07.07.19    Avyakt Bapdada     Kannada Murli     26.12.84     Om Shanti     Madhuban


"ಸತ್ಯತೆಯ ಶಕ್ತಿ"


ಇಂದು ಸರ್ವಶಕ್ತಿವಂತ ತಂದೆಯು ವಿಶೇಷವಾಗಿ ಎರಡು ಶಕ್ತಿಗಳನ್ನು ನೋಡುತ್ತಿದ್ದಾರೆ. ಒಂದು ರಾಜ್ಯ ಶಕ್ತಿ, ಇನ್ನೊಂದು ಈಶ್ವರೀಯ ಶಕ್ತಿ. ಈಗ ಎರಡೂ ಶಕ್ತಿಗಳ ಸಂಗಮದಲ್ಲಿ ವಿಶೇಷ ಪಾತ್ರವು ನಡೆಯುತ್ತಿದೆ. ರಾಜ್ಯ ಶಕ್ತಿಯು ಏರುಪೇರಿನಲ್ಲಿದೆ. ಈಶ್ವರೀಯ ಶಕ್ತಿಯು ಸದಾ ಅಚಲ ಅವಿನಾಶಿಯಾದುದಾಗಿದೆ. ಈಶ್ವರೀಯ ಶಕ್ತಿಯನ್ನು ಸತ್ಯತೆಯ ಶಕ್ತಿಯೆಂದೂ ಹೇಳಲಾಗುತ್ತದೆ ಏಕೆಂದರೆ ಕೊಡುವಂತಹವರು ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವಾಗಿದ್ದಾರೆ, ಆದ್ದರಿಂದ ಸತ್ಯತೆಯ ಶಕ್ತಿಯು ಸದಾ ಶ್ರೇಷ್ಠವಾದುದಾಗಿದೆ. ಸತ್ಯತೆಯ ಶಕ್ತಿಯ ಮೂಲಕ ಸತ್ಯಯುತ, ಸತ್ಯಖಂಡದ ಸ್ಥಾಪನೆಯನ್ನು ಮಾಡುತ್ತಿದ್ದೀರಿ. ಸತ್ಯ ಅರ್ಥಾತ್ ಅವಿನಾಶಿಯಾದುದೂ ಸಹ ಆಗಿದೆ. ಅಂದಮೇಲೆ ಸತ್ಯತೆಯ ಶಕ್ತಿಯ ಮೂಲಕ ಅವಿನಾಶಿ ಆಸ್ತಿ, ಅವಿನಾಶಿ ಪದವಿಯ ಪ್ರಾಪ್ತಿಯನ್ನು ಮಾಡಿಕೊಳ್ಳುವಂತಹ ವಿದ್ಯೆ, ಅವಿನಾಶಿ ವರದಾನವನ್ನು ಪ್ರಾಪ್ತಿ ಮಾಡಿಕೊಂಡಿದ್ದೀರಿ. ಈ ಪ್ರಾಪ್ತಿಯಿಂದ ಯಾರೂ ಸಹ ಸಮಾಪ್ತಿ ಮಾಡಲು ಸಾಧ್ಯವಿಲ್ಲ. ಸತ್ಯತೆಯ ಶಕ್ತಿಯಿಂದ ಇಡೀ ವಿಶ್ವದಲ್ಲಿ ತಾವು ಸತ್ಯತೆಯ, ಶಕ್ತಿಯಾಗಿರುವವರ ಅವಿನಾಶಿ ಗಾಯನ ಹಾಗೂ ಪೂಜೆಯನ್ನು ಈಗ ಅಂತ್ಯದವರೆಗೂ ಭಕ್ತಿಮಾರ್ಗದವರು ಮುಂತಾದವರು ಮಾಡುತ್ತಾ ಬಂದಿದ್ದಾರೆ ಅರ್ಥಾತ್ ಗಾಯನ ಪೂಜೆಯೂ ಸಹ ಅವಿನಾಶಿ ಸತ್ಯವಾಗಿ ಬಿಡುತ್ತದೆ. ಸತ್ ಅರ್ಥಾತ್ ಸತ್ಯ. ಅಂದಮೇಲೆ ಮೊಟ್ಟ ಮೊದಲು ಏನನ್ನು ತಿಳಿದಿರಿ? ತಮ್ಮನ್ನು ತಾವು ಸತ್ಯ ಆತ್ಮವೆಂದು ತಿಳಿದಿರಿ. ಸತ್ಯ ತಂದೆಯ ಸತ್ಯ ಪರಿಚಯವನ್ನು ತಿಳಿದಿರಿ. ಈ ಸತ್ಯ ಪರಿಚಯದಿಂದ ಸತ್ಯ ಜ್ಞಾನದಿಂದ ಸತ್ಯತೆಯ ಶಕ್ತಿಯು ಸ್ವತಹವಾಗಿಯೇ ಸತ್ಯವಾಗಿ ಬಿಡುತ್ತದೆ. ಸತ್ಯತೆಯ ಶಕ್ತಿಯ ಮೂಲಕ ಅಸತ್ಯವೆಂಬ ಅಂಧಕಾರ, ಅಜ್ಞಾನವೆಂಬ ಅಂಧಕಾರವು ಸ್ವತಹವಾಗಿಯೇ ಸಮಾಪ್ತಿಯಾಗಿ ಬಿಡುತ್ತದೆ. ಅಜ್ಞಾನವು ಸದಾ ಅಸತ್ಯವಾಗಿರುತ್ತದೆ. ಜ್ಞಾನವು ಸತ್ಯವಾಗಿದೆ, ಸತ್ಯವಿದೆ ಆದ್ದರಿಂದ ಭಕ್ತರು ತಂದೆಯ ಮಹಿಮೆಯಲ್ಲಿಯೂ ಹೇಳಿದ್ದಾರೆ - "ಸತ್ಯ ಶಿವಂ ಸುಂದರಂ" ಎಂದು. ಸತ್ಯತೆಯ ಶಕ್ತಿಯು ಸಹಜವಾಗಿಯೇ ಪ್ರಕೃತಿಜೀತರು, ಮಾಯಾಜೀತರನ್ನಾಗಿ ಮಾಡಿಬಿಡುತ್ತದೆ. ಈಗ ತಾವು ತಮ್ಮೊಂದಿಗೆ ಕೇಳಿಕೊಳ್ಳಿರಿ- ಸತ್ಯ ತಂದೆಯ ಮಕ್ಕಳಾಗಿದ್ದೇವೆಂದರೆ, ಸತ್ಯತೆಯ ಶಕ್ತಿಯು ಎಲ್ಲಿಯವರೆಗೆ ನನ್ನಲ್ಲಿ ಧಾರಣೆ ಮಾಡಿಕೊಂಡಿರುವೆನು?

ಸತ್ಯತೆಯ ಶಕ್ತಿಯ ಪ್ರಮಾಣವಾಗಿದೆ - ಅವರು ಸದಾ ನಿರ್ಭಯವಾಗಿರುತ್ತಾರೆ. ಹೇಗೆ ಮುರುಳಿಯಲ್ಲಿ ಕೇಳಿದ್ದೀರಿ- "ಸತ್ಯವಾಗಿರುವವರು ನರ್ತನ ಮಾಡುತ್ತಿರುತ್ತಾರೆ" ಅರ್ಥಾತ್ ಸತ್ಯತೆಯ ಶಕ್ತಿಯವರು ಸದಾ ನಿಶ್ಚಿಂತವಾಗಿರುವ ಕಾರಣದಿಂದ, ನಿರ್ಭಯವಾಗಿರುವ ಕಾರಣದಿಂದ ಖುಷಿಯಲ್ಲಿ ನರ್ತಿಸುತ್ತಿರುತ್ತಾರೆ. ಎಲ್ಲಿ ಭಯವಿದೆ, ಚಿಂತೆಯಿದೆಯೋ ಅಲ್ಲಿ ಖುಷಿಯಲ್ಲಿ ನರ್ತಿಸುವುದಿಲ್ಲ. ತನ್ನ ಬಲಹೀನತೆಯದೂ ಚಿಂತೆಯಾಗುತ್ತದೆ. ತನ್ನ ಸಂಸ್ಕಾರ ಅಥವಾ ಸಂಕಲ್ಪವು ಬಲಹೀನವಾಗಿದೆಯೆಂದರೆ, ಸತ್ಯಮಾರ್ಗವಾಗಿರುವ ಕಾರಣದಿಂದ ಮನಸ್ಸಿನಲ್ಲಿ ತನ್ನ ಬಲಹೀನತೆಯ ಚಿಂತನೆಯು ಖಂಡಿತವಾಗಿಯೂ ನಡೆಯುತ್ತಿರುತ್ತದೆ. ಬಲಹೀನತೆಯು ಮನಸ್ಸಿನ ಸ್ಥಿತಿಯನ್ನು ಅವಶ್ಯವಾಗಿ ಏರುಪೇರಿನಲ್ಲಿ ತರುತ್ತದೆ. ಭಲೆ ಎಷ್ಟಾದರೂ ತನ್ನನ್ನು ಬಚ್ಚಿಟ್ಟುಕೊಳ್ಳಬಹುದು ಅಥವಾ ಆರ್ಟಿಫಿಷಿಯಲ್ ಅಲ್ಪಕಾಲದ ಸಮಯದನುಸಾರ, ಪರಿಸ್ಥಿತಿಯನುಸಾರವಾಗಿ ಹೊರಗಿನಿಂದ ಮುಗುಳ್ನಗುವನ್ನೇ ತೋರಿಸಲಿ ಆದರೆ ಸತ್ಯತೆಯ ಶಕ್ತಿಯು ಸ್ವಯಂಗೆ ಅವಶ್ಯವಾಗಿ ಅನುಭೂತಿ ಮಾಡಿಸುತ್ತದೆ. ತಂದೆಯಿಂದ ಮತ್ತು ತಮ್ಮಿಂದ ತಾವು ಬಚ್ಚಿಡಲು ಸಾಧ್ಯವಿಲ್ಲ. ಅನ್ಯರಿಂದ ಬಚ್ಚಿಡಬಹುದು. ಭಲೆ ಹುಡುಗಾಟಿಕೆಯ ಕಾರಣದಿಂದ ತಮಗೆ ತಾವೂ ಸಹ ಕೆಲವೊಮ್ಮೆ ಅನುಭವವಾಗುತ್ತಿದ್ದರೂ ನಡೆಸಿಬಿಡಬಹುದು, ಆದರೂ ಸತ್ಯತೆಯ ಶಕ್ತಿಯು ಮನಸ್ಸಿನಲ್ಲಿ ಗೊಂದಲದ ರೂಪದಲ್ಲಿ, ಆಲಸ್ಯದ ರೂಪದಲ್ಲಿ, ವ್ಯರ್ಥ ಸಂಕಲ್ಪದ ರೂಪದಲ್ಲಿ ಖಂಡಿತವಾಗಿ ಬರುತ್ತದೆ ಏಕೆಂದರೆ ಸತ್ಯತೆಯ ಮುಂದೆ ಅಸತ್ಯವು ನಿಲ್ಲಲು ಸಾಧ್ಯವಿಲ್ಲ. ಹೇಗೆ ಭಕ್ತಿಮಾರ್ಗದಲ್ಲಿ ಚಿತ್ರವನ್ನು ತೋರಿಸಿದ್ದಾರೆ- ಸಾಗರದ ಮಧ್ಯೆ ಸರ್ಪದ ಮೇಲೆ ನರ್ತನ ಮಾಡುತ್ತಿದ್ದಾರೆ. ಅಲ್ಲಿರುವುದು ಸರ್ಪ ಆದರೆ ಸತ್ಯತೆಯ ಶಕ್ತಿಯಿಂದ ಸರ್ಪವೂ ಸಹ ನರ್ತಿಸುವ ಮಂಟಪವಾಗಿ ಬಿಡುತ್ತದೆ. ಎಂತಹ ಭಯಾನಕ ಪರಿಸ್ಥಿತಿಯಿರಲಿ, ಮಾಯೆಯ ವಿಕರಾಳ ರೂಪವಿರಲಿ, ಸಂಬಂಧ-ಸಂಪರ್ಕದವರು ಬೇಸರ ಮಾಡುವವರಲಿ, ವಾಯುಮಂಡಲವು ಎಷ್ಟೇ ವಿಷಮಯವಾಗಿಯೇ ಇರಲಿ ಆದರೆ ಸತ್ಯತೆಯ ಶಕ್ತಿಯವರು ಇವೆಲ್ಲವನ್ನು ಖುಷಿಯಲ್ಲಿ ನರ್ತಿಸುವ ಮಂಟಪವನ್ನಾಗಿ ಮಾಡಿಬಿಡುತ್ತಾರೆ. ಅಂದಮೇಲೆ ಈ ಚಿತ್ರವು ಯಾರದಾಗಿದೆ? ತಮ್ಮೆಲ್ಲರದಾಗಿದೆ ಅಲ್ಲವೆ. ಎಲ್ಲರೂ ಕೃಷ್ಣನಾಗುವವರಾಗಿದ್ದೀರಿ. ಅಂದಮೇಲೆ ಕೃಷ್ಣನಾಗುವಂತಹ ಆತ್ಮರು ಇಂತಹ ಸ್ಟೇಜಿನ ಮೇಲೆ ಸದಾ ನರ್ತಿಸುತ್ತಿರುತ್ತಾರೆ. ಯಾವುದೇ ಪ್ರಕೃತಿ ಅಥವಾ ಮಾಯೆ ಅಥವಾ ವ್ಯಕ್ತಿ, ವೈಭವವೂ ಸಹ ಅವರನ್ನು ಅಲುಗಾಡಿಸಲು ಸಾಧ್ಯವಿಲ್ಲ. ಮಾಯೆಯನ್ನೇ ತನ್ನ ಮಂಟಪ ಅಥವಾ ಶಯನವನ್ನಾಗಿ ಮಾಡಿಕೊಂಡು ಬಿಡುತ್ತಾರೆ. ಇದೂ ಸಹ ಚಿತ್ರವನ್ನು ನೋಡಿದ್ದೀರಲ್ಲವೆ. ಸರ್ಪವನ್ನು ಶಯನವನ್ನಾಗಿ ಮಾಡಿಕೊಂಡರು ಅರ್ಥಾತ್ ವಿಜಯಿಯಾಗಿ ಬಿಟ್ಟರು. ಅಂದಮೇಲೆ ಸತ್ಯತೆಯ ಶಕ್ತಿಯ ಚಿಹ್ನೆಯು, ಸತ್ಯವಾಗಿರುವವರು ನರ್ತಿಸುತ್ತಾರೆ, ಈ ಚಿತ್ರವಿದೆ. ಸತ್ಯತೆಯ ಶಕ್ತಿಯವರೆಂದಿಗೂ ಸಹ ಮುಳುಗಲು ಸಾಧ್ಯವಿಲ್ಲ. ಸತ್ಯತೆಯ ದೋಣಿಯು ಅಲುಗಾಡುವ ಆಟವನ್ನಾಡಿಸಬಹುದು ಆದರೆ ಮುಳುಗಿಸಲು ಸಾಧ್ಯವಿಲ್ಲ. ಅಲುಗಾಡಿಸುತ್ತಿರುವುದೂ ಸಹ ಆಟವೆಂದು ಅನುಭವ ಮಾಡುವರು. ಇತ್ತೀಚೆಗೆ ಆಟವನ್ನೂ ಸಹ ಎಲ್ಲಾ ಗೊತ್ತಿದ್ದರೂ ಮೇಲೆ-ಕೆಳಗೆ ಅಲುಗಾಡುವುದನ್ನು ಮಾಡುತ್ತಾರಲ್ಲವೆ. ಅಲ್ಲಿರುವುದು ಬೀಳುವಂತದ್ದು ಆದರೆ ಆಟವಾಗಿರುವ ಕಾರಣದಿಂದ ವಿಜಯಿಯೆಂದು ಅನುಭವ ಮಾಡುತ್ತಾ, ಅದೆಷ್ಟಾದರೂ ಅಲುಗಾಡುತ್ತಿರಲಿ ಆದರೆ ಆಟವಾಡುವವರು ಹೀಗೆ ತಿಳಿಯುತ್ತಾರೆ- ನಾವು ವಿಜಯವನ್ನು ಪ್ರಾಪ್ತಿ ಮಾಡಿಕೊಂಡೆವು. ಹೀಗೆಯೇ ಸತ್ಯತೆಯ ಶಕ್ತಿ ಅರ್ಥಾತ್ ವಿಜಯಿಯಾಗುವ ವರದಾನಿಯೆಂದು ಸ್ವಯಂನ್ನು ತಿಳಿಯುತ್ತೀರಾ? ತಮ್ಮ ವಿಜಯಿ ಸ್ವರೂಪವನ್ನು ಸದಾ ಅನುಭವ ಮಾಡುತ್ತೀರಾ? ಒಂದುವೇಳೆ ಈಗಿನವರೆಗೂ ಯಾವುದೇ ಏರುಪೇರಿದೆ, ಭಯವಿದೆಯೆಂದರೆ ಸತ್ಯತೆಯ ಜೊತೆಗೆ ಅಸತ್ಯವು ಈಗಲೂ ಉಳಿದುಕೊಂಡಿದೆ ಆದ್ದರಿಂದ ಏರುಪೇರಿನಲ್ಲಿ ತರುತ್ತಿದೆ. ಅಂದಮೇಲೆ ಪರಿಶೀಲನೆ ಮಾಡಿರಿ- ಸಂಕಲ್ಪ, ದೃಷ್ಟಿ, ವೃತ್ತಿ, ಮಾತು ಮತ್ತು ಸಂಬಂಧ-ಸಂಪರ್ಕದಲ್ಲಿ ಸತ್ಯತೆಯ ಶಕ್ತಿಯು ಅಚಲವಾಗಿದೆಯೇ? ಒಳ್ಳೆಯದು. ಇಂದು ಮಿಲನವಾಗುವವರು ಬಹಳಷ್ಟಿದ್ದಾರೆ ಆದ್ದರಿಂದ ಈ ಸತ್ಯತೆಯ ಶಕ್ತಿಯಲ್ಲಿ, ಬ್ರಾಹ್ಮಣ ಜೀವನದಲ್ಲಿ ಹೇಗೆ ವಿಶೇಷತಾ ಸಂಪನ್ನರಾಗಿ ನಡೆಯಬಹುದು, ಇದರ ಬಗ್ಗೆ ಮತ್ತೆ ವಿಸ್ತಾರವಾಗಿ ತಿಳಿಸುತ್ತೇವೆ. ತಿಳಿಯಿತೆ?

