04.02.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಅಂತರ್ಮುಖಿಗಳಾಗಿ ತಮ್ಮ ಕಲ್ಯಾಣದ ಚಿಂತೆಯನ್ನು ಮಾಡಿ, ತಿರುಗಾಡಲು ಹೋದಾಗಲೂ ಏಕಾಂತದಲ್ಲಿ ವಿಚಾರ
ಸಾಗರ ಮಂಥನ ಮಾಡಿ, ನಾವು ಸದಾ ಹರ್ಷಿತರಾಗಿರುತ್ತೇವೆಯೇ ಎಂದು ಸ್ವಯಂನ್ನು ಕೇಳಿಕೊಳ್ಳಿ”
ಪ್ರಶ್ನೆ:
ದಯಾಹೃದಯಿ
ತಂದೆಯ ಮಕ್ಕಳು ತಮ್ಮ ಮೇಲೆ ಯಾವ ದಯೆ ತೋರಿಸಿಕೊಳ್ಳಬೇಕು?
ಉತ್ತರ:
ನನ್ನ ಮಕ್ಕಳು
ಮುಳ್ಳಿನಿಂದ ಹೂವಾಗಬೇಕೆಂದು ತಂದೆಗೆ ದಯೆ ಬರುತ್ತದೆ, ತಂದೆ ಮಕ್ಕಳನ್ನು ಹೂಗಳನ್ನಾಗಿ ಮಾಡಲು
ಎಷ್ಟೊಂದು ಶ್ರಮ ಪಡುತ್ತಾರೆ, ಅಂದಮೇಲೆ ಮಕ್ಕಳಿಗೂ ಸಹ ತಮ್ಮ ಮೇಲೆ ದಯೆ ಬರಬೇಕು. ನಾವು ತಂದೆಯನ್ನು
ಕರೆದೆವು - ಹೇ ಪತಿತ-ಪಾವನ ಬನ್ನಿ, ಹೂಗಳನ್ನಾಗಿ ಮಾಡಿ. ಈಗ ಅವರು ಬಂದಿದ್ದಾರೆಂದಾಗ ನಾವು
ಹೂವುಗಳಾಗುವುದಿಲ್ಲವೇನು! ದಯೆ ಬಂದರೆ ಆತ್ಮಾಭಿಮಾನಿಯಾಗಿರಿ. ತಂದೆಯು ಏನನ್ನು ತಿಳಿಸುತ್ತಾರೆಯೋ
ಅದನ್ನು ಧಾರಣೆ ಮಾಡಿಕೊಳ್ಳಿ.
ಓಂ ಶಾಂತಿ.
ಇವರು ತಂದೆ,
ಶಿಕ್ಷಕ, ಸದ್ಗುರುವೂ ಆಗಿದ್ದಾರೆ ಎಂದು ಮಕ್ಕಳಿಗೆ ಗೊತ್ತಿದೆ. ತಂದೆಯು ಮಕ್ಕಳನ್ನು ಕೇಳುತ್ತಾರೆ
- ತಾವು ಇಲ್ಲಿಗೆ ಬಂದಾಗ ಈ ಲಕ್ಷ್ಮೀ-ನಾರಾಯಣರ ಹಾಗೂ ಏಣಿ ಚಿತ್ರವನ್ನು ನೋಡುತ್ತೀರಾ? ಯಾವಾಗ
ಎರಡನ್ನೂ ನೋಡಿದಾಗ ಗುರಿಯ ಜೊತೆಗೆ ಪೂರ್ಣ ಚಕ್ರವು ಬುದ್ಧಿಯಲ್ಲಿ ಬರುತ್ತದೆ - ನಾವು ದೇವತೆಗಳಾಗಿ
ನಂತರ ಈ ರೀತಿ ಏಣಿಯನ್ನು ಇಳಿಯುತ್ತಾ ಬಂದಿದ್ದೇವೆ. ಈ ಜ್ಞಾನವು ನೀವು ಮಕ್ಕಳಿಗೆ ಮಾತ್ರ
ಸಿಗುತ್ತದೆ. ತಾವು ವಿದ್ಯಾರ್ಥಿಗಳಾಗಿದ್ದೀರಿ. ನಿಮ್ಮ ಮುಂದೆ ಗುರಿ-ಉದ್ದೇಶವು ನಿಂತಿದೆ. ಇದೇ
ನಮ್ಮ ಗುರಿಯೆಂದು ಯಾರೇ ಬಂದರೂ ತಿಳಿಸಿರಿ. ಈ ವಿದ್ಯೆಯಿಂದ ಈ ದೇವಿ-ದೇವತೆಗಳಾಗುತ್ತೇವೆ. ಮತ್ತೆ
84 ಜನ್ಮಗಳ ಏಣಿಯನ್ನು ಇಳಿಯುತ್ತೇವೆ ಮತ್ತೆ ಪುನರಾವರ್ತನೆಯಾಗುತ್ತದೆ. ಬಹಳ ಸಹಜವಾದ ಜ್ಞಾನವಾಗಿದೆ
ಆದರೂ ಸಹ ಓದುತ್ತಾ-ಓದುತ್ತಾ ಏಕೆ ಫೇಲ್ ಆಗುತ್ತೀರಿ? ಆ ಶಾರೀರಿಕ ವಿದ್ಯೆಗಿಂತಲೂ ಈ ಈಶ್ವರೀಯ
ವಿದ್ಯೆಯು ಸಂಪೂರ್ಣ ಸಹಜವಾಗಿದೆ. ಗುರಿಯ ಚಿತ್ರ ಮತ್ತು 84 ಜನ್ಮಗಳ ಚಕ್ರವು ನಿಮ್ಮ ಮುಂದೆ
ನಿಂತಿದೆ. ಈ ಎರಡೂ ಚಿತ್ರಗಳು ಭೇಟಿ ಮಾಡುವ ಕೊಠಡಿಯಲ್ಲಿಯೂ (ವಿಸಿಟಿಂಗ್ ರೂಮ್) ಇರಬೇಕು. ಸರ್ವೀಸ್
ಮಾಡಲು ಎಲ್ಲಾ ಸಾಮಗ್ರಿಗಳೂ ಇರಬೇಕು, ಎಲ್ಲಾ ಜ್ಞಾನವು ಇದರಲ್ಲಿಯೇ ಇದೆ. ಈ ಪುರುಷಾರ್ಥವನ್ನೂ ಸಹ
