26.01.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈಗ ನಿಮ್ಮ ಕೂಗು ಆಲಿಸಲಾಗುತ್ತದೆ, ತಂದೆಯು ನಿಮ್ಮನ್ನು ದುಃಖದಿಂದ ಬಿಡಿಸಿ ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆ, ಈಗ ನಿಮ್ಮೆಲ್ಲರದು ವಾನಪ್ರಸ್ಥ ಸ್ಥಿತಿಯಾಗಿದೆ, ಹಿಂತಿರುಗಿ ಮನೆಗೆ ಹೋಗಬೇಕಾಗಿದೆ”

ಪ್ರಶ್ನೆ:
ಸದಾ ಯೋಗಯುಕ್ತರಾಗಿರಲು ಮತ್ತು ಶ್ರೀಮತದಂತೆ ನಡೆಯುವ ಆಜ್ಞೆಯು ಪ್ರತೀ ಮಗುವಿಗೂ ಪದೇ-ಪದೇ ಏಕೆ ಸಿಗುತ್ತಿರುತ್ತದೆ?

ಉತ್ತರ:
ಏಕೆಂದರೆ ಈಗ ಅಂತಿಮ ವಿನಾಶದ ದೃಶ್ಯವು ಸಮೀಪವಿದೆ. ಕೋಟ್ಯಾಂತರ ಮನುಷ್ಯರು ಸಾಯುತ್ತಾರೆ, ಪ್ರಾಕೃತಿಕ ವಿಕೋಪಗಳಾಗುತ್ತವೆ. ಆ ಸಮಯದಲ್ಲಿ ಸ್ಥಿತಿಯು ಏಕರಸವಾಗಿರಲಿ, ಎಲ್ಲಾ ದೃಶ್ಯಗಳನ್ನು ನೋಡುತ್ತಿದ್ದರೂ ಸಹ ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ..... ಈ ರೀತಿ ಅನುಭವವಾಗಲಿ, ಅದಕ್ಕಾಗಿ ಯೋಗಯುಕ್ತರಾಗಿರಬೇಕಾಗಿದೆ. ಶ್ರೀಮತದಂತೆ ನಡೆಯುವಂತಹ ಯೋಗಿ ಮಕ್ಕಳೇ ಆನಂದದಲ್ಲಿರುತ್ತಾರೆ. ಅವರ ಬುದ್ಧಿಯಲ್ಲಿರುತ್ತದೆ - ನಾವು ಹಳೆಯ ಶರೀರವನ್ನು ಬಿಟ್ಟು ನಮ್ಮ ಮಧುರ ಮನೆಗೆ ಹೋಗುತ್ತೇವೆ.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳೊಂದಿಗೆ ಆತ್ಮಿಕ ವಾರ್ತಾಲಾಪವನ್ನು ಮಾಡುತ್ತಿದ್ದಾರೆ ಅಥವಾ ಆತ್ಮಗಳಿಗೆ ತಿಳಿಸುತ್ತಿದ್ದಾರೆ. ಏಕೆಂದರೆ ಆತ್ಮಗಳು ಭಕ್ತಿ ಮಾರ್ಗದಲ್ಲಿ ಬಹಳ ನೆನಪು ಮಾಡುತ್ತಿದ್ದರು. ಒಬ್ಬ ಪ್ರಿಯತಮನಿಗೆ ಎಲ್ಲರೂ ಪ್ರಿಯತಮೆಯರಾಗಿದ್ದಾರೆ. ಆ ಪ್ರಿಯತಮ ಶಿವತಂದೆಯ ಚಿತ್ರ ಮಾಡಲ್ಪಟ್ಟಿದೆ, ಅವರನ್ನು ಕುಳಿತು ಪೂಜಿಸುತ್ತಾರೆ. ಅವರಿಂದ ಏನು ಬೇಡಬೇಕೆಂದು ಅವರಿಗೆ ಗೊತ್ತಿಲ್ಲ. ಪೂಜೆಯಂತೂ ಎಲ್ಲರೂ ಮಾಡುತ್ತಾರೆ. ಶಂಕರಾಚಾರ್ಯರೂ ಪೂಜೆ ಮಾಡುತ್ತಿದ್ದರು, ಎಲ್ಲರೂ ಅವರನ್ನು ಶ್ರೇಷ್ಠರೆಂದು ತಿಳಿದುಕೊಂಡಿದ್ದಾರೆ. ಭಲೇ ಧರ್ಮ ಸ್ಥಾಪಕರಾಗಿದ್ದಾರೆ ಆದರೆ ಅವರೂ ಸಹ ಪುನರ್ ಜನ್ಮವನ್ನು ತೆಗೆದುಕೊಳ್ಳುತ್ತಾ ಕೆಳಗಿಳಿಯುತ್ತಾ ಬರುತ್ತಾರೆ. ಈಗ ಎಲ್ಲರೂ ಅಂತಿಮ ಜನ್ಮದಲ್ಲಿ ಬಂದು ತಲುಪಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವು ಚಿಕ್ಕವರು-ದೊಡ್ಡವರದು ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ನಾನು ನಿಮ್ಮೆಲ್ಲರನ್ನು ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗುತ್ತೇನೆ. ಪತಿತ ಪ್ರಪಂಚದಲ್ಲಿ ಬನ್ನಿ ಎಂದೇ ನನ್ನನ್ನು ಕರೆಯುತ್ತಾರೆ, ಎಷ್ಟೊಂದು ಗೌರವವನ್ನಿಡುತ್ತಾರೆ. ಪತಿತ-ಪಾವನ ಪರದೇಶದಲ್ಲಿ ಬನ್ನಿ. ಅವಶ್ಯವಾಗಿ ದುಃಖಿಗಳಾಗಿದ್ದೇವೆ ಆಗಲೇ ಕರೆಯುತ್ತೇವೆ. ದುಃಖಹರ್ತ-ಸುಖಕರ್ತ ಎಂದು ಗಾಯನ ಮಾಡಲಾಗುತ್ತದೆ ಅಂದಾಗ ಅವಶ್ಯವಾಗಿ ಛೀ ಛೀ ಹಳೆಯ ಪ್ರಪಂಚ, ಹಳೆಯ ಶರೀರದಲ್ಲಿ ಬರಬೇಕಾಗುವುದು ಅದೂ ತಮೋಪ್ರಧಾನದ ಶರೀರದಲ್ಲಿ ಬರಬೇಕಾಗುವುದು. ಸತೋಪ್ರಧಾನ ಪ್ರಪಂಚದಲ್ಲಿ ನನ್ನನ್ನು ಯಾರೂ ನೆನಪು ಮಾಡುವುದಿಲ್ಲ. ಡ್ರಾಮಾನುಸಾರ ಎಲ್ಲರನ್ನು ಸುಖಿಗಳನ್ನಾಗಿ ಮಾಡುತ್ತೇನೆ. ಸತ್ಯಯುಗದಲ್ಲಿ ಅವಶ್ಯವಾಗಿ ಆದಿ ಸನಾತನ ದೇವಿ-ದೇವತಾ ಧರ್ಮವಿರುತ್ತದೆ, ಅನ್ಯ ಸತ್ಸಂಗಗಳಲ್ಲಂತೂ ಕೇವಲ ಶಾಸ್ತ್ರವನ್ನು ಓದುತ್ತಾ-ಓದುತ್ತಾ ಕೆಳಗಿಳಿಯುತ್ತಲೇ ಹೋಗುತ್ತಾರೆ ಎಂಬುದನ್ನು ಬುದ್ಧಿಯಿಂದ ತಿಳಿಯಬೇಕಾಗಿದೆ. ಕೆಸರಿನಲ್ಲಿ ಬಿದ್ದವರು ದುಃಖಿಗಳಾಗುತ್ತಾರೆ, ಇದಂತೂ ದುಃಖಧಾಮವೇ ಆಗಿದೆ, ಅದು ಸುಖಧಾಮವಾಗಿದೆ. ತಂದೆಯು ಎಷ್ಟೊಂದು ಸಹಜವಾಗಿ ತಿಳಿಸುತ್ತಿದ್ದಾರೆ ಏಕೆಂದರೆ ಅಸಹಾಯ ಅಬಲೆಯರು ಸ್ವಲ್ಪವೂ ತಿಳಿದುಕೊಳ್ಳಲು ಆಗುವುದಿಲ್ಲ. ನಾವು ಹಿಂತಿರುಗಿ ಹೋಗಲೇಬೇಕಾಗಿದೆ ಮತ್ತು ಸದಾ ಪುನರ್ ಜನ್ಮವನ್ನು ತೆಗೆದುಕೊಳ್ಳುತ್ತಾ ಇರುತ್ತೇವೆ ಎಂಬುದು ಯಾರಿಗೂ ಗೊತ್ತೇ ಇಲ್ಲ. ಈಗಂತೂ ಎಲ್ಲಾ ಧರ್ಮದವರೂ ಇದ್ದಾರೆ. ಮೊದಲು ಸ್ವರ್ಗವಿದ್ದಾಗ ಒಂದೇ ಧರ್ಮವಿತ್ತು ಪೂರ್ಣ ಚಕ್ರವೇ ಬುದ್ಧಿಯಲ್ಲಿದೆ, ಬೇರೆ ಯಾರಿಗೂ ಈ ಮಾತುಗಳು ಬುದ್ಧಿಯಲ್ಲಿ ಕುಳಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅವರಂತೂ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ, ಇದಕ್ಕೆ ಘೋರ ಅಂಧಕಾರವೆಂದು ಹೇಳಲಾಗುತ್ತದೆ. ಜ್ಞಾನವು ಸಂಪೂರ್ಣ ಬೆಳಕಾಗಿದೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿ ಪ್ರಕಾಶವಿದೆ. ನೀವು ಯಾವುದೇ ಮಂದಿರ ಮುಂತಾದವುಗಳಿಗೆ ಹೋಗುತ್ತೀರೆಂದರೆ ನಾವು ಶಿವತಂದೆಯ ಬಳಿಗೆ ಹೋಗುತ್ತೇವೆಂದು ನೀವು ಹೇಳುತ್ತೀರಿ. ಇಂತಹ ಲಕ್ಷ್ಮೀ-ನಾರಾಯಣರು ನಾವಾಗುತ್ತೇವೆ ಎನ್ನುವ ಮಾತುಗಳು ಅನ್ಯ ಸತ್ಸಂಗಗಳಲ್ಲಿ ಇರುವುದಿಲ್ಲ. ಅದೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಈಗ ನೀವು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದಿದ್ದೀರಿ. ಋಷಿ ಮುನಿ ಮುಂತಾದವರು ರಚಯಿತನ ಬಗ್ಗೆ ನಮಗೆ ಏನೂ ತಿಳಿದಿಲ್ಲವೆಂದು ಹೇಳುತ್ತಿದ್ದರು. ನೀವೂ ಸಹ ಮೊದಲು ಏನನ್ನೂ ತಿಳಿದುಕೊಂಡಿರಲಿಲ್ಲ. ಈ ಸಮಯದಲ್ಲಿ ಇಡೀ ವಿಶ್ವದಲ್ಲಿ ಭಕ್ತಿಯಿದೆ. ಇದು ಹಳೆಯ ಪ್ರಪಂಚವಾಗಿದೆ, ಎಷ್ಟೊಂದು ಜನರಿದ್ದಾರೆ. ಸತ್ಯಯುಗದ ಹೊಸ ಪ್ರಪಂಚದಲ್ಲಂತೂ ಒಂದೇ ಅದ್ವೈತ ಧರ್ಮವಿತ್ತು ನಂತರ ದ್ವೈತ ಧರ್ಮವಾಗುತ್ತದೆ. ಅನೇಕ ಧರ್ಮಗಳಿಂದ ಕಲಹಗಳಾಗುತ್ತವೆ. ಎಲ್ಲರಿಗೂ ಒಬ್ಬರಿಂದೊಬ್ಬರಿಗೆ ಕಲಹಗಳು ಆಗುತ್ತಿರುತ್ತವೆ. ಡ್ರಾಮಾನುಸಾರ ಅವರ ಪಾಲಿಸಿಯೇ ಅದಾಗಿರುತ್ತದೆ. ಯಾರೇ ಒಬ್ಬರನ್ನು ಬೇರೆ ಮಾಡಿದರೆ ಯುದ್ಧವಾಗುತ್ತದೆ, ವಿಭಜನೆಗಳಾಗುತ್ತವೆ. ಮನುಷ್ಯರು ತಂದೆಯನ್ನು ತಿಳಿದುಕೊಳ್ಳದೇ ಇರುವ ಕಾರಣ ಕಲ್ಲು ಬುದ್ಧಿಯವರಾಗಿದ್ದಾರೆ. ದೇವಿ-ದೇವತಾ ಧರ್ಮವು ಪ್ರಾಯಲೋಪವಾಗಿ ಬಿಟ್ಟಿದೆ ಎಂದು ಈ ಸಮಯದಲ್ಲಿ ತಂದೆಯು ತಿಳಿಸುತ್ತಾರೆ. ದೇವಿ-ದೇವತೆಗಳ ರಾಜ್ಯವಿತ್ತೆಂದು ಯಾರೊಬ್ಬರಿಗೂ ತಿಳಿದಿಲ್ಲ. ನಾವು ಅಂತಹ ದೇವತೆಗಳಾಗುತ್ತಿದ್ದೇವೆಂದು ಈಗ ತಿಳಿದಿದ್ದೀರಿ. ಶಿವಬಾಬಾ ನಮ್ಮ ವಿಧೇಯ ಸೇವಕರಾಗಿದ್ದಾರೆ. ಗಣ್ಯ ವ್ಯಕ್ತಿಗಳು ಪತ್ರವನ್ನು ಬರೆದ ನಂತರ ಕೆಳಗೆ ವಿಧೇಯ ಸೇವಕರೆಂದು ಬರೆಯುತ್ತಾರೆ ಹಾಗೆಯೇ ತಂದೆಯೂ ಸಹ ತಿಳಿಸುತ್ತಾರೆ- ನಾನು ವಿಧೇಯ ಸೇವಕನೆಂದು ಹೇಳುತ್ತಾರೆ. ದಾದಾರವರೂ ಸಹ ನಾನು ವಿಧೇಯ ಸೇವಕನೆಂದು ಹೇಳುತ್ತಾರೆ. ನಾನು ಮತ್ತೆ 5000 ವರ್ಷಗಳ ನಂತರ ಪ್ರತೀ ಕಲ್ಪ ಪುರುಷೋತ್ತಮ ಸಂಗಮಯುಗದಲ್ಲಿ ಬರುತ್ತೇನೆ, ಬಂದು ಮಕ್ಕಳ ಸೇವೆಯನ್ನು ಮಾಡುತ್ತೇನೆ. ನನಗೆ ದೂರ ದೇಶದಲ್ಲಿ ಇರುವವರು..... ಎಂದು ಕರೆಯುತ್ತಾರೆ. ಇದರ ಅರ್ಥವನ್ನೂ ಸಹ ತಿಳಿದುಕೊಂಡಿಲ್ಲ. ಇಷ್ಟೆಲ್ಲಾ ಶಾಸ್ತ್ರಗಳನ್ನು ಓದುತ್ತಾರೆ ಆದರೆ ಅರ್ಥವನ್ನಂತೂ ತಿಳಿದುಕೊಂಡಿಲ್ಲ. ತಂದೆಯು ಬಂದು ಎಲ್ಲಾ ವೇದ ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಈ ಸಮಯದಲ್ಲಿ ರಾವಣ ರಾಜ್ಯವೆಂದು ನೀವು ಮಕ್ಕಳಿಗೆ ಗೊತ್ತಿದೆ. ಮನುಷ್ಯರು ಪತಿತರಾಗುತ್ತಾ ಹೋಗುತ್ತಾರೆ. ಇದೂ ಸಹ ಡ್ರಾಮಾದಲ್ಲಿ ನಿಗಧಿ ಮಾಡಲ್ಪಟ್ಟಿದೆ. ತಾವು ಮಕ್ಕಳನ್ನು ನರಕದಿಂದ ತೆಗೆದು ಸ್ವರ್ಗಕ್ಕೆ ಕರೆದೊಯ್ಯುತ್ತಾರೆ. ಅದಕ್ಕೆ ಭಗವಂತನ ಹೂದೋಟವೆನ್ನುತ್ತಾರೆ, ಇದು ಮುಳ್ಳುಗಳ ಕಾಡಾಗಿದೆ. ಸಂಗಮಯುಗವು ಹೂಗಳ ತೋಟವಾಗಿದೆ. ಅಲ್ಲಿ ತಾವು ಸದಾ ಸುಖಿಗಳಾಗಿರುತ್ತೀರಿ, ಸದಾಕಾಲಕ್ಕೆ ಆರೋಗ್ಯ ಮತ್ತು ಐಶ್ವರ್ಯವಂತರಾಗುತ್ತೀರಿ. ಅರ್ಧಕಲ್ಪ ಸುಖ ನಂತರ ಅರ್ಧಕಲ್ಪ ದುಃಖ, ಈ ಚಕ್ರವು ಸುತ್ತುತ್ತಲೇ ಇರುತ್ತದೆ. ಇದರ ಅಂತ್ಯವಾಗುವುದೇ ಇಲ್ಲ. ಎಲ್ಲರಿಗಿಂತ ದೊಡ್ಡ ತಂದೆ ಎಲ್ಲರನ್ನು ಶಾಂತಿಧಾಮ ಮತ್ತು ಸುಖಧಾಮಕ್ಕೆ ಕರೆದೊಯ್ಯುತ್ತಾರೆ. ತಾವು ಯಾವಾಗ ಸುಖಧಾಮಕ್ಕೆ ಹೋಗುತ್ತೀರಿ ಉಳಿದವರೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ಅರ್ಧಕಲ್ಪ ಸುಖ ಮತ್ತು ಅರ್ಧಕಲ್ಪ ದುಃಖ, ಅದರಲ್ಲಿಯೂ ಸುಖವು ಹೆಚ್ಚಾಗಿದೆ. ಒಂದು ವೇಳೆ ಅರ್ಧ-ಅರ್ಧವಾದರೆ ರುಚಿ ಏನು ಬರುತ್ತದೆ. ಭಕ್ತಿಮಾರ್ಗದಲ್ಲೂ ಬಹಳ ಧನವಂತರಾಗಿದ್ದಿರಿ. ಈಗ ತಮಗೆ ನಾವೆಷ್ಟು ಧನವಂತರಾಗಿದ್ದೆವು ಎಂಬುದು ನೆನಪು ಬರುತ್ತದೆ. ಯಾವಾಗ ಶ್ರೀಮಂತರು ದಿವಾಳಿಯಾಗಿ ಬಿಡುತ್ತಾರೆ ಆಗ ಎಷ್ಟು ಧನವಿತ್ತು, ಎಷ್ಟು ಸಂಪತ್ತಿತ್ತು ಎಂಬುದು ನೆನಪಿಗೆ ಬರುತ್ತದೆ. ತಂದೆಯು ತಿಳಿಸುತ್ತಾರೆ - ಭಾರತವು ಎಷ್ಟು ಶ್ರೀಮಂತವಾಗಿತ್ತು, ಸ್ವರ್ಗವಾಗಿತ್ತು, ಈಗ ಇಷ್ಟೊಂದು ಬಡ ದೇಶವಾಗಿದೆ. ಬಡವರ ಮೇಲೆಯೇ ದಯೆ ಬರುತ್ತದೆ. ಈಗ ಸಂಪೂರ್ಣ ಕಂಗಾಲಾಗಿದೆ. ಭಿಕ್ಷೆ ಬೇಡುತ್ತಿದ್ದಾರೆ. ಯಾರು ಶ್ರೀಮಂತರಾಗಿದ್ದರೋ ಅವರೇ ಬಡವರಾಗಿದ್ದಾರೆ. ಇದೂ ಸಹ ನಾಟಕವಾಗಿದೆ ಉಳಿದ ಯಾವೆಲ್ಲಾ ಧರ್ಮಗಳು ಬರುತ್ತವೆಯೋ ಅವು ರೆಂಬೆ ಕೊಂಬೆಗಳಾಗಿದೆ. ಎಷ್ಟೊಂದು ಧರ್ಮದ ಮನುಷ್ಯರು ವೃದ್ಧಿಯಾಗುತ್ತಾರೆ, ಭಾರತವಾಸಿಗಳದೇ 84 ಜನ್ಮಗಳಾಗಿದೆ. ಒಂದು ಮಗು ಬೇರೆ ಧರ್ಮಗಳ ಲೆಕ್ಕಾಚಾರವನ್ನು ತೆಗೆದು ಬರೆದು ಕಳುಹಿಸಿದ್ದರು. ಆದರೆ ಹೆಚ್ಚಾಗಿ ಈ ಮಾತುಗಳಲ್ಲಿ ಹೋಗುವುದರಿಂದ ಯಾವುದೇ ಲಾಭವಿಲ್ಲ. ಇದೂ ಸಹ ಸಮಯ ವ್ಯರ್ಥವಾಯಿತು. ಇಷ್ಟು ಸಮಯ ಒಂದು ವೇಳೆ ತಂದೆಯ ನೆನಪಿನಲ್ಲಿದ್ದರೆ ಎಷ್ಟೊಂದು ಸಂಪಾದನೆಯಾಗುತ್ತಿತ್ತು. ನಾವು ಪೂರ್ಣ ಪುರುಷಾರ್ಥ ಮಾಡಿ ವಿಶ್ವದ ಮಾಲೀಕರಾಗಬೇಕು ಎಂಬುದು ಮುಖ್ಯ ಮಾತಾಗಿದೆ. ತಂದೆಯು ಹೇಳುತ್ತಾರೆ - ನೀವೇ ಸತೋಪ್ರಧಾನರಾಗಿದ್ದಿರಿ, ತಾವೇ ತಮೋಪ್ರಧಾನರಾಗಿದ್ದೀರಿ. 84 ಜನ್ಮಗಳನ್ನು ನೀವೇ ಪಡೆದಿದ್ದೀರಿ, ಈಗ ಹಿಂತಿರುಗಬೇಕು. ತಂದೆಯಿಂದ ಆಸ್ತಿಯನ್ನು ಪಡೆಯಬೇಕು. ತಾವು ಅರ್ಧಕಲ್ಪ ತಂದೆಯನ್ನು ನೆನಪು ಮಾಡಿದಿರಿ, ನಿಮ್ಮ ಮಾತನ್ನು ಆಲಿಸಲು ಈಗ ತಂದೆಯು ಬಂದಿದ್ದಾರೆ. ತಂದೆಯು ನಿಮ್ಮನ್ನು ಸುಖಧಾಮಕ್ಕೆ ಕರೆದೊಯ್ಯುತ್ತಾರೆ. ಭಾರತದ ಉತ್ಥಾನ ಮತ್ತು ಪತನವು ಒಂದು ರೀತಿಯ ಕಥೆಯಾಗಿದೆ. ಈಗ ಇದು ಪತಿತ ಜಗತ್ತಾಗಿದೆ, ಸಂಬಂಧವೂ ಸಹ ಹಳೆಯದಾಗಿದೆ. ಈಗ ಮತ್ತೆ ಹೊಸ ಸಂಬಂಧಕ್ಕೆ ಹೋಗಬೇಕಾಗಿದೆ. ಈ ಸಮಯದಲ್ಲಿ ಎಲ್ಲಾ ಪಾತ್ರಧಾರಿಗಳೂ ಸಹ ಹಾಜರಿದ್ದಾರೆ. ಇದರಲ್ಲಿ ಯಾವುದೇ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಆತ್ಮ ಅವಿನಾಶಿಯಾಗಿದೆ, ಎಷ್ಟೊಂದು ಆತ್ಮರಿದ್ದಾರೆ ಅವರು ಎಂದೂ ವಿನಾಶವಾಗುವುದಿಲ್ಲ. ಇಷ್ಟೊಂದು ಕೋಟ್ಯಾಂತರ ಆತ್ಮರು ಮೊದಲು ಹಿಂತಿರುಗಬೇಕು ಬಾಕಿ ಶರೀರವಂತೂ ಎಲ್ಲರದೂ ಸಮಾಪ್ತಿಯಾಗುತ್ತದೆ. ಆದುದರಿಂದ ಹೋಳಿಯನ್ನು ಆಚರಿಸುತ್ತಾರೆ. ನಾವೇ ಪೂಜ್ಯರಾಗಿದ್ದೆವು ನಂತರ ಪೂಜಾರಿಗಳಾದೆವು ಈಗ ಮತ್ತೆ ಪೂಜ್ಯರಾಗುತ್ತೇವೆ ಎಂಬುದು ನಿಮಗೆ ಗೊತ್ತಿದೆ. ಅಲ್ಲಿ ಈ ಜ್ಞಾನವಿರುವುದಿಲ್ಲ, ಈ ಶಾಸ್ತ್ರ ಮುಂತಾದವುಗಳೂ ಸಹ ಇರುವುದಿಲ್ಲ ಎಲ್ಲವೂ ಸಮಾಪ್ತಿಯಾಗುತ್ತದೆ. ಯಾರು ಯೋಗಯುಕ್ತರಾಗಿರುತ್ತಾರೆಯೋ, ಶ್ರೀಮತದಂತೆ ನಡೆಯುತ್ತಾರೆ ಅವರು ಎಲ್ಲವನ್ನೂ ನೋಡುತ್ತಾರೆ. ಹೇಗೆ ಭೂಕಂಪವಾದರೆ ಎಲ್ಲವೂ ಸಮಾಪ್ತಿಯಾಗುತ್ತದೆ. ಹೇಗೆ ಹಳ್ಳಿ-ಹಳ್ಳಿಯೇ ಸಮಾಪ್ತಿಯಾಗುತ್ತದೆ ಎಂದು ಪತ್ರಿಕೆಗಳಲ್ಲಿ ಬರುತ್ತದೆ. ಬಾಂಬೆ ಮೊದಲು ಇಷ್ಟಿರಲಿಲ್ಲ ಆದರೆ ಸಮುದ್ರವನ್ನು ಒಣಗಿಸಿದ್ದಾರೆ ಮತ್ತೆ ಸಮುದ್ರವಾಗಿ ಬಿಡುತ್ತದೆ. ಈ ಮನೆಗಳು ಯಾವುದೂ ಇರುವುದಿಲ್ಲ. ಸತ್ಯಯುಗದಲ್ಲಿ ಸಿಹಿಯಾದ ನೀರಿನ ಬಳಿ ಮಹಲುಗಳಿರುತ್ತದೆ. ಉಪ್ಪು ನೀರಿನ ಮೇಲೆ ಇರುವುದಿಲ್ಲ ಅಂದಮೇಲೆ ಇದು ಇರುವುದೇ ಇಲ್ಲ. ಸಮುದ್ರವು ಒಮ್ಮೆ ಉಕ್ಕಿದರೂ ಸಹ ಎಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಬಹಳ ಉಪದ್ರವವಾಗುತ್ತದೆ. ಕೋಟ್ಯಾಂತರ ಮನುಷ್ಯರು ಸಾಯುತ್ತಾರೆ, ದವಸ-ಧಾನ್ಯವೆಲ್ಲವೂ ಎಲ್ಲಿಂದ ಬರುತ್ತದೆ? ಆಪತ್ತುಗಳು ಬಂದೇ ಬರುತ್ತವೆ ಎಂದು ಮನುಷ್ಯರೂ ಸಹ ಹೇಳುತ್ತಾರೆ. ಮನುಷ್ಯರು ಸಾಯುವಾಗ ಯಾರು ಯೋಗಯುಕ್ತರಾಗಿರುತ್ತಾರೆಯೋ ಅವರು ಆ ಸಮಯದಲ್ಲಿ ಖುಷಿಯಾಗಿರುತ್ತಾರೆ. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ. ಹಿಮದ ಮಳೆ ಸುರಿಯುವುದರಿಂದ ಬಹಳ ಮನುಷ್ಯರು ಸಾಯುತ್ತಾರೆ, ಬಹಳ ಪ್ರಾಕೃತಿಕ ವಿಕೋಪಗಳಾಗುತ್ತವೆ, ಇವೆಲ್ಲವೂ ಸಮಾಪ್ತಿಯಾಗುತ್ತದೆ. ಇದಕ್ಕೆ ಪ್ರಾಕೃತಿಕ ವಿಕೋಪವೆಂದು ಹೇಳಲಾಗುತ್ತದೆ, ಪರಮಾತ್ಮನ ವಿಕೋಪವೆಂದು ಹೇಳುವುದಿಲ್ಲ. ಪರಮಾತ್ಮನಿಗೆ ದೋಷ ಹೊರಿಸುತ್ತೀರಾ? ಶಂಕರನು ಕಣ್ಣು ತೆರೆದನು ವಿನಾಶವಾಯಿತೆಂದಂತೂ ಅಲ್ಲ. ಇದೆಲ್ಲವೂ ಭಕ್ತಿ ಮಾರ್ಗದ ಮಾತುಗಳಾಗಿವೆ. ಅಣ್ವಸ್ತ್ರಗಳ ಬಗ್ಗೆಯೂ ಶಾಸ್ತ್ರಗಳಲ್ಲಿ ಬರೆಯಲಾಗಿದೆ. ತಮಗೆ ಗೊತ್ತಿದೆ, ಈ ಅಣ್ವಸ್ತ್ರಗಳಿಂದ ಹೇಗೆ ವಿನಾಶ ಮಾಡುತ್ತಾರೆ. ಹೇಗೆ ಬೆಂಕಿ, ವಿಷ ಅನಿಲವು ಅದರಲ್ಲಿ ಬೀಳುತ್ತದೆ. ತಂದೆಯು ತಿಳಿಸುತ್ತಾರೆ - ಅಂತಿಮದಲ್ಲಿ ಎಲ್ಲರೂ ತಕ್ಷಣವೇ ಸಾಯುತ್ತಾರೆ. ಯಾವ ಮಕ್ಕಳೂ ಸಹ ದುಃಖಿಯಾಗಬಾರದು. ಆದ್ದರಿಂದ ಪ್ರಾಕೃತಿಕ ವಿಕೋಪಗಳಿಂದ ತಕ್ಷಣ ಸಾಯುತ್ತಾರೆ, ಇದೆಲ್ಲವೂ ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ, ಆತ್ಮವು ಅವಿನಾಶಿಯಾಗಿದೆ ಎಂದೂ ವಿನಾಶವಾಗುವುದಿಲ್ಲ, ಚಿಕ್ಕದು-ದೊಡ್ಡದು ಆಗುವುದಿಲ್ಲ. ಶರೀರವೆಲ್ಲವೂ ಇಲ್ಲಿಯೇ ಸಮಾಪ್ತಿಯಾಗುತ್ತದೆ. ಉಳಿದೆಲ್ಲಾ ಆತ್ಮರು ಮನೆಗೆ ಹೊರಟು ಹೋಗುತ್ತವೆ. ಕಲ್ಪ-ಕಲ್ಪದ ಸಂಗಮಯುಗದಲ್ಲಿ ತಂದೆಯು ಬರುತ್ತಾರೆ, ತಾವೂ ಸಹ ಈ ಪುರುಷೋತ್ತಮ ಸಂಗಮಯುಗದಲ್ಲಿ ಸರ್ವ ಶ್ರೇಷ್ಠರಾಗುತ್ತೀರಿ. ವಾಸ್ತವದಲ್ಲಿ ಶ್ರೀ ಶ್ರೀ ಎಂದು ಶಿವ ತಂದೆಯನ್ನು ಹಾಗೂ ಶ್ರೀ ಎಂದು ಈ ದೇವತೆಗಳಿಗೆ ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಶ್ರೀ ಶ್ರೀ ಎಂದು ಹೇಳುತ್ತಿರುತ್ತಾರೆ. ಶ್ರೀಮತಿ, ಶ್ರೀ ಇಂತಹವರೆಂದು. ಈಗ ಶ್ರೀಮತವನ್ನು ಒಬ್ಬ ತಂದೆಯೇ ಕೊಡುತ್ತಾರೆ. ವಿಕಾರದಲ್ಲಿ ಹೋಗುವುದೇನು ಶ್ರೀಮತವಾಗಿದೆಯೇ? ಇದಂತೂ ಭ್ರಷ್ಟಾಚಾರಿ ಪ್ರಪಂಚವಾಗಿದೆ. ಈಗ ಮಧುರಾತಿ ಮಧುರ ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ತುಕ್ಕು ಹೊರಟು ಹೋಗುತ್ತದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನ ಪವಿತ್ರರಾಗಿ, ಸ್ವಯಂಗೆ ಈಗ ವಿಶ್ವದ ಆದಿ-ಮಧ್ಯ-ಅಂತ್ಯದ ಚಕ್ರದ ಜ್ಞಾನವು ಸಿಕ್ಕಿದೆ ಆದರೆ ಈ ಅಲಂಕಾರಗಳನ್ನು ತಮಗೆ ಕೊಡಲು ಸಾಧ್ಯವಿಲ್ಲ. ಇಂದು ತಾವು ತಮ್ಮನ್ನು ಸ್ವದರ್ಶನ ಚಕ್ರಧಾರಿ ಎಂದು ತಿಳಿಯುತ್ತೀರಿ. ನಾಳೆ ಮಾಯೆಯು ಪೆಟ್ಟು ಕೊಟ್ಟರೆ ಜ್ಞಾನವೇ ಹಾರಿ ಹೋಗುತ್ತದೆ. ಆದ್ದರಿಂದ ತಾವು ಬ್ರಾಹ್ಮಣರ ಮಾಲೆಯನ್ನೂ ಸಹ ಮಾಡಲಾಗುವುದಿಲ್ಲ. ಮಾಯೆಯು ಪೆಟ್ಟು ಕೊಟ್ಟು ಅನೇಕರನ್ನು ಬೀಳಿಸಿ ಬಿಡುತ್ತದೆ ಅಂದಮೇಲೆ ಅವರ ಮಾಲೆಯು ಹೇಗಾಗುತ್ತದೆ? ದೆಶೆಗಳು ಬದಲಾಗುತ್ತಿರುತ್ತವೆ. ರುದ್ರ ಮಾಲೆಯು ಸರಿಯಿದೆ, ವಿಷ್ಣುವಿನ ಮಾಲೆಯೂ ಸಹ ಇದೆ ಬಾಕಿ ಬ್ರಾಹ್ಮಣರ ಮಾಲೆಯನ್ನು ಮಾಡಲಾಗುವುದಿಲ್ಲ. ದೇಹಸಹಿತ ದೇಹದ ಸರ್ವ ಧರ್ಮಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ ಎಂದು ನೀವು ಮಕ್ಕಳಿಗೆ ಆದೇಶವನ್ನು ಕೊಡುತ್ತಾರೆ. ತಂದೆಯಂತೂ ನಿರಾಕಾರನಾಗಿದ್ದಾರೆ, ಅವರಿಗೆ ಅವರ ಶರೀರವಂತೂ ಇಲ್ಲ ಮತ್ತು ಇವರ ವಾನಪ್ರಸ್ಥ ಸ್ಥಿತಿಯಲ್ಲಿ ತಂದೆ ಬಂದಿದ್ದಾರೆ ಯಾವಾಗ ಇವರಿಗೆ 60 ವರ್ಷಗಳಾಯಿತೋ ಆಗ ಇವರ ವಾನಪ್ರಸ್ಥ ಸ್ಥಿತಿಯಾಯಿತು. ವಾನಪ್ರಸ್ಥ ಸ್ಥಿತಿಯಲ್ಲಿಯೇ ಗುರುಗಳನ್ನಾಗಿ ಮಾಡಿಕೊಳ್ಳುತ್ತಾರೆ. ನಾನಂತೂ ಸದ್ಗುರುವಾಗಿದ್ದೇನೆ ಆದರೆ ಗುಪ್ತ ವೇಷದಲ್ಲಿ ಇದ್ದೇನೆ. ಅವರು ಭಕ್ತಿಯ ಗುರುಗಳಾಗಿದ್ದಾರೆ, ನಾನು ಜ್ಞಾನದ ಗುರುವಾಗಿದ್ದೇನೆ. ಪ್ರಜಾಪಿತ ಬ್ರಹ್ಮಾರವರನ್ನು ನೋಡಿ, ಎಷ್ಟೊಂದು ಮಕ್ಕಳಿದ್ದಾರೆ. ಬುದ್ಧಿಯು ಲೌಕಿಕದಿಂದ ಬೇಹದ್ದಿನ ಕಡೆ ಹೋಗಿದೆ. ಮುಕ್ತಿಯಲ್ಲಿ ಹೋಗಿ ನಂತರ ಜೀವನ್ಮುಕ್ತಿಯಲ್ಲಿ ಬರುತ್ತಾರೆ. ತಾವು ಮೊದಲು ಬರುತ್ತೀರಿ ಅನ್ಯರು ನಂತರ ಬರುತ್ತಾರೆ. ಪ್ರತಿಯೊಬ್ಬರಿಗೆ ಮೊದಲು ಸುಖ ನಂತರ ದುಃಖವನ್ನು ಅನುಭವಿಸಬೇಕಾಗುತ್ತದೆ. ಇದು ವಿಶ್ವದ ನಾಟಕವಾಗಿದೆ ಆದ್ದರಿಂದ ಹೇಳುತ್ತಾರೆ - ಓಹೋ ಪ್ರಭು ನಿನ್ನ ಲೀಲೆ..... ನಿಮ್ಮ ಬುದ್ಧಿಯು ಮೇಲಿನಿಂದ ಕೆಳಗಿನವರೆಗೆ ಚಕ್ರ ಹಾಕುತ್ತಾ ಇರುತ್ತದೆ. ತಾವು ಮಾರ್ಗವನ್ನು ತಿಳಿಸುವಂತಹ ಪ್ರಕಾಶ ಸ್ಥಂಭವಾಗಿದ್ದೀರಿ, ತಾವು ತಂದೆಯ ಮಕ್ಕಳಾಗಿದ್ದೀರಲ್ಲವೆ. ನನ್ನನ್ನು ನೆನಪು ಮಾಡಿದರೆ ತಾವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರೆಂದು ತಂದೆಯು ಹೇಳುತ್ತಾರೆ. ರೈಲಿನಲ್ಲಿಯೂ ಸಹ ತಾವು ತಿಳಿಸಬಹುದು - ಬೇಹದ್ದಿನ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ, ಭಾರತದಲ್ಲಿ ಸ್ವರ್ಗವಿತ್ತು. ತಂದೆಯು ಭಾರತದಲ್ಲಿ ಬರುತ್ತಾರೆ. ಶಿವ ಜಯಂತಿಯೂ ಸಹ ಭಾರತದಲ್ಲಿಯೇ ಆಚರಿಸಲಾಗುತ್ತದೆ. ಆದರೆ ಯಾವಾಗ ಆಗುತ್ತದೆ ಅದು ಯಾರಿಗೂ ಗೊತ್ತಿಲ್ಲ. ದಿನಾಂಕವೇನೂ ಇಲ್ಲ ಏಕೆಂದರೆ ಗರ್ಭದಿಂದ ಜನ್ಮ ಪಡೆಯುವುದಿಲ್ಲ. ತಮ್ಮನ್ನು ಆತ್ಮನೆಂದು ತಿಳಿಯಿರಿ ಎಂದು ತಂದೆಯು ತಿಳಿಸುತ್ತಾರೆ. ತಾವು ಅಶರೀರಿಯಾಗಿ ಬಂದಿದ್ದೀರಿ, ಪವಿತ್ರರಾಗಿದ್ದಿರಿ ಪುನಃ ಅಶರೀರಿಗಳಾಗಿ ಹೋಗುತ್ತೀರಿ. ನನ್ನೊಬ್ಬನನ್ನೇ ನೆನಪು ಮಾಡಿದರೆ ಪಾಪವು ತುಂಡಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

೧. ಪ್ರಕಾಶ ಸ್ಥಂಬವಾಗಿ ಎಲ್ಲರಿಗೂ ಮಾರ್ಗವನ್ನು ತಿಳಿಸಬೇಕು. ಬುದ್ಧಿಯು ಸೀಮಿತವಾದುದರಿಂದ ತೆಗೆದು ಬೇಹದ್ದಿನಲ್ಲಿಡಬೇಕಾಗಿದೆ. ಸ್ವದರ್ಶನ ಚಕ್ರಧಾರಿ ಆಗಬೇಕಾಗಿದೆ.

