19.11.2018 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಜ್ಞಾನ
ಯೊಗದ ಶಕ್ತಿಯಿಂದ ವಾಯು ಮಂಡಲವನ್ನು ಶುದ್ಧ ಮಾಡಬೇಕು, ಸ್ವದರ್ಶನ ಚಕ್ರದಿಂದ ಮಾಯೆಯ ಮೇಲೆ ಜಯ
ಗಳಿಸಬೇಕು”
ಪ್ರಶ್ನೆ:
ಯಾವ ಒಂದು
ಮಾತಿನಿಂದ ಆತ್ಮ ಎಂದೂ ಜ್ಯೋತಿಯಲ್ಲಿ ಲೀನ ಆಗುವುದಿಲ್ಲ ಎನ್ನುವುದು ಸಿದ್ಧ ಆಗುತ್ತದೆ?
ಉತ್ತರ:
ಮಾಡಿ
ಮಾಡಲ್ಪಟ್ಟಿರುವುದು ಮತ್ತೆ ಮಾಡಲ್ಪಡುತ್ತಿದೆ ಎಂದು ಹೇಳುತ್ತಾರೆ.... ಅಂದರೆ ಆತ್ಮ ತನ್ನ
ಪಾತ್ರವನ್ನು ಪುನರಾವರ್ತನೆ ಮಾಡುತ್ತದೆ. ಜ್ಯೋತಿ ಜ್ಯೋತಿಯಲ್ಲಿ ಲೀನ ಆದರೆ ಆತ್ಮದ ಪಾತ್ರ ಸಮಾಪ್ತಿ
ಆಯಿತು ನಂತರ ಅನಾದಿ ನಾಟಕ ಎಂದು ಹೇಳುವುದು ತಪ್ಪಾಗುತ್ತದೆ. ಆತ್ಮ ಒಂದು ಹಳೆಯ ಬಟ್ಟೆಯನ್ನು
ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತದೆ, ಲೀನ ಆಗುವುದಿಲ್ಲ.
ಗೀತೆ:
ಓ ದೂರದ
ಪ್ರಯಾಣಿಕನೇ....
ಓಂ ಶಾಂತಿ.
ಯಾರು ಯೋಗಿ ಮತ್ತು ಜ್ಞಾನಿ ಮಕ್ಕಳಿದ್ದಾರೆ ಮತ್ತು ಬೇರೆಯವರಿಗೆ ತಿಳಿಸಿಕೊಡಬಲ್ಲವರಾಗಿದ್ದರೆ,
ಅವರು ಈ ಗೀತೆಯ ಅರ್ಥವನ್ನು ಯಥಾರ್ಥವಾಗಿ ತಿಳಿದುಕೊಳ್ಳಲು ಸಾಧ್ಯ. ಮನುಷ್ಯರೆಲ್ಲರೂ ಗೋರಿಯಲ್ಲಿ
ಹೂತು ಹೋಗಿದ್ದಾರೆ. ಯಾರ ಜ್ಯೋತಿ ನಂದಿ ಹೋಗಿದೆ, ಯಾರು ತಮೋಪ್ರಧಾನ ಆಗಿದ್ದಾರೆ ಅವರಿಗೆ
ಗೋರಿಯಲ್ಲಿರುವವರು ಎಂದು ಹೇಳಲಾಗುತ್ತದೆ. ಯಾರು ಸ್ಥಾಪನೆ ಮಾಡಿದ್ದರು ಅನೇಕ ಜನ್ಮ ಪಾಲನೆಗಾಗಿ
ನಿಮಿತ್ತ ಆದರು, ಅವರೆಲ್ಲರೂ ತಮ್ಮ ಜನ್ಮಗಳನ್ನು ಪೂರ್ಣ ಮಾಡಿರುವರು. ಆದಿಯಿಂದ ಅಂತ್ಯದವರೆಗೂ ಯಾವ
ಯಾವ ಧರ್ಮಗಳ ಸ್ಥಾಪನೆ ಆಗಿವೆ-ಲೆಕ್ಕ ಮಾಡಬಹುದು. ಸೀಮಿತ ನಾಟಕದಲ್ಲಿ ಯಾರು ಮುಖ್ಯ ರಚೈತಾ,
ನಿರ್ದೇಶಕ, ನಟರು ಇರುತ್ತಾರೆ ಅವರಿಗೆ ಮಾನ್ಯತೆ ಇರುತ್ತದೆ. ಎಷ್ಟು ಬಹುಮಾನಗಳು ಸಿಗುತ್ತದೆ.
ತಮ್ಮ ಪ್ರತಿಭೆ ತೋರಿಸುತ್ತಾರೆ ಅಲ್ಲವೆ. ನಿಮ್ಮದಾಗಿದೆ ಜ್ಞಾನ ಯೋಗದ ಪ್ರತಿಭೆ. ಮೃತ್ಯು
ಎದುರಿಗಿದೆ ಎನ್ನುವುದು ಮನುಷ್ಯರಿಗೆ ಗೊತ್ತಿಲ್ಲ, ನಾವು ನಾಟಕದಲ್ಲಿ ಎಷ್ಟು ಜನ್ಮ ಪಡೆಯುತ್ತೇವೆ,
ಎಲ್ಲಿಂದ ಬರುತ್ತೇವೆ? ಎಲ್ಲ ಜನ್ಮಗಳನ್ನು ವಿಸ್ತಾರವಾಗಿ ನಾವು ನೀವು ತಿಳಿದುಕೊಳ್ಳಲು
ಸಾಧ್ಯವಿಲ್ಲ. ಇನ್ನು ಈ ಜನ್ಮದಲ್ಲಿ ಭವಿಷ್ಯಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ. ದೇವತೆ ಅಂತೂ
ಆಗುತ್ತೇವೆ. ಆದರೆ ಯಾವ ಪದವಿ ಪಡೆಯುತ್ತೇವೆ ಅದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ. ನಿಮಗೆ
ಗೊತ್ತಿದೆ ಈ ಲಕ್ಷ್ಮೀ ನಾರಾಯಣರು 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ. ಈಗ ಅವರು ಅವಶ್ಯವಾಗಿ
ರಾಜ ರಾಣಿ ಆಗುವರು. ಲಕ್ಷಣಗಳೂ ಇವೆ. ಸಾಕ್ಷಾತ್ಕಾರವನ್ನೂ ಮಾಡಿಸುತ್ತಾರೆ. ಭಕ್ತಿ ಮಾರ್ಗದಲ್ಲಿಯೂ
ಸಾಕ್ಷಾತ್ಕಾರ ಆಗುತ್ತದೆ. ಅವರು ಯಾರ ಧ್ಯಾನ ಮಾಡುತ್ತಾರೆ ಅವರ ಸಾಕ್ಷಾತ್ಕಾರ ಆಗುತ್ತದೆ. ಕಪ್ಪು
ಕೃಷ್ಣನ ಚಿತ್ರ ನೋಡುತ್ತಿದ್ದರೆ, ಅದೇ ಧ್ಯಾನ ಮಾಡುತ್ತಿದ್ದರೆ ಅಂತಹದೇ ಸಾಕ್ಷಾತ್ಕಾರ ಆಗುತ್ತದೆ.
