16.11.2018 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ನೀವು ಆತ್ಮಿಕ
ಮಾರ್ಗದರ್ಶಕರಾಗಿ ಯಾತ್ರೆಯನ್ನು ಮಾಡಿ ಹಾಗೂ ಮಾಡಿಸಬೇಕು, ನೆನಪೇ ನಿಮ್ಮ ಯಾತ್ರೆಯಾಗಿದೆ, ನೆನಪು
ಮಾಡುತ್ತಿದ್ದಾಗ ಅಪಾರವಾದ ಖುಷಿಯಿರುತ್ತದೆ.”
ಪ್ರಶ್ನೆ:
ನಿರಾಕಾರಿ
ಪ್ರಪಂಚಕ್ಕೆ ಹೋದ ತಕ್ಷಣ ಯಾವ ಸಂಸ್ಕಾರವು ಸಮಾಪ್ತಿಯಾಗುತ್ತದೆ ಹಾಗೂ ಯಾವ ಸಂಸ್ಕಾರ ಉಳಿದು
ಬಿಡುತ್ತದೆ?
ಉತ್ತರ:
ಅಲ್ಲಿ ಜ್ಞಾನದ
ಸಂಸ್ಕಾರ ಸಮಾಪ್ತಿಯಾಗುತ್ತದೆ, ಪ್ರಾಲಬ್ಧದ ಸಂಸ್ಕಾರ ಉಳಿಯುತ್ತದೆ. ಆ ಸಂಸ್ಕಾರದ ಆಧಾರದಿಂದ ನೀವು
ಮಕ್ಕಳು ಸತ್ಯಯುಗದಲ್ಲಿ ಪ್ರಾಲಬ್ಧವನ್ನು ಭೋಗಿಸುತ್ತೀರಿ. ನಂತರ ಅಲ್ಲಿ ವಿದ್ಯೆ ಅಥವಾ
ಪುರುಷಾರ್ಥದ ಸಂಸ್ಕಾರ ಇರುವುದಿಲ್ಲ. ಪ್ರಾಲಬ್ಧ ಸಿಕ್ಕಿದ ನಂತರ ಈ ಜ್ಞಾನವು ಸಮಾಪ್ತಿಯಾಗುತ್ತದೆ.
ಗೀತೆ:
ರಾತ್ರಿಯ
ಪ್ರಯಾಣಿಕನೇ ಸುಸ್ತಾಗಬೇಡ, ದಿನವು ಬರುತ್ತಿದೆ........
ಓಂ ಶಾಂತಿ.
ಇಲ್ಲಿ ಸಮ್ಮುಖದಲ್ಲಿ ಶಿವ ಭಗವಾನುವಾಚ ಇದೆ. ಆದರೆ ಗೀತೆಯಲ್ಲಿ ಕೃಷ್ಣ ಭಗವಾನುವಾಚವೆಂದು
ತೋರಿಸುತ್ತಾರೆ. ಆಗ ಅಲ್ಲಿ ಕೃಷ್ಣ ಆ ನಾಮ, ರೂಪದಿಂದ ಸಮ್ಮುಖದಲ್ಲಿರಲು ಸಾಧ್ಯವಿಲ್ಲ. ಇಲ್ಲಿ
ನಿರಾಕಾರ ಭಗವಾನುವಾಚ ಎಂದು ಸಮ್ಮುಖದಲ್ಲಿ ಹೇಳುತ್ತಾರೆ. ಕೃಷ್ಣವಾಚ ಎಂದು ಹೇಳಿದಾಗ ಅವರು
ಸಾಕಾರಿಯಾಗುತ್ತಾರೆ. ವೇದ-ಶಾಸ್ತ್ರ ಮೊದಲಾದುವುಗಳನ್ನು ಹೇಳುವಂತಹವರು ಭಗವಾನುವಾಚ ಎಂದು
ಹೆಳುವುದಿಲ್ಲ. ಏಕೆಂದರೆ ಸಾಧು-ಸಂತ, ಮಹಾತ್ಮರೆಲ್ಲರೂ ಸಾಕಾರದಲ್ಲಿ ಕುಳಿತಿದ್ದಾರೆ. ಆದರೆ ಇಲ್ಲಿ
ತಂದೆಯು ಹೇಳುತ್ತಾರೆ - ಹೇ ಆತ್ಮಿಕ ಪ್ರಯಾಣಿಕನೆ ಎಂದು. ಆತ್ಮಿಕ ತಂದೆಯು ಅವಶ್ಯವಾಗಿ ಆತ್ಮಗಳಿಗೆ
ಮಾತ್ರ ಮಕ್ಕಳೇ, ಸುಸ್ತಾಗಬೇಡಿ ಎಂದು ಹೇಳುತ್ತಾರೆ. ಯಾತ್ರೆಯಲ್ಲಿ ಕೆಲವರು ದಣಿದು ಹಿಂತಿರುಗಿ
ಬರುತ್ತಾರೆ. ಅದು ಶಾರೀರಿಕ ಯಾತ್ರೆಯಾಗಿದೆ. ಭಿನ್ನ-ಭಿನ್ನ ಯಾತ್ರೆಗಳಿಗೆ ಶಾರೀರಿಕ ಯಾತ್ರೆಯನ್ನು
ಮಾಡಲು ಹೋಗುತ್ತಾರೆ. ಕೆಲವರು ಶಿವನ ಮಂದಿರಕ್ಕೆ ಹೋಗುತ್ತಾರೆ ಅಲ್ಲಿ ಎಲ್ಲಾ ಭಕ್ತಿಮಾರ್ಗದ
ಶಾರೀರಿಕ ಚಿತ್ರಗಳನ್ನು ಇಟ್ಟಿರುತ್ತಾರೆ. ಇಲ್ಲಿ ಸರ್ವಶ್ರೇಷ್ಠ ತಂದೆ ಪರಮಪಿತ ಪರಮಾತ್ಮ
ಆತ್ಮಗಳಿಗೆ ಹೇಳುತ್ತಾರೆ - ಹೇ ಮಕ್ಕಳೇ, ಈಗ ನನ್ನೊಬ್ಬನೊಂದಿಗೆ ಬುದ್ಧಿಯೋಗವನ್ನು ಜೋಡಿಸಿ ಎಂದು
ಹೇಳುತ್ತಾ ಜ್ಞಾನವನ್ನೂ ಕೊಡುತ್ತಾರೆ. ತೀರ್ಥ ಯಾತ್ರೆಗಳಿಗೆ ಹೊರಟಾಗ ಅಲ್ಲಿ ಕಥೆ-ಕೀರ್ತನೆ ಮಾಡಲು
ಅಲ್ಲಿ ಬ್ರಾಹ್ಮಣರಿರುತ್ತಾರೆ. ನಿಮ್ಮದು ನರನಿಂದ ನಾರಾಯಣನಾಗುವ ಒಂದೇ ಸತ್ಯ ನಾರಾಯಣನ ಕಥೆಯಾಗಿದೆ.
