19.01.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ, ನೆನಪಿನಿಂದಲೇ ಆಯಸ್ಸು ಹೆಚ್ಚುವುದು, ವಿಕರ್ಮ
ವಿನಾಶವಾಗುವುದು, ನೆನಪಿನಲ್ಲಿರುವವರ ಸ್ಥಿತಿ, ಮಾತು, ನಡತೆ ಬಹಳ ಫಸ್ಟ್ಕ್ಲಾಸ್ ಆಗಿರುವುದು”
ಪ್ರಶ್ನೆ:
ನೀವು ಮಕ್ಕಳಿಗೆ
ದೇವತೆಗಳಿಗಿಂತಲೂ ಹೆಚ್ಚು ಖುಷಿಯಿರಬೇಕು - ಏಕೆ?
ಉತ್ತರ:
ಏಕೆಂದರೆ ಈಗ
ನಿಮಗೆ ಬಹಳ ದೊಡ್ಡ ಲಾಟರಿ ಸಿಕ್ಕಿದೆ. ಭಗವಂತನೇ ನಿಮಗೆ ಓದಿಸುತ್ತಾರೆ, ಸತ್ಯಯುಗದಲ್ಲಿ
ದೇವತೆಗಳಿಗೆ ದೇವತೆಗಳೇ ಓದಿಸುತ್ತಾರೆ, ಇಲ್ಲಿ ಮನುಷ್ಯರು ಮನುಷ್ಯರಿಗೆ ಓದಿಸುತ್ತಾರೆ. ಆದರೆ
ನೀವಾತ್ಮರಿಗೆ ಸ್ವಯಂ ಪರಮಾತ್ಮನೇ ಓದಿಸುತ್ತಾರೆ. ನೀವೀಗ ಸ್ವದರ್ಶನ ಚಕ್ರಧಾರಿಗಳಾಗುತ್ತಿದ್ದೀರಿ.
ನಿಮ್ಮಲ್ಲಿ ಸಂಪೂರ್ಣ ಜ್ಞಾನವಿದೆ. ದೇವತೆಗಳಲ್ಲಿ ಈ ಜ್ಞಾನವೂ ಇರುವುದಿಲ್ಲ.
ಗೀತೆ:
ಎದ್ದೇಳಿ
ಪ್ರಿಯತಮೆಯರೇ ಎದ್ದೇಳಿ ನವಯುಗ ಬರಲಿದೆ...........
ಓಂ ಶಾಂತಿ.
ಹೊಸ ಯುಗದಲ್ಲಿ
ದೇವಿ-ದೇವತೆಗಳಿರುತ್ತಾರೆ, ಅವರೂ ಮನುಷ್ಯರೇ ಆದರೆ ಅವರ ಗುಣಗಳು ದೇವತೆಗಳ ಹಾಗಿರುತ್ತದೆ. ಅವರು
ವೈಷ್ಣವರು, ಡಬಲ್ ಅಹಿಂಸಕರಾಗಿದ್ದಾರೆ, ಈಗಿನ ಮನುಷ್ಯರು ಡಬಲ್ ಹಿಂಸಕರಾಗಿದ್ದಾರೆ. ಹೊಡೆದಾಟವನ್ನು
ಮಾಡುತ್ತಾರೆ, ಕಾಮ ಕಟಾರಿಯನ್ನು ನಡೆಸುತ್ತಾರೆ, ಇದಕ್ಕೆ ಮೃತ್ಯು ಲೋಕವೆಂದು ಹೇಳಲಾಗುತ್ತದೆ.
ಇಲ್ಲಿ ವಿಕಾರಿ ಮನುಷ್ಯರಿದ್ದಾರೆ. ಎಲ್ಲಿ ದೇವಿ-ದೇವತೆಗಳಿರುವರೋ ಅದಕ್ಕೆ ದೇವ ಲೋಕವೆಂದು
ಹೇಳಲಾಗುತ್ತದೆ. ಅವರು ಡಬಲ್ ಅಹಿಂಸಕರಾಗಿದ್ದರು, ಅವರ ರಾಜ್ಯವು ಇತ್ತು. ಕಲ್ಪದ ಆಯಸ್ಸು
ಲಕ್ಷಾಂತರ ವರ್ಷಗಳಾಗಿದ್ದರೆ ಯಾವುದೇ ಮಾತಿನ ವಿಚಾರವೂ ಬರುತ್ತಿರಲಿಲ್ಲ. ಇತ್ತೀಚೆಗೆ ಕಲ್ಪದ
ಆಯಸ್ಸು ಸ್ವಲ್ಪ ಕಡಿಮೆ ಮಾಡುತ್ತಾ ಹೋಗುತ್ತಿದ್ದಾರೆ. ಕೆಲವರು 7000 ವರ್ಷಗಳೆಂದು, ಇನ್ನೂ ಕೆಲವರು
10 ಸಾವಿರ ವರ್ಷಗಳೆಂದು ಹೇಳುತ್ತಾರೆ. ನೀವು ಮಕ್ಕಳಿಗೆ ಇದೂ ಸಹ ತಿಳಿದಿದೆ - ತಂದೆಯು ಶ್ರೇಷ್ಠಾತಿ
ಶ್ರೇಷ್ಠ ಭಗವಂತನಾಗಿದ್ದಾರೆ, ಅವರ ಮಕ್ಕಳಾದ ನಾವು ಶಾಂತಿಧಾಮದಲ್ಲಿರುತ್ತೇವೆ. ನಾವು ಮಾರ್ಗ
ತೋರಿಸುವಂತಹ ಮಾರ್ಗದರ್ಶಕರಾಗಿದ್ದೇವೆ. ಈ ಯಾತ್ರೆಯ ಬಗ್ಗೆ ಯಾವುದೇ ವರ್ಣನೆಯಿಲ್ಲ. ಗೀತೆಯಲ್ಲಿ
ಮನ್ಮನಾಭವ ಎಂಬ ಅಕ್ಷರವಿದೆ ಆದರೆ ಅದರ ಅರ್ಥವೇನು? ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು
ನೆನಪು ಮಾಡಿರಿ ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಯಾವಾಗ ತಂದೆಯು ಬಂದು ತಿಳಿಸುವರೋ ಆಗ
ಬುದ್ಧಿಯಲ್ಲಿ ಬರುವುದು - ಈ ಸಮಯದಲ್ಲಿ ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ. ಇಲ್ಲಿ
ಮನುಷ್ಯರಿದ್ದಾರೆ, ದೇವತೆಗಳು ಸತ್ಯಯುಗದಲ್ಲಿರುತ್ತಾರೆ. ಅವಶ್ಯವಾಗಿ ನೀವೀಗ ಮನುಷ್ಯನಿಂದ
ದೇವತೆಯಾಗುತ್ತೀರಿ. ನಿಮ್ಮದು ಇದು ಈಶ್ವರೀಯ ಮಿಷನ್ ಆಗಿದೆ. ನಿರಾಕಾರಿ ಪರಮಾತ್ಮನನ್ನು ಯಾವ
ಮನುಷ್ಯರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ನಿರಾಕಾರನಿಗೆ ಕಾಲು-ಕೈಗಳು ಎಲ್ಲಿಂದ ಬಂದಿತು!
ಕೃಷ್ಣನಿಗೆ ಕೈ-ಕಾಲು ಎಲ್ಲವೂ ಇದೆ. ಭಕ್ತಿಮಾರ್ಗದ ಎಷ್ಟೊಂದು ಶಾಸ್ತ್ರಗಳನ್ನು ಬರೆದಿದ್ದಾರೆ, ಈಗ
ನೀವು ಮಕ್ಕಳ ಬಳಿ ಚಿತ್ರಗಳು ಬಹಳಷ್ಟಿವೆ. ಚಿತ್ರಗಳಿಂದ ಯಾವ ಚಿತ್ರದ ಬಗ್ಗೆ ಹೇಗೆ ತಿಳಿಸಬೇಕು
ಎಂದು ನೆನಪಿಗೆ ಬರುತ್ತದೆ. ಮುಂದೆ ಇನ್ನೂ ಬಹಳಷ್ಟು ಚಿತ್ರಗಳಾಗುತ್ತಾ ಹೋಗುವವು. ಎಲ್ಲದಕ್ಕಿಂತ
ಮೇಲೆ ಆತ್ಮರನ್ನು ತೋರಿಸಬೇಕು. ಅಲ್ಲಿ ಕೇವಲ ಆತ್ಮರೇ ಕಂಡು ಬರುವರು ನಂತರ ಸೂಕ್ಷ್ಮವತನ,
ಅದಕ್ಕಿಂತಲೂ ಕೆಳಗೆ ಮನುಷ್ಯ ಲೋಕವನ್ನು ತೋರಿಸಿರಿ. ಮನುಷ್ಯರು ಹೇಗೆ ಕೊನೆಯಲ್ಲಿ ಬಂದು ಮತ್ತೆ
ಮೇಲೇರುತ್ತಾರೆ, ಇದನ್ನು ತೋರಿಸಿರಿ. ದಿನ-ಪ್ರತಿ ದಿನ ಹೊಸ ಅನ್ವೇಷಣೆಗಳಾಗುತ್ತಾ ಹೋಗುವವು. ಈಗ
ಎಷ್ಟು ಚಿತ್ರಗಳಿವೆಯೋ ಅಷ್ಟು ಸರ್ವೀಸ್ ಮಾಡಬೇಕಾಗಿದೆ. ಮುಂದೆ ಇಂತಿಂತಹ ಚಿತ್ರಗಳು ತಯಾರಾಗುವವು,
ಯಾವುದರಿಂದ ಮನುಷ್ಯರು ಬಹುಬೇಗನೆ ತಿಳಿದುಕೊಳ್ಳುವರು. ವೃಕ್ಷವು ಬಹಳ ಬೇಗನೆ ವೃದ್ಧಿಯಾಗುತ್ತಾ
ಹೋಗುವುದು. ಕಲ್ಪದ ಮೊದಲು ಯಾರು ಯಾವ ಪದವಿಯನ್ನು ಪಡೆದಿದ್ದರೋ, ಯಾವ ಫಲಿತಾಂಶವು ಹೊರ ಬಂದಿತೋ ಅದೇ
ಬರುವುದು. ಕೊನೆಯಲ್ಲಿ ಬರುವವರು ಮಾಲೆಯ ಮಣಿಯಾಗುವುದಿಲ್ಲ ಎಂದಲ್ಲ. ಅವರೂ ಆಗುವರು, ನೌಧಾ
ಭಕ್ತಿಯವರು ರಾತ್ರಿ-ಹಗಲು ಭಕ್ತಿಯಲ್ಲಿ ತೊಡಗಿರುತ್ತಾರೆ ಆಗ ಅವರಿಗೆ ಸಾಕ್ಷಾತ್ಕಾರವಾಗುತ್ತದೆ.
