10.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಸರ್ವೀಸಿನ ವೃದ್ಧಿಗಾಗಿ ಹೊಸ-ಹೊಸ, ವಿಧಾನಗಳನ್ನು ರಚಿಸಿ, ಹಳ್ಳಿ-ಹಳ್ಳಿಗೆ ಹೋಗಿ ಸರ್ವೀಸ್ ಮಾಡಿ, ಸರ್ವೀಸ್ ಮಾಡುವುದಕ್ಕಾಗಿ ಜ್ಞಾನದ ಪರಾಕಾಷ್ಟತೆ(ತಿಳುವಳಿಕೆ) ಬೇಕಾಗಿದೆ”

ಪ್ರಶ್ನೆ:
ಬುದ್ಧಿಯಿಂದ ಹಳೆಯ ಪ್ರಪಂಚವನ್ನು ಮರೆಯಲು ಸಹಜವಾದ ಯುಕ್ತಿ ಯಾವುದಾಗಿದೆ?

ಉತ್ತರ:
ಮನೆ (ಪರಮಧಾಮ) ಯನ್ನು ಪದೇ-ಪದೇ ನೆನಪು ಮಾಡಿ. ಈಗ ಈ ಮೃತ್ಯುಲೋಕದಿಂದ ಲೆಕ್ಕಾಚಾರವನ್ನು ಮುಗಿಸಿಕೊಂಡು ಅಮರಲೋಕಕ್ಕೆ ಹೋಗಬೇಕೆನ್ನುವ ಬುದ್ಧಿಯಿರಬೇಕು. ದೇಹದಿಂದಲೂ ಭಿಕ್ಷುಕ, ಈ ದೇಹವೂ ನನ್ನದಲ್ಲ - ಈ ಅಭ್ಯಾಸವಿದ್ದಾಗ ಹಳೆಯ ಪ್ರಪಂಚವವು ಮರೆತು ಹೋಗುತ್ತದೆ. ಈ ಹಳೆಯ ಪ್ರಪಂಚದಲ್ಲಿರುತ್ತಾ ತಮ್ಮ ಸ್ಥಿತಿಯನ್ನು ಪರಿಪಕ್ವ ಮಾಡಿಕೊಳ್ಳಬೇಕು, ಏಕರಸ ಸ್ಥಿತಿಗಾಗಿ ಪರಿಶ್ರಮ ಪಡಬೇಕಾಗುತ್ತದೆ.

ಗೀತೆ:
ಮಾತಾ ಓ ಮಾತಾ

ಓಂ ಶಾಂತಿ.
ಜಗದಂಬೆಯ ಮಹಿಮೆಯು ಭಾರತದಲ್ಲಿ ಬಹಳ ಇದೆ. ಜಗದಂಬೆಯನ್ನು ಭಾರತವಾಸಿಗಳ ವಿನಃ ಬೇರೆ ಯಾರೂ ತಿಳಿದುಕೊಂಡಿಲ್ಲ. ಕೇವಲ ಈವ್ ಅರ್ಥಾತ್ ಬೀಬಿ ಎಂಬ ಹೆಸರನ್ನು ಕೇಳಿದ್ದಾರಷ್ಟೇ. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ - ಬೀಬಿ ಹಾಗೂ ಮಾಲೀಕನ ವಿನಃ ರಚನೆಯನ್ನು ರಚಿಸಲು ಸಾಧ್ಯವಿಲ್ಲ. ಆಗ ಅಗತ್ಯವಾಗಿ ಜಗದಂಬೆಯು ಪ್ರಕಟವಾಗಬೇಕಾಗುತ್ತದೆ. ಹಿಂದೆ ಒಮ್ಮೆ ಇದ್ದರು ಅದಕ್ಕೆ ಅವರ ಮಹಿಮೆಯನ್ನು ಮಾಡುತ್ತೇವೆ. ಭಾರತದ ಮಹಿಮೆಯು ಬಹಳ ಇದೆ. ಭಾರತವನ್ನು ಸ್ವರ್ಗವೆಂದೂ ಹೇಳುತ್ತಾರೆ ಹಾಗೂ ಪ್ರಾಚೀನ ಭಾರತವೆಂದೂ ಹೇಳುತ್ತಾರೆ ಆದ್ದರಿಂದ ಅವಶ್ಯವಾಗಿ ಸ್ವರ್ಗವಾಗಿರಬೇಕು. ಇದನ್ನು ನೀವು ಈಶ್ವರ ಸಂತಾನರ ವಿನಃ ಬೇರೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಯಾರು ಕಲ್ಪದ ಹಿಂದೆ ತಿಳಿದುಕೊಂಡಿದ್ದಾರೆಯೋ ಅವರೇ ಬರುತ್ತಿರುತ್ತಾರೆ. ಪ್ರದರ್ಶನಿಗಳು ನಡೆಯುತ್ತಿರುತ್ತವೆ. ಇವೆಲ್ಲಾ ಕಲ್ಪದ ಹಿಂದೆಯೂ ನಡೆದಿರಬೇಕೆಂದು ತಿಳಿದುಕೊಳ್ಳುತ್ತಾರೆ. ಎಲ್ಲರಿಗೂ ತಿಳಿಸಲು ಈ ಅಕ್ಷರಗಳು ಬಹಳ ಚೆನ್ನಾಗಿದೆ. ಪವಿತ್ರ ಆತ್ಮ, ಪವಿತ್ರತೆಯಿಂದ ನೀವು ಪ್ರಕಾಶತೆಯ ಕಿರೀಟವನ್ನು ಪಡೆಯುತ್ತೀರಿ. ಹಾಗೆಯೇ ದಾನ-ಪುಣ್ಯ ಮಾಡುವವರಿಗೆ ಪುಣ್ಯಾತ್ಮನೆಂದು ಕರೆಯುತ್ತಾರೆ. ಅದನ್ನು ಆಂಗ್ಲ ಭಾಷೆಯಲ್ಲಿ ಫಿಲಾಂತ್ರೊಫಿಸ್ಟ್ (ಮಹಾದಾನಿ) ಎಂದು ಕರೆಯುತ್ತಾರೆ. ಪವಿತ್ರರಿಗೆ ನಿರ್ವಿಕಾರಿ ಎಂದು ಹೇಳಲಾಗುತ್ತದೆ. ಹೀಗೆ ಭಿನ್ನ-ಭಿನ್ನವಾದ ಅಕ್ಷರಗಳಿವೆ. ಭಾರತದಲ್ಲಿ ಬಹಳ ದಾನ-ಪುಣ್ಯ ಮಾಡುತ್ತಾರೆ. ಆದರೆ ವಿಶೇಷವಾಗಿ ಗುರುಗಳಿಗೆ ದಾನ ಮಾಡುತ್ತಾರೆ. ಅವರಿಗೆ ಪವಿತ್ರ ಆತ್ಮನೆಂದು ಹೇಳಬಹುದು ಆದರೆ ಪುಣಾತ್ಮನೆಂದು ಹೇಳಲಾಗುವುದಿಲ್ಲ. ಅವರು ದಾನ-ಪುಣ್ಯ ಮಾಡುವುದಿಲ್ಲ. ಆದರೆ ದಾನ-ಪುಣ್ಯವನ್ನು ತೆಗೆದುಕೊಳ್ಳುತ್ತಾರೆ. ಈಗ ಇವೆಲ್ಲವುಗಳಿಂದ ಬುದ್ಧಿಯೋಗವನ್ನು ತೆಗೆದು ಒಬ್ಬ ತಂದೆಯೊಂದಿಗೆ ಜೋಡಿಸಬೇಕು. ಆದುದರಿಂದ ತಂದೆಯು ಇವೆಲ್ಲವೂ ಸರಿಯಿಲ್ಲವೆಂದು ಹೇಳಬೇಕಾಗುವುದು. ಆದರೆ ನಾನು ಇವರೆಲ್ಲರ ಉದ್ಧಾರವನ್ನು ಮಾಡಲು ಬರುತ್ತೇನೆ. ನೀವು ಜ್ಞಾನಸಾಗರನಿಂದ ಬಂದಿರುವಂತಹ ಜ್ಞಾನ ಗಂಗೆಯರಾಗಿದ್ದೀರಿ. ವಾಸ್ತವದಲ್ಲಿ ಗಂಗೆ ಎಂಬ ಶಬ್ಧವೂ ಸಹ ಸರಿಯಿಲ್ಲ. ಆದರೆ ಗಾಯನವಿದೆ, ಆದುದರಿಂದ ಹೋಲಿಸಲಾಗಿದೆ. ತಂದೆಯು ಬಂದು ಹಳೆಯ ಜಗತ್ತಿನ, ಹಳೆಯ ಎಲ್ಲಾ ವಸ್ತುಗಳನ್ನು ಹೊಸದನ್ನಾಗಿ ಮಾಡುತ್ತಾರೆ. ಸ್ವರ್ಗವು ಹೊಸ ವಸ್ತುವಾಗಿದೆ, ಹೊಸ ವಸ್ತುವಿನ ಸಮಾಚಾರವನ್ನು ತಂದೆಯೊಬ್ಬರೇ ತಿಳಿದುಕೊಂಡಿದ್ದಾರೆ, ಪ್ರಪಂಚದವರು ತಿಳಿದುಕೊಂಡಿಲ್ಲ.

ಭಗವಾನುವಾಚ, ಆದರೆ ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಎಲ್ಲರ ಬುದ್ಧಿಯೋಗ ಭಗವಂತನಿಂದ ದೂರವಾಗಿ ಬಿಟ್ಟಿದೆ. ಆದುದರಿಂದ ಸರ್ವವ್ಯಾಪಿ ಎಂದು ಹೇಳಿ ಬಿಟ್ಟಿದ್ದಾರೆ. ಕೃಷ್ಣನ ಜೊತೆ ಬಹಳಷ್ಟು ಜನರ ಬುದ್ಧಿಯೋಗವಿರುತ್ತದೆ. ಎಲ್ಲೆಲ್ಲಿ ಗೀತೆಗೆ ಮಾನ್ಯತೆ ಕೊಡುತ್ತಾರೆ ಅಲ್ಲಿ ಕೃಷ್ಣನಿಗೆ ಮಾನ್ಯತೆಯಿದೆ. ವಾಸ್ತವಿಕವಾಗಿ ತಂದೆಯ ಮಹಿಮೆಯೆಂಬ ಟೋಪಿಯನ್ನು ಮಗನಿಗೆ ಹಾಕಿದ್ದಾರೆ, ಇದೂ ಸಹ ನಾಟಕದಲ್ಲಿ ನೊಂದಾಯಿಸಲ್ಪಟ್ಟಿದೆ. ಇದನ್ನು ತಂದೆಯೇ ಬಂದು ತಿಳಿಸುತ್ತಾರೆ.

