23.12.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಹೆಜ್ಜೆ-ಹೆಜ್ಜೆಯಲ್ಲಿಯೂ ಶ್ರೀಮತದನುಸಾರ ನಡೆಯುವುದೇ ಅತ್ಯುತ್ತಮ ಚಾರ್ಟ್ ಆಗಿದೆ, ಯಾವ ಮಕ್ಕಳಿಗೆ
ಶ್ರೀಮತದ ಬೆಲೆಯಿದೆಯೋ ಅವರು ಅವಶ್ಯವಾಗಿ ಮುರುಳಿಯನ್ನು ಓದುತ್ತಾರೆ”
ಪ್ರಶ್ನೆ:
ನೀವು ಈಶ್ವರನ
ಮಕ್ಕಳೊಂದಿಗೆ ಯಾವ ಯನ್ನು ಯಾರೂ ಕೇಳಲು ಸಾಧ್ಯವಿಲ್ಲ?
ಉತ್ತರ:
ನೀವು ಖುಷಿಯಾಗಿದ್ದೀರಾ ಎಂದು ನೀವು ಮಕ್ಕಳನ್ನು ಯಾರೂ ಕೇಳಲು ಸಾಧ್ಯವಿಲ್ಲ, ಏಕೆಂದರೆ ನೀವು
ಹೇಳುತ್ತೀರಿ - ನಾವು ಸದಾ ಖುಷಿಯಾಗಿದ್ದೇವೆ. ಪರಬ್ರಹ್ಮದಲ್ಲಿರುವ, ಪರಮಾತ್ಮನನ್ನು ಪಡೆಯುವ
ಚಿಂತೆಯಿತ್ತು, ಅವರು ಸಿಕ್ಕಿ ಬಿಟ್ಟರೆಂದಮೇಲೆ ಇನ್ನ್ಯಾವ ಮಾತಿನ ಚಿಂತೆ ಮಾಡಬೇಕು! ನೀವು ಭಲೆ
ರೋಗಿಯಾಗಿದ್ದರೂ ಸಹ ನಾವು ಪ್ರಸನ್ನರಾಗಿದ್ದೇವೆ ಎಂದು ಹೇಳುತ್ತೇವೆ. ಈಶ್ವರನ ಮಕ್ಕಳಿಗೆ ಯಾವುದೇ
ಮಾತಿನ ಚಿಂತೆಯಿಲ್ಲ. ಇವರ ಮೇಲೆ ಮಾಯೆಯ ಪ್ರಭಾವವಾಗಿದೆಯೆಂಬುದನ್ನು ತಂದೆಯು ನೋಡಿದಾಗ ಕೇಳುತ್ತಾರೆ
- ಮಕ್ಕಳೇ, ಪ್ರಸನ್ನಚಿತ್ತರಾಗಿದ್ದೀರಾ?
ಓಂ ಶಾಂತಿ.
ತಂದೆಯು ತಿಳಿಸುತ್ತಾರೆ - ಮಕ್ಕಳ ಬುದ್ಧಿಯಲ್ಲಿ ಇದು ಅವಶ್ಯವಾಗಿ ಇರುವುದಲ್ಲವೆ - ನಮ್ಮ ತಂದೆಯು
ತಂದೆಯೂ ಆಗಿದ್ದಾರೆ, ಶಿಕ್ಷಕ ಮತ್ತು ಸದ್ಗುರುವೂ ಆಗಿದ್ದಾರೆ. ಈ ನೆನಪಿನಲ್ಲಿ ಅವಶ್ಯವಾಗಿ
ಇರುತ್ತೀರಿ. ಈ ನೆನಪನ್ನು ಎಂದೂ ಯಾರೂ ಕಲಿಸಲು ಸಾಧ್ಯವಿಲ್ಲ. ಕಲ್ಪ-ಕಲ್ಪವೂ ತಂದೆಯೇ ಬಂದು
ಕಲಿಸುತ್ತಾರೆ. ಅವರು ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆ. ಇದನ್ನು ಈಗಲೇ ತಿಳಿಸಲಾಗುತ್ತದೆ -
ಜ್ಞಾನದ ನೇತ್ರ, ದಿವ್ಯ ಬುದ್ಧಿಯು ಸಿಕ್ಕಿದೆ. ಭಲೆ ಮಕ್ಕಳು ತಿಳಿದುಕೊಂಡಿರುತ್ತೀರಿ. ಆದರೆ
ತಂದೆಯನ್ನೇ ಮರೆತು ಹೋಗುತ್ತೀರೆಂದರೆ ಶಿಕ್ಷಕ ಮತ್ತು ಸದ್ಗುರು ಹೇಗೆ ನೆನಪಿಗೆ ಬರುವರು. ಮಾಯೆಯು
ಬಹಳ ಪ್ರಬಲವಾಗಿದೆ, ಅದು ತಂದೆಯ ಮೂರೂ ರೂಪಗಳನ್ನೇ ಮರೆಸಿ ಬಿಡುತ್ತದೆ. ನಾವು ಸೋತು ಹೋದೆವೆಂದು
ಹೇಳುತ್ತಾರೆ. ಹಾಗೆ ನೋಡಿದರೆ ಹೆಜ್ಜೆ-ಹೆಜ್ಜೆಯಲ್ಲಿ ಪದುಮದಷ್ಟು ಸಂಪಾದನೆಯಿದೆ, ಆದರೆ
ಸೋಲನ್ನನುಭವಿಸಿದರೆ ಪದುಮದಷ್ಟು ಹೇಗಾಗುತ್ತದೆ? ದೇವತೆಗಳಿಗೆ ಪದುಮ (ಕಮಲ) ದ ಚಿಹ್ನೆಯನ್ನು
