10.09.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಎಷ್ಟು ಸಮಯ ತಂದೆಯ ನೆನಪಿನಲ್ಲಿರುತ್ತೀರೋ ಅಷ್ಟು ಸಮಯ ಸಂಪಾದನೆಯೇ ಸಂಪಾದನೆಯಿದೆ. ನೆನಪಿನಿಂದಲೇ
ನೀವು ತಂದೆಯ ಸಮೀಪ ಬರುತ್ತಾ ಹೋಗುತ್ತೀರಿ.”
ಪ್ರಶ್ನೆ:
ಯಾವ ಮಕ್ಕಳು
ನೆನಪಿನಲ್ಲಿರುವುದಿಲ್ಲವೋ ಅವರಿಗೆ ಯಾವ ಮಾತಿನಲ್ಲಿ ಸಂಕೋಚವಾಗುತ್ತದೆ?
ಉತ್ತರ:
ತಮ್ಮ
ಚಾರ್ಟನ್ನಿಡುವುದು ಅವರಿಗೆ ನಾಚಿಕೆ ಆಗುತ್ತದೆ. ನಾವು ಸತ್ಯವನ್ನು ಬರೆದರೆ ತಂದೆಯು ಏನು ಹೇಳುವರೋ
ಎಂದು ತಿಳಿಯುತ್ತಾರೆ. ಆದರೆ ಸತ್ಯ-ಸತ್ಯವಾದ ಚಾರ್ಟನ್ನು ಬರೆಯುವುದರಲ್ಲಿಯೇ ಮಕ್ಕಳ ಕಲ್ಯಾಣವಿದೆ.
ಚಾರ್ಟ್ ಬರೆಯುವುದರಲ್ಲಿ ಬಹಳ ಲಾಭವಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ. ಮಕ್ಕಳೇ ಇದರಲ್ಲಿ
ಸಂಕೋಚ ಪಡಬೇಡಿ.
ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಈಗ ನೀವು ಮಕ್ಕಳು 15 ನಿಮಿಷಕ್ಕೆ ಮೊದಲೇ
ಬಂದು ಇಲ್ಲಿ ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ. ಈಗ ಮತ್ತ್ಯಾವುದೇ ಕೆಲಸವಂತೂ ಇಲ್ಲ. ತಂದೆಯ
ನೆನಪಿನಲ್ಲಿಯೇ ಬಂದು ಕುಳಿತುಕೊಳ್ಳುತ್ತೀರಿ. ಭಕ್ತಿಮಾರ್ಗದಲ್ಲಂತೂ ತಂದೆಯ ಪರಿಚಯವಿರುವುದಿಲ್ಲ.
ಇಲ್ಲಿ ತಂದೆಯ ಪರಿಚಯ ಸಿಕ್ಕಿದೆ ಮತ್ತು ತಂದೆಯು ತಿಳಿಸುತ್ತಾರೆ. ನನ್ನೊಬ್ಬನನ್ನೇ ನೆನಪು ಮಾಡಿ,
ನಾನಂತೂ ಎಲ್ಲಾ ಮಕ್ಕಳ ತಂದೆಯಾಗಿದ್ದೇನೆ. ತಂದೆಯನ್ನು ನೆನಪು ಮಾಡುವುದರಿಂದ ಆಸ್ತಿಯು ತಾನಾಗಿಯೇ
ನೆನಪು ಬರಬೇಕು. ನೀವು ಚಿಕ್ಕ ಮಕ್ಕಳಂತೂ ಅಲ್ಲ ಅಲ್ಲವೇ? ಭಲೆ ನಾನು 5 ತಿಂಗಳಿನ ಮಗು ಅಥವಾ 2
ತಿಂಗಳಿನ ಮಗುವಾಗಿದ್ದೇನೆಂದು ಬರೆಯುತ್ತಾರೆ. ಆದರೆ ನಿಮ್ಮ ಕರ್ಮೇಂದ್ರಿಯಗಳಂತೂ ದೊಡ್ಡದಾಗಿವೆ.
ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇಲ್ಲಿ ತಂದೆ ಮತ್ತು ಆಸ್ತಿಯ ನೆನಪಿನಲ್ಲಿ
ಕುಳಿತುಕೊಳ್ಳಬೇಕು. ನಿಮಗೆ ಗೊತ್ತಿದೆ. ನಾವು ನರನಿಂದ ನಾರಾಯಣರಾಗುವ ಪುರುಷಾರ್ಥದಲ್ಲಿ
ತತ್ಪರರಾಗಿದ್ದೇವೆ ಅಥವಾ ಸ್ವರ್ಗದಲ್ಲಿ ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ. ಅಂದಾಗ
ನಾವು ಇಲ್ಲಿ ಉಳಿದಂತೆ ಎಷ್ಟು ಸಮಯ ನೆನಪು ಮಾಡಿದೆವು ಎಂಬುದನ್ನು ಮಕ್ಕಳು ಬರೆದುಕೊಳ್ಳಬೇಕು.
ಬರೆಯುವುದರಿಂದ ಪ್ರತಿಯೊಬ್ಬರೂ ಎಷ್ಟು ಸಮಯ ನೆನಪಿನಲ್ಲಿರುತ್ತಾರೆಂದು ತಂದೆಗೆ ಗೊತ್ತಿರುತ್ತದೆ
ಎಂದು ಸುಮ್ಮನಿರುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಚಾರ್ಟ್ನಿಂದ ತಿಳಿಯಬಹುದಾಗಿದೆ. ಈಗ ತಂದೆಯು
ಬರುತ್ತಾರೆ ಎಂಬುದು ಬುದ್ಧಿಯಲ್ಲಿದ್ದರೂ ಸಹ ಇದೂ ನೆನಪಾಯಿತಲ್ಲವೆ! ಎಷ್ಟು ಸಮಯ ನೆನಪು
ಮಾಡಿದೆವೆಂಬುದನ್ನು ಸತ್ಯವಾಗಿ ಚಾರ್ಟ್ನಲ್ಲಿ ಬರೆಯಿರಿ. ಅಸತ್ಯವನ್ನು ಬರೆದರೆ ಇನ್ನೂ ಒಂದಕ್ಕೆ
ನೂರರಷ್ಟು ಪಾಪವಾಗುತ್ತದೆ. ಇನ್ನೂ ನಷ್ಟವಾಗಿ ಬಿಡುತ್ತದೆ. ಆದ್ದರಿಂದ ಸತ್ಯವನ್ನು ಬರೆಯಬೇಕು.
