24/10/18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಪ್ರಭಾತದ ಸಮಯದಲ್ಲಿ ಮನಸ್ಸು, ಬುದ್ಧಿಯಿಂದ ತಂದೆಯನ್ನು ನೆನಪು ಮಾಡಿ, ಜೊತೆ ಜೊತೆಗೆ ಭಾರತವನ್ನು
ದೈವೀ ರಾಜಾಸ್ಥಾನವನ್ನಾಗಿ ಮಾಡುವ ಸೇವೆ ಮಾಡಿರಿ”
ಪ್ರಶ್ನೆ:
ಸೂರ್ಯವಂಶಿ
ರಾಜಧಾನಿಯ ಬಹುಮಾನವು ಯಾವ ಆಧಾರದಿಂದ ಸಿಗುತ್ತದೆ?
ಉತ್ತರ:
ಸೂರ್ಯವಂಶಿ
ರಾಜಧಾನಿಯ ಬಹುಮಾನವನ್ನು ಪಡೆಯಲು ತಂದೆಗೆ ಪೂರ್ಣ ಸಹಯೋಗಿಗಳಾಗಿ, ಶ್ರೀಮತದಂತೆ ನಡೆಯುತ್ತಾ ಇರಿ.
ಆಶೀರ್ವಾದವನ್ನು ಬೇಡಬಾರದು ಆದರೆ ಯೋಗಬಲದಿಂದ ಆತ್ಮವನ್ನು ಪಾವನವನ್ನಾಗಿ ಮಾಡಿಕೊಳ್ಳುವ
ಪುರುಷಾರ್ಥ ಮಾಡಿರಿ. ದೇಹ ಸಹಿತವಾಗಿ ದೇಹದ ಎಲ್ಲಾ ಸಂಬಂಧಗಳನ್ನು ತ್ಯಾಗ ಮಾಡಿ ಒಬ್ಬ ಪ್ರಿಯಾತಿ
ಪ್ರಿಯ ತಂದೆಯನ್ನು ನೆನಪು ಮಾಡಿ. ಆಗ ಸೂರ್ಯವಂಶಿ ರಾಜಧಾನಿಯ ಬಹುಮಾನವು ಸಿಗುತ್ತದೆ. ಅದರಲ್ಲಿ
ಶಾಂತಿ, ಪವಿತ್ರತೆ, ಸಂಪತ್ತು ಎಲ್ಲವೂ ಇರುತ್ತದೆ.
ಗೀತೆ:
ಕೊನೆಗೂ ಆ ದಿನ
ಬಂದಿತು.....
ಓಂ ಶಾಂತಿ.
ಓಂ ಶಾಂತಿಯ ಅರ್ಥವಂತೂ ನೀವು ಮಕ್ಕಳ ಬುದ್ಧಿಯಲ್ಲಿ ಇದ್ದೇ ಇರುತ್ತದೆ. ತಂದೆಯು ಏನು
ತಿಳಿಸುತ್ತಾರೆಯೋ ಅದು ಈ ಪ್ರಪಂಚದಲ್ಲಿ ಕೇವಲ ನಿಮ್ಮನ್ನು ಬಿಟ್ಟರೆ ಬೇರೆ ಯಾರಿಗೂ ತಿಳಿದುಕೊಳ್ಳಲು
ಆಗುವುದಿಲ್ಲ. ಯಾರಾದರೂ ಹೊಸಬರು ಬಂದು ಕುಳಿತುಕೊಂಡರೆ ಏನೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅವರು
ಈ ರೀತಿ ತಿಳಿದುಕೊಳ್ಳುತ್ತಾರೆ-ಹೇಗೆ ಯಾರಾದರೂ ವೈದ್ಯಕೀಯ ಕಾಲೇಜ್ನಲ್ಲಿ ಹೋಗಿ ಕುಳಿತುಕೊಂಡರೆ
ತಿಳಿದುಕೊಳ್ಳಲಾಗುವುದಿಲ್ಲ. ಮನುಷ್ಯರು ಹೋಗಿ ಏನನ್ನೂ ತಿಳಿದುಕೊಳ್ಳದೇ ಇರುವ ಯಾವುದೇ
ಸತ್ಸಂಗವಿಲ್ಲ. ಅಲ್ಲಿಯಂತೂ ಶಾಸ್ತ್ರ ಇತ್ಯಾದಿಗಳ ಮಾತುಗಳನ್ನೇ ತಿಳಿಸುತ್ತಾರೆ. ಇದು ಅತಿ ದೊಡ್ಡ
ವಿಶ್ವ ವಿದ್ಯಾಲಯವಾಗಿದೆ. ಇದೇನೂ ಹೊಸದಲ್ಲ ಯಾವಾಗ ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ.
ಪುನಃ ಆ ದಿನ ಇಂದು ಬಂದಿತು. ಈ ಸಮಯ ಭಾರತದಲ್ಲಿ ರಾಜ್ಯಭಾಗ್ಯವಂತೂ ಇಲ್ಲ. ನೀವು ಈ ರಾಜಯೋಗದಿಂದ
ರಾಜರಿಗೂ ರಾಜರಾಗುತ್ತೀರಿ ಅರ್ಥಾತ್ ನೀವು ತಿಳಿದುಕೊಂಡಿದ್ದೀರಿ - ಯಾರು ವಿಕಾರಿ
ರಾಜರುಗಳಾಗಿದ್ದಾರೆಯೋ ಅಂತಹವರಿಗೂ ನಾವು ರಾಜರಾಗುತ್ತೇವೆ. ತಿಳುವಳಿಕೆಯು ಸಿಕ್ಕಿದೆ, ಯಾರು
ಯಾವುದೇ ಕರ್ಮವನ್ನು ಮಾಡಿದರೂ ಅದರ ನೆನಪಂತೂ ಇರುತ್ತದೆಯಲ್ಲವೆ. ನೀವು ವಾರಸುಧಾರರಾಗಿದ್ದೀರಿ.
