16.12.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಅಪಾರ ಖುಷಿ ಹಾಗೂ ನಶೆಯಲ್ಲಿರಲು ದೇಹಾಭಿಮಾನದ ಖಾಯಿಲೆಯನ್ನು ಬಿಟ್ಟು ಪ್ರೀತಿ ಬುದ್ಧಿಯವರಾಗಿ, ತಮ್ಮ ನಡವಳಿಕೆಯನ್ನು ಸುಧಾರಣೆ ಮಾಡಿಕೊಳ್ಳಿ”

ಪ್ರಶ್ನೆ:
ಯಾವ ಮಕ್ಕಳಿಗೆ ಜ್ಞಾನದ ಉಲ್ಟಾ ನಶೆಯೇರಲು ಸಾಧ್ಯವಿಲ್ಲ?

ಉತ್ತರ:
ಯಾರು ತಂದೆಯನ್ನು ಯಥಾರ್ಥವಾಗಿ ಅರಿತು ನೆನಪು ಮಾಡುವರೋ, ಹೃದಯದಿಂದ ತಂದೆಯ ಮಹಿಮೆ ಮಾಡುವರೋ, ಯಾರಿಗೆ ವಿದ್ಯೆಯ ಮೇಲೆ ಪೂರ್ಣ ಗಮನವಿದೆಯೋ ಅವರಿಗೆ ಜ್ಞಾನದ ಉಲ್ಟಾ ನಶೆಯೇರಲು ಸಾಧ್ಯವಿಲ್ಲ. ಯಾರು ತಂದೆಯನ್ನು ಸಾಧಾರಣವಾಗಿ ತಿಳಿಯುವರೋ ಅವರು ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ. ನೆನಪು ಮಾಡಿದರೆ ತಂದೆಗೆ ತಮ್ಮ ಸಮಾಚಾರವನ್ನೂ ಅವಶ್ಯವಾಗಿ ಕೊಡುವರು. ಮಕ್ಕಳು ತಮ್ಮ ಸಮಾಚಾರವನ್ನು ತಿಳಿಸಲಿಲ್ಲವೆಂದರೆ ತಂದೆಗೆ ವಿಚಾರವು ನಡೆಯುತ್ತದೆ - ಮಕ್ಕಳು ಎಲ್ಲಿಯೂ ಮೂರ್ಛಿತರಂತೂ ಆಗಿಲ್ಲವೆ?

ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಯಾರಾದರೂ ಹೊಸಬರು ಬಂದಾಗ ಅವರಿಗೆ ಮೊದಲು ಲೌಕಿಕ ಮತ್ತು ಪಾರಲೌಕಿಕ - ಇಬ್ಬರೂ ತಂದೆಯರ ಪರಿಚಯ ಕೊಡಿ. ಬೇಹದ್ದಿನ ತಂದೆಯೆಂದರೆ ಬೇಹದ್ದಿನ ಆತ್ಮಗಳ ತಂದೆ. ಆ ಲೌಕಿಕ ತಂದೆಯು ಪ್ರತಿಯೊಬ್ಬ ಜೀವಾತ್ಮನಿಗೂ ಬೇರೆ-ಬೇರೆಯಿರುತ್ತಾರೆ. ಈ ಜ್ಞಾನವನ್ನೂ ಸಹ ಎಲ್ಲರೂ ಏಕರಸವಾಗಿ ಧಾರಣೆ ಮಾಡುವುದಿಲ್ಲ. ಕೆಲವರು 1%, ಕೆಲವರು 95% ಧಾರಣೆ ಮಾಡುತ್ತಾರೆ. ಇದಂತೂ ತಿಳುವಳಿಕೆಯ ಮಾತಾಗಿದೆ. ಸೂರ್ಯವಂಶಿ-ಚಂದ್ರವಂಶಿ ಮನೆತನವಿರುತ್ತದೆಯಲ್ಲವೆ. ರಾಜ-ರಾಣಿ ಹಾಗೂ ಪ್ರಜೆಗಳು, ಪ್ರಜೆಗಳಲ್ಲಿ ಎಲ್ಲಾ ಪ್ರಕಾರದ ಮನುಷ್ಯರಿರುತ್ತಾರೆ. ಪ್ರಜೆಗಳೆಂದರೆ ಪ್ರಜೆಗಳು. ತಂದೆಯು ತಿಳಿಸುತ್ತಾರೆ - ಇದು ವಿದ್ಯೆಯಾಗಿದೆ, ಪ್ರತಿಯೊಬ್ಬರೂ ತಮ್ಮ ಬುದ್ಧಿಯನುಸಾರವೇ ಓದುತ್ತಾರೆ. ಪ್ರತಿಯೊಬ್ಬರಿಗೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ. ಯಾರು ಕಲ್ಪದ ಹಿಂದೆ ಎಷ್ಟು ವಿದ್ಯೆಯನ್ನು ಧಾರಣೆ ಮಾಡಿರುವರೋ ಅಷ್ಟನ್ನೇ ಈಗಲೂ ಮಾಡುವರು. ವಿದ್ಯಾಭ್ಯಾಸವೆಂದೂ ಮುಚ್ಚಿಡಲ್ಪಡುವುದಿಲ್ಲ. ವಿದ್ಯೆಯನುಸಾರ ಪದವಿಯೂ ಸಿಗುತ್ತದೆ. ತಂದೆಯು ತಿಳಿಸಿದ್ದಾರೆ. ಮುಂದೆ ಹೋದಂತೆ ಪರೀಕ್ಷೆಯಿರುವುದು ಪರೀಕ್ಷೆಯಿಲ್ಲದೆ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ವರ್ಗಾಯಿತರಾಗಲು ಸಾಧ್ಯವಿಲ್ಲ ಅಂದಾಗ ಅಂತಿಮದಲ್ಲಿ ಎಲ್ಲವೂ ತಿಳಿಯುವುದು. ಆದರೆ ನಾವು ಯಾವ ಪದವಿಗೆ ಯೋಗ್ಯರಾಗಿದ್ದೇವೆ ಎಂಬುದನ್ನು ಈಗಲೂ ಸಹ ನೀವು ತಿಳಿದುಕೊಳ್ಳಬಲ್ಲಿರಿ. ಭಲೆ ಸಂಕೋಚದ ಕಾರಣ ಎಲ್ಲರೂ ಕೈಯನ್ನೆತ್ತುತ್ತೀರಿ. ಆದರೆ ನಾವು ಈ ರೀತಿ ಹೇಗಾಗಲು ಸಾಧ್ಯ ಎಂಬುದನ್ನು ತಾವೇ ತಿಳಿದುಕೊಳ್ಳಬಹುದು, ಆದರೂ ಸಹ ಕೈಯನ್ನೆತ್ತಿ ಬಿಡುತ್ತಾರೆ. ಇದಕ್ಕೂ ಅಜ್ಞಾನವೆಂದೇ ಹೇಳುತ್ತಾರೆ. ತಂದೆಗೆ ಅರ್ಥವಾಗುತ್ತದೆ - ಇವರಿಗಿಂತಲೂ ಹೆಚ್ಚಿನ ಬುದ್ಧಿವಂತಿಕೆ ಲೌಕಿಕ ವಿದ್ಯಾರ್ಥಿಗಳಲ್ಲಿರುತ್ತದೆ. ನಾವು ವಿದ್ಯಾರ್ಥಿ ವೇತನವನ್ನು ಪಡೆಯಲು ಯೋಗ್ಯರಾಗಿಲ್ಲ, ತೇರ್ಗಡೆಯಾಗುವುದಿಲ್ಲ ಎಂಬುದನ್ನು ಅವರೂ ಸಹ ತಿಳಿಯುತ್ತಾರೆ. ಶಿಕ್ಷಕರು ಏನನ್ನು ಓದಿಸುವರೋ ಅದರಲ್ಲಿ ನಾವು ಎಷ್ಟು ಅಂಕಗಳನ್ನು ಪಡೆಯುತ್ತೇವೆ ಎಂಬುದನ್ನು ನೋಡಿಕೊಳ್ಳುತ್ತಾರೆ. ನಾವು ಪಾಸ್-ವಿತ್-ಆನರ್ ಆಗಿ ಬಿಡುತ್ತೇವೆಂದು ಹೇಳುವುದಿಲ್ಲ. ಇಲ್ಲಂತೂ ಕೆಲವು ಮಕ್ಕಳಲ್ಲಿ ಇಷ್ಟಾದರೂ ಬುದ್ಧಿಯಿಲ್ಲ, ಬಹಳ ದೇಹಾಭಿಮಾನವಿದೆ. ಭಲೆ ದೇವತೆಗಳಾಗಲು ಬಂದಿದ್ದಾರೆ, ಆದರೆ ಅಂಥಹ ನಡುವಳಿಕೆಯೂ ಬೇಕಲ್ಲವೆ. ತಂದೆಯು ತಿಳಿಸುತ್ತಾರೆ - ವಿನಾಶಕಾಲೇ ವಿಪರೀತ ಬುದ್ಧಿ ಏಕೆಂದರೆ ನಿಯಮಾನುಸಾರವಾಗಿ ತಂದೆಯೊಂದಿಗೆ ಪ್ರೀತಿಯಿಲ್ಲ.

ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೆ, ವಿನಾಶಕಾಲೇ ವಿಪರೀತ ಬುದ್ಧಿಯ ಯಥಾರ್ಥ ಅರ್ಥವೇನು? ಮಕ್ಕಳೇ ಪೂರ್ಣ ತಿಳಿದುಕೊಳ್ಳದಿದ್ದರೆ ಮತ್ತೆ ಅನ್ಯರೇನು ತಿಳಿದುಕೊಳ್ಳುತ್ತಾರೆ? ತಂದೆಯನ್ನು ನೆನಪು ಮಾಡುವುದಂತೂ ಗುಪ್ತ ಮಾತಾಯಿತು. ವಿದ್ಯೆಯು ಗುಪ್ತವಾಗಿರುವುದಿಲ್ಲ ಅಲ್ಲವೆ. ವಿದ್ಯೆಯಲ್ಲಿ ನಂಬರ್ವಾರ್ ಇರುತ್ತಾರೆ. ಎಲ್ಲರೂ ಒಂದೇ ಸಮನಾಗಿ ಓದುವುದಿಲ್ಲ. ಇನ್ನೂ ಇವರು ಸಣ್ಣ ಮಕ್ಕಳಾಗಿದ್ದಾರೆಂದು ತಂದೆಯು ತಿಳಿಯುತ್ತಾರೆ. ಇಂತಹ ಬೇಹದ್ದಿನ ತಂದೆಯನ್ನು ಮೂರು-ನಾಲ್ಕು ತಿಂಗಳವರೆಗೆ ನೆನಪೇ ಮಾಡುವುದಿಲ್ಲ ಅಂದಮೇಲೆ ನೆನಪು ಮಾಡುತ್ತಾರೆಂದು ಹೇಗೆ ತಿಳಿಯುತ್ತದೆ? ಬಾಬಾ, ನಾನು ಹೀಗೀಗೆ ನಡೆಯುತ್ತಿದ್ದೇನೆ, ಯಾವ-ಯಾವ ಸೇವೆ ಮಾಡುತ್ತೇನೆಂದು ತಂದೆಗೆ ಪತ್ರವನ್ನೂ ಬರೆಯುವುದಿಲ್ಲ. ತಂದೆಗೆ ಮಕ್ಕಳ ಪ್ರತಿ ಇವರು ಎಲ್ಲಿಯೂ ಮೂರ್ಛಿತರಂತೂ ಆಗಿಲ್ಲವೆ, ಎಲ್ಲಿಯೂ ಸತ್ತು ಹೋಗಿಲ್ಲವೆ (ಜ್ಞಾನ ಬಿಡುವುದು) ಎಂದು ಚಿಂತೆಯಿರುತ್ತದೆ. ಕೆಲವರಂತೂ ತಂದೆಗೆ ಎಷ್ಟು ಒಳ್ಳೊಳ್ಳೆಯ ಸೇವಾ ಸಮಾಚಾರಗಳನ್ನು ಬರೆಯುತ್ತಾರೆ. ಮಗು ಗೆದ್ದಿದೆ ಎಂದು ತಂದೆಯು ತಿಳಿಯುತ್ತಾರೆ. ಸರ್ವೀಸ್ ಮಾಡುವ ಮಕ್ಕಳು ಎಂದೂ ಮುಚ್ಚಿಡಲ್ಪಡಲು ಸಾಧ್ಯವಿಲ್ಲ. ತಂದೆಯಂತೂ ಯಾವ ಮಗು ಹೇಗಿದೆಯೆಂದು ಪ್ರತಿಯೊಬ್ಬ ಮಗುವಿನ ಹೃದಯವನ್ನು ನೋಡುತ್ತಾರೆ. ದೇಹಾಭಿಮಾನದ ಖಾಯಿಲೆಯು ಬಹಳ ಕಠಿಣವಾಗಿದೆ. ತಂದೆಯು ಮುರುಳಿಯಲ್ಲಿ ತಿಳಿಸುತ್ತಾರೆ, ಕೆಲವರಿಗಂತೂ ಜ್ಞಾನದ ಉಲ್ಟಾ ನಶೆಯೇರಿ ಬಿಡುತ್ತದೆ, ಅಹಂಕಾರವು ಬಂದು ಬಿಡುತ್ತದೆ ಮತ್ತೆ ನೆನಪೂ ಮಾಡುವುದಿಲ್ಲ, ಪತ್ರವನ್ನೂ ಬರೆಯುವುದಿಲ್ಲ ಅಂದಾಗ ತಂದೆಯು ಹೇಗೆ ನೆನಪು ಮಾಡುತ್ತಾರೆ? ನೆನಪಿನಿಂದಲೇ ನೆನಪು ಸಿಗುತ್ತದೆ. ಈಗ ನೀವು ಮಕ್ಕಳು ತಂದೆಯನ್ನು ಯಥಾರ್ಥವಾಗಿ ತಿಳಿದು ನೆನಪು ಮಾಡುತ್ತೀರಿ, ಹೃದಯದಿಂದ ಮಹಿಮೆ ಮಾಡುತ್ತೀರಿ. ಕೆಲವು ಮಕ್ಕಳು ತಂದೆಯನ್ನು ಸಾಧಾರಣ ಎಂದು ತಿಳಿಯುತ್ತಾರೆ. ಆದ್ದರಿಂದ ನೆನಪು ಮಾಡುವುದಿಲ್ಲ. ತಂದೆಯು ಯಾವುದೇ ಆಡಂಬರವನ್ನು ತೋರಿಸುವರೇ? ಭಗವಾನುವಾಚ - ನಾನು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡಲು ರಾಜಯೋಗವನ್ನು ಕಲಿಸುತ್ತೇನೆ. ಆದರೆ ನಾವು ವಿಶ್ವದ ರಾಜ್ಯಭಾಗ್ಯವನ್ನು ಪಡೆಯಲು ಬೇಹದ್ದಿನ ತಂದೆಯಿಂದ ಓದುತ್ತೇವೆಂದು ನೀವೆಲ್ಲಿ ತಿಳಿಯುತ್ತೀರಿ! ಈ ನಶೆಯಿದ್ದರೆ ಸದಾ ಅಪಾರ ಖುಷಿಯಿರುವುದು. ಗೀತೆಯನ್ನು ಓದುವವರು ಭಲೆ ಹೇಳುತ್ತಾರೆ - ಶ್ರೀ ಕೃಷ್ಣ ಭಗವಾನುವಾಚ, ರಾಜಯೋಗವನ್ನು ಕಲಿಸುತ್ತೇನೆ ಎಂದು. ಆದರೆ ಅವರಿಗೆ ರಾಜ್ಯಭಾಗ್ಯವನ್ನು ಪಡೆಯುವ ಖುಷಿಯೆಲ್ಲಿರುತ್ತದೆ? ಗೀತೆಯನ್ನು ಓದಿ ಪೂರ್ಣ ಮಾಡಿದರೆಂದರೆ ತಮ್ಮ-ತಮ್ಮ ವ್ಯಾಪಾರ-ವ್ಯವಹಾರಗಳಲ್ಲಿ ಹೊರಟು ಹೋಗುತ್ತಾರೆ. ನಮಗೆ ಬೇಹದ್ದಿನ ತಂದೆಯು ಓದಿಸುತ್ತಾರೆಂದು ಈಗ ನಿಮಗೆ ಬುದ್ಧಿಯಲ್ಲಿದೆ, ಅವರಿಗೆ ಈ ರೀತಿ ಬುದ್ಧಿಯಲ್ಲಿ ಬರುವುದಿಲ್ಲ. ಅಂದಮೇಲೆ ಮೊಟ್ಟ ಮೊದಲಿಗೆ ಯಾರೇ ಬರಲಿ ಅವರಿಗೆ ಇಬ್ಬರು ತಂದೆಯರ ಪರಿಚಯವನ್ನು ಕೊಡಬೇಕು. ಹೇಳಿ, ಭಾರತವು ಸ್ವರ್ಗವಾಗಿತ್ತು, ಈಗ ನರಕವಾಗಿದೆ. ಇದು ಕಲಿಯುಗವಾಗಿದೆ, ಇದಕ್ಕೆ ಸ್ವರ್ಗವೆಂದು ಹೇಳುತ್ತಾರೆಯೇ! ಸತ್ಯಯುಗದಲ್ಲಿಯೂ ಇದ್ದೇವೆ, ಕಲಿಯುಗದಲ್ಲಿಯೂ ಇದ್ದೇವೆಂದು ಹೇಳಲು ಸಾಧ್ಯವಿಲ್ಲ. ಯಾರಿಗಾದರೂ ದುಃಖವಾದಾಗ ನರಕದಲ್ಲಿದ್ದಾರೆಂದು ಹೇಳುತ್ತಾರೆ. ಸುಖವಿದ್ದಾಗ ಸ್ವರ್ಗದಲ್ಲಿದ್ದಾರೆಂದು ಹೇಳುತ್ತಾರೆ. ದುಃಖಿ ಮನುಷ್ಯರು ನರಕದಲ್ಲಿದ್ದಾರೆ, ನಾವಂತೂ ಬಹಳ ಸುಖದಲ್ಲಿದ್ದೇವೆ, ಮಹಲು-ಮಹಡಿ, ವಾಹನಗಳು ಎಲ್ಲವೂ ಇದೆ. ನಾವಂತೂ ಸ್ವರ್ಗದಲ್ಲಿದ್ದೇವೆಂದು ಅನೇಕರು ಹೇಳುತ್ತಾರೆ. ಸತ್ಯಯುಗ-ಕಲಿಯುಗ ಒಂದೇ ಮಾತೆಂದು ತಿಳಿಯುತ್ತಾರೆ.

ಆದ್ದರಿಂದ ಮೊಟ್ಟ ಮೊದಲು ಇಬ್ಬರು ತಂದೆಯ ಮಾತನ್ನು ಬುದ್ಧಿಯಲ್ಲಿ ಕೂರಿಸಬೇಕಾಗಿದೆ. ಸ್ವಯಂ ತಂದೆ ತಮ್ಮ ಪರಿಚಯವನ್ನು ಕೊಡುತ್ತಾರೆ. ಅವರು ಸರ್ವವ್ಯಾಪಿಯಾಗಲು ಹೇಗೆ ಸಾಧ್ಯ? ಲೌಕಿಕ ತಂದೆಗೆ ಸರ್ವವ್ಯಾಪಿಯೆಂದು ಹೇಳುವಿರಾ? ಈಗ ನೀವು ಚಿತ್ರದಲ್ಲಿ ನೋಡುತ್ತೀರಿ - ಆತ್ಮ ಮತ್ತು ಪರಮಾತ್ಮನ ರೂಪವಂತೂ ಒಂದೇ ಆಗಿದೆ, ಅದರಲ್ಲಿ ವ್ಯತ್ಯಾಸವಂತೂ ಇಲ್ಲ. ಆತ್ಮ ಮತ್ತು ಪರಮಾತ್ಮನ ಗಾತ್ರವು