17.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಇದು ಮನುಷ್ಯರಿಂದ ದೇವತೆಗಳಾಗುವ ವಿದ್ಯೆಯಾಗಿದೆ, ಈ ವಿದ್ಯೆಯಲ್ಲಿ ಸ್ವಲ್ಪವೂ ಹುಡುಗಾಟಿಕೆಯನ್ನು ಮಾಡಬಾರದು, ತಿಂದಿರಿ-ಮಲಗಿದಿರಿ, ವಿದ್ಯಾಭ್ಯಾಸ ಮಾಡಲಿಲ್ಲವೆಂದರೆ ಬಹಳ ಪಶ್ಚಾತ್ತಾಪ ಪಡಬೇಕಾಗುವುದು.”

ಪ್ರಶ್ನೆ:

ಯಾವ ಮಾತಿನಲ್ಲಿ ಬ್ರಹ್ಮಾ ತಂದೆಯನ್ನು ಅನುಕರಣೆ ಮಾಡುವುದರಿಂದ ಉನ್ನತಿಯಾಗುತ್ತಾ ಇರುವುದು?

ಉತ್ತರ:

ಹೇಗೆ ಬ್ರಹ್ಮಾ ತಂದೆಯು ತಮ್ಮದೆಲ್ಲವನ್ನೂ ಆಹುತಿ ಮಾಡಿ ಬಿಟ್ಟರು, ಅಂದರೆ ಸರ್ವಸ್ವವನ್ನು ಸಮರ್ಪಣೆ ಮಾಡಿದರು ಹಾಗೆಯೇ ತಂದೆಯನ್ನು ಅನುಕರಣೆ ಮಾಡಿ. ತಂದೆಯು ರಚಿಸಿರುವ ಈ ರುದ್ರ ಯಜ್ಞದಲ್ಲಿ ಸಂಪೂರ್ಣ ಆಹುತಿ ಮಾಡುವುದು ಅರ್ಥಾತ್ ತಂದೆಗೆ ಸಹಯೋಗಿಗಳಾಗುವುದೇ ಉನ್ನತಿಯ ಸಾಧನವಾಗಿದೆ. ಆದರೆ ನಾನು ಇಷ್ಟು ಸಹಾಯ ಮಾಡಿದೆನು, ಇಷ್ಟೊಂದು ಕೊಟ್ಟೆನು ಎಂಬ ವಿಚಾರಗಳು ಎಂದೂ ಬರಬಾರದು. ಏಕೆಂದರೆ ತಂದೆಯಂತೂ ದಾತ ಆಗಿದ್ದಾರೆ ಅವರಿಂದ ನೀವು ಪಡೆಯುತ್ತೀರೇ ವಿನಃ ಕೊಡುವುದಿಲ್ಲ.

ಗೀತೆ:

ನೀನು ರಾತ್ರಿಯನ್ನು ಮಲಗುತ್ತಾ ಕಳೆದೆ........

ಓಂ ಶಾಂತಿ.

