18.08.19 Avyakt Bapdada
Kannada
Murli
16.01.85 Om Shanti Madhuban
ಭಾಗ್ಯಶಾಲಿ ಯುಗದಲ್ಲಿ
ಭಗವಂತನ ಮೂಲಕ ಆಸ್ತಿ ಮತ್ತು ವರದಾನಗಳ ಪ್ರಾಪ್ತಿ
ಇಂದು ಸೃಷ್ಟಿವೃಕ್ಷದ
ಬೀಜರೂಪ ತಂದೆಯು ತನ್ನ ವೃಕ್ಷದ ಬುಡದಲ್ಲಿರುವ ಮಕ್ಕಳನ್ನು ನೋಡುತ್ತಿದ್ದಾರೆ. ಯಾವ ಬುಡದ ಮೂಲಕ ಇಡೀ
ವೃಕ್ಷದ ವಿಸ್ತಾರವಾಗುತ್ತದೆ, ವಿಸ್ತಾರ ಮಾಡುವವರು (ತಂದೆಯು) ಸಾರ ಸ್ವರೂಪ ವಿಶೇಷ ಆತ್ಮರನ್ನು
ನೋಡುತ್ತಿದ್ದಾರೆ ಅರ್ಥಾತ್ ವೃಕ್ಷದ ಆಧಾರಮೂರ್ತಿ ಆತ್ಮರನ್ನು ನೋಡುತ್ತಿದ್ದಾರೆ. ಡೈರೆಕ್ಟ್
ಬೀಜರೂಪದ ಮೂಲಕ ಪ್ರಾಪ್ತಿ ಮಾಡಿಕೊಂಡಿರುವ ಶಕ್ತಿಗಳನ್ನು ಧಾರಣೆ ಮಾಡಿಕೊಳ್ಳುವಂತಹ ವಿಶೇಷ
ಆತ್ಮರನ್ನು ನೋಡುತ್ತಿದ್ದಾರೆ. ಇಡೀ ವಿಶ್ವದ ಸರ್ವ ಆತ್ಮರುಗಳೆಲ್ಲರಿಂದ ಕೇವಲ ಸ್ವಲ್ಪ ಆತ್ಮರಿಗೆ
ವಿಶೇಷವಾದ ಈ ಪಾತ್ರವು ಸಿಕ್ಕಿರುವುದು. ಎಷ್ಟು ಸ್ವಲ್ಪ ಆತ್ಮರಿದ್ದಾರೆ, ಅವರಿಗೆ ಬೀಜದ ಜೊತೆ
ಸಂಬಂಧದ ಮೂಲಕ ಶ್ರೇಷ್ಠ ಪ್ರಾಪ್ತಿಯ ಪಾತ್ರವು ಸಿಕ್ಕಿರುವುದು.
ಇಂದು ಬಾಪ್ದಾದಾರವರು ಇಂತಹ ಶ್ರೇಷ್ಠ ಭಾಗ್ಯಶಾಲಿ ಮಕ್ಕಳ ಭಾಗ್ಯವನ್ನು ನೋಡುತ್ತಿದ್ದಾರೆ. ಕೇವಲ
ಮಕ್ಕಳಿಗೆ ಇವೆರಡು ಶಬ್ಧಗಳು ನೆನಪಿರಲಿ - "ಭಗವಂತ ಮತ್ತು ಭಾಗ್ಯ". ಭಾಗ್ಯವು ತಮ್ಮ ಕರ್ಮದ
ಲೆಕ್ಕದಿಂದ ಎಲ್ಲರಿಗೂ ಸಿಗುತ್ತದೆ. ದ್ವಾಪರದಿಂದ ಈಗಿನವರೆಗೂ ತಾವು ಆತ್ಮರಿಗೂ ಸಹ ಕರ್ಮ ಮತ್ತು
ಭಾಗ್ಯ - ಈ ಲೆಕ್ಕಾಚಾರದಲ್ಲಿ ಬರಲೇಬೇಕಾಗುತ್ತದೆ. ಆದರೆ ವರ್ತಮಾನ ಭಾಗ್ಯಶಾಲಿ ಯುಗದಲ್ಲಿ ಭಗವಂತನು
ಭಾಗ್ಯವನ್ನು ಕೊಡುತ್ತಾರೆ. ಭಾಗ್ಯದ ಶ್ರೇಷ್ಠ ರೇಖೆಯನ್ನು ಎಳೆಯುವ ವಿಧಿ - "ಶ್ರೇಷ್ಠ ಕರ್ಮವೆಂಬ
ಲೇಖನಿ" ಇದನ್ನು ತಾವು ಮಕ್ಕಳಿಗೆ ಕೊಟ್ಟು ಬಿಡುತ್ತಾರೆ, ಇದರಿಂದ ಎಷ್ಟು ಶ್ರೇಷ್ಠ, ಸ್ಪಷ್ಟ,
ಜನ್ಮ-ಜನ್ಮಾಂತರದ ಭಾಗ್ಯದ ರೇಖೆಯನ್ನೆಳೆದುಕೊಳ್ಳಬೇಕೆಂದು ಬಯಸುತ್ತಾರೆಯೋ, ಅಷ್ಟೂ
ಮಾಡಿಕೊಳ್ಳಬಹುದು. ಮತ್ತ್ಯಾವುದೇ ಸಮಯಕ್ಕೂ ಈ ವರದಾನವಿಲ್ಲ. ಇದೇ ಸಮಯಕ್ಕೆ ಈ ವರದಾನವಿದೆ, ಏನು
ಬೇಕು ಎಷ್ಟು ಬೇಕು ಅಷ್ಟೂ ಪಡೆಯಬಹುದು. ಏಕೆ? ಭಗವಂತನು ಭಾಗ್ಯದ ಭಂಡಾರವನ್ನು ವಿಶಾಲ ಹೃದಯದಿಂದ,
ಪರಿಶ್ರಮ ಪಡೆದೆಯೇ ಮಕ್ಕಳಿಗೆ ಕೊಡುತ್ತಿದ್ದಾರೆ. ತೆರೆದ ಭಂಡಾರವಿದೆ, ಬೀಗ ಹಾಕಿರುವುದಿಲ್ಲ ಮತ್ತು
ಅದು ಇಷ್ಟೂ ಸಂಪನ್ನ, ಅಕೂಟವಾಗಿದೆ. ಯಾರಿಗೆಷ್ಟು ಬೇಕು, ಯಾರಿಗೇ ಬೇಕು ಅಷ್ಟೂ ತೆಗೆದುಕೊಂಡುಬಿಡಿ.