ನಾವು ಆತ್ಮಗಳು ಈಗ ತಂದೆಯ ಜೊತೆಯಲ್ಲಿ ಬುದ್ಧಿಯೋಗವನ್ನಿಡುವುದರಿಂದ ಭಾರತವನ್ನು ಪವಿತ್ರವನ್ನಾಗಿ
ಮಾಡುತ್ತೇವೆ ಮತ್ತು ಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಧಾರಣೆ ಮಾಡಿ ಚಕ್ರವರ್ತಿ
ರಾಜರಾಗುತ್ತೇವೆಂದು ತಿಳಿದುಕೊಂಡಿದ್ದೀರಿ. ಇದಂತೂ ಬುದ್ಧಿಯಲ್ಲಿರಬೇಕು. ನಾವು ಯುದ್ಧದ
ಮೈದಾನದಲ್ಲಿದ್ದೇವೆ, ವಿಜಯವಂತೂ ನಮಗೆ ಸಿಗುವುದು. ಇದಂತೂ ನಿಶ್ಚಿತವಾಗಿದೆ. ಖಂಡಿತವಾಗಿಯೂ ನಾವು
ಭಾರತವನ್ನು ಪುನಃ ದೈವೀ ಡಬಲ್ ಕಿರೀಟಧಾರಿ ರಾಜಾಸ್ಥಾನವನ್ನಾಗಿ ಮಾಡುತ್ತಿದ್ದೇವೆ. ತಂದೆಯು
ಚಿತ್ರಗಳ ಬಗ್ಗೆ ಬಹಳ ಚೆನ್ನಾಗಿ ತಿಳಿಸಿ ಕೊಡುತ್ತಿರುತ್ತಾರೆ. ನಾವು 84 ಜನ್ಮಗಳನ್ನು ಪೂರ್ಣ ಮಾಡಿ
ಈಗ ಹಿಂತಿರುಗಿ ಮನೆಗೆ ಹೋಗುತ್ತೇವೆ ಪುನಃ ಬಂದು ರಾಜ್ಯ ಮಾಡುತ್ತೇವೆ. ಈ ಎಲ್ಲಾ
ಬ್ರಹ್ಮಾಕುಮಾರ-ಕುಮಾರಿಯರಂತೂ ಏನು ಮಾಡುತ್ತಿದ್ದಾರೆ, ಬ್ರಹ್ಮಾಕುಮಾರಿಯರ ಈ ಸಂಸ್ಥೆಯು
ಎಂತಹದ್ದಾಗಿದೆ? ಈ ರೀತಿ ಕೇಳುತ್ತಾರಲ್ಲವೆ. ಬಿ.ಕೆ.ಗಳು ತಕ್ಷಣ ಹೇಳಿ ಬಿಡುತ್ತಾರೆ - ನಾವು
ಶ್ರೀಮತದಂತೆ ನಡೆದು ಈ ಭಾರತವನ್ನು ಪುನಃ ದೈವೀ ರಾಜಾಸ್ಥಾನವನ್ನಾಗಿ ಮಾಡುತ್ತಿದ್ದೇವೆ. ಮನುಷ್ಯರು
‘ಶ್ರೀ’ನ ಅರ್ಥವನ್ನು ತಿಳಿದುಕೊಂಡಿಲ್ಲ, ನೀವು ತಿಳಿದುಕೊಂಡಿದ್ದೀರಿ. ಶ್ರೀ ಶ್ರೀ ಶಿವಬಾಬಾ
ಆಗಿದ್ದಾರೆ, ಅವರದೇ ಮಾಲೆಯಾಗುತ್ತದೆ. ಈ ಎಲ್ಲಾ ರಚನೆಯು ಯಾರದ್ದಾಗಿದೆ? ರಚೈತನಂತೂ
ತಂದೆಯಾಗಿದ್ದಾರಲ್ಲವೆ. ಸೂರ್ಯವಂಶಿ, ಚಂದ್ರವಂಶಿ ಯಾರೆಲ್ಲಾ ಇದ್ದಾರೆ ಇಡೀ ಮಾಲೆಯು ರುದ್ರ ಶಿವ
ತಂದೆಯದಾಗಿದೆ. ಎಲ್ಲರೂ ತನ್ನ ರಚೈತನನ್ನು ತಿಳಿದುಕೊಂಡಿದ್ದಾರೆ ಆದರೆ ಅವರ ಕರ್ತವ್ಯವನ್ನಂತೂ
ತಿಳಿದುಕೊಂಡಿಲ್ಲ. ಅವರು ಯಾವಾಗ ಮತ್ತು ಹೇಗೆ ಬಂದು ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡುತ್ತಾರೆ....
ಇದು ಯಾರ ಬುದ್ಧಿಯಲ್ಲಿಯೂ ಇಲ್ಲ. ಅವರಂತೂ ಕಲಿಯುಗವು ಇನ್ನೂ ಬಹಳ ವರ್ಷಗಳು ನಡೆಯುತ್ತದೆ ಎಂದು
ತಿಳಿದುಕೊಂಡಿದ್ದಾರೆ.
ಈಗ ನೀವು ತಿಳಿದುಕೊಂಡಿದ್ದೀರಿ - ನಾವು ದೈವೀ ರಾಜಾಸ್ಥಾನವನ್ನು ಸ್ಥಾಪನೆ ಮಾಡಲು
ನಿಮಿತ್ತರಾಗಿದ್ದೇವೆ. ಅವಶ್ಯವಾಗಿ ದೈವೀ ರಾಜಾಸ್ಥಾನವಾಗುವುದು ನಂತರ ಅದೇ ಕ್ಷತ್ರಿಯ
ರಾಜಾಸ್ಥಾನವಾಗುವುದು. ಮೊದಲು ಸೂರ್ಯವಂಶಿ ಕುಲ ನಂತರ ಕ್ಷತ್ರಿಯ ಕುಲ ರಾಜ್ಯವಾಗುವುದು. ನೀವಂತೂ
ಚಕ್ರವರ್ತಿ ರಾಜ-ರಾಣಿಯರಾಗಬೇಕು ಅಂದಮೇಲೆ ಬುದ್ಧಿಯಲ್ಲಿ ಚಕ್ರವನ್ನು ತಿರುಗಿಸುತ್ತಾ ಇರಬೇಕಲ್ಲವೆ.
