19.12.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವೀಗ
ವಿದ್ಯೆಯನ್ನು ಓದುತ್ತಿದ್ದೀರಿ, ಇದು ಪತಿತರಿಂದ ಪಾವನರಾಗುವ ವಿದ್ಯೆಯಾಗಿದೆ, ನೀವು ಈ
ವಿದ್ಯೆಯನ್ನು ಓದಬೇಕು ಮತ್ತು ಓದಿಸಬೇಕಾಗಿದೆ”
ಪ್ರಶ್ನೆ:
ಪ್ರಪಂಚದಲ್ಲಿ
ಯಾವ ಜ್ಞಾನವಿದ್ದರೂ ಸಹ ಅಜ್ಞಾನ ಅಂಧಕಾರವಿದೆ?
ಉತ್ತರ:
ಮಾಯೆಯ ಜ್ಞಾನ, ಇದರಿಂದ ವಿನಾಶವಾಗುತ್ತದೆ. ಚಂದ್ರನವರೆಗೆ ಹೋಗುತ್ತಾರೆ, ಈ ಜ್ಞಾನವು ಮನುಷ್ಯರಲ್ಲಿ
ಬಹಳ ಇದೆ. ಆದರೆ ಹೊಸ ಪ್ರಪಂಚ ಹಾಗೂ ಹಳೆಯ ಪ್ರಪಂಚದ ಜ್ಞಾನವು ಯಾರ ಬಳಿಯೂ ಇಲ್ಲ, ಎಲ್ಲರೂ ಅಜ್ಞಾನ
ಅಂಧಕಾರದಲ್ಲಿದ್ದಾರೆ. ಜ್ಞಾನ ನೇತ್ರವಿಲ್ಲದೆ ಕುರುಡರಾಗಿದ್ದಾರೆ, ಈಗ ನಿಮಗೆ ಜ್ಞಾನದ ಮೂರನೆಯ
ನೇತ್ರವು ಸಿಗುತ್ತದೆ. ನೀವು ಜ್ಞಾನಪೂರ್ಣ ಮಕ್ಕಳು ತಿಳಿದುಕೊಂಡಿದ್ದೀರಿ - ಅವರ ಬುದ್ಧಿಯಲ್ಲಿ
ವಿನಾಶದ ವಿಚಾರಗಳಿವೆ, ನಿಮ್ಮ ಬುದ್ಧಿಯಲ್ಲಿ ಸ್ಥಾಪನೆಯ ವಿಚಾರಗಳಿವೆ.
ಓಂ ಶಾಂತಿ.
ತಂದೆಯು ಈ ಶರೀರದ ಮೂಲಕ ತಿಳಿಸುತ್ತಾರೆ, ಶರೀರಕ್ಕೆ ಜೀವವೆಂದು ಕರೆಯಲಾಗುತ್ತದೆ. ಇದರಲ್ಲಿ ಆತ್ಮವೂ
ಇದೆ ಮತ್ತು ನಾನೂ (ಶಿವ) ಸಹ ಇದರಲ್ಲಿ ಬಂದು ಕುಳಿತುಕೊಳ್ಳುತ್ತೇನೆ. ಇದು ಮೊಟ್ಟ ಮೊದಲಿಗೆ
ನಿಶ್ಚಯ ಇರಬೇಕು. ಇವರಿಗೆ ದಾದಾ ಎಂದು ಕರೆಯಲಾಗುತ್ತದೆ. ಈ ನಿಶ್ಚಯವು ಮಕ್ಕಳಿಗೆ ಬಹಳ ಪಕ್ಕಾ
ಇರಬೇಕು. ಈ ನಿಶ್ಚಯದಲ್ಲಿಯೇ ಚಿಂತನೆ ಮಾಡಬೇಕಾಗಿದೆ. ಅವಶ್ಯವಾಗಿ ಇವರಲ್ಲಿ ತಂದೆಯ
ಪ್ರವೇಶತೆಯಾಗಿದೆ. ಆ ತಂದೆಯೇ ತಿಳಿಸುತ್ತಾರೆ - ನಾನು ಇವರ ಬಹಳ ಜನ್ಮಗಳ ಅಂತಿಮದಲ್ಲಿ ಬರುತ್ತೇನೆ.
ಇದು ಸರ್ವಶಾಸ್ತ್ರ ಶಿರೋಮಣಿ ಗೀತೆಯಾಗಿದೆ. ಶ್ರೀಮತ ಎಂದರೆ ಶ್ರೇಷ್ಠ ಮತ. ಒಬ್ಬ ಭಗವಂತನ ಮತವು
ಶ್ರೇಷ್ಠಾತಿ ಶ್ರೇಷ್ಠವಾಗಿದೆ. ಅವರ ಶ್ರೇಷ್ಠ ಮತದಿಂದಲೇ ನೀವು ದೇವತೆಗಳಾಗುತ್ತೀರಿ. ಆ ತಂದೆಯೇ
ತಿಳಿಸುತ್ತಾರೆ - ಯಾವಾಗ ನೀವು ಭ್ರಷ್ಟಮತದಿಂದ ಪತಿತರಾಗುತ್ತೀರೋ ಆಗಲೇ ನಾನು ಬರುತ್ತೇನೆ.
