28.07.19 Avyakt Bapdada
Kannada
Murli
07.01.85 Om Shanti Madhuban
ಹೊಸ ವರ್ಷದ ವಿಶೇಷ
ಸಂಕಲ್ಪ - "ಮಾಸ್ಟರ್ ವಿದಾತಾ ಆಗಿರಿ"
ಇಂದು ವಿದಾತಾ ತಂದೆಯು
ತನ್ನ ಮಾಸ್ಟರ್ ವಿದಾತಾ ಮಕ್ಕಳೊಂದಿಗೆ ಮಿಲನವಾಗಲು ಬಂದಿದ್ದಾರೆ. ವಿದಾತಾ ತಂದೆಯು ಪ್ರತಿಯೊಂದು
ಮಕ್ಕಳ ಚಾರ್ಟನ್ನು ನೋಡುತ್ತಿದ್ದಾರೆ. ವಿದಾತಾ ತಂದೆಯ ಮೂಲಕ ಸಿಕ್ಕಿರುವ ಖಜಾನೆಗಳಲ್ಲಿಂದ
ಎಲ್ಲಿಯವರೆಗೆ ವಿದಾತನ ಸಮಾನ ಮಾಸ್ಟರ್ ವಿದಾತರಾಗಿದ್ದಾರೆ? ಜ್ಞಾನದ ವಿದಾತಾ ಆಗಿದ್ದಾರೆಯೇ?
ನೆನಪಿನ ಶಕ್ತಿಗಳ ವಿದಾತಾ ಆಗಿದ್ದಾರೆಯೇ? ಸಮಯದನುಸಾರ, ಅವಶ್ಯಕತೆಯನುಸಾರ ಪ್ರತಿಯೊಂದು ಶಕ್ತಿಗಳ
ವಿದಾತಾ ಆಗಿದ್ದಾರೆಯೇ? ಗುಣಗಳ ವಿದಾತಾ ಆಗಿದ್ದಾರೆಯೇ? ಆತ್ಮಿಕ ದೃಷ್ಟಿ, ಆತ್ಮಿಕ ಸ್ನೇಹದ ವಿದಾತಾ
ಆಗಿದ್ದಾರೆಯೇ? ಸಮಯದನುಸಾರವಾಗಿ ಪ್ರತಿಯೊಂದು ಆತ್ಮರಿಗೆ ಸಹಯೋಗದ ವಿದಾತಾ ಆಗಿದ್ದಾರೆಯೇ?
ನಿರ್ಬಲರನ್ನು ತನ್ನ ಶ್ರೇಷ್ಠ ಸಂಗದ ವಿದಾತಾ, ಸಂಪರ್ಕದ ವಿದಾತಾ ಆಗಿದ್ದಾರೆಯೇ? ಅಪ್ರಾಪ್ತ
ಆತ್ಮರನ್ನು ತೃಪ್ತಾತ್ಮರನ್ನಾಗಿ ಮಾಡುವ ಉಮ್ಮಂಗ-ಉತ್ಸಾಹದ ವಿದಾತಾ ಆಗಿದ್ದಾರೆಯೇ? ಪ್ರತಿಯೊಬ್ಬ
ಮಾಸ್ಟರ್ ವಿದಾತರ ಈ ಚಾರ್ಟನ್ನು ನೋಡುತ್ತಿದ್ದರು.
ವಿದಾತಾ ಅರ್ಥಾತ್ ಪ್ರತೀ ಸಮಯ, ಪ್ರತೀ ಸಂಕಲ್ಪದ ಮೂಲಕ ಕೊಡುವವರು. ವಿದಾತಾ ಅರ್ಥಾತ್ ವಿಶಾಲ ಹೃದಯಿ.
ಸಾಗರದ ಸಮಾನ ಕೊಡುವುದರಲ್ಲಿ ದೊಡ್ಡ ಹೃದಯದವರು. ವಿದಾತಾ ಅರ್ಥಾತ್ ತಂದೆಯಿಂದಲ್ಲದೆ ಮತ್ತ್ಯಾವುದೇ
ಆತ್ಮರಿಂದ ತೆಗೆದುಕೊಳ್ಳುವ ಭಾವನೆಯಿಡುವವರಲ್ಲ. ಸದಾ ಕೊಡುವವರು. ಒಂದುವೇಳೆ ಯಾರೇ ಆತ್ಮಿಕ ಸ್ನೇಹ,
ಸಹಯೋಗವನ್ನು ಕೊಡುತ್ತಿರುತ್ತಾರೆ, ಅದರಲ್ಲಿ ಒಂದಕ್ಕೆ ಬದಲಾಗಿ ಪದಮದಷ್ಟು ಕೊಡುವವರು. ಹೇಗೆ
ತಂದೆಯು ತೆಗೆದುಕೊಳ್ಳುವುದಿಲ್ಲ, ಕೊಡುತ್ತಾರೆ. ಒಂದುವೇಳೆ ಯಾವುದೇ ಮಗು ತನ್ನ ಹಳೆಯ ಕೊಳಕನ್ನು
ಕೊಡುತ್ತಾರೆ, ಅದಕ್ಕೆ ಬದಲು ಇಷ್ಟೂ ಕೊಡುತ್ತಾರೆ, ತೆಗೆದುಕೊಳ್ಳುವುದು ಕೊಡುವುದರಲ್ಲಿ ಬದಲಾಗಿ
ಬಿಡುತ್ತದೆ. ಇಂತಹ ಮಾಸ್ಟರ್ ವಿದಾತಾ ಅರ್ಥಾತ್ ಪ್ರತೀ ಸಂಕಲ್ಪ, ಪ್ರತೀ ಹೆಜ್ಜೆಯಲ್ಲಿ ಕೊಡುವವರು.
