21.02.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಆತ್ಮಾಭಿಮಾನವು ವಿಶ್ವದ ಮಾಲೀಕರನ್ನಾಗಿ ಮಾಡುತ್ತದೆ, ದೇಹಾಭಿಮಾನವು ಕಂಗಾಲರನ್ನಾಗಿ ಮಾಡುತ್ತದೆ,
ಆದ್ದರಿಂದ ಆತ್ಮಾಭಿಮಾನಿ ಭವ.”
ಪ್ರಶ್ನೆ:
ಯಾವ ಅಭ್ಯಾಸವು
ಅಶರೀರಿಯಾಗುವುದರಲ್ಲಿ ಬಹಳ ಸಹಯೋಗ ಕೊಡುತ್ತದೆ?
ಉತ್ತರ:
ತಮ್ಮನ್ನು ಸದಾ
ಪಾತ್ರಧಾರಿಯೆಂದು ತಿಳಿಯಿರಿ, ಹೇಗೆ ಪಾತ್ರಧಾರಿಯ ಪಾತ್ರವು ಮುಕ್ತಾಯವಾಗುತ್ತಿದ್ದಂತೆಯೇ
ವಸ್ತ್ರವನ್ನು ತೆಗೆದು ಬಿಡುತ್ತಾರೆ. ಹಾಗೆಯೇ ತಾವು ಮಕ್ಕಳೂ ಸಹ ಈ ಅಭ್ಯಾಸ ಮಾಡಬೇಕು, ಕರ್ಮವು
ಮುಕ್ತಾಯವಾಗುತ್ತಿದ್ದಂತೆಯೇ ಹಳೆಯ ವಸ್ತ್ರ(ಶರೀರ)ವನ್ನು ಬಿಟ್ಟು ಅಶರೀರಿಯಾಗಿ ಬಿಡಿ. ಆತ್ಮಗಳು
ಸಹೋದರ-ಸಹೋದರನಾಗಿದೆ, ಈ ಅಭ್ಯಾಸವನ್ನು ಮಾಡುತ್ತಾ ಇರಿ. ಇದೇ ಪಾವನರಾಗುವ ಸಹಜ ಸಾಧನವಾಗಿದೆ.
ಶರೀರವನ್ನು ನೋಡುವುದರಿಂದ ಕೆಟ್ಟ ವಿಚಾರಗಳು ನಡೆಯುತ್ತವೆ ಆದ್ದರಿಂದ ಅಶರೀರಿಗಳಾಗಿ.
ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ ಏಕೆಂದರೆ ಬಹಳ ಬುದ್ಧಿಹೀನರಾಗಿ ಬಿಟ್ಟಿದ್ದೀರಿ. 5000
ವರ್ಷಗಳ ಹಿಂದೆಯೂ ಸಹ ನಿಮಗೆ ತಿಳಿಸಿದ್ದೆನು ಮತ್ತು ದೈವೀ ಕರ್ಮವನ್ನೂ ಕಲಿಸಿದ್ದೆನು. ನೀವು
ದೇವಿ-ದೇವತಾ ಧರ್ಮದಲ್ಲಿ ಬಂದಿದ್ದಿರಿ ನಂತರ ಡ್ರಾಮಾದ ಯೋಜನೆಯನುಸಾರ ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಮತ್ತೆ ಕಲೆಗಳು ಕಡಿಮೆಯಾಗುತ್ತಾ-ಆಗುತ್ತಾ ಇಲ್ಲಿ
ಪ್ರತ್ಯಕ್ಷ ರೂಪದಲ್ಲಿ ಕಲಾಹೀನರಾಗಿ ಬಿಟ್ಟಿದ್ದೀರಿ. ಏಕೆಂದರೆ ಇದು ತಮೋಪ್ರಧಾನ ರಾವಣ
ರಾಜ್ಯವಾಗಿದೆ. ಈ ರಾವಣ ರಾಜ್ಯವೂ ಸಹ ಮೊದಲು ಸತೋಪ್ರಧಾನವಾಗಿತ್ತು. ನಂತರ ಸತೋ, ರಜೋ, ತಮೋ ಆಗಿ
ಬಿಟ್ಟಿತು. ಈಗಂತೂ ಸಂಪೂರ್ಣ ತಮೋಪ್ರಧಾನವಾಗಿದೆ, ಈಗ ಇದರ ಅಂತ್ಯವಾಗಲಿದೆ. ರಾವಣ ರಾಜ್ಯಕ್ಕೆ
ಆಸುರಿ ರಾಜ್ಯವೆಂದು ಹೇಳಲಾಗುತ್ತದೆ. ರಾವಣನನ್ನು ಸುಡುವ ಸಂಪ್ರದಾಯವು ಭಾರತದಲ್ಲಿದೆ. ರಾಮರಾಜ್ಯ,
ರಾವಣ ರಾಜ್ಯವೆಂದು ಭಾರತವಾಸಿಗಳೇ ಹೇಳುತ್ತಾರೆ ಅಂದಾಗ ರಾಮ ರಾಜ್ಯವು ಸತ್ಯಯುಗದಲ್ಲಿಯೇ ಇರುತ್ತದೆ,
ರಾವಣ ರಾಜ್ಯವು ಕಲಿಯುಗದಲ್ಲಿದೆ, ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ತಂದೆಗೆ
ಆಶ್ಚರ್ಯವೆನಿಸುತ್ತದೆ - ಒಳ್ಳೊಳ್ಳೆಯ ಮಕ್ಕಳೂ ಸಹ ಪೂರ್ಣ ರೀತಿಯಲ್ಲಿ ಅರಿಯದೇ ಇರುವ ಕಾರಣ ತಮ್ಮ
ಅದೃಷ್ಟಕ್ಕೆ ಅಡ್ಡ ಗೆರೆಯನ್ನು ಎಳೆದುಕೊಳ್ಳುತ್ತಾರೆ. ರಾವಣನ ಅವಗುಣಗಳು ಹಿಡಿದುಕೊಳ್ಳುತ್ತವೆ.
