24.04.19 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ಈ
ನಿಮ್ಮ ಜೀವನವು ದೇವತೆಗಳಿಗಿಂತಲೂ ಉತ್ತಮವಾಗಿದೆ, ಏಕೆಂದರೆ ಈಗ ನೀವು ರಚಯಿತ ಮತ್ತು ರಚನೆಯನ್ನು
ಯಥಾರ್ಥವಾಗಿ ತಿಳಿದುಕೊಂಡು ಆಸ್ತಿಕರಾಗಿದ್ದೀರಿ"
ಪ್ರಶ್ನೆ:
ಸಂಗಮಯುಗೀ
ಈಶ್ವರೀಯ ಪರಿವಾರದ ವಿಶೇಷತೆ ಏನಾಗಿದೆ ಯಾವುದು ಇಡೀ ಕಲ್ಪದಲ್ಲಿಯೇ ಇರುವುದಿಲ್ಲ?
ಉತ್ತರ:
ಈ ಸಮಯದಲ್ಲಿಯೇ
ಈಶ್ವರ ತಂದೆ ಆಗಿ ನೀವು ಮಕ್ಕಳನ್ನು ಪಾಲನೆ ಮಾಡುತ್ತಾರೆ. ಶಿಕ್ಷಕರಾಗಿ ಓದಿಸುತ್ತಾರೆ. ಮತ್ತು
ಸದ್ಗುರುವಾಗಿ ನಿಮ್ಮನ್ನು ಹೂವನ್ನಾಗಿ ಮಾಡಿ ಜೊತೆ ಕರೆದುಕೊಂಡು ಹೋಗುತ್ತಾರೆ. ಸತ್ಯಯುಗದಲ್ಲಿ ಭಲೇ
ದೈವೀ ಪರಿವಾರವಿರುತ್ತದೆ ಆದರೆ ಇಂತಹ ಈಶ್ವರೀಯ ಪರಿವಾರ ಇರುವುದಿಲ್ಲ. ಈಗ ನೀವು ಮಕ್ಕಳು
ಬೇಹದ್ದಿನ ಸನ್ಯಾಸಿಗಳು ಆಗಿದ್ದೀರಿ, ರಾಜಯೋಗಿಗಳೂ ಆಗಿದ್ದೀರಿ. ರಾಜ್ಯಭಾಗ್ಯಕ್ಕಾಗಿ
ಓದುತ್ತಿದ್ದೀರಿ.
ಓಂ ಶಾಂತಿ.
ಇದು ಪಾಠಶಾಲೆಯಾಗಿದೆ, ಯಾರ ಪಾಠಶಾಲೆ? ಆತ್ಮಗಳ ಪಾಠಶಾಲೆ. ಇದಂತೂ ಅವಶ್ಯವಾಗಿದೆ ಆತ್ಮವು
ಶರೀರವಿಲ್ಲದೆ ಏನನ್ನೂ ಕೇಳಲು ಸಾಧ್ಯವಿಲ್ಲ. ಆತ್ಮಗಳ ಪಾಠಶಾಲೆ ಎಂದಮೇಲೆ ಆತ್ಮವು ಶರೀರ ಇಲ್ಲದೆ
ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿದುಕೊಳ್ಳಬೇಕು. ಅಂದಾಗ ಜೀವಾತ್ಮ ಎಂದು ಕರೆಯಲಾಗುತ್ತದೆ.
ಈಗ ಎಲ್ಲವಂತೂ ಜೀವಾತ್ಮಗಳ ಪಾಠಶಾಲೆಗಳಾಗಿದೆ. ಆದ್ದರಿಂದ ಇದಕ್ಕೆ ಆತ್ಮಗಳ ಪಾಠಶಾಲೆ ಎಂದು
ಹೇಳಲಾಗುತ್ತದೆ. ಮತ್ತೆ ಇಲ್ಲಿ ಪರಮಪಿತ ಪರಮಾತ್ಮನೇ ಬಂದು ಓದಿಸುತ್ತಾರೆ, ಅದು ಶಾರೀರಿಕ ವಿದ್ಯೆ
ಆಗುತ್ತದೆ. ಇದು ಆತ್ಮಿಕ ವಿದ್ಯೆಯಾಗಿದೆ. ಇದನ್ನು ಬೇಹದ್ದಿನ ತಂದೆಯು ಬಂದು ಓದಿಸುತ್ತಾರೆ. ಇದು
ಈಶ್ವರೀಯ ವಿಶ್ವವಿದ್ಯಾಲಯವಾಯಿತು, ಭಗವಾನುವಾಚ ಇದೆಯಲ್ಲವೇ. ಇದು ಭಕ್ತಿಮಾರ್ಗವಲ್ಲ,
ವಿದ್ಯೆಯಾಗಿದೆ. ಶಾಲೆಯಲ್ಲಿ ವಿದ್ಯಾಭ್ಯಾಸವಿರುತ್ತದೆ. ಭಕ್ತಿಯು ಗುಡಿ-ಗೋಪುರಗಳಲ್ಲಿ ಇರುತ್ತದೆ.
ಈ ಪಾಠಶಾಲೆಯಲ್ಲಿ ಯಾರು ಓದಿಸುತ್ತಾರೆ? ಭಗವಾನುವಾಚ. ಮತ್ತ್ಯಾವುದೇ ಪಾಠಶಾಲೆಯಲ್ಲಿ ಭಗವಾನುವಾಚ
ಇರುವುದೇ ಇಲ್ಲ. ಕೇವಲ ಇದೊಂದೇ ಸ್ಥಳದಲ್ಲಿ ಭಗವಾನುವಾಚ ಇದೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನಿಗೆ
ಜ್ಞಾನಸಾಗರ ಎಂದು ಹೇಳಲಾಗುತ್ತದೆ, ಅವರೇ ಜ್ಞಾನವನ್ನು ಕೊಡುತ್ತಾರೆ. ಉಳಿದೆಲ್ಲವೂ ಭಕ್ತಿಯಾಗಿದೆ.