ಮೊದಲು ನಾವು ಮಧುರ ಮನೆಗೆ ಹೋಗಿ ನಂತರ ವಿಷ್ಣು ಪುರಿಗೆ ಬರುತ್ತೇವೆಂದು ನೀವು ತಿಳಿದಿದ್ದೀರಿ.
ನೀವು ಈ ಸಮಯದಲ್ಲಿ ಬ್ರಹ್ಮ ಪುರಿಯಲ್ಲಿದ್ದೀರಿ, ಇದನ್ನು ತವರು ಮನೆ ಎಂದು ಕರೆಯಲಾಗುತ್ತದೆ.
ಆದುದರಿಂದ ಆಭರಣಗಳೇನೂ ಇಲ್ಲ, ಏಕೆಂದರೆ ನೀವು ತವರು ಮನೆಯಲ್ಲಿದ್ದೀರಿ. ಅತ್ತೆ ಮನೆಯಲ್ಲಿ ನಮಗೆ
ಅಪಾರವಾದ ಸುಖ ಸಿಗುತ್ತದೆಯೆಂದು ನಿಮಗೆ ಗೊತ್ತಿದೆ. ಈ ಕಲಿಯುಗದ ಅತ್ತೆ ಮನೆಯಲ್ಲಿ ಅಪಾರವಾದಂತಹ
ದುಃಖವಿದೆ. ನೀವೀಗ ಆ ಸುಖಧಾಮದ ಕಡೆ ಹೋಗಬೇಕು. ಅಲ್ಲಿಗೆ ಹೋಗಲು ಇಲ್ಲಿಂದ ಪರಿವರ್ತನೆಯಾಗಬೇಕು.
ತಂದೆಯು ಎಲ್ಲರನ್ನೂ ತಮ್ಮ ಕಣ್ಣಿನಲ್ಲಿ ಕುಳ್ಳರಿಸಿಕೊಂಡು ಕರೆದೊಯ್ಯುತ್ತಾರೆ. ಕೃಷ್ಣನ ತಂದೆಯು
ಕೃಷ್ಣನನ್ನು ಬುಟ್ಟಿಯಲ್ಲಿ ಕೂರಿಸಿಕೊಂಡು ಆ ತೀರಕ್ಕೆ ಹೋದರೆಂದು ತೋರಿಸುತ್ತಾರಲ್ಲವೆ. ಆದರೆ
ಇಲ್ಲಿ ಬೇಹದ್ದಿನ ತಂದೆಯು ಮಕ್ಕಳಾದ ನಿಮ್ಮನ್ನು ಆ ಅತ್ತೆ ಮನೆಯ ಕಡೆ ಕರೆದೊಯ್ಯುತ್ತಾರೆ. ಮೊದಲು
ತನ್ನ ನಿರಾಕಾರಿ ಮನೆಗೆ ಕರೆದುಕೊಂಡು ಹೋಗಿ ನಂತರ ಅತ್ತೆ ಮನೆಗೆ ಕಳುಹಿಸಿ ಕೊಡುತ್ತಾರೆ. ಅಲ್ಲಿ
ಶಾಂತಿಧಾಮವನ್ನು ತಲುಪಿ ಬಿಡುತ್ತೀರಿ. ಶಾಂತಿಧಾಮದಲ್ಲಿ ತವರು ಮನೆ ಹಾಗೂ ಅತ್ತೆ ಮನೆಯ
ಮಾತುಗಳೆಲ್ಲವನ್ನೂ ಮರೆತು ಹೋಗುತ್ತೀರಿ. ಅದು ನಿರಾಕಾರಿ ತವರು ಮನೆಯಾಗಿದೆ. ಅಲ್ಲಿ ಈ ಜ್ಞಾನವು
ಮರೆತು ಹೋಗುತ್ತದೆ, ಈ ಜ್ಞಾನದ ಸಂಸ್ಕಾರವು ಹೊರಟು ಹೋಗುತ್ತದೆ. ಬಾಕಿ ಪ್ರಾಲಬ್ಧದ ಸಂಸ್ಕಾರವು
ಮಾತ್ರ ಉಳಿದುಕೊಳ್ಳುತ್ತದೆ ನಂತರ ಮಕ್ಕಳಿಗೆ ಪ್ರಾಲಬ್ಧವೇ ಗಮನದಲ್ಲಿರುತ್ತದೆ.