ಹಾಗೆಯೇ ಇಲ್ಲಿಯೂ ಸಹ ಅಂತಹವರು ಮುಂದೆ ಬರುವರು. ರಾತ್ರಿ-ಹಗಲು ಪರಿಶ್ರಮಪಟ್ಟು ಪತಿತರಿಂದ ಪಾವನ
ಆಗುವರು. ಎಲ್ಲರಿಗೆ ಅವಕಾಶವಿದೆ, ಕೊನೆಯಲ್ಲಿ ಯಾರೂ ಉಳಿದುಕೊಳ್ಳಬಾರದು. ನಾಟಕವೇ ಹೀಗೆ
ಮಾಡಲ್ಪಟ್ಟಿದೆ. ಯಾರೂ ವಂಚಿತರಾಗುವುದಿಲ್ಲ. ಎಲ್ಲಾ ಕಡೆ ಸಂದೇಶ ಕೊಡಬೇಕಾಗಿದೆ. ಶಾಸ್ತ್ರಗಳಲ್ಲಿದೆ,
ಒಬ್ಬರು ಮಾತ್ರವೇ ಉಳಿದುಕೊಂಡರು ಅವರು ದೂರ ಕೊಟ್ಟರೆಂದು. ಮುಂದೆ ಈ ಚಿತ್ರಗಳು ಪತ್ರಿಕೆಗಳಲ್ಲಿಯೂ
ಹಾಕಲ್ಪಡುವುದು. ನಿಮಗೂ ನಿಮಂತ್ರಣ ಸಿಗುತ್ತಿರುತ್ತದೆ. ತಂದೆಯು ಬಂದಿದ್ದಾರೆಂಬುದು ಎಲ್ಲರಿಗೆ
ಅರ್ಥವಾಗುವುದು, ಯಾವಾಗ ಪೂರ್ಣ ನಿಶ್ಚಯವಾಗುವುದೋ ಆಗ ಓಡೋಡಿ ಬರುತ್ತಾರೆ. ಪ್ರಸಿದ್ಧಿ ಆಗುತ್ತಾ
ಇರುತ್ತದೆ. ಸತ್ಯಯುಗಕ್ಕೆ ನವ ಯುಗವೆಂದು ಹೇಳಲಾಗುತ್ತದೆ. ನವಯುಗ ಎಂಬ ಹೆಸರಿನ ಪತ್ರಿಕೆಯಿದೆ ಹಾಗೂ
ನವದೆಹಲಿ ಎಂದು ಹೇಳುತ್ತಾರೆ ಆದರೆ ಹೊಸ ದೆಹಲಿಯಿದ್ದಾಗ ಈ ಹಳೆಯ ಕೋಟೆಗಳು ಕೊಳಕು
ಇತ್ಯಾದಿಯಿರುವುದಿಲ್ಲ. ಈಗಂತೂ ಪ್ರತಿಯೊಂದು ವಸ್ತು ಅಂಕುಡೊಂಕಾಗಿ ಬಿಟ್ಟಿದೆ. ಸತ್ಯಯುಗದಲ್ಲಿ
ಎಲ್ಲಾ ತತ್ವಗಳು ಆರ್ಡರ್ನಲ್ಲಿರುತ್ತವೆ, ಇಲ್ಲಂತೂ ಐದು ತತ್ವಗಳೂ ತಮೋಪ್ರಧಾನವಾಗಿವೆ. ಅಲ್ಲಿ
ಎಲ್ಲವೂ ಸತೋಪ್ರಧಾನವಾಗಿರುತ್ತವೆ ಆದ್ದರಿಂದ ಪ್ರತಿಯೊಂದು ತತ್ವದಿಂದ ಸುಖ ಸಿಗುತ್ತದೆ, ದುಃಖದ
ಹೆಸರೂ ಇರುವುದಿಲ್ಲ. ಅದರ ಹೆಸರೇ ಆಗಿದೆ - ಸ್ವರ್ಗ, ಇವೆಲ್ಲಾ ಮಾತುಗಳನ್ನು ನೀವೀಗ
ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ನಾವೀಗ ತಮೋಪ್ರಧಾನರಾಗಿ ಬಿಟ್ಟಿದ್ದೇವೆ.
ಸತೋಪ್ರಧಾನರಾಗುವುದಕ್ಕಾಗಿ ಪುರುಷಾರ್ಥ ಮಾಡಿ ಗುರಿಯನ್ನು ತಲುಪುತ್ತಿದ್ದೇವೆ, ಮತ್ತೆಲ್ಲರೂ
ಅಂಧಕಾರದಲ್ಲಿದ್ದಾರೆ ನಾವು ಬೆಳಕಿನಲ್ಲಿದ್ದೇವೆ. ನಾವು ಮೇಲೆ ಹೋಗುತ್ತಿದ್ದೇವೆ ಮತ್ತೆಲ್ಲರೂ
ಕೆಳಗಿಳಿಯುತ್ತಿದ್ದಾರೆ. ಇದೆಲ್ಲಾ ವಿಚಾರ ಸಾಗರ ಮಂಥನವನ್ನು ನೀವು ಮಕ್ಕಳೇ ಮಾಡಬೇಕಾಗಿದೆ. ಶಿವ
ತಂದೆಯು ಕಲಿಸಿ ಕೊಡುವವರಾಗಿದ್ದಾರೆ. ಅವರಂತೂ ಮಂಥನ ಮಾಡುವುದಿಲ್ಲ. ಈ ಬ್ರಹ್ಮಾ ತಂದೆಯು ಜ್ಞಾನದ
ಮಂಥನ ಮಾಡಬೇಕಾಗುತ್ತದೆ. ನೀವೆಲ್ಲರೂ ವಿಚಾರ ಸಾಗರ ಮಂಥನ ಮಾಡಿ ತಿಳಿಸುತ್ತೀರಿ. ಕೆಲವರಿಗಂತೂ
ಮಂಥನ ನಡೆಯುವುದೇ ಇಲ್ಲ. ಹಳೆಯ ಪ್ರಪಂಚವೇ ನೆನಪಿಗೆ ಬರುತ್ತದೆ. ತಂದೆಯು ತಿಳಿಸುತ್ತಾರೆ - ಹಳೆಯ
ಪ್ರಪಂಚವನ್ನು ಒಮ್ಮೆಲೆ ಮರೆತು ಹೋಗಿರಿ. ಆದರೆ ತಂದೆಗೆ ಗೊತ್ತಿದೆ - ನಂಬರ್ವಾರ್
ಪುರುಷಾರ್ಥದನುಸಾರ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ತಂದೆಯು ತಿಳಿಸುತ್ತಾರೆ - ನಾನು ಬಂದು
ರಾಜಧಾನಿಯನ್ನು ಸ್ಥಾಪನೆ ಮಾಡಿ ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತೇನೆ. ಅವರಂತೂ ಕೇವಲ
ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ, ಅವರ ಹಿಂದೆ ಅವರ ಧರ್ಮದವರು ಬರುತ್ತಿರುತ್ತಾರೆ.
ಅವರದೇನು ಮಹಿಮೆ ಮಾಡುತ್ತೀರಿ! ಮಹಿಮೆಯು ನಿಮ್ಮದಾಗಿದೆ. ಆದಿ ಸನಾತನ ದೇವಿ-ದೇವತಾ ಧರ್ಮವನ್ನೇ
ಹೀರೋ-ಹೀರೋಯಿನ್ ಎಂದು ಹೇಳಲಾಗುತ್ತದೆ ಅಂದರೆ ವಜ್ರ ಸಮಾನ ಜನ್ಮ ಮತ್ತು ಕವಡೆಯಂತಹ ಜನ್ಮವೆಂದು
ನಿಮಗಾಗಿಯೇ ಗಾಯನವಿದೆ ನಂತರ ನೀವು ಕೊನೆಯಲ್ಲಿ ಮೇಲಿನಿಂದ ಕೆಳಗಿಳಿದು ಬಂದು ಬಿಡುತ್ತೀರಿ.
