24.01.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಆತ್ಮೀಯ ಸರ್ಜನ್ ನಿಮಗೆ ಜ್ಞಾನ-ಯೋಗದ ಬಹಳ ಚೆನ್ನಾಗಿರುವ ಅಧ್ಬುತವಾದ ಶಕ್ತಿವರ್ಧಕ ಭೋಜನವನ್ನು
ತಿನ್ನಿಸುತ್ತಾರೆ, ಈ ಆತ್ಮೀಯ ಭೋಜನವನ್ನು ಪರಸ್ಪರರಲ್ಲಿ ತಿನ್ನಿಸುತ್ತಾ ಎಲ್ಲರ ಕಾಳಜಿಯನ್ನು
ಮಾಡುತ್ತಿರಿ”
ಪ್ರಶ್ನೆ:
ವಿಶ್ವದ
ರಾಜ್ಯಭಾಗ್ಯವನ್ನು ಪಡೆಯಲು ಯಾವ ಒಂದು ಪ್ರಯತ್ನಪಟ್ಟು, ಪಕ್ಕಾ ಅಭ್ಯಾಸವನ್ನು ಮಾಡಿಕೊಳ್ಳಬೇಕು?
ಉತ್ತರ:
ಜ್ಞಾನದ ಮೂರನೇ
ನೇತ್ರದಿಂದ ಅಕಾಲ ಸಿಂಹಾಸನಾಧಾರಿ ಆತ್ಮ ಸಹೋದರನನ್ನು ನೋಡುವಂತಹ ಪ್ರಯತ್ನ ಪಡಿ.
ಸಹೋದರ-ಸಹೋದರನೆಂದು ತಿಳಿದು ಎಲ್ಲರಿಗೂ ಜ್ಞಾನವನ್ನು ಕೊಡಿ. ಮೊದಲು ಸ್ವಯಂನ್ನು ಆತ್ಮನೆಂದು
ತಿಳಿದು ನಂತರ ಸಹೋದರರಿಗೆ ತಿಳಿಸಿ. ಈ ಅಭ್ಯಾಸ ಮಾಡಿಕೊಂಡಾಗ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ.
ಈ ಅಭ್ಯಾಸದಿಂದ ಶರೀರಭಾನವು ಹೊರಟು ಹೋಗುತ್ತದೆ. ಮಾಯೆಯ ಬಿರುಗಾಳಿ ಹಾಗೂ ಕೆಟ್ಟ ಸಂಕಲ್ಪವು
ಬರುವುದಿಲ್ಲ. ಅನ್ಯರಿಗೆ ಜ್ಞಾನದ ಬಾಣವೂ ಸಹ ಚೆನ್ನಾಗಿ ನಾಟುತ್ತದೆ.
ಓಂ ಶಾಂತಿ.
ಜ್ಞಾನದ ಮೂರನೇ
ನೇತ್ರವನ್ನು ಕೊಡುವಂತಹ ಆತ್ಮೀಯ ತಂದೆಯು ಕುಳಿತು ಆತ್ಮೀಯ ಮಕ್ಕಳಿಗೆ ತಿಳಿಸುತ್ತಾರೆ. ಜ್ಞಾನದ
ಮೂರನೆಯ ನೇತ್ರವನ್ನು ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಈಗ ತಾವು ಮಕ್ಕಳಿಗೆ ಜ್ಞಾನದ
ಮೂರನೆಯ ನೇತ್ರವು ಸಿಕ್ಕಿದೆ. ಈಗ ಈ ಹಳೆಯ ಪ್ರಪಂಚವು ಬದಲಾಗುತ್ತದೆ ಎಂಬುದು ನಿಮಗೆ ಗೊತ್ತಿದೆ.
ಪಾಪ! ಮನುಷ್ಯರಿಗೆ ಯಾರು ಬದಲಾಯಿಸುತ್ತಾರೆ ಹಾಗೂ ಹೇಗೆ ಬದಲಾಗುತ್ತದೆ ಎಂಬುದು ಏನೂ ಗೊತ್ತಿಲ್ಲ.
ಏಕೆಂದರೆ ಅವರಿಗೆ ಜ್ಞಾನದ ಮೂರನೆಯ ನೇತ್ರವೇ ಇಲ್ಲ. ತಾವು ಮಕ್ಕಳಿಗೆ ಈಗ ಜ್ಞಾನದ ಮೂರನೆಯ ನೇತ್ರವು
ಸಿಕ್ಕಿದೆ. ಇದರಿಂದ ತಾವು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಇದು ಜ್ಞಾನದ
ಸ್ಯಾಕ್ರೀನ್ ಆಗಿದೆ. ಸ್ಯಾಕ್ರೀನ್ನ ಒಂದು ಹನಿಯೂ ಸಹ ಎಷ್ಟೊಂದು ಮಧುರವಾಗಿರುತ್ತದೆ. ಜ್ಞಾನದ ಒಂದೇ
ಅಕ್ಷರವಾಗಿದೆ- ಮನ್ಮನಾಭವ. ಸ್ವಯಂನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ತಂದೆಯು
ಶಾಂತಿಧಾಮ ಹಾಗೂ ಸುಖಧಾಮದ ಮಾರ್ಗವನ್ನು ತಿಳಿಸುತ್ತಿದ್ದಾರೆ. ತಂದೆಯು ಸ್ವರ್ಗದ ಆಸ್ತಿಯನ್ನು
ಕೊಡಲು ಬಂದಿದ್ದಾರೆ. ಅಂದಾಗ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕಾಗಿದೆ. ಖುಷಿಯಂತಹ ಟಾನಿಕ್
ಇಲ್ಲವೆಂದು ಹೇಳುತ್ತಾರೆ. ಯಾರು ಸದಾ ಖುಷಿಯ ಮೋಜಿನಲ್ಲಿರುತ್ತಾರೆಯೋ ಅವರಿಗಾಗಿ ಆ ಖುಷಿಯು ಟಾನಿಕ್
ಆಗುತ್ತದೆ. ಇದು 21 ಜನ್ಮಗಳು ಖುಷಿಯಲ್ಲಿರುವ ಶಕ್ತಿಶಾಲಿ ಟಾನಿಕ್ ಆಗಿದೆ. ಇದೇ ಟಾನಿಕ್ ಅನ್ನು
ಸದಾ ಒಬ್ಬರು ಇನ್ನೊಬ್ಬರಿಗೆ ತಿನ್ನಿಸುತ್ತಾ ಇರಿ. ನೀವು ಶ್ರೀಮತದಂತೆ ಎಲ್ಲರ ಆತ್ಮಿಕ ಉಪಚಾರ
ಮಾಡುತ್ತೀರಿ. ಸತ್ಯ-ಸತ್ಯವಾದ ಖುಷಿಯ ಸಮಾಚಾರವೆಂದರೆ ಅನ್ಯರಿಗೆ ತಂದೆಯ ಪರಿಚಯ ಕೊಡುವುದು. ಮಧುರ
ಮಕ್ಕಳಿಗೆ ತಿಳಿದಿದೆ - ಬೇಹದ್ದಿನ ತಂದೆಯ ಮೂಲಕ ನಮಗೆ ಜೀವನ್ಮುಕ್ತಿಯ ಟಾನಿಕ್ ಸಿಗುತ್ತದೆ.