ಪ್ರಾಲಬ್ಧದನುಸಾರವಾಗಿ ಹೋಗಿ ಸುಖದ ಜನ್ಮವನ್ನು ತೆಗೆದುಕೊಳ್ಳುವಿರಿ. ಆದ್ದರಿಂದ ಸುಖಧಾಮಕ್ಕೆ
ಹೋಗಬೇಕು. ಸುಖಧಾಮದಲ್ಲಿಯೂ ಅದು ಶಾಂತಿಧಾಮವಾಗಿದೆ ಎನ್ನುವ ಜ್ಞಾನವು ಇರುವುದಿಲ್ಲ. ಪ್ರಾಲಬ್ಧ
ದೊರೆತ ನಂತರ ಈ ಜ್ಞಾನವು ಸಮಾಪ್ತಿಯಾಗಿ ಬಿಡುತ್ತದೆ. ಪ್ರಾಲಬ್ಧದಲ್ಲಿ ಮತ್ತೆ ನಮ್ಮ ಅದೇ ಪಾತ್ರ
ನಡೆಯುತ್ತದೆ ಎಂದು ನೀವು ತಿಳಿದುಕೊಂಡಿದ್ದೀರಿ. ನಿಮ್ಮ ಸಂಸ್ಕಾರವೇ ಪ್ರಾಲಬ್ಧದ ಸಂಸ್ಕಾರವಾಗಿ
ಬಿಡುತ್ತದೆ. ಈಗ ಪುರುಷಾರ್ಥದ ಸಂಸ್ಕಾರವಿದೆ. ಪುರುಷಾರ್ಥ ಹಾಗೂ ಪ್ರಾಲಬ್ಧದ ಸಂಸ್ಕಾರವು ಅಲ್ಲಿ
ಇರುತ್ತದೆಯೆಂದು ಹೇಳಲಾಗುವುದಿಲ್ಲ. ಅಲ್ಲಿ ಈ ಜ್ಞಾನವು ಇರುವುದಿಲ್ಲ. ಇದು ನಿಮ್ಮ ಆತ್ಮಿಕ
ಯಾತ್ರೆಯಾಗಿದೆ. ನಿಮ್ಮ ಯಾತ್ರೆಗೆ ತಂದೆಯು ಮುಖ್ಯ ಮಾರ್ಗದರ್ಶಕರಾಗಿದ್ದಾರೆ. ನೀವೂ ಸಹ ಆತ್ಮಿಕ
ಮಾರ್ಗದರ್ಶಕರಾಗಿ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೀರಿ. ಅವರು ಶಾರೀರಿಕ ಮಾರ್ಗದರ್ಶಕರಾಗಿದ್ದಾರೆ,
ನೀವು ಆತ್ಮಿಕ ಮಾರ್ಗದರ್ಶಕರು. ಅವರು ಅಮರನಾಥಕ್ಕೆ ಬಹಳ ವಿಜೃಂಭಣೆಯಿಂದ ಹೋಗುತ್ತಾರೆ, ವಿಶೇಷ
ಗುಂಪು-ಗುಂಪಾಗಿ ಅಮರನಾಥವನ್ನು ಖುಷಿಯಿಂದ ತಲುಪುತ್ತಾರೆ. ಬ್ರಹ್ಮಾ ತಂದೆಯೂ ಸಹ ಎಷ್ಟೊಂದು
ಸಾಧು-ಸಂತರನ್ನು ತಾಳ-ವಾಧ್ಯ ಗಳೊಂದಿಗೆ ಕರೆದೊಯ್ಯುವುದನ್ನು ನೋಡಿದ್ದಾರೆ. ಜೊತೆಯಲ್ಲಿ ವೈದ್ಯರು
ಮೊದಲಾದವರನ್ನು ಕರೆದುಕೊಂಡು ಹೋಗುತ್ತಾರೆ. ಏಕೆಂದರೆ ಅಲ್ಲಿ ಶೀತದ ಸಮಯವಾಗಿರುತ್ತದೆ. ಆದುದರಿಂದ
ಕೆಲವರು ಖಾಯಿಲೆಗೊಳಗಾಗುತ್ತಾರೆ. ಆದರೆ ನಿಮ್ಮ ಯಾತ್ರೆಯು ಬಹಳ ಸಹಜವಾಗಿದೆ. ನೆನಪಿನಲ್ಲಿರುವುದೇ
ನಿಮ್ಮ ಯಾತ್ರೆಯಾಗಿದೆ ಎಂದು ತಂದೆಯು ಹೇಳುತ್ತಾರೆ. ನೆನಪೇ ಮುಖ್ಯವಾಗಿದೆ, ಮಕ್ಕಳು ನೆನಪು
ಮಾಡುತ್ತಿದ್ದರೆ ಅಪಾರವಾದ ಖುಷಿಯಿರುತ್ತದೆ. ಅನ್ಯರನ್ನೂ ಜೊತೆಯಲ್ಲಿ ಯಾತ್ರೆಗೆ ಕರೆದೊಯ್ಯಬೇಕು.
ಈ ಯಾತ್ರೆಯು ಒಮ್ಮೆ ಮಾತ್ರ ಆಗುತ್ತದೆ. ಭಕ್ತಿಮಾರ್ಗದ ಆರಂಭದಿಂದಲೇ ಯಾತ್ರೆಗೆ ಯಾರೂ
ಹೋಗುವುದಿಲ್ಲ. ತಕ್ಷಣ ಮಂದಿರ, ಚಿತ್ರ ಮೊದಲಾದುವುಗಳನ್ನು ಮಾಡಲಾಗುವುದಿಲ್ಲ. ಅವುಗಳೆಲ್ಲಾ ನಿಧ
ನಿಧಾನವಾಗಿ ನಂತರ ಮಾಡುತ್ತಾ ಹೋಗುತ್ತಾರೆ. ಮೊಟ್ಟ ಮೊದಲು ಶಿವನ ಮಂದಿರವಾಗುತ್ತದೆ, ಅದನ್ನೂ ಸಹ
ಮೊದಲು ಮನೆಯಲ್ಲಿಯೇ ಸೋಮನಾಥ ಮಂದಿರವನ್ನು ಮಾಡುತ್ತಾರೆ. ಆಗ ಎಲ್ಲಿಗೂ ಹೋಗುವ
ಅವಶ್ಯಕತೆಯಿರುವುದಿಲ್ಲ. ಈ ಮಂದಿರಗಳೆಲ್ಲವೂ ನಂತರದಲ್ಲಾಗುತ್ತದೆ ಸಮಯ ಹಿಡಿಯುತ್ತದೆ. ಆದುದರಿಂದ
ನಿಧಾನವಾಗಿ ಹೊಸ ಶಾಸ್ತ್ರ, ಹೊಸ ಚಿತ್ರ, ಹೊಸ ಮಂದಿರಗಳು ಆಗುತ್ತಿರುತ್ತವೆ. ಏಕೆಂದರೆ ಅವುಗಳನ್ನು
ಅಧ್ಯಯನ ಮಾಡುವಂತಹವರೂ ಸಹ ಬೇಕಾಗುವ ಕಾರಣ ಸಮಯ ಹಿಡಿಸುತ್ತದೆ. ಯಾವಾಗ ಮಠ ಮೊದಲಾದುವುಗಳು
ವೃದ್ಧಿಯಾಗುತ್ತವೆ. ನಂತರ ಶಾಸ್ತ್ರಗಳನ್ನು ಮಾಡೋಣವೆಂಬ ವಿಚಾರವು ಬರುತ್ತದೆ. ಇಷ್ಟೊಂದು ತೀರ್ಥ
ಸ್ಥಾನ, ಮಂದಿರ, ಚಿತ್ರಗಳನ್ನು ಮಾಡಲು ಸಮಯ ಬೇಕಾಗುತ್ತದೆಯಲ್ಲವೆ. ಭಲೇ ಭಕ್ತಿಮಾರ್ಗವು ದ್ವಾಪರ
ಯುಗದಿಂದ ಪ್ರಾರಂಭವಾಯಿತೆಂದು ಹೇಳಲಾಗುತ್ತದೆ. ಆದರೆ ಎಲ್ಲದಕ್ಕೂ ಸಮಯವಂತೂ ಹಿಡಿಸುತ್ತದೆಯಲ್ಲವೇ.
