18/10/18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಶ್ಚಯ ಮಾಡಿಕೊಳ್ಳಿ - ನಾವಾತ್ಮರಾಗಿದ್ದೇವೆ, ಇದು ನಮ್ಮ ಶರೀರವಾಗಿದೆ, ಇದರಲ್ಲಿ ಸಾಕ್ಷಾತ್ಕಾರದ ಯಾವುದೇ ಮಾತಿಲ್ಲ, ಆತ್ಮದ ಸಾಕ್ಷಾತ್ಕಾರವಾದರೂ ಸಹ ಅರಿತುಕೊಳ್ಳಲು ಸಾಧ್ಯವಿಲ್ಲ.”

ಪ್ರಶ್ನೆ:
ತಂದೆಯ ಯಾವ ಶ್ರೀಮತದಂತೆ ನಡೆಯುವುದರಿಂದ ಗರ್ಭ ಜೈಲಿನ ಶಿಕ್ಷೆಗಳಿಂದ ಬಿಡುಗಡೆಯಾಗುತ್ತೀರಿ?

ಉತ್ತರ:
ತಂದೆಯ ಶ್ರೀಮತವಾಗಿದೆ - ಮಕ್ಕಳೇ, ನಷ್ಟಮೋಹಿಗಳಾಗಿ, ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ, ನೀವು ಕೇವಲ ನನ್ನನ್ನು ನೆನಪು ಮಾಡಿ. ಯಾವುದೇ ಪಾಪ ಕರ್ಮವನ್ನು ಮಾಡಬೇಡಿ ಆಗ ಗರ್ಭ ಜೈಲಿನ ಶಿಕ್ಷೆಗಳಿಂದ ಬಿಡುಗಡೆಯಾಗುತ್ತೀರಿ. ಇಲ್ಲಿ ನೀವು ಜನ್ಮ-ಜನ್ಮಾಂತರಗಳಿಂದ ಪಂಜರದ ಪಕ್ಷಿಯಾಗುತ್ತಾ ಬಂದಿದ್ದೀರಿ. ಈಗ ಆ ಎಲ್ಲಾ ಶಿಕ್ಷೆಗಳಿಂದ ಪಾರು ಮಾಡಲು ತಂದೆಯು ಬಂದಿದ್ದಾರೆ. ಸತ್ಯಯುಗದಲ್ಲಿ ಗರ್ಭ ಜೈಲಿರುವುದಿಲ್ಲ.

ಓಂ ಶಾಂತಿ.
ಆತ್ಮ ಏನಾಗಿದೆ ಮತ್ತು ಆತ್ಮನ ತಂದೆ ಪರಮಾತ್ಮ ಯಾರೆಂದು ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಪುನಃ ತಿಳಿಸುತ್ತಾರೆ ಏಕೆಂದರೆ ಇದಂತೂ ಪತಿತ ಪ್ರಪಂಚವಾಗಿದೆ. ಪತಿತ ಪ್ರಪಂಚದಲ್ಲಿ ಯಾವಾಗಲೂ ಬುದ್ಧಿಹೀನರಿರುತ್ತಾರೆ. ಪಾವನ ಪ್ರಪಂಚದಲ್ಲಿ ಬುದ್ಧಿವಂತರಿರುತ್ತಾರೆ. ಭಾರತವು ಪಾವನ ಪ್ರಪಂಚ ಅರ್ಥಾತ್ ದೇವಿ-ದೇವತೆಗಳ ರಾಜ್ಯವಾಗಿತ್ತು, ಲಕ್ಷ್ಮಿ-ನಾರಾಯಣರ ರಾಜ್ಯವಿತ್ತು. ಬಹಳ ಧನವಂತರು, ಸುಖಿಯಾಗಿದ್ದರು ಆದರೆ ಭಾರತವಾಸಿಗಳು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ತಂದೆ ಪರಮಪಿತ ಅಥವಾ ರಚಯಿತನನ್ನೇ ತಿಳಿದುಕೊಂಡಿಲ್ಲ. ಇದನ್ನು ಮನುಷ್ಯರೇ ಅರಿತುಕೊಳ್ಳಬೇಕು, ಪ್ರಾಣಿಗಳಂತೂ ಅರಿತುಕೊಳ್ಳುವುದಿಲ್ಲ ಅಲ್ಲವೆ. ಹೇ ಪರಮಪಿತ ಪರಮಾತ್ಮ ಎಂದು ನೆನಪು ಮಾಡುತ್ತಾರೆ ಅವರು ಪಾರಲೌಕಿಕ ತಂದೆಯಾಗಿದ್ದಾರೆ. ಆತ್ಮವು ತನ್ನ ತಂದೆಯಾದ ಪರಮಪಿತ ಪರಮಾತ್ಮನನ್ನೇ ನೆನಪು ಮಾಡುತ್ತದೆ. ಈ ಶರೀರಕ್ಕೆ ಜನ್ಮ ಕೊಡುವಂತಹವರಂತೂ ಲೌಕಿಕ ತಂದೆಯಾಗಿದ್ದಾರೆ ಮತ್ತು ಪರಮಪಿತ ಪರಮಾತ್ಮನು ಪಾರಲೌಕಿಕ ತಂದೆಯಾಗಿದ್ದಾರೆ ಅಂದರೆ ಆತ್ಮಗಳ ತಂದೆಯಾಗಿದ್ದಾರೆ. ಮನುಷ್ಯರು