ಮನುಷ್ಯರಿಂದ ದೇವತೆಗಳಾಗುವ ಅರ್ಥವನ್ನು ತಿಳಿಯಬೇಕಾಗಿದೆ, ವಿಕಾರಿ ಮನುಷ್ಯರಿಂದ ನಿರ್ವಿಕಾರಿ
ದೇವತೆಗಳನ್ನಾಗಿ ಮಾಡಲು ತಂದೆಯು ಬರುತ್ತಾರೆ. ಸತ್ಯಯುಗದಲ್ಲಿ ಮನುಷ್ಯರೇ ಇರುತ್ತಾರೆ, ಆದರೆ
ದೈವೀಗುಣವಂತರಾಗಿರುತ್ತಾರೆ. ಈಗ ಕಲಿಯುಗದಲ್ಲಿ ಎಲ್ಲರೂ ಆಸುರೀ ಗುಣಗಳನ್ನು ಹೊಂದಿದ್ದಾರೆ. ಇಡೀ
ಮನುಷ್ಯ ಸೃಷ್ಟಿಯೇ ಆಸುರಿಯಾಗಿದೆ ಆದರೆ ಇಲ್ಲಿ ಈಶ್ವರೀಯ ಬುದ್ಧಿಯವರಿದ್ದಾರೆ, ಅವರು ಆಸುರೀ
ಬುದ್ಧಿಯವರಾಗಿದ್ದಾರೆ. ಇಲ್ಲಿ ಜ್ಞಾನವಿದೆ, ಅಲ್ಲಿ ಭಕ್ತಿಯಿದೆ. ಜ್ಞಾನ ಮತ್ತು ಭಕ್ತಿ
ಬೇರೆ-ಬೇರೆಯಾಗಿದೆ. ಭಕ್ತಿಯ ಪುಸ್ತಕಗಳು ಎಷ್ಟೊಂದಿದೆ, ಜ್ಞಾನದ ಪುಸ್ತಕವು ಒಂದೇ ಇದೆ. ಒಬ್ಬರೇ
ಜ್ಞಾನ ಸಾಗರನಾದ್ದರಿಂದ ಪುಸ್ತಕವೂ ಒಂದೇ ಇರಬೇಕು. ಯಾರೆಲ್ಲಾ ಧರ್ಮ ಸ್ಥಾಪನೆ ಮಾಡುತ್ತಾರೆಯೋ ಅವರ
ಪುಸ್ತಕವು ಒಂದೇ ಇರುತ್ತದೆ, ಅದಕ್ಕೆ ಧರ್ಮ ಗ್ರಂಥವೆಂದು ಕರೆಯಲಾಗುತ್ತದೆ.
ಮೊಟ್ಟ ಮೊದಲ ಧರ್ಮ ಗ್ರಂಥವು ಗೀತೆಯಾಗಿದೆ. ಮೊಟ್ಟ ಮೊದಲನೆಯದು ಆದಿ ಸನಾತನ ದೇವಿ-ದೇವತಾ
ಧರ್ಮವಾಗಿದೆ, ಹಿಂದೂ ಧರ್ಮವಲ್ಲ. ಗೀತೆಯಿಂದ ಹಿಂದೂ ಧರ್ಮ ಸ್ಥಾಪನೆಯಾಯಿತು, ಗೀತಾ ಜ್ಞಾನವನ್ನು
ಕೃಷ್ಣನು ತಿಳಿಸಿದನೆಂದು ಮನುಷ್ಯರು ತಿಳಿಯುತ್ತಾರೆ, ಯಾವಾಗ ತಿಳಿಸಿದರು? ಪರಂಪರೆಯಿಂದ ಎಂದು
ಹೇಳುತ್ತಾರೆ. ಕೆಲವು ಶಾಸ್ತ್ರಗಳಲ್ಲಿ ಭಗವಾನುವಾಚವಂತೂ ಇಲ್ಲವೇ ಇಲ್ಲ. ನೀವೀಗ
ತಿಳಿದುಕೊಂಡಿದ್ದೀರಿ - ಈ ಗೀತಾ ಜ್ಞಾನದ ಮೂಲಕವೇ ಮನುಷ್ಯರಿಂದ ದೇವತೆಗಳಾಗಿದ್ದಾರೆ. ಆ
ಜ್ಞಾನವನ್ನು ತಂದೆಯು ಈಗ ನಮಗೆ ಕೊಡುತ್ತಿದ್ದಾರೆ. ಇದಕ್ಕೆ ಭಾರತದ ಪ್ರಾಚೀನ ರಾಜಯೋಗವೆಂದು
ಕರೆಯಲಾಗುತ್ತದೆ. ಆ ಗೀತೆಯಲ್ಲಿಯೇ ಕಾಮ ಮಹಾಶತ್ರುವೆಂದು ಬರೆಯಲಾಗಿದೆ. ಈ ಶತ್ರುವೇ ನಿಮಗೆ
ಸೋಲನ್ನುಂಟು ಮಾಡಿದೆ. ತಂದೆಯು ಈ ಶತ್ರುವಿನ ಮೇಲೆ ಜಯವನ್ನು ಪ್ರಾಪ್ತಿ ಮಾಡಿಸಿ ಜಗತ್ಜೀತರು,
ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಬೇಹದ್ದಿನ ತಂದೆಯು ಕುಳಿತು ಇವರ ಮೂಲಕ ನೀವು ಮಕ್ಕಳಿಗೆ
ತಿಳಿಸುತ್ತಾರೆ. ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ ಮತ್ತು ಇವರು (ಬ್ರಹ್ಮಾ) ಎಲ್ಲಾ
ಮನುಷ್ಯಾತ್ಮರ ತಂದೆಯಾಗಿದ್ದಾರೆ. ಹೆಸರೇ ಆಗಿದೆ - ಪ್ರಜಾಪಿತ ಬ್ರಹ್ಮಾ. ನೀವು ಯಾರನ್ನಾದರೂ
ಕೇಳಬಹುದು - ಬ್ರಹ್ಮನ ತಂದೆಯ ಹೆಸರೇನು? ಮನುಷ್ಯರು ಇದಕ್ಕೆ ತಬ್ಬಿಬ್ಬಾಗುತ್ತಾರೆ.
ಬ್ರಹ್ಮಾ-ವಿಷ್ಣು-ಶಂಕರ - ಈ ಮೂವರ ತಂದೆಯು ಯಾರಾದರೂ ಇರಬೇಕಲ್ಲವೆ! ಬ್ರಹ್ಮಾ-ವಿಷ್ಣು-ಶಂಕರರು
ಸೂಕ್ಷದಲ್ಲಿ ದೇವತೆಗಳಿದ್ದಾರೆ, ಅವರ ಮೇಲೆ ಶಿವನಿದ್ದಾರೆ. ಶಿವ ತಂದೆಗೆ ಯಾವ ಮಕ್ಕಳಿದ್ದಾರೆಯೋ (ಆತ್ಮಗಳು)
ಅವರು ಶರೀರ ಧಾರಣೆ ಮಾಡಿದ್ದಾರೆ. ಆದರೆ ಶಿವನಂತೂ ಸದಾ ನಿರಾಕಾರ, ಪರಮಪಿತ ಪರಮಾತ್ಮನಾಗಿದ್ದಾರೆ.
ಆತ್ಮವೇ ಶರೀರದ ಮೂಲಕ ಪರಮಪಿತ ಎಂದು ಹೇಳುತ್ತದೆ. ಇದು ಎಷ್ಟು ಸಹಜ ಮಾತಾಗಿದೆ! ಇದಕ್ಕೆ ತಂದೆ
ಮತ್ತು ಆಸ್ತಿಯ ವಿದ್ಯೆಯೆಂದು ಹೇಳಲಾಗುತ್ತದೆ. ಇದನ್ನು ಯಾರು ಓದಿಸುತ್ತಾರೆ? ಗೀತಾ ಜ್ಞಾನವನ್ನು
ಯಾರು ತಿಳಿಸಿದರು? ಕೃಷ್ಣನಿಗಂತೂ ಭಗವಂತನೆಂದು ಹೇಳಲಾಗುವುದಿಲ್ಲ. ಕೃಷ್ಣನು ದೇಹಧಾರಿಯಾಗಿದ್ದಾನೆ,
ಕಿರೀಟಧಾರಿಯಾಗಿದ್ದಾನೆ. ಶಿವನು ನಿರಾಕಾರಿಯಾಗಿದ್ದಾನೆ, ಅವರಿಗೆ ಯಾವುದೇ ಕಿರೀಟವಿಲ್ಲ, ಅವರೇ
ಜ್ಞಾನ ಸಾಗರನಾಗಿದ್ದಾರೆ. ತಂದೆಯು ಬೀಜರೂಪ, ಚೈತನ್ಯವಾಗಿದ್ದಾರೆ. ನೀವೂ ಸಹ ಚೈತನ್ಯವಾಗಿದ್ದೀರಿ.
ಎಲ್ಲಾ ವೃಕ್ಷಗಳ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಭಲೆ ನೀವು ಮಾಲೀಕರಲ್ಲ, ಬೀಜವನ್ನು
ಹೇಗೆ ಬಿತ್ತುತ್ತಾರೆ ಮತ್ತೆ ಅದರಿಂದ ಹೇಗೆ ಸಸಿಯು ಬರುತ್ತದೆ ಎಂಬುದನ್ನು ತಿಳಿದುಕೊಂಡಿದ್ದೀರಿ.
ಅದು ಜಡವಾಗಿದೆ, ಇದು ಚೈತನ್ಯವಾಗಿದೆ. ಆತ್ಮಕ್ಕೆ ಚೈತನ್ಯವೆಂದು ಹೇಳಲಾಗುತ್ತದೆ, ನೀವಾತ್ಮದಲ್ಲಿಯೇ
ಜ್ಞಾನವಿದೆ. ನಿಮ್ಮ ವಿನಃ ಮತ್ತ್ಯಾರಲ್ಲಿಯೂ ಜ್ಞಾನವಿರಲು ಸಾಧ್ಯವಿಲ್ಲ ಅಂದಾಗ ತಂದೆಯು ಚೈತನ್ಯ
ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದಾರೆ, ಇದು ಚೈತನ್ಯ ರಚನೆಯಾಗಿದೆ.
ಅವೆಲ್ಲವೂ ಜಡ ಬೀಜಗಳಾಗಿವೆ. ಜಡ ಬೀಜದಲ್ಲಿ ಯಾವುದೇ ಜ್ಞಾನವಿಲ್ಲ ಎಂದಲ್ಲ. ಇವರಂತೂ ಚೈತನ್ಯ ಬೀಜ
ರೂಪನಾಗಿದ್ದಾರೆ, ಇವರಲ್ಲಿ ಇಡೀ ಸೃಷ್ಟಿಯ ಜ್ಞಾನವಿದೆ. ವೃಕ್ಷದ ಉತ್ಪತ್ತಿ, ಪಾಲನೆ, ವಿನಾಶ
ಎಲ್ಲದರ ಜ್ಞಾನವಿದೆ ನಂತರ ಹೊಸ ವೃಕ್ಷವು ಹೇಗೆ ಎದ್ದು ನಿಲ್ಲುತ್ತದೆ, ಅದೂ ಗುಪ್ತವಾಗಿದೆ. ನಿಮಗೆ
ಜ್ಞಾನವು ಗುಪ್ತವಾಗಿಯೇ ಸಿಗುತ್ತದೆ. ತಂದೆಯು ಗುಪ್ತವಾಗಿ ಬಂದಿದ್ದಾರೆ, ಇಲ್ಲಿ ಸಸಿಯ
ನಾಟಿಯಾಗುತ್ತಿದೆ, ಈಗಂತೂ ಎಲ್ಲರೂ ಪತಿತರಾಗಿ ಬಿಟ್ಟಿದ್ದಾರೆ. ಅಂದಾಗ ಬೀಜದಿಂದ ಮೊಟ್ಟ ಮೊದಲ
ಎಲೆಯು ಹೊರ ಬಂದಿತು ಆ ಎಲೆಯು ಯಾರು? ಸತ್ಯಯುಗದ ಮೊದಲ ಎಲೆಯೆಂದು ಕೃಷ್ಣನಿಗೇ ಹೇಳುತ್ತಾರೆ,
