05.12.18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಇದು
ಮಾಡಿ-ಮಾಡಲ್ಪಟ್ಟ ಅನಾದಿ ಡ್ರಾಮಾ ಆಗಿದೆ, ಈ ಡ್ರಾಮಾದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯ ಪಾತ್ರವು
ನಿಶ್ಚಿತವಾಗಿದೆ, ಮೋಕ್ಷವು ಯಾರಿಗೂ ಸಿಗಲು ಸಾಧ್ಯವಿಲ್ಲ”
ಪ್ರಶ್ನೆ:
ಶಿವ ತಂದೆಯು
ಅಶರೀರಿಯಾಗಿದ್ದಾರೆ, ಅವರು ಶರೀರದಲ್ಲಿ ಏತಕ್ಕಾಗಿ ಬರುತ್ತಾರೆ? ಯಾವ ಕಾರ್ಯ ಮಾಡುತ್ತಾರೆ ಮತ್ತು
ಯಾವುದನ್ನು ಮಾಡುವುದಿಲ್ಲ?
ಉತ್ತರ:
ತಂದೆಯು
ತಿಳಿಸುತ್ತಾರೆ - ಮಕ್ಕಳೇ, ನಾನು ಈ ಶರೀರದಲ್ಲಿ ತಮಗೆ ಕೇವಲ ಮುರುಳಿಯನ್ನು ನುಡಿಸಲು ಬರುತ್ತೇನೆ.
ನಾನು ಮುರುಳಿಯನ್ನು ನುಡಿಸುವ ಕಾರ್ಯ ಮಾತ್ರ ಮಾಡುತ್ತೇನೆ. ನಾನು ತಿನ್ನಲು, ಕುಡಿಯಲು
ಬರುವುದಿಲ್ಲ. ನಾನು ಹೊಸ ರಾಜಧಾನಿಯನ್ನು ಕೊಡಲು ಬಂದಿದ್ದೇನೆ. ಬಾಕಿ ಸ್ವಾದವನ್ನು ಇವರ ಆತ್ಮವು
ತೆಗೆದುಕೊಳ್ಳುತ್ತದೆ.
ಗೀತೆ:
ಆಕಾಶ
ಸಿಂಹಾಸನವನ್ನು ಬಿಟ್ಟು ಬಾ
ಓಂ ಶಾಂತಿ.
ನಿಮಗೆ ಸಂಬಂಧವಿರುವಂತಹ ಹಾಡನ್ನೇ ಹಾಕಲಾಗುತ್ತದೆ. ಆಕಾಶದಲ್ಲಿ ಯಾವು ಸಿಂಹಾಸನವಿಲ್ಲ. ಆಕಾಶವೆಂದು
ತತ್ವಕ್ಕೆ ಹೇಳಲಾಗುತ್ತದೆ. ಬಾಕಿ ಆಕಾಶದಲ್ಲಿ ಯಾವುದೇ ಸಿಂಹಾಸನವಿಲ್ಲ. ಪರಮಪಿತ ಪರಮಾತ್ಮ ಈ
ಆಕಾಶದ ಸಿಂಹಾಸನದ ಮೇಲೆ ಇರುವುದಿಲ್ಲ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನಾನು ಪರಮಪಿತ
ಪರಮಾತ್ಮ ಹಾಗೂ ನೀವು ಮಕ್ಕಳು ಯಾರು ಆತ್ಮರಾಗಿದ್ದೀರಿ ಇಬ್ಬರೂ ಸಹ ಈ ಸೂರ್ಯ, ಚಂದ್ರ,
ನಕ್ಷತ್ರಗಳಿಗಿಂತ ದೂರವಿರುತ್ತೇವೆ, ಅದಕ್ಕೆ ಮೂಲವತನವೆಂದು ಹೇಳಲಾಗುತ್ತದೆ. ಹೇಗೆ ಈ ಆಕಾಶದಲ್ಲಿ
ಸೂರ್ಯ, ಚಂದ್ರ, ನಕ್ಷತ್ರಗಳಿವೆ ಹಾಗೆಯೇ ವೃಕ್ಷದ ರೀತಿಯಲ್ಲಿ ಮಹಾತತ್ವದಲ್ಲಿಯೂ ಸಹ
ಆತ್ಮಗಳಿರುತ್ತಾರೆ. ಹೇಗೆ ನಕ್ಷತ್ರಗಳು ಆಕಾಶದ ಮೇಲೆ ನಿಂತಿವೆ, ಯಾವುದೇ ವಸ್ತುವಿನ ಆಧಾರವಿಲ್ಲ.
ನಾವಾತ್ಮರು ಮತ್ತು ಪರಮಾತ್ಮ ತಂದೆ, ನಾವೆಲ್ಲರೂ ಮಹಾತತ್ವದಲ್ಲಿ ಇರುತ್ತೇವೆ. ನಕ್ಷತ್ರ
ರೂಪದಲ್ಲಿಯೇ ಇರುವುದು, ಜ್ಞಾನ ಸೂರ್ಯ, ಜ್ಞಾನ ಚಂದ್ರಮ, ಜ್ಞಾನ ನಕ್ಷತ್ರಗಳು. ಈಗ ಇದಂತೂ
ತಿಳಿಸಲಾಗಿದೆ - ಯಾವಾಗ ಬಹಳ ದುಃಖವಾಗುತ್ತದೆ ಆಗ ನಾನು ಬರುತ್ತೇನೆ. ಹಳೆಯದನ್ನು ಖಂಡಿತ
ಹೊಸದನ್ನಾಗಿ ಮಾಡಬೇಕು. ಹಳೆಯದರಲ್ಲಿ ದುಃಖವಾಗುತ್ತದೆ. ಕಲಿಯುಗದಲ್ಲಿ ಬಹಳ ದುಃಖವಿದೆ.
ಸ್ವರ್ಗದಲ್ಲಿ ಸುಖವೇ ಸುಖ, ಪುನಃ ನಾನು ಬಂದು ಸಹಜ ಜ್ಞಾನ ಹಾಗೂ ಸಹಜ ರಾಜಯೋಗವನ್ನು
ಕಲಿಸಬೇಕಾಗುತ್ತದೆ. ಎಲ್ಲರೂ ಕರೆಯುತ್ತಾರೆ. ಕೃಷ್ಣನನ್ನು ಸಿಂಹಾಸನವನ್ನು ಬಿಟ್ಟು ಬಾ ಎಂದು
ಹೇಳುವುದಿಲ್ಲ. ಕೃಷ್ಣನಿಗೆ ಸಿಂಹಾಸನ ಎಂಬ ಅಕ್ಷರ ಶೋಭಿಸುವುದಿಲ್ಲ. ಕೃಷ್ಣನು ರಾಜಕುಮಾರನಲ್ಲವೆ!
ರಾಜ್ಯ ಗದ್ದುಗೆ ಸಿಕ್ಕಿದಾಗ ಸಿಂಹಾಸನ ಎಂದು ಹೇಳಬಹುದು. ಚಿಕ್ಕ ಮಗುವನ್ನು ತಂದೆಯ ಮಡಿಲಿನಲ್ಲಿ
ಅಥವಾ ಪಕ್ಕದಲ್ಲಿ ಕೂರಿಸಬಹುದು ಅಂದಮೇಲೆ ತಂದೆ ಹೇಳುತ್ತಾರೆ ಆತ್ಮರು ಮೂಲವತನದಲ್ಲಿ ನಕ್ಷತ್ರಗಳ
ರೂಪದಲ್ಲಿರುತ್ತವೆ ಮತ್ತೆ ಅಲ್ಲಿಂದ ನಂಬರ್ವಾರ್ ಆಗಿ ಬರುತ್ತಿರುತ್ತವೆ. ನಕ್ಷತ್ರಗಳು ಹೇಗೆ
ಬೀಳುತ್ತವೆ ಎಂಬುದನ್ನು ತೋರಿಸುತ್ತಾರಲ್ಲವೆ. ಅಲ್ಲಿಂದ ಆತ್ಮರು ಸೀದಾ ಗರ್ಭದಲ್ಲಿ ಹೋಗುತ್ತವೆ.
ಇದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ - ಪ್ರತಿಯೊಂದು ಆತ್ಮ ಸತೋ, ರಜೋ, ತಮೋದಲ್ಲಿ ಬರಲೇಬೇಕು.
ಹೇಗೆ ಮೊದಲು ಲಕ್ಷ್ಮೀ-ನಾರಾಯಣರು ಬರುತ್ತಾರೆ ಅವರು ಸತೋ, ರಜೋ ಸ್ಥಿತಿಯನ್ನು ಪಾರಾಗಬೇಕಾಗುತ್ತದೆ,
ಪುನರ್ಜನ್ಮವನ್ನು ಪಡೆಯುತ್ತಾ-ಪಡೆಯುತ್ತಾ ತಮೋಪ್ರಧಾನ ಸ್ಥಿತಿಯನ್ನು ಹೊಂದಲೇಬೇಕು.
ಪ್ರತಿಯೊಬ್ಬರದೂ ಅದೇ ರೀತಿಯಾಗುತ್ತದೆ. ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇಬ್ರಾಹಿಂ, ಬುದ್ಧ
ಬರುತ್ತಾರೆ ಅವರೂ ಸಹ ಸತೋ, ರಜೋ, ತಮೋದಿಂದ ಮುಂದೆ ಹೋಗಬೇಕು. ಪುನರ್ಜನ್ಮವನ್ನು ಪಡೆಯಬೇಕು.
ದ್ವಾಪರದಲ್ಲಿ ಧರ್ಮ ಸ್ಥಾಪಕರು ಬರುತ್ತಾರೆ. ಅಲ್ಲಿಂದ ಪುನರ್ಜನ್ಮವು ಪ್ರಾರಂಭವಾಗುತ್ತದೆ ನಂತರ
ತಮೋಪ್ರಧಾನರಾಗಬೇಕು. ಈಗ ಅವರ ಸದ್ಗತಿಯನ್ನು ಯಾರು ಮಾಡುವುದು? ಸದ್ಗತಿದಾತ ಶಿವನೊಬ್ಬರೇ
ಆಗಿದ್ದಾರೆ. ಸರ್ವರ ಸದ್ಗತಿಯನ್ನು ಮಾಡಲು ನಾನೇ ಬರಬೇಕಾಗುತ್ತದೆ. ನನ್ನ ಹಾಗೆ ಕೆಲಸವನ್ನು ಬೇರೆ
ಯಾರೂ ಮಾಡಲು ಸಾಧ್ಯವಿಲ್ಲ. ನಾನು ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತೇನೆ. ತಮಗೆ ರಾಜಯೋಗವನ್ನು
ಕಲಿಸುತ್ತಿದ್ದೇನೆ. ಗತಿ ಹಾಗೂ ಸದ್ಗತಿದಾತ ನಾನು ಆಗಿದ್ದೇನೆ. ಯಾವಾಗ ತಾವು ಪವಿತ್ರರಾಗುತ್ತೀರಿ
ಆಗ ಮತ್ತೆ ನಾನು ಹಿಂತಿರುಗಿ ಕರೆದೊಯುತ್ತೇನೆ. ನಿಮ್ಮ ಸದ್ಗತಿಯನ್ನೂ ಸಹ ಮಾಡುತ್ತೇನೆ. ನಿಮ್ಮ
ಜೊತೆ ಯಾರು ಅನೇಕ ಧರ್ಮದವರಿದ್ದಾರೆ ಆ ಧರ್ಮ ಸ್ಥಾಪಕರ ಸಹಿತ ಸರ್ವರ ಉದ್ಧಾರ ಮಾಡುತ್ತೇನೆ.
ತಮ್ಮನ್ನು ಜ್ಞಾನದಿಂದ ಶೃಂಗಾರ ಮಾಡಿ ಸ್ವರ್ಗದ ಮಾಲಿಕ ಲಕ್ಷ್ಮೀ ಅಥವಾ ನಾರಾಯಣನನ್ನು ವರಿಸಲು
ಯೋಗ್ಯರನ್ನಾಗಿ ಮಾಡುತ್ತೇನೆ. ಮತ್ತೆ ತಮ್ಮನ್ನು ಹಿಂತಿರುಗಿ ಕರೆದೊಯ್ಯುತ್ತೇನೆ. ಸರ್ವರನ್ನು
ಮೊದಲು ಮುಕ್ತಿಧಾಮಕ್ಕೆ ಕಳುಹಿಸುತ್ತೇನೆ, ಸರ್ವರ ಸದ್ಗತಿದಾತನೂ ಆಗಿದ್ದೇನೆ. ಅನ್ಯ ಧರ್ಮ
ಸ್ಥಾಪಕರು ಯಾರು ಬರುತ್ತಾರೆ ಅವರು ಸದ್ಗತಿಯನ್ನು ಮಾಡುವುದಿಲ್ಲ. ಅವರು ಕೇವಲ ತಮ್ಮ ಧರ್ಮ
ಸ್ಥಾಪನೆಯನ್ನು ಮಾಡಿ ಅದನ್ನು ವೃದ್ಧಿ ಮಾಡಲು ತೊಡಗುತ್ತಾರೆ. ತಮ್ಮ ಧರ್ಮದಲ್ಲಿ ಪುನರ್ಜನ್ಮವನ್ನು
ಪಡೆಯುತ್ತಾ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಈಗ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಈಗ ಇವರನ್ನು
ಸತೋಪ್ರಧಾನ ಪಾವನರನ್ನಾಗಿ ಯಾರು ಮಾಡುತ್ತಾರೆ? ತಂದೆಯೇ ಸ್ವಯಂ ಕುಳಿತು ಮಕ್ಕಳಿಗೆ ತಿಳಿಸುತ್ತಾರೆ.
ಭಗವಂತ ಬಂದು ಸರ್ವರ ಸದ್ಗತಿಯನ್ನೂ ಮಾಡುತ್ತಾರೆ, ಭಾರತವನ್ನು ಸ್ವರ್ಗವನ್ನಾಗಿಯೂ ಮಾಡುತ್ತಾರೆ.
ಜೀವನ್ಮುಕ್ತಿಗಾಗಿ ರಾಜಯೋಗವನ್ನು ಕಲಿಸುತ್ತಾರೆ, ಆದ್ದರಿಂದ ತಂದೆಗೆ ಇಷ್ಟೊಂದು ಮಹಿಮೆ ಇದೆ. ಗೀತೆ
ಸರ್ವಶಾಸ್ತ್ರಮಯಿ ಶಿರೋಮಣಿಯಾಗಿದೆ. ಆದರೆ ಕೃಷ್ಣನ ಹೆಸರನ್ನು ಬರೆದಿದ್ದರಿಂದ ಭಗವಂತನ ಹೆಸರು
ಮರೆತಿದ್ದಾರೆ. ಭಗವಂತ ಸರ್ವರ ಸದ್ಗತಿದಾತನಾಗಿದ್ದಾರೆ ಆದ್ದರಿಂದ ಗೀತೆಯು ಸರ್ವ ಧರ್ಮದವರ ಧರ್ಮ
ಶಾಸ್ತ್ರವಾಗಿದೆ, ಎಲ್ಲರೂ ಇದನ್ನು ಒಪ್ಪಿಕೊಳ್ಳಬೇಕು. ಸದ್ಗತಿಯ ಶಾಸ್ತ್ರ ಬೇರೆ ಯಾವುದೂ ಇಲ್ಲ.
ಸದ್ಗತಿಯನ್ನು ನೀಡುವವರು ಒಬ್ಬರೇ ಆಗಿದ್ದಾರೆ. ಅವರದೇ ಗೀತೆಯಾಗಿದೆ. ನಾವು ಮಕ್ಕಳಿಗೆ ಸದ್ಗತಿಯ
ಜ್ಞಾನವನ್ನು ಕೊಡುತ್ತಿದ್ದಾರೆ, ಗೀತೆಯಲ್ಲಿ ಶಿವನ ಹೆಸರು ಇದ್ದಿದ್ದರೆ ಎಲ್ಲಾ ಧರ್ಮದವರಿಗೂ ಇದೇ
ಶಾಸ್ತ್ರವಾಗಿರುತ್ತಿತ್ತು. ತಂದೆಯು ಎಲ್ಲರಿಗೂ ಹೇಳುತ್ತಾರೆ - ಸ್ವಯಂನ್ನು ಆತ್ಮನೆಂದು ತಿಳಿದು
ನನ್ನ ಜೊತೆ ಯೋಗವನ್ನು ಜೋಡಿಸಿ ಆಗ ವಿಕರ್ಮ ವಿನಾಶವಾಗುತ್ತದೆ. ಹಾಗು ತಾವು ನನ್ನ ಧಾಮಕ್ಕೆ
ಬರುತ್ತೀರಿ. ಸರ್ವ ಧರ್ಮದವರ ಸದ್ಗತಿಯನ್ನು ನಾನೇ ಮಾಡುತ್ತೇನೆ. ಬೇರೆಯವರು ತನ್ನ ಧರ್ಮ
ಸ್ಥಾಪನೆಯನ್ನು ಮಾಡಲು ಬರುತ್ತಾರೆ. ಮನುಷ್ಯರು ಮೋಕ್ಷ ಸಿಗುವುದಿಲ್ಲವೆ? ಎಂದು ಕೇಳುತ್ತಾರೆ.
ತಂದೆಯು ತಿಳಿಸುತ್ತಾರೆ - ಇಲ್ಲ, ಯಾರೆಲ್ಲಾ ಆತ್ಮಗಳಿದ್ದಾರೆ. ಎಲ್ಲರ ಪಾತ್ರವೂ ಡ್ರಾಮಾದಲ್ಲಿ
ನಿಶ್ಚಿತವಾಗಿದೆ, ಯಾರ ಪಾತ್ರವೂ ಬದಲಾವಣೆಯಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಪೂರ್ಣ ಪಾತ್ರದ
ಅನಾದಿ ಡ್ರಾಮಾ ಮಾಡಲ್ಪಟ್ಟಿದೆ. ಡ್ರಾಮಾ ಅನಾದಿಯಾಗಿದೆ, ಅದರ ಆದಿ-ಮಧ್ಯ-ಅಂತ್ಯವಿಲ್ಲ. ಸೃಷ್ಟಿಯ
ಆದಿ ಸತ್ಯಯುಗಕ್ಕೆ ಹೇಳಲಾಗುತ್ತದೆ ಹಾಗೂ ಅಂತ್ಯವೆಂದು ಕಲಿಯುಗಕ್ಕೆ ಹೇಳಲಾಗುತ್ತದೆ ಬಾಕಿ
ಡ್ರಾಮಾದ ಆದಿ-ಅಂತ್ಯವಿಲ್ಲ. ಡ್ರಾಮಾ ಯಾವಾಗ ಆಯಿತು, ಇದನ್ನು ಹೇಳಲು ಸಾಧ್ಯವಿಲ್ಲ. ಆ ಪ್ರಶ್ನೆಯೇ
ಬರುವುದಿಲ್ಲ.
ಬಾಬಾ ತಿಳಿಸಿದ್ದಾರೆ - ಬೇರೆ ಯಾವುದೆಲ್ಲಾ ಶಾಸ್ತ್ರವಿದೆ ಅದರಿಂದ ಪ್ರತಿಯೊಬ್ಬರೂ ಬಂದು ತಮ್ಮ
ಧರ್ಮವನ್ನು ಸ್ಥಾಪನೆ ಮಾಡಿದ್ದಾರೆ, ಸದ್ಗತಿ ಮಾಡಿಲ್ಲ. ಅವರು ಧರ್ಮ ಸ್ಥಾಪನೆ ಮಾಡಿದರು, ಅವರ
ಹಿಂದೆ ವೃದ್ಧಿಯಾಯಿತು. ಎಷ್ಟೊಂದು ಗುಹ್ಯ ವಿಚಾರಗಳಿವೆ, ಪ್ರಬಂಧವನ್ನು ಬರೆಯುವ ಹಾಗಿದೆ. ಇಲ್ಲಿ
ಸುಳ್ಳಿನ ಮಾತಿಲ್ಲ. ಇದು ಸೋಲು-ಗೆಲುವಿನ ಡ್ರಾಮಾ ಆಗಿದೆ. ಸತ್ಯಯುಗದಲ್ಲಿ ಪರಮಾತ್ಮನನ್ನು ನೆನಪು
ಮಾಡುವ ಅವಶ್ಯಕತೆಯಿಲ್ಲ. ಪರಮಾತ್ಮನನ್ನು ನೆನಪು ಮಾಡಿದರೆ ನಂತರ ನಾವು ಬ್ರಾಹ್ಮಣರನ್ನೂ ಅವರು
ರಚಿಸಿದ್ದಾರೆ ಎಂಬ ಮಾತನ್ನು ತಿಳಿದುಕೊಳ್ಳಬೇಕಾಗುತ್ತದೆ. ನಾನು ರಚಯಿತನಾಗಿದ್ದೇನೆ ಎಂಬುದನ್ನು
ತಮಗೆ ಸಮ್ಮುಖದಲ್ಲಿ ಹೇಳುತ್ತಾರೆ. ಇದು ಬ್ರಾಹ್ಮಣರ ಸಂಗಮದ ಹೊಸ ಜಗತ್ತಾಗಿದೆ.ಶಿಖೆಯನ್ನು ಯಾರು
ತಿಳಿದುಕೊಂಡಿಲ್ಲ ವಿರಾಟ ರೂಪವನ್ನು ಮಾಡುತ್ತಾರೆ, ಅದರಲ್ಲಿ ದೇವತಾ-ಕ್ಷತ್ರಿಯ-ವೈಶ್ಯ-ಶೂದ್ರರನ್ನು
ತೋರಿಸುತ್ತಾರೆ. ಬ್ರಾಹ್ಮಣರನ್ನು ಮರೆತು ಹೋಗಿದ್ದಾರೆ. ಸತ್ಯಯುಗದಲ್ಲಿ ದೇವತೆಗಳು, ಕಲಿಯುಗದಲ್ಲಿ
ಶೂದ್ರರು, ಸಂಗಮಯುಗೀ ಬ್ರಾಹ್ಮಣರನ್ನು ತಿಳಿದುಕೊಂಡೇ ಇಲ್ಲ. ಈ ರಹಸ್ಯವನ್ನು ತಂದೆಯೇ ಬಂದು
ತಿಳಿಸುತ್ತಾರೆ. ಬಾಬಾ ಹೇಳುತ್ತಾರೆ ಪವಿತ್ರತೆಯ ವಿನಃ ಎಂದೂ ಧಾರಣೆಯಾಗಲು ಸಾಧ್ಯವಿಲ್ಲ ಎಷ್ಟೊಂದು
ವೇದ-ಶಾಸ್ತ್ರಗಳಿವೆ, ಮಂದಿರಗಳಿಂದ ಚಿತ್ರವನ್ನು ತೆಗೆದು ಪರಿಕ್ರಮಣ ಮಾಡಿಸಿ ಮತ್ತೆ ಮಂದಿರಕ್ಕೆ
ತೆಗೆದುಕೊಂಡು ಹೋಗುತ್ತಾರೆ. ಬಾಬಾ ಅನುಭವಿಯಾಗಿದ್ದಾರೆ. ಶಾಸ್ತ್ರಗಳಿಂದ ಗಾಡಿಯನ್ನು ತುಂಬಿಕೊಂಡು
ಪರಿಕ್ರಮಣ ಮಾಡುತ್ತಾರೆ. ಹಾಗೆಯೇ ದೇವತೆಗಳ ಚಿತ್ರವನ್ನೂ ಸಹ ಗಾಡಿಯಲ್ಲಿ ಇಟ್ಟುಕೊಂಡು ಪರಿಕ್ರಮಣ
ಮಾಡುತ್ತಾರೆ. ಇವೆಲ್ಲವೂ ಭಕ್ತಿಮಾರ್ಗವಾಗಿದೆ.
