16.12.18    Avyakt Bapdada     Kannada Murli     09.03.84     Om Shanti     Madhuban


“ ಪರಿವರ್ತನೆಯನ್ನು ಅವಿನಾಶಿಯನ್ನಾಗಿ ಮಾಡಿಕೊಳ್ಳಿರಿ ”


ಬಾಪ್ದಾದಾರವರು ಸರ್ವ ಚಾತ್ರಕ ಮಕ್ಕಳನ್ನು ನೋಡುತ್ತಿದ್ದಾರೆ. ಎಲ್ಲರಿಗೂ ಕೇಳುವುದು, ಮಿಲನವಾಗುವುದು ಮತ್ತು ಆಗುವುದು - ಇದೇ ಲಗನ್ ಇದೆ. ಕೇಳಿಸಿಕೊಳ್ಳುವುದು, ಇದರಲ್ಲಿ ನಂಬರ್ವನ್ ಚಾತ್ರಕರಾಗಿದ್ದೀರಿ. ಮಿಲನವಾಗುವುದು - ಇದರಲ್ಲಿ ನಂಬರ್ ಇದೆ ಮತ್ತು ಆಗುವುದು - ಇದರಲ್ಲಿ ಯಥಾಶಕ್ತಿ ಹಾಗೂ ಸಮಾನರಾಗುವುದು. ಆದರೆ ಅವಶ್ಯವಾಗಿ ಎಲ್ಲರೂ ಶ್ರೇಷ್ಠ ಆತ್ಮರು, ಬ್ರಾಹ್ಮಣ ಆತ್ಮರು ಮೂರರ ಚಾತ್ರಕರಂತು ಹೌದು. ನಂಬರ್ವನ್ ಚಾತ್ರಕರು ಮಾಸ್ಟರ್ ಮುರುಳೀಧರ, ಮಾಸ್ಟರ್ ಸರ್ವಶಕ್ತಿವಂತರು ಸದಾ ಹಾಗೂ ಸಹಜವಾಗಿ ತಂದೆಯ ಸಮಾನರಾಗಿ ಬಿಡುತ್ತಾರೆ. ಕೇಳಿಸಿಕೊಳ್ಳುವುದು ಅರ್ಥಾತ್ ಮುರುಳೀಧರರಾಗುವುದು. ಮಿಲನವಾಗುವುದು ಅರ್ಥಾತ್ ಸಂಗದ ರಂಗಿನಲ್ಲಿ, ಅದರ ಸಮಾನವಾಗಿ ಶಕ್ತಿಗಳು ಮತ್ತು ಗುಣಗಳಲ್ಲಿ ರಂಗಿತರಾಗಿ ಬಿಡುವುದು. ಆಗುವುದು ಅರ್ಥಾತ್ ಸಂಕಲ್ಪದ ಹೆಜ್ಜೆಯ ಮೇಲೆ, ಮಾತಿನ ಹೆಜ್ಜೆಯ ಮೇಲೆ, ಕರ್ಮದ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ ಸಾಕ್ಷಾತ್ ತಂದೆಯ ಸಮಾನರಾಗುವುದು. ಮಕ್ಕಳ ಸಂಕಲ್ಪದಲ್ಲಿ ತಂದೆಯ ಸಂಕಲ್ಪವು ಸಮಾನವೆನ್ನುವ ಅನುಭವವಾಗಲಿ. ಮಾತಿನಲ್ಲಿ, ಕರ್ಮದಲ್ಲಿ ತಂದೆಯಂತೆ ಮಕ್ಕಳೆನ್ನುವ ಅನುಭವವು ಸರ್ವರಿಗಾಗಲಿ. ಇದಕ್ಕೆ ಹೇಳಲಾಗುತ್ತದೆ - ಸಮಾನರಾಗುವುದು ಅಥವಾ ನಂಬರ್ವನ್ ಚಾತ್ರಕ. ಮೂರರಲ್ಲಿಂದ ಪರಿಶೀಲನೆ ಮಾಡಿಕೊಳ್ಳಿರಿ - ನಾನು ಯಾರಾಗಿದ್ದೇನೆ! ಎಲ್ಲಾ ಮಕ್ಕಳ ಉಮ್ಮಂಗ-ಉತ್ಸಾಹವಿರುವ ಸಂಕಲ್ಪವು ಬಾಪ್ದಾದಾರವರ ಬಳಿಗೆ ತಲುಪುತ್ತದೆ. ಸಂಕಲ್ಪವು ಬಹಳ ಒಳ್ಳೆಯ ಸಾಹಸ ಮತ್ತು ಧೃಡತೆಯಿಂದ ಮಾಡುತ್ತೀರಿ. ಸಂಕಲ್ಪವೆಂಬ ಬೀಜವು ಶಕ್ತಿಶಾಲಿಯಾಗಿ ಇದೆ ಆದರೆ ಧಾರಣೆಯ ಧರಣಿ, ಜ್ಞಾನದ ಗಂಗಾಜಲ ಮತ್ತು ನೆನಪಿನ ದೂಪವೆಂದಾದರೂ ಹೇಳಿರಿ ಅಥವಾ ಬಿಸಿಯೆಂದಾದರೂ ಹೇಳಿರಿ, ಮತ್ತೆ-ಮತ್ತೆ ಸ್ವಯಂ ಗಮನದ ರೂಪ ರೇಖೆಗಳನ್ನು ನೋಡಿದಾಗ ಕೆಲವೊಂದು ಕಡೆ ಹುಡುಗಾಟಿಕೆಯಾಗಿ ಬಿಡುತ್ತೀರಿ. ಒಂದು ಮಾತಿನ ಕೊರತೆಯಾಗುವುದರಿಂದಲೂ ಸಂಕಲ್ಪವೆಂಬ ಬೀಜವು ಸದಾಕಾಲಕ್ಕಾಗಿ ಫಲವನ್ನು ಕೊಡುವುದಿಲ್ಲ. ಸ್ವಲ್ಪ ಸಮಯಕ್ಕಾಗಿ ಒಂದು ಸೀಜನ್, ಎರಡು ಸೀಜನ್ ಫಲವನ್ನು ಕೊಡುತ್ತದೆ. ಸದಾಕಾಲಕ್ಕಾಗಿ ಫಲವನ್ನು ಕೊಡುವುದಿಲ್ಲ. ಮತ್ತೆ ಯೋಚಿಸುತ್ತೀರಿ - ಬೀಜವಂತು ಶಕ್ತಿಶಾಲಿಯಾಗಿತ್ತು, ಪ್ರತಿಜ್ಞೆಯಂತು ಪರಿಪಕ್ವವಾಗಿ ಇತ್ತು. ಸ್ಪಷ್ಟವೂ ಆಗಿ ಬಿಟ್ಟಿತು. ನಂತರ ಏನಾಯಿತೆಂದು ಗೊತ್ತಿಲ್ಲ. 6 ತಿಂಗಳಂತು ಬಹಳ ಉಮ್ಮಂಗವಿತ್ತು ನಂತರ ನಡೆಯುತ್ತಾ-ನಡೆಯುತ್ತಾ ಏನಾಯಿತೆಂದು ಗೊತ್ತಿಲ್ಲ. ಇದಕ್ಕಾಗಿ ಮೊದಲು ಯಾವ ಮಾತನ್ನು ತಿಳಿಸಲಾಯಿತು, ಅದರ ಮೇಲೆ ಸದಾ ಗಮನವಿರಲಿ.

