02.01.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈ
ಪುರುಷೋತ್ತಮ ಸಂಗಮಯುಗದಲ್ಲಿ ಪುರುಷೋತ್ತಮರಾಗಲು ಸಂಪೂರ್ಣ ಪುರುಷಾರ್ಥ ಮಾಡಿ, ಎಷ್ಟು ಸಾಧ್ಯವೋ
ಅಷ್ಟು ನೆನಪು ಮತ್ತು ವಿದ್ಯೆಯ ಮೇಲೆ ಗಮನ ಕೊಡಿ”
ಪ್ರಶ್ನೆ:
ತಾವು ಮಕ್ಕಳು
ಬಹಳ ದೊಡ್ಡ ವ್ಯಾಪಾರಿಯಾಗಿದ್ದೀರಿ, ತಾವು ಸದಾ ಯಾವ ಮಾತಿನ ಮೇಲೆ ಗಮನ ಕೊಟ್ಟು ವಿಚಾರ ಮಾಡಬೇಕು?
ಉತ್ತರ:
ಸದಾ ನಷ್ಟ ಹಾಗೂ
ಲಾಭದ ಬಗ್ಗೆ ವಿಚಾರ ಮಾಡಿ. ಒಂದುವೇಳೆ ಇದರ ಬಗ್ಗೆ ವಿಚಾರ ನಡೆಸದಿದ್ದರೆ ಪ್ರಜೆಗಳಲ್ಲಿ
ದಾಸ-ದಾಸಿಯರಾಗಬೇಕಾಗುತ್ತದೆ. ತಂದೆಯು 21 ಜನ್ಮಗಳ ರಾಜ್ಯದ ಯಾವ ಆಸ್ತಿಯನ್ನು ಕೊಡುತ್ತಾರೆಯೋ
ಅದನ್ನು ಕಳೆದುಕೊಳ್ಳುವಿರಿ. ಆದ್ದರಿಂದ ತಂದೆಯ ಜೊತೆ ಪೂರ್ಣ ವ್ಯಾಪಾರವನ್ನು ಮಾಡಬೇಕು. ತಂದೆಯು
ದಾತನಾಗಿದ್ದಾರೆ, ತಾವು ಮಕ್ಕಳು ಸುಧಾಮನ ರೀತಿ ಒಂದು ಮುಷ್ಟಿಯಷ್ಟು ಅವಲಕ್ಕಿಯನ್ನು ಕೊಡುತ್ತೀರಿ
ಹಾಗೂ ವಿಶ್ವದ ಚಕ್ರಾಧಿಪತ್ಯವನ್ನು ಪಡೆಯುತ್ತೀರಿ.
ಓಂ ಶಾಂತಿ.
ಮಕ್ಕಳು ಇಲ್ಲಿ ಕುಳಿತಿದ್ದೀರಿ, ಇದು ಶಾಲೆಯಾಗಿದೆ. ಇದು ಯಾವುದೇ ಸತ್ಸಂಗವಲ್ಲ. ಮಹಾತ್ಮರು,
ಬ್ರಾಹ್ಮಣರು ಅಥವಾ ಯಾವುದೇ ಸನ್ಯಾಸಿಗಳ ಮುಂದೆ ಕುಳಿತುಕೊಂಡಿಲ್ಲ. ಸ್ವಾಮಿಯು ಸಿಟ್ಟಾಗುವರೇನೋ
ಎಂಬ ಯಾವುದೇ ಭಯದ ಮಾತಿಲ್ಲ. ಭಕ್ತಿಮಾರ್ಗದಲ್ಲಿ ಎಂದಾದರೂ ಸಾಧು-ಸನ್ಯಾಸಿಗಳನ್ನು ಮನೆಗೆ ಕರೆದರೆ
ಅವರ ಕಾಲನ್ನು ತೊಳೆದು ಆ ನೀರನ್ನು ಕುಡಿಯುತ್ತಾರೆ, ಇವರಂತು ತಂದೆಯಲ್ಲವೆ. ಮನೆಯಲ್ಲಿ ಮಕ್ಕಳು
ಎಂದಾದರೂ ತಂದೆಗೆ ಭಯ ಪಡೆಯುತ್ತಾರೆಯೇ! ತಾವಂತೂ ತಂದೆಯ ಜೊತೆ ತಿನ್ನುತ್ತಾ-ಕುಡಿಯುತ್ತಾ
ಆಟವಾಡುತ್ತೀರಿ. ಸನ್ಯಾಸಿ, ಗುರುಗಳ ಜೊತೆಯಲ್ಲಿ ಈ ರೀತಿ ಮಾಡುತ್ತಾರೇನು? ಅಲ್ಲಂತೂ ಇಡೀ ದಿನ
ಗುರುಗಳೇ, ಗುರುಗಳೇ ಎನ್ನುತ್ತಿರುತ್ತಾರೆ. ಇಲ್ಲಿ ಆ ರೀತಿಯಾಗಿ ಮಾಡಬಾರದು. ಇವರಂತೂ
ತಂದೆಯಾಗಿದ್ದಾರೆ, ಗುರುವಿನಿಂದ ಅವರ ಆಸ್ತಿ, ಶಿಕ್ಷಕರಿಂದ ಅವರು ಆಸ್ತಿಯು ಸಿಗುತ್ತದೆ.
ತಂದೆಯಿಂದಂತೂ ಆಸ್ತಿಯು ಸಿಗುತ್ತದೆ. ಮಗುವು ಜನ್ಮ ಪಡೆದರೆ ವಾರಸುಧಾರನಾಗುತ್ತಾನೆ. ಇಲ್ಲಿಯೂ ಸಹ
ತಂದೆಯ ಮಕ್ಕಳಾದರೆ, ತಂದೆಯನ್ನು ಗುರುತಿಸಿದರೆ ಸಾಕು ನಾವು ಸ್ವರ್ಗಕ್ಕೆ ಮಾಲೀಕರಾಗುತ್ತೇವೆ.
