24.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಸದ್ಗುರುವಿನ ಸಹಜ ವಶೀಕರಣ ಮಂತ್ರ ನಿಮಗೆ ಸಿಕ್ಕಿದೆ, ಶಾಂತಿಯಿಂದ ಇರುತ್ತಾ ನನ್ನೊಬ್ಬನನ್ನೇ ನೆನಪು ಮಾಡಿ, ಇದೇ ಮಾಯೆಯನ್ನು ಅಧೀನ ಮಾಡಿಕ್ಕೊಳ್ಳುವ ಮಹಾ ಮಂತ್ರವಾಗಿದೆ.”

ಪ್ರಶ್ನೆ:
ಶಿವಬಾಬಾರವರೇ ತುಂಬಾ ಮುಗ್ದ ಗ್ರಾಹಕರಾಗಿದ್ದಾರೆ - ಹೇಗೆ?

ಉತ್ತರ:
ಬಾಬಾ ಹೇಳುತ್ತಾರೆ - ಮಕ್ಕಳೇ, ನಿಮ್ಮ ಬಳಿ ದೇಹ ಸಹಿತ ಏನೆಲ್ಲಾ ಹಳೆಯ ಕಿಚಡಾಯಿದೆ, ಅದನ್ನು ನಾನು ತೆಗೆದುಕ್ಕೊಳ್ಳುವೆ, ಅದೂ ಸಹ ನೀವು ಆಗಲೋ ಈಗಲೋ ಸಾಯುವ ಅಂಚಿನಲ್ಲಿರುವಿರಿ. ನಿಮ್ಮ ಬಿಳಿಯ ವಸ್ತ್ರ ಕೂಡ ಸಾಯುವ ನಿಶಾನಿಯಾಗಿದೆ. ನೀವು ಈಗ ತಂದೆಯ ಮೇಲೆ ಬಲಿಹಾರಿಯಾಗುವಿರಿ. ತಂದೆ ನಂತರ 21 ಜನ್ಮಗಳಿಗೆ ನಿಮ್ಮನ್ನು ಮಾಲಾಮಾಲ್ ಮಾಡಿ ಬಿಡುವರು. ಭಕ್ತಿ ಮಾರ್ಗದಲ್ಲೂ ತಂದೆ ಎಲ್ಲರ ಮನೋಕಾಮನೆಗಳನ್ನು ಪೂರ್ಣ ಮಾಡುತ್ತಾರೆ, ಜ್ಞಾನ ಮಾರ್ಗದಲ್ಲೂ ಸಹ ಸೃಷ್ಠಿಯ ಆದಿ, ಮಧ್ಯ, ಅಂತ್ಯದ ಜ್ಞಾನ ಕೊಟ್ಟು ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಾರೆ.

ಗೀತೆ:

ಭೋಲಾನಾಥನಿಗಿಂತಾ ನಿರಾಳಾ

ಓಂ ಶಾಂತಿ.
ಮಕ್ಕಳು ಭೋಲಾನಾಥನ ಸಮ್ಮುಖದಲ್ಲಿ ಕುಳಿತಿರುವಿರಿ. ವ್ಯಾಪಾರಿ ಜನ ಹೇಳುತ್ತಾರೆ - ಇಂತಹ ಮಹಾ ಬುದ್ಧಿಹೀನ (ಕಡಿಮೆ ಬುದ್ಧಿ ಉಳ್ಳ) ಯಾರು ಒಂದು ಸಾವಿರ, ಎರಡು ಸಾವಿರದ ವಸ್ತು ತೆಗೆದುಕೊಂಡು, ನಮಗೆ ಚೆನ್ನಾಗಿ ಧನ ಕೊಟ್ಟು ಹೋಗುತ್ತಾರೆ. ಹೇ ಭಗವಂತ, ನಮಗೆ ಇಂತಹ ಗ್ರಾಹಕನ ಜೊತೆ ಸೇರಿಸು. ಈಗ ಭೊಲಾನಾಥ ತಂದೆ ಬಂದು ಮಕ್ಕಳಿಗೆ ಆದಿ, ಮಧ್ಯ, ಅಂತ್ಯದ ರಹಸ್ಯ ತಿಳಿಸಿ ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಿದ್ದಾರೆ. ನನ್ನ ರೀತಿಯ ಗ್ರಾಹಕ ನಿಮಗೆ ಎಂದಾದರೂ ಸಿಗಲು ಸಾಧ್ಯವೇ? ನೀವು ಅವನಿಗೆ ಅರ್ಪಣೆಯಾಗುವಿರಿ. ಭಕ್ತಿ ಮಾರ್ಗದಲ್ಲಿ ಬಹಳ ಮಹಿಮೆ ಮಾಡುವಿರಿ. ಭೋಲಾನಾಥನ ಮಹಿಮೆ ಮಾಡುತ್ತಾರೆ - ನೀನೇ ತಾಯಿ-ತಂದೆ....... ಅವರು ಬಂದು ರಾಜಯೋಗ ಕಲಿಸುತ್ತಾರೆ, ರಾಜ್ಯಭಾಗ್ಯ ಕೊಡುತ್ತಾರೆ. ತಂದೆಗೆ ಹೇಳುತ್ತಾರೆ ನಮ್ಮ ಬಳಿ ಏನೆಲ್ಲಾ ಹಳೆಯ ಕೆಟ್ಟದೆಲ್ಲಾ ಇದೆ ಅದನ್ನು ನಿಮ್ಮ ಮೇಲೆ ಬಲಿಹಾರಿ ಮಾಡುತ್ತೇವೆ. ತಾವು ನಮಗೆ 21 ಜನ್ಮಗಳಿಗಾಗಿ ಮಾಲಾಮಾಲ್ ಮಾಡುವಿರಿ. ದಳ್ಳಾಳಿಗಳಿರುವರೆಲ್ಲ, ಅವರು ಅಲ್ಲಿಯದು ಇಲ್ಲಿಗೆ ಇಲ್ಲಿಯದು ಅಲ್ಲಿಗೆ ಮಾಡಿ ಕಮೀಷನ್ ತೆಗೆದುಕೊಳ್ಳುತ್ತಾರೆ. ಇದೂ ಹೇಳುತ್ತಾರೆ, ದೇಹ ಸಹಿತ ಏನೆಲ್ಲಾ ಕಚಡಾ ನಿಮ್ಮದು ಇದೆ ಅದನ್ನು ತೆಗೆದುಕೊಳ್ಳುತ್ತೇನೆ. ಯಾವಾಗ ನೀವು ಸಾಯುವ ಹಂತದಲ್ಲಿರುವಿರಿ. ನೀವು ಬ್ರಹ್ಮಾಕುಮಾರಿಯರ ಬಟ್ಟೆ ಕೂಡ ಬಿಳಿಯಾಗಿದೆ. ಹೇಗೆ ನೀವು ಸತ್ತಿರುವಿರಿ. ಸತ್ತವರ ಮೇಲೆ ಸಾಮಾನ್ಯವಾಗಿ ಬಿಳಿ ವಸ್ತ್ರವನ್ನು ಹಾಕುತ್ತಾರೆ.ಯಾವುದೇ ಕಲೆ ಆಗದಿರಲಿ ಎಂದು. ಈ ಸಮಯದಲ್ಲಿ ಎಲ್ಲರಿಗೂ ಮಾಯೆಯ ಕಪ್ಪು ಕಲೆ ಅಂಟಿಕೊಂಡಿದೆ, ಇದಕ್ಕೇ ರಾಹುವಿನ ಗ್ರಹಣವೆಂದು ಹೇಳಲಾಗುತ್ತದೆ. ಚಂದ್ರನಿಗೂ ಗ್ರಹಣ ಹಿಡಿಯುವುದರಿಂದ ಕಪ್ಪಾಗಿ ಬಿಡುತ್ತದೆ. ಅಂದರೆ ಈ ಮಾಯೆಯ ಗ್ರಹಣವು ಇಡೀ ವಿಶ್ವವನ್ನು ಕಪ್ಪು ಮಾಡಿ ಬಿಡುತ್ತದೆ. ಇದರಲ್ಲಿ ತತ್ವಗಳೂ ಸಹ ಸೇರಿರುತ್ತವೆ. ತಂದೆ ಕುಳಿತು ತಿಳಿಸುತ್ತಾರೆ, ಇದು ನಿಮ್ಮ ರಾಜಯೋಗವಾಗಿದೆ. ರಾಜಯೋಗದಿಂದ ಸ್ವರ್ಗದಲ್ಲಿ ರಾಜ್ಯಭಾಗ್ಯ ಪ್ರಾಪ್ತಿ ಮಾಡಿಕೊಳ್ಳಬೇಕು. ನೀವು ರಾಜರುಗಳ ರಾಜರಾಗುವಿರಿ, ನಾರಾಯಣ ನಶೆ ಇರುತ್ತದೆ. ನರನಿಂದ ನಾರಾಯಣ ಆಗುವಿರಿ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿರುತ್ತದೆ. ಅಂದಾಗ ನಾನು ಅವಶ್ಯವಾಗಿ ಅಂತ್ಯದಲ್ಲಿ ಬರಬೇಕಾಗುತ್ತದೆ. ಇದು ಭಕ್ತಿಮಾರ್ಗದ ಸಮಯವಾಗಿದೆ, ಭಕ್ತಿ ಮಾರ್ಗದಲ್ಲಿ ಎಲ್ಲಾ ಮಂದಿರಗಳಿಗೆ ಹೋಗಿ ತಲೆ ಬಾಗುತ್ತಾ ನೂಕು ನುಗ್ಗಾಟದಲ್ಲಿ ಸಿಲುಕುವಿರಿ. ಭಕ್ತರನ್ನು ಕಾಯುವವನು ಭಗವಂತನಾಗಿದ್ದಾನೆ, ಭಕ್ತಿಯ ಫಲವನ್ನು ಬಂದು ಕೊಡುತ್ತಾನೆ. ಎಲ್ಲರೂ ಭಕ್ತರಂತೂ ಆಗಿದ್ದಾರೆ ಆದರೆ ಎಲ್ಲರಿಗೂ ಒಂದೇ ತರಹ ಫಲ ಸಿಗುವುದಿಲ್ಲ. ಕೆಲವರಿಗೆ ಸಾಕ್ಷಾತ್ಕಾರವಾಗುತ್ತದೆ, ಕೆಲವರಿಗೆ ಪುತ್ರ ಪಾಪ್ತಿಯಾಗುತ್ತದೆ, ಅಲ್ಪಕಾಲಕ್ಕಾಗಿ. ಭಿನ್ನ-ಭಿನ್ನವಾದ ಮನೋಕಾಮನೆಗಳನ್ನು ಪೂರ್ಣ ಮಾಡುತ್ತೇನೆ. ಪ್ರಪಂಚದಲ್ಲಿ ಇದು ಯಾರಿಗೂ ಗೊತ್ತಿಲ್ಲಾ ಭಗವಂತನು ಬಂದಿರುವನು ಬಂದು ರಾಜಯೋಗವನ್ನು ಕಲಿಸುತ್ತಿರುವನು ಎಂದು ತಿಳಿಯುತ್ತಾರೆ ಅವರು ದ್ವಾಪರದಲ್ಲಿ ಬಂದಿದ್ದರು. ಆಗ ರಾಜಯೋಗ ಕಲಿಸಿರಬಹುದು ಎಂದು. ನಂತರ ಅಲ್ಲಿ ನರನಿಂದ ನಾರಾಯಣ ಹೇಗೆ ಆಗುತ್ತಾರೆ ? ಈ ಸಮಯದಲ್ಲೆ ತಂದೆ ನಮಗೆ ರಾಜಯೋಗವನ್ನು ಕಲಿಸಿ ರಾಜರುಗಳ ರಾಜರನ್ನಾಗಿ ಮಾಡುತ್ತಾರೆ. ಇಲ್ಲಂತು ನೀವು ಕೇವಲ ಸುಮ್ಮನೆ ಇರಬೇಕು. ಮನ್ಮನಾಭವ ಇದು ಸದ್ಗುರುವಿನ ವಶೀಕರಣ ಮಂತ್ರವಾಗಿದೆ. ಈ ಮಂತ್ರದಿಂದ ಬಹಳ ಸಂಪಾದನೆ ಇದೆ. ಇದು ಮಾಯೆಯನ್ನು ತನ್ನ ಅಧೀನದಲ್ಲಿಡುವಂತಹ ಮಂತ್ರವಾಗಿದೆ. ಮಾಯಾಜೀತ್ ಜಗತ್ ಜೀತ್. ಭಕ್ತಿ ಮಾರ್ಗದವರಿಗೆ ಮನ್ಜೀತೆ ಜಗತ್ ಜೀತ್, ಅದಕ್ಕಾಗಿ ಅವರು ಹಠಯೋಗ ಮುಂತಾದವುವನ್ನು ಮಾಡುತ್ತಾರೆ. ಅದೂ ಸಹ ಜಗತ್ ಜೀತ್ ಆಗಲು ಮಾಡುವುದಿಲ್ಲ. ಅವರು ಮುಕ್ತಿಗಾಗಿ ಮಾಡುತ್ತಾರೆ. ತಂದೆ ಬಂದು ತಿಳಿಸುತ್ತಾರೆ - ಮಕ್ಕಳೇ, ದೇಹ ಸಹಿತವಾಗಿ, ಸರ್ವ ಧರ್ಮಾನ್......... ನಾನು ಇಂತಹ ಧರ್ಮದವನಾಗಿದ್ದೇನೆ, ಇಂತಹವನಾಗಿದ್ದೇನೆ. ಈ ಎಲ್ಲಾ ಮಾತುಗಳನ್ನು ಬಿಟ್ಟು ನಿಮ್ಮನ್ನು ಆತ್ಮ ಎಂದು ತಿಳಿದು ನನ್ನನ್ನೊಬ್ಬನನ್ನೇ ನೆನಪು ಮಾಡಿ. ಅಷ್ಟೇ ನಾನು ಏನು ಮತವನ್ನು ಕೊಡುತ್ತಿರುವೆನು ಅದರಂತೆ ನಡೆಯಿರಿ. ಬಾಕಿ ಇದುವರೆಗೆ ಏನು ಅನೇಕ ಮತಗಳ ಮೇಲೆ ನಡೆಯುತ್ತಾ ಬಂದಿರಿ ಅದೆಲ್ಲಾ ಮತವನ್ನು ಬಿಡ ಬೇಕಾಗಿದೆ. ಆದ್ದರಿಂದ ನಿಮ್ಮ ಜ್ಞಾನ ಪೂರ್ತಿ ಹೊಸದಾಗಿದೆ. ತಿಳಿಯುತ್ತಾರೆ ಇವರ ಮಾತುಗಳು ಹೊಸದಾಗಿವೆ ಎಂದು. ನೀವು ಮಕ್ಕಳು ಯಾರಿಗಾದರೂ ತಿಳಿಸುವ ಮೊದಲು ಅವರ ನಾಡಿಯನ್ನು ನೋಡಬೇಕಾಗಿದೆ. ಎಲ್ಲರ ಮುಂದೆ ಒಂದೇ ರೀತಿ ಮಾತನಾಡಬಾರದು. ಮನುಷ್ಯರದು ಅನೇಕ ಮತಗಳಿವೆ. ನಿಮ್ಮದು ಒಂದೇ ಮತ. ಆದರೆ ನಂಬರ್ ವಾರ್ ಆಗಿದೆ. ಯಾರು ಚೆನ್ನಾಗಿ ಯೋಗದಲ್ಲಿರುತ್ತಾರೆ, ಧಾರಣೆ ಮಾಡುತ್ತಾರೆ ಅವರು ಅವಶ್ಯವಾಗಿ ಚೆನ್ನಾಗಿ ತಿಳಿಸುತ್ತಾರೆ. ಕಡಿಮೆ ಧಾರಣೆಯವರು ಕಡಿಮೆ ತಿಳಿಸುತ್ತಾರೆ. ಯಾರೇ ಆಗಿರಲಿ ಅವರಿಗೆ ಒಂದೇ ಒಂದು ಸಹಜ ಮಾತನ್ನು ತಿಳಿಸಿ - ಭಲೇ ಗೃಹಸ್ಥ ವ್ಯವಹಾರದಲ್ಲೇ ಇರಿ ಆದರೆ ಕಮಲಪುಷ್ಪ ಸಮಾನ ಇರಿ. ನಿಮಗೆ ತಿಳಿದಿದೆ, ಕಮಲದ ಹೂವಿಗೆ ಮಕ್ಕಳು ಮರಿ ಬಹಳಷ್ಟು ಇರುತ್ತವೆ ಆದರೂ ಅದರದೇ ಉದಾಹರಣೆಯನ್ನು ಕೊಡಲಾಗುತ್ತದೆ. ತಂದೆಗೂ ಮಕ್ಕಳು ಮರಿಯಂತು ಬಹಳ ಇದ್ದಾರೆ. ಕಮಲ ಪುಷ್ಪ ಮಾತ್ರ ನೀರಿನಿಂದ ಮೇಲಿರುತ್ತದೆ, ಬಾಕಿ ಮಕ್ಕಳು ಮರಿ ಕೆಳಗಿರುತ್ತಾರೆ. ಈ ಉದಾಹರಣೆ ಚೆನ್ನಾಗಿದೆ. ಬಾಬಾ ತಿಳಿಸುತ್ತಾರೆ, ಗೃಹಸ್ಥ ವ್ಯವಹಾರದಲ್ಲಿರಿ ಆದರೆ ಪವಿತ್ರವಾಗಿರಿ. ಇದು