ಯಥಾಶಕ್ತಿಯಲ್ಲ, ದೊಡ್ಡ ಹೃದಯದಿಂದ ತೆಗೆದುಕೊಳ್ಳಿರಿ. ಆದರೆ ತೆರೆದ ಭಂಡಾರದಿಂದ, ಸಂಪನ್ನವಾದ
ಭಂಡಾರದಿಂದ ತೆಗೆದುಕೊಳ್ಳಿರಿ. ಒಂದುವೇಳೆ ಯಾರೇ ಯಥಾಶಕ್ತಿಯೇ ತೆಗೆದುಕೊಳ್ಳುತ್ತಾರೆಂದರೆ
ತಂದೆಯವರು ಏನು ಹೇಳುವರು? ತಂದೆಯೂ ಸಹ ಸಾಕ್ಷಿಯಾಗಿದ್ದು ನೋಡಿ-ನೋಡಿ ಹರ್ಷಿತವಾಗಿರುತ್ತಾರೆ -
ಏನೆಂದರೆ, ಇವರೆಂತಹ ಮುಗ್ಧವಾದ ಮಕ್ಕಳು ಸ್ವಲ್ಪದರಲ್ಲಿಯೇ ಖುಷಿಯಾಗಿ ಬಿಡುತ್ತಾರಲ್ಲವೆ! ಏಕೆ? 63
ಜನ್ಮಗಳ ಭಕ್ತನ ಸಂಸ್ಕಾರವು ಸ್ವಲ್ಪದರಲ್ಲಿಯೇ ಖುಷಿಯಾಗುವ ಕಾರಣದಿಂದ, ಈಗಲೂ ಸಂಪನ್ನ ಪ್ರಾಪ್ತಿಗೆ
ಬದಲು ಸ್ವಲ್ಪವನ್ನೇ ಬಹಳಷ್ಟೆಂದು ತಿಳಿದುಕೊಂಡು, ಅದರಲ್ಲಿಯೇ ಖುಷಿಯಾಗಿ ಬಿಡುತ್ತಾರೆ.
ಈ ಸಮಯದಲ್ಲಿ ಅವಿನಾಶಿ ತಂದೆಯ ಮೂಲಕ ಸರ್ವ ಪ್ರಾಪ್ತಿಯಾಗುವ ಸಮಯವಿದೆ, ಇದನ್ನು ಮರೆತು ಹೋಗುತ್ತಾರೆ.
ಆದರೂ ಸಹ ಬಾಪ್ದಾದಾರವರು ಮಕ್ಕಳಿಗೆ ಸ್ಮೃತಿ ತರಿಸುತ್ತಾರೆ- ಮಕ್ಕಳೇ ಸಮರ್ಥರಾಗಿರಿ ಎಂದು. ಈಗಲೂ
ಟೂಲೇಟ್ ಆಗಿಲ್ಲ. ಲೇಟ್ ಆಗಿ ಬಂದಿದ್ದೀರಿ ಆದರೆ ಟೂಲೇಟ್ನ ಸಮಯವಿನ್ನೂ ಬಂದಿಲ್ಲ. ಆದ್ದರಿಂದ ಈಗಲೂ
ಎರಡು ರೂಪದಿಂದ - ತಂದೆಯ ರೂಪದಿಂದ ಆಸ್ತಿ, ಸದ್ಗುರುವಿನ ರೂಪದಿಂದ ವರದಾನವು ಸಿಗುವ ಸಮಯವಾಗಿದೆ.
ಅಂದಮೇಲೆ ವರದಾನ ಮತ್ತು ಆಸ್ತಿಯ ರೂಪದಲ್ಲಿ ಸಹಜ ಶ್ರೇಷ್ಠ ಭಾಗ್ಯವನ್ನು ರೂಪಿಸಿಕೊಂಡುಬಿಡಿ. ಈ
ಸಮಯದಲ್ಲಿ ಯಥಾಶಕ್ತಿ ಪ್ರಾಪ್ತಿ ಆಗಲು ಸಾಧ್ಯವಿಲ್ಲ. ಈಗ ವರದಾನವಿದೆ - ಏನು ಬೇಕು ಅದನ್ನು ತಂದೆಯ
ಖಜಾನೆಯಿಂದ ಅಧಿಕಾರದ ರೂಪದಲ್ಲಿ ತೆಗೆದುಕೊಳ್ಳಬಹುದು. ಬಲಹೀನರಾಗಿದ್ದೀರೆಂದರೂ ಸಹ ತಂದೆಯ
ಸಹಯೋಗದಿಂದ, ಸಾಹಸ ಮಕ್ಕಳದು ಸಹಯೋಗ ತಂದೆಯದಿರುತ್ತದೆ. ವರ್ತಮಾನ ಮತ್ತು ಭವಿಷ್ಯವನ್ನು ಶ್ರೇಷ್ಠ
ಮಾಡಿಕೊಳ್ಳಬಹುದು. ಉಳಿದಂತೆ ಈಗ ತೆರೆದ ಭಂಡಾರದಿಂದ ತಂದೆಯ ಸಹಯೋಗ ಮತ್ತು ಭಾಗ್ಯವು ಸಿಗುವಂತಹ
ಸಮಯವು ಸ್ವಲ್ಪವೇ ಇದೆ.
ಈಗ ಸ್ನೇಹದ ಕಾರಣದಿಂದ ತಂದೆಯ ರೂಪದಲ್ಲಿ ಪ್ರತೀ ಸಮಯ, ಪ್ರತೀ ಪರಿಸ್ಥಿತಿಯಲ್ಲಿ ಜೊತೆಗಾರನಿದ್ದಾರೆ.
ಆದರೆ ಈ ಸ್ವಲ್ಪವೇ ಸಮಯದ ನಂತರ ಜೊತೆಗಾರನಿಗೆ ಬದಲಾಗಿ ಸಾಕ್ಷಿಯಾಗಿ ನೋಡುವ ಪಾತ್ರವು ನಡೆಯುತ್ತದೆ.
