15.02.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಇಲ್ಲಿಯವರೆಗೂ ಏನೆಲ್ಲಾ ಓದಿದ್ದೀರಿ, ಅದೆಲ್ಲವನ್ನೂ ಮರೆತು ಹೋಗಿ, ಒಮ್ಮೆಲೆ ಬಾಲ್ಯತನದಲ್ಲಿ ಹೊರಟು
ಹೋಗಿ ಆಗ ಈ ಆತ್ಮಿಕ ವಿದ್ಯೆಯಲ್ಲಿ ಉತ್ತೀರ್ಣರಾಗಲು ಸಾಧ್ಯ”
ಪ್ರಶ್ನೆ:
ಯಾವ ಮಕ್ಕಳಿಗೆ
ದಿವ್ಯ ಬುದ್ಧಿಯು ಪ್ರಾಪ್ತಿಯಾಗಿದೆ, ಅವರ ಲಕ್ಷಣಗಳೇನಾಗಿವೆ?
ಉತ್ತರ:
ಅಂತಹ ಮಕ್ಕಳು ಈ
ಹಳೆಯ ಪ್ರಪಂಚವನ್ನು ಈ ಕಣ್ಣುಗಳಿಂದ ನೋಡಿಯೂ ನೋಡದಂತಿರುತ್ತಾರೆ. ಅವರ ಬುದ್ಧಿಯಲ್ಲಿ ಸದಾ
ಇರುತ್ತದೆ - ಈ ಹಳೆಯ ಪ್ರಪಂಚವು ಸಮಾಪ್ತಿಯಾಯಿತೆಂದರೆ ಆಯಿತು, ಈ ಶರೀರವೂ ಹಳೆಯ ತಮೋಪ್ರಧಾನವಾಗಿದೆ.
ಆದ್ದರಿಂದ ಆತ್ಮವೂ ಹಳೆಯ ತಮೋಪ್ರಧಾನವಾಗಿದೆ. ಇದರೊಂದಿಗೇನು ಪ್ರೀತಿಯಿಡಬೇಕು. ಇಂತಹ ದಿವ್ಯ
ಬುದ್ಧಿಯುಳ್ಳ ಮಕ್ಕಳೇ ತಂದೆಗೂ ಪ್ರಿಯವೆನಿಸುತ್ತಾರೆ. ಇಂತಹ ಮಕ್ಕಳೇ ನಿರಂತರ ತಂದೆಯ
ನೆನಪಿನಲ್ಲಿರುತ್ತಾರೆ. ಸೇವೆಯಲ್ಲಿಯೂ ಮುಂದುವರೆಯುತ್ತಾರೆ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ತಿಳಿಸುತ್ತಾರೆ. ಹೇಗೆ ಆ ಹದ್ದಿನ ಸನ್ಯಾಸಿಗಳು
ಇರುತ್ತಾರೆ, ಅವರು ಮನೆ-ಮಠವನ್ನು ಬಿಟ್ಟು ಹೋಗುತ್ತಾರೆ ಏಕೆಂದರೆ ನಾವು ಬ್ರಹ್ಮ ತತ್ವದಲ್ಲಿ
ಲೀನವಾಗಿ ಬಿಡುತ್ತೇವೆ. ಆದ್ದರಿಂದ ಪ್ರಪಂಚದಿಂದ ಆಸಕ್ತಿಯನ್ನು ಬಿಡಬೇಕು ಎಂದು ಹೇಳುತ್ತಾರೆ
ಹಾಗೆಯೇ ಅಭ್ಯಾಸವನ್ನೂ ಮಾಡುತ್ತಾರೆ, ಹೋಗಿ ಏಕಾಂತದಲ್ಲಿರುತ್ತಾರೆ. ಅವರು ಹಠಯೋಗಿ,
ತತ್ವಜ್ಞಾನಿಗಳಾಗಿದ್ದಾರೆ. ಬ್ರಹ್ಮ ತತ್ವದಲ್ಲಿ ಲೀನವಾಗಿ ಬಿಡುತ್ತೇವೆ ಎಂದು ತಿಳಿಯುತ್ತಾರೆ.
ಆದ್ದರಿಂದ ಮಮತ್ವವನ್ನು ಕಳೆಯಲು ಗೃಹಸ್ಥವನ್ನು ಬಿಟ್ಟು ಹೋಗುತ್ತಾರೆ, ವೈರಾಗ್ಯವು ಬಂದು
ಬಿಡುತ್ತದೆ. ಆದರೆ ಅಷ್ಟು ಬೇಗನೆ ಮಮತ್ವವು ಕಳೆಯುವುದಿಲ್ಲ. ಸ್ತ್ರೀ, ಮಕ್ಕಳು ಮೊದಲಾದವರು
ನೆನಪಿಗೆ ಬರುತ್ತಿರುತ್ತಾರೆ, ಇಲ್ಲಂತೂ ನೀವು ಜ್ಞಾನದ ಬುದ್ಧಿಯಿಂದ ಎಲ್ಲವನ್ನೂ ಮರೆಯಬೇಕಾಗುತ್ತದೆ.
ಯಾವುದೇ ವಸ್ತುವು ಬೇಗನೆ ಮರೆತು ಹೋಗುವುದಿಲ್ಲ. ಈಗ ನೀವು ಈ ಬೇಹದ್ದಿನ ಸನ್ಯಾಸ ಮಾಡುತ್ತೀರಿ,
ನೆನಪಂತೂ ಎಲ್ಲಾ ಸನ್ಯಾಸಿಗಳಿಗೂ ಇರುತ್ತದೆ. ಆದರೆ ಬುದ್ಧಿಯಿಂದ ನಾವು ಬ್ರಹ್ಮ ತತ್ವದಲ್ಲಿ
ಲೀನವಾಗಬೇಕು. ಆದ್ದರಿಂದ ದೇಹಭಾನವನ್ನು ಇಟ್ಟುಕೊಳ್ಳಬಾರದೆಂದು ತಿಳಿಯುತ್ತಾರೆ ಅವರದು
ಹಠಯೋಗವಾಗಿದೆ. ನಾವು ಈ ಶರೀರವನ್ನು ಬಿಟ್ಟು ಬ್ರಹ್ಮ್ ನಲ್ಲಿ ಲೀನವಾಗುತ್ತೇವೆಂದು ತಿಳಿಯುತ್ತಾರೆ.
