23.08.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೆನಪಿನ ಯಾತ್ರೆಯಿಂದಲೇ ನಿಮ್ಮ ಸಂಪಾದನೆಯು ಜಮಾ ಆಗುತ್ತದೆ, ನೀವು ನಷ್ಟದಿಂದ ಲಾಭದಲ್ಲಿ ಬರುತ್ತೀರಿ, ವಿಶ್ವದ ಮಾಲೀಕರಾಗುತ್ತೀರಿ”

ಪ್ರಶ್ನೆ:
ಸತ್ಸಂಗ ಮೇಲೆತ್ತುತ್ತದೆ, ಕೆಟ್ಟ ಸಂಗ ಕೆಳಗೆ ಬೀಳಿಸುತ್ತದೆ - ಇದರ ಅರ್ಥವೇನು?

ಉತ್ತರ:
ಯಾವಾಗ ನೀವು ಮಕ್ಕಳಿಗೆ ಸತ್ಯ ಸಂಗ ಅರ್ಥಾತ್ ಸತ್ಯ ತಂದೆಯ ಸಂಗ ಸಿಗುತ್ತದೆಯೋ ಆಗ ನಿಮ್ಮದು ಏರುವ ಕಲೆಯಾಗುತ್ತದೆ. ರಾವಣನ ಸಂಗವು ಕೆಟ್ಟ ಸಂಗವಾಗಿದೆ, ರಾವಣನ ಸಂಗದಿಂದ ನೀವು ಕೆಳಗೆ ಬೀಳುತ್ತೀರಿ ಅರ್ಥಾತ್ ರಾವಣ ನಿಮ್ಮನ್ನು ಮುಳುಗಿಸುತ್ತಾನೆ, ತಂದೆಯು ಪಾರು ಮಾಡುತ್ತಾರೆ. ತಂದೆಯದೂ ಸಹ ಚಮತ್ಕಾರವಾಗಿದೆ. ಒಂದು ಸೆಕೆಂಡಿನಲ್ಲಿ ಇಂತಹ ಸಂಗವನ್ನು ಕೊಡುತ್ತಾರೆ ಯಾವುದರಿಂದ ನಿಮ್ಮ ಗತಿ ಸದ್ಗತಿಯಾಗುತ್ತದೆ. ಆದ್ದರಿಂದ ಅವರಿಗೆ ಜಾದೂಗಾರನೆಂದೂ ಹೇಳಲಾಗುತ್ತದೆ.

ಓಂ ಶಾಂತಿ.
ಮಕ್ಕಳು ನೆನಪಿನಲ್ಲಿ ಕುಳಿತಿದ್ದಿರಿ, ಇದಕ್ಕೆ ನೆನಪಿನ ಯಾತ್ರೆಯೆಂದು ಹೇಳಲಾಗುತ್ತದೆ. ತಂದೆಯು ಹೇಳುತ್ತಾರೆ - ಮಕ್ಕಳೇ, ಯೋಗ ಎಂಬ ಶಬ್ಧವನ್ನು ಬಳಸಬೇಡಿ, ತಂದೆಯನ್ನು ನೆನಪು ಮಾಡಿ, ಅವರು ಆತ್ಮರ ತಂದೆ, ಪರಮಪಿತ ಪತಿತ-ಪಾವನನಾಗಿದ್ದಾರೆ. ಆ ಪತಿತ-ಪಾವನನನ್ನೇ ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ಒಬ್ಬ ತಂದೆಯನ್ನು ನೆನಪು ಮಾಡಿರಿ. ತಾನು ಸತ್ತರೆ ಜಗತ್ತೇ ಸತ್ತಂತೆ ಎಂದು ಹೇಳುತ್ತಾರಲ್ಲವೆ. ದೇಹ ಸಹಿತವಾಗಿ ಯಾವುದೆಲ್ಲಾ ಸಂಬಂಧಗಳು ಕಾಣುತ್ತದೆಯೋ ಅದೆಲ್ಲವನ್ನು ನೆನಪು ಮಾಡಬೇಡಿ, ಒಬ್ಬ ತಂದೆಯನ್ನೇ ನೆನಪು ಮಾಡಿರಿ ಆಗ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ನೀವು ಜನ್ಮಜನ್ಮಾಂತರದ ಪಾಪಾತ್ಮರಾಗಿದ್ದೀರಲ್ಲವೆ. ಇದು ಪಾಪಾತ್ಮರ ಪ್ರಪಂಚವಾಗಿದೆ, ಸತ್ಯಯುಗವು ಪುಣ್ಯಾತ್ಮರ ಪ್ರಪಂಚವಾಗಿದೆ. ಈಗ ಪಾಪಗಳೆಲ್ಲಾ ತುಂಡಾಗಿ ಪುಣ್ಯವು ಹೇಗೆ ಜಮಾ ಆಗುವುದು? ತಂದೆಯ ನೆನಪಿನಿಂದಲೇ ಜಮಾ ಆಗುತ್ತದೆ. ಆತ್ಮದಲ್ಲಿ ಮನಸ್ಸು-ಬುದ್ಧಿಯಿದೆಯಲ್ಲವೆ. ಅಂದಮೇಲೆ ಆತ್ಮವನ್ನು ಬುದ್ಧಿಯಿಂದ ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನಿಮಗೆ ಯಾರೆಲ್ಲಾ ಮಿತ್ರ ಸಂಬಂಧಿ ಮೊದಲಾದವರಿದ್ದಾರೆಯೋ ಅವರೆಲ್ಲರನ್ನೂ ಮರೆಯಿರಿ, ಅವರೆಲ್ಲರೂ ಒಬ್ಬರು ಇನ್ನೊಬ್ಬರಿಗೆ ದುಃಖ ಕೊಡುತ್ತಾರೆ. ಒಂದು ಕಾಮ ವಿಕಾರದ ಪಾಪ ಮಾಡುತ್ತಾರೆ, ಎರಡನೆಯ ಪಾಪವೇನು? ಸರ್ವರ ಸದ್ಗತಿದಾತ ತಂದೆಯು ಮಕ್ಕಳಿಗೆ ಬೇಹದ್ದಿನ ಸುಖವನ್ನು ಕೊಡುತ್ತಾರೆ ಅರ್ಥಾತ್ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಆದರೆ ಅವರನ್ನೇ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಇದು ಪಾಠಶಾಲೆಯಾಗಿದೆ, ನೀವು