ತಂದೆಯೇ ಸ್ವರ್ಗದ ರಚಯಿತನಾಗಿದ್ದಾರೆ, ಈ ಲಕ್ಷ್ಮೀ-ನಾರಾಯಣರು ಸ್ವರ್ಗದ ರಾಜ್ಯವನ್ನು ಹೇಗೆ ಮತ್ತು
ಎಲ್ಲಿಂದ ಪಡೆದರು - ಇದು ಯಾರಿಗೂ ಗೊತ್ತಿಲ್ಲ. ತಮಗೆ ಗೊತ್ತಿದೆ - ನಾವು ಇವರು ಆಗಿದ್ದೆವು ಮತ್ತೆ
ಆಗುತ್ತಿದ್ದೇವೆ. ಮನುಷ್ಯರಂತೂ ಇವರು ಯಾರು, ನಾವು ಯಾರನ್ನು ಪೂಜಿಸುತ್ತೇವೆ ಎಂಬ ಯಾವುದೇ
ಚಿಂತೆಯನ್ನು ಮಾಡುವುದಿಲ್ಲ. ಶಿವನ ಮಂದಿರಕ್ಕೆ ಹೋಗಿ ಕೇವಲ ಅಭಿಷೇಕ ಮಾಡಿ ಬರುತ್ತಾರೆ, ಆದರೆ ಏನೂ
ಅರಿತುಕೊಂಡಿಲ್ಲ. ನಾವು ಈ ಮೃತ್ಯುಲೋಕದ ಶರೀರವನ್ನು ಬಿಟ್ಟು ಅಮರಲೋಕಕ್ಕೆ ಹೋಗುತ್ತಿದ್ದೇವೆ ಎಂಬ
ಅನುಭವ ನಿಮಗೆ ಈಗ ಆಗುತ್ತಿದೆ. ಪ್ರಾಪ್ತಿಯು ಎಷ್ಟು ದೊಡ್ಡದಾಗಿದೆ, ಭಕ್ತಿಮಾರ್ಗದಲ್ಲಿ ಏನೂ
ಪ್ರಾಪ್ತಿ ಇಲ್ಲ. ತಂದೆಯು ಸ್ವಯಂ ಹೇಳುತ್ತಾರೆ - ನಾನು 12 ಜನ ಗುರುಗಳನ್ನು ಮಾಡಿಕೊಂಡಿದ್ದೆ
ಅದೆಲ್ಲವೂ ವ್ಯರ್ಥವಾಯಿತು, ಇನ್ನಷ್ಟು ಕೆಳಗಿಳಿಯುತ್ತಾ ಬಂದೆನೆಂದು ಈಗ ಅರ್ಥವಾಗುತ್ತದೆ. ಆದರೆ
ಇದೂ ಸಹ ಡ್ರಾಮಾದಲ್ಲಿ ನಿಶ್ಚಿತವಾಗಿದೆ. ಯಾರ ಜೊತೆಯಲ್ಲಿಯೂ ನಮಗೆ ಶತ್ರುತ್ವವಿಲ್ಲ. ನಮ್ಮದು
ಒಬ್ಬ ತಂದೆಯೊಂದಿಗೆ ಮಾತ್ರವೆ ಪ್ರೀತಿಯಿದೆ. ತಾವು ಕ್ಲಾಸಿನ ಒಳಗಡೆ ಬಂದಾಗ ಈ ಚಿತ್ರಗಳನ್ನು ನೋಡಿ
ಖುಷಿಯಾಗಬೇಕು. ನಾವು ಓದಿ ಇಂತಹವರಾಗುತ್ತಿದ್ದೇವೆಂದು. ಈ ರಾಜಧಾನಿ ಹೇಗೆ ಸ್ಥಾಪನೆಯಾಗುತ್ತಿದೆ
ಎಂದು ನಿಮಗೆ ಗೊತ್ತಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಬ್ಬಿಬ್ಬಾಗಬೇಡಿ ತಂದೆಯು ಎಷ್ಟೊಂದು
ಚೆನ್ನಾಗಿ ಹೇಳುತ್ತಾರೆ ಆದರೂ ಸಹ ಆಶ್ಚರ್ಯವಾಗಿ ಕೇಳುತ್ತಾರೆ, ಹೇಳುತ್ತಾರೆ, ಓಡಿ ಹೋಗುತ್ತಾರೆ.
ಮಾಯೆಗೆ ವಶರಾಗಿ ಬಿಡುತ್ತಾರೆ, ಅವರಿಗೆ ದ್ರೋಹಿಗಳೆಂದು ಹೇಳಲಾಗುತ್ತದೆ. ಅವರು ಒಂದು
ರಾಜಧಾನಿಯಿಂದ ಇನ್ನೊಂದು ರಾಜಧಾನಿಗೆ ಹೋಗಿ ಬಿಡುತ್ತಾರೆ. ತಂದೆಯು ಎಷ್ಟೊಂದು ಚೆನ್ನಾಗಿ
ಪುರುಷಾರ್ಥ ಮಾಡಿಸುತ್ತಾರೆ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಅಲೆಯುತ್ತಾರೆ. ದಾನ-ಪುಣ್ಯ,
