26.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈಗ
ನಿಮ್ಮೆಲ್ಲರ ಆಸೆಗಳು ಪೂರ್ಣವಾಗುತ್ತವೆ, ಹೊಟ್ಟೆಯು ತುಂಬಿ ಬಿಡುತ್ತದೆ, ತಂದೆಯು ನಿಮ್ಮನ್ನು
ತೃಪ್ತ ಆತ್ಮರನ್ನಾಗಿ ಮಾಡಲು ಬಂದಿದ್ದಾರೆ”
ಪ್ರಶ್ನೆ:
ಈಗ ನೀವು ಮಕ್ಕಳು
ಭಕ್ತಿಯನ್ನಂತೂ ಮಾಡುವುದಿಲ್ಲ, ಆದರೆ ಅವಶ್ಯವಾಗಿ ಭಕ್ತರಾಗಿದ್ದೀರಿ- ಹೇಗೆ?
ಉತ್ತರ:
ಎಲ್ಲಿಯವರೆಗೆ
ದೇಹಾಭಿಮಾನವಿರುವುದೋ ಅಲ್ಲಿಯವರೆಗೆ ಭಕ್ತರೇ, ನೀವು ಜ್ಞಾನಿಗಳಾಗಲು ಓದುತ್ತಿದ್ದೀರಿ. ಯಾವಾಗ
ಪರೀಕ್ಷೆಯನ್ನು ತೇರ್ಗಡೆ ಮಾಡುತ್ತೀರಿ, ಕರ್ಮಾತೀತರಾಗಿ ಬಿಡುತ್ತೀರಿ ಆಗ ಸಂಪೂರ್ಣ ಜ್ಞಾನಿಗಳೆಂದು
ಹೇಳಲಾಗುತ್ತದೆ ನಂತರ ಓದುವ ಅವಶ್ಯಕತೆಯಿಲ್ಲ.
ಓಂ ಶಾಂತಿ.
ಭಕ್ತರು ಮತ್ತು ಭಗವಂತ ಎರಡು ವಸ್ತುಗಳಿವೆಯಲ್ಲವೇ. ತಂದೆ ಮತ್ತು ಮಕ್ಕಳು. ಭಕ್ತರು ಅನೇಕರಿದ್ದಾರೆ,
ಭಗವಂತನು ಒಬ್ಬರೇ ಆಗಿದ್ದಾರೆ. ನೀವು ಮಕ್ಕಳಿಗೆ ಸಹಜ ಮಾತೆನಿಸುತ್ತದೆ. ಆತ್ಮಗಳು ಶರೀರದ ಮೂಲಕ
ಭಕ್ತಿ ಮಾಡುತ್ತಾರೆ - ಏಕೆ? ಭಗವಂತ ತಂದೆಯನ್ನು ಮಿಲನ ಮಾಡುವುದಕ್ಕಾಗಿ. ನೀವು ಭಕ್ತರು ಈಗ
ನಾಟಕವನ್ನು ಅರಿತಿದ್ದೀರಿ. ಯಾವಾಗ ಪೂರ್ಣ ಜ್ಞಾನಿಗಳಾಗಿ ಬಿಡುತ್ತೀರೋ ಆಗ ಇಲ್ಲಿರುವುದಿಲ್ಲ.
ಶಾಲೆಯಲ್ಲಿ ಓದಿ ಪರೀಕ್ಷೆಯನ್ನು ತೇರ್ಗಡೆ ಮಾಡಿದರೆ ಇನ್ನೊಂದು ತರಗತಿಯಲ್ಲಿ ಹೋಗುತ್ತೀರಿ. ಈಗ
ನಿಮಗೆ ಭಗವಂತನು ಓದಿಸುತ್ತಿದ್ದಾರೆ, ಜ್ಞಾನಿಗಳಿಗಂತೂ ವಿದ್ಯೆಯ ಅವಶ್ಯಕತೆಯಿರುವುದಿಲ್ಲ.
ಭಕ್ತರಿಗೆ ಭಗವಂತನು ಓದಿಸುತ್ತಿದ್ದಾರೆ. ನಿಮಗೆ ತಿಳಿದಿದೆ - ನಾವಾತ್ಮರು ಭಕ್ತಿ ಮಾಡುತ್ತಿದ್ದೆವು,
ಈಗ ಭಕ್ತಿಯಿಂದ ಹೊರ ಬಂದು ಜ್ಞಾನದಲ್ಲಿ ಹೇಗೆ ಹೋಗಬೇಕೆಂದು ತಂದೆಯು ಕಲಿಸಿ ಕೊಡುತ್ತಾರೆ. ಈಗ
ಭಕ್ತಿಯಂತೂ ಮಾಡುವುದಿಲ್ಲ, ಆದರೆ ದೇಹಭಿಮಾನದಲ್ಲಂತೂ ಬಂದು ಬಿಡುತ್ತೀರಲ್ಲವೆ. ಇದನ್ನೂ ಸಹ
ತಿಳಿಯುತ್ತೀರಿ, ಆ ಭಕ್ತರು ಭಗವಂತನನ್ನೇ ತಿಳಿದುಕೊಂಡಿಲ್ಲ. ನಮಗೆ ಗೊತ್ತಿಲ್ಲವೆಂದು ಖುದ್ದಾಗಿ
ಹೇಳುತ್ತಾರೆ. ಯಾರು ನಂಬರ್ವನ್ ಭಕ್ತರಾಗಿದ್ದಾರೆಯೋ ಅವರನ್ನು ತಂದೆಯು ಪ್ರಶ್ನೆ ಮಾಡುತ್ತಾರೆ-
ನೀವು ಯಾವ ಭಗವಂತನ ಭಕ್ತರಾಗಿದ್ದಿರೋ ಅವರನ್ನು ತಿಳಿದುಕೊಂಡಿದ್ದೀರಾ? ವಾಸ್ತವದಲ್ಲಿ ಭಗವಂತನು
ಒಬ್ಬರೇ ಆಗಿರಬೇಕು. ಇಲ್ಲಂತೂ ಅನೇಕ ಭಗವಂತರಾಗಿ ಬಿಟ್ಟಿದ್ದಾರೆ, ತಮ್ಮನ್ನು ಭಗವಂತನೆಂದು
ಹೇಳಿಕೊಳ್ಳುತ್ತಾರೆ. ಇದಕ್ಕೆ ಅಜ್ಞಾನವೆಂದು ಹೇಳಲಾಗುತ್ತದೆ. ಭಕ್ತಿಯಲ್ಲಿ ಘೋರ ಅಂಧಕಾರವಿದೆ, ಅದು
ಭಕ್ತಿಮಾರ್ಗವಾಗಿದೆ. ಜ್ಞಾನ ಅಂಜನವನ್ನು ಸದ್ಗುರು ಕೊಟ್ಟರು ಅದರಿಂದ ಅಜ್ಞಾನವು ವಿನಾಶವಾಯಿತೆಂದು
ಭಕ್ತರು ಹಾಡುತ್ತಾರೆ. ಜ್ಞಾನಾಂಜನವನ್ನು ಗುರುಗಳು ಕೊಡಲು ಸಾಧ್ಯವಿಲ್ಲ. ಗುರುಗಳಂತೂ
ಅನೇಕರಿದ್ದಾರೆ, ನೀವು ಮಕ್ಕಳಿಗೆ ಗೊತ್ತಿದೆ - ಭಕ್ತಿಯಲ್ಲಿ ಏನೇನು ಮಾಡುತ್ತಿದ್ದೆವು, ಯಾರನ್ನು
ನೆನಪು ಮಾಡುತ್ತಿದ್ದೆವು, ಯಾರನ್ನು ಪೂಜಿಸುತ್ತಿದ್ದೆವು? ಆ ನಿಮ್ಮ ಭಕ್ತಿಯ ಅಂಧಕಾರವು ಈಗ ಬಿಟ್ಟು
ಹೋಯಿತು ಏಕೆಂದರೆ ತಂದೆಯನ್ನು ಅರಿತುಕೊಂಡಿರಿ. ತಂದೆಯು ಪರಿಚಯ ನೀಡಿದ್ದಾರೆ- ಮಧುರಾತಿ ಮಧುರ
ಮಕ್ಕಳೇ, ನೀವು ಆತ್ಮರಾಗಿದ್ದೀರಿ. ನೀವು ಶರೀರದ ಜೊತೆ ಪಾತ್ರವನ್ನಭಿನಯಿಸಿದ್ದೀರಿ. ನಿಮ್ಮದು
ಬೇಹದ್ದಿನ ಜ್ಞಾನವಾಗಿದೆ. ಬೇಹದ್ದಿನ ಪಾತ್ರವನ್ನಭಿನಯಿಸುತ್ತಾ ಇರುತ್ತೀರಿ, ನೀವು ಹದ್ದಿನಿಂದ
ಬೇಹದ್ದಿನಲ್ಲಿ ಹೊರಟು ಹೋಗುತ್ತೀರಿ. ಈ ಪ್ರಪಂಚವೂ ಸಹ ವೃದ್ಧಿಯಾಗುತ್ತಾ-ಆಗುತ್ತಾ ಎಷ್ಟೊಂದು
ಬೇಹದ್ದಿಗೆ ಹೊರಟು ಹೋಗಿದೆ, ಅವಶ್ಯವಾಗಿ ಮತ್ತೆ ಹದ್ದಿನಲ್ಲಿ ಬರುತ್ತದೆ. ಹದ್ದಿನಿಂದ
ಬೇಹದ್ದಿನಲ್ಲಿ, ಬೇಹದ್ದಿನಿಂದ ಹದ್ದಿನಲ್ಲಿ ಹೇಗೆ ಬರುತ್ತೇವೆಂದು ಈಗ ನೀವು ಮಕ್ಕಳಿಗೆ
ತಿಳಿಯುತ್ತದೆ. ಆತ್ಮವು ಅತಿ ಸೂಕ್ಷ್ಮ ನಕ್ಷತ್ರವಾಗಿದೆ. ಇದನ್ನು ತಿಳಿದುಕೊಳ್ಳುತ್ತಾರೆ ಆದರೂ ಸಹ
ಇಷ್ಟು ದೊಡ್ಡ ಲಿಂಗವನ್ನು ಮಾಡಿ ಬಿಡುತ್ತಾರೆ. ಅವರು ತಾನೆ ಏನು ಮಾಡುತ್ತಾರೆ? ಏಕೆಂದರೆ ಅತಿ
ಸೂಕ್ಷ್ಮ ಬಿಂದುವಿನ ಪೂಜೆಯನ್ನು ಮಾಡಲು ಆಗುವುದಿಲ್ಲ. ಭೃಕುಟಿಯ ಮಧ್ಯದಲ್ಲಿ ಹೊಳೆಯುವ
ನಕ್ಷತ್ರವೆಂದು ಹೇಳುತ್ತಾರೆ, ಈಗ ಆ ನಕ್ಷತ್ರದ ಭಕ್ತಿಯನ್ನು ಹೇಗೆ ಮಾಡುವುದು? ಭಗವಂತನ ಬಗ್ಗೆ
ಯಾರಿಗೂ ತಿಳಿದಿಲ್ಲ. ಆತ್ಮವು ಭೃಕುಟಿಯ ಮಧ್ಯದಲ್ಲಿರುತ್ತದೆ ಎಂದು ಆತ್ಮದ ಬಗ್ಗೆಯಷ್ಟೆ ಗೊತ್ತಿದೆ
ಆದರೆ ಆತ್ಮವೇ ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತದೆ ಎಂದು ಬುದ್ಧಿಯಲ್ಲಿ
ಬರುವುದಿಲ್ಲ, ಮೊಟ್ಟ ಮೊದಲು ನೀವೇ ಪೂಜೆ ಮಾಡುತ್ತಿದ್ದಿರಿ. ದೊಡ್ಡ-ದೊಡ್ಡ ಲಿಂಗವನ್ನು
ಮಾಡುತ್ತಾರೆ ದಿನ-ಪ್ರತಿದಿನ ರಾವಣನನ್ನು ದೊಡ್ಡ ಚಿತ್ರವನ್ನಾಗಿ ಮಾಡುತ್ತಾರೆ. ರಾವಣನನ್ನು
ಚಿಕ್ಕದಾಗಿ ಮಾಡಲು ಸಾಧ್ಯವಿಲ್ಲ. ಮನುಷ್ಯರು ಮೊದಲು ಚಿಕ್ಕದಾಗಿರುತ್ತಾರೆ ನಂತರ
ದೊಡ್ಡವರಾಗುತ್ತಾರೆ. ರಾವಣನನ್ನೆಂದೂ ಚಿಕ್ಕದಾಗಿ ತೋರಿಸುವುದಿಲ್ಲ. ರಾವಣನೆಂದೂ ಚಿಕ್ಕವನು,
ದೊಡ್ಡವನು ಆಗುವುದಿಲ್ಲ. ರಾವಣನು ಯಾವುದೇ ಸ್ಥೂಲ ವಸ್ತುವಲ್ಲ. ಪಂಚ ವಿಕಾರಗಳಿಗೆ ರಾವಣನೆಂದು
