15.11.2018 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಮ್ಮ
ಬುದ್ಧಿ ಹಾಗೂ ವಿಚಾರಗಳನ್ನು ಇಷ್ಟೊಂದು ಶುದ್ಧ ಹಾಗೂ ಸ್ವಚ್ಛ ಮಾಡಿಕೊಂಡು ತಂದೆಯ ಹೆಸರು
ಪ್ರಸಿದ್ಧ ಮಾಡುವಂತಹ ಶ್ರೀಮತವನ್ನು ಯಥಾರ್ಥವಾಗಿ ಧಾರಣೆ ಮಾಡಿ.”
ಪ್ರಶ್ನೆ:
ಮಕ್ಕಳ ಯಾವ
ಸ್ಥಿತಿಯು ತಂದೆಯನ್ನು ಶೋ ಮಾಡುತ್ತದೆ?
ಉತ್ತರ:
ಯಾವಾಗ ಮಕ್ಕಳ
ನಿರಂತರ ಹರ್ಷಿತಮುಖ, ಅಚಲ-ಅಡೋಲ, ಸ್ಥಿರ ಹಾಗೂ ನಶೆಯಲ್ಲಿರುವಂತಹ ಅವಸ್ಥೆಯಾಗುತ್ತದೆಯೋ ಆಗ
ತಂದೆಯನ್ನು ಶೋ ಮಾಡಬಹುದು. ಇಂತಹ ಏಕರಸ ಸ್ಥಿತಿಯುಳ್ಳ ಮಕ್ಕಳೇ ಯಥಾರ್ಥ ರೀತಿಯಲ್ಲಿ ಎಲ್ಲರಿಗೂ
ತಂದೆಯ ಪರಿಚಯವನ್ನು ಕೊಡಲು ಸಾಧ್ಯ.
ಗೀತೆ:
ಸತ್ತರೂ ನಿಮ್ಮ
ಮಡಿಲಿನಲ್ಲಿಯೇ, ಬದುಕಿದರೂ ನಿಮ್ಮ ಮಡಿಲಿನಲ್ಲಿಯೇ..........
ಓಂ ಶಾಂತಿ.
ಮಕ್ಕಳು ಹಾಡನ್ನು ಕೇಳಿದಿರಿ. ಬದುಕಿದ್ದು ಸಾಯಲು ನಿಮ್ಮ ಬಾಗಿಲಲ್ಲಿ ಬಂದಿದ್ದೇವೆಂದು ಹೇಳುತ್ತಾ
ಬಂದಿದ್ದೀರಿ. ಯಾರ ಬಾಗಿಲಿನಲ್ಲಿ? ಆಗ ಮತ್ತೆ ಇದೇ ಮಾತು ಹೇಳಬೇಕಾಗುತ್ತದೆ - ಗೀತೆಯ ಭಗವಂತ
ಕೃಷ್ಣನೆಂದು ಹೇಳಿದರೆ ಆಗ ಈ ಯಾವ ಮಾತೂ ಬರುವುದಿಲ್ಲ. ಕೃಷ್ಣನೂ ಸಹ ಇಲ್ಲಿರಲು ಸಾಧ್ಯವಿಲ್ಲ.
ಕೃಷ್ಣನಂತೂ ಸತ್ಯಯುಗದ ರಾಜಕುಮಾರ. ಗೀತೆಯನ್ನು ಕೃಷ್ಣನು ಹೇಳಲಿಲ್ಲ. ಗೀತೆಯನ್ನಂತೂ ಪರಮಪಿತನೇ
ಹೇಳಿದರು. ಎಲ್ಲವೂ ಈ ಒಂದು ಮಾತಿನ ಮೇಲೆ ಆಧಾರವಾಗಿದೆ. ನೀವು ಭಕ್ತಿಯಲ್ಲಿ ಎಷ್ಟೊಂದು ಪರಿಶ್ರಮ
ಪಟ್ಟು ಬಂದಿದ್ದೀರಿ ಅದರ ಅವಶ್ಯಕತೆಯಿಲ್ಲ. ಇದು ಒಂದು ಸೆಕೆಂಡಿನ ಮಾತಾಗಿದೆ. ಕೇವಲ ಈ ಒಂದು
ಮಾತನ್ನು ಸಿದ್ಧ ಮಾಡಬೇಕೆಂದರೆ ತಂದೆಯೂ ಎಷ್ಟೊಂದು ಪರಿಶ್ರಮ ಪಡಬೇಕಾಗುವುದು, ಎಷ್ಟೊಂದು
ತಿಳುವಳಿಕೆಯನ್ನು ಕೊಡಬೇಕಾಗುವುದು. ಪ್ರಾಚೀನ ಜ್ಞಾನವನ್ನು ಭಗವಂತನೇ ಕೊಟ್ಟಿದ್ದಾರೆ, ಅದೇ
ಜ್ಞಾನವಾಗಿದೆ. ಆದುದರಿಂದ ಎಲ್ಲಾ ಮಾತುಗಳು ಗೀತೆಯ ಮೇಲೆ ಉಳಿದಿವೆ. ಪರಮಪಿತ ಪರಮಾತ್ಮನೇ ಬಂದು
ದೇವಿ-ದೇವತಾ ಧರ್ಮದ ಸ್ಥಾಪನೆಗಾಗಿ, ಸಹಜ ರಾಜಯೋಗ ಹಾಗೂ ಜ್ಞಾನವನ್ನು ತಿಳಿಸಿದರು. ಈಗ ಅದೆಲ್ಲವೂ
ಪ್ರಾಯಲೋಪವಾಗಿದೆ. ಮನುಷ್ಯರು ಕೃಷ್ಣನು ಮತ್ತೆಂದಾದರೂ ಬಂದು ಗೀತೆಯನ್ನು ಹೇಳುತ್ತಾನೆಂದು
