24.03.19 Avyakt Bapdada
Kannada
Murli
09.05.84 Om Shanti Madhuban
"ಸದಾ ಏಕರಸವಾಗಿ ಹಾರುವ
ಮತ್ತು ಹಾರಿಸುವ ಗೀತೆಯನ್ನು ಹಾಡಿರಿ"
ಇಂದು ಅಮೃತ ವೇಳೆಯಿಂದ
ದಿಲಾರಾಮ ತಂದೆಯವರು ಪ್ರತಿಯೊಬ್ಬ ದಿಲ್ರುಬಾ ಮಕ್ಕಳ ಹೃದಯದ ಗೀತೆಯನ್ನು ಆಲಿಸುತ್ತಿದ್ದರು.
ಗೀತೆಯನ್ನು ಎಲ್ಲರೂ ಹಾಡುತ್ತಾರೆ ಮತ್ತು ಹಾಡಿನ ಮಾತೂ ಸಹ ಎಲ್ಲರದೂ ಒಂದೇ ಆಗಿದೆ. ಅದಾಗಿದೆ "ಬಾಬಾ".
ಎಲ್ಲರೂ ಬಾಬಾ-ಬಾಬಾ ಎಂಬ ಗೀತೆಯನ್ನು ಹಾಡುತ್ತಾರೆ. ಎಲ್ಲರಿಗೂ ಈ ಗೀತೆಯು ಬರುತ್ತದೆ,
ಹಗಲು-ರಾತ್ರಿ ಹಾಡುತ್ತಿರುತ್ತೀರಾ? ಆದರೆ ಮಾತು ಒಂದೇ ಆಗಿದ್ದರೂ ಸಹ ಪ್ರತಿಯೊಬ್ಬರ ಮಾತಿನ ಸಂಗೀತ
ಮತ್ತು ತಾಳ ಭಿನ್ನ-ಭಿನ್ನವಾಗಿದೆ. ಕೆಲವರದು ಖುಷಿಯ ಸಂಗೀತವಾಗಿದೆ. ಕೆಲವರದು ಹಾರುವ ಮತ್ತು
ಹಾರಿಸುವ ಸಂಗೀತವಾಗಿದೆ ಮತ್ತು ಕೆಲಕೆಲವು ಮಕ್ಕಳದು ಅಭ್ಯಾಸದ ಸಂಗೀತವಾಗಿದೆ. ಕೆಲವೊಮ್ಮೆ ಬಹಳ
ಚೆನ್ನಾಗಿ ಮತ್ತು ಕೆಲವೊಮ್ಮೆ ಸಂಪೂರ್ಣ ಅಭ್ಯಾಸವಿಲ್ಲದಿರುವುದರಿಂದ ಏರುಪೇರಾಗಿಯೂ ಹಾಡುತ್ತಾರೆ.
ಒಂದು ಸ್ವರದಲ್ಲಿ ಇನ್ನೊಂದು ಸ್ವರವು ಸೇರ್ಪಡೆಯಾಗಿ ಬಿಡುತ್ತದೆ. ಹೇಗೆ ಇಲ್ಲಿ ಹಾಡಿನ ಜೊತೆಗೆ
ಸಂಗೀತವನ್ನು ಯಾವಾಗ ಆಲಿಸುತ್ತಾರೆಯೋ, ಆಗ ಕೆಲವು ಹಾಡು ಅಥವಾ ಸಂಗೀತವು ನರ್ತಿಸುವಂತಿರುತ್ತದೆ,
ಕೆಲವು ಸ್ನೇಹದಲ್ಲಿ ಸಮಾವೇಶವಾಗುವಂತದ್ದಿರುತ್ತದೆ, ಕೆಲವು ಕರೆಯುತ್ತಿರುವಂತೆ ಇರುತ್ತದೆ, ಕೆಲವು
ಪ್ರಾಪ್ತಿಯದಾಗಿರುತ್ತದೆ. ಬಾಪ್ದಾದಾರವರ ಬಳಿಯೂ ಸಹ ಭಿನ್ನ-ಭಿನ್ನ ಪ್ರಕಾರದ ರಹಸ್ಯ ಹಾಗೂ ಸಂಗೀತ
ತುಂಬಿದ ಹಾಡುಗಳು ಕೇಳಿಸುತ್ತದೆ. ಕೆಲವು ಇಂದಿನ ವಿಜ್ಞಾನದ ಅನ್ವೇಷಣೆಯನುಸಾರವಾಗಿ ಸ್ವತಹವಾಗಿ
ನಿರಂತರ ಹಾಡನ್ನು ಹಾಡುತ್ತಿರುತ್ತದೆ. ಸ್ಮೃತಿಯ ಸ್ವಿಚ್ ಸದಾ ತೆರೆದಿರುತ್ತದೆ ಆದ್ದರಿಂದ
ಸ್ವತಹವಾಗಿಯೇ ಹಾಗೂ ಏಕರಸವಾಗಿದೆ, ಕೆಲವೊಂದನ್ನು ಸ್ವಿಚ್ ಹಾಕುವುದರಿಂದ ಹಾಡು ಮೊಳಗುತ್ತದೆ. ಆದರೆ
ಭಿನ್ನ-ಭಿನ್ನ ಸಂಗೀತವು ಕೆಲವೊಮ್ಮೆ ಕೆಲವು, ಕೆಲವೊಮ್ಮೆ ಕೆಲವಿರುತ್ತದೆ. ಬಾಪ್ದಾದಾರವರು ಮಕ್ಕಳ
ಗೀತೆಗಳನ್ನು ಆಲಿಸುತ್ತಾ ಹರ್ಷಿತವೂ ಆಗುತ್ತಿದ್ದಾರೆ - ಎಲ್ಲರ ಹೃದಯದಲ್ಲಿ ಒಬ್ಬ ತಂದೆಯೇ
ಸಮಾವೇಶವಾಗಿದ್ದಾರೆ. ಲಗನ್ ಸಹ ಒಬ್ಬ ತಂದೆಯೊಂದಿಗಿದೆ. ಎಲ್ಲವನ್ನು ಮಾಡುತ್ತಿದ್ದರೂ ಸಹ ಒಬ್ಬ
ತಂದೆಗಾಗಿ ಮಾಡುತ್ತಿದ್ದಾರೆ. ಸರ್ವ ಸಂಬಂಧವೂ ಒಬ್ಬ ತಂದೆಯೊಂದಿಗೆ ಜೋಡಣೆಯಾಗಿದೆ. ಸ್ಮೃತಿಯಲ್ಲಿ,
ದೃಷ್ಟಿಯಲ್ಲಿ, ಮುಖದಲ್ಲಿ ಒಬ್ಬ ತಂದೆಯೇ ಇದ್ದಾರೆ. ತಂದೆಯನ್ನು ತಮ್ಮ ಸಂಸಾರವನ್ನಾಗಿ
ಮಾಡಿಕೊಂಡಿದ್ದಾರೆ. ಪ್ರತೀ ಹೆಜ್ಜೆಯಲ್ಲಿ ತಂದೆಯ ನೆನಪಿನಿಂದ ಪದಮಗಳ ಸಂಪಾದನೆಯು ಜಮಾ ಸಹ
ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಮಕ್ಕಳ ಮಸ್ತಕದಲ್ಲಿ ಶ್ರೇಷ್ಠ ಭಾಗ್ಯದ ನಕ್ಷತ್ರವೂ ಸಹ
ಹೊಳೆಯುತ್ತಿದೆ. ಇಂತಹ ಶ್ರೇಷ್ಠ ವಿಶೇಷ ಆತ್ಮರು ವಿಶ್ವದ ಮುಂದೆ ಉದಾಹರಣೆಯೂ ಆಗಿ ಬಿಟ್ಟರು.