ಲಕ್ಷ್ಮಿ-ನಾರಾಯಣರಿಗೆ ಹೇಳುತ್ತಾರೆ. ಮೊದಲು ಹೊಸ ಎಲೆಯು ಚಿಕ್ಕದಾಗಿರುತ್ತದೆ ನಂತರ
ದೊಡ್ಡದಾಗುತ್ತದೆ ಅಂದಾಗ ಈ ಬೀಜಕ್ಕೆ ಎಷ್ಟೊಂದು ಮಹಿಮೆಯಿದೆ. ಈ ತಂದೆಯಂತೂ
ಚೈತನ್ಯವಾಗಿದ್ದಾರಲ್ಲವೆ! ಭಲೆ ಅನ್ಯ ಎಲೆಗಳು ಬರುತ್ತಾರೆ, ನಿಧಾನ-ನಿಧಾನವಾಗಿ ಅವರ ಮಹಿಮೆಯು
ಕಡಿಮೆಯಾಗುತ್ತಾ ಹೋಗುತ್ತದೆ. ಈಗ ನೀವು ದೇವತೆಗಳಾಗುತ್ತೀರಿ ಅಂದಾಗ ಮೂಲ ಮಾತು ನಾವು ದೈವೀ
ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಈ ದೇವತೆಗಳ ಸಮಾನರಾಗಬೇಕಾಗಿದೆ. ಚಿತ್ರಗಳೂ ಇವೆ, ಈ
ಚಿತ್ರಗಳಿಲ್ಲದೆ ಬುದ್ಧಿಯಲ್ಲಿ ಜ್ಞಾನವು ಹೇಗೆ ಬರುತ್ತದೆ! ಈ ಚಿತ್ರಗಳು ಬಹಳ ಕೆಲಸಕ್ಕೆ ಬರುತ್ತವೆ.
ಭಕ್ತಿಮಾರ್ಗದಲ್ಲಿ ಈ ಚಿತ್ರಗಳಿವೆ ಮತ್ತು ಜ್ಞಾನ ಮಾರ್ಗದಲ್ಲಿ ನಾವು ಇವರ ಸಮಾನ ಆಗಬೇಕೆಂದು ನಿಮಗೆ
ಈ ಚಿತ್ರಗಳಿಂದ ಜ್ಞಾನವು ಸಿಗುತ್ತದೆ. ಭಕ್ತಿಮಾರ್ಗದಲ್ಲಿ ನಾವು ಇವರ ಸಮಾನರಾಗಬೇಕೆಂದು
ತಿಳಿಯುವುದಿಲ್ಲ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಮಂದಿರಗಳನ್ನು ನಿರ್ಮಿಸುತ್ತಾರೆ, ಎಲ್ಲರಿಗಿಂತ
ಹೆಚ್ಚಿನದಾಗಿ ಯಾರ ಮಂದಿರಗಳಾಗುತ್ತವೆ? ಅವಶ್ಯವಾಗಿ ಶಿವ ತಂದೆಗೆ ಹೆಚ್ಚಿನ ಮಂದಿರಗಳಾಗುತ್ತವೆ
ನಂತರ ಅವರ ರಚನೆಗೆ (ಲಕ್ಷ್ಮಿ-ನಾರಾಯಣ) ಮಂದಿರಗಳು ನಿರ್ಮಾಣವಾಗುತ್ತದೆ. ತಂದೆಯ ಮೊದಲ ರಚನೆ ಈ
ಲಕ್ಷ್ಮಿ-ನಾರಾಯಣರಾಗಿದ್ದಾರೆ, ಆದ್ದರಿಂದ ಶಿವನ ನಂತರ ಇವರಿಗೆ ಹೆಚ್ಚಿನ ಪೂಜೆಯಾಗುತ್ತದೆ.
ಹೆಚ್ಚಿನದಾಗಿ ಜ್ಞಾನ ಕೊಡುವ ಮಾತೆಯರ ಪೂಜೆಯಲ್ಲ, ನಿಮಗೆ ಈಗ ಪೂಜೆಯಾಗುವುದಿಲ್ಲ ಏಕೆಂದರೆ
ನೀವಿನ್ನೂ ಓದುತ್ತಿದ್ದೀರಿ. ಯಾವಾಗ ನೀವು ಓದಿ ನಂತರ ಪುನಃ ಅವಿದ್ಯಾವಂತರಾಗುತ್ತೀರೋ ಆಗ (ದ್ವಾಪರದಲ್ಲಿ)
ಪೂಜೆಯಾಗುವುದು. ಈಗ ನೀವು ದೇವಿ-ದೇವತೆಗಳಾಗುತ್ತೀರಿ. ಸತ್ಯಯುಗದಲ್ಲಿ ತಂದೆಯು ಓದಿಸಲು
ಹೋಗುವುದಿಲ್ಲ. ಅಲ್ಲಿ ಇಂತಹ ವಿದ್ಯೆಯೇ ಇರುವುದಿಲ್ಲ. ಇದು ಪತಿತರಿಂದ ಪಾವನರನ್ನಾಗಿ ಮಾಡುವ
ವಿದ್ಯೆಯಾಗಿದೆ. ನೀವು ತಿಳಿದುಕೊಂಡಿದ್ದೀರಿ - ನಮ್ಮನ್ನು ಯಾರು ಈ ರೀತಿ ಮಾಡುವರೋ ಅವರ ಪೂಜೆಯೂ
ಆಗುವುದು ನಂತರ ನಮ್ಮದೂ ನಂಬರ್ವಾರ್ ಪೂಜೆಯು ನಡೆಯುವುದು. ನಂತರ ಕೆಳಗಿಳಿಯುತ್ತಾ-ಇಳಿಯುತ್ತಾ ಪಂಚ
ತತ್ವಗಳಿಗೂ ಪೂಜೆ ಮಾಡತೊಡಗುತ್ತಾರೆ. ಪಂಚ ತತ್ವಗಳ ಪೂಜೆಯೆಂದರೆ ಪತಿತ ಶರೀರದ ಪೂಜೆಯಾಗಿದೆ.
ಬುದ್ಧಿಯಲ್ಲಿ ಈ ಜ್ಞಾನವಿದೆ - ಈ ಲಕ್ಷ್ಮೀ-ನಾರಾಯಣರ ರಾಜ್ಯವು ಇಡೀ ಸೃಷ್ಟಿಯಲ್ಲಿತ್ತು. ಈ
ದೇವಿ-ದೇವತೆಗಳು ರಾಜ್ಯವನ್ನು ಹೇಗೆ ಮತ್ತು ಯಾವಾಗ ಪಡೆದರು? ಇದು ಯಾರಿಗೂ ತಿಳಿದಿಲ್ಲ. ಲಕ್ಷಾಂತರ
ವರ್ಷಗಳೆಂದು ಹೇಳಿ ಬಿಡುತ್ತಾರೆ. ಲಕ್ಷಾಂತರ ವರ್ಷಗಳ ಮಾತು ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳಲು
ಸಾಧ್ಯವಿಲ್ಲ. ಆದ್ದರಿಂದ ಇದು ಪರಂಪರೆಯಿಂದ ನಡೆದು ಬಂದಿದೆ ಎಂದು ಹೇಳಿ ಬಿಡುತ್ತಾರೆ. ಈಗ ನೀವು
ತಿಳಿದುಕೊಂಡಿದ್ದೀರಿ - ದೇವಿ-ದೇವತಾ ಧರ್ಮದವರು ಅನ್ಯ ಧರ್ಮಗಳಲ್ಲಿ ಸೇರಿ ಹೋಗಿದ್ದಾರೆ. ಯಾರು
ಭಾರತದಲ್ಲಿದ್ದಾರೆಯೋ ಅವರು ತಮ್ಮನ್ನು ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ ಏಕೆಂದರೆ ಪತಿತರಾಗುವ
ಕಾರಣ ದೇವಿ-ದೇವತೆಗಳೆಂದು ಹೇಳಿಕೊಳ್ಳುವುದು ಶೋಭಿಸುವುದಿಲ್ಲ. ಆದರೆ ಮನುಷ್ಯರಲ್ಲಿ
ಜ್ಞಾನವೆಲ್ಲಿದೆ! ದೇವಿ-ದೇವತೆಗಳಿಗಿಂತಲೂ ಶ್ರೇಷ್ಠ ಬಿರುದನ್ನು ತಮಗೇ ಇಟ್ಟುಕೊಳ್ಳುತ್ತಾರೆ.
ಪಾವನ ದೇವಿ-ದೇವತೆಗಳ ಪೂಜೆ ಮಾಡುತ್ತಾರೆ, ತಲೆ ಬಾಗುತ್ತಾರೆ, ಆದರೆ ತಮ್ಮನ್ನು ಪತಿತರೆಂದು
ತಿಳಿದುಕೊಳ್ಳುವುದಿಲ್ಲ.
ಭಾರತದಲ್ಲಿ ವಿಶೇಷವಾಗಿ ಕನ್ಯೆಯರಿಗೆ ಎಷ್ಟೊಂದು ನಮಿಸುತ್ತಾರೆ, ಕುಮಾರರಿಗೂ ಮಾಡುವುದಿಲ್ಲ,
ಪುರುಷರಿಗಿಂತಲೂ ಹೆಚ್ಚಿನದಾಗಿ ಸ್ತ್ರೀಯರಿಗೆ ನಮಸ್ಕಾರ ಮಾಡುತ್ತಾರೆ, ಏಕೆಂದರೆ ಈ ಸಮಯದಲ್ಲಿ
ಜ್ಞಾನದ ಅಮೃತವು ಮೊದಲು ಮಾತೆಯರಿಗೇ ಸಿಗುತ್ತದೆ. ತಂದೆಯು ಇವರಲ್ಲಿ ಪ್ರವೇಶ ಮಾಡುತ್ತಾರೆ, ನಿಮಗೆ
ತಿಳಿದಿದೆ - ಈ ಬ್ರಹ್ಮಾ ತಂದೆಯು ಜ್ಞಾನದ ಮಹಾ ನದಿಯಾಗಿದ್ದಾರೆ, ಜ್ಞಾನ ನದಿಯೂ ಆಗಿದ್ದಾರೆ ಮತ್ತೆ
ಪುರುಷನೂ ಆಗಿದ್ದಾರೆ. ಬ್ರಹ್ಮ ಪುತ್ರಾ ನದಿಯು ಎಲ್ಲದಕ್ಕಿಂತ ದೊಡ್ಡದಾಗಿದೆ, ಅದು ಕಲ್ಕತ್ತಾದ ಕಡೆ
ಸಾಗರದಲ್ಲಿ ಹೋಗಿ ಸೇರುತ್ತದೆ. ಮೇಳವೂ ಅಲ್ಲಿಯೇ ನಡೆಯುತ್ತದೆ. ಆದರೆ ಇದು ಆತ್ಮರು ಮತ್ತು
ಪರಮಾತ್ಮನ ಮೇಳವೆಂದು ಅವರಿಗೆ ತಿಳಿದಿಲ್ಲ. ಅದಂತೂ ನೀರಿನ ನದಿಯಾಗಿದೆ, ಅದಕ್ಕೆ ಬ್ರಹ್ಮ ಪುತ್ರಾ
ಎಂದು ಹೆಸರನ್ನಿಟ್ಟಿದ್ದಾರೆ. ಮನುಷ್ಯರಂತೂ ಬ್ರಹ್ಮ್ ತತ್ವವನ್ನು ಈಶ್ವರನೆಂದು ಹೇಳುತ್ತಾರೆ
ಆದ್ದರಿಂದ ಬ್ರಹ್ಮ ಪುತ್ರಾ ನದಿಯನ್ನು ಪಾವನವೆಂದು ತಿಳಿಯುತ್ತಾರೆ. ವಾಸ್ತವದಲ್ಲಿ ನೀರಿನ ಗಂಗೆಗೆ
ಪತಿತ-ಪಾವನಿ ಎಂದು ಹೇಳಲಾಗುವುದಿಲ್ಲ. ಇಲ್ಲಿ ಸಾಗರ ಮತ್ತು ಬ್ರಹ್ಮಾ ನದಿಯ ಮೇಳವಾಗಿದೆ. ತಂದೆಯು
ತಿಳಿಸುತ್ತಾರೆ - ಇವರು ಸ್ತ್ರೀಯಂತೂ ಅಲ್ಲ, ಆದರೆ ಇವರ ಮೂಲಕ ದತ್ತು ಮಾಡಿಕೊಳ್ಳಲಾಗುತ್ತದೆ. ಇವು
ಬಹಳ ಗುಹ್ಯವಾದ ಅರಿತುಕೊಳ್ಳುವ ಮಾತುಗಳಾಗಿವೆ. ಇವು ಮತ್ತೆ ಪ್ರಾಯಲೋಪವಾಗಿ ಬಿಡುತ್ತವೆ. ನಂತರ
ಮನುಷ್ಯರು ಇದರ ಆಧಾರದ ಮೇಲೆ ಶಾಸ್ತ್ರಗಳನ್ನು ರಚಿಸುತ್ತಾರೆ. ಮೊದಲು ಕೈಯಿಂದ ಬರೆಯಲ್ಪಟ್ಟ
ಶಾಸ್ತ್ರಗಳಿದ್ದವು ನಂತರ ದೊಡ್ಡ-ದೊಡ್ಡ ಗ್ರಂಥಗಳನ್ನು ಮುದ್ರಿಸಿದ್ದಾರೆ. ಮೊದಲು ಸಂಸ್ಕೃತದಲ್ಲಿ
ಶ್ಲೋಕಗಳಿರಲಿಲ್ಲ, ಇದು ಸಂಪೂರ್ಣ ಸಹಜ ಮಾತಾಗಿದೆ. ನಾನು ಇವರ ಮೂಲಕ ರಾಜಯೋಗವನ್ನು ಕಲಿಸುತ್ತೇನೆ,
ನಂತರ ಈ ಪ್ರಪಂಚವೇ ಸಮಾಪ್ತಿಯಾಗುತ್ತದೆ. ಶಾಸ್ತ್ರ ಇತ್ಯಾದಿಗಳೇನೂ ಉಳಿಯುವುದಿಲ್ಲ. ನಂತರ
ಭಕ್ತಿಮಾರ್ಗದಲ್ಲಿ ಈ ಶಾಸ್ತ್ರಗಳು ರಚಿಸಲ್ಪಡುತ್ತವೆ. ಈ ಶಾಸ್ತ್ರಗಳು ಪರಂಪರೆಯಿಂದ ನಡೆದು ಬಂದಿದೆ
ಎಂದು ಮನುಷ್ಯರು ತಿಳಿಯುತ್ತಾರೆ. ಇದಕ್ಕೆ ಅಜ್ಞಾನ ಅಂಧಕಾರವೆಂದು ಹೇಳಲಾಗುತ್ತದೆ. ಈಗ ನೀವು
ಮಕ್ಕಳಿಗೆ ತಂದೆಯು ಓದಿಸುತ್ತಾರೆ, ಇದರಿಂದ ನೀವು ಬೆಳಕಿನೆಡೆಗೆ ಬಂದಿದ್ದೀರಿ. ಸತ್ಯಯುಗದಲ್ಲಿ
ಪವಿತ್ರ ಪ್ರವೃತ್ತಿ ಮಾರ್ಗವಿರುತ್ತದೆ. ಕಲಿಯುಗದಲ್ಲಿ ಎಲ್ಲರೂ ಪತಿತರಾಗಿದ್ದಾರೆ, ಇದೂ ಸಹ
ನಾಟಕದಲ್ಲಿ ನೊಂದಾವಣೆಯಾಗಿದೆ. ನಂತರ ಇದು ನಿವೃತ್ತಿ ಮಾರ್ಗವಾಗುತ್ತದೆ ಇದಕ್ಕೆ ಸನ್ಯಾಸ
ಧರ್ಮವೆಂದು ಹೇಳುತ್ತಾರೆ. ಕಾಡಿನಲ್ಲಿ ಹೋಗಿ ಇರುತ್ತಾರೆ ಅದು ಮಿತವಾದ ಸನ್ಯಾಸವಾಗಿದೆ. ಏಕೆಂದರೆ
ಇರುವುದಂತೂ ಈ ಹಳೆಯ ಪ್ರಪಂಚದಲ್ಲಿಯೇ. ಈಗ ನೀವು ಹೊಸ ಪ್ರಪಂಚದಲ್ಲಿ ಹೋಗುತ್ತೀರಿ. ನಿಮಗೆ
ತಂದೆಯಿಂದ ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ ಇದರಿಂದ ನೀವು ಜ್ಞಾನಪೂರ್ಣರಾಗುತ್ತೀರಿ.
