14.12.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ತಂದೆಯ ಬಳಿ ರಿಫ್ರೆಷ್ ಆಗಲು ಬರುತ್ತೀರಿ, ತಂದೆಯೊಂದಿಗೆ ಮಿಲನ ಮಾಡುವುದರಿಂದ ಭಕ್ತಿಮಾರ್ಗದ
ದಣಿವೆಲ್ಲವೂ ದೂರವಾಗಿ ಬಿಡುತ್ತದೆ”
ಪ್ರಶ್ನೆ:
ನೀವು ಮಕ್ಕಳನ್ನು
ತಂದೆಯು ಯಾವ ವಿಧಿಯಿಂದ ರಿಫ್ರೆಷ್ ಮಾಡುತ್ತಾರೆ?
ಉತ್ತರ:
1. ತಂದೆಯು ಜ್ಞಾನವನ್ನು ಹೇಳಿ-ಹೇಳಿ ನಿಮ್ಮನ್ನು ರಿಫ್ರೆಷ್ ಮಾಡಿ ಬಿಡುತ್ತಾರೆ. 2. ನೆನಪಿನಿಂದಲೇ
ನೀವು ಮಕ್ಕಳು ರಿಫ್ರೆಷ್ ಆಗುತ್ತೀರಿ. ವಾಸ್ತವದಲ್ಲಿ ಸತ್ಯಯುಗವು ಸತ್ಯವಾದ ವಿಶ್ರಾಮ ಪುರಿಯಾಗಿದೆ.
ಅಲ್ಲಿ ಯಾವುದೇ ವಸ್ತುವನ್ನು ಪ್ರಾಪ್ತಿ ಮಾಡಿಕೊಳ್ಳುವ ಪರಿಶ್ರಮವು ಯಾವುದೇ ಅಪ್ರಾಪ್ತ
ವಸ್ತುವಿರುವುದಿಲ್ಲ. 3. ಶಿವ ತಂದೆಯ ಮಡಿಲಿಗೆ ಬರುತ್ತಿದ್ದಂತೆ ನೀವು ಮಕ್ಕಳಿಗೆ ವಿಶ್ರಾಮವು
ಸಿಗುತ್ತದೆ, ದಣಿವೆಲ್ಲವೂ ದೂರವಾಗುತ್ತದೆ.
ಓಂ ಶಾಂತಿ.
ತಂದೆಯು ತಿಳಿಸುತ್ತಾರೆ ಜೊತೆಯಲ್ಲಿ ಈ ದಾದಾರವರೂ ತಿಳಿಯುತ್ತಾರೆ ಏಕೆಂದರೆ ತಂದೆಯು ಇವರ ಮೂಲಕ
ಕುಳಿತು ತಿಳಿಸಿಕೊಡುತ್ತಾರೆ. ಹೇಗೆ ನೀವು ತಿಳಿದುಕೊಳ್ಳುವಿರೋ ಅದೇ ರೀತಿ ಈ ದಾದಾರವರೂ
ತಿಳಿದುಕೊಳ್ಳುತ್ತಾರೆ. ಇವರಿಗೆ ಭಗವಂತನೆಂದು ಹೇಳಲಾಗುವುದಿಲ್ಲ, ಇದು ಭಗವಾನುವಾಚವಾಗಿದೆ. ತಂದೆಯು
ಏನನ್ನು ತಿಳಿಸುತ್ತಾರೆ? ಮಕ್ಕಳೇ, ಆತ್ಮಾಭಿಮಾನಿ ಭವ, ಏಕೆಂದರೆ ತನ್ನನ್ನು ಆತ್ಮನೆಂದು ತಿಳಿಯದ
ಹೊರತು ಪರಮಪಿತ ಪರಮಾತ್ಮನನ್ನು ನೆನಪು ಮಾಡಲು ಸಾಧ್ಯವಿಲ್ಲ. ಏಕೆಂದರೆ ಈ ಸಮಯದಲ್ಲಿ ಎಲ್ಲಾ
ಆತ್ಮಗಳು ಪತಿತರಾಗಿದ್ದಾರೆ. ಪತಿತರಿಗೇ ಮನುಷ್ಯರೆಂದು, ಪಾವನರಿಗೆ ದೇವತೆಗಳೆಂದು ಕರೆಯಲಾಗುತ್ತದೆ.
ಇವು ಬಹಳ ಸಹಜವಾದ ತಿಳಿದುಕೊಳ್ಳುವ ಮತ್ತು ತಿಳಿಸುವ ಮಾತುಗಳಾಗಿವೆ. ಹೇ ಪತಿತರನ್ನು ಪಾವನ ಮಾಡುವ
ತಂದೆಯೇ ಬನ್ನಿ ಎಂದು ಮನುಷ್ಯರೇ ಕರೆಯುತ್ತಾರೆ. ಈ ರೀತಿ ದೇವಿ-ದೇವತೆಗಳೆಂದೂ ಹೇಳುವುದಿಲ್ಲ.
ಪತಿತ-ಪಾವನ ತಂದೆಯು ಪತಿತರ ಕರೆಯ ಮೇರೆಗೆ ಬರುತ್ತಾರೆ. ಆತ್ಮಗಳನ್ನು ಪಾವನ ಮಾಡಿ ಮತ್ತೆ ಹೊಸ
ಪ್ರಪಂಚವನ್ನೂ ಸ್ಥಾಪನೆ ಮಾಡುತ್ತಾರೆ. ಆತ್ಮವೇ ತಂದೆಯನ್ನು ಕರೆಯುತ್ತದೆ, ಶರೀರವು ಕರೆಯುವುದಿಲ್ಲ.