ಆದರೆ ಕೃಷ್ಣ ಈ ರೀತಿ ಕಪ್ಪಾಗಿರುವುದಿಲ್ಲ. ಮನುಷ್ಯರಿಗೆ ಈ ಮಾತಿನ ಯಾವ ಜ್ಞಾನವೂ ಇರುವುದಿಲ್ಲ.
ಈಗ ನೀವು ಪ್ರತ್ಯಕ್ಷದಲ್ಲಿದ್ದೀರಿ. ಸೂಕ್ಷ್ಮ ವತನದಲ್ಲಿಯೂ ನೋಡುತ್ತೀರಿ, ವೈಕುಂಠದಲ್ಲಿಯೂ
ನೋಡುತ್ತೀರಿ. ಆತ್ಮ ಮತ್ತು ಪರಮಾತ್ಮನ ಜ್ಞಾನ ಇದೆ. ಆತ್ಮನ ಸಾಕ್ಷಾತ್ಕಾರ ಆಗುತ್ತದೆ. ಇಲ್ಲಿ ನೀವು
ಯಾವ ಸಾಕ್ಷಾತ್ಕಾರ ಮಾಡುತ್ತೀರಿ ಅದರ ಜ್ಞಾನ ನಿಮಗೆ ಇದೆ. ಹೊರಗಿನವರಿಗೆ ಆತ್ಮದ ಸಾಕ್ಷಾತ್ಕಾರ
ಆದರೂ ಅದರ ಜ್ಞಾನ ಅವರಿಗೆ ಇಲ್ಲ. ಅವರು ಆತ್ಮವೇ ಪರಮಾತ್ಮ ಎಂದು ಹೇಳುತ್ತಾರೆ. ಆತ್ಮ ನಕ್ಷತ್ರ
ಆಗಿದೆ. ಇದಂತೂ ಕಂಡುಬರುತ್ತದೆ. ಎಷ್ಟು ಜನರಿರುವರೊ ಅಷ್ಟು ಆತ್ಮರಿದ್ದಾರೆ. ಮನುಷ್ಯರ ಶರೀರ ಈ
ಕಣ್ಣುಗಳಿಗೆ ಕಾಣಿಸುತ್ತದೆ. ಆತ್ಮವನ್ನು ದಿವ್ಯ ದೃಷ್ಟಿಯ ಮೂಲಕ ನೋಡಲು ಸಾಧ್ಯ. ಮನುಷ್ಯರ ಬಣ್ಣ
ರೂಪ ಭಿನ್ನ ಭಿನ್ನವಾಗಿದೆ, ಆತ್ಮ ಒಂದೇ ಸಮಾನವಾಗಿದೆ. ಪಾತ್ರ ಮಾತ್ರ ಎಲ್ಲರದೂ ಭಿನ್ನ
ಭಿನ್ನವಾಗಿದೆ. ಮನುಷ್ಯರು ಚಿಕ್ಕವರು ದೊಡ್ಡವರು ಇರುತ್ತಾರೆ ಆದರೆ ಆತ್ಮ ಆ ರೀತಿ ಇರುವುದಿಲ್ಲ.
ಆತ್ಮದ ಗಾತ್ರ ಒಂದೇ ಇದೆ. ಆತ್ಮ ಜ್ಯೋತಿಯಲ್ಲಿ ಲೀನ ಆಗಿ ಬಿಟ್ಟರೆ ಪಾತ್ರ ಹೇಗೆ ಪುನರಾವರ್ತನೆ
ಆಗಲು ಸಾಧ್ಯ? ಮಾಡಿ ಮಾಡಲ್ಪಟ್ಟಿರುವುದು ನಡೆಯುತ್ತಿದೆ ಎನ್ನುವ ಗಾಯನ ಇದೆ. ಈ ಅನಾದಿ ವಿಶ್ವ
ನಾಟಕ ಚಕ್ರ ಸುತ್ತುತ್ತಿರುತ್ತದೆ. ಇದು ನೀವು ಮಕ್ಕಳಿಗೆ ಗೊತ್ತಿದೆ. ಸೊಳ್ಳೆಗಳ ತರಹ ಆತ್ಮರು
ವಾಪಸ್ ಹೋಗುತ್ತಾರೆ. ಸೊಳ್ಳೆಗಳನ್ನು ಈ ಕಣ್ಣಿನಿಂದ ನೋಡಬಹುದು. ಆತ್ಮವನ್ನು ದಿವ್ಯ ದೃಷ್ಟಿ
ಇಲ್ಲದೇ ನೋಡಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಆತ್ಮದ ಸಾಕ್ಷಾತ್ಕಾರದ ಅವಶ್ಯಕತೆ ಇರುವುದಿಲ್ಲ.
ನಾವು ಆತ್ಮ ಹಳೆಯ ಶರೀರ ಬಿಟ್ಟು ಹೊಸದನ್ನು ತೆಗೆದುಕೊಳ್ಳಬೇಕು ಎನ್ನುವುದು ತಿಳಿದಿರುತ್ತದೆ.
ಪರಮಾತ್ಮನನ್ನು ತಿಳಿದಿರುವುದಿಲ್ಲ. ಪರಮಾತ್ಮನನ್ನು ತಿಳಿದುಕೊಂಡಿದ್ದರೆ ಸೃಷ್ಟಿ ಚಕ್ರವು
ತಿಳಿದಿರುತ್ತಿತ್ತು. ಗೀತೆಯಲ್ಲಿ ಹೇಳುತ್ತಾರೆ - ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗು.
ಕೊನೆಗೆ ಬಹಳ ಪಶ್ಚಾತ್ತಾಪ ಪಡುತ್ತಾರೆ. ಎಲ್ಲರಿಗೂ ನಿಮಂತ್ರಣ ಸಿಗುತ್ತದೆ. ನಿಮಂತ್ರಣ ಕೊಡಲು
ಎಷ್ಟು ಯುಕ್ತಿಗಳನ್ನು ಮಾಡಲಾಗಿದೆ.
ಶಾಂತಿ ಶಾಂತಿ ಎಂದು ಎಲ್ಲರೂ ಹೇಳುತ್ತಾರೆ ಆದರೆ ಶಾಂತಿಯ ಅರ್ಥವನ್ನು ತಿಳಿದಿಲ್ಲ. ಶಾಂತಿ
ಹೇಗಿರುತ್ತದೆ ಎನ್ನುವುದು ನಿಮಗೆ ತಿಳಿದಿದೆ. ಯಾವ ರೀತಿ ಗಾಣದಲ್ಲಿ ಸಾಸಿವೆ ಪುಡಿ ಆಗುತ್ತದೆ ಅದೇ
ರೀತಿ ಎಲ್ಲರ ಶರೀರ ವಿನಾಶದಲ್ಲಿ ಸಮಾಪ್ತಿ ಆಗುತ್ತದೆ. ಆತ್ಮಗಳು ಸಮಾಪ್ತಿ ಆಗುವುದಿಲ್ಲ. ಅವರು
ಹೋಗಿ ಬಿಡುತ್ತಾರೆ. ಆತ್ಮರು ಸೊಳ್ಳೆಗಳ ಸಮಾನ ಓಡಿ ಹೋಗುತ್ತಾರೆ ಎಂದು ಬರೆಯಲಾಗಿದೆ. ಎಲ್ಲ
ಪರಮಾತ್ಮರು ಓಡುತ್ತಾರೆ ಎಂದು ಬರೆದಿಲ್ಲ. ಮನುಷ್ಯರು ಏನೂ ತಿಳಿದುಕೊಂಡಿಲ್ಲ. ಆತ್ಮ ಮತ್ತು
ಪರಮಾತ್ಮನಲ್ಲಿ ಏನು ವ್ಯತ್ಯಾಸ ಇದೆ ಅದೂ ಸಹ ತಿಳಿದಿಲ್ಲ. ನಾವೆಲ್ಲರೂ ಸಹೋದರರು ಎಂದು ಹೇಳುತ್ತಾರೆ,
ಹಾಗಾದರೆ ಸಹೋದರರಾಗಿ ಇರಬೇಕು. ಸತ್ಯಯುಗದಲ್ಲಿ ಸಹೋದರರು ಅಥವಾ ಸಹೋದರ ಸಹೋದರಿಯರು ಎಲ್ಲರೂ
ಪರಸ್ಪರ ಕ್ಷೀರ ಖಂಡವಾಗಿರುತ್ತಾರೆ ಎನ್ನುವುದು ಅವರಿಗೆ ತಿಳಿದಿಲ್ಲ. ಅಲ್ಲಿ ಉಪ್ಪು ನೀರಾಗುವ ಮಾತೇ
ಇಲ್ಲ. ಇಲ್ಲಿ ನೋಡಿ ಈಗೀಗ ಕ್ಷೀರ ಖಂಡ ಆಗಿರುತ್ತಾರೆ, ಈಗೀಗ ಉಪ್ಪು ನೀರಾಗುತ್ತಾರೆ. ಒಂದು ಕಡೆ
ಚೀನಿ ಹಿಂದೂ, ಸಹೋದರರು ಎಂದು ಹೇಳುತ್ತಾರೆ. ನಂತರ ಅವರ ಪ್ರತಿಕೃತಿಯನ್ನು ಮಾಡಿ ಸುಡುತ್ತಾರೆ.
ದೈಹಿಕ ಸಹೋದರರ ಗತಿ ನೋಡಿ. ಆತ್ಮಿಕ ಸಂಬಂಧ ಅಂತೂ ಅವರಿಗೆ ಗೊತ್ತಿಲ್ಲ. ನಿಮಗೆ ತಂದೆ
ತಿಳಿಸಿಕೊಡುತ್ತಾರೆ ನಿಮ್ಮನ್ನು ನೀವು ಆತ್ಮ ಎಂದು ತಿಳಿಯಿರಿ. ದೇಹ ಅಭಿಮಾನದಲ್ಲಿ ಸಿಕ್ಕಿ
ಹಾಕಿಕೊಳ್ಳಬಾರದು. ಕೆಲವರು ದೇಹ ಅಭಿಮಾನದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ತಂದೆ ಹೇಳುತ್ತಾರೆ
ದೇಹ ಸಹಿತವಾಗಿ ದೇಹದ ಎಲ್ಲಾ ಸಂಬಂಧವನ್ನು ಬಿಟ್ಟು ಬಿಡಿ. ಈ ಮನೆ ಇತ್ಯಾದಿಯನ್ನು ಮರೆಯಿರಿ.