ಈಗ ನಾವು ಮಾಡುತ್ತೇವೆ. ಸತೋಪ್ರಧಾನರಾಗಲು ಬಹಳ ಪ್ರಯತ್ನ ಪಡಬೇಕು. ಇದರಲ್ಲಿ ಅಂತರ್ಮುಖಿಗಳಾಗಿ
ವಿಚಾರಸಾಗರ ಮಂಥನ ಮಾಡಬೇಕು. ತಿರುಗಾಡಲು ಹೋದಾಗಲೂ ಸಹ ಬುದ್ಧಿಯಲ್ಲಿ ಇದೇ ಇರಬೇಕು. ತಂದೆಗೆ
ತಿಳಿದಿದೆ - ಇದಂತೂ ನಂಬರ್ವಾರ್ ಆಗಿದೆ. ಕೆಲವರು ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ತಮ್ಮ
ಕಲ್ಯಾಣಕ್ಕಾಗಿ ಖಂಡಿತ ಪುರುಷಾರ್ಥ ಮಾಡುತ್ತಾರೆ. ಇವರು ಚೆನ್ನಾಗಿ ಓದುತ್ತಾರೆಂದು ಪ್ರತಿಯೊಬ್ಬ
ವಿದ್ಯಾರ್ಥಿಗೂ ಸಹ ಗೊತ್ತಾಗುತ್ತದೆ. ಸ್ವಯಂ ಓದದಿದ್ದರೆ ತಮಗೇ ನಷ್ಟವಾಗುತ್ತದೆ. ಸ್ವಯಂನ್ನು
ಯೋಗ್ಯ ಮಾಡಿಕೊಳ್ಳಬೇಕು. ಬೇಹದ್ದಿನ ತಂದೆಗೂ ಸಹ ವಿದ್ಯಾರ್ಥಿಗಳಾಗಿದ್ದೀರಿ. ಈ ಬ್ರಹ್ಮಾರವರೂ ಸಹ
ಓದುತ್ತಾರೆ. ಈ ಲಕ್ಷ್ಮೀ-ನಾರಾಯಣ ಎಂಬುದು ಪದವಿಯಾಗಿದೆ ಮತ್ತು ಏಣಿಯು 84 ಜನ್ಮಗಳ ಚಕ್ರದ್ದಾಗಿದೆ.
ಇದು ಮೊದಲ ಜನ್ಮ, ಇದು ಕೊನೆಯ ಜನ್ಮ, ತಾವು ದೇವತೆಗಳಾಗುತ್ತೀರಿ, ಒಳಗಡೆ ಬರುತ್ತಿದ್ದಂತೆಯೇ ಮುಂದೆ
ಗುರಿ ಹಾಗೂ ಏಣಿಯ ಚಿತ್ರದ ಬಗ್ಗೆ ತಿಳಿಸಿ. ಪ್ರತಿನಿತ್ಯ ಬಂದು ಇದರ ಮುಂದೆ ಕುಳಿತುಕೊಳ್ಳಿ ಆಗ
ಸ್ಮೃತಿ ಬರುತ್ತದೆ. ಬೇಹದ್ದಿನ ತಂದೆಯು ನಮಗೆ ಓದಿಸುತ್ತಿದ್ದಾರೆ ಎಂಬುದು ನಿಮ್ಮ ಬುದ್ಧಿಯಲ್ಲಿದೆ.
ಪೂರ್ಣ ಚಕ್ರದ ಜ್ಞಾನವು ನಿಮ್ಮ ಬುದ್ಧಿಯಲ್ಲಿ ತುಂಬಿದೆ ಅಂದಾಗ ಎಷ್ಟು ಹರ್ಷಿತವಾಗಿರಬೇಕು.
ತಮ್ಮನ್ನು ಕೇಳಿಕೊಳ್ಳಬೇಕು - ನಮ್ಮದು ಅಂತಹ ಸ್ಥಿತಿ ಏಕೆ ಇರುವುದಿಲ್ಲ? ಹರ್ಷಿತವಾಗಿರುವುದರಲ್ಲಿ
ಅಡಚಣೆಯಾಗಲು ಕಾರಣವೇನು? ಯಾರು ಚಿತ್ರವನ್ನು ಮಾಡುತ್ತಾರೆಯೋ ಅವರ ಬುದ್ಧಿಯಲ್ಲಿಯೂ ಸಹ ಇರುತ್ತದೆ,
ಇದು ನಮ್ಮ ಭವಿಷ್ಯ ಪದವಿಯಾಗಿದೆ, ಇದು ನಮ್ಮ ಗುರಿಯಾಗಿದೆ ಹಾಗೂ ಇದು 84 ರ ಚಕ್ರವಾಗಿದೆ. ಸಹಜ
ರಾಜಯೋಗವೆಂಬ ಗಾಯನವಿದೆ, ಅದನ್ನೇ ತಂದೆಯು ಪ್ರತಿನಿತ್ಯ ತಿಳಿಸುತ್ತಿರುತ್ತಾರೆ. ನೀವು ಬೇಹದ್ದಿನ
ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಸ್ವರ್ಗದ ಆಸ್ತಿಯನ್ನು ಖಂಡಿತ ಪಡೆಯಬೇಕು ಹಾಗೂ ಪೂರ್ಣ ಚಕ್ರದ
ರಹಸ್ಯವನ್ನು ತಿಳಿಸಿದ್ದಾರೆ ಅಂದಾಗ ಅದನ್ನು ನೆನಪು ಮಾಡಿಕೊಳ್ಳಬೇಕು. ನಡುವಳಿಕೆ ಬಹಳ ಚೆನ್ನಾಗಿ
ಇರಬೇಕು. ನಡೆಯುತ್ತ-ತಿರುಗಾಡುತ್ತಾ, ಕೆಲಸ-ಕಾರ್ಯ ಮಾಡುತ್ತಾ ಬುದ್ಧಿಯಲ್ಲಿ ಇದೇ ಇರಲಿ - ನಾವು
ತಂದೆಯ ಬಳಿಗೆ ಓದಲು ಬಂದಿದ್ದೇವೆ. ಈ ಜ್ಞಾನವನ್ನೇ ತಾವು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು.
