20.05.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ಮುಳ್ಳುಗಳನ್ನು ಹೂಗಳನ್ನಾಗಿ ಮಾಡಲು ಬಂದಿದ್ದಾರೆ, ದೇಹಾಭಿಮಾನವು ಎಲ್ಲದಕ್ಕಿಂತ ದೊಡ್ಡ
ಮುಳ್ಳಾಗಿದೆ, ಇದರಿಂದ ಎಲ್ಲಾ ವಿಕಾರಗಳು ಬರುತ್ತವೆ ಆದ್ದರಿಂದ ದೇಹೀ-ಅಭಿಮಾನಿಯಾಗಿರಿ.”
ಪ್ರಶ್ನೆ:
ಭಕ್ತರು ತಂದೆಯು
ಯಾವ ಒಂದು ಕರ್ತವ್ಯವನ್ನು ತಿಳಿಯದ ಕಾರಣ ಸರ್ವವ್ಯಾಪಿ ಎಂದು ಹೇಳಿ ಬಿಟ್ಟಿದ್ದಾರೆ?
ಉತ್ತರ:
ತಂದೆಯು
ಬಹುರೂಪಿಯಾಗಿದ್ದಾರೆ, ಎಲ್ಲಿ ಅವಶ್ಯಕತೆಯಿರುತ್ತದೆಯೋ ಅಲ್ಲಿ ಒಂದು ಸೆಕೆಂಡಿನಲ್ಲಿ ಯಾವುದೇ
ಮಕ್ಕಳಲ್ಲಿ ಪ್ರವೇಶ ಮಾಡಿ ಮುಂದಿರುವ ಆತ್ಮನ ಕಲ್ಯಾಣ ಮಾಡಿ ಬಿಡುತ್ತಾರೆ, ಭಕ್ತರಿಗೆ
ಸಾಕ್ಷಾತ್ಕಾರ ಮಾಡಿಸುತ್ತಾರೆ. ಅವರು ಸರ್ವವ್ಯಾಪಿಯಲ್ಲ ಆದರೆ ತುಂಬಾ ತೀವ್ರವಾಗಿರುವ ರಾಕೆಟ್
ಆಗಿದ್ದಾರೆ. ತಂದೆಗೆ ಬಂದು-ಹೋಗಲು ಸಮಯ ಹಿಡಿಸುವುದಿಲ್ಲ. ಈ ಮಾತನ್ನು ತಿಳಿಯದಿರುವ ಕಾರಣ ಭಕ್ತರು
ತಂದೆಯನ್ನು ಸರ್ವವ್ಯಾಪಿಯೆ೦ದು ಹೇಳಿ ಬಿಡುತ್ತಾರೆ.
ಓಂ ಶಾಂತಿ.
ಇದು ಅತೀ ಚಿಕ್ಕ ಹೂದೋಟವಾಗಿದೆ. ಇದು ಮಾನವರ ಹೂದೋಟ, ತೋಟದಲ್ಲಿ ಹೋದಾಗ ಅಲ್ಲಿ ಭಿನ್ನ
ಭಿನ್ನವಾಗಿರುವ ಹಳೆಯ ವೃಕ್ಷಗಳು ಇರುತ್ತವೆ, ಕೆಲವು ಕಡೆ ಮೊಗ್ಗುಗಳೂ ಇರುತ್ತವೆ, ಕೆಲವು ಕಡೆ
ಅರ್ಧ ಅರಳಿರುವ ಮೊಗ್ಗುಗಳಿರುತ್ತವೆ, ಇದು ತೋಟವಾಗಿದೆಯಲ್ಲವೆ. ಈಗ ಇದನ್ನು ಮಕ್ಕಳು
ತಿಳಿದುಕೊಂಡಿದ್ದೀರಿ - ಇಲ್ಲಿ ಬಂದಿರುವುದೇ ಮುಳ್ಳುಗಳಿಂದ ಹೂಗಳಾಗಲು. ನಾವು ಶ್ರೀಮತದಂತೆ
ಮುಳ್ಳುಗಳಿಂದ ಹೂಗಳಾಗುತ್ತಿದ್ದೇವೆ. ಮುಳ್ಳುಗಳು ಕಾಡಿನಲ್ಲಿರುತ್ತವೆ, ಹೂಗಳು ತೋಟದಲ್ಲಿರುತ್ತವೆ.