ತಾವೇ ದೈವೀ ಗುಣಗಳ ವರ್ಣನೆಯನ್ನು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಅದೇ
ದೇವತೆಗಳಾಗಿದ್ದಿರಿ, ನೀವೇ 84 ಜನ್ಮಗಳನ್ನು ಭೋಗಿಸಿದಿರಿ. ನೀವೇಕೆ ತಮೋಪ್ರಧಾನರಾಗಿದ್ದೀರಿ ಎಂಬ
ಅಂತರವನ್ನು ತಿಳಿಸಲಾಗಿದೆ. ಇದು ರಾವಣ ರಾಜ್ಯವಾಗಿದೆ. ರಾವಣನೇ ಎಲ್ಲರಿಗಿಂತ ದೊಡ್ಡ
ಶತ್ರುವಾಗಿದ್ದಾನೆ, ಇವನೇ ಭಾರತವನ್ನು ಎಷ್ಟೊಂದು ಕಂಗಾಲ, ತಮೋಪ್ರಧಾನವನ್ನಾಗಿ ಮಾಡಿದ್ದಾನೆ. ರಾಮ
ರಾಜ್ಯದಲ್ಲಿ ಇಷ್ಟೊಂದು ಮನುಷ್ಯರಿರುವುದಿಲ್ಲ. ಅಲ್ಲಿ ಒಂದು ಧರ್ಮವಿರುತ್ತದೆ, ಇಲ್ಲಿ ಎಲ್ಲರಲ್ಲಿ
ಭೂತ ಪ್ರವೇಶತೆಯಾಗಿದೆ. ಕ್ರೋಧ, ಲೋಭ, ಮೋಹದ ಭೂತವಿದೆಯಲ್ಲವೆ. ನಾವು ಅವಿನಾಶಿಯಾಗಿದ್ದೇವೆ, ಈ
ಶರೀರವು ವಿನಾಶಿಯಾಗಿದೆ ಎಂಬುದನ್ನು ಮರೆತು ಹೋಗಿದ್ದಾರೆ, ಆತ್ಮಾಭಿಮಾನಿಯಾಗುವುದೇ ಇಲ್ಲ ಬಹಳ
ದೇಹಾಭಿಮಾನವೇ ಇದೆ. ದೇಹಾಭಿಮಾನ ಮತ್ತು ಆತ್ಮಾಭಿಮಾನಿಯಲ್ಲಿ ರಾತ್ರಿ-ಹಗಲಿನ ಅಂತರವಿದೆ.
ಆತ್ಮಾಭಿಮಾನಿ ದೇವಿ-ದೇವತೆಗಳು ವಿಶ್ವದ ಮಾಲೀಕರಾಗಿ ಬಿಡುತ್ತಾರೆ. ದೇಹಾಭಿಮಾನವು ಬರುವುದರಿಂದ
ಕಂಗಾಲಾಗಿ ಬಿಡುತ್ತಾರೆ. ಭಾರತವು ಚಿನ್ನದ ಪಕ್ಷಿಯಾಗಿತ್ತು, ಭಲೇ ಹೇಳುತ್ತಾರೆ - ಮಧುರಾತಿ ಮಧುರ
ಮಕ್ಕಳೇ, ನಿಮ್ಮನ್ನು ವಿಶ್ವಕ್ಕೆ ಮಾಲೀಕರನ್ನಾಗಿ ಮಾಡುತ್ತೇನೆ. ಈ ಲಕ್ಷ್ಮೀ-ನಾರಾಯಣರು ವಿಶ್ವದ
ಮಾಲೀಕರಾಗಿದ್ದರು, ಎಂದಾದರೂ ಕೇಳಿದಿರಾ - ಇವರಿಗೆ ರಾಜ್ಯಭಾಗ್ಯವನ್ನು ಯಾರು ಕೊಟ್ಟರು? ಎಂದು.
ಅವರು ಅಂತಹ ಯಾವ ಕರ್ಮವನ್ನು ಮಾಡಿರಬಹುದು? ಯಾವುದರಿಂದ ಇಷ್ಟು ಶ್ರೇಷ್ಠ ಪದವಿಯನ್ನು ಪಡೆದರು?
ಕರ್ಮದ ಮಾತಲ್ಲವೆ. ಮನುಷ್ಯರು ಆಸುರೀ ಕರ್ಮಗಳನ್ನು ಮಾಡುತ್ತಾರೆ ಅಂದಾಗ ಅವರ ಕರ್ಮವು ವಿಕರ್ಮವಾಗಿ
ಬಿಡುತ್ತದೆ. ಸತ್ಯಯುಗದಲ್ಲಿ ಕರ್ಮ-ಅಕರ್ಮಗಳಾಗುತ್ತವೆ. ಅಲ್ಲಿ ಕರ್ಮದ ಖಾತೆಯೇ ಇರುವುದಿಲ್ಲ.
