21.06.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ – ಶರೀರ
ಸಹಿತ ಏನೆಲ್ಲವೂ ಕಾಣಿಸುತ್ತದೆಯೋ ಅದೆಲ್ಲವೂ ವಿನಾಶವಾಗಲಿದೆ, ನೀವಾತ್ಮಗಳು ಈಗ ಮನೆಗೆ
ಹಿಂತಿರುಗಬೇಕಾಗಿದೆ, ಆದ್ದರಿಂದ ಹಳೆಯ ಪ್ರಪಂಚವನ್ನು ಮರೆತು ಬಿಡಿ.”
ಪ್ರಶ್ನೆ:
ನೀವು ಮಕ್ಕಳು
ಯಾವ ಶಬ್ಧಗಳಲ್ಲಿ ಎಲ್ಲರಿಗೆ ತಂದೆಯ ಸಂದೇಶವನ್ನು ತಿಳಿಸಬಹುದು?
ಉತ್ತರ:
ಎಲ್ಲರಿಗೆ
ತಿಳಿಸಿ- ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ನೀಡಲು ಬಂದಿದ್ದಾರೆ. ಈಗ ಮಿತವಾದ ಆಸ್ತಿಯ
ಸಮಯವು ಮುಕ್ತಾಯವಾಯಿತು ಅರ್ಥಾತ್ ಭಕ್ತಿ ಪೂರ್ಣವಾಯಿತು, ಈಗ ರಾವಣ ರಾಜ್ಯವು ಸಮಾಪ್ತಿಯಾಗುತ್ತದೆ,
ನಿಮ್ಮನ್ನು ರಾವಣನ ಪಂಚ ವಿಕಾರಗಳ ಜೈಲಿನಿಂದ ಮುಕ್ತರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಇದು
ಪುರುಷೋತ್ತಮ ಸಂಗಮಯುಗವಾಗಿದೆ, ಇದರಲ್ಲಿ ನೀವು ಪುರುಷಾರ್ಥ ಮಾಡಿ ದೈವೀ ಗುಣವಂತರಾಗಬೇಕು. ಕೇವಲ
ಪುರುಷೋತ್ತಮ ಸಂಗಮಯುಗವನ್ನು ಅರಿತರೂ ಸಹ ಸ್ಥಿತಿಯು ಶ್ರೇಷ್ಠವಾಗಿ ಬಿಡುತ್ತದೆ.
ಓಂ ಶಾಂತಿ.
ಈಗ ಆತ್ಮೀಯ ಮಕ್ಕಳು ಏನು ಮಾಡುತ್ತಿದ್ದೀರಿ? ಅವ್ಯಭಿಚಾರಿ ನೆನಪಿನಲ್ಲಿ ಕುಳಿತಿದ್ದೀರಿ. ಇದು ಒಂದು
ಅವ್ಯಭಿಚಾರಿ ನೆನಪಾಗಿದೆ, ಇನ್ನೊಂದು ವ್ಯಭಿಚಾರಿ ನೆನಪು. ಅವ್ಯಭಿಚಾರಿ ನೆನಪು ಅಥವಾ ಅವ್ಯಭಿಚಾರಿ
ಭಕ್ತಿಯು ಮೊದಲು ಪ್ರಾರಂಭವಾದಾಗ ಎಲ್ಲರೂ ಶಿವನ ಪೂಜೆಯನ್ನೇ ಮಾಡುತ್ತಾರೆ. ಸರ್ವ ಶ್ರೇಷ್ಠ ಭಗವಂತ
ಅವರೇ ಆಗಿದ್ದಾರೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಓದಿಸುತ್ತಾರೆ. ಏನನ್ನು
ಓದಿಸುತ್ತಾರೆ? ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ. ದೇವತೆಗಳಿಂದ ಮನುಷ್ಯರಾಗಲು ನೀವು
ಮಕ್ಕಳಿಗೆ 84 ಜನ್ಮಗಳು ಹಿಡಿಸಿದೆ ಮತ್ತು ಮನುಷ್ಯರಿಂದ ದೇವತೆಗಳಾಗಲು ಒಂದು ಸೆಕೆಂಡ್ ಸಾಕು.
ಇದಂತೂ ಮಕ್ಕಳಿಗೆ ತಿಳಿದಿದೆ - ನಾವು ತಂದೆಯ ನೆನಪಿನಲ್ಲಿ ಕುಳಿತಿದ್ದೇವೆ. ಅವರು ನಮ್ಮ ಶಿಕ್ಷಕರೂ
ಆಗಿದ್ದಾರೆ ಸದ್ಗುರುವೂ ಆಗಿದ್ದಾರೆ. ಒಬ್ಬರ ನೆನಪಿನಲ್ಲಿರಿ ಎಂದು ಯೋಗವನ್ನು ಕಲಿಸುತ್ತಾರೆ ಮತ್ತು
ಸ್ವತಃ ತಿಳಿಸುತ್ತಾರೆ - ಹೇ ಆತ್ಮಗಳೇ, ಹೇ ಮಕ್ಕಳೇ, ದೇಹದ ಎಲ್ಲಾ ಸಂಬಂಧಗಳನ್ನು ಬಿಡಿ, ಈಗ
ಹಿಂತಿರುಗಿ ಹೋಗಬೇಕಾಗಿದೆ. ಈಗ ಈ ಹಳೆಯ ಪ್ರಪಂಚವು ಬದಲಾಗುತ್ತಿದೆ ಮತ್ತು ಈಗ ಇಲ್ಲಿ ಇರುವಂತಿಲ್ಲ.
ಹಳೆಯ ಪ್ರಪಂಚದ ವಿನಾಶಕ್ಕಾಗಿಯೇ ಈ ಅಣ್ವಸ್ತ್ರಗಳನ್ನು ಮಾಡಿದ್ದಾರೆ, ಪ್ರಾಕೃತಿಕ ವಿಕೋಪಗಳೂ ಸಹ
ಇದರಲ್ಲಿ ಸಹಯೋಗ ಕೊಡುತ್ತವೆ. ವಿನಾಶವಂತೂ ಅವಶ್ಯವಾಗಿ ಆಗುತ್ತದೆ. ನೀವು ಪುರುಷೋತ್ತಮ
ಸಂಗಮಯುಗದಲ್ಲಿದ್ದೀರಿ. ನಾವೀಗ ಹಿಂತಿರುಗುತ್ತಿದ್ದೇವೆ ಎಂದು ಆತ್ಮಕ್ಕೆ ಗೊತ್ತಿದೆ, ಆದ್ದರಿಂದಲೇ
ತಂದೆಯು ತಿಳಿಸುತ್ತಾರೆ - ಈ ಹಳೆಯ ಪ್ರಪಂಚ, ಈ ಹಳೆಯ ದೇಹವನ್ನೂ ಬಿಡಬೇಕಾಗಿದೆ. ದೇಹದ ಸಹಿತ ಈ
ಹಳೆಯ ಪ್ರಪಂಚದಲ್ಲಿ ಏನೆಲ್ಲವೂ ಕಾಣಿಸುವುದೋ ಇದೆಲ್ಲವೂ ವಿನಾಶವಾಗುವುದಿದೆ. ಶರೀರವೂ ಸಹ
ಸಮಾಪ್ತಿಯಾಗುವುದು. ಈಗ ನಾವು ಆತ್ಮಗಳು ಮನೆಗೆ ಹಿಂತಿರುಗಿ ಹೋಗಬೇಕಾಗಿದೆ. ಹಿಂತಿರುಗಿ ಹೋಗದ ವಿನಃ
ಹೊಸ ಪ್ರಪಂಚದಲ್ಲಿ ಬರಲು ಸಾಧ್ಯವಿಲ್ಲ. ಈಗ ನೀವು ಪುರುಷೋತ್ತಮರಾಗುವ ಪುರುಷಾರ್ಥ ಮಾಡುತ್ತಿದ್ದೀರಿ.
ಈ ದೇವತೆಗಳು ಪುರುಷೋತ್ತಮರಾಗಿದ್ದಾರೆ, ಎಲ್ಲರಿಗಿಂತ ಶ್ರೇಷ್ಠಾತಿ ಶ್ರೇಷ್ಠ ನಿರಾಕಾರ
ತಂದೆಯಾಗಿದ್ದಾರೆ ಮತ್ತು ಮನುಷ್ಯ ಸೃಷ್ಟಿಯಲ್ಲಿ ಬಂದಾಗ ಇದರಲ್ಲಿ ದೇವತೆಗಳು ಶ್ರೇಷ್ಠರಾಗಿದ್ದಾರೆ,
ಅವರೂ ಮನುಷ್ಯರೇ ಆದರೆ ದೈವೀ ಗುಣವುಳ್ಳವರಾಗಿದ್ದಾರೆ ಮತ್ತೆ ಅವರೇ ಆಸುರೀ ಗುಣವುಳ್ಳವರಾಗುತ್ತಾರೆ.
ಈಗ ಮತ್ತೆ ಆಸುರೀ ಗುಣಗಳಿಂದ ದೈವೀ ಗುಣಗಳಲ್ಲಿ ಹೋಗಬೇಕಾಗಿದೆ. ಸತ್ಯಯುಗದಲ್ಲಿ ಹೋಗಬೇಕಾಗಿದೆ.
ಯಾರು? ನೀವು ಮಕ್ಕಳು. ಮಕ್ಕಳು ಓದುತ್ತಿದ್ದೀರಿ ಮತ್ತು ಅನ್ಯರಿಗೂ ಓದಿಸುತ್ತೀರಿ. ಕೇವಲ ತಂದೆಯ
ಸಂದೇಶವನ್ನೇ ಕೊಡಬೇಕಾಗಿದೆ. ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ನೀಡಲು ಬಂದಿದ್ದಾರೆ, ಈಗ
ಈ ಕ್ಷಣಿಕದ ಆಸ್ತಿಯು ಪೂರ್ಣವಾಗುತ್ತದೆ.