ತೋಟವು ಸ್ವರ್ಗವಾಗಿದೆ, ಕಾಡು ನರಕವಾಗಿದೆ. ತಂದೆಯು ತಿಳಿಸುತ್ತಾರೆ - ಇದು ಪತಿತ, ಮುಳ್ಳಿನ
ಕಾಡಾಗಿದೆ, ಅದು ಹೂವಿನ ತೋಟವಾಗಿದೆ. ಹೂದೋಟವಿತ್ತು ಅದು ಈಗ ಮುಳ್ಳಿನ ಕಾಡಾಗಿದೆ. ದೇಹಾಭಿಮಾನವು
ಎಲ್ಲದಕ್ಕಿಂತ ದೊಡ್ಡ ಕಾಡಾಗಿದೆ, ಅದರ ಹಿಂದೆ ಎಲ್ಲಾ ವಿಕಾರಗಳು ಬರುತ್ತವೆ. ಅಲ್ಲಿ ನೀವು
ದೇಹಿ-ಅಭಿಮಾನಿಯಾಗಿರುತ್ತೀರಿ, ಈಗ ನಮ್ಮ ಆಯಸ್ಸು ಪೂರ್ಣವಾಯಿತು. ಈಗ ನಾವು ಈ ಹಳೆಯ ಶರೀರವನ್ನು
ಬಿಟ್ಟು ಬೇರೆ ಶರೀರವನ್ನು ಪಡೆಯುತ್ತೇವೆಂಬ ಆತ್ಮ ಜ್ಞಾನವಿರುತ್ತದೆ. ನಾವು ಗರ್ಭ ಮಹಲಿನಲ್ಲಿ
ವಿರಾಜಮಾನವಾಗುತ್ತೇವೆಂಬ ಸಾಕ್ಷಾತ್ಕಾರವೂ ಆಗುತ್ತದೆ. ಮೊದಲು ಮೊಗ್ಗಾಗಿ, ಮೊಗ್ಗಿನಿಂದ
ಹೂವಾಗುತ್ತವೆ ಆದರೆ ಅಲ್ಲಿ ಸೃಷ್ಟಿಚಕ್ರ ಹೇಗೆ ತಿರುಗುತ್ತದೆ ಎಂಬ ಜ್ಞಾನವಿರುವುದಿಲ್ಲ ಕೇವಲ ಇದು
ಹಳೆಯ ಶರೀರವಾಗಿದೆ, ಇದನ್ನು ಬದಲಾಯಿಸಬೇಕೆಂಬ ಜ್ಞಾನವಿರುತ್ತದೆ. ಆಂತರ್ಯದಲ್ಲಿ ಬದಲಾಯಿಸುವಂತಹ
ಖುಷಿಯಿರುತ್ತದೆ. ಈ ಕಲಿಯುಗೀ ಪದ್ಧತಿಗಳು ಅಲ್ಲಿರುವುದಿಲ್ಲ. ಇಲ್ಲಿ ಪ್ರಪಂಚದ ಕುಲ ಮರ್ಯಾದೆ
ಇರುತ್ತದೆ ಈ ಅಂತರವಿದೆ. ಅಲ್ಲಿಯ ಮರ್ಯಾದೆಗೆ ಸತ್ಯ ಮರ್ಯಾದೆಯೆ೦ದು ಕರೆಯಲಾಗುವುದು, ಇಲ್ಲಿ
ಅಸತ್ಯ ಮರ್ಯಾದೆಗಳಿವೆ. ಸೃಷ್ಟಿಯಂತೂ ಇದೆಯಲ್ಲವೆ. ಯಾವಾಗ ಆಸುರೀ ಸಂಪ್ರದಾಯವಿರುತ್ತದೆಯೋ ಆಗ
ತಂದೆಯು ಬರುತ್ತಾರೆ. ಅದರಲ್ಲಿಯೂ ಯಾವಾಗ ದೈವೀ ಸಂಪ್ರದಾಯವು ಸ್ಥಾಪನೆಯಾಗುತ್ತದೆಯೋ ಆಗ
ವಿನಾಶವಾಗುತ್ತದೆ. ಅಗತ್ಯವಾಗಿ ಈಗ ಅಸುರೀ ಸಂಪ್ರದಾಯವಿದೆ, ಈ ಆಸುರೀ ಸಂಪ್ರದಾಯದಲ್ಲಿಯೇ ದೈವೀ
ಗುಣವುಳ್ಳ ಸಂಪ್ರದಾಯ ಸ್ಥಾಪನೆಯಾಗುತ್ತಿದೆ. ಯೋಗಬಲದಿಂದ ನಿಮ್ಮ ಜನ್ಮ-ಜನ್ಮಾಂತರದ ಪಾಪವು
ನಷ್ಟವಾಗುತ್ತದೆಯೆ೦ದು ತಿಳಿಸಲಾಗಿದೆ. ಈ ಜನ್ಮದಲ್ಲಿಯೂ ಯಾವ ಪಾಪ ಮಾಡಲಾಗಿದೆ ಅದನ್ನೂ
ಹೇಳಬೇಕಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ವಿಕಾರದ ಮಾತೇ ಆಗಿದೆ. ನೆನಪಿನಲ್ಲಿ ಶಕ್ತಿಯಿದೆ,
ತಂದೆಯು ಸರ್ವಶಕ್ತಿವಂತನಾಗಿದ್ದಾರೆ. ಯಾರು ಸರ್ವರಿಗೂ ತಂದೆಯಾಗಿದ್ದಾರೆ ಅವರ ಜೊತೆ ಸಂಬಂಧ
ಜೋಡಿಸುವುದರಿಂದ ಪಾಪವು ಭಸ್ಮವಾಗುತ್ತದೆ ಎಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಈ
ಲಕ್ಷ್ಮೀ-ನಾರಾಯಣ ಸರ್ವಶಕ್ತಿವಂತರಾಗಿದ್ದಾರೆ, ಇಡೀ ವಿಶ್ವದ ಮೇಲೆ ಇವರ ರಾಜ್ಯವಿದೆ, ಅದು ಹೊಸ
ಪ್ರಪಂಚವಾಗಿರುತ್ತದೆ. ಅಲ್ಲಿ ಪ್ರತಿಯೊಂದು ವಸ್ತು ಹೊಸದಾಗಿರುತ್ತದೆ, ಈಗ ನೆಲವೂ ಸಹ ಬಂಜರು
ಭೂಮಿಯಾಗಿ ಬಿಟ್ಟಿದೆ. ಈಗ ನೀವು ಮಕ್ಕಳು ಹೊಸ ಪ್ರಪಂಚದ ಮಾಲೀಕರಾಗುತ್ತೀರಿ ಆದ್ದರಿಂದ ಎಷ್ಟೊಂದು
ಖುಷಿಯಿರಬೇಕಾಗಿದೆ. ವಿದ್ಯಾರ್ಥಿಗಳು ಹೇಗಿರುತ್ತಾರೆಯೋ ಹಾಗೆಯೇ ಖುಷಿಯೂ ಹೆಚ್ಚಾಗಿರುತ್ತದೆ. ಇದು
ನಿಮ್ಮ ಸರ್ವ ಶ್ರೇಷ್ಠ ವಿಶ್ವ ವಿದ್ಯಾಲಯವಾಗಿದೆ, ಓದಿಸುವವರೂ ಸಹ ಶ್ರೇಷ್ಠಾತಿ
ಶ್ರೇಷ್ಠವಾಗಿದ್ದಾರೆ. ಮಕ್ಕಳೂ ಸಹ ಶ್ರೇಷ್ಠಾತಿ ಶ್ರೇಷ್ಠರಾಗಲು ಓದುತ್ತಾರೆ. ನೀವು ಮಕ್ಕಳು
ಎಷ್ಟೊಂದು ಕನಿಷ್ಠರಾಗಿದ್ದವರು ಒಮ್ಮೆಲೆ ಕನಿಷ್ಠರಿಂದ ಶ್ರೇಷ್ಠರಾಗುತ್ತೀರಿ. ಸ್ವಯಂ ತಂದೆಯೇ
ಹೇಳುತ್ತಾರೆ- ಈಗ ನೀವು ಸ್ವರ್ಗಕ್ಕೆ ಯೋಗ್ಯರಾಗಿದ್ದೀರೇನು? ಅಪವಿತ್ರರು ಅಲ್ಲಿಗೆ ಹೋಗಲು
ಸಾಧ್ಯವಿಲ್ಲ. ಕನಿಷ್ಠರಾಗಿರುವ ಕಾರಣ ಶ್ರೇಷ್ಠ ದೇವತೆಗಳ ಮುಂದೆ ಹೋಗಿ ಮಹಿಮೆ ಮಾಡುತ್ತಾರೆ.