ಭಲೆ ಸರ್ವಶಕ್ತಿ ಸಂಪನ್ನರಾಗಿರಿ, ಯಥಾಶಕ್ತಿಯವರೇ ಆಗಿರಿ- ಎರಡೂ ರೀತಿಯವರನ್ನೂ ಸಾಕ್ಷಿಯಾಗಿಯೇ
ನೋಡುತ್ತಾರೆ. ಆದ್ದರಿಂದ ಈ ಶ್ರೇಷ್ಠ ಸಮಯದಲ್ಲಿ ಬಾಪ್ದಾದಾರವರ ಮೂಲಕ ಆಸ್ತಿ, ವರದಾನ, ಸಹಯೋಗ,
ಜೊತೆಗೆ ಈ ಭಾಗ್ಯದ ಪ್ರಾಪ್ತಿಯೇನಾಗುತ್ತಿದೆಯೋ, ಅದನ್ನು ಪ್ರಾಪ್ತಿ ಮಾಡಿಕೊಂಡುಬಿಡಿ.
ಪ್ರಾಪ್ತಿಯಲ್ಲೆಂದಿಗೂ ಹುಡುಗಾಟಿಕೆ ಇರುವವರಾಗಬಾರದು. ಸೃಷ್ಟಿಯ ಪರಿವರ್ತನೆಯ ಸಮಯ ಮತ್ತು
ಪ್ರಾಪ್ತಿಯ ಸಮಯವು ಈಗಿನ್ನೂ ಇಷ್ಟು ವರ್ಷಗಳಿದೆ ಎಂದು ಎರಡನ್ನೂ ಸೇರಿಸಿ ಬಿಡಬಾರದು. ಈ
ಹುಡುಗಾಟಿಕೆಯ ಸಂಕಲ್ಪದಿಂದ ಯೋಚನೆ ಮಾಡುತ್ತಾ ಉಳಿದು ಬಿಡಬಾರದು. ಸದಾ ಬ್ರಾಹ್ಮಣ ಜೀವನದಲ್ಲಿ
ಸರ್ವ ಪ್ರಾಪ್ತಿಯ, ಬಹಳ ಕಾಲದ ಪ್ರಾಪ್ತಿಯ ಇದೇ ಮಾತನ್ನು ನೆನಪಿಟ್ಟುಕೊಳ್ಳಿರಿ- "ಈಗಿಲ್ಲದಿದ್ದರೆ
ಇನ್ನೆಂದಿಗೂ ಇಲ್ಲ". ಆದ್ದರಿಂದ ಕೇವಲ ಇವೆರಡು ಶಬ್ದಗಳನ್ನೂ ನೆನಪಿಟ್ಟುಕೊಳ್ಳಿರಿ - "ಭಗವಂತ
ಮತ್ತು ಭಾಗ್ಯ". ಅದರಿಂದ ಸದಾ ಪದಮಾಪದಮ ಭಾಗ್ಯಶಾಲಿಯಾಗಿರುತ್ತೀರಿ. ಬಾಪ್ದಾದಾರವರು
ಪರಸ್ಪರದಲ್ಲಿಯೂ ಸಹ ಆತ್ಮಿಕ ವಾರ್ತಾಲಾಪ ಮಾಡುತ್ತಾರೆ - ಇಂತಹ ಹಳೆಯ ಹವ್ಯಾಸ(ಸಂಸ್ಕಾರ)ದೊಂದಿಗೆ
ಏಕೆ ವಿವಶರಾಗಿ ಬಿಡುತ್ತಾರೆ! ತಂದೆಯು ಶಕ್ತಿಶಾಲಿ ಮಾಡುತ್ತಾರೆ, ಆದರೂ ಸಹ ಮಕ್ಕಳು ವಿವಶರಾಗಿ
ಬಿಡುತ್ತಾರೆ. ಸಾಹಸದ ಕಾಲನ್ನೂ (ಧೈರ್ಯ, ಆಧಾರ) ಕೊಡುತ್ತಾರೆ, ರೆಕ್ಕೆಯನ್ನೂ ಕೊಡುತ್ತಾರೆ, ಜೊತೆ
ಜೊತೆಗೆ ಹಾರಿಸುತ್ತಾರೆ. ಆದರೂ ಸಹ ಏರುಪೇರು, ಏರುಪೇರೇಕೆ ಆಗುತ್ತಾರೆ. ಮೋಜುಗಳ ಯುಗದಲ್ಲಿಯೂ
ತಬ್ಬಿಬ್ಬಾಗುತ್ತಿರುತ್ತಾರೆ, ಇದಕ್ಕೆ ಹೇಳಲಾಗುತ್ತದೆ - ಹಳೆಯ ಹವ್ಯಾಸದೊಂದಿಗೆ ವಿವಶರಾಗುವುದು.
ಶಕ್ತಿಶಾಲಿಯಾಗಿದ್ದೀರಾ ಅಥವಾ ವಿವಶರಾಗಿದ್ದೀರಾ? ತಂದೆಯು ಡಬಲ್ಲೈಟ್ ಮಾಡುತ್ತಾರೆ, ಎಲ್ಲಾ
ಹೊರೆಯನ್ನೂ ಸ್ವಯಂ ತಂದೆಯು ತೆಗೆದುಕೊಳ್ಳಲು ಜೊತೆ ಕೊಡುತ್ತಾರೆ, ಆದರೂ ಹೊರೆಯನ್ನೇರುವ
ಹವ್ಯಾಸದಿಂದ ಹೊರೆಯನ್ನು ಹೊತ್ತುಕೊಳ್ಳುತ್ತಾರೆ. ನಂತರ ಯಾವ ಗೀತೆಯನ್ನು ಹಾಡುತ್ತಾರೆ,
ಗೊತ್ತಿದೆಯೇ? ಏನು, ಏಕೆ, ಹೇಗೆ ಎನ್ನುವ ಈ "ಏ, ಏ" ಗೀತೆಯನ್ನಾಡುತ್ತಾರೆ. ಇನ್ನೊಂದೂ ಗೀತೆಯನ್ನೂ
ಹಾಡುತ್ತಾರೆ - "ಣ, ಣ" ಎನ್ನುವ ಗೀತೆ. ಇದಂತು ಭಕ್ತಿಯ ಗೀತೆಯಾಗಿದೆ. ಅಧಿಕಾರಿಯಾಗುವ ಗೀತೆಯಾಗಿದೆ
"ಪಡೆದು ಬಿಟ್ಟೆನು" ಎನ್ನುವುದು. ಅಂದಮೇಲೆ ಯಾವ ಗೀತೆಯನ್ನು ಹಾಡುತ್ತೀರಿ? ಇಡೀ ದಿನದಲ್ಲಿ
ಪರಿಶೀಲನೆ ಮಾಡಿರಿ - ಇಂದು ಯಾವ ಗೀತೆಯಿತ್ತು? ಬಾಪ್ದಾದಾರವರಿಗೆ ಮಕ್ಕಳೊಂದಿಗೆ ಸ್ನೇಹವಿದೆ.
