20.08.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಇದು ಬೇಹದ್ದಿನ ಅನ್ಲಿಮಿಟೆಡ್ ಸ್ಟೇಜ್ ಆಗಿದೆ, ಇದರಲ್ಲಿ ನೀವಾತ್ಮರು ಪಾತ್ರವನ್ನಭಿನಯಿಸಲು ಬಂಧಿತರಾಗಿದ್ದೀರಿ, ಇದರಲ್ಲಿ ಪ್ರತಿಯೊಬ್ಬರ ಪಾತ್ರವು ನಿಶ್ಚಿತವಾಗಿದೆ”

ಪ್ರಶ್ನೆ:
ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಪುರುಷಾರ್ಥವೇನು?

ಉತ್ತರ:
ಕರ್ಮಾತೀತರಾಗಬೇಕೆಂದರೆ ಸಂಪೂರ್ಣ ಸಮರ್ಪಿತರಾಗಬೇಕಾಗುವುದು. ತನ್ನದೇನೂ ಇಲ್ಲ. ಈ ರೀತಿ ಎಲ್ಲವನ್ನೂ ಮರೆತಾಗಲೇ ಕರ್ಮಾತೀತರಾಗಲು ಸಾಧ್ಯ. ಯಾರಿಗೆ ಹಣ, ಅಧಿಕಾರ, ಮಕ್ಕಳು ಇತ್ಯಾದಿ ನೆನಪಿಗೆ ಬರುವುದೋ ಅವರು ಕರ್ಮಾತೀತರಾಗಲು ಸಾಧ್ಯವಿಲ್ಲ. ಆದ್ದರಿಂದ ತಂದೆಯು ಹೇಳುತ್ತಾರೆ - ನಾನು ಬಡವರ ಬಂಧುವಾಗಿದ್ದೇನೆ. ಬಡ ಮಕ್ಕಳೇ ಬಹುಬೇಗನೆ ಸಮರ್ಪಿತರಾಗಿ ಬಿಡುತ್ತಾರೆ. ಎಲ್ಲವನ್ನು ಸಹಜವಾಗಿ ಮರೆತು ಒಬ್ಬ ತಂದೆಯ ನೆನಪಿನಲ್ಲಿರುತ್ತಾರೆ.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳ ಬುದ್ಧಿಯಲ್ಲಿ ಇದು ಅವಶ್ಯವಾಗಿ ಇದೆ- ನಾವೀಗ ಮನೆಗೆ ಹೋಗಬೇಕೆಂದು. ಭಕ್ತರ ಬುದ್ಧಿಯಲ್ಲಿ ಇದು ಇರುವುದಿಲ್ಲ, ನೀವೇ ತಿಳಿದುಕೊಂಡಿದ್ದೀರಿ. ಈ 84 ಜನ್ಮಗಳ ಚಕ್ರವು ಈಗ ಮುಕ್ತಾಯವಾಯಿತು. ಇದು ಬಹಳ ದೊಡ್ಡ ಬೇಹದ್ದಿನ ಮಂಟಪ ಅಥವಾ ಸ್ಟೇಜ್ ಆಗಿದೆ, ಈ ಹಳೆಯ ಮಂಟಪವನ್ನು ಬಿಟ್ಟು ಮನೆಗೆ ಹೋಗಬೇಕಾಗಿದೆ. ಅಪವಿತ್ರ ಆತ್ಮರಂತೂ ಹೋಗಲು ಸಾಧ್ಯವಿಲ್ಲ. ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಈಗ ಈ ಆಟದ ಅಂತ್ಯವಾಗಿದೆ. ಅಪರಮಪಾರ ದುಃಖಗಳ ಅಂತಿಮವಾಗಿದೆ. ಈ ಸಮಯದಲ್ಲಿ ಇದೆಲ್ಲವೂ ಮಾಯೆಯ ಆಡಂಬರವಾಗಿದೆ. ಇದನ್ನು ಮನುಷ್ಯರು ಸ್ವರ್ಗವೆಂದು ತಿಳಿಯುತ್ತಾರೆ. ಎಷ್ಟೊಂದು ಮಹಲು, ವಾಹನಗಳು, ಇತ್ಯಾದಿಗಳಿವೆ. ಇದಕ್ಕೆ ಮಾಯೆಯ ಕಾಂಪಿಟೇಶನ್ ಎಂದು ಹೇಳಲಾಗುತ್ತದೆ. ಸ್ವರ್ಗದ ಜೊತೆಗೆ ನರಕದ ಕಾಂಪಿಟೇಷನ್ ಆಗಿದೆ. ಅಲ್ಪಕಾಲಕ್ಕಾಗಿ ಸುಖವಿದೆ, ಡ್ರಾಮಾನುಸಾರ ಇದು ಮಾಯೆಯ ಲಾಲಸೆಯಾಗಿದೆ. ಎಷ್ಟೊಂದು ಮನುಷ್ಯರಿದ್ದಾರೆ, ಮೊದಲು ಕೇವಲ ಒಂದು ಆದಿ ಸನಾತನ ದೇವಿ-ದೇವತಾ ಧರ್ಮವೇ ಇತ್ತು, ಈಗಂತೂ ಈ ಮಂಟಪವು ತುಂಬಿ ಹೋಗಿದೆ. ಈಗ ಈ ಚಕ್ರವು ಮುಕ್ತಾಯವಾಗುತ್ತದೆ. ಎಲ್ಲರೂ ತಮೋಪ್ರಧಾನರಾಗಿದ್ದಾರೆ, ಸೃಷ್ಟಿಯೂ ತಮೋಪ್ರಧಾನವಾಗಿದೆ. ನಂತರ ಸತೋಪ್ರಧಾನವಾಗಲಿದೆ. ಇಡೀ ಸೃಷ್ಟಿಯು ಹೊಸದಾಗಬೇಕಲ್ಲವೆ. ಹೊಸದರಿಂದ ಹಳೆಯದು, ಹಳೆಯದರಿಂದ ಹೊಸದು. ಹೀಗೆ ಅನೇಕ ಬಾರಿ ನಡೆಯುತ್ತಾ ಬಂದಿದೆ. ಅನಾದಿ ಆಟವಾಗಿದೆ. ಯಾವಾಗಿನಿಂದ ಆರಂಭವಾಯಿತೆಂದು ಹೇಳುವಂತಿಲ್ಲ. ಅನಾದಿಯಾಗಿ ನಡೆಯುತ್ತಲೇ ಇರುತ್ತದೆ. ಇದನ್ನೂ ನೀವು ತಿಳಿದುಕೊಂಡಿದ್ದೀರಿ, ಮತ್ತ್ಯಾರೂ ತಿಳಿದುಕೊಂಡಿಲ್ಲ. ನೀವೂ ಸಹ ಈ ಜ್ಞಾನ ಸಿಗುವುದಕ್ಕೆ ಮೊದಲು ಏನನ್ನೂ ತಿಳಿದುಕೊಂಡಿರಲಿಲ್ಲ. ದೇವತೆಗಳಿಗೂ ಗೊತ್ತಿರಲಿಲ್ಲ, ಕೇವಲ ನೀವು ಪುರುಷೋತ್ತಮ ಸಂಗಮಯುಗಿ ಬ್ರಾಹ್ಮಣರೇ ತಿಳಿದುಕೊಂಡಿದ್ದೀರಿ ನಂತರ ಈ ಜ್ಞಾನವು ಪ್ರಾಯಃಲೋಪವಾಗಿ ಬಿಡುವುದು. ತಂದೆಯು ಸುಖಧಾಮದ ಮಾಲೀಕರನ್ನಾಗಿ ಮಾಡಿದರು ಮತ್ತೇನು ಬೇಕು! ತಂದೆಯಿಂದ ಏನನ್ನು ಪಡೆಯಬೇಕಿತ್ತೋ ಅದನ್ನು ಪಡೆದುಕೊಂಡಮೇಲೆ ಪಡೆಯುವುದೇನು ಉಳಿದುಕೊಂಡಿಲ್ಲ, ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವೇ ಎಲ್ಲರಿಗಿಂತ ಜಾಸ್ತಿ ಪತಿತರಾಗಿದ್ದೀರಿ, ಮೊಟ್ಟ ಮೊದಲು ನೀವೇ ಪಾತ್ರವನ್ನಭಿನಯಿಸಲು ಬಂದಿದ್ದೀರಿ, ನೀವೇ ಮೊದಲು ಹೋಗಬೇಕಾಗುವುದು, ಇದು ಚಕ್ರವಲ್ಲವೆ. ಮೊಟ್ಟ ಮೊದಲಿಗೆ ನೀವೇ ಮಾಲೆಯಲ್ಲಿ ಪೋಣಿಸಲ್ಪಡುತ್ತೀರಿ. ಇದು ರುದ್ರಮಾಲೆಯಾಗಿದೆ. ಈ ದಾರದಲ್ಲಿ ಇಡೀ ಪ್ರಪಂಚದ ಮನುಷ್ಯರು ಪೋಣಿಸಲ್ಪಟ್ಟಿದ್ದಾರೆ. ದಾರದಿಂದ ಹೊರಬಂದು ಪರಮಧಾಮಕ್ಕೆ ಹೊರಟು ಹೋಗುತ್ತಾರೆ ಪುನಃ ಅದೇ ರೀತಿ ದಾರದಲ್ಲಿ ಪೋಣಿಸಲ್ಪಡುತ್ತಾರೆ, ಬಹಳ ದೊಡ್ಡ ಮಾಲೆಯಾಗಿದೆ. ಶಿವ ತಂದೆಗೆ ಎಷ್ಟು ಮಂದಿ ಮಕ್ಕಳಿದ್ದಾರೆ, ಮೊಟ್ಟ ಮೊದಲು ನೀವು ದೇವತೆಗಳೇ ಬರುತ್ತೀರಿ. ಇದು ಬೇಹದ್ದಿನ ಮಾಲೆಯಾಗಿದೆ. ಇದರಲ್ಲಿ ಎಲ್ಲರೂ ಮಣಿಗಳಂತೆ ಪೋಣಿಸಲ್ಪಟ್ಟಿದ್ದೀರಿ. ರುದ್ರಮಾಲೆ ಮತ್ತು ವಿಷ್ಣುವಿನ ಮಾಲೆಯೆಂದು ಗಾಯನ ಮಾಡಲಾಗುತ್ತದೆ. ಪ್ರಜಾಪಿತ ಬ್ರಹ್ಮನ ಮಾಲೆಯಿಲ್ಲ. ನೀವು ಬ್ರಹ್ಮಾಕುಮಾರ-ಕುಮಾರಿಯರದು ಮಾಲೆಯಾಗುವುದಿಲ್ಲ ಏಕೆಂದರೆ ನೀವು ಏರುತ್ತೀರಿ, ಇಳಿಯುತ್ತೀರಿ, ಸೋಲನ್ನನುಭವಿಸುತ್ತೀರಿ, ಗಳಿಗೆ-ಗಳಿಗೆಯೂ ಮಾಯೆಯು ಬೀಳಿಸಿ ಬಿಡುತ್ತದೆ. ಆದ್ದರಿಂದ ಬ್ರಾಹ್ಮಣರದು ಮಾಲೆಯಾಗುವುದಿಲ್ಲ. ಯಾವಾಗ ಪೂರ್ಣ ತೇರ್ಗಡೆಯಾಗುತ್ತೀರೋ ಆಗ ವಿಷ್ಣುವಿನ ಮಾಲೆಯಾಗುತ್ತದೆ. ಪ್ರಜಾಪಿತ ಬ್ರಹ್ಮನದೂ ವಂಶಾವಳಿಯಾಗಿದೆ. ಯಾವಾಗ ತೇರ್ಗಡೆಯಾಗುವಿರೋ ಆಗ ಬ್ರಹ್ಮನ ಮಾಲೆಯೆಂದು ಹೇಳಲಾಗುವುದು, ವಂಶಾವಳಿ ಮಾಡಲ್ಪಟ್ಟಿದೆ. ಈ ಸಮಯದಲ್ಲಿ ಮಾಲೆಯಾಗುವುದಿಲ್ಲ ಏಕೆಂದರೆ ಇಂದು ಪವಿತ್ರರಾಗುತ್ತಾ ನಾಳೆ ಪುನಃ ಮಾಯೆಯು ಪೆಟ್ಟು ಕೊಟ್ಟು ಎಲ್ಲವನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಮಾಡಿಕೊಂಡಿರುವ ಸಂಪಾದನೆಯು ಸಮಾಪ್ತಿಯಾಗಿ ಬಿಡುತ್ತದೆ. ಎಲ್ಲಿಂದ ಬೀಳುತ್ತಾರೆಂದು ಸ್ವಲ್ಪ ಆಲೋಚಿಸಿ! ತಂದೆಯಂತೂ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಅವರ ಶ್ರೀಮತದಂತೆ ನಡೆದರೆ ನೀವು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ, ಸೋತರೆ ಸಮಾಪ್ತಿ. ಕಾಮ ವಿಕಾರವು ಮಹಾಶತ್ರುವಾಗಿದೆ. ಅದರಿಂದ ಸೋಲನ್ನನುಭವಿಸಬಾರದು. ಉಳಿದೆಲ್ಲಾ ವಿಕಾರಗಳು ಮರಿ ಮಕ್ಕಳಾಗಿವೆ. ದೊಡ್ಡ ಶತ್ರು ಕಾಮ ವಿಕಾರವಾಗಿದೆ. ಈಗ ಅದನ್ನೇ ಗೆಲ್ಲಬೇಕಾಗಿದೆ. ಕಾಮವನ್ನು ಜಯಿಸಿದರೆ ನೀವು ಜಗಜ್ಜೀತರಾಗುತ್ತೀರಿ. ಈ ಐದು ವಿಕಾರಗಳು ಅರ್ಧಕಲ್ಪದ ಶತ್ರುಗಳಾಗಿವೆ, ಅವು ಬಿಡುವುದಿಲ್ಲ. ಕ್ರೋಧ ಮಾಡಿಕೊಳ್ಳಲೇಬೇಕಾಗುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅವಶ್ಯಕತೆಯಾದರೂ ಏನಿದೆ, ಪ್ರೀತಿಯಿಂದಲೂ ಕೆಲಸವಾಗಬಲ್ಲದು. ಕಳ್ಳರಿಗೂ ಸಹ ಒಂದುವೇಳೆ ಪ್ರೀತಿಯಿಂದ ತಿಳಿಸಿದರೆ ಅವರು ಕೂಡಲೇ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ. ತಂದೆಯು ಹೇಳುತ್ತಾರೆ - ಮಕ್ಕಳೇ, ನಾನು ಪ್ರೀತಿಯ ಸಾಗರನಾಗಿದ್ದೇನೆ, ಅಂದಮೇಲೆ ಮಕ್ಕಳೂ ಸಹ ಪ್ರೀತಿಯಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ಭಲೆ ಯಾವುದೇ ಪೊಜಿಷನ್ ಇರಲಿ, ಬಾಬನ ಬಳಿ ಮಿಲಿಟರಿಯವರು ಬರುತ್ತಾರೆ. ಅವರಿಗೂ ಸಹ ತಂದೆಯು ತಿಳಿಸುತ್ತಾರೆ - ನೀವು ಸ್ವರ್ಗದಲ್ಲಿ ಹೋಗಬಯಸುತ್ತೀರೆಂದರೆ ಕೇವಲ ಶಿವ ತಂದೆಯನ್ನು ನೆನಪು ಮಾಡಿರಿ. ನೀವು ಯುದ್ಧದ ಮೈದಾನದಲ್ಲಿ ಸತ್ತರೆ ಸ್ವರ್ಗದಲ್ಲಿ ಹೋಗುತ್ತೀರಿ ಎಂದು ಅವರಿಗೆ ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ಯುದ್ಧದ ಮೈದಾನವು ಇದಾಗಿದೆ, ಅವರಂತೂ ಯುದ್ಧ ಮಾಡುತ್ತಾ-ಮಾಡುತ್ತಾ ಶರೀರ ಬಿಟ್ಟರೆ ಪುನಃ ಅಲ್ಲಿಯೇ ಹೋಗಿ ಜನ್ಮ ಪಡೆಯುತ್ತಾರೆ ಏಕೆಂದರೆ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆ. ಸ್ವರ್ಗದಲ್ಲಂತೂ ಹೋಗಲು ಸಾಧ್ಯವಿಲ್ಲ, ಆದ್ದರಿಂದ ತಂದೆಯು ಅವರಿಗೆ ತಿಳಿಸುತ್ತಿದ್ದರು - ಶಿವ ತಂದೆಯನ್ನು ನೆನಪು ಮಾಡಿದರೆ ನೀವು ಸ್ವರ್ಗದಲ್ಲಿ ಹೋಗುವಿರಿ ಏಕೆಂದರೆ ಸ್ವರ್ಗದ ಸ್ಥಾಪನೆಯಾಗುತ್ತಿದೆ. ಶಿವ ತಂದೆಯ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಇದು ಸ್ವಲ್ಪ ಜ್ಞಾನ ಸಿಕ್ಕಿದರೂ ಸಹ ಈ ಅವಿನಾಶಿ ಜ್ಞಾನದ ವಿನಾಶವಾಗುವುದಿಲ್ಲ.

