31.12.18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಒಬ್ಬ
ತಂದೆಯ ಜೊತೆ ಸತ್ಯ ಪ್ರೀತಿಯಿದ್ದಾಗ ತಂದೆಯು ನಿಮ್ಮನ್ನು ತನ್ನ ಜೊತೆ ಮನೆಗೆ ಕರೆದುಕೊಂಡು
ಹೋಗುತ್ತಾರೆ, ಎಲ್ಲಾ ಪಾಪಗಳಿಂದ ಮುಕ್ತರನ್ನಾಗಿ ಮಾಡುತ್ತಾರೆ, ಸ್ವರ್ಗದ ಮಾಲೀಕರನ್ನಾಗಿ
ಮಾಡುತ್ತಾರೆ”
ಪ್ರಶ್ನೆ:
ತಮ್ಮನ್ನು ತಾವು
ಖುಷಿಯಲ್ಲಿಟ್ಟುಕೊಳ್ಳಲು ಯಾವ ಮುಖ್ಯ ಧಾರಣೆ ಬೇಕು?
ಉತ್ತರ:
ಯಾವಾಗ
ತಮ್ಮೊಂದಿಗೆ ತಾವು ವಾರ್ತಾಲಾಪ ಮಾಡುವುದು ಬರುತ್ತದೆಯೋ ಆಗಲೇ ಖುಷಿಯಲ್ಲಿರಲು ಸಾಧ್ಯ. ಯಾವುದೇ
ವಸ್ತುವಿನಲ್ಲಿ ಆಸಕ್ತಿಯಿರಬಾರದು. ಹೊಟ್ಟೆಗೆ ಎರಡು ರೊಟ್ಟಿ ಸಿಕ್ಕಿದರೆ ಸಾಕು - ಇಂತಹ ಅನಾಸಕ್ತ
ವೃತಿಯ ಧಾರಣೆಯಿರಬೇಕು. ಆಗ ಹರ್ಷಿತರಾಗಿರುತ್ತೀರಿ. ಜ್ಞಾನದ ಮನನ ಮಾಡಿ ಸ್ವಯಂನ್ನು
ಹರ್ಷಿತವಾಗಿಟ್ಟುಕೊಳ್ಳಿ, ನೀವು ಕರ್ಮಯೋಗಿಯಾಗಿದ್ದೀರಿ, ಕರ್ಮ ಮಾಡುತ್ತಾ ಮನೆಯ ಕೆಲಸ
ಕಾರ್ಯಗಳನ್ನು ಮಾಡುತ್ತಾ, ಭೋಜನವನ್ನು ಮಾಡುತ್ತಿದ್ದರೂ ಸಹ ತಂದೆಯನ್ನು ನೆನಪು ಮಾಡಿ ಸ್ವದರ್ಶನ
ಚಕ್ರವು ಬುದ್ಧಿಯಲ್ಲಿ ತಿರುಗುತ್ತಿರಲಿ ಆಗ ಬಹಳ ಖುಷಿಯಿರುತ್ತದೆ.
ಗೀತೆ:
ಅವರು
ನಮ್ಮನ್ನೆಂದೂ ಅಗಲುವುದಿಲ್ಲ..............
ಓಂ ಶಾಂತಿ.
ಮಧುರಾತಿ ಮಧುರ
ಮಕ್ಕಳು ಗೀತೆಯನ್ನು ಕೇಳಿದಿರಿ, ಇದೂ ತನ್ನ ಪರಮಪಿತ ಪರಮಾತ್ಮನ ಜೊತೆ ಮಕ್ಕಳ ಅಥವಾ ಆತ್ಮಗಳ
ಆತ್ಮಿಕ ಪ್ರೀತಿಯಾಗಿದೆ. ಈ ಆತ್ಮಿಕ ಪ್ರೀತಿಯು ಕೇವಲ ನೀವು ಬ್ರಾಹ್ಮಣ ಮಕ್ಕಳಿಗೇ ಇರುತ್ತದೆ. ನೀವು
ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳುತ್ತೀರಿ. ಆದರೆ ಆತ್ಮವು ಪರಮಾತ್ಮನೆಂದು ಹೇಳಿದರೆ ಆತ್ಮವು
ಯಾರ ಜೊತೆ ಪ್ರೀತಿಯನ್ನಿಟ್ಟುಕೊಳ್ಳುವುದು! ತಂದೆಯ ಜೊತೆ ಮಕ್ಕಳ ಪ್ರೀತಿಯಿರುತ್ತದೆ. ತಂದೆಯ ಜೊತೆ
ತಂದೆಯ ಪ್ರೀತಿಯಿರುವುದಿಲ್ಲ. ಈಗ ನಿಮಗೆ ತಿಳಿದಿದೆ - ನಾವಾತ್ಮರು ನಮ್ಮ ಪರಮಪಿತ ಪರಮಾತ್ಮನ ಜೊತೆ
ಪ್ರೀತಿಯನ್ನಿಡುತ್ತಿದ್ದೇವೆ. ಈ ಪ್ರೀತಿಯೇ ನಿಮ್ಮನ್ನು ಜೊತೆ ಕರೆದುಕೊಂಡು ಹೋಗುತ್ತದೆ. ಈ
ಆತ್ಮಿಕ ಪ್ರೀತಿಯು ತಂದೆಯ ಜೊತೆಯಿಡುವ ಕಾರಣ ಕಷ್ಟವನ್ನು ಸಹನೆ ಮಾಡಬೇಕಾಗುತ್ತದೆ. ಇಡೀ ಪ್ರಪಂಚ,
ಮನೆಯ ಪರಿವಾರ ಮೊದಲಾದವರೆಲ್ಲರೂ ಶತ್ರುಗಳಾಗಿ ಬಿಡುತ್ತಾರೆ. ಮಕ್ಕಳಿಗೆ ಈಗಾಗಲೇ ತಿಳಿಸಲಾಗಿದೆ -
ಗಂಗೆಯು ಪತಿತ - ಪಾವನಿಯಲ್ಲ. ಮನುಷ್ಯರು ಪಾವನರಾಗುವ ವಿಚಾರದಿಂದ ಗಂಗೆ ಅಥವಾ ಜಮುನಾ ನದಿಯ
ತೀರದಲ್ಲಿ ಹರಿದ್ವಾರ, ಕಾಶಿಯಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ಮುಖ್ಯ ಸ್ಥಾನಗಳು ಇವೆರಡಾಗಿವೆ.