ಪಾರಲೌಕಿಕ ತಂದೆ ಯಾರು ಸದಾ ಪಾವನನಾಗಿದ್ದಾರೆ ಅವರನ್ನೇ ಎಲ್ಲರೂ ನೆನಪು ಮಾಡುತ್ತಾರೆ. ಇದು ಹಳೆಯ
ಪ್ರಪಂಚವಾಗಿದೆ. ತಂದೆಯು ಹೊಸ ಪ್ರಪಂಚವನ್ನಾಗಿ ಮಾಡುತ್ತಾರೆ, ಕೆಲವರಂತೂ ಈ ರೀತಿಯವರೂ ಇದ್ದಾರೆ -
ನಮಗೆ ಇಲ್ಲಿಯೇ ಅಪಾರ ಸುಖವಿದೆ. ಹಣ, ಸಂಪತ್ತು ಬಹಳಷ್ಟಿದೆ, ನಮಗೆ ಇದೇ ಸ್ವರ್ಗವೆಂದು
ತಿಳಿಯುತ್ತಾರೆ. ಅವರು ನಿಮ್ಮ ಮಾತುಗಳನ್ನು ಹೇಗೆ ಒಪ್ಪುತ್ತಾರೆ? ಕಲಿಯುಗೀ ಪ್ರಪಂಚವನ್ನು
ಸ್ವರ್ಗವೆಂದು ತಿಳಿಯುವುದೂ ಸಹ ಬುದ್ಧಿಹೀನತೆಯಾಗಿದೆ. ಎಷ್ಟೊಂದು ಜಡಜಡೀಭೂತ ಸ್ಥಿತಿಯಾಗಿ
ಬಿಟ್ಟಿದೆ. ಆದರೂ ಸಹ ನಾವು ಸ್ವರ್ಗದಲ್ಲಿ ಕುಳಿತಿದ್ದೇವೆಂದು ಮನುಷ್ಯರು ತಿಳಿಯುತ್ತಾರೆ. ಮಕ್ಕಳು
ತಿಳಿಸದೇ ಇದ್ದರೆ ತಂದೆಯು ಹೇಳುತ್ತಾರಲ್ಲವೆ - ನೀವೇನು ಕಲ್ಲು ಬುದ್ಧಿಯವರೇ? ಅನ್ಯರಿಗೆ ತಿಳಿಸಲು
ಆಗುವುದಿಲ್ಲವೆ? ಯಾವಾಗ ತಾನು ಪಾರಸ ಬುದ್ಧಿಯವರಾಗುವರೋ ಆಗ ಅನ್ಯರನ್ನೂ ಮಾಡುವರು. ಒಳ್ಳೆಯ
ಪುರುಷಾರ್ಥ ಮಾಡಬೇಕು, ಇದರಲ್ಲಿ ನಾಚಿಕೆಯ ಮಾತಿಲ್ಲ. ಆದರೆ ಮನುಷ್ಯರ ಬುದ್ಧಿಯಲ್ಲಿ ಅರ್ಧಕಲ್ಪದ
ಯಾವ ಉಲ್ಟಾ ಮತಗಳು ತುಂಬಿವೆಯೋ ಅವು ಬಹು ಬೇಗನೆ ಮರೆಯುವುದಿಲ್ಲ. ಎಲ್ಲಿಯವರೆಗೆ ತಂದೆಯನ್ನು
ಯಥಾರ್ಥವಾಗಿ ಅರಿತುಕೊಂಡಿಲ್ಲವೋ ಅಲ್ಲಿಯವರೆಗೆ ಆ ಶಕ್ತಿಯು ಬರಲು ಸಾಧ್ಯವಿಲ್ಲ. ತಂದೆಯು
ತಿಳಿಸುತ್ತಾರೆ - ಈ ವೇದಶಾಸ್ತ್ರ ಇತ್ಯಾದಿಗಳಿಂದ ಮನುಷ್ಯರು ಏನೂ ಸುಧಾರಣೆಯಾಗುವುದಿಲ್ಲ.
ದಿನ-ಪ್ರತಿದಿನ ಇನ್ನೂ ಕೆಡುತ್ತಲೇ ಬಂದಿದ್ದಾರೆ. ಸತೋಪ್ರಧಾನರಿಂದ ತಮೋಪ್ರಧಾನರೇ ಆಗಿದ್ದಾರೆ.
ನಾವೇ ಸತೋಪ್ರಧಾನ ದೇವಿ-ದೇವತೆಗಳಾಗಿದ್ದೆವು, ಹೇಗೆ ಕೆಳಗಿಳಿದಿದ್ದೇವೆ! ಎಂಬ ಮಾತನ್ನು ಯಾರ
ಬುದ್ಧಿಯಲ್ಲಿಯೂ ಬರುವುದಿಲ್ಲ ಮತ್ತು 84 ಜನ್ಮಗಳ ಬದಲು 84 ಲಕ್ಷ ಜನ್ಮಗಳೆಂದು ಹೇಳಿ
ಬಿಟ್ಟಿದ್ದಾರೆ ಅಂದಮೇಲೆ ಅವರಿಗೆ ತಿಳಿಯುವುದಾದರೂ ಹೇಗೆ? ತಂದೆಯ ವಿನಃ ಜ್ಞಾನದ ಬೆಳಕನ್ನು
ಕೊಡುವವರು ಯಾರೂ ಇಲ್ಲ. ಎಲ್ಲರೂ ಇನ್ನೊಬ್ಬರ ಹಿಂದೆ ಅಲೆದಾಡಿ ಪೆಟ್ಟು ತಿನ್ನುತ್ತಿರುತ್ತಾರೆ.
ಕೆಳಗೆ ಬೀಳುತ್ತಾ-ಬೀಳುತ್ತಾ ಸುಸ್ತಾಗಿ ಬಿಟ್ಟಿದ್ದಾರೆ, ಎಲ್ಲಾ ಶಕ್ತಿಗಳು ಸಮಾಪ್ತಿಯಾಗಿವೆ.
ತಂದೆಯನ್ನು ಯಥಾರ್ಥವಾಗಿ ಅರಿತುಕೊಳ್ಳಲು ಬುದ್ಧಿಯಲ್ಲಿ ಆ ಶಕ್ತಿಯಿಲ್ಲ. ತಂದೆಯೇ ಬಂದು ಆ
ಬುದ್ಧಿಯನ್ನು ತೆರೆಯುತ್ತಾರೆ, ಇದರಿಂದ ಎಷ್ಟೊಂದು ರಿಫ್ರೆಷ್ ಆಗುತ್ತಾರೆ. ಮಕ್ಕಳು ತಂದೆಯ ಬಳಿ
ರಿಫ್ರೆಷ್ ಆಗಲು ಬರುತ್ತೀರಿ. ಮನೆಯಲ್ಲಿ ವಿಶ್ರಾಂತಿಯು ಸಿಗುತ್ತದೆಯಲ್ಲವೆ. ತಂದೆಯ ಮಿಲನ
ಮಾಡುವುದರಿಂದ ಭಕ್ತಿಮಾರ್ಗದ ದಣಿವೆಲ್ಲವೂ ದೂರವಾಗಿ ಬಿಡುತ್ತದೆ. ಸತ್ಯಯುಗಕ್ಕೂ ವಿಶ್ರಾಂತ
ಪುರಿಯೆಂದು ಕರೆಯಲಾಗುತ್ತದೆ. ಅಲ್ಲಿ ನಿಮಗೆ ಎಷ್ಟೊಂದು ವಿಶ್ರಾಂತಿಯು ಸಿಗುತ್ತದೆ. ಯಾವುದೇ
ವಸ್ತುವನ್ನು ಪ್ರಾಪ್ತಿ ಮಾಡಿಕೊಳ್ಳುವ ಪರಿಶ್ರಮ ಪಡಲು ಅಲ್ಲಿ ಯಾವುದೇ ಅಪ್ರಾಪ್ತ
ವಸ್ತುವಿರುವುದಿಲ್ಲ. ಇಲ್ಲಿ ತಂದೆಯೂ ರಿಫ್ರೆಷ್ ಮಾಡುತ್ತಾರೆ, ಈ ದಾದಾರವರೂ ಮಾಡುತ್ತಾರೆ. ಶಿವ
ತಂದೆಯ ಮಡಿಲಿಗೆ ಬರುತ್ತಿದ್ದಂತೆಯೇ ಎಷ್ಟೊಂದು ವಿಶ್ರಾಂತಿ ಸಿಗುತ್ತದೆ. ವಿಶ್ರಾಂತಿ ಎಂದರೆ ಶಾಂತಿ.
ಮನುಷ್ಯರೂ ಸಹ ಸುಸ್ತಾಗಿ ವಿಶ್ರಾಂತರಾಗಿ ಬಿಡುತ್ತಾರೆ. ಕೆಲಕೆಲವರು ಕೆಲಕೆಲೆವೊಂದೆಡೆ
ವಿಶ್ರಾಂತಿಗಾಗಿ ಹೋಗುತ್ತಾರಲ್ಲವೆ ಆದರೆ ಆ ವಿಶ್ರಾಂತಿಯಲ್ಲಿ ರಿಫ್ರೆಷ್ಮೆಂಟ್ ಇರುವುದಿಲ್ಲ.
ಇಲ್ಲಂತೂ ತಂದೆಯು ನಿಮಗೆ ಎಷ್ಟೊಂದು ಜ್ಞಾನವನ್ನು ತಿಳಿಸಿ ರಿಫ್ರೆಷ್ ಮಾಡುತ್ತಾರೆ. ತಂದೆಯ
ನೆನಪಿನಿಂದಲೂ ಸಹ ಎಷ್ಟೊಂದು ರಿಫ್ರೆಷ್ ಆಗುತ್ತೀರಿ ಮತ್ತು ತಮೋಪ್ರಧಾನರಿಂದ ಸತೋಪ್ರಧಾನರೂ
ಆಗುತ್ತೀರಿ. ಸತೋಪ್ರಧಾನರಾಗುವುದಕ್ಕಾಗಿಯೇ ನೀವು ಇಲ್ಲಿ ತಂದೆಯ ಬಳಿಗೆ ಬರುತ್ತೀರಿ. ತಂದೆಯು
ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ತಂದೆಯನ್ನು ನೆನಪು ಮಾಡಿ ಇಡೀ ಸೃಷ್ಟಿಚಕ್ರವು ಹೇಗೆ
ಸುತ್ತುತ್ತದೆ, ಸರ್ವ ಆತ್ಮಗಳಿಗೆ ವಿಶ್ರಾಂತಿಯು ಎಲ್ಲಿ ಮತ್ತು ಹೇಗೆ ಸಿಗುತ್ತವೆ ಎಂಬುದನ್ನು
ತಂದೆಯು ತಿಳಿಸುತ್ತಾರೆ. ಎಲ್ಲರಿಗೆ ತಂದೆಯ ಸಂದೇಶವನ್ನು ಕೊಡುವುದು ನೀವು ಮಕ್ಕಳ ಕರ್ತವ್ಯವಾಗಿದೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ನನ್ನನ್ನು ನೆನಪು ಮಾಡಿದರೆ ನೀವು ಈ ಆಸ್ತಿಗೆ
ಮಾಲೀಕರಾಗಿ ಬಿಡುತ್ತೀರಿ. ತಂದೆಯು ಈ ಸಂಗಮಯುಗದಲ್ಲಿ ಹೊಸ ಸ್ವರ್ಗದ ಪ್ರಪಂಚವನ್ನು ರಚಿಸುತ್ತಾರೆ,
ಅಲ್ಲಿ ನೀವು ಹೋಗಿ ಮಾಲೀಕರಾಗುತ್ತೀರಿ ಮತ್ತೆ ದ್ವಾಪರದಲ್ಲಿ ಮಾಯಾ ರಾವಣನ ಮೂಲಕ ನಿಮಗೆ ಶಾಪವು
ಸಿಗುತ್ತದೆ. ಅದರಿಂದ ಪವಿತ್ರತೆ, ಸುಖ-ಶಾಂತಿ, ಧನ, ಇತ್ಯಾದಿಯೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ.
