15.05.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ನೆನಪಿನಲ್ಲಿದ್ದು ಭೋಜನವನ್ನು ತಯಾರಿ ಮಾಡಿದಾಗ ಸ್ವೀಕರಿಸುವಂತಹವರ ಹೃದಯ (ಮನಸ್ಸು) ಶುದ್ಧವಾಗಿ
ಬಿಡುತ್ತದೆ, ನೀವು ಬ್ರಾಹ್ಮಣರ ಭೋಜನ ಬಹಳ ಶುದ್ಧವಾಗಿರಬೇಕಾಗಿದೆ.”
ಪ್ರಶ್ನೆ:
ಸತ್ಯಯುಗದಲ್ಲಿ
ನಿಮ್ಮ ಬಾಗಿಲಿಗೆ ಎಂದಿಗೂ ಮೃತ್ಯುವು ಬರುವುದಿಲ್ಲ- ಏಕೆ?
ಉತ್ತರ:
ಏಕೆಂದರೆ
ಸಂಗಮದಲ್ಲಿ ನೀವು ಮಕ್ಕಳು ತಂದೆಯಿಂದ ಬದುಕಿದ್ದಂತೆಯೇ ಸಾಯುವುದನ್ನು ಕಲಿತಿದ್ದೀರಿ. ಯಾರು ಈಗ
ಬದುಕಿದ್ದೂ ಸಾಯುತ್ತಾರೆ ಅವರ ಬಾಗಿಲಿಗೆ ಎಂದಿಗೂ ಮೃತ್ಯುವು ಬರುವುದಿಲ್ಲ. ನೀವು ಇಲ್ಲಿಗೆ
ಬಂದಿರುವುದೇ ಸಾಯುವುದನ್ನು ಕಲಿಯುವ ಸಲುವಾಗಿ, ಸತ್ಯಯುಗವಾಗಿದೆ- ಅಮರಲೋಕ, ಅಲ್ಲಿ ಮೃತ್ಯು
ಯಾರನ್ನೂ ಕಬಳಿಸುವುದಿಲ್ಲ. ಈ ರಾವಣ ರಾಜ್ಯವು ಮೃತ್ಯು ಲೋಕವಾಗಿದೆ, ಆದ್ದರಿಂದ ಇಲ್ಲಿ ಎಲ್ಲರ
ಅಕಾಲ ಮೃತ್ಯುವಾಗುತ್ತಿರುತ್ತದೆ.
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳೇ, ಪ್ರದರ್ಶನಿಯನ್ನು ನೋಡಿ ಬಂದಾಗ ಬುದ್ಧಿಯಲ್ಲಿ ಇದೇ ನೆನಪಿರಬೇಕು -
ಶೂದ್ರನಾಗಿದ್ದಂತಹ ನಾವು ಬ್ರಾಹ್ಮಣರಾಗಿದ್ದೇವೆ ನಂತರ ದೇವತಾ ಸೂರ್ಯವಂಶಿ, ಚಂದ್ರವಂಶಿಯಾಗುತ್ತೇವೆ.
ಈ ಸಂಗಮಯುಗದ ಮಾಡೆಲ್ನ ಚಿತ್ರ ಪ್ರದರ್ಶನದಲ್ಲಿಡಬೇಕು. ಕಲಿಯುಗ ಮತ್ತು ಸತ್ಯಯುಗದ ಮಧ್ಯದಲ್ಲಿ ಇದು
ಸಂಗಮಯುಗವಾಗಿದೆ. ಆದ್ದರಿಂದ ಸಂಗಮಯುಗದ ಮಾಡಲ್ ಮಧ್ಯದಲ್ಲಿರಲಿ. ಆ ಚಿತ್ರದಲ್ಲಿ 15-20 ಶ್ವೇತ
ವಸ್ತ್ರಧಾರಿಗಳು ತಪಸ್ಸಿನಲ್ಲಿ ಕುಳಿತಿರಬೇಕು. ಸೂರ್ಯವಂಶಿಯರನ್ನು ತೋರಿಸಿರುವಂತೆ
ಚಂದ್ರವಂಶಿಯರನ್ನೂ ತೋರಿಸಬೇಕು. ತಪಸ್ಸಿನಿಂದ ಹೀಗಿದ್ದವರು ಹೀಗಾದರೆಂದು ಮನುಷ್ಯರು
ತಿಳಿದುಕೊಳ್ಳುವಂತೆ ಮಾಡಬೇಕು. ಇದು ನಿಮ್ಮ ಆರಂಭದ ಚಿತ್ರವೂ ಆಗಿದೆ. ಸಾಧಾರಣ ತಪಸ್ಸಿನ ಹಾಗೂ
ಭವಿಷ್ಯದ ರಾಜ್ಯ ಪದವಿಯ ಚಿತ್ರ ಇರುವಂತೆ ಇದನ್ನೂ ಮಾಡಬೇಕು. ಆಗ ನೀವು ಇವರೇ ಅವರಾಗುತ್ತಾರೆಂದು
ತಿಳಿಸಿಕೊಡಬಹುದು. ಯಥಾವತ್ತಾಗಿ ತೋರಿಸಬೇಕಾಗುತ್ತದೆ. ನಾವು ಬ್ರಹ್ಮಾಕುಮಾರ-ಕುಮಾರಿಯರು
ರಾಜಯೋಗವನ್ನು ಕಲಿತು ಹೀಗೆ ಆಗುತ್ತೇವೆ. ಆಗ ಸಂಗಮಯುಗವನ್ನೂ ಸಹ ಅಗತ್ಯವಾಗಿ ತೋರಿಸಬೇಕಾಗುವುದು.