ಭಕ್ತಿಗಾಗಿ ಅದರಿಂದ ಯಾರ ಸದ್ಗತಿಯು ಆಗುವುದಿಲ್ಲ ಎಂದು ತಂದೆಯು ತಿಳಿಸಿದ್ದಾರೆ. ಸರ್ವರ
ಸದ್ಗತಿದಾತ ಒಬ್ಬ ಪರಮಾತ್ಮನೇ ಆಗಿದ್ದಾರೆ. ಅವರು ಬಂದು ರಾಜಯೋಗವನ್ನು ಕಲಿಸುತ್ತಾರೆ. ಆತ್ಮವು
ಶರೀರದ ಮೂಲಕ ಕೇಳುತ್ತದೆ, ಮತ್ತ್ಯಾವುದೇ ಜ್ಞಾನ ಮೊದಲಾದವುಗಳಲ್ಲಿ ಭಗವಾನುವಾಚ ಇರುವುದೇ ಇಲ್ಲ.
ಭಾರತದಲ್ಲಿಯೇ ಶಿವ ಜಯಂತಿಯನ್ನು ಆಚರಿಸಲಾಗುತ್ತದೆ. ಭಗವಂತನಂತೂ ನಿರಾಕಾರನಾಗಿದ್ದಾರೆ. ಮತ್ತೆ
ಶಿವಜಯಂತಿಯನ್ನು ಹೇಗೆ ಆಚರಿಸುತ್ತೀರಿ? ಯಾವಾಗ ಅವರು ಶರೀರದಲ್ಲಿ ಪ್ರವೇಶ ಮಾಡುತ್ತಾರೆಯೋ ಆಗ
ಜಯಂತಿ ಆಗುತ್ತದೆ. ನಾನಂತೂ ಎಂದೂ ಗರ್ಭದಲ್ಲಿ ಪ್ರವೇಶ ಮಾಡುವುದಿಲ್ಲ ಎಂದು ತಂದೆಯು ತಿಳಿಸುತ್ತಾರೆ.
ನೀವೆಲ್ಲರೂ ಗರ್ಭದಲ್ಲಿ ಪ್ರವೇಶ ಮಾಡುತ್ತೀರಿ, 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ,
ಎಲ್ಲದಕ್ಕಿಂತ ಹೆಚ್ಚಿನ ಜನ್ಮಗಳನ್ನು ಈ ಲಕ್ಷ್ಮೀ-ನಾರಾಯಣರು ತೆಗೆದುಕೊಳ್ಳುತ್ತಾರೆ. 84
ಜನ್ಮಗಳನ್ನು ತೆಗೆದುಕೊಂಡ ನಂತರ ಶ್ಯಾಮ, ಹಳ್ಳಿಯ ಬಾಲಕನಾಗುತ್ತಾರೆ. ಲಕ್ಷ್ಮೀ-ನಾರಾಯಣ ಎಂದಾದರೂ
ಹೇಳಿ, ರಾಧೆ-ಕೃಷ್ಣ ಎಂದಾದರೂ ಹೇಳಿ. ಬಾಲ್ಯದಲ್ಲಿ ರಾಧೆ-ಕೃಷ್ಣರಾಗಿದ್ದಾರೆ, ಅವರು ಜನ್ಮ
ಪಡೆಯುತ್ತಾರೆ ಎಂದರೆ ಸ್ವರ್ಗದಲ್ಲಿಯೇ ಪಡೆಯುತ್ತಾರೆ ಅದಕ್ಕೆ ವೈಕುಂಠವೆಂದೂ ಹೇಳಲಾಗುತ್ತದೆ.
ಮೊದಲನೆಯ ಜನ್ಮವೂ ಇವರದಾಗಿದೆ. 84 ಜನ್ಮಗಳನ್ನೂ ಅವರೇ ತೆಗೆದುಕೊಳ್ಳುತ್ತಾರೆ. ಶ್ಯಾಮ ಮತ್ತು
ಸುಂದರ, ಸುಂದರನಿಂದ ಮತ್ತೆ ಶ್ಯಾಮ. ಕೃಷ್ಣನು ಎಲ್ಲರಿಗೆ ಪ್ರಿಯನಾಗುತ್ತಾನೆ. ಕೃಷ್ಣನ ಜನ್ಮವಂತೂ
ಹೊಸ ಪ್ರಪಂಚದಲ್ಲಿಯೇ ಆಗುತ್ತದೆ ನಂತರ ಪುನರ್ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ
ಹಳೆಯ ಪ್ರಪಂಚದಲ್ಲಿ ಬಂದು ತಲುಪಿದಾಗ ಶ್ಯಾಮನಾಗಿ ಬಿಡುತ್ತಾನೆ. ಈ ಆಟವೇ ಹೀಗಿದೆ. ಮೊದಲು ಭಾರತವು
ಸತೋಪ್ರಧಾನ, ಸುಂದರವಾಗಿತ್ತು, ಈಗ ಕಪ್ಪಾಗಿ ಬಿಟ್ಟಿದೆ. ತಂದೆಯು ತಿಳಿಸುತ್ತಾರೆ - ಇಷ್ಟೆಲ್ಲಾ
ಆತ್ಮಗಳು ನನ್ನ ಮಕ್ಕಳಾಗಿದ್ದೀರಿ, ಈಗ ಎಲ್ಲರೂ ಕಾಮ ಚಿತೆಯ ಮೇಲೆ ಕುಳಿತು ಸುಟ್ಟು ಕಪ್ಪಾಗಿ
ಬಿಟ್ಟಿದ್ದಾರೆ. ನಾನು ಬಂದು ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತೇನೆ. ಈ ಸೃಷ್ಟಿಚಕ್ರವೇ
ಹೀಗಿದೆ - ಹೂಗಳ ತೋಟವೂ ಮುಳ್ಳುಗಳ ಕಾಡಗಿ ಬಿಟ್ಟಿದೆ. ನೀವು ಮಕ್ಕಳು ಎಷ್ಟು ಸುಂದರ ಸ್ವರ್ಗದ
ಮಾಲೀಕರಾಗಿದ್ದಿರಿ, ಈಗ ಪುನಃ ಆಗುತ್ತಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ಈ
ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು. ಇವರು 84 ಜನ್ಮಗಳನ್ನು ತೆಗೆದುಕೊಂಡು ಮತ್ತೆ ಆ
ರೀತಿ ಆಗಿದ್ದಾರೆ ಅರ್ಥಾತ್ ಅವರ ಆತ್ಮವು ಈಗ ಓದುತ್ತಿದೆ. ಸತ್ಯಯುಗದಲ್ಲಿ ಅಪಾರ ಸುಖವಿರುತ್ತದೆ
ಎಂದು ನಿಮಗೆ ತಿಳಿದಿದೆ. ಅಲ್ಲಿ ತಂದೆಯನ್ನೆಂದೂ ನೆನಪು ಮಾಡುವ ಅವಶ್ಯಕತೆಯೇ ಇರುವುದಿಲ್ಲ.
ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ...... ಎಂದು ಗಾಯನವಿದೆ. ಯಾರ ಸ್ಮರಣೆ ಮಾಡುತ್ತಾರೆ?
ತಂದೆಯ ಸ್ಮರಣೆ ಮಾಡುತ್ತಾರೆ. ಇಷ್ಟೆಲ್ಲರ ಸ್ಮರಣೆ ಮಾಡಬಾರದು. ಭಕ್ತಿಯಲ್ಲಿ ಅನೇಕರ ಸ್ಮರಣೆ
ಮಾಡುತ್ತಾರೆ, ಅವರಿಗೇನೂ ತಿಳಿದಿಲ್ಲ, ಕೃಷ್ಣನು ಯಾವಾಗ ಬಂದನು, ಕೃಷ್ಣ ಯಾರೆಂಬುದೂ ಸಹ
ಗೊತ್ತಿಲ್ಲ. ಕೃಷ್ಣ ಮತ್ತು ನಾರಾಯಣನ ಭೇದವನ್ನು ತಿಳಿದಿಲ್ಲ. ಶಿವ ತಂದೆಯು ಶ್ರೇಷ್ಠಾತಿ
ಶ್ರೇಷ್ಠರಾಗಿದ್ದಾರೆ ಮತ್ತು ಅವರ ಕೆಳಗೆ ಬ್ರಹ್ಮಾ-ವಿಷ್ಣು-ಶಂಕರ... ಅವರನ್ನು ದೇವತೆಗಳೆಂದು
ಹೇಳಲಾಗುತ್ತದೆ. ಮನುಷ್ಯರಂತೂ ಎಲ್ಲರನ್ನು ಭಗವಂತನೆಂದು ಹೇಳುತ್ತಿರುತ್ತಾರೆ ಇಲ್ಲವೆಂದರೆ
ಸರ್ವವ್ಯಾಪಿ ಎಂದು ಹೇಳಲಾಗುತ್ತದೆ. ಇಲ್ಲವೆಂದರೆ ಸರ್ವವ್ಯಾಪಿ ಎಂದು ಹೇಳುತ್ತಾರೆ. ಅದಕ್ಕೆ
ಮಾಯೆಯ ಪಂಚ ವಿಕಾರಗಳು ಸರ್ವವ್ಯಾಪಿ ಆಗಿವೆ ಎಂದು ತಂದೆಯು ತಿಳಿಸುತ್ತಾರೆ. ಇವು
ಪ್ರತಿಯೊಬ್ಬರಲ್ಲಿಯೂ ಇವೆ. ಸತ್ಯಯುಗದಲ್ಲಿ ಯಾವುದೇ ವಿಕಾರವಿರುವುದಿಲ್ಲ, ಮುಕ್ತಿಧಾಮದಲ್ಲಿಯೂ ಸಹ
ಆತ್ಮಗಳು ಪವಿತ್ರರಾಗಿರುತ್ತಾರೆ, ಅಪವಿತ್ರತೆಯ ಯಾವುದೇ ಮಾತಿರುವುದಿಲ್ಲ ಅಂದಮೇಲೆ ಇದನ್ನು ರಚಯಿತ
ತಂದೆಯೇ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ, ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ.
ಇದರಿಂದ ನೀವು ಆಸ್ತಿಕರಾಗುತ್ತೀರಿ. ನೀವು ಒಂದೇ ಬಾರಿ ಆಸ್ತಿಕರಾಗುತ್ತೀರಿ, ನಿಮ್ಮ ಈ ಜೀವನವು
ದೇವತೆಗಳಿಗಿಂತಲೂ ಉತ್ತಮವಾಗಿದೆ. ಮನುಷ್ಯ ಜೀವನವು ದುರ್ಲಭವೆಂದು ಗಾಯನ ಮಾಡುತ್ತಾರೆ. ಅಂದರೆ
ಯಾವಾಗ ಪುರುಷೊತ್ತಮ ಸಂಗಮಯುಗವು ಬರುತ್ತದೆಯೋ ಆಗ ಜೀವನವು ವಜ್ರ ಸಮಾನವಾಗುತ್ತದೆ.
ಲಕ್ಷ್ಮೀ-ನಾರಾಯಣರನ್ನು ವಜ್ರ ಸಮಾನರೆಂದು ಹೇಳುವುದಿಲ್ಲ. ನಿಮ್ಮದು ವಜ್ರ ಸಮಾನ ಜನ್ಮವಾಗಿದೆ.
