29.01.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವೀಗ ಶಾಂತಿ ಮತ್ತು ಸುಖದ ಶಿಖರಕ್ಕೆ ಹೋಗಬೇಕಾಗಿದೆ ಆದ್ದರಿಂದ ತಮ್ಮ ಸ್ವಭಾವ ಮತ್ತು ನಡತೆಯನ್ನು ಸುಧಾರಣೆ ಮಾಡಿಕೊಳ್ಳುತ್ತಾ ಹೋಗಿ, ಹಳೆಯದನ್ನು ಪರಿವರ್ತನೆ ಮಾಡಿಕೊಳ್ಳಿ”

ಪ್ರಶ್ನೆ:
ಬುದ್ಧಿಯು ಸದಾ ರಿಫ್ರೆಷ್ ಆಗಲು ಯುಕ್ತಿ ಏನಾಗಿದೆ?

ಉತ್ತರ:
ತಂದೆಯು ಏನು ಹೇಳುತ್ತಾರೆಯೋ ಅದರ ಮಂಥನವನ್ನು ಮಾಡಿ ಅದರಿಂದ ಬುದ್ಧಿಯು ಸದಾ ರಿಫ್ರೆಷ್ ಆಗಿರುತ್ತದೆ, ಅವರೇ ಅನ್ಯರ ಸರ್ವೀಸ್ ಮಾಡಲು ಸಾಧ್ಯ. ಅವರ ಬ್ಯಾಟರಿ ಸದಾ ಚಾರ್ಜ್ ಆಗುತ್ತಲೇ ಇರುತ್ತದೆ. ಏಕೆಂದರೆ ವಿಚಾರಸಾಗರ ಮಂಥನ ಮಾಡುವುದರಿಂದ ಸರ್ವಶಕ್ತಿವಂತ ತಂದೆಯ ಜೊತೆ ಸಂಬಂಧವು ಇರುತ್ತದೆ.

ಗೀತೆ:
ನಯನಹೀನನಿಗೆ ದಾರಿ ತೋರಿಸು ಪ್ರಭು.....

ಓಂ ಶಾಂತಿ.
ಈ ಗೀತೆಯನ್ನು ಮನುಷ್ಯರು ಗಾಯನ ಮಾಡಿದ್ದಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಹೇಗೆ ಬೇರೆಲ್ಲಾ ಪ್ರಾರ್ಥನೆ ಮಾಡುತ್ತಾರೆಯೋ ಅದೇ ರೀತಿ ಇದೂ ಸಹ ಒಂದು ಪ್ರಾರ್ಥನೆಯಾಗಿದೆ. ಪರಮಾತ್ಮನನ್ನು ತಿಳಿದುಕೊಂಡಿಲ್ಲ. ಒಂದು ವೇಳೆ ಪರಮಾತ್ಮನನ್ನು ತಿಳಿದುಕೊಂಡರೆ ಎಲ್ಲವೂ ಅರ್ಥವಾಗುತ್ತದೆ. ಕೇವಲ ಪರಮಾತ್ಮನೆಂದು ಹೇಳುತ್ತಾರೆ, ಆದರೆ ಅವರ ಜೀವನ ಚರಿತ್ರೆಯನ್ನು ತಿಳಿದುಕೊಂಡಿಲ್ಲ. ಅಂದಮೇಲೆ ನಯನಹೀನ ಆದರಲ್ಲವೆ. ನಿಮಗೆ ಈ ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ ಆದ್ದರಿಂದ ನಿಮ್ಮನ್ನು ತ್ರಿನೇತ್ರಿಗಳೆಂದು ಕರೆಯಲಾಗುತ್ತದೆ. ಪ್ರಪಂಚದಲ್ಲಿ ಭಲೇ ಮನುಷ್ಯರು ಈ ಅಕ್ಷರವನ್ನು ಹೇಳುತ್ತಾರೆ - ತ್ರಿಕಾಲದರ್ಶಿ, ತ್ರಿನೇತ್ರಿ, ತ್ರಿಮೂರ್ತಿ.... ಆದರೆ ಅರ್ಥವನ್ನು ತಿಳಿದುಕೊಂಡೇ ಇಲ್ಲ. ಸೈನ್ಸ್(ವಿಜ್ಞಾನ) ಮತ್ತು ಸೈಲೆನ್ಸ್(ಶಾಂತಿ) ಗೆ ಪರಸ್ಪರದಲ್ಲಿ ಸಂಬಂಧವೇನಿದೆ? ಭಲೇ ಪ್ರಶ್ನೆಯನ್ನಂತೂ ಕೇಳುತ್ತಾರೆ ಆದರೆ ಉತ್ತರವನ್ನಂತೂ ತಿಳಿದುಕೊಂಡಿಲ್ಲ. ವಿಶ್ವದಲ್ಲಿ ಶಾಂತಿಯಿರಲಿ ಎಂದು ಹೇಳುತ್ತಾರೆ ಆದರೆ ಶಾಂತಿಯು ಯಾವಾಗ ಇತ್ತು? ಯಾರು ಮಾಡಿದರು? ಏನನ್ನೂ ತಿಳಿದುಕೊಂಡಿಲ್ಲ, ಕೇವಲ ಕೇಳುತ್ತಿರುತ್ತಾರೆ ಆದರೆ ಅವರಿಗೆ ಹೇಳಲು ಯಾರಾದರೂ ತಿಳಿದಿರುವವರು ಬೇಕು. ತಾವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ಇದೆಲ್ಲಾ ಆಟವು ಮಾಡಲ್ಪಟ್ಟಿದೆ. ಶಾಂತಿಯ ಶಿಖರ, ಸುಖದ ಶಿಖರ ಎಲ್ಲದರ ಶಿಖರವಿರುತ್ತದೆ. ಶಾಂತಿಯ ಶಿಖರವು ಮೂಲವತನವಾಗಿದೆ. ಅಲ್ಲಿ ನಾವಾತ್ಮರು ಇರುತ್ತೇವೆ. ಅದಕ್ಕೆ ಶಾಂತಿಯ ಶಿಖರವೆಂದು ಹೇಳುತ್ತೇವೆ. ನಂತರ ಸತ್ಯಯುಗದಲ್ಲಿ ಸುಖದ ಶಿಖರ, ಶಾಂತಿಯ ಶಿಖರ, ಸಂಪತ್ತು ಇರುತ್ತದೆ. ನಾವಾತ್ಮರ ಮನೆಯು ಮುಕ್ತಿಧಾಮವಾಗಿದೆ ಎಂದು ಯಾರೂ ಹೇಳುವುದಿಲ್ಲ. ಇವೆಲ್ಲಾ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ಶಿಕ್ಷಕರೆಂದರೆ ಹೀಗೆ ಇರಬೇಕು, ಅವರು ಜ್ಞಾನದ ಶಿಖರವಾಗಿದ್ದಾರೆ. ತಮ್ಮನ್ನೂ ಸಹ ಶಾಂತಿ ಹಾಗೂ ಸುಖದ ಶಿಖರಕ್ಕೆ ಕರೆದೊಯ್ಯುತ್ತಾರೆ. ಇದು ದುಃಖಧಾಮವಾಗಿದೆ. ಪ್ರತಿಯೊಂದು ಮಾತಿನಲ್ಲಿ ಬಡವರಾಗಿದ್ದಾರೆ. ಪವಿತ್ರತೆ, ಸುಖ-ಶಾಂತಿಯ ಆಸ್ತಿಯನ್ನು ತಾವು ಈ ಸಮಯದಲ್ಲಿ ಪಡೆಯುತ್ತೀರಿ. ಬಲಿಹಾರಿ ಈ ಪುರುಷೋತ್ತಮ ಸಂಗಮಯುಗದ್ದಾಗಿದೆ. ಕಲಿಯುಗದ ನಂತರ ಸತ್ಯಯುಗವಿದೆ, ಅವರು ಶಾಂತಿಯ ಶಿಖರವಾಗಿದ್ದಾರೆ, ಇವರು ಸುಖದ ಶಿಖರವಾಗಿದ್ದಾರೆ. ಇಲ್ಲಿ ಅಪಾರ ದುಃಖವಿದೆ, ಎಲ್ಲಾ ದುಃಖವು ಬಂದು ಒಟ್ಟಿಗೆ ಸೇರಿದೆ. ದುಃಖದ ಪರ್ವತವೇ ಬೀಳುತ್ತದೆ ಎಂದು ಹೇಳುತ್ತಾರಲ್ಲವೆ. ಯಾವಾಗ ಭೂಕಂಪ ಇತ್ಯಾದಿ ಆಗುತ್ತವೆ, ಎಷ್ಟೊಂದು ಅಯ್ಯೊ, ಅಯ್ಯೊ ಎನ್ನುತ್ತಾರೆ. ಬಾಕಿ ಸ್ವಲ್ಪ ಸಮಯವಿದೆಯೆಂದು ತಂದೆಯು ತಿಳಿಸುತ್ತಾರೆ. ಮಕ್ಕಳಿಗೆ ನೆನಪಿನ ಯಾತ್ರೆಯಲ್ಲಿ ಸಮಯ ಹಿಡಿಸುತ್ತದೆ. ಅನೇಕರಿದ್ದಾರೆ ಆದರೆ ಅವರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಆತ್ಮವು ಹೇಗಿದೆಯೋ ಪರಮಾತ್ಮನೂ ಹಾಗೆಯೇ ಇದ್ದಾರೆ, ಆತ್ಮವನ್ನು ತಿಳಿದುಕೊಂಡಿದ್ದಾರಲ್ಲವೆ, ಅದು ಅದೃಷ್ಟದ ನಕ್ಷತ್ರವಾಗಿದೆ, ಸಂಪೂರ್ಣ ಸೂಕ್ಷ್ಮವಾಗಿದೆ. ಈ ನೇತ್ರಗಳಿಂದ ನೋಡಲು ಸಾಧ್ಯವಿಲ್ಲ ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಇಂತಹ ಮಾತುಗಳ ಮೇಲೆ ವಿಚಾರ ಸಾಗರ ಮಂಥನ ಮಾಡುವುದರಿಂದಲೇ ರಿಫ್ರೆಷ್ ಆಗುತ್ತದೆ. ಎಲ್ಲಿಗೆ ಹೋದರೂ ತಿಳಿಸಿರಿ - ಶಾಂತಿಯ ಶಿಖರ, ಸುಖದ ಶಿಖರ, ಪವಿತ್ರತೆಯ ಶಿಖರವು ಹೊಸ ಜಗತ್ತಿನಲ್ಲಿರುತ್ತದೆ ಎಂದು ಹೇಳಲಾಗುತ್ತದೆ. ಹಳೆಯ ಸ್ವಭಾವ, ಗುಣಗಳನ್ನು ಸುಧಾರಣೆ ಮಾಡಿಸಿ ತಂದೆಯು ಹೊಸ ಜಗತ್ತಿನ ಮಾಲೀಕರನ್ನಾಗಿ ಮಾಡುತ್ತಾರೆ. ಮನುಷ್ಯರು ಭಲೇ ವೇದ ಶಾಸ್ತ್ರ ಮುಂತಾದವುಗಳನ್ನು ಓದುತ್ತಾರೆ ಆದರೆ ಏನೂ ಅರ್ಥ ಮಾಡಿಕೊಳ್ಳುವುದಿಲ್ಲ. ಏಣಿಯಂತೂ ಕೆಳಗಿಳಿಯುತ್ತಲೇ ಬರುತ್ತಾರೆ. ಭಲೇ ಸ್ವಯಂನ್ನು