ನೀವು ಮಕ್ಕಳು ನೋಡಿಕೊಂಡು ಬರುತ್ತೀರೆಂದಾಗ ಇಡೀ ದಿನ ಆ ಜ್ಞಾನವು ಬುದ್ಧಿಯಲ್ಲಿರಬೇಕಾಗಿದೆ. ಆಗಲೇ
ಜ್ಞಾನ ಸಾಗರನ ಮಕ್ಕಳು ನೀವು ಮಾಸ್ಟರ್ ಜ್ಞಾನಸಾಗರ ಎಂದು ಕರೆಸಿಕೊಳ್ಳುತ್ತೀರಿ. ಒಂದು ವೇಳೆ
ಜ್ಞಾನವು ಬುದ್ಧಿಯಲ್ಲಿ ಇಲ್ಲದಿರುವಾಗ ಜ್ಞಾನಸಾಗರನೆಂದು ಹೇಳಲಾಗುತ್ತದೆಯೇನು! ಆದುದರಿಂದ ಇಡೀ
ದಿನ ಬುದ್ಧಿಯು ಇದರಲ್ಲಿಯೇ ತೊಡಗಿದ್ದಾಗ ಎಲ್ಲಾ ಬಂಧನಗಳು ದೂರವಾಗುತ್ತಾ ಹೋಗುತ್ತವೆ. ಈಗ ನಾವು
ಬ್ರಾಹ್ಮಣರಾಗಿದ್ದೇವೆ ನಂತರ ದೇವತೆಯಾಗುತ್ತೇವೆ. ಒಂದು ವೇಳೆ ಉತ್ತಮ ಪುರುಷಾರ್ಥ ಮಾಡದೇ ಹೋದಲ್ಲಿ
ಕ್ಷತ್ರಿಯ ಕುಲದಲ್ಲಿ ಹೋಗಿ ಬಿಡುತ್ತೀರಿ ವೈಕುಂಠವನ್ನು ನೋಡಲೂ ಆಗುವುದಿಲ್ಲ. ಮುಖ್ಯವಾಗಿರುವುದೇ
ವೈಕುಂಠ. ವಂಡರ್ ಆಫ್ ದಿ ವರ್ಲ್ಡ್ (ಅಧ್ಭುತ ಜಗತ್ತು) ಎಂದು ಸತ್ಯಯುಗಕ್ಕೆ ಕರೆಯಲಾಗುವುದು
ಆದುದರಿಂದ ಪುರುಷಾರ್ಥ ಮಾಡಬೇಕು. ನಿಮ್ಮ ಈ ಎರಡೂ ಚಿತ್ರಗಳಿರಬೇಕಾಗುತ್ತದೆ. ಅದೇ ಬಣ್ಣ-ಬಣ್ಣದ
ವಸ್ತ್ರ ಹಾಗೂ ಆಭರಣಗಳಿಂದ ಶೃಂಗರಿಸಲ್ಪಟ್ಟಿರುವ ಚಿತ್ರ ಹಾಗೂ ಇದು ತಪಸ್ಸಿನ ಚಿತ್ರ ಆಗ......
ಇವರು ಸೂಕ್ಷ್ಮವತನದಲ್ಲಿ ಕುಳಿತಿದ್ದಾರೆಂದು ಅವರು ತಿಳಿದುಕೊಳ್ಳುತ್ತಾರೆ. ವಸ್ತ್ರವನ್ನಂತೂ
ಬದಲಾಯಿಸಬೇಕಾಗುತ್ತದೆ, ಲಕ್ಷಣವನ್ನಂತೂ ಬದಲಾಯಿಸಲು ಸಾಧ್ಯವಿಲ್ಲ. ಅದು ಅಪವಿತ್ರ ಪ್ರವೃತ್ತಿ
ಮಾರ್ಗದ್ದಾಗಿದೆ, ಇದು ಪವಿತ್ರ ಪ್ರವೃತ್ತಿ ಮಾರ್ಗದ್ದಾಗಿದೆ. ಈ ಎರಡೂ ಚಿತ್ರದಿಂದ ಸತ್ಯಯುಗದ
ಸ್ಥಾಪನೆ ಮಾಡುತ್ತಿದ್ದಾರೆಂದು ತಿಳಿದುಕೊಳ್ಳುತ್ತಾರೆ. ಇವರೇ ಮತ್ತೆ ಅವರಾಗುತ್ತಾರೆ (ದೇವತೆಗಳು).
ಯಾರು ಪರಿಶ್ರಮ ಪಡುತ್ತಾರೆಯೋ ಅವರೇ ಪಡೆದುಕೊಳ್ಳುತ್ತಾರೆ. ಬ್ರಾಹ್ಮಣರಾಗುವವರಂತೂ ಬಹಳ
ಇದ್ದಾರಲ್ಲವೆ, ಈ ಸಮಯ ನೀವು ಕಡಿಮೆಯಿದ್ದೀರಿ. ದಿನ-ಪ್ರತಿದಿನ ವೃದ್ಧಿಯಾಗುತ್ತಿರುತ್ತದೆ. ಸೃಷ್ಟಿ
ಚಕ್ರವು ಹೇಗೆ ತಿರುಗುತ್ತದೆ ಎನ್ನುವುದು ಬುದ್ಧಿಯಲ್ಲಿದೆ- ನಾವೀಗ ತಪಸ್ಸನ್ನು ಮಾಡುತ್ತಿದ್ದೇವೆ
ನಂತರ ಹೀಗೆ ಆಗುತ್ತೇವೆ. ಇದನ್ನೇ ಸ್ವದರ್ಶನ ಚಕ್ರಧಾರಿಯಾಗಿ ಕುಳಿತುಕೊಳ್ಳುವುದು ಎಂದು
ಕರೆಯಲಾಗುವುದು, ಏಕೆಂದರೆ ಬುದ್ಧಿಯಲ್ಲಂತೂ ಪೂರ್ಣ ಜ್ಞಾನವಿದೆ. ನಾವು ಏನಾಗಿದ್ದೆವು, ಈಗ
ಏನಾಗುತ್ತೇವೆ. ವಿದ್ಯಾರ್ಥಿಗಳು ಶಿಕ್ಷಕರನ್ನು ಅಗತ್ಯವಾಗಿ ನೆನಪು ಮಾಡುತ್ತಾರೆ, ನಿಮ್ಮನ್ನೂ ಸಹ
ತಂದೆ (ಶಿಕ್ಷಕ) ಯು ನೆನಪು ಮಾಡುತ್ತಾರೆ. ನೆನಪಿನ ಯಾತ್ರೆಯಿಂದ ಮಾತ್ರ ಪಾಪ ನಾಶವಾಗುತ್ತದೆ.