ಅಂದಮೇಲೆ ಈ ಸಮಯದಲ್ಲಿ ನೀವು ಮಕ್ಕಳಿಗೆ ದೇವತೆಗಳಿಗಿಂತಲೂ ಹೆಚ್ಚು ಖುಷಿಯಿರಬೇಕು ಏಕೆಂದರೆ ನಿಮಗೆ
ಲಾಟರಿ ಸಿಕ್ಕಿದೆ. ಈಗ ನಿಮಗೆ ಭಗವಂತ ಓದಿಸುತ್ತಾರೆ, ಅಲ್ಲಂತೂ ದೇವತೆಗಳು ದೇವತೆಗಳಿಗೆ
ಓದಿಸುತ್ತಾರೆ. ಇಲ್ಲಿ ಮನುಷ್ಯರಿಗೆ ಮನುಷ್ಯರೇ ಓದಿಸುತ್ತಾರೆ ಹಾಗೂ ನೀವಾತ್ಮರಿಗೆ ಪರಮಪಿತ
ಪರಮಾತ್ಮನೇ ಓದಿಸುತ್ತಾರೆ. ಅಂತರವಾಯಿತಲ್ಲವೆ. ನೀವು ಬ್ರಾಹ್ಮಣರು ರಾಮರಾಜ್ಯ ಹಾಗೂ ರಾವಣ
ರಾಜ್ಯವನ್ನು ತಿಳಿದುಕೊಂಡಿದ್ದೀರಿ. ನೀವೀಗ ಎಷ್ಟು ಶ್ರೀಮತದಂತೆ ನಡೆಯುವಿರೋ ಅಷ್ಟು ಶ್ರೇಷ್ಠ
ಪದವಿಯನ್ನು ಪಡೆಯುತ್ತೀರಿ. ಅಜ್ಞಾನ ಕಾಲದಲ್ಲಿ ಏನು ಮಾಡಿದರೂ ಅದು ಉಲ್ಟಾ ಆಗುತ್ತದೆ. ಬಾಲ್ಯದಲ್ಲಿ
ಬುದ್ಧಿ ಬೆಳವಣಿಗೆಯಾಗಿರುವುದಿಲ್ಲ ನಂತರ ಬುದ್ಧಿಯು ಪ್ರೌಡವಾಗುತ್ತದೆ. 16-17 ವರ್ಷಗಳ ನಂತರ
ನಿಶ್ಚಿತಾರ್ಥವಾಗುತ್ತದೆ. ಇತ್ತೀಚೆಗಂತೂ ಬಹಳ ಕೊಳಕಿದೆ. ಮಡಿಲಲ್ಲಿರುವ ಮಗುವಿಗೂ ನಿಶ್ಚಿತಾರ್ಥ
ಮಾಡಿಸಿ ಬಿಡುತ್ತಾರೆ ನಂತರ ಕೊಟ್ಟು ತೆಗೆದುಕೊಳ್ಳುವುದನ್ನು ಆರಂಭಿಸಿ ಬಿಡುತ್ತಾರೆ.
ಸತ್ಯಯುಗದಲ್ಲಿ ವಿವಾಹವೂ ಸಹ ಎಷ್ಟು ರಾಯಲ್ ಆಗಿರುತ್ತದೆ. ನೀವು ಎಲ್ಲವನ್ನೂ ಸಾಕ್ಷಾತ್ಕಾರದಲ್ಲಿ
ನೋಡಿದ್ದೀರಿ. ಎಷ್ಟು ಮುಂದುವರೆಯುತ್ತಾ ಹೋಗುತ್ತೀರೋ, ನೀವು ಎಲ್ಲವನ್ನೂ ಸಾಕ್ಷಾತ್ಕಾರ
ಮಾಡುತ್ತೀರಿ. ಒಳ್ಳೆಯ ಫಸ್ಟ್ಕ್ಲಾಸ್ ಯೋಗಿ ಮಕ್ಕಳ ಆಯಸ್ಸು ಹೆಚ್ಚುತ್ತಾ ಹೋಗುವುದು. ತಂದೆಯು
ತಿಳಿಸುತ್ತಾರೆ - ಯೋಗದಿಂದ ತಮ್ಮ ಆಯಸ್ಸನ್ನು ಹೆಚ್ಚಿಸಿಕೊಳ್ಳಿರಿ. ನಾವು ಯೋಗದಲ್ಲಿ ಬಹಳ
ಹಿಂದುಳಿದಿದ್ದೇವೆ. ನೆನಪಿನಲ್ಲಿರಲು ಬಹಳ ತಲೆಕೆಡಿಸಿಕೊಂಡರೂ ಇರಲು ಆಗುವುದಿಲ್ಲ, ಪದೇ-ಪದೇ ಮರೆತು
ಹೋಗುತ್ತೇವೆಂದು ಮಕ್ಕಳು ತಿಳಿದುಕೊಳ್ಳುತ್ತಾರೆ. ವಾಸ್ತವದಲ್ಲಿ ಇಲ್ಲಿರುವವರ ಚಾರ್ಟ್ ಬಹಳ
ಚೆನ್ನಾಗಿರಬೇಕು. ಹೊರಗಡೆಯಂತೂ ಉದ್ಯೋಗ-ವ್ಯವಹಾರಗಳ ಜಂಜಾಟದಲ್ಲಿರುತ್ತಾರೆ. ತಂದೆಯನ್ನು ನೆನಪು
ಮಾಡುತ್ತಾ-ಮಾಡುತ್ತಾ ಇಲ್ಲಿಯೇ ನೀವು ಸತೋಪ್ರಧಾನರಾಗಬೇಕಾಗಿದೆ. ಕೊನೆ ಪಕ್ಷ ಭೋಜನವನ್ನು
ತಯಾರಿಸುತ್ತಾ, ಕೆಲಸ-ಕಾರ್ಯಗಳನ್ನು ಮಾಡುತ್ತಾ 8 ಗಂಟೆಗಳಾದರೂ ನನ್ನನ್ನು ನೆನಪು ಮಾಡಿರಿ ಆಗ
ಅಂತ್ಯದಲ್ಲಿ ಕರ್ಮಾತೀತ ಸ್ಥಿತಿಯಾಗುವುದು. ನಾನು 6-8 ಗಂಟೆಗಳು ಯೋಗದಲ್ಲಿರುತ್ತೇನೆ ಎಂದು
ಯಾರಾದರೂ ಹೇಳಿದರೆ ಅದನ್ನು ತಂದೆಯು ಒಪ್ಪುವುದಿಲ್ಲ. ಅನೇಕರಿಗೆ ಸಂಕೋಚವಾಗಿ ಚಾರ್ಟ್
ಬರೆಯುವುದಿಲ್ಲ. ಅರ್ಧ ಗಂಟೆಯೂ ನೆನಪಿನಲ್ಲಿರುವುದಿಲ್ಲ. ಮುರುಳಿಯನ್ನು ಕೇಳುವುದು, ಯೋಗವಲ್ಲ. ಇದು
ಕೇವಲ ಧನ ಸಂಪಾದನೆಯಾಯಿತು. ನೆನಪಿನಲ್ಲಿದ್ದಾಗ ಕೇಳುವುದೇ ನಿಂತು ಹೋಗುತ್ತದೆ. ಕೆಲವು ಮಕ್ಕಳು
ಬಾಬಾ, ನಾವು ನೆನಪಿನಲ್ಲಿದ್ದು ಮುರುಳಿ ಕೇಳಿದೆವು ಎಂದು ಬರೆಯುತ್ತಾರೆ ಆದರೆ ಇದು ನೆನಪಾಗಲಿಲ್ಲ.
ತಂದೆಯೇ(ಬ್ರಹ್ಮಾ) ಸ್ವಯಂ ಹೇಳುತ್ತಾರೆ - ನಾನು ಪದೇ-ಪದೇ ಮರೆತು ಹೋಗುತ್ತೇನೆ, ನೆನಪಿನಲ್ಲಿ
ಭೋಜನ ಮಾಡಲು ಕುಳಿತುಕೊಳ್ಳುತ್ತೇನೆ. ಬಾಬಾ, ತಾವಂತೂ ಅಭೋಕ್ತನಾಗಿದ್ದೀರಿ, ತಾವೂ ತಿನ್ನುತ್ತೀರಿ,
ನಾನೂ ತಿನ್ನುತ್ತೇನೆಂದು ಹೇಗೆ ನಾನು ಹೇಳಲಿ! ಕೆಲಕೆಲವು ಮಾತುಗಳಲ್ಲಿ ತಂದೆಯು ಜೊತೆಯಿದ್ದಾರೆಂದು
ಹೇಳುತ್ತೇವೆ. ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ. ಮುರುಳಿಯ ಸಬ್ಜೆಕ್ಟ್ ಸಂಪೂರ್ಣ ಬೇರೆಯಾಗಿದೆ.
ನೆನಪಿನಿಂದಲೇ ಪವಿತ್ರರಾಗುತ್ತೀರಿ. ಆಯಸ್ಸೂ ಹೆಚ್ಚುತ್ತದೆ. ಬಾಕಿ ಮುರುಳಿಯನ್ನು ಕೇಳಿದ ತಕ್ಷಣ
ಶಿವ ತಂದೆಯು ಇವರಲ್ಲಿದ್ದರಲ್ಲವೆ ಆದ್ದರಿಂದ ಮುರುಳಿ ಕೇಳುವುದರಿಂದ ವಿಕರ್ಮ ವಿನಾಶವಾಯಿತು
ಎಂದಲ್ಲ, ಪರಿಶ್ರಮವಿದೆ. ತಂದೆಗೆ ಗೊತ್ತಿದೆ, ಬಹಳ ಮಂದಿ ಮಕ್ಕಳು ನೆನಪೇ ಮಾಡುವುದಿಲ್ಲ.
ನೆನಪಿನಲ್ಲಿರುವವರ ಸ್ಥಿತಿ ಮಾತು, ನಡವಳಿಕೆ ಸಂಪೂರ್ಣ ಭಿನ್ನವಾಗಿರುವುದು. ನೆನಪಿನಿಂದಲೇ
ಸತೋಪ್ರಧಾನರಾಗುವಿರಿ ಆದರೆ ಮಾಯೆಯು ಒಮ್ಮೆಲೆ ಮಂದ ಬುದ್ಧಿಯವರನ್ನಾಗಿ ಮಾಡಿ ಬಿಡುತ್ತದೆ.
ಅನೇಕರಿಗೆ ಕಾಯಿಲೆ ಹೊರ ಬರುತ್ತದೆ. ಮೊದಲು ಯಾವ ಮೋಹವಿರಲಿಲ್ಲವೋ ಅದೂ ಸಹ ಹೆಚ್ಚಾಗಿ ಹೊರ
ಬರುತ್ತದೆ. ಮತ್ತಷ್ಟು ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದು ಬಹಳ ಪರಿಶ್ರಮದ ಕೆಲಸವಾಗಿದೆ. ಮುರುಳಿ
ಕೇಳುವುದೇ ಬೇರೆ ಸಬ್ಜೆಕ್ಟ್ ಆಗಿದೆ. ಇದು ಕೇವಲ ಧನ ಸಂಪಾದನೆಯ ಮಾತಾಗಿದೆ. ಇದರಲ್ಲಿ ಆಯಸ್ಸು
ಹೆಚ್ಚಾಗುವುದಿಲ್ಲ, ಪಾವನರಾಗುವುದಿಲ್ಲ. ವಿಕರ್ಮ ವಿನಾಶವಾಗುವುದಿಲ್ಲ. ಮುರುಳಿಯನ್ನಂತೂ ಅನೇಕರು
ಕೇಳುತ್ತಾರೆ, ಮತ್ತೆ ಹೋಗಿ ವಿಕಾರಗಳಲ್ಲಿ ಬೀಳುತ್ತಿರುತ್ತಾರೆ. ಸತ್ಯವನ್ನು ತಿಳಿಸುವುದಿಲ್ಲ.