ಹೇ ಪತಿತ-ಪಾವನಿ ಗಂಗೆಯೆಂದು ಹೇಳುತ್ತಾರೆ ಆದರೆ ಆ ಗಂಗೆಯಂತೂ ಕೇಳಿಸಿಕೊಳ್ಳುವುದಿಲ್ಲ. ಕೂಗನ್ನು
ಕೇಳುವವರು ಒಬ್ಬ ಪತಿತ-ಪಾವನ ತಂದೆಯೇ ಆಗಿದ್ದಾರೆ. ಈಗ ನೀವು ಆ ತಂದೆಯ ಸಮ್ಮುಖದಲ್ಲಿ
ಕುಳಿತಿದ್ದೀರಿ. ನೀವು ಹೇಗೆ ಪಾವನರಾಗುವಿರಿ ಎಂಬುದನ್ನು ತಂದೆಯು ತಿಳಿಸುತ್ತಿದ್ದಾರೆ ಆದರೆ
ನನ್ನೊಬ್ಬನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವುದೆಂದು ನೀರಿನ ಗಂಗೆಯು ಹೇಳಲು
ಸಾಧ್ಯವಿಲ್ಲ. ಇದನ್ನು ತಂದೆಯೇ ತಿಳಿಸುತ್ತಾರೆ, ಮಕ್ಕಳೇ ನಾನು ಪ್ರತಿಜ್ಞೆ ಮಾಡುತ್ತೇನೆ, ಒಂದು
ವೇಳೆ ನೀವು ತಂದೆಯಾದ ನನ್ನನ್ನು ನೆನಪು ಮಾಡುತ್ತೀರೆಂದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ
ಎಂದು ತಂದೆಯು ಗ್ಯಾರಂಟಿ ಕೊಡುತ್ತಾರೆ, ಈ ಗ್ಯಾರಂಟಿಯನ್ನು ನೀರಿನ ಗಂಗೆಯು ಕೊಡಲು ಸಾಧ್ಯವಿಲ್ಲ.
ಹೇಗೆ ಮನುಷ್ಯರು ರಾವಣನನ್ನು ವರ್ಷ-ವರ್ಷವೂ ಸುಡುತ್ತಲೇ ಬಂದಿದ್ದಾರೆ. ಆದರೆ ರಾವಣನು ಸಾಯುವುದೇ
ಇಲ್ಲವೋ ಹಾಗೆಯೇ ಗಂಗೆಯಲ್ಲಿ ಜನ್ಮ-ಜನ್ಮಾಂತರದಿಂದಲೂ ಸ್ನಾನ ಮಾಡುತ್ತಲೇ ಬಂದಿದ್ದಾರೆ. ಆದರೆ
ಪತಿತರಿಂದ ಯಾರೂ ಪಾವನರಾಗಿಲ್ಲ, ಮತ್ತೆ-ಮತ್ತೆ ಸ್ನಾನ ಮಾಡಲು ಹೋಗುತ್ತಾರೆ. ಒಂದು ಬಾರಿ
ಪಾವನರಾದರೆ ಸ್ನಾನ ಮಾಡಲು ಪುನಃ ಏಕೆ ಹೋಗುತ್ತಾರೆ? ಎಷ್ಟೊಂದು ಮೇಳಗಳು ಆಗುತ್ತವೆ ಆದರೆ ಅದಕ್ಕೆ
ಆತ್ಮ-ಪರಮಾತ್ಮರ ಸಂಗಮವೆಂದು ಹೇಳುವುದಿಲ್ಲ. ಭಕ್ತಿ ಮಾರ್ಗದಲ್ಲಿ ಮೇಳದಲ್ಲಿ ಅನೇಕ ಜನರು
ಸೇರುತ್ತಾರೆ. ಈಗ ನೀವು ತಂದೆಯ ಜೊತೆ ಬುದ್ಧಿ ಯೋಗವನ್ನು ಜೋಡಿಸುತ್ತೀರಿ. ನಾವಾತ್ಮರು
ಪರಮಾತ್ಮನಿಗೆ ಪ್ರಿಯತಮೆಯರಾಗಿದ್ದೇವೆಂದು ನಿಮಗೆ ಗೊತ್ತಿದೆ. ಆತ್ಮವೇ ಶರೀರದ ಮುಖಾಂತರ
ಭಗವಂತನನ್ನು ನೆನಪು ಮಾಡುತ್ತದೆ. ತಂದೆಯು ಹೇಳುತ್ತಾರೆ, ನಾನು ಸಹ ಈ ಶರೀರದ ಮುಖಾಂತರ
ಓದಿಸುತ್ತಿದ್ದೇನೆ. ಆದ್ದರಿಂದ ಸದಾ ಬಾಬಾನನ್ನು ನೆನಪು ಮಾಡುತ್ತಾ ಇರಿ. ಬಾಬಾ ಎಂದು ಹೇಳಿದಾಗ
ಸ್ವರ್ಗವು ಅವಶ್ಯವಾಗಿ ನೆನಪು ಬರುವುದು ಮತ್ತು ತಮ್ಮ ಮುಕ್ತಿಧಾಮ ಮನೆಯೂ ನೆನಪಿಗೆ ಬರುವುದು.
