16.05.19 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ -
ನಿಮ್ಮಲ್ಲಿ ಮೊಟ್ಟ ಮೊದಲು ನಿಶ್ಚಯವಿರಬೇಕು - ನಮಗೆ ಓದಿಸುವವವರು ಸ್ವಯಂ ಶಾಂತಿ ಸಾಗರ, ಸುಖದ
ಸಾಗರ ತಂದೆಯಾಗಿದ್ದಾರೆ. ಯಾವುದೇ ಮನುಷ್ಯರು ಯಾರಿಗೂ ಸಹ ಸುಖ-ಶಾಂತಿ ಕೊಡಲು ಸಾಧ್ಯವಿಲ್ಲ"
ಪ್ರಶ್ನೆ:
– ಅತೀ
ಶ್ರೇಷ್ಠವಾದ ಗುರಿ ಯಾವುದು? ಆ ಗುರಿಯನ್ನು ಪಡೆಯಲು ಪುರುಷಾರ್ಥವೇನಾಗಿದೆ?
ಉತ್ತರ:
ಒಬ್ಬ ತಂದೆಯ
ನೆನಪು ಪರಿಪಕ್ವವಾಗಿ ಬಿಡಲಿ, ಬುದ್ಧಿಯು ಮತ್ತ್ಯಾವುದೇ ಕಡೆಯಲ್ಲಿಯೂ ಹೋಗಬಾರದು - ಇದು ಶ್ರೇಷ್ಠ
ಗುರಿಯಾಗಿದೆ. ಇದಕ್ಕಾಗಿ ಆತ್ಮಾಭಿಮಾನಿಯಾಗುವ ಪುರುಷಾರ್ಥವನ್ನು ಮಾಡಬೇಕಾಗುತ್ತದೆ. ಯಾವಾಗ ನೀವು
ಆತ್ಮಾಭಿಮಾನಿ ಆಗಿ ಬಿಡುತ್ತೀರಿ, ಆಗ ಎಲ್ಲಾ ವಿಕಾರಿ ವಿಚಾರಗಳು ಸಮಾಪ್ತಿಯಾಗಿ ಬಿಡುತ್ತವೆ.
ಬುದ್ಧಿಯ ಅಲೆದಾಟವು ಬಂದ್ ಆಗಿ ಬಿಡುತ್ತದೆ. ದೇಹದ ಕಡೆಗೆ ದೃಷ್ಟಿಯು ಹೋಗುವುದೇ ಇಲ್ಲ, ಇದು
ಗುರಿಯಾಗಿದೆ, ಇದಕ್ಕಾಗಿ ಆತ್ಮಾಭಿಮಾನಿ ಭವ.
ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ಕುಳಿತು ತಿಳಿಸುತ್ತಾರೆ- ಇವರಿಗೆ( ಬ್ರಹ್ಮಾ ತಂದೆ)
ಆತ್ಮಿಕ ತಂದೆಯೆಂದು ಹೇಳುವುದಿಲ್ಲ. ಇಂದಿನ ದಿನವನ್ನು ಸದ್ಗುರುವಾರ ಎಂದು ಹೇಳಲಾಗುತ್ತದೆ,
ಗುರುವಾರ ಎಂದು ಹೇಳುವುದು ತಪ್ಪಾಗಿದೆ. ಸದ್ಗುರುವಾರ. ಗುರು ಜನರು ಬಹಳಷ್ಟಿದ್ದಾರೆ, ಸದ್ಗುರುವು
ಒಬ್ಬರೇ ಆಗಿದ್ದಾರೆ. ಅನೇಕರಿದ್ದಾರೆ, ಯಾರು ತಮ್ಮನ್ನು ಗುರುವೆಂದೂ ಹೇಳಿಕೊಳ್ಳುತ್ತಾರೆ,
ಸದ್ಗುರುವೆಂದು ಹೇಳಿಕೊಳ್ಳುತ್ತಾರೆ. ಈಗ ನೀವು ಮಕ್ಕಳು ತಿಳಿದಿದ್ದೀರಿ - ಗುರು ಮತ್ತು
ಸದ್ಗುರುವಿನಲ್ಲಂತು ಅಂತರವಿದೆ. ಸತ್ಯ ಅರ್ಥಾತ್ ಟ್ರೂಥ್. ಸತ್ಯ ಎಂದು ಒಬ್ಬರೇ ನಿರಾಕಾರ ತಂದೆಗೆ
ಹೇಳಲಾಗುತ್ತದೆ, ಮನುಷ್ಯರಿಗಲ್ಲ. ಸತ್ಯ ಜ್ಞಾನವಂತು ಒಂದೇ ಬಾರಿ ಜ್ಞಾನ ಸಾಗರ ತಂದೆಯೇ ಬಂದು
ಕೊಡುತ್ತಾರೆ. ಮನುಷ್ಯ, ಮನುಷ್ಯನಿಗೆಂದಿಗೂ ಸತ್ಯ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ.
ಸತ್ಯವಿರುವವರೇ ಒಬ್ಬ ನಿರಾಕಾರ ತಂದೆ. ಇವರ ಹೆಸರಂತು ಬ್ರಹ್ಮಾ ಎಂದು, ಇವರು ಯಾರಿಗೂ ಜ್ಞಾನವನ್ನು
ಕೊಡಲು ಸಾಧ್ಯವಿಲ್ಲ. ಬ್ರಹ್ಮಾರವರಲ್ಲಿ ಸ್ವಲ್ಪವೂ ಜ್ಞಾನವಿರಲೇ ಇಲ್ಲ. ಈಗಲೂ ಹೇಳುತ್ತಾರೆ-
ಇವರಲ್ಲಿ ಸಂಪೂರ್ಣ ಜ್ಞಾನವಂತು ಇಲ್ಲ. ಸಂಪೂರ್ಣ ಜ್ಞಾನವಂತು ಜ್ಞಾನಸಾಗರ ಪರಮಪಿತ ಪರಮಾತ್ಮನಲ್ಲಿಯೇ
ಇದೆ. ಈಗ ಅಂತಹ ಯಾವುದೇ ಮನುಷ್ಯನಿಲ್ಲ, ಯಾರು ತನ್ನನ್ನು ಸದ್ಗುರುವೆಂದು ಹೇಳಿಕೊಳ್ಳಲು
ಸಾಧ್ಯವಾಗುವುದು. ಸದ್ಗುರುವೆಂದರೆ ಸಂಪೂರ್ಣ ಸತ್ಯವಾಗಿರುವವರು. ನೀವು ಯಾವಾಗ ಸತ್ಯವಂತರಾಗಿ
ಬಿಡುತ್ತೀರಿ, ಆಗ ಈ ಶರೀರವಿರುವುದಿಲ್ಲ. ಮನುಷ್ಯರೆಂದಿಗೂ ಸದ್ಗುರುವೆಂದು ಹೇಳಲು ಸಾಧ್ಯವಿಲ್ಲ.