ನಂತರ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಮೊದಲು ಅವ್ಯಭಿಚಾರಿ ಭಕ್ತಿ ನಂತರ ವ್ಯಭಿಚಾರಿ
ಭಕ್ತಿಯಾಗಿ ಬಿಡುತ್ತದೆ. ಈ ಮಾತುಗಳನ್ನು ಬಹಳ ಚೆನ್ನಾಗಿ ಚಿತ್ರಗಳ ಮುಖಾಂತರ ಸಿದ್ಧ ಮಾಡಿ
ತೋರಿಸಲಾಗುವುದು. ತಿಳಿಸಿ ಕೊಡುವಂತಹವರ ಬುದ್ಧಿಯಲ್ಲಿ ಇಂತಹ ಚಿತ್ರಗಳನ್ನು ಮಾಡಿ ತಿಳಿಸಿ
ಕೊಡೋಣವೆಂದು ಚಿಂತನೆ ನಡೆಯುತ್ತದೆ. ಎಲ್ಲರ ಬುದ್ಧಿಯಲ್ಲಿ ವಿಚಾರವು ನಡೆಯುವುದಿಲ್ಲ, ಅದೂ ಸಹ
ನಂಬರ್ವಾರ್ ಆಗಿದೆ. ಕೆಲವರ ಬುದ್ಧಿಯಲ್ಲಿ ಸ್ವಲ್ಪವೂ ವಿಚಾರಗಳು ನಡೆಯುವುದಿಲ್ಲ. ಆದ್ದರಿಂದ ಅವರು
ಅಂತಹ ಪದವಿಯನ್ನೇ ಪಡೆಯುತ್ತಾರೆ. ಇವರು ಏನಾಗುವರೆಂದು ಗೊತ್ತಾಗಿ ಬಿಡುತ್ತದೆ. ಮುಂದೆ ಹೋಗುತ್ತಾ
ನೀವು ತಿಳಿದುಕೊಳ್ಳುತ್ತಾ ಹೋಗುತ್ತೀರಿ. ಯಾವಾಗ ಯುದ್ಧ ಮೊದಲಾದುವುಗಳು ಆರಂಭವಾಗುತ್ತವೆಯೋ ಆಗ
ಪ್ರತ್ಯಕ್ಷವಾಗಿಯೂ ನೋಡುತ್ತೀರಿ. ನಂತರ ಬಹಳ ಪಶ್ಚಾತ್ತಾಪ ಪಡುತ್ತೀರಿ. ಆದರೆ ಆ ಸಮಯದಲ್ಲಿ
ವಿದ್ಯೆಯಿರುವುದಿಲ್ಲ. ಯುದ್ಧದ ಸಮಯದಲ್ಲಿ ಅಯ್ಯೊ, ಅಯ್ಯೊ ಎಂದು ಕೂಗುತ್ತಿರುತ್ತಾರೆ. ಆದರೆ
ಅದನ್ನು ಕೇಳುವುದಕ್ಕೆ ಆಗುವುದಿಲ್ಲ. ಏನಾಗುತ್ತದೋ ಗೊತ್ತಿಲ್ಲ. ಯಾವಾಗ ಭಾರತ, ಪಾಕೀಸ್ಥಾನದ
ವಿಭಜನೆಯಾಯಿತೋ ಆಗ ಏನಾಯಿತು ಎಂದು ನೋಡಿದಿರಲ್ಲವೆ. ಆದರೆ ಈ ವಿನಾಶದ ಸಮಯವು ಬಹಳ ಕಠಿಣವಾಗಿದೆ.
ಹೌದು! ಉಳಿದಂತೆ ಸಾಕ್ಷಾತ್ಕಾರ ಮೊದಲಾದುವುಗಳು ಬಹಳಷ್ಟು ಆಗುತ್ತವೆ, ಅದರಿಂದ ಎಷ್ಟು
ಓದಿದ್ದಾರೆಂದು ನೀವು ತಿಳಿದುಕೊಳ್ಳಬಹುದು. ಆಗ ತುಂಬಾ ಪಶ್ಚಾತ್ತಾಪ ಪಡುತ್ತಾರೆ ಹಾಗೂ ಈ ರೀತಿ
ಸಾಕ್ಷಾತ್ಕಾರವೂ ಆಗುತ್ತದೆ - ನೋಡಿ, ನೀವು ವಿದ್ಯೆಯನ್ನು ಬಿಟ್ಟ ಕಾರಣ ಇಂತಹ ಸ್ಥಿತಿ ಒದಗಿದೆ.
ಧರ್ಮರಾಜನು ಸಾಕ್ಷಾತ್ಕಾರವಿಲ್ಲದೆ ಶಿಕ್ಷೆಯನ್ನು ಹೇಗೆ ಕೊಡುತ್ತಾರೆ? ಎಲ್ಲವನ್ನೂ ಸಾಕ್ಷಾತ್ಕಾರ
ಮಾಡಿಸುತ್ತಾರೆ. ಆದರೆ ಆ ಸಮಯದಲ್ಲಿ ನೀವು ಏನೂ ಮಾಡಲು ಸಾಧ್ಯವಿಲ್ಲ. ಅಯ್ಯೊ ನನ್ನ ಅದೃಷ್ಟ (ಕರ್ಮ)
ವೆಂದು ಹೇಳುತ್ತೀರಿ, ಏಕೆಂದರೆ ಅದೃಷ್ವವನ್ನು ಬೆಳಗಿಸಿಕೊಳ್ಳುವ ಸಮಯ ಮುಗಿದು ಹೋಗಿರುತ್ತದೆ.
