05.11.2018         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಸದಾ ಆರೋಗ್ಯ-ಸದಾ ಐಶ್ವರ್ಯವಂತರಾಗಲು ನೀವೀಗ ಡೈರೆಕ್ಟ್ ನಿಮ್ಮ ತನು-ಮನ-ಧನವನ್ನು ಇನ್ಶೂರ್ ಮಾಡಿ, ಈ ಸಮಯದಲ್ಲೇ ಇಂತಹ ಬೇಹದ್ದಿನ ಇನ್ಶೂರೆನ್ಸ್ ಮಾಡಲಾಗುತ್ತದೆ”

ಪ್ರಶ್ನೆ:
ಪರಸ್ಪರ ಒಬ್ಬರಿಗೊಬರು ಯಾವ ಸ್ಮೃತಿಯನ್ನು ತರಿಸುತ್ತಾ ಉನ್ನತಿಯನ್ನು ಹೊಂದಬೇಕು?

ಉತ್ತರ:
ಪರಸ್ಪರ ಈ ಸ್ಮೃತಿಯನ್ನು ತರಿಸಿ - ಈಗ ನಾಟಕವು ಪೂರ್ಣವಾಯಿತು, ಮನೆಗೆ ಹಿಂತಿರುಗಬೇಕು. ಈ ಪಾತ್ರವನ್ನು ಅನೇಕ ಬಾರಿ ಅಭಿನಯಿಸುತ್ತೇವೆ. ಈಗ 84 ಜನ್ಮಗಳು ಪೂರ್ಣವಾಯಿತು, ಈಗ ಈ ಶರೀರವೆಂಬ ವಸ್ತ್ರವನ್ನು ಕಳಚಿ ಮನೆಗೆ ಹೋಗುತ್ತೀರಿ. ಇದೇ ನೀವು ಆತ್ಮಿಕ ಸಮಾಜ ಸೇವಕರ ಸೇವೆಯಾಗಿದೆ. ನೀವು ಆತ್ಮಿಕ ಸಮಾಜ ಸೇವಕರು ಎಲ್ಲರಿಗೂ ಇದೇ ಸಂದೇಶವನ್ನು ಕೊಡುತ್ತಿರಿ. ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ತಂದೆ ಹಾಗೂ ಮನೆಯನ್ನು ನೆನಪು ಮಾಡಿ.

ಗೀತೆ:
ಆಕಾಶ ಸಿಂಹಾಸನವನ್ನು ಬಿಟ್ಟು ಬಾ

ಓಂ ಶಾಂತಿ.
ಎಲ್ಲಿ ಗೀತಾ ಪಾಠಶಾಲೆಗಳು ನಡೆಯುತ್ತವೆಯೋ ಅಲ್ಲಿ ವಿಶೇಷವಾಗಿ ಈ ಹಾಡನ್ನು ಹಾಡುತ್ತಾರೆ. ಭಗವದ್ಗೀತೆಯನ್ನು ತಿಳಿಸುವವರು ಈ ಶ್ಲೋಕವನ್ನು ಹಾಡುತ್ತಾರೆ. ಅವರಿಗೆ ನಾವು ಯಾರನ್ನು ಕರೆಯುತ್ತಿದ್ದೇವೆಂದು ಗೊತ್ತಿಲ್ಲ. ಈಗ ಧರ್ಮಗ್ಲಾನಿಯ ಸಮಯವಾಗಿದೆ. ಮೊದಲು ಪ್ರಾರ್ಥನೆ ಮಾಡಿ ನಂತರ ಬನ್ನಿ ಎಂದು ಕರೆಯುತ್ತಾ, ಬಂದು ಗೀತಾಜ್ಞಾನವನ್ನು ಹೇಳಿ ಏಕೆಂದರೆ ಪಾಪವು ತುಂಬಾ ಹೆಚ್ಚಾಗಿ ಬಿಟ್ಟಿದೆ. ಹಾ! ಯಾವಾಗ ಭಾರತದ ಜನರು ಪಾಪಾತ್ಮಗಳಾಗುತ್ತಾರೆಯೋ, ದುಃಖಿಗಳಾಗುತ್ತಾರೆಯೋ, ಧರ್ಮ ಗ್ಲಾನಿಯಾಗುತ್ತದೆಯೋ ಆಗ ನಾನು ಬರುತ್ತೇನೆಂದು ತಂದೆಯು ಹೇಳುತ್ತಾರೆ. ಸ್ವರೂಪ ಪರಿವರ್ತನೆ ಮಾಡಿಕೊಳ್ಳಬೇಕಾಗುತ್ತದೆ. ಅವಶ್ಯವಾಗಿ ಮನುಷ್ಯನ ತನುವಿನಲ್ಲಿಯೇ ಬರುತ್ತಾರೆ. ಎಲ್ಲಾ ಆತ್ಮಗಳ ರೂಪವಂತೂ ಪರಿವರ್ತನೆಯಾಗುತ್ತಿರುತ್ತದೆ. ನೀವು ಆತ್ಮಗಳು ಮೂಲತಃ ನಿರಾಕಾರಿಯಾಗಿದ್ದಿರಿ ನಂತರ ಇಲ್ಲಿ ಬಂದು ಸಾಕಾರಿಯಾಗುತ್ತೀರಿ, ಆಗ ಮನುಷ್ಯರೆಂದು ಹೇಳಿಕೊಳ್ಳುತ್ತೀರಿ. ಈಗ ಮನುಷ್ಯರು ಪಾಪಾತ್ಮ, ಪತಿತರಾಗಿರುವ ಕಾರಣ ನಾನು ನನ್ನ ರೂಪವನ್ನು ರಚನೆ ಮಾಡಿಕ್ಕೊಳ್ಳಬೇಕಿದೆ. ಹೇಗೆ ನೀವು ನಿರಾಕಾರದಿಂದ ಸಾಕಾರಿಯಾಗಿದ್ದೀರಿ. ನಾನೂ ಸಹ ಆಗಬೇಕಾಗುತ್ತದೆ. ಈ ಪತಿತ ಪ್ರಪಂಚದಲ್ಲಂತೂ ಕೃಷ್ಣನು