26.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈಗ ಕಲ್ಯಾಣಕಾರಿ ತಂದೆಯು ನಿಮಗೆ ಇಂತಹ ಕಲ್ಯಾಣವನ್ನು ಮಾಡುತ್ತಾರೆ, ಅದರಿಂದ ಎಂದೂ ಅಳಬೇಕಾಗಿಲ್ಲ, ಅಳುವುದು ಅಕಲ್ಯಾಣ ಅಥವಾ ದೇಹಾಭಿಮಾನದ ಚಿಹ್ನೆಯಾಗಿದೆ”

ಪ್ರಶ್ನೆ:
ನಾಟಕದ ಯಾವ ಪೂರ್ವ ನಿಶ್ಚಿತವನ್ನು ತಿಳಿದು ನೀವು ಸದಾ ನಿಶ್ಚಿಂತರಾಗಿರಬೇಕು?

ಉತ್ತರ:
ನಿಮಗೆ ತಿಳಿದಿದೆ - ಈ ಹಳೆಯ ಪ್ರಪಂಚವು ಅವಶ್ಯವಾಗಿ ವಿನಾಶವಾಗಲಿದೆ. ಭಲೇ ಶಾಂತಿಗಾಗಿ ಪ್ರಯತ್ನ ಪಡುತ್ತಿರುತ್ತಾರೆ. ಆದರೆ ನರನು ಬಯಸುವುದೇ ಬೇರೆ, ವಿಧಿಯು ಆಗುವುದೇ ಬೇರೆ...... ಎಷ್ಟೇ ಪ್ರಯತ್ನ ಪಟ್ಟರೂ ಈ ನಾಟಕದ ಪೂರ್ವ ನಿಶ್ಚಿತವು ಬದಲಾಗಲು ಸಾಧ್ಯವಿಲ್ಲ. ಪ್ರಾಕೃತಿಕ ವಿಕೋಪ ಮೊದಲಾದವುಗಳು ಆಗಲೇಬೇಕಿದೆ. ಆದರೆ ನಿಮಗೆ ನಶೆಯಿದೆ - ನಾವು ಈಶ್ವರನ ಮಡಿಲನ್ನು ತೆಗೆದುಕೊಂಡಿದ್ದೇವೆ, ಯಾವುದನ್ನು ಸಾಕ್ಷಾತ್ಕಾರದಲ್ಲಿ ನೋಡಿದ್ದೇವೆಯೋ ಅದೆಲ್ಲವೂ ಪ್ರತ್ಯಕ್ಷದಲ್ಲಿ ಆಗಲೇಬೇಕಾಗಿದೆ, ಆದ್ದರಿಂದ ನೀವು ಸದಾ ನಿಶ್ಚಿಂತವಾಗಿರುತ್ತೀರಿ.

ಓಂ ಶಾಂತಿ.
ವಿಶ್ವದಲ್ಲಿ ಮನುಷ್ಯರ ಬುದ್ಧಿಯಲ್ಲಿ ಭಕ್ತಿ ಮಾರ್ಗದ್ದೇ ಗಾಯನವಿದೆ. ಏಕೆಂದರೆ ಈಗ ಭಕ್ತಿ ಮಾರ್ಗವು ನಡೆಯುತ್ತಿದೆ. ನಂತರ ಇಲ್ಲಿ ಭಕ್ತಿಯ ಗಾಯನವಿಲ್ಲ. ಇಲ್ಲಂತೂ ತಂದೆಯ ಗಾಯನವಿದೆ. ತಂದೆಯ ಮಹಿಮೆ ಮಾಡಬೇಕಾಗುತ್ತದೆ, ಆ ತಂದೆಯಿಂದಲೇ ಇಷ್ಟು ಶ್ರೇಷ್ಠ ಆಸ್ತಿಯು ಸಿಗುತ್ತದೆ. ಭಕ್ತಿಯಲ್ಲಿ ಸುಖವಿಲ್ಲ, ಭಕ್ತಿ ಮಾಡುತ್ತಿದ್ದರೂ ಸಹ ಸ್ವರ್ಗದ ನೆನಪನ್ನೇ ಮಾಡುತ್ತಾರಲ್ಲವೆ. ಮನುಷ್ಯರು ಮರಣ ಹೊಂದುತ್ತಾರೆಂದರೆ ಸ್ವರ್ಗವಾಸಿಗಳಾದರು ಎಂದು ಹೇಳುತ್ತಾರೆ ಅಂದಮೇಲೆ ಖುಷಿಯಾಗಬೇಕಲ್ಲವೆ?. ಯಾವಾಗ ಸ್ವರ್ಗದಲ್ಲಿ ಜನ್ಮ ಪಡೆಯುತ್ತಾರೆಂದರೆ ಅಳುವಂಥಹ ಅವಶ್ಯಕತೆಯಿಲ್ಲ. ವಾಸ್ತವದಲ್ಲಿ ಸ್ವರ್ಗವಾಸಿಗಳಾದರು ಎಂಬುದು ಸತ್ಯವಾದ ಮಾತಲ್ಲ ಆದ್ದರಿಂದ ಅಳುತ್ತಿರುತ್ತಾರೆ. ಈಗ ಈ ಅಳುವವರ ಕಲ್ಯಾಣ ಹೇಗಾಗುತ್ತದೆ? ಅಳುವುದು ದುಃಖದ ಸಂಕೇತವಾಗಿದೆ. ಮನುಷ್ಯರು ಅಳುತ್ತಾರಲ್ಲವೆ. ಮಕ್ಕಳು ಜನ್ಮ ಪಡೆಯುವಾಗಲೂ ಅಳುತ್ತಾರೆ ಏಕೆಂದರೆ ದುಃಖವಾಗುತ್ತದೆ. ದುಃಖವಾಗಲಿಲ್ಲವೆಂದರೆ ಅವಶ್ಯವಾಗಿ ಹರ್ಷಿತರಾಗಿರುತ್ತಾರೆ. ಯಾವಾಗ ದುಃಖವಾಗುತ್ತದೆಯೋ ಆಗ ಒಂದಲ್ಲ ಒಂದು ಅಕಲ್ಯಾಣವಾಗುತ್ತದೆ ಆಗಲೇ ಅಳು ಬರುತ್ತದೆ. ಸತ್ಯಯುಗದಲ್ಲಿ ಎಂದೂ ಅಕಲ್ಯಾಣವಾಗುವುದಿಲ್ಲ ಆದ್ದರಿಂದ ಅಲ್ಲಿ ಎಂದೂ ಅಳುವುದಿಲ್ಲ, ಅಕಲ್ಯಾಣದ ಮಾತೂ ಇರುವುದಿಲ್ಲ. ಇಲ್ಲಿ ಸಂಪಾದನೆಯಲ್ಲಿ ಕೆಲವೊಮ್ಮೆ ನಷ್ಟವಾಗುತ್ತದೆ ಇಲ್ಲವೆ ಕೆಲವೊಮ್ಮೆ ಆಹಾರ ಸಿಗುವುದಿಲ್ಲವೆಂದರೆ ಆಗ ದುಃಖಿಗಳಾಗುತ್ತಾರೆ. ದುಃಖದಲ್ಲಿ ಅಳುತ್ತಾರೆ, ಬಂದು ಎಲ್ಲರ ಕಲ್ಯಾಣ ಮಾಡಿ ಎಂದು ಭಗವಂತನನ್ನು ನೆನಪು ಮಾಡುತ್ತಾರೆ. ಒಂದು ವೇಳೆ ಭಗವಂತನು ಸರ್ವವ್ಯಾಪಿಯಾಗಿದ್ದರೆ ಕಲ್ಯಾಣ ಮಾಡಿ ಎಂದು ಯಾರಿಗೆ ಹೇಳುತ್ತಾರೆ? ಪರಮಪಿತ ಪರಮಾತ್ಮನನ್ನು ಸರ್ವವ್ಯಾಪಿ ಎಂದು ಒಪ್ಪುವುದು ದೊಡ್ಡದಕ್ಕಿಂತ ದೊಡ್ಡ ತಪ್ಪಾಗಿದೆ. ತಂದೆಯು ಎಲ್ಲರ ಕಲ್ಯಾಣಕಾರಿಯಾಗಿದ್ದಾರೆ, ಅವರೊಬ್ಬರೇ ಕಲ್ಯಾಣಕಾರಿಯಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಎಲ್ಲರ ಕಲ್ಯಾಣ ಮಾಡುತ್ತಾರೆ. ನೀವು ಮಕ್ಕಳಿಗೆ ಗೊತ್ತಿದೆ - ಪರಮಪಿತ ಪರಮಾತ್ಮನು ಯಾವಾಗ ಕಲ್ಯಾಣವನ್ನೇ ಮಾಡುತ್ತಾರೆ ಅಂದಾಗ ವಿಶ್ವದ ಕಲ್ಯಾಣವನ್ನು ಮಾಡಲು ಆ ಪರಮಪಿತ ಪರಮಾತ್ಮನು ಯಾವಾಗ ಬಂದರು? ಏಕೆಂದರೆ ವಿಶ್ವದ ಕಲ್ಯಾಣ ಮಾಡುವವರು ಮತ್ತ್ಯಾರೂ ಇಲ್ಲ. ಅಂತಹ ತಂದೆಯನ್ನು ಮತ್ತೆ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ ಅಂದಾಗ ಇದು ಎಷ್ಟೊಂದು ತಪ್ಪಾಗಿದೆ. ಈಗ ತಂದೆಯು ತಮ್ಮ ಪರಿಚಯವನ್ನು ಕೊಟ್ಟು ಹೇಳುತ್ತಾರೆ - ಮನ್ಮನಾಭವ. ಇದರಲ್ಲಿಯೇ ಕಲ್ಯಾಣವಿದೆ. ಸತ್ಯಯುಗ-ತ್ರೇತಾದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಅಕಲ್ಯಾಣವಾಗುವುದಿಲ್ಲ. ತ್ರೇತಾಯುಗದಲ್ಲಿಯೂ ಸಹ ಯಾವಾಗ ರಾಮರಾಜ್ಯವಿರುತ್ತದೆಯೋ ಆಗ ಅಲ್ಲಿ ಹುಲಿ-ಮೇಕೆ ಒಟ್ಟಾಗಿ ನೀರು ಕುಡಿಯುತ್ತವೆ. ನಾವು ರಾಮ-ಸೀತೆಯ ರಾಜ್ಯದ ಮಹಿಮೆಯನ್ನು ಹೆಚ್ಚು ಮಾಡುವುದಿಲ್ಲ. ಏಕೆಂದರೆ ಎರಡು ಕಲೆಗಳು ಕಡಿಮೆಯಾಗುವುದರಿಂದ ಸುಖವು ಸ್ವಲ್ಪ ಕಡಿಮೆ ಸಿಗುತ್ತದೆ. ನಾವಂತೂ ಸ್ವರ್ಗವನ್ನೇ ನೆನಪು ಮಾಡುತ್ತೇವೆ, ಯಾವುದನ್ನು ತಂದೆ ಸ್ಥಾಪನೆ ಮಾಡುತ್ತಾರೆ. ಅದರಲ್ಲಿ ಪೂರ್ಣ ಆಸ್ತಿಯನ್ನು ಪಡೆಯುವುದು ತುಂಬಾ ಒಳ್ಳೆಯದಾಗಿದೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯಿಂದ ಆಸ್ತಿಯನ್ನು ಪಡೆದುಕೊಂಡು ನಾವು ಕಲ್ಯಾಣ ಮಾಡಬೇಕು. ಪ್ರತಿಯೊಬ್ಬರೂ ಶ್ರೀಮತದಂತೆ ತನ್ನ ಕಲ್ಯಾಣ ಮಾಡಿಕೊಳ್ಳಬೇಕು. ತಂದೆಯು ತಿಳಿಸಿದ್ದಾರೆ - 1) ಆಸುರೀ ಸಂಪ್ರದಾಯವಾಗಿದೆ 2) ದೈವೀ ಸಂಪ್ರದಾಯವಾಗಿದೆ. ಈಗ ರಾವಣ ರಾಜ್ಯವಿದೆ, ಇನ್ನೊಂದು ಕಡೆ ದೈವೀ ಸಂಪ್ರದಾಯವನ್ನು ಸ್ಥಾಪನೆ ಮಾಡುತ್ತಿದ್ದೇನೆ ಅಂದರೆ ಈಗ ದೈವೀ ಸಂಪ್ರದಾಯವಿದೆ ಎಂದಲ್ಲ. ಆಸುರೀ ಸಂಪ್ರದಾಯವನ್ನು ನಾನು ದೈವೀ ಸಂಪ್ರದಾಯವನ್ನಾಗಿ ಮಾಡುತ್ತಿದ್ದೇನೆ. ಹೇಳುತ್ತಾರೆ ದೈವೀ ಸಂಪ್ರದಾಯವು ಸತ್ಯಯುಗದಲ್ಲಿರುತ್ತದೆ ಆದರೆ ಈ ಆಸುರೀ ಸಂಪ್ರದಾಯವನ್ನು ಭವಿಷ್ಯಕ್ಕೋಸ್ಕರ ದೈವೀ ಸಂಪ್ರದಾಯವನ್ನಾಗಿ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಈಗ ಬ್ರಾಹ್ಮಣ ಸಂಪ್ರದಾಯವಾಗಿದೆ ಅದನ್ನೇ ದೈವೀ ಸಂಪ್ರದಾಯವನ್ನಾಗಿ ಮಾಡುತ್ತಿದ್ದೇನೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಎಂದು ಗುರುನಾನಕರು ಹೇಳಿದರು. ಆದರೆ ಯಾವ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ? ಅವರು ನಾಟಕದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ. ಸೃಷ್ಟಿಯ ಆದಿಯಲ್ಲಿ ಯಾವ ಲಕ್ಷ್ಮೀ-ನಾರಾಯಣರು ಶ್ರೇಷ್ಠಾಚಾರಿಯಾಗಿದ್ದರು ಅವರೂ ಸಹ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿಲ್ಲ, ತ್ರಿಕಾಲದರ್ಶಿಗಳಾಗಿಲ್ಲ. ಅದಕ್ಕೆ ಮೊದಲಿನ ಜನ್ಮದಲ್ಲಿ ತ್ರಿಕಾಲದರ್ಶಿಗಳಾಗಿದ್ದರು, ಸ್ವದರ್ಶನ ಚಕ್ರಧಾರಿಗಳಾಗಿದ್ದರು ಆದ್ದರಿಂದಲೇ ಈ ರಾಜ್ಯ ಪದವಿಯನ್ನು ಪಡೆದರು. ಅವರು ವಿಷ್ಣುವಿಗೆ ಸ್ವದರ್ಶನ ಚಕ್ರವನ್ನು ತೋರಿಸಿದ್ದಾರೆ. ಆದ್ದರಿಂದ ಇದನ್ನೂ ಸಹ ತಿಳಿಸಬೇಕು - ಸ್ವದರ್ಶನ ಚಕ್ರಧಾರಿಗಳು ಬ್ರಾಹ್ಮಣರಾಗಿದ್ದಾರೆಂದು ತಿಳಿಸಿದರೆ ಮನುಷ್ಯರು ಆಶ್ಚರ್ಯಚಕಿತರಾಗುತ್ತಾರೆ. ಅವರಂತೂ ಕೃಷ್ಣನಿಗೂ ಹೇಳುತ್ತಾರೆ, ವಿಷ್ಣುವಿಗೂ ಹೇಳಿ ಬಿಡುತ್ತಾರೆ ಆದರೆ ವಿಷ್ಣುವಿನ ಎರಡು ರೂಪಗಳೇ ಲಕ್ಷ್ಮೀ-ನಾರಾಯಣರೆಂದು ಅವರಿಗೆ ಗೊತ್ತಿಲ್ಲ. ಮೊದಲು ನಾವೂ ಸಹ ತಿಳಿದುಕೊಂಡಿರಲಿಲ್ಲ. ಮನುಷ್ಯರು ಪ್ರತಿಯೊಂದು ಮಾತಿನಲ್ಲಿ ವಿಧಿ ಎಂದು ಹೇಳುತ್ತಾರೆ, ನಾಟಕದಲ್ಲಿ ಏನಾಗಬೇಕಾಗಿದೆಯೋ ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇದಂತೂ ನಾಟಕವಾಗಿದೆ. ಅಂದಾಗ ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕೋ ಅಥವಾ ನಾಟಕದ ರಹಸ್ಯವನ್ನು ತಿಳಿಸಬೇಕೋ? ತಂದೆಯ ನೆನಪಿರಬೇಕು, ಮೊಟ್ಟ ಮೊದಲು ತಂದೆಯ ಪರಿಚಯವನ್ನು ಕೊಡಬೇಕು. ಬೇಹದ್ದಿನ ತಂದೆ, ಶಿವಬಾಬಾರವರಂತೂ ಪ್ರಸಿದ್ಧವಾಗಿದ್ದಾರೆ, ರುದ್ರಬಾಬಾ ಎಂದೂ ಸಹ ಹೇಳುವುದಿಲ್ಲ. ಶಿವಬಾಬಾ ಹೆಸರುವಾಸಿಯಾಗಿದ್ದಾರೆ, ತಂದೆಯು ತಿಳಿಸಿದ್ದಾರೆ- ಎಲ್ಲೆಲ್ಲಿ ಭಕ್ತರಿದ್ದಾರೆಯೋ ಅಲ್ಲಿಗೆ ಹೋಗಿ ಅವರಿಗೆ ತಿಳಿಸಿ ಹಿಮಾಲಯಕ್ಕೆ ಇಷ್ಟು ಮಲ್ಟಿ ಮಿಲಿಯನ್ ವರ್ಷಗಳಾಗಿವೆ ಎಂದು ಮನುಷ್ಯರು ಹೇಳುವುದನ್ನು ಪತ್ರಿಕೆಯಲ್ಲಿ ಓದಿದ್ದೆವು. ಈಗ ಹೇಳಿ ಹಿಮಾಲಯಕ್ಕೆ ಏನಾದರೂ ಆಯಸ್ಸಿದೆಯೇ? ಅದಂತೂ ಸದಾಕಾಲಕ್ಕೆ ಇದ್ದೇ ಇರುತ್ತದೆ. ಹಿಮಾಲಯವೆಂದೂ ಮುಚ್ಚಿ ಹೋಗುವುದಿಲ್ಲ. ಹಾಗೆಯೇ ಈ ಭಾರತವೂ ಸಹ ಅನಾದಿಯಾಗಿದೆ. ಇದು ಯಾವಾಗ ರಚಿಸಲ್ಪಟ್ಟಿತು ಮತ್ತು ಇದರ ಆಯಸ್ಸನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಹಾಗೆ ಹಿಮಾಲಯದ ಆಯಸ್ಸನ್ನು ಇದು ಯಾವಾಗಿನಿಂದ ಇದೆಯೆಂದು ಹೇಳಲು ಸಾಧ್ಯವಿಲ್ಲ. ಹಿಮಾಲಯ ಪರ್ವತದ ಆಯಸ್ಸನ್ನು ಎಣಿಸಲು ಸಾಧ್ಯವಿಲ್ಲ ಅಂದರೆ ಆಕಾಶ ಹಾಗೂ ಸಮುದ್ರದ ಆಯಸ್ಸು ಇಷ್ಟೆಂದು ಹೇಳಲು ಆಗುತ್ತದೆಯೇನು! ಹಿಮಾಲಯದ ಆಯಸ್ಸನ್ನು ಹೇಳುತ್ತಾರಲ್ಲವೆ. ಹಾಗೆಯೇ ಸಮುದ್ರದ ಆಯಸ್ಸನ್ನೂ ತಿಳಿಸಬೇಕು, ಆದರೆ ಏನನ್ನೂ ತಿಳಿದುಕೊಂಡಿಲ್ಲ. ಇಲ್ಲಿ ತಾವು ತಂದೆಯಿಂದ ಆಸ್ತಿಯನ್ನು ಪಡೆಯಬೇಕು. ಇದು ಈಶ್ವರೀಯ ಪರಿವಾರವಾಗಿದೆ.

ತಂದೆಯ ಮಕ್ಕಳಾಗುವುದರಿಂದ ಸ್ವರ್ಗದ ಮಾಲೀಕರಾಗುತ್ತೀರೆಂದು ನಿಮಗೆ ತಿಳಿದಿದೆ. ಒಬ್ಬ ಜನಕ ರಾಜನ ಮಾತಲ್ಲ. ಜೀವನ್ಮುಕ್ತಿಯಲ್ಲಿ ಅಥವಾ ರಾಮ ರಾಜ್ಯದಲ್ಲಿ ಬಹಳ ಜನ ಇರುತ್ತಾರೆ. ಎಲ್ಲರಿಗೂ ಜೀವನ್ಮುಕ್ತಿಯು ಸಿಕ್ಕಿರುತ್ತದೆ. ಒಂದು ಸೆಕೆಂಡಿನಲ್ಲಿ ನೀವು ಮುಕ್ತಿ-ಜೀವನ್ಮುಕ್ತಿಯನ್ನು ಪಡೆಯುವ ಪುರುಷಾರ್ಥಿಗಳಾಗಿದ್ದೀರಿ. ಮಕ್ಕಳಾಗಿರುವುದರಿಂದ ಮಮ್ಮಾ-ಬಾಬಾ ಎಂದು ಹೇಳುತ್ತಿರುತ್ತೀರಿ ಅಂದಾಗ ಜೀವನ್ಮುಕ್ತಿಯಂತೂ ಸಿಗುತ್ತದೆಯಲ್ಲವೆ. ಪ್ರಜೆಗಳಂತೂ ಬಹಳಷ್ಟು ಜನರಾಗುತ್ತಾರೆಂದು ನಿಮಗೆ ತಿಳಿದಿದೆ. ದಿನ-ಪ್ರತಿದಿನ ಪ್ರಭಾವ ಬೀರುತ್ತದೆಯಲ್ಲವೆ. ಈ ಧರ್ಮದ ಸ್ಥಾಪನೆ ಮಾಡುವುದು ಬಹಳ ಪರಿಶ್ರಮವಿದೆ. ಆ ಧರ್ಮ ಸ್ಥಾಪಕರು ಮೇಲಿಂದ ಬಂದು ಸ್ಥಾಪಿಸುತ್ತಾರೆ, ಅವರ ಹಿಂದೆ ಅನುಯಾಯಿಗಳೂ ಸಹ ಬರುತ್ತಾರೆ. ಆದರೆ ಇಲ್ಲಿ ಪ್ರತಿಯೊಬ್ಬರನ್ನು ರಾಜ್ಯಭಾಗ್ಯವನ್ನು ಪಡೆಯಲು ಯೋಗ್ಯರನ್ನಾಗಿ ಮಾಡುವುದು ತಂದೆಯ ಕರ್ತವ್ಯವಾಗಿದೆ. ಯಾರು ಮುಕ್ತಿ-ಜೀವನ್ಮುಕ್ತಿಗೆ ಯೋಗ್ಯರಾಗಿದ್ದರೋ ಅಂತಹವರನ್ನು ಈಗ ಮಾಯೆಯು ಯೋಗ್ಯ ಹೀನರನ್ನಾಗಿ ಮಾಡಿದೆ. ಪಂಚ ತತ್ವಗಳೂ ಯೋಗ್ಯ ಹೀನವಾಗಿದೆ ಪುನಃ ಯೋಗ್ಯರನ್ನಾಗಿ ಮಾಡುವಂತಹವರು ತಂದೆಯಾಗಿದ್ದಾರೆ. ನಿಮ್ಮದು ಈಗ ಸೆಕೆಂಡ್-ಸೆಕೆಂಡಿನಲ್ಲಿಯೂ ಯಾವ ಪುರುಷಾರ್ಥ ನಡೆಯುತ್ತದೆಯೋ ಕಲ್ಪದ ಮೊದಲೂ ಸಹ ಅದೇ ಪುರುಷಾರ್ಥವನ್ನು ಮಾಡಿದ್ದರು ಎಂದು ತಿಳಿದುಕೊಳ್ಳುತ್ತೇವೆ. ಕೆಲವರು ಆಶ್ಚರ್ಯವಾಗಿ ಓಡಿ ಹೋಗುತ್ತಾರೆ, ವಿಚ್ಛೇಧನವನ್ನು ಕೊಡುತ್ತಾರೆ. ಇದನ್ನು ಪ್ರತ್ಯಕ್ಷದಲ್ಲಿ ನೋಡುತ್ತಿರುತ್ತೀರಿ. ಈಗ ವಿನಾಶವೂ ಸಹ ಸಮೀಪದಲ್ಲಿಯೇ ನಿಂತಿದೆ. ನಾಟಕದನುಸಾರ ಎಲ್ಲರೂ ತಮ್ಮ-ತಮ್ಮ ಪಾತ್ರವನ್ನಭಿನಯಿಸಲು ಬರಲೇಬೇಕು. ನರನು ಇಷ್ಟ ಪಡುವುದೇ ಬೇರೆ..... ಅವರು ಶಾಂತಿ ಸ್ಥಾಪನೆಯಾಗಲೆಂದು ಇಚ್ಛೆ ಪಡುತ್ತಾರೆ ಆದರೆ ನೀವು ಮಕ್ಕಳಿಗೆ ನಾಟಕದ ರಹಸ್ಯವು ತಿಳಿದಿದೆ. ನಿಮಗೆ ಸಾಕ್ಷಾತ್ಕಾರವೂ ಆಗಿದೆ, ಅವರು ಭಲೆ ಎಷ್ಟೇ ವಿನಾಶವಾಗಬಾರದೆಂದು ತಲೆಕೆಡಿಸಿಕೊಂಡರೂ ಆ ನಾಟಕವನ್ನು ನಿಲ್ಲಿಸಲು ಸಾಧ್ಯವಿಲ್ಲ. ಭೂಕಂಪ, ಪ್ರಾಕೃತಿಕ ವಿಕೋಪಗಳು ಆಗುತ್ತದೆ. ಆದರೂ ಸಹ ಅವರು ಏನು ಮಾಡಲು ಸಾಧ್ಯ. ಇದು ಭಗವಂತನ ಕಾರ್ಯವಾಗಿದೆ ಎಂದು ಹೇಳುತ್ತಾರೆ. ನಿಮ್ಮಲ್ಲಿಯೂ ಸಹ ಕೆಲವರಿಗೆ ಬಹಳ ನಶೆಯೇರುತ್ತದೆ ಮತ್ತು ನೆನಪಿನಲ್ಲಿರುತ್ತಾರೆ. ಎಲ್ಲರೂ ಪರಿಪೂರ್ಣರಾಗಿಲ್ಲ. ಈ ನಾಟಕವು ನಿಲ್ಲುವುದಿಲ್ಲವೆಂದು ನಿಮಗೆ ತಿಳಿದಿದೆ. ಆಹಾರವಿಲ್ಲ, ಮನುಷ್ಯರು ವಾಸಿಸುವುದಕ್ಕಾಗಿ ಸ್ಥಳವಿಲ್ಲ, ಮೂರು ಹೆಜ್ಜೆಯಷ್ಟೂ ಭೂಮಿಯಿಲ್ಲ. ನಿಮ್ಮ ಈಶ್ವರೀಯ ಪರಿವಾರವು ತಾಯಿ-ತಂದೆ, ಮಕ್ಕಳಿರುವಂತಹ ಪರಿವಾರವಾಗಿದೆ. ನಾನು ಮಕ್ಕಳ ಮುಂದೆಯೇ ಪ್ರತ್ಯಕ್ಷವಾಗುತ್ತೇನೆ, ಮಕ್ಕಳಿಗೆ ಕಲಿಸಿಕೊಡುತ್ತೇನೆಂದು ತಂದೆಯು ಹೇಳುತ್ತಾರೆ. ನಾವು ತಂದೆಯ ಮತದಂತೆ ನಡೆಯುತ್ತೇವೆಂದು ಮಕ್ಕಳು ಹೇಳುತ್ತಾರೆ. ನಾನು ಮಕ್ಕಳ ಸನ್ಮುಖದಲ್ಲಿಯೇ ಬಂದು ಮತವನ್ನು ಕೊಡುತ್ತೇನೆಂದು ತಂದೆಯು ಹೇಳುತ್ತಾರೆ. ಮಕ್ಕಳೇ ತಿಳಿದುಕೊಳ್ಳುತ್ತಾರೆ, ತಿಳಿದುಕೊಳ್ಳದಿದ್ದರೆ ಬಿಟ್ಟು ಬಿಡಿ ಜಗಳವಾಡುವಂತಹ ಮಾತಿಲ್ಲ. ನಾವು ತಂದೆಯ ಪರಿಚಯವನ್ನು ಕೊಡುತ್ತೇವೆ. ತಂದೆಯು ಹೇಳುತ್ತಾರೆ, ನನ್ನನ್ನು ನೆನಪು ಮಾಡಿದಾಗ ವಿಕರ್ಮವು ವಿನಾಶವಾಗುತ್ತದೆ ಮತ್ತು ಸ್ವದರ್ಶನ ಚಕ್ರದ ನೆನಪು ಮಾಡಿದರೆ ಚಕ್ರವರ್ತಿ ರಾಜರಾಗುತ್ತೀರಿ. ಮನ್ಮನಾಭವ, ಮಧ್ಯಾಜೀಭವದ ಅರ್ಥವೇ ಇದಾಗಿದೆ. ತಂದೆಯ ಪರಿಚಯವನ್ನು ಕೊಟ್ಟಾಗ ರಚಯಿತ ಮತ್ತು ರಚನೆಯ ರಹಸ್ಯವನ್ನು ತಿಳಿದುಕೊಳ್ಳುತ್ತಾರೆ. ಗೀತೆಯಲ್ಲಿ ಮುಖ್ಯವಾಗಿ ಇದೊಂದೇ ತಪ್ಪಾಗಿದೆ. ತಂದೆಯು