ಸತ್ಯಯುಗದಲ್ಲಿ ಭಾರತವು ಜೀವನ್ಮುಕ್ತವಾಗಿತ್ತು, ಪಾವನವಾಗಿತ್ತು. ತಂದೆಯು ಬಹಳ ದೊಡ್ಡ ಒಳ್ಳೆಯ
ಟಾನಿಕ್ ಅನ್ನು ಕೊಡುತ್ತಾರೆ. ಆದ್ದರಿಂದಲೇ ಅತೀಂದ್ರಿಯ ಸುಖದ ಅನುಭವವನ್ನು ಕೇಳಬೇಕೆಂದರೆ
ಗೋಪ-ಗೋಪಿಯರನ್ನು ಕೇಳಿ ಎಂಬ ಗಾಯನವಿದೆ. ಈ ಜ್ಞಾನ ಮತ್ತು ಯೋಗವು ಬಹಳ ಒಳ್ಳೆಯ ಅದ್ಭುತವಾದಂತಹ
ಟಾನಿಕ್ ಆಗಿದೆ ಮತ್ತು ಈ ಟಾನಿಕ್ ಒಬ್ಬ ಆತ್ಮಿಕ ಸರ್ಜನ್ನ ಬಳಿಯೇ ಇದೆ. ಮತ್ತ್ಯಾರಿಗೂ ಈ ಟಾನಿಕ್
ಬಗ್ಗೆ ತಿಳಿದೇ ಇಲ್ಲ. ಮಧುರ ಮಕ್ಕಳೇ, ನಿಮಗಾಗಿ ನಾನು ಅಂಗೈಯಲ್ಲಿ ಉಡುಗೊರೆಯನ್ನು ತಂದಿದ್ದೇನೆ.
ಮುಕ್ತಿ-ಜೀವನ್ಮುಕ್ತಿಯ ಉಡುಗೊರೆಯು ನನ್ನ ಬಳಿಯೇ ಇರುತ್ತದೆ. ಆದ್ದರಿಂದ ಕಲ್ಪ-ಕಲ್ಪವೂ ನಾನೇ ಬಂದು
ಕೊಡುತ್ತೇನೆ ನಂತರ ರಾವಣನು ಕಸಿದುಕೊಳ್ಳುತ್ತಾನೆಂದು ತಂದೆಯು ತಿಳಿಸುತ್ತಾರೆ. ಈಗ ತಾವು ಮಕ್ಕಳಿಗೆ
ಎಷ್ಟೊಂದು ಖುಷಿಯ ನಶೆಯಿರಬೇಕು. ಏಕೆಂದರೆ ನಿಮಗೆ ಗೊತ್ತಿದೆ - ನಮ್ಮ ಒಬ್ಬ ತಂದೆಯೇ ಶಿಕ್ಷಕ ಮತ್ತು
ಸತ್ಯ-ಸತ್ಯವಾದಂತಹ ಸದ್ಗುರುವಾಗಿದ್ದಾರೆ. ಅವರು ನಮ್ಮನ್ನು ಜೊತೆ ಕರೆದುಕೊಂಡು ಹೋಗುತ್ತಾರೆ. ಆ
ಪ್ರಿಯಾತಿ ಪ್ರಿಯ ತಂದೆಯಿಂದ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ. ಇದು ಕಡಿಮೆ ಮಾತೇನು! ಸದಾ
ಹರ್ಷಿತವಾಗಿರಬೇಕು. ಈಶ್ವರೀಯ ವಿದ್ಯಾರ್ಥಿ ಜೀವನವು ಶ್ರೇಷ್ಠವಾಗಿದೆ (ಗಾಡ್ಲೀ ಸ್ಟೂಡೆಂಟ್ ಲೈಫ್
ಈಜ್ ದಿ ಬೆಸ್ಟ್) ಇದು ಈಗಿನದೇ ಗಾಯನವಾಗಿದೆ. ಮತ್ತೆ ಹೊಸ ಪ್ರಪಂಚದಲ್ಲಿಯೂ ಸಹ ಸದಾ ನೀವು
ಖುಷಿಯಲ್ಲಿಯೇ ಇರುತ್ತೀರಿ ಆದರೆ ಸತ್ಯ-ಸತ್ಯವಾದ ಖುಷಿಯನ್ನು ಯಾವಾಗ ಆಚರಿಸಲಾಗುತ್ತದೆ ಎಂದು
ಪ್ರಪಂಚದವರಿಗೂ ಗೊತ್ತಿಲ್ಲ. ಮನುಷ್ಯರಿಗಂತೂ ಸತ್ಯಯುಗದ ಜ್ಞಾನವೇ ಇಲ್ಲ, ಆದ್ದರಿಂದ ಅವರು ಇಲ್ಲಿಯೇ
ಆಚರಿಸುತ್ತಿರುತ್ತಾರೆ. ಆದರೆ ಈ ಹಳೆಯ ತಮೋಪ್ರಧಾನ ಪ್ರಪಂಚದಲ್ಲಿ ಖುಷಿಯೆಲ್ಲಿಂದ ಬಂದಿತು!
