01.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ – ಈಗ
ಮರಳಿ ಮನೆಗೆ ಹೋಗಬೇಕಾಗಿದೆ ಆದ್ದರಿಂದ ತಂದೆಯನ್ನು ನೆನಪು ಮಾಡುವ ಮತ್ತು ತಮ್ಮ ಚಾರಿತ್ರ್ಯೆವನ್ನು
ಸುಧಾರಣೆ ಮಾಡಿಕೊಳ್ಳುವ ಪರಿಶ್ರಮ ಮಾಡಿರಿ”
ಪ್ರಶ್ನೆ:
ಅಜ್ಞಾನ
ನಿದ್ದೆಯಲ್ಲಿ ಮಲಗಿಸುವ ಮಾತು ಯಾವುದು? ಅದರಿಂದ ಏನು ನಷ್ಟವಾಗಿದೆ?
ಉತ್ತರ:
ಕಲ್ಪದ
ಅವಧಿಯನ್ನು ಲಕ್ಷಾಂತರ ವರ್ಷಗಳು ಎಂದು ಹೇಳಿರುವುದೇ ಅಜ್ಞಾನ ನಿದ್ರೆಯಲ್ಲಿ ಮಲಗಿಸುವುದಾಗಿದೆ.
ಇದರಿಂದ ಜ್ಞಾನ ನೇತ್ರ ಹೀನರಾಗಿದ್ದಾರೆ, ಮನೆಯನ್ನು ಬಹಳ ದೂರವೆಂದು ತಿಳಿಯುತ್ತಾರೆ. ಇನ್ನೂ
ಲಕ್ಷಾಂತರ ಇಲ್ಲಿಯೇ ಸುಖ-ದುಃಖದ ಪಾತ್ರವನ್ನು ಅಭಿನಯಿಸುತ್ತಿರಬೇಕೆನ್ನುವುದು ಬುದ್ಧಿಯಲ್ಲಿದೆ,
ಆದ್ದರಿಂದ ಪಾವನರಾಗುವ ಪರಿಶ್ರಮ ಪಡುವುದಿಲ್ಲ. ನೀವು ಮಕ್ಕಳಿಗೆ ಗೊತ್ತಿದೆ - ಈಗ ಮನೆಯು ಬಹಳ
ಸಮೀಪವಿದೆ, ನಾವು ಪರಿಶ್ರಮ ಪಟ್ಟು ಕರ್ಮಾತೀತರಾಗಬೇಕು.
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳಿಗೆ ಈಗ ತಂದೆಯು ಮನೆಯ ನೆನಪನ್ನು ತರಿಸಿದ್ದಾರೆ. ಭಕ್ತಿಮಾರ್ಗದಲ್ಲಿಯೂ
ಮನೆಯನ್ನು ನೆನಪು ಮಾಡುತ್ತಾರಾದರೂ ಅಲ್ಲಿ ಯಾವಾಗ ಹೋಗುವುದು, ಹೇಗೆ ಹೋಗುವುದು ಎನ್ನುವುದು
ತಿಳಿದುಕೊಂಡಿಲ್ಲ. ಕಲ್ಪದ ಅವಧಿಯನ್ನು ಲಕ್ಷಾಂತರ ವರ್ಷವೆಂದು ಹೇಳುವ ಕಾರಣ ಮನೆಯೂ ಮರೆತು ಹೋಗಿದೆ,
ಲಕ್ಷಾಂತರ ವರ್ಷಗಳು ಇಲ್ಲಿಯೇ ಪಾತ್ರವನ್ನಭಿನಯಿಸಬೇಕು ಎಂದು ತಿಳಿದಿರುವುದರಿಂದ ಮನೆಯೂ ಮರೆತು
ಹೋಗಿದೆ. ಈಗ ತಂದೆಯು ನೆನಪು ತರಿಸುತ್ತಾರೆ - ಮಕ್ಕಳೇ, ಮನೆಯಂತೂ ಬಹಳ ಸಮೀಪವಿದೆ, ಈಗ ಮನೆಗೆ
ನಡೆಯುತ್ತೀರಾ! ನಾನಂತೂ ನೀವು ಮಕ್ಕಳ ಕರೆಯ ಮೇರೆಗೆ ಬಂದಿದ್ದೇನೆ, ನಡೆಯುವಿರಾ? ಎಷ್ಟು ಸಹಜ
ಮಾರ್ಗವಾಗಿದೆ. ಭಕ್ತಿಮಾರ್ಗದಲ್ಲಿಯಂತೂ ಯಾವಾಗ ಮುಕ್ತಿಧಾಮಕ್ಕೆ ಹೋಗುವುದೆಂದು ಗೊತ್ತಿರುವುದಿಲ್ಲ.
ಮುಕ್ತಿಯನ್ನೇ ಮನೆಯೆಂದು ಹೇಳುತ್ತಾರೆ. ಲಕ್ಷಾಂತರ ವರ್ಷಗಳೆಂದು ಹೇಳುವುದರಿಂದ ಎಲ್ಲವನ್ನೂ
ಮರೆತಿದ್ದಾರೆ. ತಂದೆಯನ್ನು ಮತ್ತು ಮನೆಯನ್ನೂ ಮರೆತು ಹೋಗುತ್ತಾರೆ. ಲಕ್ಷಾಂತರ ವರ್ಷಗಳೆಂದು ಎಂದು
ಹೇಳುವ ಕಾರಣ ಬಹಳ ಅಂತರವಾಗಿದೆ. ಅಜ್ಞಾನ ನಿದ್ರೆಯಲ್ಲಿ ಮಲಗಿದ್ದಾರೆ, ಯಾರಿಗೂ ತಿಳಿಯುವುದೇ ಇಲ್ಲ.
ಭಕ್ತಿ ಮಾರ್ಗದಲ್ಲಿ ಮನೆಯನ್ನು ಎಷ್ಟು ದೂರವೆಂದು ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ - ಓಹೋ!
