24.08.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆ, ಶಿಕ್ಷಕ ಮತ್ತು ಸದ್ಗುರು - ಈ ಮೂರು ಅಕ್ಷರಗಳನ್ನು ನೆನಪು ಮಾಡಿ, ಇದರಿಂದ ಅನೇಕ ವಿಶೇಷತೆಗಳು ಬಂದು ಬಿಡುತ್ತವೆ”

ಪ್ರಶ್ನೆ:
ಯಾವ ಮಕ್ಕಳ ಪ್ರತೀ ಹೆಜ್ಜೆಯಲ್ಲಿ ಪದುಮಗಳಷ್ಟು ಸಂಪಾದನೆಯು ಜಮಾ ಆಗುತ್ತಾ ಇರುತ್ತದೆ?

ಉತ್ತರ:
ಯಾರು ಪ್ರತೀ ಹೆಜ್ಜೆಯನ್ನು ಸರ್ವೀಸಿನಲ್ಲಿ ಮುಂದಿಡುತ್ತಾ ಹೋಗುತ್ತಾರೆಯೋ ಅವರೇ ಪದುಮಗಳ ಸಂಪಾದನೆಯನ್ನು ಜಮಾ ಮಾಡಿಕೊಳ್ಳುತ್ತಾರೆ. ಒಂದುವೇಳೆ ತಂದೆಯ ಸೇವೆಯಲ್ಲಿ ಹೆಜ್ಜೆಯನ್ನಿಡಲಿಲ್ಲವೆಂದರೆ ಪದುಮಗಳನ್ನು ಹೇಗೆ ಪಡೆಯುತ್ತೀರಿ? ಸೇವೆಯೇ ಹೆಜ್ಜೆಯಲ್ಲಿ ಪದುಮದಷ್ಟನ್ನು ಕೊಡುತ್ತದೆ. ಇದರಿಂದಲೇ ಪದಮಾಪದಮಪತಿಗಳಾಗುತ್ತೀರಿ.

ಪ್ರಶ್ನೆ:
ಯಾವ ರಹಸ್ಯವನ್ನು ಅರಿತುಕೊಳ್ಳುವ ಕಾರಣ ನೀವು ಮಕ್ಕಳು ಎಲ್ಲರ ಕಲ್ಯಾಣಕಾರಿಗಳಾಗುತ್ತೀರಿ?

ಉತ್ತರ:
ತಂದೆಯು ನಾವು ಮಕ್ಕಳಿಗೆ ಈ ರಹಸ್ಯವನ್ನು ತಿಳಿಸುತ್ತಾರೆ - ಎಲ್ಲರಿಗೂ ಇದೊಂದೇ ಅಂಗಡಿಯಾಗಿದೆ. ಎಲ್ಲರೂ ಇಲ್ಲಿಯೇ ಬರಬೇಕಾಗಿದೆ. ಇದು ಬಹಳ ಗುಹ್ಯ ರಹಸ್ಯವಾಗಿದೆ. ಈ ರಹಸ್ಯವನ್ನು ಅರಿತುಕೊಳ್ಳುವಂತಹ ಮಕ್ಕಳೇ ಎಲ್ಲರ ಕಲ್ಯಾಣಕಾರಿಗಳಾಗುತ್ತಾರೆ.

ಓಂ ಶಾಂತಿ.
ಆತ್ಮಿಕ ತಂದೆಯ ಆತ್ಮಿಕ ಮಕ್ಕಳು ಇದನ್ನಂತೂ ಪ್ರತಿಯೊಬ್ಬರೂ ತಿಳಿದುಕೊಂಡಿರುತ್ತೀರಿ - ತಂದೆಯು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಮತ್ತು ಸದ್ಗುರುವೂ ಆಗಿದ್ದಾರೆ. ಮಕ್ಕಳಿಗೆ ಗೊತ್ತಿದೆ, ಗೊತ್ತಿದ್ದರೂ ಸಹ ಪದೇ-ಪದೇ ಮರೆತು ಹೋಗುತ್ತೀರಿ. ಇಲ್ಲಿ ಯಾರು ಕುಳಿತಿದ್ದೀರೋ ಅವರಂತೂ ತಿಳಿದುಕೊಂಡಿರುತ್ತೀರಲ್ಲವೆ ಆದರೆ ಮರೆತು ಹೋಗುತ್ತೀರಿ. ಪ್ರಪಂಚದವರಿಗಂತೂ ಏನೂ ಗೊತ್ತಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕೇವಲ ಈ ಮೂರು ಶಬ್ಧಗಳು ನೆನಪಿದ್ದರೂ ಸಹ ಬಹಳ ಸೇವೆ ಮಾಡಬಲ್ಲಿರಿ. ಪ್ರದರ್ಶನಿ ಅಥವಾ ಮ್ಯೂಜಿಯಂನಲ್ಲಿ ನಿಮ್ಮ ಬಳಿ ಅನೇಕರು ಬರುತ್ತಾರೆ. ಮನೆಯಲ್ಲಿಯೂ ಸಹ ಮಿತ್ರ ಸಂಬಂಧಿಗಳು ಮೊದಲಾದವರು ಅನೇಕರು ಬರುತ್ತಾರೆ. ಯಾರೇ ಬಂದರೂ ತಿಳಿಸಿಕೊಡಬೇಕು - ಯಾರಿಗೆ ಭಗವಂತನೆಂದು ಹೇಳಲಾಗುತ್ತದೆಯೋ ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಮತ್ತು ಸದ್ಗುರುವೂ ಆಗಿದ್ದಾರೆ. ಈ ನೆನಪಿದ್ದರೂ ಸರಿ, ಮತ್ತ್ಯಾವುದೇ ನೆನಪು ಬರಬಾರದು. ಮತ್ತ್ಯಾರಿಗೂ ಈ ರೀತಿ ಹೇಳಲು ಸಾಧ್ಯವಿಲ್ಲ, ಏಕೆಂದರೆ ಇದು ನೀವು ಮಕ್ಕಳಿಗೇ ಗೊತ್ತಿದೆ - ನಮ್ಮ ತಂದೆಯು ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಎಷ್ಟು ಸಹಜವಾಗಿದೆ ಆದರೆ ಕೆಲವರದು ಇಂತಹ ಕಲ್ಲು ಬುದ್ಧಿಯಾಗಿದೆ ಆ ಮೂರು ಶಬ್ಧಗಳನ್ನೂ ಸಹ ಧಾರಣೆ ಮಾಡಲು ಆಗುವುದಿಲ್ಲ, ಮರೆತು ಹೋಗುತ್ತಾರೆ. ತಂದೆಯು ನಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ ಏಕೆಂದರೆ ಬೇಹದ್ದಿನ ತಂದೆಯಲ್ಲವೆ. ಬೇಹದ್ದಿನ ತಂದೆಯಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಬೇಹದ್ದಿನ ಆಸ್ತಿಯನ್ನೇ ಕೊಡುತ್ತಾರೆ. ಬೇಹದ್ದಿನ ಆಸ್ತಿಯು ದೇವತೆಗಳ ಬಳಿಯಿದೆ. ಕೇವಲ ಇಷ್ಟನ್ನು ನೆನಪು ಮಾಡಿದರೆ ಮನೆಯಲ್ಲಿಯೂ ಸಹ ಸರ್ವೀಸ್ ಮಾಡಬಹುದು ಆದರೆ ಇದನ್ನೂ ಮರೆತು ಹೋಗುವ ಕಾರಣ ಯಾರಿಗೂ ತಿಳಿಸಲು ಆಗುವುದಿಲ್ಲ. ಪದೇ-ಪದೇ ಮರೆತು ಹೋಗುತ್ತಾರೆ ಏಕೆಂದರೆ ಇಡೀ ಕಲ್ಪದಲ್ಲಿಯೇ ಮರೆತಿದ್ದಾರೆ. ಈಗ ತಂದೆಯು ಕುಳಿತು ತಿಳಿಸುತ್ತಾರೆ - ವಾಸ್ತವದಲ್ಲಿ ಈ ಜ್ಞಾನವು ಬಹಳ ಸಹಜವಾಗಿದೆ. ಬಾಕಿ ನೆನಪಿನ ಯಾತ್ರೆಯಿಂದ ಸಂಪೂರ್ಣರಾಗಬೇಕು, ಇದರಲ್ಲಿಯೇ ಪರಿಶ್ರಮವಿದೆ. ತಂದೆಯು ನಮಗೆ ತಂದೆಯೂ ಆಗಿದ್ದಾರೆ, ಶಿಕ್ಷಣವನ್ನೂ ಕೊಡುತ್ತಾರೆ. ಆಸ್ತಿಯನ್ನೂ ಕೊಡುತ್ತಾರೆ, ಪವಿತ್ರರನ್ನಾಗಿಯೂ ಮಾಡುತ್ತಾರೆ. ಏಕೆಂದರೆ ಪತಿತ-ಪಾವನ ತಂದೆಯಾಗಿದ್ದಾರೆ. ಕೇವಲ ಇಷ್ಟನ್ನೇ ತಿಳಿಸುತ್ತಾರೆ - ಮಕ್ಕಳೇ, ಎಲ್ಲರಿಗೆ ಇದನ್ನೇ ಹೇಳಿ - ನನ್ನನ್ನು ನೆನಪು ಮಾಡಿ. ತಂದೆಯ ಸೇವೆಯಲ್ಲಿ ಹೆಜ್ಜೆಯನ್ನಿಡದೇ ಇದ್ದರೆ ಅವರು ಪದುಮದಷ್ಟನ್ನು ಹೇಗೆ ಪಡೆಯುತ್ತಾರೆ! ಸರ್ವೀಸಿನಿಂದಲೇ ಪದಮಾಪತಿಗಳಾಗಲು ಸಾಧ್ಯ. ಸೇವೆಯೇ ಒಂದೊಂದು ಹೆಜ್ಜೆಯಲ್ಲಿ ಪದಮದಷ್ಟನ್ನು ತೆಗೆದುಕೊಂಡು ಬರುತ್ತದೆ. ಸರ್ವೀಸಿಗಾಗಿ ಮಕ್ಕಳು ಎಲ್ಲೆಲ್ಲಿಂದ ಓಡಿ ಬರುತ್ತಾರೆ. ಎಷ್ಟೊಂದು ಹೆಜ್ಜೆಗಳನ್ನಿಡಬೇಕಾಗುತ್ತದೆ. ಅವರಿಗೇ ಪದುಮಗಳು ಸಿಗುತ್ತದೆಯಲ್ಲವೆ. ಬುದ್ಧಿಯು ಇದನ್ನೂ ಸಹ ಹೇಳುತ್ತದೆ - ಮೊಟ್ಟ ಮೊದಲು ಶೂದ್ರರನ್ನು ಬ್ರಾಹ್ಮಣರನ್ನಾಗಿ ಮಾಡಬೇಕು. ಬ್ರಾಹ್ಮಣರನ್ನಾಗಿಯೇ ಮಾಡದಿದ್ದರೆ ಮತ್ತೆ ಇನ್ನೇನಾಗುತ್ತೀರಿ! ಸರ್ವೀಸಂತೂ ಬೇಕಲ್ಲವೆ. ಮಕ್ಕಳಿಗೆ ಸರ್ವೀಸಿನ ಸಮಾಚಾರವನ್ನೂ ಏಕೆ ತಿಳಿಸಲಾಗುತ್ತದೆಯೆಂದರೆ ಉಮ್ಮಂಗ-ಉತ್ಸಾಹವು ಬರಲೆಂದು. ಸರ್ವೀಸಿನಿಂದಲೇ ಪದುಮಗಳಷ್ಟು ಸಿಕ್ಕಿದೆ. ಕೇವಲ ಒಂದು ಮಾತನ್ನೇ ತಿಳಿಸಿ, ಅದನ್ನು ಪ್ರಪಂಚದಲ್ಲಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ಬೇಹದ್ದಿನ ತಂದೆಯಾಗಿದ್ದಾರೆ ಆದರೆ ಆ ತಂದೆಯನ್ನೇ ಯಾರೂ ತಿಳಿದುಕೊಂಡಿಲ್ಲ. ಕೇವಲ ಹಾಗೆಯೇ ಗಾಡ್ ಫಾದರ್ ಎಂದು ಹೇಳುತ್ತಾರೆ, ಅವರು ಶಿಕ್ಷಕರೂ ಆಗಿದ್ದಾರೆಂದು ಯಾರ ಬುದ್ಧಿಯಲ್ಲಿಯೂ ಇಲ್ಲ. ವಿದ್ಯಾರ್ಥಿಯ ಬುದ್ಧಿಯಲ್ಲಿ ಸದಾ ಶಿಕ್ಷಕನ ನೆನಪೇ ಇರುತ್ತದೆ. ಯಾರು ಪೂರ್ಣ ರೀತಿಯಲ್ಲಿ ಓದುವುದಿಲ್ಲವೋ ಅವರಿಗೆ ಅವಿದ್ಯಾವಂತರೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ಪರವಾಗಿಲ್ಲ, ನೀವು ಏನೂ ಓದದಿದ್ದರೂ ಸಹ ಇಷ್ಟನ್ನಂತೂ ಅರ್ಥ ಮಾಡಿಕೊಳ್ಳಬಹುದಲ್ಲವೆ - ನಾವು ಸಹೋದರ-ಸಹೋದರರಾಗಿದ್ದೇವೆ, ನಮ್ಮ ತಂದೆಯು ಬೇಹದ್ದಿನ ತಂದೆಯಾಗಿದ್ದಾರೆ. ಅವರು ಒಂದು ಧರ್ಮದ ಸ್ಥಾಪನೆ ಮಾಡುವುದಕ್ಕಾಗಿಯೇ ಬರುತ್ತಾರೆ. ಬ್ರಹ್ಮಾರವರ ಮೂಲಕ ಮಾಡುತ್ತಾರೆ ಆದರೆ ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಒಂದುವೇಳೆ ಈಶ್ವರನು ಎಂದೂ ಬಂದೇ ಇಲ್ಲವೆಂದರೆ ಅವರನ್ನು ಹೇ ಮುಕ್ತಿದಾತ ಬನ್ನಿ, ಹೇ ಪತಿತ-ಪಾವನ ಬನ್ನಿ ಎಂದು ಕರೆಯುವುದಾದರೂ ಏಕೆ? ಯಾವಾಗ ಪತಿತ-ಪಾವನನನ್ನು ನೆನಪು ಮಾಡುತ್ತಾರೆಂದಮೇಲೆ ಮತ್ತೆ ಶಾಸ್ತ್ರಗಳನ್ನೇಕೆ ಓದುತ್ತಾರೆ? ತೀರ್ಥ ಸ್ಥಾನಗಳಿಗೆ ಏಕೆ ಹೋಗುತ್ತಾರೆ? ಅಲ್ಲಿ ಕುಳಿತಿದ್ದಾರೇನು? ಯಾವಾಗ ಪತಿತ-ಪಾವನ ಈಶ್ವರನಾಗಿದ್ದಾರೆ ಅಂದಮೇಲೆ ಗಂಗಾಸ್ನಾನ ಇತ್ಯಾದಿಗಳಿಂದ ಪಾವನರಾಗುವುದು ಹೇಗೆ ಸಾಧ್ಯ? ಸ್ವರ್ಗದಲ್ಲಿ ಹೇಗೆ ಹೋಗಲು ಸಾಧ್ಯ? ಜನ್ಮವಂತೂ ಇಲ್ಲಿಯೇ ತೆಗೆದುಕೊಳ್ಳಬೇಕಾಗಿದೆ. ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚದಲ್ಲಿ ಅಂತರವಂತೂ ಇದೆಯಲ್ಲವೆ. ಇದಕ್ಕೆ ಸತ್ಯಯುಗವೆಂದು ಹೇಳುವುದಿಲ್ಲ. ಈಗಂತೂ ಕಲಿಯುಗವಾಗಿದೆಯಲ್ಲವೆ. ಮನುಷ್ಯರದು ಸಂಪೂರ್ಣ ಕಲ್ಲು ಬುದ್ಧಿಯಾಗಿದೆ. ಎಲ್ಲಿಯಾದರೂ ಸ್ವಲ್ಪ ಸುಖ ನೋಡಿದರೂ ಸಾಕು ಅದನ್ನೇ ಸ್ವರ್ಗವೆಂದು ತಿಳಿಯುತ್ತಾರೆ. ಇದನ್ನು ತಂದೆಯೇ ತಿಳಿಸುತ್ತಾರೆ. ತಂದೆಯು ಯಾವುದೇ ನಿಂದನೆ ಮಾಡುತ್ತಿಲ್ಲ, ತಂದೆಯು ಶಿಕ್ಷಣವನ್ನೂ ಕೊಡುತ್ತಾರೆ, ಎಲ್ಲರಿಗೆ ಸದ್ಗತಿಯನ್ನೂ ಕೊಡುತ್ತಾರೆ. ಭಗವಂತನು ತಂದೆಯಾಗಿದ್ದಾರೆ ಅಂದಮೇಲೆ ತಂದೆಯಿಂದ ಅವಶ್ಯವಾಗಿ ಏನಾದರೂ ಸಿಗಬೇಕಲ್ಲವೆ. ತಂದೆಯ ಶಬ್ದವೂ ಸಹ ಈ ರೀತಿಯಿದೆ ಅದರಿಂದ ಆಸ್ತಿಯ ಸುವಾಸನೆಯು ಅವಶ್ಯವಾಗಿ ಬರುತ್ತದೆ. ಭಲೆ ಚಿಕ್ಕಪ್ಪ, ದೊಡ್ಡಪ್ಪ, ಮಾವ ಮೊದಲಾದವರಿರಲಿ ಅದರಿಂದ ಆಸ್ತಿಯ ಸುವಾಸನೆಯು ಬರುವುದಿಲ್ಲ. ತಂದೆಯು ಸರಿಯಾಗಿ ಹೇಳುತ್ತಾರೆಂಬುದನ್ನು ಅಂತರ್ಮುಖಿಯಾಗಿ ವಿಚಾರ ಮಾಡಬೇಕು. ಗುರುವಿನ ಬಳಿ ಯಾವುದೇ ಆಸ್ತಿಯಿರುವುದಿಲ್ಲ ಅವರಂತೂ ತಾನೇ ಮನೆ-ಮಠವನ್ನು ಬಿಡುತ್ತಾರೆ. ನೀವು ವಿಕಾರಗಳ ಸನ್ಯಾಸ ಮಾಡಿದ್ದೀರಿ. ನಾವು ಮನೆ-ಮಠವನ್ನು ಬಿಟ್ಟಿದ್ದೇವೆಂದು ಅವರು ಹೇಳುತ್ತಾರೆ. ನಾವು ಇಡೀ ಪ್ರಪಂಚದ ವಿಕಾರಗಳ ಸನ್ಯಾಸವನ್ನೇ ಮಾಡುತ್ತೇವೆಂದು ನೀವು ಹೇಳುತ್ತೀರಿ. ಹೊಸ ಪ್ರಪಂಚದಲ್ಲಿ ಹೋಗುವುದು ಎಷ್ಟು ಸಹಜವಾಗಿದೆ. ನಾವು ಇಡೀ ಹಳೆಯಸೃಷ್ಟಿ, ತಮೋಪ್ರಧಾನ ಪ್ರಪಂಚದ ಸನ್ಯಾಸ ಮಾಡುತ್ತೇವೆ. ಸತ್ಯಯುಗವು ಹೊಸ ಪ್ರಪಂಚವಾಗಿದೆ, ಇದೂ ಸಹ ನಿಮಗೆ ಗೊತ್ತಿದೆ - ಅವಶ್ಯವಾಗಿ ಹೊಸ ಪ್ರಪಂಚವಿತ್ತು, ಎಲ್ಲರೂ ಹಾಡುತ್ತಾರೆ, ಸ್ವರ್ಗವೆಂದು ಹೊಸ ಪ್ರಪಂಚಕ್ಕೆ ಹೇಳಲಾಗುತ್ತದೆ ಆದರೆ ಅವರು ಹೇಳುವುದಕ್ಕಷ್ಟೇ ಹೇಳಿ ಬಿಡುತ್ತಾರೆ, ತಿಳುವಳಿಕೆಯೇನೂ ಇಲ್ಲ ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಕೇವಲ ಈ ವಿಚಾರ ಮಾಡಿ - ತಂದೆಯು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕ ಮತ್ತು ಸದ್ಗುರುವೂ ಆಗಿದ್ದಾರೆ, ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ಎರಡೇ ಅಕ್ಷರವಾಗಿದೆ - ಮನ್ಮನಾಭವ. ಇದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ಆದರೆ ಇದನ್ನೂ ಮರೆತು ಹೋಗುತ್ತಾರೆ, ಬುದ್ಧಿಯಲ್ಲಿ ಏನೇನು ನೆನಪಿರುತ್ತದೆಯೋ ಗೊತ್ತಿಲ್ಲ, ಇಲ್ಲವೆಂದರೆ ಪ್ರತಿನಿತ್ಯ ಬರೆದುಕೊಡಿ - ಇಷ್ಟು ಸಮಯ ನಾವು ಯಾವ ಸ್ಥಿತಿಯಲ್ಲಿ ಕುಳಿತಿದ್ದೆವು? ನೀವು ತಂದೆ, ಶಿಕ್ಷಕ, ಸದ್ಗುರುವಿನ ಸನ್ಮುಖದಲ್ಲಿ ಕುಳಿತಿದ್ದೀರೆಂದಮೇಲೆ ಅವರ ನೆನಪೇ ಇರಬೇಕಲ್ಲವೆ. ವಿದ್ಯಾರ್ಥಿಗಳಿಗೆ ಶಿಕ್ಷಕರೇ ನೆನಪಿಗೆ ಬರುತ್ತಾರಲ್ಲವೆ ಆದರೆ ಇಲ್ಲಿ ಮಾಯೆಯಿದೆ. ಒಮ್ಮೆಲೆ ತಲೆಯನ್ನೇ ತಿರುಗಿಸಿ ಬಿಡುತ್ತದೆ. ಇಡೀ ರಾಜ್ಯಭಾಗ್ಯವನ್ನು ಕಸಿದುಕೊಂಡು ಬಿಡುತ್ತದೆ, ನಿಮಗೆ ಗೊತ್ತೇ ಆಗುವುದಿಲ್ಲ. ಬಂದಿರುವುದು ಆಸ್ತಿಯನ್ನು ಪಡೆಯಲು ಆದರೆ ಸಿಗುವುದೇನೂ ಇಲ್ಲ ಆ ರೀತಿ ಹೇಳಬೇಕಾಗುತ್ತದೆಯಲ್ಲವೇ. ಭಲೆ ಸ್ವರ್ಗದಲ್ಲಂತೂ ಹೋಗುತ್ತಾರೆ, ಆದರೆ ಅದೇನು ದೊಡ್ಡ ಮಾತಲ್ಲ. ಭಲೆ ಇಲ್ಲಿ ಬಂದಿರಿ ಆದರೆ ಓದಲಿಲ್ಲ ಮತ್ತೆ ಸ್ವರ್ಗದಲ್ಲಂತೂ ಬರುತ್ತೀರಿ ಏಕೆಂದರೆ ಇಲ್ಲಿ ಕುಳಿತಿದ್ದೀರಲ್ಲವೆ. ಏನಾದರೂ ಪರವಾಗಿಲ್ಲ, ಸ್ವರ್ಗದಲ್ಲಂತೂ ಬರಬೇಕೆಂದು ಹೇಳುತ್ತಾರೆ ಆದರೆ ಅದು ವಿದ್ಯೆಯಾಗಲಿಲ್ಲವಲ್ಲವೆ. ಸ್ವಲ್ಪ ಕೇಳಿದರೂ ಸಹ ಅದರ ಫಲವು ಸಿಗುತ್ತದೆ, ವಿದ್ಯೆಯಿಂದಂತೂ ಅತಿ ದೊಡ್ಡ ವಿದ್ಯಾರ್ಥಿ ವೇತನ ಸಿಗುತ್ತದೆ. ತಂದೆಯಿಂದ ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ಪುರುಷಾರ್ಥ ಮಾಡಬೇಕಾಗುತ್ತದೆ. ವಿದ್ಯೆಯು ನೆನಪಿದ್ದರೆ 84 ಜನ್ಮಗಳ ಚಕ್ರವೂ ಸಹ ನೆನಪಿಗೆ ಬಂದು ಬಿಡುತ್ತದೆ. ಇಲ್ಲಿ ಕುಳಿತುಕೊಂಡರೆ ಎಲ್ಲವೂ ನೆನಪಿಗೆ ಬರುವುದು ಆದರೆ ಇದೂ ಸಹ ನೆನಪಿಗೆ ಬರುವುದಿಲ್ಲ. ಒಂದುವೇಳೆ ನೆನಪಿಗೆ ಬಂದರೆ ಅನ್ಯರಿಗೂ ತಿಳಿಸುವರೂ ಸಹ. ಚಿತ್ರಗಳಂತೂ ಎಲ್ಲರ ಬಳಿಯೂ ಇದೆ. ಶಿವನ ಚಿತ್ರವನ್ನು ಕುರಿತು ನೀವು ಯಾರಿಗೇ ತಿಳಿಸುತ್ತೀರೆಂದರೆ ಎಂದಿಗೂ ಅವರು ಕ್ರೋಧ ಮಾಡುವುದಿಲ್ಲ. ಹೇಗೆ - ತಾವು ಬಂದರೆ ನಾವು ನಿಮಗೆ ತಿಳಿಸುತ್ತೇವೆ - ಈ ಶಿವನು ಬೇಹದ್ದಿನ ತಂದೆಯಲ್ಲವೆ. ಇವರ ಜೊತೆ ತಮ್ಮ ಸಂಬಂಧವೇನು? ವ್ಯರ್ಥ ಚಿತ್ರಗಳಂತೂ ಇರುವುದಿಲ್ಲ. ಶಿವನಿಗಾಗಿ ಅವಶ್ಯವಾಗಿ ಹೇಳುತ್ತಾರೆ - ಇವರು ಭಗವಂತನಾಗಿದ್ದಾರೆಂದು. ಭಗವಂತನಂತೂ ನಿರಾಕಾರನೇ ಆಗಿದ್ದಾರೆ ಅವರಿಗೆ ತಂದೆಯೆಂದು ಹೇಳಲಾಗುತ್ತದೆ, ಅವರು ಶಿಕ್ಷಣವನ್ನೂ ಕೊಡುತ್ತಾರೆ. ನಿಮ್ಮ ಆತ್ಮವು ಶಿಕ್ಷಣವನ್ನು ತೆಗೆದುಕೊಳ್ಳುತ್ತದೆ, ಆತ್ಮವೇ ಎಲ್ಲವನ್ನೂ ಮಾಡುತ್ತದೆ. ಶಿಕ್ಷಕನೂ ಸಹ ಆತ್ಮವೇ ಆಗುತ್ತದೆ. ತಂದೆಯು ಈ ರಥದಲ್ಲಿ ಬಂದು ಓದಿಸುತ್ತಾರೆ, ಸತ್ಯಯುಗದ ಸ್ಥಾಪನೆ ಮಾಡುತ್ತಾರೆ. ಅಲ್ಲಿ ಕಲಿಯುಗದ ಹೆಸರು-ಗುರುತೇ ಇರುವುದಿಲ್ಲ. ಮನುಷ್ಯರೆಲ್ಲಿಂದ ಬರುತ್ತಾರೆ! ಸೇವಾಧಾರಿ ಮಕ್ಕಳಿಗೆ ಇಡೀ ದಿನ ಈ ವಿಚಾರಗಳು ನಡೆಯುತ್ತಿರುತ್ತವೆ. ಸೇವೆ ಮಾಡದಿದ್ದರೆ ಅವರ ಬುದ್ಧಿಯೇ ಕೆಲಸ ಮಾಡುವುದಿಲ್ಲ, ಹೇಗೆ ಮಂಧ ಬುದ್ಧಿಯವರಾಗಿ ಕುಳಿತಿದ್ದಾರೆಂದು ತಿಳಿಯಲಾಗುತ್ತದೆ. ತಂದೆಯನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಪತಿತ-ಪಾವನ ತಂದೆಯನ್ನು ನೆನಪು ಮಾಡುವುದರಿಂದಲೇ ಆಸ್ತಿಯು ಸಿಗುತ್ತದೆ. ನೆನಪು ಮಾಡುತ್ತಾ-ಮಾಡುತ್ತಾ ಶರೀರ ಬಿಡುತ್ತಾರೆಂದರೆ ತಂದೆಯ ಪೂರ್ಣ ಆಸ್ತಿಯು ಸಿಗುತ್ತದೆ. ಬೇಹದ್ದಿನ ತಂದೆಯ ಆಸ್ತಿಯು ಸ್ವರ್ಗವಾಗಿದೆ.

ಮಕ್ಕಳ ಬಳಿ ಪದಕ (ಬ್ಯಾಡ್ಜ್) ವೂ ಇದೆ, ಮನೆಯಲ್ಲಿ ಮಿತ್ರ-ಸಂಬಂಧಿಗಳು ಅನೇಕರು ಬರುತ್ತಾರೆ, ಯಾರಾದರೂ ಶರೀರ ಬಿಟ್ಟಾಗ ಅಲ್ಲಿಗೂ ಬರುತ್ತಾರೆ. ಆಗ ನೀವು ಅವರಿಗೆ ತಿಳಿಸಿ, ಬಹಳಷ್ಟು ಸರ್ವೀಸ್ ಮಾಡಬಹುದು. ಶಿವ ತಂದೆಯ ಚಿತ್ರವಂತೂ ಬಹಳ ಚೆನ್ನಾಗಿದೆ, ಭಲೆ ದೊಡ್ಡದೇ ಇಟ್ಟುಕೊಳ್ಳಿ ಆದರೆ ಯಾರು ಏನೂ ಹೇಳುವುದಿಲ್ಲ. ಇವರು ಬ್ರಹ್ಮನಾಗಿದ್ದಾರೆಂದು ಹೇಳುವುದಿಲ್ಲ, ಇವರು ಗುಪ್ತವಾಗಿದ್ದಾರೆ. ನೀವು ಗುಪ್ತವಾಗಿಯೂ ಸಹ ತಿಳಿಸಿಕೊಡಬಹುದು. ಎಲ್ಲಾ ಚಿತ್ರಗಳನ್ನು ತೆಗೆದು ಕೇವಲ ಶಿವನ ಚಿತ್ರವನ್ನು ಇಟ್ಟುಕೊಳ್ಳಿ. ಈ ಶಿವ ತಂದೆಯು ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ, ಇವರು ಹೊಸ ಪ್ರಪಂಚ ಸ್ಥಾಪನೆ ಮಾಡಲು ಬರುತ್ತಾರೆ ಮತ್ತು ಸಂಗಮಯುಗದಲ್ಲಿಯೇ ಬರುತ್ತಾರೆ. ಈ ಜ್ಞಾನವಂತೂ ಬುದ್ಧಿಯಲ್ಲಿದೆಯಲ್ಲವೆ. ತಿಳಿಸಿ, ಶಿವ ತಂದೆಯನ್ನು ನೆನಪು ಮಾಡಿ ಮತ್ತ್ಯಾರನ್ನೂ ನೆನಪು ಮಾಡಬೇಡಿ. ಶಿವ ತಂದೆಯು ಪತಿತ-ಪಾವನನಾಗಿದ್ದಾರೆ, ಅವರೇ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ಬಂದು