07.08.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಚೈತನ್ಯ ಅವಸ್ಥೆಯಲ್ಲಿದ್ದು ತಂದೆಯನ್ನು ನೆನಪು ಮಾಡಬೇಕಾಗಿದೆ. ನಿಶ್ಯಬ್ಧ ಸ್ಥಿತಿಯಲ್ಲಿ ಹೋಗುವುದು ಅಥವಾ ನಿದ್ರೆ ಮಾಡುವುದು, ಇದೇನು ಯೋಗವಲ್ಲ”

ಪ್ರಶ್ನೆ:
ತಾವು ಕಣ್ಣು ಮುಚ್ಚಿ ಕುಳಿತುಕೊಳ್ಳುವುದನ್ನು ನಿರಾಕರಿಸಲಾಗಿದೆ, ಏಕೆ?

ಉತ್ತರ:
ಒಂದು ವೇಳೆ ಕಣ್ಣು ಮುಚ್ಚಿ ಕುಳಿತುಕೊಂಡರೆ ಅಂಗಡಿಯ ಎಲ್ಲ ಸಾಮಾನುಗಳನ್ನು ಕಳ್ಳ ಕದ್ದುಕೊಂಡು ಹೋಗುತ್ತಾನೆ. ಮಾಯಾ ಕಳ್ಳ ಬುದ್ಧಿಯಲ್ಲಿ ಏನನ್ನೂ ಧಾರಣೆ ಮಾಡಲು ಬಿಡುವುದಿಲ್ಲ. ಯೋಗದಲ್ಲಿ ಕಣ್ಣು ಮುಚ್ಚಿ ಕುಳಿತುಕೊಂಡರೆ ನಿದ್ರೆ ಬರುವುದು, ಗೊತ್ತಾಗುವುದೇ ಇಲ್ಲ. ಆದ್ದರಿಂದ ಕಣ್ಣನ್ನು ತೆರೆದು ಕುಳಿತುಕೊಳ್ಳಬೇಕು. ಕೆಲಸ ಕಾರ್ಯ ಮಾಡುತ್ತಿದ್ದರೂ ತಂದೆಯನ್ನು ನೆನಪು ಮಾಡಬೇಕಾಗಿದೆ. ಇದರಲ್ಲಿ ಹಠಯೋಗದ ಮಾತಿಲ್ಲ.

ಓಂ ಶಾಂತಿ.
ಆತ್ಮಿಕ ತಂದೆ ಮಕ್ಕಳಿಗೆ ಹೇಳುತ್ತಾರೆ, ಇವರೂ (ಬ್ರಹ್ಮಾ ತಂದೆಯು) ಮಗು ಆಗಿದ್ದಾರಲ್ಲವೆ. ದೇಹಧಾರಿಗಳೆಲ್ಲರೂ ಮಕ್ಕಳಾಗಿದ್ದಾರೆ ಅಂದಮೇಲೆ ಆತ್ಮಿಕ ತಂದೆ ಆತ್ಮಗಳಿಗೆ ಹೇಳುತ್ತಾರೆ, ಆತ್ಮದ ಮಾತೇ ಮುಖ್ಯವಾದುದು. ಇದನ್ನು ಚೆನ್ನಾಗಿ ತಿಳಿದುಕೊಳ್ಳಿ. ಇಲ್ಲಿ ಎದುರಲ್ಲಿ ಕುಳಿತಾಗ ಶರೀರದಿಂದ ಭಿನ್ನವಾಗಿ ಕಳೆದು ಹೋಗುವುದಲ್ಲ. ಶರೀರದಿಂದ ಭಿನ್ನವಾಗಿ ಕಳೆದು ಹೋಗುವುದು, ಇದೇನು ನೆನಪಿನ ಯಾತ್ರೆಯ ಸ್ಥಿತಿ ಅಲ್ಲ. ಇಲ್ಲಂತೂ ಜಾಗೃತಾವಸ್ಥೆಯಲ್ಲಿ ಕುಳಿತುಕೊಳ್ಳಬೇಕಾಗಿದೆ. ನಡೆಯುತ್ತಾ- ತಿರುಗಾಡುತ್ತಾ, ಕುಳಿತುಕೊಳ್ಳುತ್ತಾ-ಏಳುತ್ತಾ ತಮ್ಮನ್ನು ಆತ್ಮ ಎಂದು ತಿಳಿದು ನೆನಪು ಮಾಡಬೇಕು. ತಂದೆಯು ಇಲ್ಲಿ ಕುಳಿತಿದ್ದಂತೆಯೇ ಮೂರ್ಚಿತರಾಗಿರಿ ಎಂದು ಹೇಳುವುದಿಲ್ಲ. ಈ ರೀತಿ ಬಹಳ ಜನ ಕುಳಿತು ಕುಳಿತಿದ್ದಂತೆ ಕಳೆದು ಹೋಗುತ್ತಾರೆ. ನೀವು ಜಾಗೃತರಾಗಿ ಕುಳಿತುಕೊಳ್ಳಬೇಕಾಗಿದೆ ಮತ್ತು ಪವಿತ್ರರೂ ಆಗಬೇಕು. ಪವಿತ್ರತೆಯ ಹೊರತು ಧಾರಣೆ ಆಗಲು ಸಾಧ್ಯವಿಲ್ಲ, ಯಾರ ಕಲ್ಯಾಣವೂ ಆಗಲು ಸಾಧ್ಯವಿಲ್ಲ, ಯಾರಿಗೂ ತಿಳಿಸಲು ಸಾಧ್ಯವಿಲ್ಲ. ಪವಿತ್ರ ಆಗದೇ ಬೇರೆಯರಿಗೆ ಹೇಳುವವರು ಪಂಡಿತರಂತಾಗುತ್ತಾರೆ. ತನಗೆ ತಿಳಿದಿದೆ ಎಂಬ ಅಹಂಕಾರವೂ ಇರಬಾರದು. ಆ ನಂತರ ಅವರ ಮನಸ್ಸು