25.05.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈ
ಜನ್ಮದ ಪಾಪಗಳಿಂದ ಹಗುರ (ಮುಕ್ತರ) ರಾಗಲು ತಂದೆಗೆ ಸತ್ಯವನ್ನು ಹೇಳಿ ಮತ್ತು ಹಿಂದಿನ ಜನ್ಮಗಳ
ವಿಕರ್ಮಗಳನ್ನು ಯೋಗಾಗ್ನಿಯಿಂದ ಸಮಾಪ್ತಿ ಮಾಡಿಕೊಳ್ಳಿ”
ಪ್ರಶ್ನೆ:
ಈಶ್ವರನ
ಸೇವಾಧಾರಿಗಳಾಗಲು ಯಾವ ಒಂದು ಚಿಂತೆಯಿರಬೇಕಾಗಿದೆ?
ಉತ್ತರ:
ನಾವು ನೆನಪಿನ
ಯಾತ್ರೆಯಲ್ಲಿದ್ದು ಅವಶ್ಯವಾಗಿ ಪಾವನರಾಗಬೇಕಾಗಿದೆ. ಪಾವನರಾಗಲು ಚಿಂತೆಯಿರಬೇಕಾಗಿದೆ. ಇದೇ ಮುಖ್ಯ
ಸಬ್ಜೆಕ್ಟ್ ಆಗಿದೆ. ಯಾವ ಮಕ್ಕಳು ಪಾವನರಾಗಿರುತ್ತಾರೆ ಅವರೇ ತಂದೆಯ ಸಹಯೋಗಿಗಳಾಗಲು ಸಾಧ್ಯ.
ತಂದೆಯೊಬ್ಬರೇ ಏನು ಮಾಡುತ್ತಾರೆ ಆದ್ದರಿಂದ ಮಕ್ಕಳಿಗೆ ಶ್ರೀಮತದಂತೆ ತಮ್ಮದೇ ಯೋಗಬಲದಿಂದ
ವಿಶ್ವವನ್ನು ಪಾವನ ಮಾಡಿ ಪಾವನ ರಾಜಧಾನಿಯನ್ನು ಮಾಡಬೇಕಾಗಿದೆ. ಮೊದಲು ಸ್ವಯಂನ್ನು ಪಾವನ
ಮಾಡಿಕೊಳ್ಳಬೇಕಾಗಿದೆ.
ಓಂ ಶಾಂತಿ.
ಇದಂತೂ ಅವಶ್ಯವಾಗಿ ಮಕ್ಕಳು ತಿಳಿದುಕೊಳ್ಳುತ್ತಾರೆ - ನಾವು ತಂದೆಯ ಬಳಿಗೆ ರಿಫ್ರೆಷ್ ಆಗಲು
ಹೋಗುತ್ತೇವೆ. ಇಲ್ಲಿ ಸೇವಾಕೇಂದ್ರಕ್ಕೆ ಬಂದಾಗ ಈ ರೀತಿ ತಿಳಿದುಕೊಳ್ಳುವುದಿಲ್ಲ. ನೀವು ಮಕ್ಕಳ
ಬುದ್ಧಿಯಲ್ಲಿದೆ- ಬಾಬಾ, ಮಧುಬನದಲ್ಲಿದ್ದಾರೆ ಎಂದು ಇರುತ್ತದೆ. ತಂದೆಯು ಮಕ್ಕಳಿಗಾಗಿ
ಮುರುಳಿಯನ್ನು ನುಡಿಸುತ್ತಾರೆ ಆದ್ದರಿಂದ ಮಕ್ಕಳೂ ಸಹ ಮುರುಳಿಯನ್ನು ಕೇಳಲು ಹೋಗುತ್ತೇವೆಂದು
ತಿಳಿದುಕೊಳ್ಳುತ್ತಾರೆ. ಮುರುಳಿ ಎನ್ನುವ ಮಾತು ಕೃಷ್ಣನಿಗೆಂದು ತಿಳಿದು ಬಿಟ್ಟಿದ್ದಾರೆ. ಮುರುಳಿಯ
ಅರ್ಥ ಬೇರೇನೂ ಇಲ್ಲ. ಹೀಗೆ ನೀವು ಮಕ್ಕಳಿಗೆ ಒಳ್ಳೆಯ ತಿಳುವಳಿಕೆ ಬಂದಿದೆ. ತಂದೆಯು ತಿಳಿಸಿದ್ದಾರೆ-
ನೀವು ಅದನ್ನು ಅನುಭವ ಮಾಡುತ್ತೀರಿ. ಹೌದು! ನಾವು ಬಹಳ ಬುದ್ಧಿಯಿಲ್ಲದವರಾಗಿದ್ದೇವೆಂದು ಯಾರೂ
ತಿಳಿದುಕೊಳ್ಳುವುದಿಲ್ಲ. ಇಲ್ಲಿ ಬಂದಾಗ ನಿಶ್ಚಯಬುದ್ಧಿಯವರಾಗುತ್ತಾರೆ. ಅವಶ್ಯವಾಗಿ ನಾವು ಬಹಳ
ಬುದ್ಧಿಯಿಲ್ಲದವರಾಗಿ ಬಿಟ್ಟಿದ್ದೆವು, ನೀವು ಸತ್ಯಯುಗದಲ್ಲಿ ಎಷ್ಟೊಂದು ಬುದ್ಧಿವಂತರು, ವಿಶ್ವದ
ಮಾಲೀಕರಾಗಿದ್ದಿರಿ, ಯಾರೇ ಮೂರ್ಖರು ವಿಶ್ವದ ಮಾಲೀಕರಾಗುತ್ತಾರೇನು! ಈ ಲಕ್ಷ್ಮೀ-ನಾರಾಯಣ ವಿಶ್ವದ
ಮಾಲೀಕರಾಗಿದ್ದರು, ಅವರು ಬುದ್ಧಿವಂತರಾಗಿರುವ ಕಾರಣ ಭಕ್ತಿಮಾರ್ಗದಲ್ಲಿ ಅವರನ್ನು ಪೂಜಿಸಲಾಗುತ್ತದೆ.
ಜಡ ಚಿತ್ರವೇನೂ ಮಾತನಾಡುವುದಿಲ್ಲ, ಶಿವ ತಂದೆಯ ಪೂಜೆ ಮಾಡುತ್ತಾರೆಂದಾಗ ಅವರು ಮಾತನಾಡುತ್ತಾರೇನು?
