27.03.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈಗ
ನಿಮ್ಮದು ವಾನಪ್ರಸ್ಥ ಸ್ಥಿತಿಯಾಗಿದೆ, ಏಕೆಂದರೆ ನೀವು ವಾಣಿಯಿಂದ ದೂರ ಮನೆಗೆ ಹೋಗಬೇಕಾಗಿದೆ,
ಆದ್ದರಿಂದ ನೆನಪಿನಲ್ಲಿದ್ದು ಪಾವನರಾಗಿ.”
ಪ್ರಶ್ನೆ:
ಶ್ರೇಷ್ಠ
ಗುರಿಯನ್ನು ತಲುಪಲು ಅವಶ್ಯವಾಗಿ ಯಾವ ಮಾತಿನ ಸಂಭಾಲನೆ ಮಾಡಬೇಕಾಗಿದೆ?
ಉತ್ತರ:
ಕಣ್ಣುಗಳ
ಸಂಭಾಲನೆ ಮಾಡಿ. ಇವೇ ಬಹಳ ಮೋಸಗೊಳಿಸುವಂತದ್ದಾಗಿದೆ. ಕೆಟ್ಟ ದೃಷ್ಟಿಯು ಬಹಳ ನಷ್ಟ ಮಾಡುತ್ತದೆ.
ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ.
ಸಹೋದರ-ಸಹೋದರ ದೃಷ್ಟಿಯ ಅಭ್ಯಾಸ ಮಾಡಿ. ಬೆಳಗ್ಗೆ-ಬೆಳಗ್ಗೆ ಎದ್ದು ಏಕಾಂತದಲ್ಲಿ ಕುಳಿತು
ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಿ. ಭಗವಂತನ ಆಜ್ಞೆಯಾಗಿದೆ - ಮಧುರ ಮಕ್ಕಳೇ, ಕಾಮ ಮಹಾ
ಶತ್ರುವಿನಿಂದ ಎಚ್ಚರದಿಂದಿರಿ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಇದನ್ನಂತೂ ತಿಳಿದುಕೊಂಡಿದ್ದೀರಿ, ಏಕೆಂದರೆ ತಿಳಿದುಕೊಳ್ಳುವವರೇ
ಇಲ್ಲಿ ಬರಲು ಸಾಧ್ಯ. ಇಲ್ಲಿ ಯಾವುದೇ ಮನುಷ್ಯರು ಓದಿಸುವುದಿಲ್ಲ, ಭಗವಂತನು ಓದಿಸುತ್ತಾರೆ ಅಂದಾಗ
ಭಗವಂತನ ಪರಿಚಯವೂ ಬೇಕು. ಭಗವಂತನೆಂಬ ಹೆಸರು ಎಷ್ಟು ದೊಡ್ಡದಾಗಿದೆ ಆದರೆ ಅವರು ನಾಮ-ರೂಪದಿಂದ
ಭಿನ್ನ ಎಂದು ಹೇಳಿ ಬಿಡುತ್ತಾರೆ. ಅವರು ಅತೀ ಭಿನ್ನವಾಗಿದ್ದಾರೆ. ಇಷ್ಟು ಚಿಕ್ಕ ಬಿಂದುವಾಗಿದ್ದಾರೆ
ಆದ್ದರಿಂದಲೇ ಆತ್ಮವು ನಕ್ಷತ್ರ ಸಮಾನವಿದೆ ಎಂದು ಹೇಳುತ್ತಾರೆ. ಹೇಗೆ ಆ ನಕ್ಷತ್ರಗಳು ಚಿಕ್ಕ
ಗಾತ್ರದಲ್ಲೇನೂ ಇರುವುದಿಲ್ಲ ಆದರೆ ಈ ಆತ್ಮ ನಕ್ಷತ್ರವು ಅತೀ ಸೂಕ್ಷ್ಮವಾಗಿದೆ. ತಂದೆಯೂ
ಬಿಂದುವಾಗಿದ್ದಾರೆ, ಅವರು ಸದಾ ಪವಿತ್ರರಾಗಿರುವವರಾಗಿದ್ದಾರೆ. ಅವರ ಮಹಿಮೆಯೂ ಇದೆ - ಜ್ಞಾನ ಸಾಗರ,
ಶಾಂತಿಯ ಸಾಗರ, ಇದರಲ್ಲಿ ಯಾವುದೇ ತಬ್ಬಿಬ್ಬಾಗುವ ಮಾತಿಲ್ಲ. ಮುಖ್ಯ ಮಾತು ಪಾವನರಾಗುವುದಾಗಿದೆ.
