23.03.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ಜ್ಞಾನವು ಸಂಪೂರ್ಣ ಶಾಂತಿಯದಾಗಿದೆ, ಇದರಲ್ಲಿ ಏನನ್ನೂ ಮಾತನಾಡುವಂತಿಲ್ಲ ಕೇವಲ ಶಾಂತಿಯ ಸಾಗರ ತಂದೆಯನ್ನು ನೆನಪು ಮಾಡುತ್ತಾ ಇರಿ.”

ಪ್ರಶ್ನೆ:
ಉನ್ನತಿಗೆ ಆಧಾರವೇನಾಗಿದೆ? ತಂದೆಯ ಶಿಕ್ಷಣಗಳನ್ನು ಯಾವಾಗ ಧಾರಣೆ ಮಾಡಲು ಸಾಧ್ಯ?

ಉತ್ತರ:
ಉನ್ನತಿಗೆ ಆಧಾರ ಪ್ರೀತಿಯಾಗಿದೆ, ಒಬ್ಬ ತಂದೆಯೊಂದಿಗೆ ಸತ್ಯ ಪ್ರೀತಿಯನ್ನಿಡಬೇಕು. ಸಮೀಪದಲ್ಲಿದ್ದರೂ ಒಂದು ವೇಳೆ ಉನ್ನತಿಯಾಗಲಿಲ್ಲವೆಂದರೆ ಅವಶ್ಯವಾಗಿ ಪ್ರೀತಿಯು ಕಡಿಮೆಯಿದೆ ಎಂದರ್ಥ. ಪ್ರೀತಿಯಿದ್ದರೆ ತಂದೆಯನ್ನು ನೆನಪು ಮಾಡಿ. ನೆನಪು ಮಾಡುವುದರಿಂದ ಎಲ್ಲಾ ಶಿಕ್ಷಣಗಳನ್ನು ಧಾರಣೆ ಮಾಡಬಹುದು. ಉನ್ನತಿಗಾಗಿ ತಮ್ಮ ಸತ್ಯ-ಸತ್ಯವಾದ ಚಾರ್ಟನ್ನು ಬರೆಯಿರಿ. ತಂದೆಯಿಂದ ಯಾವುದೇ ಮಾತನ್ನು ಮುಚ್ಚಿಡಬಾರದು. ಆತ್ಮಾಭಿಮಾನಿಯಾಗುತ್ತಾ ಸ್ವಯಂನ್ನು ಸುಧಾರಣೆ ಮಾಡಿಕೊಳ್ಳುತ್ತಾ ಇರಿ.

ಓಂ ಶಾಂತಿ.
ಮಕ್ಕಳು ತಮ್ಮನ್ನು ಆತ್ಮನೆಂದು ತಿಳಿದು ಕುಳಿತುಕೊಳ್ಳಿ ಮತ್ತು ತಂದೆಯನ್ನು ನೆನಪು ಮಾಡಿ. ತಂದೆಯು ಕೇಳುತ್ತಾರೆ - ಯಾವಾಗಲೇ ಯಾವುದೇ ಸಭೆಯಲ್ಲಿ ಭಾಷಣ ಮಾಡುತ್ತೀರೆಂದರೆ ಪದೇ-ಪದೇ ಇದನ್ನು ಕೇಳುತ್ತೀರಿ - ನೀವು ತಮ್ಮನ್ನು ಆತ್ಮನೆಂದು ತಿಳಿಯುತ್ತೀರೋ ಅಥವಾ ದೇಹವೋ? ತಮ್ಮನ್ನು ಆತ್ಮನೆಂದು ತಿಳಿದು ಇಲ್ಲಿ ಕುಳಿತುಕೊಳ್ಳಿ. ಆತ್ಮವೇ ಪುನರ್ಜನ್ಮದಲ್ಲಿ ಬರುತ್ತದೆ. ತಮ್ಮನ್ನು ಆತ್ಮನೆಂದು ತಿಳಿದು ಪರಮಪಿತ ಪರಮಾತ್ಮನನ್ನು ನೆನಪು ಮಾಡಿ. ತಂದೆಯನ್ನು ನೆನಪು ಮಾಡುವುದರಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಇದಕ್ಕೆ ಯೋಗಾಗ್ನಿಯನ್ನಲಾಗುತ್ತದೆ. ನಿರಾಕಾರಿ ತಂದೆಯೇ ನಿರಾಕಾರಿ ಮಕ್ಕಳಿಗೆ ಹೇಳುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ ಮತ್ತು ಪಾವನರಾಗಿ ಬಿಡುತ್ತೀರಿ. ಮತ್ತೆ ನೀವು ಮುಕ್ತಿ-ಜೀವನ್ಮುಕ್ತಿಯನ್ನು ಪಡೆಯುತ್ತೀರಿ. ಎಲ್ಲರೂ ಮುಕ್ತಿಯ ನಂತರ ಜೀವನ್ಮುಕ್ತಿಯಲ್ಲಿ ಅವಶ್ಯವಾಗಿ ಬರಬೇಕಾಗಿದೆ ಅಂದಮೇಲೆ ಪದೇ-ಪದೇ ಇದನ್ನು ಹೇಳಬೇಕಾಗುತ್ತದೆ - ತಮ್ಮನ್ನು ಆತ್ಮನಿಶ್ಚಯ ಮಾಡಿಕೊಂಡು ಕುಳಿತುಕೊಳ್ಳಿ. ಸಹೋದರ-ಸಹೋದರಿಯರೇ, ತಮ್ಮನ್ನು