ಹೇಳಲಾಗುತ್ತದೆ. ಪಂಚ ವಿಕಾರಗಳೇ ವೃದ್ಧಿಯಾಗುತ್ತಾ ಹೋಗುತ್ತದೆ ಏಕೆಂದರೆ ತಮೋಪ್ರಧಾನರಾಗುತ್ತಾ
ಹೋಗುತ್ತಾರೆ. ಮೊದಲು ಇಷ್ಟೊಂದು ದೇಹಾಭಿಮಾನವಿರಲಿಲ್ಲ. ನಂತರದಲ್ಲಿ ಹೆಚ್ಚುತ್ತಾ ಹೋಗಿದೆ. ಒಬ್ಬರ
ಪೂಜೆ ಮಾಡಿದರು ನಂತರ ಇನ್ನೊಬ್ಬರ ಪೂಜೆ ಮಾಡಿದರು ಹೀಗೆ ವೃದ್ಧಿಯಾಗುತ್ತಾ ಹೋಗಿದೆ. ಆತ್ಮವು
ತಮೋಪ್ರಧಾನವಾಗಿ ಬಿಟ್ಟಿದೆ. ಯಾವಾಗ ತಮೋಪ್ರಧಾನರಾಗುತ್ತೇವೆ, ಯಾವಾಗ ಸತೋಪ್ರಧಾನರಾಗುತ್ತೇವೆಂದು
ಬುದ್ಧಿಯಲ್ಲಿರುವಂತಹ ಮನುಷ್ಯರು ಪ್ರಪಂಚದಲ್ಲಿ ಯಾರೂ ಇರುವುದಿಲ್ಲ. ಈ ಮಾತುಗಳಲ್ಲಿ ಮನುಷ್ಯರು
ಸಂಪೂರ್ಣ ಅಪರಿಚಿತರಾಗಿದ್ದಾರೆ. ಜ್ಞಾನವೇನೂ ಕಷ್ಟವಲ್ಲ, ತಂದೆಯು ಬಂದು ಬಹಳ ಸಹಜವಾಗಿ ಜ್ಞಾನವನ್ನು
ತಿಳಿಸುತ್ತಾರೆ, ಓದಿಸುತ್ತಾರೆ. ಕೊನೆಗೂ ಇಡೀ ವಿದ್ಯೆಯ ಸಾರವು ಉಳಿಯುತ್ತದೆ. ನಾವಾತ್ಮರು ತಂದೆಯ
ಮಕ್ಕಳಾಗಿದ್ದೇವೆ, ತಂದೆಯನ್ನು ನೆನಪು ಮಾಡಬೇಕಾಗಿದೆ.
ಇದೂ ಗಾಯನವಾಗಿದೆ - ಕೋಟಿಯಲ್ಲಿ ಕೆಲವರು, ಬಹಳ ಕೆಲವರೇ ಬರುತ್ತಾರೆ. ಕೋಟಿಯಲ್ಲಿ ಕೆಲವರೇ
ಯಥಾರ್ಥವಾಗಿ ಅರಿತುಕೊಳ್ಳುತ್ತಾರೆ, ಯಾರನ್ನು? ತಂದೆಯನ್ನು ತಂದೆಯು ಎಂದಾದರೂ ಈ
ರೀತಿಯಿರುತ್ತಾರೆಯೇ ಎಂದು ಕೇಳುತ್ತಾರೆ. ತಮ್ಮ ಲೌಕಿಕ ತಂದೆಯನ್ನಂತೂ ಎಲ್ಲರೂ ತಿಳಿದುಕೊಂಡಿದ್ದಾರೆ
ಆದರೆ ಈ ತಂದೆಯನ್ನು ಏಕೆ ಮರೆತು ಹೋಗಿದ್ದಾರೆ? ಇದರ ಹೆಸರೇ ಆಗಿದೆ- ಮರೆತು ಮರೆಸುವ ಆಟ. ಒಬ್ಬರು
ಲೌಕಿಕ ತಂದೆಯಾಗಿದ್ದಾರೆ, ಇನ್ನೊಬ್ಬರು ಬೇಹದ್ದಿನ ತಂದೆಯಿದ್ದಾರೆ. ಇಬ್ಬರಿಂದಲೂ ಆಸ್ತಿಯು
ಸಿಗುತ್ತದೆ. ಲೌಕಿಕ ತಂದೆಯಿಂದ ಸ್ವಲ್ಪ ಆಸ್ತಿಯು ಸಿಗುತ್ತದೆ. ದಿನ-ಪ್ರತಿದಿನ ಕಡಿಮೆಯಾಗುತ್ತಾ
ಹೋಗುತ್ತದೆ. ಕೊನೆಗೆ ಇಲ್ಲವೇ ಇಲ್ಲದಂತಾಗುತ್ತದೆ. ಎಲ್ಲಿಯವರೆಗೆ ಬೇಹದ್ದಿನ ತಂದೆಯು
ಬರುವುದಿಲ್ಲವೋ ಅಲ್ಲಿಯವರೆಗೆ ಹೊಟ್ಟೆ ತುಂಬುವುದೇ ಇಲ್ಲ. ಪೂರ್ಣ ಹೊಟ್ಟೆಯೇ ಖಾಲಿಯಾಗಿ ಬಿಡುತ್ತದೆ.
ತಂದೆಯೇ ಬಂದು ಮತ್ತೆ ತುಂಬುತ್ತಾರೆ. ಪ್ರತಿಯೊಂದು ಮಾತಿನಲ್ಲಿ ಈ ರೀತಿ ಹೊಟ್ಟೆ ತುಂಬುತ್ತಾರೆ
ಮತ್ತೆ ನೀವು ಮಕ್ಕಳಿಗೆ ಯಾವುದೇ ವಸ್ತುವಿನ ಅವಶ್ಯಕತೆಯೇ ಇರುವುದಿಲ್ಲ, ಎಲ್ಲಾ ಆಸೆಗಳನ್ನು ಪೂರ್ಣ
ಮಾಡುತ್ತಾರೆ, ಆತ್ಮವು ತೃಪ್ತವಾಗಿ ಬಿಡುತ್ತದೆ. ಹೇಗೆ ಬ್ರಾಹ್ಮಣರಿಗೆ ತಿನ್ನಿಸುತ್ತಾರೆಂದರೆ (ಶ್ರಾದ್ಧ)
ಆತ್ಮವು ತೃಪ್ತವಾಗಿ ಬಿಡುತ್ತದೆ. ಆದರೆ ಇದು ಬೇಹದ್ದಿನ ತೃಪ್ತಿಯಾಗಿದೆ. ಎಷ್ಟೊಂದು ಅಂತರವಿದೆ
ನೋಡಿ! ಆತ್ಮದ ಹದ್ದಿನ ತೃಪ್ತಿ ಮತ್ತು ಬೇಹದ್ದಿನ ತೃಪ್ತಿಯಲ್ಲಿ ನೋಡಿ ಎಷ್ಟೊಂದು ಅಂತರವಿದೆ.