ಡಬಲ್ ವಿದೇಶಿ ಮಕ್ಕಳು ಕ್ರಿಸ್ಮಸ್ನ್ನು ಆಚರಿಸಿದರು- ಇಂದೂ ಸಹ ಕ್ರಿಸ್ಮಸ್ ಇದೆಯೇ? ಬ್ರಾಹ್ಮಣ ಮಕ್ಕಳಿಗಾಗಿ ಸಂಗಮಯುಗವೇ ಆಚರಿಸುವ ಯುಗವಾಗಿದೆ. ಅಂದಮೇಲೆ ಪ್ರತಿನಿತ್ಯವೂ ನರ್ತಿಸಿರಿ, ಹಾಡಿರಿ, ಖುಷಿಯನ್ನಾಚರಿಸಿರಿ. ಕಲ್ಪದ ಲೆಕ್ಕದಿಂದಂತು ಸಂಗಮಯುಗವು ಸ್ವಲ್ಪ ದಿನಗಳ ಸಮಾನವಾಗಿದೆಯಲ್ಲವೆ. ಆದ್ದರಿಂದ ಸಂಗಮಯುಗದ ಪ್ರತೀ ದಿನವೂ ಸಹ ಶ್ರೇಷ್ಠವಾಗಿದೆ. ಒಳ್ಳೆಯದು.

ಎಲ್ಲರೂ ಸತ್ಯತೆಯ ಶಕ್ತಿ ಸ್ವರೂಪ, ಸತ್ಯ ತಂದೆಯ ಮೂಲಕ ಸತ್ಯ ವರದಾನ ಅಥವಾ ಆಸ್ತಿಯನ್ನು ಪಡೆಯುವವರು, ಸದಾ ಸತ್ಯತೆಯ ಶಕ್ತಿಯ ಮೂಲಕ ವಿಜಯಿ ಆತ್ಮರು, ಸದಾ ಪ್ರಕೃತಿಜೀತ, ಮಾಯಾಜೀತ, ಖುಷಿಯಲ್ಲಿ ನರ್ತಿಸುವವರು, ಇಂತಹ ಸತ್ಯ ಮಕ್ಕಳಿಗೆ ಸತ್ಯ ತಂದೆ, ಶಿಕ್ಷಕ ಮತ್ತು ಸದ್ಗುರುವಿನ ನೆನಪು-ಪ್ರೀತಿ ಹಾಗೂ ನಮಸ್ತೆ.