ನೀವು ಯಾರಿಗೆ ಬೇಕಾದರೂ ಈ ಚಿತ್ರಗಳ ಬಗ್ಗೆ ಬಹಳ ಚೆನ್ನಾಗಿ ತಿಳಿಸಬಹುದು. ಈ ಲಕ್ಷ್ಮಿ-ನಾರಾಯಣರದು
ಸೂರ್ಯವಂಶಿ ಕುಲವಾಗಿದೆ ಮತ್ತು ರಾಮ-ಸೀತೆಯರದು ಕ್ಷತ್ರಿಯ ಕುಲವಾಗಿದೆ ನಂತರ ವೈಶ್ಯಕುಲ,
ಶೂದ್ರವಂಶಿ ಪತಿತ ಕುಲವಾಗಿ ಬಿಡುತ್ತದೆ. ಪೂಜ್ಯರು ಪುನಃ ಪೂಜಾರಿಗಳಾಗಿ ಬಿಡುತ್ತಾರೆ. ಸಿಂಗಲ್
ಕಿರೀಟವುಳ್ಳ ರಾಜರುಗಳ ಚಿತ್ರವನ್ನೂ ಮಾಡಬೇಕಾಗಿದೆ. ಈ ಚಿತ್ರ ಸಂಗ್ರಹಾಲಯವು ಬಹಳ ಅದ್ಭುತವಾಗಿ
ಬಿಡುತ್ತದೆ. ನೀವು ತಿಳಿದಿದ್ದೀರಿ, ಡ್ರಾಮಾನುಸಾರ ಸೇವಾರ್ಥವಾಗಿ ಈ ಚಿತ್ರ ಸಂಗ್ರಹಾಲಯಗಳು ಬಹಳ
ಅವಶ್ಯಕತೆಯಿದೆ, ಆಗ ಮಾತ್ರವೇ ಮಕ್ಕಳ ಬುದ್ಧಿಯಲ್ಲಿ ಕುಳಿತುಕೊಳ್ಳುವುದು. ಹೊಸ ಪ್ರಪಂಚವು ಹೇಗೆ
ಸ್ಥಾಪನೆಯಾಗುತ್ತಾ ಇದೆ, ಅದನ್ನು ಚಿತ್ರಗಳ ಮೂಲಕ ತಿಳಿಸಿ ಕೊಡಲಾಗುತ್ತದೆ. ಮಕ್ಕಳ ಬುದ್ಧಿಯಲ್ಲಿ
ಖುಷಿಯ ಪಾರವು ಏರುತ್ತಿರಬೇಕು. ಇದಂತೂ ತಿಳಿಸಿಕೊಡಲಾಗಿದೆ-ಸತ್ಯಯುಗದಲ್ಲಿ ಆತ್ಮದ ಜ್ಞಾನವಿರುತ್ತದೆ,
ಅಂದಾಗ ಯಾವಾಗ ವೃದ್ಧರಾಗುತ್ತಾರೋ ಆಗ ಸಹಜವಾಗಿಯೇ ಈ ವಿಚಾರವು ಬರುತ್ತದೆ - ನಾನೀಗ ಈ ಹಳೆಯ
ಶರೀರವನ್ನು ಬಿಟ್ಟು ಮತ್ತೊಂದು ಹೊಸ ಶರೀರವನ್ನು ತೆಗೆದುಕೊಳ್ಳುತ್ತೇನೆ. ಇಂತಹ ವಿಚಾರಗಳು ಅಂತಿಮ
ಸಮಯದಲ್ಲಿ ಬರುತ್ತವೆ, ಆದರೆ ಎಲ್ಲಾ ಸಮಯದಲ್ಲಿ ಖುಷಿ, ಮೋಜಿನಲ್ಲಿ ಇರುತ್ತಾರೆ. ಮೊದಲೇ ಈ ಜ್ಞಾನ
ಗೊತ್ತಿರುವುದಿಲ್ಲ. ಎಲ್ಲಿಯವರೆಗೆ ತಂದೆಯು ಬಂದು ತನ್ನ ಪರಿಚಯವನ್ನು ಕೊಡುವುದಿಲ್ಲವೋ ಅಲ್ಲಿಯ
ತನಕ ಈ ಪರಮಪಿತ ಪರಮಾತ್ಮನ ನಾಮ, ರೂಪ, ದೇಶ, ಕಾಲವನ್ನು ಯಾರೂ ತಿಳಿದುಕೊಳ್ಳುವುದಿಲ್ಲವೆಂದು
ಮಕ್ಕಳಿಗೆ ತಿಳಿಸಲಾಗಿದೆ. ಇವರ ಪರಿಚಯವು ಬಹಳ ಗಂಭೀರವಾಗಿದೆ. ಅವರ ರೂಪವಂತೂ ಲಿಂಗಾಕಾರವಾಗಿದೆ
ಎಂದು ಹೇಳಲಾಗುತ್ತದೆ. ರುದ್ರ ಯಜ್ಞವನ್ನು ರಚಿಸಿದಾಗ ಮಣ್ಣಿನಿಂದ ಲಿಂಗವನ್ನು ಮಾಡಿ ಪೂಜಿಸುತ್ತಾರೆ.
ಹಾಗೆಯೇ ತಂದೆಯೂ ಸಹ ಮೊದಲು ನಾನು ಬಿಂದುವಾಗಿದ್ದೇನೆಂದು ತಿಳಿಸಿರಲಿಲ್ಲ. ಒಂದುವೇಳೆ ಮೊದಲೇ ಬಿಂದು
ರೂಪವಾಗಿದ್ದೇನೆಂದು ಹೇಳಿದರೆ ನೀವು ಅರಿತುಕೊಳ್ಳುತ್ತಿರಲಿಲ್ಲ. ಯಾವ ಮಾತನ್ನು ಯಾವಾಗ ತಿಳಿಸಬೇಕೋ
ಆಗಲೇ ತಿಳಿಸಿಕೊಡುತ್ತಾರೆ. ಇಂದು ಹೇಳುವುದನ್ನು ಮೊದಲೇ ಏಕೆ ತಿಳಿಸಲಿಲ್ಲವೆಂದು ಹೇಳುವಂತಿಲ್ಲ.
ಡ್ರಾಮಾದಲ್ಲಿ ಹೀಗೆಯೇ ದಾಖಲೆಯಾಗಿದೆ. ಈ ಚಿತ್ರ ಸಂಗ್ರಹಾಲಗಳಿಂದ ಸೇವೆಯು ಬಹಳ ವೃದ್ಧಿಯಾಗುತ್ತದೆ.