ಇಲ್ಲಂತೂ ಅಯ್ಯೊ ಅಯ್ಯೊ ಎನ್ನುತ್ತಿರುತ್ತಾರೆ. ಇದು ಎಷ್ಟೊಂದು ದುಃಖದ ಪ್ರಪಂಚವಾಗಿದೆ. ತಂದೆಯು
ನೀವು ಮಕ್ಕಳಿಗೆ ಎಷ್ಟೊಂದು ಸಹಜವಾದ ಮಾರ್ಗವನ್ನು ತಿಳಿಸುತ್ತಾರೆ - ಮಕ್ಕಳೇ, ಗೃಹಸ್ಥ
ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನರಾಗಿರಿ. ಉದ್ಯೋಗ - ವ್ಯವಹಾರ ಮೊದಲಾದವುಗಳನ್ನು ಮಾಡುತ್ತಾ
ಇರಿ. ಹೇಗೆ ಪ್ರಿಯತಮ ಮತ್ತು ಪ್ರಿಯತಮೆಯರು ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಿರುತ್ತಾರೆ.
ಇವರು ಅವರಿಗಾಗಿಯೇ ಇರುತ್ತಾರೆ ಅದರೆ ಇಲ್ಲಿ ಆ ಮಾತಿಲ್ಲ. ಇಲ್ಲಿ ನೀವೆಲ್ಲರೂ ಒಬ್ಬ ಪ್ರಿಯತಮನಿಗೆ
ಜನ್ಮ-ಜನ್ಮಾಂತರದಿಂದ ಪ್ರಿಯತಮೆಯರಾಗಿದ್ದೀರಿ. ತಂದೆಯು ನಿಮಗೆ ಎಂದೂ ಪ್ರಿಯತಮೆಯಾಗುವುದಿಲ್ಲ.
ನೀವು ಆ ಪ್ರಿಯತಮನು ಬರುವುದಕ್ಕಾಗಿಯೇ ನೆನಪು ಮಾಡುತ್ತಾ ಬಂದಿದ್ದೀರಿ. ಯಾರಿಗೆ ಹೆಚ್ಚಿನ
ದುಃಖವಾಗುತ್ತದೆಯೋ ಆಗಲೇ ಹೆಚ್ಚಾಗಿ ಸ್ಮರಣೆ ಮಾಡುತ್ತಾರೆ. ಆದ್ದರಿಂದಲೇ ದುಃಖದಲ್ಲಿ ಎಲ್ಲರೂ
ಸ್ಮರಿಸುತ್ತಾರೆ, ಸುಖದಲ್ಲಿ ಸ್ಮರಣೆ ಮಾಡುವುದಿಲ್ಲವೆಂಬ ಗಾಯನವಿದೆ. ಈ ಸಮಯದಲ್ಲಿ ತಂದೆಯು ಸಹ
ಸರ್ವಶಕ್ತಿವಂತನಾಗಿದ್ದಾರೆ. ದಿನ-ಪ್ರತಿ ದಿನ ಮಾಯೆಯೂ ಸಹ ಸರ್ವಶಕ್ತಿವಂತ ತಮೋಪ್ರಧಾನವಾಗುತ್ತಾ
ಹೋಗುತ್ತದೆ ಆದ್ದರಿಂದ ತಂದೆಯು ಈಗ ತಿಳಿಸುತ್ತಾರೆ - ಮಧುರ ಮಕ್ಕಳೇ, ಆತ್ಮಾಭಿಮಾನಿಗಳಾಗಿ,
ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. ಜೊತೆ ಜೊತೆಗೆ ದೈವೀ ಗುಣಗಳನ್ನೂ
ಧಾರಣೆ ಮಾಡಿ ಆಗ ನೀವು ಲಕ್ಷ್ಮೀ-ನಾರಾಯಣನ ಸಮಾನರಾಗಿ ಬಿಡುತ್ತೀರಿ. ಈ ವಿದ್ಯೆಯಲ್ಲಿ ಮುಖ್ಯ ಮಾತು
ನೆನಪಿನದ್ದಾಗಿದೆ. ಸರ್ವ ಶ್ರೇಷ್ಠ ತಂದೆಯನ್ನು ಬಹಳ ಪ್ರೀತಿ ಹಾಗೂ ಸ್ನೇಹದಿಂದ ನೆನಪು ಮಾಡಬೇಕು.
ಅವರೇ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವವರಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವು
ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡುವುದಕ್ಕಾಗಿಯೇ ಬಂದಿದ್ದೇನೆ. ಆದ್ದರಿಂದ ಈಗ ನನ್ನನ್ನು
ನೆನಪು ಮಾಡಿ ಆಗ ನಿಮ್ಮ ಅನೇಕ ಜನ್ಮಗಳ ಪಾಪವು ಪರಿಹಾರವಾಗುತ್ತದೆ. ಪತಿತ-ಪಾವನ ತಂದೆಯನ್ನೇ
ಕರೆಯುತ್ತಾರಲ್ಲವೆ. ಆದ್ದರಿಂದ ಈಗ ತಂದೆಯು ಬಂದಿದ್ದಾರೆಂದ ಮೇಲೆ ಅವಶ್ಯವಾಗಿ
ಪಾವನರಾಗಬೇಕಾಗುತ್ತದೆ. ತಂದೆಯು ದುಃಖಹರ್ತ-ಸುಖಕರ್ತನಾಗಿದ್ದಾರೆ. ಅವಶ್ಯವಾಗಿ ಸತ್ಯಯುಗವು ಪಾವನ
ಪ್ರಪಂಚವಾಗಿತ್ತು, ಆಗ ಎಲ್ಲರೂ ಸುಖಿಯಾಗಿದ್ದರು. ಈಗ ತಂದೆಯು ಪುನಃ ತಿಳಿಸುತ್ತಾರೆ, ಮಕ್ಕಳೇ
ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡುತ್ತಾ ಇರಿ. ಈಗ ಸಂಗಮಯುಗವಾಗಿದೆ. ಅಂಬಿಗನೂ
ನಿಮ್ಮನ್ನು ಈ ದಡದಿಂದ ಆ ದಡಕ್ಕೆ ಕರೆದುಕೊಂಡು ಹೋಗುತ್ತಾರೆ, ಇದು ಕೇವಲ ಒಂದು ದೋಣಿಯಲ್ಲ, ಇಡೀ
ಪ್ರಪಂಚವೇ ಒಂದು ದೊಡ್ಡ ಹಡಗಾಗಿದೆ. ಅದನ್ನು ತಂದೆಯು ಪಾರು ಮಾಡುತ್ತಾರೆ. ತಾವು ಮಧುರ ಮಕ್ಕಳಿಗೆ
ಎಷ್ಟು ಖುಷಿಯಾಗಬೇಕು - ನಿಮಗಾಗಿ ಸದಾ ಖುಷಿಯೇ ಖುಷಿಯಿದೆ. ಬೇಹದ್ದಿನ ತಂದೆಯು ಓದಿಸುತ್ತಿದ್ದಾರೆ.
