24.07.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯ
ನೆನಪಿನಿಂದ ಬುದ್ಧಿಯು ಸ್ವಚ್ಛವಾಗುತ್ತದೆ. ದೈವಿ ಗುಣಗಳು ಬರುತ್ತವೆ, ಆದ್ದರಿಂದ ಏಕಾಂತದಲ್ಲಿ
ಕುಳಿತು ತಮ್ಮೋಂದಿಗೆ ತಾವು ಕೇಳಿಕೊಳ್ಳಿ - ನನ್ನಲ್ಲಿ ದೈವಿಗುಣಗಳು ಎಷ್ಟು ಬಂದಿವೆ”
ಪ್ರಶ್ನೆ:
ಎಲ್ಲಕ್ಕಿಂತ
ದೋಡ್ದ ಅಸುರಿ ಅವಗುಣ ಯಾವುದಾಗಿದೆ, ಅದು ನೀವು ಮಕ್ಕಳಲ್ಲಿ ಇರಬಾರದು?
ಉತ್ತರ:
ಯಾರೊಂದಿಗೆ ಆಗಲಿ
ಒರಟಾಗಿ ಮಾತನಾಡುವುದು ಹಾಗೂ ಕಟುವಾಗಿ ಮಾತನಾಡುವುದು ಎಲ್ಲಕ್ಕಿಂತ ದೊಡ್ಡ ಅಸುರೀ ಅವಗುಣವಾಗಿದೆ,
ಇದನ್ನೇ ಭೂತವೆಂದು ಹೇಳಲಾಗುತ್ತದೆ. ಯಾರಲ್ಲಾದರೂ ಈ ಭೂತವು ಪ್ರವೇಶ ಮಾಡುತ್ತದೆಯೆಂದರೆ ಬಹಳ ನಷ್ಟ
ಮಾಡುತ್ತದೆ, ಆದ್ದರಿಂದ ಇದರಿಂದ ಬಹಳ ದೂರವಿರಬೇಕು, ಎಷ್ಟು ಸಾಧ್ಯವೋ ಅಷ್ಟು ಅಭ್ಯಾಸ ಮಾಡಿ - ಈಗ
ಮನೆಗೆ ಹೋಗಬೇಕು, ಮತ್ತೆ ಹೊಸ ರಾಜಧಾನಿಯಲ್ಲಿ ಬರಬೇಕಾಗಿದೆ. ಈ ಪ್ರಪಂಚದಲ್ಲಿ ಎಲ್ಲವನ್ನೂ
ನೊಡುತ್ತಿದ್ದರೂ ಸಹ ಏನೂ ಕಾಣಿಸಬಾರದು (ಅರ್ಥಾತ್ ನೊಡಿಯೂ ನೋಡದಂತಿರಬೇಕು.)
ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸಿಕೊಡುತ್ತಾರೆ - ಶರೀರವನ್ನಂತೂ ಬಿಟ್ಟು ಹೋಗಬೇಕಾಗಿದೆ. ಈ
ಪ್ರಪಂಚವನ್ನು ಮರೆತು ಬಿಡಬೇಕಾಗಿದೆ. ಇದೂ ಸಹ ಒಂದು ಅಭ್ಯಾಸವಾಗಿದೆ. ಶರೀರದಲ್ಲಿ ಯಾವುದೇ
ಏರುಪೇರಾಗುತ್ತದೆಯೆಂದರೆ ಶರೀರವನ್ನು ಸಹ ಪ್ರಯತ್ನ ಪಟ್ಟು ಮರೆಯಬೇಕಾಗುತ್ತದೆ. ಮರೆಯುವ ಅಭ್ಯಾಸ
ಮಾಡಲು ಮುಂಜಾನೆಯ ಸಮಯವು ಚೆನ್ನಾಗಿರುತ್ತದೆ. ಸಾಕು, ಈಗ ಹಿಂತಿರುಗಿ ಮನೆಗೆ ಹೋಗಬೇಕಾದೆ, ಈ
ಜ್ಞಾನವಂತೂ ಮಕ್ಕಳಿಗೆ ಸಿಕ್ಕಿದೆ. ಇಡೀ ಪ್ರಪಂಚವನ್ನು ಬಿಟ್ಟು ಮನೆಗೆ ಹೋಗಬೇಕಾಗಿದೆ. ಹೆಚ್ಚಿನ
ಜ್ಞಾನದ ಅವಶ್ಯಕತೆಯಿರುವದಿಲ್ಲ, ಪ್ರಯತ್ನಪಟ್ಟು ಇದೇ ಗುಂಗಿನಲ್ಲಿರಬೇಕಾಗಿದೆ. ಭಲೆ ಶರೀರಕ್ಕೆ
ಎಷ್ಟೇ ತೊದರೆಯಾಗಿರಬಹುದು, ಆಗಲೂ ಸಹ ಹೇಗೆ ಅಭ್ಯಾಸ ಮಾಡಬೇಕೆಂದು ಮಕ್ಕಳಿಗೆ ತಿಳಿಸಲಾಗುತ್ತದೆ.
ಹೇಗೆ ನೀವು ಇಲ್ಲವೇ ಇಲ್ಲ, ಇದೂ ಸಹ ಬಹಳ ಓಳ್ಳೆಯ ಅಭ್ಯಾಸವಾಗಿದೆ. ಇನ್ನು ಸ್ವಲ್ಪವೇ ಸಮಯವಿದೆ,
ಮನೆಗೆ ಹೋಗಬೇಕಾಗಿದೆ. ಇದಕ್ಕೆ ತಂದೆಯ ಸಹಯೋಗವೂ ಇದೆ ಅಥವಾ ಇವರಿಗೆ (ಬ್ರಹ್ಮಾ) ತಮ್ಮ ಸಹಯೋಗವೂ
ಇದೆ. ಸಹಯೋಗವಂತೂ ಸಿಗುತ್ತದೆ. ಆದರೆ ಪುರುಷಾರ್ಥವನ್ನೂ ಮಾಡಬೇಕಾಗಿದೆ. ಏನೆಲ್ಲವೂ ಕಾಣಿಸುತ್ತದೆಯೋ
ಅದು ಇಲ್ಲವೇ ಇಲ್ಲ, ಈಗ ಮನೆಗೆ ಹೋಗಬೇಕಾಗಿದೆ. ಅಲ್ಲಿಂದ ಮತ್ತೆ ರಾಜಧಾನಿಯಲ್ಲಿ ಬರಬೇಕಾಗಿದೆ.