ಆತ್ಮವು ಪವಿತ್ರವಾಗಿ ನಂತರ ಪವಿತ್ರ ಶರೀರವು ದೊರೆಯುತ್ತದೆ. ಯಾರು ಶೂದ್ರರಿಂದ
ಬ್ರಾಹ್ಮಣರಾಗುತ್ತಾರೆಯೋ ಅವರೇ ನಂತರ ದೇವತೆಗಳಾಗುತ್ತಾರೆ. ಈ ಚಿತ್ರವು ಎಷ್ಟು ದೊಡ್ಡ
ಚಿತ್ರವಾಗಿರುತ್ತದೆಯೋ ಅಷ್ಟು ಒಳ್ಳೆಯದು ಏಕೆಂದರೆ ಸಂಗಮಯುಗದಲ್ಲಿ ಪುರುಷೋತ್ತಮರಾಗುವ ಬ್ರಾಹ್ಮಣರು
ಎಂದು ಬರೆಯಬೇಕು. ಈಗ ನಿಮಗೆ ತಂದೆಯು ಕುಳಿತು ಓದಿಸುತ್ತಿದ್ದಾರೆ. ಮೇಲೆ ಶಿವತಂದೆಯ ಚಿತ್ರವೂ ಇರಲಿ,
ಅವರು ನಿಮಗೆ ಓದಿಸುತ್ತಿದ್ದಾರೆ. ನೀವೀಗ ಹೀಗೆ(ದೇವತೆ) ಆಗುತ್ತೀರಿ. ಈ ಬ್ರಹ್ಮಾರವರೂ ಸಹ ನಿಮ್ಮ
ಜೊತೆಯಿದ್ದಾರೆ, ಅವರು ಶ್ವೇತ ವಸ್ತ್ರಧಾರಿ ವಿದ್ಯಾರ್ಥಿಯಾಗಿದ್ದಾರೆ. ಮನುಷ್ಯರಂತೂ ರಾಮ
ರಾಜ್ಯವನ್ನು ಒಪ್ಪಿಕೊಳ್ಳುವುದಿಲ್ಲ. ರಾಮ ರಾಜ್ಯ, ರಾಮನಂತೆ ಪ್ರಜೆ..... ಎಂಬ ಗಾಯನವೂ ಇದೆ.
ಸತ್ಯಯುಗದಲ್ಲಂತೂ ಧರ್ಮದ ರಾಜ್ಯವಿರುತ್ತದೆ ಉಳಿದ ತ್ರೇತಾಯುಗದಲ್ಲಿ ಕ್ಷತ್ರಿಯರನ್ನು ನಿಂಧನೆ
ಮಾಡಿದ್ದಾರೆ. ಸೂರ್ಯವಂಶಿಯರನ್ನು ನಿಂದನೆ ಮಾಡಿಲ್ಲ. ಆದ್ದರಿಂದ ಇದನ್ನು ಬರೆಯಬೇಕು- ರಾಮ ರಾಜ,
ರಾಮ ಪ್ರಜಾ..... ಧರ್ಮದಲ್ಲಿ ಉಪಕಾರವಿರುತ್ತದೆ. ಅದೂ ಸಹ ಸೆಮಿ ಸ್ವರ್ಗವಾಗಿದೆ ಏಕೆಂದರೆ 14
ಕಲೆಯಲ್ಲವೆ! ಅಲ್ಲಿ ಇಂತಹ ನಿಂದನೆಯ ಮಾತಿರುವುದಿಲ್ಲ, ಆಗುವುದಿಲ್ಲ ಆದುದರಿಂದ ಅವರಿಗೆ ನಾವು
ಏನಾಗುತ್ತಿದ್ದೇವೆಂದು ಸ್ಪಷ್ಟ ಮಾಡಿ. ನಾವೇ ನಮಗಾಗಿ ರಾಮರಾಜ್ಯ ಸ್ಥಾಪನೆ ಮಾಡುತ್ತಿದ್ದೇವೆ,
ವಿಶ್ವದಲ್ಲಿ ಶಾಂತಿಯ ಒಂದೇ ಅಂತಹ ಸ್ವರಾಜ್ಯವನ್ನು ಎಲ್ಲರೂ ಬೇಡುತ್ತಾರೆ, ನಾವು ಅದನ್ನು ಸ್ಥಾಪನೆ
ಮಾಡುತ್ತಿದ್ದೇವೆ. ತಂದೆಯು ಪ್ರದರ್ಶನಿ ಮೊದಲಾದವುಗಳನ್ನು ನೋಡಿದಾಗ ಈ ಚಿಂತನೆ ನಡೆಯುತ್ತಿರುತ್ತದೆ.
ನೀವು ಮಕ್ಕಳು ಮನೆಗೆ ಹೋದಾಗ ಎಲ್ಲವನ್ನೂ ಮರೆತು ಬಿಡುತ್ತೀರಿ ಆದರೆ ಈ ಎಲ್ಲವನ್ನೂ ಬುದ್ಧಿಯಲ್ಲಿ
ನೆನಪಿಟ್ಟುಕೊಳ್ಳಬೇಕು. ಪ್ರದರ್ಶನಿಯಿಂದ ಹೊರಗೆ ಬಂದ ನಂತರ ಆಟ ಮುಗಿಯುವಂತೆ ಮರೆಯಬಾರದು.
ಒಳ್ಳೊಳ್ಳೆಯ ಮಕ್ಕಳು ಯಾರು ಉತ್ತಮ ಪುರುಷಾರ್ಥಿಗಳಾಗಿದ್ದಾರೆ, ಅವರ ಬುದ್ಧಿಯಲ್ಲಿ ಇದು ವಿಚಾರ
ನಡೆಯುತ್ತಿರಬೇಕು. ತಂದೆಗಂತೂ ವಿಚಾರ ನಡೆಯುತ್ತಲೇ ಇರುತ್ತದೆ. ಬುದ್ಧಿಯಲ್ಲಿ ಇಡೀ ಜ್ಞಾನವಿದ್ದರೆ
ತಂದೆಯ ನೆನಪೂ ಇರುತ್ತದೆ, ಉನ್ನತಿಯನ್ನು ಹೊಂದುತ್ತಿರುತ್ತೀರಿ. ಒಂದು ವೇಳೆ
ಸತೋಪ್ರಧಾನವಾಗದಿದ್ದರೆ ಸತ್ಯಯುಗದಲ್ಲಿ ಹೋಗುವುದಿಲ್ಲ ಆದ್ದರಿಂದ ತಮ್ಮನ್ನು ನೆನಪಿನ ಯಾತ್ರೆಯಲ್ಲಿ
ಪಕ್ಕಾ ಇಟ್ಟುಕೊಳ್ಳಬೇಕು. ನೀವು ರಾಜಯೋಗಿಗಳು, ನಿಮಗೆ ಅತೀ ದೊಡ್ಡ ಜಟೆ (ಉದ್ದವಾದ ಕೂದಲು) ಯಿದೆ,
ನೀವು ಮಾತೆಯರದೇ ಎಲ್ಲಾ ಮಹಿಮೆ ಆಗಿದೆ. ಸ್ವಾಭಾವಿಕ ಜಟೆಯಿದೆ. ರಾಜಯೋಗಿ ಹಾಗೂ ಯೋಗಿನಿಯ
ಸತ್ಯ-ಸತ್ಯ ತಪಸ್ಸಿನ ರೂಪ ತೋರಿಸುತ್ತಾರೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ತಂದೆಯು
ತಿಳಿಸುತ್ತಾರೆ- ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು ನಿಶ್ಚಯ ಮಾಡಿಕೊಳ್ಳಿ.
ಉಳಿದ ದೇಹದ ಸಂಬಂಧ ಮುಂತಾದವುಗಳನ್ನು ಮರೆತು ಒಬ್ಬ ತಂದೆಯನ್ನು ನೆನಪು ಮಾಡಿ. ಅವರು (ತಂದೆ)
ನಿಮ್ಮನ್ನು ತುಂಬಾ ಸಂಪದ್ಭರಿತವಾಗಿ ಮಾಡುತ್ತಾರೆ. ಬದುಕಿದ್ದೂ ಸತ್ತು ಹೋಗಿ. ತಂದೆಯು ಬಂದು
ಬದುಕಿದ್ದಂತೆಯೇ ಸಾಯುವುದನ್ನು ಕಲಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಕಾಲರ
ಕಾಲನಾಗಿದ್ದೇನೆ, ನಿಮಗೆ ಇಂತಹ ಮೃತ್ಯುವನ್ನು ಕಲಿಸಿಕೊಡುತ್ತೇನೆ, ಅದರಿಂದ ಎಂದಿಗೂ ನಿಮ್ಮ
ಬಾಗಿಲಲ್ಲಿ ಮೃತ್ಯುವು ಬರಲು ಸಾಧ್ಯವಿಲ್ಲ. ಅಲ್ಲಿ ರಾವಣ ರಾಜ್ಯವೇ ಇರುವುದಿಲ್ಲ. ಸತ್ಯಯುಗದಲ್ಲಿ
ಎಂದಿಗೂ ಮೃತ್ಯುವೂ ಕಬಳಿಸುವುದಿಲ್ಲ ಅದನ್ನು ಅಮರ ಪುರಿಯೆ೦ದು ಕರೆಯಲಾಗುವುದು. ತಂದೆಯು ನಿಮ್ಮನ್ನು
ಅಮರ ಪುರಿಯ ಮಾಲೀಕರನ್ನಾಗಿ ಮಾಡುತ್ತಾರೆ. ಇದಾಗಿದೆ ಮೃತ್ಯುಲೋಕ ಅದಾಗಿದೆ ಅಮರಪುರಿ. ಇದು
ರಾಜಯೋಗವಾಗಿದೆ, ಇಲ್ಲಿ ಮತ್ತೆ ಪ್ರಾಚೀನ ಭಾರತದ ರಾಜಯೋಗವನ್ನು ಕಲಿಸಲಾಗುತ್ತದೆ ಎಂದು ಬರೆಯಿರಿ.
ಯಾರು ಪ್ರದರ್ಶನಿ ಮೊದಲಾದವುಗಳನ್ನು ನೋಡಿಕೊಳ್ಳುತ್ತಾರೆ ಅವರು ಜನರಿಗೆ ಯಥಾವತ್ತಾಗಿ
ತಿಳಿಸಿಕೊಡುವಂತೆ ವಿಚಾರ ಮಾಡಬೇಕಾಗುವುದು. ಇದರಲ್ಲಿ ಪ್ರತ್ಯಕ್ಷವಾಗಿ ಬಹಳ ಚೆನ್ನಾಗಿ
ತಿಳಿಸಿಕೊಡಬೇಕು. ಯಥಾ ರಾಜ - ರಾಣಿ ತಥಾ ಪ್ರಜೆಯಂತೂ ಬಂದೇ ಬಿಡುತ್ತಾರೆ. ತಂದೆಯು ಎಷ್ಟು
ಸ್ಪಷ್ಟವಾಗಿ ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದರ
ಬಗ್ಗೆ ಪೂರ್ಣ ಗಮನ ಕೊಡಬೇಕು. ವಿಶ್ವದಲ್ಲಿ ಪವಿತ್ರತೆ, ಸುಖ-ಶಾಂತಿಯ ಸ್ಥಾಪನೆಯಾಗುತ್ತಿದೆ, ಅದು
ಹೇಗೆ ಆಗುತ್ತಿದೆ ಎಂದು ಬಂದು ತಿಳಿದುಕೊಳ್ಳಿ. ನೀವು ನಿಮಗಾಗಿಯೇ ಮಾಡುತ್ತೀರಿ. ಹೇಗಾಗುತ್ತಾರೆಂದೂ
ಸಹ ತೋರಿಸಬೇಕು. ಪ್ರಜೆಗಳನ್ನೂ ತೋರಿಸಬೇಕು, ಶ್ರೀಮಂತ ಪ್ರಜೆಗಳನ್ನು, ಎರಡನೆ ದರ್ಜೆ, ಮೂರನೇ
ದರ್ಜೆಯ ಪ್ರಜೆಗಳನ್ನೂ ತೋರಿಸಬೇಕು. ಹೀಗೆ ಚೆನ್ನಾಗಿ ತಿಳಿಸಿಕೊಡಲು ಸ್ಪಷ್ಟವಾಗಿ ಮಾಡಬೇಕು.