ಲಕ್ಷ್ಮೀ-ನಾರಾಯಣರ ಪೂಜೆಯನ್ನು ಮಾಡುತ್ತಾರೆ, ಇವರು ಸತ್ಯಯುಗದಲ್ಲಿದ್ದರು ಮತ್ತು ರಾಮ-ಸೀತೆಯರು ತ್ರೇತಾಯುಗದಲ್ಲಿದ್ದರೆಂಬುದನ್ನು ತಿಳಿಯುತ್ತಾರೆ. ತಂದೆಯು ಬಂದು ತಿಳಿಸುತ್ತಾರೆ - ಮಕ್ಕಳೇ ಪಾರಲೌಕಿಕ ತಂದೆಯಾದ ನನ್ನನ್ನು ಜನ್ಮ-ಜನ್ಮಾಂತರಗಳಿಂದ ನೆನಪು ಮಾಡುತ್ತಾ ಬಂದಿರಿ, ಪರಮಾತ್ಮನಂತೂ ಅವಶ್ಯವಾಗಿ ನಿರಾಕಾರನಾದರಲ್ಲವೆ. ಆತ್ಮಗಳೂ ಸಹ ನಿರಾಕಾರಿಯೇ, ಇಲ್ಲಿ ಬಂದು ಆಕಾರಿ, ಸಾಕಾರಿಯಾಗಿದ್ದಾರೆ. ಈ ಚಿಕ್ಕ ಮಾತೂ ಸಹ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಅವರು ನಿಮ್ಮ ಬೇಹದ್ದಿನ ತಂದೆ ರಚಯಿತನಾಗಿದ್ದಾರೆ. ನೀವು ಮಾತಾಪಿತ ನಾನು ನಿಮ್ಮ ಬಾಲಕ, ನಾವು ನಿಮ್ಮವರಾಗುತ್ತೇವೆಂದರೆ ಸ್ವರ್ಗದ ಮಾಲೀಕರಾಗುತ್ತೇವೆ ನಂತರ ತಮ್ಮನ್ನು ಮರೆಯುವುದರಿಂದ ನರಕದ ಮಾಲೀಕರಾಗಿ ಬಿಡುತ್ತೇವೆ ಎಂದು ಹೇಳುತ್ತಾರೆ. ಈಗ ಆ ತಂದೆಯು ಇವರ ಮುಖಾಂತರ ಕುಳಿತು ತಿಳಿಸುತ್ತಾರೆ. ನಾನು ರಚಯಿತನಾಗಿದ್ದೇನೆ, ಇದು ನನ್ನ ರಚನೆಯಾಗಿದೆ, ಇದರ ರಹಸ್ಯವನ್ನು ನಾನು ನಿಮಗೆ ತಿಳಿಸುತ್ತೇನೆ, ಇದನ್ನೂ ಸಹ ತಿಳಿದುಕೊಳ್ಳುತ್ತೀರಿ. ಆತ್ಮವನ್ನು ಯಾರೂ ನೋಡಿಲ್ಲ ಆದರೂ ಅಹಂ ಆತ್ಮ ಎಂದು ಏಕೆ ಹೇಳುತ್ತಾರೆ? ನಾನಾತ್ಮ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ ಎಂಬುದನ್ನಂತೂ ತಿಳಿದುಕೊಳ್ಳುತ್ತಾರಲ್ಲವೆ. ಮಹಾನ್ ಆತ್ಮ, ಪುಣ್ಯಾತ್ಮ ಎಂದು ಹೇಳುತ್ತಾರಲ್ಲವೆ. ನಿಶ್ಚಯ ಮಾಡಿಕೊಳ್ಳುತ್ತಾರೆ - ನಾವಾತ್ಮಗಳಾಗಿದ್ದೇವೆ, ಇದು ನಮ್ಮ ಶರೀರವಾಗಿದೆ, ಶರೀರವು ವಿನಾಶಿಯಾಗಿದೆ, ಆತ್ಮವು ಅವಿನಾಶಿಯಾಗಿದೆ. ಆ ಪರಮಪಿತ ಪರಮಾತ್ಮನ ಸಂತಾನನಾಗಿದ್ದೇನೆ. ಇದು ಎಷ್ಟು ಸಹಜವಾದ ಮಾತಾಗಿದೆ. ಆದರೆ ಒಳ್ಳೊಳ್ಳೆಯ ಬುದ್ಧಿವಂತರೇ ಇದನ್ನು ತಿಳಿಯುವುದಿಲ್ಲ. ಮಾಯೆಯು ಬುದ್ಧಿಗೆ ಬೀಗ ಹಾಕಿದೆ. ನಿಮಗೆ ತಮ್ಮ ಆತ್ಮದ ಸಾಕ್ಷಾತ್ಕಾರವೂ ಆಗುವುದಿಲ್ಲ. ಆತ್ಮವೇ ಅನೇಕ ಜನ್ಮಗಳನ್ನು ತೆಗೆದುಕೊಳ್ಳುತ್ತದೆಯಲ್ಲವೆ. ಪ್ರತಿಯೊಂದು ಜನ್ಮದಲ್ಲಿ ತಂದೆಯು ಬದಲಾಗುತ್ತಾ ಹೋಗುತ್ತಾರೆ. ನೀವು ತಮ್ಮನ್ನು ಆತ್ಮನೆಂದು ಏಕೆ ನಿಶ್ಚಯ ಮಾಡಿಕೊಳ್ಳುವುದಿಲ್ಲ? ಆತ್ಮದ ಸಾಕ್ಷಾತ್ಕಾರವಾಗಲೆಂದು ಹೇಳುತ್ತಾರೆ. ಅರೆ! ಇಷ್ಟೊಂದು