ಮಕ್ಕಳು ಗೀತೆಯನ್ನು ಕೇಳಿದಿರಿ. ಇದರ ಮೇಲೂ ಮಕ್ಕಳು ತಿಳಿಸಬೇಕು, ತಂದೆಯು ತಿಳಿಸುತ್ತಾರೆ - ನಾನು ಮಕ್ಕಳೊಂದಿಗೆ ಮಾತನಾಡುತ್ತೇನೆಂದು ಮತ್ತ್ಯಾರೂ ಈ ರೀತಿ ಹೇಳಲು ಸಾಧ್ಯವಿಲ್ಲ. ಸಾಧು-ಸಂತ ಮಹಾತ್ಮರಂತೂ ಅನೇಕರಿದ್ದಾರೆ. ಕೆಲವರು ಹೇಳುತ್ತಾರೆ ಇವರಲ್ಲಿ ಶಕ್ತಿಯಿದೆ ಆದರೆ ಇವರಂತೂ ಎಲ್ಲರ ತಂದೆ, ಅವರೇ ಕುಳಿತು ತಿಳಿಸುತ್ತಾರೆ. ಅನೇಕ ಮಕ್ಕಳು ಇಡೀ ದಿನ ಕೇವಲ ತಿನ್ನುತ್ತಾ-ಕುಡಿಯುತ್ತಾ, ಮಲಗುತ್ತಾ ಸಮಯವನ್ನು ಕಳೆಯುತ್ತಾರೆ, ಹೆಚ್ಚಾಗಿ ನಿದ್ರೆಯನ್ನು ಮಾಡುತ್ತಾರೆ. ಇದರಿಂದ ಏನಾಗುವುದು? ವಜ್ರ ಸಮಾನ ಜನ್ಮವನ್ನು ಕಳೆದುಕೊಳ್ಳುತ್ತಾರೆ, ಮಾಯೆಯು ಬಹಳ ಹುಡುಗಾಟಿಕೆ ಮಾಡಿಸುತ್ತದೆ. ಕುಂಭಕರ್ಣನ ನಿದ್ರೆಯಲ್ಲಿ ಮಾಯೆಯು ಮಲಗಿಸಿ ಬಿಟ್ಟಿದೆ. ಈಗ ಜಾಗೃತರನ್ನಾಗಿ ಮಾಡುವ ತಂದೆಯೂ ಬಂದಿದ್ದಾರೆ ಅಜ್ಞಾನ ನಿದ್ರೆಯಿಂದ ಎದ್ದೇಳಿ. ಇಡೀ ಸೃಷ್ಟಿಯು ಅದರಲ್ಲಿಯೂ ವಿಶೇಷವಾಗಿ ಭಾರತದಲ್ಲಿ ಅಜ್ಞಾನವೇ ಅಜ್ಞಾನವಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಹುಡುಗಾಟಿಕೆ ಮಾಡುತ್ತೀರೆಂದರೆ ಬಹಳ-ಬಹಳ ಪಶ್ಚಾತ್ತಾಪ ಪಡಬೇಕಾಗುವುದು. ಪಶ್ಚಾತ್ತಾಪದಿಂದಂತೂ ಏನೂ ಪ್ರಯೋಜನವಿಲ್ಲ. ಇಲ್ಲಿ ಈ ವಿದ್ಯೆಯು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವುದಾಗಿದೆ. ಈ ರೀತಿ ಬೇರೆ ಯಾರೂ ತಿಳಿಸಲು ಸಾಧ್ಯವಿಲ್ಲ. ಇಲ್ಲಿಯೂ ಅದೇ ಜ್ಞಾನವೆಂದು ಹೇಳಬಾರದು. ಈ ವಿದ್ಯೆಯೇ ಹೊಸದಾಗಿದೆ. ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಹಾಗೆ ನೋಡಿದರೆ ಇಲ್ಲಿಯೂ ದೇವಿಯರೆಂದು ಅನೇಕರಿಗೆ ಹೇಳುತ್ತಾರೆ. ಸ್ತ್ರೀ ದೇವಿಯಾದರೆ ಪುರುಷ ದೇವತೆಯಾದರು ಆದರೆ ನಾವಂತೂ ಸತ್ಯಯುಗದಲ್ಲಿ ದೇವಿ-ದೇವತಾ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತಿದ್ದೇವೆ ಅಂದಮೇಲೆ ಅವಶ್ಯವಾಗಿ ಸತ್ಯಯುಗವನ್ನು ಸ್ಥಾಪನೆ ಮಾಡುವ ತಂದೆಯೇ ಪ್ರಾಪ್ತಿ ಮಾಡಿಸುತ್ತಾರೆ. ಎಲ್ಲಾ ಸತ್ಸಂಗಗಳಿಗಿಂತ ಇಲ್ಲಿನ ಮಾತುಗಳು ಭಿನ್ನವಾಗಿವೆ. ಯಾರು ಈಶ್ವರನನ್ನು ಸರ್ವವ್ಯಾಪಿ ಎಂದು ಹೇಳುತ್ತಾರೆ, ಅನೇಕ ಅವತಾರಗಳೆಂದು ತಿಳಿಸುತ್ತಾರೆಯೋ ಅವರನ್ನು ಕೇಳಿ - ಒಂದುವೇಳೆ ಈಶ್ವರನು ಸರ್ವವ್ಯಾಪಿ ಆಗಿದ್ದಾರೆಂದರೆ ಅವತಾರವೆಂದು ಹೇಳುವವರೂ ಸಹ ಅವಶ್ಯವಾಗಿ ಈಶ್ವರನ ಅವತಾರವಾಗಿರುತ್ತಾರೆ. ಅಂದಮೇಲೆ ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಿ. ಹೀಗೆ ಕೇಳಿದಾಗ ಅವರು ಏನನ್ನೂ ಹೇಳಲು ಸಾಧ್ಯವಿಲ್ಲ. ಭಿನ್ನ-ಭಿನ್ನ ಪ್ರಕಾರದ ಮನುಷ್ಯರಿರುತ್ತಾರೆ, ರಿದ್ಧಿ-ಸಿದ್ಧಿಯವರೂ ಇರುತ್ತಾರೆ. ಹೊಸ ಆತ್ಮವು ಬಂದಾಗ ಅದು ತನ್ನ ಶಕ್ತಿಯನ್ನು ತೋರಿಸುತ್ತದೆ. ಧರ್ಮ ಸ್ಥಾಪನೆ ಮಾಡಲು ಹೊಸ ಆತ್ಮವು ಪ್ರವೇಶ ಮಾಡುತ್ತದೆಯೆಂದರೆ ಅವರ ಹೆಸರು ಪ್ರಸಿದ್ಧವಾಗಿ ಬಿಡುತ್ತದೆ. ಇಲ್ಲಿ ಶಕ್ತಿಯ ಮಾತಿಲ್ಲ. ಶಿವ ತಂದೆಯೇ, ನಾವು ತಮ್ಮಿಂದ ಸ್ವರ್ಗದ ಆಸ್ತಿಯನ್ನು ಪಡೆಯಲು ಬಂದಿದ್ದೇವೆಂದು ನೀವು ಹೇಳುತ್ತೀರಿ. ಇದಕ್ಕೆ ಈಶ್ವರೀಯ ಜನ್ಮಸಿದ್ಧ ಅಧಿಕಾರವೆಂದು ಹೇಳಲಾಗುತ್ತದೆ. ನೀವು ಈಶ್ವರೀಯ ಸಂತಾನರಾಗಿದ್ದೀರಿ. ಯಾವುದೇ ಸಾಧು-ಸಂತ, ಮಹಾತ್ಮರು ನಾವು ಬಾಪ್ದಾದಾರವರ ಮಕ್ಕಳಾಗಿದ್ದೇವೆಂದು ಹೇಳುವುದಿಲ್ಲ.