ತಂದೆಯು ತಿಳಿಸುತ್ತಾರೆ - ತಿಳಿಯದೇ ಇರುವ ಕಾರಣ ಬಹಳ ವಿಘ್ನಗಳು ಬರುತ್ತವೆ. ಶಿವ-ಶಂಕರ ಒಬ್ಬರೇ
ಎಂದು ಹೇಳುತ್ತಾರೆ. ಅರೆ! ಶಿವ ನಿರಾಕಾರನನ್ನು ಒಂಟಿಯಾಗಿ ತೋರಿಸುತ್ತಾರೆ, ಶಂಕರ-ಪಾರ್ವತಿಯನ್ನು
ಒಟ್ಟಾಗಿ ತೋರಿಸುತ್ತಾರೆ. ಇಬ್ಬರ ಕಾರ್ಯವೇ ಬೇರೆ-ಬೇರೆಯಾಗಿದೆ. ಮಂತ್ರಿ ಮತ್ತು ರಾಷ್ಟ್ರಪತಿಯನ್ನು
ಒಬ್ಬರೇ ಎಂದು ಹೇಗೆ ಹೇಳಲು ಸಾಧ್ಯ? ಇಬ್ಬರ ಪದವಿಯೂ ಬೇರೆ-ಬೇರೆಯಾಗಿದೆ ಅಂದಾಗ ಶಿವ-ಶಂಕರನನ್ನು
ಒಬ್ಬರೇ ಎಂದು ಹೇಗೆ ಹೇಳಲು ಸಾಧ್ಯ. ಈ ರೀತಿ ಹೇಳುತ್ತಾರೆ, ಯಾರು ರಾಮನ ಸಂಪ್ರದಾಯದಲ್ಲಿ
ಬರುವುದಿಲ್ಲವೋ ಅವರು ತಿಳಿದುಕೊಳ್ಳುವುದೇ ಇಲ್ಲ. ಆಸುರೀ ಸಂಪ್ರದಾಯದವರು ನಿಂದನೆ ಮಾಡುತ್ತಾರೆ,
ವಿಘ್ನಗಳನ್ನು ಹಾಕುತ್ತಾರೆ ಏಕೆಂದರೆ ಅವರಲ್ಲಿ ಪಂಚ ವಿಕಾರಗಳಿವೆಯಲ್ಲವೆ. ದೇವತೆಗಳು ಸಂಪೂರ್ಣ
ನಿರ್ವಿಕಾರಿಗಳಾಗಿದ್ದಾರೆ, ಅವರದು ಬಹಳ ಶ್ರೇಷ್ಠ ಪದವಿಯಾಗಿದೆ. ಈಗ ನೀವು ತಿಳಿದುಕೊಂಡಿದ್ದೀರಿ -
ನಾವು ಎಷ್ಟು ವಿಕಾರಿಗಳಾಗಿದ್ದೆವು, ವಿಕಾರದಿಂದಲೇ ಜನ್ಮ ಪಡೆಯುತ್ತಾರೆ! ಸನ್ಯಾಸಿಗಳೂ ಸಹ
ವಿಕಾರದಿಂದಲೇ ಜನ್ಮ ಪಡೆಯುತ್ತಾರೆ ನಂತರ ಸನ್ಯಾಸವನ್ನು ಸ್ವೀಕರಿಸುತ್ತಾರೆ. ಆದರೆ ಸತ್ಯಯುಗದಲ್ಲಿ
ಈ ಮಾತುಗಳಿರುವುದಿಲ್ಲ. ಸನ್ಯಾಸಿಗಳು ಸತ್ಯಯುಗ ಇದ್ದೇ ಇದೆ ಎಂದು ಹೇಳಿ ಬಿಡುತ್ತಾರೆ ಆದರೆ ಈ
ಮಾತುಗಳನ್ನು ತಿಳಿದುಕೊಂಡೇ ಇಲ್ಲ. ಹೇಗೆ ಎಲ್ಲಿ ನೋಡಿದರಲ್ಲಿ ಕೃಷ್ಣನೇ ಕೃಷ್ಣ, ಎಲ್ಲಿ
ನೋಡಿದರಲ್ಲಿ ರಾಧೆಯೇ ರಾಧೆ ಎಂದು ಹೇಳುತ್ತಾರಲ್ಲವೆ. ಆದರೆ ಅನೇಕ ಮತ-ಮತಾಂತರ, ಅನೇಕ ಧರ್ಮಗಳು
ಅರ್ಧಕಲ್ಪ ದೈವೀ ಮತವು ನಡೆಯುತ್ತದೆ, ಅದು ನಿಮಗೀಗ ಸಿಗುತ್ತದೆ. ನೀವೇ ಬ್ರಹ್ಮಾ ಮುಖವಂಶಾವಳಿ
ಮತ್ತೆ ವಿಷ್ಣುವಂಶಿ ಮತ್ತು ಚಂದ್ರವಂಶಿಯಾಗುತ್ತೀರಿ. ಅವರೆಡು ವಂಶಾವಳಿಯಾಗಿದೆ ಮತ್ತು ಒಂದು