ಅಂತಿಮದಲ್ಲಿ ಹೋಗಬೇಕು ಮತ್ತೆ ಬರಬೇಕು ಎಂಬ ಈ ಎರಡು ಮಾತೇ ಉಳಿಯುತ್ತದೆ. ಇದನ್ನೂ ನೋಡಬಹುದು - ಈ
ನೆನಪಿನಲ್ಲಿರುವದರಿಂದ ಶರೀರದ ರೋಗಗಳು ಯಾವುದು ಕಷ್ಟ ಕೊಡುತ್ತದೆಯೋ ಅವು ಸಹ ತಾವಾಗಿಯೇ ತಣ್ಣಗಾಗಿ
ಬಿಡುತ್ತವೆ. ಆ ಖುಷಿಯು ಉಳಿದು ಬಿಡುತ್ತದೆ, ಖುಷಿಯಂತಹ ಟಾನಿಕ್ ಬೇರೆಯಿಲ್ಲ ಆದ್ದರಿಂದ ಮಕ್ಕಳಿಗೂ
ಸಹ ಇದನ್ನು ತಿಳಿಸಬೇಕಾಗುತ್ತದೆ. ಮಕ್ಕಳೇ ಈಗ ಮನೆಗೆ ಹೋಗಬೇಕಾಗಿದೆ, ಮಧುರ ಮನೆಯಲ್ಲಿ
ಹೋಗಬೇಕಾಗಿದೆ. ಅಂದಮೇಲೆ ಈ ಹಳೆಯ ಪ್ರಪಂಚವನ್ನು ಮರೆತು ಬಿಡಿ. ಇದಕ್ಕೆ ನೆನಪಿನ ಯಾತ್ರೆಯೆಂದು
ಹೇಳಲಾಗುತ್ತದೆ. ಇದು ಮಕ್ಕಳಿಗೆ ಈ ಸಮಯದಲ್ಲಿಯೇ ತಿಳಿಯುತ್ತದೆ. ತಂದೆಯು ಕಲ್ಪ ಕಲ್ಪವೂ ಬರುತ್ತಾರೆ,
ಮತ್ತು ಕಲ್ಪದ ನಂತರ ಮಿಲನ ಮಾಡುತ್ತೇನೆಂದು ತಿಳಿಸುತ್ತಾರೆ. ಮಕ್ಕಳೇ, ಈಗ ನೀವು ಏನನ್ನು ಕೇಳುವಿರೋ
ಕಲ್ಪದ ನಂತರವೂ ಇದನ್ನೇ ಕೇಳುತ್ತೀರಿ. ಇದಂತೂ ಮಕ್ಕಳಿಗೆ ಗೂತ್ತಿದೆ-ನಾನು ಕಲ್ಪ-ಕಲ್ಪವೂ ಬಂದು
ಮಕ್ಕಳಿಗೆ ಜ್ಞಾನವನ್ನು ತಿಳಿಸುತ್ತೇನೆಂದು ತಂದೆಯು ಹೇಳುತ್ತಾರೆ. ಮಾರ್ಗದಂತೆ ನಡೆಯುವುದು ಮಕ್ಕಳ
ಕಾರ್ಯವಾಗಿದೆ. ತಂದೆಯು ಬಂದು ಮಾರ್ಗವನ್ನು ತಿಳಿಸಿ ಜೂತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಕೇವಲ
ಮಾರ್ಗವನ್ನು ತಿಳಿಸುವುದಿಲ್ಲ. ಜೊತೆಯಲ್ಲಿಯೂ ಕರೆದುಕೊಂಡು ಹೋಗುತ್ತಾರೆ. ಇದನ್ನೂ ತಿಳಿಸುತ್ತಾರೆ
- ಈ ಯಾವುದೆಲ್ಲಾ ಚಿತ್ರಗಳಿವೆಯೋ ಇವು ಅಂತಿಮದಲ್ಲಿ ಏನೂ ಕೆಲಸಕ್ಕೆ ಬರುವುದಿಲ್ಲ, ತಂದೆಯು ನಮ್ಮ
ಪರಿಚಯವನ್ನು ಕೊಟ್ಟಿದ್ದಾರೆ, ತಂದೆಯ ಆಸ್ತಿಯು ಬೇಹದ್ದಿನ ರಾಜ್ಯ ಭಾಗ್ಯವಾಗಿದೆ ಎಂಬುದು ಮಕ್ಕಳಿಗೆ
ಗೊತ್ತಾಗಿ ಬಿಟ್ಟಿದೆ. ಯಾರು ನಿನ್ನೆಯ ದಿನ ಮಂದಿರಗಳಿಗೆ ಹೋಗುತ್ತಿದ್ದರೋ, ಈ ಮಕ್ಕಳ (ಲಕ್ಶ್ಮಿ-ನಾರಾಯಣರ)
ಮಹಿಮೆ ಮಾಡುತ್ತಿದ್ದಿರಿ, ಅವರಿಗೂ ತಂದೆಯು ಮಕ್ಕಳೇ, ಮಕ್ಕಳೇ ಎಂದು ಹೇಳುತ್ತಾರಲ್ಲವೇ ಯಾರು ಅವರ
ಶ್ರೇಷ್ಠತೆಯ ಮಹಿಮೆ ಹಾಡುತ್ತಿದ್ದರೋ ಈಗ ಅವರೇ ಶ್ರೇಷ್ಠರಾಗುವ ಪುರುಷಾರ್ಥ ಮಾಡುತ್ತಾರೆ.
ಶಿವತಂದೆಗಾಗಿ ಇದು ಹೊಸ ಮಾತಲ್ಲ, ನೀವು ಮಕ್ಕಳಿಗೆ ಹೊಸ ಮಾತಾಗಿದೆ, ಮಕ್ಕಳು ಯುದ್ಧದ
ಮೈದಾನದಲ್ಲಿದ್ದಿರಿ, ಅಂದಾಗ ಸಂಕಲ್ಪ ವಿಕಲ್ಪಗಳು ತೊಂದರೆ ಕೊಡುತ್ತವೆ, ಈ ಕೆಮ್ಮು ಸಹ ಇವರ (ಬ್ರಹ್ಮಾ)
ಕರ್ಮದ ಲೆಕ್ಕಾಚಾರವಾಗಿದೆ, ಇದನ್ನು ಅನುಭವಿಸಬೇಕಾಗಿದೆ. ಬ್ರಹ್ಮಾ ತಂದೆಯಂತೂ ಖುಶಿಯಲ್ಲಿದ್ದಾರೆ,
ಇವರು ಕರ್ಮಾತೀತರಾಗಬೇಕಾಗಿದೆ, ಶಿವ ತಂದೆಯುಂತೂ ಸದಾ ಕರ್ಮಾತೀತ ಸ್ಥಿತಿಯಲ್ಲಿಯೇ ಇರುತ್ತಾರೆ.