ನೀವು ಈಶ್ವರೀಯ ಸಂತಾನರಾಗಿದ್ದೀರಿ. ದೇವತೆಗಳು ದೈವೀ ಸಂತಾನರಾಗಿದ್ದಾರೆ. ಇಲ್ಲಿ ನೀವು
ಹೇಳುತ್ತೀರಿ, ನಾವು ಈಶ್ವರೀಯ ಸಂತಾನರಾಗಿದ್ದೇವೆ, ಈಶ್ವರ ನಮ್ಮ ತಂದೆಯಾಗಿದ್ದಾರೆ ಅವರು ನಮಗೆ
ಓದಿಸುತ್ತಾರೆ ಏಕೆಂದರೆ ಜ್ಞಾನಸಾಗರನಾಗಿದ್ದಾರಲ್ಲವೆ. ಅವರೇ ರಾಜಯೋಗವನ್ನು ಕಲಿಸುತ್ತಾರೆ. ಈ
ಜ್ಞಾನವು ಪುರುಷೋತ್ತಮ ಸಂಗಮಯುಗದಲ್ಲಿ ಇದೊಂದೇ ಬಾರಿ ಸಿಗುತ್ತದೆ. ಇದು ಸರ್ವೊತ್ತಮ ಪುರುಷರಾಗುವ
ಯುಗವಾಗಿದೆ. ಇದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ಎಲ್ಲರೂ ಕುಂಭಕರ್ಣನ ಅಂಧಕಾರದ ನಿದ್ರೆಯಲ್ಲಿ
ಮಲಗಿ ಬಿಟ್ಟಿದ್ದಾರೆ. ವಿನಾಶವೂ ಸನ್ಮುಖದಲ್ಲಿ ನಿಂತಿದೆ ಆದ್ದರಿಂದ ಈಗ ಮಕ್ಕಳು ಯಾರೊಂದಿಗೂ
ಸಂಬಂಧವನ್ನು ಇಟ್ಟುಕೊಳ್ಳಬಾರದು. ಅಂತ್ಯದಲ್ಲಿ ಯಾರು ಸ್ತ್ರೀಯನ್ನು ಸ್ಮರಣೆ ಮಾಡಿದರು...........
ಎಂದು ಹೇಳುತ್ತಾರೆ. ಅಂತ್ಯದಲ್ಲಿ ಶಿವತಂದೆಯನ್ನು ಸ್ಮರಣೆ ಮಾಡಿದರೆ ಶ್ರೀ-ನಾರಾಯಣನ ಸಂಬಂಧದಲ್ಲಿ
ಬರುತ್ತೀರಿ. ಈ ಏಣಿಯು ಬಹಳ ಚೆನ್ನಾಗಿದೆ. ನಾವೇ ದೇವತೆಗಳು, ನಾವೇ ಕ್ಷತ್ರಿಯರು.... ಎಂದು
ಬರೆಯಲ್ಪಟ್ಟಿದೆ, ಈ ಸಮಯವು ರಾವಣ ರಾಜ್ಯವಾಗಿದೆ. ಈಗ ತಮ್ಮ ಆದಿ ಸನಾತನ ದೇವಿ-ದೇವತಾ ಧರ್ಮವನ್ನು
ಮರೆತು ಅನ್ಯ ಧರ್ಮಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ಪೂರ್ಣ ಪ್ರಪಂಚವೇ ಲಂಕೆಯಾಗಿದೆ. ಬಾಕಿ
ಯಾವುದೇ ಚಿನ್ನದ ಲಂಕೆ ಇರಲಿಲ್ಲ. ನೀವು ತಮಗಿಂತಲೂ ಸಹ ಹೆಚ್ಚಿನದಾಗಿ ನನ್ನ ನಿಂದನೆ ಮಾಡಿದಿರಿ
ಎಂದು ತಂದೆಯು ತಿಳಿಸುತ್ತಾರೆ. ನಿಮಗಾಗಿ 84 ಲಕ್ಷ ಜನ್ಮಗಳು ಮತ್ತು ನನ್ನನ್ನು ಕಣ-ಕಣದಲ್ಲಿ
ಇದ್ದಾರೆಂದು ಹೇಳಿ ಬಿಟ್ಟಿರಿ. ಇಂತಹ ಅಪಕಾರಿಗಳಿಗೂ ಸಹ ನಾನು ಉಪಕಾರ ಮಾಡುತ್ತೇನೆ. ತಂದೆ
ಹೇಳುತ್ತಾರೆ ನಿಮ್ಮದೇನೂ ದೋಷವಿಲ್ಲ. ಇದು ನಾಟಕವಾಗಿದೆ. ಸತ್ಯಯುಗದ ಆದಿಯಿಂದ ಹಿಡಿದು ಕಲಿಯುದ
ಅಂತ್ಯದವರೆಗೆ ಆಟವಾಗಿದೆ. ಇದು ಸುತ್ತಲೇಬೇಕಾಗಿದೆ. ಇದನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು
ಸಾಧ್ಯವಿಲ್ಲ. ನೀವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ನೀವು ಬ್ರಾಹ್ಮಣರು ಈಶ್ವರೀಯ
ಸಂತಾನರಾಗಿದ್ದೀರಿ. ನೀವು ಈಶ್ವರೀಯ ಪರಿವಾರದಲ್ಲಿ ಕುಳಿತಿದ್ದೀರಿ, ಸತ್ಯಯುಗದಲ್ಲಿ ದೈವೀ
ಪರಿವಾರವಿರುತ್ತದೆ. ಈ ಈಶ್ವರೀಯ ಪರಿವಾರದಲ್ಲಿ ತಂದೆಯು ನಿಮ್ಮನ್ನು ಪಾಲನೆಯೂ ಮಾಡುತ್ತಾರೆ,
ಓದಿಸುತ್ತಾರೆ ಮತ್ತು ಹೂಗಳನ್ನಾಗಿ ಮಾಡಿ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ನೀವು ಮನುಷ್ಯರಿಂದ
ದೇವತೆಗಳಾಗಲು ಓದುತ್ತೀರಿ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು.... ಎಂದು ಗ್ರಂಥದಲ್ಲಿಯೂ ಇದೆ
ಆದ್ದರಿಂದ ಪರಮಾತ್ಮನನ್ನು ಜಾದೂಗಾರನೆಂದೂ ಹೇಳಲಾಗುತ್ತದೆ. ನರಕವನ್ನು ಸ್ವರ್ಗವನ್ನಾಗಿ ಮಾಡುವುದು
ಜಾದುವಿನ ಆಟವಾಗಿದೆಯಲ್ಲವೇ. ಸ್ವರ್ಗದಿಂದ ನರಕ ಆಗುವುದರಲ್ಲಿ 84 ಜನ್ಮ ಮತ್ತು ನರಕದಿಂದ ಸ್ವರ್ಗ
ಒಂದು ಸೆಕೆಂಡಿನಲ್ಲಿ ಆಗುತ್ತದೆ. ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುತ್ತದೆ.