ಇದರಲ್ಲಿ ಪರಿಶ್ರಮವಂತೂ ಪಡಬೇಕಾಗುವುದು. ಸಮಯವಂತೂ ತುಂಬಾ ಕಡಿಮೆಯಿದೆ, ಈ ಜ್ಞಾನವು ನಿಮಗಾಗಿಯೇ
ಇದೆ, ನೀವು ಪ್ರದರ್ಶನಿಯಲ್ಲಿ ಈ ರೀತಿ ತಿಳಿಸಿದರೆ ಜನರು ನಾವು ಒಬ್ಬ ತಂದೆಯನ್ನು ನೆನಪು ಮಾಡಿದಾಗ
ನಾವು ಹೀಗಾಗುತ್ತೇವೆಂದು ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ಮತ್ತೆ ಅವರು ಭಕ್ತಿಮಾರ್ಗದಲ್ಲಿ ಬಂದು
ಬಿಡುತ್ತಾರೆ. ನೀವು ಮಹಾರಥಿ ಮಕ್ಕಳಾದ್ದರಿಂದ ನಿಮ್ಮ ಬುದ್ಧಿಯು ಸೇವೆಯ ಬಗ್ಗೆ ವಿಚಾರ ನಡೆಯುತ್ತದೆ.
ಸಹೋದರರಲ್ಲೂ ಒಳ್ಳೊಳ್ಳೆಯವರಿದ್ದಾರೆ. ನಂಬರವನ್ ಜಗದೀಶ್ ಆಗಿದ್ದಾರೆ. ಅವರು ಮಾಸ ಪತ್ರಿಕೆಯನ್ನೂ
ಮಾಡುತ್ತಾರೆ. ಬೃಜ್ಮೋಹನ್ ಅವರಿಗೂ ಸಹ ಬರೆಯುವುದರಲ್ಲಿ ಬಹಳ ಆಸಕ್ತಿಯಿದೆ. ಬಹುಷಃ ಮೂರನೆಯವರು
ಯಾರಾದರೂ ತಯಾರಾಗಬಹುದು. ಪ್ರತಿಯೊಂದು ಮಾತನ್ನೂ ನೀವು ದಿನ-ಪ್ರತಿದಿನ ಸ್ಪಷ್ಟ ಮಾಡುತ್ತಾ
ಹೋಗುತ್ತೀರಿ. ತಂದೆಯು ಜ್ಞಾನಸಾಗರ ಆಗಿದ್ದಾರೆ, ಆ ಪರಮಾತ್ಮನಲ್ಲಿ ಜ್ಞಾನವು
ತುಂಬಲ್ಪಟ್ಟಿದೆಯಲ್ಲವೆ. ಹೇಗೆ ಹಾಡನ್ನೂ ಸಹ ಕೇಳುತ್ತೀರಿ ಹಾಗೆಯೇ ಪೂರ್ಣ ರಿಕಾರ್ಡ್
ತುಂಬಲ್ಪಟ್ಟಿರುತ್ತದೆ. ಇದೂ ಸಹ ಅದೇ ರೀತಿಯಾಗಿದೆ. ತಂದೆಯ ಬಳಿ ಯಾವ ಮಾಲ್ (ಸಂಪತ್ತು) ಇದೆ, ಅದು
ನಾಟಕದನುಸಾರ ಸಿಗುತ್ತಿರುತ್ತದೆ. ಇದೆಲ್ಲವೂ ನೀವು ಮಕ್ಕಳ ಬುದ್ಧಿಯಲ್ಲಿ ವಿಚಾರ ನಡೆಯುತ್ತಿರಬೇಕು.
ಭಲೇ ಕೆಲಸ ಕಾರ್ಯಗಳನ್ನು ಮಾಡಿ, ಕೈಯಿಂದ ಭೋಜನವನ್ನೂ ತಯಾರು ಮಾಡಿ ಆದರೆ ಬುದ್ಧಿಯು ಶಿವ ತಂದೆಯ
ಜೊತೆಯಿರಲಿ, ಏಕೆಂದರೆ ಬ್ರಹ್ಮಾ ಭೋಜನವು ಪವಿತ್ರವಾಗಿರಬೇಕು. ಬ್ರಹ್ಮಾ ಭೋಜನವೇ ಬ್ರಾಹ್ಮಣರ
ಭೋಜನವಾಗಿದೆ. ಎಷ್ಟೆಷ್ಟು ಯೋಗದಲ್ಲಿದ್ದು ಊಟ ತಯಾರು ಮಾಡುತ್ತೀರಿ ಅಷ್ಟು ಆ ಭೋಜನದಲ್ಲಿ ಶಕ್ತಿ
ಬರುತ್ತದೆ. ದೇವತೆಗಳೂ ಸಹ ಬ್ರಹ್ಮಾ ಭೋಜನವನ್ನು ಬಹಳ ಮಹಿಮೆ ಮಾಡುತ್ತಿದ್ದರೆಂದು ಗಾಯನವಿದೆ.
ಅಂತಹ ಊಟದಿಂದ ಹೃದಯ ಶುದ್ಧವಾಗುತ್ತದೆ ಎಂದಾಗ ಬ್ರಾಹ್ಮಣರೂ ಸಹ ಅದೇ ರೀತಿಯಿರಬೇಕು ಆದರೆ ಅದು ಈಗ
ಇಲ್ಲದಂತಾಗಿದೆ. ಈಗ ಒಂದು ವೇಳೆ ಈ ರೀತಿಯಾಗಿ ಬಿಟ್ಟರೆ ನಿಮ್ಮದು ವೃದ್ಧಿಯಾಗುತ್ತದೆ ಆದರೆ
ನಾಟಕದನುಸಾರ ನಿಧಾನ-ನಿಧಾನವಾಗಿ ಬೆಳವಣಿಗೆಯಾಗಬೇಕು. ಇಂತಹ ಬ್ರಾಹ್ಮಣರೂ ತಯಾರಾಗುತ್ತಾರೆ- ನಾವು
ತಂದೆಯ ನೆನಪಿನಲ್ಲಿದ್ದು ಭೋಜನ ತಯಾರು ಮಾಡುತ್ತೇವೆಂದು ಹೇಳುತ್ತಾರೆ. ಯೋಗದಲ್ಲಿದ್ದು ಭೋಜನವನ್ನು
ತಯಾರು ಮಾಡುವ ಬ್ರಾಹ್ಮಣರು ಬೇಕು ಎಂದು ತಂದೆಯೂ ಸಹ ಚಾಲೆಂಜ್ ಮಾಡುತ್ತಾರಲ್ಲವೆ. ಭೋಜನವು
ಪವಿತ್ರವಾಗಿರಬೇಕಾಗುತ್ತದೆ. ಭೋಜನದ ಮೇಲೆ ಬಹಳ ಆಧಾರಿತವಾಗಿದೆ. ಮಕ್ಕಳಿಗೆ ಹೊರಗಡೆ ದೊರೆಯದೇ
ಇರುವ ಕಾರಣ ಇಲ್ಲಿ ಬರುತ್ತಾರೆ. ಮಕ್ಕಳು ಭೋಜನದಿಂದ ರಿಫ್ರೆಷ್ ಆಗುತ್ತಾರೆ. ಯೋಗದಲ್ಲಿರುವವರೇ
ಜ್ಞಾನಿಗಳೂ ಆಗಿರುತ್ತಾರೆ ಆದುದರಿಂದ ಅವರನ್ನು ಸೇವೆಯಲ್ಲಿ ಕಳುಹಿಸುತ್ತಾರೆ. ಬಹಳ ಮಕ್ಕಳಾಗಿ
ಬಿಟ್ಟಾಗ ಇಲ್ಲಿಯೂ ಅಂತಹ ಬ್ರಾಹ್ಮಣರನ್ನು ಇಡುತ್ತೇವೆ. ಇಲ್ಲವೆಂದರೆ ಮಹಾರಥಿಗಳಂಥಹ ಮಕ್ಕಳು
ಯಜ್ಞ(ಭೋಜನದ) ಸೇವೆಗೆ ನಿಮಿತ್ತರಾಗಬೇಕು. ಆ ಭೋಜನವನ್ನು ಯೋಗಯುಕ್ತರಾಗಿ ತಯಾರು ಮಾಡುವವರಾಗಿರಬೇಕು.
