31.08.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ನಿಮಗೆ ಸಂಗಮಯುಗದಲ್ಲಿ ಯಾವ ಸ್ಮೃತಿಯನ್ನು ತರಿಸಿದ್ದಾರೆ, ಆದರೆ ಸ್ಮರಣೆ ಮಾಡಿ, ಅದರಿಂದ ಸದಾ
ಹರ್ಷಿತರಾಗಿರುತ್ತೀರಿ”
ಪ್ರಶ್ನೆ:
ಸದಾ
ಹಗುರವಾಗಿರಲು ಯಾವ ಯುಕ್ತಿಯಿದೆ? ಯಾವ ಸಾಧನವನ್ನು ತನ್ನದನ್ನಾಗಿ ಮಾಡಿಕೊಂಡಾಗ ಖುಷಿಯಲ್ಲಿರಲು
ಸಾಧ್ಯ?
ಉತ್ತರ:
ಸದಾ
ಹಗುರವಾಗಿರಲು ಈ ಜನ್ಮದಲ್ಲಿ ಯಾವ ಯಾವ ಪಾಪಗಳಾಗಿವೆಯೋ ಅವೆಲ್ಲವನ್ನೂ ಅವಿನಾಶಿ ಸರ್ಜನ್ನ ಮುಂದಿಡಿ.
ಬಾಕಿ ಜನ್ಮ ಜನ್ಮಾಂತರದ ಪಾಪವು ಯಾವುದು ತಲೆಯ ಮೇಲಿದೆ ಅದಕ್ಕಾಗಿ ನೆನಪಿನ ಯಾತ್ರೆಯಲ್ಲಿರಿ.
ನೆನಪಿನಿಂದಲೇ ಪಾಪಗಳು ನಾಶವಾಗುತ್ತವೆ ಮತ್ತು ಖುಷಿಯಿರುತ್ತದೆ, ತಂದೆಯ ನೆನಪಿನಿಂದ ಆತ್ಮವು
ಸತೋಪ್ರಧಾನವಾಗುತ್ತದೆ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮಗೆ ಸ್ಮೃತಿಯು ಬಂದಿದೆ, ನಾವು ಆದಿ
ಸನಾತನ ದೇವಿ ದೇವತಾ ಧರ್ಮದವರಾಗಿದ್ದೆವು, ರಾಜ್ಯಭಾರ ಮಾಡುತ್ತಿದ್ದೆವು, ಅವಶ್ಯವಾಗಿ ವಿಶ್ವದ
ಮಾಲೀಕರಾಗಿದ್ದೆವು, ಆ ಸಮಯದಲ್ಲಿ ಬೇರೆ ಯಾವುದೇ ಧರ್ಮವಿರಲಿಲ್ಲ. ನಾವೇ ಸತ್ಯಯುಗದಿಂದ ಹಿಡಿದು 84
ಜನ್ಮಗಳನ್ನು ತೆಗೆದುಕೊಂಡೆವು. ಚಕ್ರವನ್ನು ಪೂರ್ಣ ಮಾಡಿದೆವು. ಈಗ ಇಡೀ ವೃಕ್ಷದ ಸ್ಮೃತಿಯು ಬಂದಿದೆ,
ನಾವು ದೇವತೆಗಳಾಗಿದ್ದೆವು, ನಂತರ ರಾವಣನ ರಾಜ್ಯದಲ್ಲಿ ಬಂದಿದ್ದರಿಂದ ದೇವಿ ದೇವತೆಗಳೆಂದು
ಕರೆಸಿಕೊಳ್ಳಲು ಯೋಗ್ಯವಾಗಲಿಲ್ಲ. ಆದ್ದರಿಂದ ಬೇರೆ ಧರ್ಮವನ್ನೇ (ಹಿಂದೂ) ನಮ್ಮದೆಂದು
ತಿಳಿದುಕೊಂಡೆವು. ಬೇರೆ ಯಾರ ಧರ್ಮವೂ ಬದಲಾಗುವುದಿಲ್ಲ. ಕ್ರಿಸ್ತನದು ಕ್ರಿಶ್ಚಿಯನ್ ಧರ್ಮ,
ಬುದ್ಧನದು ಬೌದ್ಧ ಧರ್ಮ ನಡೆದು ಬರುತ್ತದೆ. ಬುದ್ಧನು ಬಂದು ಧರ್ಮ ಸ್ಥಾಪನೆ ಮಾಡಿದನೆಂದು ಎಲ್ಲರಿಗೂ
ಗೊತ್ತಿದೆ. ಆದರೆ ನಮ್ಮ ಹಿಂದೂ ಧರ್ಮ ಯಾರು ಸ್ಥಾಪನೆ ಮಾಡಿದರು ಯಾವಾಗಿನಿಂದ ಪ್ರಾರಂಭವಾಯಿತು
ಎನ್ನುವುದು ಹಿಂದೂಗಳಿಗೆ ತಮ್ಮ ಧರ್ಮದ ಬಗ್ಗೆ ಗೊತ್ತಿಲ್ಲ. ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ.
ಇಡೀ ಸೃಷ್ಟಿ ಚಕ್ರದ ಜ್ಞಾನ ಮಕ್ಕಳಿಗೆ ಗೊತ್ತಿದೆ. ಇದಕ್ಕೆ ಜ್ಞಾನ ವಿಜ್ಞಾನವೆಂದು ಹೇಳುತ್ತಾರೆ.
ಅವರು ವಿಜ್ಞಾನ ಭವನವೆಂದು ಹೆಸರಿಟ್ಟಿದ್ದಾರೆ. ಆದರೆ ತಂದೆಯು ಅದರೆ ಅರ್ಥವನ್ನು ತಿಳಿಸುತ್ತಾರೆ.
ಜ್ಞಾನ ವಿಜ್ಞಾನವೆಂದರೆ ಜ್ಞಾನ ಮತ್ತು ಯೋಗವಾಗಿದೆ, ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ
ಜ್ಞಾನವಾಗಿದೆ. ಈಗ ನೀವು ತಿಳಿದುಕೊಂಡಿದ್ದೀರಿ, ನಮಗೂ ಗೊತ್ತಿರಲಿಲ್ಲ, ನಾಸ್ತಿಕರಾಗಿದ್ದೆವು,
ಸತ್ಯಯುಗದಲ್ಲಿ ಈ ಜ್ಞಾನವಿರಲು ಸಾಧ್ಯವಿಲ್ಲ. ಈಗ ನಿಮಗೆ ಶಿಕ್ಷಕರು ಓದಿಸಿದ್ದಾರೆ. ಓದಿದರೆ ನಿಮಗೆ
ರಾಜ್ಯಭಾಗ್ಯವು ಸಿಗುತ್ತದೆ, ಏಕೆಂದರೆ ನೀವು ಇರುವುದಕ್ಕಾಗಿಯೇ ಹೊಸ ಸೃಷ್ಟಿಯು ಬೇಕು, ಹಳೆಯ
ಸೃಷ್ಟಿಯಲ್ಲಿ ಪವಿತ್ರ ದೇವಿ ದೇವತೆಗಳು ಪಾದವನ್ನೂ ಇಡಲು ಸಾಧ್ಯವಿಲ್ಲ. ತಂದೆಯು ಬಂದು ನಿಮಗಾಗಿ
ಹಳೆಯ ಪ್ರಪಂಚದ ವಿನಾಶ ಮಾಡಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ನಮಗಾಗಿ
ವಿನಾಶವಾಗಲೇಬೇಕಾಗಿದೆ. ಕಲ್ಪ ಕಲ್ಪಾಂತರ ನಾವು ಈ ಪಾತ್ರ ಅಭಿನಯಿಸುತ್ತೇವೆ. ತಂದೆಯು ಕೇಳುತ್ತಾರೆ
- ಮೊದಲು ಎಂದಾದರೂ ಮಿಲನ ಮಾಡಿದ್ದೀರಾ? ಆಗ ಹೇಳುತ್ತಾರೆ - ಬಾಬಾ, ಪ್ರತಿ ಕಲ್ಪವೂ ತಮ್ಮಿಂದ
ರಾಜ್ಯ ಭಾಗ್ಯ ಪಡೆಯಲು ಮಿಲನ ಮಾಡುತ್ತೇವೆ. ಕಲ್ಪದ ಮೊದಲೂ ಬೇಹದ್ದಿನ ಸುಖದ ರಾಜ್ಯಭಾಗ್ಯವು
ಸಿಕ್ಕಿತ್ತು. ಈಗ ಯಾವುದೆಲ್ಲಾ ಮಾತುಗಳು ಸ್ಮೃತಿಗೆ ಬಂದಿದೆಯೋ ಅದರ ಸ್ಮರಣೆ ಮಾಡಬೇಕು. ಇದಕ್ಕೆ
ತಂದೆಯು ಸ್ವದರ್ಶನ ಚಕ್ರವೆಂದು ಹೇಳುತ್ತಾರೆ. ನಾವು ಮೊದಲು ಸತೋಪ್ರಧಾನರಾಗಿದ್ದೆವು, ಇದೂ ಸಹ
ನಿಮಗೆ ಸ್ಮೃತಿ ಬಂದಿದೆ - ಪ್ರತಿಯೊಂದು ಆತ್ಮಕ್ಕೆ ತನ್ನ ತನ್ನದೇ ಆದ ಪಾತ್ರವು ಸಿಕ್ಕಿದೆ, ನಾವು
ಆತ್ಮರು ಸೂಕ್ಷ್ಮ ಅವಿನಾಶಿಯಾಗಿದ್ದೇವೆ. ಅದರಲ್ಲಿನ ಪಾತ್ರವೂ ಅವಿನಾಶಿಯಾಗಿದೆ, ಅದು ನಡೆಯುತ್ತಲೇ
ಇರುತ್ತದೆ. ಮಾಡಿ ಮಾಡಲ್ಪಟ್ಟಿರುವುದೇ ನಡೆಯುತ್ತದೆ.... ಇದರಲ್ಲಿ ಹೊಸ ಮಾತು ಸೇರ್ಪಡೆ ಆಗುವುದೂ
ಇಲ್ಲ, ಅಥವಾ ಇರುವುದರಲ್ಲಿ ಯಾವುದನ್ನೂ ತೆಗೆದು ಹಾಕಲು ಸಾಧ್ಯವಿಲ್ಲ. ಯಾರೂ ಮೋಕ್ಷವನ್ನು ಪಡೆಯಲು
ಸಾಧ್ಯವಿಲ್ಲ. ಕೆಲವರು ಮುಕ್ತಿಯನ್ನು ಬಯಸುತ್ತಾರೆ, ಮುಕ್ತಿ ಬೇರೆ ಮೋಕ್ಷ ಬೇರೆಯಾಗಿದೆ. ಇದನ್ನೂ
ಸ್ಮೃತಿಯಲ್ಲಿಟ್ಟುಕೊಳ್ಳಬೇಕು. ಸ್ಮೃತಿಯಲ್ಲಿದ್ದಾಗ ಅನ್ಯರಿಗೂ ಸ್ಮೃತಿ ತರಿಸಲು ಸಾಧ್ಯ. ನಿಮ್ಮ
ವ್ಯಾಪಾರವೇ ಇದಾಗಿದೆ, ತಂದೆಯು ಯಾವ ಸ್ಮೃತಿಯನ್ನು ತರಿಸಿದ್ದಾರೆ ಅದನ್ನು ಬೇರೆಯವರಿಗೂ ಸ್ಮೃತಿ
ತರಿಸಿರಿ, ಆಗ ಶ್ರೇಷ್ಠ ಪದವಿ ಸಿಗುತ್ತದೆ. ಶ್ರೇಷ್ಠ ಪದವಿಗಾಗಿ ಬಹಳ ಪರಿಶ್ರಮ ಪಡಬೇಕಾಗುತ್ತದೆ,
ಮುಖ್ಯ ಪರಿಶ್ರಮವು ಯೋಗದ್ದಾಗಿದೆ. ಇದು ನೆನಪಿನ ಯಾತ್ರೆಯಾಗಿದೆ. ತಂದೆಯ ವಿನಃ ಬೇರೆ ಯಾರೂ ಕಲಿಸಲು
ಸಾಧ್ಯವಿಲ್ಲ. ಈಗ ನೀವು ಮನುಷ್ಯರಿಂದ ದೇವತೆಯಾಗುವ ವಿದ್ಯೆಯನ್ನು ಕಲಿಯುತ್ತಿದ್ದೀರಿ. ನಿಮಗೆ
ಗೊತ್ತಿದೆ ನಾವು ಪುನಃ ಹೊಸ ಪ್ರಪಂಚಕ್ಕೆ ಹೋಗುತ್ತೇವೆ. ಅದರ ಹೆಸರೇ ಆಗಿದೆ - ಅಮರಲೋಕ. ಇದು
ಮೃತ್ಯುಲೋಕವಾಗಿದೆ. ಇಲ್ಲಿ ಆಕಸ್ಮಿಕವಾಗಿ ಕುಳಿತು ಕುಳಿತಿದ್ದಂತೆ ಮೃತ್ಯು ಬರುತ್ತದೆ. ಅಲ್ಲಿ
ಮೃತ್ಯುವಿನ ಹೆಸರು ಗುರುತೂ ಇರುವುದಿಲ್ಲ, ಏಕೆಂದರೆ ವಾಸ್ತವದಲ್ಲಿ ಆತ್ಮವನ್ನು ಮೃತ್ಯು
ಕಬಳಿಸುವುದಿಲ್ಲ. ಆತ್ಮವು ಯಾವುದೇ ಸಿಹಿಯಾದ ಪದಾರ್ಥವೇನು! ನಾಟಕದನುಸಾರ ಸಮಯವು ಬಂದಾಗ ಆತ್ಮವು
ಹೊರಟು ಹೋಗುತ್ತದೆ. ಯಾವ ಸಮಯದಲ್ಲಿ ಯಾರು ಹೋಗಬೇಕಾಗಿದೆ ಅವರೇ ಹೋಗುತ್ತಾರೆ. ಮೃತ್ಯುವೇನೂ
ಹಿಡಿದುಕೊಳ್ಳುವುದಿಲ್ಲ, ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ.
