13.01.19       Avyakt Bapdada      Kannada Murli      10.04.84      Om Shanti     Madhuban


“ ಪ್ರಭು ಪ್ರೀತಿ - ಬ್ರಾಹ್ಮಣ ಜೀವನದ ಆಧಾರ ”


ಇಂದು ಬಾಪ್ದಾದಾರವರು ತನ್ನ ಸ್ನೇಹಿ, ಸಹಯೋಗಿ, ಸಹಜಯೋಗಿ ಆತ್ಮರನ್ನು ನೋಡುತ್ತಿದ್ದಾರೆ. ಯೋಗಿ ಆತ್ಮರಂತು ಎಲ್ಲರೂ ಆಗಿದ್ದಾರೆ. ಇದು ಯೋಗಿಗಳ ಸಭೆಯಾಗಿದೆಯೆಂದೇ ಹೇಳುತ್ತೇವೆ. ಎಲ್ಲಾ ಯೋಗಿ ಆತ್ಮರು ಅರ್ಥಾತ್ ಪ್ರಭು ಪ್ರಿಯ ಆತ್ಮರು ಕುಳಿತಿದ್ದಾರೆ. ಯಾರು ಪ್ರಭುವಿಗೆ ಪ್ರಿಯವೆನಿಸುತ್ತಾರೆ, ಅವರು ವಿಶ್ವದ ಪ್ರಿಯರು ಆಗಿಯೇ ಆಗುತ್ತಾರೆ. ಎಲ್ಲರಿಗೂ ಈ ಆತ್ಮಿಕ ನಶೆ, ಆತ್ಮಿಕ ಸುಗಂಧ, ಆತ್ಮಿಕ ನಶೆಯು ಸದಾ ಇರುತ್ತದೆಯೇ - ನಾವು ಪರಮಾತ್ಮ ಪ್ರಿಯರು, ಭಗವಂತನ ಪ್ರಿಯರು, ಜಗತ್ತಿಗೆ ಪ್ರಿಯರಾಗಿ ಬಿಟ್ಟೆವು? ಕೇವಲ ಈ ಒಂದು ಅರ್ಧ ಗಳಿಗೆಗಳ ದೃಷ್ಟಿಯೇ ನಮ್ಮ ಮೇಲೆ ಬೀಳಲಿ, ಭಕ್ತರು ಇದಕ್ಕಾಗಿ ಬಾಯಾರಿರುತ್ತಾರೆ ಮತ್ತು ಇದೇ ಮಹಾನತೆಯಾಗಿದೆ ಎಂದು ತಿಳಿಯುತ್ತಾರೆ. ಆದರೆ ತಾವು ಈಶ್ವರನ ಪ್ರೀತಿಗೆ ಪಾತ್ರರಾಗಿ ಬಿಟ್ಟಿರಿ. ಪ್ರಭುವಿನ ಪ್ರಿಯರಾಗಿ ಬಿಟ್ಟಿರಿ. ಇದೆಷ್ಟು ಮಹಾನ್ ಭಾಗ್ಯವಾಗಿದೆ. ಇಂದು ಪ್ರತಿಯೊಂದು ಆತ್ಮನು ಬಾಲ್ಯದಿಂದ ಮೃತ್ಯುವಿನವರೆಗೂ ಏನು ಬಯಸುತ್ತಾರೆ? ಬುದ್ಧಿಹೀನರಾದ ಮಕ್ಕಳೂ ಸಹ ಜೀವನದಲ್ಲಿ ಪ್ರೀತಿಯನ್ನು ಬಯಸುತ್ತಾರೆ. ಹಣವನ್ನು ನಂತರ ಬಯಸುತ್ತಾರೆ ಆದರೆ ಮೊದಲು ಪ್ರೀತಿಯನ್ನು ಬಯಸುತ್ತಾರೆ. ಪ್ರೀತಿಯಿಲ್ಲವೆಂದರೆ ಜೀವನವು ನಿರಾಶೆ ಜೀವನವೆಂದು ಅನುಭವ ಮಾಡುತ್ತಾರೆ, ಪ್ರಾಪ್ತಿಯಿಲ್ಲದಿರುವುದೆಂದು ಅನುಭವ ಮಾಡುತ್ತಾರೆ. ಆದರೆ ತಾವು ಸರ್ವ ಆತ್ಮರಿಗೆ ಪರಮಾತ್ಮನ ಪ್ರೀತಿಯು ಸಿಕ್ಕಿದೆ, ಪರಮಾತ್ಮ ಪ್ರಿಯರಾಗಿ ಬಿಟ್ಟಿರಿ, ಇದಕ್ಕಿಂತ ದೊಡ್ಡ ವಸ್ತು ಮತ್ತೇನಿದೆ? ಪ್ರೀತಿಯಿದೆಯೆಂದರೆ ಪ್ರಪಂಚವಿದೆ, ಜೀವನವಿದೆ. ಪ್ರೀತಿಯೇ ಇಲ್ಲವೆಂದರೆ ಪ್ರಾಣವೂ ಇಲ್ಲ, ಪ್ರಪಂಚವೂ ಇಲ್ಲ. ಪ್ರೀತಿ ಸಿಕ್ಕಿತೆಂದರೆ ಪ್ರಪಂಚವೂ ಸಿಕ್ಕಿತು. ಇಂತಹ ಪ್ರೀತಿಯು ಶ್ರೇಷ್ಠ ಭಾಗ್ಯವೆಂದು ಅನುಭವ ಮಾಡುತ್ತೀರಾ? ಪ್ರಪಂಚವು ಇದಕ್ಕಾಗಿ ಬಾಯಾರಿದೆ. ಒಂದು ಹನಿಯ ಬಾಯಾರಿಕೆಯಿದೆ ಮತ್ತು ತಾವು ಮಕ್ಕಳಿಗೆ ಪ್ರಭು ಪ್ರೀತಿಯ ಈ ಆಸ್ತಿಯೇ ಇದೆ. ಇದೇ ಪ್ರಭು ಪ್ರೀತಿಯಿಂದ ಬೆಳೆಯುತ್ತೀರಿ ಅರ್ಥಾತ್ ಬ್ರಾಹ್ಮಣ ಜೀವನದಲ್ಲಿ ಮುಂದುವರೆಯುತ್ತೀರಿ. ಇಂತಹ ಅನುಭವ ಮಾಡುತ್ತೀರಾ? ಪ್ರೀತಿಯ ಸಾಗರನಲ್ಲಿ ಲವಲೀನರಾಗಿ ಇರುತ್ತೀರಾ? ಅಥವಾ ಕೇವಲ ಕೇಳಿರುವುದೇ ಅಥವಾ ತಿಳಿದಿದ್ದೀರಾ? ಅರ್ಥಾತ್ ಸಾಗರದ ದಡದಲ್ಲಿ ನಿಂತು ನಿಂತಿದ್ದಂತೆಯೇ ಕೇವಲ ಯೋಚಿಸುತ್ತಾ ಮತ್ತು ನೋಡುತ್ತಿರುತ್ತೀರಾ. ಕೇವಲ ಕೇಳುವುದು ಮತ್ತು ತಿಳಿದುಕೊಳ್ಳುವುದು - ಇದು ದಡದಲ್ಲಿ ನಿಂತಿರುವುದಾಯಿತು. ಈ ಅನುಭವವನ್ನು ಮಾಡಲಿಲ್ಲವೆಂದರೆ ಪ್ರಭು ಪ್ರೀತಿಗೆ ಪಾತ್ರರಾಗಿ ಪಡೆಯುವವರಲ್ಲ. ಆದರೆ ಬಾಯಾರಿರುವವರಾಗಿಯೇ ಉಳಿದು ಬಿಟ್ಟಿರಿ. ತಮ್ಮ ಬಳಿ ಬಂದಿದ್ದರೂ ಸಹ ಬಾಯಾರಿರುವವರಾಗಿ ಇರುವವರಿಗೆ ಏನೆಂದು ಹೇಳುತ್ತಾರೆ? ಯೋಚಿಸಿ, ಯಾರು ತಮ್ಮನ್ನು ತನ್ನವರನ್ನಾಗಿ ಮಾಡಿಕೊಂಡರು! ಯಾರಿಗೆ ಪ್ರಿಯರಾಗಿದ್ದೀರಿ! ಯಾರ ಪಾಲನೆಯಲ್ಲಿ ಬೆಳೆಯುತ್ತಿದ್ದೀರಿ? ಅದರಿಂದ ಏನಾಗುತ್ತದೆ? ಸದಾ ಸ್ನೇಹದಲ್ಲಿ ಸಮಾವೇಶವಾಗಿರುವ ಕಾರಣದಿಂದ ಸಮಸ್ಯೆಗಳು ಅಥವಾ ಯಾವುದೇ ಪ್ರಕಾರದ ಏರುಪೇರಿನ ಪ್ರಭಾವವು ಬೀಳಲು ಸಾಧ್ಯವಿಲ್ಲ. ಸದಾ ವಿಘ್ನ ವಿನಾಶಕ, ಸಮಾಧಾನ ಸ್ವರೂಪ, ಮಾಯಾಜೀತನ ಅನುಭವ ಮಾಡುತ್ತೀರಿ. ಕೆಲವು ಮಕ್ಕಳು ಹೇಳುತ್ತಾರೆ - ಜ್ಞಾನದ ಗುಹ್ಯವಾದ ಮಾತುಗಳು ನೆನಪಿರುವುದಿಲ್ಲ. ಆದರೆ ಈ ಒಂದು ಮಾತು ನೆನಪಿರುತ್ತದೆ - ನಾನು ಪರಮಾತ್ಮನ ಪ್ರಿಯನಾಗಿದ್ದೇನೆ. ಪರಮಾತ್ಮ ಪ್ರೀತಿಯ ಅಧಿಕಾರಿಯಾಗಿದ್ದೇನೆ. ಇದೊಂದೇ ಸ್ಮೃತಿಯಿಂದ ಸದಾ ಸಮರ್ಥರಾಗಿ ಬಿಡುತ್ತೀರಿ. ಇದಂತು ಸಹಜವಲ್ಲವೆ. ಇದೂ ಸಹ ಮರೆತು ಬಿಡುತ್ತದೆ, ನಂತರದಲ್ಲಂತು ಕಣ್ಣು ಮುಚ್ಚಾಲೆ ಆಟದಲ್ಲಿ ಸಿಕ್ಕಿಕೊಂಡು ಬಿಡುತ್ತೀರಿ. ಕೇವಲ ಈ ಒಂದು ಮಾತು ಸರ್ವಪ್ರಾಪ್ತಿ ಅಧಿಕಾರಿಯನ್ನಾಗಿ ಮಾಡುವಂತದ್ದಾಗಿದೆ. ಅಂದಮೇಲೆ ಸದಾ ಇದನ್ನೇ ನೆನಪಿಟ್ಟುಕೊಳ್ಳಿರಿ, ಅನುಭವ ಮಾಡಿರಿ - ನಾನು ಪ್ರಭುವಿನ ಪ್ರಿಯನು ಜಗತ್ತಿಗೂ ಪ್ರಿಯನಾಗಿದ್ದೇನೆ. ತಿಳಿಯಿತೆ! ಇದಂತು ಸಹಜವಲ್ಲವೆ. ಒಳ್ಳೆಯದು - ಕೇಳಿರುವುದಂತು ಬಹಳಷ್ಟಾಯಿತು, ಈಗ ಸಮಾವೇಶವಾಗಬೇಕು. ಸಮಾವೇಶ ಮಾಡಿಕೊಳ್ಳುವುದೇ ಸಮಾನರಾಗುವುದು. ತಿಳಿಯಿತೆ!