ತಾವು ಶಿವ ಶಕ್ತಿಯರಾಗಿದ್ದೀರಿ, ತಾವು ಪೂರ್ಣ ವಿಶ್ವದ ಸದ್ಗತಿಯನ್ನು ಮಾಡುತ್ತೀರಿ. ಆದರೆ
ದಿಲ್ವಾಡಾ ಮಂದಿರ ಇವರದೇ ನೆನಪಾರ್ಥವಾಗಿದೆ ಎಂದು ಯಾರಿಗೂ ಗೊತ್ತಿಲ್ಲ. ಇಂತಹ ಮಂದಿರ ಎಲ್ಲಿಯೂ
ಇಲ್ಲ. ಜಗದಂಬೆಯು ಇದ್ದಾರೆ, ಶಿವಬಾಬಾ ಇದ್ದಾರೆ, ಎತ್ತರದ ಸ್ಥಾನದಲ್ಲಿ ಶಕ್ತಿಯರನ್ನು
ಇರಿಸಿದ್ದಾರೆ. ಭಕ್ತಿಮಾರ್ಗದಲ್ಲಿ ಪುನಃ ಅಂತಹ ಮಂದಿರವನ್ನು ಮಾಡುತ್ತಾರೆ ಮತ್ತೆ ವಿನಾಶವಾಗುತ್ತದೆ.
ಆಗ ಇದೆಲ್ಲವೂ ಸಮಾಪ್ತಿಯಾಗುತ್ತದೆ. ಸತ್ಯಯುಗದಲ್ಲಿ ಯಾವುದೇ ಮಂದಿರಗಳು ಇರುವುದಿಲ್ಲ. ಇದೆಲ್ಲವೂ
ಭಕ್ತಿಮಾರ್ಗದ ವಿಸ್ತಾರವಾಗಿದೆ. ಜ್ಞಾನ ಮಾರ್ಗದಲ್ಲಿ ಶಾಂತವಾಗಿರಬೇಕು, ಒಬ್ಬ ಶಿವ ತಂದೆಯನ್ನು
ನೆನಪು ಮಾಡಬೇಕು. ಶಿವ ತಂದೆಯನ್ನು ಮರೆತು ಅನ್ಯರನ್ನು ನೆನಪು ಮಾಡಿದರೆ ಅಂತಿಮದಲ್ಲಿ ಫೇಲ್
ಆಗುತ್ತೀರಿ. ಫೇಲ್ ಆಗಬಾರದು. ಮನುಷ್ಯರು ಸಾಯುವ ಸಮಯದಲ್ಲಿ ಅವರಿಗೆ ರಾಮ-ರಾಮ ಎಂದು ಹೇಳಿ
ಎನ್ನುತ್ತಾರೆ ಆದರೆ ಆ ರೀತಿ ನೆನಪು ಬರುವುದಿಲ್ಲ. ಆದರೂ ಸಹ ಗಾಯನವಿದೆ- ಅಂತ್ಯಕಾಲದಲ್ಲಿ ಯಾರು
ನಾರಾಯಣನನ್ನು ಸ್ಮರಿಸುತ್ತಾರೆಯೋ........ ಈ ಮಾತು ಈ ಸಮಯದ್ದಾಗಿದೆ. ಬಿದುರಿನ ಕಾಡಿಗೆ ಬೆಂಕಿ
ಬೀಳಲೇಬೇಕು. ಅಂತ್ಯಕಾಲದಲ್ಲಿ ಯಾರು ನಾರಾಯಣನನ್ನು ಸ್ಮರಣೆ ಮಾಡುತ್ತಾರೆ. ಖಂಡಿತ ಈಗ ತಮಗೆ
ಗೊತ್ತಿದೆ, ನಾವು ನಾರಾಯಣ ಅಥವಾ ಲಕ್ಷ್ಮಿಯನ್ನು ವರಿಸುತ್ತೇವೆ. ಸ್ವರ್ಗಕ್ಕಾಗಿ ತಯಾರು
ಆಗುತ್ತಿದ್ದೀರಿ ಬಾಬಾನ ವಿನಃ ಮತ್ತ್ಯಾರೂ ಈ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಈ ಬಾಬಾ ಸಹ
ಹೇಳುತ್ತಾರೆ - ಈಗ ನಮಗೆ ಶಿವಬಾಬಾ ಹೇಳಿದರು ಎಂದು. ಇದಕ್ಕೆ ಶಕ್ತಿಸೇನೆ ಅಥವಾ ಪಾಂಡವಸೇನೆ
ಎನ್ನಲಾಗುತ್ತದೆ. ಮಹಾರಥಿಗಳಿಗೆ ಪಾಂಡವರು ಎಂಬ ಹೆಸರಿದೆ. ಶಕ್ತಿಯರ ಸವಾರಿಯನ್ನು ಸಿಂಹದ ಮೇಲೆ
ತೋರಿಸುತ್ತಾರೆ. ತಂದೆಯು ಹೇಳುತ್ತಾರೆ- ಹೇಗೆ ಕಲ್ಪದ ಮೊದಲು ಸಹಜ ರಾಜಯೋಗವನ್ನು ಕಲಿಸಿದ್ದೆನು ಅದೇ
ರೀತಿ ಕಲಿಸುತ್ತಿದ್ದೇನೆ. ಯಾವುದೆಲ್ಲಾ ಪಾತ್ರವು ನಡೆಯುವುದೋ ಕಲ್ಪ-ಕಲ್ಪದಲ್ಲಿಯೂ ಅದೇ
ನಡೆಯುತ್ತದೆ. ಇದರಲ್ಲಿ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಮತ್ತೆ ಕಲ್ಪ-ಕಲ್ಪದಲ್ಲಿಯೂ ಈ ಪಾತ್ರವು
ನಡೆಯುತ್ತದೆ. ತಂದೆಯು ತಿಳಿಸುತ್ತಾರೆ - ನಿಮಗೆ ರಹಸ್ಯಯುಕ್ತವಾದ ಮಾತುಗಳನ್ನು ತಿಳಿಸುತ್ತೇನೆ.
