14.01.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಸಂಪೂರ್ಣ ಪಾವನರಾಗಬೇಕಾಗಿದೆ, ಆದ್ದರಿಂದ ಎಂದೂ ಯಾರಿಗೂ ದುಃಖ ಕೊಡಬಾರದು, ಕರ್ಮೇಂದ್ರಿಯಗಳಿಂದ
ಯಾವುದೇ ವಿಕರ್ಮವಾಗಬಾರದು, ಸದಾ ತಂದೆಯ ಆಜ್ಞೆಯಂತೆ ನಡೆಯುತ್ತಿರಿ.”
ಪ್ರಶ್ನೆ:
ಕಲ್ಲಿನಿಂದ
ಪಾರಸರಾಗಲು ಯುಕ್ತಿಯೇನಾಗಿದೆ? ಯಾವ ರೋಗವು ಇದರಲ್ಲಿ ವಿಘ್ನ ರೂಪವಾಗುತ್ತದೆ?
ಉತ್ತರ:
ಕಲ್ಲಿನಿಂದ
ಪಾರಸರಾಗುವುದಕ್ಕೆ ಪೂರ್ಣ ನಾರಾಯಣೀ ನಶೆಯಿರಬೇಕಾಗಿದೆ. ದೇಹಾಭಿಮಾನವು ತುಂಡಾಗಿರಬೇಕು. ಈ
ದೇಹಾಭಿಮಾನವೇ ಅತಿ ಕಠಿಣವಾಗಿರುವಂತಹ ರೋಗವಾಗಿದೆ. ಎಲ್ಲಿಯವರೆಗೆ ದೇಹೀ-ಅಭಿಮಾನಿಯಾಗುವುದಿಲ್ಲವೋ
ಅಲ್ಲಿಯವರೆಗೆ ಪಾರಸರಾಗುವುದಕ್ಕೆ ಸಾಧ್ಯವಿಲ್ಲ. ಪಾರಸರಾಗುವವರೇ ತಂದೆಗೆ ಸಹಯೋಗಿಗಳಾಗಲು ಸಾಧ್ಯ.
2. ಸರ್ವೀಸ್ ಸಹ ನಿಮ್ಮ ಬುದ್ಧಿಯನ್ನು ಚಿನ್ನವನ್ನಾಗಿಸುತ್ತದೆ ಇದಕ್ಕಾಗಿ ವಿದ್ಯೆಯ ಕಡೆ ಪೂರ್ಣ
ಗಮನ ಕೊಡಬೇಕಾಗಿದೆ.
ಓಂ ಶಾಂತಿ.
ಆತ್ಮಿಕ ಮಕ್ಕಳ
ಪ್ರತಿ ಆತ್ಮಿಕ ತಂದೆಯು ಎಚ್ಚರಿಕೆ ನೀಡುತ್ತಿದ್ದಾರೆ - ಮಕ್ಕಳೇ, ತಮ್ಮನ್ನು ಸಂಗಮಯುಗದವರೆಂದು
ತಿಳಿಯಿರಿ, ಸತ್ಯಯುಗದವರೆಂದು ತಿಳಿಯುವುದಿಲ್ಲ. ನೀವು ಬ್ರಾಹ್ಮಣರೇ ತಮ್ಮನ್ನು ಸಂಗಮಯುಗಿಗಳೆಂದು
ತಿಳಿಯುತ್ತೀರಿ. ಬೇರೆಯವರೆಲ್ಲರೂ ತಮ್ಮನ್ನು ಕಲಿಯುಗದವರೆಂದು ತಿಳಿಯುತ್ತಾರೆ. ಸತ್ಯಯುಗ ಮತ್ತು
ಕಲಿಯುಗ, ಸ್ವರ್ಗವಾಸಿ ಮತ್ತು ನರಕವಾಸಿ ಎಂಬುದರಲ್ಲಿ ಬಹಳ ವ್ಯತ್ಯಾಸವಿದೆ. ನೀವಂತೂ
ಸ್ವರ್ಗವಾಸಿಗಳೂ ಅಲ್ಲ, ನರಕವಾಸಿಗಳೂ ಅಲ್ಲ. ನೀವು ಪುರುಷೋತ್ತಮ ಸಂಗಮವಾಸಿಗಳಾಗಿದ್ದೀರಿ. ಈ
ಸಂಗಮಯುಗವನ್ನು ನೀವು ಬ್ರಾಹ್ಮಣರೇ ತಿಳಿದುಕೊಂಡಿದ್ದೀರಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ನೀವು ಭಲೇ
ತಿಳಿದುಕೊಂಡಿದ್ದೀರಿ ಆದರೆ ಮರೆತು ಬಿಡುತ್ತೀರಿ. ಈಗ ಮನುಷ್ಯರಿಗೆ ಹೇಗೆ ತಿಳಿಸುವುದು. ಅವರಂತೂ
ರಾವಣನ ಜಂಜಾಟದಲ್ಲಿ ಸಿಕ್ಕಿಕೊಂಡಿದ್ದಾರೆ. ರಾಮ ರಾಜ್ಯವಂತೂ ಇಲ್ಲ. ರಾವಣನನ್ನು
ಸುಡುತ್ತಿರುತ್ತಾರೆ, ಇದರಿಂದ ಇದು ರಾವಣ ರಾಜ್ಯವಾಗಿದೆ ಎಂದು ಸಿದ್ಧವಾಗುತ್ತದೆ. ರಾಮ
ರಾಜ್ಯವೆಂದರೆ ಏನು, ರಾವಣ ರಾಜ್ಯವೆಂದರೇನು ಎಂದು ನೀವು ಮಕ್ಕಳಲ್ಲಿಯೂ ನಂಬರ್ವಾರ್ ಆಗಿ
ತಿಳಿದುಕೊಂಡಿದ್ದೀರಿ. ತಂದೆಯು ಸಂಗಮಯುಗದಲ್ಲಿ ಬರುತ್ತಾರೆಂದಾಗ ಸತ್ಯಯುಗ ಮತ್ತು ಕಲಿಯುಗದ
ಹೋಲಿಕೆಯೂ ಸಹ ಈಗ ಮಾಡಲಾಗುತ್ತದೆ. ಕಲಿಯುಗದಲ್ಲಿರುವವರಿಗೆ ನರಕವಾಸಿಗಳೆಂದು,
ಸತ್ಯಯುಗದಲ್ಲಿವವರಿಗೆ ಸ್ವರ್ಗವಾಸಿಗಳೆಂದು ಹೇಳಲಾಗುತ್ತದೆ. ಸ್ವರ್ಗವಾಸಿಗಳಿಗೆ ಪಾವನರು,
ನರಕವಾಸಿಗಳಿಗೆ ಪತಿತರೆಂದು ಹೇಳಲಾಗುತ್ತದೆ. ನಿಮ್ಮ ಮಾತುಗಳಂತೂ ಭಿನ್ನವಾಗಿದೆ ಆದರೆ ನೀವು ಈ
ಪುರುಷೋತ್ತಮ ಸಂಗಮಯುಗವನ್ನು ತಿಳಿದುಕೊಂಡಿದ್ದೀರಿ. ನಾವು ಬ್ರಾಹ್ಮಣರೆಂದು ನಿಮಗೆ ಗೊತ್ತಿದೆ.