ಶಿವ ತಂದೆಯು ಒಮ್ಮೆಯೇ ಬಂದು ಮಾತನಾಡುತ್ತಾರೆ. ಪೂಜೆ ಮಾಡುವವರಿಗೂ ಸಹ ಈ ಜ್ಞಾನ
ಹೇಳುವವರಾಗಿದ್ದಾರೆಂದು ತಿಳಿದುಕೊಂಡಿಲ್ಲ. ಕೃಷ್ಣನು ಮುರುಳಿಯನ್ನು ನುಡಿಸುತ್ತಿದ್ದನೆಂದು
ತಿಳಿದುಕೊಂಡಿದ್ದಾರೆ. ಯಾರ ಪೂಜೆ ಮಾಡಿದರೂ ಅವರ ಕರ್ತವ್ಯವನ್ನಂತೂ ತಿಳಿದುಕೊಂಡಿಲ್ಲ ಆದ್ದರಿಂದ
ತಂದೆಯು ಬರುವ ತನಕ ಈ ಪೂಜೆಯು ನಿಷ್ಫಲವಾಗುತ್ತದೆ. ನೀವು ಮಕ್ಕಳಲ್ಲಿಯೂ ಸಹ ಕೆಲವರು ಹೇಗೆ
ಶಾಸ್ತ್ರ ಮೊದಲಾದವುಗಳೇನನ್ನೂ ಓದಿಲ್ಲ. ಈಗ ನಿಮಗೆ ಒಬ್ಬ ಸತ್ಯ ತಂದೆ ಓದಿಸುತ್ತಾರೆ. ನೀವು
ತಿಳಿದಿದ್ದೀರಿ- ಈಗ ಸತ್ಯವನ್ನು ಓದಿಸುವವರು ಒಬ್ಬರೇ ತಂದೆಯಾಗಿದ್ದಾರೆ. ತಂದೆಗೆ ಸತ್ಯ ಎಂದು
ಕರೆಯಲಾಗುವುದು. ನರನಿಂದ ನಾರಾಯಣರಾಗುವ ಸತ್ಯ ಕಥೆಯನ್ನು ತಿಳಿಸುತ್ತಾರೆ. ಅರ್ಥವೇನೋ ಸರಿಯಿದೆ,
ಸತ್ಯ ತಂದೆಯು ಬರುತ್ತಾರೆ. ಈಗ ನರನಿಂದ ನಾರಾಯಣರಾಗಬೇಕಾದರೆ ಅವಶ್ಯವಾಗಿ ಸತ್ಯಯುಗದ ಸ್ಥಾಪನೆ
ಮಾಡುತ್ತಾರಲ್ಲವೆ. ಈ ಹಳೆಯ ಕಲಿಯುಗದ ಪ್ರಪಂಚವನ್ನು ಸ್ಥಾಪಿಸುತ್ತಾರೇನು! ಕಥೆಯನ್ನು ಕೇಳುವ
ಸಮಯದಲ್ಲಿ ನಾವು ನರನಿಂದ ನಾರಾಯಣರಾಗುತ್ತೇವೆಂದು ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಈಗ ನಿಮಗೆ
ನರನಿಂದ ನಾರಾಯಣರಾಗುವ ರಾಜಯೋಗವನ್ನು ಕಲಿಸುತ್ತಾರೆ. ಇದೂ ಸಹ ಹೊಸ ಮಾತೇನಲ್ಲ. ತಂದೆಯು
ತಿಳಿಸುತ್ತಾರೆ- ನಾನು ಕಲ್ಪ-ಕಲ್ಪವೂ ಬಂದು ತಿಳಿಸುತ್ತೇನೆ, ಯುಗ-ಯುಗದಲ್ಲಿ ನಾನು ಹೇಗೆ ಬರಲಿ.
ಬ್ರಹ್ಮನ ಚಿತ್ರವನ್ನು ತೋರಿಸಿ ಇದು ಅವರ (ಶಿವ ತಂದೆ) ರಥವಾಗಿದೆ ಎಂದು ತಿಳಿಸಿ. ಇವರು ಅನೇಕ
ಜನ್ಮಗಳ ಅಂತ್ಯದ ಜನ್ಮದಲ್ಲಿ ಪತಿತರಾಗಿದ್ದಾರೆ. ಈಗ ಇವರೂ ಸಹ ಪಾವನರಾಗುತ್ತಾರೆ, ನಾವೂ ಸಹ
ಆಗುತ್ತೇವೆ ಆದರೆ ಯೋಗಬಲದ ವಿನಃ ಯಾರೂ ಪಾವನರಾಗುವುದಿಲ್ಲ, ವಿಕರ್ಮ ವಿನಾಶವಾಗಲು ಸಾಧ್ಯವಿಲ್ಲ.
ನೀರಿನಲ್ಲಿ ಸ್ನಾನ ಮಾಡುವುದರಿಂದ ಯಾರೂ ಪಾವನರಾಗುವುದಿಲ್ಲ. ಇದು ಯೋಗಾಗ್ನಿಯಾಗಿದೆ, ನೀರು
ಅಗ್ನಿಯನ್ನು ನಂದಿಸುವಂತದ್ದು, ಅಗ್ನಿ ಸುಡುವಂತದ್ದಾಗಿದೆ. ಇದರಿಂದ ವಿಕರ್ಮ ವಿನಾಶವಾಗಲು ನೀರೇನು
ಅಗ್ನಿಯಂತೂ ಅಲ್ಲ. ಇವರು ಎಲ್ಲರಿಗಿಂತ ಹೆಚ್ಚು ಗುರುಗಳನ್ನು ಮಾಡಿಕೊಂಡಿದ್ದರು, ಬಹಳ
ಶಾಸ್ತ್ರಗಳನ್ನು ಓದಿದ್ದಾರೆ. ಆ ಜನ್ಮದಲ್ಲಿ ಪಂಡಿತನಂತೆ ಇದ್ದರು ಆದರೆ ಅದರಿಂದ ಏನೂ ಲಾಭ
ಸಿಗಲಿಲ್ಲ, ಅದರಿಂದ ಪುಣ್ಯಾತ್ಮ ಆಗುವುದಿಲ್ಲ. ಇನ್ನೂ ಪಾಪವನ್ನು ಮಾಡುತ್ತಾ ಬಂದೆವು. ತಂದೆಯು
ತಿಳಿಸುತ್ತಾರೆ- ಯಾರು ತಮ್ಮನ್ನು ಮಕ್ಕಳೆಂದು ತಿಳಿದುಕೊಳ್ಳುತ್ತಾರೆ, ಈ ಜನ್ಮದಲ್ಲಿ ಮಾಡಿರುವ
ಪಾಪವನ್ನು, ತಂದೆಯ ಸನ್ಮುಖದಲ್ಲಿ ಬಂದಾಗ ಎಲ್ಲವನ್ನೂ ತಿಳಿಸಿ ಬಿಡಬೇಕು ಆಗ ಹಗುರವಾಗಿ ಬಿಡುತ್ತದೆ.
