18.05.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯು ಸರ್ವ ಸಂಬಂಧಗಳ ಪ್ರೀತಿಯ ಸ್ಯಾಕ್ರೀನ್ ಆಗಿದ್ದಾರೆ, ಒಬ್ಬ ಪ್ರೀತಿಯ ಪ್ರಿಯತಮನನ್ನು ನೆನಪು ಮಾಡಿದರೆ ಬುದ್ಧಿಯು ಎಲ್ಲಾ ಕಡೆಯಿಂದ ದೂರವಾಗಿ ಬಿಡುತ್ತದೆ”

ಪ್ರಶ್ನೆ:
ಕರ್ಮಾತೀತರಾಗಲು ಸಹಜ ಪುರುಷಾರ್ಥ ಹಾಗೂ ಯುಕ್ತಿಯೇನಾಗಿದೆ?

ಉತ್ತರ:
ಸಹೋದರ-ಸಹೋದರ ದೃಷ್ಟಿಯನ್ನು ಪಕ್ಕಾ ಮಾಡಿಕೊಳ್ಳುವ ಪುರುಷಾರ್ಥ ಮಾಡಿ. ಬುದ್ಧಿಯಿಂದ ಒಬ್ಬ ತಂದೆಯ ವಿನಃ ಮತ್ತೆಲ್ಲವನ್ನೂ ಮರೆಯಬೇಕು. ಯಾವುದೇ ದೇಹದ ಸಂಬಂಧವು ನೆನಪಿಗೆ ಬಾರದೇ ಇದ್ದಾಗ ಕರ್ಮಾತೀತರಾಗುತ್ತೀರಿ. ತಮ್ಮನ್ನು ಆತ್ಮ ಸಹೋದರ-ಸಹೋದರ ಎಂದು ತಿಳಿದುಕೊಳ್ಳುವುದೇ ಪುರುಷಾರ್ಥದ ಗುರಿಯಾಗಿದೆ. ಸಹೋದರ-ಸಹೋದರನೆಂದು ತಿಳಿದುಕೊಳ್ಳುವುದರಿಂದ ದೈಹಿಕ ದೃಷ್ಠಿ , ವಿಕಾರಿ ಚಿಂತನೆ ಸಮಾಪ್ತಿಯಾಗಿ ಬಿಡುತ್ತದೆ.

ಓಂ ಶಾಂತಿ.
ಡಬಲ್ ಓಂ ಶಾಂತಿ. ಇದು ಮಕ್ಕಳ ಬುದ್ಧಿಯಲ್ಲಿದೆ. ತಂದೆಯೂ ಸಹ ಕುಳಿತು ಮಕ್ಕಳಿಗೇ ತಿಳಿಸುತ್ತಾರೆ. ಮೊಟ್ಟ ಮೊದಲು ತಂದೆಯ ಬಗ್ಗೆ ನಿಶ್ಚಯವಿರಬೇಕು ಏಕೆಂದರೆ ಅವರು ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಹಾಗೆ ನೋಡಿದರೆ ಲೌಕಿಕ ರೀತಿಯಿಂದ ಬೇರೆ-ಬೇರೆಯಾಗಿರುತ್ತಾರೆ. ಶಿಕ್ಷಕನನ್ನು ಯೌವನದಲ್ಲಿ ಮಾಡಿಕೊಳ್ಳಲಾಗುವುದು. ಗುರುವನ್ನು 60 ವಯಸ್ಸಿನ ನಂತರ ಮಾಡಿಕೊಳ್ಳುತ್ತಾರೆ. ಇಲ್ಲಿ ತಂದೆಯು ಬಂದು ಮೂರೂ ಸಂಬಂಧದಲ್ಲಿ ಜೊತೆ ಜೊತೆ ಸೇವೆ ಮಾಡುತ್ತಾರೆ. ಚಿಕ್ಕವರೂ, ದೊಡ್ಡವರೆಲ್ಲರೂ ಓದಬಹುದೆಂದು ಹೇಳುತ್ತಾರೆ. ಮಕ್ಕಳ ಬುದ್ಧಿಯು ಬಹಳ ಉಲ್ಲಾಸವಾಗುತ್ತದೆ. ಚಿಕ್ಕವರು, ದೊಡ್ಡವರು ಎಲ್ಲರೂ ಅಗತ್ಯವಾಗಿ ಜೀವಾತ್ಮ ಆಗಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಆತ್ಮವು ದೇಹದಲ್ಲಿ ಪ್ರವೇಶ ಮಾಡುತ್ತದೆ, ಆತ್ಮ ಹಾಗೂ ಜೀವದಲ್ಲಿ ಅಂತರವಿದೆಯಲ್ಲವೆ. ಇಲ್ಲಿ ಮಕ್ಕಳಿಗೆ ಆತ್ಮ ಹಾಗೂ ಪರಮಾತ್ಮನ ಜ್ಞಾನವನ್ನು ನೀಡಲಾಗುವುದು. ಆತ್ಮವು ಅವಿನಾಶಿಯಾಗಿದೆ, ಆದರೆ ಇಲ್ಲಿ ಶರೀರವು ಭ್ರಷ್ಟಾಚಾರದಿಂದ ಜನ್ಮವಾಗುತ್ತದೆ, ಅಲ್ಲಿ ಭ್ರಷ್ಟಾಚಾರದ ಹೆಸರೂ ಸಹ ಇರುವುದಿಲ್ಲ. ಆ ಪ್ರಪಂಚವನ್ನು ಸಂಪೂರ್ಣ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುವುದು. ಶ್ರೇಷ್ಠಾಚಾರಿ ಮತ್ತು ಭ್ರಷ್ಟಾಚಾರಿಯ ಅಕ್ಷರವಿದೆಯಲ್ಲವೆ. ಇವೆಲ್ಲಾ ಮಾತುಗಳನ್ನು ತಂದೆಯೇ ತಿಳಿಸಿಕೊಡುತ್ತಾರೆ. ಮಕ್ಕಳಿಗೆ ಇದು ಪಕ್ಕಾ ನಿಶ್ಚಯವಿರಬೇಕಾಗಿದೆ - ನಾವೆಲ್ಲಾ ಆತ್ಮಗಳ ತಂದೆ ನಮಗೆ ಓದಿಸುತ್ತಿದ್ದಾರೆ, ತಂದೆಯು ಪುರುಷೋತ್ತಮ ಸಂಗಮಯುಗದಲ್ಲಿ ಬರುತ್ತಾರೆ. ಇದರಿಂದ ಕನಿಷ್ಟರಿಂದ ಪುರುಷೋತ್ತಮರನ್ನಾಗಿ ಮಾಡುತ್ತಾರೆಂದು ಸಿದ್ಧವಾಗುತ್ತದೆ. ಈ ಪ್ರಪಂಚ ಕನಿಷ್ಟ, ತಮೋಪ್ರಧಾನವಾಗಿದೆ, ಇದನ್ನು ಘೋರ ನರಕವೆಂದು ಕರೆಯಲಾಗುವುದು. ಈಗ ನಾವು ಮನೆಗೆ ಹಿಂತಿರುಗಬೇಕಾಗಿದೆ ಆದುದರಿಂದ ತಮ್ಮನ್ನು ಆತ್ಮನೆಂದು ತಿಳಿಯಿರಿ. ತಂದೆಯು ಬಂದಿರುವುದೇ ಮನೆಗೆ ಕರೆದುಕೊಂಡು ಹೋಗಲು. ನಾವು ಆತ್ಮರು ಸಹೋದರ -ಸಹೋದರರಾಗಿದ್ದೇವೆಂದು ಪಕ್ಕಾ ನಿಶ್ಚಯ ಮಾಡಿಕೊಳ್ಳಿ. ಈ ದೇಹವಂತೂ ಇರುವುದೇ ಇಲ್ಲ. ಹೀಗೆ ವಿಕಾರಿ ದೃಷ್ಟಿಯು ಸಮಾಪ್ತಿಯಾಗಿ ಬಿಡುತ್ತದೆ. ಇದೇ ಅತೀ ದೊಡ್ಡ ಗುರಿಯಾಗಿದೆ. ಇದರಲ್ಲಿ ಕಡಿಮೆ ಮಕ್ಕಳು ಈ ಗುರಿಯನ್ನು ತಲುಪುತ್ತಾರೆ. ಅಂತ್ಯದಲ್ಲಿ ಯಾವ ವಸ್ತುವೂ ನೆನಪಿಗೆ ಬರಬಾರದು. ಇದನ್ನೇ ಕರ್ಮಾತೀತ ಸ್ಥಿತಿಯೆಂದು ಕರೆಯಲಾಗುವುದು. ಈ ದೇಹವೂ ಸಹ ವಿನಾಶಿಯಾಗಿದೆ, ಇದರೊಂದಿಗೂ ಮಮತ್ವವು ಹೊರಟು ಹೋಗಬೇಕು. ಹಳೆಯ ದೇಹ, ದೇಹದ ಸಂಬಂಧದಲ್ಲಿ ಮಮತೆಯನ್ನಿಟ್ಟುಕೊಳ್ಳಬಾರದು, ಈಗ ಹೊಸ ಸಂಬಂಧದಲ್ಲಿ ಹೋಗಬೇಕಾಗಿದೆ. ಈ ಹಳೆಯ ಆಸುರೀ ಸ್ತ್ರೀ-ಪುರುಷರ ಸಂಬಂಧ ಎಷ್ಟೊಂದು ಅಪವಿತ್ರವಾಗಿದೆ. ಅದಕ್ಕಾಗಿ ತಂದೆಯು ತಿಳಿಸುತ್ತಾರೆ- ತಮ್ಮನ್ನು ತಾವು ಆತ್ಮನೆಂದು ತಿಳಿದುಕೊಳ್ಳಿ, ಈಗ ಆತ್ಮಗಳು ಮನೆಗೆ ಹಿಂತಿರುಗಬೇಕಾಗಿದೆ. ಆತ್ಮ, ಆತ್ಮನೆಂದು ತಿಳಿಯುವುದರಿಂದ ಶರೀರದ ಭಾನವಿರುವುದಿಲ್ಲ. ಸ್ತ್ರೀ-ಪುರುಷ ಎಂಬ ಸೆಳೆತ ಹೊರಟು ಹೋಗುತ್ತದೆ. ಅಂತ್ಯ ಕಾಲದಲ್ಲಿ ಯಾರು ಸ್ತ್ರೀಯನ್ನು ಸ್ಮರಣೆ ಮಾಡುತ್ತಾರೆಯೋ ಆ ಚಿಂತೆಯಲ್ಲಿಯೇ ದೇಹ ಬಿಡುತ್ತಾರೆ....... ಎಂದು ಬರೆಯಲ್ಪಟ್ಟಿದೆ. ಆದುದರಿಂದ ಅಂತ್ಯ ಕಾಲದಲ್ಲಿ ಗಂಗಾ ಜಲವನ್ನು ಬಾಯಿಗೆ ಹಾಕುತ್ತಾ ಕೃಷ್ಣನನ್ನು ನೆನಪು ಮಾಡಲು ಹೇಳುತ್ತಾರೆ. ಭಕ್ತಿ ಮಾರ್ಗದಲ್ಲಿ ಕೃಷ್ಣನ ನೆನಪಿರುತ್ತದೆ, ಕೃಷ್ಣ ಭಗವಾನುವಾಚ ಎಂದು ಹೇಳುತ್ತಾರೆ. ಇಲ್ಲಿ ತಂದೆಯು ತಿಳಿಸುತ್ತಾರೆ- ದೇಹವನ್ನು ನೆನಪು ಮಾಡಬಾರದು, ನಿಮ್ಮನ್ನು ಆತ್ಮನೆಂದು ತಿಳಿದು ಎಲ್ಲಾ ಕಡೆಯಿಂದ ನಿಮ್ಮ ಬುದ್ಧಿಯಿಂದ ದೂರವಾಗುತ್ತಾ ಹೋಗಿ. ಸರ್ವ ಸಂಬಂಧಗಳ ಪ್ರೀತಿ ಹೇಗೆ ಒಬ್ಬ ತಂದೆಯಲ್ಲಿಯೇ ಸ್ಯಾಕ್ರೀನ್ ಆಗಿ ಬಿಡುತ್ತದೆ. ಎಲ್ಲರಿಗೂ ಅತೀ ಮಧುರ ಹಾಗೂ ಎಲ್ಲರ ಪ್ರಿಯತಮ ಅವರೇ ಆಗಿದ್ದಾರೆ. ಒಬ್ಬರೇ ಪ್ರಿಯತಮನಾಗಿದ್ದಾರೆ ಆದರೆ ಭಕ್ತಿ ಮಾರ್ಗದಲ್ಲಿ ಎಷ್ಟೊಂದು ಹೆಸರುಗಳನ್ನಿಟ್ಟಿದ್ದಾರೆ. ಭಕ್ತಿಯ ವಿಸ್ತಾರವು ಬಹಳ ಇದೆ. ಯಜ್ಞ, ಜಪ-ತಪ, ದಾನ, ತೀರ್ಥ, ವ್ರತ ಮಾಡುವುದು, ಶಾಸ್ತ್ರಗಳನ್ನು ಓದುವುದೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ಜ್ಞಾನದ ಸಾಮಗ್ರಿಯೇನೂ ಇಲ್ಲ, ಸ್ವಲ್ಪವೂ ಇಲ್ಲ. ಇದನ್ನೂ ಸಹ ನೀವು ತಿಳಿಸಿಕೊಡಲು ನೋಟ್ ಮಾಡಿಕೊಳ್ಳುತ್ತೀರಿ. ಆದರೆ ನಿಮ್ಮ ಈ ಕಾಗದ ಯಾವುದೂ ಸಹ ಉಳಿಯುವುದಿಲ್ಲ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ಶಾಂತಿಧಾಮದಿಂದ ಬಂದಿದ್ದೀರಿ ಆಗ ನಿಮಗೆ ಶಾಂತಿಯೇ ಇತ್ತು, ಶಾಂತಿ ಸಾಗರನಿಂದ ಶಾಂತಿಯ, ಪವಿತ್ರತೆಯ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಈಗ ನೀವು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಲ್ಲವೆ! ಜ್ಞಾನವನ್ನೂ ತೆಗೆದುಕೊಳ್ಳುತ್ತಿದ್ದೀರಿ, ನಿಮ್ಮ ಪದವಿಯು ನಿಮ್ಮ ಮುಂದೆ ನಿಂತಿದೆ ಈ ಜ್ಞಾನವನ್ನು ತಂದೆಯ ವಿನಃ ಅನ್ಯರು ಯಾರೂ ಕೊಡಲು ಸಾಧ್ಯವಿಲ್ಲ, ಇದು ಆತ್ಮಿಕ ಜ್ಞಾನವಾಗಿದೆ, ಆತ್ಮದ ಜ್ಞಾನವನ್ನು ಕೊಡಲು ಆತ್ಮಿಕ ತಂದೆಯು ಒಮ್ಮೆಯೇ ಬರುತ್ತಾರೆ ಅವರಿಗೆ ಪತಿತ ಪಾವನನೆಂದು ಹೇಳುತ್ತಾರೆ. ಮುಂಜಾನೆ ಮಕ್ಕಳಿಗೆ ಕುಳಿತು ಡ್ರಿಲ್ ಮಾಡಿಸುತ್ತಾರೆ. ವಾಸ್ತವದಲ್ಲಿ ಇದನ್ನು ಡ್ರಿಲ್ ಎಂದು ಹೇಳಲಾಗುವುದಿಲ್ಲ. ಕೇವಲ ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ. ಎಷ್ಟೊಂದು ಸಹಜವಾಗಿದೆ, ನೀವು ಆತ್ಮವಲ್ಲವೆ ಅಂದಾಗ ಎಲ್ಲಿಂದ ಬಂದಿರಿ? ಪರಮಧಾಮದಿಂದ. ಈ ರೀತಿಯಾಗಿ ಬೇರೆ ಯಾರೂ ಕೇಳುವುದಿಲ್ಲ. ಪಾರಲೌಕಿಕ ತಂದೆಯೇ ಮಕ್ಕಳನ್ನು ಕೇಳುತ್ತಾರೆ. ಮಕ್ಕಳೇ ಈ ಶರೀರದಲ್ಲಿ ಪಾತ್ರವನ್ನಭಿನಯಿಸಲು ಪರಮಧಾಮದಿಂದ ಬಂದಿದ್ದೀರಲ್ಲವೆ. ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಈಗ ನಾಟಕ ಪೂರ್ಣವಾಯಿತು. ಆತ್ಮ ಪತಿತವಾದ ಕಾರಣ ಶರೀರವು ಪತಿತವಾಯಿತು. ಚಿನ್ನದಲ್ಲಿಯೇ ಕಲಬೆರಕೆಯಾಗುತ್ತದೆ ಮತ್ತೆ ಅದನ್ನು ಕರಗಿಸಲಾಗುವುದು. ಸನ್ಯಾಸಿಗಳು ಇದರ ಅರ್ಥವನ್ನು ಎಂದಿಗೂ ತಿಳಿಸುವುದಿಲ್ಲ. ಅವರು ಈಶ್ವರನನ್ನು ತಿಳಿದುಕೊಂಡಿಲ್ಲ, ಈಶ್ವರನೊಂದಿಗೆ ಸಂಬಂಧ ಜೋಡಿಸುವುದನ್ನು ಅವರು ಒಪ್ಪುವುದಿಲ್ಲ. ತಂದೆಯು ಕಲಿಸುವುದನ್ನು ಬೇರೆ ಯಾರೂ ಕಲಿಸಲು ಸಾಧ್ಯವಿಲ್ಲ. ಇಲ್ಲಿ ಪ್ರತ್ಯಕ್ಷವಾಗಿ ಶ್ರಮ ಪಡಬೇಕಾಗುವುದು. ತಂದೆಯು ಇಲ್ಲಿ ಎಷ್ಟೊಂದು ಸಹಜವಾಗಿ ತಿಳಿಸಿಕೊಡುತ್ತಾರೆ. ಹೇ ಪತಿತ-ಪಾವನ, ಸರ್ವಶಕ್ತಿವಂತ.... ಎಂದು ಹಾಡುತ್ತಾರೆ. ಅವರಿಗೇ ಶ್ರೀ ಶ್ರೀ ಎಂದು ಕರೆಯಲಾಗುವುದು ಹಾಗೂ ದೇವತೆಗಳಿಗೂ ಶ್ರೀ ಎಂದು ಕರೆಯಲಾಗುತ್ತದೆ, ಅದು ಅವರಿಗೆ ಶೋಭಿಸುತ್ತದೆ. ಅವರ ಆತ್ಮ ಹಾಗೂ ಶರೀರವೆರಡೂ ಪವಿತ್ರವಾಗಿರುತ್ತದೆ. ಆತ್ಮನನ್ನು ಯಾರೂ ನಿರ್ಲೇಪವೆಂದು ಹೇಳಲು ಸಾಧ್ಯವಿಲ್ಲ, ಆತ್ಮವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ ಆದರೆ ಮನುಷ್ಯರು ತಿಳಿಯದಿರುವ ಕಾರಣ ಆತ್ಮವನ್ನು ಅಸತ್ಯ ಮಾಡಿ ಬಿಟ್ಟಿದ್ದಾರೆ. ಒಬ್ಬ ತಂದೆಯೇ ಬಂದು ಸತ್ಯವನ್ನಾಗಿ ಮಾಡುತ್ತಾರೆ. ರಾವಣನು ಅಸತ್ಯವನ್ನಾಗಿ ಮಾಡುತ್ತಾನೆ, ನಿಮ್ಮ ಬಳಿ ಚಿತ್ರವೂ ಇದೆ. ಉಳಿದಂತೆ 10 ತಲೆಯುಳ್ಳಂತಹ ರಾವಣ ಯಾರೂ ಇರುವುದಿಲ್ಲ. ಸತ್ಯಯುಗದಲ್ಲಿ ರಾವಣನಿರುವುದಿಲ್ಲ ಎನ್ನುವುದು ಸ್ಪಷ್ಟವಿದೆ ಆದರೆ ಕೇಳುವವರಲ್ಲಿ ಇಲ್ಲಿಯ ದೇವತಾ ಕಸಿ ಎಂದು ಹೇಳಲಾಗುತ್ತದೆ. ಕೆಲವರು ಸ್ವಲ್ಪ ಕೇಳುತ್ತಾರೆ, ಇನ್ನೂ ಕೆಲವರು ಬಹಳ ಕೇಳುತ್ತಾರೆ. ಭಕ್ತಿಮಾರ್ಗವು ಎಷ್ಟೊಂದು ವಿಸ್ತಾರವಾಗಿದೆ. ನೋಡಿ! ಅನೇಕ ಪ್ರಕಾರದ ಭಕ್ತರಿದ್ದಾರೆ. ಅಲ್ಲದೆ ಮೊದಲಿನಿಂದಲೂ ಕೇಳಿರುತ್ತಾರೆ- ಕೃಷ್ಣನು ಗೋಪಿಕೆಯರನ್ನು ಓಡಿಸಿಕೊಂಡು ಹೋದ ಎಂದು ಹೇಳುತ್ತಾರೆ. ಹಾಗಾದರೆ ಕೃಷ್ಣನನ್ನು ಏಕೆ ಪ್ರೀತಿ ಮಾಡುತ್ತಾರೆ? ಏಕೆ ಪೂಜಿಸುತ್ತಾರೆ? ಆದುದರಿಂದ ತಂದೆಯು ಕುಳಿತು ತಿಳಿಸುತ್ತಾರೆ- ಕೃಷ್ಣನು ಮೊದಲನೇ ರಾಜಕುಮಾರನಾಗಿರುತ್ತಾನೆ, ಅವನು ಎಷ್ಟೊಂದು ಬುದ್ಧಿವಂತನಾಗಿರುತ್ತಾನೆ. ಇಡೀ ವಿಶ್ವದ ಮಾಲೀಕನಾಗಿರುವ ಕೃಷ್ಣ ಕಡಿಮೆ ಬುದ್ಧಿಯುಳ್ಳವನಾಗಿರುತ್ತಾನೆಯೇ? ಅಲ್ಲಿ ಅವನಿಗೆ ಮಂತ್ರಿ ಮುಂತಾದವರಿರುವುದಿಲ್ಲ, ಸಲಹೆಯನ್ನು ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಇಲ್ಲಿ ಸಲಹೆಯನ್ನು ತೆಗೆದುಕೊಂಡೇ ಸಂಪೂರ್ಣನಾಗಿದ್ದೇನೆ ಆದ್ದರಿಂದ ಸಲಹೆಯನ್ನು ಏಕೆ ತೆಗೆದುಕೊಳ್ಳುತ್ತಾನೆ! ನೀವು ಅರ್ಧಕಲ್ಪಕ್ಕೆ ಯಾವುದೇ ಸಲಹೆಯನ್ನು ತೆಗೆದುಕೊಳ್ಳುವುದಿಲ್ಲ. ಸ್ವರ್ಗ ಹಾಗೂ ನರಕದ ಹೆಸರನ್ನು ಕೇಳಿದ್ದೀರಿ, ಇದಂತೂ ಸ್ವರ್ಗವಾಗಲು ಸಾಧ್ಯವಿಲ್ಲ. ಕಲ್ಲು ಬುದ್ಧಿಯವರು ನಮ್ಮ ಬಳಿ ಹಣವಿದೆ, ಮಹಲುಗಳಿವೆ, ನಾವು ಸ್ವರ್ಗದಲ್ಲಿದ್ದೇವೆಂದು ತಿಳಿದುಕೊಳ್ಳುತ್ತಾರೆ ಆದರೆ ಸ್ವರ್ಗವು ಹೊಸ ಪ್ರಪಂಚದಲ್ಲಿ ಇರುತ್ತದೆಯೆ೦ದು ನೀವು ತಿಳಿದುಕೊಂಡಿದ್ದೀರಿ. ಸ್ವರ್ಗದಲ್ಲಿ ಎಲ್ಲರೂ ಸದ್ಗತಿಯಲ್ಲಿರುತ್ತಾರೆ, ಸ್ವರ್ಗ-ನರಕ ಜೊತೆ ಜೊತೆಯಲ್ಲಿ ಹೇಗೆ ಇರುತ್ತದೆ! ಸ್ವರ್ಗವೆಂದು ಯಾವುದಕ್ಕೆ ಹೇಳಲಾಗುತ್ತದೆ, ಅದಕ್ಕೆ ಎಷ್ಟು ಆಯಸ್ಸಿರುತ್ತದೆ? ಇವೆಲ್ಲವನ್ನೂ ತಂದೆಯು ನಿಮಗೆ ತಿಳಿಸಿಕೊಟ್ಟಿದ್ದಾರೆ. ಪ್ರಪಂಚವಂತೂ ಒಂದೇ ಆಗಿದೆ, ಹೊಸದನ್ನು ಸತ್ಯಯುಗ, ಹಳೆಯದನ್ನು ಕಲಿಯುಗವೆಂದು ಕರೆಯಲಾಗುತ್ತದೆ. ಈಗ ಭಕ್ತಿಮಾರ್ಗವು ಸಮಾಪ್ತಿಯಾಗುತ್ತಿದೆ, ಭಕ್ತಿಯ ನಂತರ ಜ್ಞಾನ, ಎಲಾ ಜೀವಾತ್ಮರು ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಪತಿತರಾಗಿದ್ದಾರೆ ಇದನ್ನೂ ಸಹ ತಂದೆಯು ತಿಳಿಸಿಕೊಟ್ಟಿದ್ದಾರೆ. ನೀವು ಸುಖವನ್ನು ಹೆಚ್ಚು ಪಡೆಯುತ್ತೀರಿ. 3/4 ಸುಖವಿರುತ್ತದೆ ಉಳಿದಂತೆ 1/4 ದುಃಖವಿರುತ್ತದೆ. ಇದರಲ್ಲಿಯೂ ಯಾವಾಗ ತಮೋಪ್ರಧಾನರಾಗಿ ಬಿಡುತ್ತೀರಿ ಆಗ ದುಃಖವು ಹೆಚ್ಚಾಗುತ್ತದೆ. ಅರ್ಧ-ಅರ್ಧ ಇದ್ದರೂ ಸಹ ಮಜಾ ಬರುವುದಿಲ್ಲ. ಯಾವಾಗ ಸ್ವರ್ಗದಲ್ಲಿ ದುಃಖದ ಹೆಸರು ಚಿಹ್ನೆಯೇ ಇರುವುದಿಲ್ಲ ಆಗ ಮಜಾ ಇರುತ್ತದೆ. ಅದಕ್ಕೆ ಎಲ್ಲರೂ ಸ್ವರ್ಗವನ್ನು ನೆನಪು ಮಾಡುತ್ತಾರೆ. ಹೊಸ ಪ್ರಪಂಚ ಹಾಗೂ ಹಳೆಯ ಪ್ರಪಂಚ ಈ ಬೇಹದ್ದಿನ ಆಟವಾಗಿದೆ ಅದನ್ನು ಯಾರೂ ತಿಳಿದುಕೊಳ್ಳಲಾಗುವುದಿಲ್ಲ. ತಂದೆಯು ಭಾರತವಾಸಿಗಳಿಗೆ ತಿಳಿಸುತ್ತಾರೆ ಬಾಕಿ ಉಳಿದವರೆಲ್ಲರೂ ಅರ್ಧಕಲ್ಪ ನಂತರ ಬರುತ್ತಾರೆ. ಅರ್ಧಕಲ್ಪದಲ್ಲಿ ನೀವು ಸೂರ್ಯವಂಶಿ-ಚಂದ್ರವಂಶಿಯಾಗುತ್ತೀರಿ. ಅಲ್ಲಿ ಪವಿತ್ರವಾಗಿರುವ ಕಾರಣ ನಿಮಗೆ ದೀರ್ಘಾಯಸ್ಸಿರುತ್ತದೆ ಹಾಗೂ ಅದು ಹೊಸ ಪ್ರಪಂಚವಾಗಿರುತ್ತದೆ. ಹಾಗೆ ಅಲ್ಲಿ ಪ್ರತಿಯೊಂದು ವಸ್ತುವೂ ಹೊಸದಾಗಿರುತ್ತದೆ. ಧವಸ, ಧಾನ್ಯ, ನೀರು, ಧರಣಿ ಮೊದಲಾದ ಎಲ್ಲವೂ ಹೊಸದಾಗಿರುತ್ತದೆ. ಈ ರೀತಿ ಆಗುತ್ತದೆ ಎಂದು ಮುಂದೆ ಹೋದಂತೆ ನೀವು ಮಕ್ಕಳಿಗೆ ಎಲ್ಲಾ ಸಾಕ್ಷಾತ್ಕಾರಗಳನ್ನು ಮಾಡಿಸುತ್ತಿರುತ್ತೇನೆ. ಯಜ್ಞದ ಆದಿಯಲ್ಲಿ ಆದಂತೆ ಅಂತ್ಯದಲ್ಲಿಯೂ ಆಗಬೇಕು. ಸಮೀಪ ಬರುತ್ತಾ ಖುಷಿಯಾಗುತ್ತಿರುತ್ತದೆ. ಮನುಷ್ಯರು ಹೊರ ದೇಶದಿಂದ ತಮ್ಮ ದೇಶದಲ್ಲಿ ಬಂದಾಗ ಖುಷಿಯಾಗುತ್ತದೆಯಲ್ಲವೆ. ಯಾರಾದರೂ ಹೊರ ದೇಶದಲ್ಲಿ ಶರೀರ ಬಿಟ್ಟರೆ ವಿಮಾನದಲ್ಲಿ ಸ್ವದೇಶಕ್ಕೆ ತೆಗೆದುಕೊಂಡು ಬರುತ್ತಾರೆ. ಎಲ್ಲದಕ್ಕಿಂತಲೂ ಅತ್ಯಂತ ಪವಿತ್ರ ಭೂಮಿ ಭಾರತವಾಗಿದೆ. ಭಾರತದ ಮಹಿಮೆಯನ್ನು ನೀವು ಮಕ್ಕಳ ವಿನಃ ಬೇರೆ ಯಾರೂ ತಿಳಿದುಕೊಂಡಿಲ್ಲ. ವಂಡರ್ ಆಫ್ ದಿ ವರ್ಲ್ಡ್ ಆಗಿದೆ. ಸ್ವರ್ಗವೆಂದು ಹೆಸರಿದೆ. ಇಲ್ಲಿ ತೋರಿಸುವ ಅದ್ಭುತಗಳು ನರಕದ್ದಾಗಿವೆ, ನರಕದ ಅದ್ಭುತಗಳಿಗೂ ಸ್ವರ್ಗದ ಅದ್ಭುತಗಳಿಗೂ ಹಗಲು-ರಾತ್ರಿಯ ಅಂತರವಿದೆ. ನರಕದ ಅದ್ಭುತಗಳನ್ನು ನೋಡಲು ಬಹಳ ಜನ ಹೋಗುತ್ತಾರೆ. ಎಷ್ಟೊಂದು ಮಂದಿರಗಳು ಇಲ್ಲಿವೆ ಆದರೆ ಅಲ್ಲಿರುವುದಿಲ್ಲ. ಸ್ವಾಭಾವಿಕ ಸೌಂದರ್ಯವಿರುತ್ತದೆ, ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ. ಇಲ್ಲಿಯ ಹಾಗೆ ಸುಗಂಧಭರಿತ ವಸ್ತುಗಳ ಅವಶ್ಯಕತೆಯಿರುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ತಮ್ಮದೆ ಆದ ತೋಟವಿರುತ್ತದೆ, ಸುಂದರವಾದ ಹೂಗಳಿರುತ್ತವೆ, ಅಲ್ಲಿಯ ಹವಾಮಾನವೂ ಫಸ್ಟ್ ಕ್ಲಾಸ್ ಆಗಿರುತ್ತದೆ. ಬೇಸಿಗೆ ಮೊದಲಾದವುಗಳೆಲ್ಲವೂ ಕಷ್ಟ ಕೊಡುವುದಿಲ್ಲ, ಸದಾ ವಸಂತ ಋತುವಿರುತ್ತದೆ. ಅಗರಬತ್ತಿಯ ಅವಶ್ಯಕತೆಯಿರುವುದಿಲ್ಲ. ಸ್ವರ್ಗದ ಹೆಸರನ್ನು ಕೇಳಿದ ತಕ್ಷಣವೇ ಬಾಯಲ್ಲಿ ನೀರೂರುತ್ತದೆ. ನೀವೂ ಸಹ ಹೇಳುತ್ತೀರಿ- ಇಂತಹ ಸ್ವರ್ಗದಲ್ಲಿ ತಲುಪಬೇಕು ಏಕೆಂದರೆ ನೀವು ಸ್ವರ್ಗವನ್ನು ತಿಳಿದುಕೊಂಡಿದ್ದೀರಿ ಆದರೆ ಮತ್ತೆ ಮನಸ್ಸು ಹೇಳುತ್ತದೆ- ಈಗ ನಾವು ಬೇಹದ್ದಿನ ತಂದೆಯ ಜೊತೆಯಲ್ಲಿದ್ದೇವೆ, ತಂದೆಯು ಓದಿಸುತ್ತಿದ್ದಾರೆ, ಇಂತಹ ಸುವರ್ಣಾವಕಾಶವು ಪುನಃ ಸಿಗುತ್ತದೆಯೇನು? ಇಲ್ಲಿಯಾದರೂ ಮನುಷ್ಯರು ಮನುಷ್ಯರಿಗೆ ಓದಿಸುತ್ತಾರೆ, ಅಲ್ಲಿ ದೇವತೆಗಳು ದೇವತೆಗಳಿಗೆ ಓದಿಸುತ್ತಾರೆ ಆದರೆ ಇಲ್ಲಿ ತಂದೆಯು ಮಕ್ಕಳಿಗೆ ಓದಿಸುತ್ತಾರೆ ಅಂದಾಗ ಹಗಲು-ರಾತ್ರಿಯ ಅಂತರವಿದೆ, ಎಷ್ಟೊಂದು ಖುಷಿಯಾಗಬೇಕು. 84 ಜನ್ಮಗಳನ್ನು ನೀವು ತೆಗೆದುಕೊಂಡಿದ್ದೀರಿ. ನಾವು ಅನೇಕ ಬಾರಿ ರಾಜ್ಯವನ್ನು ತೆಗೆದುಕೊಂಡು ಮತ್ತೆ ರಾವಣ ರಾಜ್ಯದಲ್ಲಿ ಬಂದಿದ್ದೇವೆಂದು ನೀವೇ ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿದುಕೊಂಡಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ- ನೀವು ಒಂದು ಜನ್ಮದಲ್ಲಿ ಪವಿತ್ರರಾದಾಗ 21 ಜನ್ಮಗಳಿಗೆ ನೀವು ಪಾವನರಾಗಿ ಬಿಡುತ್ತೀರಿ ಹಾಗಾದರೆ ಏಕೆ ಆಗುವುದಿಲ್ಲ! ಆದರೆ ಮಾಯೆಯು ಈ ರೀತಿಯಿದೆ, ಸಹೋದರ-ಸಹೋದರಿಯ ಸಂಬಂಧದ ಬೇಳೆಯೂ ಸಹ ಬೇಯುವುದಿಲ್ಲ. ಹಾಗೆಯೇ ಹಸಿಯಾಗಿಯೇ ಉಳಿದು ಬಿಡುತ್ತದೆ. ಯಾವಾಗ ತಮ್ಮನ್ನು ಆತ್ಮನೆಂದು ತಿಳಿದು ಸಹೋದರ-ಸಹೋದರರೆಂದು ತಿಳಿದುಕೊಂಡಾಗ ಬೇಳೆ ಬೇಯುತ್ತದೆ. ದೇಹದ ಪರಿವೆಯಿರಬಾರದು- ಇದೇ ಪರಿಶ್ರಮವಾಗಿದೆ, ತುಂಬಾ ಸಹಜವೂ ಆಗಿದೆ. ಯಾರಿಗಾದರೂ ತುಂಬಾ ಕಷ್ಟವೆಂದರೆ ಅವರ ಮನಸ್ಸು ತುಂಬಾ ದೂರವಾಗಿ ಬಿಡುತ್ತದೆ. ಆದ್ದರಿಂದ ಇದನ್ನು ಸಹಜಯೋಗ ಎಂದು ಹೆಸರಿಡಲಾಗಿದೆ. ಜ್ಞಾನವು ಸಹಜವಾಗಿದೆ, 84 ಜನ್ಮಗಳ ಚಕ್ರವನ್ನು ತಿಳಿದುಕೊಳ್ಳುವುದು, ಮೊಟ್ಟ ಮೊದಲು ತಂದೆಯ ಪರಿಚಯವನ್ನು ಕೊಡುವುದು. ತಂದೆಯ ನೆನಪಿನಿಂದ ಮಾತ್ರ ಆತ್ಮದಲ್ಲಿರುವ ತುಕ್ಕು ಬಿಟ್ಟು ಹೋಗುತ್ತದೆ ಹಾಗೂ ಪವಿತ್ರ ಪ್ರಪಂಚದ ಆಸ್ತಿಯನ್ನು ಪಡೆಯುತ್ತೀರಿ ಆದ್ದರಿಂದ ಮೊದಲು ತಂದೆಯನ್ನು ನೆನಪು ಮಾಡಿ. ಭಾರತದ ಪ್ರಾಚೀನ ಯೋಗವೆಂದು ಹೇಳುತ್ತೀರಿ ಅದರಿಂದ ಭಾರತಕ್ಕೆ ವಿಶ್ವದ ರಾಜ್ಯಭಾಗ್ಯ ಸಿಗುತ್ತದೆ. ಪ್ರಾಚೀನವೆಂದರೆ ಎಷ್ಟು ವರ್ಷಗಳಾಯಿತು? ಆಗ ಲಕ್ಷಾಂತರ ವರ್ಷವೆಂದು ಹೇಳುತ್ತಾರೆ. 