ಮಹಾನ್ ದಾತಾ ಅರ್ಥಾತ್ ವಿದಾತಾ. ಸದಾ ಕೊಡುವವರಾಗಿರುವ ಕಾರಣದಿಂದ ಸದಾ ನಿಸ್ವಾರ್ಥಿಯಾಗಿರುತ್ತಾರೆ.
ಸ್ವಯಂನ ಸ್ವಾರ್ಥದಿಂದ ಸದಾ ಭಿನ್ನ ಹಾಗೂ ತಂದೆಯ ಸಮಾನ ಸರ್ವರ ಪ್ರಿಯರಾಗಿರುತ್ತಾರೆ. ವಿದಾತಾ
ಆತ್ಮನ ಪ್ರತಿ ಸ್ವತಹವಾಗಿಯೇ ಸರ್ವರ ರಿಗಾರ್ಡ್ನ ರಿಕಾರ್ಡ್ ಆಗುತ್ತದೆ. ವಿದಾತಾನು ಸ್ವತಹವಾಗಿಯೇ
ಸರ್ವರ ದೃಷ್ಟಿಯಲ್ಲಿ ದಾತಾ ಅರ್ಥಾತ್ ಮಹಾನರಾಗಿರುತ್ತಾರೆ. ಇಂತಹ ವಿದಾತಾ, ಎಲ್ಲಿಯವರೆಗೆ
ಆಗಿದ್ದೀರಿ? ಈಗ ಕೊಡುವುದೇ ತೆಗೆದುಕೊಳ್ಳುವುದಾಗಿದೆ, ಎಷ್ಟು ಕೊಡುತ್ತೀರಿ ಅಷ್ಟು ಸ್ವತಹವಾಗಿಯೇ
ಹೆಚ್ಚಾಗುತ್ತಿರುತ್ತದೆ. ಯಾವುದೇ ಪ್ರಕಾರದ ಅಲ್ಪಕಾಲದ ಮಾತುಗಳ ಲೇವತಾ
ಆಗಬಾರದು(ತೆಗೆದುಕೊಳ್ಳುವವರು). ಈಗಿನವರೆಗೂ ತಮ್ಮ ಅಲ್ಪಕಾಲದ ಆಶೆಗಳನ್ನು ಪೂರ್ಣ ಮಾಡುವ
ಇಚ್ಛೆಯಿರುತ್ತದೆಯೆಂದರೆ ವಿಶ್ವದ ಸರ್ವ ಆತ್ಮರ ಆಶೆಗಳನ್ನು ಹೇಗೆ ಪೂರ್ಣಗೊಳಿಸುತ್ತೀರಿ! ಸ್ವಲ್ಪ
ಹೆಸರಾಗಬೇಕು, ಮಾನ್ಯತೆ ಸಿಗಬೇಕು, ಗೌರವ ಬೇಕು, ಸ್ನೇಹ ಬೇಕು, ಶಕ್ತಿ ಬೇಕು. ಈಗಿನವರೆಗೂ
ಸ್ವಾರ್ಥಿ ಅರ್ಥಾತ್ ಸ್ವಯಂನ ಅರ್ಥವಾಗಿ ಈ ಇಚ್ಛೆಗಳನ್ನೇ ಇಟ್ಟುಕೊಳ್ಳುವವರಾಗಿರುತ್ತೀರೆಂದರೆ,
ಇಚ್ಛಾ ಮಾತ್ರಂ ಅವಿದ್ಯಾ ಸ್ಥಿತಿಯ ಅನುಭವವನ್ನು ಯಾವಾಗ ಮಾಡುತ್ತೀರಿ? ಈ ಅಲ್ಪಕಾಲದ
ಇಚ್ಛೆಗಳೆಂದಿಗೂ ಸಹ ಒಳ್ಳೆಯವರನ್ನಾಗಿ ಮಾಡಲು ಬಿಡುವುದಿಲ್ಲ. ಈ ಇಚ್ಛೆಯೂ ಸಹ ರಾಯಲ್ ಭಿಕಾರಿತನದ
ಅಂಶವಾಗಿದೆ. ಅಧಿಕಾರಿಯ ಹಿಂದೆ ಇವೆಲ್ಲಾ ಮಾತುಗಳು ಸ್ವತಹವಾಗಿಯೇ ಮುಂದೆ ಬರುತ್ತದೆ. ಬೇಕು-ಬೇಕು
ಎನ್ನುವ ಹಾಡನ್ನಾಡುವುದಿಲ್ಲ. ಸಿಕ್ಕಿ ಬಿಟ್ಟಿತು, ಆಗಿ ಬಿಟ್ಟೇನು - ಇದೇ ಹಾಡನ್ನಾಡುತ್ತಾರೆ.
ಬೇಹದ್ದಿನ ವಿದಾತನಿಗಾಗಿ ಈ ಅಲ್ಪಕಾಲದ ಆಶೆಗಳು ಅಥವಾ ಇಚ್ಛೆಗಳು, ಸ್ವಯಂ ಆಗಿಯೇ ನೆರಳಿನ ಸಮಾನ
ಹಿಂದಿಂದೆ ನಡೆಯುತ್ತದೆ. ಯಾವಾಗ ಹಾಡನ್ನಾಡುತ್ತೀರಿ- ಪಡೆಯಬೇಕಾದುದನ್ನು ಪಡೆದು ಬಿಟ್ಟೆನು, ನಂತರ
ಈ ಅಲ್ಪಕಾಲದ ಹೆಸರು, ಮಾನ್ಯತೆ, ಸ್ಥಾನ, ಪಡೆಯುವ ಇಚ್ಛೆಯು ಹೇಗೆ ಉಳಿದುಕೊಳ್ಳುತ್ತದೆ?
ಇಲ್ಲವೆಂದರೆ ಹಾಡನ್ನು ಬದಲಾಯಿಸಿಬಿಡಿ. ಯಾವಾಗ 5 ತತ್ವಗಳೂ ಸಹ ತಾವು ವಿದಾತರ ಮುಂದೆ ದಾಸಿಯಾಗಿ
ಬಿಡುತ್ತದೆ, ಪ್ರಕೃತಿಜೀತ ಮಾಯಾಜೀತರಾಗಿ ಬಿಡುತ್ತೀರಿ, ಅವರ ಮುಂದೆ ಈ ಅಲ್ಪಕಾಲದ ಇಚ್ಛೆಗಳು
ಹೀಗಿದೆ, ಹೇಗೆಂದರೆ ಸೂರ್ಯನ ಮುಂದೆ ದೀಪದಂತೆ. ಯಾವಾಗ ಸೂರ್ಯನಾಗಿ ಬಿಡುತ್ತೀರಿ, ಈ ದೀಪಗಳ
ಅವಶ್ಯಕತೆಯೇನಿದೆ? ಬೇಕೆನ್ನುವುದು ತೃಪ್ತಿಯ ಆಧಾರವಾಗಿದೆ, ಏನು ಬೇಕು, ಅದನ್ನು ಹೆಚ್ಚು-ಹೆಚ್ಚಾಗಿ
ಕೊಡುತ್ತಾ ಸಾಗಿರಿ. ಮಾನ್ಯತೆ ಕೊಡಿ, ತೆಗೆದುಕೊಳ್ಳಬೇಡಿ. ಗೌರವ ಕೊಡಿ, ಗೌರವವನ್ನು ಬೇಕು
ಎನ್ನದಿರಿ. ಹೆಸರು ಬೇಕೆಂದರೆ ತಂದೆಯ ಹೆಸರನ್ನು ದಾನವಾಗಿ ಕೊಡಿ. ಆಗ ಸ್ವತಹವಾಗಿಯೇ ತಮ್ಮ ಹೆಸರಾಗಿ
ಬಿಡುತ್ತದೆ. ಕೊಡುವುದೇ ತೆಗೆದುಕೊಳ್ಳುವುದಕ್ಕೆ ಆಧಾರವಾಗಿದೆ. ಹೇಗೆ ಭಕ್ತಿಮಾರ್ಗದಲ್ಲಿಯೂ ಈ
ಪದ್ಧತಿಯು ನಡೆಯುತ್ತಾ ಬಂದಿದೆ, ಯಾವುದೇ ವಸ್ತುವಿನ ಕೊರತೆಯಾಗುತ್ತದೆಯೆಂದರೆ, ಪ್ರಾಪ್ತಿ
ಮಾಡಿಕೊಳ್ಳಲು ಅದೇ ವಸ್ತುವನ್ನು ದಾನ ಮಾಡಿಸುತ್ತಾರೆ. ಅಂದಮೇಲೆ ಕೊಡುವುದು ತೆಗೆದುಕೊಳ್ಳುವುದಾಗಿ
ಬಿಡುತ್ತದೆ. ಹಾಗೆಯೇ ತಾವೂ ಸಹ ದಾತನ ಮಕ್ಕಳು ಕೊಡುವವರು ದೇವತೆಯಾಗುವವರಾಗಿದ್ದೀರಿ. ತಾವು ಎಲ್ಲರ
ಮಹಿಮೆಯನ್ನು ಕೊಡುವಂತಹ ದೇವ, ಶಾಂತಿದೇವ, ಸಂಪತ್ತಿನ ದೇವ ಎಂದು ಹೇಳುತ್ತಾರೆ. ತೆಗೆದುಕೊಳ್ಳುವವರು
ಎಂದು ಮಹಿಮೆ ಮಾಡುವುದಿಲ್ಲ. ಇಂದು ದೇವತೆಯಾಗುವವರು ಎಷ್ಟಿದ್ದಾರೆ ಮತ್ತು ಲೇವತಾ (ತೆಗೆದುಕೊಳ್ಳುವವರು)
ಆಗುವವರು ಎಷ್ಟಿದ್ದಾರೆ ಎನ್ನುವ ಈ ಚಾರ್ಟನ್ನು ನೋಡುತ್ತಿದ್ದರು. ಲೌಕಿಕ ಇಚ್ಛೆಗಳು, ಆಶೆಗಳಂತು
ಸಮಾಪ್ತಿಯಾಯಿತು. ಈಗ ಅಲೌಕಿಕ ಜೀವನದ ಬೇಹದ್ದಿನ ಇಚ್ಛೆಗಳನ್ನು ತಿಳಿಯುತ್ತೀರಿ - ಇದಂತು
ಜ್ಞಾನದ್ದಾಗಿದೆಯಲ್ಲವೆ. ಇದಂತು ಆಗಬೇಕಲ್ಲವೆ. ಆದರೆ ಯಾವುದೇ ಅಲ್ಪಕಾಲದ ಇಚ್ಛೆಯಿರುವವರು
ಮಾಯೆಯನ್ನು ಎದುರಿಸಲು ಸಾಧ್ಯವಿಲ್ಲ. ಬೇಡುವವರಿಂದ ಸಿಗುವಂತಹ ವಸ್ತುವೇನಲ್ಲ. ಯಾರಿಗಾದರೂ ಹೇಳಿರಿ
- ನನಗೆ ಗೌರವ ಕೊಡಿ ಅಥವಾ ಗೌರವ ಕೊಡಿಸಿರಿ. ಬೇಡುವುದರಿಂದ ಸಿಗುತ್ತದೆ- ಈ ಮಾರ್ಗವೇ ತಪ್ಪಾಗಿದೆ,
ಅಂದಮೇಲೆ ಆ ಲಕ್ಷ್ಯವು ಎಲ್ಲಿಂದ ಸಿಗುತ್ತದೆ ಆದ್ದರಿಂದ ಮಾಸ್ಟರ್ ವಿದಾತಾ ಆಗಿದೆ. ಅದರಿಂದ
ಸ್ವತಹವಾಗಿಯೇ ಎಲ್ಲರೂ ತಮಗೆ ಕೊಡುವುದಕ್ಕೆ ಬರುತ್ತಾರೆ. ಗೌರವವನ್ನು ಬೇಡುವವರು ಬೇಸರವಾಗುತ್ತಾರೆ,
ಆದ್ದರಿಂದ ಮಾಸ್ಟರ್ ವಿದಾತನ ಗೌರವದಲ್ಲಿರಿ. ನನ್ನದು-ನನ್ನದು ಎನ್ನದಿರಿ, ಎಲ್ಲವೂ
ನಿನ್ನದು-ನಿನ್ನದು. ತಾವು ನಿನ್ನದು ಎಂದು ಮಾಡುತ್ತೀರೆಂದರೆ, ಎಲ್ಲರೂ ಹೇಳುತ್ತಾರೆ -
ನಿನ್ನದು-ನಿನ್ನದು. ನನ್ನದು-ನನ್ನದು ಎಂದು ಹೇಳುವುದರಿಂದ ಏನು ಬರುತ್ತದೆಯೋ ಅದನ್ನೂ ಕಳೆದು
ಬಿಡುತ್ತೀರಿ. ಏಕೆಂದರೆ ಎಲ್ಲಿ ಸಂತುಷ್ಟತೆಯಿದೆಯೋ ಅಲ್ಲಿ ಪ್ರಾಪ್ತಿಯೂ ಸಹ ಅಪ್ರಾಪ್ತಿಯ
ಸಮಾನವಾಗಿರುತ್ತದೆ. ಎಲ್ಲಿ ಸಂತುಷ್ಟತೆಯಿದೆ ಅಲ್ಲಿ ಸ್ವಲ್ಪವೂ ಸಹ ಸರ್ವ ಸಮಾನವಾಗಿರುತ್ತದೆ.
ಅಂದಮೇಲೆ ನಿನ್ನದು-ನಿನ್ನದು ಎಂದು ಹೇಳುವುದರಿಂದ ಪ್ರಾಪ್ತಿ ಸ್ವರೂಪರಾಗಿ ಬಿಡುತ್ತೀರಿ. ಹೇಗೆ
ಇಲ್ಲಿ ಗುಮ್ಮಟದಲ್ಲಿ ಧ್ವನಿ ಮಾಡುತ್ತೀರೆಂದರೆ, ಅದೇ ಧ್ವನಿಯು ಹಿಂತಿರುಗಿ ಬರುತ್ತದೆ. ಹಾಗೆಯೇ ಈ
ಬೇಹದ್ದಿನ ಗುಮ್ಮಟದಲ್ಲೇನಾದರೂ ತಾವು ಮನಸ್ಸಿನಿಂದ ನನ್ನದೆಂದು ಹೇಳುತ್ತೀರೆಂದರೆ, ಎಲ್ಲರ
ಕಡೆಯಿಂದ ಅದೇ "ನನ್ನದು" ಎನ್ನುವುದೇ ಧ್ವನಿಯನ್ನು ಕೇಳುತ್ತೀರಿ!
