16/10/18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈಗ ನೀವು ಬಹಳ ದೊಡ್ಡ ಹಡಗಿನಲ್ಲಿ ಕುಳಿತಿದ್ದೀರಿ, ನೀವೀಗ ವಿಷಯ ಸಾಗರವನ್ನು ದಾಟಿ ಕ್ಷೀರ ಸಾಗರದೆಡೆಗೆ ಹೋಗುತ್ತಿದ್ದೀರಿ. ನಿಮ್ಮ ದೋಣಿಯ ಹಗ್ಗವು ಬಿಚ್ಚಲ್ಪಟ್ಟಿದೆ.”

ಪ್ರಶ್ನೆ:
ಮಕ್ಕಳಿಗೆ ವಿಶೇಷವಾಗಿ ಯಾವ ಮಾತಿನಲ್ಲಿ ಸುಸ್ತಾಗುತ್ತದೆ? ಸುಸ್ತಾಗಲು ಮುಖ್ಯ ಕಾರಣವೇನು?

ಉತ್ತರ:
ಮಕ್ಕಳು ನಡೆಯುತ್ತಾ-ನಡೆಯುತ್ತಾ ನೆನಪಿನ ಯಾತ್ರೆಯಲ್ಲಿಯೇ ಸುಸ್ತಾಗಿ ಬಿಡುತ್ತಾರೆ. ಇದರಲ್ಲಿ ಸುಸ್ತಾಗಲು ಮುಖ್ಯ ಕಾರಣ ಸಂಗದೋಷವಾಗಿದೆ. ಇಂತಹ ಸಂಗವು ಸಿಕ್ಕಿ ಬಿಡುತ್ತದೆ. ಅದರಿಂದ ತಂದೆಯ ಕೈಯನ್ನೇ ಬಿಟ್ಟು ಬಿಡುತ್ತಾರೆ. ಆದ್ದರಿಂದಲೇ ಕೆಟ್ಟ ಸಂಗವೇ ಕೆಳಗೆ ಬೀಳಿಸುತ್ತದೆ, ಒಳ್ಳೆಯ ಸಂಗವು ಮೇಲೆತ್ತುತ್ತದೆ. ಸಂಗ ದೋಷದಲ್ಲಿ ಬಂದು ಕಾಲನ್ನು ಹಡಗಿನಿಂದ ಹೊರ ತೆಗೆದಿದ್ದೇ ಆದರೆ ಮಾಯೆಯು ಹಸಿಯಾಗಿಯೇ ತಿಂದು ಬಿಡುವುದು. ಮಕ್ಕಳೇ ಸಮರ್ಥ ತಂದೆಯ ಕೈಯನ್ನು ಎಂದೂ ಬಿಡಬೇಡಿ ಎಂದು ತಂದೆಯು ಮಕ್ಕಳಿಗೆ ಎಚ್ಚರಿಕೆ ನೀಡುತ್ತಾರೆ.

ಗೀತೆ:
ಮಾತಾ ಓ ಮಾತಾ.........