ವಿಕಾರದ ಮೇಲೂ ಜಗಳವಾಗುತ್ತದೆ. ಪಾವನರಾಗುವುದಕ್ಕಾಗಿ ಪತಿತ-ಪಾವನನನ್ನು ಕರೆಯುತ್ತಾರೆ ಅಂದಮೇಲೆ
ಅವಶ್ಯವಾಗಿ ಪಾವನರಾಗಬೇಕಾಗಿದೆ ಅಲ್ಲವೆ, ಆದರೆ ಇದರಲ್ಲಿ ತಬ್ಬಿಬ್ಬಾಗಬಾರದು. ಏನೆಲ್ಲಾ ಕಳೆದು
ಹೋಯಿತೋ ವಿಘ್ನ ಮೊದಲಾದವುಗಳು ಬಂದವೋ ಇವು ಹೊಸ ಮಾತೇನಲ್ಲ. ಅಬಲೆಯರ ಮೇಲೆ ಅತ್ಯಾಚಾರವಾಗುತ್ತದೆ,
ಅನ್ಯ ಸತ್ಸಂಗಗಳಲ್ಲಿ ಈ ಮಾತುಗಳಿರುವುದಿಲ್ಲ. ಅಲ್ಲಿ ಜಗಳವೂ ಆಗುವುದಿಲ್ಲ, ಇಲ್ಲಿ ಈ ಮಾತಿನ
ಮೇಲೆಯೇ ಜಗಳವಾಗುತ್ತದೆ. ತಂದೆಯು ಪಾವನರನ್ನಾಗಿ ಮಾಡಲು ಬರುತ್ತಾರೆ, ಆದ್ದರಿಂದ ಎಷ್ಟೊಂದು
ಜಗಳವಾಗುತ್ತದೆ. ತಂದೆಯೇ ಕುಳಿತು ಓದಿಸುತ್ತಾರೆ, ತಿಳಿಸುತ್ತಾರೆ - ನಾನು ವಾನಪ್ರಸ್ಥ
ಸ್ಥಿತಿಯಲ್ಲಿ ಬರುತ್ತೇನೆ. ವಾನಪ್ರಸ್ಥ ಸ್ಥಿತಿಯ ಕಾಯಿದೆಯೂ ಸಹ ಇಲ್ಲಿಂದಲೇ ಆರಂಭವಾಗುತ್ತದೆ
ಅಂದಾಗ ವಾನಪ್ರಸ್ಥ ಸ್ಥಿತಿಯಲ್ಲಿ ಇರುವವರು ಅವಶ್ಯವಾಗಿ ವಾನಪ್ರಸ್ಥದಲ್ಲಿಯೇ ಇರುತ್ತಾರೆ.
ವಾಣಿಯಿಂದ ದೂರ ಹೋಗಲು ತಂದೆಯನ್ನು ಪೂರ್ಣ ನೆನಪು ಮಾಡಿ ಪವಿತ್ರರಾಗಬೇಕಾಗಿದೆ. ಪವಿತ್ರರಾಗುವ
ವಿಧಿಯಂತೂ ಒಂದೇ ಆಗಿದೆ. ಹಿಂತಿರುಗಿ ಹೋಗಬೇಕೆಂದರೆ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.
ಹೋಗುವುದಂತೂ ಎಲ್ಲರೂ ಹೋಗಬೇಕಾಗಿದೆ. ಇಬ್ಬರು, ಮೂರು ಜನರಂತೂ ಹೋಗುವಂತಿಲ್ಲ. ಇಡೀ ಪತಿತ ಪ್ರಪಂಚವೇ
ಪರಿವರ್ತನೆಯಾಗಬೇಕಾಗಿದೆ. ಈ ನಾಟಕದ ಬಗ್ಗೆ ಯಾರಿಗೂ ತಿಳಿದಿಲ್ಲ - ಸತ್ಯಯುಗದಿಂದ ಕಲಿಯುಗದವರೆಗೆ
ಇದು ನಾಟಕದ ಚಕ್ರವಾಗಿದೆ. ಆದ್ದರಿಂದ ತಂದೆಯೇ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು
ತಂದೆಯನ್ನು ನೆನಪು ಮಾಡಬೇಕು, ಅವಶ್ಯವಾಗಿ ಪಾವನರೂ ಆಗಬೇಕಾಗಿದೆ. ಆಗಲೇ ನೀವು ಶಾಂತಿಧಾಮ ಹಾಗೂ
ಸುಖಧಾಮದಲ್ಲಿ ಹೋಗಲು ಸಾಧ್ಯ. ಗತಿ-ಸದ್ಗತಿದಾತ ಒಬ್ಬರೇ ಆಗಿದ್ದಾರೆಂದು ಗಾಯನವೂ ಇದೆ.
ಸತ್ಯಯುಗದಲ್ಲಿ ಕೆಲವರೇ ಇರುತ್ತಾರೆ ಮತ್ತು ಪವಿತ್ರರಾಗಿರುತ್ತಾರೆ. ಕಲಿಯುಗದಲ್ಲಿ ಅನೇಕ
ಧರ್ಮಗಳಿವೆ ಮತ್ತು ಅಪವಿತ್ರರಾಗಿ ಬಿಡುತ್ತಾರೆ. ಇದಂತೂ ಸಹಜ ಮಾತಾಗಿದೆ ಮತ್ತು ತಂದೆಯು ಮೊದಲೇ
ತಿಳಿಸಿರುತ್ತಾರೆ. ತಂದೆಗಂತೂ ಗೊತ್ತಿದೆ - ಅವಶ್ಯವಾಗಿ ಅನುಮತಿ ಪತ್ರವನ್ನು ತೆಗೆದುಕೊಂಡು ಬನ್ನಿ
ಎಂದು ಯುಕ್ತಿಗಳನ್ನು ಏಕೆ ರಚಿಸುತ್ತಿದ್ದರು? ಈ ಜಗಳಗಳಾಗುವುದೂ ಸಹ ನಾಟಕದಲ್ಲಿ ನಿಗಧಿಯಾಗಿದೆ
ಎಂದು ತಂದೆಗೆ ಗೊತ್ತಿದೆ. ಆಶ್ಚರ್ಯವಾಗಿ ಬಹಳ ಚೆನ್ನಾಗಿ ತಿಳಿದುಕೊಂಡು ಜ್ಞಾನವನ್ನೂ
ತೆಗೆದುಕೊಳ್ಳುತ್ತಾರೆ ಮತ್ತು ಅನ್ಯರಿಗೂ ಕೊಡುತ್ತಾರೆ ಆದ ನಂತರವೂ ಸಹ ಅಹೋ ಮಾಯೆ! ಅಂತಹವರನ್ನೂ
ನಿನ್ನ ಕಡೆಗೆ ಸೆಳೆಯುತ್ತೀಯಾ! ಇದೆಲ್ಲವೂ ನಾಟಕದಲ್ಲಿ ನಿಗಧಿತವಾಗಿದೆ. ಈ ಪೂರ್ವ ನಿಶ್ಚಿತವನ್ನು
ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮನುಷ್ಯರು ಕೇವಲ ಹೇಳುತ್ತಾರಷ್ಟೇ ಅರ್ಥವನ್ನಂತೂ
ತಿಳಿದುಕೊಂಡಿಲ್ಲ. ಮಕ್ಕಳೇ, ಇದು ಬಹಳ ಉನ್ನತವಾದ ವಿದ್ಯೆಯಾಗಿದೆ. ಕಣ್ಣುಗಳು ಇಷ್ಟೂ
ಮೋಸಗಾರನಾಗಿದೆ, ಕೇಳಲೇಬೇಡಿ. ತಮೋಪ್ರಧಾನ ಪ್ರಪಂಚವಾಗಿದೆ, ಕಾಲೇಜುಗಳಲ್ಲಿಯೂ ಬಹಳ ಹಾಳಾಗಿ
ಬಿಡುತ್ತಾರೆ, ವಿದೇಶದ್ದಂತೂ ಕೇಳಲೇಬೇಡಿ. ಸತ್ಯಯುಗದಲ್ಲಂತೂ ಇಂತಹ ಮಾತುಗಳಿರುವುದಿಲ್ಲ.
ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳಾಯಿತೆಂದು ಮನುಷ್ಯರು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ
- ನಾನು ನಿಮಗೆ ನೆನ್ನೆ ತಾನೆ ರಾಜ್ಯಭಾಗ್ಯವನ್ನು ಕೊಟ್ಟು ಹೋಗಿದ್ದೆನು, ಎಲ್ಲವನ್ನೂ
ಕಳೆದುಕೊಂಡಿರಿ. ಲೌಕಿಕದಲ್ಲಿಯೂ ಸಹ ತಂದೆಯು ಹೇಳುತ್ತಾರೆ - ನಿಮಗೆ ಇಷ್ಟೊಂದು ಸಂಪತ್ತನ್ನು
ಕೊಟ್ಟಿದ್ದೆನು ಎಲ್ಲವನ್ನೂ ಕಳೆದುಕೊಂಡಿರಿ. ಇತ್ತೀಚೆಗಂತೂ ಅಂತಹ ಮಕ್ಕಳೂ ಸಹ ಇರುತ್ತಾರೆ, ಒಂದೇ
ಏಟಿಗೆ ಸಂಪತ್ತೆಲ್ಲವನ್ನೂ ಹಾರಿಸಿ ಬಿಡುತ್ತಾರೆ. ಇಲ್ಲಿ ಬೇಹದ್ದಿನ ತಂದೆಯು ತಿಳಿಸುತ್ತಾರೆ-
ಮಕ್ಕಳೇ, ನಾನು ನಿಮಗೆ ಎಷ್ಟೊಂದು ಧನವನ್ನು ಕೊಟ್ಟು ಹೋದೆನು. ನಿಮ್ಮನ್ನು ಎಷ್ಟೊಂದು
ಯೋಗ್ಯರನ್ನಾಗಿ ಮಾಡಿದೆನು ಆದರೆ ಈಗ ನಾಟಕದನುಸಾರ ನಿಮ್ಮ ಸ್ಥಿತಿಯು ಏನಾಗಿ ಬಿಟ್ಟಿದೆ. ನೀವು ಅದೇ
ನನ್ನ ಮಕ್ಕಳಾಗಿದ್ದೀರಲ್ಲವೆ. ನೀವು ಎಷ್ಟು ಧನವಂತರಾಗಿದ್ದೀರಿ. ಇದು ಬೇಹದ್ದಿನ ಮಾತಾಗಿದೆ,
ಇದನ್ನು ನೀವು ತಿಳಿಸುತ್ತೀರಿ. ಒಂದು ಕಥೆಯೂ ಇದೆ- ಹುಲಿ ಬಂದಿತು, ಹುಲಿ ಬಂದಿತು ಎಂದು ಪ್ರತೀ
ದಿನವೂ ಹೇಳುತ್ತಿದ್ದರು. ಹುಲಿಯೂ ಬರಲೇ ಇಲ್ಲ. ಒಂದು ದಿನ ಹುಲಿಯು ಬಂದೇ ಬಿಟ್ಟಿತು ಹಾಗೆಯೇ
ಮೃತ್ಯುವೂ ಬಂದಿತೆಂದರೆ ಬಂದಿತು ಎಂದು ಹೇಳುತ್ತೀರಿ, ಅದಕ್ಕೆ ಮನುಷ್ಯರು ಇವರು ಪ್ರತಿನಿತ್ಯವೂ
ವಿನಾಶವಾಗುತ್ತದೆ ಎಂದು ಹೇಳುತ್ತಾರೆ ಆದರೆ ಆಗುವುದೇ ಇಲ್ಲ ಎನ್ನುತ್ತಾರೆ. ಈಗ ನಿಮಗೆ ಗೊತ್ತಿದೆ,
ಒಂದು ದಿನ ವಿನಾಶವಂತೂ ಆಗಲಿದೆ ಇದನ್ನು ಅವರು ಕಥೆಯನ್ನಾಗಿ ಮಾಡಿ ಬಿಟ್ಟಿದ್ದಾರೆ. ಅವರದೇನೂ
ದೋಷವಿಲ್ಲ ಕಲ್ಪದ ಹಿಂದೆಯೂ ಆಗಿತ್ತು, ಇದು 5000 ವರ್ಷಗಳ ಮಾತಾಗಿದೆ ಎಂದು ತಂದೆಯು ತಿಳಿಸುತ್ತಾರೆ
ಮತ್ತು ಅನೇಕ ಬಾರಿ ತಿಳಿಸಿದ್ದಾರೆ- ಮಕ್ಕಳೇ, ನೀವು ಇದನ್ನೂ ಬರೆಯುತ್ತೀರಿ 5000 ವಷಗಳ ಹಿಂದೆ
ಚಾಚೂ ತಪ್ಪದೆ ಕಲ್ಪದ ಹಿಂದೆಯೂ ಸಹ ಭಾರತದಲ್ಲಿ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಲು ಇಂತಹ
ಸಂಗ್ರಹಾಲಯವನ್ನು ತೆರೆದಿದ್ದೆವು. ಇದನ್ನು ಸ್ಪಷ್ಟವಾಗಿ ಬರೆಯಿರಿ ಆಗ ಅನ್ಯರು ಬಂದು
ತಿಳಿದುಕೊಳ್ಳಲಿ. ತಂದೆಯು ಬಂದಿದ್ದಾರೆ, ತಂದೆಯ ಆಸ್ತಿಯು ಸ್ವರ್ಗದ ರಾಜ್ಯಭಾಗ್ಯವಾಗಿದೆ. ಭಾರತವು
ಸ್ವರ್ಗವಾಗಿತ್ತು, ಮೊದಲು ಹೊಸ ಪ್ರಪಂಚದಲ್ಲಿ ಹೊಸ ಭಾರತ, ಸ್ವರ್ಗವಾಗಿತ್ತು. ಸ್ವರ್ಗದಿಂದ ನರಕ,
ಇದು ಬಹಳ ದೊಡ್ಡ ಬೇಹದ್ದಿನ ನಾಟಕವಾಗಿದೆ, ಇದರಲ್ಲಿ ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ. 84
ಜನ್ಮಗಳ ಪಾತ್ರವನ್ನಭಿನಯಿಸಿ ಮತ್ತೆ ನಾವು ಹಿಂತಿರುಗಿ ಹೋಗುತ್ತೇವೆ. ಮೊದಲು ನಾವು
ಮಾಲೀಕರಾಗಿದ್ದೆವು ನಂತರ ಕಂಗಾಲರಾದೆವು ಈಗ ಮತ್ತೆ ತಂದೆಯ ಮತದಂತೆ ನಡೆದು ಮಾಲೀಕರಾಗುತ್ತೇವೆ.
ನಿಮಗೂ ಗೊತ್ತಿದೆ, ನಾವು ಶ್ರೀಮತದಂತೆ ನಡೆದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ ಅವಶ್ಯ
ಪಾವನರಾಗಬೇಕಿದೆ, ಪಾವನರಾಗುವ ಕಾರಣವೇ ಅತ್ಯಾಚಾರವಾಗುತ್ತದೆ ಹೀಗೆ ಮಕ್ಕಳಿಗೆ ತಂದೆಯು ಬಹಳಷ್ಟು
ತಿಳಿಸುತ್ತಾರೆ ಆದರೆ ಹೊರಗಡೆ ಹೋದಾಗ ಮತ್ತೆ ಬುದ್ಧಿಹೀನರಾಗಿ ಬಿಡುತ್ತಾರೆ. ಆಶ್ಚರ್ಯವಾಗಿ
ಕೇಳುತ್ತಾರೆ, ನಡೆಯುತ್ತಾರೆ, ಅನ್ಯರಿಗೂ ಜ್ಞಾನ ನೀಡುತ್ತಾರೆ. ಅಹೋ ಮಾಯೆಗೆ ವಶರಾಗಿ ಹೇಗಿದ್ದರೋ
ಹಾಗೆಯೇ ಆಗಿ ಬಿಡುತ್ತಾರೆ, ಕೆಲವರು ಅದಕ್ಕಿಂತಲೂ ಹಾಳಾಗಿ ಬಿಡುತ್ತಾರೆ. ಕಾಮ ವಿಕಾರದಲ್ಲಿ
ಸಿಲುಕಿಕೊಂಡರೆಂದರೆ ಬಿದ್ದರೆಂದು ಅರ್ಥವಾಗಿದೆ. ಶಿವ ತಂದೆಯು ಈ ಭಾರತವನ್ನು ಶಿವಾಲಯವನ್ನಾಗಿ
ಮಾಡುತ್ತಾರೆ ಅಂದಮೇಲೆ ಮಕ್ಕಳೂ ಸಹ ಪುರುಷಾರ್ಥ ಮಾಡಬೇಕು. ಈ ಬೇಹದ್ದಿನ ತಂದೆಯು ಬಹಳ ಮಧುರ
ತಂದೆಯಾಗಿದ್ದಾರೆ. ಒಂದು ವೇಳೆ ಇದು ಎಲ್ಲರಿಗೂ ಗೊತ್ತಾಗಿ ಬಿಟ್ಟರೆ ಅನೇಕರು ಬಂದು ಬಿಡುತ್ತಾರೆ
ಆಗ ವಿದ್ಯೆಯು ಮುಂದುವರೆಯುವುದಿಲ್ಲ, ವಿದ್ಯಾಭ್ಯಾಸದಲ್ಲಂತೂ ಏಕಾಂತವಿರಬೇಕು. ಮುಂಜಾನೆಯ ಸಮಯದಲ್ಲಿ
ಎಷ್ಟೊಂದು ಶಾಂತಿಯಿರುತ್ತದೆ, ನಾವು ನಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು
ಮಾಡುತ್ತೇವೆ. ನೆನಪಿಲ್ಲದೆ ವಿಕರ್ಮಗಳು ಹೇಗೆ ವಿನಾಶವಾಗುತ್ತದೆ? ಇದೇ ಚಿಂತೆಯಿರುತ್ತದೆ - ಈಗ
ಪತಿತ, ಕಂಗಾಲರಾಗಿ ಬಿಟ್ಟಿದ್ದೇವೆ, ಈಗ ಮತ್ತೆ ಪಾವನ, ಕಿರೀಟಧಾರಿಗಳು ಹೇಗಾಗುವುದು! ತಂದೆಯಂತೂ
ಬಹಳ ಸಹಜ ಮಾತುಗಳನ್ನು ತಿಳಿಸುತ್ತಾರೆ, ಏರುಪೇರುಗಳಂತೂ ಆಗುತ್ತಿರುತ್ತವೆ, ಇದರಲ್ಲಿ ಭಯ ಪಡುವ
ಮಾತಿಲ್ಲ. ತಂದೆಯಂತೂ ಬಹಳ ಸಾಧಾರಣವಾಗಿದ್ದಾರೆ. ಉಡುಪು ಮೊದಲಾದವುಗಳೆಲ್ಲವೂ ಅದು ಮೊದಲಿನದೆ, ಏನೂ
ಸಹ ಅಂತರವಿಲ್ಲ. ಸನ್ಯಾಸಿಗಳಾದರೂ, ಮನೆ-ಮಠವನ್ನು ಬಿಟ್ಟು ಕಾವೀ ಬಟ್ಟೆಯನ್ನು ಧರಿಸುತ್ತಾರೆ ಆದರೆ
