11/10/18 Morning
Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಬೇಹದ್ದಿನ ತಂದೆಯನ್ನು ನೆನಪು ಮಾಡಿ, ಇದರಲ್ಲಿಯೇ ಜ್ಞಾನ, ಭಕ್ತಿ ಮತ್ತು ವೈರಾಗ್ಯ ಮೂರೂ
ಸಮಾವೇಶವಾಗಿದೆ, ಇದಾಗಿದೆ ಹೊಸ ವಿದ್ಯೆ.”
ಪ್ರಶ್ನೆ:
ಸಂಗಮದಲ್ಲಿ
ಜ್ಞಾನ ಮತ್ತು ಯೋಗದ ಜೊತೆ-ಜೊತೆಯಲ್ಲಿ ಭಕ್ತಿಯೂ ನಡೆಯುತ್ತದೆ - ಹೇಗೆ?
ಉತ್ತರ:
ವಾಸ್ತವದಲ್ಲಿ
ಯೋಗಕ್ಕೆ ಭಕ್ತಿಯೆಂದೂ ಹೇಳಬಹುದಾಗಿದೆ, ಏಕೆಂದರೆ ನೀವು ಮಕ್ಕಳು ಅವ್ಯಭಿಚಾರಿ
ನೆನಪಿನಲ್ಲಿರುತ್ತೀರಿ. ನಿಮ್ಮ ಈ ನೆನಪು ಜ್ಞಾನ ಸಹಿತವಾಗಿದೆ, ಆದ್ದರಿಂದ ಇದಕ್ಕೆ ಯೋಗವೆಂದು
ಹೇಳಲಾಗಿದೆ. ದ್ವಾಪರದಿಂದ ಕೇವಲ ಭಕ್ತಿಯಿರುತ್ತದೆ ಜ್ಞಾನವಿರುವುದಿಲ್ಲ. ಆದ್ದರಿಂದ ಆ ಭಕ್ತಿಗೆ
ಯೋಗವೆಂದು ಹೇಳಲಾಗುವುದಿಲ್ಲ. ಅದರಲ್ಲಿ ಯಾವುದೇ ಗುರಿ-ಉದ್ದೇಶವಿರುವುದಿಲ್ಲ. ಈಗ ನಿಮಗೆ ಜ್ಞಾನವು
ಸಿಗುತ್ತದೆ, ಯೋಗವನ್ನು ಮಾಡುತ್ತೀರಿ ಮತ್ತು ಬೇಹದ್ದಿನ ಸೃಷ್ಟಿಯೊಂದಿಗೆ ನಿಮಗೆ ವೈರಾಗ್ಯವೂ ಇದೆ.
ಗೀತೆ:
ಯಾರೋ ನನ್ನನ್ನು
ತನ್ನವರನ್ನಾಗಿ ಮಾಡಿಕೊಂಡು ಮುಗುಳ್ನಗುವುದನ್ನು ಕಲಿಸಿದರು.......
ಓಂ ಶಾಂತಿ.
ಬೇಹದ್ದಿನ ತಂದೆಯು
ತಿಳಿಸುತ್ತಾರೆ - ಶಾಸ್ತ್ರಗಳ ವಿದ್ಯೆ, ಅದೇನೂ ವಿದ್ಯೆಯಲ್ಲ. ಏಕೆಂದರೆ ಶಾಸ್ತ್ರಗಳ ವಿದ್ಯೆಯಲ್ಲಿ
ಯಾವುದೇ ಗುರಿ-ಉದ್ದೇಶವಿರುವುದಿಲ್ಲ. ಶಾಸ್ತ್ರಗಳಿಂದ ಯಾವುದೇ ಪ್ರಪಂಚದ ವಿಚಾರ ತಿಳಿಯುವುದಿಲ್ಲಾ,
ಅಮೇರಿಕಾ ಎಲ್ಲಿದೆ, ಅದನ್ನು ಯಾರು ಹುಡುಕಿದರು ಈ ಮಾತುಗಳು ಶಾಸ್ತ್ರಗಳಲಿಲ್ಲ. ಇಂತಹವರು
ಇಂತಹದ್ದನ್ನು ಹುಡುಕಿದರೆಂದು ಹೇಳುತ್ತಾರೆ. ಕೆಲವರು ತಮ್ಮ ವಾಸಕ್ಕಾಗಿ ಭೂಮಿಯನ್ನು ಪತ್ತೆ
ಹಚ್ಚುತ್ತಾರೆ. ನೋಡಿದಿರಾ! ಮನುಷ್ಯರ ಜನಸಂಖ್ಯೆ ಬಹಳ ಆಗಿ ಬಿಟ್ಟಿದೆ, ವಾಸಕ್ಕಾಗಿ ಭೂಮಿಯಂತೂ
ಬೇಕಲ್ಲವೆ. ಇವೆಲ್ಲವೂ ವಿದ್ಯೆಯ ಮಾತುಗಳಾಗಿವೆ, ಇದಕ್ಕೆ ಶಿಕ್ಷಣವೆಂದೂ ಹೇಳಲಾಗುತ್ತದೆ. ನಿಮ್ಮದೂ
ಸಹ ಇದು ಶಿಕ್ಷಣವಾಗಿದೆ. ಇದಕ್ಕೆ ಆಶ್ರಮವೆಂದು ಹೇಳುವುದೇ ಅಥವಾ ಶಿಕ್ಷಣ ಎಂದು ಹೇಳುವುದೇ ಅಥವಾ
ವಿಶ್ವ ವಿದ್ಯಾಲಯವೆಂದು ಹೇಳುವುದೇ? ಇದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ಆ ವಿದ್ಯೆಯ ನಕ್ಷೆಗಳೇ
ಬೇರೆಯಾಗಿರುತ್ತವೆ. ಶಾಸ್ತ್ರಗಳಿಂದ ಬೆಳಕು ಸಿಗುವುದಿಲ್ಲ, ವಿದ್ಯೆಯಿಂದಲೇ ಬೆಳಕು ಅರ್ಥಾತ್
ಪ್ರಕಾಶತೆಯು ಸಿಗುತ್ತದೆ. ನಿಮ್ಮದು ವಿದ್ಯೆಯೂ ಆಗಿದೆ, ವೈಕುಂಠವೆಂದು ಯಾವುದಕ್ಕೆ
ಹೇಳಲಾಗುತ್ತದೆಯೆಂದು ಆ ವಿದ್ಯೆಯಲ್ಲಿಯೂ ಇಲ್ಲ, ಶಾಸ್ತ್ರಗಳಲ್ಲಿಯೂ ಇಲ್ಲ. ಈ ಜ್ಞಾನವೇ ಹೊಸದಾಗಿದೆ,
ಇದನ್ನು ಒಬ್ಬ ತಂದೆಯೇ ತಿಳಿಸುತ್ತಾರೆ. ಸ್ವರ್ಗ, ನರಕ ಎಲ್ಲವೂ ಇಲ್ಲಿಯೇ ಇದೆಯೆಂದು ಮನುಷ್ಯರು
ಹೇಳಿ ಬಿಡುತ್ತಾರೆ. ಸ್ವರ್ಗ-ನರಕವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು ತಂದೆಯೇ
ತಿಳಿಸುತ್ತಾರೆ. ಈ ಮಾತುಗಳು ಶಾಸ್ತ್ರಗಳಲ್ಲಿಯೂ ಇಲ್ಲ, ಆ ಶಿಕ್ಷಣದಲ್ಲಿಯೂ ಇಲ್ಲ. ಇವು ಹೊಸ
ಮಾತುಗಳಾಗಿರುವ ಕಾರಣ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಇಂತಹ ಜ್ಞಾನವನ್ನು ಎಲ್ಲಿಯೂ ಕೇಳಿಯೇ
ಇಲ್ಲವೆಂದು ಹೇಳುತ್ತಾರೆ. ಇವಂತೂ ಹೊಸ ವಿಚಿತ್ರವಾದ ಮಾತುಗಳಾಗಿವೆ. ಇದನ್ನು ಯಾರೂ ಎಂದೂ
ತಿಳಿಸಿಲ್ಲ. ಇವು ಅವಶ್ಯವಾಗಿ ಹೊಸ ಮಾತುಗಳೇ ಆಗಿವೆ. ಇವನ್ನು ಆ ಶಿಕ್ಷಣದವರಾಗಲಿ, ಸನ್ಯಾಸಿ
ಮುಂತಾದವರಾಗಲಿ ತಿಳಿಸುವುದಿಲ್ಲ. ಆದ್ದರಿಂದ ಪರಮಪಿತ ಪರಮಾತ್ಮನನ್ನೇ ಜ್ಞಾನ ಸಾಗರನೆಂದು
ಕರೆಯಲಾಗುತ್ತದೆ. ಬೇಹದ್ದಿನ ಇತಿಹಾಸ-ಭೂಗೋಳವನ್ನೂ ತಿಳಿಸುತ್ತಾರೆ. ಜ್ಞಾನದಿಂದ ಸ್ವರ್ಗ ಮತ್ತು
ನರಕದ ವಿಸ್ತಾರವನ್ನು ತಿಳಿಸುತ್ತಾರೆ. ಇವು ಹೊಸ ಮಾತುಗಳಾಗಿವೆಯಲ್ಲವೆ. ಈ ವಿದ್ಯೆಯಲ್ಲಿ ಎಲ್ಲವೂ
ಇದೆ - ಜ್ಞಾನವೂ ಇದೆ, ಯೋಗವೂ ಇದೆ, ವಿದ್ಯೆಯೂ ಇದೆ, ಭಕ್ತಿಯೂ ಇದೆ. ಯೋಗಕ್ಕೆ ಭಕ್ತಿಯೆಂದೂ
ಹೇಳಬಹುದು ಏಕೆಂದರೆ ಒಬ್ಬರ ಜೊತೆ ಯೋಗವನ್ನು ಜೋಡಿಸಿ, ಅವರನ್ನು ನೆನಪು ಮಾಡಲಾಗುತ್ತದೆ. ಆ ಭಕ್ತರೂ
ಸಹ ನೆನಪು ಮಾಡುತ್ತಾರೆ, ಪೂಜೆ ಮಾಡುತ್ತಾರೆ, ಹಾಡುತ್ತಾರೆ. ಆ ಭಕ್ತಿ ಮಾಡುವುದಕ್ಕೆ ಯೋಗವೆಂದು
ಹೇಳುವುದಿಲ್ಲ. ತಿಳಿದುಕೊಳ್ಳಿ, ಹೇಗೆ ಮೀರಾ ಕೃಷ್ಣನ ಜೊತೆ ಬುದ್ಧಿಯೋಗವನ್ನಿಡುತ್ತಿದ್ದಳು,
ಕೃಷ್ಣನನ್ನು ನೆನಪು ಮಾಡುತ್ತಿದ್ದಳು. ಅದಕ್ಕೆ ಭಕ್ತಿಯೆಂದು ಹೇಳಲಾಗುತ್ತದೆ ಏಕೆಂದರೆ ಅವರ
ಬುದ್ಧಿಯಲ್ಲಿ ಯಾವುದೇ ಗುರಿ ಉದ್ದೇಶವಿಲ್ಲ. ಇದಕ್ಕೆ ಜ್ಞಾನವೆಂದೂ ಹೇಳುತ್ತಾರೆ, ಭಕ್ತಿಯೆಂದೂ
ಹೇಳುತ್ತಾರೆ. ಇಲ್ಲಿ ಒಬ್ಬರನ್ನೇ ನೆನಪು ಮಾಡುತ್ತೀರಿ. ಸತ್ಯಯುಗದಲ್ಲಿ ಭಕ್ತಿಯೂ ಇರುವುದಿಲ್ಲ,
ಜ್ಞಾನವೂ ಇರುವುದಿಲ್ಲ. ಸಂಗಮಯುಗದಲ್ಲಿ ಜ್ಞಾನ ಮತ್ತು ಭಕ್ತಿ ಎರಡೂ ಇವೆ ಮತ್ತು ದ್ವಾಪರದಿಂದ
ಹಿಡಿದು ಕೇವಲ ಭಕ್ತಿಯು ನಡೆಯುತ್ತಾ ಬಂದಿದೆ. ಯಾರನ್ನು ನೆನಪು ಮಾಡಬೇಕೋ ಅವರ ಭಕ್ತಿ ಮಾಡುತ್ತಾರೆ.
ಇಲ್ಲಿ ಇದು ಜ್ಞಾನವೂ ಆಗಿದೆ, ಯೋಗವೂ ಆಗಿದೆ, ಭಕ್ತಿಯೂ ಇದೆ. ಎಲ್ಲವನ್ನೂ ಅರ್ಥ ಮಾಡಿಕೊಳ್ಳಬಹುದು.
ಅವರು ಕೇವಲ ಭಕ್ತರಾಗಿದ್ದಾರೆ, ತತ್ವದೊಂದಿಗೆ ಯೋಗವನ್ನು ಜೋಡಿಸುತ್ತಾರೆ ಆದರೆ ಅವರದು
ಅನೇಕರೊಂದಿಗೆ ಯೋಗವಾಗಿದೆ. ಆದ್ದರಿಂದ ಅವರಿಗೆ ಭಕ್ತರೆಂದು ಹೇಳುತ್ತಾರೆ. ನಿಮ್ಮದು ಅವ್ಯಭಿಚಾರಿ
ಯೋಗವಾಗಿದೆ. ಇದನ್ನು ಸ್ವಯಂ ಜ್ಞಾನ ಸಾಗರನೇ ಕುಳಿತು ಓದಿಸುತ್ತಾರೆ. ಅವರೊಂದಿಗೆ
ಯೋಗವನ್ನಿಡಲಾಗುತ್ತದೆ. ಆ ಮನುಷ್ಯರಂತೂ ಆತ್ಮವನ್ನೆ ತಿಳಿದುಕೊಂಡಿಲ್ಲ, ನಾವಂತೂ
ತಿಳಿದುಕೊಂಡಿದ್ದೇವೆ. ಪರಮಪಿತ ಪರಮಾತ್ಮನ ಜೊತೆ ಬುದ್ಧಿಯೋಗವನ್ನು ಜೋಡಿಸುವುದರಿಂದ ನಾವು ತಂದೆಯ
ಬಳಿ ಹೊರಟು ಹೋಗುತ್ತೇವೆ. ಅವರು ಹನುಮಂತನನ್ನು ನೆನಪು ಮಾಡುತ್ತಾರೆಂದರೆ ಅವರ
ಸಾಕ್ಷಾತ್ಕಾರವಾಗುತ್ತದೆ. ಅದಕ್ಕೆ ವ್ಯಭಿಚಾರಿಯೆಂದು ಕರೆಯುತ್ತಾರೆ. ಇದು ಅವ್ಯಭಿಚಾರಿ ಯೋಗವಾಗಿದೆ.