ಅನ್ವೇಷಣೆಗಳು ನಡೆಯುತ್ತವೆ ನಂತರ ವೃದ್ಧಿ ಹೊಂದುತ್ತಾ ಹೋಗುತ್ತದೆ. ಹೇಗೆ ತಂದೆಯು ಮೋಟಾರನ್ನು
ಉದಾಹರಣೆಯಾಗಿ ತೋರಿಸುತ್ತಾರೆ. ಅದನ್ನು ಅನ್ವೇಷಣೆ ಮಾಡುವಾಗ ಪರಿಶ್ರಮವಾಗಿರಬಹುದು ಆದರೆ ಈಗ ನೋಡಿ
- ದೊಡ್ಡ-ದೊಡ್ಡ ಕಾರ್ಖಾನೆಯಲ್ಲಿ ಒಂದು ನಿಮಿಷದಲ್ಲಿ ಮೋಟಾರ್ ತಯಾರಾಗಿ ಬಿಡುತ್ತದೆ. ವಿಜ್ಞಾನದ
ಎಷ್ಟೊಂದು ಅನ್ವೇಷಣೆಗಳು ಹೊರ ಬಂದಿವೆ. ಭಾರತವು ಎಷ್ಟೊಂದು ದೊಡ್ಡ ದೇಶವಾಗಿದೆ ಎಂದು ನೀವು
ತಿಳಿದುಕೊಂಡಿದ್ದೀರಿ. ಪ್ರಪಂಚವು ದೊಡ್ಡದಾಗಿದೆ ನಂತರ ಬಹಳ ಚಿಕ್ಕದಾಗಿ ಬಿಡುವುದು. ಇದನ್ನು
ಬುದ್ಧಿಯಲ್ಲಿ ಚೆನ್ನಾಗಿ ಕುಳಿತುಕೊಳ್ಳುವಂತೆ ಮಾಡಿಸಬೇಕು. ಯಾರು ಸರ್ವೀಸೇಬಲ್
ಮಕ್ಕಳಾಗಿರುತ್ತಾರೆಯೋ ಅವರ ಬುದ್ಧಿಯಲ್ಲಿ ಈ ಎಲ್ಲಾ ಮಾತುಗಳು ಧಾರಣೆಯಾಗಿರುತ್ತವೆ. ಉಳಿದವರಂತೂ
ತಿನ್ನುವುದು-ಕುಡಿಯುವುದು, ಅಲ್ಲಸಲ್ಲದ ಮಾತುಗಳನ್ನಾಡುವುದರಲ್ಲಿಯೇ ಸಮಯ ವ್ಯರ್ಥವಾಗಿ ಬಿಡುವುದು.
ಇದನ್ನು ನೀವು ತಿಳಿದಿದ್ದೀರಿ - ಭಾರತದಲ್ಲಿ ಪುನಃ ದೈವೀ ರಾಜಾಸ್ಥಾನವು ಸ್ಥಾಪನೆಯಾಗುತ್ತಾ ಇದೆ.
ವಾಸ್ತವದಲ್ಲಿ ಕಿಂಗ್ಡಮ್ ಅಕ್ಷರವು ತಪ್ಪಾಗಿದೆ. ಭಾರತವು ದೈವೀ ರಾಜಾಸ್ಥಾನವಾಗುತ್ತಾ ಇದೆ, ಈ
ಸಮಯದಲ್ಲಿ ಅಸುರೀ ರಾಜಾಸ್ತಾನ ರಾವಣ ರಾಜ್ಯವಾಗಿದೆ, ಪ್ರತಿಯೊಬ್ಬರಲ್ಲೂ 5 ವಿಕಾರಗಳ ಪ್ರವೇಶವಾಗಿದೆ.
ಎಷ್ಟೊಂದು ಕೋಟಿ ಆತ್ಮಗಳು, ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ, ತಮ್ಮ ತಮ್ಮ ಸಮಯದಲ್ಲಿ ಬಂದು ನಂತರ
ಹೊರಟು ಹೋಗುತ್ತಾರೆ. ಪುನಃ ಪ್ರತಿಯೊಬ್ಬರೂ ತನ್ನ ಪಾತ್ರವನ್ನು ಪುನರಾವರ್ತಿಸಬೇಕಾಗಿದೆ.
ಘಳಿಗೆ-ಘಳಿಗೆಯೂ ನಾಟಕವು ಹೇಗಿದೆಯೋ ಹಾಗೆಯೇ ಪುನರಾವರ್ತನೆಯಾಗುತ್ತದೆ. ಕಲ್ಪದ ಮೊದಲು ಯಾವ
ಪಾತ್ರವನ್ನು ಅಭಿನಯಿಸಿದ್ದರೋ ಅದನ್ನೇ ಈಗಲೂ ಅಭಿನಯಿಸುತ್ತಾರೆ. ಇವೆಲ್ಲಾ ಅಂಶಗಳನ್ನು
ಬುದ್ಧಿಯಲ್ಲಿ ಧಾರಣೆ ಮಾಡಬೇಕು. ಉದ್ಯೋಗ-ವ್ಯವಹಾರದಲ್ಲಿರುವುದರಿಂದ ಪುನಃ ಕಷ್ಟವಾಗುತ್ತದೆ. ಆದರೆ
ತಂದೆಯು ತಿಳಿಸುತ್ತಾರೆ - ಪ್ರಾತಃ ಸಮಯದ ಗಾಯನವಿದೆ. ಬೆಳಗ್ಗೆ-ಬೆಳಗ್ಗೆ ರಾಮನನ್ನು ಸ್ಮರಿಸಿರಿ
ಎನ್ನುವ ಗಾಯನವೂ ಇದೆ. ಈಗ ಮತ್ತೇನನ್ನೂ ಸ್ಮರಿಸಬೇಡಿ, ಪ್ರಭಾತದ ಸಮಯದಲ್ಲಿ ನನ್ನನ್ನೇ ನೆನಪು ಮಾಡಿ
ಎಂದು ತಂದೆಯು ತಿಳಿಸುತ್ತಾರೆ. ತಂದೆಯು ಈಗ ಸನ್ಮುಖದಲ್ಲಿದ್ದು ತಿಳಿಸುತ್ತಾರೆ ಮತ್ತೆ ಅದೇ
ಭಕ್ತಿಮಾರ್ಗದಲ್ಲಿ ಗಾಯನವಾಗುತ್ತದೆ. ಸತ್ಯಯುಗ, ತ್ರೇತಾದಲ್ಲಂತೂ ಗಾಯನ ಮಾಡುವುದಿಲ್ಲ. ತಂದೆ
ತಿಳಿಸುತ್ತಾರೆ- ಹೇ ಆತ್ಮ ತನ್ನ ಮನ-ಬುದ್ಧಿಯಿಂದ ಪ್ರಭಾಃತದ ಸಮಯದಲ್ಲಿ ತಂದೆಯಾದ ನನ್ನನ್ನು ನೆನಪು
ಮಾಡಿ, ಭಕ್ತರು ಸಾಮಾನ್ಯವಾಗಿ ರಾತ್ರಿಯಲ್ಲಿ ಜಾಗೃತರಾಗಿದ್ದು ಸ್ವಲ್ಪವಾದರೂ ನೆನಪು ಮಾಡುತ್ತಾರೆ.