ತಿನ್ನುತ್ತಿರುತ್ತದೆ. ನಾವು ನಿಶ್ಯಬ್ಧದಲ್ಲಿ ಹೊರಟು ಹೋಗುತ್ತೇವೆಂದು ತಿಳಿಯಬೇಡಿ. ಕಣ್ಣುಗಳು ಮುಚ್ಚಿಕೊಳ್ಳುತ್ತವೆ. ಇದು ನೆನಪಿನ ಸ್ಥಿತಿಯಂತೂ ಅಲ್ಲ. ಇದರಲ್ಲಿ ಚೈತನ್ಯ ಸ್ಥಿತಿಯಲ್ಲಿದ್ದು ತಂದೆಯನ್ನು ನೆನಪು ಮಾಡಬೇಕು. ನಿದ್ರೆ ಮಾಡುವುದು ನೆನಪು ಮಾಡುವುದೇನಲ್ಲ. ಮಕ್ಕಳಿಗೆ ಕೆಲವು ವಿಷಯಗಳನ್ನು ತಿಳಿಸಲಾಗುತ್ತದೆ. ಶಾಸ್ತ್ರಗಳಲ್ಲಿ ತೋರಿಸಲಾಗುತ್ತೆ ಏಳನೇ ಲೋಕಕ್ಕೆ ಹೋಗಿ ಬಿಡುತ್ತಾರೆ, ಅವರಿಗೆ ಪ್ರಪಂಚದ ಬಗ್ಗೆ ಗೊತ್ತೇ ಆಗುವುದಿಲ್ಲ. ಇದಂತೂ ಛೀ ಛೀ ಪ್ರಪಂಚವಾಗಿದೆ. ನಿಮಗೆ ಪ್ರಪಂಚ ಗೊತ್ತಿದೆಯಲ್ಲವೆ. ತಂದೆಯನ್ನೂ ಕೆಲವರು ತಿಳಿದುಕೊಂಡಿಲ್ಲ. ಒಂದು ವೇಳೆ ತಂದೆಯನ್ನು ತಿಳಿದುಕೊಂಡಿದ್ದೇ ಆದರೆ ಸೃಷ್ಟಿ ಚಕ್ರವನ್ನು ತಿಳಿದುಕೊಂಡು ಬಿಡುತ್ತಾರೆ. ಈ ಚಕ್ರ ಹೇಗೆ ತಿರುಗುತ್ತದೆ ಎನ್ನುವುದನ್ನು ತಂದೆಯು ತಿಳಿಸುತ್ತಾರೆ. ಮನುಷ್ಯರು ಪುನರ್ಜನ್ಮ ಹೇಗೆ ಪಡೆಯುತ್ತಾರೆ. ಸತ್ಯಯುಗದಲ್ಲಿ ಹೆಚ್ಚು ಆಯುಷ್ಯ ಇರುತ್ತದೆ. ಸೌಂದರ್ಯ ಇಲ್ಲದೇ ಇರುವುದಿಲ್ಲ. ಸನ್ಯಾಸಿಗಳದ್ದು ಹಠಯೋಗವಾಗಿದೆ. ಕಣ್ಣು ಮುಚ್ಚಿ ಕುಳಿತುಕೊಳ್ಳುವುದು ಗುಹೆಗಳಲ್ಲಿ ಕುಳಿತು ಕುಳಿತು ಶೋಭೆ ಇಲ್ಲದವರಾಗುವುದಾಗಿದೆ.... ನಿಮಗೆ ತಂದೆಯು ಹೇಳುತ್ತಾರೆ - ಗೃಹಸ್ಥ ವ್ಯವಹಾರದಲ್ಲಿದ್ದು ಜಾಗೃತರಾಗಿರಬೇಕು. ನಿಶ್ಯಬ್ಧದಲ್ಲಿ ಹೋಗುವುದು ಯಾವ ಸ್ಥಿತಿಯೂ ಅಲ್ಲ. ವ್ಯವಹಾರವನ್ನು ಮಾಡಬೇಕು, ಗೃಹಸ್ಥವನ್ನು ಸಂಭಾಲನೆ ಮಾಡಬೇಕು, ಸುಮ್ಮನೆ ಇದ್ದು ಬಿಡುವುದಲ್ಲ. ಕೆಲಸ ಕಾರ್ಯ ಮಾಡುತ್ತಾ ಬುದ್ಧಿಯಿಂದ ತಂದೆಯನ್ನು ನೆನಪು ಮಾಡಬೇಕು. ಕೆಲಸ ಅವಶ್ಯ ಮಾಡುತ್ತೀರಿ, ಕಣ್ಣು ತೆರೆದೇ ಮಾಡುತ್ತೀರಲ್ಲವೆ. ವ್ಯವಹಾರ ಮುಂತಾದವು ಎಲ್ಲವನ್ನೂ ಮಾಡುತ್ತಿರಿ, ಬುದ್ಧಿಯೋಗ ತಂದೆಯ ಜೊತೆಯಿರಲಿ. ಇದರಲ್ಲಿ ತಪ್ಪು ಮಾಡಬಾರದು. ಅಂಗಡಿಯಲ್ಲಿ ಕಣ್ಣು ಮುಚ್ಚಿ ಕುಳಿತರೆ ಯಾರಾದರೂ ಸಾಮಾನುಗಳನ್ನು ಗೊತ್ತಾಗದಂತೆ ಹೊತ್ತುಕೊಂಡು ಹೋಗುತ್ತಾರೆ. ಇದು ಯಾವ ಸ್ಥಿತಿಯೂ ಅಲ್ಲ. ನಾವು ದೇಹದಿಂದ ಭಿನ್ನವಾಗುತ್ತೇವೆ, ಇದು ಹಠಯೋಗದ ಮಾತಾಗಿದೆ, ರಿದ್ಧಿ ಸಿದ್ಧಿಯವರು ಮಾಡಿದ್ದಾರೆ. ತಂದೆಯಂತೂ ಚೆನ್ನಾಗಿ ತಿಳಿಸುತ್ತಾರೆ, ಇದರಲ್ಲಿ ಕಣ್ಣು ಮುಚ್ಚಬಾರದು.