ಬ್ರಾಹ್ಮಣ ಕುಲವೆಂದು ಹೇಳುತ್ತಾರೆ. ಇದಕ್ಕೆ ವಂಶಾವಳಿಯೆಂದು ಹೇಳುವುದಿಲ್ಲ. ಇವರ ರಾಜಧಾನಿಯು
ನಡೆಯುವುದಿಲ್ಲ. ಇದನ್ನೂ ಸಹ ನೀವೇ ತಿಳಿಯುತ್ತೀರಿ. ನಿಮ್ಮಲ್ಲಿ ಕೆಲವರಷ್ಟೇ ತಿಳಿಯುತ್ತೀರಿ,
ಕೆಲವರಂತೂ ಸುಧಾರಣೆಯಾಗುವುದೇ ಇಲ್ಲ. ಯಾವುದಾದರೊಂದು ಭೂತವಿರುತ್ತದೆ, ಲೋಭದ ಭೂತ, ಕ್ರೋಧದ
ಭೂತವಿದೆಯಲ್ಲವೆ. ಸತ್ಯಯುಗದಲ್ಲಿ ಯಾವುದೇ ಭೂತವಿರುವುದಿಲ್ಲ, ಅಲ್ಲಿ ದೇವತೆಗಳಿರುತ್ತಾರೆ, ಬಹಳ
ಸುಖಿಯಾಗಿರುತ್ತಾರೆ. ಭೂತವೇ ದುಃಖ ಕೊಡುತ್ತದೆ, ಕಾಮದ ಭೂತವು ಆದಿ-ಮಧ್ಯ-ಅಂತ್ಯದಲ್ಲಿ ದುಃಖವನ್ನು
ಕೊಡುತ್ತದೆ. ಇದರಲ್ಲಿ ಬಹಳ ಪರಿಶ್ರಮ ಪಡಬೇಕಾಗುತ್ತದೆ. ಚಿಕ್ಕಮ್ಮನ ಮನೆಯಂತಲ್ಲ. ತಂದೆಯು
ತಿಳಿಸುತ್ತಾ ಇರುತ್ತಾರೆ - ತಮ್ಮನ್ನು ಸಹೋದರ-ಸಹೋದರಿಯೆಂದು ತಿಳಿಯಿರಿ. ಆಗ ಕೆಟ್ಟ ದೃಷ್ಟಿಯು
ಇರುವುದಿಲ್ಲ. ಪ್ರತಿಯೊಂದು ಮಾತಿನಲ್ಲಿ ಧೈರ್ಯವು ಬೇಕು. ಕೆಲವರು ನೀನು ವಿವಾಹ ಮಾಡಿಕೊಳ್ಳದಿದ್ದರೆ
ಮನೆಯಿಂದ ಹೊರಟು ಹೋಗು ಎಂದು ಹೇಳುತ್ತಾರೆ. ಆದ್ದರಿಂದ ಇದಕ್ಕೆ ಸಾಹಸವಿದೆಯೇ ಎಂದು ತಮ್ಮ
ಪರಿಶೀಲನೆಯನ್ನು ಮಾಡಿಕೊಳ್ಳಿ. ನೀವು ಮಕ್ಕಳು ಬಹಳ ಪದಮಾಪದಮ ಭಾಗ್ಯಶಾಲಿಗಳಾಗುತ್ತಿದ್ದೀರಿ.
ಇದೆಲ್ಲವೂ ಸಮಾಪ್ತಿಯಾಗುತ್ತದೆ, ಎಲ್ಲವೂ ಮಣ್ಣು ಪಾಲಾಗುವುದಿದೆ. ಕೆಲವರಂತೂ ಒಳ್ಳೆಯ
ಸಾಹಸವನ್ನಿಟ್ಟು ನಡೆಯುತ್ತಾರೆ, ಇನ್ನೂ ಕೆಲವರು ಸಾಹಸವನ್ನಿಟ್ಟ ಮೇಲೆ ಅನುತ್ತೀರ್ಣರಾಗಿ
ಬಿಡುತ್ತಾರೆ. ತಂದೆಯು ಪ್ರತಿಯೊಂದು ಮಾತಿನಲ್ಲಿ ತಿಳಿಸುತ್ತಿರುತ್ತಾರೆ, ಆದರೆ ಮಾಡಲಿಲ್ಲವೆಂದರೆ
ಅವರದು ಪೂರ್ಣ ಯೋಗವಿಲ್ಲವೆಂದು ತಿಳಿಯುತ್ತಾರೆ. ಭಾರತದ ಪ್ರಾಚೀನ ರಾಜಯೋಗವಂತೂ ಪ್ರಸಿದ್ಧವಾಗಿದೆ.
ಈ ಯೋಗದಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ. ಈ ವಿದ್ಯೆಯು ಸಂಪಾದನೆಗೆ ಮೂಲವಾಗಿದೆ.
ವಿದ್ಯೆಯಿಂದಲೇ ನೀವು ನಂಬರ್ವಾರ್ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಸಹೋದರ-ಸಹೋದರಿಯ
ಸಂಬಂಧದಲ್ಲಿಯೂ ಬುದ್ಧಿಯು ಚಲಾಯಮಾನವಾಗುತ್ತದೆ. ಆದ್ದರಿಂದ ತಂದೆಯು ಇದಕ್ಕಿಂತಲೂ ಮೇಲೆ
ತೆಗೆದುಕೊಂಡು ಹೋಗುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ, ಅನ್ಯರನ್ನು ಆತ್ಮವು
ಸಹೋದರ-ಸಹೋದರನೆಂದು ತಿಳಿಯಿರಿ. ನಾವೆಲ್ಲರೂ ಸಹೋದರ-ಸಹೋದರನಾಗಿದ್ದೇವೆಂದರೆ ಬೇರೆ ದೃಷ್ಠಿಯು
ಇರುವುದೇ ಇಲ್ಲ. ಶರೀರವನ್ನು ನೋಡುವುದರಿಂದಲೇ ಕೆಟ್ಟ ವಿಚಾರಗಳು ಬರುತ್ತವೆ. ಆದ್ದರಿಂದ ತಂದೆಯು
ಹೇಳುತ್ತಾರೆ - ಅಶರೀರಿ ಭವ, ದೇಹೀ-ಅಭಿಮಾನಿ ಭವ. ತಮ್ಮನ್ನು ಆತ್ಮನೆಂದು ತಿಳಿಯಿರಿ, ಆತ್ಮವು
ಅವಿನಾಶಿಯಾಗಿದೆ, ಶರೀರದಿಂದ ಪಾತ್ರವನ್ನಭಿನಯಿಸಿದಿರಿ ಮತ್ತೆ ಈ ಶರೀರದಿಂದ ಬೇರೆಯಾಗಿ ಬಿಡಬೇಕು.
ಹೇಗೆ ಆ ಪಾತ್ರಧಾರಿಗಳು ಪಾತ್ರವನ್ನು ಮುಕ್ತಾಯ ಮಾಡಿ ವಸ್ತ್ರಗಳನ್ನು ಬದಲಾಯಿಸುತ್ತಾರೆ. ಈಗ ಹಳೆಯ
ಶರೀರವನ್ನು ತೆಗೆದು ಹೊಸ ವಸ್ತ್ರವನ್ನು ಧರಿಸಬೇಕಾಗಿದೆ. ಈ ಸಮಯದಲ್ಲಿ ಆತ್ಮವೂ ತಮೋಪ್ರಧಾನ,
ಶರೀರವೂ ತಮೋಪ್ರಧಾನವಾಗಿದೆ. ತಮೋಪ್ರಧಾನ ಆತ್ಮವು ಮುಕ್ತಿಯಲ್ಲಿ ಹೋಗಲು ಸಾಧ್ಯವಿಲ್ಲ.
ಪವಿತ್ರವಾದಾಗಲೇ ಹೋಗಲು ಸಾಧ್ಯ, ಅಪವಿತ್ರ ಆತ್ಮವು ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇಂತಹವರು
ಬ್ರಹ್ಮ್ ದಲ್ಲಿ ಲೀನವಾದರೆಂದು ಸುಳ್ಳನ್ನು ಹೇಳುತ್ತಿರುತ್ತಾರೆ. ಆದರೆ ಒಬ್ಬರೂ ಹೋಗಲು
ಸಾಧ್ಯವಿಲ್ಲ. ಹೇಗೆ ವೃಕ್ಷವು ಮಾಡಲ್ಪಟ್ಟಿದೆಯೋ ಹಾಗೆಯೇ ಇರುತ್ತದೆ. ಇದನ್ನು ನೀವು ಬ್ರಾಹ್ಮಣ
ಮಕ್ಕಳು ಅರಿತಿದ್ದೀರಿ. ಗೀತೆಯಲ್ಲಿ ಬ್ರಾಹ್ಮಣರ ಹೆಸರನ್ನು ಎಲ್ಲಿಯೂ ತೋರಿಸಿಲ್ಲ. ಇದನ್ನಂತೂ
ತಿಳಿಸುತ್ತಾರೆ - ಪ್ರಜಾಪಿತ ಬ್ರಹ್ಮಾರವರ ಶರೀರದಲ್ಲಿ ಪ್ರವೇಶ ಮಾಡುತ್ತೇನೆ, ಅವಶ್ಯವಾಗಿ ದತ್ತು
ಮಾಡಿಕೊಳ್ಳಬೇಕು, ಆ ಬ್ರಾಹ್ಮಣರು ವಿಕಾರಿಗಳಾಗಿದ್ದಾರೆ, ನೀವು ನಿರ್ವಿಕಾರಿಗಳಾಗಿದ್ದೀರಿ.
ನಿರ್ವಿಕಾರಿಗಳಾಗುವುದರಲ್ಲಿ ಬಹಳ ದುಃಖವನ್ನು ಸಹನೆ ಮಾಡಬೇಕಾಗುತ್ತದೆ, ಈ ನಾಮ-ರೂಪವನ್ನು
ನೋಡುವುದರಿಂದ ಅನೇಕ ವಿಕಲ್ಪಗಳು ಬರುತ್ತವೆ. ಸಹೋದರ-ಸಹೋದರಿಯ ಸಂಬಂಧದಲ್ಲಿಯೂ ಸಹ ಬೀಳುತ್ತಾರೆ.