ವಾಹ್! ಇದಂತೂ ಎಂದೂ ಕೇಳಿಯೂ ಇಲ್ಲ, ಓದಿಯೂ ಇಲ್ಲ. ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು
ಕಲಿಸುತ್ತೇನೆ. ತಾವು ಆತ್ಮಿಕ ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಿದ್ದೇನೆ. ಅಂದಾಗ ಪೂರ್ಣ
ಚೆನ್ನಾಗಿ ಕಲಿಯಬೇಕು ಮತ್ತು ಧಾರಣೆ ಮಾಡಿಕೊಳ್ಳಬೇಕು. ಸಂಪೂರ್ಣ ಓದಬೇಕಾಗಿದೆ. ವಿದ್ಯೆಯಲ್ಲಿ
ನಂಬರ್ ವಾರಂತೂ ಸದಾ ಇರುತ್ತದೆ. ಸ್ವಯಂನ್ನು ನೋಡಿಕೊಳ್ಳಿ - ನಾನು ಉತ್ತಮನೆ, ಮಧ್ಯಮನೆ, ಕನಿಷ್ಠನೆ?
ತಂದೆಯು ಹೇಳುತ್ತಾರೆ - ಸ್ವಯಂನ್ನು ನೋಡಿಕೊಳ್ಳಿ, ನಾನು ಉತ್ತಮನಾಗಲು ಯೋಗ್ಯನಾಗಿದ್ದೇನೆಯೇ?
ಆತ್ಮೀಯ ಸರ್ವೀಸ್ ಮಾಡುತ್ತೇನೆಯೇ? ಏಕೆಂದರೆ ತಂದೆಯು ಹೇಳುತ್ತಾರೆ - ಮಕ್ಕಳೇ, ಸೇವಾಧಾರಿಗಳಾಗಿ
ಅನುಸರಣೆ ಮಾಡಿ. ನಾನು ಸೇವೆಗಾಗಿಯೇ ಬಂದಿದ್ದೇನೆ, ಪ್ರತಿನಿತ್ಯ ಸೇವೆ ಮಾಡುತ್ತೇನೆ, ಆದ್ದರಿಂದಲೇ
ಈ ರಥವನ್ನು ಪಡೆದಿದ್ದೇನೆ. ಇವರ ರಥಕ್ಕೆ ಕಾಯಿಲೆ ಬಂದರೆ ನಾನು ಇವರಲ್ಲಿ ಕುಳಿತು ಮುರುಳಿಯನ್ನು
ಬರೆಯುತ್ತೇನೆ. ಆದರೆ ಮುಖದಿಂದ ಹೇಳಲು ಆಗದಿದ್ದರೆ ನಾನು ಬರೆಯುತ್ತೇನೆ ಅಂದರೆ ಮಕ್ಕಳಿಗೆ ತಪ್ಪಿ
ಹೋಗಬಾರದೆಂದು ನಾನು ಸರ್ವೀಸ್ ಮಾಡುತ್ತೇನಲ್ಲವೆ. ಇದು ಆತ್ಮೀಯ ಸರ್ವೀಸ್ ಆಗಿದೆ. ತಂದೆಯು ಮಧುರಾತಿ
ಮಧುರ ಮಕ್ಕಳಿಗೆ ತಿಳಿಸುತ್ತಿದ್ದಾರೆ - ಮಕ್ಕಳೇ, ನೀವೂ ಸಹ ತಂದೆಯ ಸರ್ವೀಸಿನಲ್ಲಿಯೇ ತೊಡಗಿರಿ.
ಆನ್ ಗಾಡ್ ಫಾದರ್ಲೀ ಸರ್ವೀಸ್, ಇಡೀ ವಿಶ್ವದ ಮಾಲೀಕರೇ ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು
ಬಂದಿದ್ದಾರೆ. ಯಾರು ಚೆನ್ನಾಗಿ ಪುರುಷಾರ್ಥ ಮಾಡುತ್ತಾರೆಯೋ ಅವರನ್ನು ಮಹಾವೀರರೆಂದು ಹೇಳಲಾಗುತ್ತದೆ.
ಯಾರು ಮಹಾವೀರರಾಗಿದ್ದಾರೆ, ಯಾರು ತಂದೆಯ ಡೈರೆಕ್ಷನ್(ಶ್ರೀಮತ) ನಂತೆ ನಡೆಯುತ್ತಾರೆಂದು
ನೋಡಲಾಗುತ್ತದೆ. ತಮ್ಮನ್ನು ಆತ್ಮನೆಂದು ತಿಳಿದು ಸಹೋದರ-ಸಹೋದರನನ್ನು ನೋಡಿ, ಈ ಶರೀರವನ್ನು
ಮರೆತುಬಿಡಿ ಎಂದು ಆದೇಶವಿದೆ. ತಂದೆಯು ಸಹ ಈ ಶರೀರಗಳನ್ನು ನೋಡುವುದಿಲ್ಲ. ತಂದೆಯು ಹೇಳುತ್ತಾರೆ-
ನಾನು ಆತ್ಮರನ್ನೇ ನೋಡುತ್ತೇನೆ ಬಾಕಿ ಇದಂತೂ ಜ್ಞಾನವಾಗಿದೆ ಏಕೆಂದರೆ ಆತ್ಮವು ಶರೀರದ ವಿನಃ
ಮಾತನಾಡಲು ಸಾಧ್ಯವಿಲ್ಲ. ನಾನೂ ಸಹ ಈ ಶರೀರದಲ್ಲಿ ಬಂದಿದ್ದೇನೆ, ಆಧಾರವಾಗಿ
ತೆಗೆದುಕೊಂಡಿರುವುದಾಗಿದೆ. ಶರೀರದ ಜೊತೆಯಲ್ಲಿಯೇ ಆತ್ಮವು ಓದಲು ಸಾಧ್ಯ. ತಂದೆಯ ಆಸನವು ಇದಾಗಿದೆ
(ಬ್ರಹ್ಮನ ತನು). ಇದು ಅಕಾಲ ಸಿಂಹಾಸನ ಆತ್ಮವು ಅಕಾಲ ಮೂರ್ತಿಯಾಗಿದೆ. ಆತ್ಮವು ಎಂದೂ ಚಿಕ್ಕದು -ದೊಡ್ಡದಾಗುವುದಿಲ್ಲ.