ವರ್ಣದ ಚಿತ್ರಗಳೂ ಸಹ ತುಂಬಾ ಚೆನ್ನಾಗಿದೆ, ಅಂದಾಗ ಅದರ ಬಗ್ಗೆ ನೀವು ತಿಳಿಸಬಹುದು. ಯಾವ ಮನುಷ್ಯರು
ತಮ್ಮನ್ನು ನರಕವಾಸಿಗಳು, ಪತಿತರು ಕಂಗಾಲರೆಂದು ತಿಳಿದುಕೊಳ್ಳುತ್ತಾರೆಯೋ ಅವರಿಗೆ ಹೋಲಿಕೆಯನ್ನು
ತಿಳಿಸಬೇಕಾಗಿದೆ. ಬರೆಯಬೇಕಾಗಿದೆ ಇದು ಹಳೆಯ ಕಲಿಯುಗೀ ಪ್ರಪಂಚ. ಸತ್ಯಯುಗ ಸ್ವರ್ಗ ಹೊಸ
ಪ್ರಪಂಚವಾಗಿದೆ. ನೀವು ನರಕವಾಸಿಯಾಗಿದ್ದೀರಾ ಅಥವಾ ಸ್ವರ್ಗವಾಸಿಯಾಗಿದ್ದೀರಾ? ನೀವು
ದೇವತೆಗಳಾಗಿದ್ದೀರಾ ಅಥವಾ ಅಸುರರಾಗಿದ್ದೀರಾ? ಆದರೆ ನಾವು ಸ್ವರ್ಗವಾಸಿಗಳೆಂದು ಯಾರೂ
ಹೇಳುವುದಿಲ್ಲ. ನಾವಂತೂ ಸ್ವರ್ಗದಲ್ಲಿ ಕುಳಿತಿದ್ದೇವೆಂದು ಕೆಲವರು ತಿಳಿದುಕೊಳ್ಳುತ್ತಾರೆ. ಅರೆ!
ಇದಂತೂ ನರಕವಾಗಿದೆಯಲ್ಲವೆ. ಸತ್ಯಯುಗವೆಲ್ಲಿದೆ, ಇದು ರಾವಣ ರಾಜ್ಯವಾಗಿದೆ ಆದ್ದರಿಂದ ರಾವಣನನ್ನು
ಸುಡುತ್ತಾರೆ. ಅವರ ಬಳಿಯೂ ಸಹ ಎಷ್ಟು ಉತ್ತರಗಳಿರುತ್ತವೆ. ಸರ್ವವ್ಯಾಪಿ ಎಂಬುದರ ಮೇಲೆ ಎಷ್ಟೊಂದು
ವಾಗ್ವಾದ ಮಾಡುತ್ತಾರೆ. ತಾವು ಮಕ್ಕಳು ಸ್ಪಷ್ಟವಾಗಿ ಕೇಳುತ್ತೀರಿ. ಈಗ ಹೊಸ ಜಗತ್ತಾಗಿದೆಯೋ ಅಥವಾ
ಹಳೆಯ ಜಗತ್ತಾಗಿದೆಯೇ? ಈ ರೀತಿ ಸ್ಪಷ್ಟವಾಗಿ ವ್ಯತ್ಯಾಸವನ್ನು ತಿಳಿಸಬೇಕು, ಇದರಲ್ಲಿ ಬಹಳ ಬುದ್ಧಿ
ಬೇಕು. ಈ ರೀತಿ ಯುಕ್ತಿಯಿಂದ ಬರೆಯಬೇಕು, ಅದರಿಂದ ಮನುಷ್ಯರು ತಮ್ಮನ್ನು ತಾವೇ ಕೇಳಿಕೊಳ್ಳಬೇಕು -
ನಾನು ಸ್ವರ್ಗವಾಸಿಯೇ ಅಥವಾ ನರಕವಾಸಿಯೇ? ಇದು ಹಳೆಯ ಪ್ರಪಂಚವೋ ಅಥವಾ ಹೊಸ ಪ್ರಪಂಚವೇ? ಇದು ರಾಮ
ರಾಜ್ಯವೇ ಅಥವಾ ರಾವಣ ರಾಜ್ಯವೇ? ನಾವು ಹಳೆಯ ಕಲಿಯುಗೀ ಪ್ರಪಂಚದ ನಿವಾಸಿಗಳೋ ಅಥವಾ ಹೊಸ ಪ್ರಪಂಚದ
ನಿವಾಸಿಗಳೋ? ಹಿಂದಿಯಲ್ಲಿ ಬರೆದ ನಂತರ ಆಂಗ್ಲ ಭಾಷೆಯಲ್ಲಿ ಹಾಗೂ ಗುಜರಾತಿಯಲ್ಲಿ ತರ್ಜುಮೆ ಮಾಡಬೇಕು.