ತಂದೆಯು ತಿಳುವಳಿಕೆ ನೀಡಿದ್ದಾರೆ - ಎಲ್ಲಾ ಮನುಷ್ಯರು ಪಂಚ ವಿಕಾರಗಳರೂಪಿ ರಾವಣನ
ಜೈಲಿನಲ್ಲಿದ್ದಾರೆ, ಎಲ್ಲರೂ ದುಃಖವನ್ನೇ ಪಡೆಯುತ್ತಾರೆ. ಒಣ ರೊಟ್ಟಿ ಸಿಗುತ್ತದೆ. ತಂದೆಯು ಬಂದು
ಎಲ್ಲರನ್ನೂ ರಾವಣನ ಜೈಲಿನಿಂದ ಬಿಡಿಸಿ ಸದಾ ಸುಖಿಯನ್ನಾಗಿ ಮಾಡುತ್ತಾರೆ. ತಂದೆಯ ವಿನಃ
ಮನುಷ್ಯರನ್ನು ಮತ್ತ್ಯಾರೂ ದೇವತೆಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಮನುಷ್ಯರಿಂದ ದೇವತೆಗಳಾಗಲು
ತಾವಿಲ್ಲಿ ಕುಳಿತಿದ್ದೀರಿ. ಈಗ ಕಲಿಯುಗವಿದೆ, ಅನೇಕ ಧರ್ಮಗಳಾಗಿ ಬಿಟ್ಟಿವೆ. ನೀವು ಮಕ್ಕಳಿಗೆ
ರಚಯಿತ ಮತ್ತು ರಚನೆಯ ಪರಿಚಯವನ್ನು ಸ್ವಯಂ ತಂದೆಯೇ ತಿಳಿಸುತ್ತಾರೆ. ನೀವು ಕೇವಲ ಈಶ್ವರ, ಪರಮಾತ್ಮ
ಎಂದು ಹೇಳುತ್ತಿದ್ದೀರಿ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕ-ಗುರುವೂ ಆಗಿದ್ದಾರೆಂದು ನಿಮಗೆ
ತಿಳಿದಿರಲಿಲ್ಲ. ಅವರಿಗೆ ಸದ್ಗುರುವೆಂದು ಹೇಳಲಾಗುತ್ತದೆ, ಅಕಾಲಮೂರ್ತಿಯೆಂದೂ ಹೇಳುತ್ತಾರೆ.
ನಿಮ್ಮನ್ನು ಆತ್ಮ ಮತ್ತು ಜೀವ ಎಂದು ಹೇಳಲಾಗುತ್ತದೆ. ಈ ಅಕಾಲಮೂರ್ತ ತಂದೆಯು ಈ ಶರೀರರೂಪಿ
ಸಿಂಹಾಸನದಲ್ಲಿ ಕುಳಿತಿದ್ದಾರೆ. ಅವರು ಜನ್ಮ ಪಡೆಯುವುದಿಲ್ಲ ಅಂದಾಗ ಅಕಾಲಮೂರ್ತ ತಂದೆಯು ತಿಳಿಸಿ
ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನನಗೆ ನನ್ನದೇ ಆದ ರಥವಿಲ್ಲ ಅಂದಾಗ ನೀವು
ಮಕ್ಕಳನ್ನು ಹೇಗೆ ಪಾವನರನ್ನಾಗಿ ಮಾಡಲಿ! ನನಗೆ ರಥವಂತೂ ಬೇಕಲ್ಲವೆ. ಅಕಾಲಮೂರ್ತನಿಗೂ ಸಿಂಹಾಸನವು
ಬೇಕು. ಅಕಾಲ ಸಿಂಹಾಸನವು ಮನುಷ್ಯರದೇ ಇರುತ್ತದೆ, ಮತ್ತ್ಯಾರದೂ ಅಲ್ಲ. ಪ್ರತಿಯೊಬ್ಬರಿಗೂ
ಸಿಂಹಾಸನವು ಬೇಕು, ಅಕಾಲಮೂರ್ತ ಆತ್ಮವು ಇಲ್ಲಿ (ಭೃಕುಟಿ) ವಿರಾಜಮಾನವಾಗಿದೆ. ಅವರು ಎಲ್ಲರ
ತಂದೆಯಾಗಿದ್ದಾರೆ, ಅವರಿಗೆ ಮಹಾಕಾಲನೆಂದು ಹೇಳಲಾಗುತ್ತದೆ, ಅವರು ಪುನರ್ಜನ್ಮದಲ್ಲಿ ಬರುವುದಿಲ್ಲ.
ನೀವಾತ್ಮರು ಪುನರ್ಜನ್ಮದಲ್ಲಿ ಬರುತ್ತೀರಿ, ನಾನು ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ಭಕ್ತಿಗೆ
ರಾತ್ರಿ, ಜ್ಞಾನಕ್ಕೆ ದಿನವೆಂದು ಹೇಳಲಾಗುತ್ತದೆ, ಇದನ್ನು ಪಕ್ಕಾ ನೆನಪು ಮಾಡಿ. ಮುಖ್ಯವಾದ ಎರಡು
ಮಾತುಗಳು- ತಂದೆ ಮತ್ತು ಆಸ್ತಿ. ತಂದೆಯು ಬಂದು ರಾಜ್ಯಭಾಗ್ಯವನ್ನೂ ನೀಡುತ್ತಾರೆ ಮತ್ತು ಆ
ರಾಜ್ಯಕ್ಕಾಗಿ ವಿದ್ಯೆಯನ್ನೂ ಓದಿಸುತ್ತಾರೆ. ಆದ್ದರಿಂದ ಇದಕ್ಕೆ ಪಾಠಶಾಲೆಯೆಂದೂ ಹೇಳಲಾಗುವುದು.