ನಂತರ ಜನ್ಮ-ಜನ್ಮಾಂತರದ ಪಾಪಕರ್ಮದ ಹೊರೆಯನ್ನು ಪುರುಷಾರ್ಥ ಮಾಡಿ ದೂರ ಮಾಡಿಕೊಳ್ಳಬೇಕು ಆಗ ಈ
ಜನ್ಮದಲ್ಲಿ ಹಗುರವಾಗಿ ಬಿಡುತ್ತೀರಿ. ತಂದೆಯು ಯೋಗದ ಮಾತನ್ನು ತಿಳಿಸುತ್ತಾರೆ. ಯೋಗದಿಂದ ವಿಕರ್ಮ
ವಿನಾಶವಾಗುತ್ತದೆ. ಈ ಮಾತುಗಳನ್ನು ನೀವು ಈಗ ಕೇಳುತ್ತೀರಿ. ಸತ್ಯಯುಗದಲ್ಲಿ ಈ ಮಾತುಗಳನ್ನು ಯಾರೂ
ಹೇಳುವುದಿಲ್ಲ. ಹೀಗೆ ನಾಟಕವು ಮಾಡಲ್ಪಟ್ಟಿದೆ. ಸೆಕೆಂಡ್ ಬೈ ಸೆಕೆಂಡ್ ಈ ನಾಟಕವು
ಸುತ್ತುತ್ತಿರುತ್ತದೆ, ಒಂದು ಸೆಕೆಂಡ್ ಮತ್ತೊಂದು ಸೆಕೆಂಡಿನೊಂದಿಗೆ ಹೋಲುವುದಿಲ್ಲ.
ಗಳಿಗೆ-ಗಳಿಗೆಗೆ ಆಯಸ್ಸು ಕಡಿಮೆಯಾಗುತ್ತಾ ಇರುತ್ತದೆ ಆದರೆ ನೀವೀಗ ಆಯಸ್ಸು ಕಡಿಮೆಯಾಗುವುದನ್ನು
ತಡೆಯುತ್ತೀರಿ ಹಾಗೂ ಯೋಗದಿಂದ ಆಯಸ್ಸನ್ನು ವೃದ್ಧಿ ಮಾಡಿಕೊಳ್ಳುತ್ತೀರಿ. ಈಗ ತಾವು ಮಕ್ಕಳು
ಯೋಗಬಲದಿಂದ ಧೀರ್ಘಾಯಸ್ಸನ್ನಾಗಿ ಮಾಡಿಕೊಳ್ಳಬೇಕು. ಯೋಗಕ್ಕಾಗಿ ತಂದೆಯು ಬಹಳ ಒತ್ತು ಕೊಡುತ್ತಾರೆ.
ಆದರೆ ಕೆಲವು ಮಕ್ಕಳು ತಿಳಿದುಕೊಳ್ಳುವುದೇ ಇಲ್ಲ. ಬಾಬಾ, ನಾವು ಮರೆತು ಹೋಗುತ್ತೇವೆಂದು
ಹೇಳುತ್ತಾರೆ. ತಂದೆಯೂ ತಿಳಿಸುತ್ತಾರೆ- ಯೋಗವೆಂದರೆ ಅನ್ಯ ಮಾತೇನಿಲ್ಲ, ಇದು ನೆನಪಿನ
ಯಾತ್ರೆಯಾಗಿದೆ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಪಾಪ ನಾಶವಾಗುತ್ತದೆ, ಅಂತ್ಯಮತಿ ಸೋ
ಗತಿಯಾಗಿ ಬಿಡುತ್ತದೆ. ಇದನ್ನು ಕುರಿತು ಒಂದು ಕಥೆಯನ್ನು ಹೇಳುತ್ತಾರೆ. ಯಾರೋ ಒಬ್ಬರಿಗೆ ನೀನು
ಎಮ್ಮೆ ಎಂದು ತಿಳಿದುಕೊ ಎಂದು ಹೇಳಿದ ಕೂಡಲೇ ನಾನು ಎಮ್ಮೆಯಾಗಿದ್ದೇನೆ ಎಂಬ ಅಭ್ಯಾಸ ಮಾಡತೊಡಗಿದರು,
ನಂತರ ಅವರಿಗೆ ಈ ಬಾಗಿಲಿನಿಂದ ಹೋಗಿ ಎಂದು ಹೇಳಿದರೆ ಅವರು ಎಮ್ಮೆ ಆಗಿದ್ದೇನೆ, ಹೇಗೆ ಹೋಗಲಿ? ಎಂದು
ಹೇಳಿದರು. ಆ ಸಮಯದಲ್ಲಿ ಅವರು ಎಮ್ಮೆಯಂತೆಯೇ ಆಗಿ ಬಿಟ್ಟರು. ಇದನ್ನು ಒಂದು ಉದಾಹರಣೆಗಾಗಿ
ಮಾಡಿದ್ದಾರೆ. ವಾಸ್ತವದಲ್ಲಿ ಈ ರೀತಿ ಯಾರೂ ಇರಲು ಸಾಧ್ಯವಿಲ್ಲ. ಇದು ಯಥಾರ್ಥವಾದ ಉದಾಹರಣೆಯಲ್ಲ.
ಸಾಮಾನ್ಯವಾಗಿ ಸತ್ಯ ಮಾತಿನ ಉದಾಹರಣೆಯನ್ನು ನೀಡಲಾಗುತ್ತದೆ.
ಈ ಸಮಯದಲ್ಲಿ ತಂದೆಯು ನಿಮಗೆ ಏನೆಲ್ಲವನ್ನು ಹೇಳುತ್ತಾರೆ ಅದನ್ನು ಭಕ್ತಿಮಾರ್ಗದಲ್ಲಿ ಹಬ್ಬಗಳ ರೀತಿ
ಆಚರಿಸುತ್ತಾರೆ. ಎಷ್ಟೊಂದು ಜಾತ್ರೆ, ಹುಣ್ಣಿಮೆಗಳು ನಡೆಯುತ್ತವೆ ಆದರೆ ಈ ಸಮಯದಲ್ಲಿ ಏನು
ನಡೆಯುತ್ತದೆಯೋ ಅದೇ ಹಬ್ಬದ ರೂಪದಲ್ಲಿ ಆಚರಿಸುತ್ತಾರೆ. ನೀವಿಲ್ಲಿ ಎಷ್ಟೊಂದು ಸ್ವಚ್ಛವಾಗುತ್ತೀರಿ!
