28.05.19 Morning Kannada Murli Om Shanti
BapDada Madhuban
“ಮಧುರಮಕ್ಕಳೇ-
ವಿಶ್ವದಸರ್ವಆತ್ಮಗಳುಬುದ್ಧಿಯಿಲ್ಲದವರು, ದುಃಖಿಗಳಾಗಿದ್ದಾರೆ, ನೀವುಅವರಮೇಲೆಉಪಕಾರಮಾಡಿ,
ತಂದೆಯಪರಿಚಯಕೊಟ್ಟುಖುಷಿಯಲ್ಲಿತನ್ನಿ, ಅವರಕಣ್ಣನ್ನುತೆರೆಯಿರಿ”
ಪ್ರಶ್ನೆ:
ಯಾವುದೇ
ಸೇವಾಕೇಂದ್ರದ ವೃದ್ಧಿಗೆ ಆಧಾರವೇನಾಗಿದೆ?
ಉತ್ತರ:
ನಿಸ್ವಾರ್ಥ,
ಸತ್ಯ ಹೃದಯದ ಸೇವೆ. ನಿಮಗೆ ಸೇವೆಯಲ್ಲಿ ಸದಾ ಆಸಕ್ತಿಯಿದ್ದರೆ ಹುಂಡಿ ತುಂಬುತ್ತಿರುತ್ತದೆ. ಎಲ್ಲಿ
ಸೇವೆಯಿರುತ್ತದೆಯೋ ಅಲ್ಲಿ ಪ್ರಬಂಧ ಮಾಡಬೇಕು, ಯಾರಿಂದಲೂ ಬೇಡಬಾರದು. ಬೇಡುವುದಕ್ಕಿಂತ ಸಾಯುವುದು
ಲೇಸು. ಎಲ್ಲವೂ ತಾನಾಗಿ ಬರುತ್ತದೆ, ನೀವು ಹೊರಗಿನ ಜಗತ್ತಿನವರಂತೆ ಚಂದಾ ಸೇರಿಸಬಾರದು.
ಬೇಡುವುದರಿಂದ ಸೇವಾಕೇಂದ್ರ ಸಂಪನ್ನವಾಗುವುದಿಲ್ಲ, ವೃದ್ಧಿಯಾಗುವುದಿಲ್ಲ. ಆದ್ದರಿಂದ ಬೇಡದೇ
ಸೇವಾಕೇಂದ್ರವನ್ನು ವೃದ್ಧಿ ಮಾಡಬೇಕು.
ಓಂ ಶಾಂತಿ.
ಆತ್ಮಿಕ ಮಕ್ಕಳು ಇಲ್ಲಿ ಕುಳಿತಿದ್ದೀರಿ ಹಾಗೂ ಬುದ್ಧಿಯಲ್ಲಿ ಈ ಜ್ಞಾನವಿದೆ. ನಾವು ಆರಂಭದಲ್ಲಿ
ಹೇಗೆ ಮೇಲಿಂದ ಬರುತ್ತೇವೆ, ವಿಷ್ಣುವಿನ ಅವತರಣೆಯ ಆಟವನ್ನು ತೋರಿಸುತ್ತಾರೆ. ವಿಮಾನದಲ್ಲಿ ಕುಳಿತು
ವಿಷ್ಣುವು ಮೇಲಿಂದ ಇಳಿಯುತ್ತಾನೆ. ನೀವು ಮಕ್ಕಳು ತಿಳಿದಿದ್ದೀರಿ- ಅವತಾರ ಮೊದಲಾದವುಗಳೆಲ್ಲವೂ
ತೋರಿಸುವುದು ತಪ್ಪಾಗಿದೆ, ಈಗ ನೀವು ತಿಳಿದುಕೊಂಡಿದ್ದೀರಿ- ನಾವಾತ್ಮರು ಮೂಲತಃ ಎಲ್ಲಿದ್ದವರು,
ಹೇಗೆ ಮೇಲಿಂದ ಮತ್ತೆ ಇಲ್ಲಿಗೆ ಬರುತ್ತೇವೆ, ಹೇಗೆ 84 ಜನ್ಮಗಳ ಪಾತ್ರವನ್ನಭಿನಯಿಸಿ
ಪತಿತರಾಗುತ್ತೇವೆ. ಈಗ ತಂದೆ ಮತ್ತೆ ಪವಿತ್ರ ಮಾಡುತ್ತಾರೆ. ವಿದ್ಯಾರ್ಥಿಗಳಾದ ನಿಮ್ಮ ಬುದ್ಧಿಯಲ್ಲಿ
ಅಗತ್ಯವಾಗಿ ಇದು ಇರಬೇಕು- ನಾವು 84 ಜನ್ಮಗಳಲ್ಲಿ ಹೇಗೆ ಸುತ್ತಾಡುತ್ತೇವೆ? ಇದು
ಸ್ಮೃತಿಯಲ್ಲಿರಬೇಕಾಗಿದೆ. ತಂದೆ ನೀವು ಹೇಗೆ 84 ಜನ್ಮಗಳನ್ನು ಪಡೆಯುತ್ತೀರೆಂದು ತಿಳಿಸುತ್ತಾರೆ.
ಕಲ್ಪದ ಆಯಸ್ಸನ್ನು ಬಹಳ ವಿಸ್ತಾರ ಮಾಡಿರುವ ಕಾರಣ ಈ ಸಹಜ ಮಾತನ್ನೂ ಮನುಷ್ಯರು
ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ಇದನ್ನು ಅಂಧಶ್ರದ್ಧೆಯಂದು ಕರೆಯಲಾಗುವುದು. ಉಳಿದ ಎಲ್ಲಾ
ಧರ್ಮಗಳು ಹೇಗೆ ಸ್ಥಾಪನೆಯಾಗುತ್ತದೆ ಎಂದು ನಿಮ್ಮ ಬುದ್ಧಿಯಲ್ಲಿದೆ. ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ, ಪಾತ್ರವನ್ನಭಿನಯಿಸುತ್ತಾ ಈಗ ಅಂತ್ಯದಲ್ಲಿ ಬಂದು
ತಲುಪಿದ್ದೇವೆಂದು ಈಗ ನೀವು ತಿಳಿದುಕೊಂಡಿದ್ದೀರಿ ಈಗ ಮತ್ತೆ ಹಿಂತಿರುಗಿ ಹೋಗುತ್ತೇವೆ. ಈ ಜ್ಞಾನವು
ನೀವು ಮಕ್ಕಳಿಗಾಗಿಯೇ ಇದೆ. ಪ್ರಪಂಚದಲ್ಲಿ ಯಾರೂ ಸಹ ಈ ಜ್ಞಾನವನ್ನು ತಿಳಿದುಕೊಂಡಿಲ್ಲ. 5000
ವರ್ಷಗಳ ಹಿಂದೆ ಸ್ವರ್ಗವಿತ್ತೆಂದು ಹೇಳುತ್ತಾರೆ, ಆದರೆ ಇದನ್ನು ಸ್ವಲ್ಪವೂ ತಿಳಿದುಕೊಂಡಿಲ್ಲ.
ಅವಶ್ಯವಾಗಿ ಆದಿ ಸನಾತನ ದೇವಿ-ದೇವತೆಗಳ ರಾಜ್ಯವಿತ್ತು ಆದರೆ ಇದನ್ನು ಸ್ವಲ್ಪವೂ ತಿಳಿದುಕೊಂಡಿಲ್ಲ.
ನಾವೂ ಸಹ ಮೊದಲು ತಿಳಿದುಕೊಂಡಿರಲಿಲ್ಲ ಎಂಬುದನ್ನು ನೀವೇ ತಿಳಿದುಕೊಂಡಿದ್ದೀರಿ. ಅನ್ಯ ಧರ್ಮದವರು
ತಮ್ಮ ಧರ್ಮ ಸ್ಥಾಪಕನನ್ನೇನು ತಿಳಿದುಕೊಂಡಿರುವುದಿಲ್ಲವೇನು! ಈಗ ತಿಳಿದಿರುವವರು ಹಾಗೂ ಜ್ಞಾನ
ಸಂಪನ್ನರಾಗಿದ್ದೀರಿ. ಪ್ರಪಂಚದಲ್ಲಿರುವವರೆಲ್ಲರೂ ತಿಳುವಳಿಕೆಯಿಲ್ಲದವರಾಗಿದ್ದಾರೆ. ನಾವು
ಎಷ್ಟೊಂದು ಬುದ್ಧಿವಂತರಾಗಿದ್ದೆವು ಈಗ ಮತ್ತೆ ಬುದ್ಧಿಯಿಲ್ಲದವರಾಗಿದ್ದೇವೆ. ಮತ್ತೆ ಈಗ
ತಿಳುವಳಿಕೆಯಿಲ್ಲದ ಅಪರಿಚಿತರಾಗಿದ್ದೇವೆ. ಮನುಷ್ಯರಾಗಿದ್ದು ಅಥವಾ ಪಾತ್ರಧಾರಿಗಳಾಗಿದ್ದು ನಾವು
ತಿಳಿದುಕೊಂಡಿರಲಿಲ್ಲ. ನೋಡಿ! ಜ್ಞಾನದ ಪ್ರಭಾವ ಹೇಗಿದೆ ಎಂಬುದನ್ನು ನೀವು ಮಾತ್ರ
ತಿಳಿದುಕೊಂಡಿದ್ದೀರಿ ಆದ್ದರಿಂದ ಮಕ್ಕಳ ಆಂತರ್ಯದಲ್ಲಿ ಎಷ್ಟೊಂದು ಗದ್ಗದಿತವಾಗಬೇಕು. ಧಾರಣೆಯಾದಾಗ
ಆಂತರ್ಯದಲ್ಲಿ ಖುಷಿಯಾಗುತ್ತದೆ, ನಾವು ಪ್ರಾರಂಭದಲ್ಲಿ ಹೇಗೆ ಬಂದು ಈಗ ಶೂದ್ರ ಕುಲದಿಂದ ಬ್ರಾಹ್ಮಣ
ಕುಲದಲ್ಲಿ ಪರಿವರ್ತನೆಯಾದೆವೆಂದು ನೀವು ತಿಳಿದುಕೊಂಡಿದ್ದೀರಿ. ಈ ಸೃಷ್ಟಿಚಕ್ರವು ಹೇಗೆ
ತಿರುಗುತ್ತದೆ ಎಂಬುದನ್ನು ನಿಮ್ಮ ವಿನಃ ಬೇರೆ ಯಾರೂ ತಿಳಿದುಕೊಂಡಿಲ್ಲ. ಆಂತರ್ಯದಲ್ಲಿ ಜ್ಞಾನದ
ನೃತ್ಯ ಮಾಡಬೇಕಾಗಿದೆ. ತಂದೆಯು ನಮಗೆ ಎಷ್ಟೊಂದು ಅದ್ಭುತವಾದ ಜ್ಞಾನವನ್ನು ಕೊಡುತ್ತಾರೆ. ಈ
ಜ್ಞಾನದಿಂದ ನಾವು ನಮ್ಮ ಆಸ್ತಿಯನ್ನು ಪಡೆಯುತ್ತೇವೆ. ರಾಜಯೋಗದಿಂದ ರಾಜರಿಗೂ ರಾಜರನ್ನಾಗಿ
ಮಾಡುತ್ತೇನೆಂದು ಬರೆಯಲ್ಪಟ್ಟಿದೆ ಆದರೆ ಸ್ವಲ್ಪವೂ ತಿಳಿದುಕೊಳ್ಳಲು ಬರುತ್ತಿರಲಿಲ್ಲ. ಈಗ
ಬುದ್ಧಿಯಲ್ಲಿ ಎಲ್ಲಾ ರಹಸ್ಯಗಳು ತಿಳಿದು ಬಂದಿವೆ. ನಾವು ಶೂದ್ರರಿಂದ ಈಗ ಅಂದರೆ
ಬ್ರಾಹ್ಮಣರಾಗುತ್ತೇವೆ. ಈ ಮಂತ್ರವೂ ಬುದ್ಧಿಯಲ್ಲಿದೆ. ನಾವೇ ಬ್ರಾಹ್ಮಣರು ಸೋ ದೇವತೆಗಳಾಗುತ್ತೇವೆ
ನಂತರ ನಾವೇ ಇಳಿಯುತ್ತಾ-ಇಳಿಯುತ್ತಾ ಕೆಳಗೆ ಬರುತ್ತೇವೆ. ಎಷ್ಟೊಂದು ಪುನರ್ಜನ್ಮವನ್ನು ಪಡೆದು
ಚಕ್ರ ತಿರುಗಿಸುತ್ತೀರಿ! ಈ ಜ್ಞಾನವು ಬುದ್ಧಿಯಲ್ಲಿರುವ ಕಾರಣ ಖುಷಿಯಲ್ಲಿರಬೇಕಾಗಿದೆ. ಅನ್ಯರಿಗೂ