ಎಷ್ಟು ನೆನೆಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಇದನ್ನೂ
ತಿಳಿದುಕೊಂಡಿದ್ದೀರಿ - ನಾವು ಸಮೀಪ ಬರುತ್ತಾ ಹೋಗುತ್ತೇವೆ. ಕೊನೆಗೆ ಯಾವಾಗ ನೆನಪು
ಪೂರ್ಣವಾಗುವುದೋ ಆಗ ನಾವು ತಂದೆಯ ಬಳಿ ಹೊರಟು ಹೋಗುತ್ತೇವೆ ಮತ್ತೆ ಕೆಲವರು ಅಲ್ಲಿಂದ ತಕ್ಷಣ ಹೊಸ
ಪ್ರಪಂಚದಲ್ಲಿ ಬಂದು ಪಾತ್ರವನ್ನಭಿನಯಿಸುತ್ತಾರೆ. ಇನ್ನೂ ಕೆಲವರು ಅಲ್ಲಿಯೇ (ಪರಮಧಾಮ)
ಕುಳಿತಿರುತ್ತಾರೆ. ಅಲ್ಲಿ ಯಾವುದೇ ಸಂಕಲ್ಪವಂತೂ ಬರುವುದಿಲ್ಲ. ಅದು ಮುಕ್ತಿಧಾಮ, ಸುಖ-ದುಃಖದಿಂದ
ಭಿನ್ನವಾಗಿದೆ. ಸುಖಧಾಮದಲ್ಲಿ ಹೋಗುವುದಕ್ಕಾಗಿ ಈಗ ನೀವು ಪುರುಷಾರ್ಥ ಮಾಡುತ್ತೀರಿ. ನೀವು ಎಷ್ಟು
ನೆನಪು ಮಾಡುವಿರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ. ನೆನಪಿನ ಚಾರ್ಟ್ ಇಡುವುದರಿಂದಲೇ ಜ್ಞಾನದ
ಧಾರಣೆಯೂ ಸಹ ಚೆನ್ನಾಗಿ ಆಗುತ್ತದೆ. ಚಾರ್ಟ್ ಇಡುವುದರಲ್ಲಿ ಲಾಭವೇ ಇದೆ. ತಂದೆಗೆ ಗೊತ್ತಿದೆ.
ನೆನಪಿನಲ್ಲಿರದ ಕಾರಣ ಬರೆಯುವುದರಲ್ಲಿ ನಾಚಿಕೆಯಾಗುತ್ತದೆ. ತಂದೆಯು ಏನು ಹೇಳುತ್ತಾರೆ,
ಮುರುಳಿಯಲ್ಲಿ ತಿಳಿಸಿ ಬಿಡುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ಇದರಲ್ಲಿ ನಾಚಿಕೆಯ
ಮಾತೇನಿದೆ? ನಾನು ನೆನಪು ಮಾಡುತ್ತೇನೆಯೇ ಅಥವಾ ಇಲ್ಲವೆ ಎಂದು ಪ್ರತಿಯೊಬ್ಬರೂ ಆಂತರಿಕವಾಗಿ
ತಿಳಿದುಕೊಳ್ಳಬಹುದು. ಕಲ್ಯಾಣಕಾರಿ ತಂದೆಯಂತೂ ತಿಳಿಸುತ್ತಾರೆ. ಬರೆದರೆ ನಿಮ್ಮದೇ ಕಲ್ಯಾಣವಾಗುವುದು.
ತಂದೆಯು ಬರುವವರೆಗೆ ಅಷ್ಟೂ ಸಮಯ ನೆನಪಿನಲ್ಲಿ ಕುಳಿತಿದ್ದೇನೆ. ಆ ನೆನಪಿನ ಚಾರ್ಟ್ ಎಷ್ಟಿತ್ತು?
ಹೀಗೆ ಅಂತರವನ್ನು ನೋಡಿಕೊಳ್ಳಬೇಕು. ಪ್ರಿಯವಾದ ವಸ್ತುವನ್ನಂತೂ ಬಹಳ ನೆನಪು ಮಾಡಲಾಗುತ್ತದೆ. ಹೇಗೆ
ಕುಮಾರ-ಕುಮಾರಿಯ ನಿಶ್ಚಿತಾರ್ಥವಾಗುತ್ತದೆಯೆಂದರೆ ಮನಸ್ಸಿನಲ್ಲಿ ಪರಸ್ಪರ ಒಬ್ಬರಿಗೆ ಇನ್ನೊಬ್ಬರ
ನೆನಪು ನಿಂತು ಬಿಡುತ್ತದೆ. ನಂತರ ವಿವಾಹವಾದಾಗ ಇನ್ನೂ ಪಕ್ಕಾ ಆಗಿ ಬಿಡುತ್ತದೆ. ನೋಡದಿದ್ದರೂ ಸಹ
ನಮ್ಮ ನಿಶ್ಚಿತಾರ್ಥವಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಈಗ ನೀವು ಮಕ್ಕಳಿಗೆ ಗೊತ್ತಿದೆ. ಶಿವ
ತಂದೆಯನ್ನು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಭಲೆ ನೋಡಿಲ್ಲ ಆದರೆ ಬುದ್ಧಿಯಿಂದಂತೂ
ಅರಿತುಕೊಳ್ಳಬಹುದು. ಅವರು ನಾಮ-ರೂಪದಿಂದ ಭಿನ್ನವಾಗಿದ್ದಾರೆ ಎಂದು ತಿಳಿಯುತ್ತಾರೆ. ಹಾಗಿದ್ದರೆ
ಅವರ ಪೂಜೆಯನ್ನೇಕೆ ಮಾಡುತ್ತೀರಿ? ನೆನಪೇಕೆ ಮಾಡುತ್ತೀರಿ? ನಾಮ ರೂಪದಿಂದ ಭಿನ್ನವಾದ ಯಾವುದೇ
ವಸ್ತುವಿರುವುದಿಲ್ಲ. ಅವಶ್ಯವಾಗಿ ವಸ್ತುವನ್ನು ನೋಡಿದಾಗಲೇ ಅದರ ವರ್ಣನೆ ಮಾಡಲಾಗುತ್ತದೆ.
ಆಕಾಶವನ್ನು ನೋಡುತ್ತಾರಲ್ಲವೆ. ಬೇಹಂತ್ ಎಂದು ಹೇಳಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿ
ಭಗವಂತನನ್ನು ಹೇ ಭಗವಂತ ಎಂದು ನೆನಪು ಮಾಡುತ್ತಾರೆ. ಅಂದಾಗ ಬೇಹಂತ್ ಎಂದು ಹೇಳುವುದಿಲ್ಲ. ಹೇ
ಭಗವಂತ ಎಂದು ಹೇಳಿದಾಗ ತಕ್ಷಣ ಅವರ ನೆನಪು ಬರುತ್ತದೆ. ಅಂದಮೇಲೆ ಅವಶ್ಯವಾಗಿ ಯಾವುದೋ ರೂಪವಿದೆ.
ಆತ್ಮವನ್ನು ಅರಿತುಕೊಳ್ಳಲಾಗುತ್ತದೆಯೇ ಹೊರತು ಸ್ಥೂಲ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ.
ಎಲ್ಲಾ ಆತ್ಮಗಳಿಗೆ ಒಬ್ಬರೇ ತಂದೆಯಾಗಿದ್ದಾರೆ. ಅವರನ್ನು ಬುದ್ಧಿಯಿಂದ ಅರಿತುಕೊಳ್ಳಬೇಕಾಗುತ್ತದೆ.
ನೀವು ಮಕ್ಕಳಿಗೆ ಗೊತ್ತಿದೆ. ತಂದೆಯು ಓದಿಸುತ್ತಾರೆ. ಅವರು ಬಂದು ಓದಿಸುತ್ತಾರೆಂದು ಮೊದಲಿಗೆ
ಗೊತ್ತಿರಲಿಲ್ಲ. ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಕೃಷ್ಣನನ್ನಂತೂ ಈ ಕಣ್ಣುಗಳಿಂದ
ನೋಡಬಹುದು. ಆದ್ದರಿಂದ ಕೃಷ್ಣನಿಗೆ ಬೇಹಂತ್, ನಾಮ ರೂಪದಿಂದ ಭಿನ್ನವೆಂದು ಹೇಳಲು ಸಾಧ್ಯವಿಲ್ಲ.
ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಕೃಷ್ಣನು ಎಂದೂ ಹೇಳುವುದಿಲ್ಲ. ಕೃಷ್ಣನಂತೂ
ಸಮ್ಮುಖದಲ್ಲಿದ್ದಾರೆ. ಕೃಷ್ಣನಿಗೆ ತಂದೆಯೆಂತಲೂ ಹೇಳುವುದಿಲ್ಲ. ಮಾತೆಯರು ಕೃಷ್ಣನನ್ನು ಮಗುವೆಂದು
ತಿಳಿದು ಮಡಿಲಿನಲ್ಲಿ ಕುಳ್ಳರಿಸಿಕೊಳ್ಳುತ್ತಾರೆ. ಜನ್ಮಾಷ್ಟಮಿಯಲ್ಲಂತೂ ಪುಟ್ಟ ಕೃಷ್ಣನನ್ನು
ತೊಟ್ಟಿಲಲ್ಲಿ ತೂಗುತ್ತಾರೆ. ಅಂದಾಗ ಕೃಷ್ಣನು ಸದಾ ಚಿಕ್ಕವನಾಗಿಯೇ ಇರುತ್ತಾನೆಯೇ? ಮತ್ತೆ ರಾಸ
ಲೀಲೆಯನ್ನು ಮಾಡುತ್ತಾರೆ. ಅಂದಾಗ ಅವಶ್ಯವಾಗಿ ಸ್ವಲ್ಪ ದೊಡ್ಡವನಾದನು ನಂತರದ ಅದಕ್ಕಿಂತಲೂ
ದೊಡ್ಡವನಾದನೆ ಅಥವಾ ಏನಾದನು, ಎಲ್ಲಿ ಹೋದನು ಎಂಬುದು ಯಾರಿಗೂ ಗೊತ್ತಿಲ್ಲ. ಸದಾ ಚಿಕ್ಕ ಶರೀರವು
ಹಾಗೆಯೇ ಇರುವುದಿಲ್ಲ ಅಲ್ಲವೆ. ಇದನ್ನು ವಿಚಾರವೇ ಮಾಡುವುದಿಲ್ಲ. ಈ ಪೂಜೆ ಇತ್ಯಾದಿಗಳನ್ನು ಮಾಡುವ
ಪದ್ಧತಿಯೇ ನಡೆದು ಬರುತ್ತದೆ. ಜ್ಞಾನವು ಯಾರಲ್ಲಿಯೂ ಇಲ್ಲ. ಕೃಷ್ಣನು ಕಂಸ ಪುರಿಯಲ್ಲಿ ಜನ್ಮ
ತೆಗೆದುಕೊಂಡರೆಂದು ತೋರಿಸುತ್ತಾರೆ. ಈಗ ಕಂಸ ಪುರಿಯ ಮಾತೇ ಇಲ್ಲ. ಯಾರಿಗೂ ವಿಚಾರವೇ
ನಡೆಯುವುದಿಲ್ಲ. ಎಲ್ಲಿ ನೋಡಿದರಲ್ಲಿ ಕೃಷ್ಣನೇ ಕೃಷ್ಣನಿದ್ದಾನೆಂದು ಭಕ್ತರು ಹೇಳುತ್ತಾರೆ. ನಂತರ
ಕೃಷ್ಣನಿಗೆ ಸ್ನಾನವನ್ನೂ ಮಾಡಿಸುತ್ತಾರೆ, ತಿನ್ನಿಸುತ್ತಾರೆ. ಕೃಷ್ಣನಂತೂ ತಿನ್ನುವುದಿಲ್ಲ.
ಕೃಷ್ಣನ ಮೂರ್ತಿಯ ಮುಂದೆ ಇಡುತ್ತಾರೆ. ಮತ್ತೆ ತಾವೇ ತಿನ್ನುತ್ತಾರೆ. ಇದು ಭಕ್ತಿಮಾರ್ಗವಾಯಿತಲ್ಲವೆ.