ತಂದೆಯನ್ನು ಅರಿತುಕೊಳ್ಳುವುದರಿಂದಲೇ ತೃಪ್ತವಾಗಿ ಬಿಡುತ್ತದೆ ಏಕೆಂದರೆ ತಂದೆಯು ಸ್ವರ್ಗದ
ಮಾಲೀಕರನ್ನಾಗಿ ಮಾಡಿ ಬಿಡುತ್ತಾರೆ. ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಬೇಹದ್ದಿನ ತಂದೆಯ
ಮಕ್ಕಳಾಗಿದ್ದೇವೆ, ತಂದೆಯನ್ನಂತೂ ಎಲ್ಲರೂ ನೆನಪು ಮಾಡುತ್ತಾರಲ್ಲವೆ. ಭಲೆ ಕೆಲವರು ಇದಂತೂ
ಪ್ರಕೃತಿಯಾಗಿದೆಯಲ್ಲವೆ, ಬ್ರಹ್ಮ್ ತತ್ವದಲ್ಲಿ ಲೀನವಾಗಿ ಬಿಡುತ್ತೇವೆಂದು ಹೇಳುತ್ತಾರೆ. ತಂದೆಯು
ತಿಳಿಸಿದ್ದಾರೆ, ಬ್ರಹ್ಮ್ ತತ್ವದಲ್ಲಿ ಯಾರೂ ಲೀನವಾಗುವುದಿಲ್ಲ. ಇದಂತೂ ಅನಾದಿ ನಾಟಕವಾಗಿದೆ, ಇದು
ಸುತ್ತುತ್ತಲೇ ಇರುತ್ತದೆ. ಇದರಲ್ಲಿ ತಬ್ಬಿಬ್ಬಾಗುವ ಅವಶ್ಯಕತೆಯೇ ಇಲ್ಲ. ನಾಲ್ಕು ಯುಗಗಳ ಈ ಚಕ್ರವು
ಸುತ್ತುತ್ತಾ ಇರುತ್ತದೆ. ಚಾಚೂ ತಪ್ಪದೆ ಪುನರಾವರ್ತನೆಯಾಗುತ್ತಾ ಇರುತ್ತದೆ. ತಂದೆಯು ಒಬ್ಬರೇ,
ಪ್ರಪಂಚವೂ ಒಂದೇ ಆಗಿದೆ. ಮನುಷ್ಯರು ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ. ಚಂದ್ರ ಗ್ರಹದಲ್ಲಿಯೂ
ಪ್ರಪಂಚವಿದೆ, ನಕ್ಷತ್ರಗಳಲ್ಲಿಯೂ ಪ್ರಪಂಚವಿದೆ ಎಂದು ತಿಳಿಯುತ್ತಾರೆ. ಎಷ್ಟೊಂದು ಸಂಶೋಧನೆ
ಮಾಡುತ್ತಾರೆ. ಚಂದ್ರ ಗ್ರಹದಲ್ಲಿ ಫ್ಲಾಟನ್ನು ತೆಗೆದುಕೊಳ್ಳಲು ಯೋಚಿಸುತ್ತಾರೆ. ಇದು ಹೇಗಾಗಲು
ಸಾಧ್ಯ? ಯಾರಿಗೆ ಹಣವನ್ನು ಕೊಡುತ್ತಾರೆ? ಇದಕ್ಕೆ ವಿಜ್ಞಾನದ ಅಭಿಮಾನವೆಂದು ಹೇಳಲಾಗುತ್ತದೆ. ಬಾಕಿ
ಇನ್ನೇನೂ ಇಲ್ಲ. ಪ್ರಯತ್ನ ಪಡುತ್ತಿರುತ್ತಾರೆ, ಇದು ಮಾಯೆಯ ಆಡಂಬರವಾಗಿದೆಯಲ್ಲವೆ.
ಸ್ವರ್ಗಕ್ಕಿಂತಲೂ ಹೆಚ್ಚಿನ ಶೋ ಮಾಡಿ ತೋರಿಸುತ್ತಾರೆ, ಸ್ವರ್ಗವನ್ನಂತೂ ಮರೆತೇ ಹೋಗಿದ್ದಾರೆ.
ಸ್ವರ್ಗದಲ್ಲಂತೂ ಅಪಾರ ಧನವಿತ್ತು. ಒಂದು ಮಂದಿರದಿಂದಲೇ ಎಷ್ಟೊಂದು ಹಣವನ್ನು ತೆಗೆದುಕೊಂಡು ಹೋದರು.
ಭಾರತದಲ್ಲಿಯೇ ಎಷ್ಟೊಂದು ಹಣವಿತ್ತು, ಬಹಳ ಖಜಾನೆಗಳು ಸಂಪನ್ನವಾಗಿತ್ತು. ಮಹಮ್ಮದ್ ಘಜ್ನಿಯು ಬಂದು
ಲೂಟಿ ಮಾಡಿ ತೆಗೆದುಕೊಂಡು ಹೋದನು. ಅರ್ಧಕಲ್ಪವಂತೂ ನೀವು ಸಮರ್ಥರಾಗಿರುತ್ತೀರಿ, ಕಳ್ಳತನ,
ಇತ್ಯಾದಿಗಳ ಹೆಸರೇ ಇರುವುದಿಲ್ಲ. ರಾವಣ ರಾಜ್ಯವೇ ಇಲ್ಲ. ರಾವಣ ರಾಜ್ಯವು ಪ್ರಾರಂಭವಾಯಿತು.
ಆಗಿನಿಂದ ಕಳ್ಳತನ, ಜಗಳ, ಸುಲಿಗೆ ಎಲ್ಲವೂ ಆರಂಭವಾಗಿದೆ. ರಾವಣನ ಹೆಸರನ್ನು ತೆಗೆದುಕೊಳ್ಳುತ್ತಾರೆ.