ಜಾತ್ರೆಗಳಂತಹ ಕಡೆ ಎಷ್ಟೊಂದು ಕೊಳಕಾಗಿರುತ್ತದೆ. ಶರೀರಕ್ಕೂ ಮಣ್ಣನ್ನು ಹಚ್ಚುತ್ತಾರೆ, ಇದರಿಂದ
ಪಾಪವು ನಾಶವಾಗುತ್ತದೆಯಂದು ತಿಳಿಯುತ್ತಾರೆ ಬಾಬಾ ಇದೆಲ್ಲವನ್ನೂ ಮಾಡಿದ್ದಾರೆ, ನಾಸಿಕ್ ನಲ್ಲಿ
ನೀರು ಬಹಳ ಕೊಳಕಾಗಿರುತ್ತದೆ, ಅಲ್ಲಿ ಹೋಗಿ ಮಣ್ಣು ಹಚ್ಚುತ್ತಾರೆ ಪಾಪ ವಿನಾಶವಾಗುವುದೆಂದು
ತಿಳಿಯುತ್ತಾರೆ ಮತ್ತೆ ಆ ಮಣ್ಣನ್ನು ಸ್ವಚ್ಛ ಮಾಡಲು ಆ ನೀರನ್ನು ತೆಗೆದುಕೊಂಡು ಬರುತ್ತಾರೆ.
ವಿದೇಶಕ್ಕೆ ಮಹಾರಾಜರಂತಹ ವ್ಯಕ್ತಿಗಳು ಹೊರಟರೆ ಗಂಗಾಜಲದ ಮಡಿಕೆಗಳನ್ನು ತೆಗೆದುಕೊಂಡು ಹೋಗುತ್ತಾರೆ
ನಂತರ ಹಡಗಿನಲ್ಲಿಯೂ ಅದೇ ನೀರನ್ನು ಕುಡಿಯುತ್ತಾರೆ. ಮುಂಚೆ ವಿಮಾನ, ಮೋಟಾರು ಮುಂತಾದವುಗಳೇನೂ
ಇರಲಿಲ್ಲ. 100-150 ವರ್ಷಗಳಲ್ಲಿ ಏನೇನೋ ಆಗಿ ಬಿಟ್ಟಿದೆ! ಸತ್ಯಯುಗದ ಆದಿಯಲ್ಲಿ ಈ ವಿಜ್ಞಾನವು
ಉಪಯೋಗಕ್ಕೆ ಬರುತ್ತದೆ. ಅಲ್ಲಂತೂ ಮಹಲು ಮುಂತಾದವುಗಳನ್ನು ಮಾಡಲು ಹೆಚ್ಚು ಸಮಯ ಹಿಡಿಸುವುದಿಲ್ಲ.
ಈಗ ನಿಮ್ಮ ಬುದ್ಧಿಯು ಪಾರಸಬುದ್ಧಿಯಾಗುತ್ತದೆ ಆದ್ದರಿಂದ ಎಲ್ಲಾ ಕಾರ್ಯಗಳನ್ನು ಸಹಜವಾಗಿ ಮಾಡಿ
ಬಿಡುತ್ತೀರಿ. ಹೀಗೆ ಇಲ್ಲಿ ಮಣ್ಣಿನ ಇಟ್ಟಿಗೆಯನ್ನು ತಯಾರಿಸುತ್ತಾರೆ, ಅಲ್ಲಿ ಚಿನ್ನದ
ಇಟ್ಟಿಗೆಯಾಗುತ್ತದೆ. ಇದನ್ನು ಕುರಿತು ಮಾಯಾ ಮಚ್ಛಂದರ್ನ ಆಟವನ್ನು ತೋರಿಸುತ್ತಾರೆ. ಅವರು ಇದನ್ನು
ಪ್ರದರ್ಶಿಸುವ ಸಲುವಾಗಿ ಕುಳಿತು ನಾಟಕವನ್ನಾಗಿ ಮಾಡಿದ್ದಾರೆ ಆದರೆ ಸ್ವರ್ಗದಲ್ಲಿ ಚಿನ್ನದ
ಇಟ್ಟಿಗೆಗಳು ಅವಶ್ಯವಾಗಿ ಇರುತ್ತದೆ, ಅದನ್ನು ಸ್ವರ್ಣಿಮ ಯುಗವೆಂದು ಕರೆಯಲಾಗುವುದು. ಇದನ್ನು
ಕಬ್ಬಿಣದ ಯುಗವೆಂದು ಕರೆಯಲಾಗುವುದು. ಸ್ವರ್ಗವನ್ನು ಎಲ್ಲರೂ ನೆನಪು ಮಾಡುತ್ತಾರೆ, ಸ್ವರ್ಗದ
ಚಿತ್ರಗಳೂ ಸಹ ಶಾಶ್ವತವಾಗಿ ಉಳಿದಿವೆ. ಆದಿ ಸನಾತನ ಧರ್ಮವೆಂದು ಹೇಳುತ್ತಾ ಹಿಂದೂ ಧರ್ಮವೆಂದು ಹೇಳಿ
ಬಿಡುತ್ತಾರೆ, ದೇವತೆಗಳಿಗೆ ಬದಲಾಗಿ ಹಿಂದೂ ಎಂದು ಹೇಳಿ ಬಿಡುತ್ತಾರೆ. ಏಕೆಂದರೆ ವಿಕಾರಿಯಾಗುವ
ಕಾರಣ ದೇವತೆಯಂದು ಹೇಗೆ ಹೇಳಿಕೊಳ್ಳುತ್ತಾರೆ! ನೀವು ಎಲ್ಲಿಗೇ ಹೋದರೂ ಇದನ್ನು ತಿಳಿಸುತ್ತೀರಿ
ಏಕೆಂದರೆ ನೀವು ಮೆಸೆಂಜರ್ ಹಾಗೂ ಸಂದೇಶವಾಹಕರು. ತಂದೆಯ ಪರಿಚಯವನ್ನಂತೂ ಪ್ರತಿಯೊಬ್ಬರಿಗೂ ನೀಡಬೇಕು.
ಇವರು ಹೇಳುವುದು ಸರಿಯೆಂದು ಕೆಲವರು ತಕ್ಷಣ ತಿಳಿಯುತ್ತಾರೆ. ಇಬ್ಬರೂ ತಂದೆಯರು ಅವಶ್ಯವಾಗಿ
ಇದ್ದಾರೆ. ಪರಮಾತ್ಮ ಸರ್ವವ್ಯಾಪಿ ಎಂದು ಕೆಲವರು ಹೇಳಿಬಿಡುತ್ತಾರೆ. ಒಬ್ಬರಿಂದ ಹದ್ದಿನ ಆಸ್ತಿಯು
ಸಿಗುತ್ತದೆ ಎಂದು ನೀವು ತಿಳಿದುಕೊಂಡಿದ್ದೀರಿ. ಪಾರಲೌಕಿಕ ತಂದೆಯಿಂದ 21 ಜನ್ಮಗಳಿಗಾಗಿ ಬೇಹದ್ದಿನ
ಆಸ್ತಿಯು ಸಿಗುತ್ತದೆ. ಈ ಜ್ಞಾನವೂ ಹೀಗಿದೆ, ಅಲ್ಲಿ (ಸತ್ಯಯುಗ) ಈ ಜ್ಞಾನವಿರುವುದಿಲ್ಲ.