ನಾನಾತ್ಮನಾಗಿದ್ದೇನೆ, ಆತ್ಮನನ್ನೂ ಅರಿತುಕೊಂಡಿರಿ, ಪರಮಾತ್ಮನನ್ನೂ ಅರಿತುಕೊಂಡಿರಿ. ಆತ್ಮ ಅಂದರೆ
ಏನು ಎನ್ನುವುದು ಮತ್ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ. ಗುರುಗಳು ಅನೇಕರಿದ್ದಾರೆ, ಸದ್ಗುರು
ಒಬ್ಬರೇ ಆಗಿದ್ದಾರೆ. ಸದ್ಗುರು ಅಕಾಲ್ ಎಂದು ಹೇಳುತ್ತಾರೆ. ಪರಮಪಿತ ಪರಮಾತ್ಮ ಒಬ್ಬರೇ ಸದ್ಗುರು
ಆಗಿದ್ದಾರೆ ಆದರೆ ಗುರುಗಳು ಅನೇಕರಿದ್ದಾರೆ, ಯಾರೂ ನಿರ್ವಿಕಾರಿಗಳಿಲ್ಲ. ಎಲ್ಲರೂ ವಿಕಾರದಿಂದಲೇ
ಜನ್ಮ ಪಡೆಯುತ್ತಾರೆ. ಈ ರಾಜಧಾನಿಯು ಸ್ಥಾಪನೆ ಆಗುತ್ತಿದೆ, ನೀವು ಎಲ್ಲರೂ ಇಲ್ಲಿ
ರಾಜ್ಯಭಾಗ್ಯಕ್ಕಾಗಿ ಓದುತ್ತೀರಿ. ರಾಜಯೋಗಿಗಳಾಗಿದ್ದೀರಿ, ಬೇಹದ್ದಿನ ಸನ್ಯಾಸಿಗಳಾಗಿದ್ದೀರಿ. ಆ
ಹಠಯೋಗಿಗಳು ಹದ್ದಿನ ಸನ್ಯಾಸಿಗಳಾಗಿದ್ದಾರೆ. ತಂದೆಯು ಬಂದು ಎಲ್ಲರ ಸದ್ಗತಿ ಮಾಡಿ ಸುಖಿಯನ್ನಾಗಿ
ಮಾಡುತ್ತಾರೆ. ನನ್ನನ್ನೇ ಸದ್ಗುರು ಅಕಾಲಮೂರ್ತಿ ಎಂದು ಹೇಳುತ್ತಾರೆ. ಅಲ್ಲಿ ನಾವು ಪದೇ-ಪದೇ
ಶರೀರವನ್ನು ಬಿಡುವುದಾಗಲಿ, ತೆಗೆದುಕೊಳ್ಳುವುದಾಗಲಿ ಇರುವುದಿಲ್ಲ, ಮೃತ್ಯುವು ಕಬಳಿಸುವುದಿಲ್ಲ.
ನಿಮ್ಮ ಆತ್ಮವು ಅವಿನಾಶಿಯಾಗಿದೆ ಆದರೆ ಪತಿತ ಮತ್ತು ಪಾವನವಾಗುತ್ತದೆ ನಿರ್ಲೇಪವಲ್ಲ. ನಾಟಕದ
ರಹಸ್ಯವನ್ನೂ ಸಹ ತಂದೆಯೇ ತಿಳಿಸುತ್ತಾರೆ. ರಚಯಿತನೇ ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು
ತಿಳಿಸುತ್ತಾರಲ್ಲವೇ. ಜ್ಞಾನಸಾಗರ ಆ ತಂದೆ ಒಬ್ಬರೇ ಆಗಿದ್ದಾರೆ. ಅವರೇ ನಿಮ್ಮನ್ನು ಮನುಷ್ಯರಿಂದ
ದೇವತೆಗಳು, ಡಬಲ್ ಕಿರೀಟಧಾರಿಗಳನ್ನಾಗಿ ಮಾಡುತ್ತಾರೆ. ನಿಮ್ಮ ಜನ್ಮವು ಕವಡೆ ಸಮಾನ ಇತ್ತು. ಈಗ
ನೀವು ವಜ್ರ ಸಮಾನರಾಗುತ್ತಿದ್ದೀರಿ. ತಂದೆಯು ಹಮ್ ಸೋ, ಸೋ ಹಮ್ನ ಮಂತ್ರವನ್ನು ತಿಳಿಸಿದ್ದಾರೆ.