ಇನ್ನೊಂದು ಮಾತು - ಚಿಕ್ಕದಾದ ಮಾತಿನಲ್ಲಿ ಬೇಗನೆ ಗಾಬರಿಯಾಗುವುದು. ಗಾಬರಿಯಾಗುವ ಕಾರಣವೇನೆಂದರೆ ಚಿಕ್ಕದಾಗಿರುವ ಮಾತನ್ನು ದೊಡ್ಡದನ್ನಾಗಿ ಮಾಡುತ್ತೀರಿ. ಇರುವೆಯಷ್ಟು ಆಗಿರುತ್ತದೆ ಅದನ್ನು ಆನೆಯಷ್ಟು ಮಾಡಿ ಬಿಡುತ್ತೀರಿ. ಆದ್ದರಿಂದ ಸಮತೋಲನವಿರುವುದಿಲ್ಲ. ಸಮತೋಲನವಿರದಿರುವ ಕಾರಣದಿಂದ ಜೀವನದಿಂದ ಬೇಸರವಾಗಿ ಬಿಡುತ್ತೀರಿ. ಇಲ್ಲವೆಂದರೆ ನಶೆಯಲ್ಲಿ ಸಂಪೂರ್ಣವಾಗಿ ಮೇಲೇರಿ ಬಿಡುತ್ತೀರಿ ಅಥವಾ ಚಿಕ್ಕದಾದ ಮಾತೂ ಸಹ ಕೆಳಗೆ ಕೂರಿಸಿ ಬಿಡುತ್ತದೆ. ಜ್ಞಾನಪೂರ್ಣರಾಗಿ ಅದನ್ನು ಸೆಕೆಂಡಿನಲ್ಲಿ ಸಮಾಪ್ತಿ ಮಾಡುವುದಕ್ಕೆ ಬದಲು ಬಂಧನವು ಬಂದಿತು, ನಿಂತು ಬಿಟ್ಟೆನು, ಕೆಳಗೆ ಬಂದು ಬಿಟ್ಟೆನು, ಇದಾಯಿತು, ಇದನ್ನು ಯೋಚಿಸಲು ಪ್ರಾರಂಭಿಸಿ ಬಿಡುತ್ತೀರಿ. ರೋಗವು ಬಂದು ಬಿಟ್ಟಿತು, ಜ್ವರ ಅಥವಾ ನೋವುಗಳುಂಟಾಯಿತು. ಒಂದುವೇಳೆ ಇದೇ ಯೋಚಿಸುತ್ತಾ ಮತ್ತು ಹೇಳುತ್ತಿರುತ್ತೀರೆಂದರೆ ಗತಿಯೇನಾಗುತ್ತದೆ! ಇಂತಹ ಚಿಕ್ಕ ಪುಟ್ಟ ಮಾತುಗಳೇನು ಬರುತ್ತದೆ, ಅದನ್ನು ಸಮಾಪ್ತಿ ಮಾಡಿರಿ, ದೂರಗೊಳಿಸಿರಿ ಮತ್ತು ಹಾರಿ ಬಿಡಿ. ಆಗಿ ಬಿಟ್ಟಿತು, ಬಂದು ಬಿಟ್ಟಿತು, ಇದೇ ಸಂಕಲ್ಪದಲ್ಲಿ ಬಲಹೀನರಾಗಬಾರದು. ಔಷಧಿಯನ್ನು ತೆಗೆದುಕೊಳ್ಳಿರಿ ಮತ್ತು ಆರೋಗ್ಯವಂತರಾಗಿರಿ. ಕೆಲಕೆಲವೊಮ್ಮೆ ಬಾಪ್ದಾದಾರವರ ಮಕ್ಕಳ ಚಹರೆಯನ್ನು ನೋಡುತ್ತಾ ಯೋಚಿಸುತ್ತಾರೆ - ಈಗೀಗ ಏನಾಗಿದ್ದರು, ಈಗೀಗ ಏನಾಗಿ ಬಿಟ್ಟರು! ಇವರು ಅವರೇನಾ ಅಥವಾ ಬೇರೆಯವರಾಗಿ ಬಿಟ್ಟರೆ! ಅವಸರದಲ್ಲಿ ಏರುಪೇರಾಗುವುದರಿಂದ ಏನಾಗುತ್ತದೆ? ತಲೆ ಭಾರಿಯಾಗಿ ಬಿಡುತ್ತದೆ. ಹಾಗೆಯೇ ಸ್ಥೂಲದಲ್ಲಿಯೂ ಈಗ ಮೇಲೆ, ಈಗ ಕೆಳಗೆ ಬಂದು ಬಿಡುತ್ತೀರೆಂದರೆ ಚಕ್ರದ ಅನುಭೂತಿ ಮಾಡುತ್ತೀರಲ್ಲವೆ. ಅಂದಮೇಲೆ ಈ ಸಂಸ್ಕಾರವನ್ನು ಪರಿವರ್ತನೆ ಮಾಡಿಕೊಳ್ಳಿರಿ. ಹೀಗೆ ಯೋಚಿಸಬಾರದು - ನಮ್ಮ ಹವ್ಯಾಸವೇ ಹೀಗಿದೆ. ದೇಶದ ಕಾರಣದಿಂದ ಅಥವಾ ವಾಯುಮಂಡಲದ ಕಾರಣದಿಂದ ಅಥವಾ ಜನ್ಮದ ಸಂಸ್ಕಾರ, ಸ್ವಭಾವದ ಕಾರಣದಿಂದ ಹೀಗೆ ಆಗಿಯೇ ಆಗುತ್ತದೆ, ಇಂತಿಂತಹ ಮಾನ್ಯತೆಗಳು ಬಲಹೀನರನ್ನಾಗಿ ಮಾಡಿ ಬಿಡುತ್ತದೆ. ಜನ್ಮವು ಬದಲಾಯಿತೆಂದರೆ ಸಂಸ್ಕಾರವನ್ನೂ ಬದಲಾಯಿಸಿಕೊಳ್ಳಿರಿ. ಯಾವಾಗ ವಿಶ್ವ ಪರಿವರ್ತಕರು ಆಗಿದ್ದೀರಿ ಅಂದಮೇಲೆ ಮೊದಲು ಸ್ವಪರಿವರ್ತಕರಂತು ಆಗಿಯೇ ಇರುತ್ತೀರಲ್ಲವೆ. ತಮ್ಮ ಆದಿ-ಅನಾದಿ ಸ್ವಭಾವ-ಸಂಸ್ಕಾರವನ್ನು ತಿಳಿದುಕೊಳ್ಳಿರಿ. ಸತ್ಯ ಸಂಸ್ಕಾರವು ಅದಾಗಿದೆ, ಇದಂತು ನಕಲಿಯಾಗಿದೆ. ನನ್ನ ಸಂಸ್ಕಾರ, ನನ್ನ ಸ್ವಭಾವ ಎನ್ನುವುದು ಮಾಯೆಗೆ ವಶರಾಗಿರುವವರ ಸ್ವಭಾವವಾಗಿದೆ. ತಾವು ಶ್ರೇಷ್ಠಾತ್ಮರ ಆದಿ-ಅನಾದಿ ಸ್ವಭಾವವಲ್ಲ, ಆದ್ದರಿಂದ ಈ ಮಾತುಗಳಲ್ಲಿ ಮತ್ತೆ ಗಮನ ತರಿಸುತ್ತಿದ್ದಾರೆ. ರಿವೈಜ್ ಮಾಡಿಸುತ್ತಿದ್ದಾರೆ. ಈ ಪರಿವರ್ತನೆಯನ್ನು ಅವಿನಾಶಿ ಮಾಡಿಕೊಳ್ಳಿರಿ.