ಆದುದರಿಂದ ಈಗ ಏಕೆ ಪುರುಷಾರ್ಥ ಮಾಡಿಕೊಳ್ಳಬಾರದೆಂದು ತಂದೆಯು ಹೇಳುತ್ತಾರೆ. ಸೇವೆಯಿಂದ ತಂದೆಯ
ಹೃದಯವನ್ನು ಗೆಲ್ಲುತ್ತೀರಿ. ತಂದೆಯು ಸಹ ಈ ಮಕ್ಕಳು ಒಳ್ಳೆಯ ಸೇವೆ ಮಾಡುತ್ತಾರೆಂದು ಹೇಳುತ್ತಾರೆ.
ಮಿಲಿಟರಿಯಲ್ಲಿ ಯಾರಾದರೂ ಶರೀರ ಬಿಟ್ಟರೆ ಅವರ ಮಿತ್ರ-ಸಂಬಂಧಿ ಮೊದಲಾದವರಿಗೆ ಬಹುಮಾನ ಕೊಡುತ್ತಾರೆ.
ಇಲ್ಲಿ ನಿಮಗೆ ಬಹುಮಾನ ಕೊಡುವವರು ಬೇಹದ್ದಿನ ತಂದೆಯಾಗಿದ್ದಾರೆ. ತಂದೆಯಿಂದ 21 ಜನ್ಮಗಳಿಗಾಗಿ
ಬಹುಮಾನ ಸಿಗುತ್ತದೆ. ಇಲ್ಲಿ ಪ್ರತಿಯೊಬ್ಬರೂ ತಮ್ಮ ಹೃದಯದ ಮೇಲೆ ಕೈ ಇಟ್ಟು ಕೇಳಿಕೊಳ್ಳಬೇಕು -
ನಾನು ಎಷ್ಟು ಓದುತ್ತೇನೆ? ಧಾರಣೆಯಾಗುವುದಿಲ್ಲವೆಂದರೆ ಅದೃಷ್ಟದಲ್ಲಿಲ್ಲವೆಂದರ್ಥ. ನಮ್ಮ ಕರ್ಮವೇ
ಈ ರೀತಿಯಿದೆ ಎಂದು ಹೇಳುತ್ತಾರೆ. ಬಹಳ ಕೆಟ್ಟ ಕರ್ಮವನ್ನು ಮಾಡುವಂತಹವರು ಸ್ವಲ್ಪವೂ ಮೇಲೇಳಲು (ಜ್ಞಾನವನ್ನು
ಪಡೆಯುವುದು) ಸಾಧ್ಯವಿಲ್ಲ.
ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ನೀವು ಈ ಆತ್ಮಿಕ ಯಾತ್ರೆಗೆ ತಮ್ಮ ಜೊತೆಗಾರರನ್ನು
ಕರೆದೊಯ್ಯಬೇಕು. ಪ್ರತಿಯೊಬ್ಬರಿಗೂ ಈ ಯಾತ್ರೆಯ ಮಾತನ್ನು ತಿಳಿಸುವುದು ನಿಮ್ಮ ಕರ್ತವ್ಯವಾಗಿದೆ.
ಇದು ನಮ್ಮ ಆತ್ಮಿಕ ಯಾತ್ರೆಯಾಗಿದೆ, ಅದು ಶಾರೀರಿಕ ಯಾತ್ರೆಯಾಗಿದೆ ಎಂದು ತಿಳಿಸಿ. ರಂಗೂನ್
ಪ್ರದೇಶದ ಕಡೆ ಒಂದು ಪರಿಶುದ್ಧವಾದ ಕೊಳವಿದೆ, ಅಲ್ಲಿ ಸ್ನಾನ ಮಾಡುವುದರಿಂದ ದೇವತೆಯಾಗುತ್ತೇವೆಂದು
ಹೇಳುತ್ತಾರೆ. ಆದರೆ ಆ ರೀತಿ ದೇವತೆ ಯಾರೂ ಆಗುವುದಿಲ್ಲ. ಇದು ಜ್ಞಾನ ಸ್ನಾನ ಮಾಡುವ ಮಾತಾಗಿದೆ.
ಇದರಿಂದ ನೀವು ಸ್ವರ್ಗದ ಮಹಾರಾಣಿಯಾಗಿ ಬಿಡುತ್ತೀರಿ. ಜ್ಞಾನ, ಯೋಗಬಲದಿಂದ ವೈಕುಂಠಕ್ಕೆ ಹೋಗಿ
ಬರುವುದು ನಿಮಗೆ ಸಾಮಾನ್ಯ ಮಾತಾಗಿದೆ. ಆದರೆ ಇದೇ ಅಭ್ಯಾಸವಾಗಿ ಬಿಡುವುದೆಂದು ಮತ್ತೆ ಮತ್ತೆ
ಧ್ಯಾನದಲ್ಲಿ ಹೋಗಬೇಡಿ ಎಂದು ನಿಮ್ಮನ್ನು ತಡೆಯುತ್ತಾರೆ. ಇದು ಜ್ಞಾನ ಮಾನಸ ಸರೋವರವಾಗಿದೆ. ಇಲ್ಲಿ
ಪರಮಪಿತ ಪರಮಾತ್ಮನೇ ಬಂದು ಈ ಮನುಷ್ಯನ ಶರೀರದ (ಬ್ರಹ್ಮಾ) ಮೂಲಕ ಜ್ಞಾನವನ್ನು ಹೇಳುತ್ತಾರೆ.
