28.01.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮಗೆ
ಈಗ ಶಾಂತಿಧಾಮ ಮತ್ತು ಸುಖಧಾಮಕ್ಕೆ ಹೋಗಲು ಆಶ್ರಯ ಸಿಕ್ಕಿದೆ, ನೀವು ತಂದೆಯನ್ನು ನೆನಪು
ಮಾಡುತ್ತಾ-ಮಾಡುತ್ತಾ ಪಾವನರಾಗಿ, ಕರ್ಮಾತೀತರಾಗಿ ನಿಮ್ಮ ಶಾಂತಿಧಾಮಕ್ಕೆ ಹೋಗುವಿರಿ”
ಪ್ರಶ್ನೆ:
ತಂದೆಯ ಪ್ರೀತಿಯು
ಯಾವ ಮಕ್ಕಳಿಗೆ ಸಿಗುತ್ತದೆ? ತಂದೆಯ ಪ್ರತ್ಯಕ್ಷತೆಯನ್ನು ಹೇಗೆ ಮಾಡುವಿರಿ?
ಉತ್ತರ:
ಯಾವ ಮಕ್ಕಳು
ಪ್ರಾಮಾಣಿಕ, ಸೇವಾಧಾರಿ ಹಾಗೂ ಬಹಳ ಮಧುರರಾಗಿರುತ್ತಾರೆಯೋ, ಎಂದೂ ಯಾರಿಗೂ ದುಃಖವನ್ನು
ಕೊಡುವುದಿಲ್ಲವೋ ಅಂತಹ ಮಕ್ಕಳಿಗೇ ತಂದೆಯ ಪ್ರೀತಿ ಸಿಗುತ್ತದೆ. ಯಾವಾಗ ತಾವು ಮಕ್ಕಳಿಗೆ
ಪರಸ್ಪರದಲ್ಲಿ ಬಹಳ-ಬಹಳ ಪ್ರೀತಿಯಿರುತ್ತದೆ, ಎಂದೂ ಸಹ ತಪ್ಪಾಗುವುದಿಲ್ಲವೋ, ಮುಖದಿಂದ ದುಃಖವನ್ನು
ಕೊಡುವಂತಹ ಮಾತುಗಳು ಬರುವುದಿಲ್ಲವೋ, ಸದಾ ಸಹೋದರ-ಸಹೋದರನ ಆತ್ಮೀಯ ಪ್ರೀತಿಯಲ್ಲಿದ್ದಾಗ ತಂದೆಯ
ಪ್ರತ್ಯಕ್ಷತೆಯನ್ನು ಮಾಡಲು ಸಾಧ್ಯ.
ಗೀತೆ:
ನನಗೆ ಆಶ್ರಯ
ಕೊಡುವವರು....
ಓಂ ಶಾಂತಿ.
ಗೀತೆಯನ್ನಂತೂ
ಮಕ್ಕಳು ಅನೇಕ ಬಾರಿ ಕೇಳಿದ್ದೀರಿ. ಆವಾಗಮನ ಚಕ್ರದಲ್ಲಿ ನಾವು ಎಷ್ಟೊಂದು ಅಲೆದಾಡಿದ್ದೇವೆ ಎಂಬುದು
ಮಕ್ಕಳಿಗೆ ಗೊತ್ತಿದೆ. ಡ್ರಾಮಾನುಸಾರ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ಪಡೆದೆವು.
ಸುಖಧಾಮದಲ್ಲಿ ನಾವಾಗಿಯೇ ಖುಷಿಯಿಂದ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ಪಡೆಯುತ್ತಿದ್ದೆವು.
ಈಗ ತಂದೆಯು ಖುಷಿಯಿಂದ ಶರೀರ ಬಿಡಲು ತಿಳಿಸುತ್ತಿದ್ದಾರೆ. ನಾವಾತ್ಮರು ಪರಮಧಾಮದಿಂದ ಬಂದಿದ್ದೇವೆ,
ಇಲ್ಲಿ ಪಾತ್ರವನ್ನಭಿನಯಿಸುತ್ತಿದ್ದೇವೆ ಎಂಬುದು ನಿಮಗೆ ಗೊತ್ತಿದೆ. ನಾನಾತ್ಮ ಅವಿನಾಶಿ ಎಂಬುದು
ಆತ್ಮದ ಬಗ್ಗೆ ಮೊದಲು ನಿಶ್ಚಯ ಬೇಕು. ಆಶ್ರಯದಾತ ಒಬ್ಬ ತಂದೆಯಾಗಿದ್ದಾರೆ ಎಂಬುದನ್ನು ಮಕ್ಕಳಿಗೆ
ತಿಳಿಸಲಾಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ಬಹಳ ಖುಷಿಯಾಗುತ್ತದೆ. ಇದು ಬಹಳ ಅರ್ಥ
ಮಾಡಿಕೊಳ್ಳುವ ವಿಚಾರಗಳಾಗಿವೆ. ಮೊದಲು ಎಲ್ಲರೂ ಶಾಂತಿಧಾಮದಲ್ಲಿರುತ್ತಾರೆ ನಂತರ ಸುಖಧಾಮಕ್ಕೆ
ಬರುತ್ತಾರೆ. ತಂದೆಯು ತಮಗೆ ಆಶ್ರಯ ನೀಡುತ್ತಾರೆ - ಮಕ್ಕಳೇ, ನಿಮ್ಮ ಶಾಂತಿಧಾಮ ಮತ್ತು ಸುಖಧಾಮವು
ಬಂದಿತೆಂದರೆ ಬಂದಿತು. ನಾನಾತ್ಮ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ
ಎಂಬುದಂತೂ ನಿಶ್ಚಯವಿದೆ. ಮೊದಲಿನಿಂದಲೇ ಅವಿನಾಶಿ ಪಾತ್ರವು ಸಿಕ್ಕಿದೆ, ತಾವು ಈ 84 ಜನ್ಮಗಳ
ಪಾತ್ರವನ್ನಭಿನಯಿಸಬೇಕಾಗಿದೆ. ತಂದೆಯು ಮಕ್ಕಳ ಜೊತೆಯಲ್ಲಿಯೇ ಮಾತನಾಡುತ್ತಾರೆ ಏಕೆಂದರೆ ಈ