ವಿಶೇಷತೆಗಳೂ ಸಹ ಬಹಳಷ್ಟಿವೆ. ಸ್ನೇಹದಲ್ಲಿ ನಂಬರ್ವನ್ ಆಗಿದ್ದೀರಿ, ಸೇವೆಯ ಉಮ್ಮಂಗದಲ್ಲಿ ನಂಬರ್ವನ್ ಆಗಿದ್ದೀರಿ. ಸ್ಥೂಲದಲ್ಲಿ ದೂರವಿದ್ದರೂ ಸಹ ಸಮೀಪವಿದ್ದೀರಿ. ಕ್ಯಾಚಿಂಗ್ ಪವರ್ ಸಹ ಬಹಳ ಚೆನ್ನಾಗಿ ಇದೆ. ಅನುಭೂತಿಯ ಶಕ್ತಿಯೂ ಸಹ ಬಹಳ ತೀವ್ರವಾಗಿ ಇದೆ. ಖುಷಿಯ ಉಯ್ಯಾಲೆಯಲ್ಲಿ ತೂಗುತ್ತೀರಿ. ವಾಹ್ ಬಾಬಾ, ವಾಹ್ ಪರಿವಾರವೇ, ವಾಹ್ ಡ್ರಾಮಾ ಎಂಬ ಹಾಡನ್ನು ಬಹಳ ಚೆನ್ನಾಗಿ ಹಾಡುತ್ತೀರಿ. ಧೃಡತೆಯ ವಿಶೇಷತೆಯೂ ಚೆನ್ನಾಗಿದೆ. ಗುರುತಿಸುವ ಬುದ್ಧಿಯೂ ಸಹ ತೀವ್ರವಾಗಿದೆ. ತಂದೆ ಹಾಗೂ ಪರಿವಾರದ ಅಗಲಿ ಮರಳಿ ಸಿಕ್ಕಿರುವವರು ಬಹಳ ಮುದ್ದಾದ ಮಕ್ಕಳಾಗಿದ್ದೀರಿ. ಮಧುಬನದ ಅಲಂಕಾರವೂ ಆಗಿದ್ದೀರಿ ಮತ್ತು ಶೋಭೆಯೂ ಚೆನ್ನಾಗಿದೆ. ವಿಭಿನ್ನವಾದ ರೆಂಬೆಗಳೆಲ್ಲವೂ ಸೇರಿಕೊಂಡು ಒಂದು ಚಂದನದ ವೃಕ್ಷವಾಗುವ ಉದಾಹರಣೆಯೂ ಬಹಳ ಚೆನ್ನಾಗಿದೆ. ಎಷ್ಟೊಂದು ವಿಶೇಷತೆಗಳಾಯಿತು! ವಿಶೇಷತೆಗಳಂತು ಬಹಳಷ್ಟಿವೆ ಮತ್ತು ಬಲಹೀನತೆಯು ಒಂದಿದೆ. ಅಂದಾಗ ಒಂದನ್ನು ಸಮಾಪ್ತಿ ಮಾಡುವುದಂತು ಬಹಳ ಸಹಜವಲ್ಲವೆ. ಸಮಸ್ಯೆಗಳೂ ಸಮಾಪ್ತಿಯಾಯಿತಲ್ಲವೆ! ತಿಳಿಯಿತೆ!

ಹೇಗೆ ಸತ್ಯತೆಯಿಂದ ತಿಳಿಸುತ್ತೀರಿ, ಹಾಗೆಯೇ ಹೃದಯದಿಂದ ಸತ್ಯತೆಯಿಂದ ತೆಗೆಯುವುದರಲ್ಲಿಯೂ ನಂಬರ್ವನ್ ಆಗಿರಿ. ವಿಶೇಷತೆಗಳ ಮಾಲೆಯನ್ನು ಮಾಡುತ್ತೀರೆಂದರೆ ಬಹಳ ಉದ್ದನೆ ಪಟ್ಟಿಯಾಗಿ ಬಿಡುತ್ತದೆ. ಬಾಪ್ದಾದಾರವರು ಮತ್ತೆ ಶುಭಾಷಯಗಳನ್ನು ಕೊಡುತ್ತಾರೆ. ಈ ಪರಿವರ್ತನೆಯು 99% ಮಾಡಿ ಬಿಟ್ಟಿರಿ, ಬಾಕಿ 1% ಇದೆ. ಅದೂ ಸಹ ಪರಿವರ್ತನೆಯಾಗಿಯೇ ಇದೆ. ತಿಳಿಯಿತೆ. ಎಷ್ಟೊಂದು ಒಳ್ಳೆಯವರಿದ್ದಾರೆ, ಯಾರು ಈಗೀಗಲೂ ಸಹ ಪರಿವರ್ತನೆ ಮಾಡಿಕೊಂಡು ಇಲ್ಲವೆನ್ನುವುದರಿಂದ ಆಯಿತು ಎನ್ನುತ್ತಿದ್ದಾರೆ. ಇದೂ ಸಹ ವಿಶೇಷತೆಯಾಯಿತಲ್ಲವೆ! ಉತ್ತರವನ್ನು ಬಹಳ ಚೆನ್ನಾಗಿ ಕೊಡುತ್ತಾರೆ. ಇವರೊಂದಿಗೆ ಕೇಳುತ್ತೇವೆ - ಶಕ್ತಿಶಾಲಿ, ವಿಜಯಿಯಾಗಿದ್ದೀರಾ? ಅದಕ್ಕೆ ಹೇಳುತ್ತಾರೆ - ಈಗಿನಿಂದ ಇದ್ದೇವೆ! ಇದೂ ಸಹ ಪರಿವರ್ತನೆಯ ಶಕ್ತಿಯು ತೀವ್ರವಾಗಿದೆಯಲ್ಲವೆ. ಕೇವಲ ಇರುವೆ, ಇಲಿಯಿಂದ ಗಾಬರಿಯಾಗುವ ಸಂಸ್ಕಾರವಿದೆ. ಮಹಾವೀರರಾಗಿ ಇರುವೆಯನ್ನು ಕಾಲಿನ ಕೆಳಗೆ ಮಾಡಿಬಿಡಿ ಮತ್ತು ಇಲಿಯನ್ನು ಸವಾರಿಯನ್ನಾಗಿ ಮಾಡಿ ಬಿಡಿ, ಗಣೇಶ ಆಗಿ ಬಿಡಿ. ಈಗಿನಿಂದ ವಿಘ್ನ ವಿನಾಶಕ ಅರ್ಥಾತ್ ಗಣೇಶನಾಗಿದ್ದು ಇಲಿಯ ಮೇಲೆ ಸವಾರಿ ಮಾಡಿ ಬಿಡಿ. ಇಲಿಯಿಂದ ಭಯ ಪಡಬಾರದು. ಇಲಿಯು ಶಕ್ತಿಗಳನ್ನು ತುಂಡರಿಸಿ ಬಿಡುತ್ತದೆ. ಸಹನಾಶಕ್ತಿಯನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಸರಳತೆಯನ್ನು ಸಮಾಪ್ತಿ ಮಾಡಿ ಬಿಡುತ್ತದೆ, ಸ್ನೇಹವನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಇರುವೆಯು ಆನೆಯನ್ನು ಕಚ್ಚುತ್ತದೆಯಲ್ಲವೆ ಮತ್ತು ಸೀದಾ ತಲೆಯಲ್ಲಿ ಹೊರಟು ಹೋಗುತ್ತದೆ. ಟೆನ್ಶನ್ನಲ್ಲಿ ಮೂರ್ಛಿತರನ್ನಾಗಿ ಮಾಡಿ ಬಿಡುತ್ತದೆ. ಆ ಸಮಯದಲ್ಲಿ ಬೇಸರ ಮಾಡಿ ಬಿಡುತ್ತದೆಯಲ್ಲವೆ. ಒಳ್ಳೆಯದು!

ಸದಾ ಮಹಾವೀರರಾಗಿದ್ದು ಶಕ್ತಿಶಾಲಿ ಸ್ಥಿತಿಯಲ್ಲಿ ಸ್ಥಿತರಾಗಿರುವಂತಹ, ಪ್ರತೀ ಸಂಕಲ್ಪ, ಮಾತು ಮತ್ತು ಕರ್ಮ, ಪ್ರತೀ ಹೆಜ್ಜೆಯಲ್ಲಿ ಹೆಜ್ಜೆಯನ್ನಿಟ್ಟು ತಂದೆಯ ಜೊತೆ ಜೊತೆಗೆ ನಡೆಯುವಂತಹ ಸತ್ಯ ಜೀವನದ ಜೊತೆಗಾರರು, ಸದಾ ತಮ್ಮ ವಿಶೇಷತೆಗಳನ್ನು ಸನ್ಮುಖದಲ್ಲಿ ಇಟ್ಟುಕೊಂಡು ಸದಾಕಾಲಕ್ಕಾಗಿ ಬಲಹೀನತೆಗಳಿಗೆ ವಿದಾಯಿಯನ್ನು ಕೊಡುವಂತಹ, ಸಂಕಲ್ಪವೆಂಬ ಬೀಜವನ್ನು ಸದಾ ಫಲದಾಯಕವನ್ನಾಗಿ ಮಾಡುವಂತಹ, ಪ್ರತೀ ಸಮಯದಲ್ಲಿ ಬೇಹದ್ದಿನ ಪ್ರತ್ಯಕ್ಷ ಫಲವನ್ನು ಸೇವಿಸುವಂತಹ, ಸರ್ವ ಪ್ರಾಪ್ತಿಗಳ ಉಯ್ಯಾಲೆಯಲ್ಲಿ ತೂಗುವಂತಹ ಸದಾ ಸಮರ್ಥ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಫ್ರಾನ್ಸ್ ಗ್ರೂಪ್ನವರೊಂದಿಗೆ :-

1. ಎಲ್ಲರೂ ಬಹಳ ಬಾರಿ ಭೇಟಿಯಾಗಿದ್ದೀರಿ ಮತ್ತು ಈಗ ಮತ್ತೆ ಭೇಟಿಯಾಗುತ್ತಿದ್ದೀರಿ - ಏಕೆಂದರೆ ಕಲ್ಪದ ಮೊದಲು ಮಿಲನವಾಗಿದ್ದಿರಿ, ಆದ್ದರಿಂದ ಈಗ ಮಿಲನವಾಗುತ್ತಿದ್ದೀರಿ. ಕಲ್ಪದ ಮೊದಲಿನ ಆತ್ಮರು ಮತ್ತೆ ತನ್ನ ಹಕ್ಕನ್ನು ತೆಗೆದುಕೊಳ್ಳುವುದಕ್ಕಾಗಿ ತಲುಪಿ ಬಿಟ್ಟಿದ್ದೀರಾ? ಹೊಸಬರೆನಿಸುವುದಿಲ್ಲ ಅಲ್ಲವೆ! ಪರಿಚಯವು ನೆನಪಿಗೆ ಬರುತ್ತಿದೆ- ನಾವು ಬಹಳ ಬಾರಿ ಮಿಲನವಾಗಿದ್ದೇವೆ! ಗೊತ್ತಿರುವ ಮನೆಯೆನಿಸುತ್ತಿದೆ. ಯಾವಾಗ ತಮ್ಮವರೇನಾದರೂ ಭೇಟಿಯಾಗುತ್ತಾರೆಂದರೆ, ತನ್ನವರನ್ನು ನೋಡಿ ಖುಶಿಯಾಗುತ್ತದೆ. ಈಗ ತಿಳಿಯುತ್ತೀರಿ - ಅದೇನು ಸಂಬಂಧ(ಲೌಕಿಕ) ಇತ್ತು ಅದು ಸ್ವಾರ್ಥದ ಸಂಬಂಧವಿತ್ತು, ಸತ್ಯವಾದುದಲ್ಲ. ಈಗ ತಮ್ಮ ಪರಿವಾರ, ತಮ್ಮ ಮಧುರ ಮನೆಯಲ್ಲಿ ತಲುಪಿ ಬಿಟ್ಟಿರಿ. ಬಾಪ್ದಾದಾರವರೂ ಸಹ ಭಲೆ ಬಂದಿದ್ದೀರಿ ಎಂದು ಹೇಳುತ್ತಾ ಸ್ವಾಗತವನ್ನು ಮಾಡುತ್ತಿದ್ದಾರೆ.

ಧೃಡತೆಯು ಸಫಲತೆಯನ್ನು ತರುತ್ತದೆ, ಎಲ್ಲಿ ಈ ಸಂಕಲ್ಪವಿರುತ್ತದೆ - ಇದಾಗುತ್ತದೆಯೋ ಅಥವಾ ಇಲ್ಲವೊ, ಅಲ್ಲಿ ಸಫಲತೆಯಾಗುವುದಿಲ್ಲ. ಎಲ್ಲಿ ಧೃಡತೆಯಿದೆ ಅಲ್ಲಿ ಸಫಲತೆಯಾಗಿರುತ್ತದೆ. ಎಂದಿಗೂ ಸಹ ಸೇವೆಯಲ್ಲಿ ಹೃದಯ ವಿಧೀರ್ಣರಾಗಬಾರದು. ಏಕೆಂದರೆ ಅವಿನಾಶಿ ತಂದೆಯ ಅವಿನಾಶಿ ಕಾರ್ಯವಾಗಿದೆ. ಸಫಲತೆಯೂ ಸಹ ಅವಿನಾಶಿ ಆಗಲೇಬೇಕು. ಸೇವೆಯ ಫಲವು ಬರಲಿಲ್ಲ - ಹೀಗಾಗಲು ಸಾಧ್ಯವಿಲ್ಲ. ಕೆಲವು ಅದೇ ಸಮಯದಲ್ಲಿ ಫಲವು ಬರುತ್ತದೆ, ಕೆಲವು ಸ್ವಲ್ಪ ಸಮಯದ ನಂತರ ಬರುತ್ತದೆ. ಆದ್ದರಿಂದ ಎಂದಿಗೂ ಸಹ ಈ ಸಂಕಲ್ಪವನ್ನು ಮಾಡಬಾರದು. ಸದಾ ಹೀಗೆ ತಿಳಿದುಕೊಳ್ಳಿರಿ - ಸೇವೆಯಾಗಲೇಬೇಕು.