ತಿಳಿದುಕೊಂಡಿದ್ದಾರೆ. ಆದರೆ ನೀವೀಗ ಸೃಷ್ಟಿಚಕ್ರದ ಚಿತ್ರದ ಮೂಲಕ ಗೀತೆಯು ಪಾರಲೌಕಿಕ ಪರಮಪಿತ
ಪರಮಾತ್ಮ ಜ್ಞಾನ ಸಾಗರನೇ ಹೇಳಿದ್ದಾರೆಂಬುದನ್ನು ಬಹಳ ಚೆನ್ನಾಗಿ ಸಿದ್ಧ ಮಾಡಬೇಕು. ಕೃಷ್ಣನ
ಮಹಿಮೆಯೇ ಬೇರೆಯಾಗಿದೆ, ಪರಮಪಿತ ಪರಮಾತ್ಮನ ಮಹಿಮೆಯೇ ಬೇರೆಯಾಗಿದೆ. ಕೃಷ್ಣನು ಸತ್ಯಯುಗದ
ರಾಜಕುಮಾರ, ಯಾರು ಈ ಸಹಜ ರಾಜಯೋಗದಿಂದ ಈ ರಾಜ್ಯಭಾಗ್ಯವನ್ನು ಪಡೆದಿದ್ದಾರೆ. ಆದರೆ ಓದುವ ಸಮಯದಲ್ಲಿ
ಬೇರೆ ನಾಮ, ರೂಪವಿದ್ದು ಆಮೇಲೆ ಯಾವಾಗ ರಾಜ್ಯಭಾಗ್ಯವನ್ನು ಪಡೆಯುತ್ತಾರೆಯೋ ಆಗ ಬೇರೆ ನಾಮ,
ರೂಪವಿರುತ್ತದೆ ಎಂದು ಸಿದ್ಧ ಮಾಡಿ ತೋರಿಸಬೇಕು. ಶ್ರೀ ಕೃಷ್ಣನಿಗೆ ಎಂದೂ ಪತಿತ ಪಾವನ ಎಂದು
ಹೇಳುವುದಿಲ್ಲ. ಪತಿತ ಪಾವನ ಒಬ್ಬ ತಂದೆಯೇ ಆಗಿದ್ದಾರೆ. ಈಗ ಮತ್ತೆ ಶ್ರೀ ಕೃಷ್ಣನ ಆತ್ಮ
ಪತಿತ-ಪಾವನನ ಮೂಲಕ ರಾಜಯೋಗವನ್ನು ಕಲಿತು ಭವಿಷ್ಯ ಪಾವನ ಪ್ರಪಂಚಕ್ಕೆ ರಾಜಕುಮಾರನಾಗುತ್ತಿದ್ದಾನೆ.
ಇದನ್ನು ಸಿದ್ಧ ಮಾಡಿ ತಿಳಿಸಿಕೊಡುವುದರಲ್ಲಿ ಯುಕ್ತಿಯು ಬೇಕು. ವಿದೇಶದವರೆಗೆ ಇದನ್ನು ಸಿದ್ಧ ಮಾಡಿ
ತೋರಿಸಬೇಕು. ಗೀತೆಯೇ ನಂಬರ್ವನ್ ಆಗಿದೆ. ಸರ್ವಶಾಸ್ತ್ರಮಯಿ ಶ್ರೀ ಮತ್ಭಗವದ್ಗೀತಾ ಮಾತಾ. ಈಗ ಈ
ಮಾತೆಗೆ ಯಾರು ಜನ್ಮ ಕೊಟ್ಟರು? ತಂದೆಯೇ ಮಾತೆಯನ್ನು ದತ್ತು ತೆಗೆದುಕೊಳ್ಳುತ್ತಾರಲ್ಲವೆ.
ಗೀತೆಯನ್ನು ಯಾರು ಹೇಳಿದರು? ಕ್ರಿಸ್ತನು ಬೈಬಲ್ನ್ನು ದತ್ತು ತೆಗೆದುಕೊಂಡನೆಂದು ಎಂದಿಗೂ
ಹೇಳುವುದಿಲ್ಲ. ಕ್ರಿಸ್ತರು ಯಾವ ಶಿಕ್ಷಣವನ್ನು ಕೊಟ್ಟಿದ್ದರೋ ನಂತರ ಅದನ್ನು ಬೈಬಲ್ ಮಾಡಿ
ಓದುತ್ತಾರೆ. ಹಾಗೆಯೇ ಗೀತೆಯ ಶಿಕ್ಷಣವನ್ನು ಯಾರು ಕೊಟ್ಟರು, ಅದನ್ನು ನಂತರ ಗ್ರಂಥ ಮಾಡಿ
ಓದುತ್ತಿರುತ್ತಾರೆ. ಇದು ಯಾರಿಗೂ ಗೊತ್ತಿಲ್ಲ. ಉಳಿದೆಲ್ಲಾ ಶಾಸ್ತ್ರಗಳ ಬಗ್ಗೆಯಂತೂ ಗೊತ್ತಿದೆ.
ಇಲ್ಲಿ ಯಾವ ಸಹಜ ರಾಜಯೋಗದ ಶಿಕ್ಷಣವಿದೆಯೋ ಅದನ್ನು ಯಾರು ಕೊಟ್ಟರು ಎಂಬ ಮಾತನ್ನು ಸಿದ್ಧ ಮಾಡಬೇಕು.
ಪ್ರಪಂಚವಂತೂ ದಿನ-ಪ್ರತಿದಿನ ತಮೋಪ್ರಧಾನವಾಗುತ್ತಾ ಹೋಗುತ್ತದೆ. ಇದೆಲ್ಲವೂ ಸ್ವಚ್ಛ
ಬುದ್ಧಿಯಲ್ಲಿಯೇ ಕುಳಿತುಕೊಳ್ಳುತ್ತದೆ. ಯಾರು ಶ್ರೀಮತದಂತೆ ನಡೆಯುವುದಿಲ್ಲವೋ ಅವರಿಗೆ
ಧಾರಣೆಯಾಗುವುದಿಲ್ಲ. ಶ್ರೀಮತವೂ ಸಹ ಹೇಳುತ್ತದೆ, ನೀವು ಏನನ್ನೂ ತಿಳಿಸಲು ಸಾಧ್ಯವಿಲ್ಲ.