ತೋರಿಸುತ್ತಾರೆ. ಇದು ಈಶ್ವರನ ವಿದ್ಯೆಯಾಗಿದೆ. ಈ ರೀತಿ ಮನುಷ್ಯರ ವಿದ್ಯೆ ಎಂದೂ ಇರಲು
ಸಾಧ್ಯವಿಲ್ಲ. ಭಲೆ ದೇವತೆಗಳ ಮಹಿಮೆ ಮಾಡಲಾಗುತ್ತದೆ ಆದರೂ ಸಹ ಸರ್ವ ಶ್ರೇಷ್ಠರು ಒಬ್ಬರೇ
ತಂದೆಯಾಗಿದ್ದಾರೆ. ಬಾಕಿ ದೇವತೆಗಳ ಮಹಿಮೆ ಏನಾಗಿದೆ? ಇಂದು ಕನಿಷ್ಠರು ನಾಳೆ ರಾಜರು. ಈಗ ನೀವು
ಪುರುಷಾರ್ಥ ಮಾಡಿ ಇಂತಹ ದೇವತೆಗಳಾಗುತ್ತಿದ್ದೀರಿ. ನಿಮಗೆ ತಿಳಿದಿದೆ - ಈ ಪುರುಷಾರ್ಥದಲ್ಲಿ
ಅನೇಕರು ಅನುತ್ತೀರ್ಣರಾಗುತ್ತಾರೆ. ಜ್ಞಾನವಂತೂ ಬಹಳ ಸಹಜ ಆದರೂ ಸಹ ಇದರಲ್ಲಿ ಕೆಲವರೇ
ಉತ್ತೀರ್ಣರಾಗುತ್ತಾರೆ - ಏಕೆ? ಮಾಯೆಯು ಪದೇ-ಪದೇ ಮರೆಸಿ ಬಿಡುತ್ತದೆ. ತಮ್ಮ ಚಾರ್ಟ್ ಇಡಿ ಎಂದು
ತಂದೆಯು ಹೇಳುತ್ತಾರೆ, ಆದರೆ ಮಕ್ಕಳು ಬರೆಯುವುದೇ ಇಲ್ಲ. ಎಲ್ಲಿಯವರೆಗೆ ಬರೆಯುವರೋ ಒಂದುವೇಳೆ
ಬರೆದರೂ ಸಹ ಕೆಲವೊಮ್ಮೆ ಅತೀ ಮೇಲೆ, ಕೆಲವೊಮ್ಮೆ ಅತೀ ಕೆಳಗೆ. ಯಾರು ಹೆಜ್ಜೆ-ಹೆಜ್ಜೆಯಲ್ಲಿ
ಶ್ರೀಮತದಂತೆ ನಡೆಯುವರೋ ಅವರದು ಉತ್ತಮ ಚಾರ್ಟ್ ಆಗಿದೆ. ತಂದೆಯಂತೂ ತಿಳಿಯುತ್ತಾರೆ - ಪಾಪ! ಇವರಿಗೆ
ಸಂಕೋಚವಾಗುತ್ತದೆಯೇನೋ! ಇಲ್ಲವೆಂದರೆ ಶ್ರೀಮತವನ್ನು ಕಾರ್ಯದಲ್ಲಿ ತರಬೇಕು, ಒಂದೆರಡು
ಪರ್ಸೇಂಟ್ನ್ನು ಪರಿಶ್ರಮದಿಂದ ಬರೆಯುತ್ತಾರೆ. ಶ್ರೀಮತದ ಪ್ರತಿ ಅಷ್ಟೊಂದು ಬೆಲೆಯಿಲ್ಲ, ಮುರುಳಿ
ಸಿಕ್ಕಿದರೂ ಸಹ ಓದುವುದಿಲ್ಲ. ಅವರ ಹೃದಯಕ್ಕೆ ಅವಶ್ಯವಾಗಿ ಈ ರೀತಿಯೆನಿಸಬಹುದು - ತಂದೆಯಂತೂ
ಸತ್ಯವನ್ನೇ ಹೇಳುತ್ತಾರೆ. ನಾವು ಮುರುಳಿಯನ್ನು ಓದುವುದಿಲ್ಲ ಅಂದಾಗ ಅನ್ಯರಿಗೇನು ಕಲಿಸುವರು?
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ಸ್ವರ್ಗದ ಮಾಲೀಕರಾಗುವಿರಿ.
ಇದರಲ್ಲಿ ತಂದೆಯ ನೆನಪೂ ಬರುವುದು, ಓದಿಸುವವರ ನೆನಪೂ ಬಂದು ಬಿಟ್ಟಿತು, ಸದ್ಗತಿದಾತನ ನೆನಪೂ
ಬಂದಿತು. ಚಿಕ್ಕ-ಚಿಕ್ಕ ಶಬ್ಧಗಳಲ್ಲಿ ಪೂರ್ಣ ಜ್ಞಾನವು ಬಂದು ಬಿಡುತ್ತದೆ. ಇಲ್ಲಿ ನೀವು ಇದನ್ನು
ಮನನ ಮಾಡುವುದಕ್ಕಾಗಿ ಬರುತ್ತೀರಿ. ಭಲೆ ತಂದೆಯೂ ಸಹ ಇದನ್ನೇ ತಿಳಿಸುತ್ತಾರೆ. ಏಕೆಂದರೆ ನೀವೇ
ಹೇಳುತ್ತೀರಿ - ಬಾಬಾ, ನಾವು ಮರೆತು ಹೋಗುತ್ತೇವೆ. ಆದ್ದರಿಂದ ಮತ್ತೆ ಅದನ್ನು ಅಭ್ಯಾಸ ಮಾಡಲು
ಇಲ್ಲಿಗೆ ಬರುತ್ತೇವೆ. ಭಲೆ ಇಲ್ಲಿ ಯಾರಾದರೂ ಮಾಡಿದರೂ ಸಹ ಅದರಲ್ಲಿ ಅಷ್ಟೊಂದು ಫಲ ಸಿಗುವುದಿಲ್ಲ.