ನಾನು ಮತ್ತು ನೀವು ಮಕ್ಕಳಿಗೆ ಮಾಯೆಯ ಬಿರುಗಾಳಿಗಳು ಕರ್ಮಭೋಗದ ರೂಪದಲ್ಲಿ ಬರುತ್ತವೆ. ಇದನ್ನು
ತಿಳಿಸಬೇಕು, ತಂದೆಯು ಈ ಮಾರ್ಗವನ್ನು ತಿಳಿಸುತ್ತಾರೆ. ಮಕ್ಕಳಿಗೆ ಪ್ರತಿಯೊಂದನ್ನು ತಿಳಿಸುತ್ತಾರೆ.
ಈ ರಥಕ್ಕೆ ಏನಾದರೂ ಆದರೆ ಈ ದಾದಾರವರಿಗೆ ಏನೋ ಆಗಿದೆ ಎಂದು ನಿಮಗೆ ಭಾವನೆ ಬರುತ್ತದೆ, ಶಿವ ತಂದೆಗೆ
ಏನೂ ಆಗುವುದಿಲ್ಲ. ಇವರಿಗೆ (ಬ್ರಹ್ಮಾ) ಆಗುತ್ತದೆ. ಜ್ಞಾನ ಮಾರ್ಗದಲ್ಲಿ ಅಂಧಶ್ರಧ್ದೆಯ
ಮಾತಿರುವುದಿಲ್ಲ. ತಂದೆಯು ತಿಳಿಸಿಕೊಡುತ್ತಾರೆ - ನಾನು ಯಾವ ಶರೀರದಲ್ಲಿ ಬರುತ್ತೇನೆ ನಾನು ಬಹಳ
ಜನ್ಮಗಳ ಅಂತಿಮದ ಪತಿತ ಶರೀರದಲ್ಲಿ ಪ್ರವೇಶ ಮಾಡುತ್ತೇನೆ, ದಾದಾರವರೂ ಸಹ ತಿಳಿದುಕೊಳ್ಳುತ್ತಾರೆ-
ಹೇಗೆ ಮಕ್ಕಳಿದ್ದಾರೆಯೋ ಹಾಗೆಯೇ ನಾನು ಇದ್ದೇನೆ. ದಾದಾರವರು ಇನ್ನೂ ಪುರುಷಾರ್ಥಿಯಾಗಿದ್ದಾರೆ,
ಸಂಪೂರ್ಣರಾಗಿಲ್ಲ. ನೀವೆಲ್ಲರೂ ಪ್ರಜಾಪಿತ ಬ್ರಹ್ಮನ ಮಕ್ಕಳು ಬ್ರಾಹ್ಮಣರು ವಿಷ್ಣು ಪದವಿಯನ್ನು
ಪಡೆಯಲು ಪುರುಷಾರ್ಥ ಮಾಡುತ್ತೀರಿ. ಲಕ್ಶ್ಮಿ-ನಾರಾಯಣರೆಂದಾದರೂ ಹೇಳಿ, ಕೃಷ್ಣನೆಂದಾದರೂ ಹೇಳಿ ಒಂದೇ
ಮಾತಾಗಿದೆ, ತಂದೆಯು ಇದನ್ನು ತಿಳಿಸಿದ್ದಾರೆ - ನಿಮಗೆ ಮೊದಲು ಏನೂ ತಿಳಿದಿರಲಿಲ್ಲ,
ಬ್ರಹ್ಮಾ-ವಿಷ್ಣು-ಶಂಕರರನ್ನಾಗಲಿ, ತಮ್ಮನ್ನು ತಾವಾಗಲೀ ತಿಳಿದುಕೊಂಡಿರಲಿಲ್ಲ. ಈಗಂತೂ ತಂದೆಯನ್ನು
ಮತ್ತು ಬ್ರಹ್ಮಾ-ವಿಷ್ಣು-ಶಂಕರರನ್ನು ನೋಡಿದಾಗ ಈ ಬ್ರಹ್ಮಾರವರು ತಪಸ್ಸು ಮಾಡುತ್ತಾರೆ. ಇದೇ
ಶ್ವೇತ ವಸ್ತ್ರವಾಗಿದೆ ಎಂದು ಬುದ್ಧಿಯಲ್ಲಿ ಬರುತ್ತದೆ, ಕರ್ಮಾತೀತ ಸ್ಥಿತಿಯೂ ಇಲ್ಲಿಯೇ ಅಗುತ್ತದೆ.
ಈ ತಂದೆಯು ಫರಿಶ್ತಾ ಆಗುತ್ತಾರೆಂದು ನಿಮಗೆ ಮುಂಚಿತವಾಗಿಯೇ ಸಾಕ್ಷಾತ್ಕಾರವಾಗುತ್ತದೆ. ನಿಮಗೂ ಸಹ
ತಿಳಿದಿದೆ- ನಾವು ಕರ್ಮಾತೀತ ಸ್ಥಿತಿಯನ್ನು ಹೊಂದಿದ ಮೇಲೆ ನಂಬರ್ವಾರ್ ಫರಿಶ್ತೆಗಳಾಗುತ್ತೇವೆ.