ಜಪಾನ್ ಗ್ರೂಪ್ನವರೊಂದಿಗೆ :- ತಂದೆಯ ಮೂಲಕ ಸರ್ವ ಖಜಾನೆಗಳು ಪ್ರಾಪ್ತಿಯಾಗುತ್ತಿದೆಯೇ? ಸಂಪನ್ನ ಆತ್ಮರಾಗಿದ್ದೇವೆ - ಇಂತಹ ಅನುಭವ ಮಾಡುತ್ತಿದ್ದೀರಾ? ಒಂದು ಜನ್ಮವಲ್ಲ ಆದರೆ 21 ಜನ್ಮಗಳಲ್ಲಿ ಈ ಖಜಾನೆಗಳು ನಡೆಯುತ್ತಿರುತ್ತದೆ. ಇಂದಿನ ಪ್ರಪಂಚದಲ್ಲಿ ಯಾರೆಷ್ಟೇ ಧನವಂತರಿರಲಿ ಆದರೆ ಯಾವ ಖಜಾನೆಯು ತಮ್ಮ ಬಳಿಯಿದೆ, ಅದು ಮತ್ತ್ಯಾರ ಬಳಿಯೂ ಇಲ್ಲ. ಅಂದಮೇಲೆ ವಾಸ್ತವಿಕ ಸತ್ಯವಾಗಿ ವಿ.ಐ.ಪಿ. ಯಾರಾಗಿದ್ದಾರೆ? ತಾವಾಗಿದ್ದೀರಲ್ಲವೆ. ಅವರ ಸ್ಥಾನವು ಇಂದಿದೆ, ನಾಳೆ ಇಲ್ಲ. ಆದರೆ ತಮ್ಮ ಈ ಈಶ್ವರೀಯ ಸ್ಥಾನವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ತಂದೆಯ ಮನೆಯ ಶೃಂಗಾರವು ಮಕ್ಕಳಾಗಿದ್ದೀರಿ. ಹೇಗೆ ಮನೆಯನ್ನು ಹೂಗಳಿಂದ ಶೃಂಗರಿಸಲಾಗುತ್ತದೆ, ಹಾಗೆಯೇ ತಂದೆಯ ಮನೆಯ ಶೃಂಗಾರವಾಗಿದ್ದೀರಿ. ಅಂದಮೇಲೆ ಸದಾ ಸ್ವಯಂನ್ನು - ನಾನು ತಂದೆಯ ಶೃಂಗಾರವಾಗಿದ್ದೇನೆ, ಹೀಗೆ ತಿಳಿದುಕೊಂಡು ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿರಿ. ಎಂದಿಗೂ ಸಹ ಬಲಹೀನತೆಯ ಮಾತುಗಳನ್ನು ನೆನಪು ಮಾಡಬಾರದು. ಕಳೆದು ಹೋಗಿರುವ ಮಾತುಗಳನ್ನು ನೆನಪು ಮಾಡುವುದರಿಂದ ಮತ್ತಷ್ಟು ಬಲಹೀನತೆಗಳು ಬಂದು ಬಿಡುತ್ತದೆ. ಭೂತ ಕಾಲವನ್ನು ಯೋಚಿಸಿದರೆ ಅಳು ಬರುತ್ತದೆ. ಆದ್ದರಿಂದ ಪಾಸ್ಟ್ ಅಂದರೆ ಫಿನಿಶ್. ತಂದೆಯ ನೆನಪು ಶಕ್ತಿಶಾಲಿ ಆತ್ಮನನ್ನಾಗಿ ಮಾಡಿ ಬಿಡುತ್ತದೆ. ಶಕ್ತಿಶಾಲಿ ಆತ್ಮನಾಗುವುದಕ್ಕಾಗಿ ಪರಿಶ್ರಮವೂ ಸಹ ಪ್ರೀತಿಯಲ್ಲಿ ಬದಲಾಗಿ ಬಿಡುತ್ತದೆ. ಜ್ಞಾನದ ಖಜಾನೆಯನ್ನು ಅನ್ಯರಿಗೆಷ್ಟು ಕೊಡುತ್ತೀರಿ, ಅಷ್ಟೂ ವೃದ್ಧಿಯಾಗುತ್ತದೆ. ಸಾಹಸ ಮತ್ತು ಉಲ್ಲಾಸದ ಮೂಲಕ ಸದಾ ಉನ್ನತಿಯನ್ನು ಪಡೆಯುತ್ತಾ ಮುಂದುವರೆಯುತ್ತಾ ಸಾಗಿರಿ. ಒಳ್ಳೆಯದು!

ಅವ್ಯಕ್ತ ಮಹಾವಾಕ್ಯ - " ಇಚ್ಛಾ ಮಾತ್ರಂ ಅವಿದ್ಯಾ "

ಬ್ರಾಹ್ಮಣರ ಅಂತಿಮ ಸಂಪೂರ್ಣ ಸ್ವರೂಪ ಅಥವಾ ಸ್ಥಿತಿಯ ವರ್ಣನೆಯಾಗಿದೆ - ಇಚ್ಛಾ ಮಾತ್ರಂ ಅವಿದ್ಯಾ. ಯಾವಾಗ ಇಂತಹ ಸ್ಥಿತಿಯಾಗುತ್ತದೆಯೋ ಆಗಲೇ ಜಯ ಜಯಕಾರ ಹಾಗೂ ಹಾಹಾಕಾರವಾಗುತ್ತದೆ. ಇದಕ್ಕಾಗಿ ತೃಪ್ತ ಆತ್ಮರಾಗಿ ಇರಿ. ಎಷ್ಟು ತೃಪ್ತರಾಗಿರುತ್ತೀರಿ ಅಷ್ಟೇ ಇಚ್ಛಾ ಮಾತ್ರಂ ಅವಿದ್ಯಾ ಆಗಿರುತ್ತೀರಿ. ಹೇಗೆ ಬಾಪ್ದಾದಾರವರು ಯಾವುದೇ ಕರ್ಮದ ಫಲದ ಇಚ್ಛೆಯನ್ನಿಡುತ್ತಿರಲಿಲ್ಲ. ಪ್ರತೀ ವಚನ ಮತ್ತು ಕರ್ಮದಲ್ಲಿ ಸದಾ ತಂದೆಯ ಸ್ಮೃತಿಯಿರುವ ಕಾರಣದಿಂದ, ಫಲದ ಇಚ್ಛೆಯ ಸಂಕಲ್ಪದಲ್ಲಿಯೂ ಇರುತ್ತಿರಲಿಲ್ಲ, ಇದೇ ರೀತಿ ಫಾಲೋ ಫಾದರ್ ಮಾಡಿರಿ. ಕಚ್ಚಾ ಫಲದ ಇಚ್ಛೆಯನ್ನಿಟ್ಟುಕೊಳ್ಳಬೇಡಿ. ಫಲದ ಇಚ್ಛೆಯು ಸೂಕ್ಷ್ಮದಲ್ಲಿಯೂ ಇರುತ್ತದೆಯೆಂದರೆ ಹೇಗೆ ಮಾಡಿದಿರಿ ಮತ್ತು ಫಲವನ್ನು ಸೇವಿಸಿದಿರಿ, ನಂತರ ಫಲ ಸ್ವರೂಪವು ಹೇಗೆ ಕಾಣಿಸುತ್ತದೆ, ಆದ್ದರಿಂದ ಫಲದ ಇಚ್ಛೆಯನ್ನು ಬಿಟ್ಟು ಇಚ್ಛಾ ಮಾತ್ರಂ ಅವಿದ್ಯಾ ಆಗಿರಿ.