ಕಿರೀಟ, ತಿಲಕ, ಸಿಂಹಾಸನಾಧೀಶರೂ ಆಗಿ ಬಿಟ್ಟರು. ಇಂತಹ ಶ್ರೇಷ್ಠಾತ್ಮರು, ಅವರ ಗುಣ ಗಾಯನವನ್ನು
ಸ್ವಯಂ ತಂದೆಯು ಹಾಡುತ್ತಾರೆ. ತಂದೆಯು ಪ್ರತಿಯೊಂದು ಮಕ್ಕಳ ಹೆಸರಿನ ಮಾಲೆಯನ್ನು ಸ್ಮರಣೆ
ಮಾಡುತ್ತಾರೆ. ಎಲ್ಲರಿಗೂ ಇಂತಹ ಶ್ರೇಷ್ಠ ಭಾಗ್ಯವು ಪ್ರಾಪ್ತಿಯಾಗಿದೆಯಲ್ಲವೆ! ನಂತರ ಗೀತೆಯನ್ನು
ಹಾಡುತ್ತಾ-ಹಾಡುತ್ತಾ ಸಂಗೀತವೇಕೆ ಬದಲಾಗುತ್ತದೆ? ಕೆಲವೊಮ್ಮೆ ಪ್ರಾಪ್ತಿಯ, ಕೆಲವೊಮ್ಮೆ ಪರಿಶ್ರಮದ,
ಕೆಲವೊಮ್ಮೆ ಕೂಗುವ, ಕೆಲವೊಮ್ಮೆ ಹೃದಯ ವಿಧೀರ್ಣರಾಗುವ ಸಂಗೀತ. ಈ ಸಂಗೀತವೇಕೆ ಬದಲಾಗುತ್ತದೆ? ಸದಾ
ಏಕರಸವಾಗಿ ಹಾರುವ ಹಾಗೂ ಹಾರಿಸುವ ಗೀತೆಯನ್ನೇಕೆ ಹಾಡುವುದಿಲ್ಲ? ಇಂತಹ ಗೀತೆಯನ್ನು ಹಾಡಿರಿ,
ಅದನ್ನು ಕೇಳುವವರಿಗೆ ರೆಕ್ಕೆ ಬಂದು ಬಿಡಲಿ ಮತ್ತು ಹಾರತೊಡಗಲಿ. ಕುಂಟರಿಗೆ ಕಾಲು ಸಿಕ್ಕಿ ಬಿಡಲಿ
ಮತ್ತು ನರ್ತನ ಮಾಡತೊಡಗಲಿ. ದುಃಖದ ಶಯನದಿಂದ ಮೇಲೆದ್ದು ಸುಖದ ಗೀತೆಯನ್ನು ಹಾಡತೊಡಗಲಿ. ಚಿಂತೆಯ
ಚಿತೆಯ ಮೇಲೆ ಕುಳಿತಿದ್ದರೂ, ಪ್ರಾಣಿ (ಆತ್ಮ) ಚಿತೆಯಿಂದ ಮೇಲೆದ್ದು ಖುಷಿಯಲ್ಲಿ ನರ್ತಿಸಲಿ.
ಹೃದಯವಿಧೀರ್ಣ ಆತ್ಮರು ಉಮ್ಮಂಗ-ಉತ್ಸಾಹದ ಗೀತೆಯನ್ನು ಹಾಡತೊಡಗಲಿ. ಭಿಕಾರಿ ಆತ್ಮರು ಸರ್ವ
ಖಜಾನೆಗಳಿಂದ ಸಂಪನ್ನರಾಗಿರುತ್ತಾ "ಸಿಕ್ಕಿ ಬಿಟ್ಟರು, ಪಡೆದು ಬಿಟ್ಟೆವು" - ಈ ಗೀತೆಯನ್ನು
ಹಾಡತೊಡಗಲಿ. ಇದೇ ಸಿದ್ಧಿಯ ಪ್ರಾಪ್ತಿಯ ಸೇವೆಯು ವಿಶ್ವಕ್ಕೆ ಅವಶ್ಯಕತೆಯಿದೆ. ಅಲ್ಪಕಾಲದ
ಸಿದ್ಧಿಯವರ ಹಿಂದೆ ಎಷ್ಟೊಂದು ಅಲೆದಾಡುತ್ತಿದ್ದಾರೆ. ತನ್ನ ಸಮಯ ಹಾಗೂ ಹಣವನ್ನು ಎಷ್ಟೊಂದು
ತೊಡಗಿಸುತ್ತಿದ್ದಾರೆ. ವರ್ತಮಾನ ಸಮಯದಲ್ಲಿ ಸರ್ವ ಆತ್ಮರುಗಳು ಸುಸ್ತಾಗಿದ್ದಾರೆ, ಸಿದ್ಧಿಯನ್ನು
ಬಯಸುತ್ತಾರೆ. ಅಲ್ಪಕಾಲದ ಸಿದ್ಧಿಯ ಮೂಲಕ ಸಂತುಷ್ಟವಾಗಿ ಬಿಡುತ್ತಾರೆ. ಆದರೆ ಒಂದು ಮಾತಿನಲ್ಲಿ
ಸಂತುಷ್ಟವಾಗುತ್ತಾರೆಂದರೆ, ಮತ್ತೆ ಅನೇಕ ಮಾತುಗಳು ಉತ್ಪನ್ನಗೊಳುತ್ತವೆ. ಕುಂಟನು ನಡೆಯ ತೊಡಗುವನು
ಮತ್ತು ಇಚ್ಛೆಯು ಉತ್ಪನ್ನವಾಗುತ್ತದೆ. ಇದೂ ಸಹ ಆಗಿ ಬಿಡಲಿ, ಇದೂ ಆಗಿ ಬಿಡಲಿ ಎಂದು. ಅಂದಮೇಲೆ
ವರ್ತಮಾನ ಸಮಯದನುಸಾರವಾಗಿ ತಾವು ಆತ್ಮರ ಸೇವೆಯ ವಿಧಿಯು - ಈ ಸಿದ್ಧಿ ಸ್ವರೂಪದಾಗಬೇಕಾಗಿದೆ.
ಅವಿನಾಶಿ, ಅಲೌಕಿಕ ಆತ್ಮಿಕ ಸಿದ್ಧಿ ಹಾಗೂ ಆತ್ಮಿಕ ಚಮತ್ಕಾರವನ್ನು ತೋರಿಸಿರಿ. ಈ ಚಮತ್ಕಾರವು
ಕಡಿಮೆಯೇನು? ಇಡೀ ಪ್ರಪಂಚದ 99% ಆತ್ಮರು ಚಿಂತೆಯ ಚಿತೆಯ ಮೇಲೆ ಸತ್ತು ಮಲಗಿದ್ದಾರೆ. ಹೀಗೆ
ಸತ್ತಿರುವವರನ್ನು ಬದುಕಿಸಿರಿ. ಹೊಸ ಜೀವನವನ್ನು ಕೊಡಿ. ಒಂದು ಪ್ರಾಪ್ತಿಯ ಕಾಲಿದೆ ಮತ್ತು ಅನೇಕ
ಪ್ರಾಪ್ತಿಗಳಿಂದ ಕುಂಟರಾಗಿದ್ದಾರೆ. ಇಂತಹ ಆತ್ಮರಿಗೆ ಅವಿನಾಶಿ ಸರ್ವ ಪ್ರಾಪ್ತಿಗಳ ಕಾಲನ್ನು ಕೊಡಿ.
ಅಂಧರನ್ನು ತ್ರಿನೇತ್ರಿಯನ್ನಾಗಿ ಮಾಡಿರಿ. ಮೂರನೇ ನೇತ್ರವನ್ನು ಕೊಡಿ. ತಮ್ಮ ಜೀವನದ ಶ್ರೇಷ್ಠ
ವರ್ತಮಾನ ಮತ್ತು ಭವಿಷ್ಯವನ್ನು ನೋಡುವ ಕಣ್ಣುಗಳನ್ನು ಕೊಡಿ. ಈ ಸಿದ್ಧಿಯನ್ನು ಮಾಡುವುದಕ್ಕೆ
ಸಾಧ್ಯವಿಲ್ಲವೇ! ಈ ಆತ್ಮಿಕ ಚಮತ್ಕಾರವನ್ನು ತೋರಿಸಲು ಸಾಧ್ಯವಿಲ್ಲವೇ! ಭಿಕಾರಿಗಳನ್ನು
ಚಕ್ರವರ್ತಿಯನ್ನಾಗಿ ಮಾಡಲು ಸಾಧ್ಯವಿಲ್ಲವೇ! ಇಂತಹ ಸಿದ್ಧಿ ಸ್ವರೂಪರು ಸೇವೆಯ ಶಕ್ತಿಯರು, ತಂದೆಯ
ಮೂಲಕ ಪ್ರಾಪ್ತವಾಗಲ್ಲವೇನು! ಈಗ ವಿಧಿಯ ಸ್ವರೂಪದಿಂದ ಸಿದ್ಧಿ ಸ್ವರೂಪರಾಗಿರಿ. ಸಿದ್ಧಿ ಸ್ವರೂಪರು
ಸೇವೆಗೆ ನಿಮಿತ್ತರಾಗಿರಿ. ವಿಧಿ ಅರ್ಥಾತ್ ಪುರುಷಾರ್ಥದ ಸಮಯದಲ್ಲಿ ಪುರುಷಾರ್ಥವನ್ನು ಮಾಡುವುದು.
ಈಗ ಪುರುಷಾರ್ಥದ ಫಲವಾಗಿ ಸಿದ್ಧಿ ಸ್ವರೂಪರಾಗಿದ್ದು ಸೇವೆಯಲ್ಲಿ ವಿಶ್ವದ ಮುಂದೆ ಪ್ರತ್ಯಕ್ಷವಾಗಿರಿ.
ಈಗ ಈ ಧ್ವನಿಯು ಮೊಳಗಲಿ - ವಿಶ್ವದಲ್ಲಿ ಅವಿನಾಶಿ ಸಿದ್ಧಿಯನ್ನು ಕೊಡುವವರು, ಕೇವಲ ತೋರಿಸುವವರಲ್ಲ,
ಕೊಡುವವರು, ಸಿದ್ಧಿ ಸ್ವರೂಪರನ್ನಾಗಿ ಮಾಡುವವರು ಒಬ್ಬರೇ, ಈ ಈಶ್ವರೀಯ ವಿಶ್ವವಿದ್ಯಾಲಯವೇ ಆಗಿದೆ.
ಒಂದೇ ಸ್ಥಾನವಿದೆ. ಸ್ವಯಂ ತಾವಂತು ಸಿದ್ಧಿ ಸ್ವರೂಪರಾಗಿದ್ದೀರಲ್ಲವೆ! ಬಾಂಬೆಯಲ್ಲಿ ಮೊದಲು ಈ
ಹೆಸರನ್ನು ಪ್ರಸಿದ್ಧಗೊಳಿಸಿರಿ. ಮತ್ತೆ-ಮತ್ತೆ ಪರಿಶ್ರಮದಿಂದ ಮುಕ್ತರಾಗಿರಿ. ಇಂದು ಈ ಮಾತಿನ
ಬಗ್ಗೆ ಪುರುಷಾರ್ಥದ ಪರಿಶ್ರಮ ಪಟ್ಟೆವು, ಇಂದು ಮಾತಿನ ಬಗ್ಗೆ ಪರಿಶ್ರಮ ಮಾಡಿದೆವು. ಇದು
ಪುರುಷಾರ್ಥದ ಪರಿಶ್ರಮವಾಗಿದೆ. ಈ ಪರಿಶ್ರಮದಿಂದ ಮುಕ್ತರಾಗಿ ಪ್ರಾಪ್ತಿ ಸ್ವರೂಪ
ಶಕ್ತಿಶಾಲಿಯಾಗುವುದು ಸಿದ್ಧಿ ಸ್ವರೂಪರಾಗುವುದಾಗಿದೆ. ಈಗ ಸಿದ್ಧಿ ಸ್ವರೂಪ ಜ್ಞಾನಿ ಆತ್ಮರು, ಯೋಗಿ
ಆತ್ಮರಾಗಿರಿ ಮತ್ತು ಅನ್ಯರನ್ನೂ ಮಾಡಿರಿ. ಅಂತ್ಯದವರೆಗೂ ಪರಿಶ್ರಮ ಪಡುತ್ತಾ ಇರುತ್ತೀರೇನು?
ಭವಿಷ್ಯದಲ್ಲಿ ಪ್ರಾಲಬ್ಧವೇನು ಪಡೆಯುವಿರಿ? ಪುರುಷಾರ್ಥದ ಪ್ರತ್ಯಕ್ಷ ಫಲವನ್ನಂತು ಈಗಲೇ
ಅನುಭವಿಸಬೇಕು. ಈಗ ಪ್ರತ್ಯಕ್ಷ ಫಲವನ್ನು ಅನುಭವಿಸಿರಿ, ನಂತರ ಭವಿಷ್ಯ ಫಲ. ಭವಿಷ್ಯದ
ನಿರೀಕ್ಷಣೆಯಲ್ಲಿ ಪ್ರತ್ಯಕ್ಷ ಫಲವನ್ನು ಕಳೆದುಕೊಳ್ಳಬಾರದು. ಅಂತ್ಯದಲ್ಲಿ ಫಲವು ಸಿಗುತ್ತದೆ ಎಂಬ
ವಿಶ್ವಾಸದಲ್ಲಿಯೂ ಇರಬಾರದು. ಒಂದನ್ನು ಮಾಡಿ, ಪದುಮದಷ್ಟು ಪಡೆಯಿರಿ. ಇದು ಈಗಿನ ಮಾತಾಗಿದೆ.