ಆದ್ದರಿಂದ ಸ್ನೇಹದ ಕಾರಣದಿಂದ ಸದಾ ಇದನ್ನೇ ಯೋಚಿಸುತ್ತಾರೆ - ಪ್ರತಿಯೊಂದು ಮಗುವು ಸದಾ
ಸಂಪನ್ನವಾಗಿರಲಿ, ಸಮರ್ಥರಾಗಿರಲಿ. ಸದಾ ಪದಮಾಪದಮ ಭಾಗ್ಯಶಾಲಿ ಆಗಿರಲಿ. ಒಳ್ಳೆಯದು!
ಸದಾ ಸಮಯದನುಸಾರ ಆಸ್ತಿ ಮತ್ತು ವರದಾನದ ಅಧಿಕಾರಿ, ಸದಾ ಭಾಗ್ಯದ ತೆರೆದ ಭಂಡಾರದಿಂದ ಸಂಪೂರ್ಣ
ಭಾಗ್ಯಶಾಲಿಯನ್ನಾಗಿ ಮಾಡುವಂತಹ, ಯಥಾಶಕ್ತಿಯನ್ನು ಸರ್ವಶಕ್ತಿ ಸಂಪನ್ನತೆಯಲ್ಲಿ ಪರಿವರ್ತನೆ
ಮಾಡುವಂತಹ, ಶ್ರೇಷ್ಠ ಕರ್ಮದ ಲೇಖನಿಯ ಮೂಲಕ ಸಂಪನ್ನ ಅದೃಷ್ಟದ ರೇಖೆಯನ್ನೆಳುವಂತಹ, ಸಮಯದ
ಮಹತ್ವವನ್ನು ತಿಳಿದು ಸರ್ವಪ್ರಾಪ್ತಿ ಸ್ವರೂಪ ಶ್ರೇಷ್ಠಾತ್ಮರಿಗೆ ಬಾಪ್ದಾದಾರವರು ಸಂಪನ್ನರನ್ನಾಗಿ
ಮಾಡುವ ನೆನಪು-ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ
ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ:-
1. ಸದಾ ತಮ್ಮ
ಅಲೌಕಿಕ ಜನ್ಮ, ಅಲೌಕಿಕ ಜೀವನ, ಅಲೌಕಿಕ ತಂದೆ, ಅಲೌಕಿಕ ಆಸ್ತಿಯು ನೆನಪಿರುತ್ತದೆಯೇ? ಹೇಗೆ ತಂದೆಯು
ಅಲೌಕಿಕ ಆಗಿದ್ದಾರೆ, ಅಂದಮೇಲೆ ಆಸ್ತಿಯೂ ಅಲೌಕಿಕವಾಗಿದೆ. ಲೌಕಿಕ ತಂದೆಯು ಅಲ್ಪಕಾಲದ ಆಸ್ತಿಯನ್ನು
ಕೊಡುತ್ತಾರೆ, ಅಲೌಕಿಕ ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಅಂದಮೇಲೆ ಸದಾ ಅಲೌಕಿಕ ತಂದೆ
ಮತ್ತು ಆಸ್ತಿಯ ಸ್ಮೃತಿಯಿರಲಿ. ಎಂದಿಗೂ ಸಹ ಲೌಕಿಕ ಜೀವನದ ಸ್ಮೃತಿಯಲ್ಲಂತು ಹೋಗುವುದಿಲ್ಲ,
ಮರುಜೀವಾ ಆಗಿಬಿಟ್ಟಿದ್ದೀರಲ್ಲವೆ. ಹೇಗೆ ಶರೀರದಿಂದ ಸಾಯುವವರೆಂದಿಗೂ ಸಹ ಹಿಂದಿನ ಜನ್ಮವನ್ನು
ನೆನಪು ಮಾಡುವುದಿಲ್ಲ, ಹಾಗೆಯೇ ಅಲೌಕಿಕ ಜೀವನದವರು, ಅಲೌಕಿಕ ಜನ್ಮವುಳ್ಳುವರು, ಲೌಕಿಕ ಜನ್ಮವನ್ನು
ನೆನಪು ಮಾಡಲು ಸಾಧ್ಯವಿಲ್ಲ. ಈಗಂತು ಯುಗವೇ ಬದಲಾಗಿ ಬಿಟ್ಟಿತು. ಪ್ರಪಂಚವು ಕಲಿಯುಗಿ ಆಗಿದೆ, ತಾವು
ಸಂಗಮಯುಗಿ ಆಗಿದ್ದೀರಿ, ಎಲ್ಲವೂ ಬದಲಾಗಿ ಬಿಟ್ಟಿತು. ಕೆಲವೊಮ್ಮೆ ಕಲಿಯುಗದಲ್ಲಂತು ಹೋಗಿ
ಬಿಡುವುದಿಲ್ಲವೇ? ಇದೂ ಸಹ ಬಾರ್ಡರ್ ಆಗಿದೆ. ಬಾರ್ಡರ್ ಕ್ರಾಸ್ ಮಾಡಿದಿರಿ, ಮತ್ತೆ ಶತ್ರುಗಳ
ಮುತ್ತಿಗೆಯಾಗಿ ಬಿಡುತ್ತದೆ. ಅಂದಾಗ ಬಾರ್ಡರ್ನ್ನು ಕ್ರಾಸ್ ಮಾಡುವುದಿಲ್ಲವೇ? ಸದಾ ಸಂಗಮಯುಗಿ
ಅಲೌಕಿಕ ಜೀವನದ ಶ್ರೇಷ್ಠಾತ್ಮನಾಗಿದ್ದೇನೆ ಎನ್ನುವ ಸ್ಮೃತಿಯಲ್ಲಿರಿ. ಈಗ ಏನು ಮಾಡುತ್ತೀರಿ? ಅತಿ
ದೊಡ್ಡ ಬ್ಯುಸಿನೆಸ್ಮೆನ್ ಆಗಿರಿ. ಇಂತಹ ಬ್ಯುಸಿನೆಸ್ಮೆನ್, ಯಾರು ಒಂದು ಹೆಜ್ಜೆಯಲ್ಲಿ ಪದಮಗಳ
ಸಂಪಾದನೆಯನ್ನು ಜಮಾ ಮಾಡುವವರು ಆಗಿರಿ. ಸದಾ ಬೇಹದ್ದಿನ ತಂದೆಯ ಮಗುವಾಗಿದ್ದೇನೆ, ಅದರಿಂದ
ಬೇಹದ್ದಿನ ಸೇವೆಯಲ್ಲಿ, ಬೇಹದ್ದಿನ ಉಮ್ಮಂಗ-ಉತ್ಸಾಹದಿಂದ ಮುಂದುವರೆಯುತ್ತಿರಿ.