ತಂದೆಯು ಹೇಳುತ್ತಾರೆ - ಮಿತ್ರ ಸಂಬಂಧಿಗಳನ್ನು ಮರೆತು ಒಬ್ಬ ತಂದೆಯನ್ನು ನೆನಪು ಮಾಡಬೇಕು. ನೆನಪಿನ ಯಾತ್ರೆ ಮಾಡದ ವಿನಃ ಪಾಪ ಕತ್ತರಿಸುವುದಿಲ್ಲ. ಭೋಗವನ್ನು ತೆಗೆದುಕೊಂಡು ಹೋಗುತ್ತಾರೆ, ಸೂಕ್ಷ್ಮ ವತನದಲ್ಲಿ ಮರೆಯಾಗುತ್ತಾರೆ, ಇದರಿಂದ ಏನಾಗುತ್ತದೆ? ಅಲ್ಲಿ ಇದ್ದ ಸಮಯದಲ್ಲಿ ವಿಕರ್ಮ ವಿನಾಶವಾಗುವುದಿಲ್ಲ. ಶಿವಬಾಬಾ ಅವರನ್ನು ನೆನಪು ಮಾಡಲು ಸಾಧ್ಯವಾಗುವುದಿಲ್ಲ. ತಂದೆಯ ವಾಣಿಯನ್ನು ಕೇಳಲು ಸಾಧ್ಯವಾಗುವುದಿಲ್ಲವೆಂದಮೇಲೆ ನಷ್ಟವಾಯಿತಲ್ಲವೆ. ಆದರೆ ಇದು ನಾಟಕದಲ್ಲಿ ನಿಗದಿಯಾಗಿದೆ ಆದ್ದರಿಂದ ಹೋಗುತ್ತಾರೆ. ನಂತರ ಮರಳಿ ಬಂದು ಕೇಳುತ್ತಾರೆ. ಆದ್ದರಿಂದ ಬಾಬಾ ಹೇಳುತ್ತಾರೆ, ಹೋಗಿ ತಕ್ಷಣ ಬಂದು ಬಿಡಿ, ಅಲ್ಲಿ ಕುಳಿತುಕೊಳ್ಳಬೇಡಿ. ಆಟ ಪಾಟವನ್ನು ತಂದೆಯು ನಿಷೇಧಿಸಿದ್ದಾರೆ. ಇದೂ ಸಹ ಸುತ್ತಾಡುವುದು ಅಲೆದಾಡುವುದು ಆಯಿತಲ್ಲವೆ. ಭಕ್ತಿಮಾರ್ಗದಲ್ಲಿ ಅಳುವುದು ದುಃಖಿಸುವುದು ಬಹಳ ಇರುತ್ತದೆ ಏಕೆಂದರೆ ಅಂಧಕಾರದ ಮಾರ್ಗವಾಗಿದೆಯಲ್ಲವೆ. ಮೀರಾ ಧ್ಯಾನದಲ್ಲಿ ವೈಕುಂಠಕ್ಕೆ ಹೋಗುತ್ತಿದ್ದಳು ಆಕೆಗೆ ಯೋಗ ಮತ್ತು ವಿದ್ಯೆ ಏನಾದರೂ ಗೊತ್ತಿತ್ತೇ? ಆಕೆ ಸದ್ಗತಿಯನ್ನು ಪಡೆದುಕೊಂಡಳೇ? ಸ್ವರ್ಗಕ್ಕೆ ಹೋಗಲು ಯೋಗ್ಯಳಾದಳೇ? ಜನ್ಮ ಜನ್ಮಾಂತರದ ಪಾಪ ನಾಶವಾಯಿತೇ? ಇಲ್ಲವೇ ಇಲ್ಲ. ಜನ್ಮ ಜನ್ಮಾಂತರದ ಪಾಪ ತಂದೆಯ ನೆನಪಿನಿಂದ ಮಾತ್ರ ನಾಶವಾಗುತ್ತದೆ. ಉಳಿದ ಸಾಕ್ಷಾತ್ಕಾರ ಮೊದಲಾದವುಗಳಿಂದ ಯಾವ ಲಾಭವಿಲ್ಲ. ಇದು ಕೇವಲ ಭಕ್ತಿಯಾಗಿದೆ. ನೆನಪೂ ಅಲ್ಲ, ಜ್ಞಾನವೂ ಅಲ್ಲ. ಭಕ್ತಿ ಮಾರ್ಗದಲ್ಲಿ ಇದನ್ನು ಕಲಿಸುವವರು ಯಾರೂ ಇರುವುದಿಲ್ಲ. ಆದ್ದರಿಂದ ಸದ್ಗತಿ ಪಡೆಯುವುದಿಲ್ಲ. ಭಲೆ ಎಷ್ಟೇ ಸಾಕ್ಷಾತ್ಕಾರಗಳಾಗಲಿ, ಆರಂಭದಲ್ಲಿ ಮಕ್ಕಳು ಸ್ವತಃ ಹೋಗುತ್ತಿದ್ದರು ಮಮ್ಮಾ ಬಾಬಾ ಹೋಗುತ್ತಿರಲಿಲ್ಲ, ಆರಂಭದಲ್ಲಿ ಬಾಬಾರವರಿಗೆ ಸ್ಥಾಪನೆ ಮತ್ತು ವಿನಾಶದ ಸಾಕ್ಷಾತ್ಕಾರ ಮಾತ್ರ ಆಯಿತು. ಆಮೇಲೆ ಏನೂ ಆಗಲಿಲ್ಲ. ನಾವೇನೂ ಯಾರನ್ನೂ ಕಳಿಸುವುದಿಲ್ಲ. ಕೂಡಿಸಿಕೊಂಡು ಹೇಳುತ್ತೇನೆ - ಇವರ ಬುದ್ಧಿಯೋಗವನ್ನು ಸೆಳೆಯಿರಿ, ಅದೂ ಸಹ ನಾಟಕದಲ್ಲಿದ್ದರೆ ಸೆಳೆಯುತ್ತಾರೆ, ಇಲ್ಲವೆಂದರೆ ಇಲ್ಲ. ಸಾಕ್ಷಾತ್ಕಾರವಂತೂ ಹೆಚ್ಚಾಗಿ ಆಗುತ್ತದೆ. ಹೇಗೆ ಪ್ರಾರಂಭದಲ್ಲಿ ಬಹಳ ಸಾಕ್ಷಾತ್ಕಾರ ಆಗುತ್ತಿತ್ತು. ಅಂತ್ಯದಲ್ಲಿಯೂ ಬಹಳ ಸಾಕ್ಷಾತ್ಕಾರ ಆಗುತ್ತದೆ. ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ. . . . ಇಷ್ಟೊಂದು ಮನುಷ್ಯರಿದ್ದಾರೆ, ಎಲ್ಲರೂ ಶರೀರ ಬಿಡುತ್ತಾರೆ, ಶರೀರ ಸಹಿತವಾಗಿ ಯಾರೂ ಸತ್ಯಯುಗಕ್ಕೆ ಅಥವಾ ಶಾಂತಿಧಾಮಕ್ಕೆ ಹೋಗಲು ಸಾಧ್ಯವಿಲ್ಲ. ಎಷ್ಟು ಮನುಷ್ಯರಿದ್ದಾರೆ, ಅವರೆಲ್ಲರೂ ವಿನಾಶವಾಗುತ್ತಾರೆ. ಆ ನಂತರ ಒಂದು ಆದಿ ಸನಾತನ ದೇವಿ ದೇವತಾ ಧರ್ಮದ ಸ್ಥಾಪನೆ ಬ್ರಹ್ಮಾರ ಮುಖಾಂತರ ಆಗುತ್ತದೆ. ತಾವು ಮಕ್ಕಳು ಹಳ್ಳಿ ಹಳ್ಳಿಗೆ ಹೋಗಿ ಎಷ್ಟು ಸೇವೆ ಮಾಡುತ್ತೀರಿ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತೀರಿ. ಸನ್ಯಾಸಿಗಳಿಗಂತೂ ರಾಜಯೋಗ ಕಲಿಸುವುದು ತಿಳಿದೇ ಇಲ್ಲ. ಆ ತಂದೆಯ ವಿನಃ ರಾಜಯೋಗವನ್ನು ಯಾರು ಕಲಿಸುತ್ತಾರೆ? ತಾವು ಮಕ್ಕಳಿಗೆ ತಂದೆ ಈಗ ರಾಜಯೋಗ ಕಲಿಸುತ್ತಿದ್ದಾರೆ, ನಂತರ ರಾಜ್ಯ ಪದವಿ ಸಿಗುತ್ತದೆ. ತಾವೆಲ್ಲರೂ ಅಪಾರ ಸುಖದಲ್ಲಿರುತ್ತೀರಿ. ಅಲ್ಲಿ ನೆನಪು ಮಾಡುವ ಅವಶ್ಯಕತೆ ಇರುವುದಿಲ್ಲ. ಅಂಶ ಮಾತ್ರವೂ ದುಃಖ ಇರುವುದಿಲ್ಲ. ಆಯುಷ್ಯವು ಬಹಳ ಹೆಚ್ಚು ಇರುತ್ತದೆ, ಶರೀರವು ನಿರೋಗಿಯಾಗಿರುತ್ತದೆ. ಇಲ್ಲಿ ಎಷ್ಟು ದುಃಖವಿದೆ, ತಂದೆ ದುಃಖಕ್ಕಾಗಿ ಈ ಆಟವನ್ನು ರಚಿಸಿದರು ಎಂದಲ್ಲ, ಇದು ಸುಖ ದುಃಖ, ಸೋಲು ಗೆಲುವಿನ, ಆದಿ ಅನಾದಿ ಆಟವಾಗಿದೆ. ಈ ಎಲ್ಲ ಮಾತುಗಳನ್ನು ಸನ್ಯಾಸಿಗಳು ತಿಳಿದಿಲ್ಲವೆಂದಮೇಲೆ ಹೇಗೆ ತಿಳಿಸಲು ಸಾಧ್ಯ? ಅವರು ಭಕ್ತಿಮಾರ್ಗದ ಶಾಸ್ತ್ರ ಇತ್ಯಾದಿಗಳನ್ನು ಓದುವವರಾಗಿದ್ದಾರೆ. ನಿಮಗೆ ಹೇಳಲಾಗಿದೆ - ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂದು. ಆ ಸನ್ಯಾಸಿಗಳು ಆತ್ಮವೆಂದು ತಿಳಿದು ಬ್ರಹ್ಮ್ ವನ್ನು ನೆನಪು ಮಾಡುತ್ತಾರೆ. ಬ್ರಹ್ಮ್ ವನ್ನು ಪರಮಾತ್ಮನೆಂದು ತಿಳಿಯುತ್ತಾರೆ. ಅವರು ಬ್ರಹ್ಮ್ ಜ್ಞಾನಿಗಳಾಗಿದ್ದಾರೆ. ವಾಸ್ತವದಲ್ಲಿ ಬ್ರಹ್ಮ್ ವಾಸಿಸುವ ಸ್ಥಾನವಾಗಿದೆ, ಅಲ್ಲಿ ನಾವೆಲ್ಲ ಆತ್ಮರು ಇರುತ್ತೇವೆ, ಆದರೆ ಸನ್ಯಾಸಿಗಳು ಅಲ್ಲಿ ಲೀನವಾಗುತ್ತೇವೆಂದು ಹೇಳುತ್ತಾರೆ. ಅವರ ಜ್ಞಾನ ಉಲ್ಟಾ ಆಗಿದೆ. ಇಲ್ಲಿ ಬೇಹದ್ದಿನ ತಂದೆ ನಿಮಗೆ ಓದಿಸುತ್ತಾರೆ. ಅವರು ಹೇಳುತ್ತಾರೆ - ಭಗವಂತ 40,000 ವರ್ಷಗಳ ನಂತರ ಬರುತ್ತಾರೆಂದು. ಇದಕ್ಕೆ ಅಜ್ಞಾನ ಅಂಧಕಾರವೆಂದು ಹೇಳುತ್ತಾರೆ. ಹೊಸ ಪ್ರಪಂಚದ ಸ್ಥಾಪನೆ ಮತ್ತು ಹಳೆಯ ಪ್ರಪಂಚದ ವಿನಾಶ ಮಾಡಿಸುವಂತಹವನು ನಾನೇ ಆಗಿದ್ದೇನೆ. ನಾನು ಸ್ಥಾಪನೆ ಮಾಡುತ್ತಿದ್ದೇನೆ, ವಿನಾಶವು