ನಾವು ಬ್ರಹ್ಮಾ ಭೋಜನವನ್ನು ಸ್ವೀಕರಿಸಿ ದೇವತೆಗಳಾದೆವೆಂದು ದೇವತೆಗಳೂ ತಿಳಿದುಕೊಂಡಿದ್ದಾರೆ
ಆದುದರಿಂದ ನಿಮ್ಮೊಂದಿಗೆ ಬಹಳ ಇಷ್ಟ ಪಟ್ಟು ಮಿಲನ ಮಾಡಲು ಬರುತ್ತಾರೆ. ಅವರು ಹೇಗೆ ನಿಮ್ಮೊಂದಿಗೆ
ಮಿಲನ ಮಾಡುತ್ತಾರೆ, ಅದೂ ಸಹ ನಾಟಕದಲ್ಲಿ ಯುಕ್ತಿಯನ್ನು ರಚಿಸಲ್ಪಟ್ಟಿದೆ. ಆದುದರಿಂದ ಶ್ರಮ ಪಟ್ಟ
ನಂತರ ಸಾಕ್ಷಾತ್ಕಾರವಾಗುತ್ತದೆ, ಅದೂ ಕೇವಲ ದರ್ಶನ ಮಾತ್ರವಾಗುತ್ತದೆ. ದರ್ಶನವಾದರೆ ನಾವು
ಮುಕ್ತರಾಗುತ್ತೇವೆಂದು ತಿಳಿದುಕೊಂಡಿರುತ್ತಾರೆ. ನಾವು ಈ ವಿದ್ಯೆಯಿಂದ ಹೀಗೆ ಆಗುತ್ತೇವೆಂದು ಅವರು
ತಿಳಿದುಕೊಂಡಿರುತ್ತಾರೇನು! ಈ ಸೂರ್ಯವಂಶಿ, ಚಂದ್ರವಂಶಿಯು ಈ ವಿದ್ಯೆಯಿಂದ ಆಗಿದ್ದಾರೆ. ಉಳಿದಂತೆ
ಇಷ್ಟೊಂದು ಚಿತ್ರಗಳನ್ನು ಮಾಡಲಾಗಿದೆ, ಈ ರೀತಿಯಂತೂ ಏನೂ ಇಲ್ಲ. ಇದು ಭಕ್ತಿಮಾರ್ಗದ
ವಿಸ್ತಾರವಾಗಿದೆ. ಇದು ಅತೀ ದೊಡ್ಡ ವ್ಯವಹಾರವಾಗಿದೆ. ಈಗ ಜ್ಞಾನ ಮತ್ತು ಭಕ್ತಿಯ ರಹಸ್ಯವನ್ನು
ತಿಳಿದುಕೊಳ್ಳಲು ಸಾಧ್ಯ. ಇದನ್ನು ತಂದೆಯೇ ಕುಳಿತು ತಿಳಿಸುತ್ತಾರೆ, ಅವರೇ ಜ್ಞಾನ ಸಾಗರನಾಗಿದ್ದಾರೆ,
ಆತ್ಮಿಕ ತಂದೆಯಾಗಿದ್ದಾರೆ. ಕಲ್ಪ-ಕಲ್ಪ ಹಳೆಯ ಪ್ರಪಂಚವನ್ನು ಹೊಸ ಪ್ರಪಂಚವನ್ನಾಗಿ ಮಾಡುವುದು,
ರಾಜಯೋಗವನ್ನು ಕಲಿಸುವುದು ತಂದೆಯ ಕೆಲಸವಾಗಿದೆ. ಆದರೆ ಗೀತೆಯಲ್ಲಿ ತಂದೆಯ ಹೆಸರನ್ನು ಬದಲಾಯಿಸಿ
ಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ- ಇದೂ ಸಹ ಕಲ್ಪ-ಕಲ್ಪದ ಆಟವಾಗಿದೆ. ನಾವಿಲ್ಲಿ ಮನೆಯಿಂದ
ಪಾತ್ರವನ್ನಭಿನಯಿಸಲು ಬರುತ್ತೇವೆ. ವೃಕ್ಷದತ್ತ ಯಾರಿಗೆ ಹೇಗೆ ತಿಳಿಸಿಕೊಡಬೇಕೆಂದು ಬುದ್ಧಿಯಿಂದ
ಕೆಲಸ ಮಾಡಬೇಕು. ನಾವೇನು ಸ್ವರ್ಗದಲ್ಲಿ ಬರುವುದಿಲ್ಲವೆ ಎಂದು ಕೇಳುತ್ತಾರೆ. ನಿಮ್ಮ ಧರ್ಮ
ಸ್ಥಾಪಕರಂತೂ ಸ್ವರ್ಗದಲ್ಲಿ ಬರುವುದೇ ಇಲ್ಲ, ಅವರೆಲ್ಲರೂ ಸ್ವರ್ಗದಲ್ಲಿ ಬಂದಾಗ ನೀವೂ ಬರುತ್ತೀರಿ
ಎಂದು ಹೇಳಿ. ಪ್ರತಿಯೊಂದು ಧರ್ಮಕ್ಕೂ ತಮ್ಮ ತಮ್ಮದೇ ಆದ ಸಮಯದಲ್ಲಿ ಪಾತ್ರವಿದೆ. ಇದು
ಭಿನ್ನ-ಭಿನ್ನ ಧರ್ಮಗಳ ಪಾತ್ರವು ಮಾಡಲ್ಪಟ್ಟಿದೆ. ಇದು ಮಾಡಿ-ಮಾಡಲ್ಪಟ್ಟಂತಹ ಆಟವಾಗಿದೆ, ಇಲ್ಲಿ
ಸ್ವಲ್ಪವೂ ಹೇಳುವ ಅವಶ್ಯಕತೆಯಿಲ್ಲ. ಆದರೆ ಮುಖ್ಯ ಧರ್ಮಗಳನ್ನು ತೋರಿಸಲಾಗಿದೆ. ಇದನ್ನಂತೂ ಮಕ್ಕಳು