ಮಂದಿರಗಳಿಗೆ ಹೋಗಿ ದೇವತೆಗಳ ಶ್ರೇಷ್ಠತೆ ಹಾಗೂ ತಮ್ಮ ಕನಿಷ್ಠತೆಯನ್ನು ವರ್ಣನೆ ಮಾಡುತ್ತಾರೆ.
ನಂತರ ನಾವೂ ಈ ರೀತಿಯಾಗಿ ಶ್ರೇಷ್ಠರಾಗುತ್ತೇವೆ, ದಯೆ ತೋರಿಸಿ ಎಂದು ಬೇಡುತ್ತಾರೆ ಮತ್ತು ಅವರ
ಮುಂದೆ ತಲೆ ಬಾಗುತ್ತಾರೆ. ಅವರೂ ಸಹ ಮನುಷ್ಯರಾಗಿದ್ದಾರೆ ಆದರೆ ಅವರಲ್ಲಿ ದೈವೀ ಗುಣಗಳಿವೆ.
ಮಂದಿರಗಳಿಗೆ ಹೋಗಿ ಅವರಂತೆಯೇ ನಾವೂ ಆಗಬೇಕೆಂದು ಪೂಜಿಸುತ್ತಾರೆ. ಇವರನ್ನು ಈ ರೀತಿಯಾಗಿ ಮಾಡಿದವರು
ಯಾರೆಂಬುದು ಯಾರಿಗೂ ಗೊತ್ತಿಲ್ಲ. ಇಡೀ ನಾಟಕವೇ ನೀವು ಮಕ್ಕಳ ಬುದ್ಧಿಯಲ್ಲಿ ಕುಳಿತಿದೆ, ದೈವೀ
ವೃಕ್ಷದ ಸಸಿಯ ನಾಟಿಯು ಹೇಗೆ ನಡೆಯುತ್ತಿದೆ. ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ, ಇದು ಪತಿತ
ಪ್ರಪಂಚವಾಗಿದೆ ಆದ್ದರಿಂದ ತಂದೆಯೇ ಬಂದು ಪತಿತರಿಂದ ಪಾವನ ಮಾಡು ಎಂದು ಕರೆಯುತ್ತಾರೆ. ಈಗ ನೀವು
ಪಾವನರಾಗಲು ಪುರುಷಾರ್ಥ ಮಾಡುತ್ತೀರಿ. ಉಳಿದವರೆಲ್ಲರೂ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ
ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಮನ್ಮನಾಭವದ ಮಂತ್ರವು ಮುಖ್ಯವಾಗಿದೆ, ಅದನ್ನು ತಂದೆಯೇ ನಿಮಗೆ
ಕೊಡುತ್ತಾರೆ. ಗುರುಗಳಂತೂ ಅನೇಕರಿದ್ದಾರೆ, ಎಷ್ಟೊಂದು ಮಂತ್ರಗಳನ್ನು ಕೊಡುತ್ತಾರೆ. ತಂದೆಯದ್ದು
ಒಂದೇ ಮಂತ್ರವಾಗಿದೆ. ತಂದೆಯು ಭಾರತದಲ್ಲಿ ಬಂದು ಮಂತ್ರವನ್ನು ಕೊಟ್ಟಿದ್ದರು, ಆದ್ದರಿಂದ ನೀವು
ದೇವಿ-ದೇವತೆಗಳಾಗಿದ್ದಿರಿ. ಭಗವಾನುವಾಚ ಇದೆಯಲ್ಲವೆ - ಇವರು ಶ್ಲೋಕ ಮೊದಲಾದವುಗಳನ್ನು ಹೇಳಿ
ಬಿಟ್ಟಿದ್ದಾರೆ ಆದರೆ ಅರ್ಥವೇನೂ ತಿಳಿದುಕೊಂಡಿಲ್ಲ, ನೀವು ಅರ್ಥವನ್ನೂ ತಿಳಿಸುತ್ತೀರಿ.
ಕುಂಭಮೇಳದಲ್ಲಿಯೂ ನೀವು ಎಲ್ಲರಿಗೂ ತಿಳಿಸಬಹುದು, ಇದು ಪತಿತ ಪ್ರಪಂಚವಾಗಿದೆ ನರಕವಾಗಿದೆ.
ಸತ್ಯಯುಗ ಪಾವನ ಪ್ರಪಂಚವಾಗಿತ್ತು, ಅದನ್ನು ಸ್ವರ್ಗವೆಂದು ಕರೆಯಲಾಗುವುದು. ಪತಿತ ಪ್ರಪಂಚದಲ್ಲಿ
ಪಾವನರು ಯಾರೂ ಇರುವುದಿಲ್ಲ. ಮನುಷ್ಯರು ಪಾವನರಾಗುವ ಸಲುವಾಗಿ ಗಂಗಾಸ್ನಾನ ಮಾಡಲು ಹೋಗುತ್ತಾರೆ
ಏಕೆಂದರೆ ಶರೀರವನ್ನೇ ಪಾವನ ಮಾಡಿಕೊಳ್ಳಬೇಕೆಂದು ತಿಳಿದುಕೊಂಡಿದ್ದಾರೆ. ಆತ್ಮವಂತೂ ಸದಾ
ಪಾವನವಾಗಿಯೇ ಇರುತ್ತದೆ. ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ಆತ್ಮವು ಜ್ಞಾನ ಸ್ನಾನದಿಂದ
ಪವಿತ್ರವಾಗುತ್ತದೆಯೇ ವಿನಃ ನೀರಿನ ಸ್ನಾನದಿಂದಲ್ಲ ಎಂದು ನೀವು ಬರೆಯಬಹುದು. ನೀರಿನ ಸ್ನಾನವನ್ನಂತೂ
ಪ್ರತಿನಿತ್ಯ ಮಾಡುತ್ತೇವೆ, ಎಲ್ಲಿ ನದಿಗಳಿವೆ ಅಲ್ಲಿ ಪ್ರತಿನಿತ್ಯ ಸ್ನಾನ ಮಾಡುತ್ತಾರೆ, ಅದೇ
ನೀರನ್ನು ಕುಡಿಯುತ್ತಾರೆ. ಈಗ ನೀರಿನಿಂದಲೇ ಎಲ್ಲವೂ ಮಾಡಲಾಗುವುದು. ಮಾತಂತೂ ಎಷ್ಟು ಸಹಜವಾಗಿದೆ
ಆದರೆ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಜ್ಞಾನದಿಂದ ಒಂದು ಸೆಕೆಂಡಿನಲ್ಲಿ ಸದ್ಗತಿಯಾಗುತ್ತದೆ.
ಮತ್ತೆ ಅಪಾರವಾದ ಜ್ಞಾನವಿದೆ, ಸಮುದ್ರವನ್ನು ಶಾಹಿಯನ್ನಾಗಿ ಮಾಡಿಕೊಂಡು, ಕಾಡನ್ನು ಲೇಖನಿಯನ್ನಾಗಿ
ಮಾಡಿ, ಭೂಮಿಯನ್ನು ಕಾಗದವನ್ನಾಗಿ ಮಾಡಿಕೊಂಡು ಬರೆದರೂ ಅದಕ್ಕೆ ಅಂತ್ಯವಿಲ್ಲವೆಂದು ಹೇಳುತ್ತಾರೆ.
ತಂದೆಯು ಪ್ರತಿನಿತ್ಯ ಭಿನ್ನ-ಭಿನ್ನ ಮಾತುಗಳನ್ನು ತಿಳಿಸುತ್ತಿರುತ್ತಾರೆ. ಇಂದು ನಿಮಗೆ ಬಹಳ
ಗುಹ್ಯ ಮಾತುಗಳನ್ನು ಹೇಳುತ್ತೇನೆಂದು ತಿಳಿಸುತ್ತಾರೆ. ಮೊದಲು ಏಕೆ ತಿಳಿಸಲಿಲ್ಲ! ಎಂದು ಮಕ್ಕಳು
ಕೇಳುತ್ತಾರೆ. ಅರೆ! ಮೊದಲೇ ಹೇಗೆ ಹೇಳಲಿ..... ಕಥೆಯನ್ನು ಆರಂಭದಿಂದ ಹಿಡಿದು ನಂಬರವಾರ್ ಆಗಿ
ಹೇಳುತ್ತಾರಲ್ಲವೆ. ಅಂತ್ಯದ ಪಾತ್ರವನ್ನು ಮೊದಲೇ ಹೇಗೆ ಹೇಳಲು ಸಾಧ್ಯ! ಇದನ್ನೂ ಸಹ ತಂದೆಯು
ಹೇಳುತ್ತಿರುತ್ತಾರೆ. ಈ ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯವನ್ನು ನೀವು ತಿಳಿದುಕೊಂಡಿದ್ದೀರಿ.
ನಿಮ್ಮನ್ನು ಯಾರೇ ಕೇಳಿದರೂ ಸಹ ತಕ್ಷಣ ನೀವು ಉತ್ತರ ನೀಡುತ್ತೀರಿ. ನಿಮ್ಮಲ್ಲಿಯೂ ಸಹ ಜ್ಞಾನವು
ನಂಬರವಾರ್ ಆಗಿ ಬುದ್ಧಿಯಲ್ಲಿ ಕುಳಿತಿರುತ್ತದೆ. ನಿಮ್ಮ ಬಳಿ ಬಂದು ಸರಿಯಾದ ಉತ್ತರವು ಸಿಗದಿದ್ದಾಗ
ಅವರು ಹೊರಗೆ ಹೋದ ನಂತರ ಇಲ್ಲಿ ಸಂಪೂರ್ಣ ತಿಳುವಳಿಕೆ ಸಿಗುವುದಿಲ್ಲ, ವ್ಯರ್ಥವಾದ
ಚಿತ್ರಗಳನ್ನಿಟ್ಟಿದ್ದಾರೆಂದು ಹೇಳುತ್ತಾರೆ ಆದ್ದರಿಂದ ಅಂತಹವರಿಗೆ ತಿಳಿಸುವವರು ಬಹಳ
ಅನುಭವಿಯಾಗಿರಬೇಕು. ಇಲ್ಲವೆಂದರೆ ಅವರೂ ಸಹ ಸರಿಯಾಗಿ ತಿಳಿದುಕೊಳ್ಳುವುದಿಲ್ಲ. ತಿಳಿಸಿಕೊಡುವವರೇ
ಸರಿಯಿಲ್ಲದಿದ್ದಾಗ ತಿಳಿದುಕೊಳ್ಳುವವರೂ ಅದೇ ರೀತಿಯಿರುತ್ತಾರೆ. ತಂದೆಯು ತಿಳಿಸುತ್ತಾರೆ -
ಒಂದೊಂದು ಕಡೆ ಕೆಲವು ವ್ಯಕ್ತಿಗಳು ಬಹಳ ಬುದ್ಧಿವಂತರಿರುತ್ತಾರೆ ಆದರೆ ಮಕ್ಕಳು ಅಷ್ಟೊಂದು
ಬುದ್ಧಿವಂತರಾಗಿಲ್ಲದ್ದನ್ನು ನೋಡಿ ನಾನೇ ಅವರಲ್ಲಿ ಪ್ರವೇಶ ಮಾಡಿ ಸಹಯೋಗ ಕೊಡುತ್ತೇನೆ. ಏಕೆಂದರೆ
ತಂದೆಯಂತೂ ಅತೀ ಸೂಕ್ಷ್ಮ ರಾಕೆಟ್ ಆಗಿದ್ದಾರೆ. ಬಂದು -ಹೋಗಲು ಸಮಯ ತೆಗೆದುಕೊಳ್ಳುವುದಿಲ್ಲ. ಅವರು
ಇದನ್ನು ಬಹುರೂಪಿ ಅಥವಾ ಸರ್ವವ್ಯಾಪಿಯ ರೂಪದಲ್ಲಿ ತೆಗೆದುಕೊಂಡು ಬಿಟ್ಟಿದ್ದಾರೆ. ಇದನ್ನು ತಂದೆಯು
ನೀವು ಮಕ್ಕಳಿಗೆ ತಿಳಿಸುತ್ತಾರೆ. ಕೆಲಕೆಲವು ಮನುಷ್ಯರು ಬಹಳ ಬುದ್ಧಿವಂತರಾಗಿದ್ದು ಅವರಿಗೆ
ತಿಳಿಸಿಕೊಡುವವರಿಗೂ ಸಹ ಹಾಗೆಯೇ ಇರಬೇಕಾಗುತ್ತದೆ. ಈ ಸಮಯದಲ್ಲಿ ಕೆಲವರು ಚಿಕ್ಕಂದಿನಿಂದಲೇ
ಶಾಸ್ತ್ರಗಳನ್ನು ಕಂಠಪಾಠ ಮಾಡಿಕೊಂಡಿರುತ್ತಾರೆ. ಏಕೆಂದರೆ ಆತ್ಮವು ಸಂಸ್ಕಾರವನ್ನು ತೆಗೆದುಕೊಂಡು
ಬರುತ್ತದೆ. ಎಲ್ಲಾದರೂ ಜನ್ಮ ಪಡೆದುಕೊಳ್ಳಲಿ ಅಲ್ಲಿ ವೇದಶಾಸ್ತ್ರಗಳನ್ನು ಓದಲು ತೊಡಗುತ್ತಾರೆ.
ಅಂತ್ಯದಲ್ಲಿ ಎಂತಹ ಸ್ಥಿತಿ ಇರುತ್ತದೋ ಅಂತಹ ಗತಿ ಪಡೆದುಕೊಳ್ಳುತ್ತಾರಲ್ಲವೇ. ಆತ್ಮವು ತನ್ನ
ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಕೊನೆಗೂ ಆ
ದಿನ ಇಂದು ಬಂದಿದೆ....... ಈಗ ಸ್ವರ್ಗದ ಬಾಗಿಲು ಸತ್ಯವಾಗಿ ತೆರೆಯಲ್ಪಡುತ್ತದೆ. ಹೊಸ ಪ್ರಪಂಚದ
ಸ್ಥಾಪನೆ, ಹಳೆಯ ಪ್ರಪಂಚದ ವಿನಾಶವಾಗಬೇಕಾಗಿದೆ. ಸ್ವರ್ಗವು ಹೊಸ ಪ್ರಪಂಚದಲ್ಲಿರುತ್ತದೆ ಎಂದು
ಮನುಷ್ಯರಿಗಂತೂ ಗೊತ್ತಿಲ್ಲ. ನಾವು ಸತ್ಯ-ಸತ್ಯ ಸತ್ಯ ನಾರಾಯಣನ ಕಥೆ ಅಥವಾ ಅಮರನಾಥನ ಕಥೆಯನ್ನು
ಕೇಳುತ್ತಿದ್ದೇವೆಂದು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಇವೆರಡೂ ಒಂದೇ ಕಥೆಯಾಗಿದ್ದು ಹೇಳಿದವರೂ
ಒಬ್ಬರೇ ಆಗಿದ್ದಾರೆ ನಂತರ ಅವುಗಳನ್ನು ಶಾಸ್ತ್ರವನ್ನಾಗಿ ಮಾಡಿದ್ದಾರೆ. ಇದೆಲ್ಲವೂ ನಿಮ್ಮದೇ
ಉದಾಹರಣೆಯಾಗಿದೆ ಅದನ್ನು ಮತ್ತೆ ಭಕ್ತಿ ಮಾರ್ಗದಲ್ಲಿ ಆಚರಿಸುತ್ತಾರೆ. ಈಗ ತಂದೆಯು ಸಂಗಮಯುಗದಲ್ಲಿ
ಬಂದು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಇದು ಅತೀ ದೊಡ್ಡ ಬೇಹದ್ದಿನ ಆಟವಗಿದೆ, ಈ ಆಟದಲ್ಲಿ
ಮೊದಲು ಸತ್ಯ-ತ್ರೇತಾದಲ್ಲಿ ರಾಮರಾಜ್ಯ ನಂತರ ರಾವಣ ರಾಜ್ಯವಾಗುತ್ತದೆ. ಈ ನಾಟಕವು ಮೊದಲೇ
ಮಾಡಲ್ಪಟ್ಟಿದೆ, ಇದನ್ನು ಅನಾದಿ-ಅವಿನಾಶಿ ಎಂದು ಕರೆಯಲಾಗುವುದು. ನಾವೆಲ್ಲರೂ ಆತ್ಮರಾಗಿದ್ದೇವೆ,
ತಂದೆಯು ಕೊಡುತ್ತಿರುವಂತಹ ಜ್ಞಾನವು ಯಾರಲ್ಲಿಯೂ ಇಲ್ಲದಾಗಿದೆ. ಆತ್ಮಗಳೆಲ್ಲರ ಪಾತ್ರವು ಈ
ನಾಟಕದಲ್ಲಿ ನಿಗದಿಯಾಗಿದೆ. ಯಾವ ಸಮಯದಲ್ಲಿ ಯಾರ ಪಾತ್ರವಿರುತ್ತದೆ ಅವರು ಅದೇ ಸಮಯದಲ್ಲಿ
ಬರುತ್ತಾರೆ ಮತ್ತು ವೃದ್ಧಿಯಾಗುತ್ತಾ ಇರುತ್ತದೆ. ಪತಿತರಿಂದ ಪಾವನರಾಗುವುದೇ ಮಕ್ಕಳಿಗೆ ಮುಖ್ಯವಾದ
ಮಾತಾಗಿದೆ. ಹೇ ಪತಿತ-ಪಾವನನೆಂದೇ ಕರೆಯುತ್ತಾರೆ, ಈ ರೀತಿಯಾಗಿ ಮಕ್ಕಳೇ ಕರೆಯುತ್ತಾರೆ. ನನ್ನ
ಮಕ್ಕಳು ಕಾಮ ಚಿತೆಯ ಮೇಲೆ ಕುಳಿತು ಭಸ್ಮವಾಗಿ ಬಿಟ್ಟರೆಂದು ತಂದೆಯು ಹೇಳುತ್ತಾರೆ. ಇವು
ಯಥಾರ್ಥವಾದ ಮಾತುಗಳಾಗಿವೆ. ಅಕಾಲನಾಗಿರುವ ಆತ್ಮನಿಗೆ ಇದು ಸಿಂಹಾಸನವಾಗಿದೆ. ಇದನ್ನು (ಬ್ರಹ್ಮಾ)
ಲೋನ್ ತೆಗೆದುಕೊಳ್ಳಲಾಗಿದೆ. ಬ್ರಹ್ಮನನ್ನು ನೋಡಿ ಇವರು ಯಾರೆಂದು ನಿಮ್ಮನ್ನು ಕೇಳುತ್ತಾರೆ. ಈಗ
ನೀವು ಹೇಳಿ..... ನೋಡಿ ನಾನು ಸಾಧಾರಣ ತನುವಿನಲ್ಲಿ ಬರುತ್ತೇನೆಂದು ಭಗವಾನುವಾಚ ಬರೆಯಲ್ಪಟ್ಟಿದೆ.
ಆ ಶೃಂಗರಿಸಲ್ಪಟ್ಟಿರುವ ಕೃಷ್ಣನೇ 84 ಜನ್ಮಗಳನ್ನು ಪಡೆದು ಸಾಧಾರಣನಾಗುತ್ತಾನೆ. ಸಾಧಾರಣನೇ ಮತ್ತೆ
ಶ್ರೀ ಕೃಷ್ಣನಾಗುತ್ತಾನೆ, ಕೆಳಗೆ ಕುಳಿತು ತಪಸ್ಸನ್ನು ಮಾಡುತ್ತಿದ್ದಾನೆ. ನಾವು ಈ ರೀತಿ (ದೇವತೆ)
ಆಗುತ್ತೇವೆಂದು ತಿಳಿದುಕೊಂಡಿದ್ದಾರೆ. ಅನೇಕರು ತ್ರಿಮೂರ್ತಿಯನ್ನು ನೋಡಿದ್ದಾರೆ ಆದರೆ ಅದರ ಅರ್ಥವೂ
ಆಗಬೇಕಲ್ಲವೆ. ಸ್ಥಾಪನೆ ಮಾಡುವವರೇ ಪಾಲನೆಯನ್ನೂ ಮಾಡುತ್ತಾರೆ. ಸ್ಥಾಪನೆಯ ಸಮಯದ ನಾಮ-ರೂಪ,
ದೇಶ-ಕಾಲ ಬೇರೆಯಾಗಿರುತ್ತದೆ, ಪಾಲನೆಯ ಸಮಯದ ನಾಮ-ರೂಪ, ದೇಶ-ಕಾಲವೇ ಬೇರೆಯಾಗಿರುತ್ತದೆ. ಈ
ಮಾತುಗಳನ್ನು ತಿಳಿಸಿಕೊಡಲು ಬಹಳ ಸಹಜವಾಗಿದೆ. ಅವರು ಕೆಳಗೆ ತಪಸ್ಸನ್ನು ಮಾಡುತ್ತಿದ್ದಾರೆ ಮತ್ತೆ
ಹೀಗೆ (ದೇವತೆ) ಆಗುವವರಾಗಿದ್ದಾರೆ. ಇವರೇ 84 ಜನ್ಮಗಳನ್ನು ಪಡೆದು ಈ ರೀತಿಯಾಗುತ್ತಾರೆ. ಇದು ಒಂದು
ಸೆಕೆಂಡಿನ ಜ್ಞಾನವಾಗಿದೆ, ನಾವು ದೇವತೆಯಾಗುತ್ತಿದ್ದೇವೆಂದು ಬುದ್ಧಿಯಲ್ಲಿ ಜ್ಞಾನವಿದೆ. 84
ಜನ್ಮಗಳನ್ನೂ ಸಹ ದೇವತೆಗಳೇ ಪಡೆಯುತ್ತಾರೆಯೇ ಹೊರತು ಬೇರೆ ಯಾರೂ ಪಡೆಯುವುದಿಲ್ಲ. 84 ಜನ್ಮಗಳ
ರಹಸ್ಯವನ್ನು ಮಕ್ಕಳಿಗೆ ತಿಳಿಸಲಾಗಿದೆ. ದೇವತೆಗಳೇ ಮೊಟ್ಟ ಮೊದಲು ಜನ್ಮ ತೆಗೆದುಕೊಳ್ಳುತ್ತಾರೆ.
ಮೀನಿನ ಆಟದ ಸಾಮಾನು ಗೊಂಬೆಯಿರುತ್ತದೆಯಲ್ಲವೆ. ಅಲ್ಲಿ ಮೀನು ಕೆಳಗೆ ಬಂದು ಮತ್ತೆ ಮೇಲೆ ಹೋಗುತ್ತದೆ.