ಆತ್ಮವೇ ಪರಮಾತ್ಮ, ಪರಮಾತ್ಮನೇ ಆತ್ಮ, ಹಮ್ ಸೋ, ಸೋ ಹಮ್ ಎಂದು ಹೇಳಿ ಬಿಡುತ್ತಾರೆ. ಆದ್ದರಿಂದ
ತಂದೆಯ ಆತ್ಮವೇ ಪರಮಾತ್ಮನಾಗಲು ಹೇಗೆ ಸಾಧ್ಯ? ಎಂದು ತಿಳಿಸುತ್ತಾರೆ. ಈ ಸಮಯದಲ್ಲಿ
ಬ್ರಾಹ್ಮಣರಾಗಿದ್ದೇವೆ ಮತ್ತೆ ನಾವೇ ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆ, ನಂತರ
ಕ್ಷತ್ರಿಯರಾಗುತ್ತೇವೆ ಎಂದು ತಂದೆಯು ನಿಮಗೆ ತಿಳಿಸುತ್ತಾರೆ. ಕ್ಷತ್ರಿಯರಿಂದ ಶೂದ್ರರು,
ಶೂದ್ರರಿಂದ ಬ್ರಾಹ್ಮಣರಾಗುತ್ತೇವೆ, ನಿಮ್ಮದು ಎಲ್ಲರಿಗಿಂತ ಶ್ರೇಷ್ಠ ಜನ್ಮವಾಗಿದೆ. ಇದು ಈಶ್ವರನ
ಮನೆಯಾಗಿದೆ, ತಾವು ಯಾರ ಬಳಿ ಕುಳಿತಿದ್ದೀರಿ? ಮಾತಾ-ಪಿತರ ಬಳಿ ಕುಳಿತಿದ್ದೇವೆ. ಇಲ್ಲಿ ಎಲ್ಲರೂ
ಸಹೋದರ-ಸಹೋದರಿಯರಾಗಿದ್ದಾರೆ. ತಂದೆಯು ಆತ್ಮಗಳಿಗೆ ಶಿಕ್ಷಣ ಕೊಡುತ್ತಾರೆ, ನೀವೆಲ್ಲರೂ ನನ್ನ
ಮಕ್ಕಳಾಗಿದ್ದೀರಿ, ಆಸ್ತಿಯನ್ನು ಪಡೆಯಲು ಅಧಿಕಾರವಿದೆ. ಪರಮಾತ್ಮ ತಂದೆಯಿಂದ ಪ್ರತಿಯೊಬ್ಬರೂ ಆಸ್ತಿ
ಪಡೆದುಕೊಳ್ಳಬಹುದಾಗಿದೆ, ವೃದ್ಧರು, ದೊಡ್ಡವರು, ಚಿಕ್ಕವರು ಎಲ್ಲರಿಗೂ ತಂದೆಯಿಂದ ಆಸ್ತಿಯನ್ನು
ಪಡೆಯುವ ಹಕ್ಕಿದೆ. ಆದ್ದರಿಂದ ತಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ಪಾಪಗಳು
ಭಸ್ಮವಾಗುತ್ತವೆ ಎಂದು ಮಕ್ಕಳಿಗೂ ತಿಳಿಸಿ. ಭಕ್ತಿಮಾರ್ಗದವರು ಈ ಮಾತುಗಳನ್ನು ಸ್ವಲ್ಪವೂ
ತಿಳಿದುಕೊಳ್ಳುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ರಾತ್ರಿ ಕ್ಲಾಸ್
-
ಮಕ್ಕಳು
ತಂದೆಯನ್ನು ಗುರುತಿಸುತ್ತಾರೆ, ತಿಳಿಯುತ್ತಾರೆ ತಂದೆಯೇ ಓದಿಸುತ್ತಿದ್ದಾರೆ ಎಂದು, ಅವರಿಂದ
ಬೇಹದ್ದಿನ ಆಸ್ತಿ ಸಿಗಬೇಕಿದೆ. ಆದರೆ ಮಾಯೆ ಮರೆಸಿ ಬಿಡುತ್ತದೆ ಇದೇ ಕಷ್ಟ ಆಗಿದೆ. ಏನಾದರೂ ಒಂದು
ವಿಘ್ನವನ್ನು ಹಾಕುತ್ತದೆ ಯಾವುದರಿಂದ ಭಯ ಪಡಲಿ ಎಂದು. ಅದರಲ್ಲೂ ಮೊದಲನೇ ನಂಬರ್ ನ ವಿಕಾರದಲ್ಲಿ
ಬೀಳುತ್ತಾರೆ. ಕಣ್ಣು ಮೋಸ ಮಾಡುತ್ತೆ. ಕಣ್ಣನ್ನು ತೆಗೆದು ಹಾಕುವ ಮಾತಲ್ಲ. ತಂದೆ ಜ್ಞಾನದ ನೇತ್ರ
ಕೊಡುತ್ತಾರೆ, ಜ್ಞಾನ ಮತ್ತು ಅಜ್ಞಾನದ ಯುದ್ಧ ನಡೆಯುತ್ತದೆ. ಜ್ಞಾನ ಆಗಿದೆ ತಂದೆ, ವಿಜ್ಞಾನ ಆಗಿದೆ
ಮಾಯೆ. ಇದರ ಯುದ್ಧ ಬಹಳ ತೀಕ್ಷ್ಣವಾಗಿದೆ. ಬೀಳುತ್ತಿದ್ದರೂ ತಿಳಿವಳಿಕೆಗೆ ಬರುವುದಿಲ್ಲ. ನಂತರ
ತಿಳಿಯುತ್ತಾರೆ ನಾನು ಬಿದ್ದಿದ್ದೇನೆ, ನಾನು ಬಹಳ ನನ್ನ ಅಕಲ್ಯಾಣ ಮಾಡಿಕೊಂಡಿರುವೆನು ಎಂದು. ಮಾಯೆ
ಒಂದು ಬಾರಿ ಸೋಲಿಸಿದರೆ ಮತ್ತೆ ಏರುವುದು ಬಹಳ ಕಷ್ಟವಾಗಿ ಬಿಡುತ್ತೆ. ಬಹಳ ಮಕ್ಕಳು ಹೇಳುತ್ತಾರೆ
ನಾನು ಧ್ಯಾನದಲ್ಲಿ ಹೋಗುತ್ತೇನೆ ಎಂದು, ಆದರೆ ಅದರಲ್ಲಿ ಮಾಯೆ ಪ್ರವೇಶವಾಗಿ ಬಿಡುತ್ತದೆ. ಗೊತ್ತೇ
ಆಗುವುದಿಲ್ಲ. ಮಾಯೆ ಕಳ್ಳತನ ಮಾಡಿಸುತ್ತದೆ, ಸುಳ್ಳನ್ನು ಹೇಳಿಸುತ್ತೆ. ಮಾಯೆ ಏನು ತಾನೇ
ಮಾಡಿಸುವುದಿಲ್ಲ! ಮಾತೇ ಕೇಳಬೇಡಿ. ಕೊಳಕು ಮಾಡಿಸಿ ಬಿಡುತ್ತೆ. ಗುಲ್-ಗಲ್ ಆಗುತ್ತಾ-ಆಗುತ್ತಾ
ನಂತರ ಚೀ! ಚೀ! ಆಗಿ ಬಿಡುತ್ತಾರೆ. ಮಾಯೆ ಇಷ್ಟು ಜಬರ್ ದಸ್ತ್ ಆಗಿದೆ ಯಾವುದು ಘಳಿಗೆ-ಘಳಿಗೆ
ಬೀಳಿಸಿ ಬಿಡುತ್ತೆ. ಮಕ್ಕಳು ಹೇಳುತ್ತಾರೆ ಬಾಬಾ ನಾವು ಘಳಿಗೆ-ಘಳಿಗೆ ಮರೆತು ಹೋಗುತ್ತೇವೆ ಎಂದು.