ತಿಳಿದುಕೊಂಡಿದ್ದೀರಿ. ಈ ಚಿತ್ರಗಳಲ್ಲಿ ಯಾವುದೂ ಸಹ ಹೊಸ ಚಿತ್ರಗಳಿಲ್ಲ. ಕಲ್ಪ-ಕಲ್ಪವೂ ಇದೇ ರೀತಿ
ನಡೆಯುತ್ತಾ ಬರುತ್ತದೆ. ಅನೇಕ ಪ್ರಕಾರದ ವಿಘ್ನಗಳೂ ಬೀಳುತ್ತವೆ. ಹೊಡೆದಾಟ (ಜಗಳ) ಮೊದಲಾದವುಗಳ
ವಿಘ್ನಗಳೂ ಬೀಳುತ್ತಿರುತ್ತವೆಯಲ್ಲವೆ. ಮಕ್ಕಳಿಗೆ ಎಷ್ಟೊಂದು ಯುಕ್ತಿಯಿಂದ ತಿಳಿಸಲಾಗುತ್ತದೆ.
ಭಗವಾನುವಾಚ- ಕಾಮ ಮಹಾಶತ್ರುವಾಗಿದೆ ಎಂದು ಹೇಳಿ. ಈಗಂತೂ ಈ ಕಲಿಯುಗೀ ಪ್ರಪಂಚವು ವಿನಾಶವಾಗುವುದಿದೆ.
ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು
ಪವಿತ್ರರಾಗಿ ಕಾಮವನ್ನು ಗೆಲ್ಲಿರಿ. ಇದರ ಮೇಲೆ ಜಗಳವಾಗುತ್ತಿರುತ್ತದೆ. ನೀವು ಗಣ್ಯ ವ್ಯಕ್ತಿಗಳಿಗೂ
ತಿಳಿಸುತ್ತೀರಿ. ರಾಜ್ಯಪಾಲರ ಹೆಸರನ್ನು ಕೇಳಿ ಎಲ್ಲರೂ ಬರುವರು ಆದುದರಿಂದ ಯುಕ್ತಿ ರಚಿಸಲಾಗುತ್ತದೆ.
ಅವರಲ್ಲಿ ಯಾರಾದರೂ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಹಿರಿಯರ ಹೆಸರನ್ನು ಕೇಳಿ ಬಹಳ ಮಂದಿ
ಬರುತ್ತಾರೆ. ಗಣ್ಯ ವ್ಯಕ್ತಿಗಳು ಬರುವಂತೆಯೂ ಆಗಬಹುದು, ಇದು ಬಹಳ ಕಷ್ಟವೇನೋ ಆಗಿದೆ. ತಂದೆಯು
ಎಷ್ಟೊಂದು ಬರೆಯುತ್ತಾರೆ- ಮಕ್ಕಳೇ, ಯಾರಿಂದ ಉದ್ಘಾಟನೆ ಮಾಡಿಸುತ್ತೀರೋ ಅವರಿಗೆ ಮೊದಲು ಈ ರೀತಿ
ತಿಳಿಸಿ- ಅಗತ್ಯವಾಗಿ ಮನುಷ್ಯರು ದೇವತೆಗಳಾಗುತ್ತಾರೆ. ವಿಶ್ವದಲ್ಲಿ ಶಾಂತಿಯೂ ನೆಲೆಸುತ್ತದೆ.
ಸ್ವರ್ಗದಲ್ಲಿಯೇ ಶಾಂತಿ ಹಾಗೂ ಸುಖವಿತ್ತು, ಈ ರೀತಿ ಭಾಷಣ ಮಾಡಿ ಸಮಾಚಾರ ಪತ್ರಿಕೆಯಲ್ಲಿ ಬಂದಾಗ
ನಿಮ್ಮ ಬಳಿ ಅನೇಕಾನೇಕ ಜನರು ಬರಲು ಪ್ರಾರಂಭಿಸುತ್ತಾರೆ, ನಿಮ್ಮನ್ನು ನಿದ್ರೆ ಮಾಡಲೂ
ಬಿಡುವುದಿಲ್ಲ. ನಿದ್ರೆಯನ್ನು ತ್ಯಜಿಸಬೇಕಾಗುತ್ತದೆ. ಸೇವೆಯಿಂದ, ಯೋಗದಿಂದ ಶಕ್ತಿಯೂ ಬರುತ್ತದೆ,
ಏಕೆಂದರೆ ನಿಮಗೆ ಅದರಿಂದ ಸಂಪಾದನೆಯಾಗುತ್ತದೆ. ಸಂಪಾದನೆ ಮಾಡುವವರಿಗೆ ಎಂದಿಗೂ ಆಲಸ್ಯತನ, ಆಕಳಿಕೆ
ಬರುವುದಿಲ್ಲ, ತೂಕಡಿಕೆಯೂ (ನಿದ್ರೆಯೂ) ಬರುವುದಿಲ್ಲ. ಸಂಪಾದನೆಯಿಂದ ಹೊಟ್ಟೆ ತುಂಬುವುದರ ಕಾರಣ
ನಿದ್ರೆಯೂ ಬರುವುದಿಲ್ಲ ಹಾಗೆಯೇ ಅವರು ಪ್ರತಿ ದಿನ ಹಾಜರಾಗುತ್ತಾರೆ. ನೀವೂ ಸಹ ಅತೀ ದೊಡ್ಡ
ಸಂಪಾದನೆ ಮಾಡಿಕೊಳ್ಳುತ್ತೀರಿ. ಆಲಸ್ಯ (ಆಕಳಿಕೆ) ದಿವಾಳಿಯಾಗುವವರಿಗೆ ಬರುತ್ತದೆ. ಯಾರು ತುಂಬಾ