ಶರೀರವು ಚಿಕ್ಕದು-ದೊಡ್ಡದಾಗುವುದು. ಯಾರೆಲ್ಲರೂ ಆತ್ಮರಿದ್ದಾರೆಯೋ ಅವರೆಲ್ಲರ ಸಿಂಹಾಸನವೂ
ಭೃಕುಟಿಯ ಮಧ್ಯವಾಗಿದೆ. ಎಲ್ಲರಿಗೂ ಶರೀರವಂತೂ ಬೇರೆ-ಬೇರೆಯಾಗಿದೆ. ಕೆಲವರ ಅಕಾಲ ಸಿಂಹಾಸನವು
ಪುರುಷನದ್ದಾಗಿದೆ, ಕೆಲವರದು ಅಕಾಲ ಸಿಂಹಾಸನವು ಸ್ತ್ರೀಯದ್ದಾಗಿದೆ. ಕೆಲವರ ಅಕಾಲ ಸಿಂಹಾಸನ
ಮಕ್ಕಳದ್ದಾಗಿದೆ. ತಂದೆಯು ಕುಳಿತು ಮಕ್ಕಳಿಗೆ ಆತ್ಮೀಯ ವ್ಯಾಯಾಮವನ್ನು ಕಲಿಸುತ್ತಾರೆ. ಯಾರ
ಜೊತೆಯಲ್ಲಾದರೂ ಮಾತನಾಡುವಾಗ ಮೊದಲು ಆತ್ಮನೆಂದು ತಿಳಿಯಿರಿ. ನಾನಾತ್ಮ ಎಂತಹ ಸಹೋದರನೊಂದಿಗೆ
ಮಾತನಾಡುತ್ತೇನೆ. ಶಿವ ತಂದೆಯನ್ನು ನೆನಪು ಮಾಡಿ ಎಂದು ತಂದೆಯ ಸಂದೇಶವನ್ನು ಕೊಡಬೇಕು.
ನೆನಪಿನಿಂದಲೇ ತುಕ್ಕು ಇಳಿಯುತ್ತದೆ. ಚಿನ್ನದಲ್ಲಿ ಯಾವಾಗ ಮಿಶ್ರಣವಾಗುತ್ತದೆ. ಆಗ ಚಿನ್ನದ ಬೆಲೆಯೇ
ಕಡಿಮೆಯಾಗುತ್ತದೆ. ತಾವಾತ್ಮಗಳಲ್ಲಿಯೂ ತುಕ್ಕು ಬೀಳುವುದರಿಂದ ಬೆಲೆಯಿಲ್ಲದವರಾಗಿ ಬಿಟ್ಟಿದ್ದೀರಿ.
ಈಗ ಪುನಃ ಪಾವನರಾಗಬೇಕು. ತಾವಾತ್ಮರಿಗೆ ಈಗ ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ. ಆ ನೇತ್ರದಿಂದ
ತಮ್ಮ ಸಹೋದರರನ್ನು ನೋಡಿ. ಸಹೋದರ-ಸಹೋದರನನ್ನು ನೋಡುವುದರಿಂದ ಕರ್ಮೇಂದ್ರಿಯಗಳು ಎಂದೂ
ಚಂಚಲವಾಗುವುದಿಲ್ಲ. ರಾಜ್ಯಭಾಗ್ಯವನ್ನು ಪಡೆಯಬೇಕು. ವಿಶ್ವದ ಮಾಲೀಕರಾಗಲು ಈ ಪ್ರಯತ್ನಪಡಿ.
ಸಹೋದರ-ಸಹೋದರನೆಂದು ತಿಳಿದು ಎಲ್ಲರಿಗೂ ಈ ಜ್ಞಾನವನ್ನು ಕೊಡಿ ನಂತರ ಈ ಅಭ್ಯಾಸವು ಪಕ್ಕಾ ಆಗಿ
ಬಿಡುವುದು. ತಾವೆಲ್ಲಾ ಸತ್ಯ-ಸತ್ಯ ಸಹೋದರರಾಗಿದ್ದೀರಿ. ತಂದೆಯೂ ಸಹ ಮೇಲಿಂದ ಬಂದಿದ್ದಾರೆ. ನೀವೂ
ಸಹ ಅಲ್ಲಿಂದಲೇ ಬಂದಿದ್ದೀರಿ. ತಂದೆ ಮಕ್ಕಳ ಸಹಿತ ಸರ್ವೀಸ್ ಮಾಡುತ್ತಿದ್ದಾರೆ. ಸರ್ವೀಸ್ ಮಾಡಲು
ತಂದೆಯು ಧೈರ್ಯ ಕೊಡುತ್ತಾರೆ. ನಾನು ಸಹೋದರ ಆತ್ಮನಿಗೆ ಓದಿಸುತ್ತೇನೆ - ಈ ಅಭ್ಯಾಸ ಮಾಡಬೇಕು.