ಮುಕ್ತಿಧಾಮಕ್ಕಂತೂ ಈಗಲೇ ಹೋಗಬೇಕಾಗಿದೆ. ಭಕ್ತಿಯು ಯಾವಾಗಿನಿಂದ ಪ್ರಾರಂಭವಾಗಿದೆ ಎನ್ನುವುದು
ನಿಮಗೆ ಗೊತ್ತಿಲ್ಲ. ಲಕ್ಷಾಂತರ ವರ್ಷಗಳ ಲೆಕ್ಕ ಮಾಡುವ ಅವಶ್ಯಕತೆಯೇ ಇಲ್ಲ. ತಂದೆ ಮತ್ತು ಮನೆಯನ್ನೇ
ಮರೆತಿದ್ದಾರೆ. ಇದೂ ಸಹ ನಾಟಕದಲ್ಲಿ ನಿಗದಿಯಾಗಿದೆ, ಆದರೆ ಎಷ್ಟು ದೂರ ಮಾಡಿದ್ದಾರೆ. ಈಗ ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಮನೆಯಂತೂ ಬಹಳ ಸಮೀಪವಿದೆ. ನಿಮ್ಮನ್ನು ಕರೆದುಕೊಂಡು ಹೋಗಲು ಈಗ ನಾನು
ಬಂದಿದ್ದೇನೆ. ಮನೆಗೆ ಹೋಗಬೇಕಾಗಿದೆ ಆದರೆ ಪವಿತ್ರ ಅವಶ್ಯ ಆಗಬೇಕು. ಗಂಗಾ ಸ್ನಾನ ಇತ್ಯಾದಿ
ಮಾಡುತ್ತಲೇ ಬಂದಿದ್ದಿರಿ ಆದರೆ ನೀವು ಪವಿತ್ರರಾಗಲಿಲ್ಲ. ಪವಿತ್ರರಾಗಿದ್ದರೆ ನೀವು ಮನೆಗೆ
ಹೋಗುತ್ತಿದ್ದಿರಿ. ಆದರೆ ಮನೆಯ ಬಗ್ಗೆ ಗೊತ್ತಿಲ್ಲ ಮತ್ತು ಪವಿತ್ರ ಆಗಬೇಕೆನ್ನುವುದೂ ಗೊತ್ತಿಲ್ಲ.
ಅರ್ಧ ಕಲ್ಪದಿಂದ ಭಕ್ತಿ ಮಾಡಿರುವುದರಿಂದ ಈಗ ಭಕ್ತಿಯನ್ನು ಬಿಡುವುದಿಲ್ಲ. ಈಗ ತಂದೆಯು
ತಿಳಿಸುತ್ತಾರೆ - ಭಕ್ತಿಯು ಪೂರ್ಣವಾಗುತ್ತಿದೆ. ಭಕ್ತಿಯಲ್ಲಿ ಅಪರಮಪಾರ ದುಃಖವಿದೆ, ನೀವು ಮಕ್ಕಳು
ಲಕ್ಷಾಂತರ ವರ್ಷ ದುಃಖವನ್ನು ನೋಡಿಲ್ಲ. ಲಕ್ಷಾಂತರ ವರ್ಷಗಳ ಮಾತೇ ಇಲ್ಲ. ಸತ್ಯ ಸತ್ಯವಾದ
ದುಃಖವನ್ನು ನೀವು ಕಲಿಯುಗದಲ್ಲಿ ಅನುಭವಿಸುತ್ತೀರಿ. ಯಾವಾಗ ಹೆಚ್ಚಿನ ವಿಕಾರದಿಂದಾಗಿ
ಕೊಳಕಾಗಿದ್ದೀರಿ. ಮೊದಲು ರಜೋದಲ್ಲಿದ್ದಾಗ ಸ್ವಲ್ಪ ತಿಳುವಳಿಕೆಯಿತ್ತು, ಈಗಂತೂ ಸಂಪೂರ್ಣ
ಬುದ್ಧಿಹೀನರಾಗಿ ಬಿಟ್ಟಿದ್ದೀರಿ. ಈಗ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಸುಖಧಾಮಕ್ಕೆ
ಹೋಗಬೇಕೆಂದರೆ ಪಾವನರಾಗಬೇಕು. ತಲೆಯ ಮೇಲಿರುವ ಜನ್ಮ ಜನ್ಮಾಂತರದ ಪಾಪವನ್ನು ನೆನಪಿನಿಂದಲೇ
ಇಳಿಸಬೇಕು. ನೆನಪಿನಿಂದ ಬಹಳ ಖುಷಿಯಿರುವುದು. ಯಾವ ತಂದೆಯು ನಿಮ್ಮನ್ನು ಅರ್ಧ ಕಲ್ಪ ಸುಖಧಾಮಕ್ಕೆ
ಕರೆದುಕೊಂಡು ಹೋಗುತ್ತಾರೆ ಅವರನ್ನು ನೆನಪು ಮಾಡಬೇಕು. ಆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು
ಈ ಲಕ್ಷ್ಮೀ ನಾರಾಯಣರಂತೆ ಆಗಬೇಕೆಂದರೆ ಮೊದಲನೇಯದಾಗಿ ಪವಿತ್ರರಾಗಿರಿ ಮತ್ತು ನಡವಳಿಕೆಯನ್ನು
ಸುಧಾರಣೆ ಮಾಡಿಕೊಳ್ಳಿ. ವಿಕಾರಗಳಿಗೆ ಭೂತವೆಂದು ಹೇಳುತ್ತಾರೆ. ಲೋಭದ ಭೂತವೇನೂ ಕಡಿಮೆಯಿಲ್ಲ. ಈ
ಭೂತ ಬಹಳ ಅಶುದ್ಧವಾಗಿದೆ, ಮನುಷ್ಯರನ್ನು ಬಹಳ ಕೊಳಕಾಗಿ ಮಾಡುತ್ತದೆ, ಲೋಭವೂ ಸಹ ಮನುಷ್ಯರಿಂದ ಬಹಳ
ಪಾಪ ಮಾಡಿಸುತ್ತದೆ. 5 ವಿಕಾರಗಳು ಬಹಳ ಕಠಿಣ ಭೂತಗಳಾಗಿವೆ. ಇದೆಲ್ಲವನ್ನೂ ಬಿಡಬೇಕಾಗಿದೆ. ಹೇಗೆ
ಕಾಮವನ್ನು ಬಿಡುವುದು ಪರಿಶ್ರಮವೋ ಹಾಗೆಯೇ ಲೋಭವನ್ನು ಬಿಡುವುದೂ ಸಹ ಪರಿಶ್ರಮವಾಗಿದೆ. ಮೋಹವನ್ನು
ಬಿಡುವುದು ಕಾಮವನ್ನು ಬಿಡುವಷ್ಟು ಪರಿಶ್ರಮವಾಗುತ್ತದೆ. ಆದ್ದರಿಂದ ಬಿಡುವುದೇ ಇಲ್ಲ, ಬಹಳ
ಸಮಯದಿಂದ ತಂದೆಯು ತಿಳಿಸುತ್ತಲೇ ಬಂದಿದ್ದಾರೆ. ಆದರೂ ಸಹ ಮೋಹದ ದಾರವು ಜೋಡಣೆಯಾಗಿಯೇ ಇರುತ್ತದೆ.
ಕ್ರೋಧವೂ ಸಹ ಬಹಳ ಪರಿಶ್ರಮದಿಂದ ಬಿಟ್ಟು ಹೋಗುತ್ತದೆ. ಮಕ್ಕಳ ಮೇಲೆ ಕ್ರೋಧವು ಬರುತ್ತದೆ ಎಂದು
ಹೇಳುತ್ತಾರೆ, ಕ್ರೋಧದ ಹೆಸರೇ ಹೇಳುತ್ತಾರಲ್ಲವೆ. ಯಾವುದೇ ಭೂತವು ಬರಬಾರದು. ಆ ಭೂತಗಳ ಮೇಲೆ
ವಿಜಯಿಯಾಗಬೇಕಾಗಿದೆ.
ತಂದೆಯು ತಿಳಿಸುತ್ತಾರೆ - ಎಲ್ಲಿಯವರೆಗೆ ನಾನು ಇರುತ್ತೇನೆ ಅಲ್ಲಿಯವರೆಗೆ ನೀವು ಪುರುಷಾರ್ಥ
ಮಾಡುತ್ತಿರಬೇಕು. ತಂದೆಯು ಎಷ್ಟು ವರ್ಷಗಳಿರುತ್ತಾರೆ? ತಂದೆಯು ಇಷ್ಟೊಂದು ವರ್ಷಗಳಿಂದ
ತಿಳಿಸುತ್ತಿದ್ದಾರೆ ಅಂದಮೇಲೆ ಸಮಯವನ್ನು ಚೆನ್ನಾಗಿಯೇ ಕೊಡುತ್ತಾರೆ. ಸೃಷ್ಟಿ ಚಕ್ರವನ್ನು
ತಿಳಿದುಕೊಳ್ಳುವುದು ಬಹಳ ಸಹಜವಾಗಿದೆ. ಏಳು ದಿನಗಳಲ್ಲಿ ಪೂರ್ಣ ಜ್ಞಾನವು ಬುದ್ಧಿಯಲ್ಲಿ ಬಂದು
ಬಿಡುತ್ತದೆ. ಆದರೆ ಜನ್ಮ ಜನ್ಮಾಂತರದ ಪಾಪ ನಾಶವಾಗುವುದರಲ್ಲಿ ತಡವಾಗುತ್ತದೆ. ಇದೇ
ಕಷ್ಟದಾಯಕವಾಗಿದೆ. ಅದಕ್ಕಾಗಿ ತಂದೆಯು ಸಮಯವನ್ನು ಕೊಡುತ್ತಾರೆ. ಮಾಯೆಯ ಹೋರಾಟವು ಬಹಳ ನಡೆಯುತ್ತದೆ.
ಒಮ್ಮೆಲೆ ಮರೆಸಿ ಬಿಡುತ್ತದೆ, ಇಲ್ಲಿ ಕುಳಿತುಕೊಂಡಾಗ ಪೂರ್ಣ ಸಮಯ ನೆನಪಿನಲ್ಲಿರುತ್ತೀರಾ?
ಬುದ್ಧಿಯು ಬಹಳ ಕಡೆ ಹೊರಟು ಹೋಗುತ್ತದೆ, ಆದ್ದರಿಂದ ಸಮಯ ಕೊಡಬೇಕಾಗುತ್ತದೆ, ಪರಿಶ್ರಮ ಪಟ್ಟು
ಕರ್ಮಾತೀತ ಸ್ಥಿತಿಯನ್ನು ತಲುಪಬೇಕಾಗಿದೆ. ವಿದ್ಯೆಯು ಬಹಳ ಸಹಜವಾಗಿದೆ. ಮಕ್ಕಳು
ಬುದ್ಧಿವಂತರಾಗಿದ್ದಾರೆ, ಈ 84 ಜನ್ಮಗಳ ಚಕ್ರವು ಹೇಗೆ ಸುತ್ತುತ್ತದೆ ಎನ್ನುವುದನ್ನು ಏಳು
ದಿನಗಳಲ್ಲಿ ಪೂರ್ಣ ಜ್ಞಾನವನ್ನು ಅರಿತುಕೊಳ್ಳುತ್ತಾರೆ ಬಾಕಿ ಪವಿತ್ರವಾಗುವುದರಲ್ಲಿ ಪರಿಶ್ರಮವಿದೆ.
ಇದರಲ್ಲಿಯೇ ಹೊಡೆದಾಟಗಳಾಗುತ್ತವೆ. ಈ ಜ್ಞಾನವನ್ನು ತಿಳಿದಾಗ ನಾವು ಈ ಬ್ರಹ್ಮಾ ಕುಮಾರ-ಕುಮಾರಿಯರು
ಸಹೋದರ ಸಹೋದರಿಯರನ್ನಾಗಿ ಮಾಡುತ್ತಾರೆ ಎಂದು ನಿಂದನೆ ಮಾಡುತ್ತಿದ್ದೆವು, ಆದರೆ ಈ ಮಾತು ಸರಿಯಾಗಿದೆ,
ಏಕೆಂದರೆ ಎಲ್ಲಿಯವರೆಗೆ ನೀವು ಪ್ರಜಾಪಿತ ಬ್ರಹ್ಮನ ಮಕ್ಕಳಾಗುವುದಿಲ್ಲ ಅಲ್ಲಿಯವರೆಗೆ ಪವಿತ್ರರಾಗಲು
ಹೇಗೆ ಸಾಧ್ಯ. ವಿಕಾರಿ ದೃಷ್ಟಿಯಿಂದ ನಿರ್ವಿಕಾರಿ ದೃಷ್ಟಿಯಾಗಲು ಹೇಗೆ ಸಾಧ್ಯ ಎಂದೂ
ಅರಿತುಕೊಳ್ಳುತ್ತಾರೆ. ಈ ಯುಕ್ತಿಯು ಬಹಳ ಚೆನ್ನಾಗಿದೆ - ನಾವು ಬ್ರಹ್ಮಾಕುಮಾರ-ಕುಮಾರಿಯರು
ಸಹೋದರ-ಸಹೋದರಿಯರಾದೆವು, ನಿರ್ವಿಕಾರಿ ದೃಷ್ಟಿ ಮಾಡಿಕೊಳ್ಳುವುದರಲ್ಲಿ ಬಹಳ ಸಹಯೋಗ ಸಿಗುತ್ತದೆ.