ಶಾಸ್ತ್ರಗಳ ಅಥಾರಿಟಿ ಎಂದು ತಿಳಿಯುತ್ತಾರೆ ಆದರೆ ಅವರು ಇಳಿಯಲೇ ಬೇಕು. ಆತ್ಮವು ಮೊದಲು ಸತೋಪ್ರಧಾನವಾಗಿರುತ್ತದೆ ನಂತರ ನಿಧಾನ-ನಿಧಾನವಾಗಿ ಶಕ್ತಿಯು ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಎಲ್ಲರ ಬ್ಯಾಟರಿಯು ಸಮಾಪ್ತಿಯಾಗುತ್ತಿದೆ, ಈಗ ಮತ್ತೆ ಚಾರ್ಜ್ ಆಗುತ್ತದೆ. ಮನ್ಮನಾಭವ ಎಂದು ತಂದೆಯು ಹೇಳುತ್ತಾರೆ. ತಮ್ಮನ್ನು ಆತ್ಮನೆಂದು ತಿಳಿಯಿರಿ, ತಂದೆಯು ಸರ್ವಶಕ್ತಿವಂತನಾಗಿದ್ದಾರೆ, ಅವರನ್ನು ನೆನಪು ಮಾಡುವುದರಿಂದ ನಿಮ್ಮ ಪಾಪವು ತುಂಡಾಗುತ್ತದೆ ಮತ್ತು ಬ್ಯಾಟರಿಯು ಚಾರ್ಜ್ ಆಗುತ್ತದೆ. ತಮ್ಮ ಬ್ಯಾಟರಿಯು ಚಾರ್ಜ್ ಆಗುತ್ತಿದೆಯೆಂದು ತಾವೀಗ ಅನುಭವ ಮಾಡುತ್ತಿದ್ದೀರಿ. ಕೆಲವರದು ಚಾರ್ಜ್ ಆಗುವುದಿಲ್ಲ, ಸುಧಾರಣೆಯ ಬದಲಾಗಿ ಇನ್ನಷ್ಟು ಹಾಳಾಗುತ್ತಾರೆ. ಬಾಬಾ, ನಾವು ಇನ್ನೆಂದಿಗೂ ವಿಕಾರದಲ್ಲಿ ಹೋಗುವುದಿಲ್ಲ ತಂದೆಯೊಂದಿಗೆ ಪ್ರತಿಜ್ಞೆಯನ್ನೂ ಮಾಡುತ್ತಾರೆ. ಪರಸ್ಪರದಲ್ಲಿ 21 ಜನ್ಮಗಳ ಆಸ್ತಿಯನ್ನು ಖಂಡಿತ ಪಡೆಯುತ್ತಾರೆ. ಆದರೂ ಸಹ ಮತ್ತೆ ಬೀಳುತ್ತಾರೆ. ತಂದೆಯು ತಿಳಿಸುತ್ತಾರೆ – ಕಾಮ ವಿಕಾರದ ಮೇಲೆ ವಿಜಯಿಗಳಾಗುವುದರಿಂದ ತಾವು ಜಗತ್ಜೀತರಾಗುತ್ತೀರಿ ಮತ್ತೆ ಒಂದು ವೇಳೆ ವಿಕಾರದಲ್ಲಿ ಹೋದರೆ ಬುದ್ಧಿಯು ಸಮಾಪ್ತಿಯಾಗುತ್ತದೆ. ಈ ಕಾಮ ವಿಕಾರವು ಮಹಾ ಶತ್ರುವಾಗಿದೆ. ಪರಸ್ಪರದಲ್ಲಿ ನೋಡುವುದರಿಂದ ಕಾಮದ ಅಗ್ನಿಯು ಹತ್ತಿಕೊಳ್ಳುತ್ತದೆ. ತಂದೆಯು ತಿಳಿಸುತ್ತಾರೆ - ತಾವು ಕಾಮ ಚಿತೆಯ ಮೇಲೆ ಕುಳಿತು ಕಪ್ಪಾಗಿದ್ದೀರಿ, ಈಗ ನಿಮ್ಮನ್ನು ಸುಂದರರನ್ನಾಗಿ ಮಾಡುತ್ತಾರೆ. ಈ ತಂದೆಯೇ ತಾವು ಮಕ್ಕಳಿಗೆ ಓದಿಸುತ್ತಾರೆ, ವಿದ್ಯೆಯಿಂದ ಬುದ್ಧಿಯು ತೆರೆಯುತ್ತದೆ. ವೃಕ್ಷದ ವರ್ಣನೆಯನ್ನೂ ಮಾಡುತ್ತಾರೆ. ಇದು ಕಲ್ಪವೃಕ್ಷವಾಗಿದೆ, ಮನುಷ್ಯ ಸೃಷ್ಟಿಯ ವಿಭಿನ್ನ ವೃಕ್ಷವಾಗಿದೆ. ಇದಕ್ಕೆ ಉಲ್ಟಾ ವೃಕ್ಷವೆಂದು ಕರೆಯಲಾಗುತ್ತದೆ. ಎಷ್ಟು ವಿಭಿನ್ನ ಧರ್ಮಗಳಾಗಿವೆ! ಇಷ್ಟು ಕೋಟ್ಯಾಂತರ ಆತ್ಮರಿಗೆ ಅವಿನಾಶಿ ಪಾತ್ರವು ಸಿಕ್ಕಿದೆ. ಎಷ್ಟೊಂದು ಆತ್ಮರಿದ್ದಾರೆ ಎಂಬುದು ವಿಚಾರ ಮಾಡಿ. ಹೇಗೆ ಮೀನುಗಳ ಒಂದು ಆಟದ ಸಾಮಗ್ರಿಯಿರುತ್ತದೆ, ತಂತಿಯ ಮೇಲೆ ಹಾಗೆಯೇ ಕೆಳಗಿಳಿದು ಬಿಡುತ್ತದೆ. ಅಂದಾಗ ಇದೂ ಸಹ ಅದೇ ರೀತಿಯ ಆಟವಾಗಿದೆ. ತಾವೂ ಸಹ ಡ್ರಾಮಾದ ಹಗ್ಗದಲ್ಲಿ ಬಂಧಿತರಾಗಿದ್ದೀರಿ. ಈ ರೀತಿ ಇಳಿಯುತ್ತಾ-ಇಳಿಯುತ್ತಾ ಕಲ್ಪವು ಪೂರ್ಣವಾಗಿದೆ ಮತ್ತು ನಾವು ಮೇಲೆ ಬರುತ್ತೇವೆ. ಈ ತಿಳುವಳಿಕೆಯೂ ಸಹ ಮಕ್ಕಳಿಗೆ ಈಗ ಸಿಕ್ಕಿದೆ. ಮೇಲಿಂದ ಆತ್ಮರು ಬರುತ್ತಾರೆ, ನಂಬರ್ವಾರ್ ಆಗಿ ಸೇರುತ್ತಾ ಹೋಗುತ್ತಾರೆ. ಈ ಆಟದಲ್ಲಿ ತಾವು ಪಾತ್ರಧಾರಿಗಳಾಗಿದ್ದೀರಿ, ಮುಖ್ಯ ರಚಯಿತ, ನಿರ್ದೇಶಕ, ಪಾತ್ರಧಾರಿಗಳು ಇರುತ್ತಾರಲ್ಲವೆ. ಶಿವತಂದೆಯು ಮುಖ್ಯವಾಗಿದ್ದಾರೆ. ನಂತರ ಯಾವ ಪಾತ್ರಧಾರಿಗಳು? ಬ್ರಹ್ಮಾ, ವಿಷ್ಣು, ಶಂಕರ. ಭಕ್ತಿ ಮಾರ್ಗದವರು ಅನೇಕ ಚಿತ್ರಗಳನ್ನು ಮಾಡುತ್ತಾರೆ ಆದರೆ ಅರ್ಥವೇ ಗೊತ್ತಿಲ್ಲ. ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಈಗ ತಂದೆಯು ಬಂದು ಪೂರ್ಣ ಜ್ಞಾನವನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ಈ ಜ್ಞಾನವು ನಮಗೆ ಇರುವುದಿಲ್ಲ ಎಂಬುದು ತಮಗೆ ಗೊತ್ತಿದೆ. ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ, ಈಗ ತಂದೆಯು ಬಂದು ಪೂರ್ಣ ಜ್ಞಾನವನ್ನು ಕೊಡುತ್ತಾರೆ. ತಮಗೆ ಗೊತ್ತಿದೆ - ಸತ್ಯಯುಗದಲ್ಲಿ ನಮಗೆ ಈ ಜ್ಞಾನವಿರುವುದಿಲ್ಲ, ಹೇಗೆ ಇಲ್ಲಿ ಕಾರೋಬಾರ್ ನಡೆಯುತ್ತದೆಯೋ ಹಾಗೆಯೇ ಅಲ್ಲಿಯೂ ಪವಿತ್ರ, ಸುಖದ ರಾಜಧಾನಿಯು ನಡೆಯುತ್ತದೆ. ತಂದೆಯು ವಿಚಿತ್ರವಾಗಿದ್ದಾರೆ, ಇಷ್ಟು ಸೂಕ್ಷ್ಮ ಬಿಂದುವಾಗಿದ್ದಾರೆ. ನೀವು ಆತ್ಮರು ಹೇಗಿದ್ದೀರೋ ಹಾಗೆಯೇ ಇವರ (ಬ್ರಹ್ಮಾ) ಆತ್ಮವು ತಂದೆಯಿಂದ ಪೂರ್ಣ ಜ್ಞಾನವನ್ನು ಪಡೆಯುತ್ತಿದೆ. ಹಾಗಾದರೆ ಬ್ರಹ್ಮಾ ತಂದೆಯು ದೊಡ್ಡದಾಗಿರುತ್ತಾರೇನು? ಅವರೂ ಸಹ ಬಿಂದುವಾಗಿರುತ್ತಾರೆ. ನೀವಾತ್ಮರು ಯಾರು ಬಿಂದುವಾಗಿದ್ದೀರಿ? ನಿಮ್ಮಲ್ಲಿ ಪೂರ್ಣ ಜ್ಞಾನವು ಧಾರಣೆಯಾಗುತ್ತದೆ. ಈ ಜ್ಞಾನವು ಕಲ್ಪದ ನಂತರ ಮತ್ತೆ ತಂದೆಯು ಕೊಡುತ್ತಾರೆ. ರೆಕಾರ್ಡ್ ಹೇಗೆ ತುಂಬಿರುತ್ತದೆ, ಅದು ಪುನರಾವರ್ತನೆಯಾಗುತ್ತದೆಯಲ್ಲವೆ. ಆತ್ಮದಲ್ಲಿಯೇ ಪೂರ್ಣ ಪಾತ್ರವು ತುಂಬಿದೆ. ಕೆಲವಂತೂ ಬಹಳ ಅದ್ಭುತ ಮಾತುಗಳಾಗಿವೆ. ಅದನ್ನು ವಿಧಿಯೆಂದು ಹೇಳಲಾಗುತ್ತದೆ. ಈ ಅನಾದಿ ಡ್ರಾಮಾದ ಪಾತ್ರದಿಂದ ಒಬ್ಬರೂ ಸಹ ಬಿಡಿಸಿಕೊಳ್ಳಲು ಸಾಧ್ಯವಿಲ್ಲ, ಎಲ್ಲರೂ ಪಾತ್ರವನ್ನು ಅಭಿನಯಿಸಲೇಬೇಕು. ಇದು ಬಹಳ ಅದ್ಭುತವಾದ ಮಾತುಗಳಾಗಿದೆ. ಯಾರು ಚೆನ್ನಾಗಿ ಅರ್ಥ ಮಾಡಿಕೊಂಡು ಧಾರಣೆ ಮಾಡಿಕೊಳ್ಳುತ್ತಾರೆಯೋ ಅವರಿಗೆ ಖುಷಿಯ ನಶೆಯೇರುತ್ತದೆ. ನಿಮಗೆ ಇಷ್ಟೊಂದು ವಿದ್ಯಾರ್ಥಿ ವೇತನವು ಸಿಗುತ್ತದೆಯೆಂದರೆ ಚೆನ್ನಾಗಿ ಓದಬೇಕು. ತಮ್ಮ ಸಮಾನರನ್ನಾಗಿ ಮಾಡಿಕೊಳ್ಳಬೇಕು. ತಾವೆಲ್ಲರೂ ಶಿಕ್ಷಕರಾಗಿದ್ದೀರಿ. ಶಿಕ್ಷಕರು ತಮಗೆ ಓದಿಸಿ ತಮ್ಮ ಸಮಾನ ಶಿಕ್ಷಕರನ್ನಾಗಿ ಮಾಡುತ್ತಾರೆ ಆದರೆ ನೀವು ಗುರುಗಳಾಗಬಾರದು. ತಾವು ಶಿಕ್ಷಕರಾಗುತ್ತೀರಿ ಏಕೆಂದರೆ ರಾಜಯೋಗವನ್ನು ಕಲಿಸುತ್ತೀರಿ ಮತ್ತೆ ತಾವು ಹೊರಟು ಹೋಗುತ್ತೀರಿ, ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಅವರಂತೂ ತಿಳಿದುಕೊಂಡಿಲ್ಲ, ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ. ಸರ್ವರ ಸದ್ಗತಿದಾತ ತಂದೆಯೊಬ್ಬರೇ ಅಲ್ಲವೆ. ಮುಕ್ತೇಶ್ವರ, ಮುಕ್ತಿದಾತನೂ ಅವರೇ ಆಗಿದ್ದಾರೆ. ಯಾವಾಗ ತಾವು ಅಲ್ಲಿಂದ ಬರುತ್ತೀರಿ ಆಗ ತಂದೆಯು ಮಾರ್ಗದರ್ಶಕರಾಗುವುದಿಲ್ಲ. ಈಗ ತಂದೆಯು ಮಾರ್ಗದರ್ಶಕನಾಗುತ್ತಾರೆ, ಯಾವಾಗ ನೀವು ಮನೆಯಿಂದ ಬರುತ್ತೀರಿ ಆಗ ಮನೆಯನ್ನೇ ಮರೆತು ಹೋಗುತ್ತೀರಿ. ಈಗ ತಾವೂ ಸಹ ಮಾರ್ಗದರ್ಶಕರಾಗಿದ್ದೀರಿ. ಎಲ್ಲರಿಗೂ ಮಾರ್ಗವನ್ನು ತಿಳಿಸುತ್ತೀರಿ - ಅಶರೀರಿ ಭವ. ತಮ್ಮ ಹೆಸರು ಪಾಂಡವ ಸೇನೆ ಎಂದಾಗಿದೆ. ಶರೀರಧಾರಿಗಳಲ್ಲವೆ. ಯಾವಾಗ ಒಬ್ಬರೆ ಇರುತ್ತೀರಿ ಆಗ ಸೇನೆಯೆಂದು ಹೇಳುವುದಿಲ್ಲ. ಶರೀರದೊಂದಿಗೆ ಯಾವಾಗ ಮಾಯೆಯ ಮೇಲೆ ವಿಜಯ ಗಳಿಸುತ್ತೀರಿ ಆಗ ನಿಮಗೆ ಸೇನೆಯೆಂದು ಹೇಳಲಾಗುತ್ತದೆ. ಅವರು ಯುದ್ಧದ ಮಾತನ್ನು ಬರೆದಿದ್ದಾರೆ, ಇದು ಬೇಹದ್ದಿನ ಮಾತಾಗಿದೆ. ಅವರು ಸಮ್ಮೇಳನ ಇತ್ಯಾದಿಗಳನ್ನು ಮಾಡುತ್ತಾರೆ. ಸಂಸ್ಕೃತಿ ಇತ್ಯಾದಿಯ ಕಾಲೇಜನ್ನು ತೆರೆಯುತ್ತಾರೆ. ಎಷ್ಟೊಂದು ಖರ್ಚು ಮಾಡುತ್ತಾರೆ! ಖರ್ಚು ಮಾಡುತ್ತಾ-ಮಾಡುತ್ತಾ ಖಾಲಿಯಾಗಿ ಬಿಟ್ಟಿದೆ. ಬೆಳ್ಳಿ, ಚಿನ್ನ, ವಜ್ರ ಎಲ್ಲವೂ ಸಮಾಪ್ತಿಯಾಗಿ ಬಿಟ್ಟಿದೆ. ಮತ್ತೆ ನಿಮಗಾಗಿ ಎಲ್ಲವೂ ಹೊಸದಾಗಿ ಸಿಗುತ್ತದೆ ಅಂದಮೇಲೆ ತಾವು ಮಕ್ಕಳು ನಡೆಯುತ್ತಾ-ತಿರುಗಾಡುತ್ತಾ ಬಹಳ ಖುಷಿಯಾಗಬೇಕು. ತಂದೆ ಹಾಗೂ ಆಸ್ತಿಯನ್ನು ನೆನಪು ಮಾಡಬೇಕು. ತಮ್ಮ ಪಾತ್ರವು ನಡೆಯುತ್ತಿರುತ್ತದೆ, ಎಂದೂ ನಿಂತು ಹೋಗುವುದಿಲ್ಲ. ತಾವು ತಮ್ಮ ಜನ್ಮಗಳನ್ನೂ ಸಹ ತಿಳಿದುಕೊಂಡಿಲ್ಲವೆಂದು ತಂದೆಯು ತಿಳಿಸುತ್ತಾರೆ. ಯಾರು ಮೊಟ್ಟ ಮೊದಲು ಬರುತ್ತಾರೆಯೋ ಅವರಿಗೂ 84 ಜನ್ಮಗಳ ಲೆಕ್ಕವನ್ನು ತಿಳಿಸುತ್ತಾರೆ. ತಾವು ಮಕ್ಕಳಿಗೆ ಅಪಾರ ಸುಖ ಸಿಗುತ್ತದೆ. ಆರೋಗ್ಯ, ಐಶ್ವರ್ಯ, ಸಂತೋಷ...... ಅಂದಮೇಲೆ ಎಷ್ಟೊಂದು ನಶೆಯಿರಬೇಕು. ತಂದೆಯು