ಇವರದಂತೂ (ಬ್ರಹ್ಮಾ) ಅದೇ ವೇಷ ಭೂಷಣವಾಗಿದೆ. ಕೇವಲ ತಂದೆಯು ಪ್ರವೇಶ ಮಾಡಿದರು ಮತ್ತೇನೂ
ವ್ಯತ್ಯಾಸವಿಲ್ಲ. ಹೇಗೆ ತಂದೆಯು ಮಕ್ಕಳನ್ನು ಪ್ರೀತಿಯಿಂದ ಸಂಭಾಲನೆ ಮಾಡುತ್ತಾರೆ, ಪಾಲನೆ-ಪೋಷಣೆ
ಮಾಡುತ್ತಾರೆಯೋ ಹಾಗೆಯೇ ಇವರೂ ಮಾಡುತ್ತಾರೆ. ಯಾವುದೇ ಅಹಂಕಾರದ ಮಾತಿಲ್ಲ. ಬಹಳ ಸಾಧಾರಣ ರೀತಿಯಿಂದ
ನಡೆಯುತ್ತಾರೆ ಬಾಕಿ ಇರುವುದಕ್ಕಾಗಿ ಮನೆಯನ್ನು ಕಟ್ಟಿಸಬೇಕಾಗುತ್ತದೆ. ಅದು ಸಾಧಾರಣ! ನಿಮಗಂತೂ
ಬೇಹದ್ದಿನ ತಂದೆಯು ಓದಿಸುತ್ತಾರೆ, ತಂದೆಯಂತೂ ಅಯಸ್ಕಾಂತವಾಗಿದ್ದಾರೆ ಅಂದಾಗ ಅವರು ಕಡಿಮೆಯೇನು!
ಮಕ್ಕಳು ಪವಿತ್ರರಾಗುತ್ತಾ ಬಂದರೆ (ಕನ್ಯೆಯರು) ಬಹಳ ಸುಖ ಸಿಗುತ್ತದೆ. ಮನುಷ್ಯರಂತೂ ಇವರಲ್ಲಿ
ಯಾವುದೋ ಶಕ್ತಿಯಿದೆಯೆಂದು ಹೇಳುತ್ತಾರೆ ಆದರೆ ಯಾವುದಕ್ಕೆ ಶಕ್ತಿಯೆಂದು ಹೇಳಲಾಗುತ್ತದೆ ಎಂಬುದನ್ನು
ತಿಳಿದುಕೊಂಡಿಲ್ಲ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ, ಅವರು ಎಲ್ಲರನ್ನೂ ಹೀಗೆ ಮಾಡುತ್ತಾರೆ
ಆದರೆ ಎಲ್ಲರೂ ಒಂದೇ ರೀತಿಯಾಗಲು ಸಾಧ್ಯವಿಲ್ಲ. ಹಾಗೆ ಎಲ್ಲರೂ ಒಂದೇ ರೀತಿಯಾಗಿ ಆಗುವಂತಿದ್ದರೆ
ಎಲ್ಲರ ಮುಖ ಲಕ್ಷಣಗಳೂ ಸಹ ಒಂದೇ ರೀತಿಯಾಗಿರುತ್ತಿತ್ತು, ಪದವಿಯೂ ಒಂದೇ ರೀತಿಯಾಗಿ ಬಿಡುತ್ತದೆ
ಆದರೆ ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. 84 ಜನ್ಮಗಳಲ್ಲಿ ನಿಮಗೆ ಅದೇ 84 ಮುಖ ಲಕ್ಷಣಗಳು
ಸಿಗುತ್ತವೆ. ನಿಮಗೆ ಯಾವುದು ಕಲ್ಪದ ಹಿಂದೆ ಸಿಕ್ಕಿತ್ತೋ ಅದೇ 84 ಮುಖ ಲಕ್ಷಣಗಳು ಸಿಗುತ್ತವೆ. ಅದೇ
ಸಿಗುತ್ತಿರುತ್ತವೆ ಇದರಲ್ಲಿ ಸ್ವಲ್ಪವೂ ಅಂತರವಾಗುವುದಿಲ್ಲ. ಇವು ಎಷ್ಟೊಂದು ತಿಳಿದುಕೊಳ್ಳುವ
ಮಾತುಗಳು ಮತ್ತು ಧಾರಣೆ ಮಾಡುವ ಮಾತುಗಳಾಗಿವೆ. ವಿನಾಶವಂತೂ ಅವಶ್ಯವಾಗಿ ಆಗಬೇಕಾಗಿದೆ. ಈಗಂತೂ
ವಿಶ್ವದಲ್ಲಿ ಸಂಪೂರ್ಣ ಶಾಂತಿಯಿರಲು ಸಾಧ್ಯವಿಲ್ಲ, ಪರಸ್ಪರ ಹೊಡೆದಾಡುತ್ತಿರುತ್ತಾರೆ. ಮೃತ್ಯುವು
ತಲೆಯ ಮೇಲೆ ನಿಂತಿದೆ. ನಾಟಕದನುಸಾರ ಒಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ, ಅನ್ಯ
ಧರ್ಮಗಳ ವಿನಾಶವಾಗಲಿದೆ. ಅಣು ಬಾಂಬುಗಳನ್ನು ತಯಾರಿಸುತ್ತಿರುತ್ತಾರೆ, ಪ್ರಾಕೃತಿಕ ವಿಕೋಪಗಳೂ
ಆಗುತ್ತವೆ. ದೊಡ್ಡ-ದೊಡ್ಡ ಕಲ್ಲುಗಳು ಬೀಳುತ್ತವೆ ಅದರಿಂದ ಎಲ್ಲಾ ಮನೆಗಳು ಬಿದ್ದು ಹೋಗುತ್ತವೆ.