ಅದೃಷ್ಟದಲ್ಲಿಲ್ಲವೆಂದರೆ ಪುರುಷಾರ್ಥವೇನು ಮಾಡುತ್ತಾರೆ? ಪುರುಷಾರ್ಥ ಮಾಡಿಸುವವರು ಒಬ್ಬರೇ
ತಂದೆಯಾಗಿದ್ದಾರೆ. ಇದರಲ್ಲಿ ಯಾರಿಗೂ ವಿಶೇಷವಾಗಿ ಪುರುಷಾರ್ಥ ಮಾಡಿಸುವುದಿಲ್ಲ. ಆ ವಿದ್ಯೆಯಲ್ಲಂತೂ
ಇನ್ನೂ ಹೆಚ್ಚಿನದಾಗಿ ಓದಿಸಲು ಶಿಕ್ಷಕರನ್ನು ಕರೆಯುತ್ತಾರೆ, ಇಲ್ಲಂತೂ ಅದೃಷ್ಟವನ್ನು ರೂಪಿಸಲು
ತಂದೆಯು ಎಲ್ಲರಿಗೆ ಏಕರಸವಾಗಿ ಓದಿಸುತ್ತಾರೆ. ಒಬ್ಬೊಬ್ಬರಿಗೂ ಬೇರೆ-ಬೇರೆಯಾಗಿ ಕೂರಿಸಿ ಓದಿಸಲು
ಎಷ್ಟೊಂದು ಮಂದಿ ಮಕ್ಕಳಿದ್ದಾರೆ, ಲೌಕಿಕ ವಿದ್ಯೆಯಲ್ಲಿ ಯಾರಾದರೂ ಹಿರಿಯ ವ್ಯಕ್ತಿಗಳ ಮಕ್ಕಳಿದ್ದರೆ
ಅವರು ಕರೆಸಿ ಇನ್ನೂ ಹೆಚ್ಚಿನದಾಗಿ ಓದಿಸಲು ಹೇಳುತ್ತಾರೆ. ಶಿಕ್ಷಕರಿಗೆ ತಿಳಿದಿರುತ್ತದೆ - ಇವರು
ಬಹಳ ಮಂದ ಬುದ್ಧಿಯವರಾಗಿದ್ದಾರೆ. ಆದ್ದರಿಂದ ಓದಿಸಿ ಅವರನ್ನು ಯೋಗ್ಯರನ್ನಾಗಿ ಮಾಡುತ್ತಾರೆ ಆದರೆ
ಈ ಶಿಕ್ಷಕರು ಹಾಗೆ ಮಾಡುವುದಿಲ್ಲ. ಇವರು ಎಲ್ಲರಿಗೂ ಒಂದೇ ಸಮನಾಗಿ ಓದಿಸುತ್ತಾರೆ. ಹೆಚ್ಚಿನ
ಪುರುಷಾರ್ಥವೆಂದರೆ ಶಿಕ್ಷಕರು ಸ್ವಲ್ಪ ಕೃಪೆ ತೋರುತ್ತಾರೆ. ಭಲೆ ಹಣವನ್ನು ತೆಗೆದುಕೊಂಡು ವಿಶೇಷ
ಸಮಯ ಕೊಟ್ಟು ಓದಿಸುತ್ತಾರೆ. ಇದರಿಂದ ಅವರು ಹೆಚ್ಚಿನದಾಗಿ ಓದಿ ಬುದ್ಧಿವಂತರಾಗುತ್ತಾರೆ. ಆದರೆ
ಇಲ್ಲಿ ತಂದೆಯು ಎಲ್ಲರಿಗೆ ಒಂದೇ ಮಹಾಮಂತ್ರವನ್ನು ಕೊಡುತ್ತಾರೆ - ಮನ್ಮನಾಭವ. ತಂದೆಯೊಬ್ಬರೇ
ಪತಿತ-ಪಾವನನಾಗಿದ್ದಾರೆ, ಅವರ ನೆನಪಿನಿಂದಲೇ ಪಾವನರಾಗುತ್ತೇವೆ. ಅದು ನೀವು ಮಕ್ಕಳ ಕೈಯಲ್ಲಿಯೇ ಇದೆ.
ಎಷ್ಟು ನೆನಪು ಮಾಡುವಿರೋ ಅಷ್ಟು ಪಾವನರಾಗುವಿರಿ. ಎಲ್ಲವೂ ಪ್ರತಿಯೊಬ್ಬರ ಪುರುಷಾರ್ಥದ ಮೇಲೆ
ಆಧಾರಿತವಾಗಿದೆ. ಅವರಂತೂ ತೀರ್ಥ ಯಾತ್ರೆ ಮಾಡಲು ಒಬ್ಬರು ಇನ್ನೊಬ್ಬರನ್ನು ನೋಡಿಯಾದರೂ ಹೋಗುತ್ತಾರೆ.
ನೀವು ಮಕ್ಕಳೂ ಸಹ ಬಹಳಷ್ಟು ಯಾತ್ರೆ ಮಾಡಿದಿರಿ, ಅದರಿಂದೇನಾಯಿತು? ಕೆಳಗಿಳಿಯುತ್ತಲೇ ಹೋಗುತ್ತೀರಿ.
ಯಾತ್ರೆಯು ಏತಕ್ಕಾಗಿ ಬೇಕು? ಇದರಿಂದ ಏನು ಸಿಗುತ್ತದೆ ಎಂಬುದೇನೂ ತಿಳಿದಿರಲಿಲ್ಲ. ಈಗ ನಿಮ್ಮದು
ನೆನಪಿನ ಯಾತ್ರೆಯಾಗಿದೆ. ಶಬ್ಧವು ಒಂದೇ ಆಗಿದೆ - ಮನ್ಮನಾಭವ. ನಿಮ್ಮ ಈ ಯಾತ್ರೆಯು ಅನಾದಿಯಾಗಿದೆ,
ನಾವು ಈ ಯಾತ್ರೆಯನ್ನು ಅನಾದಿ ಕಾಲದಿಂದ ಮಾಡುತ್ತಾ ಬಂದಿದ್ದೇವೆ ಎಂದು ಅವರೂ ಸಹ ಹೇಳುತ್ತಾರೆ.
ನೀವೀಗ ಜ್ಞಾನ ಸಹಿತವಾಗಿ ಹೇಳುತ್ತೀರಿ - ನಾವು ಕಲ್ಪ-ಕಲ್ಪವೂ ಈ ಯಾತ್ರೆಯನ್ನು ಮಾಡುತ್ತೇವೆ.
ಸ್ವಯಂ ತಂದೆಯೇ ಬಂದು ಈ ಯಾತ್ರೆಯನ್ನು ಕಲಿಸುತ್ತಾರೆ. ಆ ತೀರ್ಥ ಯಾತ್ರೆಗಳಲ್ಲಿ ಎಷ್ಟೊಂದು
ಪರಿಶ್ರಮ ಪಡುತ್ತಾರೆ, ಎಷ್ಟು ಕಷ್ಟವಿರುತ್ತದೆ! ಸದ್ದು ಗದ್ದಲವಿರುತ್ತದೆ. ಈ ಯಾತ್ರೆಯು ಸಂಪೂರ್ಣ
ಶಾಂತಿಯದ್ದಾಗಿದೆ. ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ, ಇದರಿಂದಲೇ ಪಾವನರಾಗಬೇಕು. ತಂದೆಯು
ನಿಮಗೆ ಈ ಸತ್ಯ-ಸತ್ಯವಾದ ಆತ್ಮಿಕ ಯಾತ್ರೆಯನ್ನು ಕಲಿಸಿದ್ದಾರೆ. ಆ ತೀರ್ಥ ಯಾತ್ರೆಗಳನ್ನು
ಜನ್ಮ-ಜನ್ಮಾಂತರದಿಂದ ಮಾಡುತ್ತಲೇ ಇದ್ದೀರಿ. ಆದರೂ ಸಹ ನಾಲ್ಕೂ ಕಡೆ ಅಲೆದಾಡಿದರೂ ಭಗವಂತನಿಂದ ದೂರ
ಉಳಿದೆವೆಂದು ಹಾಡುತ್ತಾರೆ. ಯಾತ್ರೆಯಿಂದ ಬಂದು ಮತ್ತೆ ವಿಕಾರಗಳಲ್ಲಿ ಬೀಳುತ್ತಾರೆಂದರೆ ಏನು ಲಾಭ!
ಈಗ ನೀವು ತಿಳಿದುಕೊಂಡಿದ್ದೀರಿ - ಇದು ಪುರುಷೋತ್ತಮ ಸಂಗಮಯುಗವಾಗಿದೆ. ಈಗ ತಂದೆಯು ಬಂದಿದ್ದಾರೆ.
ತಂದೆಯು ಬಂದಿದ್ದಾರೆಂಬ ಮಾತನ್ನು ಕೊನೆಗೊಂದು ದಿನ ಎಲ್ಲರೂ ತಿಳಿದುಕೊಳ್ಳುತ್ತಾರೆ. ಭಗವಂತನು
ಕೊನೆಗೂ ಹೇಗೆ ಸಿಗುವರು ಎಂದು ಯಾರೂ ತಿಳಿದುಕೊಂಡಿಲ್ಲ. ನಾಯಿ, ಬೆಕ್ಕಿನಲ್ಲಿ ಸಿಗುವರೆಂದು ಕೆಲವರು
ತಿಳಿಯುತ್ತಾರೆ, ಇವೆಲ್ಲದರಲ್ಲಿ ಭಗವಂತನು ಸಿಗುವರೆ? ಎಷ್ಟೊಂದು ಅಸತ್ಯವಿದೆ. ಅಸತ್ಯವನ್ನೇ
ತಿನ್ನುವುದು, ಅಸತ್ಯವನ್ನೇ ಕುಡಿಯುವುದು, ಅಸತ್ಯದಲ್ಲಿಯೇ ರಾತ್ರಿಯನ್ನು ಕಳೆಯುತ್ತಾರೆ.
ಆದ್ದರಿಂದ ಇದು ಅಸತ್ಯ ಖಂಡವಾಗಿದೆ. ಸ್ವರ್ಗಕ್ಕೆ ಸತ್ಯ ಖಂಡವೆಂದು ಹೇಳಲಾಗುತ್ತದೆ. ಭಾರತವೇ
ಸ್ವರ್ಗವಾಗಿತ್ತು, ಸ್ವರ್ಗದಲ್ಲಿ ಎಲ್ಲಾ ಭಾರತವಾಸಿಗಳಿದ್ದರು. ಇಂದು ಅದೇ ಭಾರತವಾಸಿಗಳು
ನರಕದಲ್ಲಿದ್ದಾರೆ. ಇದನ್ನಂತೂ ನೀವು ಮಧುರಾತಿ ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ - ನಾವು
ತಂದೆಯಿಂದ ಶ್ರೀಮತವನ್ನು ತೆಗೆದುಕೊಂಡು ಭಾರತವನ್ನು ಪುನಃ ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ. ಆ
ಸಮಯದ ಭಾರತದಲ್ಲಿ ಮತ್ತ್ಯಾರೂ ಇರುವುದಿಲ್ಲ. ಇಡೀ ವಿಶ್ವವು ಪವಿತ್ರವಾಗಿ ಬಿಡುತ್ತದೆ. ಈಗಂತೂ
ಅನೇಕಾನೇಕ ಧರ್ಮಗಳಿವೆ. ತಂದೆಯು ಇಡೀ ವೃಕ್ಷದ ಜ್ಞಾನವನ್ನು ತಿಳಿಸುತ್ತಾರೆ. ನಿಮಗೆ ಪುನಃ ಸ್ಮೃತಿ
ತರಿಸುತ್ತಾರೆ - ನೀವೇ ದೇವತೆಗಳಾಗಿದ್ದಿರಿ, ನಂತರ ವೈಶ್ಯ, ಶೂದ್ರರಾದಿರಿ. ಈಗ ನೀವು
ಬ್ರಾಹ್ಮಣರಾಗಿದ್ದೀರಿ. ಈ ಶಬ್ಧವನ್ನು ಎಂದಾದರೂ ಯಾವುದೇ ಸಾಧು-ಸನ್ಯಾಸಿ, ವಿದ್ವಾನರ ಮೂಲಕ
ಕೇಳಿದ್ದೀರಾ? ಈ ಹಮ್ ಸೋ - ಇದರ ಅರ್ಥವನ್ನು ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ! ಹಮ್ ಸೋ
ಎಂದರೆ ನಾನು ಆತ್ಮ, ಹೀಗೀಗೆ ಚಕ್ರವನ್ನು ಸುತ್ತುತ್ತೇನೆ. ಇದಕ್ಕೆ ಅವರು ನಾನಾತ್ಮನೇ ಪರಮಾತ್ಮ,
ಪರಮಾತ್ಮನೇ ಆತ್ಮನೆಂದು ಹೇಳುತ್ತಾರೆ. ಹಮ್ ಸೋ - ನ ಅರ್ಥವನ್ನು ಯಥಾರ್ಥವಾಗಿ ತಿಳಿದುಕೊಂಡಿರುವವರು
ಒಬ್ಬರೂ ಇಲ್ಲ. ತಂದೆಯು ತಿಳಿಸುತ್ತಾರೆ - ಈ ಹಮ್ ಸೋನ ಮಂತ್ರವು ಸದಾ ಬುದ್ಧಿಯಲ್ಲಿ ನೆನಪಿರಬೇಕು.
ಇಲ್ಲವೆಂದರೆ ಹೇಗೆ ಚಕ್ರವರ್ತಿ ರಾಜರಾಗುತ್ತೀರಿ? ಮನುಷ್ಯರಂತೂ 84 ಜನ್ಮಗಳ ಚಕ್ರದ ಅರ್ಥವನ್ನೂ
ತಿಳಿದುಕೊಂಡಿಲ್ಲ. ಭಾರತದ ಉತ್ಥಾನ ಮತ್ತು ಪಥನದ ಗಾಯನವಿದೆ. ಸತೋಪ್ರಧಾನ, ಸತೋ, ರಜೋ, ತಮೋ.