ತಂದೆಯು ಪದೇ-ಪದೇ ತಿಳಿಸುತ್ತಾರೆ - ಯಾರಾದರೂ ಬಂದಾಗ ಪ್ರತಿಯೊಬ್ಬರ ಕರ್ತವ್ಯವನ್ನು ಕೇಳಿ. ಇವರೊಂದಿಗೆ ನಿಮ್ಮ ಸಂಬಂಧವೇನಾಗಿದೆ? ತಂದೆಯು ಒಳ್ಳೆಯ ಪ್ರಶ್ನಾವಳಿಯನ್ನು ಮಾಡಿದ್ದಾರೆ. ಇದರಿಂದ ಸೇವೆಯು ಬಹಳ ಚೆನ್ನಾಗಿ ಆಗುತ್ತದೆ. ಸೇವೆಯಂತೂ ಜಗದಂಬಾನ ಮಂದಿರದಲ್ಲಿ ಆಗುತ್ತದೆ. ಅಲ್ಲಿಗೆ ಹೋಗಿ ಜಗದಂಬೆಯು ಈ ಸೃಷ್ಟಿಯನ್ನು ರಚಿಸುವಂತಹ ತಾಯಿಯಾಗಿದ್ದಾರೆಂದು ತಿಳಿಸಿಕೊಡಿ. ಅಂದಾಗ ಯಾವ ಪ್ರಪಂಚವನ್ನು ರಚಿಸುತ್ತಾರೆ? ಅವಶ್ಯವಾಗಿ ಹೊಸ ಪ್ರಪಂಚವನ್ನು ರಚಿಸುತ್ತಾರೆ. ಒಳ್ಳೆಯದು - ಈ ತಾಯಿಗೆ ತಂದೆಯು ಯಾರಾಗಿದ್ದಾರೆ? ಇವರಿಗೆ ಜನ್ಮ ಕೊಟ್ಟವರು ಯಾರು? ಮನುಷ್ಯರಂತೂ ಮುಖವಂಶಾವಳಿಯ ಅರ್ಥವನ್ನಂತೂ ತಿಳಿದುಕೊಂಡಿಲ್ಲ. ಇವರಿಗೆ ಪರಮಪಿತ ಪರಮಾತ್ಮ ಜನ್ಮ ಕೊಟ್ಟರು ಎಂಬುದು ನಿಮಗೆ ಗೊತ್ತಿದೆ. ಜಗದಂಬಾ ಹೇಗೆ ಮುಖವಂಶಾವಳಿ ಆಗಿದ್ದಾರೆಂದು ನೀವು ಮಕ್ಕಳೇ ತಿಳಿಸಿಕೊಡಬೇಕಾಗುತ್ತದೆ. ಪರಮಪಿತ ಪರಮಾತ್ಮ ನಿರಾಕಾರ ಆದುದರಿಂದ ಬ್ರಹ್ಮಾ ತನುವಿನ ಮೂಲಕ ತಿಳಿಸುತ್ತಾರೆ, ಪರಮಪಿತ ಪರಮಾತ್ಮ ಬಂದು ಹೇಗೆ ಈ ಬ್ರಹ್ಮಾರವರನ್ನು ಹೇಗೆ ದತ್ತು ತೆಗೆದುಕೊಂಡಿದ್ದಾರೆಯೋ ಹಾಗೆಯೇ ನೀವು ಮಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಈ ಮಾತುಗಳು ಎಲ್ಲರ ಬುದ್ಧಿಯಲ್ಲಿ ಸ್ಥಿರವಾಗಿರುವುದಿಲ್ಲ. ಪದೇ-ಪದೇ ಮರೆತು ಹೋಗುತ್ತಾರೆ. ಮಕ್ಕಳು ಬಹಳ ಸೇವೆಯನ್ನು ಮಾಡಬಹುದು. ಜಗದಂಬಾನ ಮಂದಿರದಲ್ಲಿ ಹೋಗಿ ಅವರ ಪರಿಚಯವನ್ನು ಕೊಡಬೇಕಾಗಿದೆ, ಆಗ ಅವರ ಬುದ್ಧಿಯೋಗ ತಂದೆಯ ಜೊತೆ ಜೋಡಿಸಲು ಸಾಧ್ಯವಾಗುತ್ತದೆ. ಜಗದಂಬೆಯೂ ಸಹ ಆ ತಂದೆಯನ್ನು ನೆನಪು ಮಾಡುವ ಕಾರಣ ನಾವೂ ಸಹ ಅವರನ್ನು ನೆನಪು ಮಾಡಬೇಕಾಗಿದೆ. ಜಗದಂಬೆಯು ಕೆಳಗಡೆ ತಪಸ್ಸಿನಲ್ಲಿ ಕುಳಿತಿದ್ದಾರೆ ಮೇಲೆ ಅವರ ಮಂದಿರವಿದೆ ಕೆಳಗೆ, ರಾಜಯೋಗದ ತಪಸ್ಸನ್ನು ಮಾಡುತ್ತಿದ್ದಾರೆ. ನಂತರ ರಾಜರಾಜೇಶ್ವರಿ ಸತ್ಯಯುಗದಲ್ಲಿ ಸ್ವರ್ಗದ ಮಾಲೀಕರಾಗುತ್ತಾರೆ. ಈಗ ಕಲಿಯುಗವಾಗಿದೆ, ಮತ್ತೆ ಯಾವಾಗ ತಪಸ್ಸಿನಲ್ಲಿ ಕುಳಿತುಕೊಳ್ಳುತ್ತಾರೋ ಆಗ ಸ್ವರ್ಗದ ಮಾಲೀಕರಾಗುವವರಲ್ಲವೆ! ನಿಮ್ಮ ಬುದ್ಧಿಯಲ್ಲಿ ಈ ಎಲ್ಲಾ ಜ್ಞಾನವೂ ಇರಬೇಕಾಗಿದೆ. ಈ ಸತ್ಯವಾದ ಸಲಹೆಯನ್ನು ಮನುಷ್ಯರಿಗೆ ಕೊಡಲಾಗುತ್ತದೆ. ನೀವು ಪ್ರತಿಯೊಬ್ಬರಿಗೂ ಪರಿಚಯ ಕೊಡುತ್ತೀರಿ. ಆದರೆ ಎಲ್ಲರ ಬುದ್ದಿಯಲ್ಲಿ ಒಮ್ಮೆಯೇ ಕುಳಿತುಕೊಳ್ಳುವುದಿಲ್ಲ. ಯಾವಾಗ ಸೇವೆಯಲ್ಲಿ ತೊಡಗುತ್ತಾರೆಯೋ ಆಗ ಬುದ್ಧಿಯಲ್ಲಿ ಚೆನ್ನಾಗಿ ಕುಳಿತುಕೊಳ್ಳುತ್ತದೆ. ಚಿತ್ರಗಳೂ ಸಹ ಚೆನ್ನಾಗಿ ಮಾಡಲ್ಪಟ್ಟಿದೆ. ಲಕ್ಷ್ಮೀ-ನಾರಾಯಣರ ಮಂದಿರದಲ್ಲಿ ಹೋಗಿ ನೀವು ತಿಳಿಸಿಕೊಡಬಹುದು. ತಂದೆಯು ತಿಳಿಸುತ್ತಾರೆ - ನನ್ನ ಭಕ್ತರಿಗೆ ತಿಳಿಸಿಕೊಡಿ. ಅಗತ್ಯವಾಗಿ ಭಕ್ತರು ಮಂದಿರಗಳಲ್ಲಿ ಸಿಗುತ್ತಾರೆ. ಅವರಿಗೆ ಹೀಗೆ ಪ್ರೀತಿಯಿಂದ ತಿಳಿಸಿಕೊಡಿ - ಲಕ್ಷ್ಮೀ-ನಾರಾಯಣರ ಚಿತ್ರವನ್ನು ತೋರಿಸುತ್ತಾ ಇವರನ್ನು ಎಲ್ಲರೂ ಸ್ವರ್ಗದ ಮಾಲೀಕರೆಂದು ಹೇಳುತ್ತಾರಲ್ಲವೆ. ಒಳ್ಳೆಯದು - ಈಗ ಏನಿದೆ? ಅಗತ್ಯವಾಗಿ ಈಗ ಕಲಿಯುಗವಿದೆ. ಕಲಿಯುಗದಲ್ಲಿ ದುಃಖವೇ ದುಃಖವಿದೆ, ಹಾಗಾದರೆ ಈಗ ಮತ್ತೆ ಇವರಿಗೆ ರಾಜ್ಯಭಾಗ್ಯ ಹೇಗೆ ಸಿಗುತ್ತದೆ? ನೀವು ತಿಳಿದುಕೊಂಡಿದ್ದರೆ ಎಲ್ಲರಿಗೂ ತಿಳಿಸಿಕೊಡಬಹುದು. ಒಬ್ಬರಿಗೆ ತಿಳಿಸಿಕೊಟ್ಟಾಗ ಅಲ್ಲಿ ಸತ್ಸಂಗವೇ ಸೇರಿ ಬಿಡುತ್ತದೆ. ಆಗ ನಮ್ಮ ಬಳಿ ಬನ್ನಿ..... ಎಂದು ಎಲ್ಲರಿಗೂ ಹೇಳುತ್ತಾರೆ. ಮಂದಿರದಲ್ಲಿ ಅತಿ ದೊಡ್ದ ಜಾತ್ರೆಯೇ ಸೇರುತ್ತದೆ. ರಾಮನ ಮಂದಿರಕ್ಕೂ ಹೋಗಿ ನೀವು ರಾಮನ ಕರ್ತವ್ಯವನ್ನು ತಿಳಿಸಿಕೊಡಬಹುದು. ನಿಧಾನ-ನಿಧಾನವಾಗಿ ಯುಕ್ತಿಯಿಂದ ತಿಳಿಸಿಕೊಡಬೇಕಾಗುವುದು. ಬಾಬಾ ನಾವು ಈ ರೀತಿ ತಿಳಿಸಿಕೊಟ್ಟೆವೆಂದು ಕೆಲವು ಮಕ್ಕಳು ಬರೆಯುತ್ತಾರೆ. ಒಬ್ಬರಿಗೆ ತಿಳಿಸಿಕೊಟ್ಟರೆ ಮತ್ತೊಬ್ಬರು ಆಮಂತ್ರಣ ಕೊಡುತ್ತಾರೆ. ನಮ್ಮ ಮನೆಯಲ್ಲಿಯೂ 7 ದಿನದ ಭಾಷಣ ನಡೆದರೆ ಎಷ್ಟು ಚೆನ್ನಾಗಿರುತ್ತದೆ! ಮತ್ತೆ ಅಲ್ಲಿಂದಲೇ ಇನ್ನೂ ಯಾರಾದರೂ ಸಿಗುತ್ತಾರೆ. ಯಾರೇ ನಿಮಗೆ ಆಮಂತ್ರಣ ಕೊಟ್ಟರೂ ಅವರಿಗೆ ಹಾಗೇ ಆ ರೀತಿ ತಿಳಿಸಿಕೊಡಬೇಕು, ಅವರನ್ನು ಬಿಡಲೇಬಾರದು. ನೀವು ಭಾಷಣ ಮಾಡಲು ತೊಡಗಿದರೆ ಅಕ್ಕಪಕ್ಕದ ಮಿತ್ರ ಸಂಬಂಧಿಗಳೆಲ್ಲರೂ ಸೇರಿ ಬಿಡುತ್ತಾರೆ ಹಾಗೆಯೇ ವೃದ್ಧಿಯಾಗುತ್ತದೆ. ಸೇವಾಕೇಂದ್ರಗಳಿಗೆ ಅಷ್ಟೊಂದು ಜನರು ಬರಲು ಸಾಧ್ಯವಿಲ್ಲ. ಇದು ಸೇವೆಗಾಗಿ ಒಳ್ಳೆಯ ಯುಕ್ತಿಯಾಗಿದೆ. ಈ ರೀತಿ ಶ್ರಮ ಪಡಬೇಕಾಗುವುದು. ಶ್ರಮ ಪಡುವಂತಹ ಯುಕ್ತಿಯೂ ಸಹ ಕೆಲವರಿಗೆ ಮಾತ್ರ ಬರುತ್ತದೆ, ಅದಕ್ಕಾಗಿ ಜ್ಞಾನದ ಪರಕಾಷ್ಠತೆ ಬೇಕಾಗುವುದು. ತಂದೆಯೂ ಸಹ ಎಷ್ಟೊಂದು ದೂರದಿಂದ ನಮಗೆ ಕಲಿಸಲು ಬರುತ್ತಾರೆ. ಒಂದುವೇಳೆ ಸೇವೆ ಮಾಡಲಿಲ್ಲವೆಂದರೆ ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುತ್ತೀರಿ? ಶಾಲೆಯಲ್ಲಿಯೂ ಸಹ ತುಂಬಾ ಒಳ್ಳೊಳ್ಳೆಯ ಚಮತ್ಕಾರವುಳ್ಳ ಮಕ್ಕಳಿರುತ್ತಾರೆ. ಬಹಳ ಉತ್ಸಾಹದಲ್ಲಿರುತ್ತಾರೆ. ಇದೂ ಸಹ ವಿದ್ಯೆಯಾಗಿದೆ ಆದರೆ ಇದು ವಂಡರ್ಫುಲ್ ವಿದ್ಯೆಯಾಗಿದ್ದು ಇಲ್ಲಿ ವೃದ್ಧರು, ಯುವಕರು ಮಕ್ಕಳೆಲ್ಲರೂ ಸಹ ಓದಬಹುದು. ಬಡವರಿಗಂತೂ ಒಳ್ಳೆಯ ಅವಕಾಶವಿದೆ. ಸನ್ಯಾಸಿಗಳೂ ಸಹ ವಾಸ್ತವದಲ್ಲಿ ಬಡವರಾಗಿದ್ದಾರೆ, ಅವರನ್ನು ಎಷ್ಟೊಂದು ದೊಡ್ಡ ದೊಡ್ಡ ಗಣ್ಯ ವ್ಯಕ್ತಿಗಳು ತಮ್ಮಲ್ಲಿಗೆ ಆಮಂತ್ರಿಸುತ್ತಾರೆ. ಸನ್ಯಾಸಿಗಳಂತೂ ಮನೆ-ಮಠವನ್ನು ಬಿಟ್ಟು ಬಡವರಾಗಿದ್ದಾರೆ, ಅವರ ಬಳಿ ಏನೂ ಇಲ್ಲ. ನೀವೂ ಸಹ ಈಗ ಬಡವರಾಗಿದ್ದು ನಂತರ ರಾಜಕುಮಾರರಾಗುತ್ತೀರಿ. ಅವರೂ ಬಡವರಾಗಿದ್ದಾರೆ, ಇದರಲ್ಲಿ ಮುಖ್ಯವಾಗಿ ಪವಿತ್ರತೆಯ ಮಾತಾಗಿದೆ ನಿಮ್ಮ ಬಳಿ ಬೇರೇನೂ ಇಲ್ಲ. ನೀವಂತೂ ದೇಹವನ್ನೂ ಮರೆಯುತ್ತೀರಿ. ದೇಹ ಸಹಿತ ಎಲ್ಲವನ್ನೂ ತ್ಯಾಗ ಮಾಡಿ ಒಬ್ಬ ತಂದೆಯವರಾಗುತ್ತೀರಿ. ಎಷ್ಟು ಒಬ್ಬ ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟಷ್ಟು ಧಾರಣೆಯಾಗುತ್ತಿರುತ್ತದೆ, ನಾವು ತಂದೆಯ ಬಳಿಗೆ ಹೋಗಬೇಕು. ಈ ಹಳೆಯ ಪ್ರಪಂಚದ ಚಿಂತೆಯನ್ನೇಕೆ ಮಾಡಬೇಕು! ಎಲ್ಲಿಯವರೆಗೆ ಈ ಪರಿಪಕ್ವ ಸ್ಥಿತಿಯಿರುವುದಿಲ್ಲವೋ ಅಲ್ಲಿಯವರೆಗೆ ಈ ಹಳೆಯ ಪ್ರಪಂಚ ಹಾಗೂ ಈ ಹಳೆಯ ಶರೀರದಲ್ಲಿಯೇ ಇರುತ್ತೇವೆ. ಈಗ ನೀವು ಗೃಹಸ್ಥ ವ್ಯವಹಾರದಲ್ಲಿದ್ದು ಪವಿತ್ರರಾಗಬೇಕು. ಈ ಮೃತ್ಯುಲೋಕದಿಂದ ನಿಮ್ಮ ಲೆಕ್ಕಾಚಾರ ಸಮಾಪ್ತಿಯಾಗುತ್ತದೆ. ಈಗ ಅಮರಲೋಕಕ್ಕೆ ಹೋಗಬೇಕು. ಮನೆಯನ್ನು ಪದೇ-ಪದೇ ನೆನಪು ಮಾಡುವುದರಿಂದ ಹಳೆಯ ಪ್ರಪಂಚವು ಮರೆತು ಹೋಗುತ್ತದೆ. ಗೀತೆಯಲ್ಲಿ ತಂದೆಯು ಏನು ಹೇಳಿದ್ದಾರೆ? ಎಂದು ಹೇಳಿ. ಭಗವಂತನಿಗೆ ತಂದೆಯೆಂದು ಹೇಳಲಾಗುವುದು. ನಿರಾಕಾರ ತಂದೆಯು ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ಯೋಗ ಅಗ್ನಿಯಿಂದ ನಿಮ್ಮ ವಿಕರ್ಮ ವಿನಾಶವಾಗುತ್ತದೆ. ಕೃಷ್ಣನು ಈ ರೀತಿ ಹೇಳಲು ಸಾಧ್ಯವಿಲ್ಲ. ಇದು ಭಗವಂತನ ಮಹಾವಾಕ್ಯವಾಗಿದೆ - ಈ ಹಳೆಯ ಪ್ರಪಂಚ ಹಾಗೂ ಹಳೆಯ ಶರೀರವನ್ನು ಬಿಡಿ, ದೇಹೀ-ಅಭಿಮಾನಿಯಾಗಿ ನಿರಂತರ ತಂದೆಯನ್ನು ನೆನಪು ಮಾಡಿ. ಭಗವಂತನು ನಿರಾಕಾರನಾಗಿದ್ದಾರೆ, ಆತ್ಮವು ಶರೀರವನ್ನು ತೆಗೆದುಕೊಂಡು ಶಬ್ಧದಲ್ಲಿ ಬರುತ್ತದೆ. ತಂದೆಯಂತೂ ಗರ್ಭದಿಂದ ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ಅವರ ಹೆಸರು ಶಿವ ಒಂದೇ ಆಗಿದೆ. ಬ್ರಹ್ಮಾ, ವಿಷ್ಣು, ಶಂಕರರ ಆತ್ಮಗಳಿವೆ, ಅವರಿಗೆ ತಮ್ಮ ಸೂಕ್ಷ್ಮ ಶರೀರಗಳಿವೆ. ಇವರಾಗಿದ್ದಾರೆ ನಿರಾಕಾರ ಪರಮಪಿತ ಪರಮಾತ್ಮ ಅವರ ಹೆಸರಾಗಿದೆ ಶಿವ. ಅವರು ಜ್ಞಾನಸಾಗರರಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರರಿಗೆ ರಚೈತನೆಂದು ಹೇಳಲಾಗುವುದಿಲ್ಲ. ಒಬ್ಬ ನಿರಾಕಾರನಿಗೆ ಮಾತ್ರ ರಚೈತನೆಂದು ಹೇಳಲಾಗುವುದು. ಹಾಗಾದರೆ ಅವರು ಈ ಸಾಕಾರಿ ರಚನೆಯನ್ನು ಹೇಗೆ ರಚಿಸಿದರು? ಆದುದರಿಂದ ಬ್ರಹ್ಮನ ಮುಖಾಂತರ ಬಂದು ತಿಳಿಸಿ ಕೊಡುತ್ತಾರೆ, ಕೃಷ್ಣನ ಮುಖಾಂತರ ತಿಳಿಸಲು ಆಗುವುದಿಲ್ಲ. ಬ್ರಹ್ಮನ ಕೈಯಲ್ಲಿಯೆ ವೇದ-ಶಾಸ್ತ್ರಗಳನ್ನು ತೋರಿಸುತ್ತಾರೆ. ಬ್ರಹ್ಮನ ಮುಖಾಂತರ ಸ್ಥಾಪನೆ ಎಂಬ ಗಾಯನವಿದೆ, ಬ್ರಹ್ಮನ ಮುಖಾಂತರ ಸರ್ವಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ನಿರಾಕಾರ, ಸಾಕಾರನ ಮುಖಾಂತರ ತಿಳಿಸುತ್ತಾರೆ ಈ ಮಾತುಗಳನ್ನು ಚೆನ್ನಾಗಿ ಧಾರಣೆ ಮಾಡಬೇಕು. ಭಗವಾನುವಾಚ - ನಾನು ರಾಜಯೋಗವನ್ನು ಕಲಿಸುತ್ತೇನೆ. ವಿನಾಶಕ್ಕೆ ಮೊದಲು ಅಗತ್ಯವಾಗಿ ಸ್ಥಾಪನೆಯಾಗಬೇಕು. ಮೊಟ್ಟ ಮೊದಲು ಸ್ಥಾಪನೆ ಬಹಳ ಸ್ಪಷ್ಟವಾಗಿ ಬರೆಯುತ್ತಾರೆ ಬ್ರಹ್ಮಾನ ಮೂಲಕ ಸೂರ್ಯವಂಶಿ ರಾಜ ಮನೆತನದ ಸ್ಥಾಪನೆ ಈ ಬರಹದಲ್ಲಿ ಬಹಳ ಒಳ್ಳೆಯ ರಹಸ್ಯವಿದೆ, ಆದರೆ ಯಾರಾದರೂ ಶ್ರಮ ಪಟ್ಟು ಸೇವೆಯಲ್ಲಿ ತೊಡಗಬೇಕು. ಹೀಗೆ ಸೇವೆಯಲ್ಲಿ ತೊಡಗಿದಾಗ ಬಹಳ ಮಜಾ ಬರುತ್ತದೆ. ಮಮ್ಮಾ-ಬಾಬಾರವರಿಗೂ ಸಹ ಸೇವೆಯಲ್ಲಿ ಬಹಳ ಮಜಾ ಅನಿಸುತ್ತಿತ್ತು. ಮಕ್ಕಳೂ ಸಹ ಸೇವೆ ಮಾಡಬೇಕಾಗಿದೆ. ಮಮ್ಮಾರವರನ್ನಂತೂ ಮಂದಿರಕ್ಕೆ ಕರೆದುಕೊಂಡು ಹೋಗಲಾರಿರಿ. ಮಮ್ಮಾರವರಿಗೆ ಬಹಳ ಮಹಿಮೆ ಇದೆ, ಮಕ್ಕಳಂತೂ ಹೋಗಲೇಬೇಕಿದೆ. ಬಾಬಾ ಹೇಳುತ್ತಾರೆ, ವಾನಪ್ರಸ್ಥಿಗಳ ಬಳಿ ಹೋಗಿ ಹೀಗೆ ಕೇಳಿ ತಿಳಿಸಿ ಕೊಡಬೇಕು - ನೀವು ಎಂದಾದರೂ ಗೀತೆಯನ್ನು ಅಧ್ಯಯನ ಮಾಡಿದ್ದೀರಾ? ಗೀತೆಯ ಭಗವಂತ ಯಾರು? ಭಗವಂತ ಒಬ್ಬರೇ ನಿರಾಕಾರ ಸಾಕಾರರಿಗೆ ಭಗವಂತ ಎಂದು ಹೇಳಲು ಸಾಧ್ಯವಿಲ್ಲ. ಭಗವಂತ ಒಬ್ಬರೇ ಆಗಿದ್ದಾರೆ, ಹೀಗೆ ಸೇವೆಯಲ್ಲಿ ಬಹಳ ವಿಚಾರ ಸಾಗರ ಮಂಥನ ನಡೆಯುತ್ತಿರಬೇಕು. ಅಭ್ಯಾಸ ಮಾಡಿ ಹೊರಗೆ ಹೋಗಿ ಪ್ರಯತ್ನ ಪಡಬೇಕು. ಜಗದಂಬಾನ ದರ್ಶನ ಮಾಡಲು ಪ್ರತಿನಿತ್ಯ ಬರುತ್ತಾರೆ, ತ್ರಿವೇಣಿಗೂ ಬಹಳ ಜನ ಹೋಗುತ್ತಾರೆ. ಅಲ್ಲಿಗೆ ಹೋಗಿ ಸೇವೆ ಮಾಡುತ್ತಾ, ಭಾಷಣ ಮಾಡಿದರೆ ಬಹಳ ಜನ ಸೇರುತ್ತಾರೆ. ನಿಮಂತ್ರಣವನ್ನು ಕೊಡುತ್ತಿರುತ್ತಾರೆ - ನಮ್ಮ ಬಳಿ ಬಂದು ಸತ್ಸಂಗವನ್ನು ಮಾಡಿ. ಬಾಬಾ-ಮಮ್ಮಾರವರಂತೂ ಎಲ್ಲಿಗೂ ಹೋಗಲು ಸಾಧ್ಯವಿಲ್ಲ, ಮಕ್ಕಳು ಹೋಗಲು ಸಾಧ್ಯವಿದೆ. ಬಂಗಾಳದಲ್ಲಿ ಕಾಳಿಯ ಮಂದಿರವಿದೆ, ಅಲ್ಲಿಯೂ ಬಹಳ ಸರ್ವೀಸ್ ಮಾಡಲು ಸಾಧ್ಯ. ಕಾಳಿ ಯಾರು? ಇದರ ಬಗ್ಗೆ ಭಾಷಣ ಮಾಡಿ ಆದರೆ ಸಾಹಸವಿರಬೇಕಾಗಿದೆ. ತಂದೆಗೆ ತಿಳಿದಿದೆ, ಯಾರು ಹೇಗೆ ತಿಳಿಸಲು ಸಾಧ್ಯ? ಯಾರಲ್ಲಿ ದೇಹಾಭಿಮಾನವಿದೆ ಅವರು ಏನು ಸರ್ವೀಸ್ ಮಾಡಲು ಸಾಧ್ಯ? ಸರ್ವೀಸಿನ ಪ್ರತ್ಯಕ್ಷ ಪ್ರಮಾಣವನ್ನು ನೀಡುವುದಿಲ್ಲ. ಸರ್ವೀಸನ್ನು ಸಂಪೂರ್ಣ ಮಾಡುವುದಿಲ್ಲವೆಂದರೆ ತಂದೆಯ ಹೆಸರನ್ನು ಕೆಡಿಸುತ್ತಾರೆ. ಯೋಗಿಯಲ್ಲಿ ಶಕ್ತಿಯು ಬಹಳ ಚೆನ್ನಾಗಿರುತ್ತದೆ. ಅನ್ಯರಿಗೆ ತಿಳಿಸಿಕೊಡಲು ತಂದೆಯು ಬಹಳ ಒಳ್ಳೆಯ ವಿಚಾರಗಳನ್ನು ತಿಳಿಸುತ್ತಿರುತ್ತಾರೆ. ಆದರೆ ಒಳ್ಳೊಳ್ಳೆಯ ಮಹಾರಥಿಗಳೂ ಸಹ ಮರೆತು ಹೋಗುತ್ತಾರೆ. ಸರ್ವೀಸಂತೂ ಬಹಳ ಇದೆ, ಇದನ್ನು ಬೇಹದ್ದಿನ ಸರ್ವೀಸ್ ಎಂದು ಕರೆಯಲಾಗುತ್ತದೆ. ನಂತರ ಅವರು ಬಹಳ ಗೌರವವನ್ನೂ ಪಡೆಯುತ್ತಾರೆ. ಮುಖ್ಯ ಮಾತು ಪವಿತ್ರತೆಯಾಗಿದೆ. ನಡೆಯುತ್ತಾ-ನಡೆಯುತ್ತಾ ಬಿದ್ದು ಹೋಗುತ್ತಾರೆ. ಲೌಕಿಕ ತಂದೆಯಲ್ಲಿ ಎಂದೂ ಯಾರಿಗೂ ನಿಶ್ಚಯ ಇಲ್ಲದೇ ಇರುವುದಿಲ್ಲ ಅರ್ಥಾತ್ ಸಂಶಯ ಬರುವುದಿಲ್ಲ. ಇಲ್ಲಿ ತಂದೆಯ ಬಳಿ ಜನ್ಮ ಪಡೆಯುತ್ತಾರೆ ಮತ್ತೆ ಇಂತಹ ತಂದೆಯನ್ನೇ ಘಳಿಗೆ-ಘಳಿಗೆಯೂ ಮರೆತು ಹೋಗುತ್ತಾರೆ. ಏಕೆಂದರೆ ಇವರು ವಿಚಿತ್ರ ತಂದೆಯಾಗಿದ್ದಾರೆ, ಇಂಥಹ ತಂದೆಗೆ ಚಿತ್ರವಿಲ್ಲ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಮತ್ತು