ಕೊನೆಯಲ್ಲಿ ಏನಾಗುತ್ತದೆಯೋ ಮತ್ತೆ ಕೊನೆಯಲ್ಲಿಯೇ ತಿಳಿಸುತ್ತೇನೆ. ಈಗ ಎಲ್ಲವೂ ಹೇಳಬೇಕೆಂದರೆ
ಹಿಂತಿರುಗಿ ಹೋಗಿ ಬಿಡಲೇನು? ಕೊನೆಯ ತನಕ ಹೊಸ ವಿಚಾರಗಳನ್ನು ಹೇಳುತ್ತಲೇ ಇರುತ್ತಾರೆ. ನಾವು
ಗೀತೆಯ ಮಹಿಮೆಯನ್ನು ಬಹಳ ಮಾಡುತ್ತೇವೆ. ಆದರೆ ಆ ಗೀತೆ ಅಥವಾ ಮಹಾಭಾರತದಲ್ಲಿ ಹಿಂಸಕ ಯುದ್ಧ
ಮುಂತಾದವನ್ನು ತೋರಿಸಿದ್ದಾರೆ. ಈಗ ಯುದ್ಧವಂತೂ ಇಲ್ಲವೇ ಇಲ್ಲ. ನಿಮ್ಮದಂತೂ ಯೋಗಬಲದ ಮಾತಾಗಿದೆ.
ಅಹಿಂಸೆ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಕೇವಲ ಸ್ತ್ರೀಯನ್ನು ನರಕದ ದ್ವಾರ ಎಂದು ಹೇಳಿ
ಬಿಟ್ಟರು. ವಾಸ್ತವಿಕವಾಗಿ ಇಬ್ಬರೂ ಸಹ ನರಕದ ದ್ವಾರ ಆಗಿದ್ದಾರೆ. ಈಗ ಮತ್ತೆ ಅವರಿಗೆ ಸ್ವರ್ಗದ
ದ್ವಾರವನ್ನಾಗಿ ಯಾರು ಮಾಡಿದರು ಅದು ಭಗವಂತನದೇ ಶಕ್ತಿಯಾಗಿದೆ. ಈ ಗೀತೆಯನ್ನು ಬಾಬಾರವರೇ
ಮಾಡಿಸಿದ್ದಾರೆ. ಮಾಡುವವರಲ್ಲಿ ಕೆಲವರು ಸರಿಯಾಗಿ ಮಾಡಿದ್ದಾರೆ, ಕೆಲವರು ತಪ್ಪು ಮಾಡಿದ್ದಾರೆ.
ಎಲ್ಲವನ್ನೂ ಬೆರೆಸಿ ಬಿಟ್ಟಿದ್ದಾರೆ. ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ........ ಈ ರೀತಿ
ಗೀತೆಯನ್ನು ನಾನು ಮಾಡಿದ್ದೇನೆ. ಅಂದಮೇಲೆ ಇಲ್ಲಿನ ಮಾತುಗಳೇ ಬೇರೆಯಾಗಿವೆ. ಗೋಶಾಲೆಯೂ ಇದೆ,
ವನವಾಸವೂ ಸಹ ಇದೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ನಾವು ಯಾರನ್ನಾದರೂ ಓಡಿಸಿದ್ದೇವೆಯೇ?
ಕರಾಚಿಗೆ ಬಂದು ಬಿಡಿ ಎಂದು ಯಾರಿಗಾದರೂ ಹೇಳಿದ್ದೇವೆಯೇ? ಕೇಳಿ ಈ ಶಕ್ತಿಯರನ್ನು. ಇದು
ಡ್ರಾಮಾದಲ್ಲಿ ಪಾತ್ರವಿತ್ತು. ಯಾರ ಮೇಲೆ ಅತ್ಯಾಚಾರವಾಯಿತೋ ಅವರು ಓಡಿ ಬಂದರು. ಅಂದಮೇಲೆ ಸರಿ
ಯಾವುದು ಎಂಬುದನ್ನು ತಂದೆಯು ಹೇಳುತ್ತಾರೆ. ಶಾಸ್ತ್ರಗಳಲ್ಲಿ ಏನು ಬರೆದಿದ್ದಾರೆ ಅದು
ಭಕ್ತಿಮಾರ್ಗವಾಗಿದೆ, ಅದರಿಂದ ನನ್ನ ಜೊತೆ ಮಿಲನ ಮಾಡಲು ಸಾಧ್ಯವಿಲ್ಲ. ನನ್ನ ಬಳಿಗೆ ಬರಲು
ಸಾಧ್ಯವಿಲ್ಲ. ನಾನು ಮಾರ್ಗದರ್ಶಕನಾಗಿ ಇಲ್ಲಿಗೆ ಬರಬೇಕಾಗುತ್ತದೆ. ಗೃಹಸ್ಥಿ ಆಗದವರ ಶರೀರವನ್ನು
ಏಕೆ ತೆಗೆದುಕೊಂಡಿಲ್ಲ ಎಂದು ಕೇಳುತ್ತಾರೆ. ಅರೆ! ನಾನಂತೂ ಗೃಹಸ್ಥಿಯ ತನುವಿನಲ್ಲಿಯೇ ಬಂದು ಅವರಿಗೆ
ಜ್ಞಾನವನ್ನು ಕೊಡಬೇಕು. ಅವರದೇ 84 ಜನ್ಮಗಳ ಬಗ್ಗೆ ಹೇಳುತ್ತೇನೆ ಅಂದಮೇಲೆ ಎಷ್ಟೊಂದು ಗುಹ್ಯ
ವಿಚಾರಗಳಾಗಿವೆ. ಇದು ಹೊಸ ಧರ್ಮಕ್ಕಾಗಿ ಹೊಸ ಮಾತುಗಳಾಗಿವೆ. ಜ್ಞಾನವೂ ಸಹ ಹೊಸದಾಗಿದೆ. ತಂದೆಯು
