03.05.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೆನಪಿಗೆ ಆಧಾರ ಪ್ರೀತಿಯಾಗಿದೆ, ಪ್ರೀತಿಯಲ್ಲಿ ಕಡಿಮೆಯಿದೆಯೆಂದರೆ ನೆನಪು ಏಕರಸವಾಗಿರಲು ಸಾಧ್ಯವಿಲ್ಲ ಮತ್ತು ನೆನಪು ಏಕರಸವಾಗಿರುವುದಿಲ್ಲವೆಂದರೆ ಪ್ರೀತಿಯೂ ಸಿಗಲು ಸಾಧ್ಯವಿಲ್ಲ”

ಪ್ರಶ್ನೆ:
ಆತ್ಮಕ್ಕೆ ಎಲ್ಲದಕ್ಕಿಂತ ಪ್ರೀತಿಯ ವಸ್ತು ಯಾವುದಾಗಿದೆ? ಅದರ ಚಿಹ್ನೆಗಳೇನಾಗಿದೆ?

ಉತ್ತರ:
ಈ ಶರೀರವು ಆತ್ಮಕ್ಕೆ ಎಲ್ಲದಕ್ಕಿಂತ ಪ್ರೀತಿಯ ವಸ್ತುವಾಗಿದೆ. ಶರೀರದೊಂದಿಗೆ ಇಷ್ಟು ಪ್ರೀತಿಯಿದೆ ಇದನ್ನು ಬಿಡಲು ಇಷ್ಟ ಪಡುವುದಿಲ್ಲ. ರಕ್ಷಿಸಿಕೊಳ್ಳಲು ಅನೇಕ ಪ್ರಬಂಧಗಳನ್ನು ರಚಿಸುತ್ತದೆ. ತಂದೆಯು ಹೇಳುತ್ತಾರೆ - ಮಕ್ಕಳೇ, ಇದಂತೂ ತಮೋಪ್ರಧಾನ ಅಪವಿತ್ರ ಶರೀರವಾಗಿದೆ. ನೀವೀಗ ಹೊಸ ಶರೀರವನ್ನು ತೆಗೆದುಕೊಳ್ಳಬೇಕಾಗಿದೆ ಆದ್ದರಿಂದ ಈ ಹಳೆಯ ಶರೀರದೊಂದಿಗಿನ ಮಮತ್ವವನ್ನು ತೆಗೆದು ಬಿಡಿ. ಈ ಶರೀರಭಾನ ಇರಬಾರದು, ಇದೇ ನಿಮ್ಮ ಗುರಿಯಾಗಿದೆ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಈಗ ಇದಂತೂ ಮಕ್ಕಳು ತಿಳಿದುಕೊಂಡಿದ್ದೀರಿ – ದೈವೀ ಸ್ವರಾಜ್ಯದ ಉದ್ಘಾಟನೆಯಂತೂ ಆಗಿ ಬಿಟ್ಟಿದೆ. ಅಲ್ಲಿಗೆ ಹೋಗಲು ಈಗ ತಯಾರಿಯಾಗುತ್ತಿದೆ. ಎಲ್ಲಿಯಾದರೂ ಯಾವುದೇ ಶಾಖೆಗಳನ್ನು (ಸೇವಾ ಕೇಂದ್ರ) ತೆರೆಯುತ್ತಾರೆಂದರೆ ಗಣ್ಯ ವ್ಯಕ್ತಿಗಳ ಮೂಲಕ ಉದ್ಘಾಟನೆ ಮಾಡಿಸಲು ಪ್ರಯತ್ನ ಪಡಲಾಗುತ್ತದೆ. ಗಣ್ಯ ವ್ಯಕ್ತಿಗಳನ್ನು ನೋಡಿ ಅವರ ಕೆಳಗಿನ ಆಫೀಸರ್ ಮುಂತಾದವರೆಲ್ಲರೂ ಬಂದು ಬಿಡುತ್ತಾರೆ. ಒಂದು ವೇಳೆ ಗವರ್ನರ್ ಬರುತ್ತಾರೆಂದರೆ ದೊಡ್ಡ-ದೊಡ್ಡ ಮಂತ್ರಿಗಳು ಮುಂತಾದವರು ಬಂದು ಬಿಡುತ್ತಾರೆ. ಒಂದು ವೇಳೆ ಕಲೆಕ್ಟರ್ ಗೆ ನೀವು ಕರೆ ನೀಡುತ್ತೀರೆಂದರೆ ಗಣ್ಯ ವ್ಯಕ್ತಿಗಳು ಬರುವುದಿಲ್ಲ. ಆದ್ದರಿಂದ ಗಣ್ಯ ವ್ಯಕ್ತಿಗಳು ಬರಬೇಕೆಂದರೆ ಪ್ರಯತ್ನ ಪಡಬೇಕಾಗುತ್ತದೆ. ಒಂದಲ್ಲ ಒಂದು ನೆಪದಿಂದ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಪರಿಶ್ರಮ ಪಡಬೇಕಾಗುತ್ತದೆ. ಒಂದಲ್ಲ ಒಂದು ನೆಪದಿಂದ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಹೇಗೆ ಸಿಗುತ್ತಿದೆ ಎಂದು ಅವರಿಗೆ ಮಾರ್ಗವನ್ನು ತೋರಿಸಿ. ನಿಮ್ಮ ವಿನಃ ಬೇರೆ ಯಾರೂ ಸಹ ಇದನ್ನು ತಿಳಿದುಕೊಂಡಿರುವ ಮನುಷ್ಯರು ಯಾರೂ ಇರುವುದಿಲ್ಲ. ಭಗವಂತ ಬಂದಿದ್ದಾರೆಂದೂ ಸಹ ಹೇಳಬಾರದು. ಕೆಲವರು ಭಗವಂತ ಬಂದು ಬಿಟ್ಟಿದ್ದಾರೆಂದು ಹೇಳಿ ಬಿಡುತ್ತಾರೆ. ಆ ರೀತಿ ಹೇಳಬಾರದು ಏಕೆಂದರೆ ನಾನೇ ಭಗವಂತನೆಂದು ಹೇಳಿಕೊಳ್ಳುವವರು ಬಹಳ ಇದ್ದಾರೆ. ಬೇಹದ್ದಿನ ತಂದೆಯು ಬಂದು ಬೇಹದ್ದಿನ ನಾಟಕದನುಸಾರ ಆಸ್ತಿಯನ್ನು ಕೊಡುತ್ತಿದ್ದಾರೆಂದು ತಿಳಿಸಬೇಕು. ಈ ವಾಕ್ಯವನ್ನು ಸಂಪೂರ್ಣವಾಗಿ ಬರೆಯಬೇಕು. ಮನುಷ್ಯರು ಬರೆದಿರುವುದನ್ನು ಓದುತ್ತಾರೆ ಅವರ ಅದೃಷ್ಟದಲ್ಲಿದ್ದಾಗ ಪ್ರಯತ್ನ ಪಡುತ್ತಾರೆ. ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯುತ್ತಿದ್ದೇವೆಂದು ನಿಮಗೆ ಗೊತ್ತಿದೆಯಲ್ಲವೆ. ಇಲ್ಲಿಗೆ ನಿಶ್ಚಯಬುದ್ಧಿ ಮಕ್ಕಳು ಮಾತ್ರ ಬರುತ್ತಾರೆ. ನಿಶ್ಚಯಬುದ್ಧಿ ಮಕ್ಕಳೇ ಮತ್ತೆ ಕೆಲವೊಮ್ಮೆ ಸಂಶಯ ಬುದ್ಧಿಯವರಾಗಿ ಬಿಡುತ್ತಾರೆ. ಮಾಯೆಯು ಹಿಂದೆ ಬೀಳುತ್ತದೆ. ನಡೆಯುತ್ತಾ-ನಡೆಯುತ್ತಾ ಸೋತು ಬಿಡುತ್ತಾರೆ. ಒಂದೇ ಕಡೆ ಗೆಲ್ಲುವಂಥಹ ನಿಯಮವೂ ಇಲ್ಲ. ಸೋಲಬಾರದೆಂಬ ಮಾತೂ ಇಲ್ಲ. ಸೋಲು -ಗೆಲುವು ಎರಡೂ ನಡೆಯುತ್ತದೆ. ಯುದ್ಧದಲ್ಲಿಯೂ ಮೂರು ಪ್ರಕಾರದಲ್ಲಿರುತ್ತದೆ – ಫಸ್ಟ್ ಕ್ಲಾಸ್, ಸೆಕೆಂಡ್, ಥರ್ಡ್..... ಒಮ್ಮೊಮ್ಮೆ ಯುದ್ಧ ಮಾಡದವರನ್ನೂ ನೋಡಲಾಗುತ್ತದೆ. ಅವರನ್ನೂ ಸಹ ಸೇರಿಸಿಕೊಳ್ಳಲಾಗುವುದು. ಬಹುಷಃ ಅವರಿಗೂ ಸೈನ್ಯದಲ್ಲಿದ್ದು ಯುದ್ಧ ಮಾಡುವಂತಹ ವಿಧಿ ಬರಬಹುದು, ಆಗ ಸೇನೆಯಲ್ಲಿ ಸೇರಿಸಿಕೊಳ್ಳಬಹುದು. ಏಕೆಂದರೆ ಪ್ರಪಂಚದವರಿಗೆ ನೀವು ಮಹಾರಥಿ ಯೋಧರೆಂದು ಅವರಿಗೆ ತಿಳಿದಿಲ್ಲ. ಆದರೆ ನಿಮ್ಮ ಕೈಯಲ್ಲಿ ಯಾವುದೇ ರೀತಿಯ ಆಯುಧಗಳಿಲ್ಲ. ನಿಮ್ಮ ಕೈಯಲ್ಲಿ ಆಯುಧಗಳು ಶೋಭಿಸುವುದಿಲ್ಲ. ಆದರೆ ತಂದೆಯು ತಿಳಿಸುತ್ತಾರೆ - ಜ್ಞಾನವು ಖಡ್ಗವಾಗಿದೆ, ಜ್ಞಾನವೇ ಕಠಾರಿಯಾಗಿದೆ ಆದರೆ ಅವರು ಸ್ಥೂಲ ಆಯುಧಗಳೆಂದು ತಿಳಿದುಕೊಂಡು ಬಿಟ್ಟಿದ್ದಾರೆ. ನೀವು ಮಕ್ಕಳಿಗೆ ತಂದೆಯು ಜ್ಞಾನದ ಅಸ್ತ ಶಸ್ತ್ರಗಳನ್ನು ಕೊಡುತ್ತಾರೆ ಇದರಲ್ಲಿ ಹಿಂಸೆಯ ಮಾತಿಲ್ಲ, ಆದರೆ ಇದನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ದೇವಿಯರಿಗೆ ಸ್ಥೂಲ ಅಸ್ತ್ರ ಶಸ್ತ್ರಗಳನ್ನೆಲ್ಲಾ ಕೊಟ್ಟು ಬಿಟ್ಟಿದ್ದಾರೆ, ಅವರನ್ನೂ ಹಿಂಸಕರನ್ನಾಗಿ ಮಾಡಿ ಬಿಟ್ಟಿದ್ದಾರೆ. ಇದು ಅವಶ್ಯವಾಗಿ ಬುದ್ಧಿಹೀನ ಕಾರ್ಯವಾಗಿದೆ. ಯಾರು-ಯಾರು ಹೂವಾಗುತ್ತಿದ್ದಾರೆಂದು ತಂದೆಯು ಚೆನ್ನಾಗಿ ತಿಳಿದುಕೊಂಡಿದ್ದಾರೆ ಆದ್ದರಿಂದ ಸ್ವಯಂ ತಂದೆಯು ಹೂಗಳನ್ನು ಮುಂದೆ ಇರುವಂತೆ ಹೇಳಿದ್ದಾರೆ. ಇವರು ಸದಾ ಹೂವಾಗುವವರಾಗಿದ್ದಾರೆ. ತಂದೆಯು ಯಾರ ಹೆಸರನ್ನೂ ತೆಗೆದುಕೊಳ್ಳುವುದಿಲ್ಲ ಇಲ್ಲವೆಂದರೆ ಅನ್ಯರು ಕೇಳುತ್ತಾರೆ - ನಾವು ಮುಳ್ಳಾಗುತ್ತೇವೆಯೇ? ನರನಿಂದ ನಾರಾಯಣ ಯಾರಾಗುತ್ತೀರೆಂದರೆ ಎಲ್ಲರೂ ಕೈ ಏತ್ತುತ್ತಾರೆ. ನೀವೂ ಸಹ ಸ್ವಯಂ ತಿಳಿದುಕೊಂಡಿದ್ದೀರಿ- ಯಾರು ಹೆಚ್ಚು ಸೇವೆಯನ್ನು ಮಾಡುತ್ತಾರೆ ಹಾಗೂ ತಂದೆಯನ್ನು ನೆನಪು ಮಾಡುತ್ತಾರೆಯೋ ಅವರು ನಾರಾಯಣರಾಗುತ್ತಾರೆ. ನೆನಪು ಮಾಡದೇ ಇದ್ದರೆ ಪ್ರೀತಿಯಿಲ್ಲವೆಂದರ್ಥ. ಪ್ರೀತಿಯಿರುವ ವಸ್ತುವನ್ನು ಬಹಳ ನೆನಪು ಮಾಡಲಾಗುವುದು. ಮಕ್ಕಳು ಪ್ರಿಯವಾಗಿದ್ದಾಗ ತಂದೆ-ತಾಯಿ ತಮ್ಮ ಮಡಿಲಿನಲ್ಲಿಯೇ ಬೆಳೆಸುತ್ತಾರೆ. ಚಿಕ್ಕ ಮಕ್ಕಳೂ ಸಹ ಹೂವಾಗಿದ್ದಾರೆ! ನೀವು ಮಕ್ಕಳಿಗೂ ಸಹ ಶಿವ ತಂದೆಯ ಬಳಿಗೆ ಹೋಗಲು ಮನಸ್ಸಾಗುತ್ತದೆ. ಹಾಗೆಯೇ ಚಿಕ್ಕ ಮಕ್ಕಳೂ ಸಹ ಆಕರ್ಷಣೆ ಮಾಡುತ್ತಾರೆ. ತಕ್ಷಣ ಮಕ್ಕಳನ್ನು ಎತ್ತಿಕೊಂಡು ಮಡಿಲಿನಲ್ಲಿ ಕುಳ್ಳರಿಸಿಕೊಂಡು ಪ್ರೀತಿ ಮಾಡುತ್ತಾರೆ. ಈ ಬೇಹದ್ದಿನ ತಂದೆಯು ಬಹಳ ಪ್ರಿಯರಾಗಿದ್ದಾರೆ, ಎಲ್ಲರ ಶುಭಕಾಮನೆಗಳನ್ನು ಪೂರ್ಣ ಮಾಡುತ್ತಾರೆ, ಮನುಷ್ಯರಿಗೆ ಏನು ಬೇಕು? ಆರೋಗ್ಯ ಚೆನ್ನಾಗಿರಲಿ ಎಂದು ಬಯಸುತ್ತಾರೆ ಎಂದೂ ರೋಗ ಬರದಿರಲಿ ಎಲ್ಲದಕ್ಕಿಂತ ಉತ್ತಮವಾದುದು ಆರೋಗ್ಯವಾಗಿದೆ. ಆರೋಗ್ಯ ಚೆನ್ನಾಗಿದ್ದು ಹಣವಿಲ್ಲದಿದ್ದರೆ ಆ ಆರೋಗ್ಯವು ಯಾವ ಕೆಲಸಕ್ಕೆ ಬರುತ್ತದೆ? ಆದ್ದರಿಂದ ಧನವೂ ಬೇಕಾಗುತ್ತದೆ, ಅದರಿಂದ ಸುಖವು ಪ್ರಾಪ್ತಿಯಾಗುತ್ತದೆ. ತಂದೆಯು ತಿಳಿಸುತ್ತಾರೆ - ನಿಮಗೆ ಆರೋಗ್ಯ, ಐಶ್ವರ್ಯಗಳೆರಡೂ ಸಹ ಸಿಗುತ್ತದೆ. ಇದ್ಯಾವುದೂ ಸಹ ಹೊಸ ಮಾತಲ್ಲ. ಇದು ಬಹಳ ಹಳೆಯ ಮಾತಾಗಿದೆ. ನೀವು ಯಾವಾಗ ಮಿಲನ ಮಾಡುತ್ತೀರಿ ಆಗ ಎಲ್ಲರೂ ಈ ರೀತಿಯಾಗಿ ಹೇಳುತ್ತೀರಿ. ಆದರೆ ಲಕ್ಷಾಂತರ ಅಥವಾ ಪದಮಗಳಷ್ಟು ವರ್ಷಗಳಾಗಿವೆ ಎಂದು ಹೇಳುವುದಿಲ್ಲ. ಇಲ್ಲ ಈ ಪ್ರಪಂಚವು ಯಾವಾಗ ಹೊಸದಾಗುತ್ತದೆ, ಯಾವಾಗ ಹಳೆಯದಾಗುತ್ತದೆ ಎಂದು ನೀವು ತಿಳಿದುಕೊಂಡಿದ್ದೀರಿ. ನಾವಾತ್ಮಗಳು ಹೊಸ ಪ್ರಪಂಚಕ್ಕೆ ಹೋಗುತ್ತೇವೆ ಮತ್ತೆ ಹಳೆಯ ಪ್ರಪಂಚದಲ್ಲಿ ಬರುತ್ತೇವೆ. ನಿಮಗೆ ಆಲ್ರೌಂಡರ್ ಎಂದು ಹೆಸರನ್ನಿಡಲಾಗಿದೆ. ತಂದೆಯು ನೀವು ಆಲ್ರೌಂಡರ್ ಎಂದು ತಿಳಿಸಿದ್ದಾರೆ. ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಅಂತಿಮ ಜನ್ಮದಲ್ಲಿ ಬಂದು ತಲುಪಿದ್ದೀರಿ. ಮೊಟ್ಟ ಮೊದಲು ನೀವು ಪಾತ್ರವನ್ನಭಿನಯಿಸಲು ಬರುತ್ತೀರಿ. ಅದು ಮಧುರ ಶಾಂತಿಯ ಮನೆಯಾಗಿದೆ. ಮನುಷ್ಯರು ಶಾಂತಿಗಾಗಿ ಎಷ್ಟೊಂದು ಕಷ್ಟ ಪಡುತ್ತಾರೆ. ನಾವು ಶಾಂತಿಧಾಮದಲ್ಲಿರುವವರು ಅಲ್ಲಿಂದ ಪಾತ್ರವನ್ನಭಿನಯಿಸಲು ಬಂದಿದ್ದೇವೆಂದು ಅವರು ತಿಳಿದುಕೊಂಡಿಲ್ಲ. ಪಾತ್ರ ಪೂರ್ಣವಾದ ನಂತರ ಪುನಃ ನಾವು ಎಲ್ಲಿಂದ ಬಂದಿದ್ದೇವೋ ಅಲ್ಲಿಗೆ ಅವಶ್ಯವಾಗಿ ಹೋಗುತ್ತೇವೆ ಎಲ್ಲರೂ ಶಾಂತಿಧಾಮದಿಂದ ಬರುತ್ತಾರೆ, ಎಲ್ಲರ ಮನೆಯು ಆ ಬ್ರಹ್ಮ್ ಲೋಕ, ಬ್ರಹ್ಮಾಂಡವಾಗಿದೆ. ಎಲ್ಲಿ ಎಲ್ಲಾ ಆತ್ಮಗಳು ವಾಸ ಮಾಡುತ್ತಾರೆ. ರುದ್ರನನ್ನು ಬಹಳ ದೊಡ್ಡದಾಗಿ, ಅಂಡಾಕಾರದಲ್ಲಿ ಮಾಡುತ್ತಾರೆ. ಅವರಿಗೆ ಆತ್ಮವು ಅತೀ ಸೂಕ್ಷ್ಮವಾಗಿದೆ ಎಂದು ತಿಳಿದಿಲ್ಲ. ನಕ್ಷತ್ರದಂತೆಯೇ ಇದೆಯೆಂದು ಹೇಳುತ್ತಾರೆ ಆದರೆ ಪೂಜೆಗಾಗಿ ದೊಡ್ಡದಾಗಿ ಮಾಡಲಾಗುತ್ತದೆ. ಇಷ್ಟು ಚಿಕ್ಕ ಬಿಂದುವಿಗೆ ಪೂಜೆ ಮಾಡಲು ಆಗುವುದಿಲ್ಲವೆಂದು ನೀವು ತಿಳಿದುಕೊಂಡಿದ್ದೀರಿ ಆದ್ದರಿಂದ ದೊಡ್ದದಾಗಿ ಮಾಡಿ ಪೂಜಿಸುತ್ತಾರೆ, ಹಾಲನ್ನೂ ಅರ್ಪಣೆ ಮಾಡುತ್ತಾರೆ. ವಾಸ್ತವದಲ್ಲಿ ಶಿವ ಅಭೋಕನಾಗಿದ್ದಾರೆ ಹಾಗಾದರೆ ಅವರಿಗೆ ಹಾಲನ್ನು ಏಕೆ ಅರ್ಪಿಸುತ್ತಾರೆ? ಹಾಲನ್ನು ಕುಡಿಯುವುದಾದರೆ ಅವರು ಪುನಃ ಭೋಕ್ತರಾದರು. ಇದೊಂದು ಆಶ್ಚರ್ಯದ್ದಾಗಿದೆ! ಎಲ್ಲರೂ ಸಹ ಅವರು ನಮ್ಮ ಮಗನಾಗಿದ್ದಾರೆ, ನಾವು ಅವರಿಗೆ ಮಗುವಾಗಿದ್ದಾರೆಂದು ಹೇಳಿ ಅವರ ಮೇಲೆ ಬಲಿಹಾರಿಯಾಗುತ್ತಾರೆ. ಹೇಗೆ ತಂದೆಯು ಮಕ್ಕಳಿಗೆ ಬಲಿಹಾರಿಯಾಗಿ ತನ್ನೆಲ್ಲಾ ಆಸ್ತಿಯನ್ನು ಅವರಿಗೆ ಕೊಟ್ಟು ನಂತರ ಸ್ವಯಂ ವಾನಪ್ರಸ್ಥದಲ್ಲಿ ಹೊರಟು ಹೋಗುತ್ತಾರೆ. ಇಲ್ಲಿ ನೀವು ತಂದೆಯ ಬಳಿ ಜಮಾ ಮಾಡಿದರೆ ನಮ್ಮದು ಸುರಕ್ಷಿತವಾಗಿರುತ್ತದೆಯೆಂದು ನೀವು ತಿಳಿದಿದ್ದೀರಿ. ಗಾಯನವೂ ಇದೆ - ಕೆಲವರದು ಮಣ್ಣು ಪಾಲಾಯಿತು....... ಇದ್ಯಾವುದೂ ಇರುವುದಿಲ್ಲವೆಂದು ನೀವು ಮಕ್ಕಳಿಗೆ ತಿಳಿದಿದೆ. ಎಲ್ಲವೂ ಭಸ್ಮವಾಗಿ ಬಿಡುತ್ತದೆ. ಈ ರೀತಿಯೂ ತಿಳಿದುಕೊಳ್ಳಬಾರದು - ವಿಮಾನವು ಬಿತ್ತು, ವಿಮಾನವು ಬಿದ್ದಾಗ ಕಳ್ಳರಿಗೆ ಮಾಲು ಸಿಗುತ್ತದೆ ಆದರೆ ವಿನಾಶದ ಸಮಯದಲ್ಲಿ ಕಳ್ಳರೂ ಸಹ ಸಮಾಪ್ತಿಯಾಗಿ ಬಿಡುತ್ತಾರೆ. ಆ ಸಮಯದಲ್ಲಿ ಕಳ್ಳರು ಮೊದಲಾದವರಿರುವುದಿಲ್ಲ, ಇಲ್ಲದಿದ್ದರೆ ವಿಮಾನವೇನಾದರೂ ಬಿದ್ದಲ್ಲಿ ಎಲ್ಲಾ ಸಾಮಾನು ಕಳ್ಳರ ಕೈಗೆ ಹೋಗಿ ಬಿಡುತ್ತದೆ. ಅವರು ಅಲ್ಲಿಯೇ ಕಾಡುಗಳಲ್ಲಿ ಅದೆಲ್ಲವನ್ನೂ ಬಚ್ಚಿಟ್ಟು ಬಿಡುತ್ತಾರೆ, ಒಂದು ಸೆಕೆಂಡಿನಲ್ಲಿ ಎಲ್ಲವನ್ನೂ ಮಾಡಿ ಮುಗಿಸುತ್ತಾರೆ. ಅನೇಕ ಪ್ರಕಾರದಿಂದ ಕೆಲಸ ಮಾಡಿ ಮುಗಿಸುತ್ತಾರೆ. ಕೆಲವರು ಘನತೆ (ರಾಯಲ್ಟಿ) ಯಿಂದ ಕೆಲವರು ಘನತೆಗೆ ವಿರುದ್ಧವಾದ (ಅನ್-ರಾಯಲ್ಟಿ) ಕೆಲಸ ಮಾಡುತ್ತಾರೆ. ನಿಮಗೆ ಗೊತ್ತಿದೆ- ಎಲ್ಲವೂ ವಿನಾಶವಾಗುತ್ತದೆ ನಂತರ ನೀವು ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಆಗ ನೀವು ಎಲ್ಲಿಯೂ ಏನೂ ಹುಡುಕುವ ಅವಶ್ಯಕತೆಯಿರುವುದಿಲ್ಲ, ಶ್ರೇಷ್ಠ ಮನೆಯಲ್ಲಿ ಜನ್ಮ ಪಡೆಯುತ್ತೀರಿ, ಅಲ್ಲಿ ಹಣದ ಕೊರತೆಯೂ ಇರುವುದಿಲ್ಲ. ರಾಜರಿಗೆ ಎಂದಿಗೂ ಹಣವನ್ನು ಪಡೆಯುವ ವಿಚಾರವು ಬರುವುದಿಲ್ಲ. ದೇವತೆಗಳಿಗಂತೂ ಕಿಂಚಿತ್ತೂ ಇರುವುದಿಲ್ಲ. ಈ ರೀತಿಯಾಗಿ ತಂದೆಯು ನಿಮಗೆ ಎಂದಿಗೂ ಕಳ್ಳತನ ನಡೆಯದಂತಹ ಅಸೂಯೆ ಪಡದಂತಹ ರೀತಿಯಲ್ಲಿ ಎಲ್ಲವನ್ನೂ ಕೊಟ್ಟು ಬಿಡುತ್ತಾರೆ. ನೀವು ಸಂಪೂರ್ಣ ಹೂವಾಗಿ ಬಿಡುತ್ತೀರಿ. ಮುಳ್ಳು ಮತ್ತು ಹೂಗಳಿವೆಯಲ್ಲವೆ. ಇಲ್ಲಿ ಎಲ್ಲರೂ ಮುಳ್ಳೇ ಮುಳ್ಳಾಗಿದ್ದಾರೆ. ಯಾರು ವಿಕಾರದ ವಿನಃ ಇರುವುದಿಲ್ಲವೋ ಅವರಿಗೆ ಮುಳ್ಳೆಂದು ಹೇಳಬೇಕಾಗುತ್ತದೆ. ರಾಜನಿಂದ ಹಿಡಿದು ಎಲ್ಲರೂ ಮುಳ್ಳಾಗಿದ್ದಾರೆ ಆದ್ದರಿಂದ ನಿಮ್ಮನ್ನು ಈ ಲಕ್ಷ್ಮೀ-ನಾರಾಯಣರಂತೆ ಮಾಡುತ್ತೇನೆ ಅರ್ಥಾತ್ ರಾಜರಿಗೂ ರಾಜರನ್ನಾಗಿ ಮಾಡುತ್ತೇನೆಂದು ತಿಳಿಸುತ್ತಾರೆ. ಇಲ್ಲಿಯ ಮುಳ್ಳುಗಳು ಹೂಗಳ ಮುಂದೆ ಹೋಗಿ ತಲೆ ಬಾಗುತ್ತಾರೆ. ಈ ಲಕ್ಷ್ಮೀ-ನಾರಾಯಣರಂತೂ ಬುದ್ಧಿವಂತರಲ್ಲವೆ. ಸತ್ಯಯುಗದವರಿಗೆ ಮಹಾರಾಜರೆಂದು, ತ್ರೇತಾದವರಿಗೆ ರಾಜರೆಂದು ಕರೆಯಲಾಗುತ್ತದೆ ಎಂಬ ಮಾತುಗಳನ್ನು ತಂದೆಯು ತಿಳಿಸಿ ಕೊಟ್ಟಿದ್ದಾರೆ. ದೊಡ್ಡ ಮನುಷ್ಯನಿಗೆ ಮಹಾರಾಜನೆಂದು, ಚಿಕ್ಕ ವ್ಯಕ್ತಿಗೆ ರಾಜನೆಂದು ಕರೆಯಲಾಗುತ್ತದೆ. ಮೊದಲು ಮಹಾರಾಜನ ಸಭೆಯು ನಡೆಯುತ್ತದೆ, ಪದವಿಯಿರುತ್ತದೆಯಲ್ಲವೆ. ಕುರ್ಚಿಯೂ ಸಹ ನಂಬರವಾರ್ ಸಿಗುತ್ತದೆ. ಒಂದು ವೇಳೆ ಎಂದೂ ಬಾರದವರು ಬಂದಾಗ ಮೊದಲು ಅವರಿಗೆ ಕುರ್ಚಿಯನ್ನು ಕೊಡುತ್ತೀರಲ್ಲವೆ. ಗೌರವ ಕೊಡಬೇಕಾಗುತ್ತದೆ. ನಮ್ಮ ಮಾಲೆಯಾಗುತ್ತದೆ ಎಂದು ನೀವು ತಿಳಿದಿದ್ದೀರಿ. ಇದೂ ಸಹ ನಿಮ್ಮ ವಿನಃ ಬೇರೆ ಯಾರ ಬುದ್ಧಿಯಲ್ಲಿಯೂ ಇರಲು ಸಾಧ್ಯವಿಲ್ಲ. ರುದ್ರ ಮಾಲೆಯನ್ನು ತೆಗೆದುಕೊಂಡು ಜಪ ಮಾಡುತ್ತಾರೆ. ನೀವೂ ಸಹ ಜಪ ಮಾಡುತ್ತಿದ್ದಿರಲ್ಲವೆ! ಅನೇಕ ಮಂತ್ರಗಳನ್ನು ಜಪಿಸುತ್ತಿದ್ದಿರಿ. ಇದೆಲ್ಲವೂ ಭಕ್ತಿಯೆಂದು ತಂದೆಯು ತಿಳಿಸುತ್ತಾರೆ. ಇಲ್ಲಿ ನೀವು ಒಬ್ಬರನ್ನೇ ನೆನಪು ಮಾಡಬೇಕು