ಮಾತುಗಳನ್ನು ನಿಮ್ಮ ವಿನಃ ಬೇರೆ ಯಾರೂ ಸಹ ತಿಳಿದುಕೊಂಡಿಲ್ಲ. ಈ ಪುರುಷೋತ್ತಮ ಸಂಗಮಯುಗದಲ್ಲಿಯೇ
ಪುರುಷೋತ್ತಮರಾಗಲು ತಂದೆಯು ಮಾರ್ಗವನ್ನು ತಿಳಿಸುತ್ತಾರೆ. ಆತ್ಮಕ್ಕೆ ಯಾವುದೇ ಭಯವಾಗಬಾರದು. ನಾವು
ಬಹಳ ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆ. ನೀವು ಎಲ್ಲಾ ಜನ್ಮಗಳನ್ನು ತಿಳಿದಿರುವಿರಿ, ಇದು ಅಂತಿಮ
ಜನ್ಮವಾಗಿದೆ. ಶಾಂತಿಧಾಮ ಸುಖಧಾಮಕ್ಕೆ ಹೋಗಲು ನಮಗೆ ಆಶ್ರಯ ಸಿಕ್ಕಿದೆ ಎಂಬುದು ಆತ್ಮವು ಅರ್ಥ
ಮಾಡಿಕೊಂಡಿದೆ ಅಂದಮೇಲೆ ಖುಷಿಯಿಂದ ಹೋಗಬೇಕು. ಆದರೆ ಆತ್ಮವು ಪತಿತವಾಗಿದೆ ಎಂಬ ಜ್ಞಾನವು ಈಗ
ಸಿಕ್ಕಿದೆ. ಆತ್ಮದ ರೆಕ್ಕೆಗಳು ತುಂಡಾಗಿದೆ. ಮಾಯೆಯು ರೆಕ್ಕೆಗಳನ್ನು ಮುರಿದು ಹಾಕುತ್ತದೆ,
ಆದ್ದರಿಂದ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಅವಶ್ಯವಾಗಿ ಪಾವನರಾಗಬೇಕಾಗಿದೆ. ಅಲ್ಲಿಂದ ಕೆಳಗಂತೂ
ಬಂದು ಬಿಟ್ಟೆವು ಆದರೆ ಈಗ ನಾವೇ ಹಿಂತಿರುಗಿ ಮನೆಗೆ ಹೋಗಲು ಸಾಧ್ಯವಿಲ್ಲ. ಎಲ್ಲರೂ
ಪಾತ್ರವನ್ನಭಿನಯಿಸಲೇಬೇಕು. ನಾವು ಬಹಳ ಶ್ರೇಷ್ಠ ಕುಲದವರೆಂದು ತಿಳಿದುಕೊಳ್ಳಬೇಕು. ಈಗ ನಮಗೆ ಮತ್ತೆ
ಶ್ರೇಷ್ಠ ವಂಶದ ರಾಜ್ಯಭಾಗ್ಯವು ಸಿಗುತ್ತದೆ ನಂತರ ನಾವು ಈ ಶರೀರವನ್ನು ಏನು ಮಾಡುತ್ತೇವೆ. ಅಲ್ಲಿ
ನಮಗೆ ಹೊಸ ಶರೀರವಂತೂ ಸಿಗುತ್ತದೆ - ಈ ರೀತಿ ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳಬೇಕು. ತಂದೆಯೂ ಸಹ
ತಮ್ಮ ಪರಿಚಯ ಕೊಟ್ಟಿದ್ದಾರೆ, ರಚನೆಯ ಆದಿ-ಮಧ್ಯ-ಅಂತ್ಯವನ್ನೂ ಸಹ ತಿಳಿಸುತ್ತಾರೆ - ಆತ್ಮವೇ
ಸತೋಪ್ರಧಾನ, ಸತೋ, ರಜೋ, ತಮೋದಲ್ಲಿ ಬರುತ್ತದೆ. ಈಗ ಮತ್ತೆ ಆತ್ಮಾಭಿಮಾನಿಯಾಗಬೇಕಾಗಿದೆ. ಆತ್ಮವೇ
ಪವಿತ್ರವಾಗುತ್ತದೆ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೆ ನೆನಪು ಮಾಡಿ ಬೇರೆ ಯಾರನ್ನೂ
ನೆನಪು ಮಾಡಬೇಡಿ, ಹಣ-ಐಶ್ವರ್ಯ, ಮನೆ-ಮಕ್ಕಳು ಎಲ್ಲದರಲ್ಲಿ ಬುದ್ಧಿಯು ಹೋದರೆ ಕರ್ಮಾತೀತ
ಸ್ಥಿತಿಯನ್ನು ಪಡೆಯಲು ಸಾಧ್ಯವಿಲ್ಲ. ನಂತರ ಪದವಿಯು ಕಡಿಮೆಯಾಗಿ ಬಿಡುತ್ತದೆ. ಪುನಃ ಶಿಕ್ಷೆಯನ್ನು
ಅನುಭವಿಸಬೇಕಾಗುತ್ತದೆ. ಈಗ ನಾವಾತ್ಮಗಳು ಹಿಂತಿರುಗಿ ಹೋಗುವವರು ಪಾವನರಾಗಿಯೇ ಹೋಗಬೇಕು. ತಂದೆಯು
ಹೇಳುತ್ತಾರೆ - ಪಾವನರಾಗಬೇಕಾದರೆ ಖುಷಿಯಿಂದ ಏಕೆ ತಂದೆಯನ್ನು ನೆನಪು ಮಾಡುವುದಿಲ್ಲ, ಅದರಿಂದ
ನಮ್ಮ ವಿಕರ್ಮವೆಲ್ಲಾ ವಿನಾಶವಾಗುತ್ತದೆ. ಸ್ವಯಂ ನೆನಪು ಮಾಡುತ್ತಿದ್ದರೆ ಬೇರೆಯವರಿಗೂ ಹೇಳಿದಾಗ
ಬಾಣವು ನಾಟುತ್ತದೆ. ಇದಕ್ಕೆ ವಿಚಾರಸಾಗರ ಮಂಥನವೆನ್ನಲಾಗುತ್ತದೆ. ಬೆಳಗ್ಗೆ ವಿಚಾರ ಸಾಗರ ಮಂಥನ
ಚೆನ್ನಾಗಿ ಆಗುತ್ತದೆ ಏಕೆಂದರೆ ಬುದ್ಧಿಯು ಚೆನ್ನಾಗಿರುತ್ತದೆ, ತಾಜಾತನವಿರುತ್ತದೆ. ಭಕ್ತಿಯೂ ಸಹ