ಇಲ್ಲಿಯ ರೀತಿ-ನೀತಿಗಳು ಪುನಃ ಭಕ್ತಿಮಾರ್ಗದಲ್ಲಿ ನಡೆದು ಬಂದಿವೆ. ನೀವು ಮಕ್ಕಳಿಗೆ ತಿಳಿಸಿಕೊಡಲು
ವಿವಿಧ ಯುಕ್ತಿಗಳು ದೊರೆಯುತ್ತಾ ಇರುತ್ತವೆ. ಭಾರತವು ಇಷ್ಟು ಸಮಯದ ಮೊದಲು ದೈವೀ
ರಾಜಾಸ್ಥಾನವಾಗಿತ್ತು ಪುನಃ ಕ್ಷತ್ರಿಯ ರಾಜಾಸ್ಥಾನವಾಯಿತು, ವೈಶ್ಯ ರಾಜಾಸ್ಥಾನವಾಯಿತು.
ದಿನ-ಪ್ರತಿದಿನ ತಮೋಪ್ರಧಾನವಾಗುತ್ತಾ ಅವಶ್ಯವಾಗಿ ಬೀಳಲೇಬೇಕು. ಮುಖ್ಯವಾದದ್ದು ಚಕ್ರ, ಚಕ್ರವನ್ನು
ತಿಳಿದುಕೊಳ್ಳುವುದರಿಂದ ನೀವು ಚಕ್ರವರ್ತಿ ರಾಜರಾಗಿ ಬಿಡುತ್ತೀರಿ. ಈಗ ನೀವು ಕಲಿಯುಗದಲ್ಲಿ
ಕುಳಿತಿದ್ದೀರಿ, ಮುಂದೆ ಸತ್ಯಯುಗವಿದೆ. ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದರ ಜ್ಞಾನವು ನಿಮಗಿದೆ.
ನಾಳೆ ನಾವು ಸತ್ಯಯುಗೀ ರಾಜಧಾನಿಯಲ್ಲಿರುತ್ತೇವೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಇದು ಎಷ್ಟೊಂದು
ಸಹಜವಾಗಿದೆ. ಮೇಲೆ ತ್ರಿಮೂರ್ತಿ ಶಿವನಿದ್ದಾರೆ, ಚಕ್ರವೂ ಇದೆ, ಲಕ್ಷ್ಮಿ-ನಾರಾಯಣರೂ ಇದರಲ್ಲಿಯೇ
ಬಂದು ಬಿಡುವರು. ಈ ಚಿತ್ರವನ್ನು ಎದುರಿಗೆ ಇಡಲಾಗಿದೆ ಇದನ್ನು ಯಾರಿಗಾದರೂ ಸಹಜವಾಗಿಯೇ
ತಿಳಿಸಿಕೊಡಬಹುದು. ಭಾರತ ದೈವೀ ರಾಜಸ್ಥಾನವಾಗಿತ್ತು ಆದರೆ ಈಗ ಇಲ್ಲ, ಸಿಂಗಲ್ ಕಿರೀಟಧಾರಿ
ರಾಜರುಗಳೂ ಸಹ ಇಲ್ಲ. ಚಿತ್ರಗಳ ಬಗ್ಗೆ ನೀವು ಮಕ್ಕಳು ತಿಳಿಸಿಕೊಡಬೇಕಾಗುತ್ತದೆ. ಈ ಚಿತ್ರಗಳು ಬಹಳ
ಬೆಲೆಯುಳ್ಳದ್ದಾಗಿದೆ. ಎಷ್ಟು ಅದ್ಭುತವಾದ ವಸ್ತುವಾಗಿದೆ ಅಂದಾಗ ಅಷ್ಟೇ ಅದ್ಭುತವಾಗಿ
ತಿಳಿಸಿಕೊಡಬೇಕಾಗುತ್ತದೆ. ಇದು 30"x40" ವೃಕ್ಷ, ತ್ರಿಮೂರ್ತಿಯ ಚಿತ್ರ ಎಲ್ಲರೂ ತಮ್ಮ-ತಮ್ಮ
ಮನೆಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಯಾರೇ ಮಿತ್ರ ಸಂಬಂಧಿಗಳು ಬಂದಾಗ ಈ ಚಿತ್ರಗಳ ಬಗ್ಗೆ
ತಿಳಿಸಿಕೊಡಬೇಕು. ಇದು ವಿಶ್ವದ ಚರಿತ್ರೆ, ಭೂಗೋಳವಾಗಿದೆ. ಪ್ರತಿಯೊಬ್ಬ ಮಕ್ಕಳ ಬಳಿ ಈ ಚಿತ್ರ
ಅವಶ್ಯವಾಗಿರಬೇಕು ಜೊತೆಯಲ್ಲಿ ಒಳ್ಳೊಳ್ಳೆಯ ಗೀತೆಗಳೂ ಇರಬೇಕು. ಕೊನೆಗೂ ಆ ದಿನ ಬಂದಿತು....
ಅವಶ್ಯವಾಗಿ ತಂದೆಯು ಬಂದು ಬಿಟ್ಟಿದ್ದಾರೆ ಮತ್ತು ನಮಗೆ ರಾಜಯೋಗವನ್ನು ಕಲಿಸುತ್ತಾರೆ.
ಚಿತ್ರಗಳನ್ನು ಯಾರಾದರೂ ಅಪೇಕ್ಷೆ ಪಟ್ಟರೆ ಅವರಿಗೆ ದೊರೆಯುತ್ತದೆ, ಬಡವರಿಗೆ ಉಚಿತವಾಗಿ ಸಿಗುತ್ತದೆ.
ಆದರೆ ತಿಳಿಸಿ ಕೊಡುವಂತಹ ಸಾಹಸವು ಇರಬೇಕು. ಇದು ಅವಿನಾಶಿ ಜ್ಞಾನರತ್ನಗಳ ಖಜಾನೆಯಾಗಿದೆ. ನೀವು
ದಾನಿಯಾಗಿದ್ದೀರಿ, ನಿಮ್ಮಂತಹ ಅವಿನಾಶಿ ಜ್ಞಾನ ರತ್ನಗಳ ದಾನ ಮಾಡುವಂತಹವರು ಬೇರೆ ಯಾರೂ ಇರಲು
ಸಾಧ್ಯವಿಲ್ಲ. ಇಂತಹ ದಾನ ಯಾವುದೂ ಇರುವುದಿಲ್ಲ ಅಂದಮೇಲೆ ಜ್ಞಾನ ರತ್ನಗಳ ದಾನ ಮಾಡಬೇಕು, ಯಾರೇ
ಬರಲಿ ಅವರಿಗೆ ತಿಳಿಸಬೇಕು. ಅನಂತರ ಒಬ್ಬರು ಇನ್ನೊಬ್ಬರನ್ನು ನೋಡಿ ಅನೇಕರು ಬರುತ್ತಾರೆ. ಈ
ಚಿತ್ರವು ಬಹಳ ಅಮೂಲ್ಯವಾದ ವಸ್ತುವಾಗಿದೆ. ಹೇಗೆ ನೀವೂ ಸಹ ಅಮೂಲ್ಯರೆಂದು ಕರೆಸಿಕೊಳ್ಳುತ್ತೀರಿ,
ಕವಡೆಯಿಂದ ವಜ್ರ ಸಮಾನರಾಗುತ್ತೀರಿ. ಈ ಚಿತ್ರವನ್ನು ವಿದೇಶದಲ್ಲಿ ತೆಗೆದುಕೊಂಡು ಹೋಗಿ ತಿಳಿಸಿದರೂ
ಕೂಡ ಚಮತ್ಕಾರವಾಗಿ ಬಿಡುತ್ತದೆ. ನಾವು ಭಾರತದ ಯೋಗವನ್ನು ಕಲಿಸುತ್ತೇವೆಂದು ಇಷ್ಟು ಸಮಯ
ಸನ್ಯಾಸಿಗಳು ಹೇಳುತ್ತಾ ಬಂದರು. ಪ್ರತಿಯೊಬ್ಬರೂ ತಮ್ಮ ಧರ್ಮದ ಮಹಿಮೆ ಮಾಡಿಕೊಳ್ಳುತ್ತಾರೆ. ಬೌದ್ಧ
ಧರ್ಮದವರು ಎಷ್ಟು ಜನರನ್ನು ಬೌದ್ಧಿಯನ್ನಾಗಿ ಮಾಡಿಕೊಳ್ಳುತ್ತಾರೆ. ಆದರೆ ಅದರಿಂದ ಏನೂ ಲಾಭವಿಲ್ಲ.
ತಾವಂತೂ ಇಲ್ಲಿ ಮನುಷ್ಯರನ್ನು ಮಂಗನಿಂದ ಮಂದಿರಕ್ಕೆ ಯೋಗ್ಯರನ್ನಾಗಿ ಮಾಡುವಿರಿ. ಭಾರತದಲ್ಲಿಯೇ
ಸಂಪೂರ್ಣ ನಿರ್ವಿಕಾರಿಗಳಿದ್ದರು. ಭಾರತವು ಸುಂದರವಾಗಿತ್ತು, ಈಗ ಭಾರತವು ಕಪ್ಪಾಗಿದೆ. ಎಷ್ಟೊಂದು
ಮನುಷ್ಯರಿದ್ದಾರೆ, ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆಯಲ್ಲವೆ. ಸಂಗಮಯುಗದಲ್ಲಿಯೇ
ತಂದೆಯು ಬಂದು ಸ್ಥಾಪನೆ ಮಾಡುತ್ತಾರೆ, ರಾಜಯೋಗವನ್ನು ಕಲಿಸುತ್ತಾರೆ. ಯಾರು ಕಲ್ಪದ ಹಿಂದೆ
ಕಲಿತಿದ್ದರೋ ಅಂತಹ ಮಕ್ಕಳಿಗೇ ಕಲಿಸುತ್ತಾರೆ. ಸ್ಥಾಪನೆಯಂತೂ ಆಗಲೇಬೇಕಾಗಿದೆ. ಮಕ್ಕಳು ರಾವಣನಿಂದ
ಸೋಲನ್ನನುಭವಿಸುತ್ತಾರೆ ನಂತರ ರಾವಣನ ಮೇಲೆ ಜಯ ಗಳಿಸುತ್ತಾರೆ. ಎಷ್ಟು ಸಹಜವಾಗಿದೆ ಅಂದಾಗ ಮಕ್ಕಳು
ದೊಡ್ಡ ಚಿತ್ರಗಳನ್ನು ಮಾಡಿಸಿ ಅದರಿಂದ ಸರ್ವೀಸ್ ಮಾಡಬೇಕು. ದೊಡ್ಡ-ದೊಡ್ಡ ಅಕ್ಷರಗಳಲ್ಲಿರಬೇಕು.
ಅದರ ಮೇಲೆ ಈ ರೀತಿ ಬರೆಯಬೇಕು - ಇಲ್ಲಿಂದ ಭಕ್ತಿಮಾರ್ಗವು ಪ್ರಾರಂಭವಾಗುತ್ತದೆ, ಅವಶ್ಯವಾಗಿ
ಯಾವಾಗ ದುರ್ಗತಿಯು ಪೂರ್ಣವಾಗುವುದೋ ಆಗಲೇ ತಂದೆಯು ಸದ್ಗತಿ ಮಾಡಲು ಬರುತ್ತಾರಲ್ಲವೆ.
ತಂದೆಯು ತಿಳಿಸಿದ್ದಾರೆ - ಭಕ್ತಿ ಮಾಡಬೇಡಿ ಎಂದು ನೀವು ಎಂದೂ ಯಾರಿಗೂ ಹೇಳಬಾರದು. ತಂದೆಯ
ಪರಿಚಯವನ್ನು ಕೊಟ್ಟು ತಿಳಿಸಿದಾಗ ಅವರಿಗೇ ಬಾಣವು ನಾಟುತ್ತದೆ. ಮಹಾಭಾರತ ಯುದ್ಧವೆಂದು ಏಕೆ
ಹೇಳಲಾಗುತ್ತದೆಯೆಂದು ನಿಮಗೆ ಗೊತ್ತಿದೆ, ಏಕೆಂದರೆ ಇದು ಅತಿದೊಡ್ಡ ಯಜ್ಞವಾಗಿದೆ, ಈ ಯಜ್ಞದಿಂದಲೇ
ಈ ಯುದ್ಧವು ಪ್ರಜ್ವಲಿತವಾಗಿದೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ಇವೆಲ್ಲಾ ಮಾತುಗಳು ನಿಮ್ಮ
ಬುದ್ಧಿಯಲ್ಲಿದೆ. ಮನುಷ್ಯರಿಗಂತೂ ಶಾಂತಿ ಪಾರಿತೋಷಕವು ಸಿಗುತ್ತಿರುತ್ತದೆ ಆದರೂ ಶಾಂತಿಯಂತೂ
ಇರುವುದಿಲ್ಲ. ವಾಸ್ತವದಲ್ಲಿ ಶಾಂತಿಯ ಸ್ಥಾಪನೆ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ಅವರ ಜೊತೆ
ನೀವು ಸಹಯೋಗಿಗಳಾಗಿದ್ದೀರಿ. ಪಾರಿತೋಷಕವೂ ಸಹ ನಿಮಗೆ ಸಿಗಬೇಕಾಗಿದೆ, ತಂದೆಗೆ ಸಿಗುತ್ತದೆಯೆ?
ತಂದೆಯಂತೂ ಕೊಡುವಂತಹವರಾಗಿದ್ದಾರೆ. ನಿಮಗೆ ನಂಬರ್ವಾರ್ ಪುರುಷಾರ್ಥದನುಸಾರ ಬಹುಮಾನವು ಸಿಗುತ್ತದೆ.
ಅಸಂಖ್ಯಾತ ಮಕ್ಕಳಿರುತ್ತಾರೆ. ನೀವೀಗ ಸುಖ, ಶಾಂತಿ, ಪವಿತ್ರತೆಯನ್ನು ಸ್ಥಾಪನೆ ಮಾಡುತ್ತಿದ್ದೀರಿ.
ಎಷ್ಟು ದೊಡ್ಡ ಬಹುಮಾನವಾಗಿದೆ! ನಿಮಗೆ ಗೊತ್ತಿದೆ – ಯಾರು ಎಷ್ಟು ಪರಿಶ್ರಮ ಪಡುತ್ತಾರೆಯೋ ಅಷ್ಟು
ಸೂರ್ಯವಂಶಿ ರಾಜಧಾನಿಯ ಬಹುಮಾನವು ಸಿಗುವುದು. ತಂದೆಯು ಶ್ರೀಮತವನ್ನು ಕೊಡುವವರಾಗಿದ್ದಾರೆ. ಬಾಬಾ,
ಆಶೀರ್ವಾದ ಮಾಡಿ ಎಂದಲ್ಲ. ತಂದೆಯನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ ಎಂದು
ವಿದ್ಯಾರ್ಥಿ (ಮಕ್ಕಳು) ಗಳಿಗೆ ಸಲಹೆ ನೀಡಲಾಗುತ್ತದೆ. ಯೋಗಬಲದಿಂದಲೇ ನಿಮ್ಮ ಆತ್ಮವು
ಪವಿತ್ರವಾಗುವುದು. ನೀವೆಲ್ಲರೂ ಸೀತೆಯರಾಗಿದ್ದೀರಿ, ಬೆಂಕಿಯಿಂದ ಪಾರಾಗುತ್ತೀರಿ. ಯೋಗಬಲದಿಂದ
ಪಾರಾಗಬೇಕು ಇಲ್ಲವೆಂದರೆ ಅಗ್ನಿಯಲ್ಲಿ ಸುಟ್ಟು ಹಾಕಬೇಕು. ದೇಹ ಸಹಿತವಾಗಿ ಎಲ್ಲಾ ಸಂಬಂಧಗಳನ್ನು
ತ್ಯಾಗ ಮಾಡಿ ಒಬ್ಬ ಪ್ರಿಯಾತಿ ಪ್ರಿಯ ತಂದೆಯನ್ನು ನೆನಪು ಮಾಡಿ. ಆದರೆ ನಿರಂತರವಾಗಿ
ನೆನಪಿನಲ್ಲಿರುವುದು ಬಹಳ ಪರಿಶ್ರಮದಾಯಕವಾಗಿದೆ, ಸಮಯ ಹಿಡಿಸುತ್ತದೆ. ಯೋಗಾಗ್ನಿಯೆಂದು ಗಾಯನವೂ ಇದೆ.
ಭಾರತದ ಪ್ರಾಚೀನ ಯೋಗವೆಂದು ಪ್ರಸಿದ್ಧವಾಗಿದೆ. ಗೀತೆಯೇ ಸರ್ವಶಾಸ್ತ್ರಮಯೀ ಶಿರೋಮಣಿಯಾಗಿದೆ.
ಅದರಲ್ಲಿ ರಾಜಯೋಗವೆಂಬ ಶಬ್ಧವಿದೆ. ಆದರೆ ರಾಜ ಎಂಬ ಅಕ್ಷರವನ್ನು ಮರೆ ಮಾಡಿ ಕೇವಲ ಯೋಗ ಅಕ್ಷರವನ್ನು
ಹಿಡಿದುಕೊಂಡಿದ್ದಾರೆ. ಈ ರಾಜಯೋಗದಿಂದ ನಾನು ನಿಮ್ಮನ್ನು ರಾಜರಿಗೂ ರಾಜರನ್ನಾಗಿ ಮಾಡುತ್ತೇನೆಂದು
ತಂದೆಯ ವಿನಃ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಈಗ ನೀವು ಶಿವ ತಂದೆಯ ಸಮ್ಮುಖದಲ್ಲಿ ಕುಳಿತಿದ್ದೀರಿ.
ಈಗ ನಿಮಗೆ ತಿಳಿದಿದೆ - ನಾವೆಲ್ಲಾ ಆತ್ಮಗಳು ಪರಮಧಾಮದ ನಿವಾಸಿಗಳಾಗಿದ್ದೇವೆ. ಮತ್ತೆ ಶರೀರ ಧಾರಣೆ
ಮಾಡಿ ಪಾತ್ರವನ್ನಭಿನಯಿಸುತ್ತೇವೆ. ಶಿವ ತಂದೆಯಂತೂ ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ.
ಬ್ರಹ್ಮಾ-ವಿಷ್ಣು-ಶಂಕರರೂ ಸಹ ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ನಾನು ಪತಿತರಿಂದ
ಪಾವನರನ್ನಾಗಿ ಮಾಡುವುದಕ್ಕೋಸ್ಕರ ಬರುತ್ತೇನೆಂದು ತಂದೆಯು ಹೇಳುತ್ತಾರೆ. ಆದ್ದರಿಂದಲೇ ಪತಿತ-ಪಾವನ
ಬನ್ನಿ ಎಂದು ಎಲ್ಲರೂ ನೆನಪು ಮಾಡುತ್ತಾರೆ. ಈ ಅಕ್ಷರವು ಸರಿಯಾಗಿದೆ. ತಂದೆಯು ತಿಳಿಸುತ್ತಾರೆ -
ನಾನು ನಿಮ್ಮನ್ನು ಪಾವನ ದೇವಿ-ದೇವತೆಗಳನ್ನಾಗಿ ಮಾಡುತ್ತಿದ್ದೇನೆ ಎಂದಮೇಲೆ ಅಷ್ಟೊಂದು
ನಶೆಯೇರಬೇಕಲ್ಲವೆ. ತಂದೆಯು ಇವರಲ್ಲಿ(ಬ್ರಹ್ಮಾ) ಬಂದು ನಮಗೆ ಶಿಕ್ಷಣ ನೀಡುತ್ತಿದ್ದಾರೆ. ಈ
ಹೂದೋಟದ ಮಾಲಿಕ ತಂದೆಯಾಗಿದ್ದಾರೆ. ನಾವು ತಂದೆಯ ಕೈಹಿಡಿದಿದ್ದೇವೆ. ಇದರಲ್ಲಿ ಎಲ್ಲವೂ ಬುದ್ದಿಯ
ಮಾತಾಗಿದೆ. ತಂದೆಯು ಆ ತೀರಕ್ಕೆ, ವಿಷಯ ಸಾಗರದಿಂದ ಕ್ಷೀರ ಸಾಗರದೆಡೆಗೆ ಕರೆದುಕೊಂಡು ಹೋಗುತ್ತಾರೆ.