ನನ್ನ ಜೊತೆ ಮಿಲನ ಮಾಡುತ್ತೀರಿ. ನೀವು ಗುಪ್ತ ಸೇವೆಯನ್ನು ಮಾಡಬಹುದು. ಈ ಲಕ್ಷ್ಮೀ-ನಾರಾಯಣರು ಈ ಜ್ಞಾನದಿಂದಲೇ ಆಗಿದ್ದಾರೆ. ಶಿವ ತಂದೆಯು ನಿರಾಕಾರನಾಗಿದ್ದಾರೆ, ಅವರು ಹೇಗೆ ಬರುತ್ತಾರೆಂದು ಕೇಳುತ್ತಾರೆ. ಅರೆ! ನಿಮ್ಮ ಆತ್ಮವು ನಿರಾಕಾರಿಯಾಗಿದೆ ಅಂದಮೇಲೆ ಹೇಗೆ ಬರುತ್ತದೆ? ಅದು ಮೇಲಿಂದಲೇ ಪಾತ್ರವನ್ನಭಿನಯಿಸಲು ಬರುತ್ತದೆಯಲ್ಲವೆ. ಇದನ್ನೂ ಸಹ ತಂದೆಯು ಬಂದು ತಿಳಿಸುತ್ತಾರೆ, ಎತ್ತಿನ ಮೇಲಂತೂ ಬರಲು ಸಾಧ್ಯವಿಲ್ಲ. ಎತ್ತಿನ ಮೇಲೆ ಬಂದು ಮಾತನಾಡುವುದಾದರೂ ಹೇಗೆ? ಸಾಧಾರಣ ವೃದ್ಧನ ಶರೀರದಲ್ಲಿ ಬರುತ್ತಾರೆ, ತಿಳಿಸುವುದಕ್ಕೂ ಬಹಳ ಯುಕ್ತಿ ಬೇಕು. ನೀವು ಭಕ್ತಿ ಮಾಡುವುದಿಲ್ಲವೆ ಎಂದು ನಿಮ್ಮನ್ನು ಯಾರಾದರೂ ಪ್ರಶ್ನಿಸಿದರೆ ಹೇಳಿ, ನಾವಂತೂ ಎಲ್ಲವನ್ನೂ ಮಾಡುತ್ತೇವೆ, ಯುಕ್ತಿಯಿಂದ ನಡೆಯಬೇಕಾಗುತ್ತದೆ. ಅನ್ಯರನ್ನು ಮೇಲೆತ್ತಲು ಯಾವ ಯುಕ್ತಿಯನ್ನು ರಚಿಸಬೇಕೆಂದು ಯೋಚಿಸಬೇಕು. ಯಾರಿಗೂ ಬೇಸರ ಪಡಿಸಬಾರದು. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕೇವಲ ಪವಿತ್ರರಾಗಿರಬೇಕು. ಬಾಬಾ ಸರ್ವೀಸ್ ಸಿಗುವುದಿಲ್ಲವೆಂದು ನೀವು ಹೇಳುತ್ತೀರಿ, ಅರೆ! ನೀವು ಬಹಳಷ್ಟು ಸರ್ವೀಸ್ ಮಾಡಬಲ್ಲಿರಿ. ಗಂಗಾ ನದಿಯ ತೀರದಲ್ಲಿ ಹೋಗಿ ಕುಳಿತುಕೊಳ್ಳಿ, ತಿಳಿಸಿ - ಈ ನೀರಿನಲ್ಲಿ ಸ್ನಾನ ಮಾಡುವುದರಿಂದ ಏನಾಗುವುದು? ಪಾವನರಾಗಿ ಬಿಡುತ್ತಾರೆಯೇ? ನೀವಂತೂ ಭಗವಂತನಿಗೆ ಹೇ ಪತಿತ-ಪಾವನ ಬನ್ನಿ, ಬಂದು ಪಾವನರನ್ನಾಗಿ ಮಾಡಿ ಎಂದು ಹೇಳುತ್ತೀರಿ. ಅಂದಮೇಲೆ ಅವರು ಪತಿತ-ಪಾವನನೋ ಅಥವಾ ಈ ಗಂಗೆಯೋ? ಇಂತಹ ನದಿಗಳಂತೂ ಸದಾ ಇದ್ದೇ ಇರುತ್ತದೆ. ತಂದೆಯು ಪತಿತ-ಪಾವನನಂತೂ ಒಬ್ಬರೇ ಇದ್ದಾರೆ, ಈ ನೀರಿನ ನದಿಗಳಂತೂ ಸದ ಇದ್ದೇ ಇರುತ್ತದೆ ಆದರೆ ತಂದೆಯು ಪಾವನರನ್ನಾಗಿ ಮಾಡುವುದಕ್ಕಾಗಿಯೇ ಬರಬೇಕಾಗುತ್ತದೆ. ಪುರುಷೋತ್ತಮ ಸಂಗಮಯುಗದಲ್ಲಿಯೇ ಬರುತ್ತಾರೆ, ಬಂದು ಪಾವನರನ್ನಾಗಿ ಮಾಡುತ್ತಾರೆ. ಅಲ್ಲಿ ಯಾರೂ ಪತಿತರಿರುವುದಿಲ್ಲ. ಹೆಸರೇ ಆಗಿದೆ - ಸ್ವರ್ಗ, ಹೊಸ ಪ್ರಪಂಚ. ಈಗಂತೂ ಹಳೆಯ ಪ್ರಪಂಚವಾಗಿದೆ. ಈ ಸಂಗಮಯುಗದ ಬಗ್ಗೆ ನಿಮಗೆ ಗೊತ್ತಿದೆ, ಮತ್ತ್ಯಾರೂ ಅರಿತುಕೊಳ್ಳಲು ಸಾಧ್ಯವಿಲ್ಲ. ತಂದೆಯಂತೂ ಅನೇಕ ಪ್ರಕಾರದ ಸರ್ವೀಸಿನ ಯುಕ್ತಿಗಳನ್ನು ತಿಳಿಸಿ ಕೊಡುತ್ತಾರೆ ಆದ್ದರಿಂದ ಮಂಧಬುದ್ಧಿಯವರಾಗಬೇಡಿ. ಹೇಳುತ್ತಾರೆ- ಅಮರನಾಥದಲ್ಲಿಯೂ ಪಾರಿವಾಳಗಳಿರುತ್ತವೆ, ಪಾರಿವಾಳಗಳು ಸಂದೇಶವನ್ನು ತಲುಪಿಸುತ್ತದೆ ಅಂದರೆ ಪರಮಾತ್ಮ ಸಂದೇಶವನ್ನು ಮೇಲಿನಿಂದ ತರುತ್ತವೆಯೆಂದಲ್ಲ. ಇದನ್ನೂ ಕಲಿಸಿ ಕೊಡುತ್ತಾರೆ- ಅದರ ಕಾಲಿಗೆ ಚೀಟಿಯನ್ನು ಬರೆದು ಕಟ್ಟಿದರೆ ತೆಗೆದುಕೊಂಡು ಹೋಗುತ್ತದೆ. ಅದಕ್ಕೆ ಸಹಜವಾಗಿ ಧಾನ್ಯಗಳು ಸಿಕ್ಕಿದರೆ ಎಲ್ಲಿಯೂ ಅಲೆದಾಡುವ ಅವಶ್ಯಕತೆಯಿರುವುದಿಲ್ಲ. ನಿಮಗೂ ಸಹ ಇಲ್ಲಿ ಧಾನ್ಯಗಳು ಸಹಜವಾಗಿ ಸಿಗುತ್ತವೆ, ನಿಮ್ಮ ಬುದ್ಧಿಯಲ್ಲಿದೆ - ವಿಶ್ವದ ರಾಜ್ಯಭಾಗ್ಯವು ಇಲ್ಲಿಂದಲೇ ಸಿಗುತ್ತದೆ. ಧಾನ್ಯಗಳು ಇಲ್ಲಿಯೇ ಸಿಗುತ್ತದೆಯೆಂದು ಅವರಿಗೂ ತಿಳಿಯುತ್ತದೆಯೆಂದರೆ ಅವರು ಬಂದು ಇಲ್ಲಿಯೇ ನಿಂತು ಬಿಡುತ್ತಾರೆ. ನೀವಂತೂ ಚೈತನ್ಯವಾಗಿದ್ದೀರಿ, ನಿಮಗೆ ಅವಿನಾಶಿ ಜ್ಞಾನರತ್ನಗಳ ಧಾನ್ಯಗಳು ಸಿಗುತ್ತವೆ. ಪಕ್ಷಿಗಳು ಸಾಗರವನ್ನು ನುಂಗಿ ಒಣಗಿಸಿ ಬಿಟ್ಟವೆಂದು ಶಾಸ್ತ್ರಗಳಲ್ಲಿಯೂ ಇದೆ, ಬಹಳ ಕಥೆಗಳನ್ನು ಬರೆದು ಬಿಟ್ಟಿದ್ದಾರೆ. ಅದಕ್ಕೆ ಮನುಷ್ಯರು ಸತ್ಯವೆಂದು ಹೇಳುತ್ತಾರೆ ಮತ್ತೆ ಸಾಗರದಿಂದ ದೇವತೆಗಳು ಬಂದರು, ರತ್ನಗಳ ತಟ್ಟೆಗಳನ್ನು ತುಂಬಿಸಿಕೊಂಡು ಬಂದರೆಂದು ಹೇಳುತ್ತಾರೆ, ಇದಕ್ಕೂ ಸಹ ಮನುಷ್ಯರು ಸತ್ಯವೆಂದು ಹೇಳುತ್ತಾರೆ. ಈಗ ಸಮುದ್ರದಿಂದ ದೇವತೆಗಳು ಹೇಗೆ ಬರುತ್ತಾರೆ? ಸಮುದ್ರದಲ್ಲಿ ಮನುಷ್ಯರು ಅಥವಾ ದೇವತೆಗಳಿರುತ್ತಾರೆಯೇ! ಏನನ್ನೂ ತಿಳಿದುಕೊಂಡಿಲ್ಲ. ಜನ್ಮ-ಜನ್ಮಾಂತರದಿಂದಲೂ ಓದುತ್ತಾ ಕೇಳುತ್ತಲೇ ಇರುತ್ತಾರೆ ಆದ್ದರಿಂದ ಸುಳ್ಳು ಮಾಯೆ, ಸುಳ್ಳು ಶರೀರ.... ಎಂದು ಹೇಳುತ್ತಾರೆ. ಸತ್ಯ ಮತ್ತು ಸುಳ್ಳಿನ ಸಂಸಾರದಲ್ಲಿ ಎಷ್ಟೊಂದು ಹಗಲು-ರಾತ್ರಿಯ ಅಂತರವಿದೆ. ಆ ಸತ್ಯವನ್ನು ಹೇಳುತ್ತಾ-ಹೇಳುತ್ತಾ ಭಿಕಾರಿಗಳಾಗಿ ಬಿಟ್ಟಿದ್ದಾರೆ. ನೀವು ಎಷ್ಟು ಯುಕ್ತಿಯಿಂದ ತಿಳಿಸುತ್ತೀರಿ ಆದರೂ ಸಹ ಕೋಟಿಯಲ್ಲಿ ಕೆಲವರಿಗೇ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಇದು ಬಹಳ ಸಹಜ ಜ್ಞಾನ ಮತ್ತು ಸಹಜ ಯೋಗವಾಗಿದೆ. ತಂದೆ, ಶಿಕ್ಷಕ, ಸದ್ಗುರುವನ್ನು ನೆನಪು ಮಾಡುವುದರಿಂದ ಅವರ ವಿಶೇಷತೆಗಳೂ ಸಹ ಬುದ್ಧಿಯಲ್ಲಿ ಬಂದು ಬಿಡುತ್ತದೆ ಅಂದಾಗ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕು - ನಾವೆಲ್ಲರೂ ತಂದೆಯನ್ನು ನೆನಪು ಮಾಡುತ್ತೇವೆಯೇ ಅಥವಾ ಮತ್ತ್ಯಾವ ಕಡೆಯಾದರೂ ಬುದ್ಧಿಯು ಹೋಗುತ್ತದೆಯೇ? ನಿಮ್ಮ ಬುದ್ಧಿಗೆ ಈಗ ತಿಳುವಳಿಕೆ ಸಿಗುತ್ತದೆ. ಎಷ್ಟು ಮಧುರಾತಿ ಮಧುರ ಮಾತುಗಳನ್ನು ತಿಳಿಸುತ್ತಾರೆ, ಯುಕ್ತಿಗಳನ್ನು ತಿಳಿಸುತ್ತಾರೆ. ನೀವು ಯಾರಿಗೇ ತಿಳಿಸಿದರೂ ಮತ್ತೆ ಅವರು ನಿಮ್ಮ ಶತ್ರುಗಳೂ ಆಗುವುದಿಲ್ಲ. ಶಿವ ತಂದೆಯೇ ನಿಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ, ಅವರನ್ನು ನೆನಪು ಮಾಡಿ ತಿಳಿಸುವುದಕ್ಕೆ ಯುಕ್ತಿ ರಚಿಸಬೇಕು. ಬ್ರಹ್ಮನ ಚಿತ್ರದ ಬಗ್ಗೆ ಬಹಳ ಹಿಂದೆ ಬೀಳುತ್ತಾರೆ. ಶಿವನ ಚಿತ್ರವನ್ನು ನೋಡಿ ಏನೂ ಮಾತನಾಡುವುದಿಲ್ಲ. ಇವರಂತೂ ಅತ್ಮಗಳ ತಂದೆಯಲ್ಲವೆ ಆದ್ದರಿಂದ ತಂದೆಯನ್ನು ನೆನಪು ಮಾಡಿ ಇದರಿಂದ ಅನೇಕರಿಗೆ ಲಾಭವಾಗುತ್ತದೆ. ಇವರನ್ನು ನೆನಪು ಮಾಡುವುದರಿಂದ ನೀವು ಪತಿತರಿಂದ ಪಾವನರಾಗಿ ಬಿಡುತ್ತೀರಿ. ಅವರು ಎಲ್ಲರ ತಂದೆಯಾಗಿದ್ದಾರೆ, ಒಬ್ಬ ತಂದೆಯ ವಿನಃ ಯಾರ ನೆನಪೂ ಬರಬಾರದು, ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬರ ಸಂಗವನ್ನು ಸೇರಬೇಕಾಗಿದೆ. ಇವು ಅನ್ಯರ ಕಲ್ಯಾಣ ಮಾಡುವ ಯುಕ್ತಿಗಳಾಗಿವೆ. ತಂದೆಯನ್ನು ನೆನಪೇ ಮಾಡದಿದ್ದರೆ ಹೇಗೆ ಪಾವನರಾಗಿ ಬಿಡುತ್ತೀರಿ! ಮನೆಯಲ್ಲಿಯೂ ನೀವು ಬಹಳಷ್ಟು ಸರ್ವೀಸ್ ಮಾಡಬಹುದು. ಅನೇಕರು ಮಿತ್ರ ಸಂಬಂಧಿ ಮೊದಲಾದವರು ನಿಮಗೆ ಸಿಗುತ್ತಾರೆ ಆದ್ದರಿಂದ ಭಿನ್ನ-ಭಿನ್ನ ಯುಕ್ತಿಗಳಿಂದ ಅವರ ಕಲ್ಯಾಣ ಮಾಡಬಲ್ಲಿರಿ. ಅಂಗಡಿಯಂತೂ ಇದೊಂದೇ ಆಗಿದೆ, ಮತ್ತ್ಯಾವುದೇ ಅಂಗಡಿಯಿಲ್ಲ ಅಂದಾಗ ಮತ್ತೆಲ್ಲಿಗೆ ಹೋಗುತ್ತಾರೆ? ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಗೃಹಸ್ಥ ವ್ಯವಹಾರದಲ್ಲಿರುತ್ತಾ ಬಹಳ ಯುಕ್ತಿಯಿಂದ ನಡೆಯಬೇಕಾಗಿದೆ, ಯಾರಿಗೂ ಬೇಸರವೂ ಪಡಿಸಬಾರದು. ಅವಶ್ಯವಾಗಿ ಪವಿತ್ರರೂ ಆಗಬೇಕಾಗಿದೆ.

2. ಒಬ್ಬ ತಂದೆಯಿಂದ ಅವಿನಾಶಿ ಜ್ಞಾನರತ್ನಗಳ ಧಾನ್ಯಗಳನ್ನು ಪಡೆದುಕೊಂಡು ತಮ್ಮ ಬುದ್ಧಿರೂಪಿ ಜೋಳಿಗೆಯನ್ನು ಸಂಪನ್ನವಾಗಿಟ್ಟುಕೊಳ್ಳಬೇಕಾಗಿದೆ, ಬುದ್ಧಿಯನ್ನು ಅಲೆದಾಡಿಸಬಾರದು. ಸಂದೇಶವಾಹಕರಾಗಿ ಎಲ್ಲರಿಗೆ ಸಂದೇಶವನ್ನು ಕೊಡಬೇಕಾಗಿದೆ.

ವರದಾನ:
ಬ್ರಾಹ್ಮಣ ಜೀವನದಲ್ಲಿ ವಿಭಿನ್ನ ಅನುಭೂತಿಗಳ ಮೂಲಕ ರಮಣೀಕತೆಯ ಅನುಭವ ಮಾಡುವಂತಹ ಸಂಪನ್ನ ಆತ್ಮ ಭವ.

ಜೀವನದಲ್ಲಿ ಎಲ್ಲಾ ಮನುಷ್ಯ ಆತ್ಮರು ವಿಭಿನ್ನ ಇಚ್ಛೆಗಳಿಂದ ಕೂಡಿರುತ್ತಾರೆ. ಅದು ಇಡೀ ದಿನದಲ್ಲಿ ಭಿನ್ನ-ಭಿನ್ನ ಸಂಬಂಧ, ಭಿನ್ನ-ಭಿನ್ನ ಸ್ವರೂಪದ ವಿಭಿನ್ನತೆಯ ಅನುಭವ ಮಾಡಿ, ಆಗ ಬಹಳ ರಮಣೀಕ ಜೀವನದ ಅನುಭವ ಮಾಡುವಿರಿ. ಬ್ರಾಹ್ಮಣ ಜೀವನ ಭಗವಂತನಿಂದ ಸರ್ವ ಸಂಬಂಧದ ಅನುಭವ ಮಾಡುವಂತಹ ಸಂಪನ್ನ ಜೀವನವಾಗಿದೆ ಆದ್ದರಿಂದ ಒಂದು ಸಂಬಂಧ ಸಹ ಕಡಿಮೆ ಮಾಡಬೇಡಿ. ಒಂದು ವೇಳೆ ಬೇರೆಯಾವುದಾದರೂ ಆತ್ಮದ ಸಣ್ಣ ಅಥವಾ ಹಗುರ ಸಂಬಂಧ ಮಿಕ್ಸ್ ಆದಾಗ ಸರ್ವ ಎನ್ನುವ ಶಬ್ಧ ಸಮಾಪ್ತಿಯಾಗಿ ಬಿಡುವುದು. ಎಲ್ಲಿ ಸರ್ವ ಇದೆ ಅಲ್ಲಿ ಸಂಪನ್ನತೆಯಿದೆ ಆದ್ದರಿಂದ ಸರ್ವ ಸಂಬಂಧಗಳಿಂದ ಸ್ಮೃತಿ ಸ್ವರೂಪರಾಗಿ.

ಸ್ಲೋಗನ್:
ತಂದೆ ಸಮಾನ ಅವ್ಯಕ್ತ ರೂಪಧಾರಿಯಾಗಿ ಪ್ರಕೃತಿಯ ಪ್ರತಿ ದೃಶ್ಯವನ್ನು ನೋಡುತ್ತಿದ್ದಾಗ ಹಲ್-ಚಲ್ ನಲ್ಲಿ ಬರುವುದಿಲ್ಲ.