ಓದಲು ಬಂದಿದ್ದೀರಿ. ಈ ಲಕ್ಷ್ಮೀ-ನಾರಾಯಣರ ಚಿತ್ರವು ನಿಮ್ಮ ಗುರಿ-ಧ್ಯೇಯವಾಗಿದೆ ಮತ್ತ್ಯಾರೂ ಈ ರೀತಿ ಹೇಳಲು ಸಾಧ್ಯವಿಲ್ಲ. ನಿಮಗೆ ಗೊತ್ತಿದೆ, ನಾವೀಗ ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗಬೇಕಾಗಿದೆ. ನಾವೇ ವಿಶ್ವದ ಮಾಲೀಕರಾಗಿದ್ದೆವು, ಪೂರ್ಣ 5000 ವರ್ಷಗಳಾಯಿತು, ದೇವಿ-ದೇವತೆಗಳು ವಿಶ್ವದ ಮಾಲೀಕರಾಗಿದ್ದರಲ್ಲವೆ! ಎಷ್ಟು ಶ್ರೇಷ್ಠ ಪದವಿಯಾಗಿದೆ, ಅವಶ್ಯವಾಗಿ ತಂದೆಯೇ ಆ ರೀತಿ ಮಾಡುತ್ತಾರೆ. ತಂದೆಯನ್ನೇ ಪರಮಾತ್ಮನೆಂದು ಹೇಳುತ್ತಾರೆ, ಅವರ ಮೂಲ ಹೆಸರಾಗಿದೆ - ಶಿವ. ಅವರಿಗೆ ಅನೇಕ ಹೆಸರಗಳನ್ನಿಟ್ಟಿದ್ದಾರೆ, ಹೇಗೆ ಬಾಂಬೆಯಲ್ಲಿ ಬಬುಲ್ನಾಥನ ಮಂದಿರವಿದೆ ಅರ್ಥಾತ್ ಮುಳ್ಳಿನ ಕಾಡನ್ನು ಹೂವಿನ ಉದ್ಯಾನವನ್ನಾಗಿ ಮಾಡುವವರು ಎಂದರ್ಥ. ಆದರೆ ಅವರ ಮೂಲ ಹೆಸರು ಒಂದೇ ಆಗಿದೆ - ಶಿವ. ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡಿದಾಗಲೂ ಅವರ ಹೆಸರು ಶಿವ ಎಂದೇ ಇರುತ್ತದೆ. ನೀವು ಈ ಬ್ರಹ್ಮಾರವರನ್ನು ನೆನಪು ಮಾಡುವಂತಿಲ್ಲ. ಇವರು ದೇಹಧಾರಿಯಾಗಿದ್ದಾರೆ. ನೀವು ವಿದೇಹಿಯನ್ನು ನೆನಪು ಮಾಡಬೇಕಾಗಿದೆ. ನೀವಾತ್ಮರು ಪತಿತರಾಗಿದ್ದೀರಿ, ಈಗ ಪಾವನ ಮಾಡಿಕೊಳ್ಳಬೇಕಾಗಿದೆ, ಮಹಾತ್ಮ-ಪಾಪಾತ್ಮರೆಂದು ಹೇಳುತ್ತಾರೆ, ಮಹಾನ್ ಪರಮಾತ್ಮನೆಂದು ಹೇಳುವುದಿಲ್ಲ. ತಮ್ಮನ್ನು ಪರಮಾತ್ಮ ಅಥವಾ ಈಶ್ವರ ಎಂದು ಯಾರೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಮಹಾತ್ಮ, ಪವಿತ್ರ ಎಂದು ಹೇಳುತ್ತಾರೆ. ಸನ್ಯಾಸಿಗಳು ಸನ್ಯಾಸ ಮಾಡುತ್ತಾರೆ, ಆದ್ದರಿಂದ ಪವಿತ್ರ ಆತ್ಮರಾಗಿದ್ದಾರೆ. ತಂದೆಯು ತಿಳಿಸಿದ್ದಾರೆ - ಅವರೆಲ್ಲರೂ ಪುನರ್ಜನ್ಮ ತೆಗೆದುಕೊಳ್ಳುತ್ತಾರೆ, ದೇಹಧಾರಿಗಳು ಅವಶ್ಯವಾಗಿ ಪುನರ್ಜನ್ಮ ತೆಗೆದುಕೊಳ್ಳಬೇಕಾಗುತ್ತದೆ. ವಿಕಾರದಿಂದ ಜನ್ಮವನ್ನು ಪಡೆದು ನಂತರ ದೊಡ್ಡವರಾದ ಮೇಲೆ ಸನ್ಯಾಸತ್ವವನ್ನು ಸ್ವೀಕರಿಸುತ್ತಾರೆ, ದೇವತೆಗಳು ಹೀಗೆ ಮಾಡುವುದಿಲ್ಲ, ಅವರು ಸದಾ ಪವಿತ್ರರಾಗಿರುತ್ತಾರೆ. ತಂದೆಯು ಈಗ ನಿಮ್ಮನ್ನು ಆಸುರೀ ಸಂಪ್ರದಾಯದವರಿಂದ ದೈವೀ ಸಂಪ್ರದಾಯದವರನ್ನಾಗಿ ಮಾಡುತ್ತಾರೆ. ದೈವೀ ಗುಣಗಳನ್ನು ಧಾರಣೆ ಮಾಡಿಕೊಂಡರೆ ದೈವೀ ಸಂಪ್ರದಾಯದವರಾಗುತ್ತೀರಿ. ದೈವೀ ಸಂಪ್ರದಾಯದವರು ಸತ್ಯಯುಗದಲ್ಲಿರುತ್ತಾರೆ, ಕಲಿಯುಗದಲ್ಲಿ ಆಸುರೀ ಸಂಪ್ರದಾಯದವರಿದ್ದಾರೆ. ಈಗ ಸಂಗಮಯುಗವಾಗಿದೆ, ಈಗ ನಿಮಗೆ ತಂದೆಯು ಸಿಕ್ಕಿದ್ದಾರೆ. ತಂದೆಯು ಹೇಳುತ್ತಾರೆ - ಮಕ್ಕಳೇ, ನೀವೀಗ ಅವಶ್ಯವಾಗಿ ದೈವೀ ಸಂಪ್ರದಾಯದವರಾಗಬೇಕಾಗಿದೆ. ನೀವಿಲ್ಲಿ ಬಂದಿರುವುದೇ ದೈವೀ ಸಂಪ್ರದಾಯದವರಾಗಲು. ದೈವೀ ಸಂಪ್ರದಾಯದವರಿಗೆ ಅಪಾರ ಸುಖವಿರುತ್ತದೆ. ಈ ಪ್ರಪಂಚಕ್ಕೆ ಹಿಂಸಾತ್ಮಕವೆಂದು ಹೇಳಲಾಗುತ್ತದೆ ದೇವತೆಗಳು ಅಹಿಂಸಕರಾಗಿದ್ದಾರೆ.

ತಂದೆಯು ಹೇಳುತ್ತಾರೆ - ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ತಂದೆಯನ್ನು ನೆನಪು ಮಾಡಿರಿ- ನಿಮ್ಮ ಗುರುಗಳೆಲ್ಲರೂ ದೇಹಧಾರಿಗಳಾಗಿದ್ದಾರೆ, ಈಗ ನೀವಾತ್ಮರು ಪರಮಾತ್ಮ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾವಾಗ ನೀವು ಪುಣ್ಯಾತ್ಮರಾಗುತ್ತೀರಿ ಆಗ ಸುಖ ಸಿಗುವುದು. 84 ಜನ್ಮಗಳ ನಂತರವೇ ನೀವು ಪಾಪಾತ್ಮರಾಗಿ ಬಿಡುತ್ತೀರಿ. ನೀವೀಗ ಪುಣ್ಯವನ್ನು ಜಮಾ ಮಾಡಿಕೊಳ್ಳುತ್ತೀರಿ. ಯೋಗಬಲದಿಂದ ಪಾಪಗಳನ್ನು ಭಸ್ಮ ಮಾಡಿಕೊಳ್ಳುತ್ತೀರಿ, ಈ ನೆನಪಿನ ಯಾತ್ರೆಯಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ. ನೀವು ವಿಶ್ವದ ಮಾಲೀಕರಾಗಿದ್ದಿರಲ್ಲವೆ. ಅವರು ಎಲ್ಲಿಗೆ ಹೋದರು, ಇದನ್ನು ತಂದೆಯೇ ತಿಳಿಸುತ್ತಾರೆ. ನೀವು 84 ಜನ್ಮಗಳನ್ನು ತೆಗೆದುಕೊಂಡಿರಿ, ಸೂರ್ಯವಂಶಿ-ಚಂದ್ರವಂಶಿಯರಾದಿರಿ, ಭಕ್ತಿಯ ಫಲವನ್ನು ಕೊಡಲು ಭಗವಂತನು ಬರುತ್ತಾರೆಂದು ಹೇಳುತ್ತಾರೆ. ಯಾವುದೇ ದೇಹಧಾರಿಯನ್ನು ಭಗವಂತನೆಂದು ಹೇಳಲಾಗುವುದಿಲ್ಲ. ಅವರು ನಿರಾಕಾರ ಶಿವನಾಗಿದ್ದಾರೆ, ಶಿವರಾತ್ರಿಯನ್ನು ಆಚರಿಸುತ್ತಾರೆಂದರೆ ಅವರು ಅವಶ್ಯವಾಗಿ ಬರುತ್ತಾರಲ್ಲವೆ ಆದರೆ ತಂದೆಯು ಹೇಳುತ್ತಾರೆ - ನಾನು ನಿಮ್ಮ ಹಾಗೆ ಜನ್ಮ ತೆಗೆದುಕೊಳ್ಳುವುದಿಲ್ಲ. ನಾನು ಶರೀರವನ್ನು ಲೋನ್ ಆಗಿ ತೆಗೆದುಕೊಳ್ಳುತ್ತೇನೆ. ನನಗೆ ನನ್ನದೇ ಆದ ಶರೀರವಿಲ್ಲ. ಒಂದುವೇಳೆ ಇದ್ದಿದ್ದರೆ ಅದಕ್ಕೆ ಹೆಸರಿರುತ್ತಿತ್ತು. ಬ್ರಹ್ಮನೆಂಬುದು ಇವರ ತಮ್ಮ ಹೆಸರಾಗಿದೆ. ಇವರು ಸನ್ಯಾಸ ಮಾಡಿದ ಕಾರಣ ಇವರಿಗೆ ಬ್ರಹ್ಮನೆಂದು ಹೆಸರಿಟ್ಟಿದ್ದೇನೆ, ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ, ಇಲ್ಲದಿದ್ದರೆ ಬ್ರಹ್ಮನೆಲ್ಲಿಂದ ಬರುವರು. ಬ್ರಹ್ಮನು ಶಿವನ ಮಗನಾಗಿದ್ದಾರೆ. ಶಿವ ತಂದೆಯು ತನ್ನ ಮಗು ಬ್ರಹ್ಮನಲ್ಲಿ ಪ್ರವೇಶ ಮಾಡಿ ನಿಮಗೆ ಜ್ಞಾನ ಕೊಡುತ್ತಾರೆ. ಬ್ರಹ್ಮಾ, ವಿಷ್ಣು, ಶಂಕರರೂ ಸಹ ಇವರ ಮಕ್ಕಳೇ ಆಗಿದ್ದಾರೆ. ನಿರಾಕಾರ ತಂದೆಗೆ ಎಲ್ಲರೂ ನಿರಾಕಾರಿ ಮಕ್ಕಳಾಗಿದ್ದಾರೆ. ಆತ್ಮರು ಇಲ್ಲಿ ಬಂದಮೇಲೆ ಶರೀರವನ್ನು ಧಾರಣೆ ಮಾಡಿ ಪಾತ್ರವನ್ನಭಿನಯಿಸುತ್ತಾರೆ. ತಂದೆಯು ಹೇಳುತ್ತಾರೆ- ನಾನು ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ಬರುತ್ತೇನೆ. ಈ ಶರೀರವನ್ನು ಲೋನ್ ಆಗಿ ತೆಗೆದುಕೊಳ್ಳುತ್ತೇನೆ. ಶಿವ ಭಗವಾನುವಾಚ ಇದೆಯಲ್ಲವೆ. ಕೃಷ್ಣನಿಗೆ ಭಗವಂತನೆಂದು ಹೇಳುವುದಿಲ್ಲ. ಭಗವಂತನು ಒಬ್ಬರೇ ಆಗಿದ್ದಾರೆ, ಕೃಷ್ಣನ ಮಹಿಮೆಯೇ ಬೇರೆಯಾಗಿದೆ. ಮೊದಲ ನಂಬರಿನ ದೇವತೆಗಳು ರಾಧಾಕೃಷ್ಣರಾಗಿದ್ದಾರೆ. ಇವರೇ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣರಾಗುವರು. ಆದರೆ ಯಾರಿಗೂ ಗೊತ್ತಿಲ್ಲ. ರಾಧೆ-ಕೃಷ್ಣರ ಕುರಿತು ಯಾರಿಗೂ ತಿಳಿದಿಲ್ಲ. ನಂತರ ಅವರು ಎಲ್ಲಿ ಹೋಗುತ್ತಾರೆ. ರಾಧೆ-ಕೃಷ್ಣರೇ ಸ್ವಯಂವರದ ನಂತರ ಲಕ್ಷ್ಮಿ-ನಾರಾಯಣರಾಗುತ್ತಾರೆ. ಆದರೆ ಇಬ್ಬರೂ ಬೇರೆ-ಬೇರೆ ಮಹಾರಾಜರ ಮಕ್ಕಳಾಗಿದ್ದಾರೆ. ಅಲ್ಲಿ ಅಪವಿತ್ರತೆಯ ಹೆಸರಿಲ್ಲ ಏಕೆಂದರೆ ಪಂಚ ವಿಕಾರರೂಪಿ ರಾವಣನೇ ಇರುವುದಿಲ್ಲ. ಅಲ್ಲಿರುವುದೇ ರಾಮ ರಾಜ್ಯ, ಈಗ ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ತುಂಡಾಗುತ್ತವೆ. ನೀವು ಸತೋಪ್ರಧಾನರಾಗುತ್ತೀರಿ, ಈಗ ತಮೋಪ್ರಧಾನರಾಗಿದ್ದೀರಿ. ನಷ್ಟವುಂಟಾಗಿದೆ, ಈಗ ಮತ್ತೆ ಜಮಾ ಮಾಡಿಕೊಳ್ಳಬೇಕಾಗಿದೆ. ಭಗವಂತನಿಗೆ ವ್ಯಾಪಾರಿ ಎಂದು ಹೇಳುತ್ತಾರೆ, ಅವರೊಂದಿಗೆ ಕೆಲವರೇ ವಿರಳವಾಗಿ ವ್ಯಾಪಾರವನ್ನು ಮಾಡುತ್ತಾರೆ. ಅವರಿಗೆ ಜಾದೂಗಾರನೆಂದೂ ಹೇಳುತ್ತಾರೆ, ಚಮತ್ಕಾರ ಮಾಡುತ್ತಾರೆ, ಇಡೀ ಪ್ರಪಂಚದ ಸದ್ಗತಿ ಮಾಡುತ್ತಾರೆ. ಎಲ್ಲರಿಗೂ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ. ಜಾದೂವಿನ ಆಟವಾಗಿದೆಯಲ್ಲವೆ. ಮನುಷ್ಯರು ಮನುಷ್ಯರಿಗೆ ಕೊಡಲು ಸಾಧ್ಯವಿಲ್ಲ. ನೀವು 63 ಜನ್ಮಗಳು ಭಕ್ತಿ ಮಾಡುತ್ತಾ ಬಂದಿದ್ದೀರಿ. ಈ ಭಕ್ತಿಯಿಂದ ಯಾರಾದರೂ ಸದ್ಗತಿಯನ್ನು ಪಡೆದಿದ್ದಾರೆಯೇ? ಸದ್ಗತಿಯನ್ನು ಕೊಡಲು ಯಾರಾದರೂ ಇದ್ದಾರೆಯೇ. ಸಾಧ್ಯವೇ ಇಲ್ಲ. ಒಬ್ಬರೂ ವಾಪಸ್ಸು ಹೋಗಲು ಸಾಧ್ಯವಿಲ್ಲ ಬೇಹದ್ದಿನ ತಂದೆಯೇ ಬಂದು ಎಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ಕಲಿಯುಗದಲ್ಲಿ ಅನೇಕ ರಾಜರಿದ್ದಾರೆ. ಅಲ್ಲಿ ನೀವು ಕೆಲವರೇ ರಾಜ್ಯ ಮಾಡುತ್ತೀರಿ, ಉಳಿದೆಲ್ಲಾ ಆತ್ಮಗಳು ಮುಕ್ತಿಯಲ್ಲಿ ಹೊರಟು ಹೋಗುತ್ತಾರೆ. ನೀವು ಮುಕ್ತಿಧಾಮದ ಮೂಲಕ ಜೀವನ್ಮುಕ್ತಿಯಲ್ಲಿ ಹೋಗುತ್ತೀರಿ. ಈ ಚಕ್ರವು ಸುತ್ತುತ್ತಾ ಇರುತ್ತದೆ. ಈಗ ನೀವಾತ್ಮರಿಗೆ ಈ ಸೃಷ್ಟಿಚಕ್ರದ, ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ದರ್ಶನವಾಗಿದೆ. ನೀವೇ ಈ ಜ್ಞಾನದಿಂದ ನರನಿಂದ ನಾರಾಯಣ ಆಗುತ್ತೀರಿ. ದೇವತೆಗಳ ರಾಜ್ಯವು ಸ್ಥಾಪನೆಯಾಗಿ ಬಿಟ್ಟಿತೆಂದರೆ ಮತ್ತೆ ನಿಮಗೆ ಈ ಜ್ಞಾನದ ಅವಶ್ಯಕತೆಯೇ ಇಲ್ಲ. ಭಕ್ತರಿಗೆ ಭಗವಂತನು ಅರ್ಧಕಲ್ಪ ಸುಖದ ಫಲವನ್ನು ಕೊಟ್ಟರೆ ನಂತರ ರಾವಣ ರಾಜ್ಯದಲ್ಲಿ ದುಃಖವು ಆರಂಭವಾಗುತ್ತದೆ. ನಿಧಾನ-ನಿಧಾನವಾಗಿ ಏಣಿಯನ್ನು ಇಳಿಯುತ್ತೀರಿ. ನೀವು ಸತ್ಯಯುಗದಲ್ಲಿದ್ದಾಗಲೂ ಒಂದು ದಿನವು ಕಳೆಯಿತೆಂದರೆ ಏಣಿಯನ್ನು ಇಳಿಯುತ್ತಲೇ ಹೋಗುತ್ತೀರಿ. ನೀವು 16 ಕಲಾಸಂಪೂರ್ಣರಾಗುತ್ತೀರಿ ನಂತರ ಏಣಿಯನ್ನು ಇಳಿಯುತ್ತಲೇ ಇರುತ್ತೀರಿ. ಕ್ಷಣ-ಪ್ರತಿಕ್ಷಣ ಟಿಕ್-ಟಿಕ್ ಆಗುತ್ತಲೇ ಇರುತ್ತದೆ, ಇಳಿಯುತ್ತಲೇ ಹೋಗುತ್ತದೆ. ಸಮಯವು ಕಳೆಯುತ್ತಾ-ಕಳೆಯುತ್ತಾ ಇಲ್ಲಿಗೆ ಬಂದು ತಲುಪಿದ್ದೀರಿ. ಅಲ್ಲಿಯೂ ಸಹ ಇದೇ ರೀತಿ ಕ್ಷಣಗಳು ಕಳೆಯುತ್ತಾ ಹೋಗುತ್ತದೆ. ಒಮ್ಮೆಲೆ ನಾವು ಏಣಿಯನ್ನು ಏರುತ್ತೇವೆ ನಂತರ ಏಣಿಯನ್ನು ಹೇನಿನಂತೆ ಇಳಿಯುತ್ತೇವೆ.

ತಂದೆಯು ತಿಳಿಸುತ್ತಾರೆ - ನಾನು ಸರ್ವರ ಸದ್ಗತಿ ಮಾಡುವವನಾಗಿದ್ದೇನೆ, ಮನುಷ್ಯರು ಮನುಷ್ಯರ ಸದ್ಗತಿ ಮಾಡಲು ಸಾಧ್ಯವಿಲ್ಲ, ಏಕೆಂದರೆ ಅವರು ವಿಕಾರದಿಂದ ಜನ್ಮ ತೆಗೆದುಕೊಳ್ಳುತ್ತಾರೆ, ಪತಿತರಾಗಿದ್ದಾರೆ. ವಾಸ್ತವದಲ್ಲಿ ಕೃಷ್ಣನಿಗೇ ಸತ್ಯ ಮಹಾತ್ಮನೆಂದು ಹೇಳಬಹುದು. ಇಲ್ಲಿಯ ಮಹಾತ್ಮರೆಲ್ಲರೂ ವಿಕಾರದಿಂದ ಜನ್ಮ ತೆಗೆದುಕೊಂಡು ನಂತರ ಸನ್ಯಾಸ ಮಾಡುತ್ತಾರೆ. ಅವರಂತೂ (ಸತ್ಯಯುಗದವರು) ದೇವತೆಗಳಾಗಿದ್ದಾರೆ. ದೇವತೆಗಳು ಸದಾ ಪವಿತ್ರರಾಗಿದ್ದಾರೆ, ಅವರಲ್ಲಿ ಯಾವುದೇ ವಿಕಾರವಿರುವುದಿಲ್ಲ, ಅದಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ, ಇದಕ್ಕೆ ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ, ಪವಿತ್ರತೆಯಿಲ್ಲ ಮತ್ತು ನಡುವಳಿಕೆಯು ಎಷ್ಟು ಹಾಳಾಗಿದೆ? ದೇವತೆಗಳ ನಡುವಳಿಕೆಯಂತೂ ಬಹಳ ಚೆನ್ನಾಗಿರುತ್ತದೆ. ಎಲ್ಲರೂ ಅವರಿಗೆ ನಮಸ್ಕಾರ ಮಾಡುತ್ತಾರೆ. ಅವರ ನಡುವಳಿಕೆಯು ಚೆನ್ನಾಗಿರುತ್ತದೆ. ಆದ್ದರಿಂದಲೇ ಅಪವಿತ್ರ ಮನುಷ್ಯರು ಆ ಪವಿತ್ರ ದೇವತೆಗಳ ಮುಂದೆ ತಲೆ ಬಾಗುತ್ತಾರೆ. ಈಗಂತೂ ಯುದ್ಧ, ಜಗಳ ಏನೆಲ್ಲಾ ಆಗುತ್ತಿದೆ. ಬಹಳ ಹೊಡೆದಾಟವಿದೆ, ಈಗಂತೂ ಇರುವುದಕ್ಕೂ ಸ್ಥಳವಿಲ್ಲ, ಜನಸಂಖ್ಯೆಯು ಕಡಿಮೆಯಾಗಬೇಕೆಂದು ಬಯಸುತ್ತಾರೆ. ಆದರೆ ಇದು ತಂದೆಯದೇ ಕರ್ತವ್ಯವಾಗಿದೆ. ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ. ಇಷ್ಟೆಲ್ಲಾ ಶರೀರಗಳು ಭಸ್ಮವಾಗಿ ಬಿಡುತ್ತದೆ. ಉಳಿದೆಲ್ಲಾ ಆತ್ಮಗಳು ತಮ್ಮ ಮಧುರ ಮನೆಗೆ ಹೊರಟು ಹೋಗುತ್ತಾರೆ. ಶಿಕ್ಷೆಯನ್ನಂತೂ ನಂಬರ್ವಾರ್ ಅವಶ್ಯವಾಗಿ ಅನುಭವಿಸುತ್ತಾರೆ. ಯಾರು ಪೂರ್ಣ ಪುರುಷಾರ್ಥ ಮಾಡಿ ವಿಜಯ ಮಾಲೆಯ ಮಣಿಯಾಗುತ್ತಾರೆಯೋ ಅವರು ಶಿಕ್ಷೆಗಳಿಂದ ಮುಕ್ತರಾಗಿ ಬಿಡುತ್ತಾರೆ. ಮಾಲೆಯು ಒಬ್ಬರದೇ ಆಗುವುದಿಲ್ಲ. ಯಾರು ಮಣಿಗಳನ್ನು