ತೀರ್ಥಯಾತ್ರೆ, ವ್ರತ-ನಿಯಮ ಇತ್ಯಾದಿಗಳನ್ನು ಬಹಳ ಮಾಡುತ್ತಾರೆ. ಸಾಕ್ಷಾತ್ಕಾರವಾದರೆ ಏನಾಯಿತು
ಏರುವ ಕಲೆಯಂತೂ ಆಗಲಿಲ್ಲ, ಮತ್ತಷ್ಟು ಇಳಿಯುವ ಕಲೆಯಾಯಿತು. ನಿಮ್ಮದು ದಿನ-ಪ್ರತಿದಿನ ಏರುವ ಕಲೆಯೇ
ಆಗಿದೆ ಉಳಿದವರೆಲ್ಲರದೂ ಇಳಿಯುವ ಕಲೆಯಾಗಿದೆ. ಗುರುಗಳೂ ಸಹ ಜ್ಞಾನವನ್ನು ಬ್ರಹ್ಮನ ಹಗಲಾಗಿದೆ,
ಭಕ್ತಿಯು ಬ್ರಹ್ಮನ ರಾತ್ರಿಯಾಗಿದೆ ಎಂದು ಹೇಳುತ್ತಾರೆ. ಜ್ಞಾನ ಹಾಗೂ ಭಕ್ತಿಯಲ್ಲಿ ಹಗಲು-ರಾತ್ರಿಯ
ವ್ಯತ್ಯಾಸವಿದೆ. ಜ್ಞಾನದಿಂದ ಸುಖ ಸಿಗುತ್ತದೆ. ತಂದೆಯು ಎಷ್ಟೊಂದು ಸಹಜವಾಗಿ ತಿಳಿಸುತ್ತಾರೆ -
ತಾವೇ ವಿಶ್ವದ ಮಾಲೀಕರಾಗಿದ್ದಿರಿ ಮತ್ತೆ ತಾವೇ ಇಳಿಯುತ್ತಾ ಬಂದಿರಿ. ತಂದೆಯು ತಿಳಿಸುತ್ತಾರೆ -
ಕೇವಲ ತಮ್ಮನ್ನು ಆತ್ಮನೆಂದು ತಿಳಿಯಿರಿ, ಆತ್ಮವು ಅವಿನಾಶಿಯಾಗಿದೆ. ಆತ್ಮವು ಹೇಳುತ್ತದೆ - ಹೇ
ಅವಿನಾಶಿ ತಂದೆಯೇ, ತಾವು ಬಂದು ನಮ್ಮನ್ನು ಪಾವನ ಮಾಡಿ ಇದರಲ್ಲಿ ಮುಕ್ತಿ-ಜೀವನ್ಮುಕ್ತಿ ಎಲ್ಲವೂ
ಬಂದು ಬಿಡುತ್ತದೆ. ಭಕ್ತಿಯಲ್ಲಿ ನಾವು ಏನನ್ನೂ ತಿಳಿದುಕೊಂಡಿರಲಿಲ್ಲ, ಹುಡುಕುತ್ತಲೇ ಇದ್ದೆವು
ಎಂಬುದು ಈಗ ತಮಗೆ ಗೊತ್ತಿದೆ. ಹೇ ಭಗವಂತ ನಮ್ಮ ಮೇಲೆ ದಯೆ ತೋರಿಸು ಎಂದು ಹಾಡುತ್ತಿದ್ದೆವು.
ಭಗವಂತ ಎನ್ನುವುದರಿಂದ ಅಷ್ಟೊಂದು ರುಚಿಯೆನಿಸುವುದಿಲ್ಲ, ಆಸ್ತಿಯು ನೆನಪು ಬರುವುದಿಲ್ಲ. ಸರ್ವ
ಶ್ರೇಷ್ಠ ಶಿವತಂದೆ ಎನ್ನುತ್ತೀರೆಂದಾಗ ತಕ್ಷಣ ಆಸ್ತಿಯು ನೆನಪು ಬರುತ್ತದೆ. ಇದು ರಾವಣ
ರಾಜ್ಯವಾಗಿದೆ ಎಂಬುದು ಈಗ ನಿಮಗೆ ಗೊತ್ತಿದೆ. ಸತ್ಯಯುಗದಲ್ಲಿ ರಾಮ ರಾಜ್ಯವಾಗುತ್ತದೆ, ಈಗಂತೂ
ಕಲಿಯುಗವಾಗಿದೆ. ಸತ್ಯಯುಗದಲ್ಲಿ ಬಹಳ ಕಡಿಮೆ ಮನುಷ್ಯರಿದ್ದರು, ಒಂದೇ ಆದಿಸನಾತನ ಧರ್ಮವಿತ್ತು,
ಸುಖ-ಶಾಂತಿಯಿತ್ತು. ಇಲ್ಲಿ ಮನುಷ್ಯರು ಶಾಂತಿಗಾಗಿ ಅಲೆಯುತ್ತಿರುತ್ತಾರೆ, ಸಮ್ಮೇಳನ
ಮುಂತಾದವುಗಳಲ್ಲಿ ಎಷ್ಟೊಂದು ಖರ್ಚು ಮಾಡುತ್ತಿರುತ್ತಾರೆ. ತಾವು ಅವರಿಗೆ ಬರೆಯಬಹುದು - ಶಾಂತಿಯ
ಸಾಗರ, ಪವಿತ್ರತೆಯ ಸಾಗರ, ಸಂಪತ್ತಿಗೂ ಸಹ ಅವರು ಸಾಗರನಾಗಿದ್ದಾರೆ, ಎಲ್ಲವೂ ಅವರಿಂದಲೇ ಸಿಗುತ್ತದೆ.