ಮನುಷ್ಯರು ತಮ್ಮನ್ನು ತಾವು ಎಲ್ಲಿಯ ನಿವಾಸಿಗಳಾಗಿದ್ದೇವೆ ಕೇಳಿಕೊಳ್ಳಬೇಕು. ಯಾರಾದರೂ ಶರೀರ
ಬಿಟ್ಟರೆ ಸ್ವರ್ಗವಾಸಿಗಳಾದರು ಎಂದು ಹೇಳುತ್ತಾರೆ ಆದರೆ ಈಗ ಸ್ವರ್ಗವೆಲ್ಲಿದೆ? ಈಗಂತೂ
ಕಲಿಯುಗವಾಗಿದೆ, ಅವಶ್ಯವಾಗಿ ಪುನರ್ ಜನ್ಮವನ್ನೂ ಸಹ ಇಲ್ಲಿಯೇ ಪಡೆಯಬೇಕಾಗುತ್ತದೆ. ಸ್ವರ್ಗವೆಂದು
ಸತ್ಯಯುಗಕ್ಕೆ ಹೇಳಲಾಗುತ್ತದೆ ಅಂದಾಗ ಅಲ್ಲಿಗೆ ಹೇಗೆ ಹೋಗುತ್ತಾರೆ - ಇವೆಲ್ಲವೂ ವಿಚಾರಸಾಗರ ಮಂಥನ
ಮಾಡುವ ವಿಚಾರಗಳಾಗಿವೆ. ಈ ರೀತಿ ಸ್ಪಷ್ಟವಾಗಿ ವ್ಯತ್ಯಾಸವಿರಲಿ, ಅದರಲ್ಲಿ ಬರೆಯಬೇಕು. ಇದು
ಭಗವಾನುವಾಚ - ಪ್ರತಿಯೊಬ್ಬರು ತಮ್ಮನ್ನು ಕೇಳಿಕೊಳ್ಳಲಿ - ನಾನು ಸತ್ಯಯುಗಿ ರಾಮರಾಜ್ಯದ ನಿವಾಸಿಯೋ
ಅಥವಾ ಕಲಿಯುಗೀ ರಾವಣ ರಾಜ್ಯದ ನಿವಾಸಿಯೋ? ತಾವು ಬ್ರಾಹ್ಮಣರು ಸಂಗಮಯುಗದ ನಿವಾಸಿಗಳಾಗಿದ್ದೀರಿ,
ನಿಮ್ಮನ್ನು ಯಾರೂ ತಿಳಿದುಕೊಂಡಿಲ್ಲ. ತಾವು ಎಲ್ಲರಿಗಿಂತ ಭಿನ್ನರಾಗಿದ್ದೀರಿ, ತಾವು ಸತ್ಯಯುಗ
ಮತ್ತು ಕಲಿಯುಗವನ್ನು ಯಥಾರ್ಥವಾಗಿ ತಿಳಿದುಕೊಂಡಿದ್ದೀರಿ. ತಾವು ಮಾತ್ರವೇ ಕೇಳಬಹುದು - ತಾವು
ವಿಕಾರಿ ಭ್ರಷ್ಟಾಚಾರಿಗಳೋ ಅಥವಾ ನಿರ್ವಿಕಾರಿ ಶ್ರೇಷ್ಠಾಚಾರಿಗಳೋ? ಇದು ನಿಮ್ಮ ಪುಸ್ತಕವೇ ಆಗಬಹುದು.
ಹೊಸ-ಹೊಸ ಮಾತುಗಳನ್ನು ರಚಿಸಬೇಕಾಗುತ್ತದೆ, ಅದರಿಂದ ಈಶ್ವರನು ಸರ್ವವ್ಯಾಪಿ ಅಲ್ಲವೆಂದು
ಮನುಷ್ಯರಿಗೆ ಅರ್ಥವಾಗಬೇಕು. ನಿಮ್ಮ ಈ ಬರಹವನ್ನು ನೋಡಿ ತಮಗೆ ತಾವೇ ಪ್ರಶ್ನೆಯನ್ನು
ಕೇಳಿಕೊಳ್ಳುತ್ತಾರೆ. ಇದನ್ನು ಕಬ್ಬಿಣದ ಯುಗವೆಂದು ಎಲ್ಲರೂ ಹೇಳುತ್ತಾರೆ. ಈಗಂತೂ ಸತ್ಯಯುಗಿ ದೈವೀ
ರಾಜ್ಯವೆಂದು ಯಾರೂ ಹೇಳುವುದಿಲ್ಲ. ಇದು ನರಕವೇ ಅಥವಾ ಸ್ವರ್ಗವೇ? ಈ ರೀತಿ ಬಹಳ ಒಳ್ಳೆಯ
ಹೇಳಿಕೆಯನ್ನು ಬರೆಯಿರಿ - ಇದರಿಂದ ಮನುಷ್ಯರು ತಮ್ಮನ್ನು ನರಕವಾಸಿ ಪತಿತರೆಂದು ಅರ್ಥ ಮಾಡಿಕೊಳ್ಳಲಿ.
ನಮ್ಮಲ್ಲಿ ದೈವೀ ಗುಣವಂತೂ ಇಲ್ಲ, ಕಲಿಯುಗದಲ್ಲಿ ಸತ್ಯಯುಗದವರು ಯಾರೂ ಇರಲು ಸಾಧ್ಯವಿಲ್ಲ. ಈ ರೀತಿ
ವಿಚಾರಸಾಗರ ಮಂಥನ ಮಾಡಿ ಬರೆಯಬೇಕಾಗಿದೆ. ಯಾರು ಈ ರೀತಿ ವಿಚಾರ ಸಾಗರ ಮಂಥನ ಮಾಡುತ್ತಾರೆಯೋ ಅವರು
ಅರ್ಜುನರು..... ಗೀತೆಯಲ್ಲಿ ಅರ್ಜುನನ ಹೆಸರನ್ನು ಹಾಕಿದ್ದಾರೆ. ತಂದೆಯು ತಿಳಿಸುತ್ತಾರೆ - ಯಾವ
ಗೀತೆಯಿದೆ ಅದರಲ್ಲಿ ಹಿಟ್ಟಿನಲ್ಲಿ ಉಪ್ಪಿನಷ್ಟಿದೆ. ಉಪ್ಪು ಹಾಗೂ ಸಕ್ಕರೆಯಲ್ಲಿ ಎಷ್ಟು
ವ್ಯತ್ಯಾಸವಿದೆ.... ಅದು ಸಿಹಿ ಹಾಗೂ ಇದು ಉಪ್ಪು. ಕೃಷ್ಣ ಭಗವಾನುವಾಚ ಎಂದು ಬರೆದು ಗೀತೆಯನ್ನು
ಉಪ್ಪು ಮಾಡಿ ಬಿಟ್ಟಿದ್ದಾರೆ. ಮನುಷ್ಯರು ಹೇಗೆ ಕೆಸರಿನಲ್ಲಿ ಸಿಕ್ಕಿಕೊಳ್ಳುತ್ತಾರೆ. ಪಾಪ!
ಜ್ಞಾನದ ರಹಸ್ಯವೂ ಸಹ ಗೊತ್ತಿಲ್ಲ. ಜ್ಞಾನವನ್ನು ಭಗವಂತ ತಮಗೆ ಮಾತ್ರ ಹೇಳುತ್ತಾರೆ, ಬೇರೆ ಯಾರಿಗೂ
ಗೊತ್ತಿಲ್ಲ. ಜ್ಞಾನವಂತೂ ಬಹಳ ಸಹಜವಾಗಿದೆ ಆದರೆ ಭಗವಂತ ಓದಿಸುತ್ತಾರೆ ಎಂದು ಮರೆತು ಹೋಗುತ್ತಾರೆ.
ಶಿಕ್ಷಕನನ್ನೇ ಮರೆತು ಬಿಡುತ್ತಾರೆ ಇಲ್ಲವೆಂದರೆ ವಿದ್ಯಾರ್ಥಿಗಳು ಶಿಕ್ಷಕನನ್ನು ಎಂದೂ
ಮರೆಯುವುದಿಲ್ಲ. ಬಾಬಾ, ನಾವು ನಿಮ್ಮನ್ನು ಪದೇ-ಪದೇ ಮರೆತು ಹೋಗುತ್ತೇವೆಂದು ಮಕ್ಕಳು ಹೇಳುತ್ತಾರೆ.
ತಂದೆಯು ತಿಳಿಸುತ್ತಾರೆ - ಮಾಯೆಯೂ ಕಡಿಮೆಯೇನೂ ಇಲ್ಲ, ತಾವು ದೇಹಾಭಿಮಾನಿಗಳಾಗಿ ಬಿಡುತ್ತೀರಿ,
ಬಹಳ ವಿಕರ್ಮವಾಗುತ್ತದೆ. ಯಾವುದೂ ವಿಕರ್ಮವಾಗದೇ ಇರುವಂತಹ ದಿನವೇ ಇಲ್ಲ. ತಂದೆಯ ಯಾವ ಆದೇಶಗಳಿದೆಯೋ
ಅದನ್ನೇ ಮರೆತು ಹೋಗುತ್ತೀರಿ, ಇದು ಮುಖ್ಯವಾದ ವಿಕರ್ಮವಾಗಿದೆ. ಮನ್ಮನಾಭವ, ತಮ್ಮನ್ನು ಆತ್ಮನೆಂದು
ತಿಳಿಯಿರಿ. ಇದು ತಂದೆಯ ಆದೇಶವಾಗಿದೆ. ಈ ಆದೇಶಕ್ಕೆ ಮಾನ್ಯತೆ ಕೊಡದಿದ್ದರೆ ಬಹಳ ವಿಕರ್ಮವೇ
ಆಗುತ್ತದೆ, ಬಹಳ ಪಾಪವಾಗಿ ಬಿಡುತ್ತದೆ. ತಂದೆಯ ಆದೇಶ ಬಹಳ ಸಹಜವೂ ಆಗಿದೆ, ಕಠಿಣವೂ ಆಗಿದೆ. ಎಷ್ಟೇ
ಹೇಳಿದರೂ ಮರೆತು ಹೋಗುತ್ತೀರಿ ಏಕೆಂದರೆ ಅರ್ಧ ಕಲ್ಪದ ದೇಹಾಭಿಮಾನವಲ್ಲವೆ. ಐದು ನಿಮಿಷವೂ ಸಹ
ಯಥಾರ್ಥವಾಗಿ ತಂದೆಯ ನೆನಪಿನಲ್ಲಿ ಕುಳಿತುಕೊಳ್ಳುವುದಿಲ್ಲ. ಒಂದು ವೇಳೆ ಇಡೀ ದಿನ
ನೆನಪಿನಲ್ಲಿದ್ದರೆ ಕರ್ಮಾತೀತ ಸ್ಥಿತಿಯಾಗಿ ಬಿಡುತ್ತದೆ. ತಂದೆಯು ತಿಳಿಸಿದ್ದಾರೆ - ಇದರಲ್ಲಿ
ಶ್ರಮವಿದೆ. ತಾವು ಈ ಶಾರೀರಿಕ ವಿದ್ಯೆಯನ್ನು ಚೆನ್ನಾಗಿ ಓದುತ್ತೀರಿ. ಇತಿಹಾಸ-ಭೂಗೋಳವನ್ನು ಓದುವ
ಅಭ್ಯಾಸವಿದೆ. ಆದರೆ ನೆನಪಿನ ಯಾತ್ರೆಯ ಅಭ್ಯಾಸವು ಸ್ವಲ್ಪವೂ ಇಲ್ಲ. ಸ್ವಯಂನ್ನು ಆತ್ಮನೆಂದು
ತಿಳಿದು ತಂದೆಯನ್ನು ನೆನಪು ಮಾಡಬೇಕು - ಇದು ಹೊಸ ವಿಚಾರವಾಗಿದೆ. ಅಂತಹ ತಂದೆಯನ್ನು ಚೆನ್ನಾಗಿ
ನೆನಪು ಮಾಡಬೇಕೆಂದು ವಿವೇಕವು ಹೇಳುತ್ತದೆ. ಸ್ವಲ್ಪ ಸಮಯವನ್ನು ತೆಗೆದು ರೊಟ್ಟಿ
ತಿನ್ನುತ್ತೀರೆಂದಾಗಲೂ ತಂದೆಯ ನೆನಪಿನಲ್ಲಿ ತಿನ್ನಬೇಕು. ಎಷ್ಟು ನೆನಪಿನಲ್ಲಿರುತ್ತೀರಿ ಅಷ್ಟು
ಪಾವನರಾಗುತ್ತೀರಿ. ಕೆಲವರ ಬಳಿ ಅಷ್ಟೊಂದು ಹಣವಿದೆ ಅದರಿಂದ ಬಡ್ಡಿ ಸಿಗುತ್ತಿರುತ್ತದೆ. ಅಂತಹ
ಮಕ್ಕಳು ಅನೇಕರಿದ್ದಾರೆ. ತಂದೆಯನ್ನು ನೆನಪು ಮಾಡುತ್ತಾ ರೊಟ್ಟಿ ತಿನ್ನುತ್ತಿದ್ದರೆ ಸಾಕು ಆದರೆ
ಮಾಯೆಯು ನೆನಪು ಮಾಡಲು ಬಿಡುವುದಿಲ್ಲ. ಕಲ್ಪದ ಮೊದಲು ಯಾರೆಷ್ಟು ಪುರುಷಾರ್ಥ ಮಾಡಿದ್ದಾರೆಯೋ ಅವರು
ಅಷ್ಟೇ ಮಾಡುತ್ತಾರೆ, ಸಮಯ ಹಿಡಿಸುತ್ತದೆ. ಕೆಲವರು ಬೇಗ ಓಡಿ ಹೋಗಿ ತಲುಪೋಣ ಅಂದರೆ ಸಾಧ್ಯವೇ ಇಲ್ಲ.
