23.05.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ದುಃಖಧಾಮಕ್ಕೆ ಬದುಕಿರುವಾಗಲೇ ವಿಚ್ಛೇದನವನ್ನು ಕೊಡಿ ಏಕೆಂದರೆ ಸುಖಧಾಮಕ್ಕೆ ಹೋಗಬೇಕು”

ಪ್ರಶ್ನೆ:
ತಂದೆಯು ಮಕ್ಕಳಿಗೆ ಯಾವ ಒಂದು ಚಿಕ್ಕ ಪರಿಶ್ರಮವನ್ನು ಕೊಡುತ್ತಾರೆ?

ಉತ್ತರ:
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕಾಮ ಮಹಾಶತ್ರುವಾಗಿದೆ, ಇದೇ ಸ್ವಲ್ಪ ಪರಿಶ್ರಮ ಕೊಡುತ್ತದೆ, ನೀವು ಸಂಪೂರ್ಣ ಪಾವನರಾಗಬೇಕು, ಪತಿತರಿಂದ ಪಾವನ ಅರ್ಥಾತ್ ಪಾರಸರಾಗಬೇಕು. ಪಾರಸವಾಗುವವರು ಕಲ್ಲಾಗುವುದಿಲ್ಲ. ಈಗ ಮಕ್ಕಳು ಹೂಗಳಾದರೆ ತಂದೆಯು ನಿಮ್ಮನ್ನು ನಯನಗಳ ಮೇಲೆ ಕುಳ್ಳರಿಸಿಕೊಂಡು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳು ನಾವು ಬ್ರಾಹ್ಮಣರು ದೇವತೆಗಳಾಗುತ್ತೇವೆಂದು ಅವಶ್ಯವಾಗಿ ತಿಳಿದಿದ್ದೀರಿ. ಇದು ಪಕ್ಕಾ ನಿಶ್ಚಯವಿದೆಯಲ್ಲವೆ! ಶಿಕ್ಷಕರು ಯಾರಿಗೆ ಓದಿಸುತ್ತಾರೆ ಅವರನ್ನು ತನ್ನ ಸಮಾನ ಅವಶ್ಯವಾಗಿ ಮಾಡಿ ಬಿಡುತ್ತಾರೆ. ಇದು ನಿಶ್ಚಯದ ಮಾತಾಗಿದೆ. ಕಲ್ಪ-ಕಲ್ಪವೂ ತಂದೆಯು ಬಂದು ತಿಳಿಸುತ್ತಾರೆ. ನಾವು ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತೇವೆ. ಇಡೀ ಪ್ರಪಂಚವನ್ನು ಪಾವನ ಮಾಡುವವರು ಯಾರಾದರೂ ಇರಬೇಕಲ್ಲವೆ! ತಂದೆಯು ಸ್ವರ್ಗವಾಸಿಗಳನ್ನಾಗಿ ಮಾಡುತ್ತಾನೆ, ರಾವಣನು ನರಕವಾಸಿಗಳನ್ನಾಗಿ ಮಾಡುತ್ತಾನೆ. ಈ ಸಮಯ ರಾವಣ ರಾಜ್ಯವಿದೆ, ಸತ್ಯಯುಗದಲ್ಲಿ ರಾಮ ರಾಜ್ಯವಿರುತ್ತದೆ. ರಾಮ ರಾಜ್ಯವನ್ನು ಸ್ಥಾಪಿಸುವವರಿರುವಾಗ ರಾವಣ ರಾಜ್ಯವನ್ನೂ ಸ್ಥಾಪನೆ ಮಾಡುವವರು ಇರಬೇಕಲ್ಲವೆ. ಭಗವಂತನಿಗೆ ರಾಮನೆಂದು ಕರೆಯಲಾಗುವುದು. ಭಗವಂತ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾನೆ. ಈ ಜ್ಞಾನವು ಬಹಳ ಸಹಜವಾಗಿದೆ, ದೊಡ್ಡ ಮಾತೇನಿಲ್ಲ. ಆದರೆ ಈ ರೀತಿ ಕಲ್ಲು ಬುದ್ಧಿಯವರಾಗಿ ಬಿಟ್ಟಿದ್ದಾರೆ ಮತ್ತೆ ಪಾರಸ ಬುದ್ಧಿಯವರಾಗಲು ಅಸಂಭವವೆಂದು ತಿಳಿಯುತ್ತಾರೆ. ನರಕವಾಸಿಗಳಿಂದ ಸ್ವರ್ಗವಾಸಿಗಳಾಗಲು ಬಹಳ ಕಷ್ಟ ಪಡುತ್ತಾರೆ, ಏಕೆಂದರೆ ಮಾಯೆಯ ಪ್ರಭಾವವಿದೆ. 