29.05.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಯಾರದೇ
ನಾಮ-ರೂಪದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಅತಿ ಕಠಿಣವಾದ ಖಾಯಿಲೆಯಾಗಿದೆ, ಅಂತರ್ಮುಖಿಗಳಾಗಿ ಈ
ಖಾಯಿಲೆಯನ್ನು ಪರಿಶೀಲನೆ ಮಾಡಿ ಮತ್ತು ಇದರಿಂದ ಮುಕ್ತರಾಗಿ”
ಪ್ರಶ್ನೆ:
ನಾಮ-ರೂಪದ
ಖಾಯಿಲೆಯನ್ನು ಸಮಾಪ್ತಿ ಮಾಡುವ ಯುಕ್ತಿಯೇನಾಗಿದೆ? ಇದರಿಂದ ಯಾವ ಯಾವ ನಷ್ಟವಾಗುತ್ತದೆ?
ಉತ್ತರ:
ನಾಮ-ರೂಪದ
ಖಾಯಿಲೆಯನ್ನು ಸಮಾಪ್ತಿ ಮಾಡಲು ಒಬ್ಬ ತಂದೆಯೊಂದಿಗೆ ಸತ್ಯ-ಸತ್ಯವಾದ ಪ್ರೀತಿಯನ್ನಿಡಿ. ನೆನಪಿನ
ಸಮಯದಲ್ಲಿ ಬುದ್ಧಿಯು ಅಲೆದಾಡುತ್ತದೆ, ದೇಹಧಾರಿಗಳಲ್ಲಿ ಹೋಗುತ್ತದೆಯೆಂದರೆ ಸತ್ಯ-ಸತ್ಯವಾದುದನ್ನು
ತಂದೆಗೆ ತಿಳಿಸಬೇಕು. ಸತ್ಯವನ್ನು ಹೇಳುವುದರಿಂದ ತಂದೆಯು ಕ್ಷಮಿಸಿ ಬಿಡುತ್ತಾರೆ. ಸರ್ಜನ್ನ ಬಳಿ
ಖಾಯಿಲೆಯನ್ನು ಮುಚ್ಚಿಡಬಾರದು. ತಂದೆಗೆ ಹೇಳುವುದರಿಂದ ಜಾಗೃತರಾಗಿ ಬಿಡುತ್ತೀರಿ. ಬುದ್ಧಿಯು ಯಾರದೇ
ನಾಮ-ರೂಪದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆ ತಂದೆಯೊಂದಿಗೆ ಬುದ್ಧಿಯನ್ನು ಜೋಡಿಸಲು ಸಾಧ್ಯವಿಲ್ಲ.
ಅವರು ಸರ್ವೀಸಿಗೆ ಬದಲಾಗಿ ಡಿಸ್-ಸರ್ವೀಸ್ ಮಾಡುತ್ತಾರೆ. ತಂದೆಯ ನಿಂದನೆಯನ್ನು ಮಾಡಿಸುತ್ತಾರೆ.
ಇಂತಹ ನಿಂದಕರು ಬಹಳ ಕಠಿಣ ಶಿಕ್ಷೆಗಳಿಗೆ ಭಾಗಿಗಳಾಗುತ್ತಾರೆ.
ಓಂ ಶಾಂತಿ.
ಈಗ ಮಕ್ಕಳು ತಿಳಿದುಕೊಂಡಿದ್ದೀರಿ - ಪ್ರತಿಯೊಬ್ಬರಿಗೂ ತಂದೆಯಿಂದ ಆಸ್ತಿಯು ಸಿಗುತ್ತದೆ.
ಸಹೋದರನಿಂದ ಸಹೋದರನಿಗೆ ಆಸ್ತಿ ಎಂದೂ ಸಿಗುವುದಿಲ್ಲ ಮತ್ತು ಸಹೋದರ-ಸಹೋದರಿಯರು ಯಾರಿದ್ದಾರೆ
ಅವರಿಗೆ ಪ್ರತಿಯೊಬ್ಬರ ಸ್ಥಿತಿಯೂ ಗೊತ್ತಾಗುವುದಿಲ್ಲ. ಎಲ್ಲಾ ಸಮಾಚಾರವು ಬಾಪ್ದಾದಾರವರ ಬಳಿ
ಬರುತ್ತದೆ, ಇದು ಪ್ರತ್ಯಕ್ಷವಾಗಿದೆ. ಪ್ರತಿಯೊಬ್ಬರೂ ತಮ್ಮನ್ನು ತಾವು ನೋಡಿಕೊಳ್ಳಿ- ನಾನು
ಎಲ್ಲಿಯವರೆಗೆ ನೆನಪು ಮಾಡುತ್ತೇನೆ? ಯಾರದಾದರೂ ನಾಮ-ರೂಪದಲ್ಲಿ ಸಿಲುಕಿಕೊಂಡಿದ್ದೇನೆಯೇ. ನಮ್ಮ
ಆತ್ಮನ ವೃತ್ತಿಯು ಎಲ್ಲೆಲ್ಲಿಗೆ ಹೋಗುತ್ತದೆ? ಆತ್ಮವು ಸ್ವಯಂ ತಿಳಿದುಕೊಳ್ಳುತ್ತದೆ- ತಮ್ಮನ್ನು
ಆತ್ಮನೆಂದೇ ತಿಳಿದುಕೊಳ್ಳಬೇಕು. ನಮ್ಮ ವೃತ್ತಿ ಒಬ್ಬ ಶಿವ ತಂದೆಯ ಕಡೆಯೇ ಹೋಗುತ್ತದೆಯೇ ಅಥವಾ
ಯಾವುದಾದರೂ ನಾಮ-ರೂಪದ ಕಡೆ ಹೋಗುತ್ತದೆಯೇ? ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು ಮಾಡಬೇಕು
ಹಾಗೂ ಎಲ್ಲವನ್ನೂ ಮರೆಯುತ್ತಾ ಹೋಗಬೇಕು. ನಮ್ಮ ಮನಸ್ಸನ್ನು ನಾವೇ ಕೇಳಿಕೊಳ್ಳಬೇಕು- ನಮ್ಮ ಮನಸ್ಸು
ಬೇರೆ ಎಲ್ಲಿಯೂ ಅಲೆದಾಡುವುದಿಲ್ಲವೆ? ಒಮ್ಮೊಮ್ಮೆ ವ್ಯಾಪಾರ-ವ್ಯವಹಾರದಲ್ಲಿ, ಮಿತ್ರ ಸಂಬಂಧಿ
ಮುಂತಾದವರ ಕಡೆ ಹೋಗುವುದಿಲ್ಲವೆ? ಅಂತರ್ಮುಖಿಯಾಗಿ ಪರಿಶೀಲಿಸಿಕೊಳ್ಳಬೇಕು. ಇಲ್ಲಿಗೆ ಬಂದು