ತಾವೂ ಸಹ ನನ್ನದು ಎಂದು ಹೇಳುತ್ತೀರಿ, ಅವರೂ ನನ್ನದು ಎಂದು ಹೇಳುತ್ತಾರೆ ಆದ್ದರಿಂದ ಮನಸ್ಸಿನ
ಸ್ನೇಹದಿಂದ (ಒಂದು ತೋರ್ಪಡಿಕೆಯಿಂದಲ್ಲ) ನಿನ್ನದು ಎಂದು ಎಷ್ಟು ಹೇಳುತ್ತೀರಿ, ಅಷ್ಟೇ ಮನಸ್ಸಿನ
ಸ್ನೇಹದಿಂದ ತಮ್ಮ ಮುಂದಿರುವವರೂ ಸಹ ತಮಗೆ ನಿಮ್ಮದು ಎಂದು ಹೇಳುವರು. ಈ ವಿಧಿಯಿಂದ ನನ್ನದು-ನನ್ನದು
ಎನ್ನುವುದು ಬೇಹದ್ದಿನ ಪರಿವರ್ತನೆಯಾಗಿ ಬಿಡುತ್ತದೆ. ಮತ್ತು ಲೇವತಾಗೆ ಬದಲಾಗಿ ಮಾಸ್ಟರ್ ವಿದಾತಾ
ಆಗಿ ಬಿಡುತ್ತೀರಿ. ಅಂದಮೇಲೆ ಈ ವರ್ಷದಲ್ಲಿ ವಿಶೇಷವಾಗಿ ಈ ಸಂಕಲ್ಪ ಮಾಡಿರಿ - ಸದಾ ಮಾಸ್ಟರ್
ವಿದಾತಾ ಆಗುವಿರಿ. ತಿಳಿಯಿತೆ!
ಮಹಾರಾಷ್ಟ್ರ ಜೋನ್ನವರು ಬಂದಿದ್ದಾರೆ, ಅಂದಮೇಲೆ ಮಹಾನರಾಗಬೇಕಲ್ಲವೆ. ಮಹಾರಾಷ್ಟ್ರ ಅರ್ಥಾತ್ ಸದಾ
ಮಹಾನರಾಗಿದ್ದು ಸರ್ವರಿಗೂ ಕೊಡುವವರಾಗುವುದು. ಮಹಾರಾಷ್ಟ್ರ ಅರ್ಥಾತ್ ಸದಾ ಸಂಪನ್ನವಾದ ರಾಷ್ಟ್ರ.
ದೇಶವು ಸಂಪನ್ನವಾಗಿರಲಿ, ಆಗದಿರಲಿ ಆದರೆ ತಾವು ಮಹಾನ್ ಆತ್ಮರಂತು ಸಂಪನ್ನರಾಗಿದ್ದೀರಿ ಆದ್ದರಿಂದ
ಮಹಾರಾಷ್ಟ್ರ ಅರ್ಥಾತ್ ಮಹಾದಾನಿ ಆತ್ಮರು.
ಇನ್ನೊಬ್ಬರು ಯು.ಪಿ.ಯವರಿದ್ದಾರೆ. ಯು.ಪಿ.ಯಲ್ಲಿಯೂ ಪತಿತ-ಪಾವನಿ ಗಂಗೆಯ ಮಹತ್ವವಿದೆ. ಅಂದಮೇಲೆ
ಸದಾ ಪ್ರಾಪ್ತಿ ಸ್ವರೂಪರಾಗಿದ್ದಾರೆ, ಆದ್ದರಿಂದ ಪತಿತ-ಪಾವನಿಯಾಗಲು ಸಾಧ್ಯವಿದೆ. ಯು.ಪಿ.ಯವರೂ ಸಹ
ಪಾವನೆಯ ಭಂಡಾರವಾಗಿದ್ದಾರೆ. ಸದಾ ಸರ್ವರ ಪ್ರತಿ ಪಾವನತೆಯ ಹನಿಯನ್ನು ಕೊಡುವ ಮಾಸ್ಟರ್ ವಿದಾತಾ
ಆಗಿದ್ದಾರೆ. ಅಂದಮೇಲೆ ಇಬ್ಬರೂ ಮಹಾನರಾದರಲ್ಲವೆ. ಬಾಪ್ದಾದಾರವರೂ ಸಹ ಸರ್ವ ಮಹಾನ್ ಆತ್ಮರನ್ನು
ನೋಡುತ್ತಾ ಹರ್ಷಿತವಾಗುತ್ತಿದ್ದಾರೆ.
ಡಬಲ್ ವಿದೇಶಿಗಳಂತು ಇದ್ದೇ ಇರುತ್ತಾರೆ ಡಬಲ್ ನಶೆಯಲ್ಲಿರುವವರು. ಒಂದು - ನೆನಪಿನ ನಶೆ, ಇನ್ನೊಂದು
ಸೇವೆಯ ನಶೆ. ಮೆಜಾರಿಟಿ ಈ ಡಬಲ್ ನಶೆಯಲ್ಲಿ ಸದಾ ಇರುವವರಾಗಿದ್ದಾರೆ. ಮತ್ತು ಈ ಡಬಲ್ ನಶೆಯೇ ಅನೇಕ
ನಶೆಗಳಿಂದ ಪಾರು ಮಾಡುವಂತದ್ದಾಗಿದೆ. ಹಾಗಾದರೆ ಡಬಲ್ ವಿದೇಶಿ ಮಕ್ಕಳೂ ಸಹ ಎರಡೂ ಮಾತುಗಳ
ರೇಸ್ನಲ್ಲಿ ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಬಾಬಾ ಮತ್ತು ಸೇವೆಯ ಗೀತೆಯನ್ನು
ಸ್ವಪ್ನದಲ್ಲಿಯೂ ಹಾಡುತ್ತಿರುತ್ತಾರೆ. ಅಂದಮೇಲೆ ಮೂರೂ ನದಿಗಳ ಸಂಗಮವಾಗಿದೆ. ಗಂಗಾ, ಜಮುನಾ,
ಸರಸ್ವತಿ ಮೂರೂ ಆಗಿಬಿಟ್ಟಿರಲ್ಲವೆ. ಸತ್ಯ ತಂದೆಯ ಸ್ಥಾನವಂತು ಇದೇ ಮಧುಬನವಾಗಿದೆಯಲ್ಲವೆ.