50-100 ಅಂತಸ್ತಿನ ಎಷ್ಟು ದೊಡ್ಡ-ದೊಡ್ಡ ಮನೆಗಳನ್ನು ಕಟ್ಟುತ್ತಾರೆ. ಸ್ವರ್ಗದಲ್ಲಿ ಇಷ್ಟೊಂದು ಅಂತಸ್ತಿನ ಮನೆಗಳನ್ನು ಕಟ್ಟುವುದಿಲ್ಲ. ವರ್ತಮಾನದಲ್ಲಿ ಇಲ್ಲಿಯೂ ಮಾಡುತ್ತಾರೆ, ಸತ್ಯಯುಗದಲ್ಲಿ ಇಲ್ಲಿ ಮಾಡುವಂತಹ ಮನೆಗಳನ್ನು ಕಟ್ಟುವುದಿಲ್ಲವೆಂದು ನೀವು ತಿಳಿದಿದ್ದೀರಿ. ಸ್ವಯಂ ತಂದೆಯು ತಿಳಿಸುತ್ತಾರೆ- ಇಷ್ಟೊಂದು ದೊಡ್ಡ ವೃಕ್ಷ ವಿಶ್ವದಲ್ಲಿರುವಾಗ ಅಲ್ಲಿ ಇಷ್ಟೆಲ್ಲಾ ಅಂತಸ್ತುಗಳನ್ನು ಕಟ್ಟುವ ಅವಶ್ಯಕತೆಯಿಲ್ಲ. ವಿಸ್ತಾರವಾದ ಭೂಮಿಯಿರುತ್ತದೆ. ಇಲ್ಲಿ ಖಾಲಿಯಾದ ಜಮೀನು ಇಲ್ಲದಂತಾಗಿದೆ, ಆದ್ದರಿಂದ ಜಮೀನಿನ ಬೆಲೆ ಎಷ್ಟೊಂದು ಹೆಚ್ಚಾಗಿ ಬಿಟ್ಟಿದೆ. ಅಲ್ಲಂತೂ ಜಮೀನಿಗೆ ಬೆಲೆ ಕಟ್ಟುವ ಅವಶ್ಯಕತೆಯಿಲ್ಲ, ಮುನ್ಸಿಪಾಲಿಟಿಯ ತೆರಿಗೆ ಮೊದಲಾದವುಗಳು ಇರುವುದಿಲ್ಲ. ಯಾರಿಗೆ ಎಷ್ಟು ಜಮೀನು ಬೇಕೋ ಅಷ್ಟು ತೆಗೆದುಕೊಳ್ಳಬಹುದು. ಅಲ್ಲಿ ಕೇವಲ ಒಬ್ಬ ತಂದೆಯ ಜ್ಞಾನದಿಂದ ನಿಮಗೆ ಬಹಳ ಸುಖ ಸಿಕ್ಕಿ ಬಿಡುತ್ತದೆ. ಮನುಷ್ಯರು 100 ಅಂತಸ್ತು ಮುಂತಾದವುಗಳನ್ನು ಮಾಡುವಾಗ ಅದಕ್ಕೂ ಸಹ ಬಹಳ ಖರ್ಚಾಗುತ್ತದೆ. ಅಲ್ಲಿ ಖರ್ಚಿನ ಮಾತೇ ಇಲ್ಲ, ಅಪಾರ ಧನವಿರುತ್ತದೆ, ಧನಕ್ಕೆ ಬೆಲೆಯಿರುವುದಿಲ್ಲ. ಹೆಚ್ಚು ಹಣವಿದ್ದರೆ ಏನು ಮಾಡುತ್ತಾರೆ! ಚಿನ್ನ, ವಜ್ರ, ವೈಡೂರ್ಯ, ಮುತ್ತುಗಳಿಂದ ಮಹಲುಗಳನ್ನು ಕಟ್ಟುತ್ತಾರೆ. ಈಗ ನೀವು ಮಕ್ಕಳಿಗೆ ಎಷ್ಟೊಂದು ತಿಳುವಳಿಕೆ ಸಿಕ್ಕಿದೆ. ತಿಳುವಳಿಕೆ ಹಾಗೂ ತಿಳುವಳಿಕೆಯಿಲ್ಲದ ಮಾತಾಗಿದೆ. ಸತೋಬುದ್ಧಿ ಹಾಗೂ ತಮೋಬುದ್ಧಿ. ಸತೋಪ್ರಧಾನ, ಸ್ವರ್ಗದ ಮಾಲೀಕರು, ತಮೋಗುಣಿ ನರಕದ ಮಾಲೀಕರು. ಇದು ಸ್ವರ್ಗವಲ್ಲ, ಇದು ರೌರವ ನರಕವಾಗಿದೆ. ಬಹಳ ದುಃಖಿಗಳಾಗಿರುವ ಕಾರಣ ಭಗವಂತನನ್ನು ಕರೆಯುತ್ತಾರೆ ಮತ್ತೆ ಮರೆತು ಹೋಗುತ್ತಾರೆ. ಏಕತೆಗಾಗಿ ಎಷ್ಟೊಂದು ಸಮ್ಮೇಳನಗಳನ್ನು ಮಾಡುತ್ತಾ ಕಷ್ಟ ಪಡುತ್ತಾರೆ ಆದರೆ ಇವರು ಪರಸ್ಪರ ಒಂದಾಗಲು ಸಾಧ್ಯವಿಲ್ಲ. ಈಗ ಇಡೀ ವೃಕ್ಷ ನಿಸ್ಸಾರವಾಗಿದೆ ಮತ್ತೆ ಅದೇ ಹೊಸದಾಗುತ್ತದೆ. ಇದೇ ಕಲಿಯುಗವು ಸತ್ಯಯುಗ ಹೇಗಾಗುತ್ತದೆ ಎಂದು ನೀವು ತಿಳಿದಿದ್ದೀರಿ. ಈ ಜ್ಞಾನವನ್ನು ತಂದೆಯು ಈಗ ಮಾತ್ರ ನಿಮಗೆ ತಿಳಿಸುತ್ತಾರೆ. ಸತ್ಯಯುಗೀ ನಿವಾಸಿಗಳೇ ಕಲಿಯುಗೀ ನಿವಾಸಿಗಳಾಗುತ್ತಾರೆ ನಂತರ ನೀವು ಸಂಗಮಯುಗಿ ನಿವಾಸಿಗಳಾಗಿ ನಂತರ ಸತ್ಯಯುಗೀ ನಿವಾಸಿಗಳಾಗುತ್ತೀರಿ. ಇಷ್ಟೊಂದು ಜನ ಸತ್ಯಯುಗಕ್ಕೆ ಹೋಗುತ್ತಾರೆಯೇ? ಎಂದು ಕೇಳುತ್ತಾರೆ, ಹೋಗುವುದಿಲ್ಲ. ಯಾರು ಸತ್ಯ ನಾರಾಯಣನ ಕಥೆಯನ್ನು ಕೇಳುತ್ತಾರೆಯೋ ಅವರೇ ಸ್ವರ್ಗಕ್ಕೆ ಹೋಗುತ್ತಾರೆ. ಉಳಿದವರೆಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ ಆದರೆ ಆಗ ದುಃಖಧಾಮವಿರುವುದಿಲ್ಲ. ಆದ್ದರಿಂದ ಈ ದುಃಖಧಾಮದಲ್ಲಿ ಬದುಕಿದ್ದಂತಯೇ ವಿಚ್ಛೇಧನ ಕೊಡಬೇಕು. ಹೇಗೆ ವಿಚ್ಛೇದನವನ್ನು ಕೊಡಬಹುದು ಎಂದು ತಂದೆಯು ಯುಕ್ತಿಗಳನ್ನು ತಿಳಿಸುತ್ತಾರೆ. ಈ ಇಡೀ ಸೃಷ್ಟಿಯ ಮೇಲೆ ದೇವಿ-ದೇವತೆಗಳ ರಾಜ್ಯವಿತ್ತು ಈಗ ಮತ್ತೆ ಸ್ಥಾಪನೆ ಮಾಡಲು ತಂದೆಯು ಬರುತ್ತಾರೆ. ನಾವು ಆ ತಂದೆಯಿಂದ ವಿಶ್ವ ರಾಜ್ಯವನ್ನು ಪಡೆಯುತ್ತಿದ್ದೇವೆ. ನಾಟಕದನುಸಾರವಾಗಿ ಅವಶ್ಯವಾಗಿ ಪರಿವರ್ತನೆಯಾಗುತ್ತದೆ. ಇದು ಹಳೆಯ ಪ್ರಪಂಚವಾಗಿದೆ, ಇದನ್ನು ಸತ್ಯಯುಗವೆಂದು ಹೇಗೆ ಹೇಳುತ್ತೀರಿ? ಆದರೆ ಮನುಷ್ಯರು ಸತ್ಯಯುಗದಲ್ಲಿ ಹೇಗಿರುತ್ತದೆ ಎನ್ನುವುದನ್ನೇ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ- ಯಾರು ಬಹಳ ಭಕ್ತಿಯನ್ನು ಮಾಡಿದ್ದಾರೆ ಅವರೇ ಈ ಜ್ಞಾನಕ್ಕೆ ಯೋಗ್ಯರಾಗುತ್ತಾರೆ, ಅವರಿಗೆ ಮಾತ್ರ ತಿಳಿಸಿಕೊಡಬೇಕು ಉಳಿದಂತೆ ಈ ಕುಲದವರಲ್ಲವೆಂದಾಗ ಅವರು ತಿಳಿದುಕೊಳ್ಳುವುದೂ ಇಲ್ಲ. ಸುಮ್ಮನೆ ಹಾಗೆಯೇ ಸಮಯವನ್ನು ಏಕೆ ವ್ಯರ್ಥ ಮಾಡಬೇಕು? ನಮ್ಮ ಮನೆತನದವರಲ್ಲದೇ ಹೋದಾಗ ಸ್ವಲ್ಪವೂ ಒಪ್ಪಿಕೊಳ್ಳುವುದಿಲ್ಲ. ಆತ್ಮ ಎಂದರೆ ಏನು ಹಾಗೂ ಪರಮಾತ್ಮನೆಂದರೆ ಯಾರು ಎಂದು ತಿಳಿದುಕೊಳ್ಳಲು ನಮಗೆ ಇಷ್ಟವಿಲ್ಲವೆಂದು ಹೇಳಿ ಬಿಡುತ್ತಾರೆ. ಇಂತಹವರ ಜೊತೆಗೆ ಏಕೆ ಕಷ್ಟ ಪಡಬೇಕು? ತಂದೆಯೂ ತಿಳಿಸುತ್ತಾರೆ- ಮೇಲೆ ಭಗವಾನುವಾಚ ಎಂದು ಬರೆಯಲ್ಪಟ್ಟಿದೆ, ನಾನು ಕಲ್ಪ-ಕಲ್ಪವೂ ಪುರುಷೋತ್ತಮ ಸಂಗಮಯುಗದಲ್ಲಿ ಹಾಗೂ ಸಾಧಾರಣ ಮನುಷ್ಯನ ತನುವಿನಲ್ಲಿ ಬರುತ್ತೇನೆ, ಅವರು ತನ್ನ ಜನ್ಮಗಳ ಬಗ್ಗೆ ತಿಳಿದುಕೊಂಡಿರುವುದಿಲ್ಲ, ನಾನೇ ತಿಳಿಸುತ್ತೇನೆ. 5000 ವರ್ಷಗಳ ಪಾತ್ರ ಯಾರಿಗೆ ಲಭ್ಯವಿದೆ ಎಂದು ನಾನೇ ತಿಳಿಸುತ್ತೇನೆ. ಯಾರು ಮೊದಲನೇ ನಂಬರಿನಲ್ಲಿ ಬರುತ್ತಾರೆಯೋ ಅವರದೇ ಪಾತ್ರವಿರುತ್ತದೆಯಲ್ಲವೇ. ಶ್ರೀಕೃಷ್ಣನಿಗೆ ಸತ್ಯಯುಗದ ಮೊದಲನೇ ರಾಜಕುಮಾರನೆಂದು ಮಹಿಮೆ ಮಾಡುತ್ತಾರೆ. ಶ್ರೀಕೃಷ್ಣನೇ 84 ಜನ್ಮಗಳ ನಂತರ ಏನಾಗುತ್ತಾನೆ? ಫಸ್ಟ್ ಬೆಗ್ಗರ್. ಬೆಗ್ಗರ್ ಟು ಪ್ರಿನ್ಸ್ ನಂತರ ಪ್ರಿನ್ಸ್ ಟು ಬೆಗ್ಗರ್. ಶ್ರೀಮಂತನಿಂದ ಬಡವ ಹೇಗಾಗುವುದು ಎಂದು ನೀವು ತಿಳಿದಿದ್ದೀರಿ, ತಂದೆಯು ಬಂದು ಕವಡೆಯಿಂದ ವಜ್ರದಂತೆ ಮಾಡುತ್ತಾರೆ. ಯಾರು ವಜ್ರದಂತಿರುತ್ತಾರೆ ಅವರೇ ಕವಡೆಯಾಗುತ್ತಾರೆ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರಲ್ಲವೆ! ಎಲ್ಲದಕ್ಕಿಂತ ಹೆಚ್ಚು ಜನ್ಮಗಳನ್ನು ಯಾರು ತೆಗೆದುಕೊಳ್ಳುತ್ತಾರೆ ಇದನ್ನು ನೀವೇ ತಿಳಿದುಕೊಂಡಿದ್ದೀರಿ. ಮೊದಲು ಶ್ರೀಕೃಷ್ಣನನ್ನೇ ಒಪ್ಪಬೇಕಲ್ಲವೆ. ಶ್ರೀಕೃಷ್ಣನ ರಾಜಧಾನಿಯೂ ಇದೆ. ಬಹಳ ಜನ್ಮಗಳು ಶ್ರೀಕೃಷ್ಣನಿಗಿರುತ್ತದೆ, ಇದು ಬಹಳ ಸಹಜ ಮಾತಾಗಿದೆ ಆದರೆ ಮನುಷ್ಯರು ಇದರ ಮೇಲೆ ಗಮನ ಹರಿಸುವುದಿಲ್ಲ. ತಂದೆಯು ತಿಳಿಸಿದಾಗ ಆಶ್ಚರ್ಯ ಪಡುತ್ತಾರೆ. ತಂದೆಯು ಯಥಾರ್ಥವಾಗಿ ತಿಳಿಸುತ್ತಾರೆ - ಯಾರು ಮೊದಲಿರುತ್ತಾರೆ ನಂತರ ಅವರೇ ಕೊನೆಯಲ್ಲಿ ಬರುತ್ತಾರೆ. ಮೊದಲನೇ ವಜ್ರವೇ ಕೊನೆಗೆ ಮೊದಲು ಕವಡೆಯ ಸಮಾನರಾಗುತ್ತಾರೆ ನಂತರ ಅವರೇ ವಜ್ರ ಸಮಾನ ಪಾವನರಾಗುತ್ತಾರೆ. ಇದರಲ್ಲಿ ಕಷ್ಟವೇನು? ಪಾರಲೌಕಿಕ ತಂದೆಯು ಆದೇಶವನ್ನು ಹೊರಡಿಸುತ್ತಾರೆ. ಕಾಮ ಮಹಾಶತ್ರುವಾಗಿದೆ. ನೀವು ಹೇಗೆ ಪತಿತರಾದಿರಿ? ವಿಕಾರದಲ್ಲಿ ಹೋದ ಕಾರಣ, ನೀವು ಪತಿತ-ಪಾವನ ಬನ್ನಿ ಎಂದು ಕರೆಯುತ್ತೀರಿ ಏಕೆಂದರೆ ತಂದೆಯು ಸದಾ ಪಾರಸ ಬುದ್ಧಿಯವರಾಗಿದ್ದಾರೆ. ಅವರು ಎಂದಿಗೂ ಕಲ್ಲು ಬುದ್ಧಿಯವರಾಗುವುದಿಲ್ಲ. ಅವರ ಸಂಬಂಧ ಮೊದಲನೇ ಜನ್ಮದವರೊಂದಿಗೆ ಇದೆ. ದೇವತೆಗಳಂತೂ ಬಹಳ ಇರುತ್ತಾರೆ ಆದರೆ ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ.

ಕ್ರಿಶ್ಚಿಯನ್ನರು ಕ್ರೈಸ್ತನಿಗೆ 3000 ವರ್ಷಗಳ ಹಿಂದೆ ಸ್ವರ್ಗವಿತ್ತೆಂದು ಹೇಳುತ್ತಾರೆ. ಅವರು ಕೊನೆಯಲ್ಲಿ ಬಂದಿರುವ ಕಾರಣ ಅವರಲ್ಲಿ ಶಕ್ತಿಯಿದೆ. ಅವರಿಂದ ಎಲ್ಲರೂ ಕಲಿಯಲು ಹೋಗುತ್ತಾರೆ ಏಕೆಂದರೆ ಅವರಿಗಿನ್ನೂ ಸ್ವಚ್ಛ ಬುದ್ಧಿಯಿದೆ ಅವರೇ ಹೆಚ್ಚು ವೃದ್ಧಿಯಾಗಿದ್ದಾರೆ. ಸತೋ ರಜೋ ತಮೋವಿನಲ್ಲಿ ಬರುತ್ತಾರಲ್ಲವೆ! ನಿಮಗೆ ಗೊತ್ತಿದೆ - ಎಲ್ಲವನ್ನೂ ವಿದೇಶದಿಂದ ಕಲಿತುಕೊಳ್ಳುತ್ತಾರೆ. ಸತ್ಯಯುಗದಲ್ಲಿ ಮಹಲು ಮುಂತಾದವುಗಳನ್ನು ಕಟ್ಟಲು ಸಮಯ ಹಿಡಿಸುವುದಿಲ್ಲ ಎಂದು ನೀವು ತಿಳಿದಿದ್ದೀರಿ. ಒಬ್ಬರ ಬುದ್ಧಿಯಲ್ಲಿ ಬಂದರೆ ಅದು ವೃದ್ಧಿಯಾಗುತ್ತಿರುತ್ತದೆ. ಒಂದನ್ನು ಮಾಡಿದ ನಂತರ ಹೆಚ್ಚಿಸಿಕೊಂಡು ಹೋಗುತ್ತಾರೆ. ಬುದ್ಧಿಯಲ್ಲಿ ಬಂದು ಬಿಡುತ್ತದೆಯಲ್ಲವೆ? ವಿಜ್ಞಾನಿಗಳ ಬುದ್ಧಿಯು ನಿಮ್ಮ ಬಳಿ ಉತ್ತಮವಾಗಿರುತ್ತದೆ. ತಕ್ಷಣ ಮಹಲು ಕಟ್ಟುತ್ತಿರುತ್ತಾರೆ. ಇಲ್ಲಂತೂ ಮನೆ ಅಥವಾ ಮಂದಿರಗಳನ್ನು ಕಟ್ಟಲು 12 ತಿಂಗಳು