ಆ ಸಮಯದಲ್ಲಿಯೇ ಆಗುತ್ತದೆ. ರಾಮನನ್ನು ಬೆಳಗ್ಗೆ-ಬೆಳಗ್ಗೆ ಸ್ಮರಿಸಿ.... ಎಂದು ಭಕ್ತಿ
ಮಾರ್ಗದಲ್ಲಂತೂ ಕೇವಲ ಹಾಡುತ್ತಿದ್ದೆವು. ಈಗ ತಂದೆಯ ಆದೇಶ ಸಿಕ್ಕಿದೆ - ಬೆಳಗ್ಗೆ-ಬೆಳಗ್ಗೆ ಎದ್ದು
ತಂದೆಯನ್ನು ನೆನಪು ಮಾಡಿ. ಸತ್ಯಯುಗದಲ್ಲಿ ರಾಮನನ್ನು ಸ್ಮರಿಸುವುದಿಲ್ಲ. ಇದು ಡ್ರಾಮಾ
ಮಾಡಲ್ಪಟ್ಟಿದೆ. ತಂದೆಯು ಬಂದು ಜ್ಞಾನ ಮತ್ತು ಭಕ್ತಿಯ ರಹಸ್ಯವನ್ನು ತಿಳಿಸುತ್ತಾರೆ. ಮೊದಲು ತಾವು
ಇದನ್ನು ತಿಳಿದುಕೊಂಡಿರಲಿಲ್ಲ. ಆದ್ದರಿಂದ ಕಲ್ಲು ಬುದ್ಧಿಯವರು ಎನ್ನಲಾಗುತ್ತದೆ. ಸತ್ಯಯುಗದಲ್ಲಿ
ಈ ರೀತಿ ಹೇಳುವುದಿಲ್ಲ. ಈ ಸಮಯದಲ್ಲಿಯೇ ಹೇಳುತ್ತಾರೆ. ಈಶ್ವರನು ನಿಮ್ಮ ಬುದ್ಧಿಯನ್ನು ಚೆನ್ನಾಗಿ
ಮಾಡಲಿ. ಇಲ್ಲಿಯ ಗಾಯನ ಭಕ್ತಿ ಮಾರ್ಗದಲ್ಲಿ ನಡೆಯುತ್ತದೆ ಅಂದಮೇಲೆ ತಂದೆಯು ಬಹಳ ಪ್ರೀತಿಯಿಂದ
ತಿಳಿಸುತ್ತಾರೆ - ಮಕ್ಕಳೇ, ತಾವು ಬೇಹದ್ದಿನ ತಂದೆಯಾದ ನನ್ನನ್ನು ಮರೆತು ಬಿಟ್ಟಿದ್ದೀರಿ, ನಿಮಗೆ
ಅರ್ಧಕಲ್ಪಕ್ಕಾಗಿ ಬೇಹದ್ದಿನ ಆಸ್ತಿಯನ್ನು ಕೊಟ್ಟಿದ್ದೆನು. ತಮಗೆ ಬೇಹದ್ದಿನ ಸನ್ಯಾಸವನ್ನು ನಾನೇ
ಮಾಡಿಸಿದ್ದೆನು, ಈ ಪೂರ್ಣ ಜಗತ್ತು ಸ್ಮಶಾನವಾಗಲಿದೆ ಎಂದು ನಾನೇ ಹೇಳಿದ್ದೆನು. ಯಾವುದು
ಸಮಾಪ್ತಿಯಾಗುತ್ತದೆಯೋ ಅದನ್ನು ತಾವೇಕೆ ನೆನಪು ಮಾಡುತ್ತೀರಿ! ಮತ್ತೆ ತಾವು ಕರೆಯುತ್ತೀರಿ - ಬಾಬಾ,
ನಮ್ಮನ್ನು ಪತಿತ ಪ್ರಪಂಚದಿಂದ ಬಿಡಿಸಿ ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ. ಪತಿತ
ಪ್ರಪಂಚದಲ್ಲಿ ಕೋಟ್ಯಾಂತರ ಮನುಷ್ಯರಿದ್ದಾರೆ, ಪಾವನ ಪ್ರಪಂಚದಲ್ಲಿ ಬಹಳ ಕಡಿಮೆ ಮನುಷ್ಯರಿರುತ್ತಾರೆ
ಅಂದಾಗ ಕಾಲರ ಕಾಲ ಮಹಾಕಾಲನನ್ನು ಕರೆಯುತ್ತಾರಲ್ಲವೆ. ಭಗವಂತ, ಬಂದು ಭಕ್ತಿಯ ಫಲವನ್ನು ಕೊಡಿ,
ನಾವಂತೂ ಬಹಳ ದುಃಖವನ್ನು ಅನುಭವಿಸಿದ್ದೇವೆ ಎಂದು ಭಕ್ತರು ಭಗವಂತನನ್ನು ಕರೆಯುತ್ತಾರೆ.
ಅರ್ಧಕಲ್ಪದ ಅಭ್ಯಾಸವಾಗಿದೆ ಅಂದಾಗ ಬಿಡಲು ಕಷ್ಟವಾಗುತ್ತದೆ ಆದರೆ ಇದೂ ಸಹ ಡ್ರಾಮಾದಲ್ಲಿ
ನಿಶ್ಚಿತವಾಗಿದೆ. ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರವಾಗಿ ತಮ್ಮ ಕರ್ಮಾತೀತ ಸ್ಥಿತಿಯನ್ನು
ಕಲ್ಪದ ಮೊದಲಿನಂತೆ ಪಡೆಯುತ್ತಾರೆ, ನಂತರ ವಿನಾಶವಾಗುತ್ತದೆ. ಈಗ ಇಲ್ಲಿ ವಾಸ ಮಾಡಲೂ ಸಹ
ಸ್ಥಳವಿಲ್ಲ, ದವಸ-ಧಾನ್ಯಗಳಿಲ್ಲ, ಎಲ್ಲಿಂದ ತಿನ್ನುವುದು. ಅಮೇರಿಕಾದಲ್ಲಿಯೂ ಸಹ ಹೇಳುತ್ತಾರೆ.
ಕೋಟ್ಯಾಂತರ ಮನುಷ್ಯರು ಹಸಿವಿನಿಂದ ಸಾಯುತ್ತಾರೆ. ಈ ಪ್ರಾಕೃತಿಕ ವಿಕೋಪಗಳು ಆಗಲೇಬೇಕು. ಯುದ್ಧವು
ಪ್ರಾರಂಭವಾಗಿ ಬಿಟ್ಟರೆ ಆಹಾರವು ಎಲ್ಲಿಂದ ಬರುತ್ತದೆ. ಯುದ್ಧವೂ ಸಹ ಬಹಳ ಭಯಾನಕವಾಗಿ ಆಗುತ್ತದೆ.
