21.03.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಪ್ರಾಣ ದಾನವನ್ನು ನೀಡುವವರು ತಂದೆಯಾಗಿದ್ದಾರೆ, ಅವರು ಜ್ಞಾನವನ್ನು ಈ ರೀತಿ ಕೊಡುತ್ತಾರೆ, ಅದರಿಂದ ಪ್ರಾಣ ದಾನವು ಸಿಕ್ಕಿ ಬಿಡುವುದು, ಇಂತಹ ಪ್ರಾಣ ದಾನವನ್ನು ನೀಡುವ ತಂದೆಯನ್ನು ಪ್ರೀತಿಯಿಂದ ನೆನಪು ಮಾಡಿ.”

ಪ್ರಶ್ನೆ:
ಯಾವ ಆಧಾರದ ಮೇಲೆ 21 ಜನ್ಮಗಳವರೆವಿಗೂ ನಿಮ್ಮೆಲ್ಲಾ ಭಂಡಾರಗಳು ಸಂಪನ್ನವಾಗಿರುತ್ತವೆ?

ಉತ್ತರ:
ಸಂಗಮಯುಗದಲ್ಲಿ ನೀವು ಮಕ್ಕಳಿಗೆ ಯಾವ ಜ್ಞಾನವು ಸಿಗುತ್ತದೆ, ಈ ಜ್ಞಾನವು ಆದಾಯದ ಮೂಲವಾಗಿದೆ. ಈ ವಿದ್ಯೆಯ ಆಧಾರದಿಂದ ಎಲ್ಲಾ ಭಂಡಾರಗಳು ಸಂಪನ್ನವಾಗಿ ಬಿಡುತ್ತವೆ. ಈ ವಿದ್ಯೆಯಿಂದ 21 ಜನ್ಮಗಳಿಗೆ ಖುಷಿಯು ಸಿಕ್ಕಿ ಬಿಡುವುದು. ಅದರ ಪ್ರಾಪ್ತಿಗಾಗಿ ಇಚ್ಛೆ ಇಟ್ಟುಕೊಳ್ಳಬೇಕಾದ ಯಾವುದೇ ಅಪ್ರಾಪ್ತ ವಸ್ತುವಿರುವುದಿಲ್ಲ. ತಂದೆಯು ಜ್ಞಾನ ದಾನವನ್ನು ಈ ರೀತಿ ಮಾಡುತ್ತಾರೆ, ಅದರಿಂದ ಆತ್ಮವು ಹೇಗಿದ್ದದ್ದು ಏನಾಗಿ ಬಿಡುವುದು!

ಓಂ ಶಾಂತಿ.
ಭಗವಾನುವಾಚ - ಸಾಲಿಗ್ರಾಮ ಮಕ್ಕಳು ತಿಳಿದಿದ್ದೀರಿ - ಶಿವ ತಂದೆಯು ನಮಗೆ ಓದಿಸಲು ಬರುತ್ತಾರೆ ಮತ್ತು ಅವರೇ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದಿದ್ದಾರೆ. ಮಕ್ಕಳಿಗೆ ಈಗ ಯಾವುದು ಹೊಸ ಮಾತು ಎನಿಸುವುದಿಲ್ಲ. ಎಲ್ಲವೂ ಅರ್ಥವಾಗಿದೆ. ಮನುಷ್ಯರಂತೂ ಎಲ್ಲವನ್ನೂ ಮರೆತಿದ್ದಾರೆ. ಯಾರು ಓದಿಸಿದರೋ ಅವರ ಬದಲು ಮೊದಲಿನ ನಂಬರಿನಲ್ಲಿ ಓದುವವರ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ನೀವು ಓದುತ್ತಾ-ಓದುತ್ತಾ ಈ ಮಾತನ್ನು ಸಿದ್ಧ ಮಾಡಬೇಕು. ಭಾರತದ ಶಾಸ್ತ್ರಗಳ ಮಾತೇ ಆಗಿದೆ, ಅನ್ಯ ಧರ್ಮದ ಶಾಸ್ತ್ರಗಳದಲ್ಲ. ಭಾರತದ ಶಾಸ್ತ್ರಗಳದ್ದೇ ತಪ್ಪಾಗಿದೆ. ನಿಮ್ಮ ವಿನಃ ಈ ಮಾತನ್ನು ಯಾರೂ ಸಿದ್ಧ ಮಾಡಲು ಸಾಧ್ಯವಿಲ್ಲ. ಮಕ್ಕಳಿಗೂ ಗೊತ್ತಿದೆ - ಇದು ಅನಾದಿ ನಾಟಕವಾಗಿದೆ. ಇದು ಪುನಃ ಪುನರಾವರ್ತನೆಯಾಗುವುದು. ನೀವು ಮನುಷ್ಯ ಮಾತ್ರರನ್ನೂ ಸುಧಾರಣೆ ಮಾಡುವ ಪುರುಷಾರ್ಥ ಮಾಡುತ್ತೀರಿ. ಯಾವಾಗ ಮನುಷ್ಯರು ಸುಧಾರಣೆಯಾಗುತ್ತಾರೆಯೋ ಆಗ ಪ್ರಪಂಚವೇ ಸುಧಾರಣೆಯಾಗುತ್ತದೆ. ಸತ್ಯಯುಗವು ಸುಧಾರಣೆಯಾಗಿರುವ ಹೊಸ ಪ್ರಪಂಚವಾಗಿದೆ. ಮತ್ತು ಕಲಿಯುಗವು ಸುಧಾರಣೆ ಆಗದಿರುವ ಹಳೆಯ ಪ್ರಪಂಚವಾಗಿದೆ. ಇದನ್ನೂ ಸಹ ನೀವು ಮಕ್ಕಳು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ ಮತ್ತು ಧಾರಣೆ ಮಾಡಿ ತಿಳಿಸಿಕೊಡಲು ಯೋಗ್ಯರೂ ಆಗುತ್ತೀರಿ. ಇದರಲ್ಲಿ ಬಹಳ ಪರಿಶುದ್ಧತೆ ಬೇಕು. ತಂದೆಯು ನಿಮಗೆ ಎಷ್ಟು ಪರಿಶುದ್ಧ ಮಾಡಿ ತಿಳಿಸಿ ಕೊಡುತ್ತಾರೆ, ಸುಧಾರಣೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯಾವಾಗ ನೀವು ಸುಧಾರಣೆ ಆಗಿ ಬಿಡುತ್ತೀರಿ ಆಗ ಮತ್ತೆ ನಾನು ಸುಧಾರಣೆ ಮಾಡುವ ಅವಶ್ಯಕತೆಯಿರುವುದಿಲ್ಲ. ನೀವು ಅನಾರ್ಯರಾಗಿ ಬಿಟ್ಟಿದ್ದೀರಿ, ಈಗ ಆರ್ಯ ಅಂದರೆ ದೇವಿ-ದೇವತೆಗಳಾಗಬೇಕಾಗಿದೆ. ಅಂದಾಗ ಸತ್ಯಯುಗದಲ್ಲಿಯೇ ಆಗುತ್ತೀರಿ. ಅವರೆಲ್ಲರೂ ಸುಧಾರಣೆಯಾಗಿದ್ದರು, ಈಗ ಸುಧಾರಣೆಯಾಗದಿರುವವರು ಪೂಜೆ ಮಾಡುತ್ತಾರೆ. ನಾವು ಅವರನ್ನು ಏಕೆ ಸುಧಾರಣೆಯಾಗಿರುವವರು ಎಂದು ಹೇಳುತ್ತೇವೆ ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಎಲ್ಲರೂ ಮನುಷ್ಯರೆ ಆದರೆ ಯಾರು ಸುಧಾರಣೆಯಾಗಿರುವ ಆರ್ಯರಾಗಿದ್ದರೋ ಅವರೇ ಎಲ್ಲರೂ ಕೆಟ್ಟು ಹೋಗಿದ್ದಾರೆ. ಆರ್ಯರು ಮತ್ತು ಅನಾರ್ಯರು. ಬಾಕಿ ಯಾರು ಆರ್ಯ ಸಮಾಜದವರು ಆಗಿದ್ದಾರೆಯೋ ಅದು ಮಠ-ಪಂಥವಾಗಿವೆ. ಇದೆಲ್ಲವನ್ನೂ ವೃಕ್ಷದ ಚಿತ್ರದಿಂದ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಇದು ಮನುಷ್ಯ ಸೃಷ್ಟಿಯ ವೃಕ್ಷವಾಗಿದೆ. ಇದರ ಆಯಸ್ಸು 5000 ವರ್ಷಗಳಾಗಿದೆ. ಇದರ ಹೆಸರು ಕಲ್ಪವೃಕ್ಷವಾಗಿದೆ, ಆದರೆ ಕಲ್ಪವೃಕ್ಷದ ಅಕ್ಷರದಿಂದ ಮನುಷ್ಯರ ಬುದ್ಧಿಯಲ್ಲಿ ವೃಕ್ಷವು ಬರುವುದೇ ಇಲ್ಲ. ನಿಮಗೆ ವೃಕ್ಷ ರೂಪದಲ್ಲಿ ತಿಳಿಸಲಾಗಿದೆ ಅವರು ಹೇಳುತ್ತಾರೆ, ಕಲ್ಪ ಲಕ್ಷಾಂತರ ವರ್ಷಗಳದಾಗಿದೆ. ತಂದೆ ಹೇಳುತ್ತಾರೆ, ಇದು 5000 ವರ್ಷಗಳ ಮಾತಾಗಿದೆ. ಇದನ್ನು ಕೆಲವರು ಕೆಲಕೆಲವೊಂದು ರೀತಿಯಲ್ಲಿ ತಿಳಿಸುತ್ತಾರೆ. ಪೂರ್ಣ ತಿಳಿಸುವಂಥಹವರು ಯಾರೂ ಇಲ್ಲ. ಪರಸ್ಪರ ಎಷ್ಟೊಂದು ಶಾಸ್ತ್ರವಾದ ಮಾಡುತ್ತಾರೆ. ನಿಮ್ಮದು ಇದು ಆತ್ಮೀಕ ವಾರ್ತಾಲಾಪವಾಗಿದೆ, ನೀವು ಚರ್ಚಾ ಸ್ಪರ್ಧೆಯನ್ನು ಮಾಡುತ್ತೀರಿ ಇದಕ್ಕೆ ಆತ್ಮೀಕ ವಾರ್ತಾಲಾಪವೆಂದು ಹೇಳಲಾಗುವುದು. ಪ್ರಶ್ನೆ ಉತ್ತರ ತಿಳಿದುಕೊಳ್ಳಲು ಮಾಡಲಾಗುತ್ತದೆ. ತಂದೆ ನಿಮಗೆ ಏನನ್ನು ತಿಳೀಸುತ್ತಾರೆಯೋ ಅದರಿಂದಲೇ ವಿಷಯವನ್ನು ತೆಗೆದುಕೊಂಡು ನೀವು ತಿಳಿಸುತ್ತೀರಿ, ಅವರು ಏನು ತಿಳಿಸುತ್ತಾರೆ ಎಂಬುದನ್ನೂ ಸಹ ನೀವು ಹೋಗಿ ಕೇಳಿ ಮತ್ತೆ ತಿಳಿಸಬೇಕು - ಈ ಪ್ರಕಾರದ ವಾದ-ವಿವಾದಗಳು ನಡೆಯುತ್ತವೆ.