ಕುಳಿತುಕೊಂಡಾಗ ತಮ್ಮ ಮೇಲೆ ತಾವೇ ಗಮನವಿಡಬೇಕು. ಇಲ್ಲಿ ಯಾರಾದರೂ ಸನ್ಮುಖದಲ್ಲಿ ಯೋಗದಲ್ಲಿ
ಕುಳಿತಿರುತ್ತಾರೆ ಅವರು ಶಿವ ತಂದೆಯ ನೆನಪನ್ನು ಮಾಡುತ್ತಿರಬಹುದು. ತನ್ನ ಮಕ್ಕಳು-ಮರಿಯನ್ನು ನೆನಪು
ಮಾಡುತ್ತಿರುತ್ತಾರೆಂದು ತಿಳಿಯಬಾರದು, ಶಿವ ತಂದೆಯನ್ನೆ ನೆನಪು ಮಾಡಬೇಕು. ಇಲ್ಲಿ ಕುಳಿತಿರುವುದೇ
ಶಿವ ತಂದೆಯ ನೆನಪಿನಲ್ಲಿ ನಂತರ ಕಣ್ಣು ತೆರೆದು ಕುಳಿತುಕೊಳ್ಳಲಿ ಅಥವಾ ಕಣ್ಣನ್ನು ಮುಚ್ಚಿ
ಕುಳಿತುಕೊಳ್ಳಲಿ- ಇದಂತೂ ಬುದ್ಧಿಯಿಂದ ತಿಳಿದುಕೊಳ್ಳುವ ಮಾತಾಗಿದೆ. ನಮ್ಮ ಮನಸ್ಸನ್ನು ನಾವೇ
ಕೇಳಿಕೊಳ್ಳಬೇಕು- ನಾವು ಒಬ್ಬರನ್ನೇ ನೆನಪು ಮಾಡಬೇಕು, ಇಲ್ಲಿ ಕುಳಿತುಕೊಳ್ಳುವವರೂ ಸಹ ಶಿವ ತಂದೆಯ
ನೆನಪಿನಲ್ಲಿಯೇ ಇರಬಹುದು. ನಿಮ್ಮನ್ನು ನೋಡುವುದಿಲ್ಲ ಏಕೆಂದರೆ ಅವರಿಗೂ ಸಹ ಯಾರ ಸ್ಥಿತಿಯ ಬಗ್ಗೆಯೂ
ತಿಳಿದಿರುವುದಿಲ್ಲ. ಪ್ರತಿಯೊಬ್ಬರ ಸಮಾಚಾರವು ತಂದೆಯ ಬಳಿ ಬರುತ್ತದೆ, ತಂದೆಯು ಯಾವ-ಯಾವ ಮಕ್ಕಳು
ಚೆನ್ನಾಗಿದ್ದಾರೆ, ಲೈನ್ ಸ್ಪಷ್ಟವಾಗಿದೆಯೆಂದು ತಿಳಿದುಕೊಂಡಿರುತ್ತಾರೆ. ಕೆಲವರ ಬುದ್ಧಿಯು
ಬೇರೆಲ್ಲಿಗೂ ಹೋಗುವುದಿಲ್ಲ. ಕೆಲವರ ಬುದ್ಧಿಯೋಗವು ಬೇರೆ ಕಡೆಗೆ ಹೋಗುತ್ತದೆ, ನಂತರ ಮುರುಳಿಯನ್ನು
ಕೇಳುವ ಸಂದರ್ಭದಲ್ಲಿ ಪರಿವರ್ತನೆಯಾಗುತ್ತಾರೆ. ಆಗ ಇದು ನಮ್ಮ ತಪ್ಪೆಂದು ಅನುಭವ ಮಾಡುತ್ತಾರೆ-
ಹೌದು ನಮ್ಮ ದೃಷ್ಟಿ, ವೃತ್ತಿ ಸರಿಯಾಗಿರಲಿಲ್ಲ. ಇದನ್ನು ಸರಿಪಡಿಸಿಕೊಳ್ಳಬೇಕೆಂದರೆ ಅಪವಿತ್ರತೆಯ
ವೃತ್ತಿಯನ್ನು ಬಿಟ್ಟು ಬಿಡಬೇಕು. ತಂದೆಯು ತಿಳಿಸುತ್ತಾರೆ- ಸಹೋದರ-ಸಹೋದರನಿಗೆ ತಿಳಿಸಲು
ಆಗುವುದಿಲ್ಲವೇ? ತಂದೆಯು ನೋಡುತ್ತಾರೆ- ಇವರ ದೃಷ್ಟಿ-ವೃತ್ತಿ ಹೇಗಿದೆ? ತಂದೆಗೆ ಮಾತ್ರ ತಮ್ಮ
ಮನಸ್ಸಿನ ಸ್ಥಿತಿ ಗತಿಗಳನ್ನು ಹೇಳುತ್ತಾರೆ. ಶಿವ ತಂದೆಗೆ ತಿಳಿಸಿದರೆ ಬ್ರಹ್ಮಾ ತಂದೆಯೂ
ತಿಳಿದುಕೊಳ್ಳುತ್ತಾರೆ. ಪ್ರತಿಯೊಬ್ಬರೂ ಹೇಳುವುದರಿಂದ, ನೋಡುವುದರಿಂದ ತಿಳಿದುಕೊಳ್ಳುತ್ತಾರೆ.
ಹೇಳದ ಹೊರತು ಇವರು ಏನೇನು ಮಾಡುತ್ತಾರೆಂದು ಅವರಿಗೆ ಹೇಗೆ ತಿಳಿಯುತ್ತದೆ? ಅವರ ನಡತೆಯಿಂದ,
ಸೇವೆಯಿಂದ, ಇವರಿಗೆ ಬಹಳ ದೇಹಾಭಿಮಾನವಿದೆ, ಇವರಿಗೆ ಕಡಿಮೆಯಿದೆ ಇವರ ನಡತೆ ಸರಿಯಿಲ್ಲವೆಂದು
ತಿಳಿಯಬಹುದು. ಯಾರದಾದರೂ ನಾಮ-ರೂಪದಲ್ಲಿ ಸಿಕ್ಕಿಕೊಂಡಿರುತ್ತಾರೆ. ತಂದೆಯು ಕೇಳುತ್ತಾರೆ- ಯಾರ
ಕಡೆಯಾದರೂ ಬುದ್ಧಿಯು ಹೋಗುತ್ತದೆಯೇ? ಕೆಲವರು ಸತ್ಯವನ್ನು ಹೇಳುತ್ತಾರೆ, ಕೆಲವರು ನಾಮ-ರೂಪದಲ್ಲಿ
ಸಿಕ್ಕಿಕೊಂಡಿದ್ದರೂ ಹೇಳುವುದಿಲ್ಲ. ತಮಗೆ ತಾವು ನಷ್ಟ ಮಾಡಿಕೊಳ್ಳುತ್ತಿರುತ್ತಾರೆ. ತಂದೆಗೆ
ಹೇಳುವುದರಿಂದ ಅವರಿಂದ ಕ್ಷಮೆ ಸಿಗುತ್ತದೆ ಹಾಗೂ ಭವಿಷ್ಯಕ್ಕಾಗಿ ಎಚ್ಚರಿಕೆ ವಹಿಸುತ್ತಾರೆ.
ಬಹಳಷ್ಟು ತಮ್ಮ ವೃತ್ತಿಯನ್ನು ಸತ್ಯವಾಗಿರುವುದನ್ನು ಹೇಳುವುದಿಲ್ಲ, ನಾಚಿಕೆ ಪಡುತ್ತಾರೆ. ಹೇಗೆ
ಯಾರಾದರೂ ಉಲ್ಟಾ ಕೆಲಸ ಮಾಡಿದಾಗ ಸರ್ಜನ್ಗೆ ಹೇಳುವುದಿಲ್ಲ ಅದನ್ನು ಬಚ್ಚಿಟ್ಟುಕೊಳ್ಳುವುದರಿಂದ
ಖಾಯಿಲೆಯು ಇನ್ನೂ ವೃದ್ಧಿಯಾಗುತ್ತದೆ, ಇಲ್ಲಿಯೂ ಸಹ ಅದೇ ರೀತಿಯಿದ್ದಾರೆ. ತಂದೆಗೆ ಹೇಳುವುದರಿಂದ
ಹಗುರವಾಗಿ ಬಿಡುತ್ತಾರೆ ಇಲ್ಲವೆಂದರೆ ಆಂತರ್ಯದಲ್ಲಿ ಭಾರದಿಂದಿರುತ್ತಾರೆ. ತಂದೆಗೆ ಹೇಳುವುದರಿಂದ
ನಂತರ ಅದನ್ನು ಮಾಡುವುದಿಲ್ಲ. ಭವಿಷ್ಯದಲ್ಲಿ ಎಚ್ಚರದಿಂದಿರುತ್ತಾರೆ. ಒಂದುವೇಳೆ ಹೇಳದಿದ್ದರೆ ಅದು
ವೃದ್ಧಿಯಾಗುತ್ತಿರುತ್ತದೆ. ತಂದೆಯು ತಿಳಿದಿದ್ದಾರೆ- ಇವರು ಒಳ್ಳೆಯ ಸೇವಾಧಾರಿಗಳಾಗಿದ್ದಾರೆ, ಇವರ
ಕರ್ತವ್ಯ ಹೇಗಿರುತ್ತದೆ? ಸೇವೆಯಲ್ಲಿ ಹೇಗಿರುತ್ತಾರೆ? ಯಾರೊಂದಿಗೂ ಸಿಕ್ಕಿಕೊಂಡಿಲ್ಲವೆ?
ಪ್ರತಿಯೊಬ್ಬರ ಜನ್ಮ ಪತ್ರಿಕೆಯನ್ನು ನೋಡಿ ಅವರನ್ನು ಪ್ರೀತಿ ಮಾಡುತ್ತಾರೆ. ಕೆಲವರಂತೂ ಬಹಳ
ಒಳ್ಳೆಯ ಸೇವೆಯನ್ನು ಮಾಡುತ್ತಿರುತ್ತಾರೆ. ಎಂದಿಗೂ ಅವರ ಬುದ್ಧಿಯೋಗ ಬೇರೆ ಕಡೆ ಹೋಗುವುದಿಲ್ಲ.
ಮೊದಲು ಹೋಗುತ್ತಿರಬಹುದು ಆದರೆ ಈಗ ಎಚ್ಚರದಿಂದಿರುತ್ತಾರೆ. ತಂದೆಗೆ ತಿಳಿಸುತ್ತಾರೆ- ನಾನು ಈಗ
ಎಚ್ಚರಿಕೆಯಿಂದ ಇದ್ದೇನೆ, ಮೊದಲು ಬಹಳ ತಪ್ಪುಗಳನ್ನು ಮಾಡುತ್ತಿದ್ದೆನು. ದೇಹಾಭಿಮಾನದಲ್ಲಿ
ಬರುವುದರಿಂದ ತಪ್ಪುಗಳಾಗುತ್ತಿತ್ತು ಎಂದು ತಿಳಿದುಕೊಳ್ಳುತ್ತಾರೆ, ಮತ್ತೆ ಪದವಿಯೂ ಭ್ರಷ್ಟವಾಗಿ
ಬಿಡುತ್ತದೆ. ಒಂದುವೇಳೆ ಯಾರಿಗೂ ತಿಳಿಯದೇ ಮಾಡಬಹುದು ಆದರೆ ಪದವಿಯಂತೂ ಭ್ರಷ್ಟವಾಗಿ ಬಿಡುತ್ತದೆ.
ಇಲ್ಲಿ ಮನಸ್ಸಿನ ಸ್ವಚ್ಛತೆಯು ಬಹಳ ಮುಖ್ಯವಾಗಿದೆ ಆಗ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ.
ಅಂತಹವರ ಬುದ್ಧಿಯು ಲಕ್ಷ್ಮೀ-ನಾರಾಯಣ ಆತ್ಮದಂತೆ ಬಹಳ ಸ್ವಚ್ಛವಾಗಿರುತ್ತದೆ ಆಗ ಅವರು ಶ್ರೇಷ್ಠ
ಪದವಿಯನ್ನು ಪಡೆದಿರುತ್ತಾರೆ. ಕೆಲವರನ್ನು ಕುರಿತು ತಿಳಿದುಕೊಳ್ಳಬೇಕಾಗುತ್ತದೆ- ಇವರಿಗೆ
ನಾಮ-ರೂಪದ ಕಡೆ ವೃತ್ತಿಯಿದೆ. ದೇಹೀ-ಅಭಿಮಾನಿಯಾಗಿರುವುದಿಲ್ಲ, ಈ ಕಾರಣದಿಂದ ಪದವಿಯು
ಕಡಿಮೆಯಾಗುತ್ತಾ ಹೋಯಿತು. ರಾಜನಿಂದ ಹಿಡಿದು ಪ್ರಜೆಯವರೆಗೆ ನಂಬರ್ವಾರ್ ಇದೆಯಲ್ಲವೆ! ಹೀಗೆ ಏಕೆ
ಆಗುತ್ತದೆ! ಇದನ್ನೂ ಸಹ ತಿಳಿದುಕೊಳ್ಳಬೇಕು. ಅವಶ್ಯವಾಗಿ ನಂಬರ್ವಾರ್ ಆಗುತ್ತಾರೆ, ಕಲೆಗಳು
ಕಡಿಮೆಯಾಗುತ್ತಾ ಹೋಗುತ್ತದೆ. 16 ಕಲಾ ಸಂಪೂರ್ಣರಾಗಿದ್ದವರು 14 ಕಲೆಯಲ್ಲಿ ಬಂದು ಬಿಡುತ್ತಾರೆ.