ಆದುದರಿಂದ ತಮ್ಮನ್ನು ಜ್ಞಾನಿ ಎಂದು ತಿಳಿದುಕೊಳ್ಳಬೇಡಿ. ಮುಖ್ಯವಾಗಿ ಗೀತೆಯ ಭಗವಂತ ಪರಮಪಿತ
ಪರಮಾತ್ಮ ಅವರೇ ಪತಿತ-ಪಾವನನಾಗಿದ್ದಾರೆಂದು ಸಿದ್ಧ ಮಾಡಬೇಕು. ಮನುಷ್ಯರಂತೂ ಭಗವಂತ ಸರ್ವವ್ಯಾಪಿ
ಎಂದು ಹೇಳಿ ಬಿಡುತ್ತಾರೆ ಅಥವಾ ಬ್ರಹ್ಮ್ ತತ್ವವೆಂದು ಹೇಳಿ ಬಿಡುತ್ತಾರೆ ಅಥವಾ ಸಾಗರರೆಂದು ಹೇಳಿ
ಬಿಡುತ್ತಾರೆ. ಏನು ಬರುತ್ತದೆಯೋ ಅದನ್ನು ಅರ್ಥವಿಲ್ಲದೇ ಹೇಳಿ ಬಿಡುತ್ತಾರೆ. ಈ ಎಲ್ಲಾ ತಪ್ಪುಗಳು
ಗೀತೆಯಿಂದ ಆರಂಭವಾಗಿ ಬಿಡುತ್ತದೆ. ಅದಕ್ಕೆ ಕಾರಣ ಗೀತೆಯ ಭಗವಂತ ಶ್ರೀ ಕೃಷ್ಣನೆಂದು ಹೇಳಿದ್ದು.
ಆದುದರಿಂದ ತಿಳಿಸಿಕೊಡಲು ಗೀತೆಯನ್ನು ತೆಗೆದುಕೊಳ್ಳಬೇಕು. ಬನಾರಸಿಯ ಗುಪ್ತಾಜೀಯವರಿಗೂ ಸಹ ಗೀತೆಯ
ಭಗವಂತ ಶ್ರೀ ಕೃಷ್ಣನಲ್ಲ ಎಂಬ ಮಾತನ್ನು ಸಿದ್ಧ ಮಾಡಿ ಹೇಳಬೇಕೆಂದು ಹೇಳಿದ್ದರು. ಈಗ ಸಮ್ಮೇಳನವು
ನಡೆಯುತ್ತದೆ, ಎಲ್ಲಾ ಧಾರ್ಮಿಕ ವ್ಯಕ್ತಿಗಳೂ ಸಹ ಹೇಳುತ್ತಾರೆ - ಶಾಂತಿಗಾಗಿ ಏನು ಉಪಾಯ ಮಾಡುವುದು?
ಆದರೆ ಈಗ ಶಾಂತಿ ಸ್ಥಾಪನೆ ಮಾಡುವುದು ಪತಿತ ಮನುಷ್ಯರ ಕೈಯಲ್ಲಿಲ್ಲ. ಏಕೆಂದರೆ ಹೇ ಪತಿತ ಪಾವನ ಬಾ
ಎಂದು ಹೇಳುತ್ತಾರೆ. ಮತ್ತೆ ಹೇಗೆ ಶಾಂತಿ ಸ್ಥಾಪನೆ ಮಾಡಲು ಸಾಧ್ಯ? ಕೇವಲ ಕರೆಯುತ್ತಿರುತ್ತಾರಷ್ಟೆ.
ಆದರೆ ಪತಿತರಿಂದ ಪಾವನ ಮಾಡುವಂತಹ ತಂದೆಯನ್ನು ಮಾತ್ರ ತಿಳಿದುಕೊಂಡಿಲ್ಲ. ಭಾರತವು ಪಾವನವಾಗಿತ್ತು
ಆದರೆ ಈಗ ಪತಿತವಾಗಿದೆ. ಹಾಗಾದರೆ ಪತಿತ-ಪಾವನ ಯಾರು? ಇದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ.