ನಮಗೆ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ತಾವೆಷ್ಟು ಸಮೀಪಕ್ಕೆ ಬರುತ್ತಾ ಹೋಗುತ್ತೀರಿ ಅಷ್ಟು ಆಪತ್ತುಗಳು ಬರುತ್ತಾ ಹೋಗುತ್ತವೆ. ವೃಕ್ಷದ ವೃದ್ಧಿಯೂ ಸಹ ಆಗಲೇಬೇಕು. ವೃಕ್ಷವು ಚಿಕ್ಕದಾಗಿದ್ದರೆ ತಕ್ಷಣ ಬಿರುಗಾಳಿ ಬೀಸುವುದರಿಂದ ಮುರಿದು ಹೋಗುತ್ತದೆ. ಇದಂತೂ ಆಗಲೇಬೇಕು. ನಿಮ್ಮ ಗುರಿಯ ಚಿತ್ರವಂತೂ ಮುಂದೆ ನಿಂತಿದೆ. ತಾವು ಬೇರೆ ಯಾವ ಚಿತ್ರವನ್ನೂ ಮುಂದಿಡಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿ ಮನುಷ್ಯರು ಅನೇಕ ಚಿತ್ರಗಳನ್ನು ಇಡುತ್ತಾರೆ, ಆದರೆ ಜ್ಞಾನ ಮಾರ್ಗದಲ್ಲಿ ಒಂದೇ. ಅದೂ ಸಹ ಜ್ಞಾನವು ಬುದ್ಧಿಯಲ್ಲಿದೆ, ಬಾಕಿ ಬಿಂದುವಿನ ಭಾವ ಚಿತ್ರವನ್ನು ತೆಗೆಯಲಾಗುವುದಿಲ್ಲ. ಆತ್ಮವಂತೂ ನಕ್ಷತ್ರವಾಗಿದೆಯಲ್ಲವೆ. ಇದೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ಆತ್ಮವನ್ನಂತೂ ಈ ನೇತ್ರಗಳಿಂದ ನೋಡಲು ಸಾಧ್ಯವಿಲ್ಲ. ಅನೇಕರು ಹೇಳುತ್ತಾರೆ - ಬಾಬಾ, ನಮಗೆ ಸಾಕ್ಷಾತ್ಕಾರ ಮಾಡಿ ವೈಕುಂಠ ನೋಡಬೇಕು. ಆದರೆ ನೋಡುವುದರಿಂದ ಮಾಲೀಕರಾಗುತ್ತೀರೇನು? ಇಂತಹವರು ಸ್ವರ್ಗಕ್ಕೆ ಹೋದರೆಂದು ಮನುಷ್ಯರು ಹೇಳುತ್ತಾರೆ ಆದರೆ ಸ್ವರ್ಗವೆಲ್ಲಿದೆ ಎಂದು ಮನುಷ್ಯರಿಗೆ ಗೊತ್ತಿದೆಯೇ! ಈಗ ತಮಗೆ ಸರ್ವಶ್ರೇಷ್ಠ ತಂದೆಯು ಓದಿಸುತ್ತಿದ್ದಾರೆ, ಇದರಿಂದ ತಾವು ಸರ್ವ ಶ್ರೇಷ್ಠ ಪದವಿಯನ್ನು ಪಡೆಯುತ್ತಿದ್ದೀರಿ. ಅವಶ್ಯವಾಗಿ ನಂಬರ್ವಾರ್ ಪುರುಷಾರ್ಥದನುಸಾರ ನರನಿಂದ ನಾರಾಯಣ ಆಗುತ್ತೀರಿ. ಯಾರು ಶಾಂತಿಯನ್ನು ಬೇಡುತ್ತಾರೆ ಅವರಿಗೆ ತಿಳಿಸುವುದು ನಿಮ್ಮ ಕೆಲಸವಾಗಿದೆ. ಹೇಗೆ ಸುಶೀಲ ಮುನಿಯಿದ್ದಾರೆ ಅವರನ್ನು ತಾವು ಕರೆದು ತಿಳಿಸಬಹುದು. ವ್ಯಕ್ತಿಯು ಒಳ್ಳೆಯವರಾಗಿದ್ದಾರೆ, ಇವರು ಸರಿಯಾಗಿ ಹೇಳುತ್ತಿದ್ದಾರೆಂದು ಅವರಿಗೆ ತಿಳಿಯುತ್ತದೆ. ಈ ಸಮಯವೂ ಬರುತ್ತದೆ. ಕುಮಾರಿಯರ ಮುಖಾಂತರ ಭೀಷ್ಮ ಪಿತಾಮಹ ಮುಂತಾದವರಿಗೂ ಸಹ ಈ ಜ್ಞಾನ ಬಾಣವನ್ನು ಹೊಡೆಯಲಾಯಿತೆಂದು ಬರೆಯಲಾಯಿತು. ಬಾಕಿ ಅರ್ಜುನನು ಬಾಣವನ್ನು ಹೊಡೆದನೆಂಬ ಮಾತಿಲ್ಲ. ಇಂತಿಂತಹ ಮಾತುಗಳನ್ನು ಕೇಳಿ ಇಲ್ಲಿಂದಲೇ ಗಂಗೆಯು ಬಂದಿತೆಂದು ಹೇಳುತ್ತಾರೆ. ಗೋ ಮುಖವನ್ನೂ ಸಹ ಮಾಡಿದ್ದಾರೆ. ಈಗ ತಾವು ಮಕ್ಕಳು ನೋಡುತ್ತೀರಿ, ನಿಮ್ಮ ಸ್ಮಾರಕವೂ ನಿಂತಿದೆ. ಅದು ಜಡ ದಿಲ್ವಾಡ ಮಂದಿರವಾಗಿದೆ. ಇದು ಚೈತನ್ಯವಾಗಿದೆ. ಅಲ್ಲಿ ಮೇಲೆ ವೈಕುಂಠವನ್ನು ತೋರಿಸಿದ್ದಾರೆ, ಕೆಳಗೆ ತಪಸ್ಸು