ಹೇಳುತ್ತಾರೆ - ಕಲ್ಪ-ಕಲ್ಪದಲ್ಲಿಯೂ ನಾನು ಈ ಜ್ಞಾನವನ್ನು ಹೇಳುತ್ತೇನೆ. ಬೇರೆ ಯಾರೂ ಸಹ ನಾನು
ಕಲ್ಪ-ಕಲ್ಪದಲ್ಲಿ ಧರ್ಮ ಸ್ಥಾಪನೆ ಮಾಡಲು ಬರುತ್ತೇನೆಂದು ಹೇಳುವುದಿಲ್ಲ. ಲಕ್ಷ್ಮೀ-ನಾರಾಯಣರಿಬ್ಬರೂ
ಸಹ ನಾವು ಮತ್ತೆ ರಾಜ್ಯಭಾರ ಮಾಡಲು ಬಂದಿದ್ದೇವೆಂದು ಹೇಳುವುದಿಲ್ಲ. ಅಲ್ಲಿ ಈ ಜ್ಞಾನವೇ
ಪ್ರಾಯಲೋಪವಾಗುತ್ತದೆ. ಅನೇಕ ಶಾಸ್ತ್ರಗಳಂತೂ ನಂತರದಲ್ಲಿ ಮಾಡಲಾಯಿತು. ನಾವು ಬ್ರಾಹ್ಮಣರಿಗೆ
ಗೀತೆಯು ಒಂದೇ ಇದೆ. ಧರ್ಮವನ್ನೂ ಸಹ ಸ್ಥಾಪನೆ ಮಾಡುತ್ತೇನೆ ಹಾಗೂ ಸರ್ವರ ಸದ್ಗತಿಯನ್ನು
ಮಾಡುತ್ತೇನೆ. ಎರಡು ಕೆಲಸವಾಯಿತಲ್ಲವೆ. ಈಗ ನಾನು ಯಾವುದು ಹೇಳುತ್ತೇನೆಯೋ ಅದು ಸರಿಯೇ ಅಥವಾ ಅವರದು
ಸರಿಯೇ ಎಂಬುದನ್ನು ತಾವು ತಿಳಿದುಕೊಂಡಿದ್ದೀರಿ. ನಾನು ಯಾರು? ನಾನು ಸತ್ಯವಾಗಿದ್ದೇನೆ, ನಾನು
ಯಾವುದೇ ವೇದ-ಶಾಸ್ತ್ರವನ್ನು ಹೇಳುವುದಿಲ್ಲ. ಭಲೆ ಇವರು ಬಹಳ ಓದಿದ್ದಾರೆ ಆದರೆ ಇವರು
ಹೇಳುತ್ತಾರೇನು. ಇದಂತೂ ಶಿವಬಾಬಾ ಹೊಸ-ಹೊಸ ವಿಚಾರಗಳನ್ನು ತಿಳಿಸುತ್ತಾರೆ, ಅವರು
ಅಶರೀರಿಗಳಾಗಿದ್ದಾರೆ. ಕೇವಲ ಈ ಮುರುಳಿಯನ್ನು ಹೇಳುವ ಕೆಲಸವನ್ನು ಮಾಡಲು ಬರುತ್ತಾರೆ.
ಆಹಾರ-ಪಾನೀಯಗಳನ್ನು ಸ್ವೀಕರಿಸಲು ಬರುವುದಿಲ್ಲ. ನಾನು ಬರುವುದೇ ತಾವು ಮಕ್ಕಳಿಗೆ ಮತ್ತೆ
ರಾಜಧಾನಿಯನ್ನು ಕೊಡಲು. ಸ್ವಾದವನ್ನು ಇವರ ಆತ್ಮವು ತೆಗೆದುಕೊಳ್ಳುತ್ತದೆ.
ಪ್ರತಿಯೊಬ್ಬ ಧರ್ಮವು ಬೇರೆಯಾಗಿದೆ. ಅವರು ತಮ್ಮ ಧರ್ಮ ಶಾಸ್ತ್ರವನ್ನು ಓದಬೇಕು. ಇಲ್ಲಿ ಅನೇಕ
ಶಾಸ್ತ್ರಗಳನ್ನು ಓದುತ್ತಾ ಇರುತ್ತಾರೆ, ಏನೂ ಸಾರವಿಲ್ಲ. ಎಷ್ಟು ಓದುತ್ತಿರುತ್ತಾರೆ, ಜಗತ್ತು
ನಿಸ್ಸಾರವಾಗುತ್ತಾ ಹೋಗುತ್ತದೆ. ತಮೋಪ್ರಧಾನ ಆಗಲೇಬೇಕು. ಮೊಟ್ಟ ಮೊದಲು ಸೃಷ್ಟಿಯಲ್ಲಿ ತಾವು
ಬಂದಿದ್ದೀರಿ. ತಾವು ಬ್ರಾಹ್ಮಣರು ಮಾತಾಪಿತರಿಂದ ಜನ್ಮವನ್ನು ಪಡೆದಿದ್ದೀರಿ. ಆ ಕಡೆ ಆಸುರೀ
ಕುಟುಂಬವಿದೆ, ಇಲ್ಲಿ ಈಶ್ವರೀಯ ಕುಟುಂಬ ಮತ್ತೆ ಹೋಗಿ ದೈವೀ ಮಡಿಲನ್ನು ಪಡೆಯುತ್ತೀರಿ, ಸ್ವರ್ಗದ
ಮಾಲೀಕರಾಗುತ್ತೀರಿ. ಮಾತಾಪಿತರ ಮತದಂತೆ ನಡೆಯುತ್ತೀರೆಂದಾಗ ಸ್ವರ್ಗದ ಅಪಾರ ಸುಖ-ಸಂಪತ್ತು
ಸಿಗುತ್ತದೆ. ಬಾಕಿ ರುದ್ರ ಜ್ಞಾನ ಯಜ್ಞದಲ್ಲಿ ವಿಘ್ನವಂತೂ ಖಂಡಿತ ಬೀಳುತ್ತದೆ. ತಂದೆಯು
ತಿಳಿಸುತ್ತಾರೆ - ಮಕ್ಕಳೇ ವಿಕಾರಗಳ ಮೇಲೆ ವಿಜಯಿಗಳಾಗುವುದರಿಂದಲೇ ತಾವು ಜಗತ್ಜೀತರಾಗಲು ಸಾಧ್ಯ.