ಸೂರ್ಯವಂಶಿ, ಚಂದ್ರವಂಶಿ........
ಈಗ ನೀವು ಮಕ್ಕಳಿಗೆ ಎಲ್ಲವೂ ಅರ್ಥವಾಗಿದೆ. ತಂದೆ ಬೀಜರೂಪನೆಂದು ಜ್ಞಾನ ಸಾಗರನೆಂದು ಹೇಳಲಾಗುತ್ತದೆ.
ಅವರು ಈ ಸೃಷ್ಟಿಚಕ್ರದಲ್ಲಿ ಬರುವುದಿಲ್ಲ. ನಾನಾತ್ಮನೇ ಪರಮಾತ್ಮನಾಗಿ ಬಿಡುತ್ತೇನೆಂದಲ್ಲ. ತಂದೆಯು
ತನ್ನ ಸಮಾನ ಜ್ಞಾನಪೂರ್ಣರನ್ನಾಗಿ ಮಾಡುತ್ತಾರೆಯೇ ಹೊರತು ತನ್ನ ಸಮಾನ ಭಗವಂತನನ್ನಾಗಿ
ಮಾಡುವುದಿಲ್ಲ. ಈ ಮಾತುಗಳನ್ನು ಬಹಳ ಚೆನ್ನಾಗಿ ಅರಿತುಕೊಳ್ಳಬೇಕು, ಆಗಲೇ ಬುದ್ಧಿಯು ಕೆಲಸ
ಮಾಡುತ್ತದೆ. ನೀವು ಬುದ್ಧಿಯಿಂದ ನಾವು ಹೇಗೆ 84 ಜನ್ಮಗಳ ಚಕ್ರದಲ್ಲಿ ಬರುತ್ತೇವೆಂಬುದನ್ನು
ಅರಿತುಕೊಳ್ಳಬಹುದು. ಇದರಲ್ಲಿ ಸಮಯ, ವರ್ಣ, ವಂಶಾವಳಿ ಎಲ್ಲವೂ ಬಂದು ಬಿಡುತ್ತದೆ. ಈ ಜ್ಞಾನದಿಂದಲೇ
ಶ್ರೇಷ್ಠಾತಿ ಶ್ರೇಷ್ಠರಾಗುತ್ತೀರಿ. ತಮ್ಮಲ್ಲಿ ಜ್ಞಾನವಿದ್ದರೆ ಅನ್ಯರಿಗೂ ಕೊಡುವಿರಿ. ಆ
ಶಾಲೆಗಳಲ್ಲಿ ಪರೀಕ್ಷೆಯಾದಾಗ ಪ್ರಶ್ನೆ ಪತ್ರಿಕೆಯನ್ನು ಬರೆಸುತ್ತಾರೆ. ಪತ್ರಿಕೆಗಳು ವಿದೇಶದಿಂದ
ಬರುತ್ತವೆ. ಯಾರು ವಿದೇಶದಲ್ಲಿ ಓದುವರೋ ಅವರಲ್ಲಿಯೂ ಬಹಳ ದೊಡ್ಡ ಶಿಕ್ಷಣ ಮಂತ್ರಿಯಿದ್ದರೆ ಅವರು
ಇದನ್ನು ಪರಿಶೀಲಿಸುತ್ತಾರೆ. ಇಲ್ಲಿ ನಿಮ್ಮ ಪತ್ರಿಕೆಗಳನ್ನು ಯಾರು ನೋಡುವರು? ನೀವೇ ನೋಡುವಿರಿ.
ತಮಗೆ ಏನು ಬೇಕೋ ಆ ರೀತಿಯಾಗಬಹುದು, ಓದಿ ತಂದೆಯಿಂದ ಯಾವ ಪದವಿ ಬೇಕೋ ಅದನ್ನು ಪಡೆದುಕೊಳ್ಳಿ. ನೀವು
ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ, ಅನ್ಯರ ಸೇವೆ ಮಾಡುವಿರೋ ಅಷ್ಟೇ ಫಲವು ಸಿಗುತ್ತದೆ.
ಅಂತಹವರಿಗೆ ಸರ್ವೀಸ್ ಮಾಡುವ ಚಿಂತೆಯಿರುತ್ತದೆ - ರಾಜಧಾನಿಯು ಸ್ಥಾಪನೆಯಾಗುತ್ತಿದೆಯೆಂದರೆ
ಅದರಲ್ಲಿ ಪ್ರಜೆಗಳೂ ಬೇಕಲ್ಲವೆ. ಅಲ್ಲಿ ಮಂತ್ರಿ ಮೊದಲಾದವರ ಅವಶ್ಯಕತೆಯಿರುವುದಿಲ್ಲ. ಇಲ್ಲಿ
ಯಾವಾಗ ಬುದ್ಧಿಯು ಕಡಿಮೆಯಾಗುತ್ತದೆಯೋ ಆಗ ಮಂತ್ರಿಯ ಅವಶ್ಯಕತೆಯಿರುವುದು. ಇಲ್ಲಿ ತಂದೆಯ ಬಳಿಯೂ
ಸಹ ಕೆಲವರು ಸಲಹೆ ತೆಗೆದುಕೊಳ್ಳಲು ಬರುತ್ತಾರೆ. ಬಾಬಾ, ನಮ್ಮ ಬಳಿ ಹಣವಿದೆ, ಇದನ್ನು ಏನು
ಮಾಡುವುದು? ವ್ಯಾಪಾರವನ್ನು ಹೇಗೆ ಮಾಡುವುದು? ಅದಕ್ಕೆ ತಂದೆಯು ತಿಳಿಸುತ್ತಾರೆ - ಈ ಪ್ರಪಂಚದ
ವ್ಯಾಪಾರ ಇತ್ಯಾದಿಗಳ ಮಾತನ್ನು ಇಲ್ಲಿಗೆ ತರಬೇಡಿ. ಹಾ! ಯಾರಾದರೂ ಹೃದಯ ವಿಧೀರ್ಣರಾದರೆ ಅವರಿಗೆ
ಧೈರ್ಯವನ್ನು ಕೊಡವುದಕ್ಕಾಗಿ ತಿಳಿಸುತ್ತೇವೆ. ಆದರೆ ಇದು ನನ್ನ ಕರ್ತವ್ಯವಲ್ಲ. ನಿಮ್ಮನ್ನು
ಪತಿತರಿಂದ ಪಾವನರನ್ನಾಗಿ ಮಾಡಿ, ವಿಶ್ವದ ಮಾಲೀಕರನ್ನಾಗಿ ಮಾಡುವ ಕರ್ತವ್ಯವು ನನ್ನದಾಗಿದೆ. ನೀವು
ತಂದೆಯಿಂದ ಸದಾ ಶ್ರೀಮತವನ್ನು ತೆಗೆದುಕೊಳ್ಳುತ್ತಿರಬೇಕು. ಈಗಂತೂ ಎಲ್ಲರದೂ ಅಸುರೀ ಮತವಾಗಿದೆ,
ಸ್ವರ್ಗವು ಸುಖಧಾಮವಾಗಿದೆ. ಅಲ್ಲಿ ಎಂದೂ ನೀವು ಖುಷಿಯಾಗಿದ್ದೀರಾ? ಆರೋಗ್ಯವು ಸರಿಯಾಗಿದೆಯೇ? ಎಂದು
ಕೇಳುವುದಿಲ್ಲ. ಈ ಶಬ್ಧವನ್ನು ಇಲ್ಲಿಯೇ ಕೇಳಲಾಗುತ್ತದೆ. ಸತ್ಯಯುಗದಲ್ಲಿ ಈ ಶಬ್ಧಗಳೇ ಇರುವುದಿಲ್ಲ.