ಮೊದಲಂತೂ ಇದನ್ನು ತಿಳಿಸಬೇಕು - ಗೀತೆಯ ಭಗವಂತ ಯಾರು? ಭಗವಂತ ತಂದೆಯನ್ನು ಮರೆತಿರುವ ಕಾರಣ ಸಂಪೂರ್ಣ ನಷ್ಟದ ಖಾತೆಯಲ್ಲಿ ಬಂದು ಬಿಟ್ಟಿದ್ದಾರೆ. ನಿಮಗಂತೂ ತಂದೆಯ ಮೇಲೆ ಪ್ರೀತಿಯಿದೆ. ಆದ್ದರಿಂದ ತಂದೆಯನ್ನು ನೆನಪು ಮಾಡುತ್ತೀರಿ. ತಂದೆಯೇ ಪ್ರಾಣ ದಾನ ನೀಡುವವರಾಗಿದ್ದಾರೆ. ಜ್ಞಾನ ದಾನವನ್ನು ಈ ರೀತಿ ಕೊಡುತ್ತಾರೆ ಅದರಿಂದ ಹೇಗಿದ್ದವರು ಹೇಗಾಗುತ್ತಾರೆ! ಅಂದಮೇಲೆ ತಂದೆಯ ಮೇಲೆ ಬಹಳ ಪ್ರೀತಿಯಿರಬೇಕು. ತಂದೆಯು ನಿಮಗೆ ಇಂತಿಂತಹ ಹೊಸ ಮಾತುಗಳ್ನನು ತಿಳಿಸುತ್ತಾರೆ. ನಾವು ಕೃಷ್ಣನನ್ನು ಇಷ್ಟೊಂದು ನೆನಪು ಮಾಡುತ್ತೇವೆ ಆದರೆ ಕೃಷ್ಣನೇನೂ ಕೊಡುವುದಿಲ್ಲ. ನಾರಾಯಣನನ್ನು ನೆನಪು ಮಾಡುತ್ತೇವೆ ನೆನಪು ಮಾಡುವುದರಿಂದ ಏನಾದರೂ ಆಗುತ್ತದೆಯೇ? ನಾವಂತೂ ಕಂಗಾಲರಿಗೆ ಕಂಗಾಲರಾಗಿಯೇ ಉಳಿದು ಬಿಟ್ಟೆವು. ದೇವತೆಗಳು ಎಷ್ಟೊಂದು ಸಾಹುಕಾರರಾಗಿದ್ದರು. ಈಗ ಎಲ್ಲವೂ ಕೃತಕ ವಸ್ತುಗಳಾಗಿ ಬಿಟ್ಟಿದೆ. ಯಾವುದಕ್ಕೆ ಬೆಲೆಯಿರಲಿಲ್ಲವೋ ಅದಕ್ಕೆ ಇಂದು ಬೆಲೆಯೇರಿಬಿಟ್ಟಿದೆ. ಅಲ್ಲಿ ಆಹಾರ ಧಾನ್ಯಗಳಿಗೆ ಬೆಲೆಯ ಮಾತೇ ಇರಲಿಲ್ಲ. ಎಲ್ಲರಿಗೆ ತಮ್ಮ-ತಮ್ಮದೆ ಆದ ಸಂಪತ್ತಿರುತ್ತದೆ. ಆ ಪ್ರಾಪ್ತಿಯ ಇಚ್ಛೆಯಿಟ್ಟುಕೊಳ್ಳಲು ಅಂತಹ ಯಾವುದೇ ಅಪ್ರಾಪ್ತ ವಸ್ತುವಿರುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ಭಂಡಾರವನ್ನು ಸಂಪನ್ನ ಮಾಡಿಕೊಡುತ್ತೇನೆ. ನಾನು ನಿಮಗೆ ಇಂತಹ ಜ್ಞಾನವನ್ನು ಕೊಡುತ್ತೇನೆ ಇದರಿಂದ ನಿಮ್ಮ ಭಂಡಾರವು ತುಂಬಿ ಹೋಗುತ್ತದೆ. ಜ್ಞಾನವೇ ಆದಾಯದ ಮೂಲವೆಂದು ನಿಮ್ಮ ಬುದ್ಧಿಯಲ್ಲಿದೆ. ಜ್ಞಾನವೇ ಸರ್ವಸ್ವವಾಗಿದೆ. ಈ ವಿದ್ಯೆಯಿಂದ ನೀವು ಎಷ್ಟು ಶ್ರೇಷ್ಠರಾಗುತ್ತೀರಿ! ವಿದ್ಯೆಯ ಭಂಡಾರವೇ ಇದೆಯಲ್ಲವೆ. ಹೇಗೆ ಆ ಶಿಕ್ಷಕರು ಓದಿಸುತ್ತಾರೆ ಅದರಿಂದ ಅಲ್ಪಕಾಲದ ಸುಖವು ಸಿಗುತ್ತದೆ. ಆದರೆ ಈ ವಿದ್ಯೆಯಿಂದ ನಿಮಗೆ 21 ಜನ್ಮಗಳ ಸುಖ ಸಿಗುತ್ತದೆ. ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ಇದನ್ನು ತಿಳಿದುಕೊಳ್ಳುವುದರಲ್ಲಿ ಸಮಯ ಹಿಡಿಸುತ್ತದೆ. ಬೇಗ ಯಾರೂ ತಿಳಿದುಕೊಳ್ಳಲಾಗದು ಕೋಟಿಯಲ್ಲಿ ಕೆಲವರೇ ಬರುತ್ತಾರೆ. ಎಲ್ಲಾ ಮನುಷ್ಯರು ಒಬ್ಬರು ಇನ್ನೊಬ್ಬರನ್ನು ಬೀಳಿಸುತ್ತಲೇ ಬಂದಿದ್ದಾರೆ. ಏರಿಸುವವರು ಒಬ್ಬರೇ ತಂದೆಯಾಗಿದ್ದಾರೆ. ಬೇಹದ್ದಿನ ವಿದ್ಯೆಯನ್ನು ಓದಿಸುವವರ ಬದಲು ಓದುವವರ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಪ್ರಪಂಚದವರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಭಗವಾನುವಾಚ - ಓದಿಸಿ ಹೋದರೆಂದು ಹೇಳುತ್ತಾರೆ ಮತ್ತೆ ಅವರ ಯಾವುದೇ ಶಾಸ್ತ್ರಗಳಿರುವುದಿಲ್ಲ. ಸತ್ಯಯುಗದಲ್ಲಿ ಯಾವುದೇ ಶಾಸ್ತ್ರಗಳಿರುವುದಿಲ್ಲ ಇವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ. ಎಷ್ಟು ದೊಡ್ಡ ವೃಕ್ಷವಾಗಿದೆ. ಭಕ್ತಿಯ ಈ ಅನೇಕ ರೆಂಬೆ-ಕೊಂಬೆಗಳು ಇರದಿದ್ದರೆ ವೃಕ್ಷದ ಹೆಸರೇ ಇರುವುದಿಲ್ಲ. ಇವೆಲ್ಲವೂ ಧಾರಣೆ ಮಾಡಿಕೊಳ್ಳುವ ಮಾತುಗಳಾಗಿವೆ. ನೀವು ಧಾರಣೆ ಮಾಡುತ್ತೀರಿ. ಓದಿಸುವವರಂತೂ ಓದಿಸಿ ಮರೆಯಾಗಿ ಬಿಡುತ್ತಾರೆ. ಓದುವವರು ಬಂದು ವಿಶ್ವದ ಮಾಲೀಕರಾಗುತ್ತಾರೆ. ಎಷ್ಟೊಂದು ಹೊಸ ಮಾತುಗಳಾಗಿವೆ. ಒಂದು ಮಾತೂ ಸಹ ಯಾರ ಬುದ್ಧಿಯಲ್ಲೂ ಕುಳಿತುಕೊಳ್ಳುವುದಿಲ್ಲ. ನೀವೆಲ್ಲಾ ವಿದ್ಯಾರ್ಥಿಗಳೂ ಸಹ ನಂಬರ್ವಾರ್ ಇದ್ದೀರಿ. ಕೆಲವರು ಉತ್ತೀರ್ಣರಾಗುತ್ತಾರೆ, ಇನ್ನೂ ಕೆಲವರು ಅನುತ್ತೀರ್ಣರಾಗುತ್ತಾರೆ. ಇದು ಬೇಹದ್ದಿನ ದೊಡ್ಡ ಪರೀಕ್ಷೆಯಾಗಿದೆ. ನಿಮಗೆ ಗೊತ್ತಿದೆ, ನಾವೀಗ ಚೆನ್ನಾಗಿ ಓದಿದರೆ ಕಲ್ಪ-ಕಲ್ಪಾಂತರವೂ ಚೆನ್ನಾಗಿ ಓದುತ್ತೇವೆ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ನಂಬರ್ವಾರ್ ಎಲ್ಲರೂ ಹೋಗುತ್ತಾರೆ, ಪೂರ್ಣ ತರಗತಿಯ ವರ್ಗಾವಣೆಯಾಗುತ್ತದೆ. ನಂಬರ್ವಾರಾಗಿ ಆಗಿ ಹೋಗಿ ಕುಳಿತುಕೊಳ್ಳುತ್ತಾರೆ. ಈ ಜ್ಞಾನವೂ ಸಹ ಆತ್ಮದಲ್ಲಿದೆ ಒಳ್ಳೆಯ ಹಾಗೂ ಕೆಟ್ಟ ಸಂಸ್ಕಾರವೂ ಆತ್ಮದಲ್ಲಿದೆ ಶರೀರವಂತೂ ಮಣ್ಣಾಗಿದೆ. ಆತ್ಮ ನಿರ್ಲೇಪವಾಗಲು ಸಾಧ್ಯವಿಲ್ಲ. 100% ಸತೋಪ್ರಧಾನ ಮತ್ತು 100% ತಮೋಪ್ರಧಾನರು ಯಾರೆಂಬುದನ್ನೂ ಸಹ ನೀವು ತಿಳಿಯುತ್ತೀರಿ. ಮೊದಲು ಬಡವರನ್ನು ಮೇಲೆತ್ತಬೇಕು. ಅವರು ಮೊದಲು ಬರುತ್ತಾರೆ, ಗುರುಗಳಿಗೂ ಸಹ ಯಾವಾಗ ಅನನ್ಯ ಶಿಷ್ಯರು ಬರುತ್ತಾರೆಯೋ ಆಗ ಅವರೆಲ್ಲರ ಬುದ್ಧಿಯು ತೆರೆಯುತ್ತದೆ. ಆಗ ಇವು ನಮ್ಮದೇ ಎಲೆಗಳು ಬರುತ್ತಾ ಹೋಗುತ್ತವೆ ಎಂದು ಹೇಳುತ್ತಾರೆ. ಇಲ್ಲಿಯವರು ಯಾರಿರುತ್ತಾರೆಯೋ ಅವರೇ ಬರುತ್ತಾರೆ. ತಂದೆಯು ಬಂದು ಹೊಸ ವೃಕ್ಷದ ನಾಟಿ ಮಾಡುತ್ತಾರೆ. ಯಾರು ಅನ್ಯ ಧರ್ಮಗಳಲ್ಲಿ ಹೋಗಿದ್ದಾರೆಯೋ ಅವರೆಲ್ಲರೂ ಹಿಂತಿರುಗುತ್ತಾರೆ. ಪುನಃ ತಮ್ಮ ಭಾರತದಲ್ಲಿಯೇ ಬರುತ್ತಾರೆ, ಏಕೆಂದರೆ ಭಾರತವಾಸಿಗಳೇ ಆಗಿದ್ದರಲ್ಲವೆ! ನಮ್ಮ ಕೊಂಬೆಯವರೆಲ್ಲರೂ ಸಹ ಬಂದು ಬಿಡುತ್ತಾರೆ. ಮುಂದೆ ಹೋದಂತೆ ನೀವು ಎಲ್ಲವನ್ನೂ ತಿಳಿಯುತ್ತಾ ಹೋಗುತ್ತೀರಿ. ಈಗ ಹೊರಗಿನಿಂದ ಎಲ್ಲರಿಗೆ ಬಹಳ ಪೆಟ್ಟು ಸಿಗುತ್ತದೆ. ಇವರು ಬಹಳ ಧನವಂತರಾಗಿ ಬಿಟ್ಟಿದಾರೆ. ಇಲ್ಲಿಯವರು ಬಡವರಾಗಿ ಬಿಟ್ಟಿದ್ದಾರೆಂದು ತಿಳಿಯುತ್ತಾರೆ.

