01.09.19    Avyakt Bapdada     Kannada Murli     21.01.85     Om Shanti     Madhuban


ಈಶ್ವರೀಯ ಜನ್ಮದಿನದ ಸ್ವರ್ಣೀಮ ಉಡುಗೊರೆ - ‘ದಿವ್ಯಬುದ್ಧಿ'


ಇಂದು ವಿಶ್ವ ರಚೈತ ತಂದೆಯು ತನ್ನ ಜಗತ್ತಿನ ಕಣ್ಣು, ಕಣ್ಮಣಿಗಳಾದ ಮಕ್ಕಳನ್ನು ನೋಡುತ್ತಿದ್ದಾರೆ. ತಾವು ಶ್ರೇಷ್ಠಾತ್ಮರು ಜಗತ್ತಿನ ಮಣಿಯಾಗಿದ್ದೀರಿ ಅರ್ಥಾತ್ ಜಗತ್ತಿನ ಬೆಳಕಾಗಿದ್ದೀರಿ. ಹೇಗೆ ಸ್ಥೂಲ ಕಣ್ಣುಗಳಿಲ್ಲದಿದ್ದರೆ ಜಗತ್ತೇ ಇಲ್ಲ ಏಕೆಂದರೆ ಕಣ್ಣು ಎಂದರೆ ಬೆಳಕು. ಬೆಳಕೇ ಇಲ್ಲದಿದ್ದರೆ, ಅಂಧಕಾರದ ಕಾರಣದಿಂದ ಜಗತ್ತಿಲ್ಲ. ಅಂದಮೇಲೆ ತಾವು ಮಣಿಗಳಿಲ್ಲದಿದ್ದರೆ ಜಗತ್ತಿನಲ್ಲಿ ಬೆಳಕಿಲ್ಲ. ತಾವಿದ್ದೀರೆಂದರೆ ಬೆಳಕಿನ ಕಾರಣ ಜಗತ್ತಿದೆ. ಅಂದಮೇಲೆ ಬಾಪ್ದಾದಾರವರು ಇಂತಹ ಜಗತ್ತಿನ ಮಣಿಗಳಾದ ಮಕ್ಕಳನ್ನು ನೋಡುತ್ತಿದ್ದಾರೆ. ಇಂತಹ ಮಕ್ಕಳ ಮಹಿಮೆಯು ಸದಾ ಮಾಡುತ್ತಾ ಮತ್ತು ಪೂಜಿಸಲಾಗುತ್ತದೆ. ಇಂತಹ ಮಕ್ಕಳೇ ವಿಶ್ವದ ರಾಜ್ಯಭಾಗ್ಯದ ಅಧಿಕಾರಿಯಾಗುವರು. ಬಾಪ್ದಾದಾರವರು ಪ್ರತೀ ಬ್ರಾಹ್ಮಣ ಮಕ್ಕಳಾಗುತ್ತಿದ್ದಂತೆಯೇ ವಿಶೇಷ ದಿವ್ಯ ಜನ್ಮದಿನದ ದಿವ್ಯವಾದ ಎರಡು ಉಡುಗೊರೆಗಳನ್ನು ಕೊಡುತ್ತಾರೆ. ಪ್ರಪಂಚದಲ್ಲಿ ಮನುಷ್ಯಾತ್ಮರು ಮನುಷ್ಯಾತ್ಮರಿಗೆ ಉಡುಗೊರೆಯನ್ನು ಕೊಡುತ್ತಾರೆ. ಆದರೆ ಈ ಸಂಗಮಯುಗದಲ್ಲಿ ಬ್ರಾಹ್ಮಣ ಮಕ್ಕಳಿಗೆ ಸ್ವಯಂ ತಂದೆಯು ದಿವ್ಯ ಉಡುಗೊರೆಯನ್ನು ಕೊಡುತ್ತಾರೆ. ಏನು ಕೊಡುತ್ತಾರೆ? ಒಂದು ದಿವ್ಯ ಬುದ್ಧಿ ಮತ್ತು ಇನ್ನೊಂದು ದಿವ್ಯ ನೇತ್ರ ಅರ್ಥಾತ್ ಆತ್ಮಿಕ ಮಣಿ. ಇವೆರಡು ಉಡುಗೊರೆಯನ್ನು ಪ್ರತಿಯೊಂದು ಬ್ರಾಹ್ಮಣ ಮಕ್ಕಳ ಜನ್ಮದಿನದ ಉಡುಗೊರೆಯಾಗಿದೆ. ಇವೆರಡು ಉಡುಗೊರೆಯನ್ನು ಸದಾ ಜೊತೆಯಲ್ಲಿಟ್ಟುಕೊಳ್ಳುತ್ತಾ, ಇದರ ಮೂಲಕ ಸದಾ ಸಫಲತಾ ಸ್ವರೂಪರಾಗುತ್ತೀರಿ. ದಿವ್ಯ ಬುದ್ಧಿಯೇ ಪ್ರತಿಯೊಂದು ಮಕ್ಕಳಿಗೂ ದಿವ್ಯ ಜ್ಞಾನ, ದಿವ್ಯ ನೆನಪು, ದಿವ್ಯ ಧಾರಣಾ ಸ್ವರೂಪವನ್ನಾಗಿ ಮಾಡುತ್ತದೆ. ದಿವ್ಯ ಬುದ್ಧಿಯೇ ಧಾರಣೆ ಮಾಡಿಕೊಳ್ಳುವ ವಿಶೇಷವಾದ ಉಡುಗೊರೆಯಾಗಿದೆ. ಅಂದಮೇಲೆ ದಿವ್ಯ ಬುದ್ಧಿಯು ಸದಾ ಇದೆ ಅರ್ಥಾತ್ ಧಾರಣಾ ಸ್ವರೂಪವಾಗಿದ್ದೀರಿ. ದಿವ್ಯ ಬುದ್ಧಿಯಲ್ಲಿ ಅರ್ಥಾತ್ ಸತೋಪ್ರಧಾನ ಗೋಲ್ಡನ್ ಬುದ್ಧಿಯಲ್ಲಿ ಸ್ವಲ್ಪವೂ ರಜೋ, ತಮೋದ ಪ್ರಭಾವ ಬೀರುತ್ತದೆಯೆಂದರೆ ಧಾರಣಾ ಸ್ವರೂಪರ ಬದಲು ಮಾಯೆಯ ಪ್ರಭಾವದಲ್ಲಿ ಬಂದು ಬಿಡುತ್ತಾರೆ. ಆದ್ದರಿಂದ ಪ್ರತಿಯೊಂದು ಸಹಜ ಮಾತೂ ಸಹ ಕಷ್ಟದ ಅನುಭವ ಮಾಡುತ್ತಾರೆ. ಸಹಜ ಉಡುಗೊರೆಯ ರೂಪದಲ್ಲಿ ಪ್ರಾಪ್ತಿಯಾದ ದಿವ್ಯ ಬುದ್ಧಿಯು ಬಲಹೀನವಾಗಿರುವ ಕಾರಣದಿಂದ ಪರಿಶ್ರಮದ ಅನುಭವ ಮಾಡುತ್ತಾರೆ. ಯಾವಾಗ ಕಷ್ಟ ಅಥವಾ ಪರಿಶ್ರಮದ ಅನುಭವವನ್ನು ಮಾಡುತ್ತೀರೆಂದರೆ, ಅವಶ್ಯವಾಗಿ ದಿವ್ಯ ಬುದ್ಧಿಯು ಯಾವುದಾದರೊಂದು ಮಾಯೆಯ ರೂಪದಿಂದ ಪ್ರಭಾವಿತವಾಗಿದೆ. ಆಗಲೇ ಇಂತಹ ಅನುಭವವಾಗುತ್ತದೆ. ದಿವ್ಯ ಬುದ್ಧಿಯ ಮೂಲಕ ಸೆಕೆಂಡಿನಲ್ಲಿ ಬಾಪ್ದಾದಾರವರ ಶ್ರೀಮತವನ್ನು ಧಾರಣೆ ಮಾಡಿಕೊಂಡು, ಸದಾ ಸಮರ್ಥ, ಸದ ಅಚಲ, ಸದಾ ಮಾಸ್ಟರ್ ಸರ್ವಶಕ್ತಿವಂತ ಸ್ಥಿತಿಯ ಅನುಭವ ಮಾಡುತ್ತಾರೆ. ಶ್ರೀಮತ ಅರ್ಥಾತ್ ಶ್ರೇಷ್ಠರನ್ನಾಗಿ ಮಾಡುವ ಮತ. ಅದೆಂದಿಗೂ ಸಹ ಕಷ್ಟದ ಅನುಭವ ಮಾಡಿಸಲು ಸಾಧ್ಯವಿಲ್ಲ. ಶ್ರೀಮತವು ಸದಾ ಸಹಜವಾಗಿ ಹಾರಿಸುವ ಮತವಾಗಿದೆ. ಆದರೆ ಧಾರಣೆ ಮಾಡಿಕೊಳ್ಳಲು ಖಂಡಿತವಾಗಿಯೂ ದಿವ್ಯ ಬುದ್ಧಿಯಿರಬೇಕು. ಅಂದಮೇಲೆ ಪರಿಶೀಲಿಸಿರಿ - ತಮ್ಮ ಜನ್ಮದ ಉಡುಗೊರೆಯು ಸದಾ ಜೊತೆಯಿದೆಯೇ? ಎಂದೂ ಸಹ ಮಾಯೆಯು ತನ್ನವರನ್ನಾಗಿ ಮಾಡಿಕೊಂಡು ದಿವ್ಯ ಬುದ್ಧಿಯ ಉಡುಗೊರೆಯನ್ನು ಕಸಿದುಕೊಳ್ಳುವುದಿಲ್ಲವೇ? ಎಂದಿಗೂ ಮಾಯೆಯ ಪ್ರಭಾವದಿಂದ ಮುಗ್ಧರಾಗಿ ಬಿಡುವುದಿಲ್ಲವೇ, ಅದರಿಂದ ಪರಮಾತ್ಮನ ಉಡುಗೊರೆಯನ್ನೂ ಕಳೆದುಕೊಳ್ಳುವಂತಾಗುತ್ತದೆ. ಮಾಯೆಗೂ ಸಹ ಈಶ್ವರನ ಉಡುಗೊರೆಯನ್ನು ತನ್ನದಾಗಿಸಿಕೊಳ್ಳುವ ಚತುರತೆ ಬರುತ್ತದೆ. ಅಂದಮೇಲೆ ಸ್ವಯಂ ಚತುರನಾಗಿ ಬಿಡುತ್ತದೆ ಮತ್ತು ತಮ್ಮನ್ನು ಮುಗ್ಧರನ್ನಾಗಿ ಮಾಡಿ ಬಿಡುತ್ತದೆ. ಆದ್ದರಿಂದ ಭೋಲಾನಾಥ ತಂದೆಯ ಭೋಲಾ ಮಕ್ಕಳಂತು ಭಲೆ ಆಗಿರಿ ಆದರೆ ಮಾಯೆಯ ಮುಗ್ಧರಾಗದಿರಿ. ಮಾಯೆಯ ಮುಗ್ಧರಾಗುವುದು ಅರ್ಥಾತ್ ಮರೆಯುವವರಾಗುವುದು. ಈಶ್ವರೀಯ ದಿವ್ಯ ಬುದ್ಧಿಯ ಉಡುಗೊರೆಯು ಸದಾ ಛತ್ರಛಾಯೆಯಾಗಿದೆ ಮತ್ತು ಮಾಯೆಯು ತನ್ನ ಛಾಯೆಯಲ್ಲಿ ಹಾಕಿ ಬಿಡುತ್ತದೆ. ಛತ್ರ(ಆಧಾರ, ಆಶ್ರಯ) ಹಾರಿ ಬಿಡುತ್ತದೆ, ನೆರಳು ಉಳಿದುಕೊಳ್ಳುತ್ತದೆ. ಆದ್ದರಿಂದ ಸದಾ ಪರಿಶೀಲಿಸಿರಿ - ತಂದೆಯು ಉಡುಗೊರೆಯು ಸದಾಕಾಲವಿದೆಯೇ? ದಿವ್ಯ ಬುದ್ಧಿಯ ಚಿಹ್ನೆಯು ಉಡುಗೊರೆಯು, ಲಿಫ್ಟ್ ನ ಕಾರ್ಯವನ್ನು ಮಾಡುತ್ತದೆ. ಯಾರು ಶ್ರೇಷ್ಠ ಸಂಕಲ್ಪವೆಂಬ ಸ್ವಿಚ್ನ್ನು ಆನ್ ಮಾಡಿದರು, ಅವರು ಸೆಕೆಂಡಿನಲ್ಲಿ ಸ್ಥಿತಿಯಲ್ಲಿ ಸ್ಥಿತರಾದರು. ಒಂದುವೇಳೆ ದಿವ್ಯ ಬುದ್ಧಿಯ ಮಧ್ಯೆ ಮಾಯೆಯ ಛಾಯೆಯಿದೆಯೆಂದರೆ, ಇದು ಗಿಫ್ಟ್ ನ ಲಿಫ್ಟ್ ಕಾರ್ಯವನ್ನು ಮಾಡುವುದಿಲ್ಲ. ಹೇಗೆ ಸ್ಥೂಲ ಲಿಫ್ಟ್ ಸದಾ ಹಾಳಾಗಿ ಬಿಡುತ್ತದೆಯೆಂದರೆ ಗತಿಯೇನಾಗುತ್ತದೆ? ಶ್ರೇಷ್ಠ ಮಟ್ಟಕ್ಕೆ ಹೋಗುವುದಿಲ್ಲ, ಮಧ್ಯದಲ್ಲಿಯೇ ಸಿಲುಕಿ ಬಿಡುತ್ತಾರೆ. ಶಾನ್(ಗೌರವ)ಗೆ ಬದಲಾಗಿ ಪರೇಶಾನ್(ಬೇಸರ) ಆಗಿ ಬಿಡುತ್ತಾರೆ. ಸ್ವಿಚ್ ಎಷ್ಟೇ ಆನ್ ಮಾಡಿರಬಹುದು, ಆದರೆ ಗುರಿಯಲ್ಲಿ ತಲುಪುವ ಪ್ರಾಪ್ತಿಯನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದಮೇಲೆ ಈ ಗಿಫ್ಟ್ ನ ಲಿಫ್ಟ್ ಹಾಳು ಮಾಡಿ ಬಿಡುತ್ತಾರೆ. ಆದ್ದರಿಂದ ಪರಿಶ್ರಮವೆಂಬ ಏಣಿಯನ್ನೇರಬೇಕಾಗುತ್ತದೆ. ಮತ್ತೇನು ಹೇಳುತ್ತೀರಿ? ಸಾಹಸವೆಂಬ ಕಾಲು ನಡೆಯಲು ಸಾಧ್ಯವಾಗುತ್ತಿಲ್ಲ. ಅಂದಮೇಲೆ ಸಹಜವನ್ನು ಕಷ್ಟವನ್ನಾಗಿ ಯಾರು ಮಾಡಿದರು ಮತ್ತು ಹೇಗೆ ಮಾಡಿದರು? ತಾವು ತಮ್ಮನ್ನು ಹುಡುಗಾಟಿಕೆಯವರನ್ನಾಗಿ ಮಾಡಿದಿರಿ. ಮಾಯೆಯ ಛಾಯೆಯಲ್ಲಿ ಬಂದು ಬಿಟ್ಟಿರಿ. ಆದ್ದರಿಂದ ಸೆಕೆಂಡಿನ ಸಹಜ ಮಾತನ್ನು ಬಹಳ ಸಮಯದ ಪರಿಶ್ರಮದ ಅನುಭವ ಮಾಡುತ್ತೀರಿ. ದಿವ್ಯ ಬುದ್ಧಿಯ ಉಡುಗೊರೆಯು ಅಲೌಕಿಕ ವಿಮಾನವಾಗಿದೆ. ಆ ದಿವ್ಯ ವಿಮಾನದ ಮೂಲಕ ಸೆಕೆಂಡಿನಲ್ಲಿ ಸ್ವಿಚ್ ಆನ್ ಮಾಡುವುದರಿಂದ ಎಲ್ಲಿಗೆ ಬೇಕೋ, ಅಲ್ಲಿಗೆ ತಲುಪಲು ಸಾಧ್ಯವಿದೆ. ಅದರ ಸ್ವಿಚ್ ಆಗಿದೆ - ಸಂಕಲ್ಪ. ವಿಜ್ಞಾನಿಗಳಂತು ಒಂದು ಲೋಕದ ಪರಿಕ್ರಮಣ ಮಾಡಲು ಸಾಧ್ಯವಿದೆ. ತಾವು ಮೂರೂ ಲೋಕಗಳ ಪರಿಕ್ರಮಣ ಮಾಡಬಲ್ಲಿರಿ. ಸೆಕೆಂಡಿನಲ್ಲಿ ವಿಶ್ವ ಕಲ್ಯಾಣಕಾರಿ ಸ್ವರೂಪರಾಗಿದ್ದು, ಇಡೀ ವಿಶ್ವಕ್ಕೆ ಲೈಟ್ ಮತ್ತು ಮೈಟ್ ಕೊಡಬಹುದು. ಕೇವಲ ದಿವ್ಯ ಬುದ್ಧಿಯ ವಿಮಾನದ ಮೂಲಕ ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ. ಹೇಗೆ ಅವರುಗಳು ವಿಮಾನದ ಮೂಲಕ ಹಿಮಾಲಕ್ಕಿಂತಲೂ ಮೇಲೆ ಬೂದಿಯನ್ನು ಹಾಕಿದರು, ನದಿಯಲ್ಲಿ ಬೂದಿಯನ್ನಾಕಿದರು, ಏತಕ್ಕಾಗಿ? ನಾಲ್ಕೂ ಕಡೆಯಲ್ಲಿ ಹರಡಿಸುವುದಕ್ಕಾಗಿ ಅಲ್ಲವೆ. ಅವರುಗಳಂತು ಬೂದಿಯನ್ನು ಹಾಕಿದರು, ತಾವು ದಿವ್ಯ ಬುದ್ಧಿಯೆಂಬ ವಿಮಾನದ ಮೂಲಕ ಬಹಳ ಶ್ರೇಷ್ಠ ಶಿಖರದ ಸ್ಥಿತಿಯಲ್ಲಿ ಸ್ಥಿತರಾಗಿದ್ದು, ವಿಶ್ವದ ಸರ್ವ ಆತ್ಮರ ಪ್ರತಿ ಲೈಟ್ ಮತ್ತು ಮೈಟ್ನ ಶುಭ ಭಾವನೆ ಮತ್ತು ಶ್ರೇಷ್ಠ ಕಾಮನೆಯ ಸಹಯೋಗದ ಪ್ರಕಂಪನಗಳನ್ನು ಹರಡಿಸಿರಿ. ವಿಮಾನವಂತು ಶಕ್ತಿಶಾಲಿಯಾಗಿದೆ ಅಲ್ಲವೇ? ಕೇವಲ ಅದನ್ನು ಉಪಯೋಗಿಸುವುದು ಬರಬೇಕಷ್ಟೇ.

ಬಾಪ್ದಾದಾರವರ ರಿಫೈನ್ ಶ್ರೇಷ್ಠ ಮತದ ಸಾಧನವಿರಬೇಕು. ಹೇಗೆ ಇತ್ತೀಚೆಗೆ ರಿಫೈನ್ಗಿಂತಲೂ ಡಬಲ್ ರಿಫೈನ್ ನಡೆಯುತ್ತದೆಯಲ್ಲವೆ. ಅಂದಮೇಲೆ ಬಾಪ್ದಾದಾರವರ ಈ ಡಬಲ್ ರಿಫೈನ್ ಸಾಧನವಿದೆ. ಸ್ವಲ್ಪವೇನಾದರೂ ಮನಮತ, ಪರಮತದ ಕೊಳಕಿದೆಯೆಂದರೆ ಏನಾಗುತ್ತದೆ? ಶ್ರೇಷ್ಠ ಮಟ್ಟಕ್ಕೆ ಹೋಗುತ್ತೀರಾ ಅಥವಾ ಕೆಳಗಡೆಗೋ? ಅಂದಮೇಲೆ ಇದನ್ನು ಪರಿಶೀಲಿಸಿಕೊಳ್ಳಿರಿ - ದಿವ್ಯ ಬುದ್ಧಿಯೆಂಬ ವಿಮಾನದಲ್ಲಿ ಸದಾ ಡಬಲ್ ರಿಫೈನ್ ಸಾಧನವಿದೆಯೇ? ಮಧ್ಯದಲ್ಲೇನಾದರೂ ಕೊಳಕು ಬಂದು ಬಿಡುವುದಿಲ್ಲವೇ? ಇಲ್ಲವೆಂದರೆ ಈ ವಿಮಾನವು ಸದಾ ಸುಖ ಕೊಡುವುದಾಗಿದೆ. ಹೇಗೆ ಸತ್ಯಯುಗದಲ್ಲಿ ಎಂದಿಗೂ ಯಾವುದೇ ಅಪಘಾತವಾಗಲು ಸಾಧ್ಯವಿಲ್ಲ, ಏಕೆಂದರೆ ತಮ್ಮ ಶ್ರೇಷ್ಠ ಕರ್ಮಗಳ ಶ್ರೇಷ್ಠ ಪ್ರಾಲಬ್ಧವಿದೆ. ಅಂತಹ ಯಾವುದೇ ಕರ್ಮವಾಗುವುದಿಲ್ಲ, ಯಾವ ಕರ್ಮ ಭೋಗದ ಲೆಕ್ಕದಿಂದ ಈ ದುಃಖವನ್ನುನುಭವಿಸಬೇಕಾಗುತ್ತದೆ. ಇಂತಹ ಸಂಗಮಯುಗದ ಈಶ್ವರನ ಉಡುಗೊರೆಯಾದ ದಿವ್ಯ ಬುದ್ಧಿಯು, ಸದಾ ಸರ್ವ ಪ್ರಕಾರದ ದುಃಖ ಮತ್ತು ಮೋಸದಿಂದ ಮುಕ್ತವಾದುದಾಗಿದೆ. ದಿವ್ಯ ಬುದ್ಧಿಯವರು ಎಂದಿಗೂ ಮೋಸದಲ್ಲಿ ಬರಲು ಸಾಧ್ಯವಿಲ್ಲ, ದುಃಖದ ಅನುಭೂತಿಯನ್ನು ಮಾಡಲು ಸಾಧ್ಯವಿಲ್ಲ. ಸದಾ ಸುರಕ್ಷಿತವಾಗಿರುತ್ತಾರೆ. ಆಪತ್ತುಗಳಿಂದ ಮುಕ್ತರಾಗಿದ್ದಾರೆ. ಆದ್ದರಿಂದ ಈ ಈಶ್ವರೀಯ ಉಡುಗೊರೆಯ ಮಹತ್ವಿಕೆಯನ್ನು ತಿಳಿದುಕೊಂಡು, ಈ ಉಡುಗೊರೆಯನ್ನು ಸದಾ ಜೊತೆಯಿಟ್ಟುಕೊಳ್ಳಿರಿ. ಈ ಉಡುಗೊರೆಯ ಮಹತ್ವಿಕೆಯು ತಿಳಿಯಿತೆ? ಉಡುಗೊರೆಯು ಎಲ್ಲರಿಗೂ ಸಿಕ್ಕಿದೆಯೇ ಅಥವಾ ಕೆಲವರಿಗೆ ಇಲ್ಲವೇ? ಸಿಕ್ಕಿರುವುದಂತು ಎಲ್ಲರಿಗೂ ಅಲ್ಲವೆ. ಕೇವಲ ಅದನ್ನು ಸಂಭಾಲನೆ ಮಾಡಲು ಬರುತ್ತದೆಯೋ ಅಥವಾ ಇಲ್ಲವೋ, ಅದು ತಮ್ಮ ಮೇಲಿದೆ. ಸದಾ ಅಮೃತವೇಳೆಯಲ್ಲಿ ಪರಿಶೀಲನೆ ಮಾಡಿರಿ - ಸ್ವಲ್ಪವಾದರೂ ಕಡಿಮೆಯಿದ್ದರೆ ಅಮೃತವೇಳೆಯಲ್ಲಿ ಸರಿಪಡಿಸಿಕೊಳ್ಳುವುದರಿಂದ, ಇಡೀ ದಿನದಲ್ಲಿ ಶಕ್ತಿಶಾಲಿಯಾಗಿರುತ್ತದೆ. ಒಂದುವೇಳೆ ಸ್ವಯಂ ತಾವೇ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಸರಿ ಮಾಡಿಸಿಕೊಳ್ಳಿರಿ. ಆದರೆ ಅಮೃತವೇಳೆಯಲ್ಲಿಯೇ ಸರಿಪಡಿಸಿ ಬಿಡಿ. ಒಳ್ಳೆಯದು. ದಿವ್ಯ ದೃಷ್ಟಿಯ ಮಾತನ್ನು ಮತ್ತೆ ತಿಳಿಸುತ್ತೇವೆ. ದಿವ್ಯ ದೃಷ್ಟಿಯೆಂದಾದರೂ ಹೇಳಿರಿ, ದಿವ್ಯ ನೇತ್ರವೆಂದಾದರೂ ಹೇಳಿರಿ, ಆತ್ಮಿಕ ಮಣಿಯೆಂದಾದರೂ ಹೇಳಿರಿ, ಮಾತು ಒಂದೇ ಆಗಿದೆ. ಈ ದಿವ್ಯ ಬುದ್ಧಿಯೆಂಬ ಸಂಪೂರ್ಣ ಚಿನ್ನದ ಪಾತ್ರೆಯನ್ನು ತೆಗೆದುಕೊಂಡು ಬಂದಿದ್ದೀರಲ್ಲವೆ. ಅಪ್ಪಟ ಚಿನ್ನದಲ್ಲಿ ಬೆಳ್ಳಿ ಅಥವಾ ತಾಮ್ರವಂತು ಸೇರಿರುವುದಿಲ್ಲ ಅಲ್ಲವೆ. ಸತೋಪ್ರಧಾನ ಅರ್ಥಾತ್ ಸಂಪೂರ್ಣ ಚಿನ್ನ(ಅಪ್ಪಟ ಚಿನ್ನ), ಇದಕ್ಕೇ ದಿವ್ಯ ಬುದ್ಧಿಯೆಂದು ಹೇಳಲಾಗುತ್ತದೆ. ಒಳ್ಳೆಯದು. ಯಾವುದೇ ಕಡೆಯಿಂದ ಬಂದಿದ್ದೀರಿ, ಎಲ್ಲಾ ಕಡೆಗಳಿಂದ ಜ್ಞಾನ ನದಿಗಳು ಬಂದು ಸಾಗರನಲ್ಲಿ ಸಮಾವೇಶವಾದಿರಿ. ನದಿ ಮತ್ತು ಸಾಗರದ ಮೇಳ(ಸಂಗಮ)ವಾಗಿದೆ. ಮಹಾನ್ ಮೇಳವನ್ನಾಚರಿಸಲು ಬಂದಿದ್ದೀರಲ್ಲವೆ. ಮಿಲನದ ಮೇಳವನ್ನು ಆಚರಿಸುವುದಕ್ಕಾಗಿ ಬಂದಿದ್ದೀರಿ. ಬಾಪ್ದಾದಾರವರೂ ಸಹ ಸರ್ವ ಜ್ಞಾನ ನದಿಗಳನ್ನು ನೋಡುತ್ತಾ ಹರ್ಷಿತವಾಗುತ್ತಾರೆ - ಹೇಗೆ ಇವರು ಉಮ್ಮಂಗ-ಉತ್ಸಾಹದಿಂದ, ಎಲ್ಲೆಲ್ಲಿಂದ ಈ ಮಿಲನದ ಮೇಳದಲ್ಲಿ ತಲುಪಿ ಬಿಟ್ಟಿದ್ದಾರೆ! ಎಂದು. ಒಳ್ಳೆಯದು!

ಸದಾ ದಿವ್ಯ ಬುದ್ಧಿಯ ಗೋಲ್ಡನ್ ಗಿಫ್ಟ್ ನ್ನು ಕಾರ್ಯದಲ್ಲಿ ಉಪಯೋಗಿಸುವಂತಹ, ಸದಾ ತಂದೆಯ ಸಮಾನ ಚತುರರಾಗಿದ್ದು ಮಾಯೆಯ ಚತುರತೆಯನ್ನು ತಿಳಿಯುವ, ಸದಾ ತಂದೆಯ ಛತ್ರಛಾಯೆಯಲ್ಲಿದ್ದು ಮಾಯೆಯ ಛಾಯೆಯಿಂದ ದೂರವಿರುವ, ಸದಾ ಜ್ಞಾನ ಸಾಗರನೊಂದಿಗೆ ಮಧುರ ಮಿಲನವನ್ನಾಚರಿಸುವ, ಪ್ರತಿಯೊಂದು ಕಷ್ಟವನ್ನು ಸಹಜವನ್ನಾಗಿ ಮಾಡಿಕೊಳ್ಳುವ, ವಿಶ್ವ ಕಲ್ಯಾಣಕಾರಿ, ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿರುವ, ಶ್ರೇಷ್ಠಾತ್ಮರಿಗೆ ಬಾಪ್ದಾದಾರವರಿಗೆ ನೆನಪು-ಪ್ರೀತಿ ಹಾಗೂ ನಮಸ್ತೆ.

ವ್ಯಕ್ತಿಗತ ವಾರ್ತಾಲಾಪ:-
1. ದೃಷ್ಟಿ ಬದಲಾಗುವುದರಿಂದ ಸೃಷ್ಟಿಯು ಬದಲಾಗಿ ಬಿಟ್ಟಿದೆಯಲ್ಲವೆ! ದೃಷ್ಟಿಯು ಶ್ರೇಷ್ಠವಾಯಿತೆಂದಾಗ ಸೃಷ್ಠಿಯೂ ಶ್ರೇಷ್ಠವಾಗಿ ಬಿಟ್ಟಿತು! ಈಗ ಸೃಷ್ಟಿಯೇ ತಂದೆಯಾಗಿದ್ದಾರೆ. ತಂದೆಯಲ್ಲಿ ಸೃಷ್ಟಿಯು ಸಮಾವೇಶವಾಗಿದೆ. ಇಂತಹದ್ದೇ ಅನುಭವವಾಗುತ್ತದೆ ಅಲ್ಲವೆ! ಎಲ್ಲಿಯೇ ನೋಡಿ, ಕೇಳಿದರೂ ತಂದೆಯೂ ಸಹ ಜೊತೆಯಲ್ಲಿರುವ ಅನುಭವವಾಗುತ್ತದೆಯಲ್ಲವೆ! ಇಂತಹ ಸ್ನೇಹಿಯು ಇಡೀ ವಿಶ್ವದಲ್ಲಿ ಯಾರೂ ಆಗಲು ಸಾಧ್ಯವಿಲ್ಲ, ಯಾರು ಪ್ರತೀ ಸೆಕೆಂಡ್, ಪ್ರತೀ ಸಂಕಲ್ಪದಲ್ಲಿಯೂ ಜೊತೆಯನ್ನು ನಿಭಾಯಿಸುತ್ತಾರೆ. ಲೌಕಿಕದಲ್ಲಿ ಯಾರೆಷ್ಟಾದರೂ ಸ್ನೇಹಿಯಾಗಿರಲಿ ಆದರೆ ಸದಾ ಜೊತೆಯನ್ನು ಕೊಡಲು ಸಾಧ್ಯವಿಲ್ಲ. ಇವರಂತು ಸ್ವಪ್ನದಲ್ಲಿಯೂ ಜೊತೆ ಕೊಡುತ್ತಾರೆ. ಇಂತಹ ಜೊತೆ ನಿಭಾಯಿಸುವ ಜೊತೆಗಾರನು ಸಿಕ್ಕಿದ್ದಾರೆ. ಆದ್ದರಿಂದ ಸೃಷ್ಟಿಯು ಬದಲಾಗಿ ಬಿಟ್ಟಿತು. ಈಗ ಲೌಕಿಕದಲ್ಲಿಯೂ ಅಲೌಕಿಕತೆಯ ಅನುಭವ ಮಾಡುತ್ತೀರಲ್ಲವೆ! ಲೌಕಿಕದಲ್ಲಿ ಯಾವುದೇ ಸಂಬಂಧವನ್ನು ನೋಡುತ್ತೀರೆಂದರೆ ಸತ್ಯ ಸಂಬಂಧವು ಸ್ವತಹವಾಗಿ ಸ್ಮೃತಿಯಲ್ಲಿ ಬರುತ್ತದೆ, ಇದರಿಂದ ಆ ಆತ್ಮರಿಗೂ ಶಕ್ತಿಯು ಸಿಕ್ಕಿ ಬಿಡುತ್ತದೆ. ಯಾವಾಗ ತಂದೆಯು ಜೊತೆಯಿದ್ದಾರೆಂದಾಗ ನಿಶ್ಚಿಂತ ಚಕ್ರವರ್ತಿಯಾಗಿದ್ದೀರಿ. ಸರಿಯಾಗುತ್ತದೆಯೇ ಅಥವಾ ಇಲ್ಲವೇ - ಇದನ್ನೂ ಸಹ ಯೋಚಿಸುವ ಅವಶ್ಯಕತೆಯಿರುವುದಿಲ್ಲ. ಯಾವಾಗ ತಂದೆಯು ಜೊತೆಯಿದ್ದಾರೆಂದಾಗ ಎಲ್ಲವೂ ಸರಿಯಾಗಿಯೇ ಇದೆ. ಅಂದಮೇಲೆ ಜೊತೆಯ ಅನುಭವ ಮಾಡುತ್ತಾ ಹಾರುತ್ತಾ ಸಾಗಿರಿ. ಯೋಚಿಸುವುದೂ ಸಹ ತಂದೆಯ ಕಾರ್ಯವಾಗಿದೆ, ನಮ್ಮ ಕಾರ್ಯವಾಗಿದೆ - ಜೊತೆಯಲ್ಲಿ ಮಗ್ನರಾಗಿರುವುದು. ಆದ್ದರಿಂದ ಬಲಹೀನತೆಯ ವಿಚಾರವೂ ಸಮಾಪ್ತಿ. ಸದಾ ನಿಶ್ಚಿಂತ ಚಕ್ರವರ್ತಿಯಾಗಿರಿ, ಈಗಲೂ ಚಕ್ರವರ್ತಿ ಮತ್ತು ಸದಾಕಾಲವೂ ಚಕ್ರವರ್ತಿ.

2. ಸದಾ ತಮ್ಮನ್ನು ಸಫಲತೆಯ ನಕ್ಷತ್ರವೆಂದು ತಿಳಿಯಿರಿ ಮತ್ತು ಅನ್ಯ ಆತ್ಮರಿಗೂ ಸಫಲತೆಯ ಬೀಗದ ಕೈನ್ನು ಕೊಡುತ್ತಿರಿ. ಈ ಸೇವೆಯಿಂದ ಎಲ್ಲಾ ಆತ್ಮರು ಖುಷಿಯಾಗಿ, ತಮ್ಮ ಹೃದಯದಿಂದ ಆಶೀರ್ವಾದವನ್ನು ಕೊಡುತ್ತಾರೆ. ತಂದೆ ಹಾಗೂ ಸರ್ವರ ಆಶೀರ್ವಾದಗಳೇ ಮುಂದುವರೆಸುತ್ತದೆ.

ವಿಶೇಷವಾಗಿ ಆಯ್ಕೆ ಮಾಡಿರುವ ಅವ್ಯಕ್ತ-ಮಹಾವಾಕ್ಯಗಳು -

ಸಹಯೋಗಿಯಾಗಿ ಮತ್ತು ಸಹಯೋಗಿಯನ್ನಾಗಿ ಮಾಡಿರಿ

ಹೇಗೆ ಪ್ರಜೆಯು ರಾಜನ ಸಹಯೋಗಿ, ಸ್ನೇಹಿಯಾಗಿರುತ್ತಾನೆಯೋ ಹಾಗೆಯೇ ಮೊದಲು ತಮ್ಮ ಈ ಸರ್ವ ಕರ್ಮೇಂದ್ರಿಯಗಳು, ವಿಶೇಷ ಶಕ್ತಿಗಳು ಸದಾ ಸ್ನೇಹಿ, ಸಹಯೋಗಿಯಾಗಿರಲಿ. ಆಗಲೇ ಇದರ ಪ್ರಭಾವವು ಸಾಕಾರದಲ್ಲಿ ತಮ್ಮ ಸೇವೆಯ ಜೊತೆಗಾರರು ಅಥವಾ ಲೌಕಿಕ ಸಂಬಂಧಿಗಳು, ಜೊತೆಗಾರರ ಮೇಲೆ ಬೀಳುತ್ತದೆ. ಯಾವಾಗ ಸ್ವಯಂ ತಮ್ಮ ಸರ್ವ ಕರ್ಮೇಂದ್ರಿಯಗಳನ್ನು ಆದೇಶದನುಸಾರವಾಗಿ ಇಟ್ಟುಕೊಳ್ಳುತ್ತೀರಿ, ಆಗಲೇ ತಮ್ಮ ಅನ್ಯ ಎಲ್ಲಾ ಜೊತೆಗಾರರು ತಮ್ಮ ಕಾರ್ಯದಲ್ಲಿ ಸಹಯೋಗಿಯಾಗುವರು. ಯಾರೊಂದಿಗೆ ಸ್ನೇಹವಿರುತ್ತದೆಯೋ ಅವರ ಪ್ರತೀ ಕಾರ್ಯದಲ್ಲಿ ಅವಶ್ಯವಾಗಿ ಸಹಯೋಗಿಯಾಗಿರುತ್ತಾರೆ. ಅತಿ ಸ್ನೇಹಿ ಆತ್ಮನ ಚಿಹ್ನೆಯು - ಸದಾ ತಂದೆಯ ಶ್ರೇಷ್ಠ ಕಾರ್ಯದಲ್ಲಿ ಸಹಯೋಗಿಯಾಗಿರುತ್ತಾರೆ. ಎಷ್ಟೆಷ್ಟು ಸಹಯೋಗಿ, ಅಷ್ಟು ಸಹಜಯೋಗಿ. ಅಂದಮೇಲೆ ಹಗಲು-ರಾತ್ರಿಯೂ ಇದೇ ಲಗನ್ ಇರಲಿ - ಬಾಬಾ ಮತ್ತು ಸೇವೆ, ಇದನ್ನು ಬಿಟ್ಟು ಇನ್ನೇನೂ ಇಲ್ಲವೇ ಇಲ್ಲ. ಅವರು ಮಾಯೆಯ ಸಹಯೋಗಿಯಾಗಲು ಸಾಧ್ಯವಿಲ್ಲ, ಮಾಯೆಯಿಂದ ದೂರವಾಗಿ ಬಿಡುತ್ತಾರೆ.