ಜನ್ಮಗಳಿಂದ ನಮಗೆ ಆತ್ಮದ ಸಾಕ್ಷಾತ್ಕಾರವಾಗಲೆಂದು ಯಾರಿಗಾದರೂ ಹೇಳಿದ್ದೀರಾ? ಕೆಲಕೆಲವರಿಗೆ ಆತ್ಮದ ಸಾಕ್ಷಾತ್ಕಾರವಾದರೂ ಸಹ ಅವರು ಅರಿತುಕೊಳ್ಳಲಾಗುವುದಿಲ್ಲ, ತಂದೆಯನ್ನು ನೀವು ಅರಿತುಕೊಂಡಿಲ್ಲ. ಬೇಹದ್ದಿನ ತಂದೆಯ ವಿನಃ ಆತ್ಮಗಳಿಗೆ ಪರಮಾತ್ಮನ ಸಾಕ್ಷಾತ್ಕಾರವನ್ನೂ ಯಾರೂ ಮಾಡಿಸುವುದಿಲ್ಲ. ಹೇ ಭಗವಂತನೇ ಎಂದು ಹೇಳುತ್ತಾರೆ ಅಂದಾಗ ಅವರು ತಂದೆಯಾದರಲ್ಲವೆ. ನಿಮಗೆ ಇಬ್ಬರು ತಂದೆಯರಿದ್ದಾರೆ, ಒಬ್ಬರಂತೂ ವಿನಾಶಿ ಶರೀರಕ್ಕೆ ಜನ್ಮ ಕೊಡುವ ವಿನಾಶಿ ತಂದೆಯಾಗಿದ್ದಾರೆ, ಇನ್ನೊಬ್ಬರು ಅವಿನಾಶಿ ಆತ್ಮಗಳ ಅವಿನಾಶಿ ತಂದೆಯಾಗಿದ್ದಾರೆ. ನೀವು ಮಾತಾಪಿತ ಎಂದು ಹಾಡುತ್ತೀರಿ ಅವರನ್ನು ನೆನಪು ಮಾಡುತ್ತೀರೆಂದರೆ ಅವಶ್ಯವಾಗಿ ಅವರು ಬಂದಿರಬೇಕಲ್ಲವೆ. ಜಗದಂಬಾ ಮತ್ತು ಜಗತ್ಪಿತ ಕುಳಿತಿದ್ದಾರೆ, ರಾಜಯೋಗವನ್ನು ಕಲಿಯುತ್ತಿದ್ದಾರೆ. ವೈಕುಂಠದಲ್ಲಿ ಲಕ್ಷ್ಮಿ-ನಾರಾಯಣರ ರಾಜ್ಯವಿತ್ತು, ಅವರೂ ಸಹ ಭಾರತದಲ್ಲೇ ಇದ್ದರಲ್ಲವೆ. ಮೇಲೆ ಎಲ್ಲೋ ಸ್ವರ್ಗವಿದೆ ಎಂದು ಮನುಷ್ಯರು ತಿಳಿಯುತ್ತಾರೆ. ಅರೆ ಲಕ್ಷ್ಮಿ-ನಾರಾಯಣರ ನೆನಪಾರ್ಥವು ಇಲ್ಲಿಯೇ ಇದೆಯಲ್ಲವೆ ಅಂದಮೇಲೆ ಅವಶ್ಯವಾಗಿ ಇಲ್ಲಿಯೇ ರಾಜ್ಯ ಮಾಡಿರುವರು. ನಿಮ್ಮ ನೆನಪಾರ್ಥವಾಗಿ ದಿಲ್ವಾಡಾ ಮಂದಿರವು ಮಾಡಲ್ಪಟ್ಟಿದೆ. ನೀವು ರಾಜಯೋಗಿಗಳಾಗಿದ್ದೀರಿ. 108 ಕೊಠಡಿಗಳಿಂದ ಮಾಡಲ್ಪಟ್ಟಿದೆ. ನೀವು ಅಧರ್ ಕುಮಾರರು ಮತ್ತು ಕುಮಾರಿಯರು ಇಲ್ಲಿ ಕುಳಿತಿದ್ದೀರಿ, ಇದರ ನೆನಪಾರ್ಥ ನಂತರ ಭಕ್ತಿಯಲ್ಲಾಗುತ್ತದೆ. ನಿಮ್ಮ ನೆನಪಾರ್ಥವಾಗಿ ದಿಲ್ವಾಡಾ ಮಂದಿರವು ಸರಿಯಾಗಿ ಹೋಲುತ್ತದೆ. ಆದರೆ ಆ ಮಂದಿರದ ನಿಮಿತ್ತರು ಮುಂತಾದವರು ಯಾರಿದ್ದಾರೊ ಅವರಿಗೆ ಈ ಮಂದಿರವು ಯಾರದು? ಎಂದು ಗೊತ್ತಿಲ್ಲ. ದಿಲ್ವಾಡಾ ಎಂಬ ಹೆಸರಿಗೆ ಯಾವುದಾದರೂ ಅರ್ಥವಿರಬೇಕಲ್ಲವೆ. ಅಂದಮೇಲೆ ನಮ್ಮ ಹೃದಯವನ್ನು ಗೆಲ್ಲುವವರು ಯಾರು? ಈ ಆದಿ ದೇವ ಮತ್ತು ಆದಿ ದೇವಿಯೂ ಸಹ ರಾಜಯೋಗವನ್ನು ಕಲಿಯುತ್ತಿದ್ದಾರೆ. ಇವರೂ ಸಹ ಆ ನಿರಾಕಾರ ಪರಮಪಿತ ಪರಮಾತ್ಮನನ್ನೇ ನೆನಪು ಮಾಡುತ್ತಾರೆ. ಅವರಾಗಿದ್ದಾರೆ ಶ್ರೇಷ್ಠಾತಿ ಶ್ರೇಷ್ಠ ಜ್ಞಾನಸಾಗರ. ಈ ಆದಿ ದೇವನ ಶರೀರದಲ್ಲಿ ಕುಳಿತು ಎಲ್ಲಾ ಮಕ್ಕಳಿಗೆ ತಿಳಿಸುತ್ತಾರೆ - ಈ ಮಂದಿರವು