ಮನುಷ್ಯರಲ್ಲಂತು ನಯಾ ಪೈಸೆಯ ಶಕ್ತಿಯೂ ಇಲ್ಲ. ಇವರ ಸ್ವಯಂ ಹೇಳುತ್ತಾರೆ- ನಾನೂ ಸಹ ನಿಮ್ಮಂತೆಯೇ
ಮನುಷ್ಯನಾಗಿರುವೆನು, ಇದರಲ್ಲಿ ಶಕ್ತಿಯ ಮಾತೇ ಬರಲು ಸಾಧ್ಯವಿಲ್ಲ. ಇದನ್ನಂತು ತಂದೆಯು
ಓದಿಸುತ್ತಾರೆ, ಬ್ರಹ್ಮಾರವರಲ್ಲ. ಈ ಬ್ರಹ್ಮನೂ ಸಹ ಅವರಿಂದ ಓದಿ ನಂತರ ಓದಿಸುತ್ತಾರೆ. ನೀವು
ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುವವರೂ ಸಹ ಪರಮಪಿತ ಪರಮಾತ್ಮ ಸದ್ಗುರುವಿನಿಂದ
ಓದುತ್ತೀರಿ. ನಿಮಗೆ ಅವರಿಂದ ಶಕ್ತಿಯು ಸಿಗುತ್ತದೆ. ಶಕ್ತಿಯ ಅರ್ಥವು ಇದಲ್ಲ- ಯಾರನ್ನಾದರೂ ಈ ರೀತಿ
ಹೊಡೆಯಿರಿ, ಅದರಿಂದ ಅವರು ಬಿದ್ದು ಹೋಗಲಿ. ಅದಲ್ಲ. ಇದು ಆತ್ಮಿಕ ಶಕ್ತಿಯಾಗಿದೆ, ಅದು ಆತ್ಮಿಕ
ತಂದೆಯ ಮೂಲಕವೇ ಸಿಗುತ್ತದೆ. ನೆನಪಿನ ಬಲದಿಂದ ನೀವು ಶಾಂತಿಯನ್ನು ಪಡೆಯುತ್ತೀರಿ ಮತ್ತು
ವಿದ್ಯೆಯಿಂದ ನಿಮಗೆ ಸುಖವು ಸಿಗುತ್ತದೆ. ಹೇಗೆ ಅನ್ಯ ಶಿಕ್ಷಕಿಯರು ನಿಮಗೆ ಓದಿಸುತ್ತಾರೆ, ಹಾಗೆಯೇ
ತಂದೆಯೂ ಓದಿಸುತ್ತಾರೆ. ಇವರೂ (ಬ್ರಹ್ಮಾ) ಸಹ ಓದುತ್ತಾರೆ, ವಿದ್ಯಾರ್ಥಿಯಾಗಿದ್ದಾರೆ. ಯಾರೆಲ್ಲರೂ
ದೇಹಧಾರಿಯಾಗಿದ್ದಾರೆ, ಅವರೆಲ್ಲರೂ ವಿದ್ಯಾರ್ಥಿಯಾಗಿದ್ದಾರೆ. ತಂದೆಯವರಿಗಂತು ದೇಹವೇ ಇಲ್ಲ. ಓದುವ
ಸಮಯದಲ್ಲಿ ಯಾವಾಗಲೂ ಬ್ರಹ್ಮಚರ್ಯದಲ್ಲಿರುತ್ತಾರೆ. ಬ್ರಹ್ಮಚರ್ಯದಲ್ಲಿ ಓದುತ್ತಾ, ಯಾವಾಗ
ಸಂಪೂರ್ಣಗೊಳಿಸುತ್ತಾರೆ. ನಂತರದಲ್ಲಿ ವಿಕಾರದಲ್ಲಿ ಬೀಳುತ್ತಾರೆ. ಮನುಷ್ಯರಂತು ಮನುಷ್ಯರಂತೆಯೇ
ಕಾಣಿಸುತ್ತಾರೆ. ಹೇಳುತ್ತಾರೆ- ಇವರು ಇಂತಹ ವ್ಯಕ್ತಿಯಾಗಿದ್ದಾರೆ, ಇವರು ಎಲ್.ಎ.ಬಿ. ಇದ್ದಾರೆ,
ಇವರು ಇಂತಹ ಆಫೀಸರ್ ಆಗಿದ್ದಾರೆ. ವಿದ್ಯಾರ್ಹತೆಯಿಂದ ಬಿರುದು ಸಿಕ್ಕಿ ಬಿಡುತ್ತದೆ. ಮುಖವಂತು ಅದೇ
ಇರುತ್ತದೆ. ಆ ಶಾರೀರಿಕ ವಿದ್ಯೆಯನ್ನಂತು ನೀವು ತಿಳಿದಿದ್ದೀರಿ. ಸಾಧು-ಸಂತು ಮುಂತಾದವರು ಏನೆಲ್ಲಾ
ಶಾಸ್ತ್ರಗಳನ್ನು ಓದುತ್ತಾ, ಓದಿಸುತ್ತಾರೆ. ಅದರಲ್ಲೇನೂ ದೊಡ್ಡಸ್ಥಿಕೆಯಿಲ್ಲ, ಅದರಿಂದ ಯಾರಿಗೂ ಸಹ
ಶಾಂತಿಯಂತು ಸಿಗಲು ಸಾಧ್ಯವಿಲ್ಲ. ಸ್ವಯಂ ಸಹ ಶಾಂತಿಗಾಗಿ ಅಲೆದಾಡುತ್ತಿರುತ್ತಾರೆ.
ಕಾಡಿನಲ್ಲೇನಾದರೂ ಶಾಂತಿಯಿದ್ದರೆ, ಮತ್ತೆ ಹಿಂತಿರುಗಿ ಬರುವುದೇಕೆ! ಮುಕ್ತಿಯನ್ನಂತು ಯಾರೂ
ಪಡೆಯುವುದಿಲ್ಲ. ಯಾರೆಲ್ಲಾ ಒಳ್ಳೊಳ್ಳೆಯ ಹೆಸರುವಾಸಿಯಾಗಿರುವ ರಾಮಕೃಷ್ಣ ಪರಮಹಂಸ ಮುಂತಾದವರು
ಇದ್ದು ಹೋದರು, ಅವರೆಲ್ಲರೂ ಸಹ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗೇ
ಬಂದಿದ್ದಾರೆ. ಮುಕ್ತಿ-ಜೀವನ್ಮುಕ್ತಿಯನ್ನಂತು ಯಾರೂ ಪಡೆಯುವುದಿಲ್ಲ. ತಮೋಪ್ರಧಾನರಾಗಲೇಬೇಕು.
ನೋಡುವುದರಲ್ಲಂತು ಏನೂ ಕಾಣಿಸುವುದಿಲ್ಲ. ಯಾರೊಂದಿಗಾದರೂ ಕೇಳಿರಿ- ನಿಮಗೆ ಗುರುವಿನಿಂದ ಏನು
ಸಿಗುತ್ತದೆ? ಅದಕ್ಕೆ ಹೇಳುತ್ತಾರೆ- ಶಾಂತಿ ಸಿಗುತ್ತದೆ. ಆದರೆ ಸಿಗುವುದೇನೂ ಇಲ್ಲ. ಶಾಂತಿಯ
ಅರ್ಥವನ್ನೇ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳು ತಿಳಿದಿದ್ದೀರಿ- ತಂದೆಯು ಜ್ಞಾನದ
ಸಾಗರನಾಗಿದ್ದಾರೆ, ಮತ್ತ್ಯಾವುದೇ ಸಾಧು-ಸಂತು, ಗುರು ಮುಂತಾದವರು ಶಾಂತಿಯ ಸಾಗರನಾಗಲು
ಸಾಧ್ಯವಿಲ್ಲ. ಮನುಷ್ಯನು ಯಾರಿಗೂ ಸತ್ಯ ಶಾಂತಿಯನ್ನು ಕೊಡಲು ಸಾಧ್ಯವಿಲ್ಲ. ನೀವು ಮಕ್ಕಳು ಮೊಟ್ಟ
ಮೊದಲು ನಿಶ್ಚಯ ಮಾಡಿಕೊಳ್ಳಬೇಕು- ಶಾಂತಿಯ ಸಾಗರನು ಒಬ್ಬ ತಂದೆಯಾಗಿದ್ದಾರೆ, ಅವರು ನಮಗೆ
ಓದಿಸುತ್ತಾರೆ. ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಅದನ್ನೂ ತಂದೆಯೇ ತಿಳಿಸುತ್ತಾರೆ. ಮನುಷ್ಯರು,
ಮನುಷ್ಯರಿಗೆಂದಿಗೂ ಸುಖ-ಶಾಂತಿಯನ್ನು ಕೊಡಲು ಸಾಧ್ಯವಿಲ್ಲ. ಇದು (ಬ್ರಹ್ಮಾ) ಅವರ ರಥವಾಗಿದೆ.
ನಿಮ್ಮಂತೆಯೇ ವಿದ್ಯಾರ್ಥಿಯಿದ್ದಾರೆ. ಇವರೂ ಗೃಹಸ್ಥ ವ್ಯವಹಾರದಲ್ಲಿರುವವರಿದ್ದರು. ಕೇವಲ ತಂದೆಗೆ
ತನ್ನ ರಥವನ್ನು ಲೋನ್ನಲ್ಲಿ ಕೊಟ್ಟಿದ್ದಾರೆ, ಅದೂ ವಾನಪ್ರಸ್ಥ ಅವಸ್ಥೆಯಲ್ಲಿ. ನಿಮಗೆ ತಿಳಿಸುವವರು
ಒಬ್ಬ ತಂದೆಯಾಗಿದ್ದಾರೆ, ಆ ತಂದೆಯು ಹೇಳುತ್ತಾರೆ- ಎಲ್ಲರೂ ನಿರ್ವಿಕಾರಿ ಆಗಬೇಕಾಗಿದೆ. ಯಾರು
ಸ್ವಯಂ ಆಗಲು ಸಾಧ್ಯವಿಲ್ಲ, ಆಗ ಮತ್ತೆ ಅನೇಕ ಪ್ರಕಾರದ ಮಾತುಗಳನ್ನಾಡುತ್ತಾರೆ, ನಿಂದನೆಗಳನ್ನೂ
ಕೊಡುತ್ತಾರೆ. ತಿಳಿಯುತ್ತಾರೆ- ನಮ್ಮ ಜನ್ಮ-ಜನ್ಮಾಂತರದ ಭೋಜನವನ್ನು ತಂದೆಯ ಆಸ್ತಿಯಲ್ಲಿ ಸಿಕ್ಕಿದೆ,
ಅವರು ಮುಕ್ತಗೊಳಿಸುತ್ತಾರೆ. ಈಗ ಮುಕ್ತಗೊಳಿಸುತ್ತಾರೆಂದರೆ ಅವರು ಬೇಹದ್ದಿನ ತಂದೆಯಾದರಲ್ಲವೆ.
ಇವರನ್ನೂ ಅವರು ಮುಕ್ತಗೊಳಿಸಿದರು. ಮಕ್ಕಳನ್ನೂ ಮುಕ್ತಗೊಳಿಸುವ ಪ್ರಯತ್ನ ಪಟ್ಟರು, ಯಾರು ಹೊರ ಬರಲು
ಸಾಧ್ಯವೋ ಅವರನ್ನು ಹೊರ ತಂದರು. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ- ನಮಗೆ ಓದಿಸುವವರು ಯಾವುದೇ
ಮನುಷ್ಯನಲ್ಲ. ಸರ್ವಶಕ್ತಿವಂತ, ಒಬ್ಬರೇ ನಿರಾಕಾರ ತಂದೆಗೆ ಹೇಳಲಾಗುತ್ತದೆ, ಮತ್ತ್ಯಾರಿಗೂ
ಹೇಳಲಾಗುವುದಿಲ್ಲ. ಅವರೇ ನಿಮಗೆ ಜ್ಞಾನವನ್ನು ಕೊಡುತ್ತಿದ್ದಾರೆ. ತಂದೆಯೇ ನಿಮಗೆ ತಿಳಿಸುತ್ತಾರೆ.
ಈ ವಿಕಾರವೇ ಎಲ್ಲರಿಗಿಂತಲೂ ತಮ್ಮ ದೊಡ್ಡ ಶತ್ರುವಾಗಿದ್ದಾನೆ, ಇದನ್ನು ಬಿಟ್ಟು ಬಿಡಿ. ನಂತರ ಯಾರು
ಅದನ್ನು ಬಿಡಲು ಸಾಧ್ಯವಿಲ್ಲವೋ, ಅವರೆಷ್ಟು ಜಗಳ ಮಾಡುತ್ತಾರೆ. ಮಾತೆಯರೂ ಸಹ ಕೆಲ ಕೆಲವರು ಇಂತಹವರು
ಬರುತ್ತಾರೆ, ಅವರು ವಿಕಾರಕ್ಕಾಗಿ ದೊಡ್ಡ ಗಲಾಟೆಯನ್ನೇ ಮಾಡುತ್ತಾರೆ. ಈಗ ನೀವು
ಸಂಗಮಯುಗದಲ್ಲಿದ್ದೀರಿ. ಇದನ್ನು ಯಾರೂ ತಿಳಿದಿಲ್ಲ- ಇದು ಪುರುಷೋತ್ತಮ ಸಂಗಮಯುಗವಾಗಿದೆ. ತಂದೆಯು
ಎಷ್ಟೊಂದು ಚೆನ್ನಾಗಿ ತಿಳಿಸುತ್ತಾರೆ. ಅನೇಕರಿದ್ದಾರೆ, ಅವರಿಗೆ ಪೂರ್ಣ ನಿಶ್ಚಯವೂ ಇದೆ. ಕೆಲವರಿಗೆ
ಸೆಮಿ ನಿಶ್ಚಯವಿದೆ, ಕೆಲವರಿಗೆ 100%, ಕೆಲವರಿಗೆ 10% ಇದೆ. ಈಗ ಭಗವಂತನ ಶ್ರೀಮತವಿದೆ- ಮಕ್ಕಳೇ,
ನನ್ನನ್ನು ನೆನಪು ಮಾಡಿರಿ. ಇದಿರುವುದೇ ತಂದೆಯ ದೊಡ್ಡ ಆದೇಶ. ನಿಶ್ಚಯವಿದೆ, ಆದ್ದರಿಂದಲೇ ಅವರ
ಆದೇಶದನುಸಾರವಾಗಿ ನಡೆದರಲ್ಲವೆ. ತಂದೆಯು ಹೇಳುತ್ತಾರೆ- ನನ್ನ ಮಧುರ ಮಕ್ಕಳೇ, ನೀವು ತಮ್ಮನ್ನು
ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ. ಇವರನ್ನು ನೆನಪು ಮಾಡದಿರಿ, ನಾನು ಹೇಳುವುದಿಲ್ಲ,
ತಂದೆಯು ನನ್ನ ಮೂಲಕ ನಿಮಗೆ ಹೇಳುತ್ತಾರೆ. ಹೇಗೆ ನೀವು ಮಕ್ಕಳು ಓದುತ್ತೀರಿ, ಅದೇ ರೀತಿ ಇವರೂ
ಓದುತ್ತಾರೆ, ಎಲ್ಲರೂ ವಿದ್ಯಾರ್ಥಿಯಾಗಿದ್ದಾರೆ. ಓದಿಸುವವರು ಒಬ್ಬ ಶಿಕ್ಷಕನಾಗಿದ್ದಾರೆ.
ಅದೆಲ್ಲವನ್ನೂ ಮನುಷ್ಯರು ಓದಿಸುತ್ತಾರೆ, ಇಲ್ಲಿ ನಿಮಗೆ ಈಶ್ವರನೇ ಓದಿಸುತ್ತಾರೆ. ನೀವು ಆತ್ಮರು
ಓದುತ್ತೀರಿ. ನಿಮ್ಮ ಆತ್ಮವು ನಂತರದಲ್ಲಿ ಓದಿಸುತ್ತದೆ. ಇದರಲ್ಲಿ ಬಹಳ ಆತ್ಮಾಭಿಮಾನಿ ಆಗಬೇಕು.
ಬ್ಯಾರಿಸ್ಟರ್, ಇಂಜಿನಿಯರ್ ಆತ್ಮವೇ ಆಗುತ್ತದೆ. ಆತ್ಮನಿಗೆ ಈಗ ದೇಹ-ಅಭಿಮಾನವು ಬಂದು ಬಿಟ್ಟಿದೆ.
ಆತ್ಮ-ಅಭಿಮಾನಕ್ಕೆ ಬದಲು ದೇಹ-ಅಭಿಮಾನಿ ಆಗಿ ಬಿಟ್ಟಿದೆ. ಯಾವಾಗ ಆತ್ಮಾಭಿಮಾನಿ ಆಗುತ್ತದೆಯೋ, ಆಗ
ವಿಕಾರಿಯೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಅವರಿಗೆಂದಿಗೂ ವಿಕಾರಿ ವಿಚಾರಗಳೂ ಬರಲು ಸಾಧ್ಯವಿಲ್ಲ.
ದೇಹ-ಅಭಿಮಾನದಿಂದಲೇ ವಿಕಾರಿ ವಿಚಾರಗಳು ಬರುತ್ತವೆ. ನಂತರ ವಿಕಾರಿ ದೃಷ್ಟಿಯಿಂದಲೇ ನೋಡುತ್ತಾರೆ.