ಮನೆಯನ್ನು ಎಷ್ಟೇ ಶಕ್ತಿಶಾಲಿಯಾಗಿ ಕಟ್ಟಿಸಲಿ, ಶಕ್ತಿಶಾಲಿ ಬುನಾದಿಯನ್ನು ಹಾಕಿಸಲಿ ಆದರೆ ಏನೂ
ಉಳಿಯುವುದಿಲ್ಲ. ಭೂಕಂಪವಾದರೂ ಸಹ ಇವು ಬೀಳುವುದಿಲ್ಲವೆಂದು ಅವರು ತಿಳಿಯುತ್ತಾರೆ ಆದರೆ ಎಷ್ಟಾದರೂ
ಮಾಡಿ, 100 ಅಂತಸ್ತುಗಳನ್ನಾದರೂ ಕಟ್ಟಿಸಿ ಆದರೆ ವಿನಾಶವಂತೂ ಆಗುತ್ತದೆ ಏನೂ ಉಳಿಯುವುದಿಲ್ಲ. ತಾವು
ಮಕ್ಕಳು ಸ್ವರ್ಗದ ಆಸ್ತಿಯನ್ನು ಪಡೆಯಲು ಇಲ್ಲಿಗೆ ಬಂದಿದ್ದೀರಿ, ವಿದೇಶದಲ್ಲಿ ನೋಡಿ ಏನಾಗಿ
ಬಿಟ್ಟಿದೆ! ಇದಕ್ಕೆ ರಾವಣನ ಆಡಂಬರವೆಂದು ಹೇಳಲಾಗುತ್ತದೆ. ನಾನು ಕಡಿಮೆಯೇನಿಲ್ಲ ಎಂದು ಮಾಯೆಯು
ಹೇಳುತ್ತದೆ. ಅಲ್ಲಂತೂ ನಿಮ್ಮ ವಜ್ರ-ವೈಡೂರ್ಯಗಳ ಮಹಲುಗಳಿರುತ್ತವೆ. ಎಲ್ಲಾ ವಸ್ತುಗಳು ಚಿನ್ನದಿಂದ
ಮಾಡಲ್ಪಟ್ಟಿರುತ್ತದೆ. ಅಲ್ಲಿ ಎರಡನೇ-ಮೂರನೇ ಅಂತಸ್ತು ಮಹಡಿಯನ್ನು ಕಟ್ಟಿಸುವ
ಅವಶ್ಯಕತೆಯಿರುವುದಿಲ್ಲ. ಜಮೀನಿಗಾಗಿಯೂ ಖರ್ಚು ಮಾಡಬೇಕಾಗಿರುವುದಿಲ್ಲ ಎಲ್ಲವೂ
ಯಥೇಚ್ಛವಾಗಿರುತ್ತದೆ ಅಂದಮೇಲೆ ಮಕ್ಕಳು ಬಹಳ ಪುರುಷಾರ್ಥ ಮಾಡಬೇಕು, ಎಲ್ಲರಿಗೆ ಸಂದೇಶ
ಕೊಡಬೇಕಾಗಿದೆ. ಒಳ್ಳೊಳ್ಳೆಯ ಮಾರ್ಗದರ್ಶಕರಾಗಿ ಮಕ್ಕಳು ರಿಫ್ರೆಷ್ ಆಗಲು ಬರುತ್ತಾರೆ. ಇದೂ ಸಹ
ನಾಟಕದಲ್ಲಿ ನಿಗಧಿಯಾಗಿದೆ. ಕಲ್ಪದ ನಂತರವೂ ಬರುತ್ತಾರೆ, ಇಷ್ಟೊಂದು ಮಕ್ಕಳು ಬಂದಿದ್ದಾರೆ ಆದರೆ
ಇವರೆಲ್ಲರನ್ನೂ ಮತ್ತೆ ನೋಡುತ್ತೇನೆಯೋ ಇಲ್ಲವೋ ಗೊತ್ತಿಲ್ಲ, ಇವರೆಲ್ಲರೂ ಮಕ್ಕಳಾಗಿಯೇ
ಉಳಿಯುತ್ತಾರೆಯೇ ಅಥವಾ ಇಲ್ಲವೋ? ಬರುವುದಂತೂ ಅನೇಕರು ಬಂದರು ಆದರೆ ಆಶ್ಚರ್ಯವಾಗುವಂತೆ ಓಡಿ ಹೋದರು.
ಬಾಬಾ, ನಾವು ಬಿದ್ದು ಹೋದೆವು ಎಂದು ಬರೆಯುತ್ತಾರೆ. ಅರೆ! ರೂಪಿಸಿಕೊಂಡಿರುವ ಸಂಪಾದನೆಯನ್ನು ಹಾಳು
ಮಾಡಿದಿರಿ! ಮತ್ತೆ ಇಷ್ಟೂ ಮೇಲೇರಲು ಸಾಧ್ಯವಿಲ್ಲ. ಇದು ದೊಡ್ಡದಕ್ಕಿಂತ ದೊಡ್ಡ ಉಲ್ಲಂಘನೆಯಾಗಿದೆ.
ಹೇಗೆ ಅವರೂ ಸಹ ಆದೇಶವನ್ನು ಹೊರಡಿಸುತ್ತಾರೆ - ಇಂತಹ ಸಮಯದಲ್ಲಿ ಯಾರೂ ಹೊರಗಡೆ ಹೋಗಬೇಡಿ,
ಇಲ್ಲವಾದಲ್ಲಿ ಗುಂಡನ್ನು ಹಾರಿಸುತ್ತೇವೆ. ಹಾಗೆಯೇ ತಂದೆಯು ಹೇಳುತ್ತಾರೆ - ಹಾಗೆಯೇ ವಿಕಾರದಲ್ಲಿ
ಹೋಗುತ್ತೀರೆಂದರೆ ಬಿದ್ದು ಹೋಗುತ್ತೀರಿ. ಎಚ್ಚರದಿಂದಿರಿ ಎನ್ನುವುದು ಭಗವಂತನ ಆಜ್ಞೆಯಿದೆಯಲ್ಲವೆ.
ಇತ್ತೀಚೆಗಂತೂ ವಿಷ ಅನಿಲದ ಇಂತಹ ಪದಾರ್ಥಗಳು ಹೊರಬಂದಿವೆ ಅದರಿಂದ ಮನುಷ್ಯರು
ಕುಳಿತು-ಕುಳಿತಿದ್ದಂತೆಯೇ ಸಮಾಪ್ತಿಯಾಗಿ ಬಿಡುತ್ತಾರೆ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ
ಏಕೆಂದರೆ ಅಂತಿಮದಲ್ಲಿ ಆಸ್ಪತ್ರೆ ಮೊದಲಾದವುಗಳು ಇರುವುದೇ ಇಲ್ಲ. ಆತ್ಮವು ಬೇಗನೆ ಒಂದು ಶರೀರವನ್ನು
ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ದುಃಖ, ಕ್ಲೇಶ ಮೊದಲಾದುದೆಲ್ಲವೂ ದೂರವಾಗುತ್ತದೆ.
ಅಲ್ಲಿ ಕ್ಲೇಶವಿರುವುದೇ ಇಲ್ಲ ಆತ್ಮವು ಸ್ವತಂತ್ರವಾಗಿರುತ್ತದೆ. ಯಾವ ಸಮಯದಲ್ಲಿ ಆಯಸ್ಸು
ಪೂರ್ಣವಾಗುತ್ತದೆ ಆಗ ಶರೀರವನ್ನು ಬಿಟ್ಟು ಬಿಡುತ್ತದೆ. ಅಲ್ಲಿ ಮೃತ್ಯು ಎಂಬ ಶಬ್ಧವಿರುವುದಿಲ್ಲ,
ರಾವಣನೇ ಇಲ್ಲವೆಂದರೆ ಮೃತ್ಯುವೆಲ್ಲಿಂದ ಬರುತ್ತದೆ? ಈ ಮೃತ್ಯು ರಾವಣನ ದೂತನಾಗಿದೆ, ಭಗವಂತನ
ದೂತನಲ್ಲ. ಭಗವಂತನ ಮಕ್ಕಳಂತೂ ಬಹಳ ಪ್ರಿಯರಾಗಿದ್ದೀರಿ. ತಂದೆಯು ಎಂದೂ ಸಹ ಮಕ್ಕಳ ದುಃಖವನ್ನು ಸಹನೆ
ಮಾಡಲು ಸಾಧ್ಯವಿಲ್ಲ. ನಾಟಕದನುಸಾರ ಕಲ್ಪದ ಮುಕ್ಕಾಲು ಭಾಗ ನೀವು ಸುಖವನ್ನು ಪಡೆಯುತ್ತೀರಿ. ತಂದೆಯು
ಇಷ್ಟೊಂದು ಸುಖವನ್ನು ಕೊಡುತ್ತಾರೆಂದರೆ ಅವರ ಶ್ರೀಮತದಂತೆ ನಡೆಯಬೇಕಾಗಿದೆ ಅಲ್ಲವೆ. ಇದು ನಿಮ್ಮ
ಅಂತಿಮ ಜನ್ಮವಾಗಿದೆ ಆದ್ದರಿಂದ ನೀವು ಗೃಹಸ್ಥ ವ್ಯವಹಾರದಲಿದ್ದು ಈ ಅಂತಿಮ ಜನ್ಮದಲ್ಲಿ
ಪವಿತ್ರರಾಗಬೇಕೆಂದು ತಂದೆಯು ತಿಳಿಸುತ್ತಾರೆ. ತಂದೆಯ ನೆನಪಿನಿಂದಲೇ ವಿಕರ್ಮವು ವಿನಾಶವಾಗುತ್ತದೆ,
ಜನ್ಮ-ಜನ್ಮಾಂತರದ ಪಾಪವು ತಲೆಯ ಮೇಲಿದೆ. ತಮೋಪ್ರಧಾನರಿಂದ ಅವಶ್ಯವಾಗಿ ಸತೋಪ್ರಧಾನವಾಗಬೇಕಾಗಿದೆ.
ತಂದೆಯು ಸರ್ವಶಕ್ತಿವಂತ, ಅಥಾರಿಟಿಯಾಗಿದ್ದಾರೆ. ಯಾರೆಲ್ಲಾ ಶಾಸ್ತ್ರ ಮೊದಲಾದವುಗಳನ್ನು
ಓದುತ್ತಾರೆಯೋ ಅವರನ್ನು ಅಥಾರಿಟಿ ಎಂದು ಹೇಳುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಎಲ್ಲರ
ಅಥಾರಿಟಿ ನಾನಾಗಿದ್ದೇನೆ, ನಾನು ಈ ಬ್ರಹ್ಮಾರವರ ಮೂಲಕ ಎಲ್ಲಾ ಶಾಸ್ತ್ರಗಳನ್ನು ತಿಳಿಸುತ್ತೇನೆ.
ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿದ್ದೇ ಆದರೆ ಪಾಪಗಳು ವಿನಾಶವಾಗುತ್ತವೆ ಬಾಕಿ
ನೀರಿನಲ್ಲಿ ಸ್ನಾನ ಮಾಡುವುದರಿಂದ ಹೇಗೆ ಪಾವನರಾಗುತ್ತೀರಿ? ಎಲ್ಲಾದರೂ ಸ್ವಲ್ಪ ನೀರಿದ್ದರೂ ಸಹ
ಅದನ್ನೂ ತೀರ್ಥವೆಂದು ತಿಳಿದು ಅದರಲ್ಲಿ ಸ್ನಾನ ಮಾಡಿ ಬಿಡುತ್ತಾರೆ. ಇದಕ್ಕೆ ತಮೋಪ್ರಧಾನ
ನಿಶ್ಚಯವೆಂದು ಹೇಳಲಾಗುತ್ತದೆ. ನಿಮ್ಮದು ಸತೋಪ್ರಧಾನ ನಿಶ್ಚಯವಾಗಿದೆ. ತಂದೆಯು ತಿಳಿಸುತ್ತಾರೆ -
ಇದರಲ್ಲಿ ಹೆದರುವ ಮಾತಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಭಗವಂತನು
ಪವಿತ್ರರಾಗುವ ಯಾವ ಆಜ್ಞೆಯನ್ನು ನೀಡಿದ್ದಾರೆಯೋ ಅದನ್ನು ಎಂದೂ ಉಲ್ಲಂಘಿಸಬಾರದು, ಬಹಳ -ಬಹಳ
ಎಚ್ಚರದಿಂದಿರಬೇಕು. ಬಾಪ್-ದಾದಾ ಇಬ್ಬರ ಪಾಲನೆಯ ಮರುಪಾವತಿಗಾಗಿ ಪವಿತ್ರರಾಗಿ ತೋರಿಸಬೇಕಾಗಿದೆ.
2. ನಾಟಕದ ಪೂರ್ವ ನಿಶ್ಚಿತವು ಅಟಲವಾಗಿ ಮಾಡಲ್ಪಟ್ಟಿದೆ ಅದನ್ನರಿತು ಸದಾ ನಿಶ್ಚಿಂತರಾಗಿರಬೇಕು,
ವಿನಾಶಕ್ಕೆ ಮುಂಚೆ ಎಲ್ಲರಿಗೆ ತಂದೆಯ ಸಂದೇಶವನ್ನು ಕೊಡಬೇಕಾಗಿದೆ.
ವರದಾನ:
ಬಾಬಾ ಎನ್ನುವ
ಒಂದು ಶಬ್ಧದ ಸ್ಮೃತಿಯಿಂದ ನೆನಪು ಮತ್ತು ಸೇವೆಯಲ್ಲಿರುವಂತಹ ಸತ್ಯ ಯೋಗಿ, ಸತ್ಯ ಸೇವಾಧಾರಿ ಭವ.
ತಾವು ಮಕ್ಕಳು ಮುಖದಿಂದ
ಅಥವಾ ಮನಸ್ಸಿನಿಂದ ಪದೇ-ಪದೇ ಬಾಬಾ ಎನ್ನುವ ಶಬ್ಧ ಹೇಳುವಿರಿ, ಮಕ್ಕಳಾದ ಮೇಲೆ ಬಾಬಾ ಶಬ್ಧ ನೆನಪಿಗೆ
ಬರುವುದು ಅಥವಾ ಯೋಚಿಸುವುದೇ ಯೋಗವಾಗಿದೆ ಮತ್ತು ಮುಖದಿಂದ ಪದೇ-ಪದೇ ಹೇಳಬೇಕು ಬಾಬಾ ಈ ರೀತಿ
ಹೇಳುತ್ತಾರೆ, ಬಾಬಾ ಇದನ್ನು ಹೇಳಿದರು - ಇದೇ ಸೇವೆಯಾಗಿದೆ. ಆದರೆ ಈ ಬಾಬಾ ಶಬ್ದವನ್ನು ಕೆಲವರು
ಹೃದಯದಿಂದ ಹೇಳುವವರಿದ್ದಾರೆ ಕೆಲವರು ಜ್ಞಾನದ ಬುದ್ಧಿಯಿಂದ ಹೇಳುತ್ತಾರೆ. ಯಾರು ಹೃದಯದಿಂದ
ಹೇಳುತ್ತಾರೆ ಅವರಿಗೆ ಹೃದಯದಲ್ಲಿ ಸದಾ ಪ್ರತ್ಯಕ್ಷ ಪ್ರಾಪ್ತಿ ಖುಶಿ ಮತ್ತು ಶಕ್ತಿ ಸಿಗುವುದು.
ಬುದ್ಧಿಯಿಂದ ಹೇಳುವವರಿಗೆ ಹೇಳುವಷ್ಟು ಸಮಯ ಖುಷಿಯಾಗುವುದು ಸದಾಕಾಲಕ್ಕಾಗಿ ಅಲ್ಲ.
ಸ್ಲೋಗನ್:
ಪರಮಾತ್ಮ ರೂಪಿ
ಜ್ಯೋತಿಯ ಮೇಲೆ ಬಲಿಹಾರಿಯಾಗುವವರೇ ಸತ್ಯ ಪತಂಗಗಳಾಗಿದ್ದಾರೆ.