ಆದ್ದರಿಂದ ಇವರಿಗೆ ಮಾನಸ ಸರೋವರವೆಂದು ಹೇಳಲಾಗುವುದು. ಮಾನಸ ಸರೋವರವೆಂಬ ಅಕ್ಷರವು ಸಾಗರದಿಂದ
ಬಂದಿದೆ. ಜ್ಞಾನ ಸಾಗರನಲ್ಲಿ ಜ್ಞಾನ ಸ್ನಾನ ಮಾಡುವುದು ಬಹಳ ಚೆನ್ನಾಗಿರುತ್ತದೆ. ಸ್ವರ್ಗದ ರಾಣಿಗೆ
ಮಹಾರಾಣಿಯೆಂದು ಕರೆಯಲಾಗುವುದು. ನೀವು ಸ್ವರ್ಗದ ಮಾಲೀಕರಾಗಿ ಎಂದು ತಂದೆಯು ಹೇಳುತ್ತಾರೆ. ಏಕೆಂದರೆ
ತಂದೆಗೆ ಮಕ್ಕಳ ಮೇಲೆ ಪ್ರೀತಿಯಿರುತ್ತದೆ. ಪ್ರತಿಯೊಬ್ಬರ ಮೇಲೆ ದಯೆ ಬರುತ್ತದೆ, ಸಾಧುಗಳ ಮೇಲೂ ದಯೆ
ಬರುತ್ತದೆ. ಸಾಧುಗಳನ್ನೂ ಸಹ ಉದ್ದಾರ ಮಾಡುತ್ತಾರೆಂದು ಗೀತೆಯಲ್ಲಿ ಬರೆಯಲಾಗಿದೆ. ಉದ್ಧಾರವೂ ಸಹ
ಜ್ಞಾನ, ಯೋಗದಿಂದ ಆಗುತ್ತದೆ. ಮಕ್ಕಳಿಗೆ ತಿಳಿಸಲು ಬಹಳ ಸ್ಪೂರ್ತಿ ಇರಬೇಕು. ನೀವು
ಬೇರೆಯೆಲ್ಲವನ್ನೂ ತಿಳಿದುಕೊಂಡಿದ್ದೀರಿ ಆದರೆ ಅದು ಮಜ್ಜಿಗೆಯಾಗಿದೆ. ಬೆಣ್ಣೆ ತಿನ್ನಿಸುವವರನ್ನು
ನೀವು ತಿಳಿದುಕೊಂಡೇ ಇಲ್ಲ ಎಂದು ಹೇಳಿ. ತಂದೆಯು ಎಷ್ಟೊಂದು ಚೆನ್ನಾಗಿ ತಿಳಿಸಿಕೊಡುತ್ತಾರೆ. ಆದರೆ
ಯಾರ ಬುದ್ಧಿಯಲ್ಲಾದರೂ ಕುಳಿತುಕೊಳ್ಳಬೇಕಲ್ಲವೆ. ತಂದೆಯನ್ನು ತಿಳಿದುಕೊಳ್ಳುವುದರಿಂದ ಮನುಷ್ಯರು
ವಜ್ರ ಸಮಾನರಾಗುತ್ತಾರೆ. ತಿಳಿದುಕೊಳ್ಳದೇ ಇರುವ ಕಾರಣ ಮನುಷ್ಯನು ಕವಡೆಯಂತೆ ಸಂಪೂರ್ಣ
ಪತಿತನಾಗಿದ್ದಾನೆ. ತಂದೆಯನ್ನು ತಿಳಿಯುವುದರಿಂದ ಮಾತ್ರ ಪಾವನರಾಗುತ್ತಾರೆ. ಈ ಪತಿತ ಪ್ರಪಂಚದಲ್ಲಿ
ಯಾರೂ ಪಾವನರಿಲ್ಲ. ಮಹಾರಥಿ ಮಕ್ಕಳೆಲ್ಲರೂ ಚೆನ್ನಾಗಿ ತಿಳಿಸಿಕೊಡುತ್ತಾರೆ. ಎಷ್ಟೊಂದು
ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆ, ಪ್ರಜಾಪಿತ ಬ್ರಹ್ಮನ ಹೆಸರು ಪ್ರಸಿದ್ಧಿಯಾಗಿದೆ. ಇವರು
ಪ್ರಜಾಪಿತ ಬ್ರಹ್ಮನ ಮುಖವಂಶಾವಳಿಯಾಗಿದ್ದಾರೆ. ಆದ್ದರಿಂದ ಬ್ರಹ್ಮನಿಗೆ ಮಾತ್ರ 100 ಭುಜ, 1000
ಭುಜಗಳನ್ನು ತೋರಿಸುತ್ತಾರೆ. ಇಷ್ಟೊಂದು ಭುಜಗಳಿರುವುದಿಲ್ಲ ಎಂದು ತಿಳಿಸಲಾಗುವುದು. ಉಳಿದ ಹಾಗೆ
ಬ್ರಹ್ಮನು ತುಂಬಾ ಮಕ್ಕಳುಳ್ಳವರಾಗಿದ್ದಾರೆ. ಹಾಗಾದರೆ ಬ್ರಹ್ಮಾ ಯಾರ ಮಗು? ಇವರಿಗೂ
ತಂದೆಯಿದ್ದಾರಲ್ಲವೆ. ಬ್ರಹ್ಮಾ, ಶಿವ ತಂದೆಯ ಮಗನಾಗಿದ್ದಾರೆ. ಇವರಿಗೆ ಬೇರೆ ಇನ್ಯಾರು ತಂದೆಯಾಗಲು
ಸಾಧ್ಯ? ಇವರ ತಂದೆಯು ಮನುಷ್ಯರ್ಯಾರೂ ಆಗಿರಲು ಸಾಧ್ಯವಿಲ್ಲ. ಬ್ರಹ್ಮಾ-ವಿಷ್ಣು-ಶಂಕರರು ಸೂಕ್ಷ್ಮ
ಲೋಕದವರೆಂದು ಗಾಯನವಿದೆ. ಅವರಂತೂ ಇಲ್ಲಿ ಬರಲು ಸಾಧ್ಯವಿಲ್ಲ. ಆದರೆ ಪ್ರಜಾಪಿತ ಬ್ರಹ್ಮಾ ಇಲ್ಲಿಯೇ
ಇರಬೇಕಾಗುತ್ತದೆ. ಸೂಕ್ಷ್ಮ ಲೋಕದಲ್ಲಿ ಪ್ರಜೆಗಳನ್ನು ರಚಿಸುವುದಿಲ್ಲ. ಆದ್ದರಿಂದ ಪರಮಪಿತ
ಪರಮಾತ್ಮನು ಬಂದು ಈ ಬ್ರಹ್ಮಾ ಮುಖ ಕಮಲದ ಮೂಲಕ ಈ ಶಕ್ತಿ ಸೈನ್ಯವನ್ನು ರಚಿಸುತ್ತಾರೆ. ನಾವು
ಬ್ರಹ್ಮಾ ಮುಖವಂಶಾವಳಿ ಎಂದು ಮೊಟ್ಟ ಮೊದಲು ಪರಿಚಯ ಕೊಡಬೇಕು. ನೀವೂ ಸಹ ಬ್ರಹ್ಮನ ಮಕ್ಕಳಾಗಿದ್ದೀರಿ.