ಬ್ರಹ್ಮನ ಕರ್ತವ್ಯವೂ ಇದೆಯಲ್ಲವೆ. ಬ್ರಹ್ಮಾರವರ ಮೂಲಕ ದೇವಿ ದೇವತಾ ಧರ್ಮದ ಸ್ಥಾಪನೆ ಅಥವಾ
ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವುದು ಕರ್ತವ್ಯವಾಗಿದೆ.
ತಂದೆಯು ಬರುವುದೇ ಪುರುಷೋತ್ತಮ ಸಂಗಮಯುಗದಲ್ಲಿ ಅಂದಮೇಲೆ ತಿಳಿಸಲು ಎಷ್ಟು ಶ್ರಮ ಪಡಬೇಕಾಗುತ್ತದೆ.
ತಂದೆಯ ಪರಿಚಯ ಕೊಡುವುದಕ್ಕಾಗಿಯೇ ಸೇವಾಕೇಂದ್ರಗಳನ್ನು ತೆರೆಯಲಾಗುತ್ತದೆ. ಬೇಹದ್ದಿನ ತಂದೆಯಿಂದ
ಬೇಹದ್ದಿನ ಆಸ್ತಿಯನ್ನು ಪಡೆಯಬೇಕಾಗಿದೆ. ಭಗವಂತನು ನಿರಾಕಾರನಾಗಿದ್ದಾರೆ, ಕೃಷ್ಣನು
ದೇಹಧಾರಿಯಾಗಿದ್ದಾನೆ. ಅಂದಮೇಲೆ ಕೃಷ್ಣನಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಭಗವಂತನು ಬಂದು
ಭಕ್ತಿಯ ಫಲವನ್ನು ಕೊಡುತ್ತಾರೆ ಆದರೆ ಭಗವಂತನ ಪರಿಚಯವೇ ಇಲ್ಲ. ನೀವು ಎಷ್ಟೊಂದು ತಿಳಿಸುತ್ತೀರಿ.
ಆದರೂ ತಿಳಿದುಕೊಳ್ಳುವುದಿಲ್ಲ. ದೇಹಧಾರಿಗಳು ಅವಶ್ಯವಾಗಿ ಪುನರ್ಜನ್ಮದಲ್ಲಿ ಬರುತ್ತಾರೆ.
ಆದ್ದರಿಂದ ಈಗ ಅವರಿಂದ ಆಸ್ತಿಯು ಸಿಗಲು ಸಾಧ್ಯವಿಲ್ಲ. ಆತ್ಮಗಳಿಗೆ ಒಬ್ಬ ಪರಮಪಿತ ಪರಮಾತ್ಮನಿಂದ
ಆಸ್ತಿಯು ಸಿಗುತ್ತದೆ. ಮನುಷ್ಯರು ಮನುಷ್ಯರಿಗೆ ಜೀವನ್ಮುಕ್ತಿ ಕೊಡಲು ಸಾಧ್ಯವಿಲ್ಲ. ಈ ಆಸ್ತಿಯನ್ನು
ಪಡೆಯುವುದಕ್ಕಾಗಿಯೇ ನೀವು ಮಕ್ಕಳು ಪುರುಷಾರ್ಥ ಮಾಡುತ್ತೀರಿ. ಆ ತಂದೆಯನ್ನು ಪಡೆಯಲು ನೀವು ಎಷ್ಟು
ಅಲೆದಾಡುತ್ತಿದ್ದಿರಿ. ಪ್ರಾರಂಭದಲ್ಲಿ ಒಬ್ಬ ಶಿವನ ಪೂಜೆಯನ್ನು ಮಾಡುತ್ತಿದ್ದಿರಿ, ಬೇರೆ ಎಲ್ಲಿಯೂ
ಹೋಗುತ್ತಿರಲಿಲ್ಲ. ಅದು ಅವ್ಯಭಿಚಾರಿ ಭಕ್ತಿಯಾಗಿದೆ. ದೇವತೆಗಳ ಮಂದಿರಗಳು ಇರಲಿಲ್ಲ. ಈಗಂತೂ ಅನೇಕ
ಚಿತ್ರಗಳಿವೆ, ಅನೇಕ ಮಂದಿರಗಳನ್ನು ಕಟ್ಟಿಸುತ್ತಾರೆ. ಭಕ್ತಿ ಮಾರ್ಗದಲ್ಲಿ ನೀವು ಎಷ್ಟು ಶ್ರಮ
ಪಡಬೇಕಾಗುತ್ತದೆ. ನಿಮಗೂ ಗೊತ್ತಿದೆ, ಶಾಸ್ತ್ರಗಳಲ್ಲಿ ಯಾವ ಗತಿ ಸದ್ಗತಿ ಮಾರ್ಗವಿಲ್ಲ.