ಹಾಗೂ ಆ ತಂದೆಯು ವಿಶೇಷವಾಗಿ ಹೇಳುತ್ತಾರೆ - ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ಭಕ್ತಿ ಮಾರ್ಗದಲ್ಲಿ ದೇಹಾಭಿಮಾನದ ಕಾರಣ ನೀವು ಎಲ್ಲರನ್ನೂ ನೆನಪು ಮಾಡುತ್ತಿದ್ದಿರಿ, ಈಗ ನನ್ನೊಬ್ಬನನ್ನೇ ನೆನಪು ಮಾಡಿ. ಒಬ್ಬ ತಂದೆಯು ಸಿಕ್ಕಿರುವಾಗ ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನೇ ನೆನಪು ಮಾಡಿದಾಗ ಬಹಳ ಖುಷಿಯಾಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ವಿಶ್ವ ರಾಜ್ಯಭಾಗ್ಯ ಸಿಗುತ್ತದೆ. ಎಷ್ಟೆಷ್ಟು ಸಮಯ ಕಡಿಮೆಯಾಗುತ್ತಾ ಹೋಗುತ್ತದೆ ಅಷ್ಟಷ್ಟು ಬೇಗ-ಬೇಗ ನೆನಪು ಮಾಡುತ್ತಿರುತ್ತೀರಿ. ದಿನೇ-ದಿನೇ ಹೆಜ್ಜೆಯನ್ನು ಬೇಗನೆ ಮುಂದಿಡುತ್ತಾ ಹೋಗುತ್ತೀರಿ. ಆತ್ಮವೆಂದಿಗೂ ಸುಸ್ತಾಗುವುದಿಲ್ಲ. ಶರೀರದೊಂದಿಗೆ ಬೆಟ್ಟ ಮೊದಲಾದವುಗಳನ್ನು ಹತ್ತಲು ಹೋದರೆ ಸುಸ್ತಾಗಿ ಬಿಡುತ್ತಾರೆ. ತಂದೆಯನ್ನು ನೆನಪು ಮಾಡುವುದರಿಂದ ಯಾವುದೇ ರೀತಿಯ ಆಯಾಸವಾಗುವುದಿಲ್ಲ, ಖುಷಿಯಾಗಿರುತ್ತೀರಿ. ತಂದೆಯನ್ನು ನೆನಪು ಮಾಡಿ ಮುಂದುವರೆಯುತ್ತಿರುತ್ತೀರಿ. ಶಾಂತಿಧಾಮಕ್ಕೆ ಹೋಗಲು ನೀವು ಮಕ್ಕಳು ಅರ್ಧಕಲ್ಪ ಶ್ರಮ ಪಟ್ಟಿರಿ. ಗುರಿ-ಉದ್ದೇಶವಂತೂ ಸ್ವಲ್ಪವೂ ತಿಳಿದಿರಲಿಲ್ಲ. ಈಗ ಮಕ್ಕಳಿಗೆ ಪರಿಚಯವಿದೆ- ಭಕ್ತಿ ಮಾರ್ಗದಲ್ಲಿ ಯಾರಿಗಾಗಿ ಇಷ್ಟೆಲ್ಲಾ ನೆನಪು ಮಾಡುತ್ತಾ ಬಂದಿದ್ದೀರಿ ಅವರು ಈಗ ನನ್ನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ತಂದೆಯು ಸರಿಯಾಗಿ ಹೇಳುತ್ತಿದ್ದಾರೆಯೇ ಅಥವಾ ಇಲ್ಲವೆ ಎಂದು ನೀವೇ ಯೋಚಿಸಿ. ಅವರು ನೀರಿನಿಂದ ಪಾವನರಾಗುತ್ತೇವೆಂದು ತಿಳಿದಿದ್ದಾರೆ. ನೀರಂತೂ ಇಲ್ಲಿಯೂ ಇದೆ, ಗಂಗೆಯಲ್ಲಿರುವುದೇ ನೀರಾಗಿದೆಯೇನು? ಆ ರೀತಿಯಿಲ್ಲ. ಅದೆಲ್ಲವೂ ಮಳೆಯಿಂದ ಒಂದು ಕಡೆ ಸೇರಿರುವ ನೀರಾಗಿದೆ. ಎತ್ತರ ಪ್ರದೇಶಗಳಿಂದ ಜರಿಗಳಿಂದ ಹರಿದು ಬರುತ್ತಿರುತ್ತದೆ. ಅದನ್ನು ಗಂಗಾ ನದಿಯ ನೀರೆಂದು ಹೇಳಲಾಗುವುದಿಲ್ಲ. ಅದು ಹರಿಯುವುದೆಂದೂ ನಿಲ್ಲಲು ಸಾಧ್ಯವಿಲ್ಲ, ಅದೂ ಸಹ ಪ್ರಕೃತಿದತ್ತವಾಗಿದೆ. ಮಳೆ ಬಾರದಿದ್ದರೂ ಸಹ ಆ ನೀರು ಹರಿಯುತ್ತಲೇ ಇರುತ್ತದೆ. ವೈಷ್ಣವರು ಸಾಮಾನ್ಯವಾಗಿ ಬಾವಿಯ ನೀರನ್ನು ಕುಡಿಯುತ್ತಾರೆ. ಒಂದು ಕಡೆ ಆ ಬಾವಿಯ ನೀರು ಪವಿತ್ರವೆಂದು, ಇನ್ನೊಂದು ಕಡೆ ಪತಿತ-ಪಾವನಿ ಎಂದು ಸ್ನಾನ ಮಾಡುತ್ತಾರೆ. ಇದನ್ನು ಅಜ್ಞಾನವೆಂದು ಹೇಳಲಾಗುತ್ತದೆ. ಮಳೆಯ ನೀರು ಚೆನ್ನಾಗಿರುತ್ತದೆ ಇದನ್ನು ನಾಟಕದ ಲೀಲೆಯೆಂದು ಕರೆಯಲಾಗುವುದು. ಇದೆಲ್ಲವೂ ಈಶ್ವರನ ಪ್ರಕೃತಿದತ್ತವಾದ ಲೀಲೆಯಾಗಿದೆ. ಬೀಜವು ಎಷ್ಟೊಂದು ಚಿಕ್ಕದಾಗಿರುತ್ತದೆ, ಅದರಿಂದ ಎಷ್ಟು ದೊಡ್ಡ ವೃಕ್ಷವಾಗುತ್ತದೆ! ಯಾವಾಗ ಭೂಮಿಯು ಬಂಜರು ಭೂಮಿಯಾಗುತ್ತದೆ ಆಗ ಶಕ್ತಿಯನ್ನು ಕಳೆದುಕೊಂಡು ರುಚಿಯಿರುವುದಿಲ್ಲವೆಂದು ನೀವು ತಿಳಿದುಕೊಂಡಿದ್ದೀರಿ. ಸ್ವರ್ಗವು ಹೇಗಿರುತ್ತದೆ ಎಂದು ತಂದೆಯು ಮಕ್ಕಳಿಗೆ ಎಲ್ಲಾ ಅನುಭವಗಳನ್ನು ಇಲ್ಲಿಯೇ ಮಾಡಿಸುತ್ತಾರೆ. ಈಗಂತೂ ಸ್ವರ್ಗವಿಲ್ಲ. ನಾಟಕದಲ್ಲಿ ಎಲ್ಲವೂ ನೊಂದಾವಣೆಯಾಗಿದೆ. ಮಕ್ಕಳಿಗೆ ಎಲ್ಲವೂ ಸಾಕ್ಷಾತ್ಕಾರವಾಗಿದೆ, ಅಲ್ಲಿಯ ಫಲ-ವೃಕ್ಷವು ಹೇಗಿರುತ್ತದೆ, ಸಿಹಿಯಾಗಿರುತ್ತದೆ ಎಂದು ಧ್ಯಾನದಲ್ಲಿ ನೋಡಿ ಬಂದು ಹೇಳುತ್ತೀರಿ. ಆಮೇಲೆ ಇಲ್ಲಿ ಸಾಕ್ಷಾತ್ಕಾರವಾಗುವುದೆಲ್ಲವೂ ಪ್ರತ್ಯಕ್ಷವಾಗಿ ತಿನ್ನುತ್ತೀರಿ. ಏನೆಲ್ಲವೂ ಸಾಕ್ಷಾತ್ಕಾರವಾಗುತ್ತದೆ ಅದನ್ನು ಈ ಕಣ್ಣುಗಳಿಂದ ನೋಡುತ್ತೀರಿ, ಉಳಿದೆಲ್ಲವೂ ಪುರುಷಾರ್ಥದ ಮೇಲಿದೆ. ಒಂದು ವೇಳೆ ಪುರುಷಾರ್ಥ ಮಾಡದಿದ್ದರೆ ಎಂತಹ ಪದವಿಯು ಸಿಗುತ್ತದೆ? ಈಗ ನಿಮ್ಮ ಪುರುಷಾರ್ಥ ನಡೆಯುತ್ತಿದೆ, ಈಗ ನೀವು ಹೀಗಾಗುತ್ತೀರಿ. ಈ ವಿನಾಶದ ನಂತರ ಲಕ್ಷ್ಮೀ-ನಾರಾಯಣರ ರಾಜ್ಯವಿರುತ್ತದೆ. ಇದೆಲ್ಲವೂ ನಿಮಗೇ ತಿಳಿದಿದೆ ಆದರೆ ಪಾವನರಾಗಲು ಸಮಯ ಹಿಡಿಸುತ್ತದೆ. ಅದಕ್ಕಾಗಿ ನೆನಪಿನ ಯಾತ್ರೆಯು ಮುಖ್ಯವಾಗಿದೆ. ಸಹೋದರ - ಸಹೋದರಿಯೆಂದು ತಿಳಿಯುವುದರಿಂದಲೂ ದೂರವಿರಲು ಸಾಧ್ಯವಿಲ್ಲದಿದ್ದರೆ ಆಗ ಸಹೋದರ-ಸಹೋದರ ಎಂದು ತಿಳಿದುಕೊಳ್ಳಿ ಎಂದು ಹೇಳುತ್ತಾರೆ. ಸಹೋದರ-ಸಹೋದರಿಯೆಂದು ತಿಳಿದುಕೊಳ್ಳುವುದರಿಂದ ದೃಷ್ಟಿಯು ಪರಿವರ್ತನೆಯಾಗುವುದಿಲ್ಲ. ಸಹೋದರ-ಸಹೋದರರನ್ನು ನೋಡುವುದರಿಂದ ಈ ಶರೀರವೇ ಇರುವುದಿಲ್ಲ. ನಾವೆಲ್ಲರೂ ಆತ್ಮಗಳಾಗಿದ್ದೇವೆ, ಶರೀರವಲ್ಲ. ಇಲ್ಲಿ ನೋಡುವುದೆಲ್ಲವೂ ವಿನಾಶವಾಗಿ ಬಿಡುತ್ತದೆ. ಈಗ ನೀವು ಈ ಶರೀರವನ್ನು ಬಿಟ್ಟು ಅಶರೀರಿಯಾಗಿ ಹೋಗಬೇಕು. ನಾವು ಶರೀರವನ್ನು ಬಿಟ್ಟು ಹೇಗೆ ಹೋಗಬೇಕೆಂದು ಕಲಿಯಲು ನೀವು ಇಲ್ಲಿಗೆ ಬಂದಿದ್ದೀರಿ. ಇದೇ ಗುರಿಯಾಗಿದೆ. ಶರೀರವಂತೂ ಆತ್ಮನಿಗೆ ಬಹಳ ಪ್ರಿಯವಾಗಿದೆ. ಶರೀರವನ್ನು ಬಿಡಬಾರದೆಂದು ಆತ್ಮವು ಎಷ್ಟೊಂದು ಪ್ರಬಂಧವನ್ನು ಮಾಡುತ್ತದೆ. ನಮ್ಮ ಈ ಶರೀರ ಹೋಗಬಾರದು. ಆತ್ಮನಿಗೆ ಈ ಶರೀರದೊಂದಿಗೆ ಬಹಳ ಪ್ರೀತಿಯಿದೆ. ಈ ಶರೀರವು ತುಂಬಾ ಹಳೆಯದಾಗಿದೆ ಎಂದು ತಂದೆಯು ತಿಳಿಸುತ್ತಾರೆ, ನೀವೂ ತಮೋಪ್ರಧಾನರಾಗಿದ್ದೀರಿ ಮತ್ತು ನಿಮ್ಮ ಆತ್ಮವು ಅಪವಿತ್ರವಾಗಿದೆ ಆದ್ದರಿಂದ ನೀವು ದುಃಖಿಗಳು, ರೋಗಿಗಳಾಗುತ್ತಿರುತ್ತೀರಿ. ತಂದೆಯು ತಿಳಿಸುತ್ತಾರೆ- ಈಗ ನೀವು ಶರೀರದೊಂದಿಗೆ ಪ್ರೀತಿಯಿಡಬಾರದು. ಇದು ಹಳೆಯ ಶರೀರವಾಗಿದೆ. ಈಗ ನೀವು ಹೊಸ ಶರೀರವನ್ನು ಕೊಂಡುಕೊಳ್ಳಬೇಕು. ಕೊಂಡುಕೊಳ್ಳುವ ಯಾವುದೇ ಅಂಗಡಿಯೂ ಇಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದಾಗ ನೀವು ಪಾವನರಾಗುತ್ತೀರಿ. ನಂತರ ನಿಮಗೆ ಪಾವನ ಶರೀರವು ಸಿಗುತ್ತದೆ. ಪಂಚ ತತ್ವಗಳೂ ಪಾವನವಾಗಿ ಬಿಡುತ್ತವೆ, ತಂದೆಯು ಎಲ್ಲಾ ಮಾತುಗಳನ್ನು ತಿಳಿಸಿ ಮತ್ತೆ ಮನ್ಮನಾಭವ ಎಂದು ಹೇಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ನಾವು ಶಿವತಂದೆಯ ವಾರಸುಧಾರರಾಗಿದ್ದೇವೆ, ಅವರು ನಮ್ಮ ವಾರಸುಧಾರರಾಗಿದ್ದಾರೆ, ಈ ನಿಶ್ಚಯದಿಂದ ತಂದೆಯ ಮೇಲೆ ಪೂರ್ಣ ಬಲಿಹಾರಿಯಾಗಬೇಕಾಗಿದೆ. ತಂದೆಯ ಬಳಿ ಎಷ್ಟು ಜಮಾ ಮಾಡುತ್ತೀರಿ ಅಷ್ಟು ಸುರಕ್ಷಿತವಾಗುತ್ತದೆ. ಕೆಲವರದು ಮಣ್ಣು ಪಾಲಾಯಿತು.....ಎಂದು ಹೇಳಲಾಗುತ್ತದೆ.

2. ಮುಳ್ಳಿನಿಂದ ಹೂ ಈಗಲೇ ಆಗಬೇಕಾಗಿದೆ. ಏಕರಸ ನೆನಪು ಮತ್ತು ಸರ್ವೀಸಿನಿಂದ ತಂದೆಯ ಪ್ರೀತಿಯ ಅಧಿಕಾರಿಗಳಾಗಬೇಕಾಗಿದೆ. ದಿನ-ಪ್ರತಿದಿನ ನೆನಪಿನಲ್ಲಿ ಹೆಜ್ಜೆಯನ್ನು ಮುಂದುವರೆಸುತ್ತಾ ಇರಬೇಕಾಗಿದೆ.


ವರದಾನ:
ಈ ಕಲ್ಯಾಣಕಾರಿ ಯುಗದಲ್ಲಿ ಸರ್ವರ ಕಲ್ಯಾಣ ಮಾಡುವಂತಹ ಪ್ರಕೃತಿ ಜೀತ್ ಮಾಯಾಜೀತ್ ಭವ.

ಸಂಗಮಯುಗವನ್ನು ಕಲ್ಯಾಣಕಾರಿ ಯುಗವೆಂದು ಹೇಳಲಾಗುವುದು ಈ ಯುಗದಲ್ಲಿ ಸದಾ ಇದೇ ಸ್ವಮಾನ ನೆನಪಿನಲ್ಲಿಟ್ಟುಕೊಳ್ಳಿ ನಾನು ಕಲ್ಯಾಣಕಾರಿ ಆತ್ಮನಾಗಿದ್ದೇನೆ, ನನ್ನ ಕರ್ತವ್ಯವೇ ಆಗಿದೆ ಮೊದಲು ಸ್ವಯಂನ ಕಲ್ಯಾಣ ಮಾಡಬೇಕು. ಮನುಷ್ಯಾತ್ಮರಿಗಲ್ಲದೆ ನಾವು ಪ್ರಕೃತಿಯ ಕಲ್ಯಾಣವನ್ನೂ ಸಹ ಮಾಡುವವರಾಗಿದ್ದೇವೆ. ಆದ್ದರಿಂದ ಪ್ರಕೃತಿ ಜೀತ್, ಮಾಯಾಜೀತ್ ಎಂದು ಕರೆಸಿಕೊಳ್ಳುವಿರಿ. ಯಾವಾಗ ಆತ್ಮ ಪುರುಷ ಪ್ರಕೃತಿ ಜೀತ್ ಆಗಿ ಬಿಡುವುದು, ಆಗ ಪ್ರಕೃತಿಯೂ ಸಹಾ ಸುಖದಾಯಿಯಾಗಿ ಬಿಡುವುದು. ಪ್ರಕೃತಿ ಅಥವಾ ಮಾಯೆಯ ಹಲ್ಚಲ್ ನಲ್ಲಿ ಬರಲು ಸಾದ್ಯವಿಲ್ಲ. ಅವರ ಮೇಲೆ ಅಕಲ್ಯಾಣದ ವಾಯುಮಂಡಲದ ಪ್ರಭಾವ ಬೀಳಲು ಸಾಧ್ಯವಿಲ್ಲ.

ಸ್ಲೋಗನ್:
ಪರಸ್ಪರ ಒಬ್ಬರು ಇನ್ನೊಬ್ಬರ ವಿಚರಗಳಿಗೆ ಸಮ್ಮಾನ ಕೊಟ್ಟಾಗ ಮಾನನೀಯ ಆತ್ಮ ಆಗಿ ಬಿಡುವಿರಿ.