2. ಸದಾ ಡಬಲ್ಲೈಟ್ ಸ್ಥಿತಿಯ ಅನುಭವ ಮಾಡುತ್ತೀರಾ? ಡಬಲ್ಲೈಟ್ ಸ್ಥಿತಿಯ ಗುರುತಾಗಿದೆ- ಸದಾ ಹಾರುವ
ಕಲೆಯಿರುವುದು. ಹಾರುವ ಕಲೆಯವರು ಎಂದಿಗೂ ಸಹ ಮಾಯೆಯ ಆಕರ್ಷಣೆಯಲ್ಲಿ ಬರಲು ಸಾಧ್ಯವಿಲ್ಲ. ಹಾರುವ
ಕಲೆಯವರು ಸದಾ ವಿಜಯಿಯಾಗಿದ್ದೀರಾ? ಹಾರುವ ಕಲೆಯವರು ಸದಾ ನಿಶ್ಚಯಬುದ್ಧಿ ನಿಶ್ಚಿಂತರು. ಹಾರುವ ಕಲೆ
ಏನಾಗಿರುತ್ತದೆ? ಹಾರುವ ಕಲೆ ಎಂದರೆ ಶ್ರೇಷ್ಠಾತಿ ಶ್ರೇಷ್ಠ ಸ್ಥಿತಿ. ಹಾರುತ್ತಾರೆಂದರೆ ಮೇಲೆ ಹೋಗಿ
ಬಿಡುತ್ತಾರಲ್ಲವೆ. ಶ್ರೇಷ್ಠಾತಿ ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗುವವರು ಶ್ರೇಷ್ಠಾತ್ಮರೆಂದು
ತಿಳಿದುಕೊಂಡು ಮುಂದುವರೆಯುತ್ತಾ ಸಾಗಿರಿ. ಹಾರುವ ಕಲೆಯವರು ಅರ್ಥಾತ್ ಬುದ್ಧಿಯೆಂಬ ಕಾಲು ಧರಣಿಯ
ಮೇಲಿಲ್ಲ. ಧರಣಿ ಅರ್ಥಾತ್ ದೇಹದ ಪರಿವೆಯಿಂದ ಮೇಲಿರುವುದು. ಯಾರು ದೇಹಭಾನದ ಧರಣಿಯಿಂದ
ಮೇಲಿರುತ್ತಾರೆಯೋ, ಅವರು ಸದಾ ಫರಿಶ್ತೆಯಾಗಿದ್ದಾರೆ. ಅವರಿಗೆ ಧರಣಿಯೊಂದಿಗೆ ಯಾವುದೇ ಸಂಬಂಧವೇ
ಇಲ್ಲ. ದೇಹಭಾನವನ್ನೂ ತಿಳಿದಿರಿ, ದೇಹೀ-ಅಭಿಮಾನಿ ಸ್ಥಿತಿಯನ್ನೂ ತಿಳಿದು ಬಿಟ್ಟಿರಿ. ಯಾವಾಗ ಎರಡರ
ಅಂತರವನ್ನು ತಿಳಿದುಬಿಟ್ಟಿರೆಂದರೆ ದೇಹಾಭಿಮಾನದಲ್ಲಿ ಬರಲು ಸಾಧ್ಯವಿಲ್ಲ. ಯಾವುದು
ಇಷ್ಟವೆನಿಸುತ್ತದೆಯೋ ಅದನ್ನೇ ಮಾಡಲಾಗುತ್ತದೆಯಲ್ಲವೆ. ಅಂದಮೇಲೆ ಸದಾ ಇದೇ ಸ್ಮೃತಿಯಲ್ಲಿರಿ -
ನಾನಿರುವುದೇ ಫರಿಶ್ತಾ. ಫರಿಶ್ತಾ ಎನ್ನುವ ಸ್ಮೃತಿಯಿಂದ ಸದಾ ಹಾರುತ್ತಿರುತ್ತೀರಿ. ಹಾರುವ
ಕಲೆಯಲ್ಲಿ ಹೊರಟು ಹೋಗುತ್ತೀರೆಂದರೆ, ಕೆಳಗಿನ ಧರಣಿಯು ಆಕರ್ಷಿಸಲು ಸಾಧ್ಯವಿಲ್ಲ, ಹೇಗೆ ಆಕಾಶದಲ್ಲಿ
ಹೋಗುತ್ತಾರೆಂದರೆ ಧರಣಿಯು ಆಕರ್ಷಣೆ ಮಾಡುವುದಿಲ್ಲ. ಹಾಗೆಯೇ ಫರಿಶ್ತೆಯಾಗಿ ಬಿಡುತ್ತೀರೆಂದರೆ
ದೇಹವೆಂಬ ಧರಣಿಯು ಆಕರ್ಷಣೆ ಮಾಡಲು ಸಾಧ್ಯವಿಲ್ಲ.
3. ಸದಾ ಸಹಯೋಗಿ, ಕರ್ಮಯೋಗಿ, ಸ್ವತಃ ಯೋಗಿ, ನಿರಂತರ ಯೋಗಿ, ಇಂತಹ ಸ್ಥಿತಿಯನ್ನು ಅನುಭವ
ಮಾಡುತ್ತೀರಾ? ಎಲ್ಲಿ ಸಹಜವಿದೆ ಅಲ್ಲಿ ನಿರಂತರವಿದೆ. ಸಹಜವಿಲ್ಲವೆಂದರೆ ನಿರಂತರವಿರುವುದಿಲ್ಲ.