ಮುಕ್ತಿಗೆ ನಿರ್ವಾಣಧಾಮವೆಂದು ಹೇಳುತ್ತಾರೆ. ಇದು ಸಾಕಾರಿ ಪ್ರಪಂಚವಾಗಿದೆ. ಎಲ್ಲಿಯ ತನಕ ಆತ್ಮಗಳು
ಇಲ್ಲಿಗೆ ಬರುವುದಿಲ್ಲವೋ ಸಾಕಾರಿ ಪ್ರಪಂಚವು ಹೇಗೆ ವೃದ್ಧಿಯಾಗುತ್ತದೆ? ಆತ್ಮರು ನಿರಾಕಾರಿ
ಪ್ರಪಂಚದಿಂದ ಬರುತ್ತಾರೆ, ಮನುಷ್ಯ ಸೃಷ್ಟಿಯು ವೃದ್ಧಿಯಾಗುತ್ತಾ ಹೋಗುತ್ತದೆ. ಇದು ಸ್ವಾಭಾವಿಕವಾಗಿ
ವೃದ್ಧಿ ಹೊಂದುತ್ತಿರುತ್ತದೆ ಎಂದು ಕೆಲವರು ಹೇಳುತ್ತಾರೆ, ಆದರೆ ನಿಮಗೆ ಗೊತ್ತಿದೆ - ಆತ್ಮರು
ಇಲ್ಲಿಗೆ ಬರುತ್ತವೆ ವೃದ್ಧಿ ಹೊಂದುತ್ತದೆ ಮತ್ತು ಮಕ್ಕಳಿಗೆ ಇದೂ ಸಹ ತಿಳಿದಿದೆ - ಮಧುರ ಮನೆಯು
ಶಾಂತಿಧಾಮವಾಗಿದೆ. ಶಾಂತಿಯನ್ನು ಅನೇಕರು ಬಯಸುತ್ತಾರೆ. ಆದರೆ ಅದೇ ಶಾಂತಿಧಾಮವು ನಮ್ಮ ಮಧುರ
ತಂದೆಯ ಮನೆಯಾಗಿದೆ ಎಂದು ನಿಮಗೆ ತಿಳಿದಿದೆ. ಭಾರತವಾಸಿಗಳು ವಿದೇಶದಿಂದ ಹಿಂದಿರುಗುವಾಗ ನಾವು
ನಮ್ಮ ಮಧುರ ಮನೆಯಾದ ಭಾರತಕ್ಕೆ ಹೋಗುತ್ತೇವೆ ಎಂದು ಹೇಳುತ್ತಾರೆ. ಎಲ್ಲಿ ಜನ್ಮ ಪಡೆದಿರುತ್ತಾರೆಯೋ
ಆ ದೇಶವು ಪ್ರಿಯವೆನಿಸುತ್ತದೆ. ನಮ್ಮನ್ನು ಮಧುರ ಮನೆ (ಭಾರತ) ಗೆ ಕರೆದುಕೊಂಡು ಹೋಗಿ ಎಂದು
ಹೇಳುತ್ತಾರೆ. ತಿಳಿದುಕೊಳ್ಳಿ – ಒಂದು ವೇಳೆ ಸಾವನ್ನಪ್ಪಿದರೆ ಆತ್ಮವಂತು ಹೊರಟು ಹೋಯಿತು. ಆದರೆ
ಶರೀರವನ್ನು ಇಲ್ಲಿಗೇ ತೆಗೆದುಕೊಂಡು ಬಂದು ಸಮಾಪ್ತಿ ಮಾಡುತ್ತಾರೆ. ಅಂದರೆ ಭಾರತದ ಮಣ್ಣು
ಭಾರತದಲ್ಲಿಯೇ ಸೇರಲೆಂದು ತಿಳಿಯುತ್ತಾರೆ. ನೆಹರು ಸತ್ತಾಗ ಅವರ ಬೂದಿಯನ್ನು ಎಲ್ಲೆಲ್ಲಿಗೆ
ತೆಗೆದುಕೊಂಡು ಹೋದರು, ಹೊಲ ಗದ್ದೆಗಳಲ್ಲಿ ಚೆಲ್ಲಿದರು. ಇದರಿಂದ ಹೊಲದ ಬೆಳೆಯು ಚೆನ್ನಾಗಿ
ಆಗುತ್ತದೆಯೆಂದು ತಿಳಿಯುತ್ತಾರೆ. ಆದರೆ ಪ್ರತಿಯೊಂದು ವಸ್ತುವೂ ಅದಕ್ಕೆ ಎಷ್ಟೇ ಮಾನ್ಯತೆಯಿದ್ದರೂ
ಸಹ ಅವಶ್ಯವಾಗಿ ಹಳೆಯದಂತೂ ಆಗುತ್ತದೆ. ಮನುಷ್ಯರು ಎಷ್ಟೊಂದು ಸಹನೆ ಮಾಡುತ್ತಿದ್ದಾರೆ, ಅವರಿಗೆ
ತಂದೆಯ ಪರಿಚಯ ಗೊತ್ತಿಲ್ಲ. ಆದರೆ ನೀವು ತಂದೆಯನ್ನರಿತುಕೊಂಡು ತಂದೆಯಿಂದ ಆಸ್ತಿಯನ್ನು
ಪಡೆಯುತ್ತಿದ್ದೀರಿ. ಆದ್ದರಿಂದ ಮಿತ್ರ ಸಂಬಂಧಿಗಳನ್ನೂ ಸಹ ಸ್ವರ್ಗವಾಸಿಗಳನ್ನಾಗಿ ಮಾಡಬೇಕೆಂದು
ಮನಸ್ಸಾಗುತ್ತದೆ. ನೀವು ಸ್ವರ್ಗವಾಸಿಗಳಾಗಿ ಎಂದು ಯಾರಿಗಾದರೂ ಹೇಳಿದರೆ ನೀವು ಸಾಯಲು
ಬಯಸುತ್ತೀರೇನು! ಎಂದು ಕೇಳುತ್ತಾರೆ. ನೀವು ಮಕ್ಕಳಿಗೆ ಗೊತ್ತಿದೆ - ಶ್ರೀಮತದಂತೆ ನಾವು ಶ್ರೇಷ್ಠ
ಸ್ವರ್ಗವಾಸಿಗಳಾಗುತ್ತಿದ್ದೇವೆ. ದೇಹಿ-ಅಭಿಮಾನಿಯಾಗುವುದರಲ್ಲಿ ಬಹಳ ಪರಿಶ್ರಮವಾಗುತ್ತದೆ.
ಘಳಿಗೆ-ಘಳಿಗೆಯೂ ದೇಹಾಭಿಮಾನದಲ್ಲಿ ಬಂದು ತಂದೆಯನ್ನು ಮರೆತು ಹೋಗುತ್ತೀರಿ. ಈಗ ನೀವು ಸನ್ಮುಖದಲ್ಲಿ
ಕುಳಿತಿದ್ದೀರಿ. ನಾವು ನಮ್ಮ ಪರಮಪಿತ ಪರಮಾತ್ಮನ ಬಳಿ ಬಂದಿದ್ದೇವೆಂದು ನಿಮಗೆ ಗೊತ್ತಿದೆ. ತಂದೆಯು
ಕೇಳುತ್ತಾರೆ - ನೀವು ಮೊದಲು ಎಂದಾದರೂ ಮಿಲನ ಮಾಡಿದ್ದೀರಾ? ತಕ್ಷಣ ಹೇಳುತ್ತಾರೆ ಹೌದು ಬಾಬಾ,
5000 ವರ್ಷಗಳ ಹಿಂದೆ ಮಾಡಿದ್ದೆವೆಂದು ಹೇಳುತ್ತಾರೆ. ಇದು ನಿಮ್ಮ ಗುಪ್ತ ಅಕ್ಷರವಾಗಿದೆ. ಇದನ್ನು
ಯಾರೂ ಕಾಪಿ ಮಾಡಲು ಸಾಧ್ಯವಿಲ್ಲ. ಭಲೇ ಕೃಷ್ಣನ ವೇಷವನ್ನು ಧರಿಸುತ್ತಾರೆ. ನಾವು ಸ್ವರ್ಗದ ಸ್ಥಾಪನೆ