ನೀವು ಮಕ್ಕಳು ಈ ಮೇಳ ಇತ್ಯಾದಿಗಳನ್ನು ಮಾಡುತ್ತೀರಿ, ಇದರಿಂದ ಎಷ್ಟೊಂದು ಪ್ರಜೆಗಳು ತಯಾರಾಗುತ್ತಾರೆ. ನೀವು ಆತ್ಮಿಕ ಸೈನಿಕರಲ್ಲಿ ಕಮಾಂಡರ್, ಮೇಜರ್, ಮೊದಲಾದವರು ಕಡಿಮೆಯಿರುತ್ತಾರೆ. ಪ್ರಜೆಗಳು ಅನೇಕರಾಗುತ್ತಾರೆ. ಯಾರು ಚೆನ್ನಾಗಿ ತಿಳಿಸುವರೋ ಅವರು ಯಾವುದಾದರೊಂದು ಒಳ್ಳೆಯ ಪದವಿಯನ್ನು ಪಡೆಯುತ್ತಾರೆ, ಅದರಲ್ಲಿಯೇ ಫಸ್ಟ್, ಸೆಕೆಂಡ್, ಥರ್ಡ್ ಗ್ರೇಡ್ ಇರುತ್ತದೆ. ನೀವು ಶಿಕ್ಷಣವನ್ನು ಕೊಡುತ್ತಾ ಇರುತ್ತೀರಿ. ಕೆಲವರಂತೂ ಸಂಪೂರ್ಣ ತಮ್ಮ ಸಮಾನರಾಗಿ ಬಿಡುತ್ತಾರೆ. ಕೆಲವರು ಎಲ್ಲರಿಗಿಂತ ಮೇಲೆ ಹೊರಟು ಹೋಗುತ್ತಾರೆ. ನೋಡಿದಾಗ ಒಬ್ಬರು ಇನ್ನೊಬ್ಬರಿಗಿಂತಲೂ ಮೇಲೆ ಹೋಗುತ್ತಾರೆ. ಹೊಸ-ಹೊಸಬರು ಹಳಬರಿಗಿಂತಲೂ ಮುಂದೆ ಹೋಗುತ್ತಾರೆ. ತಂದೆಯಿಂದ ಪೂರ್ಣ ಯೋಗವು ಜೋಡಣೆಯಾದಾಗಲೇ ಅವರು ಮೇಲೇರಲು ಸಾಧ್ಯ. ಎಲ್ಲವೂ ಯೋಗದ ಮೇಲೆ ಆಧಾರಿತವಾಗಿದೆ. ಜ್ಞಾನವು ಬಹಳ ಸಹಜವಾಗಿದೆ. ನೀವು ಅದನ್ನು ಅನುಭವ ಮಾಡಿರುತ್ತೀರಿ. ತಂದೆಯ ನೆನಪಿನಲ್ಲಿ ವಿಘ್ನಗಳು ಬರುತ್ತವೆ. ತಂದೆಯು ತಿಳಿಸುತ್ತಾರೆ- ಭೋಜನವನ್ನು ಸೇವಿಸುವಾಗಲೂ ತಂದೆಯ ನೆನಪಿನಲ್ಲಿ ಸೇವಿಸಿರಿ ಆದರೆ ಕೆಲವರು ಎರಡು ನಿಮಿಷ, ಕೆಲವರು ಐದು ನಿಮಿಷಗಳು ತಂದೆಯ ನೆನಪಿನಲ್ಲಿರುತ್ತಾರೆ. ಇಡೀ ಸಮಯ ತಂದೆಯ ನೆನಪಿನಲ್ಲಿರುವುದು ಪರಿಶ್ರಮವಾಗಿದೆ. ಮಾಯೆಯು ಎಲ್ಲಿಂದೆಲ್ಲಿಗೋ ಹಾರಿಸಿ ಮರೆಸಿ ಬಿಡುತ್ತದೆ. ತಂದೆಯ ವಿನಃ ಮತ್ತ್ಯಾರ ನೆನಪೂ ಇರಬಾರದು ಆಗಲೇ ಕರ್ಮಾತೀತ ಸ್ಥಿತಿಯಾಗುವುದು. ಒಂದುವೇಳೆ ತಮ್ಮದೇನಾದರೂ ಸ್ವಲ್ಪವಿದ್ದರೂ ಸಹ ಅದು ಅವಶ್ಯವಾಗಿ ನೆನಪಿಗೆ ಬರುವುದು. ಏನೂ ನೆನಪಿಗೆ ಬರಬಾರದು. ಇದಕ್ಕೆ ಬ್ರಹ್ಮಾ ತಂದೆಯು ಉದಾಹರಣೆಯಾಗಿದ್ದಾರೆ. ಇವರಿಗೇನಾದರೂ ನೆನಪಿಗೆ ಬರುವುದೇ? ಯಾರಾದರೂ ಮಕ್ಕಳು, ಮರಿ, ಹಣ ಇತ್ಯಾದಿ ಇದೆಯೇ? ಕೇವಲ ನೀವು ಮಕ್ಕಳೇ ನೆನಪಿಗೆ ಬರುತ್ತೀರಿ. ನೀವಂತೂ ಅವಶ್ಯವಾಗಿ ತಂದೆಗೆ ನೆನಪಿಗೆ ಬಂದೇ ಬರುತ್ತೀರಿ ಏಕೆಂದರೆ ತಂದೆಯು ಕಲ್ಯಾಣ ಮಾಡುವುದಕ್ಕಾಗಿ ಬಂದಿದ್ದಾರೆ, ಎಲ್ಲರನ್ನೂ ನೆನಪು ಮಾಡಿಕೊಳ್ಳುತ್ತಾರೆ ಆದರೂ ಬುದ್ಧಿಯು ಹೂಗಳ ಕಡೆಯೇ ಹೊರಟು ಹೋಗುತ್ತದೆ. ಅನೇಕ ಪ್ರಕಾರದ ಹೂಗಳಿದ್ದಾರೆ, ಕೆಲವರು ಸುಗಂಧವಿಲ್ಲದ ಹೂಗಳೂ ಇದ್ದಾರೆ. ಇದು ಉದ್ಯಾನವನವಲ್ಲವೆ. ತಂದೆಗೆ ಹೂದೋಟದ ಮಾಲೀಕನೆಂದೂ ಮಾಲಿ ಎಂದೂ ಹೇಳುತ್ತಾರೆ. ಇದಂತೂ ನಿಮಗೆ ತಿಳಿದಿದೆ - ಮನುಷ್ಯರು ಕ್ರೋಧದಲ್ಲಿ ಬಂದು ಎಷ್ಟೊಂದು ಹೊಡೆದಾಡಿ, ಜಗಳವಾಡುತ್ತಾರೆ, ಬಹಳ ದೇಹಾಭಿಮಾನವಿದೆ. ತಂದೆಯು ತಿಳಿಸುತ್ತಾರೆ - ಯಾರಾದರೂ ಕ್ರೋಧ ಮಾಡಿದರೆ ಶಾಂತವಾಗಿರಬೇಕು. ಕ್ರೋಧವು ಭೂತವಲ್ಲವೆ. ಭೂತದ ಮುಂದೆ ಶಾಂತಿಯಿಂದ ಪ್ರತ್ಯುತ್ತರ ನೀಡಬೇಕು.

