29/10/18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಆಜ್ಞಾಕಾರಿಗಳಾಗಿ, ತಂದೆಯ ಮೊದಲ ಆಜ್ಞೆಯಾಗಿದೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ.”

ಪ್ರಶ್ನೆ:
ಆತ್ಮರೂಪಿ ಪಾತ್ರೆಯು ಏಕೆ ಅಶುದ್ಧವಾಗಿದೆ? ಅದನ್ನು ಶುದ್ಧವನ್ನಾಗಿ ಮಾಡುವ ಸಾಧನವೇನಾಗಿದೆ?

ಉತ್ತರ:
ವ್ಯರ್ಥ ಮಾತುಗಳನ್ನು ಕೇಳುತ್ತಾ ಹಾಗೂ ಹೇಳುತ್ತಾ ಆತ್ಮರೂಪಿ ಪಾತ್ರೆಯು ಅಶುದ್ಧವಾಗಿದೆ. ಅದನ್ನು ಶುದ್ಧ ಮಾಡಿಕೊಳ್ಳುವುದಕ್ಕೋಸ್ಕರ ತಂದೆಯ ಆಜ್ಞೆಯಾಗಿದೆ - ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ...... ಒಬ್ಬ ತಂದೆಯಿಂದಲೇ ಕೇಳಿ, ತಂದೆಯನ್ನೇ ನೆನಪು ಮಾಡಿ ಆಗ ಆತ್ಮರೂಪಿ ಪಾತ್ರೆಯು ಶುದ್ಧವಾಗಿ ಬಿಡುವುದು. ಆತ್ಮ ಮತ್ತು ಶರೀರ ಎರಡೂ ಪಾವನವಾಗಿ ಬಿಡುತ್ತವೆ.

ಗೀತೆ:
ಯಾರು ತಂದೆಯ ಜೊತೆಯಿದ್ದಾರೆಯೋ ಅವರ ಮೇಲೆ ಜ್ಞಾನದ ಮಳೆ.........

ಓಂ ಶಾಂತಿ.

ಓಂ ಶಾಂತಿಯ ಅರ್ಥವನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ. ಮಕ್ಕಳಿಗೆ ಘಳಿಗೆ-ಘಳಿಗೆಯೂ ಅನೇಕ ವಿಷಯಗಳನ್ನು ಕೊಡಲಾಗುತ್ತದೆ. ಹೇಗೆ ಘಳಿಗೆ-ಘಳಿಗೆಯೂ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು ಹೇಳಲಾಗುತ್ತದೆ. ಇಲ್ಲಿ ಯಾವುದೇ ಮನುಷ್ಯರ ನೆನಪಿಲ್ಲ. ಮನುಷ್ಯ ಮನುಷ್ಯರ ಅಥವಾ ಯಾವುದಾದರೂ ದೇವತೆಗಳ ನೆನಪನ್ನು ತರಿಸುತ್ತಾರೆ. ಪಾರಲೌಕಿಕ ತಂದೆಯ ನೆನಪನ್ನು ಯಾರೂ ತರಿಸುವುದಿಲ್ಲ ಏಕೆಂದರೆ ತಂದೆಯನ್ನು ಯಾರೂ ಅರಿತುಕೊಂಡೇ ಇಲ್ಲ. ಇಲ್ಲಿ ನೀವು ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂದು ಘಳಿಗೆ-ಘಳಿಗೆಯೂ ತಿಳಿಸಲಾಗುತ್ತದೆ. ಹೇಗೆ ತಂದೆಗೆ ಮಕ್ಕಳಿದ್ದರೆ ಎಲ್ಲರೂ ಸಹ ತಂದೆಯಿಂದ ಆಸ್ತಿಯನ್ನು ಪಡೆಯಲು ಬಂದಿದ್ದಾರೆಂದು ಅರಿತುಕೊಳ್ಳುತ್ತಾರೆ ನಂತರ ಅವರಿಗೆ ತಂದೆ ಮತ್ತು ಆಸ್ತಿಯ ನೆನಪಿರುತ್ತದೆ. ಅದೇ ರೀತಿ ಇಲ್ಲಿಯೂ ಸಹ ಹಾಗೆಯೇ. ಅವಶ್ಯವಾಗಿ ಮಕ್ಕಳು ತಂದೆಯನ್ನು ಅರಿತುಕೊಂಡಿಲ್ಲ. ಆದ್ದರಿಂದ ತಂದೆಯು ಬರಬೇಕಾಗುತ್ತದೆ. ಯಾರು ತಂದೆಯ ಜೊತೆಯಿದ್ದಾರೆಯೋ ಅವರಿಗಾಗಿಯೇ ಈ ಜ್ಞಾನದ ಮಳೆಯಾಗಿದೆ. ವೇದಶಾಸ್ತ್ರಗಳಲ್ಲಿ ಯಾವ ಜ್ಞಾನವಿದೆಯೋ ಅವೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ಜಪ, ತಪ, ದಾನ, ಪುಣ್ಯ, ಸಂಧ್ಯಾ ವಂದನೆ, ಗಾಯಿತ್ರಿ ಮಂತ್ರ ಇತ್ಯಾದಿ ಏನೆಲ್ಲವನ್ನೂ ಮಾಡುತ್ತಾರೆಯೋ ಅವೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಗಳಾಗಿವೆ. ಸನ್ಯಾಸಿಗಳೂ ಭಕ್ತರಾಗಿದ್ದಾರೆ. ಪವಿತ್ರತೆಯಿಲ್ಲದೆ ಯಾರೂ ಶಾಂತಿಧಾಮಕ್ಕೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಅವರು ಮನೆ ಮಠವನ್ನು ಬಿಟ್ಟು ಹೋಗುತ್ತಾರೆ. ಆದರೆ ಇಡೀ ಪ್ರಪಂಚವು ಹಾಗೆ ಮಾಡಲು ಸಾಧ್ಯವಿಲ್ಲ. ಅವರ ಹಠಯೋಗವು ನಾಟಕದಲ್ಲಿ ನಿಗಧಿಯಾಗಿದೆ. ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸಲು ಕಲ್ಪ-ಕಲ್ಪ ಒಂದೇ ಬಾರಿ ಬರುತ್ತೇನೆ ಆದರೆ ನಾನು ಮತ್ತ್ಯಾವುದೇ ಅವತಾರವನ್ನೂ ತೆಗೆದುಕೊಳ್ಳುವುದಿಲ್ಲ. ಇದು ಪರಮಾತ್ಮನ ಪುನರವತರಣೆಯಾಗಿದೆ. ಅವರು ಶ್ರೇಷ್ಠಾತಿ ಶ್ರೇಷ್ಠರಾಗಿದ್ದಾರೆ ನಂತರ ಜಗದಂಬೆಯ ಪುನರವತರಣೆ ಮತ್ತು ಜಗತ್ಪಿತನೂ ಅವಶ್ಯವಾಗಿ ಇರಲೇಬೇಕು. ವಾಸ್ತವದಲ್ಲಿ ಪುನರವತರಣೆಯ ಅಕ್ಷರ ಕೇವಲ ತಂದೆಗೆ ಅನ್ವಯಿಸುತ್ತದೆ. ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ. ಹಾಗೆ ನೋಡಿದರೆ ಪ್ರತಿಯೊಂದು ವಸ್ತುವಿನ ಪುನರಾವರ್ತನೆಯಾಗುತ್ತದೆ. ಹೇಗೆ ಈಗ ಭ್ರಷ್ಠಾಚಾರವಿದೆಯೋ, ಭ್ರಷ್ಟಾಚಾರವೂ ಪುನರಾವರ್ತನೆಯಾಗಿದೆ ಎಂದು ಹೇಳಲಾಗುತ್ತದೆ. ಪುನಃ ಭ್ರಷ್ಟಾಚಾರವಾಗಿದೆ ನಂತರ ಪುನಃ ಶ್ರೇಷ್ಠಾಚಾರವಾಗುತ್ತದೆ. ಪ್ರತಿಯೊಂದು ವಸ್ತುವಿನ ಪುನರಾವರ್ತನೆಯಾಗುತ್ತದೆ. ಈಗ ಹಳೆಯ ಪ್ರಪಂಚವಿದೆ ಪುನಃ ಹೊಸ ಪ್ರಪಂಚವಾಗುತ್ತದೆ. ಹೊಸ ಪ್ರಪಂಚದ ನಂತರ ಹಳೆಯ ಪ್ರಪಂಚವು ಬರುತ್ತದೆ ಎಂದು ಹೇಳಲಾಗುತ್ತದೆ. ಈ ಎಲ್ಲಾ ಮಾತುಗಳನ್ನು ತಂದೆಯು ಕುಳಿತು ತಿಳಿಸುತ್ತಿದ್ದಾರೆ. ನೀವು ಇಲ್ಲಿ ಕುಳಿತಿದ್ದೀರಿ ಅಂದಮೇಲೆ ಸದಾ ಈ ರೀತಿ ತಿಳಿದುಕೊಳ್ಳಿರಿ - ನಾನು ಆತ್ಮ, ನನಗೆ ತಂದೆಯ ಆದೇಶವು ಸಿಕ್ಕಿದೆ, ಮಕ್ಕಳೇ ನನ್ನನ್ನು ನೆನಪು ಮಾಡಿ ಎಂದು. ಮಕ್ಕಳ ವಿನಃ ಬೇರೆ ಯಾರಿಗೂ ತಂದೆಯ ಆದೇಶ ದೊರೆಯಲು ಸಾಧ್ಯವಿಲ್ಲ. ಮಕ್ಕಳಲ್ಲಿಯೂ ಕೆಲವರು ಆಜ್ಞಾಕಾರಿಗಳಾಗುತ್ತಾರೆ, ಇನ್ನೂ ಕೆಲವರು ಆಜ್ಞೆಯನ್ನು ಉಲ್ಲಂಘನೆ ಮಾಡುವವರೂ ಇರುತ್ತಾರೆ. ತಂದೆಯು ತಿಳಿಸುತ್ತಾರೆ-ಹೇ ಆತ್ಮಗಳೇ, ನೀವು ನನ್ನ ಜೊತೆ ಬುದ್ಧಿಯೋಗವನ್ನು ಜೋಡಿಸಿ. ತಂದೆಯು ಆತ್ಮಗಳೊಂದಿಗೆ ಮಾತನಾಡುತ್ತಾರೆ. ನಾನು ಆತ್ಮಗಳೊಂದಿಗೆ ಮಾತನಾಡುತ್ತಿದ್ದೇನೆ ಎಂದು ಯಾವುದೇ ವಿದ್ವಾಂಸ ಪಂಡಿತರ್ಯಾರೂ ಹೇಳಲು ಸಾಧ್ಯವಿಲ್ಲ. ಅವರಂತೂ ಆತ್ಮ ಸೋ ಪರಮಾತ್ಮ ಎಂದು ಹೇಳಿ ಬಿಡುತ್ತಾರೆ ಅದು ತಪ್ಪಾಗಿದೆ. ನೀವು ಮಕ್ಕಳು ತಿಳಿದಿದ್ದೀರಿ – ಶಿವ ತಂದೆಯು ಈ ಶರೀರ (ಬ್ರಹ್ಮಾ)ದ ಮೂಲಕ ಮಾತನಾಡುತ್ತಿದ್ದಾರೆ. ಶರೀರದ ವಿನಃ ಪಾತ್ರವನ್ನಭಿನಯಿಸಲು ಸಾಧ್ಯವಿಲ್ಲ. ಮೊಟ್ಟ ಮೊದಲನೆಯದಾಗಿ ಈ ನಿಶ್ಚಯವಿರಬೇಕು-ನಿಶ್ಚಯದ ಹೊರತಾಗಿ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳುವುದಿಲ್ಲ. ನಾವೆಲ್ಲಾ ಆತ್ಮಗಳ ತಂದೆ, ಅವರು ನಿರಾಕಾರ ಪರಮಪಿತ ಪರಮಾತ್ಮ ಮತ್ತು ಸಾಕಾರದಲ್ಲಿ ಪ್ರಜಾಪಿತ ಬ್ರಹ್ಮಾರವರಿದ್ದಾರೆ, ನಾವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ ಎಂಬುದು ಮೊದಲ ನಿಶ್ಚಯವಿರಬೇಕು. ಎಲ್ಲಾ ಆತ್ಮಗಳು ಶಿವನ ಮಕ್ಕಳಾಗಿದ್ದಾರೆ ಆದ್ದರಿಂದ ಶಿವ ಕುಮಾರ ಎಂದು ಹೇಳಬಹುದು, ಆದರೆ ಶಿವ ಕುಮಾರಿಯಲ್ಲ. ಈ ಎಲ್ಲಾ ಮಾತುಗಳು ಧಾರಣೆ ಮಾಡುವಂತಹದ್ದಾಗಿದೆ. ನಿರಂತರವಾಗಿ ನೆನಪು ಮಾಡುತ್ತಾ ಇದ್ದಾಗ ಧಾರಣೆಯಾಗುವುದು. ನೆನಪು ಮಾಡುತ್ತಿರುವುದರಿಂದಲೇ ಬುದ್ಧಿರೂಪಿ ಪಾತ್ರೆಯು ಶುದ್ಧವಾಗುವುದು. ವ್ಯರ್ಥ ಮಾತುಗಳನ್ನು ಕೇಳುತ್ತಾ-ಕೇಳುತ್ತಾ ಪಾತ್ರೆಯು ಅಶುದ್ಧವಾಗಿ ಬಿಟ್ಟಿದೆ. ಅದನ್ನು ಶುದ್ಧವನ್ನಾಗಿ ಮಾಡಬೇಕಾಗಿದೆ. ತಂದೆಯ ಆಜ್ಞೆಯಾಗಿದೆ-ನನ್ನನ್ನು ನೆನಪು ಮಾಡುವುದರಿಂದ ತಮ್ಮ ಬುದ್ಧಿಯು ಪವಿತ್ರವಾಗುವುದು. ನಿಮ್ಮ ಆತ್ಮನಲ್ಲಿ ತುಕ್ಕು ಹಿಡಿದಿದೆ, ಈಗ ಪವಿತ್ರವಾಗಬೇಕಾಗಿದೆ. ಸನ್ಯಾಸಿಗಳು ಆತ್ಮ ನಿರ್ಲೇಪವೆಂದು ಹೇಳುತ್ತಾರೆ. ಆತ್ಮದಲ್ಲಿಯೇ ತುಕ್ಕು ಹಿಡಿದಿದೆ ಎಂದು ತಂದೆಯು ಹೇಳುತ್ತಾರೆ. ಶ್ರೀಕೃಷ್ಣನ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿದೆ. ಸತ್ಯಯುಗದಲ್ಲಿ ಮಾತ್ರ ಎರಡೂ ಪವಿತ್ರವಾಗಿರುತ್ತದೆ ಆದರೆ ಇಲ್ಲಿರಲು ಸಾಧ್ಯವಿಲ್ಲ. ನೀವಾತ್ಮಗಳು ನಂಬರ್ವಾರ್ ಆಗಿ ಪವಿತ್ರವಾಗುತ್ತಾ ಇದ್ದೀರಿ. ಇಲ್ಲಿಯವರೆಗೂ ಪವಿತ್ರವಾಗಿಲ್ಲ, ಯಾರೂ ಪವಿತ್ರರಿಲ್ಲ ಎಲ್ಲರೂ ಪುರುಷಾರ್ಥವನ್ನು ಮಾಡುತ್ತಿದ್ದಾರೆ. ಅಂತ್ಯದಲ್ಲಿ ನಂಬರ್ವಾರ್ ಎಲ್ಲರ ಫಲಿತಾಂಶವು ಹೊರ ಬೀಳುವುದು.

ತಂದೆಯು ಬಂದು ಎಲ್ಲಾ ಆತ್ಮಗಳಿಗೆ ಆದೇಶ ನೀಡುತ್ತಾರೆ - ನನ್ನನ್ನು ನೆನಪು ಮಾಡಿ, ತಮ್ಮನ್ನು ಅಶರೀರಿ ಎಂದು ತಿಳಿಯಿರಿ, ದೇಹೀ ಅಭಿಮಾನಿಗಳಾಗಿ. ಮೂಲ ಮಾತೇನೆಂದರೆ ತಂದೆಯ ವಿನಃ ಇದನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮೊದಲು ಇದು ಪೂರ್ಣ ನಿಶ್ಚಯವಿದ್ದಾಗ ಮಾತ್ರ ವಿಜಯ ಪಡೆಯುತ್ತೀರಿ, ನಿಶ್ಚಯವಿಲ್ಲದಿದ್ದರೆ ವಿಜಯ ಪಡೆಯುವುದಿಲ್ಲ. ನಿಶ್ಚಯಬುದ್ದಿ ವಿಜಯಂತಿ ಸಂಶಯಬುದ್ಧಿ ವಿನಶ್ಯಂತಿ. ಗೀತೆಯಲ್ಲಿಯೂ ಸಹ ಕೆಲಕೆಲವು ಶಬ್ಧಗಳು ಬಹಳ ಚೆನ್ನಾಗಿವೆ. ಇದಕ್ಕೆ ಹಿಟ್ಟಿನಲ್ಲಿ ಉಪ್ಪಿನಷ್ಟು ಸತ್ಯವೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ-ನಾನು ನಿಮಗೆ ಈ ವೇದ-ಶಾಸ್ತ್ರಗಳಲ್ಲಿ ಏನೇನಿದೆಯೆಂದು ಸಾರವನ್ನು