ದೇವತೆಗಳಲ್ಲಿ ವಿಕಾರಿ ದೃಷ್ಟಿ ಎಂದಿಗೂ ಬರಲು ಸಾಧ್ಯವಿಲ್ಲ. ಜ್ಞಾನದಿಂದ ನಂತರ ದೃಷ್ಟಿ ಪರಿವರ್ತನೆ
ಆಗಿ ಬಿಡುತ್ತದೆ. ಸತ್ಯಯುಗದಲ್ಲಿ ಇಂತಹ ಪ್ರೀತಿ ಮಾಡುತ್ತಾರೆಯೇ, ನೃತ್ಯ ಮಾಡುತ್ತಾರೆಯೇ! ಅಲ್ಲಿ
ಪ್ರೀತಿ ಮಾಡುವರು ಆದರೆ ವಿಕಾರದ ದುರ್ಗಂಧವಿರುವುದಿಲ್ಲ. ಜನ್ಮ-ಜನ್ಮಾಂತರ ವಿಕಾರದಲ್ಲಿ ಹೋದರೆಂದರೆ,
ಆ ನಶೆಯು ಬಹಳ ಕಷ್ಟವಾಗಿ ಕಡಿಮೆಯಾಗಿದೆ. ತಂದೆಯು ನಿರ್ವಿಕಾರಿಯನ್ನಾಗಿ ಮಾಡುತ್ತಾರೆ, ಅದು ಕೆಲ
ಮಕ್ಕಳಿಗೆ ಬಹಳ ಕಷ್ಟವಾಗಿ ಬಿಡುತ್ತದೆ. ನಾವಂತು ಸಂಪೂರ್ಣ ನಿರ್ವಿಕಾರಿಯಾಗಲೇಬೇಕು, ನಾವು
ಒಂಟಿಯಾಗಿದ್ದೆವು, ಒಂಟಿಯಾಗಿ ಹೋಗಬೇಕಾಗಿದೆ. ಅವರಿನ್ನೇನಾದರೂ ಸ್ವಲ್ಪ ಟಚ್ ಮಾಡಿದರೂ
ಇಷ್ಟವಾಗುವುದಿಲ್ಲ. ಹೇಳುತ್ತಾರೆ- ಇವರು ನಮ್ಮ ಮೇಲೆ ಕೈಯೇಕೆ ಹಾಕಿದರು, ಇವರಲ್ಲಿ ವಿಕಾರಿ
ದುರ್ಗಂಧವಿದೆ. ವಿಕಾರಿಗಳು ನಮ್ಮನ್ನು ಟಚ್ ಸಹ ಮಾಡಬಾರದು, ಇದು ಗುರಿಯಲ್ಲಿ ತಲುಪುವುದಾಗಿದೆ.
ದೇಹದ ಕಡೆ ದೃಷ್ಟಿಯೇ ಹೋಗಬಾರದು. ಅಂತಹ ಕರ್ಮಾತೀತ ಸ್ಥಿತಿಯನ್ನು ಈಗ ತಯಾರು ಮಾಡಿಕೊಳ್ಳಬೇಕು.
ಈಗಿನವರೆಗೂ ಹೀಗಿಲ್ಲಾ, ಕೇವಲ ಆತ್ಮವನ್ನೇ ನೋಡುವುದು ಗುರಿಯಿದೆ. ತಂದೆಯು ಸದಾ
ತಿಳಿಸುತ್ತಿರುತ್ತಾರೆ- ಮಕ್ಕಳೇ, ತಮ್ಮನ್ನು ಆತ್ಮವೆಂದು ತಿಳಿದುಕೊಳ್ಳಿರಿ. ಈ ಶರೀರವು
ಗೊಂಬೆಯಾಗಿದೆ, ಅದರಲ್ಲಿ ನೀವು ಪಾತ್ರವನ್ನಭಿನಯಿಸುತ್ತಿದ್ದೀರಿ. ಕೆಲವರು ಹೇಳುತ್ತಾರೆ- ಇದರಲ್ಲಿ
ಶಕ್ತಿಯಿದೆ. ಆದರೆ ಶಕ್ತಿಯ ಮಾತೇನೂ ಇಲ್ಲ. ಇದಂತು ವಿದ್ಯೆ. ಹೇಗೆ ಅನ್ಯರೂ ಓದುತ್ತಾರೆ, ಇವರೂ
ಓದುತ್ತಾರೆ. ಪವಿತ್ರತೆಗಾಗಿ ಎಷ್ಟೊಂದು ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಬಹಳ ಪರಿಶ್ರಮವಿದೆ
ಆದ್ದರಿಂದ ತಂದೆಯು ಹೇಳುತ್ತಾರೆ- ಒಬ್ಬರಿನ್ನೊಬ್ಬರು ಆತ್ಮವನ್ನೇ ನೋಡಿರಿ. ಸತ್ಯಯುಗದಲ್ಲಿಯೂ ನೀವು
ಆತ್ಮಾಭಿಮಾನಿ ಆಗಿರುತ್ತೀರಿ. ಅಲ್ಲಂತು ರಾವಣ ರಾಜ್ಯವೇ ಇಲ್ಲ, ವಿಕಾರದ ಮಾತೇ ಇಲ್ಲ. ಇಲ್ಲಿ ರಾವಣ
ರಾಜ್ಯದಲ್ಲಿ ಎಲ್ಲರೂ ವಿಕಾರಿಗಳಿದ್ದಾರೆ, ಆದ್ದರಿಂದ ತಂದೆಯು ಬಂದು ನಿರ್ವಿಕಾರಿಯನ್ನಾಗಿ
ಮಾಡುತ್ತಾರೆ. ಆಗುವುದಿಲ್ಲವೆಂದರೆ ಶಿಕ್ಷೆಯನ್ನುನುಭವಿಸಬೇಕಾಗುತ್ತದೆ. ಆತ್ಮವು ಪವಿತ್ರವಾಗದೆ
ಮೇಲೆ ಹೋಗಲು ಸಾಧ್ಯವಿಲ್ಲ. ಲೆಕ್ಕಾಚಾರವನ್ನು ಸಮಾಪ್ತಿ ಮಾಡಬೇಕಾಗುತ್ತದೆ. ನಂತರದಲ್ಲಿಯೂ ಪದವಿಯು
ಕಡಿಮೆಯಾಗಿ ಬಿಡುತ್ತದೆ. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಮಕ್ಕಳು ತಿಳಿದುಕೊಂಡಿದ್ದಾರೆ-
ಸ್ವರ್ಗದಲ್ಲಿ ಒಂದು ಆದಿ ಸನಾತನ ದೇವಿ-ದೇವತೆಗಳ ರಾಜ್ಯವಿತ್ತು. ಮೊಟ್ಟ ಮೊದಲಂತು ಅವಶ್ಯವಾಗಿ ಈ
ರಾಜ-ರಾಣಿ ಇರುತ್ತಾರೆ, ನಂತರ ರಾಜಧಾನಿಯಾಗುತ್ತದೆ. ಪ್ರಜೆಗಳು ಬಹಳಷ್ಟಿರುತ್ತಾರೆ. ಅವರ
ಸ್ಥಿತಿಯಲ್ಲಿ ಅಂತರವಾಗುತ್ತದೆ, ಯಾರಿಗೆ ಪೂರ್ಣ ನಿಶ್ಚಯವಿರುವುದಿಲ್ಲ ಅವರು ಓದುವುದಕ್ಕೂ
ಸಾಧ್ಯವಿಲ್ಲ. ಪವಿತ್ರರಾಗಲು ಸಾಧ್ಯವಿಲ್ಲ. ಅರ್ಧಕಲ್ಪ ಪತಿತರು, ಒಂದು ಜನ್ಮದಲ್ಲಿ 21
ಜನ್ಮಗಳಿಗಾಗಿ ಪಾವನರಾಗುವುದು- ಚಿಕ್ಕಮ್ಮನ ಮನೆಯಂತೇನು! ಮುಖ್ಯವಾದುದೇ ಕಾಮ ವಿಕಾರದ ಮಾತು.