ರಾವಣನೆಂದರೆ ಯಾರೂ ಇಲ್ಲ. ರಾವಣನೆಂದರೆ ವಿಕಾರಗಳ ಪ್ರವೇಶತೆಯಾಯಿತು. ರಾವಣನಿಗಾಗಿ ಮನುಷ್ಯರು
ಏನೇನು ಮಾಡುತ್ತಾರೆ? ಎಷ್ಟೊಂದು ಆಚರಣೆ ಮಾಡುತ್ತಾರೆ. ನೀವೂ ಸಹ ದಸರಾ ಆಚರಿಸುತ್ತಿದ್ದಿರಿ,
ರಾವಣನನ್ನು ಹೇಗೆ ಸುಡುತ್ತಾರೆಂದು ನೋಡುತ್ತಿದ್ದಿರಿ. ಇಷ್ಟೊಂದು ಚಿನ್ನವನ್ನು ಲೂಟಿ ಮಾಡಲು
ಹೋಗುತ್ತಾರೆ. ಯಾವ ಸ್ಥಿತಿಯುಂತಾಗಿದೆ! ಈಗ ಆಶ್ಚರ್ಯವೆನಿಸುತ್ತದೆ. ಏನಾಗಿ ಬಿಟ್ಟಿದ್ದಿರಿ,
ಎಷ್ಟೊಂದು ಪೂಜೆ ಇತ್ಯಾದಿಯನ್ನು ಮಾಡುತ್ತಿದ್ದಿರಿ. ಯಾವುದೇ ವಿಶೇಷ ದಿನದಂದು ಏನೆಲ್ಲಾ
ಮಾಡುತ್ತಿರುತ್ತಾರೆ, ಭಕ್ತಿಮಾರ್ಗದಲ್ಲಿ ಗೊಂಬೆಯಾಟವಾಗಿದೆ. ಅದೂ ಸಹ ಎಷ್ಟು ಸಮಯ
ನಡೆಯುತ್ತದೆಯೆಂದು ನಿಮಗೆ ತಿಳಿದಿದೆ. ಪ್ರಾರಂಭದಲ್ಲಿ ಇಷ್ಟೊಂದು ಮಾಡುತ್ತಿರಲಿಲ್ಲ ನಂತರ
ವೃದ್ಧಿಯಾಗುತ್ತಾ - ಆಗುತ್ತಾ ನೋಡಿ ಏನಾಗಿ ಬಿಟ್ಟಿದೆ! ಇಷ್ಟೊಂದು ಖರ್ಚು ಮಾಡಿ ಚಿತ್ರ ಹಾಗೂ
ಮಂದಿರ ಮೊದಲಾದವುಗಳನ್ನು ಏಕೆ ಮಾಡುತ್ತಾರೆ? ಇದು ಹಣವನ್ನು ವ್ಯರ್ಥವಾಗಿ ಕಳೆಯುವುದಾಗಿದೆ.
ಮಂದಿರಗಳನ್ನು ಕಟ್ಟಿಸುವುದರಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ತಂದೆಯು ಎಷ್ಟು
ಪ್ರೀತಿಯಿಂದ ಕುಳಿತು ತಿಳಿಸುತ್ತಾರೆ - ನಾನು ನೀವು ಮಕ್ಕಳಿಗೆ ಅಪಾರ ಧನವನ್ನು ಕೊಟ್ಟೆನು.
ಅದೆಲ್ಲವೂ ಎಲ್ಲಿ ಕಳೆದುಕೊಂಡಿರಿ. ರಾವಣ ರಾಜ್ಯದಲ್ಲಿ ನೀವು ಹೇಗಿದ್ದವರು ಏನಾಗಿ ಬಿಟ್ಟಿದ್ದೀರಿ!
ಈಶ್ವರನ ಲೀಲೆಯ ಮೇಲೆ ರಾಜಿಯಾಗಿರಬೇಕೆಂದಲ್ಲ. ಇದೇನೂ ಈಶ್ವರನ ಲೀಲೆಯಲ್ಲ, ಇದು ಮಾಯೆಯ ಲೀಲೆಯಾಗಿದೆ.
ಈಗ ನಿಮಗೆ ಈಶ್ವರನ ರಾಜ್ಯಭಾಗ್ಯವು ಸಿಗುತ್ತದೆ. ಅಲ್ಲಂತೂ ದುಃಖದ ಯಾವುದೇ ಮಾತುಗಳಿರುವುದಿಲ್ಲ.
ಈಶ್ವರನ ಲೀಲೆ ಮತ್ತು ಆಸುರೀ ಲೀಲೆಯಲ್ಲಿ ಎಷ್ಟೊಂದು ಅಂತರವಿದೆ. ಈ ತಿಳುವಳಿಕೆಯು ನಿಮಗೆ ಈಗಷ್ಟೇ
ತಿಳಿಯುತ್ತದೆ ಅದೂ ನಂಬರ್ವಾರ್ ಅನುಸಾರ. ಜ್ಞಾನದ ಇಂಜೆಕ್ಷನ್ ಯಾರಿಗೆ ನಾಟುತ್ತದೆ ಎಂಬುದನ್ನಂತೂ
ತಿಳಿದುಕೊಳ್ಳಬಹುದಾಗಿದೆ. ಕೆಲವರಿಗೆ ಜ್ಞಾನದ ಇಂಜೆಕ್ಷನ್ ಚೆನ್ನಾಗಿ ಹಿಡಿಸಿದೆ, ಕೆಲವರಿಗೆ ಕಡಿಮೆ
ಹಿಡಿಸಿದೆ ಕೆಲವರಿಗಂತೂ ಸಂಪೂರ್ಣ ಹಿಡಿಸುವುದೇ ಇಲ್ಲ. ಇದಂತೂ ತಂದೆಗೇ ಗೊತ್ತಿದೆ, ಎಲ್ಲವೂ
ಸರ್ವೀಸಿನ ಮೇಲೆ ಆಧಾರಿತವಾಗಿದೆ. ಸರ್ವೀಸಿನಿಂದಲೇ ಇವರಿಗೆ ಇಂಜೆಕ್ಷನ್ ಹಿಡಿಸಿಲ್ಲ. ಸರ್ವೀಸ್
ಮಾಡುವುದನ್ನೇ ತಿಳಿದುಕೊಂಡಿಲ್ಲವೆಂದು ತಂದೆಯು ತಿಳಿಸುತ್ತಾರೆ. ಇಂತಹವರೂ ಇದ್ದಾರೆ, ಕೆಲವರಿಗೆ
ಇಂಜೆಕ್ಷನ್ ಹೆಚ್ಚಿನದಾಗಿ ಹಿಡಿಸಿದೆ, ಕೆಲವರಿಗೆ ಇಲ್ಲವೇ ಇಲ್ಲ.
ಜ್ಞಾನಾಂಜನವನ್ನು ಸದ್ಗುರು ಕೊಟ್ಟರು, ಅಜ್ಞಾನ ಅಂಧಕಾರವು ವಿನಾಶವಾಯಿತೆಂದು ಹೇಳಲಾಗುತ್ತದೆ.