ಆದರೆ ನಾವು ಶಾಂತಿಧಾಮದಲ್ಲಿ ಹೋಗಲು ಹೇಗೆ ಸಾಧ್ಯ ಎಂಬುದು ಅವರಿಗೆ ತಿಳಿದೇ ಇಲ್ಲ. ನೀವೀಗ
ತಿಳಿದಿದ್ದೀರಿ - ನಾವು ಮನೆಗೆ ಹೋಗಬೇಕಾಗಿದೆ. ಹೇಗೆ ವಿದೇಶದಿಂದ ಬರುತ್ತಾರೆಂದರೆ ನೀವು ಬಾಂಬೆಯ
ಮೂಲಕ ಹೋಗಬೇಕೆಂದು ತಿಳಿಯುತ್ತೀರಿ. ಈಗ ನೀವು ಮಕ್ಕಳಿಗೂ ಸಹ ಪಕ್ಕಾ ನಿಶ್ಚಯವಿದೆ. ಪವಿತ್ರತೆಯೂ
ಚೆನ್ನಾಗಿದೆ, ಜ್ಞಾನವೂ ಚೆನ್ನಾಗಿದೆ, ಒಳ್ಳೆಯ ಸಂಸ್ಥೆಯಾಗಿದೆ, ಮಾತೆಯರು ಬಹಳ ಪರಿಶ್ರಮ
ಪಡುತ್ತಾರೆ ಎಂದು ಅನೇಕರು ಹೇಳುತ್ತಾರೆ. ಏಕೆಂದರೆ ಅವಿಶ್ರಾಂತರಾಗಿ ಸೇವೆ ಮಾಡುತ್ತಾರೆ. ತಮ್ಮ
ತನು-ಮನ-ಧನವನ್ನು ತೊಡಗಿಸುತ್ತೀರಿ ಆದ್ದರಿಂದ ಒಳ್ಳೆಯದು ಎಂದೆನಿಸುತ್ತದೆ. ಅದನ್ನು ತಂದೆಯೂ ಸಹ
ಹೇಳುತ್ತಾರೆ - ಕೋಟಿಯಲ್ಲಿ ಕೆಲವರು ಅರ್ಥಾತ್ ಯಾರು ನಿಮ್ಮ ಬಳಿ ಬರುತ್ತಾರೆಯೋ ಅವರಲ್ಲಿಯೂ ಕೆಲವರೇ
ಯಥಾರ್ಥವಾಗಿ ತಿಳಿಯುತ್ತಾರೆ. ಈ ಹಳೆಯ ಪ್ರಪಂಚವಂತೂ ಈಗ ಸಮಾಪ್ತಿಯಾಗಲಿದೆ. ಈಗ ತಂದೆಯು
ಬಂದಿದ್ದಾರೆಂದು ನಿಮಗೂ ಗೊತ್ತಿದೆ. ಸಾಕ್ಷಾತ್ಕಾರವಾಗಲಿ ಅಥವಾ ಬಿಡಲಿ ವಿವೇಕವಂತೂ ಹೇಳುತ್ತದೆ,
ಬೇಹದ್ದಿನ ತಂದೆಯು ಬಂದಿದ್ದಾರೆ. ಇದು ನಿಮಗೂ ಸಹ ಗೊತ್ತಿದೆ - ತಂದೆಯು ಒಬ್ಬರೇ ಆಗಿದ್ದಾರೆ, ಅವರೇ
ಪಾರಲೌಕಿಕ ತಂದೆ ಜ್ಞಾನಸಾಗರನಾಗಿದ್ದಾರೆ. ಲೌಕಿಕ ತಂದೆಗಂತೂ ಎಂದೂ ಜ್ಞಾನಸಾಗರನೆಂದು
ಹೇಳುವುದಿಲ್ಲ. ಇದನ್ನು ತಂದೆಯೇ ಬಂದು ನೀವು ಮಕ್ಕಳಿಗೆ ತಮ್ಮ ಪರಿಚಯವನ್ನು ಕೊಡುತ್ತಾರೆ. ನೀವು
ಮಕ್ಕಳಿಗೂ ಗೊತ್ತಿದೆ - ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ನಾವು 84 ಜನ್ಮಗಳ ಚಕ್ರವನ್ನು
ಪೂರ್ಣ ಮಾಡಿದೆವು. ಈಗ ನಾವು ಹಿಂತಿರುಗಿ ಶಾಂತಿಧಾಮದ ಮೂಲಕ ಸುಖಧಾಮಕ್ಕೆ ಹೋಗಲು ಪುರುಷಾರ್ಥ
ಮಾಡುತ್ತೇವೆ. ಶಾಂತಿಧಾಮಕ್ಕಂತೂ ಅವಶ್ಯವಾಗಿ ಹೋಗಬೇಕಾಗಿದೆ, ಅಲ್ಲಿಂದ ಮತ್ತೆ ಇಲ್ಲಿಗೆ ಹಿಂತಿರುಗಿ
ಬರಬೇಕಾಗಿದೆ. ಮನುಷ್ಯರಂತೂ ಈ ಮಾತುಗಳಲ್ಲಿ ಗೊಂದಲಕ್ಕೊಳಗಾಗಿದ್ದಾರೆ. ಯಾರೇ ಸತ್ತರೂ ವೈಕುಂಠಕ್ಕೆ
ಹೋದರೆಂದು ತಿಳಿಯುತ್ತಾರೆ ಆದರೆ ವೈಕುಂಠವೆಲ್ಲಿದೆ? ಈ ವೈಕುಂಠದ ಹೆಸರಂತೂ ಭಾರತವಾಸಿಗಳಿಗೇ
ಗೊತ್ತಿದೆ ಅನ್ಯ ಧರ್ಮದವರಿಗೆ ಗೊತ್ತೇ ಇಲ್ಲ. ಕೇವಲ ಹೆಸರನ್ನು ಕೇಳಿದ್ದಾರೆ, ಚಿತ್ರಗಳನ್ನು
ನೋಡಿದ್ದಾರೆ. ದೇವತೆಗಳ ಹಲವಾರು ಮಂದಿರಗಳನ್ನು ನೋಡಿದ್ದಾರೆ. ಹೇಗೆ ಈ ದಿಲ್ವಾಡಾ ಮಂದಿರವಿದೆ,
ಇದನ್ನು ಲಕ್ಷಾಂತರ, ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿಸಿದ್ದಾರೆ, ಮಾಡಿಸುತ್ತಲೇ ಇರುತ್ತಾರೆ.