ಅಲ್ಲಾಹ್ನ ಸ್ಥಾನದಲ್ಲಿ ಈ ಮೂರೂ ನದಿಗಳ ಸಂಗಮವಿದೆ. ಒಳ್ಳೆಯದು.
ಸದಾ ಮಾಸ್ಟರ್ ವಿದಾತಾ, ಸದಾ ಸರ್ವರಿಗೆ ಕೊಡುವ ಭಾವನೆಯಲ್ಲಿರುವ, ದೇವತೆಯಾಗುವಂತಹ, ಸದಾ
ನಿನ್ನದು-ನಿನ್ನದು ಎನ್ನುವ ಹಾಡನ್ನಾಡುವ, ಸದಾ ಅಪ್ರಾಪ್ತ ಆತ್ಮರನ್ನು ತೃಪ್ತ ಮಾಡುವ, ಎಲ್ಲಾ
ಸಂಪನ್ನ ಆತ್ಮರಿಗೆ ವಿದಾತಾ ವರದಾತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ನಿಮಿತ್ತ ಶಿಕ್ಷಕಿ ಸಹೋದರಿಯರೊಂದಿಗೆ ವಾರ್ತಾಲಾಪ:- ಸೇವಾಧಾರಿಯು ಸೇವೆಯನ್ನು ಮಾಡುವುದರಿಂದ ಸ್ವಯಂ
ಸಹ ಶಕ್ತಿಶಾಲಿಯಾಗುತ್ತಾರೆ ಮತ್ತು ಅನ್ಯರಲ್ಲಿಯೂ ಶಕ್ತಿ ತುಂಬಲು ನಿಮಿತ್ತರಾಗುತ್ತಾರೆ. ಸತ್ಯ
ಆತ್ಮಿಕ ಸೇವೆಯು ಸದಾ ಸ್ವ-ಉನ್ನತಿ ಮತ್ತು ಅನ್ಯರ ಉನ್ನತಿಗೆ ನಿಮಿತ್ತರನ್ನಾಗಿ ಮಾಡಿಸುತ್ತದೆ.
ಅನ್ಯರ ಸೇವೆಯನ್ನು ಮಾಡುವುದಕ್ಕೆ ಮೊದಲು ತಮ್ಮ ಸೇವೆಯನ್ನು ಮಾಡಬೇಕಾಗುತ್ತದೆ. ಅನ್ಯರಿಗೆ
ತಿಳಿಸುವುದು ಅರ್ಥಾತ್ ಮೊದಲು ಸ್ವಯಂ ಕೇಳುತ್ತಾ, ಮೊದಲು ತಮ್ಮ ಕಿವಿಗಳಲ್ಲಿ ಹೋಗುತ್ತದೆಯಲ್ಲವೆ.
ತಿಳಿಸುವುದಿರುವುದಿಲ್ಲ, ಕೇಳುವುದಿರುತ್ತದೆ. ಅಂದಮೇಲೆ ಸೇವೆಯಿಂದ ಡಬಲ್ ಲಾಭವಾಗುತ್ತದೆ. ತಮಗೂ
ಹಾಗೂ ಅನ್ಯರಿಗೂ ಲಾಭವಾಗುತ್ತದೆ. ಸೇವೆಯಲ್ಲಿ ಬ್ಯುಸಿಯಿರುವುದು ಅರ್ಥಾತ್ ಸಹಜ ಮಾಯಾಜೀತರಾಗುವುದು.
ಬ್ಯುಸಿಯಿರುವುದಿಲ್ಲವೆಂದರೆ ಮಾಯೆಯು ಬರುತ್ತದೆ. ಸೇವಾಧಾರಿ ಅರ್ಥಾತ್ ಬ್ಯುಸಿಯಿರುವವರು.