ತಂದೆಯು ಹೇಳುತ್ತಾರೆ - ಪವಿತ್ರರಾಗಿ ಇರದಿದ್ದರೆ ಇಲ್ಲಿಗೇಕೆ ಬರುತ್ತೀರಿ ಎಂದು. ಬಾಬಾ, ನಾನು
ಅಜಾಮೀಳನಾಗಿದ್ದೇನೆ, ಇಲ್ಲಿ ಬಂದಾಗಲೇ ಪಾವನನಾಗುವೆನು. ಇಲ್ಲಿ ಬರುವುದರಿಂದ ಸ್ವಲ್ಪ
ಸುಧಾರಣೆಯಾಗುವುದು, ಇಲ್ಲದಿದ್ದರೆ ಎಲ್ಲಿ ಹೋಗುವುದು! ಮಾರ್ಗವಂತೂ ಇದೇ ಆಗಿದೆ ಎಂದು ಹೇಳ
ತೊಡಗುತ್ತಾರೆ. ಇಂತಿಂತಹವರು ಬರುತ್ತಾರೆ. ಒಂದಲ್ಲ ಒಂದು ಸಮಯದಲ್ಲಿ ಅವರಿಗೆ ಬಾಣವು ನಾಟುವುದು.
ತಂದೆಯು ಇಲ್ಲಿಗಾಗಿಯೇ ಹೇಳುತ್ತಾರೆ - ಇಲ್ಲಿ ಯಾರೂ ಅಪವಿತ್ರರು ಬರಬಾರದು, ಇದಂತೂ ಇಂದ್ರ
ಸಭೆಯಾಗಿದೆ. ಇಲ್ಲಿಯವರೆಗೂ ಬಂದು ಬಿಡುತ್ತಿದ್ದರು ಆದರೆ ಒಂದು ದಿನ ಇದನ್ನೂ ಖಾಯಿದೆ ಮಾಡಲಾಗುವುದು
- ಎಲ್ಲಿಯವರೆಗೆ ಪಕ್ಕಾ ಆಗುವುದಿಲ್ಲವೋ ಅಲ್ಲಿಯವರೆಗೆ ಪ್ರವೇಶವಿಲ್ಲ. ಇದರಿಂದ
ತಿಳಿದುಕೊಳ್ಳುತ್ತಾರೆ - ಇದು ಇಂತಹ ಸಂಸ್ಥೆಯಾಗಿದೆ, ಅಪವಿತ್ರರು ಒಳಗೆ ಹೋಗಲು ಸಾಧ್ಯವಿಲ್ಲ. ಇದು
ಯಾರ ಸಭೆಯಾಗಿದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ ಅರ್ಥಾತ್ ನಾವು ಭಗವಂತ, ಈಶ್ವರ, ಸೋಮನಾಥ,
ಬಬುಲ್ನಾಥನ ಬಳಿ ಕುಳಿತಿದ್ದೇವೆ, ಅವರೇ ಪಾವನರನ್ನಾಗಿ ಮಾಡುವವರಾಗಿದ್ದಾರೆ. ಈಗ ಕೊನೆಯಲ್ಲಿ
ಅನೇಕರು ಬಂದು ಬಿಡುತ್ತಾರೆ ಆಗ ಯಾರೂ ಇಲ್ಲಿ ತೊಂದರೆ ಕೊಡಲು ಸಾಧ್ಯವಿಲ್ಲ. ಯಾರು ಈ
ಧರ್ಮದವರಿದ್ದಾರೆಯೋ ಅವರು ಬಂದು ಬಿಡುವರು. ಆರ್ಯ ಸಮಾಜಿಗಳು ಹಿಂದೂಗಳಾಗಿದ್ದಾರೆ. ಕೇವಲ ಮಠ
ಪಂಥವನ್ನು ಬೇರೆ ಮಾಡಿ ಬಿಟ್ಟಿದ್ದಾರೆ. ದೇವತೆಗಳಿರುವುದು ಸತ್ಯಯುಗದಲ್ಲಿ, ಇಲ್ಲಿ ಎಲ್ಲರೂ
ಹಿಂದೂಗಳಿದ್ದಾರೆ. ವಾಸ್ತವದಲ್ಲಿ ಹಿಂದೂ ಎಂಬ ಧರ್ಮವಿಲ್ಲ. ಈ ಹಿಂದೂ ಸ್ಥಾನವೆಂಬುದು ದೇಶದ
ಹೆಸರಾಗಿದೆ. ನೀವು ಮಕ್ಕಳು ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆದಾಡುತ್ತಾ ಸ್ವದರ್ಶನ
ಚಕ್ರಧಾರಿಗಳಾಗಬೇಕಾಗಿದೆ. ವಿದ್ಯಾರ್ಥಿಗೆ ವಿದ್ಯಾಭ್ಯಾಸದ ನೆನಪಿರಬೇಕಲ್ಲವೆ. ಇಡೀ ಚಕ್ರವು
ಬುದ್ಧಿಯಲ್ಲಿದೆ. ದೇವತೆಗಳು ಮತ್ತು ನಿಮ್ಮಲ್ಲಿ ಸ್ವಲ್ಪ ಅಂತರ ಉಳಿದುಕೊಂಡಿದೆ. ಪಕ್ಕಾ ಸ್ವದರ್ಶನ
ಚಕ್ರಧಾರಿಗಳಾಗಿ ಬಿಟ್ಟರೆ ಮತ್ತೆ ವಿಷ್ಣು ಕುಲದವರಾಗಿ ಬಿಡುತ್ತೀರಿ. ನಾವು ಈ
ರೀತಿಯಾಗುತ್ತಿದ್ದೇವೆ ಎಂದು ನೀವು ತಿಳಿದುಕೊಳ್ಳುತ್ತೀರಿ. ಆ ದೇವತೆಗಳು ಸಂಪೂರ್ಣರಾಗಿದ್ದಾರೆ,
ಯಾವಾಗ ನಿಮ್ಮದು ಕರ್ಮಾತೀತ ಸ್ಥಿತಿಯಾಗುವುದೋ ಆಗ ನೀವು ಸಂಪೂರ್ಣರಾಗುತ್ತೀರಿ. ಶಿವ ತಂದೆಯು