ಸತ್ಯಯುಗದಲ್ಲಿ ನಾವು ಬಹಳ ಧನವಂತರಾಗಿದ್ದೆವೆಂಬುದು ತಮಗೆ ಗೊತ್ತಿದೆ. ವಿಶ್ವದಲ್ಲಿ ಶಾಂತಿಯಂತೂ
ಅಲ್ಲಿತ್ತು ಉಳಿದ ಆತ್ಮರಿಗೆ ಪರಮಧಾಮದ ಮನೆಯಲ್ಲಿ ಶಾಂತಿಯಿರುತ್ತದೆ. ವಿಶ್ವದಲ್ಲಿ ನಾವು ಮಾತ್ರ
ಇದ್ದಾಗ ಸುಖ-ಶಾಂತಿ ಎಲ್ಲವೂ ಇತ್ತು ಅಂದಮೇಲೆ ಮಕ್ಕಳಿಗೆ ಬಹಳ ಖುಷಿಯಾಗಬೇಕು. ಅಂತಹ ಸ್ವರ್ಗದ
ಬಗ್ಗೆ ಶಾಸ್ತ್ರಗಳಲ್ಲಿ ಏನೇನು ಮಾತುಗಳನ್ನು ಬರೆದು ಬಿಟ್ಟಿದ್ದಾರೆ. ಈಗ ತಂದೆಯು ಹೇಳುತ್ತಾರೆ -
ನಾನು ನಿಮಗೆ ಇಷ್ಟೊಂದು ತಿಳಿಸುತ್ತೇನೆ ಇನ್ನ್ಯಾವುದೇ ಪ್ರಶ್ನೆಯನ್ನು ಕೇಳುವ ಅವಶ್ಯಕತೆಯೇ
ಇರುವುದಿಲ್ಲ. ಮೊದಲು ನನ್ನೊಬ್ಬನನ್ನೇ ನೆನಪು ಮಾಡಿ. ತಾವು ಪತಿತರನ್ನು ಪಾವನ ಮಾಡಿ ಎಂದು
ಕರೆಯುತ್ತೀರಿ ಅರ್ಥಾತ್ ಹಳೆಯ ಜಗತ್ತನ್ನು ಬಂದು ಹೊಸದನ್ನಾಗಿ ಮಾಡಿ ಎಂದು ಹೇಳುತ್ತೀರಿ ಆದರೆ
ಅರ್ಥವೇನೂ ಗೊತ್ತಿಲ್ಲ. ದಾರವು ಕಗ್ಗಂಟಾಗಿದೆ, ಈಗ ಬಿಡಿಸಬೇಕಾಗಿದೆ. ಭಕ್ತಿಯಲ್ಲಿ ಎಷ್ಟೊಂದು
ಚಿತ್ರಗಳನ್ನು ಮಾಡಿದ್ದಾರೆ, ಕೃಷ್ಣನಿಗೆ ಚಕ್ರವನ್ನು ಕೊಟ್ಟಿದ್ದಾರೆ. ಅದರಿಂದ
ಅಕಾಸುರ-ಬಕಾಸುರರನ್ನು ಹೊಡೆದನು. ಅರೆ! ಕೃಷ್ಣನು ಹಿಂಸಕನಾಗಿದ್ದನೇ? ಮತ್ತೆ ಹೇಳುತ್ತಾರೆ-
ಇಂತಿಂತಹವರನ್ನೆಲ್ಲಾ ತಂದಿಟ್ಟುಕೊಂಡನು. ಡಬಲ್ ಹಿಂಸಕನನ್ನಾಗಿ ಮಾಡಿ ಬಿಟ್ಟಿದ್ದಾರೆ,
ಆಶ್ಚರ್ಯವಲ್ಲವೇ! ಯಾರೆಲ್ಲರೂ ಶಾಸ್ತ್ರಗಳನ್ನು ಮಾಡಿದ್ದಾರೆಯೋ ಅವರ ಬುದ್ಧಿಯ ಚಮತ್ಕಾರವಾಗಿದೆ
ನಂತರ ವ್ಯಾಸ ಭಗವಂತ ಎಂದು ಅವರಿಗೆ ಹೇಳುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು
ಮಾಡಿ ಹಾಗೂ ದೈವೀ ಗುಣವನ್ನು ಧಾರಣೆ ಮಾಡಿ ಬೇರೆ ಯಾವುದೇ ಮಾತಿಲ್ಲ. ತಮ್ಮನ್ನು ಯೋಗದಲ್ಲಿ
ಕೂರಿಸುತ್ತಾರೆ. ಏಕೆಂದರೆ ಅನೇಕರು ತಂದೆಯನ್ನು ನೆನಪೇ ಮಾಡುವುದಿಲ್ಲ. ತಮ್ಮ ವ್ಯವಹಾರದಲ್ಲಿ ಇದ್ದು
ಬಿಡುತ್ತಾರೆ, ಅವರಿಗೆ ಸಮಯವೇ ಇರುವುದಿಲ್ಲ. ಆದರೆ ಕೆಲಸ ಇತ್ಯಾದಿಯನ್ನು ಮಾಡುತ್ತಿದ್ದರೂ ಸಹ
ಬುದ್ಧಿಯಿಂದ ತಂದೆಯನ್ನು ನೆನಪು ಮಾಡಬೇಕು. ನಾನು ಪ್ರಿಯತಮನಿಗೆ ತಾವು ಪ್ರಿಯತಮೆಯರಾಗಿದ್ದೀರಿ.
ಬೇರೆಲ್ಲಾ ಸಂಗವನ್ನು ಬಿಟ್ಟು ನನ್ನೊಬ್ಬನ ಸಂಗವನ್ನು ಮಾಡಿ ಎಂದು ಈಗ ನಾನು ಹೇಳುತ್ತೇನೆ.
ತಿನ್ನುತ್ತಾ-ಕುಡಿಯುತ್ತಾ ಕೇವಲ ಈ ಅಭ್ಯಾಸವನ್ನು ಮಾಡಿಕೊಳ್ಳಿ - ನಾನು ಆತ್ಮನಾಗಿದ್ದೇನೆ, ಹಾಗೂ
ತಂದೆಯನ್ನು ನೆನಪು ಮಾಡಿ. ತಂದೆಯು ತಮ್ಮನ್ನು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಿದ್ದಾರೆ. ತಾವು
ಈ ನಯಾಪೈಸೆಯ ಮಾತನ್ನು ಕೇಳುವುದಿಲ್ಲವೇನು. ನನ್ನನ್ನು ನೆನಪು ಮಾಡುವುದಿಲ್ಲ. ತಮ್ಮ ಮಕ್ಕಳನ್ನು
ನೆನಪು ಮಾಡುತ್ತೀರಿ, ನನ್ನನ್ನು ನೆನಪು ಮಾಡಲು ಸಾಧ್ಯವಿಲ್ಲವೇ. ನನ್ನನ್ನು ನೆನಪು ಮಾಡಿ ಎಂದು
ತಂದೆಯು ಪ್ರತ್ಯಕ್ಷದಲ್ಲಿ ಬಂದು ತಿಳಿಸುತ್ತಾರೆ. ಕಲ್ಪದ ಮೊದಲೂ ಸಹ ಸನ್ಮುಖದಲ್ಲಿ ಬಂದು
ತಿಳಿಸಿದ್ದರು. ಈಗಲೂ ಸಹ ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಕಲ್ಪದ ನಂತರ ಸಿಕ್ಕಿರುವ
ಮುದ್ದಾದ ಮಕ್ಕಳೇ..... ಈಗ ನಿಮ್ಮ 84 ಜನ್ಮಗಳು ಪೂರ್ಣವಾಯಿತು. ಈಗ ಹಿಂತಿರುಗಿ ಹೋಗಲು ತಾವು
ಖಂಡಿತ ಪವಿತ್ರರಾಗಲೇಬೇಕಾಗಿದೆ. ವಿಕಾರದಲ್ಲಿ ಹೋಗುವ ಕಾರಣ ತಾವು ಬಹಳ ಪತಿತರಾಗಿದ್ದೀರಿ,
ಪಾವನರಾಗದಿದ್ದರೆ ಪದವಿಯೂ ಕಡಿಮೆ ಸಿಗುತ್ತದೆ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು
ಮಾಡಿ 84 ಜನ್ಮಗಳ ಚಕ್ರವನ್ನೂ ನೆನಪು ಮಾಡಿ, ಇದೇ ಸ್ವದರ್ಶನ ಚಕ್ರವಾಗಿದೆ. ಇದರ ಅರ್ಥವೂ ಸಹ
ಯಾರಿಗೂ ಗೊತ್ತಿಲ್ಲ. ಮುಖದಿಂದ ಜ್ಞಾನದ ಶಂಖವನ್ನು ಮೊಳಗಿಸಬೇಕಾಗಿದೆ. ಇದು ಜ್ಞಾನದ ಮಾತುಗಳಾಗಿವೆ.
