03.12.18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ
-
ಜ್ಞಾನ ಮತ್ತು
ಯೋಗದ ಜೊತೆ ಜೊತೆಗೆ ನಿಮ್ಮ ಚಲನೆಯೂ ಸಹ ಬಹಳ ಚೆನ್ನಾಗಿರಬೇಕು, ಒಳಗೆ ಯಾವುದೇ ಭೂತ ಇರಬಾರದು.
ಏಕೆಂದರೆ ನೀವು ಭೂತವನ್ನು ಹೊರ ತೆಗೆಯುವವರಾಗಿದ್ದೀರಿ”
ಪ್ರಶ್ನೆ:
ಸುಪುತ್ರ
ಮಕ್ಕಳಿಗೆ ಯಾವ ನಶೆಯು ಸ್ಥಿರವಾಗಿರಲು ಸಾಧ್ಯ?
ಉತ್ತರ:
ತಂದೆಯಿಂದ ನಾವು
ಡಬಲ್ ಕಿರೀಟಧಾರಿಗಳು, ವಿಶ್ವದ ಮಾಲೀಕರಾಗುವ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ನಶೆಯು
ಸುಪುತ್ರ ಮಕ್ಕಳಲ್ಲಿಯೇ ಸ್ಥಿರವಾಗಿರಲು ಸಾಧ್ಯ. ಆದರೆ ಕಾಮ-ಕ್ರೋಧದ ಭೂತ ಒಳಗಡೆಯಿದ್ದಾಗ ಈ
ನಶೆಯಿರಲು ಸಾಧ್ಯವಿಲ್ಲ. ಇಂತಹ ಮಕ್ಕಳು ನಂತರ ತಂದೆಗೆ ಗೌರವ ಇಡುವುದಿಲ್ಲ. ಆದ್ದರಿಂದ ಮೊದಲು
ಭೂತಗಳನ್ನು ಓಡಿಸಬೇಕಾಗಿದೆ. ತಮ್ಮ ಸ್ಥಿತಿಯನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ.
ಗೀತೆ:
ನನ್ನ ಮನದ
ಬಾಗಿಲಿನಲ್ಲಿ ಬಂದವರು ಯಾರು
ಓಂ ಶಾಂತಿ.
ನೀವು ಮಕ್ಕಳ ವಿನಃ ಮತ್ತ್ಯಾರೂ ಈ ಗೀತೆಯ ಅರ್ಥವನ್ನು ತಿಳಿಯಲು ಸಾಧ್ಯವಿಲ್ಲ. ಅದರಲ್ಲಿಯೂ ಸಹ
ನಂಬರ್ವಾರ್ ಪುರುಷಾರ್ಥದನುಸಾರ ಏಕೆಂದರೆ ಪರಮಪಿತ ಪರಮಾತ್ಮನಿಗೆ ಸ್ಥೂಲ ಇಲ್ಲವೆ ಸೂಕ್ಷ್ಮ
ಚಿತ್ರವಂತೂ ಇಲ್ಲ. ಸೂಕ್ಷ್ಮ ದೇವತೆಗಳಾಗಿದ್ದಾರೆ, ಅವರಂತೂ ಕೇವಲ ಮೂವರಾಗಿದ್ದಾರೆ. ಅವರಿಗಿಂತಲೂ
ಅತೀ ಸೂಕ್ಷ್ಮವಾಗಿರುವವರು ಪರಮಾತ್ಮ ಆಗಿದ್ದಾರೆ, ಈಗ ಹೇ ಪರಮಪಿತ ಪರಮಾತ್ಮ ಎಂದು ಯಾರು
ಹೇಳುತ್ತಾರೆ? ಆತ್ಮವು ಹೇಳುತ್ತದೆ. ಪರಮಪಿತ ಪರಮಾತ್ಮನಿಗೆ ಪರಮ ಆತ್ಮನೆಂದು ಹೇಳುತ್ತಾರೆ. ಲೌಕಿಕ
ತಂದೆಯನ್ನು ಆತ್ಮವು ಪರಮಪಿತನೆಂದು ಹೇಳಲು ಸಾಧ್ಯವಿಲ್ಲ. ಯಾವಾಗ ಪಾರಲೌಕಿಕ ಪರಮಪಿತ ಪರಮಾತ್ಮನನ್ನು
ನೆನಪು ಮಾಡುತ್ತಾರೆಯೋ ಅವರಿಗೇ ಆತ್ಮಾಭಿಮಾನಿಗಳೆಂದು ಹೇಳಲಾಗುತ್ತದೆ. ದೇಹದ ಜೊತೆ
ಸಂಬಂಧವನ್ನಿಡುವಂತಹ ತಂದೆಯ ನೆನಪು ಬಂದು ಬಿಡುತ್ತದೆ. ಆದರೆ ಇವರು ಆತ್ಮದ ಜೊತೆ
ಸಂಬಂಧವನ್ನಿಡುವಂತಹ ತಂದೆಯಾಗಿದ್ದಾರೆ. ಈಗ ಅವರು ಬಂದಿದ್ದಾರೆ. ಆತ್ಮವು ಬುದ್ಧಿಯಿಂದ
ಅರಿತುಕೊಳ್ಳುತ್ತದೆ. ಆತ್ಮದಲ್ಲಿಯೇ ಬುದ್ಧಿಯಿದೆಯಲ್ಲವೆ. ಅಂದಾಗ ಪರಮಪಿತ ಪರಮಾತ್ಮನು ಅವಶ್ಯವಾಗಿ
ಪಾರಲೌಕಿಕ ತಂದೆಯಾದರು. ಅವರಿಗೆ ಈಶ್ವರನೆಂದು ಕರೆಯಲಾಗುತ್ತದೆ. ಈಗ ತಂದೆಯು ಈ ಪ್ರಶ್ನಾವಳಿಯನ್ನು
ಮಾಡಿದ್ದಾರೆ. ಇದರ ಮೇಲೆ ತಿಳಿಸಲು ನೀವು ಮಕ್ಕಳಿಗೆ ಸಹಜವಾಗುವುದು. ಹೇಗೆ ಫಾರ್ಮ್ನ್ನು
ತುಂಬಿಸಲಾಗುತ್ತದೆಯೋ ಹಾಗೆಯೇ ನೀವು ಪ್ರಶ್ನೆಯನ್ನೂ ಕೇಳಬಹುದು. ಅವಶ್ಯವಾಗಿ ಯಾರು ಕೇಳುತ್ತಾರೆಯೋ
ಅವರು ಜ್ಞಾನಪೂರ್ಣರಾಗಿರುತ್ತಾರೆ. ಅಂದರೆ ಅವರು ಅವಶ್ಯವಾಗಿ ಶಿಕ್ಷಕರೇ ಆದರು. ಆತ್ಮವು ಶರೀರವನ್ನು
ಧಾರಣೆ ಮಾಡುತ್ತದೆ ಮತ್ತು ಕರ್ಮೇಂದ್ರಿಯಗಳಿಂದ ತಿಳಿಸುತ್ತದೆ. ಆದ್ದರಿಂದ ಮಕ್ಕಳು ಸಹಜವಾಗಿ
ತಿಳಿಸುವುದಕ್ಕೋಸ್ಕರ ಈ ಪ್ರಶ್ನಾವಳಿಯನ್ನು ತಯಾರಿಸಲಾಗಿದೆ. ಆದರೆ ಜ್ಞಾನವನ್ನು ತಿಳಿಸುವ ಮಕ್ಕಳ
ಸ್ಥಿತಿಯೂ ಸಹ ಬಹಳ ಚೆನ್ನಾಗಿರಬೇಕು. ಭಲೆ ಯಾರಲ್ಲಿಯಾದರೂ ಜ್ಞಾನವು ಬಹಳ ಚೆನ್ನಾಗಿರಬಹುದು, ಯೋಗವೂ
ಚೆನ್ನಾಗಿರಬಹುದು. ಆದರೆ ನಡವಳಿಕೆಯೂ ಸಹ ಚೆನ್ನಾಗಿರಬೇಕು. ಯಾರಲ್ಲಿ ಕಾಮ-ಕ್ರೋಧ, ಅಹಂಕಾರದ
ಭೂತವಿರುವುದಿಲ್ಲವೋ ಅವರದು ದೈವೀ ನಡವಳಿಕೆಯಾಗಿರುವುದು. ಏಕೆಂದರೆ ಇವು ದೊಡ್ಡ-ದೊಡ್ಡ ಭೂತಗಳಾಗಿವೆ.