ಯಾವಾಗ ನೀವು ಫರಿಶ್ತೆಗಳಾಗುವಿರೋ ಆಗ ತಿಳಿಯುತ್ತೀರಿ - ಈಗ ಯುಧ್ದವು ಪ್ರಾರಂಭವಾಗುವದು. ಬೆಕ್ಕಿಗೆ
ಚಲ್ಲಾಟ, ಇಲಿಗೆ ಪ್ರಾಣ ಸಂಕಟ... ಇದು ಬಹಳ ಉನ್ನತ ಸ್ಥಿತಿಯಾಗಿದೆ. ಮಕ್ಕಳು ಧಾರಣೆಯನ್ನೂ
ಮಾಡಬೇಕಾಗಿದೆ. ನಾವು ಚಕ್ರವನ್ನು ಸುತ್ತುತ್ತೇವೆಂಬ ನಿಶ್ಚಯವು ಇದೆ, ಮತ್ತ್ಯಾರು ಈ ಮಾತನ್ನು
ಅರಿತುಕೊಳ್ಳುವುದಿಲ್ಲ. ಇದು ಹೊಸ ಜ್ಞಾನವಾಗಿದೆ ಮತ್ತು ಪಾವನರಾಗಲು ನೆನಪನ್ನು ಕಲಿಸುತ್ತಾರೆ.
ತಂದೆಯಿಂದಲೇ ಆಸ್ತಿಯು ಸಿಗುತ್ತದೆ ಎಂಬುದೂ ಸಹ ಮಕ್ಕಳಿಗೆ ಗೊತ್ತಿದೆ. ಕಲ್ಪ-ಕಲ್ಪವು ತಂದೆಯ
ಮಕ್ಕಳಾಗುತ್ತೀರಿ, 84 ಜನ್ಮಗಳ ಚಕ್ರವನ್ನು ಸುತ್ತಿದ್ದೀರಿ. ನೀವು ಆತ್ಮಗಳಾಗಿದ್ದೀರಿ, ಪರಮಪಿತ
ಪರಮಾತ್ಮ ತಂದೆಯಾಗಿದ್ದಾರೆ, ಈಗ ಆ ತಂದೆಯನ್ನು ನೆನಪು ಮಾಡಿ ಎಂದು ನೀವು ಯಾರಿಗೇ ತಿಳಿಸಿದರೂ ಸಹ
ಅವರ ಬುದ್ದಿಯಲ್ಲಿ ಬರುತ್ತದೆ - ಈಗ ದೈವಿ ರಾಜಕುಮಾರ- ಕುಮಾರಿಯರಾಗಬೇಕಾಗಿದೆ ಅಂದಮೇಲೆ ಇಷ್ಟು
ಪುರುಷಾರ್ಥ ಮಾಡಬೇಕು, ವಿಕಾರ ಮೊದಲಾದವುಗಳನ್ನು ಬಿಡಬೇಕು. ತಂದೆಯು ತಿಳಿಸಿಕೊಡುತ್ತಾರೆ - ಸಹೋದರ-
ಸಹೋದರಿಯ ಸಂಬಂಧವೂ ಅಲ್ಲ, ಪರಸ್ಪರ ಸಹೋದರರೆಂದು ತಿಳಿಯಿರಿ ಮತ್ತು ತಂದೆಯನ್ನು ನೆನಪು ಮಾಡಿ ಆಗ
ವಿಕರ್ಮಗಳು ವಿನಾಶವಾಗುತ್ತವೆ, ಮಾತ್ತಾವುದೇ ಕಷ್ಟವಿಲ್ಲ. ಅಂತಿಮದಲ್ಲಿ ಅನ್ಯ ಯಾವುದೇ ಮಾತುಗಳ
ಅವಶ್ಯಕತೆಯಿರುವದಿಲ್ಲ. ಕೇವಲ ತಂದೆಯನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ.
ಆಸ್ತಿಕರಾಗಬೇಕಾಗಿದೆ, ಇಂತಹ ಸರ್ವಗುಣ ಸಂಪನ್ನರಾಗಬೇಕಾಗಿದೆ, ಇಷ್ಟೇ ಬುದ್ಧಿಯಲ್ಲಿರುತ್ತದೆ.
ಲಕ್ಶ್ಮಿ-ನಾರಾಯಣರ ಚಿತ್ರವು ಬಹಳ ನಿಖರವಾಗಿದೆ, ಕೇವಲ ತಂದೆಯನ್ನು ಮರೆಯುವುದರಿಂದ ದೈವಿಗುಣಗಳನ್ನು
ಧಾರಣೆ ಮಾಡುವುದೂ ಮರೆತು ಹೋಗುತ್ತಾರೆ. ಮಕ್ಕಳೇ ಏಕಾಂತದಲ್ಲಿ ಕುಳಿತು ವಿಚಾರ ಮಾಡಿ- ತಂದೆಯನ್ನು
ನೆನಪು ಮಾಡಿ, ನಾವು ಈ ರೀತಿಯಾಗಬೇಕು, ಈ ಗುಣಗಳನ್ನು ಧಾರಣೆ ಮಾಡಬೇಕು. ಮಾತು ಬಹಳ ಚಿಕ್ಕದಾಗಿದೆ.
ಮಕ್ಕಳು ಎಷ್ಟೊಂದು ಪರಿಶ್ರಮ ಪಡಬೇಕಾಗುತ್ತದೆ. ಎಷ್ಟೊಂದು ದೇಹಾಭಿಮಾನವು ಬಂದು ಬಿಡುತ್ತದೆ,
ತಂದೆಯು ತಿಳಿಸುತ್ತಾರೆ - ‘ಆತ್ಮಾಭಿಮಾನಿ ಭವ’ ತಂದೆಯಿಂದಲೇ ಆಸ್ತಿಯನ್ನು ಪಡೆಯಬೇಕಾಗುತ್ತದೆ.
ತಂದೆಯನ್ನು ನೆನಪು ಮಾಡಿದಾಗಲೇ ಕೊಳಕು ಬಿಟ್ಟು ಹೋಗುವುದು.