ಕ್ರಮೇಣವಾಗಿ ಹೇಗೆ ಸಮಾಪ್ತಿಯಾಗುತ್ತದೆ ಎಂಬುದನ್ನೂ ಸಹ ತಂದೆಯು ತಿಳಿಸಿದ್ದಾರೆ. ದುಃಖಧಾಮದಲ್ಲಿ
ಯಾವುದೇ ವಿಶ್ರಾಂತಿಯಿರುವುದಿಲ್ಲ. ಸುಖಧಾಮದಲ್ಲಿ ವಿಶ್ರಾಂತಿಯೇ ವಿಶ್ರಾಂತಿಯಿದೆ. ಮನುಷ್ಯರಿಗೆ
ಭಕ್ತಿಯು ಎಷ್ಟೊಂದು ದಣಿವನ್ನುಂಟು ಮಾಡುತ್ತದೆ, ಜನ್ಮ-ಜನ್ಮಾಂತರ ಭಕ್ತಿಯಿಂದ ಎಷ್ಟೊಂದು ಸುಸ್ತಾಗಿ
ಬಿಡುತ್ತಾರೆ. ಹೇಗೆ ಒಮ್ಮೆಲೆ ಕಂಗಾಲಾಗಿ ಬಿಟ್ಟಿದ್ದೀರಿ, ಈ ರಹಸ್ಯವನ್ನು ತಂದೆಯೇ ತಿಳಿಸುತ್ತಾರೆ.
ಹೊಸ-ಹೊಸಬರು ಬರುತ್ತಾರೆಂದರೆ ಅವರಿಗೆ ಎಷ್ಟೊಂದು ತಿಳಿಸಲಾಗುತ್ತದೆ. ಪ್ರತಿಯೊಂದು ಮಾತಿನ ಮೇಲೆ
ಮನುಷ್ಯರು ಎಷ್ಟೊಂದು ಯೋಚಿಸುತ್ತಾರೆ, ಜಾದುವಾಗಲೆಂದು ತಿಳಿಯುತ್ತಾರೆ. ಭಗವಂತನು ಜಾದುಗಾರನೆಂದು
ನೀವೇ ಹೇಳುತ್ತೀರಿ, ಆದ್ದರಿಂದ ತಂದೆಯು ಹೇಳುತ್ತಾರೆ - ಹೌದು ಮಕ್ಕಳೇ ನಾನು ಅವಶ್ಯವಾಗಿ
ಜಾದೂಗಾರನಾಗಿದ್ದೇನೆ ಆದರೆ ಅದು ಆ ಜಾದೂ ಅಲ್ಲ ಯಾವುದರಿಂದ ಮನುಷ್ಯರು ಮೇಕೆ, ತೋಳವಾಗಿ
ಬಿಡುತ್ತಾರೆ. ಇದನ್ನು ಬುದ್ಧಿಯಿಂದ ತಿಳಿದುಕೊಳ್ಳಲಾಗುತ್ತದೆ - ಇಲ್ಲಂತೂ ಕುರಿಗಳ ಸಮಾನವಾಗಿದೆ.