ಅದೂ ಸಹ ಒಂದು ಏಣಿಯಂತೆ ಇದೆ. ಭ್ರಮರಿ, ಆಮೆ ಮೊದಲಾದವುಗಳ ಉದಾಹರಣೆಯನ್ನು ನೀಡಲಾಗುತ್ತದೆ.
ಅದೆಲ್ಲವೂ ಸಹ ಈ ಸಮಯದ ಉದಾಹರಣೆಯಾಗಿದೆ. ಭ್ರಮರಿಗೂ ಸಹ ಎಷ್ಟೊಂದು ಬುದ್ಧಿಯಿದೆ ನೋಡಿ! ಆದರೆ
ಮನುಷ್ಯನು ತಾನು ಬಹಳ ಬುದ್ಧಿವಂತನೆಂದು ತಿಳಿದುಕೊಂಡಿದ್ದಾನೆ. ಆದರೆ ಭ್ರಮರಿಗಿರುವಷ್ಟು ಬುದ್ಧಿಯೂ
ಸಹ ಇಲ್ಲವೆಂದು ತಂದೆಯು ತಿಳಿಸುತ್ತಾರೆ. ಸರ್ಪವು ಹಳೆಯ ಪೊರೆಯನ್ನು ಕಳಚಿ ಹೊಸ ಪೊರೆಯನ್ನು
ಪಡೆಯುತ್ತದೆ. ಮಕ್ಕಳನ್ನು ಎಷ್ಟೊಂದು ಯೋಗ್ಯ ಹಾಗೂ ಬುದ್ಧಿವಂತರನ್ನಾಗಿ ಮಾಡಲಾಗುತ್ತದೆ. ಆತ್ಮವು
ಅಪವಿತ್ರವಾಗಿರುವ ಕಾರಣ ಯೋಗ್ಯವಾಗಿಲ್ಲ, ಅದನ್ನು ಪವಿತ್ರ ಮಾಡಿ ಯೋಗ್ಯ ಮಾಡಲಾಗುವುದು. ಅದು (ಸತ್ಯಯುಗ)
ಯೋಗ್ಯತೆಯುಳ್ಳ ಪ್ರಪಂಚವಾಗಿದೆ, ಹೀಗೆ ಇಡೀ ಪ್ರಪಂಚವನ್ನು ನರಕದಿಂದ ಸ್ವರ್ಗವನ್ನಾಗಿ ಮಾಡುವುದು
ತಂದೆಯ ಕಾರ್ಯವಾಗಿದೆ. ಸ್ವರ್ಗವು ಹೇಗಿರುತ್ತದೆಯೆ೦ದು ಈ ಮನುಷ್ಯರಿಗೆ ತಿಳಿದಿಲ್ಲ.
ದೇವಿ-ದೇವತೆಗಳ ರಾಜಧಾನಿಗೆ ಸ್ವರ್ಗವೆಂದು ಕರೆಯಲಾಗುವುದು. ಸತ್ಯಯುಗದಲ್ಲಿ ದೇವಿ-ದೇವತೆಗಳ
ರಾಜ್ಯವಿತ್ತು. ಸತ್ಯಯುಗ ಹೊಸ ಪ್ರಪಂಚದಲ್ಲಿ ನಾವೇ ರಾಜ್ಯಭಾಗ್ಯವನ್ನು ಮಾಡುತ್ತಿದ್ದೆವೆಂದು ನೀವು
ತಿಳಿದುಕೊಂಡಿದ್ದೀರಿ. 84 ಜನ್ಮಗಳನ್ನು ನಾವೇ ತೆಗೆದುಕೊಂಡಿರಬೇಕು. ಎಷ್ಟು ಬಾರಿ ರಾಜ್ಯ ಮಾಡಿ
ಕಳೆದುಕೊಂಡಿದ್ದೇವೆಂಬುದು ನೀವು ತಿಳಿದಿದ್ದೀರಿ. ರಾಮನ ಮತದಿಂದ ನೀವು ರಾಜ್ಯವನ್ನು ಪಡೆದು ರಾವಣನ
ಮತದಿಂದ ರಾಜ್ಯವನ್ನು ಕಳೆದುಕೊಂಡಿದ್ದೀರಿ. ಈಗ ಪುನಃ ಏರುವ ಸಲುವಾಗಿ ನಿಮಗೆ ರಾಮನ ಮತ ಸಿಗುತ್ತದೆ,
ಇಳಿಯುವ ಸಲುವಾಗಿ ಸಿಗುವುದಿಲ್ಲ. ನೀವು ಬಹಳ ಚೆನ್ನಾಗಿ ತಿಳಿಸಿಕೊಡುತ್ತೀರಿ ಆದರೆ ಭಕ್ತಿಮಾರ್ಗದ
ಬುದ್ಧಿಯು ಬಹಳ ಕಷ್ಟದಿಂದ ಪರಿವರ್ತನೆಯಾಗುತ್ತದೆ. ಭಕ್ತಿಯು ಬಹಳ ಆಡಂಬರವಾಗಿದೆ, ಅದು
ಕೆಸರಾಗಿದ್ದು ಒಮ್ಮೆಯೇ ಕುತ್ತಿಗೆಯವರೆಗೂ ಮುಳುಗಿಸಿ ಬಿಟ್ಟಿದ್ದಾರೆ. ಯಾವಾಗ ಎಲ್ಲದರ
ಅಂತ್ಯವಾಗುತ್ತದೆ ಆಗ ನಾನು ಬಂದು ಜ್ಞಾನದಿಂದ ದೂರ ಕರೆದುಕೊಂಡು ಹೋಗುತ್ತೇನೆ. ನಾನು ಬಂದು ಮಕ್ಕಳ
ಮೂಲಕ ಕಾರ್ಯವನ್ನು ಮಾಡಿಸುತ್ತೇನೆ. ತಂದೆಯೊಂದಿಗೆ ಸೇವೆ ಮಾಡುವಂತಹವರು ನೀವು
ಬ್ರಾಹ್ಮಣರಾಗಿದ್ದೀರಿ, ನಿಮಗೆ ಈಶ್ವರೀಯ ಸೇವಾಧಾರಿಗಳೆಂದು ಹೇಳಲಾಗುವುದು. ಇದು ಎಲ್ಲದಕ್ಕಿಂತ
ಉತ್ತಮವಾದ ಸೇವೆಯಾಗಿದೆ, ಮಕ್ಕಳಿಗೂ ಸಹ ಈ ರೀತಿಯಾಗಿ ಮಾಡಲು ಶ್ರೀ ಮತ ಸಿಗುತ್ತದೆ. ಇದು
ನಾಟಕದಲ್ಲಿ ನಿಗದಿಯಾಗಿ ಬಿಟ್ಟಿದೆ. ನೀವು ಕೇವಲ ಸಂದೇಶವನ್ನು ತಲುಪಿಸಬೇಕು. ಅದೂ ಸಹ ಸಹಜವೇ ಆಗಿದೆ.
ಯಾವಾಗ ಭಕ್ತಿಯು ಸಂಪೂರ್ಣ ಶಕ್ತಿಶಾಲಿಯಾಗಿರುತ್ತದೆಯೋ ಆಗ ಭಗವಂತ ಕಲ್ಪದ ಸಂಗಮಯುಗದಲ್ಲಿ
ಬರುತ್ತಾರೆಂದು ನೀವು ತಿಳಿದಿದ್ದೀರಿ. ತಂದೆಯು ಬಂದು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ಈಗ
ನಿಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ, ನೀವೆಲ್ಲರೂ ಸ್ವರ್ಗದಲ್ಲಿ ಹೋಗುತ್ತೀರಿ ಆದರೆ ವಿದ್ಯೆಯಲ್ಲಿ
ನಂಬರವಾರ್ ಆಗಿರುತ್ತಾರೆ. ಕೆಲವರ ಮೇಲೆ ಮಂಗಳ ದೆಶೆ, ಇನ್ನೂ ಕೆಲವರ ಮೇಲೆ ರಾಹು ದೆಶೆ
ಕುಳಿತಿರುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಯೋಗ್ಯ ಹಾಗೂ
ಬುದ್ಧಿವಂತರಾಗಲು ಪವಿತ್ರರಾಗಬೇಕು. ಇಡೀ ವಿಶ್ವವನ್ನು ನರಕದಿಂದ ಸ್ವರ್ಗವನ್ನಾಗಿ ಮಾಡಲು
ತಂದೆಯೊಂದಿಗೆ ಸೇವೆ ಮಾಡಬೇಕಾಗಿದೆ. ಈಶ್ವರೀಯ ಸೇವಾಧಾರಿಗಳಾಗಬೇಕು.
2. ಕಲಿಯುಗೀ ಪ್ರಪಂಚದ
ರೀತಿ-ಪದ್ಧತಿ, ಕುಲ ಮರ್ಯಾದೆಗಳೆಲ್ಲವನ್ನೂ ಬಿಟ್ಟು ಸತ್ಯ ಮರ್ಯಾದೆಗಳನ್ನು ಪಾಲನೆ ಮಾಡಬೇಕು. ದೈವೀ
ಗುಣ ಸಂಪನ್ನರಾಗಿ ದೈವೀ ಸಂಪ್ರದಾಯದ ಸ್ಥಾಪನೆ ಮಾಡಬೇಕು.
ವರದಾನ:
ಬಿರುಗಾಳಿಯನ್ನು
ಬಳುವಳಿ (ಉಡುಗೊರೆ) ಎಂದು ತಿಳಿದು ಸಹಜವಾಗಿ ಕ್ರಾಸ್ ಮಾಡುವಂತಹ ಸಂಪೂರ್ಣ ಮತ್ತು ಸಂಪನ್ನ ಭವ.
ಯಾವಾಗ ಎಲ್ಲರ ಲಕ್ಷ್ಯ
ಸಂಪೂರ್ಣ ಮತ್ತು ಸಂಪನ್ನರಾಗುವುದಾಗಿದೆ ಆಗ ಸಣ್ಣ-ಪುಟ್ಟ ಮಾತುಗಳಲ್ಲಿ ಗಾಬರಿಯಾಗಬೇಡಿ. ಮೂರ್ತಿ
ತಯಾರಾಗುತ್ತಿದೆ ಅಂದಮೇಲೆ ಸ್ವಲ್ಪವಾದರೂ ಸುತ್ತಿಗೆಯ ಏಟು ಖಂಡಿತ ತಗಲುವುದು. ಯಾರು ಎಷ್ಟೇ ಮುಂದೆ
ಹೋಗುತ್ತಾರೆ ಅವರು ಬಿರುಗಾಳಿಯನ್ನು ಹೆಚ್ಚು ಕ್ರಾಸ್ ಮಾಡಬೇಕಾಗುವುದು ಆದರೆ ಆ ಬಿರುಗಾಳಿ ಅವರಿಗೆ
ಬಿರುಗಾಳಿ ಎಂದೆನಿಸುವುದಿಲ್ಲ, ಬಳುವಳಿ(ಉಡುಗೊರೆ) ಎನ್ನಿಸುತ್ತದೆ. ಈ ಬಿರುಗಾಳಿಯೂ ಸಹಾ
ಅನುಭವಿಯಾಗಲು ಉಡುಗೊರೆಯಾಗಿ ಬಿಡುವುದು, ಆದ್ದರಿಂದ ವಿಘ್ನಗಳನ್ನು ಸ್ವಾಗತಿಸಿ ಮತ್ತು
ಅನುಭವಿಗಳಾಗುತ್ತಾ ಮುಂದುವರೆಯುತ್ತಾ ಹೋಗಿ.
ಸ್ಲೋಗನ್:
ಹುಡುಗಾಟಿಕೆಯನ್ನು ಸಮಾಪ್ತಿ ಮಾಡಬೇಕಾದರೆ ಸ್ವ ಚಿಂತನೆಯಲ್ಲಿರುತ್ತಾ ಸ್ವಯಂನ ಚೆಕ್ಕಿಂಗ್
ಮಾಡಿಕೊಳ್ಳಿ.