ಅವರ ಬಳಿ ಯಾವುದೆಲ್ಲಾ ಸಾಮಗ್ರಿಗಳು ತಯಾರಿದೆಯೋ ಅದೆಲ್ಲವನ್ನೂ ಹೊರ ತೆಗೆಯುತ್ತಾರೆ, ಪ್ರಾಕೃತಿಕ
ವಿಕೋಪಗಳೂ ಸಹ ಸಹಯೋಗ ಕೊಡುತ್ತವೆ, ಅದಕ್ಕೆ ಮೊದಲು ತಾವು ಕರ್ಮಾತೀತ ಸ್ಥಿತಿಯನ್ನು ಪಡೆಯಬೇಕು,
ಪತಿತರಿಂದ ಪಾವನರಾಗಬೇಕು. ಕಾಮಚಿತೆಯ ಮೇಲೆ ಕುಳಿತು ಕಪ್ಪಾಗಿದ್ದೀರಿ, ಈಗ ತಂದೆಯು ಸುಂದರರನ್ನಾಗಿ
ಮಾಡುತ್ತಿದ್ದಾರೆ. ಆತ್ಮಗಳಿರುವ ನೆಲೆಯಂತೂ ಒಂದೇ ಅಲ್ಲವೆ. ಆದರೆ ಇಲ್ಲಿಗೆ ಬಂದು
ಪಾತ್ರವನ್ನಭಿನಯಿಸುತ್ತೀರಿ. ರಾಮ ರಾಜ್ಯ ಮತ್ತು ರಾವಣ ರಾಜ್ಯವನ್ನು ನೀವು ಕ್ರಾಸ್ ಮಾಡುವಿರಿ ಈಗ
ಹಳೆಯ ಜಗತ್ತಿನ ಅಂತ್ಯವಾಗುತ್ತದೆ, ನಾನು ಬರುವುದೂ ಅಂತ್ಯದಲ್ಲಿಯೇ, ಆಗಲೇ ಮಕ್ಕಳೂ ಕರೆಯುತ್ತಾರೆ.
ಹಳೆಯ ಪ್ರಪಂಚದ ವಿನಾಶವಂತೂ ಖಂಡಿತ ಆಗಲೇಬೇಕು. ಗಾಯನವೂ ಸಹ ಇದೆ - ಬೆಕ್ಕಿಗೆ ಚೆಲ್ಲಾಟ, ಇಲಿಗೆ
ಪ್ರಾಣ ಸಂಕಟ...... ಆದರೆ ತಂದೆಯ ಶ್ರೀಮತದಂತೆ ನಡೆಯದಿದ್ದರೆ ಆ ಖುಷಿಯಿರಲು ಸಾಧ್ಯವಿಲ್ಲ. ನಾವು
ಈ ಶರೀರವನ್ನು ಬಿಟ್ಟು ಅಮರಪುರಿಗೆ ಹೋಗಬೇಕಾಗಿದೆ ಎಂದು ಈಗ ನಾವು ಮಕ್ಕಳಿಗೆ ಗೊತ್ತಿದೆ. ತಮ್ಮ
ಹೆಸರು ಶೀತಲದಳ, ಶಿವಶಕ್ತಿ ಎಂದಾಗಿದೆ ಮತ್ತು ತಾವು ಪ್ರಜಾಪಿತ ಬ್ರಹ್ಮಾಕುಮಾರ -
ಕುಮಾರಿಯರಾಗಿದ್ದೀರಿ. ಶಿವನ ಮಕ್ಕಳಂತೂ ಆಗಿದ್ದೀರಿ, ನಂತರ ಸಹೋದರ-ಸಹೋದರರಾಗುತ್ತೀರಿ. ಪ್ರಜಾಪಿತ
ಬ್ರಹ್ಮನ ಮುಖಾಂತರವೇ ರಚನೆಯನ್ನು ರಚಿಸಲಾಗುತ್ತದೆ. ಬ್ರಹ್ಮನಿಗೆ ಮನು ಕುಲದ ಮೂಲಪಿತ ಎಂದು
ಹೇಳುತ್ತಾರೆ. ಅಂದಮೇಲೆ ಆತ್ಮಗಳಿಗೇ ಕುಳಿತು ತಿಳಿಸುತ್ತಾರೆ. ಆತ್ಮವೇ ಶರೀರದ ಮುಖಾಂತರ ಎಲ್ಲವನ್ನೂ
ಮಾಡುತ್ತದೆ. ಆತ್ಮದ ಶರೀರಕ್ಕೆ ಹೊಡೆಯುತ್ತಾರೆ ಆಗ ಆತ್ಮವು ನಾನು ಈ ಶರೀರದಿಂದ ಇಂತಹ ಆತ್ಮದ
ಶರೀರಕ್ಕೆ ಹೊಡೆದೆನು ಎಂದು ಹೇಳುತ್ತದೆ. ಮಕ್ಕಳು ಪತ್ರದಲ್ಲಿ ಬರೆಯುತ್ತಾರೆ - ನಾನಾತ್ಮ ಶರೀರದ
ಮೂಲಕ ಈ ತಪ್ಪನ್ನು ಮಾಡಿದ್ದೇನೆ. ಕಷ್ಟವಿದೆಯಲ್ಲವೆ. ಇದರಲ್ಲಿ ವಿಚಾರಸಾಗರ ಮಂಥನ ಮಾಡಬೇಕು
ಪುರುಷರಿಗೆ ಬಹಳ ಸಹಜವಾಗಿದೆ. ಬಾಂಬೆಯಲ್ಲಿ ಬೆಳಗ್ಗೆ ಎಷ್ಟೊಂದು ಜನರು ತಿರುಗಾಡಲು ಹೋಗುತ್ತಾರೆ,
ತಾವು ಏಕಾಂತದಲ್ಲಿ ವಿಚಾರಸಾಗರ ಮಂಥನ ಮಾಡಬೇಕಾಗುತ್ತದೆ. ತಂದೆಯ ಮಹಿಮೆಯನ್ನು ಮಾಡುತ್ತಿರಿ - ಬಾಬಾ,
ನಿಮ್ಮದು ಚಮತ್ಕಾರವಾಗಿದೆ, ದೇಹಧಾರಿಯ ಮಹಿಮೆಯನ್ನು ಮಾಡುವುದಿಲ್ಲ. ಸರ್ವ ಶ್ರೇಷ್ಠ ಭಗವಂತ
ವಿದೇಹಿಯಾಗಿದ್ದಾರೆ. ಅವರು ಎಂದೂ ದೇಹವನ್ನು ಪಡೆಯುವುದಿಲ್ಲ. ನಾನು ಸಾಧಾರಣ ತನುವಿನಲ್ಲಿ ಪ್ರವೇಶ