ಈ ಜ್ಞಾನವನ್ನು ಹೇಗೆ ತಿಳಿಸುವುದು? ಎಷ್ಟೊಂದು ವಿಚಾರಗಳು ನಡೆಯುತ್ತಿರಬೇಕು. ಎಲ್ಲರಿಗೂ ತಂದೆಯ
ಪರಿಚಯವನ್ನು ಹೇಗೆ ಕೊಡುತ್ತೀರಿ? ನೀವು ಬ್ರಾಹ್ಮಣರು ಎಷ್ಟೊಂದು ಉಪಕಾರ ಮಾಡುತ್ತೀರಿ. ತಂದೆಯೂ ಸಹ
ನಿಮಗೆ ಉಪಕಾರ ಮಾಡುತ್ತಾರಲ್ಲವೆ! ಯಾರು ಸಂಪೂರ್ಣ ಅಜ್ಞಾನಿಗಳಾಗಿದ್ದಾರೆ, ಅವರನ್ನು ಸದಾ
ಸುಖಿಗಳನ್ನಾಗಿ ಮಾಡಿ, ಕಣ್ಣುಗಳನ್ನು ತೆರೆಯಿರಿ ಆಗ ಖುಷಿಯಾಗುತ್ತದೆಯಲ್ಲವೆ. ಯಾರಿಗೆ ಸೇವೆಯ
ಆಸಕ್ತಿಯಿರುತ್ತದೆ ಅವರ ಆಂತರ್ಯದಲ್ಲಿ ಬಹಳ ಖುಷಿಯಿರಬೇಕಾಗಿದೆ. ನಾವಾತ್ಮರು ಎಲ್ಲಿ ವಾಸಿಸುವವರು,
ನಂತರ ಹೇಗೆ ಪಾತ್ರವನ್ನಭಿನಯಿಸಲು ಬರುತ್ತೇವೆ? ಎಷ್ಟು ಶ್ರೇಷ್ಠರಾಗಿದ್ದವರು ನಂತರ ಹೇಗೆ
ಕನಿಷ್ಠದಲ್ಲಿ ಬರುತ್ತಾರೆ ನಂತರ ರಾವಣ ರಾಜ್ಯವು ಯಾವಾಗ ಪ್ರಾರಂಭವಾಗುತ್ತದೆ? ಈಗ ಇದು
ಬುದ್ಧಿಯಲ್ಲಿ ಬಂದಿದೆ.
ಭಕ್ತಿ ಮತ್ತು ಜ್ಞಾನದಲ್ಲಿ ರಾತ್ರಿ-ಹಗಲಿನ ಅಂತರವಿದೆ. ಪ್ರಾರಂಭದಿಂದ ಯಾರು ಭಕ್ತಿ ಮಾಡಿದರು?
ನೀವು ಹೇಳುತ್ತೀರಿ- ಮೊಟ್ಟ ಮೊದಲು ನಾವು ಬಂದೆವು ಅಂದಾಗ ಬಹಳ ಸುಖವನ್ನು ನೋಡಿದೆವು ನಂತರ ನಾವೇ
ಭಕ್ತಿಯನ್ನು ಮಾಡಲು ತೊಡಗಿದೆವು. ಪೂಜ್ಯ ಮತ್ತು ಪೂಜಾರಿಗಳಾಗುವುದರಲ್ಲಿ ರಾತ್ರಿ-ಹಗಲಿನ ಅಂತರವಿದೆ.
ನಿಮ್ಮ ಬಳಿ ಈಗ ಎಷ್ಟು ಜ್ಞಾನವಿದೆ! ಖುಷಿಯಿರಬೇಕಾಗಿದೆಯಲ್ಲವೆ! ಹೇಗೆ ನಾವು 84 ಜನ್ಮಗಳ
ಚಕ್ರವನ್ನು ಸುತ್ತಿದೆವು, 84 ಜನ್ಮವೆಲ್ಲಿ 84 ಲಕ್ಷ ಜನ್ಮವೆಲ್ಲಿ! ಇಷ್ಟು ಚಿಕ್ಕ ಮಾತೂ ಸಹ
ಯಾರಿಗೂ ಗಮನದಲ್ಲಿ ಬರುವುದಿಲ್ಲ. ಲಕ್ಷಾಂತರ ವರ್ಷಗಳ ಹೋಲಿಕೆಯಲ್ಲಿ ಇದು ಒಂದೆರಡು ದಿನಗಳಿಗೆ
ಸಮಾನವಾಗಿದೆ. ಒಳ್ಳೊಳ್ಳೆಯ ಮಕ್ಕಳ ಬುದ್ಧಿಯಲ್ಲಿ ಈ ಚಕ್ರವು ತಿರುಗುತ್ತಿರುತ್ತದೆ ಆದ್ದರಿಂದ
ಸ್ವದರ್ಶನ ಚಕ್ರಧಾರಿ ಎಂದು ಕರೆಯಲಾಗುವುದು. ಸತ್ಯಯುಗದಲ್ಲಿ ಈ ಜ್ಞಾನವಿರುವುದಿಲ್ಲ, ಸ್ವರ್ಗದ
ಮಹಿಮೆಯನ್ನು ಎಷ್ಟೊಂದು ವರ್ಣಿಸುತ್ತಾರೆ. ಆಗ ಭಾರತ ಮಾತ್ರವೇ ಇತ್ತು, ಮತ್ತೆ ಏನಿತ್ತು ಅದು ಆಗಿಯೇ
ಆಗುತ್ತದೆ. ಪ್ರಪಂಚದಲ್ಲಿದ್ದು ನೋಡಿದರೆ ಏನೂ ತಿಳಿಯುವುದಿಲ್ಲ, ಸಾಕ್ಷಾತ್ಕಾರವೂ ಆಗುತ್ತದೆ.