ಕೇವಲ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿರುವುದರಿಂದ ಇದರಲ್ಲಿ ಜ್ಞಾನ, ಭಕ್ತಿ ಮತ್ತು ವೈರಾಗ್ಯ
ಎಲ್ಲವೂ ಒಟ್ಟಿಗೆ ಇದೆ ಮತ್ತು ಅವರದೆಲ್ಲವೂ ಬೇರೆ-ಬೇರೆಯಾಗಿದೆ. ಭಕ್ತಿಯೂ ಬೇರೆ, ಜ್ಞಾನವೂ ಸಹ
ಕೇವಲ ಶಾಸ್ತ್ರಗಳ ಜ್ಞಾನವಾಗಿದೆ, ವೈರಾಗ್ಯವೂ ಹದ್ದಿನದಾಗಿದೆ. ಇಲ್ಲಿ ಬೇಹದ್ದಿನ ಮಾತಾಗಿದೆ, ನಾವು
ಬೇಹದ್ದಿನ ತಂದೆಯನ್ನು ಅರಿತುಕೊಂಡಿದ್ದೇವೆ, ಆದ್ದರಿಂದ ಅವರನ್ನು ನೆನಪು ಮಾಡುತ್ತೇವೆ. ಅವರು ಭಲೆ
ಶಿವನನ್ನು ನೆನಪು ಮಾಡುತ್ತಾರೆ. ಆದರೆ ವಿಕರ್ಮ ವಿನಾಶವಾಗುವುದಿಲ್ಲ. ಏಕೆಂದರೆ ಅವರು ಶಿವನ
ಕರ್ತವ್ಯವನ್ನೇ ಅರಿತುಕೊಂಡಿಲ್ಲ. ಅವರ ಬಳಿ ವಿಕರ್ಮ ವಿನಾಶವಾಗುವ ಜ್ಞಾನವೇ ಇಲ್ಲ. ಇಲ್ಲಂತೂ
ತಂದೆಯ ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ. ಅಲ್ಲಿ ಕಾಶಿಯಲ್ಲಿ ಹೋಗಿ ಬಲಿಯಾಗುತ್ತಾರೆಂದರೆ
ಅವರ ವಿಕರ್ಮ ವಿನಾಶವಾಗುತ್ತದೆ. ನೋವನ್ನನುಭವಿಸಬೇಕಾಗುತ್ತದೆ ಆದರೆ ನಿಮ್ಮ ತರಹ ನಿಧ ನಿಧಾನವಾಗಿ
ಕರ್ಮಾತೀತರಾಗುತ್ತಾರೆಂದಲ್ಲ. ಅವರ ವಿಕರ್ಮಗಳು ಶಿಕ್ಷೆಗಳನ್ನನುಭವಿಸುತ್ತಾ-ಅನುಭವಿಸುತ್ತಾ
ಸಮಾಪ್ತಿಯಾಗುತ್ತದೆಯೇ ಹೊರತು ಹಾಗೆಯೇ ಕ್ಷಮಾರ್ಪಣೆಯಾಗಿ ಬಿಡುವುದಿಲ್ಲ. ಇದು ವಿದ್ಯೆಯೂ ಆಗಿದೆ,
ಜ್ಞಾನವೂ ಆಗಿದೆ, ಭಕ್ತಿಯೂ ಆಗಿದೆ, ಇದರಲ್ಲಿ ಎಲ್ಲವೂ ಇದೆ. ಕಲಿಸುವುವರಂತೂ ಒಬ್ಬರೇ
ತಂದೆಯಾಗಿದ್ದಾರೆ, ಇದಕ್ಕೆ ಆಶ್ರಮ ಅಥವಾ ಶಿಕ್ಷಣ ಕೇಂದ್ರವೆಂದು ಹೇಳಲಾಗುತ್ತದೆ. ಬಹಳ ಚೆನ್ನಾಗಿ
ಬರೆಯಲಾಗಿದೆ. ಮೊದಲು ಓಂ ಮಂಡಳಿ ಎನ್ನುವ ಹೆಸರು ತಪ್ಪಾಗಿತ್ತು. ಈಗ ತಿಳುವಳಿಕೆ ಬಂದಿದೆ. ಶಿಕ್ಷಣ
ಕೇಂದ್ರವೆಂಬ ಹೆಸರು ಬಹಳ ಚೆನ್ನಾಗಿದೆ. ಯಾರಿಗೆ ಬೇಕಾದರೂ ತಿಳಿಸಬಹುದು - ನೀವೂ ಸಹ
ಬ್ರಹ್ಮಾಕುಮಾರರಾಗಿದ್ದೀರಿ. ತಂದೆಯು ಎಲ್ಲರ ರಚಯಿತನಾಗಿದ್ದಾರೆ, ಮೊಟ್ಟ ಮೊದಲು ಅವರು
ಸೂಕ್ಷ್ಮವತನವನ್ನು ರಚಿಸಬೇಕಾಗಿದೆ. ಬ್ರಹ್ಮಾ-ವಿಷ್ಣು-ಶಂಕರರು ಸೂಕ್ಷ್ಮವತನವಾಸಿಗಳಾಗಿದ್ದಾರೆ.
ತಂದೆಯು ಹೊಸ ಸೃಷ್ಟಿಯನ್ನು ರಚಿಸುತ್ತಾರೆಂದರೆ ಅವಶ್ಯವಾಗಿ ಪ್ರಜಾಪಿತ ಬ್ರಹ್ಮಾರವರು ಬೇಕು.
