ಸದಾ ಸಮರ್ಥ ಆತ್ಮರು ಏನೇ
ಸಂಕಲ್ಪವನ್ನು ಮಾಡುತ್ತಾರೆ, ಯಾವುದೇ ಮಾತನ್ನು ಮಾತನಾಡುತ್ತಾರೆ, ಕರ್ಮವನ್ನು ಮಾಡುತ್ತಾರೆ, ಅದು
ಸಮರ್ಥವಾಗಿರುತ್ತದೆ. ಸಮರ್ಥದ ಅರ್ಥವೇ ಆಗಿದೆ - ವ್ಯರ್ಥವನ್ನು ಸಮಾಪ್ತಿಗೊಳಿಸುವವರು. ವ್ಯರ್ಥದ
ಖಾತೆಯು ಸಮಾಪ್ತಿ ಮತ್ತು ಸಮರ್ಥದ ಖಾತೆಯನ್ನು ಸದಾ ಜಮಾ ಮಾಡುವವರು. ಎಂದಿಗೂ ವ್ಯರ್ಥವು
ನಡೆಯುವುದಿಲ್ಲವೇ? ವ್ಯರ್ಥ ಸಂಕಲ್ಪ ಅಥವಾ ಮಾತು ಅಥವ ವ್ಯರ್ಥ ಸಮಯ, ಇದರಲ್ಲೇನಾದರೂ ಸೆಕೆಂಡ್
ಹೋಯಿತೆಂದರೂ ಸಹ ಎಷ್ಟೊಂದು ಹೊರಟು ಹೋಯಿತು! ಸಂಗಮದಲ್ಲಿ ಸೆಕೆಂಡ್ ಸಹ ಎಷ್ಟು ಶ್ರೇಷ್ಠವಾಗಿದೆ!
ಅದು ಸೆಕೆಂಡ್ ಅಲ್ಲ ಆದರೆ ಒಂದು ಸೆಕೆಂಡ್ ಒಂದು ಜನ್ಮಕ್ಕೆ ಸಮಾನವಿದೆ. ಒಂದು ಸೆಕೆಂಡ್ ಹೋಗಲಿಲ್ಲ,
ಒಂದು ಜನ್ಮವೇ ಕಳೆಯಿತು. ಇಷ್ಟೂ ಮಹತ್ವವನ್ನು ತಿಳಿದುಕೊಳ್ಳುವ ಸಮರ್ಥ ಆತ್ಮರಾಗಿದ್ದೀರಲ್ಲವೆ. ಸದಾ
ಈ ಸ್ಮೃತಿಯಿರಲಿ - ನಾವು ಸಮರ್ಥ ತಂದೆಯ ಮಕ್ಕಳಾಗಿದ್ದೇವೆ, ಸಮರ್ಥ ಆತ್ಮರಾಗಿದ್ದೇವೆ, ಸಮರ್ಥ
ಕಾರ್ಯಕ್ಕೆ ನಿಮಿತ್ತರಾಗಿದ್ದೇವೆ. ಅಂದಮೇಲೆ ಸದಾಕಾಲವೂ ಹಾರುವ ಕಲೆಯ ಅನುಭವವನ್ನು
ಮಾಡುತ್ತಿರುತ್ತೀರಿ. ಬಲಹೀನರು ಹಾರಲು ಸಾಧ್ಯವಿಲ್ಲ. ಸಮರ್ಥರು ಸದಾ ಹಾರುತ್ತಿರುತ್ತಾರೆ. ಅಂದಮೇಲೆ
ಯಾವ ಕಲೆಯವರಾಗಿದ್ದೀರಿ? ಹಾರುವ ಕಲೆಯವರೇ ಅಥವಾ ಏರುವ ಕಲೆಯವರೇ? ಏರುವುದರಲ್ಲಿ
ಉಸಿರನ್ನೇಳೆಯಬೇಕಾಗುತ್ತದೆ. ಸುಸ್ತಾಗುತ್ತೀರಿ. ಮತ್ತು ಹಾರುವ ಕಲೆಯವರು ಸೆಕೆಂಡಿನಲ್ಲಿ
ಗುರಿಯಲ್ಲಿ ಸಫಲತಾ ಸ್ವರೂಪರಾದರು. ಏರುವ ಕಲೆಯಿದೆಯೆಂದರೆ ಅವಶ್ಯವಾಗಿ ಸುಸ್ತಾಗುತ್ತಾರೆ,
ಉಸಿರನ್ನೆಳೆಯುತ್ತಾರೆ- ಏನು ಮಾಡಲಿ, ಹೇಗೆ ಮಾಡಲಿ, ಈ ಉಸಿರು ಬಿಡುತ್ತಾರೆ. ಹಾರುವ ಕಲೆಯಲ್ಲಿ
ಎಲ್ಲದರಿಂದಲೂ ಪಾರಾಗಿ ಬಿಡುತ್ತಾರೆ. ಇದನ್ನು ಮಾಡಿರಿ ಎನ್ನುವ ಟಚಿಂಗ್ ಬರುತ್ತದೆ, ಇದು ಆಗಿಯೇ
ಇದೆ. ಅಂದಮೇಲೆ ಸೆಕೆಂಡಿನಲ್ಲಿ ಸಫಲತೆಯ ಗುರಿಯನ್ನು ಪಡೆಯುವವರಿಗೆ ಹೇಳಲಾಗುತ್ತದೆ. ಸಮರ್ಥ ಆತ್ಮರು.