ಆತ್ಮವೇ ಓದುತ್ತದೆಯಲ್ಲವೆ, ಇದಕ್ಕೆ ಆಧ್ಯಾತ್ಮಿಕ ಜ್ಞಾನವೆನ್ನಲಾಗುತ್ತದೆ. ಈ ಜ್ಞಾನವು ಆತ್ಮೀಯ
ತಂದೆಯಿಂದಲೇ ಸಿಗುತ್ತದೆ. ಸ್ವಯಂನ್ನು ಆತ್ಮನೆಂದು ತಿಳಿಯಿರಿ ಎಂಬ ಜ್ಞಾನವನ್ನು ಸಂಗಮದಲ್ಲಿ
ತಂದೆಯೇ ಬಂದು ಕೊಡುತ್ತಾರೆ. ತಾವು ಅಶರೀರಿಗಳಾಗಿ ಬಂದಿದ್ದೀರಿ, ಪುನಃ ಶರೀರ ಧಾರಣೆ ಮಾಡಿ ತಾವು
84 ಜನ್ಮಗಳ ಪಾತ್ರವನ್ನು ಅಭಿನಯಿಸಿದಿರಿ. ಈಗ ಮತ್ತೆ ಹಿಂದಿರುಗಬೇಕು ಆದ್ದರಿಂದ ಸ್ವಯಂನ್ನು
ಆತ್ಮನೆಂದು ತಿಳಿದು ಸಹೋದರ-ಸಹೋದರ ದೃಷ್ಟಿಯಿಂದ ನೋಡಬೇಕು. ಈ ಪ್ರಯತ್ನಪಡಬೇಕಾಗಿದೆ. ತಮ್ಮ
ಪರಿಶ್ರಮ ಪಡಬೇಕು, ಬೇರೆಯವರಿಂದ ನಮಗೇನೂ ಆಗಬೇಕಾದ್ದಿಲ್ಲ, ಮನೆಯೇ ಮೊದಲ ಪಾಠಶಾಲೆ, ಅಂದರೆ ಮೊದಲು
ಸ್ವಯಂನ್ನು ಆತ್ಮನೆಂದು ತಿಳಿದು ನಂತರ ಸಹೋದರರಿಗೆ ತಿಳಿಸಿ ಆಗ ಬಾಣವು ಚೆನ್ನಾಗಿ ನಾಟುತ್ತದೆ. ಈ
ಹೊಳಪನ್ನು ತುಂಬಬೇಕು. ಶ್ರಮ ಪಟ್ಟಾಗಲೇ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ತಂದೆಯು ಬಂದಿರುವುದೇ
ಫಲವನ್ನು ಕೊಡಲು ಅಂದಮೇಲೆ ಶ್ರಮ ಪಡಬೇಕಾಗಿದೆ. ಸ್ವಲ್ಪ ಸಹನೆಯೂ ಪಡಬೇಕಾಗಿದೆ. ಯಾರಾದರೂ
ಉಲ್ಟಾ-ಸುಲ್ಟಾ ಮಾತನಾಡಿದರೆ ನೀವು ಸುಮ್ಮನೆ ಇರಿ. ತಾವು ಸುಮ್ಮನಿದ್ದರೆ ಬೇರೆಯವರು ಏನು ಮಾಡಲು
ಸಾಧ್ಯ? ಎರಡು ಕೈಯಿಂದ ಚಪ್ಪಾಳೆಯಾಗುತ್ತದೆ. ಒಬ್ಬರ ಮುಖದಿಂದ ಚಪ್ಪಾಳೆಯನ್ನು ಬಾರಿಸಿದರೆ
ಇನ್ನೊಬ್ಬರು ತಾವಾಗಿಯೇ ಸುಮ್ಮನಿದ್ದರೆ ಆಗ ಅವರೂ ಸುಮ್ಮನಾಗಿ ಬಿಡುತ್ತಾರೆ. ಕೈಗೆ ಕೈ
ಹೊಡೆಯುವುದರಿಂದ ಶಬ್ಧ ಬರುತ್ತದೆ. ಮಕ್ಕಳು ಪರಸ್ಪರರಿಗೆ ಕಲ್ಯಾಣ ಮಾಡಬೇಕು. ತಂದೆಯು ಹೇಳುತ್ತಾರೆ
- ಮಕ್ಕಳೇ, ಸದಾ ಖುಷಿಯಲ್ಲಿರಲು ಇಚ್ಛೆಯಿದ್ದರೆ ಮನ್ಮನಾಭವ. ಸ್ವಯಂನ್ನು ಆತ್ಮ ಎಂದು ತಿಳಿದು
ತಂದೆಯನ್ನು ನೆನಪು ಮಾಡಿ ಆತ್ಮಗಳ ಕಡೆ ನೋಡಿ, ಸಹೋದರನಿಗೂ ಈ ಜ್ಞಾನವನ್ನು ಕೊಡಿ. ಯೋಗ
ಮಾಡಿಸುತ್ತಿದ್ದಾಗಲೂ ತಮ್ಮನ್ನು ಆತ್ಮನೆಂದು ತಿಳಿದು ಸಹೋದರನನ್ನು ನೋಡುತ್ತೀರಿ ಅಂದಾಗ ಸರ್ವೀಸ್
ಚೆನ್ನಾಗಿ ಆಗುತ್ತದೆ. ಸಹೋದರರಿಗೆ ತಿಳಿಸಿ ಎಂದು ತಂದೆಯು ಹೇಳುತ್ತಾರೆ. ಸಹೋದರರೆಲ್ಲರೂ ಸಹ
ತಂದೆಯಿಂದ ಆಸ್ತಿಯನ್ನು ಪಡೆಯುತ್ತಾರೆ ಅಂದಾಗ ಈ ಆತ್ಮೀಯ ಜ್ಞಾನವು ಒಮ್ಮೆ ಮಾತ್ರವೇ ತಾವು
ಬ್ರಾಹ್ಮಣ ಮಕ್ಕಳಿಗೆ ಸಿಗುತ್ತದೆ. ತಾವು ಬ್ರಾಹ್ಮಣ ಮಕ್ಕಳು ಮತ್ತೆ ದೇವತೆಗಳಾಗುತ್ತೀರಿ ಅಂದಾಗ ಈ
ಸಂಗಮಯುಗವನ್ನೇನು ಬಿಡುತ್ತೀರೇನು! ಇಲ್ಲವಾದರೆ ಹೇಗೆ ಪಾರಾಗುತ್ತೀರಿ ಜಿಗಿಯುತ್ತೀರೇನು. ಈ
ಸಂಗಮಯುಗವು ವಿಚಿತ್ರವಾಗಿದೆ ಅಂದಮೇಲೆ ಮಕ್ಕಳು ಆತ್ಮೀಯ ಯಾತ್ರೆಯಲ್ಲಿರುವ ಅಭ್ಯಾಸ
ಮಾಡಿಕೊಳ್ಳಬೇಕಾಗಿದೆ. ನಿಮ್ಮದೇ ಲಾಭದ ವಿಚಾರವಾಗಿದೆ. ತಂದೆಯ ಶಿಕ್ಷಣವನ್ನು ಸಹೋದರರಿಗೆ
ಕೊಡಬೇಕಾಗಿದೆ. ತಂದೆಯು ಹೇಳುತ್ತಾರೆ - ನಾನು ನೀವಾತ್ಮರಿಗೆ ಜ್ಞಾನವನ್ನು ಕೊಡುತ್ತಿದ್ದೇನೆ.