೨. ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಆದ್ದರಿಂದ ಈ ವಾನಪ್ರಸ್ಥ ಸ್ಥಿತಿಯಲ್ಲಿ ಸತೋಪ್ರಧಾನರಾಗುವ ಪುರುಷಾರ್ಥ ಮಾಡಬೇಕಾಗಿದೆ. ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು.

ವರದಾನ:
ಯೋಚಿಸಿ-ತಿಳಿದುಕೊಂಡು ಪ್ರತಿ ಕರ್ಮ ಮಡುವಂತಹ ಪಶ್ಚಾತ್ತಾಪದಿಂದ ಮುಕ್ತ ಜ್ಞಾನಿತ್ವ ಆತ್ಮ ಭವ.

ಪ್ರಪಂಚದವರೂ ಸಹಾ ಹೇಳುತ್ತಾರೆ ಮೊದಲು ಯೋಚಿಸಿ ನಂತರ ಮಾಡಿ. ಯಾರು ಯೋಚಿಸಿ ಮಾಡುವುದಿಲ್ಲ, ಮಾಡಿದ ನಂತರ ಯೋಚಿಸುತ್ತಾರೆ ಆಗ ಅದು ಪಶ್ಚಾತ್ತಾಪದ ರೂಪ ತೆಗೆದುಕೊಳ್ಳುತ್ತದೆ. ನಂತರ ಯೋಚಿಸುವುದು ಪಶ್ಚಾತ್ತಾಪದ ರೂಪವಾಗಿದೆ ಮತ್ತು ಮೊದಲು ಯೋಚಿಸಿವುದು - ಇದು ಜ್ಞಾನಿತ್ವ ಆತ್ಮನ ಗುಣವಾಗಿದೆ. ದ್ವಾಪರ-ಕಲಿಯುಗದಲ್ಲಂತೂ ಅನೇಕ ಪ್ರಕಾರದ ಪಶ್ಚಾತ್ತಾಪಗಳನ್ನೇ ಮಾಡುತ್ತಾ ಇದ್ದೇವೆ. ಆದರೆ ಈಗ ಸಂಗಮದಲ್ಲಿ ಹೀಗೆ ಯೋಚಿಸಿ ತಿಳಿದು ಸಂಕಲ್ಪ ಅಥವಾ ಕರ್ಮ ಮಾಡಿ ಆಗ ಎಂದೂ ಮನಸ್ಸಿನಲ್ಲಿಯೂ, ಒಂದು ಸೆಕೆಂಡ್ ಸಹಾ ಪಶ್ಚಾತ್ತಾಪ ಆಗಬಾರದು , ಆಗ ಹೇಳಲಾಗುವುದು ಜ್ಞಾನಿತ್ವ ಆತ್ಮ.

ಸ್ಲೋಗನ್:
ದಯಾ ಹೃದಯಿಯಾಗಿ ಸರ್ವ ಗುಣ ಮತ್ತು ಶಕ್ತಿಗಳ ದಾನ ಕೊಡುವಂತಹವರೇ ಮಾಸ್ಟರ್ ದಾತಾ ಆಗಿದ್ದಾರೆ.


ಬ್ರಹ್ಮಾ ತಂದೆಯ ಸಮಾನರಾಗಲು ವಿಶೇಷ ಪುರುಷಾರ್ಥ -
ಬ್ರಹ್ಮಾ ತಂದೆಯ ಸಮಾನ ವಿಶೇಷ ಅಮೃತ ವೇಳೆ ಶಕ್ತಿಶಾಲಿ ಸ್ಟೇಜ್ ಅರ್ಥಾತ್ ತಂದೆಯ ಸಮಾನ ಬೀಜ ರೂಪ ಸ್ಥಿತಿಯಲ್ಲಿ ಸ್ಥಿತರಾಗುವ ಅಭ್ಯಾಸ ಮಾಡಿ. ಹೇಗೆ ಶ್ರೇಷ್ಠ ಸಮಯ ಇದಾಗಿದೆ ಹಾಗೆ ಶ್ರೇಷ್ಠ ಸ್ಥಿತಿ ಇರಬೇಕಾಗಿದೆ. ಅಂದರೆ ಇದು ವಿಶೇಷ ವರದಾನದ ಸಮಯವಾಗಿದೆ. ಈ ಸಮಯವನ್ನು ಯಥಾರ್ಥ ರೀತಿಯಲ್ಲಿ ಉಪಯೋಗಿಸಿಕೊಳ್ಳಿ ಆಗ ಇಡೀ ದಿನದ ನೆನಪಿನ ಸ್ಥಿತಿಯ ಮೇಲೆ ಅದರ ಪ್ರಭಾವವಿರುವುದು.