ಸೂಕ್ಷ್ಮವತನವಾಸಿ ಬ್ರಹ್ಮಾರವರಂತೂ ಇಲ್ಲಿಗೆ ಬರಲು ಸಾಧ್ಯವಿಲ್ಲ. ಅವರು ಸಂಪೂರ್ಣ
ಅವ್ಯಕ್ತರಾಗಿದ್ದಾರೆ, ಆದರೆ ಇಲ್ಲಿ ಸಾಕಾರಿ ಬ್ರಹ್ಮಾರವರು ಬೇಕಲ್ಲವೆ. ಅವರೆಲ್ಲಿಂದ ಬಂದರು
ಎನ್ನುವ ಮಾತನ್ನು ಮನುಷ್ಯರು ತಿಳಿದುಕೊಂಡಿಲ್ಲ. ಚಿತ್ರಗಳಂತೂ ಇದೆಯಲ್ಲವೆ. ಬ್ರಹ್ಮಾರವರಿಂದ
ಬ್ರಾಹ್ಮಣರು ರಚಿಸಲ್ಪಟ್ಟರು ಆದರೆ ಬ್ರಹ್ಮಾರವರೆಲ್ಲಿಂದ ಬಂದರು ಎಂದರೆ ದತ್ತು
ಮಾಡಿಕೊಳ್ಳಲಾಗುತ್ತದೆ. ಹೇಗೆ ಯಾವ ರಾಜನಿಗಾದರೂ ಮಕ್ಕಳಿಲ್ಲದಿದ್ದರೆ ದತ್ತು ಮಾಡಿಕೊಳ್ಳುತ್ತಾರೆ.
ತಂದೆಯೂ ಸಹ ಇವರನ್ನು ದತ್ತು ಮಾಡಿಕೊಂಡು ಇವರ ಹೆಸರನ್ನು ಬದಲಾಯಿಸಿ ಪ್ರಜಾಪಿತ ಬ್ರಹ್ಮಾ ಎಂದು
ಹೆಸರನ್ನಿಡುತ್ತಾರೆ. ಆ ಮೇಲಿರುವವರಂತೂ ಕೆಳಗೆ ಬರಲು ಸಾಧ್ಯವಿಲ್ಲ. ಈ ಕೆಳಗಿರುವವರೇ ಮೇಲೆ
ಹೋಗಬೇಕಾಗಿದೆ. ಅವರು ಅವ್ಯಕ್ತ, ಇವರು ವ್ಯಕ್ತವಾಗಿದ್ದಾರೆ. ಆದ್ದರಿಂದ ಈ ರಹಸ್ಯವನ್ನು ಚೆನ್ನಾಗಿ
ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಎಲ್ಲರಿಗೆ ಪ್ರಶ್ನೆ ಉದ್ಭವಿಸುತ್ತದೆ. ಈ ದಾದಾರವರಿಗೆ
ಕೆಲವೊಮ್ಮೆ ಬ್ರಹ್ಮಾ, ಕೆಲವೊಮ್ಮೆ ಭಗವಂತ, ಕೆಲವೊಮ್ಮೆ ಕೃಷ್ಣನೆಂದು ಹೇಳುತ್ತೀರಿ....
ಎನ್ನುತ್ತಾರೆ. ಈಗ ಇವರಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಆದರೆ ಬ್ರಹ್ಮಾ ಮತ್ತು ಕೃಷ್ಣನೆಂದು
ಹೇಳಬಹುದು. ಏಕೆಂದರೆ ಕೃಷ್ಣನು ಕಪ್ಪಾಗುತ್ತಾನೆ ಅಂದರೆ ಯಾವಾಗ ರಾತ್ರಿಯಾಗುತ್ತದೆಯೋ ಆಗ ಬ್ರಹ್ಮಾ
ಎಂದೂ, ದಿನವಾದಾಗ ಕೃಷ್ಣನೆಂತಲೂ ಹೇಳುತ್ತಾರೆ. ಕೃಷ್ಣನ ಆತ್ಮವು ಈಗ ಅಂತಿಮ ಜನ್ಮದಲ್ಲಿದೆ ಮತ್ತು
ಶ್ರೀ ಕೃಷ್ಣನದು ಆದಿಯ ಜನ್ಮವಾಗಿದೆ. ಇದನ್ನು ಸ್ಪಷ್ಟವಾಗಿ ಬರೆಯಬೇಕಾಗುತ್ತದೆ. ರಾಧೆ-ಕೃಷ್ಣರ
ಅಥವಾ ಲಕ್ಷ್ಮೀ-ನಾರಾಯಣರ 84 ಜನ್ಮಗಳ ಬಗ್ಗೆ ತಿಳಿಸಬೇಕಾಗುತ್ತದೆ. ಇಲ್ಲಿ ಇವರನ್ನು ದತ್ತು
ಮಾಡಿಕೊಳ್ಳುತ್ತಾರೆ ಅಂದಾಗ ಬ್ರಹ್ಮನ ದಿನ ಮತ್ತು ಬ್ರಹ್ಮನ ರಾತ್ರಿಯಾಗಿ ಬಿಡುತ್ತದೆ. ಅದೇ
ಲಕ್ಷ್ಮೀ-ನಾರಾಯಣರ ದಿನ ಮತ್ತು ರಾತ್ರಿಯಾಗಿದೆ. ಅವರ ವಂಶಾವಳಿಗೂ ಸಹ ಹಾಗೇ ಆಗುತ್ತದೆ.
ನೀವೀಗ ಬ್ರಾಹ್ಮಣ ಕುಲದವರಾಗಿದ್ದೀರಿ, ನಂತರ ದೇವತಾ ಕುಲದವರಾಗುತ್ತೀರಿ ಅಂದಾಗ ಇದು
ಬ್ರಹ್ಮಾಕುಮಾರ-ಕುಮಾರಿಯರ ದಿನ ಮತ್ತು ರಾತ್ರಿಯಾಯಿತು. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ,
ಚಿತ್ರಗಳಲ್ಲಿಯೂ ಸ್ಪಷ್ಟವಾಗಿದೆ - ಕೆಳಗೆ ತಪಸ್ಸು ಮಾಡುತ್ತಿದ್ದಾರೆ, ಇದು ಅಂತಿಮ ಜನ್ಮವಾಗಿದೆ.
ಬ್ರಹ್ಮಾ ಎಲ್ಲಿಂದ ಬಂದರು? ಯಾರಿಂದ ಜನ್ಮ ಪಡೆದರು? ಅಂದರೆ ಬ್ರಹ್ಮಾರವರನ್ನು ದತ್ತು
ಮಾಡಿಕೊಳ್ಳಲಾಗುತ್ತದೆ. ಹೇಗೆ ರಾಜನು ದತ್ತು ಮಾಡಿಕೊಳ್ಳುತ್ತಾನೆ - ನಂತರ ಆ ಮಗುವಿಗೆ
ರಾಜಕುಮಾರನೆಂದು ಹೇಳುತ್ತಾರೆ. ಇಂತಹ ರಾಜಕುಮಾರನೆಂದು ಹೆಸರನ್ನು ಬದಲಾಯಿಸುತ್ತಾರೆ. ಮೊದಲಂತೂ
ರಾಜಕುಮಾರನಾಗಿರಲಿಲ್ಲ. ರಾಜನು ಯಾವಾಗ ದತ್ತು ಮಾಡಿಕೊಂಡರೋ ಆಗ ರಾಜಕುಮಾರನೆಂಬ ಹೆಸರನ್ನಿಟ್ಟರು.