ಸೇವಾಧಾರಿಗಳು ಎಂದಿಗೂ ಸಹ ಬಿಡುವಾಗಿರುವುದಿಲ್ಲ. ಯಾವಾಗ ಬಿಡುವೇ ಇರುವುದಿಲ್ಲ, ಮಾಯೆಯು ಹೇಗೆ
ಬರುತ್ತದೆ! ಸೇವಾಧಾರಿ ಆಗುವುದು ಅರ್ಥಾತ್ ಸಹಜವಾಗಿ ವಿಜಯಿಯಾಗುವುದು. ಸೇವಾಧಾರಿಯು ಮಾಲೆಯಲ್ಲಿ
ಸಹಜವಾಗಿ ಬರಬಹುದು ಏಕೆಂದರೆ ಸಹಜ ವಿಜಯಿಯಾಗಿದ್ದಾರೆ. ಅಂದಮೇಲೆ ವಿಜಯಿ ವಿಜಯ ಮಾಲೆಯಲ್ಲಿ
ಬರುತ್ತಾರೆ. ಸೇವಾಧಾರಿಯ ಅರ್ಥವಾಗಿದೆ- ತಾಜಾ ಫಲವನ್ನು ಸೇವಿಸುವವರು. ತಾಜಾ ಫಲವನ್ನು ಸೇವಿಸುವವರು
ಬಹಳ ಆರೋಗ್ಯವಂತರಾಗಿರುತ್ತಾರೆ. ವೈದ್ಯರೂ ಹೇಳುತ್ತಾರೆ - ತಾಜಾಫಲ, ತಾಜಾ ತರಕಾರಿಗಳನ್ನು
ಸೇವಿಸಿರಿ ಎಂದು. ಅಂದಮೇಲೆ ಸೇವೆ ಮಾಡುವುದು ಎಂದರೆ ವಿಟಮಿನ್ ಸಿಗುವುದಾಗಿದೆ. ಇಂತಹ
ಸೇವಾಧಾರಿಯಾಗಿದ್ದೀರಿ ಅಲ್ಲವೆ. ಸೇವೆಯ ಮಹತ್ವಿಕೆಯು ಎಷ್ಟೊಂದಿದೆ! ಈಗ ಇದೇ ಮಾತುಗಳನ್ನು
ಪರಿಶೀಲನೆ ಮಾಡಿರಿ. ಇಂತಹ ಸೇವೆಯ ಅನುಭೂತಿಯಾಗುತ್ತಿದೆ, ಯಾರೆಷ್ಟೇ ಗೊಂದಲದಲ್ಲಿರಲಿ, ಸೇವೆಯು
ಖುಷಿಯಲ್ಲಿ ನರ್ತನ ಮಾಡಿಸುವಂತದ್ದಾಗಿದೆ. ಯಾರೆಷ್ಟೇ ರೋಗಿಯಾಗಿರಲಿ, ಸೇವೆಯು ಆರೋಗ್ಯವಂತರನ್ನಾಗಿ
ಮಾಡುವಂತದ್ದಾಗಿದೆ. ಅದು ಹೀಗಾಗುವುದಿಲ್ಲ- ಸೇವೆಯನ್ನು ಮಾಡುತ್ತಾ-ಮಾಡುತ್ತಾ ರೋಗಿಯಾಗಿ ಬಿಟ್ಟರು.
ಇಲ್ಲ. ರೋಗಿಯನ್ನು ಆರೋಗ್ಯವಂತರನ್ನಾಗಿ ಮಾಡಿಸುವುದು ಸೇವೆಯಾಗಿದೆ. ಇಂತಹ ಅನುಭವವಾಗಲಿ. ಇಂತಹ
ವಿಶೇಷ ಸೇವಾಧಾರಿ ವಿಶೇಷ ಆತ್ಮರಾಗಿದ್ದೀರಿ. ಬಾಪ್ದಾದಾರವರು ಸೇವಾಧಾರಿಗಳನ್ನು ಸದಾ ಶ್ರೇಷ್ಠ
ಸಂಬಂಧದಿಂದ ನೋಡುತ್ತಾರೆ. ಏಕೆಂದರೆ ಸೇವೆಗಾಗಿ ತ್ಯಾಗಿ-ತಪಸ್ವಿಯಂತು ಆಗಿದ್ದೀರಲ್ಲವೆ. ತ್ಯಾಗ
ಮತ್ತು ತಪಸ್ಸನ್ನು ನೋಡುತ್ತಾ ಬಾಪ್ದಾದಾರವರು ಸದಾ ಖುಷಿಯಾಗಿದ್ದಾರೆ.
2. ಎಲ್ಲರೂ ಸೇವಾಧಾರಿ ಅರ್ಥಾತ್ ಸದಾ ಸೇವೆಗೆ ನಿಮಿತ್ತರಾಗಿರುವ ಆತ್ಮರು. ಸದಾ ತಮ್ಮನ್ನು
ನಿಮಿತ್ತರೆಂದು ತಿಳಿದು ಸೇವೆಯಲ್ಲಿ ಮುಂದುವರೆಯುತ್ತಿರಿ. ನಾನು ಸೇವಾಧಾರಿಯಿದ್ದೇನೆ, ಈ
ನನ್ನತನವಂತು ಬರುವುದಿಲ್ಲ ಅಲ್ಲವೆ. ತಂದೆಯು ಮಾಡಿಸುವವರಾಗಿದ್ದಾರೆ, ನಾನು ನಿಮಿತ್ತನಿದ್ದೇನೆ.
ಮಾಡಿಸುವವರು ಮಾಡಿಸುತ್ತಿದ್ದಾರೆ. ನಡೆಸುವವರು ನಡೆಸುತ್ತಿದ್ದಾರೆ- ಈ ಶ್ರೇಷ್ಠ ಭಾವನೆಯಿಂದ ಸದಾ
ಭಿನ್ನ ಹಾಗೂ ಪ್ರಿಯರಾಗಿರುತ್ತೀರಿ. ಒಂದುವೇಳೆ ನಾನು ಮಾಡುವವನು - ಹೀಗೆಂದರೆ ಭಿನ್ನ ಹಾಗೂ
ಪ್ರಿಯರಲ್ಲ. ಅಂದಮೇಲೆ ಸದಾ ಭಿನ್ನ ಹಾಗೂ ಸದಾ ಪ್ರಿಯರಾಗುವ ಸಹಜ ಸಾಧನವಾಗಿದೆ - ಮಾಡಿಸುವವರು
ಮಾಡಿಸುತ್ತಿದ್ದಾರೆ ಎನ್ನುವ ಸ್ಮೃತಿಯಲ್ಲಿರುವುದು. ಇದರಿಂದ ಸಫಲತೆಯೂ ಹೆಚ್ಚು ಮತ್ತು ಸೇವೆಯೂ
ಸಹಜವಾಗುತ್ತದೆ, ಪರಿಶ್ರಮವೆನಿಸುವುದಿಲ್ಲ. ಎಂದಿಗೂ ಸಹ ನಾನೆನ್ನುವ ಚಕ್ರದಲ್ಲಿ ಬರುವವರಲ್ಲ.