ಸ್ವಯಂನ್ನು ಯಾರೆಷ್ಟಾದರೂ ಬೇರೆ ಮಾರ್ಗದವರೆಂದು ತಿಳಿದುಕೊಳ್ಳಲಿ, ಆದರೆ ಈಶ್ವರೀಯ ಸ್ನೇಹವು ಸಹಯೋಗಿಯನ್ನಾಗಿ ಮಾಡಿ ‘ಪರಸ್ಪರದಲ್ಲಿ ಒಂದಾಗಿ' ಮುಂದುವರೆಯುವ ಸೂತ್ರದಲ್ಲಿ ಬಂಧಿಸಿ ಬಿಡುತ್ತದೆ. ಸ್ನೇಹವು ಮೊದಲು ಸಹಯೋಗಿಯನ್ನಾಗಿ ಮಾಡುತ್ತದೆ, ಸಹಯೋಗಿಯನ್ನಾಗಿ ಮಾಡುತ್ತಾ-ಮಾಡುತ್ತಾ ಸ್ವತಹವಾಗಿ ಸಮಯದಲ್ಲಿ ಸಹಜಯೋಗಿಯನ್ನಾಗಿ ಮಾಡಿ ಬಿಡುತ್ತದೆ. ಈಶ್ವರೀಯ ಸ್ನೇಹವು ಪರಿವರ್ತನೆಯ ಫೌಂಡೇಷನ್ ಆಗಿದೆ ಅಥವಾ ಜೀವನ-ಪರಿವರ್ತನೆಯ ಬೀಜ ಸ್ವರೂಪವಾಗಿದೆ. ಯಾವ ಆತ್ಮರಲ್ಲಿ ಈಶ್ವರೀಯ ಸ್ನೇಹದ ಅನುಭೂತಿಯ ಬೀಜವು ಬಿತ್ತನೆಯಾಗಿರುತ್ತದೆ, ಅದರಿಂದ ಈ ಬೀಜವು ಸಹಯೋಗಿಯಾಗುವ ವೃಕ್ಷವು, ಸ್ವತಹವಾಗಿಯೇ ಉತ್ಪನ್ನ ಮಾಡುತ್ತಿರುತ್ತದೆ ಮತ್ತು ಸಮಯದಲ್ಲಿ ಸಹಜ ಯೋಗಿಯಾಗುವ ಫಲವು ಕಾಣಿಸುತ್ತದೆ. ಏಕೆಂದರೆ ಪರಿವರ್ತನೆಯ ಬೀಜದ ಫಲವು ಅವಶ್ಯವಾಗಿ ತೋರಿಸುತ್ತದೆ. ಎಲ್ಲರ ಮನಸ್ಸಿನ ಶುಭ ಭಾವನೆ ಮತ್ತು ಶುಭ ಕಾಮನೆಯ ಸಹಯೋಗವು ಯಾವುದೇ ಕಾರ್ಯದಲ್ಲಿಯೂ ಸಫಲತೆಯನ್ನು ಕೊಡಿಸುತ್ತದೆ. ಏಕೆಂದರೆ ಈ ಶುಭ ಭಾವನೆ, ಶುಭ ಕಾಮನೆಯ ಕೋಟೆಯು ಆತ್ಮರನ್ನು ಪರಿವರ್ತನೆ ಮಾಡಿ ಬಿಡುತ್ತದೆ. ವಾಯುಮಂಡಲದ ಕೋಟೆಯು ಸರ್ವರ ಸಹಯೋಗದಿಂದಲೇ ಆಗುತ್ತದೆ. ಈಶ್ವರೀಯ ಸ್ನೇಹದ ಸೂತ್ರವು ಒಂದಿರುತ್ತದೆಯೆಂದರೆ, ಅನೇಕತೆಯ ವಿಚಾರವಿದ್ದರೂ ಸಹ ಸಹಯೋಗಿಯಾಗುವ ವಿಚಾರವು ಉತ್ಪನ್ನವಾಗಿ ಬಿಡುತ್ತದೆ. ಈಗ ಸರ್ವಶಕ್ತಿಗಳನ್ನು ಸಹಯೋಗಿಯನ್ನಾಗಿ ಮಾಡಿಕೊಳ್ಳಿರಿ. ಆಗುತ್ತಲೂ ಇದ್ದೀರಿ ಆದರೆ ಇನ್ನೂ ಸಮೀಪ, ಸಹಯೋಗಿಯನ್ನಾಗಿ ಮಾಡಿಕೊಳ್ಳುತ್ತಾ ಸಾಗಿರಿ ಏಕೆಂದರೆ ಈಗ ಪ್ರತ್ಯಕ್ಷತೆಯ ಸಮಯವು ಸಮೀಪಕ್ಕೆ ಬರುತ್ತಿದೆ. ಮೊದಲು ತಾವು ಅವರನ್ನು ಸಹಯೋಗಿಯನ್ನಾಗಿ ಮಾಡಿಕೊಳ್ಳುವ ಪರಿಶ್ರಮ ಪಡುತ್ತಿದ್ದಿರಿ, ಈಗ ಅವರು ಸ್ವಯಂ ಸಹಯೋಗಿಯಾಗುವ ಅವಕಾಶವನ್ನು ಕೊಡುತ್ತಿದ್ದಾರೆ ಮತ್ತು ಮುಂದೆಯೂ ಮಾಡುತ್ತಿರುತ್ತಾರೆ.