ಪ್ರಭುವಿನ ಪ್ರೀತಿಗೆ ಪಾತ್ರರಾಗಿರುವ ಎಲ್ಲಾ ಮಕ್ಕಳಿಗೆ , ಸ್ನೇಹದಲ್ಲಿ ಸಮಾವೇಶವಾಗಿರುವ ಎಲ್ಲಾ ಶ್ರೇಷ್ಠಾತ್ಮರಿಗೆ , ಪ್ರೀತಿ ಪಾಲನೆಗೆ ಅಧಿಕಾರಿಯಾಗಿರುವ ಎಲ್ಲಾ ಮಕ್ಕಳಿಗೆ , ಆತ್ಮಿಕ ನಶೆಯಲ್ಲಿರುವಂತಹ , ಆತ್ಮಿಕ ನಶೆಯಲ್ಲಿರುವಂತಹ ಶ್ರೇಷ್ಠಾತ್ಮರಿಗೆ ಬಾಪ್ ದಾದಾರವರ ನೆನಪು - ಪ್ರೀತಿ ಹಾಗೂ ನಮಸ್ತೆ .

ಪಾರ್ಟಿಯೊಂದಿಗೆ ಅವ್ಯಕ್ತ - ಬಾಪ್ ದಾದಾರವರ ವಾರ್ತಾಲಾಪ -

1. ಎಲ್ಲರೂ ಸಹಜಯೋಗಿ ಆತ್ಮರಾಗಿದ್ದೀರಲ್ಲವೆ! ಸರ್ವ ಸಂಬಂಧದಿಂದ ನೆನಪು ಸಹಜಯೋಗಿಯನ್ನಾಗಿ ಮಾಡಿ ಬಿಡುತ್ತದೆ. ಎಲ್ಲಿ ಸಂಬಂಧವಿದೆ ಅಲ್ಲಿ ಸಹಜವಿದೆ. ನಾನು ಸಹಜಯೋಗಿ ಆತ್ಮನಾಗಿರುವೆನು, ಈ ಸ್ಮೃತಿಯು ಸರ್ವ ಸಮಸ್ಯೆಗಳನ್ನು ಸಹಜವಾಗಿಯೇ ಸಮಾಪ್ತಿ ಮಾಡಿಸಿ ಬಿಡುತ್ತದೆ. ಏಕೆಂದರೆ ಸಹಜಯೋಗಿ ಅರ್ಥಾತ್ ಸದಾ ತಂದೆಯು ಜೊತೆಯಿದ್ದಾರೆ. ಎಲ್ಲಿ ಸರ್ವಶಕ್ತಿವಂತ ತಂದೆಯು ಜೊತೆಯಿದ್ದಾರೆ, ಸರ್ವಶಕ್ತಿಗಳೂ ಜೊತೆಯಿದೆ ಅಂದಮೇಲೆ ಸಮಸ್ಯೆಗಳು ಸಮಾಧಾನ ರೂಪದಲ್ಲಿ ಬದಲಾಗಿ ಬಿಡುತ್ತದೆ. ಯಾವುದೇ ಸಮಸ್ಯೆಯು ತಂದೆಗೆ ಗೊತ್ತು, ಸಮಸ್ಯೆಗೆ ಗೊತ್ತು. ಇಂತಹ ಸಂಬಂಧದ ಅಧಿಕಾರದಿಂದ ಸಮಸ್ಯೆಯು ಸಮಾಪ್ತಿಯಾಗಿ ಬಿಡುತ್ತದೆ. ನಾನು ಏನು ಮಾಡಲಿ! ಎನ್ನುವುದಿಲ್ಲ. ತಂದೆಗೆ ಗೊತ್ತು, ಸಮಸ್ಯೆಗೆ ಗೊತ್ತು ಎಲ್ಲಾ ಮಾತುಗಳೂ ಸಹ ಹಗುರವಾಗಿ ಬಿಡುತ್ತದೆ. ಸ್ವಲ್ಪವೇನಾದರೂ ವಿಚಾರ ನಡೆದರೆ ಭಾರಿಯಾಗಿ ಬಿಡುತ್ತೀರಿ ಮತ್ತು ಮಾತುಗಳೂ ಸಹ ಹೊರೆಯಾಗಿ ಬಿಡುತ್ತದೆ. ಆದ್ದರಿಂದ ನಾನು ಹಗುರನಿದ್ದೇನೆ, ಅದರಿಂದ ಭಿನ್ನವಾಗಿದ್ದೇನೆ, ಇದರಿಂದ ಎಲ್ಲಾ ಮಾತುಗಳು ಹಗುರವಾಗಿರುತ್ತದೆ. ಇದೇ ವಿಧಿಯೂ ಆಗಿದೆ, ಇದೇ ವಿಧಿಯಿಂದ ಸಿದ್ಧಿಯ ಪ್ರಾಪ್ತಿಯಾಗುತ್ತದೆ. ಹಿಂದಿನ ಲೆಕ್ಕಾಚಾರಗಳು ಸಮಾಪ್ತಿಯಾಗುತ್ತಿದ್ದರೂ ಹೊರೆಯ ಅನುಭವವಾಗುವುದಿಲ್ಲ. ಈ ರೀತಿ ಸಾಕ್ಷಿಯಾಗಿ ನೋಡುತ್ತೀರೆ, ಹೇಗೆಂದರೆ ಹಿಂದಿನದೆಲ್ಲವೂ ಸಮಾಪ್ತಿಯಾಗುತ್ತಿದೆ ಮತ್ತು ವರ್ತಮಾನದ ಶಕ್ತಿಯಿಂದ ಸಾಕ್ಷಿಯಾಗಿ ನೋಡುತ್ತಿದ್ದೇನೆ. ಜಮಾ ಸಹ ಆಗುತ್ತಿದೆ ಮತ್ತು ಲೆಕ್ಕಾಚಾರವು ಸಮಾಪ್ತಿಯೂ ಆಗುತ್ತಿದೆ. ಜಮಾ ಆಗುವ ಶಕ್ತಿಯಿಂದ ಸಮಾಪ್ತಿಯಾಗುವುದರ ಹೊರೆಯಿಲ್ಲ. ಅಂದಮೇಲೆ ಸದಾ ವರ್ತಮಾನವನ್ನು ನೆನಪಿಟ್ಟುಕೊಳ್ಳಿರಿ. ಯಾವಾಗ ಒಂದು ಕಡೆ ಹೊರೆಯಾಗುತ್ತದೆ, ಆಗ ಇನ್ನೊಂದು ಕಡೆಯಲ್ಲಿ ಸ್ವತಹವಾಗಿ ಹಗುರವಾಗಿ ಬಿಡುತ್ತದೆ. ಅಂದಮೇಲೆ ವರ್ತಮಾನದಲ್ಲಿ ಭಾರವಾಗಿದೆಯೆಂದರೆ ಹಿಂದಿನದು ಹಗುರವಾಗಿ ಬಿಡುತ್ತದೆಯಲ್ಲವೆ. ವರ್ತಮಾನದ ಪ್ರಾಪ್ತಿ ಸ್ವರೂಪವನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತೀರೆಂದರೆ ಎಲ್ಲವೂ ಹಗುರವಾಗಿ ಬಿಡುತ್ತದೆ. ಅದರಿಂದ ಹಿಂದಿನ ಲೆಕ್ಕಾಚಾರವನ್ನು ಹಗುರ ಮಾಡಿಕೊಳ್ಳಲು ಸಾಧನವಾಗಿದೆ - ವರ್ತಮಾನವನ್ನು ಶಕ್ತಿಶಾಲಿಗೊಳಿಸಿರಿ. ವರ್ತಮಾನವಿರುವುದೇ ಶಕ್ತಿಶಾಲಿ. ವರ್ತಮಾನದ ಪ್ರಾಪ್ತಿಯನ್ನು ಮುಂದಿಟ್ಟುಕೊಳ್ಳುತ್ತೀರೆಂದರೆ ಎಲ್ಲವೂ ಸಹಜವಾಗಿ ಬಿಡುತ್ತದೆ. ಹಿಂದಿನದು ಶೂಲದಿಂದ ಮುಳ್ಳಿನ ಸಮಾನವಾಗಿ ಬಿಡುತ್ತದೆ. ಏನು, ಏಕೆ, ಎನ್ನುವುದಿರುವುದಿಲ್ಲ. ಅದು ಹಿಂದಿನದಾಗಿದೆ. ಹಿಂದಕ್ಕೆ ಏಕೆ ನೋಡುವುದು! ಎಲ್ಲಿ ಲಗನ್ ಇದೆ. ಅಲ್ಲಿ ವಿಘ್ನವು ಹೆಚ್ಚು ಎನಿಸುವುದಿಲ್ಲ, ಆಟವೆನಿಸುತ್ತದೆ. ವರ್ತಮಾನದ ಖುಷಿಯ ಆಶೀರ್ವಾದದಿಂದ ಮತ್ತು ಔಷಧಿಯಿಂದ ಎಲ್ಲಾ ಲೆಕ್ಕಾಚಾರಗಳನ್ನು ಸಮಾಪ್ತಿಗೊಳಿಸಿರಿ.