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ ಓಂ ಶಾಂತಿ. ಇದನ್ನೇ ಮಹಾ ಮಂತ್ರವೆಂದು ಹೇಳಲಾಗುತ್ತದೆ. ಆತ್ಮವು ತನ್ನ ಸ್ವಧರ್ಮದ ಮಂತ್ರವನ್ನು ಜಪಿಸುತ್ತದೆ. ನಾನಾತ್ಮದ ಸ್ವಧರ್ಮವು ಶಾಂತಿಯಾಗಿದೆ. ಶಾಂತಿಗಾಗಿ ಯಾವುದೇ ಕಾಡಿಗೆ ಹೋಗುವ ಅವಶ್ಯಕತೆಯಿಲ್ಲ. ಆತ್ಮವು ಶಾಂತವಾಗಿದ್ದೇನೆ, ಇವು ನನ್ನ ಕರ್ಮೇಂದ್ರಿಯಗಳಾಗಿವೆ, ಶಬ್ಧ ಮಾಡುವುದು, ಬಿಡುವುದು ನನ್ನ ಕೈಯಲ್ಲಿದೆ. ಆದರೆ ಈ ಜ್ಞಾನವಿಲ್ಲದೇ ಇರುವ ಕಾರಣ ಅಲ್ಲಿಗೆ-ಇಲ್ಲಿಗೆ ಅಲೆದಾಡುತ್ತಾರೆ. ಇದರಿಂದಲೇ ಒಂದು ಕಥೆಯೂ ಇದೆ – ರಾಣಿಯ ಹಾರವನ್ನು ಕೊರಳಿನಲ್ಲಿಯೇ ಇದ್ದುದನ್ನು ಮರೆತು ನನ್ನ ಹಾರವು ಕಳೆದು ಹೋಗಿದೆ, ಕಳೆದು ಹೋಗಿದೆ ಎಂದು ಹೊರಗಡೆ ಹುಡುಕಾಡುತ್ತಿದ್ದಳು. ನಂತರ ಹಾರವಂತೂ ಕೊರಳಿನಲ್ಲಿಯೇ ಇದೆಯೆಂದು ಯಾರೋ ಹೇಳಿದರು. ಈ ಉದಾಹರಣೆಯನ್ನು ತಂದೆಯು ತಿಳಿಸುತ್ತಾರೆ. ಮನುಷ್ಯರು ಅಲ್ಲಿ-ಇಲ್ಲಿ ಅಲೆದಾಡುತ್ತಾರಲ್ಲವೆ. ನಮ್ಮ ಮನಸ್ಸಿಗೆ ಶಾಂತಿ ಹೇಗೆ ಸಿಗುವುದೆಂದು ಸನ್ಯಾಸಿಗಳೂ ಸಹ ಕೇಳುತ್ತಾರೆ. ಆದರೆ ಆತ್ಮದಲ್ಲಿಯೇ ಮನಸ್ಸು ಬುದ್ಧಿಯಿದೆ. ಆತ್ಮವು ಯಾವಾಗ ಕರ್ಮೇಂದ್ರಿಯಗಳಲ್ಲಿ ಬರುತ್ತದೆಯೋ ಆಗ ಶಬ್ಧದಲ್ಲಿ ಬರುತ್ತದೆ. ಆದ್ದರಿಂದ ನೀವಾತ್ಮಗಳು ಸ್ವಧರ್ಮದಲ್ಲಿರಿ. ನೀವು ಆತ್ಮಗಳು ತಮ್ಮ ಸ್ವಧರ್ಮದಲ್ಲಿರಿ. ಈ ದೇಹದ ಎಲ್ಲಾ ಧರ್ಮಗಳನ್ನು ಮರೆತು ಹೋಗಿ ಎಂದು ತಂದೆಯು ಪದೇ-ಪದೇ ತಿಳಿಸುತ್ತಾರೆ. ಆದರೂ ಸಹ ನಮಗೆ ಶಾಂತಿಯಲ್ಲಿ ಕೂರಿಸಿ, ಧ್ಯಾನ ಮಾಡಿಸಿ ಎಂದು ಕೆಲಕೆಲವರು ಹೇಳುತ್ತಾರೆ. ಈ ರೀತಿ ಹೇಳುವುದೂ ಸಹ ತಪ್ಪಾಗಿದೆ. ನನ್ನನ್ನು ಶಾಂತಿಯಲ್ಲಿ ಕೂರಿಸಿ ಎಂದು ಒಂದು ಆತ್ಮವು ಇನ್ನೊಂದು ಆತ್ಮಕ್ಕೆ ಹೇಳುತ್ತದೆ. ಅರೆ! ನಿಮ್ಮ ಸ್ವಧರ್ಮವು ಶಾಂತಿಯಲ್ಲವೇನು? ನೀವು ತಾವೇ ಕುಳಿತುಕೊಳ್ಳಲು ಸಾಧ್ಯವಲ್ಲವೆ. ನಡೆಯುತ್ತಾ-ತಿರುಗಾಡುತ್ತಾ ನೀವು ಸ್ವಧರ್ಮದಲ್ಲೇಕೆ ಸ್ಥಿತರಾಗುವುದಿಲ್ಲ. ಎಲ್ಲಿಯವರೆಗೆ ಮಾರ್ಗವನ್ನು ತಿಳಿಸುವ ತಂದೆಯು ಸಿಗುವುದಿಲ್ಲವೋ ಅಲ್ಲಿಯವರೆಗೆ ಯಾರೂ ಸ್ವಧರ್ಮದಲ್ಲಿ ಸ್ಥಿತರಾಗಲು ಸಾಧ್ಯವಿಲ್ಲ. ಮನುಷ್ಯರು ಆತ್ಮವೇ ಪರಮಾತ್ಮ ಎಂದು ಹೇಳಿರುವುದರಿಂದ ಸ್ವಧರ್ಮದಲ್ಲಿ ಸ್ಥಿತರಾಗಲು ಸಾಧ್ಯವಿಲ್ಲ. ಈ ಅಶಾಂತಿ ದೇಶದಲ್ಲಿ ನಿಮ್ಮದು ಅಂತಿಮ ಜನ್ಮವಾಗಿದೆ. ಈಗ ನೀವು ಶಾಂತಿ ದೇಶದಲ್ಲಿ ಹೋಗಬೇಕಾಗಿದೆ, ನಂತರ ಸುಖಧಾಮದಲ್ಲಿ ಬರಬೇಕಾಗಿದೆ. ಇಲ್ಲಂತೂ ಮನೆ-ಮನೆಯಲ್ಲೂ ಅಶಾಂತಿಯಿದೆ. ಸತ್ಯಯುಗದಲ್ಲಿ ಮನೆ-ಮನೆಯಲ್ಲಿ ಬೆಳಕಿರುತ್ತದೆ ಅಂದಾಗ ಇಲ್ಲಿ ಅಂಧಕಾರವಿದೆ, ಪ್ರತಿಯೊಂದು ಮಾತಿನಲ್ಲಿ ಪೆಟ್ಟು ತಿನ್ನಬೇಕಾಗುತ್ತದೆ ಅಂದರೆ ಮೋಸ ಹೋಗಬೇಕಾಗುತ್ತದೆ. ಮನೆ-ಮನೆಯಲ್ಲಿ ಅಂಧಕಾರವಿರುವುದರಿಂದಲೇ ದೀಪ ಬೆಳಗಿಸುತ್ತಾರೆ. ಯಾವಾಗ ರಾವಣನು ಸಾಯುತ್ತಾನೆಯೋ ನಂತರ ದೀಪಾವಳಿಯನ್ನು ಆಚರಿಸುತ್ತಾರೆ. ಸತ್ಯಯುಗದಲ್ಲಂತೂ ರಾವಣನಿರುವುದಿಲ್ಲ. ಆದ್ದರಿಂದ ಸದಾ ದೀಪಾವಳಿಯೇ ಇರುತ್ತದೆ. ಇಲ್ಲಿ ರಾವಣ ರಾಜ್ಯವಿರುವ ಕಾರಣ 12 ತಿಂಗಳ ನಂತರ ಮತ್ತೆ ದೀಪಾವಳಿಯನ್ನು ಆಚರಿಸುತ್ತಾರೆ. ರಾವಣನು ಸತ್ತ ನಂತರ ಲಕ್ಷ್ಮೀ-ನಾರಾಯಣರ ಪಟ್ಟಾಭಿಷೇಕದ ಖುಷಿಯನ್ನಾಚರಿಸುತ್ತಾರೆ. ಸತ್ಯಯುಗದಲ್ಲಿ ಯಾವಾಗ ಲಕ್ಷ್ಮೀ-ನಾರಾಯಣರು ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೆಯೋ ಆಗ ಪಟ್ಟಾಭಿಷೇಕವನ್ನು ಆಚರಿಸುತ್ತಾರೆ. ನಿಮಗೆ ಗೊತ್ತಿದೆ - ಈಗ ರಾವಣ ರಾಜ್ಯವು ಮುಕ್ತಾಯವಾಗುವುದು. ಭಾರತಕ್ಕೆ ಪುನಃ ರಾಜ್ಯಭಾಗ್ಯವು ಸಿಗಲಿದೆ. ಈಗ ಯಾವುದೇ ರಾಜ್ಯವಿಲ್ಲ, ತಂದೆಯಿಂದ ಆಸ್ತಿಯು ಸಿಗಬೇಕಾಗಿದೆ. ಬೇಹದ್ದಿನ ತಂದೆಯು ಬೇಹದ್ದಿನ ರಾಜಧಾನಿಯ ಆಸ್ತಿಯನ್ನು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಸದಾ ಸುಖದ ಆಸ್ತಿಯನ್ನು ನೀಡುವವನಾಗಿದ್ದೇನೆ. ಉಳಿದವರೆಲ್ಲರೂ ನಿಮಗೆ ದುಃಖಕೊಡುವವರಾಗಿದ್ದಾರೆ. ಯಾರಾದರೂ ಸುಖ ಕೊಟ್ಟರೂ ಸಹ ಅದು ಅಲ್ಪಕಾಲದ ಕ್ಷಣಭಂಗುರ ಸುಖವಾಗಿರುತ್ತದೆ. ಆ ಸುಖವು ಕಾಗವಿಷ್ಟ ಸಮಾನವಾಗಿದೆ. ನಾನು ನಿಮಗೆ ಇಷ್ಟೊಂದು ಸುಖವನ್ನು ಕೊಡುತ್ತೇನೆ, ಮತ್ತೇಂದೂ ನಿಮಗೆ ದುಃಖವಾಗುವುದಿಲ್ಲ. ಆದ್ದರಿಂದ ಈ ದೇಹ ಸಹಿತ ದೇಹದ ಸಂಬಂಧವನ್ನಿಟ್ಟುಕೊಳ್ಳುವವರನ್ನು ಮರೆಯಿರಿ. ಈ ದೇಹ, ದೇಹದ ಸಂಬಂಧಿಗಳು ನಿಮಗೆ ದುಃಖ ಕೊಡುವವರಾಗಿದ್ದಾರೆ, ಇವರನ್ನು ಬಿಟ್ಟು ನನ್ನೊಬ್ಬನನ್ನು ನೆನಪು ಮಾಡಿ. ಮುಂಜಾನೆ ಅಮೃತವೇಳೆ ನೆನಪು ಮಾಡಬೇಕಾಗುತ್ತದೆ. ಭಕ್ತಿಮಾರ್ಗದಲ್ಲಿ ಮನುಷ್ಯರು ಮುಂಜಾನೆ ಏಳುತ್ತಾರೆ. ಕೆಲಕೆಲವರು ಕೆಲಕೆಲವರ ಮತದಂತೆ ಏನೇನನ್ನೋ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಅಮೃತವೇಳೆಯಲ್ಲಿ ಎದ್ದು ಎಷ್ಟು ಸಾಧ್ಯವೋ ಅಷ್ಟು ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ. ಇದು ತಂದೆಯ ಆದೇಶವಾಗಿದೆ.