ಮಾಡಲು ಬಂದಿದ್ದೇವೆಂದು ಹೇಳುತ್ತಾರೆ. ಆದರೆ 5000 ವರ್ಷಗಳ ಹಿಂದೆಯೂ ಸ್ವರ್ಗದ ಸ್ಥಾಪನೆ
ಮಾಡಿದ್ದೆವು ಎಂದು ಹೇಳಲು ಸಾಧ್ಯವಿಲ್ಲ. ಈ ಮಾತನ್ನು ನೀವೇ ಹೇಳುತ್ತೀರಿ - ಬಾಬಾ, 5000 ವರ್ಷಗಳ
ಹಿಂದೆಯೂ ಸಹ ನಾವು ತಮ್ಮಿಂದ ಆಸ್ತಿಯನ್ನು ಪಡೆಯಲು ಬಂದಿದ್ದೆವು. ತಾವು ರಾಜಯೋಗವನ್ನು
ಕಲಿಸಿದ್ದಿರಿ, ಇದನ್ನೇ ಶರೀರದ ಮೂಲಕ ಆತ್ಮವು ಹೇಳುತ್ತದೆ. ತನ್ನನ್ನು ಆತ್ಮ ನಿಶ್ಚಯ ಮಾಡಿಕೊಂಡು
ತಂದೆಯನ್ನು ನೆನಪು ಮಾಡಬೇಕಾಗಿದೆ. ಇದರಲ್ಲಿ ಸರ್ವವ್ಯಾಪಿಯ ಮಾತೇ ಇಲ್ಲ. ಬ್ರಹ್ಮಾರವರು ಅವಶ್ಯವಾಗಿ
ಸಾಕಾರದಲ್ಲಿಯೇ ಬೇಕು, ಯಾರ ಮೂಲಕ ಪರಮಪಿತ ಪರಮಾತ್ಮನು ಸೃಷ್ಟಿಯನ್ನು ರಚಿಸುತ್ತಾರೆ ಎಂಬ ಮಾತನ್ನು
ಸಹ ಮನುಷ್ಯರು ತಿಳಿಯುವುದಿಲ್ಲ. ಪತಿತ-ಪಾವನ ತಂದೆಯು ಬಂದು ಪುನಃ ಪಾವನ ದೇವಿ-ದೇವತೆಗಳನ್ನಾಗಿ
ಮಾಡುತ್ತಾರೆ. ತಂದೆಯೇ ಸ್ವರ್ಗದ ರಚಯಿತನಾಗಿದ್ದಾರೆ ಅಂದಾಗ ಅವಶ್ಯವಾಗಿ ಸ್ವರ್ಗದಲ್ಲಿ ಮನುಷ್ಯರು
ಬೇಕು. ತಂದೆಯು ಬಂದು ನಿಮಗೆ ಸ್ವರ್ಗದ ದ್ವಾರ ತಿಳಿಸುತ್ತಾರೆ. ನಾವು ನರಕವಾಸಿಗಳನ್ನು
ಸ್ವರ್ಗವಾಸಿಗಳನ್ನಾಗಿ ಮಾಡಬೇಕೆಂದು ನೀವು ಪ್ರಯತ್ನ ಪಡುತ್ತೀರಿ. ಯಾರಾದರೂ ಹಿರಿಯ ವ್ಯಕ್ತಿಗಳಿಗೆ
ನೀವು ಪತಿತ, ನರಕವಾಸಿಗಳಾಗಿದ್ದೀರೆಂದು ನೇರವಾಗಿ ಹೇಳಿದರೆ ಅವರು ಕೋಪಿಸಿಕೊಳ್ಳುತ್ತಾರೆ. ಈಗ
ನಿಮಗೆ ಗೊತ್ತಿದೆ - ನಾವು ನರಕದಿಂದ ಹೊರ ಬಂದು ಸ್ವರ್ಗದಲ್ಲಿ ಹೋಗುತ್ತಿದ್ದೇವೆ. ನಾವೀಗ
ಸಂಗಮವಾಸಿಗಳಾಗಿದ್ದೇವೆ. ನಾವಾತ್ಮಗಳು ಈಗ ಈ ಶರೀರವನ್ನು ಬಿಟ್ಟು ತಂದೆಯ ಬಳಿ, ತಂದೆಯ ಮನೆಗೆ
ಹೋಗುತ್ತಿದ್ದೇವೆ. ಇದು ನಿಮ್ಮ ಆತ್ಮಿಕ ಯಾತ್ರೆಯಾಗಿದೆ, ತಂದೆಯ ನೆನಪಿನಲ್ಲಿರಬೇಕಾಗಿದೆ. ಈ
ಶರೀರವು ಎಲ್ಲಿಯವರೆಗೆ ಇರುವುದೋ ಅಲ್ಲಿಯವರೆಗೂ ಈ ಯಾತ್ರೆಯು ನಡೆಯುತ್ತಲೇ ಇರುತ್ತದೆ ಎಂದು ನಿಮಗೆ
ಗೊತ್ತಿದೆ. ಕರ್ಮವನ್ನು ಮಾಡಬೇಕು, ಭಲೇ ತಿನ್ನಿರಿ, ಕುಡಿಯಿರಿ, ಭೋಜನವನ್ನು ತಯಾರಿಸಿ. ಎಷ್ಟು
ಸಮಯ ಸಿಗುವುದೋ ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕು. ಕಛೇರಿಯಲ್ಲಿ ಕುಳಿತುಕೊಂಡಾಗ
ಬಿಡುವಿದ್ದರೆ ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಿ. ಬಹಳ ಸಂಪಾದನೆಯಿದೆ. ರೈಲಿನಲ್ಲಿ ಪ್ರಯಾಣ
ಮಾಡುವ ಸಮಯದಲ್ಲಿ ಯಾವುದೇ ಕೆಲಸವಿರುವುದಿಲ್ಲ ಆಗ ಕುಳಿತುಕೊಂಡೇ ತಂದೆಯನ್ನು ನೆನಪು ಮಾಡುತ್ತಾ ಇರಿ.
ಈಗ ನಾವು ತಂದೆಯ ಬಳಿ ಹೋಗುತ್ತೇವೆ. ತಂದೆಯು ಪರಮಧಾಮದಿಂದ ನಮ್ಮನ್ನು ಕರೆದುಕೊಂಡು ಹೋಗಲು
ಬಂದಿದ್ದಾರೆ, ಸಂಜೆಯ ಸಮಯ ಮನೆಯಲ್ಲಿ ಭೋಜನವನ್ನು ತಯಾರಿಸುತ್ತಿರುವಾಗಲೂ ಬನ್ನಿ, ನಾವು ತಂದೆಯ
ನೆನಪಿನಲ್ಲಿ ಕುಳಿತುಕೊಳ್ಳೋಣ ಎಂದು ಒಬ್ಬರು ಇನ್ನೊಬ್ಬರಿಗೆ ನೆನಪು ತರಿಸಿ. ಜ್ಞಾನದ ವಿಚಾರಗಳನ್ನು
ಒಬ್ಬರು ಇನ್ನೊಬ್ಬರಿಗೆ ತಿಳಿಸಿ, ನಾವು ಸ್ವದರ್ಶನ ಚಕ್ರಧಾರಿಗಳಾಗಿದ್ದೇವೆ. ತಂದೆಯು
ತಿಳಿಸುತ್ತಾರೆ - ನೀವು ಲೈಟ್ಹೌಸ್ ಆಗಿದ್ದೀರಿ, ಎಲ್ಲರಿಗೆ ಮಾರ್ಗವನ್ನು ತಿಳಿಸುತ್ತೀರಿ.
ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆದಾಡುತ್ತಾ ಲೈಟ್ಹೌಸ್ ಆಗಿದ್ದೀರಿ. ಒಂದು ಕಣ್ಣಿನಲ್ಲಿ ಮುಕ್ತಿ,
ಇನ್ನೊಂದು ಕಣ್ಣಿನಲ್ಲಿ ಜೀವನ್ಮುಕ್ತಿಯಿರಲಿ. ಸ್ವರ್ಗವು ಇಲ್ಲಿತ್ತು, ಈಗಿಲ್ಲ. ಈಗಂತೂ ನರಕವಾಗಿದೆ.
ತಂದೆಯು ಪುನಃ ಸ್ವರ್ಗ ಸ್ಥಾಪನೆ ಮಾಡುತ್ತಿದ್ದಾರೆ. ತಿಳಿಸುತ್ತಿದ್ದಾರೆ - ಮಕ್ಕಳೇ, ನಾನು
ನಿಮ್ಮನ್ನು ಸುಂದರವಾದ ಹೂಗಳನ್ನಾಗಿ ಮಾಡುತ್ತೇನೆ, ಮತ್ತೆ ನೀವು ಹೋಗಿ ಮಹಾರಾಣಿ, ಪಟ್ಟದ
ರಾಣಿಯಾಗುತ್ತೀರಿ. ಸಾಧಾರಣ ರಾಣಿಯಾಗಬಾರದು. ನೀವು 16 ಕಲಾ ಸಂಪನ್ನರಾಗಬೇಕೇ ಹೊರತು 14
ಕಲೆಯವರಲ್ಲ. ಶ್ರೀ ಕೃಷ್ಣನು 16 ಕಲೆಗಳನ್ನು ಹೊಂದಿದ್ದ. ನೀವು ಮಕ್ಕಳು ಎಷ್ಟೊಂದು ವ್ರತ, ನಿಯಮ
ಮೊದಲಾದವುಗಳನ್ನು ಮಾಡುತ್ತಿದ್ದಿರಿ! 7 ದಿನಗಳ ಕಾಲ ನಿರ್ಜಲವಾಗಿರುತ್ತಿದ್ದಿರಿ, ಎಷ್ಟೊಂದು
ಪರಿಶ್ರಮ ಪಡುತ್ತಿದ್ದಿರಿ! ಆದರೂ ಕೃಷ್ಣ ಪುರಿಯಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಈಗ ನೀವು
ಕೃಷ್ಣಪುರಿ ಸ್ವರ್ಗದಲ್ಲಿ ಹೋಗಲು ಪುರುಷಾರ್ಥ ಮಾಡುತ್ತಿದ್ದೀರಿ. ಕೃಷ್ಣನನ್ನು ದ್ವಾಪರದಲ್ಲಿ
ತೆಗೆದುಕೊಂಡು ಹೋಗಿರುವುದರಿಂದ ಸ್ವರ್ಗದ ಬಗ್ಗೆ ಯಾರಿಗೂ ತಿಳಿಯುವುದಿಲ್ಲ. ವಾಸ್ತವದಲ್ಲಿ 7
ದಿನಗಳ ಅರ್ಥವೇನೆಂಬುದನ್ನು ಈಗ ನೀವು ತಿಳಿದುಕೊಂಡಿದ್ದೀರಿ. ತಂದೆಯ ವಿನಃ ಮತ್ತ್ಯಾರನ್ನೂ ನೆನಪು
ಮಾಡಬಾರದು. ಬಾಕಿ ನಿರ್ಜಲವಾಗಿರುವ ಮೊದಲಾದ ಯಾವುದೇ ಮಾತಿಲ್ಲ. ತಂದೆಯನ್ನು ನೆನಪು ಮಾಡುವುದರಿಂದ
ನೀವು ತಂದೆಯ ಬಳಿ ಹೊರಟು ಹೋಗುತ್ತೀರಿ ಮತ್ತೆ ತಂದೆಯು ಸ್ವರ್ಗದಲ್ಲಿ ಕಳುಹಿಸಿ ಕೊಡುತ್ತಾರೆ.
ವ್ರತ, ನಿಯಮಗಳನ್ನಿಟ್ಟುಕೊಂಡು ನೀವು ಎಷ್ಟು ದಿನಗಳು ಹಸಿವಿನಿಂದ ಸಾಯುತ್ತೀರಿ!
ಜನ್ಮ-ಜನ್ಮಾಂತರದಿಂದ ಎಷ್ಟೊಂದು ಪರಿಶ್ರಮ ಪಡುತ್ತೀರಿ! ಆದರೆ ಪ್ರಾಪ್ತಿಯೇನೂ ಇಲ್ಲ. ಈಗ ತಂದೆಯು
ನಿಮ್ಮನ್ನು ಅದರಿಂದ ಬಿಡಿಸಿ ಸದ್ಗತಿ ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ. ಬಾಬಾ, ಕಲ್ಪದ
ಹಿಂದೆಯೂ ಸಹ ಸ್ವರ್ಗದ ಆಸ್ತಿಯನ್ನು ಪಡೆಯಲು ನಿಮ್ಮೊಂದಿಗೆ ಮಿಲನ ಮಾಡಿದ್ದೆವೆಂದು ನೀವು
ಹೇಳುತ್ತೀರಿ. ಇದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಹೆಜ್ಜೆ-ಹೆಜ್ಜೆಗೂ ಸಲಹೆಯನ್ನು
ತೆಗೆದುಕೊಳ್ಳುತ್ತಾ ಇರಿ. ಎಲ್ಲಾ ಲೆಕ್ಕಾಚಾರವನ್ನು ಕೇಳಿ ತಂದೆಯು ಸಲಹೆ ನೀಡುತ್ತಾ ಇರುತ್ತಾರೆ.