ನಿಮಿತ್ತ ಶಿಕ್ಷಕಿಯರೊಂದಿಗೆ :-

ಸದಾ ಪ್ರತೀ ಹೆಜ್ಜೆಯಲ್ಲಿ ಸಫಲತೆಯ ಅನುಭವವನ್ನು ಮಾಡುವಿರಲ್ಲವೆ. ಅನುಭವಿ ಆತ್ಮರಾಗಿದ್ದೀರಲ್ಲವೆ! ಅನುಭವವೇ ಎಲ್ಲದಕ್ಕಿಂತಲೂ ದೊಡ್ಡ ಅಧಿಕಾರವಾಗಿದೆ. ಅನುಭವದ ಅಧಿಕಾರವಿರುವವರು ಪ್ರತೀ ಹೆಜ್ಜೆಯಲ್ಲಿ, ಪ್ರತೀ ಕಾರ್ಯದಲ್ಲಿ ಸಫಲರಾಗಿಯೇ ಇರುತ್ತಾರೆ. ಸೇವೆಗೆ ನಿಮಿತ್ತರಾಗುವ ಅವಕಾಶವು ಸಿಗುವುದೂ ಸಹ ಒಂದು ವಿಶೇಷತೆಯ ಚಿಹ್ನೆಯಾಗಿದೆ. ಯಾವ ಅವಕಾಶವು ಸಿಗುತ್ತದೆ, ಅದನ್ನೇ ಮುಂದುವರೆಸುತ್ತಿರಿ. ಸದಾ ನಿಮಿತ್ತರಾಗಿದ್ದು ಮುಂದುವರೆಯುವ ಮತ್ತು ಮುಂದುವರೆಸುವವರಾಗಿದ್ದೀರಿ. ಈ ನಿಮಿತ್ತಭಾವವೇ ಸಫಲತೆಯನ್ನು ಪ್ರಾಪ್ತಿ ಮಾಡಿಸುತ್ತದೆ. ನಿಮಿತ್ತ ಮತ್ತು ನಿರ್ಮಾಣದ ವಿಶೇಷತೆಯನ್ನು ಸದಾ ಜೊತೆಯಿಟ್ಟುಕೊಳ್ಳಿರಿ. ಇದೇ ವಿಶೇಷತೆಯು ಸದಾ ವಿಶೇಷವಿರುವವರನ್ನಾಗಿ ಮಾಡಿಸುತ್ತದೆ. ನಿಮಿತ್ತರಾಗುವ ಪಾತ್ರವು ಸ್ವಯಂಗೂ ಸಹ ಲಿಫ್ಟ್ ಕೊಡುತ್ತದೆ. ಅನ್ಯರಿಗೆ ನಿಮಿತ್ತರಾಗುವುದು ಅರ್ಥಾತ್ ಸ್ವಯಂ ಸಂಪನ್ನರಾಗುವುದು. ಧೃಡತೆಯಿಂದ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾ ಸಾಗಿರಿ. ಸಫಲತೆಯಿದ್ದೇ ಇದೆ, ಇದೇ ಧೃಡತೆಯಿಂದ ಸಫಲತೆಯು ತಾನಾಗಿಯೇ ಮುಂದೆ ಹೋಗುತ್ತದೆ. ಜನ್ಮವಾಗುತ್ತಿದ್ದಂತೆಯೇ ಸೇವಾಧಾರಿಯಾಗುವ ಸುವರ್ಣಾವಕಾಶವು ಸಿಕ್ಕಿದೆ, ಅಂದಮೇಲೆ ಅತೀ ದೊಡ್ಡ ಚಾನ್ಸ್ಲರ್ ಆಗಿ ಬಿಟ್ಟಿರಲ್ಲವೆ. ಬಾಲ್ಯದಿಂದಲೇ ಸೇವಾಧಾರಿಯ ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೀರಿ. ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೀರಿ. ಎಷ್ಟೊಂದು ಆತ್ಮರ ಶ್ರೇಷ್ಠ ಅದೃಷ್ಟವನ್ನು ರೂಪಿಸುವ ಕರ್ತವ್ಯಕ್ಕಾಗಿ ನಿಮಿತ್ತರಾಗಿ ಬಿಟ್ಟಿರಿ. ಅಂದಮೇಲೆ ಸದಾ ನೆನಪಿರಲಿ - ವಾಹ್! ನನ್ನ ಶ್ರೇಷ್ಠ ಅದೃಷ್ಟದ ಶ್ರೇಷ್ಠ ರೇಖೆಯೇ! ತಂದೆಯು ಸಿಕ್ಕಿದರು, ಸೇವೆ ಸಿಕ್ಕಿತು, ಸೇವಾ ಸ್ಥಾನವು ಸಿಕ್ಕಿತು ಮತ್ತು ಸೇವೆಯ ಜೊತೆ ಜೊತೆಗೆ ಶ್ರೇಷ್ಠಾತ್ಮರ ಶ್ರೇಷ್ಠ ಪರಿವಾರವು ಸಿಕ್ಕಿತು. ತಮಗೆ ಏನು ಸಿಕ್ಕಿಲ್ಲ, ರಾಜ್ಯಭಾಗ್ಯವೆಲ್ಲವೂ ಸಿಕ್ಕಿ ಬಿಟ್ಟಿತು! ಈ ಖುಷಿಯು ಸದಾ ಇರಲಿ. ವಿಧಿಯ ಮೂಲಕ ಸದಾ ವೃದ್ಧಿಯನ್ನು ಪಡೆಯುತ್ತಿರಿ. ನಿಮಿತ್ತ ಭಾವದ ವಿಧಿಯಿಂದ ಸೇವೆಯಲ್ಲಿ ವೃದ್ಧಿಯಾಗುತ್ತಿರುತ್ತದೆ.