ಆತ್ಮವನ್ನೇ ನೋಡುತ್ತೇನೆ. ಮನುಷ್ಯರು ಮನುಷ್ಯರ ಜೊತೆ ಮಾತನಾಡುತ್ತಾರೆ ಅಂದಾಗ ಅವರ ಮುಖವನ್ನು
ನೋಡುತ್ತಾರಲ್ಲವೆ. ನೀವು ಆತ್ಮರ ಜೊತೆ ಮಾತನಾಡುತ್ತೀರಿ. ಆಗ ಆತ್ಮವನ್ನೇ ನೋಡಬೇಕು. ಭಲೇ ಶರೀರದ
ಮುಖಾಂತರ ಜ್ಞಾನವನ್ನು ಕೊಡುತ್ತೀರಿ ಆದರೆ ಇದರಲ್ಲಿ ಶರೀರದ ಭಾನವನ್ನು ಬಿಡಬೇಕು. ಪರಮಾತ್ಮ ತಂದೆಯು
ನಮಗೆ ಜ್ಞಾನವನ್ನು ಕೊಡುತ್ತಿದ್ದಾರೆ ಎಂದು ನೀವಾತ್ಮರು ಅರ್ಥ ಮಾಡಿಕೊಳ್ಳುತ್ತೀರಿ. ತಂದೆಯೂ ಸಹ
ಹೇಳುತ್ತಾರೆ - ಆತ್ಮಗಳನ್ನು ನೋಡುತ್ತೇನೆ, ನಾವು ಪರಮಾತ್ಮ ತಂದೆಯನ್ನು ನೋಡುತ್ತಿದ್ದೇವೆಂದು
ನೀವಾತ್ಮರೂ ಸಹ ಹೇಳುತ್ತೀರಿ. ಅವರಿಂದ ಜ್ಞಾನವನ್ನು ಪಡೆಯುತ್ತಿದ್ದೇವೆ. ಇದಕ್ಕೆ ಆಧ್ಯಾತ್ಮಿಕ
ಜ್ಞಾನ ಕೊಡುವುದು ತೆಗೆದುಕೊಳ್ಳುವುದಾಗಿದೆ ಆತ್ಮಕ್ಕೆ ಆತ್ಮದೊಂದಿಗೇ. ಆತ್ಮದಲ್ಲಿಯೇ ಜ್ಞಾನವಿದೆ
ಅಂದಾಗ ಆತ್ಮಕ್ಕೆ ಜ್ಞಾನವನ್ನು ಕೊಡಬೇಕು. ನಿಮ್ಮ ಜ್ಞಾನದಲ್ಲಿ ಈ ಹರಿತವು ತುಂಬುತ್ತದೆ. ಆಗ
ಯಾರಿಗಾದರೂ ತಿಳಿಸುವುದರಿಂದ ತಕ್ಷಣ ಜ್ಞಾನವು ನಾಟುತ್ತದೆ. ತಂದೆಯು ತಿಳಿಸುತ್ತಾರೆ - ಜ್ಞಾನವನ್ನು
ಅಭ್ಯಾಸ ಮಾಡಿ ನೋಡಿ ಆಗ ಬಾಣವು ನಾಟುತ್ತದೆ. ಈ ಹೊಸ ಅಭ್ಯಾಸವನ್ನು ಮಾಡಿಕೊಳ್ಳಬೇಕಾದರೆ ಶರೀರಭಾನವು
ಹೊರಟು ಹೋಗುತ್ತದೆ, ಮಾಯೆಯ ಬಿರುಗಾಳಿ ಕಡಿಮೆ ಬರುತ್ತದೆ, ಕೆಟ್ಟ ಸಂಕಲ್ಪಗಳು ಬರುವುದಿಲ್ಲ.
ಕುದೃಷ್ಟಿಯು ಬರುವುದಿಲ್ಲ. ನಾವಾತ್ಮ 84ರ ಚಕ್ರವನ್ನು ಸುತ್ತು ಹಾಕಿದೆವು, ಈಗ ನಾಟಕವು
ಪೂರ್ಣವಾಗುತ್ತದೆ. ಈಗ ತಂದೆಯ ನೆನಪಿನಲ್ಲಿರಬೇಕಾಗಿದೆ. ನೆನಪಿನಿಂದಲೇ ತಮೋಪ್ರಧಾನರಿಂದ
ಸತೋಪ್ರಧಾನರಾಗಿ, ಸತೋಪ್ರಧಾನ ಪ್ರಪಂಚದ ಮಾಲೀಕರಾಗುತ್ತೀರಿ. ಎಷ್ಟೊಂದು ಸಹಜವಾಗಿದೆ. ಮಕ್ಕಳಿಗೆ ಈ
ಶಿಕ್ಷಣವನ್ನು ಕೊಡುವುದೇ ನನ್ನ ಪಾತ್ರವಾಗಿದೆ ಎಂದು ತಂದೆಗೆ ಗೊತ್ತಿದೆ. ಯಾವುದೇ ಹೊಸ ಮಾತಿಲ್ಲ.
ಪ್ರತೀ 5000 ವರ್ಷದ ನಂತರ ನಾನು ಬರಲೇಬೇಕಾಗಿದೆ. ನಾನು ಬಂಧಿತನಾಗಿದ್ದೇನೆ, ಮಕ್ಕಳಿಗೇ ಕುಳಿತು
ತಿಳಿಸುತ್ತೇನೆ - ಮಧುರ ಮಕ್ಕಳೇ, ಆತ್ಮೀಯ ನೆನಪಿನ ಯಾತ್ರೆಯಲ್ಲಿರಿ ಆಗ ಅಂತ್ ಮತಿ ಸೋ
ಗತಿಯಾಗುತ್ತದೆ ಅಂದಾಗ ಇದು ಅಂತ್ಯಕಾಲವಾಗಿದೆಯಲ್ಲವೆ. ನನ್ನೊಬ್ಬನನ್ನೇ ನೆನಪು ಮಾಡಿದಾಗ ನಿಮ್ಮ
ಸದ್ಗತಿಯಾಗುತ್ತದೆ. ಆತ್ಮಾಭಿಮಾನಿಯಾಗುವ ಈ ಶಿಕ್ಷಣವು ಒಮ್ಮೆ ಮಾತ್ರವೇ ತಾವು ಮಕ್ಕಳಿಗೆ
ಸಿಗುತ್ತದೆ. ಎಷ್ಟೊಂದು ಅದ್ಭುತ ಜ್ಞಾನವಾಗಿದೆ. ತಂದೆಯು ಅದ್ಭುತ ಅಂದಾಗ ತಂದೆಯು ಜ್ಞಾನವೂ
ಅದ್ಭುತವೇ, ಇದನ್ನು ಎಂದೂ ಯಾರೂ ಹೇಳಲು ಸಾಧ್ಯವಿಲ್ಲ ಈಗ ಹಿಂತಿರುಗಿ ಹೋಗಬೇಕಾಗಿದೆ. ಆದ್ದರಿಂದ
ತಂದೆಯು ಹೇಳುತ್ತಾರೆ - ಮಧುರ ಮಕ್ಕಳೇ, ಈ ಅಭ್ಯಾಸವನ್ನು ಮಾಡಿ ಸ್ವಯಂನ್ನು ಆತ್ಮನೆಂದು ತಿಳಿದು
ಆತ್ಮಕ್ಕೆ ಜ್ಞಾನವನ್ನು ಕೊಡಿ. ಮೂರನೆಯ ನೇತ್ರದಿಂದ ಸಹೋದರ-ಸಹೋದರನನ್ನು ನೋಡಬೇಕೆಂದಾಗ ಇದು ಬಹಳ
ಕಷ್ಟವಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
೧ . ಹೇಗೆ ತಂದೆಯು
ಆತ್ಮೀಯ ಮಕ್ಕಳ ಸೇವೆಗೆ ಬಂದಿದ್ದಾರೆ ಹಾಗೆಯೇ ತಂದೆಯನ್ನು ಅನುಸರಿಸಿ ಆತ್ಮಿಕ ಸೇವೆ ಮಾಡಬೇಕಾಗಿದೆ.
