27.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಾನು ನಿಮಗೆ ಪುನಃ ರಾಜಯೋಗವನ್ನು ಕಲಿಸಿ ರಾಜರುಗಳ ರಾಜರನ್ನಾಗಿ ಮಾಡುತ್ತೇನೆ, ಈ ಪುನಃ ಎಂಬ ಶಬ್ಧದಲ್ಲಿಯೇ ಇಡೀ ಚಕ್ರವು ಸಮಾವೇಶವಾಗಿದೆ.”

ಪ್ರಶ್ನೆ:
ತಂದೆಯೂ ಸಹ ಪ್ರಬಲವಾಗಿದ್ದಾರೆ, ಮಾಯೆಯೂ ಸಹ ಪ್ರಬಲವಾಗಿದೆ - ಇಬ್ಬರ ಪ್ರಬಲತೆಯೇನಾಗಿದೆ?

ಉತ್ತರ:
ತಂದೆಯು ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ, ಪಾವನರನ್ನಾಗಿ ಮಾಡುವುದರಲ್ಲಿ ತಂದೆಯು ಪ್ರಬಲವಾಗಿದ್ದಾರೆ. ಆದ್ದರಿಂದ ತಂದೆಯನ್ನು ಪತಿತ-ಪಾವನ, ಸರ್ವಶಕ್ತಿವಂತ ಎಂದು ಹೇಳಲಾಗುತ್ತದೆ. ಮಾಯೆಯು ಮತ್ತೆ ಪತಿತರನ್ನಾಗಿ ಮಾಡುವುದರಲ್ಲಿ ಪ್ರಬಲವಾಗಿದೆ. ಸತ್ಯ ಸಂಪಾದನೆಯಲ್ಲಿ ಗ್ರಹಚಾರವು ಈ ರೀತಿ ಕುಳಿತುಕೊಳ್ಳುತ್ತದೆ - ಲಾಭಕ್ಕೆ ಬದಲಾಗಿ ನಷ್ಟವಾಗುತ್ತಾ ಹೋಗುತ್ತದೆ, ವಿಕಾರಗಳ ಹಿಂದೆ ಮಾಯೆಯು ಬುದ್ಧಿಯನ್ನು ಭ್ರಷ್ಟವನ್ನಾಗಿ ಮಾಡುತ್ತದೆ. ಆದ್ದರಿಂದ ತಂದೆಯು ಹೇಳುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿಯಾಗುವಂತಹ ಪುರುಷಾರ್ಥ ಮಾಡಿ.

ಗೀತೆ:
ನಾವು ಆ ಮಾರ್ಗದಂತೆ ನಡೆಯಬೇಕು

ಓಂ ಶಾಂತಿ.
ನೀವು ಮಕ್ಕಳು ಯಾವ ಮಾರ್ಗದಂತೆ ನಡೆಯಬೇಕು? ಅವಶ್ಯವಾಗಿ ಮಾರ್ಗವನ್ನು ತೋರಿಸುವಂತಹವರು ಇರಬೇಕು. ಮನುಷ್ಯರು ತಪ್ಪಾದ ದಾರಿಯಲ್ಲಿಯೇ ನಡೆಯುತ್ತಾರೆ ಆದ್ದರಿಂದ ದುಃಖಿಗಳಾಗುತ್ತಾರೆ. ಈಗ ಎಷ್ಟೊಂದು ದುಃಖಿಗಳಾಗಿದ್ದಾರೆ ಏಕೆಂದರೆ ಅವರ ಮತದಂತೆ ನಡೆಯುವುದಿಲ್ಲ. ಉಲ್ಟಾ ಮತವನ್ನು ಕೊಡುವಂತಹ ರಾವಣ ರಾಜ್ಯ ಪ್ರಾರಂಭವಾದಾಗಿನಿಂದ ಎಲ್ಲರೂ ಅವರ ಮತದಂತೆ ನಡೆಯುತ್ತಾ ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವು ಈ ಸಮಯದಲ್ಲಿ ರಾವಣನ ಮತದಲ್ಲಿದ್ದೀರಿ ಆದ್ದರಿಂದ ಎಲ್ಲರದೂ ಕೆಟ್ಟ ಸ್ಥಿತಿಯಾಗಿ ಬಿಟ್ಟಿದೆ. ಎಲ್ಲರೂ ತನ್ನನ್ನು ಪತಿತರೆಂದೂ ಸಹ ಕೇಳುತ್ತಾರೆ. ಗಾಂಧಿ ಬಾಪೂಜಿಯೂ ಸಹ ಹೇಳುತ್ತಿದ್ದರು - ಪತಿತ-ಪಾವನ ಬಾ, ಅಂದರೆ ನಾವು ಪತಿತರಾಗಿದ್ದೇವೆ. ಆದರೆ ನಾವು ಪತಿತರು ಹೇಗಾದೆವು? ಎಂದು ಯಾರಿಗೂ ಗೊತ್ತಿಲ್ಲ. ಭಾರತದಲ್ಲಿ ರಾಮ ರಾಜ್ಯವು ಬೇಕು ಎಂದು ಬಯಸುತ್ತಾರೆ. ಆದರೆ ಅದನ್ನು ಯಾರು ಮಾಡುತ್ತಾರೆ? ಗೀತೆಯಲ್ಲಿ ತಂದೆಯು ಎಲ್ಲಾ ಮಾತುಗಳನ್ನು