ಅಂತ್ಯದಲ್ಲಿ ಎಲ್ಲರೂ ತಮ್ಮ-ತಮ್ಮ ಧರ್ಮದಲ್ಲಿ ಹೋಗಬೇಕಾಗುತ್ತದೆ. ಕೊನೆಯಲ್ಲಿ ಎಲ್ಲರೂ ತಮ್ಮ ತಮ್ಮ ಮನೆಯ ಕಡೆ ಓಡುತ್ತಾರೆ. ವಿದೇಶದಲ್ಲಿ ಯಾರಾದರೂ ಶರೀರ ಬಿಟ್ಟರೆ ಅವರನ್ನು ಭಾರತದಕ್ಕೆ ಕರೆದುಕೊಂಡು ಬರುತ್ತಾರೆ. ಏಕೆಂದರೆ ಭಾರತವು ಫಸ್ಟ್ ಕ್ಲಾಸ್ ಪವಿತ್ರ ಭೂಮಿಯಾಗಿದೆ, ಭಾರತದಲ್ಲಿಯೇ ಹೊಸ ಪ್ರಪಂಚವಿತ್ತು, ಈ ಸಮಯದಲ್ಲಿ ಇದಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲು ಸಾಧ್ಯವಿಲ್ಲ. ಇದು ವಿಕಾರಿ ಪ್ರಪಂಚವಾಗಿದೆ, ಆದ್ದರಿಂದಲೇ ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಭಲೆ ಪ್ರಪಂಚವಂತೂ ಇದೇ ಆಗಿದೆ ಆದರೆ ಈ ಸಮಯದಲ್ಲಿ ಪ್ರಪಂಚದಲ್ಲಿ ಯಾರೂ ಪಾವನರಿಲ್ಲ. ಪಾವನ ಆತ್ಮರು ಮೂಲವತನದಲ್ಲಿರುತ್ತಾರೆ, ಅದು ಬ್ರಹ್ಮ ಮಹಾತತ್ವವಾಗಿದೆ. ಎಲ್ಲರೂ ಪಾವನರಾಗಿ ಅಲ್ಲಿಗೆ ಹೋಗುತ್ತಾರೆ, ಮತ್ತೆ ನಂಬರ್ವಾರ್ ಪಾತ್ರವನ್ನಭಿನಯಿಸಲು ಬರುತ್ತಾರೆ. ಇದು ಆದಿ ಸನಾತನ ದೇವಿ-ದೇವತಾ ಧರ್ಮದ ತಳಹದಿಯಾಗಿದೆ. ಮತ್ತೆ ಇದರಿಂದ ಮೂರು ಕೊಂಬೆಗಳು ಹೊರಡುತ್ತವೆ. ಇದಂತೂ ದೇವತಾ ಧರ್ಮವಾಗಿದೆ, ಇದು ಯಾವುದೇ ಕೊಂಬೆಯಲ್ಲ. ಮೊದಲು ಈ ಫೌಂಡೇಷನ್ ಇರುತ್ತದೆ ನಂತರ ಮೂರು ಕೊಂಬೆಗಳು ಬರುತ್ತವೆ. ಮುಖ್ಯವಾಗಿ ನಾಲ್ಕು ಧರ್ಮಗಳಿವೆ. ಎಲ್ಲದಕ್ಕಿಂತ ಒಳ್ಳೆಯ ಧರ್ಮ ಈ ಬ್ರಾಹ್ಮಣ ಧರ್ಮವಾಗಿದೆ. ಇದಕ್ಕೆ ಬಹಳ ಮಹಿಮೆಯಿದೆ. ಇಲ್ಲಿ ನೀವು ವಜ್ರ ಸಮಾನರಾಗುತ್ತೀರಿ. ನಿಮಗೆ ಇಲ್ಲಿ ತಂದೆಯು ಓದಿಸುತ್ತಾರೆ ಅಂದಾಗ ನೀವೆಷ್ಟು ಹಿರಿಯರಾಗಿದ್ದೀರಿ. ನೀವು ಬ್ರಾಹ್ಮಣರು ದೇವತೆಗಳಿಗಿಂತಲೂ ಬಹಳ ಜ್ಞಾನಪೂರ್ಣರಾಗಿದ್ದೀರಿ. ವಿಚಿತ್ರವಾಗಿದೆಯಲ್ಲವೆ. ನಾವು ಯಾವ ಜ್ಞಾನವನ್ನು ಪಡೆಯುತ್ತೇವೆಯೋ ಅದು ನಮ್ಮ ಜೊತೆಯಲ್ಲಿ ಬರುತ್ತದೆ ಮತ್ತೆ ಅಲ್ಲಿ ಜ್ಞಾನವನ್ನೇ ಮರೆತು ಹೋಗುತ್ತೇವೆ. ಮಕ್ಕಳಿಗೆ ಗೊತ್ತಿದೆ - ನಾವು ಮೊದಲು ಏನು ಓದುತ್ತಿದ್ದೆವು, ಈಗ ಏನನ್ನು ಓದುತ್ತೇವೆ. ಐ.ಸಿ.ಎಸ್.