ನಿಮಗೆ ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿ ನಾವು ನಂಬರ್ವಾರ್ ಆಗಿ ಹೊಸ ಪ್ರಪಂಚದಲ್ಲಿ ಬರುತ್ತೇವೆಂದು
ತಿಳಿದುಕೊಂಡಿದ್ದೀರಿ. ಆತ್ಮರು ಪಾತ್ರವನ್ನಭಿನಯಿಸಲು ಹೇಗೆ ಬರುತ್ತೇವೆ ಎಂದು ತಿಳಿದುಕೊಂಡು
ಬಿಟ್ಟಿದ್ದೀರಿ. ನಾಟಕದಲ್ಲಿ ತೋರಿಸಿರುವಂತೆ ಆತ್ಮಗಳೇನು ಮೇಲಿಂದ ಇಳಿದು ಬರುವುದಿಲ್ಲ. ಆತ್ಮನನ್ನು
ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಆದರೆ ಆತ್ಮವು ಹೇಗೆ ಬರುತ್ತದೆ, ಇಷ್ಟು ಚಿಕ್ಕ ಶರೀರದಲ್ಲಿ
ಪ್ರವೇಶಿಸುತ್ತದೆ, ಇದು ಬಹಳ ಅದ್ಭುತವಾದ ಆಟವಾಗಿದೆ. ಇದು ಈಶ್ವರೀಯ ವಿದ್ಯೆಯಾಗಿದೆ, ಇಲ್ಲಿ
ಹಗಲು-ರಾತ್ರಿ ವಿಚಾರ ನಡೆಯುತ್ತಿರಬೇಕಾಗಿದೆ. ನಾವು ಒಮ್ಮೆ ನೋಡಿದ ನಂತರ ಹೇಗೆ ವರ್ಣನೆ
ಮಾಡುತ್ತೇವೆಯೋ ಹಾಗೆಯೇ ನಾವು ಇದನ್ನು ತಿಳಿದುಕೊಂಡಿದ್ದೇವೆ. ಮೊದಲೆಲ್ಲಾ ಜಾದು ಮಾಡುವವರು
ಬಹಳಷ್ಟು ವಸ್ತುಗಳನ್ನು ತೆಗೆದು ತೋರಿಸುತ್ತಿದ್ದರು, ತಂದೆಗೂ ಸಹ ಜಾದೂಗಾರ್, ಸೌಧಾಗರ್, ರತ್ನಾಗರ್....
ಎಂದು ಹೇಳುತ್ತಾರಲ್ಲವೆ! ಆತ್ಮನಲ್ಲಿಯೇ ಎಲ್ಲಾ ಜ್ಞಾನವು ನಿಲ್ಲುತ್ತದೆ, ಆತ್ಮವೇ ಜ್ಞಾನ
ಸಾಗರನಾಗುತ್ತದೆ. ಪರಮಾತ್ಮನಿಗೂ ಜ್ಞಾನ ಸಾಗರನೆಂದು ಹೇಳುತ್ತಾರೆ ಆದರೆ ಅವರಲ್ಲಿ ಯಾವ ಜ್ಞಾನವಿದೆ?
ಅವರು ಯಾರು? ಅವರು ಹೇಗೆ ಜಾದೂಗಾರ್ ಆಗಿದ್ದಾರೆ? ಇದು ಮೊದಲು ಯಾರಿಗೂ ಗೊತ್ತಿರಲಿಲ್ಲ. ನಿಮಗೂ ಸಹ
ಮುಂಚೆ ತಿಳಿದಿರಲಿಲ್ಲ, ಈಗ ತಂದೆಯು ಬಂದು ದೇವತೆಯನ್ನಾಗಿ ಮಾಡುತ್ತಾರೆ ಅಂದಾಗ ಆಂತರ್ಯದಲ್ಲಿ
ಎಷ್ಟೊಂದು ಖುಷಿಯಾಗಬೇಕು! ಒಬ್ಬ ತಂದೆಯೇ ಜ್ಞಾನಪೂರ್ಣರಾಗಿದ್ದಾರೆ, ನಮಗೆ ಓದಿಸುತ್ತಲೂ ಇದ್ದಾರೆ,
ಇದನ್ನು ನೀವು ಮಕ್ಕಳು ಮಾತ್ರ ತಿಳಿದುಕೊಂಡಿದ್ದೀರಿ. ಇದನ್ನು ಹಗಲು-ರಾತ್ರಿ ಆಂತರ್ಯದಲ್ಲಿ ಸ್ಮರಣೆ
ಮಾಡಬೇಕಾಗಿದೆ. ಈ ಬೇಹದ್ದಿನ ನಾಟಕವನ್ನು ಒಬ್ಬ ತಂದೆಯೇ ತಿಳಿಸುತ್ತಾರೆ, ಬೇರೆ ಯಾರೂ
ಹೇಳಲಾಗುವುದಿಲ್ಲ. ತಂದೆಯು ಅದನ್ನೆಲ್ಲಾ ನೋಡಿದ್ದಾರೇನು? ಆದರೆ ಅವರಲ್ಲಿ ಪೂರ್ಣ ಜ್ಞಾನವಿದೆ.
ತಂದೆಯು ತಿಳಿಸುತ್ತಾರೆ- ನಾನು ಸತ್ಯ-ತ್ರೇತಾಯುಗದಲ್ಲಿ ಬರುವುದಿಲ್ಲ. ಆದರೆ ಸಂಪೂರ್ಣ ಜ್ಞಾನವನ್ನು
ತಿಳಿಸುತ್ತೇನೆ. ಆಶ್ಚರ್ಯವಾಗುತ್ತದೆಯಲ್ಲವೆ. ಯಾರು ಎಂದೂ ಪಾತ್ರವೇ ಮಾಡಿರುವುದಿಲ್ಲ ಅವರು ಹೇಗೆ
ತಿಳಿಸುತ್ತಾರೆ? ತಂದೆಯು ತಿಳಿಸುತ್ತಾರೆ- ನಾನು ಏನನ್ನೂ ನೋಡಿಲ್ಲ, ಸತ್ಯ-ತ್ರೇತಾಯುಗದಲ್ಲಿಯೂ
ಬರುವುದಿಲ್ಲ ಆದರೆ ನನ್ನಲ್ಲಿ ಎಷ್ಟು ಒಳ್ಳೆಯ ಜ್ಞಾನವಿದೆ, ನಾನು ಒಮ್ಮೆ ಮಾತ್ರ ಬಂದು ನಿಮಗೆ
ಹೇಳುತ್ತೇನೆ. ನೀವು ಪಾತ್ರವನ್ನಭಿನಯಿಸಿದ್ದಿರಿ ಆದರೆ ನೀವು ತಿಳಿದುಕೊಂಡಿಲ್ಲ, ಆದರೆ ಯಾರು
ಪಾತ್ರವನ್ನು ಅಭಿನಯಿಸಿಲ್ಲ ಅವರು ಎಲ್ಲವನ್ನೂ ಹೇಳುವುದು ಆಶ್ಚರ್ಯವಲ್ಲವೆ! ನಾವು
ಪಾತ್ರಧಾರಿಗಳಾಗಿದ್ದು ನಾವೇನೂ ತಿಳಿದುಕೊಂಡಿಲ್ಲ. ತಂದೆಯಲ್ಲಿ ಎಷ್ಟೊಂದು ಜ್ಞಾನವಿದೆ, ತಂದೆಯು
ತಿಳಿಸುತ್ತಾರೆ - ನಾನು ಅನುಭವವನ್ನು ತಿಳಿಸಲು ಸತ್ಯ-ತ್ರೇತಾಯುಗದಲ್ಲೇನಾದರೂ ಬರುತ್ತೇನೆಯೇ?