ಇಲ್ಲಿ ಇಬ್ಬರು ತಂದೆಯರಿದ್ದಾರೆ. ಬೇಹದ್ದಿನ ತಂದೆಗೆ ತಮ್ಮದೇ ಆದ ಶರೀರವಿಲ್ಲ, ಅವರು
ಇವರಲ್ಲಿ(ಬ್ರಹ್ಮಾ) ಪ್ರವೇಶ ಮಾಡಿ ಮಾತನಾಡುತ್ತಾರೆ ಅಂದಮೇಲೆ ತಂದೆಯ ಶ್ರೀಮತದಂತೆ ನಡೆಯಬೇಕು.
ದೇಹ ಸಹಿತ ಎಲ್ಲಾ ಧರ್ಮವನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯಿರಿ ಎಂದು ತಂದೆಯು ಮಕ್ಕಳಿಗೆ
ಶ್ರೀಮತವನ್ನು ಕೊಡುತ್ತಾರೆ. ತಾವು ಪವಿತ್ರರಾಗಿ ಬಂದಿದ್ದಿರಿ, 84 ಜನ್ಮಗಳನ್ನು
ಪಡೆಯುತ್ತಾ-ಪಡೆಯುತ್ತಾ ಆತ್ಮವು ಪತಿತವಾಗಿದೆ, ಈಗ ಪಾವನರಾಗಲು ಶ್ರೀಮತದಂತೆ ನಡೆಯಬೇಕು. ಆಗ
ತಂದೆಯು ಗ್ಯಾರೆಂಟಿ ಕೊಡುತ್ತಾರೆ ನಿಮ್ಮ ಪಾಪವು ತುಂಡಾಗುತ್ತದೆ. ಆತ್ಮವು ಚಿನ್ನದ ಸಮಾನವಾಗುತ್ತದೆ
ನಂತರ ಅಲ್ಲಿ ಚಿನ್ನದ ಸಮಾನವಾದ ದೇಹವು ಸಿಗುತ್ತದೆ. ಯಾರು ಈ ಕುಲದವರಾಗಿರುತ್ತಾರೆಯೋ ಅವರು ನಿಮ್ಮ
ಮಾತುಗಳನ್ನು ಕೇಳಿ ಯೋಚನೆಯಲ್ಲಿ ತೊಡಗುತ್ತಾರೆ. ನಿಮ್ಮ ಮಾತಂತೂ ಸರಿಯಾಗಿದೆ ಎಂದು ಹೇಳುತ್ತಾರೆ.
ಪಾವನರಾಗಬೇಕೆಂದರೆ ಯಾರಿಗೂ ದುಃಖವನ್ನು ಕೊಡಬಾರದು. ಮನಸಾ-ವಾಚಾ-ಕರ್ಮಣಾ ಪವಿತ್ರರಾಗಬೇಕಾಗಿದೆ.
ಮನಸ್ಸಿನಲ್ಲಿ ಬಿರುಗಾಳಿಯಂತೂ ಬರುತ್ತವೆ, ನೀವು ಬೇಹದ್ದಿನ ರಾಜ್ಯಭಾಗ್ಯವನ್ನು
ಪಡೆಯುತ್ತಿದ್ದೀರಲ್ಲವೆ, ನೀವು ಭಲೇ ಸತ್ಯವನ್ನು ಹೇಳಿ ಅಥವಾ ಹೇಳದೇ ಇರಿ ಆದರೆ ತಂದೆಯು ಸ್ವಯಂ
ಹೇಳುತ್ತಾರೆ - ಮಾಯೆಯ ಬಹಳ ವಿಕಲ್ಪಗಳು ಬರುತ್ತವೆ ಆದರೆ ಕರ್ಮೇಂದ್ರಿಯಗಳಿಂದ ಎಂದೂ ವಿಕರ್ಮ
ಮಾಡಬಾರದು, ಕರ್ಮೇಂದ್ರಿಯಗಳಿಂದ ಯಾವುದೇ ಪಾಪ ಮಾಡಬಾರದು. ಅಂದಮೇಲೆ ಈ ವ್ಯತ್ಯಾಸದ ಮಾತುಗಳನ್ನು
ಚೆನ್ನಾಗಿ ಬರೆಯಬೇಕು. ಕೃಷ್ಣನು ಪೂರ್ಣ 84 ಜನ್ಮಗಳನ್ನು ಪಡೆಯುತ್ತಾನೆ ಆದರೆ ಶಿವ ತಂದೆಯು ಪುನರ್
ಜನ್ಮವನ್ನು ಪಡೆಯುವುದಿಲ್ಲ. ಕೃಷ್ಣನು ಸರ್ವ ಗುಣ ಸಂಪನ್ನ ದೇವತಾ, ಇವರಂತೂ (ಶಿವಬಾಬಾ)
ತಂದೆಯಾಗಿದ್ದಾರೆ. ತಾವು ನೋಡಿದ್ದೀರಿ, ಪಾಂಡವರ ಚಿತ್ರಗಳನ್ನು ಎಷ್ಟು ದೊಡ್ಡದನ್ನಾಗಿ ಮಾಡುತ್ತಾರೆ
ಅರ್ಥಾತ್ ಅವರು ಅಷ್ಟೂ ವಿಶಾಲ ಬುದ್ಧಿಯವರಾಗಿದ್ದಾರೆ ಎಂದರ್ಥ. ಬುದ್ಧಿಯು ವಿಶಾಲವಾಗಿತ್ತು ಆದರೆ
ಅವರು ಶರೀರವನ್ನು ದೊಡ್ಡದಾಗಿ ಮಾಡಿದ್ದಾರೆ. ನಿಮ್ಮಂತಹ ವಿಶಾಲ ಬುದ್ಧಿಯು ಬೇರೆ ಯಾರದೂ ಆಗಲು