ಎದುರಿಗೆ ನಿಂತಿದೆ. ಈಗ ತೀವ್ರ ಪುರುಷಾರ್ಥ ಮಾಡಿ. ಪಾವನರಾಗಿ ಆಗಲೇ ಪಾವನ ಪ್ರಪಂಚಕ್ಕೆ ಹೋಗುತ್ತೀರಿ. ಇದು ಹಳೆಯ ತಮೋಪ್ರಧಾನ ಪ್ರಪಂಚವಾಗಿದೆ. ಇಲ್ಲಿ ಲಕ್ಷ್ಮೀ ನಾರಾಯಣರ ರಾಜ್ಯ ಇದೆಯೇನು? ಇವರ ರಾಜ್ಯ ಹೊಸ ಪ್ರಪಂಚದಲ್ಲಿತ್ತು ಈಗ ಇಲ್ಲ. ಇವರೂ ಸಹ ಪುನರ್ಜನ್ಮ ಪಡೆಯುತ್ತಾ ಬಂದಿದ್ದಾರೆ. ಶಾಸ್ತ್ರದಲ್ಲಿ ಏನೇನೊ ಬರೆದಿದ್ದಾರೆ, ಅರ್ಜುನನ ಕುದುರೆ ಗಾಡಿಯಲ್ಲಿ ಕೃಷ್ಣ ಕುಳಿತಿರುವುದನ್ನು ತೋರಿಸಿದ್ದಾರೆ. ಅರ್ಜುನನ ಒಳಗೆ ಕುಳಿತಂತೆ ಅಲ್ಲ, ಕೃಷ್ಣನು ದೇಹಧಾರಿಯಲ್ಲವೆ. ಯುದ್ಧದ ಮಾತಂತೂ ಯಾವುದೂ ಇಲ್ಲ. ಅವರು ಪಾಂಡವರ ಮತ್ತು ಕೌರವರ ಸೈನ್ಯವನ್ನು ಬೇರೆ ಬೇರೆಯಾಗಿ ತೋರಿಸಿದ್ದಾರೆ. ಇಲ್ಲಿ ಆ ಮಾತುಗಳು ಇಲ್ಲ. ಇದೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ. ಸತ್ಯಯುಗದಲ್ಲಿ ಇದು ಇರುವುದೇ ಇಲ್ಲ. ಅಲ್ಲಿ ಜ್ಞಾನದ ಪ್ರಾಲಬ್ಧ ರಾಜಧಾನಿ ಇರುತ್ತದೆ. ಅಲ್ಲಿ ಸುಖವೇ ಸುಖ ಇರುತ್ತದೆ. ತಂದೆ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಾರೆಂದಮೇಲೆ ಹೊಸ ಪ್ರಪಂಚದಲ್ಲಿ ಅವಶ್ಯವಾಗಿ ಸುಖವೇ ಇರುತ್ತದೆಯಲ್ಲವೆ. ತಂದೆ ಹಳೆಯ ಮನೆಯನ್ನು ಕಟ್ಟುತ್ತಾರೇನು! ತಂದೆಯಂತೂ ಹೊಸ ಮನೆ ಕಟ್ಟುತ್ತಾರೆ. ಅದಾಗಿದೆ ಸೀಮಿತ ಮನೆ. ಇವರು ಹೊಸ ಪ್ರಪಂಚವನ್ನು ಮಾಡುವಂತಹವರಾಗಿದ್ದಾರೆ. ಅದಕ್ಕೆ ಸತೋಪ್ರಧಾನವೆಂದು ಹೇಳುತ್ತಾರೆ. ಈಗ ತಮೋಪ್ರಧಾನ ಅಪವಿತ್ರವಾಗಿದೆ. ಈಗ ತಾವು ಪರದೇಶ ರಾವಣನ ರಾಜ್ಯದಲ್ಲಿ ಕುಳಿತಿದ್ದೀರಿ.

ರಾಮನೆಂದು ಶಿವಬಾಬಾ ಅವರಿಗೆ ಹೇಳುತ್ತಾರೆ, ರಾಮ ರಾಮ ಎಂದು ರಾಮನ ಹೆಸರಿನಲ್ಲಿ ದಾನ ಮಾಡುತ್ತಾರೆ. ಈಗ ಎಲ್ಲಿ ರಾಮ! ಎಲ್ಲಿ ಶಿವಬಾಬಾ! ಈಗ ಶಿವ ಬಾಬಾ ನನ್ನೊಬ್ಬನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಎಲ್ಲಿಂದ ಬಂದಿರೋ ಅಲ್ಲಿಗೆ ಹೋಗಬೇಕಾಗಿದೆ, ಎಲ್ಲಿಯವರೆಗೆ ತಂದೆಯನ್ನು ನೆನಪು ಮಾಡಿ ಪವಿತ್ರರಾಗುವುದಿಲ್ಲ, ಅಲ್ಲಿಯವರೆಗೆ ವಾಪಸ ಹೋಗಲು ಸಾಧ್ಯವಿಲ್ಲ. ನೀವು ಮಕ್ಕಳಲ್ಲಿಯೂ ಕೆಲವರು ಮಾತ್ರ ತಂದೆಯನ್ನು ಚೆನ್ನಾಗಿ ನೆನಪು ಮಾಡುತ್ತೀರಿ. ಬಾಯಿಂದ ಹೇಳುವ ಮಾತಲ್ಲ. ಭಕ್ತಿಯಲ್ಲಿ ರಾಮ ರಾಮ ಎಂದು ಬಾಯಿಂದ ಹೇಳುತ್ತಾರೆ. ಯಾರಾದರೂ ಹೇಳದಿದ್ದರೆ ನಾಸ್ತಿಕರೆಂದು ತಿಳಿಯುತ್ತಾರೆ. ಎಷ್ಟು ಈ ವೃಕ್ಷ ದೊಡ್ಡದಾಗುತ್ತದೆ ಅಷ್ಟು ಭಕ್ತಿಯ ಸಾಮಗ್ರಿ ಹೆಚ್ಚಾಗುತ್ತದೆ. ಬೀಜ ಬಹಳ ಚಿಕ್ಕದಾಗಿರುತ್ತದೆ. ನೀವಿಲ್ಲಿ ಯಾವ ಶಬ್ದ ಮಾಡಬೇಕಾಗಿಲ್ಲ. ನಿಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂದು ಮಾತ್ರ ಹೇಳುತ್ತಾರೆ. ಬಾಯಿಂದ ಏನೂ ಹೇಳಬೇಕಾಗಿಲ್ಲ. ಲೌಕಿಕ ತಂದೆಯನ್ನು ಮಕ್ಕಳು ಬುದ್ಧಿಯಿಂದ ನೆನಪು ಮಾಡುತ್ತಾರೆ. ತಂದೆ ತಂದೆ ಎಂದು ಹೇಳುತ್ತಾ ಕುಳಿತುಕೊಳ್ಳುತ್ತಾರೇನು. ಆತ್ಮದ ತಂದೆ ಯಾರೆಂದು ನಿವೀಗ ತಿಳಿದುಕೊಂಡಿದ್ದೀರಿ. ಆತ್ಮಗಳೆಲ್ಲರೂ ಸಹೋದರ ಸಹೋದರರಾಗಿದ್ದಾರೆ. ಆತ್ಮನಿಗೆ ಬೇರೆ ಯಾವ ಹೆಸರೂ ಇಲ್ಲ. ಶರೀರದ ಹೆಸರು ಬದಲಾಗುತ್ತಿರುತ್ತದೆ. ಆತ್ಮವಂತೂ ಸದಾ ಆತ್ಮವೇ ಆಗಿರುತ್ತದೆ. ಅವರು ಪರಮ ಆತ್ಮ. ಅವರ ಹೆಸರು ಶಿವ. ಅವರಿಗೆ ತಮ್ಮದೇ ಆದ ಶರೀರವಿಲ್ಲ. ಒಂದುವೇಳೆ ನನಗೂ ಶರೀರವಿದ್ದಿದ್ದರೆ ಪುನರ್ಜನ್ಮದಲ್ಲಿ ಬರಬೇಕಾಗುತ್ತದೆ. ಆಮೇಲೆ ನಿಮ್ಮೆಲ್ಲರಿಗೂ ಸದ್ಗತಿಯನ್ನು ಯಾರು ಕೊಡಬೇಕು? ಭಕ್ತಿಮಾರ್ಗದಲ್ಲಿ ನನ್ನನ್ನು ನೆನಪು ಮಾಡುತ್ತಾರೆ. ಅನೇಕ ಚಿತ್ರಗಳಿವೆ. ಈಗ ನೀವು ನರಕವಾಸಿಯಿಂದ ಸ್ವರ್ಗವಾಸಿಯಾಗುತ್ತೀರಲ್ಲವೆ. ಜನ್ಮವಂತೂ ನರಕದಲ್ಲಿಯೇ ಪಡೆದುಕೊಂಡಿದ್ದೀರಿ, ಸ್ವರ್ಗಕ್ಕಾಗಿ ಸಾಯುತ್ತೀರಿ. ಇಲ್ಲಿಗೆ ನೀವು ಸ್ವರ್ಗಕ್ಕೆ ಹೋಗುವುದಕ್ಕೋಸ್ಕರ ಬಂದಿದ್ದೀರಿ. ಹೇಗೆ ಯಾವುದಾದರೂ ಸೇತುವೆ ಇತ್ಯಾದಿ ಕಟ್ಟುವಾಗ ತಳಪಾಯ ಪೂಜೆಯನ್ನು ಮಾಡುತ್ತಾರೆ, ಆ ನಂತರ ಸೇತುವೆಯನ್ನು ಕಟ್ಟುತ್ತಾರೆ. ಸ್ವರ್ಗದ ಸ್ಥಾಪನೆಯ ಉದ್ಘಾಟನೆಯನ್ನು ತಂದೆಯೇ ಮಾಡಿದ್ದಾರೆ, ಈಗ ತಯಾರಿಯು ನಡೆಯುತ್ತಿದೆ. ಮನೆಯನ್ನು ಕಟ್ಟಲು ಸಮಯ ಹಿಡಿಯುತ್ತದೆಯಲ್ಲವೆ. ಸರಕಾರದವರ ಬಳಿ ಬಂದಾಗ ಒಂದು ತಿಂಗಳಲ್ಲಿ ಮನೆ ಕಟ್ಟುತ್ತಾರೆ. ವಿದೇಶದಲ್ಲಿ ತಯಾರ ಆಗಿರುವ ಮನೆಯೇ ಸಿಗುತ್ತದೆ. ಸತ್ಯಯುಗದಲ್ಲಿ ಬಹಳ ವಿಶಾಲ ಬುದ್ಧಿ ಸತೋಪ್ರಧಾನ ಬುದ್ಧಿಯವರಿರುತ್ತಾರೆ. ವಿಜ್ಞಾನದವರ ಬುದ್ಧಿಯು ತೀಕ್ಷ್ಣವಾಗಿರುತ್ತದೆ. ತಕ್ಷಣವೇ ಮಾಡುತ್ತಾ ಹೋಗುತ್ತಾರೆ, ಮನೆಯನ್ನು ಕೂಡಿಸುತ್ತಾ ಹೋಗುತ್ತಾರೆ. ಈಗಿನ ಕಾಲದಲ್ಲಿ ನೋಡಿ ಎಷ್ಟು ಬೇಗ ಅನುಕರಿಸುತ್ತಾರೆ. ಅಲ್ಲಿ ಸತ್ಯತೆಯಿಂದ ಬಹಳ ಹೊಳೆಯುತ್ತಿರುತ್ತದೆ, ಮತ್ತು ಈಗಿನ ಕಾಲದಲ್ಲಿ ಯಂತ್ರೋಪಕರಣಗಳಿಂದ ಬೇಗ ಮಾಡುತ್ತಾರೆ. ಅಲ್ಲಿ ಮನೆಯನ್ನು ಮಾಡುವುದರಲ್ಲಿ ನಿಧಾನವಾಗುವುದಿಲ್ಲ. ಸ್ವಚ್ಚವಾಗುವುದರಲ್ಲಿ ಸಮಯ ಹಿಡಿಯುತ್ತದೆ. ಚಿನ್ನದ ದ್ವಾರಿಕೆ ಸಮುದ್ರದಿಂದ ಹೊರ ಬರುತ್ತದೆ ಎಂದಲ್ಲ. ಅಂದಮೇಲೆ ತಂದೆಯು ಹೇಳುತ್ತಾರೆ, ಭಲೆ ತಿನ್ನಿರಿ, ಕುಡಿಯಿರಿ, ಕೇವಲ ತಂದೆಯನ್ನು ನೆನಪು ಮಾಡಿದ್ದೇ ಆದರೆ ವಿಕರ್ಮ ವಿನಾಶವಾಗುತ್ತದೆ. ಬೇರೆ ಯಾವ ಉಪಾಯವಿಲ್ಲ. ಜನ್ಮ ಜನ್ಮಾಂತರದಿಂದ ಗಂಗಾ ಸ್ನಾನ ಇತ್ಯಾದಿ ಮಾಡುತ್ತಾ ಬಂದಿರಿ. ಆದರೆ ಯಾರೂ ಸಹ ಮುಕ್ತಿ ಜೀವನ್ಮುಕ್ತಿ ಪಡೆಯಲಿಲ್ಲ. ಇಲ್ಲಿ ತಂದೆಯು ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ತಂದೆ ನಾನೇ ಪತಿತ ಪಾವನನಾಗಿದ್ದೇನೆಂದು ಹೇಳುತ್ತಾರೆ. ನೀವೆಲ್ಲರೂ ನನ್ನನ್ನು ಪತಿತ ಪಾವನ ತಂದೆ ಬಾ, ಬಂದು ನಮ್ಮನ್ನು ಪಾವನರನ್ನಾಗಿ ಮಾಡು ಎಂದು ಕರೆದಿರಲ್ಲವೆ. ನಾಟಕ ಮುಗಿದಾಗ ಎಲ್ಲಾ ಪಾತ್ರಧಾರಿಗಳು ರಂಗಮಂಚದ ಮೇಲೆ ಇರಬೇಕಲ್ಲವೆ. ರಚಯಿತನೂ ಇರಬೇಕು. ಎಲ್ಲರೂ ನಿಲ್ಲುತ್ತಾರೆ. ಇಲ್ಲಿಯೂ ಅದೇ ರೀತಿ ಎಲ್ಲ ಆತ್ಮರು ಬಂದ ಮೇಲೆ ಹಿಂತಿರುಗಿ ಹೋಗಬೇಕಾಗುತ್ತದೆ. ಈಗ ನೀವು ಸಿದ್ಧರಾಗಿಲ್ಲ. ಕರ್ಮಾತೀತ ಸ್ಥಿತಿ ಇನ್ನೂ ಆಗಿಲ್ಲವೆಂದಮೇಲೆ ವಿನಾಶ ಹೇಗೆ ಆಗುತ್ತದೆ? ತಂದೆ ಬರುವುದೇ ನಿಮಗೆ ಹೊಸ ಪ್ರಪಂಚಕ್ಕಾಗಿ ವಿದ್ಯೆಯನ್ನು ಓದಿಸಲು. ಅಲ್ಲಿ ಮೃತ್ಯು ಇರುವುದಿಲ್ಲ. ನೀವೆಲ್ಲರೂ ಮೃತ್ಯುವಿನ ಮೇಲೆ ವಿಜಯವನ್ನು ಪಡೆಯುತ್ತಿರಿ. ಯಾರು ವಿಜಯ ಗಳಿಸಿಕೊಡುತ್ತಾರೆ? ಅವರು ಕಾಲರ ಕಾಲ ಆಗಿದ್ದಾರೆ. ಅವರು ಎಷ್ಟು ಜನರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ! ನೀವೆಲ್ಲರೂ ಖುಷಿಯಿಂದ ಹೊರಡುತ್ತೀರಿ. ಈಗ ತಂದೆ ಬಂದಿದ್ದಾರೆ ಎಲ್ಲರ ದುಃಖವನ್ನು ದೂರ ಮಾಡಲಿಕ್ಕಾಗಿ. ಆದ್ದರಿಂದ ಅವರ ಮಹಿಮೆಯನ್ನು ಹಾಡುತ್ತಾರೆ. ಗಾಡ್ ಫಾದರ್ ಈ ದುಃಖದಿಂದ ನಮ್ಮನ್ನು ಮುಕ್ತರನ್ನಾಗಿ ಮಾಡು ಎಂದು. ಶಾಂತಿಧಾಮ, ಸುಖಧಾಮಕ್ಕೆ ಕರೆದುಕೊಂಡು ಹೋಗು ಎಂದು ಹಾಡುತ್ತಾರೆ. ಆದರೆ ಈಗ ಇಲ್ಲಿ ಮನುಷ್ಯರಿಗೆ ತಂದೆ ಸ್ವರ್ಗದ ರಚನೆಯನ್ನು ಮಾಡುತ್ತಾರೆಂಬುದು ತಿಳಿದೇ ಇಲ್ಲ. ನೀವೆಲ್ಲರೂ ಸ್ವರ್ಗಕ್ಕೆ ಹೋಗುತ್ತೀರಿ ಅಲ್ಲಿ ವೃಕ್ಷವು ಬಹಳ ಚಿಕ್ಕದಾಗಿರುತ್ತದೆ ನಂತರ ವೃದ್ಧಿ ಹೊಂದುತ್ತದೆ. ಈಗ ಎಲ್ಲ ಧರ್ಮಗಳೂ ಇವೆ ಆದರೆ ಆ ಒಂದು ಧರ್ಮ ಇಲ್ಲ. ನಾಮ, ರೂಪ, ರಾಜ್ಯ ಎಲ್ಲವೂ ಬದಲಾಗುತ್ತದೆ. ಮೊದಲು ಡಬಲ್ ಕಿರೀಟ, ನಂತರ ಸಿಂಗಲ್ ಕಿರೀಟಧಾರಿಯಾಗುತ್ತಾರೆ. ಸೋಮನಾಥ ಮಂದಿರವನ್ನು ಮಾಡಿದ್ದಾರೆ, ಅಲ್ಲಿ ಅಪಾರ ಧನವಿತ್ತು. ಎಲ್ಲದಕ್ಕಿಂತ ದೊಡ್ದ ಮಂದಿರ ಅದಾಗಿತ್ತು, ಅದನ್ನು ಲೂಟಿ ಮಾಡಿ ಹೊತ್ತುಕೊಂಡು