ಭಲೇ ತಮ್ಮ ವ್ಯಾಪಾರ, ವ್ಯವಹಾರವನ್ನು ಮಾಡುತ್ತಾ ಇರಿ ಆದರೂ ಸಹ ತಂದೆ ಸಲಹೆಯನ್ನು
ಕೊಡುತ್ತಿರುತ್ತಾರೆ. ತಂದೆಯೂ ಸಹ ನೋಡುತ್ತಾರೆ - ಇವರು ಬಹಳ ವ್ಯಾಪಾರದಲ್ಲಿಯೇ
ಸಿಕ್ಕಿಹಾಕಿಕೊಂಡಿದ್ದಾರೆಂದರೆ. ಸಲಹೆಯನ್ನು ಕೊಡುತ್ತಾರೆ. ಇಷ್ಟೊಂದು ತಲೆಯನ್ನೇಕೆ
ಕೆಡಿಸಿಕೊಳ್ಳುತ್ತೀರಿ? ಎಷ್ಟು ಸಮಯ ನೀವು ಜೀವಿಸಬಲ್ಲಿರಿ, ಹೊಟ್ಟೆಯಂತೂ ಒಂದೆರಡು ರೊಟ್ಟಿಯನ್ನು
ಕೇಳುತ್ತದೆ, ಅದರಿಂದ ಬಡವರೂ ನಡೆಯುತ್ತಾರೆ, ಸಾಹುಕಾರರೂ ನಡೆಯುತ್ತಾರೆ. ಸಾಹುಕಾರರು ಚೆನ್ನಾಗಿ
ತಿನ್ನುತ್ತಾರೆ ಮತ್ತೆ ರೋಗಿಗಳೂ ಆಗುತ್ತಾರೆ. ಕಾಡು ಜನರನ್ನೂ ನೋಡಿ, ಎಷ್ಟು
ಶಕ್ತಿಶಾಲಿಯಾಗಿರುತ್ತಾರೆ! ಮತ್ತು ಅವರು ತಿನ್ನುವುದಾದರೂ ಏನು? ಎಷ್ಟೊಂದು ಕೆಲಸ ಮಾಡುತ್ತಾರೆ!
ತಮ್ಮ ಗುಡಿಸಿಲಿನಲ್ಲಿ ಖುಷಿಯಾಗಿರುತ್ತಾರೆ. ಆದ್ದರಿಂದ ಈ ಸಮಯದಲ್ಲಿ ನೀವು ಮತ್ತೆಲ್ಲಾ ಆಸೆಗಳನ್ನು
ಬಿಟ್ಟು ಬಿಡಬೇಕು. ಎರಡು ರೊಟ್ಟಿ ಸಿಕ್ಕಿತು, ಹೊಟ್ಟೆ ತುಂಬಿದರೆ ಸಾಕು, ತಂದೆಯನ್ನು ನೆನಪು
ಮಾಡಬೇಕು. ನೀವು ಆತ್ಮಿಕ ಮಕ್ಕಳಾಗಿದ್ದೀರಿ, ಪರಮಪಿತ ಪರಮಾತ್ಮ ಪ್ರಿಯತಮನಿಗೆ
ಪ್ರಿಯತಮೆಯರಾಗಿದ್ದೀರಿ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟೂ ವಿಕರ್ಮಗಳು
ವಿನಾಶವಾಗುತ್ತವೆ ಮತ್ತು ಯಾರನ್ನು ನೆನಪು ಮಾಡುತ್ತೀರೋ ಹೋಗಿ ಅವರನ್ನೇ ಸೇರುತ್ತೀರಿ. ನಮಗೆ
ಸಾಕ್ಷಾತ್ಕಾರವಾಗಲಿ, ಇದಾಗಲಿ, ಅದಾಗಲಿ ಎಂದು ಬಯಸುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ -
ಮನೆಯಲ್ಲಿ ಕುಳಿತಿದ್ದರೂ ಸಹ ನಿಮಗೆ ಸಾಕ್ಷಾತ್ಕಾರವಾಗಬಹುದು. ಶಿವ ತಂದೆಯನ್ನು ನೆನಪು
ಮಾಡುವುದರಿಂದ ನಿಮಗೆ ವೈಕುಂಠದ ಸಾಕ್ಷಾತ್ಕಾರವಾಗುವುದು. ಕೃಷ್ಣ ಪುರಿಯನ್ನು ನೋಡುತ್ತೀರಿ.
ಇಲ್ಲಂತೂ ನಿಮ್ಮನ್ನು ವೈಕುಂಠದ ಮಾಲೀಕರನ್ನಾಗಿ ಮಾಡುತ್ತಾರೆ. ಕೇವಲ ಸಾಕ್ಷಾತ್ಕಾರದ ಮಾತಿಲ್ಲ.
ನನ್ನನ್ನು ನೆನಪು ಮಾಡಿ ಏಕೆಂದರೆ ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ. ಶಿವ
ತಂದೆಯನ್ನು ನೆನಪು ಮಾಡಬೇಕು. ಏಕೆಂದರೆ ಅವರೇ ಕೃಷ್ಣಪುರಿಯ ಮಾಲೀಕರನ್ನಾಗಿ ಮಾಡುವವರಾಗಿದ್ದಾರೆ.
ಕೃಷ್ಣನಂತೂ ಈ ರೀತಿಯಾಗಿ ಮಾಡಲು ಸಾಧ್ಯವಿಲ್ಲ. ಶಿವತಂದೆಯನ್ನು ನೆನಪು ಮಾಡುವುದರಿಂದ ನಿಮಗೆ
ವೈಕುಂಠದ ರಾಜ್ಯಭಾಗ್ಯ ಸಿಗುತ್ತದೆ. ಈಗ ಅವರು ಪರಮಧಾಮದಿಂದ ಬಂದಿದ್ದಾರೆ. ಅವಶ್ಯವಾಗಿ ಬಂದಿದ್ದಾರೆ
ಆದ್ದರಿಂದ ಅವರ ನೆನಪಾರ್ಥ ಮಂದಿರಗಳಾಗಿದೆ. ಶಿವನ ಮಂದಿರವಿದೆ, ಶಿವಜಯಂತಿಯನ್ನೂ ಆಚರಿಸುತ್ತಾರೆ
ಆದರೆ ಅವರು ಭಾರತದಲ್ಲಿ ಹೇಗೆ ಬರುತ್ತಾರೆಂದು ಯಾರಿಗೂ ಗೊತ್ತಿಲ್ಲ. ಕೃಷ್ಣನ ತನುವಿನಲ್ಲಂತೂ
ಬರುವುದಿಲ್ಲ. ಕೃಷ್ಣನು ಸ್ವರ್ಗದಲ್ಲಿಯೇ ಇರುತ್ತಾನೆ, ಶಿವನ ಅತೀ ದೊಡ್ಡ ಮಂದಿರವಿದೆ. ಕೃಷ್ಣನದು
ಅಷ್ಟೊಂದು ದೊಡ್ಡ ಮಂದಿರವಿಲ್ಲ. ಸೋಮನಾಥ ಮಂದಿರವು ಎಷ್ಟು ದೊಡ್ಡದಾಗಿದೆ! ಕೃಷ್ಣನ ಮಂದಿರದಲ್ಲಿ
ರಾಧೆ -ಕೃಷ್ಣರಿಗೆ ಬಹಳ ಆಭರಣಗಳನ್ನು ತೊಡಿಸುತ್ತಾರೆ. ಶಿವನ ಮಂದಿರಗಳಲ್ಲೆಂದೂ ಆಭರಣಗಳನ್ನು
ನೋಡುವುದಿಲ್ಲ. ಶಿವ ತಂದೆಯಂತೂ ದೊಡ್ಡ ಮಹಲುಗಳಲ್ಲಿರುವುದಿಲ್ಲ, ಶ್ರೀಕೃಷ್ಣ ಮಹಲುಗಳಲ್ಲಿರುತ್ತಾನೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಮಹಲುಗಳಲ್ಲೇನೂ ಇರುವುದಿಲ್ಲ. ಆದರೆ ಭಕ್ತಿಮಾರ್ಗದಲ್ಲಿ
ಎಷ್ಟು ದೊಡ್ಡ, ಆಡಂಭರವಾದ, ವಜ್ರ ರತ್ನಗಳಿಂದ ಮಂದಿರವನ್ನು ಮಾಡಿದ್ದಾರೆ! ಯಾರಿಗೆ ಶಿವ ತಂದೆಯ
ಮೂಲಕ ಸ್ವರ್ಗದ ಆಸ್ತಿಯು ಸಿಕ್ಕಿದೆಯೋ ಅವರೇ ತಂದೆಯ ಮಂದಿರವನ್ನು ಇಷ್ಟು ಚೆನ್ನಾಗಿ
ಕಟ್ಟಿಸಿದ್ದಾರೆ. ನೆನಪಾರ್ಥಕ್ಕಾಗಿ ಎಷ್ಟು ದೊಡ್ಡ ಮಂದಿರವನ್ನು ಮಾಡಿದ್ದಾರೆಂದರೆ ತಾವೆಷ್ಟು
ಸಾಹುಕಾರರಾಗಿರಬಹುದು!! ಮಂದಿರವನ್ನು ಬಹಳ ಚೆನ್ನಾಗಿ ಮಾಡಿಸುತ್ತಾರೆ. ಮುಂಬೈನಲ್ಲಿ
ಬಾಬರೀನಾಥದಲ್ಲಿ ಶಿವನ ಮಂದಿರವಿದೆ, ಲಕ್ಷ್ಮೀ-ನಾರಾಯಣರದು ಮಾಧವಬಾಗ್ನಲ್ಲಿದೆ. ತಂದೆಯು
ತಿಳಿಸುತ್ತಾರೆ - ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಆದ್ದರಿಂದಲೇ
ಭಕ್ತಿಮಾರ್ಗದಲ್ಲಿ ನೀವು ಎಷ್ಟೊಂದು ದೊಡ್ಡ ಮಂದಿರವನ್ನು ಮಾಡುತ್ತೀರಿ ಮತ್ತು ಈಗ ನೋಡಿ, ನಾನು
ಎಂತಹ ಗುಡಿಸಿಲಿನಲ್ಲಿ ಕುಳಿತಿದ್ದೇನೆ. ನಿಮ್ಮ ಹೆಸರೂ ಪ್ರಸಿದ್ಧವಾಗಬೇಕು. ನಿಮಗೆ ಗೊತ್ತಿದೆ -
ನಮ್ಮದು ಪುನಃ ಮಂದಿರವಾಗುವುದು, ನಮ್ಮ ತಂದೆ ಶಿವನ ಮಂದಿರವೂ ಇದೆ, ಚಮತ್ಕಾರವಾಗಿದೆ. ಯಾರು
ಸೋಮನಾಥನ ಮಂದಿರವನ್ನು ಮಾಡಿಸಿದ್ದರು, ಅವರು ಅದೆಷ್ಟು ಧನವಂತರಾಗಿರಬಹುದು! ಈಗಂತೂ ನಾನು ಎಷ್ಟು
ಗುಪ್ತವಾಗಿದ್ದೇನೆ! ಯಾರಿಗೂ ಗೊತ್ತಿಲ್ಲ. ನೀವು ತಿಳಿದುಕೊಂಡಿದ್ದೀರಿ - ಹೇಗೆ ಶಿವ ತಂದೆಯ
ಮಂದಿರವನ್ನು ಪುನಃ ಕಟ್ಟಬೇಕಾಗುತ್ತದೆ. ಭಕ್ತಿಮಾರ್ಗದಲ್ಲಿ ಬರುತ್ತೇವೆ. ಮಮ್ಮಾ, ಬಾಬಾ ಯಾರು
ಮೊದಲ ನಂಬರಿನಲ್ಲಿ ಪೂಜ್ಯರಾಗುತ್ತಾರೆ, ವೈಕುಂಠದ ಮಾಲೀಕರಾಗುತ್ತಾರೆಯೋ ಅವರೇ ನಂತರ ಮೊಟ್ಟ
ಮೊದಲನೆಯದಾಗಿ ಪೂಜಾರಿಗಳಾಗಿ ಅವರೇ ಮಂದಿರವನ್ನು ಕಟ್ಟಿಸಬೇಕಾಗಿದೆ. ಅಂದಾಗ ಮನಸ್ಸಿನಲ್ಲಿ
ಹೇಳುತ್ತೀರಲ್ಲವೆ - ನಾವೇ ಪೂಜಾರಿಗಳಾಗಿ ಮಂದಿರಗಳನ್ನು ಕಟ್ಟುತ್ತೇವೆ. ಇಂತಿಂತಹ ಮಾತುಗಳನ್ನು
ಮನನ ಮಾಡುವುದರಿಂದ ಈ ಹಳೆಯ ಪ್ರಪಂಚವು ಮರೆತು ಹೋಗುವುದು. ಪರಸ್ಪರದಲ್ಲಿಯೂ ಸಹ ಇಂತಿಂತಹ
ಮಾತುಗಳನ್ನಾಡಬೇಕು ಆಗ ಬಹಳ ಖುಷಿಯಿರುವುದು. ತಮ್ಮೊಂದಿಗೆ ವಾರ್ತಾಲಾಪ ಮಾಡಿಕೊಳ್ಳಿ. ಪರಮಾತ್ಮನು
ಕುಳಿತು ನೀವಾತ್ಮರನ್ನು ಖುಷಿ ಪಡಿಸುತ್ತಾರೆ, ಈ ಜ್ಞಾನದಿಂದ ಹರ್ಷಿತರನ್ನಾಗಿ ಮಾಡುತ್ತಾರೆ. ನಾವು
ಕಲ್ಪದ ನಂತರ ಪುನಃ ಬಂದಿದ್ದೇವೆ. ಅನೇಕ ಬಾರಿ ತಂದೆಯೊಂದಿಗೆ ಮಿಲನ ಮಾಡಿದ್ದೇವೆ, ಆಸ್ತಿಯನ್ನು
ಪಡೆದಿದ್ದೇವೆಂದು ನೀವು ಹೇಳುತ್ತೀರಿ. ಹೀಗೆ ತಮ್ಮಲ್ಲಿಯೂ ಮಾತನಾಡಿಕೊಳ್ಳಬೇಕು ಮತ್ತೆ ನೀವು
ಕರ್ಮಯೋಗಿಗಳೂ ಆಗಿದ್ದೀರಿ. ಆದ್ದರಿಂದ ಮನೆಯಲ್ಲಿ ಅಡಿಗೆಯನ್ನು ತಯಾರಿಸಿದರೂ ಸಹ ಖುಷಿಯಿರುವುದು.