ನೀವು ಮಕ್ಕಳಲ್ಲಿ ಯಾವುದೇ ಭೂತವಿರಬಾರದು. ನಾವು ಭೂತಗಳನ್ನು ಹೊರ ತೆಗೆಯುವವರಾಗಿದ್ದೇವೆ. ಅಶುದ್ಧ
ಆತ್ಮರು, ಯಾರು ಅಲೆದಾಡುತ್ತಿರುತ್ತಾರೆಯೋ ಅವರಿಗೆ ಭೂತವೆಂದು ಹೇಳಲಾಗುತ್ತದೆ. ಆ ಭೂತಗಳನ್ನು
ತೆಗೆಯುವುದಕ್ಕಾಗಿ ಮಾಂತ್ರಿಕರಿರುತ್ತಾರೆ. ಈ ಯಾವ ಪಂಚ ವಿಕಾರರೂಪಿ ಭೂತವಿದೆಯೋ, ಇದನ್ನು ಪರಮಪಿತ
ಪರಮಾತ್ಮನ ವಿನಃ ಮತ್ತ್ಯಾರೂ ಹೊರ ತೆಗೆಯಲು ಸಾಧ್ಯವಿಲ್ಲ. ಸರ್ವರ ಭೂತಗಳನ್ನು ತೆಗೆಯುವವರು ಒಬ್ಬರೇ
ಆಗಿದ್ದಾರೆ. ಸರ್ವರ ಸದ್ಗತಿ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ. ರಾವಣನಿಂದ ಬಿಡುಗಡೆ ಮಾಡುವವರೂ
ಒಬ್ಬರೆ ಆಗಿದ್ದಾರೆ. ಇವು ದೊಡ್ಡ ಭೂತಗಳಾಗಿವೆ. ಇವರಲ್ಲಿ ಕ್ರೋಧದ ಭೂತವಿದೆ, ಇವರಲ್ಲಿ ಮೋಹದ
ಮತ್ತು ಅಶುದ್ಧ ಅಹಂಕಾರದ ಭೂತವಿದೆಯೆಂದು ಹೇಳಲಾಗುತ್ತದೆ. ಎಲ್ಲರನ್ನು ಈ ಭೂತಗಳಿಂದ ಬಿಡಿಸುವಂತಹ
ಮುಕ್ತಿದಾತ ಪರಮಪಿತ ಪರಮಾತ್ಮನೂ ಒಬ್ಬರೇ ಆಗಿದ್ದಾರೆ. ನಿಮಗೆ ಗೊತ್ತಿದೆ - ಈ ಸಮಯದಲ್ಲಿ
ಎಲ್ಲರಿಗಿಂತ ಶಕ್ತಿಶಾಲಿಗಳು ಕ್ರಿಶ್ಚಿಯನ್ನರಾಗಿದ್ದಾರೆ. ಅವರ ಆಂಗ್ಲ ಭಾಷೆಯ ಶಬ್ಧಗಳು ಬಹಳ
ಚೆನ್ನಾಗಿವೆ. ಯಾರು ರಾಜರಿರುತ್ತಾರೆಯೋ ಅವರು ತಮ್ಮ ಭಾಷೆಯನ್ನೇ ನಡೆಸುತ್ತಾರೆ. ದೇವತೆಗಳ
ಭಾಷೆಯನ್ನು ಯಾರೂ ತಿಳಿದುಕೊಂಡಿಲ್ಲ. ಮಕ್ಕಳು ಮೊದಲು ಎಲ್ಲವನ್ನು ಬಂದು ತಿಳಿಸುತ್ತಿದ್ದರು. 2-4
ದಿನಗಳ ಕಾಲ ಧ್ಯಾನದಲ್ಲಿಯೇ ಇರುತ್ತಿದ್ದರು. ಈಗ ಯಾರಾದರೂ ಬುದ್ಧಿವಂತ ಸಂದೇಶಿಯರು ಅಲ್ಲಿನ ಭಾಷೆ
ನೋಡಿ ಹೇಳುವಂತಿರಬೇಕು. ನೀವು ಮಕ್ಕಳು ಎಲ್ಲರಿಗೆ ಭಾರತದ ಕಥೆಯನ್ನು ತಿಳಿಸಿ, ಭಾರತವು
ಸತೋಪ್ರಧಾನವಾಗಿತ್ತು, ಈಗ ತಮೋಪ್ರಧಾನ ಪೂಜ್ಯ ಭಾರತವೇ ಪೂಜಾರಿಯಾಗಿದೆ. ಭಾರತದಲ್ಲಿ ದೇವತೆಗಳ
ಅನೇಕ ಚಿತ್ರಗಳಿವೆ, ಅಂಧಶ್ರದ್ಧೆಯಿಂದ ಪೂಜಿಸುತ್ತಾರೆ. ಅವರ ಜೀವನ ಚರಿತ್ರೆಯನ್ನು
ತಿಳಿದುಕೊಂಡಿಲ್ಲ. ನಾವೆಲ್ಲರೂ ಪಾತ್ರಧಾರಿಗಳಾಗಿದ್ದೇವೆ ಅಂದಮೇಲೆ ನಾಟಕದ ನಿರ್ದೇಶಕ ಮೊದಲಾದವರ
ಬಗ್ಗೆ ತಿಳಿಯಬೇಕು. ಆದ್ದರಿಂದ ಪ್ರಶ್ನಾವಳಿಯನ್ನು ಮಾಡಲಾಗಿದೆ. ಪೋಪರಿಗೂ ಬರೆಯಬೇಕು - ನೀವು
ಅನುಯಾಯಿಗಳಿಗೆ ಈ ವಿನಾಶದ ವಸ್ತುಗಳನ್ನು ನಿಲ್ಲಿಸಿ ಎಂದು ಹೇಳುತ್ತಿದ್ದೀರಿ. ಅಂದಮೇಲೆ
ನಿಮ್ಮದನ್ನು ಇವರೆಲ್ಲರೂ ಏಕೆ ಒಪ್ಪುತ್ತಿಲ್ಲ. ತಾವಂತೂ ಎಲ್ಲರ ಗುರುವಾಗಿದ್ದೀರಿ, ನಿಮ್ಮದು ಬಹಳ
ಮಹಿಮೆಯಿದೆ. ಆದರೂ ಸಹ ಇವರು ಏಕೆ ಒಪ್ಪುತ್ತಿಲ್ಲ? ಕಾರಣ ಅದನ್ನು ನೀವೇ ತಿಳಿದುಕೊಂಡಿಲ್ಲ.