ಆತ್ಮನೆಂದು ತಿಳಿದು ಕುಳಿತುಕೊಳ್ಳಿ ಮತ್ತು ತಂದೆಯನ್ನು ನೆನಪು ಮಾಡಿ. ತಂದೆಯೇ ಈ ಆದೇಶ ನೀಡಿದ್ದಾರೆ - ಇದು ನೆನಪಿನ ಯಾತ್ರೆಯಾಗಿದೆ. ತಂದೆಯು ತಿಳಿಸುತ್ತಾರೆ - ನನ್ನ ಜೊತೆ ಬುದ್ಧಿಯೋಗವನ್ನಿಡಿ. ಆಗ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗಿ ಬಿಡುತ್ತದೆ. ಇದನ್ನು ನೀವು ಪದೇ-ಪದೇ ನೆನಪಿಗೆ ತರಿಸುತ್ತೀರಿ. ತಿಳಿಸುತ್ತೀರೆಂದರೆ ಆಗ ಆತ್ಮ ಅವಿನಾಶಿ, ದೇಹ ವಿನಾಶಿಯಾಗಿದೆ ಎಂಬುದ್ನನು ತಿಳಿಯುತ್ತಾರೆ. ಅವಿನಾಶಿ ಆತ್ಮವೇ ವಿನಾಶಿ ದೇಹವನ್ನು ಧಾರಣೆ ಮಾಡಿ ಪಾತ್ರವನ್ನಭಿನಯಿಸಿ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಆತ್ಮದ ಸ್ವಧರ್ಮವಂತೂ ಶಾಂತಿಯಾಗಿದೆ. ಮನುಷ್ಯರು ತಮ್ಮ ಸ್ವಧರ್ಮವನ್ನೂ ಸಹ ತಿಳಿದುಕೊಂಡಿಲ್ಲ. ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಇದು ಮೂಲ ಮಾತಾಗಿದೆ - ಮೊಟ್ಟ ಮೊದಲು ನೀವು ಮಕ್ಕಳು ಇದೇ ಶ್ರಮ ಪಡಬೇಕು. ಬೇಹದ್ದಿನ ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ, ಇದರಲ್ಲಿ ಯಾವುದೇ ಶಾಸ್ತ್ರಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ನೀವು ಗೀತೆಯ ಉದಾಹರಣೆಯನ್ನು ಕೊಡುತ್ತೀರೆಂದರೂ ಸಹ ನೀವು ಕೇವಲ ಗೀತೆಯನ್ನೇಕೆ ತೆಗೆದುಕೊಳ್ಳುತ್ತೀರಿ, ವೇದಗಳ ಹೆಸರನ್ನೇಕೆ ತೆಗೆದುಕೊಳ್ಳುವುದಿಲ್ಲವೆಂದು ಕೇಳುತ್ತಾರೆ. ಆದ್ದರಿಂದ ತಂದೆಯು (ಬ್ರಹ್ಮಾ) ಹೇಳಿದರು - ಅವರನ್ನು ಕೇಳಿ, ವೇದವು ಯಾವ ಧರ್ಮದ ಶಾಸ್ತ್ರವಾಗಿದೆ? (ಆರ್ಯ ಧರ್ಮದ್ದೆಂದು ಹೇಳುತ್ತಾರೆ) ಆರ್ಯರೆಂದು ಯಾರಿಗೆ ಹೇಳುತ್ತಾರೆ? ಹಿಂದೂ ಧರ್ಮವಂತೂ ಅಲ್ಲ. ಆದಿ ಸನಾತನ ದೇವಿ-ದೇವತಾ ಧರ್ಮವೇ ಅಂದಮೇಲೆ ಆರ್ಯ ಯಾವ ಧರ್ಮವಾಗಿದೆ? ಆರ್ಯರಂತೂ ಆರ್ಯ ಸಮಾಜಿಗಳ ಧರ್ಮದವರಾಗಿರುವರು. ಆರ್ಯ ಧರ್ಮದ ಹೆಸರೇ ಇಲ್ಲ ಅಂದಮೇಲೆ ಆ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು? ವಾಸ್ತವದಲ್ಲಿ ನೀವು ಗೀತೆಯನ್ನೂ ಸಹ ತೆಗೆದುಕೊಳ್ಳಬಾರದು. ಮೊದಲ ಮಾತು - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುತ್ತೀರಿ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಮೊಟ್ಟ ಮೊದಲು ತಂದೆಯ ಪರಿಚಯವನ್ನೇ ಕೊಡಬೇಕು. ತಂದೆಯದೇ ಮಾಡುತ್ತಿರುತ್ತೀರೋ ಆಗಲೇ ಹೇಳಲು ಸಾಧ್ಯ. ಆದರೆ ಮಕ್ಕಳಲ್ಲಿ ಈ ಮಾತಿನ ಬಲಹೀನತೆಯಿದೆ. ತಂದೆಯು ಯಾವಾಗಲೂ ತಿಳಿಸುತ್ತಾರೆ - ಮಕ್ಕಳೇ, ನೆನಪಿನ ಯಾತ್ರೆಯ ಚಾರ್ಟನ್ನು ಇಡಿ. ಪ್ರತಿಯೊಬ್ಬರೂ ತಮ್ಮ ಹೃದಯದೊಂದಿಗೆ ಕೇಳಿಕೊಳ್ಳಿ - ಎಲ್ಲಿಯವರೆಗೆ ನೆನಪು ಮಾಡುತ್ತೇವೆ? ನೀವು ಮಕ್ಕಳ ಹೃದಯದಲ್ಲಿ ಅಪಾರ ಖುಷಿಯಿರಬೇಕು. ಯಾವಾಗ ನಿಮಗೆ ಅಂತರಾಳದ ಖುಷಿಯಿದ್ದಾಗ ಅನ್ಯರಿಗೂ ಸಹ ತಿಳಿಸಿದರೆ ಪ್ರಭಾವ ಬೀರುವುದು. ಮೊದಲ ಮೂಲ ಮಾತು ಇದನ್ನೇ ತಿಳಿಸಬೇಕು - ಸಹೋದರ-ಸಹೋದರಿಯರೇ, ತಮ್ಮನ್ನು ಆತ್ಮನೆಂದು ತಿಳಿಯಿರಿ. ಈ ರೀತಿ ಮತ್ತ್ಯಾವುದೇ ಸತ್ಸಂಗಗಳಲ್ಲಿ ಹೇಳುವುದಿಲ್ಲ. ವಾಸ್ತವದಲ್ಲಿ ಸತ್ಸಂಗ ಯಾವುದೂ ಇಲ್ಲ. ಸತ್ಯವಾದ ಸಂಗ ಒಂದೇ ಆಗಿದೆ ಉಳಿದೆಲ್ಲವೂ ಕೆಟ್ಟ ಸಂಗಗಳಾಗಿವೆ. ಇಲ್ಲಿ ಸಂಪೂರ್ಣ ಹೊಸ ಮಾತುಗಳಾಗಿವೆ. ವೇದಗಳಿಂದಂತೂ ಯಾವುದೇ ಧರ್ಮ ಸ್ಥಾಪನೆಯಾಗಲೇ ಇಲ್ಲ ಅಂದಮೇಲೆ ನಾವು ವೇದಗಳನ್ನು ಏಕೆ ತೆಗೆದುಕೊಳ್ಳಬೇಕು? ಯಾರಲ್ಲಿಯೂ ಜ್ಞಾನವಿಲ್ಲ. ತಾವೇ ನೇತಿ-ನೇತಿ ಅಂದರೆ ನಮಗೆ ಗೊತ್ತಿಲ್ಲವೆಂದು ಹೇಳುತ್ತಾರೆಂದರೆ ನಾಸ್ತಿಕರಾದರಲ್ಲವೆ! ಈಗ ಸ್ವಯಂ ತಂದೆಯೇ ಹೇಳುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ, ಆಸ್ತಿಕರಾಗಿ. ಈ ಕೆಲವು ಮಾತುಗಳು ಗೀತೆಯಲ್ಲಿವೆ, ವೇದಗಳಲ್ಲಿಲ್ಲ. ವೇದ-ಉಪನಿಷತ್ತುಗಳಂತೂ ಬಹಳ ಇವೆ. ಅದು ಯಾವ ಧರ್ಮದ ಶಾಸ್ತ್ರವಾಗಿದೆ. ಮನುಷ್ಯರಂತೂ ತಮ್ಮದೇ ಮಾತನಾಡುತ್ತಾರೆ ನೀವು ಯಾರದ್ದನ್ನೂ ಕೇಳಿಸಿಕೊಳ್ಳಬಾರದು. ತಂದೆಯಂತೂ ಸಹಜವಾಗಿ ತಿಳಿಸುತ್ತಾರೆ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ಪಾವನರಾಗಿ ಬಿಡುತ್ತೀರಿ. ಆದ್ದರಿಂದ ವಿಶ್ವದ ಇತಿಹಾಸ-ಭೂಗೋಳವನ್ನು ಅರಿತುಕೊಳ್ಳಬೇಕಾಗಿದೆ. ನಿಮ್ಮ ಈ ತ್ರಿಮೂರ್ತಿ ಮತ್ತು ಗೋಲದ ಚಿತ್ರಗಳು ಮುಖ್ಯವಾಗಿವೆ. ಇದರಲ್ಲಿ ಎಲ್ಲಾ ಧರ್ಮಗಳು ಬಂದು ಬಿಡುತ್ತವೆ. ಮೊಟ್ಟ ಮೊದಲು ದೇವಿ-ದೇವತಾ ಧರ್ಮವಾಗಿದೆ. ತಂದೆಯು ತಿಳಿಸಿದರು - ತ್ರಿಮೂರ್ತಿ ಮತ್ತು ಚಕ್ರದ ಚಿತ್ರಗಳನ್ನು ದೊಡ್ಡ-ದೊಡ್ಡದಾಗಿ ಮಾಡಿಸಿ. ದೆಹಲಿಯ ಮುಖ್ಯ ಸ್ಥಾನಗಳಲ್ಲಿ ಅಂದರೆ ಎಲ್ಲಿ ಹೆಚ್ಚಿನದಾಗಿ ಜನಸಂದಣಿ ಇರುತ್ತದೆಯೋ ಅಲ್ಲಿ ಹಾಕಿ ಟಿನ್ ಷೀಟ್ ನಲ್ಲಿ ಮಾಡಿಸಿ. ಏಣಿಯ ಚಿತ್ರದಲ್ಲಂತೂ ಅನ್ಯ ಧರ್ಮಗಳು ಬರುವುದಿಲ್ಲ. ಆದ್ದರಿಂದ ಈ ಎರಡು ಚಿತ್ರಗಳು ಮುಖ್ಯವಾಗಿದೆ. ಇವುಗಳ ಮೇಲೆ ತಿಳಿಸಬೇಕಾಗಿದೆ. ಮೊದಲು ತಂದೆಯ ಪರಿಚಯವಾಗಿದೆ, ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ಈ ನಿಶ್ಚಯ ಮಾಡಿಸದ ಹೊರತು ನಿಮ್ಮ ಜ್ಞಾನವನ್ನು ಯಾರೂ ತಿಳಿದುಕೊಳ್ಳಲು ಆಗುವುದಿಲ್ಲ. ಒಬ್ಬ ತಂದೆಯನ್ನೇ ಅರಿತುಕೊಂಡಲ್ಲವೆಂದರೆ ಅನ್ಯ ಚಿತ್ರಗಳನ್ನು ತೆಗೆದುಕೊಂಡು ಹೋಗುವುದೇ ವ್ಯರ್ಥವಾಗುತ್ತದೆ. ತಂದೆಯನ್ನು ಅರಿತುಕೊಳ್ಳದ ವಿನಃ ಮತ್ತೇನನ್ನೂ ಅರಿತುಕೊಳ್ಳುವುದಿಲ್ಲ. ತಂದೆಯ ಪರಿಚಯದ ಹೊರತು ಮತ್ತೇನನ್ನೂ ಮಾತನಾಡಬೇಡಿ. ತಂದೆಯಿಂದಲೇ ಬೇಹದ್ದಿನ ಆಸ್ತಿಯು ಸಿಗುತ್ತದೆ. ತಂದೆಗೆ ವಿಚಾರ ಬರುತ್ತದೆ, ಇಂತಹ ಸಹಜವಾದ ಮಾತನ್ನು ಏಕೆ ತಿಳಿದುಕೊಳ್ಳುವುದಿಲ್ಲ? ನೀವಾತ್ಮಗಳ ತಂದೆ ಶಿವನಾಗಿದ್ದಾರೆ. ಅವರಿಂದಲೇ ಆಸ್ತಿಯು ಸಿಗುತ್ತದೆ. ನೀವೆಲ್ಲರೂ ಪರಸ್ಪರ ಸಹೋದರರಾಗಿದ್ದೀರಿ. ಈ ಮಾತನ್ನು ಯಾವಾಗ ನೀವು ಮರೆಯುತ್ತೀರೋ ಆಗ ತಮೋಪ್ರಧಾನರಾಗಿ ಬಿಡುತ್ತೀರಿ. ಈಗ ತಂದೆಯನ್ನು ನೆನಪು ಮಾಡಿದರೆ ಸತೋಪ್ರಧಾನರಾಗುತ್ತೀರಿ. ಮೂಲ ಮಾತು ರಚಯಿತ ಮತ್ತು ರಚನೆಯನ್ನು ಅರಿತುಕೊಳ್ಳುವುದಾಗಿದೆ, ಆದರೆ ಯಾರೂ ಅರಿತುಕೊಳ್ಳುವುದಿಲ್ಲ. ಋಷಿ-ಮುನಿಗಳಿಗೂ ಸಹ ಗೊತ್ತಿರಲಿಲ್ಲ. ಆದ್ದರಿಂದ ಮೊದಲು ತಂದೆಯ ಪರಿಚಯವನ್ನು ಕೊಟ್ಟು ಎಲ್ಲರನ್ನೂ ಆಸ್ತಿಕರನ್ನಾಗಿ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ಅರಿತುಕೊಳ್ಳುವುದರಿಂದ ಎಲ್ಲವನ್ನೂ ಅರಿತುಕೊಳ್ಳುವಿರಿ. ನನ್ನನ್ನೇ ಅರಿತುಕೊಂಡಿಲ್ಲವೆಂದರೆ ಏನೂ ಅರಿಯುವುದಿಲ್ಲ. ತಮ್ಮ ಸಮಯವನ್ನು ಹಾಗೆಯೇ ವ್ಯರ್ಥ ಮಾಡುತ್ತೀರಿ. ಡ್ರಾಮಾನುಸಾರ ಯಾವ ಚಿತ್ರಗಳು ಆಗಿವೆಯೋ ಅವೇ ಸರಿಯಾಗಿದೆ. ಆದರೆ ನೀವು ಇಷ್ಟೊಂದು ಪರಿಶ್ರಮ ಪಟ್ಟರೂ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಮಕ್ಕಳು ತಿಳಿಸುತ್ತಾರೆ - ಬಾಬಾ, ನಾವು ತಿಳಿಸುವುದರಲ್ಲಿ ಏನಾದರೂ ತಪ್ಪಿದೆಯೇ? ತಂದೆಯು ತಕ್ಷಣ ತಿಳಿಸುತ್ತಾರೆ - ಹೌದು, ತಪ್ಪಿದೆ. ತಂದೆಯನ್ನೇ ಅರಿತುಕೊಳ್ಳದಿದ್ದರೆ ಅಲ್ಲಿಂದ ಹೊರಟು ಹೋಗಿ. ತಿಳಿಸಿ, ಎಲ್ಲಿಯವರೆಗೆ ತಂದೆಯನ್ನು ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳುವುದಿಲ್ಲ. ನೀವೂ ಸಹ ಯಾವಾಗ ದೇಹೀ-ಅಭಿಮಾನಿ ಸ್ಥಿತಿಯಲ್ಲಿರುವುದಿಲ್ಲವೋ ಆಗ ಕುದೃಷ್ಟಿಯಿರುತ್ತದೆ. ಯಾವಾಗ ತಮ್ಮನ್ನು ಆತ್ಮನೆಂದು ತಿಳಿಯುತ್ತೀರೋ ಆಗ ಆತ್ಮಿಕ ದೃಷ್ಟಿಯಾಗುತ್ತದೆ. ದೇಹೀ-ಅಭಿಮಾನಿಯಾಗಿದ್ದರೆ ಕಣ್ಣುಗಳು ನಿಮ್ಮನ್ನು ಮೋಸ ಮಾಡುವುದಿಲ್ಲ. ದೇಹೀ-ಅಭಿಮಾನಿಯಾಗಿರದಿದ್ದರೆ ಮಾಯೆಯು ಮೋಸ ಮಾಡುತ್ತಿರುತ್ತದೆ. ಆದ್ದರಿಂದ ಮೊದಲು ಆತ್ಮಾಭಿಮಾನಿಯಾಗಬೇಕಾಗಿದೆ. ತಮ್ಮ ಚಾರ್ಟನ್ನು ನೋಡಿಕೊಂಡಾಗ ತಿಳಿಯುತ್ತದೆ - ಒಂದು ವೇಳೆ ಇಲ್ಲಿಯವರೆಗೆ ಸುಳ್ಳು, ಪಾಪ, ಕೋಪವಿದ್ದರೆ ತಮ್ಮದೇ ಸತ್ಯನಾಶ ಮಾಡುತ್ತೀರಿ. ತಂದೆಯು ಚಾರ್ಟನ್ನು ನೋಡಿ ಇವರು ಸತ್ಯವಾಗಿ ಬರೆದಿದ್ದಾರೆಯೇ ಅಥವಾ ಅರ್ಥವನ್ನೇ ತಿಳಿದುಕೊಂಡಿಲ್ಲವೆ ಎಂದು ಅರಿತುಕೊಳ್ಳುತ್ತಾರೆ. ಎಲ್ಲಾ ಮಕ್ಕಳಿಗೆ ಚಾರ್ಟನ್ನು ಬರೆಯಿರಿ ಎಂದು ತಂದೆಯು ತಿಳಿಸುತ್ತಾರೆ. ಯಾವ ಮಕ್ಕಳು ಯೋಗದಲ್ಲಿರುವುದಿಲ್ಲವೋ ಅವರು ಸರ್ವೀಸ್ ಮಾಡಲು ಸಾಧ್ಯವಿಲ್ಲ. ಜ್ಞಾನದ ಕತ್ತಿಯಲ್ಲಿ ಹೊಳಪಿರುವುದಿಲ್ಲ. ಕೋಟಿಯಲ್ಲಿ ಕೆಲವರೇ ಬರುತ್ತಾರೆಂದು ಭಲೇ ಹೇಳುತ್ತಾರೆ ಆದರೆ ಎಲ್ಲಿಯವರೆಗೆ ನೀವು ಯೋಗದಲ್ಲಿರುವುದಿಲ್ಲವೋ ಅಲ್ಲಿಯವರೆಗೆ ಅನ್ಯರಿಗೆ ಹೇಗೆ ಹೇಳುತ್ತೀರಿ? ಸುಖವು ಕಾಗವಿಷ್ಟ ಸಮಾನವೆಂದು ಸನ್ಯಾಸಿಗಳು ಹೇಳುತ್ತಾರೆ. ಅವರು ಸುಖದ ಹೆಸರನ್ನೇ ತೆಗೆದುಕೊಳ್ಳುವುದಿಲ್ಲ. ನಿಮಗೆ ಗೊತ್ತಿದೆ, ಬಹಳ ಭಕ್ತಿಯಿದೆ ಅದರಲ್ಲಿ ಎಷ್ಟೊಂದು ಸದ್ದು ಗದ್ದಲವಿದೆ. ನಿಮ್ಮ ಜ್ಞಾನವು ಬಹಳ ಶಾಂತಿಯದ್ದಾಗಿದೆ. ಆದ್ದರಿಂದ ತಿಳಿಸಿ, ಶಾಂತಿಯ ಸಾಗರರಂತೂ ತಂದೆಯೇ ಆಗಿದ್ದಾರೆ. ಅಂದಾಗ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು. ತಂದೆಯು ಹೇಳುತ್ತಾರೆ - ಮನ್ಮನಾಭವ. ಈ ಶಬ್ಧವನ್ನೆಂದೂ ಹೇಳಬೇಡಿ. ಹಿಂದೂಸ್ಥಾನದ ಭಾಷೆಯು ಹಿಂದಿಯಾಗಿದೆ, ಅಂದಮೇಲೆ ಸಂಸ್ಕೃತ ಭಾಷೆಯೇಕೆ? ಈಗ ಇವೆಲ್ಲಾ ಭಾಷೆಯಗಳನ್ನು ಬಿಡಿ. ತಮ್ಮನ್ನು ಆತ್ಮನೆಂದು ತಿಳಿಯಿರಿ ಎಂದು ಭಾಷಣ ಮಾಡಿ. ಅನೇಕರು ತಮ್ಮನ್ನು ಆತ್ಮನೆಂದು ತಿಳಿಯುವುದಿಲ್ಲ, ನೆನಪೂ ಮಾಡುವುದಿಲ್ಲ, ತಮ್ಮ ನಷ್ಟವನ್ನು ಯಾರೂ ಅರಿತುಕೊಳ್ಳುವುದಿಲ್ಲ. ತಂದೆಯ ನೆನಪಿನಲ್ಲಿಯೇ ಕಲ್ಯಾಣವಿದೆ ಮತ್ತ್ಯಾವುದೇ ಸತ್ಸಂಗಗಳಲ್ಲಿ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂದು ಹೇಳುವುದಿಲ್ಲ. ಮಕ್ಕಳು ಎಂದಾದರೂ ತಮ್ಮ ತಂದೆಯನ್ನು ಒಂದು ಸ್ಥಳದಲ್ಲಿ ಕುಳಿತು ನೆನಪು ಮಾಡುತ್ತಾರೆಯೇ? ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯ ನೆನಪು ಇದ್ದೇ ಇರುತ್ತದೆ ಅಂದಾಗ ತಾವೂ ಸಹ ಆತ್ಮಾಭಿಮಾನಿಯಾಗುವ ಅಭ್ಯಾಸ ಮಾಡಬೇಕು. ನೀವು ಬಹಳ ಮಾತನಾಡುತ್ತೀರಿ, ಇಷ್ಟೊಂದು ಮಾತನಾಡಬಾರದು. ಮೂಲ ಮಾತು, ನೆನಪಿನ ಯಾತ್ರೆಯಾಗಿದೆ. ಯೋಗಾಗ್ನಿಯಿಂದಲೇ ನೀವು ಪಾವನರಾಗುತ್ತೀರಿ. ಈ ಸಮಯದಲ್ಲಿ ಎಲ್ಲರೂ ದುಃಖಿಯಾಗಿದ್ದಾರೆ. ಪಾವನರಾಗುವುದರಿಂದಲೇ ಸುಖ ಸಿಗುತ್ತದೆ. ನೀವು ಆತ್ಮಾಭಿಮಾನಿಯಾಗಿ ಯಾರಿಗೇ ತಿಳಿಸಿದರೂ ಸಹ ಅವರಿಗೆ ಬಾಣ ನಾಟುತ್ತದೆ. ಒಂದು ವೇಳೆ ಯಾರಾದರೂ ತಾವೇ ವಿಕಾರಿಯಾಗಿದ್ದು ಅನ್ಯರಿಗೆ ನಿರ್ವಿಕಾರಿಗಳಾಗಿ ಎಂದು ಹೇಳಿದರೆ ಅವರಿಗೆ ಬಾಣ ನಾಟುವುದೇ! ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ನೀವು ನೆನಪಿನ ಯಾತ್ರೆಯಲ್ಲಿರುವುದಿಲ್ಲ. ಆದ್ದರಿಂದಲೇ ಬಾಣವೂ ನಾಟುತ್ತಿಲ್ಲ. ತಂದೆಯು ಹೇಳುತ್ತಾರೆ - ಮಕ್ಕಳೇ, ಕಳೆದದ್ದು ಕಳೆದು ಹೋಯಿತು, ಮೊದಲು ತಮ್ಮನ್ನು ಸುಧಾರಣೆ ಮಾಡಿಕೊಳ್ಳಿ. ತಮ್ಮೊಂದಿಗೆ ಕೇಳಿಕೊಳ್ಳಿ - ನಾವು ನಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆ? ಯಾವ ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ? ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ನಾವು ಅವಶ್ಯವಾಗಿ ವಿಶ್ವದ ಮಾಲೀಕರಾಗಬೇಕು. ಆ ಒಬ್ಬ ಪ್ರಿಯತಮನೇ ಬಂದು ನಿಮ್ಮ ಸನ್ಮುಖದಲ್ಲಿ ನಿಂತಿದ್ದಾರೆಂದರೆ ಅವರ ಜೊತೆ ಬಹಳ ಪ್ರೀತಿಯಿರಬೇಕು. ಪ್ರೀತಿಯೆಂದರೆ. ನೆನಪು, ವಿವಾಹವಾದರೆ ಸ್ತ್ರೀಗೆ ಪತಿಯ ಜೊತೆ ಎಷ್ಟು ಪ್ರೀತಿಯಿರುತ್ತದೆ ಅಂದಮೇಲೆ ನಿಮಗೂ ನಿಶ್ಚಿತಾರ್ಥವಾಗಿದೆ ವಿವಾಹವಲ್ಲ. ಮೊದಲು ಶಿವ ತಂದೆಯ ಬಳಿ ಹೋಗುತ್ತೀರಿ ನಂತರ ಮಾವನ ಮನೆಯಾದ ವಿಷ್ಣು ಪುರಿಯಲ್ಲಿ ಹೋಗುತ್ತೀರಿ. ನಿಶ್ಚಿತಾರ್ಥದ ಖುಷಿಯು ಕಡಿಮೆಯಿರುತ್ತದೆಯೇ! ನಿಶ್ಚಿತಾರ್ಥವಾಯಿತೆಂದರೆ ನೆನಪು ಪಕ್ಕಾ ಆಯಿತು. ಸತ್ಯಯುಗದಲ್ಲಿಯೂ ಸಹ ನಿಶ್ಚಿತಾರ್ಥವಾಗುತ್ತದೆ, ಅಲ್ಲಿ ನಿಶ್ಚಿತಾರ್ಥವಾದ ಮೇಲೆ ಎಂದೂ ಅದು ಒಡೆಯುವುದಿಲ್ಲ, ಅಕಾಲ ಮೃತ್ಯುವಾಗುವುದಿಲ್ಲ. ಇಲ್ಲಂತೂ ಇವೆಲ್ಲವೂ ಆಗುತ್ತದೆ. ನೀವು ಮಕ್ಕಳು ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಬೇಕು. ಭಲೇ ಬಹಳ ಸಮೀಪದಲ್ಲಿಯೂ ಇರುತ್ತಾರೆ ಆದರೆ ಉನ್ನತಿಯಾಗುವುದಿಲ್ಲ. ಯಾರು ಆ ಪ್ರೀತಿಯಿಂದ ಬರುತ್ತಾರೆಯೋ ಅವರದು ಬಹಳ ಉನ್ನತಿಯಾಗುತ್ತದೆ. ನೆನಪೇ ಇಲ್ಲವೆಂದರೆ ಪ್ರೀತಿಯೂ ಇರುವುದಿಲ್ಲ ಅಂದಮೇಲೆ ಅವರ ಶಿಕ್ಷಣವನ್ನು ಧಾರಣೆ ಮಾಡಲು ಸಾಧ್ಯವಾಗುವುದಿಲ್ಲ. ಭಗವಾನುವಾಚ - ನೀವು ಮಕ್ಕಳು ಎಲ್ಲರಿಗೂ ಇದೇ ಸಂದೇಶ ಕೊಡಿ. ಕಾಮ ಮಹಾಶತ್ರುವಾಗಿದೆ. ಇದು ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ನೀವಂತೂ ಪವಿತ್ರ ಪ್ರಪಂಚದ, ಸತ್ಯಯುಗದ ಮಾಲೀಕರಾಗಿದ್ದಿರಿ, ಈಗ ನೀವು ಕೆಳಗೆ ಬಿದ್ದು ಕೊಳಕಾಗಿ ಬಿಟ್ಟಿದ್ದೀರಿ. ಈ ಅಂತಿಮ ಜನ್ಮದಲ್ಲಿ ಪುನಃ ಪವಿತ್ರರಾಗಿ. ಕಾಮ ಚಿತೆಯ ಮೇಲೆ ಕುಳಿತುಕೊಳ್ಳುವ ಕಂಕಣವನ್ನು ನಿಷೇಧಿಸಿ. ನೀವು ಮಕ್ಕಳು ಯಾವಾಗ ಯೋಗದಲ್ಲಿದ್ದು ಮಾತನಾಡುವಿರೋ ಆಗ ಅನ್ಯರ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಜ್ಞಾನದ ಕತ್ತಿಯಲ್ಲಿ ಯೋಗದ ಹರಿತವಿರಬೇಕು. ಮೊದಲ ಮುಖ್ಯ ಮಾತು ಒಂದಾಗಿದೆ - ಮಕ್ಕಳು ಹೇಳುತ್ತಾರೆ, ಬಾಬಾ ನಾವು ಬಹಳ ಶ್ರಮ ಪಡುತ್ತೇವೆ ಆದರೆ ಕೆಲವರೇ ವಿರಳವಾಗಿ ಬರುತ್ತಾರೆ. ಅದಕ್ಕೆ ತಂದೆಯು ಮಕ್ಕಳೇ, ಯೋಗದಲ್ಲಿದ್ದು ತಿಳಿಸಿ ಎಂದು ಹೇಳುತ್ತಾರೆ. ನೆನಪಿನ ಯಾತ್ರೆಯ ಪರಿಶ್ರಮ ಪಡಿ. ರಾವಣನಿಂದ ಸೋತು ವಿಕಾರಿಗಳಾಗಿದ್ದೀರಿ, ಈಗ ನಿರ್ವಿಕಾರಿಗಳಾಗಿ. ತಂದೆಯ ನೆನಪಿನಿಂದ ಎಲ್ಲರ ಮನೋಕಾಮನೆಗಳು ಪೂರ್ಣವಾಗುತ್ತದೆ. ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯು ಬಹಳಷ್ಟು ಸಲಹೆ ನೀಡುತ್ತಾರೆ. ಆದರೆ ಮಕ್ಕಳು ಅದನ್ನು ಸರಿಯಾದ ರೀತಿಯಲ್ಲಿ ಕ್ಯಾಚ್ ಮಾಡುವುದಿಲ್ಲ. ಬೇರೆ-ಬೇರೆ ಮಾತುಗಳಲ್ಲಿ ಹೊರಟು ಹೋಗುತ್ತಾರೆ. ಮುಖ್ಯವಾಗಿ ತಂದೆಯ ಸಂದೇಶ ಕೊಡಿ. ಆದರೆ ತಾವೇ ನೆನಪು ಮಾಡುವುದಿಲ್ಲವೆಂದರೆ ಅನ್ಯರಿಗೆ ಹೇಗೆ ಹೇಳುತ್ತೀರಿ? ಇಲ್ಲಿ ಸುಳ್ಳು ನಡೆಯುವುದಿಲ್ಲ. ವಿಕಾರದಲ್ಲಿ ಹೋಗಬಾರದು ಎಂದು ಅನ್ಯರಿಗೆ ಹೇಳಿ. ತಾವೇ ಹೋದರೆ ಅವಶ್ಯವಾಗಿ ಮನಸ್ಸು ತಿನ್ನುತ್ತದೆ. ಇಂತಹ ಮೋಸವೂ ಇದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮೂಲ ಮಾತು ತಂದೆಯ ಪರಿಚಯವಾಗಿದೆ. ತಂದೆಯನ್ನರಿತರೆ ನೀವು ಎಲ್ಲವನ್ನೂ ಅರಿಯುತ್ತೀರಿ. ತಂದೆಯನ್ನು ತಿಳಿಯದಿದ್ದರೆ ನೀವು ಮತ್ತೇನನ್ನೂ ತಿಳಿಸಲು ಸಾಧ್ಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಆಂತರಿಕವಾಗಿ ತಂದೆಯ ನೆನಪಿನ ಖುಷಿಯಲ್ಲಿದ್ದು ಅನ್ಯರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ, ಎಲ್ಲರಿಗೆ ಒಬ್ಬ ತಂದೆಯ ಪರಿಚಯವನ್ನು ತಿಳಿಸಬೇಕಾಗಿದೆ.

2. ಆತ್ಮಾಭಿಮಾನಿಯಾಗುವ ಬಹಳ ಅಭ್ಯಾಸ ಮಾಡಬೇಕು, ಹೆಚ್ಚಾಗಿ ಮಾತನಾಡಬಾರದು. ಕಳೆದದ್ದನ್ನು ಮರೆತು ಬಿಡಿ. ಮೊದಲು ಸ್ವಯಂನ್ನು ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ನೆನಪಿನ ಯಾತ್ರೆಯ ಸತ್ಯವಾದ ಚಾರ್ಟನ್ನು ಇಡಬೇಕಾಗಿದೆ.


ವರದಾನ:
ತಮ್ಮ ಸಂಕಲ್ಪಗಳನ್ನು ಶುದ್ಧ, ಜ್ಞಾನ ಸ್ವರೂಪ ಮತ್ತು ಶಕ್ತಿ ಸ್ವರೂಪ ಮಾಡಿಕೊಳ್ಳುವಂತಹ ಸಂಪೂರ್ಣ ಪವಿತ್ರ ಭವ.

ತಂದೆ ಸಮಾನ ಆಗಲು ಪವಿತ್ರತೆಯ ತಳಪಾಯವನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಿ. ತಳಪಾಯದಲ್ಲಿ ಬ್ರಹ್ಮಚರ್ಯವನ್ನು ಧಾರಣೆ ಮಾಡುವುದು ಇದಂತು ಸಾಮಾನ್ಯ ಮಾತಾಯಿತು, ಕೇವಲ ಇದರಲ್ಲಿಯೇ ಖುಶಿಯಾಗಬೇಡಿ. ದೃಷ್ಠಿ ವೃತ್ತಿಯ ಪವಿತ್ರತೆಗೆ ಇನ್ನೂ ಸಹಾ ಅಂಡರ್ಲೈನ್ ಮಾಡಿ ಜೊತೆ-ಜೊತೆಯಲ್ಲಿ ತಮ್ಮ ಸಂಕಲ್ಪಗಳನ್ನು ಶುದ್ಧ, ಜ್ಞಾನ ಸ್ವರೂಪ, ಶಕ್ತಿ ಸ್ವರೂಪ ಮಾಡಿಕೊಳ್ಳಿ. ಸಂಕಲ್ಪದಲ್ಲಿ ಇನ್ನೂ ಬಹಳ ಬಲಹೀನತೆ ಇದೆ. ಈ ಬಲಹೀನತೆಯನ್ನೂ ಸಹಾ ಸಮಾಪ್ತಿ ಮಾಡಿ ಆಗ ಹೇಳಲಾಗುವುದು ಸಂಪೂರ್ಣ ಪವಿತ್ರ ಆತ್ಮ.

ಸ್ಲೋಗನ್:
ದೃಷ್ಠಿಯಲ್ಲಿ ಎಲ್ಲರ ಪ್ರತಿ ದಯೆ ಮತ್ತು ಶುಭ ಭಾವನೆಯಿರಲಿ, ಆಗ ಅಭಿಮಾನ ಅಥವಾ ಅಪಮಾನದ ಅಂಶ ಸಹಾ ಬರಲು ಸಾಧ್ಯವಿಲ್ಲ.