ಇದಕ್ಕಿಂತ ಹೆಚ್ಚಿನ ಜ್ಞಾನವು ಯಾವುದೂ ಇರುವುದಿಲ್ಲ. ಅದಂತೂ ಮಾಯೆಯ ಜ್ಞಾನವಾಗಿದೆ, ಅದರಿಂದ
ವಿನಾಶವಾಗುತ್ತದೆ. ಅವರು ಚಂದ್ರ ಗ್ರಹದವರೆಗೆ ಹೋಗಿ ಅನ್ವೇಷಣೆ ನಡೆಸುತ್ತಾರೆ. ನಿಮಗಾಗಿ ಯಾವುದೇ
ಹೊಸ ಮಾತಲ್ಲ. ಇದೆಲ್ಲವೂ ಮಾಯೆಯ ಶೋ ಆಗಿದೆ, ಬಹಳ ಶೋ ಮಾಡುತ್ತಾರೆ. ಏನಾದರೂ ಚಮತ್ಕಾರ ಮಾಡಿ
ತೋರಿಸಬೇಕೆಂದು ಬಹಳ ಆಳದಲ್ಲಿ ಹೋಗುತ್ತಾರೆ, ಬಹಳ ಚಮತ್ಕಾರ ಮಾಡುವುದರಿಂದ ಮತ್ತೆ ನಷ್ಟವೂ ಆಗಿ
ಬಿಡುತ್ತದೆ. ಅವರ ಬುದ್ಧಿಯಲ್ಲಿ ವಿನಾಶದ ವಿಚಾರಗಳೇ ಬರುತ್ತವೆ, ಏನೇನನ್ನೋ ಮಾಡುತ್ತಿರುತ್ತಾರೆ.
ತಯಾರು ಮಾಡುವವರಿಗೆ ಇದರಿಂದಲೇ ವಿನಾಶವಾಗುವುದೆಂದು ತಿಳಿದಿದೆ. ಅದರ ಪ್ರಯೋಗವನ್ನೂ
ಮಾಡುತ್ತಿರುತ್ತಾರೆ. ಎರಡು ಬೆಕ್ಕುಗಳು ಕಾದಾಡಿದವು ನಡುವೆ ಕೋತಿಯು ಬೆಣ್ಣೆಯನ್ನು ತಿಂದು ಹೋಯಿತು
ಎಂದು ಹೇಳುತ್ತಾರೆ. ಕಥೆಯಂತೂ ಚಿಕ್ಕದಾಗಿದೆ ಆದರೆ ಆಟವು ಎಷ್ಟು ದೊಡ್ಡದಾಗಿದೆ. ಹೆಸರಂತೂ ಇವರದೇ
(ಯಾದವರು) ಪ್ರಸಿದ್ಧವಾಗಿದೆ. ಇವರ ಮೂಲಕವೇ ವಿನಾಶವು ನಿಶ್ಚಿತವಾಗಿದೆ, ಯಾರಾದರೂ
ನಿಮಿತ್ತರಾಗಬೇಕಲ್ಲವೆ. ಕ್ರಿಶ್ಚಿಯನ್ನರೂ ಸಹ ತಿಳಿದುಕೊಳ್ಳುತ್ತಾರೆ - ಸ್ವರ್ಗವಿತ್ತು, ಆದರೆ ಆಗ
ನಾವು ಇರಲಿಲ್ಲ. ಇಸ್ಲಾಂ, ಬೌದ್ಧಿಯರೂ ಸಹ ಇರಲಿಲ್ಲ. ಕ್ರಿಶ್ಚಿಯನ್ನರ ಬುದ್ಧಿಯಾದರೂ ಸ್ವಲ್ಪ
ಚೆನ್ನಾಗಿದೆ, ದೇವಿ-ದೇವತಾ ಧರ್ಮವು ಲಕ್ಷಾಂತರ ವರ್ಷಗಳ ಹಿಂದೆ ಇತ್ತೆಂದು ಭಾರತವಾಸಿಗಳು
ಹೇಳುತ್ತಾರೆ ಅಂದಮೇಲೆ ಭಾರತವಾಸಿಗಳು ಮಂಧಬುದ್ಧಿಯವರಾದರಲ್ಲವೆ. ಅಂದಾಗ ತಂದೆಯು ಭಾರತದಲ್ಲಿಯೇ
ಬರುತ್ತಾರೆ, ಭಾರತವೇ ಮಹಾನ್ ಬುದ್ಧಿಹೀನನಾಗಿದೆ. ಇದನ್ನೇ ಮಹಾನ್ ಬುದ್ಧಿವಂತನನ್ನಾಗಿ ಮಾಡುತ್ತಾರೆ.
ತಂದೆಯು ಮಕ್ಕಳಿಗೆ ಎಷ್ಟು ಸಹಜ ಮಾಡಿ ತಿಳಿಸಿಕೊಡುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಆಗ
ಚಿನ್ನದ ಪಾತ್ರೆಯ ಸಮಾನವಾಗುತ್ತೀರಿ ಆಗ ಧಾರಣೆಯೂ ಚೆನ್ನಾಗಿ ಆಗುವುದು. ನೆನಪಿನ ಯಾತ್ರೆಯಿಂದಲೇ
ಪಾಪಗಳು ತುಂಡಾಗುತ್ತವೆ. ಮುರುಳಿಯನ್ನು ಕೇಳದಿದ್ದರೆ ಜ್ಞಾನವೂ ಸಹ ನಿಲ್ಲುವುದಿಲ್ಲ. ತಂದೆಯಂತೂ
ದಯಾಹೃದಯಿ ಆದ್ದರಿಂದ ಮೇಲೇಳುವ ಯುಕ್ತಿಯನ್ನೇ ತಿಳಿಸುತ್ತಾರೆ. ಅಂತ್ಯದವರೆಗೂ ಕಲಿಸುತ್ತಲೇ
ಇರುತ್ತಾರೆ. ಒಳ್ಳೆಯದು, ಇಂದು ಭೋಗದ ದಿನವಾಗಿದೆ, ಭೋಗವನ್ನಿಟ್ಟು ಬೇಗನೆ ಹಿಂತಿರುಗಿ ಬರಬೇಕಾಗಿದೆ.