ಏಕೆಂದರೆ ರಘುಪತಿ ರಾಘವ ರಾಜಾರಾಂ.... ಎಂದು ಹೇಳಿ ಬಿಡುತ್ತಾರೆ. ಅಂದಾಗ ಆ ರಾಮನಂತೂ
ಪತಿತ-ಪಾವನನಲ್ಲ. ಅವರನ್ನು ಸುಮ್ಮನೆ ಕರೆಯುತ್ತಾರೆ ಆದರೆ ಏನೂ ತಿಳಿದುಕೊಂಡಿಲ್ಲ. ಹಾಗಾದರೆ
ಇದನ್ನು ಯಾರು ಹೇಳುವುದು? ಅತಿ ಉತ್ತಮವಾದ ಮಕ್ಕಳ ಬೇಕಾಗುತ್ತದೆ. ತಿಳಿಸಿಕೊಡಲು ಯುಕ್ತಿಗಳು ಬಹಳ
ಚೆನ್ನಾಗಿ ಬೇಕಾಗುತ್ತದೆ. ಸೃಷ್ಟಿಚಕ್ರದ ಚಿತ್ರವನ್ನು ಬಹಳ ದೊಡ್ಡದನ್ನಾಗಿ ಮಾಡಿದ್ದಾರೆ, ಇದರಿಂದ
ಗೀತೆಯನ್ನು ಭಗವಂತನೇ ರಚಿಸಿದರು ಎಂದು ಸಿದ್ಧವಾಗುತ್ತದೆ. ಆದರೆ ಅವರು ಹೇಳುತ್ತಾರೆ ಯಾರಾದರೇನು
ಎಲ್ಲರೂ ಭಗವಂತನಾಗಿದ್ದಾರೆ. ತಂದೆಯು ಹೇಳುತ್ತಾರೆ - ನೀವು ತಿಳುವಳಿಕೆಯಿಲ್ಲದವರು ನಾನು ಬಂದು
ಪಾವನ ರಾಜ್ಯವನ್ನು ಸ್ಥಾಪನೆ ಮಾಡಿದ್ದೆ, ಅದಕ್ಕೆ ಬದಲು ಶ್ರೀ ಕೃಷ್ಣನ ಹೆಸರನ್ನು ಹಾಕಿ
ಬಿಟ್ಟಿದ್ದಾರೆ. ಪತಿತನನ್ನೇ ಪಾವನ ಮಾಡಿ ಮೊದಲನೆಯ ರಾಜಕುಮಾರನನ್ನಾಗಿ ಮಾಡುತ್ತೇನೆ. ಭಗವಾನುವಾಚ
- ನಾನು ಕೃಷ್ಣನ ಆತ್ಮನನ್ನು ದತ್ತು ತೆಗೆದುಕೊಂಡು ಬ್ರಹ್ಮನನ್ನಾಗಿ ಮಾಡಿ ಅವರ ಮೂಲಕ ಜ್ಞಾನ
ತಿಳಿಸುತ್ತೇನೆ. ಆ ಬ್ರಹ್ಮನು ಮತ್ತೆ ಈ ಸಹಜ ರಾಜಯೋಗದಿಂದ ಸತ್ಯಯುಗದಲ್ಲಿ ಮೊದಲನೇ
ರಾಜಕುಮಾರನಾಗುತ್ತಾನೆ. ಈ ಒಂದು ಜ್ಞಾನವು ಯಾರ ಬುದ್ಧಿಯಲ್ಲಿಯೂ ಇಲ್ಲ.
ನೀವು ಮೊದಲು ಈ ತಪ್ಪನ್ನು ಸಿದ್ಧ ಮಾಡಿ ತೋರಿಸಬೇಕು – ಶ್ರೀ ಮತ್ಭಗವದ್ಗೀತೆಯು ಸರ್ವಶಾಸ್ತ್ರಗಳ
ತಾಯಿ-ತಂದೆಯಾಗಿದೆ, ಅದರ ರಚಯಿತ ಯಾರು? ಹೇಗೆ ಕ್ರಿಸ್ತನು ಬೈಬಲ್ಗೆ ಜನ್ಮ ಕೊಟ್ಟನು, ಅದು
ಕ್ರಿಶ್ಚಿಯನ್ನ್ ಧರ್ಮದ ಶಾಸ್ತ್ರವಾಯಿತು. ಒಳ್ಳೆಯದು ಬೈಬಲ್ನ ತಂದೆ ಯಾರು? ಕ್ರಿಸ್ತ.
ಕ್ರಿಸ್ತನಿಗೆ ತಾಯಿ-ತಂದೆ ಎಂದು ಹೇಳುವುದಿಲ್ಲ, ಏಕೆಂದರೆ ಅಲ್ಲಿ ತಾಯಿಯ ಮಾತು ಬರುವುದಿಲ್ಲ. ಆದರೆ
ಇಲ್ಲಿ ತಾಯಿ-ತಂದೆಯಿದ್ದಾರೆ. ಕ್ರಿಶ್ಚಿಯನ್ನರು ಕೃಷ್ಣನ ಧರ್ಮದೊಂದಿಗೆ ರೀಸ್ ಮಾಡಿದ್ದಾರೆ.
ಅವರಂತೂ ಕ್ರೈಸ್ತನನ್ನು ಒಪ್ಪಿಕೊಳ್ಳುವವರಾಗಿದ್ದಾರೆ. ಹೇಗೆ ಬುದ್ಧನು ಧರ್ಮ ಸ್ಥಾಪನೆ ಮಾಡಿದ
ಕಾರಣ ಬೌದ್ಧರ ಶಾಸ್ತ್ರವು ಇದೆ. ಹಾಗಾದರೆ ಈಗ ಈ ಗೀತೆಯನ್ನು ಯಾರು ಹೇಳಿದರು? ಅದರಿಂದ ಯಾವ ಧರ್ಮವು
ಸ್ಥಾಪನೆಯಾಯಿತು? ಇದನ್ನು ಯಾರೂ ತಿಳಿದುಕೊಂಡಿಲ್ಲ. ಪತಿತ ಪಾವನ ಪರಮಪಿತ ಪರಮಾತ್ಮನೇ ಕೊಟ್ಟರೆಂದೂ
ಸಹ ಹೇಳುವುದಿಲ್ಲ. ಈಗ ಸೃಷ್ಟಿಚಕ್ರವನ್ನು ಈ ರೀತಿ ಮಾಡಲಾಗಿದೆ, ಇದರಿಂದ ಪರಮಪಿತ ಪರಮಾತ್ಮನೇ ಗೀತಾ
ಜ್ಞಾನವನ್ನು ಕೊಟ್ಟರೆಂದು ತಿಳಿಸಿ ಕೊಡಬಹುದು. ರಾಧಾ-ಕೃಷ್ಣರಂತೂ ಸತ್ಯಯುಗದಲ್ಲಿದ್ದರು, ಅವರಂತೂ
ತನಗೆ ಈ ಜ್ಞಾನವನ್ನು ಕೊಡಲಿಲ್ಲ. ಜ್ಞಾನವನ್ನು ಕೊಡುವಂತಹವರು ಬೇರೆಯವರಾಗಿರಬೇಕು. ಬೇರೆ ಯಾರೋ
ಅವರನ್ನು ಉತ್ತೀರ್ಣ ಮಾಡಿಸಿರಬೇಕು. ಇಂತಹ ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವ ಜ್ಞಾನವನ್ನು
ಯಾರು ಕೊಟ್ಟರು? ಅದೃಷ್ಟವು ತಾನೇ ತಾನಾಗಿ ಆಗುವುದಿಲ್ಲ. ಅದೃಷ್ಟವನ್ನು ಮಾಡಿಸುವಂತಹವರು ತಂದೆ
ಅಥವಾ ಶಿಕ್ಷಕನಾಗಿರಬೇಕು. ಗುರು ಮುಕ್ತಿ (ಗತಿ)ಯನ್ನು ಕೊಡುತ್ತಾರೆಂದು ಹೇಳುತ್ತಾರೆ. ಆದರೆ
ಗತಿ-ಸದ್ಗತಿಯ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಗೃಹಸ್ಥದಲ್ಲಿರುವವರಿಗೆ ಸದ್ಗತಿ ಸಿಗುತ್ತದೆ.