ದಾದಿ ಚಂದ್ರಮಣಿಜೀಯವರು ಬಾಪ್ದಾದಾರವರಿಂದ ಅನುಮತಿ ತೆಗೆದುಕೊಂಡು ಪಂಜಾಬ್ಗೆ ಹೊರಡುತ್ತಿದ್ದಾರೆ:-
ಪಂಜಾಬ್ ನಿವಾಸಿಗಳು ಸೊ ಮಧುಬನ ನಿವಾಸಿ ಮಕ್ಕಳೆಲ್ಲರೂ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ. ಎಲ್ಲಾ ಮಕ್ಕಳು ಸದಾಕಾಲವೂ ನಿಶ್ಚಿಂತ ಚಕ್ರವರ್ತಿಗಳಾಗುತ್ತಿದ್ದೀರಿ. ಏಕೆ? ಯೋಗಯುಕ್ತ ಮಕ್ಕಳು ಸದಾ ಛತ್ರಛಾಯೆಯಲ್ಲಿದ್ದಾರೆ. ಯೋಗಿ ಮಕ್ಕಳು ಪಂಜಾಬಿನಲ್ಲಿರುವುದಿಲ್ಲ ಆದರೆ ಬಾಪ್ದಾದಾರವರ ಛತ್ರಛಾಯೆಯಲ್ಲಿರುತ್ತಾರೆ. ಭಲೆ ಪಂಜಾಬಿನಲ್ಲಿರಬಹುದು, ಭಲೆ ಎಲ್ಲಿಯೇ ಇದ್ದೀರಿ ಆದರೆ ಛತ್ರಛಾಯೆಯಲ್ಲಿರುವ ಮಕ್ಕಳು ಸದಾ ಸುರಕ್ಷಿತವಾಗಿರುತ್ತಾರೆ. ಒಂದುವೇಳೆ ಏರುಪೇರಿನಲ್ಲಿ ಬರುತ್ತೀರೆಂದರೆ ಒಂದಲ್ಲ ಒಂದು ಪೆಟ್ಟು ಬೀಳುತ್ತದೆ. ಆದರೆ ಅಚಲರಾಗಿರುತ್ತೀರೆಂದರೆ ಪೆಟ್ಟು ಬೀಳುವ ಸ್ಥಾನದಲ್ಲಿದ್ದರೂ ಕೂದಲನ್ನು ಅಲುಗಾಡಿಸಲು ಸಾಧ್ಯವಿಲ್ಲ. ಆದ್ದರಿಂದ ಬಾಪ್ದಾದಾರವರ ಕೈ(ಶ್ರೀಮತ) ಇದೆ, ಜೊತೆಯಿದೆ ಅಂದಮೇಲೆ ನಿಶ್ಚಿಂತ ಚಕ್ರವರ್ತಿಯಾಗಿರಿ ಮತ್ತು ಇಂತಹ ಬಹಳ ಅಶಾಂತ ವಾತಾವರಣದಲ್ಲಿ ಶಾಂತಿಯ ಕಿರಣಗಳನ್ನು ಹರಡಿಸಿರಿ. ಭರವಸೆಯಿಲ್ಲದವರಿಗೆ ಈಶ್ವರ ಆಶ್ರಯದ ಭರವಸೆಯನ್ನು ಕೊಡಿ. ಏರುಪೇರಿನಲ್ಲಿರುವವರಿಗೆ ಅವಿನಾಶಿ ಆಶ್ರಯದ ಸ್ಮೃತಿಯನ್ನು ತರಿಸುತ್ತಾ ಅಚಲರನ್ನಾಗಿ ಮಾಡಿರಿ. ಇದೇ ಸೇವೆಯನ್ನು ವಿಶೇಷವಾಗಿ ಪಂಜಾಬಿನವರು ಮಾಡಬೇಕು. ಮೊದಲೂ ಹೇಳಿದ್ದೆವು- ಪಂಜಾಬಿನವರಿಗೆ ಹೆಸರುವಾಸಿ ಮಾಡುವ ಅವಕಾಶವೂ ಸಹ ಇದೆ. ನಾಲ್ಕೂ ಕಡೆಯಲ್ಲಿ ಯಾವುದೇ ಆಶ್ರಯವು ಕಂಡು ಬರುತ್ತಿಲ್ಲ. ಇಂತಹ ಸಮಯದಲ್ಲಿ ಅನುಭವ ಮಾಡಲಿ - ಏನೆಂದರೆ, ಹೃದಯಕ್ಕೆ ಆರಾಮ ಕೊಡುವವರು, ಹೃದಯಕ್ಕೆ ಶಾಂತಿಯ ಆಶ್ರಯವನ್ನು ಕೊಡುವವರು ಇವರೇ ಶ್ರೇಷ್ಠಾತ್ಮರಾಗಿದ್ದಾರೆ. ಅಶಾಂತಿಯ ಸಮಯದಲ್ಲಿ ಶಾಂತಿಯ ಮಹತ್ವವಿರುತ್ತದೆ. ಅಂದಮೇಲೆ ಇಂತಹ ಸಮಯದಲ್ಲಿ ಈ ಅನುಭವವನ್ನು ಮಾಡಿಸುವುದು - ಪ್ರತ್ಯಕ್ಷತೆಗೆ ಇದೊಂದೇ ನಿಮಿತ್ತವಾಗಿ ಆಧಾರವಾಗಿ ಬಿಡುತ್ತದೆ. ಅಂದಮೇಲೆ ಪಂಜಾಬಿನವರು ಭಯ ಪಡಬಾರದು, ಆದರೆ ಇಂತಹ ಸಮಯದಲ್ಲಿ ಅವರು ಅನುಭವ ಮಾಡಲಿ - ಮತ್ತೆಲ್ಲರೂ ಭಯ ಪಡಿಸುವವರಿದ್ದಾರೆ ಆದರೆ ಇವರು ಆಶ್ರಯವನ್ನು ಕೊಡುವವರಾಗಿದ್ದಾರೆ, ಮೀಟಿಂಗ್ ಮಾಡಿ ಇಂತಹ ಏನಾದರೂ ಯೋಜನೆ ಮಾಡಿರಿ, ಯಾರು ಅಶಾಂತ ಆತ್ಮರಿದ್ದಾರೆಯೋ ಅವರ ಸಂಘಟನೆಯಲ್ಲಿ ಹೋಗಿ ಶಾಂತಿಯ ಅನುಭೂತಿಯನ್ನು ಮಾಡಿಸಿರಿ. ಒಬ್ಬರಿನ್ನೊಬ್ಬರಿಗೂ ಶಾಂತಿಯ ಅನುಭೂತಿಯನ್ನು ಮಾಡಿಸುತ್ತೀರೆಂದರೆ, ಒಬ್ಬರಿನ್ನೊಬ್ಬರಿಂದ ಪ್ರಕಂಪನಗಳನ್ನು ಹರಡುತ್ತಿರುತ್ತದೆ ಮತ್ತು ಪ್ರಸಿದ್ಧವಾಗಿ ಬಿಡುತ್ತದೆ. ಮೀಟಿಂಗ್ನ್ನು ಬಹಳ ಚೆನ್ನಾಗಿ ಮಾಡುತ್ತಿದ್ದಾರೆ, ಸಾಹಸದವರಾಗಿದ್ದೀರಿ, ಉಲ್ಲಾಸವಿರುವವರಾಗಿದ್ದೀರಿ ಮತ್ತು ಸದಾಕಾಲವೂ ಪ್ರತೀ ಕಾರ್ಯದಲ್ಲಿ ಸಹಯೋಗಿ, ಸ್ನೇಹಿ ಜೊತೆಯಲ್ಲಿದ್ದೀರಿ ಮತ್ತು ಸದಾ ಇರುತ್ತೀರಿ. ಪಂಜಾಬ್ನ ನಂಬರ್ ಹಿಂದಿಲ್ಲ, ಮುಂದೆ ಇದೆ. ಪಂಜಾಬ್ನ್ನು ಸಿಂಹವೆಂದು ಹೇಳಲಾಗುತ್ತದೆ, ಸಿಂಹವು ಹಿಂದಿರುವುದಿಲ್ಲ, ಮುಂದಿರುತ್ತದೆ. ಯಾವುದೇ ಕಾರ್ಯಕ್ರಮವು ಸಿಗುತ್ತದೆ, ಅದರಲ್ಲಿ ಹಾಂಜಿ, ಹಾಜಿ ಮಾಡುತ್ತೀರೆಂದರೆ ಅಸಂಭವವೂ ಸಂಭವವಾಗಿ ಬಿಡುತ್ತದೆ. ಒಳ್ಳೆಯದು. ಎಲ್ಲಾ ಮಕ್ಕಳೊಂದಿಗೆ ಮಿಲನ ಮಾಡಿದ ನಂತರ ಬೆಳಗ್ಗೆ 5.30 ಗಂಟೆಗೆ ಬಾಪ್ದಾದಾರವರು ಸದ್ಗುರುವಾರದ ನೆನಪು-ಪ್ರೀತಿಯನ್ನು ಕೊಟ್ಟರು.