ಬಾಕಿ ವೈಕುಂಠದಲ್ಲಿ ಹೋಗಿ ದೇವಿ-ದೇವತೆಗಳ ಸಾಕ್ಷಾತ್ಕಾರ ಮಾಡುವುದೆಲ್ಲವೂ ವ್ಯರ್ಥವಾಗಿದೆ.
ಇದರಲ್ಲಿ ಬಹಳ ಸೂಕ್ಷ್ಮ ಬುದ್ಧಿಯು ಬೇಕು. ತಂದೆಯು ಈ ರಥದ ಮೂಲಕ ತಿಳಿಸುತ್ತಾರೆ - ಮಕ್ಕಳೆ,
ನನ್ನನ್ನು ನೆನಪು ಮಾಡಿ. ನಾನೇ ಪತಿತ-ಪಾವನ, ನಿಮ್ಮ ತಂದೆಯಾಗಿದ್ದೇನೆ. ನಿಮ್ಮೊಂದಿಗೇ ತಿನ್ನುವೆನು,
ನಿಮ್ಮೊಂದಿಗೇ ಕುಳಿತುಕೊಳ್ಳುವೆನು...... ಇದು ಇಲ್ಲಿಯ ಮಾತಾಗಿದೆ. ಮೇಲೆ ಇದು ಹೇಗಾಗಲು ಸಾಧ್ಯ!
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯು ಈ
ದಾದಾರವರಲ್ಲಿ ಪ್ರವೇಶ ಮಾಡಿ ನಮ್ಮನ್ನು ಮನುಷ್ಯರಿಂದ ದೇವತೆಗಳು ಅರ್ಥಾತ್ ವಿಕಾರಿಗಳಿಂದ
ನಿರ್ವಿಕಾರಿಗಳನ್ನಾಗಿ ಮಾಡಲು ಗೀತಾ ಜ್ಞಾನವನ್ನು ತಿಳಿಸುತ್ತಿದ್ದಾರೆ, ಇದೇ ನಿಶ್ಚಯದಿಂದ ಚಿಂತನೆ
ಮಾಡಬೇಕಾಗಿದೆ. ಶ್ರೀಮತದಿಂದ ನಡೆದು ಶ್ರೇಷ್ಠ ಗುಣವಂತರಾಗಬೇಕಾಗಿದೆ.
2. ನೆನಪಿನ ಯಾತ್ರೆಯಿಂದ ಬುದ್ಧಿಯನ್ನು ಚಿನ್ನದ ಪಾತ್ರೆಯ ಸಮಾನ ಮಾಡಿಕೊಳ್ಳಬೇಕಾಗಿದೆ.
ಬುದ್ಧಿಯಲ್ಲಿ ಸದಾ ಜ್ಞಾನವಿರಲಿ, ಅದಕ್ಕಾಗಿ ಮುರುಳಿಯನ್ನು ಅವಶ್ಯವಾಗಿ ಓದಬೇಕು ಅಥವಾ
ಕೇಳಬೇಕಾಗಿದೆ.
ವರದಾನ:
ಶರೀರದ
ವ್ಯಾಧಿಗಳ ಚಿಂತನೆಯಿಂದ ಮುಕ್ತ, ಜ್ಞಾನ ಚಿಂತನೆ ಹಾಗೂ ಸ್ವ-ಚಿಂತನೆ ಮಾಡುವಂತಹ ಶುಭಚಿಂತಕ ಭವ.
ಒಂದಾಗಿದೆ ಶರೀರದ ವ್ಯಾದಿ
ಬರುವುದು, ಇನ್ನೊಂದಾಗಿದೆ ವ್ಯಾದಿಗೆ ಅಲುಗಾಡುವುದು, ವ್ಯಾಧಿ ಬರುವುದು ಇದಂತು ನಿಶ್ಚಿತ
ಭವಿಷ್ಯವಾಗಿದೆ. ಆದರೆ ಶ್ರೇಷ್ಠ ಸ್ಥಿತಿಯಲ್ಲಿ ಅಲುಗಾಡುವುದು - ಇದಾಗಿದೆ ಬಂಧನಯುಕ್ತರ
ನಿಶಾನಿಯಾಗಿದೆ. ಯಾರು ಶರೀರದ ವ್ಯಾದಿಯ ಚಿಂತನೆಯಿಂದ ಮುಕ್ತವಾಗಿದ್ದು ಸ್ವ-ಚಿಂತನೆ, ಜ್ಞಾನದ
ಚಿಂತನೆ ಮಾಡುತ್ತಾರೆ ಅವರೇ ಶುಭ ಚಿಂತಕರಾಗಿದ್ದಾರೆ. ಪ್ರಕೃತಿಯ ಚಿಂತನೆ ಹೆಚ್ಚು ಮಾಡುವುದರಿಂದ
ಚಿತೆಯ ರೂಪ ಆಗಿ ಬಿಡುವುದು. ಈ ಬಂಧನದಿಂದ ಮುಕ್ತರಾಗಬೇಕು ಇದಕ್ಕೇ ಕರ್ಮಾತೀತ ಸ್ಥಿತಿ ಎಂದು
ಹೇಳಲಾಗುವುದು.
ಸ್ಲೋಗನ್:
ಸ್ನೇಹದ ಶಕ್ತಿ ಸಮಸ್ಯಾ
ರೂಪಿ ಬೆಟ್ಟವನ್ನೂ ಸಹ ನೀರಿನಂತೆ ಹಗುರವಾಗಿ ಮಾಡಿ ಬಿಡುವುದು.