ಮಾಡುತ್ತೇನೆಂದು ಸ್ವಯಂ ತಂದೆಯು ಹೇಳಿದ್ದಾರೆ. ಇವರು ತಮ್ಮ ಜನ್ಮಗಳನ್ನು ತಿಳಿದುಕೊಂಡಿಲ್ಲ, ತಾವೂ
ಸಹ ತಿಳಿದುಕೊಂಡಿರಲಿಲ್ಲ. ಈಗ ಇವರು (ಬ್ರಹ್ಮಾ) ನನ್ನ ಮೂಲಕ ತಿಳಿದುಕೊಂಡರು ಅಂದಾಗ ನೀವೂ ಸಹ
ತಿಳಿದುಕೊಂಡಿದ್ದೀರಿ. ಇದೂ ಸಹ ಅಭ್ಯಾಸವಿದೆ, ತಂದೆಯನ್ನು ನೆನಪು ಮಾಡುವುದರಿಂದ ನಿಮಗೆ
ಖುಷಿಯಾಗುತ್ತದೆ. ಯಾವಾಗ ತಮ್ಮನ್ನು ಆತ್ಮವೆಂದು ನಿಶ್ಚಯ ಮಾಡಿಕೊಳ್ಳುತ್ತೀರಿ ಆಗ ಆತ್ಮವನ್ನೇ
ನೋಡುತ್ತಿರುತ್ತೀರಿ ಆಗ ವಿಕಾರದ ಯಾವುದೇ ಮಾತುಗಳು ಬರಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ -
ಅಶರೀರಿ ಭವ. ಮತ್ತೆ ವಿಕಾರಿ ಯೋಜನೆಗಳು ಹೇಗೆ ಉತ್ಫನ್ನವಾಗುತ್ತದೆ. ಶರೀರವನ್ನು ನೋಡುವುದರಿಂದ
ಬೀಳುತ್ತೀರಿ ಆದ್ದರಿಂದ ಆತ್ಮವನ್ನು ನೋಡಬೇಕು - ಆತ್ಮನಾಗಿದ್ದೇನೆ, ನಾನು ಈ ಪಾತ್ರವನ್ನು
ಅಭಿನಯಿಸಿದ್ದೇನೆ. ಈಗ ತಂದೆಯು ಅಶರೀರಿ ಭವ ಎಂದು ಹೇಳುತ್ತಾರೆ. ನನ್ನನ್ನು ನೆನಪು ಮಾಡಿದರೆ ಪಾಪವು
ಭಸ್ಮವಾಗುತ್ತದೆ ಹಾಗೂ ನೆನಪಿನ ಯಾತ್ರೆಯಲ್ಲಿ ಬರುವುದರಿಂದ ಸಂಪಾದನೆಯು ಜಮಾ ಆಗುತ್ತದೆ. ಬೆಳಗಿನ
ಸಮಯವು ಬಹಳ ಚೆನ್ನಾಗಿದೆ. ಕೇವಲ ತಂದೆಯ ವಿನಃ ಬೇರೆ ಯಾರನ್ನೂ ನೋಡಬೇಡಿ. ಬಾಕಿ ಈ
ಲಕ್ಷ್ಮೀ-ನಾರಾಯಣರಾಗುವುದೇ ನಮ್ಮ ಗುರಿಯಾಗಿದೆ. ಮನ್ಮನಾಭವ, ಮಧ್ಯಾಜೀಭವ - ಇದರ ಅರ್ಥವನ್ನು ಯಾರೂ
ತಿಳಿದುಕೊಂಡಿಲ್ಲ. ಭಕ್ತಿಯಿರುವುದೇ ಪ್ರವೃತ್ತಿ ಮಾರ್ಗದವರಿಗೆ ಎಂದು ತಾವು ತಿಳಿಸಬಹುದು.
ನಿವೃತ್ತಿ ಮಾರ್ಗದವರು ಕಾಡಿನಲ್ಲಿ ಭಕ್ತಿಯೇನು ಮಾಡುತ್ತಾರೆ. ಮೊದಲು ಇವರೂ ಸಹ
ಸತೋಪ್ರಧಾನರಾಗಿದ್ದರು, ಆ ಸಮಯದಲ್ಲಿ ಅವರಿಗೆ ಎಲ್ಲವೂ ಕಾಡಿಗೆ ತಲುಪಿಸುತ್ತಿದ್ದರು. ಈಗ ನೋಡಿ,
ಕುಟೀರಗಳೆಲ್ಲವೂ ಖಾಲಿ ಬಿದ್ದಿದೆ ಏಕೆಂದರೆ ತಮೋಪ್ರಧಾನರಾಗಿರುವ ಕಾರಣ ಏನೂ ತಲುಪುವುದೇ ಇಲ್ಲ.
ಭಕ್ತರಿಗೆ ಶ್ರದ್ಧೆಯೇ ಇಲ್ಲ, ಈ ಕಾರಣದಿಂದ ಈಗ ವ್ಯಾಪಾರದಲ್ಲಿ ತೊಡಗಿದ್ದಾರೆ. ಕೋಟ್ಯಾಧೀಶ್ವರರು
ಪದಮಾಪತಿಗಳಾಗಿದ್ದಾರೆ. ಈಗಂತೂ ಎಲ್ಲವೂ ಸಮಾಪ್ತಿಯಾಗುವುದಿದೆ. ಚಿನ್ನದಿಂದ ಮಹಲು
ಮೊದಲಾದುವುಗಳನ್ನು ಮಾಡಿಕೊಳ್ಳುತ್ತೇವೆಂದಲ್ಲ. ಅಲ್ಲಿ ಎಲ್ಲವೂ ಹೊಸದಾಗಿರುತ್ತದೆ. ದವಸ-ಧಾನ್ಯಗಳು
ಹೊಸದು, ಹೊಸ ಪ್ರಪಂಚದಲ್ಲಿ ಬಹಳ ಒಳ್ಳೆಯ ವಸ್ತುಗಳಿರುತ್ತವೆ. ಈಗಂತೂ ಭೂಮಿಯು ನಿಸ್ಸಾರವಾಗಿದೆ,
ಅದರಲ್ಲಿ ಫಲವೂ ಸಹ ಪೂರ್ಣ ಸಿಗುವುದಿಲ್ಲ. ಅಲ್ಲಿ ಪೂರ್ಣ ಭೂಮಿ, ಸಾಗರವೂ ಸಹ ನಿಮ್ಮದಾಗಿರುತ್ತದೆ.
ಅಲ್ಲಿ ಎಷ್ಟು ಶುದ್ಧವಾದ ಭೋಜನವನ್ನು ಸ್ವೀಕರಿಸುತ್ತೀರಿ. ಇಲ್ಲಿ ನೋಡಿ, ಪ್ರಾಣಿಗಳನ್ನೂ ಸಹ
ಬೇಯಿಸಿ ತಿಂದು ಬಿಡುತ್ತಾರೆ. ಅಲ್ಲಂತೂ ಇಂತಹ ಯಾವುದೇ ಮಾತುಗಳಿಲ್ಲ ಅಂದಮೇಲೆ ತಾವು ಮಕ್ಕಳು
ತಂದೆಗೆ ಬಹಳ ಧನ್ಯವಾದಗಳನ್ನು ತಿಳಿಸಬೇಕು. ತಾವು ತಂದೆಯನ್ನು ಅರ್ಥ ಮಾಡಿಕೊಂಡಿದ್ದೀರಿ ಹಾಗೂ
ಅನ್ಯರಿಗೂ ಹೇಳುತ್ತೀರಿ - ತಂದೆಯು ಹೇಳಿದ್ದಾರೆ, ನಾನು ಸಾಧಾರಣ ವೃದ್ಧನ ತನುವಿನಲ್ಲಿ, ಇವರ (ಬ್ರಹ್ಮಾ)
ವಾನಪ್ರಸ್ಥ ಸ್ಥಿತಿಯಲ್ಲಿ ಪ್ರವೇಶ ಮಾಡುತ್ತೇನೆ. ವಾನಪ್ರಸ್ಥ ಸ್ಥಿತಿಯಲ್ಲಿಯೇ ಹಿಂತಿರುಗಿ
ಹೋಗಬೇಕು, ಇದೂ ಸಹ ನಿಯಮವಿದೆ. ಭಕ್ತಿಯಲ್ಲಿಯೂ ಸಹ ಇದೇ ಪದ್ಧತಿಯು ನಡೆಯುತ್ತದೆ, ಇವೆಲ್ಲವೂ ಧಾರಣೆ
ಮಾಡಿಕೊಳ್ಳುವ ಮಾತುಗಳಾಗಿವೆ. ಕೆಲವರಂತೂ ಚೆನ್ನಾಗಿ ಬರೆದು ಧಾರಣೆ ಮಾಡಿ ಅನ್ಯರಿಗೂ ಹೇಳುತ್ತಾರೆ.
ಕೇಳುವುದರಿಂದ ಬಹಳ ಖುಷಿಯಾಗುತ್ತದೆ ಏಕೆಂದರೆ ಈಗ ಆಶ್ರಯವು ಸಿಕ್ಕಿದೆ. ಪ್ರತಿಯೊಬ್ಬರ ಆತ್ಮವು
ಭೃಕುಟಿಯ ಸಿಂಹಾಸನದ ಮೇಲೆ ವಿರಾಜಮಾನವಾಗಿದೆ ಎಂಬುದು ನಿಮಗೆ ಗೊತ್ತಿದೆ. ಭೃಕುಟಿಯ ಮಧ್ಯದಲ್ಲಿ
ಅವಿನಾಶಿ ನಕ್ಷತ್ರವು ಹೊಳೆಯುತ್ತಿದೆ ಎಂದು ಆತ್ಮಕ್ಕೆ ಹೇಳಲಾಗುತ್ತದೆ. ಪರಮಪಿತ ಪರಮಾತ್ಮ ಶಿವ
ಹೊಳೆಯುತ್ತಾರೆ ಎಂದು ಹೇಳುವುದಿಲ್ಲ ಆದರೆ ಆತ್ಮವು ಹೊಳೆಯುತ್ತಿದೆ. ಆತ್ಮವು ಸಹೋದರ-ಸಹೋದರನಾಗಿದೆ
ಅದಕ್ಕೆ ಹಿಂದೂಸ್ಥಾನಿ-ಪಾಕೀಸ್ಥಾನಿ, ಬೌದ್ಧಿಗಳೆಲ್ಲರೂ ಸಹೋದರ-ಸಹೋದರನಾಗಿದ್ದಾರೆ ಎಂದು
ಹೇಳುತ್ತಾರೆ. ಆದರೆ ಸಹೋದರತ್ವದ ಅರ್ಥವನ್ನೇ ತಿಳಿದುಕೊಂಡಿಲ್ಲ. ಪರಸ್ಪರ ನಿಮ್ಮಲ್ಲಿ ಎಷ್ಟೊಂದು
ಪ್ರೀತಿಯಿರಬೇಕಾಗಿದೆ. ಆದರೆ ದೇಹಾಭಿಮಾನದಲ್ಲಿ ಬರುವುದರಿಂದ ಪರಸ್ಪರರಿಂದ ತೊಂದರೆ ಪಡುತ್ತಾರೆ
ನಂತರ ಪರಸ್ಪರ ಗ್ಲಾನಿ ಮಾಡುತ್ತಿರುತ್ತಾರೆ. ಈ ಸಮಯದಲ್ಲಂತೂ ನೀವು ಮಕ್ಕಳು ಪರಸ್ಪರದಲ್ಲಿ ಬಹಳ
ಕ್ಷೀರಖಂಡವಾಗಿರಲೇ ಬೇಕು. ಈ ಸಮಯದಲ್ಲಿ ಯಾರು ಈ ಪುರುಷಾರ್ಥ ಮಾಡುತ್ತೀರೋ ಅವರು 21 ಜನ್ಮಗಳಲ್ಲಿ
ಬಹಳ ಕ್ಷೀರಖಂಡವಾಗಿರುತ್ತೀರಿ. ಒಂದು ವೇಳೆ ಯಾವುದಾದರೂ ಉಲ್ಟಾ ಮಾತು ಮುಖದಿಂದ ಬಂದರೆ ತಕ್ಷಣ ಐ
ಆಮ್ ಸಾರಿ (ನನ್ನನ್ನು ಕ್ಷಮಿಸಿ) ಎಂದು ಕೇಳಬೇಕು ಏಕೆಂದರೆ ಬಹಳ ಮಧುರರಾಗಿರಬೇಕು ಎಂದು ತಂದೆಯ
ಆದೇಶವಾಗಿದೆ. ಯಾರು ಆದೇಶವನ್ನು ಪಾಲಿಸುವುದಿಲ್ಲವೋ ಅವರಿಗೆ ಈಶ್ವರನಿಗೆ ಅಪ್ರಾಮಾಣಿಕರೆಂದು
ಹೇಳಲಾಗುತ್ತದೆ. ಎಂದೂ ಸಹ ಯಾರಿಗೂ ದುಃಖ ಕೊಡಬಾರದು. ತಂದೆಗೆ ಗೊತ್ತಿದೆ - ಮಿಲಿಟರಿಯವರು
ಯುದ್ಧವನ್ನು ಮಾಡಬೇಕಾಗುತ್ತದೆ. ಕೇವಲ ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿದರೆ
ಬಂಧನವು ದೂರವಾಗುತ್ತದೆ. ಈ ಹಳೆಯ ಪ್ರಪಂಚವನ್ನು ಏನು ನೋಡುವುದಿದೆ? ನಾವಂತೂ ಹೊಸ ಪ್ರಪಂಚವನ್ನು
ನೋಡಬೇಕು. ಈಗ ಶ್ರೀಮತದಿಂದ ಹೊಸ ಪ್ರಪಂಚದ ಸ್ಥಾಪನೆಯಾಗುತ್ತಿದೆ. ಇದರಲ್ಲಿ ಆಶೀರ್ವಾದದ ಯಾವುದೇ
ಮಾತಿಲ್ಲ. ಶಿಕ್ಷಕರು ಎಂದೂ ಆಶೀರ್ವಾದ ಮಾಡುವುದಿಲ್ಲ, ಓದಿಸುತ್ತಾರೆ. ಯಾರೆಷ್ಟು ಓದುತ್ತಾರೆಯೋ,
ಗುಣಗಳ ಧಾರಣೆ ಮಾಡಿಕೊಳ್ಳುತ್ತಾರೆಯೋ ಅಂತಹ ಪದವಿಯನ್ನು ಪಡೆಯುತ್ತಾರೆ ಇದರಲ್ಲಿಯೂ ಸಹ ಅದೇ ರೀತಿ
ಇದೆ. ನಾನು ಹೇಗೆ ನಡೆದುಕೊಳ್ಳುತ್ತೇನೆ ಎಂದು ತಮ್ಮ ರಿಜಿಸ್ಟರನ್ನು ತಾವೇ ನೋಡಿಕೊಳ್ಳಬೇಕು.