ತಿಳಿಸುತ್ತೇನೆ, ಇವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಇವುಗಳದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಭಕ್ತಿಮಾರ್ಗದಲ್ಲಿ ಇವೆಲ್ಲಾ ಏಕೆ ಮಾಡಲ್ಪಟ್ಟಿವೆ ಎಂಬ ಪ್ರಶ್ನೆಯೂ ಸಹ ಉದ್ಭವಿಸಬಾರದು. ಇದಂತೂ ಅನಾದಿ ಮಾಡಿ-ಮಾಡಲ್ಪಟ್ಟಿರುವಂತಹ ನಾಟಕವಾಗಿದೆ. ನೀವೂ ಸಹ ಈ ನಾಟಕದಲ್ಲಿ ತಂದೆಯಿಂದ ಸ್ವರ್ಗದ ಮಾಲಿಕರಾಗುವ ಆಸ್ತಿಯನ್ನು ಅನೇಕ ಬಾರಿ ಪಡೆದಿದ್ದೀರಿ ಮತ್ತು ಪಡೆಯುತ್ತಲೇ ಇರುತ್ತೀರಿ. ಎಂದೂ ಕೂಡ ಇದರ ಅಂತ್ಯವಾಗುವುದಿಲ್ಲ. ಈ ಚಕ್ರವಂತೂ ಸುತ್ತುತ್ತಲೇ ಇರುತ್ತದೆ. ನೀವು ಮಕ್ಕಳು ಈಗ ದುಃಖಧಾಮದಲ್ಲಿದ್ದೀರಿ ಮತ್ತು ಶಾಂತಿಧಾಮಕ್ಕೆ ಹೋಗುತ್ತೀರಿ, ಶಾಂತಿಧಾಮದಿಂದ ಸುಖಧಾಮಕ್ಕೆ ಹೋಗುತ್ತೀರಿ ನಂತರ ದುಃಖಧಾಮದಲ್ಲಿ ಬರುತ್ತೀರಿ. ಈ ಅನಾದಿ ಚಕ್ರವು ನಡೆಯುತ್ತಲೇ ಇರುತ್ತದೆ. ಸುಖಧಾಮದಿಂದ ದುಃಖಧಾಮಕ್ಕೆ ಬರುವುದರಲ್ಲಿ ನೀವು ಮಕ್ಕಳಿಗೆ 5000 ವರ್ಷಗಳು ಹಿಡಿಸುತ್ತವೆ. ಇದರಲ್ಲಿ ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಕೇವಲ ನೀವು ಮಕ್ಕಳು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ ಎಲ್ಲರೂ ತೆಗೆದುಕೊಳ್ಳುವುದಿಲ್ಲ. ಈ ಬೇಹದ್ದಿನ ತಂದೆಯು ನಿಮಗೆ ನೇರವಾಗಿ ತಿಳಿಸುತ್ತಿದ್ದಾರೆ ನಂತರ ಮಕ್ಕಳು ಮುರುಳಿಯನ್ನು ಕೇಳುತ್ತಾರೆ ಅಥವಾ ಓದುತ್ತಾರೆ ಇಲ್ಲವೆ ಟೇಪಿನಿಂದ ಕೇಳುತ್ತಾರೆ. ಈ ಕ್ಯಾಸೆಟ್ನಿಂದಲೂ ಸಹ ಎಲ್ಲರೂ ಕೇಳಲು ಸಾಧ್ಯವಿಲ್ಲ ಅಂದಾಗ ಮೊಟ್ಟ ಮೊದಲು ನೀವು ಮಕ್ಕಳು ಏಳುತ್ತಾ-ಕುಳಿತುಕೊಳ್ಳುತ್ತಾ ಈ ನೆನಪಿನಲ್ಲಿರಬೇಕಾಗಿದೆ. ಮನುಷ್ಯರಂತೂ ಮಾಲೆಯನ್ನು ತಿರುಗಿಸುತ್ತಾ ರಾಮ-ರಾಮ ಎಂದು ಜಪಿಸುತ್ತಾರೆ. ರುದ್ರಾಕ್ಷಿಯ ಮಾಲೆಯೆಂದು ಹೇಳುತ್ತಾರಲ್ಲವೆ. ಈಗ ರುದ್ರನಂತೂ ಭಗವಂತನಾಗಿದ್ದಾರೆ ನಂತರ ಈ ಮಾಲೆಯಲ್ಲಿ ಎರಡು ಜೋಡಿ ಮಣಿಗಳು ಒಟ್ಟಿಗೆ ಇವೆ. ಇವಂತೂ ವಿಷ್ಣುವಿನ ಯುಗಲ್ ಸ್ವರೂಪವಾಗಿದೆ. ಅವರು ಯಾರು? ಈ ಮಾತ್ಪಿತಾರೇ ನಂತರ ವಿಷ್ಣುವಿನ ಎರಡು ರೂಪ ಲಕ್ಷ್ಮಿ-ನಾರಾಯಣರಾಗುತ್ತಾರೆ. ಆದ್ದರಿಂದ ಆ ಮಣಿಗಳಿಗೆ ಜೋಡಿ ಮಣಿಗಳೆಂದು ಹೇಳಲಾಗುತ್ತದೆ. ಮಾಲೆಯಲ್ಲಿನ ಹೂವು ಶಿವ ತಂದೆಯಾಗಿದ್ದಾರೆ ನಂತರದ ಜೋಡಿ ಮಣಿಗಳು ಮಮ್ಮಾ-ಬಾಬಾ ಆಗಿದ್ದಾರೆ ಇವರನ್ನೇ ಮಾತಾ-ಪಿತ ಎಂದು ಹೇಳುತ್ತೀರಿ. ವಿಷ್ಣುವಿಗೆ ಮಾತಾ ಪಿತಾ ಎಂದು ಹೇಳುವುದಿಲ್ಲ. ಲಕ್ಷ್ಮಿ-ನಾರಾಯಣರಿಗೆ ಮಾತಾ-ಪಿತ ಎಂದು ಅವರ ಮಕ್ಕಳೇ ಹೇಳುತ್ತಾರೆ. ಇತ್ತೀಚೆಗಂತೂ ಎಲ್ಲರ ಮುಂದೆ ಹೋಗಿ ತ್ವಮೇವ ಮಾತಾಶ್ಚ ಪಿತಾ ಎಂದು ಹೇಳುತ್ತಾರೆ. ಯಾರಾದರೂ ಒಬ್ಬರು ಮಹಿಮೆ ಮಾಡಿದರೆ ಸಾಕು ಅವರ ಹಿಂದೆ ಅನೇಕರು