ದೇವಿ-ದೇವತೆಗಳಿಗೆ ವೈಷ್ಣವರೆಂದು ಕರೆಯುತ್ತಾರೆ, ಅವರು ವಿಷ್ಣುವಿನ ವಂಶಾವಳಿಯಾಗಿದ್ದಾರೆ ಅವರಂತೂ
ಪವಿತ್ರರು ಆಗಿಯೇ ಇದ್ದಾರೆ, ಸತ್ಯಯುಗಕ್ಕೆ ಪಾವನ ಪ್ರಪಂಚವೆಂದು ಹೇಳಲಾಗುತ್ತದೆ. ಇದಾಗಿದೆ ಪತಿತ
ಪ್ರಪಂಚ. ಸತ್ಯಯುಗದ ವೈಭವ ಮುಂತಾದವೆಲ್ಲವೂ ಇಲ್ಲಿ ಇಲ್ಲವೇ ಇಲ್ಲ. ಇಲ್ಲಂತೂ ದವಸ-ಧಾನ್ಯ
ಮುಂತಾದವೆಲ್ಲವೂ ತಮೋಪ್ರಧಾನವಾಗಿ ಬಿಡುತ್ತವೆ. ಇಲ್ಲಿನ ರುಚಿಯೂ ಸಹ ತಮೋಪ್ರಧಾನವಾಗಿದೆ. ಮಕ್ಕಳು
ಧ್ಯಾನದಲ್ಲಿ ಹೋದಾಗ ನಾವು ಶೂಬೀರಸವನ್ನು ಕುಡಿದು ಬಂದೆವು ಬಹಳ ಚೆನ್ನಾಗಿತ್ತೆಂದು ಹೇಳುತ್ತಾರೆ.
ಇಲ್ಲಿಯೂ ಸಹ ನಿಮ್ಮ ಕೈಯಿಂದ ತಯಾರಿಸಿದ ಆಹಾರವನ್ನು ಸೇವಿಸುತ್ತಾರೆ ಬಹಳ ಪ್ರೀತಿಯಿಂದ
ತಿನ್ನುತ್ತಾರೆ. ಆದರೆ ನೀವು ಅಭ್ಯಾಸವಿಲ್ಲದೇ ಕೇವಲ ಯೋಗದಲ್ಲಿ ತಯಾರಿಸಿದರೆ ಅದು
ಸ್ವಾದಿಷ್ಟವಾಗಿರುತ್ತದೆ ಎಂದಲ್ಲ, ಇದೂ ಸಹ ಅಭ್ಯಾಸವಿರಬೇಕಾಗಿದೆ. ಕೆಲವರು ಬಹಳ ಚೆನ್ನಾಗಿ
ಭೋಜನವನ್ನು ತಯಾರಿಸುತ್ತಾರೆ. ಸತ್ಯಯುಗದಲ್ಲಿ ಪ್ರತಿಯೊಂದು ಪದಾರ್ಥವು ಸತೋಪ್ರಧಾನವಾಗಿರುತ್ತದೆ.
ಆದ್ದರಿಂದ ಬಹಳ ಶಕ್ತಿಯಿರುತ್ತದೆ. ತಮೋಪ್ರಧಾನವಾಗಿರುವುದರಿಂದ ಅದರ ಶಕ್ತಿಯು ಕಡಿಮೆಯಾಗುತ್ತದೆ
ಮತ್ತೆ ಅದರಿಂದ ಖಾಯಿಲೆಗಳು, ದುಃಖ ಮೊದಲಾದವುಗಳು ಬರುತ್ತಿರುತ್ತವೆ. ಹೆಸರೇ ದುಃಖಧಾಮವಾಗಿದೆ,
ಸುಖಧಾಮದಲ್ಲಿ ದುಃಖದ ಮಾತೇ ಇರುವುದಿಲ್ಲ. ನಾವು ಇಷ್ಟೊಂದು ಸುಖದಲ್ಲಿ ಹೋಗುತ್ತೇವೆ, ಯಾವುದಕ್ಕೆ
ಸ್ವರ್ಗದ ಸುಖವೆಂದು ಹೇಳಲಾಗುತ್ತದೆ. ಕೇವಲ ನೀವು ಪವಿತ್ರರಾಗಬೇಕು ಅದೂ ಈ ಜನ್ಮಕ್ಕಾಗಿ. ಹಿಂದಿನ
ವಿಚಾರಗಳನ್ನು ಮಾಡಬೇಡಿ, ಈಗಂತೂ ನೀವು ಪವಿತ್ರರಾಗಿ ಮೊದಲು ಈ ವಿಚಾರ ಮಾಡಿ - ನಮಗೆ ಹೇಳುವವರು
ಯಾರು? ಬೇಹದ್ದಿನ ತಂದೆಯ ಪರಿಚಯ ಕೊಡಬೇಕಾಗುತ್ತದೆ. ಬೇಹದ್ದಿನ ತಂದೆಯಿಂದ ಸುಖದ ಆಸ್ತಿಯು
ಸಿಗುತ್ತದೆ. ಲೌಕಿಕ ತಂದೆಯೂ ಸಹ ಪಾರಲೌಕಿಕ ತಂದೆಯನ್ನೇ ನೆನಪು ಮಾಡುತ್ತಾರೆ, ಬುದ್ಧಿಯು ಮೇಲೆ
ಹೋಗುತ್ತದೆ. ನೀವು ಮಕ್ಕಳು ಯಾರು ನಿಶ್ಚಯ ಬುದ್ಧಿಯವರಾಗಿದ್ದಾರೆಯೋ ಅವರ ಆಂತರ್ಯದಲ್ಲಿರುತ್ತದೆ -
ಈ ಹಳೆಯ ಪ್ರಪಂಚದಲ್ಲಿ ನಾವು ಇನ್ನು ಸ್ವಲ್ಪ ದಿನಗಳು ಮಾತ್ರ ಇರುತ್ತೇವೆ. ಇದಂತೂ ಕವಡೆಯ ಸಮಾನವಾದ
ಶರೀರವಾಗಿದೆ, ಆತ್ಮವೂ ಸಹ ಕವಡೆಯ ಸಮಾನವಾಗಿದೆ, ಇದಕ್ಕೇ ವೈರಾಗ್ಯವೆಂದು ಹೇಳಲಾಗುತ್ತದೆ. ಈಗ ನೀವು
ಮಕ್ಕಳು ನಾಟಕವನ್ನು ಅರ್ಥ ಮಾಡಿಕೊಂಡಿದ್ದೀರಿ. ಭಕ್ತಿ ಮಾರ್ಗದ ಪಾತ್ರವು ನಡೆಯಲೇಬೇಕಾಗಿದೆ.
ಎಲ್ಲರೂ ಭಕ್ತಿಯಲ್ಲಿದ್ದಾರೆ, ಇದರಲ್ಲಿ ತಿರಸ್ಕಾರದ ಮಾತಿಲ್ಲ. ಸನ್ಯಾಸಿಗಳು ತಿರಸ್ಕಾರವನ್ನು
ತರಿಸುತ್ತಾರೆ. ಮನೆಯಲ್ಲಿ ಎಲ್ಲರೂ ದುಃಖಿಯಾಗಿ ಬಿಡುತ್ತಾರೆ, ಸನ್ಯಾಸಿಗಳು ಹೋಗಿ ತಮ್ಮನ್ನು
ಸ್ವಲ್ಪ ಸುಖಿಯನ್ನಾಗಿ ಮಾಡಿಕೊಳ್ಳುತ್ತಾರೆ ಆದರೆ ಹಿಂತಿರುಗಿ ಮತ್ತೆಲ್ಲಿಗೂ ಹೋಗಲು ಸಾಧ್ಯವಿಲ್ಲ.
ಯಾರೆಲ್ಲರೂ ಬಂದಿದ್ದಾರೆಯೋ ಅವರ್ಯಾರೂ ಹಿಂತಿರುಗಿ ಹೋಗಿಲ್ಲ, ಅವರೆಲ್ಲರೂ ಇಲ್ಲಿಯೇ ಇದ್ದಾರೆ.
ಯಾರೊಬ್ಬರೂ ಸಹ ನಿರ್ವಾಣ ಅಥವಾ ಬ್ರಹ್ಮ ತತ್ವದಲ್ಲಿ ಹೋಗಿಲ್ಲ. ಇಂತಹವರು ಬ್ರಹ್ಮ ತತ್ವದಲ್ಲಿ
ಹೋದರೆಂದು ತಿಳಿಯುತ್ತಾರೆ. ಇವೆಲ್ಲವೂ ಭಕ್ತಿ ಮಾರ್ಗದ ಶಾಸ್ತ್ರಗಳಾಗಿವೆ. ತಂದೆಯು ತಿಳಿಸುತ್ತಾರೆ
- ಈ ಶಾಸ್ತ್ರ ಮೊದಲಾದವುಗಳಲ್ಲಿ ಏನೆಲ್ಲವೂ ಇದೆಯೋ ಅವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ನೀವು
ಮಕ್ಕಳಿಗೆ ಈಗ ಜ್ಞಾನವು ಸಿಗುತ್ತಿದೆ, ನೀವು ಏನನ್ನೂ ಓದುವ ಅವಶ್ಯಕತೆಯಿಲ್ಲ. ಆದರೆ ಕೆಲ ಕೆಲವರಿಗೆ
ಕಾದಂಬರಿ ಮುಂತಾದವುಗಳನ್ನು ಓದುವ ಅಭ್ಯಾಸವಿದೆ, ಪೂರ್ಣ ಜ್ಞಾನವಿಲ್ಲ ಅಂತಹವರಿಗೆ ಅರ್ಧಂಬರ್ಧ
ಜ್ಞಾನಿಗಳೆಂದು ಹೇಳಲಾಗುತ್ತದೆ. ರಾತ್ರಿಯಲ್ಲಿ ಕಾದಂಬರಿಗಳನ್ನು ಓದಿ ನಿದ್ರೆ ಮಾಡುತ್ತಾರೆಂದರೆ
ಅವರ ಗತಿಯೇನಾಗುವುದು? ಇಲ್ಲಂತೂ ತಂದೆಯು ತಿಳಿಸುತ್ತಾರೆ - ಏನನ್ನು ಓದಿದ್ದೀರೋ ಅದೆಲ್ಲವನ್ನು
ಮರೆತು ಹೋಗಿ. ಈ ಆತ್ಮಿಕ ವಿದ್ಯೆಯಲ್ಲಿ ತೊಡಗಿ. ಇದನ್ನು ಭಗವಂತನು ಓದಿಸುತ್ತಾರೆ, ಇದರಿಂದ ನೀವು
21 ಜನ್ಮಗಳಿಗೆ ದೇವತೆಗಳಾಗುತ್ತೀರಿ. ಬಾಕಿ ಏನೆಲ್ಲವನ್ನೂ ಓದುತ್ತೀರೋ ಅದೆಲ್ಲವನ್ನೂ
ಮರೆಯಬೇಕಾಗುತ್ತದೆ. ಸಂಪೂರ್ಣ ಬಾಲ್ಯತನದಲ್ಲಿ ಹೋಗಿ, ತಮ್ಮನ್ನು ಆತ್ಮನೆಂದು ತಿಳಿಯಿರಿ. ಭಲೇ ಈ
ಕಣ್ಣುಗಳಿಂದ ನೋಡುತ್ತೀರಿ ಆದರೆ ನೋಡಿಯೂ ನೋಡದಂತೆ ಇರಿ. ನಿಮಗೆ ದಿವ್ಯ ದೃಷ್ಟಿ ಹಾಗೂ ದಿವ್ಯ
ಬುದ್ಧಿಯು ಸಿಕ್ಕಿದೆ. ಆದ್ದರಿಂದ ಇದೆಲ್ಲವೂ ಹಳೆಯ ಪ್ರಪಂಚವಾಗಿದೆ, ಇದು ಸಮಾಪ್ತಿಯಾಗಲಿದೆ ಎಂದು
ತಿಳಿಯುತ್ತೀರಿ. ಇದೆಲ್ಲವೂ ಸ್ಮಶಾನವಾಗಿದೆ ಇದರೊಂದಿಗೆ ಮನಸ್ಸನ್ನೇನು ಇಡುತ್ತೀರಿ? ಈಗಂತೂ
ಪರಿಸ್ಥಾನಿಗಳಾಗಬೇಕಾಗಿದೆ (ಸ್ವರ್ಗವಾಸಿ) ನೀವೀಗ ಸ್ಮಶಾನ ಮತ್ತು ಸತ್ಯಯುಗದ ಮಧ್ಯದಲ್ಲಿ
ಕುಳಿತಿದ್ದೀರಿ. ಸತ್ಯಯುಗವು ಸ್ಥಾಪನೆಯಾಗುತ್ತಿದೆ, ಈಗ ಹಳೆಯ ಪ್ರಪಂಚದಲ್ಲಿ ಕುಳಿತಿದ್ದೀರಿ. ಆದರೆ
ಮಧ್ಯದಲ್ಲಿ ಬುದ್ಧಿಯ ಯೋಗವು ಅಲ್ಲಿ ಹೊರಟು ಹೋಗಿದೆ. ನೀವು ಪುರುಷಾರ್ಥವನ್ನು ಹೊಸ
ಪ್ರಪಂಚಕ್ಕಾಗಿಯೇ ಮಾಡುತ್ತಿದ್ದೀರಿ. ಈಗ ಪುರುಷೋತ್ತಮರಾಗಲು ಮಧ್ಯದಲ್ಲಿ ಕುಳಿತಿದ್ದೀರಿ. ಈ
ಪುರುಷೋತ್ತಮ ಸಂಗಮಯುಗವೂ ಸಹ ಯಾರಿಗೂ ಗೊತ್ತಿಲ್ಲ. ಪುರುಷೋತ್ತಮ ಮಾಸ, ಪುರುಷೋತ್ತಮ ವರ್ಷದ
ಅರ್ಥವನ್ನೂ ತಿಳಿದುಕೊಂಡಿಲ್ಲ. ಪುರುಷೋತ್ತಮ ಸಂಗಮಯುಗಕ್ಕೆ ಬಹಳ ಕಡಿಮೆ ಸಮಯವು ಸಿಕ್ಕಿದೆ ತಡವಾಗಿ
ಈ ವಿಶ್ವ ವಿದ್ಯಾಲಯಕ್ಕೆ ಬಂದರೆ ಶ್ರಮ ಪಡಬೇಕಾಗುತ್ತದೆ. ನೆನಪು ಬಹಳ ಪರಿಶ್ರಮದಿಂದ ನಿಲ್ಲುತ್ತದೆ.