ತಿಳಿಸಿದ್ದಾರೆ. ಆದರೆ ಗೀತೆಯ ಭಗವಂತನ ಹೆಸರು ಉಲ್ಟಾ ಮಾಡಲ್ಪಟ್ಟಿದೆ. ನೀವು ಏನನ್ನು ಮಾಡಿದಿರಿ ತಂದೆಯು ತಿಳಿಸುತ್ತಾರೆ. ಕ್ರಿಸ್ತನ ಬೈಬಲ್ನಲ್ಲಿ ಪೋಪನ ಹೆಸರನ್ನು ಹಾಕಿದ್ದೇ ಆದರೆ ಎಷ್ಟೊಂದು ನಷ್ಟವಾಗುತ್ತದೆ. ಇದೂ ಸಹ ಡ್ರಾಮಾ ಆಗಿದೆ. ತಂದೆಯು ದೊಡ್ಡ ತಪ್ಪನ್ನು ತಿಳಿಸುತ್ತಾರೆ. ಆದಿ-ಮಧ್ಯ-ಅಂತ್ಯದ ಜ್ಞಾನವು ಗೀತೆಯಲ್ಲಿದೆ. ನಾನು ನಿಮ್ಮನ್ನು ರಾಜರುಗಳ ರಾಜರನ್ನಾಗಿ ಮಾಡುತ್ತೇನೆ ಎಂದು ತಂದೆಯು ಹೇಳುತ್ತಾರೆ. ನೀವೇ 84 ಜನ್ಮಗಳನ್ನು ಹೇಗೆ ತೆಗೆದುಕೊಂಡಿರಿ - ಇದನ್ನು ನೀವು ತಿಳಿದುಕೊಂಡಿಲ್ಲ, ನಾವು ಅದನ್ನು ತಿಳಿಸುತ್ತೇವೆ. ಇದು ಯಾವುದೇ ಶಾಸ್ತ್ರದಲ್ಲಿಲ್ಲ. ಶಾಸ್ತ್ರಗಳಂತೂ ಅನೇಕ ಇವೆ, ಭಿನ್ನ-ಭಿನ್ನ ಮತಗಳಿವೆ. ಗೀತೆಯೆಂದರೆ ಗೀತೆ. ಯಾರು ಗೀತೆಯನ್ನು ನುಡಿಸಿದರೋ ಅವರೇ ದಾರಿಯನ್ನು ತೋರಿಸಿದ್ದಾರೆ. ನಾನು ನಿಮಗೆ ರಾಜಯೋಗವನ್ನು ಕಲಿಸಲು ಮತ್ತೆ ಬಂದಿದ್ದೇನೆ ಎಂದು ತಂದೆಯು ಹೇಳುತ್ತಾರೆ. ನಿಮ್ಮ ಮೇಲೆ ಮಾಯೆಯ ನೆರಳು ಬಿದ್ದು ಬಿಟ್ಟಿದೆ. ನಾನು ಮತ್ತೆ ಬಂದಿದ್ದೇನೆ. ಗೀತೆಯಲ್ಲಿಯೂ ಸಹ ಹೇಳುತ್ತಾರೆ - ಹೇ ಭಗವಂತ, ಮತ್ತೆ ಗೀತೆಯನ್ನು ನುಡಿಸಲು ಬಾ ಅರ್ಥಾತ್ ಮತ್ತೆ ಗೀತೆಯ ಜ್ಞಾನವನ್ನು ಕೊಡು. ಗೀತೆಯಲ್ಲಿಯೇ ಈ ಮಾತಿದೆ. ಆಸುರೀ ಸೃಷ್ಟಿಯ ವಿನಾಶ ಮತ್ತು ದೈವೀ ಸೃಷ್ಟಿಯ ಸ್ಥಾಪನೆ ಪುನಃ ಆಗುತ್ತದೆ. ಗುರುನಾನಕರು ಮತ್ತೆ ಅವರ ಸಮಯದಲ್ಲಿ ಬರುತ್ತಾರೆ, ಚಿತ್ರವನ್ನೂ ಸಹ ತೋರಿಸಲಾಗುತ್ತದೆ. ಕೃಷ್ಣನೂ ಸಹ ಮತ್ತೆ ಅದೇ ಮೋರ ಮುಕುಟಧಾರಿ ಆಗುತ್ತಾನೆ. ಇವೆಲ್ಲಾ ರಹಸ್ಯಗಳು ಗೀತೆಯಲ್ಲಿದೆ. ಆದರೆ ಭಗವಂತನನ್ನೇ ಬದಲಾಯಿಸಿ ಬಿಟ್ಟಿದ್ದಾರೆ. ನಾವು ಗೀತೆಯನ್ನು ಒಪ್ಪುವುದಿಲ್ಲವೆಂದು ಹೇಳುವುದಿಲ್ಲ ಆದರೆ ಅದರಲ್ಲಿ ಯಾವ ಉಲ್ಟಾ ಹೆಸರನ್ನು ಮನುಷ್ಯರು ಹಾಕಿದ್ದಾರೆಯೋ ಅದನ್ನು ತಂದೆಯು ಬಂದು ಸೀದಾ ಮಾಡಿ ತಿಳಿಸುತ್ತಾರೆ. ಪ್ರತಿಯೊಬ್ಬ ಆತ್ಮನಲ್ಲಿ ತನ್ನ ತನ್ನದೇ ಆದ ಪಾತ್ರವು ನೊಂದಾವಣೆಯಾಗಿದೆ ಎಂಬುದನ್ನೂ ಸಹ ತಿಳಿಸುತ್ತಾರೆ. ಯಾರೇ ಆದರೂ ಸರಿಸಮಾನರಾಗಿರಲು ಸಾಧ್ಯವಿಲ್ಲ. ಹೇಗೆ ಮನುಷ್ಯರೆಂದರೆ ಮನುಷ್ಯರು, ಆತ್ಮ ಎಂದರೆ ಆತ್ಮ. ಆದರೆ ಪ್ರತಿಯೊಬ್ಬ ಆತ್ಮನಲ್ಲಿ ತನ್ನದೇ ಆದ ಪಾತ್ರವು ತುಂಬಲ್ಪಟ್ಟಿದೆ - ಈ ಮಾತನ್ನು ತಿಳಿಸುವಂತಹವರು