ಮಾರ್ಗವನ್ನು ಒಬ್ಬ ತಂದೆ ಮಾತ್ರ ತಿಳಿಸುತ್ತಾರೆ. ಭಕ್ತಿ ಮಾರ್ಗದಲ್ಲಿ ಎಷ್ಟು ಮಂದಿರಗಳನ್ನು
ಕಟ್ಟುತ್ತಾರೆ, ವಾಸ್ತವದಲ್ಲಿ ದೇವಿ ದೇವತೆಗಳ ಮಂದಿರಗಳು ಮಾತ್ರ ಇರುತ್ತವೆ, ಅವು
ಸತ್ಯಯುಗದಲ್ಲಿರುತ್ತವೆ. ಬೇರೆ ಯಾವುದೇ ಮನುಷ್ಯರ ಮಂದಿರವಾಗುವುದಿಲ್ಲ. ಏಕೆಂದರೆ ಮನುಷ್ಯರು
ಪತಿತವಾಗಿದ್ದಾರೆ. ಪತಿತ ಮನುಷ್ಯರು ಪಾವನ ದೇವತೆಗಳ ಪೂಜೆ ಮಾಡುತ್ತಾರೆ. ಅವರೂ ಮನುಷ್ಯರೇ ನಿಜ
ಆದರೆ ಅವರಲ್ಲಿ ದೈವೀ ಗುಣಗಳಿರುತ್ತವೆ. ಯಾರಲ್ಲಿ ದೈವೀ ಗುಣಗಳಿಲ್ಲವೋ ಅವರು ದೇವತೆಗಳ ಪೂಜೆ
ಮಾಡುತ್ತಾರೆ. ನೀವೇ ಪೂಜ್ಯರಾಗಿದ್ದಿರಿ ನಂತರ ಪೂಜಾರಿಗಳಾದಿರಿ. ಮನುಷ್ಯರ ಭಕ್ತಿ ಮಾಡುವುದು ಅಂದರೆ
ಈ ಪಂಚತತ್ವಗಳ ಭಕ್ತಿ ಮಾಡುವುದಾಗಿದೆ. ಶರೀರವು ಪಂಚ ತತ್ವಗಳಿಂದಾಗಿದೆ, ಈಗ ಮಕ್ಕಳು
ಮುಕ್ತಿಧಾಮಕ್ಕೆ ಹೋಗಬೇಕಾಗಿದೆ. ಅದಕ್ಕಾಗಿಯೇ ಇಷ್ಟೊಂದು ಭಕ್ತಿ ಮಾಡಿದ್ದೀರಿ. ಈಗ ನನ್ನ ಜೊತೆ
ಕರೆದುಕೊಂಡು ಹೋಗುತ್ತೇನೆ, ನೀವು ಸತ್ಯಯುಗದಲ್ಲಿ ಹೊರಟು ಹೋಗುತ್ತೀರಿ. ತಂದೆಯು ಪತಿತ
ಜಗತ್ತಿನಿಂದ ಪಾವನ ಜಗತ್ತಿಗೆ ಕರೆದುಕೊಂಡು ಹೋಗುವುದಕ್ಕಾಗಿಯೇ ಬಂದಿದ್ದಾರೆ. ಪಾವನ ಪ್ರಪಂಚ
ಇರುವುದೇ ಎರಡು, ಒಂದು ಮುಕ್ತಿ ಮತ್ತು ಇನ್ನೊಂದು ಜೀವನ್ಮುಕ್ತಿ. ತಂದೆಯು ತಿಳಿಸುತ್ತಾರೆ -
ಮಧುರಾತಿ ಮಧುರ ಮಕ್ಕಳೇ, ನಾನು ಕಲ್ಪ-ಕಲ್ಪವೂ ಸಂಗಮಯುಗದಲ್ಲಿ ಬರುತ್ತೇನೆ. ನೀವು
ಭಕ್ತಿಮಾರ್ಗದಲ್ಲಿ ಎಷ್ಟೊಂದು ದುಃಖವನ್ನು ಪಡೆಯುತ್ತೀರಿ. ಗೀತೆಯೂ ಇದೆಯಲ್ಲವೆ - ನಾಲ್ಕೂ ಕಡೆ
ಸುತ್ತಿದೆವು ಆದರೂ ದೂರ ಉಳಿದೆವು....... ಯಾರಿಂದ ದೂರ ಉಳಿದಿರಿ? ತಂದೆಯಿಂದ. ತಂದೆಯನ್ನು
ಹುಡುಕುವುದಕ್ಕಾಗಿಯೇ ಪ್ರತೀ ಜನ್ಮದಲ್ಲಿ ಸುತ್ತಿದಿರಿ. ಆದರೆ ತಂದೆಯಿಂದ ಬಹಳ ದೂರವೇ ಉಳಿದಿರಿ.
ಆದ್ದರಿಂದ ಹೇ ಪತಿತ ಪಾವನ ಬನ್ನಿ, ಬಂದು ಪಾವನ ಮಾಡಿ ಎಂದು ಕರೆದಿರಿ. ತಂದೆಯ ವಿನಃ ಬೇರೆ ಯಾರೂ
ಮಾಡಲು ಸಾಧ್ಯವಿಲ್ಲ. ಈ ಆಟವೇ 5000 ವರ್ಷಗಳದ್ದಾಗಿದೆ. ನಾಟಕದನುಸಾರ ಪ್ರತಿಯೊಬ್ಬರೂ ಪುರುಷಾರ್ಥ
ಮಾಡುತ್ತಾರೆ. ಯಾರು ಕಲ್ಪದ ಹಿಂದೆ ಯಾವ ರೀತಿ ಮಾಡಿದ್ದಾರೋ ಅದೇ ರೀತಿ ಮಾಡುತ್ತಿದ್ದೀರಿ,
ಅದರನುಸಾರವೇ ರಾಜಧಾನಿ ಸ್ಥಾಪನೆಯಾಗುತ್ತಿದೆ. ಎಲ್ಲರೂ ಒಂದೇ ರೀತಿ ಓದುವುದಿಲ್ಲ. ಇದು
ಪಾಠಶಾಲೆಯಾಗಿದೆಯಲ್ಲವೆ. ರಾಜಯೋಗದ ವಿದ್ಯೆಯಾಗಿದೆ. ಯಾರು ದೇವಿ ದೇವತಾ ಧರ್ಮದವರಾಗಿದ್ದಾರೊ ಅವರೇ
ಹಿಂತಿರುಗಿ ಬರುತ್ತಾರೆ. ಮೂಲವತನದಲ್ಲಿರುವ ಸಂಖ್ಯೆಯೂ ನಿಖರವಾಗಿರುವುದು. ಹೆಚ್ಚು ಕಡಿಮೆ
ಇರುವುದಿಲ್ಲ. ನಾಟಕದಲ್ಲಿ ಪಾತ್ರಧಾರಿಗಳ ಅಂದಾಜು ಸಂಪೂರ್ಣ ಸರಿಯಾಗಿರುತ್ತದೆ, ಆದರೆ
ಅರಿತುಕೊಂಡಿಲ್ಲ. ಆತ್ಮರ ಸಂಖ್ಯೆ ನಿಖರವಾಗಿದೆ. ಪುನಃ ಬಂದು ಪಾತ್ರವನ್ನು ಮಾಡುತ್ತಾರೆ. ಪುನಃ
ನೀವು ಹೊಸ ಪ್ರಪಂಚದಲ್ಲಿ ಬರುತ್ತೀರಿ. ಉಳಿದವರೆಲ್ಲರೂ ಮುಕ್ತಿಧಾಮಕ್ಕೆ ಹೋಗುತ್ತಾರೆ. ಈಗ ಯಾರಾದರೂ
ಎಣಿಕೆ ಮಾಡುವುದಾದರೆ ಮಾಡಬಹುದು. ಈಗ ತಂದೆಯು ನಿಮಗೆ ಅತ್ಯಂತ ಗುಹ್ಯ ವಿಚಾರಗಳನ್ನು ತಿಳಿಸುತ್ತಾರೆ.