ವಾಸ್ತವದಲ್ಲಿ ನೀವು ಪರಮಧಾಮದ ನಿವಾಸಿಗಳು. ಈಗ ಎಲ್ಲಿಂದ ಪಾತ್ರ ಮಾಡಲು ಬಂದಿರುವಿರಿ ಅಲ್ಲಿಗೆ
ಹೋಗಬೇಕಾಗಿದೆ, ನಂತರ ನಾವು ನಿಮ್ಮನ್ನು ಸುಖಧಾಮಕ್ಕೆ ಕಳಿಸುತ್ತೇವೆ. ಆದ್ದರಿಂದ ತಂದೆ ಹೇಳುತ್ತಾರೆ
ಯೋಗ್ಯರಾಗಿರಿ. ಪರಮಾತ್ಮ ರಾಜ್ಯದ ಸ್ಥಾಪನೆ ಮಾಡುತ್ತಿದ್ದಾರೆ. ಕ್ರಿಸ್ತನದು ಯಾವ ರಾಜ್ಯವೂ
ಇರಲಿಲ್ಲ. ನಂತರ ಯಾವಾಗ ಲಕ್ಷಾಂತರ ಕ್ರಿಶ್ಚಿಯನ್ನರಾದರೋ ಆಗ ರಾಜ್ಯ ಸ್ಥಾಪನೆ ಆಯಿತು. ಇಲ್ಲಿ
ತಕ್ಷಣ ಸತ್ಯಯುಗೀ ರಾಜ್ಯ ಸ್ಥಾಪನೆ ಆಗುತ್ತದೆ. ಎಷ್ಟು ಸಹಜ ಮಾತಾಗಿದೆ. ಭಗವಂತ ಬಂದು ಸ್ಥಾಪನೆ
ಮಾಡಿದರು. ಕೃಷ್ಣನ ಹೆಸರು ಹಾಕಿರುವುದರಿಂದ ಎಲ್ಲವೂ ಗೊಂದಲವಾಗಿದೆ. ಗೀತೆಯಲ್ಲಿ ಪ್ರಾಚೀನ ರಾಜಯೋಗ
ಮತ್ತು ಜ್ಞಾನ ಇದೆ. ಅದು ಪ್ರಾಯಃಲೋಪ ಆಗುತ್ತದೆ. ಇಂಗ್ಲಿಷ್ ಅಕ್ಷರ ಚೆನ್ನಾಗಿದೆ. ನೀವು
ಹೇಳುತ್ತೀರಿ ಬಾಬಾ ಅವರಿಗೆ ಇಂಗ್ಲಿಷ್ ಬರುವುದಿಲ್ಲ. ಬಾಬಾ ಹೇಳುತ್ತಾರೆ ನಾನು ಎಲ್ಲಿಯವರೆಗೆ
ಎಷ್ಟು ಭಾಷೆಯಲ್ಲಿ ಮಾತನಾಡಲಿ. ಮುಖ್ಯವಾದದ್ದು ಹಿಂದಿ. ಆದ್ದರಿಂದ ನಾನು ಹಿಂದಿಯಲ್ಲಿ ಮುರಳಿ
ನುಡಿಸುತ್ತೇನೆ. ಯಾರ ಶರೀರ ಧಾರಣೆ ಮಾಡಿದ್ದೇನೆ ಅವರಿಗೆ ಹಿಂದಿ ತಿಳಿದಿದೆ. ಇವರ ಭಾಷೆ ಯಾವುದಿದೆ
ಅದರಲ್ಲಿಯೇ ನಾನೂ ಮಾತನಾಡುತ್ತೇನೆ. ಅನ್ಯ ಭಾಷೆಯಲ್ಲಿ ಏಕೆ ಓದಿಸಬೇಕು. ನಾನು ಫ್ರೆಂಚ್
ಮಾತನಾಡಿದರೆ ಇವರು ಹೇಗೆ ತಿಳಿದುಕೊಳ್ಳುತ್ತಾರೆ? ಮುಖ್ಯವಾದದ್ದು ಇವರ(ಬ್ರಹ್ಮಾ ಅವರ) ಮಾತಾಗಿದೆ.
ಇವರು ಮೊದಲು ತಿಳಿದುಕೊಳ್ಳಬೇಕು ಅಲ್ಲವೇ. ಬೇರೆಯವರ ಶರೀರವನ್ನು ತೆಗೆದುಕೊಳ್ಳುವುದಿಲ್ಲ ಅಲ್ಲವೆ.
ನನ್ನನ್ನು ಕರೆದುಕೊಂಡು ಹೋಗು ಎಂದು ಗೀತೆಯಲ್ಲಿಯೂ ಹೇಳುತ್ತಾರೆ. ಏಕೆಂದರೆ ತಂದೆ ಮತ್ತು ತಂದೆಯ
ಮನೆಯ ಬಗ್ಗೆ ಯಾರಿಗೂ ಗೊತ್ತಿಲ್ಲ. ಸುಳ್ಳು ಹೇಳುತ್ತಿರುತ್ತಾರೆ. ಅನೇಕ ಮನುಷ್ಯರ ಅನೇಕ ಮತಗಳಿವೆ
ಆದ್ದರಿಂದಲೇ ಎಲ್ಲವೂ ಕಗ್ಗಂಟಾಗಿದೆ. ತಂದೆ ನೋಡಿ ಹೇಗೆ ಕುಳಿತುಕೊಂಡಿದ್ದಾರೆ. ಈ ಚರಣಗಳು ಯಾರದು?
(ಶಿವಬಾಬಾ ಅವರದು) ಅದಂತೂ ನನ್ನದಲ್ಲವೆ. ನಾನು ಸಾಲವಾಗಿ ಕೊಟ್ಟಿದ್ದೇನೆ. ಶಿವಬಾಬಾ ಅಂತೂ ಸ್ವಲ್ಪ
ಸಮಯಕ್ಕಾಗಿ ಉಪಯೋಗ ಮಾಡುತ್ತಾರೆ. ಹಾಗೇ ನೋಡಿದರೆ ಈ ಚರಣಗಳು ನನ್ನದಾಗಿವೆ ಅಲ್ಲವೆ. ಶಿವನ
ಮಂದಿರದಲ್ಲಿ ಚರಣಗಳನ್ನು ಇಡುವುದಿಲ್ಲ. ಕೃಷ್ಣನ ಚರಣಗಳನ್ನು ಇಡುತ್ತಾರೆ. ಶಿವ ಶ್ರೇಷ್ಠರಲ್ಲಿ
ಶ್ರೇಷ್ಠ ಆಗಿದ್ದಾರೆ, ಅವರ ಚರಣ ಎಲ್ಲಿಂದ ಬಂತು. ಹಾಂ, ಶಿವಬಾಬಾ ಸಾಲವಾಗಿ ತೆಗೆದುಕೊಂಡಿದ್ದಾರೆ.
ಚರಣಗಳಂತೂತೂ ಬ್ರಹ್ಮಾ ಅವರದಾಗಿದೆ. ಮಂದಿರದಲ್ಲಿ ಎತ್ತು ತೋರಿಸಿದ್ದಾರೆ. ಎತ್ತಿನ ಮೇಲೆ ಹೇಗೆ
ಸವಾರಿ ಮಾಡಲು ಸಾಧ್ಯ? ಎತ್ತಿನ ಮೇಲೆ ಶಿವಬಾಬಾ ಹೇಗೆ ಹತ್ತಿ ಕುಳಿತುಕೊಳ್ಳುತ್ತಾರೆ? ಸಾಲಿಗ್ರಾಮ
ಆತ್ಮ ಮನುಷ್ಯ ತನುವಿನಲ್ಲಿ ಸವಾರಿ ಮಾಡುತ್ತಾನೆ. ತಂದೆ ಹೇಳುತ್ತಾರೆ ನಾನು ನಿಮಗೆ ಹೇಳುವ ಜ್ಞಾನ
ಪ್ರಾಯಃಲೋಪ ಆಗಿದೆ. ಹಿಟ್ಟಿನಲ್ಲಿ ಉಪ್ಪು ಇದ್ದಷ್ಟು ಉಳಿದಿದೆ. ಅದನ್ನು ಯಾರೂ ತಿಳಿದುಕೊಳ್ಳಲು
ಸಾಧ್ಯವಾಗುವುದಿಲ್ಲ. ನಾನೇ ಬಂದು ಅದರ ಸಾರವನ್ನು ತಿಳಿಸಿಕೊಡುತ್ತೇನೆ. ನಾನೇ ಶ್ರೀಮತ ಕೊಟ್ಟು
ಸೃಷ್ಟಿ ಚಕ್ರದ ರಹಸ್ಯ ತಿಳಿಸಿ ಕೊಟ್ಟಿದ್ದೆ. ಆದರೆ ಅವರು ದೇತೆಗಳಿಗೆ ಸೃಷ್ಟಿ ಚಕ್ರ
ತೋರಿಸಿದ್ದಾರೆ. ಅವರ ಬಳಿ ಜ್ಞಾನ ಅಂತೂ ಇಲ್ಲ. ಇದು ಎಲ್ಲವೂ ಜ್ಞಾನದ ಮಾತಾಗಿದೆ. ಆತ್ಮನಿಗೆ
ಸೃಷ್ಟಿ ಚಕ್ರದ ಜ್ಞಾನ ಸಿಗುತ್ತದೆ, ಇದರಿಂದ ಮಾಯೆಯ ಕತ್ತನ್ನು ಕತ್ತರಿಸಲು ಸಾಧ್ಯವಾಗುತ್ತದೆ.
ಅವರು ಅದನ್ನು ಅಸುರರ ಹಿಂದೆ ಎಸೆಯುತ್ತಿರುವುದನ್ನು ತೋರಿಸಿದ್ದಾರೆ. ಈ ಸ್ವದರ್ಶನ ಚಕ್ರದಿಂದ ನೀವು
ಮಾಯೆಯ ಮೇಲೆ ಜಯ ಗಳಿಸುತ್ತೀರಿ. ಎಲ್ಲಿಯ ಮಾತನ್ನು ಎಲ್ಲಿಗೆ ತೆಗೆದುಕೊಂಡು ಹೋಗಿದ್ದಾರೆ.
ನಿಮ್ಮಲ್ಲಿಯೂ ಸಹ ಈ ಮಾತನ್ನು ಧಾರಣೆ ಮಾಡಿ ತಿಳಿಸಿಕೊಡುವವರು ವಿರಳ. ಜ್ಞಾನ ಬಹಳ ಉನ್ನತವಾಗಿದೆ.