ಮಾಯೆಯು ವಿಘ್ನಗಳನ್ನು ಹಾಕುತ್ತಿರುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ಹಳೆಯ
ಪ್ರಪಂಚವು ಸಮಾಪ್ತಿಯಾಗಲಿದೆ. ತಂದೆಯು ಭಲೇ ಕುಳಿತಿದ್ದಾರೆ, ನೋಡುತ್ತಾರೆ. ಆದರೆ ಇದೆಲ್ಲವೂ
ಸಮಾಪ್ತಿಯಾಗಲಿದೆ ಏನೂ ಉಳಿಯುವುದಿಲ್ಲ ಎಂದು ಬುದ್ಧಿಯಲ್ಲಿದೆ. ಇದಂತೂ ಹಳೆಯ ಪ್ರಪಂಚವಾಗಿದೆ,
ಇದರೊಂದಿಗೆ ವೈರಾಗ್ಯ ಬಂದು ಬಿಡುತ್ತದೆ. ಶರೀರಧಾರಿಗಳೆಲ್ಲರೂ ಹಳಬರಾಗಿದ್ದಾರೆ, ಶರೀರವು ಹಳೆಯ
ತಮೋಪ್ರಧಾನವಾಗಿರುವುದರಿಂದ ಆತ್ಮವೂ ತಮೋಪ್ರಧಾನವಾಗಿದೆ. ಇಂತಹ ವಸ್ತುವನ್ನು ನಾವು ನೋಡಿ ಏನು
ಮಾಡುವುದು! ಇದಂತೂ ಏನೂ ಉಳಿಯುವುದಿಲ್ಲ ಇದರೊಂದಿಗೆ ಪ್ರೀತಿಯಿಲ್ಲ. ತಂದೆಗೂ ಸಹ ಯಾವ ಮಕ್ಕಳು
ತಂದೆಯನ್ನು ಬಹಳ ಚೆನ್ನಾಗಿ ನೆನಪು ಮಾಡುತ್ತಾರೆ ಹಾಗೂ ಸೇವೆ ಮಾಡುತ್ತಾರೆಯೋ ಅಂತಹವರು
ಪ್ರಿಯವೆನಿಸುತ್ತಾರೆ. ಬಾಕಿ ಎಲ್ಲರೂ ಮಕ್ಕಳೇ ಆಗಿದ್ದಾರೆ. ಎಷ್ಟೊಂದು ಮಕ್ಕಳಿದ್ದಾರೆ, ಎಲ್ಲರೂ
ತಂದೆಯನ್ನು ನೋಡಿಲ್ಲ. ಪ್ರಜಾಪಿತ ಬ್ರಹ್ಮಾರವರನ್ನಂತೂ ತಿಳಿದುಕೊಂಡೇ ಇಲ್ಲ. ಪ್ರಜಾಪಿತ ಬ್ರಹ್ಮಾ
ಎಂಬ ಹೆಸರನ್ನು ತಿಳಿದುಕೊಂಡಿದ್ದಾರೆ. ಆದರೆ ಅವರಿಂದ ಏನು ಸಿಗುತ್ತದೆ ಎಂದು ತಿಳಿದುಕೊಂಡೇ ಇಲ್ಲ.
ಬ್ರಹ್ಮಾರವರ ಮಂದಿರವಿದೆ, ಇವರನ್ನು ದಾಡಿ -ಮೀಸೆಗಳ ರೂಪದಲ್ಲಿ ತೋರಿಸಿದ್ದಾರೆ. ಆದರೆ ಅವರನ್ನು
ಯಾರೂ ನೆನಪು ಮಾಡುವುದಿಲ್ಲ. ಏಕೆಂದರೆ ಅವರಿಂದ ಆಸ್ತಿಯು ಸಿಗುವುದಿಲ್ಲ. ಆತ್ಮಗಳಿಗೆ ಒಂದನೆಯದಾಗಿ
ದೈಹಿಕ ತಂದೆಯಿಂದ, ಎರಡನೆಯದಾಗಿ ಆತ್ಮಿಕ ತಂದೆಯಿಂದ ಆಸ್ತಿಯು ಸಿಗುತ್ತದೆ. ಪ್ರಜಾಪಿತ ಬ್ರಹ್ಮನಂತೂ
ಯಾರೂ ತಿಳಿದುಕೊಂಡೇ ಇಲ್ಲ. ಇದು ಆಶ್ಚರ್ಯಕರವಾಗಿದೆ. ತಂದೆಯಾಗಿ ಆಸ್ತಿಯನ್ನೂ ಕೊಡದಿದ್ದರೆ
ಅಲೌಕಿಕ ತಂದೆಯಾದರಲ್ಲವೆ (ಬ್ರಹ್ಮಾ). ಆಸ್ತಿಯಂತೂ ಪರಿಮಿತ ಮತ್ತು ಅಪರಿಮಿತವಾಗಿರುತ್ತದೆ.