ನಾಟಕದನುಸಾರ ನೋಡದೇ ಅನುಭವ ಮಾಡದೆ ಎಲ್ಲಾ ಜ್ಞಾನವನ್ನು ಕೊಡುತ್ತಾರೆ ಆದರೆ ಆಶ್ಚರ್ಯವೇನೆಂದರೆ
ನಾನು ಪಾತ್ರವನ್ನಭಿನಯಿಸಲು ಬರುವುದೇ ಇಲ್ಲ, ಆದರೆ ನಿಮಗೆ ಎಲ್ಲಾ ಪಾತ್ರವನ್ನು ತಿಳಿಸುತ್ತೇನೆ.
ಆದ್ದರಿಂದಲೇ ನನ್ನನ್ನು ಜ್ಞಾನಪೂರ್ಣನೆಂದು ಕರೆಯುತ್ತಾರೆ.
ಅಂದಾಗ ತಂದೆಯು ತಿಳಿಸುತ್ತಾರೆ - ಈಗ ಮಧುರಾತಿ ಮಧುರ ಮಕ್ಕಳು ಉನ್ನತಿಯನ್ನು ಮಾಡಿಕೊಳ್ಳಬೇಕಾದರೆ
ತಮ್ಮನ್ನು ಆತ್ಮನೆಂದು ತಿಳಿಯಿರಿ. ಇದು ಆಟವಾಗಿದೆ. ನೀವು ನಂತರವೂ ಇಂತಹ ಆಟವನ್ನೇ ಆಡುತ್ತೀರಿ.
ದೇವಿ-ದೇವತೆಗಳಾಗುತ್ತೀರಿ ನಂತರ ಅಂತ್ಯದಲ್ಲಿ ಚಕ್ರ ಸುತ್ತಿಕೊಂಡು ಮನುಷ್ಯರಾಗುತ್ತೀರಿ, ಆಶ್ಚರ್ಯ
ಪಡಬೇಕಲ್ಲವೆ. ತಂದೆಗೆ ಇದೆಲ್ಲಾ ಜ್ಞಾನವು ಎಲ್ಲಿಂದ ಬಂದಿತು? ಅವರಿಗೆ ಯಾರೂ ಸಹ ಗುರುಗಳಿಲ್ಲ.
ನಾಟಕದನುಸಾರವಾಗಿ ಮೊದಲಿನಿಂದಲೇ ಅವರು ಈ ಪಾತ್ರವನ್ನಭಿನಯಿಸುವುದು ನೊಂದಣಿಯಾಗಿದೆ, ಇದನ್ನು
ವಿಧಿ(ಈಶ್ವರನ ಆಟವೆಂದು) ಎಂದು ಹೇಳಬಹುದಲ್ಲವೆ. ಪ್ರತಿಯೊಂದು ಮಾತು ಅದ್ಭುತವಾಗಿದೆ. ತಂದೆಯು
ಕುಳಿತು ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾರೆ. ಇಂತಹ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕು!
84 ಜನ್ಮದ ಚಕ್ರವನ್ನೂ ನೆನಪು ಮಾಡಬೇಕು. ಈ ಎಲ್ಲಾ ರಹಸ್ಯವನ್ನು ತಂದೆಯೇ ತಿಳಿಸಿದ್ದಾರೆ, ವಿರಾಟ
ರೂಪದ ಚಿತ್ರವು ಎಷ್ಟು ಚೆನ್ನಾಗಿದೆ. ಲಕ್ಷ್ಮೀ-ನಾರಾಯಣ ಅಥವಾ ವಿಷ್ಣುವಿನ ಚಿತ್ರವನ್ನು
ಮಾಡುತ್ತಾರೆ, ನಾವು ಹೇಗೆ 84 ಜನ್ಮಗಳನ್ನು ತೆಗೆದುಕೊಂಡು ಬಂದೆವೆಂದು ತೋರಿಸುತ್ತಾರೆ. ನಾವೇ
ದೇವತಾ ನಂತರ ಕ್ಷತ್ರಿಯ, ವೈಶ್ಯ, ಶೂದ್ರರು. ಹೀಗೆ ಸ್ಮರಿಸಲು ಕಷ್ಟವೇ? ತಂದೆಯು
ಜ್ಞಾನಪೂರ್ಣನಾಗಿದ್ದಾರೆ, ಅವರು ಯಾರಿಂದಲಾದರೂ ಓದಿದ್ದಾರೆಯೇ? ಶಾಸ್ತ್ರ ಮೊದಲಾದವುಗಳನ್ನು
ಓದಿಲ್ಲ. ಏನೂ ಓದದೆ ಗುರುಗಳನ್ನು ಮಾಡಿಕೊಳ್ಳದೇ ಇಷ್ಟೆಲ್ಲಾ ಜ್ಞಾನವನ್ನು ಕುಳಿತು ಹೇಳುವುದು ಎಂದೂ
ನೋಡಿಲ್ಲ. ತಂದೆಯು ಎಷ್ಟೊಂದು ಮಧುರವಾಗಿದ್ದಾರೆ, ಭಕ್ತಿಮಾರ್ಗದಲ್ಲಿ ಕೆಲವರು ಕೆಲವರನ್ನು
ಮಧುರರೆಂದು ತಿಳಿಯುತ್ತಾರೆ. ಯಾರಿಗೆ ಯಾರು ಇಷ್ಟವೋ ಅವರನ್ನೇ ಪೂಜಿಸುತ್ತಾರೆ, ತಂದೆಯು ಕುಳಿತು
ಎಲ್ಲಾ ರಹಸ್ಯವನ್ನು ತಿಳಿಸುತ್ತಾರೆ - ಆತ್ಮವೇ ಆನಂದ ಸ್ವರೂಪವಾಗಿದೆ, ಮತ್ತೆ ಆತ್ಮವೇ ದುಃಖರೂಪ,