ಬಹಳ ಬುದ್ಧಿವಂತರಾಗಿರಬೇಕು. ಯಾರು ಅನ್ಯರಿಗೆ ತಿಳಿಸಲು ಸಾಧ್ಯವಿದೆ, ಯಾರು ಸರ್ವೀಸನ್ನು ಮಾಡುವುದರಲ್ಲಿ ತಿಳುವಳಿಕೆವುಳ್ಳವರಾಗಿದ್ದಾರೆ, ಯಾರ ಲೈನ್ ಕ್ಲಿಯರ್ ಆಗಿದೆ ಎಂದು ತಂದೆಗೆ ತಿಳಿದಿದೆ. ಯಾರು ದೇಹೀ-ಅಭಿಮಾನಿಯಾಗಿ ಇರುತ್ತಾರೆ. ಯಾರೂ ಸಹ ಪರಿಪೂರ್ಣ, ದೇಹೀ ಅಭಿಮಾನಿಗಳು ಆಗಿಲ್ಲ. ಇದಂತೂ ಕೊನೆಯಲ್ಲಿ ಕಂಡುಬರುತ್ತದೆ. ಪರೀಕ್ಷೆಯ ದಿನಗಳು ಸಮೀಪ ಬಂದಾಗ ಯಾರ್ಯಾರು ಉತ್ತೀರ್ಣರಾಗುತ್ತಾರೆಂದು ತಿಳಿಯಬಹುದು. ಶಿಕ್ಷಕರೂ ತಿಳಿಯಬಹುದು ಮತ್ತು ಮಕ್ಕಳು ತಿಳಿಯಬಹುದು - ಇವರು ಎಲ್ಲರಿಗಿಂತ ತೀಕ್ಷಣವಾಗಿದ್ದಾರೆ. ಅಲ್ಲಿ ಮೋಸವೂ ಆಗಬಹುದು. ಇಲ್ಲಂತೂ ಈ ಮಾತುಗಳಿರಲು ಸಾಧ್ಯವಿಲ್ಲ. ಇದಂತೂ ನಾಟಕದಲ್ಲಿ ನೊಂದಣೆಯಾಗಿದೆ. ಕಲ್ಪದ ಮೊದಲೂ ಸಹ ಆಗಿತ್ತು. ಈ ಸತ್ಯ ಸಂಪಾದನೆಯಲ್ಲಿ ಲಾಭ ಮತ್ತು ನಷ್ಟ, ಗ್ರಹಚಾರ ಮುಂತಾದವುಗಳು ಬರುತ್ತವೆ. ನಡೆಯುತ್ತಾ-ನಡೆಯುತ್ತಾ ಕಾಲು ಮುರಿಯುತ್ತದೆ (ಪುರುಷಾರ್ಥದ ಕಾಲು ಮುರಿಯುತ್ತದೆ) ಗಂಧರ್ವ ವಿವಾಹವನ್ನು ಮಾಡಿಕೊಂಡ ನಂತರ ಮಾಯೆಯು ಅವರ ಬುದ್ಧಿಯನ್ನು ಒಂದೇ ಸಾರಿ ಭ್ರಷ್ಟ ಮಾಡಿ ಬಿಡುತ್ತದೆ. ಮಾಯೆಯು ಬಹಳ ಪ್ರಬಲವಾಗಿದೆ, ತಂದೆಯು ಪಾವನ ಮಾಡುವುದರಲ್ಲಿ ಪ್ರಬಲರಾಗಿದ್ದಾರೆ. ಆದ್ದರಿಂದ ಅವರಿಗೆ ಸರ್ವಶಕ್ತಿವಂತ, ಪತಿತ-ಪಾವನ ಎಂದು ಹೇಳಲಾಗುತ್ತದೆ. ಮಾಯೆಯು ಪತಿತರನ್ನಾಗಿ ಮಾಡುವುದರಲ್ಲಿ ಪ್ರಬಲವಾಗಿದೆ. ಸತ್ಯಯುಗದಲ್ಲಿ ಮಾಯೆಯಿರುವುದಿಲ್ಲ, ಅದು ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿದೆ, ಇದು ಒಂದೇ ಸಾರಿ ಮೂಗನ್ನು ಹಿಡಿದು ಕೆಳಗೆ ಬೀಳಿಸಿ ಬಿಡುತ್ತದೆ. ವಿಚ್ಛೇಧನವನ್ನು ಕೊಡಿಸಿ ಬಿಡುತ್ತದೆ. ಇಷ್ಟೊಂದು ಮಾಯೆಯು ಪ್ರಬಲವಾಗಿದೆ. ಸರ್ವಶಕ್ತಿವಂತನೆಂದು ಪರಮಪಿತ ಪರಮಾತ್ಮನಿಗೆ ಹೇಳಲಾಗುತ್ತದೆ ಆದರೆ ಮಾಯೆಯೇನೂ ಕಡಿಮೆಯಿಲ್ಲ, ಅರ್ಧಕಲ್ಪ ಅದರ ರಾಜ್ಯ ನಡೆಯುತ್ತದೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. ದಿನ-ರಾತ್ರಿ ಯಾವಾಗಲೂ ಅರ್ಧ-ಅರ್ಧವಿರುತ್ತದೆ. ಬ್ರಹ್ಮನ ದಿನ-ಬ್ರಹ್ಮನ ರಾತ್ರಿ. ಆದರೂ ಸಹ ಸತ್ಯಯುಗಕ್ಕೆ ಲಕ್ಷಾಂತರ ವರ್ಷ, ಕಲಿಯುಗಕ್ಕೆ ಎಷ್ಟೊಂದು ವರ್ಷಗಳೆಂದು ಹೇಳಿದ್ದಾರೆ. ಈಗ ತಂದೆಯು ತಿಳಿಸಿಕೊಡುವುದರಿಂದ ತಿಳಿದು