ಯಾವಾಗಿನದೋ ಮಾತಲ್ಲ. ತಿಳಿಯಿತೆ - ಬಾಂಬೆಯವರು ಏನಾಗುವರು? ಭರವಸೆ ತರಿಸುವವರಂತು ಆಗುವುದಿಲ್ಲ
ಅಲ್ಲವೆ. ಸಿದ್ಧ ಪ್ರಸಿದ್ಧವಾಗುತ್ತಾರೆ. ಹೇಳುತ್ತಾರಲ್ಲವೆ - ಇವರು ಸಿದ್ಧ ಬಾಬಾ ಆಗಿದ್ದಾರೆ,
ಸಿದ್ಧಿ ಯೋಗಿ ಆಗಿದ್ದಾರೆ. ಬಾಂಬೆಯವರೂ ಸಹ ಸಿದ್ಧಿ ಸಹಜಯೋಗಿ ಅರ್ಥಾತ್ ಸಿದ್ಧಿಯನ್ನು ಪ್ರಾಪ್ತಿ
ಮಾಡಿಕೊಂಡಿರುವವರಲ್ಲವೆ! ಒಳ್ಳೆಯದು.
ಸದಾ ಸ್ವತಹವಾಗಿ ಏಕರಸವಾಗಿ ಹಾರಿಸುವ ಹಾಡನ್ನಾಡುವವರು, ಸದಾ ಸಿದ್ಧಿ ಸ್ವರೂಪರಾಗಿದ್ದು ಅವಿನಾಶಿ
ಆತ್ಮಿಕ ಸಿದ್ಧಿಯನ್ನು ಪ್ರಾಪ್ತಿ ಮಾಡಿಸುವವರು, ಆತ್ಮಿಕ ಚಮತ್ಕಾರವನ್ನು ತೋರಿಸುವಂತಹ ಚಮತ್ಕಾರಿ
ಆತ್ಮರು, ಸದಾ ಸರ್ವಪ್ರಾಪ್ತಿಗಳ ಸಿದ್ಧಿಯ ಅನುಭವವನ್ನು ಮಾಡಿಸುವ ಸಿದ್ಧಿಸ್ವರೂಪ ಸಹಜಯೋಗಿ,
ಜ್ಞಾನಸ್ವರೂಪ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಕುಮಾರಿಯರ
ಭಿನ್ನ-ಭಿನ್ನ ಗ್ರೂಪ್ನೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ -
1. ಸದಾ ಆತ್ಮಿಕ ನೆನಪಿನಲ್ಲಿರುವ ಆತ್ಮಿಕ ಕುಮಾರಿಯರಾಗಿದ್ದೀರಲ್ಲವೆ! ದೇಹಾಭಿಮಾನವಿರುವ
ಕುಮಾರಿಯರಂತು ಬಹಳಷ್ಟಿದ್ದಾರೆ, ಆದರೆ ತಾವು ಆತ್ಮಿಕ ಕುಮಾರಿಯರಾಗಿದ್ದೀರಿ. ಸದಾ ರುಹ್ ಅರ್ಥಾತ್
ಆತ್ಮದ ಸ್ಮೃತಿಯಲ್ಲಿ ಇರುವವರು. ಆತ್ಮವಾಗಿದ್ದು ಆತ್ಮನನ್ನು ನೋಡುವವರಿಗೆ ಹೇಳಲಾಗುತ್ತದೆ -
ಆತ್ಮಿಕ ಕುಮಾರಿಯರು ಎಂದು. ಅಂದಮೇಲೆ ಎಂತಹ ಕುಮಾರಿಯರಾಗಿದ್ದೀರಿ? ಕೆಲವೊಮ್ಮೆ ದೇಹ-ಅಭಿಮಾನದಲ್ಲಿ
ಬರುವವರಲ್ಲ. ದೇಹ-ಅಭಿಮಾನದಲ್ಲಿ ಬರುವುದು ಅರ್ಥಾತ್ ಮಾಯೆಯ ಕಡೆ ಬೀಳುವುದು ಮತ್ತು ಆತ್ಮಿಕ
ಸ್ಮೃತಿಯಲ್ಲಿರುವುದು ಅರ್ಥಾತ್ ತಂದೆಯ ಸಮೀಪದಲ್ಲಿ ಬರುವುದು. ಬೀಳುವವರಲ್ಲ, ತಂದೆಯ ಜೊತೆಯಿರುವವರು.
ತಂದೆಯ ಜೊತೆ ಯಾರಿರುತ್ತಾರೆ? ಆತ್ಮಿಕ ಕುಮಾರಿಯರೇ ತಂದೆಯ ಜೊತೆಯಲ್ಲಿರಲು ಸಾಧ್ಯ. ಹೇಗೆ ತಂದೆಯು
ಸುಪ್ರೀಂ ಇದ್ದಾರೆ, ಎಂದಿಗೂ ದೇಹಾಭಿಮಾನದಲ್ಲಿ ಬರುವುದಿಲ್ಲ, ಅದೇ ರೀತಿ ದೇಹಾಭಿಮಾನದಲ್ಲಿ
ಬರುವವರಲ್ಲ. ಯಾರಲ್ಲಿ ತಂದೆಯೊಂದಿಗೆ ಪ್ರೀತಿಯಿದೆಯೋ, ಅವರು ಪ್ರತಿನಿತ್ಯವೂ ಪ್ರೀತಿಯಿಂದ ನೆನಪು
ಮಾಡುತ್ತಾರೆ, ಪ್ರೀತಿಯಿಂದ ಜ್ಞಾನದ ವಿದ್ಯೆಯನ್ನು ಓದುತ್ತಾರೆ. ಪ್ರೀತಿಯಿಂದ ಯಾವ ಕಾರ್ಯವನ್ನು
ಮಾಡಲಾಗುತ್ತದೆಯೋ ಅದರಲ್ಲಿ ಸಫಲತೆಯಾಗುತ್ತದೆ. ಹೇಳುವುದರಿಂದ ಮಾಡಿದರೆ ಸ್ವಲ್ಪ ಸಮಯದ
ಸಫಲತೆಯಾಗುತ್ತದೆ. ಪ್ರೀತಿಯಿಂದ ತಮ್ಮ ಮನಃಪೂರ್ವಕವಾಗಿ ನಡೆಯುವವರು ಸದಾ ನಡೆಯುತ್ತಾರೆ. ಯಾವಾಗ
ಒಂದು ಸಾರಿ ಅನುಭವ ಮಾಡಿ ಬಿಟ್ಟರು - ತಂದೆಯೇನು ಮತ್ತು ಮಾಯೆಯೇನು! ಅದರಿಂದ ಒಂದು ಸಾರಿಯ
ಅನುಭವಿಯೆಂದಿಗೂ ಸಹ ಮೋಸದಲ್ಲಿ ಬರಲು ಸಾಧ್ಯವಿಲ್ಲ. ಮಾಯೆಯು ಭಿನ್ನ-ಭಿನ್ನ ರೂಪದಲ್ಲಿ ಬರುತ್ತದೆ.
ಮಾಯೆಯು ಹೇಳುತ್ತದೆ - ಈ ಕುಮಾರಿಯರು ನಮ್ಮವರಾಗಲಿ, ತಂದೆಯು ಹೇಳುತ್ತಾರೆ - ನಮ್ಮವರಾಗಲಿ, ಅಂದಾಗ
ಏನು ಮಾಡುವಿರಿ? ಮಾಯೆಯನ್ನು ಓಡಿಸುವುದರಲ್ಲಿ ಬುದ್ಧಿವಂತರಾಗಿದ್ದೀರಾ? ಗಾಬರಿಯಾಗುವ ಬಲಹೀನರಂತು
ಅಲ್ಲ ಅಲ್ಲವೆ? ಗೆಳತಿಯರ ಸಂಗದಲ್ಲಿ ಸಿನಿಮಾ ನೋಡಲು ಹೊರಟು ಹೋಗುವಿರಿ ಎನ್ನುವಂತಿಲ್ಲವೆ. ಸಂಗದ
ರಂಗಿನಲ್ಲೆಂದಿಗೂ ಬರಬಾರದು. ಸದಾ ಬಹದ್ದೂರ್, ಸದಾ ಅಮರ, ಸದಾ ಅವಿನಾಶಿಯಾಗಿ ಇರಿ. ಸದಾ ತಮ್ಮ
ಜೀವನವನ್ನು ಶ್ರೇಷ್ಠವನ್ನಾಗಿ ಮಾಡಿಕೊಳ್ಳಬೇಕು. ಗುಂಡಿಯಲ್ಲಿ ಬೀಳಬಾರದು. ಗುಂಡಿಯೆನ್ನುವ ಶಬ್ಧವು
ಹೇಗಿದೆ. ತಂದೆಯು ಸಾಗರನಿದ್ದಾರೆ, ಸಾಗರದಲ್ಲಿ ಸದಾ ತೇಲಾಡುತ್ತಿರಿ. ಕುಮಾರಿ ಜೀವನದಲ್ಲಿ ಜ್ಞಾನವು
ಸಿಕ್ಕಿತು, ಮಾರ್ಗವು ಸಿಕ್ಕಿ ಬಿಟ್ಟಿತು, ಗುರಿಯು ಸಿಕ್ಕಿತು, ಇದನ್ನು ನೋಡಿ ಖುಷಿಯಾಗುತ್ತದೆ!
ಬಹಳ ಭಾಗ್ಯಶಾಲಿ ಆಗಿದ್ದೀರಿ. ಇಂದಿನ ಪ್ರಪಂಚದ ಸ್ಥಿತಿಯನ್ನು ನೋಡಿರಿ. ದುಃಖ-ನೋವುಗಳಿಲ್ಲದೆ
ಮತ್ತ್ಯಾವುದೇ ಮಾತಿಲ್ಲ. ಹಳ್ಳದಲ್ಲಿ ಬೀಳುತ್ತಾ, ಪೆಟ್ಟಿನ ಮೇಲೆ ಪೆಟ್ಟನ್ನು
ಅನುಭವಿಸುತ್ತಿರುತ್ತಾರೆ. ಇಂದಿನ ಇದು ಪ್ರಪಂಚವಿದೆ. ಕೇಳುತ್ತಿರುತ್ತೀರಲ್ಲವೆ - ಇಂದು
ವಿವಾಹವಾಯಿತು, ನಾಳೆ ಸುಟ್ಟುಕೊಂಡು ಸತ್ತರು. ಇಂದು ವಿವಾಹ ಮಾಡಿಕೊಂಡರು, ನಾಳೆ ಮನೆಗೆ ಬಂದು
ಬಿಟ್ಟರು. ಒಂದಂತು ಹಳ್ಳದಲ್ಲಿ ಬಿದ್ದರು, ನಂತರ ಇನ್ನೂ ಪೆಟ್ಟಿನ ಮೇಲೆ ಪೆಟ್ಟನ್ನು ಅನುಭವಿಸಿದರು.
ಅಂದಮೇಲೆ ಹೀಗೆ ಪೆಟ್ಟನ್ನು ಅನುಭವಿಸಬೇಕೇನು? ಆದ್ದರಿಂದ ಸದಾ ತಮ್ಮನ್ನು ಭಾಗ್ಯಶಾಲಿ ಆತ್ಮನೆಂದು
ತಿಳಿದುಕೊಳ್ಳಿರಿ. ತಂದೆಯು ತಮ್ಮ ಪಾರು ಮಾಡಿದರು. ಪಾರಾದೆವು, ತಂದೆಯ ಮಗುವಾಗಿ ಬಿಟ್ಟೆವು
ಎನ್ನುವ ಖುಷಿಯಾಗುತ್ತದೆಯಲ್ಲವೆ! ಬಾಪ್ದಾದಾರವರಿಗೂ ಸಹ ಖುಷಿಯಾಗುತ್ತದೆ. ಏಕೆಂದರೆ ಬೀಳುವುದರಿಂದ,
ಪೆಟ್ಟನ್ನು ಅನುಭವಿಸುವುದರಿಂದ ಪಾರಾದಿರಿ. ಅಂದಮೇಲೆ ಸದಾ ಹೀಗೆ ಅವಿನಾಶಿಯಾಗಿ ಇರಿ.
2. ಎಲ್ಲರೂ ಶ್ರೇಷ್ಠ ಕುಮಾರಿಯರಾಗಿದ್ದೀರಲ್ಲವೇ? ಸಾಧಾರಣ ಕುಮಾರಿಯಿಂದ ಶ್ರೇಷ್ಠ ಕುಮಾರಿಯಾಗಿ
ಬಿಟ್ಟಿರಿ. ಶ್ರೇಷ್ಠ ಕುಮಾರಿಯು ಸದಾ ಶ್ರೇಷ್ಠ ಕರ್ತವ್ಯವನ್ನು ಮಾಡಲು ನಿಮಿತ್ತರು. ಸದಾ ತಮ್ಮನ್ನು
ಹೀಗೆ ಅನುಭವ ಮಾಡುತ್ತೀರಾ- ನಾವು ಶ್ರೇಷ್ಠ ಕಾರ್ಯಕ್ಕಾಗಿ ನಿಮಿತ್ತರು! ಶ್ರೇಷ್ಠ ಕಾರ್ಯವೇನಾಗಿದೆ?
ವಿಶ್ವ ಕಲ್ಯಾಣ. ಅಂದಮೇಲೆ ವಿಶ್ವ ಕಲ್ಯಾಣವನ್ನು ಮಾಡುವ ವಿಶ್ವ ಕಲ್ಯಾಣಕಾರಿ ಕುಮಾರಿಯರಾಗಿದ್ದೀರಿ.
ಮನೆಯಲ್ಲಿಯರುವ ಕುಮಾರಿಯರಲ್ಲ. ಮಂಕರಿಯನ್ನು ಹೋರುವ ಕುಮಾರಿಯರಲ್ಲ, ಆದರೆ ವಿಶ್ವ ಕಲ್ಯಾಣಕಾರಿ
ಕುಮಾರಿಯರು. ಕುಮಾರಿಯರೆಂದರೆ ಅವರು, ಯಾರು ಹೇಳುತ್ತಾರೆ - ನಾವು ಕುಲದ ಕಲ್ಯಾಣವನ್ನು ಮಾಡುತ್ತೇವೆ.