ಹಾಗೆಯೇ ಗತಿ ಎಂದರೆ ಎಲ್ಲರೂ ತಂದೆಯ ಬಳಿ ಹೋಗುತ್ತಾರೆ. ಈ ಮಾತುಗಳನ್ನು ಯಾರೂ
ತಿಳಿದುಕೊಳ್ಳುವುದಿಲ್ಲ. ಅವರಂತೂ ಭಕ್ತಿ ಮಾರ್ಗದಲ್ಲಿ ಅತಿ ದೊಡ್ಡ ಮಳಿಗೆ (ಅಂಗಡಿ) ಗಳನ್ನು
ತೆರೆದು ಕುಳಿತಿದ್ದಾರೆ. ಆದರೆ ಸತ್ಯ ಜ್ಞಾನ ಮಾರ್ಗದ ಅಂಗಡಿ ಇದೊಂದೇ ಆಗಿದೆ. ಬಾಕಿ ಉಳಿದವೆಲ್ಲವೂ
ಭಕ್ತಿಮಾರ್ಗದ ಮಳಿಗೆಗಳಾಗಿವೆ. ತಂದೆಯೂ ಸಹ ಹೇಳುತ್ತಾರೆ - ಈ ವೇದ-ಶಾಸ್ತ್ರ ಮೊದಲಾದುವುಗಳೆಲ್ಲವೂ
ಭಕ್ತಿಮಾರ್ಗದ ಸಾಮಗ್ರಿಗಳಾಗಿವೆ. ಈ ಜಪ, ತಪ, ವೇದ-ಶಾಸ್ತ್ರ ಮೊದಲಾದುವುಗಳನ್ನು ಅಧ್ಯಯನ
ಮಾಡುವುದರಿಂದ ನಾನು ಸಿಗುವುದಿಲ್ಲ. ನಾನು ಮಕ್ಕಳಿಗೆ ಜ್ಞಾನವನ್ನು ಕೊಟ್ಟು ಪಾವನರನ್ನಾಗಿ
ಮಾಡುತ್ತೇನೆ. ನಾನು ಇಡೀ ಸೃಷ್ಟಿಯ ಸದ್ಗತಿದಾತನಾಗಿದ್ದೇನೆ. ಗತಿ (ಮುಕ್ತಿ) ಯ ಮೂಲಕ ಹೋಗಿ ನಂತರ
ಸದ್ಗತಿಯಲ್ಲಿ ಬರಬೇಕು. ಎಲ್ಲರೂ ಸತ್ಯಯುಗದಲ್ಲಿ ಬರುವುದಿಲ್ಲ. ಈ ನಾಟಕ ಮಾಡಲ್ಪಟ್ಟಿದೆ. ಕಲ್ಪದ
ಹಿಂದೆ ನಿಮಗೆ ಯಾವುದನ್ನು ಕಲಿಸಲಾಗಿತ್ತು, ಯಾವ ಚಿತ್ರವನ್ನು ಮಾಡಲಾಗಿತ್ತು, ಈಗ ಅದನ್ನು
ಮಾಡಿಸುತ್ತಿದ್ದೇನೆ.
ಮನುಷ್ಯರು ಮೂರು ಧರ್ಮಗಳ ಕಾಲಿನ ಮೇಲೆ ಸೃಷ್ಟಿಯು ನಿಂತಿದೆ ಎಂದು ಹೇಳುತ್ತಾರೆ. ಒಂದು ದೇವತಾ
ಧರ್ಮದ ಕಾಲು ಮುರಿಯಲ್ಪಟ್ಟಿದೆ ಆದುದರಿಂದ ಅಲುಗಾಡುತ್ತಿರುತ್ತದೆ. ಮೊದಲು ಒಂದೇ ಧರ್ಮವಿರುತ್ತದೆ,
ಅದನ್ನು ಅದ್ವೈತ ರಾಜ್ಯವೆಂದು ಕರೆಯಲಾಗುವುದು. ನಂತರ ಒಂದು ಕಾಲು ಕಡಿಮೆಯಾಗಿ ಮೂರು ಕಾಲುಗಳು
ಉಳಿಯುತ್ತವೆ, ಇದರಲ್ಲಿ ಸ್ವಲ್ಪವೂ ಶಕ್ತಿಯಿರುವುದಿಲ್ಲ. ಪರಸ್ಪರ ಯುದ್ಧ-ಜಗಳಗಳು
ನಡೆಯುತ್ತಿರುತ್ತವೆ. ದಣಿಯನ್ನು ತಿಳಿಯದಿರುವುದರಿಂದ ನಿಧನಿಕರಾಗಿದ್ದಾರೆ. ಹೀಗೆ ತಿಳಿಸಲು ಬಹಳ
ಯುಕ್ತಿಗಳು ಬೇಕಾಗಿದೆ. ಪ್ರದರ್ಶನಿಯಲ್ಲಿ ಈ ಮಾತನ್ನು ತಿಳಿಸಬೇಕು - ಗೀತೆಯ ಭಗವಂತ ಶ್ರೀ
ಕೃಷ್ಣನಲ್ಲ, ಪರಮಪಿತನಾಗಿದ್ದಾರೆ. ಅವರ ಜನ್ಮ ಸ್ಥಾನ ಭಾರತವಾಗಿದೆ. ಶ್ರೀ ಕೃಷ್ಣ ಸಾಕಾರಿಯಾಗಿದ್ದು
ತಂದೆ ನಿರಾಕಾರಿಯಾಗಿದ್ದಾರೆ. ಅವರ ಮಹಿಮೆಯೂ ಸಂಪೂರ್ಣ ಬೇರೆಯಾಗಿದೆ. ಹೀಗೆ ಯುಕ್ತಿಯಿಂದ
ಚಿತ್ರಗಳನ್ನು ಮಾಡಿ ಗೀತೆಯನ್ನು ಹೇಳಿದವರು ಯಾರೆಂದು ಸಿದ್ಧ ಮಾಡಬೇಕು. ಕುರುಡರ ಮುಂದೆ ಅತಿ
ದೊಡ್ಡ ಕನ್ನಡಿಯನ್ನು ಇಡಬೇಕು. ಇದು ಕುರುಡರ ಮುಂದೆ ಕನ್ನಡಿ ಇಟ್ಟ ಹಾಗೆ. ಅತಿಯಾಗಿ ಹೋಗಬಾರದು,
ಅತಿ ದೊಡ್ಡ ತಪ್ಪು ಇದಾಗಿದೆ. ಪರಮಪಿತ ಪರಮಾತ್ಮನ ಮಹಿಮೆಯೇ ಬೇರೆಯಾಗಿದೆ, ಅವರಿಗೆ ಬದಲು ಶ್ರೀ
ಕೃಷ್ಣನ ಮಹಿಮೆಯನ್ನು ಮಾಡಿ ಬಿಟ್ಟಿದ್ದಾರೆ. ಲಕ್ಷ್ಮಿ-ನಾರಾಯಣರ ಚಿತ್ರದ ಕೆಳಗೆ
ರಾಧಾ-ಕೃಷ್ಣರಿದ್ದಾರೆ. ಅವರೇ ಮತ್ತೆ ಲಕ್ಷ್ಮಿ-ನಾರಾಯಣರಾಗುತ್ತಾರೆ. ಮತ್ತೆ ಅವರೇ
ಲಕ್ಷ್ಮಿ-ನಾರಾಯಣ ಸತ್ಯಯುಗದಲ್ಲಿ, ರಾಮ-ಸೀತೆ ತ್ರೇತಾಯುಗದಲ್ಲಿ. ಮೊದಲನೇ ಸ್ಥಾನದ ಮಗು ಶ್ರೀ
ಕೃಷ್ಣನಾಗಿದ್ದಾನೆ ಮತ್ತೆ ಅವನನ್ನು ದ್ವಾಪರದಲ್ಲಿ ತೆಗೆದುಕೊಂಡು ಹೋಗಲಾಗಿದೆ. ಇದೆಲ್ಲವೂ
ಭಕ್ತಿಮಾರ್ಗದಲ್ಲಿ ನಿಗದಿಯಾಗಿದೆ. ವಿದೇಶದವರು ಈ ಮಾತುಗಳನ್ನು ಹೇಗೆ ತಿಳಿದುಕೊಳ್ಳುವರು.
ನಾಟಕದನುಸಾರವಾಗಿ ಈ ಜ್ಞಾನವು ಯಾರ ಬಳಿಯೂ ಇಲ್ಲ. ಜ್ಞಾನವೆಂದರೆ ಹಗಲು, ಭಕ್ತಿಗೆ ರಾತ್ರಿ ಎಂದು
ಹೇಳುತ್ತಾರೆ. ಬ್ರಹ್ಮನ ಹಗಲು, ಬ್ರಹ್ಮನ ರಾತ್ರಿ. ಸತ್ಯಯುಗದ ಸ್ಥಾಪನೆ ಮಾಡುವವರು ಯಾರು? ಬ್ರಹ್ಮ
ಎಲ್ಲಿಂದ ಬಂದರು? ಸೂಕ್ಷ್ಮವತನ ಎಲ್ಲಿಂದ ಬಂದಿತು? ಪರಮಪಿತ ಪರಮಾತ್ಮನೇ ಸೂಕ್ಷ್ಮ ಸೃಷ್ಟಿಯನ್ನು
ರಚನೆ ಮಾಡುತ್ತಾರೆ, ಅಲ್ಲಿ ಬ್ರಹ್ಮನನ್ನು ತೋರಿಸುತ್ತಾರೆ. ಆದರೆ ಅಲ್ಲಿ ಪ್ರಜಾಪಿತ ಬ್ರಹ್ಮನಿರಲು
ಸಾಧ್ಯವಿಲ್ಲ. ಅವಶ್ಯವಾಗಿ ಪ್ರಜಾಪಿತ ಬ್ರಹ್ಮಾ ಬೇರೆಯಾಗಿದ್ದಾರೆ, ಅವರು ಎಲ್ಲಿಂದ ಬಂದರು? ಈ
ಮಾತುಗಳನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಕೃಷ್ಣನ ಅಂತಿಮ ಜನ್ಮದಲ್ಲಿ ಕೃಷ್ಣನನ್ನು ಪರಮಾತ್ಮನು
ತನ್ನ ರಥವನ್ನಾಗಿ ಮಾಡಿಕೊಂಡರು ಅಂದಾಗ ಇದು ಯಾರ ಬುದ್ಧಿಯಲ್ಲಿಯೂ ಇಲ್ಲ.