ಸಂಗಮಯುಗದಲ್ಲಿಯೇ ಆಸ್ತಿಯು ಸಿಗುತ್ತದೆ ನಂತರ 21 ಪೀಳಿಗೆಗಳವರೆಗೆ ಜನ್ಮ-ಜನ್ಮಾಂತರ ರಾಜ್ಯ
ಮಾಡುತ್ತೀರಿ. ನೀವು ಇಡೀ ವಿಶ್ವದ ಮಾಲೀಕರಾಗುತ್ತೀರಿ. ಇದೆಲ್ಲವೂ ನಿಮಗೆ ಈಗ ತಿಳಿದಿದೆ. ಯಾರು
ಪಕ್ಕಾ ನಿಶ್ಚಯ ಬುದ್ಧಿಯವರಾಗಿರುತ್ತಾರೆ, ಅವರಿಗೆಂದೂ ಸಂಶಯ ಬರುವುದಿಲ್ಲ. ಬೇಹದ್ದಿನ ತಂದೆಯಿಂದ
ಬೇಹದ್ದಿನ ಆಸ್ತಿಯು ಸಿಗುತ್ತದೆ. ಶಿವ ತಂದೆಯು ಬಂದಾಗ ಅವಶ್ಯವಾಗಿ ಆಸ್ತಿಯನ್ನು ಕೊಡುತ್ತಾರಲ್ಲವೆ!
ಆದ್ದರಿಂದ ತಂದೆಯೂ ಸಹ ಈ ಬ್ಯಾಡ್ಜ್ ಬಹಳ ಚೆನ್ನಾಗಿದೆ ಎಂದು ಹೇಳುತ್ತಾರೆ. ಇದನ್ನು ಸದಾ
ಧರಿಸಿರಬೇಕು. ಮನೆ-ಮನೆಗೂ ಸಂದೇಶ ಕೊಡಬೇಕು ನಂತರ ಒಪ್ಪಿಕೊಳ್ಳುವುದು ಅಥವಾ ಒಪ್ಪಿಕೊಳ್ಳದಿರುವುದು
ಅವರಿಗೆ ಬಿಟ್ಟಿದ್ದು. ವಿನಾಶವು ಆಗುವಾಗ ಭಗವಂತ ಬಂದಿದ್ದಾರೆಂದು ತಿಳಿದುಕೊಳ್ಳುತ್ತಾರೆ, ಆಗ ನೀವು
ಯಾರಿಗೆ ಸಂದೇಶವನ್ನು ಮೊದಲೇ ಕೊಟ್ಟಿರುತ್ತೀರಿ ಅವರು ಆಗ ಈ ಶ್ವೇತ ವಸ್ತ್ರಧಾರಿಯಾಗಿರುವ
ಸೂಕ್ಷ್ಮದೇವತೆ ಯಾರೆಂದು ತಿಳಿಯುತ್ತಾರೆ. ಸೂಕ್ಷ್ಮವತನದಲ್ಲಿ ಸೂಕ್ಷ್ಮ ದೇವತೆಯನ್ನು
ನೋಡುತ್ತಾರಲ್ಲವೆ. ಮಮ್ಮಾ-ಬಾಬಾ ಯೋಗಬಲದಿಂದ ಹೀಗೆ ಸೂಕ್ಷ್ಮ ದೇವತೆಯಾಗುವರು, ನಾವು ಹಾಗೆಯೇ
ಆಗುತ್ತೇವೆಂದು ಈಗ ನೀವು ತಿಳಿದುಕೊಂಡಿದ್ದೀರಿ. ಈ ಎಲ್ಲಾ ಮಾತುಗಳನ್ನು ತಂದೆಯು ಇವರಲ್ಲಿ (ಬ್ರಹ್ಮಾ)
ಪ್ರವೇಶ ಮಾಡಿ ತಿಳಿಸುತ್ತಾರೆ. ನೇರವಾಗಿ ಜ್ಞಾನವನ್ನು ಕೊಡುತ್ತಾರೆ, ತಂದೆಯಲ್ಲಿರುವ ಜ್ಞಾನವು
ನೀವು ಮಕ್ಕಳಲ್ಲಿಯೂ ಇದೆ. ಯಾವಾಗ ಮೇಲೆ ಹೋಗುತ್ತೀರಿ, ಆಗ ಈ ಜ್ಞಾನದ ಪಾತ್ರವು ಸಮಾಪ್ತಿಯಾಗುತ್ತದೆ.
ನಂತರ ಸುಖದ ಪಾತ್ರವನ್ನಭಿನಯಿಸುತ್ತೀರಿ ಆಗ ಈ ಜ್ಞಾನವು ಮರೆತು ಹೋಗುತ್ತದೆ.
ಆದ್ದರಿಂದ ನೀವು ಮಕ್ಕಳು ಎಲ್ಲಿಗೇ ಹೋದರೂ ಸಹ ಸಂದೇಶಿಯ ಚಿಹ್ನೆಯಾಗಿ ಈ ಬ್ಯಾಡ್ಜ್ ಅಗತ್ಯವಾಗಿ
ಜೊತೆಯಲ್ಲಿರಬೇಕು. ಒಂದುವೇಳೆ ಯಾರಾದರೂ ತಮಾಷೆ ಮಾಡಬಹುದು. ಏನೆಂದು ತಾನೆ ತಮಾಷೆ ಮಾಡುತ್ತಾರೆ!