ನಿಮ್ಮನ್ನು ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡುತ್ತಾರೆ, ಅವರಲ್ಲಿ ಜ್ಞಾನವಿದೆಯಲ್ಲವೆ. ಅವರು
ನಿಮ್ಮನ್ನು ಮಾಡುವವರಾಗಿದ್ದಾರೆ. ನೀವು ಆಗುವವರಾಗಿದ್ದೀರಿ. ಬ್ರಾಹ್ಮಣರಾಗಿ ನಂತರ
ದೇವತೆಗಳಾಗುತ್ತೀರಿ. ಈಗ ಈ ಅಲಂಕಾರಗಳನ್ನು ನಿಮಗೆ ಹೇಗೆ ಕೊಡುವುದು! ಈಗಿನ್ನೂ ನೀವು
ಪುರುಷಾರ್ಥಿಯಾಗಿದ್ದೀರಿ ನಂತರ ನೀವೇ ವಿಷ್ಣುವಿನ ಕುಲದವರಾಗುತ್ತೀರಿ. ಸತ್ಯಯುಗವು ವೈಷ್ಣವ
ಕುಲವಲ್ಲವೆ. ಅಂದಮೇಲೆ ಈ ರೀತಿಯಾಗಬೇಕಾಗಿದೆ. ನೀವು ಬಹಳ ಮಧುರರಾಗಬೇಕಾಗಿದೆ. ಅಂತಿಂತಹ
ಶಬ್ಧಗಳನ್ನು ಮಾತನಾಡುವುದಕ್ಕಿಂತಲೂ ಸುಮ್ಮನಿರುವುದೇ ಒಳ್ಳೆಯದು. ಒಂದು ದೃಷ್ಟಾಂತವಿದೆ - ಇಬ್ಬರು
ಹೊಡೆದಾಡುತ್ತಿದ್ದರು, ಸನ್ಯಾಸಿ ಹೇಳಿದರು - ಬಾಯಲ್ಲಿ ಉಂಗುರವನ್ನು ಹಾಕಿಕೊಳ್ಳಿರಿ, ಎಂದೂ
ತೆಗೆಯಬಾರದು, ಇದರಿಂದ ಪ್ರತ್ಯುತ್ತರ ಕೊಡುವುದಿಲ್ಲ. ಐದು ವಿಕಾರಗಳನ್ನು ಗೆಲ್ಲುವುದು ಚಿಕ್ಕಮ್ಮನ
ಮನೆಯಂತಲ್ಲ. ಕೆಲವರಂತೂ ತಮ್ಮ ಅನುಭವವನ್ನು ತಿಳಿಸುತ್ತಾರೆ - ನಮ್ಮಲ್ಲಿ ಬಹಳ ಕ್ರೋಧವಿತ್ತು, ಈಗ
ಬಹಳ ಕಡಿಮೆಯಾಗಿ ಬಿಟ್ಟಿದೆ. ಬಹಳ ಮಧುರರಾಗಬೇಕಾಗಿದೆ. ನೆನ್ನೆ ತಾನೆ ನೀವು ಈ ದೇವತೆಗಳ ಗುಣಗಳನ್ನು
ಹಾಡುತ್ತಿದ್ದಿರಿ. ಇಂದು ನಾವೇ ಈ ರೀತಿಯಾಗುತ್ತಿದ್ದೇವೆ. ನೀವೀಗ ತಿಳಿದುಕೊಂಡಿದ್ದೀರಿ -
ನಂಬರ್ವಾರ್ ಆಗುವರು. ಯಾರು ಸರ್ವೀಸ್ ಮಾಡುವರೋ ಅವಶ್ಯವಾಗಿ ತಂದೆಯು ಅವರ ಹೆಸರನ್ನು
ತೆಗೆದುಕೊಳ್ಳುವರು. ಮಾರ್ಗವನ್ನು ತಿಳಿಸಬೇಕು. ನಾವೂ ಸಹ ಮೊದಲು ಏನನ್ನೂ ತಿಳಿದುಕೊಂಡಿರಲಿಲ್ಲ.
ಈಗ ಎಷ್ಟೊಂದು ಜ್ಞಾನವು ಸಿಕ್ಕಿದೆ. ಯಾರು ಚೆನ್ನಾಗಿ ಧಾರಣೆ ಮಾಡುವುದಿಲ್ಲವೋ ಅವರ ರಿಪೋರ್ಟ್
ಬರುತ್ತದೆ. ಬಾಬಾ, ಇವರಲ್ಲಂತೂ ಬಹಳ ಕ್ರೋಧವಿದೆ. ತಂದೆಯು ತಿಳಿಸುತ್ತಾರೆ - ಇವರು ಆತ್ಮಿಕ ಸೇವೆ
ಮಾಡಲು ಆಗದಿದ್ದರೆ ಸ್ಥೂಲ ಸೇವೆಯನ್ನಾದರೂ ಮಾಡಲಿ. ಬಾಬಾನ ನೆನಪಿನಲ್ಲಿದ್ದು ಸರ್ವೀಸ್ ಮಾಡುವುದು
ಅಹೋ ಸೌಭಾಗ್ಯವಾಗಿದೆ. ಒಬ್ಬರು ಇನ್ನೊಬ್ಬರಿಗೆ ನೆನಪು ತರಿಸುತ್ತಾ ಇರಿ. ನೆನಪಿನಿಂದ ಬಹಳ ಬಲ
ಸಿಗುವುದು. ನೆನಪು ಮಾಡುವವರು ಚಾರ್ಟ್ ಇಡಬೇಕು. ಚಾರ್ಟ್ನಿಂದ ತಿಳಿಯಲಾಗುತ್ತದೆ. ಪ್ರತಿಯೊಬ್ಬರಿಗೆ
ತಂದೆಯು ಎಚ್ಚರಿಕೆಯನ್ನು ಕೊಡುತ್ತಿರುತ್ತಾರೆ. ವಿಶ್ವದಲ್ಲಿ ಶಾಂತಿಯನ್ನು ಬಹಳ ಬೇಡುತ್ತಾರೆ.