ವಾಸ್ತವದಲ್ಲಿ ಮೃತ್ಯುವೆಂದರೆ ಇನ್ನೇನೂ ಅಲ್ಲ. ಇದಂತೂ ಕೇವಲ ಕಥೆಗಳನ್ನು ಬರೆದಿದ್ದಾರೆ.
ಸತ್ಯಯುಗವು ಅಮರಲೋಕವಾಗಿದೆ, ಅಲ್ಲಿ ನಿರೋಗಿ ಶರೀರವಿರುತ್ತದೆ. ಸತ್ಯಯುಗದಲ್ಲಿ ಭಾರತವಾಸಿಗಳ
ಆಯುಸ್ಸು ದೀರ್ಘವಾಗಿತ್ತು, ಯೋಗಿಗಳಾಗಿದ್ದರು. ಯೋಗಿ ಮತ್ತು ಭೋಗಿಯ ಅಂತರವೂ ಸಹ ಈಗ ತಿಳಿಯುತ್ತದೆ.
ಈಗ ನಿಮ್ಮ ಆಯುಸ್ಸು ವೃದ್ಧಿಯಾಗುತ್ತದೆ. ಎಷ್ಟು ನೀವು ಯೋಗದಲ್ಲಿರುತ್ತೀರಿ ಅಷ್ಟು ನಿಮ್ಮ ಪಾಪಗಳು
ಭಸ್ಮವಾಗುತ್ತವೆ ಮತ್ತು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಆಯುಸ್ಸೂ ವೃದ್ಧಿಯಾಗುತ್ತದೆ. ಯಥಾ
ರಾಜ ರಾಣಿ.... ಆಯುಸ್ಸು ಪೂರ್ಣವಾದ ಮೇಲೆ ಶರೀರ ಬಿಡುತ್ತಾರೆ ಪ್ರಜೆಗಳಿಗೂ ಹೀಗೆಯೇ ಆಗುತ್ತದೆ
ಆದರೆ ಪದವಿಯಲ್ಲಿ ಅಂತರವಿರುತ್ತದೆ.
ಈಗ ತಂದೆಯು ತಿಳಿಸುತ್ತಾರೆ - ಸ್ವದರ್ಶನ ಚಕ್ರಧಾರಿ ಮಕ್ಕಳೇ, ಈ ಅಲಂಕಾರಗಳು ನಿಮ್ಮದಾಗಿದೆ.
ಗೃಹಸ್ಥ ವ್ಯವಹಾರದಲ್ಲಿದ್ದು ನೀವು ಕಮಲ ಪುಷ್ಪ ಸಮಾನರಾಗುತ್ತೀರಿ. ನಿಮ್ಮ ವಿನಃ ಬೇರೆ ಯಾರೂ ಆಗಲು
ಸಾಧ್ಯವಿಲ್ಲ. ಈ ಜನ್ಮದಲ್ಲಿ ಎಷ್ಟು ಪಾಪಗಳನ್ನು ಮಾಡಿದ್ದೇವೆಂದು ಸ್ಮೃತಿಗೆ ಬಂದಿದೆ. ಆದ್ದರಿಂದ
ತಂದೆಯು ತಿಳಿಸುತ್ತಾರೆ - ನಿಮ್ಮದೆಲ್ಲವನ್ನೂ ಅವಿನಾಶಿ ಸರ್ಜನ್ನ ಮುಂದಿಡಿ. ಆಗ ಹಗುರರಾಗುತ್ತೀರಿ.