ಭಗವಾನುವಾಚ- ಭಗವಂತನಂತೂ ನಿರಾಕಾರನಾಗಿದ್ದಾರೆ. ಅವರದೂ ಪಾತ್ರವಿರಬೇಕು, ಅವರು ಸರ್ವಶ್ರೇಷ್ಠ
ಭಗವಂತನಾಗಿದ್ದಾರೆ, ಅವರನ್ನು ಎಲ್ಲರೂ ನೆನಪು ಮಾಡುತ್ತಾರೆ. ಅವರನ್ನು ಭಕ್ತಿಮಾರ್ಗದಲ್ಲಿ ನೆನಪು
ಮಾಡದೇ ಇರುವಂತಹ ಮನುಷ್ಯರ್ಯಾರೂ ಇಲ್ಲ. ಎಲ್ಲರೂ ಹೃದಯಪೂರ್ವಕವಾಗಿ ಕರೆಯುತ್ತಾರೆ- ಹೇ ಭಗವಂತ, ಹೇ
ಮುಕ್ತಿದಾತ, ಓ ಗಾಡ್ಫಾದರ್. ಏಕೆಂದರೆ ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಅವಶ್ಯವಾಗಿ
ಬೇಹದ್ದಿನ ಸುಖವನ್ನೇ ಕೊಡುತ್ತಾರೆ. ಲೌಕಿಕ ತಂದೆಯು ಲೌಕಿಕ ಆಸ್ತಿಯನ್ನು ಕೊಡುತ್ತಾರೆ, ಯಾರಿಗೂ
ಗೊತ್ತಿಲ್ಲ. ಈಗ ತಂದೆಯು ಬಂದಿದ್ದಾರೆ, ತಿಳಿಸುತ್ತಾರೆ- ಮಕ್ಕಳೇ, ಮತ್ತೆಲ್ಲಾ ಸಂಗಗಳನ್ನು ಬಿಟ್ಟು
ಒಬ್ಬ ತಂದೆಯಾದ ನನ್ನನ್ನು ನೆನಪು ಮಾಡಿ ಮತ್ತು ಇದನ್ನೂ ತಂದೆಯು ತಿಳಿಸಿದ್ದಾರೆ- ನೀವು
ದೇವಿ-ದೇವತೆಗಳು ಹೊಸ ಪ್ರಪಂಚದಲ್ಲಿರುತ್ತೀರಿ ಅಲ್ಲಂತೂ ಅಪಾರ ಸುಖವಿರುತ್ತದೆ ಆ ಸುಖದ ಅಂತ್ಯವನ್ನು
ತಿಳಿಯಲಾಗದು, ಹೊಸ ಮನೆಯಲ್ಲಿ ಸದಾ ಸುಖವಿರುತ್ತದೆ,ಹಳೆಯದರಲ್ಲಿ ದುಃಖವಿರುತ್ತದೆ. ಹಳೆಯ ಮನೆಯಲ್ಲಿ
ದುಃಖವಿರುತ್ತದೆ. ಆದ್ದರಿಂದಲೇ ತಂದೆಯು ಮಕ್ಕಳಿಗಾಗಿ ಹೊಸ ಮನೆಯನ್ನು ಕಟ್ಟಿಸುತ್ತಾರೆ. ಮಕ್ಕಳ
ಬುದ್ಧಿಯೋಗವು ಹೊಸ ಮನೆಯ ಕಡೆ ಹೊರಟು ಹೋಗುತ್ತದೆ. ಅದಂತೂ ಅಲ್ಪಕಾಲದ ಮಾತಾಯಿತು. ಇಲ್ಲಿ ತಂದೆಯು
ಬೇಹದ್ದಿನ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದಾರೆ. ಹಳೆಯ ಪ್ರಪಂಚದಲ್ಲಿ ಏನೆಲ್ಲವನ್ನೂ
ನೋಡುತ್ತಿದ್ದೀರೋ ಅದೆಲ್ಲವೂ ಸ್ಮಶಾನವಾಗಲಿದೆ. ಈಗ ಸತ್ಯಯುಗವು ಸ್ಥಾಪನೆಯಾಗುತ್ತಿದೆ. ನೀವು
ಸಂಗಮಯುಗದಲ್ಲಿದ್ದೀರಿ. ಕಲಿಯುಗದ ಕಡೆಯೂ ನೋಡಬಹುದು, ಸತ್ಯಯುಗದ ಕಡೆಯೂ ನೋಡಬಹುದು. ನೀವು
ಸಂಗಮಯುಗದಲ್ಲಿ ಎಲ್ಲವನ್ನೂ ಸಾಕ್ಷಿಯಾಗಿ ನೋಡುತ್ತೀರಿ. ಪ್ರದರ್ಶನಿ ಅಥವಾ ಮ್ಯೂಸಿಯಂನಲ್ಲಿ
ಬರುತ್ತಾರೆಂದರೆ ಅಲ್ಲಿಯೂ ನೀವು ಸಂಗಮಯುಗದ ಕಡೆ ನಿಲ್ಲಿಸಿ. ಈ ಕಡೆ ಕಲಿಯುಗ, ಆ ಕಡೆ ಸತ್ಯಯುಗವಿದೆ,
ನಾವು ಮಧ್ಯದಲ್ಲಿದ್ದೇವೆ. ತಂದೆಯು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ಅಲ್ಲಿ ಕೆಲವರೇ
ಮನುಷ್ಯರಿರುತ್ತಾರೆ, ಮತ್ತ್ಯಾವುದೇ ಧರ್ಮದವರಿರುವುದಿಲ್ಲ. ನೀವೇ ಮೊಟ್ಟ ಮೊದಲು ಬರುತ್ತೀರಿ. ಈಗ
ನೀವು ಸ್ವರ್ಗದಲ್ಲಿ ಹೋಗುವ ಪುರುಷಾರ್ಥ ಮಾಡುತ್ತಿದ್ದೀರಿ. ಪಾವನರಾಗುವುದಕ್ಕಾಗಿಯೇ ನನ್ನನ್ನು
ಕರೆದಿರಿ- ಹೇ ತಂದೆಯೇ, ನಮ್ಮನ್ನು ಪಾವನರನ್ನಾಗಿ ಮಾಡಿ, ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ.
ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಹೇಳುವುದಿಲ್ಲ. ಪರಮಧಾಮಕ್ಕೆ ಮಧುರ ಮನೆ ಎಂದು
ಹೇಳಲಾಗುತ್ತದೆ, ಈಗ ನಾವು ಮನೆಗೆ ಹೋಗಬೇಕಾಗಿದೆ, ಅದಕ್ಕೆ ಮುಕ್ತಿಧಾಮವೆಂದು ಹೇಳಲಾಗುತ್ತದೆ,
ಅದಕ್ಕಾಗಿಯೇ ಸನ್ಯಾಸಿಗಳು ಶಿಕ್ಷಣ ಕೊಡುತ್ತಾರೆ. ಅವರು ಸುಖಧಾಮದ ಜ್ಞಾನವನ್ನು ತಿಳಿಸಲು
ಸಾಧ್ಯವಿಲ್ಲ, ನಿವೃತ್ತಿ ಮಾರ್ಗದವರಾಗಿದ್ದಾರೆ. ಯಾವ-ಯಾವ ಧರ್ಮದವರು ಯಾವಾಗ ಬರುತ್ತಾರೆಂದು ನಿಮಗೆ
ತಿಳಿಸಲಾಗಿದೆ. ಮನುಷ್ಯ ಸೃಷ್ಟಿರೂಪಿ ವೃಕ್ಷದಲ್ಲಿ ಮೊಟ್ಟ ಮೊದಲ ಅಡಿಪಾಯವೇ ನಿಮ್ಮದಾಗಿದೆ.
ಬೀಜಕ್ಕೆ ವೃಕ್ಷಪತಿ ಎಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ- ನಾನು ವೃಕ್ಷಪತಿ ಮೇಲೆ
ನಿವಾಸ ಮಾಡುತ್ತೇನೆ. ಯಾವಾಗ ವೃಕ್ಷವು ಜಡಜಡೀಭೂತವಾಗುತ್ತದೆಯೋ ಆಗ ನಾನು ದೇವತಾ ಧರ್ಮವನ್ನು
ಸ್ಥಾಪನೆ ಮಾಡಲು ಬರುತ್ತೇನೆ. ಆಲದ ಮರವು ಬಹಳ ವಿಚಿತ್ರವಾದ ವೃಕ್ಷವಾಗಿದೆ ಅದಕ್ಕೆ ಬುಡ ಅರ್ಥಾತ್
ಬುನಾದಿಯಿಲ್ಲ, ಉಳಿದೆಲ್ಲಾ ವೃಕ್ಷವು ನಿಂತಿದೆ. ಹಾಗೆಯೇ ಈ ಬೇಹದ್ದಿನ ವೃಕ್ಷದಲ್ಲಿ ಆದಿ ಸನಾತನ
ದೇವಿ-ದೇವತಾ ಧರ್ಮವಿಲ್ಲ. ಉಳಿದೆಲ್ಲಾ ರೆಂಬೆ-ಕೊಂಬೆಗಳು ಅರ್ಥಾತ್ ಧರ್ಮಗಳು ನಿಂತಿವೆ. ನೀವು
ಮೂಲವತನ ನಿವಾಸಿಗಳಾಗಿದ್ದೀರಿ, ನೀವು ಪಾತ್ರವನ್ನಭಿನಯಿಸಲು ಬಂದಿದ್ದೀರಿ. ನೀವು ಮಕ್ಕಳು
ಸರ್ವತೋಮುಖ ಪಾತ್ರವನ್ನಭಿನಯಿಸುವವರಾಗಿದ್ದೀರಿ. ಆದ್ದರಿಂದ ನಿಮ್ಮದು ಗರಿಷ್ಠ 84 ಜನ್ಮಗಳು,
ಕನಿಷ್ಠ ಒಂದು ಜನ್ಮವಾಗಿದೆ. ಮನುಷ್ಯರು 84 ಲಕ್ಷ ಜನ್ಮಗಳೆಂದು ಹೇಳಿ ಬಿಡುತ್ತಾರೆ. ಅದನ್ನು
ಯಾರಿಗೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ತಂದೆಯು ಬಂದು ಮಕ್ಕಳಿಗೆ ತಿಳಿಸುತ್ತಾರೆ- ನೀವು 84
ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ, ಮೊಟ್ಟ ಮೊದಲು ನನ್ನಿಂದ ಅಗಲುತ್ತೀರಿ. ಸತ್ಯಯುಗೀ ದೇವತೆಗಳೇ
ಮೊದಲು ಇರುತ್ತಾರೆ, ಯಾವಾಗ ಆ ಆತ್ಮರು ಇಲ್ಲಿ ಪಾತ್ರವನ್ನಭಿನಯಿಸುತ್ತಾರೆಯೋ ಆಗ ಉಳಿದೆಲ್ಲಾ
ಆತ್ಮಗಳು ಎಲ್ಲಿಗೆ ಹೋಗುತ್ತಾರೆ? ಇದೂ ಸಹ ನಿಮಗೆ ಗೊತ್ತಿದೆ, ಉಳಿದೆಲ್ಲಾ ಆತ್ಮಗಳು ಎಲ್ಲಿಗೆ
ಹೋಗುತ್ತಾರೆ? ಇದೂ ಸಹ ನಿಮಗೆ ಗೊತ್ತಿದೆ, ಉಳಿದೆಲ್ಲಾ ಆತ್ಮಗಳು ಶಾಂತಿಧಾಮದಲ್ಲಿರುತ್ತಾರೆ,
ಶಾಂತಿಧಾಮವು ಬೇರೆಯಾಯಿತಲ್ಲವೆ ಬಾಕಿ ಪ್ರಪಂಚವಂತೂ ಇದೆ. ಇಲ್ಲಿ ಪಾತ್ರವನ್ನಭಿನಯಿಸುತ್ತೀರಿ. ಹೊಸ
ಪ್ರಪಂಚದಲ್ಲಿ ಸುಖದ ಪಾತ್ರ, ಹಳೆಯ ಪ್ರಪಂಚದಲ್ಲಿ ದುಃಖದ ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ಇದು
ಸುಖ ಮತ್ತು ದುಃಖದ ಆಟವಾಗಿದೆ, ರಾಮ ರಾಜ್ಯವಾಗಿದೆ. ಪ್ರಪಂಚದಲ್ಲಿ ಯಾವುದೇ ಮನುಷ್ಯರು ಈ
ಸೃಷ್ಟಿಚಕ್ರವು ಹೇಗೆ ತಿರುಗುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ರಚಯಿತನನ್ನಾಗಲಿ, ರಚನೆಯ
ಆದಿ-ಮಧ್ಯ-ಅಂತ್ಯವನ್ನಾಗಲಿ ತಿಳಿದುಕೊಂಡಿಲ್ಲ. ಜ್ಞಾನ ಸಾಗರನೆಂದು ಒಬ್ಬ ತಂದೆಗೇ ಹೇಳಲಾಗುತ್ತದೆ.
ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವು ಯಾವುದೇ ಶಾಸ್ತ್ರಗಳಲ್ಲಿಯೂ ಇಲ್ಲ. ನಾನು ನಿಮಗೇ
ತಿಳಿಸುತ್ತೇನೆ ನಂತರ ಇದು ಪ್ರಾಯಲೋಪವಾಗಿ ಬಿಡುತ್ತದೆ. ಸತ್ಯಯುಗದಲ್ಲಿ ನಿಮಗೆ ಈ
ಜ್ಞಾನವಿರುವುದಿಲ್ಲ. ಭಾರತದ್ದೇ ಪ್ರಾಚೀನ ಸಹಜ ರಾಜಯೋಗವೆಂದೇ ಗಾಯನವಿದೆ. ಗೀತೆಯಲ್ಲಿಯೂ ರಾಜಯೋಗದ
ಹೆಸರು ಬರುತ್ತದೆ. ತಂದೆಯು ನಿಮಗೆ ರಾಜಯೋಗವನ್ನು ಕಲಿಸಿ ರಾಜ್ಯ ಪದವಿಯ ಆಸ್ತಿಯನ್ನು ಕೊಡುತ್ತಾರೆ.
ರಚನೆಯಿಂದ ಆಸ್ತಿಯು ಸಿಗುವುದಿಲ್ಲ, ರಚಯಿತ ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ಪ್ರತಿಯೊಬ್ಬ
ಮನುಷ್ಯರೂ ರಚಯಿತನಾಗಿದ್ದಾರೆ, ಅವರು ತಮ್ಮ ಮಕ್ಕಳನ್ನು ರಚಿಸುತ್ತಾರೆ. ಆದರೆ ಅವರು ಹದ್ದಿನ
ಬ್ರಹ್ಮಾ, ಇವರು ಬೇಹದ್ದಿನ ಬ್ರಹ್ಮನಾಗಿದ್ದಾರೆ. ಅವರು ಲೌಕಿಕ ತಂದೆಯಾಗಿದ್ದಾರೆ, ಇವರು ನಿರಾಕಾರ
ಆತ್ಮಗಳ ಪಿತನಾಗಿದ್ದಾರೆ ಮತ್ತು ಇವರು ಪ್ರಜಾಪಿತನಾಗಿದ್ದಾರೆ. ಪ್ರಜಾಪಿತನು ಯಾವಾಗ ಬೇಕು?
ಸತ್ಯಯುಗದಲ್ಲಿಯೇ? ಅಲ್ಲ. ಪುರುಷೋತ್ತಮ ಸಂಗಮಯುಗದಲ್ಲಿ ಪ್ರಜಾಪಿತನು ಬೇಕು. ಸತ್ಯಯುಗವು ಯಾವಾಗ
ಸ್ಥಾಪನೆಯಾಗುತ್ತದೆ ಎಂದೂ ಸಹ ಮನುಷ್ಯರಿಗೆ ಗೊತ್ತಿಲ್ಲ, ಅವರು ಸತ್ಯಯುಗ-ಕಲಿಯುಗಕ್ಕೆ ಲಕ್ಷಾಂತರ
ವರ್ಷಗಳೆಂದು ಹೇಳಿ ಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ- ಒಂದು ಯುಗಕ್ಕೆ 1250
ವರ್ಷಗಳಿರುತ್ತವೆ. ಈ ಜನ್ಮಗಳದ್ದೂ ಲೆಕ್ಕಾಚಾರ ಬೇಕಲ್ಲವೇ ಏಣಿಯ ಲೆಕ್ಕವೂ ಬೇಕಲ್ಲವೆ- ನಾವು ಹೇಗೆ
ಇಳಿಯುತ್ತೇವೆ. ಮೊಟ್ಟ ಮೊದಲು ಬುನಾದಿಯು ದೇವಿ-ದೇವತೆಗಳಾಗಿದ್ದಾರೆ, ಅವರ ನಂತರ ಇಸ್ಲಾಮಿ,
ಬೌದ್ಧಿಯರು ಬರುತ್ತಾರೆ. ಹೀಗೆ ತಂದೆಯು ವೃಕ್ಷದ ರಹಸ್ಯವನ್ನೂ ತಿಳಿಸಿದ್ದಾರೆ. ತಂದೆಯ ವಿನಃ
ಇದನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಈ ಚಿತ್ರಗಳನ್ನು ಯಾರು ರಚಿಸಿದರು? ಯಾರು ಕಲಿಸಿದರು?