ಅದರಲ್ಲಿ ಸಮಯ ಹಿಡಿಯುತ್ತದೆ. ಅಂತ್ಯದಲ್ಲಿ ನಿಮ್ಮಲ್ಲಿ ಜ್ಞಾನ ಯೋಗದ ಶಕ್ತಿ ಇರುತ್ತದೆ. ಇದು
ನಾಟಕದಲ್ಲಿ ನಿಗದಿಯಾಗಿದೆ. ಅವರ ಬುದ್ಧಿಯೂ ಸಹ ಮೃದು ಆಗುತ್ತದೆ. ನೀವು ವಾಯುಮಂಡಲವನ್ನು ಶುದ್ಧ
ಮಾಡುತ್ತೀರಿ. ಇದು ಎಷ್ಟು ಗುಪ್ತ ಜ್ಞಾನ ಆಗಿದೆ. ಅಜಾಮಿಳನಂತಹ ಪಾಪಿಗಳನ್ನು ಉದ್ಧಾರ ಮಾಡಿದರು
ಎಂದು ಬರೆದಿದ್ದಾರೆ, ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಅವರು ಜ್ಯೋತಿ ಜ್ಯೋತಿಯಲ್ಲಿ
ಸಮಾವೇಶ ಆಯಿತು ಎಂದು ತಿಳಿದಿದ್ದಾರೆ. ಸಾಗರದಲ್ಲಿ ಲೀನ ಆಯಿತು. ಪಂಚ ಪಾಂಡವರು ಹಿಮಾಲಯದಲ್ಲಿ ಕರಗಿ
ಹೋದರು. ಪ್ರಳಯ ಅಯಿತು. ಒಂದು ಕಡೆ ಅವರು ರಾಜಯೋಗ ಕಲಿತರು ಎಂದು ಹೇಳುತ್ತಾರೆ. ನಂತರ ಪ್ರಳಯ
ತೋರಿಸಿದ್ದಾರೆ ಮತ್ತು ಕೃಷ್ಣ ಉಂಗುಷ್ಟ ಚೀಪುತ್ತಾ ಆಲದೆಲೆಯ ಮೇಲೆ ಬಂದ ಎಂದು ಹೇಳುತ್ತಾರೆ. ಅದರ
ಅರ್ಥವನ್ನೂ ತಿಳಿದುಕೊಂಡಿಲ್ಲ. ಅವನು ಗರ್ಭ ಮಹಲಿನಲ್ಲಿ ಇದ್ದ. ಉಂಗುಷ್ಟವನ್ನು ಮಕ್ಕಳು
ಚೀಪುತ್ತಾರೆ. ಎಲ್ಲಿಯ ಮಾತನ್ನು ಎಲ್ಲಿಗೆ ಹೋಲಿಸಿದ್ದಾರೆ. ಮನುಷ್ಯರು ಏನು ಕೇಳುತ್ತಾರೆ ಅದೆಲ್ಲವೂ
ಸತ್ಯ ಸತ್ಯ ಎನ್ನುತ್ತಾರೆ.
ಸತ್ಯಯುಗದ ಬಗ್ಗೆ ಯಾರಿಗೂ ತಿಳಿದಿಲ್ಲ. ಯಾವುದು ಇರುವುದೇ ಇಲ್ಲ ಅದಕ್ಕೆ ಸುಳ್ಳು ಎಂದು
ಹೇಳುತ್ತಾರೆ. ಯಾವ ರೀತಿ ಪರಮಾತ್ಮನಿಗೆ ನಾಮ ರೂಪ ಇಲ್ಲ ಎನ್ನುತ್ತಾರೆ. ಆದರೆ ಅವರ ಪೂಜೆ
ಮಾಡುತ್ತಾರೆ. ಪರಮಾತ್ಮ ಅತೀ ಸೂಕ್ಷ್ಮ ಆಗಿದ್ದಾರೆ. ಬಿಂದು ಆಗಿದ್ದಾರೆ. ಸೂಕ್ಷ್ಮ ಇರುವ ಕಾರಣ
ಯಾರೂ ತಿಳಿದುಕೊಂಡಿಲ್ಲ. ಆಕಾಶಕ್ಕೂ ಸೂಕ್ಷ್ಮ ಎಂದು ಹೇಳುತ್ತಾರೆ ಆದರೆ ಅದು ದೃವ ಪ್ರದೇಶ ಆಗಿದೆ.
ಐದು ತತ್ವಗಳಿವೆ. ಐದು ತತ್ವಗಳ ಶರೀರದಲ್ಲಿ ಬಂದು ಪ್ರವೇಶ ಮಾಡುತ್ತಾರೆ. ಅವರು ಎಷ್ಟು ಸೂಕ್ಷ್ಮ
ಆಗಿದ್ದಾರೆ. ಬಿಂದು ಆಗಿದ್ದಾರೆ. ನಕ್ಷತ್ರ ಎಷ್ಟು ಚಿಕ್ಕದಾಗಿರುತ್ತದೆ. ಇಲ್ಲಿ ಪರಮಾತ್ಮ
ನಕ್ಷತ್ರದ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ ಅದಕ್ಕೆ ಮಾತನಾಡಲು ಸಾಧ್ಯವಾಗುತ್ತದೆ. ಎಷ್ಟು
ಸೂಕ್ಷ್ಮ ಮಾತಾಗಿದೆ. ಮಂದ ಬುದ್ಧಿಯವರು ಇದನ್ನು ಸ್ವಲ್ಪವೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆ
ಎಷ್ಟು ಒಳ್ಳೆಯ ಮಾತುಗಳನ್ನು ತಿಳಿಸುತ್ತಾರೆ. ನಾಟಕದ ಅನುಸಾರ ಕಲ್ಪದ ಹಿಂದೆ ಯಾವ ಪಾತ್ರ
ಮಾಡಿದ್ದರು ಅದನ್ನೇ ಮಾಡುತ್ತಾರೆ. ಮಕ್ಕಳು ತಿಳಿಯುತ್ತಾರೆ ಬಾಬಾ ಬಂದು ನಿತ್ಯವೂ ಹೊಸ ಹೊಸ
ಮಾತುಗಳನ್ನು ಹೇಳುತ್ತಾರೆ. ಅಂದರೆ ಹೊಸ ಜ್ಞಾನ ಆಯಿತಲ್ಲವೇ. ಅಂದಮೇಲೆ ಪ್ರತಿನಿತ್ಯ ಓದಬೇಕು.
ಪ್ರತಿ ದಿನ ಬರದಿದ್ದರೆ ಸ್ನೇಹಿತರನ್ನು ಇಂದು ತರಗತಿಯಲ್ಲಿ ಏನಾಯಿತು? ಎಂದು ಕೇಳುತ್ತಾರೆ. ಇಲ್ಲಿ
ಕೆಲವರು ಓದುವುದನ್ನೇ ಬಿಡುತ್ತಾರೆ. ಸಾಕು, ಅವಿನಾಶಿ ಜ್ಞಾನ ರತ್ನಗಳ ಆಸ್ತಿ ಬೇಡ. ಅರೆ,
ವಿದ್ಯೆಯನ್ನು ಬಿಟ್ಟರೆ ನಿಮ್ಮ ಗತಿ ಏನಾಗುವುದು? ತಂದೆಯಿಂದ ಏನು ಆಸ್ತಿ ಪಡೆಯುವಿರಿ?