ಮಧ್ಯದಲ್ಲಿ ಆಸ್ತಿಯಿರುವುದಿಲ್ಲ ಭಲೇ. ಪ್ರಜಾಪಿತನೆಂದು ಹೇಳುತ್ತಾರೆ ಆದರೆ ಆಸ್ತಿಯೇನೂ ಇಲ್ಲ. ಈ
ಅಲೌಕಿಕ ತಂದೆಗೂ ಸಹ ಆಸ್ತಿಯು ಪಾರಲೌಕಿಕ ತಂದೆಯಿಂದಲೇ ಸಿಗುತ್ತದೆ ಅಂದಮೇಲೆ ಇವರು ಹೇಗೆ
ಕೊಡುತ್ತಾರೆ! ಪಾರಲೌಕಿಕ ತಂದೆಯು ಇವರ ಮುಖಾಂತರ ಕೊಡುತ್ತಾರೆ. ಇವರು ಭಾಗ್ಯಶಾಲಿ ರಥವಾಗಿದ್ದಾರೆ
ಅಂದಾಗ ಇವರನ್ನು ಏನು ನೆನಪು ಮಾಡುವುದು! ಇವರೂ ಸಹ ಆ ತಂದೆಯನ್ನೇ ನೆನಪು ಮಾಡಬೇಕಾಗುತ್ತದೆ.
ಮನುಷ್ಯರು ಆ ಬ್ರಹ್ಮನನ್ನೇ ಪರಮಾತ್ಮನೆಂದು ತಿಳಿಯುತ್ತಾರೆ. ನಮಗೆ ಆಸ್ತಿಯು ಇವರಿಂದ
ಸಿಗುವುದಿಲ್ಲ, ಶಿವ ತಂದೆಯಿಂದ ಸಿಗುತ್ತದೆ. ಇವರಂತೂ ಮಧ್ಯದಲ್ಲಿ ದಲ್ಲಾಳಿ ರೂಪದಲ್ಲಿದ್ದಾರೆ.
ಇವರೂ ಸಹ ನಮ್ಮ ಹಾಗೆ ವಿದ್ಯಾರ್ಥಿಯಾಗಿದ್ದಾರೆ, ಭಯ ಪಡುವ ಮಾತಿಲ್ಲ. ಈ ಸಮಯದಲ್ಲಿ ಇಡೀ ಪ್ರಪಂಚವು
ತಮೋಪ್ರಧಾನವಾಗಿದೆ. ನೀವು ಯೋಗಬಲದಿಂದ ಸತೋಪ್ರಧಾನರಾಗಬೇಕಾಗಿದೆ. ಲೌಕಿಕ ತಂದೆಯಿಂದ ಹದ್ದಿನ
ಆಸ್ತಿಯು ಸಿಗುತ್ತದೆ. ನೀವೀಗ ಬೇಹದ್ದಿನಲ್ಲಿ ಬುದ್ಧಿಯನ್ನಿಡಬೇಕಾಗಿದೆ. ತಂದೆಯು ತಿಳಿಸುತ್ತಾರೆ
- ತಂದೆಯ ವಿನಃ ಮತ್ತ್ಯಾರಿಂದಲೂ ಏನೂ ಸಿಗುವುದಿಲ್ಲ. ಭಲೆ ದೇವತೆಗಳಾಗಿದ್ದರೂ ಸಹ ಈ ಸಮಯದಲ್ಲಂತೂ
ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಲೌಕಿಕ ತಂದೆಯಿಂದ ಆಸ್ತಿಯಂತೂ ಅವಶ್ಯವಾಗಿ ಸಿಗುತ್ತದೆ. ಬಾಕಿ ಈ
ಲಕ್ಷ್ಮೀ-ನಾರಾಯಣರಿಂದ ಏನನ್ನು ಬಯಸುತ್ತೀರಿ! ಇವರು ಅಮರರಾಗಿದ್ದಾರೆ, ಎಂದೂ ಮರಣ ಹೊಂದುವುದಿಲ್ಲ.
ತಮೋಪ್ರಧಾನವಾಗುತ್ತಾರೆ ಎಂದು ತಿಳಿಯುತ್ತಾರೆ. ಆದರೆ ನಿಮಗೆ ಗೊತ್ತಿದೆ, ಯಾರು
ಸತೋಪ್ರಧಾನವಾಗಿದ್ದಾರೆಯೋ ಅವರೇ ತಮೋಪ್ರಧಾನತೆಯಲ್ಲಿ ಬರುತ್ತಾರೆ. ಶ್ರೀ ಕೃಷ್ಣನನ್ನು
ಲಕ್ಷ್ಮೀ-ನಾರಾಯಣರಿಗಿಂತಲೂ ಶ್ರೇಷ್ಠರೆಂದು ತಿಳಿಯುತ್ತಾರೆ ಏಕೆಂದರೆ ಈ ಲಕ್ಷ್ಮೀ-ನಾರಾಯಣರಿಗೆ
ವಿವಾಹವಾಗಿದೆ ಆದರೆ ಕೃಷ್ಣನು ಜನ್ಮತಃ ಪವಿತ್ರ ಆದ್ದರಿಂದ ಬಾಲ್ಯದಲ್ಲಿ ಸತೋಪ್ರಧಾನತೆಯಿರುವ ಕಾರಣ
ಕೃಷ್ಣನಿಗೆ ಬಹಳ ಮಹಿಮೆಯಿದೆ. ಕೃಷ್ಣನನ್ನು ಉಯ್ಯಾಲೆಯಲ್ಲಿ ತೂಗುತ್ತಾರೆ, ಕೃಷ್ಣ ಜಯಂತಿಯನ್ನು
ಆಚರಿಸುತ್ತಾರೆ. ಲಕ್ಷ್ಮೀ-ನಾರಾಯಣರದನ್ನು ಏಕೆ ಆಚರಿಸುವುದಿಲ್ಲ? ಜ್ಞಾನವಿಲ್ಲದಿರುವ ಕಾರಣ
ಕೃಷ್ಣನನ್ನು ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಗೀತಾ ಜ್ಞಾನವನ್ನು ದ್ವಾಪರದಲ್ಲಿ
ಕೊಟ್ಟಿದ್ದಾರೆಂದು ಹೇಳುತ್ತಾರೆ. ಅನ್ಯರಿಗೆ ತಿಳಿಸುವುದು ಎಷ್ಟೊಂದು ಕಠಿಣವಾಗಿದೆ. ಜ್ಞಾನವು
ಪರಂಪರೆಯಿಂದ ನಡೆದು ಬರುತ್ತಿದೆ ಎಂದು ಹೇಳಿ ಬಿಡುತ್ತಾರೆ. ಆದರೆ ಪರಂಪರೆಯೆಂದರೆ ಯಾವಾಗಿನಿಂದ?