ಹೀಗೆ ಸ್ವಲ್ಪ-ಸ್ವಲ್ಪ ಕಡಿಮೆಯಾಗುತ್ತಾ ಅವಶ್ಯವಾಗಿ ಕಲೆಗಳು ಇಳಿಯುತ್ತವೆ. 14 ಕಲೆಯಾದರೂ
ಒಳ್ಳೆಯದು, ಇನ್ನೂ ವಾಮ ಮಾರ್ಗದಲ್ಲಿ ಇಳಿದು ವಿಕಾರಿಗಳಾಗಿ ಬಿಡುತ್ತಾರೆ, ಆಯಸ್ಸು ಕಡಿಮೆಯಾಗಿ
ಬಿಡುತ್ತದೆ ನಂತರ ರಜೋ, ತಮೋಗುಣಿಯಾಗುತ್ತಾ ಹೋಗುತ್ತಾರೆ. ಕಡಿಮೆಯಾಗುತ್ತಾ-ಆಗುತ್ತಾ ಹಳಬರಾಗಿ
ಬಿಡುತ್ತಾರೆ. ಆತ್ಮವು ಶರೀರದೊಂದಿಗೆ ಹಳೆಯದಾಗಿ ಬಿಡುತ್ತದೆ, ಈ ಎಲ್ಲಾ ಜ್ಞಾನ ನೀವು ಮಕ್ಕಳಲ್ಲಿಯೇ
ಇದೆ. ಹೇಗೆ 16 ಕಲೆಯಿಂದ ಇಳಿಯುತ್ತಾ-ಇಳಿಯುತ್ತಾ ಹೇಗೆ ಮನುಷ್ಯರಾಗಿ ಬಿಡುತ್ತಾರೆ, ದೇವತಾ ಮತವಂತೂ
ಇರುವುದಿಲ್ಲ. ತಂದೆಯ ಮತ ಸಿಗುವುದರಿಂದ 21 ಜನ್ಮಗಳು ಮತ ಸಿಗುವ ಅವಶ್ಯಕತೆಯಿರುವುದಿಲ್ಲ. ಈ
ಈಶ್ವರೀಯ ಮತವು ನಿಮಗೆ 21 ಜನ್ಮಗಳವರೆಗೆ ನಡೆಯುತ್ತದೆ. ಯಾವಾಗ ರಾವಣ ರಾಜ್ಯವು ಪ್ರಾರಂಭವಾಗುತ್ತದೆ
ಆಗ ನಿಮಗೆ ರಾವಣನ ಮತವು ಸಿಗುತ್ತದೆ. ಆಗ ವಾಮ ಮಾರ್ಗದಲ್ಲಿ ದೇವತೆಗಳು ಹೋದರೆಂದು ತೋರಿಸುತ್ತಾರೆ.
ಬೇರೆ ಧರ್ಮದವರಿಗೆ ಇಂತಹ ಮಾತುಗಳಿರುವುದಿಲ್ಲ. ದೇವತೆಗಳು ಯಾವಾಗ ವಾಮಮಾರ್ಗದಲ್ಲಿ ಹೋಗುತ್ತಾರೆ
ಆಗ ಅನ್ಯ ಧರ್ಮದವರು ಬರುತ್ತಾರೆ.
ತಂದೆಯು ತಿಳಿಸುತ್ತಾರೆ- ಮಕ್ಕಳೇ, ಈಗ ನೀವು ಮನೆಗೆ ಹಿಂತಿರುಗಬೇಕು, ಇದು ಹಳೆಯ ಪ್ರಪಂಚವಾಗಿದೆ,
ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡುವುದು ನಾಟಕದಲ್ಲಿ ಇದು ನನ್ನ ಪಾತ್ರವಾಗಿದೆ. ಇದನ್ನೂ ನೀವು
ತಿಳಿದುಕೊಂಡಿದ್ದೀರಿ. ಪ್ರಪಂಚದ ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ನೀವು ಇಷ್ಟೊಂದು
ತಿಳಿಸಿಕೊಟ್ಟರೂ ಕೆಲವರು ಆಸಕ್ತಿ ತೋರಿಸುತ್ತಾರೆ, ಮತ್ತೆ ಕೆಲವರು ತಮ್ಮದೇ ಮತವನ್ನು ಕೊಡುತ್ತಾರೆ.
ಈ ಲಕ್ಷ್ಮೀ-ನಾರಾಯಣರಿದ್ದಾಗ ಪವಿತ್ರತೆ-ಸುಖ-ಶಾಂತಿ ಎಲ್ಲವೂ ಇತ್ತು. ಪವಿತ್ರತೆಯೇ ಮುಖ್ಯ
ಮಾತಾಗಿದೆ. ಸತ್ಯಯುಗದಲ್ಲಿ ದೇವತೆಗಳು ಪವಿತ್ರರಾಗಿದ್ದರೆಂದು ಮನುಷ್ಯರಿಗೆ ತಿಳಿದಿಲ್ಲ. ಅವರು
ದೇವತೆಗಳಿಗೂ ಮಕ್ಕಳು ಜನ್ಮ ಪಡೆಯುತ್ತಾರೆ ಎಂದು ತಿಳಿಯುತ್ತಾರೆ ಆದರೆ ಅಲ್ಲಿ ಯೋಗಬಲದಿಂದ ಹೇಗೆ
ಜನ್ಮವಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಹೇಳುತ್ತಾರೆ- ಇಡೀ ಜೀವನವೆಲ್ಲಾ ಪವಿತ್ರವಾಗಿದ್ದರೆ
ಮತ್ತೆ ಮಕ್ಕಳ ಜನ್ಮ ಹೇಗಾಗುತ್ತದೆ. ಆಗ ಅವರಿಗೆ ತಿಳಿಸಬೇಕು- ಈ ಜನ್ಮವು ಪವಿತ್ರವಾಗಿರುವುದರಿಂದ
ಮತ್ತೆ 21 ಜನ್ಮಗಳು ಪವಿತ್ರವಾಗಿರುತ್ತಾರೆ ಅರ್ಥಾತ್ ಶ್ರೀಮತದಂತೆ ನಾವು ನಿರ್ವಿಕಾರಿ
ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಇದು ತಂದೆಯ ಶ್ರೀಮತವಾಗಿದೆ, ಗಾಯನವೂ ಇದೆ-
ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲಾಯಿತು...... ಈಗ ಎಲ್ಲರೂ ಮನುಷ್ಯರಾಗಿದ್ದಾರೆ, ಮತ್ತೆ ಅವರೇ
ದೇವತೆಯಾಗುತ್ತಾರೆ. ಈಗ ನಾವು ಶ್ರೀಮತದಂತೆ ದೈವೀ ಸರ್ಕಾರವನ್ನು ಸ್ಥಾಪನೆ ಮಾಡುತ್ತಿದ್ದೇವೆ.