ನೀವಂತೂ ಸರಿಯಾಗಿರುವ ಮಾತುಗಳನ್ನೇ ಹೇಳುತ್ತೀರಿ. ಇವರು ಬೇಹದ್ದಿನ ತಂದೆಯಾಗಿದ್ದಾರೆ, ಶಿವ ಎಂದು
ಅವರ ಹೆಸರಾಗಿದೆ. ಅವರು ಕಲ್ಯಾಣಕಾರಿಯಾಗಿದ್ದಾರೆ, ಅವರು ಬಂದು ಸ್ವರ್ಗ ಸ್ಥಾಪನೆಯನ್ನು
ಮಾಡುತ್ತಾರೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ, ಈ ಎಲ್ಲಾ ಜ್ಞಾನವು ನಿಮಗೆ ಈಗ ಪ್ರಾಪ್ತಿಯಾಗಿದೆ
ಅಂದಾಗ ಏಕೆ ಮರೆಯಬೇಕು! ಈ ಎಲ್ಲಾ ಮಾತುಗಳು ಬಹಳ ಸಹಜವಾಗಿದೆ. ನಡೆಯುತ್ತಾ-ತಿರುಗಾಡುತ್ತಾ ತಂದೆ
ಹಾಗೂ ಆಸ್ತಿಯನ್ನು ನೆನಪು ಮಾಡಬೇಕು. ಶಾಂತಿಧಾಮ ಹಾಗೂ ಸುಖಧಾಮ. ನೀವು ಮಕ್ಕಳು ಇಲ್ಲಿಗೆ
ಬರುತ್ತೀರೆಂದಾಗ ಮುರುಳಿಯನ್ನು ಕೇಳಿ ನಂತರ ಹೋಗಿ ಮುರುಳಿಯನ್ನು ಹೇಳಬೇಕು. ಕೇವಲ ನಿಮಿತ್ತ ಸಹೋದರಿ
ಮಾತ್ರ ಮುರುಳಿ ನುಡಿಸುವಂತಾಗಬಾರದು. ನಿಮಿತ್ತ ಸಹೋದರಿಯು ತಮ್ಮ ಸಮಾನ ಮಾಡಿ ತಯಾರು ಮಾಡಬೇಕು ಆಗ
ಅನೇಕರ ಕಲ್ಯಾಣ ಮಾಡಲು ಸಾಧ್ಯವಾಗುತ್ತದೆ. ಒಂದುವೇಳೆ ಒಬ್ಬ ನಿಮಿತ್ತ ಸಹೊದರಿ ಬೇರೆ ಕಡೆ ಹೋದಾಗ
ಉಳಿದವರು ಏಕೆ ಸೇವಾಕೇಂದ್ರವನ್ನು ನಡೆಸಬಾರದು! ಉಳಿದವರು ಧಾರಣೆ ಮಾಡಿರುವುದಿಲ್ಲವೇನು?
ವಿದ್ಯಾರ್ಥಿಗೆ ಓದುವುದು ಹಾಗೂ ಓದಿಸುವುದರಲ್ಲಿ ರುಚಿಯಿರಬೇಕು. ಮುರುಳಿಯಂತೂ ಬಹಳ ಸಹಜವಾಗಿದೆ
ಯಾರು ಬೇಕಾದರೂ ಧಾರಣೆ ಮಾಡಿ ಕ್ಲಾಸ್ ಮಾಡಬಹುದು. ಇಲ್ಲಿ ತಂದೆಯು ಕುಳಿತಿದ್ದಾರೆ, ಮಕ್ಕಳು ಯಾವುದೇ
ಮಾತಿನಲ್ಲಿಯೂ ಸಂಶಯ ಪಡಬಾರದೆಂದು ತಿಳಿಸುತ್ತಾರೆ. ಒಬ್ಬ ತಂದೆಯೇ ಎಲ್ಲವನ್ನೂ ತಿಳಿಸುತ್ತಾರೆ.
ಗುರಿ-ಉದ್ದೇಶವೂ ಒಂದೇ ಆಗಿದೆ. ಇದರಲ್ಲಿ ಯಾವ ಪ್ರಶ್ನೆಯನ್ನೂ ಕೇಳುವ ಅವಶ್ಯಕತೆಯಿಲ್ಲ. ಮುಂಜಾನೆ
ಎದ್ದು ಮಕ್ಕಳಿಗೆ ನೆನಪಿನ ಯಾತ್ರೆಯಲ್ಲಿ ಸಹಯೋಗ ನೀಡುತ್ತೇನೆ. ಬೇಹದ್ದಿನ ಮಕ್ಕಳೆಲ್ಲಾ ನೆನಪು
ಮಾಡುತ್ತಾರೆ. ನೀವು ಎಲ್ಲಾ ಮಕ್ಕಳು ಈ ನೆನಪಿನ ಸಹಯೋಗದಿಂದ ವಿಶ್ವವನ್ನೆಲ್ಲಾ ಪಾವನ ಮಾಡಬೇಕು.
ಇದರಲ್ಲಿ ನೀವು ಸಹಯೋಗ ಕೊಡುತ್ತೀರಿ. ಜಗತ್ತನ್ನೆಲ್ಲಾ ಪವಿತ್ರ ಮಾಡಬೇಕಾಗಿದೆಯಲ್ಲವೆ! ಎಲ್ಲರೂ
ಶಾಂತಿಧಾಮಕ್ಕೆ ಹೋಗಲಿ ಎಂದು ತಂದೆಯು ಎಲ್ಲಾ ಮಕ್ಕಳ ಮೇಲೂ ದೃಷ್ಟಿಯನ್ನಿಡುತ್ತಾರೆ. ಎಲ್ಲರಿಗೂ
ಗಮನ ತರಿಸುತ್ತಾರೆ. ತಂದೆಯಂತೂ ಬೇಹದ್ದಿನಲ್ಲಿ ಕುಳಿತುಕೊಳ್ಳುತ್ತಾರಲ್ಲವೆ. ನಾನು ಇಡೀ ಜಗತ್ತನ್ನು
ಪಾವನ ಮಾಡಲು ಬಂದಿದ್ದೇನೆ. ಜಗತ್ತೆಲ್ಲಾ ಪವಿತ್ರವಾಗುವ ಶಕ್ತಿಯನ್ನು ಕೊಡುತ್ತೇನೆ. ಯಾರಿಗೆ
ಪೂರ್ಣ ಯೋಗಬಲವಿರುತ್ತದೆಯೋ ಅವರು ಯೋಗದ ಸಮಯದಲ್ಲಿ- ತಂದೆಯು ಈಗ ಕುಳಿತು ನೆನಪಿನ ಯಾತ್ರೆಯನ್ನು
ಕಲಿಸುತ್ತಿದ್ದಾರೆ, ಇದರಿಂದ ವಿಶ್ವದಲ್ಲಿ ಶಾಂತಿಯು ಹರಡುತ್ತದೆಯಂದು ಮಕ್ಕಳು
ತಿಳಿದುಕೊಳ್ಳುತ್ತೀರಿ. ಮಕ್ಕಳೂ ನೆನಪಿನಲ್ಲಿರುತ್ತೀರೆಂದರೆ ಆಗ ಸಹಯೋಗ ಸಿಗುತ್ತದೆ. ಸಹಯೋಗಿ
ಮಕ್ಕಳು ಬೇಕಲ್ಲವೆ. ಈಶ್ವರನ ಸಹಯೋಗಿಗಳು, ನಿಶ್ಚಯಬುದ್ಧಿಯವರೇ ನೆನಪು ಮಾಡುತ್ತಾರೆ.