ಚೆನ್ನಾಗಿ ತಿಳಿದುಕೊಂಡು ನೆನಪಿನಲಿರುತ್ತಾರೆಯೋ ಅವರಿಗೆ ಆಲಸ್ಯ ಬರುವುದಿಲ್ಲ. ಒಂದು ವೇಳೆ ಮಿತ್ರ
ಸಂಬಂಧಿ ಮೊದಲಾದವರು ನೆನಪಿಗೆ ಬರುತ್ತಾರೆ ಆಕಳಿಕೆ ಬರುತ್ತಿರುತ್ತದೆ, ಇದು ಗುರುತಾಗಿದೆ
ಸ್ವರ್ಗದಲ್ಲಿ ನಿಮಗೆ ಆಕಳಿಕೆ ಎಂದೂ ಬರುವುದಿಲ್ಲ. ತಂದೆಯಿಂದ ಆಸ್ತಿಯನ್ನು ಪಡೆದ ನಂತರ ಅಲ್ಲಿ
ನಿದ್ರೆ ಮಾಡುವುದು, ಕುಳಿತುಕೊಳ್ಳುವುದು-ಎದ್ದೇಳುವುದು ನಿಯಮ ಪ್ರಮಾಣವಾಗಿ ನಡೆಯುವುದು. ಆತ್ಮವು
ಯಥಾರ್ಥವಾದ ಲಿವರ್ ಗಡಿಯಾರವಾಗಿ ಬಿಡುತ್ತದೆ. ಈಗ ನೀವು ಸಿಲೆಂಡರ್ ಗಡಿಯಾರ ಆಗಿದ್ದೀರಿ, ಅದನ್ನು
ಲಿವರ್ ಮಾಡಬೇಕು. ಕೆಲವರು ಮಾಡುತ್ತಾರೆ ಕೆಲವರು ಮಾಡಲಾಗುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಬಂಧನ
ಮುಕ್ತರಾಗಲು ಅಥವಾ ತಮ್ಮ ಉನ್ನತಿಯನ್ನು ಮಾಡಿಕೊಳ್ಳಲು ಬುದ್ಧಿಯು ಜ್ಞಾನದಿಂದ ತುಂಬಿರಬೇಕು.
ಮಾಸ್ಟರ್ ಜ್ಞಾನಸಾಗರನಾಗಿ ಸ್ವದರ್ಶನ ಚಕ್ರಧಾರಿಯಾಗಿ ನೆನಪಿನಲ್ಲಿ ಕುಳಿತುಕೊಳ್ಳಬೇಕು.
2. ನಿದ್ರೆಯನ್ನು ಗೆಲ್ಲುವವರಾಗಿ, ನೆನಪು ಹಾಗೂ ಸೇವೆಯ ಬಲವನ್ನು ಜಮಾ ಮಾಡಿಕೊಳ್ಳಬೇಕು.
ಸಂಪಾದನೆಯಲ್ಲಿ ಎಂದೂ ಆಲಸ್ಯ ಮಾಡಬಾರದು, ತೂಕಡಿಸಬಾರದು.
ವರದಾನ:
ಸರ್ವರ ಪ್ರತಿ
ತಮ್ಮ ಪ್ರೀತಿಯ ದೃಷ್ಠಿ ಮತ್ತು ಭಾವನೆ ಇಡುವಂತಹವರು ಸರ್ವರಿಗೂ ಪ್ರಿಯ ಫರಿಶ್ತಾ ಭವ.
ಸ್ವಪ್ನದಲ್ಲಿಯಾದರೂ ಸಹಾ
ಯಾರ ಬಳಿಯಾದರೂ ಫರಿಶ್ತಾ ಬರುತ್ತದೆ ಎಂದರೆ ಎಷ್ಟು ಖುಶಿಯಾಗುವುದು. ಫರಿಶ್ತಾ ಅರ್ಥಾತ್ ಸರ್ವರಿಗೂ
ಪ್ರೀಯ. ಹದ್ದಿನ ಪ್ರೀಯ ಅಲ್ಲ, ಬೇಹದ್ದಿನ ಪ್ರೀಯ. ಯಾರು ಪ್ರೀತಿ ಮಾಡುತ್ತಾರೆ ಅವರಿಗೆ ಪ್ಯಾರೆ
ಅಲ್ಲ ಆದರೆ ಸರ್ವರಿಗೂ ಪ್ರೀಯ. ಯಾರು ಎಂತಹ ಆತ್ಮರೇ ಆಗಿರಬಹುದು ಆದರೆ ನಿಮ್ಮ ದೃಷ್ಠಿ, ನಿಮ್ಮ
ಭಾವನೆ ಪ್ರೀತಿಯದಾಗಿರಲಿ- ಇದಕ್ಕೆ ಹೇಳಲಾಗುವುದು ಸರ್ವರಿಗೆ ಪ್ರಿಯ. ಯಾರೇ ನಿಂದನೆ ಮಾಡಲಿ,
ತಿರಸ್ಕಾರ ಮಾಡಲಿ ಆದರೂ ಸಹಾ ಅವರ ಪ್ರತಿ ಪ್ರೀತಿ ಹಾಗೂ ಕಲ್ಯಾಣದ ಭಾವನೆ ಉತ್ಪನ್ನವಾಗಲಿ ಏಕೆಂದರೆ
ಆ ಸಮಯದಲ್ಲಿ ಅವರು ಪರವಶವಾಗಿರುತ್ತಾರೆ.
ಸ್ಲೋಗನ್:
ಯಾರು ಸರ್ವ
ಪ್ರಾಪ್ತಿಗಳಿಂದ ಸಂಪನ್ನರಾಗಿದ್ದಾರೆ ಅವರೇ ಸದಾ ಹರ್ಷಿತ, ಸದಾ ಖುಷಿ ಮತ್ತು
ಅದೃಷ್ಠಶಾಲಿಗಳಾಗಿದ್ದಾರೆ.