ತಂದೆಯ ಆದೇಶದಂತೆ ನಡೆದು ಖುಷಿಯ ಟಾನಿಕ್ ತಿಂದು ಅನ್ಯರಿಗೂ ತಿನ್ನಿಸಬೇಕಾಗಿದೆ.
೨ . ಯಾರಾದರೂ ಉಲ್ಟಾ-ಸುಲ್ಟಾ ಮಾತನಾಡಿದರೆ ಶಾಂತವಾಗಿರಬೇಕಾಗಿದೆ, ಮುಖದಿಂದ ಶಬ್ಧ ಬರಬಾರದು, ಸಹನೆ
ಮಾಡಿಕೊಳ್ಳಬೇಕಾಗಿದೆ.
ವರದಾನ:
ಸೈಲೆನ್ಸ್ ನ
ಸಾಧನೆಗಳ ಮುಖಾಂತರ ಮಾಯೆಯನ್ನು ದೂರದಿಂದಲೇ ಗುರುತಿಸಿ ಓಡಿಸುವಂತಹ ಮಾಯಾಜೀತ್ ಭವ.
ಮಾಯೆಯಂತೂ ಅಂತಿಮ
ಘಳಿಗೆಯವರೆಗೂ ಬರುವುದು ಆದರೆ ಮಾಯೆಯ ಕೆಲಸವಾಗಿದೆ ಬರುವುದು ಮತ್ತು ನಿಮ್ಮ ಕೆಲಸವಾಗಿದೆ ಅದನ್ನು
ದೂರದಿಂದಲೆ ಓಡಿಸುವುದು. ಮಾಯೆ ಬಂದು ಮತ್ತು ನಿಮ್ಮನ್ನು ಅಲುಗಾಡಿಸಿ ನಂತರ ನೀವು ಓಡಿಸುವುದು, ಇದೂ
ಸಹಾ ಸಮಯ ವ್ಯರ್ಥವಾಗುವುದು. ಆದ್ದರಿಂದ ಸೈಲೆನ್ಸ್ ನ ಸಾಧನೆಗಳ ಮೂಲಕ ನೀವು ದೂರದಿಂದಲೇ ಗುರುತಿಸಿ
ಇದು ಮಾಯೆಯಾಗಿದೆ. ಅದನ್ನು ಬಳಿಯಲ್ಲಿ ಸುಳಿಯಲು ಬಿಡಬೇಡಿ. ಒಂದು ವೇಳೆ ಏನು ಮಾಡುವುದು, ಹೇಗೆ
ಮಾಡುವುದು, ಈಗಿನ್ನೂ ಪುರುಷಾರ್ಥಿಯಾಗಿದ್ದೇನೆ.... ಎಂದು ಯೋಚಿಸುವಿರಿ ಎಂದರೆ ಮಾಯೆಗೆ ಬರಲು
ಖಾತ್ರಿ ಮಾಡಿದ ಹಾಗೆ, ನಂತರ ಬೇಸರವಾಗಿ ಬಿಡುವಿರಿ. ಆದ್ದರಿಂದ ದೂರದಿಂದಲೆ ಕಂಡು ಹಿಡಿದು ಓಡಿಸಿ
ಬಿಡಿ ಆಗ ಮಾಯಾಜೀತ್ ಆಗಿ ಬಿಡುವಿರಿ.
ಸ್ಲೋಗನ್:
ಶ್ರೇಷ್ಠ ಭಾಗ್ಯದ ರೇಖೆಗಳನ್ನು ಇಮರ್ಜ್ ಮಾಡಿಕೊಳ್ಳಿ ಆಗ ಹಳೆಯ ಸ೦ಸ್ಕಾರಗಳ ರೇಖೆಗಳು ಮರ್ಜ್ ಆಗಿ
ಬಿಡುವುದು.
ಬ್ರಹ್ಮಾ ತಂದೆಯ
ಸಮಾನರಾಗಲು ವಿಶೇಷ ಪುರುಷಾರ್ಥ -
ಹೇಗೆ ವೃಕ್ಷದ ರಚೈತ ಬೀಜ. ಯಾವಾಗ ವೃಕ್ಷದ ಅಂತಿಮ ಸ್ಟೇಜ್ ಬರುವುದು, ಆಗ ಅದು ಮತ್ತೆ ಮೇಲೆ
ಬರುವುದು. ಅದೇ ರೀತಿ ಬೇಹದ್ದಿನ ಮಾಸ್ಟರ್ ರಚೈತ ಸದಾ ತಮ್ಮನ್ನು ಈ ಕಲ್ಪ ವೃಕ್ಷದ ಮೇಲೆ ನಿಂತಿರುವ
ಅನುಭವ ಮಾಡಿ, ತಂದೆಯ ಜೊತೆ-ಜೊತೆ ವೃಕ್ಷದ ಮೇಲೆ ಮಾಸ್ಟರ್ ಬೀಜ ರೂಪವಾಗಿ ಶಕ್ತಿಗಳ, ಗುಣಗಳ,
ಶುಭಭಾವನೆ-ಶುಭಕಾಮನೆಯ ಸ್ನೇಹದ ಸಹಯೋಗದ ಕಿರಣಗಳನ್ನು ಕಳುಹಿಸಿ.