ಶ್ರೀನಾಥ ದ್ವಾರದಲ್ಲಿ ಅಷ್ಟೊಂದು ಭೋಗವನ್ನಿಡುತ್ತಾರೆ. ಶ್ರೀನಾಥನಂತೂ ತಿನ್ನುವುದಿಲ್ಲ. ಮತ್ತೆ
ಅದನ್ನು ತಾವೇ ತಿನ್ನುತ್ತಾರೆ. ದೇವಿಯರ ಪೂಜೆಯಲ್ಲಿಯೂ ಇದೇ ರೀತಿ ಮಾಡುತ್ತಾರೆ. ಮತ್ತೆ ತಾವೇ
ದೇವಿಯರ ಮೂರ್ತಿಯನ್ನು ಮಾಡುತ್ತಾರೆ. ನಂತರ ಪೂಜೆ ಮಾಡಿ ನೀರಿನಲ್ಲಿ ಮುಳುಗಿಸಿ ಬಿಡುತ್ತಾರೆ.
ಆಭರಣಗಳನ್ನು ಬಿಚ್ಚಿ ನೀರಿನಲ್ಲಿ ಮುಳುಗಿಸುತ್ತಾರೆ ಮತ್ತೆ ಅಲ್ಲಿ ಅನೇಕರಿರುತ್ತಾರೆ. ಯಾರಿಗೇನು
ಕೈಗೆ ಸಿಗುತ್ತದೆಯೋ ಅದನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚಿನದಾಗಿ ದೇವಿಯರ ಪೂಜೆ ಮಾಡುತ್ತಾರೆ.
ಲಕ್ಷ್ಮೀ ಮತ್ತು ದುರ್ಗಾ ಇಬ್ಬರ ಮೂರ್ತಿಗಳನ್ನು ಮಾಡುತ್ತಾರೆ. ದೊಡ್ಡ ತಾಯಿ (ಬ್ರಹ್ಮ)ಯು ಇಲ್ಲಿ
ಕುಳಿತಿದ್ದಾರಲ್ಲವೆ. ಇವರಿಗೆ ಬ್ರಹ್ಮಪುತ್ರನೆಂದು ಹೇಳುತ್ತಾರೆ. ತಿಳಿಯುತ್ತಾರಲ್ಲವೆ - ಈ ಜನ್ಮ
ಮತ್ತು ಭವಿಷ್ಯದ ರೂಪದ ಪೂಜೆ ಮಾಡುತ್ತಿದ್ದಾರೆ. ಎಷ್ಟು ವಿಚಿತ್ರವಾದ ನಾಟಕವಾಗಿದೆ. ಇಂತಿಂತಹ
ಮಾತುಗಳು ಶಾಸ್ತ್ರಗಳಲ್ಲಿ ಬರುವುದಿಲ್ಲ. ಇದು ಪ್ರತ್ಯಕ್ಷ ಚಟುವಟಿಕೆಯಾಗಿದೆ. ನೀವು ಮಕ್ಕಳಿಗೆ ಈಗ
ಜ್ಞಾನವಿದೆ. ಎಲ್ಲದಕ್ಕಿಂತ ಹೆಚ್ಚಿನದಾಗಿ ಆತ್ಮಗಳ ಚಿತ್ರಗಳನ್ನು ಮಾಡಿದ್ದಾರೆ. ರುದ್ರ ಯಜ್ಞವನ್ನು
ರಚಿಸಿದಾಗ ಲಕ್ಷಾಂತರ ಸಾಲಿಗ್ರಾಮಗಳನ್ನು ಮಾಡುತ್ತಾರೆ. ಎಂದೂ ಲಕ್ಷಾಂತರ ದೇವಿಯರ ಚಿತ್ರವನ್ನು
ಮಾಡುವುದಿಲ್ಲ. ದೇವಿಯರನ್ನಂತೂ ಎಷ್ಟು ಮಂದಿ ಪೂಜಾರಿಗಳಿರುತ್ತಾರೆಯೋ ಅಷ್ಟು ಮಂದಿ ದೇವಿಯರನ್ನು
ಮಾಡುತ್ತಾರೆ. ಆದರೆ ಸಾಲಿಗ್ರಾಮಗಳನ್ನಂತೂ ಒಂದೇ ಸಮಯದಲ್ಲಿ ಲಕ್ಷಾಂತರ ಸಾಲಿಗ್ರಾಮಗಳನ್ನು
ಮಾಡುತ್ತಾರೆ. ಹೇಗೆ ದೇವಿಯರ ಪೂಜೆಯು ನಿಗಧಿತ ಸಮಯದಲ್ಲಿ ಆಗುತ್ತದೆ. ಆದರೆ ಸಾಲಿಗ್ರಾಮಗಳಿಗೆ
ಯಾವುದೇ ನಿಗಧಿಯಾದ ದಿನವಿರುವುದಿಲ್ಲ. ಯಾವುದೇ ಮುಹೂರ್ತ ಇತ್ಯಾದಿಯಿರುವುದಿಲ್ಲ. ವ್ಯಾಪಾರಿಗಳಿಗೆ
ರುದ್ರ ಅಥವಾ ಸಾಲಿಗ್ರಾಮಗಳನ್ನು ರಚಿಸಬೇಕೆಂದು ವಿಚಾರದಲ್ಲಿ ಬಂದಾಗ ಬ್ರಾಹ್ಮಣರನ್ನು ಕರೆಸುತ್ತಾರೆ.
ಒಬ್ಬ ತಂದೆಗೆ ರುದ್ರನೆಂದು ಹೇಳಲಾಗುತ್ತದೆ. ಮತ್ತೆ ಅವರ ಜೊತೆ ಅನೇಕ ಸಾಲಿಗ್ರಾಮಗಳನ್ನು
ಮಾಡುತ್ತಾರೆ. ಇಷ್ಟು ಸಾಲಿಗ್ರಾಮಗಳನ್ನು ಮಾಡಿ ಎಂದು ವ್ಯಾಪಾರಿಗಳು ಹೇಳುತ್ತಾರೆ. ಅದಕ್ಕೆ ಯಾವುದೇ
ತಿಥಿ-ತಾರೀಖು ನಿಗಧಿಯಿರುವುದಿಲ್ಲ. ಶಿವ ಜಯಂತಿಯಂದೇ ರುದ್ರ ಪೂಜೆ ಮಾಡುತ್ತಾರೆಂದೂ ಅಲ್ಲ. ಬಹಳ
ಮಟ್ಟಿಗೆ ಶುಭ ದಿನದಂದು ಬೃಹಸ್ಪತಿಯನ್ನೂ ಇಡುತ್ತಾರೆ. ದೀಪಾವಳಿಯಂದು ಲಕ್ಷ್ಮೀಯ ಚಿತ್ರವನ್ನು
ತಟ್ಟೆಯಲ್ಲಿಟ್ಟು ಅವರ ಪೂಜೆ ಮಾಡುತ್ತಾರೆ. ನಂತರ ಇಟ್ಟು ಬಿಡುತ್ತಾರೆ. ಅವರು
ಮಹಾಲಕ್ಷ್ಮಿಯಾಗಿದ್ದಾರೆ. ಇಬ್ಬರಿದ್ದಾರಲ್ಲವೆ! ಮನುಷ್ಯರು ಈ ಮಾತುಗಳನ್ನು ಅರಿತುಕೊಂಡಿಲ್ಲ.
ಲಕ್ಷ್ಮೀಗೆ ಹಣವೆಲ್ಲಿಂದ ಸಿಗುತ್ತದೆ? ದಂಪತಿಗಳೂ ಬೇಕಲ್ಲವೆ. ಅಂದಾಗ ಈ ಲಕ್ಷ್ಮೀ-ನಾರಾಯಣರು
ದಂಪತಿಯಾಗಿದ್ದಾರೆ. ಆದ್ದರಿಂದ ಇದಕ್ಕೆ ಮಹಾಲಕ್ಷ್ಮಿಯೆಂದು ಹೆಸರಿಟ್ಟು ಬಿಡುತ್ತಾರೆ. ಯಾವಾಗ
ದೇವಿಯಾದರು, ಮಹಾಲಕ್ಷ್ಮಿಯು ಯಾವಾಗ ಇದ್ದು ಹೋದರು? ಇವೆಲ್ಲಾ ಮಾತುಗಳನ್ನು ಮನುಷ್ಯರು
ಅರಿತುಕೊಂಡಿಲ್ಲ. ಈಗ ನಿಮಗೆ ತಂದೆಯು ಕುಳಿತು ತಿಳಿಸುತ್ತಾರೆ. ನಿಮ್ಮಲ್ಲಿಯೂ ಎಲ್ಲರಿಗೆ ಏಕರಸವಾಗಿ
ಧಾರಣೆಯಾಗುವುದಿಲ್ಲ. ತಂದೆಯು ಇಷ್ಟೆಲ್ಲವನ್ನೂ ತಿಳಿಸಿದ ನಂತರವೂ ಹೇಳುತ್ತಾರೆ - ಶಿವ ತಂದೆಯ
ನೆನಪಿದೆಯೇ? ಆಸ್ತಿಯ ನೆನಪಿದೆಯೇ? ಮೂಲ ಮಾತೇ ಇದಾಗಿದೆ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಹಣವನ್ನು
ವ್ಯರ್ಥ ಮಾಡುತ್ತಾರೆ. ಇಲ್ಲಿ ನಿಮ್ಮದು ಒಂದು ಪೈಸೆಯೂ ವ್ಯರ್ಥವಾಗುವುದಿಲ್ಲ. ನೀವು
ಧನವಂತರಾಗುವುದಕ್ಕಾಗಿಯೇ ಸರ್ವೀಸ್ ಮಾಡುತ್ತೀರಿ. ಭಕ್ತಿಮಾರ್ಗದಲ್ಲಂತೂ ಬಹಳಷ್ಟು ಹಣವನ್ನು ಖರ್ಚು
ಮಾಡುತ್ತಾರೆ. ಬಡವರಾಗಿ ಬಿಡುತ್ತಾರೆ. ಎಲ್ಲವೂ ಮಣ್ಣು ಪಾಲಾಗಿ ಬಿಡುತ್ತದೆ. ಎಷ್ಟೊಂದು ಅಂತರವಿದೆ!
ಈ ಸಮಯದಲ್ಲಿ ಏನೆಲ್ಲವನ್ನೂ ಮಾಡುತ್ತಾರೆಯೋ ಅದನ್ನು ಈಶ್ವರೀಯ ಸೇವೆಯಲ್ಲಿ ಶಿವ ತಂದೆಗೆ
ಕೊಡುತ್ತೀರಿ. ಶಿವ ತಂದೆಯಂತೂ ತಿನ್ನುವುದಿಲ್ಲ. ನೀವೇ ತಿನ್ನುತ್ತೀರಿ. ನೀವು ಬ್ರಾಹ್ಮಣರು
ಮಧ್ಯದಲ್ಲಿ ನಿಮಿತ್ತರಾಗಿದ್ದೀರಿ. ನೀವು ಬ್ರಹ್ಮನಿಗೆ ಕೊಡುವುದಿಲ್ಲ. ಶಿವ ತಂದೆಗೆ ಕೊಡುತ್ತೀರಿ.
ಬಾಬಾ, ತಮಗಾಗಿ ವಸ್ತ್ರಗಳನ್ನು ತಂದಿದ್ದೇವೆ ಎಂದು ಹೇಳುತ್ತಾರೆ. ಅದಕ್ಕೇ ತಂದೆಯು ತಿಳಿಸುತ್ತಾರೆ
- ಈ ಬ್ರಹ್ಮರವರಿಗೆ ಕೊಡುವುದರಿಂದ ನಿಮ್ಮದೇನೂ ಜಮಾ ಆಗುವುದಿಲ್ಲ. ಬ್ರಹ್ಮ ತಂದೆ ಹೇಳುತ್ತಾರೆ -
ನೀವು ನನ್ನನ್ನು ನೆನಪು ಮಾಡಬೇಡಿ. ಶಿವ ತಂದೆಗೆ ಕೊಡುತ್ತೀರೆಂದರೆ ಆಗ ಅದು ಜಮಾ ಆಗುತ್ತದೆ. ಮತ್ತೆ
ಇದಂತೂ ನಿಮಗೆ ಗೊತ್ತಿದೆ. ಬ್ರಾಹ್ಮಣರು ಶಿವ ತಂದೆಯ ಖಜಾನೆಯಿಂದಲೇ ಪಾಲನೆ ಪಡೆಯುತ್ತಾರೆ. ಏನನ್ನು
ಕಳುಹಿಸಲಿ ಎಂದು ಈ ಬ್ರಹ್ಮರವರನ್ನು ಕೇಳುವ ಅವಶ್ಯಕತೆಯಿಲ್ಲ. ಇವರಂತೂ ತೆಗೆದುಕೊಳ್ಳುವುದಿಲ್ಲ.
ಒಂದುವೇಳೆ ಕೊಡುವಾಗ ಬ್ರಹ್ಮನನ್ನು ನೆನಪು ಮಾಡಿದರೆ ನಿಮ್ಮದಂತೂ ಜಮಾ ಆಗುವುದಿಲ್ಲ. ಈ ಬ್ರಹ್ಮರವರು
ಸದಾ ಶಿವ ತಂದೆಯ ಖಜಾನೆಯಿಂದಲೇ ತೆಗೆದುಕೊಳ್ಳಬೇಕಾಗಿದೆ. ಅಂದಮೇಲೆ ಶಿವ ತಂದೆಯ ನೆನಪೇ ಬರುತ್ತದೆ.
ನಿಮ್ಮ ವಸ್ತುಗಳನ್ನು ಏಕೆ ತೆಗೆದುಕೊಳ್ಳುತ್ತಾರೆ? ಬಿ.ಕೆ.ಗಳಿಗೆ ಕೊಡುವುದೂ ತಪ್ಪಾಗಿದೆ. ತಂದೆಯೂ
ತಿಳಿಸಿದ್ದಾರೆ - ನೀವು ಯಾರಿಂದಲಾದರೂ ವಸ್ತುವನ್ನು ತೆಗೆದುಕೊಂಡು ಉಪಯೋಗಿಸುತ್ತೀರೆಂದರೆ ಅವರ
ನೆನಪೇ ಬರುತ್ತಿರುತ್ತದೆ. ಯಾವುದೇ ಚಿಕ್ಕ ಪುಟ್ಟ ವಸ್ತುವಿನ ಮಾತಲ್ಲ. ಒಳ್ಳೆಯ ವಸ್ತುವಾಗಿದ್ದರೆ
ಇಂತಹವರು ಇದನ್ನು ಕೊಟ್ಟರೆಂದು ಹೆಚ್ಚಿನದಾಗಿ ನೆನಪೇ ತರಿಸುತ್ತದೆ. ಅವರದೇನೂ ಜಮಾ ಆಗುವುದಿಲ್ಲ.
ಅಂದಾಗ ನಷ್ಟವಾಯಿತಲ್ಲವೆ. ಶಿವ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನು ನೆನಪು ಮಾಡಿ, ನನಗೆ
ವಸ್ತ್ರ ಇತ್ಯಾದಿಗಳ ಅವಶ್ಯಕತೆಯಿಲ್ಲ. ವಸ್ತ್ರ ಇತ್ಯಾದಿ ಮಕ್ಕಳಿಗೆ ಬೇಕು. ಅದನ್ನು ಶಿವ ತಂದೆಯ
ಖಜಾನೆಯಿಂದ ಉಪಯೋಗಿಸುತ್ತಾರೆ. ನನಗಂತೂ ನನ್ನದೇ ಆದ ಶರೀರವಿಲ್ಲ. ಇವರಂತೂ (ಬ್ರಹ್ಮ) ಶಿವ ತಂದೆಯ
ಖಜಾನೆಯಿಂದ ತೆಗೆದುಕೊಳ್ಳಲು ಹಕ್ಕುದಾರರಾಗಿದ್ದಾರೆ. ರಾಜ್ಯಭಾಗ್ಯಕ್ಕೂ ಹಕ್ಕುದಾರರಾಗಿದ್ದಾರೆ.
ಎಷ್ಟು ಹೆಚ್ಚು ಸೇವೆ ಅಷ್ಟು ಹೆಚ್ಚಿನ ಸಂಪಾದನೆಯಾಗುವುದು. ಶಿವ ತಂದೆಯ ಭಂಡಾರದಿಂದಲೇ
ತಿನ್ನುತ್ತೀರಿ, ಕುಡಿಯುತ್ತೀರಿ ಅವರಿಗೆ ಕೊಡುವುದಿಲ್ಲವೆಂದರೆ ನಿಮಗೆ ಜಮಾ ಆಗುವುದಿಲ್ಲ. ಶಿವ
ತಂದೆಗೆ ಕೊಡಲಾಗುತ್ತದೆ. ಬಾಬಾ, ತಮ್ಮಿಂದ ಭವಿಷ್ಯದ 21 ಜನ್ಮಗಳಿಗಾಗಿ ಪದಮಾಪದಮಪತಿ ಆಗುತ್ತೇವೆ.
ಹಣವಂತೂ ಸಮಾಪ್ತಿಯಾಗುತ್ತದೆ. ಆದ್ದರಿಂದ ಸಮರ್ಥರಿಗೆ ನಾವು ಕೊಡುತ್ತೇವೆ. ತಂದೆಯು
ಸಮರ್ಥರಾಗಿದ್ದಾರಲ್ಲವೆ. ಅವರು 21 ಜನ್ಮಗಳಿಗೆ ಕೊಡುತ್ತಾರೆ. ಪರೋಕ್ಷವಾಗಿಯೂ ಈಶ್ವರಾರ್ಥವಾಗಿ
ಕೊಡುತ್ತಾರಲ್ಲವೆ. ಪರೋಕ್ಷವಾಗಿ ಇಷ್ಟು ಸಮರ್ಥತೆಯಿಲ್ಲ. ಈಗಂತೂ ಬಹಳ ಸಮರ್ಥವಾಗಿದ್ದಾರೆ. ಏಕೆಂದರೆ
ಸಮ್ಮುಖದಲ್ಲಿದ್ದಾರೆ. ಈ ಸಮಯಕ್ಕಾಗಿ ಅವರು ವಿಶ್ವದ ಸರ್ವಶಕ್ತಿವಂತನಾಗಿದ್ದಾರೆ.
ಈಶ್ವರಾರ್ಥವಾಗಿ ಏನಾದರೂ ದಾನ-ಪುಣ್ಯ ಮಾಡುತ್ತಾರೆಂದರೆ ಅಲ್ಪಕಾಲಕ್ಕಾಗಿ ಸಿಕ್ಕಿ ಬಿಡುತ್ತದೆ.
ಇಲ್ಲಂತೂ ತಂದೆಯು ನಿಮಗೆ ತಿಳಿಸುತ್ತಾರೆ - ನಾನು ಸಮ್ಮುಖದಲ್ಲಿದ್ದೇನೆ. ನಾನೇ ಕೊಡುವವನಾಗಿದ್ದೇನೆ.