ವಿದ್ಯೆಯಂತೂ ಸಹಜವಾಗಿದೆ ಆದರೆ ಒಂದು ವೇಳೆ ಪೂರ್ಣ ಚೆನ್ನಾಗಿ ಓದಲಿಲ್ಲವೆಂದರೆ ಶಿಕ್ಷಕರಿಗೆ
ಖಂಡಿತ ಯೋಚನೆಯಾಗುತ್ತದೆ. ಒಂದು ವೇಳೆ ಕ್ಲಾಸಿನಲ್ಲಿ ಬಹಳ ಮಕ್ಕಳ ಮಂದ ಬುದ್ಧಿಯವರಾಗಿದ್ದರೆ ನನ್ನ
ಹೆಸರು ಹಾಳಾಗುತ್ತದೆ, ಬಹುಮಾನ ಸಿಗುವುದಿಲ್ಲ. ಸರ್ಕಾರವೂ ಏನೂ ಕೊಡುವುದಿಲ್ಲ. ಇದೂ ಸಹ
ಶಾಲೆಯಲ್ಲವೆ. ಇದರಲ್ಲಿ ಬಹುಮಾನ ಇತ್ಯಾದಿಯ ಮಾತಿಲ್ಲ ಆದರೂ ಸಹ ಪುರುಷಾರ್ಥವಂತೂ
ಮಾಡಿಸಲಾಗುತ್ತದೆಯಲ್ಲವೆ. ನಡವಳಿಕೆಯನ್ನು ಸುಧಾರಿಸಿಕೊಳ್ಳಿ, ದೈವೀ ಗುಣಗಳನ್ನು ಧಾರಣೆ
ಮಾಡಿಕೊಳ್ಳಿ. ಒಳ್ಳೆಯ ಗುಣಗಳಿರಬೇಕು, ತಂದೆಯಂತೂ ತಮ್ಮ ಕಲ್ಯಾಣಕ್ಕಾಗಿ ಬಂದಿದ್ದಾರೆ. ಆದರೆ
ತಂದೆಯ ಶ್ರೀಮತದಂತೆ ನಡೆಯಲು ಆಗುವುದಿಲ್ಲ. ಶ್ರೀಮತವು ಹೇಳುತ್ತದೆ - ಇಲ್ಲಿಗೆ ಹೋಗಿ ಅಂದರೆ
ಹೋಗುವುದೇ ಇಲ್ಲ. ಇಲ್ಲಿ ಚಳಿ, ಅಲ್ಲಿ ಬಿಸಿಲು ಎಂದು ಹೇಳುತ್ತಾರೆ. ಯಾರು ನಮಗೆ ಹೇಳುತ್ತಿದ್ದಾರೆ
ತಂದೆಯ ಬಗ್ಗೆ ತಿಳಿದುಕೊಳ್ಳುವುದೇ ಇಲ್ಲ. ದೊಡ್ಡ ರಾಜರ ಬಗ್ಗೆ ಎಲ್ಲರಿಗೂ ಎಷ್ಟೊಂದು ಭಯವಿರುತ್ತದೆ,
ದೊಡ್ಡ ಅಧಿಕಾರವಿರುತ್ತದೆ. ಇಲ್ಲಂತೂ ತಂದೆಯು ಹೇಳುತ್ತಾರೆ - ನಾನು ಬಡವರ ಬಂಧುವಾಗಿದ್ದೇನೆ. ನಾನು
ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ಎಷ್ಟೊಂದು
ಮನುಷ್ಯರಿದ್ದಾರೆ, ಎಂಥೆಂತಹ ಮಾತನ್ನಾಡುತ್ತಾರೆ, ಏನೇನು ಮಾತನಾಡುತ್ತಾರೆ. ಭಗವಂತ ಎಂಥಹ
ವಸ್ತುವಾಗಿದ್ದಾರೆ ಎಂಬುದೂ ಸಹ ತಿಳಿದುಕೊಂಡಿಲ್ಲ ಆಶ್ಚರ್ಯವಲ್ಲವೆ. ತಂದೆಯು ತಿಳಿಸುತ್ತಾರೆ -
ತನುವಿನಲ್ಲಿ ಬಂದು ತನ್ನ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತೇನೆ. 84 ರ ಈ
ಏಣಿ ಎಷ್ಟು ಸ್ಪಷ್ಟವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಈ ರೀತಿ ಮಾಡಿದ್ದೆನು
ಮತ್ತೆ ಮಾಡುತ್ತಿದ್ದೇನೆ. ತಾವು ಚಿನ್ನದ ಸಮಾನ ಬುದ್ಧಿಯವರಾಗಿದ್ದಿರಿ ಮತ್ತೆ ನಿಮ್ಮನ್ನು ಕಲ್ಲು
ಬುದ್ಧಿಯವರನ್ನಾಗಿ ಯಾರು ಮಾಡಿದರು? ಅರ್ಧಕಲ್ಪ ರಾವಣ ರಾಜ್ಯದಲ್ಲಿ ತಾವು ಬೀಳುತ್ತಲೇ ಬರುತ್ತೀರಿ.
ಈಗ ತಾವು ತಮೋಪ್ರಧಾನರಿಂದ ಖಂಡಿತ ಸತೋಪ್ರಧನರಾಗಲೇಬೇಕು. ತಂದೆಯು ಸತ್ಯವೆಂದು ನಿಮ್ಮ ವಿವೇಕವೇ
ಹೇಳುತ್ತದೆ ಅವರು ಖಂಡಿತ ಸತ್ಯವನ್ನೇ ಹೇಳುತ್ತಾರೆ. ಈ ಬ್ರಹ್ಮಾರವರೂ ಸಹ ಓದುತ್ತಾರೆ ನೀವೂ
ಓದುತ್ತೀರಿ. ನಾನೂ ಸಹ ವಿದ್ಯಾರ್ಥಿಯಾಗಿದ್ದೇನೆಂದು ಇವರು ಹೇಳುತ್ತಾರೆ. ವಿದ್ಯೆಯಲ್ಲಿ ಗಮನ
ಕೊಡುತ್ತೇನೆ, ಸಂಪೂರ್ಣ ಕರ್ಮಾತೀತ ಸ್ಥಿತಿಯಂತೂ ಇನ್ನೂ ಆಗಿಲ್ಲ. ಇಂಥಹ ಶ್ರೇಷ್ಠ ಪದವಿಯನ್ನು
ವಿದ್ಯೆಯ ಮೇಲೆ ಗಮನ ಕೊಡದಿರುವವರು ಯಾರಿರುತ್ತಾರೆ? ಎಲ್ಲರೂ ಹೇಳುತ್ತಾರೆ - ಅಂಥಹ ಪದವಿಯನ್ನು
ಖಂಡಿತ ಪಡೆಯಬೇಕು. ತಂದೆಗೆ ಮಕ್ಕಳೆಂದ ಮೇಲೆ ಖಂಡಿತ ಮಕ್ಕಳಾಗಬೇಕು ಬಾಕಿ ವಿದ್ಯೆಯಲ್ಲಿಯೇ
ಏರುವುದು-ಇಳಿಯುವುದು ಆಗುತ್ತಲೇ ಇರುತ್ತದೆ. ಈಗ ತಮಗೆ ಜ್ಞಾನದ ಸಾರವು ಸಿಕ್ಕಿದೆ, ಪ್ರಾರಂಭದಲ್ಲಿ
ಹಳೆಯ ಜ್ಞಾನವೇ ಇತ್ತು, ನಿಧಾನ-ನಿಧಾನವಾಗಿ ತಾವು ಅರ್ಥ ಮಾಡಿಕೊಳ್ಳುತ್ತಾ ಬಂದಿದ್ದೀರಿ.
ಜ್ಞಾನವಂತೂ ಖಂಡಿತ ಈಗಲೇ ನಮಗೆ ಸಿಗುತ್ತದೆ ಎಂಬುದೂ ಸಹ ನಮಗೆ ಗೊತ್ತಿದೆ. ತಂದೆಯು ತಿಳಿಸುತ್ತಾರೆ
- ಮಕ್ಕಳೇ, ತಮಗೆ ಇಂದು ನಾನು ಗುಪ್ತವಾದ ಮಾತುಗಳನ್ನು ಹೇಳುತ್ತೇನೆ. ಯಾರೂ ಸಹ ಜೀವನ್ಮುಕ್ತಿಯನ್ನು
ಪಡೆಯಲು ಸಾಧ್ಯವಿಲ್ಲ, ಪೂರ್ಣ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ಮೊದಲು ಈ ಏಣಿಯ
ಚಿತ್ರವಿರಲಿಲ್ಲ. ನಾವು ಈ ರೀತಿ ಜನ್ಮ ಪಡೆಯುತ್ತಾ ಬರುತ್ತೇವೆ ಎಂಬುದು ಈಗ ತಿಳಿಯಿತು. ನಾವೇ
ಸ್ವದರ್ಶನ ಚಕ್ರಧಾರಿಗಳು, ಬಾಬಾ ನಮ್ಮ ಪೂರ್ಣ ಚಕ್ರದ ರಹಸ್ಯವನ್ನು ತಿಳಿಸುತ್ತಿದ್ದಾರೆ. ನಿಮ್ಮ
ಧರ್ಮವು ಬಹಳ ಸುಖ ಕೊಡುತ್ತದೆ, ತಂದೆಯೇ ಬಂದು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ.