ಮೊದಲಿನ ಮತ್ತು ಈಗಿನ ತಿಳುವಳಿಕೆಯಲ್ಲಿ ಎಷ್ಟು ಅಂತರವಿದೆ. ವಿದ್ಯೆಯಲ್ಲಿ ಸಮಯ ಹಿಡಿಯುತ್ತದೆ. ಬಹು
ಬೇಗನೇ ಯಾರೂ ಐ.ಸಿ.ಎಸ್ ಮಾಡಿ ಬಿಡುವುದಿಲ್ಲ. ನಂಬರ್ವಾರ್ ವಿದ್ಯೆ ಇರುತ್ತದೆ. ಮನುಷ್ಯರ
ಬುದ್ಧಿಯಲ್ಲಿ ಎಷ್ಟು ಸಹಜವಾಗಿ ತಿಳಿಯಲಿಯೆಂದು ಎಷ್ಟು ಸಹಜವಾಗಿ ತಿಳಿಸುತ್ತಾರೆ. ದಿನ ಪ್ರತಿದಿನ
ಹೊಸ ಹೊಸ ಮಾತುಗಳನ್ನೇ ತಿಳಿಸುತ್ತಾರೆ. ಈಗ ತಂದೆಯೇ ಹೇಳುತ್ತಾರೆ - ನಾನು ಪತಿತ-ಪಾವನ ತಂದೆಯನ್ನು
ಕರೆದಿರಿ, ಈಗ ನಾನು ಬಂದಿದ್ದೆನೆ ಅಂದಮೇಲೆ ಈಗ ಪಾವನರಾಗಿರಿ. ತಮ್ಮನ್ನು ಆತ್ಮವೆಂದು ತಿಳಿದು
ನನ್ನೊಬ್ಬನನ್ನು ನೆನಪು ಮಾಡಿರಿ. ಆಗ ನೀವು ಸತೋಪ್ರಧಾನರಾಗುತ್ತೀರಿ. ಪುನಃ ನೀವಿಲ್ಲಿಗೆ ಬಂದು
ಪಾತ್ರವನ್ನಭಿನಯಿಸಬೇಕಾಗಿದೆ. ತಂದೆಯು ತಿಳಿಸುತ್ತಾರೆ, ಆತ್ಮವು ಪತಿತವಾಗಿರುವ ಕಾರಣ ಪಾವನಾರಾಗಲು
ಪತಿತ ಪಾವನ ತಂದೆಯನ್ನು ನೆನಪು ಮಾಡುತ್ತಾರೆ. ಎಷ್ಟೊಂದು ವಿಚಿತ್ರವಾಗಿದೆ ಇಷ್ಟೊಂದು ಸೂಕ್ಷ್ಮ
ಆತ್ಮವು ಎಷ್ಟೊಂದು ಪಾತ್ರವನ್ನಭಿನಯಿಸುತ್ತದೆ. ಇದಕ್ಕೆ ಸೃಷ್ಟಿಯೆಂದು ಹೇಳಲಾಗುತ್ತದೆ. ಆತ್ಮವನ್ನು
ನೋಡಲಾಗುವುದಿಲ್ಲ. ನಾವು ಪರಮಾತ್ಮನ ಸಾಕ್ಷಾತ್ಕಾರವನ್ನು ನೋಡಬೇಕೆಂದು ಹೇಳುತ್ತಾರೆ. ಅದಕ್ಕೆ
ತಂದೆಯು ತಿಳಿಸುತ್ತಾರೆ – ಇಷ್ಟು ಸೂಕ್ಷ್ಮ ಬಿಂದುವಿನ ಸಾಕ್ಷಾತ್ಕಾರವನ್ನೇನು ನೋಡುತ್ತೀರಿ, ನೀವು
ಅರಿತುಕೊಳ್ಳಬಹುದೇ ವಿನಃ ನೋಡಲು ಸಾಧ್ಯವಿಲ್ಲ. ಆತ್ಮಕ್ಕೆ ಇವೆಲ್ಲ ಕರ್ಮೇಂದ್ರಿಯಗಳು ಪಾತ್ರ ಮಾಡಲು
ಸಿಕ್ಕಿದೆ, ಎಷ್ಟೊಂದು ಪಾತ್ರವನ್ನು ಅಭಿನಯಿಸುತ್ತದೆ, ಎಷ್ಟು ವಿಚಿತ್ರವಾಗಿದೆ. ಆತ್ಮವೆಂದೂ
ಸವೆಯುವುದಿಲ್ಲ. ಇದು ಅವಿನಾಶಿ ನಾಟಕವಾಗಿದೆ, ಇದು ಮಾಡಿ ಮಾಡಲ್ಪಟ್ಟಿದೆ. ಯಾವಾಗ ಮಾಡಲ್ಪಟ್ಟಿತು
ಎನ್ನುವುದನ್ನು ಕೇಳಲು ಸಾಧ್ಯವಿಲ್ಲ. ಇದಕ್ಕೆ ಅನಾದಿಯೆಂದು ಹೇಳುತ್ತಾರೆ. ಮನುಷ್ಯರನ್ನು ಕೇಳಿ
ರಾವಣನನ್ನು ಯಾವಾಗಿನಿಂದ ಸುಡುತ್ತಾ ಬಂದಿರಿ, ಶಾಸ್ತ್ರಗಳನ್ನು ಯಾವಾಗಿನಿಂದ ಓದುತ್ತಾ ಬಂದಿರಿ,
ಇದು ಅನಾದಿಯಾಗಿದೆ ನಮಗೆ ಗೊತ್ತಿಲ್ಲ ಎಂದು ಹೇಳುತ್ತಾರೆ. ತಬ್ಬಿಬ್ಬಾಗಿದ್ದಾರಲ್ಲವೆ. ತಂದೆಯು
ಬಂದು ತಿಳಿಸುತ್ತಾರೆ - ಚಾಚೂ ತಪ್ಪದೇ ಮಕ್ಕಳಿಗೆ ಓದಿಸುತ್ತಾರೆ.