ಪವಿತ್ರತೆಯ ಮಾತಾಯಿತು. ಅದೂ ಸಹ ಈ ಒಂದು ಅಂತಿಮ ಜೀವನಕ್ಕಾಗಿ ಪವಿತ್ರವಾಗಿದ್ದು ನನ್ನನ್ನೊಬ್ಬನನ್ನೆ ನೆನಪು ಮಾಡಿ. ರಚನೆಯ ಪಾಲನೆಯನ್ನೂ ಸಹ ಅವಶ್ಯವಾಗಿ ಮಾಡಬೇಕು. ಇಲ್ಲದೇ ಹೋದರೆ ಹಠಯೋಗವಾಗಿ ಬಿಡುತ್ತದೆ. ಪ್ರಪಂಚದಲ್ಲಂತೂ ಅನೇಕರು ಪವಿತ್ರರಾಗಿರುತ್ತಾರೆ. ಉದಾಹರಣೆಗೆ ಬಾಲ ಬ್ರಹ್ಮಚಾರಿಗಳು ಭೀಷ್ಮ ಪಿತಾಮಹನಂತವರು. ಒಳ್ಳೆಯ ಬಾಲ ಬ್ರಹ್ಮಚಾರಿಗಳು ಯಾರೆಂದರೆ ಯಾರು ಸ್ತ್ರೀ-ಪುರುಷ ಇಬ್ಬರೂ ಒಟ್ಟಿಗೆ ಇರುತ್ತಾ ಪವಿತ್ರರಾಗಿರುವವರು. ಗಂಧರ್ವ ವಿವಾಹದ ಉಲ್ಲೇಖವಂತೂ ಶಾಸ್ತ್ರಗಳಲ್ಲಿಯೂ ಇದೆ, ಆದರೆ ಯಾರಿಗೂ ಇದು ತಿಳಿದಿಲ್ಲ. ಇಲ್ಲಂತು ತಂದೆಯೇ ತಿಳಿಸುತ್ತಾರೆ. ಬಾಬಾ ತಿಳಿಸುತ್ತಾರೆ - ಮಕ್ಕಳೇ, ಈಗ ಕಾಮಚಿತೆಯ ಬದಲು ಇಬ್ಬರೂ ಜ್ಞಾನ ಚಿತೆಯ ಕಂಕಣ ಕಟ್ಟಿಕ್ಕೊಳ್ಳಿ. ಎಂತಹ ಒಳ್ಳೆಯ ಕೆಲಸ ನೀವು ಬ್ರಾಹ್ಮಣರು ಮಾಡುತ್ತಿರುವಿರಿ. ಪವಿತ್ರವಾಗಿರುವ ಪ್ರತಿಜ್ಞೆ ಮಾಡಿ. ಪರಸ್ಪರ ಎಚ್ಚರಿಕೆ ನೀಡುತ್ತಾ ನೀವಿಬ್ಬರೂ ಸ್ವರ್ಗದಲ್ಲಿ ಹೋಗಿ ಬಿಡುವಿರಿ. ಇಲ್ಲಿ ನೀವಿಬ್ಬರೂ ಒಟ್ಟಿಗೆ ಪವಿತ್ರರಾಗಿದ್ದು ತೋರಿಸುವಿರಿ. ಆದ್ದರಿಂದ ನೀವು ದೊಡ್ಡ ಶ್ರೇಷ್ಠ ಪದವಿಯನ್ನು ಪಡೆಯಬಹುದು. ಉದಾಹರಣೆಯನ್ನು ಕೊಡಲಾಗುತ್ತದೆ ತಾನೆ. ಜ್ಞಾನ ಚಿತೆಯ ಮೇಲೆ ಕುಳಿತು ಸ್ವರ್ಗದಲ್ಲಿ ಹೋಗಿ ಶ್ರೇಷ್ಠ ಪದವಿ ಪಡೆಯುವಿರಿ. ಇದರಲ್ಲಿ ಹೆಚ್ಚು ಸಾಹಸ ಇದೆ, ಒಂದು ವೇಳೆ ಪಕ್ಕಾ ಆಗಿ ನಡೆಯುತ್ತಿದ್ದರೆ ಪದವಿ ಬಹಳ ಶ್ರೇಷ್ಠವಿದೆ ಮತ್ತು ಸೇವೆಯನ್ನೂ ಅವಲಂಬಿಸಿದೆ. ಯಾರು ಬಹಳ ಸೇವೆ ಮಾಡುತ್ತಾರೆ, ಪ್ರಜೆಗಳನ್ನು ಮಾಡುತ್ತಾರೆ ಅವರು ಒಳ್ಳೆಯ ಪದವಿಯನ್ನು ಪಡೆಯುತ್ತಾರೆ. ಬಾಬಾ-ಮಮ್ಮಾರವರಿಗಿಂತಲೂ ಮುಂದೆ ಹೋಗಬೇಕಾಗಿದೆ. ಆದರೆ ಹೇಗೆ ಬಾಬಾ ಹೇಳುತ್ತಾರೆ ಒಂದು ವೇಳೆ ಆ ಇಬ್ಬರು ಕ್ರಿಶ್ಚಿಯನ್ನರು ಒಂದಾಗಿ ಬಿಟ್ಟರೆ ವಿಶ್ವದ ಮಾಲೀಕರಾಗಿ ಬಿಡುತ್ತಾರೆ, ಇಂತಹ ಜೋಡಿ ಯಾರಾದರೂ ಹೊರ ಬರಲಿ ಯಾರು ತಾಯಿ-ತಂದೆಗಿಂತಲೂ ಮುಂದೆ ಹೋಗಬೇಕು. ಆದರೆ ಯಾರೂ ಇಲ್ಲ. ಜಗದಂಬಾ, ಜಗತ್ ಪಿತಾ ಇವರೇ ಹೆಸರುವಾಸಿಯಾಗಿದ್ದಾರೆ. ಇವರ ರೀತಿ ಸೇವೆ ಮಾಡಲು ಸಾಧ್ಯವಿಲ್ಲ. ಇವರು ನಿಮಿತ್ತರಾಗಿದ್ದಾರೆ ಆದ್ದರಿಂದ ಎಂದೂ ಹಾರ್ಟ್ ಫೇಲ್ ಆಗಬೇಡಿ. ಒಳ್ಳೆಯದು, ಮಮ್ಮಾ ಬಾಬಾರವರ ತರಹ ಇಲ್ಲದಿದ್ದರೂ ಸೆಕೆಂಡ್ ನಂಬರ್ ನಲ್ಲಾದರೂ ಬರಬಹುದು. ಸೇವೆಯ ಮೇಲೆ ಅವಲಂಬಿತವಾಗಿದೆ. ಪ್ರಜೆ ಮತ್ತು ವಾರಿಸ್ ಮಾಡಬೇಕು, ಹೀಗೆ ನಿಮ್ಮ ಮಾತು ಹೊಸದಾಗಿದೆ. ಹೊಸ ಪ್ರಪಂಚ ರಚಿಸುವ ಸಲುವಾಗಿ ಅವಶ್ಯವಾಗಿ ತಂದೆ ಬರಬೇಕಾಗುತ್ತದೆ. ಅವರೇ ರಚೈತ ಆಗಿದ್ದಾರೆ. ಅವರು ಹೇಳಿ ಬಿಡುತ್ತಾರೆ - ಪರಮಾತ್ಮ ನಾಮ ರೂಪದಿಂದ ಭಿನ್ನ ಎಂದು. ಆದರೆ ಹೀಗೆ ಇಲ್ಲ. ಅವರದೂ ಏನು ದೋಷವಿಲ್ಲ. ಅದೃಷ್ಠದಲ್ಲಿದ್ದರೆ ತಿಳಿಯುತ್ತಾರೆ. ಬಹಳಷ್ಟು ಜನ ಬರುತ್ತಾರೆ ಈ ಮಾತು ಸರಿಯಾಗಿದೆ ಎಂದು ತಿಳಿಯುತ್ತಾರೆ ಕೂಡ. ಯಾರಾದರೂ ಆತ್ಮ ನಾಮ ರೂಪದಿಂದ ನ್ಯಾರಾ ಎಂದು ಹೇಳಿದರೆ, ಆತ್ಮ ಎಂಬ ಹೆಸರು ಯಾವುದರ ಮೇಲಿದೆ? ಆತ್ಮ ಎಂಬ ಹೆಸರಂತೂ ಇದೆಯಲ್ಲವೇ. ನೀವು ಎಲ್ಲರಿಗೂ ಹೇಳಿ ಇದು ರಾಜಯೋಗವಾಗಿದೆ. ಪರಮಪಿತ ಪರಮಾತ್ಮ ಸಂಗಮಯುಗದಲ್ಲಿ ಬರುತ್ತಾರೆ. ರಾಜಯೋಗವನ್ನು ಅವಶ್ಯವಾಗಿ ಸಂಗಮಯುಗದಲ್ಲಿ ಕಲಿಸುತ್ತಾರೆ ಆಗಲೇ ಪತಿತರಿಂದ ಪಾವನ ಮಾಡುತ್ತಾರೆ. ಆದ್ದರಿಂದ ಇಲ್ಲಿನ ಮಾತುಗಳು ಭಿನ್ನವಾಗಿದೆ. ತಂದೆ ತಿಳಿಸುತ್ತಾರೆ, ಕೇವಲ ನಿಮ್ಮನ್ನು ಆತ್ಮ ಎಂದು ತಿಳಿಯಿರಿ. ತಂದೆಯ ಬಳಿ ಹೋಗಬೇಕಾಗಿದೆ. ಇದರಲ್ಲಿ ಪ್ರಶ್ನೆ ಕೇಳುವಂತಹ ಯಾವುದೇ ಮಾತಿಲ್ಲ. ಹೀಗೂ ಹೇಳುತ್ತಾರೆ ನನ್ನ ಆತ್ಮಕ್ಕೆ ದುಃಖ ಕೊಡಬೇಡ ಎಂದು. ಇವರು ಪಾಪಾತ್ಮರಾಗಿದ್ದಾರೆ, ಇವರು ಪುಣ್ಯಾತ್ಮರಾಗಿದ್ದಾರೆ. ಆತ್ಮಗಳಿಗೆ ಯಾರೂ ಹೇಳುವುದಿಲ್ಲ ಇವರಿಗೆ ಯಾವುದೇ ರೂಪವಿರುವುದಿಲ್ಲ. ವಿವೇಕಾನಂದರು ರಾಮಕೃಷ್ಣರ ಎದುರು ಕುಳಿತಾಗ ಅವರಿಗೆ ಸಾಕ್ಷಾತ್ಕಾರವಾಯಿತು, ಒಂದು ಬೆಳಕು ಅವರಿಂದ ಬಂದು ಇವರಲ್ಲಿ ಪ್ರವೇಶವಾದಂತಾಯಿತು. ಈ ರೀತಿ ಏನೋ ಹೇಳುತ್ತಾರೆ. ನೀವು ಹೇಳಿ ನಮ್ಮದು ರಾಜಯೋಗವಾಗಿದೆ. ಇದರಲ್ಲಿ ದೇಹ ಸಹಿತ ದೇಹದ ಎಲ್ಲಾ ಮಿತ್ರ ಸಂಬಂಧಿಗಳು ಮುಂತಾದವರನ್ನು ಮರೆಯಬೇಕಾಗುತ್ತದೆ, ನಾವು ಆತ್ಮಗಳು ಅವರ ಮಕ್ಕಳಾಗಿದ್ದೇವೆ, ಪರಸ್ಪರ ಸಹೋದರತ್ವವಾಗಿದೆ. ಒಂದು ವೇಳೆ ಎಲ್ಲರೂ ತಂದೆಯರಾಗಿ ಬಿಟ್ಟರೆ ತಂದೆಯೇ ತಂದೆಗೆ ಪ್ರಾರ್ಥನೆ ಮಾಡಬೇಕಾಗುತ್ತದೆ. ಈಗ ನಾವು ರಾಜಯೋಗ ಕಲಿಯುತ್ತಿದ್ದೇವೆ. ಇದಾಗಿದೆ ರಾಜರುಗಳ ರಾಜರಾಗುವ ಯೋಗ. ಈಗಂತು ರಾಜ್ಯಧಿಕಾರ ಇಲ್ಲ. ಇದನ್ನು ತಿಳಿಸಬೇಕಾಗಿದೆ ನಾವು ಶಾಂತಿಯಲ್ಲಿರುತ್ತಾ ಕೇವಲ ಶಿವಬಾಬಾರವರನ್ನು ನೆನಪು ಮಾಡುತ್ತೇವೆ. ನಮ್ಮನ್ನು ಈ ಶರೀರದಿಂದ ಭಿನ್ನ ಎಂದು ತಿಳಿಯುತ್ತೇವೆ. ಆತ್ಮ ಹೇಳುತ್ತದೆ, ನಾನು ಒಂದು ಶರೀರವನ್ನು ಬಿಟ್ಟು ಮತ್ತೊಂದನ್ನು ತೆಗೆದುಕ್ಕೊಳ್ಳುತ್ತೇನೆ. ಆದ್ದರಿಂದ ಜ್ಞಾನದ ಸಂಸ್ಕಾರ ಆತ್ಮನಲ್ಲಿರುತ್ತದೆ ಅಲ್ಲವೇ. ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರ ಆತ್ಮನಲ್ಲಿರುತ್ತದೆ. ಆತ್ಮ ನಿರ್ಲೇಪ ಅಲ್ಲ, ಇದನ್ನು ತಿಳಿಸಿಕೊಡಬೇಕಾಗಿದೆ. ಆತ್ಮ ಪುನರ್ ಜನ್ಮದಲ್ಲಿ ಬರುತ್ತದೆ. ಪದೇ-ಪದೇ ಶರೀರವನ್ನು ತೆಗೆದುಕ್ಕೊಳ್ಳಬೇಕಾಗುತ್ತದೆ. ಆತ್ಮ ನಕ್ಷತ್ರವಾಗಿದೆ, ಭ್ರಕುಟಿಯ ಮಧ್ಯದಲ್ಲಿರುತ್ತದೆ. ಆತ್ಮನ ಸಾಕ್ಷಾತ್ಕಾರ ಆಯಿತು, ಅದನ್ನು ಅವರು ತಿಳಿದರು ಇವರಲ್ಲಿ ಇಷ್ಟು ಶಕ್ತಿಯಿದೆ. ಇದರಿಂದ ನನಗೆ ಆತ್ಮದ ಸಾಕ್ಷಾತ್ಕಾರ ಮಾಡಿಸಿದರು ಎಂದು. ಈಗ ಆತ್ಮವಂತು ಭ್ರಕುಟಿಯ ಮಧ್ಯೆ ಇರುತ್ತದೆ. ಸಾಕ್ಷಾತ್ಕಾರ ಮಾಡಲಿ ಬಿಡಲಿ ಇದರಿಂದ ಏನೂ ವ್ಯತ್ಯಾಸವಾಗುವುದು? ಆತ್ಮ ಖುದ್ದಾಗಿ ಹೇಳುತ್ತೆ ನಾನು ನಕ್ಷತ್ರವಾಗಿದ್ದೇನೆ. ನನ್ನಲ್ಲಿ 84 ಜನ್ಮಗಳ ಪಾತ್ರವಿದೆ. ಒಂದು ವೇಳೆ 84 ಲಕ್ಷ ಜನ್ಮವಾಗಿದ್ದರೆ ಇಷ್ಟು ಸಂಸ್ಕಾರವಿರುತ್ತಿತ್ತು ಅದರಿಂದ ಏನಾಗುತ್ತಿತ್ತೊ! 84 ಜನ್ಮ ಒಪ್ಪಬಹುದು. 84 ಲಕ್ಷ ಜನ್ಮ ಒಪ್ಪಲು ಸಾಧ್ಯವಿಲ್ಲ. ಈಗ ನಾವು ಪಾವನರಾಗುತ್ತಿದ್ದೇವೆ. ಬಾಬಾ ನಮ್ಮನ್ನು ನರನಿಂದ ನಾರಾಯಣ ನನ್ನಾಗಿ ಮಾಡಲು ಪವಿತ್ರರನ್ನಾಗಿ ಮಾಡಿದ್ದಾರೆ, ಇದರ ಬಗ್ಗೆ ಹೆಚ್ಚು ನಶೆ ಇರಬೇಕಾಗಿದೆ. ನೀವು ಯಾರೊಂದಿಗೂ ವಾಗ್ವಾದ ಮಾಡುವ ಅವಶ್ಯಕತೆ ಇಲ್ಲ. ದೇಹ ಸಹಿತ ದೇಹದ ಎಲ್ಲಾ ಧರ್ಮ ತ್ಯಾಗ ಮಾಡಿ ತಮ್ಮನ್ನು ಆತ್ಮ, ಅಶರೀರಿ ಎಂದು ತಿಳಿಯಿರಿ. ಭಲೇ ನಾವು ಶಾಸ್ತ್ರ ಮುಂತಾದುವನ್ನು ಓದಿರಬಹುದು, ಆದರೆ ವಾದ ವಿವಾದ ಏಕೆ ಮಾಡಬೇಕು? ಯಾವಾಗ ತಂದೆ ಹೇಳಿದ್ದಾರೆ, ನನ್ನೊಬ್ಬನ್ನನ್ನೇ ನೆನಪು ಮಾಡಿ ಎಂದು ಮತ್ತು ಎರಡನೇ ಆಜ್ಞೆಯಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಪ ಸಮಾನ ಪವಿತ್ರರಾಗಿರಿ ಎಂದು. ಯೋಗ ಅಗ್ನಿಯಿಂದಲೇ ಪಾಪ ನಾಶವಾಗುತ್ತದೆ. ಭಗವಾನುವಾಚ ಆಗಿದೆ, ಭಗವಂತನೂ ಪರಮ ಆತ್ಮನಾಗಿದ್ದಾನೆ. ಅವನಿಗೂ ನಕ್ಷತ್ರವೆಂದು ಹೇಳಲಾಗುತ್ತದೆ. ಬಹಳ ಪಾಯಿಂಟ್ಸ್ಗಳಿವೆ ಒಂದೇ ಸಮಯಕ್ಕೆ ಒಟ್ಟಿಗೆ ಹೇಳುವಂತಿಲ್ಲ. ಆಸಾಮಿಯನ್ನು ನೋಡಿ ಯುಕ್ತಿಯಿಂದ ಹೇಳಬೇಕಾಗಿದೆ. ಹೇಳಿ, ನಾವೂ ಸಹ ಶಾಸ್ತ್ರವನ್ನು ಓದುತ್ತೇವೆ ಆದರೆ ತಂದೆಯ ಆಜ್ಞೆಯಾಗಿದೆ ಎಲ್ಲವನ್ನೂ ಮರೆತು ನನ್ನನ್ನೊಬ್ಬನನ್ನೇ ನೆನಪು ಮಾಡಿ ಎಂದು. ಅವರು ನಿರಾಕಾರ ಆಗಿದ್ದಾರೆ. ಆತ್ಮನನ್ನಂತೂ ಎಲ್ಲರೂ ಒಪ್ಪುತ್ತಾರೆ. ವಿವೇಕಾನಂದರ ಅನುಯಾಯಿಗಳೂ ಒಪ್ಪುತ್ತಾರೆ. ಆತ್ಮವಂತೂ ಎಲ್ಲರಲ್ಲಿಯೂ ಇದೆ. ಅವಶ್ಯವಾಗಿ ಅದರ ತಂದೆ ಇರಬೇಕು ತಾನೆ ಅವರನ್ನು ಪರಮಪಿತ ಪರಮಾತ್ಮ ಎಂದು ಕರೆಯಲಾಗುತ್ತದೆ. ಇದೆಲ್ಲಾ ಪಾಯಿಂಟ್ಸ್ ಇದೆಯಲ್ಲವೇ. ಹೀಗೆ ಸ್ಮರಣೆ ಮಾಡುತ್ತಿದ್ದರೆ ಸದಾ ಪಾಯಿಂಟ್ಸ್ ಸಿಗುತ್ತಿರುತ್ತವೆ, ಸ್ಟೀಮರ್ ತುಂಬುತ್ತಿರುತ್ತದೆ. ಇದೂ ಒಂದು ತರಹ ಅವಿನಾಶಿ ಜ್ಞಾನರತ್ನಗಳ ಸಾಮಗ್ರಿ ತುಂಬುತ್ತಿರುತ್ತದೆ. ಪಾಯಿಂಟ್ಸ್ ಬರೆದುಕೊಂಡು ಅದನ್ನು ರಿವೈಸ್ ಮಾಡಿ. ಇವು ರತ್ನಗಳಾಗಿವೆ, ಇವನ್ನು ಧಾರಣೆ ಮಾಡುವ ಮತ್ತು ಬರೆಯುವ ಹವ್ಯಾಸ ಇರಬೇಕು. ಒಳ್ಳೆಯ ರೀತಿಯಲ್ಲಿ ಎಲ್ಲರಿಗೂ ತಿಳಿಸಿ, ಆತ್ಮವಂತೂ ಎಲ್ಲರಲ್ಲಿಯೂ ಇದೆ ಅದರ ನಾಮ ರೂಪ ಇಲ್ಲ. ಹೀಗಂತೂ ಹೇಳಲು ಸಾಧ್ಯವಿಲ್ಲ, ಆತ್ಮಕ್ಕೆ ರೂಪವಿದ್ದರೆ ಪರಮಾತ್ಮನಿಗೆ ಏಕೆ ಇಲ್ಲ. ಅವರಿಗೆ ಪರಮಪಿತ ಪರಮಾತ್ಮ ಎಂದು ಹೇಳಲಾಗುತ್ತದೆ, ಪರಮಧಾಮದಲ್ಲಿ ವಾಸ ಮಾಡುವವರು. ಮಕ್ಕಳಿಗೆ ಎಷ್ಟು ತಿಳಿಸಿಕೊಡಲಾಗಿದೆ. ಆದ್ದರಿಂದ ಈಗ ಸೇವೆ ಮಾಡಿ ತೋರಿಸಿ. ಬಾಬಾ ಸೇವೆಯ ಮೇಲೆ ಉಡುಗೊರೆ ಕೊಡುತ್ತಾರೆ. ಎಷ್ಟು ಜ್ಞಾನರತ್ನಗಳ ಶೃಂಗಾರ ಮಾಡುತ್ತಾರೆ. ನಾವು ಇಲ್ಲಿ ಪದುಮಾಪತಿಗಳು ಆಗಲು ಇಚ್ಚಿಸುವುದಿಲ್ಲ, ನಮಗೆ ವಿಶ್ವದ ಬಾದ್ಷಾಹಿ ಆಗಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

೧. ಜ್ಞಾನ ರತ್ನಗಳು ಏನೆಲ್ಲಾ ಸಿಗುತ್ತವೆ ಅದರ ಮೇಲೆ ವಿಚಾರ ಸಾಗರ ಮಂಥನ ಮಾಡಿ ಸ್ವಯಂನಲ್ಲಿ ಧಾರಣೆ ಮಾಡಬೇಕು. ಜ್ಞಾನ ರತ್ನಗಳಿಂದ ಸದಾ ಸಂಪನ್ನರಾಗಿರಿ.

೨. ತಮ್ಮದೇ ನಾರಾಯಣಿ ನಶೆಯಲ್ಲಿರಿ, ಯಾರೊಂದಿಗೂ ವ್ಯರ್ಥ ಮಾತುಗಳನ್ನಾಡಬೇಡಿ. ಅಶರೀರಿಗಳಾಗುವ ಅಭ್ಯಾಸ ಮಾಡಿ.

ವರದಾನ:
ಮಾಯೆಯನ್ನು ಶತ್ರು ಎಂದು ತಿಳಿಯುವ ಬದಲು ಪಾಠ ಕಲಿಸುವಂತಹ ಸಹಯೋಗಿ ಎಂದು ತಿಳಿದು ಏಕರಸವಾಗಿರುವಂತಹ ಮಾಯಾಜೀತ್ ಭವ.