ದುಃಖಧಾಮದ ಮಾತುಗಳೇ ಇರುವುದಿಲ್ಲ. ಆದರೆ ತಂದೆಗೆ ಗೊತ್ತಿದೆ, ಮಕ್ಕಳಲ್ಲಿ ಮಾಯೆಯ ಪ್ರವೇಶತೆಯಾಗುವ
ಕಾರಣ ತಂದೆಯು ಕೇಳುತ್ತಾರೆ - ಸಂಪೂರ್ಣ ಖುಷಿಯಾಗಿದ್ದೀರಾ? ಮನುಷ್ಯರು ಇಲ್ಲಿಯ ಶಬ್ಧಗಳನ್ನು
ಅರಿತುಕೊಳ್ಳಲು ಸಾಧ್ಯವಿಲ್ಲ. ಯಾರಾದರೂ ನಿಮ್ಮನ್ನು ಕೇಳಿದರೆ ನೀವು ಹೀಗೆ ಹೇಳಬಹುದು - ನಾವು
ಈಶ್ವರನ ಮಕ್ಕಳಾಗಿದ್ದೇವೆ ಅಂದಮೇಲೆ ನಮ್ಮೊಂದಿಗೆ ಯೋಗ ಕ್ಷೇಮವನ್ನೇನು ಕೇಳುತ್ತೀರಿ?
ಪರಬ್ರಹ್ಮದಲ್ಲಿರುವ ಈಶ್ವರನನ್ನು ಪಡೆಯುವ ಚಿಂತೆಯಿತ್ತು, ಅವರು ಸಿಕ್ಕಿ ಬಿಟ್ಟರು ಅಂದಮೇಲೆ
ಇನ್ನೇನು ಚಿಂತೆ? ಇದು ಸದಾ ನೆನಪಿರಬೇಕು. ನಾವು ಯಾವ ಮಕ್ಕಳಾಗಿದ್ದೇವೆ ಎಂಬ ಜ್ಞಾನವೂ ಸಹ
ಬುದ್ಧಿಯಲ್ಲಿದೆ. ಯಾವಾಗ ಪಾವನರಾಗಿ ಬಿಡುತ್ತೇವೆಯೋ ಆಗ ಯುದ್ಧವು ಪ್ರಾರಂಭವಾಗಿ ಬಿಡುವುದು.
ಮನುಷ್ಯರು ನಿಮ್ಮನ್ನು ಅವಶ್ಯವಾಗಿ ಕೇಳುತ್ತಾರೆ ಅಂದಾಗ ನೀವು ಅವಶ್ಯವಾಗಿ ಹೇಳುತ್ತೀರಿ - ನಾವಂತೂ
ಖುಷಿಯಾಗಿದ್ದೇವೆ, ರೋಗಿಯಾಗಿದ್ದರೂ ಸಹ ಖುಷಿಯಲ್ಲಿರುತ್ತೀರಿ. ತಂದೆಯ ನೆನಪಿನಲ್ಲಿರುತ್ತೀರಿ.
ಆದ್ದರಿಂದ ಸ್ವರ್ಗಕ್ಕಿಂತಲೂ ಹೆಚ್ಚಿನದಾಗಿ ಇಲ್ಲಿ ಖುಷಿಯಲ್ಲಿರುತ್ತೀರಿ. ಏಕೆಂದರೆ ಈಗ ಸ್ವರ್ಗದ
ರಾಜ್ಯಭಾಗ್ಯವನ್ನು ಕೊಡುವ ತಂದೆಯು ಸಿಕ್ಕಿದ್ದಾರೆ. ನಮ್ಮನ್ನು ಎಷ್ಟೊಂದು ಯೋಗ್ಯರನ್ನಾಗಿ
ಮಾಡುತ್ತಾರೆ ಅಂದಮೇಲೆ ನಮಗೇನು ಚಿಂತೆ? ಈಶ್ವರನ ಮಕ್ಕಳಿಗೆ ಯಾವ ಮಾತಿನ ಚಿಂತೆ? ಅಲ್ಲಿ
ದೇವತೆಗಳಿಗೂ ಚಿಂತೆಯಿರಲಿಲ್ಲ. ಆ ದೇವತೆಗಳಿಗಿಂತಲೂ ಮೇಲಿರುವವರು ಈಶ್ವರನಾಗಿದ್ದಾರೆ ಅಂದಮೇಲೆ
ಈಶ್ವರನ ಮಕ್ಕಳಿಗೆ ಚಿಂತೆಯಿರುವುದೇ? ನಮಗೆ ತಂದೆಯು ಓದಿಸುತ್ತಿದ್ದಾರೆ, ನಮ್ಮ ತಂದೆಯು ಶಿಕ್ಷಕ,
ಸದ್ಗುರುವಾಗಿದ್ದಾರೆ. ತಂದೆಯು ನಮ್ಮ ಮೇಲೆ ಕಿರೀಟವನ್ನಿಡುತ್ತಾರೆ, ಇದಕ್ಕೆ ಆಂಗ್ಲ ಭಾಷೆಯಲ್ಲಿ
ಕ್ರೌನ್ ಆಫ್ ಪ್ರಿನ್ಸ್ ಎಂದು ಹೇಳುತ್ತಾರೆ. ತಂದೆಯ ಕಿರೀಟವನ್ನು ಮಕ್ಕಳು ಧರಿಸುವರು. ನೀವು
ತಿಳಿದುಕೊಳ್ಳುತ್ತೀರಿ - ಸತ್ಯಯುಗದಲ್ಲಿ ಸುಖವೇ ಸುಖವಿರುತ್ತದೆ. ಪ್ರತ್ಯಕ್ಷ ರೂಪದಲ್ಲಿ ನೀವು
