06.08.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಜ್ಞಾನದ ಧಾರಣೆ ಮಾಡುತ್ತಿರಿ, ಅದರಿಂದ ನೀವು ಅಂತ್ಯದಲ್ಲಿ ತಂದೆ ಸಮಾನ ಆಗುತ್ತೀರಿ, ತಂದೆಯ ಸಂಪೂರ್ಣ ಶಕ್ತಿಯನ್ನು ನೀವು ಜೀರ್ಣ ಮಾಡಿಕೊಳ್ಳುತ್ತೀರಿ”

ಪ್ರಶ್ನೆ:
ಯಾವ ಎರಡು ಶಬ್ದಗಳ ಸ್ಮೃತಿಯಿಂದ ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ?

ಉತ್ತರ:
ಉತ್ಥಾನ ಮತ್ತು ಪತನ, ಸತೋಪ್ರಧಾನ ಮತ್ತು ತಮೋಪ್ರಧಾನ, ಶಿವಾಲಯ ಮತ್ತು ವೇಶ್ಯಾಲಯ, ಇಂತಹ ಎರಡೆರಡು ಶಬ್ಧಗಳ ಸ್ಮೃತಿಯಿದ್ದಾಗ ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ. ಈಗ ನೀವು ಮಕ್ಕಳು ಜ್ಞಾನವನ್ನು ಯಥಾರ್ಥವಾಗಿ ತಿಳಿದುಕೊಂಡಿದ್ದೀರಿ. ಭಕ್ತಿಯಲ್ಲಿ ಜ್ಞಾನವಿಲ್ಲ ಕೇವಲ ಖುಷಿ ಪಡಿಸುವಂತಹ ಮಾತುಗಳನ್ನು ಆಡುತ್ತಾರೆ. ಭಕ್ತಿಮಾರ್ಗವೇ ಮನಸ್ಸನ್ನು ಖುಷಿ ಪಡಿಸುವಂತಹದಾಗಿದೆ.

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ. ಈಗ ನೀವು ಮಕ್ಕಳಿಗಾಗಿ ತಂದೆಯು ಹೇಳುತ್ತಾರೆ - ನೀವು ಎಷ್ಟು ಶ್ರೇಷ್ಠರಾಗಿದ್ದಿರಿ. ಇದು ಉತ್ಥಾನ ಮತ್ತು ಪತನದ ಆಟವಾಗಿದೆ. ಈಗ ನಿಮ್ಮ ಬುದ್ಧಿಯಲ್ಲಿದೆ - ನಾವು ಎಷ್ಟು ಉತ್ತಮರು ಮತ್ತು ಪವಿತ್ರರಾಗಿದ್ದೆವು. ಈಗ ಎಷ್ಟು ಕನಿಷ್ಠರಾಗಿದ್ದೇವೆ. ದೇವಿ ದೇವತೆಗಳ ಮುಂದೆ ಹೋಗಿ ನೀವು ಶ್ರೇಷ್ಠರಾಗಿದ್ದೀರಿ, ನಾವು ಕನಿಷ್ಠರಾಗಿದ್ದೇವೆಂದು ನೀವೇ ಹೇಳುತ್ತೀರಿ. ನಾವೇ ಶ್ರೇಷ್ಠರು ಮತ್ತು ಕನಿಷ್ಠರಾಗುತ್ತೇವೆಂದು ಮೊದಲು ನಿಮಗೆ ತಿಳಿದಿರಲಿಲ್ಲ. ಈಗ ತಂದೆಯು ನಿಮಗೆ ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ ನೀವೆಷ್ಟು ಶ್ರೇಷ್ಠ, ಪವಿತ್ರರಾಗಿದ್ದಿರಿ ನಂತರ ಎಷ್ಟು ಅಪವಿತ್ರರಾದಿರಿ! ಪವಿತ್ರರಿಗೆ ಉತ್ತಮರೆಂದು ಹೇಳಲಾಗುತ್ತದೆ. ಅದಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಅಲ್ಲಿ ನಿಮ್ಮ ರಾಜ್ಯವಿತ್ತು ಅದನ್ನು ನೀವೀಗ ಸ್ಥಾಪನೆ ಮಾಡುತ್ತಿದ್ದೀರಿ. ತಂದೆಯು ಕೇವಲ ಸೂಚನೆ ನೀಡುತ್ತಾರೆ. ನೀವು ಬಹಳ ಉತ್ತಮ ಶಿವಾಲಯದ ನಿವಾಸಿಗಳಾಗಿದ್ದಿರಿ ಪುನಃ ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನೀವು ಅರ್ಧದಲ್ಲಿ ವಿಕಾರದಲ್ಲಿ ಇಳಿದಿದ್ದರಿಂದ ಪತಿತ, ವಿಕಾರಿಗಳಾದಿರಿ. ಈಗ ನೀವು ಪುನಃ ನಿರ್ವಿಕಾರಿ ಸತೋಪ್ರಧಾನರಾಗಬೇಕಾಗಿದೆ. ಎರಡು ಶಬ್ದಗಳನ್ನು ನೆನಪು ಮಾಡಬೇಕಾಗಿದೆ. ಈಗ ಇದು ತಮೋಪ್ರಧಾನ ಪ್ರಪಂಚವಾಗಿದೆ, ಸತೋಪ್ರಧಾನ ಪ್ರಪಂಚದ ಗುರುತು ಲಕ್ಷ್ಮೀ ನಾರಾಯಣರಾಗಿದ್ದಾರೆ. ಇದು 5000 ವರ್ಷಗಳ ಮಾತಾಗಿದೆ. ಸತೋಪ್ರಧಾನ ಭಾರತದಲ್ಲಿ ರಾಜ್ಯವಿತ್ತು, ಭಾರತವು ಬಹಳ ಉತ್ತಮವಾಗಿತ್ತು, ಈಗ ಕನಿಷ್ಠವಾಗಿದೆ. ನಿರ್ವಿಕಾರಿಗಳಿಂದ ವಿಕಾರಿಗಳಾಗುವುದರಲ್ಲಿ ನಿಮಗೆ 84 ಜನ್ಮಗಳು ಹಿಡಿಸಿತು. ಅಲ್ಲಿಯೂ ಸಹ ಕ್ಷಣ ಪ್ರತಿ ಕ್ಷಣ ಕಳೆದಂತೆ ಸ್ವಲ್ಪ ಸ್ವಲ್ಪ ಕಲೆಗಳು ಕಡಿಮೆಯಾಗುತ್ತಾ ಬಂದವು ಆದರೂ ಸಂಪೂರ್ಣ ನಿರ್ವಿಕಾರಿಗಳೆಂದೇ ಹೇಳುತ್ತಾರಲ್ಲವೆ. ಸಂಪೂರ್ಣ ನಿರ್ವಿಕಾರಿ ಎಂದು ಶ್ರೀ ಕೃಷ್ಣನಿಗ ಹೇಳುತ್ತಾರೆ, ಕೃಷ್ಣನು ಸುಂದರನಾಗಿದ್ದನು, ಈಗ ಕಪ್ಪಾಗಿದ್ದಾನೆ. ನೀವಿಲ್ಲಿ ಕುಳಿತಾಗ ಬುದ್ಧಿಯಲ್ಲಿರಬೇಕು - ನಾವು ಶಿವಾಲಯದಲ್ಲಿ ವಿಶ್ವದ ಮಾಲೀಕರಾಗಿದ್ದೆವು, ಅನ್ಯ ಯಾವ ಧರ್ಮವಿರಲಿಲ್ಲ ಕೇವಲ ನಮ್ಮದೇ ರಾಜ್ಯವಿತ್ತು ನಂತರ ಎರಡು ಕಲೆಗಳು ಕಡಿಮೆಯಾಯಿತು. ಕಲೆಗಳು ಸ್ವಲ್ಪ ಸ್ವಲ್ಪವಾಗಿಯೇ ಕಡಿಮೆಯಾಗುತ್ತಾ ತ್ರೇತಾಯುಗದಲ್ಲಿ ಎರಡು ಕಡಿಮೆಯಾಗಿ ಹೋಯಿತು. ಕೊನೆಯಲ್ಲಿ ವಿಕಾರಿಗಳಾಗುತ್ತೇವೆ ಮತ್ತು ಇಳಿಯುತ್ತಾ ಇಳಿಯುತ್ತಾ ಪತಿತರಾಗಿ ಬಿಡುತ್ತೇವೆ. ಇದಕ್ಕೆ ವಿಕಾರಿ ಪ್ರಪಂಚವೆಂದು ಹೇಳುತ್ತಾರೆ. ವಿಷಯ ವೈತರಣಿ ನದಿಯಲ್ಲಿ ಮುಳುಗುತ್ತಿರುತ್ತಾರೆ. ಸತ್ಯಯುಗದಲ್ಲಿ ಕ್ಷೀರ ಸಾಗರದಲ್ಲಿ ಇರುತ್ತಿದ್ದಿರಿ, ನೀವು ಇಡೀ ವಿಶ್ವದ ಇತಿಹಾಸ ಭೂಗೋಳವನ್ನು, ತಮ್ಮ 84 ಜನ್ಮಗಳ ಕಥೆಯನ್ನು ತಿಳಿದುಕೊಂಡಿದ್ದೀರಿ - ನಾವು ನಿರ್ವಿಕಾರಿಗಳಾಗಿದ್ದೆವು, ಇವರ ರಾಜ್ಯದಲ್ಲಿದ್ದೆವು, ಪವಿತ್ರ ರಾಜಧಾನಿಯಾಗಿತ್ತು, ಅದಕ್ಕೆ ಪೂರ್ಣ ಸ್ವರ್ಗವೆಂದು ಹೇಳಲಾಗುತ್ತದೆ. ನಂತರ ತ್ರೇತಾದಲ್ಲಿ ಸೆಮಿ ಸ್ವರ್ಗವಾತ್ತದೆ, ಇದು ಬುದ್ಧಿಯಲ್ಲಿರುತ್ತದೆಯಲ್ಲವೆ. ತಂದೆಯೇ ಬಂದು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಮಧ್ಯದಲ್ಲಿಯೇ ರಾವಣನು ಬರುತ್ತಾನೆ ನಂತರ ಅಂತ್ಯದಲ್ಲಿ ಈ ವಿಕಾರಿ ಪ್ರಪಂಚವು ವಿನಾಶವಾಗುತ್ತದೆ. ಪುನಃ ಆದಿಯಲ್ಲಿ ಹೋಗುವುದಕ್ಕಾಗಿ ಪವಿತ್ರರಾಗಬೇಕಾಗಿದೆ. ತಮ್ಮನ್ನು ಆತ್ಮವೆಂದು ತಿಳಿದು ನನೊಬ್ಬನನೇ ನೆನಪು ಮಾಡಿರಿ. ತಮ್ಮನ್ನು ದೇಹವೆಂದು ತಿಳಿಯಬೇಡಿ. ನೀವು ಭಕ್ತಿಮಾರ್ಗದಲ್ಲಿ ಬಾಬಾ ತಾವು ಬಂದರೆ ನಾವು ತಮಗೆ ಬಲಿಹಾರಿಯಾಗುತ್ತೇವೆಂದು ಪ್ರತಿಜ್ಞೆ ಮಾಡಿದ್ದಿರಿ. ಆತ್ಮವು ತಂದೆಯೊಂದಿಗೆ ಮಾತನಾಡುತ್ತದೆ. ಕೃಷ್ಣನು ತಂದೆಯಾಗಿರಲಿಲ್ಲ, ಆತ್ಮಗಳ ತಂದೆ ನಿರಾಕಾರ ಶಿವ ತಂದೆಯೊಬ್ಬರೇ ಆಗಿದ್ದಾರೆ. ಆ ಹದ್ದಿನ ತಂದೆಯಿಂದ ಹದ್ದಿನ ಆಸ್ತಿ ಸಿಗುತ್ತದೆ, ಬೆಹದ್ದಿನ ತಂದೆಯಿಂದ ಭಾರತಕ್ಕೆ ಬೇಹದ್ದಿನ ಆಸ್ತಿ ಸಿಗುತ್ತದೆ. ಆದ್ದರಿಂದ ಸತ್ಯಯುಗಕ್ಕೆ ಶಿವಾಲಯವೆಂದು ಹೇಳಲಾಗುತ್ತದೆ. ಶಿವ ತಂದೆಯು ಬಂದು ದೇವಿ ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ಇದನ್ನು ಸದಾ ನೆನಪಿಟ್ಟುಕೊಳ್ಳಬೇಕು. ಖುಷಿಯ ಮಾತಲ್ಲವೆ. ಈಗ ಮತ್ತೆ ಶಿವಾಲಯಕ್ಕೆ ಹೋಗುತ್ತೇವೆ. ಯಾರಾದರೂ ಶರೀರ ಬಿಟ್ಟಾಗ ಸ್ವರ್ಗಕ್ಕೆ ಹೋದರೆಂದು ಹೇಳುತ್ತಾರೆ ಆದರೆ ಈ ರೀತಿ ಎಂದೂ ಯಾರೂ ಹೋಗುವುದಿಲ್ಲ. ಇವೆಲ್ಲವೂ ಕೇವಲ ಮನಸ್ಸನ್ನು ಖುಷಿ ಪಡಿಸಲು ಭಕ್ತಿಮಾರ್ಗದ ಸುಳ್ಳು ಮಾತುಗಳಾಗಿವೆ. ಸತ್ಯ-ಸತ್ಯವಾದ ಸ್ವರ್ಗಕ್ಕೆ ತಾವೀಗ ಹೋಗುವವರಿದ್ದೀರಿ. ಅಲ್ಲಿ ಯಾವ ರೋಗಗಳಿರುವುದಿಲ್ಲ. ನೀವು ಸದಾ ಹರ್ಷಿತರಾಗಿರುತ್ತೀರಿ. ಅಂದಾಗ ತಂದೆಯು ಎಷ್ಟು ಸಹಜವಾಗಿ ಚಿಕ್ಕ ಚಿಕ್ಕ ಮಕ್ಕಳಿಗೆ ತಿಳಿಸಿಕೊಡುತ್ತಾರೆ, ಹೊರಗಡೆ ಎಲ್ಲಿದ್ದರೂ ನೀವು ಪದವಿಯನ್ನು ಪಡೆಯಬಹುದು. ಇದರಲ್ಲಿ ಮೊದಲು ಪವಿತ್ರತೆಯು ಮುಖ್ಯವಾಗಿದೆ. ಆಹಾರ ಪಾನೀಯಗಳು ಶುದ್ಧವಾಗಿರಬೇಕು. ದೇವತೆಗಳ ಮುಂದೆ ಎಂದಾದರೂ ಬೀಡಿ, ಸಿಗರೇಟು ಇತ್ಯಾದಿಗಳ ನೈವೇದ್ಯ ಇಡುತ್ತೀರಾ? ಗ್ರಂಥಗಳ ಮುಂದೆ ಎಂದಾದರೂ ಮೊಟ್ಟೆ ಅಥವಾ ಬೀಡಿ ಇತ್ಯಾದಿಗಳ ಭೋಗವನ್ನಿಟ್ಟಿದ್ದೀರಾ? ಗ್ರಂಥವನ್ನು ಹೇಗೆ ಅದು ಗೋವಿಂದನ ಶರೀರವೆಂದು ತಿಳಿಯುತ್ತಾರೆ ಅಂದರೆ ಗ್ರಂಥಕ್ಕೆ ಇಷ್ಟೊಂದು ಮಾನ್ಯತೆ ಕೊಡುತ್ತಾರೆ. ಇದು ಗುರುವಿನ ದೇಹವಿದ್ದಂತೆ ಎಂದು ಸಿಖ್ಖರು ತಿಳಿಯುತ್ತಾರೆ. ಆದರೆ ಗುರು ನಾನಕರು ಕುಳಿತು ಗ್ರಂಥವನ್ನು ಬರೆದರೆ! ನಾನಕರಂತೂ ಅವತಾರ ಪಡೆದರು, ಸಿಖ್ಖರ ವೃದ್ಧಿಯಾಯಿತು ನಂತರದಲ್ಲಿ ಅವರು ಗ್ರಂಥ ಮೊದಲಾದುದನ್ನು ಬರೆದಿದ್ದಾರೆ. ಒಬ್ಬರ ನಂತರ ಇನ್ನೊಬ್ಬರು ಹೀಗೆ ಸಿಖ್ಖ್ ಧರ್ಮದಲ್ಲಿ ಬಂದರು. ಮೊದಲಂತೂ ಗ್ರಂಥವೂ ಸಹ ಕೈಯಿಂದ ಬರೆದ ಅತಿ ಚಿಕ್ಕ ಗ್ರಂಥ ಇತ್ತು. ಗೀತೆಗೂ ಸಹ ಕೃಷ್ಣನ ರೂಪವೆಂದು ತಿಳಿಯುತ್ತಾರೆ. ನಾನಕರ ಗ್ರಂಥ ಇರುವಂತೆ ಕೃಷ್ಣನ ಗೀತೆ ಎಂದು ಗಾಯನವಿದೆ. ಕೃಷ್ಣ ಭಗವನುವಾಚ ಎಂದು ಹೇಳುತ್ತಾರೆ, ಇದು ಅಜ್ಞಾನವಾಗಿದೆ. ಜ್ಞಾನವು ಒಬ್ಬ ಪರಮಪಿತ ಪರಮಾತ್ಮನಲ್ಲಿಯೇ ಇದೆ, ಗೀತೆಯಿಂದಲೇ ಸದ್ಗತಿಯಾಗುತ್ತದೆ. ಆ ಜ್ಞಾನವು ತಂದೆಯ ಬಳಿಯಷ್ಟೇ ಇದೆ. ಜ್ಞಾನದಿಂದ ದಿನ, ಭಕ್ತಿಯಿಂದ ರಾತ್ರಿಯಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ಆತ್ಮವನ್ನು ಪವಿತ್ರ ಮಾಡಿಕೊಳ್ಳಬೇಕು ಅದಕ್ಕಾಗಿ ಪರಿಶ್ರಮ ಪಡಬೇಕಾಗುತ್ತದೆ. ಮಾಯೆಯ ಬಿರುಗಾಳಿಗಳು ಇಷ್ಟೂ ಶಕ್ತಿಶಾಲಿಯಾಗಿ ಬರುತ್ತವೆ ಅದರಲ್ಲಿ ಜ್ಞಾನವು ಹಾರಿಹೋಗುತ್ತದೆ. ಯಾರಿಗೂ ತಿಳಿಸುವುದಕ್ಕೂ ಆಗುವುದಿಲ್ಲ. ಮೊದಲನೆಯದಾಗಿ ಕಾಮ ವಿಕಾರವೇ ಬಹಳ ತೊಂದರೆ ಕೊಡುತ್ತದೆ, ಅದರಲ್ಲಿಯೇ ಸಮಯ ಹಿಡಿಸುತ್ತದೆ. ವಾಸ್ತವದಲ್ಲಿ ಇದು ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಮಾತಾಗಿದೆ. ಮಗುವು ಜನ್ಮ ಪಡೆಯಿತೆಂದರೆ ಮಾಲೀಕನಾಯಿತು. ಶಿವ ತಂದೆಯು ಬಂದಿದ್ದಾರೆಂದು ಅರಿತುಕೊಂಡಿರಿ ಮತ್ತು ಆಸ್ತಿಗೆ ಹಕ್ಕುದಾರರಾದಿರಿ. ಗೀತೆಯನ್ನೂ ಸಹ ಶಿವ ತಂದೆಯೇ ಹೇಳಿದ್ದರು, ಅವರೇ ತಿಳಿಸಿದ್ದಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ, ನಾನು ಈ ಸಾಧಾರಣ ತನುವಿನಲ್ಲಿ ಬರುತ್ತೇನೆ, ಕೃಷ್ಣನು ಸಾಧಾರಣನಲ್ಲ. ಕೃಷ್ಣನು ಜನ್ಮ ಪಡೆದಾಗ ಪ್ರಕಾಶ ಮಿಂಚುತ್ತದೆ, ಬಹಳ ಪ್ರಭಾವ ಬೀರುತ್ತದೆ, ಆದ್ದರಿಂದ ಶ್ರೀಕೃಷ್ಣನ ಮಹಿಮೆಯನ್ನು ಈಗಲೂ ಮಾಡುತ್ತಾರೆ. ಬಾಕಿ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಆಂಗ್ಲ ಭಾಷೆಯಲ್ಲಿ ಫಿಲಾಸಫಿ ಎಂದು ಹೇಳುತ್ತಾರೆ. ಆಧ್ಯಾತ್ಮಿಕ ಜ್ಞಾನವನ್ನು ತಂದೆ ಮಾತ್ರ ಕೊಡುತ್ತಾರೆ ಸ್ವತಃ ತಿಳಿಸುತ್ತಾರೆ - ನಾನು ನಿಮ್ಮ ಆತ್ಮಿಕ ತಂದೆಯಾಗಿದ್ದೇನೆ, ಜ್ಞಾನಸಾಗರನಾಗಿದ್ದೇನೆ. ಮಕ್ಕಳೂ ಸಹ ತಂದೆಯಿಂದ ಕಲಿಯುತ್ತೀರಿ. ಜ್ಞಾನವನ್ನು ಧಾರಣೆ ಮಾಡುತ್ತೀರಿ. ನಂತರ ಕೊನೆಯಲ್ಲಿ ತಂದೆಯಂತೆ ಆಗುತ್ತೀರಿ. ಎಲ್ಲವೂ ಧಾರಣೆ ಮಾಡುವುದರ ಮೇಲೆ ಆಧಾರವಾಗಿದೆ. ನಂತರ ತಂದೆಯ ನೆನಪಿನಿಂದ ಆ ಶಕ್ತಿಯು ಬರುತ್ತದೆ. ನೆನಪಿಗೆ ಹರಿತ ಎಂದು ಹೇಳುತ್ತಾರೆ. ಆಯುಧಗಳಲ್ಲಿಯೂ ಅಂತರವಿರುತ್ತದೆ. ಕೆಲವು ಕತ್ತಿಗಳು ಒಂದು ರೂಪಾಯಿದಾಗಿದ್ದರೆ, ಇನ್ನು ಕೆಲವು ಬಹಳ ಬೆಲೆ ಬಾಳುವಂತಹದಾಗಿರುತ್ತದೆ. ಬಾಬಾ ಅವರು ಅನುಭವಿಯಾಗಿದ್ದಾರೆ. ಖಡ್ಗಕ್ಕೆ ಬಹಳ ಮಾನ್ಯತೆ ಇರುತ್ತದೆ. ಗುರು ಗೋವಿಂದ ಸಿಂಹರ ಖಡ್ಗಕ್ಕೆ ಬಹಳ ಮಾನ್ಯತೆ ಇದೆ. ಅಂದಮೇಲೆ ನೀವು ಮಕ್ಕಳಲ್ಲಿಯೂ ಸಹ ಯೋಗದ ಬಲ ಬೇಕು. ಆದ್ದರಿಂದ ಜ್ಞಾನದ ಖಡ್ಗದಲ್ಲಿ ಯೋಗದ ಹರಿತವಿರಬೇಕು. ಹರಿತ ಬರುವುದರಿಂದ ನಾಟಕದನುಸಾರ ನೀವು ಪರಿಶ್ರಮ ಪಡುತ್ತೀರಿ. ತಂದೆಯನ್ನು ಎಷ್ಟೆಷ್ಟು ನೆನಪು ಮಾಡುತ್ತೀರಿ ಅಷ್ಟು ಆ ನೆನಪಿನಿಂದಲೇ ಪಾಪಗಳು ಭಸ್ಮವಾಗುತ್ತವೆ. ಪತಿತ ಪಾವನ ತಂದೆಯೇ ಯುಕ್ತಿಯನ್ನು ತಿಳಿಸುತ್ತಾರೆ ಮತ್ತು ಪುನಃ ಕಲ್ಪದ ನಂತರ ಬಂದು ನಿಮಗೆ ಜ್ಞಾನ ಕೊಡುತ್ತಾರೆ. ಇವರಿಂದಲೂ (ಬ್ರಹ್ಮಾ) ಸರ್ವ ತ್ಯಾಗವನ್ನು ಮಾಡಿಸಿ ಹೀಗೆಯೇ ತಮ್ಮ ರಥವನ್ನಾಗಿ ಮಾಡಿಕೊಳ್ಳುತ್ತಾರೆ. ನೀವು ಮಕ್ಕಳಿಗೆ ಪ್ರಾರಂಭದಲ್ಲಿ ಎಷ್ಟು ಆಕರ್ಷಣೆಯಾಯಿತು, ಎಲ್ಲರೂ ಹೇಗೆ ಓಡಿ ಬಂದಿರಿ, ತಂದೆಯಲ್ಲಿ ಆಕರ್ಷಣೆಯಿದೆಯಲ್ಲವೆ. ಈಗ ನೀವೂ ಸಹ ಈ ರೀತಿ ಸಂಪೂರ್ಣರಾಗಬೇಕು. ನಂಬರವಾರ್ ಆಗಿಯೇ ಆಗುತ್ತಿರಿ, ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ.

