15.12.19    Avyakt Bapdada     Kannada Murli     21.03.85     Om Shanti     Madhuban


ಸ್ವದರ್ಶನ ಚಕ್ರದಿಂದ ವಿಜಯ ಚಕ್ರದ ಪ್ರಾಪ್ತಿ


ಇಂದು ಬಾಪ್ದಾದಾರವರು ಆತ್ಮಿಕ ಸೇನಾಪತಿಯ ರೂಪದಲ್ಲಿ ತನ್ನ ಆತ್ಮಿಕ ಸೇನೆಯನ್ನು ನೋಡುತ್ತಿದ್ದಾರೆ. ಈ ಆತ್ಮಿಕ ಸೇನೆಯಲ್ಲಿ ಎಂತೆಂತಹ ಮಹಾವೀರರಿದ್ದಾರೆ, ಎಂತಹ ಶಕ್ತಿಶಾಲಿ ಶಸ್ತ್ರಗಳನ್ನು ಧಾರಣೆ ಮಾಡಿದ್ದಾರೆ. ಹೇಗೆ ಆ ಶಸ್ತ್ರಧಾರಿಗಳು (ಮಿಲಿಟರಿ) ದಿನ ಕಳೆದಂತೆ ಅತಿ ಸೂಕ್ಷ್ಮ ಮತ್ತು ತೀವ್ರ ಗತಿಯ ಶಕ್ತಿ ಸಂಪನ್ನ ಸಾಧನಗಳನ್ನು ತಯಾರು ಮಾಡುತ್ತಾ ಸಾಗುತ್ತಾರೆ, ಹಾಗೆಯೇ ಆತ್ಮಿಕ ಸೇನೆಯು ಅತಿ ಸೂಕ್ಷ್ಮ ಶಕ್ತಿಶಾಲಿ ಶಸ್ತ್ರಧಾರಿಯಾಗಿದ್ದೀರಾ? ಹೇಗೆ ವಿನಾಶಕಾರಿ ಆತ್ಮರು ಒಂದು ಸ್ಥಾನದಲ್ಲಿ ಕುಳಿತು, ಎಷ್ಟೊಂದು ಮೈಲಿಗಳಷ್ಟು ದೂರದಲ್ಲಿ ವಿನಾಶಕಾರಿ ಕಿರಣಗಳ ಮೂಲಕ ವಿನಾಶ ಮಾಡಿಸುವುದಕ್ಕಾಗಿ ಸಾಧನಗಳನ್ನು ಮಾಡಿದ್ದಾರೆ. ಅಲ್ಲಿ ಹೋಗುವ ಅವಶ್ಯಕತೆಯೂ ಇಲ್ಲ. ದೂರ ಕುಳಿತುಕೊಂಡೇ ಗುರಿ ಸಾಧಿಸಬಹುದು. ಹಾಗೆಯೇ ಆತ್ಮಿಕ ಸೇನೆಯವರು ಸ್ಥಾಪನಾಕಾರಿ ಸೇನೆಯಾಗಿದ್ದಾರೆ. ಅವರು ವಿನಾಶಕಾರಿಗಳು, ತಾವು ಸ್ಥಾಪನಾಕಾರಿಯಾಗಿದ್ದೀರಿ. ಅವರು ವಿನಾಶದ ಯೋಜನೆಯನ್ನು ಯೋಚಿಸುತ್ತಾರೆ, ತಾವು ಹೊಸ ರಚನೆಯ, ವಿಶ್ವ ಪರಿವರ್ತನೆಯ ಯೋಜನೆಯನ್ನು ಯೋಚಿಸುತ್ತೀರಿ. ಸ್ಥಾಪನಾಕಾರಿ ಸೇನೆಯವರು ಇಂತಹ ತೀವ್ರಗತಿಯ ಆತ್ಮಿಕ ಸಾಧನವನ್ನು ಧಾರಣೆ ಮಾಡಿಕೊಂಡಿದ್ದೀರಾ? ಒಂದು ಸ್ಥಾನದಲ್ಲಿ ಕುಳಿತುಕೊಂಡು ಎಲ್ಲಿ ಬೇಕೋ ಅಲ್ಲಿ ಆತ್ಮಿಕ ನೆನಪಿನ ಕಿರಣಗಳ ಮೂಲಕ ಯಾವುದೇ ಆತ್ಮನನ್ನೂ ಟಚ್ ಮಾಡಬಹುದು. ಪರಿವರ್ತನೆಯ ಶಕ್ತಿಯು ಇಷ್ಟೂ ತೀವ್ರ ಗತಿಯ ಸೇವೆ ಮಾಡುವುದಕ್ಕಾಗಿ ತಯಾರಿದ್ದಾರೆಯೇ? ಜ್ಞಾನ ಅರ್ಥಾತ್ ಶಕ್ತಿಯು ಎಲ್ಲರಿಗೂ ಪ್ರಾಪ್ತಿಯಾಗುತ್ತಿದೆಯಲ್ಲವೆ. ಜ್ಞಾನದ ಶಕ್ತಿಯ ಮೂಲಕ ಇಂತಹ ಶಕ್ತಿಶಾಲಿ ಶಸ್ತ್ರಧಾರಿಯಾಗಿದ್ದೀರಾ? ಮಹಾವೀರರಾಗಿದ್ದೀರಾ ಅಥವಾ ವೀರರಾಗಿದ್ದೀರಾ? ವಿಜಯದ ಚಕ್ರವನ್ನು ಪ್ರಾಪ್ತಿ ಮಾಡಿಕೊಂಡಿದ್ದೀರಾ? ಶಾರೀರಿಕ ಸೇನೆಯವರಿಗೆ ಅನೇಕ ಪ್ರಕಾರದ ಚಕ್ರವು ಬಹುಮಾನದಲ್ಲಿ ಸಿಗುತ್ತದೆ. ತಾವೆಲ್ಲರಿಗೂ ಸಫಲತೆಯ ಬಹುಮಾನವಾಗಿ ವಿಜಯದ ಚಕ್ರವು ಸಿಕ್ಕಿದೆಯೇ? ವಿಜಯವು ಪ್ರಾಪ್ತಿಯಾಗಿಯೇ ಇದೆ! ಹೀಗೆ ನಿಶ್ಚಯ ಬುದ್ಧಿ ಮಹಾವೀರ ಆತ್ಮರು ವಿಜಯ ಚಕ್ರದ ಅಧಿಕಾರಿಯಾಗಿದ್ದಾರೆ.

ಬಾಪ್ದಾದಾರವರು ನೋಡುತ್ತಿದ್ದರು - ಯಾರಿಗೆ ವಿಜಯ ಚಕ್ರವು ಪ್ರಾಪ್ತಿಯಾಗಿದೆ! ಸ್ವದರ್ಶನ ಚಕ್ರದಿಂದ ವಿಜಯ ಚಕ್ರವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಅಂದಮೇಲೆ ಎಲ್ಲರೂ ಶಸ್ತ್ರಧಾರಿಯಾಗಿದ್ದೀರಲ್ಲವೆ! ಈ ಆತ್ಮಿಕ ಶಸ್ತ್ರಗಳ ನೆನಪಾರ್ಥವು ಸ್ಥೂಲ ರೂಪದಲ್ಲಿ ತಮ್ಮ ನೆನಪಾರ್ಥ ಚಿತ್ರಗಳಲ್ಲಿ ತೋರಿಸಿದ್ದಾರೆ. ದೇವಿಯರ ಚಿತ್ರಗಳಲ್ಲಿ ಶಸ್ತ್ರಧಾರಿಯನ್ನಾಗಿ ತೋರಿಸಿದ್ದಾರಲ್ಲವೆ. ಪಾಂಡವರನ್ನೂ ಶಸ್ತ್ರಧಾರಿಯನ್ನಾಗಿ ತೋರಿಸಿದ್ದಾರಲ್ಲವೆ. ಈ ಆತ್ಮಿಕ ಶಸ್ತ್ರ ಅರ್ಥಾತ್ ಆತ್ಮಿಕ ಶಕ್ತಿಗಳನ್ನು ಸ್ಥೂಲ ಶಸ್ತ್ರಗಳ ರೂಪದಲ್ಲಿ ತೋರಿಸಿ ಬಿಟ್ಟಿದ್ದಾರೆ. ವಾಸ್ತವದಲ್ಲಿ ಎಲ್ಲಾ ಮಕ್ಕಳಿಗೆ ಬಾಪ್ದಾದಾರವರ ಮೂಲಕ ಒಂದೇ ಸಮಯದಲ್ಲಿ ಒಂದೇ ರೀತಿ ಜ್ಞಾನದ ಶಕ್ತಿಯು ಪ್ರಾಪ್ತಿಯಾಗಿದೆ. ಬೇರೆ-ಬೇರೆ ಜ್ಞಾನವನ್ನು ಕೊಡುವುದಿಲ್ಲ, ಆದರೂ ನಂಬರ್ವಾರ್ ಏಕೆ ಆಗುತ್ತಾರೆ? ಬಾಪ್ದಾದಾರವರು ಎಂದಾದರೂ ಯಾರಿಗಾದರೂ ಒಬ್ಬರಿಗೇ ಬೇರೆಯಾಗಿ ಓದಿಸಿದ್ದಾರೆಯೇ? ಒಟ್ಟಿಗೆಯೇ ವಿದ್ಯೆಯನ್ನು ಓದಿಸಿದ್ದಾರಲ್ಲವೆ. ಎಲ್ಲರಿಗೂ ಒಂದೇ ವಿದ್ಯೆಯನ್ನು ಓದಿಸಿದ್ದಾರಲ್ಲವೆ, ಅಥವಾ ಕೆಲವು ಗ್ರೂಪ್ಗಳಿಗೆ ಕೆಲವು ವಿದ್ಯೆಯನ್ನು ಓದಿಸುತ್ತಾರೆ, ಕೆಲವರಿಗೆ ಕೆಲವನ್ನು ಓದಿಸಿದ್ದಾರೆಯೇ!

ಇಲ್ಲಿ 6 ತಿಂಗಳಿನ ಈಶ್ವರನ ವಿದ್ಯಾರ್ಥಿಯಾಗಿರಲಿ ಅಥವಾ 50 ವರ್ಷದವರಾಗಿರಲಿ, ಒಂದೇ ಕ್ಲಾಸಿನಲ್ಲಿ ಕುಳಿತುಕೊಳ್ಳುತ್ತಾರೆ. ಬೇರೆ-ಬೇರೆ ಕುಳಿತುಕೊಳ್ಳುತ್ತೀರೇನು? ಬಾಪ್ದಾದಾರವರು ಒಂದೇ ಸಮಯದಲ್ಲಿ ಒಂದು ವಿದ್ಯೆ ಮತ್ತು ಎಲ್ಲರಿಗೂ ಒಟ್ಟಿಗೆ ಓದಿಸುತ್ತಾರೆ. ಒಂದುವೇಳೆ ಯಾರೇ ಹಿಂದೆಯೇ ಬಂದಿರಬಹುದು, ಮುಂಚೆ ವಿದ್ಯೆಯೇನು ಓದಿಸಿದ್ದಾರೆಯೋ ಅದೇ ವಿದ್ಯೆಯನ್ನು ತಾವೆಲ್ಲರೂ, ಈಗಲೂ ಓದಿಸುತ್ತಿರುತ್ತೀರಿ. ರಿವೈಜ್ ಕೋರ್ಸ್ ಏನು ನಡೆಯುತ್ತಿದೆಯೋ, ಅದನ್ನೇ ತಾವೂ ಓದುತ್ತೀರಾ ಅಥವಾ ಹಳಬರಿಗೆ ಕೋರ್ಸ್ ಬೇರೆಯಿದೆ, ತಮಗೆ ಬೇರೆಯಿದೆಯೇ? ಒಂದೇ ಕೋರ್ಸ್ ಇದೆಯಲ್ಲವೆ. 40 ವರ್ಷದವರಿಗಾಗಿ ಬೇರೆ ಮುರುಳಿ ಮತ್ತು 6 ತಿಂಗಳಿನವರಿಗಾಗಿ ಬೇರೆ ಮುರುಳಿಯಂದು ಇಲ್ಲವಲ್ಲವೆ. ಒಂದೇ ಮುರುಳಿ ಇದೆಯಲ್ಲವೆ! ವಿದ್ಯೆ ಒಂದು, ಓದಿಸುವವರೂ ಸಹ ಒಬ್ಬರೆ, ಮತ್ತೇಕೆ ನಂಬರ್ವಾರ್ ಆಗುವುದು? ಅಥವಾ ಎಲ್ಲರೂ ನಂಬರ್ವನ್ ಇದ್ದಾರೆಯೇ? ನಂಬರ್ ಏಕೆ ಆಗುತ್ತದೆ? ಏಕೆಂದರೆ ವಿದ್ಯೆಯನ್ನು ಭಲೆ ಎಲ್ಲರೂ ಓದುತ್ತಾರೆ. ಆದರೆ ವಿದ್ಯೆಯ ಅರ್ಥಾತ್ ಜ್ಞಾನದ ಒಂದೊಂದು ಮಾತನ್ನು ಶಸ್ತ್ರ ಅಥವಾ ಶಕ್ತಿರೂಪದಲ್ಲಿ ಧಾರಣೆ ಮಾಡುವುದು, ಮತ್ತು ಜ್ಞಾನದ ಮಾತುಗಳನ್ನು ಪಾಯಿಂಟ್ ರೂಪದಲ್ಲಿ ಧಾರಣೆ ಮಾಡುವುದರಲ್ಲಿ ಅಂತರವಾಗಿ ಬಿಡುತ್ತದೆ. ಕೆಲವರು ಮುರುಳಿ ಕೇಳಿ ಕೇವಲ ಪಾಯಿಂಟ್ಗಳ ರೂಪದಲ್ಲಿ ಬುದ್ಧಿಯಲ್ಲಿ ಧಾರಣೆ ಮಾಡುತ್ತಾರೆ ಮತ್ತು ಧಾರಣೆ ಮಾಡಿರುವ ಪಾಯಿಂಟುಗಳ ವರ್ಣನೆಯನ್ನೂ ಬಹಳ ಚೆನ್ನಾಗಿ ಮಾಡುತ್ತಾರೆ. ಭಾಷಣ ಮಾಡುವುದರಲ್ಲಿ, ಕೋರ್ಸ್ ಕೊಡುವುದರಲ್ಲಿ ಮೆಜಾರಿಟಿ ಬುದ್ಧಿವಂತರಿದ್ದಾರೆ. ಬಾಪ್ದಾದಾರವರೂ ಸಹ ಮಕ್ಕಳ ಭಾಷಣ ಅಥವಾ ಕೋರ್ಸ್ ಮಾಡಿಸುವುದನ್ನು ನೋಡಿ ಖುಷಿಯಾಗುತ್ತಾರೆ. ಕೆಲವು ಮಕ್ಕಳಂತು ಬಾಪ್ದಾದಾರವರಿಗಿಂತಲೂ ಚೆನ್ನಾಗಿ ಭಾಷಣ ಮಾಡುತ್ತಾರೆ. ಪಾಯಿಂಟುಗಳನ್ನೂ ಸಹ ಬಹಳ ಚೆನ್ನಾಗಿ ವರ್ಣನೆ ಮಾಡುತ್ತಾರೆ, ಆದರೆ ಅಂತರವು ಇದೆ. ಜ್ಞಾನವನ್ನು ಪಾಯಿಂಟುಗಳ ರೂಪದಲ್ಲಿ ಧಾರಣೆ ಮಾಡುವುದು ಮತ್ತು ಜ್ಞಾನದ ಒಂದೊಂದು ಮಾತನ್ನು ಶಕ್ತಿ ರೂಪದಲ್ಲಿ ಧಾರಣೆ ಮಾಡುವುದರಲ್ಲಿ ಅಂತರವಾಗಿ ಬಿಡುತ್ತದೆ. ಹೇಗೆ ಡ್ರಾಮಾದ ಪಾಯಿಂಟನ್ನೇ ತೆಗೆದುಕೊಳ್ಳಿರಿ, ಇದು ಬಹಳ ದೊಡ್ಡ ವಿಜಯ ಪ್ರಾಪ್ತಿ ಮಾಡಿಕೊಳ್ಳುವ ಶಕ್ತಿಶಾಲಿ ಅಸ್ತ್ರವಾಗಿದೆ. ಯಾರಲ್ಲಿ ಡ್ರಾಮಾದ ಜ್ಞಾನದ ಶಕ್ತಿಯನ್ನು ಪ್ರತ್ಯಕ್ಷ ಜೀವನದಲ್ಲಿ ಧಾರಣೆಯಾಗಿದೆ, ಅವರೆಂದಿಗೂ ಸಹ ಏರುಪೇರಿನಲ್ಲಿ ಬರಲು ಸಾಧ್ಯವಿಲ್ಲ. ಸದಾ ಏಕರಸ ಅಚಲ ಅಡೋಲರಾಗುವ ಮತ್ತು ಅನ್ಯರನ್ನು ಮಾಡುವ ವಿಶೇಷ ಶಕ್ತಿಯು ಡ್ರಾಮಾದ ಪಾಯಿಂಟ್ನಲ್ಲಿದೆ. ಶಕ್ತಿ ರೂಪದಲ್ಲಿ ಧಾರಣೆ ಮಾಡಿಕೊಳ್ಳುವವರೆಂದಿಗೂ ಸಹ ಸೋಲನ್ನನುಭವಿಸಲು ಸಾಧ್ಯವಿಲ್ಲ. ಆದರೆ ಯಾರು ಕೇವಲ ಪಾಯಿಂಟ್ನ ರೂಪದಲ್ಲಿ ಧಾರಣೆ ಮಾಡುತ್ತಾರೆ, ಅವರೇನು ಮಾಡುತ್ತಾರೆ? ಡ್ರಾಮಾದ ಪಾಯಿಂಟನ್ನೇ ವರ್ಣಿಸುತ್ತಾರೆ. ಏರುಪೇರಿನಲ್ಲಿಯೂ ಬರುತಿದ್ದಾರೆ ಮತ್ತು ಡ್ರಾಮಾದ ಪಾಯಿಂಟನ್ನೂ ಹೇಳುತ್ತಿರುತ್ತಾರೆ. ಹಾ! ವಿಜಯಿಯಂತು ಆಗಲೇಬೇಕು. ಇರುವುದಂತು ವಿಜಯಿ ರತ್ನಗಳಾಗಿ. ಡ್ರಾಮಾದ ನೆನಪಿದೆ ಆದರೆ ಗೊತ್ತಿಲ್ಲ ಏನಾಗಿ ಬಿಟ್ಟಿದೆ. ಇದಕ್ಕೇನು ಹೇಳುವುದು? ಶಕ್ತಿಯ ರೂಪದಿಂದ, ಶಸ್ತ್ರದ ರೂಪದಿಂದ ಧಾರಣೆ ಮಾಡುತ್ತೀರಾ ಅಥವಾ ಕೇವಲ ಪಾಯಿಂಟ್ನ ರೀತಿಯಿಂದ ಧಾರಣೆ ಮಾಡಿದಿರಾ? ಹಾಗೆಯೇ ಆತ್ಮರ ಪ್ರತಿಯೂ ಹೇಳುತ್ತೀರಿ, ನಾನಂತು ಇರುವುದೇ ಶಕ್ತಿಶಾಲಿ ಆತ್ಮನಾಗಿ, ಸರ್ವಶಕ್ತಿವಂತನ ಮಗುವಾಗಿದ್ದೇನೆ, ಆದರೆ ಈ ಮಾತು ಬಹಳ ಕಷ್ಟವಿದೆ. ಇಂತಹ ಮಾತನ್ನೆಂದಿಗೂ ಸಹ ನಾವು ಯೋಚಿಸಿರಲಿಲ್ಲ. ಎಲ್ಲಿ ಮಾಸ್ಟರ್ ಸರ್ವಶಕ್ತಿವಂತ ಆತ್ಮ ಮತ್ತು ಈ ಮಾತೆಲ್ಲಿ? ಸರಿಯೆನಿಸುತ್ತದೆಯೇ? ಅಂದಾಗ ಇದಕ್ಕೆ ಏನು ಹೇಳುವುದು? ಅಂದಮೇಲೆ ಒಂದು ಆತ್ಮದ ಪಾಠ, ಪರಮ ಆತ್ಮನ ಪಾಠ, ಡ್ರಾಮಾದ ಪಾಠ, 84 ಜನ್ಮಗಳ ಪಾಠ, ಎಷ್ಟು ಪಾಠಗಳಿವೆ? ಎಲ್ಲವನ್ನೂ ಶಕ್ತಿ ಅರ್ಥಾತ್ ಶಸ್ತ್ರದ ರೂಪದಲ್ಲಿ ಧಾರಣೆ ಮಾಡುವುದು ಅರ್ಥಾತ್ ವಿಜಯಿಯಾಗುವುದು. ಕೇವಲ ಪಾಯಿಂಟ್ನ ರೀತಿಯಿಂದ ಧಾರಣೆ ಮಾಡಿಕೊಂಡಿರೆಂದರೆ, ಕೆಲವೊಮ್ಮೆ ಪಾಯಿಂಟ್ ಕೆಲಸ ಮಾಡುತ್ತದೆ, ಕೆಲವೊಮ್ಮೆ ಮಾಡುವುದಿಲ್ಲ. ನಂತರವೂ ಪಾಯಿಂಟ್ನ ರೂಪದಲ್ಲಿಯೂ ಸಹ ಧಾರಣೆ ಮಾಡುವವರು ಸೇವೆಯಲ್ಲಿ ಬ್ಯುಸಿಯಾಗಿರುವ ಕಾರಣೆ ಮತ್ತು ಪಾಯಿಂಟ್ನ್ನು ಮತ್ತೆ-ಮತ್ತೆ ವರ್ಣನೆ ಮಾಡುವ ಕಾರಣದಿಂದ ಮಾಯೆಯಿಂದ ಸುರಕ್ಷಿತವಾಗಿರುತ್ತಾರೆ. ಆದರೆ ಯಾವಾಗ ಯಾವುದೇ ಪರಿಸ್ಥಿತಿ ಅಥವಾ ಮಾಯೆಯ ರಾಯಲ್ ರೂಪವು ಮುಂದೆ ಬರುತ್ತದೆಯೆಂದರೆ, ಸದಾ ವಿಜಯಿಯಾಗಲು ಸಾಧ್ಯವಿಲ್ಲ. ಅದೇ ಪಾಯಿಂಟ್ಗಳನ್ನು ವರ್ಣನೆ ಮಾಡುತ್ತಿರುತ್ತಾರೆ ಆದರೆ ಶಕ್ತಿಯಿರದಿರುವ ಕಾರಣದಿಂದ ಸದಾ ಮಾಯಾಜೀತರಾಗಲು ಸಾಧ್ಯವಿಲ್ಲ.

ಅಂದಮೇಲೆ ತಿಳಿಯಿತೇ - ನಂಬರ್ವಾರ್ ಏಕೆ ಆಗುತ್ತಾರೆ? ಈಗ ಇದನ್ನು ಪರಿಶೀಲನೆ ಮಾಡಿಕೊಳ್ಳಿರಿ - ಪ್ರತೀ ಜ್ಞಾನದ ಪಾಯಿಂಟ್ನ್ನು ಶಕ್ತಿಯ ರೂಪದಿಂದ, ಶಸ್ತ್ರದ ರೂಪದಿಂದ ಧಾರಣೆ ಮಾಡಿದಿರಾ? ಕೇವಲ ಜ್ಞಾನವಂತರಾಗಿದ್ದೀರಾ ಅಥವಾ ಶಕ್ತಿಶಾಲಿಯೂ ಆಗಿದ್ದೀರಾ? ಜ್ಞಾನಪೂರ್ಣರಾಗುವ ಜೊತೆಗೆ ಶಕ್ತಿಪೂರ್ಣರೂ ಆಗಿದ್ದೀರ ಅಥವಾ ಕೇವಲ ಜ್ಞಾನಪೂರ್ಣರಷ್ಟೇ ಆಗಿದ್ದೀರಾ! ಯಥಾರ್ಥ ಜ್ಞಾನವು ಲೈಟ್ ಮತ್ತು ಮೈಟ್ ಸ್ವರೂಪದ್ದಾಗಿದೆ. ಅದೇ ರೂಪದಿಂದ ಧಾರಣೆ ಮಾಡಿಕೊಂಡಿದ್ದೀರಾ? ಒಂದುವೇಳೆ ಸಮಯದಲ್ಲಿ ಜ್ಞಾನವು ವಿಜಯಿಯನ್ನಾಗಿ ಮಾಡುವುದಿಲ್ಲವೆಂದರೆ ಜ್ಞಾನವನ್ನು ಶಕ್ತಿಯ ರೂಪದಲ್ಲಿ ಧಾರಣೆ ಮಾಡಿಕೊಂಡಿಲ್ಲ. ಒಂದುವೇಳೆ ಯಾವುದೇ ಯೋಧನು ಸಮಯದಲ್ಲಿ ಶಸ್ತ್ರಗಳನ್ನು ಕಾರ್ಯದಲ್ಲಿ ತರಲು ಸಾಧ್ಯವಿಲ್ಲವೆಂದರೆ, ಅವರಿಗೇನು ಹೇಳುವರು? ಮಹಾವೀರ ಎಂದು ಹೇಳುವರೇ? ಈ ಜ್ಞಾನದ ಶಕ್ತಿಯು ಏತಕ್ಕಾಗಿ ಸಿಕ್ಕಿದೆ? ಮಾಯಾಜೀತರಾಗುವುದಕ್ಕಾಗಿ ಸಿಕ್ಕಿದೆಯಲ್ಲವೆ! ಅಥವಾ ಸಮಯ ಕಳೆದ ನಂತರ ಪಾಯಿಂಟ್ ನೆನಪು ಮಾಡುವಿರಾ, ಮಾಡಬೇಕಿತ್ತು ವಿಚಾರವಂತು ಇತ್ತು ಎಂದು. ಅದಕ್ಕಾಗಿ ಇದನ್ನು ಪರಿಶೀಲನೆ ಮಾಡಿರಿ. ಈಗ ಫೋರ್ಸ್ ನ ಕೋರ್ಸ್ನ್ನು ಎಲ್ಲಿಯವರೆಗೆ ಮಾಡಿದ್ದೀರಿ! ಕೋರ್ಸ್ ಮಾಡುವುದಕ್ಕಾಗಿ ಎಲ್ಲರೂ ತಯಾರಾಗಿದ್ದೀರಲ್ಲವೆ! ಯಾರು ಕೋರ್ಸ್ನ್ನೇ ಮಾಡಲು ಸಾಧ್ಯವಿಲ್ಲ ಎನ್ನುವವರು ಯಾರಾದರೂ ಇದ್ದೀರಾ! ಎಲ್ಲರೂ ಮಾಡಿಸಬಹುದು ಮತ್ತು ಬಹಳ ಪ್ರೀತಿಯಿಂದ ಬಹಳ ಚೆನ್ನಾಗಿ ಕೋರ್ಸ್ ಮಾಡಿಸುತ್ತೀರಿ. ಬಾಪ್ದಾದಾರವರು ನೋಡುವರು - ಬಹಳ ಪ್ರೀತಿಯಿಂದ, ಅವಿಶ್ರಾಂತರಾಗಿ ಮಾಡುತ್ತಾ, ಲಗನ್ನಿನಿಂದ ಮಾಡುತ್ತಾ ಮತ್ತು ಮಾಡಿಸುತ್ತೀರಿ. ಬಹಳ ಒಳ್ಳೆಯ ಕಾರ್ಯಕ್ರಮವನ್ನು ಮಾಡುತ್ತೀರಿ. ತನು-ಮನ-ಧನವನ್ನು ಉಪಯೋಗಿಸುತ್ತೀರಿ. ಆದ್ದರಿಂದಲೇ ಇಷ್ಟು ವೃದ್ಧಿಯಾಯಿತು. ಇದಂತು ಬಹಳ ಚೆನ್ನಾಗಿ ಮಾಡುತ್ತೀರಿ, ಆದರೆ ಈಗ ಸಮಯ ಪ್ರಮಾಣ ಇದಂತು ಪಾಸ್ ಮಾಡಿ ಬಿಟ್ಟಿರಿ. ಬಾಲ್ಯತನವು ಪೂರ್ಣವಾಯಿತಲ್ಲವೆ, ಈಗ ಯುವಾವಸ್ಥೆಯಲ್ಲಿದ್ದೀರಾ ಅಥವಾ ವಾನಪ್ರಸ್ಥದಲ್ಲಿದ್ದೀರಾ. ಎಲ್ಲಿಯವರೆಗೆ ತಲುಪಿದ್ದೀರಿ? ಈ ಗ್ರೂಪ್ನಲ್ಲಿ ಮೆಜಾರಿಟಿ ಹೊಸ-ಹೊಸಬರಿದ್ದಾರೆ. ಆದರೆ ವಿದೇಶದ ಸೇವೆಯಲ್ಲಿ ಇಷ್ಟು ವರ್ಷಗಳು ಪೂರ್ಣವಾಯಿತು, ಅಂದಮೇಲೆ ಈಗ ಬಾಲ್ಯತನವಲ್ಲ, ಈಗ ಯುವಾವಸ್ಥೆಯವರೆಗೆ ತಲುಪಿದ್ದೀರಿ. ಈಗ ಫೋರ್ಸ್ ನ ಕೋರ್ಸ್ ಮಾಡಿರಿ ಮತ್ತು ಮಾಡಿಸಿರಿ.