ಕ್ರೋಧ ಮುಂತಾದವೇನು ಅಷ್ಟಿಲ್ಲ. ಎಲ್ಲಿಯೇ ಬುದ್ಧಿ ಹೋಗುತ್ತದೆಯೆಂದರೆ, ಖಂಡಿತವಾಗಿ ತಂದೆಯನ್ನು
ನೆನಪು ಮಾಡುವುದಿಲ್ಲ.. ತಂದೆಯ ನೆನಪು ಪರಿಪಕ್ವವಾಗಿ ಬಿಡುತ್ತದೆಯೆಂದರೆ, ನಂತರ ಮತ್ತ್ಯಾವುದೇ ಕಡೆ
ಬುದ್ಧಿಯು ಹೋಗುವುದಿಲ್ಲ. ಬಹಳ ಶ್ರೇಷ್ಠವಾದ ಗುರಿಯಾಗಿದೆ. ಪವಿತ್ರತೆಯ ಮಾತನ್ನು ಕೇಳಿ
ಬೆಂಕಿಯಲ್ಲಿ ಸುಟ್ಟು ಸಾಯುತ್ತಾರೆ. ಹೇಳುತ್ತಾರೆ, ಈ ಮಾತಂತು ಯಾರೆಂದಿಗೂ ಹೇಳುವುದಿಲ್ಲ. ಯಾವುದೇ
ಶಾಸ್ತ್ರಗಳಲ್ಲಿಯೂ ಇಲ್ಲ. ಬಹಳ ಕಷ್ಟವೆಂದು ತಿಳಿಯುತ್ತಾರೆ. ಅವರಂತು ಇರುವುದೇ ನಿವೃತ್ತಿ ಮಾರ್ಗದ
ಧರ್ಮದವರು ಬೇರೆ. ಅವರಂತು ಪುನರ್ಜನ್ಮ ತೆಗೆದುಕೊಂಡು, ಮತ್ತೆಯೂ ಸನ್ಯಾಸ ಧರ್ಮದಲ್ಲಿಯೋ ಹೋಗಬೇಕು,
ಅದೇ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆ. ನೀವಂತು ಮನೆ ಮಠ ಏನನ್ನೂ ಬಿಡುವುದಿಲ್ಲ.
ತಿಳಿಸಲಾಗುತ್ತದೆ- ಭಲೇ ಮನೆಯಲ್ಲಿರಿ, ಅವರಿಗೂ ತಿಳಿಸಿರಿ- ಇದು ಸಂಗಮಯುಗವಾಗಿದೆ. ಪವಿತ್ರರಾಗದೇ
ಸತ್ಯಯುಗದಲ್ಲಿ ದೇವತೆಗಳಾಗಲು ಸಾಧ್ಯವಿಲ್ಲ. ಸ್ವಲ್ಪ ಜ್ಞಾನವನ್ನು ಕೇಳಿದರೂ ಅವರು ಪ್ರಜೆಗಳಾಗಿ
ಬಿಡುತ್ತಾರೆ. ಪ್ರಜೆಗಳಂತು ಬಹಳ ಇರುತ್ತಾರಲ್ಲವೆ. ಸತ್ಯಯುಗದಲ್ಲಿ ಮಂತ್ರಿಯೂ ಇರುವುದಿಲ್ಲ
ಏಕೆಂದರೆ ತಂದೆಯು ಸಂಪೂರ್ಣ ಜ್ಞಾನಿಯನ್ನಾಗಿ ಮಾಡಿ ಬಿಡುತ್ತಾರೆ. ಮಂತ್ರಿ ಮುಂತಾದವರು ಬೇಕು
ಅಜ್ಞಾನಿಗಳಿಗೆ. ಈ ಸಮಯದಲ್ಲಿ ನೋಡಿರಿ- ಒಬ್ಬರಿನ್ನೊಬ್ಬರನ್ನು ಸಾಯಿಸುವುದು ಹೇಗಿರುತ್ತದೆ,
ಶತ್ರುತ್ವದ ಸ್ವಭಾವವು ಎಷ್ಟು ಕಠಿಣವಾಗಿದೆ. ಈಗ ನೀವು ತಿಳಿಯುತ್ತೀರಿ- ನಾವು ಈ ಹಳೆಯ ಶರೀರವನ್ನು
ಬಿಟ್ಟು, ಹೋಗಿ ಇನ್ನೊಂದನ್ನು ತೆಗೆದುಕೊಳ್ಳುತ್ತೇವೆ. ದೊಡ್ಡ ಮಾತೇನು! ಅವರು ದುಃಖದಿಂದ
ಸಾಯುತ್ತಾರೆ, ನೀವು ಸುಖದಿಂದ ತಂದೆಯ ನೆನಪಿನಲ್ಲಿ ಹೋಗಬೇಕಾಗಿದೆ. ನಾನು ತಂದೆಯನ್ನೆಷ್ಟು ನೆನಪು
ಮಾಡುತ್ತೇನೆ, ಆಗ ಮತ್ತೆಲ್ಲವೂ ಮರೆತು ಹೋಗುತ್ತದೆ. ಏನೂ ನೆನಪಿರುವುದಿಲ್ಲ. ಆದರೆ ಆ ಸ್ಥಿತಿಯು