ಬರುತ್ತಿದೆ, ಇದಂತೂ ಸಂಪೂರ್ಣ ಸತ್ಯವಾಗಿದೆ. ತಂದೆಯು ಕುಳಿತು ಓದಿಸುತ್ತಾರೆ. ಕಲಿಯುಗದಲ್ಲಿ ಮನುಷ್ಯರಿಗೆ ಗೀತೆಯ ರಾಜಯೋಗವನ್ನು ಕಲಿಸಿ ರಾಜರಿಗೂ ರಾಜರನ್ನಾಗಿ ಮಾಡುತ್ತಾರೇನು? ನಾವು ರಾಜಯೋಗವನ್ನು ಕಲಿತು ರಾಜರುಗಳ ರಾಜರಾಗುತ್ತೇವೆ. ಈ ರೀತಿ ಯಾರ ಬುದ್ಧಿಯಲ್ಲಿಯೂ ಸಹ ಇಲ್ಲ. ಆ ಗೀತಾ ಪಾಠ ಶಾಲೆಗಳಲ್ಲಿ ಅನೇಕರಿರುತ್ತಾರೆ ಆದರೆ ಯಾರು ರಾಜಯೋಗವನ್ನು ಕಲಿತು ಯಾರೂ ರಾಜರುಗಳ ರಾಜ ಅಥವಾ ರಾಣಿಯಾಗಲು ಸಾಧ್ಯವಿಲ್ಲ. ಅಲ್ಲಿ ರಾಜರಾಗುವಂತಹ ಯಾವುದೇ ಗುರಿ-ಧ್ಯೇಯವಿಲ್ಲ. ನಾವು ಬೇಹದ್ದಿನ ತಂದೆಯಿಂದ ಭವಿಷ್ಯ ಸುಖದ ರಾಜ್ಯವನ್ನು ಪಡೆಯಲು ಓದುತ್ತಿದ್ದೇವೆಂದು ಹೇಳುತ್ತೀರಿ. ಮೊಟ್ಟ ಮೊದಲು ತಂದೆಯ ಬಗ್ಗೆ ತಿಳಿಸಿಕೊಡಬೇಕು. ಗೀತೆಯ ಮೇಲೆ ಎಲ್ಲವೂ ಆಧಾರಿತವಾಗಿದೆ. ಮನುಷ್ಯರಿಗೆ ಸೃಷ್ಟಿ ಚಕ್ರ ಹೇಗೆ ಸುತ್ತುತ್ತದೆ, ನಾವು ಎಲ್ಲಿಂದ ಬಂದೆವು, ಎಲ್ಲಿಗೆ ಹೋಗಬೇಕಾಗಿದೆ - ಇವೆಲ್ಲವೂ ಹೇಗೆ ತಿಳಿಯಬೇಕು. ಇದು ಯಾರಿಗೂ ಗೊತಿಲ್ಲ. ಯಾವ ದೇಶದಿಂದ ಬಂದೆವು, ಯಾವ ದೇಶಕ್ಕೆ ಹೋಗಬೇಕು ಎನ್ನುವ ಹಾಡೂ ಸಹ ಇದೆಯಲ್ಲವೇ. ಕೇವಲ ಗಿಣಿಯ ಹಾಗೆ ಹಾಡುತ್ತಿರುತ್ತಾರೆ. ಯಾರನ್ನು ಹೇ ಪರಮಪಿತ ಪರಮಾತ್ಮ ಎಂದು ಹೇಳುತ್ತಾರೆ, ಅವರು ಯಾರಾಗಿದ್ದಾರೆ ಎಂಬುದು ಆತ್ಮನಲ್ಲಿರುವ ಬುದ್ಧಿಗೆ ತಿಳಿದಿಲ್ಲ. ಅವರನ್ನು ನೋಡಲು, ಅರಿಯಲೂ ಆಗುವುದಿಲ್ಲ ತಂದೆಯನ್ನು ತಿಳಿಯುವುದು, ನೋಡುವುದು - ಇದು ಆತ್ಮನ ಕರ್ತವ್ಯವಾಗಿದೆ. ನಾವು ಆತ್ಮರಾಗಿದ್ದೇವೆ, ಪರಮಪಿತ ಪರಮಾತ್ಮ ತಂದೆಯು ನಮಗೆ ಓದಿಸುತ್ತಿದ್ದಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಬಂದು ಓದಿಸುತ್ತಾರೆ ಎಂದು ಬುದ್ಧಿಯು ಹೇಳುತ್ತದೆ. ಯಾವುದೇ ಆತ್ಮನನ್ನು ಕರೆಸುತ್ತಾರೆಂದರೆ ಅವರ ಆತ್ಮವು ಬಂದಿದೆ ಎಂದು ತಿಳಿದುಕೊಳ್ಳುತ್ತಾರೆ. ಅಂದಾಗ ನಾನು ಆತ್ಮ, ಅವರು ನಮ್ಮ ತಂದೆಯೆಂದು ತಿಳಿದುಕೊಂಡಿದ್ದೀರಿ. ತಂದೆಯಿಂದ ಅವಶ್ಯವಾಗಿ ಆಸ್ತಿ ಸಿಗಬೇಕು. ನಾವು ಏಕೆ ದುಃಖಿಗಳಾದೆವು. ಮನುಷ್ಯರು ಹೇಳುತ್ತಾರೆ - ತಂದೆಯು ಸುಖ-ದುಃಖವನ್ನು ಕೊಡುವವರಾಗಿದ್ದಾರೆ. ಭಗವಂತನಿಗೆ ನಿಂದನೆ ಮಾಡುತ್ತಿರುತ್ತಾರೆ ಅವರು ಅಸುರೀ ಸಂತಾನರಾಗಿದ್ದಾರೆ. ಕಲ್ಪದ ಮೊದಲೂ ಹೇಗೆ ಹೇಳಿದ್ದರೋ ಹಾಗೆಯೇ ಹೇಳುತ್ತಾರೆ. ನೀವೀಗ ಪ್ರತ್ಯಕ್ಷದಲ್ಲಿ ಈಶ್ವರೀಯ ಸಂತಾನರಾಗಿದ್ದೀರಿ. ಮೊದಲು ನೀವು ಆಸುರೀ ಸಂತಾನರಾಗಿದ್ದಿರಿ ಈಗ ತಂದೆಯು ತಿಳಿಸುತ್ತಾರೆ. ನಿರಂತರ ನನ್ನನ್ನು ನೆನಪು ಮಾಡಿ - ಈ ಎರಡು ಶಬ್ಧಗಳನ್ನು ತಿಳಿಸಿಕೊಡುವುದು ಬಹಳ ಸಹಜವಾಗಿದೆ. ನೀವು ಭಗವಂತನ ಮಕ್ಕಳಾಗಿದ್ದೀರಿ, ಭಗವಂತನೇ ರಚಿಸಿದರು. ಅದು ನರಕವಾಗಿದೆ ಮತ್ತೆ ತಂದೆಯೇ ಸ್ವರ್ಗವನ್ನಾಗಿ ಮಾಡುತ್ತಾರೆ. ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ, ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ಒಳ್ಳೆಯದು - ಶಿವನನ್ನು ತಿಳಿದುಕೊಂಡಿಲ್ಲ. ಪ್ರಜಾಪಿತ ಬ್ರಹ್ಮನನ್ನೂ ರಚಿಸುವಂತಹವರು ಆ ತಂದೆಯಾಗಿದ್ದಾರೆ. ಆದರೆ ತಂದೆಯು ಬ್ರಹ್ಮಾರವರ ಮುಖಾಂತರ ಕಲಿಸುತ್ತಾರೆ. ಈಗ ಶೂದ್ರ ವರ್ಣವಿದೆ, ನಾವು ಬ್ರಾಹ್ಮಣರಿಂದ ದೇವತಾ, ಕ್ಷತ್ರಿಯರಾಗುತ್ತೇವೆ ಇಲ್ಲವೆಂದರೆ ವಿರಾಟ ರೂಪವನ್ನು ಏಕೆ ತೋರಿಸಲಾಗಿದೆ. ಚಿತ್ರವು ಸರಿಯಾಗಿದೆ ಆದರೆ ತಿಳಿದುಕೊಳ್ಳಲು ಸಾಧ್ಯವಿಲ್ಲ. ಶೂದ್ರರನ್ನು ಬ್ರಾಹ್ಮಣರನ್ನಾಗಿ ಯಾರು ಮಾಡುವರು? ಪ್ರಜಾಪಿತ ಬ್ರಹ್ಮಾ ಅವಶ್ಯವಾಗಿ ಬೇಕು, ಅವರನ್ನು ಹೇಗೆ ದತ್ತು ಮಾಡಿಕೊಳ್ಳಲಾಯಿತು. ಇವರು ನನ್ನ ಸ್ತ್ರೀ ಎಂದು ನೀವು ಹೇಳುತ್ತೀರಿ ತನ್ನವರನ್ನಾಗಿ ಹೇಗೆ ಮಾಡಿಕೊಂಡಿರಿ ಅಂದಾಗ ಇವರನ್ನು ದತ್ತು ಮಾಡಿಕೊಂಡಿರಿ. ತಂದೆಯು ತಿಳಿಸುತ್ತಾರೆ - ನನಗೂ ಸಹ ಮಾತಾಪಿತರೆಂದು ಹೇಳುತ್ತೀರಿ, ನಾನಂತೂ ತಂದೆಯಾಗಿದ್ದೇನೆ. ನನ್ನವಳನ್ನು ಎಲ್ಲಿಂದ ತರುವುದು ಅಂದಾಗ ಇವರಲ್ಲಿ ಪ್ರವೇಶ ಮಾಡಿ ಇವರ ಹೆಸರನ್ನು ಬ್ರಹ್ಮಾ ಎಂದು ಇಡುತ್ತೇನೆ. ಸ್ತ್ರೀಯನ್ನು ದತ್ತು ಮಾಡಿಕೊಳ್ಳಲಾಗುತ್ತದೆ. ಹೇಗೆ ಲೌಕಿಕ ತಂದೆಯು ಸ್ತ್ರೀಯನ್ನು ದತ್ತು ಮಾಡಿಕೊಂಡು, ಕುಖವಂಶಾವಳಿಯನ್ನು ರಚಿಸುತ್ತಾರೆ. ತಂದೆಯು ಇವರಲ್ಲಿ ಪ್ರವೇಶ ಮಾಡಿ ಇವರನ್ನು ದತ್ತು ಮಾಡಿಕೊಂಡು, ಇವರ ಮುಖದ ಮೂಲಕ ಮುಖವಂಶಾವಳಿಗಳನ್ನಾಗಿ ಮಾಡಿದ್ದಾರೆ. ನಾವು ಬ್ರಾಹ್ಮಣ-ಬ್ರಾಹ್ಮಣಿಯರಾಗಿದ್ದೇವೆಂದು ನೀವು ಹೇಳುತ್ತೀರಿ. ಇವರ ಹೆಸರು ಬ್ರಹ್ಮಾ ಆಗಿದೆ. ಬ್ರಹ್ಮಾ ಯಾರ ಮಗ? ಶಿವ ತಂದೆಯ ಮಗ. ಬ್ರಹ್ಮನನ್ನು ಯಾರು ದತ್ತು ಮಾಡಿಕೊಂಡರು? ಬೇಹದ್ದಿನ ತಂದೆ. ದೃಷ್ಟಾಂತವಂತೂ ಬಹಳ ಚೆನ್ನಾಗಿದೆ ಆದರೆ ಯಾರ ಬುದ್ಧಿಯಲ್ಲಿ ಕುಳಿತಿದೆಯೋ ಅವರು ತಿಳಿಸಿಕೊಡಲು ಸಾಧ್ಯ. ಯಾರ ಬುದ್ಧಿಯಲ್ಲಿ ಕುಳಿತಿಲ್ಲವೋ ಅವರು ತಿಳಿಸಿಕೊಡಲು ಬರುವುದಿಲ್ಲ. ಲೌಕಿಕ ಮತ್ತು ಪಾರಲೌಕಿಕ ತಂದೆಯಂತೂ ಇದ್ದಾರಲ್ಲವೆ. ಅಲ್ಲಿ ಸ್ತ್ರೀಯನ್ನು ದತ್ತು ಮಾಡಿಕೊಂಡು ನನ್ನವಳೆಂದು ಹೇಳುತ್ತಾರೆ, ತಂದೆಯು ಇವರಲ್ಲಿ ಪ್ರವೇಶವಾಗಿ ದತ್ತು ಮಾಡಿಕೊಳ್ಳುತ್ತಾರೆ. ನಾನು ನಿರಾಕಾರನಾಗಿದ್ದೇನೆ, ಇವರ ಆಧಾರವನ್ನು ತೆಗೆದುಕೊಳ್ಳುತ್ತೇನೆ ಮತ್ತು ಇವರ (ಬ್ರಹ್ಮಾ) ಹೆಸರನ್ನು ಬದಲಾವಣೆ ಮಾಡುತ್ತೇನೆ ಎಂದು ಸ್ವಯಂ ತಂದೆಯೇ ಹೇಳುತ್ತಾರೆ. ಒಂದೇ ಸಮಯದಲ್ಲಿ ಎಷ್ಟೊಂದು ಜನರ ಹೆಸರನ್ನು ಇಡುವುದು, ಹೆಸರಿನ ಪಟ್ಟಿಯೂ ಸಹ ನಿಮ್ಮ ಬಳಿಯಿರಬೇಕು. ಪ್ರದರ್ಶನಿಯಲ್ಲಿ ಹೆಸರಿನ ಪಟ್ಟಿಯನ್ನು ತೋರಿಸಬೇಕು. ತಂದೆಯು ಹೇಗೆ ಒಂದೇ ಸಮಯದಲ್ಲಿ ಹೆಸರನ್ನಿಟ್ಟರು, ತಂದೆಯು ನಮ್ಮನ್ನು ತನ್ನವರನ್ನಾಗಿ ಮಾಡಿಕೊಂಡು ಹೆಸರನ್ನು ಬದಲಾಯಿಸಿದರು, ಅವರನ್ನು ಭೃಗು ಋಷಿ ಎಂದು ಹೇಳಲಾಗುತ್ತದೆ. ಜನ್ಮ ಪತ್ರಿಕೆಯು ಭಗವಂತನ ಬಳಿ ಇದೆ. ಅದ್ಭುತವಾದ ಹೆಸರುಗಳಾಗಿವೆ ಈಗಂತೂ ಎಲ್ಲರೂ ಇಲ್ಲ, ಕೆಲವರು ಆಶ್ಚರ್ಯವಾಗಿದ್ದು ನಂತರ ಓಡಿ ಹೋದರು. ಇಂದು ಇರುತ್ತಾರೆ, ನಾಳೆ ಇರುವುದಿಲ್ಲ. ನಂಬರ್ ವನ್ ಶತ್ರು ಕಾಮ ವಿಕಾರವಾಗಿದೆ. ಈ ಕಾಮ ವಿಕಾರವು ಬಹಳ ಸತಾಯಿಸುತ್ತದೆ, ಅದರ ಮೇಲೆ ವಿಜಯ ಗಳಿಸಬೇಕು. ಗೃಹಸ್ಥ ವ್ಯವಹಾರದಲ್ಲಿ ಜೊತೆಯಲ್ಲೇ ಇರುತ್ತಾ ಕಾಮ ವಿಕಾರದ ಮೇಲೆ ಜಯ ಗಳಿಸಬೇಕು. ಇದಾಗಿದೆ ಪ್ರತಿಜ್ಞೆ. ನಿಮ್ಮ ವೃತ್ತಿಯನ್ನು ನೋಡಿಕೊಳ್ಳಬೇಕು, ಕರ್ಮೇಂದ್ರಿಯಗಳಿಂದ ವಿಕರ್ಮವನ್ನು ಮಾಡಬಾರದು. ಬಿರುಗಾಳಿಯಂತೂ ಎಲ್ಲರಿಗೂ ಬರುತ್ತವೆ, ಇದರಲ್ಲಿ ಭಯ ಪಡಬಾರದು. ಬಹಳ ಮಕ್ಕಳು ತಂದೆಯನ್ನು, ಈ ವ್ಯಾಪಾರವನ್ನು ಮಾಡಬಹುದೇ ಅಥವಾ ಬೇಡವೇ? ಎಂದು ಕೇಳುತ್ತಾರೆ. ತಂದೆಯು ನಾನು ನಿಮ್ಮ ವ್ಯಾಪಾರವನ್ನು, ವ್ಯವಹಾರವನ್ನು ನೋಡಲು ಬಂದಿದ್ದೇನೆಯೇ? ಎಂದು ಬರೆಯುತ್ತಾರೆ. ನಾನು ಓದಿಸಲು ಶಿಕ್ಷಕನಾಗಿದ್ದೇನೆ, ನಿಮ್ಮ ವ್ಯವಹಾರದ ಮಾತನ್ನು ಏಕೆ ಕೇಳುತ್ತೀರಿ? ನಾನಂತೂ ರಾಜಯೋಗವನ್ನು ಕಲಿಸುತ್ತೇನೆ. ರುದ್ರ ಯಜ್ಞದ ಗಾಯನವಿದೆ, ಕೃಷ್ಣ ಯಜ್ಞವಲ್ಲ. ತಂದೆ ಹೇಳುತ್ತಾರೆ ಲಕ್ಷ್ಮೀ-ನಾರಾಯಣರಲ್ಲಿ ಈ ಸೃಷ್ಟಿ ಚಕ್ರದ ಜ್ಞಾನವೇ ಇಲ್ಲ. ಒಂದು ವೇಳೆ ನಾವು 16 ಕಲೆಯಿಂದ ಮತ್ತೆ 