ಇದರಲ್ಲಿ ಪವಿತ್ರತೆಯು ಬಹಳ ಮುಖ್ಯವಾಗಿದೆ. ಆತ್ಮವೇ ಪವಿತ್ರವಾಗಬೇಕು, ಆತ್ಮವೇ ಕಲ್ಲು
ಬುದ್ಧಿಯಾಗಿದೆ. ಹೀಗೆ ಒಮ್ಮೆಯೇ ಸ್ಪಷ್ಟ ಮಾಡಿ ತಿಳಿಸಬೇಕು. ತಂದೆಯೇ ಸತ್ಯಯುಗೀ, ದೈವೀ
ಸರ್ಕಾರವನ್ನು ಸ್ಥಾಪನೆ ಮಾಡಿದ್ದರು, ಅದನ್ನು ವೈಕುಂಠವೆಂದು ಹೇಳುತ್ತಾರೆ. ಮನುಷ್ಯರನ್ನು
ದೇವತೆಗಳನ್ನಾಗಿ ತಂದೆಯೇ ಮಾಡಿದ್ದರು, ಮನುಷ್ಯರು ಪತಿತರಾಗಿದ್ದರು ಅವರನ್ನು ಪತಿತರಿಂದ
ಪಾವನರನ್ನಾಗಿ ಹೇಗೆ ಮಾಡಿದರು? ತಂದೆಯು ಮಕ್ಕಳಿಗೆ ತಿಳಿಸಿದರು- ನನ್ನೊಬ್ಬನನ್ನೇ ನೆನಪು ಮಾಡಿ ಆಗ
ನೀವು ಪಾವನರಾಗುತ್ತೀರಿ. ನೀವು ಈ ಮಾತುಗಳನ್ನು ಯಾರಿಗಾದರೂ ತಿಳಿಸಿದರೆ ಆಂತರ್ಯಕ್ಕೆ ನಾಟುತ್ತದೆ.
ಈಗ ನಾವು ಪತಿತರಿಂದ ಪಾವನರು ಹೇಗಾಗಬೇಕು? ಅವಶ್ಯವಾಗಿ ತಂದೆಯನ್ನು ನೆನಪು ಮಾಡಬೇಕಾಗುತ್ತದೆ.
ಅನ್ಯ ಸಂಗವನ್ನು ಬಿಟ್ಟು ಒಬ್ಬನ ಸಂಗದಲ್ಲಿ ಬುದ್ಧಿಯನ್ನು ಜೋಡಿಸಬೇಕು ಆಗ ಮನುಷ್ಯರಿಂದ
ದೇವತೆಯಾಗಬಹುದು ಎಂದು ತಿಳಿಸಬಹುದು. ನೀವು ಏನನ್ನು ತಿಳಿಸಿಕೊಟ್ಟಿದ್ದೀರಿ ಅದು ನಾಟಕದನುಸಾರವಾಗಿ
ಸಂಪೂರ್ಣ ಸರಿಯಾಗಿತ್ತು. ಇದನ್ನೂ ತಿಳಿದುಕೊಳ್ಳುತ್ತಾರೆ ಮತ್ತೆ ದಿನ-ಪ್ರತಿದಿನ ತಿಳಿಸಲು ಹೊಸ
ಅಂಶಗಳು ಸಿಗುತ್ತಿರುತ್ತವೆ. ನಾವು ಪತಿತರಿಂದ ಪಾವನರು ಹೇಗಾಗುವುದು ಎಂಬುದೇ ಮುಖ್ಯ ಮಾತಾಗಿದೆ.
ತಂದೆಯು ತಿಳಿಸುತ್ತಾರೆ - ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ. ಈ
ಪುರುಷೋತ್ತಮ ಸಂಗಮಯುಗವನ್ನು ನೀವು ಮಕ್ಕಳು ಮಾತ್ರ ತಿಳಿದಿದ್ದೀರಿ. ಈಗ ನಾವು ಪ್ರಜಾಪಿತ ಬ್ರಹ್ಮನ
ಸಂತಾನರು ಬ್ರಾಹ್ಮಣರಾಗಿದ್ದೇವೆ. ತಂದೆಯು ನಮಗೆ ಓದಿಸುತ್ತಾರೆ. ಬ್ರಾಹ್ಮಣರಾಗದ ವಿನಃ ನಾವು ಹೇಗೆ
ದೇವತೆಯಾಗುತ್ತೇವೆ! ಈ ಬ್ರಹ್ಮಾರವರೂ ಸಹ ಸಂಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ನಂತರ
ಅವರೇ ಮೊದಲನೇ ನಂಬರಿನಲ್ಲಿ ಜನ್ಮ ಪಡೆಯಬೇಕಾಗುತ್ತದೆ. ತಂದೆಯು ಬಂದು ಪ್ರವೇಶ ಮಾಡುತ್ತಾರೆ,
ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ- ಇದೊಂದೇ ಮೂಲ ಮಾತಾಗಿದೆ.
ದೇಹಾಭಿಮಾನದಲ್ಲಿ ಬರುವ ಕಾರಣ ಒಂದಲ್ಲ ಒಂದು ಕಡೆ ಸಿಕ್ಕಿಕೊಳ್ಳುತ್ತಾರೆ. ಎಲ್ಲರೂ
ದೇಹೀ-ಅಭಿಮಾನಿಯಾಗಲು ಸಾಧ್ಯವಿಲ್ಲ. ನಾವು ಎಲ್ಲಿಯಾದರೂ ದೇಹಾಭಿಮಾನದಲ್ಲಿ ಬರುವುದಿಲ್ಲವೇ ಎಂದು
ನಮ್ಮನ್ನು ಸಂಪೂರ್ಣವಾಗಿ ಪರಿಶೀಲಿಸಿಕೊಳ್ಳಬೇಕು. ನಮ್ಮಿಂದ ಯಾವುದೇ ವಿಕರ್ಮವಾಗುವುದಿಲ್ಲವೇ?