ಬೇರೆಯವರ ಸುಖದ ಸಮಯವು ಈಗ ಬಂದಿದೆ, ಈಗ ಮೃತ್ಯುವೂ ಸನ್ಮುಖದಲ್ಲಿ ನಿಂತಿದೆ. ಈ ವಿಮಾನ, ವಿದ್ಯುತ್
ಇವೆಲ್ಲವೂ ಮೊದಲಿರಲಿಲ್ಲ. ಅವರಿಗೆ ಈಗ ಇದು ಸ್ವರ್ಗದಂತೆ ಇದೆ, ಎಷ್ಟು ದೊಡ್ಡ-ದೊಡ್ಡ ಮಹಲುಗಳನ್ನು
ಮಾಡಿದ್ದಾರೆ, ಈಗ ನಮಗೆ ಸುಖವಿದೆ ಎಂದು ತಿಳಿದುಕೊಂಡಿದ್ದಾರೆ. ಲಂಡನ್ಗೆ ಎಷ್ಟು ಬೇಗ ತಲುಪಿ
ಬಿಡುತ್ತಾರೆ. ಸಾಕು ಇದೇ ನಮಗೆ ಸ್ವರ್ಗವೆಂದು ತಿಳಿಯುತ್ತಾರೆ. ಈಗ ಅವರಿಗೆ ಯಾರಾದರೂ ತಿಳಿಸಬೇಕು
- ಸ್ವರ್ಗವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ ಕಲಿಯುಗಕ್ಕೆ ಸ್ವರ್ಗವೆನ್ನುವರೇನು? ನರಕದಲ್ಲಿ
ಶರೀರ ಬಿಟ್ಟರೆ ಪುನರ್ಜನ್ಮವು ನರಕದಲ್ಲಿಯೇ ಪಡೆಯುತ್ತಾರೆ. ಮೊದಲು ತಾವೂ ಸಹ ಈ ಮಾತುಗಳನ್ನು
ತಿಳಿದುಕೊಂಡಿರಲಿಲ್ಲ ಈಗ ಗೊತ್ತಾಗಿದೆ. ರಾವಣ ರಾಜ್ಯವು ಬಂದಿತೆಂದರೆ ನಾವು ಬೀಳುತ್ತೇವೆ ನಂತರ
ಎಲ್ಲಾ ವಿಕಾರಗಳು ಬರುತ್ತವೆ. ಈಗ ನಿಮಗೆ ಪೂರ್ಣ ಜ್ಞಾನವು ಸಿಕ್ಕಿದೆ ಅಂದಮೇಲೆ ನಿಮ್ಮ ನಡುವಳಿಕೆಯೂ
ಪೂರ್ಣ ರಾಯಲ್ ಆಗಿರಬೇಕು. ಈಗ ತಾವು ಸತ್ಯಯುಗಕ್ಕಿಂತಲೂ ಹೆಚ್ಚು ಅಮೂಲ್ಯವಾಗಿದ್ದೀರಿ. ತಂದೆಯು
ಯಾರು ಜ್ಞಾನಸಾಗರನಾಗಿದ್ದಾರೆ, ಆ ಪೂರ್ಣ ಜ್ಞಾನವನ್ನು ಈಗ ಕೊಡುತ್ತಾರೆ. ಬೇರೆ ಯಾವ ಮನುಷ್ಯರು
ಭಕ್ತಿ ಹಾಗೂ ಜ್ಞಾನವನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಎರಡನ್ನೂ ಸೇರಿಸಿ
ಬಿಟ್ಟಿದ್ದಾರೆ. ಅವರು ತಿಳಿದುಕೊಂಡಿದ್ದಾರೆ - ಶಾಸ್ತ್ರವನ್ನು ಓದುವುದು ಜ್ಞಾನವಾಗಿದೆ ಮತ್ತು
ಪೂಜೆ ಮಾಡುವುದು ಭಕ್ತಿಯಾಗಿದೆಯೆಂದು ತಿಳಿದುಕೊಂಡಿದ್ದಾರೆ. ಈಗ ತಂದೆಯು ಹೂಗಳನ್ನಾಗಿ ಮಾಡಲು
ಎಷ್ಟೊಂದು ಪ್ರಯತ್ನ ಪಡುತ್ತಾರೆ. ಮಕ್ಕಳಿಗೂ ಸಹ ದಯೆ ಬರಬೇಕು - ಪತಿತರನ್ನು ಪಾವನ ಮಾಡಲು ಬನ್ನಿ,
ಹೂಗಳನ್ನಾಗಿ ಮಾಡಿ ಎಂದು ನಾವು ತಂದೆಯನ್ನು ಕರೆದೆವು. ಈಗ ತಂದೆಯು ಬಂದಿದ್ದಾರೆ ಅಂದಾಗ ತಮ್ಮ ಮೇಲೂ
ಸಹ ದಯೆ ತೋರಿಸಿಕೊಳ್ಳಬೇಕು. ನಾವು ಅಂಥಹ ಹೂಗಳಾಗಲು ಸಾಧ್ಯವಿಲ್ಲವೇನು! ಇಲ್ಲಿಯ ತನಕ ನಾವು ತಂದೆಯ
ಹೃದಯ ಸಿಂಹಾಸನದಲ್ಲಿ ಏಕೆ ಏರಿಲ್ಲ! ಗಮನ ಕೊಡುವುದಿಲ್ಲ. ತಂದೆಯು ಎಷ್ಟೊಂದು ದಯಾಹೃದಯಿ ಆಗಿದ್ದಾರೆ,
ತಂದೆಯನ್ನು ಪತಿತ ಜಗತ್ತಿನಲ್ಲಿ ಬಂದು ಪಾವನ ಮಾಡಿ ಎಂದು ಕರೆಯುತ್ತಾರೆ. ಹೇಗೆ ತಂದೆಗೆ ದಯೆ
ಬರುತ್ತದೆಯೋ ಹಾಗೆಯೇ ಮಕ್ಕಳಿಗೂ ದಯೆ ಬರಬೇಕು ಇಲ್ಲವಾದರೆ ಸದ್ಗುರುವಿನ ನಿಂದಕರು ಪದವಿಯನ್ನು
ಪಡೆಯಲು ಸಾಧ್ಯವಿಲ್ಲ. ಇದು ಯಾರಿಗೂ ಸ್ವಪ್ನದಲ್ಲಿಯೂ ಬಂದಿರುವುದಿಲ್ಲ - ಸದ್ಗುರು ಯಾರು?
ಮನುಷ್ಯರು ಆ ಗುರುಗಳೆಂದು ತಿಳಿದುಕೊಳ್ಳುತ್ತಾರೆ- ಶಾಪ ಕೊಡಬಾರದು, ಅಕೃಪೆಯಾಗದಿದ್ದರೆ ಸಾಕು.