ಬಾಕಿ ತಲೆಯ ಮೇಲಿರುವ ಜನ್ಮ ಜನ್ಮಾಂತರದ ಪಾಪದ ಹೊರೆಯನ್ನು ಇಳಿಸಿಕೊಳ್ಳಲು ಯೋಗದಲ್ಲಿರಬೇಕು,
ಯೋಗದಿಂದಲೇ ಪಾಪವು ಭಸ್ಮವಾಗುತ್ತದೆ ಮತ್ತು ಖುಷಿಯಲ್ಲಿರುತ್ತೀರಿ. ತಂದೆಯ ನೆನಪಿನಿಂದ
ಸತೋಪ್ರಧಾನರಾಗುತ್ತೀರಿ. ನಾವು ನೆನಪಿನಿಂದ ಈ ರೀತಿಯಾಗುತ್ತೇವೆಂದು ಗೊತ್ತಾದರೆ ಯಾರು ತಾನೇ ನೆನಪು
ಮಾಡುವುದಿಲ್ಲ! ಆದರೆ ಇದು ಯುದ್ಧದ ಮೈದಾನವಾಗಿದೆ. ಆದ್ದರಿಂದ ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯಲು
ಶ್ರಮ ಪಡಬೇಕಾಗುತ್ತದೆ. ಮಕ್ಕಳಿಗೆ ಈ ಸ್ಮೃತಿಯೂ ಬಂದಿದೆ, ಬೇಹದ್ದಿನ ತಂದೆಯಿಂದ ಶ್ರೇಷ್ಠಾತಿ
ಶ್ರೇಷ್ಠ ಆಸ್ತಿಯನ್ನು ಪಡೆಯುತ್ತೇವೆ, ಕಲ್ಪ ಕಲ್ಪವೂ ಪಡೆಯುತ್ತೇವೆ. ನಿಮ್ಮ ಬಳಿ ಅನೇಕರು
ಬರುತ್ತಾರೆ, ಬಂದು ಮನ್ಮನಾಭವದ ಮಂತ್ರವನ್ನು ತೆಗೆದುಕೊಳ್ಳುತ್ತಾರೆ, ಮನ್ಮನಾಭವದ ಅರ್ಥವೇ ಆಗಿದೆ
ತಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡುವುದು. ಇದು ಮಹಾನ್ ಆತ್ಮಗಳಾಗಲು
ಮಹಾಮಂತ್ರವಾಗಿದೆ. ಅವರೇನೂ ಮಹಾತ್ಮರಲ್ಲ. ವಾಸ್ತವದಲ್ಲಿ ಕೃಷ್ಣನಿಗೆ ಮಹಾತ್ಮ ಎಂದು ಹೇಳಬಹುದು
ಏಕೆಂದರೆ ಕೃಷ್ಣನು ಪವಿತ್ರನಾಗಿದ್ದಾನೆ. ದೇವತೆಗಳು ಸದಾ ಪವಿತ್ರರಾಗಿರುತ್ತಾರೆ. ದೇವತೆಗಳದ್ದು
ಪ್ರವೃತ್ತಿ ಮಾರ್ಗವಾಗಿದೆ, ಸನ್ಯಾಸಿಗಳದ್ದು ನಿವೃತ್ತಿ ಮಾರ್ಗವಾಗಿದೆ. ಸ್ತ್ರೀಯರು ಪೆಟ್ಟು
ತಿನ್ನಲು ಸಾಧ್ಯವಿಲ್ಲ. ಕಲಿಯುಗದಲ್ಲಿ ಈ ರೀತಿ ಆಗಿದೆ ಸ್ತ್ರೀಯರನ್ನೂ ಸಹ ಸನ್ಯಾಸಿಗಳನ್ನಾಗಿ ಮಾಡಿ
ಕರೆದುಕೊಂಡು ಹೋಗುತ್ತಾರೆ. ಅವರ ಪವಿತ್ರತೆಯಿಂದ ಭಾರತವು ಅಲ್ಪ ಸ್ವಲ್ಪ ಶಮನವಾಗಿದೆ. ಹೇಗೆ ಹಳೆಯ
ಮನೆಯನ್ನು ಗುಡಿಸಿ ಸಾರಿಸಿದಾಗ ಹೊಸದಾಗಿ ಕಾಣಿಸುತ್ತದೆ ಹಾಗೆಯೇ ಸನ್ಯಾಸಿಗಳೂ ಸಹ ಸುಡುತ್ತಿರುವ
ಭಾರತವನ್ನು ಸ್ವಲ್ಪ ತಣ್ಣಗೆ ಮಾಡುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಆ ಧರ್ಮವೇ ಬೇರೆಯಾಗಿದೆ,
ಕೇವಲ ಪವಿತ್ರರಾಗುತ್ತಾರೆ.
ಭಾರತ ಖಂಡದಲ್ಲಿಯೇ ಇಷ್ಟು ದೇವಿ ದೇವತೆಗಳ ಮಂದಿರಗಳಿವೆ, ಭಕ್ತಿ ಇದೆ, ಇದೂ ಸಹ ಆಟವಾಗಿದೆ, ಇದರ
ವೃತ್ತಾಂತವನ್ನು ನೀವು ತಿಳಿಸುತ್ತೀರಿ, ಭಕ್ತಿಮಾರ್ಗಕ್ಕಾಗಿ ಬೇಕಲ್ಲವೆ. ಒಬ್ಬ ಶಿವನಿಗೆ ಎಷ್ಟೊಂದು
ಹೆಸರುಗಳನ್ನಿಟ್ಟಿದ್ದಾರೆ, ಹೆಸರಿನ ಮೇಲೆ ಮಂದಿರವಾಗುತ್ತಾ ಹೋಗಿದೆ. ಅನೇಕಾನೇಕ ಮಂದಿರಗಳಿವೆ,
ಎಷ್ಟು ಖರ್ಚಾಗುತ್ತದೆ ಆದರೆ ಸಿಗುವುದು ಅರ್ಧ ಕಲ್ಪದ ಸುಖ ಮಾತ್ರ. ಎಷ್ಟು ಹಣ ತೊಡಗಿಸುತ್ತಾರೆ,
ಮೂರ್ತಿಗಳು ಒಡೆದು ಹೋಗುತ್ತವೆ, ಅಲ್ಲಂತೂ ಮಂದಿರ ಇತ್ಯಾದಿಗಳ ಅವಶ್ಯಕತೆ ಇರುವುದಿಲ್ಲ. ಇದೂ ಸಹ
ಸ್ಮೃತಿ ಬಂದಿದೆ, ಅರ್ಧ ಕಲ್ಪ ಭಕ್ತಿಯು ನಡೆಯುತ್ತದೆ, ಇನ್ನರ್ಧ ಕಲ್ಪ ಭಕ್ತಿಯ ಹೆಸರೂ
ಇರುವುದಿಲ್ಲ. ತಂದೆಯು ಈ ವಿಭಿನ್ನ ವೃಕ್ಷದ ಸ್ಮೃತಿ ತರಿಸುತ್ತಾರೆ, ಕೇವಲ ಕಲಿಯುಗದ ಆಯಸ್ಸು 40
ಸಾವಿರ ವರ್ಷಗಳಾದರೆ ಕ್ರಿಶ್ಚಿಯನ್ ಮೊದಲಾದವರ ಆಯಸ್ಸು ಬಹಳ ಹೆಚ್ಚಾಗಬೇಕು. ತಂದೆಯು ತಿಳಿಸುತ್ತಾರೆ
- ಕ್ರಿಶ್ಚಿಯನ್ ಧರ್ಮಕ್ಕೆ ಇಷ್ಟೇ ಪರಿಮಿತಿ ಇದೆ. ಇದು ನಿಮಗೆ ಗೊತ್ತಿದೆ, ಕೃಷ್ಣನಿಗೆ ಎಷ್ಟು
ಸಮಯವಾಯಿತು, ಇಂತಹ ಧರ್ಮದವರಿಗೆ ಇಷ್ಟು ಸಮಯವಾಯಿತು, ಧರ್ಮ ಸ್ಥಾಪನೆ ಮಾಡಿದರು ಆದರೆ ಪುನಃ
ಹೋಗುವುದು ಯಾವಾಗ? ಇದು ಗೊತ್ತಿಲ್ಲ. ಕಲ್ಪದ ಆಯುಷ್ಯವನ್ನೇ ಹೆಚ್ಚು ಮಾಡಿ ಬಿಟ್ಟಿದ್ದಾರೆ. ಈಗ
ನಿಮಗೆ ಗೊತ್ತಿದೆ, ವಿನಾಶದ ತಯಾರಿಯಾಗುತ್ತಿದೆ, ಅವರದು ಸೈನ್ಸ್ ನಿಮ್ಮದು ಸೈಲೆನ್ಸ್. ನೀವು ಎಷ್ಟು
ಸೈಲೆನ್ಸನಲ್ಲಿರುತ್ತೀರೋ ಅಷ್ಟು ವಿನಾಶಕ್ಕಾಗಿ ಒಳ್ಳೊಳ್ಳೆಯ ವಸ್ತುಗಳನ್ನು ತಯಾರು ಮಾಡುತ್ತಾರೆ.