ಸೃಷ್ಟಿ ಚಕ್ರವನ್ನು ಆದಿಯಿಂದ ಹಿಡಿದು ಕಲಿಯುಗದ ಅಂತ್ಯದವರೆಗೂ ತಿಳಿದುಕೊಂಡಿರಿ. ಈಗ ಸಂಗಮ ಯುಗವಾಗಿದೆ, ಪಾವನರನ್ನಾಗಿ ಮಾಡಲು ಅವಶ್ಯವಾಗಿ ತಂದೆಯು ಬರಬೇಕಾಗುತ್ತದೆ. ಪಾವನ ಎಂದರೆ ಸತೋಪ್ರಧಾನರು ನಂತರ ತುಕ್ಕು ಹಿಡಿಯಿತು. ಈಗ ತುಕ್ಕು ಬಿಡುವುದು ಹೇಗೆ? ಆತ್ಮವು ಚೊಕ್ಕ ಚಿನ್ನವಾದಾಗ ಆಭರಣವೂ ಸತ್ಯ ಅರ್ಥಾತ್ ಸುಂದರ ಶರೀರವಿರುತ್ತದೆ. ಆತ್ಮವು ಸುಳ್ಳಾದಾಗ ಶರೀರವೂ ಪತಿತವಾಗುತ್ತದೆ. ಜ್ಞಾನಕ್ಕೆ ಮೊದಲು ಇವರೂ ಸಹ (ಬ್ರಹ್ಮಾ) ವಂದನೆ, ನಮಸ್ಕಾರ ಮಾಡುತ್ತಿದ್ದರು. ಆಯಿಲ್ ಪೇಂಟ್ನಿಂದ ಮಾಡಿರುವ ಲಕ್ಷ್ಮೀ ನಾರಾಯಣರ ಚಿತ್ರ ಸದಾ ಗದ್ದಿಯ ಮೇಲಿರುತ್ತಿತ್ತು, ಅವರನ್ನೇ ಬಹಳ ಪ್ರೀತಿಯಿಂದ ನೆನಪು ಮಾಡುತ್ತಿದ್ದರು. ಬೇರೆ ಯಾರ ನೆನಪೂ ಇರುತ್ತಿರಲಿಲ್ಲ. ಬೇರೆ ಕಡೆ ವಿಚಾರ ಹೋದರೆ ತಮಗೇ ತಾವೇ ಪೆಟ್ಟು ಕೊಡುತ್ತಿದ್ದರು, ಮನಸ್ಸು ಏಕೆ ಓಡುತ್ತದೆ, ದರ್ಶನವೇಕೆ ಆಗುವುದಿಲ್ಲ ಎಂದು ಶಿಕ್ಷೆ ಕೊಟ್ಟುಕೊಳ್ಳುತ್ತಿದ್ದರು. ಭಕ್ತರಾಗಿದ್ದರು ಅಲ್ಲವೆ! ನಂತರ ಯಾವಾಗ ವಿಷ್ಣುವಿನ ದರ್ಶನವಾಯಿತೋ ನಾರಾಯಣನಂತೂ ಆಗಲಿಲ್ಲ, ಪುರುಷಾರ್ಥವಂತೂ ಅವಶ್ಯ ಮಾಡಬೇಕಾಗುತ್ತದೆ ಗುರಿ ಧ್ಯೇಯವು ಸನ್ಮುಖದಲ್ಲಿದೆ. ಇವರು ಚೈತನ್ಯದಲ್ಲಿದ್ದರು ಆದ್ದರಿಂದಲೇ ಇವರ ಜಡ ಚಿತ್ರಗಳನ್ನು ಮಾಡಿದ್ದಾರೆ, ಈಗ ಪಾವನರನ್ನಾಗಿ ಮಾಡಲು, ನರನಿಂದ ನಾರಾಯಣನನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ನೀವು ಸಹ ಅವರ ರಾಜಧಾನಿಯಲ್ಲಿದ್ದಿರಿ ಪುನಃ ಇಂತಹವರಾಗುವ ಪುರುಷಾರ್ಥ ಮಾಡುತ್ತೀರಿ. ಆದ್ದರಿಂದ ಒಳ್ಳೆಯ ರೀತಿಯಲ್ಲಿ ಅನುಸರಿಸಬೇಕು. ಬ್ರಹ್ಮನಿಗೆ ದೇವತೆಯೆಂದು ಹೇಳುವುದಿಲ್ಲ. ವಿಷ್ಣು ದೇವತೆ ಎನ್ನುವುದು ಸರಿಯಾಗಿದೆ. ಮನುಷ್ಯರಿಗಂತೂ ಏನೂ ಗೊತ್ತಿಲ್ಲ, ಗುರು ಬ್ರಹ್ಮ, ಗುರು ವಿಷ್ಣು..... ಎಂದು ಹೇಳುತ್ತಾರೆ, ವಿಷ್ಣು ಯಾರಿಗೆ ಗುರುವಾಗಿದ್ದಾರೆ? ಎಲ್ಲರನ್ನೂ ಗುರು ಎಂದು ಹೇಳುತ್ತಾರೆ. ಶಿವ ಪರಮಾತ್ಮಾಯ ನಮಃ ಅವರಿಗೆ ಗುರು, ಇವರಿಗೆ ಪರಮಾತ್ಮನೆಂದು ಹೇಳುತ್ತಾರೆ. ಎಲ್ಲರಿಗಿಂತ ತಂದೆಯು ಹಿರಿಯರಾಗಿದ್ದಾರಲ್ಲವೆ. ಅನ್ಯರಿಗೆ ಕಲಿಸಲು ನಾವು ಅವರಿಂದ ಕಲಿಯುತ್ತಿದ್ದೇವೆ. ಸದ್ಗುರು ಯಾವುದನ್ನು ನಿಮಗೆ ಕಲಿಸುತ್ತಾರೊ ಅದನ್ನು ನೀವು ಅನ್ಯರಿಗೆ ಕಲಿಸುತ್ತೀರಿ. ಇವರು ತಂದೆ, ಶಿಕ್ಷಕ ಆಗಿದ್ದಾರೆ ಎಂದು ಗುರುಗಳಿಗೆ ಹೇಳುವುದಿಲ್ಲ. ಇಲ್ಲದಿದ್ದರೆ ಇಡೀ ಜ್ಞಾನವು ನಿಮ್ಮ ಬುದ್ಧಿಯಲ್ಲಿರಬೇಕು. ನಾವು ಶಿವಾಲಯದಲ್ಲಿದ್ದೆವು, ಈಗ ವೇಶ್ಯಾಲಯದಲ್ಲಿದ್ದೇವೆ. ಈಗ ಪುನಃ ಶಿವಾಲಯಕ್ಕೆ ಹೋಗಬೇಕಾಗಿದೆ. ಬ್ರಹ್ಮ್ ತತ್ವದಲ್ಲಿ ಲೀನವಾಯಿತು, ಜ್ಯೋತಿ ಜ್ಯೋತಿಯಲ್ಲಿ ಸಮಾವೇಶವಾಯಿತು ಎಂದು ಹೇಳುತ್ತಾರೆ, ಆದರೆ ಆತ್ಮವು ಅವಿನಾಶಿಯಾಗಿದೆ, ಪ್ರತಿಯೊಬ್ಬರಲ್ಲಿ ತನ್ನ ತನ್ನದೇ ಆದ ಪಾತ್ರ ತುಂಬಿದೆ. ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ ಅಂದಮೇಲೆ ಅವರು ತಮ್ಮ ಪಾತ್ರವನ್ನು ಅಭಿನಯಿಸಲೇಬೇಕು. ಹೇಗೆ ಹೊಸದಾಗಿ ಶೂಟಿಂಗ್ ಆಗುತ್ತದೆ, ಆದರೆ ಇದು ಅನಾದಿ ಶೂಟಿಂಗ್ ಆಗಿದೆ, ಈ ವಿಶ್ವದ ಇತಿಹಾಸ ಭೂಗೋಳವು ಪುನರಾವರ್ತನೆಯಾಗುತ್ತದೆ. ಈ ವಿಚಿತ್ರವಾದ ನಕ್ಷತ್ರವು ಭೃಕುಟಿಯ ಮಧ್ಯದಲ್ಲಿ ಹೊಳೆಯುತ್ತದೆ, ಎಂದೂ ಸವೆಯುವುದಿಲ್ಲ. ಈ ಜ್ಞಾನವು ಮೊದಲು ನಿಮ್ಮಲ್ಲಿರಲಿಲ್ಲ. ಜಗತ್ತಿನ ಅದ್ಭುತ ಸ್ವರ್ಗದ ಹೆಸರನ್ನು ಕೇಳಿ ಮನಸ್ಸಿಗೆ ಖುಷಿಯಾಗುತ್ತದೆ. ಈಗಂತೂ ಸತ್ಯಯುಗ ಇಲ್ಲ ಕಲಿಯುಗವಿದೆ, ಆದ್ದರಿಂದ ಪುನರ್ಜನ್ಮವನ್ನು ಕಲಿಯುಗದಲ್ಲಿಯೇ ತೆಗೆದುಕೊಳ್ಳುತ್ತಾರೆ. ಎಲ್ಲರೂ ಅವಶ್ಯವಾಗಿ ಹೋಗಲೇಬೇಕು, ಆದರೆ ಪತಿತ ಆತ್ಮರು ಹೋಗಲು ಸಾಧ್ಯವಿಲ್ಲ. ಈಗ ನೀವು ಮಕ್ಕಳು ಯೋಗ ಬಲದಿಂದ ಪಾವನರಾಗುತ್ತೀರಿ, ಪಾವನ ಪ್ರಪಂಚವನ್ನು ಪರಮಾತ್ಮನೇ ಸ್ಥಾಪನೆ ಮಾಡುತ್ತಾರೆ. ನಂತರ ರಾವಣನು ನರಕವನ್ನಾಗಿ ಮಾಡುತ್ತಾನೆ. ಇದು ಪ್ರತ್ಯಕ್ಷದಲ್ಲಿದೆಯಲ್ಲವೆ. ರಾವಣನನ್ನು ಸುಡುತ್ತಾರೆ, ಇದು ಅನಾದಿಯಿಂದ ನಡೆಯುತ್ತಿದೆ ಎಂದು ಮನುಷ್ಯರು ಹೇಳುತ್ತಾರೆ. ಆದರೆ ಯಾವಾಗಿನಿಂದ ಪ್ರಾರಂಭವಾಗುತ್ತದೆಯೆಂದು ಯಾರಿಗೂ ಗೊತ್ತಿಲ್ಲ. ಅರ್ಧ ಅರ್ಧವೆಂದು ಹೇಳಲೂ ಸಾಧ್ಯವಿಲ್ಲ. ಏಕೆಂದರೆ ಲಕ್ಷಾಂತರ ವರ್ಷವೆಂದು ಹೇಳಿದ್ದಾರೆ. ಕಲಿಯುಗಕ್ಕೆ 40 ಸಾವಿರ ವರ್ಷಗಳೆಂದು ಹೇಳುತ್ತಾರೆ. ಮನುಷ್ಯರು ಘೋರ ಅಂಧಕಾರದಲ್ಲಿದ್ದಾರೆ. ಅಜ್ಞಾನ ನಿದ್ರೆಯಿಂದ ಏಳುವುದು ಬಹಳ ಕಠಿಣವಾಗಿದೆ, ಏಳುವುದೇ ಇಲ್ಲ. ಈಗ ಸಂಗಮಯುಗದಲ್ಲಿ ತಂದೆಯು ಬಂದು ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ನೀವು ಪಾವನರಾದಾಗ ಪಾವನ ಪ್ರಪಂಚವು ಸ್ಥಾಪನೆಯಾಗುತ್ತದೆ. ಈ ಪತಿತ ಪ್ರಪಂಚವೇ ಸಮಾಪ್ತಿಯಾಗುವುದು, ಈಗ ಎಷ್ಟು ದೊಡ್ಡ ಪ್ರಪಂಚವಾಗಿದೆ. ಸತ್ಯಯುಗದಲ್ಲಿ ಬಹಳ ಚಿಕ್ಕ ಪ್ರಪಂಚವಿರುತ್ತದೆ. ಈಗ ಮಾಯೆಯ ಮೇಲೆ ಜಯ ಗಳಿಸಿ ಪಾವನರು ಅವಶ್ಯ ಆಗಬೇಕು. ತಂದೆಯು ತಿಳಿಸುತ್ತಾರೆ - ಮಾಯೆಯು