ಪಾವನರಾಗುವುದೇ ನಿಮ್ಮ ಮೊದಲ ಸಬ್ಜೆಕ್ಟ್ ಆಗಿದೆ ಆದ್ದರಿಂದ ನೀವು ಮಕ್ಕಳು ತಂದೆಯ ಜೊತೆ
ನಿಮಿತ್ತರಾಗುತ್ತೀರಿ. ಹೇ ಪತಿತ-ಪಾವನ ಬನ್ನಿ ಎಂದು ತಂದೆಯನ್ನು ಕರೆಯುತ್ತೀರಿ ಅಂದಾಗ ಅವರೊಬ್ಬರೇ
ಏನು ಮಾಡುತ್ತಾರೆ! ನಿಮಗೆ ತಿಳಿದಿದೆ - ನಾವು ವಿಶ್ವವನ್ನು ಪಾವನ ಮಾಡಿ ಇಡೀ ವಿಶ್ವದ ಮೇಲೆ
ರಾಜ್ಯಭಾರ ಮಾಡುತ್ತೇನೆ. ಬುದ್ಧಿಯಲ್ಲಿ ಇಂತಹ ನಿಶ್ಚಯವಿದ್ದಾಗ ನಶೆಯೇರುತ್ತದೆ. ನಾವು ತಂದೆಯ
ಶ್ರೀಮತದಿಂದ ನಮ್ಮದೇ ಯೋಗಬಲದಿಂದ ನಮಗಾಗಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ನೀವು
ಮಕ್ಕಳು ತಿಳಿದುಕೊಂಡಿದ್ದೀರಿ, ಈ ನಶೆಯೇರಬೇಕು. ಇದು ಆತ್ಮಿಕ ಮಾತಾಗಿದೆ. ಪ್ರತೀ ಕಲ್ಪದಲ್ಲಿ
ತಂದೆಯು ಈ ಆತ್ಮಿಕ ಬಲದಿಂದ ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಂದು ನೀವು
ತಿಳಿದಿದ್ದೀರಿ. ಈಗ ನಿಮ್ಮ ತಲೆಯಲ್ಲಿ ಈ ನೆನಪಿನ ಯಾತ್ರೆಯ ಚಿಂತೆಯಿದೆ. ಪುರುಷಾರ್ಥ ಮಾಡಬೇಕಾಗಿದೆ.
ವ್ಯಾಪಾರ ಮುಂತಾದವುಗಳನ್ನು ಮಾಡುತ್ತಾ ನೆನಪಿನ ಯಾತ್ರೆಯಲ್ಲಿರಬೇಕು. ಸದಾ ಆರೋಗ್ಯವಂತರಾಗಲು
ತಂದೆಯು ಅತಿ ಶಕ್ತಿಶಾಲಿ ಸಂಪಾದನೆಯನ್ನು ಮಾಡಿಸುತ್ತಾರೆ. ಈ ಸಮಯದಲ್ಲಿ ಎಲ್ಲವನ್ನೂ ಮರೆಯಬೇಕಾಗಿದೆ.
ನಾವಾತ್ಮರು ಮನೆಗೆ ಹಿಂತಿರುಗುತ್ತಿದ್ದೇವೆ, ಆತ್ಮಾಭಿಮಾನಿಯಾಗುವ ಅಭ್ಯಾಸ ಮಾಡಿಸಲಾಗುತ್ತದೆ.
ತಿನ್ನುತ್ತಾ-ಕುಡಿಯುತ್ತಾ, ನಡೆಯುತ್ತಾ-ಓಡಾಡುತ್ತಾ ನೆನಪು ಮಾಡಲು ಆಗುವುದಿಲ್ಲವೇ! ಬಟ್ಟೆಯನ್ನು
ಹೊಲಿಯುತ್ತಾ ತಂದೆಯ ನೆನಪಿನಲ್ಲಿರಬೇಕು. ಇದು ಬಹಳ ಸಹಜವಾಗಿದೆ. 84 ಜನ್ಮಗಳ ಚಕ್ರವು
ಸಮಾಪ್ತಿಯಾಯಿತೆಂದು ನೀವು ತಿಳಿದಿದ್ದೀರಿ. ಈಗ ತಂದೆಯು ನಾವಾತ್ಮರಿಗೆ ರಾಜಯೋಗವನ್ನು ಕಲಿಸಲು
ಬಂದಿದ್ದಾರೆ. ಪ್ರಪಂಚದ ಚರಿತ್ರೆ-ಭೂಗೋಳ ಪುನರಾವರ್ತನೆಯಾಗುತ್ತಿರುತ್ತದೆ, ಕಲ್ಪದ ಹಿಂದೆಯೂ ಹೀಗೆ
ಆಗಿತ್ತು, ಈಗ ಮತ್ತೆ ಪುನರಾವರ್ತನೆಯಾಗುತ್ತಿದೆ. ಈ ಪುನರಾವರ್ತನೆಯ ರಹಸ್ಯವನ್ನು ತಂದೆಯೇ
ತಿಳಿಸುತ್ತಿದ್ದಾರೆ. ಪ್ರತಿಯೊಬ್ಬರದೂ ಈ ನಾಟಕದಲ್ಲಿ ಪಾತ್ರವು ಸಿಕ್ಕಿದೆ, ಅದನ್ನು ಅವರು
ತಿಳಿಸಿಕೊಡುತ್ತಾರೆ. ತಂದೆಯನ್ನು ನೆನಪು ಮಾಡಿದಾಗ ಸತೋಪ್ರಧಾನರಾಗುತ್ತೀರೆಂದು ಮಕ್ಕಳಿಗೆ
ಸಲಹೆಯನ್ನು ನೀಡಲಾಗುತ್ತದೆ, ನಂತರ ಈ ಶರೀರವು ಬಿಡುಗಡೆಯಾಗುತ್ತದೆ. ಈಗ ನಾವಾತ್ಮಗಳು
ಸತೋಪ್ರಧಾನರಾಗಿ ಮನೆಗೆ ಹಿಂತಿರುಗಬೇಕೆಂದು ಈಗ ನಿಮ್ಮ ಬುದ್ಧಿಯಲ್ಲಿದೆ, ಆದರೆ ಸತ್ಯಯುಗದಲ್ಲಿ ಈ
ರೀತಿ ಹೇಳುವುದಿಲ್ಲ. ಅಲ್ಲಿ ಈ ಹಳೆಯ ಶರೀರವನ್ನು ಬಿಟ್ಟು ಹೊಸ ಶರೀರವನ್ನು
ತೆಗೆದುಕೊಳ್ಳುತ್ತೇವೆಂದು ಹೇಳುತ್ತಾರೆ, ಅಲ್ಲಿ ದುಃಖವಾಗುವುದೇ ಇಲ್ಲ, ಇದು ದುಃಖಧಾಮವಾಗಿದೆ.