ಇವರು ನಿಮ್ಮ ಬೇಹದ್ದಿನ ತಂದೆಯಾಗಿದ್ದಾರೆ, ಸ್ವರ್ಗದ ರಚಯಿತನಾಗಿದ್ದಾರೆ. ತಂದೆಯನ್ನು ನೆನಪು
ಮಾಡಿದಾಗ ನಿಮ್ಮದು ಏರುವ ಕಲೆಯಾಗುತ್ತದೆ, ಎಷ್ಟೊಂದು ಸಹಜ ಮಾತಾಗಿದೆ.
ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ ಎಂಬುದನ್ನು ತಾವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ. ಪ್ರತೀ
5000 ವರ್ಷಗಳ ನಂತರ ತಂದೆಯು ಬರುತ್ತಾರೆ. ಈಗ ತಾವು ಪುರುಷಾರ್ಥ ಮಾಡಿ. ಈಗ ತಾವು ಹಣದ ಹಿಂದೆ ಏಕೆ
ಹೋಗುತ್ತೀರಿ? ತಿಂಗಳಿಗೆ ಒಂದೆರಡು ಲಕ್ಷಗಳಷ್ಟು ಸಂಪಾದನೆ ಮಾಡಿದರೆ ಅದೂ ಸಹ ಸಮಾಪ್ತಿಯಾಗುತ್ತದೆ.
ಮಕ್ಕಳು, ಯಾರೂ ಸಹ ಅದನ್ನು ಉಪಯೋಗಿಸಲು ಇರುವುದಿಲ್ಲ. ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು
ಎಲ್ಲರೂ ತಿನ್ನುತ್ತಾರೆ ಎಂಬ ಲೋಭವಿರುತ್ತದೆ. ಪುನರ್ಜನ್ಮವನ್ನು ಎಲ್ಲರೂ ಅದೇ ಕುಲದಲ್ಲಿ
ಪಡೆಯುತ್ತಾರೆಂದೇನಿಲ್ಲ. ಪುನರ್ಜನ್ಮವನ್ನು ಎಲ್ಲೆಲ್ಲಿ ಪಡೆಯುತ್ತಾರೆಯೋ ಗೊತ್ತಿಲ್ಲ, ತಾವು ಇಲ್ಲಿ
21 ಜನ್ಮಗಳ ಆಸ್ತಿಯನ್ನು ಪಡೆಯುತ್ತೀರಿ. ಒಂದುವೇಳೆ ಕಡಿಮೆ ಪುರುಷಾರ್ಥ ಮಾಡಿದರೆ ಪ್ರಜೆಗಳಲ್ಲಿ
ಹೋಗಿ ದಾಸ-ದಾಸಿಯರಾಗುತ್ತೀರಿ ಆಗ ಎಷ್ಟೊಂದು ನಷ್ಟವಾಗುತ್ತದೆ. ಲಾಭ ಹಾಗೂ ನಷ್ಟದ ಬಗ್ಗೆ ವಿಚಾರ
ಮಾಡಿ. ವ್ಯಾಪಾರಿಗಳು ಬಹಳ ಪಾಪದ ಕಾರ್ಯ ಮಾಡುತ್ತಾರೆ. ಆದುದರಿಂದ ಧರ್ಮಕ್ಕಾಗಿ ಹಣವನ್ನು
ತೆಗೆದಿಡುತ್ತಾರೆ. ಆದರೆ ಇದು ಅವಿನಾಶಿ ಜ್ಞಾನರತ್ನಗಳ ವ್ಯಾಪಾರವಾಗಿದೆ ಅಂದಾಗ ಈ ವ್ಯಾಪಾರವನ್ನು
ಕೆಲವರೇ ಮಾಡುತ್ತಾರೆ. ವ್ಯಾಪಾರವನ್ನು ನೇರವಾಗಿ ತಂದೆಯ ಜೊತೆಯೇ ಮಾಡಬೇಕು. ತಂದೆಯು
ಜ್ಞಾನರತ್ನಗಳನ್ನು ಕೊಡುತ್ತಾರೆ. ಅವರು ದಾತನಾಗಿದ್ದಾರೆ. ಮಕ್ಕಳು ಮುಷ್ಟಿಯಷ್ಟು ಅವಲಕ್ಕಿಯನ್ನು
ಕೊಡುತ್ತಾರೆ, ತಂದೆಯು ಬೇಹದ್ದಿನ ಚಕ್ರಾಧಿಪತ್ಯವನ್ನು ಕೊಡುತ್ತಾರೆ. ಅದರ ಹೋಲಿಕೆಯಲ್ಲಿ ಇದು
ಮುಷ್ಟಿಯಷ್ಟು ಅವಲಕ್ಕಿಯಲ್ಲವೆ. ತಾವೆಲ್ಲರೂ ಸುಧಾಮರಾಗಿದ್ದೀರಿ. ಏನು ಕೊಡುತ್ತೀರಿ ಮತ್ತು ಏನನ್ನು
ತೆಗೆದುಕೊಳ್ಳುತ್ತೀರಿ? ವಿಶ್ವ ಚಕ್ರಾಧಿಪತ್ಯವನ್ನು ತೆಗೆದುಕೊಂಡು ವಿಶ್ವದ ಮಾಲೀಕರಾಗುತ್ತೀರಿ.