ಆಗ ಆಗುತ್ತದೆ, ಯಾವಾಗ ಪರಿಪಕ್ವ ನಿಶ್ಚಯವಿರುತ್ತದೆ. ನಿಶ್ಚಯವಿಲ್ಲವೆಂದರೆ ನೆನಪೂ ಸಹ ನಿಲ್ಲಲು
ಸಾಧ್ಯವಿಲ್ಲ. ಹೆಸರಿಗಷ್ಟೇ ಕೇವಲ ಹೇಳುತ್ತಾರೆ, ನಿಶ್ಚಯವೇ ಇಲ್ಲವೆಂದರೆ ನೆನಪು ಎಲ್ಲಿಯದನ್ನು
ಮಾಡುವರು. ಎಲ್ಲರಿಗೂ ಒಂದೇ ರೀತಿಯ ನಿಶ್ಚಯವಂತು ಇರುವುದಿಲ್ಲ ಅಲ್ಲವೆ. ಮಾಯೆಯು ನಿಶ್ಚಯದಿಂದ ದೂರ
ಮಾಡಿ ಬಿಡುತ್ತದೆ. ಹೇಗಿರುವವರು ಹಾಗೆಯೇ ಆಗಿ ಬಿಡುತ್ತಾರೆ. ಮೊಟ್ಟ ಮೊದಲಂತು ತಂದೆಯಲ್ಲಿ
ನಿಶ್ಚಯವಾಗಬೇಕು. ಇವರು ತಂದೆಯಲ್ಲ ಎಂದು ಸಂಶಯವಿರುತ್ತದೆಯೇನು! ಬೇಹದ್ದಿನ ತಂದೆಯೇ ಜ್ಞಾನವನ್ನು
ಕೊಡುತ್ತಾರೆ. ಇವರಂತು ಹೇಳುತ್ತಾರೆ- ನಾನು ಸೃಷ್ಟಿಯ ರಚೈತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲ.
ನನಗಂತು ಯಾರಾದರೂ ತಿಳಿಸುತ್ತಾರೆ. ನಾನು 12 ಮಂದಿ ಗುರುಗಳನ್ನು ಮಾಡಿಕೊಂಡೆನು, ಅವರೆಲ್ಲರನ್ನೂ
ಬಿಡಬೇಕಾಯಿತು. ಗುರುವಂತು ಜ್ಞಾನವನ್ನು ಕೊಡಲಿಲ್ಲ, ಸದ್ಗುರುವು ಇದ್ದಕ್ಕಿಂದ್ದಂತೆಯೇ ಬಂದು
ಪ್ರವೇಶ ಮಾಡಿದರು. ತಿಳಿಯಿತೆ, ಏನಾಗಬೇಕು ಎನ್ನುವುದಂತು ಗೊತ್ತಿಲ್ಲ. ಗೀತೆಯಲ್ಲಿದೆಯಲ್ಲವೆ,
ಅರ್ಜುನನಿಗೂ ಸಾಕ್ಷಾತ್ಕಾರವನ್ನು ಮಾಡಿಸಿದರು. ಅರ್ಜುನನ ಮಾತಿಲ್ಲ, ಇದಂತು ರಥವಾಗಿದೆಯಲ್ಲವೆ,
ಇವರೂ (ಬ್ರಹ್ಮಾ) ಸಹ ಮುಂಚೆ ಗೀತೆಯನ್ನು ಓದುತ್ತಿದ್ದರು. ತಂದೆಯು ಪ್ರವೇಶ ಮಾಡಿದರು,
ಸಾಕ್ಷಾತ್ಕಾರ ಮಾಡಿಸಿದರು- ಈ ಜ್ಞಾನವನ್ನಂತು ತಂದೆಯೇ ಕೊಡುವವರಾಗಿದ್ದಾರೆ, ಅಂದಮೇಲೆ ಆ
ಗೀತೆಯನ್ನು ಬಿಟ್ಟು ಬಿಟ್ಟರು. ತಂದೆಯು ಜ್ಞಾನದ ಸಾಗರನಾಗಿದ್ದಾರೆ. ನಮಗಂತು ಅವರೇ
ತಿಳಿಸುತ್ತಾರಲ್ಲವೆ. ಗೀತೆಯು ಸರ್ವಶಾಸ್ತ್ರಗಳ ಶಿರೋಮಣಿ. ಆ ತಂದೆಯನ್ನೇ ತ್ವಮೇವ ಮಾತಾಶ್ಚ ಪಿತಾ
ಎಂದು ಹೇಳುತ್ತೇವೆ. ಅವರು ರಚನೆಯನ್ನು ರಚಿಸುತ್ತಾ, ದತ್ತು ಮಾಡಿಕೊಳ್ಳುತ್ತಾರಲ್ಲವೆ. ಈ
ಬ್ರಹ್ಮಾರವರೂ ಸಹ ನಿಮ್ಮಂತೆಯೇ ಇದ್ದಾರೆ. ತಂದೆಯು ಹೇಳುತ್ತಾರೆ- ಇವರದೂ ಸಹ ಯಾವಾಗ ವಾನಪ್ರಸ್ಥ
ಸ್ಥಿತಿಯಾಗುತ್ತದೆ, ಆಗಲೇ ನಾನು ಪ್ರವೇಶ ಮಾಡುವೆನು. ಕುಮಾರಿಯರಂತು ಇರುವುದೇ ಪವಿತ್ರರಾಗಿ.