ಈ ಸಂಪ್ರದಾಯವು ನಡೆಯುತ್ತಾ ಬಂದಿದೆ ಅಂದಮೇಲೆ ಮಕ್ಕಳಿಗೆ ಇದು ಬುದ್ಧಿಯಲ್ಲಿರಬೇಕು. ತಂದೆಯು ಹೇಗೆ
ಹಳೆಯ ಪ್ರಪಂಚದ ವಿನಾಶ ಮತ್ತು ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಾರೆಂದು ಪ್ರಪಂಚದವರಿಗೆ
ಗೊತ್ತಿಲ್ಲ. ಈ ಜ್ಞಾನ ನೀವು ಮಕ್ಕಳಲ್ಲಿದೆ ನಿಮ್ಮಲ್ಲಿಯೂ ಸಹ ನಂಬರ್ವಾರ್ ಇದ್ದಾರೆ. ಮುಂದೆ
ಹೋದಂತೆ ಚಿಕ್ಕ-ಚಿಕ್ಕ ಮಕ್ಕಳೂ ಸಹ ಬಹಳ ತೀಕ್ಷ್ಣವಾಗುತ್ತಾರೆ ಏಕೆಂದರೆ ಕುಮಾರಿಯರಾಗಿದ್ದಾರೆ.
ಕುಮಾರಿಯರ ಮೂಲಕ ಬಾಣ ಹೊಡೆಸಿದರೆಂದು ಬರೆಯಲಾಗಿದೆ. ಕುಮಾರಿಯರ ಚಮತ್ಕಾರವು ನಂಬರ್ವನ್ನಲ್ಲಿ
ಹೋಗಿದೆ. ಮಮ್ಮಾರವರೂ ಸಹ ಕುಮಾರಿಯರಾಗಿದ್ದಾರೆ, ಎಲ್ಲರಿಗಿಂತ ತೀಕ್ಷ್ಣವಾಗಿ ಹೋಗಿದ್ದಾರೆ. ಮಗಳು
ತಾಯಿಯನ್ನು ಪ್ರತ್ಯಕ್ಷ ಮಾಡುತ್ತಾಳೆಂದು ಹೇಳಲಾಗುತ್ತದೆ. ತಾಯಿಯೇನೂ ಯಾರೊಂದಿಗೂ ಕುಳಿತು
ಮಾತನಾಡುವುದಿಲ್ಲ, ಈ ತಾಯಿ (ಬ್ರಹ್ಮಾ) ಯಂತೂ ಗುಪ್ತ, ಆದರೆ ಮಮ್ಮಾ ಪ್ರತ್ಯಕ್ಷವಾಗಿದ್ದಾರೆ.
ಅಂದಮೇಲೆ ನೀವು ಶಕ್ತಿಯರು ಅಥವಾ ಮಕ್ಕಳ ಕೆಲಸವೇ ತಾಯಿಯನ್ನು ಪ್ರತ್ಯಕ್ಷ ಮಾಡುವುದಾಗಿದೆ. ಅನೇಕ
ಒಳ್ಳೊಳ್ಳೆಯ ಮಕ್ಕಳು (ಕುಮಾರಿ) ಇದ್ದಾರೆ, ಅವರ ಪುರುಷಾರ್ಥವು ಚೆನ್ನಾಗಿ ನಡೆಯುತ್ತದೆ. ಕೌರವ
ಸಂಪ್ರದಾಯದಲ್ಲಿಯೂ ಸಹ ಕೆಲವು ಮುಖ್ಯವಾದ ಮಹಾರಥಿಗಳ ಹೆಸರುಗಳಿವೆಯಲ್ಲವೆ, ಹಾಗೆಯೇ ಇಲ್ಲಿಯೂ ಸಹ
ಮಹಾರಥಿಯರ ಹೆಸರುಗಳಿವೆ. ಎಲ್ಲರಿಗಿಂತ ಹಿರಿಯರು ಶಿವ ತಂದೆಯಾಗಿದ್ದಾರೆ, ಶ್ರೇಷ್ಠಾತಿ ಶ್ರೇಷ್ಠ
ಶಿವ ತಂದೆಯಾಗಿದ್ದಾರೆ. ಅವರ ಸ್ಥಾನವೂ ಶ್ರೇಷ್ಠವಾಗಿದೆ, ವಾಸ್ತವದಲ್ಲಿ ನಾವಾತ್ಮಗಳಿರುವ ಧಾಮವೂ
ಶ್ರೇಷ್ಠವಾಗಿದೆ. ಮನುಷ್ಯರಂತೂ ಕೇವಲ ಮಹಿಮೆ ಮಾಡುತ್ತಿರುತ್ತಾರೆ ಆದರೆ ತಿಳಿದುಕೊಂಡಿಲ್ಲ.
ನಾವಾತ್ಮಗಳೂ ಸಹ ಅಲ್ಲಿನ ನಿವಾಸಿಗಳಾಗಿದ್ದೇವೆ. ನಾವು ಜನನ ಮರಣದಲ್ಲಿ ಬಂದು
ಪಾತ್ರವನ್ನಭಿನಯಿಸಬೇಕಾಗಿದೆ. ತಂದೆಯು ಜನನ-ಮರಣದಲ್ಲಿ ಬರುವುದಿಲ್ಲ. ಪಾತ್ರವು ಅವರದೂ ಇದೆ, ಆದರೆ
ಹೇಗಿದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಇದು
ಶಿವ ತಂದೆಯ ರಥವಾಗಿದೆ, ಅಶ್ವ ಅಥವಾ ಕುದುರೆಯೂ ಆಗಿದೆ ಆದರೆ ಆ ಕುದುರೆ ಗಾಡಿಯಲ್ಲ. ಯಾವ
ತಪ್ಪುಗಳಾಗಿ ಬಿಟ್ಟಿವೆಯೋ ಅವೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ಅರ್ಧ ಕಲ್ಪ ನಾವೂ ಸಹ
ತಪ್ಪುಗಳಲ್ಲಿ ಅಥವಾ ಮರೆವಿನಲ್ಲಿ ಅಲೆದಾಡುತ್ತಾ-ಅಲೆದಾಡುತ್ತಾ ಪೂರ್ತಿ ದಾರಿ ತಪ್ಪಿ ಹೋಗುತ್ತೇವೆ.
ಈಗ ಬೆಳಕು ಸಿಕ್ಕಿರುವುದರಿಂದ ಬಹಳ ಜಾಗೃತರಾಗಿದ್ದೇವೆ. ನಮಗೆ ಗೊತ್ತಿದೆ, ಈ ಹಳೆಯ ಪ್ರಪಂಚವು
ನಾಶವಾಗಲಿದೆ, ನಾವು ನಷ್ಟಮೋಹಿಗಳಾಗಬೇಕಾಗಿದೆ. ಕಮಲ ಪುಷ್ಫ ಸಮಾನ ಗೃಹಸ್ಥದಲ್ಲಿರುತ್ತಾ
ನಷ್ಟಮೋಹಿಗಳಾಗುವ ಪುರುಷಾರ್ಥ ಮಾಡಬೇಕು. ಎಲ್ಲರೊಂದಿಗೆ ಸಂಬಂಧವನ್ನೂ ನಿಭಾಯಿಸಬೇಕು, ಜೊತೆಯೂ
ಇರಬೇಕಾಗಿದೆ. ಈ ಭಟ್ಟಿಯೂ ಸಹ ಆಗಬೇಕಿತ್ತು. ಹೇಗೆ ಕಲ್ಪದ ಹಿಂದೆಯೂ ಆಗಿತ್ತು ಆದರೆ ಈಗಂತೂ
ಹೇಳುತ್ತಾರೆ ಗೃಹಸ್ಥ ವ್ಯವಹಾರದಲ್ಲಿದ್ದು ಪರಿಶ್ರಮ ಪಡಬೇಕು. ಇಲ್ಲಿ ಮನೆ-ಮಠವನ್ನು ಬಿಟ್ಟು ಬರುವ
ಮಾತಿಲ್ಲ. ನಾವಂತೂ ಮನೆಯಲ್ಲಿ ಕುಳಿತಿದ್ದೇವಲ್ಲವೆ. ಎಷ್ಟು ಮಕ್ಕಳಿದ್ದಾರಲ್ಲವೆ, ಲೌಕಿಕವೂ
ಇತ್ತಲ್ಲವೆ. ಏನನ್ನೂ ಬಿಡಲಿಲ್ಲ, ಸನ್ಯಾಸಿಗಳಂತೂ ಕಾಡಿಗೆ ಹೊರಟು ಹೋಗುತ್ತಾರೆ. ನಾವಂತೂ
ಪಟ್ಟಣದಲ್ಲಿ ಕುಳಿತಿದ್ದೇವೆ ಅಂದಮೇಲೆ ಎಲ್ಲರೊಂದಿಗೆ ಸಂಬಂಧವನ್ನು ನಿಭಾಯಿಸಬೇಕಾಗಿದೆ. ತಂದೆಯ
ರಚನೆಯಾಗಿದೆ, ತಂದೆಯು ಸಂಪಾದಿಸಿ ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಮೊದಲಂತೂ ಕಾಮ ವಿಕಾರದ
ಆಸ್ತಿಯನ್ನು ಕೊಡುತ್ತಾರೆ ನಂತರ ಅದರಿಂದ ಬಿಡಿಸಿ ನಿರ್ವಿಕಾರಿಗಳನ್ನಾಗಿ ಮಾಡುವುದು, ತಂದೆಯ
ಕರ್ತವ್ಯವೇ ಆಗಿದೆ. ಹೀಗೂ ಇರುತ್ತಾರೆ, ಕೆಲವು ಮಕ್ಕಳು ತಂದೆ-ತಾಯಿಗೆ ಜ್ಞಾನವನ್ನು ಕೊಡುತ್ತಾರೆ,
ಇನ್ನೂ ಕೆಲವರು ತಂದೆಯು ಮಕ್ಕಳಿಗೆ ಜ್ಞಾನವನ್ನು ಕೊಡುತ್ತಾರೆ.
ಇದು ರಾಜಯೋಗವಾಗಿದೆ, ಅದು ಹಠಯೋಗವಾಗಿದೆ. ಆತ್ಮಕ್ಕೆ ಪರಮಾತ್ಮನಿಂದ ಜ್ಞಾನವು ಸಿಗುತ್ತದೆ. ನಾನು
(ಬ್ರಹ್ಮಾ) ರಾಜರಿಗೂ ರಾಜನಾಗಿದ್ದೆನು, ಈಗ ಬಡವನಾಗಿದ್ದೇನೆ. ಬಡವನಿಂದ ರಾಜನೆಂದು ಗಾಯನವಿದೆ.
ಮಕ್ಕಳಿಗೆ ಗೊತ್ತಿದೆ - ನಾವು ಯಾರು ಸೂರ್ಯವಂಶಿಗಳಾಗಿದ್ದೆವೋ, ಈಗ ಶೂದ್ರವಂಶಿಯರಾಗಿದ್ದೇವೆ. ನರಕ
ಮತ್ತು ಸ್ವರ್ಗ ಬೇರೆ-ಬೇರೆಯಾಗಿದೆ. ಇದೂ ಸಹ ತಿಳಿಸಬೇಕಾಗುತ್ತದೆ, ಮನುಷ್ಯರು ಇದನ್ನು
ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ಅನೇಕ ಮಕ್ಕಳು ಏನನ್ನೂ ತಿಳಿದುಕೊಂಡಿಲ್ಲ. ಅಂದರೆ
ಅದೃಷ್ಟದಲ್ಲಿಲ್ಲವೆಂದರೆ ಪುರುಷಾರ್ಥವೇನು ಮಾಡುತ್ತಾರೆ? ಕೆಲವರ ಅದೃಷ್ಟದಲ್ಲಿ ಏನೂ ಇಲ್ಲ, ಕೆಲವರ
ಅದೃಷ್ಟದಲ್ಲಿ ಎಲ್ಲವೂ ಇದೆ. ಅದೃಷ್ಟವೇ ಪುರುಷಾರ್ಥ ಮಾಡಿಸುತ್ತದೆ. ಅದೃಷ್ಟದಲ್ಲಿಲ್ಲದಿದ್ದರೆ
ಪುರುಷಾರ್ಥವೇನು ಮಾಡುತ್ತಾರೆ? ಇದು ಒಂದೇ ಶಾಲೆಯಾಗಿದೆ, ನಡೆಯುತ್ತಲೇ ಇರುತ್ತದೆ. ಆದರೆ ಕೆಲವು
ಮಕ್ಕಳು ಅರ್ಧದಲ್ಲಿಯೇ ಬೀಳುತ್ತಾರೆ, ಇನ್ನೂ ಕೆಲವರು ನಡೆಯುತ್ತಾ-ನಡೆಯುತ್ತಾ ಸತ್ತು ಹೋಗುತ್ತಾರೆ.
ಜನ್ಮ ಪಡೆಯುವುದು ಮತ್ತು ಸಾಯುವುದು, ಹೀಗೆ ಬಹಳ ಆಗುತ್ತದೆ. ಈ ಜ್ಞಾನವು ಬಹಳ ವಿಚಿತ್ರವಾಗಿದೆ.
ಜ್ಞಾನವಂತೂ ಬಹಳ ಸಹಜವಾಗಿದೆ ಆದರೆ ಕರ್ಮಾತೀತ ಸ್ಥಿತಿಯನ್ನು ಪಡೆಯುವುದರಲ್ಲಿ ಪೂರ್ಣ ಪರಿಶ್ರಮವಿದೆ.
ಯಾವಾಗ ವಿಕರ್ಮ ವಿನಾಶವಾಗುತ್ತದೆಯೋ ಆಗಲೇ ಹಾರಲು ಸಾಧ್ಯ. ಧ್ಯಾನಕ್ಕಿಂತ ಜ್ಞಾನವು ಶ್ರೇಷ್ಠ.