ಬರಲು ಆಗುವುದಿಲ್ಲ. ಕೃಷ್ಣನಂತೂ ಸ್ವರ್ಗದ ಮಾಲೀಕನಾಗಿದ್ದಾನೆ. ಕೃಷ್ಣನು ಗೀತೆಯನ್ನು ಹೇಳಿದ್ದಾರೆಂದು ತಿಳಿದುಕೊಳ್ಳುತ್ತಾರೆ ಆದರೆ ಕೃಷ್ಣನಂತೂ ಈ ಪ್ರಪಂಚದಲ್ಲಿ ಬರುವುದಿಲ್ಲ. ಕೃಷ್ಣನ ನಾಮ, ರೂಪ, ದೇಶ, ಕಾಲ, ಕರ್ಮ ಸಂಪೂರ್ಣವಾಗಿ ಎಲ್ಲವೂ ಬೇರೆಯಾಗಿದೆ. ಇದನ್ನು ತಂದೆಯು ತಿಳಿಸುತ್ತಿದ್ದಾರೆ. ಕೃಷ್ಣನಿಗಂತೂ ತನ್ನ ತಂದೆ-ತಾಯಿಯಿದ್ದಾರೆ. ಕೃಷ್ಣನು ತನ್ನ ತಾಯಿಯ ಗರ್ಭದಲ್ಲಿ ತನ್ನ ರೂಪವನ್ನು ರಚಿಸಿಕೊಂಡಿದ್ದಾನೆ. ನಾನಂತೂ ಗರ್ಭದಲ್ಲಿ ಬರುವುದಿಲ್ಲ. ನನಗೆ ರಥವಂತೂ ಅವಶ್ಯ ಬೇಕು. ನಾನು ಇವರ ಬಹಳ ಜನ್ಮಗಳ ಅಂತ್ಯದ ಜನ್ಮದಲ್ಲಿ ಪ್ರವೇಶ ಮಾಡುತ್ತೇನೆ, ಮೊದಲನೇ ನಂಬರಿನಲ್ಲಂತೂ ಶ್ರೀ ಕೃಷ್ಣನಿದ್ದಾನೆ, ಇವರ ಬಹಳ ಜನ್ಮಗಳ ಅಂತ್ಯದ ಜನ್ಮವೇ 84ನೇ ಜನ್ಮ. ಆದುದರಿಂದ ನಾನು ಇವರಲ್ಲಿಯೇ ಬರುತ್ತೇನೆ, ಇವರು ತಮ್ಮ ಜನ್ಮಗಳನ್ನು ಕುರಿತು ತಿಳಿದುಕೊಂಡಿಲ್ಲ. ನಾನು ನನ್ನ ಜನ್ಮಗಳನ್ನು ತಿಳಿದುಕೊಂಡಿಲ್ಲವೆಂದು ಶ್ರೀ ಕೃಷ್ಣನೆಂದೂ ಹೇಳುವುದಿಲ್ಲ. ಭಗವಂತ ಹೇಳುತ್ತಾರೆ, ನಾನು ಯಾರಲ್ಲಿ ಪ್ರವೇಶ ಮಾಡುತ್ತೇನೆಯೋ ಅವರೂ ಸಹ ಅವರ ಜನ್ಮಗಳನ್ನು ತಿಳಿದುಕೊಂಡಿಲ್ಲ. ನಾನು ತಿಳಿದುಕೊಂಡಿದ್ದೇನೆ - ಕೃಷ್ಣನು ರಾಜಧಾನಿಯ ಮಾಲೀಕನಾಗಿದ್ದಾನೆ. ಸತ್ಯಯುಗದಲ್ಲಿ ಸೂರ್ಯವಂಶಿ, ವಿಷ್ಣುಪುರಿಯ ರಾಜ್ಯವಿರುತ್ತದೆ. ಲಕ್ಷ್ಮಿ-ನಾರಾಯಣರಿಗೆ ವಿಷ್ಣು ಎಂದು ಕರೆಯಲಾಗುವುದು. ಎಲ್ಲಿಯಾದರೂ ಭಾಷಣ ಮಾಡುವುದಾದರೆ ಈ ಇಷ್ಟು ವಿಷಯ ಸಾಕು. ಏಕೆಂದರೆ ಸ್ವಯಂ ಭಾರತವಾಸಿಗಳೇ ಮಹಿಮೆ ಮಾಡುತ್ತಾರೆ. ಯಾವಾಗ ಧರ್ಮ ಪ್ರಾಯಲೋಪವಾಗುತ್ತದೆಯೋ ಆಗ ಮತ್ತೆ ಗೀತೆಯನ್ನು ಹೇಳುತ್ತೇನೆ, ಆಗ ಮತ್ತೆ ಅದೇ ಧರ್ಮವನ್ನು ಸ್ಥಾಪನೆ ಮಾಡಬೇಕು. ಆ ಧರ್ಮದ ಯಾವ ಮನುಷ್ಯನೂ ಇಲ್ಲವೆಂದಾಗ ಗೀತೆಯ ಜ್ಞಾನವು ಎಲ್ಲಿಂದ ಬಂದಿತು? ತಂದೆಯು ತಿಳಿಸುತ್ತಾರೆ - ಸತ್ಯ-ತ್ರೇತಾಯುಗದಲ್ಲಿ ಯಾವ ಶಾಸ್ತ್ರಗಳೂ ಇರುವುದಿಲ್ಲ. ಇವೆಲ್ಲಾ ಭಕ್ತಿಮಾರ್ಗದ ಸಾಮಗ್ರಿಗಳಾಗಿವೆ. ಭಕ್ತಿಮಾರ್ಗದ ಸಾಮಗ್ರಿಗಳ ಮೂಲಕ ನನ್ನನ್ನು ಯಾರೂ ಮಿಲನ ಮಾಡಲು ಆಗುವುದಿಲ್ಲ. ಆದ್ದರಿಂದ ನಾನೇ ಬರಬೇಕಾಗುತ್ತದೆ, ನಾನೇ ಬಂದು ಸರ್ವರಿಗೂ ಮುಕ್ತಿಯ ಮೂಲಕ ಜೀವನ್ಮುಕ್ತಿಯನ್ನು ಕೊಡುತ್ತೇನೆ. ಎಲ್ಲರೂ ಹಿಂತಿರುಗಬೇಕಾಗುತ್ತದೆ. ಮುಕ್ತಿಗೆ ಹೋಗಿ ನಂತರ ಸ್ವರ್ಗದಲ್ಲಿ ಬರಬೇಕಾಗುವುದು. ಮುಕ್ತಿಗೆ ಹೋಗಿ ನಂತರ ಜೀವನ್ಮುಕ್ತಿಯಲ್ಲಿ ಬರಬೇಕು. ಆದ್ದರಿಂದ ತಂದೆಯು ಹೇಳುತ್ತಾರೆ - ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗಬಹುದು. ಗೃಹಸ್ಥ ವ್ಯವಹಾರದಲ್ಲಿರುತ್ತಾ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ. ಅಂದರೆ ದುಃಖ ರಹಿತ ಸನ್ಯಾಸಿಗಳಂತೂ ಜೀವನ್ಮುಕ್ತರನ್ನಾಗಿ ಮಾಡಲು ಸಾಧ್ಯವಿಲ್ಲ, ಅವರು ಜೀವನ್ಮುಕ್ತಿಯನ್ನು ಒಪ್ಪಿಕೊಳ್ಳುವುದೂ ಇಲ್ಲ. ಈ ಸನ್ಯಾಸಿಗಳ ಧರ್ಮವು ಸತ್ಯಯುಗದಲ್ಲಿರುವುದಿಲ್ಲ. ಸನ್ಯಾಸಿಗಳ ಧರ್ಮವಂತೂ ನಂತರ ಬರುತ್ತದೆ. ಇಸ್ಲಾಮಿ, ಬೌದ್ದ ಧರ್ಮ, ಮೊದಲಾದವು ಸತ್ಯಯುಗದಲ್ಲಿ ಬರುವುದಿಲ್ಲ. ಈಗ ಎಲ್ಲಾ ಧರ್ಮಗಳಿದ್ದು ದೇವತಾ ಧರ್ಮವು ಇಲ್ಲದಂತಾಗಿದೆ. ದೇವತಾ ಧರ್ಮದವರೇ ಬೇರೆ ಧರ್ಮಗಳಲ್ಲಿ ಹೊರಟು ಹೋಗಿದ್ದಾರೆ, ತಮ್ಮ ಧರ್ಮವನ್ನು ತಿಳಿದುಕೊಂಡಿಲ್ಲ. ಯಾರೂ ತಮ್ಮನ್ನು ದೇವತಾ ಧರ್ಮದವರೆಂದು ಒಪ್ಪಿಕೊಳ್ಳುವುದಿಲ್ಲ. ಜೈ ಹಿಂದ್ ಎಂದು ಹೇಳುತ್ತಾರೆ, ಅವರಂತೂ ತಂದೆಯಲ್ಲ. ಭಾರತಕ್ಕೆ ಜಯ, ಭಾರತಕ್ಕೆ ಸೋಲು ಯಾವಾಗ ಆಗುತ್ತದೆಯೆಂದು ಯಾರೂ ತಿಳಿದುಕೊಂಡಿಲ್ಲ. ಯಾವಾಗ ರಾಜ್ಯಭಾಗ್ಯವು ಸಿಗುತ್ತದೆಯೋ ಆಗ ಭಾರತಕ್ಕೆ ಜಯವಾಗುತ್ತದೆ, ಆಗ ಹಳೆಯ ಪ್ರಪಂಚದ ವಿನಾಶವೂ ಆಗುತ್ತದೆ. ರಾವಣನು ಸೋಲಿಸುತ್ತಾನೆ, ರಾಮ ವಿಜಯಿಗಳನ್ನಾಗಿ ಮಾಡುತ್ತಾರೆ. ಜಯ ಭಾರತ ಎಂದೂ ಹೇಳುತ್ತಾರೆ, ಜೈ ಹಿಂದ್ ಅಲ್ಲ. ಅಕ್ಷರವನ್ನು ಬದಲಾವಣೆ ಮಾಡಿ ಬಿಟ್ಟಿದ್ದಾರೆ. ಗೀತೆಯ ಅಕ್ಷರವಂತೂ ಬಹಳ ಚೆನ್ನಾಗಿದೆ.

ಭಗವಂತ ಶ್ರೇಷ್ಠಾತಿ ಶ್ರೇಷ್ಠ ಆಗಿದ್ದಾರೆ, ತಂದೆಯು ತನಗೆ ಯಾರೂ ತಂದೆ -ತಾಯಿಗಳಿಲ್ಲವೆಂದು ಹೇಳುತ್ತಾರೆ. ನಾನು ನನ್ನ ರೂಪವನ್ನು ನಾನೇ ಮಾಡಿಕೊಳ್ಳಬೇಕಾಗುತ್ತದೆ. ನಾನು ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡುತ್ತೇನೆ. ಕೃಷ್ಣನಿಗೆ ತಾಯಿಯು ಜನ್ಮ ಕೊಟ್ಟರು. ನಾನು ರಚಯಿತನಾಗಿದ್ದೇನೆ, ನಾಟಕದನುಸಾರವಾಗಿ ಈ ಭಕ್ತಿಮಾರ್ಗಕ್ಕಾಗಿ ಎಲ್ಲಾ ಶಾಸ್ತ್ರಗಳು ಮಾಡಲ್ಪಟ್ಟಿವೆ. ಈ ಗೀತಾ-ಭಾಗವತಗಳೆಲ್ಲವೂ ದೇವತಾ ಧರ್ಮವನ್ನು ಕುರಿತು ಮಾಡಲಾಗಿದೆ. ತಂದೆಯು ಯಾವಾಗ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತಾರೋ ಅದು ಇಂದು ಕಳೆದು ಹೋಗಿದೆ. ಪುನಃ ಭವಿಷ್ಯದಲ್ಲಿ ಬರುತ್ತದೆ. ಆದಿ-ಮಧ್ಯ-ಅಂತ್ಯವನ್ನು, ಪಾಸ್ಟ್-ಪ್ರೆಜೆಂಟ್-ಫ್ಯೂಚರ್ ಎಂದು ಹೇಳುತ್ತಾರೆ. ಇದರಲ್ಲಿ ಆದಿ-ಮಧ್ಯ-ಅಂತ್ಯದ ಅರ್ಥವೇ ಬೇರೆಯಾಗಿದೆ. ಯಾವುದು