ಮದುವೆ ಮಾಡಿಕೊಳ್ಳದಿದ್ದರೆ ನಿಶಕ್ತರಾಗುತ್ತೀರೆಂದಲ್ಲ. ಸನ್ಯಾಸಿಗಳು ಪವಿತ್ರರಾಗುತ್ತಾರೆ ಮತ್ತೆ
ಅವರು ಎಷ್ಟೊಂದು ದಪ್ಪನಾಗಿ, ಆರೋಗ್ಯವಾಗಿ ಇರುತ್ತಾರೆ. ಇಲ್ಲಂತೂ ಮೆದುಳಿನ ಕೆಲಸವಾಗಿದೆ.
ಶ್ರಮವಿದೆ, ದಧೀಚಿ ಋಷಿಯ ಉದಾಹರಣೆ ಇದೆಯಲ್ಲವೆ. ಸನ್ಯಾಸಿಗಳಿಗಂತೂ ಬಹಳ ಸಂಪತ್ತು ಸಿಗುತ್ತದೆ.
ಬಾಬಾ ಸ್ವಯಂ ಬಹಳ ಪುಷ್ಠಿದಾಯಕ ಆಹಾರ ತಿನ್ನಿಸುತ್ತಾರೆ. ಇಲ್ಲಿ ಬಹಳ ಪಥ್ಯೆ ಇರಬೇಕಾಗುತ್ತದೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಜ್ಞಾನದ ಒಳ್ಳೆಯ ಧಾರಣೆಗಾಗಿ ಪವಿತ್ರತೆಯ ವ್ರತವನ್ನು ತಮ್ಮದನ್ನಾಗಿ ಮಾಡಿಕೊಳ್ಳಬೇಕಾಗಿದೆ.
ಅಂತ್ಯಕಾಲವಾಗಿದೆ, ಆದ್ದರಿಂದ ಒಬ್ಬ ತಂದೆಯ ವಿನಃ ಬೇರೆ ಯಾರದೇ ನೆನಪು ಬರಬಾರದು - ಈ ರೀತಿ
ಅಭ್ಯಾಸ ಮಾಡಬೇಕು.
2. ದಧೀಚಿ ಋಷಿಯ ಹಾಗೆ ಸೇವೆ ಮಾಡುತ್ತಾ ವಿಕಾರಗಳ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಂಡು
ಜಗತ್ಜೀತರಾಗಬೇಕು.
ವರದಾನ:
ಬುದ್ಧಿಯನ್ನು
ಡೈರೆಕ್ಷನ್ ಪ್ರಮಾಣ ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತ ಮಾಡುವಂತಹ ಮಾಸ್ಟರ್ ಸರ್ವ ಶಕ್ತಿವಾನ್ ಭವ.
ಕೆಲವು ಮಕ್ಕಳು
ಯಾವಾಗ ಯೋಗದಲ್ಲಿ ಕುಳಿತುಕೊಳ್ಳುತ್ತಾರೆ, ಆಗ ಆತ್ಮ ಅಭಿಮಾನಿಯಾಗುವ ಬದಲು ಸೇವೆ ನೆನಪಿಗೆ ಬರುವುದು,
ಆದರೆ ಹೀಗೆ ಆಗಬಾರದು. ಏಕೆಂದರೆ ಅಂತಿಮ ಸಮಯದಲ್ಲಿ ಒಂದುವೇಳೆ ಅಶರೀರಿ ಆಗುವ ಬದಲು ಸೇವೆಯ ಸಂಕಲ್ಪ
ನಡೆದರು ಸಹಾ ಸೆಕೆಂಡ್ ನ ಪೇಪರ್ ನಲ್ಲಿ ಫೇಲ್ ಆಗಿ ಬಿಡುವಿರಿ. ಆ ಸಮಯದಲ್ಲಿ ಕೇವಲ ತಂದೆಯ,
ನಿರಾಕಾರಿ, ನಿರ್ವಿಕಾರಿ, ನಿರಹಂಕಾರಿ ಅಲ್ಲದೆ ಬೇರೆ ಏನೂ ನೆನಪಿರಬಾರದು. ಸೇವೆಯಲ್ಲಿ ಮತ್ತೆ
ಸಾಕಾರದಲ್ಲಿ ಬಂದು ಬಿಡುವಿರಿ. ಆದ್ದರಿಂದ ಈ ಅಭ್ಯಾಸ ಮಾಡಿ ಯಾವ ಸಮಯದಲ್ಲಿ ಯಾವ ಸ್ಥಿತಿಯಲ್ಲಿ
ಸ್ಥಿತರಾಗಲು ಬಯಸುವಿರೊ ಆ ಸ್ಥಿತಿಯಲ್ಲಿ ಸ್ಥಿತರಾಗಬೇಕು - ಆಗ ಹೇಳಲಾಗುವುದು. ಮಾಸ್ಟರ್
ಸರ್ವಶಕ್ತಿವಾನ್, ಕಂಟ್ರೋಲಿಂಗ್ ಮತ್ತು ರೂಲಿಂಗ್ ಪವರ್ ಉಳ್ಳವರು.
ಸ್ಲೋಗನ್:
ಯಾವುದೇ
ಪರಿಸ್ಥಿತಿಯನ್ನು ಸಹಜವಾಗಿ ಪಾರು ಮಾಡಲು ಸಾಧನವಾಗಿದೆ - ಒಂದೇ ಬಲ, ಒಂದೇ ಭರವಸೆ.