ಹಳೆಯ ಶರೀರವಾದಾಗ ಇದನ್ನು ಬಿಟ್ಟು ಮನೆಗೆ ಹೋಗಬೇಕೆಂದು ತಿಳಿಯುತ್ತಾರೆ. ತಂದೆಯನ್ನು ನಿರಂತರವಾಗಿ
ನೆನಪು ಮಾಡಬೇಕು, ಆ ನಿರಾಕಾರ ತಂದೆಯೇ ಜ್ಞಾನ ಸಾಗರ ಆಗಿದ್ದಾರೆ, ಅವರೇ ಬಂದು ಸರ್ವರ ಸದ್ಗತಿಯನ್ನು
ಮಾಡುತ್ತಾರೆ. ಸಾಧುಗಳ ಉದ್ಧಾರವನ್ನೂ ಮಾಡುತ್ತೇನೆಂದು ತಂದೆಯು ಹೇಳುತ್ತಾರೆ. ಈಗ ನೀವು ಒಬ್ಬ
ತಂದೆಯನ್ನೇ ನೆನಪು ಮಾಡಿ, ನೀವೆಲ್ಲಾ ಆತ್ಮಗಳಿಗೆ ತಂದೆಯಿಂದ ಆಸ್ತಿಯನ್ನು ಪಡೆಯುವಂತಹ ಅಧಿಕಾರವಿದೆ.
ತಮ್ಮನ್ನು ಆತ್ಮನೆಂದು ತಿಳಿದು ದೇಹೀ-ಅಭಿಮಾನಿಯಾಗಬೇಕು ಹಾಗೂ ತಂದೆಯನ್ನು ನಿರಂತರ ನೆನಪು
ಮಾಡಿದಾಗ ಪಾಪವು ನಾಶವಾಗುತ್ತಾ ಹೋಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಮುರುಳಿಯನ್ನು
ಕೇಳಿ ಮತ್ತೆ ಅನ್ಯರಿಗೆ ಹೇಳಬೇಕಾಗಿದೆ. ಓದುವುದರ ಜೊತೆ-ಜೊತೆ ಅನ್ಯರಿಗೂ ಓದಿಸಬೇಕಾಗಿದೆ.
ಕಲ್ಯಾಣಕಾರಿಯಾಗಬೇಕಾಗಿದೆ. ಬ್ಯಾಡ್ಜ್ ಸಂದೇಶಿಯ ಚಿಹ್ನೆಯಾಗಿದೆ, ಸದಾ ಇದನ್ನು ಧರಿಸಿರಬೇಕು.
2. ವಿಶ್ವದಲ್ಲಿ ಶಾಂತಿ
ಸ್ಥಾಪನೆ ಮಾಡಲು ನೆನಪಿನ ಯಾತ್ರೆಯಲ್ಲಿರಬೇಕಾಗಿದೆ. ಹೇಗೆ ತಂದೆಯ ದೃಷ್ಠಿ ಬೇಹದ್ದಿನಲ್ಲಿರುತ್ತದೆ,
ಇಡೀ ಪ್ರಪಂಚವನ್ನು ಪಾವನ ಮಾಡಲು ಕರೆಂಟ್ (ಶಕ್ತಿ) ಕೊಡುತ್ತಾರೆ, ಹಾಗೆಯೇ ತಂದೆಯನ್ನು ಅನುಸರಣೆ
ಮಾಡಿ ಸಹಯೋಗಿಗಳಾಗಬೇಕಾಗಿದೆ.
ವರದಾನ:
ಪ್ರತಿಯೊಂದು
ಆತ್ಮನ ಸಂಬಂಧ ಸಂಪರ್ಕದಲ್ಲಿ ಬರುತ್ತಾ ಎಲ್ಲರಿಗೆ ದಾನ ಕೊಡುವ ಮಹಾದಾನಿ, ಿ ಭವ.
ಇಡೀ ದಿನದಲ್ಲಿ
ಯಾರೆಲ್ಲಾ ಸಂಬಂಧ-ಸಂಪರ್ಕದಲ್ಲಿ ಬರುತ್ತಾರೆ ಅವರಿಗೆ ಯಾವುದಾದರೂ ಶಕ್ತಿಯ, ಜ್ಞಾನದ, ಗುಣದ ದಾನ
ಮಾಡಿ. ತಮ್ಮ ಹತ್ತಿರ ಜ್ಞಾನದ್ದೂ ಖಜಾನೆ ಇದೆ ಅಂದಾಗ ಶಕ್ತಿಗಳ ಮತ್ತು ಗುಣಗಳ ಖಜಾನೆಯೂ ಸಹ ಇದೆ.
ಆದ್ದರಿಂದ ದಾನ ಕೊಡದೆ ಖಾಲಿಯಾಗಿ ಯಾರೂ ಹೋಗಬಾರದು ಆಗ ಮಹಾದಾನಿ ಎಂದು ಹೇಳಲಾಗುತ್ತದೆ. ದಾನಿ
ಶಬ್ದದ ಆತ್ಮಿಕ ಅರ್ಥವೇ ಸಹಯೋಗ ಕೊಡುವುದು. ಅಂದಾಗ ತಮ್ಮ ಶ್ರೇಷ್ಠ ಸ್ಥಿತಿಯ ವಾಯುಂಡಲದ ಮೂಲಕ
ಮತ್ತು ತಮ್ಮ ವೃತ್ತಿಯ ಪ್ರಕಂಪನೆಗಳ ಮೂಲಕ ಪ್ರತಿಯೊಂದು ಆತ್ಮನಿಗೆ ಸಹಯೋಗ ಕೊಟ್ಟಾಗ ವರದಾನಿ ಎಂದು
ಹೇಳಲಾಗುತ್ತದೆ.
ಸ್ಲೋಗನ್:
ಯಾರು ಬಾಪ್ದಾದಾ
ಮತ್ತು ಪರಿವಾರಕ್ಕೆ ಸಮೀಪವಾಗಿರುತ್ತಾರೆ ಅವರ ಮುಖದ ಮೇಲೆ ಸಂತುಷ್ಟತೆ, ಆತ್ಮೀಯತೆ ಮತ್ತು
ಪ್ರಸನ್ನತೆಯ ಮುಗುಳ್ನಗು ಇರುತ್ತದೆ.