ಬೇಕಾಗುತ್ತದೆ ಆದರೆ ಅಲ್ಲಿಯ ಇಂಜಿನಿಯರ್ ಮೊದಲಾದವರು ಬಹಳ ಬುದ್ಧಿವಂತರಾಗಿರುತ್ತಾರೆ. ಅದು ಸ್ವರ್ಣಿಮ ಯುಗವಾಗಿರುತ್ತದೆ ಅಲ್ಲಿ ಕಲ್ಲುಗಳಿರುವುದೇ ಇಲ್ಲ. ನೀವಿಲ್ಲಿ ಕುಳಿತು ಯೋಚಿಸಬಹುದು - ನಾವು ಈ ಹಳೆಯ ಶರೀರವನ್ನು ಬಿಡುತ್ತೇವೆ ಮತ್ತೆ ಮನೆಗೆ ಹೋಗಿ ನಂತರ ಹಿಂತಿರುಗಿ ಯೋಗಬಲದಿಂದ ಸತ್ಯಯುಗದಲ್ಲಿ ಜನ್ಮ ಪಡೆಯುತ್ತೇವೆ. ಮಕ್ಕಳಿಗೆ ಏಕೆ ಖುಷಿಯಾಗುವುದಿಲ್ಲ! ಏಕೆ ವಿಚಾರ ನಡೆಯುವುದಿಲ್ಲ! ಯಾರು ಉತ್ತಮ ಸೇವಾಧಾರಿ ಮಕ್ಕಳಿರುತ್ತಾರೆ ಅವರಿಗೆ ಅವಶ್ಯವಾಗಿ ಚಿಂತನೆ ನಡೆಯುತ್ತದೆ. ಹೇಗೆ ಎಲ್.ಎಲ್.ಬಿ ಉತ್ತೀರ್ಣರಾದರೆ ಅವರ ಬುದ್ಧಿಯು ಏನೇನು ಮಾಡಬೇಕೆಂದು ವಿಚಾರ ನಡೆಯುತ್ತಿರುತ್ತದೆ. ನೀವೂ ಸಹ ಈ ಶರೀರವನ್ನು ಬಿಟ್ಟು ಹೋಗಿ ದೇವತೆಯಾಗುತ್ತೇವೆಂದು ತಿಳಿದುಕೊಂಡಿದ್ದೀರಿ, ನೆನಪಿನಿಂದ ನಿಮ್ಮ ಆಯಸ್ಸು ವೃದ್ಧಿಯಾಗುತ್ತದೆ. ಈಗ ಬೇಹದ್ದಿನ ತಂದೆಗೆ ಮಕ್ಕಳಾಗಿದ್ದೀರಿ, ಈ ಸ್ಥಾನ ಬಹಳ ಶ್ರೇಷ್ಠವಾಗಿದೆ. ನೀವು ಈಶ್ವರೀಯ ಪರಿವಾರದವರಾಗಿದ್ದೀರಿ, ಅವರಿಗೆ ಬೇರೆ ಯಾವುದೇ ಸಂಬಂಧವೂ ಇಲ್ಲ. ಸಹೋದರ-ಸಹೋದರಿಗಿಂತಲೂ ಶ್ರೇಷ್ಠ ಸ್ಥಿತಿಯಲ್ಲಿ ಏರಿಸಿದ್ದಾರೆ. ಸಹೋದರ-ಸಹೋದರರೆಂದು ತಿಳಿದುಕೊಳ್ಳುವ ಅಭ್ಯಾಸವನ್ನು ಮಾಡಬೇಕು. ಸಹೋದರನ ನಿವಾಸ ಎಲ್ಲಿದೆ. ಈ ಸಿಂಹಾಸನದಲ್ಲಿ ಅಕಾಲ ಆತ್ಮವಿರುತ್ತದೆ. ಸರ್ವ ಆತ್ಮಗಳ ಈ ಸಿಂಹಾಸನವು ಹಾಳಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಸಿಂಹಾಸನವು ಹಾಳಾಗಿ ಬಿಟ್ಟಿದೆ. ಆತ್ಮವು ಈ ಸಿಂಹಾಸನದಲ್ಲಿ ವಿರಾಜಮಾನವಾಗಿರುತ್ತದೆ. ಭೃಕುಟಿಯ ಮಧ್ಯದಲ್ಲಿ ಏನಿದೆ, ಇದು ಬುದ್ಧಿಯಿಂದ ತಿಳಿದುಕೊಳ್ಳುವ ಮಾತುಗಳಾಗಿವೆ. ಆತ್ಮವು ಅವಶ್ಯವಾಗಿ ಸೂಕ್ಷ್ಮವಾಗಿದೆ, ನಕ್ಷತ್ರದಂತಿದೆ, ನಾನೂ ಬಿಂದುವಾಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ನಾನು ನಿಮಗಿಂತ ಗಾತ್ರದಲ್ಲಿ ದೊಡ್ಡದಾಗಿದ್ದೇನೆಯೇ? ನಾವು ಶಿವ ತಂದೆಯ ಸಂತಾನರೆಂದು ತಿಳಿದಿದ್ದೀರಿ. ಈಗ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು. ಆದ್ದರಿಂದ ತಮ್ಮನ್ನು ಸಹೋದರ-ಸಹೋದರ ಆತ್ಮನೆಂದು ತಿಳಿಯಿರಿ. ತಂದೆಯು ನಿಮಗೆ ಸನ್ಮುಖದಲ್ಲಿ ಓದಿಸುತ್ತಿದ್ದಾರೆ, ಮುಂದೆ ಹೋದಂತೆ ಇನ್ನೂ ಆಕರ್ಷಣೆಯಾಗುತ್ತಾ ಹೋಗುತ್ತದೆ. ಈ ವಿಘ್ನಗಳೂ ನಾಟಕದನುಸಾರ ಬೀಳುತ್ತಲೇ ಬರುತ್ತದೆ.