ಆದ್ದರಿಂದ ನಾವು ನಿಮಗೆ ತಿಳಿಸುತ್ತೇವೆ. ಇದ್ಯಾವುದೇ ನಿಮ ಮತದಂತಿಲ್ಲ, ಇದನ್ನು ಈಶ್ವರೀಯ
ಮತದನುಸಾರ ಮಾಡುತ್ತಿದ್ದೇವೆ. ಸ್ವರ್ಗದ ಸ್ಥಾಪನೆಯು ಆದಿದೇವ-ಆದಿದೇವಿಯ ಮೂಲಕ ಆಗುತ್ತದೆ.
ಜ್ಞಾನಸಾಗರನು ಪರಮಾತ್ಮನಾಗಿದ್ದಾರೆ, ಅವರು ಗುಪ್ತವಾಗಿದ್ದಾರೆ. ಅವಶ್ಯವಾಗಿ ಅವರ ಸೇನೆಯೂ ಸಹ ಅವರ
ಮತದಂತೆ ನಡೆಯುವಂತದ್ದೇ ಆಗಿರುವುದು. ಹೀಗೀಗೆ ತಿಳಿಸಬೇಕು, ಆದರೆ ಮಕ್ಕಳು ಇಷ್ಟೊಂದು ವಿಶಾಲ
ಬುದ್ಧಿಯವರಾಗಿಲ್ಲ. ಆದ್ದರಿಂದ ಸ್ಕ್ರೂವನ್ನು ಬಿಗಿ ಮಾಡಬೇಕಾಗಿದೆ. ಹೇಗೆ ಇಂಜಿನ್ ತಣ್ಣಗಾದರೆ
ಅದನ್ನು ಬಿಸಿ ಮಾಡಲು ಇದ್ದಿಲನ್ನು ಹಾಕುತ್ತಾರೆ. ಹಾಗೆಯೇ ಇವೂ ಸಹ ಜ್ಞಾನದ ಇದ್ದಿಲಾಗಿದೆ.
ಪರಮಪಿತ ಪರಮಾತ್ಮ ಎಲ್ಲರಿಗಿಂತ ಹಿರಿಯರಾಗಿದ್ದಾರೆ, ಎಲ್ಲರೂ ಅವರಿಗೆ ನಮಸ್ಕಾರ ಮಾಡಲು ಬರುತ್ತಾರೆ.
ಪೋಪನನ್ನೂ ಸಹ ಎಲ್ಲರೂ ಶಕ್ತಿಶಾಲಿ ಎಂದು ತಿಳಿಯುತ್ತಾರೆ. ಅವರಿಗೆ ಎಷ್ಟು ಗೌರವವನ್ನು
ಕೊಡುತ್ತಾರೆಯೋ ಅಷ್ಟು ಮತ್ತ್ಯಾರಿಗೂ ಕೊಡುವುದಿಲ್ಲ. ತಂದೆಯನ್ನು ತಿಳಿದುಕೊಂಡಿಲ್ಲ. ಅವರಂತೂ
ಗುಪ್ತವಾಗಿದ್ದಾರೆ. ಅವರನ್ನು ಕೇವಲ ಮಕ್ಕಳೇ ತಿಳಿದುಕೊಂಡಿದ್ದಾರೆ ಮತ್ತು ಗೌರವ ಕೊಡುತ್ತಾರೆ.
ಆದರೆ ತಂದೆಗೆ ಗೌರವ ಕೊಡಲೂ ಸಹ ಮಾಯೆಯು ಬಿಡುವುದಿಲ್ಲ. ತಂದೆಯು ಮಕ್ಕಳನ್ನು ವಿಶ್ವದ
ಮಾಲೀಕರನ್ನಾಗಿ ಮಾಡುತ್ತಾರೆ, ಈ ನಶೆಯು ಹೊರಗಡೆ ಹೋದಾಗ ಸಮಾಪ್ತಿಯಾಗಿ ಬಿಡುತ್ತದೆ. ನಾವು
ತಂದೆಯಿಂದ ಡಬಲ್ ಕಿರೀಟದ ಆಸ್ತಿಯನ್ನೇಕೆ ಪಡೆಯುವುದಿಲ್ಲ, ಇದು ಸುಪುತ್ರ ಮಕ್ಕಳ ನಶೆಯಾಗಿದೆ. ಆದರೆ
ಬಹಳ ಮಕ್ಕಳು ಹೀಗಿದ್ದಾರೆ, ಅವರಿಗೆ ಕಾಮ-ಕ್ರೋಧ, ಲೋಭದ ಭೂತವು ಬಂದು ಬಿಡುತ್ತದೆ. ತಂದೆಯು
ಮುರುಳಿಯನ್ನು ನುಡಿಸುತ್ತಾರೆಂದರೆ ಆಂತರ್ಯದಲ್ಲಿ ಬರುತ್ತದೆ - ಇಲ್ಲಿಯವರೆಗೆ ನಮ್ಮಲ್ಲಿ ಕಾಮದ
ಹಗುರ ನಶೆಯಿದೆ. ಒಂದುವೇಳೆ ಒಂದುಕಡೆ ಶಕ್ತಿಶಾಲಿಯಾಗಿದ್ದರೆ ಏನೂ ಆಗಲು ಸಾಧ್ಯವಿಲ್ಲ. ಒಂದು ಕಡೆ
ಸ್ತ್ರೀ ಶಕ್ತಿಶಾಲಿಯಾಗಿರುತ್ತಾರೆ, ಇನ್ನೊಂದು ಕಡೆ ಪುರುಷ. ತಂದೆಯ ಬಳಿ ಎಲ್ಲಾ ಪ್ರಕಾರದ
ಸಮಾಚಾರಗಳು ಬರುತ್ತವೆ. ಕೆಲವರು ಸತ್ಯ ಹೃದಯದಿಂದ ಬರೆಯುತ್ತಾರೆ. ಒಳಗೆ-ಹೊರಗಿನ ಸ್ವಚ್ಛತೆ ಬೇಕು.
ಕೆಲವರು ಹೊರಗೆ ಸತ್ಯ, ಒಳಗಡೆ ಅಸತ್ಯವಾಗಿರುತ್ತಾರೆ. ಅನೇಕರಿಗೆ ಬಿರುಗಾಳಿಗಳು ಬರುತ್ತವೆ, ಬಾಬಾ
ಇಂದು ನನಗೆ ಕಾಮದ ಬಿರುಗಾಳಿಯು ಬಂದಿತು. ಆದರೆ ಬಚಾವ್ ಆಗಿ ಬಿಟ್ಟೆನೆಂದು ಬರೆಯುತ್ತಾರೆ.