ಆ ರೀತಿ ಮಾಡಿದರೋ ಅವರು ಮಾಲೆಯ ಹೂವಾಗಿದ್ದಾರೆ ನಂತರ ಜೋಡಿ ಮಣಿಗಳು, ಪ್ರವೃತ್ತಿ ಮಾರ್ಗವಾಗಿದೆಯಲ್ಲವೆ ಅಂದಾಗ ಜೋಡಿ ಮಾಲೆಯಾಗಿದೆ. ಒಂಟಿ ಮಣಿಯ ಮಾಲೆಯಾಗುವುದಿಲ್ಲ. ಸನ್ಯಾಸಿಗಳ ಮಾಲೆಯಾಗುವುದಿಲ್ಲ ಏಕೆಂದರೆ ಅವರು ನಿವೃತ್ತಿ ಮಾರ್ಗದವರಾಗಿದ್ದಾರೆ, ಅವರು ಪ್ರವೃತ್ತಿ ಮಾರ್ಗದವರಿಗೆ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಪವಿತ್ರರಾಗಲು ಅವರದು ಹದ್ದಿನ ಸನ್ಯಾಸವಾಗಿದೆ, ಹಠಯೋಗವಾಗಿದೆ. ಇದು ರಾಜಯೋಗವಾಗಿದೆ, ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಡಲು ತಂದೆ ನಿಮಗೆ ಈ ರಾಜಯೋಗವನ್ನು ಕಲಿಸುತ್ತಾರೆ ತಂದೆ ಪ್ರತಿ 5000 ವರ್ಷದ ನಂತರ ಬರುತ್ತಾರೆ. ಅರ್ಧಕಲ್ಪ ನೀವು ಸುಖಧಾಮದಲ್ಲಿ ರಾಜ್ಯಭಾರ ಮಾಡುತ್ತೀರಿ ನಂತರ ರಾವಣ ರಾಜ್ಯದಲ್ಲಿ ನಿಧಾನ-ನಿಧಾನವಾಗಿ ನೀವು ದುಃಖಿಯಾಗಿ ಬಿಡುತ್ತೀರಿ. ಇದು ಸುಖ-ದುಃಖದ ಆಟವಾಗಿದೆ. ನೀವು ಪಾಂಡವರಿಗೆ ವಿಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ಈಗ ನೀವು ಮಾರ್ಗದರ್ಶಕರಾಗಿದ್ದೀರಿ, ಮನೆಗೆ ಹೋಗುವ ಯಾತ್ರೆಯನ್ನು ಮಾಡಿಸುತ್ತೀರಿ. ಆ ಯಾತ್ರೆಗಳನ್ನಂತೂ ಜನ್ಮ-ಜನ್ಮಾಂತರಗಳಿಂದ ಮಾಡುತ್ತಾ ಬಂದಿರಿ. ಈಗ ನಿಮ್ಮದು ಮನೆಗೆ ಹೋಗುವ ಯಾತ್ರೆಯಾಗಿದೆ. ತಂದೆಯು ಬಂದು ಎಲ್ಲರಿಗೆ ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸುತ್ತಾರೆ. ನೀವು ಜೀವನ್ಮುಕ್ತಿಯಲ್ಲಿ, ಉಳಿದವರೆಲ್ಲರೂ ಮುಕ್ತಿಯಲ್ಲಿ ಹೊರಟು ಹೋಗುತ್ತಾರೆ. ಹಾಹಾಕಾರದ ನಂತರ ಜಯಜಯಕಾರವಾಗುತ್ತದೆ, ಈಗ ಕಲಿಯುಗದ ಅಂತಿಮವಾಗಿದೆ ಬಹಳಷ್ಟು ಆಪತ್ತುಗಳು ಬರಲಿವೆ. ನಂತರ ಆ ಸಮಯದಲ್ಲಿ ನೀವು ನೆನಪಿನ ಯಾತ್ರೆಯಲ್ಲಿರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಬಹಳಷ್ಟು ಏರುಪೇರುಗಳಾಗುತ್ತವೆ, ಆದ್ದರಿಂದ ತಂದೆಯು ತಿಳಿಸುತ್ತಾರೆ - ಈಗ ನೆನಪಿನ ಯಾತ್ರೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿ. ಅದರಿಂದ ಪಾಪಗಳು ಭಸ್ಮವಾಗಲಿ ಮತ್ತು ಜಮಾ ಮಾಡಿಕೊಳ್ಳಿ. ಸತೋಪ್ರಧಾನರಾದರೂ ಆಗಿ, ತಂದೆಯು ತಿಳಿಸುತ್ತಾರೆ- ನಾನು ಪ್ರತೀ ಕಲ್ಪದ ಪುರುಷೋತ್ತಮ ಸಂಗಮಯುಗದಲ್ಲಿ ಬರುತ್ತೇನೆ. ಇದಂತೂ ಅತಿ ಚಿಕ್ಕದಾದ ಬ್ರಾಹ್ಮಣರ ಯುಗವಾಗಿದೆ. ಬ್ರಾಹ್ಮಣರ ಗುರುತಿಗೆ ಶಿಖೆಯಿರುತ್ತದೆ. ಬ್ರಾಹ್ಮಣ, ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರ - ಈ ಚಕ್ರವು ಸುತ್ತುತ್ತಲೇ ಇರುತ್ತದೆ. ಬ್ರಾಹ್ಮಣರದು