ಇಡೀ ವಿಶ್ವವೇ ತಮ್ಮ ಕುಲವಾಗಿದೆ. ಬೇಹದ್ದಿನ ಕುಲವಾಯಿತು. ಸಾಧಾರಣ ಕುಮಾರಿಯರು ತನ್ನ ಹದ್ದಿನ
ಕುಲದ ಕಲ್ಯಾಣವನ್ನು ಮಾಡುತ್ತಾರೆ ಮತ್ತು ಶ್ರೇಷ್ಠ ಕುಮಾರಿಯರು ವಿಶ್ವದ ಕುಲದ ಕಲ್ಯಾಣವನ್ನು
ಮಾಡುತ್ತಾರೆ, ಹೀಗಿದ್ದೀರಲ್ಲವೆ! ಬಲಹೀನರಂತು ಅಲ್ಲವೇ! ಭಯ ಪಡುವವರಲ್ಲವೇ! ಸದಾ ತಂದೆಯು
ಜೊತೆಯಿದ್ದಾರೆ. ಯಾವಾಗ ತಂದೆಯೇ ಜೊತೆಯಿದ್ದಾರೆ, ಅಂದಮೇಲೆ ಭಯ ಪಡುವ ಯಾವುದೇ ಮಾತಿಲ್ಲ.
ಒಳ್ಳೆಯದಾಯಿತು, ಕುಮಾರಿ ಜೀವನದಲ್ಲಿ ಪಾರಾಗಿ ಬಿಟ್ಟಿರಿ, ಇದಂತು ಬಹಳ ದೊಡ್ಡ ಭಾಗ್ಯವಾಗಿದೆ.
ಉಲ್ಟಾ ಮಾರ್ಗದಲ್ಲಿ ಹೋಗಿ ನಂತರ ಹಿಂತಿರುಗುವುದು, ಇದೂ ಸಹ ಸಮಯವು ವ್ಯರ್ಥವಾಯಿತಲ್ಲವೆ! ಅಂದಮೇಲೆ
ಸಮಯ, ಶಕ್ತಿಗಳೆಲ್ಲವೂ ಉಳಿಯಿತು. ಅಲೆಯುವ ಪರಿಶ್ರಮದಿಂದ ಮುಕ್ತರಾದಿರಿ. ಎಷ್ಟೊಂದು ಲಾಭವಾಯಿತು!
ಇಷ್ಟೇ ವಾಹ್ ನನ್ನ ಶ್ರೇಷ್ಠ ಭಾಗ್ಯವೇ! ಇದನ್ನು ನೋಡುತ್ತಾ ಸದಾ ಹರ್ಷಿತವಾಗಿರಿ. ಯಾವುದೇ
ಬಲಹೀನತೆಯಿಂದ ತಮ್ಮ ಶ್ರೇಷ್ಠ ಸೇವೆಯಿಂದ ವಂಚಿತರಾಗಬಾರದು.
3. ಕುಮಾರಿ ಅರ್ಥಾತ್ ಮಹಾನ್. ಪವಿತ್ರ ಆತ್ಮನಿಗೆ ಸದಾ ಮಹಾನ್ ಆತ್ಮನೆಂದು ಹೇಳಲಾಗುತ್ತದೆ.
ಇತ್ತೀಚಿನ ಮಹಾತ್ಮರೂ ಸಹ ಮಹಾತ್ಮರು ಹೇಗಾಗುತ್ತಾರೆ? ಪವಿತ್ರರಾಗುತ್ತಾರೆ. ಪವಿತ್ರತೆಯ
ಕಾರಣದಿಂದಲೇ ಮಹಾನ್ ಆತ್ಮರೆಂದು ಹೇಳಿಕೊಳ್ಳುತ್ತಾರೆ. ಆದರೆ ತಾವು ಮಹಾನ್ ಆತ್ಮರ ಮುಂದೆ ಅವರೇನೂ
ಇಲ್ಲ. ತಮ್ಮ ಮಹಾನತೆಯು ಜ್ಞಾನಸಹಿತ ಅವಿನಾಶಿ ಮಹಾನತೆಯಿದೆ. ಅವರು ಒಂದು ಜನ್ಮದಲ್ಲಿ
ಮಹಾನರಾಗುತ್ತಾರೆ, ನಂತರ ಇನ್ನೊಂದು ಜನ್ಮದಲ್ಲಿ ಮತ್ತೆ ಆಗಬೇಕಾಗುತ್ತದೆ. ತಾವು ಜನ್ಮ ಜನ್ಮದ
ಮಹಾನ್ ಆತ್ಮರಾಗಿದ್ದೀರಿ. ಈಗಿನ ಮಹಾನತೆಯಿಂದ ಜನ್ಮ ಜನ್ಮಕ್ಕಾಗಿ ಮಹಾನ್ ಆಗಿ ಬಿಡುತ್ತೀರಿ. 21
ಜನ್ಮಗಳಲ್ಲಿ ಮಹಾನರಾಗಿರುತ್ತೀರಿ. ಅರ್ಧಂಬರ್ಧ ಇರುವವರನ್ನು ಮಾಯೆಯು ತಿಂದು ಬಿಡುತ್ತದೆ, ಪಕ್ಕಾ
ಇರುವವರನ್ನಲ್ಲ. ನೋಡಿ - ಇಲ್ಲಿ ಎಲ್ಲರ ಭಾವ ಚಿತ್ರವನ್ನು ತೆಗೆದುಕೊಳ್ಳುತ್ತಿದ್ದಾರೆ.
ಪರಿಪಕ್ವವಾಗಿ ಇರಬೇಕು. ಭಯ ಪಡುವವರಲ್ಲ. ಎಷ್ಟು ಪರಿಪಕ್ವವೋ ಅಷ್ಟು ಖುಷಿಯ ಅನುಭವ, ಸರ್ವ
ಪ್ರಾಪ್ತಿಗಳ ಅನುಭವವನ್ನು ಮಾಡುತ್ತೀರಿ. ಪರಿಪಕ್ವವಿಲ್ಲವೆಂದರೆ ಸದಾಕಾಲದ ಖುಷಿಯಿಲ್ಲ. ಸದಾ
ತಮ್ಮನ್ನು ಮಹಾನ್ ಆತ್ಮನೆಂದು ತಿಳಿದುಕೊಳ್ಳಿರಿ. ಮಹಾನ್ ಆತ್ಮನಿಂದ ಯಾವುದೇ ಅಂತಹ ಸಾಧಾರಣ
ಕರ್ಮವಾಗಲು ಸಾಧ್ಯವಿಲ್ಲ. ಮಹಾನ್ ಆತ್ಮರೆಂದಿಗೂ ಯಾರ ಮುಂದೆಯೂ ಬಾಗಲು ಸಾಧ್ಯವಿಲ್ಲ. ಅಂದಮೇಲೆ
ಮಾಯೆಯ ಕಡೆ ಎಂದಿಗೂ ಬಾಗುವುದಿಲ್ಲ. ಕುಮಾರಿ ಅಂದರೆ ಭುಜಗಳು. ಕುಮಾರಿಯರು ಶಕ್ತಿಯರಾಗುವುದು
ಅರ್ಥಾತ್ ಸೇವೆಯಲ್ಲಿ ವೃದ್ಧಿಯಾಗುವುದು. ತಂದೆಗೆ ಖುಷಿಯಿದೆ - ಇವರು ಮುಂದಾಗುವಂತಹ ವಿಶ್ವ
ಸೇವಾಧಾರಿ, ವಿಶ್ವದ ಕಲ್ಯಾಣ ಮಾಡುವಂತಹ ವಿಶೇಷ ಆತ್ಮರಾಗಿದ್ದಾರೆ.