ಮಕ್ಕಳಿಗೆ ಗೊತ್ತಿದೆ - ಈಗ ತಂದೆಯು ಬಂದಿದ್ದಾರೆ, ಬ್ರಹ್ಮಾರವರ ಮೂಲಕ ಹೊಸ ಪ್ರಪಂಚದ ಸ್ಥಾಪನೆ
ಮಾಡುತ್ತಾರೆ. ನಿಮಗೆ ಗೊತ್ತಿದೆ - ಸ್ಥಾಪನೆಯಾಗುತ್ತಾ ಇದೆ, ಇಷ್ಟು ಸಹಜ ಮಾತೂ ಸಹ ನಿಮ್ಮಿಂದ ಜಾರಿ
ಹೋಗುತ್ತದೆ, ಒಬ್ಬರು ತಂದೆಯಾಗಿದ್ದಾರೆ, ಆ ಬೇಹದ್ದಿನ ತಂದೆಯಿಂದ ರಾಜ್ಯಭಾಗ್ಯವು ಸಿಗುತ್ತದೆ,
ತಂದೆಯನ್ನು ನೆನಪು ಮಾಡಿದಾಗ ಹೊಸ ಪ್ರಪಂಚದ ನೆನಪು ಬಂದು ಬಿಡುತ್ತದೆ, ಅಬಲೆಯರು ಕುಬ್ಜೆಯರೂ ಸಹ
ಬಹಳ ಒಳ್ಳೆಯ ಪದವಿಯನ್ನು ಪಡೆಯಬಹುದು. ಇದಕ್ಕಾಗಿ ಕೇವಲ ತಂದೆಯನ್ನು ನೆನಪು ಮಾಡಿ. ತಂದೆಯಂತೂ
ಮಾರ್ಗವನ್ನು ತಿಳಿಸುತ್ತಾರೆ, ಹೇಳುತ್ತಾರೆ - ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ, ತಂದೆಯ
ಪರಿಚಯವಂತೂ ಸಿಕ್ಕಿದೆ. ಬುದ್ಧಿಯಲ್ಲಿ ಕುಳಿತುಬಿಟ್ಟಿದೆ - ಈಗ 84 ಜನ್ಮಗಳ ಪೂರ್ಣವಾಯಿತು, ಮನೆಗೆ
ಹೋಗುತ್ತೇನೆ ಮತ್ತೆ ಬಂದು ಸ್ವರ್ಗದಲ್ಲಿ ಪಾತ್ರವನ್ನಭಿನಯಿಸುತ್ತೇವೆ, ಅಂದಮೇಲೆ ಎಲ್ಲಿ ನೆನಪು
ಮಾಡಲಿ, ಹೇಗೆ ಮಾಡಲಿ ಎಂಬ ಪ್ರಶ್ನೆಯು ಉದ್ಭವಿಸುವುದಿಲ್ಲ. ಏಕೆಂದರೆ ತಂದೆಯನ್ನು ನೆನಪು
ಮಾಡಬೇಕೆಂದು ಬುದ್ಧಿಯಲ್ಲಿದೆ, ತಂದೆಯು ಎಲ್ಲಿಗೇ ಹೋಗಲಿ ನೀವಂತೂ ಅವರ ಮಕ್ಕಳೇ ಆಗಿದ್ದಿರಿ.
ಅಂದಾಗ ಬೇಹದ್ದಿನ ತಂದೆಯನ್ನು ನೆನಪು ಮಾಡಬೇಕು, ಇಲ್ಲಿ ಕುಳಿತಿದ್ದಾಗ ನಿಮಗೆ ಆನಂದವಾಗುತ್ತದೆ.
ಸನ್ಮುಖದಲ್ಲಿ ತಂದೆಯೊಂದಿಗೆ ಮಿಲನ ಮಾಡುತ್ತೀರಿ. ಶಿವ ತಂದೆಯ ಜಯಂತಿಯು ಹೇಗಾಗುತ್ತದೆ ಎಂದು
ಮನುಷ್ಯರು ತಬ್ಬಿಬ್ಬಾಗುತ್ತಾರೆ. ಶಿವರಾತ್ರಿಯೆಂದು ಏಕೆ ಹೇಳಲಾಗುತ್ತದೆ ಎಂಬುದನ್ನು ಸಹ
ತಿಳಿದುಕೊಂಡಿಲ್ಲ, ಕೃಷ್ಣನ ಜಯಂತಿಯು ರಾತ್ರಿಯ ಸಮಯದಲ್ಲಾಗುತ್ತದೆ ಎಂದು ತಿಳಿಯುತ್ತಾರೆ ಆದರೆ ಈ
ರಾತ್ರಿಯ ಮಾತಲ್ಲ, ಸೃಷ್ಟಿಯ ಅರ್ಧಕಲ್ಪದ ರಾತ್ರಿಯು ಪೂರ್ಣವಾಗುತ್ತದೆ. ಆಗ ಹೊಸ ಪ್ರಪಂಚದ ಸ್ಥಾಪನೆ
ಮಾಡಲು ತಂದೆಯು ಬರಬೇಕಾಗುತ್ತದೆ, ಇದು ಬಹಳ ಸಹಜವಾಗಿದೆ ಎಂಬುದನ್ನು ಮಕ್ಕಳೂ ತಿಳಿಯುತ್ತೀರಿ
ಅಂದಾಗ ದೈವಿಗುಣಗಳನ್ನು ಧಾರಣೆ ಮಾಡಬೇಕಾಗಿದೆ ಇಲ್ಲವೆಂದರೆ ಒಂದಕ್ಕೆ ನೂರು ಪಟ್ಟು ಪಾಪವಾಗಿ
ಬಿಡುತ್ತದೆ, ನನ್ನ ನಿಂದನೆ ಮಾಡಿಸುವವರಿಗೆ ಶ್ರೇಷ್ಟ ಸ್ಥಾನವು ಸಿಗಲು ಸಾಧ್ಯವಿಲ್ಲ. ತಂದೆಯ
ನಿಂದನೆ ಮಾಡಿಸುತ್ತೀರೆಂದರೆ ಪದವಿ ಭ್ರಷ್ಠರಾಗುವಿರಿ, ಆದ್ದರಿಂದ ಬಹಳ ಮಧುರರಾಗಬೇಕು.