ಕುಮಾರರೊಂದಿಗೆ :- ಕುಮಾರ ಜೀವನದಲ್ಲಿ ಉಳಿದುಕೊಳ್ಳುವುದು ಎಲ್ಲದಕ್ಕಿಂತಲೂ ದೊಡ್ಡ ಭಾಗ್ಯವೇ ಆಗಿದೆ. ಎಷ್ಟೊಂದು ಜಂಜಾಟಗಳಿಂದ ಪಾರಾಗಿ ಬಿಟ್ಟಿರಿ. ಕುಮಾರ ಅರ್ಥಾತ್ ಬಂಧನಮುಕ್ತ ಆತ್ಮರು. ಕುಮಾರ ಜೀವನವು ಬಂಧನ ಮುಕ್ತ ಜೀವನವಾಗಿದೆ. ಆದರೆ ಕುಮಾರ ಜೀವನದಲ್ಲಿಯೂ ಫ್ರೀ ಆಗಿರುವುದು ಎಂದರೆ ಹೊರೆಯನ್ನೇರಿಸಿಕೊಳ್ಳುವುದು. ಕುಮಾರರ ಪ್ರತಿ ಬಾಪ್ದಾದಾರವರ ಡೈರೆಕ್ಷನ್ ಇದೆ - ಲೌಕಿಕದಲ್ಲಿರುತ್ತಾ ಅಲೌಕಿಕ ಸೇವೆಯನ್ನು ಮಾಡಬೇಕು. ಲೌಕಿಕ ಸೇವೆಯು ಸಂಪರ್ಕವನ್ನು ರೂಪಿಸುವ ಸಾಧನವಾಗಿದೆ. ಇದರಲ್ಲಿ ಬ್ಯುಜಿಯಾಗಿರುತ್ತೀರೆಂದರೆ ಅಲೌಕಿಕ ಸೇವೆಯನ್ನು ಮಾಡಬಹುದು. ಲೌಕಿಕದಲ್ಲಿರುತ್ತಾ ಅಲೌಕಿಕ ಸೇವೆಯನ್ನು ಮಾಡಿರಿ, ಅದರಿಂದ ಬುದ್ಧಿಯು ಭಾರಿಯಾಗಿರುವುದಿಲ್ಲ. ಎಲ್ಲರಿಗೂ ತಮ್ಮ ಅನುಭವವನ್ನು ತಿಳಿಸುತ್ತಾ ಸೇವೆಯನ್ನು ಮಾಡಿರಿ. ಲೌಕಿಕ ಸೇವೆಯನ್ನು ಸೇವೆಯ ಸಾಧನವೆಂದು ತಿಳಿದುಕೊಂಡು ಮಾಡಿರಿ, ಆಗ ಲೌಕಿಕ ಸಾಧನವು ಬಹಳಷ್ಟು ಸೇವೆಯ ಅವಕಾಶವನ್ನು ಕೊಡಿಸುತ್ತದೆ. ಲಕ್ಷ್ಯವು ಈಶ್ವರೀಯ ಸೇವೆಯನ್ನು ಮಾಡುವುದಾಗಿದೆ ಆದರೆ ಇದು ಸಾಧನವಾಗಿದೆ. ಹೀಗೆ ತಿಳಿದುಕೊಂಡು ಮಾಡಿರಿ. ಕುಮಾರ ಅರ್ಥಾತ್ ಸಾಹಸವಂತರು. ಯಾರು ಬೇಕಾದರೂ ಅದನ್ನು ಮಾಡಬಹುದು. ಆದ್ದರಿಂದ ಬಾಪ್ದಾದಾರವರು ಸದಾ ಸಾಧನಗಳ ಮೂಲಕ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಸಲಹೆಯನ್ನು ಕೊಡುತ್ತಾರೆ. ಕುಮಾರ ಅರ್ಥಾತ್ ನಿರಂತರ ಯೋಗಿ ಅರ್ಥಾತ್ ಕುಮಾರರ ಪ್ರಪಂಚವೇ ಒಬ್ಬ ಬಾಬಾ ಆಗಿದ್ದಾರೆ. ಯಾವಾಗ ಬಾಬಾರವರೇ ಅವರ ಸಂಸಾರವಾಗಿದ್ದಾರೆ, ಅಂದಮೇಲೆ ಅದನ್ನು ಬಿಟ್ಟು ಬುದ್ಧಿಯು ಮತ್ತೆಲ್ಲಿಗೆ ಹೋಗುತ್ತದೆ! ಯಾವಾಗ ಒಬ್ಬರವರಾಗಿ ಬಿಟ್ಟರು, ಆಗ ಒಬ್ಬರದೇ ನೆನಪಿರುತ್ತದೆಯಲ್ಲವೆ ಮತ್ತು ಒಬ್ಬರನ್ನು ನೆನಪು ಮಾಡುವುದು ಬಹಳ ಸಹಜವಿದೆ. ಅನೇಕರಿಂದಂತು ಮುಕ್ತರಾಗಿ ಬಿಟ್ಟರು. ಒಬ್ಬರಲ್ಲಿಯೇ ಎಲ್ಲವೂ ಸಮಾವೇಶವಾಗಿದೆ! ಸದಾ ಪ್ರತೀ ಕರ್ಮದಿಂದ ಸೇವೆಯನ್ನು ಮಾಡಬೇಕು, ದೃಷ್ಟಿಯಿಂದ, ಮುಖದಿಂದ ಸೇವೆಯೇ ಸೇವೆ. ಯಾವುದರೊಂದಿಗೆ ಪ್ರೀತಿಯುಂಟಾಗುತ್ತದೆ, ಅದನ್ನು ಪ್ರತ್ಯಕ್ಷಗೊಳಿಸುವ ಉಮ್ಮಂಗವಿರುತ್ತದೆ. ಪ್ರತೀ ಹೆಜ್ಜೆಯಲ್ಲಿ ತಂದೆ ಹಾಗೂ ಸೇವೆಯು ಸದಾ ಜೊತೆಯಿರಲಿ. ಒಳ್ಳೆಯದು.

ಆಯ್ಕೆ ಮಾಡಿರುವ ವಿಶೇಷ ಮಹಾವಾಕ್ಯಗಳು – ಕರ್ಮ ಬಂಧನ ಮುಕ್ತ ಕರ್ಮಾತೀತ , ವಿದೇಹಿಯಾಗಿರಿ.

ವಿದೇಹಿ ಅಥವಾ ಕರ್ಮಾತೀತ ಸ್ಥಿತಿಯ ಅನುಭವವನ್ನು ಮಾಡುವುದಕ್ಕಾಗಿ -

1. ಅಲ್ಪಕಾಲದ ನನ್ನದು-ನನ್ನದೆನ್ನುವ ದೇಹ-ಅಭಿಮಾನದಿಂದ ಮುಕ್ತರಾಗಿರಿ.

2. ಲೌಕಿಕ ಮತ್ತು ಅಲೌಕಿಕ, ಕರ್ಮ ಮತ್ತು ಸಂಬಂಧವೆರಡರಲ್ಲಿಯೂ ಸ್ವಾರ್ಥ ಭಾವದಿಂದ ಮುಕ್ತರಾಗಿರಿ.

3. ಹಿಂದಿನ ಜನ್ಮದ ಕರ್ಮಗಳ ಲೆಕ್ಕಾಚಾರ ಅಥವಾ ವರ್ತಮಾನ ಪುರುಷಾರ್ಥದ ಬಲಹೀನತೆಯ ಕಾರಣದಿಂದ, ಯಾವುದೇ ವ್ಯರ್ಥ ಸ್ವಭಾವ-ಸಂಸ್ಕಾರಕ್ಕೆ ವಶರಾಗುವುದರಿಂದ ಮುಕ್ತರಾಗಿರಿ.

4. ಒಂದು ವೇಳೆ ಯಾವುದೇ ಸೇವೆಯ, ಸಂಘಟನೆಯ, ಪ್ರಕೃತಿಯ ಪರಿಸ್ಥಿತಿಯು ಸ್ವಸ್ಥಿತಿಯನ್ನು ಅಥವಾ ಶ್ರೇಷ್ಠ ಸ್ಥಿತಿಯನ್ನು ಏರುಪೇರು ಮಾಡುತ್ತದೆಯೆಂದರೆ, ಇದೂ ಸಹ ಬಂಧನಮುಕ್ತ ಸ್ಥಿತಿಯಲ್ಲ, ಈ ಬಂಧನದಿಂದಲೂ ಮುಕ್ತರಾಗಿರಿ.