ದಿನ ಪ್ರತಿ ದಿನ ಆಧುನಿಕ ವಸ್ತುಗಳನ್ನು ಮಾಡುತ್ತಾರೆ. ನಿಮಗೆ ಖುಷಿಯಾಗುತ್ತದೆ ನಮಗಾಗಿ ತಂದೆ ಹೊಸ
ಪ್ರಪಂಚವನ್ನು ಮಾಡಲು ಬಂದಿದ್ದಾರೆ. ಆಗ ನಾವು ಹಳೆಯ ಪ್ರಪಂಚದಲ್ಲಿರುತ್ತೇವೆಯೇ! ತಂದೆಯದು
ಚಮತ್ಕಾರವಾಗಿದೆ. ಬಾಬಾ, ತಾವು ಸ್ವರ್ಗ ಸ್ಥಾಪನೆ ಮಾಡುವುದೂ ಸಹ ಚಮತ್ಕಾರವಾಗಿದೆ ಎಂದು ನಿಮಗೆ
ಎಲ್ಲವೂ ಈಗ ಸ್ಮೃತಿಗೆ ಬಂದಿದೆ. ಮನುಷ್ಯರು ರಚಯಿತ ಮತ್ತು ರಚನೆಯ ಆದಿ ಮಧ್ಯ ಅಂತ್ಯವನ್ನೇ
ತಿಳಿದುಕೊಂಡಿಲ್ಲ, ನೀವು ತಿಳಿದುಕೊಂಡಿದ್ದೀರಿ. ನೀವು ಎಷ್ಟು ಪ್ರಕಾಶದಲ್ಲಿರುವಿರಿ, ಮನುಷ್ಯರು
ಘೋರ ಅಂಧಕಾರದಲ್ಲಿದ್ದಾರೆ, ಅಂದಾಗ ಅಂತರವಾಯಿತಲ್ಲವೆ. ಜ್ಞಾನ ಅಂಜನವನ್ನು ಸದ್ಗುರು ಕೊಟ್ಟಾಗ
ಅಜ್ಞಾನ ಅಂಧಕಾರ ವಿನಾಶವಾಯಿತು. ಭಕ್ತಿ ಮಾಡುವವರು ಜ್ಞಾನವನ್ನು ತಿಳಿದುಕೊಂಡಿಲ್ಲ. ಈಗ ನೀವು
ಭಕ್ತಿಯನ್ನೂ ತಿಳಿದುಕೊಂಡಿದ್ದೀರಿ, ಜ್ಞಾನವನ್ನೂ ತಿಳಿದುಕೊಂಡಿದ್ದೀರಿ, ಈಗ ಪೂರ್ಣ ಸ್ಮೃತಿಯು
ಬಂದಿದೆ. ಭಕ್ತಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಯಾವಾಗ ಮುಕ್ತಾಯವಾಗುತ್ತದೆ, ತಂದೆಯು ಯಾವಾಗ
ಮುಕ್ತಿ ಕೊಡುತ್ತಾರೆ, ಯಾವಾಗ ಪೂರ್ಣವಾಗುತ್ತದೆ ಎನ್ನುವುದು ಸ್ಮೃತಿಗೆ ಬಂದಿದೆ. ನಂಬರ್ವಾರ್
ಇದ್ದೇ ಇದೆ. ಕೆಲವರಿಗೆ ಬಹಳ ಸ್ಮೃತಿಯು ಬಂದಿದೆ ಕೆಲವರಿಗೆ ಕಡಿಮೆ. ಯಾರಿಗೆ ಬಹಳ ಸ್ಮೃತಿ
ಇರುತ್ತದೆ ಅವರು ಉತ್ತಮ ಪದವಿಯನ್ನು ಪಡೆಯುತ್ತಾರೆ. ಸ್ಮೃತಿ ಇದ್ದಾಗ ಅದನ್ನು ಅನ್ಯರಿಗೆ
ತಿಳಿಸುತ್ತಾರೆ - ವಿಚಿತ್ರವಾದ ಸ್ಮೃತಿಯಾಗಿದೆಯಲ್ಲವೆ. ಮೊದಲು ನಿಮ್ಮ ಬುದ್ಧಿಯಲ್ಲಿ ಏನಿತ್ತು,
ಭಕ್ತಿ, ಜಪ, ತಪ, ತೀರ್ಥ ಯಾತ್ರೆ ಮಾಡುವುದು, ತಲೆ ಬಾಗುವುದು - ಹೀಗೆ ಮಾಡುತ್ತಾ ಹಣೆಯೇ ಸವೆದು
ಹೋಯಿತು. ಭಕ್ತಿಯ ಸ್ಮೃತಿ ಮತ್ತು ಜ್ಞಾನದಲ್ಲಿ ಎಷ್ಟು ಅಂತರವಿದೆ. ನೀವೀಗ ಭಕ್ತಿಯನ್ನೂ
ತಿಳಿದುಕೊಂಡಿದ್ದೀರಿ ಏಕೆಂದರೆ ಪ್ರಾರಂಭದಿಂದ ಭಕ್ತಿ ಮಾಡಿದ್ದೀರಿ. ನಿಮಗೆ ಗೊತ್ತಿದೆ ನಾವೇ
ಮೊಟ್ಟ ಮೊದಲು ಶಿವನ ಭಕ್ತಿಯನ್ನು ಮಾಡಿದೆವು ನಂತರ ದೇವತೆಗಳ ಭಕ್ತಿ ಮಾಡಿದೆವು. ಬೇರೆ ಯಾರಿಗೂ ಈ
ಸ್ಮೃತಿ ಇಲ್ಲ. ನಿಮಗೆ ರಚನೆಯ ಆದಿ - ಮಧ್ಯ - ಅಂತ್ಯದ, ಭಕ್ತಿ ಮೊದಲಾದುವುದರ ಸ್ಮೃತಿಯಿದೆ. ಅರ್ಧ
ಕಲ್ಪ ಭಕ್ತಿ ಮಾಡುತ್ತಾ ಬೀಳುತ್ತಲೇ ಬಂದೆವು.