ಪವಿತ್ರರಾಗಿ. ಆಗ ನನ್ನ ಬಳಿ ಬಂದು ಬಿಡುತ್ತೀರಿ. ನಾನೇ 84 ಜನ್ಮಗಳ ಪಾತ್ರವನ್ನಿಭಿನಯಿಸುತ್ತೇನೆ ಎಂದು ಆತ್ಮವು ತಿಳಿಯುತ್ತದೆ. ಆತ್ಮನಲ್ಲಿ ಎಲ್ಲಾ ಪಾತ್ರವು ನೊಂದಾವಣೆಯಾಗಿದೆ. ಶರೀರದಲ್ಲಿ ಪಾತ್ರವಿಲ್ಲ, ಇಷ್ಟೂ ಚಿಕ್ಕ ಆತ್ಮನಲ್ಲಿ ಎಷ್ಟು ದೊಡ್ಡ ಪಾತ್ರವಿದೆ, ಬುದ್ಧಿಯಲ್ಲಿ ಎಷ್ಟೊಂದು ನಶೆಯಿರಬೇಕು, ವ್ಯವಹಾರದ ಜೊತೆ ಜೊತೆಗೆ ಈ ಸೇವೆಯನ್ನೂ ಮಾಡಬೇಕು. ತಂದೆ-ತಾಯಿಯಂತೂ ಎಲ್ಲಿಗೂ ಹೋಗುವುದಿಲ್ಲ. ಮಕ್ಕಳು ಎಲ್ಲಿ ಬೇಕಾದರೂ ಹೋಗಿ ಸರ್ವೀಸ್ ಮಾಡಬಹುದು. ಮಕ್ಕಳಿಗೇ ಅದೃಷ್ಟಶಾಲಿ ನಕ್ಷತ್ರಗಳೆಂದು ಕರೆಯಲಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ದೇಹಾಭಿಮಾನವನ್ನು ಬಿಟ್ಟು ಸರ್ವೀಸ್ ಮಾಡಬೇಕಾಗಿದೆ. ವಿಚಾರ ಸಾಗರ ಮಂಥನ ಮಾಡಿ ಬೇಹದ್ದಿನ ಸರ್ವೀಸಿನ ಪ್ರತ್ಯಕ್ಷ ಪ್ರಮಾಣವನ್ನು ಕೊಡಬೇಕಾಗಿದೆ.

2. ಈ ಮೃತ್ಯುಲೋಕದಿಂದ ಹಳೆಯದೆಲ್ಲಾ ಲೆಕ್ಕಾಚಾರವನ್ನು ಸಮಾಪ್ತಿ ಮಾಡಬೇಕಾಗಿದೆ. ಹಳೆಯ ಶರೀರ ಮತ್ತು ಹಳೆಯ ಪ್ರಪಂಚವನ್ನು ಬುದ್ಧಿಯಿಂದ ಮರೆತು ಹೋಗಬೇಕಾಗಿದೆ.


ವರದಾನ:
ಕರ್ಮ ಮಾಡುತ್ತಾ ಶಕ್ತಿಶಾಲಿ ಸ್ಟೇಜ್ ನಲ್ಲಿ ಸ್ಥಿತರಾಗಿ ಆತ್ಮೀಯ ವ್ಯಕ್ತಿತ್ವದ ಅನುಭವ ಮಾಡಿಸುವಂತಹ ಕರ್ಮಯೋಗಿ ಭವ.

ನೀವು ಮಕ್ಕಳು ಕೇವಲ ಕರ್ಮ ಮಾಡುವವರಲ್ಲ. ಆದರೆ ಯೋಗಯುಕ್ತರಾಗಿ ಕರ್ಮ ಮಾಡುವಂತಹ ಕರ್ಮಯೋಗಿಗಳಾಗಿರುವಿರಿ. ಆದ್ದರಿಂದ ನಿಮ್ಮ ಮೂಲಕ ಪ್ರತಿಯೊಬ್ಬರಿಗೆ ಈ ರೀತಿ ಅನುಭವವಾಗಲಿ ಇವರು ಕೆಲಸವಂತು ಕೈಯಿಂದ ಮಾಡುತ್ತಿದ್ದಾರೆ. ಆದರೆ ಕೆಲಸ ಮಾಡುತ್ತಿದ್ದರೂ ಸಹ ತಮ್ಮ ಶಕ್ತಿಶಾಲಿ ಸ್ಟೇಜ್ ನಲ್ಲಿ ಸ್ಥಿತರಾಗಿದ್ದಾರೆ. ಇಲ್ಲ ಸಾಧಾರಣ ರೀತಿಯಿಂದ ನಡೆಯುತ್ತಿರಲಿ, ಇಲ್ಲ ನಿಂತಿರಲಿ ಆದರೆ ಆತ್ಮೀಯ ವ್ಯಕ್ತಿತ್ವ ದೂರದಿಂದಲೇ ಅನುಭವವಾಗಬೇಕು. ಯಾವ ರೀತಿ ಈ ಪ್ರಾಪಂಚಿಕ ವ್ಯಕ್ತಿತ್ವ ಆಕರ್ಷಣೆ ಮಾಡುವುದು, ಅದೇ ರೀತಿ ನಿಮ್ಮ ಆತ್ಮೀಯ ವ್ಯಕ್ತಿತ್ವ, ಪವಿತ್ರತೆಯ ವ್ಯಕ್ತಿತ್ವ, ಜ್ಞಾನಿತ್ವ ಹಾಗೂ ಯೋಗಿತ್ವ ಆತ್ಮನ ವ್ಯಕ್ತಿತ್ವ ಸ್ವತಃ ಆಕರ್ಷಣೆ ಮಾಡುವುದು.

ಸ್ಲೋಗನ್:
ಸರಿಯಾದ ಮಾರ್ಗದಲ್ಲಿ ನಡೆಯವವರು ಹಾಗೂ ಎಲ್ಲರಿಗೂ ಸರಿಯಾದ ಮಾರ್ಗ ತೋರಿಸುವಂತಹವರೇ ಸತ್ಯ-ಸತ್ಯ ಲೈಟ್ಹೌಸ್.