ಕಳೆದು ಹೋಗಿದೆಯೋ ಅದೇ ಮತ್ತೆ ವರ್ತಮಾನದಲ್ಲಿ ನಡೆಯುತ್ತದೆ. ಯಾವ ಹಿಂದಿನ ಕಥೆಗಳನ್ನು ಹೇಳುತ್ತಾರೆ. ಅದು ಭವಿಷ್ಯದಲ್ಲಿ ಪುನರಾವರ್ತನೆಯಾಗುತ್ತದೆ. ಮನುಷ್ಯರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಯಾವುದು ಕಳೆದು ಹೋಗುತ್ತದೆಯೋ ಅದನ್ನು ತಂದೆಯು ವರ್ತಮಾನದಲ್ಲಿ ಹೇಳುತ್ತಾರೆ ನಂತರ ಭವಿಷ್ಯದಲ್ಲಿ ಪುನರಾವರ್ತನೆಯಾಗುತ್ತದೆ. ಇವೆಲ್ಲವೂ ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಇದಕ್ಕಾಗಿ ಬುದ್ಧಿ ತುಂಬಾ ಸ್ವಚ್ಛವಾಗಿರಬೇಕು. ಎಲ್ಲಿಯಾದರೂ ನಿಮ್ಮನ್ನು ಭಾಷಣ ಮಾಡಲು ಕರೆದರೆ ನೀವು ಹೋಗಿ ಮಾಡಬೇಕು. ಮಕ್ಕಳು ತಂದೆಯನ್ನು ಶೋ ಮಾಡಬೇಕು. ಮಕ್ಕಳೇ ನಮ್ಮ ತಂದೆ ಯಾರೆಂದು ತಿಳಿಸುತ್ತಾರೆ. ತಂದೆಯೂ ಅವಶ್ಯವಾಗಿ ಇರಬೇಕು. ಇಲ್ಲವೆಂದರೆ ಆಸ್ತಿಯನ್ನು ಹೇಗೆ ತೆಗೆದುಕೊಳ್ಳುತ್ತೀರಿ? ನೀವು ಬಹಳ ಶ್ರೇಷ್ಠಾತಿ ಶ್ರೇಷ್ಠ ಆಗಿದ್ದೀರಿ. ಆದರೂ ದೊಡ್ಡ ವ್ಯಕ್ತಿಗಳಿಗೆ ಗೌರವ ಕೊಡಬೇಕಾಗುತ್ತದೆ. ನೀವೆಲ್ಲರೂ ತಂದೆಯ ಪರಿಚಯವನ್ನು ಕೊಡಬೇಕು. ಎಲ್ಲರೂ ಪರಮಪಿತ ಪರಮಾತ್ಮನನ್ನು ಕರೆಯುತ್ತಾರೆ, ಪ್ರಾರ್ಥನೆ ಮಾಡುತ್ತಾರೆ, ಓ ಗಾಡ್ ಫಾದರ್ ಬಾ ಎಂದು, ಆದರೆ ಅವರು ಯಾರು? ನೀವು ಶಿವ ತಂದೆಯ ಮಹಿಮೆಯನ್ನೂ ಮಾಡಬೇಕು, ಶ್ರೀ ಕೃಷ್ಣನ ಮಹಿಮೆಯನ್ನೂ ಮಾಡಬೇಕು, ಭಾರತದ ಮಹಿಮೆಯನ್ನೂ ಮಾಡಬೇಕು. ಭಾರತವು ಶಿವಾಲಯ ಸ್ವರ್ಗವಾಗಿತ್ತು. 5000 ವರ್ಷಗಳ ಹಿಂದೆ ದೇವಿ-ದೇವತೆಗಳ ರಾಜ್ಯವಿತ್ತು ಅದನ್ನು ಯಾರು ಸ್ಥಾಪನೆ ಮಾಡಿದರು? ಅವಶ್ಯವಾಗಿ ಶ್ರೇಷ್ಠಾತಿ ಶ್ರೇಷ್ಠ ಭಗವಂತನೇ ಮಾಡಿರಬೇಕು. ಶ್ರೇಷ್ಠಾತಿ ಶ್ರೇಷ್ಠ ಪರಮಪಿತ ಪರಮಾತ್ಮನೇ ಶಿವಾಯ ನಮಃ ಆಗಿದ್ದಾರೆ. ಶಿವ ಜಯಂತಿಯನ್ನು ಭಾರತವಾಸಿಗಳೇ ಆಚರಣೆ ಮಾಡುತ್ತಾರೆ. ಆದರೆ ಶಿವ ಯಾವಾಗ ಆಗಮಿಸಿದರು? ಇದು ಯಾರಿಗೂ ಗೊತ್ತಿಲ್ಲ. ಅವಶ್ಯವಾಗಿ ಸ್ವರ್ಗಕ್ಕಿಂತಲೂ ಮೊದಲು ಸಂಗಮದಲ್ಲಿ ಬಂದಿರಬೇಕು. ಹೇಳುತ್ತಾರೆ, ಕಲ್ಪ-ಕಲ್ಪದ ಸಂಗಮಯುಗೇ ಯುಗೇ ಬರುತ್ತೇನೆ. ಆದರೆ ಪ್ರತೀ ಯುಗದಲ್ಲಿಯೂ ಅಲ್ಲ. ಒಂದುವೇಳೆ ಪ್ರತೀ ಯುಗವೆಂದು ಹೇಳಿದರೂ ನಾಲ್ಕು ಅವತಾರಗಳೇ ಆಗಿರಬೇಕಲ್ಲವೆ? ಆದರೆ ಮನುಷ್ಯರು ಎಷ್ಟೊಂದು ಅವತಾರಗಳನ್ನು ತೋರಿಸಿದ್ದಾರೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯೇ ಆಗಿದ್ದಾರೆ, ಅವರೇ ಸ್ವರ್ಗವನ್ನು ರಚಿಸುತ್ತಾರೆ. ಭಾರತವೇ ಸ್ವರ್ಗವಾಗಿತ್ತು, ನಿರ್ವಿಕಾರಿಯಾಗಿತ್ತು, ಅಂದಾಗ ಈ ಪ್ರಶ್ನೆಯೇಳುವುದಿಲ್ಲ. ಅಲ್ಲಿ ಮಕ್ಕಳ ಜನ್ಮ ಹೇಗೆ ಆಗುತ್ತದೆ? ಅಲ್ಲಂತೂ ಅಲ್ಲಿನ ರೀತಿ-ಪದ್ಧತಿಗನುಗುಣವಾಗಿ ನಡೆಯುತ್ತದೆ. ನೀವು ಏಕೆ ಚಿಂತೆ ಮಾಡುತ್ತೀರಿ, ಮೊದಲು ನೀವು ತಂದೆಯನ್ನು ತಿಳಿದುಕೊಳ್ಳಿ. ಸತ್ಯಯುಗದಲ್ಲಿ ಆತ್ಮದ ಜ್ಞಾನವಿರುತ್ತದೆ. ನಾನು ಆತ್ಮ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ. ಅಳುವ ಮಾತಿಲ್ಲ, ಅಲ್ಲಿ ಎಂದಿಗೂ ಅಕಾಲ ಮೃತ್ಯುವಾಗುವುದಿಲ್ಲ, ಖುಷಿಯಿಂದ ಶರೀರವನ್ನು ಬಿಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಹೇಗೆ ರೂಪ ಪರಿವರ್ತನೆ ಮಾಡಿಕೊಂಡು ಬರುತ್ತೇನೆ ಎಂದು. ಕೃಷ್ಣನಿಗೆ ಈ ರೀತಿ ಹೇಳುವುದಿಲ್ಲ. ಕೃಷ್ಣನಂತೂ ಗರ್ಭದಿಂದ ಜನ್ಮ ಪಡೆಯುತ್ತಾನೆ, ಬ್ರಹ್ಮಾ-ವಿಷ್ಣು-ಶಂಕರರು ಸೂಕ್ಷ್ಮವತನವಾಸಿಗಳಾಗಿದ್ದಾರೆ. ಪ್ರಜಾಪಿತ ಅವಶ್ಯವಾಗಿ ಇಲ್ಲಿರಬೇಕು, ನಾವು ಅವರ ಸಂತಾನರಾಗಿದ್ದೇವೆ. ಆ ನಿರಾಕಾರ ತಂದೆಯು ಅವಿನಾಶಿಯಾಗಿದ್ದಾರೆ, ನಾವಾತ್ಮಗಳೂ ಅವಿನಾಶಿಯಾಗಿದ್ದೇವೆ. ಆದರೆ ನಾವು ಅವಶ್ಯವಾಗಿ ಪುನರ್ಜನ್ಮದಲ್ಲಿ ಬರಬೇಕು ಈ ಡ್ರಾಮ ಮಾಡಲ್ಪಟ್ಟಿದೆ. ಮತ್ತೆ ಬಂದು ಗೀತಾಜ್ಞಾನವನ್ನು ಹೇಳು ಎಂದು ಹೇಳುತ್ತಾರೆ. ಅವಶ್ಯವಾಗಿ ಎಲ್ಲರೂ ಚಕ್ರದಲ್ಲಿ ಬಂದು ಹೋಗಿರಬೇಕು. ತಂದೆಯೂ ಬಂದು ಹೋಗಿರುವ ಕಾರಣ ಮತ್ತೆ ಬಂದಿದ್ದಾರೆ. ಮತ್ತೆ ಬಂದು ಗೀತೆಯನ್ನು ತಿಳಿಸುತ್ತೇನೆ ಎಂದು ಹೇಳುತ್ತಾರೆ. ಹೇ ಪತಿತ ಪಾವನ ಬಾ ಎಂದು ಕರೆಯುತ್ತಾರೆ. ಆದುದರಿಂದ ಇದು ಅವಶ್ಯವಾಗಿ ಪತಿತ ಪ್ರಪಂಚವಾಗಿದೆ. ಎಲ್ಲರೂ ಪತಿತರಾಗಿರುವ ಕಾರಣ ಪಾಪವನ್ನು ಕಳೆದುಕೊಳ್ಳಲು ಗಂಗಾ ಸ್ನಾನವನ್ನು ಮಾಡುತ್ತಾರೆ. ಸ್ವರ್ಗದಲ್ಲಿ ಭಾರತವೇ ಇತ್ತು, ಭಾರತವು ಶ್ರೇಷ್ಠ ಅವಿನಾಶಿ ಖಂಡ, ಸರ್ವರ ತೀರ್ಥ ಸ್ಥಾನವಾಗಿದೆ. ಎಲ್ಲಾ ಮನುಷ್ಯರು ಪತಿತರಾಗಿದ್ದಾರೆ, ಎಲ್ಲರಿಗೂ ಆ ಜೀವನ್ಮುಕ್ತಿಯನ್ನು ಕೊಡುವಂತಹವರು ತಂದೆಯಾಗಿದ್ದಾರೆ. ಅವಶ್ಯವಾಗಿ ಇಷ್ಟೊಂದು ದೊಡ್ಡ ಸೇವೆಯನ್ನು ಮಾಡುವಂತಹವರ ಮಹಿಮೆ ಮಾಡಬೇಕಾಗುತ್ತದೆ. ಭಾರತವು ಅವಿನಾಶಿ ತಂದೆಯ ಜನ್ಮ ಸ್ಥಾನವಾಗಿದೆ, ಅವರೇ ಎಲ್ಲರನ್ನು ಪಾವನ ಮಾಡುವವರಾಗಿದ್ದಾರೆ. ತಂದೆಯು ತಮ್ಮ ಜನ್ಮ ಸ್ಥಾನವನ್ನು ಬಿಟ್ಟು ಬೇರೆ ಎಲ್ಲಿಗೂ ಹೋಗುವುದಿಲ್ಲ. ಅದನ್ನೇ ತಂದೆಯು ಕುಳಿತು ತಾನು ಹೇಗೆ ರೂಪ ಧರಿಸಿ ಬರುತ್ತೇನೆಂದು ತಿಳಿಸುತ್ತಾರೆ.