ಬಾಬಾ ನಾವು ಬಿದ್ದು ಹೋದೆವು, ಮುಖ ಕಪ್ಪು ಮಾಡಿಕೊಂಡೆವೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ
- ವಾಹ್! ಸಹೋದರ-ಸಹೋದರಿಯಾಗಿರಿ ಎಂದು ನಾನೇ ಹೇಳಿದೆನು. ಆದರೆ ನೀವು ಇಂತಹ ಕೆಟ್ಟ ಕೆಲಸವನ್ನು
ಮಾಡಿದಿರಿ ಅದಕ್ಕೆ ಪ್ರತಿಫಲವಾಗಿ ಕಠಿಣ ಶಿಕ್ಷೆಯು ಸಿಕ್ಕಿ ಬಿಡುವುದು. ಹೇಗೆ ಯಾರಾದರೂ
ಬೇರೆಯವರನ್ನು ಹಾಳು ಮಾಡುತ್ತಾರೆಂದರೆ ಅವರನ್ನು ಜೈಲಿನಲ್ಲಿ ಹಾಕಲಾಗುವುದು. ಭಾರತವು ಎಷ್ಟೊಂದು
ಪವಿತ್ರವಾಗಿತ್ತು, ಯಾವುದನ್ನು ನಾನು ಸ್ಥಾಪನೆ ಮಾಡಿದೆನು ಅದರ ಹೆಸರೇ ಶಿವಾಲಯವಾಗಿದೆ, ಈ ಜ್ಞಾನವು
ಯಾರಲ್ಲಿಯೂ ಇಲ್ಲ. ಉಳಿದ ಶಾಸ್ತ್ರ, ಮೊದಲಾದುದೆನ್ನಲ್ಲವೂ ಇದೆಯೋ ಅದೆಲ್ಲವೂ ಭಕ್ತಿಮಾರ್ಗದ
ಕರ್ಮಕಾಂಡವಾಗಿದೆ. ಸತ್ಯಯುಗದಿಂದ ಎಲ್ಲರೂ ಸದ್ಗತಿಯಲ್ಲಿ ಹೋಗುತ್ತಾರೆ. ಆದ್ದರಿಂದ ಅಲ್ಲಿ ಯಾವುದೇ
ಪುರುಷಾರ್ಥ ಮಾಡುವುದಿಲ್ಲ, ಇಲ್ಲಿ ಎಲ್ಲರೂ ಗತಿ-ಸದ್ಗತಿಗಾಗಿ ಪುರುಷಾರ್ಥ ಮಾಡುತ್ತಾರೆ ಏಕೆಂದರೆ
ದುರ್ಗತಿಯಲ್ಲಿದ್ದಾರೆ. ಗಂಗಾ ಸ್ನಾನ ಮಾಡಲು ಹೋಗುತ್ತಾರೆ ಅಂದಾಗ ಗಂಗೆಯ ನೀರು ಸದ್ಗತಿ
ಕೊಡುತ್ತದೆಯೇ? ಪಾವನರನ್ನಾಗಿ ಮಾಡುತ್ತದೆಯೇ? ಏನನ್ನೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ
ನಂಬರ್ವಾರ್ ಇದ್ದಾರೆ. ಕೆಲವರಂತೂ ಸ್ವಯಂ ತಾವೇ ಅರಿತುಕೊಂಡಿಲ್ಲ ಅಂದಾಗ ಅನ್ಯರಿಗೇನು
ತಿಳಿಸುತ್ತಾರೆ. ಆದ್ದರಿಂದ ತಂದೆಯು ಅಂತಹವರನ್ನು ತಿಳಿಸಲು ಕಳುಹಿಸುವುದಿಲ್ಲ. ಬಾಬಾ ತಾವು ಬಂದರೆ
ತಮ್ಮ ಶ್ರೀಮತದಂತೆ ನಡೆದು ದೇವತೆಗಳಾಗುತ್ತೇವೆಂದು ಹಾಡುತ್ತಿರುತ್ತಾರೆ. ದೇವತೆಗಳು
ಸತ್ಯಯುಗ-ತ್ರೇತಾದಲ್ಲಿ ಬರುತ್ತಾರೆ. ಇಲ್ಲಂತೂ ಎಲ್ಲದಕ್ಕಿಂತ ಹೆಚ್ಚಿನದಾಗಿ ಕಾಮ ವಿಕಾರದಲ್ಲಿ
ಸಿಕ್ಕಿಕೊಂಡಿದ್ದಾರೆ. ಕಾಮ ವಿಕಾರವನ್ನು ಬಿಟ್ಟು ಇರುವುದಕ್ಕೇ ಆಗುವುದಿಲ್ಲ ಎಂದು ಹೇಳುತ್ತಾರೆ.