ಈಗ ತಂದೆಯು ತಿಳಿಸುತ್ತಾರೆ- ನೀವು ಪತಿತರಾಗಬಾರದು, ಇದು ನನ್ನ ಆದೇಶವಾಗಿದೆ. ಈಗ ಇನ್ನೂ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ವಿಕಾರವಿಲ್ಲದೇ ಇರುವುದೇ ಇಲ್ಲ. ಮಧ್ಯಪಾನ ಸೇವಿಸಬಾರದೆಂದು ಸರ್ಕಾರವು ಹೇಳುತ್ತದೆ ಆದರೆ ಕೆಲವರು ಮಧ್ಯಪಾನವನ್ನು ಬಿಟ್ಟಿರುವುದೇ ಇಲ್ಲ. ಮತ್ತೆ ಅವರಿಗೇ ಮಧ್ಯಪಾನವನ್ನು ಕುಡಿಸಿ ಆದೇಶ ಕೊಡುತ್ತಾರೆ- ಇಂತಹ ಸ್ಥಾನದಲ್ಲಿ ಬಾಂಬ್ ಬಿಳಿಸಿ. ಎಷ್ಟೊಂದು ನಷ್ಟವಾಗುತ್ತದೆ! ನೀವಿಲ್ಲಿ ಕುಳಿತ ಕಡೆಯೇ ವಿಶ್ವದ ಮಾಲೀಕರಾಗುತ್ತೀರಿ. ಅವರು ಅಲ್ಲಿ ಕುಳಿತ ಕಡೆ ಇಡೀ ವಿಶ್ವವನ್ನು ವಿನಾಶ ಮಾಡಲು ಬಾಂಬುಗಳನ್ನು ಹಾಕುತ್ತಾರೆ. ಹೇಗೆ............ ನೀವಿಲ್ಲಿ ಕುಳಿತ ಕಡೆ ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಅಂದಾಗ ಹೇಗಾದರೂ ಮಾಡಿ ತಂದೆಯನ್ನು ನೆನಪು ಮಾಡಬೇಕು. ಇಲ್ಲಿ ಹಠಯೋಗ ಮಾಡುವ, ಆಸನ ಮಾಡುವ ಅವಶ್ಯಕತೆಯಿಲ್ಲ. ತಂದೆಯು ಯಾವುದೇ ಕಷ್ಟವನ್ನು ಕೊಡುವುದಿಲ್ಲ, ಹೇಗಾದರೂ ಕುಳಿತುಕೊಳ್ಳಿ, ನಾವು ಅತಿ ಪ್ರಿಯ ತಂದೆಗೆ ಮಕ್ಕಳಾಗಿದ್ದೇವೆಂದು ನೆನಪು ಮಾಡಿ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಿಮಗೆ ಆಸ್ತಿಯು ಸಿಗುತ್ತದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ! ಎಲ್ಲಿಯೇ ಕುಳಿತುಕೊಳ್ಳಿ, ತಿರುಗಾಡಿ ಆದರೆ ತಂದೆಯನ್ನು ನೆನಪು ಮಾಡಬೆಕು. ಪವಿತ್ರರಾಗದೇ ಹೇಗೆ ಹೋಗುತ್ತೀರಿ? ಪವಿತ್ರರಾಗದಿದ್ದರೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಯಾವಾಗ ಧರ್ಮರಾಜನ ಬಳಿ ಹೋಗುವಿರೋ ಆಗ ಎಲ್ಲರ ಲೆಕ್ಕಾಚಾರ ಚುಕ್ತಾ ಆಗುವುದು. ಎಷ್ಟು ಪವಿತ್ರರಾಗುತ್ತೀರಿ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಅಪವಿತ್ರರಾದರೆ ಒಣ ರೊಟ್ಟಿಯನ್ನು ತಿನ್ನಬೇಕಾಗುತ್ತದೆ. ಎಷ್ಟೆಷ್ಟು ತಂದೆಯನ್ನು ನೆನಪು ಮಾಡುತ್ತೀರಿ ಅಷ್ಟು ಪಾಪ ಭಸ್ಮವಾಗುತ್ತದೆ. ಇದರಲ್ಲಿ ಖರ್ಚು ಮುಂತಾದವುಗಳ ಮಾತಿಲ್ಲ. ಭಲೆ ಮನೆಯಲ್ಲಿಯೇ ಕುಳಿತುಕೊಳ್ಳಿ ಆದರೆ ತಂದೆಯಿಂದ ಮಂತ್ರವನ್ನು ಪಡೆಯಿರಿ. ಈ ಮನ್ಮನಾಭವ ಮಾಯೆಯನ್ನು ವಶ ಮಾಡಿಕೊಳ್ಳುವ ಮಂತ್ರವಾಗಿದೆ. ಈ ಮಂತ್ರವು ಸಿಕ್ಕಿದ ನಂತರ ನೀವು ಮನೆಗೆ ಹೋಗಬಹುದು. ಮುಖದಿಂದ ಏನೂ ಹೇಳಬಾರದು, ತಂದೆ ಹಾಗೂ ಆಸ್ತಿಯನ್ನು ನೆನಪು ಮಾಡಿ. ನಿಮಗೆ ತಿಳಿದಿದೆ - ತಂದೆಯನ್ನು ನೆನಪು ಮಾಡುವುದರಿಂದ ಪಾಪವು ನಾಶವಾಗಿ ಬಿಡುತ್ತದೆ. ತಂದೆಯು (ಬ್ರಹ್ಮಾ) ತಮ್ಮ ಅನುಭವವನ್ನು ತಿಳಿಸುತ್ತಾರೆ - ನಾನು ಊಟ ಮಾಡಲು ಕುಳಿತುಕೊಳ್ಳುತ್ತೇನೆ. ಒಳ್ಳೆಯದು. ನಾನು ತಂದೆಯ ನೆನಪನ್ನು ಮಾಡಿ ಸ್ವೀಕರಿಸುತ್ತೇನೆ ಆದರೆ ತಕ್ಷಣ ಮರೆತು ಹೋಗುತ್ತೇನೆ ಏಕೆಂದರೆ ಯಾರ ಮೇಲೆ ಜವಾಬ್ದಾರಿಯಿದೆ.... ಎಂಬ ಗಾಯನವಿದೆ. ಎಷ್ಟೊಂದು ವಿಚಾರ ಮಾಡಬೇಕಾಗುವುದು! ಯಾವ ಆತ್ಮವು ಬಹಳ ಸೇವೆ ಮಾಡುತ್ತದೆ ಅವರನ್ನೂ ನೆನಪು ಮಾಡಬೇಕು. ಸೇವಾಧಾರಿ ಮಕ್ಕಳನ್ನು ತಂದೆಯು ಬಹಳ ಪ್ರೀತಿ ಮಾಡುತ್ತಾರೆ. ಈ (ಬ್ರಹ್ಮಾ) ಶರೀರದಲ್ಲಿ ಆತ್ಮವು ವಿರಾಜಮಾನವಾಗಿದೆ. ಅವರನ್ನು ನೆನಪು ಮಾಡಿ ಎಂದು ನಿಮಗೆ ತಂದೆಯು ತಿಳಿಸುತ್ತಾರೆ. ನೀವಿಲ್ಲಿ ಶಿವ ತಂದೆಯ ಬಳಿಗೆ ಬರುತ್ತೀರಿ, ಶಿವ ತಂದೆಯು ಮೇಲಿಂದ ಕೆಳಗೆ ಬಂದಿದ್ದಾರೆ, ನೀವು ಎಲ್ಲರಿಗೂ ಭಗವಂತ ಬಂದಿದ್ದಾರೆಂದು ಹೇಳುತ್ತೀರಿ ಆದರೆ ಅವರು ತಿಳಿದುಕೊಳ್ಳುವುದಿಲ್ಲ. ಆದರೆ ಉಪಾಯದಿಂದ ತಿಳಿಸಬೇಕಾಗುತ್ತದೆ. ಹದ್ದಿನ ಹಾಗೂ ಬೇಹದ್ದಿನ ಇಬ್ಬರು ತಂದೆಯರು ನಿಮಗಿದ್ದಾರೆ. ಈಗ ಬೇಹದ್ದಿನ ತಂದೆಯು ರಾಜ್ಯಭಾಗ್ಯವನ್ನು ಕೊಡುತ್ತಿದ್ದಾರೆ. ಹಳೆಯ ಪ್ರಪಂಚದ ವಿನಾಶವೂ ಮುಂದೆ ನಿಂತಿದೆ. ಒಂದು ಧರ್ಮದ ಸ್ಥಾಪನೆ ಅನೇಕ ಧರ್ಮಗಳ ವಿನಾಶವಾಗುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿದಾಗ ನಿಮ್ಮ ಪಾಪವು ಭಸ್ಮವಾಗಿ ಬಿಡುತ್ತದೆ, ಇದು ಯೋಗಾಗ್ನಿಯಾಗಿದೆ ಇದರಿಂದ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ಈ ವಿಧಿಯನ್ನು ತಂದೆಯೇ ತಿಳಿಸುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಎಲ್ಲರನ್ನೂ ಹೂಗಳನ್ನಾಗಿ ಮಾಡಿ ತನ್ನ ನಯನಗಳ ಮೇಲೆ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಾರೆ. ಯಾವ ನಯನ? ಜ್ಞಾನದ ನಯನ, ಆತ್ಮಗಳನ್ನು ಕರೆದೊಯ್ಯುತ್ತಾರೆ. ಅವಶ್ಯವಾಗಿ ಹೋಗಬೇಕೆಂದು ನೀವು ತಿಳಿದಿದ್ದೀರಿ ಆದ್ದರಿಂದ ಹೋಗುವುದಕ್ಕೆ ಮುಂಚೆ ತಂದೆಯಿಂದ ಆಸ್ತಿಯನ್ನೇಕೆ ತೆಗೆದುಕೊಳ್ಳಬಾರದು! ಇದು ಬಹಳ ದೊಡ್ಡ ಸಂಪಾದನೆಯಾಗಿದೆ. ಒಂದುವೇಳೆ ಮರೆಯುವುದರಿಂದ ಬಹಳ ನಷ್ಟವಾಗುತ್ತದೆ ಆದ್ದರಿಂದ ಪಕ್ಕಾ ವ್ಯಾಪಾರಿಗಳಾಗಿ ತಂದೆಯನ್ನು ನೆನಪು ಮಾಡುವುದರಿಂದ ಆತ್ಮವು ಪವಿತ್ರವಾಗುತ್ತದೆ ನಂತರ ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ತೆಗೆದುಕೊಳ್ಳುತ್ತೀರಿ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ದೇಹೀ-ಅಭಿಮಾನಿಗಳಾಗಿ. ಈ ಅಭ್ಯಾಸವನ್ನು ಪಕ್ಕಾ ಮಾಡಿಕೊಳ್ಳಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯಿಂದ ಓದುತ್ತಿದ್ದರೆ ನಿಮ್ಮ ಹಡಗು ಪಾರಾಗಿ ಬಿಡುತ್ತದೆ. ನೀವು ಶಿವಾಲಯದಲ್ಲಿ ಹೋಗಿ ಬಿಡುತ್ತೀರಿ. ಚಂದ್ರಕಾಂತ ವೇದಾಂತದಲ್ಲಿ ಈ ಕಥೆಯಿದೆ - ಹಡಗು ಹೇಗೆ ನಡೆಯುತ್ತದೆ, ಯಾವುದಾದರೂ ವಸ್ತುವಿನ ಮೇಲೆ ಮನಸ್ಸಾದರೆ ಮಧ್ಯದಲ್ಲಿ ಇಳಿದು ಬಿಡುತ್ತಾರೆ. ಆ ಹಡಗು ಹೊರಟು ಹೋಗುತ್ತದೆ. ಇದು ಭಕ್ತಿಮಾರ್ಗದ ಶಾಸ್ತ್ರಗಳು ಪುನಃ ಆಗುತ್ತವೆ, ನೀವು ಓದುತ್ತೀರಿ ನಂತರ ತಂದೆಯು ಬಂದಾಗ ನೀವು ಎಲ್ಲರನ್ನೂ ಬಿಟ್ಟು ಬಿಡುತ್ತೀರಿ. ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗಲು ಬರುತ್ತಾರೆ. ಭಾರತದ ಉತ್ಥಾನ ಮತ್ತು ಪತನ ಹೇಗೆ ಆಗುತ್ತದೆ ಎಂದು ಎಷ್ಟೊಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದೇ ಭಾರತವು ಪತಿತ ಹಾಗೂ ಪಾವನವಾಗುತ್ತದೆ. ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮಾ ಒಬ್ಬರೇ ಆಗುವುದಿಲ್ಲ, ಇದೆಲ್ಲವೂ ತಿಳುವಳಿಕೆಯಾಗಿದೆ. ಕೃಷ್ಣನದೂ ಶ್ಯಾಮ ಸುಂದರನೆಂಬ ಮಾತಿದೆ. ಸ್ವರ್ಗಕ್ಕೆ ಹೋದಾಗ ನರಕವನ್ನುಕಾಲಿನಿಂದ ಒದೆಯುತ್ತಾನೆ. ಇದು ಚಿತ್ರದಲ್ಲಿ ಸ್ಪಷ್ಟವಾಗಿದೆ. ನಿಮ್ಮದೇ ರಾಜ್ಯಭಾಗ್ಯದ ಚಿತ್ರ ಮಾಡಲಾಗಿತ್ತು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ತಂದೆಯ ಆದೇಶವನ್ನು ಪಾಲಿಸುವ ಸಲುವಾಗಿ ನಾನಾತ್ಮ ಸಹೋದರ-ಸಹೋದರನಾಗಿದ್ದೇನೆ, ಭೃಕುಟಿಯ ಮಧ್ಯದಲ್ಲಿ ನನ್ನ ನಿವಾಸವಿದೆ, ನಾವು ಬೇಹದ್ದಿನ ತಂದೆಗೆ ಮಕ್ಕಳಾಗಿದ್ದೇವೆ, ಇದು ನಮ್ಮ ಈಶ್ವರೀಯ ಪರಿವಾರವಾಗಿದೆ- ಈ ಸ್ಮೃತಿಯಲ್ಲಿರಬೇಕು. ದೇಹೀ-ಅಭಿಮಾನಿಯಾಗುವ ಅಭ್ಯಾಸ ಮಾಡಬೇಕು.

2. ಧರ್ಮರಾಜನ ಶಿಕ್ಷೆಯಿಂದ ಬಿಡುಗಡೆಯಾಗಲು ತಮ್ಮೆಲ್ಲಾ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕು. ಮಾಯೆಯನ್ನು ವಶಪಡಿಸಿಕೊಳ್ಳುವ ಯಾವ ಮಂತ್ರವು ಸಿಕ್ಕಿದೆ ಅದನ್ನು ನೆನಪಿಟ್ಟುಕೊಂಡು ಸತೋಪ್ರಧಾನರಾಗಬೇಕು.


ವರದಾನ:
ಸದಾ ಎಚ್ಚರಿಕೆಯಿಂದಿರುತ್ತಾ ಎಲ್ಲರ ಆಸೆಗಳನ್ನು ಪೂರ್ಣ ಮಾಡುವಂತಹ ಮಾಸ್ಟರ್ ಮುಕ್ತಿ-ಜೀವನ್ಮುಕ್ತಿ ದಾತಾ ಭವ.

ಈಗ ಎಲ್ಲಾ ಮಕ್ಕಳಲ್ಲಿಯೂ ಇದೇ ಶುಭ ಸಂಕಲ್ಪ ಇಮರ್ಜ್ ಆಗಿರಬೇಕು ಸರ್ವರ ಆಸೆಗಳನ್ನು ಪೂರ್ಣ ಮಾಡಬೇಕು. ಎಲ್ಲರ ಇಚ್ಛೆ ಆಗಿದೆ ಜನನ-ಮರಣದಿಂದ ಮುಕ್ತವಾಗಿ ಬಿಡಬೇಕು, ಅದರ ಅನುಭವ ಮಾಡಿಸಿ. ಇದಕ್ಕಾಗಿ ತಮ್ಮ ಶಕ್ತಿಶಾಲಿ ಸತೋಪ್ರಧಾನ ವೈಭ್ರೇಷನ್ ನಿಂದ ಪ್ರಕೃತಿ ಮತ್ತು ಮನುಷ್ಯಾತ್ಮರ ವೃತ್ತಿಯನ್ನು ಬದಲಾಯಿಸಿ. ಮಾಸ್ಟರ್ ದಾತಾ ಆಗಿ ಎಲ್ಲಾ ಆತ್ಮರ ಆಸೆಗಳನ್ನು ಪೂರ್ಣ ಮಾಡಿ. ಮುಕ್ತಿ, ಜೀವನ್ಮುಕ್ತಿಯ ದಾನ ನೀಡಿ. ಈ ಜವಾಬ್ದಾರಿಯ ಸ್ಮೃತಿ ನಿಮ್ಮನ್ನು ಸದಾ ಎಚ್ಚರಿಕೆಯಿಂದಿಡುತ್ತದೆ.

ಸ್ಲೋಗನ್:
ಮುರಳೀಧರನ ಮುರಳಿಯ ಮೇಲೆ ದೇಹದ ಪರಿವೆಯನ್ನೂ ಮರೆತು ಬಿಡುವಂತಹವರೇ ಸತ್ಯ ಗೋಪ, ಗೊಪಿಕೆಯರು.