ಅಪವಿತ್ರವಾಗಿ ಬಿಡುತ್ತದೆ. ಭಕ್ತಿಮಾರ್ಗದಲ್ಲಿ ನೀವು ಏನನ್ನೂ ತಿಳಿದುಕೊಂಡಿರಲಿಲ್ಲ. ನನ್ನ ಮಹಿಮೆ
ಎಷ್ಟೊಂದು ಮಾಡುತ್ತಿದ್ದಿರಿ ಆದರೆ ಏನನ್ನೂ ತಿಳಿದುಕೊಂಡಿರಲಿಲ್ಲ. ಇದೂ ಸಹ ಎಷ್ಟೊಂದು
ವಿಚಿತ್ರವಾದ ಆಟವಾಗಿದೆ. ಈ ಎಲ್ಲಾ ಆಟವನ್ನು ತಂದೆಯು ತಿಳಿಸಿದ್ದಾರೆ. ಇಷ್ಟೊಂದು ಚಿತ್ರ, ಏಣಿ
ಮೊದಲಾದವುಗಳನ್ನು ಎಂದೂ ನೋಡಿರಲಿಲ್ಲ. ಈಗ ನೋಡುತ್ತಾ ಕೇಳುತ್ತೇವೆಂದಾಗ ಈ ಜ್ಞಾನವು
ಯಥಾರ್ಥವಾಗಿದೆಯಂದು ಹೇಳುತ್ತಾರೆ. ಆದರೆ ಕಾಮ ಮಹಾಶತ್ರುವಾಗಿದೆ, ಇದನ್ನು ಗೆಲ್ಲಬೇಕು. ಇದನ್ನು
ಕೇಳಿ ನಿರುತ್ಸಾಹಿಗಳಾಗಿ ಬಿಡುತ್ತಾರೆ. ನೀವು ಎಷ್ಟೇ ಹೇಳಿದರೂ ತಿಳಿದುಕೊಳ್ಳುವುದಿಲ್ಲ, ಎಷ್ಟೊಂದು
ಕಷ್ಟವಾಗುತ್ತದೆ. ಇದನ್ನು ಸಹ ತಿಳಿದುಕೊಂಡಿದ್ದೀರಿ - ಕಲ್ಪದ ಮೊದಲು ಯಾರು ತಿಳಿದುಕೊಂಡಿದ್ದರೋ
ಅವರೇ ತಿಳಿದುಕೊಳ್ಳುತ್ತಾರೆ, ಯಾರು ದೈವೀ ಪರಿವಾರದವರಾಗುವವರು ಇದ್ದಾರೆಯೋ ಅವರಿಗೇ
ಧಾರಣೆಯಾಗುತ್ತದೆ. ನಿಮಗೆ ತಿಳಿದಿದೆ, ನಾವು ಶ್ರೀಮತದಂತೆ ರಾಜಧಾನಿಯನ್ನು ಸ್ಥಾಪನೆ ಮಾಡುತ್ತೇವೆ.
ತಂದೆಯ ಆದೇಶವಾಗಿದೆ- ಅನ್ಯರನ್ನು ತಮ್ಮ ಸಮಾನ ಮಾಡಿಕೊಳ್ಳಿ. ತಂದೆಯು ಎಲ್ಲಾ ಜ್ಞಾನವನ್ನೂ
ತಿಳಿಸುತ್ತಿದ್ದಾರೆ, ನೀವೂ ಸಹ ಕೇಳುತ್ತಿದ್ದೀರಿ ಅಂದಾಗ ಅವಶ್ಯವಾಗಿ ಈ ಶಿವ ತಂದೆಯ ರಥವೂ ಹೇಳಲು
ಸಾಧ್ಯವಿದೆ. ಆದರೆ ತಮ್ಮನ್ನು ಗುಪ್ತ ಮಾಡಿ ಬಿಟ್ಟಿದ್ದಾರೆ. ನೀವು ಶಿವ ತಂದೆಯನ್ನೇ ನೆನಪು
ಮಾಡುತ್ತಿರಿ, ಇವರ (ಬ್ರಹ್ಮಾ) ಮಹಿಮೆಯನ್ನೂ ಮಾಡಬೇಡಿ. ಸರ್ವರ ಸದ್ಗತಿದಾತ, ಮಾಯೆಯಿಂದ
ಬಿಡಿಸುವವರು ಒಬ್ಬರೇ ಆಗಿದ್ದಾರೆ.
ತಂದೆಯು ಹೇಗೆ ಕುಳಿತು ನಿಮಗೆ ತಿಳಿಸುತ್ತಾರೆ, ಇದನ್ನು ನೀವು ಮಕ್ಕಳ ವಿನಃ ಬೇರೆ ಯಾರಿಗೂ
ಗೊತ್ತಿಲ್ಲ. ಮನುಷ್ಯರಿಗೆ ರಾವಣನು ಎಂತಹ ವಸ್ತುವಾಗಿದ್ದಾನೆ, ಪ್ರತೀ ವರ್ಷ ಸುಡುತ್ತಾ ಬಂದಿದ್ದೇವೆ
ಎನ್ನುವುದನ್ನು ತಿಳಿದಿಲ್ಲ. ಆ ರೀತಿಯ ಶತ್ರುಗಳ ಪ್ರತಿಕೃತಿಯನ್ನೇ ಮಾಡಲಾಗುತ್ತದೆಯಲ್ಲವೆ! ಈಗ
ನಿಮಗೆ ರಾವಣ ಭಾರತದ ಶತ್ರುವಾಗಿದ್ದಾನೆಂದು ತಿಳಿದಿದೆ. ಆ ರಾವಣನೇ ಭಾರತವನ್ನು ದುಃಖಿ, ಕಂಗಾಲು
ಮಾಡಿ ಬಿಟ್ಟಿದ್ದಾನೆ. ಎಲ್ಲರೂ ಪಂಚ ವಿಕಾರಗಳೆಂಬ ರಾವಣನ ಮುಷ್ಟಿಯಲ್ಲಿ ಸಿಕ್ಕಿಕೊಂಡಿದ್ದಾರೆ.