ತಂದೆಯವರಿಗೆ ಖುಷಿಯಾಗುತ್ತದೆ- ಎಲ್ಲರೂ ಹಾರುವ ಕಲೆಯ ಮಕ್ಕಳಾಗಿದ್ದಾರೆ, ಪರಿಶ್ರಮವನ್ನೇನು
ಮಾಡಬೇಕು. ತಂದೆಯಂತು ಹೇಳುತ್ತಾರೆ- ಮಕ್ಕಳು ಪರಿಶ್ರಮದಿಂದ ಮುಕ್ತರಾದರು. ಯಾವಾಗ ತಂದೆಯೇ
ಮಾರ್ಗವನ್ನು ತೋರಿಸುತ್ತಿದ್ದಾರೆ, ಡಬಲ್ಲೈಟ್ ಮಾಡುತ್ತಿದ್ದಾರೆಂದಮೇಲೆ ಕೆಳಗೇಕೆ ಬಂದು
ಬಿಡುತ್ತೀರಿ? ಏನಾಗುತ್ತದೆಯೋ, ಹೇಗಾಗುತ್ತದೆಯೋ ಎನ್ನುವ ಹೊರೆಯಿದೆ. ಸದಾ ಕಲ್ಯಾಣವಾಗುತ್ತದೆ, ಸದಾ
ಶ್ರೇಷ್ಠವಾಗುತ್ತದೆ, ಸದಾ ಸಫಲತೆಯು ಜನ್ಮಸಿದ್ಧ ಅಧಿಕಾರವಿದೆ, ಈ ಸ್ಮೃತಿಯಿಂದ ಸಾಗಿರಿ.
4. ಕುಮಾರರು ಪರೀಕ್ಷೆಯನ್ನು ಕೊಡುವುದಕ್ಕಾಗಿ ಯುದ್ಧ ಮಾಡಬೇಕಾಗುತ್ತದೆ. ಪವಿತ್ರರಾಗಬೇಕು, ಈ
ಸಂಕಲ್ಪವನ್ನು ಮಾಡಿದಿರೆಂದರೆ ಮಾಯೆಯು ಯುದ್ಧ ಮಾಡುವುದು ಪ್ರಾರಂಭಿಸಿ ಬಿಡುತ್ತದೆ. ಕುಮಾರ ಜೀವನವು
ಶ್ರೇಷ್ಠ ಜೀವನವಾಗಿದೆ. ಮಹಾನ್ ಆತ್ಮರಾಗಿದ್ದೀರಿ. ಈಗ ಕುಮಾರರು ಚಮತ್ಕಾರವನ್ನು ಮಾಡಿ ತೋರಿಸಬೇಕು.
ಅತೀ ದೊಡ್ಡ ಚಮತ್ಕಾರವಾಗಿದೆ - ತಂದೆಯ ಸಮಾನರಾಗಿದ್ದು ತಂದೆಯ ಜೊತೆಗಾರರನ್ನಾಗಿ ಮಾಡುವುದು. ಹೇಗೆ
ತಾವು ಸ್ವಯಂ ತಂದೆಯ ಜೊತೆಗಾರರಾದಿರಿ, ಹಾಗೆಯೇ ಅನ್ಯರನ್ನೂ ಜೊತೆಗಾರರನ್ನಾಗಿ ಮಾಡಬೇಕಾಗಿದೆ.