ಪ್ರತೀ ಮಾತಿನಲ್ಲಿ ಬಾಬಾ-ಬಾಬಾ ಎಂದು ಹೇಳಿದಿರೆಂದರೆ ಸಫಲತೆಯಿದೆ. ಇಂತಹ ಸೇವಾಧಾರಿಯು ಸದಾ
ಮುಂದುವರೆಯುತ್ತಲೂ ಇರುತ್ತಾರೆ. ಮತ್ತು ಅನ್ಯರನ್ನೂ ಮುಂದುವರೆಸುತ್ತಾರೆ. ಇಲ್ಲವೆಂದರೆ ಸ್ವಯಂ ಸಹ
ಕೆಲವೊಮ್ಮೆ ಹಾರುವ ಕಲೆ, ಕೆಲವೊಮ್ಮೆ ಏರುವ ಕಲೆ, ಕೆಲವೊಮ್ಮೆ ನಡೆಯುವ ಕಲೆ. ಬದಲಾಗುತ್ತಿರುತ್ತೀರಿ
ಮತ್ತು ಅನ್ಯರನ್ನೂ ಶಕ್ತಿಶಾಲಿ ಮಾಡಲು ಸಾಧ್ಯವಾಗುವುದಿಲ್ಲ. ಸದಾ ಬಾಬಾ-ಬಾಬಾ ಎಂದು ಹೇಳುವವರೂ
ಅಲ್ಲ ಆದರೆ ಮಾಡಿ ತೋರಿಸುವವರು. ಇಂತಹ ಸೇವಾಧಾರಿಗಳು ಸದಾ ಬಾಪ್ದಾದಾರವರ ಸಮೀಪವಿದ್ದಾರೆ. ಸದಾ
ವಿಘ್ನ ವಿನಾಶಕ ಆಗಿದ್ದಾರೆ. ಒಳ್ಳೆಯದು.
ವರದಾನ:
ಸಾಹಸ ಮತ್ತು ಉಮ್ಮಂಗ-ಉತ್ಸಾಹದ ರೆಕ್ಕೆಗಳಿಂದ ಹಾರುವ ಕಲೆಯಲ್ಲಿ ಹಾರುವಂತಹ ತೀವ್ರ ಪುರುಷಾರ್ಥಿ
ಭವ.
ಹಾರುವ ಕಲೆಯ
ಎರಡು ರೆಕ್ಕೆಗಳಾಗಿವೆ - ಸಾಹಸ ಮತ್ತು ಉಮ್ಮಂಗ-ಉತ್ಸಾಹ. ಯಾವುದೇ ಕಾರ್ಯದಲ್ಲಿ ಸಫಲತೆಯನ್ನು
ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಸಾಹಸ ಮತ್ತು ಉಮ್ಮಂಗ-ಉತ್ಸಾಹವು ಬಹಳ ಅವಶ್ಯಕವಿದೆ. ಎಲ್ಲಿ
ಉಮ್ಮಂಗ-ಉತ್ಸಾಹವಿರುವುದಿಲ್ಲವೋ ಅಲ್ಲಿ ಸುಸ್ತಾಗುತ್ತದೆ ಮತ್ತು ಸುಸ್ತಾಗಿರುವವರೆಂದಿಗೂ
ಸಫಲರಾಗುವುದಿಲ್ಲ. ವರ್ತಮಾನ ಸಮಯದನುಸಾರವಾಗಿ ಹಾರುವ ಕಲೆಯ ವಿನಃ ಗುರಿಯಲ್ಲಿ ತಲುಪಲು
ಸಾಧ್ಯವಾಗುವುದಿಲ್ಲ, ಏಕೆಂದರೆ ಪುರುಷಾರ್ಥವು ಒಂದು ಜನ್ಮದ್ದು ಮತ್ತು ಪ್ರಾಪ್ತಿಯು 21
ಜನ್ಮಕ್ಕಾಗಿಯೇ ಅಲ್ಲ, ಇಡೀ ಕಲ್ಪದ್ದಾಗಿದೆ. ಅಂದಮೇಲೆ ಯಾವಾಗ ಸಮಯದ ಪರಿಚಯವು
ಸ್ಮೃತಿಯಲ್ಲಿರುತ್ತದೆಯೋ, ಆಗ ಪುರುಷಾರ್ಥವು ಸ್ವತಹವಾಗಿಯೇ ತೀವ್ರಗತಿಯದ್ದಾಗುತ್ತದೆ.
ಸ್ಲೋಗನ್:
ಸರ್ವರ
ಮನೋಕಾಮನೆಗಳನ್ನು ಪೂರ್ಣಗೊಳಿಸುವವರೇ ಕಾಮಧೇನು ಆಗಿದ್ದಾರೆ.