4. ಕುಮಾರಿಯರು ಭಲೇ ಕಿರಿಯರಿರಬಹುದು, ಭಲೇ ಹಿರಿಯರು ಆದರೆ ಎಲ್ಲರೂ ನೂರು ಬ್ರಾಹ್ಮಣರಿಗಿಂತಲೂ
ಉತ್ತಮ ಕುಮಾರಿಯರಾಗಿದ್ದೇವೆ - ಹೀಗೆ ತಿಳಿಯುತ್ತೀರಾ? ನೂರು ಬ್ರಾಹ್ಮಣರಿಗಿಂತಲೂ ಉತ್ತಮ
ಕನ್ಯೆಯೆಂದು ಏಕೆ ಗಾಯನವಾಗುತ್ತದೆ? ಪ್ರತಿಯೊಂದು ಕನ್ಯೆಯು ಕೊನೆ ಪಕ್ಷದಲ್ಲಿ ನೂರು
ಬ್ರಾಹ್ಮಣರನ್ನಂತು ಖಂಡಿತವಾಗಿ ತಯಾರು ಮಾಡುತ್ತಾರೆ. ಆದ್ದರಿಂದ ನೂರು ಬ್ರಾಹ್ಮಣರಿಗಿಂತಲೂ
ಉತ್ತಮವಾದ ಕನ್ಯೆಯೆಂದು ಹೇಳಲಾಗುತ್ತದೆ. ನೂರಂತು ಏನೂ ಇಲ್ಲ, ತಾವಂತು ವಿಶ್ವದ ಸೇವೆಯನ್ನು
ಮಾಡುತ್ತೀರಿ. ಎಲ್ಲರೂ ನೂರು ಬ್ರಾಹ್ಮಣರಿಗಿಂತ ಉತ್ತಮ ಕನ್ಯೆಯರಾಗಿದ್ದೀರಿ. ಸರ್ವ ಆತ್ಮರನ್ನು
ಶ್ರೇಷ್ಠರನ್ನಾಗಿ ಮಾಡುವಂತಹ ಶ್ರೇಷ್ಠಾತ್ಮರಾಗಿದ್ದೀರಿ. ಇಂತಹ ನಶೆಯು ತಮಗಿರುತ್ತದೆಯೇ? ಕಾಲೇಜಿನ,
ಸ್ಕೂಲಿನ ಕುಮಾರಿಯರಲ್ಲ. ಈಶ್ವರೀಯ ವಿಶ್ವ ವಿದ್ಯಾಲಯದ ಕುಮಾರಿಯರಾಗಿದ್ದೀರಿ. ಎಂತಹ ಕುಮಾರಿಯರೆಂದು
ಯಾರಾದರೂ ಕೇಳುತ್ತಾರೆ, ಆಗ ಹೇಳಿರಿ - ನಾವು ಈಶ್ವರೀಯ ವಿಶ್ವವಿದ್ಯಾಲಯದ ಕುಮಾರಿಯರಾಗಿದ್ದೇವೆ.
ಇವರೊಬ್ಬಬ್ಬ ಕುಮಾರಿಯರೂ ಸೇವಾಧಾರಿ ಕುಮಾರಿಯರಾಗುತ್ತಾರೆ. ಎಷ್ಟೊಂದು ಸೇವಾ ಕೇಂದ್ರಗಳನ್ನು
ತೆರೆಯುತ್ತಾರೆ! ಕುಮಾರಿಯರನ್ನು ನೋಡಿ ತಂದೆಯವರಿಗೂ ಇದೇ ಖುಷಿಯಿರುತ್ತದೆ - ಇಷ್ಟೆಲ್ಲಾ ಭುಜಗಳು
ತಯಾರಾಗುತ್ತಿದ್ದಾರೆ, ಬಲ ಭುಜವಲ್ಲವೇ! ಎಡ ಭುಜವಂತು ಅಲ್ಲ. ಎಡ ಭುಜದಿಂದ ಯಾವ ಕಾರ್ಯವನ್ನು
ಮಾಡುತ್ತೀರಿ, ಅದು ಸ್ವಲ್ಪ ಹೆಚ್ಚು ಕಡಿಮೆಯಾಗಬಹುದು. ಬಲ ಭುಜದಿಂದ ಕಾರ್ಯವು ಬೇಗನೆ ಮತ್ತು
ಚೆನ್ನಾಗಿ ಆಗುತ್ತದೆ. ಅಂದಮೇಲೆ ಇಷ್ಟೆಲ್ಲಾ ಕುಮಾರಿಯರು ತಯಾರಾಗಿ ಬಿಟ್ಟರೆ, ಎಷ್ಟೊಂದು ಸೇವಾ
ಕೇಂದ್ರಗಳಾಗಿ ಬಿಡುತ್ತದೆ, ಎಲ್ಲಿಯೇ ಕಳುಹಿಸಲಾಗುತ್ತದೆ ಅಲ್ಲಿಗೆ ಹೋಗುತ್ತೀರಲ್ಲವೆ! ಎಲ್ಲಿ
ಕೂರಿಸುತ್ತಾರೆಯೋ ಅಲ್ಲಿಯೇ ಕುಳಿತುಕೊಳ್ಳುತ್ತೀರಲ್ಲವೆ! ಕುಮಾರಿಯರೆಲ್ಲರೂ ಮಹಾನ್ ಆಗಿದ್ದೀರಿ.
ಸದಾ ಮಹಾನ್ ಆಗಿರಿ, ಸಂಗದಲ್ಲಿ ಬರಬಾರದು. ಒಂದು ವೇಳೆ ಯಾರೇ ತಮ್ಮ ಮೇಲೆ ತನ್ನ ರಂಗನ್ನಾಕಲು
ಬಯಸುತ್ತಾರೆಂದರೆ, ತಾವು ಅವರ ಮೇಲೆ ತಮ್ಮ ರಂಗನ್ನು ಹಾಕಿ ಬಿಡಬೇಕು. ತಂದೆ-ತಾಯಿಯೂ ಸಹ ಬಂಧನ
ಹಾಕಲು ಇಚ್ಛಿಸುತ್ತಾರೆಂದರೂ ಸಹ ಬಂಧನದಲ್ಲಿ ಬಂಧಿತರಾಗುವವರಲ್ಲ. ಸದಾ ನಿರ್ಬಂಧನರು. ಸದಾ
ಭಾಗ್ಯಶಾಲಿಗಳು. ಕುಮಾರಿ ಜೀವನವು ಪೂಜ್ಯ ಜೀವನವಾಗಿದೆ. ಪೂಜ್ಯರೆಂದಿಗೂ ಸಹ ಪೂಜಾರಿಯಾಗಲು
ಸಾಧ್ಯವಿಲ್ಲ. ಸದಾ ಇದೇ ನಶೆಯಲ್ಲಿರುವವರು. ಒಳ್ಳೆಯದು.
5. ಎಲ್ಲರೂ ದೇವಿಯರಾಗಿದ್ದೀರಲ್ಲವೆ! ಕುಮಾರಿ ಅರ್ಥಾತ್ ದೇವಿ. ಯಾರು ಉಲ್ಟಾ ಮಾರ್ಗದಲ್ಲಿ
ಹೋಗುತ್ತಾರೆಯೋ ಅವರು ದಾಸಿಯಾಗಿ ಬಿಡುತ್ತಾರೆ ಮತ್ತು ಯಾರು ಮಹಾನ್ ಆತ್ಮರಾಗುತ್ತಾರೆಯೋ ಅವರು
ದೇವಿಯರಾಗಿದ್ದಾರೆ! ದಾಸಿಯು ಬಾಗುವಳು. ಅಂದಮೇಲೆ ತಾವೆಲ್ಲರೂ ದೇವಿಯರಿದ್ದೀರಿ, ದಾಸಿಯಾಗುವವರಲ್ಲ.
ದೇವಿಯರ ಪೂಜೆಯು ಎಷ್ಟೊಂದಾಗುತ್ತದೆ! ಅಂದಮೇಲೆ ಈ ಪೂಜೆಯು ತಮ್ಮದಾಗಿದೆಯಲ್ಲವೆ! ಕಿರಿಯರೇ ಇರಲಿ
ಅಥವಾ ಹಿರಿಯರು, ಎಲ್ಲರೂ ದೇವಿಯರಿದ್ದೀರಿ. ಇದನ್ನೇ ನೆನಪಿಟ್ಟುಕೊಳ್ಳಿ ಅಷ್ಟೇ - ನಾವು ಮಹಾನ್
ಆತ್ಮರು, ಪವಿತ್ರ ಆತ್ಮರಾಗಿದ್ದೇವೆ. ತಂದೆಯ ಮಕ್ಕಳಾಗುವುದು ಕಡಿಮೆ ಮಾತೇನಲ್ಲ, ಹೇಳುವುದರಲ್ಲಿ
ಸಹಜ ಮಾತಾಗಿ ಬಿಟ್ಟಿದೆ. ಆದರೆ ಯಾರ ಮಕ್ಕಳಾಗಿರುವಿರಿ? ಎಷ್ಟು ಶ್ರೇಷ್ಠರಾಗಿದ್ದೀರಿ? ಎಷ್ಟೊಂದು
ವಿಶೇಷ ಆತ್ಮರಾಗಿದ್ದೀರಿ? ಇದನ್ನು ನಡೆಯುತ್ತಾ-ತಿರುಗಾಡುತ್ತಾ ನೆನಪಿರುತ್ತದೆಯೇ - ಏನೆಂದರೆ,
ನಾವು ಎಷ್ಟೊಂದು ಮಹಾನ್, ಎಷ್ಟೊಂದು ಶ್ರೇಷ್ಠ ಆತ್ಮರಾಗಿದ್ದೇವೆ! ಭಾಗ್ಯವಂತ ಆತ್ಮರಿಗೆ ಸದಾ ತನ್ನ
ಭಾಗ್ಯವು ನೆನಪಿರಲಿ. ಯಾರಾಗಿದ್ದೀರಿ? ದೇವಿ. ದೇವಿಯು ಸದಾ ಮುಗುಳ್ನಗುತ್ತಿರುತ್ತಾಳೆ.
ದೇವಿಯೆಂದಿಗೂ ಅಳುವುದಿಲ್ಲ. ದೇವಿಯರ ಚಿತ್ರದ ಮುಂದೆ ಹೋಗುತ್ತೀರೆಂದರೆ ಏನು ಕಾಣಿಸುತ್ತದೆ? ಸದಾ
ಮುಗುಳ್ನಗುತ್ತಿರುತ್ತಾಳೆ! ದೃಷ್ಟಿಯಿಂದ, ಕೈಗಳಿಂದ ಸದಾ ಕೊಡುವಂತಹ ದೇವಿ. ದೇವತಾ ಅಥವಾ ದೇವಿಯ
ಅರ್ಥವೇ ಆಗಿದೆ - ಕೊಡುವವರು. ಏನನ್ನು ಕೊಡುವವರು? ಎಲ್ಲರಿಗೂ ಸುಖ-ಶಾಂತಿ, ಆನಂದ, ಪ್ರೇಮ ಸರ್ವ
ಖಜಾನೆಗಳನ್ನು ಕೊಡುವಂತಹ ದೇವಿಯರಾಗಿದ್ದೀರಿ. ಎಲ್ಲರೂ ಬಲ ಭುಜಗಳಾಗಿದ್ದೀರಿ. ಬಲ ಭುಜ ಅರ್ಥಾತ್
ಶ್ರೇಷ್ಠ ಕರ್ಮವನ್ನು ಮಾಡುವವರು.
ವರದಾನ:
ವ್ಯರ್ಥ
ಸಂಕಲ್ಪಗಳ ಕಾರಣವನ್ನು ತಿಳಿದುಕೊಂಡು ಅದನ್ನು ಸಮಾಪ್ತಿಗೊಳಿಸುವಂತಹ ಸಮಾಧಾನ ಸ್ವರೂಪ ಭವ.
ವ್ಯರ್ಥ ಸಂಕಲ್ಪವು
ಉತ್ಪನ್ನವಾಗಲು ಮುಖ್ಯವಾಗಿ ಎರಡು ಕಾರಣಗಳಿವೆ - 1. ಅಭಿಮಾನ ಮತ್ತು 2. ಅಪಮಾನ. ನನಗೆ ಕಡಿಮೆಯೇಕೆ,
ನನಗೂ ಸಹ ಈ ಪದವಿಯಿರಬೇಕು, ನನ್ನನ್ನೂ ಮುಂದಿಡಬೇಕು..... ಅಂದಮೇಲೆ ಇದರಲ್ಲಿ ತನ್ನನ್ನು
ಅಪಮಾನವೆಂದು ತಿಳಿಯುತ್ತೀರಿ, ಇಲ್ಲವೆಂದರೆ ಅಭಿಮಾನದಲ್ಲಿ ಬರುತ್ತೀರಿ. ಹೆಸರಿನಲ್ಲಿ,
ಮಾನ್ಯತೆಯಲ್ಲಿ, ಗೌರವದಲ್ಲಿ, ಮುಂದೆ ಬರುವುದರಲ್ಲಿ, ಸೇವೆಯಲ್ಲಿ.... ಅಭಿಮಾನ ಅಥವಾ ಅಪಮಾನದ
ಅನುಭವ ಮಾಡುವುದೇ ವ್ಯರ್ಥ ಸಂಕಲ್ಪಗಳ ಕಾರಣವಾಗಿದೆ, ಈ ಕಾರಣವನ್ನು ತಿಳಿದುಕೊಂಡು ನಿವಾರಣೆ
ಮಾಡುವುದೇ ಸಮಾಧಾನ ಸ್ವರೂಪರಾಗುವುದಾಗಿದೆ.
ಸ್ಲೋಗನ್:
ಸೈಲೆನ್ಸ್ ನ
ಶಕ್ತಿಯ ಮೂಲಕ ಮಧುರ ಮನೆಯ ಯಾತ್ರೆಯ ಮಾಡುವುದು ಬಹಳ ಸಹಜವಿದೆ.