ಒರಟು-ಒರಟಾಗಿ ಮಾತನಾಡುವುದು ದೈವಿಗುಣವಲ್ಲವೆಂದು ಪ್ರೀತಿಯಿಂದ ತಿಳಿಸಬೇಕಾಗಿದೆ. ಇದೂ ಸಹ
ಮಕ್ಕಳಿಗೆ ಗೊತ್ತಿದೆ - ಈಗ ಕಲಿಯುಗವು ಮುಕ್ತಾಯವಾಗುತ್ತದೆ, ಇದು ಸಂಗಮಯುಗವಾಗಿದೆ. ಮನುಷ್ಯರಿಗಂತೂ
ಏನೂ ಗೊತ್ತಿಲ್ಲ, ಕುಂಭಕರ್ಣನ ನಿದ್ರೆಯಲ್ಲಿ ಮಲಗಿ ಬಿಟ್ಟಿದ್ದಾರೆ, ಇನ್ನೂ 40 ಸಾವಿರ ವರ್ಷಗಳಿವೆ,
ನಾವು ಜೀವಿಸಿಯೇ ಇರುತ್ತೇವೆ, ಸುಖವನ್ನು ಅನುಭವಿಸುತ್ತೇವೆಂದು ತಿಳಿದಿದ್ದಾರೆ. ಆದರೆ ದಿನ-
ಪ್ರತಿದಿನ ಇನ್ನೂ ತಮೋಪ್ರಧಾನರಾಗುತೇವೆಂದು ತಿಳಿದುಕೊಂಡಿಲ್ಲ. ನೀವು ಮಕ್ಕಳು ವಿನಾಶದ
ಸಾಕ್ಷಾತ್ಕಾರವನ್ನೂ ನೋಡಿದ್ದೀರಿ, ಮುಂದೆ ಹೋದಂತೆ ಬ್ರಹ್ಮಾ-ಕೃಷ್ಣನ ಸಾಕ್ಷಾತ್ಕಾರವನ್ನೂ
ಮಾಡುತ್ತಿರುತ್ತಾರೆ. ಬ್ರಹ್ಮಾರವರ ಬಳಿ ಹೋದರೆ ನೀವು ಇಂತಹ ಸ್ವರ್ಗದ ರಾಜಕುಮಾರರಾಗುತ್ತೀರಿ.
ಆದುದರಿಂದ ಹೆಚ್ಚಾಗಿ ಬ್ರಹ್ಮಾ ಮತ್ತು ಕೃಷ್ಣ ಇಬ್ಬರ ಸಾಕ್ಷಾತ್ಕಾರವೂ ಆಗುತ್ತದೆ. ಆದರೆ ಅದರಿಂದ
ಅಷ್ಟೊಂದು ತಿಳಿದುಕೊಳ್ಳುವುದಕ್ಕಾಗುವುದಿಲ್ಲ. ಕೆಲವರಿಗೆ ವಿಷ್ಣುವಿನ ಸಾಕ್ಷಾತ್ಕಾರವಾಗುತ್ತದೆ
ನಾರಾಯಣನದಾದರೆ ಅರ್ಥ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ನಾವು ದೇವತೆಗಳಾಗುವದಕ್ಕಾಗಿಯೇ
ಹೋಗುತ್ತೇವೆಂದು ತಿಳಿದುಕೊಳ್ಳುತ್ತಾರೆ ಅಂದಾಗ ನೀವೀಗ ಸೃಷ್ಟಿಯ ಆದಿ-ಮದ್ಯ-ಅಂತ್ಯದ ಪಾಠವನ್ನು
ಓದುತ್ತೀರಿ, ನೆನಪಿಗಾಗಿ ಪಾಠವನ್ನು ಓದಿಸಲಾಗುತ್ತದೆ, ಆತ್ಮವೇ ಪಾಠವನ್ನು ಓದುತ್ತದೆ, ದೇಹದ ಪರಿವೆ
ಹೊರಟು ಹೋಗುತ್ತದೆ. ಆತ್ಮವೇ ಎಲ್ಲವನ್ನೂ ಮಾಡುತ್ತದೆ, ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವು
ಆತ್ಮದಲ್ಲಿಯೇ ಇರುತ್ತದೆ.
ನೀವು ಮಧುರಾತಿ ಮಧುರ ಮಕ್ಕಳು 5000 ವರ್ಷಗಳ ನಂತರ ಬಂದು ಮಿಲನ ಮಾಡಿದ್ದೀರಿ. ನೀವು ಅವರೇ
ಆಗಿದ್ದೀರಿ. ಲಕ್ಷಣಗಳೂ ಅದೇ ಇದೆ. 5000 ವರ್ಷಗಳ ಹಿಂದೆಯೂ ಸಹ ನೀವೇ ಇದ್ದಿರಿ. ನೀವೂ ಸಹ
ಹೇಳುತ್ತೀರಿ - ಬಾಬಾ, 5000 ವರ್ಷಗಳ ನಂತರ ತಾವು ಬಂದು ಮಿಲನ ಮಾಡಿದ್ದೀರಿ, ನೀವೀಗ ನಮ್ಮನ್ನು
ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಿದ್ದೀರಿ. ನಾವು ದೇವತೆಗಳಾಗಿದ್ದೆವು ನಂತರ ಅಸುರರಾಗಿ
ಬಿಟ್ಟಿದ್ದೇವೆ. ದೇವತೆಗಳ ಗುಣಗಳನ್ನು ಹಾಡುತ್ತಾ ತಮ್ಮ ಅವಗುಣಗಳನ್ನು ವರ್ಣನೆ ಮಾಡುತ್ತಾಬಂದೆವು,
ಈಗ ಮತ್ತೆ ದೇವತೆಗಳಾಗಬೇಕಾಗಿದೆ, ಏಕೆಂದರೆ ದೈವಿ ಪ್ರಪಂಚದಲ್ಲಿ ಹೋಗಬೇಕಾಗಿದೆ. ಆದ್ದರಿಂದ ಈಗ
ಒಳ್ಳೆಯ ರೀತಿಯಲ್ಲಿ ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಿರಿ. ಶಿಕ್ಷಕರಂತೂ ಚೆನ್ನಾಗಿ
ಓದಿ ಎಂದು ಎಲ್ಲರಿಗೂ ಹೇಳುತ್ತಾರಲ್ಲವೆ! ತಿಳಿಸುತ್ತಾರೆ - ಒಳ್ಳೆಯ ಅಂಕಗಳಲ್ಲಿ ತೇರ್ಗಡೆಯಾದರೆ
ನಮ್ಮ ಹೆಸರೂ ಪ್ರಸಿದ್ಧವಾಗುತ್ತದೆ. ಮತ್ತು ನಿಮ್ಮ ಹೆಸರೂ ಪ್ರಸಿದ್ಧವಾಗುವುದು, ಹೀಗೆ ಅನೇಕರು
ಹೇಳುತ್ತಾರೆ - ಬಾಬಾ ತಮ್ಮ ಬಳಿ ಬಂದಾಗ ನಮ್ಮ ಬಾಯಿಂದ ಏನೂ ಹೊರಡುವುದಿಲ್ಲ ಎಲ್ಲವನ್ನೂ ಮರೆತು