ಇದನ್ನು ಯಾರೂ ತಿಳಿದುಕೊಂಡಿಲ್ಲ. ಪೂಜೆಯು ಯಾವಾಗಿನಿಂದ ಪ್ರಾರಂಭವಾಗಿದೆ ಅದನ್ನೂ
ತಿಳಿದುಕೊಂಡಿಲ್ಲ. ಆದ್ದರಿಂದ ರಚಯಿತ ಮತ್ತು ರಚನೆಯ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು
ತಿಳಿದುಕೊಂಡಿಲ್ಲವೆಂದು ಹೇಳುತ್ತಾರೆ. ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳಿರುವುದರಿಂದ
ಪರಂಪರೆಯೆಂದು ಹೇಳಿ ಬಿಡುತ್ತಾರೆ. ತಿಥಿ, ತಾರೀಖು ಏನನ್ನೂ ತಿಳಿದುಕೊಂಡಿಲ್ಲ. ಲಕ್ಷ್ಮೀ-ನಾರಾಯಣರ
ಜನ್ಮ ದಿನವನ್ನು ಆಚರಿಸುವುದಿಲ್ಲ ಇದಕ್ಕೆ ಅಜ್ಞಾನ ಅಂಧಕಾರವೆಂದು ಹೇಳಲಾಗುತ್ತದೆ. ನಿಮ್ಮಲ್ಲಿಯೂ
ಸಹ ಯಥಾರ್ಥ ರೀತಿಯಲ್ಲಿ ಈ ಮಾತುಗಳನ್ನು ಅರಿತುಕೊಂಡಿಲ್ಲ. ಆದ್ದರಿಂದಲೇ ಮಹಾರಥಿ, ಕುದುರೆ ಸವಾರರು
ಮತ್ತು ಕಾಲಾಳುಗಳು ಎಂದು ಹೇಳಲಾಗಿದೆ. ಗಜವನ್ನು ಮೊಸಳೆಯು ತಿಂದಿತು, ಮೊಸಳೆಯು ಬಹಳ
ದೊಡ್ಡದಿರುತ್ತದೆ, ಒಂದೇ ಸಲ ನುಂಗಿ ಬಿಡುತ್ತದೆ. ಹೇಗೆ ಸರ್ಪವು ಕಪ್ಪೆಯನ್ನು ನುಂಗುತ್ತದೆಯೋ ಹಾಗೆ.
ಭಗವಂತನನ್ನು ಹೂದೋಟದ ಮಾಲೀಕ, ಅಂಬಿಗನೆಂದು ಏಕೆ ಹೇಳುತ್ತಾರೆ? ಇದನ್ನೂ ಸಹ ನೀವು ಈಗ
ತಿಳಿದುಕೊಂಡಿದ್ದೀರಿ. ತಂದೆಯು ಬಂದು ವಿಷಯ ಸಾಗರದಿಂದ ದೂರ ಕರೆದುಕೊಂಡು ಹೋಗುತ್ತಾರೆ. ಆದ್ದರಿಂದ
ಅಂಬಿಗನೇ ನನ್ನ ದೋಣಿಯನ್ನು ಪಾರು ಮಾಡು ಎಂದು ಹೇಳುತ್ತಾರೆ. ನಿಮಗೂ ಸಹ ನಾವು ಹೇಗೆ
ಪಾರಾಗುತ್ತೇವೆಂದು ತಿಳಿದಿದೆ. ಅಲ್ಲಿ ದುಃಖ-ನೋವಿನ ಮಾತಿರುವುದಿಲ್ಲ. ನೀವು ಕೇಳಿ, ಅನ್ಯರಿಗೂ
ಹೇಳುತ್ತೀರಿ - ಜೀವನ ದೋಣಿಯನ್ನು ಪಾರು ಮಾಡುವ ಅಂಬಿಗನು ತಿಳಿಸುತ್ತಾರೆ - ಹೇ ಮಕ್ಕಳೇ,
ನೀವೆಲ್ಲರೂ ತಮ್ಮನ್ನು ಆತ್ಮನೆಂದು ತಿಳಿಯಿರಿ. ನೀವು ಮೊದಲು ಕ್ಷೀರಸಾಗರದಲ್ಲಿದ್ದಿರಿ, ಈಗ ವಿಷಯ
ಸಾಗರದಲ್ಲಿ ಬಂದು ತಲುಪಿದ್ದೀರಿ. ಮೊದಲು ನೀವು ದೇವತೆಗಳಾಗಿದ್ದಿರಿ, ಸ್ವರ್ಗವು ವಂಡರ್ ಆಫ್
ವರ್ಲ್ಡ್ (ಅದ್ಭುತಗಳಲ್ಲಿ ಒಂದಾಗಿದೆ). ಇಡೀ ಪ್ರಪಂಚದಲ್ಲಿ ಆತ್ಮಿಕ ಅದ್ಭುತವು ಸ್ವರ್ಗವಾಗಿದೆ.