ನಿಯಮಕ್ಕೆ ವಿರುದ್ಧವಾದ ಚಲನವಲನವಲ್ಲವೇ? ಬಹಳ ಮಂದಿಯಿಂದ ಈ ರೀತಿಯಾಗುತ್ತದೆ ಅವರು ಅಂತ್ಯದಲ್ಲಿ
ಬಹಳ ಶಿಕ್ಷೆಗೆ ಗುರಿಯಾಗುತ್ತಾರೆ. ಭಲೆ ಕರ್ಮಾತೀತ ಸ್ಥಿತಿಯನ್ನು ತಲುಪಿಲ್ಲ. ಕರ್ಮಾತೀತ
ಸ್ಥಿತಿಯುಳ್ಳವರು ಎಲ್ಲಾ ದುಃಖಗಳಿಂದ ದೂರವಾಗಿ ಬಿಡುತ್ತಾರೆ, ಎಲ್ಲಾ ಶಿಕ್ಷೆಗಳಿಂದ ದೂರವಾಗಿ
ಬಿಡುತ್ತಾರೆ. ಯೋಚಿಸಲಾಗುತ್ತದೆ - ನಂಬರ್ವಾರ್ ರಾಜರೂ ಆಗುತ್ತಾರೆ. ಅಗತ್ಯವಾಗಿ ಕೆಲವರದು ಕಡಿಮೆ
ಪುರುಷಾರ್ಥವಿರಬೇಕು ಆ ಕಾರಣದಿಂದ ಶಿಕ್ಷೆಗೆ ಗುರಿಯಾಗುತ್ತಾರೆ. ಆತ್ಮವೇ ಗರ್ಭ ಜೈಲಿನಲ್ಲಿ ಶಿಕ್ಷೆ
ಭೋಗಿಸುತ್ತದೆ. ಆತ್ಮವು ಗರ್ಭದಲ್ಲಿದ್ದಾಗ ನಮ್ಮನ್ನು ಮುಕ್ತ ಮಾಡಿ, ನಾವು ಪಾಪ ಮಾಡುವುದಿಲ್ಲವೆಂದು
ಹೇಳುತ್ತದೆ. ಆತ್ಮವೇ ಶಿಕ್ಷೆ ಭೋಗಿಸುತ್ತದೆ, ಆತ್ಮವೇ ಕರ್ಮ, ವಿಕರ್ಮ ಮಾಡುತ್ತದೆ. ಈ ಶರೀರವು
ಯಾವ ಕೆಲಸಕ್ಕೂ ಬರುವುದಿಲ್ಲ. ಮುಖ್ಯ ಮಾತು ತಮ್ಮನ್ನು ಆತ್ಮನೆಂದು ತಿಳಿಯಬೇಕು.
ತಿಳಿದುಕೊಳ್ಳುವವರು ಆತ್ಮವೇ ಎಲ್ಲವನ್ನೂ ಮಾಡುತ್ತದೆಯಂದು ತಿಳಿದುಕೊಳ್ಳಬೇಕು. ಈಗ ನೀವೆಲ್ಲಾ
ಆತ್ಮಗಳು ಮನೆಗೆ ಹಿಂತಿರುಗಬೇಕು ಆಗಲೇ ಈ ಜ್ಞಾನವು ಸಿಗುತ್ತದೆ ಮತ್ತೆಂದಿಗೂ ಈ ಜ್ಞಾನವು
ಸಿಗುವುದಿಲ್ಲ. ಆತ್ಮಾಭಿಮಾನಿಗಳು ಎಲ್ಲರನ್ನೂ ಸಹೋದರ-ಸಹೋದರನೆಂದು ನೋಡುತ್ತಾರೆ. ಇಲ್ಲಿ ಶರೀರದ
ಮಾತಿಲ್ಲ. ಆತ್ಮವಾದ ನಂತರ ಶರೀರದ ಜೊತೆ ಸೆಳೆತವಿರುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ
- ಇದು ಶ್ರೇಷ್ಠ ಸ್ಥಿತಿಯಾಗಿದೆ. ಸಹೋದರ-ಸಹೋದರಿಯೆಂದು ತಿಳಿಯುವುದರಿಂದಲೂ ಬಹಳ ಡಿಸ್-ಸರ್ವೀಸ್
ಆಗುತ್ತದೆ. ಆತ್ಮಾಭಿಮಾನಿ ಭವ- ಇದರಲ್ಲಿಯೇ ಕಷ್ಟವಿದೆ. ವಿದ್ಯೆಯಲ್ಲಿಯೂ ವಿಷಯಗಳಿರುತ್ತವೆಯಲ್ಲವೆ.
ಇಂತಹ ವಿಷಯದಲ್ಲಿ ನಾವು ಅನುತ್ತೀರ್ಣರಾಗುತ್ತೇವೆಂದು ತಿಳಿಯುತ್ತಾರೆ. ಒಂದು ಸಬ್ಜೆಕ್ಟ್ ನಲ್ಲಿ
ಅನುತ್ತೀರ್ಣರಾಗುವ ಕಾರಣ ಉಳಿದ ಸಬ್ಜೆಕ್ಟ್ ನಲ್ಲಿ ಬಲಹೀನರಾಗುತ್ತಾರೆ. ಈಗ ನಿಮ್ಮ ಆತ್ಮವು
ಬುದ್ಧಿಯೋಗ ಬಲದಿಂದ ಚಿನ್ನದ ಪಾತ್ರೆಯ ಸಮಾನವಾಗುತ್ತಿದೆ. ಯೋಗವಿಲ್ಲದಿದ್ದರೆ ಜ್ಞಾನವೂ ಕಡಿಮೆ,
ಶಕ್ತಿಯೂ ಇರುವುದಿಲ್ಲ. ಯೋಗದ ಹರಿತವಿರುವುದಿಲ್ಲ. ಇದು ನಾಟಕದಲ್ಲಿ ನೊಂದಾವಣೆಯಾಗಿ ಬಿಟ್ಟಿದೆ.