ನಾಲ್ಕೂ ಕಡೆಯಲ್ಲಿರುವ ಸತ್ಯ-ಸತ್ಯವಾದ ಸತ್ಯ ತಂದೆ ಸತ್ಯ ಶಿಕ್ಷಕ, ಸದ್ಗುರುವಿನ ಅತಿ ಸಮೀಪ, ಸ್ನೇಹಿಗಳು, ಸದಾ ಜೊತೆಗಾರವಿರುವ ಮಕ್ಕಳಿಗೆ ಸದ್ಗುರುವಾರ ದಿನದ ಬಹಳ-ಬಹಳ ನೆನಪು-ಪ್ರೀತಿಯನ್ನು ಸ್ವೀಕರಿಸಿರಿ. ಇಂದು ಸದ್ಗುರುವಾರದ ದಿನದಂದು ಬಾಪ್ದಾದಾರವರು ಎಲ್ಲರಿಗೂ ಸದಾ ಸಫಲತಾ ಸ್ವರೂಪರಾಗಿರಿ, ಸದಾ ಸಾಹಸ-ಉಲ್ಲಾಸದಲ್ಲಿರಿ, ಸದಾ ತಂದೆಯ ಛತ್ರಛಾಯೆಯಲ್ಲಿ ಸುರಕ್ಷಿತವಾಗಿರಿ, ಸದಾ ಒಂದು ಬಲ ಒಂದು ಭರವಸೆಯಲ್ಲಿ ಸ್ಥಿತರಾಗಿದ್ದು ಸಾಕ್ಷಿಯಾಗಿ ಎಲ್ಲಾ ದೃಶ್ಯಗಳನ್ನು ನೋಡುತ್ತಾ ಹರ್ಷಿತವಾಗಿರಿ, ಇಂತಹ ವಿಶೇಷ ಸ್ನೇಹದಿಂದ ವರದಾನವನ್ನು ಕೊಡುತ್ತಿದ್ದೇವೆ. ಇದೇ ವರದಾನಗಳನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳುತ್ತಾ ಸಮರ್ಥರಾಗಿರಿ, ಸದಾ ನೆನಪಿರಲಿ ಮತ್ತು ಸದಾ ನೆನಪಿನಲ್ಲಿರಿ. ಒಳ್ಳೆಯದು. ಎಲ್ಲರಿಗೂ ಗುಡ್ಮಾರ್ನಿಂಗ್ ಮತ್ತು ಸದಾ ಪ್ರತೀ ದಿನದ ಶುಭಾಷಯಗಳು. ಒಳ್ಳೆಯದು!

ವಿಶೇಷವಾಗಿ ಆಯ್ಕೆ ಮಾಡಿರುವ ಅವ್ಯಕ್ತ ಮಹಾವಾಕ್ಯಗಳು - ನೆನಪನ್ನು ಜ್ವಾಲಾಸ್ವರೂಪವನ್ನಾಗಿ ಮಾಡಿಕೊಳ್ಳಿರಿ:
ಯಾವಾಗ ತಮ್ಮ ನೆನಪು ಜ್ವಾಲಾಸ್ವರೂಪವಾಗಿರುತ್ತದೆಯೋ ಆಗ ತಂದೆಯ ಸಮಾನ ಪಾಪ ಕಟೇಶ್ವರ ಅಥವಾ ಪಾಪ ಹರಿಣಿಯಾಗಬಲ್ಲಿರಿ. ಇಂತಹ ನೆನಪೇ ತಮ್ಮ ದಿವ್ಯ ದರ್ಶನೀಯ ಮೂರ್ತಿಯನ್ನು ಪ್ರತ್ಯಕ್ಷಗೊಳಿಸುತ್ತದೆ. ಇದಕ್ಕಾಗಿ ಎಂತಹ ಸಮಯದಲ್ಲಿಯೂ ಸಾಧಾರಣ ನೆನಪಿರಬಾರದು. ಸದಾ ಜ್ವಾಲಾ ಸ್ವರೂಪ, ಶಕ್ತಿ ಸ್ವರೂಪ ನೆನಪಿನಲ್ಲಿರಿ. ಸ್ನೇಹದ ಜೊತೆಗೆ ಶಕ್ತಿರೂಪವು ಕಂಬೈಂಡ್ ಆಗಿರಲಿ.

ವರ್ತಮಾನ ಸಮಯದಲ್ಲಿ ಸಂಘಟಿತರೂಪದ ಜ್ವಾಲಾ ಸ್ವರೂಪದ ಅವಶ್ಯಕತೆಯಿದೆ. ಜ್ವಾಲಾರೂಪದ ನೆನಪೇ ಶಕ್ತಿಶಾಲಿ ವಾಯುಮಂಡಲವನ್ನಾಗಿ ಮಾಡುತ್ತದೆ ಮತ್ತು ನಿರ್ಬಲ ಆತ್ಮರನ್ನು ಶಕ್ತಿಸಂಪನ್ನರನ್ನಾಗಿ ಮಾಡುತ್ತದೆ. ಎಲ್ಲಾ ವಿಘ್ನಗಳು ಸಹಜವಾಗಿ ಸಮಾಪ್ತಿಯಾಗಿ ಬಿಡುತ್ತದೆ ಮತ್ತು ಹಳೆಯ ಪ್ರಪಂಚದ ವಿನಾಶವು ಜ್ವಾಲೆಯನ್ನು ಪ್ರಜ್ವಲಿತ ಮಾಡುತ್ತದೆ. ಪ್ರಾಪ್ತಿಯ ಕಿರಣಗಳ ಅನುಭೂತಿ ಮಾಡಿಸಿರಿ. ಇದಕ್ಕಾಗಿ ಮೊದಲು ಜಮಾದ ಖಾತೆಯು ಹೆಚ್ಚಾಗಿರಲಿ. ಹೇಗೆ ಸೂರ್ಯನ ಕಿರಣಗಳು ನಾಲ್ಕೂ ಕಡೆಯಲ್ಲಿ ಹರಡುತ್ತದೆ, ಹಾಗೆಯೇ ತಾವು ಮಾಸ್ಟರ್ ಸರ್ವಶಕ್ತಿವಂತನ ಸ್ಥಿತಿಯಲ್ಲಿರುತ್ತೀರೆಂದರೆ ಶಕ್ತಿಗಳ ಅಥವಾ ವಿಶೇಷತೆಗಳೆಂಬ ಕಿರಣಗಳು ನಾಲ್ಕೂ ಕಡೆಯಲ್ಲಿ ಹರಡುವ ಅನುಭೂತಿ ಮಾಡುವಿರಿ.