ಹೇಗೆ ಅಪಾರ ದುಃಖಗಳ ಪಟ್ಟಿಯಿದೆ, ಹಾಗೆಯೇ ಫಲದ ಇಚ್ಛೆಗಳ ಅಥವಾ ಯಾರು ಅದರ ಪ್ರತ್ಯುತ್ತರವನ್ನು ತೆಗೆದುಕೊಳ್ಳುವ ಸೂಕ್ಷ್ಮ ಸಂಕಲ್ಪವಿರುತ್ತದೆಯೋ, ಅದೂ ಸಹ ಭಿನ್ನ-ಭಿನ್ನ ಪ್ರಕಾರವಾದುದು ಆಗಿರುತ್ತದೆ. ನಿಷ್ಕಾಮ ವೃತ್ತಿಯಿರುವುದಿಲ್ಲ. ಪುರುಷಾರ್ಥದ ಪ್ರಾಲಬ್ಧದ ತಿಳುವಳಿಕೆಯಿದ್ದರೂ ಸಹ, ಅದರಲ್ಲಿ ಮಮತ್ವವಿರುತ್ತದೆ. ಯಾರೇ ಮಹಿಮೆಯನ್ನು ಮಾಡುತ್ತಾರೆ ಮತ್ತು ಅವರ ಕಡೆಗೆ ತಮ್ಮ ವಿಶೇಷವಾದ ಗಮನ ಹರಿಯುತ್ತದೆಯೆಂದರೆ, ಇದೂ ಸಹ ಸೂಕ್ಷ್ಮ ಫಲವನ್ನು ಸ್ವೀಕಾರ ಮಾಡುವುದಾಗಿದೆ. ಒಂದು ಶ್ರೇಷ್ಠ ಕರ್ಮವನ್ನು ಮಾಡುವುದರ ಫಲವು ತಮ್ಮ ಮುಂದೆ ನೂರು ಪಟ್ಟು ಸಂಪನ್ನ ಫಲವಾಗಿ ಬರುತ್ತದೆ. ಆದರೆ ತಾವು ಅಲ್ಪಕಾಲದ ಇಚ್ಛಾ ಮಾತ್ರಂ ಅವಿದ್ಯಾ ಆಗಿರಿ. ಇಚ್ಛಾ, ಅಚ್ಛಾ ಕರ್ಮವನ್ನು ಸಮಾಪ್ತಿ ಮಾಡಿ ಬಿಡುತ್ತದೆ, ಇಚ್ಛೆಯು ಸ್ವಚ್ಛತೆಯನ್ನು ಸಮಾಪ್ತಿ ಮಾಡಿ ಬಿಡುತ್ತದೆ ಮತ್ತು ಸ್ವಚ್ಛತೆಗೆ ಬದಲಾಗಿ ಯೋಚಿಸುವವರನ್ನಾಗಿ ಮಾಡಿ ಬಿಡುತ್ತದೆ, ಆದ್ದರಿಂದ ಈ ವಿದ್ಯೆಯ ಅವಿದ್ಯಾ ಆಗಿರಿ.

ಹೇಗೆ ತಂದೆಯನ್ನು ನೋಡಿದಿರಿ - ಸ್ವಯಂನ ಸಮಯವನ್ನೂ ಸಹ ಸೇವೆಯಲ್ಲಿ ಕೊಟ್ಟರು. ಸ್ವಯಂ ನಿರಹಂಕಾರಿಯಾಗಿದ್ದು ಮಕ್ಕಳಿಗೆ ಮಾನ್ಯತೆಯನ್ನು ಕೊಟ್ಟರು. ಮೊದಲು ಮಕ್ಕಳು - ಹೆಸರು ಮಕ್ಕಳದು, ಕಾರ್ಯವು ತನ್ನದು. ಕಾರ್ಯದ ಹೆಸರಿನ ಪ್ರಾಪ್ತಿಯ ತ್ಯಾಗವನ್ನೂ ಮಾಡಿದರು. ಮಕ್ಕಳನ್ನು ಮಾಲೀಕರನ್ನಾಗಿ ಇಟ್ಟರು ಮತ್ತು ಸ್ವಯಂನ್ನು ಸೇವಾಧಾರಿ. ಮಾಲೀಕತ್ವದ ಮಾನ್ಯತೆಯನ್ನೂ ಕೊಟ್ಟರು - ಸ್ಥಾನವನ್ನೂ ಕೊಟ್ಟು ಬಿಟ್ಟರು, ಹೆಸರನ್ನೂ ಕೊಟ್ಟು ಬಿಟ್ಟರು. ಎಂದಿಗೂ ಸಹ ತನ್ನ ಹೆಸರನ್ನು ಮಾಡಿಕೊಳ್ಳಲಿಲ್ಲ - ನನ್ನ ಮಕ್ಕಳು. ಅಂದಮೇಲೆ ಹೇಗೆ ತಂದೆಯ ಹೆಸರು, ಮಾನ್ಯತೆ, ಸ್ಥಾನ, ಎಲ್ಲವನ್ನೂ ತ್ಯಾಗ ಮಾಡಿದರು ಹಾಗೆಯೇ ಫಾಲೋ ಫಾದರ್ ಮಾಡಿರಿ. ತಾವು ಈಗೀಗ ಯಾವುದೇ ಸೇವೆಯನ್ನು ಮಾಡಿದಿರಿ ಮತ್ತು ಈಗೀಗ ಅದರ ಫಲವನ್ನು ತೆಗೆದುಕೊಂಡಿರೆಂದರೆ, ಸ್ವಲ್ಪವೂ ಜಮಾ ಆಗಲಿಲ್ಲ, ಸಂಪಾದಿಸಿರಿ ಮತ್ತು ಅದನ್ನು ಉಪಯೋಗಿಸಿ ಬಿಟ್ಟಿರಿ. ಅದರಲ್ಲಿ ಮತ್ತೆ ವಿಲ್ಪವರ್ ಇರುವುದಿಲ್ಲ. ಅಂತಹವರು ಆಂತರ್ಯದಿಂದ ಬಲಹೀನರಾಗಿರುತ್ತಾರೆ, ಶಕ್ತಿಶಾಲಿ ಅಲ್ಲ, ಖಾಲಿ-ಖಾಲಿಯಾಗಿ ಉಳಿದು ಬಿಡುತ್ತಾರೆ. ಯಾವಾಗ ಈ ಮಾತು ಸಮಾಪ್ತಿಯಾಗಿ ಬಿಡುತ್ತದೆಯೋ ಆಗ ನಿರಾಕಾರಿ, ನಿರಹಂಕಾರಿ ಮತ್ತು ನಿರ್ವಿಕಾರಿ ಸ್ಥಿತಿಯು ಸ್ವತಹವಾಗಿ ಆಗಿ ಬಿಡುತ್ತದೆ. ತಾವು ಮಕ್ಕಳು ಕಾಮನೆಯಿಂದ ಎಷ್ಟೇ ಭಿನ್ನರಾಗಿರುತ್ತೀರಿ, ಅಷ್ಟೇ ತಮ್ಮ ಪ್ರತೀ ಕಾಮನೆಯು ಸಹಜವಾಗಿ ಪೂರ್ಣವಾಗುತ್ತಿರುತ್ತದೆ. ಫೆಸಿಲಿಟೀಸನ್ನು ಬೇಡಬಾರದು, ದಾತನಾಗಿದ್ದು ಕೊಡಿ - ಯಾವುದೇ ಸೇವೆಗಾಗಿ ಅಥವಾ ಸ್ವಯಂಗಾಗಿ ಪರಿಹಾರದ ಆಧಾರದ ಮೇಲೆ ಸ್ವಯಂನ್ನು ಉನ್ನತಿ ಅಥವಾ ಸೇವೆಯ ಅಲ್ಪಕಾಲದ ಸಫಲತೆಯು ಪ್ರಾಪ್ತಿಯಾಗಿ ಬಿಡುತ್ತದೆ. ಆದರೆ ಇಂದು ಮಹಾನರಾಗಿರುತ್ತಾರೆ ನಾಳೆ ಮಹಾನತೆಯ ಬಾಯಾರಿರುವ ಆತ್ಮರಾಗಿ ಬಿಡುತ್ತಾರೆ, ಸದಾಕಾಲದ ಪ್ರಾಪ್ತಿಯ ಇಚ್ಛೆಯಲ್ಲಿರುತ್ತಾರೆ.

ಎಂದಿಗೂ ಸಹ ನ್ಯಾಯವನ್ನು ಬೇಡುವವರಾಗಬಾರದು. ಯಾವುದೇ ಪ್ರಕಾರದ ಬೇಡಿಕೆಯಿರುವವರು ಸ್ವಯಂನ್ನು ತೃಪ್ತಾತ್ಮನೆಂಬ ಅನುಭವ ಮಾಡುವುದಿಲ್ಲ. ಮಹಾದಾನಿಗಳು ಭಿಕಾರಿಯಿಂದ ಒಂದು ನಯಾಪೈಸೆಯಷ್ಟೂ ಇಚ್ಛೆಯನ್ನಿಟ್ಟುಕೊಳ್ಳಲು ಸಾಧ್ಯವಿಲ್ಲ. ಇವರು ಬದಲಾಗಲಿ ಅಥವಾ ಇವರು ಮಾಡಲಿ ಅಥವಾ ಇವರು ಸ್ವಲ್ಪ ಸಹಯೋಗವನ್ನು ಕೊಡಲಿ, ಹೆಜ್ಜೆಯನ್ನು ಮುಂದಿಡಲಿ, ಇಂತಹ ಸಂಕಲ್ಪ ಅಥವಾ ಹೀಗೆ ಸಹಯೋಗದ ಭಾವನೆಗೆ ಪರವಶರು, ಶಕ್ತಿ ಹೀನ, ಭಿಕಾರಿ ಆತ್ಮರಿಂದೇನು ಇಚ್ಚೆಯನ್ನಿಡಬಹುದು! ಒಂದುವೇಳೆ ಯಾರೇ ತಮ್ಮ ಸಹಯೋಗಿ ಸಹೋದರ-ಸಹೋದರಿಯು ಪರಿವಾರದ ಆತ್ಮರು, ಬುದ್ಧಿ ಹೀನ ಅಥವಾ ಬಾಲ್ಯ ಹಠದಿಂದ ಅಲ್ಪಕಾಲದ ವಸ್ತುವನ್ನು ಸದಾಕಾಲದ ಪ್ರಾಪ್ತಿಯೆಂದು ತಿಳಿದು, ಅಲ್ಪಕಾಲದ ಮಾನ್ಯತೆ-ಸ್ಥಾನ-ಹೆಸರು ಅಥವಾ ಅಲ್ಪಕಾಲದ ಪ್ರಾಪ್ತಿಯ ಇಚ್ಛೆಯನ್ನಿಡುತ್ತಾರೆಂದರೆ ಅನ್ಯರಿಗೂ ಮಾನ್ಯತೆಯನ್ನು ಕೊಟ್ಟು ಸ್ವಯಂ ನಿರಹಂಕಾರಿಯಾಗಿರಿ, ಹೀಗೆ ಕೊಡುವುದೂ ಸಹ ಸದಾಕಾಲಕ್ಕಾಗಿ ತೆಗೆದುಕೊಳ್ಳುವುದಾಗಿದೆ. ಯಾರಿಂದ ಯಾವುದೇ ಪರಿಹಾರವನ್ನು ತೆಗೆದುಕೊಂಡು ನಂತರ ಪರಿಹಾರವನ್ನು ಕೊಡುವುದರ ಬಗ್ಗೆ ಸಂಕಲ್ಪದಲ್ಲಿಯೂ ಇರಬಾರದು. ಈ ಅಲ್ಪಕಾಲದ ಇಚ್ಛೆಯಿಂದ ಬೆಗ್ಗರ್ ಆಗಿರಿ. ಎಲ್ಲಿಯವರೆಗೆ ಯಾರಲ್ಲಿಯೇ, ಯಾವುದೇ ಆಸಕ್ತಿಯು ಅಂಶದಷ್ಟಾದರೂ ಕಂಡು ಬರುತ್ತದೆ, ನಿಸ್ಸಾರ ಪ್ರಪಂಚದ ಅನುಭವವಾಗುವುದಿಲ್ಲ, ಆಗ ಬುದ್ಧಿಯಲ್ಲಿ ಇದು ಬರುವುದಿಲ್ಲ - ಇವರೆಲ್ಲರೂ ಸತ್ತು ಹೋಗಿದ್ದಾರೆ. ಅಲ್ಲಿಯವರೆಗೂ ಅವರಿಂದ ಯಾವುದಾದರೂ ಪ್ರಾಪ್ತಿಯ ಇಚ್ಛೆಯಿರಲಿ, ಸಾಧ್ಯವಿದೆ. ಆದರೆ ಸದಾ ಏಕರಸ ಇರುವವರು, ಏಕರಸ ಸ್ಥಿತಿಯಿರುವವರಾಗಿ ಬಿಡುತ್ತಾರೆ. ಅವರು ಶವದೊಂದಿಗೆ ಯಾವುದೇ ಪ್ರಕಾರದ ಪ್ರಾಪ್ತಿಯ ಕಾಮನೆಯಿರಲು ಸಾಧ್ಯವಿಲ್ಲ. ಯಾವುದೇ ವಿನಾಶಿ ಇಚ್ಛೆಯು ತನ್ನ ಕಡೆಗೆ ಆಕರ್ಷಿಸಲು ಸಾಧ್ಯವಿಲ್ಲ.

ಅನೇಕ ಪ್ರಕಾರದ ಕಾಮನೆಗಳನ್ನು ಪೂರ್ಣಗೊಳಿಸುವುದರಲ್ಲಿ ವಿಘ್ನವನ್ನು ಹಾಕುತ್ತದೆ. ಯಾವಾಗ ಈ ಕಾಮನೆಯನ್ನಿಡುತ್ತೀರಿ - ನನ್ನ ಹೆಸರಾಗಲಿ, ನಾನು ಹೀಗಿದ್ದೇನೆ, ನನ್ನಿಂದ ಸಲಹೆಯನ್ನೇಕೆ ತೆಗೆದುಕೊಳ್ಳಲಿಲ್ಲ, ನನ್ನ ಮೌಲ್ಯವನ್ನೇಕೆ ಇಡಲಿಲ್ಲ? ಆಗಲೇ ಸೇವೆಯಲ್ಲಿ ವಿಘ್ನವು ಬೀಳುತ್ತದೆ. ಆದರಿಂದ ಮಾನ್ಯತೆಯ ಇಚ್ಛೆಯನ್ನು ಬಿಟ್ಟು, ಸ್ವಮಾನದಲ್ಲಿ ಸ್ಥಿತರಾಗಿ ಬಿಡುತ್ತೀರೆಂದರೆ ಮಾನ್ಯತೆಯು ನೆರಳಿನಂತೆ ತಮ್ಮ ಹಿಂದೆಯೇ ಬರುತ್ತದೆ.

ಕೆಲವು ಮಕ್ಕಳು ಬಹಳ ಒಳ್ಳೆಯ ಪುರುಷಾರ್ಥಿಗಳಿದ್ದಾರೆ. ಆದರೆ ಪುರುಷಾರ್ಥವನ್ನು ಮಾಡುತ್ತಾ-ಮಾಡುತ್ತಾ ಕೆಲವೊಂದು ಕಡೆ ಪುರುಷಾರ್ಥವನ್ನು ಚೆನ್ನಾಗಿ ಮಾಡಿದ ನಂತರ, ಪ್ರಾಲಬ್ಧವನ್ನು ಇಲ್ಲಿಯೇ ಭೋಗಿಸುವ ಇಚ್ಛೆಯನ್ನಿಡುತ್ತಾರೆ. ಈ ಭೋಗಿಸುವ ಇಚ್ಛೆಯು ಜಮಾ ಆಗುವುದರಲ್ಲಿ ಕೊರತೆ ಮಾಡಿ ಬಿಡುತ್ತದೆ. ಆದ್ದರಿಂದ ಪ್ರಾಲಬ್ಧದ ಇಚ್ಛೆಯನ್ನು ಸಮಾಪ್ತಿ ಮಾಡಿ. ಕೇವಲ ಒಳ್ಳೆಯ ಪುರುಷಾರ್ಥವನ್ನು ಮಾಡಿರಿ. ಇಚ್ಛೆಗೆ ಬದಲಾಗಿ ಅಚ್ಛಾ ಶಬ್ಧವನ್ನು ನೆನಪಿಟ್ಟುಕೊಳ್ಳಿರಿ.