ಈ ಬ್ರಹ್ಮರವರೂ ಸಹ ಶಿವ ತಂದೆಗೆ ಎಲ್ಲವನ್ನೂ ಕೊಟ್ಟು, ಇಡೀ ವಿಶ್ವದ ರಾಜ್ಯಭಾಗ್ಯವನ್ನು
ತೆಗೆದುಕೊಂಡವರಲ್ಲವೆ. ಇದೂ ಸಹ ನಿಮಗೆ ಗೊತ್ತಿದೆ. ಈ ವ್ಯಕ್ತವೇ ಅವ್ಯಕ್ತರೂಪದಲ್ಲಿ
ಸಾಕ್ಷಾತ್ಕಾರವಾಗುತ್ತದೆ. ಇವರಲ್ಲಿ ಶಿವ ತಂದೆಯು ಬಂದು ಮಕ್ಕಳೊಂದಿಗೆ ಮಾತನಾಡುತ್ತಾರೆ. ನಾವು
ಮನುಷ್ಯರಿಂದ ತೆಗೆದುಕೊಳ್ಳುತ್ತೇವೆಂದು ಎಂದಿಗೂ ವಿಚಾರದಲ್ಲಿಯೂ ಬರಬಾರದು. ತಿಳಿಸಿ, ಶಿವ ತಂದೆಯ
ಭಂಡಾರಕ್ಕೆ ಕಳುಹಿಸಿಕೊಡಿ, ಈ ಬ್ರಹ್ಮರವರ ನೆನಪಿನಲ್ಲಿ ಕೊಡುವುದರಿಂದ ಏನೂ ಸಿಗುವುದಿಲ್ಲ. ಇನ್ನೂ
ನಷ್ಟವಾಗುತ್ತದೆ. ಬಡವರಿರುತ್ತಾರೆ, 3-4 ರೂಪಾಯಿಗಳ ಯಾವುದೇ ವಸ್ತುವನ್ನು ನಿಮಗೆ ಕೊಡುತ್ತಾರೆ.
ಇದನ್ನು ಶಿವ ತಂದೆಯ ಭಂಡಾರದಲ್ಲಿ ಹಾಕುವುದರಿಂದ ಅದು ಪದಮದಷ್ಟಾಗಿ ಬಿಡುತ್ತದೆ. ಅಂದಮೇಲೆ ತಮಗೇಕೆ
ನಷ್ಟ ಮಾಡಿಕೊಳ್ಳಬೇಕು. ಬಹಳ ಮಟ್ಟಿಗೆ ದೇವಿಯರದೇ ಪೂಜೆಯಾಗುತ್ತದೆ. ಏಕೆಂದರೆ ನೀವು ದೇವಿಯರೇ
ಜ್ಞಾನವನ್ನು ಕೊಡಲು ನಿಮಿತ್ತರಾಗುತ್ತೀರಿ. ಭಲೆ ಗೋಪರು ತಿಳಿಸುತ್ತಾರೆ. ಆದರೆ ಬಹಳ ಮಟ್ಟಿಗೆ
ಮಾತೇಯರೇ ಬ್ರಾಹ್ಮಿಣಿಯರಾಗಿ ಮಾರ್ಗವನ್ನು ತಿಳಿಸುತ್ತಾರೆ. ಆದ್ದರಿಂದ ಹೆಚ್ಚಿನದಾಗಿ ದೇವಿಯರ
ಹೆಸರಿದೆ. ದೇವಿಯರಿಗೆ ಬಹಳಷ್ಟು ಪೂಜೆಯಾಗುತ್ತದೆ. ಇದನ್ನೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ
- ಅರ್ಧಕಲ್ಪ ನಾವು ಪೂಜ್ಯರಾಗಿದ್ದೇವು. ಮೊದಲು ಪೂರ್ಣ ಪೂಜ್ಯರಾಗಿದ್ದೇವು. ನಂತರ ಅರ್ಧ ಪೂಜ್ಯರು
ಏಕೆಂದರೆ ಎರಡು ಕಲೆಗಳು ಕಡಿಮೆಯಾಗಿ ಬಿಡುತ್ತವೆ. ತ್ರೇತಾಯುಗದಲ್ಲಿ ರಾಮರಾಜ್ಯವೆಂದು ಹೇಳುತ್ತಾರೆ.
ಮನುಷ್ಯರು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಇದರಿಂದ ಲೆಕ್ಕವೇ ಸಿಗದಂತಾಗಿ ಬಿಡುತ್ತದೆ.
ಭಕ್ತಿಮಾರ್ಗದವರ ಬುದ್ಧಿಗೂ ಮತ್ತು ನಿಮ್ಮ ಬುದ್ಧಿಗೂ ಹಗಲು-ರಾತ್ರಿಯ ಅಂತರವಿದೆ. ನೀವು ಈಶ್ವರೀಯ
ಬುದ್ಧಿಯವರಾಗಿದ್ದೀರಿ, ಅವರು ರಾವಣನ ಬುದ್ಧಿಯವರಾಗಿದ್ದಾರೆ. ನಿಮ್ಮ ಬುದ್ಧಿಯಲ್ಲಿದೆ - ಈ ಇಡೀ
ಚಕ್ರವೇ 5000 ವರ್ಷಗಳದ್ದಾಗಿದೆ. ಅದು ಸುತ್ತುತ್ತಾ ಇರುತ್ತದೆ. ಯಾರು ರಾತ್ರಿಯಲ್ಲಿರುವರೋ (ಅಜ್ಞಾನ)
ಅವರು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಯಾರು ದಿನದಲ್ಲಿದ್ದಾರೆಯೋ ಅವರು 5000 ವರ್ಷಗಳೆಂದು
ಹೇಳುತ್ತಾರೆ. ಅರ್ಧಕಲ್ಪ ಭಕ್ತಿಮಾರ್ಗದಲ್ಲಿ ನೀವು ಅಸತ್ಯ ಮಾತುಗಳನ್ನು ಕೇಳಿದ್ದೀರಿ.
ಸತ್ಯಯುಗದಲ್ಲಿ ಇಂತಹ ಮಾತುಗಳಿರುವುದೇ ಇಲ್ಲ. ಅಲ್ಲಂತೂ ಆಸ್ತಿಯು ಸಿಗುತ್ತದೆ. ಈಗ ನಿಮಗೆ ನೇರವಾದ
ಮತವು ಸಿಗುತ್ತದೆ. ಶ್ರೀಮತ್ಭಗವದ್ಗೀತೆ ಆಗಿದೆಯಲ್ಲವೆ! ಮತ್ತ್ಯಾವುದೇ ಶಾಸ್ತ್ರದಲ್ಲಿ ಶ್ರೀಮತ್
ಎನ್ನುವ ಹೆಸರಿಲ್ಲ. ಪ್ರತಿ 5000 ವರ್ಷಗಳ ನಂತರ ಈ ಪುರುಷೋತ್ತಮ ಸಂಗಮಯುಗ, ಗೀತಾಯುಗ ಬರುತ್ತದೆ.
ಲಕ್ಷಾಂತರ ವರ್ಷಗಳ ಮಾತಾಗಿರಲು ಸಾಧ್ಯವಿಲ್ಲ. ಯಾರೇ ಬರಲಿ ಅವರನ್ನು ಸಂಗಮಯುಗದ ಚಿತ್ರದ ಬಳಿ
ಕರೆದುಕೊಂಡು ಹೋಗಿ ಬೇಹದ್ದಿನ ತಂದೆಯು ರಚಿಯಿತ ಅರ್ಥಾತ್ ತನ್ನ ಮತ್ತು ರಚನೆಯ ಪೂರ್ಣಪರಿಚಯವನ್ನು
ಕೊಟ್ಟಿದ್ದಾರೆ. ಆದರೂ ಮತ್ತೆ ತಿಳಿಸುತ್ತಾರೆ - ಒಳ್ಳೆಯದು, ತಂದೆಯನ್ನು ನೆನಪು ಮಾಡಿ.
ಮತ್ತೇನಾದರೂ ಧಾರಣೆ ಮಾಡಲಾಗದಿದ್ದರೂ ಸಹ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ,
ಪವಿತ್ರರಂತೂ ಆಗಲೇಬೇಕಾಗಿದೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ ಅಂದಮೇಲೆ ದೈವೀ
ಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ
ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. 21
ಜನ್ಮಗಳಿಗಾಗಿ ಪದುಮಗಳ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕು. ಡೈರೆಕ್ಟ್ ಈಶ್ವರೀಯ ಸೇವೆಯಲ್ಲಿ
ಎಲ್ಲವನ್ನೂ ಸಫಲ ಮಾಡಿಕೊಳ್ಳಬೇಕಾಗಿದೆ. ನಿಮಿತ್ತರಾಗಿ ಶಿವ ತಂದೆಯ ಹೆಸರಿನ ಮೇಲೆ ಸೇವೆ
ಮಾಡಬೇಕಾಗಿದೆ.
2. ನೆನಪಿನಲ್ಲಿ ಎಷ್ಟು ಸಮಯ ಕುಳಿತುಕೊಳ್ಳುತ್ತೀರೋ ಅಷ್ಟು ಬುದ್ಧಿಯು ಎಲ್ಲೆಲ್ಲಿಗೆ ಹೋಯಿತೆಂದು
ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. ತಮ್ಮ ಸತ್ಯ-ಸತ್ಯವಾದ ಲೆಕ್ಕವನ್ನಿಡಬೇಕಾಗಿದೆ. ನರನಿಂದ
ನಾರಾಯಣರಾಗಲು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ.
ವರದಾನ:
ಅವಿನಾಶಿ
ಪ್ರಾಪ್ತಿಗಳ ಸ್ಮೃತಿಯಿಂದ ತಮ್ಮ ಶ್ರೇಷ್ಠ ಭಾಗ್ಯದ ಖುಶಿಯಲ್ಲಿರುವಂತಹ ಇಚ್ಛಾ ಮಾತ್ರಂ ಅವಿದ್ಯೆ
ಭವ.
ಯಾರ ತಂದೆಯೇ
ಭಾಗ್ಯವಿಧಾತ ಆಗಿದ್ದಾಗ ಅವರ ಭಾಗ್ಯ ಏನಿರುವುದು! ಸದಾ ಇದೇ ಖುಶಿಯಿರಲಿ ಭಾಗ್ಯವಂತೂ ನಮ್ಮ
ಜನ್ಮಸಿದ್ಧ ಅಧಿಕಾರವಾಗಿದೆ. “ವ್ಹಾ ನನ್ನ ಶ್ರೇಷ್ಠ ಭಾಗ್ಯ ಮತ್ತು ಭಾಗ್ಯ ವಿಧಾತ ತಂದೆ” ಇದೇ
ಗೀತೆಯನ್ನು ಹಾಡುತ್ತಾ ಖುಶಿಯಲ್ಲಿ ಹಾರುತ್ತಾ ಇರಿ. ಇಂತಹ ಅವಿನಾಶಿ ಖಜಾನೆ ಸಿಕ್ಕಿದೆ. ಯಾವುದು
ಅನೇಕ ಜನ್ಮ ಜೊತೆಯಲ್ಲಿರುವುದು, ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ, ಲೂಟಿ ಮಾಡಲು
ಸಾಧ್ಯವಿಲ್ಲ. ಎಷ್ಟು ದೊಡ್ಡ ಭಾಗ್ಯವಿದೆ ಅದರಲ್ಲಿ ಯಾವುದೂ ಇಚ್ಛೆ ಇಲ್ಲ, ಮನಸ್ಸಿನ ಖುಶಿ
ಸಿಕ್ಕಿದೊಡನೆ ಎಲ್ಲಾ ಪ್ರಾಪ್ತಿಗಳು ಆಯಿತು. ಯಾವುದೇ ಅಪ್ರಾಪ್ತಿಯ ವಸ್ತುಗಳಿಲ್ಲ ಆದ್ದರಿಂದ ಇಚ್ಛಾ
ಮಾತ್ರಂ ಅವಿದ್ಯೆ ಆಗಿ ಬಿಟ್ಟಿರಿ.
ಸ್ಲೋಗನ್:
ವಿಕರ್ಮ
ಮಾಡುವಂತಹ ಸಮಯ ಕಳೆದು ಹೋಯಿತು, ಈಗ ವ್ಯರ್ಥ ಸಂಕಲ್ಪ, ಮಾತು ಸಹ ಬಹಳ ಮೋಸ ಮಾಡುವುದು.