ಬಹಳ ಕಠಿಣವಾಗಿದೆ. ಪಾವನರಾಗುವುದರಲ್ಲಿ ಅನೇಕ ಪ್ರಕಾರದ ವಿಘ್ನಗಳನ್ನು ತರುತ್ತದೆ. ಪವಿತ್ರರಾಗುವ ಸಾಹಸವನ್ನು ಮಾಡುತ್ತಾರೆ. ಆಗ ಮಾಯೆ ಬಂದು ಎಂತಹ ಸ್ಥಿತಿ ಮಾಡಿ ಬಿಡುತ್ತದೆ. ಏಟನ್ನು ಕೊಟ್ಟು ಬೀಳಿಸಿ ಬಿಡುತ್ತದೆ, ಅದರಿಂದ ಮಾಡಿರುವ ಸಂಪಾದನೆಯೆಲ್ಲವೂ ಸಮಾಪ್ತಿಯಾಗುತ್ತದೆ, ನಂತರ ಬಹಳ ಪರಿಶ್ರಮ ಪಡಬೇಕಾಗುತ್ತದೆ. ಕೆಲವರು ಬೀಳುತ್ತಾರೆ ಮತ್ತೆ ಮುಖವನ್ನೂ ತೋರಿಸುವುದಿಲ್ಲ. ನಂತರ ಇಷ್ಟು ಉತ್ತಮ ಪದವಿ ಪಡೆಯಲು ಸಾಧ್ಯವಿಲ್ಲ. ಪೂರ್ಣ ಪುರುಷಾರ್ಥವಿರಬೇಕು. ಅನುತ್ತೀರ್ಣರಾಗಬಾರದು. ಅದಕ್ಕಾಗಿ ಕೆಲವರು ಗಂಧರ್ವ ವಿವಾಹವನ್ನು ಮಾಡಿಕೊಂಡು ತೋರಿಸುತ್ತಾರೆ. ವಿವಾಹ ಮಾಡಿಕೊಂಡು ಪವಿತ್ರವಾಗಿರುವುದು ಅಸಂಭವವೆಂದು ಸನ್ಯಾಸಿಗಳು ಹೇಳುತ್ತಾರೆ. ಆದರೆ ಇದು ಸಂಭವವೆಂದು ತಂದೆಯು ತಿಳಿಸುತ್ತಾರೆ ಏಕೆಂದರೆ ಬಹಳ ಪ್ರಾಪ್ತಿ ಇದೆ. ಈ ಒಂದು ಅಂತಿಮ ಜನ್ಮದಲ್ಲಿ ನೀವು ಪವಿತ್ರರಾಗಿದ್ದರೆ ನಿಮಗೆ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆ. ಅಂದಮೇಲೆ ಇಷ್ಟು ದೊಡ್ಡ ಪ್ರಾಪ್ತಿಗಾಗಿ ನೀವು ಒಂದು ಜನ್ಮ ಪವಿತ್ರರಾಗಿರಲು ಸಾಧ್ಯವಿಲ್ಲವೆ? ಬಾಬಾ, ನಾವು ಅವಶ್ಯವಾಗಿ ಇರುತ್ತೇವೆಂದು ಹೇಳುತ್ತಾರೆ. ಸಿಖ್ಖರೂ ಸಹ ಪವಿತ್ರತೆಯ ಕಂಕಣವನ್ನು ಕಟ್ಟಿಕೊಳ್ಳುತ್ತಾರೆ, ಇಲ್ಲಿ ಯಾವ ದಾರವನ್ನು ಕಟ್ಟಿಕೊಳ್ಳುವ ಅವಶ್ಯಕತೆಯಿಲ್ಲ, ಇದು ಬುದ್ಧಿಯ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ಮಕ್ಕಳು ಅನೇಕರಿಗೆ ತಿಳಿಸುತ್ತಾರೆ ಆದರೆ ದೊಡ್ಡ ವ್ಯಕ್ತಿಗಳ ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ಮೊದಲು ಅವರಿಗೆ ಇದನ್ನು ಚೆನ್ನಾಗಿ ತಿಳಿಸಿ - ಇವರೆಲ್ಲರೂ ಪ್ರಜಾಪಿತ ಬ್ರಹ್ಮಾನ ಸಂತಾನರಾಗಿದ್ದಾರೆ. ಶಿವ ತಂದೆಯಿಂದ ಆಸ್ತಿಯು ಸಿಗುತ್ತಿದೆ, ಪತಿತರಿಂದ ಪಾವನರಾಗಬೇಕಾಗಿದೆ. ಈಗ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ಈ ರೀತಿ ಯಾರೂ ಹೇಳಲು ಸಾಧ್ಯವಿಲ್ಲ. ಮೊಟ್ಟ ಮೊದಲು ಅವರ ಬುದ್ಧಿಯಲ್ಲಿ ಕುಳ್ಳರಿಸಬೇಕು - ಭಾರತವು ನಿರ್ವಿಕಾರಿಯಾಗಿತ್ತು. ಈಗ ವಿಕಾರಿಯಾಗಿದೆ, ಪುನಃ ನಿರ್ವಿಕಾರಿಯಾಗುವುದು ಹೇಗೆ? ಭಗವಾನುವಾಚ - ನನ್ನೊಬ್ಬನನ್ನೇ ನೆನಪು ಮಾಡಿ, ಸಾಕು ಇಷ್ಟು ಹೇಳಿದರೂ ಅಹೋ ಸೌಭಾಗ್ಯ! ಆದರೆ ಇಷ್ಟನ್ನೂ ಹೇಳುವುದಿಲ್ಲ. ಮರೆತು ಹೋಗುತ್ತಾರೆ. ತಂದೆಯು ತಿಳಿಸಿದ್ದಾರೆ - ಉದ್ಘಾಟನೆಯನ್ನು