ಅಲ್ಲಿ ಹೋದಾಗ ಸುಖವನ್ನು ಪಡೆಯುತ್ತೀರಿ. ಅದು ನಿಮಗೇ ಗೊತ್ತು, ಸತ್ಯಯುಗದಲ್ಲಿ ಏನಿರುತ್ತದೆ, ಈ
ಶರೀರವನ್ನು ಬಿಟ್ಟು ಎಲ್ಲಿ ಹೋಗುತ್ತೇವೆ? ಇದೆಲ್ಲವೂ ನಿಮಗೆ ತಿಳಿಯುತ್ತದೆ. ಈಗ ನಿಮಗೆ
ಸನ್ಮುಖದಲ್ಲಿ ತಂದೆಯು ಓದಿಸುತ್ತಿದ್ದಾರೆ. ನಿಮಗೂ ತಿಳಿದಿದೆ, ಸತ್ಯ-ಸತ್ಯವಾಗಿ ನಾವು
ಸ್ವರ್ಗದಲ್ಲಿ ಹೋಗುತ್ತೇವೆ. ಇಂತಹವರು ಸತ್ತಾಗ ಇವರು ಸ್ವರ್ಗದಲ್ಲಿ ಹೋದರೆಂದು ಮನುಷ್ಯರು
ಹೇಳುತ್ತಾರೆ. ಆದರೆ ಸ್ವರ್ಗ ಮತ್ತು ನರಕವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂದು ಅವರು
ತಿಳಿದುಕೊಂಡಿಲ್ಲ. ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ಜನ್ಮ-ಜನ್ಮಾಂತರದಿಂದ
ಈ ಜ್ಞಾನವನ್ನು ಕೇಳುತ್ತಾ-ಕೇಳುತ್ತಾ ಬೀಳುತ್ತಾ ಬಂದಿದ್ದಾರೆ. ನಾವು ಎಲ್ಲಿಂದ ಎಲ್ಲಿಗೆ ಬಂದು
ಬಿದ್ದಿದ್ದೇವೆ ಎಂದು ಈಗ ನಿಮ್ಮ ಬುದ್ಧಿಯಲ್ಲಿದೆ. ಸತ್ಯಯುಗದಿಂದ ಬೀಳುತ್ತಲೇ ಬಂದಿದ್ದೇವೆ. ಈಗ
ನಾವು ಈ ಪುರುಷೋತ್ತಮ ಸಂಗಮಯುಗದಲ್ಲಿ ತಲುಪಿದ್ದೇವೆ. ಕಲ್ಪ-ಕಲ್ಪವೂ ತಂದೆಯು ಓದಿಸಲು ಬರುತ್ತಾರೆ.
ತಂದೆಯ ಬಳಿ ನೀವು ಇರುತ್ತೀರೆಂದರೆ ಇವರೇ ನಮ್ಮ ಸತ್ಯ-ಸತ್ಯವಾದ ಸದ್ಗುರುವಾಗಿದ್ದಾರೆ. ಅವರು
ಮುಕ್ತಿ-ಜೀವನ್ಮುಕ್ತಿಯ ಮಾತನ್ನು ತಿಳಿಸುತ್ತಾರೆ. ಹೇಗೆ ಈ ಬ್ರಹ್ಮಾ ತಂದೆಯು ಕಲಿಯುತ್ತಾರೆಯೋ ಅದೇ
ರೀತಿ ಇವರನ್ನು ನೋಡಿ ನೀವು ಮಕ್ಕಳು ಕಲಿಯುತ್ತೀರಿ. ಹೆಜ್ಜೆ-ಹೆಜ್ಜೆಯಲ್ಲಿ ಗಮನವನ್ನಿಡಬೇಕಾಗಿದೆ.
ಮನಸ್ಸಾ-ವಾಚಾ-ಕರ್ಮಣಾ ಬಹಳ ಶುದ್ಧವಾಗಿರಬೇಕಾಗಿದೆ. ಒಳಗೆ ಯಾವುದೇ ಕೊಳಕಿರಬಾರದು. ಮಕ್ಕಳು
ತಂದೆಯನ್ನು ಪದೇ-ಪದೇ ಮರೆತು ಹೋಗುತ್ತೀರಿ. ತಂದೆಯನ್ನು ಮರೆಯುವುದರಿಂದ ತಂದೆಯ ಶಿಕ್ಷಣವನ್ನೂ
ಮರೆಯುತ್ತೀರಿ. ನಾವು ವಿದ್ಯಾರ್ಥಿಗಳಾಗಿದ್ದೇವೆ ಎಂಬುದನ್ನೂ ಮರೆತು ಹೋಗುತ್ತೀರಿ. ಇದು ಬಹಳ
ಸಹಜವಾಗಿದೆ. ತಂದೆಯ ವಿದ್ಯೆಯಲ್ಲಿಯೇ ಚಮತ್ಕಾರವಿದೆ. ಇಂತಹ ಚಮತ್ಕಾರವನ್ನು ಮತ್ತ್ಯಾವ ತಂದೆಯು
ಕಲಿಸಲು ಸಾಧ್ಯವಿಲ್ಲ. ಈ ಚಮತ್ಕಾರದಿಂದಲೇ ತಮೋಪ್ರಧಾನದಿಂದ ಸತೋಪ್ರಧಾನರಾಗುತ್ತೀರಿ.