ಸುರಮಂಡಲದ ಸಂಗೀತವು ಕುರಿಗೇನು ಗೊತ್ತು ಎಂದು ಗಾಯನವಿದೆ. ಈ ಸಮಯದಲ್ಲಿ ಮನುಷ್ಯರು
ಕುರಿ-ಮೇಕೆಗಳಾಗಿದ್ದಾರೆ, ಈ ಮಾತುಗಳೆಲ್ಲವೂ ಈ ಸಮಯದ್ದೇ ಗಾಯನವಾಗಿದೆ. ಕಲ್ಪದ ಅಂತಿಮದಲ್ಲಿಯೂ ಸಹ
ಮನುಷ್ಯರು ಅರಿತುಕೊಳ್ಳುವುದಿಲ್ಲ. ಚಂಡಿಕಾ ದೇವಿಯದು ಎಷ್ಟೊಂದು ದೊಡ್ಡ ಮೇಳವಾಗುತ್ತದೆ ಅಂದಮೇಲೆ
ಅವರು ಯಾರಾಗಿದ್ದರು? ಅವರೊಬ್ಬ ದೇವಿಯಾಗಿದ್ದರು ಎಂದು ಹೇಳುತ್ತಾರೆ. ಇಂತಹ ಹೆಸರಂತೂ ಅಲ್ಲಿ
ಯಾವುದೂ ಇರುವುದಿಲ್ಲ. ಸತ್ಯಯುಗದಲ್ಲಿ ಒಳ್ಳೆಯ ಸುಂದರ ಹೆಸರುಗಳಿರುತ್ತವೆ! ಸತ್ಯಯುಗೀ
ಸಂಪ್ರದಾಯಕ್ಕೆ ಶ್ರೇಷ್ಠಾಚಾರಿ ಎಂದು ಹೇಳಲಾಗುವುದು, ಕಲಿಯುಗೀ ಸಂಪ್ರದಾಯಕ್ಕಂತೂ ಎಷ್ಟೊಂದು
ಕೆಟ್ಟ-ಕೆಟ್ಟ ಬಿರುದುಗಳನ್ನು ಕೊಡುತ್ತಾರೆ. ಈಗಿನ ಮನುಷ್ಯರಿಗೆ ಶ್ರೇಷ್ಠರೆಂದು ಹೇಳುವುದಿಲ್ಲ,
ದೇವತೆಗಳಿಗೆ ಶ್ರೇಷ್ಠರೆಂದು ಕರೆಯಲಾಗುತ್ತದೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಸದ್ಗುರು
ಎಂದು ಗಾಯನವಿದೆ. ಮನುಷ್ಯರಿಂದ ದೇವತೆಗಳು, ದೇವತೆಗಳಿಂದ ಮನುಷ್ಯರು ಹೇಗಾಗುತ್ತಾರೆ ಎಂಬ
ರಹಸ್ಯವನ್ನು ತಂದೆಯು ಈಗ ತಿಳಿಸಿದ್ದಾರೆ. ಅದಕ್ಕೆ ದೈವೀ ಪ್ರಪಂಚ, ಇದಕ್ಕೆ ಮಾನವ ಪ್ರಪಂಚವೆಂದು
ಹೇಳಲಾಗುತ್ತದೆ. ದಿನಕ್ಕೆ ಹಗಲು, ರಾತ್ರಿಗೆ ಅಂಧಕಾರವೆಂದು ಕರೆಯಲಾಗುತ್ತದೆ. ಜ್ಞಾನವು ಬೆಳಕಾಗಿದೆ,
ಭಕ್ತಿಯು ಅಂಧಕಾರವಾಗಿದೆ. ಅಜ್ಞಾನ ನಿದ್ರೆಯೆಂದು ಹೇಳಲಾಗುತ್ತದೆಯಲ್ಲವೆ. ನೀವೂ ಸಹ
ತಿಳಿದುಕೊಳ್ಳುತ್ತೀರಿ - ಮೊದಲು ನಾವು ಏನನ್ನೂ ಅರಿತುಕೊಂಡಿರಲಿಲ್ಲ, ಅದರಿಂದ ನೇತಿ-ನೇತಿ ಅರ್ಥಾತ್
ನಮಗೂ ಗೊತ್ತಿಲ್ಲವೆಂದು ಹೇಳುತ್ತಿದ್ದೆವು. ಈಗ ತಿಳಿದುಕೊಳ್ಳುತ್ತೇವೆ - ನಾವೂ ಸಹ ಮೊದಲು
ನಾಸ್ತಿಕರಾಗಿದ್ದೆವು, ಬೇಹದ್ದಿನ ತಂದೆಯನ್ನೇ ಅರಿತುಕೊಂಡಿರಲಿಲ್ಲ. ಅವರು ಅವಿನಾಶಿ
ತಂದೆಯಾಗಿದ್ದಾರೆ, ಅವರಿಗೆ ಸರ್ವ ಆತ್ಮಗಳ ತಂದೆಯೆಂದು ಹೇಳಲಾಗುತ್ತದೆ. ನೀವು ಮಕ್ಕಳು
ಅರಿತುಕೊಂಡಿದ್ದೀರಿ, ಈಗ ನಾವು ಆ ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ. ತಂದೆಯು ಮಕ್ಕಳಿಗೆ ಗುಪ್ತ
ಜ್ಞಾನವನ್ನು ಕೊಡುತ್ತಾರೆ, ಈ ಜ್ಞಾನವು ಮನುಷ್ಯರಲ್ಲಿ ಎಲ್ಲಿಯೂ ಸಿಗಲು ಸಾಧ್ಯವಿಲ್ಲ. ಆತ್ಮವೂ