ಸಾಧ್ಯವಿಲ್ಲ. ನಿಮ್ಮದು ಈಶ್ವರೀಯ ಬುದ್ಧಿಯಾಗಿದೆ, ಭಕ್ತಿಯಲ್ಲಿ ಎಷ್ಟು ದೊಡ್ಡ-ದೊಡ್ಡ
ಚಿತ್ರಗಳನ್ನು ಮಾಡಿ ಹಣವನ್ನು ವ್ಯರ್ಥ ಮಾಡುತ್ತಾರೆ. ಎಷ್ಟು ವೇದ ಶಾಸ್ತ್ರ, ಉಪನಿಷತ್ತುಗಳನ್ನು
ಮಾಡಿ ಎಷ್ಟೊಂದು ಖರ್ಚು ಮಾಡಿದರು. ತಂದೆಯು ಹೇಳುತ್ತಾರೆ - ತಾವೆಷ್ಟು ಹಣವನ್ನು ಕಳೆದುಕೊಂಡು
ಬಂದಿದ್ದೀರಿ. ಬೇಹದ್ದಿನ ತಂದೆಯು ದೂರಿಡುತ್ತಿದ್ದಾರೆ, ಬಾಬಾ ಬಹಳಷ್ಟು ಹಣವನ್ನು
ಕೊಟ್ಟಿದ್ದರೆಂಬುದು ನೀವು ಅನುಭವ ಮಾಡುತ್ತೀರಿ. ರಾಜಯೋಗವನ್ನು ಕಲಿಸಿ ರಾಜರಿಗೂ ರಾಜರನ್ನಾಗಿ
ಮಾಡಿದರು. ಆ ಶಾರೀರಿಕ ವಿದ್ಯೆಯನ್ನು ಓದಿ ವಕೀಲರು ಮುಂತಾದವರಾಗುತ್ತಾರೆ ನಂತರ ಅದರಲ್ಲಿ
ಸಂಪಾದನೆಯಾಗುತ್ತದೆ ಆದ್ದರಿಂದ ವಿದ್ಯೆಯೇ ಸಂಪಾದನೆಗೆ ಆಧಾರವೆಂದು ಹೇಳಲಾಗುತ್ತದೆ. ಈ ಈಶ್ವರೀಯ
ವಿದ್ಯೆಯೂ ಸಹ ಸಂಪಾದನೆಗೆ ಆಧಾರವಾಗಿದೆ. ಇದರಿಂದ ಬೇಹದ್ದಿನ ಚಕ್ರಾಧಿಪತ್ಯವು ಸಿಗುತ್ತದೆ. ಭಾಗವತ,
ರಾಮಾಯಣ ಇತ್ಯಾದಿಗಳಲ್ಲಿ ಯಾವುದೇ ಜ್ಞಾನವಿಲ್ಲ, ಯಾವ ಗುರಿಯೂ ಇಲ್ಲ. ತಂದೆ ಏನು ಜ್ಞಾನ
ಪೂರ್ಣರಾಗಿದ್ದಾರೆಯೋ ಅವರೇ ಕುಳಿತು ನೀವು ಮಕ್ಕಳಿಗೆ ತಿಳಿಸುತ್ತಿದ್ದಾರೆ - ಇದು ಸಂಪೂರ್ಣ ಹೊಸ
ವಿದ್ಯೆಯಾಗಿದೆ, ಅದನ್ನೂ ಸಹ ಯಾರು ಓದಿಸುತ್ತಾರೆ? ಸ್ವಯಂ ಭಗವಂತ. ಹೊಸ ಪ್ರಪಂಚದ ಮಾಲೀಕರನ್ನಾಗಿ
ಮಾಡಲು ಓದಿಸುತ್ತಾರೆ. ಈ ಲಕ್ಷ್ಮೀ-ನಾರಾಯಣರು ಈ ವಿದ್ಯೆಯಿಂದ ಉತ್ತಮ ಪದವಿಯನ್ನು ಪಡೆದರು.
ರಾಜನೆಲ್ಲಿ! ಎಲ್ಲಿ ಪ್ರಜೆ! ಯಾರದೇ ಅದೃಷ್ಟದ ಬಾಗಿಲು ತೆರೆದರೆ ಬಂಧನವು ದೂರವಾಗುತ್ತದೆ.
ವಿದ್ಯಾರ್ಥಿಗಳೂ ಸಹ ಅರ್ಥ ಮಾಡಿಕೊಳ್ಳಬಹುದು - ನಾವು ಓದುತ್ತೇವೆ ಹಾಗೂ ಓದಿಸುತ್ತೇವೆಯೋ ಅಥವಾ
ಇಲ್ಲವೋ? ವಿದ್ಯೆಯ ಮೇಲೆ ಪೂರ್ಣ ಗಮನವನ್ನಿಡಬೇಕಾಗಿದೆ. ಕಲ್ಲು ಬುದ್ಧಿಯಾಗಿರುವ ಕಾರಣ ಏನೂ
ಅರ್ಥವಾಗುವುದಿಲ್ಲ. ನೀವು ಪಾರಸ ಬುದ್ಧಿಯವರಾಗಬೇಕು. ಯಾರು ಸರ್ವೀಸ್ ಮಾಡುತ್ತಿರುತ್ತಾರೆಯೋ ಅವರದೂ
ಆ ರೀತಿಯಾಗುತ್ತದೆ. ಬ್ಯಾಡ್ಜ್ನಿಂದಲೂ ಸಹ ಯಾರಿಗೇ ಬೇಕಾದರೂ ತಿಳಿಸಬಹುದು. ಬೇಹದ್ದಿನ ತಂದೆಯಿಂದ
ಬೇಹದ್ದಿನ ಆಸ್ತಿಯನ್ನು ಪಡೆಯಿರಿ. ಭಾರತವು ಸ್ವರ್ಗವಾಗಿತ್ತಲ್ಲವೆ, ಅದು ನೆನ್ನೆಯ ವಿಚಾರವಾಗಿದೆ.