ಬಹಳ ಚಿಕ್ಕ ಕುಲವಿರುತ್ತದೆ, ಈ ಚಿಕ್ಕದಾದ ಯುಗದಲ್ಲಿ ತಂದೆಯು ಬಂದು ನಿಮಗೆ ಓದಿಸುತ್ತಾರೆ. ನೀವು ಮಕ್ಕಳೂ ಆಗಿದ್ದೀರಿ, ವಿದ್ಯಾರ್ಥಿಗಳೂ ಆಗಿದ್ದೀರಿ ಅಲ್ಲದೆ ಅನುಯಾಯಿಗಳೂ ಆಗಿದ್ದೀರಿ. ಒಬ್ಬರವರೇ ಆಗಿದ್ದೀರಿ. ತಂದೆ ಮತ್ತು ಶಿಕ್ಷಣ ನೀಡುವಂತಹ ಶಿಕ್ಷಕ, ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುವವರು, ಮತ್ತೆ ಜೊತೆಯಲ್ಲಿ ಕರೆದುಕೊಂಡು ಹೋಗುವಂತಹ ಮನುಷ್ಯರು ಯಾರೂ ಇರುವುದಿಲ್ಲ. ಈ ಮಾತುಗಳನ್ನು ಈಗ ನೀವು ಅರಿತುಕೊಳ್ಳುತ್ತೀರಿ. ಸತ್ಯಯುಗದಲ್ಲಿ ನಿಮ್ಮದೂ ಸಹ ಮೊಟ್ಟ ಮೊದಲು ಚಿಕ್ಕದಾದ ವೃಕ್ಷವಿರುತ್ತದೆ, ಉಳಿದವರೆಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ತಂದೆಗೆ ಸರ್ವರ ಸದ್ಗತಿದಾತನೆಂದು ಹೇಳಲಾಗುತ್ತದೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ, ಇನ್ನೊಂದು ಕಡೆ ಪರಮಾತ್ಮನು ನಾಯಿ-ಬೆಕ್ಕು, ಕಲ್ಲು-ಮಣ್ಣು ಎಲ್ಲದರಲ್ಲಿಯೂ ಇದ್ದಾರೆಂದು ಹೇಳಿ ಬಿಡುತ್ತಾರೆ. ಬೇಹದ್ದಿನ ತಂದೆಗೆ ಅಪಕಾರ ಮಾಡುತ್ತಾರೆ. ಯಾವ ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರಿಗೆ ನಿಂದನೆ ಮಾಡುತ್ತಾರೆ. ಇದನ್ನೇ ರಾವಣನ ಸಂಗದೋಷವೆಂದು ಹೇಳಲಾಗುತ್ತದೆ. ಸತ್ಸಂಗವು ಮೇಲೆಳಿಸುವುದು, ಕೆಟ್ಟ ಸಂಗವು ಮುಳುಗಿಸುವುದು. ರಾವಣ ರಾಜ್ಯವು ಆರಂಭವಾಗುತ್ತದೆಯೆಂದರೆ ನೀವು ಕೆಳಗಿಳಿಯತೊಡಗುತ್ತೀರಿ. ತಂದೆಯು ಬಂದು ನಿಮ್ಮದನ್ನು ಏರುವ ಕಲೆಯನ್ನಾಗಿ ಮಾಡುತ್ತಾರೆ. ತಂದೆಯು ಬಂದು ನಿಮ್ಮನ್ನು ದೇವತೆಗಳನ್ನಾಗಿ ಮಾಡುತ್ತಾರೆಂದರೆ ಸರ್ವರ ಉದ್ಧಾರವಾಗಿ ಬಿಡುತ್ತದೆ. ಈಗಂತೂ ಎಲ್ಲರೂ ಇಲ್ಲಿಯೇ ಇದ್ದಾರೆ. ಇನ್ನೂ ಪರಮಧಾಮದಲ್ಲಿ ಯಾರು ಉಳಿದಿದ್ದಾರೆಯೋ ಅವರೂ ಸಹ ಬರುತ್ತಾ ಇರುತ್ತಾರೆ. ಎಲ್ಲಿಯವರೆಗೆ ನಿರಾಕಾರಿ ಪ್ರಪಂಚದಿಂದ ಎಲ್ಲಾ ಆತ್ಮಗಳು ಬರುತ್ತಾ ಹೋಗುವರೋ ಅಲ್ಲಿಯವರೆಗೂ ನೀವು ಪರೀಕ್ಷೆಯಲ್ಲಿ ನಂಬರ್ವಾರ್ ತೇರ್ಗಡೆಯಾಗುತ್ತಾ ಹೋಗುತ್ತೀರಿ, ಇದಕ್ಕೆ ಆತ್ಮಿಕ ವಿಶ್ವ ವಿದ್ಯಾಲಯವೆಂದು ಹೇಳಲಾಗುತ್ತದೆ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಓದಿಸಲು ಬರುತ್ತಾರೆ. ರಾವಣ ರಾಜ್ಯವು ಬಂದಿದ್ದರಿಂದ ಮತ್ತೆ ಶರೀರವನ್ನು ಬಿಟ್ಟು ಅಪವಿತ್ರ ರಾಜರಾದರು ಮತ್ತು ಪವಿತ್ರ ದೇವತೆಗಳ ಮುಂದೆ ತಲೆ ಬಾಗತೊಡಗಿದರು. ಆತ್ಮವೇ ಪವಿತ್ರ, ಆತ್ಮವೇ ಪತಿತವಾಗುತ್ತದೆ. ಆತ್ಮವು ಪತಿತವಾದಾಗ ಪತಿತ ಶರೀರವೇ ಸಿಗುತ್ತದೆ. ಅಪ್ಪಟ ಚಿನ್ನದಲ್ಲಿ ಕಲಬೆರಕೆಯಾದಾಗ ಆಭರಣಗಳೂ ಅಂತಹದ್ದೇ ಆಗುತ್ತದೆ. ಈಗ ಆತ್ಮದಿಂದ ತುಕ್ಕು ಹೇಗೆ ಬಿಟ್ಟು ಹೋಗುವುದು? ಯೋಗಾಗ್ನಿಯು ಬೇಕು ಅದರಿಂದ ನಿಮ್ಮ ವಿಕರ್ಮಗಳು ವಿನಾಶವಾಗಿ ಬಿಡುತ್ತವೆ. ಆತ್ಮದಲ್ಲಿ ಬೆಳ್ಳಿ, ತಾಮ್ರ, ಕಬ್ಬಿಣ ಸೇರ್ಪಡೆಯಾಗಿ ಬಿಟ್ಟಿದೆ, ಇದೇ ತುಕ್ಕಾಗಿದೆ. ಆತ್ಮವು ಸತ್ಯ ಚಿನ್ನವಾಗಿದೆ, ಈಗ ನಕಲಿಯಾಗಿ ಬಿಟ್ಟಿದೆ. ಆ ತುಕ್ಕು ಹೇಗೆ ಬಿಡುವುದು? ಇದು ಯೋಗಾಗ್ನಿಯಾಗಿದೆ, ಜ್ಞಾನಚಿತೆಯ ಮೇಲೆ ಕುಳಿತಿದ್ದೀರಿ. ಮೊದಲು ಕಾಮಚಿತೆಯ ಮೇಲೆ ಕುಳಿತಿದ್ದಿರಿ, ತಂದೆಯು ಜ್ಞಾನಚಿತೆಯ ಮೇಲೆ ಕುಳ್ಳರಿಸುತ್ತಾರೆ. ಜ್ಞಾನ ಸಾಗರ ತಂದೆಯ ವಿನಃ ಮತ್ತ್ಯಾರೂ ಜ್ಞಾನ ಚಿತೆಯ ಮೇಲೆ ಕುಳ್ಳಿರಿಸಲು ಸಾಧ್ಯವಿಲ್ಲ. ಮನುಷ್ಯರು ಭಕ್ತಿಮಾರ್ಗದಲ್ಲಿ ಎಷ್ಟೊಂದು ಪೂಜೆಯನ್ನು ಮಾಡುತ್ತಿರುತ್ತಾರೆ ಆದರೆ ಯಾರನ್ನೂ ತಿಳಿದುಕೊಂಡಿಲ್ಲ. ಈಗ ನೀವು ಎಲ್ಲರನ್ನೂ ಅರಿತುಕೊಂಡಿದ್ದೀರಿ. ನೀವೆಲ್ಲರೂ ದೇವತೆಗಳಾಗಿ ಬಿಟ್ಟರೆ ನಂತರ ಪೂಜೆಯ ಮಾತೇ ಸಮಾಪ್ತಿಯಾಗಿ ಬಿಡುತ್ತದೆ. ಯಾವಾಗ ರಾವಣ ರಾಜ್ಯವು ಆರಂಭವಾಗಿ ಬಿಡುತ್ತದೆಯೋ ಆಗ ಭಕ್ತಿಯೂ ಆರಂಭವಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಶಿಕ್ಷೆಗಳಿಂದ ಮುಕ್ತರಾಗಲು ವಿಜಯ ಮಾಲೆಯ ಮಣಿಯಾಗುವ ಪುರುಷಾರ್ಥ ಮಾಡಬೇಕು. ಆತ್ಮಿಕ ಮಾರ್ಗದರ್ಶಕರಾಗಿ ಎಲ್ಲರಿಗೆ ಶಾಂತಿಧಾಮ ಮನೆಯ ಯಾತ್ರೆಯನ್ನು ಮಾಡಿಸಬೇಕು.

2. ನೆನಪಿನ ಯಾತ್ರೆಯನ್ನು ಹೆಚ್ಚಿಸಿಕೊಳ್ಳುತ್ತಾ-ಹೆಚ್ಚಿಸಿಕೊಳ್ಳುತ್ತಾ ಪಾಪಗಳಿಂದ ಮುಕ್ತರಾಗಿ ಬಿಡಬೇಕಾಗಿದೆ. ಯೋಗಾಗ್ನಿಯಿಂದ ಆತ್ಮವನ್ನು ಸತ್ಯ ಚಿನ್ನವನ್ನಾಗಿ ಮಾಡಿಕೊಳ್ಳಬೇಕಾಗಿದೆ, ಸತೋಪ್ರಧಾನರಾಗಬೇಕಾಗಿದೆ.

ವರದಾನ:
ಪ್ರತಿ ಕರ್ಮದಲ್ಲಿ ತಂದೆಯ ಜೊತೆ ಭಿನ್ನ-ಭಿನ್ನ ಸಂಬಂಧಗಳಿಂದ ಸ್ಮೃತಿ ಸ್ವರೂಪರಾಗುವಂತಹ ಶ್ರೇಷ್ಠ ಭಾಗ್ಯವಾನ್ ಭವ.

ಇಡೀ ದಿನದಲ್ಲಿ ಪ್ರತಿ ಕರ್ಮದಲ್ಲಿ ಕೆಲವೊಮ್ಮೆ ಭಗವಂತನ ಸಖ ಅಥವಾ ಸಖಿಯ ರೂಪವನ್ನು, ಕೆಲವೊಮ್ಮೆ ಜೀವನ ಸಂಗಾತಿ ರೂಪವನ್ನು, ಕೆಲವೊಮ್ಮೆ ಪ್ರೀತಿಯ ಮಗನ ರೂಪವನ್ನು, ಯಾವಾಗಲಾದರೂ ಬೇಸರವಾದಾಗ ಸರ್ವ ಶಕ್ತಿವಾನ್ ಸ್ವರೂಪದಿಂದ ಮಾಸ್ಟರ್ ಸರ್ವ ಶಕ್ತಿವಾನ್ ನ ಸ್ಮೃತಿ ಸ್ವರೂಪವನ್ನು ಇಮರ್ಜ್ ಮಾಡಿಕೊಂಡಾಗ ದಿಲ್ಖುಶ್ ಆಗಿ ಬಿಡುವಿರಿ ಮತ್ತು ತಂದೆಯ ಜೊತೆಯ ಸ್ವತಃ ಅನುಭವ ಮಾಡುವಿರಿ. ನಂತರ ಈ ಬ್ರಾಹ್ಮಣ ಜೀವನ ಸದಾ ಅಮೂಲ್ಯ, ಶ್ರೇಷ್ಠ ಭಾಗ್ಯವಾನ್ ಅನುಭವ ಆಗುತ್ತಿರುವುದು.

ಸ್ಲೋಗನ್:
ಬ್ರಹ್ಮಾ ತಂದೆಯ ಸಮಾನ ಆಗುವುದು ಅರ್ಥಾತ್ ಸಂಪೂರ್ಣತೆಯ ಗುರಿಯನ್ನು ಮುಟ್ಟುವುದು.