ನವರು ಮೊದಲು ಏನು ಓದುತ್ತಾರೆ ಮತ್ತು ನಂತರದಲ್ಲಿ ಏನು ಓದುತ್ತಾರೆ ಅಂದಾಗ ಅಂತರವಂತೂ ಇದೆಯಲ್ಲವೆ. ಇನ್ನು ಮುಂದಕ್ಕೆ ನೀವು ಬಹಳ ಹೊಸ ಪಾಯಿಂಟ್ಸ್ ಕೇಳುತ್ತೀರಿ, ಈಗ ತಿಳಿಸುವುದಿಲ್ಲ, ಪಾತ್ರವೇ ಮುಂದೆ ಕೇಳುವುದಾಗಿದೆ. ಬುದ್ಧಿಯಲ್ಲಿರುತ್ತದೆ - ಯಾವಾಗ ಜ್ಞಾನದ ಪಾತ್ರವು ಮುಕ್ತಾಯವಾಗಬೇಕಾಗಿದೆಯೋ ಆಗ ನಾವೂ ಸಹ ಆ ಸಮಯದಲ್ಲಿ ತಂದೆಯ ಜ್ಞಾನವನ್ನು ಧಾರಣೆ ಮಾಡಿಕೊಳ್ಳುತ್ತೇವೆ, ಮತ್ತೆ ನಮ್ಮ ಪಾತ್ರವು ಸ್ವರ್ಗದಲ್ಲಿ ಪ್ರಾರಂಭವಾಗುತ್ತದೆ. ಅವರ ಪಾತ್ರವು ಮುಕ್ತಾಯವಾಗುತ್ತದೆ. ಬುದ್ಧಿಯಲ್ಲಿ ಬಹಳ ಚೆನ್ನಾಗಿ ಧಾರಣೆ ಮಾಡಬೇಕು. ಸ್ಮರಣೆ ಮಾಡುತ್ತಾ ಇರಿ, ತಂದೆಯನ್ನು ನೆನಪು ಮಾಡುತ್ತಾ ಇರಿ. ನೆನಪು ಮಾಡದಿದ್ದರೆ ಕಡಿಮೆ ಪದವಿಯನ್ನು ಪಡೆಯುತ್ತೀರಿ. ನೆನಪು ಮಾಡುತ್ತಾ-ಮಾಡುತ್ತಾ ಶರೀರದ ಪರಿವೆಯು ಹೊರಟು ಹೋಗುತ್ತದೆ. ಸನ್ಯಾಸಿಗಳೂ ಈ ಸ್ಥಿತಿಯನ್ನು ಅಭ್ಯಾಸ ಮಾಡುತ್ತಾ ಮಾಡುತ್ತಾ ಶರೀರ ಬಿಟ್ಟು ಬಿಡುತ್ತಾರೆ ಆದರೆ ಅವರ ಮಾರ್ಗವೇ ಬೇರೆಯಾಗಿದೆ. ಆದ್ದರಿಂದ ಅವರು ಮತ್ತೆ ಜನ್ಮವನ್ನು ಪಡೆಯಬೇಕಾಗುತ್ತದೆ. ಅವರು ಬ್ರಹ್ಮ್ ದಲ್ಲಿ ಲೀನವಾದರು ಮತ್ತೆ ಹಿಂತಿರುಗಿ ಬರಲು ಸಾಧ್ಯವಿಲ್ಲವೆಂದು ಅವರ ಅನುಯಾಯಿಗಳು ತಿಳಿಯುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಅಂತ್ಯದಲ್ಲಿ ಎಲ್ಲಾ ಪಾತ್ರಧಾರಿಗಳು ಯಾವಾಗ ಸ್ಟೇಜಿನ ಮೇಲೆ ಬರುತ್ತಾರೆಯೋ ಆಗ ಎಲ್ಲರೂ ಮನೆಗೆ ಹೋಗುತ್ತಾರೆ. ಅದು ಸೀಮಿತವಾದ ವಿನಾಶಿ ನಾಟಕವಾಗಿದೆ, ಇದು ಬೇಹದ್ದಿನ್ ಅವಿನಾಶಿ ನಾಟಕವಾಗಿದೆ. ನೀವು ಇದನ್ನು ಬಹಳ ಚೆನ್ನಾಗಿ ತಿಳಿಸಬಹುದು - ಈ ನಾಟಕವು ನಿಧಾನ(ಹೇನಿನ ರೀತಿ)ವಾಗಿ ನಡೆಯುತ್ತದೆ. ಅವರಂತೂ ಚಿಕ್ಕ-ಚಿಕ್ಕ ನಾಟಕಗಳನ್ನು ರಚಿಸುತ್ತಾರೆ. ಸುಳ್ಳು ಚಲನಚಿತ್ರಗಳನ್ನು ಮಾಡುತ್ತಾರೆ. ಅದರಲ್ಲಿ ಕೆಲವು ಒಳ್ಳೆಯ ಮಾತುಗಳಿರುತ್ತವೆ. ಹೇಗೆ ವಿಷ್ಣು ಅವತರಣೆಯನ್ನು ತೋರಿಸುತ್ತಾರೆ. ಮೇಲಿನಿಂದ ಇಳಿದು ಬರುತ್ತಾರೆಂದಲ್ಲ, ಲಕ್ಷ್ಮೀ-ನಾರಾಯಣರು ಪಾತ್ರವನ್ನಭಿನಯಿಸಲು ಬರುತ್ತಾರೆ. ಬಾಕಿ ಮೇಲಿನಿಂದ ಇಳಿದು ಬರುವುದಿಲ್ಲ. ಈಗ ನೀವು ಮಕ್ಕಳಿಗೆ ತಂದೆಯು ಓದಿಸುತ್ತಾರೆ, ಆದ್ದರಿಂದ ನೀವೆಲ್ಲಾ ಮಕ್ಕಳು ಅರಿತುಕೊಳ್ಳುತ್ತೀರಿ. ಮೊದಲು ನೀವೂ ಸಹ ತುಚ್ಛ ಬುದ್ಧಿಯವರಾಗಿದ್ದಿರಿ. ಯಾವಾಗ ಆ ತಂದೆಯು ತಿಳಿಸಿದರೋ ಆಗ ನಿಮ್ಮ ಬುದ್ಧಿಯು ತೆರೆಯಿತು. ಇಲ್ಲಿಯವರೆಗೂ ಏನೆಲ್ಲವನ್ನೂ ಕೇಳಿದಿರೋ ಅದು ಯಾವುದೇ ಕೆಲಸಕ್ಕೆ ಬರಲಿಲ್ಲ. ಇನ್ನೂ ಇಳಿಯುತ್ತಲೇ ಬಂದಿರಿ. ಆದ್ದರಿಂದ ನೀವು ಎಲ್ಲರಿಂದ ಬರೆಸಿಕೊಳ್ಳುತ್ತೀರಿ. ಯಾವಾಗ ಬರೆದುಕೊಡುತ್ತಾರೆಯೋ ಆಗ ಇವರ ಬುದ್ಧಿಯಲ್ಲಿ ಸ್ವಲ್ಪ ಕುಳಿತಿದೆ ಎಂದು ತಿಳಿದುಕೊಳ್ಳಬಹುದು. ಹೊರಗಿನಿಂದ ಬರುತ್ತಾರೆ, ಫಾರಂನ್ನು ತುಂಬುತ್ತಾರೆಂದರೆ ಇವರು ನಮ್ಮ ಕುಲದವರಾಗಿದ್ದಾರೆಂದು ತಿಳಿಯುತ್ತದೆ. ಮೂಲ ಮಾತಾಗಿದೆ - ತಂದೆಯನ್ನು ಅರಿತುಕೊಳ್ಳುವುದು. ಕಲ್ಪ-ಕಲ್ಪವೂ ತಂದೆಯು ನಮಗೆ ಓದಿಸುತ್ತಾರೆ ಎಂಬುದನ್ನು ಅವರು ತಿಳಿಯಬೇಕು ಮತ್ತು ಅವರೊಂದಿಗೆ ಕೇಳಬೇಕು- ಯಾವಾಗಿನಿಂದ ಪವಿತ್ರರಾದಿರಿ? ಬೇಗನೆ ಸುಧಾರಣೆಯಾಗುವುದಿಲ್ಲ, ಗಳಿಗೆ-ಗಳಿಗೆಯೂ ಮಾಯೆಯು ಹಿಡಿದುಕೊಳ್ಳುತ್ತದೆ. ನೋಡುತ್ತದೆ ಇವರು ಕಚ್ಚಾ ಆಗಿದ್ದಾರೆಂದರೆ, ಅವರನ್ನು ನುಂಗಿ ಬಿಡುತ್ತದೆ. ಕೆಲವು ಮಹಾರಥಿಗಳನ್ನೂ ಸಹ ಮಾಯೆಯು ನುಂಗಿ ಹಾಕಿತು. ಶಾಸ್ತ್ರಗಳಲ್ಲಿನ ಉದಾಹರಣೆಗಳು ಈಗಿನದಾಗಿವೆ. ಮಂದಿರದಲ್ಲಿಯೂ ಕುದುರೆ ಸವಾರ, ಮಹಾರಥಿ, ಕಾಲಾಳು, ಮುಂತಾದವರನ್ನು ತೋರಿಸುತ್ತಾರೆ. ನೀವೀಗ ತಮ್ಮ ನೆನಪಾರ್ಥವನ್ನು ನೋಡುತ್ತೀರಿ. ಯಾವಾಗ ನೀವು ಆಗಿ ಬಿಡುತ್ತೀರೋ ಆಗ ಭಕ್ತಿಯು ಹಾರಿ ಹೋಗುತ್ತದೆ. ನೀವು ಯಾರಿಗೂ ತಲೆ ಬಾಗುವಂತಿಲ್ಲ. ನೀವು ಕೇಳಿ - ಇವರು ಎಲ್ಲಿಗೆ ಹೋದರು? ಇವರ ಚರಿತ್ರೆಯನ್ನು ತಿಳಿಸಿ. ತಂದೆಯು ನೀವು ಮಕ್ಕಳನ್ನು ಜ್ಞಾನಪೂರ್ಣರನ್ನಾಗಿ ಮಾಡಿದ್ದಾರೆ, ಆದ್ದರಿಂದಲೇ ನೀವು ಕೇಳುತ್ತೀರಿ ಅಂದಮೇಲೆ ನಶೆಯಿರಬೇಕು. ಪಾಸ್-ವಿತ್-ಆನರ್ 8 ರತ್ನಗಳೇ ಆಗುತ್ತಾರೆ. ಇದು ಬಹಳ ದೊಡ್ಡ ಪರೀಕ್ಷೆಯಾಗಿದೆ. ನಾವಾತ್ಮಗಳು ಪವಿತ್ರರಾಗಿದ್ದೇವೆಯೇ ಎಂದು ನೋಡಿಕೊಳ್ಳಬೇಕು. ಯೋಗವಿದ್ದಾಗಲೇ ಬ್ಯಾಟರಿಯು ತುಂಬುತ್ತದೆ. ತಂದೆಯೊಂದಿಗೆ ಯೋಗವಿದ್ದಾಗ ಸತೋಪ್ರಧಾನರಾಗುತ್ತೀರಿ. ತಮೋಪ್ರಧಾನ ಆತ್ಮವು ಹಿಂತಿರುಗಿ ಹೋಗಲು ಸಾಧ್ಯವಿಲ್ಲ.