ಒಂದುವೇಳೆ ಹೀಗೆ ಬರೆಯದಿದ್ದರೆ ಒಂದು ದಂಡನೆ, ಇನ್ನೊಂದು ಅಭ್ಯಾಸ ವೃದ್ಧಿಯಾಗುತ್ತಾ ಹೋಗುವುದು.
ಕೊನೆಗೆ ಬಿದ್ದು ಹೋಗುವಿರಿ. ತಂದೆಗೆ ಮಕ್ಕಳಲ್ಲಿ ಬಹಳ ಭರವಸೆಯಿರುತ್ತದೆಯಲ್ಲವೆ. ಸ್ವಲ್ಪ
ಗ್ರಹಚಾರಿಯು ಬರುತ್ತದೆ, ಅದು ಇಳಿದು ಹೋಗುತ್ತದೆ. ಕೆಲವರು ಇಂದು ಚೆನ್ನಾಗಿ ನಡೆಯುತ್ತಿದ್ದಾರೆ,
ನಾಳೆ ಮೂರ್ಛಿತರಾಗಿ ಬಿಡುತ್ತಾರೆ ಅಥವಾ ಗಂಟಲು ಕಟ್ಟುತ್ತದೆ. ಅಂದಾಗ ಅವಶ್ಯವಾಗಿ ಯಾವುದೋ
ಉಲ್ಲಂಘನೆ ಮಾಡುತ್ತಾರೆ. ಪ್ರತಿಯೊಂದು ಮಾತಿನಲ್ಲಿ ಸತ್ಯವಾಗಿರಬೇಕು. ಆಗಲೇ ಸತ್ಯಖಂಡದ
ಮಾಲೀಕರಾಗುತ್ತೀರಿ. ಅಸತ್ಯವನ್ನು ಹೇಳುತ್ತೀರೆಂದರೆ ಖಾಯಿಲೆಯೂ ಸಹ ವೃದ್ಧಿಯಾಗುತ್ತಾ ನಷ್ಟಗೊಳಿಸಿ
ಬಿಡುವುದು. ಮಕ್ಕಳು ಬಹಳ ಯುಕ್ತಿಯಿಂದ ಪ್ರಶ್ನಾವಳಿಯನ್ನು ಬರೆಯಬೇಕು - ಪರಮಪಿತ ಪರಮಾತ್ಮನೊಂದಿಗೆ
ನಿಮ್ಮ ಸಂಬಂಧವೇನು? ಯಾವಾಗ ತಂದೆಯಾಗಿದ್ದಾರೆ. ಅಂದಮೇಲೆ ಸರ್ವವ್ಯಾಪಿಯ ಮಾತಿಲ್ಲ. ಅವರು ಸರ್ವರ
ಸದ್ಗತಿದಾತನಾಗಿದ್ದಾರೆ, ಪತಿತ-ಪಾವನನಾಗಿದ್ದಾರೆ, ಗೀತೆಯ ಭಗವಂತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ
ಎಂದಾದರೂ ಬಂದು ಜ್ಞಾನವನ್ನು ಕೊಟ್ಟಿರಬೇಕು. ಒಂದುವೇಳೆ ಈ ಮಾತಿದೆಯೆಂದರೆ ಅವರ ಜೀವನ ಕಥೆಯನ್ನು
ತಿಳಿದುಕೊಂಡಿದ್ದೀರಾ? ತಿಳಿದುಕೊಂಡಿಲ್ಲವೆಂದರೆ ಆಸ್ತಿಯು ಸಿಗಲು ಸಾಧ್ಯವಿಲ್ಲ. ತಂದೆಯಿಂದ
ಅವಶ್ಯವಾಗಿ ಆಸ್ತಿಯು ಸಿಗುವುದು. ನಂತರ ಎರಡನೆಯ ಪ್ರಶ್ನೆಯನ್ನು ಕೇಳಿ - ಪ್ರಜಾಪಿತ ಬ್ರಹ್ಮಾ ಹಾಗೂ
ಅವರ ಮುಖವಂಶಾವಳಿಯನ್ನು ಅರಿತುಕೊಂಡಿದ್ದೀರಾ? ಯಾರ ಹೆಸರು ಸರಸ್ವತಿಯಾಗಿದೆಯೋ ಅವರು
ಜ್ಞಾನಜ್ಞಾನೇಶ್ವರಿಯಾಗಿದ್ದಾರೆ ಹಾಗೂ ವಿದ್ಯಾದೇವತೆಯಾಗಿದ್ದಾರೆ, ಇವರು ಜಗದಂಬೆಯಾಗಿದ್ದಾರೆ.
ಅಂದಾಗ ಅವಶ್ಯವಾಗಿ ಅವರ ಮಕ್ಕಳೂ ಇರುತ್ತಾರೆ, ತಂದೆಯೂ ಇರುವರು. ಜ್ಞಾನವನ್ನು ಕೊಡುವವರು ಆ
ತಂದೆಯಾದರು. ಈಗ ಈ ಪ್ರಜಾಪಿತ ಮತ್ತು ಜಗದಂಬೆ ಯಾರು? ಅವರಿಗೆ ಧನಲಕ್ಷ್ಮಿ ಎಂದು ಹೇಳುತ್ತಾರೆ, ಆಗ
ಜ್ಞಾನ ಜ್ಞಾನೇಶ್ವರಿಯಲ್ಲ. ಈ ಬ್ರಹ್ಮಾ-ಸರಸ್ವತಿ ರಾಜರಾಜೇಶ್ವರಿಯಾಗುತ್ತಾರೆ, ಅಂದಾಗ ಅವರ ಮಕ್ಕಳೂ
ಸಹ ಅವಶ್ಯವಾಗಿ ಸ್ವರ್ಗದ ಮಾಲೀಕರಾಗುತ್ತಾರೆ. ಈಗ ಇದು ಸಂಗಮ, ಕುಂಭವಾಗಿದೆ. ಈ ಕುಂಭಮೇಳದಲ್ಲಿ
ನೋಡಿ ಏನಾಗುತ್ತದೆ, ಭಕ್ತಿಮಾರ್ಗದ ಅರ್ಥ ಮತ್ತು ಇದರಲ್ಲಿ ರಾತ್ರಿ-ಹಗಲಿನ ಅಂತರವಿದೆ. ಅದು ನೀರಿನ
ನದಿಗಳು ಮತು ಸಾಗರದ ಮೇಳವಾಗಿದೆ. ಇವರು ಮಾನವ ಗಂಗೆಯರು ಜ್ಞಾನ ಸಾಗರನಿಂದ ಜನ್ಮ ಪಡೆಯುತ್ತಾರೆ,
ಇದು ಅವರ ಮೇಳವಾಗಿದೆ. ಈ ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ. ಪತಿತರಿಂದ ಪಾವನರನ್ನಾಗಿ ಮಾಡುವವರು
ಯಾರು? ಇದಂತೂ ತಿಳಿದುಕೊಳ್ಳುವ ಮಾತುಗಳಾಗಿವೆಯಲ್ಲವೆ. ಆದ್ದರಿಂದಲೇ ಕೇಳುತ್ತಾರೆ. ಈ ಮಾತಾಪಿತರ
ಜ್ಞಾನದಿಂದ ನೀವು ರಾಜರಾಜೇಶ್ವರಿಯಾಗುತ್ತೀರಿ. ಈಶ್ವರನನ್ನು ಸರ್ವವ್ಯಾಪಿ ಎಂದು ಹೇಳುವುದರಿಂದ
ಬಾಯಿಯು ಮಧುರವಾಗುತ್ತದೆಯೇ? ಈಗ ನಿಮಗೆ ಭಕ್ತಿಯ ಫಲವಾದ ಜ್ಞಾನವು ಸಿಗುತ್ತದೆ. ಈಗ ಭಗವಂತನು