ಜ್ವಾಲಾ ರೂಪರಾಗುವ ಮುಖ್ಯ ಮತ್ತು ಸಹಜ ಪುರುಷಾರ್ಥ - ಸದಾ ಇದೇ ಗುಂಗಿರಲಿ - ಈಗ ಹಿಂತಿರುಗಿ ಮನೆಗೆ ಹೋಗಬೇಕು ಮತ್ತು ಎಲ್ಲರನ್ನೂ ಜೊತೆ ಕರೆದುಕೊಂಡು ಹೋಗಬೇಕಾಗಿದೆ. ಈ ಸ್ಮೃತಿಯಿಂದ ಸ್ವತಹವಾಗಿಯೇ ಸರ್ವ ಸಂಬಂಧ, ಸರ್ವ ಪ್ರಕೃತಿಯ ಆಕರ್ಷಣೆಯಿಂದ ಉಪರಾಂ ಅರ್ಥಾತ್ ಸಾಕ್ಷಿಯಾಗಿ ಬಿಡುತ್ತೀರಿ. ಸಾಕ್ಷಿಯಾಗುವುದರಿಂದ ಸಹಜವಾಗಿಯೇ ತಂದೆಯ ಜೊತೆಗಾರ ಅಥವಾ ತಂದೆಯ ಸಮಾನರಾಗಿ ಬಿಡುತ್ತೀರಿ.

ಜ್ವಾಲಾ ಸ್ವರೂಪದ ನೆನಪು ಅರ್ಥಾತ್ ಲೈಟ್ಹೌಸ್ ಮತ್ತು ಮೈಟ್ಹೌಸ್ ಸ್ಥಿತಿಯನ್ನು ತಿಳಿಯುತ್ತಾ, ಇದೇ ಪುರುಷಾರ್ಥದಲ್ಲಿರಿ. ವಿಶೇಷವಾಗಿ ಜ್ಞಾನ ಸ್ವರೂಪದ ಅನುಭವಿಯಾಗಿದ್ದು ಶಕ್ತಿಶಾಲಿಯಾಗಿರಿ. ಅದರಿಂದ ತಾವು ಶ್ರೇಷ್ಠಾತ್ಮರ ಶುಭ ವೃತ್ತಿ ಅಥವಾ ಕಲ್ಯಾಣದ ವೃತ್ತಿ ಮತ್ತು ಶಕ್ತಿಶಾಲಿ ವಾತಾವರಣದ ಮೂಲಕ ಚಡಪಡಿಸುತ್ತಿರುವ, ಅಲೆದಾಡುತ್ತಿರುವ, ಕರೆಯುತ್ತಿರುವ ಅನೇಕ ಆತ್ಮರಿಗೆ ಆನಂದ, ಶಾಂತಿ ಮತ್ತು ಶಕ್ತಿಯ ಅನುಭೂತಿಯಾಗಲಿ.

ಹೇಗೆ ಅಗ್ನಿಯಲ್ಲಿ ಯಾವುದೇ ವಸ್ತುವನ್ನು ಹಾಕುವುದರಿಂದ ಅದರ ನಾಮ, ರೂಪ, ಗುಣವೆಲ್ಲವೂ ಬದಲಾಗಿ ಬಿಡುತ್ತದೆ, ಹಾಗೆಯೇ ಯಾವಾಗ ತಂದೆಯ ನೆನಪಿನ ಲಗನ್ನಿನ ಅಗ್ನಿಯಲ್ಲಿ ಮುಳುಗುತ್ತೀರೆಂದರೆ ಪರಿವರ್ತನೆಯಾಗಿ ಬಿಡುತ್ತೀರಿ! ಮನುಷ್ಯರಿಂದ ಬ್ರಾಹ್ಮಣನಾಗಿ ಬಿಡುತ್ತೀರಿ, ನಂತರ ಬ್ರಾಹ್ಮಣನಿಂದ ಫರಿಶ್ತಾ, ಅದರಿಂದ ದೇವತೆಯಾಗಿ ಬಿಡುತ್ತೀರಿ. ಹೇಗೆ ಹಸಿ ಮಣ್ಣನ್ನು ಅಚ್ಚಿನಲ್ಲಿ ಹಾಕಿ ಬೆಂಕಿಯಲ್ಲಿಡುತ್ತಾರೆಂದರೆ ಇಟ್ಟಿಗೆಯಾಗಿ ಬಿಡುತ್ತದೆ, ಹಾಗೆಯೇ ಇದೂ ಸಹ ಪರಿವರ್ತನೆಯಾಗಿ ಬಿಡುತ್ತದೆ. ಆದ್ದರಿಂದ ಈ ನೆನಪನ್ನೇ ಜ್ವಾಲಾರೂಪವೆಂದು ಹೇಳಲಾಗುತ್ತದೆ.

ಸೇವಾಧಾರಿಯಾಗಿದ್ದೀರಿ, ಸ್ನೇಹಿಯಾಗಿದ್ದೀರಿ, ಒಂದು ಬಲ ಒಂದು ಭರವಸೆಯವರಾಗಿದ್ದೀರಿ, ಇದಂತು ಎಲ್ಲವೂ ಸರಿಯಿದೆ ಆದರೆ ಮಾಸ್ಟರ್ ಸರ್ವಶಕ್ತಿವಂತನ ಸ್ಥಿತಿ ಅರ್ಥಾತ್ ಲೈಟ್ಮೈಟ್ಹೌಸ್ ಸ್ಥಿತಿ, ಸ್ಟೇಜಿನ ಮೇಲೆ ಬಂದು ಬಿಡುತ್ತದೆ, ನೆನಪು ಜ್ವಾಲಾರೂಪವಾಗಿ ಬಿಡುತ್ತದೆ ಎಂದರೆ, ಎಲ್ಲರೂ ತಮ್ಮ ಮುಂದೆ ಪತಂಗಗಳಂತೆ ಸುತ್ತಾಡತೊಡಗುತ್ತಾರೆ.