ಹಾಗೆಯೇ ಯುವ ವರ್ಗದಲ್ಲಿ ಶಕ್ತಿಯು ಬಹಳ ಇರುತ್ತದೆ. ಯುವ ವರ್ಗದವರ ಆಯಸ್ಸು ಬಹಳ ಶಕ್ತಿಶಾಲಿಯಾಗಿರುತ್ತದೆ. ಏನು ಬೇಕೋ ಅದನ್ನು ಮಾಡಬಹುದು, ಆದ್ದರಿಂದ ನೋಡಿ - ವರ್ತಮಾನದ ಸರ್ಕಾರವೂ ಸಹ ಯುವವರ್ಗದಿಂದ ಗಾಬರಿಯಾಗುತ್ತಾರೆ ಏಕೆಂದರೆ ಯುವ ವರ್ಗದಲ್ಲಿ ಲೌಕಿಕ ರೂಪದಿಂದಲೂ ಬುದ್ಧಿಯದೂ ಶಕ್ತಿಯಿದೆ, ಶರೀರದ್ದೂ ಶಕ್ತಿಯಿದೆ. ಮತ್ತು ಇಲ್ಲಿ ಆ ರೀತಿ ಹಾಳು ಮಾಡುವವರು ಇಲ್ಲ. ತಯಾರು ಮಾಡುವವರಿದ್ದಾರೆ. ಅವರು ಜೋಷ್ ಇರುವವರು ಮತ್ತು ಇಲ್ಲಿ ಶಾಂತ ಸ್ವರೂಪ ಆತ್ಮರಿದ್ದಾರೆ. ಹಾಳಾಗಿರುವವರನ್ನು ಸರಿ ಪಡಿಸುವವರಿದ್ದಾರೆ. ಎಲ್ಲರ ದುಃಖವನ್ನು ದೂರ ಮಾಡುವವರಿದ್ದಾರೆ. ಅವರು ದುಃಖ ಕೊಡುವವರು ಮತ್ತು ತಾವು ದುಃಖವನ್ನು ದೂರಗೊಳಿಸುವವರಾಗಿದ್ದೀರಿ. ದುಃಖಹರ್ತ ಸುಖಕರ್ತ, ತಂದೆಯಂತೆ ಮಕ್ಕಳು. ಸದಾ ಪ್ರತೀ ಸಂಕಲ್ಪ, ಪ್ರತೀ ಆತ್ಮನ ಪ್ರತಿ ಅಥವಾ ಸ್ವಯಂನ ಪ್ರತಿ ಸುಖ ಕೊಡುವ ಸಂಕಲ್ಪವಿದೆ ಏಕೆಂದರೆ ದುಃಖದ ಪ್ರಪಂಚದಿಂದ ಹೊರಟು ಬಿಟ್ಟಿರಿ. ಈಗ ದುಃಖದ ಪ್ರಪಂಚದಲ್ಲಿಲ್ಲ. ದುಃಖಧಾಮದಿಂದ ಸಂಗಮಯುಗದಲ್ಲಿ ತಲುಪಿ ಬಿಟ್ಟಿದ್ದೀರಿ. ಪುರುಷೋತ್ತಮ ಯುಗದಲ್ಲಿ ಕುಳಿತಿದ್ದೀರಿ. ಅವರು ಕಲಿಯುಗೀ ಯುವ ವರ್ಗದವರಾಗಿದ್ದಾರೆ. ತಾವು ಸಂಗಮಯುಗೀ ಯುವ ವರ್ಗದವರಾಗಿದ್ದೀರಿ, ಆದ್ದರಿಂದ ಇದನ್ನೀಗ ಸದಾ ತಮ್ಮಲ್ಲಿ ಜ್ಞಾನವನ್ನು ಶಕ್ತಿಯ ರೂಪದಲ್ಲಿ ಧಾರಣೆ ಮಾಡಿಕೊಳ್ಳಿರಿ ಮತ್ತು ಮಾಡಿಸಲೂ ಬೇಕು. ತಾವೆಷ್ಟು ಸ್ವಯಂ ಫೋರ್ಸ್ ನ ಕೋರ್ಸ್ ಮಾಡಿರುತ್ತಾರೆ, ಅಷ್ಟು ಅನ್ಯರಿಗೂ ಮಾಡಿಸುವರು. ಇಲ್ಲವೆಂದರೆ ಕೇವಲ ಪಾಯಿಂಟ್ನ ಕೋರ್ಸ್ ಮಾಡಿಸುತ್ತಾರೆ. ಈಗ ಕೋರ್ಸ್ನ್ನು ಮತ್ತೆ ರಿವೈಜ್ ಮಾಡಿರಿ, ಒಂದೊಂದು ಪಾಯಿಂಟ್ನಲ್ಲಿ ಏನೇನು ಶಕ್ತಿಯಿದೆ, ಎಷ್ಟು ಶಕ್ತಿಯಿದೆ, ಯಾವ ಸಮಯದಲ್ಲಿ ಯಾವ ಶಕ್ತಿಯನ್ನು ಯಾವ ರೂಪದಿಂದ ಉಪಯೋಗಿಸಬಹುದು, ಈ ಟ್ರೈನಿಂಗ್ನ್ನು ತಮಗೆ ತಾವು ಕೊಟ್ಟುಕೊಳ್ಳಬಹುದು. ಅಂದಮೇಲೆ ಇದನ್ನು ಪರಿಶೀಲನೆ ಮಾಡಿರಿ - ಆತ್ಮನ ಪಾಯಿಂಟ್ ಎಂಬ ಶಕ್ತಿಶಾಲಿ ಶಸ್ತ್ರವನ್ನು ಇಡೀ ದಿನದಲ್ಲಿ ಪ್ರತ್ಯಕ್ಷದಲ್ಲಿ ಕಾರ್ಯದಲ್ಲಿ ತಂದಿದ್ದೀರಾ? ತಮ್ಮ ಟ್ರೈನಿಂಗ್ನ್ನು ತಾವೇ ಮಾಡಬಹುದು ಏಕೆಂದರೆ ಜ್ಞಾನ ಪೂರ್ಣರಂತು ಆಗಿಯೇ ಇದ್ದೀರಿ. ಆತ್ಮದ ಬಗ್ಗೆ ಪಾಯಿಂಟ್ಗಳನ್ನು ತೆಗೆಯಿರೆಂದು ಹೇಳಿದರೆ, ಎಷ್ಟು ಪಾಯಿಂಟುಗಳನ್ನು ತೆಗೆಯುವಿರಿ! ಬಹಳ ಇದೆಯಲ್ಲವೆ! ಭಾಷಣ ಮಾಡುವುದರಲ್ಲಂತು ಬುದ್ಧಿವಂತರಿದ್ದೀರಿ. ಆದರೆ ಒಂದೊಂದು ಪಾಯಿಂಟ್ನ್ನು ನೋಡಿ, ಪರಿಸ್ಥಿತಿಯ ಸಮಯದಲ್ಲಿ ಎಲ್ಲಿಯವರೆಗೆ ಕಾರ್ಯದಲ್ಲಿ ಉಪಯೋಗಿಸುವೆನು! ಇದನ್ನು ಯೋಚಿಸಬಾರದು - ಹಾಗೇ ನೋಡಿದರೆ ಸರಿಯಿರುತ್ತೇವೆ, ಆದರೆ ಇಂತಹ ಮಾತಾಯಿತು, ಪರಿಸ್ಥಿತಿ ಬಂದಿತು ಆಗಲೇ ಹೀಗಾಯಿತು. ಶಸ್ತ್ರವು ಏತಕ್ಕಾಗಿ ಇರುತ್ತದೆ? ಯಾವಾಗ ಶತ್ರು ಬರುತ್ತಾರೆಯೋ, ಅದಕ್ಕಾಗಿ ಇರುತ್ತದೆಯೋ ಅಥವಾ ಶತ್ರುವು ಬಂದು ಬಿಟ್ಟನು. ಆದ್ದರಿಂದ ನಾನು ಸೋತು ಹೋದೆನು! ಮಾಯೆಯು ಬಂದು ಬಿಟ್ಟಿತು. ಆದ್ದರಿಂದ ಏರುಪೇರಾಗಿ ಬಿಟ್ಟೆವು! ಆದರೆ ಮಾಯೆಗಾಗಿಯೇ ಶಸ್ತ್ರವಿದೆಯಲ್ಲವೆ! ಶಕ್ತಿಯನ್ನು ಏತಕ್ಕಾಗಿ ಧಾರಣೆ ಮಾಡಿಕೊಂಡಿದ್ದೀರಾ? ಸಮಯದಲ್ಲಿ ವಿಜಯವನ್ನು ಪಡೆಯುವುದಕ್ಕಾಗಿ ಶಕ್ತಿಶಾಲಿಯಾಗಿದ್ದೀರಲ್ಲವೆ! ಅಂದಮೇಲೆ ಈ ಉಮ್ಮಂಗವನ್ನು ನೋಡಿ ಖುಷಿಯಾಗುತ್ತದೆ, ವಿದ್ಯೆಯೊಂದಿಗೆ ಪ್ರೀತಿಯಿದೆ. ತಂದೆಯೊಂದಿಗೆ ಪ್ರೀತಿಯಿದೆ. ಸೇವೆಯೊಂದಿಗೆ ಪ್ರೀತಿಯಿದೆ ಆದರೆ ಕೆಲವೊಮ್ಮೆಯಂತು ಯಾರು ಕೋಮಲರಾಗಿ ಬಿಡುತ್ತಾರೆ, ಶಸ್ತ್ರಗಳು ಬಿಟ್ಟು ಹೋಗುತ್ತದೆ, ಆ ಸಮಯದಲ್ಲಿ ಇವರ ವಿಡಿಯೋ ತೆಗೆದು, ನಂತರ ಇವರಿಗೇ ತೋರಿಸಬೇಕು. ಇರುವುದಂತು ಸ್ವಲ್ಪ ಸಮಯಕ್ಕಾಗಿ ಇದೆ, ಹೆಚ್ಚಾಗಿರುವುದಿಲ್ಲ, ಆದರೆ ಆದರೂ ಸಹ ನಿರಂತರ ಅರ್ಥಾತ್ ಸದಾ ನಿರ್ವಿಘ್ನರಾಗಿರುವುದು ಮತ್ತು ವಿಘ್ನವು ನಿರ್ವಿಘ್ನವಾಗಿ ನಡೆಯುತ್ತಿರುವುದು - ಅಂತರವಂತು ಇದೆಯಲ್ಲವೆ! ದಾರದಲ್ಲಿ ಎಷ್ಟು ಗಂಟುಗಳು ಬೀಳುತ್ತದೆಯೋ ಅಷ್ಟು ಆ ದಾರವು ಬಲಹೀನವಾಗುತ್ತದೆ. ಜೋಡಣೆಯಂತು ಆಗಿ ಬಿಡುತ್ತದೆ ಆದರೆ ಜೋಡಣೆಯಾಗಿರುವ ವಸ್ತು ಮತ್ತು ಉದ್ದನೆಯ ದಾರವಿರುವ ವಸ್ತುವಿನಲ್ಲಿ ಅಂತರವಂತು ಆಗುತ್ತದೆಯಲ್ಲವೆ. ಜೋಡಿಸಿರುವ ವಸ್ತುವು ಇಷ್ಟವಾಗುತ್ತದೆಯೇ? ಈ ವಿಘ್ನವು ಬಂದಿತು ನಂತರ ನಿರ್ವಿಘ್ನವಾದೆವು, ನಂತರ ವಿಘ್ನವು ಬಂದಿತು, ತುಂಡಾಯಿತು ಜೋಡಿಸಿದೆವೆಂದರೆ ಜೋಡಣೆಯಂತು ಆಯಿತಲ್ಲವೆ. ಇದರಿಂದಲೂ ಇದರ ಪ್ರಭಾವವು ಸ್ಥಿತಿಯ ಮೇಲೆ ಬೀಳುತ್ತದೆ.