ಅದೃಷ್ಟದಲ್ಲಿ ಇಲ್ಲ. ಇಲ್ಲಿ ಸ್ಥೂಲ ಆಸ್ತಿಯ ಮಾತಿಲ್ಲ, ಜ್ಞಾನದ ಖಜಾನೆ ತಂದೆಯಿಂದ ಸಿಗುತ್ತದೆ. ಆ
ಆಸ್ತಿ ಎಲ್ಲವೂ ವಿನಾಶ ಆಗುತ್ತದೆ, ಅದರ ನಶೆ ಯಾರೂ ಇಟ್ಟುಕೊಳ್ಳಲು ಸಾಧ್ಯ ಇಲ್ಲ. ತಂದೆಯಿಂದ
ಮಾತ್ರ ಆಸ್ತಿ ಸಿಗುತ್ತದೆ. ನಿಮ್ಮ ಬಳಿ ಕೋಟಿಗಟ್ಟಲೇ ಇರಬಹುದು, ಅದೆಲ್ಲವೂ ಮಣ್ಣು ಪಾಲಾಗುತ್ತದೆ.
ಎಲ್ಲವೂ ಈ ಸಮಯದ ಮಾತಾಗಿದೆ. ಕೆಲವರದು ಮಣ್ಣು ಪಾಲಾಗುತ್ತದೆ, ಕೆಲವರದು ಸುಟ್ಟು ಹೋಗುತ್ತದೆ,
ಎನ್ನುವ ಗಾಯನವೂ ಇದೆ. ಎಲ್ಲವೂ ಈ ಸಮಯದ ಮಾತಾಗಿದೆ, ನಂತರ ಗಾಯನ ನಡೆಯುತ್ತದೆ. ವಿನಾಶವೂ ಈಗ
ಆಗಲಿದೆ. ವಿನಾಶದ ನಂತರ ಸ್ಥಾಪನೆ ಆಗುತ್ತದೆ. ಈಗ ಸ್ಥಾಪನೆ ಆಗುತ್ತಿದೆ. ಅದು ನಮ್ಮ ರಾಜಧಾನಿ
ಆಗಿದೆ. ನೀವು ಬೇರೇಯವರಿಗಾಗಿ ಮಾಡುತ್ತಿಲ್ಲ, ಏನೆಲ್ಲ ಮಾಡುತ್ತೀರಿ ಅದು ನಿಮಗಾಗಿ ಮಾಡುತ್ತೀರಿ.
ಯಾರು ಶ್ರೀಮತದಂತೆ ನಡೆಯುತ್ತಾರೆ ಅವರು ಮಾಲೀಕರಾಗುತ್ತಾರೆ. ನೀವು ಹೊಸ ವಿಶ್ವದಲ್ಲಿ ಹೊಸ ಭಾರತದ
ಮಾಲಿಕರಾಗುತ್ತೀರಿ. ಹೊಸ ವಿಶ್ವ ಅರ್ಥಾತ್ ಸತ್ಯಯುಗದಲ್ಲಿ ನೀವು ಮಾಲಿಕರಾಗಿದ್ದಿರಿ. ಈಗ ಇದು
ಹಳೆಯ ಯುಗ ಆಗಿದೆ ಆದರೆ ನಿಮಗೆ ಹೊಸ ಜಗತ್ತಿಗೆ ಹೋಗಲು ಪುರುಷಾರ್ಥ ಮಾಡಿಸಲಾಗುತ್ತಿದೆ. ಎಷ್ಟು
ಒಳ್ಳೆಯ ಮಾತುಗಳು ಅರ್ಥ ಮಾಡಿಕ್ಕೊಳ್ಳುವಂತಹದ್ದು, ಆತ್ಮ ಮತ್ತು ಪರಮಾತ್ಮನ ಜ್ಞಾನ, ಆತ್ಮಾನುಭೂತಿ.
ಆತ್ಮದ ತಂದೆ ಯಾರು? ತಂದೆ ಹೇಳುತ್ತಾರೆ ನಾನು ಬರುವುದು ನೀವು ಆತ್ಮರಿಗೆ ಓದಿಸಲು. ಈಗ ತಂದೆಯ
ಮೂಲಕ ತಂದೆಯ ಅನುಭವ ಮಾಡಿರುವಿರಿ. ನೀವು ನಮ್ಮ ಬಹಳ ಕಾಲದಿಂದ ಅಗಲಿ ಸಿಕ್ಕಿರುವ ಮಕ್ಕಳು ಎಂದು
ತಂದೆ ತಿಳಿಸುತ್ತಾರೆ. ಕಲ್ಪದ ನಂತರ ಪುನಃ ಬಂದು ಮಿಲನ ಮಾಡಿರುವಿರಿ ಆಸ್ತಿ ಪಡೆಯಲು. ಅಂದಮೇಲೆ
ಪುರುಷಾರ್ಥ ಮಾಡಬೇಕಲ್ಲವೆ. ಇಲ್ಲವಾದರೆ ಬಹಳ ಪಶ್ಚಾತ್ತಾಪ ಆಗುವುದು, ಬಹಳ ಶಿಕ್ಷೆ
ಅನುಭವಿಸಬೇಕಾಗುವುದು. ಯಾರು ಮಕ್ಕಳಾಗಿ ಕುಕರ್ಮ ಮಾಡುತ್ತಾರೆ ಅವರ ಮಾತಂತೂ ಕೇಳಬೇಡಿ. ನಾಟಕದಲ್ಲಿ
ನೋಡಿ ಬಾಬಾನ ಪಾತ್ರ ಎಷ್ಟು ಇದೆ. ಎಲ್ಲವನ್ನೂ ಕೊಟ್ಟು ಬಿಟ್ಟರು. ಬಾಬಾ ಹೇಳುತ್ತಾರೆ ಭವಿಷ್ಯ 21
ಜನ್ಮಗಳಿಗಾಗಿ ತಿರುಗಿ ಕೊಡುತ್ತೇನೆ. ಮೊದಲು ನೀವು ಅಪ್ರತ್ಯಕ್ಷವಾಗಿ ಕೊಡುತ್ತಿದ್ದಿರಿ ಆಗ