ಹೇಳುತ್ತಾರೆ - ನಾನು ಕಲ್ಯಾಣಕಾರಿಯೇ ಬಂದು ಕಲ್ಯಾಣವನ್ನು ಮಾಡುತ್ತೇನೆ ಬಾಕಿ ಶಾಸ್ತ್ರಗಳಿಂದ ಕಲ್ಯಾಣವಾಗುವುದಿಲ್ಲ. ಭಗವಂತ ಒಬ್ಬರೇ ಆಗಿದ್ದಾರೆ, ಅವರನ್ನು ನೀವು ನೆನಪು ಮಾಡುತ್ತೀರಿ ಆದರೆ ಇದನ್ನು ತಿಳಿದುಕೊಂಡಿಲ್ಲವೆಂದು ಮೊದಲು ಇದನ್ನು ಸಿದ್ಧ ಮಾಡಬೇಕು. ತಂದೆಯನ್ನು ನೆನಪು ಮಾಡುತ್ತೀರೆಂದಾಗ ಪರಿಚಯವೂ ಬೇಕಲ್ಲವೆ. ಅವರು ಎಲ್ಲಿರುತ್ತಾರೆ, ಬರುತ್ತಾರೆಯೋ ಅಥವಾ ಇಲ್ಲವೋ? ತಂದೆಯು ಆಸ್ತಿಯನ್ನು ಇಲ್ಲಿಯೇ ಕೊಡುತ್ತಾರೆಯೋ ಅಥವಾ ಭವಿಷ್ಯಕ್ಕಾಗಿ ಕೊಡುತ್ತಾರೆಯೋ? ತಂದೆಯಂತೂ ಸನ್ಮುಖದಲ್ಲಿ ಇರಬೇಕು. ಶಿವರಾತ್ರಿಯನ್ನು ಆಚರಿಸುತ್ತೀರಿ, ಶಿವನು ಎಲ್ಲರಿಗೂ ಪರಮಪಿತನಾಗಿದ್ದಾರೆ, ಅವರು ಎಲ್ಲರಿಗೂ ರಚಯಿತನಾಗಿದ್ದಾರೆ, ಹೊಸ ಜ್ಞಾನವನ್ನು ಕೊಡುತ್ತಾರೆ. ಸೃಷ್ಟಿ ಚಕ್ರದ ಆದಿ-ಮಧ್ಯ-ಅಂತ್ಯವನ್ನು ಅವರು ತಿಳಿದುಕೊಂಡಿದ್ದಾರೆ. ಅವರು ಸದಾ ಶ್ರೇಷ್ಠವಾದ ಶಿಕ್ಷಕರಾಗಿದ್ದಾರೆ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ, ರಾಜಯೋಗವನ್ನು ಕಲಿಸುತ್ತಾರೆ ಆದರೆ ಮನುಷ್ಯರೆಂದೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ನಾವೂ ಸಹ ಅವರಿಂದಲೇ ಕಲಿತು ಅನ್ಯರಿಗೆ ಕಲಿಸುತ್ತೇವೆ. ಗೀತೆಯಲ್ಲಿ ಪ್ರಾರಂಭದಲ್ಲಿ ಹಾಗೂ ಅಂತಿಮದಲ್ಲಿಯೂ ಮನ್ಮನಾಭವ ಮತ್ತು ಮಧ್ಯಾಜೀಭವ ಎಂದು ಹೇಳಲಾಗಿದೆ. ವೃಕ್ಷ ಹಾಗೂ ನಾಟಕದ ಜ್ಞಾನವು ಬುದ್ಧಿಯಲ್ಲಿರುತ್ತದೆ, ವಿಸ್ತಾರದಲ್ಲಿ ಕಲಿಸಿ ಕೊಡಬೇಕಾಗುತ್ತದೆ. ಫಲಿತಾಂಶದಲ್ಲಿ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವ ಮಾತು ಬರುತ್ತದೆ ಆದರೆ ನಾವು ವಿಶ್ವದ ಮಾಲೀಕರಾಗುತ್ತೇವೆ ಎನ್ನುವ ಒಂದು ಮಾತಿದೆ. ವಿಶ್ವದ ಕಲ್ಯಾಣಕಾರಿಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಯೇ ವಿನಃ ನರಕದ ಮಾಲೀಕರನ್ನಾಗಿ ಅಲ್ಲ. ನರಕದ ರಚಯಿತ ರಾವಣನಾಗಿದ್ದಾನೆ, ಸ್ವರ್ಗದ ರಚೈತ ತಂದೆಯಾಗಿದ್ದಾರೆಂದು ಪ್ರಪಂಚಕ್ಕೆ ತಿಳಿದಿಲ್ಲ. ಈಗ ಮೃತ್ಯುವು ಎದುರಿಗೆ ನಿಂತಿದೆ. ಎಲ್ಲರದು ವಾನಪ್ರಸ್ಥ ಸ್ಥಿತಿಯಾಗಿದೆ. ನಾನು ಎಲ್ಲರನ್ನು ಕರೆದುಕೊಂಡು ಹೋಗಲು ಬಂದಿದ್ದೇನೆಂದು ತಂದೆಯು ಹೇಳುತ್ತಾರೆ. ನನ್ನನ್ನು ನೆನಪು ಮಾಡಿದಾಗ ವಿಕರ್ಮಗಳು ವಿನಾಶವಾಗುತ್ತದೆ, ಆತ್ಮವು ಶುದ್ಧವಾಗುತ್ತದೆ ನಂತರ ನಿಮ್ಮನ್ನು ಸ್ವರ್ಗಕ್ಕೆ ಕಳುಹಿಸುತ್ತೇನೆ. ಇದನ್ನು