ಅಲ್ಲಿ ವಿಕಾರವಿರುವುದಿಲ್ಲ, ಆದ್ದರಿಂದ ಅದನ್ನು ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ.
ಭಾರತವು ನಿರ್ವಿಕಾರಿಯಾಗಿತ್ತು. ಈಗ ಅದು ವಿಕಾರಿಯಾಗಿ ಬಿಟ್ಟಿದೆ. ಈ ಚಕ್ರವು ಭಾರತಕ್ಕೋಸ್ಕರವೇ
ಇದೆ. ಭಾರತವಾಸಿಗಳೇ ಇದನ್ನು ಸುತ್ತುತ್ತಾರೆ. ಅನ್ಯ ಧರ್ಮದವರು ಪೂರ್ಣ ಚಕ್ರವನ್ನು
ಸುತ್ತುವುದಿಲ್ಲ. ಅವರಂತೂ ನಂತರದಲ್ಲಿ ಬರುತ್ತಾರೆ. ಇದು ಬಹಳ ವಿಚಿತ್ರವಾದ ಚಕ್ರವಾಗಿದೆ ಅಂದಾಗ
ಬುದ್ಧಿಯಲ್ಲಿ ನಶೆಯೇರಬೇಕಾಗಿದೆ. ಈ ಚಿತ್ರಗಳ ಮೇಲೆ ಬಹಳ ಗಮನವಿಡಬೇಕು. ಸರ್ವೀಸ್ ಮಾಡಿ ತೋರಿಸಬೇಕು.
ವಿದೇಶಗಳಲ್ಲಿಯೂ ಸಹ ಈ ಚಿತ್ರಗಳು ಹೋದರೆ ಬಹಳ ಹೆಸರುವಾಸಿಯಾಗುವುದು, ವಿಹಂಗ ಮಾರ್ಗದ ಸೇವೆಯಾಗಿ
ಬಿಡುವುದು. ಒಳ್ಳೆಯದ.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಅವಿನಾಶಿ
ಜ್ಞಾನ ರತ್ನಗಳ ಯಾವ ಖಜಾನೆಯು ಸಿಕ್ಕಿದೆಯೋ ಅದನ್ನು ದಾನ ಮಾಡಬೇಕಾಗಿದೆ. ತಮ್ಮ ಸಮಯವನ್ನು
ತಿನ್ನುವುದು-ಕುಡಿಯುವುದು, ಅಲ್ಲಸಲ್ಲದ ಮಾತುಗಳಲ್ಲಿ ವ್ಯರ್ಥವಾಗಿ ಕಳೆಯಬಾರದಾಗಿದೆ.
2. ಕವಡೆಯ ಸಮಾನ ಇರುವ ಮನುಷ್ಯರನ್ನು ವಜ್ರ ಸಮಾನ ಮಾಡುವ ಸೇವೆಯನ್ನು ಮಾಡಬೇಕಾಗಿದೆ. ತಂದೆಯಿಂದ
ಆಶೀರ್ವಾದ ಅಥವಾ ಕೃಪೆಯನ್ನು ಬೇಡಬಾರದು, ಅವರ ಆದೇಶದಂತೆ ನಡೆಯುತ್ತಿರಬೇಕಾಗಿದೆ.
ವರದಾನ:
ತಂದೆಯನ್ನು
ಎದುರಿನಲ್ಲಿಟ್ಟುಕೊಂಡು ಈಷ್ರ್ಯಾರೂಪಿ ಪಾಪದಿಂದ ತಪ್ಪಿಸಿಕೊಳ್ಳುವಂತಹ ವಿಶೇಷ ಆತ್ಮ ಭವ.
ಬ್ರಾಹ್ಮಣ
ಆತ್ಮರಲ್ಲಿ ನಿಷ್ಪ್ರಯೋಜಕತೆ ಇರುವ ಕಾರಣ ಈಷ್ರ್ಯೆ ಉತ್ಪನ್ನವಾಗುವುದು, ಈಷ್ರ್ಯೆಯ ಕಾರಣ
ಸಂಸ್ಕಾರಗಳ ಘರ್ಷಣೆಯಾಗುವುದು. ಆದರೆ ಇದರಲ್ಲಿ ವಿಶೇಷವಾಗಿ ಯೋಚಿಸಿ ಒಂದು ವೇಳೆ ನಿಷ್ಪ್ರಯೋಜಕತನ
ಯಾವುದಾದರೂ ವಿಶೇಷ ಕಾರ್ಯದ ನಿಮಿತ್ತ ಆಗಿದ್ದರೆ ಆಗ ಅವರನ್ನು ನಿಮಿತ್ತರನ್ನಾಗಿ ಮಾಡಿದವರು ಯಾರು!
ತಂದೆಯನ್ನು ಎದುರಿಗೆ ತಂದುಕೊಳ್ಳಿ ಆಗ ಈಷ್ರ್ಯಾರೂಪಿ ಮಾಯೆ ಓಡಿ ಹೋಗಿ ಬಿಡುವುದು. ಒಂದುವೇಳೆ
ಯಾರದೇ ಮಾತು ನಿಮಗೆ ಸರಿ ಎನ್ನಿಸದಿದ್ದರೆ ಶುಭ ಭಾವನೆಯಿಂದ ಮೇಲೆ ತನ್ನಿ, ಈಷ್ರ್ಯೆ ವಶ ಅಲ್ಲ.
ಪರಸ್ಪರರಲ್ಲಿ ರೇಸ್ ಮಾಡಿ ದ್ವೇಶದಿಂದಲ್ಲ, ಆಗ ವಿಶೇಷ ಆತ್ಮ ಆಗಿ ಬಿಡುವಿರಿ.
ಸ್ಲೋಗನ್:
ನೀವು ತಂದೆಯನ್ನು
ನಿಮ್ಮ ಜೊತೆಗಾರರನ್ನಾಗಿ ಮಾಡಿಕೊಳ್ಳುವಂತಹ ಮತ್ತು ಮಾಯೆಯ ಆಟವನ್ನು ಸಾಕ್ಷಿಯಾಗಿ
ನೋಡುವಂತಹವರಾಗಿರುವಿರಿ.