ಅವರಿಗಾಗಿ ಸಹಜವಿದೆ. ವಿವಾಹದ ನಂತರ ಸಂಬಂಧವೆಷ್ಟು ದೊಡ್ಡದಾಗಿ ಬಿಡುತ್ತದೆ, ಆದ್ದರಿಂದ
ದೇಹಿ-ಅಭಿಮಾನಿ ಆಗುವುದರಲ್ಲಿ ಪರಿಶ್ರಮವಾಗುತ್ತದೆ. ವಾಸ್ತವದಲ್ಲಿ ಆತ್ಮವು ಶರೀರದಿಂದ
ಭಿನ್ನವಾಗಿರುತ್ತದೆ. ಆದರೆ ಅರ್ಧಕಲ್ಪ ದೇಹಾಭಿಮಾನಿ ಆಗಿದ್ದಿರಿ. ತಂದೆಯು ಬಂದು ಈ ಅಂತಿಮ
ಜನ್ಮದಲ್ಲಿ ದೇಹಿ-ಅಭಿಮಾನಿಯನ್ನಾಗಿ ಮಾಡುತ್ತಾರೆಂದರೆ ಕಷ್ಟವೆನಿಸುತ್ತದೆ. ಪುರುಷಾರ್ಥ
ಮಾಡುತ್ತಾ-ಮಾಡುತ್ತಾ ಎಷ್ಟು ಸ್ವಲ್ಪವೇ ಉತ್ತೀರ್ಣರಾಗುತ್ತಾರೆ. 8 ರತ್ನಗಳು ಬರುತ್ತಾರೆ.
ತಮ್ಮೊಂದಿಗೆ ಕೇಳಿಕೊಳ್ಳಿರಿ- ನಮ್ಮ ಲೈನ್ ಕ್ಲಿಯರ್ ಇದೆಯೇ? ಒಬ್ಬ ತಂದೆಯಲ್ಲದೆ ಮತ್ತೇನೂ ನೆನಪಿಗೆ
ಬರುವುದಿಲ್ಲವೇ? ಈ ಸ್ಥಿತಿಯು ಅಂತ್ಯದಲ್ಲಾಗುತ್ತದೆ. ಆತ್ಮ-ಅಭಿಮಾನಿಯಾಗುವುದರಲ್ಲಿ ಬಹಳ
ಪರಿಶ್ರಮವೆನಿಸುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು-ಪ್ರೀತಿ
ಹಾಗೂ ನಮಸ್ತೆ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಜ್ಞಾನದಿಂದ
ತಮ್ಮ ದೃಷ್ಟಿಯ ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ. ಆತ್ಮ-ಅಭಿಮಾನಿಯಾಗಿದ್ದು ವಿಕಾರಿ ವಿಚಾರಗಳ
ಸಮಾಪ್ತಿ ಮಾಡಬೇಕಾಗಿದೆ. ಯಾವುದೇ ವಿಕಾರದ ದುರ್ಗಂಧವಿರಬಾರದು, ದೇಹದ ಕಡೆ ದೃಷ್ಟಿಯೇ ಹೋಗಬಾರದು.
2. ಬೇಹದ್ದಿನ ತಂದೆಯೇ ನಮಗೆ ಓದಿಸುತ್ತಾರೆ- ಇಂತಹ ಪರಿಪಕ್ವ ನಿಶ್ಚಯವಾದಾಗಲೇ ನೆನಪು ಶಕ್ತಿಶಾಲಿ
ಆಗಿರುತ್ತದೆ. ಗಮನವಿರಲಿ- ಮಾಯೆಯು ನಿಶ್ಚಯದಿಂದ ಸ್ವಲ್ಪವೂ ಅಲುಗಾಡಿಸಬಾರದು.
ವರದಾನ:
ಪವಿತ್ರತೆಯ
ಬುನಾದಿಯ ಮೂಲಕ ಸದಾ ಶ್ರೇಷ್ಠ ಕರ್ಮವನ್ನು ಮಾಡುವಂತಹ ಪೂಜ್ಯಾತ್ಮ ಭವ.
ಪವಿತ್ರತೆಯು
ಪೂಜ್ಯರನ್ನಾಗಿ ಮಾಡಿಸುತ್ತದೆ. ಪೂಜ್ಯರು ಅವರೇ ಆಗುವರು, ಯಾರು ಸದಾ ಶ್ರೇಷ್ಠ ಕರ್ಮವನ್ನು
ಮಾಡುತ್ತಾರೆ. ಆದರೆ ಪವಿತ್ರತೆಯು ಕೇವಲ ಬ್ರಹ್ಮ ಚರ್ಯವಲ್ಲ, ಮನಸ್ಸಾ ಸಂಕಲ್ಪದಲ್ಲಿಯೂ, ಯಾರ
ಪ್ರತಿಯೂ ನಕಾರಾತ್ಮಕ ಸಂಕಲ್ಪದ ಉತ್ಪತ್ತಿಯಾಗಬಾರದು, ಮಾತೂ ಸಹ ಆಯಥಾರ್ಥವಿರಬಾರದು, ಸಂಬಂಧ -ಸಂಪರ್ಕದಲ್ಲಿಯೂ
ಅಂತರವಿರಬಾರದು, ಎಲ್ಲರೊಂದಿಗೂ ಒಂದೇ ರೀತಿ, ಒಂದೇ ಸಂಬಂಧವಿರಲಿ. ಮನಸ್ಸಾ-ವಾಚಾ-ಕರ್ಮಣಾ
ಯಾವುದರಲ್ಲಿಯೂ ಪವಿತ್ರತೆಯ ಖಂಡನೆಯಾಗಬಾರದು, ಆಗಲೇ ಪೂಜ್ಯಾತ್ಮ ಎಂದು ಹೇಳಲಾಗುತ್ತದೆ. ನಾನು ಪರಮ
ಪೂಜ್ಯ ಆತ್ಮನಾಗಿದ್ದೇನೆ- ಈ ಸ್ಮೃತಿಯಿಂದ ಪವಿತ್ರತೆಯ ಬುನಾದಿಯನ್ನು ಶಕ್ತಿಶಾಲಿಯನ್ನಾಗಿ ಮಾಡಿರಿ.
ಸ್ಲೋಗನ್:
ಸದಾ ಇದೇ
ಅಲೌಕಿಕ ನಶೆಯಿರಲಿ- "ವಾಹ್ ನಾನಾತ್ಮನೇ", ಆಗ ಮನಸ್ಸು ಮತ್ತು ತನುವಿನಿಂದ ಸ್ವಾಭಾವಿಕ ಖುಷಿಯ
ನರ್ತನ ಮಾಡುತ್ತಿರುತ್ತೀರಿ.