ನಿಶ್ಚಯ ಬುದ್ಧಿಯಿಂದ ತಿಳಿಸಬೇಕಾಗಿದೆಯೇ ವಿನಃ ಗಿಣಿ ಪಾಠದ ರೀತಿಯಲ್ಲ. ನಿಶ್ಚಯ ಬುದ್ಧಿಯುಳ್ಳವರು ದುಃಖಿಸುವ ಹಾಗೂ ದೇಹಾಭಿಮಾನದಲ್ಲಿ ಬರುವ ಮಾತಿಲ್ಲ. ದೇಹಾಭಿಮಾನವು ಬಹಳ ಕೊಳಕರನ್ನಾಗಿ ಮಾಡುತ್ತದೆ. ಈಗ ನೀವು ಆತ್ಮಾಭಿಮಾನಿಗಳಾಗಿ ಶರೀರ ನಿರ್ವಹಣಾರ್ಥವಾಗಿ ಕರ್ಮವನ್ನು ಮಾಡಬೇಕು. ಅವರು ಕರ್ಮ ಸನ್ಯಾಸಿಗಳಾಗಿದ್ದಾರೆ ಆದರೆ ಇಲ್ಲಿ ನೀವು ಗೃಹಸ್ಥ ವ್ಯವಹಾರದಲ್ಲಿರಬೇಕು, ಮಕ್ಕಳನ್ನು ಸಂಭಾಲನೆ ಮಾಡಬೇಕು. ತಂದೆಯನ್ನು ಮತ್ತು ಚಕ್ರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಸಹಜವಾಗಿದೆ. ತಂದೆಗೆ ಎಷ್ಟೊಂದು ಜನ ಮಕ್ಕಳಿದ್ದಾರೆ, ಅದರಲ್ಲಿಯೂ ಕೆಲವರು ಸುಪುತ್ರರು ಮತ್ತು ಕುಪುತ್ರರಿದ್ದಾರೆ, ಹೆಸರನ್ನು ಹಾಳು ಮಾಡುತ್ತಾರೆ, ಮುಖವನ್ನು ಕಪ್ಪು ಮಾಡಿಕೊಳ್ಳುತ್ತಾರೆ. ಮುಖವನ್ನಾಗಿ ಕಪ್ಪಾಗಿ ಮಾಡಿಕೊಳ್ಳಬೇಡಿ ಎಂದು ತಂದೆಯು ಹೇಳುತ್ತಾರೆ. ಮಗುವಾಗಿ ನಂತರ ಕಪ್ಪು ಮುಖವನ್ನಾಗಿ ಮಾಡಿಕೊಂಡಾಗ ಕುಲಕಳಂಕಿತರಾಗುತ್ತೀರಿ. ಈ ಕಾಮ ಚಿತೆಯಿಂದ ನೀವು ಕಪ್ಪಾಗಿದ್ದೀರಿ, ಇದರಲ್ಲಿ ಸುಟ್ಟು ಹೋಗಬಾರದು. ಹಗುರವಾದ ನಶೆಯೂ ಇರಬಾರದು. ಸನ್ಯಾಸಿಗಳು ಮುಂತಾದವರು ತಮ್ಮ ಅನುಯಾಯಿಗಳಿಗೆ ಈ ರೀತಿ ಹೇಳುತ್ತಾರೆಯೇ! ಅದು ಸತ್ಯತೆ ಅಲ್ಲ. ತಂದೆಯು ಎಲ್ಲರಿಗೂ ಸತ್ಯವಾದ ಮಾತುಗಳನ್ನು ತಿಳಿಸುತ್ತಾರೆ. ತಂದೆಯು ನನ್ನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಬಾಬಾ, ತಮ್ಮ ಮತದಂತೆ ನಡೆದು ನಾವು ಸ್ವರ್ಗವಾಸಿಗಳಾಗುತ್ತೇವೆ ಎಂದು ನೀವು ಗ್ಯಾರಂಟಿ ಮಾಡುತ್ತೀರಿ. ಮತ್ತೆ ವಿಷದ ಹಳ್ಳದಲ್ಲಿ ಬೀಳುವ ಯೋಚನೆಗಳನ್ನು ಏಕೆ ಮಾಡುತ್ತೀರಿ ಎಂದು ತಂದೆಯು ಕೇಳುತ್ತಾರೆ. ನೀವು ಮಕ್ಕಳು ಯಾವಾಗ ಈ ರೀತಿ ಮುರುಳಿಯನ್ನು ನುಡಿಸುತ್ತೀರೋ ಆಗ ಇಂತಹ ಜ್ಞಾನವನ್ನು ನಾವು ಎಂದೂ ಸಹ ಕೇಳಿಲ್ಲವೆಂದು ಹೇಳುತ್ತಾರೆ. ಮಂದಿರದ ಮೇಲ್ವಿಚಾರಕರನ್ನು ಹಿಡಿಯಬೇಕು. ಚಿತ್ರವನ್ನು ತೆಗೆದುಕೊಂಡು ಹೋಗಬೇಕು, ಈ ತ್ರಿಮೂರ್ತಿ ವೃಕ್ಷವು ಹೃದಯ ರಾಮನ ಚಿತ್ರವಾಗಿದೆ. ಮೇಲೆ ದೈವೀ ವೃಕ್ಷವು ನಿಂತಿದೆ ಬಾಕಿ ಯಾವ ದೈವೀ ವೃಕ್ಷವು ಕಳೆದು ಹೋಗಿದೆಯೋ ಅದನ್ನು ತೋರಿಸುತ್ತಾರೆ. ಸರ್ವೀಸ್ ಮಾಡಿದಾಗ ತಂದೆಯು ಮಹಿಮೆಯನ್ನು ಮಾಡುತ್ತಾರೆ - ಇವರು ಕಮಾಲ್ ಮಾಡಿದರು. ಹೇಗೆ ತಂದೆಯು ರಮೇಶ್ ಬಾ೦ಬೆಗೆ ಮಹಿಮೆ ಮಾಡುತ್ತಾರೆ. ಪ್ರದರ್ಶನಿ, ವಿಹಂಗಮಾರ್ಗದ ಸರ್ವೀಸಿನ ನಮೂನೆಯು ಚೆನ್ನಾಗಿದೆ. ಇಲ್ಲಿಯೂ ಸಹ ಪ್ರದರ್ಶನಿಗಳನ್ನು ಮಾಡಬೇಕು. ಚಿತ್ರವಂತೂ ಬಹಳ ಚೆನ್ನಾಗಿದೆ. ಈಗ ನೋಡಿ, ದೆಹಲಿಯಲ್ಲಿ ಯಾವ ಧಾರ್ಮಿಕ ಸಮ್ಮೇಳನವಾಗುತ್ತದೆಯೋ ಅವರೂ ಸಹ ಏಕತೆಯಲ್ಲಿವೆ ಎಂದು ಹೇಳುತ್ತಾರೆ. ಅದಕ್ಕೆ ಅರ್ಥವೇ ಇರುವುದಿಲ್ಲ. ತಂದೆಯು ಒಬ್ಬರಾಗಿದ್ದಾರೆ, ಬಾಕಿ ಎಲ್ಲರೂ ಸಹೋದರ-ಸಹೋದರಿಯರಾಗಿದ್ದಾರೆ. ತಂದೆಯಿಂದ ಆಸ್ತಿಯು ಸಿಗುವಂತಹ ಮಾತು. ಪರಸ್ಪರದಲ್ಲಿ ಒಟ್ಟುಗೂಡಿ ಹೇಗೆ ಕ್ಷೀರ ಖಂಡವಾಗಬೇಕೆನ್ನುವ ಮಾತನ್ನು ತಿಳಿದುಕೊಳ್ಳಬೇಕು. ಪ್ರದರ್ಶನಿಯ ವೃದ್ಧಿಗೋಸ್ಕರವೇ ಯುಕ್ತಿಗಳನ್ನು ರಚಿಸಬೇಕು. ಯಾರು ಸರ್ವೀಸಿನ ಪ್ರತ್ಯಕ್ಷ ಪ್ರಮಾಣವನ್ನು ತೋರಿಸುವುದಿಲ್ಲವೋ ಅವರಿಗೆ ನಾಚಿಕೆಯಾಗಬೇಕು. ಒಂದು ವೇಳೆ 10 ಜನ ಹೊಸಬರು ಬಂದರೆ 8-10 ಜನ ಮರಣ ಹೊಂದಿದರೆ ಏನು ಲಾಭ? ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

೧. ಶರೀರ ನಿರ್ವಹಣಾರ್ಥವಾಗಿ ಕರ್ಮ ಮಾಡುತ್ತಾ ಆತ್ಮಾಭಿಮಾನಿಗಳಾಗುವ ಅಭ್ಯಾಸವನ್ನು ಮಾಡಬೇಕಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಅಳುವ ಮತ್ತು ದೇಹಾಭಿಮಾನದಲ್ಲಿ ಬರಬಾರದು.

೨. ಶ್ರೀ ಮತದಂತೆ ತಮ್ಮ ಮತ್ತು ಅನ್ಯರ ಕಲ್ಯಾಣ ಮಾಡಬೇಕಾಗಿದೆ. ಸುಪುತ್ರರಾಗಿ ತಂದೆಯ ಹೆಸರನ್ನು ಪ್ರಸಿದ್ಧ ಮಾಡಬೇಕಾಗಿದೆ.

ವರದಾನ:
ಶೀತಲ ದೇವಿಯಾಗಿ ಸರ್ವ ಕರ್ಮೇಂದ್ರಿಯಗಳನ್ನು ಶೀತಲ ಶಾಂತ ಮಾಡುವಂತಹ ಸ್ವರಾಜ್ಯ ಅಧಿಕಾರಿ ಭವ.

ಯಾರು ಸ್ವರಾಜ್ಯ ಅಧಿಕಾರಿ ಮಕ್ಕಳಾಗಿದ್ದಾರೆ, ಅವರನ್ನು ಯಾವುದೇ ಕರ್ಮೇಂದ್ರಿಯ ಮೋಸ ಮಾಡಲು ಸಾಧ್ಯವಿಲ್ಲ. ಯಾವಾಗ ಮೋಸ ಹೋಗುವ ಚಂಚಲತೆ ಸಮಾಪ್ತಿಯಾಗಿ ಬಿಡುವುದು ಆಗ ಸ್ವಯಂ ಶೀತಲ ದೇವಿಯಾಗಿ ಬಿಡುವರು ಮತ್ತು ಎಲ್ಲಾ ಕರ್ಮೇಂದ್ರಿಯಗಳೂ ಶೀತಲವಾಗಿ ಬಿಡುವವು. ಶೀತಲ ದೇವಿಯಲ್ಲಿ ಎಂದೂ ಕ್ರೋಧ ಬರುವುದಿಲ್ಲ. ಕೆಲವರು ಹೇಳುತ್ತಾರೆ ಕ್ರೋಧ ಇಲ್ಲ, ಸ್ವಲ್ಪ ರೋಷವನ್ನಿಡಬೇಕಾಗುವುದು. ಆದರೆ ರೋಷವೂ ಸಹ ಕ್ರೋಧದ ಅಂಶವೇ ಆಗಿದೆ. ಅಂದರೆ ಎಲ್ಲಿ ಅಂಶವಿದೆ ಅಲ್ಲಿ ವಂಶ ಹುಟ್ಟಿಕೊಂಡು ಬಿಡುವುದು. ಆದ್ದರಿಂದ ಶೀತಲ ದೇವಿ ಮತ್ತು ಶೀತಲ ದೇವರಾಗಿ, ಇದರಿಂದ ಸ್ವಪ್ನದಲ್ಲಿಯೂ ಸಹ ಕ್ರೋಧ ಅಥವಾ ರೋಷದ ಸಂಸ್ಕಾರ ಹೊರಹೊಮ್ಮಬಾರದು.

ಸ್ಲೋಗನ್:
ಆಜ್ಞಾಕಾರಿ ಮಕ್ಕಳು ಸ್ವತಃ ಆಶೀರ್ವಾದಕ್ಕೆ ಪಾತ್ರರಾಗಿರುತ್ತಾರೆ, ಅವರಿಗೆ ಆಶೀರ್ವಾದ ಕೇಳುವ ಅವಶ್ಯಕತೆ ಇಲ್ಲ.