ಜ್ಞಾನ ಸಾಗರ, ಸುಖದ ಸಾಗರ, ಪರಮಪಿತ ಪರಮಾತ್ಮನಾಗಿದ್ದಾರೆ. ಮತ್ತೆ ಅವರನ್ನೇ ಕಲ್ಲು-ಮುಳ್ಳಿನಲ್ಲಿ
ಹಾಕಿ ಬಿಟ್ಟಿದ್ದಾರೆ. ಮಕ್ಕಳಿಗೆ ಎಷ್ಟೊಂದು ನಿಶ್ಚಯವಿರಬೇಕು, ಬೇಹದ್ದಿನ ತಂದೆಯು ನಿಮಗೆ
ಬೇಹದ್ದಿನ ಸುಖವನ್ನು ಕೊಡುತ್ತಾರೆ. ಬೇಹದ್ದಿನ ತಂದೆಯೇ ತಾವು ಬರುತ್ತೀರೆಂದರೆ ಆಗ ನಾವು ತಮ್ಮವರೇ
ಆಗುತ್ತೇವೆ, ತಮ್ಮ ಮತದನುಸಾರವೇ ನಡೆಯುತ್ತೇವೆಂದು ಹಾಡುತ್ತಾರೆ. ಭಕ್ತಿಯಲ್ಲಂತೂ ತಂದೆಯ ಪರಿಚಯವೇ
ಇರುವುದಿಲ್ಲ. ಈ ಪಾತ್ರವು ಈಗಲೇ ನಡೆಯುತ್ತದೆ, ಈಗಲೇ ತಂದೆಯೂ ಓದಿಸುತ್ತಿದ್ದಾರೆ. ನಿಮಗೂ
ತಿಳಿದಿದೆ, ಈ ವಿದ್ಯೆಯ ಪಾತ್ರವು ಮತ್ತೆ 5000 ವರ್ಷಗಳ ನಂತರ ನಡೆಯುವುದು. ತಂದೆಯು 5000 ವರ್ಷಗಳ
ನಂತರ ಬರುತ್ತಾರೆ. ಆತ್ಮಗಳೆಲ್ಲರೂ ಸಹೋದರರಾಗಿದ್ದೀರಿ, ಮತ್ತೆ ಈ ಶರೀರವನ್ನು ಧಾರಣೆ ಮಾಡಿ
ಪಾತ್ರವನ್ನಭಿನಯಿಸುತ್ತಿದ್ದೀರಿ. ಮನುಷ್ಯ ಸೃಷ್ಟಿಯು ವೃದ್ಧಿಯಾಗುತ್ತಾ ಇರುತ್ತದೆ. ಆತ್ಮಗಳ
ಸ್ಟಾಕ್ ಇದೆಯಲ್ಲವೆ. ಇಲ್ಲಿ ಎಷ್ಟು ಮನುಷ್ಯರ ಸ್ಟಾಕ್ ಪೂರ್ಣವಾಗುವುದೋ ಅಷ್ಟೇ ಅಲ್ಲಿ ಆತ್ಮಗಳ
ಸ್ಟಾಕ್ ಇರುವುದು. ಒಬ್ಬ ಪಾತ್ರಧಾರಿಯು ಹೆಚ್ಚಾಗಲಿ, ಕಡಿಮೆಯಾಗಲಿ ಇರಲು ಸಾಧ್ಯವಿಲ್ಲ. ಇವರೆಲ್ಲರೂ
ಬೇಹದ್ದಿನ ಪಾತ್ರಧಾರಿಗಳಾಗಿದ್ದಾರೆ. ಇವರಿಗೆ ಅನಾದಿ ಪಾತ್ರವು ಸಿಕ್ಕಿದೆ. ಇದು
ಅದ್ಭುತವಾಗಿದೆಯಲ್ಲವೆ. ಈಗ ನೀವು ಮಕ್ಕಳು ಎಷ್ಟು ಬುದ್ಧಿವಂತರಾಗಿದ್ದೀರಿ, ಈ ವಿದ್ಯೆಯು ಎಷ್ಟು
ಶ್ರೇಷ್ಠವಾಗಿದೆ. ನಿಮಗೆ ಓದಿಸುವವರು ಸ್ವಯಂ ಜ್ಞಾನಸಾಗರ ತಂದೆಯಾಗಿದ್ದಾರೆ. ಉಳಿದವರೆಲ್ಲರೂ
ಭಕ್ತಿಯ ಸಾಗರರಾಗಿದ್ದಾರೆ. ಹೇಗೆ ಭಕ್ತಿಗೆ ಮಾನ್ಯತೆಯಿರುವುದೋ ಹಾಗೆಯೇ ಜ್ಞಾನಕ್ಕೂ ಮಾನ್ಯತೆಯಿದೆ.
ಭಕ್ತಿಯಲ್ಲಿ ಮನುಷ್ಯರು ಈಶ್ವರಾರ್ಥವಾಗಿ ಎಷ್ಟೊಂದು ದಾನ-ಪುಣ್ಯಗಳನ್ನು ಮಾಡುತ್ತಾರೆ ಏಕೆಂದರೆ
ವೇದ ಶಾಸ್ತ್ರಗಳನ್ನು ಎಷ್ಟು ದೊಡ್ಡ-ದೊಡ್ಡದಾಗಿ ರಚಿಸುತ್ತಾರೆ. ಈಗ ನೀವು ಮಕ್ಕಳಿಗೆ ಭಕ್ತಿ ಮತ್ತು
ಜ್ಞಾನದ ಅಂತರವು ಸಿಕ್ಕಿದೆ. ಎಷ್ಟೊಂದು ವಿಶಾಲ ಬುದ್ಧಿಯಿರಬೇಕು. ಎಂದೂ ಯಾರಲ್ಲಿಯೂ ನಿಮ್ಮ
ದೃಷ್ಟಿಯು ಹೋಗುವುದಿಲ್ಲ. ನಾವೇಕೆ ಈ ರಾಜಾ-ರಾಣಿ ಮೊದಲಾದವರನ್ನು ನೋಡುವುದು, ಅವರನ್ನೇಕೆ ನೋಡಬೇಕು
ಎಂದು ನೀವು ಹೇಳುತ್ತೀರಿ. ಹೃದಯದಲ್ಲಿ ಯಾವುದೇ ಆಸೆಯು ಇರುವುದಿಲ್ಲ. ಇವರೆಲ್ಲರೂ
ಸಮಾಪ್ತಿಯಾಗುವವರಿದ್ದಾರೆ. ಯಾರೆಲ್ಲರ ಬಳಿ ಏನೆಲ್ಲವೂ ಇದೆಯೋ ಎಲ್ಲವೂ ಸಮಾಪ್ತಿಯಾಗಲಿದೆ.
ಹೊಟ್ಟೆಯಂತೂ ಕೇವಲ ಎರಡು ರೊಟ್ಟಿಯನ್ನು ಕೇಳುತ್ತದೆ ಆದರೆ ಇದಕ್ಕಾಗಿ ಎಷ್ಟೊಂದು ಪಾಪ ಮಾಡುತ್ತಾರೆ.
ಪ್ರಪಂಚದಲ್ಲಿ ಈ ಸಮಯದಲ್ಲಿ ಪಾಪವೇ ಪಾಪವಿದೆ. ಹೊಟ್ಟೆಯು ಬಹಳ ಪಾಪ ಮಾಡಿಸುತ್ತದೆ. ಒಬ್ಬರು
ಇನ್ನೊಬ್ಬರ ಮೇಲೆ ಸುಳ್ಳು ಕಳಂಕಗಳನ್ನು ಹೊರಿಸುತ್ತಾರೆ, ಬಹಳಷ್ಟು ಹಣವನ್ನು ಸಂಪಾದಿಸುತ್ತಾರೆ.
ಎಷ್ಟೊಂದು ಹಣವನ್ನು ಬಚ್ಚಿಟ್ಟುಕೊಳ್ಳುತ್ತಾರೆ. ಸರ್ಕಾರ ಏನು ಮಾಡಲು ಸಾಧ್ಯ! ಆದರೆ ಯಾರೆಷ್ಟು
ಮುಚ್ಚಿಟ್ಟುಕೊಂಡರೂ ಮುಚ್ಚಿಡಲು ಸಾಧ್ಯವಿಲ್ಲ. ಈಗಂತೂ ಪ್ರಾಕೃತಿಕ ವಿಕೋಪಗಳಾಗಲಿವೆ, ಇನ್ನು
ಸ್ವಲ್ಪವೇ ಸಮಯವಿದೆ. ತಂದೆಯು ತಿಳಿಸುತ್ತಾರೆ - ಶರೀರ ನಿರ್ವಹಣಾರ್ಥವಾಗಿ ಏನಾದರೂ ಮಾಡಿ. ಅದಕ್ಕೆ
ನಿರಾಕರಿಸುವುದಿಲ್ಲ, ಮಕ್ಕಳಿಗೆ ಖುಷಿಯ ನಶೆಯೇರಿರಬೇಕು. ತಂದೆ ಮತ್ತು ಆಸ್ತಿಯ ನೆನಪೇ ಇರಲಿ.
ತಂದೆಯು ನಿಮ್ಮನ್ನು ಇಡೀ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಭೂಮಿ, ಆಕಾಶ ಎಲ್ಲವೂ ನಿಮ್ಮದಾಗಿ
ಬಿಡುತ್ತದೆ. ಯಾವುದೇ ಮಿತಿಯಿರುವುದಿಲ್ಲ. ನೀವು ಮಕ್ಕಳಿಗೂ ಸಹ ತಿಳಿದಿದೆ - ನಾವೇ
ಮಾಲೀಕರಾಗಿದ್ದೇವೆ, ಭಾರತವು ಅವಿನಾಶಿ ಖಂಡವೆಂದು ಗಾಯನವಿದೆ ಅಂದಮೇಲೆ ತಾವು ಮಕ್ಕಳಿಗೆ ಬಹಳ
ಖುಷಿಯಿರಬೇಕು. ಹೇಗೆ ಲೌಕಿಕ ವಿದ್ಯಾಭ್ಯಾಸ ಮಾಡುವಾಗಲೂ ಖುಷಿಯಿರುತ್ತದೆಯಲ್ಲವೆ ಆದರೆ ಇದಂತೂ
ಪಾರಲೌಕಿಕ ವಿದ್ಯೆಯಾಗಿದೆ, ಪಾರಲೌಕಿಕ ತಂದೆಯೇ ಓದಿಸುತ್ತಾರೆ. ಇಂತಹ ತಂದೆಯನ್ನು ನೆನಪು
ಮಾಡಬೇಕಲ್ಲವೆ. ನೀವು ಮಕ್ಕಳು ಇದನ್ನು ಅರಿತುಕೊಳ್ಳಬಹುದು - ಆ ದೈಹಿಕ ವ್ಯಾಪಾರ-ವ್ಯವಹಾರಗಳಲ್ಲಿ
ಏನಿದೆ! ಏನೂ ಲಾಭವಿಲ್ಲ. ನಾವು ತಂದೆಯಿಂದ ಎಂತಹ ಆಸ್ತಿಯನ್ನು ಪಡೆಯುತ್ತೇವೆ, ಇದರಲ್ಲಿ ಎಷ್ಟೊಂದು
ಹಗಲು-ರಾತ್ರಿಯ ಅಂತರವಿದೆ. ನಾವಂತೂ ಲೌಕಿಕ ಕಾರ್ಯ ವ್ಯವಹಾರಗಳನ್ನು ಮಾಡುತ್ತಲೂ ಹೋಗಿ
ಕಿರೀಟಧಾರಿಗಳಾಗುತ್ತೇವೆ. ತಂದೆಯು ಮಕ್ಕಳಿಗೆ ಓದಿಸುವುದಕ್ಕಾಗಿ ಬಂದಿದ್ದಾರೆ ಅಂದಾಗ ಮಕ್ಕಳಿಗೆ
ಬಹಳ ಖುಷಿಯಿರಬೇಕು, ಆ ಕೆಲಸ-ಕಾರ್ಯಗಳನ್ನೂ ಮಾಡುತ್ತಾ ಇರಬೇಕು ಆದರೆ ಈ ರೀತಿಯೂ ತಿಳಿಯಬೇಕು - ಇದು
ಹಳೆಯ ಪ್ರಪಂಚವಾಗಿದೆ, ಇದರ ವಿನಾಶಕ್ಕಾಗಿ ಎಲ್ಲಾ ತಯಾರಿ ಆಗುತ್ತಿದೆ. ಅಂತಹ ಕೆಲಸಗಳನ್ನು
ಮಾಡುತ್ತಾರೆ, ಎಲ್ಲಿ ದೊಡ್ಡ ಯುದ್ಧವಾಗುವುದೋ ಎನ್ನುವ ಭಯವಾಗುವ ಹಾಗೆ ಡ್ರಾಮಾನುಸಾರ ಇದೆಲ್ಲವೂ
ನಡೆಯಲೇಬೇಕಾಗಿದೆ. ಇದೆಲ್ಲವನ್ನೂ ಈಶ್ವರನೇ ಮಾಡಿಸುತ್ತಾನೆಂದಲ್ಲ. ಇದೆಲ್ಲವೂ ನಾಟಕದನುಸಾರ