ಚಿಕ್ಕದು-ದೊಡ್ಡದು ಇರುವುದಿಲ್ಲ. ಎಲ್ಲರೂ ಆತ್ಮಗಳಾಗಿದ್ದಾರೆ, ತಂದೆಯೂ ಸಹ ಆತ್ಮನಾಗಿದ್ದಾರೆ. ಅವರು ಸದಾ ಪರಮಧಾಮದಲ್ಲಿರುವ ಕಾರಣ ಅವರಿಗೆ ಪರಮಾತ್ಮನೆಂದು ಕರೆಯಲಾಗುತ್ತದೆ. ನೀವಾತ್ಮಗಳು ಹೇಗೆ ಬರುತ್ತೀರೋ ಹಾಗೇ ನಾನು ಬರುವುದಿಲ್ಲ. ನಾನು ಅಂತಿಮದಲ್ಲಿ ಈ (ಬ್ರಹ್ಮಾ) ತನುವಿನಲ್ಲಿ ಬಂದು ಪ್ರವೇಶ ಮಾಡುತ್ತೇನೆ. ಈ ಮಾತುಗಳನ್ನು ಹೊರಗಿನವರು ಅರಿತುಕೊಳ್ಳಲು ಸಾಧ್ಯವಿಲ್ಲ. ಬಹಳ ಸಹಜ ಮಾತಾಗಿದೆ. ಕೇವಲ ಅಂತರವಿಷ್ಟೇ ಆಗಿದೆ - ಅವರು ತಂದೆಗೆ ಬದಲಾಗಿ ವೈಕುಂಠವಾಸಿ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಕೃಷ್ಣನು ವೈಕುಂಠವನ್ನು ಬಿಟ್ಟು ನರಕದಲ್ಲಿ ಬಂದು ರಾಜಯೋಗವನ್ನು ಕಲಿಸಿದನೇ? ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಕೃಷ್ಣನು ಹೇಳುವನೇ? ದೇಹಧಾರಿಯ ನೆನಪಿನಿಂದ ಪಾಪ ಕರ್ಮಗಳು ಹೇಗೆ ತುಂಡಾಗುತ್ತವೆ? ಕೃಷ್ಣನಂತೂ ಒಬ್ಬ ಚಿಕ್ಕ ಮಗುವಾಗಿದ್ದಾನೆ ಮತ್ತು ನಾನು ಸಾಧಾರಣ ಮನುಷ್ಯನ ವೃದ್ಧನ ತನುವಿನಲ್ಲಿ ಬರುತ್ತೇನೆ. ಎಷ್ಟೊಂದು ಅಂತರವಾಯಿತು! ಈ ನಂಬರ್ವನ್ ತಪ್ಪಿನ ಕಾರಣವೇ ಎಲ್ಲಾ ಮನುಷ್ಯರು ಪತಿತರು, ಕಂಗಾಲಾರಾಗಿ ಬಿಟ್ಟಿದ್ದಾರೆ. ನಾನೂ ಸರ್ವವ್ಯಾಪಿಯಲ್ಲ, ಕೃಷ್ಣನೂ ಸರ್ವವ್ಯಾಪಿಯಲ್ಲ, ಶರೀರದಲ್ಲಿ ಆತ್ಮವು ಸರ್ವವ್ಯಾಪಿಯಾಗಿದೆ. ನನಗಂತೂ ನನ್ನದೇ ಆದಂತಹ ಶರೀರವೂ ಇಲ್ಲ. ಪ್ರತಿಯೊಂದು ಆತ್ಮಕ್ಕೆ ತಮ್ಮ-ತಮ್ಮ ಶರೀರವಿದೆ. ಪ್ರತಿಯೊಬ್ಬರಿಗೂ ತಮ್ಮ ಶರೀರದ ಮೇಲೆ ಹೆಸರು ಬರುತ್ತದೆ. ಆದರೆ ನನಗೆ ಶರೀರವೂ ಇಲ್ಲ ಮತ್ತು ನನಗೆ ಯಾವುದೇ ಶರೀರದ ಹೆಸರೂ ಇಲ್ಲ. ನಾನಂತೂ ವೃದ್ಧನ ಶರೀರವನ್ನು ತೆಗೆದುಕೊಳ್ಳುತ್ತೇನೆ. ಆದ್ದರಿಂದ ಇವರ ಹೆಸರನ್ನು ಬದಲಾಯಿಸಿ ‘ಬ್ರಹ್ಮಾ’ ಎಂದು ಇಟ್ಟಿದ್ದೇನೆ. ನನಗೆ ಬ್ರಹ್ಮಾ ಎಂದು ಹೆಸರಿಲ್ಲ, ನನ್ನನ್ನು ಸದಾ ಶಿವನೆಂದೇ ಹೇಳುತ್ತಾರೆ. ನಾನೇ ಸರ್ವರ ಸದ್ಗತಿದಾತನಾಗಿದ್ದೇನೆ, ಆತ್ಮಕ್ಕೆ ಸರ್ವರ ಸದ್ಗತಿದಾತನೆಂದು ಹೇಳುವುದಿಲ್ಲ. ಎಂದಾದರೂ ಪರಮಾತ್ಮನಿಗೆ ದುರ್ಗತಿಯಾಗುತ್ತದೆಯೇ? ಆತ್ಮಕ್ಕೇ ದುರ್ಗತಿ ಮತ್ತು ಆತ್ಮಕ್ಕೇ ಸದ್ಗತಿಯಾಗುತ್ತದೆ. ಇವೆಲ್ಲಾ ಮಾತುಗಳು ವಿಚಾರ ಸಾಗರ ಮಂಥನ ಮಾಡುವ ಮಾತುಗಳಾಗಿವೆ. ಇಲ್ಲವೆಂದರೆ ಅನ್ಯರಿಗೆ ಹೇಗೆ ತಿಳಿಸುತ್ತೀರಿ? ಆದರೆ ಮಾಯೆಯು ಇಷ್ಟು ಶಕ್ತಿಶಾಲಿಯಾಗಿದೆ, ಅದು ಮಕ್ಕಳ ಬುದ್ಧಿಯು ಕೆಲಸ ಮಾಡಲು ಬಿಡುವುದಿಲ್ಲ. ದಿನದಲ್ಲಿ ಅಲ್ಲ ಸಲ್ಲದ ಮಾತುಗಳಲ್ಲಿಯೂ ಸಮಯವನ್ನು ವ್ಯರ್ಥ ಮಾಡಿ ಬಿಡುತ್ತಾರೆ. ತಂದೆಯಿಂದ ದೂರವಾಗಲು ಮಾಯೆಯು ಎಷ್ಟೊಂದು ಒತ್ತಾಯ ಮಾಡುತ್ತದೆ. ಕೆಲವು ಮಕ್ಕಳಂತೂ ಹೊರಟೇ ಹೋಗುತ್ತಾರೆ. ತಂದೆಯನ್ನು ನೆನಪು ಮಾಡದೇ ಇರುವ ಕಾರಣ ಸ್ಥಿತಿಯು ಅಚಲ-ಅಡೋಲವಾಗುವುದಿಲ್ಲ. ತಂದೆಯು ಮತ್ತೆ-ಮತ್ತೆ ನಿಲ್ಲಿಸುತ್ತಾರೆ, ಮಾಯೆಯು ಬೀಳಿಸುತ್ತದೆ. ತಂದೆಯು ತಿಳಿಸುತ್ತಾರೆ, ಮಕ್ಕಳೇ ಸೋಲನ್ನನುಭವಿಸಬೇಡಿ. ಕಲ್ಪ-ಕಲ್ಪವೂ ಇದೇ ಆಗಿ ಬಿಡುತ್ತದೆ, ಯಾವುದೇ ಹೊಸ ಮಾತಿಲ್ಲ. ಮಾಯಾಜೀತರು ಅಂತ್ಯದಲ್ಲಿ ಆಗಿಯೇ ಬಿಡುತ್ತೀರಿ. ರಾವಣ ರಾಜ್ಯವು ಸಮಾಪ್ತಿಯಾಗುತ್ತದೆ. ಮತ್ತೆ ನಾವು ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡುತ್ತೇವೆ. ಕಲ್ಪ-ಕಲ್ಪವೂ ಮಾಯಾಜೀತರಾಗಿದ್ದೇವೆ, ಲೆಕ್ಕವಿಲ್ಲದಷ್ಟು ಬಾರಿ ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡಿದ್ದೇವೆ. ತಂದೆಯು ತಿಳಿಸುತ್ತಾರೆ - ನಿಮ್ಮ ಬುದ್ಧಿಯನ್ನು ಸದಾ ಬ್ಯುಸಿಯಾಗಿಟ್ಟುಕೊಳ್ಳಿ ಆಗ ಸದಾ ಸುರಕ್ಷಿತರಾಗಿರುತ್ತೀರಿ. ಇದಕ್ಕೆ ಸ್ವದರ್ಶನ ಚಕ್ರಧಾರಿಗಳೆಂದು ಹೇಳಲಾಗುವುದು. ಇದರಲ್ಲಿ ಹಿಂಸೆ ಮೊದಲಾದ ಮಾತಿಲ್ಲ. ಬ್ರಾಹ್ಮಣರೇ ಸ್ವದರ್ಶನ ಚಕ್ರಧಾರಿಗಳಾಗಿರುತ್ತಾರೆ. ದೇವತೆಗಳಿಗೆ ಸ್ವದರ್ಶನ ಚಕ್ರಧಾರಿಗಳೆಂದು ಹೇಳುವುದಿಲ್ಲ. ಪತಿತ ಪ್ರಪಂಚದ ರೀತಿ ನೀತಿ ಮತ್ತು ದೇವತೆಗಳ ರೀತಿ ನೀತಿಯಲ್ಲಿ ಬಹಳ ಅಂತರವಿದೆ. ಮೃತ್ಯುಲೋಕದಲ್ಲಿರುವವರೇ ಪತಿತ-ಪಾವನನೇ, ನಾವು ಪತಿತರನ್ನು ಬಂದು ಪಾವನ ಮಾಡಿ, ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದು ತಂದೆಯನ್ನು ಕರೆಯುತ್ತಾರೆ. ನಿಮ್ಮ ಬುದ್ಧಿಯಲ್ಲಿದೆ - ಇಂದಿಗೆ 5000 ವರ್ಷಗಳ ಮೊದಲು ಹೊಸ ಪಾವನ ಪ್ರಪಂಚವಿತ್ತು, ಅದಕ್ಕೆ ಸತ್ಯಯುಗವೆಂದು ಕರೆಯಲಾಗುತ್ತದೆ. ತ್ರೇತಾಯುಗಕ್ಕೆ ಹೊಸ ಪ್ರಪಂಚವೆಂದು ಹೇಳಲಾಗುವುದಿಲ್ಲ. ತಂದೆಯು ತಿಳಿಸಿದ್ದಾರೆ - ಸತ್ಯಯುಗವು ಮೊದಲನೆಯದು, ಇದು ಎರಡನೆಯ ದರ್ಜೆಯದು. ಒಂದೊಂದು ಮಾತನ್ನೂ ಬಹಳ ಚೆನ್ನಾಗಿ ಧಾರಣೆ ಮಾಡಬೇಕು. ಅದರಿಂದ ಯಾರೇ ಬಂದು ಕೇಳಿದರೂ ಆಶ್ಚರ್ಯ ಚಕಿತರಾಗಬೇಕು. ಕೆಲಕೆಲವರು ಆಶ್ಚರ್ಯ ಚಕಿತರಾಗುತ್ತಾರೆ ಆದರೆ ಪುರುಷಾರ್ಥ ಮಾಡಲು ಅವರಿಗೆ ಬಿಡುವಿರುವುದಿಲ್ಲ. ಮತ್ತೆ ಅವಶ್ಯವಾಗಿ ಪವಿತ್ರರಾಗಬೇಕೆಂದು ಕೇಳುತ್ತಾರೆ. ಈ ಕಾಮ ವಿಕಾರವೇ ಮನುಷ್ಯರನ್ನು ಪತಿತರನ್ನಾಗಿ ಮಾಡುತ್ತದೆ, ಅದನ್ನು ಗೆಲ್ಲುವುದರಿಂದ ನೀವು ಜಗತ್ತನ್ನೇ ಗೆಲ್ಲುವಿರಿ ಆದರೆ ಕಾಮ ವಿಕಾರವು ಹಾಗೆ - ಆದ್ದರಿಂದ ಅವರು ಈ ಶಬ್ಧವನ್ನು ಹೇಳುವುದಿಲ್ಲ. ಕೇವಲ ಮನಸ್ಸನ್ನು ವಶದಲ್ಲಿಟ್ಟುಕೊಳ್ಳಿ ಎಂದು ಹೇಳುತ್ತಾರೆ. ಆದರೆ ಯಾವಾಗ ಶರೀರದಲ್ಲಿರುವುದಿಲ್ಲವೋ ಆಗಲೇ ಮನಸ್ಸು ತಟಸ್ಥ ಸ್ಥಿತಿಯಲ್ಲಿರುತ್ತದೆ ಉಳಿದಂತೆ ಮನಸ್ಸು ಎಂದೂ ತಟಸ್ಥ ಸ್ಥಿತಿಯಲ್ಲಿ ಬರುವುದಿಲ್ಲ. ದೇಹ ಸಿಗುವುದೇ ಕರ್ಮ ಮಾಡುವುದಕ್ಕಾಗಿ ಅಂದಮೇಲೆ ಕರ್ಮಾತೀತ ಸ್ಥಿತಿಯಲ್ಲಿ ಹೇಗಿರುತ್ತೀರಿ? ಕರ್ಮಾತೀತ ಸ್ಥಿತಿಯೆಂದು ಶವಕ್ಕೆ ಹೇಳಲಾಗುತ್ತದೆ. ಜೀವಿಸಿದ್ದಂತೆಯೇ ಸಾಯುವುದು ಅಥವಾ ಶರೀರದಿಂದ ಭಿನ್ನವಾಗಿರುವುದು, ತಂದೆಯು ನಿಮಗೆ ಶರೀರದಿಂದ ಭಿನ್ನರಾಗುವ ವಿದ್ಯೆಯನ್ನು ಓದಿಸುತ್ತಾರೆ. ಆತ್ಮವು ಶರೀರದಿಂದ ಬೇರೆಯಾಗಿದೆ, ಆತ್ಮವು ಪರಮಧಾಮ ನಿವಾಸಿಯಾಗಿದೆ. ಅದು ಶರೀರದಲ್ಲಿ ಬಂದಾಗ ಅವರಿಗೆ ಮನುಷ್ಯನೆಂದು ಹೇಳಲಾಗುತ್ತದೆ. ಶರೀರ ಸಿಗುವುದೇ ಕರ್ಮ ಮಾಡುವುದಕ್ಕಾಗಿ. ಒಂದು ಶರೀರವನ್ನು ಬಿಟ್ಟು ಮತ್ತೆ ಇನ್ನೊಂದು ಶರೀರದಲ್ಲಿ ಕರ್ಮ ಮಾಡುವುದಕ್ಕಾಗಿ ತೆಗೆದುಕೊಳ್ಳಬೇಕಾಗಿದೆ. ಯಾವಾಗ ಶರೀರದಲ್ಲಿರುವುದಿಲ್ಲವೋ ಆಗ ಆತ್ಮವು ಸಂಪೂರ್ಣ ಶಾಂತಿಯಲ್ಲಿರುವುದು. ಮೂಲವತನದಲ್ಲಿ ಕರ್ಮವಿರುವುದಿಲ್ಲ, ಸೂಕ್ಷ್ಮವತನದ ಮಾತೇ ಇಲ್ಲ. ಸೃಷ್ಟಿಚಕ್ರವು ಇಲ್ಲಿಯೇ ಸುತ್ತುತ್ತದೆ. ತಂದೆ ಮತ್ತು ಸೃಷ್ಟಿಚಕ್ರವನ್ನು ಅರಿತುಕೊಳ್ಳುವುದಕ್ಕೆ ಜ್ಞಾನವೆಂದು ಹೇಳಲಾಗುತ್ತದೆ. ಸೂಕ್ಷ್ಮವತನದಲ್ಲಿ ಶ್ವೇತ ವಸ್ತ್ರಧಾರಿಗಳೂ ಇರುವುದಿಲ್ಲ, ಶೃಂಗರಿಸಲ್ಪಟ್ಟಿರುವವರೂ ಇಲ್ಲ. ನಾಗ ಜಟೆಗಳನ್ನು ಬಿಟ್ಟಿರುವ ಶಂಕರನೂ ಇರುವುದಿಲ್ಲ, ಬಾಕಿ ಬ್ರಹ್ಮಾ ಮತ್ತು ವಿಷ್ಣುವಿನ ರಹಸ್ಯವನ್ನು ತಂದೆಯು ತಿಳಿಸುತ್ತಿರುತ್ತಾರೆ. ಬ್ರಹ್ಮನು ಇಲ್ಲಿಯೇ ಇದ್ದಾರೆ. ವಿಷ್ಣುವಿನ ಎರಡು ರೂಪಗಳೂ (ಲಕ್ಷ್ಮಿ-ನಾರಾಯಣ) ಇಲ್ಲಿಯೇ ಇದೆ. ಅದು ಕೇವಲ ಸಾಕ್ಷಾತ್ಕಾರದ ಪಾತ್ರವು ನಾಟಕದಲ್ಲಿದೆ. ಅದನ್ನು ದಿವ್ಯ ದೃಷ್ಟಿಯಿಂದ ನೋಡಬಹುದಾಗಿದೆ. ವಿಕಾರಿ ಕಣ್ಣುಗಳಿಗೆ ಪವಿತ್ರ ವಸ್ತುವು ಕಾಣಿಸುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮನ್ನು ತಾವು ಸದಾ ಸುರಕ್ಷಿತವಾಗಿಟ್ಟುಕೊಳ್ಳಲು ಬುದ್ಧಿಯನ್ನು ವಿಚಾರ ಸಾಗರ ಮಂಥನದಲ್ಲಿ ಬ್ಯುಜಿಯಾಗಿಟ್ಟುಕೊಳ್ಳಬೇಕಾಗಿದೆ. ಸ್ವದರ್ಶನ ಚಕ್ರಧಾರಿಗಳಾಗಿರಬೇಕಾಗಿದೆ. ಅಲ್ಲ ಸಲ್ಲದ ವಿಚಾರಗಳಲ್ಲಿ ತಮ್ಮ ಸಮಯವನ್ನು ಕಳೆಯಬಾರದು.

2. ಶರೀರದಿಂದ ಭಿನ್ನರಾಗಿರುವ ಯಾವ ವಿದ್ಯೆಯನ್ನು ತಂದೆಯೇ ಓದಿಸುವರೋ ಅದನ್ನು ಓದಬೇಕಾಗಿದೆ. ಮಾಯೆಯ ಒತ್ತಡದಿಂದ ಪಾರಾಗಲು ತಮ್ಮ ಸ್ಥಿತಿಯನ್ನು ಅಚಲ-ಅಡೋಲ ಮಾಡಿಕೊಳ್ಳಬೇಕಾಗಿದೆ.

ವರದಾನ:
ಸದಾ ಉಮಂಗ-ಉತ್ಸಾಹದಲ್ಲಿರುತ್ತಾ ಮನಸ್ಸಿನಲ್ಲಿ ಖುಷಿಯ ಗೀತೆ ಹಾಡುವಂತಹ ಅವಿನಾಶಿ ಅದೃಷ್ಠಶಾಲಿ ಭವ.

ತಾವು ಅದೃಷ್ಠಶಾಲಿ ಮಕ್ಕಳು ಅವಿನಾಶಿ ವಿಧಿಯಿಂದ ಅವಿನಾಶಿ ಸಿದ್ಧಿಗಳನ್ನು ಪ್ರಾಪ್ತಿ ಮಾಡಿಕೊಳ್ಳುವಿರಿ. ತಮ್ಮ ಮನಸ್ಸಿನಿಂದ ಸದಾ ವ್ಹಾ-ವ್ಹಾ ನ ಖುಷಿಯ ಗೀತೆ ನುಡಿಯುತ್ತಿರುತ್ತೆ. ವ್ಹಾ ಬಾಬಾ! ವ್ಹಾ ನನ್ನ ಅದೃಷ್ಠ! ವ್ಹಾ ಮಧುರ ಪರಿವಾರ! ವ್ಹಾ ಶ್ರೇಷ್ಠ ಸಂಗಮದ ಆಹ್ಲಾಧಕರ ಸಮಯ! ಪ್ರತಿ ಕರ್ಮ ವ್ಹಾ ! ವ್ಹಾ ! ಆಗಿದೆ. ಆದ್ದರಿಂದ ತಾವು ಅವಿನಾಶಿ ಅದೃಷ್ಠಶಾಲಿಗಳಾಗಿರುವಿರಿ. ತಮ್ಮ ಮನಸ್ಸಿನಲ್ಲಿ ವೈ (ಏಕೆ), ಐ (ನಾನು) ಬರಲು ಸಾಧ್ಯವಿಲ್ಲ. ವೈ ಗೆ ಬದಲಾಗಿ ವ್ಹಾ-ವ್ಹಾ ಮತ್ತು ಐ ಗೆ ಬದಲಾಗಿ ಬಾಬಾ-ಬಾಬಾ ಶಬ್ಧವೇ ಬರುವುದು.

ಸ್ಲೋಗನ್:
ಯಾರು ಸಂಕಲ್ಪ ಮಾಡುವಿರಿ ಅದಕ್ಕೆ ಅವಿನಾಶಿ ಸರ್ಕಾರದ ಸ್ಟಾಂಪ್ ಹಾಕಿ ಬಿಡಿ ಆಗ ಅಟಲರಾಗಿರುವಿರಿ.