ಈಗ ದುಃಖದ ಪರ್ವತಗಳು ಬೀಳುವುದಿದೆ, ನೀವು ಮಕ್ಕಳು ಪುರುಷಾರ್ಥ ಮಾಡಬೇಕಾಗಿದೆ. ಇವು
ಬೀಳುವುದಕ್ಕಿಂತ ಮೊದಲು ನಾವು ನೆನಪಿನ ಯಾತ್ರೆಯಿಂದ ವಿಕರ್ಮ ವಿನಾಶ ಮಾಡಿಕೊಳ್ಳಬೇಕು. ಎಲ್ಲರಿಗೆ
ನೀವು ಇದನ್ನೇ ತಿಳಿಸುತ್ತೀರಿ. ನಿಮ್ಮ ಬಳಿ ಸಾವಿರಾರು ಮಂದಿ ಬರುತ್ತಾರೆ. ನೀವು ಸಹೋದರ
ಸಹೋದರಿಯರಿಗೆ ಮಾರ್ಗವನ್ನು ತಿಳಿಸುವ ಪರಿಶ್ರಮ ಪಡುತ್ತೀರಿ. ಈಗ ಜ್ಞಾನ ಮತ್ತು ಭಕ್ತಿಯ ಸ್ಮೃತಿಯು
ಬಂದಿದೆ ಅಂದರೆ ನೀವು ಪೂರ್ಣ ನಾಟಕವನ್ನು ನಂಬರವಾರ್ ಪುರುಷಾರ್ಥದ ಅನುಸಾರ ಅರಿತುಕೊಂಡಿದ್ದೀರಿ.
ಯಾರೆಷ್ಟು ಚೆನ್ನಾಗಿ ತಿಳಿದುಕೊಳ್ಳುವರೋ ಅವರು ಬೇರೆಯವರಿಗೆ ತಿಳಿಸುವರೂ ಕೂಡ. ಮಕ್ಕಳೇ
ತಿಳಿಸಿಕೊಡಬೇಕಾಗಿದೆ. ಗಾಯನವೂ ಇದೆಯಲ್ಲವೆ - ಮಕ್ಕಳಿಂದ ತಂದೆಯ ಪ್ರಸಿದ್ಧಿ ಆಗುತ್ತದೆ. ತಂದೆಯು
ಮಕ್ಕಳಿಗೆ ತಿಳಿಸುತ್ತಾರೆ, ನಂತರ ಮಕ್ಕಳು ತಮ್ಮ ಸಹೋದರ ಸಹೋದರಿಯರಿಗೆ ತಿಳಿಸುತ್ತೀರಿ. ಆತ್ಮರಿಗೆ
ತಿಳಿಸುತ್ತೀರಿ ಅಲ್ಲವೆ. ಭಕ್ತಿಗಿಂತ ಈ ಜ್ಞಾನವು ಸಂಪೂರ್ಣ ಭಿನ್ನವಾಗಿದೆ. ಒಬ್ಬ ಭಗವಂತನು ಬಂದು
ಎಲ್ಲ ಭಕ್ತರಿಗೆ ಫಲವನ್ನು ಕೊಡುತ್ತಾರೆಂದು ಗಾಯನವೂ ಇದೆಯಲ್ಲವೆ. ಎಲ್ಲರೂ ಒಬ್ಬ ತಂದೆಯ
ಮಕ್ಕಳಾಗಿದ್ದೀರಿ ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಎಲ್ಲಾ ಮಕ್ಕಳನ್ನು ಶಾಂತಿಧಾಮ,
ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ. ಈ ಕಲ್ಪ ಕಲ್ಪದ ಜ್ಞಾನವು ನಿಮಗೆ ಈಗ ಇರುತ್ತದೆ,
ಸತ್ಯಯುಗದಲ್ಲಿ ಇರುವುದೇ ಇಲ್ಲ. ನೀವು ಪತಿತರಾಗುತ್ತೀರೆಂದರೆ ಪಾವನರನ್ನಾಗಿ ಮಾಡಲು ತಂದೆಯು
ನಿಮಗಾಗಿ ಎಷ್ಟೊಂದು ಶ್ರಮ ಪಡುತ್ತಾರೆ. ಆದ್ದರಿಂದ ಗಾಯನವಿದೆ - ಅರ್ಪಣೆಯಾಗುವೆನು ಎಂದು....