ಕೆಲವರಂತೂ ಬಹಳ ಮಧುರವಾಗಿ ನಡೆದುಕೊಳ್ಳುತ್ತಾರೆ. ಪ್ರತೀ ಮಾತಿನಲ್ಲಿಯೂ ರಾಜಿಯಾಗಿರುತ್ತಾರೆ.
ಯಾವುದೂ ತಪ್ಪಾಗಿಲ್ಲವೆ ಎಂದು ಪರಸ್ಪರದಲ್ಲಿ ತಾವು ವಾರ್ತಾಲಾಪ ನಡೆಸಿ. ಆದರೆ ಚರ್ಚೆ ಮಾಡುವವರು
ತಿಳಿದುಕೊಳ್ಳಬೇಕು, ನಾನಾತ್ಮನಾಗಿದ್ದೇನೆ, ನಾನು ನನ್ನ ಸಹೋದರನನ್ನು ಕೇಳುತ್ತೇನೆ - ಈ ಶರೀರದ
ಮೂಲಕ ಯಾವುದೇ ತಪ್ಪಾಗಿಲ್ಲವೇ? ಯಾರಿಗೂ ದುಃಖ ಕೊಟ್ಟಿಲ್ಲವೆ? ತಂದೆಯು ಎಂದಿಗೂ ಸಹ ದುಃಖವನ್ನು
ಕೊಡುವುದಿಲ್ಲ. ತಂದೆಯು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯು
ದುಃಖಹರ್ತ-ಸುಖಕರ್ತನಾಗಿದ್ದಾರೆ ಅಂದಮೇಲೆ ತಾವು ಎಲ್ಲರಿಗೂ ಸುಖವನ್ನು ಕೊಡಬೇಕು. ಎಂದೂ
ಉಲ್ಟಾ-ಸುಲ್ಟಾ ಮಾತನಾಡಬಾರದು ಎಂದೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ನೀವು ರಿಪೋರ್ಟ್ ಮಾಡಬೇಕು.
ಬಹಳ ಮಧುರರಾಗಬೇಕಾಗಿದೆ. ಎಷ್ಟು ಮಧುರರಾಗುತ್ತೀರೋ ಅಷ್ಟು ತಂದೆಯ ಪ್ರತ್ಯಕ್ಷತೆಯನ್ನು ಮಾಡುತ್ತೀರಿ.
ತಂದೆಯು ಪ್ರೀತಿಯ ಸಾಗರನಾಗಿದ್ದಾರೆ, ನೀವೂ ಸಹ ಪ್ರೀತಿಯಿಂದ ತಿಳಿಸಿದರೆ ಆಗ ನಿಮ್ಮ
ವಿಜಯವಾಗುತ್ತದೆ. ತಂದೆಯು ತಿಳಿಸುತಾರೆ - ನನ್ನ ಮುದ್ಧಾದ ಮಕ್ಕಳೇ, ಎಂದೂ ಯಾರಿಗೂ ದುಃಖ ಕೊಡಬಾರದು.
ಈ ರೀತಿ ಅನೇಕರಿದ್ದಾರೆ. ಅವರು ಉಲ್ಟಾ-ಸುಲ್ಟಾ ತಪ್ಪುಗಳನ್ನು ಮಾಡುತ್ತಿರುತ್ತಾರೆ, ದೂರು
ಹೇಳುವುದು, ಜಿದ್ದು ಮಾಡುವುದು, ರೀಸ್ ಮಾಡುವುದು,ಈಷ್ರ್ಯೆ ಪಡುವುದು...... ಇದೂ ಸಹ
ವಿಕರ್ಮವಾಗಿದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಯಾರು ಒಳ್ಳೆಯ ಪ್ರಾಮಾಣಿಕರು, ಸೇವಾಧಾರಿ
ಮಕ್ಕಳಿರುತ್ತಾರೆ ಅವರು ನಮಗೆ ಖಂಡಿತ ಪ್ರಿಯರಾಗುತ್ತಾರೆ. ತಂದೆಯು ಅವರನ್ನು ಪ್ರೀತಿ ಮಾಡುತ್ತಾರೆ
ಬೇರೆಯವರಿಗೆ ಅಲ್ಲ. ಕೆಲವರು ಉಲ್ಟಾ-ಸುಲ್ಟಾ ಕೆಲಸವನ್ನು ಮಾಡಿ ದೋಷ ಹಾಕುತ್ತಾರೆ. ಇಂತಹವರು ಬೀಡಿ
ಸೇದುವುದನ್ನು ಬಿಡುವುದಿಲ್ಲವೆಂದು ಸಮಾಚಾರ ಬರುತ್ತದೆ ಅದಕ್ಕೆ ತಂದೆಯು ತಿಳಿಸುತ್ತಾರೆ - ಅವರಿಗೆ
ತಿಳಿಸಿ, ನೀವು ಯೋಗಬಲದಿಂದ ವಿಶ್ವವನ್ನು ಪಾವನ ಮಾಡುತ್ತಿದ್ದೀರೆಂದಮೇಲೆ ಇದನ್ನು ಬಿಡಲು
ಸಾಧ್ಯವಿಲ್ಲವೇನು? ತಂದೆಯನ್ನು ನೆನಪು ಮಾಡಿ. ತಂದೆಯು ಅವಿನಾಶಿ ಸರ್ಜನ್ ಆಗಿದ್ದಾರೆ, ಅಂಥಹ
ಔಷಧಿಯನ್ನು ಕೊಡುತ್ತಾರೆ ಅದರಿಂದ ಎಲ್ಲಾ ದುಃಖವೂ ದೂರವಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
೧.