ಯಾವಾಗ ಆಯಿತು, ಏಕೆ ಆಯಿತು, ಇದು ಯಾರ ನೆನಪಾರ್ಥವಾಗಿದೆ? ಇದೇನೂ ಗೊತ್ತಿಲ್ಲ. ದೇವಿಯರ ಎಷ್ಟೊಂದು ಹೆಸರುಗಳನ್ನು ತೆಗೆದುಕೊಳ್ಳುತ್ತಾರೆ. ಕಾಳಿ, ದುರ್ಗಾ, ಅನ್ನಪೂರ್ಣ....... ಈಗ ಇಡೀ ವಿಶ್ವದ ಅನ್ನಪೂರ್ಣ ಯಾರಿರಬಹುದು? ಯಾವ ದೇವಿ ಅನ್ನವನ್ನು ಪೂರ್ಣ ಮಾಡುತ್ತಾರೆ, ನಿಮಗೆ ಗೊತ್ತಿದೆಯೇ? ಭಾರತವು ಸ್ವರ್ಗವಾಗಿತ್ತು, ಅಲ್ಲಂತೂ ಅಪಾರ ವೈಭವವಿರುತ್ತದೆ. ಇಲ್ಲಿಗೆ 80-90 ವರ್ಷಗಳ ಹಿಂದೆಯೇ 10-12 ಆಣೆಗೆ ಒಂದು ಮಣ ದವಸ-ಧಾನ್ಯವು ಸಿಗುತ್ತಿತ್ತು ಅಂದಮೇಲೆ ಅದಕ್ಕಿಂತಲೂ ಮೊದಲು ಇನ್ನೆಷ್ಟು ಕಡಿಮೆ ಬೆಲೆಯಿರಬಹುದು. ಸತ್ಯಯುಗದಲ್ಲಂತೂ ದವಸ-ಧಾನ್ಯಗಳು ಬಹಳ ಸುಲಭ ಬೆಲೆ ಮತ್ತು ಬಹಳ ಚೆನ್ನಾಗಿರುತ್ತದೆ. ಆದರೆ ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ತಂದೆಯು ಬಂದು ನೀವಾತ್ಮಗಳಿಗೆ ಓದಿಸುತ್ತಾರೆ. ಆತ್ಮವು ಈ ಕರ್ಮೇಂದ್ರಿಯಗಳಿಂದ ಕೇಳುತ್ತದೆ. ಆತ್ಮಕ್ಕೆ ನೋಡಲು ಈ ಕಣ್ಣುಗಳು ಸಿಕ್ಕಿದೆ, ಕೇಳುವುದಕ್ಕೋಸ್ಕರ ಈ ಕಿವಿಗಳು ಸಿಕ್ಕಿದೆ. ತಂದೆಯು ತಿಳಿಸುತ್ತಾರೆ - ನಾನು ನಿರಾಕಾರನೂ ಸಹ ಈ ಶರೀರದ ಆಧಾರವನ್ನು ಪಡೆಯುತ್ತೇನೆ, ನನ್ನನ್ನು ಸದಾ, ಶಿವನೆಂದೇ ಹೇಳುತ್ತಾರೆ. ರುದ್ರ, ಶಿವ, ಸೋಮನಾಥ... ಇತ್ಯಾದಿ ಮನುಷ್ಯರು ಬಹಳ ಹೆಸರುಗಳನ್ನಿಟ್ಟಿದ್ದಾರೆ ಆದರೆ ನನ್ನ ಹೆಸರೊಂದೇ ಆಗಿದೆ - ಶಿವ. ಶಿವಾಯ ನಮಃ ಎಂದು ಭಕ್ತರು ಭಗವಂತನನ್ನು ನೆನಪು ಮಾಡುತ್ತಾ ಬಂದಿದ್ದಾರೆ. ಭಕ್ತಿಮಾರ್ಗಕ್ಕೆ 2500 ವರ್ಷಗಳಾಗಿವೆ, ಭಕ್ತಿಮಾರ್ಗದಲ್ಲಿ ಮೊದಲು ಅವ್ಯಭಿಚಾರಿ ಭಕ್ತಿಯಿತ್ತು, ಈಗಂತೂ ನೀವು ಕಲ್ಲು, ಮಣ್ಣಿನಲ್ಲಿ ಹಾಕಿ ಬಿಟ್ಟಿದ್ದೀರಿ. ಈಗ ಭಕ್ತಿಯದೂ ಅಂತ್ಯವಾಗಿದೆ. ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗಲು ನಾನು ಬಂದಿದ್ದೇನೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ಅಣು ಬಾಂಬುಗಳು ತಯಾರಾಗಿವೆ ಎಂದರೆ ಇದರಲ್ಲಿ ಎಲ್ಲರೂ ಸಮಾಪ್ತಿಯಾಗಿ ಬಿಡುತ್ತಾರೆ. ಸತ್ಯಯುಗದಲ್ಲಿ ಎಷ್ಟು ಕಡಿಮೆ ಕೇವಲ 9 ಲಕ್ಷ ಜನಸಂಖ್ಯೆಯಿರುತ್ತದೆ. ಉಳಿದವರೆಲ್ಲರೂ ಎಲ್ಲಿಗೆ ಹೋಗುತ್ತಾರೆ? ಈ ಯುದ್ಧ, ಭೂಕಂಪ ಇತ್ಯಾದಿಗಳಾಗುತ್ತವೆ. ವಿನಾಶವಂತೂ ಅವಶ್ಯವಾಗಿ ಆಗಲಿದೆ.