ಈ ವಿಕಾರವು ಹೇಗೆ ಜನ್ಮ ಸಿದ್ಧ ಆಸ್ತಿಯಾಗಿದೆ. ಇಲ್ಲಿ ನಿಮಗೆ ರಾಮನ ಆಸ್ತಿಯು ಸಿಗುತ್ತದೆ,
ಪವಿತ್ರತೆಯ ಆಸ್ತಿಯು ಸಿಗುತ್ತದೆ. ಅಲ್ಲಿ ವಿಕಾರದ ಮಾತೇ ಇರುವುದಿಲ್ಲ. ಭಕ್ತರು ಕೃಷ್ಣ
ಭಗವಂತನೆಂದು ಹೇಳುತ್ತಾರೆ. ನೀವು ಅವರನ್ನು 84 ಜನ್ಮಗಳಲ್ಲಿ ತೋರಿಸುತ್ತೀರಿ. ಅರೆ! ಭಗವಂತನಂತೂ
ನಿರಾಕಾರನಾಗಿದ್ದಾರೆ, ಅವರ ಹೆಸರು ಶಿವ ಎಂದಾಗಿದೆ. ತಂದೆಯು ಎಷ್ಟೊಂದು ಚೆನ್ನಾಗಿ ತಿಳಿಸುತ್ತಾರೆ,
ದಯೆಯೂ ಬರುತ್ತದೆ. ದಯಾಹೃದಯಿ ಆಗಿದ್ದಾರಲ್ಲವೆ. ಎಷ್ಟೊಂದು ಒಳ್ಳೆಯ ಬುದ್ಧಿವಂತ ಮಕ್ಕಳಿದ್ದಾರೆ,
ಆಡಂಬರವು ಚೆನ್ನಾಗಿದೆ. ಯಾರಲ್ಲಿ ಜ್ಞಾನ ಮತ್ತು ಯೋಗದ ಶಕ್ತಿಯಿದೆಯೋ ಅವರು ಆಕರ್ಷಿತರನ್ನಾಗಿ
ಮಾಡುತ್ತಾರೆ. ವಿದ್ಯಾವಂತರಿಗೆ ಒಳ್ಳೆಯ ಸತ್ಕಾರ ಸಿಗುತ್ತದೆ. ಅವಿದ್ಯಾವಂತರಿಗೆ ಸತ್ಕಾರವು
ಸಿಗುವುದಿಲ್ಲ. ಇದಂತೂ ನಿಮಗೆ ಗೊತ್ತಿದೆ, ಈ ಸಮಯದಲ್ಲಿ ಎಲ್ಲರೂ ಆಸುರೀ ಸಂಪ್ರದಾಯದವರಾಗಿದ್ದಾರೆ,
ಏನನ್ನೂ ತಿಳಿಯುವುದಿಲ್ಲ. ಶಿವ ಮತ್ತು ಶಂಕರನ ಚಿತ್ರವಂತೂ ಬಹಳ ಸ್ಪಷ್ಟವಾಗಿದೆ. ಶಿವನು
ಮೂಲವತನದಲ್ಲಿರುತ್ತಾರೆ, ಶಂಕರನು ಸೂಕ್ಷ್ಮವತನದಲ್ಲಿರುತ್ತಾರೆ ಅಂದಮೇಲೆ ಇಬ್ಬರೂ ಒಂದೇ ಆಗಲು ಹೇಗೆ
ಸಾಧ್ಯ. ಇದಂತೂ ತಮೋಪ್ರಧಾನ ಪ್ರಪಂಚವಾಗಿದೆ. ರಾವಣನು ಶತ್ರು, ಆಸುರೀ ಸಂಪ್ರದಾಯದವನಾಗಿದ್ದಾನೆ,
ಇವನು ತನ್ನ ಸಮಾನರನ್ನಾಗಿ ಮಾಡಿಕೊಳ್ಳುತ್ತಾನೆ. ಈಗ ತಂದೆಯು ನಿಮ್ಮನ್ನು ತನ್ನ ಸಮಾನ ದೈವೀ
ಸಂಪ್ರದಾಯದವರನ್ನಾಗಿ ಮಾಡುತ್ತಾರೆ, ಅಲ್ಲಿ ರಾವಣನಿರುವುದಿಲ್ಲ. ಅರ್ಧಕಲ್ಪ ರಾವಣನನ್ನು
ಸುಡುತ್ತಾರೆ, ರಾಮರಾಜ್ಯವಂತೂ ಸತ್ಯಯುಗದಲ್ಲಿರುತ್ತದೆ. ಗಾಂಧೀಜಿಯೂ ಸಹ ರಾಮ ರಾಜ್ಯವನ್ನು
ಬಯಸುತ್ತಿದ್ದರು. ಆದರೆ ಅವರು ರಾಮ ರಾಜ್ಯವನ್ನು ಸ್ಥಾಪನೆ ಮಾಡಲು ಹೇಗೆ ಸಾಧ್ಯ. ಅವರು ಯಾವುದೇ
ಆತ್ಮಾಭಿಮಾನಿಯಾಗುವ ಶಿಕ್ಷಣವನ್ನು ಕೊಡುತ್ತಿರಲಿಲ್ಲ. ತಂದೆಯೇ ಸಂಗಮಯುಗದಲ್ಲಿ ಹೇಳುತ್ತಾರೆ -
ಆತ್ಮಾಭಿಮಾನಿಗಳಾಗಿ, ಇದು ಉತ್ತಮರಾಗುವ ಯುಗವಾಗಿದೆ. ತಂದೆಯು ಎಷ್ಟೊಂದು ಪ್ರೀತಿಯಿಂದ
ತಿಳಿಸುತ್ತಿರುತ್ತಾರೆ ಅಂದಮೇಲೆ ಗಳಿಗೆ-ಗಳಿಗೆಯೂ ತಂದೆಯನ್ನು ಎಷ್ಟೊಂದು ಪ್ರೀತಿಯಿಂದ ನೆನಪು
ಮಾಡಬೇಕು - ಬಾಬಾ, ತಮ್ಮದು ಚಮತ್ಕಾರವಾಗಿದೆ. ನಾವು ಎಷ್ಟೊಂದು ಕಲ್ಲು ಬುದ್ಧಿಯವರಾಗಿದ್ದೆವು.