ದೇಹಾಭಿಮಾನದಲ್ಲಿ ಬಂದು ಪರಸ್ಪರರಲ್ಲಿ ತೊಂದರೆ ಕೊಡಬಾರದು. ಪ್ರತಿಯೊಂದು ಮಾತಿನಲ್ಲಿ ಖುಷಿಯಿಂದ
ಇರಬೇಕು. ಎಂದೂ ಸಹ ದೂರ ಹೇಳಬಾರದು, ಹಠ ಮಾಡುವುದು, ರೀಸ್ ಮಾಡಬಾರದು. ಯಾರಿಗೂ ದುಃಖ ಕೊಡಬಾರದು.
ಪರಸ್ಪರದಲ್ಲಿ ಬಹಳ ಮಧುರ, ಕ್ಷೀರ ಖಂಡವಾಗಿ ಇರಬೇಕಾಗಿದೆ.
೨. ಬೆಳಗ್ಗೆ-ಬೆಳಗ್ಗೆ ಎದ್ದು ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು. ತಮ್ಮೊಂದಿಗೆ ತಾವೇ
ಮಾತನಾಡಿಕೊಳ್ಳಬೇಕು. ವಿಚಾರ ಸಾಗರ ಮಂಥನ ಮಾಡುತ್ತಾ ತಂದೆಗೆ ಧನ್ಯವಾದಗಳನ್ನು ಹೇಳಬೇಕಾಗಿದೆ.
ವರದಾನ:
ಹೃದಯ(ಮನಸ್ಸು)
ಮತ್ತು ಮೆದುಳು(ಬುದ್ಧಿ) ಎರಡರ ಬ್ಯಾಲೆನ್ಸ್ ನಿಂದ ಸೇವೆ ಮಾಡುವಂತಹ ಸದಾ ಸಫಲತಾ ಮೂರ್ತಿ ಭವ.
ಕೆಲವು ಮಕ್ಕಳು
ಸೇವೆಯಲ್ಲಿ ಕೇವಲ ಬುದ್ಧಿ ಉಪಯೋಗಿಸುತ್ತಾರೆ ಆದರೆ ಹೃದಯ ಮತ್ತು ಬುದ್ಧಿ ಎರಡನ್ನೂ ಸೇರಿಸಿ ಸೇವೆ
ಮಾಡಿದಲ್ಲಿ ಸೇವೆಯಲ್ಲಿ ಸಫಲತಾ ಮೂರ್ತಿಗಳಾಗಿ ಬಿಡುವಿರಿ. ಯಾರು ಕೇವಲ ಬುದ್ಧಿಯಿಂದ ಮಾಡುತ್ತಾರೆ
ಅವರಿಗೆ ಬುದ್ದಿಯಲ್ಲಿ ಸ್ವಲ್ಪ ಸಮಯಕ್ಕಾಗಿ ತಂದೆಯ ನೆನಪಿರುತ್ತದೆ. ಹಾ! ಬಾಬಾರವರೇ ಇದೆಲ್ಲಾ
ಮಾಡಿಸುತ್ತಿದ್ದಾರೆ ಆದರೆ ಸ್ವಲ್ಪ ಸಮಯದ ನಂತರ ಅವರಲ್ಲಿಯೇ ನಾನು ಎನ್ನುವುದು ಬಂದು ಬಿಡುವುದು.
ಮತ್ತು ಯಾರು ಹೃದಯದಿಂದ ಮಾಡುತ್ತಾರೆ ಅವರ ಹೃದಯದಲ್ಲಿ ಬಾಬಾನ ನೆನಪು ಸದಾ ಕಾಲ ಇರುವುದು.
ಹೃದಯದಿಂದ ಸೇವೆ ಮಾಡುವವರಿಗೆ ಫಲ ಸಿಗುವುದು. ಮತ್ತು ಒಂದು ವೇಳೆ ಎರಡರ ಬ್ಯಾಲೆನ್ಸ್ ಇದ್ದಾಗ ಸದಾ
ಸಫಲತೆ ಸಿಗುತ್ತಿರುತ್ತದೆ.
ಸ್ಲೋಗನ್:
ಬೇಹದ್ಧಿನಲ್ಲಿರಿ ಆಗ ಮಿತವಾದ(ಹದ್ಧಿನ) ಮಾತುಗಳು ಸ್ವತಃವಾಗಿ ಸಮಾಪ್ತಿಯಾಗಿ ಬಿಡುವುದು.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ -
ಹೇಗೆ ಬ್ರಹ್ಮಾ
ತಂದೆಯು ಮಾಸ್ಟರ್ ಜ್ಞಾನಸೂರ್ಯ ಆಗಿ ಜ್ಞಾನದ ಬೆಳಕು ಕೊಡುವುದರ ಜೊತೆ-ಜೊತೆ ಯೋಗದ ಕಿರಣಗಳ
ಶಕ್ತಿ(ಮೈಟ್)ಯಿಂದ ಪ್ರತಿಯೊಬ್ಬ ಆತ್ಮರ ಸಂಸ್ಕಾರ ರೂಪಿ ಕೀಟಾಣುಗಳನ್ನು ನಾಶ ಮಾಡುವ ಕರ್ತವ್ಯ
ಮಾಡಿದರು. ಅದೇ ರೀತಿ ನೀವು ಮಕ್ಕಳ ಬೃಕುಟಿಯಲ್ಲಿ ನಡೆಯುತ್ತಾ ತಿರುಗಾಡುತ್ತಾ ಲೈಟ್ ನ ಗೋಲಾ ಕಂಡು
ಬರಬೇಕು ಮತ್ತು ಚಲನೆಯಿಂದ, ವಾಣಿಯಿಂದ ಜ್ಞಾನ ರೂಪಿ ಶಕ್ತಿಯ ಗೋಲಾ ಕಂಡು ಬರಬೇಕು ಅರ್ಥಾತ್ ಬೀಜ
ಕಂಡು ಬರಬೇಕು. ಮಾಸ್ಟರ್ ಬೀಜರೂಪ, ಲೈಟ್ ಮತ್ತು ಮೈಟ್ ನ ಗೋಲಾ ಆಗಿ ಆಗ ಸಾಕ್ಷಾತ್ ಅಥವಾ
ಸಾಕ್ಷಾತ್ಕಾರ ಮೂರ್ತಿ ಆಗಲು ಸಾಧ್ಯ.