ಓದಿಸುತ್ತಾರೆಂದಮೇಲೆ ಅಲ್ಲಿ-ಇಲ್ಲಿ ಮೋಸ ಹೋಗುವುದು ನಿಂತು ಹೋಗುತ್ತದೆ. ಮಕ್ಕಳೇ ಅಶರೀರಿಯಾಗಿ,
ಆತ್ಮಕ್ಕೆ ಜ್ಞಾನ ಸಿಕ್ಕಿದೆ, ಆತ್ಮ ಹೇಳುತ್ತಿದೆ. ತಂದೆಯು ತಿಳಿಸುತ್ತಾರೆ, ನಾವು ಹಿಂತಿರುಗಿ
ತಂದೆಯ ಬಳಿ ಹೋಗಬೇಕಾಗಿದೆ. ನಂತರ ಪ್ರಾಲಬ್ಧವಿದೆ. ರಾಜಧಾನಿಯು ಸ್ಥಾಪನೆಯಾಗಿ ಬಿಡುತ್ತದೆ. ಇವು
ಎಷ್ಟೊಂದು ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಪ್ರಶ್ನಾವಳಿಯು ಎಷ್ಟೊಂದು ಚೆನ್ನಾಗಿದೆ. ಇದು
ಎಲ್ಲರ ಜೇಬಿನಲ್ಲಿ ಅವಶ್ಯವಾಗಿ ಇರಬೇಕು. ಸೇವಾಧಾರಿ ಮಕ್ಕಳೇ ಈ ಮಾತುಗಳ ಮೇಲೆ ಮನನ ಮಾಡುತ್ತಾರೆ.
ಮಕ್ಕಳಿಗಾಗಿ ತಂದೆಯು ಎಷ್ಟೊಂದು ಪರಿಶ್ರಮ ಪಡಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ,
ತಮ್ಮ ಭವಿಷ್ಯವನ್ನು ಶ್ರೇಷ್ಠ ಮಾಡಿಕೊಳ್ಳಿ, ಇಲ್ಲವೆಂದರೆ ಕಲ್ಪ-ಕಲ್ಪವೂ ಪದವಿಯು ಕಡಿಮೆಯಾಗಿ
ಬಿಡುವುದು. ಹೇಗೆ ಈ ಬಾಬಾರವರು ಮಹಾರಾಜ-ಮಹಾರಾಣಿಯಾಗುತ್ತಾರೆ ಹಾಗೆಯೇ ಮಕ್ಕಳೂ ಸಹ ಆಗಬೇಕು ಆದರೆ
ತಮ್ಮಲ್ಲಿ ನಿಶ್ಚಯವಿರಬೇಕು. ರಾಜರಲ್ಲಿಯೂ ಬಹಳ ಶಕ್ತಿಯಿರುತ್ತದೆ, ಅಲ್ಲಂತೂ ಸುಖವೇ ಸುಖವಿರುತ್ತದೆ
ಮತ್ತು ಯಾರು ರಾಜರಾಗುತ್ತಾರೆಯೋ ಅವರೂ ಸಹ ಈಶ್ವರಾರ್ಥವಾಗಿ ದಾನ-ಪುಣ್ಯ ಮಾಡುವುದರಿಂದ. ರಾಜನ
ಆಜ್ಞೆಯಂತೆ ಎಲ್ಲಾ ಪ್ರಜೆಗಳು ನಡೆಯುತ್ತಾರೆ. ಈ ಸಮಯದಲ್ಲಂತೂ ಭಾರತವಾಸಿಗಳಿಗೆ ಯಾರೂ ರಾಜರಿಲ್ಲ.
ಇದು ಪಂಚಾಯಿತಿ ರಾಜ್ಯವಾಗಿದೆ. ಆದ್ದರಿಂದಲೇ ಎಷ್ಟೊಂದು ಬಲಹೀನರಾಗಿದ್ದಾರೆ. ತಂದೆಗೆ ಗೊತ್ತಿದೆ,
ಅನೇಕ ಮಕ್ಕಳಿಗೆ ಬಿರುಗಾಳಿಯು ಬರುತ್ತದೆ. ಆದರೆ ಸಮಾಚಾರವನ್ನು ತಿಳಿಸುವುದಿಲ್ಲ. ತಂದೆಗೆ
ಬರೆಯಬೇಕು - ಬಾಬಾ, ಇಂತಹ ಬಿರುಗಾಳಿಗಳು ಬರುತ್ತವೆ, ತಾವೇ ಸಲಹೆಯನ್ನು ತಿಳಿಸಬೇಕು. ಆಗ ತಂದೆಯು
ಪರಿಸ್ಥಿತಿಯನ್ನು ನೋಡಿ ಸಲಹೆಯನ್ನು ತಿಳಿಸುತ್ತಾರೆ. ಬರೆಯುವುದೂ ಇಲ್ಲ ಅಥವಾ ಅವರ ಜೊತೆಗಾರರೂ ಸಹ
ಸಮಾಚಾರವನ್ನು ಬಾಬಾ ನಮ್ಮ ಜೊತೆಗಾರರು ಈ ರೀತಿಯಾಗಿ ಬಿಟ್ಟಿದ್ದಾರೆಂದು ತಿಳಿಸುವುದಿಲ್ಲ.
ತಂದೆಗಂತೂ ಸಮಾಚಾರವನ್ನು ತಿಳಿಸಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ರಾತ್ರಿ ಕ್ಲಾಸ್
11.1.1969
ಬೇಹದ್ದಿನ ತಂದೆ ಬಂದು ತಿಳಿಸುತ್ತಾರೆ, ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ, ರಾಜ್ಯ ಪದವಿಗಾಗಿ
ಲಕ್ಷ್ಯ ಕೊಡುತ್ತಾರೆ, ಪವಿತ್ರರನ್ನಾಗಿಯೂ ಮಾಡುತ್ತಾರೆ. ತಂದೆ ಬಹಳ ಸಹಜ ರೀತಿಯಲ್ಲಿ ತನ್ನ ಹಾಗೂ
ಆಸ್ತಿಯ ಪರಿಚಯವನ್ನು ತಿಳಿಸುತ್ತಾರೆ. ನೀವಾಗಿಯೇ ತಿಳಿಯಲು ಸಾಧ್ಯವಿಲ್ಲ. ಬೇಹದ್ದಿನ ತಂದೆಯಿಂದ
ಖಂಡಿತವಾಗಿ ಬೇಹದ್ಧಿ ಆಸ್ತಿ ಸಿಗುವುದು - ಇದೂ ಸಹಾ ಒಳ್ಳೆ ಬುದ್ಧಿವಂತರೇ ತಿಳಿಯುತ್ತಾರೆ. ತಂದೆ
ಏನು ಆಸ್ತಿ ಕೊಡುತ್ತಾರೆ? ಮನೆಯ, ವಿದ್ಯೆಯ ಮತ್ತು ಸ್ವರ್ಗದ ಬಾದ್ಷಾಹಿಯ ಆಸ್ತಿಯನ್ನು ಕೊಟ್ಟು
ಬಿಡುತ್ತಾರೆ. ಯಾರು ಪವಿತ್ರ ದೈವೀ ಸಂಪ್ರದಾಯದವರಾಗುತ್ತಾರೆ ಅವರೇ ರಾಜಧಾನಿಯಲ್ಲಿ ಬರುತ್ತಾರೆ.