ತಂದೆಯು ಮಾಡಿದ್ದಾರೆ, ನೀವು ಕೇವಲ ನಿಮಿತ್ತರಾಗಿ ಮಾಡುತ್ತಿದ್ದೀರಿ. ಬುನಾದಿಯನ್ನು ಹಾಕಿದ್ದಾರೆ. ಉಳಿದಂತೆ ಈಗ ಸರ್ವೀಸ್ ಸ್ಟೇಶನ್ನಿನ ಉದ್ಘಾಟನೆಯಾಗುತ್ತಿದೆ. ಇದು ಗೀತೆಯ ಮಾತೇ ಆಗಿದೆ. ಗೀತೆಯಲ್ಲಿಯೂ ಇದೆ ಹೇ ಮಕ್ಕಳೇ, ನೀವು ಕಾಮ ವಿಕಾರದ ಮೇಲೆ ಜಯ ಗಳಿಸಿದಾಗ 21 ಜನ್ಮಗಳವರೆಗೆ ಜಗಜ್ಜೀತರಾಗುತ್ತೀರಿ. ಭಲೆ ತಾವಾಗದಿದ್ದರೂ ಅನ್ಯರಿಗಾದರೂ ತಿಳಿಸಿ. ಈ ರೀತಿ ಅನೇಕರಿದ್ದಾರೆ ಅನ್ಯರನ್ನು ಮೇಲೆತ್ತಿ ತಾವು ಬಿದ್ದು ಹೋಗುತ್ತಾರೆ. ಕಾಮ ಮಹಾ ಶತ್ರುವಾಗಿದೆ. ಒಮ್ಮೆಲೆ ಗುಂಡಿಯಲ್ಲಿ ಬೀಳಿಸಿ ಬಿಡುತ್ತದೆ. ಯಾವ ಮಕ್ಕಳು ಕಾಮದ ಮೇಲೆ ಜಯ ಗಳಿಸುವರೋ ಅವರೇ ಜಗಜ್ಜೀತರಾಗುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾ ಅವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಅಂತಿಮ ಜನ್ಮದಲ್ಲಿ ಸರ್ವ ಪ್ರಾಪ್ತಿಗಳನ್ನು ಮುಂದಿಟ್ಟುಕೊಂಡು ಪಾವನರಾಗಿ ತೋರಿಸಬೇಕು. ಮಾಯೆಯ ವಿಘ್ನಗಳಿಗೆ ಸೋಲಬಾರದು.

2. ಗುರಿ ಧ್ಯೇಯವನ್ನು ಮುಂದಿಟ್ಟುಕೊಂಡು ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಹೇಗೆ ಬ್ರಹ್ಮಾ ತಂದೆ ಪುರುಷಾರ್ಥ ಮಾಡಿ ನರನಿಂದ ನಾರಾಯಣ ಆಗುತ್ತಾರೆ, ಅದೇ ರೀತಿ ಅವರನ್ನು ಅನುಸರಿಸಿ ಸಿಂಹಾಸನಾಧೀಶರಾಗಬೇಕು. ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳುವ ಪರಿಶ್ರಮ ಪಡಬೇಕು.

ವರದಾನ:
ಶುಭ ಚಿಂತನೆಯಿಂದ ನಕಾರಾತ್ಮಕತೆಯನ್ನು ಸಕಾರಾತ್ಮಕವಾಗಿ (ನೆಗೆಟೀವ್ ಅನ್ನು ಪಾಸಿಟೀವ್) ಪರಿವರ್ತನೆ ಮಾಡುವಂತಹ ಶುಭಚಿಂತಕ ಭವ.

ಸದಾ ಸಮರ್ಥವಾಗಿರಬೇಕಾದರೆ ಕೇವಲ ಎರಡು ಶಬ್ಧವನ್ನು ನೆನಪಿನಲ್ಲಿಟ್ಟುಕೊಳ್ಳಿ - ಶುಭ ಚಿಂತನೆ ಮತ್ತು ಶುಭ ಚಿಂತಕ. ಶುಭ ಚಿಂತನೆಯಿಂದ ನಕಾರಾತ್ಮಕವನ್ನು ಸಕಾರಾತ್ಮಕದಲ್ಲಿ ಪರಿವರ್ತನೆ ಮಾಡಬಲ್ಲಿರಿ. ಶುಭಚಿಂತನೆ ಮತ್ತು ಶುಭಚಿಂತಕ ಇವೆರಡರಲ್ಲಿ ಪರಸ್ಪರ ಸಂಬಂಧವಿದೆ. ಒಂದುವೇಳೆ ಶುಭಚಿಂತನೆ ಇಲ್ಲದೇ ಹೋದರೆ ಶುಭಚಿಂತಕರಾಗಲು ಸಾಧ್ಯವಿಲ್ಲ. ವರ್ತಮಾನ ಸಮಯ ಈ ಎರಡೂ ಮಾತುಗಳ ಬಗ್ಗೆ ಗಮನವಿಡಿ ಏಕೆಂದರೆ ಬಹಳಷ್ಟು ಸಮಸ್ಯೆಗಳು ಈ ರೀತಿ ಇವೆ, ಜನ ಈ ರೀತಿ ಇದ್ದಾರೆ. ಯಾರು ವಾಣಿಯಿಂದ ತಿಳಿದುಕೊಳ್ಳಲ್ಲ ಆದರೆ ಶುಭಚಿಂತಕರಾಗಿ ವೈಭ್ರೇಷನ್ ಕೊಡಿ ಆಗ ಬದಲಾಗಿ ಬಿಡುವರು.

ಸ್ಲೋಗನ್:
ಜ್ಞಾನ ರತ್ನಗಳಿಂದ, ಗುಣ ಮತ್ತು ಶಕ್ತಿಗಳಿಂದ ಆಟವಾಡಿ, ಮಣ್ಣಿನಿಂದಲ್ಲ.