5000 ವರ್ಷಗಳೆಂದು ನಿಮಗೆ ಗೊತ್ತಿದೆ, ಅದೇ ರಾಜಯೋಗವನ್ನು ತಂದೆಯು ಕಲಿಸುತ್ತಾರೆ, ಇದರಲ್ಲಿ ಗೊಂದಲವಾಗುವ ಅಗತ್ಯವಿಲ್ಲ. ನೀವಾತ್ಮರ ನಿವಾಸ ಸ್ಥಾನ ಎಲ್ಲಿದೆಯೆ೦ದು ಕೇಳಲಾಗುತ್ತದೆ? ನಮ್ಮ ನಿವಾಸ ಸ್ಥಾನ ಭೃಕುಟಿಯೆ೦ದು ಹೇಳುತ್ತೀರಿ. ಆದ್ದರಿಂದ ಆತ್ಮವನ್ನೇ ನೋಡಬೇಕಾಗುವುದು. ಈ ಜ್ಞಾನವು ಈಗ ನಿಮಗೆ ಸಿಗುತ್ತದೆ ನಂತರ ಅಲ್ಲಿ ಈ ಜ್ಞಾನದ ಅವಶ್ಯಕತೆಯಿರುವುದಿಲ್ಲ. ಮುಕ್ತಿ-ಜೀವನ್ಮುಕ್ತಿಯನ್ನು ಪಡೆದ ನಂತರ ಸಮಾಪ್ತಿಯಾಗುತ್ತದೆ. ಮುಕ್ತಿಯವರು ತಮ್ಮ ಸಮಯದಲ್ಲಿ ಜೀವನ್ಮುಕ್ತಿಯಲ್ಲಿ ಬಂದು ಸುಖವನ್ನು ಪಡೆಯುತ್ತಾರೆ. ಎಲ್ಲರೂ ಮುಕ್ತಿಯಿಂದ ಜೀವನ್ಮುಕ್ತಿಯಲ್ಲಿ ಬರುತ್ತಾರೆ. ಇಲ್ಲಿಂದ ಶಾಂತಿಧಾಮಕ್ಕೆ ಹೋಗುತ್ತಾರೆ ಇನ್ನು ಯಾವುದೇ ಪ್ರಪಂಚವಿಲ್ಲ. ನಾಟಕದನುಸಾರವಾಗಿ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ, ವಿನಾಶದ ತಯಾರಿಯೂ ನಡೆಯುತ್ತಿದೆ, ಇಷ್ಟೊಂದು ಖರ್ಚು ಮಾಡಿ ಅಣು ಬಾಂಬನ್ನು ತಯಾರು ಮಾಡುತ್ತಿರುವಾಗ ಅವನ್ನು ಹಾಗೆಯೇ ಇಟ್ಟುಕೊಳ್ಳುತ್ತಾರೇನು! ಅವುಗಳಿರುವುದೇ ವಿನಾಶಕ್ಕಾಗಿ. ಸತ್ಯ-ತ್ರೇತಾ ಯುಗದಲ್ಲಿ ಈ ವಸ್ತುಗಳಿರುವುದಿಲ್ಲ, ಈಗ 84 ಜನ್ಮಗಳು ಪೂರ್ಣವಾಯಿತು, ಈಗ ಈ ಶರೀರವನ್ನು ಬಿಟ್ಟು ಮನೆಗೆ ಹೋಗಬೇಕು. ದೀಪಾವಳಿಯಲ್ಲಿ ಎಲ್ಲರೂ ಒಳ್ಳೊಳ್ಳೆಯ ವಸ್ತ್ರಗಳನ್ನು ಧರಿಸುತ್ತಾರಲ್ಲವೆ. ನೀವು ಆತ್ಮರೂ ಸಹ ಹೊಸದಾಗಿ ಆಗುತ್ತೀರಿ- ಇದು ಬೇಹದ್ದಿನ ಮಾತಾಗಿದೆ. ಆತ್ಮ ಪವಿತ್ರವಾಗುವುದರಿಂದ ಶರೀರವೂ ಫಸ್ಟ್ ಕ್ಲಾಸ್ ಆಗಿರುವುದೇ ಸಿಗುತ್ತದೆ. ಈ ಸಮಯ ನಕಲಿ ಶೋ ಮಾಡುತ್ತಾರೆ. ಪೌಡರ್ ಮೊದಲಾದವುಗಳನ್ನು ಹಾಕಿಕೊಂಡು ಬಹಳ ಸುಂದರರಾಗಿ ಬಿಡುತ್ತಾರೆ. ಅಲ್ಲಿ ಸ್ವಾಭಾವಿಕ ಸೌಂದರ್ಯವಿರುತ್ತದೆ. ಆತ್ಮವು ಸದಾಕಾಲಕ್ಕೆ ಸುಂದರವಾಗಿ ಬಿಡುತ್ತದೆ. ಇದನ್ನು ನೀವು ತಿಳಿದುಕೊಂಡಿದ್ದೀರಿ- ಶಾಲೆಯಲ್ಲಿ ಎಲ್ಲರೂ ಒಂದೇ ರೀತಿಯಾಗಿ ಇರುವುದಿಲ್ಲ. ನಾವು ಇಂತಹ ಲಕ್ಷ್ಮೀ-ನಾರಾಯಣರಾಗಬೇಕೆಂದು ಪುರುಷಾರ್ಥ ಮಾಡುತ್ತೀರಿ. ಇದು ನಿಮ್ಮ ಈಶ್ವರೀಯ ಕುಲವಾಗಿದೆ. ನಂತರ ಇದು ಸೂರ್ಯವಂಶಿ-ಚಂದ್ರವಂಶಿ ಮನೆತನವಾಗುತ್ತದೆ. ನಿಮ್ಮ ಬ್ರಾಹ್ಮಣರ ರಾಜ್ಯವಿಲ್ಲ, ಈಗ ನೀವು ಸಂಗಮದಲ್ಲಿದ್ದೀರಿ. ಈ ಕಲಿಯುಗದಲ್ಲಿ ರಾಜ್ಯವಿಲ್ಲ. ಒಂದು ವೇಳೆ ಯಾವುದಾದರೂ ರಾಜ್ಯಭಾರವು ಉಳಿಯಬಹುದು ಆದರೆ ಎಂದಿಗೂ ಇಲ್ಲದಂತಾಗುವುದಿಲ್ಲ. ಈಗ ನೀವು ಈ ರೀತಿಯಾಗಲು ಪುರುಷಾರ್ಥ ಮಾಡುತ್ತಿದ್ದೀರಿ. ಅವರು ತಂದೆಯಾಗಿದ್ದು ನಾವು ಆತ್ಮರು ಸಹೋದರ-ಸಹೋದರತೆಯಿಂದ ನೋಡುತ್ತೀರಿ. ಪರಸ್ಪರ ಸಹೋದರ-ಸಹೋದರರನ್ನು ನೋಡಿ ಎಂದು ತಿಳಿಸುತ್ತಾರೆ. ಜ್ಞಾನದ ಮೂರನೆಯ ನೇತ್ರ ದೊರೆತಿದೆಯಲ್ಲವೆ. ನೀವಾತ್ಮ ಎಲ್ಲಿ ನಿವಾಸ ಮಾಡುತ್ತೀರಿ? ಆತ್ಮ ಸಹೋದರ ಕೇಳುತ್ತದೆ- ಆತ್ಮವು ಎಲ್ಲಿರುತ್ತದೆ? ಇಲ್ಲಿ ಭೃಕುಟಿಯಲ್ಲಿ ಎಂದು ಹೇಳಲಾಗುತ್ತದೆ. ಇದಂತೂ ಸಾಮಾನ್ಯ ಶಬ್ಧವಾಗಿದೆ. ಒಬ್ಬ ತಂದೆಯ ವಿನಃ ಯಾವ ನೆನಪೂ ಬರಬಾರದು. ಅಂತ್ಯದಲ್ಲಿ ಶರೀರವೂ ಸಹ ತಂದೆಯ ನೆನಪಿನಲ್ಲಿ ಬಿಡಬೇಕು ಈ ಅಭ್ಯಾಸವನ್ನು ಪಕ್ಕಾ ಮಾಡಿಕೊಳ್ಳಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಸತ್ಯಯುಗದಲ್ಲಿ ಫಸ್ಟ್ ಕ್ಲಾಸ್ ಸುಂದರ ಶರೀರವನ್ನು ಪ್ರಾಪ್ತಿ ಮಾಡಿಕೊಳ್ಳಲು ಈಗ ಆತ್ಮವನ್ನು ಪಾವನ ಮಾಡಿಕೊಳ್ಳಬೇಕಾಗಿದೆ, ತುಕ್ಕನ್ನು ತೆಗೆದುಹಾಕಬೇಕು. ನಕಲಿ ಶೋ ಮಾಡಬಾರದು.

2. ಸದಾ ಪವಿತ್ರವಾಗಿರಲು ಅಭ್ಯಾಸ ಮಾಡಬೇಕಾಗಿದೆ ಏಕೆಂದರೆ ಒಬ್ಬ ತಂದೆಯ ವಿನಃ ಮತ್ತೇನೂ ನೆನಪಿಗೆ ಬರಬಾರದು. ಈ ದೇಹವನ್ನೂ ಮರೆತು ಬಿಡಬೇಕಾಗಿದೆ. ಸಹೋದರ-ಸಹೋದರ ದೃಷ್ಟಿಯನ್ನು ಸ್ವಾಭಾವಿಕವಾಗಿ ಪಕ್ಕಾ ಆಗಿ ಬಿಡಬೇಕು.


ವರದಾನ:
ದೃಢ ಸಂಕಲ್ಪರೂಪಿ ವ್ರತದಿಂದ ವೃತ್ತಿಗಳ ಪರಿವರ್ತನೆ ಮಾಡುವಂತಹ ಮಹಾನ್ ಆತ್ಮ ಭವ.

ಮಹಾನ್ ಆಗಲು ಮುಖ್ಯ ಆಧಾರವಾಗಿದೆ “ ಪವಿತ್ರತೆ “. ಈ ಪವಿತ್ರತೆಯ ವ್ರತವನ್ನು ಪ್ರತಿಜ್ಞೆಯ ರೂಪದಲ್ಲಿ ಧಾರಣೆ ಮಾಡುವುದು ಅರ್ಥಾತ್ ಮಹಾನ್ ಆತ್ಮ ಆಗುವುದಾಗಿದೆ. ಯಾವುದೇ ಸಂಕಲ್ಪರೂಪಿ ವ್ರತ ವೃತ್ತಿಯನ್ನು ಬದಲಾಯಿಸಿ ಬಿಡುವುದು. ಪವಿತ್ರತೆಯ ವ್ರತ ತೆಗೆದುಕೊಳ್ಳುವುದು ಅರ್ಥಾತ್ ತಮ್ಮ ವೃತ್ತಿಯನ್ನು ಶ್ರೇಷ್ಠ ಮಾಡಿಕೊಳ್ಳುವುದು. ವ್ರತ ಇಡುವುದು ಅರ್ಥಾತ್ ಸ್ಥೂಲ ರೀತಿಯಿಂದ ಪಥ್ಯೆ ಮಾಡುವುದು, ಮನಸ್ಸಿನಲ್ಲಿ ಪಕ್ಕಾ ಸಂಕಲ್ಪ ತೆಗೆದುಕೊಳ್ಳುವುದು. ಆದ್ದರಿಂದ ಪಾವನರಾಗುವಂತಹ ವ್ರತವನ್ನು ತೆಗೆದುಕೊಂಡಿರುವೆ ಮತ್ತು ನಾವು ಆತ್ಮ ಸಹೋದರ-ಸಹೋದರ ಆಗಿದೆ - ಈ ಬ್ರದರ್ ಹುಡ್ ನ ವೃತ್ತಿ ಮಾಡಿಕೊಂಡಿರುವಿರಿ. ಇದೇ ವೃತ್ತಿಯಿಂದ ಬ್ರಾಹ್ಮಣ ಮಹಾನ್ ಆತ್ಮ ಆದರು.

ಸ್ಲೋಗನ್:
ವ್ಯರ್ಥದಿಂದ ಸುರಕ್ಷಿತರಾಗಬೇಕಾದರೆ ಬಾಯಿಯಲ್ಲಿ ದೃಡ ಸಂಕಲ್ಪದ ಬಟನ್ ಹಾಕಿ ಕೊಳ್ಳಿ.