ಎಂದು ನಿಮ್ಮನ್ನು ಕೇಳುತ್ತಾರೆ. ಆಗ ತಿಳಿಸಿ, ತಂದೆಯು ನಮಗೆ ಧ್ಯಾನದಲ್ಲಿ ತೋರಿಸಿದರು. ನಂತರ ನಾವು
ಇಲ್ಲಿ ಬಂದು ಅದನ್ನು ರಚಿಸುತ್ತೇವೆ ಮತ್ತೆ ತಂದೆಯೇ ಈ ರಥದಲ್ಲಿ ಬಂದು ಅದನ್ನು ಹೀಗೀಗೆ ಮಾಡಿ ಎಂದು
ಸರಿ ಪಡಿಸುತ್ತಾರೆ, ತಾವೇ ತಿದ್ದು ಪಡಿ ಮಾಡುತ್ತಾರೆ.
ಕೃಷ್ಣನಿಗೆ ಶ್ಯಾಮ ಸುಂದರನೆಂದು ಹೇಳುತ್ತಾರೆ ಆದರೆ ಏಕೆ ಹೇಳಲಾಗುತ್ತದೆ ಎಂಬುದನ್ನು ಮನುಷ್ಯರು
ತಿಳಿದಿಲ್ಲ. ವೈಕುಂಠದ ಮಾಲೀಕನಾಗಿದ್ದಾಗ ಸುಂದರನಾಗಿದ್ದ, ಹಳ್ಳಿಯ ಪೋರನಾದಾಗ ಶ್ಯಾಮನಾದನು.
ಆದುದರಿಂದ ಶ್ಯಾಮ ಸುಂದರನೆಂದು ಹೇಳುತ್ತಾರೆ. ಕೃಷ್ಣನೇ ಮೊದಲು ಬರುತ್ತಾನೆ, ತತ್ತ್ವಂ. ಈ
ಲಕ್ಷ್ಮೀ-ನಾರಾಯಣರ ರಾಜ್ಯಭಾರವು ನಡೆಯುತ್ತದೆ. ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಯಾರು
ಮಾಡುತ್ತಾರೆಂಬುದು ಗೊತ್ತಿಲ್ಲ. ಭಾರತವನ್ನೂ ಸಹ ಮರೆತು ಹಿಂದೂಸ್ಥಾನ ನಿವಾಸಿಗಳು ಹಿಂದೂಗಳೆಂದು
ಹೇಳುತ್ತಾರೆ. ನಾನು ಭಾರತದಲ್ಲಿಯೇ ಬರುತ್ತೇನೆ. ಭಾರತದಲ್ಲಿ ಯಾವ ದೇವಿ-ದೇವತೆಗಳ ರಾಜ್ಯವಿತ್ತೋ
ಅದು ಈಗ ಪ್ರಾಯಲೋಪವಾಗಿ ಬಿಟ್ಟಿದೆ, ನಾನು ಅದನ್ನು ಪುನಃ ಸ್ಥಾಪನೆ ಮಾಡಲು ಬರುತ್ತೇನೆ. ಮೊಟ್ಟ
ಮೊದಲನೆಯದೇ ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ. ಈ ವೃಕ್ಷವು ವೃದ್ಧಿ ಹೊಂದುತ್ತಾ ಹೋಗುತ್ತದೆ.
ಹೊಸ-ಹೊಸ ಎಲೆಗಳು ಮಠ ಪಂಥಗಳು ಕೊನೆಯಲ್ಲಿ ಬರುತ್ತವೆ ಅಂದಾಗ ಅವುಗಳಿಂದಲೂ ವೃಕ್ಷವು ಶೋಭೆಯಾಗಿ
ಬಿಡುತ್ತದೆ. ನಂತರ ಅಂತಿಮದಲ್ಲಿ ಯಾವಾಗ ಇಡೀ ವೃಕ್ಷವು ಜಡಜಡೀಭೂತ ಸ್ಥಿತಿ ಹೊಂದುತ್ತದೆಯೋ ಆಗ ನಾನು
ಮತ್ತೆ ಬರುತ್ತೇನೆ. ಯಧಾ ಯಧಾಹೀ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ........ ಆತ್ಮವು ತನ್ನನ್ನೂ
ತಿಳಿದುಕೊಂಡಿಲ್ಲ, ತಂದೆಯನ್ನೂ ತಿಳಿದುಕೊಂಡಿಲ್ಲ. ತಮಗೂ ನಿಂದನೆ ಮಾಡಿಕೊಳ್ಳುತ್ತಾರೆ, ತಂದೆಗೂ
ಮತ್ತು ದೇವತೆಗಳಿಗೂ ನಿಂದನೆ ಮಾಡುತ್ತಿರುತ್ತಾರೆ. ತಮೋಪ್ರಧಾನ.ತಿಳುವಳಿಕೆ ಹೀನರಾದಾಗ ನಾನು
ಬರುತ್ತೇನೆ, ಪತಿತ ಪ್ರಪಂಚದಲ್ಲೇ ಬರಬೇಕಾಗುತ್ತದೆ. ನೀವು ಮನುಷ್ಯರಿಗೆ ಜೀವದಾನ ಮಾಡುವಿರಿ, ಅಂದರೆ
ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವಿರಿ. ಎಲ್ಲಾ ದುಃಖಗಳಿಂದ ಅರ್ಧಕಲ್ಪಕ್ಕಾಗಿ ದೂರ ಮಾಡಿ
ಬಿಡುತ್ತೀರಿ. ವಂದೇ ಮಾತರಂ ಎಂದು ಗಾಯನವೂ ಇದೆಯಲ್ಲವೆ. ಯಾವ ಮಾತೆಯರು, ಯಾರ ವಂದನೆ ಮಾಡುತ್ತಾರೆ?