ಜ್ವಾಲಾ ಸ್ವರೂಪದ ನೆನಪಿಗಾಗಿ ಮನಸ್ಸು ಮತ್ತು ಬುದ್ಧಿಯೆರಡಕ್ಕೂ ಒಂದು- ಶಕ್ತಿಶಾಲಿ ಬ್ರೇಕ್ ಇರಬೇಕು ಮತ್ತು ಪರಿವರ್ತನೆ ಮಾಡುವ ಶಕ್ತಿಯಿರಬೇಕು. ಇದರಿಂದ ಬುದ್ಧಿಯ ಶಕ್ತಿ ಅಥವಾ ಯಾವುದೇ ಶಕ್ತಿಯು ವ್ಯರ್ಥವಾಗದೇ ಜಮಾ ಆಗುತ್ತಿರುತ್ತದೆ. ಎಷ್ಟು ಜಮಾ ಆಗುವುದೋ ಅಷ್ಟೇ ಪರಿಶೀಲನೆಯ, ನಿರ್ಣಯ ಮಾಡುವ ಶಕ್ತಿಯು ಹೆಚ್ಚುತ್ತದೆ. ಇದಕ್ಕಾಗಿ ಈಗ ಸಂಕಲ್ಪಗಳೆಂಬ ಹಾಸಿಗೆಯನ್ನು ಬಂದ್ ಮಾಡಿ ನಡೆಯಿರಿ ಅರ್ಥಾತ್ ಸಂಕ್ಷಿಪ್ತಗೊಳಿಸುವ ಶಕ್ತಿಯನ್ನು ಧಾರಣೆ ಮಾಡಿಕೊಳ್ಳಿರಿ.

ಯಾವುದೇ ಕಾರ್ಯವನ್ನು ಮಾಡುತ್ತೀರಿ ಅಥವಾ ಮಾತನಾಡುತ್ತೀರಿ, ಮಧ್ಯ-ಮಧ್ಯದಲ್ಲಿ ಸಂಕಲ್ಪಗಳ ಟ್ರಾಫಿಕ್ನ್ನು ಸ್ಟಾಪ್ ಮಾಡಿರಿ. ಒಂದು ನಿಮಿಷಕ್ಕಾಗಿಯಾದರೂ ಮನಸ್ಸಿನ ಸಂಕಲ್ಪಗಳನ್ನು, ಭಲೆ ಶರೀರದ ಮೂಲಕ ನಡೆಯುತ್ತಾ ಕರ್ಮವನ್ನು ಮಧ್ಯದಲ್ಲಿ ನಿಲ್ಲಿಸಿಯಾದರೂ, ಇದರ ಅಭ್ಯಾಸ ಮಾಡಿರಿ, ಆಗ ಬಿಂದೂ ರೂಪದ ಶಕ್ತಿಶಾಲಿ ಸ್ಥಿತಿಯಲ್ಲಿ ಸ್ಥಿತರಾಗಬಹುದು. ಹೇಗೆ ಅವ್ಯಕ್ತ ಸ್ಥಿತಿಯಲ್ಲಿದ್ದು ಕಾರ್ಯವನ್ನು ಮಾಡುವುದು ಸರಳವಾಗುತ್ತಿದೆ ಹಾಗೆಯೇ ಈ ಬಿಂದೂ ರೂಪದ ಸ್ಥಿತಿಯೂ ಸಹ ಸಹಜವಾಗಿ ಬಿಡುತ್ತದೆ.

ಹೇಗೆ ಯಾವುದೇ ಕೀಟಾಣುವನ್ನು ಸಾಯಿಸುವುದಕ್ಕಾಗಿ ವೈದ್ಯರುಗಳು ವಿದ್ಯುತ್ತಿನ ರೇಸ್ ಕೊಡುತ್ತಾರೆ. ಹಾಗೆಯೇ ನೆನಪಿನ ಶಕ್ತಿಶಾಲಿ ಕಿರಣಗಳು ಒಂದು ಸೆಕೆಂಡಿನಲ್ಲಿ ಅನೇಕ ವಿಕರ್ಮಗಳೆಂಬ ಕೀಟಾಣುಗಳನ್ನು ಭಸ್ಮಗೊಳಿಸಿ ಬಿಡುತ್ತದೆ. ವಿಕರ್ಮವು ಭಸ್ಮವಾಯಿತೆಂದರೆ, ಮತ್ತೆ ತಮ್ಮನ್ನು ಹಗುರ ಮತ್ತು ಶಕ್ತಿಶಾಲಿಯೆಂಬ ಅನುಭವ ಮಾಡುವಿರಿ.

ಸಹಜಯೋಗಿಯಂತು ಆಗಿದ್ದೀರಿ, ಕೇವಲ ಒಂದು ನೆನಪಿನ ಸ್ಥಿತಿಯನ್ನು ಮಧ್ಯ-ಮಧ್ಯದಲ್ಲಿ ಶಕ್ತಿಶಾಲಿ ಮಾಡಿಕೊಳ್ಳುವುದಕ್ಕಾಗಿ ಗಮನವಿಡುವ ಶಕ್ತಿಯನ್ನು ತುಂಬುತ್ತಿರಿ. ಯಾವಾಗ ಪವಿತ್ರತೆಯ ಧಾರಣೆಯು ಸಂಪೂರ್ಣ ರೂಪದಲ್ಲಿರುತ್ತದೆಯೋ ಆಗ ತಮ್ಮ ಶ್ರೇಷ್ಠ ಸಂಕಲ್ಪದ ಶಕ್ತಿಯು ಲಗನ್ನಿನ ಅಗ್ನಿಯು ಪ್ರಜ್ವಲಿತ ಮಾಡುತ್ತದೆ, ಆ ಅಗ್ನಿಯಲ್ಲಿ ಕೊಳಕೆಲ್ಲವೂ ಭಸ್ಮವಾಗಿ ಬಿಡುತ್ತದೆ. ನಂತರ ಏನನ್ನು ಯೋಚಿಸುತ್ತೀರಿ ಅದೇ ಆಗುತ್ತದೆ, ವಿಹಂಗಮಾರ್ಗದ ಸೇವೆಯು ತಾನಾಗಿಯೇ ಆಗಿ ಬಿಡುತ್ತದೆ.

ಹೇಗೆ ದೇವಿಯರ ನೆನಪಾರ್ಥದಲ್ಲಿ ತೋರಿಸುತ್ತಾರೆ - ಜ್ವಾಲೆಯಿಂದ ಆಸುರರನ್ನು ಭಸ್ಮ ಮಾಡಿ ಬಿಟ್ಟಾರು. ಆಸುರರಲ್ಲ, ಆದರೆ ಆಸುರಿ ಶಕ್ತಿಗಳನ್ನು ಸಮಾಪ್ತಿ ಮಾಡಿ ಬಿಟ್ಟರು. ಇದು ಈಗಿನ ನೆನಪಾರ್ಥವಾಗಿದೆ. ಈಗ ಜ್ವಾಲಾಮುಖಿಯಾಗಿ ಅಸುರಿ ಸಂಸ್ಕಾರ, ಅಸುರಿ ಸ್ವಭಾವವೆಲ್ಲವನ್ನೂ ಭಸ್ಮ ಮಾಡಿರಿ. ಪ್ರಕೃತಿ ಮತ್ತು ಆತ್ಮರಲ್ಲಿ ತಮೋಗುಣವೇನಿದೆಯೋ, ಅದನ್ನು ಭಸ್ಮ ಮಾಡುವವರಾಗಿರಿ. ಇದು ಬಹಳ ಶ್ರೇಷ್ಠ ಕಾರ್ಯವಾಗಿದೆ, ತೀವ್ರವಾಗಿ ಮಾಡಿದಾಗಲೇ ಸಂಪೂರ್ಣವಾಗುತ್ತದೆ.