ಇದು ಅತಿ ದೊಡ್ಡ ಶಾಲೆ ಆಗಿದೆ. ಶಿಕ್ಷಕನಂತೂ ಈ ವಿದ್ಯಾರ್ಥಿಗಳು ಹೇಗಿದ್ದಾರೆಂದು
ತಿಳಿದುಕೊಳ್ಳುತ್ತಾರಲ್ಲವೆ ಅಂದಾಗ ತಂದೆಯು ತಿಳಿದುಕೊಳ್ಳುವುದಿಲ್ಲವೇನು? ಇದು ಬೇಹದ್ದಿನ ತಂದೆಯ
ತರಗತಿ ಆಗಿದೆ. ಇಲ್ಲಿಯ ಮಾತುಗಳು ಭಿನ್ನವಾಗಿದೆ. ಶಾಸ್ತ್ರಗಳಲ್ಲಂತೂ ಪ್ರಳಯ ಮುಂತಾದವುಗಳನ್ನು
ತೋರಿಸಿ ಎಷ್ಟೊಂದು ಕೋಲಾಹಲ ಮಾಡಿ ಬಿಟ್ಟಿದ್ದಾರೆ ಎಷ್ಟೊಂದು ನಶೆ ಇದೆ, ರಾಮಾಯಣ, ಗೀತೆ
ಮೊದಲಾದುವುಗಳನ್ನು ಹೇಗೆ ಕುಳಿತು ತಿಳಿಸುತ್ತಾರೆ, ಕೃಷ್ಣನಂತೂ ಗೀತೆಯನ್ನು ತಿಳಿಸಿಲ್ಲ, ಆತನಂತೂ
ಗೀತೆಯ ಜ್ಞಾನವನ್ನು ಕೇಳಿ ರಾಜ್ಯ ಪದವಿಯನ್ನು ಪಡೆದನು, ಸಿದ್ಧ ಮಾಡಿ ತಿಳಿಸುತ್ತಾರೆ ಗೀತೆಯ
ಭಗವಂತ ಇವರಾಗಿದ್ದಾರೆ, ಅವರ ಗುಣಗಳು ಇದು. ಈ ಒಂದು ತಪ್ಪಿನ ಕಾರಣದಿಂದ ಭಾರತ ಕವಡೆಯ ಸಮಾನ ಆಗಿದೆ.
ನೀವು ಮಾತೆಯರು ಅವರಿಗೆ ಹೇಳಬಹುದಾಗಿದೆ ನೀವುಗಳು ಹೇಳುತ್ತೀರಿ ಮಾತೆ ನರಕಕ್ಕೆ ದ್ವಾರ , ಆದರೆ
ಪರಮಾತ್ಮನಂತೂ ಜ್ಞಾನದ ಕಳಸವನ್ನು ಮಾತೆಯರ ಮೇಲಿಟ್ಟಿದ್ದಾರೆ. ಮಾತೆಯರೇ ಸ್ವರ್ಗದ
ದ್ವಾರವಾಗುತ್ತಾರೆ, ನೀವು ನಿಂದನೆ ಮಾಡುತ್ತಿರುವಿರಿ. ಆದರೆ ಹೇಳುವಂತಹವರು ಬಹಳ ಬುದ್ಧಿವಂತರು
ಬೇಕು. ಪಾಯಿಂಟ್ಸ್ ಗಳನ್ನು ಪಟ್ಟಿ ಮಾಡಿ ತಿಳಿಸಬೇಕಾಗಿದೆ. ವಾಸ್ತವದಲ್ಲಿ ಭಕ್ತಿಮಾರ್ಗವು
ಗೃಹಸ್ಥಿಯರಿಗಾಗಿಯೇ ಇರುವುದು ಇದು ಪ್ರವೃತ್ತಿ ಮಾರ್ಗದ ಸಹಜ ರಾಜಯೋಗವಾಗಿದೆ. ನಾವು ಇದನ್ನು
ಸಿದ್ಧ ಮಾಡಿ ತೋರಿಸುತ್ತೇವೆ, ಮಕ್ಕಳು ಶೋ ಮಾಡಬೇಕು ಸದಾ ಹರ್ಷಿತಮುಖ, ಅಚಲ, ಏಕಾಗ್ರತೆ,
ನಶೆಯಲ್ಲಿರಬೇಕಾಗಿದೆ. ಮುಂದೆ ಹೋಗುತ್ತಾ ನಿಮ್ಮ ಮಹಿಮೆಯು ಗೊತ್ತಾಗುತ್ತದೆ. ನೀವೆಲ್ಲರೂ
ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಕುಮಾರಿಯೆಂದರೆ 21 ಜನ್ಮಗಳಿಗೆ ತಂದೆಯಿಂದ ಆಸ್ತಿಯನ್ನು
ಕೊಡಿಸುವವರಾಗಿದ್ದಾರೆ. ಕುಮಾರಿಯ ಮಹಿಮೆ ಬಹಳ ಶ್ರೇಷ್ಠವಾಗಿದೆ. ನಿಮ್ಮ ಮಮ್ಮಾ ಮುಖ್ಯ
ಕುಮಾರಿಯಾಗಿದ್ದಾರೆ. ಚಂದ್ರಮನ ಜೊತೆ ಚೆನ್ನಾಗಿರುವಂತಹ ನಕ್ಷತ್ರವೂ ಬೇಕು. ಇವರು
ಜ್ಞಾನಸೂರ್ಯನಾಗಿದ್ದಾರೆ, ಈ ಗುಪ್ತ ಮಮ್ಮಾ ಬೇರೆಯಾಗಿದ್ದಾರೆ. ಈ ರಹಸ್ಯವನ್ನು ನೀವು ಮಕ್ಕಳೇ
ತಿಳಿದುಕೊಂಡು ತಿಳಿಸಿಕೊಡುತ್ತೀರಿ. ಆ ಮಮ್ಮಾನ ಹೆಸರು ಬೇರೆಯಾಗಿದೆ, ಅವರ ನೆನಪಾರ್ಥವೇ
ಮಂದಿರವಾಗಿದೆ. ಈ ಗುಪ್ತ ವೃದ್ಧ ತಾಯಿಯ ಮಂದಿರವಿದೆಯೇನು? ಈ ತಾಯಿ-ತಂದೆ ಜೊತೆಯಲ್ಲಿದ್ದಾರೆ.