ಅವರನ್ನು ಅನುಸರಿಸಲು ತೊಡಗಿ ಬಿಡುತ್ತಾರೆ. ಇದು ಅಸತ್ಯ ಪ್ರಪಂಚವಾಗಿದೆ. ಕಲಿಯುಗಕ್ಕೆ ಅಸತ್ಯವೆಂತಲೂ ಸತ್ಯಯುಗಕ್ಕೆ ಸತ್ಯವೆಂತಲೂ ಹೇಳಲಾಗುತ್ತದೆ. ಅಲ್ಲಿ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿರುತ್ತವೆ. ಸತ್ಯಯುಗದಲ್ಲಿ ಸುಂದರವಾಗಿದ್ದ ಕೃಷ್ಣನೇ ನಂತರ ಅಂತಿಮ ಜನ್ಮದಲ್ಲಿ ಅವರ ಆತ್ಮವು ಶ್ಯಾಮ ಅಂದರೆ ಕಪ್ಪಾಗಿದೆ. ಈ ಬ್ರಹ್ಮಾ-ಸರಸ್ವತಿ ಈ ಸಮಯದಲ್ಲಿ ಶ್ಯಾಮ ಆಗಿದ್ದಾರಲ್ಲವೆ. ಆತ್ಮವು ಕಪ್ಪಾಗಿರುವುದರಿಂದ ಅವರ ಆಭರಣಗಳೂ ಸಹ ಕಪ್ಪಾಗಿ ಬಿಟ್ಟಿವೆ. ಚಿನ್ನದಲ್ಲಿಯೇ ತುಕ್ಕು ಬೀಳುತ್ತದೆ ಅಂದಮೇಲೆ ಅದರಿಂದಾಗುವ ಆಭರಣಗಳೂ ಸಹ ಅಂತಹದ್ದೇ ಆಗಿರುತ್ತವೆ. ಸತ್ಯಯುಗದಲ್ಲಿ ಯಾವಾಗ ದೇವಿ-ದೇವತೆಗಳ ರಾಜ್ಯವಿರುತ್ತದೆಯೋ ಆಗ ಈ ಸುಳ್ಳು (ತುಕ್ಕು) ಇರುವುದಿಲ್ಲ. ಅಲ್ಲಂತೂ ಚಿನ್ನದ ಮಹಲುಗಳಾಗುತ್ತವೆ. ಭಾರತವು ಚಿನ್ನದ ಪಕ್ಷಿಯಾಗಿತ್ತು ಈಗ ನಕಲಿಯಾಗಿದೆ. ಇಂತಹ ಭಾರತವನ್ನು ಪುನಃ ಸ್ವರ್ಗವನ್ನಾಗಿ ತಂದೆಯೇ ಮಾಡುತ್ತಾರೆ.

ತಂದೆಯು ತಿಳಿಸುತ್ತಾರೆ - ಶ್ರೀಮದ್ಭಗವಾನುವಾಚವಿದೆ ಕೃಷ್ಣನಂತೂ ದೈವೀ ಗುಣವುಳ್ಳ ಮನುಷ್ಯನಾಗಿದ್ದಾನೆ. ಎರಡು ಭುಜ, ಎರಡು ಕಾಲುಗಳುಳ್ಳವನಾಗಿದ್ದಾನೆ. ಚಿತ್ರಗಳಲ್ಲಂತೂ ನಾರಾಯಣನಿಗೆ ನಾಲ್ಕು ಭುಜಗಳನ್ನು, ಲಕ್ಷ್ಮಿಗೆ ನಾಲ್ಕು ಭುಜಗಳನ್ನು ತೋರಿಸಿದ್ದಾರೆ. ಆದರೆ ಏನನ್ನೂ ತಿಳಿದುಕೊಂಡಿಲ್ಲ. ‘ಓಂ’ ಅಕ್ಷರವನ್ನುಹೇಳುತ್ತಾರೆ. ಅವರು ಓಂ ಅಂದರೆ ನಾನು ಪರಮಾತ್ಮ, ಎಲ್ಲಿ ನೋಡಿದರೂ ಪರಮಾತ್ಮನೇ ಪರಮಾತ್ಮನೆಂದು ಹೇಳುತ್ತಾರೆ. ಆದರೆ ಇದಂತೂ ತಪ್ಪಾಗಿದೆ. ಓಂ ಎಂದರೆ ನಾನಾತ್ಮ ಎಂದರ್ಥ. ತಂದೆಯೂ ಸಹ ಹೇಳುತ್ತಾರೆ - ನಾನು ಆತ್ಮ ಆದರೆ ಸುಪ್ರೀಂ ಆಗಿದ್ದೇನೆ. ಆದ್ದರಿಂದ ನನಗೆ ಪರಮಾತ್ಮನೆಂದು ಹೇಳುತ್ತಾರೆ. ನಾನು ಪರಮಧಾಮ ನಿವಾಸಿಯಾಗಿದ್ದೇನೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತ ನಂತರ ಸೂಕ್ಷ್ಮವತನದಲ್ಲಿ ಬ್ರಹ್ಮಾ-ವಿಷ್ಣು-ಶಂಕರನ ಆತ್ಮ ಇದೆ, ಇನ್ನೂ ಕೆಳಗೆ ಬಂದಾಗ ಇದು ಮನುಷ್ಯ ಲೋಕವಾಗಿದೆ. ಅದು ದೈವೀ ಲೋಕ, ಪರಮಧಾಮವು ಆತ್ಮಗಳ ಲೋಕವಾಗಿದೆ ಅದಕ್ಕೆ ಮೂಲವತನವೆಂದೂ ಹೇಳುತ್ತಾರೆ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ನೀವು ಮಕ್ಕಳಿಗೆ ಈ ಅವಿನಾಶಿ ಜ್ಞಾನರತ್ನಗಳ ದಾನ ಸಿಗುತ್ತದೆ. ಇದರಿಂದ ನೀವು ಭವಿಷ್ಯದಲ್ಲಿ ಸಂಪನ್ನ, ಡಬಲ್ ಕಿರೀಟಧಾರಿಗಳಾಗುತ್ತೀರಿ. ಶ್ರೀಕೃಷ್ಣನಿಗೆ ಎರಡು ಕಿರೀಟಗಳಿವೆಯಲ್ಲವೆ ಮತ್ತೆ ಅದೇ ಮಗು ಚಂದ್ರವಂಶದಲ್ಲಿ ಬಂದಾಗ 2 ಕಲೆಗಳು ಕಡಿಮೆಯಾಗಿ ಬಿಡುತ್ತವೆ. ನಂತರ ವೈಶ್ಯ ವಂಶದಲ್ಲಿ ಬಂದಾಗ ಇನ್ನೂ 4 ಕಲೆಗಳು ಕಡಿಮೆಯಾಗಿ ಬಿಡುತ್ತವೆ. ಆಗ ಪ್ರಕಾಶತೆಯ ಕಿರೀಟವು ಮರೆಯಾಗುತ್ತದೆ. ಬಾಕಿ ರತ್ನ ಜಡಿತ ಕಿರೀಟವಿರುವುದು. ನಂತರ ಯಾರು ಚೆನ್ನಾಗಿ ದಾನ-ಪುಣ್ಯ ಮಾಡುತ್ತಿರುತ್ತಾರೆ, ಅವರಿಗೆ ಒಂದು ಜನ್ಮಕ್ಕೋಸ್ಕರ ರಾಜ್ಯಭಾಗ್ಯವು ಸಿಗುತ್ತದೆ. ಇನ್ನೊಂದು ಜನ್ಮದಲ್ಲಿಯೂ ಸಹ ಚೆನ್ನಾಗಿ ದಾನ-ಪುಣ್ಯ ಮಾಡಿದರೆ ನಂತರವೂ ರಾಜ್ಯಭಾಗ್ಯವು ಸಿಗಬಹುದು. ಇಲ್ಲಂತೂ ನೀವು 21 ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಅಂದಮೇಲೆ ಪರಿಶ್ರಮ ಪಡಬೇಕಾಗುತ್ತದೆ. ಅಂದಾಗ ತಂದೆಯು ತನ್ನ ಪರಿಚಯ ಕೊಡುತ್ತಾರೆ, ತಿಳಿಸುತ್ತಾರೆ - ಐ ಯಾಮ್ ಸುಪ್ರೀಂ ಸೌಲ್. ಆದ್ದರಿಂದ ಅವರಿಗೆ ಪರಮಪಿತ ಪರಮ ಆತ್ಮ ಅರ್ಥಾತ್ ಪರಮಾತ್ಮನೆಂದು ಹೇಳಲಾಗುತ್ತದೆ. ನೀವು ಮಕ್ಕಳು ಸುಪ್ರೀಂನನ್ನು ನೆನಪು ಮಾಡುತ್ತೀರಿ, ಅವರು ಶಿವನಾಗಿದ್ದಾರೆ ನೀವು ಸಾಲಿಗ್ರಾಮಗಳಾಗಿದ್ದೀರಿ. ಶಿವನ ದೊಡ್ಡ ಲಿಂಗವನ್ನು ಮತ್ತು ಸಾಲಿಗ್ರಾಮಗಳನ್ನು ಮಣ್ಣಿನಿಂದ ತಯಾರಿಸುತ್ತಾರೆ. ಯಾವ ಆತ್ಮಗಳ ನೆನಪಾರ್ಥವಾಗಿ ಈ ರೀತಿ ಮಾಡುತ್ತಾರೆ ಎಂಬುದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ನೀವು ಶಿವ ತಂದೆಯ ಮಕ್ಕಳು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ. ಆದ್ದರಿಂದ ನಿಮ್ಮ ಪೂಜೆಯಾಗುತ್ತದೆ ನಂತರ ನೀವು ದೇವತೆಗಳಾಗುತ್ತೀರಿ ಆಗಲೂ ನಿಮ್ಮ ಪೂಜೆಯಾಗುತ್ತದೆ. ಶಿವ ತಂದೆಯ ಜೊತೆಗೆ ನೀವು ಇಷ್ಟೊಂದು ಸೇವೆ ಮಾಡುತ್ತೀರಿ. ಆದ್ದರಿಂದಲೇ ಸಾಲಿಗ್ರಾಮಗಳ ಪೂಜೆಯು ನಡೆಯುತ್ತದೆ. ಯಾರು ಉತ್ತಮಕ್ಕಿಂತ ಉತ್ತಮವಾದ ಕರ್ತವ್ಯವನ್ನು ಮಾಡುತ್ತಾರೆಯೋ ಅವರ ಪೂಜೆಯಾಗುತ್ತದೆ ಮತ್ತು ಕಲಿಯುಗದಲ್ಲಿ ಯಾರು ಒಳ್ಳೆಯ ಕಾರ್ಯ ಮಾಡುತ್ತಾರೆಯೋ ಅವರ ಸ್ಮಾರಕಗಳಾಗುತ್ತವೆ. ಕಲ್ಪ-ಕಲ್ಪವೂ ತಂದೆಯು ನೀವು ಮಕ್ಕಳಿಗೆ ಇಡೀ ಸೃಷ್ಟಿಚಕ್ರದ ರಹಸ್ಯವನ್ನು ತಿಳಿಸುತ್ತಾರೆ ಅರ್ಥಾತ್ ನಿಮ್ಮನ್ನು ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡುತ್ತಾರೆ. ಸ್ವದರ್ಶನ ಚಕ್ರವು ವಿಷ್ಣುವಿಗಿರಲು ಸಾಧ್ಯವಿಲ್ಲ. ಏಕೆಂದರೆ ವಿಷ್ಣುವಂತೂ ದೇವತೆಯಾಗಿದ್ದಾರೆ. ಈ ಜ್ಞಾನವು ನಿಮಗಷ್ಟೇ ಇದೆ ನಂತರ ಲಕ್ಷ್ಮಿ-ನಾರಾಯಣರಾಗುತ್ತೀರೆಂದರೆ ಈ ಜ್ಞಾನವಿರುವುದಿಲ್ಲ. ಅಲ್ಲಂತೂ ಎಲ್ಲರೂ ಸದ್ಗತಿಯಲ್ಲಿರುತ್ತಾರೆ. ನೀವು ಮಕ್ಕಳು ಈ ಜ್ಞಾನವನ್ನು ಈಗಲೇ ಕೇಳುತ್ತೀರಿ ನಂತರ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಸ್ವರ್ಗದ ಸ್ಥಾಪನೆಯಾಗಿ ಬಿಟ್ಟ ನಂತರ ಜ್ಞಾನದ ಅವಶ್ಯಕತೆ ಇರುವುದಿಲ್ಲ.