ಭಕ್ತರಿಗೆ ಸರ್ವ ಪ್ರಾಪ್ತಿಗಳನ್ನು ಮಾಡಿಸಲು ಆಧಾರವಾಗಿದೆ -`ಇಚ್ಛಾ ಮಾತ್ರಂ ಅವಿದ್ಯಾ' ಸ್ಥಿತಿಯಾಗಿದೆ. ಯಾವಾಗ ಸ್ವಯಂ `ಇಚ್ಛಾ ಮಾತ್ರಂ ಅವಿದ್ಯಾ' ಆಗಿ ಬಿಡುತ್ತೀರಿ, ಆಗಲೇ ಅನನ್ಯ ಆತ್ಮರ ಸರ್ವ ಇಚ್ಛೆಗಳನ್ನು ಪೂರ್ಣಗೊಳಿಸಬಹುದು. ಯಾವುದೇ ಇಚ್ಛೆಗಳನ್ನಾದರು ತನ್ನ ಪ್ರತಿಯಾಗಿ ಇಡಬಾರದು. ಆದರೆ ಅನ್ಯ ಆತ್ಮರ ಇಚ್ಛೆಯನ್ನು ಪೂರ್ಣಗೊಳಿಸುವ ವಿಚಾರ ಮಾಡುತ್ತೀರೆಂದರೆ, ಸ್ವತಹವಾಗಿಯೇ ಸ್ವಯಂ ಸಂಪನ್ನರಾಗಿ ಬಿಡುತ್ತೀರಿ. ಈಗ ವಿಶ್ವದ ಆತ್ಮರ ಅನೇಕ ಪ್ರಕಾರ ಇಚ್ಛೆಗಳು ಅಂದರೆ ಕಾಮನೆಗಳನ್ನು ಪೂರ್ಣಗೊಳಿಸುವ ಧೃಡ ಸಂಕಲ್ಪವನ್ನು ಧಾರಣೆ ಮಾಡಿರಿ. ಅನ್ಯರ ಇಚ್ಛೆಗಳನ್ನು ಪೂರ್ಣಗೊಳಿಸುವುದು ಅರ್ಥಾತ್ ಸ್ವಯಂನ್ನು ಇಚ್ಛಾ ಮಾತ್ರಂ ಅವಿದ್ಯಾ ಮಾಡುವುದು. ಹೇಗೆ ಕೊಡುವುದು ಎಂದರೆ ತೆಗೆದುಕೊಳ್ಳುವುದಾಗಿದೆ, ಹಾಗೆಯೇ ಅನ್ಯರ ಇಚ್ಛೆಗಳನ್ನು ಪೂರ್ಣಗೊಳಿಸುವುದು ಅರ್ಥಾತ್ ಸ್ವಯಂನ್ನು ಸಂಪನ್ನವನ್ನಾಗಿ ಮಾಡಿಕೊಳ್ಳುವುದಾಗಿದೆ. ಸದಾ ಇದೇ ಲಕ್ಷ್ಯವನ್ನಿಟ್ಟುಕೊಳ್ಳಿರಿ - ನಾವು ಸರ್ವರ ಕಾಮನೆಗಳನ್ನು ಪೂರ್ಣ ಮಾಡುವ ಮೂರ್ತಿಯಾಗಬೇಕಾಗಿದೆ. ಒಳ್ಳೆಯದು.

ವರದಾನ:
ಪರಿಸ್ಥಿತಿಗಳನ್ನು ಸೈಡ್ಸೀನ್ ಎಂದು ತಿಳಿದುಕೊಂಡು ಪಾರು ಮಾಡುವಂತಹ ಸ್ಮೃತಿ ಸ್ವರೂಪ ಸಮರ್ಥ ಆತ್ಮಾ ಭವ.

ಸ್ಮೃತಿ ಸ್ವರೂಪ ಆತ್ಮರು ಸಮರ್ಥರಾಗಿರುವ ಕಾರಣದಿಂದ, ಪರಿಸ್ಥಿತಿಗಳನ್ನು ಆಟವೆಂದು ತಿಳಿದುಕೊಳ್ಳುತ್ತಾರೆ. ಭಲೆ ಎಷ್ಟೇ ದೊಡ್ಡ ಪರಿಸ್ಥಿತಿಯಿರಲಿ ಆದರೆ ಸಮರ್ಥ ಆತ್ಮರಿಗಾಗಿ ಗುರಿಯಲ್ಲಿ ತಲುಪುವುದಕ್ಕಾಗಿ ಇವೆಲ್ಲವೂ ಮಾರ್ಗದಲ್ಲಿನ ಸೈಡ್ಸೀನ್ ಆಗಿದೆ. ಜನರಂತು ಖರ್ಚು ಮಾಡಿಯಾದರೂ ಸೈಡ್ಸೀನ್ ನೋಡಲು ಹೋಗುತ್ತಾರೆ. ಅಂದಮೇಲೆ ಸ್ಮೃತಿ ಸ್ವರೂಪ ಆತ್ಮರಿಗಾಗಿ ಪರಿಸ್ಥಿತಿಯೆಂದಾದರೂ ಹೇಳಿ, ಪರೀಕ್ಷೆಯೆಂದಾದರೂ ಹೇಳಿ, ವಿಘ್ನವೆಂದೇ ಹೇಳಿ ಎಲ್ಲವೂ ಸೈಡ್ಸೀನ್ ಆಗಿದೆ ಮತ್ತು ಸ್ಮೃತಿಯಲ್ಲಿದೆ - ಇದು ಗುರಿಯ ಸೈಡ್ಸೀನುಗಳನ್ನು ಬಹಳಷ್ಟು ಬಾರಿ ಪಾರು ಮಾಡಿದ್ದೇನೆ, ಹೊಸದೇನಲ್ಲ.

ಸ್ಲೋಗನ್: 
ಅನ್ಯರ ತಿದ್ದು ಪಡಿ ಮಾಡುವುದಕ್ಕೆ ಬದಲಾಗಿ ತಂದೆಯೊಂದಿಗೆ ಸಂಬಂಧವನ್ನು ಜೋಡಿಸಿ ಬಿಡಿ, ಆಗ ವರದಾನಗಳ ಅನುಭೂತಿಯಾಗುತ್ತಿರುತ್ತದೆ.

(ಸೂಚನೆ:- ಇಂದು ಮಾಸದ ಮೂರನೇ ರವಿವಾರವಾಗಿದೆ. ಎಲ್ಲಾ ಸಹೋದರ-ಸಹೋದರಿಯರು ಸಂಜೆ 6.30ರಿಂದ 7.30ರವರೆಗೆ ವಿಶೇಷವಾಗಿ ಸಂಘಟಿತ ರೂಪದಿಂದ ವಿಶ್ವದಲ್ಲಿ ಮನಸ್ಸಿನ ಮೂಲಕ ಸರ್ವಶಕ್ತಿಗಳ ಕಿರಣಗಳನ್ನು ಹರಡಿಸಿರಿ. ಇದೇ ಸ್ವಮಾನವು ಸ್ಮೃತಿಯಲ್ಲಿರಲಿ - ನಾನು ಮಾಸ್ಟರ್ ಸರ್ವಶಕ್ತಿವಂತ ಆತ್ಮನು ಪ್ರಕೃತಿ ಸಹಿತವಾಗಿ ಸರ್ವ ಆತ್ಮರಿಗೂ ಸರ್ವ ಶಕ್ತಿಗಳ ದಾನವನ್ನು ಕೊಡುತ್ತಿರುವೆನು.)