ಹೋಗುತ್ತೇವೆ. ಬಂದ ತಕ್ಷಣವೇ ಸುಮ್ಮನಾಗಿ ಬಿಡುತ್ತೇವೆ. ಈ ಪ್ರಪಂಚವು ಹೇಗೆ ಸಮಾಪ್ತಿಯಾಗಿಯೇ
ಬಿಟ್ಟಿದೆ, ನಂತರ ನೀವು ಹೊಸ ಪ್ರಪಂಚದಲ್ಲಿ ಬರುತ್ತೀರಿ, ಆ ಹೊಸ ಪ್ರಪಂಚವು ಬಹಳ
ಶೋಭಾಯಮಾನವಾಗಿರುತ್ತದೆ. ಕೆಲವರು ಶಾಂತಿಧಾಮದಲ್ಲಿ ವಿಶ್ರಾಂತಿ ಪಡೆಯುತ್ತಾರೆ, ಕೆಲವರಿಗೆ
ವಿಶ್ರಾಮವು ಸಿಗುವುದಿಲ್ಲ. ಏಕೆಂದರೆ ಸರ್ವತೋಮುಖ ಪಾತ್ರವಾಗಿದೆ. ಆದರೆ ತಮೋಪ್ರಧಾನ ದುಃಖದಿಂದ
ಬಿಡುಗಡೆಯಾಗುತ್ತೀರಿ, ಅಲ್ಲಿ ಸುಖ ಶಾಂತಿ ಎಲ್ಲವೂ ಸಿಗುತ್ತದೆ ಅಂದಮೇಲೆ ಅಷ್ಟು ಚೆನ್ನಾಗಿ
ಪುರುಷಾರ್ಥ ಮಾಡಬೇಕು. ಅದೃಷ್ಠದಲ್ಲಿದ್ದಂತೆ ಆಗಲಿ ಎಂದಲ್ಲ. ತಿಳಿಸಲಾಗುತ್ತದೆ - ಈಗ ರಾಜಧಾನಿಯು
ಸ್ಥಾಪನೆಯಾಗುತ್ತಿದೆ, ನಾವು ಶ್ರೀಮತದಂತೆ ನಮಗಾಗಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ.
ತಂದೆಯಂತೂ ಶ್ರೀಮತ ಕೊಡುವವರಾಗಿದ್ದಾರೆ. ಅವರೇನೂ ರಾಜನಾಗುವುದಿಲ್ಲ, ಅವರ ಶ್ರೀಮತದಿಂದ ನಾವು
ರಾಜರಾಗುತ್ತೇವೆ. ಹೊಸ ಮಾತಾಗಿದೆಯಲ್ಲವೆ, ಅಂದರೆ ಇದನ್ನು ಎಂದೂ ಯಾರೂ ಕೇಳಿಯೂ ಇಲ್ಲ, ನೋಡಿಯೂ
ಇಲ್ಲ. ಈಗ ನೀವು ಮಕ್ಕಳು ತಿಳಿದುಕೊಳುತ್ತೀರಿ- ಶ್ರೀಮತದನುಸಾರ ನಾವು ವೈಕುಂಠದ ರಾಜಧಾನಿಯ ಸ್ಥಾಪನೆ
ಮಾಡುತ್ತೇವೆ. ನಾವು ಲೆಕ್ಕವಿಲ್ಲದಷ್ಟು ಬಾರಿ ರಾಜಧಾನಿ ಸ್ಥಾಪನೆ ಮಾಡಿದ್ದೇವೆ. ರಾಜ್ಯಭಾರ
ಕಳೆದುಕೊಳ್ಳುತ್ತೇವೆ. ಈ ಚಕ್ರವು ತಿರುಗುತ್ತಲೇ ಇರುತ್ತದೆ, ಪಾದ್ರಿಗಳು ಸುತ್ತಾಡಲು ಹೋದಾಗ
ಮತ್ತ್ಯಾರನ್ನೂ ನೋಡಲು ಇಷ್ಟ ಪಡುವುದಿಲ್ಲ. ಕೇವಲ ಕ್ರಿಸ್ತನ ನೆನಪಿನಲ್ಲಿಯೇ ಇರುತ್ತಾರೆ,
ಶಾಂತಿಯಲ್ಲಿ ಸುತ್ತಾಡುತ್ತಾರೆ. ತಿಳುವಳಿಕೆಯಿದೆಯಲ್ಲವೇ ಕ್ರಿಸ್ತನ ನೆನಪಿನಲ್ಲಿ ಬಹಳ ಇರುತ್ತಾರೆ
ಆದರೆ ಅವಶ್ಯವಾಗಿ ಅವರಿಗೆ ಕ್ರಿಸ್ತನ ಸಾಕ್ಷಾತ್ಕಾರವಾಗಿರಬಹುದು. ಎಲ್ಲ ಪಾದ್ರಿಗಳು ಈ ರೀತಿ
ಇರುವುದಿಲ್ಲ, ಕೋಟಿಯಲ್ಲಿ ಕೆಲವರು, ನಿಮ್ಮಲ್ಲಿಯೂ ನಂಬರ್ ವಾರ್ ಇದ್ದೀರಿ. ಕೋಟಿಯಲ್ಲಿ ಕೆಲವರೇ ಈ
ರೀತಿ ನೆನಪಿನಲ್ಲಿರುತ್ತಾರೆ. ಅಂದಮೇಲೆ ಪ್ರಯತ್ನ ಪಟ್ಟು ನೋಡಿ ಮತ್ತ್ಯಾರನ್ನೂ ನೋಡಬೇಡಿ,
ತಂದೆಯನ್ನು ನೆನಪು ಮಾಡುತ್ತಾ ಸ್ವದರ್ಶನ ಚಕ್ರವನ್ನು ತಿರುಗಿಸುತ್ತಿರಿ. ನಿಮಗೆ ಅಪಾರ
ಖುಷಿಯಾಗುವುದು. ಶ್ರೇಷ್ಠಾಚಾರಿಗಳೆಂದು ದೇವತೆಗಳಿಗೂ, ಮನುಷ್ಯರಿಗೆ ಭ್ರಷ್ಠಾಚಾರಿಗಳೆಂದು
ಹೇಳಲಾಗುವುದು. ಈ ಸಮಯದಲ್ಲಂತೂ ದೇವತೆಗಳು ಯಾರೂ ಇಲ್ಲ. ಅರ್ಧಕಲ್ಪ ದಿನ, ಅರ್ಧಕಲ್ಪ ರಾತ್ರಿ, ಇದು
ಭಾರತದ್ದೇ ಮಾತಾಗಿದೆ, ತಂದೆಯು ತಿಳಿಸುತ್ತಾರೆ - ನಾನು ಬಂದು ಎಲ್ಲರ ಸದ್ಗತಿ ಮಾಡುತ್ತೇನೆ, ಉಳಿದ
ಯಾವುದೆಲ್ಲಾ ಧರ್ಮದವರಿದ್ದಾರೆಯೋ ಅವರು ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ. ಎಲ್ಲರೂ
ಅಂತಿಮದಲ್ಲಿ ತಂದೆಯನ್ನು ನೆನಪು ಮಾಡಬೇಕಾಗಿದೆ ಎಂಬ ಮಂತ್ರವನ್ನೇ ತೆಗೆದುಕೊಂಡು ಹೋಗುತ್ತಾರೆ,
ಯಾರು ನೆನಪು ಮಾಡುವವರೋ ಅವರು ತಮ್ಮ ಧರ್ಮದಲ್ಲಿ ಶ್ರೇಷ್ಟ ಪದವಿಯನ್ನು ಪಡೆಯುತ್ತಾರೆ.