ನಿಮಗೆ ಗೊತ್ತಿದೆ - ನಾವು ಸಂಪೂರ್ಣ ತಿಳುವಳಿಕೆ ಹೀನರಾಗಿದ್ದೆವು, ಈಗ ಬೇಹದ್ದಿನ ಅರಿವು ಬಂದಿದೆ.
ಅದು ಸೀಮಿತ ವಿದ್ಯೆಯಾಗಿದೆ, ಇದು ಬೇಹದ್ದಿನ ವಿದ್ಯೆಯಾಗಿದೆ. ಅರ್ಧ ಕಲ್ಪ ದಿನ, ಇನ್ನರ್ಧ ಕಲ್ಪ
ರಾತ್ರಿ. 21 ಜನ್ಮಗಳು ನೀವು ಅಂಶ ಮಾತ್ರವೂ ದುಃಖವನ್ನು ಪಡೆಯುವುದಿಲ್ಲ. ಹೇಳುತ್ತಾರಲ್ಲವೆ -
ನಿಮ್ಮ ಕೂದಲೂ ಕೊಂಕಲು ಸಾಧ್ಯವಿಲ್ಲ....... ಯಾರೂ ದುಃಖವನ್ನು ಕೊಡಲು ಸಾಧ್ಯವಿಲ್ಲ. ಮೂಲ ಮಾತು -
ಪವಿತ್ರತೆಯಾಗಿದೆ, ನಡವಳಿಕೆಯು ಚೆನ್ನಾಗಿರಬೇಕಲ್ಲವೆ.
ಮಕ್ಕಳಿಗೆ ಪ್ರತಿಯೊಂದು ಮಾತನ್ನು ಸ್ಪಷ್ಟವಾಗಿ ತಿಳಿಸಲಾಗುತ್ತದೆ. ಲಾಭ ಮತ್ತು
ನಷ್ಟವಾಗುತ್ತದೆಯಲ್ಲವೆ. ಈಗಂತೂ ಲಾಭದ ಮಾತಿಲ್ಲ, ಈಗ ನಷ್ಟವೇ ನಷ್ಟವಾಯಿತು, ವಿನಾಶದ ಸಮಯವೂ
ಬರುತ್ತಿದೆ. ಈ ಸಮಯದಲ್ಲಿ ಏನೇನು ಆಗುತ್ತದೆ ಎಂದು ನೋಡಿ. ಮಳೆಯಾಗದಿದ್ದರೆ ದವಸ ಧಾನ್ಯಗಳಿಗೆ ಬಹಳ
ಬೇಡಿಕೆಯಾಗಿ ಬಿಡುತ್ತದೆ. ಮೂರು ವರ್ಷಗಳ ನಂತರ ಸಾಕಷ್ಟು ದವಸ ಧಾನ್ಯವಿರುವುದೆಂದು ಹೇಳಿದರೂ ಸಹ
ದವಸ ಧಾನ್ಯಗಳನ್ನು ಹೊರಗಿನಿಂದ ತರಿಸಿಕೊಳ್ಳುತ್ತಿರುತ್ತಾರೆ. ಇಂತಹ ಸಮಯವೂ ಬರುತ್ತದೆ, ಒಂದು ಕಾಳೂ
ಸಹ ಸಿಗುವುದಿಲ್ಲ. ಇಷ್ಟೊಂದು ಆಪತ್ತುಗಳು ಬರುವುದಿದೆ. ಈಶ್ವರೀಯ ಆಪತ್ತುಗಳೆಂದು ಹೇಳುತ್ತಾರೆ.
ಮಳೆ ಬರದಿದ್ದರೆ ಅವಶ್ಯವಾಗಿ ಬರಗಾಲವುಂಟಾಗುತ್ತದೆ. ಎಲ್ಲ ತತ್ವಗಳು ಏರುಪೇರಾಗುತ್ತವೆ. ಬಹಳ
ಜಾಗಗಳಲ್ಲಿ ಮಳೆಯು ನಷ್ಟ ಉಂಟು ಮಾಡುತ್ತದೆ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಆದಿ ಸನಾತನ ದೇವಿ ದೇವತಾ ಧರ್ಮದ ಸ್ಥಾಪನೆ
ಮಾಡುತ್ತಿದ್ದಾರೆ. ನಿಮ್ಮ ಗುರಿ-ಉದ್ದೇಶವೇ ಇದಾಗಿದೆ, ಪುನಃ ನಿಮ್ಮನ್ನು ನರನಿಂದ ನಾರಾಯಣ
ಮಾಡುತ್ತಿದ್ದಾರೆ. ಈ ಬೇಹದ್ದಿನ ಪಾಠವನ್ನು ಬೇಹದ್ದಿನ ತಂದೆಯೇ ಓದಿಸುತ್ತಿದ್ದಾರೆ. ಯಾರು ಹೇಗೆ
ಓದುವರೋ ಅವರು ಅಂತಹ ಪದವಿಯನ್ನು ಪಡೆಯುವರು. ತಂದೆಯಂತೂ ಪುರುಷಾರ್ಥ ಮಾಡಿಸುತ್ತಾರೆ, ಕಡಿಮೆ
ಪುರುಷಾರ್ಥ ಮಾಡಿದರೆ ಕಡಿಮೆ ಪದವಿ ಪಡೆಯುತ್ತಾರೆ. ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ
ಓದಿಸುತ್ತಾರಲ್ಲವೆ. ಯಾವಾಗ ಬೇರೆಯವರನ್ನು ತಮ್ಮ ಸಮಾನ ಮಾಡಿಕೊಳ್ಳುತ್ತಾರೆಯೋ ಆಗ ಇವರು ಚೆನ್ನಾಗಿ
ಓದುತ್ತಾರೆ ಮತ್ತು ಓದಿಸುತ್ತಾರೆಂದು ತಿಳಿಯುತ್ತಾರೆ. ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ.
ತಲೆಯ ಮೇಲೆ ಪಾಪದ ಹೊರೆ ಬಹಳ ಇದೆ. ನನ್ನನ್ನು ನೆನಪು ಮಾಡುವುದರಿಂದ ಅದು ಭಸ್ಮವಾಗುತ್ತದೆ. ಇದು
ಆತ್ಮಿಕ ಯಾತ್ರೆಯಾಗಿದೆ. ಚಿಕ್ಕ ಮಕ್ಕಳಿಗೂ ಸಹ ಶಿವ ತಂದೆಯನ್ನು ನೆನಪು ಮಾಡುವುದನ್ನು ಕಲಿಸಿರಿ.
ಅವರಿಗೂ ಹಕ್ಕಿದೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕೆಂದು
ತಿಳಿಯುವುದಿಲ್ಲ. ಶಿವ ತಂದೆಯನ್ನು ಮಾತ್ರ ನೆನಪು ಮಾಡುತ್ತಾರೆ. ಪರಿಶ್ರಮ ಪಡುವುದರಿಂದ ಅವರ
ಕಲ್ಯಾಣವೂ ಆಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾ ಅವರ ನೆನಪು, ಪ್ರೀತಿ ಹಾಗೂ
ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನರನಿಂದ
ನಾರಾಯಣರಾಗುವ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಬೇಹದ್ದಿನ ತಂದೆಯಿಂದ ಬೇಹದ್ದಿನ ಪಾಠವನ್ನು
ಓದಿ, ಅನ್ಯರಿಗೂ ಓದಿಸಬೇಕಾಗಿದೆ. ಅನ್ಯರನ್ನು ತಮ್ಮ ಸಮಾನ ಮಾಡುವ ಸೇವೆ ಮಾಡಬೇಕಾಗಿದೆ.
2. ಲೋಭ, ಮೋಹದ ದಾರಗಳನ್ನು ತೆಗೆಯಲು ಶ್ರಮ ಪಡಬೇಕು. ಯಾವುದೇ ಭೂತ ಒಳಗೆ ಪ್ರವೇಶ ಮಾಡಲು
ಸಾಧ್ಯವಾಗದಂತೆ ತಮ್ಮ ನಡವಳಿಕೆಯನ್ನು ಸುಧಾರಣೆ ಮಾಡಿಕೊಳ್ಳಬೇಕು.
ವರದಾನ:
ತಮ್ಮ ರಾಜ್ಯ
ಅಧಿಕಾರಿ ಹಾಗೂ ಪೂಜ್ಯ ಸ್ವರೂಪದ ಸ್ಮೃತಿಯಿಂದ ದಾತಾ ಆಗಿ ಕೊಡುವಂತಹ ಸರ್ವ ಖಜಾನೆಗಳಿಂದ ಸಂಪನ್ನ
ಭವ.
ಸದಾ ಇದೇ ಸ್ಮೃತಿಯಲ್ಲಿರಿ
ನಾನು ಪೂಜ್ಯ ಆತ್ಮ ಬೇರೆಯವರಿಗೆ ಕೊಡುವಂತಹ ದಾತಾ ಆಗಿದ್ದೇನೆ, ತೆಗೆದುಕೊಳ್ಳುವಂತಹವನಲ್ಲ,
ದೇವತೆಯಾಗಿದ್ದೇನೆ. ಹೇಗೆ ತಂದೆ ನಿಮ್ಮೆಲ್ಲರಿಗೂ ತಾನಾಗೆ ಕೊಟ್ಟಿದ್ದಾರೆ ಅದೇ ರೀತಿ ನೀವೂ ಸಹ
ಮಾಸ್ಟರ್ ದಾತಾ ಆಗಿ ಕೊಡುತ್ತಾ ಹೋಗಿ, ಬೇಡುವುದು ಬೇಡ. ತಮ್ಮ ರಾಜ್ಯ ಅಧಿಕಾರಿ ಹಾಗೂ ಪೂಜ್ಯ
ಸ್ವರೂಪದ ಸ್ಮೃತಿಯಲ್ಲಿರಿ. ಇಂದಿನವರೆಗೆ ನಿಮ್ಮ ಜಡ ಚಿತ್ರಗಳ ಬಳಿ ಹೋಗಿ ಬೇಡುವರು, ಹೇಳುತ್ತಾರೆ
ನಮ್ಮನ್ನು ರಕ್ಷಿಸಿ. ಅಂದಾಗ ನೀವು ರಕ್ಷಿಸುವವರು, ರಕ್ಷಿಸಿ-ರಕ್ಷಿಸಿ ಎಂದು ಹೇಳುವವರಲ್ಲ. ಆದರೆ
ದಾತಾ ಆಗುವುದಕ್ಕೊಸ್ಕರ ನೆನಪಿನಿಂದ, ಸೇವೆಯಿಂದ, ಶುಭ ಭಾವನೆ, ಶುಭ ಕಾಮನೆಯಿಂದ ಸರ್ವ
ಖಜಾನೆಗಳಿಂದ ಸಂಪನ್ನರಾಗಿ.
ಸ್ಲೋಗನ್:
ಚಲನೆ ಮತ್ತು
ಚೆಹರೆಯ ಪ್ರಸನ್ನತೆಯೇ ಆತ್ಮೀಯ ವ್ಯಕ್ತಿತ್ವದ ಗುರುತಾಗಿದೆ.