ಮಾಯೆ ಬರುವುದೆ ನಿಮಗೆ ಪಾಠ ಕಲಿಸುವುದಕ್ಕಾಗಿ, ಆದ್ದರಿಂದ ಗಾಬರಿಯಾಗಬೇಡಿ, ಪಾಠ ಕಲಿಯಿರಿ. ಕೆಲವೊಮ್ಮೆ ಸಹನಶೀಲತೆಯ ಪಾಠ, ಕೆಲವೊಮ್ಮೆ ಶಾಂತ ಸ್ವರೂಪರಾಗುವಂತಹ ಪಾಠ ಪಕ್ಕಾ ಮಾಡಿಸುವ ಸಲುವಾಗಿಯೇ ಮಾಯೆ ಬರುವುದು. ಆದ್ದರಿಂದ ಮಾಯೆಯನ್ನು ಶತ್ರುವಿನ ಬದಲಾಗಿ ನಿಮ್ಮ ಸಹಯೋಗಿ ಎಂದು ತಿಳಿಯಿರಿ. ಆಗ ಗಾಬರಿಯಾಗಿ ಸೋಲುವುದಿಲ್ಲ, ಪಾಠ ಪಕ್ಕಾ ಮಾಡಿ ಅಂಗದನ ಸಮಾನ ಅಚಲರಾಗಿ ಬಿಡುವಿರಿ. ಎಂದೂ ಸಹ ಬಲಹೀನರಾಗಿ ಮಾಯೆಗೆ ಆಹ್ವಾನ ಮಾಡಬೇಡಿ ಆಗ ಅದು ನಿಮ್ಮಿಂದ ವಿಧಾಯಿ ತೆಗೆದುಕೊಳ್ಳುವುದು.

ಸ್ಲೋಗನ್:
ಪ್ರತಿ ಸಂಕಲ್ಪದಲ್ಲಿ ಧೃಡತೆಯ ಮಹಾನತೆಯಿರಲಿ, ಆಗ ಸಫಲತೆ ಸಿಗುತ್ತಿರುವುದು.


ಮಾತೇಶ್ವರಿ ಜೀ ಯವರ ಮಧುರ ಮಹಾವಾಕ್ಯ

“ ಪರಮಾತ್ಮನ ಸದ್ಗತಿ ಮಾಡುವ ಗತಿ ಮತ್ತು ಮತಿ , ಪರಮಾತ್ಮನಿಗೇ ಗೊತ್ತು ”

ನಿನ್ನ ಗತಿ ಮತಿ ನಿನಗೇ ಗೊತ್ತು..... ಈ ಮಹಿಮೆ ಯಾರ ನೆನಪಾರ್ಥದಲ್ಲಿ ಹಾಡುತ್ತಾರೆ? ಏಕೆಂದರೆ ಪರಮಾತ್ಮನ ಸದ್ಗತಿ ಮಾಡುವ ಏನು ಮತವಿದೆ ಅದನ್ನು ಪರಮಾತ್ಮ ಒಬ್ಬನೇ ತಿಳಿದಿದ್ದಾನೆ. ಮನುಷ್ಯರು ತಿಳಿಯಲು ಸಾಧ್ಯವಿಲ್ಲ, ಮನುಷ್ಯರಲ್ಲಿ ಕೇವಲ ಈ ಇಚ್ಛೆ ಇರುತ್ತದೆ ನನಗೆ ಸದಾಕಾಲಕ್ಕೆ ಸುಖ ಬೇಕು, ಆದರೆ ಆ ಸುಖ ಹೇಗೆ ಸಿಗುವುದು? ಎಲ್ಲಿಯವರೆಗೆ ಮನುಷ್ಯ ತನ್ನ 5 ವಿಕಾರಗಳನ್ನು ಭಸ್ಮ ಮಾಡಿ ಕರ್ಮವನ್ನು ಅಕರ್ಮ ಮಾಡುವುದಿಲ್ಲ ಅಲ್ಲಿಯವರೆಗೆ ಅವನಿಗೆ ಸುಖ ಸಿಗುವುದಿಲ್ಲ, ಏಕೆಂದರೆ ಕರ್ಮ, ಅಕರ್ಮ ವಿಕರ್ಮದ ಗತಿ ಬಹಳ ಆಳವಾಗಿದೆ ಅದನ್ನು ಪರಮಾತ್ಮನ ವಿನಃ ಬೇರೆ ಯಾರೇ ಮನುಷ್ಯ ಆತ್ಮ ಅದರ ಗತಿಯನ್ನು ತಿಳಿಯಲು ಸಾಧ್ಯವಿಲ್ಲ. ಈಗ ಎಲ್ಲಿಯವರೆಗೆ ಪರಮಾತ್ಮನು ಆ ಗತಿಯನ್ನು ತಿಳಿಸುವುದಿಲ್ಲ ಅಲ್ಲಿಯವರೆಗೆ ಮನುಷ್ಯರಿಗೆ ಜೀವನ್ಮುಕ್ತಿ ಪ್ರಾಪ್ತಿಯಾಗಲು ಸಾದ್ಯವಿಲ್ಲ, ಆದ್ದರಿಂದ ಮನುಷ್ಯರು ಹೇಳುತ್ತಾರೆ ನಿನ್ನ ಗತಿ ಮತಿಯನ್ನು ನೀನೇ ತಿಳಿದಿರುವೆ. ಇವರನ್ನು ಸದ್ಗತಿ ಮಾಡುವ ಮತ ಏನಿದೆ ಅದು ಪರಮಾತ್ಮನ ಬಳಿಯಿದೆ. ಕರ್ಮವನ್ನು ಹೇಗೆ ಅಕರ್ಮ ಮಾಡುವುದು, ಈ ಶಿಕ್ಷಣವನ್ನು ಕೊಡುವುದು ಪರಮಾತ್ಮನ ಕರ್ತವ್ಯವಾಗಿದೆ. ಬಾಕಿ ಮನುಷ್ಯರಿಗೆ ಈ ಜ್ಞಾನ ಇಲ್ಲ, ಯಾವ ಕಾರಣದಿಂದ ಅವರು ಉಲ್ಟಾ ಕಾರ್ಯ ಮಾಡುತ್ತಿರುತ್ತಾರೆ, ಈಗ ಮನುಷ್ಯರ ಮೊದಲ ಕರ್ತವ್ಯವಾಗಿದೆ ತಮ್ಮ ಕರ್ಮಗಳನ್ನು ಸುಧಾರಣೆ ಮಾಡಿಕೊಳ್ಳುವುದು, ಆಗ ಮಾತ್ರ ಮನುಷ್ಯ ಜೀವನದ ಪೂರ್ಣ ಲಾಭ ತೆಗೆದುಕೊಳ್ಳಲು ಸಾಧ್ಯ. ಒಳ್ಳೆಯದು. ಓಂಶಾಂತಿ.