ಒಂದೇ ಭಾರತ ಖಂಡವಾಗುತ್ತದೆ ಎಂದು ಬುದ್ಧಿಯು ಹೇಳುತ್ತದೆ, ಪ್ರಕೃತಿಯೂ ಸಹ ಹೊಸದಾಗುತ್ತದೆ. ಆತ್ಮವೂ
ಸಹ ಸತೋಪ್ರಧಾನವಾಗುತ್ತದೆ. ಸತ್ಯಯುಗದಲ್ಲಿ ತಾವು ದೇವತೆಗಳಿದ್ದಾಗ ಪವಿತ್ರ ಚಿನ್ನವಾಗಿತ್ತು.
ನಂತರ ತ್ರೇತಾದಲ್ಲಿ ಸ್ವಲ್ಪ ಬೆಳ್ಳಿ ಆತ್ಮದಲ್ಲಿ ಸೇರ್ಪಡೆಯಾಯಿತು. ಅದಕ್ಕೆ ಬೆಳ್ಳಿಯುಗ
ಎನ್ನಲಾಗುತ್ತದೆ. ಏಣಿಯನ್ನು ಇಳಿಯುತ್ತಾ ಹೋಗುತ್ತೀರಿ. ಈ ಸಮಯದಲ್ಲಿ ತಾವು ಬಹಳ
ಶ್ರೇಷ್ಠರಾಗುತ್ತಿದ್ದೀರಿ. ವಿರಾಟರೂಪದ ಚಿತ್ರವೂ ಇದೆ, ಆದರೆ ಅದರ ಅರ್ಥವನ್ನಂತೂ ತಿಳಿದುಕೊಂಡೇ
ಇಲ್ಲ. ಎಷ್ಟೊಂದು ಚಿತ್ರಗಳಿವೆ ಕೆಲವರು ಕ್ರಿಸ್ತನ ಚಿತ್ರವನ್ನು ಇಟ್ಟುಕೊಂಡಿರುತ್ತಾರೆ, ಇನ್ನೂ
ಕೆಲವರು ಸಾಯಿಬಾಬನ ಚಿತ್ರವನ್ನು ಇಟ್ಟುಕೊಂಡಿರುತ್ತಾರೆ. ಮುಸಲ್ಮಾನರನ್ನು ಗುರುಗಳನ್ನಾಗಿ
ಮಾಡಿಕೊಳ್ಳುತ್ತಾರೆ, ನಂತರ ಅಲ್ಲಿ ಹೋಗಿ ಕುಡಿತದ ಕೂಟಗಳನ್ನು ಮಾಡುತ್ತಾರೆ. ತಂದೆಯು
ತಿಳಿಸುತ್ತಾರೆ - ಎಷ್ಟೊಂದು ಅಜ್ಞಾನ ಅಂಧಕಾರವಿದೆ, ಇದೆಲ್ಲವೂ ಭಕ್ತಿಯ ಅಂಧಕಾರವಾಗಿದೆ. ಸಂಗದಿಂದ
ಬಹಳ ಎಚ್ಚರಿಕೆಯಿಂದ ಇರಬೇಕು. ಸಂಗ ಮೇಲೆತ್ತುತ್ತದೆ, ಕೆಟ್ಟ ಸಂಗವು ಮುಳುಗಿಸುತ್ತದೆ ಎಂದು
ಹೇಳಲಾಗುತ್ತದೆ. ಮಾಯೆಯ ಪಂಚ ವಿಕಾರಗಳ ಕೆಟ್ಟ ಸಂಗವಾಗಿದೆ. ಈಗ ತಮಗೆ ಸತ್ಯ ತಂದೆಯ ಸಂಗವು
ಸಿಕ್ಕಿದೆ ಇದರಿಂದ ತಾವು ಪಾರಾಗುತ್ತಿದ್ದೀರಿ. ತಂದೆಯೇ ಸತ್ಯವನ್ನು ಹೇಳುತ್ತಾರೆ. ಕಲ್ಪ-ಕಲ್ಪವು
ತಮಗೆ ಸತ್ಯ ತಂದೆಯ ಸಂಗವು ಸಿಗುತ್ತದೆ ಮತ್ತೆ ಅರ್ಧ ಕಲ್ಪದ ನಂತರ ರಾವಣನ ಕೆಟ್ಟ ಸಂಗವು ಸಿಗುತ್ತದೆ.
ಇದೂ ಸಹ ಗೊತ್ತಿದೆ - ಕಲ್ಪದ ಮೊದಲಿನಂತೆ ರಾಜಧಾನಿಯು ಖಂಡಿತ ಸ್ಥಾಪನೆಯಾಗುತ್ತದೆ. ತಾವು ಖಂಡಿತ
ವಿಶ್ವದ ಮಾಲೀಕರಾಗುತ್ತೀರಿ. ಇಲ್ಲಂತೂ ವಿಭಜನೆಯಾದ ಕಾರಣ ಎಷ್ಟೊಂದು ಜಗಳಗಳಾಗುತ್ತವೆ. ಅಲ್ಲಂತೂ
ಒಂದೇ ಧರ್ಮವಿತ್ತು, ಯಾವಾಗ ಅದ್ವೈತ ದೇವತೆಗಳ ರಾಜ್ಯವಿತ್ತು ಆಗ ವಿಶ್ವದಲ್ಲಿ ಶಾಂತಿಯಿತ್ತು, ಒಂದೇ
ಧರ್ಮವಿತ್ತು. ಅಲ್ಲಿ ಅಶಾಂತಿ ಎಲ್ಲಿಂದ ಬರುತ್ತದೆ, ಅದು ಈಶ್ವರೀಯ ರಾಜ್ಯವಾಗಿದೆ. ಆಧ್ಯಾತ್ಮಿಕ
ಜ್ಞಾನದಿಂದ ಪರಮಾತ್ಮನು ರಾಜಧಾನಿಯನ್ನು ಸ್ಥಾಪನೆ ಮಾಡಿದರೆಂದಮೇಲೆ ಖಂಡಿತ ಸುಖವಿರುತ್ತದೆ. ತಂದೆಗೆ
ಮಕ್ಕಳ ಮೇಲೆ ಪ್ರೀತಿಯಿರುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ - ತಾವು ಎಷ್ಟು ಕಷ್ಟ ಪಡುತ್ತೀರಿ
ಎಂದು ನನಗೆ ಗೊತ್ತಿದೆ. ಭಗವಂತನು ಯಾವುದಾದರೊಂದು ರೂಪದಲ್ಲಿ ಬರುತ್ತಾರೆಂದು ತಿಳಿಯುತ್ತೀರಿ.