ಯಾರು ಎಷ್ಟು ಓದುತ್ತಾರೆ, ಓದಿಸುತ್ತಾರೆ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಇಷ್ಟು
ಮಕ್ಕಳಿದ್ದಾರೆ, ತಂದೆಯಿಂದ ಆಸ್ತಿಯನ್ನು ಪಡೆಯುತ್ತಾರೆ. ತಂದೆ ಸ್ವರ್ಗದ ಮಾಲೀಕ, ನರನಿಂದ
ನಾರಾಯಣರನ್ನಾಗಿ ಮಾಡುತ್ತಾರೆ. ಇವರು ರಾಜ್ಯಭಾಗ್ಯದ ಮಾಲೀಕರಾಗಿದ್ದಾರೆ. ಯಾರು ಬೇಹದ್ದಿನ ತಂದೆ
ಸ್ವಗ್ದ ರಚೈತಾಗಿದ್ದಾರೆ. ನಾವು ಅವರ ಮಕ್ಕಳು ಸ್ವರ್ಗದ ಬಾದ್ಷಾಹಿ ಪಡೆಯುವೆವು, ಯಥಾ ರಾಜಾ ರಾಣಿ
ತಥಾ ಪ್ರಜಾ.... ಎಷ್ಟು ಪುರುಷಾರ್ಥ ಮಾಡುವಿರಿ. ಅಷ್ಟೇ ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಇದು
ರಾಜ್ಯ ಭಾಗ್ಯಕ್ಕಾಗಿ ಪುರುಷಾರ್ಥವಾಗಿದೆ. ಸತ್ಯಯುಗದ ರಾಜ್ಯಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಯಾರು
ಎಷ್ಟು ಪುರುಷಾರ್ಥ ಮಾಡುತ್ತಾರೆ ಅಷ್ಟೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಪುರುಷಾರ್ಥದ ಮೇಲೆ
ಪ್ರಾರಬ್ಧ ಅವಲಂಬಿತವಾಗಿರುತ್ತದೆ. ಇದನ್ನು ಮಕ್ಕಳು ತಿಳಿದಿದ್ದೀರಿ, ಎಷ್ಟು ಪುರುಷಾರ್ಥ ಮಾಡುವೆವು
ಎಂದು. ಪುರುಷಾರ್ಥದಿಂದಲೇ ಬಾದ್ಷಾಹಿ ಸಿಗುವುದು. ತಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು
ನೆನಪು ಮಾಡಿದಾಗ ತಮೋಪ್ರಧಾನರಿಂದ ಸತೋಪ್ರಾಧಾನ, ಶುದ್ಧ ಚಿನ್ನ ಆಗಿ ಬಿಡುವಿರಿ. ರಾಜ್ಯಭಾಗ್ಯವೂ
ಸಹಾ ಸಿಗುವುದು. ಯಾವ ರೀತಿ ಇಲ್ಲಿ ಹೇಳುವರು ನಾವು ಭಾರತದ ಮಾಲೀಕರು ಎಂದು. ಮಾಲೀಕರಂತೂ ಎಲ್ಲರೂ
ಆಗುವರು ಆದರೆ ಪದವಿ ಏನು ಪಡೆಯುವಿರಿ? ವಿದ್ಯೆಯ ನಂತರ ಸ್ವರ್ಗದಲ್ಲಿ ನಮ್ಮ ಪದವಿ ಏನಿರುತ್ತದೆ.
ನೀವು ಈಗ ಸಂಗಮದಲ್ಲಿ ಓದುವಿರಿ, ಸತ್ಯಯುಗದಲ್ಲಿ ರಾಜ್ಯಭಾಗ್ಯ ಮಾಡುವಿರಿ. ತಂದೆ ಯೋಗವನ್ನೂ ಸಹ
ಕಲಿಸುತ್ತಾರೆ, ಓದಿಸುತ್ತಲೂ ಇದ್ದಾರೆ. ನೀವು ತಿಳಿದಿರುವಿರಿ, ನಾವು ರಾಜಯೋಗವನ್ನು
ಕಲಿಯುತ್ತಿರುವೆವು ಎಂದು. ತಂದೆಯ ನೆನಪಿನಿಂದ ಪಾವನ ಸಹ ಆಗುವಿರಿ, ಮತ್ತೆ ನಮ್ಮ ಪುನರ್ಜನ್ಮ ಈ
ರಾವಣ ರಾಜ್ಯದಲ್ಲಿ ಇಲ್ಲ, ರಾಮರಾಜ್ಯದಲ್ಲಾಗುವುದು. ಈಗ ನಾವು ಓದುತ್ತಿದ್ದೇವೆ - ಮನ್ಮನಾಭವ,
ಮಧ್ಯಾಜಿ ಭವ. ಈಗ ಕಲಿಯುಗದ ಅಂತ್ಯವಾಗಿದೆ, ನಂತರ ಸತ್ಯಯುಗ ಸ್ವರ್ಗ ಖಂಡಿತ ಬರುವುದು. ತಂದೆ
ಸಂಗಮಯುಗದಲ್ಲಿಯೇ ಬಂದು ಬೇಹದ್ಧಿನ ಪಾಠಶಾಲೆಯನ್ನು ತೆರೆಯುತ್ತಾರೆ, ಎಲ್ಲಿ ಬೇಹದ್ದಿನ ವಿದ್ಯಾ
ಆಗಿದೆ, ಬೇಹದ್ದಿನ ಬಾದ್ಷಾಹಿ ಪಡೆಯುವುದಕೋಸ್ಕರ. ನೀವು ತಿಳಿದಿರುವಿರಿ ಈಗ ನಾವು ಹೊಸ ಪ್ರಪಂಚಕ್ಕೆ
ಮಾಲೀಕರಾಗುವೆವು. ಹೊಸ ಪ್ರಪಂಚಕ್ಕೆ ಸ್ವರ್ಗ ಎಂದು ಕರೆಯಲಾಗುವುದು, ನಶೆ ಏರುವುದಲ್ಲವೆ. ಪೂರ್ತಿ
ಹಳೆಯ ಪ್ರಪಂಚದ ನಂತರವಾಗಿದೆ ಹೊಸ ಪ್ರಪಂಚ. ಮಕ್ಕಳಿಗೆ ನೆನಪಿಗೆ ಬರುವುದೇ. ಎಲ್ಲಾ ಮಕ್ಕಳ