ನೀವು ಮಾತೆಯರಾಗಿದ್ದೀರಿ, ಇಡೀ ಸೃಷ್ಟಿಯನ್ನು ಸ್ವರ್ಗವನ್ನಾಗಿ ಮಾಡುತ್ತೀರಿ. ಭಲೆ ಪುರುಷರೂ
ಇದ್ದಾರೆ. ಆದರೆ ಮೆಜಾರಿಟಿ ಮಾತೆಯರದಾಗಿದೆ, ಆದ್ದರಿಂದ ತಂದೆಯು ಮಾತೆಯರ ಮಹಿಮೆ ಮಾಡುತ್ತಾರೆ.
ತಂದೆಯು ಬಂದು ನಿಮ್ಮನ್ನು ಇಷ್ಟೊಂದು ಮಹಿಮೆಗೆ ಯೋಗ್ಯರನ್ನಾಗಿ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಅಪಾರ ಸುಖದ
ಪ್ರಪಂಚದಲ್ಲಿ ಹೋಗುವುದಕ್ಕಾಗಿ ಸಂಗಮದಲ್ಲಿ ನಿಲ್ಲಬೇಕು. ಸಾಕ್ಷಿಯಾಗಿ ಎಲ್ಲವನ್ನೂ ನೋಡುತ್ತಾ
ಬುದ್ಧಿಯೋಗವನ್ನು ಹೊಸ ಪ್ರಪಂಚದಲ್ಲಿಡಬೇಕು. ಬುದ್ಧಿಯಲ್ಲಿರಲಿ- ಈಗ ನಾವು ಹಿಂತಿರುಗಿ ಮನೆಗೆ
ಹೋಗುತ್ತಿದ್ದೇವೆ.
2. ಎಲ್ಲರಿಗೆ ಜೀವದಾನ ನೀಡಬೇಕು. ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.
ಬೇಹದ್ದಿನ ತಂದೆಯಿಂದ ಓದಿ ಅನ್ಯರಿಗೂ ಓದಿಸಬೇಕಾಗಿದೆ. ದೈವೀ ಗುಣಗಳನ್ನು ಧಾರಣೆ ಮಾಡಿ ಮತ್ತು
ಮಾಡಿಸಬೇಕು.
ವರದಾನ:
ತಮ್ಮ ಸ್ಥಾನದ (ಫೊಜಿಷನ್)
ಸ್ಮತಿಯ ಮೂಲಕ ಮಾಯೆಯ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಳ್ಳುವಂತಹವರೆ ನಿರಂತರ ಯೋಗಿ ಭವ.
ಹೇಗೆ ಸ್ಥೂಲ
ಫೊಜಿಷನ್ ಉಳ್ಳವರು ತಮ್ಮ ಪೊಜಿಷನ್ ಅನ್ನು ಎಂದೂ ಮರೆಯುವುದಿಲ್ಲ. ಹಾಗೆಯೆ ನಿಮ್ಮ ಪೊಜಿಷನ್
ಆಗಿದೆ-ಮಾಸ್ಟರ್ ಸರ್ವಶಕ್ತಿವಾನ್, ಇದನ್ನು ಸದಾ ಸ್ಮತಿಯಲ್ಲಿಟ್ಟುಕೊಳ್ಳಿ ಮತ್ತು ಪ್ರತಿದಿನ
ಅಮೃತವೇಳೆ ಈ ಸ್ಮತಿಯನ್ನು ಇಮರ್ಜ್ ಮಾಡಿಕೊಳ್ಳಿ. ಆಗ ನಿರಂತರ ಯೋಗಿ ಆಗಿ ಬಿಡುವಿರಿ ಮತ್ತು ಇಡೀ
ದಿನ ಅದರ ಸಹಯೋಗ ಸಿಗುತ್ತಿರುವುದು. ನಂತರ ಮಾಸ್ಟರ್ ಸರ್ವ ಶಕ್ತಿವಾನ್ ರ ಎದುರು ಮಾಯೆ ಬರಲು
ಸಾಧ್ಯವಿಲ್ಲ, ಯಾವಾಗ ನೀವು ನಿಮ್ಮ ಸ್ಮತಿಯ ಉನ್ನತ ಸ್ಟೇಜ್ ಮೇಲಿರುವಿರಿ. ಆಗ ಮಾಯಾ ಇರುವೆಯನ್ನು
ಗೆಲ್ಲುವುದು ಸಹಜವಾಗಿ ಬಿಡುವುದು.
ಸ್ಲೋಗನ್:
ಆತ್ಮರೂಪಿ
ಪುರುಷನನ್ನು ಶ್ರೇಷ್ಠ ಮಾಡುವಂತಹವರೇ ಸತ್ಯ ಪುರುಷಾರ್ಥಿಗಳು.