ಅಂದಮೇಲೆ ನಿರಂತರ ಯೋಗಿಯಾಗಿದ್ದೀರಾ ಅಥವಾ ಅಂತರವಾಗಿ ಬಿಡುತ್ತದೆಯೇ? ಯೋಗಿ ಅರ್ಥಾತ್ ಸದಾ
ನೆನಪಿನಲ್ಲಿ ಮಗ್ನವಾಗಿರುವವರು. ಯಾವಾಗ ಸರ್ವ ಸಂಬಂಧವು ತಂದೆಯೊಂದಿಗೆ ಆಗಿ ಬಿಟ್ಟಿತು, ಸರ್ವ
ಸಂಬಂಧವು ಎಲ್ಲಿದೆಯೋ ಅಲ್ಲಿ ನೆನಪು ಸ್ವತಹವಾಗಿಯೇ ಇರುತ್ತದೆ ಮತ್ತು ಸರ್ವ ಸಂಬಂಧವಿದೆಯೆಂದರೆ
ಒಬ್ಬರದೇ ನೆನಪಿರುತ್ತದೆ. ಇರುವುದೇ ಒಬ್ಬರು, ಅಂದಮೇಲೆ ಸದಾ ನೆನಪಿರುತ್ತದೆಯಲ್ಲವೆ. ಹಾಗಾದರೆ ಸದಾ
ಸರ್ವ ಸಂಬಂಧವು ಒಬ್ಬ ತಂದೆಯಲ್ಲದೇ ಮತ್ತ್ಯಾರೂ ಇಲ್ಲ. ಸರ್ವ ಸಂಬಂಧದಿಂದ ಒಬ್ಬ ತಂದೆ.....
ನಿರಂತರ ಯೋಗಿಯಾಗಲು ಇದೇ ವಿಧಿ ಆಗಿದೆ. ಯಾವಾಗ ಇನ್ನೊಂದು ಸಂಬಂಧವೇ ಇಲ್ಲವೆಂದಾಗ ನೆನಪು
ಮತ್ತೆಲ್ಲಿಗೆ ಹೋಗುತ್ತದೆ! ಸರ್ವ ಸಂಬಂಧಗಳಿಂದ ಸಹಜಯೋಗಿ ಆತ್ಮರು - ಇದನ್ನು ಸದಾ
ಸ್ಮೃತಿಯಲ್ಲಿಟ್ಟುಕೊಳ್ಳಿರಿ. ಸದಾ ತಂದೆಯ ಸಮಾನ ಪ್ರತೀ ಹೆಜ್ಜೆಯಲ್ಲಿ ಸ್ನೇಹ ಮತ್ತು ಶಕ್ತಿಯೆರಡರ
ಬ್ಯಾಲೆನ್ಸ್ ಇಡುವುದರಿಂದ ಸ್ವತಹವಾಗಿಯೇ ಸಫಲತೆಯು ತಮ್ಮ ಮುಂದೆ ಬರುತ್ತದೆ. ಸಫಲತೆಯು ಜನ್ಮಸಿದ್ಧ
ಅಧಿಕಾರವಾಗಿದೆ. ಬ್ಯುಜಿಯಾಗಿರುವುದಕ್ಕಾಗಿ ಕಾರ್ಯವನ್ನಂತು ಮಾಡಲೇಬೇಕು ಆದರೆ ಒಂದು - ಪರಿಶ್ರಮದ
ಕಾರ್ಯ, ಇನ್ನೊಂದು ಇದೆ - ಆಟದ ಸಾಮಗ್ರಿ. ಯಾವಾಗ ತಂದೆಯ ಮೂಲಕ ಶಕ್ತಿಗಳ ವರದಾನವು
ಸಿಕ್ಕಿತೆಂದಮೇಲೆ ಶಕ್ತಿಯೆಲ್ಲಿದೆಯೋ, ಅಲ್ಲಿ ಎಲ್ಲವೂ ಸಹಜವಿರುತ್ತದೆ. ಕೇವಲ ಪರಿವಾರ ಮತ್ತು ಬಾಬಾ
- ಇದರ ಬ್ಯಾಲೆನ್ಸ್ ಇದ್ದರೆ ಸ್ವತಃವಾಗಿಯೇ ಆಶೀರ್ವಾದಗಳು ಪ್ರಾಪ್ತವಾಗಿ ಬಿಡುತ್ತದೆ. ಎಲ್ಲಿ
ಆಶೀರ್ವಾದವಿದೆ ಅಲ್ಲಿ ಹಾರುವ ಕಲೆಯಿದೆ. ಇಷ್ಟ ಪಡದಿದ್ದರೂ ಸಹಜ ಸಫಲತೆಯಿದೆ.
4. ಸದಾ ಬಾಬಾ ಮತ್ತು ಆಸ್ತಿಯೆರಡರ ಸ್ಮೃತಿಯಿರುತ್ತದೆಯೇ? ತಂದೆ ಯಾರು ಮತ್ತು ಆಸ್ತಿಯೇನು
ಸಿಕ್ಕಿದೆ - ಈ ಸ್ಮೃತಿಯು ಸ್ವತಹವಾಗಿ ಸಮರ್ಥರನ್ನಾಗಿ ಮಾಡಿ ಬಿಡುತ್ತದೆ. ಇಂತಹ ಅವಿನಾಶಿ ಆಸ್ತಿ,
ಯಾವುದು ಒಂದು ಜನ್ಮದಲ್ಲಿ ಅನೇಕ ಜನ್ಮಗಳ ಪ್ರಾಲಬ್ಧವನ್ನು ರೂಪಿಸುವಂತದ್ದಾಗಿದೆ, ಇಂತಹ
ಆಸ್ತಿಯೆಂದಾದರೂ ಸಿಕ್ಕಿದೆಯೇ? ಈಗ ಸಿಕ್ಕಿದೆ, ಇಡೀ ಕಲ್ಪದಲ್ಲಿಲ್ಲ. ಅಂದಮೇಲೆ ಸದಾ ತಂದೆ ಹಾಗೂ
ಆಸ್ತಿ, ಇದೇ ಸ್ಮೃತಿಯಿಂದ ಮುಂದುವರೆಯುತ್ತಾ ಸಾಗಿರಿ. ಆಸ್ತಿಯನ್ನು ನೆನಪು ಮಾಡುವುದರಿಂದ ಸದಾ
ಖುಷಿಯಿರುತ್ತದೆ ಮತ್ತು ತಂದೆಯನ್ನು ನೆನಪು ಮಾಡುವುದರಿಂದ ಸದಾ ಶಕ್ತಿಶಾಲಿಯಾಗಿರುತ್ತೀರಿ.
ಶಕ್ತಿಶಾಲಿ ಆತ್ಮರು ಸದಾ ಮಾಯಾಜೀತರಾಗಿರುತ್ತಾರೆ ಮತ್ತು ಖುಷಿಯಿದೆಯೆಂದರೆ ಜೀವನವಿದೆ. ಒಂದುವೇಳೆ
ಖುಷಿಯಿಲ್ಲವೆಂದರೆ ಆ ಜೀವನವೇನು? ಜೀವನವಿದ್ದರೂ ಇಲ್ಲವೆನ್ನುವುದಕ್ಕೆ ಸಮಾನವಿರುತ್ತದೆ.