ಅವಶ್ಯವಾಗಿ ಒಂದು ಸಮಯದಲ್ಲಿ ವಿಶ್ವದಲ್ಲಿ ಶಾಂತಿಯಿತ್ತು. ಸತ್ಯಯುಗದಲ್ಲಿ ಅಶಾಂತಿಯ ಯಾವುದೇ
ಮಾತಿಲ್ಲ. ಮಧುರ ತಂದೆಯ ಮಧುರ ಮಕ್ಕಳು ಇಡೀ ವಿಶ್ವವನ್ನು ಮಧುರವನ್ನಾಗಿ ಮಾಡುತ್ತಾರೆ. ಈಗ ಮಧುರತೆ
ಎಲ್ಲಿದೆ! ಈಗಂತೂ ಎಲ್ಲಿ ನೋಡಿದರೂ ಮೃತ್ಯುವೇ ಮೃತ್ಯುವಿದೆ. ಈ ಆಟವು ಅನೇಕ ಬಾರಿ ಆಗಿದೆ ಮತ್ತು
ಆಗುತ್ತಲೇ ಇರುತ್ತದೆ. ಅಂತ್ಯವಾಗಲು ಸಾಧ್ಯವಿಲ್ಲ. ಚಕ್ರವು ಸುತ್ತುತ್ತಿರುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
೧. ವಿಕರ್ಮ ವಿನಾಶ ಮಾಡಲು
ಮತ್ತು ಆಯಸ್ಸನ್ನು ಹೆಚ್ಚಿಸಿಕೊಳ್ಳಲು ನೆನಪಿನ ಯಾತ್ರೆಯಲ್ಲಿ ಅವಶ್ಯವಾಗಿ ಇರಬೇಕಾಗಿದೆ.
ನೆನಪಿನಿಂದಲೇ ಪಾವನರಾಗುತ್ತೀರಿ. ಆದ್ದರಿಂದ ಕೊನೆ ಪಕ್ಷ 8 ಗಂಟೆ ನೆನಪಿನ ಚಾರ್ಟ್ ಮಾಡಬೇಕಾಗಿದೆ.
೨. ದೇವತೆಗಳ ಸಮಾನ
ಮಧುರರಾಗಬೇಕಾಗಿದೆ. ಅಂತಿಂತಹ ಶಬ್ಧಗಳ ಮಾತುಗಳ ಬದಲಾಗಿ ಮಾತನಾಡದಿರುವುದು ಒಳ್ಳೆಯದು. ಆತ್ಮಿಕ
ಹಾಗೂ ಸ್ಥೂಲ ಸೇವೆ ಮಾಡುತ್ತಾ ತಂದೆಯ ನೆನಪಿನಲ್ಲಿದ್ದರೆ ಅಹೋ ಸೌಭಾಗ್ಯ.
ವರದಾನ:
ಈಶ್ವರೀಯ ರಸದ
ಅನುಭವ ಮಾಡಿ ಏಕರಸ ಸ್ಥಿತಿಯಲ್ಲಿ ಸ್ಥಿತರಾಗಿರುವಂತಹ ಶ್ರೇಷ್ಠ ಆತ್ಮ ಭವ.
ಯಾವ ಮಕ್ಕಳು ಈಶ್ವರೀಯ
ರಸದ ಅನುಭವ ಮಾಡುತ್ತಾರೆ ಅವರಿಗೆ ಪ್ರಪಂಚದ ಎಲ್ಲಾ ರಸಗಳೂ ಸಪ್ಪೆ ಎನ್ನಿಸುತ್ತದೆ. ಒಂದೇ ರಸ
ಯಾವಾಗ ಮಧುರ ಎನ್ನಿಸುತ್ತದೆ ಆಗ ಒಂದೇ ಕಡೆ ಗಮನ ಹೋಗುತ್ತಲ್ಲವೇ. ಸಹಜವಾಗಿ ಒಂದು ಕಡೆ ಮನಸ್ಸು
ಸಿಕ್ಕಿಕೊಂಡಿರುತ್ತದೆ, ಪರಿಶ್ರಮವೆನ್ನಿಸುವುದಿಲ್ಲ. ತಂದೆಯ ಸ್ನೇಹ, ತಂದೆಯ ಸಹಾಯ, ತಂದೆಯ ಜೊತೆ
ತಂದೆಯ ಮೂಲಕ ಸರ್ವ ಪ್ರಾಪ್ತಿಗಳು ಸಹಜವಾಗಿ ಏಕರಸ ಸ್ಥಿತಿಯಾಗಿ ಬಿಡುವುದು. ಈ ರಿತಿಯ ಏಕರಸ
ಸ್ಥಿತಿಯಲ್ಲಿರುವಂತಹ ಆತ್ಮರೇ ಶ್ರೇಷ್ಠರಾಗಿದ್ದಾರೆ.
ಸ್ಲೋಗನ್:
ಕೊಳಕನ್ನು ಸೇರಿಸಿಕೊಂಡು ರತ್ನ ಕೊಡುವುದೇ ಮಾಸ್ಟರ್ ಸಾಗರ ಆಗುವುದಾಗಿದೆ.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ -
ಹೇಗೆ ಬ್ರಹ್ಮಾ ತಂದೆಯು ತನ್ನ ಸುಖದ ಸಾಧನಗಳನ್ನು, ಆರಾಮದ, ಯಾವುದೇ ಮಾತಿನ
ಆಧಾರವಾಗಿಟ್ಟುಕೊಳ್ಳಲಿಲ್ಲ. ಅವರು ಎಲ್ಲಾ ಪ್ರಕಾರದ ದೇಹದ ಸ್ಮೃತಿಯಿಂದ ಕಳೆದು ಹೋಗಿದ್ದರು
ಅರ್ಥಾತ್ ನಿರಂತರ ಜ್ಯೋತಿಯ ಪ್ರೀತಿಯಲ್ಲಿ ಲವಲೀನರಾಗಿದ್ದರು, ಈ ರೀತಿ ತಂದೆಯನ್ನು ಅನುಕರಣೆ ಮಾಡಿ.
ಹೇಗೆ ಶಮಾ ಜ್ಯೋತಿ-ಸ್ವರೂಪ , ಲೈಟ್ ಮೈಟ್ ರೂಪವಾಗಿದೆ, ಅದೇ ರೀತಿ ಜ್ಯೋತಿಯ ತರಹ ಸ್ವಯಂ ಸಹಾ
ಲೈಟ್-ಮೈಟ್ ರೂಪ ಆಗಿ.