ಹೃದಯದಲ್ಲಿದೆ - ಸ್ವರ್ಗದ ಮಾಲೀಕರನ್ನಾಗಿ ಮಾಡಲು ಪರಮಪಿತ ಪರಮಾತ್ಮ ಓದಿಸುತ್ತಿದ್ದಾರೆ. ಮಕ್ಕಳಿಗೆ
ಇದು ನೆನಪಿರಲಿ ನಮಗೆ ಭಗವಮತ ಓದಿಸುತ್ತಿದ್ದಾನೆ, ಶ್ರೇಷ್ಠಾತಿ ಶ್ರೇಷ್ಠ ಸತ್ಯಯುಗದ ರಾಜಾ-ರಾಣಿ
ಆಗುವೆವು. ರಾಜಯೋಗದ ಮುಖಾಂತರ ರಾಜ್ಯಭಾಗ್ಯ ಸಿಗುತ್ತದೆ, ಅದರಲ್ಲಿ ಪವಿತ್ರತೆ, ಸುಖ, ಶಾಂತಿ
ಎಲ್ಲವೂ ಇರುತ್ತದೆ. ಈ ಬಾಬಾರವರಲ್ಲಿ ಶಿವಬಾಬಾ ಅವತರಿತರಾಗಿದ್ದಾರೆ. ಅವರಾಗಿದ್ದಾರೆ ಶ್ರೇಷ್ಠಾತಿ
ಶ್ರೇಷ್ಠ. ಆತ್ಮ ಅನುಭವವನ್ನು ತೆಗೆದುಕೊಂಡು ಹೋಗುವುದು. ಅಲ್ಲಿ ಹೋದಾಗ ಅಲ್ಲಿ ಕುಳಿತುಕೊಳ್ಳುವ
ಸ್ಥಾನ ಬಹಳ ಶ್ರೇಷ್ಠವಾಗಿರುವುದು. ವಿಧ್ಯಾರ್ಥಿಗಳ ಸ್ಥಾನ ತಮ್ಮ-ತಮ್ಮದೇ ಆಗಿರುತ್ತದೆ. ಒಬ್ಬರ
ಸ್ಥಾನದಲ್ಲಿ ಇನ್ನೊಬ್ಬರು ಕುಳಿತುಕೊಳ್ಳುವಂತಿಲ್ಲ. ಒಬ್ಬರ ಪಾತ್ರ ಇನ್ನೊಬ್ಬರದರ ಜೊತೆ
ಹೊಂದಾಣಿಕೆಯಾಗುವುದಿಲ್ಲ. ತಂದೆ ತಿಳಿಸಿದ್ದಾರೆ, ಆತ್ಮದಲ್ಲಿ ರಿಕಾರ್ಡ್ತುಂಬಲ್ಪಟ್ಟಿದೆ ಎಂದು.
ಡ್ರಾಮಾದ ಪ್ಲಾನ್ ಅನುಸಾರ ನಮ್ಮ ಪುರುಷಾರ್ಥ ನಡೆಯುತ್ತಿದೆ, ಕೆಲವರು ರಾಜಾ ಕೆಲವರು ರಾಣಿ ಆಗುವರು.
ಅಂತ್ಯದಲ್ಲಿ ಪುರುಷಾರ್ಥದ ಫಲಿತಾಂಶ ಹೊರ ಬೀಳುತ್ತದೆ, ಆಮೇಲೆ ನಂತರ ಮಾಲೆ ತಯಾರಾಗುವುದು. ಉನ್ನತ
ನಂಬರ್ ನವರಿಗೆ ಖಂಡಿತವಾಗಿ ತಿಳಿಯುತ್ತದೆ. ಶರೀರ ಬಿಟ್ಟ ನಂತರ ತಿಳಿಸಲಾಗುವುದು - ಆತ್ಮ ಹೋಗಿ
ಕರ್ಮಾನುಸಾರ ಇನ್ನೊಂದು ಶರೀರವನ್ನು ಪಡೆಯುವುದು. ಒಳ್ಳೆಯ ಕರ್ಮ ಮಾಡಿದವರಿಗೆ ಒಳ್ಳೆಯ ಜನ್ಮ
ದೊರಕುವುದು, ಯೋಗಬಲದಿಂದ. ಪುರುಷಾರ್ಥ ಮಾಡಲಿಲ್ಲವೆಂದರೆ ಕಡಿಮೆ ಪದವಿ ದೊರೆಯುವುದು. ಇಂತಹ-ಇಂತಹ
ವಿಚಾರ ಮಾಡುವುದರಿಂದ ಖುಶಿಯಾಗುವುದು. ಯಾರು ಹೇಗೆ ಮಹಾರಥಿಯಾಗಿದ್ದಾರೆ ಅವರ ಮಹಿಮೆಯೂ ಸಹಾ
ಅದೇರೀತಿ ಆಗುವುದು, ಎಲ್ಲರೂ ಮುರಳಿಯನ್ನು ಒಂದೇ ರೀತಿ ಓದುವುದಿಲ್ಲ. ಪ್ರತಿಯೊಬ್ಬರ ಮುರಳಿಯೂ ಸಹಾ
ಬೇರೆ-ಬೇರೆಯಾಗಿರುತ್ತದೆ. ಇದು ಮಾಡಿ ಮಾಡಲ್ಪಟ್ಟ ಆಟವಾಗಿದೆಯಲ್ಲವೆ. ಈಗ ಮಕ್ಕಳಿಗೆ ಕರ್ಮಗಳ ಮೇಲೆ
ಗಮನವಿದೆ. ತಂದೆ ಅಥವಾ ತಾಯಿ ಯಾವ ರೀತಿ ಮಾಡುವರು ಅದನ್ನು ನೋಡಿ ಮಕ್ಕಳು ಕಲಿಯುವರು. ಈಗ ನೀವು
ಶ್ರೇಷ್ಠ ಕರ್ಮವನ್ನು ಮಾಡುವಿರಿ, ಸೇವೆಯಿಂದ ತಿಳಿಯುತ್ತದೆ, ಮಹಾರಥಿಗಳ ಪರಿಶ್ರಮ ಮುಚ್ಚಿಡಲು
ಸಾಧ್ಯವಿಲ್ಲ. ತಿಳಿಯಬಹುದಾಗಿದೆ ಯಾರು ಶ್ರೇಷ್ಠ ಪದವಿ ಪಡೆಯಲು ಪರಿಶ್ರಮ ಪಡುತ್ತಿದ್ದಾರೆ. ಎಲ್ಲಾ
ಮಕ್ಕಳಿಗೂ ಚಾನ್ಸ್ ಸಹಾ ಇದೆ. ಶ್ರೇಷ್ಠ ಪದವಿಯನ್ನು ಪಡೆಯಲು ಮನ್ಮನಾಭವದ ಪಾಠವನ್ನು ಅರ್ಥ
ಸಹಿತವಾಗಿ ಸಿಕ್ಕಿದೆ. ಮಕ್ಕಳು ತಿಳಿದಿರುವಿರಿ ಈ ಗೀತೆಯ ಜ್ಞಾನವನ್ನು ಜ್ಞಾನಸಾಗರ ತಂದೆ ಖುದ್ದಾಗಿ
ಬಂದು ತಿಳಿಸುತ್ತಾರೆ. ಅಂದಮೇಲೆ ಖಂಡಿತ ನಿಖರವಾದ ಜ್ಞಾನವನ್ನೇ ಕೊಡುತ್ತಾರೆ. ಮತ್ತೆ ಧಾರಣೆಯ ಮೇಲೆ
ಆಧಾರವಾಗಿದೆ, ಏನೆಲ್ಲಾ ಕೇಳುವಿರಿ ಅದು ಕಾರ್ಯ ರೂಪದಲ್ಲಿ ಬರುತ್ತಿರಲಿ. ಕಷ್ಟವೇನೂ ಇಲ್ಲ.