ಪ್ರಜಾಪಿತ ಬ್ರಹ್ಮ ಸರ್ವರ ತಂದೆಯಾಗಿದ್ದಾರೆ. ನಂತರ ಅವರ ಮೂಲಕ ಉಳಿದೆಲ್ಲಾ ವಂಶಗಳು
ಹುಟ್ಟಿಕೊಳ್ಳುತ್ತವೆ. ಹೆಸರುಗಳು ಬೇರೆಯಾಗುತ್ತವೆ. ನೀವೀಗ ಬ್ರಾಹ್ಮಣರಾಗಿದ್ದೀರಿ. ವಾಸ್ತವದಲ್ಲಿ
ಪ್ರಜಾಪಿತ ಬ್ರಹ್ಮನಿಗೆ ಎಷ್ಟೊಂದು ಮಕ್ಕಳಿದ್ದಾರೆ. ಅವಶ್ಯವಾಗಿ ಮಕ್ಕಳಿಗೆಲ್ಲಾ ಆಸ್ತಿ ಸಿಗಬಹುದು.
ಬ್ರಹ್ಮನ ಬಳಿ ಯಾವುದೇ ಆಸ್ತಿಯಿಲ್ಲ. ಆಸ್ತಿಯೆಲ್ಲವೂ ಶಿವ ತಂದೆಯ ಬಳಿಯೇ ಇರುವುದು. ಬ್ರಹ್ಮನ
ಮೂಲಕ ಶಿವನಿಂದ ಆಸ್ತಿಯು ಸಿಗುತ್ತದೆ. ಬೇಹದ್ದಿನ ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ಅವರು
ಬ್ರಹ್ಮನ ಮುಖಾಂತರ ಕುಳಿತು ಓದಿಸುತ್ತಾರೆ. ನಮಗೆ ತಾತನ ಆಸ್ತಿ ಸಿಗುತ್ತದೆ. ತಂದೆಯು ಬಹಳ ತಿಳಿಸಿ
ಕೊಡುತ್ತಾರೆ ಆದರೆ ಯೋಗವಿರುವುದಿಲ್ಲ. ನಿಯಮಬದ್ಧವಾಗಿ ನಡೆಯದೇ ಹೋದರೆ ತಂದೆಯೂ ಸಹ ಏನು
ಮಾಡುತ್ತಾರೆ? ತಂದೆಯೂ ಸಹ ಇವರ ಅದೃಷ್ಟವೇ ಇದಾಗಿದೆ ಎಂದು ಹೇಳುತ್ತಾರೆ. ಈ ಪರಿಸ್ಥಿತಿಯಲ್ಲಿ
ನಮ್ಮ ಪದವಿ ಏನಾಗಿರುತ್ತದೆ? ಎಂದು ಒಂದುವೇಳೆ ತಂದೆಯನ್ನು ಕೇಳಿದರೆ ಅದಕ್ಕೆ ತಂದೆಯು ಹೇಳುತ್ತಾರೆ.
ನಿಮ್ಮ ಮನಸ್ಸೂ ಸಹ ನಾನು ಎಷ್ಟು ಸೇವೆ ಮಾಡುತ್ತೇನೆ? ಎಲ್ಲಿಯವರೆಗೆ ಶ್ರೀಮತದಂತೆ ನಡೆಯುತ್ತೇನೆ?
ಎಂದು ಹೇಳುತ್ತದೆ. ಶ್ರೀಮತ ಹೇಳುತ್ತದೆ - ಮನ್ಮನಾಭವ. ಎಲ್ಲರಿಗೂ ತಂದೆ ಹಾಗೂ ಆಸ್ತಿಯ ಪರಿಚಯ
ಕೊಡುತ್ತಿರುತ್ತಾರೆ. ಡಂಗುರವನ್ನೂ ಸಹ ಸಾರುತ್ತಿರುತ್ತಾರೆ. ನೀವು ಸರ್ಕಾರದವರಿಗೂ ಸಹ
ತಿಳಿಸಿಕೊಡಬೇಕೆಂದು ಬಾಬಾ ಸೂಚನೆ ಕೊಡುತ್ತಿರುತ್ತಾರೆ. ಅವರೂ ಸಹ ನಿಜವಾಗಿಯೂ ಭಾರತದ ಶಕ್ತಿಯು
ಹೊರಟು ಹೋಗಿದೆ ಎಂದು ತಿಳಿದುಕೊಳ್ಳಲಿ. ಏಕೆಂದರೆ ಪರಮಪಿತ ಪರಮಾತ್ಮ ಸರ್ವಶಕ್ತಿವಂತನೊಂದಿಗೆ
ಯೋಗವಿಲ್ಲದ ಈ ರೀತಿ ಆಗಿದೆ. ಇವರೊಂದಿಗೆ ನೀವು ಯೋಗವನ್ನು ಜೋಡಿಸಿದರೆ ಒಮ್ಮೆಲೆ ವಿಶ್ವದ
ಮಾಲಿಕರಾಗಿ ಬಿಡುತ್ತೀರಿ. ನೀವು ಮಾಯೆಯ ಮೇಲೂ ವಿಜಯಿಗಳಾಗುತ್ತೀರಿ. ಗೃಹಸ್ಥ ವ್ಯವಹಾರದಲ್ಲಿರುತ್ತಾ
ಮಾಯೆಯನ್ನು ಗೆಲ್ಲಬೇಕು. ತಂದೆಯೇ ನಮ್ಮ ಸಹಾಯಕರಾಗಿದ್ದಾರೆ. ಎಷ್ಟೊಂದು ತಿಳಿಸಲಾಗುತ್ತದೆ ಆದರೆ
ಧಾರಣೆ ಮಾಡಬೇಕಲ್ಲವೆ. ತಂದೆ ತಿಳಿಸಿದ್ದಾರೆ - ಧನವನ್ನು ದಾನ ಮಾಡಿದರೂ ಧನವು ಎಂದೂ
ಖಾಲಿಯಾಗುವುದಿಲ್ಲ. ಸೇವೆ ಮಾಡಿದಾಗ ತಂದೆಯ ಹೃದಯವನ್ನು ಗೆಲ್ಲುತ್ತೀರಿ, ಇಲ್ಲವಾದರೆ ತಂದೆಯ
ಹೃದಯವನ್ನು ಗೆಲ್ಲುವುದು ಅಸಾಧ್ಯ. ಈ ರೀತಿ ತಂದೆಯು ಪ್ರೀತಿ ಮಾಡುವುದಿಲ್ಲವೆಂದು ತಿಳಿಯಬಾರದು.