ತಂದೆಯು ನೀವು ಮಕ್ಕಳಿಗೆ ತಿಳುವಳಿಕೆ ನೀಡಿದ್ದಾರೆ – ಧರ್ಮ ಸ್ಥಾಪನೆ ಮಾಡಲು ಯಾರೆಲ್ಲಾ ಹೊಸ
ಆತ್ಮಗಳು ಮೇಲಿನಿಂದ ಬರುವರೋ ಅವರು ಮೊದಲು ದುಃಖವನ್ನನುಭವಿಸುವಂತಹ ಯಾವುದೇ ಕರ್ಮವನ್ನು
ಮಾಡುವುದಿಲ್ಲ. ಪವಿತ್ರ ಆತ್ಮಗಳು ತಮ್ಮ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ, ಹೇಗೆ ಪರಮಪಿತ
ಪರಮಾತ್ಮನು ದುಃಖವನ್ನನುಭವಿಸಲು ಸಾಧ್ಯವಿಲ್ಲ. ದುಃಖ ಅಥವಾ ನಿಂದನೆ ಎಲ್ಲವೂ ಸಹ ಇವರಿಗೆ (ಬ್ರಹ್ಮಾ)
ಸಿಗುತ್ತದೆ. ಅದೇ ರೀತಿ ಕ್ರಿಸ್ತನನ್ನು ಗಲ್ಲಿಗೇರಿಸಿದಾಗ ಯಾವ ತನುವಿನಲ್ಲಿ ಕ್ರಿಸ್ತನ ಆತ್ಮವು
ಪ್ರವೇಶ ಮಾಡಿತ್ತೊ ಅವರೇ (ಜೀಸಸ್) ಈ ದುಃಖವನ್ನು ಸಹನೆ ಮಾಡಿದರು. ಕ್ರಿಸ್ತನ ಪವಿತ್ರ ಆತ್ಮವಂತೂ
ದುಃಖವನ್ನು ಸಹನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕ್ರೈಸ್ಟ್ ಕ್ರಿಶ್ಚಿಯನ್ನರ ತಂದೆಯಾದರು,
ಅವರಿಗೆ ಕ್ರಿಸ್ತನ ಮುಖ ವಂಶಾವಳಿ ಸಹೋದರ ಮತ್ತು ಸಹೋದರಿಯರಾದರೆಂದು ಹೇಳುತ್ತಾರೆ.
ಕ್ರಿಶ್ಚಿಯನ್ನರ ಪ್ರಜಾಪಿತನು ಕ್ರಿಸ್ತನಾದರು, ಯಾರಲ್ಲಿ ಪ್ರವೇಶ ಮಾಡಿ ಮಕ್ಕಳಿಗೆ ಜನ್ಮ ನೀಡಿದರೋ
ಅವರು ತಾಯಿಯಾದರು. ಇವೆಲ್ಲಾ ರಹಸ್ಯಗಳು ತಿಳಿದುಕೊಳ್ಳುವಂತಹವಾಗಿವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸಂಪೂರ್ಣ
ಶಾಂತಿಯ ಸತ್ಯ-ಸತ್ಯವಾದ ಆತ್ಮಿಕ ಯಾತ್ರೆ ಮಾಡಬೇಕಾಗಿದೆ. ಹಮ್ ಸೋನ ಮಂತ್ರವನ್ನು ಸದಾ
ನೆನಪಿಡಬೇಕಾಗಿದೆ ಆಗಲೇ ಚಕ್ರವರ್ತಿ ರಾಜರಾಗುವಿರಿ.
2. ಮನಸಾ-ವಾಚಾ-ಕರ್ಮಣಾ ಬಹಳ ಶುದ್ಧವಾಗಿರಬೇಕಾಗಿದೆ. ಒಳಗೆ ಯಾವುದೇ ಕೊಳಕಿರಬಾರದು.
ಹೆಜ್ಜೆ-ಹೆಜ್ಜೆಯಲ್ಲಿ ಎಚ್ಚರಿಕೆಯಿಂದಿರಬೇಕಾಗಿದೆ. ಶ್ರೀಮತದ ಪ್ರತಿ ಗೌರವವನ್ನಿಡಬೇಕಾಗಿದೆ.
ವರದಾನ:
“ಬಾಬಾ” ಶಬ್ಧದ
ಬೀಗದ ಕೈ ನಿಂದ ಸರ್ವ ಖಜಾನೆ ಪ್ರಾಪ್ತಿ ಮಾಡಿಕೊಳ್ಳುವಂತಹ ಭಾಗ್ಯವಾನ್ ಆತ್ಮ ಭವ.
ತಿಳಿಯಿರಿ ಒಂದುವೇಳೆ
ಜ್ಞಾನದ ಬೇರೆ ಯಾವುದೇ ವಿಸ್ತಾರವನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ ಅಥವಾ ಕೇಳಲು
ಸಾಧ್ಯವಾಗುತ್ತಿಲ್ಲ, ಆದರೆ ಒಂದು ಶಬ್ಧ “ಬಾಬಾ” ಹೃದಯಪೂರ್ವಕವಾಗಿ ಮತ್ತು ಹೃದಯದಿಂದ ಬೇರೆಯವರಿಗೆ
ತಿಳಿಸಿದಿರಾದರೆ ವಿಶೇಷ ಆತ್ಮ ಆದಿರಿ, ಪ್ರಪಂಚದ ಮುಂದೆ ಮಹಾನ್ ಆತ್ಮದ ಸ್ವರೂಪದಲ್ಲಿ ಗಾಯನ
ಯೋಗ್ಯರಾದಿರಿ. ಏಕೆಂದರೆ “ಬಾಬಾ” ಎಂಬ ಒಂದು ಶಬ್ಧ ಸರ್ವ ಖಜಾನೆಗಳ ಹಾಗೂ ಭಾಗ್ಯದ ಕೀಲಿ ಕೈ ಆಗಿದೆ.
ಕೀಲಿ ಕೈ ಉಪಯೋಗಿಸುವ ವಿಧಿಯಾಗಿದೆ ಹೃದಯದಿಂದ ತಿಳಿಯುವುದು ಮತ್ತು ಒಪ್ಪಿಕೊಳ್ಳುವುದು. ಹೃದಯದಿಂದ
ಹೇಳಿ ಬಾಬಾ ಆಗ ಖಜಾನೆ ಸದಾ ಹಾಜಿರ್ ಆಗಿರುತ್ತದೆ.
ಸ್ಲೋಗನ್:
ಬಾಪ್ದಾದಾರವರ ಜೊತೆ
ಸ್ನೇಹವಿದ್ದರೆ ಆ ಸ್ನೇಹದಲ್ಲಿ ಹಳೆಯ ಜಗತ್ತನ್ನು ತ್ಯಾಗ ಮಾಡಿ ಬಿಡಿ.