ನಾವು ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆಂದು ನಿಮಗೆ ಗೊತ್ತಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪೂರ್ಣ ಆಸ್ತಿಯನ್ನು ಪಡೆಯಬೇಕೆಂದರೆ ನನ್ನ ನೆನಪಿನಲ್ಲಿರಿ ಅಂದರೆ ಇಲ್ಲಿಯೇ ತಂದೆ ಓದಿಸುತ್ತಾರೆ. ರಾಜಧಾನಿಯು ಸ್ಥಾಪನೆಯಾಗಿ ಬಿಟ್ಟರೆ ಈ ವಿದ್ಯೆ ಮತ್ತು ಓದಿಸುವವರು ಮರೆಯಾಗಿ ಬಿಡುತ್ತಾರೆ. ಈ ಬ್ರಾಹ್ಮಣ ಕುಲವು ಈಗಷ್ಟೇ ಇದೆ, ನಾವು ಬ್ರಹ್ಮನ ಸಂತಾನರೆಂದು ಹೇಳುತ್ತಾರೆ ಅಂದಮೇಲೆ ಬ್ರಹ್ಮಾರವರು ಯಾವಾಗ ಬಂದರು? ಬ್ರಹ್ಮನಂತೂ ಸಂಗಮಯುಗದಲ್ಲಿಯೇ ಬರುತ್ತಾರಲ್ಲವೆ. ಪ್ರಜಾಪಿತ ಬ್ರಹ್ಮನು ಯಾವ ಬ್ರಾಹ್ಮಣರನ್ನು ರಚಿಸುತ್ತಾರೆಯೋ ಅವರೇ ದೇವಿ-ದೇವತೆಗಳಾಗಿ ಬಿಡುತ್ತಾರೆ. ಅನಂತರ ಬ್ರಾಹ್ಮಣರಂತೂ ಇರುವುದಿಲ್ಲ. ನಾವೇ ಮತ್ತೆ ದೇವತಾ ಕುಲದಲ್ಲಿ ಹೋಗುತ್ತೇವೆ ನಂತರ ಕರ್ಮ ಕಾಂಡಕ್ಕಾಗಿ ಯಾರು ಪೂಜಾರಿ ಬ್ರಾಹ್ಮಣರಿದ್ದಾರೆಯೋ ಅವರನ್ನು ಋಷಿ-ಮುನಿಗಳು ಮುಂತಾದವರು ನಿಮಿತ್ತ ಮಾಡಿರಬೇಕು. ದ್ವಾಪರದಲ್ಲಿ ಯಾವಾಗ ಶಿವ ಮುಂತಾದವರ ಮಂದಿರಗಳನ್ನು ಮಾಡಿ ಪೂಜೆ ಮಾಡುವುದನ್ನು ಪ್ರಾರಂಭಿಸುತ್ತಾರೆಂದರೆ ಯಾರು ಪೂಜ್ಯ ದೇವಿ-ದೇವತೆಗಳಾಗಿದ್ದರೋ ಅವರೇ ಪೂಜಾರಿಗಳಾಗಿ ಬಿಡುತ್ತಾರೆ. ಯಾರು ಪೂಜ್ಯರಿಂದ ಪೂಜಾರಿಯಾದರೋ ಅವರಿಗೆ ಬ್ರಾಹ್ಮಣರೆಂದು ಹೇಳುವುದಿಲ್ಲ. ಮಂದಿರಗಳಲ್ಲಿ ದೇವತೆಗಳ ಮುಂದೆ ಬ್ರಾಹ್ಮಣರು ಅವಶ್ಯವಾಗಿ ಇರುತ್ತಾರೆ. ಅಂದಾಗ ಆ ಸಮಯದಲ್ಲಿಯೇ ಬ್ರಾಹ್ಮಣರನ್ನು ರಚಿಸಿರಬೇಕು. ಇದು ವಿಸ್ತಾರವಾದ ಸಮಾಚಾರವಾಯಿತು. ವಾಸ್ತವದಲ್ಲಿ ಇದರೊಂದಿಗೆ ಜ್ಞಾನದ ಸಂಬಂಧವಿಲ್ಲ. ಜ್ಞಾನವು ಕೇವಲ ಮನ್ಮನಾಭವ ಎಂದು ಹೇಳುತ್ತದೆ. ಶಿವ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು ನೀವು ಮಕ್ಕಳಿಗೆ ಹೇಳಿದರೆ ಕೇವಲ ನೀವು ನೆನಪು ಮಾಡುವುದರಿಂದ ಎಲ್ಲರೂ ಲಕ್ಷ್ಮೀ-ನಾರಾಯಣರಾಗಿ ಬಿಡುತ್ತೀರೇನು? ಇಲ್ಲ. ವಿದ್ಯೆಯಂತೂ ಅವಶ್ಯವಾಗಿ ಓದಬೇಕು. ಎಷ್ಟು ಹೆಚ್ಚಿನ ಸೇವೆ ಮಾಡುತ್ತೀರಿ, ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ಹಾಗೂ ಚಿನ್ನದ ಚಮಚದಿಂದ (ಗೋಲ್ಡನ್ ಸ್ಪೂನ್ ಇನ್ ದಿ ಮೌತ್) ಊಟ ಮಾಡುತ್ತೀರಿ. ಹೊಸ ಪ್ರಪಂಚವು ಸ್ಥಾಪನೆಯಾಗುವುದರಲ್ಲಿ, ಅದಲು-ಬದಲಾಗುವುದರಲ್ಲಿ ಸಮಯವಂತು ಹಿಡಿಸುತ್ತದೆಯಲ್ಲವೆ. ವಿನಾಶದ ನಂತರ ಸ್ಥಾಪನೆಯಾಗುವುದು, ಕಲಿಯುಗದ ನಂತರ ಸತ್ಯಯುಗವಾಗುವುದು. ಭಲೆ ಭೂಕಂಪ ಮೊದಲಾದವುಗಳು ಆಗುತ್ತಾ ಇರುತ್ತವೆ, ಆದರೆ ಅನೇಕ ಧರ್ಮಗಳ ವಿನಾಶವಾಗಬೇಕಿದೆ. ನಾಟಕವು ಮುಕ್ತಾಯವಾಗುತ್ತದೆ. ಈಗ ನಾವು ತಂದೆಯ ಬಳಿ ಹೋಗಿ ಮತ್ತೆ ಹೊಸ ಪ್ರಪಂಚದಲ್ಲಿ ಹೋಗುತ್ತೇವೆ. ಈ ಸಮಯದಲ್ಲಿ ನಾವು ಯಜ್ಞದ ಬ್ರಾಹ್ಮಣರಾಗಿದ್ದೇವೆ. ಶಿವ ತಂದೆಯು 5000 ವರ್ಷಗಳ ಹಿಂದಿನಂತೆ ರುದ್ರ ಯಜ್ಞವನ್ನು ರಚಿಸಿದ್ದಾರೆ. ಇದು ದೊಡ್ಡದಕ್ಕಿಂತ ದೊಡ್ಡ ಯಜ್ಞವಾಗಿದೆ, ಈ ಯಜ್ಞದ ಸಂಭಾಲನೆಯನ್ನು ನೀವು ಸತ್ಯ ಬ್ರಾಹ್ಮಣರೇ ಮಾಡುತ್ತೀರಿ, ಆ ಬ್ರಾಹ್ಮಣರಂತೂ ಸ್ಥೂಲ ಯಜ್ಞಗಳನ್ನು ರಚಿಸುತ್ತಾರೆ. ಯಾವುದೇ ಆಪತ್ತುಗಳು ಬರುವಂತಿದ್ದರೆ ಯಜ್ಞವನ್ನು ರಚಿಸುತ್ತಾರೆ. ಸತ್ಯಯುಗದಲ್ಲಿ ಗುರು ಮುಂತಾದವರ ಅವಶ್ಯಕತೆಯೇ ಇರುವುದಿಲ್ಲ. ಎಲ್ಲಿ ಸದ್ಗತಿಯ ಅವಶ್ಯಕತೆಯಿರುತ್ತದೆಯೋ ಅಲ್ಲಿಯೇ ಗುರುಗಳಿರುತ್ತಾರೆ. ಇಲ್ಲಿ ಈಗಂತೂ ಅನೇಕ ಗುರುಗಳಿದ್ದಾರೆ, ಇಷ್ಟೊಂದು ವೇದ-ಶಾಸ್ತ್ರ ಮೊದಲಾದವುಗಳಿದ್ದರೂ ಸಹ ಭಾರತಕ್ಕೆ ಇಂತಹ ಗತಿ( ಸ್ಥಿತಿ)ಯು ಏಕೆ ಆಗಿದೆ!

5000 ವರ್ಷಗಳ ಹಿಂದಿನಂತೆ ಎಲ್ಲಾ ಮನುಷ್ಯರು ಘೋರ ನಿದ್ರೆಯಲ್ಲಿ ಮಲಗಿ ಬಿಟ್ಟಿದ್ದಾರೆಂದು ನೀವು ಬರೆಯಬಹುದು. ನಿದ್ರೆಯನ್ನಂತೂ ಎಲ್ಲರೂ ಮಾಡುತ್ತಾರೆ ಆದರೆ ಇದು ಅಜ್ಞಾನದ ನಿದ್ರೆಯ ಮಾತಾಗಿದೆ. ಯಾವುದೇ ಗುರುಗಳು ಸದ್ಗತಿ ಕೊಡಲು ಸಾಧ್ಯವಿಲ್ಲ. ಈಗ ಇದನ್ನು ಬೆಳಕನ್ನಾಗಿ ಮಾಡುವವರು ಯಾರು? ನೀವು ಮಕ್ಕಳಿಗೆ ಈಗಾಗಲೇ ತಿಳಿಸಲಾಗಿದೆ - ಪರಮಪಿತ ಪರಮಾತ್ಮನ ವಿನಃ ಜ್ಞಾನದ ಬೆಳಕಾಗಲು ಸಾಧ್ಯವಿಲ್ಲ. ಈಗಂತೂ ಅನೇಕ ಗುರುಗಳಿದ್ದಾರೆ ಆದರೂ ಸಹ ಅಂಧಕಾರ ರಾತ್ರಿ, ದುಃಖವೇಕೆ? ಸತ್ಯಯುಗದಲ್ಲಂತೂ ಅಪಾರ ಸುಖವಿತ್ತು. ಈಗ ಯಾವಾಗ ಭಗವಂತನ ಶ್ರೀಮತ ಸಿಗುವುದೋ ಆಗ ಸುಖ ಸಿಗುವುದು, ರಾವಣನೇ ಭಾರತವನ್ನು ಪತಿತ, ದುಃಖಿಯನ್ನಾಗಿ ಮಾಡಿದ್ದಾನೆ. ಆದ್ದರಿಂದ ಈ ಕಾಮ ಮಹಾಶತ್ರುವಿನ ಮೇಲೆ ಜಯಿಸಿ, ಪವಿತ್ರತೆಯ ಪ್ರತಿಜ್ಞೆ ಮಾಡಿದರೆ ಹೊಸ ಪ್ರಪಂಚದ ಮಾಲೀಕರಾಗುತ್ತೀರೆಂದು ತಂದೆಯು ತಿಳಿಸುತ್ತಾರೆ. ಗುರುಗಳು ಪವಿತ್ರರಾಗಿ ಎನ್ನುವ ಮಾತನ್ನು ಎಂದೂ ಹೇಳುವುದಿಲ್ಲ. ಈಗ ನೀವು ಘೋರ ಪ್ರಕಾಶತೆಯಲ್ಲಿ ಬಂದಿದ್ದೀರಿ ಅಂದಮೇಲೆ ನೀವು ಹೋಗಿ ಕೇಳಿ - ಯಾವ ಭಾರತವು ಇಷ್ಟೊಂದು ಸುಖಿಯಾಗಿತ್ತು, ಈಗ ಅದೇ ಏಕೆ ದುಃಖಿಯಾಗಿದೆ? ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವೇ ದೇವತೆಗಳಾಗುತ್ತೇವೆ, ಸನ್ಯಾಸಿಗಳಂತೂ ಮನೆ-ಮಠವನ್ನು ಬಿಟ್ಟು ಹೊರ ಹೋಗುತ್ತಾರೆ. ಆದ್ದರಿಂದ ಅವರಿಗೆ ಸನ್ಯಾಸಿಗಳು ಪಾವನರೆಂದು ಹೇಳುತ್ತಾರೆ. ನಾವು ಪಾವನರಾಗಲು ಪುರುಷಾರ್ಥ ಮಾಡುತ್ತಿದ್ದೇವೆಂದು ಅವರು ಹೇಳುವುದಿಲ್ಲ. ನಿಮ್ಮ ಮಾತೇ ಭಿನ್ನವಾಗಿದೆ. ಎಲ್ಲಾ ಸನ್ಯಾಸಿಗಳು ಪವಿತ್ರರಾಗಿರುತ್ತಾರೆಂದು ತಿಳಿಯಬೇಡಿ. ಎಲ್ಲಿಯವರೆಗೆ ಸ್ಥಿತಿಯು ಶಕ್ತಿಶಾಲಿಯಾಗುವುದಿಲ್ಲವೋ ಅಲ್ಲಿಯವರೆಗೆ ಬುದ್ಧಿಯೋಗವು ಮಿತ್ರ ಸಂಬಂಧಿಗಳ ಕಡೆ ಹೋಗುತ್ತಿರುತ್ತದೆ. ದೇಹ ಸಹಿತವಾಗಿ ದೇಹದ ಸರ್ವ ಸಂಬಂಧಗಳನ್ನು ಮರೆಯಿರಿ ಎಂದು ಹೇಳಲಾಗುತ್ತದೆ ಅಂದಾಗ ಎಷ್ಟೊಂದು ಪರಿಶ್ರಮ ಹಿಡಿಸುತ್ತದೆ. ನೀವು ಸನ್ಯಾಸತ್ವವನ್ನು ಯಾವಾಗ ಮಾಡಿದಿರಿ? ಲೌಕಿಕ ಹೆಸರೇನು ಎಂದು ಅವರನ್ನು ಕೇಳಿದರೆ ಈ ಮಾತುಗಳನ್ನು ಕೇಳಬೇಡಿ, ಸ್ಮೃತಿಯನ್ನೇಕೆ ತರಿಸುತ್ತೀರಿ ಎನ್ನುತ್ತಾರೆ. ಕೆಲಕೆಲವರು ತಿಳಿಸಲೂಬಹುದು, ಆದ್ದರಿಂದ ಅವರನ್ನು ಕೇಳಿ- ನೀವು ಶೀಘ್ರವಾಗಿಯೇ ಎಲ್ಲರನ್ನು ಮರೆತು ಬಿಟ್ಟಿರಾ ಅಥವಾ ನೆನಪು ಬರುತ್ತಿದೆಯೇ? ಅದರಿಂದ ನೀವು ಯಾರಾಗಿದ್ದೀರಿ, ಹೇಗೆ ಗೃಹಸ್ಥವನ್ನು ಬಿಟ್ಟಿರಿ, ಒಬ್ಬರೇ ಇದ್ದಿರಾ ಅಥವಾ ಮಕ್ಕಳೂ ಸಹ ಇದ್ದಾರೆಯೇ ಮತ್ತು ನಿಮಗೆ ಅವರ ನೆನಪೂ ಬರುತ್ತಿದೆಯೇ ಎಂಬುದೆಲ್ಲವೂ ತಿಳಿಯುತ್ತದೆ. ಅವರೂ ಸಹ ತಿಳಿಸುತ್ತಾರೆ - ಹೌದು! ಬಹಳಷ್ಟು ಸಮಯ ಗೃಹಸ್ಥವು ನೆನಪಿಗೆ ಬರುತ್ತಿತ್ತು, ಪರಿಶ್ರಮದಿಂದಲೇ ಅವರ ನೆನಪು ದೂರವಾಗುತ್ತದೆ. ತಮ್ಮ ಜೀವನದ ನೆನಪಂತೂ ಬರುತ್ತದೆ, ಭಲೆ ನಾವು ಶಿವ ತಂದೆಯನ್ನು ನೆನಪು ಮಾಡುತ್ತೇವೆ. ಆದರೆ ನಮ್ಮ ಜೀವನ ಇಲ್ಲವೆ ಶಾಸ್ತ್ರ ಮೊದಲಾದ ಯಾವುದೆಲ್ಲಾ ಓದಿದ್ದೇವೆಯೋ ಅದನ್ನು ಮರೆಯುತ್ತೇವೆಯೇ. ಕೇವಲ ತಿಳಿಸುತ್ತಾರೆ - ಜೀವಿಸಿದ್ದಂತೆಯೇ ಮರೆತು ಹೋಗಿ, ಇದನ್ನು ಧಾರಣೆ ಮಾಡಿ. ದೇಹಧಾರಿಗಳನ್ನು ನೆನಪು ಮಾಡುತ್ತೀರೆಂದರೆ ಸಿಕ್ಕಿಹಾಕಿಕೊಳ್ಳುತ್ತೀರಿ. ಮೊದಲು ಈ ಮಾತನ್ನು ಕೇಳಿ ನಂತರ ನಿರ್ಣಯ ಮಾಡಿಕೊಳ್ಳಿ. ಜೀವಿಸಿದ್ದಂತೆಯೇ ಮರುಜೀವಿಗಳಾಗಿ ಮತ್ತ್ಯಾರ ಮಾತನ್ನೂ ಕೇಳಬೇಡಿ. ನಾವು ನಮ್ಮ ಇಡೀ ಜೀವನದ ಬಗ್ಗೆ ತಿಳಿಸಬಲ್ಲೆವು. ಹಾ! ಇದಂತೂ ಗೊತ್ತಿದೆ, ಈ ಪ್ರಪಂಚವು ಸಮಾಪ್ತಿಯಾಗಲಿದೆ, ಸೇವಾಕೇಂದ್ರಗಳು ವೃದ್ಧಿಯನ್ನು ಹೊಂದುತ್ತಿರುತ್ತದೆ. ಯಾರು ಮಮ್ಮಾ-ಬಾಬಾ ಎಂದು ಹೇಳುತ್ತಾರೆಯೋ ಅವರು ಬ್ರಾಹ್ಮಣರಾಗಿ ಬಿಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಹೇ ಆತ್ಮಗಳೇ, ಅಂದರೆ ಆತ್ಮವೇ ಮಾತನಾಡುತ್ತದೆ. ನೀವು ಯಾರು ಎಂದು ನಿಮ್ಮನ್ನು ಕೇಳಿದರೆ ತಕ್ಷಣ ನಾನಾತ್ಮ ಓದುತ್ತೇನೆಂದು ನೀವು ಹೇಳುತ್ತೀರಿ. ಈ ಜ್ಞಾನವು ನಿಮಗೆ ಈಗ ಸಿಕ್ಕಿದೆ. ನಿಮ್ಮ ಆತ್ಮವು ಈ ಇಂದ್ರಿಯಗಳಿಂದ ಓದುತ್ತದೆ. ಆತ್ಮ ಮತ್ತು ಶರೀರ ಎರಡಿವೆ, ನಿಮಗೆ ಗೊತ್ತಿದೆ - ಆತ್ಮವೇ ಶರೀರವನ್ನು ತೆಗೆದುಕೊಳ್ಳುತ್ತದೆ ಹಾಗೂ ಬಿಡುತ್ತದೆ, ಸಂಸ್ಕಾರವನ್ನು ಧಾರಣೆ ಮಾಡುತ್ತದೆ. ನಾವು ಆತ್ಮರು ಸತ್ಯಯುಗದಲ್ಲಿ ಪುಣ್ಯಾತ್ಮರಾಗಿದ್ದೆವು, ಈಗ ಪಾಪಾತ್ಮರಾಗಿದ್ದೇವೆ. ಈಗ ಇದು ಅಂತಿಮ ಜನ್ಮವಾಗಿದೆ, ಪರಮಾತ್ಮನಲ್ಲಿ ಯಾವ ಜ್ಞಾನವಿದೆಯೋ ಅದನ್ನು ಈಗ ನಾವಾತ್ಮರಿಗೆ ಓದಿಸುತ್ತಿದ್ದಾರೆ. ಉಳಿದೆಲ್ಲಾ ಆತ್ಮರು ಘೋರ ಅಂಧಕಾರದಲ್ಲಿದ್ದಾರೆ. ಶಾಸ್ತ್ರ ಮೊದಲಾದುವುಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಅದಕ್ಕೆ ಜ್ಞಾನವೆಂದು ಹೇಳುವುದಿಲ್ಲ. ಜ್ಞಾನವೆಂದರೆ ಹಗಲು ಹಾಗೂ ಭಕ್ತಿಯು ರಾತ್ರಿಯಾಗಿದೆ. ನೀವು ಇದನ್ನು ಕೇಳಬಹುದು - ಗೀತೆಯ ರಚಯಿತ ಯಾರು ಮತ್ತು ಯಾವಾಗ ಬಂದರು? ಗೀತೆಯನ್ನು ಯಾವಾಗ ರಚಿಸಲಾಯಿತು? ತಂದೆಯೂ ಸಹ ಬರೆಯುತ್ತಿರುತ್ತಾರೆ ಮತ್ತೆ ನೀವು ಅದನ್ನು ಚೆನ್ನಾಗಿ ಮನನ ಮಾಡಬೇಕಾಗುತ್ತದೆ. ಹೀಗೆ ಬುದ್ಧಿಯಲ್ಲಿ ಧಾರಣೆ ಮಾಡುವುದರಿಂದ ನಿಮ್ಮ ಉನ್ನತಿಯಾಗುತ್ತಾ ಹೋಗುವುದು. ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಮಕ್ಕಳಿಗೆ ಮಾಲೆಯ ರಹಸ್ಯವನ್ನು ತಿಳಿಸಲಾಗಿದೆ. ಪರಮಪಿತ ಪರಮಾತ್ಮನು ಬೇಹದ್ದಿನ ಹೂವಾಗಿದ್ದಾರೆ. ಮತ್ತೆ ಎರಡು ಜೋಡಿ ಮಣಿಗಳು ಬ್ರಹ್ಮಾ-ಸರಸ್ವತಿಯಾಗಿದ್ದಾರೆ. ಪ್ರಜಾಪಿತ ಬ್ರಹ್ಮಾರವರ ಮೂಲಕ ರಚನೆಯು ರಚಿಸಲ್ಪಟ್ಟಿದೆ. ಇವರು ಆದಿ ದೇವ ಮತ್ತು ಆದಿ ದೇವಿಯಾಗಿದ್ದಾರೆ. ಇವರು ಬ್ರಾಹ್ಮಣರಾಗಿದ್ದಾರೆ, ಇವರೇ ಸ್ವರ್ಗವನ್ನಾಗಿ ಮಾಡಿದ್ದಾರೆ. ಆದ್ದರಿಂದ ಇವರ ಪೂಜೆಯಾಗುತ್ತದೆ. ಮಧ್ಯದಲ್ಲಿ 8 ಮಣಿಗಳು ಸೂರ್ಯವಂಶಿಯಾಗಿದ್ದಾರೆ, ಬಹಳ ಸಹಯೋಗ ನೀಡಿದ್ದಾರೆ. ಈ ಜ್ಞಾನವು ಬುದ್ಧಿಯಲ್ಲಿರಬೇಕು. ಇದೂ ಸಹ ನಿಮಗೆ ಗೊತ್ತಿದೆ - ಯಜ್ಞದಲ್ಲಿ ಅವಶ್ಯವಾಗಿ ಆಹುತಿ ಕೊಡಲಾಗುತ್ತದೆ. ಮಾತೆಯರ ಉನ್ನತಿಗಾಗಿ ತಂದೆಯು ಯುಕ್ತಿಯನ್ನು ರಚಿಸಿದ್ದಾರೆ. ಬಾಬಾರವರು ಬಲಿಹಾರಿ ಮಾಡಿದರಲ್ಲವೆ ಅಂದಾಗ ತಂದೆಯನ್ನು ಅನುಕರಣೆ ಮಾಡಿ ಗಾಂಧೀಜಿಗೂ ಸಹ ಯಾರು ಸಹಯೋಗ ಕೊಟ್ಟರೋ ಅವರಿಗೆ ಅಲ್ಪಕಾಲದ ಸುಖ ಸಿಕ್ಕಿತು. ಆದರೆ ಅವರು ಹದ್ದಿನ ತಂದೆಯಾಗಿದ್ದರು, ಇವರು ಬೇಹದ್ದಿನ ತಂದೆಯಾಗಿದ್ದಾರೆ.

ಇಲ್ಲಿ ಬ್ರಹ್ಮಾ ತಂದೆಯು ತಮ್ಮ ಸರ್ವಸ್ವವನ್ನೂ ಮಾತೆಯರ ಚರಣಗಳಲ್ಲಿ ಕೊಟ್ಟು ಬಿಟ್ಟರು. ಆದ್ದರಿಂದ ಅವರು ಮೊದಲನೇ ನಂಬರಿನಲ್ಲಿ ಹೋದರು. ಹಾಗೆಯೇ ನೀವು ಮಕ್ಕಳೂ ಸಹ ಪುರುಷಾರ್ಥ ಮಾಡಬೇಕು. ಯಾರು ಸಹಯೋಗ ನೀಡುತ್ತೀರೋ ಅವರೇ ಸ್ವರ್ಗದ ಮಾಲೀಕರಾಗುತ್ತೀರಿ. ನಾವು ಶಿವ ತಂದೆಗೆ ಸಹಯೋಗ ಕೊಡುತ್ತೇವೆಂದು ತಿಳಿಯಬೇಡಿ. ಇಲ್ಲ ಶಿವ ತಂದೆಯೇ ನಿಮಗೆ ಸಹಯೋಗ ನೀಡುತ್ತಾರೆ. ಅವರಂತೂ ದಾತನಾಗಿದ್ದಾರೆ. ನೀವು ಏನೆಲ್ಲವನ್ನೂ ಮಾಡುತ್ತೀರೋ ತಮಗೋಸ್ಕರ ಮಾಡುತ್ತೀರಿ. ನೆನಪಿನಲ್ಲಿರುತ್ತೀರೆಂದರೆ ವಿಕರ್ಮಗಳು ವಿನಾಶವಾಗುತ್ತವೆ. ಸ್ವರ್ಗವನ್ನು ನೆನಪು ಮಾಡಿದರೆ ಸ್ವರ್ಗದಲ್ಲಿ ಹೋಗುತ್ತೀರಿ. ಸ್ವಯಂ ತಂದೆಯೇ ತಿಳಿಸುತ್ತಾರೆ - ಮನ್ಮನಾಭವ. ಇಲ್ಲವೆಂದರೆ ಶ್ರೇಷ್ಠ ಪದವಿಯು ಹೇಗೆ ಸಿಗುತ್ತದೆ? ಇದನ್ನು ಎಣಿಕೆ ಮಾಡುವುದು ನಿಮ್ಮ ಕೆಲಸವಾಗಿದೆ. ನಾನು ಕೊಡುತ್ತೇನೆಂದು ಯಾರೂ ತಿಳಿಯಬೇಡಿ. ಇದು ಶಿವ ತಂದೆಯ ಯಜ್ಞವಾಗಿದೆ ಅಂದಮೇಲೆ ನಡೆಯುತ್ತದೆ, ನಡೆಯುತ್ತಲೇ ಇರುತ್ತದೆ.