5. ಹಳೆಯ ಪ್ರಪಂಚದಲ್ಲಿ ಹಳೆಯ ಅಂತಿಮ ಶರೀರದಲ್ಲಿ, ಯಾವುದೇ ಪ್ರಕಾರದ ವ್ಯಾಧಿಯು ತಮ್ಮ ಶ್ರೇಷ್ಠ ಸ್ಥಿತಿಯನ್ನು ಏರುಪೇರಿನಲ್ಲಿ ತರಬಾರದು - ಇದರಿಂದಲೂ ಮುಕ್ತರಾಗಿರಿ. ವ್ಯಾಧಿಯು ಬರುವುದು, ಇದೂ ಪೂರ್ವ ನಿಶ್ಚಿತವಿದೆ ಆದರೆ ಸ್ಥಿತಿಯು ಅಲುಗಾಡಿ ಬಿಡುವುದು ಬಂಧನಯುಕ್ತದ ಚಿಹ್ನೆಯಾಗಿದೆ. ಸ್ವಚಿಂತನೆ, ಜ್ಞಾನ ಚಿಂತನೆ, ಶುಭ ಚಿಂತಕನಾಗುವ ಚಿಂತನೆಗೆ ಬದಲು ಶರೀರದ ವ್ಯಾಧಿಯ ಚಿಂತನೆಯು ನಡೆಯುವುದು - ಇದರಿಂದ ಮುಕ್ತರಾಗಿರಿ, ಇದಕ್ಕೇ ಕರ್ಮಾತೀತ ಸ್ಥಿತಿಯೆಂದು ಹೇಳಲಾಗುತ್ತದೆ. ಕರ್ಮಯೋಗಿಯಾಗಿ ಕರ್ಮದ ಬಂಧನಗಳಿಂದ ಸದಾ ಭಿನ್ನ ಹಾಗೂ ಸದಾ ತಂದೆಗೆ ಪ್ರಿಯರಾಗಿರಿ - ಇದೇ ಕರ್ಮಾತೀತ ವಿದೇಹಿ ಸ್ಥಿತಿಯಾಗಿದೆ. ಕರ್ಮಾತೀತದ ಅರ್ಥವು ಇದಲ್ಲ - ಕರ್ಮದಿಂದಲೇ ಅತೀತರಾಗಿ ಬಿಡುವುದು. ಕರ್ಮದಿಂದ ಭಿನ್ನವಲ್ಲ, ಕರ್ಮದ ಬಂಧನಗಳಲ್ಲಿ ಸಿಲುಕಿಕೊಳ್ಳುವುದರಿಂದ ಭಿನ್ನರಾಗಿರಿ. ಯಾವುದೆಷ್ಟೇ ದೊಡ್ಡ ಕಾರ್ಯವೇ ಇರಲಿ ಆದರೆ ಹೀಗೆನಿಸಲಿ - ಹೇಗೆಂದರೆ ಆ ಕಾರ್ಯವನ್ನು ಮಾಡುತ್ತಿಲ್ಲ ಆದರೆ ಆಟವಾಡುತ್ತಿದ್ದೇವೆ. ಭಲೇ ಯಾವುದೇ ಪರಿಸ್ಥಿತಿಯು ಬರಲಿ, ಭಲೇ ಯಾವುದೇ ಆತ್ಮವು ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಕೊಳ್ಳುವವರು ಎದುರಿಸಬಹುದು, ಭಲೇ ಶರೀರದ ಕರ್ಮಭೋಗವು ತಮ್ಮ ಮುಂದೆ ಎದುರಿಸಲು ಬರುತ್ತಿರಲಿ ಆದರೆ ಅಲ್ಪಕಾಲದ ಕಾಮನೆಗಳಿಂದ ಮುಕ್ತರಾಗುವುದೇ ವಿದೇಹಿ ಸ್ಥಿತಿಯಾಗಿದೆ. ಎಲ್ಲಿಯವರೆಗೆ ಈ ದೇಹವಿದೆ, ಕರ್ಮೇಂದ್ರಿಯಗಳ ಜೊತೆ ಈ ಕರ್ಮ ಕ್ಷೇತ್ರದಲ್ಲಿ ಪಾತ್ರವನ್ನಭಿನಯಿಸುತ್ತಿದ್ದೀರಿ, ಅಲ್ಲಿಯವರೆಗೆ ಕರ್ಮವಿಲ್ಲದೆ ಸೆಕೆಂಡಿಗೂ ಇರಲು ಸಾಧ್ಯವಿಲ್ಲ. ಆದರೆ ಕರ್ಮವನ್ನು ಮಾಡುತ್ತಿದ್ದರೂ ಕರ್ಮದ ಬಂಧನಗಳಿಂದ ದೂರವಾಗಿರುವುದೇ ಕರ್ಮಾತೀತ ವಿದೇಹಿ ಸ್ಥಿತಿಯಾಗಿದೆ. ಅಂದಮೇಲೆ ಕರ್ಮೇಂದ್ರಿಯಗಳ ಮೂಲಕ ಕರ್ಮದ ಸಂಬಂಧದಲ್ಲಿ ಬರಬೇಕು, ಕರ್ಮದ ಬಂಧನದಲ್ಲಿ ಬಂಧಿತರಾಗಬಾರದು. ಕರ್ಮದ ವಿನಾಶಿ ಫಲದ ಇಚ್ಚೆಗಳಿಗೆ ವಶರಾಗಬಾರದು. ಕರ್ಮಾತೀತ ಎಂದರೆ ಕರ್ಮಕ್ಕೆ ವಶರಾಗುವವರಲ್ಲ ಆದರೆ ಮಾಲೀಕನಾಗಿದ್ದು, ಅಧಿಕಾರಿಯಾಗಿದ್ದು ಕರ್ಮೇಂದ್ರಿಯಗಳ ಸಂಬಂಧದಲ್ಲಿ ಬರಬೇಕು, ವಿನಾಶಿ ಕಾಮನೆಗಳಿಂದ ಭಿನ್ನವಾಗಿದ್ದು ಕರ್ಮೇಂದ್ರಿಯಗಳ ಮೂಲಕ ಕರ್ಮವನ್ನು ಮಾಡಿಸಿರಿ. ಆತ್ಮನು ಮಾಲೀಕನನ್ನು ಕರ್ಮವು ತನ್ನ ಅಧೀನನನ್ನಾಗಿ ಮಾಡಿಕೊಳ್ಳಬಾರದು. ಆದರೆ ಅಧಿಕಾರಿಯಾಗಿದ್ದು ಕರ್ಮವನ್ನು ಮಾಡಿಸುತ್ತಿರಿ. ಮಾಡಿಸುವವರಾಗಿದ್ದು ಕರ್ಮವನ್ನು ಮಾಡಿಸುವುದು - ಇದಕ್ಕೆ ಹೇಳಲಾಗುತ್ತದೆ ಕರ್ಮದ ಸಂಬಂಧದಲ್ಲಿ ಬರುವುದು. ಕರ್ಮಾತೀತ ಆತ್ಮನು ಸಂಬಂಧನದಲ್ಲಿ ಬರುತ್ತಾನೆ, ಬಂಧನದಲ್ಲಲ್ಲ. ಕರ್ಮಾತೀತ ಅರ್ಥಾತ್ ದೇಹ, ದೇಹದ ಸಂಬಂಧ, ಪದಾರ್ಥ, ಲೌಕಿಕವಾಗಿರಲಿ ಅಥವಾ ಅಲೌಲಿಕವೆರಡೂ ಬಂಧನದಿಂದ ಅತೀತ ಅರ್ಥಾತ್ ಭಿನ್ನರಾಗಿರುವುದು. ಅಧೀನತೆಯಿದೆಯೆಂದರೆ ಸಂಬಂಧವೂ ಬಂಧನವಾಗಿ ಬಿಡುತ್ತದೆ. ಕರ್ಮಾತೀತ ಸ್ಥಿತಿಯಲ್ಲಿ ಕರ್ಮ ಸಂಬಂಧ ಮತ್ತು ಕರ್ಮ ಬಂಧನದ ರಹಸ್ಯವನ್ನು ತಿಳಿದುಕೊಂಡಿರುವ ಕಾರಣದಿಂದ, ಸದಾ ಪ್ರತೀ ಮಾತಿನಲ್ಲಿಯೂ ಖುಷಿಯಾಗಿರುತ್ತಾರೆ. ಎಂದಿಗೂ ಬೇಸರವಾಗಿರುವುದಿಲ್ಲ. ಅವರು ತನ್ನ ಹಿಂದಿನ ಕರ್ಮಗಳ ಲೆಕ್ಕಾಚಾರಗಳ ಬಂಧನದಿಂದಲೂ ಮುಕ್ತರಾಗಿರುತ್ತಾರೆ. ಭಲೇ ಹಿಂದಿನ ಕರ್ಮಗಳ ಲೆಕ್ಕಾಚಾರದ ಫಲ ಸ್ವರೂಪವಾಗಿ - ತನುವಿನ ರೋಗವಿರಬಹುದು, ಮನಸ್ಸಿನ ಸಂಸಂಸ್ಕಾರವು ಅನ್ಯ ಆತ್ಮರ ಸಂಸ್ಕಾರಗಳೊಂದಿಗೆ ಘರ್ಷಣೆ ಇರುವುದಿರಬಹುದು. ಆದರೆ ಕರ್ಮಾತೀತನು ಕರ್ಮ ಭೋಗಕ್ಕೆ ವಶನಾಗದೆಯೇ ಮಾಲೀಕನಾಗಿದ್ದು ಲೆಕ್ಕಾಚಾರವನ್ನು ತೀರಿಸುತ್ತಾನೆ. ಕರ್ಮಯೋಗಿಯಾಗಿದ್ದು ಕರ್ಮ ಭೋಗವನ್ನು ಚುಕ್ತ ಮಾಡುವುದು ಕರ್ಮಾತೀನನಾಗುವ ಚಿಹ್ನೆಯಾಗಿದೆ. ಯೋಗದಿಂದ ಕರ್ಮಭೋಗವನ್ನು ಮುಗುಳ್ನಗುತ್ತಾ, ಶೂಲದಿಂದ ಮುಳ್ಳಿನ ಸಮಾನ ಮಾಡಿ ಭಸ್ಮ ಮಾಡುವುದು ಅರ್ಥಾತ್ ಕರ್ಮ ಭೋಗವನ್ನು ಸಮಾಪ್ತಿ ಮಾಡುವುದು. ಕರ್ಮಯೋಗದ ಸ್ಥಿತಿಯಿಂದ ಕರ್ಮ ಭೋಗವನ್ನು ಪರಿವರ್ತನೆ ಮಾಡಿ ಬಿಡುವುದೇ ಕರ್ಮಾತೀತ ಸ್ಥಿತಿಯಾಗಿದೆ. ವ್ಯರ್ಥ ಸಂಕಲ್ಪವೇ ಕರ್ಮ ಬಂಧನದ ಸೂಕ್ಷ್ಮ ಬಂಧನವಾಗಿದೆ. ಕರ್ಮಾತೀತ ಆತ್ಮನು ಕೆಟ್ಟದರಲ್ಲಿಯೂ ಒಳ್ಳೆಯದರ ಅನುಭವ ಮಾಡುತ್ತಾನೆ. ಅವರು ಹೇಳುತ್ತಾರೆ - ಏನಾಗುತ್ತಿದೆಯೋ ಅದು ಒಳ್ಳೆಯದು, ನಾನೂ ಸಹ ಒಳ್ಳೆಯವನು, ತಂದೆಯೂ ಒಳ್ಳೆಯವರು, ಡ್ರಾಮಾ ಸಹ ಒಳ್ಳೆಯದಾಗಿದೆ. ಈ ಸಂಕಲ್ಪವು ಬಂಧನವನ್ನು ತುಂಡರಿಸಲು ಕತ್ತರಿಯ ಕೆಲಸವನ್ನು ಮಾಡುತ್ತದೆ. ಬಂಧನವು ತುಂಡಾಯಿತೆಂದರೆ ಕರ್ಮಾತೀತರಾಗಿ ಬಿಡುತ್ತೀರಿ. ವಿದೇಹಿ ಸ್ಥಿತಿಯ ಅನುಭವವನ್ನು ಮಾಡಿಸುವುದಕ್ಕಾಗಿ ಇಚ್ಛಾ ಮಾತ್ರಂ ಅವಿದ್ಯಾ ಆಗಿರಿ. ಇಂತಹ ಅಲ್ಪಕಾಲದ ಇಚ್ಛೆಯಿಂದ ಮುಕ್ತನಾಗಿರುವ ಆತ್ಮವು, ಸರ್ವ ಇಚ್ಛೆಗಳನ್ನು ಪೂರ್ಣಗೊಳಿಸುವ ತಂದೆಯ ಸಮಾನ `ಕಾಮಧೇನು' ಆಗಿರುತ್ತಾರೆ. ಹೇಗೆ ತಂದೆಯ ಸರ್ವ ಭಂಡಾರ, ಸರ್ವ ಖಜಾನೆಗಳು ಸದಾ ತುಂಬಿರುತ್ತದೆ, ಅಪ್ರಾಪ್ತಿಯ ಹೆಸರು-ಚಿಹ್ನೆಯೂ ಇರುವುದಿಲ್ಲ. ಇದೇ ರೀತಿ ತಂದೆಯ ಸಮಾನ ಸದಾ ಹಾಗೂ ಸರ್ವ ಖಜಾನೆಗಳಿಂದ ಸದಾ ಸಂಪನ್ನರಾಗಿರಿ. ಸೃಷ್ಟಿ ಚಕ್ರದಲ್ಲಿ ಪಾತ್ರವನ್ನಭಿನಯಿಸುತ್ತಿದ್ದರೂ ಅನೇಕ ದುಃಖದ ಚಕ್ರಗಳಿಂದ ಮುಕ್ತರಾಗಿರುವುದೇ ಜೀವನ್ಮುಕ್ತ ಸ್ಥಿತಿಯಾಗಿದೆ. ಇಂತಹ ಸ್ಥಿತಿಯ ಅನುಭವವನ್ನು ಮಾಡುವುದಕ್ಕಾಗಿ ಅಧಿಕಾರಿಯಾಗಿದ್ದು, ಮಾಲೀಕನಾಗಿದ್ದು ಸರ್ವ ಕರ್ಮೇಂದ್ರಿಯಗಳಿಂದ ಕರ್ಮವನ್ನು ಮಾಡಿಸುವವರಾಗಿರಿ. ಕರ್ಮದಲ್ಲಿ ಬನ್ನಿರಿ ನಂತರ ಕರ್ಮವು ಪೂರ್ಣವಾಗುತ್ತಿದ್ದಂತೆಯೇ ಭಿನ್ನವಾಗಿ ಬಿಡಿ - ಇದೇ ವಿದೇಹಿ ಸ್ಥಿತಿಯ ಅಭ್ಯಾಸ. ಆತ್ಮದ ಆದಿ ಮತ್ತು ಅನಾದಿ ಸ್ವರೂಪವು ಸ್ವತಂತ್ರವಾಗಿರುವುದಾಗಿದೆ. ಆತ್ಮವು ರಾಜನಾಗಿದೆ, ಮಾಲೀಕನಾಗಿದ್ದಾನೆ. ಮನಸ್ಸಿನ ಬಂಧನವೂ ಇಲ್ಲ. ಒಂದು ವೇಳೆ ಮನಸ್ಸಿನ ಬಂಧನವೂ ಇದೆಯೆಂದರೆ, ಈ ಒಂದು ಬಂಧನವು ಅನೇಕ ಬಂಧನಗಳನ್ನು ತೆಗೆದುಕೊಂಡು ಬರುತ್ತದೆ. ಆದ್ದರಿಂದ ಸ್ವರಾಜ್ಯ ಅಧಿಕಾರಿ ಅರ್ಥಾತ್ ಬಂಧನಮುಕ್ತ ರಾಜರಾಗಿರಿ. ಇದಕ್ಕಾಗಿ ಬ್ರೇಕ್ ಶಕ್ತಿಶಾಲಿಯಾಗಿ ಇಟ್ಟುಕೊಳ್ಳಿರಿ, ಏನನ್ನು ನೋಡಬೇಕೆಂದು ಬಯಸುತ್ತೀರಿ ಅದನ್ನೇ ನೋಡಿರಿ, ಏನು ಕೇಳಬೇಕೋ ಅದನ್ನೇ ಕೇಳಬೇಕು - ಇಷ್ಟೂ ನಿಯಂತ್ರಣಾ ಶಕ್ತಿಯಿರಲಿ, ಆಗಲೇ ಅಂತ್ಯದಲ್ಲಿ ಪಾಸ್-ವಿತ್-ಆನರ್ ಆಗಿ ಬಿಡುತ್ತೀರಿ ಅರ್ಥಾತ್ ಮೊದಲ ದರ್ಜೆಯಲ್ಲಿ ಬರಲು ಸಾಧ್ಯವಾಗುತ್ತದೆ.