ಭವಿಷ್ಯ ಒಂದು ಜನ್ಮಕ್ಕೆ ಕೊಡುತ್ತಿದ್ದೆ. ಈಗ ಪ್ರತ್ಯಕ್ಷವಾಗಿ ಕೊಡುತ್ತೀರಿ. ಆದ್ದರಿಂದ ಭವಿಷ್ಯ
21 ಜನ್ಮಗಳಿಗೆ ಇನ್ಶ್ಯೂರ್ ಮಾಡುತ್ತೇನೆ. ಪ್ರತ್ಯಕ್ಷ, ಅಪ್ರತ್ಯಕ್ಷದಲ್ಲಿ ಎಷ್ಟು ಅಂತರ ಇದೆ. ಅದು
ದ್ವಾಪರ ಕಲಿಯುಗದಲ್ಲಿ ಈಶ್ವರನ ಹೆಸರಿನಲ್ಲಿ ವಿಮೆ ಮಾಡುತ್ತಾರೆ. ನೀವು ಸತ್ಯಯುಗ-ತ್ರೇತಾ
ಯುಗಕ್ಕಾಗಿ ವಿಮೆ ಮಾಡುತ್ತೀರಿ. ನೀವು ಪ್ರತ್ಯಕ್ಷವಾಗಿ ಮಾಡಿರುವ ಕಾರಣ 21 ಜನ್ಮಗಳಿಗೆ ಸಿಗುತ್ತದೆ.
ಒಳ್ಳೆಯದು.
ಮಧುರಾತಿ - ಮಧುರ ಬಹಳ ಕಾಲದಿಂದ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಿಗೆ ಮಾತಾಪಿತ ಬಾಪ್ದಾದಾ
ಅವರ ನಂಬರವಾರ್ ಪುರುಷಾರ್ಥ ಅನುಸಾರ ನೆನಪು ಪ್ರೀತಿ ಮತ್ತು ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ
ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಅವಿನಾಶಿ ತಂದೆಯಿಂದ ಅವಿನಾಶಿ ಜ್ಞಾನ ರತ್ನಗಳನ್ನು ಪಡೆದು ಅದೃಷ್ಟವಂತರಾಗಬೇಕು. ಹೊಸ ಜ್ಞಾನ,
ಹೊಸ ವಿದ್ಯೆಯನ್ನು ಪ್ರತಿ ದಿನ ಓದಬೇಕು. ವಾಯುಮಂಡಲವನ್ನು ಶುದ್ಧ ಮಾಡುವ ಸೇವೆ ಮಾಡಬೇಕು.
2. ಭವಿಷ್ಯ 21 ಜನ್ಮಗಳಿಗೆ ನಿಮ್ಮದೆಲ್ಲವನ್ನೂ ಇನ್ಶ್ಯೂರ್ ಮಾಡಬೇಕು. ತಂದೆಯ ಮಗು ಆದ ಮೇಲೆ
ಯಾವುದೇ ಕುಕರ್ಮ ಮಾಡಬಾರದು.
ವರದಾನ:
ಜ್ಞಾನಾಮೃತದ
ಮಳೆಯ ಮುಖಾಂತರ ಹೆಣವನ್ನೂ ಸಹಾ ಮಹಾನ್ ಆಗಿ ಮಾಡುವಂತಹ ಮರ್ಜೀವಾ ಭವ.
ಮೊದಲು ಚಿಂತೆ
ಎಂಬ ಚಿತೆಯ ಮೇಲೆ ಸುಡುತ್ತಿದ್ದಿರಿ, ಈಗ ತಂದೆಯು ಜ್ಞಾನ ಅಮೃತದ ಮಳೆ ಸುರಿಸಿ ಸುಡುತ್ತಿರುವ
ಚಿತೆಯಿಂದ ಮರ್ಜೀವಾ ಮಾಡಿದರು. ಜೀವ ಕೊಟ್ಟರು. ತಂದೆ ಅಮೃತ ಕುಡಿಸಿದರು ಮತ್ತು ಅಮರರನ್ನಾಗಿ
ಮಾಡಿದರು. ಮೊದಲು ಸತ್ತಿರುವ ಹೆಣದಂತಿದ್ದಿರಿ ಮತ್ತು ಈಗ ಹೆಣದಿಂದ ಮಹಾನ್ ಆದಿರಿ. ಮೊದಲು
ಹೇಳುತ್ತಿದ್ದಿರಿ ಭಗವಂತನು ಸತ್ತಿರುವ ಹೆಣವನ್ನೂ ಸಹಾ ಜೀವಂತವಾಗಿ ಮಾಡುತ್ತಾರೆ ಎಂದು. ಆದರೆ ಹೇಗೆ
ಮಾಡುತ್ತಾರೆ, ಅದು ತಿಳಿದಿರಲಿಲ್ಲ, ಈಗ ಖುಶಿಯಾಗಿದೆ. ತಂದೆ ಈಗ
ಉರಿಯುತ್ತಿರುವ
ಚಿತೆಯಿಂದ ನಮ್ಮನ್ನು ತೆಗೆದು ಅಮರರನ್ನಾಗಿ ಮಾಡಿದರು.
ಸ್ಲೋಗನ್:
ಧರ್ಮದಲ್ಲಿ
ಸ್ಥಿತರಾಗಿ ಕರ್ಮ ಮಾಡುವವರೇ ಧರ್ಮಾತ್ಮರಾಗಿದ್ದಾರೆ.