ಕೆಲವೊಮ್ಮೆ ಬಸವನ ಮೇಲೆ ಸವಾರಿಯನ್ನು ತೋರಿಸುತ್ತಾರೆ. ಈಗ ಬಸವನ ಮೇಲೆ ಎಂದಾದರೂ
ಸವಾರಿಯಾಗುತ್ತದೆಯೇನು? ಎಷ್ಟೊಂದು ಅಂಧಕಾರವಾಗಿದೆ. ಅಂದಮೇಲೆ ತಾವು ಮಕ್ಕಳು ಎಲ್ಲರಿಗೂ ತಿಳಿಸಿ -
ತಂದೆಯು ಆಸ್ತಿಯನ್ನು ಕೊಡಲು ಬಂದಿದ್ದಾರೆ, ಬ್ರಹ್ಮಾರವರ ಮೂಲಕ ಹೊಸ ಜಗತ್ತಿನ ಸ್ಥಾಪನೆಯಾಗುತ್ತಿದೆ.
ತಂದೆಯು ಸದಾ ಆಲದ ಮರದ ಉದಾಹರಣೆಯನ್ನು ಕೊಡುತ್ತಾರೆ. ಹಾಗೆಯೇ ಇದರ ಯಾವ ತಳಹದಿಯಿದೆಯೋ ಮತ್ತೆ ಅದರ
ಸ್ಥಾಪನೆ ಮಾಡುತ್ತಿದ್ದಾರೆ. ಮತ್ತೆ ಬೇರೆ ಯಾವುದೇ ಧರ್ಮವಿರುವುದಿಲ್ಲ. ಭಾರತವು ಅವಿನಾಶಿ ಖಂಡ
ಹಾಗೂ ಅವಿನಾಶಿ ತೀರ್ಥವಾಗಿದೆ. ತಂದೆಯ ಜನ್ಮ ಸ್ಥಾನವಾಗಿದೆ. ತಂದೆಯು ಪ್ರೀತಿಯಿಂದ ಮಧುರಾತಿ ಮಧುರ
ಮಕ್ಕಳಿಗೆ ತಿಳಿಸುತ್ತಾರೆ. ಶಿಕ್ಷಕನ ರೂಪದಲ್ಲಿ ಓದಿಸುತ್ತಾರೆ. ತಾವು ಮಕ್ಕಳು ಓದಿ ನನಗಿಂತಲೂ
ಶ್ರೇಷ್ಠರಾಗುತ್ತೀರಿ. ನಾನಂತೂ ರಾಜ್ಯವನ್ನು ತೆಗೆದುಕೊಳ್ಳುವುದಿಲ್ಲ, ನನ್ನನ್ನು ಎಂದಾದರೂ
ಸ್ವರ್ಗದಲ್ಲಿ ಬನ್ನಿ ಎಂದು ಕರೆದಿದ್ದೀರೇನು - ನಾನು ನಿಮ್ಮನ್ನು ಸ್ವರ್ಗಕ್ಕೆ
ಕಳುಹಿಸಿಕೊಡುತ್ತೇನೆ. ಈ ಆಟವು ಎಷ್ಟೊಂದು ಚೆನ್ನಾಗಿದೆ. ಒಳ್ಳೆಯದು - ಮಕ್ಕಳೆ ಬದುಕಿರಿ. ನಾನು
ವಾನಪ್ರಸ್ಥ ಸ್ಥಿತಿಯಲ್ಲಿ ಹೋಗಿ ಇರುತ್ತೇನೆ. ತಂದೆಯು ಹೇಳುತ್ತಾರೆ - ಈಗಂತೂ ಆಪತ್ತುಗಳು ತಲೆಯ
ಮೇಲೆ ನಿಂತಿವೆ. ಆದ್ದರಿಂದ ಪುರುಷೋತ್ತಮರಾಗಲು ಈ ಪುರುಷೋತ್ತಮ ಸಂಗಮಯುಗದಲ್ಲಿ ಪುರುಷಾರ್ಥ
ಮಾಡಬೇಕಾಗಿದೆ. ತಂದೆಯನ್ನು ನೆನಪು ಮಾಡುವ ಪುರುಷಾರ್ಥವನ್ನು ಮಾಡುತ್ತೀರಿ. ಆಗ ವಿಕರ್ಮ
ವಿನಾಶವಾಗುತ್ತದೆ ಮತ್ತು ಯಾರೆಷ್ಟು ಓದುತ್ತಾರೆಯೋ ಅವರು ಅಷ್ಟು ಉತ್ತಮ ಕುಲದಲ್ಲಿ ಹೋಗುತ್ತಾರೆ.