ಇವರು ಪ್ರಜಾಪಿತನಾಗಿದ್ದಾರೆ, ಅನೇಕ ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆ ಅಂದಮೇಲೆ ಬ್ರಹ್ಮಾರವರ ತಂದೆ ಯಾರು? ನಿರಾಕಾರ ಶಿವನಾಗಿದ್ದಾರೆ, ನಾವು ಅವರ ಮೊಮ್ಮಕ್ಕಳಾಗಿದ್ದೇವೆ. ಶಿವ ತಂದೆಯಿಂದ ನಾವು ಆಸ್ತಿಯನ್ನು ಪಡೆಯುತ್ತೇವೆ ಅಂದಮೇಲೆ ಅವರನ್ನೇ ನೆನಪು ಮಾಡಬೇಕು. ನೆನಪಿನಿಂದಲೇ ಪಾಪಗಳ ಹೊರೆಯು ಇಳಿಯುತ್ತದೆ. ನಿಮಗೆ ಗೊತ್ತಿದೆ ಇದು ಪತಿತ ಪ್ರಪಂಚವಾಗಿದೆ. ಸತ್ಯಯುಗವು ನಿರ್ವಿಕಾರಿ ಪ್ರಪಂಚವಾಗಿರುತ್ತದೆ ಅಲ್ಲಿ ವಿಷ, ವಿಕಾರತೆ ಇರುವುದಿಲ್ಲ. ನಿಯಮಾನುಸಾರ ಒಂದು ಮಗು ಆಗುತ್ತದೆ, ಎಂದೂ ಅಕಾಲ ಮೃತ್ಯುವಿರುವುದಿಲ್ಲ. ಸುಖಧಾಮವಾಗಿರುತ್ತದೆ ಇಲ್ಲಂತೂ ಎಷ್ಟೊಂದು ದುಃಖವಿದೆ. ಆದರೆ ಈ ಮಾತುಗಳು ಯಾರಿಗೂ ಗೊತ್ತಿಲ್ಲ. ಗೀತೆಯನ್ನು ತಿಳಿಸುತ್ತಾರೆ, ಶ್ರೀ ಮತ್ಭಗವದ್ಗೀತೆ, ಭಗವಾನುವಾಚ. ಅಂದಮೇಲೆ ಭಗವಂತನು ಯಾರು? ಶ್ರೀ ಕೃಷ್ಣನೆಂದು ಹೇಳಿ ಬಿಡುತ್ತಾರೆ ಆರೆ ಶ್ರೀಕೃಷ್ಣನಂತೂ ಚಿಕ್ಕ ಮಗುವಾಗಿದ್ದಾನೆ. ಅಂದಮೇಲೆ ರಾಜಯೋಗವನ್ನು ಹೇಗೆ ಕಲಿಸುವರು? ಆ ಸಮಯದಲ್ಲಿ ಪತಿತ ಪ್ರಪಂಚವಿರುತ್ತದೆಯೆ! ಸದ್ಗತಿಗಾಗಿ ರಾಜಯೋಗವನ್ನು ಕಲಿಸುವವರು ಇಲ್ಲಿರಬೇಕು. ರುದ್ರ ಗೀತಾ ಜ್ಞಾನ ಯಜ್ಞವೆಂದು ಗೀತೆಯಲ್ಲಿ ಬರೆಯಲ್ಪಟ್ಟಿದೆ. ಕೃಷ್ಣನ ಗೀತಾ ಜ್ಞಾನ ಯಜ್ಞವೆಂದಂತೂ ಅಲ್ಲ. ಈ ಜ್ಞಾನ ಯಜ್ಞವು 72 (1936-2008) ವರ್ಷಗಳಿಂದ ನಡೆಯುತ್ತಾ ಬಂದಿದೆ. ಇದರ ಸಮಾಪ್ತಿ ಯಾವಾಗ ಆಗುವುದು? ಯಾವಾಗ ಇಡೀ ಸೃಷ್ಟಿಯು ಇದರಲ್ಲಿ ಸ್ವಾಹಾ ಆಗುತ್ತದೆಯೋ ಆಗ. ಯಜ್ಞವು ಸಮಾಪ್ತಿಯಾದಾಗ ಅದರಲ್ಲಿ ಎಲ್ಲವನ್ನು ಸ್ವಾಹಾ ಮಾಡುತ್ತಾರಲ್ಲವೆ. ಈ ಯಜ್ಞವೂ ಸಹ ಅಂತ್ಯದವರೆಗೆ ನಡೆಯುತ್ತಾ ಇರುತ್ತದೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ತಂದೆಯು ತಿಳಿಸುತ್ತಾರೆ - ನಾನು ಕಾಲರ ಕಾಲನಾಗಿದ್ದೇನೆ, ಎಲ್ಲರನ್ನೂ ಕರೆದುಕೊಂಡು ಹೋಗಲು ಬಂದಿದ್ದೇನೆ. ನಿಮಗೆ ಓದಿಸುತ್ತಿದ್ದೇನೆ. ನೀವು ಸ್ವರ್ಗದ ಮಾಲೀಕರಾಗಿ. ನಿಮಗೆ ಗೊತ್ತಿದೆ, ಈ ಸಮಯದಲ್ಲಿ - ಎಲ್ಲಾ ಮನುಷ್ಯ ಮಾತ್ರರು ಸದಾ ದೌರ್ಭಾಗ್ಯಶಾಲಿಗಳಾಗಿದ್ದಾರೆ, ಸತ್ಯಯುಗದಲ್ಲಿ ಸದಾ ಸೌಭಾಗ್ಯಶಾಲಿಗಳಾಗಿದ್ದರು. ಈ ಅಂತರವನ್ನು ಎಲ್ಲರಿಗೂ ತಿಳಿಸಬೇಕಾಗಿದೆ. ಇಲ್ಲಿ ಬಂದಾಗ ಚೆನ್ನಾಗಿ ಅರಿತುಕೊಳ್ಳುತ್ತಾರೆ ನಂತರ ಮನೆಗೆ ಹೋದಾಗ ಎಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಹೇಗೆ ಗರ್ಭ ಜೈಲಿನಲ್ಲಿ ನಾವು ಪಾಪವನ್ನೆಂದೂ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಬರುತ್ತಾರೆ. ಹೊರಗಡೆ ಬಂದಾಗ ಪುನಃ ಪಾಪ ಕರ್ಮವನ್ನು ಮಾಡಲು ತೊಡಗಿ ಬಿಡುತ್ತಾರೆ. ಹೇಗೆ ಪಂಜರದ ಪಕ್ಷಿಗಳಿರುತ್ತವೆಯಲ್ಲವೆ ಹಾಗೆಯೇ ಈ ಸಮಯದಲ್ಲಿ ಮನುಷ್ಯ ಮಾತ್ರರೆಲ್ಲರೂ ಪಂಜರದ ಪಕ್ಷಿಗಳಾಗಿದ್ದಾರೆ. ಘಳಿಗೆ-ಘಳಿಗೆಯೂ ಗರ್ಭ ಜೈಲಿನಲ್ಲಿ ಹೋಗಿ ಶಿಕ್ಷೆಗಳನ್ನನುಭವಿಸುತ್ತಾರೆ. ಈಗ ನಿಮ್ಮನ್ನು ಪಂಜರದ ಪಕ್ಷಿಯಾಗುವುದರಿಂದ ಬಿಡಿಸುತ್ತೇನೆಂದು ತಂದೆಯು ಹೇಳುತ್ತಾರೆ. ಸತ್ಯಯುಗದಲ್ಲಿ ಗರ್ಭಕ್ಕೆ ಜೈಲು ಎಂದು ಹೇಳುವುದಿಲ್ಲ. ನಿಮ್ಮನ್ನು ಈ ಶಿಕ್ಷೆಗಳಿಂದ ಪಾರು ಮಾಡಲು ಬಂದಿದ್ದೇನೆ, ಈಗ ನನ್ನನ್ನು ನೆನಪು ಮಾಡಿ ಯಾವುದೇ ಪಾಪ ಕರ್ಮ ಮಾಡಬೇಡಿ ನಷ್ಟಮೋಹಿಗಳಾಗಿ. ನನ್ನವರಂತೂ ಒಬ್ಬರೇ ವಿನಃ ಮತ್ತ್ಯಾರೂ ಇಲ್ಲವೆಂದು ಹಾಡುತ್ತಾರೆ. ಇದೇನು ಕೃಷ್ಣನ ಮಾತಲ್ಲ. ಕೃಷ್ಣನಂತೂ 84 ಜನ್ಮಗಳನ್ನು ತೆಗೆದುಕೊಂಡು ಈಗ ಬಂದು ಬ್ರಹ್ಮಾರವರಾಗಿದ್ದಾರೆ. ಪುನಃ ಇವರೇ ಕೃಷ್ಣನಾಗಬೇಕಾಗಿದೆ, ಆದ್ದರಿಂದಲೇ ಈ ಶರೀರದಲ್ಲಿಯೇ ಪ್ರವೇಶ ಮಾಡಿದ್ದಾರೆ. ಇದು ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ. ಈಗ ಭಗವಂತನು ಈ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ. ಭವಿಷ್ಯಕ್ಕೋಸ್ಕರ ನಿಮ್ಮ ಪ್ರಾಲಬ್ಧವನ್ನು ರೂಪಿಸುತ್ತಾರೆ. ಈಗ ನೀವು ಪುರುಷಾರ್ಥ ಮಾಡಿ ಅನೇಕ ಜನ್ಮಗಳ ಪ್ರಾಲಬ್ಧವನ್ನು ಬೇಹದ್ದಿನ ತಂದೆಯ ಮೂಲಕ ಮಾಡಿಕೊಳ್ಳುತ್ತಿದ್ದೀರಿ, ಆ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ಇದು ತಿಳಿದುಕೊಳ್ಳುವಂತಹ ಮಾತುಗಳಾಗಿವೆ. ನಾಟಕದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯ ಪಾತ್ರವು ಬೇರೆ-ಬೇರೆಯಾಗಿದೆ. ಇದರಲ್ಲಿ ನಾವೇಕೆ ಅಳಬೇಕು, ದುಃಖ ಪಡಬೇಕು? ನಾವಂತೂ ಜೀವಿಸಿದ್ದಂತೆಯೇ ಆ ಒಬ್ಬರೇ ತಂದೆಯನ್ನು ನೆನಪು ಮಾಡುತ್ತೇವೆ. ಈ ಶರೀರದ ಚಿಂತೆಯೂ ನಮಗಿಲ್ಲ. ಈ ಹಳೆಯ ಶರೀರವನ್ನು ಬಿಟ್ಟರೆ ನಾವು ತಂದೆಯ ಬಳಿ ಹೋಗುತ್ತೇವೆ. ಈ ಸಮಯದಲ್ಲಿ ನೀವು ಭಾರತದ ಇಷ್ಟೊಂದು ಸೇವೆ ಮಾಡುತ್ತಿದ್ದೀರಿ. ಅನ್ನಪೂರ್ಣ ದೇವಿ, ದುರ್ಗಾ, ಕಾಳಿ ಇತ್ಯಾದಿಯಾಗಿ ನಿಮ್ಮ ಹೆಸರುಗಳನ್ನೇ ಗಾಯನ ಮಾಡಲಾಗಿದೆ. ಬಾಕಿ ಯಾವುದೇ ಭಯಾನಕ ಚಹರೆಯುಳ್ಳ ಕಾಳಿ ದೇವಿಯಾಗಲಿ, ಸೊಂಡಿಲಿರುವ ಗಣೇಶನಾಗಲಿ ಇರುವುದಿಲ್ಲ. ಮನುಷ್ಯರಂತೂ ಮನುಷ್ಯರೇ ಆಗಿರುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳನ್ನು ಈ ಲಕ್ಷ್ಮಿ-ನಾರಾಯಣರನ್ನಾಗಿ ಮಾಡುತ್ತಿದ್ದೇನೆ. ನಾವು ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ ನಂತರ ಭವಿಷ್ಯದಲ್ಲಿ ಹೋಗಿ ರಾಜಕುಮಾರ-ಕುಮಾರಿಯರಾಗುತ್ತೇವೆ ಎಂದು ನಿಶ್ಚಯ ಮಾಡಿಕೊಳ್ಳಿ. ಯಾವ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆಯೋ ಅವರನ್ನು ಯಾರೂ ತಿಳಿದುಕೊಂಡಿಲ್ಲ. ಜಗದಂಬೆಯನ್ನೂ ಮರೆತು ಬಿಟ್ಟಿದ್ದಾರೆ. ಯಾರ ಮಂದಿರಗಳು ಮಾಡಲ್ಪಟ್ಟಿವೆಯೋ ಅವರು ಈಗ ಚೈತನ್ಯದಲ್ಲಿ ಕುಳಿತಿದ್ದಾರೆ. ಕಲಿಯುಗದ ನಂತರ ಪುನಃ ಸತ್ಯಯುಗವಾಗಲಿದೆ. ವಿನಾಶದ ಕುರಿತು ಮನುಷ್ಯರು ಕೇಳುತ್ತಾರೆ. ಅರೆ ಮೊದಲು ನೀವು ಓದಿ ಬುದ್ಧಿವಂತರಾಗಿ. ಮಹಾಭಾರತ ಯುದ್ಧವಂತೂ ಅವಶ್ಯವಾಗಿ ಆಗಿತ್ತು, ಇದರ ನಂತರವೇ ಸ್ವರ್ಗದ ಬಾಗಿಲುಗಳು ತೆರೆದಿದ್ದವು. ಹಾಗೆಯೇ ಈಗ ಮಾತೆಯರ ಮುಖಾಂತರವೇ ಸ್ವರ್ಗದ ಬಾಗಿಲುಗಳು ತೆರೆಯುತ್ತಿದೆ. ವಂದೇ ಮಾತರಂ ಎಂದು ಹಾಡುತ್ತಾರಲ್ಲವೆ. ಪಾವನರಿಗೇ ವಂದನೆ ಮಾಡಲಾಗುತ್ತದೆ. ಮಾತೆಯರಲ್ಲಿ ಎರಡು ಪ್ರಕಾರದವರಿರುತ್ತಾರೆ. ಒಂದನೆಯದಾಗಿ ಶಾರೀರಿಕ ಸಮಾಜ ಸೇವಕರಿದ್ದಾರೆ, ಎರಡನೆಯದಾಗಿ ಆತ್ಮಿಕ ಸಮಾಜ ಸೇವಕರಿದ್ದಾರೆ. ನಿಮ್ಮದು ಇದು ಆತ್ಮಿಕ ಯಾತ್ರೆಯಾಗಿದೆ. ನಾವು ಈಗ ಈ ಶರೀರವನ್ನು ಬಿಟ್ಟು ಹಿಂತಿರುಗಿ ಹೋಗಲಿದ್ದೇವೆ ಎಂದು ನಿಮಗೆ ಗೊತ್ತಿದೆ. ಭಗವಾನುವಾಚ - ಮನ್ಮನಾಭವ, ನಿಮ್ಮ ತಂದೆಯಾದ ನನ್ನನ್ನು ನೆನಪು ಮಾಡಿ, ಮಗುವಾದ ಶ್ರೀ ಕೃಷ್ಣನಂತೂ ಈ ರೀತಿ ಹೇಳುವುದಿಲ್ಲವಲ್ಲವೆ. ಕೃಷ್ಣನಿಗಂತೂ ತನ್ನ ತಂದೆಯಿರುತ್ತಾರೆ, ಮನ್ಮಾನಭವದ ಅರ್ಥವೂ ಸಹ ಯಾರಿಗೂ ಗೊತ್ತಿಲ್ಲ. ಇದನ್ನು ತಂದೆಯೇ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಹಾರಲು ರೆಕ್ಕೆಗಳು ಸಿಕ್ಕಿ ಬಿಡುತ್ತವೆ. ಈಗ ನೀವು ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರಾಗುತ್ತೀರಿ. ರಚಯಿತ ತಂದೆಯಂತೂ ಎಲ್ಲರಿಗೂ ಒಬ್ಬರೇ ಆಗಿದ್ದಾರೆ. ಆದಿದೇವ ಮತ್ತು ಆದಿದೇವಿಯ ಮಂದಿರವೂ ಇದೆ. ಅವರ ಮಕ್ಕಳಾದ ನೀವು ಇಲ್ಲಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ಇಲ್ಲಿಯೇ ನೀವು ತಪಸ್ಸು ಮಾಡಿದ್ದಿರಿ, ನಿಮ್ಮ ನೆನಪಾರ್ಥವು ಸಮ್ಮುಖದಲ್ಲಿ ನಿಂತಿದೆ. ಲಕ್ಷ್ಮಿ-ನಾರಾಯಣ ಮುಂತಾದವರಿಗೆ ರಾಜ್ಯ ಭಾಗ್ಯವು ಹೇಗೆ ಸಿಕ್ಕಿತು. ಇದು ಅವರ ಮಂದಿರವಾಗಿದೆ. ನೀವು ರಾಜಋಷಿಗಳಾಗಿದ್ದೀರಿ, ರಾಜ್ಯ ಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವ ಅಥವಾ ಪುನಃ ಭಾರತದ ರಾಜ್ಯ ಭಾಗ್ಯವನ್ನು ಪಡೆಯಲು ನೀವು ಪುರುಷಾರ್ಥ ಮಾಡುತ್ತಿದ್ದೀರಿ. ನೀವು ಭಾರತದಲ್ಲಿ ಸ್ವರ್ಗದ ರಾಜಧಾನಿಯನ್ನು ತಮ್ಮ ತನು-ಮನ-ಧನದಿಂದ ಸೇವೆ ಮಾಡಿ ಸ್ಥಾಪನೆ ಮಾಡುತ್ತೀರಿ. ತಂದೆಯ ಶ್ರೀ ಮತದ ಮುಖಾಂತರ ನೀವು ಪತಿತ ರಾವಣ ರಾಜ್ಯದಿಂದ ಎಲ್ಲರನ್ನೂ ಬಿಡುಗಡೆ ಮಾಡುತ್ತೀರಿ. ತಂದೆಯು ಮುಕ್ತಿದಾತ ದುಃಖಹರ್ತ-ಸುಖಕರ್ತನಾಗಿದ್ದಾರೆ. ನಿಮ್ಮ ದುಃಖವನ್ನು ದೂರ ಮಾಡಲು ಹಳೆಯ ಪ್ರಪಂಚದ ವಿನಾಶ ಮಾಡಿಸುತ್ತಾರೆ, ನಿಮಗೆ ಶತ್ರುವಿನ ಮೇಲೆ ವಿಜಯ ಪ್ರಾಪ್ತಿ ಮಾಡಿಸುತ್ತಾರೆ. ಆದ್ದರಿಂದ ನೀವು ಮಾಯಾಜೀತರು ಜಗತ್ಜೀತರು ಆಗುತ್ತೀರಿ. ನೀವು ಕಲ್ಪ-ಕಲ್ಪವೂ ರಾಜ್ಯವನ್ನು ಪಡೆಯುತ್ತೀರಿ ಮತ್ತು ಕಳೆದುಕೊಳ್ಳುತ್ತೀರಿ. ಇದು ರುದ್ರ ಶಿವನ ಜ್ಞಾನ ಯಜ್ಞವಾಗಿದೆ, ಇದರಿಂದ ಈ ವಿನಾಶ ಜ್ವಾಲೆಯು ಹೊರಟಿದೆ. ಅವರೆಲ್ಲರೂ ವಿನಾಶವಾಗುತ್ತಾರೆ ಮತ್ತು ನೀವೆಲ್ಲರೂ ಸದಾ ಸುಖಿಯಾಗಿ ಬಿಡುತ್ತೀರಿ. ದ್ವಾಪರದಿಂದ ದುಃಖವು ಪ್ರಾರಂಭವಾಗುತ್ತದೆ ನಾನು ಬಂದು ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಕಲಿಯುಗವು ವೇಶ್ಯಾಲಯವಾಗಿದೆ, ಸತ್ಯಯುಗವು ಶಿವಾಲಯವಾಗಿದೆ. ನೀವು ಬೇಹದ್ದಿನ ತಂದೆಯಿಂದ ಸ್ವರ್ಗದ ಮಾಲೀಕರಾಗುತ್ತೀರಿ ಅಂದಮೇಲೆ ಈ ಖುಷಿಯ ನಶೆಯೇರಬೇಕಾಗಿದೆಯಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಜೀವಿಸಿದ್ದಂತೆಯೇ ತಂದೆಯನ್ನು ನೆನಪು ಮಾಡಿ ಆಸ್ತಿಯ ಅಧಿಕಾರವನ್ನು ಪಡೆಯಬೇಕು, ಯಾವುದೇ ಮಾತಿಗೂ ಚಿಂತೆ ಮಾಡಬಾರದಾಗಿದೆ.

2. ಶ್ರೀಮತದನುಸಾರ ತಮ್ಮ ತನು-ಮನ-ಧನದಿಂದ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆ ಮಾಡಬೇಕು ಮತ್ತು ಎಲ್ಲರಿಗೆ ರಾವಣನಿಂದ ಮುಕ್ತರಾಗುವ ಯುಕ್ತಿಯನ್ನು ತಿಳಿಸಬೇಕಾಗಿದೆ.

ವರದಾನ:
ಬೇಹದ್ದಿನ ಸ್ಮತಿ ಸ್ವರೂಪದ ಮುಖಾಂತರ ಹದ್ದಿನ ಮಾತುಗಳನ್ನು ಸಮಾಪ್ತಿ ಮಾಡುವಂತಹ ಅನುಭವಿ ಮೂರ್ತಿ ಭವ.

ತಾವು ಶ್ರೇಷ್ಠ ಆತ್ಮರು ಡೈರೆಕ್ಟ್ ಬೀಜ ಮತ್ತು ಮುಖ್ಯ ಎರಡು ಎಲೆಗಳು, ತ್ರಿಮೂರ್ತಿಯ ಜೊತೆ ಸಮೀಪ ಸಂಬಂಧವುಳ್ಳ ಬುಡ ಆಗಿರುವಿರಿ. ಇದೇ ಉನ್ನತವಾದ ಸ್ಟೇಜ್ ಮೇಲೆ ಸ್ಥಿತರಾಗಿರಿ, ಬೇಹದ್ದಿನ ಸ್ಮತಿ ಸ್ವರೂಪರಾಗಿ ಆಗ ಹದ್ದಿನ ವ್ಯರ್ಥ ಮಾತುಗಳು ಸಮಾಪ್ತಿಯಾಗಿ ಬಿಡುವುದು. ತಮ್ಮ ಬೇಹದ್ಧಿನ ವೃದ್ದಾಪ್ಯದಲ್ಲಿ ಬಂದಾಗ ಸದಾ ಸರ್ವ ಅನುಭವೀಮೂರ್ತಿಗಳಾಗಿ ಬಿಡುವಿರಿ. ಏನು ಬೇಹದ್ದಿನ ಪೂರ್ವಜತನದ ವೃತ್ತಿಯಾಗಿದೆ, ಅದನ್ನು ಸದಾ ಸ್ಮತಿಯಲ್ಲಿಟ್ಟುಕೊಳ್ಳಿ. ನೀವು ಪೂರ್ವಜರ ಕರ್ತವ್ಯ ಆಗಿದೆ ಅಮರ ಜ್ಯೋತಿಯಾಗಿ ಅಂಧಕಾರದಲ್ಲಿ ಅಲೆದಾಡುತ್ತಿರುವ ಆತ್ಮಗಳಿಗೆ ಆಶ್ರಯದ ಕಡೆ ತಲುಪಿಸುವುದು.

ಸ್ಲೋಗನ್:
ಯಾವುದೇ ಮಾತಿನಲ್ಲಿ ತಬ್ಬಿಬ್ಬಾಗುವ ಬದಲು ಮೋಜಿನ ಅನುಭವ ಮಾಡುವುದೇ ಖುಶಿಯಲ್ಲಿರುವ ಯೋಗಿಯಾಗುವುದಾಗಿದೆ.