ಯಾರಿಗೆ? ತಂದೆಗೆ ಅರ್ಪಣೆಯಾಗಬೇಕು. ಇವರು(ಬ್ರಹ್ಮಾ) ಹೇಗೆ ಅರ್ಪಣೆಯಾದರು ಎಂದು ತಂದೆಯು ಉದಾಹರಣೆ
ಕೊಡುತ್ತಾರೆ. ಅಂದಮೇಲೆ ಇವರನ್ನು ಅನುಸರಿಸಿರಿ. ಇವರೇ ಪುನಃ ಲಕ್ಷ್ಮೀ ನಾರಾಯಣರಾಗುತ್ತಾರೆ. ಇಷ್ಟು
ಶ್ರೇಷ್ಠ ಪದವಿ ಪಡೆಯಬೇಕೆಂದರೆ ಈ ರೀತಿ ಅರ್ಪಣೆಯಾಗಬೇಕು. ಸಾಹುಕಾರರೆಂದೂ ಅರ್ಪಣೆಯಾಗುವುದಿಲ್ಲ.
ಇಲ್ಲಿಯಂತೂ ಅರ್ಪಣೆಯಾಗಬೇಕಾಗುತ್ತದೆ ಅಂದಮೇಲೆ ಸಾಹುಕಾರರಿಗೆ ಅವಶ್ಯವಾಗಿ ಸ್ಮೃತಿಗೆ ಬರುತ್ತದೆ.
ಆದ್ದರಿಂದಲೇ ಅಂತ್ಯಕಾಲದಲ್ಲಿ ಯಾರು ಸ್ತ್ರೀಯನ್ನು ಸ್ಮರಣೆ ಮಾಡುತ್ತಾರೆ.... ಎನ್ನುವ
ಗಾಯನವಿದೆಯಲ್ಲವೆ. ಇಷ್ಟು ಹಣವನ್ನು ಏನು ಮಾಡುತ್ತಾರೆ! ಯಾರೂ ತೆಗೆದುಕೊಳ್ಳುವವರೇ ಇರುವುದಿಲ್ಲ.
ಏಕೆಂದರೆ ಎಲ್ಲವೂ ಸಮಾಪ್ತಿ ಆಗುವುದಿದೆ. ನಾನೂ ಸಹ ತೆಗೆದುಕೊಂಡು ಏನು ಮಾಡಲಿ. ಶರೀರ ಸಹಿತವಾಗಿ
ಎಲ್ಲವೂ ಸಮಾಪ್ತಿಯಾಗಲಿದೆ. ತಾವು ಸತ್ತರೆ ತಮ್ಮ ಪಾಲಿಗೆ ಜಗತ್ತು ಸತ್ತಂತೆ. ಈ ಹಣ ಅಂತಸ್ತು ಏನೂ
ಇರುವುದಿಲ್ಲ. ಬಾಕಿ ಗರುಡ ಪುರಾಣದಲ್ಲಿ ಪಾಪ ಮಾಡದಿರಲು ಭಯಾನಕ ಮಾತುಗಳನ್ನು ಬರೆದಿದ್ದಾರೆ.
ತಂದೆಯು ತಿಳಿಸುತ್ತಾರೆ - ಈ ಶಾಸ್ತ್ರಗಳು ಭಕ್ತಿಮಾರ್ಗದ್ದಗಿದೆ, ರಾವಣ ರಾಜ್ಯವಿರುವಾಗ ಅರ್ಧ
ಕಲ್ಪ ಭಕ್ತಿಮಾರ್ಗವು ನಡೆಯುತ್ತದೆ. ರಾವಣನನ್ನು ಯಾವಾಗಿನಿಂದ ಸುಡುತ್ತೀರೆಂದು ಯಾರನ್ನಾದರೂ ಕೇಳಿ,
ಆಗ ಅವರು ಪರಂಪರೆಯಿಂದ ಎಂದು ಹೇಳುತ್ತಾರೆ. ಅರೆ! ಪರಂಪರೆಯಿಂದಂತೂ ರಾವಣನಿರುವುದಿಲ್ಲ,
ತಿಳಿಯದಿರುವ ಕಾರಣ ಪರಂಪರೆಯಿಂದ ಎಂದು ಹೇಳುತ್ತಾರೆ. ರಾವಣ ರಾಜ್ಯ ಯಾವಾಗಿನಿಂದ
ಪ್ರಾರಂಭವಾಗುತ್ತದೆಯೆಂದು ಈಗ ನೀವು ಮಕ್ಕಳಿಗೆ ಸ್ಮೃತಿ ಬಂದಿದೆ. ರಚಯಿತ ಮತ್ತು ರಚನೆಯ
ರಹಸ್ಯವನ್ನೂ ನೀವು ತಿಳಿದುಕೊಂಡಿರುವಿರಿ. ಈಗ ತಂದೆಯು ತಿಳೀಸುತ್ತಾರೆ - ಮಕ್ಕಳೇ ನನ್ನೊಬ್ಬನನ್ನು
ನೆನಪು ಮಾಡಿ, ಆಗ ಪಾಪಗಳು ಭಸ್ಮವಾಗುತ್ತವೆ. ಈಗ ಪರಸ್ಪರ ಇದೇ ಎಚ್ಚರಿಕೆಯನ್ನು ಕೊಡುತ್ತಿರಿ.