ಪ್ರಪಂಚವು ಇದನ್ನು ತಿಳಿದುಕೊಂಡಿಲ್ಲ. ಕೃಷ್ಣನಂತೂ ತಾಯಿ-ತಂದೆಯಲ್ಲ ಆದರೆ ಅವನು ಸತ್ಯಯುಗದ
ರಾಜಕುಮಾರನಾಗಿದ್ದಾನೆ. ಕೃಷ್ಣನಲ್ಲಿ ಭಗವಂತ ಬರಲು ಸಾಧ್ಯವಿಲ್ಲ, ಹೀಗೆ ತಿಳಿಸಿ ಕೊಡುವುದು ಬಹಳ
ಸಹಜವಾಗಿದೆ. ಗೀತೆಯ ಭಗವಂತನ ಮಹಿಮೆಯು ಬೇರೆಯಾಗಿದೆ, ಅವರು ಪತಿತ-ಪಾವನ, ಇಡೀ ಸೃಷ್ಟಿಗೆ
ಮಾರ್ಗದರ್ಶಕ ಮುಕ್ತಿದಾತನಾಗಿದ್ದಾರೆ. ಮನುಷ್ಯರು ಚಿತ್ರಗಳಿಂದ, ನಿಜವಾಗಿಯೂ ಪರಮಾತ್ಮನ ಮಹಿಮೆಯು
ಬೇರೆಯಾಗಿದೆ. ಎಲ್ಲರೂ ಒಂದೇ ಆಗಲು ಸಾಧ್ಯವಿಲ್ಲವೆಂದು ತಿಳಿದುಕೊಳ್ಳುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ತಮ್ಮ
ಸ್ಥಿತಿಯನ್ನು ಬಹಳ ನಶೆ, ಅಚಲ-ಅಡೋಲವನ್ನಾಗಿ ಮಾಡಿಕೊಳ್ಳಬೇಕು. ಸದಾ ಹರ್ಷಿತಮುಖರಾಗಿರಬೇಕು.
2. ಜ್ಞಾನದ ಶುದ್ಧ ನಶೆಯಲ್ಲಿದ್ದು ತಂದೆಯನ್ನು ಶೋ ಮಾಡಬೇಕು. ಗೀತೆಯ ಭಗವಂತನನ್ನು ಸಿದ್ಧ ಮಾಡಿ
ತಂದೆಯ ಸತ್ಯ ಪರಿಚಯವನ್ನು ಕೊಡಬೇಕು.
ವರದಾನ:
ಸರ್ವ
ಪ್ರಾಪ್ತಿಗಳ ಅನುಭೂತಿಯ ಮುಖಾಂತರ ಮಾಯೆಗೆ ವಿಧಾಯಿ ಕೊಟ್ಟು ಅಭಿನಂದನೆಗಳನ್ನು ಪಡೆಯುವಂತಹ
ಅಧೃಷ್ಠಶಾಲಿ ಆತ್ಮ ಭವ.
ಯಾರ ಜೊತೆಗಾರ
ಸರ್ವ ಶಕ್ತಿವಂತ ತಂದೆ ಇದ್ದಾರೆ, ಅವರಿಗೆ ಸದಾಕಾಲಕ್ಕೆ ಸರ್ವ ಪ್ರಾಪ್ತಿಗಳು ಇರುತ್ತವೆ. ಅವರ
ಎದುರು ಎಂದೂ ಯಾವ ಪ್ರಕಾರದ ಮಾಯೆ ಬರಲು ಸಾಧ್ಯವಿಲ್ಲ. ಯಾರು ಪ್ರಾಪ್ತಿಗಳ ಅನುಭೂತಿಯಲ್ಲಿರುತ್ತಾ
ಮಾಯೆಗೆ ವಿಧಾಯಿ ಕೊಡುತ್ತಾರೆ ಅವರಿಗೆ ಬಾಪ್ದಾದಾರವರ ಮುಖಾಂತರ ಪ್ರತಿ ಹೆಜ್ಜೆಯಲ್ಲಿ ಅಭಿನಂದನೆಗಳು
ಸಿಗುವುದು. ಆದ್ದರಿಂದ ಸದಾ ಇದೇ ಸ್ಮತಿಯಲ್ಲಿರಿ ಸ್ವಯಂ ಭಗವಂತ ನಾವು ಆತ್ಮಗಳಿಗೆ ಅಭಿನಂದನೆಗಳನ್ನು
ತಿಳಿಸುತ್ತಾರೆ, ಏನು ಯೋಚಿಸಿಯೇ ಇರಲಿಲ್ಲಾ ಅದನ್ನು ಪಡೆದುಕೊಂಡು ಬಿಟ್ಟೆವು, ತಂದೆಯನ್ನು ಪಡೆದು
ಎಲ್ಲವನ್ನೂ ಪಡೆದೆನು ಇಂತಹ ಅಧೃಷ್ಠಶಾಲಿ ಆತ್ಮ ಆಗಿರುವಿರಿ.
ಸ್ಲೋಗನ್:
ಸ್ವ ಚಿಂತನೆ
ಮತ್ತು ಪ್ರಭು ಚಿಂತನೆ ಮಾಡಿ ಆಗ ವ್ಯರ್ಥ ಚಿಂತನೆ ಸ್ವತಃವಾಗಿ ಸಮಾಪ್ತಿಯಾಗಿ ಬಿಡುವುದು.