ಸಮಯ - ಪ್ರತಿ ಸಮಯದಲ್ಲಿ ಸೇವೆಯ ರೂಪ-ರೇಖೆಗಳು ಬದಲಾಗುತ್ತಿದೆ ಮತ್ತು ಬದಲಾಗುತ್ತಿರುತ್ತದೆ. ಈಗ ತಾವುಗಳಿಗೆ ಹೇಳಬೇಕಾಗಿರುವುದಿಲ್ಲ ಆದರೆ ಅವರೇ ಸ್ವಯಂ ಹೇಳುತ್ತಾರೆ - ಈ ಕಾರ್ಯವು ಶ್ರೇಷ್ಠವಿದೆ. ಆದ್ದರಿಂದ ನಾವೂ ಸಹ ಸಹಯೋಗಿಯಾಗಲೇಬೇಕು. ಯಾರು ಸತ್ಯ ಹೃದಯದಿಂದ, ಸ್ನೇಹದಿಂದ ಸಹಯೋಗವನ್ನು ಕೊಡುತ್ತಾರೆಯೋ ಅವರು ತಂದೆಯಿಂದ ಪದಮದಷ್ಟು ತೆಗೆದುಕೊಳ್ಳಲು ಅಧಿಕಾರಿಯಾಗುತ್ತಾರೆ. ತಂದೆಯ ಸಂಪೂರ್ಣ ಸಹಯೋಗದ ಲೆಕ್ಕವನ್ನು ಚುಕ್ತ ಮಾಡುತ್ತಾರೆ. ದೊಡ್ಡ ಕಾರ್ಯವನ್ನೂ ಸಹಜವಾಗಿ ಮಾಡುವ ಚಿತ್ರವಾಗಿ, ಪರ್ವತಕ್ಕೆ ಬೆರಳನ್ನು ಕೊಡುತ್ತಿರುವ ಚಿತ್ರವನ್ನು ತೋರಿಸಿದ್ದಾರೆ, ಇದು ಸಹಯೋಗದ ಚಿಹ್ನೆಯಾಗಿದೆ. ಅಂದಮೇಲೆ ಪ್ರತಿಯೊಬ್ಬರೂ ಸಹಯೋಗಿಯಾಗಿರುತ್ತಾ ಮುಂದೆ ಬರಲಿ, ಸಮಯದಲ್ಲಿ ಸಹಯೋಗಿಯಾಗಲಿ - ಈಗ ಅದರ ಅವಶ್ಯಕತೆಯಿದೆ. ಅದಕ್ಕಾಗಿ ಶಕ್ತಿಶಾಲಿ ಬಾಣವನ್ನು ಹೊಡೆಯಬೇಕಾಗುತ್ತದೆ. ಶಕ್ತಿಶಾಲಿ ಬಾಣವು ಅದೇ ಆಗಿರುತ್ತದೆ, ಯಾವುದರಲ್ಲಿ ಸರ್ವ ಆತ್ಮರ ಸಹಯೋಗದ ಭಾವನೆಯಿರಲಿ, ಖುಷಿಯ ಭಾವನೆಯಿರಲಿ, ಸದ್ಭಾವನೆಯಿರುತ್ತದೆ. ಒಳ್ಳೆಯದು. ಓಂ ಶಾಂತಿ.

ವರದಾನ:  
ಸ್ನೇಹ ಮತ್ತು ನವೀನತೆಯ ಅಥಾರಿಟಿಯಿಂದ ಸಮರ್ಪಿತ ಮಾಡಿಸುವ ಮಹಾನ್ ಆತ್ಮ ಭವ.

ಯಾರೆಲ್ಲಾ ಸಂಪರ್ಕದಲ್ಲಿ ಬಂದಿದ್ದಾರೆಯೋ ಅವರನ್ನು ಇಂತಹ ಸಂಬಂಧದಲ್ಲಿ ಕರೆ ತನ್ನಿರಿ, ಅವರು ಸಂಬಂಧದಲ್ಲಿ ಬರುತ್ತಾ-ಬರುತ್ತಾ ಸಮರ್ಪಣಾ ಬುದ್ಧಿ ಆಗಿ ಬಿಡಿಲಿ ಮತ್ತು ಹೇಳಲಿ - ತಂದೆಯು ಏನನ್ನು ಹೇಳಿದ್ದಾರೆಯೋ ಅದೇ ಸತ್ಯವಾದುದಾಗಿದೆ, ಇದಕ್ಕೆ ಹೇಳಲಾಗುತ್ತದೆ- ಸಮರ್ಪಣಾ ಬುದ್ಧಿ. ನಂತರ ಅವರ ಪ್ರಶ್ನೆಗಳು ಸಮಾಪ್ತಿಯಾಗಿ ಬಿಡುತ್ತದೆ. ಕೇವಲ ಇವರ ಜ್ಞಾನವು ಚೆನ್ನಾಗಿದೆ ಎಂದಷ್ಟೇ ಹೇಳಬಾರದು. ಆದರೆ ಇದು ಹೊಸ ಜ್ಞಾನವಾಗಿದೆ, ಅದು ಹೊಸ ಪ್ರಪಂಚವನ್ನು ತರುತ್ತದೆ - ಈ ಧ್ವನಿ ಹೊರಡಲಿ, ಆಗಲೇ ಕುಂಭಕರ್ಣರು ಮೇಲೇಳುತ್ತಾರೆ. ಅಂದಮೇಲೆ ನವೀನತೆಯ ಮಹಾನತೆಯ ಮೂಲಕ ಸ್ನೇಹ ಮತ್ತು ಅಥಾರಿಟಿಯ ಬ್ಯಾಲೆನ್ಸ್ ನಿಂದ ಈ ರೀತಿಯಲ್ಲಿ ಸಮರ್ಪಣೆ ಮಾಡಿಸಿರಿ, ಆಗ ಮೈಕ್ ತಯಾರಾಯಿತು ಎಂದು ಹೇಳುತ್ತೇವೆ.

ಸ್ಲೋಗನ್:
ಒಬ್ಬ ಪರಮಾತ್ಮನ ಪ್ರಿಯರಾಗಿರಿ, ಆಗಲೇ ವಿಶ್ವದ ಪ್ರಿಯರಾಗುವಿರಿ.