ಧ್ಯಾನದಲ್ಲಿ ಮಾಯೆಯ ವಿಘ್ನಗಳು ಬಹಳ ಬರುತ್ತವೆ. ಆದ್ದರಿಂದ ಧ್ಯಾನಕ್ಕಿಂತ ಜ್ಞಾನವು ಒಳ್ಳೆಯದಾಗಿದೆ.
ಆದರೆ ಯೋಗಕ್ಕಿಂತ ಜ್ಞಾನವು ಒಳ್ಳೆಯದೆಂದಲ್ಲ ಕೇವಲ ಧ್ಯಾನಕ್ಕೋಸ್ಕರವೇ ಈ ರೀತಿ ಹೇಳಲಾಗುತ್ತದೆ -ಯಾರು
ಧ್ಯಾನದಲ್ಲಿ ಹೋಗುತ್ತಿದ್ದರೋ ಅವರು ಇಂದಿಲ್ಲ. ಯೋಗದಲ್ಲಂತೂ ಸಂಪಾದನೆಯಾಗುತ್ತದೆ, ವಿಕರ್ಮ
ವಿನಾಶವಾಗುತ್ತದೆ. ಧ್ಯಾನದಲ್ಲಿ ಯಾವುದೇ ಸಂಪಾದನೆಯಿಲ್ಲ. ಯೋಗ ಮತ್ತು ಜ್ಞಾನದಲ್ಲಿ ಸಂಪಾದನೆಯಿದೆ.
ಯೋಗ ಮತ್ತು ಜ್ಞಾನವಿಲ್ಲದೆ ಆರೋಗ್ಯವಂತರು, ಐಶ್ವರ್ಯವಂತರಾಗಲು ಸಾಧ್ಯವಿಲ್ಲ. ನಂತರ
ಓಡಾಡುವ-ತಿರುಗಾಡುವ ಅಭ್ಯಾಸವಾಗಿ ಬಿಡುತ್ತದೆ. ಇದೂ ಸಹ ಸರಿಯಿಲ್ಲ. ಧ್ಯಾನವು ಬಹಳ ನಷ್ಟ
ಮಾಡುತ್ತದೆ. ಜ್ಞಾನ ಸೆಕೆಂಡಿನದಾಗಿದೆ, ಯೋಗವು ಸೆಕೆಂಡಿನದಲ್ಲ. ಎಲ್ಲಿಯವರೆಗೆ
ಜೀವಿಸಿರಬೇಕಾಗಿದೆಯೋ ಅಲ್ಲಿಯವರೆಗೆ ಯೋಗ ಮಾಡುತ್ತಲೇ ಇರಬೇಕಾಗಿದೆ ಜ್ಞಾನ ಸಹಜ. ಆದರೆ ಸದಾ
ಆರೋಗ್ಯವಂತರು, ನಿರೋಗಿಗಳಾಗುವುದರಲ್ಲಿಯೇ ಪರಿಶ್ರಮವಿದೆ. ಮುಂಜಾನೆಯೆದ್ದು ನೆನಪಿನಲ್ಲಿ
ಕುಳಿತುಕೊಳ್ಳುವುದರಲ್ಲಿಯೂ ಬಹಳ ವಿಘ್ನಗಳು ಬರುತ್ತವೆ. ಅನೇಕ ವಿಚಾರಗಳನ್ನು ಮಾಡುತ್ತಾ
ವಿಷಯಗಳನ್ನು ತೆಗೆಯುವ ಸಮಯದಲ್ಲಿಯೂ ಬುದ್ಧಿಯು ಎಲ್ಲಿಂದೆಲ್ಲೆಲ್ಲಿಗೋ ಹೊರಟು ಹೋಗಿ ಬಿಡುತ್ತದೆ.
ಎಲ್ಲರಿಗಿಂತ ಹೆಚ್ಚಿನ ಬಿರುಗಾಳಿಯು ಮೊದಲ ನಂಬರಿನವರಿಗೇ ಬರುತ್ತದೆಯಲ್ಲವೆ. ಶಿವ ತಂದೆಗಂತೂ ಬರಲು
ಸಾಧ್ಯವಿಲ್ಲ. ತಂದೆಯು ಯಾವಾಗಲೂ ತಿಳಿಸುತ್ತಿರುತ್ತಾರೆ - ಬಿರುಗಾಳಿಗಳಂತೂ ಬಹಳ ಬರುತ್ತಿರುತ್ತವೆ,
ಎಷ್ಟು ನೆನಪಿನಲ್ಲಿರುವ ಪ್ರಯತ್ನ ಪಡುತ್ತೀರೋ ಅಷ್ಟು ಬಿರುಗಾಳಿಗಳು ಹೆಚ್ಚಾಗಿ ಬರುತ್ತಿರುತ್ತವೆ.
ಇದರಲ್ಲಿ ಹೆದರಬಾರದು, ನೆನಪಿನಲ್ಲಿರಬೇಕಾಗಿದೆ, ಸ್ಥಿರವಾಗಬೇಕಾಗಿದೆ. ಯಾವುದೇ ಬಿರುಗಾಳಿಗಳು
ಅಲುಗಾಡಿಸಲು ಸಾಧ್ಯವೇ ಇಲ್ಲ, ಇದು ಅಂತಿಮ ಸ್ಥಿತಿಯಾಗಿದೆ. ಇದು ಆತ್ಮಿಕ ಸ್ಫರ್ಧೆಯಾಗಿದೆ. ಶಿವ
ತಂದೆಯನ್ನು ನೆನಪು ಮಾಡುತ್ತಾ ಇರಿ. ಇವೂ ಸಹ ತಿಳಿದುಕೊಳ್ಳುವ ಮತ್ತು ಧಾರಣೆ ಮಾಡುವ ಮಾತುಗಳಾಗಿವೆ.
ಧನ ದಾನ ಮಾಡುವುದಿಲ್ಲವೆಂದರೆ ಧಾರಣೆಯೂ ಆಗುವುದಿಲ್ಲ. ಪುರುಷಾರ್ಥ ಮಾಡಬೇಕು. ಇಬ್ಬರೂ ತಂದೆಯರ
ವಿಷಯವನ್ನು ಯಾರಿಗೆ ಬೇಕಾದರೂ ತಿಳಿಸುವುದು ಬಹಳ ಸಹಜವಾಗಿದೆ. ಇದನ್ನೂ ಸಹ ನೀವೇ
ತಿಳಿದುಕೊಂಡಿದ್ದೀರಿ. ತಂದೆಯು 21 ಜನ್ಮಗಳ ಆಸ್ತಿಯನ್ನು ಕೊಡುತ್ತಾರೆ. ಈ ಲಕ್ಷ್ಮೀ-ನಾರಾಯಣರಿಗೆ
ತಂದೆಯಿಂದ 21 ಜನ್ಮಗಳ ಆಸ್ತಿಯು ಸಿಕ್ಕಿದೆ ಎಂದು ನೀವು ಹೇಳುತ್ತೀರಿ. ತಂದೆಯು ಅವರಿಗೆ
ರಾಜಯೋಗವನ್ನು ಕಲಿಸಿದರು, ಅವರಿಗೆ ಭಗವಂತನೇ ಈ ಆಸ್ತಿಯನ್ನು ಕೊಟ್ಟರೆಂದು ಮತ್ತ್ಯಾರ ಬಾಯಿಂದಲೂ
ಹೇಳಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಕೆಲ ಕೆಲವರು ಕೆಲ ಕೆಲವೊಂದು ಮಾತಿನಲ್ಲಿ ಖುಷಿಯಾಗಿರುತ್ತಾರೆ.