ಅದೃಷ್ಟ ರೂಪಿಸುವಂತಹವರು ಒಬ್ಬ ತಂದೆ ಆಗಿದ್ದಾರೆ, ಆದರೆ ಅದೃಷ್ಟದಲ್ಲಿ ಇಲ್ಲವೆಂದರೆ
ರೂಪಿಸುವಂತಹವರು ಏನು ಮಾಡಲು ಸಾಧ್ಯವಿಲ್ಲ. ಇದರಲ್ಲಿ ಯಾರೇ ಒಬ್ಬರ ಮೇಲೆ-ಗಮನ ಇಡಲು ಸಾಧ್ಯವಿಲ್ಲಾ.
ಎಕ್ಸ್ಟ್ರಾ ಓದಿಸಲೂ ಆಗುವುದಿಲ್ಲ. ಆ ವಿದ್ಯೆಯಲ್ಲಂತೂ ಎಕ್ಸ್ಟ್ರಾ ಓದಿಸಲು ಟೀಚರ್ ಅನ್ನು
ಕರೆಸುತ್ತಾರೆ. ಇಲ್ಲಿ ಅದೃಷ್ಟ ರೂಪಿಸಲು ಎಲ್ಲರಿಗೂ ಏಕರಸವಾಗಿ ಒಟ್ಟಿಗೇ ಓದಿಸಲಾಗುತ್ತದೆ,
ಒಬ್ಬೊಬ್ಬರಿಗೆ ಬೇರೆ-ಬೇರೆಯಾಗಿ ಎಲ್ಲಿವರೆಗೆ ಓದಿಸಲು ಸಾಧ್ಯ ? ಎಷ್ಟೋಂದು ಮಕ್ಕಳಿದ್ದಾರೆ! ಆ
ವಿದ್ಯೆಯಲ್ಲಿ ಯಾವುದೇ ದೊಡ್ಡ ಮನುಷ್ಯರ ಮಕ್ಕಳಾಗಿದ್ದರೆ, ಎಕ್ಸ್ಟ್ರಾ ಖರ್ಚು ಮಾಡಬಹುದು ಆಗ
ಅವರಿಗೆ ಎಕ್ಸ್ಟ್ರಾ ಕೂಡ ಓದಿಸುತ್ತಾರೆ, ಟೀಚರ್ಗೆ ಗೊತ್ತಿರುತ್ತದೆ ಇವರು ವಿದ್ಯೆಯಲ್ಲಿ ಡಲ್
ಆಗಿದ್ದಾರೆ. ಆದ್ದರಿಂದ ಹೆಚ್ಚು ಓದಿಸಿ ಇವರನ್ನು ಸ್ಕಾಲರ್ ಶಿಪ್ ಪಡೆಯಲು ಲಾಯಕ್ಕಾಗಿ ಮಾಡಿಸಬೇಕು
ಎಂದು. ಇಲ್ಲಿ ತಂದೆ ಹಾಗೆ ಮಾಡಲು ಸಾಧ್ಯವಿಲ್ಲ. ಇಲ್ಲಿ ತಂದೆ ಎಲ್ಲರಿಗೂ ಏಕರಸವಾಗಿ ಓದಿಸುತ್ತಾರೆ.