ನೀವು ಸತ್ಯ ಬ್ರಾಹ್ಮಣರ ಹೃದಯದಲ್ಲಿದೆ - ನಾವು ಕೇವಲ ಭಾರತದಲ್ಲಷ್ಟೇ ಅಲ್ಲ ಸಂಪೂರ್ಣ ವಿಶ್ವದಲ್ಲಿ ತಂದೆಯ ಸಹಯೋಗದಿಂದ ನಮ್ಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ನಾವು ಮತ್ತೆ ಪವಿತ್ರರಾಗಿ ಭಾರತವನ್ನು ಸ್ವರ್ಗವನ್ನಾಗಿ ಮಾಡಿ ರಾಜ್ಯ ಮಾಡುತ್ತೇವೆ. ಶಿವ ತಂದೆಯ ಮತದನುಸಾರ ನಡೆಯುವುದರಿಂದ ಭಾರತವು ಸ್ವರ್ಗವಾಗಿ ಬಿಡುತ್ತದೆ ಅಂದಾಗ ಇದನ್ನು ನೆನಪಿಟ್ಟುಕೊಳ್ಳಿ - ನಮಗೆ ಶಿವ ತಂದೆಯು ಓದಿಸುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯಾವಾಗ ಬ್ರಾಹ್ಮಣರಾಗುತ್ತೀರೋ ಆಗಲೇ ದೇವತಾ ಸಂಪ್ರದಾಯದಲ್ಲಿ ಬರುತ್ತೀರಿ. ವಿಕಾರದಲ್ಲಿ ಬೀಳುವುದರಿಂದ ಸತ್ಯನಾಶವಾಗಿ ಬಿಡುತ್ತದೆ. ತಮ್ಮ ಮೇಲೆ ಕೃಪೆಗೆ ಬದಲು ಅಕೃಪೆ ಮಾಡಿಕೊಳ್ಳುತ್ತಾರೆ. ಮತ್ತೆ ಶ್ರಾಪಿತರಾಗಿ ಬಿಡುತ್ತಾರೆ. ನಾನು ವರದಾನ ಕೊಡಲು ಬಂದಿದ್ದೇನೆ ಆದರೆ ಶ್ರೀಮತದಂತೆ ನಡೆಯದಿರುವುದರಿಂದ ತಮ್ಮನ್ನು ಶ್ರಾಪಿತರನ್ನಾಗಿ ಮಾಡಿಕೊಳ್ಳುತ್ತಾರೆ, ಪದವಿ ಭ್ರಷ್ಟ ಮಾಡಿಕೊಳ್ಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.