5000 ವರ್ಷಗಳ ಮಾತೆಲ್ಲಿ, ಲಕ್ಷಾಂತರ ವರ್ಷಗಳ ಮಾತೆಲ್ಲಿ. ಎಷ್ಟೊಂದು ವ್ಯತ್ಯಾಸವಿದೆ. ನೀವು
ತಿಳಿಸಿದರೂ ಸಹ ಅವರಿಗೆ ಅರ್ಥವಾಗುವುದಿಲ್ಲ, ಸಂಪೂರ್ಣ ಕಲ್ಲು ಬುದ್ಧಿಯವರಾಗಿದ್ದಾರೆ. ಈ ಬ್ಯಾಡ್ಜ್
ಸಹ ನಿಮಗೆ ಒಂದು ಗೀತೆಯಾಗಿದೆ. ಇದರಲ್ಲಿಯೇ ಎಲ್ಲಾ ವಿದ್ಯೆಯಿದೆ. ಮನುಷ್ಯರಿಗಂತೂ ಭಕ್ತಿ ಮಾರ್ಗದ
ಗೀತೆಯೇ ನೆನಪಿರುತ್ತದೆ. ಈಗ ತಾವು ತಂದೆಯ ಮೂಲಕ ಯಾವ ಗೀತೆಯನ್ನು ಕೇಳುತ್ತೀರಿ? ಅದರಿಂದ ತಾವು 21
ಜನ್ಮಗಳಿಗಾಗಿ ಸದ್ಗತಿ ಪಡೆಯುತ್ತೀರಿ. ಪ್ರಾರಂಭದಲ್ಲಿ ನೀವೇ ಗೀತೆಯನ್ನು ಓದಿದಿರಿ, ತಾವೇ
ಪೂಜೆಯನ್ನು ಪ್ರಾರಂಭ ಮಾಡಿದಿರಿ, ಈಗ ತಾವೇ ಪುರುಷಾರ್ಥವನ್ನು ಮಾಡಿ ಬಡವರನ್ನು ಭಕ್ತಿ ಮಾರ್ಗದ
ಸರಪಳಿಯಿಂದ ಬಿಡಿಸಬೇಕಾಗಿದೆ. ಯಾರಿಗಾದರೂ ತಿಳಿಸುತ್ತಲೇ ಇರಿ ಅದರಿಂದ ಒಬ್ಬಿಬ್ಬರು
ಬರುತ್ತಿರುತ್ತಾರೆ. ಒಂದು ವೇಳೆ 5-6 ಜನ ಒಟ್ಟಿಗೆ ಬಂದರೆ ಪ್ರಯತ್ನ ಪಟ್ಟು ಬೇರೆ-ಬೇರೆ ಫಾರಂ
ತುಂಬಿಸಿ, ಬೇರೆ-ಬೇರೆ ತಿಳಿಸಬೇಕು. ಇಲ್ಲವಾದರೆ ಅವರಲ್ಲಿ ಒಬ್ಬರಾದರೂ ಅಂತಿಂತಹವರು ಇದ್ದರೆ
ಅನ್ಯರನ್ನೂ ಹಾಳು ಮಾಡುತ್ತಾರೆ. ಫಾರಂನ್ನು ಬೇರೆಯಾಗಿಯೇ ತುಂಬಿಸಬೇಕು. ಒಬ್ಬರು ಇನ್ನೊಬ್ಬರದನ್ನು
ನೋಡಬಾರದು ಆಗ ಅರ್ಥ ಮಾಡಿಕೊಳ್ಳಬಹುದು. ಈ ಎಲ್ಲಾ ಯುಕ್ತಿಗಳು ಇರಬೇಕು. ಆಗ ತಾವು ಸಫಲರಾಗುತ್ತಾ
ಹೋಗುತ್ತೀರಿ. ತಂದೆಯೂ ಸಹ ವ್ಯಾಪಾರಿಯಾಗಿದ್ದಾರೆ. ಯಾರು ಬುದ್ಧಿವಂತರಾಗಿರುತ್ತಾರೆಯೋ ಅವರು
ಚೆನ್ನಾಗಿ ವ್ಯಾಪಾರ ಮಾಡುತ್ತಾರೆ. ತಂದೆಯು ಎಷ್ಟು ಲಾಭದಲ್ಲಿ ಕರೆದೊಯ್ಯುತ್ತಾರೆ. ಗುಂಪಾಗಿ ಬಂದರೆ
ಫಾರಂ ಬೇರೆ-ಬೇರೆ ತುಂಬಿಸಿ ಎಂದು ಹೇಳಬೇಕು. ಒಂದು ವೇಳೆ ಎಲ್ಲರೂ ಧಾರ್ಮಿಕ ಮನೋಭಾವ ಉಳ್ಳವರಾದರೆ
ಒಟ್ಟಾಗಿ ಕೂರಿಸಿ ಕೇಳಬೇಕು - ಗೀತೆಯನ್ನು ಓದಿದ್ದೀರಾ? ದೇವತೆಗಳನ್ನು ಒಪ್ಪುತ್ತೀರಾ? ಭಕ್ತರಿಗೇ
ಹೇಳಬೇಕೆಂದು ತಂದೆಯು ಹೇಳಿದ್ದಾರೆ. ನನ್ನ ಭಕ್ತರು ಹಾಗೂ ದೇವತೆಗಳ ಭಕ್ತರು ಬೇಗ
ತಿಳಿದುಕೊಳ್ಳುತ್ತಾರೆ. ಕಲ್ಲನ್ನು ಚಿನ್ನವನ್ನಾಗಿ ಮಾಡುವುದು ಚಿಕ್ಕಮ್ಮನ ಮನೆಯಂತಲ್ಲ.
ದೇಹಾಭಿಮಾನವು ಬಹಳ ಕಠಿಣವಾದ, ಬಹಳ ಕೊಳಕಾದ ರೋಗವಾಗಿದೆ. ಎಲ್ಲಿಯ ತನಕ ದೇಹಾಭಿಮಾನವು
ಹೋಗುವುದಿಲ್ಲವೋ ಅಲ್ಲಿಯ ತನಕ ಸುಧಾರಣೆಯಾಗುವುದು ಬಹಳ ಕಷ್ಟವಾಗಿದೆ. ಇದರಲ್ಲಿ ಪೂರ್ಣ ನಾರಾಯಣೀ
ನಶೆಯಿರಬೇಕು. ನಾವು ಅಶರೀರಿಗಳಾಗಿ ಬಂದೆವು, ಅಶರೀರಿಯಾಗಿ ಹೋಗಬೇಕು. ಇಲ್ಲಿ ಏನನ್ನು ಇಟ್ಟಿದ್ದೀರಿ?