ಮಕ್ಕಳ ಆಂತರ್ಯದಲ್ಲಿ ಈ ಚಿಂತೆಯಿರಬೇಕು- ಹೇಗೆ ಅನ್ಯರನ್ನೂ ರಾವಣನಿಂದ ಬಿಡಿಸಬಹುದು!
ಸೇವಾಕಾಶವಿದ್ದಾಗ ಪ್ರಬಂಧ ಮಾಡಬೇಕು. ಸತ್ಯ ಹೃದಯದಿಂದ, ನಿಸ್ವಾರ್ಥ ಭಾವದಿಂದ ಸೇವೆ ಮಾಡಬೇಕು.
ತಂದೆಯು ತಿಳಿಸುತ್ತಾರೆ - ಇಂತಹ ಮಕ್ಕಳ ಭಂಡಾರ ನಾನು ಸಂಪನ್ನ ಮಾಡುತ್ತೇನೆ, ಇದು ನಾಟಕದಲ್ಲಿ
ನೊಂದಣಿಯಿದೆ. ಸೇವೆಯ ಉತ್ತಮ ಅವಕಾಶವಿದ್ದಾಗ ಕೇಳುವ ಅವಶ್ಯಕತೆಯೂ ಇಲ್ಲ. ತಂದೆಯ ಸೇವೆಯನ್ನು
ಮಾಡುತ್ತಿರಿ ಎಂದು ಹೇಳಿ ಬಿಟ್ಟಿದ್ದಾರೆ, ಯಾರಿಂದಲೂ ಬೇಡಬಾರದು. ಬೇಡುವುದಕ್ಕಿಂತ ಸಾಯುವುದು ಲೇಸು.
ಅವರು ತಾನಾಗಿಯೇ ನಿಮ್ಮ ಬಳಿ ಬಂದು ಬಿಡುತ್ತಾರೆ. ಬೇಡುವುದರಿಂದ ಸೇವಾಕೇಂದ್ರವು
ಮುಂದುವರೆಯುವುದಿಲ್ಲ. ಬೇಡದೆ ಸೇವಾಕೇಂದ್ರವನ್ನು ವೃದ್ಧಿ ಮಾಡಿ ತಾನೇ ತಾನಾಗಿ ಎಲ್ಲವೂ
ಬರುತ್ತಿರುತ್ತದೆ, ಅವರಲ್ಲಿ ಶಕ್ತಿ ಇರುತ್ತದೆ ಹೇಗೆ ಪ್ರಪಂಚದವರು ಚಂದಾ ಸೇರಿಸುವಂತೆ ನೀವು
ಮಾಡಬಾರದು.
ಮನುಷ್ಯರಿಗೆಂದಿಗೂ ಭಗವಂತ ಎಂದು ಹೇಳಲಾಗದು. ಜ್ಞಾನವು ಬೀಜವಾಗಿದೆ, ಬೀಜರೂಪ ತಂದೆಯು ಕುಳಿತು
ನಿಮಗೆ ಜ್ಞಾನವನ್ನು ಕೊಡುತ್ತಿದ್ದಾರೆ. ಬೀಜವೇ ಜ್ಞಾನ ಸಂಪನ್ನವಾಗಿದೆಯಲ್ಲವೆ! ಆ ಜಡ ಬೀಜ ವರ್ಣನೆ
ಮಾಡಲು ಆಗುವುದಿಲ್ಲ, ನೀವು ವರ್ಣನೆ ಮಾಡುತ್ತೀರಿ. ಈ ಎಲ್ಲಾ ಮಾತುಗಳನ್ನು ತಿಳಿದುಕೊಳ್ಳಬಹುದು. ಈ
ಬೇಹದ್ದಿನ ವೃಕ್ಷವನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಅನನ್ಯ ಮಕ್ಕಳು ನಂಬರ್ವಾರ್
ಪುರುಷಾರ್ಥದನುಸಾರವಾಗಿ ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ಮಾಯೆಯು ಬಹಳ
ಶಕ್ತಿಶಾಲಿಯಾಗಿದೆ, ಅಲ್ಪ ಸ್ವಲ್ಪ ಸಹನೆಯನ್ನೂ ಮಾಡಬೇಕಾಗುತ್ತದೆ. ಎಷ್ಟೊಂದು ಕಠಿಣ ಕಠಿಣವಾದ
ವಿಕಾರವಿದೆ. ಬಹಳ ಉತ್ತಮ ಸೇವೆ ಮಾಡುವವರಿಗೂ ನಡೆಯುತ್ತಾ-ನಡೆಯುತ್ತಾ ಮಾಯೆಯ ಪೆಟ್ಟು ಬೀಳುತ್ತದೆ,
ಆಗ ನಾವು ಬಿದ್ದು ಬಿಟ್ಟೆವೆಂದು ಹೇಳುತ್ತಾರೆ. ಏಣಿಯನ್ನು ಹತ್ತುತ್ತಾ-ಹತ್ತುತ್ತಾ ಕೆಳಗೆ
ಬೀಳುತ್ತಾರೆ ಆಗ ಮಾಡಿಕೊಂಡಿರುವ ಸಂಪಾದನೆಯಲ್ಲವೂ ಕಳೆದು ಹೋಗುತ್ತದೆ. ಶಿಕ್ಷೆಯಂತೂ ಅವಶ್ಯವಾಗಿ
ಸಿಗುತ್ತದೆ. ತಂದೆಯೊಂದಿಗೆ ಪ್ರತಿಜ್ಞೆ ಮಾಡಿ ರಕ್ತದಿಂದಲೂ ಬರೆದು ಕೊಟ್ಟು ನಂತರ ಬಿಟ್ಟು
ಹೋಗುತ್ತಾರೆ. ತಂದೆಯು ಪಕ್ಕಾ ಮಾಡಲು ನೋಡುತ್ತಾರೆ- ಇಷ್ಟೆಲ್ಲಾ ಉಪಾಯಗಳನ್ನು ಮಾಡುತ್ತಿದ್ದರೂ ಆ
ಪ್ರಪಂಚದ ಕಡೆ ಹೊರಟು ಹೋಗುತ್ತಾರೆ. ಎಷ್ಟೊಂದು ಸಹಜವಾಗಿ ತಿಳಿಸುತ್ತಾರೆ, ಪಾತ್ರಧಾರಿಗಳಿಗೆ ತಮ್ಮ