ಮಕ್ಕಳ ಜನ್ಮವು ಗುರುವಿನ ಕೃಪೆಯಿಂದ ಆಯಿತು ಎಂದು ತಿಳಿಯುತ್ತಾರೆ, ಇದು ಅಲ್ಪಕಾಲದ ಸುಖದ ಮಾತಾಯಿತು.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಮ್ಮ ಮೇಲೆ ದಯೆ ತೋರಿಸಿ. ಆತ್ಮಾಭಿಮಾನಿಗಳಾದಾಗ ಧಾರಣೆಯೂ
ಆಗುತ್ತದೆ, ಎಲ್ಲವನ್ನೂ ಆತ್ಮವೇ ಮಾಡುತ್ತದೆ. ನಾನೂ ಸಹ ಆತ್ಮಕ್ಕೆ ಓದಿಸುತ್ತೇನೆ. ಸ್ವಯಂನ್ನು
ಆತ್ಮನೆಂದು ಪಕ್ಕಾ ಮಾಡಿಕೊಳ್ಳಿ ಮತ್ತು ತಂದೆಯನ್ನು ನೆನಪು ಮಾಡಿ. ತಂದೆಯನ್ನು ನೆನಪು ಮಾಡದಿದ್ದರೆ
ವಿಕರ್ಮವು ಹೇಗೆ ವಿನಾಶವಾಗುತ್ತದೆ? ಹೇ ಭಗವಂತ ದಯೆ ತೋರಿಸಿ ಎಂದು ಭಕ್ತಿಮಾರ್ಗದಲ್ಲಿಯೂ ಸಹ ನೆನಪು
ಮಾಡುತ್ತಾರೆ. ತಂದೆಯು ಮುಕ್ತಿದಾತ, ಮಾರ್ಗದರ್ಶಕನೂ ಆಗಿದ್ದಾರೆ. ಇದು ಅವರ ಗುಪ್ತ ಮಹಿಮೆಯಾಗಿದೆ,
ತಂದೆಯು ಬಂದು ಭಕ್ತಿಮಾರ್ಗದಲ್ಲಿಯೂ ತಾವು ನೆನಪು ಮಾಡುತ್ತೀರಿ ಎಂದು ಹೇಳುತ್ತಾರೆ. ನಾನು ನನ್ನ
ಸಮಯದಲ್ಲಿ ದಯೆ ಬರುತ್ತೇನೆ, ಇಚ್ಛಿಸಿದಾಗಲೆಲ್ಲಾ ಬರುವುದಿಲ್ಲ. ಡ್ರಾಮಾದಲ್ಲಿ ಯಾವಾಗ
ನಿಶ್ಚಿತವಾಗಿದೆಯೋ ಆಗಲೇ ಬರುತ್ತೇನೆ. ಬಾಕಿ ಅಂಥಹ ಯೋಚನೆಗಳು ಎಂದೂ ಸಹ ಬರುವುದಿಲ್ಲ. ಆ ತಂದೆಯು
ನಿಮಗೆ ಓದಿಸುತ್ತಿದ್ದಾರೆ, ಇವರು (ಬ್ರಹ್ಮಾ) ಸಹ ಅವರಿಂದ ಓದುತ್ತಾರೆ. ಅವರಂತೂ ಎಂದೂ ತಪ್ಪು
ಮಾಡುವುದಿಲ್ಲ ಯಾರಿಗೂ ತೊಂದರೆಯನ್ನೂ ಕೊಡುವುದಿಲ್ಲ. ಬಾಕಿ ಎಲ್ಲರೂ ನಂಬರ್ವಾರ್
ಶಿಕ್ಷಕರಾಗಿದ್ದಾರೆ. ಅವರು ಸತ್ಯ ತಂದೆ ನಿಮಗೆ ಸತ್ಯವನ್ನು ತಿಳಿಸುತ್ತಾರೆ. ಸತ್ಯವಂತ ಮಕ್ಕಳೂ ಸಹ
ಸತ್ಯವಂತರು, ನಂತರ ಅಸತ್ಯ ಮಕ್ಕಳಾಗುವ ಕಾರಣ ಅರ್ಧಕಲ್ಪ ಅಸತ್ಯವಂತರಾಗಿದ್ದೀರಿ. ಸತ್ಯ ತಂದೆಯನ್ನೇ
ಮರೆತು ಹೋಗುತ್ತಾರೆ ಮೊಟ್ಟ ಮೊದಲು ತಿಳಿಸಿ - ಇದು ಸತ್ಯಯುಗೀ ಜಗತ್ತೋ ಅಥವಾ ಹಳೆಯ ಜಗತ್ತೋ? ಆಗ
ಇವರು ಬಹಳ ಒಳ್ಳೆಯ ಪ್ರಶ್ನೆ ಕೇಳುತ್ತಾರೆಂದು ಮನುಷ್ಯರಿಗೆ ಅರ್ಥವಾಗಲಿ. ಈ ಸಮಯದಲ್ಲಿ
ಎಲ್ಲರಲ್ಲಿಯೂ 5 ವಿಕಾರಗಳ ಪ್ರವೇಶವಾಗಿದೆ. ಅಲ್ಲಿ 5 ವಿಕಾರಗಳು ಇರುವುದಿಲ್ಲ. ಇದು
ತಿಳಿದುಕೊಳ್ಳುವ ಬಹಳ ಸಹಜವಾದ ಮಾತಾಗಿದೆ ಆದರೆ ಯಾರು ಸ್ವಯಂ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು
ಪ್ರದರ್ಶನಿಯಲ್ಲಿ ಏನು ತಿಳಿಸುತ್ತಾರೆ? ಸರ್ವೀಸಿಗೆ ಬದಲಾಗಿ ಡಿಸ್-ಸರ್ವೀಸ್ ಮಾಡಿ ಬರುತ್ತಾರೆ.