ವರದಾನ:
ಪವಿತ್ರತೆಯನ್ನು ಆದಿ-ಅನಾದಿ ವಿಶೇಷ ಗುಣದ ರೂಪದಲ್ಲಿ ಸಹಜವಾಗಿ ತಮ್ಮದಾಗಿಸಿಕೊಳ್ಳುವ ಪೂಜ್ಯಾತ್ಮ ಭವ.

ಪೂಜ್ಯನೀಯರಾಗುವ ವಿಶೇಷ ಆಧಾರವು ಪವಿತ್ರತೆಯ ಮೇಲಿದೆ. ಸರ್ವ ಪ್ರಕಾರದ ಪವಿತ್ರತೆಯನ್ನು ಎಷ್ಟು ತಮ್ಮದಾಗಿಸಿಕೊಳ್ಳುತ್ತೀರಿ, ಅಷ್ಟೂ ಸರ್ವ ಪ್ರಕಾರದಿಂದ ಪೂಜ್ಯನೀಯರಾಗುತ್ತೀರಿ. ಯಾರು ವಿಧಿ ಪೂರ್ವಕವಾಗಿ ಆದಿ-ಅನಾದಿ ವಿಶೇಷ ಗುಣದ ರೂಪದಿಂದ ಪವಿತ್ರತೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ, ಅವರದೇ ವಿಧಿಪೂರ್ವಕ ಪೂಜೆಯಾಗುತ್ತದೆ. ಯಾರು ಜ್ಞಾನಿ ಮತ್ತು ಅಜ್ಞಾನಿ ಆತ್ಮರ ಸಂಪರ್ಕದಲ್ಲಿ ಬರುತ್ತಾ ಪವಿತ್ರ ವೃತ್ತಿ, ದೃಷ್ಟಿ, ಪ್ರಕಂಪನಗಳಿಂದ ಯಥಾರ್ಥ ಸಂಪರ್ಕ-ಸಂಬಂಧವನ್ನು ನಿಭಾಯಿಸುತ್ತಾರೆ, ಸ್ವಪ್ನದಲ್ಲಿಯೂ ಯಾರ ಪವಿತ್ರತೆಯು ಖಂಡನೆಯಾಗುವುದಿಲ್ಲ - ಅವರೇ ವಿಧಿಪೂರ್ವಕ ಪೂಜ್ಯರು ಆಗುತ್ತಾರೆ.

ಸ್ಲೋಗನ್:
ವ್ಯಕ್ತದಲ್ಲಿರುತ್ತಾ ಅವ್ಯಕ್ತ ಫರಿಶ್ತೆಯಾಗಿದ್ದು ಸೇವೆಯನ್ನು ಮಾಡುತ್ತೀರೆಂದರೆ, ವಿಶ್ವ ಕಲ್ಯಾಣದ ಕಾರ್ಯವು ತೀವ್ರ ಗತಿಯಿಂದ ಸಂಪನ್ನವಾಗುತ್ತದೆ.


ಬ್ರಹ್ಮಾ ತಂದೆಯ ಸಮಾನರಾಗುವುದಕ್ಕಾಗಿ ವಿಶೇಷ ಪುರುಷಾರ್ಥ -

ಬ್ರಹ್ಮಾ ತಂದೆಯೊಂದಿಗೆ ಪ್ರೀತಿಯಿದೆಯೆಂದರೆ ಬ್ರಹ್ಮಾ ತಂದೆಯ ಸಮಾನ ಫರಿಶ್ತೆಯಾಗಿರಿ. ಸದಾ ತಮ್ಮ ಪ್ರಕಾಶತೆಯ ಫರಿಶ್ತಾ ಸ್ವರೂಪವು ಮುಂದೆ ಕಾಣಿಸಲಿ - ಹೀಗೆ ಆಗಬೇಕು ಮತ್ತು ಭವಿಷ್ಯ ರೂಪವೂ ಕಾಣಿಸಲಿ. ಈಗ ಇದನ್ನು ಬಿಟ್ಟೆನು ಮತ್ತು ಅದನ್ನು ತೆಗೆದುಕೊಂಡೆನು. ಯಾವಾಗ ಇಂತಹ ಅನುಭೂತಿ ಆಗುತ್ತದೆ, ಆಗ ತಿಳಿಯಿರಿ - ಸಂಪೂರ್ಣತೆ ಸಮೀಪದಲ್ಲಿದ್ದೇನೆ.