ತಂದೆಯು ಮಕ್ಕಳ ಸ್ಥಿತಿಯನ್ನು ವೃದ್ಧಿ ಮಾಡಿಕೊಳ್ಳಲು ತಿಳಿಸುತ್ತಾರೆ. ನಮ್ಮನ್ನು ನಾವು
ನೋಡಿಕೊಳ್ಳಬೇಕು- ನಾನು ಆತ್ಮ, ಇಡೀ ದಿನದಲ್ಲಿ ನಿಯಮಕ್ಕೆ ವಿರುದ್ಧವಾದ ಕಾರ್ಯವನ್ನು
ಮಾಡುವುದಿಲ್ಲವೇ? ಯಾವುದದರೂ ಇಂತಹ ಅಭ್ಯಾಸಗಳಿದ್ದರೆ ಬಿಟ್ಟು ಬಿಡಬೇಕು. ಆದರೆ ಮಾಯೆಯು ನಂತರವೂ
2-3ನೇ ದಿನದಲ್ಲಿ ತಪ್ಪು ಮಾಡಿಸುತ್ತದೆ. ಹೀಗೆ ಸೂಕ್ಷ್ಮ ಮಾತುಗಳು ನಡೆಯುತ್ತಿರುತ್ತವೆ. ಇದು
ಗುಪ್ತ ಜ್ಞಾನವಾಗಿದೆ. ಮನುಷ್ಯರಿಗೇನು ಗೊತ್ತು? ನಾವು ನಮ್ಮ ಖರ್ಚಿನಿಂದ ನಮಗಾಗಿ ಎಲ್ಲವನ್ನೂ
ಮಾಡುತ್ತೇವೆಂದು ನೀವು ತಿಳಿಸುತ್ತೀರಿ. ಅನ್ಯರ ಖರ್ಚಿನಿಂದ ಹೇಗೆ ಮಾಡುತ್ತೀರಿ! ಆದ್ದರಿಂದ ತಂದೆಯು
ತಿಳಿಸುತ್ತಾರೆ- ಬೇಡುವುದಕ್ಕಿಂತ ಸಾಯುವುದು ಲೇಸು. ಸಹಜವಾಗಿ ಸಿಗುವುದು ಹಾಲಿನ ಸಮಾನ, ಬೇಡಿ
ತೆಗೆದುಕೊಳ್ಳುವುದು ನೀರಿನ ಸಮಾನ, ಬೇಡಿ ಯಾರಿಂದಲಾದರೂ ಪಡೆಯುತ್ತೀರಿ ಆದರೆ ಅವರು ಬಲವಂತದಿಂದ
ದುಃಖಿಗಳಾಗಿ ಕೊಡುತ್ತಾರೆಂದರೆ ಅದು ನೀರಿನ ಸಮಾನ, ಇನ್ನೂ ಅವರಿಂದ ಬಲವಂತವಾಗಿಯೇ
ಪಡೆಯುತ್ತೀರೆಂದರೆ ರಕ್ತದ ಸಮಾನ. ಕೆಲವರು ಬಹಳ ತೊಂದರೆ ಕೊಡುತ್ತಾರೆ, ಸಾಲ ಮಾಡಿಸುತ್ತಾರೆ, ಅದು
ರಕ್ತದ ಸಮಾನವಾಗಿ ಬಿಡುತ್ತದೆ. ಇಲ್ಲಿ ಸಾಲ ಪಡೆಯುವ ಅವಶ್ಯಕತೆಯಿಲ್ಲ. ದಾನ ಕೊಟ್ಟು ಪುನಃ ಮರಳಿ
ಪಡೆದರೆ ಅದಕ್ಕೆ ಹರಿಶ್ಚಂದ್ರನ ಉದಾಹರಣೆಯಿದೆ. ಆ ರೀತಿಯೂ ಮಾಡಬಾರದು, ಆದ್ದರಿಂದ ನೀವು ಮೊದಲೇ
ಪಾಲನ್ನು ತೆಗೆದು ಬಿಡಿ, ಅದು ಸಮಯದಲ್ಲಿ ಉಪಯೋಗಕ್ಕೆ ಬರಲಿ. ಮಕ್ಕಳಂತೂ ಅಂತ್ಯದಲ್ಲಿ ತಂದೆಯ ನೆನಪು,
ಸ್ವದರ್ಶನದ ನೆನಪು ಮಾಡುತ್ತಾ ದೇಹದಿಂದ ಆತ್ಮ ಹೋಗುವಂತ ಪುರುಷಾರ್ಥ ಮಾಡಬೇಕು ಆಗ ನೀವು ಚಕ್ರವರ್ತಿ
ರಾಜರಾಗುತ್ತೀರಿ. ಹಾಗಲ್ಲಾ ಕೊನೆಯಲ್ಲಿ ನೆನಪು ಮಾಡುತ್ತೇವೆ, ಆ ಸಮಯದಲ್ಲಿ ಅಂಥಹ
ಸ್ಥಿತಿಯಾಗುತ್ತದೆ. ಇಲ್ಲಿ ಈಗಿನಿಂದಲೇ ಪುರುಷಾರ್ಥ ಮಡುತ್ತಾ ಮಾಡುತ್ತಾ ಆ ಅವಸ್ಥೆಯನ್ನು
ಅಂತ್ಯದವರೆವಿಗೂ ಸರಿ ಮಾಡಿಕೊಳ್ಳಬೇಕಾಗುತ್ತದೆ. ಕೊನೆಯಲ್ಲಿ ನೆನಪು ಮಾಡುತ್ತಾ-ಮಾಡುತ್ತಾ ಆ
ಸ್ಥಿತಿಯನ್ನು ಅಂತ್ಯದವರೆಗೂ ಇಟ್ಟುಕೊಳ್ಳಬೇಕು. ಕೊನೆಯಲ್ಲಿ ವೃತ್ತಿಯು ಬೇರೆ ಕಡೆ ಹೋಗುವಂತೆ
ಆಗಬಾರದು. ನೆನಪಿನಿಂದ ಮಾತ್ರ ಪಾಪ ನಾಶವಾಗುತ್ತದೆ.