ಹೊರಗಡೆ ಹೋಗಿ ಸರ್ವೀಸ್ ಮಾಡುವುದು ಚಿಕ್ಕಮ್ಮನ ಮನೆಯಂತಲ್ಲ ಬಹಳ ತಿಳುವಳಿಕೆ ಬೇಕು. ಬಾಬಾ
ಪ್ರತಿಯೊಬ್ಬರ ನಡುವಳಿಕೆಯಿಂದ ತಿಳಿದುಕೊಳ್ಳುತ್ತಾರೆ. ತಂದೆಯಂತೂ ತಂದೆಯೇ ಆಗಿದ್ದಾರೆ ಮತ್ತೆ
ತಂದೆಯೂ ಹೇಳುತ್ತಾರೆ - ಇದೂ ಸಹ ಡ್ರಾಮಾದಲ್ಲಿತ್ತು. ಯಾರೇ ಬಂದರೆ ಬ್ರಹ್ಮಾಕುಮಾರಿಯು ತಿಳಿಸುವುದು
ಸರಿ, ಹೆಸರೇ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವಾಗಿದೆ. ಬ್ರಹ್ಮಾಕುಮಾರಿಯರ ಹೆಸರು
ಪ್ರಸಿದ್ಧವಾಗಬೇಕು. ಈ ಸಮಯದಲ್ಲಿ ಎಲ್ಲರೂ ಪಂಚ ವಿಕಾರಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರಿಗೆ ಹೋಗಿ
ತಿಳಿಸುವುದು ಎಷ್ಟು ಕಷ್ಟವಾಗುತ್ತದೆ. ಅವರಿಗೆ ಏನೂ ಅರ್ಥವಾಗುವುದಿಲ್ಲ, ಈ ಜ್ಞಾನವು ಚೆನ್ನಾಗಿದೆ
ಇಷ್ಟಂತೂ ಹೇಳುತ್ತಾರೆ. ಸ್ವಯಂ ಅರ್ಥ ಮಾಡಿಕೊಳ್ಳುತ್ತಾರೆ. ಯಜ್ಞದಲ್ಲಿ ವಿಘ್ನವು ಬರುತ್ತದೆಯೆಂದರೆ
ನಂತರ ಯುಕ್ತಿಗಳನ್ನು ರಚಿಸಬೇಕಾಗಿದೆ. ಪೋಲಿಸ್ನ ಕಾವಲನ್ನು ಇಡಿ, ಚಿತ್ರಗಳ ವಿಮೆ ಮಾಡಿಸಿ. ಇದು
ಯಜ್ಞವಾಗಿದೆ, ಇದರಲ್ಲಿ ಖಂಡಿತ ವಿಘ್ನಗಳು ಬರುತ್ತವೆ. ಪೂರ್ಣ ಹಳೆಯ ಜಗತ್ತು ಇದರಲ್ಲಿ ಸ್ವಾಹಾ
ಆಗಬೇಕು ಇಲ್ಲವಾದರೆ ಯಜ್ಞ ಎಂಬ ಹೆಸರು ಏಕೆ ಬಂದಿತು. ಯಜ್ಞದಲ್ಲಿ ಸ್ವಾಹಾ ಆಗಬೇಕು, ಇದರ ಹೆಸರು
ರುದ್ರ ಜ್ಞಾನ ಯಜ್ಞ ಎಂದಾಗಿದೆ. ಜ್ಞಾನಕ್ಕೆ ವಿದ್ಯೆಯೆಂದು ಹೇಳಲಾಗುತ್ತದೆ. ಇದು ಪಾಠಶಾಲೆಯೂ ಹೌದು,
ಯಜ್ಞವೂ ಸಹ ಅಗಿದೆ. ತಾವು ಪಾಠಶಾಲೆಯಲ್ಲಿ ಓದಿ ದೇವತೆಗಳಾಗುತ್ತೀರಿ ನಂತರ ಈ ಯಜ್ಞದಲ್ಲಿ ಸ್ವಾಹಾ
ಆಗುತ್ತದೆ. ಯಾರು ಪ್ರತಿನಿತ್ಯ ಅಭ್ಯಾಸ ಮಾಡುತ್ತಿರುತ್ತಾರೆಯೋ ಅವರೇ ತಿಳಿಸಲು ಸಾಧ್ಯ. ಒಂದು ವೇಳೆ
ಅಭ್ಯಾಸವಿರದಿದ್ದರೆ ಅವರು ಏನು ಮಾತನಾಡುತ್ತಾರೆ. ಜಗತ್ತಿನ ಮನುಷ್ಯರಿಗೆ ಈಗಲೇ ಸ್ವರ್ಗವಾಗಿದೆ,
ಅಲ್ಪಕಾಲಕ್ಕಾಗಿದೆ. ತಮಗಾಗಿ ಸ್ವರ್ಗವು ಅರ್ಧಕಲ್ಪಕ್ಕಾಗಿ ಇರುತ್ತದೆ. ಇದೂ ಸಹ ಡ್ರಾಮಾ
ಮಾಡಲ್ಪಟ್ಟಿದೆ, ವಿಚಾರ ಮಾಡಿದರೆ ಬಹಳ ಆಶ್ಚರ್ಯವೆನಿಸುತ್ತದೆ. ಈ ರಾವಣ ರಾಜ್ಯವು ಸಮಾಪ್ತಿಯಾಗಿ
ರಾಮರಾಜ್ಯವು ಸ್ಥಾಪನೆಯಾಗುತ್ತದೆ. ಇದರಲ್ಲಿ ಯುದ್ಧ ಮುಂತಾದ ಯಾವುದೇ ಮಾತಿಲ್ಲ. ಈ ಏಣಿ
ಚಿತ್ರವನ್ನು ನೋಡಿ ಬಹಳ ಆಶ್ಚರ್ಯ ಪಡುತ್ತಾರೆ. ತಂದೆಯು ಏನೇನು ತಿಳಿಸಿದ್ದಾರೆಯೋ, ಈ ಬ್ರಹ್ಮಾರವರೂ