ಮಾಯೆಯ ಜೊತೆಗಾರರನ್ನು ತಂದೆಯ ಜೊತೆಗಾರರನ್ನಾಗಿ ಮಾಡಬೇಕು- ಇಂತಹ ಸೇವಾಧಾರಿ ಆಗಬೇಕು. ತಮ್ಮ
ವರದಾನಿ ಸ್ವರೂಪದಿಂದ ಶುಭಭಾವನೆ ಮತ್ತು ಶುಭಕಾಮನೆಯಿಂದ ತಂದೆಯ ಮಕ್ಕಳನ್ನಾಗಿ ಮಾಡಬೇಕು. ಇದೇ
ವಿಧಿಯ ಮೂಲಕ ಸದಾ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕು. ಎಲ್ಲಿ ಶ್ರೇಷ್ಠವಾದ ವಿಧಿಯಿದೆ,
ಅಲ್ಲಿ ಸಿದ್ಧಿಯು ಅವಶ್ಯವಾಗಿ ಇರುತ್ತದೆ. ಕುಮಾರ ಅರ್ಥಾತ್ ಸದಾ ಅಚಲ. ಏರುಪೇರಿನಲ್ಲಿ ಬರದಿರುವವರು.
ಅಚಲ ಆತ್ಮರು ಅನ್ಯರನ್ನೂ ಅಚಲರನ್ನಾಗಿ ಮಾಡುತ್ತಾರೆ.
5. ಎಲ್ಲರೂ ವಿಜಯಿ ಕುಮಾರರಾಗಿದ್ದೀರಲ್ಲವೆ? ಎಲ್ಲಿ ತಂದೆಯ ಜೊತೆಯಿದೆಯೋ ಅಲ್ಲಿ ಸದಾ ವಿಜಯವಿದೆ.
ಸದಾ ತಂದೆಯ ಜೊತೆಯ ಆಧಾರದಿಂದ ಯಾವುದೇ ಕಾರ್ಯವನ್ನು ಮಾಡುತ್ತೀರೆಂದರೆ ಪರಿಶ್ರಮ ಕಡಿಮೆ ಮತ್ತು
ಹೆಚ್ಚಿನ ಪ್ರಾಪ್ತಿಯ ಅನುಭವವಾಗುತ್ತದೆ. ತಂದೆಯಿಂದ ಸ್ವಲ್ಪವೇನಾದರೂ ದೂರ ಮಾಡಿದಿರೆಂದರೆ
ಹೆಚ್ಚಿನ ಪರಿಶ್ರಮ, ಪ್ರಾಪ್ತಿಯು ಕಡಿಮೆಯಾಗುವುದು. ಅಂದಮೇಲೆ ಪರಿಶ್ರಮದಿಂದ ಮುಕ್ತರಾಗುವ
ಸಾಧನವಿದೆ- ತಂದೆಯು ಪ್ರತೀ ಸೆಕೆಂಡ್ ಪ್ರತೀ ಸಂಕಲ್ಪದಲ್ಲಿ ಜೊತೆಯಲ್ಲಿರಲಿ. ಈ ಜೊತೆಯಿಂದ
ಸಫಲತೆಯಾಗಿಯೇ ಇದೆ. ಇಂತಹ ತಂದೆಯ ಜೊತೆಗಾರನಾಗಿದ್ದೀರಲ್ಲವೆ? ತಂದೆಯ ಆಜ್ಞೆಯೇನಿದೆಯೋ, ಆ
ಆಜ್ಞೆಯನುಸಾರವಾಗಿ ಹೆಜ್ಜೆಯಿರಲಿ. ತಂದೆಯ ಹೆಜ್ಜೆಯ ಹಿಂದೆ ಹೆಜ್ಜೆಯಿರಲಿ. ಇಲ್ಲಿ ಹೆಜ್ಜೆಯನ್ನಿಡಿ
ಅಥವಾ ಇಡದಿರಿ, ಸರಿಯಿದೆಯೋ ಅಥವಾ ಇಲ್ಲವೋ, ಇದನ್ನು ಯೋಚಿಸುವ ಅವಶ್ಯಕತೆಯಿಲ್ಲ. ಯಾವುದಾದರೂ ಹೊಸ
ಮಾರ್ಗವಿದೆಯೆಂದರೆ ಯೋಚಿಸಬೇಕಾಗುತ್ತದೆ. ಆದರೆ ಯಾವಾಗ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡಬೇಕು,
ಅಂದಾಗ ಯೋಚಿಸುವ ಮಾತಿಲ್ಲ. ಸದಾ ತಂದೆಯ ಹೆಜ್ಜೆಯ ಮೇಲೆ ಹೆಜೆಯನ್ನಿಟ್ಟು ನಡೆಯುತ್ತಾ ಸಾಗಿರಿ,
ಗುರಿಯು ಸಮೀಪವೇ ಇದೆ. ತಂದೆಯು ಎಷ್ಟು ಸಹಜ ಮಾಡಿ ಕೊಡುತ್ತಾರೆ - ಶ್ರೀಮತವೇ ಹೆಜ್ಜೆಯಾಗಿದೆ.