ಪಾತ್ರವನ್ನೇ ಸ್ಮರಿಸಬೇಕಾಗಿದೆ. ತಮ್ಮ ಪಾತ್ರವನ್ನು ಯಾರಾದರೂ ಮರೆಯುತ್ತಾರೇನು! ತಂದೆಯು
ಪ್ರತಿನಿತ್ಯ ಭಿನ್ನ-ಭಿನ್ನ ಪ್ರಕಾರವಾಗಿ ತಿಳಿಸುತ್ತಿರುತ್ತಾರೆ. ನೀವೂ ಸಹ ಬಹಳ ಜನರಿಗೆ
ತಿಳಿಸುತ್ತೀರಿ, ಆದರೂ ನಾವು ತಂದೆಯ ಸನ್ಮುಖದಲ್ಲಿ ಹೋಗಬೇಕೆಂದು ಹೇಳುತ್ತಾರೆ. ತಂದೆಗೂ
ಆಶ್ಚರ್ಯವಾಗುತ್ತದೆ. ತಂದೆಯು ಪ್ರತಿನಿತ್ಯ ಮುರುಳಿಯನ್ನು ನುಡಿಸುತ್ತಾರೆ, ಅವರು
ನಿರಾಕಾರನಾಗಿದ್ದಾರೆ. ಅವರಿಗೆ ನಾಮ-ರೂಪ, ದೇಶ-ಕಾಲವು ಇಲ್ಲದ ಪಕ್ಷದಲ್ಲಿ ಜ್ಞಾನವನ್ನು ಹೇಗೆ
ತಿಳಿಸುತ್ತಾರೆ? ಆಶ್ಚರ್ಯ ಪಡುತ್ತಾರೆ ಮತ್ತೆ ಪಕ್ಕಾ ಆಗಿ ಬರುತ್ತಾರೆ. ಮನಸ್ಸಾಗುತ್ತದೆ- ಇಂತಹ
ತಂದೆಯು ಆಸ್ತಿ ಕೊಡಲು ಬಂದಿದ್ದಾರೆ, ಅವರೊಂದಿಗೆ ಮಿಲನ ಮಾಡೋಣವೆಂದು ಬರುತ್ತಾರೆ. ಈ
ಪರಿಚಯದೊಂದಿಗೆ ಬಂದು ಮಿಲನ ಮಾಡಿದರೆ ತಂದೆಯಿಂದ ಜ್ಞಾನರತ್ನಗಳ ಧಾರಣೆಯಾಗಲು ಸಾಧ್ಯವಾಗುತ್ತದೆ.
ಶ್ರೀಮತವನ್ನು ಪಾಲಿಸಬಹುದಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಜ್ಞಾನವನ್ನು
ಜೀವನದಲ್ಲಿ ಧಾರಣೆ ಮಾಡಿ ಖುಷಿಯಲ್ಲಿ ಗದ್ಗದಿತವಾಗಬೇಕು. ಅದ್ಭುತವಾದ ಜ್ಞಾನ ಹಾಗೂ ಜ್ಞಾನ
ದಾತನನ್ನು ಸ್ಮರಿಸುತ್ತಾ ಜ್ಞಾನದ ನೃತ್ಯ ಮಾಡಬೇಕು.
2. ತಮ್ಮ ಪಾತ್ರವನಷ್ಟೇ
ಸ್ಮರಣೆ ಮಾಡಬೇಕು, ಅನ್ಯರ ಪಾತ್ರವನ್ನು ನೋಡಬಾರದು. ಮಾಯೆಯು ಬಹಳ ಶಕ್ತಿಶಾಲಿಯಾಗಿದೆ ಆದ್ದರಿಂದ
ಬಹಳ ಎಚ್ಚರಿಕೆಯಿಂದ ಇರಬೇಕು. ತಮ್ಮ ಉನ್ನತಿಯಲ್ಲಿ ತೊಡಗಿರಬೇಕು, ಸೇವೆಯಲ್ಲಿ
ಆಸಕ್ತಿಯನ್ನಿಟ್ಟುಕೊಳ್ಳಿ.
ವರದಾನ:
ಸದಾನೆನಪಿನಛತ್ರಛಾಯೆಯಕೆಳಗೆ, ಮರ್ಯಾದೆಯಗೆರೆಒಳಗೆಇರುವಂತಹಮಾಯಾಜೀತವಿಜಯಿಭವ.
ತಂದೆಯ ನೆನಪೇ
ಛತ್ರಛಾಯೆಯಾಗಿದೆ, ಚತ್ರಛಾಯೆಯಲ್ಲಿ ಇರುವುದು ಅರ್ಥಾತ್ ಮಾಯಾಜೀತರು ವಿಜಯಿ ಆಗುವುದು. ಸದಾ
ನೆನಪಿನ ಚತ್ರಛಾಯೆಯ ಕೆಳಗೆ ಮತ್ತು ಮರ್ಯಾದೆಯ ಗೆರೆಯ ಒಳಗೆ ಇದ್ದಾಗ ಯಾರಿಗೂ ಒಳಗೆ ಬರುವ ಸಾಹಸ
ಇರುವುದಿಲ್ಲ. ಮರ್ಯಾದೆಯ ಗೆರೆಯಿಂದ ಹೊರ ಬಂದಾಗ ಮಾಯೆಯೂ ಸಹ ತನ್ನವರನ್ನಾಗಿ ಮಾಡಿಕೊಳ್ಳುವುದರಲ್ಲಿ
ಬದ್ಧಿವಂತ ಆಗಿದೆ. ಆದರೆ ನಾವು ಅನೇಕ ಬಾರಿ ವಿಜಯಿ ಆಗಿದ್ದೇವೆ, ವಿಜಯ ಮಾಲೆ ನಮ್ಮದೇ
ನೆನಪಾರ್ಥವಾಗಿದೆ. ಈ ಸ್ಮೃತಿಯಿಂದ ಸದಾ ಸಮರ್ಥರಾದಾಗ ಮಾಯೆಯಿಂದ ಹಾರಲು ಸಾಧ್ಯವಿಲ್ಲ.
ಸ್ಲೋಗನ್:
ಸರ್ವ
ಖಜಾನೆಗಳನ್ನು ಸ್ವಯಂನಲ್ಲಿ ಸಮಾವೇಶ ಮಾಡಿಕೊಂಡಾಗ ಸಂಪನ್ನತೆಯ ಅನುಭವ ಆಗುತ್ತಿರುತ್ತದೆ.