ಸಹ ತಂದೆಯಿಂದಲೇ ಕಲಿತಿದ್ದಾರೆ ಅದನ್ನೇ ತಿಳಿಸುತ್ತಾರೆ, ಮಕ್ಕಳು ಸಹ ತಿಳಿಸುತ್ತಾರೆ. ಯಾರು
ಅನೇಕರ ಕಲ್ಯಾಣ ಮಾಡುತ್ತಾರೆಯೋ ಅವರಿಗೆ ಖಂಡಿತ ಫಲವು ಜಾಸ್ತಿ ಸಿಗುತ್ತದೆ. ವಿದ್ಯಾವಂತರ ಮುಂದೆ
ಅವಿದ್ಯಾವಂತರು ತಲೆ ಬಾಗಿಸುತ್ತಾರೆ. ತಮ್ಮ ಕಲ್ಯಾಣವನ್ನು ಮಾಡಿಕೊಳ್ಳಿ ಎಂದು ತಂದೆಯು
ಪ್ರತಿನಿತ್ಯ ತಿಳಿಸುತ್ತಾರೆ. ಈ ಚಿತ್ರಗಳನ್ನು ಮುಂದಿಟ್ಟುಕೊಳ್ಳುವುದರಿಂದ ನಶೆಯೇರುತ್ತದೆ
ಆದ್ದರಿಂದ ತಂದೆಯು ರೂಂನಲ್ಲಿ ಈ ಚಿತ್ರವನ್ನು ಇಟ್ಟಿದ್ದಾರೆ. ಗುರಿಯು ಎಷ್ಟು ಸಹಜವಾಗಿದೆ,
ಇದರಲ್ಲಿ ಗುಣಗಳು ಬಹಳ ಚೆನ್ನಾಗಿರಬೇಕು, ಹೃದಯ ಶುದ್ಧವಾಗುತ್ತದೆ. ಪ್ರಭು ಖುಷಿಯಾಗುತ್ತಾರೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
೧. ಸದಾ
ಸ್ಮೃತಿಯನ್ನಿಟ್ಟುಕೊಳ್ಳಬೇಕು - ನಾನು ಬೇಹದ್ದಿನ ತಂದೆಗೆ ವಿದ್ಯಾರ್ಥಿಯಾಗಿದ್ದೇನೆ, ಭಗವಂತ ನಮಗೆ
ಓದಿಸುತ್ತಾರೆ, ಆದ್ದರಿಂದ ಚೆನ್ನಾಗಿ ಓದಿ ತಂದೆಯ ಹೆಸರನ್ನು ಪ್ರಸಿದ್ಧ ಮಾಡಬೇಕು. ತಮ್ಮ
ನಡುವಳಿಕೆಯನ್ನು ಬಹಳ ಚೆನ್ನಾಗಿಟ್ಟುಕೊಳ್ಳಬೇಕು.
೨. ತಂದೆಯ ಸಮಾನ ದಯಾಹೃದಯಿಗಳಾಗಿ ಮುಳ್ಳಿನಿಂದ ಹೂಗಳಾಗಬೇಕು ಅನ್ಯರನ್ನು ಹೂಗಳನ್ನಾಗಿ ಮಾಡಬೇಕು.
ಅಂತರ್ಮುಖಿಗಳಾಗಿ ತಮ್ಮ ಹಾಗೂ ಅನ್ಯರ ಕಲ್ಯಾಣದ ಚಿಂತನೆ ಮಾಡಬೇಕು.
ವರದಾನ:
ವಿಕಾರರೂಪಿ ವಿಷ
ಸರ್ಪಗಳನ್ನು ಕೊರಳಿನ ಮಾಲೆಯನ್ನಾಗಿ ಮಾಡಿಕೊಳ್ಳುವಂತಹ ಶಂಕರ ಸಮಾನ ತಪಸ್ವಿ ಮೂರ್ತಿ ಭವ.
ಈ ಐದು ವಿಕಾರಗಳು ಏನು
ಜನರಿಗೆ ವಿಷ ಸರ್ಪಗಳಾಗಿವೆ, ಈ ಸರ್ಪಗಳು ನೀವು ಯೋಗಿ ಅಥವಾ ಪ್ರಯೋಗಿ ಆತ್ಮಗಳಿಗೆ ಕೊರಳಿನ ಹಾರವಾಗಿ
ಬಿಡುವುದು. ಇದು ನೀವು ಬ್ರಾಹ್ಮಣರಿಗೆ ಹಾಗೂ ಬ್ರಹ್ಮಾ ತಂದೆಯ ಅಶರೀರಿ ತಪಸ್ವಿ ಶಂಕರ ಸ್ವರೂಪದ
ನೆನಪಾರ್ಥ ಇಂದಿನವರೆಗೂ ಸಹಾ ಪೂಜ್ಯನೀಯವಾಗಿದೆ. ಎರಡನೆಯದು - ಈ ಸರ್ಪ ಖುಷಿಯಿಂದ ನಾಟ್ಯವಾಡುವ
ಸ್ಟೇಜ್ ಆಗಿ ಬಿಡುವುದು - ಈ ಸ್ಥಿತಿಯನ್ನು ಸ್ಟೇಜಿನ ರೂಪದಲ್ಲಿ ತೋರಿಸುತ್ತಾರೆ. ಆದ್ದರಿಂದ
ಯಾವಾಗ ವಿಕಾರಗಳ ಮೇಲೆ ಈ ರೀತಿಯ ವಿಜಯವಾಗುವುದು ಆಗ ಹೇಳಲಾಗುವುದು ತಪಸ್ವಿ ಮೂರ್ತಿ, ಪ್ರಯೋಗಿ
ಆತ್ಮ.
ಸ್ಲೋಗನ್:
ಯಾರ ಸ್ವಭಾವ ಮಧುರ, ಶಾಂತಚಿತ್ತವಾಗಿರುತ್ತೆ ಅವರ ಮೇಲೆ ಕ್ರೋಧದ ಭೂತ ಯುದ್ಧ ಮಾಡಲು ಸಾಧ್ಯವಿಲ್ಲ.