ಎಲ್ಲವೂ ಧಾರಣೆಯ ಮೇಲೆ ಆಧಾರವಾಗಿದೆ. ಧಾರಣೆಗನುಗುಣವಾಗಿ ನೀವು ಮಕ್ಕಳ ಪದವಿಯಿದೆ. ಎಲ್ಲರು ಹೇಳುವುದು (ಮುರುಳಿ) ಒಂದೇ ರೀತಿಯಿರುವುದಿಲ್ಲ. ಒಂದುವೇಳೆ ಕಟ್ಟಿಗೆ ಮುರುಳಿಯನ್ನು ನುಡಿಸಿದರೂ ಸಹ ಒಂದೇ ರೀತಿಯಾಗಿ ನುಡಿಸಲಾಗುವುದಿಲ್ಲ. ಪ್ರತಿಯೊಬ್ಬರ ಪಾತ್ರವು ಬೇರೆ-ಬೇರೆಯಾಗಿದೆ. ಇಷ್ಟು ಅತೀ ಸೂಕ್ಷ್ಮವಾದ ಆತ್ಮನಲ್ಲಿ ಎಷ್ಟೊಂದು ದೊಡ್ಡ ಪಾತ್ರವಿದೆ. ಪರಮಾತ್ಮನೂ ಸಹ ನಾನು ಪಾತ್ರಧಾರಿಯೆಂದು ಹೇಳುತ್ತಾರೆ. ಯಾವಾಗ ಧರ್ಮ ಗ್ಲಾನಿಯಾಗುತ್ತದೆಯೋ ಆಗ ನಾನು ಬರುತ್ತೇನೆ. ಭಕ್ತಿಮಾರ್ಗದಲ್ಲಿಯೂ ನಾನು ಕೊಡುತ್ತೇನೆ. ಈಶ್ವರಾರ್ಥ ದಾನ, ಪುಣ್ಯ ಮಾಡುವವರಿಗೆ ಈಶ್ವರನೇ ಫಲ ಕೊಡುತ್ತಾರೆ. ಎಲ್ಲರೂ ತಮ್ಮ ಇನ್ಶೂರ್ ಮಾಡಿಕ್ಕೊಳ್ಳುತ್ತಾರೆ. ಇದರ ಫಲ ಮುಂದಿನ ಜನ್ಮದಲ್ಲಿ ಸಿಗುತ್ತದೆ ಎಂದು ತಿಳಿಯುತ್ತಾರೆ. ನೀವು 21 ಜನ್ಮಗಳಿಗಾಗಿ ಇನ್ಶೂರ್ ಮಾಡುತ್ತೀರಿ. ಅದು ಹದ್ದಿನ ಇನ್ಶೂರೆನ್ಸ್, ಇನ್ಡೈರೆಕ್ಟ್ ಆಗಿದೆ ಮತ್ತು ಇದು ಬೇಹದ್ದಿನ ಇನ್ಶೂರೆನ್ಸ್ ಡೈರೆಕ್ಟ್ ಆಗಿದೆ. ನೀವು ತನು-ಮನ-ಧನದಿಂದ ಇನ್ಶೂರ್ ಮಾಡಿಕೊಳ್ಳುತ್ತೀರಿ ನಂತರ ಅಪಾರವಾದ ಧನ ಸಂಪತ್ತನ್ನು ಪಡೆಯುತ್ತೀರಿ, ಸದಾ ಆರೋಗ್ಯವಂತರು, ಐಶ್ವರ್ಯವಂತರು ಆಗುತ್ತೀರಿ. ನೀವು ಡೈರೆಕ್ಟ್ ಇನ್ಶೂರ್ ಮಾಡುತ್ತಿದ್ದೀರಿ. ಮನುಷ್ಯರು ಈಶ್ವರಾರ್ಥ ದಾನ ಮಾಡುತ್ತಾರೆ, ಈಶ್ವರನೇ ಕೊಡುತ್ತಾನೆಂದು ತಿಳಿಯುತ್ತಾರೆ. ಆದರೆ ಅವರು ಹೇಗೆ ಕೊಡುತ್ತಾರೆಂದು ತಿಳಿದುಕೊಂಡಿಲ್ಲ. ಎಲ್ಲವನ್ನೂ ಈಶ್ವರನೇ ಕೊಡುತ್ತಾನೆ, ಸಂತಾನವನ್ನೂ ಈಶ್ವರನೇ ಕೊಡುವನು ಎಂದು ಮನುಷ್ಯರು ತಿಳಿಯುತ್ತಾರೆ, ಕೊಟ್ಟ ನಂತರ ಅವಶ್ಯವಾಗಿ ತೆಗೆದುಕೊಳ್ಳುವರಲ್ಲವೆ. ನೀವೆಲ್ಲರೂ ಅವಶ್ಯವಾಗಿ ಶರೀರ ಬಿಡಬೇಕು. ನಿಮ್ಮ ಜೊತೆಯಲ್ಲಿ ಏನೂ ಬರುವುದಿಲ್ಲ. ಈ ಶರೀರವೂ ಇಲ್ಲಿಯೇ ಸಮಾಪ್ತಿಯಾಗಿ ಬಿಡುತ್ತದೆ. ಆದ್ದರಿಂದ ಈಗ ಏನು ಇನ್ಶೂರ್ ಮಾಡಿಕೊಳ್ಳಬೇಕೋ ಮಾಡಿಕೊಳ್ಳಿ. ನಂತರ 21 ಜನ್ಮಗಳವರೆಗೆ ಇನ್ಶೂರ್ ಆಗಿ ಬಿಡುತ್ತದೆ. ಇನ್ಶೂರ್ ಮಾಡಿ ಸೇವೆ ಮಾಡದೇ ಇದ್ದಾಗ ಇಲ್ಲಿಯೇ ತಿಂದು ಇಲ್ಲಿಯೇ ಖಾಲಿಯಾಗಿ ಬಿಡುತ್ತದೆ ಆದ್ದರಿಂದ ಸೇವೆ ಮಾಡಬೇಕು. ನಿಮಗಾಗಿ ಖರ್ಚು ಸಹ ಆಗುತ್ತದೆಯಲ್ಲವೆ. ಇನ್ಶೂರ್ ಮಾಡಿ ಸೇವೆ ಮಾಡದೇ ತಿನ್ನುವುದರಿಂದ ಏನೂ ಸಿಗುವುದಿಲ್ಲ. ಯಾವಾಗ ಸೇವೆ ಮಾಡುತ್ತೀರಿ ಆಗ ಶ್ರೇಷ್ಠ ಪದವಿ ಸಿಗುತ್ತದೆ. ಎಷ್ಟು ಹೆಚ್ಚು ಸೇವೆ ಮಾಡುತ್ತೀರಿ ಅಷ್ಟು ಶ್ರೇಷ್ಠ ಪದವಿ ಸಿಗುತ್ತದೆ, ಕಡಿಮೆ ಸೇವೆ ಮಾಡಿದರೆ ಕಡಿಮೆ ಸಿಗುತ್ತದೆ. ಸರ್ಕಾರದ ಸಮಾಜ ಸೇವಕರಲ್ಲಿಯೂ ನಂಬರ್ವಾರ್ ಇರುತ್ತಾರೆ. ಅವರಲ್ಲಿಯೂ ದೊಡ್ಡ-ದೊಡ್ಡ ಮುಖ್ಯಸ್ತರೂ ಇರುತ್ತಾರೆ. ಅನೇಕ ರೀತಿ ಸಮಾಜ ಸೇವಕರಿರುತ್ತಾರೆ, ಅವರು ಶಾರೀರಿಕ ಸೇವಕರು ಆದರೆ ನೀವು ಆತ್ಮಿಕ ಸೇವಕರು. ಪ್ರತಿಯೊಬ್ಬರನ್ನೂ ನೀವು ಯಾತ್ರಿಯನ್ನಾಗಿ ಮಾಡುತ್ತೀರಿ. ಇದು ತಂದೆಯ ಬಳಿ ಹೋಗುವಂತಹ ಆತ್ಮಿಕ ಯಾತ್ರೆಯಾಗಿದೆ. ತಂದೆಯು ಹೇಳುತ್ತಾರೆ – ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮತ್ತು ಗುರು-ಗೋಸಾಯಿ ಮೊದಲಾದವರನ್ನು ಬಿಡಿ, ನನ್ನೊಬ್ಬನನ್ನು ನೆನಪು ಮಾಡಿ. ಪರಮಪಿತ ಪರಮಾತ್ಮ ನಿರಾಕಾರನಾಗಿದ್ದಾರೆ ಅವರು ಸಾಕಾರ ರೂಪವನ್ನು ಧಾರಣೆ ಮಾಡಿ ತಿಳಿಸುತ್ತಾರೆ. ನಾನು ಲೋನ್ ತೆಗೆದುಕೊಳ್ಳುತ್ತೇನೆ, ಪ್ರಕೃತಿಯ ಆಧಾರವನ್ನು ತೆಗೆದುಕೊಳ್ಳುತ್ತೇನೆಂದು ಹೇಳುತ್ತಾರೆ. ನೀವೂ ಸಹ ಅಶರೀರಿಯಾಗಿ ಬಂದವರು ಈಗ ಮತ್ತೆ ಎಲ್ಲರೂ ಮನೆಗೆ ಹಿಂತಿರುಗಬೇಕಾಗಿದೆ. ಮೃತ್ಯು ಮುಂದೆ ನಿಂತಿದೆ ಎಂದು ಎಲ್ಲಾ ಧರ್ಮದವರಿಗೂ ಹೇಳುತ್ತಾರೆ. ಯಾದವ, ಕೌರವರೆಲ್ಲರೂ ಸಮಾಪ್ತಿಯಾಗುತ್ತಾರೆ. ಬಾಕಿ ಪಾಂಡವರು ಬಂದು ರಾಜ್ಯ ಮಾಡುತ್ತಾರೆ. ಈಗ ಗೀತೆಯ ಯುಗವು ಪುನರಾವರ್ತನೆಯಾಗುತ್ತಿದೆ. ಹಳೆಯ ಪ್ರಪಂಚದ ವಿನಾಶವೂ ಆಗಬೇಕಾಗಿದೆ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಹಳೆಯದಾಗಿ ಬಿಟ್ಟಿದೆ. 84 ಜನ್ಮಗಳು ಮುಗಿಯಿತು ನಾಟಕವು ಪೂರ್ಣವಾಯಿತು. ಈಗ ಈ ಶರೀರವನ್ನು ಬಿಟ್ಟು ಮನೆಗೆ ಹಿಂತಿರುಗಬೇಕು. ಪರಸ್ಪರ ಒಬ್ಬರಿಗೊಬ್ಬರು ಈಗ ಮನೆಗೆ ಹಿಂತಿರುಗಬೇಕೆಂಬ ಸ್ಮೃತಿಯನ್ನು ತರಿಸಿಕೊಡಿ. ಈ 84 ಜನ್ಮಗಳ ಪಾತ್ರವನ್ನು ಅನೇಕ ಬಾರಿ ಮಾಡಿದ್ದೇವೆ. ಈ ನಾಟಕವು ಅನಾದಿ ಯಾಗಿ ಮಾಡಲ್ಪಟ್ಟಿದೆ. ಯಾರ್ಯಾರೂ ಯಾವ-ಯಾವ ಧರ್ಮದವರಾಗಿದ್ದಾರೆ, ಅವರು ತಮ್ಮ ವಿಭಾಗಕ್ಕೆ ಹಿಂತಿರುಗಬೇಕು. ಯಾವ ದೇವಿ-ದೇವತಾ ಧರ್ಮವು ಪ್ರಾಯಲೋಪವಾಗಿ ಬಿಟ್ಟಿದೆಯೋ ಅದಕ್ಕಾಗಿ ಸಸಿ ನಾಟಿ ನಡೆಯುತ್ತಿದೆ. ಯಾರು ಹೂವಾಗಿದ್ದರೋ ಅವರು ಬಂದು ಬಿಡುತ್ತಾರೆ. ಒಳ್ಳೊಳ್ಳೆಯ ಹೂಗಳು ಬರುತ್ತಾರೆ. ಆದರೆ ಮಾಯೆಯ ಬಿರುಗಾಳಿಗೆ ಬಿದ್ದು ಬಿಡುತ್ತಾರೆ. ನಂತರ ಜ್ಞಾನದ ಸಂಜೀವಿನಿ ಸಿಕ್ಕಿದಾಗ ಜಾಗೃತರಾಗುತ್ತಾರೆ. ತಂದೆಯು ಹೇಳುತ್ತಾರೆ, ನೀವು ಶಾಸ್ತ್ರ ಓದುತ್ತಾ ಬಂದಿದ್ದೀರಿ, ಅವಶ್ಯವಾಗಿ ಇವರಿಗೂ ಗುರುಗಳಿದ್ದರು. ಗುರುಗಳ ಸಹಿತ ಸರ್ವರನ್ನು ಸದ್ಗತಿ ಮಾಡುವಂತಹವರು ನಾನೊಬ್ಬನೇ ಆಗಿದ್ದೇನೆಂದು ತಂದೆಯು ಹೇಳುತ್ತಾರೆ. ಒಂದು ಸೆಕೆಂಡಿನಲ್ಲಿ ಮುಕ್ತಿ-ಜೀವನ್ಮುಕ್ತಿ ರಾಜ-ರಾಣಿಯೆಂದಾಗ ಪ್ರವೃತ್ತಿ ಮಾರ್ಗವಾಗಿ ಬಿಡುತ್ತದೆ. ಅದು ನಿರ್ವಿಕಾರಿ ಪ್ರವೃತ್ತಿ ಮಾರ್ಗವಾಗಿತ್ತು, ಈಗ ಸಂಪೂರ್ಣ ವಿಕಾರಿಯಾಗಿದೆ. ಅಲ್ಲಿ ರಾವಣನ ರಾಜ್ಯವಿರುವುದಿಲ್ಲ. ರಾವಣ ರಾಜ್ಯ ಅರ್ಧಕಲ್ಪದಿಂದ ಪ್ರಾರಂಭವಾಗುತ್ತದೆ. ಭಾರತವಾಸಿಗಳೇ ರಾವಣನಿಂದ ಸೋಲುತ್ತಾರೆ. ಉಳಿದ ಧರ್ಮಗಳೆಲ್ಲವೂ ತಮ್ಮ-ತಮ್ಮ ಸಮಯದಲ್ಲಿ ಸತೋ, ರಜೋ, ತಮೋವನ್ನು ಪಾರು ಮಾಡಿ ಬರುತ್ತಾರೆ. ಮೊದಲು ಸುಖದಲ್ಲಿ ನಂತರ ದುಃಖದಲ್ಲಿ ಬರುತ್ತಾರೆ. ಮುಕ್ತಿಯ ನಂತರ ಜೀವನ್ಮುಕ್ತಿಯು ಇದ್ದೇ ಇರುತ್ತದೆ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನ, ನಿಸ್ಸಾರ ಸ್ಥಿತಿಯಲ್ಲಿದ್ದಾರೆ. ಪ್ರತಿಯೊಂದು ಆತ್ಮ ಒಂದು ಶರೀರವನ್ನು ಬಿಟ್ಟು ಮತ್ತೊಂದು ಹೊಸ ಶರೀರವನ್ನು ತೆಗೆದುಕೊಳ್ಳುತ್ತದೆ. ತಂದೆಯು ಹೇಳುತ್ತಾರೆ, ನಾನು ಜನನ-ಮರಣದಲ್ಲಿ ಬರುವುದಿಲ್ಲ. ನನಗೆ ಯಾರೂ ತಂದೆಯಿರಲು ಸಾಧ್ಯವಿಲ್ಲ ಬೇರೆಯವರೆಲ್ಲರಿಗೂ ತಂದೆಯಿರುತ್ತಾರೆ. ಕೃಷ್ಣನ ಜನ್ಮವು ಸಹ ತಾಯಿಯ ಗರ್ಭದಿಂದಾಗುತ್ತದೆ. ಇದೇ ಬ್ರಹ್ಮ ಯಾವಾಗ ರಾಜ್ಯವನ್ನು ತೆಗೆದುಕೊಳ್ಳುತ್ತಾರೆಯೋ ಆಗ ಗರ್ಭದಿಂದ ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಇವರೇ ಹಳೆಯದರಿಂದ ಹೊಸದು ಆಗಬೇಕು. ಇವರು 84 ಜನ್ಮಗಳ ಹಳಬರಾಗಿದ್ದಾರೆ. ಈ ಮಾತುಗಳು ಕಷ್ಟದಿಂದ ಕೆಲವರಿಗೆ ಯಥಾರ್ಥವಾಗಿ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ ಮತ್ತು ನಶೆಯೇರುತ್ತದೆ. ಇದು ಜ್ಞಾನ ಕಸ್ತೂರಿ ಸುವಾಸನೆಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಆತ್ಮಿಕ ಸಮಾಜ ಸೇವಕರಾಗಿ ಎಲ್ಲರಿಗೂ ಆತ್ಮಿಕ ಯಾತ್ರೆಯನ್ನು ಕಲಿಸಬೇಕಾಗಿದೆ. ತಮ್ಮ ದೇವಿ-ದೇವತಾ ಧರ್ಮದ ಸಸಿ ನಾಟಿ ಮಾಡಬೇಕು.

2. ತಮ್ಮ ಸ್ವಚ್ಛ ಬುದ್ಧಿಯಿಂದ ತಂದೆಯನ್ನು ಶೋ ಮಾಡಬೇಕು. ಮೊದಲು ಸ್ವಯಂನಲ್ಲಿ ಧಾರಣೆ ಮಾಡಿ ನಂತರ ಅನ್ಯರಿಗೆ ಹೇಳಬೇಕು.

ವರದಾನ:
ಎಲ್ಲರಿಗೆ ಅಮರ ಜ್ಞಾನವನ್ನು ಕೊಟ್ಟು ಅಕಾಲ ಮೃತ್ಯುವಿನ ಭಯವನ್ನು ಹೋಗಲಾಡಿಸುವಂತಹ ಶಕ್ತಿಶಾಲಿ ಸೇವಾಧಾರಿ ಭವ.

ಈ ಪ್ರಪಂಚದಲ್ಲಿ ಇತ್ತೀಚೆಗೆ ಅಕಾಲ ಮೃತ್ಯುವಿನದೇ ಭಯವಿದೆ. ಭಯದಿಂದ ತಿನ್ನುತ್ತಿದ್ದಾರೆ, ನಡೆದಾಡುತ್ತಿದ್ದಾರೆ, ಮಲಗುತ್ತಲೂ ಸಹಾ ಇರುತ್ತಾರೆ. ಇಂತಹ ಆತ್ಮಗಳಿಗೆ ಖುಶಿಯ ಮಾತನ್ನು ಹೇಳಿ ಭಯವನ್ನು ಹೋಗಲಾಡಿಸಿ. ನಾವು ನಿಮಗೆ 21 ಜನ್ಮಗಳಿಗೆ ಅಕಾಲ ಮೃತ್ಯುವಿನಿಂದ ರಕ್ಷಿಸುತ್ತೇವೆ ಎನ್ನುವ ಖುಶಿಯ ಸಮಾಚಾರವನ್ನು ತಿಳಿಸಿ. ಎಲ್ಲಾ ಆತ್ಮಗಳಿಗೆ ಅಮರ ಜ್ಞಾನವನ್ನು ಕೊಟ್ಟು ಅಮರರನ್ನಾಗಿ ಮಾಡಿ ಯಾವುದರಿಂದ ಅವರು ಜನ್ಮ-ಜನ್ಮಾಂತರಕ್ಕೆ ಅಕಾಲ ಮೃತ್ಯುವಿನಿಂದ ಸುರಕ್ಷಿತವಾಗಿರಲಿ. ಈ ರೀತಿ ತಮ್ಮ ಶಾಂತಿ ಮತ್ತು ಸುಖದ ವೈಬ್ರೇಷನ್ ನಿಂದ ಜನರಿಗೆ ಸುಖ-ನೆಮ್ಮದಿಯ ಅನುಭೂತಿ ಮಾಡಿಸುವಂತಹ ಶಕ್ತಿಶಾಲಿ ಸೇವಾಧಾರಿಗಳಾಗಿ.

ಸ್ಲೋಗನ್:
ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಇಡುವುದರಿಂದಲೇ ಸರ್ವರಿಂದ ಆಶೀರ್ವಾದ ಸಿಗುವುದು.