ಧಾರಣೆಗಾಗಿ ಮುಖ್ಯಸಾರ:

1. ಬುದ್ಧಿಯಿಂದ ಎಲ್ಲವನ್ನೂ ಮರೆಯುವುದಕ್ಕಾಗಿ ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ಒಬ್ಬ ತಂದೆಯ ಮಾತುಗಳನ್ನು ಕೇಳಬೇಕಾಗಿದೆ. ತಮ್ಮ ಉನ್ನತಿಗಾಗಿ ಪೂರ್ಣ ಬಲಿಹಾರಿಯಾಗಬೇಕಾಗಿದೆ.

2. ಶ್ರೀ ಮತದಂತೆ ನಡೆದು ಸ್ವಯಂ ಮೇಲೆ ಕೃಪೆ ತೋರಬೇಕಾಗಿದೆ. ಸತ್ಯ ಬ್ರಾಹ್ಮಣರಾಗಿ ಯಜ್ಞದ ಸಂಭಾಲನೆ ಮಾಡಬೇಕಾಗಿದೆ. ವಿದ್ಯೆಯನ್ನು ಚೆನ್ನಾಗಿ ಓದಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ.

ವರದಾನ:

ಸ್ಮತಿ ಸ್ವರೂಪರಾಗಿ ವಿಸ್ಮತಿಯಾದವರಿಗೆ ಸ್ಮತಿ ತರಿಸುವಂತಹ ಸತ್ಯ ಸೇವಾಧಾರಿ ಭವ.

ತಮ್ಮ ಸ್ಮತಿ ಸ್ವರೂಪದ ಲಕ್ಷಣದ ಮೂಲಕ ಬೇರೆಯವರನ್ನು ಸ್ಮತಿ ಸ್ವರೂಪರಾಗಿ ಮಾಡುವುದು ಇದೇ ಸತ್ಯ ಸೇವೆಯಾಗಿದೆ. ನಿಮ್ಮ ಲಕ್ಷಣ ಬೇರೆಯವರಿಗೆ ಸ್ಮತಿ ತರಿಸಬೇಕು, ನಾನು ಆತ್ಮ ನಾಗಿರುವೆ ಎಂದು. ಮಸ್ತಕದಲ್ಲಿ ನೋಡಿದಲ್ಲಿ ಹೊಳೆಯುತ್ತಿರುವ ಆತ್ಮ ಅಥವಾ ಮಣಿಯನ್ನು. ಹೇಗೆ ಸರ್ಪದ ಮೇಲಿರುವ ಮಣಿಯನ್ನು ನೋಡಿದಾಗ ಸರ್ಪದ ಕಡೆ ಗಮನ ಹೋಗುವುದಿಲ್ಲವೊ ಹಾಗೆ ಅವಿನಾಶಿ ಹೊಳೆಯುತ್ತಿರುವ ಮಣಿಯನ್ನು ನೋಡಿ ದೇಹಭಾನವನ್ನು ಮರೆತು ಬಿಡಬೇಕು, ಅವರ ಗಮನ ಸ್ವತಃ ಆತ್ಮದ ಕಡೆ ಹೋಗಲಿ. ವಿಸ್ಮತಿಯಾದವರಿಗೆ ಸ್ಮತಿ ಬರಲಿ ಆಗ ಹೇಳಲಾಗುವುದು ಸತ್ಯ ಸೇವಾಧಾರಿ.

ಸ್ಲೋಗನ್:

ಅವಗುಣವನ್ನು ಧಾರಣೆ ಮಾಡುವಂತಹ ಬುದ್ಧಿಯನ್ನು ನಾಶ ಮಾಡಿ ಸತೋಪ್ರಧಾನ ದಿವ್ಯ ಬುದ್ಧಿಯನ್ನು ಧಾರಣೆ ಮಾಡಿಕೊಳ್ಳಿ.