ಜೊತೆಯಲ್ಲಿ ತಿರುಗಾಡಾಲು ಓಡಾಡಲು ಹೋದಾಗ ಸಹ ಇದೇ ಮಾತುಗಳನ್ನಾಡಿರಿ. ನಿಮ್ಮ ಗುಂಪೆಲ್ಲವೂ ಈ
ನೆನಪಿನಲ್ಲಿದ್ದು ಓಡಾಡಿದರೆ ನಿಮ್ಮ ಶಾಂತಿಯ ಪ್ರಭಾವವು ಬಹಳ ಆಗುತ್ತದೆ. ಪಾದ್ರಿಗಳೂ ಸಹ ಬಹಳ
ಶಾಂತಿಯಲಿದ್ದು ಕ್ರಿಸ್ತನ ನೆನಪಿನಲ್ಲಿ ಹೋಗುತ್ತಾರೆ, ಯಾರ ಕಡೆಯೂ ನೋಡುವುದಿಲ್ಲ. ನೀವಂತೂ ಹೆಚ್ಚು
ನೆನಪಿನಲ್ಲಿರಬಹುದು ಏಕೆಂದರೆ ಜಂಜಾಟವಿಲ್ಲ, ಬಹಳ ಒಳ್ಳೆಯ ವಾಯುಮಂಡಲವಿದೆ, ಹೊರಗಡೆ ಬಹಳ ಛೀ ಛೀ
ವಾಯುಮಂಡಲವಿದೆ. ಆದ್ದರಿಂದ ಸನ್ಯಾಸಿಗಳ ಆಶ್ರಮವೂ ಸಹ ಬಹಳ ದೂರ ದೂರವಿರುತ್ತದೆ. ನಿಮ್ಮದಂತೂ
ಬೇಹದ್ದಿನ ಸನ್ಯಾಸವಾಗಿದೆ. ಹಳೆಯ ಪ್ರಪಂಚವು ಇನ್ನೇನು ಹೋಯಿತು. ಇದು ಸ್ಮಶಾನವಾಗಿದೆ, ಇದೇ ಪುನಃ
ಸ್ವರ್ಗವಾಗುತ್ತದೆ, ಅಲ್ಲಿ ವಜ್ರ ರತ್ನಗಳ ಮಹಲುಗಳಿರುತ್ತವೆ. ಈ ಲಕ್ಷ್ಮೀ ನಾರಾಯಣರು ಸ್ವರ್ಗದ
ಮಾಲೀಕರಾಗಿದ್ದರಲ್ಲವೆ. ಈಗಿಲ್ಲ. ನಾನು ಕಲ್ಪ ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆಂದು
ತಂದೆಯು ತಿಳಿಸುತ್ತಾರೆ. ಈ ಸೃಷ್ಟಿ ಚಕ್ರವು ಪುನರಾವರ್ತನೆಯಾಗುತ್ತದೆ. ಈಗ ತಂದೆಯು ಸ್ಮೃತಿ
ತರಿಸಿದ್ದರಿಂದ ನಿಮಗೆ ಎಲ್ಲಾ ಸ್ಮೃತಿ ಬಂದಿದೆ. ಮೊದಲು ಬುದ್ಧಿಯಲ್ಲಿ ಏನೂ ಇರಲಿಲ್ಲ. ಯಾವಾಗ ಈ
ಸ್ಮೃತಿಯ ನಶೆಯಲ್ಲಿರುತ್ತೀರೋ ಆಗ ಅನ್ಯರಿಗೂ ಆ ಖುಷಿಯಿಂದ ತಿಳಿಸುತ್ತೀರಿ. ಸ್ಮೃತಿಯಲ್ಲಿರುತ್ತಾ
ನೀವು ಗೃಹಸ್ಥವನ್ನು ಸಂಭಾಲನೆ ಮಾಡಬೇಕಾಗಿದೆ. ಒಳ್ಳೆಯದು.
ಸದಾ ಸ್ಮೃತಿಯ ನಶೆಯಲ್ಲಿರುವಂತಹ ಮಧುರಾತಿ ಮಧುರ ಅಗಲಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ
ಬಾಪ್ದಾದಾ ಅವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನಾಟಕದ
ಆದಿ-ಮಧ್ಯ-ಅಂತ್ಯವನ್ನು ಚೆನ್ನಾಗಿ ತಿಳಿದು, ಸ್ಮೃತಿಯಲ್ಲಿಟ್ಟುಕೊಂಡು ಅನ್ಯರಿಗೂ ಸ್ಮೃತಿ
ತರಿಸಬೇಕಾಗಿದೆ. ಜ್ಞಾನದ ಅಂಜನವನ್ನು ಕೊಟ್ಟು ಅಜ್ಞಾನ ಅಂಧಕಾರವನ್ನು ದೂರ ಮಾಡಬೇಕಾಗಿದೆ.
2. ಬ್ರಹ್ಮಾ ತಂದೆಯ ಸಮಾನ ಅರ್ಪಣೆ ಆಗುವುದರಲ್ಲಿ ಸಂಪೂರ್ಣ ಅನುಸರಿಸಬೇಕು. ಶರೀರ ಸಹಿತವಾಗಿ
ಎಲ್ಲವೂ ಸಮಾಪ್ತಿ ಆಗಲಿದೆ, ಆದ್ದರಿಂದ ಅದಕ್ಕಿಂತ ಮೊದಲೇ ಬದುಕಿದ್ದು ಸಾಯಬೇಕು. ಅಂದರೆ ಅಂತಿಮ
ಸಮಯದಲ್ಲಿ ಏನೂ ನೆನಪಾಗಬಾರದು.
ವರದಾನ:
ತಮ್ಮ ಸಂಪರ್ಕದ
ಮೂಲಕ ಅನೇಕ ಆತ್ಮರುಗಳ ಚಿಂತೆಯನ್ನು ಅಳಿಸುವಂತಹ ಸರ್ವರಿಗೆ ಪ್ರಿಯ ಭವ.
ವರ್ತಮಾನ ಸಮಯ
ವ್ಯಕ್ತಿಗಳಲ್ಲಿ ಸ್ವಾರ್ಥ ಭಾವವಿರುವ ಕಾರಣ ಮತ್ತು ವೈಭವಗಳಿಂದ ಅಲ್ಪಕಾಲದ ಪ್ರಾಪ್ತಿ ಇರುವ ಕಾರಣ
ಆತ್ಮರು ಯಾವುದಾದರೂ ಒಂದು ಚಿಂತೆಯಿಂದ ವ್ಯಾಕುಲರಾಗಿದ್ದಾರೆ. ತಾವು ಶುಭ ಚಿಂತಕ ಆತ್ಮಗಳ ಸ್ವಲ್ಪ
ಸಮಯದ ಸಂಪರ್ಕವೂ ಸಹ ಆ ಆತ್ಮಗಳ ಚಿಂತೆಗಳನ್ನು ಅಳಿಸಿ ಹಾಕಲು ಆಧಾರವಾಗಿ ಬಿಡುವುದು. ಇಂದು
ವಿಶ್ವಕ್ಕೆ ನಿಮ್ಮಂತಹ ಶುಭ ಚಿಂತಕ ಆತ್ಮಗಳ ಅವಶ್ಯಕತೆಯಿದೆ. ಆದ್ದರಿಂದ ನೀವು ವಿಶ್ವಕ್ಕೆ ಅತೀ
ಪ್ರೀಯರಾಗಿರುವಿರಿ.
ಸ್ಲೋಗನ್:
ತಾವು ವಜ್ರ
ಸಮಾನ ಆತ್ಮರುಗಳ ಮಾತೂ ಸಹ ರತ್ನ ಸಮಾನ ಅಮೂಲ್ಯವಾಗಿರುವುದು.