ತಂದೆಯು ಸೇವಾಧಾರಿಗಳನ್ನೇ ಪ್ರೀತಿ ಮಾಡುತ್ತಾರೆ. ಅದಕ್ಕಾಗಿ ಪರಿಶ್ರಮ ಪಡಬೇಕು. ಎಲ್ಲರನ್ನೂ
ಯಾತ್ರೆಗೆ ಯೋಗ್ಯರನ್ನಾಗಿ ಮಾಡಬೇಕು - ಮನ್ಮನಾಭವ. ಇದು ಆತ್ಮಿಕ ಯಾತ್ರೆಯಾಗಿದೆ. ನೀವು ನನ್ನನ್ನು
ನೆನಪು ಮಾಡಿದಾಗ ನೀವು ನನ್ನ ಬಳಿಗೆ ತಲುಪುತ್ತೀರಿ. ಶಿವ ಪುರಿಗೆ ಬಂದು ನಂತರ ವಿಷ್ಣು ಪುರಿಗೆ
ಹೋಗುತ್ತೀರಿ. ಈ ಮಾತುಗಳನ್ನು ನೀವು ಮಕ್ಕಳು ಮಾತ್ರ ತಿಳಿದುಕೊಂಡಿದ್ದೀರಿ, ಬೇರೆ ಯಾರೂ ಸಹ
ಮನ್ಮನಾಭವದ ಅರ್ಥವನ್ನು ತಿಳಿದುಕೊಂಡಿಲ್ಲ. ಅನೇಕರು ಓದುತ್ತಾರೆ. ತಂದೆ ಈ ಮಹಾಮಂತ್ರವನ್ನು
ಕೊಡುತ್ತಾರೆ - ನನ್ನನ್ನು ನೆನಪು ಮಾಡಿದಾಗ ನೀವು ವಿಕರ್ಮಾಜೀತರಾಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಜ್ಞಾನ
ಸ್ನಾನ ಮಾಡಬೇಕು, ಪ್ರೀತಿಯಿಂದ ಸೇವೆ ಮಾಡಿ ತಂದೆಯ ಹೃದಯ ಸಿಂಹಾಸನದಲ್ಲಿ ಕುಳಿತುಕೊಳ್ಳಬೇಕು.
ಪುರುಷಾರ್ಥದ ಸಮಯದಲ್ಲಿ ಹುಡುಗಾಟಿಕೆ ಮಾಡಬಾರದು.
2. ತಂದೆಯ ಕಣ್ಣಿನ ರೆಪ್ಪೆಯ ಮೇಲೆ ಕುಳಿತು ಕಲಿಯುಗದ ದುಃಖಧಾಮದಿಂದ ಸುಖಧಾಮಕ್ಕೆ ನಡೆಯಬೇಕಾಗಿದೆ.
ಆದ್ದರಿಂದ ತಮ್ಮದೆಲ್ಲವನ್ನೂ ಟ್ರಾನ್ಸ್ಫರ್ ಮಾಡಿಕೊಳ್ಳಬೇಕು.
ವರದಾನ:
ಸ್ನೇಹದ
ಸಾಗರನಲ್ಲಿ ಸಮಾವೇಶವಾಗಿ ನನ್ನತನದ ಕೊಳಕನ್ನು ಸಮಾಪ್ತಿ ಮಾಡುವಂತಹ ಪವಿತ್ರ ಆತ್ಮ ಭವ.
ಯಾರು ಸದಾ
ಸ್ನೇಹದ ಸಾಗರನಲ್ಲಿ ಸಮಾವೇಶವಾಗಿರುತ್ತಾರೆ. ಅವರಿಗೆ ಪ್ರಪಂಚದ ಯಾವುದೇ ಮಾತಿನ ಬಗ್ಗೆ ಒಳ್ಳೆಯ
ಅರ್ಥ ಇರುವುದಿಲ್ಲ. ಸ್ನೇಹದಲ್ಲಿ ಸಮಾವೇಶವಾಗಿರುವ ಕಾರಣ ಅವರು ಎಲ್ಲಾ ಮಾತುಗಳಿಂದ ಸಹಜವಾಗಿ
ದೂರವಾಗಿ ಬಿಡುವರು. ಭಕ್ತರಿಗಾಗಿ ಹೇಳುತ್ತಾರೆ ಇವರು ಮುಳುಗಿ ಹೋಗಿರುತ್ತಾರೆ. ಆದರೆ ಮಕ್ಕಳು ಸದಾ
ಪ್ರೇಮದಲ್ಲಿ ಮುಳುಗಿ ಹೋಗಿರುತ್ತಾರೆ. ಆದರೆ ಮಕ್ಕಳು ಸದಾ ಪ್ರೇಮದಲ್ಲಿ ಮುಳುಗಿ ಹೋಗಿರುತ್ತಾರೆ.
ಅವರಿಗೆ ಪ್ರಪಂಚದ ಬಗ್ಗೆ ಸ್ಮತಿಯಿರುವುದಿಲ್ಲ, ನನ್ನದು-ನನ್ನದು ಎನ್ನುವುದೆಲ್ಲಾ ಸಮಾಪ್ತಿ. ನಾನು,
ನಾನು ಎನ್ನುವ ಅನೇಕ ನಾನುಗಳು ಕೊಳಕು ಮಾಡಿ ಬಿಡುವುದು, ಒಂದು ತಂದೆ ನನ್ನವರು ಎಂದಾಗ ಕೊಳಕುತನ
ಸಮಾಪ್ತಿಯಾಗಿ ಬಿಡುವುದು ಮತ್ತು ಆತ್ಮ ಪವಿತ್ರವಾಗಿ ಬಿಡುವುದು.
ಸ್ಲೋಗನ್:
ಬುದ್ಧಿಯಲ್ಲಿ
ಜ್ಞಾನ ರತ್ನಗಳನ್ನು ಗ್ರಹಣ ಮಾಡುವುದು ಮತ್ತು ಮಾಡಿಸುವುದೇ ಹೋಲಿ ಹಂಸವಾಗುವುದಾಗಿದೆ.