ತಾವು ಮಕ್ಕಳು ಪುರುಷಾರ್ಥ ಮಾಡಿ ಅಧ್ಯಾತ್ಮಿಕ ಸಂಗ್ರಹಾಲಯ ಅಥವಾ ಕಾಲೇಜನ್ನು ತೆರೆಯಬೇಕು. ಅದರಲ್ಲಿ
ಬರೆಯಿರಿ - ವಿಶ್ವದ ಅಥವಾ ಸ್ವರ್ಗದ ರಾಜ್ಯಭಾಗ್ಯವು ಒಂದು ಸೆಕೆಂಡಿನಲ್ಲಿ ಹೇಗೆ
ಪಡೆಯಬಹುದೆಂಬುದನ್ನು ಬಂದು ತಿಳಿದುಕೊಳ್ಳಿ, ತಂದೆಯನ್ನು ನೆನಪು ಮಾಡಿದರೆ ವೈಕುಂಠದ ರಾಜ್ಯಭಾರವು
ಸಿಗುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ನಡೆಯುತ್ತ-ತಿರುಗಾಡುತ್ತ ಒಬ್ಬ ತಂದೆಯ ನೆನಪೇ ಇರಲಿ ಎಲ್ಲವನ್ನೂ ನೋಡುತ್ತಿದ್ದರೂ ಸಹ ಏನೂ
ಕಾಣಿಸಬಾರದು - ಈ ಅಭ್ಯಾಸ ಮಾಡಬೇಕು. ದೈವೀಗುಣಗಳು ಎಲ್ಲಿಯವರೆಗೆ ಬಂದಿವೆ ಎಂದು ಏಕಾಂತದಲ್ಲಿ
ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು.
2. ತಂದೆಯ ನಿಂದನೆಯಾಗುವಂತಹ ಯಾವುದೇ ಕರ್ತವ್ಯವನ್ನು ಮಾಡಬಾರದು. ದೈವೀಗುಣಗಳನ್ನು ಧಾರಣೆ ಮಾಡಬೇಕು.
ಬುದ್ಢಿಯಲ್ಲಿರಲಿ - ಈಗ ಮನೆಗೆ ಹೋಗಬೇಕಾಗಿದೆ, ನಂತರ ನಮ್ಮ ರಾಜಧಾನಿಯಲ್ಲಿ ಬರಬೇಕಾಗಿದೆ.
ವರದಾನ:
ಸ್ವಾರ್ಥದಿಂದ
ಭಿನ್ನ ಮತ್ತು ಸಂಬಂಧಗಳಿಂದ ಪ್ರಿಯ ಆಗಿ ಸೇವೆ ಮಾಡುವಂತಹ ಸತ್ಯ ಸೇವಾಧಾರಿ ಭವ.
ಯಾವ ಸೇವೆ ಸ್ವಯಂಗೆ ಹಾಗೂ
ಅನ್ಯರಿಗೆ ಅಡಚಣೆ ಮಾಡುತ್ತೆ ಅದು ಸೇವೆಯೇ ಅಲ್ಲ, ಸ್ವಾರ್ಥವಾಗಿದೆ. ಯಾವುದಾದರೂ ಒಂದು
ಸ್ವಾರ್ಥಕ್ಕೆ ನಿಮಿತ್ತ ಆಗುವುದು ಆಗ ಮೇಲೆ-ಕೆಳಗೆ ಆಗುವಿರಿ. ತಮ್ಮ ಇಲ್ಲಾ ಬೇರೆಯವರ ಸ್ವಾರ್ಥ
ಯಾವಾಗ ಪೂರ್ಣ ಆಗುವುದಿಲ್ಲ ಆಗ ಸೇವೆಯಲ್ಲಿ ಅಡಚಣೆ ಉಂಟಾಗುವುದು. ಆದ್ದರಿಂದ ಸ್ವಾರ್ಥದಿಂದ ಭಿನ್ನ
ಮತ್ತು ಸೇವೆಯ ಸಂಬಂಧದಲ್ಲಿ ಪ್ರಿಯ ಆಗಿ ಸೇವೆ ಮಾಡಿ ಆಗ ಹೇಳಲಾಗುವುದು ಸತ್ಯ ಸೇವಾಧಾರಿ. ಸೇವೆ
ತುಂಬಾ ಉಮಂಗ-ಉತ್ಸಾಹದಿಂದ ಮಾಡಿ ಆದರೆ ಸೇವೆಯ ಹೊರೆ ಸ್ಥಿತಿಯನ್ನು ಎಂದೂ ಮೇಲೆ-ಕೆಳಗೆ ಮಾಡಬಾರದು,
ಇದರ ಕಡೆ ಗಮನವಿಡಿ.
ಸ್ಲೋಗನ್:
ಶುಭ ಹಾಗೂ
ಶ್ರೇಷ್ಠ ವೈಭ್ರೇಷನ್ ಮೂಲಕ ನಕಾರಾತ್ಮಕ ದೃಷ್ಯವನ್ನೂ ಸಹ ಸಕಾರಾತ್ಮಕದಲ್ಲಿ ಬದಲಾಯಿಸಿ.