ತಂದೆಯು ಹೇಳುತ್ತಾರೆ - ತಾವೆಷ್ಟು ಸ್ಮೃತಿ ಮಾಡಿಕೊಳ್ಳುತ್ತೀರೋ ಅಷ್ಟು ಖುಷಿಯಿರುತ್ತದೆ. ಸದಾ
ತಂದೆಯಿಂದ ಮಕ್ಕಳಿಗೆ ಆಸ್ತಿಯು ಸಿಗುತ್ತದೆ. ಲೌಕಿಕದಲ್ಲಿ ಗಂಡು ಮಕ್ಕಳಿಗೆ ಸಿಗುತ್ತದೆ ಹೆಣ್ಣು
ಮಕ್ಕಳನ್ನು ದಾನ ಮಾಡುತ್ತಾರೆ. ಇಲ್ಲಂತೂ ಎಲ್ಲಾ ಆತ್ಮಗಳಿಗೂ ಬೇಹದ್ದಿನ ಆಸ್ತಿಯು ಸಿಗುತ್ತದೆ,
ಅಂದಮೇಲೆ ಇದರ ಮೇಲೆ ಪೂರ್ಣ ಗಮನ ಕೊಡಬೇಕು. ಭಗವಂತನು ಓದಿಸುತ್ತಿದ್ದಾರೆ ಅಂದಾಗ ಒಂದು ದಿನವೂ
ವಿದ್ಯೆಯನ್ನು ಕೇಳುವ ಅವಕಾಶವನ್ನು ಬಿಡಬಾರದು. ನನಗೆ ಬಿಡುವಿಲ್ಲವೆಂದು ತಂದೆಗೆ ಹೇಳಿದರೆ ತಂದೆಯು
ತಿಳಿಸುತ್ತಾರೆ - ಅರೆ! ನನ್ನಿಂದ ವಿದ್ಯೆಯನ್ನು ಓದಲು ಆತ್ಮಕ್ಕೆ ಬಿಡುವಿಲ್ಲವೆ. ಈ ರೀತಿ ಹೇಳಲು
ಸಂಕೋಚವಾಗುವುದಿಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಪಿತ ಬಾಪ್ದಾದಾರವರ ನೆನಪು-ಪ್ರೀತಿ
ಹಾಗೂ ಗುಡ್ಮಾರ್ನಿಂಗ್. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಸಂಗದಿಂದ
ತಮ್ಮನ್ನು ಬಹಳ ಸಂಭಾಲನೆ ಮಾಡಿಕೊಳ್ಳಏಕು. ಒಬ್ಬ ಸತ್ಯ ತಂದೆಯ ಸಂಗವನ್ನೇ ಮಾಡಬೇಕು. ಮಾಯೆಯ ಪಂಚ
ವಿಕಾರಗಳ ಸಂಗದಿಂದ ಬಹಳ ದೂರವಿರಬೇಕು.
2. ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಬೇಕು. ತಮ್ಮ ಮಸ್ತಿಯಲ್ಲಿರಿ - ಎಷ್ಟು ವಿಚಾರ ಮಾಡುತ್ತೇವೆಯೋ
ಅಷ್ಟು ನಶೆಯೇರುತ್ತದೆ. ವಿದ್ಯೆಯನ್ನು ಒಂದು ದಿನವೂ ತಪ್ಪಿಸಬಾರದು.
ವರದಾನ:
ತಂದೆಯ
ಸಹಾಯದಿಂದ ಶೂಲವನ್ನು ಮುಳ್ಳನ್ನಾಗಿ ಮಾಡುವಂತಹ ಸದಾ ನಿಶ್ಚಿಂತ ಮತ್ತು ಟ್ರಸ್ಟಿ ಭವ.
ಹಿಂದಿನ ಲೆಕ್ಕಾಚಾರ ಶೂಲವಾಗಿದೆ, ಆದರೆ ತಂದೆಯ ಸಹಾಯದಿಂದ ಅದು ಮುಳ್ಳಾಗಿ ಬಿಡುವುದು.
ಪರಿಸ್ಥಿತಿಗಳು ಖಂಡಿತ ಬರುತ್ತವೆ. ಏಕೆಂದರೆ ಎಲ್ಲವನ್ನೂ ಇಲ್ಲೇ ಚುಕ್ತ ಮಾಡಬೇಕಿದೆ. ಆದರೆ ತಂದೆಯ
ಸಹಾಯ ಅವುಗಳನ್ನು ಮುಳ್ಳನ್ನಾಗಿ ಮಾಡಿ ಬಿಡುವುದು, ದೊಡ್ಡ ಮಾತನ್ನು ಸಣ್ಣದಾಗಿ ಮಾಡಿಬಿಡುವುದು.
ಏಕೆಂದರೆ ದೊಡ್ಡ ತಂದೆ ಜೊತೆಯಲ್ಲಿದ್ದಾರೆ. ಇದೇ ನಿಶ್ಚಯದ ಆಧಾರದಿಂದ ಸದಾ ನಿಶ್ಚಿಂತರಾಗಿರಿ ಮತ್ತು
ಟ್ರಸ್ಟಿಗಳಾಗಿ ನನ್ನದು ಎನ್ನುವುದನ್ನು ನಿನ್ನದು ಎನ್ನುವುದರಲ್ಲಿ ಬದಲಾವಣೆ ಮಾಡಿ ಹಗುರ ಆಗಿಬಿಡಿ.
ಆಗ ಎಲ್ಲಾ ಹೊರೆಗಳು ಒಂದು ಸೆಕೆಂಡಿನಲ್ಲಿ ಸಮಾಪ್ತಿಯಾಗಿ ಬಿಡುವುದು.
ಸ್ಲೋಗನ್:
ಶುಭ ಭಾವನೆಯ
ಸ್ಟಾಕ್ ಮೂಲಕ ನಕಾರಾತ್ಮಕವನ್ನು ಸಕಾರಾತ್ಮಕವಾಗಿ ಪರಿವರ್ತನೆ ಮಾಡಿ.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ
ಅಂತರ್ಮುಖಿ ಸ್ಥಿತಿಯ ಮೂಲಕ ಪ್ರತಿಯೊಬ್ಬರ ಹೃದಯದ ರಹಸ್ಯವನ್ನು ತಿಳಿದು ಅವರನ್ನು ರಾಜಿ ಮಾಡಿ.
ಅದಕ್ಕಾಗಿ ಸಾಧಾರಣ ರೂಪದಲ್ಲಿ ಅಸಾಧಾರಣ ಸ್ಥಿತಿಯ ಅನುಭವ ಸ್ವಯಂ ಸಹಾ ಮಾಡಿ ಮತ್ತು ಅನ್ಯರಿಗೂ
ಮಾಡಿಸಿ. ಬಾಹರ್ಮುಖತೆಯಲ್ಲಿ ಬರುವ ಸಮಯದಲ್ಲಿ ಅಂತರ್ಮುಖತೆಯ ಸ್ಥಿತಿಯನ್ನೂ ಸಹಾ
ಜೊತೆ-ಜೊತೆಯಲ್ಲಿಟ್ಟುಕೊಳ್ಳಿ.