ಇದೂ ನಾಟಕವಾಗಿದೆ. ಸತ್ಯಯುಗದಲ್ಲಿ ದುಃಖ ಕೊಡುವಂತಹ ಯಾವುದೇ ವಸ್ತುಗಳಿರುವುದಿಲ್ಲ. ಹಸುಗಳೂ ಸುಂದರವಾಗಿರುತ್ತವೆ, ಕೃಷ್ಣನ ಜೊತೆ ಎಷ್ಟು ಸುಂದರವಾದ ಹಸುಗಳನ್ನು ತೋರಿಸುತ್ತಾರೆ. ಹೇಗೆ ದೊಡ್ಡ-ದೊಡ್ಡ ವ್ಯಕ್ತಿಗಳ ವಸ್ತುಗಳೂ ಸುಂದರವಾಗಿರುತ್ತವೆ. ಹಸುಗಳು ಚೆನ್ನಾಗಿ ಹಾಲು ಕೊಡುತ್ತವೆ. ಆದ್ದರಿಂದ ಹಾಲಿನ ನದಿಗಳು ಹರಿಯುತ್ತವೆ. ಈಗ ಇಲ್ಲಿ ಆ ರೀತಿಯಿಲ್ಲ. ನೀವೀಗ ಜ್ಞಾನಪೂರ್ಣರಾಗಿದ್ದೀರಿ. ಈ ಪ್ರಪಂಚವನ್ನು ತುಚ್ಛವೆಂದು ತಿಳಿಯುತ್ತೀರಿ. ಇದರ ಕೊಳಕೆಲ್ಲವೂ ಸ್ವಾಹಾ ಆಗಬೇಕಾಗಿದೆ. ಕೊಳಕೆಲ್ಲವೂ ಹೊರಟು ಹೋಗಿ ಎಲ್ಲರೂ ಸ್ವಚ್ಛವಾಗಿ ಬಿಡುತ್ತೀರಿ. ನಾವು ನಮ್ಮ ರಾಜಧಾನಿಯಲ್ಲಿ ಹೋಗುತ್ತೇವೆ. ಅದರ ಹೆಸರೇ ಆಗಿದೆ - ಸ್ವರ್ಗ. ಕೇಳುತ್ತಿದ್ದಂತೆಯೇ ಖುಷಿಯಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಈ ಸುಧಾರಣೆಯಾಗದಿರುವ ಹಳೆಯ ಪ್ರಪಂಚವನ್ನು ಸುಧಾರಣೆ ಮಾಡಲು ಮೊದಲು ಸ್ವಯಂನ್ನು ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ತಮ್ಮ ಬುದ್ಧಿಯನ್ನು ತಂದೆಯ ನೆನಪಿನಿಂದ ಪರಿಶುದ್ಧ ಮಾಡಿಕೊಳ್ಳಬೇಕಾಗಿದೆ.

2. ಪರಸ್ಪರ ವಾರ್ತಾಲಾಪ ಮಾಡಬೇಕಾಗಿದೆ, ವಾದ-ವಿವಾದವಲ್ಲ. ಜ್ಞಾನದ ದಾನ ನೀಡಿ ಸರ್ವರ ಭಂಡಾರವನ್ನು ಸಂಪನ್ನ ಮಾಡಬೇಕಾಗಿದೆ.


ವರದಾನ:
ಸ್ನೇಹಕ್ಕೆ ಬದಲಾಗಿ ತಾನು ಸ್ವಯಂ ಬದಲಾಗಿ ತಂದೆ ಸಮಾನ ಆಗುವಂತಹ ಸಂಪನ್ನ ಮತ್ತು ಸಂಪೂರ್ಣ ಭವ.

ಸ್ನೇಹದ ಗುರುತಾಗಿದೆ ಅವರು ತನ್ನ ಸ್ನೇಹಿಯ ಬಲಹೀನತೆಯನ್ನು ನೋಡಲು ಇಚ್ಛಿಸುವುದಿಲ್ಲ. ಸ್ನೇಹಿಯ ತಪ್ಪನ್ನು ತನ್ನ ತಪ್ಪು ಎಂದು ತಿಳಿಯುತ್ತಾರೆ. ತಂದೆ ಯಾವಾಗ ಮಕ್ಕಳ ಯಾವುದಾದರೂ ಮಾತನ್ನು ಕೇಳಿದರೆ ಆಗ ತಿಳಿಯುತ್ತಾರೆ ಇದು ನನ್ನ ಮಾತಾಗಿದೆ. ತಂದೆ ಮಕ್ಕಳನ್ನು ತನ್ನ ಸಮಾನ ಸಂಪನ್ನ ಮತ್ತು ಸಂಪೂರ್ಣ ನೋಡಲು ಇಚ್ಛೆ ಪಡುತ್ತಾರೆ. ಈ ಸ್ನೇಹದ ಬದಲಾಗಿ ತಾನು ಸ್ವಯಂ ಬದಲಾಗಿರಿ. ಭಕ್ತರಂತೂ ತಲೆಯನ್ನೇ ಕತ್ತರಿಸಿ ಇಡಲು ತಯಾರಾಗಿರುತ್ತಾರೆ. ಆದರೆ ನೀವು ನಿಮ್ಮ ಶರೀರದ ತಲೆಯನ್ನು ಕತ್ತರಿಸುವ ಅಗತ್ಯವಿಲ್ಲ. ಆದರೆ ರಾವಣನ ತಲೆಯನ್ನು ಕತ್ತರಿಸಿ.

ಸ್ಲೋಗನ್:
ತಮ್ಮ ಆತ್ಮೀಯ ವೈಭ್ರೇಷನ್ ಮೂಲಕ ಶಕ್ತಿಶಾಲಿ ವಾಯುಮಂಡಲ ರೂಪಿಸುವಂತಹ ಸೇವೆ ಮಾಡುವುದು ಎಲ್ಲಕ್ಕಿಂತಲೂ ಶ್ರೇಷ್ಠ ಸೇವೆಯಾಗಿದೆ.