ನೀವು ಮಕ್ಕಳಿಗೆ ತಿಳಿದಿದೆ- ಪವಿತ್ರತೆಯ ಮಾತಿನಲ್ಲಿಯೇ ಶ್ರಮವಿದೆ, ವಿದ್ಯೆಯಲ್ಲಿ ಅಷ್ಟೊಂದು
ಶ್ರಮವಿಲ್ಲ. ಈ ಮಾತಿನಲ್ಲಿ ಮಕ್ಕಳಿಗೆ ಬಹಳ ಗಮನವಿರಬೇಕು. ಆದ್ದರಿಂದ ತಂದೆಯು ತಿಳಿಸುತ್ತಾರೆ-
ಪ್ರತಿನಿತ್ಯ ನಿಮ್ಮನ್ನು ನೀವು ಕೇಳಿಕೊಳ್ಳಿ- ನಾವು ಯಾವುದೇ ನಿಯಮಕ್ಕೆ ವಿರುದ್ಧವಾದ ಕಾರ್ಯವನ್ನು
ಮಾಡಲಿಲ್ಲವೆ? ಯಾರದೇ ನಾಮ-ರೂಪದಲ್ಲಿ ಸಿಕ್ಕಿಕೊಳ್ಳಲಿಲ್ಲವೆ? ಯಾರನ್ನೇ ನೋಡಿದಾಗ
ಆಕರ್ಷಣೆಯಾಗುವುದಿಲ್ಲವೇ? ಯಾವುದೇ ನಿಯಮಕ್ಕೆ ವಿರುದ್ಧವಾದ ಕಾರ್ಯವನ್ನು ಮಾಡುವುದಿಲ್ಲವೇ? ಈ
ಹಳೆಯ ಶರೀರದೊಂದಿಗೆ ಪ್ರೀತಿಯನ್ನು ಸ್ವಲ್ಪವೂ ಇಟ್ಟುಕೊಳ್ಳಬಾರದು, ಇದೂ ಸಹ ದೇಹಾಭಿಮಾನವಾಗಿ
ಬಿಡುತ್ತದೆ, ಅನಾಸಕ್ತರಾಗಿರಬೇಕು. ಸತ್ಯ ಪ್ರೀತಿ ಒಬ್ಬನೊಂದಿಗೆ ಇರಬೇಕು. ಬಾಕಿ ಉಳಿದವರ ಜೊತೆ
ಅನಾಸಕ್ತ ಪ್ರೀತಿಯಿರಲಿ. ಭಲೆ ಮಕ್ಕಳಿರಬಹುದು ಆದರೆ ಯಾರೊಂದಿಗೂ ಆಸಕ್ತಿಯಿರಬಾರದು. ನೀವು
ತಿಳಿದುಕೊಂಡಿದ್ದೀರಿ-ಏನೆಲ್ಲಾ ನೋಡುತ್ತೇವೆ ಇದೆಲ್ಲವೂ ನಾಶವಾಗಿ ಬಿಡುತ್ತದೆ. ಆಗ ಅದರೊಂದಿಗೆ
ಪ್ರೀತಿಯೂ ಹೊರಟು ಹೋಗುತ್ತದೆ. ಒಬ್ಬನೊಂದಿಗೆ ಪ್ರೀತಿಯಿರಲಿ ಬಾಕಿ ನಾಮ ಮಾತ್ರ ಅನಾಸಕ್ತರಾಗಿರಿ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ತಮ್ಮ
ವೃತ್ತಿಯನ್ನು ಬಹಳ ಶುದ್ಧ, ಪವಿತ್ರವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಕಾಯಿದೆಗೆ ವಿರುದ್ಧವಾದ
ಯಾವುದೇ ಉಲ್ಟಾ ಕರ್ಮಗಳನ್ನು ಮಾಡಬಾರದು. ಬಹಳ-ಬಹಳ ಎಚರಿಕೆಯಿಂದಿರಬೇಕಾಗಿದೆ. ಬುದ್ಧಿಯು ಎಲ್ಲಿಯೂ
ಸಿಕ್ಕಿಹಾಕಿಕೊಳ್ಳಬಾರದು.
2. ಸತ್ಯ ಪ್ರೀತಿಯನ್ನು ಒಬ್ಬ ತಂದೆಯಲ್ಲಿಯೇ ಇರಬೇಕಾಗಿದೆ, ಬಾಕಿ ಎಲ್ಲರಿಂದ ಅನಾಸಕ್ತ, ನಾಮ
ಮಾತ್ರವೇ ಪ್ರೀತಿಯಿರಲಿ. ಆತ್ಮಾಭಿಮಾನಿ ಸ್ಥಿತಿಯನ್ನು ಈ ರೀತಿ ಮಾಡಿಕೊಳ್ಳಬೇಕಾಗಿದೆ-
ಶರೀರದಲ್ಲಿಯೂ ಸೆಳೆತವಿರಬಾರದು.
ವರದಾನ:
ಕರ್ಮ ಬಂಧನವನ್ನು
ಸೇವೆಯ ಬಂಧನದಲ್ಲಿ ಪರಿವರ್ತನೆ ಮಾಡಿ ಸರ್ವರಿಂದ ನ್ಯಾರಾ ಹಾಗೂ ಪರಮಾತ್ಮನಿಗೆ ಪ್ರಿಯ ಭವ.
ಪರಮಾತ್ಮನ
ಪ್ರೀತಿ ಬ್ರಾಹ್ಮಣ ಜೀವನದ ಆಧಾರವಾಗಿದೆ ಆದರೆ ಅದು ನ್ಯಾರಾ ಆದಾಗ ಮಾತ್ರ ಸಿಗುತ್ತದೆ. ಒಂದುವೇಳೆ
ಪ್ರವೃತ್ತಿಯಲ್ಲಿ ಇರುತ್ತೀರಿ ಅಂದಾಗ ಸೇವೆಗಾಗಿ ಇರುತ್ತೀರಿ. ಎಂದೂ ಲೆಕ್ಕಾಚಾರ, ಕರ್ಮಬಂಧನ...
ಎಂದು ತಿಳಿಯಬಾರದು, ಆದರೆ ಸೇವೆ ಆಗಿದೆ. ಸೇವೆಯ ಬಂಧನದಲ್ಲಿ ಬರುವುದರಿಂದ ಕರ್ಮ ಬಂಧನ
ಸಮಾಪ್ತಿಯಾಗಿ ಬಿಡುತ್ತದೆ. ಸೇವೆಯ ಭಾವ ಇಲ್ಲವೆಂದರೆ ಕರ್ಮ ಬಂಧನ ಎಳೆಯುತ್ತದೆ. ಎಲ್ಲಿ ಕರ್ಮ
ಬಂಧನ ಇದೆ ಅಲ್ಲಿ ದುಃಖದ ಅಲೆ ಇರುತ್ತದೆ, ಸೇವೆಯ ಬಂಧನದಲ್ಲಿ ಖುಷಿ ಇದೆ, ಆದ್ದರಿಂದ ಕರ್ಮ
ಬಂಧನವನ್ನು ಸೇವೆಯ ಬಂಧನದಲ್ಲಿ ಪರಿವರ್ತನೆ ಮಾಡಿ ನ್ಯಾರಾ(ಭಿನ್ನ) ಹಾಗೂ ಪ್ಯಾರಾ(ಪ್ರಿಯ)
ಆಗಿದ್ದಾಗ ಪರಮಾತ್ಮನ ಪ್ರಿಯರಾಗಿ ಬಿಡುತ್ತಾರೆ.
ಸ್ಲೋಗನ್:
ಯಾರು ಸ್ವ
ಸ್ಥಿತಿ ಮೂಲಕ ಪ್ರತಿಯೊಂದು ಪರಿಸ್ಥಿತಿಯನ್ನು ಪಾರು ಮಾಡುತ್ತಾರೆ ಅವರೇ ಶ್ರೇಷ್ಠ ಆತ್ಮರಾಗಿದ್ದಾರೆ.