ನೀವು ಯಾವ ಮಾತಿನಲ್ಲಿ ಖುಷಿಯಾಗಿದ್ದೀರಿ ಅದನ್ನೂ ಯಾರೂ ತಿಳಿದುಕೊಂಡಿಲ್ಲ. ಮನುಷ್ಯರಂತೂ
ಅಲ್ಪಕಾಲದ ಕ್ಷಣ ಭಂಗುರಕ್ಕೋಸ್ಕರ ಖುಷಿಯನ್ನಾಚರಿಸುತ್ತಾರೆ. ನೀವು ಸತ್ಯ ಬ್ರಾಹ್ಮಣ
ಕುಲಭೂಷಣರಾಗಿದ್ದೀರಿ, ಯೋಗಿ ಮತ್ತು ಜ್ಞಾನಿಗಳಾಗಿದ್ದೀರಿ. ನಿಮ್ಮ ಈ ಅತೀಂದ್ರಿಯ ಸುಖದ ಖುಷಿಯನ್ನು
ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅವರಂತೂ ಏನೇನೋ ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ.
ಚಂದ್ರ ಗ್ರಹದಲ್ಲಿ ಹೋಗುವ ಪುರುಷಾರ್ಥ ಮಾಡುತ್ತಾರೆ. ಬಹಳ ಕಷ್ಟಕರವಾದ ಪರಿಶ್ರಮ ಪಡುತ್ತಾರೆ. ಆದರೆ
ಅವರೆಲ್ಲರ ಪರಿಶ್ರಮವು ವ್ಯರ್ಥವಾಗುವುದಿದೆ. ನೀವು ಯಾವುದೇ ಕಷ್ಟವಿಲ್ಲದೇ ಇಂತಹ ಸ್ಥಳಕ್ಕೆ ಹೋಗುವ
ಪುರುಷಾರ್ಥ ಮಾಡುತ್ತೀರಿ, ಎಲ್ಲಿಗೆ ಮತ್ತ್ಯಾರೂ ಹೋಗಲು ಸಾಧ್ಯವಿಲ್ಲ. ಒಂದೇ ಸಲ ಶ್ರೇಷ್ಠಾತಿ
ಶ್ರೇಷ್ಠ ಪರಮಧಾಮಕ್ಕೆ ಹೋಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಗೃಹಸ್ಥ ವ್ಯವಹಾರದಲ್ಲಿರುತ್ತಾ ನಷ್ಟಮೋಹಿಗಳೂ ಆಗಬೇಕಾಗಿದೆ. ಜೊತೆ ಜೊತೆಗೆ ಎಲ್ಲರೊಂದಿಗೆ
ಸಂಬಂಧವನ್ನು ನಿಭಾಯಿಸುತ್ತಾ ಕಮಲಪುಷ್ಫ ಸಮಾನರಾಗಿರಬೇಕಾಗಿದೆ.
2. ಧಾರಣೆ ಮಾಡುವುದಕ್ಕೋಸ್ಕರ ಅವಶ್ಯವಾಗಿ ಜ್ಞಾನ ಧನದ ದಾನ ಮಾಡಬೇಕಾಗಿದೆ. ಜ್ಞಾನ ಮತ್ತು
ಯೋಗದಿಂದ ತಮ್ಮ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ ಬಾಕಿ ಧ್ಯಾನ ಅಥವಾ ಸಾಕ್ಷಾತ್ಕಾರದ
ಆಸೆಯನ್ನಿಟ್ಟುಕೊಳ್ಳಬಾರದಾಗಿದೆ.
ವರದಾನ:
ಸೈಲೆನ್ಸ್ ನ
ಶಕ್ತಿಯ ಮುಖಾಂತರ ಜಮಾದ ಖಾತೆಯನ್ನು ಹೆಚ್ಚಿಸಿಕೊಳ್ಳುವಂತಹ ಶ್ರೇಷ್ಠ ಪದವಿಯ ಅಧಿಕಾರಿ ಭವ.
ಹೇಗೆ ವರ್ತಮಾನ
ಸಮಯದಲ್ಲಿ ವಿಜ್ಞಾನದ ಶಕ್ತಿಯ ಪ್ರಭಾವ ಬಹಳ ಇದೆ, ಅಲ್ಪಕಾಲಕ್ಕಾಗಿ ಪ್ರಾಪ್ತಿ ಮಾಡಿಸುತ್ತಿದ್ದಾರೆ.
ಈ ರೀತಿ ಸೈಲೆನ್ಸ್ ನ ಶಕ್ತಿಯ ಮುಖಾಂತರ ಜಮಾದ ಖಾತೆಯನ್ನು ಹೆಚ್ಚಿಸಿಕೊಳ್ಳಿ. ತಂದೆಯ ದಿವ್ಯ
ದೃಷ್ಠಿಯಿಂದ ಸ್ವಯಂನಲ್ಲಿ ಶಕ್ತಿಯನ್ನು ಜಮಾ ಮಾಡಿಕೊಳ್ಳಿ. ಆಗ ಜಮಾ ಮಾಡಿರುವ ಶಕ್ತಿ ಸಮಯದಲ್ಲಿ
ಬೇರೆಯವರಿಗೂ ಸಹ ಕೊಡಬಹುದಾಗಿದೆ. ಯಾರು ದೃಷ್ಠಿಯ ಮಹತ್ವಿಕೆಯನ್ನು ತಿಳಿದುಕೊಂಡು ಸೈಲೆನ್ಸ್ ನ
ಶಕ್ತಿಯನ್ನು ಜಮಾ ಮಾಡಿಕೊಳ್ಳುತ್ತಾರೆ. ಅವರೇ ಶ್ರೇಷ್ಠ ಪದವಿಗೆ ಅಧಿಕಾರಿಯಾಗುತ್ತಾರೆ. ಅವರ
ಮುಖದಿಂದ ಖುಶಿಯ ಆತ್ಮೀಯ ಹೊಳಪು ಕಂಡು ಬರುವುದು.
ಸ್ಲೋಗನ್:
ತಮಗೆ ತಮ್ಮ ಮೇಲೆ
ಗಮನ ಸ್ವಾಭಾವಿಕವಾಗಿದ್ದಲ್ಲಿ ಯಾವುದೇ ಪ್ರಕಾರದ ಒತ್ತಡ ಬರಲು ಸಾಧ್ಯವಿಲ್ಲ.