ನನ್ನನ್ನೇ ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಇದರಲ್ಲಿಯೇ ಪರಿಶ್ರಮವಿದೆ, ಗುರಿಯು ಬಹಳ
ದೊಡ್ಡದಾಗಿದೆ. ಇವರು ಕಲ್ಪದ ಮೊದಲಿನಂತೆ ಒಳ್ಳೆಯ ಸಹಯೋಗಿಗಳಾಗುತ್ತಾರೆಂದು ನಡುವಳಿಕೆಯಿಂದಲೇ
ತಿಳಿಯುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾರವರ ನೆನಪು-ಪ್ರೀತಿ
ಹಾಗೂ ಗುಡ್ಮಾರ್ನಿಂಗ್. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
೧. ಮನಸ್ಸಾ-ವಾಚಾ-ಕರ್ಮಣಾ
ಪವಿತ್ರರಾಗಿರಬೇಕಾಗಿದೆ. ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮವಾಗಬಾರದು - ಇದರ ಸಂಭಾಲನೆ ಮಾಡಬೇಕು.
ಆತ್ಮವನ್ನು ಕಂಚನವನ್ನಾಗಿ ಮಾಡಲು ಅವಶ್ಯವಾಗಿ ನೆನಪಿನಲ್ಲಿರಬೇಕಾಗಿದೆ.
೨. ದೇಹಾಭಿಮಾನದ ಕಠಿಣ ರೋಗದಿಂದ ಮುಕ್ತರಾಗಲು ನಾರಾಯಣಿ ನಶೆಯಲ್ಲಿರಬೇಕಾಗಿದೆ. ನಾವು ಅಶರೀರಿಗಳಾಗಿ
ಬಂದೆವು, ಈಗ ಅಶರೀರಿಗಳಾಗಿ ಹಿಂತಿರುಗಿ ಹೋಗಬೇಕಾಗಿದೆ ಎಂಬ ಅಭ್ಯಾಸವನ್ನು ಮಾಡಬೇಕಾಗಿದೆ.
ವರದಾನ:
ಬುದ್ಧಿವಂತರಲ್ಲಿ
ಬುದ್ಧಿವಾನ್ ತಂದೆಯ ಜೊತೆ ಚತುರತೆ ತೋರಿಸುವ ಬದಲು ಅನುಭೂತಿಯ ಶಕ್ತಿಯ ಮುಖಾಂತರ ಸರ್ವ ಪಾಪಗಳಿಂದ
ಮುಕ್ತ ಭವ.
ಕೆಲವು ಮಕ್ಕಳು
ಬುದ್ಧಿವಂತರಲ್ಲಿ ಬುದ್ಧಿವಾನ್ ತಂದೆಯ ಜೊತೆ ಸಹಾ ಚತುರತೆ ತೋರಿಸುತ್ತಾರೆ - ತಮ್ಮ ಕೆಲಸ ಸಿದ್ಧ
ಮಾಡುವುದಕ್ಕಾಗಿ ತಮ್ಮ ಹೆಸರು ಒಳ್ಳೆಯವರೆಂದು ತೋರಿಸಿಕೊಳ್ಳಲು ಆ ಸಮಯದಲ್ಲಿ ಗೊತ್ತಾದ ಹಾಗೆ
ಇರುತ್ತಾರೆ. ಆದರೆ ಆ ಅನುಭೂತಿಯಲ್ಲಿ ಶಕ್ತಿ ಇರುವುದಿಲ್ಲ, ಆ ಕಾರಣ ಪರಿವರ್ತನೆಯಾಗುವುದಿಲ್ಲ.
ಕೆಲವರಿರುತ್ತಾರೆ ಅವರ ತಿಳಿಯುತ್ತಾರೆ ಇದು ಸರಿಯಿಲ್ಲ. ಆದರೆ ಯೋಚಿಸುತ್ತಾರೆ ನನ್ನ ಹೆಸರು ಎಲ್ಲೂ
ಕೆಟ್ಟು ಹೋಗಬಾರದು ಎಂದು, ಆ ಕಾರಣ ತಮ್ಮ ವಿವೇಕವನ್ನು ಖೂನಿ ಮಾಡುತ್ತಾರೆ, ಇದೂ ಸಹಾ ಪಾಪದ
ಖಾತೆಯಲ್ಲಿ ಜಮಾ ಆಗುವುದು ಆದ್ದರಿಂದ ಚತುರತೆಯನ್ನು ಬಿಟ್ಟು ಸತ್ಯ ಹೃದಯದಿಂದ ಅವಲೋಕಿಸುವುದರಿಂದ
ಸ್ವಯಂ ಅನ್ನು ಪರಿವರ್ತನೆ ಮಾಡಿಕೊಂಡು ಪಾಪದಿಂದ ಮುಕ್ತರಾಗಿ.
ಸ್ಲೋಗನ್:
ಜೀವನದಲ್ಲಿರುತ್ತ ಭಿನ್ನ-ಭಿನ್ನ ಬಂಧನಗಳಿಂದ ಮುಕ್ತರಾಗಿರುವುದೇ ಜೀವನ್ ಮುಕ್ತ ಸ್ಥಿತಿಯಾಗಿದೆ.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ
ಫರಿಶ್ಥಾ ಜೀವನ, ಬಂಧನ ಮುಕ್ತ ಜೀವನವಾಗಿದೆ. ಭಲೇ ಸೇವೆಯ ಬಂಧನವಿದೆ, ಆದರೆ ಇಷ್ಟು
ತೀವ್ರಗತಿಯಲ್ಲಿರುತ್ತಾರೆ, ಅವರು ಎಷ್ಟೇ ಮಾಡಲಿ, ಅಷ್ಟು ಮಾಡುತ್ತಿದ್ದರೂ ಸದಾ ಫ್ರೀಯಾಗಿರುತ್ತಾರೆ.
ಎಷ್ಟು ಪ್ರೀತಿಯೋ ಅಷ್ಟೇ ಭಿನ್ನತೆ. ಸದಾ ಸ್ವತಂತ್ರತೆಯ ಸ್ಥಿತಿಯ ಅನುಭವವಾಗಬೇಕು, ಏಕೆಂದರೆ ಶರೀರ
ಮತ್ತು ಕರ್ಮಕ್ಕೆ ಅಧೀನರಾಗಿಲ್ಲ.