ಗುಪ್ತವಾಗಿದೆ, ಗುಪ್ತ ಜ್ಞಾನವನ್ನು ಆತ್ಮವೇ ಧಾರಣೆ ಮಾಡುತ್ತದೆ, ಆತ್ಮವೇ ಬಾಯಿಯ ಮೂಲಕ
ಜ್ಞಾನವನ್ನು ಹೇಳುತ್ತದೆ, ಆತ್ಮವೇ ಗುಪ್ತವಾಗಿ ನೆನಪು ಮಾಡುತ್ತದೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ದೇಹಾಭಿಮಾನಿಗಳಾಗಬೇಡಿ. ದೇಹಾಭಿಮಾನದಿಂದ ಆತ್ಮದ ಶಕ್ತಿಯು
ಸಮಾಪ್ತಿಯಾಗುತ್ತದೆ. ಆತ್ಮಾಭಿಮಾನಿಯಾಗುವುದರಿಂದ ಶಕ್ತಿಯು ಜಮಾ ಆಗುತ್ತದೆ. ತಂದೆಯು
ತಿಳಿಸುತ್ತಾರೆ - ನಾಟಕದ ರಹಸ್ಯವನ್ನು ಬಹಳ ಚೆನ್ನಾಗಿ ಅರಿತುಕೊಂಡು ಹೋಗಬೇಕಾಗಿದೆ. ಈ ಅವಿನಾಶಿ
ನಾಟಕದ ರಹಸ್ಯವನ್ನು ಯಾರು ಒಳ್ಳೆಯ ರೀತಿಯಲ್ಲಿ ಅರಿತುಕೊಂಡಿದ್ದಾರೆಯೋ ಅವರು ಸದಾ
ಹರ್ಷಿತರಾಗಿರುತ್ತಾರೆ. ಈ ಸಮಯದಲ್ಲಿ ಮನುಷ್ಯರು ಮೇಲೆ ಹೋಗುವ ಪರಿಶ್ರಮವನ್ನು ಎಷ್ಟೊಂದು
ಮಾಡುತ್ತಾರೆ! ಮೇಲೆ ಒಂದು ಪ್ರಪಂಚವಿದೆಯೆಂದು ತಿಳಿಯುತ್ತಾರೆ, ಶಾಸ್ತ್ರಗಳಲ್ಲಿ ಹೇಳಿದ್ದಾರೆ -
ಮೇಲೆ ಪ್ರಪಂಚವಿದೆಯೆಂದರೆ ಅಲ್ಲಿ ಹೋಗಿ ನೋಡಬೇಕೆಂದು. ಅಲ್ಲಿ ಪ್ರಪಂಚವನ್ನು ವೃದ್ಧಿ ಮಾಡುವ
ಪ್ರಯತ್ನ ಪಡುತ್ತಾರೆ. ಪ್ರಪಂಚವಂತೂ ಬಹಳ ವೃದ್ಧಿಯಾಗಿದೆಯಲ್ಲವೆ. ಭಾರತದಲ್ಲಿ ಕೇವಲ ಒಂದು ಆದಿ
ಸನಾತನ ದೇವಿ-ದೇವತಾ ಧರ್ಮವಿತ್ತು ಆಗ ಮತ್ತ್ಯಾವುದೇ ಖಂಡಗಳಿರಲಿಲ್ಲ, ಈಗ ಎಷ್ಟೊಂದು ವೃದ್ಧಿಯಾಗಿ
ಬಿಟ್ಟಿದೆ! ನೀವು ವಿಚಾರ ಮಾಡಿ - ಭಾರತದ ಎಷ್ಟು ಸ್ವಲ್ಪ ಭಾಗದಲ್ಲಿ ದೇವತೆಗಳಿರುತ್ತಾರೆ. ಜಮುನಾ
ನದಿಯ ತೀರದಲ್ಲಿ ಸ್ವರ್ಗವಿತ್ತು, ಅಲ್ಲಿ ಲಕ್ಷ್ಮಿ-ನಾರಾಯಣರು ರಾಜ್ಯ ಮಾಡುತ್ತಿದ್ದರು. ಎಷ್ಟೊಂದು
ಸುಂದರ ಶೋಭಾಯಮಾನ, ಸತೋಪ್ರಧಾನ ಪ್ರಪಂಚವಾಗಿತ್ತು, ಸ್ವಾಭಾವಿಕ ಸೌಂದರ್ಯವಿತ್ತು, ಆತ್ಮದಲ್ಲಿಯೇ
ಎಲ್ಲಾ ಚಮತ್ಕಾರವಿರುತ್ತದೆ. ಶ್ರೀಕೃಷ್ಣನ ಜನ್ಮವು ಹೇಗಾಗುತ್ತದೆ ಎಂಬುದನ್ನು ಮಕ್ಕಳಿಗೆ
ತೋರಿಸಿದ್ದೆನು, ಇಡೀ ಕೋಣೆಯು ಬೆಳಕಾಗಿ ಬಿಡುತ್ತದೆ. ಅಂದಾಗ ತಂದೆಯು ಕುಳಿತು ಮಕ್ಕಳಿಗೆ
ತಿಳಿಸುತ್ತಾರೆ, ಈಗ ನೀವು ಸ್ವರ್ಗದಲ್ಲಿ ಹೋಗಲು ಪುರುಷಾರ್ಥ ಮಾಡುತ್ತಿದ್ದೀರಿ. ಸರೋವರದಲ್ಲಿ
ಮುಳುಗುವುದರಿಂದ ದೇವತೆಗಳಾಗಿ ಬಿಡುತ್ತೀರೆಂದಲ್ಲ. ಇವೆಲ್ಲಾ ಸುಳ್ಳು ಹೆಸರುಗಳನ್ನಿಟ್ಟಿದ್ದಾರೆ.