ನೀವು 84 ಜನ್ಮದ ಇತಿಹಾಸ-ಭೂಗೋಳವನ್ನು ತಿಳಿದುಕೊಂಡಿದ್ದೀರಿ. ಈಗ ನಾವು ಬ್ರಾಹ್ಮಣರಾಗಿದ್ದೇವೆ
ನಂತರ ದೇವತೆಗಳಾಗಿ ರಾಜ್ಯ ಮಾಡುತ್ತೇವೆ. ಪೂಜಾರಿಯಿಂದ ಪೂಜ್ಯರಾಗುತ್ತೇವೆ. ನಂತರ ಮಹಲು
ಮುಂತಾದವುಗಳನ್ನು ಕಟ್ಟುತ್ತೇವೆ. ತಮ್ಮದೇ ಆದ ಇತಿಹಾಸ-ಭೂಗೋಳವನ್ನು ತಿಳಿಸುತ್ತಾ ಇರಿ. ನಮ್ಮ
ಇತಿಹಾಸ-ಭೂಗೋಳದ ಚಕ್ರವು ಹೇಗೆ ಸುತ್ತುತ್ತದೆ, ಇದಕ್ಕೆ ಸ್ವದರ್ಶನ ಚಕ್ರಧಾರಿ ಎಂದು ಹೇಳಲಾಗುತ್ತದೆ.
ನೀವು ಮೂರು ಲೋಕಗಳನ್ನೂ ತಿಳಿದುಕೊಂಡಿದ್ದೀರಿ. ನಿಮ್ಮ ಜ್ಞಾನದ ನೇತ್ರವು ತೆರೆದಿದೆ, ಈ ಚಕ್ರವನ್ನು
ನೆನಪು ಮಾಡುವುದರಿಂದ ನಿಮಗೆ ಬಹಳ ಖುಷಿಯಿರಬೇಕು, ತಂದೆಗೂ ಸಹ ಖುಷಿಯಿರುತ್ತದೆ. ಈಗ ನೀವು
ಸೇವೆಯಲ್ಲಿ ಉಪಸ್ಥಿತರಾಗಿದ್ದೀರಿ. ನೀವು ಸೇವಾಧಾರಿಗಳ ಮಂದಿರವು ನಂತರ ಭಕ್ತಿಮಾರ್ಗದಲ್ಲಾಗುತ್ತದೆ.
ಈಗ ನಾನು ನೀವು ಮಕ್ಕಳ ಸೇವೆಗೆ ಬಂದಿದ್ದೇನೆ, ನಿಮಗೆ ಸ್ವರ್ಗದ ಪೂರ್ಣ ಆಸ್ತಿಯನ್ನು ಕೊಡಲು
ಬಂದಿದ್ದೇನೆ. ಯಾರೆಷ್ಟು ಪುರುಷಾರ್ಥ ಮಾಡುತ್ತೀರೋ ಅದರನುಸಾರವಾಗಿ ಸ್ವರ್ಗದ ಮಾಲೀಕರಾಗುತ್ತೀರಿ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
೧. ನಡೆಯುತ್ತಾ-ತಿರುಗಾಡುತ್ತಾ ಲೈಟ್ಹೌಸ್ ಆಗಿ ಎಲ್ಲರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ. ಎಲ್ಲಾ
ಆಸೆಗಳನ್ನು ಬಿಟ್ಟು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯಿಂದ ಸಲಹೆಯನ್ನು
ತೆಗೆದುಕೊಳ್ಳುತ್ತಾ ಇರಬೇಕಾಗಿದೆ.
೨. ಜ್ಞಾನದ ಮಾತುಗಳಲ್ಲಿಯೇ ಮನನ ಮಾಡಬೇಕಾಗಿದೆ. ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಬೇಕಾಗಿದೆ.
ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ ಸದಾ ಹರ್ಷಿತರಾಗಿರಬೇಕಾಗಿದೆ.
ವರದಾನ:
ಶ್ರೇಷ್ಠ
ಸ್ವಮಾನದ ಸೀಟ್ ನಲ್ಲಿ ಇರುತ್ತಾ, ಎಲ್ಲರಿಗೂ ಸಮ್ಮಾನ ಕೊಡುವ ಸರ್ವರ ಮಾನನೀಯ ಭವ.
ಸದಾ ತಮ್ಮ ಶ್ರೇಷ್ಠ
ಸ್ವಮಾನದಲ್ಲಿ ಸ್ಥಿತರಾಗಿರುತ್ತಾ, ನಿರ್ಮಾನರಾಗಿ ಎಲ್ಲರಿಗೂ ಸಮ್ಮಾನ ಕೊಡುತ್ತಾ ನಡೆದಾಗ ಈ ಎರಡೂ
ಪಡೆದುಕೊಳ್ಳುವುದಾಗಿ ಬಿಡುವುದು. ಸಮ್ಮಾನ ಕೊಡುವುದು ಅರ್ಥಾತ್ ಆ ಆತ್ಮವನ್ನು ಉಮಂಗ-ಉಲ್ಲಾಸದಲ್ಲಿ
ತಂದು ಮುಂದುವರೆಸುವುದು. ಸದಾ ಸ್ವಮಾನದಲ್ಲಿರುವುದರಿಂದ ಸರ್ವ ಪ್ರಾಪ್ತಿಗಳು ಸ್ವತಃ ಆಗಿ ಬಿಡುವುವು.
ಸ್ವಮಾನದ ಕಾರಣ ವಿಶ್ವ ಸಮ್ಮಾನ ಕೊಡುವುದು ಮತ್ತು ಸರ್ವರಿಂದ ಶ್ರೇಷ್ಠ ಮಾನ್ಯತೆ ಸಿಗುವುದಕ್ಕೆ
ಪಾತ್ರರಾಗುವಿರಿ, ಮಾನನೀಯರಾಗಿ ಬಿಡುವಿರಿ.
ಸ್ಲೋಗನ್:
ಯಾರು ಸರ್ವರಿಗೆ ಗೌರವ ಕೊಡುವರು ಅವರ ರಿರ್ಕಾಡ್ ಸ್ವತಃ ಸರಿಯಾಗುತ್ತಾ ಹೋಗುವುದು.