ಸರ್ವಶಾಸ್ತ್ರ ಶಿರೋಮಣಿ ಭಗವದ್ಗೀತೆಯು ಈಶ್ವರೀಯ ಮತದ್ದಾಗಿದೆ. ಈಶ್ವರೀಯ ಮತ, ಆಸುರೀ ಮತ ಮತ್ತು ದೈವೀ ಮತ. ರಾಜಯೋಗದ ಜ್ಞಾನವನ್ನು ತಂದೆಯೇ ಕೊಡುತ್ತಾರೆ ನಂತರ ಈ ಜ್ಞಾನವು ಪ್ರಾಯಃಲೋಪವಾಗುವುದು. ರಾಜರಿಗೂ ರಾಜರಾಗಿ ಬಿಟ್ಟರೆ ಈ ಜ್ಞಾನವನ್ನೇನು ಮಾಡುವಿರಿ? 21 ಜನ್ಮಗಳವರೆಗೆ ಪ್ರಾಲಬ್ಧವನ್ನು ಪಡೆಯುವಿರಿ. ಈ ಪುರುಷಾರ್ಥಕ್ಕೆ ಈ ಫಲ ಸಿಕ್ಕಿದೆ ಎಂಬುದು ಅಲ್ಲಿ ಅರ್ಥವಾಗುವುದೇ ಇಲ್ಲ. ಅನೇಕ ಬಾರಿ ನೀವು ಸತ್ಯಯುಗದಲ್ಲಿ ಹೋಗಿದ್ದೀರಿ, ಈ ಚಕ್ರವು ಸುತ್ತುತ್ತಾ ಇರುತ್ತದೆ. ಸತ್ಯ-ತ್ರೇತಾಯುಗವು ಜ್ಞಾನದ ಫಲವಾಗಿದೆ. ಜ್ಞಾನ ಸಿಗುತ್ತದೆಯೆಂದಲ್ಲ. ತಂದೆಯು ಬಂದು ಇಲ್ಲಿ ಭಕ್ತಿಯ ಫಲವಾಗಿ ಜ್ಞಾನ ಕೊಡುತ್ತಾರೆ. ತಂದೆಯು ತಿಳಿಸಿದ್ದಾರೆ - ನೀವು ಹೆಚ್ಚು ಭಕ್ತಿ ಮಾಡಿದ್ದೀರಿ, ಈಗ ಒಬ್ಬ ತಂದೆಯನ್ನು ನೆನಪು ಮಾಡಿರಿ ಆಗ ತಮೋಪ್ರಧಾನರಿಂದ ಸತೋಪ್ರಧಾನರಾಗುವಿರಿ. ಇದರಲ್ಲಿಯೇ ಪರಿಶ್ರಮವಿದೆ, ರಚನೆಯ ಆದಿ-ಮಧ್ಯ-ಅಂತ್ಯವನ್ನು ನೆನಪು ಮಾಡಿರಿ ಆಗ ಚಕ್ರವರ್ತಿ ರಾಜರಾಗುವಿರಿ. ಭಗವಂತನು ಮಕ್ಕಳನ್ನು ಭಗವಾನ್-ಭಗವತಿಯನ್ನಾಗಿ ಮಾಡುತ್ತಾರಲ್ಲವೆ, ಆದರೆ ದೇಹಧಾರಿಗಳಿಗೆ ಭಗವಾನ್-ಭಗವತಿ ಎಂದು ಹೇಳುವುದು ತಪ್ಪಾಗಿದೆ. ಬ್ರಹ್ಮಾ-ವಿಷ್ಣು ಮತ್ತು ಶಿವನಿಗೆ ಎಷ್ಟೊಂದು ಸಂಬಂಧವಿದೆ. ಈ ಬ್ರಹ್ಮನೇ ನಂತರ ವಿಷ್ಣುವಾಗುವರು, ಕೊನೆಯಲ್ಲಿ ಇವರಲ್ಲಿಯೇ ಶಿವನ ಪ್ರವೇಶತೆಯಾಗುತ್ತದೆ. ಸೂಕ್ಷ್ಮವತನವಾಸಿಗಳಿಗೂ ಫರಿಶ್ತೆಗಳೆಂದು ಹೇಳಲಾಗುತ್ತದೆ. ನೀವು ಫರಿಶ್ತೆಯಾಗಬೇಕಾಗುತ್ತದೆ. ಅದರ ಸಾಕ್ಷಾತ್ಕಾರವಾಗುತ್ತದೆ, ಮತ್ತೇನೂ ಇಲ್ಲ. ಸೈಲೆನ್ಸ್, ಮೂವಿ ಮತ್ತು ಇಲ್ಲಿ ಟಾಕಿ. ಇದು ವಿಸ್ತಾರವಾಗಿದೆ. ಬಾಕಿ ಸಾರದಲ್ಲಿ ಹೇಳುವುದಾದರೆ ಮನ್ಮನಾಭವ, ನನ್ನೊಬ್ಬನನ್ನೇ ನೆನಪು ಮಾಡಿ ಮತ್ತು ಸೃಷ್ಟಿಚಕ್ರವನ್ನು ನೆನಪು ಮಾಡಿರಿ. ಇಲ್ಲಿ ಕುಳಿತಿರುವಾಗಲೂ ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡಿರಿ, ಈ ಹಳೆಯ ದುಃಖಧಾಮವನ್ನು ಮರೆತು ಬಿಡಿ, ಇದು ಬುದ್ಧಿಯಿಂದ ಬೇಹದ್ದಿನ ಸನ್ಯಾಸವಾಗಿದೆ. ಅವರದು ಹದ್ದಿನ ಸನ್ಯಾಸವಾಗಿದೆ. ಆ ನಿವೃತ್ತಿ ಮಾರ್ಗದವರು ಪ್ರವೃತ್ತಿ ಮಾರ್ಗದ ಜ್ಞಾನ ಕೊಡಲು ಸಾಧ್ಯವಿಲ್ಲ. ರಾಜ-ರಾಣಿಯಾಗುವುದು ಪ್ರವೃತ್ತಿ ಮಾರ್ಗವಾಗಿದೆ. ಅಲ್ಲಿ ಸುಖವಿರುತ್ತದೆ. ಅವರು ಸುಖವನ್ನು ಒಪ್ಪುವುದೇ ಇಲ್ಲ. ಸನ್ಯಾಸಿಗಳೂ ಸಹ ಕೋಟ್ಯಾಂತರ ಅಂದಾಜಿನಲ್ಲಿದ್ದಾರೆ, ಅವರ ಸಂಪಾದನೆಯು ಅಥವಾ ಪಾಲನೆಯು ಗೃಹಸ್ಥಿಗಳಿಂದಲೇ ಆಗುತ್ತದೆ. ಒಂದನೆಯದಾಗಿ ನೀವು ದಾನ-ಪುಣ್ಯದಲ್ಲಿ ತೊಡಗಿಸಿದಿರಿ. ನಂತರ ಪಾಪದ ವ್ಯವಹಾರ ಮಾಡಿದಿರಿ ಆದ್ದರಿಂದ ಪಾಪಾತ್ಮರಾಗಬೇಕಾಯಿತು. ಈಗ ನೀವು ಮಕ್ಕಳು ಅವಿನಾಶಿ ಜ್ಞಾನರತ್ನಗಳ ವ್ಯವಹಾರ ಮಾಡುತ್ತೀರಿ. ಅವರು ಧರ್ಮಶಾಲೆ ಕಟ್ಟಿಸುತ್ತಾರೆಂದರೆ ನಂತರದ ಜನ್ಮದಲ್ಲಿ ಒಳ್ಳೆಯ ಫಲ ಸಿಗುವುದು. ಇವರಂತೂ ಬೇಹದ್ದಿನ ತಂದೆಯಾಗಿದ್ದಾರೆ. ಇದು ಡೈರೆಕ್ಟ್, ಅವರದು ಇನ್-ಡೈರೆಕ್ಟ್ ಆಗಿದೆ. ಈಶ್ವರಾರ್ಪಣಂ ಎನ್ನುತ್ತಾರೆ, ಈಗ ಇವರಿಬ್ಬರಿಗೂ ಹಸಿವಿಲ್ಲ. ಶಿವ ತಂದೆಯಂತೂ ದಾತನಾಗಿದ್ದಾರೆ, ಅವರಿಗೆ ಹಸಿವಾಗುವುದೇ! ಶ್ರೀಕೃಷ್ಣನು ದಾತನಲ್ಲ, ತಂದೆಯು ಎಲ್ಲರಿಗೆ ನೀಡುವವರಾಗಿದ್ದಾರೆ. ಬೇಡುವವರಲ್ಲ. ಒಂದನ್ನು ಕೊಟ್ಟರೆ 10ನ್ನು ಪಡೆಯುವಿರಿ. ಬಡವರು ಎರಡು ರೂಪಾಯಿ ಕೊಟ್ಟರೂ ಸಹ (ಸುಧಾಮನಂತೆ) ಪದಮಗಳು ಪ್ರಾಪ್ತಿಯಾಗುತ್ತವೆ. ಭಾರತವು ಚಿನ್ನದ ಪಕ್ಷಿಯಾಗಿತ್ತಲ್ಲವೆ. ತಂದೆಯು ಎಷ್ಟು ಧನವಂತರನ್ನಾಗಿ ಮಾಡಿದರು. ಸೋಮನಾಥ ಮಂದಿರದಲ್ಲಿ ಎಷ್ಟು ಅಪಾರ ಧನವಿತ್ತು. ಎಷ್ಟೊಂದು ಲೂಟಿ ಮಾಡಿಕೊಂಡು ಹೋದರು, ದೊಡ್ಡ-ದೊಡ್ಡ ವಜ್ರ ವೈಡೂರ್ಯಗಳಿತ್ತು, ಈಗಂತೂ ನೋಡುವುದಕ್ಕೂ ಸಿಗುವುದಿಲ್ಲ. ಎಲ್ಲವೂ ಹೊರಟು ಹೋಯಿತು, ಪುನಃ ಇತಿಹಾಸವು ಪುನರಾವರ್ತನೆಯಾಗುವುದು. ಸತ್ಯಯುಗದಲ್ಲಿ ಎಲ್ಲಾ ಗಣಿಗಳು ನಿಮಗಾಗಿ ಸಂಪನ್ನವಾಗಿ ಬಿಡುವುದು. ವಜ್ರ ವೈಡೂರ್ಯಗಳಂತೂ ಅಲ್ಲಿ ಕಲ್ಲಿನಂತೆ ಹೇರಳವಾಗಿರುತ್ತದೆ. ತಂದೆಯು ಅವಿನಾಶಿ ಜ್ಞಾನರತ್ನಗಳನ್ನು ಕೊಡುತ್ತಾರೆ, ಇದರಿಂದ ನೀವು ಅಪಾರ ಧನವಂತರಾಗಿ ಬಿಡುತ್ತೀರಿ, ಅಂದಮೇಲೆ ಮಧುರಾತಿ ಮಧುರ ಮಕ್ಕಳಿಗೆ ಎಷ್ಟೊಂದು ಖುಷಿಯಾಗಬೇಕು! ಎಷ್ಟು ಓದುತ್ತಾ ಇರುತ್ತೀರೋ ಅಷ್ಟು ಖುಷಿಯ ನಶೆಯೇರುತ್ತಾ ಇರುವುದು. ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡಿದರೆ ನಾವು ಇದರಲ್ಲಿ ಉತ್ತೀರ್ಣರಾಗಿ ಈ ರೀತಿಯಾಗುತ್ತೇವೆ, ಇದನ್ನು ಮಾಡುತ್ತೇವೆಂದು ಬುದ್ಧಿಯಲ್ಲಿರುತ್ತದೆಯಲ್ಲವೆ. ಹಾಗೆಯೇ ನಿಮಗೂ ಗೊತ್ತಿದೆ - ನಾವು ಇಂತಹ ದೇವತೆಗಳಾಗುತ್ತೇವೆ. ಇವಂತೂ ಜಡಚಿತ್ರಗಳಾಗಿವೆ. ನಾವಲ್ಲಿ ಚೈತನ್ಯ ದೇವತೆಗಳಾಗುತ್ತೇವೆ. ಈ ಚಿತ್ರಗಳೂ ಸಹ ಎಲ್ಲಿಂದ ಬಂದವು? ದಿವ್ಯ ದೃಷ್ಟಿಯಿಂದ ನೀವು ನೋಡಿ ಬಂದಿದ್ದೀರಿ. ಚಿತ್ರಗಳು ಬಹಳ ಅದ್ಭುತವಾಗಿವೆ. ಈ ಬ್ರಹ್ಮಾರವರು ಮಾಡಿಸಿದ್ದಾರೆಂದು ಕೆಲವರು ತಿಳಿದುಕೊಳ್ಳುತ್ತಾರೆ. ಒಂದುವೇಳೆ ಇವರು ಯಾರಿಂದಲಾದರೂ ಕಲಿತಿದ್ದರೆ ಕೇವಲ ಇವರೊಬ್ಬರೇ ಕಲಿಯುತ್ತಿದ್ದರೆ? ಅನ್ಯರೂ ಕಲಿಯಬೇಕಿತ್ತಲ್ಲವೆ. ಆದ್ದರಿಂದ ಈ ತಂದೆಯು ಹೇಳುತ್ತಾರೆ - ನಾನು ಏನನ್ನೂ ಕಲಿತಿಲ್ಲ. ಇದನ್ನು ತಂದೆಯೇ ದಿವ್ಯ ದೃಷ್ಟಿಯ ಮೂಲಕ ಮಾಡಿಸಿದ್ದಾರೆ. ಇವೆಲ್ಲಾ ಚಿತ್ರಗಳು ಶ್ರೀಮತದಂತೆ ಮಾಡಲ್ಪಟ್ಟಿವೆ, ಇವು ಮನುಷ್ಯ ಮತದ್ದಲ್ಲ. ಇವೆಲ್ಲವೂ ಸಮಾಪ್ತಿಯಾಗುತ್ತವೆ. ಹೆಸರು-ಗುರುತೂ ಉಳಿದುಕೊಳ್ಳುವುದಿಲ್ಲ. ಈ ಸೃಷ್ಟಿಯದೇ ಅಂತ್ಯವಾಗಿದೆ. ಭಕ್ತಿಯದು ಎಷ್ಟೊಂದು ಸಾಮಗ್ರಿಯಿದೆ, ಇದೇನೂ ಉಳಿದುಕೊಳ್ಳುವುದಿಲ್ಲ. ಹೊಸ ಪ್ರಪಂಚದಲ್ಲಿ ಎಲ್ಲವೂ ಹೊಸದಾಗಿರುತ್ತವೆ. ನೀವು ಅನೇಕ ಬಾರಿ ಸ್ವರ್ಗದ ಮಾಲೀಕರಾಗಿದ್ದಿರಿ ನಂತರ ಮಾಯೆಯು ಸೋಲಿಸಿದೆ, ವಿಕಾರಗಳಿಗೆ ಮಾಯೆಯೆಂದು ಹೇಳಲಾಗುತ್ತದೆಯೇ ಹೊರತು ಹಣಕ್ಕಲ್ಲ. ನೀವು ಮಕ್ಕಳು ಅರ್ಧಕಲ್ಪದಿಂದ ರಾವಣನ ಸಂಕೋಲೆಗಳಲ್ಲಿ ಬಂಧಿತರಾಗಿದ್ದಿರಿ, ರಾವಣನು ಎಲ್ಲರಿಗಿಂತ ಹಳೆಯ ಶತ್ರುವಾಗಿದ್ದಾನೆ, ಅರ್ಧಕಲ್ಪ ರಾವಣ ರಾಜ್ಯ ನಡೆಯುತ್ತದೆ. ಲಕ್ಷಾಂತರ ವರ್ಷಗಳೆಂದು ಹೇಳಿದರೆ ಅದಕ್ಕೆ ಅರ್ಧ-ಅರ್ಧ ಭಾಗದ ಲೆಕ್ಕವೇ ಬರುವುದಿಲ್ಲ. ಎಷ್ಟೊಂದು ಅಂತರವಿದೆ. ನಿಮಗಂತೂ ತಂದೆಯು ತಿಳಿಸುತ್ತಾರೆ, ಇಡೀ ಕಲ್ಪದ ಆಯಸ್ಸೇ 5000 ವರ್ಷಗಳು. 84 ಲಕ್ಷ ಯೋನಿಗಳಂತೂ ಇಲ್ಲವೇ ಇಲ್ಲ. ಇದು ದೊಡ್ಡ ಸುಳ್ಳಾಗಿದೆ. ಸೂರ್ಯವಂಶಿ, ಚಂದ್ರವಂಶಿ ದೇವಿ-ದೇವತೆಗಳು ಇಷ್ಟು ಲಕ್ಷ ವರ್ಷಗಳವರೆಗೆ ರಾಜ್ಯಭಾರ ಮಾಡುತ್ತಿದ್ದರೆ! ಇವರ ಬುದ್ಧಿಯು ಕೆಲಸ ಮಾಡುವುದಿಲ್ಲ. ಸನ್ಯಾಸಿಗಳು ತಿಳಿದುಕೊಳ್ಳುತ್ತಾರೆ- ನಾವೀಗ ನಮ್ಮನ್ನು ತಪ್ಪೆಂದು ಒಪ್ಪಿಕೊಂಡರೆ ನಮ್ಮ ಎಲ್ಲಾ ಅನುಯಾಯಿಗಳು ನಮ್ಮನ್ನು ಬಿಟ್ಟು ಬಿಡುತ್ತಾರೆ, ಕ್ರಾಂತಿಯಾಗಿ ಬಿಡುತ್ತದೆ. ಆದ್ದರಿಂದ ಈಗ ನಿಮ್ಮ ಮತದಂತೆ ನಡೆದು ತಮ್ಮ ರಾಜ್ಯವನ್ನು ಬಿಡುವುದಿಲ್ಲ. ಅಂತಿಮದಲ್ಲಿ ಸ್ವಲ್ಪ ತಿಳಿದುಕೊಳ್ಳುವರು, ಈಗಲ್ಲ. ಸಾಹುಕಾರರೂ ಸಹ ಈ ಜ್ಞಾನ ತೆಗೆದುಕೊಳ್ಳುವುದಿಲ್ಲ. ತಂದೆಯು ಹೇಳುತ್ತಾರೆ - ನಾನು ಬಡವರ ಬಂಧುವಾಗಿದ್ದೇನೆ, ಸಾಹುಕಾರರೆಂದೂ ಸಮರ್ಪಿತರಾಗಿ ಕರ್ಮಾತೀತ ಸ್ಥಿತಿಯನ್ನು ಪಡೆಯುವುದಿಲ್ಲ. ತಂದೆಯು ಬಹಳ ದೊಡ್ಡ ವ್ಯಾಪಾರಸ್ಥನಾಗಿದ್ದಾರೆ. ಬಡವರದನ್ನೇ ತೆಗೆದುಕೊಳ್ಳುತ್ತಾರೆ. ಸಾಹುಕಾರರಿಂದ ತೆಗೆದುಕೊಂಡರೆ ಮತ್ತೆ ಅವರಿಗೆ ಮತ್ತಷ್ಟು ಕೊಡಲೂ ಬೇಕಾಗುವುದು ಸಾಹುಕಾರರು ಮೇಲೇಳುವುದೇ ಕಷ್ಟವಿದೆ ಏಕೆಂದರೆ ಇಲ್ಲಿ ಎಲ್ಲವನ್ನೂ ಮರೆಯಬೇಕಾಗುತ್ತದೆ. ಬಳಿಯಲ್ಲಿ ಏನೂ ಇರಬಾರದು, ಆಗಲೇ ಕರ್ಮಾತೀತ ಸ್ಥಿತಿಯಾಗುವುದು. ಸಾಹುಕಾರರಂತೂ ಮರೆಯುವುದಕ್ಕೆ ಆಗುವುದಿಲ್ಲ. ಯಾರು ಕಲ್ಪದ ಮೊದಲು ಆಸ್ತಿಯನ್ನು ತೆಗೆದುಕೊಂಡಿದ್ದರೋ ಅವರೇ ತೆಗೆದುಕೊಳ್ಳುವರು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಹೇಗೆ ತಂದೆಯು ಪ್ರೀತಿಯ ಸಾಗರನಾಗಿದ್ದಾರೆ ಹಾಗೆಯೇ ಮಾ|| ಪ್ರೀತಿಯ ಸಾಗರರಾಗಿ ಪ್ರೀತಿಯಿಂದ ಕೆಲಸ ತೆಗೆದುಕೊಳ್ಳಬೇಕು. ಕ್ರೋಧ ಮಾಡಬಾರದು. ಯಾರಾದರೂ ಕ್ರೋಧ ಮಾಡಿದರೂ ನೀವು ಶಾಂತವಾಗಿರಬೇಕು.

2. ಬುದ್ಧಿಯಿಂದ ಈ ಹಳೆಯ ದುಃಖದ ಪ್ರಪಂಚವನ್ನು ಮರೆತು ಬೇಹದ್ದಿನ ಸನ್ಯಾಸಿಗಳಾಗಬೇಕು. ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಬೇಕು. ಅವಿನಾಶಿ ಜ್ಞಾನರತ್ನಗಳ ವ್ಯಾಪಾರ ಮಾಡಬೇಕಾಗಿದೆ.

ವರದಾನ:
ಮನ್ಮನಾಭವದ ಜೊತೆ ಮಧ್ಯಾಜಿ ಭವದ ಮಂತ್ರ ಸ್ವರೂಪದಲ್ಲಿ ಸ್ಥಿತರಾಗಿರುವಂತಹ ಮಹಾನ್ ಆತ್ಮ ಭವ.

ನೀವು ಮಕ್ಕಳಿಗೆ ಮನ್ಮನಾಭವದ ಜೊತೆ ಮಧ್ಯಾಜಿ ಭವದ ವರದಾನ ಸಹ ಇದೆ. ನಿಮ್ಮ ಸ್ವರ್ಗದ ಸ್ವರೂಪ ಸ್ಮೃತಿಯಲ್ಲಿ ಇರಬೇಕು ಇದಕ್ಕೆ ಹೇಳಲಾಗುವುದು ಮಧ್ಯಾಜಿ ಭವ. ಯಾರು ತಮ್ಮ ಶ್ರೇಷ್ಠ ಪ್ರಾಪ್ತಿಯ ನಶೆಯಲ್ಲಿರುತ್ತಾರೆ ಅವರೇ ಮಧ್ಯಾಜಿ ಭವದ ಮಂತ್ರ ಸ್ವರೂಪದಲ್ಲಿ ಸ್ಥಿತರಾಗಿರಲು ಸಾಧ್ಯ. ಯಾರು ಮಧ್ಯಾಜಿ ಭವ ಆಗಿರುತ್ತಾರೆ ಅವರು ಮನ್ಮನಾಭವವಂತೂ ಆಗೇ ಆಗುತ್ತಾರೆ. ಅಂತಹ ಮಕ್ಕಳ ಪ್ರತಿ ಸಂಕಲ್ಪ, ಪ್ರತಿ ಮಾತು ಮತ್ತು ಪ್ರತಿ ಕರ್ಮ ಮಹಾನ್ ಆಗಿ ಬಿಡುತ್ತದೆ. ಸ್ಮೃತಿ ಸ್ವರೂಪರಾಗುವುದು ಎಂದರೆ ಮಹಾನ್ ಆತ್ಮ ಆಗುವುದು.

ಸ್ಲೋಗನ್:
ಖುಶಿ ನಿಮ್ಮ ವಿಶೇಷ ಖಜಾನೆಯಾಗಿದೆ, ಈ ಖಜಾನೆಯನ್ನು ಎಂದೂ ಸಹ ಬಿಡಬೇಡಿ.