ಕೆಲವರು ಬಹಳ ಒಳ್ಳೆಯ ತೀವ್ರ ಪುರುಷಾರ್ಥಿಯೂ ಇದ್ದಾರೆ. ಜ್ಞಾನಪೂರ್ಣ, ಸೇವಾಧಾರಿಯೂ ಇದ್ದಾರೆ. ಬಾಪ್ದಾದಾ, ಪರಿವಾರದ ದೃಷ್ಟಿಯಲ್ಲಿಯೂ ಇದ್ದಾರೆ ಆದರೆ ಜೋಡಣೆ-ತುಂಡಾಗುವ ಆತ್ಮನು ಸದಾ ಶಕ್ತಿಶಾಲಿಯಾಗಿರುವುದಿಲ್ಲ. ಚಿಕ್ಕ-ಚಿಕ್ಕ ಮಾತಿನಲ್ಲಿ ಅವರು ಪರಿಶ್ರಮ ಪಡಬೇಕಾಗುತ್ತದೆ. ಕೆಲವೊಮ್ಮೆ ಸದಾ ಹಗುರ, ಹರ್ಷಿತ ಖುಷಿಯಲ್ಲಿ ನರ್ತಿಸುವವರಾಗಿರುತ್ತಾರೆ. ಆದರೆ ಹೀಗೆ ಸದಾ ಕಂಡು ಬರುವುದಿಲ್ಲ. ಇರುವುದಂತು ಮಹಾರಥಿಯ ಲಿಸ್ಟ್ ನಲ್ಲಿ, ಆದರೆ ಇಂತಹ ಸಂಸ್ಕಾರದವರು ಅವಶ್ಯವಾಗಿ ಬಲಹೀನರಾಗಿರುತ್ತಾರೆ. ಇದರ ಕಾರಣದಿಂದ ಏನಾಗುತ್ತದೆ? ಈ ತುಂಡಾಗುವುದು ಜೋಡಣೆ ಮಾಡುವ ಸಂಸ್ಕಾರವು ಆಂತರ್ಯದಿಂದ ಬಲಹೀನರನ್ನಾಗಿ ಮಾಡಿ ಬಿಡುತ್ತದೆ. ಹೊರಗಿನಿಂದ ಯಾವುದೇ ಮಾತಿರುವುದಿಲ್ಲ. ಬಹಳ ಚೆನ್ನಾಗಿಯೇ ಕಾಣಿಸುತ್ತಾರೆ, ಆದ್ದರಿಂದ ಈ ಸಂಸ್ಕಾರವನ್ನೆಂದಿಗೂ ಸಹ ಮಾಡಿಕೊಳ್ಳಬಾರದು. ಇದನ್ನು ಯೋಚಿಸಬಾರದು - ಮಾಯೆಯು ಬಂದು ಬಿಟ್ಟಿತು, ನಡೆಯುವುದಂತು ನಡೆಯುತ್ತಿದ್ದೇವೆ. ಆದರೆ ಹೀಗೆ ನಡೆಯುವುದು, ಕೆಲವೊಮ್ಮೆ ಬೇರೆಯಾಗುವುದು ಕೆಲವೊಮ್ಮೆ ಜೋಡ್ಸಣೆಯಾಗುವುದು - ಇದೇನಾಯಿತು? ಸದಾ ಜೋಡಣೆಯಾಗಿರಿ, ಸದಾ ನಿರ್ವಿಘ್ನವಾಗಿರಿ, ಸದಾ ಹರ್ಷಿತ, ಸದಾ ಛತ್ರಛಾಯೆಯಲ್ಲಿರಿ, ಅದು ಮತ್ತು ಈ ಜೀವನದಲ್ಲಿ ಅಂತರವಿದೆಯಲ್ಲವೆ. ಆದ್ದರಿಂದ ಬಾಪ್ದಾದಾರವರು ಹೇಳುತ್ತಾರೆ - ಕೆಲಕೆಲವರ ಜನ್ಮ ಪತ್ರಿಯ ಕಾಗದವಂತು ಸಂಪೂರ್ಣ ಸ್ವಚ್ಛವಾಗಿದೆ. ಕೆಲಕೆಲವರದು ಮಧ್ಯ-ಮಧ್ಯದಲ್ಲಿ ಕಲೆಗಳಿವೆ (ಬಲಹೀನತೆ). ಭಲೆ ಆ ಕಲೆಗಳನ್ನು ಅಳಿಸಬಹುದು ಆದರೆ ಅದೂ ಸಹ ಕಾಣಿಸುತ್ತದೆಯಲ್ಲವೆ! ಆದರೆ ಆ ಕಲೆ ಅಥವಾ ಬಲಹೀನತೆಯ ಮಚ್ಚೆಯಾಗಬಾರದು. ಸ್ವಚ್ಛ ಕಾಗದ ಮತ್ತು ಮಚ್ಚೆಯನ್ನು ಅಳಿಸಿರುವ ಕಾಗದ...... ಇಷ್ಟವೇನಾಗುತ್ತದೆ? ಸ್ವಚ್ಛ ಕಾಗದವನ್ನಿಡುವ ಆಧಾರವು ಬಹಳಸಹಜವಿದೆ. ಇದಂತು ಬಹಳ ಕಷ್ಟವಿದೆ ಎಂದು ಗಾಬರಿಯಾಗಬಾರದು. ಬಹಳ ಸಹಜವಿದೆ ಏಕೆಂದರೆ ಸಮಯವು ಸಮೀಪದಲ್ಲಿ ಬರುತ್ತಿದೆ. ಸಮಯಕ್ಕೂ ಸಹ ವಿಶೇಷವಾಗಿ ವರದಾನವು ಸಿಕ್ಕಿದೆ. ಯಾರೆಷ್ಟು ಹಿಂದೆ ಬರುತ್ತಾರೆ, ಅವರಿಗೆ ಸಮಯ ಪ್ರಮಾಣ ವಿಶೇಷ ಲಿಫ್ಟ್ ನ ಗಿಫ್ಟ್ ಸಹ ಸಿಗುತ್ತದೆ. ಮತ್ತು ಈಗಂತು ಅವ್ಯಕ್ತ ರೂಪದ ಪಾತ್ರವೇ ವರದಾನಿ ಪಾತ್ರವಿದೆ. ಅಂದಮೇಲೆ ಸಮಯವೂ ಸಹ ತಮಗೆ ಸಹಯೋಗವಿದೆ. ಅವ್ಯಕ್ತ ಪಾತ್ರದ, ಅವ್ಯಕ್ತ ಸಹಯೋಗದ್ದೂ ಸಹಯೋಗವಿದೆ. ತೀವ್ರ ಗತಿಯ ಸಮಯವಾಗಿದೆ, ಇದರದೂ ಸಹಯೋಗವಿದೆ. ಮೊದಲು ಅನ್ವೇಷಣೆ ಮಾಡುವುದರಲ್ಲಿ ಸಮಯ ಹಿಡಿಸಿತು. ಈಗ ಮಾಡಿ-ಮಾಡಲ್ಪಟ್ಟಿರುವುದಿದೆ. ತಾವು ಮಾಡಿ-ಮಾಡಲ್ಪಟ್ಟಿರುವ ಸಮಯದಲ್ಲಿ ತಲುಪಿದ್ದೀರಿ. ಈ ವರದಾನವೂ ಕಡಿಮೆಯಲ್ಲ. ಯಾರು ಮೊದಲು ಬಂದರೋ, ಅವರಿಗೆ ಬೆಣ್ಣೆಯನ್ನು ತೆಗೆದರು, ತಾವುಗಳು ಬೆಣ್ಣೆ ತಿನ್ನುವ ಸಮಯದಲ್ಲಿ ತಲುಪಿ ಬಿಟ್ಟಿದ್ದೀರಿ. ಅಂದಮೇಲೆ ವರದಾನಿಯಾಗಿದ್ದೀರಲ್ಲವೆ! ಕೇವಲ ಸ್ವಲ್ಪ ಗಮನವನ್ನಿಡಿ. ಬಾಕಿ ಮತ್ತ್ಯಾವುದೇ ಮಾತಿಲ್ಲ. ಎಲ್ಲಾ ಪ್ರಕಾರದ ಸಹಯೋಗವು ತಮ್ಮ ಜೊತೆಯಿದೆ. ಈಗ ತಾವುಗಳಿಗೆ ಮಹಾರಥಿ ನಿಮಿತ್ತ ಆತ್ಮರ ಪಾಲನೆಯೆಷ್ಟು ಸಿಗುತ್ತದೆ, ಅಷ್ಟು ಮೊದಲಿನವರೆಗೆ ಸಿಗಲಿಲ್ಲ. ಒಬ್ಬೊಬ್ಬರೊಂದಿಗೆ ಎಷ್ಟೊಂದು ಕಷ್ಟಪಟ್ಟು ಸಮಯ ಕೊಡುತ್ತಾರೆ. ಮೊದಲು ಜನರಲ್ ಪಾಲನೆ ಸಿಕ್ಕಿತು ಆದರೆ ತಾವಂತು ಅಗಲಿ ಮರಳಿ ಸಿಕ್ಕಿರುವವರಾಗಿ ಬೆಳೆಯುತ್ತಿದ್ದೀರಿ. ಪಾಲನೆಯ ರಿಟರ್ನ್ ಸಹ ಕೊಡುವವರಾಗಿದ್ದೀರಲ್ಲವೆ. ಕಷ್ಟವೇನಿಲ್ಲ. ಕೇವಲ ಒಂದೊಂದು ಮಾತನ್ನು ಶಕ್ತಿಯ ರೂಪದಿಂದ ಉಪಯೋಗಿಸುವ ಗಮನವನ್ನಿಡಿ. ತಿಳಿಯಿತೆ! ಒಳ್ಳೆಯದು!

ಸದಾ ಮಹಾವೀರರಾಗಿ ವಿಜಯ ಛತ್ರಧಾರಿ ಆತ್ಮರು, ಸದಾ ಜ್ಞಾನದ ಶಕ್ತಿಯನ್ನು ಸಮಯ ಪ್ರಮಾಣ ಕಾರ್ಯದಲ್ಲಿ ತರುವವರು, ಸದಾ ಅಟಲ, ಅಚಲ ಅಖಂಡ ಸ್ಥಿತಿಯ ಧಾರಣೆ ಮಾಡುವವರು, ಸದಾ ಸ್ವಯಂನ್ನು ಮಾಸ್ಟರ್ ಸರ್ವಶಕ್ತಿವಂತನ ಅನುಭವ ಮಾಡುವವರು, ಇಂತಹ ಶ್ರೇಷ್ಠ ಸದಾ ಮಾಯಾಜೀತ ವಿಜಯಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ದಾದಿಯರೊಂದಿಗೆ:- ಅನನ್ಯ ರತ್ನಗಳ ಪ್ರತೀ ಹೆಜ್ಜೆಯಲ್ಲಿ ಸ್ವಯಂಗಂತು ಪದಮಗಳ ಸಂಪಾದನೆಯಿದೆ, ಆದರೆ ಅನ್ಯರಿಗೂ ಪದಮಗಳ ಸಂಪಾದನೆಯಿದೆ. ಅನನ್ಯ ರತ್ನಗಳು ಸದಾ ಕಾಲವೂ ಪ್ರತೀ ಹೆಜ್ಜೆಯಲ್ಲಿ ಮುಂದುವರೆಯುತ್ತಲೇ ಇರುತ್ತಾರೆ. ಅನಾದಿ ಬೀಗದ ಕೈ ಸಿಕ್ಕಿದೆ. ಅಟೊಮೆಟಿಕ್ ಬೀಗದ ಕೈ ಇದೆ. ನಿಮಿತ್ತರಾಗುವುದು ಅರ್ಥಾತ್ ಅಟೊಮೆಟಿಕ್ ಬೀಗದ ಕೈ ಉಪಯೋಗಿಸುವುದಾಗಿದೆ. ಅನನ್ಯ ರತ್ನಗಳು ಅನಾದಿ ಬೀಗದ ಕೈಯಿಂದ ಮುಂದುವರೆಯುತ್ತಲೇ ಇರುತ್ತಾರೆ. ತಮ್ಮೆಲ್ಲರ ಪ್ರತೀ ಸಂಕಲ್ಪದಲ್ಲಿ ಸೇವೆಯು ಅಡಗಿದೆ. ಒಬ್ಬರು ನಿಮಿತ್ತರಾಗುತ್ತಾರೆ, ಅನೇಕ ಆತ್ಮರನ್ನು ಉಮ್ಮಂಗ-ಉತ್ಸಾಹದಲ್ಲಿ ತರುವುದಕ್ಕಾಗಿ. ಪರಿಶ್ರಮ ಪಡಬೇಕಾಗಿರುವುದಿಲ್ಲ. ಆದರೆ ನಿಮಿತ್ತರನ್ನು ನೋಡುವುದರಿಂದಲೇ, ಆ ಪ್ರಕಂಪನಗಳು ಹರಡಿ ಬಿಡುತ್ತದೆ. ಹೇಗೆ ಒಬ್ಬರಿನ್ನೊಬರನ್ನು ನೋಡುತ್ತಾ ರಂಗೇರಿ ಬಿಡುತ್ತದೆಯಲ್ಲವೆ. ಅಂದಮೇಲೆ ಇದು ಅಟೊಮೆಟಿಕ್ ಉಮ್ಮಂಗ-ಉತ್ಸಾಹದ ಪ್ರಕಂಪನಗಳು, ಅನ್ಯರಿಗೂ ಉಮ್ಮಂಗ-ಉತ್ಸಾಹವನ್ನು ಹೆಚ್ಚಿಸುತ್ತದೆ. ಹಾಗೆ ನೋಡಿದರೆ ಕೆಲವರು ಚೆನ್ನಾಗಿ ನರ್ತಿಸುತ್ತಾರೆಂದರೆ ನೋಡುವವರಿಗೂ ಕಾಲುಗಳು ನರ್ತಿಸುತ್ತದೆ, ಪ್ರಭಾವವು ಹರಡುತ್ತದೆ. ಆದ್ದರಿಂದ ಬಯಸದಿದ್ದರೂ ಕಾಲು-ಕೈ ನರ್ತಿಸಲು ಪ್ರಾರಂಭವಾಗುತ್ತದೆ. ಒಳ್ಳೆಯದು.