ಮಾಡುತ್ತಿದ್ದಾರೆ. ಮೇಲೆ ರಾಜ್ಯಭಾಗ್ಯದ ಚಿತ್ರವಿದೆ, ಆದ್ದರಿಂದ ಮನುಷ್ಯರು ಸ್ವರ್ಗವು ಮೇಲಿದೆಯೆಂದು ತಿಳಿಯುತ್ತಾರೆ. ಬಾಂಬುಗಳನ್ನು ಮಾಡುವವರು ಇದು ನಮ್ಮ ವಿನಾಶಕ್ಕಾಗಿಯೇ ಇದೆಯೆಂದು ಸ್ವಯಂ ತಿಳಿದುಕೊಂಡಿದ್ದಾರೆ. ಈ ರೀತಿ ಮಾಡಿದರೆ ಖಂಡಿತವಾಗಿ ವಿನಾಶವಾಗುತ್ತದೆ ಎಂದು ಹೇಳುತ್ತಾರೆ. ಮಹಾಭಾರಿ ಯುದ್ಧದಲ್ಲಿ ಈ ರೀತಿಯಾಗಿತ್ತು, ಎಲ್ಲರೂ ಸಮಾಪ್ತಿಯಾದರೆಂದು ಬರೆಯಲಾಗಿದೆ. ಸತ್ಯಯುಗದಲ್ಲಿ ಒಂದೇ ತೆರನಾಗಿ ಇರುತ್ತದೆ. ಅಂದಮೇಲೆ ಉಳಿದೆಲ್ಲವೂ ಸಮಾಪ್ತಿಯಾಗುತ್ತದೆ. ಡ್ರಾಮಾನುಸಾರ ಭಕ್ತಿಯನ್ನು ಮಾಡುತ್ತಾ-ಮಾಡುತ್ತಾ ಕೆಳಗಿಳಿಯುತ್ತಲೇ ಬರುತ್ತಾರೆ. ಇದೂ ಸಹ ನೀವು ಮಕ್ಕಳಿಗೆ ಗೊತ್ತಿದೆ. ವಾಸ್ತವದಲ್ಲಿ ಇಲ್ಲಿ ಯಾವುದೇ ಆಶೀರ್ವಾದ ಮುಂತಾದ ಮಾತುಗಳಿಲ್ಲ. ಯಾವ ನಾಟಕವು ಮಾಡಲ್ಪಟ್ಟಿದೆಯೋ ಅದೇ ಆಗುತ್ತದೆ. ಏನಾದರೂ ಅಂತಹ ಮಾತುಗಳು ಬಂದರೆ ಇದು ಈಶ್ವರನ ಇಚ್ಛೆಯೆಂದು ಹೇಳುತ್ತಾರೆ. ಆದರೆ ತಾವು ಹೇಳುವುದಿಲ್ಲ. ತಾವಂತೂ ಡ್ರಾಮಾದ ಲೀಲೆಯೆಂದು ಹೇಳುತ್ತೀರಿ. ಈಶ್ವರನ ಲೀಲೆಯೆಂದು ಹೇಳುತ್ತೀರಿ. ಡ್ರಾಮಾದಲ್ಲಿಯೂ ಈಶ್ವರನ ಪಾತ್ರವಿದೆ. ಸೃಷ್ಟಿ ಚಕ್ರವು ಹೇಗೆ ಸುತ್ತುತ್ತದೆಯೆಂದು ತಂದೆಯು ತಿಳಿಸುತ್ತಾರೆ. ಜ್ಞಾನ ಪೂರ್ಣನೂ ಸಹ ತಂದೆಯೇ ಆಗಿದ್ದಾರೆ, ಅವರು ಎಲ್ಲರ ಮನಸ್ಸನ್ನು ತಿಳಿದುಕೊಂಡಿದ್ದಾರೆ ಎಂದು ಮನುಷ್ಯರು ತಿಳಿಯುತ್ತಾರೆ ಆದರೆ ನಾವು ಏನು ಮಾಡುತ್ತೇವೆಯೋ ಅದರ ಶಿಕ್ಷೆಯಂತೂ ನಮಗೆ ಅವಶ್ಯವಾಗಿ ಸಿಗುತ್ತದೆ. ತಂದೆಯು ಕುಳಿತು ಶಿಕ್ಷೆಯನ್ನು ಕೊಡುತ್ತಾರೇನು! ಇದು ಮಾಡಿ-ಮಾಡಲ್ಪಟ್ಟ ಡ್ರಾಮಾ ನಡೆಯುತ್ತಲೇ ಇರುತ್ತದೆ. ಇದರ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಂದೆಯೇ ತಿಳಿಸುತ್ತಾರೆ ನಂತರ ತಾವು ಅನ್ಯರಿಗೆ ತಿಳಿಸುತ್ತೀರಿ. ಈಗ ತಂದೆಯು ಹೇಳುತ್ತಾರೆ - ಮಕ್ಕಳೇ, ನಿಮ್ಮ ಸ್ಥಿತಿಯು ಈ ರೀತಿಯಿರಬೇಕು ಅಂತಿಮದಲ್ಲಿ ಏನೂ ನೆನಪಿಗೆ ಬರಬಾರದು. ತಮ್ಮನ್ನು ಆತ್ಮವೆಂದು ತಿಳಿಯಿರಿ, ಇದಕ್ಕೆ ಕರ್ಮಾತೀತ ಸ್ಥಿತಿಯೆಂದು ಕರೆಯಲಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
೧. ವಿದ್ಯಾರ್ಥಿ ವೇತನವನ್ನು ಪಡೆಯಲು ಚೆನ್ನಾಗಿ ಪುರುಷಾರ್ಥ ಮಾಡಿ. ಶಿಕ್ಷಕರಾಗಿ ಅನ್ಯರಿಗೂ ರಾಜಯೋಗವನ್ನು ಕಲಿಸಿ, ಮಾರ್ಗದರ್ಶನವನ್ನು ಕೊಡಿ ಎಲ್ಲರಿಗೂ ಮನೆಯ ಮಾರ್ಗವನ್ನು ತೋರಿಸುವ ಸೇವೆಯನ್ನು ಮಾಡಬೇಕು.