ಅಲ್ಲಿ ಟೀಚರ್ಸ್ ದು ಎಕ್ಸ್ಟ್ರಾ ಪುರುಷಾರ್ಥ ಮಾಡಿಸಬೇಕಾಗಿದೆ. ಇಲ್ಲಿ ಎಕ್ಸ್ಟ್ರಾ ಪುರುಷಾರ್ಥ
ಯಾರಿಗೂ ಬೇರೆಯಾಗಿ ಮಾಡಿಸುವುದಿಲ್ಲ. ಎಕ್ಸ್ಟ್ರಾ ಪುರುಷಾರ್ಥವೆಂದರೆ ಟೀಚರ್ ಸ್ವಲ್ಪ ಕೃಪೆ
ಮಾಡುತ್ತಾರೆ. ಭಲೇ ಹೀಗೆ ಹಣ ಪಡೆಯುತ್ತಾರೆ. ಖಾಸ್ ಆಗಿ ಸಮಯ ಕೊಟ್ಟು ಓದಿಸುತ್ತಾರೆ ಯಾವುದರಿಂದ
ಹೆಚ್ಚು ಓದಿ ಬುದ್ದಿವಂತರಾಗುತ್ತಾರೆ. ಇಲ್ಲಂತೂ ಹೆಚ್ಚು ಯಾವುದು ಓದುವ ಮಾತೇ ಇಲ್ಲ. ಇವರ ಮಾತು
ಒಂದೇ ಆಗಿದೆ. ಮನ್ಮನಾಭವದ ಒಂದೇ ಮಹಾಮಂತ್ರ ಕೊಡುತ್ತಾರೆ. ನೆನಪಿನಿಂದ ಏನಾಗುತ್ತದೆ, ಇದಂತೂ ನೀವು
ಮಕ್ಕಳು ತಿಳಿದಿರುವಿರಿ. ತಂದೆಯೇ ಪತಿತ-ಪಾವನ ಆಗಿದ್ದಾರೆ. ಅವರನ್ನು ನೆನಪು ಮಾಡುವುದರಿಂದಲೇ ನಾವು
ಪಾವನರಾಗುತ್ತೇವೆ. ಒಳ್ಳೆಯದು. ಗುಡ್ನೈಟ್.
ಧಾರಣೆಗಾಗಿ
ಮುಖ್ಯಸಾರ:
1. ಇಡೀ
ಪ್ರಪಂಚವು ಈಗ ಸ್ಮಶಾನವಾಗಲಿದೆ, ವಿನಾಶವು ಸನ್ಮುಖದಲ್ಲಿ ಇದೆ, ಆದ್ದರಿಂದ ಯಾರೊಂದಿಗೂ ಸಂಬಂಧವನ್ನು
ಇಡಬಾರದು. ಅಂತ್ಯಕಾಲದಲ್ಲಿ ಒಬ್ಬ ತಂದೆಯದೇ ನೆನಪು ಇರಬೇಕು.
2. ಇದು ಶ್ಯಾಮನಿಂದ ಸುಂದರ, ಪತಿತರಿಂದ ಪಾವನರಾಗುವ ಪುರುಷೊತ್ತಮ ಸಂಗಮಯುಗವಾಗಿದೆ. ಇದೇ ಸಮಯವು
ಉತ್ತಮ ಪುರುಷರಾಗುವ ಸಮಯವಾಗಿದೆ, ಸದಾ ಇದೇ ಸ್ಮೃತಿಯಲ್ಲಿ ಇದ್ದು ಸ್ವಯಂ ತನ್ನನ್ನು ಕವಡೆಯಿಂದ
ವಜ್ರ ಸಮಾನ ಮಾಡಿಕೊಳ್ಳಬೇಕು.
ವರದಾನ:
ಯಾರದೇ ವ್ಯರ್ಥ
ಸಮಾಚಾರವನ್ನು ಕೇಳಿ ಅಭಿರುಚಿಯನ್ನು ಹೆಚ್ಚಿಸಿಕೊಳ್ಳುವ ಬದಲು ಫುಲ್ ಸ್ಟಾಪ್ ಹಾಕುವಂತಹ ಪರಮತದಿಂದ
ಮುಕ್ತ ಭವ.
ಕೆಲವು ಮಕ್ಕಳು
ನಡೆಯುತ್ತಾ-ನಡೆಯುತ್ತಾ ಶ್ರೀ ಮತದ ಜೊತೆ ಆತ್ಮಗಳ ಪರಮತ ಮಿಕ್ಸ್ ಮಾಡಿ ಬಿಡುತ್ತಾರೆ. ಯಾವಾಗ
ಯಾವುದೇ ಬ್ರಾಹ್ಮಣ ಸಂಸಾರದ ಸಮಾಚಾರ ಹೇಳುತ್ತಾರೆ ಎಂದರೆ ಅದನ್ನು ಬಹಳ ಅಭಿರುಚಿಯಿಂದ ಕೇಳುತ್ತಾರೆ.
ಏನು ಮಾಡಲು ಸಾಧ್ಯವಿಲ್ಲ ಮತ್ತು ಕೇಳುವಿರೆಂದರೆ ಆ ಸಮಾಚಾರ ಬುದ್ಧಿಯಲ್ಲಿ ಹೋಗಿ ಬಿಡುವುದು, ನಂತರ
ಸಮಯ ವ್ಯರ್ಥವಾಗುವುದು. ಆದ್ದರಿಂದ ತಂದೆಯ ಆಜ್ಞೆಯಾಗಿದೆ ಕೇಳುತ್ತಿದ್ದರೂ ಕೇಳಬೇಡಿ. ಒಂದು ವೇಳೆ
ಯಾರಾದರೂ ಹೇಳಿದರೂ ಸಹಾ ನೀವು ಫುಲ್ಸ್ಟಾಪ್ ಹಾಕಿ ಬಿಡಿ. ಯಾವ ವ್ಯಕ್ತಿಯ ಬಗ್ಗೆ ಕೇಳಿದಿರಿ ಆ
ವ್ಯಕ್ತಿಯ ಪ್ರತಿ ದೃಷ್ಠಿ ಹಾಗೂ ಸಂಕಲ್ಪದಲ್ಲಿ ಸಹಾ ತಿರಸ್ಕಾರ ಭಾವ ಇಲ್ಲದೇ ಇರಲಿ ಆಗ
ಹೇಳಲಾಗುವುದು ಪರಮತದಿಂದ ಮುಕ್ತ.
ಸ್ಲೋಗನ್:
ಯಾರ ಹೃದಯ
ವಿಶಾಲವಾಗಿದೆ ಅವರ ಸ್ವಪ್ನದಲ್ಲಿಯೂ ಸಹ ಹದ್ದಿನ ಸಂಸ್ಕಾರ ಇಮರ್ಜ್ ಆಗಲು ಸಾಧ್ಯವಿಲ್ಲ.