ಲಕ್ಷಾಂತರ ವರ್ಷಗಳೆಂದು ಹೇಳಿರುವ ಕಾರಣ ಎಲ್ಲವನ್ನೂ ಸಂಪೂರ್ಣ ಮರೆತು ಹೋಗಿದ್ದಾರೆ. ಈಗ ನೀವು
ನಂಬರ್ವಾರ್ ಪುರುಷಾರ್ಥದನುಸಾರ ಸ್ಮೃತಿ ಸ್ವರೂಪರಾಗುತ್ತಿದ್ದೀರಿ ಅಂದಾಗ ವಿಚಾರ ಮಾಡಬೇಕು - ಇಷ್ಟು
ಸೂಕ್ಷ್ಮ ಆತ್ಮವು ಈ ಶರೀರದಿಂದ ಎಷ್ಟು ದೊಡ್ಡ ಪಾತ್ರವನ್ನಭಿನಯಿಸುತ್ತದೆ ಮತ್ತೆ ಆತ್ಮವು
ಶರೀರವನ್ನು ಬಿಟ್ಟು ಹೋದಾಗ ಶರೀರದ ಗತಿಯನ್ನು ನೋಡಿ ಏನಾಗಿ ಬಿಡುತ್ತದೆ! ಆತ್ಮವೇ
ಪಾತ್ರವನ್ನಭಿನಯಿಸುತ್ತದೆ, ಇದು ಎಷ್ಟು ವಿಚಾರ ಮಾಡುವ ಮಾತಾಗಿದೆ! ಇಡೀ ಪ್ರಪಂಚದ ಪಾತ್ರಧಾರಿಗಳೇ
ತಮ್ಮ ಪಾತ್ರದನುಸಾರವೇ ಅಭಿನಯಿಸುತ್ತಾರೆ. ಇದರಲ್ಲಿ ಸ್ವಲ್ಪವೂ ಅಂತರವಾಗಲು ಸಾಧ್ಯವಿಲ್ಲ. ಚಾಚೂ
ತಪ್ಪದೆ ಇಡೀ ಪಾತ್ರವು ಪುನಃ ಪುನರಾವರ್ತನೆಯಾಗುತ್ತದೆ. ಇದರಲ್ಲಿ ಸಂಶಯವಿರಲು ಸಾಧ್ಯವಿಲ್ಲ.
ಪ್ರತಿಯೊಬ್ಬರ ಬುದ್ಧಿಯಲ್ಲಿ ಅಂತರವಿರುತ್ತದೆ, ಏಕೆಂದರೆ ಆತ್ಮವು ಮನಸ್ಸು-ಬುದ್ಧಿಯಿಂದ
ಕೂಡಿದೆಯಲ್ಲವೆ. ಮಕ್ಕಳಿಗೆ ತಿಳಿದಿದೆ - ನಾವು ವಿದ್ಯಾರ್ಥಿ ವೇತನವನ್ನು ತೆಗೆದುಕೊಳ್ಳಬೇಕಾಗಿದೆ,
ಅಂದಮೇಲೆ ಒಳಗೆ ಎಷ್ಟೊಂದು ಖುಷಿಯಾಗುತ್ತದೆ. ಇಲ್ಲಿಯೂ ಸಹ ಒಳಗೆ ಬರುತ್ತಿದ್ದಂತೆಯೇ ಸನ್ಮುಖದಲ್ಲಿ
ಈ ಗುರಿ-ಧ್ಯೇಯದ ಚಿತ್ರವನ್ನು ನೋಡಿದಾಗ ಅವಶ್ಯವಾಗಿ ಖುಷಿಯಾಗುವುದು ಏಕೆಂದರೆ ನಾವು ಈ
ದೇವಿ-ದೇವತೆಗಳಾಗುವುದಕ್ಕಾಗಿ ಇಲ್ಲಿ ಓದುತ್ತೇವೆಂದು ನಿಮಗೆ ತಿಳಿದಿದೆ. ಇನ್ನೊಂದು ಜನ್ಮದ
ಗುರಿ-ಧ್ಯೇಯವನ್ನು ನೋಡುವ ಇಂತಹ ಶಾಲೆಯು ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ನೀವು ನೋಡುತ್ತಿರಿ -
ನಾವೇ ಲಕ್ಷ್ಮಿ-ನಾರಾಯಣರ ತರಹ ಆಗುತ್ತಿದ್ದೇವೆ. ಈಗ ನಾವು ಸಂಗಮಯುಗದಲ್ಲಿದ್ದೇವೆ, ಮತ್ತೆ
ಭವಿಷ್ಯದಲ್ಲಿ ಈ ಲಕ್ಷ್ಮಿ-ನಾರಾಯಣರಂತೆ ಆಗುವ ವಿದ್ಯೆಯನ್ನು ಓದುತ್ತಿದ್ದೇವೆ. ಎಷ್ಟು ಗುಪ್ತ
ವಿದ್ಯೆಯಾಗಿದೆ! ತಮ್ಮ ಲಕ್ಷ್ಯವನ್ನು ನೋಡಿ ಎಷ್ಟೊಂದು ಖುಷಿಯಾಗಬೇಕು. ಖುಷಿಗೆ ಪಾರವೇ ಇಲ್ಲ.
ಶಾಲೆಯೆಂದರೆ ಹೀಗಿರಬೇಕು, ಎಷ್ಟೊಂದು ಗುಪ್ತವಾಗಿದೆ ಆದರೆ ಶಕ್ತಿಶಾಲಿಯಾದ ಪಾಠಶಾಲೆಯಾಗಿದೆ. ಎಷ್ಟು
ದೊಡ್ಡ ವಿದ್ಯೆಯೋ ಅಷ್ಟು ಸೌಲಭ್ಯಗಳಿರುತ್ತದೆ ಆದರೆ ನೀವಿಲ್ಲಿ ಸಾಧಾರಣವಾಗಿ ನೆಲದ ಮೇಲೆ ಕುಳಿತು
ಓದುತ್ತೀರಿ. ಆತ್ಮವೇ ಓದುತ್ತದೆ, ನೆಲದ ಮೇಲಾದರೂ ಕುಳಿತುಕೊಳ್ಳಿ, ಸಿಂಹಾಸನದ ಮೇಲಾದರೂ
ಕುಳಿತುಕೊಳ್ಳಿ ಆದರೆ ಖುಷಿಯಿಂದ ನಲಿಯುತ್ತಾ ಇರಿ - ಈ ವಿದ್ಯೆಯನ್ನು ತೇರ್ಗಡೆ ಮಾಡಿದ ನಂತರ ಹೋಗಿ
ಈ ರೀತಿಯಾಗುತ್ತೇವೆ, ಈ ರೀತಿ ದೇವತೆಗಳಾಗುತ್ತೇವೆ. ಈಗ ನೀವು ಮಕ್ಕಳಿಗೆ ತಂದೆಯು ಬಂದು ನಾನು
ಇವರಲ್ಲಿ ಹೇಗೆ ಪ್ರವೇಶ ಮಾಡಿ ಓದಿಸುತ್ತೇನೆಂದು ನಿಮಗೆ ಪರಿಚಯ ನೀಡುತ್ತೇನೆ. ತಂದೆಯು
ದೇವತೆಗಳಿಗಂತೂ ಓದಿಸುವುದಿಲ್ಲ. ದೇವತೆಗಳಿಗೆ ಈ ಜ್ಞಾನವೆಲ್ಲಿದೆ! ದೇವತೆಗಳಲ್ಲಿ
ಜ್ಞಾನವಿರುವುದಿಲ್ಲವೆ ಎಂದು ಮನುಷ್ಯರು ತಬ್ಬಿಬ್ಬಾಗುತ್ತಾರೆ, ಅವರೂ ಸಹ ಈ ಜ್ಞಾನದಿಂದಲೇ
ದೇವತೆಗಳಾಗುತ್ತಾರೆ. ದೇವತೆಗಳಾದ ನಂತರ ಮತ್ತೆ ಈ ಜ್ಞಾನದ ಅವಶ್ಯಕತೆಯೇನಿದೆ? ಲೌಕಿಕ ವಿದ್ಯೆಯಿಂದ
ವಕೀಲರಾಗಿ ಸಂಪಾದನೆಯಲ್ಲಿ ತೊಡಗಿದರೆಂದರೆ ಮತ್ತೆ ವಕೀಲ ವಿದ್ಯೆಯನ್ನು ಓದುವರೇ? ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಅವಿನಾಶಿ
ನಾಟಕದ ರಹಸ್ಯವನ್ನು ಯಥಾರ್ಥವಾಗಿ ಅರಿತುಕೊಂಡು ಹರ್ಷಿತರಾಗಿರಬೇಕಾಗಿದೆ. ಈ ನಾಟಕದಲ್ಲಿ
ಪ್ರತಿಯೊಬ್ಬ ಪಾತ್ರಧಾರಿಯ ಪಾತ್ರವು ಬೇರೆ-ಬೇರೆಯಾಗಿದೆ ಅದನ್ನವರು ಚಾಚೂ ತಪ್ಪದೆ
ಅಭಿನಯಿಸುತ್ತಿದ್ದಾರೆ.
2. ತಮ್ಮ ಲಕ್ಷ್ಯವನ್ನು ಮುಂದಿಟ್ಟುಕೊಂಡು ಖುಷಿಯಲ್ಲಿ ನಲಿಯಬೇಕಾಗಿದೆ. ಬುದ್ಧಿಯಲ್ಲಿರಲಿ - ನಾವು
ಈ ವಿದ್ಯೆಯಿಂದ ಇಂತಹ ಲಕ್ಷ್ಮಿ-ನಾರಾಯಣರಾಗುತ್ತೇವೆ.
ವರದಾನ:
ಬ್ರಾಹ್ಮಣ
ಜೀವನದಲ್ಲಿ ಪ್ರತಿ ಸೆಕೆಂಡ್ ಸುಖಮಯ ಸ್ಥಿತಿಯ ಅನುಭವ ಮಾಡುವಂತಹ ಸಂಪೂರ್ಣ ಪವಿತ್ರ ಆತ್ಮ ಭವ.
ಪವಿತ್ರತೆಯನ್ನು
ಸುಖ-ಶಾಂತಿಯ ಜನನಿ ಎಂದು ಹೇಳಲಾಗುವುದು. ಯಾವುದೇ ಪ್ರಕಾರದ ಅಪವಿತ್ರತೆ ದುಃಖ ಅಶಾಂತಿಯ ಅನುಭವ
ಮಾಡಿಸುತ್ತದೆ. ಬ್ರಾಹ್ಮಣ ಜೀವನ ಅರ್ಥಾತ್ ಪ್ರತಿ ಸೆಕೆಂಡ್ ಸುಖಮಯ ಸ್ಥಿತಿಯಲ್ಲಿ ಇರುವಂತಹವರು.
ಒಂದುವೇಳೆ ದುಃಖದ ದೃಷ್ಯವೇ ಇರಬಹುದು, ಆದರೆ ಎಲ್ಲಿ ಪವಿತ್ರತೆಯ ಶಕ್ತಿಯಿದೆ ಅಲ್ಲಿ ದುಃಖದ ಅನುಭವ
ಆಗಲು ಸಾಧ್ಯವಿಲ್ಲ. ಪವಿತ್ರ ಆತ್ಮಗಳು ಮಾಸ್ಟರ್ ಸುಖಕರ್ತ ಅಗಿ ದುಃಖವನ್ನು ಆತ್ಮೀಯ ಸುಖದ
ವಾಯುಮಂಡಲದಲ್ಲಿ ಪರಿವರ್ತನೆ ಮಾಡಿ ಬಿಡುವುದು.
ಸ್ಲೋಗನ್:
ಸಾಧನಗಳ ಪ್ರಯೋಗ
ಮಾಡುತ್ತಾ ಸಾಧನೆಯನ್ನು ಹೆಚ್ಚಿಸಿಕೊಳ್ಳುವುದೇ ಬೇಹದ್ಧಿನ ವೈರಾಗ್ಯ ವೃತ್ತಿ ಆಗಿದೆ.