೨. ಸರ್ವಶಕ್ತಿವಂತ ತಂದೆಯ ನೆನಪಿನಿಂದ ತಮ್ಮ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಬೇಕು. ತಂದೆಯೊಂದಿಗೆ ಪ್ರತಿಜ್ಞೆ ಮಾಡಿದ ನಂತರ ಎಂದೂ ಸಹ ಕಾಮ ವಿಕಾರದ ಪೆಟ್ಟನ್ನು ತಿನ್ನಬಾರದು.

ವರದಾನ:
ಹಝೂರನನ್ನು ಸದಾ ಜೊತೆಯಲ್ಲಿಡುತ್ತಾ ಕಂಭೈಂಡ್ ಸ್ವರೂಪದ ಅನುಭವ ಮಾಡುವಂತಹ ವಿಶೇಷ ಪಾತ್ರಧಾರಿ ಭವ.

ಮಕ್ಕಳು ಯಾವಾಗ ಹೃದಯದಿಂದ ಹೇಳುತ್ತಾರೆ ಬಾಬಾ ಆಗ ದಿಲಾರಾಮ ಹಾಜಿರ್ ಆಗಿ ಬಿಡುತ್ತಾರೆ ಇದಕ್ಕಾಗಿ ಹೇಳುತ್ತಾರೆ ಹಾಝೂರ್ ಹಾಜಿರ್ ಇದ್ದಾರೆ ಎಂದು ಮತ್ತು ವಿಶೇಷ ಆತ್ಮಗಳಂತೂ ಕಂಭೈಂಡ್ ಆಗಿ ಇದ್ದೇ ಇರುತ್ತಾರೆ. ಜನ ಹೇಳುತ್ತಾರೆ, ಎಲ್ಲಿ ನೋಡಿದರೂ ಅಲ್ಲಿ ನೀನೆ ನೀನಾಗಿರುವೆ ಎಂದು ಮಕ್ಕಳು ಹೇಳುತ್ತಾರೆ. ನಾವು ಏನೇ ಮಾಡುತ್ತೇವೆ ಎಲ್ಲೇ ಹೋಗುತ್ತೇವೆ ಅಲ್ಲಿ ತಂದೆ ಜೊತೆ ಇದ್ದೇ ಇರುತ್ತಾರೆ ಎಂದು. ಮಾಡಿ ಮಾಡಿಸುವವನು ಎಂದು ಹೇಳಲಾಗುವುದು, ಆದ್ದರಿಂದ ಮಾಡುವವರು ಮತ್ತು ಮಾಡಿಸುವವರು ಕಂಭೈಂಡ್ ಆಗಿ ಹೋದರು. ಈ ಸ್ಮ್ರತಿಯಲ್ಲಿರುತ್ತಾ ಪಾತ್ರ ಮಾಡುವವರು ವಿಶೇಷ ಪಾತ್ರಧಾರಿಗಳಾಗುತ್ತಾರೆ.

ಸ್ಲೋಗನ್:
ಸ್ವಯಂನ್ನು ಈ ಹಳೆಯ ಪ್ರಪಂಚದಲ್ಲಿ ಅತಿಥಿ ಎಂದು ತಿಳಿದು ಇರಿ ಆಗ ಹಳೆಯ ಸಂಸ್ಕಾರಗಳು ಮತ್ತು ಸಂಕಲ್ಪಗಳನ್ನು ಗೆಟ್ ಔಟ್ ಮಾಡಲು ಸಾಧ್ಯ.


ಬ್ರಹ್ಮಾ ತಂದೆಯ ಸಮಾನರಾಗಲು ವಿಶೇಷ ಪುರುಷಾರ್ಥ -
ಸಮಯ ಪ್ರಮಾಣ ಈಗ ಬ್ರಹ್ಮಾ ತಂದೆಯ ಸಮಾನ ಅಚಲ-ಅಡೋಲ ಸರ್ವ ಖಜಾನೆಗಳಿಂದ ಸಂಪನ್ನರಾಗಿ. ಸ್ವಲ್ಪವಾದರೂ ಸಹಾ ಅಲುಗಾಡುತ್ತಿದ್ದರೆ ಸರ್ವ ಖಜಾನೆಗಳ ಅನುಭವ ಆಗುವುದಿಲ್ಲ. ತಂದೆಯ ಮೂಲಕ ಎಷ್ಟು ಖಜಾನೆಗಳು ಸಿಕ್ಕಿವೆ, ಆ ಖಜಾನೆಗಳನ್ನು ಸದಾ ಖಾಯಂ ಆಗಿ ಇಟ್ಟುಕೊಳ್ಳಲು ಸಾಧನವಾಗಿದೆ ಸದಾ ಅಚಲ -ಅಡೋಲರಾಗಿರುವುದು. ಅಚಲರಾಗಿರುವುದರಿಂದ ಖುಷಿಯ ಅನುಭೂತಿಯಾಗುತ್ತಿರುವುದು.