ಬದುಕಿದ್ದರೂ ಮೃತ್ಯುವಿನ ಸಮಾನವಿರುತ್ತದೆ. ಆಸ್ತಿಯೆಷ್ಟು ನೆನಪಿರುತ್ತದೆಯೋ ಅಷ್ಟೂ
ಖುಷಿಯಿರುತ್ತದೆ. ಅಂದಮೇಲೆ ಸದಾ ಖುಷಿಯಿರುತ್ತದೆಯೇ? ಇಂತಹ ಆಸ್ತಿಯು ಕೋಟಿಯಲ್ಲಿ ಕೆಲವರಿಗೆ
ಸಿಗುತ್ತದೆ ಮತ್ತು ನಮಗೆ ಸಿಕ್ಕಿದೆ. ಈ ಸ್ಮೃತಿಯೆಂದಿಗೂ ಮರೆಯಬಾರದು. ಎಷ್ಟು ನೆನಪೋ ಅಷ್ಟು
ಪ್ರಾಪ್ತಿ. ಸದಾ ನೆನಪು ಮತ್ತು ಸದಾ ಪ್ರಾಪ್ತಿಯ ಖುಷಿ.
ಕುಮಾರರೊಂದಿಗೆ:-
ಕುಮಾರ ಜೀವನ ಶಕ್ತಿಶಾಲಿ ಜೀವನವಾಗಿದೆ. ಅಂದಮೇಲೆ ಬ್ರಹ್ಮಾಕುಮಾರ ಅರ್ಥಾತ್ ಆತ್ಮಿಕ ಶಕ್ತಿಶಾಲಿ,
ದೈಹಿಕ ಶಕ್ತಿಶಾಲಿಯಲ್ಲ. ಆತ್ಮಿಕ ಶಕ್ತಿಶಾಲಿಗಳು ಆಗಿರುತ್ತಾರೆ. ಕುಮಾರ ಜೀವನದಲ್ಲಿ ಏನು ಬೇಕೋ
ಅದನ್ನು ಮಾಡಬಹುದು. ಅಂದಮೇಲೆ ತಾವೆಲ್ಲಾ ಕುಮಾರರು ತಮ್ಮ ಈ ಕುಮಾರ ಜೀವನದಲ್ಲಿ ತಮ್ಮ ವರ್ತಮಾನ
ಮತ್ತು ಭವಿಷ್ಯವನ್ನು ರೂಪಿಸಿಕೊಂಡಿರಾ, ಏನು ಮಾಡಿಕೊಂಡಿರಿ? ಆತ್ಮಿಕವನ್ನಾಗಿ ಮಾಡಿಕೊಂಡಿರಿ.
ಈಶ್ವರೀಯ ಜೀವನದ ಬ್ರಹ್ಮಾಕುಮಾರರಾಗಿ ಬಿಟ್ಟಿರಿ, ಅಂದಮೇಲೆ ಎಷ್ಟೊಂದು ಶ್ರೇಷ್ಠ ಜೀವನದವರಾಗಿ
ಬಿಟ್ಟಿರಿ. ಇಂತಹ ಶ್ರೇಷ್ಠ ಜೀವನವಾಯಿತು, ಅದರಿಂದ ಸದಾಕಾಲಕ್ಕಾಗಿ ದುಃಖದಿಂದ ಮತ್ತು ಮೋಸದಿಂದ,
ಅಲೆದಾಡುವುದರಿಂದ ದೂರವಾಗಿ ಬಿಟ್ಟಿರಿ. ಇಲ್ಲವೆಂದರೆ ದೈಹಿಕ ಶಕ್ತಿಯ ಕುಮಾರರಂತು
ಅಲೆಯುತ್ತಿರುತ್ತಾರೆ. ಹೊಡೆದಾಡುವುದು, ಜಗಳವಾಡುವುದು, ದುಃಖ ಕೊಡುವುದು, ಮೋಸ ಮಾಡುವುದು.....
ಇದನ್ನೇ ಮಾಡುತ್ತಾರಲ್ಲವೆ. ಅಂದಮೇಲೆ ಎಷ್ಟೊಂದು ಮಾತುಗಳಿಂದ ಪಾರಾಗಿ ಬಿಟ್ಟಿರಿ! ಹೇಗೆ
ಸ್ವಯಂನಿಂದ ಪಾರಾಗಿ ಬಿಟ್ಟಿರಿ(ರಕ್ಷೆಯಾಯಿತು) ಹಾಗೆಯೇ ಅನ್ಯರನ್ನೂ ಪಾರು ಮಾಡುವ ಉಮ್ಮಂಗವು
ಬರುತ್ತದೆ. ಅಂದಮೇಲೆ ಎಲ್ಲರನ್ನೂ ಶಕ್ತಿಶಾಲಿ ಮಾಡಿರಿ. ನಿಮಿತ್ತನೆಂದು ತಿಳಿದುಕೊಂಡು ಸೇವೆ
ಮಾಡಿರಿ. ನಾನು ಸೇವಾಧಾರಿ ಆಗಿದ್ದೇನೆ, ಎಂದಲ್ಲ. ಬಾಬಾರವರು ಮಾಡಿಸುತ್ತಾರೆ, ನಾನು ನಿಮಿತ್ತ
ಅಷ್ಟೇ. ನಿಮಿತ್ತನೆಂದು ತಿಳಿದು ಸೇವೆಯನ್ನು ಮಾಡಿರಿ. ನಾನು ಎನ್ನುವವರಲ್ಲ, ಯಾರಲ್ಲಿ ನಾನು
ಎನ್ನುವುದಿರುವುದಿಲ್ಲವೋ ಅವರು ಸತ್ಯ ಸೇವಾಧಾರಿ ಆಗಿದ್ದಾರೆ.
ಯುಗಲ್ಗಳೊಂದಿಗೆ:-
ಸದಾ ಸ್ವರಾಜ್ಯಾಧಿಕಾರಿ ಆತ್ಮರಾಗಿದ್ದೀರಾ? ಸ್ವಯಂನ ರಾಜ್ಯ ಅರ್ಥಾತ್ ಸದಾ ಅಧಿಕಾರಿ.
ಅಧಿಕಾರಿಯೆಂದಿಗೂ ಅಧೀನರಾಗಲು ಸಾಧ್ಯವಿಲ್ಲ. ಅಧೀನರಾಗಿದ್ದರೆ ಅಧಿಕಾರಿಯಲ್ಲ. ಹೇಗೆ
ರಾತ್ರಿಯಿದ್ದಾಗ ಹಗಲಿರುವುದಿಲ್ಲ, ಹಗಲಿದ್ದಾಗ ರಾತ್ರಿಯಿರುವುದಿಲ್ಲ, ಹಾಗೆಯೇ ಅಧಿಕಾರಿ
ಆತ್ಮರೆಂದಿಗೂ ಸಹ ಕರ್ಮೇಂದ್ರಿಯಗಳ, ವ್ಯಕ್ತಿಯ, ವೈಭವದ ಅಧೀನರಾಗಲು ಸಾಧ್ಯವಿಲ್ಲ. ಇಂತಹ ಅಧಿಕಾರಿ
ಆಗಿದ್ದೀರಾ? ಯಾವಾಗ ಮಾಸ್ಟರ್ ಸರ್ವಶಕ್ತಿವಂತರಾಗಿ ಬಿಟ್ಟಿರೆಂದರೆ ಏನಾದಿರಿ? ಅಧಿಕಾರಿ. ಅಂದಮೇಲೆ
ಸದಾ ಸ್ವರಾಜ್ಯ ಅಧಿಕಾರಿ ಆತ್ಮನಾಗಿದ್ದೇವೆ, ಈ ಸಮರ್ಥ ಸ್ಮೃತಿಯಿಂದ ಸದಾ ಸಹಜ ವಿಜಯಿ ಆಗಿರುತ್ತೀರಿ.
ಸ್ವಪ್ನದಲ್ಲಿಯೂ ಸೋಲಿನ ಸಂಕಲ್ಪವೂ ಇರಬಾರದು. ಇಂತಹವರಿಗೆ ಸದಾಕಾಲದ ವಿಜಯಿ ಎಂದು ಹೇಳಲಾಗುತ್ತದೆ.
ಮಾಯೆಯು ಓಡಿ ಹೋಯಿತೆ ಅಥವಾ ಓಡಿಸುತ್ತಿದ್ದೀರಾ? ಇಷ್ಟೂ ಓಡಿಸಿದ್ದೀರಾ, ಅದು ಹಿಂತಿರುಗಿ ಬರಬಾರದು.
ಯಾವುದನ್ನು ಹಿಂತಿರುಗಿ ತರುವುದಿಲ್ಲವೋ, ಅದನ್ನು ಬಹಳ-ಬಹಳ ದೂರದಲ್ಲಿ ಹೋಗಿ ಬಿಟ್ಟು ಬರುತ್ತಾರೆ.
ಅಂದಮೇಲೆ ಇಷ್ಟು ದೂರಕ್ಕೆ ಓಡಿಸಿದ್ದೀರಾ! ಒಳ್ಳೆಯದು.
ವರದಾನ:
ಬ್ರಾಹ್ಮಣ ಜೀವನದಲ್ಲಿ ಒಬ್ಬ ತಂದೆಯನ್ನು ತಮ್ಮ ಸಂಸಾರ(ಪ್ರಪಂಚ)ವನ್ನಾಗಿ ಮಾಡಿಕೊಳ್ಳುವಂತಹ ಸ್ವತಃ
ಹಾಗೂ ಸಹಜಯೋಗಿ ಭವ.
ಬ್ರಾಹ್ಮಣ
ಜೀವನದಲ್ಲಿ ಎಲ್ಲಾ ಮಕ್ಕಳ ಪ್ರತಿಜ್ಞೆಯಿದೆ - "ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ". ಯಾವಾಗ
ಸಂಸಾರವೇ ತಂದೆಯಾಗಿದ್ದಾರೆ, ಇನ್ನೊಬ್ಬರ್ಯಾರೂ ಇಲ್ಲವೇ ಇಲ್ಲವೆಂದಾಗ ಸ್ವತಃ ಹಾಗೂ ಸಹಜಯೋಗಿ
ಸ್ಥಿತಿಯು ಸದಾಕಾಲವಿರುತ್ತದೆ. ಒಂದುವೇಳೆ ಇನ್ನೊಬ್ಬರೇನಾದರೂ ಇದ್ದಾರೆಂದರೆ, ಇಲ್ಲಿ ಬುದ್ಧಿ
ಹೋಗಬಾರದು ಅಲ್ಲಿ ಹೋಗಬಾರದು ಎಂದು ಕಷ್ಟ ಪಡಬೇಕಾಗುತ್ತದೆ. ಆದರೆ ಒಬ್ಬ ತಂದೆಯೇ ಎಲ್ಲವೂ
ಆಗಿದ್ದಾರೆಂದಾಗ ಬುದ್ಧಿಯೆಲ್ಲಿಯೂ ಹೋಗಲು ಸಾಧ್ಯವಿಲ್ಲ. ಇಂತಹ ಸಹಜಯೋಗಿ, ಸಹಜ ಸ್ವರಾಜ್ಯ ಆಧಿಕಾರಿ
ಆಗಿ ಬಿಡುತ್ತೀರಿ. ಅವರ ಚಹರೆಯಲ್ಲಿ ಆತ್ಮೀಯ ಹೊಳಪು ಏಕರಸ, ಒಂದೇ ರೀತಿಯಿರುತ್ತದೆ.
ಸ್ಲೋಗನ್:
ತಂದೆಯ ಸಮಾನ
ಅವ್ಯಕ್ತ ಹಾಗೂ ವಿದೇಹಿಯಾಗುವುದು - ಇದೇ ಅವ್ಯಕ್ತ ಪಾಲನೆಗೆ ಪ್ರತ್ಯಕ್ಷ ಪ್ರಮಾಣ ಆಗಿದೆ.
ಸೂಚನೆ:
ಇಂದು ತಿಂಗಳಿನ ಮೂರನೇ ರವಿವಾರವಾಗಿದೆ. ಸಹೋದರ-ಸಹೋದರಿಯರೆಲ್ಲರೂ ಸಂಘಟಿತ ರೂಪದಲ್ಲಿ ಸಂಜೆ 6.30
ರಿಂದ 7.30ರವರೆಗೆ ಪ್ರಕೃತಿ ಸಹಿತವಾಗಿ, ಸರ್ವಾತ್ಮರುಗಳಿಗೂ ಶಾಂತಿ ಹಾಗೂ ಶಕ್ತಿಯ ಸಕಾಶವನ್ನು
ಕೊಡುವ ಸೇವೆಯನ್ನು ಮಾಡಿರಿ.