ಶ್ರೀಮತದ ಹೆಜ್ಜೆಯಲ್ಲಿ ಹೆಜ್ಜೆಯನ್ನಿಡುತ್ತೀರೆಂದರೆ ಸದಾಕಾಲಕ್ಕಾಗಿ ಪರಿಶ್ರಮದಿಂದ
ಮುಕ್ತರಾಗಿರುತ್ತೀರಿ. ಸರ್ವ ಸಫಲತೆಯು ಅಧಿಕಾರದ ರೂಪದಲ್ಲಾಗುತ್ತದೆ. ಕಿರಿಯ ಕುಮಾರರೂ ಸಹ ಬಹಳಷ್ಟು
ಸೇವೆಯನ್ನು ಮಾಡಬಹುದು. ಎಂದಿಗೂ ಮಸ್ತಿ ಮಾಡಬಾರದು, ತಮ್ಮ ಚಲನೆ, ಮಾತು-ನಡತೆಯು ಹೀಗಿರಲಿ, ಎಲ್ಲರೂ
ಕೇಳಲಿ- ಇವರು ಯಾವ ಶಾಲೆಯಲ್ಲಿ ಓದುವವರಾಗಿದ್ದಾರೆ. ಅದರಿಂದ ಸೇವೆಯಾಗಿ ಬಿಡುತ್ತದೆಯಲ್ಲವೆ.
ಒಳ್ಳೆಯದು.
ವರದಾನ:
ಶ್ರೀಮತದ
ಲಗಾಮನ್ನು ಬಿಗಿ ಮಾಡಿ ಮನಸ್ಸನ್ನು ವಶ ಮಾಡಿಕೊಳ್ಳುವಂತಹ ಬಾಲಕರಿಂದ ಮಾಲೀಕ ಭವ.
ಪ್ರಪಂಚದವರು ಹೇಳುವರು -
ಮನಸ್ಸು ಕುದುರೆಯಾಗಿದೆ, ಅದು ಬಹಳ ವೇಗವಾಗಿ ಓಡುತ್ತದೆ ಆದರೆ ತಮ್ಮ ಮನಸ್ಸು ಆ ಕಡೆ-ಈ ಕಡೆ ಓಡಲು
ಸಾಧ್ಯವಿಲ್ಲ ಏಕೆಂದರೆ ಶ್ರೀಮತದ ಲಗಾಮು ಶಕ್ತಿಶಾಲಿಯಾಗಿ ಇದೆ. ಯಾವಾಗ ಮನಸ್ಸು-ಬುದ್ಧಿಯು
ಸೈಡ್ಸೀನ್ನ್ನು ನೋಡುವುದರಲ್ಲಿ ಪ್ರಾರಂಭಿಸುತ್ತದೆ, ಆಗ ಲಗಾಮು ಸಡಿಲವಾಗುವುದರಿಂದ ಮನಸ್ಸು
ಚಂಚಲವಾಗುತ್ತದೆ. ಆದ್ದರಿಂದ ಯಾವ ಯಾವುದೇ ಮಾತಾಗಲಿ, ಮನಸ್ಸು ಚಂಚಲವೇ ಆಗಲಿ, ಆಗಲೂ ಶ್ರೀಮತದ
ಲಗಾಮನ್ನು ಬಿಗಿ ಪಡಿಸುತ್ತೀರೆಂದರೆ, ಗುರಿಯಲ್ಲಿ ತಲುಪಿ ಬಿಡುತ್ತೀರಿ. ಬಾಲಕನಿಂದ
ಮಾಲೀಕನಾಗಿದ್ದೇನೆ ಎನ್ನುವ ಸ್ಮೃತಿಯಿಂದ ಅಧಿಕಾರಿಯಾಗಿ ಮನಸ್ಸನ್ನು ತನ್ನ ವಶದಲ್ಲಿಟ್ಟುಕೊಳ್ಳಿರಿ.
ಸ್ಲೋಗನ್:
ಸದಾ
ನಿಶ್ಚಯವಿರಲಿ - ಏನಾಗುತ್ತಿದೆ ಅದೂ ಒಳ್ಳೆಯದಿದೆ ಮತ್ತು ಏನಾಗುವುದಿದೆ ಅದು ಇನ್ನೂ ಒಳ್ಳೆಯದಿದೆ
ಅಂದಮೇಲೆ ಅಚಲ-ಅಡೋಲರಾಗಿರುತ್ತೀರಿ.