ಹೆಸರನ್ನು ಕೇಳುತ್ತಿದ್ದಂತೆಯೇ ಖುಷಿಯಾಗುತ್ತದೆ. ಅಂತಹ ಸ್ವರ್ಗದಲ್ಲಿ ನೀವು ಇರುತ್ತೀರಿ. ಇಲ್ಲಿ
7 ಅದ್ಭುತಗಳನ್ನು ತೋರಿಸುತ್ತಾರೆ, ತಾಜ್ಮಹಲ್ನ್ನೂ ಸಹ ಅದ್ಭುತವೆಂದು ಹೇಳುತ್ತಾರೆ. ಆದರೆ ಅಲ್ಲಿ
ಯಾರೂ ಇರಲು ಸಾಧ್ಯವಿಲ್ಲ. ನೀವಂತೂ ಅಂತಹ ಅದ್ಭುತ ಸ್ವರ್ಗದ ಮಾಲೀಕರಾಗಿದ್ದೀರಿ. ನೀವು
ಇರುವುದಕ್ಕಾಗಿ ತಂದೆಯು ಎಷ್ಟು ಅದ್ಭುತವಾದ ವೈಕುಂಠವನ್ನು ಸ್ಥಾಪಿಸುತ್ತಾರೆ, 21 ಜನ್ಮಗಳಿಗಾಗಿ
ಪದಮಾಪತಿಗಳಾಗುತ್ತೀರಿ ಅಂದಮೇಲೆ ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು. ನಾವು ಅಲ್ಲಿಗೆ
ಹೋಗುತ್ತಿದ್ದೇವೆ, ಅನೇಕ ಬಾರಿ ಮಕ್ಕಳು ಸ್ವರ್ಗದಲ್ಲಿ ಹೋಗಿದ್ದಿರಿ. ನೀವು ಚಕ್ರವನ್ನು
ಸುತ್ತುತ್ತಲೇ ಇರುತ್ತೀರಿ. ಪುರುಷಾರ್ಥವನ್ನೂ ಸಹ ಹೀಗೆ ಮಾಡಬೇಕು ಹೊಸ ಪ್ರಪಂಚದಲ್ಲಿ ನಾವು ಮೊಟ್ಟ
ಮೊದಲು ಬರಬೇಕು. ಹಳೆಯ ಮನೆಗೆ ಹೋಗಲು ಮನಸ್ಸಾಗುತ್ತದೆಯೇ? ತಂದೆಯು ಒತ್ತು ಕೊಟ್ಟು ಹೇಳುತ್ತಾರೆ,
ಪುರುಷಾರ್ಥ ಮಾಡಿ ಹೊಸ ಪ್ರಪಂಚದಲ್ಲಿ ಹೋಗಿ ತಂದೆಯು ನಮ್ಮನ್ನು ವಿಶ್ವದ ಅದ್ಭುತವಾದ ಸ್ವರ್ಗಕ್ಕೆ
ಮಾಲೀಕರನ್ನಾಗಿ ಮಾಡುತ್ತಾರೆ ಅಂದಾಗ ಇಂತಹ ತಂದೆಯನ್ನು ನಾವೇಕೆ ನೆನಪು ಮಾಡಬಾರದು. ಬಹಳ ಶ್ರಮ
ಪಡಬೇಕಾಗಿದೆ. ಈ ಹಳೆಯ ಪ್ರಪಂಚವನ್ನು ನೋಡಿಯೂ ನೋಡದಂತಿರಿ. ತಂದೆಯು ತಿಳಿಸುತ್ತಾರೆ - ಭಲೇ ನಾನು
ನೋಡುತ್ತೇನೆ ಆದರೆ ನಾನು ಸ್ವಲ್ಪ ದಿನಗಳ ಯಾತ್ರಿಕನಾಗಿದ್ದೇನೆಂದು ನನ್ನಲ್ಲಿ ಜ್ಞಾನವಿದೆ ಹಾಗೆಯೇ
ನೀವೂ ಸಹ ಪಾತ್ರವನ್ನಭಿನಯಿಸಲು ಬಂದಿದ್ದೀರಿ. ಆದ್ದರಿಂದ ಇದರೊಂದಿಗಿನ ಮಮತ್ವವನ್ನು ತೆಗೆಯಿರಿ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
೧. ಆತ್ಮಿಕ
ವಿದ್ಯೆಯಲ್ಲಿ ಸದಾ ತತ್ಪರರಾಗಿರಬೇಕು. ಎಂದೂ ಸಹ ಕಾದಂಬರಿ ಮೊದಲಾದವುಗಳನ್ನು ಓದುವ ಕೆಟ್ಟ
ಅಭ್ಯಾಸವನ್ನು ಇಟ್ಟುಕೊಳ್ಳಬಾರದು. ಇದುವರೆಗೂ ಏನೆಲ್ಲವನ್ನೂ ಓದಿದ್ದಿರೋ ಅದೆಲ್ಲವನ್ನೂ ಮರೆತು
ತಂದೆಯನ್ನು ನೆನಪು ಮಾಡಬೇಕಾಗಿದೆ.
೨. ಈ ಹಳೆಯ ಪ್ರಪಂಚದಲ್ಲಿ
ಸ್ವಯಂನ್ನು ಅತಿಥಿ ಎಂದು ತಿಳಿದು ಇರಬೇಕಾಗಿದೆ. ಇದರೊಂದಿಗೆ ಪ್ರೀತಿಯನ್ನಿಡಬಾರದು, ನೋಡಿದರೂ
ನೋಡದಂತಿರಬೇಕು.
ವರದಾನ:
ಅಧಿಕಾರಿಯಾಗಿ
ಸಮಸ್ಯೆಗಳನ್ನು ಆಟದಂತೆ ಪಾರು ಮಾಡುವವರೆ ಹೀರೋ ಪಾತ್ರಧಾರಿ ಭವ.
ಎಂತಹದೇ
ಪರಿಸ್ಥಿತಿ ಇರಬಹುದು, ಸಮಸ್ಯೆಗಳಿರಬಹುದು ಆದರೆ ಸಮಸ್ಯೆಗಳಿಗೆ ಅಧೀನ ಇಲ್ಲ, ಅಧಿಕಾರಿಯಾಗಿ
ಸಮಸ್ಯೆಗಳನ್ನು ಈ ರೀತಿ ಪಾರು ಮಾಡಿ ಬಿಡಿ ಹೇಗೆ ಆಟವಾಡುತ್ತ ಪಾರು ಮಾಡುತ್ತಿರುವ ಹಾಗೆ. ಇಲ್ಲಾ
ಹೊರಗಿನಿಂದ ಅಳುವಂತಹ ಪಾತ್ರ ಇರಬಹುದು ಆದರೆ ಒಳಗೆ ಇದೇ ಇರಲಿ ಇದು ಆಟವಾಗಿದೆ - ಇದಕ್ಕೆ
ಹೇಳಲಾಗುವುದು ಡ್ರಾಮಾ ಮತ್ತು ಡ್ರಾಮಾದಲ್ಲಿ ನಾವು ಹೀರೋ ಪಾತ್ರಧಾರಿಗಳು. ಹೀರೋ ಪಾತ್ರಧಾರಿ
ಅರ್ಥಾತ್ ಆಕ್ಯುರೇಟ್ ಆಗಿ ಪಾತ್ರ ಮಾಡುವಂತಹವರು. ಆದ್ದರಿಂದ ಕಠಿಣ ಸಮಸ್ಯೆಯನ್ನೂ ಸಹಾ ಆಟವೆಂದು
ತಿಳಿದು ಹಗುರ ಮಾಡಿಬಿಡಿ, ಯಾವುದೇ ಹೊರೆ ಇರಬಾರದು.
ಸ್ಲೋಗನ್:
ಸದಾ ಜ್ಞಾನದ
ಸ್ಮರಣೆಯಲ್ಲಿದ್ದಾಗ ಸದಾ ಹರ್ಷಿತರಾಗಿರುವಿರಿ, ಮಾಯೆಯ ಆಕರ್ಷಣೆಯಿಂದ ಸುರಕ್ಷಿತರಾಗಿರುವಿರಿ.