ಯಾವುದೇ ಲೆಕ್ಕಾಚಾರ- ಅದು ಭಲೆ ಈ ಜನ್ಮದ್ದಾಗಿರಬಹುದು, ಭಲೆ ಹಿಂದಿನ ಜನ್ಮದ್ದಿರಬಹುದು, ಲಗನ್ನಿನ ಅಗ್ನಿ ಸ್ವರೂಪ ಸ್ಥಿತಿಯಿಲ್ಲದೆ ಭಸ್ಮವಾಗುವುದಿಲ್ಲ. ಸದಾ ಅಗ್ನಿ ಸ್ವರೂಪ ಸ್ಥಿತಿ ಅರ್ಥಾತ್ ಜ್ವಾಲಾ ಸ್ವರೂಪದ ಶಕ್ತಿಶಾಲಿ ನೆನಪು, ಬೀಜರೂಪ, ಲೈಟ್ಹೌಸ್, ಮೈಟ್ಹೌಸ್ ಸ್ಥಿತಿಯಲ್ಲಿ ಹಳೆಯ ಲೆಕ್ಕಾಚಾರಗಳು ಭಸ್ಮವಾಗಿ ಬಿಡುತ್ತದೆ. ಮತ್ತು ತಮ್ಮನ್ನು ತಾವು ಡಬಲ್ ಲೈಟ್ ಅನುಭವ ಮಾಡುವಿರಿ. ಶಕ್ತಿಶಾಲಿ ಜ್ವಾಲಾ ಸ್ವರೂಪದ ನೆನಪು ಆಗಿರುತ್ತದೆ, ಯಾವಾಗ ನೆನಪಿನ ಸಂಬಂಧವು ಸದಾ ಜೋಡಣೆಯಾಗಿರುತ್ತದೆ. ಒಂದುವೇಳೆ ಮತ್ತೆ-ಮತ್ತೆ ಸಂಬಂಧವು ತುಂಡಾಗುತ್ತದೆ, ಅದನ್ನು ಜೋಡಿಸುವುದರಲ್ಲಿಯೇ ಸಮಯವೂ ಹಿಡಿಸುತ್ತದೆ, ಪರಿಶ್ರಮವೂ ಆಗುತ್ತದೆ ಮತ್ತು ಶಕ್ತಿಶಾಲಿಯಾವುದರ ಬದಲು ಬಲಹೀನರಾಗಿ ಬಿಡುತ್ತೀರಿ.

ನೆನಪಿನ್ನು ಶಕ್ತಿಶಾಲಿ ಮಾಡಿಕೊಳ್ಳುವುದಕ್ಕಾಗಿ ವಿಸ್ತಾರದಲ್ಲಿ ಹೋಗುತ್ತಾ ಸಾರ ಸ್ಥಿತಿಯ ಅಭ್ಯಾಸವು ಕಡಿಮೆಯಾಗಬಾರದು, ವಿಸ್ತಾರದಲ್ಲಿ ಸಾರವನ್ನು ಮರೆತು ಬಿಡಬಾರದು. ತಿನ್ನಿರಿ, ಕುಡಿಯಿರಿ, ಸೇವೆಯನ್ನು ಮಾಡಿರಿ ಆದರೆ ಭಿನ್ನವಾಗಿರುವುದನ್ನು ಮರೆಯಬಾರದು. ಸಾಧನೆ ಅರ್ಥಾತ್ ಶಕ್ತಿಶಾಲಿ ನೆನಪು. ನಿರಂತರ ತಂದೆಯ ಜೊತೆ ಹೃದಯ ಸಂಬಂಧ, ಸಾಧನೆ ಎಂದು ಇದಕ್ಕೆ ಹೇಳುವುದಿಲ್ಲ - ಏನೆಂದರೆ, ಕೇವಲ ಯೋಗದಲ್ಲಿ ಕುಳಿತು ಬಿಟ್ಟೆವು. ಆದರೆ ಹೇಗೆ ಶರೀರದಿಂದ ಕುಳಿತಿದ್ದೀರಿ ಹಾಗೆಯೇ ಹೃದಯ, ಮನಸ್ಸು, ಬುದ್ಧಿಯು ಒಬ್ಬ ತಂದೆಯ ಕಡೆ, ತಂದೆಯ ಜೊತೆ ಜೊತೆಗೆ ಕುಳಿತು ಬಿಡಬೇಕು. ಇಂತಹ ಏಕಾಗ್ರತೆಯೇ ಜ್ವಾಲೆಯನ್ನು ಪ್ರಜ್ವಲಿತಗೊಳಿಸುತ್ತದೆ. ಒಳ್ಳೆಯದು. ಓಂ ಶಾಂತಿ.

ವರದಾನ:
ತಮ್ಮ ಮಾತಿನ ಬೆಲೆಯನ್ನು(ಮಹತ್ವ) ತಿಳಿದುಕೊಂಡು ಅದರ ಉಳಿತಾಯ ಮಾಡುವಂತಹ ಮಹಾನ್ ಆತ್ಮ ಭವ.

ಹೇಗೆ ಮಹಾನ್ ಆತ್ಮರಿಗೆ ಹೇಳುತ್ತಾರೆ- ಸತ್ ವಚನ್ ಮಹಾರಾಜ್. ಅಂದಮೇಲೆ ತಮ್ಮ ಮಾತು ಸದಾ ಸತ್ ವಚನ್ ಅರ್ಥಾತ್ ಏನಾದರೊಂದು ಪ್ರಾಪ್ತಿ ಮಾಡಿಸುವಂತಹ ವಚನವಿರಲಿ. ಬ್ರಾಹ್ಮಣ ಮುಖದಿಂದ ಎಂದೂ ಯಾರಿಗೂ ಶ್ರಾಪ ಕೊಡುವ ಮಾತು ಹೊರಡಬಾರದು. ಆದ್ದರಿಂದ ಯುಕ್ತಿಯುಕ್ತವಾಗಿ ಮಾತನಾಡಿರಿ ಮತ್ತು ಕಡಿಮೆ ಮಾತನಾಡಿರಿ. ಮಾತಿನ ಮಹತ್ವವನ್ನು ತಿಳಿಯಿರಿ. ಶುಭ ಶಬ್ಧ ಸುಖ ಕೊಡುವ ಶಬ್ಧವನ್ನು ಮಾತನಾಡಿರಿ, ತಮಾಷೆಯ ಮಾತನ್ನು ಮಾತನಾಡದಿರಿ, ಮಾತಿನ ಉಳಿತಾಯವನ್ನು ಮಾಡುತ್ತೀರೆಂದರೆ ಮಹಾನ್ ಆತ್ಮರಾಗಿ ಬಿಡುವಿರಿ.
ಸ್ಲೋಗನ್:
ಒಂದುವೇಳೆ ಶ್ರೀಮತದ ಕೈ ಸದಾ ಜೊತೆಯಿದೆಯೆಂದರೆ, ಇಡೀ ಯುಗವೇ ಕೈಯಲ್ಲಿ ಕೈ ಕೊಟ್ಟು ನಡೆಯುತ್ತಿರುತ್ತೀರಿ.