ತಂದೆಯನ್ನು ನೆನಪು ಮಾಡುವುದು ಮತ್ತು ಚಕ್ರವನ್ನು ತಿಳಿಯುವುದು. ಇದಾಗಿದೆ ಅಂತಿಮ ಜನ್ಮದ ವಿದ್ಯಾ,
ಇದರಿಂದ ಪಾಸ್ ಆಗಿ ಹೊಸ ಪ್ರಪಂಚ ಸತ್ಯಯುಗಕ್ಕೆ ಹೋಗಿ ತಲುಪಿ ಬಿಡುವಿರಿ.
ಗಾಯನ ಸಹಾ ಇದೆ ನಿಶ್ಚಯದಲ್ಲಿ ವಿಜಯವಿದೆ ಎಂದು. ಆದ್ದರಿಂದ ಪ್ರೀತಿ ಬುದ್ಧಿ ಮಕ್ಕಳು
ತಿಳಿದಿರುವಿರಿ - ನಮಗೆ ಭಗವಂತ ಓದಿಸುತ್ತಿದ್ದಾರೆ. ಮಕ್ಕಳು ತಿಳಿದಿರುವಿರಿ ನಮ್ಮ ಆತ್ಮ ಧಾರಣೆ
ಮಾಡುವುದು. ಆತ್ಮ ಈ ಶರೀರದ ಮೂಲಕ ಓದುವುದು, ನೌಕರಿ ಮಾಡುವುದು. ಇದೆಲ್ಲಾ ತಿಳಿದುಕೊಳ್ಳುವ
ಮಾತಾಗಿದೆ. ತಂದೆಯನ್ನು ನೆನಪು ಮಾಡುವುದು ನಂತರ ಮಾಯಾರಾವಣ ಬುದ್ಧಿಯ ಯೋಗ ಮುರಿಯುತ್ತಾನೆ,
ಮಾಯೆಯಿಂದ ಎಚ್ಚರವಾಗಿರಬೇಕು. ಎಷ್ಟೆಷ್ಟು ಮುಂದೆ ಹೋಗುವಿರಿ ಅಷ್ಟೂ ನಿಮ್ಮ ಪ್ರಭಾವ ಸಹಾ ಹೊರ
ಬರುವುದು ಮತ್ತು ಖುಶಿಯ ಪಾರ ಏರುವುದು. ಹೊಸ ಜನ್ಮ ಪಡೆದಾಗ ಬಹಳ ಷೋ ಮಾಡುವಿರಿ. ಒಳ್ಳೆಯದು!
ಮಧುರಾತಿ ಮಧುರ ಆತ್ಮೀಯ ಮಕ್ಕಳಿಗೆ ಆತ್ಮೀಯ ಬಾಪ್ದಾದಾರವರ ನೆನಪು-ಪ್ರೀತಿ ಶುಭ ರಾತ್ರಿ.
ಧಾರಣೆಗಾಗಿ
ಮುಖ್ಯಸಾರ:
1. ಒಳಗೂ-ಹೊರಗೂ
ಸ್ವಚ್ಛವಾಗಿರಬೇಕಾಗಿದೆ. ಸತ್ಯ ಹೃದಯದಿಂದ ತಂದೆಗೆ ತಮ್ಮ ಸಮಾಚಾರವನ್ನು ತಿಳಿಸಬೇಕು, ಏನನ್ನೂ
ಮುಚ್ಚಿಡಬಾರದಾಗಿದೆ.
2. ಈಗ ಹಿಂತಿರುಗಿ ಹೋಗಬೇಕಾಗಿದೆ. ಆದ್ದರಿಂದ ಅಶರೀರಿಯಾಗುವ ಅಭ್ಯಾಸ ಮಾಡಬೇಕಾಗಿದೆ,
ಶಾಂತವಾಗಿರಬೇಕಾಗಿದೆ.
ವರದಾನ:
ನನ್ನತನವನ್ನು
ಬಿಟ್ಟು ಟ್ರಸ್ಟಿ ಆಗಿ ಸೇವೆ ಮಾಡುವಂತಹ ಅದಾ ಸಂತುಷ್ಠ ಆತ್ಮ ಭವ.
ಲೌಕಿಕ
ಪರಿವಾರದಲ್ಲಿರುತ್ತಾ, ಸೇವೆ ಮಾಡುತ್ತಾ ಸದಾ ನೆನಪಿರಲಿ ನಾನು ಟ್ರಸ್ಟಿಯಾಗಿದ್ದೇನೆ,
ಸೇವಾಧಾರಿಯಾಗಿದ್ದೇನೆ. ಸೇವೆ ಮಾಡುತ್ತಾ ಸ್ವಲ್ಪವೂ ಸಹ ನನ್ನತನ ಇಲ್ಲದೆ ಇದ್ದಾಗ
ಸಂತುಷ್ಠರಾಗಿರುವಿರಿ. ಯಾವಾಗ ನನ್ನತನವಿರುವುದು ಆಗ ಬೇಸರವಾಗುವಿರಿ, ಯೋಚಿಸುವಿರಿ ನನ್ನ ಮಗ ಈ
ರೀತಿ ಮಾಡುವನಾ?.... ಎಲ್ಲಿ ನನ್ನತನವಿದೆ ಅಲ್ಲಿ ಬೇಸರವಾಗುವಿರಿ ಮತ್ತು ಎಲ್ಲಿ ನಿನ್ನದು-ನನ್ನದು
ಎಂದು ಬರುವುದು ಅಲ್ಲೇ ಈಜಾಡುತ್ತಿರುವಿರಿ. ನಿನ್ನದು-ನಿನ್ನದು ಎಂದು ಹೇಳುವುದು ಎಂದರೇನೆ
ಸ್ವಮಾನದಲ್ಲಿರುವುದು, ನನ್ನದು-ನನ್ನದು ಎಂದು ಹೇಳುವುದು ಎಂದರೆ ಅಭಿಮಾನದಲ್ಲಿ ಬರುವುದು.
ಸ್ಲೋಗನ್:
ಬುದ್ಧಿಯಲ್ಲಿ
ಪ್ರತಿ ಸಮಯ ತಂದೆ ಮತ್ತು ಶ್ರೀಮತದ ಸ್ಮತಿ ಇರಲಿ. ಆಗ ಹೇಳಲಾಗುವುದು ಹೃದಯ ಪೂರ್ವಕವಾಗಿ ಸಮರ್ಪಿತ
ಆತ್ಮ.