ಮಧುಬನದ ಎಲ್ಲಾ ಕಾರೋಬಾರ್ ಸರಿಯಾಗಿದೆಯೆ. ಮಧುಬನ ನಿವಾಸಿಗಳಿಂದ ಮಧುಬನ ಶೃಂಗಾರವಿದೆ. ಬಾಪ್ದಾದಾರವರಂತು ನಿಮಿತ್ತ ಮಕ್ಕಳನ್ನು ನೋಡುತ್ತಾ ಸದಾ ನಿಶ್ಚಿಂತವಿದ್ದಾರೆ ಏಕೆಂದರೆ ಮಕ್ಕಳು ಎಷ್ಟೊಂದು ಬುದ್ಧಿವಂತರಾಗಿದ್ದಾರೆ. ಮಕ್ಕಳೂ ಸಹ ಕಡಿಮೆಯಿಲ್ಲ. ತಂದೆಗೆ ಮಕ್ಕಳಲ್ಲಿ ಸಂಪೂರ್ಣ ವಿಶ್ವಾಸವಿದೆ ಅಂದಮೇಲೆ ಮಕ್ಕಳು ತಂದೆಗಿಂತಲೂ ಮುಂದಿದ್ದಾರೆ. ನಿಮಿತ್ತರಾಗಿರುವವರು ಸದಾಕಾಲವೂ ತಂದೆಯನ್ನೂ ನಿಶ್ಚಿಂತಗೊಳಿಸುವವರಿದ್ದಾರೆ. ಅಂತಹ ಚಿಂತೆಯೂ ಸಹ ಇಲ್ಲವೇ ಇಲ್ಲ, ಆದರೂ ತಂದೆಗೆ ಖುಷಿಯ ಸಮಾಚಾರವನ್ನು ತಿಳಿಸುವವರಿದ್ದಾರೆ. ಇಂತಹ ಮಕ್ಕಳು ಎಲ್ಲಿಯೂ ಇರುವುದಿಲ್ಲ, ಯಾವ ಒಂದೊಂದು ಮಗುವು ಒಬ್ಬರಿಂತ ಇನ್ನೊಬ್ಬರು ಮುಂದಿರುವರು, ಪ್ರತಿಯೊಂದು ಮಕ್ಕಳು ವಿಶೇಷವಿದ್ದೀರಿ. ಯಾರಿಗೂ ಇಷ್ಟೊಂದು ಮಕ್ಕಳಿರಲು ಸಾಧ್ಯವಿಲ್ಲ. ಕೆಲವರು ಜಗಳವಾಡುವವರಿರುತ್ತಾರೆ, ಕೆಲವರು ಓದುವವರಿರುತ್ತಾರೆ. ಇಲ್ಲಂತು ಪ್ರತಿಯೊಬ್ಬರೂ ವಿಶೇಷ ಮಣಿಯಾಗಿದ್ದೀರಿ, ಪ್ರತಿಯೊಬ್ಬರ ವಿಶೇಷತೆಯಿದೆ.

ವರದಾನ:  
ಪವಿತ್ರತೆಯ ಶಕ್ತಿಶಾಲಿ ದೃಷ್ಟಿ-ವೃತ್ತಿಯ ಮೂಲಕ ಸರ್ವ ಪ್ರಾಪ್ತಿಗಳನ್ನು ಮಾಡಿಸುವ ದುಃಖಹರ್ತ ಸುಖಕರ್ತ ಭವ.

ವಿಜ್ಞಾನದ ಔಷಧಿಯಲ್ಲಿ ಅಲ್ಪಕಾಲದ ಶಕ್ತಿಯಿದೆ, ಅದು ದುಃಖ-ನೋವನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಆದರೆ ಪವಿತ್ರತೆಯ ಶಕ್ತಿ ಅರ್ಥಾತ್ ಶಾತಿಯ ಶಕ್ತಿಯಲ್ಲಂತು ಆಶೀರ್ವಾದ ಶಕ್ತಿಯಾಗಿದೆ. ಈ ಪವಿತ್ರತೆಯ ಶಕ್ತಿಶಾಲಿ ದೃಷ್ಟಿ ಹಾಗೂ ವೃತ್ತಿಯು ಸದಾಕಾಲದ ಪ್ರಾಪ್ತಿ ಮಾಡಿಸುವಂತದ್ದಾಗಿದೆ. ಆದ್ದರಿಂದ ತಮ್ಮ ಜಡ ಚಿತ್ರಗಳ ಮುಂದೆ ಓ ದಯಾಳು, ದಯೆ ತೋರಿಸು ಎಂದು ಹೇಳುತ್ತಾ ದಯೆ ಅಥವಾ ಆಶೀರ್ವಾದವನ್ನು ಬೇಡುತ್ತಾರೆ. ಹಾಗಾದರೆ ಯಾವಾಗ ಚೈತನ್ಯದಲ್ಲಿ ಹೀಗೆ ಮಾಸ್ಟರ್ ದುಃಖಹರ್ತ ಸುಖಕರ್ತನಾಗಿದ್ದು ದಯೆ ತೋರಿಸಿದ್ದಿರಿ, ಆದ್ದರಿಂದಲೇ ಭಕ್ತಿಯಲ್ಲಿ ಪೂಜೆಯಾಗುತ್ತದೆ.

ಸ್ಲೋಗನ್:
ಸಮಯದ ಸಮೀಪತೆಯನುಸಾರ ಸತ್ಯ ತಪಸ್ಸು ಅಥವಾ ಸಾಧನೆಯಿರುವುದೇ ಬೇಹದ್ದಿನ ವೈರಾಗ್ಯ.
 


ಸೂಚನೆ:
ಇಂದು ತಿಂಗಳಿನ ಮೂರನೇ ರವಿವಾರವಾಗಿದೆ, ಎಲ್ಲರೂ ಸಂಘಟನೆಯಲ್ಲಿ ಸಂಜೆ 6.30ಯಿಂದ 7.30 ಗಂಟೆಯವರೆಗೆ ಅಂತರಾಷ್ಟ್ರೀಯ ಯೋಗದಲ್ಲಿ ಒಟ್ಟಿಗೆ ಸೇರಿ, ತಮ್ಮನು ಅವತರಣೆಯಾಗಿರುವ ಅವತರಿತ ಆತ್ಮನಾಗಿರುವೆನು, ಈ ಸ್ಮೃತಿಯಿಂದ ಶರೀರದಲ್ಲಿ ಪ್ರವೇಶ ಮಾಡಿರಿ ಮತ್ತು ಶರೀರದಿಂದ ಭಿನ್ನರಾಗಿ ಬಿಡಿ. ತಮ್ಮ ಬೀಜ ಸ್ವರೂಪ ಸ್ಥಿತಿಯಲ್ಲಿ ಕುಳಿತು, ಪರಮಾತ್ಮನ ಶಕ್ತಿಗಳನ್ನು ವಾಯುಮಂಡಲದಲ್ಲಿ ಹರಡಿಸುವ ಸೇವೆಯನ್ನು ಮಾಡಿರಿ.