ಹೋದರು. ನೀವು ಪದಮಾ ಪದಮ ಭಾಗ್ಯಶಾಲಿಗಳಾಗುತ್ತೀರೆಂದು ತಂದೆ ಹೇಳುತ್ತಾರೆ. ಹೆಜ್ಜೆ ಹೆಜ್ಜೆಯಲ್ಲಿ ತಂದೆಯನ್ನು ನೆನಪು ಮಾಡಿದರೆ ಪದಮವು ಒಟ್ಟಿಗೆ ಸೇರುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ಇಷ್ಟು ಸಂಪಾದನೆಯಾಗುತ್ತದೆ. ಆದರೆ ಇಂತಹ ತಂದೆಯನ್ನು ನೆನಪು ಮಾಡುವುದನ್ನು ನೀವು ಏಕೆ ಮರೆಯುತ್ತೀರಿ? ಎಷ್ಟು ತಂದೆಯನ್ನು ನೆನಪು ಮಾಡುತ್ತೀರಿ, ಎಷ್ಟು ಸೇವೆ ಮಾಡುತ್ತೀರಿ ಅಷ್ಟು ಒಳ್ಳೆಯ ಪದವಿಯನ್ನು ಪಡೆಯುತ್ತೀರಿ. ಒಳ್ಳೊಳ್ಳೆಯ ಮಕ್ಕಳು ಸಹ ನಡೆಯುತ್ತಾ ನಡೆಯುತ್ತಾ ಬಿದ್ದು ಬಿಡುತ್ತಾರೆ. ಕಪ್ಪು ಮುಖ ಮಾಡಿಕೊಂಡಿದ್ದೇ ಆದರೆ ಸಂಪಾದನೆಯು ಹಾಳಾಗಿ ಬಿಡುತ್ತದೆ. ಅಧಿಕಾರದಿಂದ ಸಿಕ್ಕಿರುವ ಲಾಟರಿಯನ್ನು ಕಳೆದುಕೊಳ್ಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾ ಅವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಗ್ರಹಸ್ಥ ವ್ಯವಹಾರವನ್ನು ಸಂಭಾಲನೆ ಮಾಡುತ್ತಾ ಬುದ್ಧಿಯೋಗವನ್ನು ತಂದೆಯ ಜೊತೆಗೆ ಇಡಬೇಕಾಗಿದೆ. ತಪ್ಪು ಮಾಡಬಾರದು. ಪವಿತ್ರತೆಯ ಧಾರಣೆಯಿಂದ ತಮ್ಮ ಮತ್ತು ಸರ್ವರ ಕಲ್ಯಾಣ ಮಾಡಬೇಕು.

2. ನೆನಪಿನ ಯಾತ್ರೆ ಮತ್ತು ವಿದ್ಯೆಯಲ್ಲಿಯೇ ಸಂಪಾದನೆಯಿದೆ. ಧ್ಯಾನ, ಸಾಕ್ಷಾತ್ಕಾರದಿಂದ ಯಾವ ಲಾಭವಿಲ್ಲ. ಎಷ್ಟು ಸಾಧ್ಯವೊ ಅಷ್ಟು ಜಾಗೃತರಾಗಿ. ತಂದೆಯನ್ನು ನೆನಪು ಮಾಡಿ ತಮ್ಮ ವಿಕರ್ಮ ವಿನಾಶ ಮಾಡಿಕೊಳ್ಳಿ.

ವರದಾನ:
ತಂದೆಯಿಂದ ಶಕ್ತಿ ಪಡೆದು ಎಲ್ಲಾ ಪರಿಸ್ಥಿತಿಯನ್ನು ನಿಭಾಯಿಸುವಂತಹವರೇ ಸಾಕ್ಷಿದೃಷ್ಠಾ ಭವ.

ನೀವು ಮಕ್ಕಳು ತಿಳಿದಿರುವಿರಿ ಅತಿಯ ನಂತರ ಅಂತ್ಯವಾಗಲೇ ಬೇಕು. ಆದ್ದರಿಂದ ಎಲ್ಲ ಪ್ರಕಾರದ ಹಲ್-ಚಲ್ ಗಳು ಅತಿಯಲ್ಲಿ ಹೋಗುವುದು, ಪರಿವಾರದಲ್ಲಿಯೂ ಸಹ ಕಿಟ್-ಪಿಟ್ ಆಗುವುದು, ಮನಸ್ಸಿನಲ್ಲಿಯೂ ಸಹ ಅನೇಕ ಜಂಜಾಟಗಳು ಬರುವುದು, ಹಣವೂ ಸಹ ಮೇಲೆ-ಕೆಳಗೆ ಆಗುವುದು. ಆದರೆ ಯಾರು ತಂದೆಯ ಜೊತೆಗಾರರಾಗಿರುತ್ತಾರೆ, ಸತ್ಯವಾಗಿರುತ್ತಾರೆ ಅವರ ಜವಾಬ್ದಾರಿ ತಂದೆಯಾಗಿದ್ದಾರೆ. ಇಂತಹ ಸಮಯದಲ್ಲಿ ಮನಸ್ಸು ತಂದೆಯ ಕಡೆ ಇದ್ದಾಗ ನಿರ್ಣಯ ಶಕ್ತಿಯಿಂದ ಎಲ್ಲವನ್ನೂ ಪಾರು ಮಾಡುವರು. ಸಾಕ್ಷಿದೃಷ್ಠಾ ಆಗಿ ಬಿಡಿ ಆಗ ತಂದೆಯ ಶಕ್ತಿಯಿಂದ ಎಲ್ಲಾ ಪರಿಸ್ಥಿತಿಯನ್ನು ಸಹಜವಾಗಿ ನಿಭಾಯಿಸುತ್ತಾರೆ.

ಸ್ಲೋಗನ್:
ಈಗ ಎಲ್ಲಾ ದಡಗಳನ್ನು ಬಿಟ್ಟು ಮನೆಗೆ ಹೋಗುವ ತಯಾರಿ ಮಾಡಿಕೊಳ್ಳಿ.