ತಾವು ಎಷ್ಟೊಂದು ಶ್ರೇಷ್ಠರನ್ನಾಗಿ ಮಾಡುತ್ತಿದ್ದೀರಿ. ತಮ್ಮ ಮತವನ್ನು ಬಿಟ್ಟು ಮತ್ತ್ಯಾರ
ಮತದಂತೆಯೂ ನಡೆಯುವುದಿಲ್ಲ. ಅಂತ್ಯದಲ್ಲಿ ಎಲ್ಲರೂ ಹೇಳುತ್ತಾರೆ - ಅವಶ್ಯವಾಗಿ
ಬ್ರಹ್ಮಾಕುಮಾರ-ಕುಮಾರಿಯರು ದೈವೀ ಮತದಂತೆ ನಡೆಯುತ್ತಿದ್ದಾರೆ, ಎಷ್ಟೊಂದು ಒಳ್ಳೊಳ್ಳೆಯ
ಮಾತುಗಳನ್ನು ತಿಳಿಸುತ್ತಾರೆ. ಆದಿ-ಮಧ್ಯ-ಅಂತ್ಯದ ಪರಿಚಯವನ್ನು ಕೊಡುತ್ತಾರೆ, ನಡುವಳಿಕೆಯನ್ನು
ಸುಧಾರಣೆ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
೧. ದೃಷ್ಟಿಯನ್ನು
ಶುದ್ಧ, ಪವಿತ್ರವನ್ನಾಗಿ ಮಾಡಿಕೊಳ್ಳುವುದಕ್ಕಾಗಿ ಯಾರ ನಾಮ-ರೂಪವನ್ನೂ ನೋಡದೇ ಅಶರೀರಿಯಾಗುವ
ಅಭ್ಯಾಸ ಮಾಡಬೇಕು. ಸ್ವಯಂನ್ನು ಆತ್ಮನೆಂದು ತಿಳಿದು ಸಹೋದರ ಆತ್ಮನೊಂದಿಗೆ ಮಾತನಾಡಬೇಕು.
೨. ಸರ್ವರ ಸತ್ಕಾರವನ್ನು ಪ್ರಾಪ್ತಿ ಮಾಡಿಕೊಳ್ಳಲು ಜ್ಞಾನ-ಯೋಗದ ಶಕ್ತಿಯನ್ನು ಧಾರಣೆ
ಮಾಡಿಕೊಳ್ಳಬೇಕಾಗಿದೆ. ದೈವೀ ಗುಣಗಳಿಂದ ಸಂಪನ್ನರಾಗಬೇಕು. ನಡವಳಿಕೆಯನ್ನು ಸುಧಾರಣೆ ಮಾಡುವ ಸೇವೆ
ಮಾಡಬೇಕು.
ವರದಾನ:
ಉಮಂಗ-ಉತ್ಸಾಹದಿಂದ ವಿಶ್ವ ಕಲ್ಯಾಣದ ಜವಾಬ್ಧಾರಿ ನಿಭಾಯಿಸುವಂತಹ ಆಲಸ್ಯ ಅಥವಾ ಹುಡುಗಾಟಿಕೆಯಿಂದ
ಮುಕ್ತ ಭವ.
ಹೊಸಬರಿರಬಹುದು,
ಹಳಬರಿರಬಹುದು, ಬ್ರಾಹ್ಮಣರಾಗುವುದು ಅಂದರೇನೆ ವಿಶ್ವ ಕಲ್ಯಾಣದ ಜವಾಬ್ಧಾರಿ ತೆಗೆದುಕೊಳ್ಳುವುದು.
ಯಾವಾಗ ಯಾವುದೇ ಜವಾಬ್ಧಾರಿ ಇರಲಿ ಅದನ್ನು ತೀವ್ರಗತಿಯಿಂದ ಪೂರ್ತಿ ಮಾಡುವರು, ಜವಾಬ್ಧಾರಿ ಇಲ್ಲ
ಎಂದರೆ ಹುಡುಗಾಟಿಕೆಯಲ್ಲಿರುತ್ತಾರೆ. ಜವಾಬ್ಧಾರಿ ಆಲಸ್ಯ ಮತ್ತು ಹುಡುಗಾಟಿಕೆಯನ್ನು ಸಮಾಪ್ತಿ ಮಾಡಿ
ಬಿಡುವುದು. ಉಮಂಗ-ಉತ್ಸಾಹವುಳ್ಳವರು ಅವಿಶ್ರಾಂತವಾಗಿರುತ್ತಾರೆ. ಅವರು ತಮ್ಮ ಮುಖ ಮತ್ತು
ಚಲನೆಯಿಂದ ಬೇರೆಯವರಲ್ಲೂ ಸಹಾ ಉಮಂಗ-ಉತ್ಸಾಹ ಹೆಚ್ಚಿಸುತ್ತಿರುತ್ತಾರೆ.
ಸ್ಲೋಗನ್:
ಸಮಯ ಪ್ರಮಾಣ
ಶಕ್ತಿಗಳನ್ನು ಉಪಯೋಗಿಸುವುದು ಎಂದರೇನೆ ಜ್ಞಾನಿ ಮತ್ತು ಯೋಗಿ ಆತ್ಮ ಆಗುವುದು.