14 ಕಲೆಯವರಾಗುತ್ತೇವೆಂದು ತಿಳಿದಿದ್ದೇ ಆದರೆ ಅವರಿಗೆ ರಾಜ್ಯದ ನಶೆಯು ಹಾರಿ ಹೋಗಿ ಬಿಡುತ್ತದೆ. ಅಲ್ಲಿ ಸದ್ಗತಿ ಇರುತ್ತದೆ, ಸದ್ಗತಿ ದಾತ ಒಬ್ಬರೇ ಆಗಿದ್ದಾರೆ, ಅವರೇ ಬಂದು ಯುಕ್ತಿಯನ್ನು ತಿಳಿಸುತ್ತಾರೆ. ಬೇರೆ ಯಾರೂ ಸಹ ತಿಳಿಸಲು ಸಾಧ್ಯವಿಲ್ಲ. ಮೊಟ್ಟ ಮೊದಲು ಈ ಮಾತನ್ನು ಕೇಳಿ ಕಾಮ ಮಹಾ ಶತ್ರುವಾಗಿದೆ ಎಂದು. ಇದೂ ಹೇಳುತ್ತಾರೆ ವಿಕಾರಿ ಮತ್ತು ನಿರ್ವಿಕಾರಿ ಪ್ರಪಂಚವಿದೆ ಎಂದು. ಭಾರತದಲ್ಲಿಯೇ ರಾವಣನನ್ನು ಸುಡುತ್ತಾರೆ, ಸತ್ಯಯುಗದಲ್ಲಿ ಸುಡುತ್ತಾರೇನು! ಒಂದು ವೇಳೆ ಅನಾದಿ ಎಂದರೆ ಸತ್ಯಯುಗದಲ್ಲಿಯೂ ಸಹ ದುಃಖವೇ ದುಃಖವಿರುತ್ತದೆ ಅಂದಾಗ ಅದನ್ನು ಸ್ವರ್ಗವೆಂದು ಹೇಗೆ ಹೇಳುವುದು? ಈ ಮಾತುಗಳನ್ನು ತಿಳಿಸಬೇಕು. ಪ್ರತಿಯೊಬ್ಬರ ಪುರುಷಾರ್ಥವೂ ತಮ್ಮ ತಮ್ಮದೇ ಆಗಿದೆ. ಯಾರು ಚೆನ್ನಾಗಿ ಪುರುಷಾರ್ಥ ಮಾಡುತ್ತಾರೆ? ಎಂಬುದು ತಿಳಿದು ಬರುತ್ತದೆ. ಸಂಪೂರ್ಣರಂತೂ ಯಾರೂ ಆಗಿಲ್ಲ. ಸತೋ, ರಜೋ, ತಮೋ ಅಂತೂ ಇರುತ್ತಾರೆ, ಪ್ರತಿಯೊಬ್ಬರ ಬುದ್ಧಿಯು ಬೇರೆ-ಬೇರೆಯಾಗಿದೆ. ಯಾರು ಶ್ರೀಮತದಂತೆ ನಡೆಯುವುದಿಲ್ಲವೋ ಅವರು ತಮೋಪ್ರಧಾನ ಬುದ್ಧಿಯಾಗಿರುತ್ತದೆ. ತನ್ನನ್ನು ವಿಮೆ ಮಾಡಿಕೊಳ್ಳಲಿಲ್ಲವೆಂದರೆ ಭವಿಷ್ಯದ 21 ಜನ್ಮಗಳಿಗೆ ಹೇಗೆ ಸಿಗುತ್ತದೆ? ಸಾಯಲೇಬೇಕು ಅಂದಾಗ ಏಕೆ ವಿಮೆ ಮಾಡಬಾರದು. ಎಲ್ಲವೂ ಅವರದೇ ಆಗಿದೆ. ಅವರೇ ಪಾಲನೆಯನ್ನೂ ಮಾಡುತ್ತಾರಲ್ಲವೆ. ಕೆಲವರು ಎಲ್ಲವನ್ನೂ ಕೊಡುತ್ತಾರೆ ಆದರೆ ಸರ್ವೀಸ್ ಮಾಡುವುದಿಲ್ಲ. ಏನು ಕೊಟ್ಟಿರುತ್ತಾರೆಯೋ ಅದನ್ನು ತಿನ್ನುತ್ತಿರುತ್ತಾರೆ ಅಂದಾಗ ಜಮಾ ಹೇಗಾಗುತ್ತದೆ? ಏನೂ ಆಗುವುದಿಲ್ಲ. ಸೇವೆಯ ಪ್ರಮಾಣ ಬೇಕಾಗಿದೆ. ಯಾರ ಮಾರ್ಗದರ್ಶಕರಾಗಿ ಬರುತ್ತಾರೆ? ಎಂದು ನೋಡಲಾಗುತ್ತದೆ. ಹೊಸ ಬಿ.ಕೆ.ಗಳೂ ಸಹ ಸೇವಾ ಕೇಂದ್ರವನ್ನು ತೆರೆಯುತ್ತಾರೆ. ಅವರಿಗೂ ಅವಕಾಶವನ್ನು ಕೊಡಲಾಗಿದೆ. ಈ ಜ್ಞಾನವು ಬಹಳ ಸಹಜವಾಗಿದೆ. ವಾನಪ್ರಸ್ತದವರಿಗೂ ತಿಳಿಸಿ ವಾನಪ್ರಸ್ಥ ಸ್ಥಿತಿಯು ಯಾವಾಗ ಆಗುತ್ತದೆ ಆಗ ತಂದೆಯೇ ಮಾರ್ಗದರ್ಶಕರಾಗಿ ಎಲ್ಲರನ್ನು ಕರೆದುಕೊಂಡು ಹೋಗುತ್ತಾರೆ. ತಂದೆಯೇ ಕಾಲರ ಕಾಲ ಆಗಿದ್ದಾರೆ ಎಂಬುದು ಮೊದಲು ತಿಳಿದಿದ್ದೀರಿ. ನಾವು ಖುಷಿಯಿಂದ ತಂದೆಯ ಜೊತೆಯಲ್ಲಿಯೇ ಹೋಗಬೇಕೆಂದು ಬಯಸುತ್ತೇವೆ. ಗೀತೆಯ ಭಗವಂತ ಯಾರು, ಇದನ್ನು ಯಾರು ರಚಿಸಿದರು? ಮೊಟ್ಟ ಮೊದಲು ಮುಖ್ಯವಾದ ಈ ಮಾತನ್ನು ತೆಗೆದುಕೊಳ್ಳಿ. ಲಕ್ಷ್ಮೀ-ನಾರಾಯಣರಿಗೆ ರಾಜಯೋಗವನ್ನು ಯಾರು ಕಲಿಸಿದರು? ಅವರದೂ ಸಹ ರಾಜಧಾನಿಯು ಸ್ಥಾಪನೆಯಾಗುತ್ತಾ ಇದೆ, ಬೇರೆ ಯಾರೂ ಸ್ಥಾಪನೆ ಮಾಡಲು ಬರುವುದಿಲ್ಲ. ತಂದೆಯೇ ರಾಜಧಾನಿಯನ್ನು ಸ್ಥಾಪನೆ ಮಾಡಲು ಬರುತ್ತಾರೆ. ಎಲ್ಲಾ ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಇದು ವಿಕಾರಿ ಪ್ರಪಂಚವಾಗಿದೆ, ಅದು ನಿರ್ವಿಕಾರಿ ಪ್ರಪಂಚ - ಎರಡರಲ್ಲಿಯೂ ನಂಬರ್ ವಾರ್ ಪದವಿಗಳಿವೆ. ಯಾರು ಶ್ರೀಮತದಂತೆ ನಡೆಯುತ್ತಾರೆಯೋ ಅವರ ಬುದ್ಧಿಯಲ್ಲಿಯೇ ಈ ಜ್ಞಾನವು ಕುಳಿತುಕೊಳ್ಳಲು ಸಾಧ್ಯ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

೧. ಬುದ್ಧಿಯ ಲೈನ್ ಸದಾ ಸ್ಪಷ್ಟವಾಗಿರಲಿ, ಇದಕ್ಕಾಗಿ ದೇಹೀ-ಅಭಿಮಾನಿಯಾಗಿರಬೇಕು. ಸತ್ಯ ಸಂಪಾದನೆಯಲ್ಲಿ ಮಾಯೆಯು ಯಾವುದೇ ಪ್ರಕಾರದಿಂದ ನಷ್ಟ ಮಾಡಬಾರದು - ಈ ಎಚ್ಚರಿಕೆ ಇರಬೇಕು.

೨. ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮವನ್ನು ಮಾಡಬಾರದು. ವಿಮೆ ಮಾಡಿದ ನಂತರ ಸರ್ವೀಸನ್ನೂ ಸಹ ಮಾಡಬೇಕು.

ವರದಾನ:
ಯೋಗದ ಬಿಸಿಲಿನಲ್ಲಿ ಕಣ್ಣಿರಿನ ಹನಿಯನ್ನು ಒಣಗಿಸಿ, ಅಳದೇ ಇರಲು ಸಾಕ್ಷಿಯಾಗುವಂತಹ ಸುಖ ಸ್ವರೂಪ ಭವ.

ಕೆಲವು ಮಕ್ಕಳು ಹೆಳುತ್ತಾರೆ, ಇಂತಹವರು ದುಃಖ ಕೊಡುತ್ತಾರೆ ಅದಕ್ಕಾಗಿ ಅಳು ಬರುತ್ತದೆ ಎಂದು. ಆದರೆ ಅವರು ಕೊಟ್ಟರೆ ನೀವು ಏಕೆ ತೆಗೆದುಕೊಳ್ಳುವಿರಿ? ಅವರ ಕೆಲಸವಾಗಿದೆ ಕೊಡುವುದು, ನೀವು ತೆಗೆದುಕೊಳ್ಳಲೇಬೇಡಿ. ಪರಮಾತ್ಮ ನ ಮಕ್ಕಳು ಎಂದೂ ಅಳಲು ಸಾಧ್ಯವಿಲ್ಲ. ಆಳುವುದು ಬಂದ್. ಕಣ್ಣುಗಳಿಂದಲೂ ಅಳಬಾರದು, ಇಲ್ಲಾ ಮನಸ್ಸಿನಿಂದಲೂ ಅಳಬಾರದು. ಎಲ್ಲಿ ಖುಷಿ ಇರುವುದು ಅಲ್ಲಿ ಅಳುವುದು ಇರುವುದಿಲ್ಲ. ಖುಷಿ ಅಥವಾ ಪ್ರೀತಿಯ ಕಣ್ಣೀರಿಗೆ ಅಳುವುದು ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಯೋಗದ ಬಿಸಿಲಿನಲ್ಲಿ ಕಣ್ಣೀರಿನ ಹನಿಗಳನ್ನು ಒಣಗಿಸಿ ಬಿಡಿ, ವಿಘ್ನಗಳನ್ನು ಆಟ ಎಂದು ತಿಳಿಯಿರಿ, ಆಗ ಸುಖ ಸ್ವರೂಪರಾಗಿ ಬಿಡುವಿರಿ.

ಸ್ಲೋಗನ್:

ಸಾಕ್ಷಿಯಾಗಿದ್ದು ಪಾತ್ರ ಅಭಿನಯಿಸುವುದರಿಂದ ಟೆನ್ಷನ್ ನಿಂದ ದೂರಾಗಿ ಸ್ವತಃ ಅಟೆನ್ಷನ್ ನಲ್ಲಿರುವಿರಿ.