ಇಂದಿಲ್ಲವೆಂದರೆ ನಾಳೆ ವಿನಾಶವಂತೂ ಅವಶ್ಯವಾಗಿ ಆಗುವುದಿದೆ. ಈಗ ನೀವು ಓದುತ್ತಿದ್ದೀರಿ ಅಂದಾಗ
ನಿಮಗಾಗಿ ಹೊಸ ಪ್ರಪಂಚವು ಅವಶ್ಯವಾಗಿ ಬೇಕು. ಇವೆಲ್ಲಾ ಮಾತುಗಳನ್ನು ಆಂತರಿಕವಾಗಿ ಸ್ಮರಣೆ
ಮಾಡುತ್ತಾ ಖುಷಿಯಾಗಿರಬೇಕು. ತಂದೆಯು ಈ ರಥವನ್ನು ಆಧಾರವಾಗಿ ತೆಗೆದುಕೊಂಡರು. ಇವರಿಗಂತೂ ಈಗ ಏನೂ
ಇಲ್ಲ, ಎಲ್ಲವನ್ನೂ ಬಿಟ್ಟು ಬಿಟ್ಟರು. ಬೇಹದ್ದಿನ ರಾಜ್ಯಭಾಗ್ಯವೇ ಸಿಗುತ್ತದೆಯೆಂದಮೇಲೆ
ಇದೆಲ್ಲವನ್ನೂ ಏನು ಮಾಡುತ್ತಾರೆ! ಬ್ರಹ್ಮಾ ತಂದೆಯನ್ನು ಕುರಿತು ಒಂದು ಗೀತೆಯೂ ರಚಿಸಲ್ಪಟ್ಟಿದೆ-
ಅಲೀಫನಿಗೆ ಅಲ್ಲಾ ಸಿಕ್ಕಿದ ಮೇಲೆ ಈ ವ್ಯಾಪಾರವನ್ನು ಏನು ಮಾಡುತ್ತಾರೆ? ಹೆಚ್ಚು-ಕಡಿಮೆ ಕೊಟ್ಟು
ವ್ಯಾಪಾರವನ್ನು ಮುಗಿಸಿದರು. ಶರೀರವನ್ನೂ ಸಹ ತಂದೆಗೆ ಅರ್ಪಣೆ ಮಾಡಿದರು. ಓಹೋ ನಾನಂತೂ ವಿಶ್ವದ
ಮಾಲೀಕನಾಗುತ್ತೇನೆ, ಅನೇಕ ಬಾರಿ ಮಾಲೀಕನಾಗಿದ್ದೆನು ಎಂಬ ಜಾಗೃತಿ ಬಂದಿತು. ನೀವು ಭಲೆ ತಮ್ಮ
ಮನೆಯಲ್ಲೇ ಇರಿ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಇಂತಹ ತೃಪ್ತ
ಮತ್ತು ವಿಶಾಲ ಬುದ್ಧಿಯವರಾಗಬೇಕು, ದೃಷ್ಟಿಯು ಯಾರಲ್ಲಿಯೂ ಹೋಗಬಾರದು. ಹೃದಯದಲ್ಲಿ ಯಾವುದೇ
ಆಸೆಯಿರಬಾರದು ಏಕೆಂದರೆ ಇದೆಲ್ಲವೂ ವಿನಾಶವಾಗಲಿದೆ.
2. ಶರೀರ
ನಿರ್ವಹಣಾರ್ಥವಾಗಿ ಕರ್ಮ ಮಾಡುತ್ತಾ ಖುಷಿಯ ನಶೆಯು ಸದಾ ಏರಿರಲಿ. ತಂದೆ ಮತ್ತು ಆಸ್ತಿಯ ನೆನಪಿರಲಿ.
ಬುದ್ಧಿಯು ಹದ್ದಿನಿಂದ ಮುಕ್ತವಾಗಿ ಸದಾ ಬೇಹದ್ದಿನಲ್ಲಿರಲಿ.
ವರದಾನ:
ತಂದೆ ಮತ್ತು
ಸೇವೆಯಲ್ಲಿ ಮಗ್ನರಾಗಿರುವಂತಹ ನಿರ್ವಿಘ್ನ, ನಿರಂತರ ಸೇವಾಧಾರಿ ಭವ.
ಎಲ್ಲಿ ಸೇವೆಯ ಉಮಂಗವಿದೆ,
ಅಲ್ಲಿ ಅನೇಕ ಮಾತುಗಳು ಸಹಜವಾಗಿಯೇ ದೂರವಾಗಿ ಬಿಡುವುದು. ಒಬ್ಬ ತಂದೆ ಮತ್ತು ಸೇವೆಯಲ್ಲಿ
ಮಗ್ನರಾಗಿದ್ದಾಗ ನಿರ್ವಿಘ್ನ, ನಿರಂತರ ಸೇವಾಧಾರಿ, ಸಹಜವಾಗಿ ಮಾಯಾಜೀತ್ ಆಗಿ ಬಿಡುವರು. ಸಮಯ ಪ್ರತಿ
ಸಮಯ ಸೇವೆಯ ರೂಪು ರೇಖೆ ಬದಲಾಗುತ್ತಿದೆ ಮತ್ತು ಬದಲಾಗುತ್ತಿರುತ್ತದೆ. ಆಗ ನಿಮಗೆ ಹೆಚ್ಚಿಗೆ
ಹೇಳುವ ಅವಶ್ಯಕತೆ ಇರುವುದಿಲ್ಲ ಆದರೆ ಅವರು ಸ್ವಯಂ ಹೇಳುತ್ತಾರೆ ಇದು ಶ್ರೇಷ್ಠ ಕಾರ್ಯವಾಗಿದೆ
ಆದ್ದರಿಂದ ನಮ್ಮನ್ನೂ ಸಹ ಸಹಯೋಗಿಗಳನ್ನಾಗಿ ಮಾಡಿಕೊಳ್ಳಿ. ಇದು ಸಮಯದ ಸಮೀಪತೆಯ ಗುರುತಾಗಿದೆ.
ಆದ್ದರಿಂದ ತುಂಬಾ ಉಮಂಗ-ಉತ್ಸಾಹದಿಂದ ಸೇವೆ ಮಾಡುತ್ತಾ ಮುಂದುವರೆಯುತ್ತಾ ಹೋಗಿ.
ಸ್ಲೋಗನ್:
ಸಂಪನ್ನತೆಯ
ಸ್ಥಿತಿಯಲ್ಲಿ ಸ್ಥಿತರಾಗಿ, ಪ್ರಕೃತಿಯ ಹಲ್-ಚಲ್ ಅನ್ನು ಚಲಿಸುತ್ತಿರುವ ಮೋಡಗಳ ಸಮಾನ ಅನುಭವ ಮಾಡಿ.