ತಂದೆಯು ಬಂದು ತನ್ನ ಮತ್ತು ರಚನೆಯ ಪೂರ್ಣ ಪರಿಚಯವನ್ನು ಕೊಡುತ್ತಾರೆ. ಸನ್ಯಾಸಿಗಳು ಮಾತೆಯರ ನಿಂದನೆ ಮಾಡಿದ್ದಾರೆ. ಆದರೆ ತಂದೆಯು ಬಂದು ಮಾತೆಯರನ್ನು ಮೇಲೆತ್ತುತ್ತಾರೆ. ತಂದೆಯು ಇದನ್ನೂ ಸಹ ತಿಳಿಸುತ್ತಾರೆ - ಈ ಸನ್ಯಾಸಿಗಳಿರದಿದ್ದರೆ ಭಾರತವು ಕಾಮ ಚಿತೆಯ ಮೇಲೆ ಕುಳಿತು ಒಂದೇ ಸಲ ಬೂದಿಯಾಗಿ ಬಿಡುತ್ತಿತ್ತು. ಯಾವಾಗ ದೇವಿ-ದೇವತೆಗಳು ವಾಮಮಾರ್ಗದಲ್ಲಿ ಇಳಿಯುತ್ತಾರೆ, ಆ ಸಮಯದಲ್ಲಿ ಬಹಳ ದೊಡ್ಡ ಭೂಕಂಪವಾಗುತ್ತದೆ. ನಂತರ ಎಲ್ಲವೂ ಕೆಳಗಡೆ ಹೋಗಿ ಬಿಡುತ್ತದೆ. ಅನ್ಯ ಖಂಡಗಳಾವೂ ಇರುವುದಿಲ್ಲ. ಭಾರತವಷ್ಟೇ ಇರುತ್ತದೆ. ಇಸ್ಲಾಮಿ ಮುಂತಾದವರಂತೂ ನಂತರದಲ್ಲಿ ಬರುತ್ತಾರೆ. ಆಗ ಸತ್ಯಯುಗದ ವಸ್ತುಗಳು ಇಲ್ಲಿರುವುದಿಲ್ಲ. ನೀವು ಯಾವ ಸೋಮನಾಥನ ಮಂದಿರವನ್ನು ನೋಡುತ್ತೀರಿ ಅದ್ಯಾವುದೇ ವೈಕುಂಠದ್ದಲ್ಲ. ಇದಂತೂ ಭಕ್ತಿಮಾರ್ಗದಲ್ಲಿ ಮಾಡಲ್ಪಟ್ಟಿದೆ. ಇದನ್ನು ಮಹಮ್ಮದ್ ಘಜ್ನಿ ಮುಂತಾದವರು ಲೂಟಿ ಮಾಡಿದರು ಬಾಕಿ ದೇವತೆಗಳ ಮಹಲ್ ಇತ್ಯಾದಿಗಳೆಲ್ಲವೂ ಭೂಕಂಪದಲ್ಲಿ ಇಲ್ಲದಂತಾಗುತ್ತವೆ. ಆದರೆ ಈ ಕೆಳಗೆ ಹೋಗಿರುವ ಮಹಲುಗಳೇ ಪುನಃ ಮೇಲೆ ಬಂದು ಬಿಡುತ್ತವೆ ಎಂದಲ್ಲ. ಅದೆಲ್ಲವೂ ಭೂಮಿಯ ಒಳಗೆ ಚೂರು-ಚೂರಾಗಿ ಜೀರ್ಣವಾಗುತ್ತವೆ. ಅದೇ ಸಮಯದಲ್ಲಿ ಅದನ್ನು ತೋಡಿದ್ದರೆ ಅಲ್ಪಸ್ವಲ್ಪ ಸಿಗುತ್ತಿತ್ತು. ಈಗಂತೂ ಏನೂ ಸಿಗುವುದಿಲ್ಲ, ಶಾಸ್ತ್ರಗಳಲ್ಲಿ ಈ ಮಾತುಗಳಿಲ್ಲ. ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ. ಮೊಟ್ಟ ಮೊದಲು ಈ ನಿಶ್ಚಯ ಬೇಕು, ನಿಶ್ಚಯದಲ್ಲಿ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ಭಗವಂತನು ಹೇಗೆ ಬರುವರು ಎಂದು ಕೇಳುತ್ತಾರೆ. ಅರೆ ಶಿವ ಜಯಂತಿಯನ್ನು ಆಚರಿಸುತ್ತಾರೆಂದರೆ ಅವಶ್ಯವಾಗಿ ಅವರು ಬಂದಿರಬೇಕಲ್ಲವೆ. ತಂದೆಯು ತಿಳಿಸುತ್ತಾರೆ - ನಾನು ಬೇಹದ್ದಿನ ದಿನ ಮತ್ತು ಬೇಹದ್ದಿನ ರಾತ್ರಿಯ ಸಂಗಮದಲ್ಲಿ ಬರುತ್ತೇನೆ. ಆದರೆ ಯಾವ ಸಮಯದಲ್ಲಿ ಬರುತ್ತೇನೆ ಎಂದು ಯಾರೂ ತಿಳಿದುಕೊಂಡಿಲ್ಲ, ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ತಂದೆಯೇ ಈ ಜ್ಞಾನವನ್ನು ಕೊಟ್ಟಿದ್ದಾರೆ ಮತ್ತು ದಿವ್ಯ ದೃಷ್ಟಿಯಿಂದ ಈ ಚಿತ್ರ ಮುಂತಾದುವುಗಳನ್ನು ಮಾಡಿಸಿದ್ದಾರೆ. ಗೀತೆಯಲ್ಲಿಯೂ ಸಹ ಕಲ್ಪವೃಕ್ಷದ ವರ್ಣನೆಯಿದೆ. ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನೂ ನೀವೂ ಈಗ ಇದ್ದೇವೆ, ಕಲ್ಪದ ಹಿಂದೆಯೂ ಇದ್ದೆವು ಮತ್ತು ಕಲ್ಪ-ಕಲ್ಪವೂ ಮಿಲನ ಮಾಡುತ್ತೇನೆ. ನಾನು ಕಲ್ಪ-ಕಲ್ಪವೂ ನಿಮಗೆ ಜ್ಞಾನವನ್ನು ಕೊಡುತ್ತೇನೆ ಅಂದಾಗ ಚಕ್ರವೂ ಸಹ ಸಿದ್ಧವಾಗುತ್ತದೆ. ಆದರೆ ನಿಮ್ಮ ವಿನಃ ಇದನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇದೆಲ್ಲವೂ ಸೃಷ್ಟಿಚಕ್ರದ ಚಿತ್ರವಾಗಿದೆ. ಅವಶ್ಯವಾಗಿ ಇದನ್ನು ಯಾರಾದರೂ ಮಾಡಿಸಿರಬೇಕಲ್ಲವೆ, ತಂದೆಯು ಇದರ ಮೇಲೆ, ಮಕ್ಕಳೂ ಇದರ ಮೇಲೆಯೇ ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಪ್ರತಿಯೊಂದು ಮಾತಿನಲ್ಲಿ ವಿಜಯದ ಆಧಾರವು ನಿಶ್ಚಯವಾಗಿದೆ. ಆದ್ದರಿಂದ ಅವಶ್ಯವಾಗಿ ನಿಶ್ಚಯ ಬುದ್ಧಿಯವರಾಗಬೇಕಾಗಿದೆ. ಸದ್ಗತಿದಾತ ತಂದೆಯಲ್ಲಿ ಸಂಶಯವೆಂದೂ ಬರಬಾರದಾಗಿದೆ.

2. ಬುದ್ಧಿಯನ್ನು ಪವಿತ್ರ ಅಥವಾ ಶುದ್ಧವನ್ನಾಗಿ ಮಾಡಿಕೊಳ್ಳಲು ಅಶರೀರಿಯಾಗುವ ಅಭ್ಯಾಸವನ್ನು ಮಾಡಬೇಕಾಗಿದೆ. ವ್ಯರ್ಥ ಮಾತುಗಳನ್ನು ಕೇಳಬಾರದು, ಹೇಳಲೂಬಾರದು.

ವರದಾನ:
ತಮ್ಮ ಶಕ್ತಿ ಸ್ವರೂಪದ ಮುಖಾಂತರ ಅಲೌಕಿಕತೆಯ ಅನುಭವ ಮಾಡುವಂತಹ ಜ್ವಾಲಾರೂಪ ಭವ.

ಇಲ್ಲಿಯವರೆಗೂ ತಂದೆ ಮಹಾ ಜ್ಯೋತಿಯ ಆಕರ್ಷಣೆ ಇದೆ, ತಂದೆಯ ಕರ್ತವ್ಯ ನಡೆಯುತ್ತಿದೆ, ಮಕ್ಕಳ ಕರ್ತವ್ಯ ಗುಟ್ಟಾಗಿದೆ. ಆದರೆ ಯಾವಾಗ ನೀವು ನಿಮ್ಮ ಶಕ್ತಿ ಸ್ವರೂಪದಲ್ಲಿ ಸ್ಥಿತರಾಗಿದ್ದಲ್ಲಿ ಸಂಪರ್ಕದಲ್ಲಿ ಬರುವಂತಹ ಆತ್ಮಗಳು ಅಲೌಕಿಕತೆಯ ಅನುಭವವನ್ನು ಮಾಡುವುದು. ಚೆನ್ನಾಗಿದೆ-ಚೆನ್ನಾಗಿದೆ ಎಂದು ಹೇಳುವವರಿಗೆ ಒಳ್ಳೆಯವರನ್ನಾಗಿ ಮಾಡುವ ಪ್ರೇರಣೆ ಯಾವಾಗ ಸಿಗುವುದೆಂದರೆ ಯಾವಾಗ ಸಂಘಟಿತ ರೂಪದಲ್ಲಿ ನೀವು ಜ್ವಾಲಾ ಸ್ವರೂಪ, ಲೈಟ್ ಹೌಸ್ ಆಗುವಿರಿ. ಮಾಸ್ಟರ್ ಸರ್ವ ಶಕ್ತಿವಾನ್ ನ ಸ್ಟೇಜ್, ಸ್ಟೇಜ್ ಮೇಲೆ ಬಂದಿದ್ದೇ ಆದರೆ ಎಲ್ಲರೂ ನಿಮ್ಮ ಮುಂದೆ ಪತಂಗಗಳ ರೀತಿ ಸುತ್ತಲು ತೊಡಗುವರು.

ಸ್ಲೋಗನ್:
ತಮ್ಮ ಕರ್ಮೇಂದ್ರಿಯಗಳನ್ನು ಯೋಗ ಅಗ್ನಿಯಲ್ಲಿ ಸುಡುವಂತಹವರು ಸಂಪೂರ್ಣ ಪಾವನರಾಗುತ್ತಾರೆ.