ಭಕ್ತರು ಭಗವಂತನನ್ನು ನೆನಪೂ ಮಾಡುತ್ತಾರೆ ಮತ್ತೆ ಎಲ್ಲರೂ ಭಗವಂತನೆಂದು ಹೇಳಿ ಬಿಡುತ್ತಾರೆ. ಈಗ ಅವರು ತಿಳಿದುಕೊಳ್ಳುವುದಿಲ್ಲ. ಒಂದು ದಿನ ಅವರೆಲ್ಲರೂ ನಿಮ್ಮ ಮಿತ್ರರಾಗುತ್ತಾರೆ. ಈ ಮಾತಂತೂ ಸರಿಯಾಗಿ ಈಶ್ವರನು ಸರ್ವವ್ಯಾಪಿ ಎಂದು ಹೇಳುವುದೆಂದರೆ ತನ್ನ ಮತ್ತು ಭಾರತದ ದೋಣಿಯು ಸಿಕ್ಕಿ ಹಾಕಿಸುವುದಾಗಿದೆ ಎಂದು ಹೇಳುತ್ತಾರೆ. ಎರಡನೆಯ ಮಾತು - ಭಾರತಕ್ಕೆ ಸ್ವರಾಜ್ಯದ ಬೆಣ್ಣೆಯನ್ನು ಕೊಡಿಸುವವರು ತಂದೆಯಾಗಿದ್ದಾರೆ, ಅವರ ಬದಲಾಗಿ ಅವರ ಮಗನ ಅಂದರೆ ಯಾವ ಶ್ರೀ ಕೃಷ್ಣನಿಗೆ ಬೆಣ್ಣೆಯು ಸಿಗುತ್ತದೆಯೋ ಅವರ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಆದ್ದರಿಂದ ಭಾರತಕ್ಕೆ ಸ್ವರಾಜ್ಯದ ಬೆಣ್ಣೆಯನ್ನು ಕೊಡಿಸುವವರು ಕೃಷ್ಣನಾಗಿದ್ದಾನೆಂದು ಮನುಷ್ಯರು ತಿಳಿಯುತ್ತಾರೆ. ತಂದೆಯ ಬದಲು ಮಕ್ಕಳ ಹೆಸರನ್ನು ಹಾಕಿ ಅನರ್ಥವನ್ನಾಗಿ ಮಾಡಿ ಬಿಟ್ಟಿದ್ದಾರೆ. ಈಗ ಕೃಷ್ಣನು ಇಡೀ ಪ್ರಪಂಚದ ಭಗವಂತನಾಗಲು ಸಾಧ್ಯವಿಲ್ಲ. ಮನುಷ್ಯರು ರಾವಣನ ಮತದಂತೆ ತಮ್ಮನ್ನು ತಾವು ಶ್ರಾಪಿತರನ್ನಾಗಿ ಮಾಡಿಕೊಂಡಿದ್ದಾರೆ. ತಂದೆಯು ಅಂಬಿಗನಾಗಿದ್ದಾರೆ, ನೀವೆಲ್ಲರೂ ದೋಣಿಯಲ್ಲಿದ್ದೀರಿ. ಆದ್ದರಿಂದಲೇ ನನ್ನ ದೋಣಿಯನ್ನು ಪಾರು ಮಾಡಿ ಎಂದು ಹಾಡುತ್ತೀರಲ್ಲವೆ. ಈಗ ನೀವು ದೊಡ್ಡ ಹಡಗಿನಲ್ಲಿ ಕುಳಿತಿದ್ದೀರಿ. ಚಂದ್ರಕಾಂತ ವೇದಾಂತದಲ್ಲಿ ಹಡಗಿನ ಮಾತಿದೆ. ಅದೂ ಸಹ ಈಗಿನದೇ ನೆನಪಾರ್ಥವಾಗಿ ಮಾಡಲ್ಪಟ್ಟಿದೆ. ನೀವು ಹಡಗಿನಲ್ಲಿ ಇಲ್ಲಿಂದ ದೂರ ಹೋಗುತ್ತಿದ್ದೀರಿ. ವಿಷಯ ಸಾಗರದಿಂದ ಅಮೃತ ಅಥವಾ ಕ್ಷೀರ ಸಾಗರದೆಡೆಗೆ ಹೋಗುತ್ತೀರಿ. ಹೇಗೆ ಲಂಡನ್ನಿನ ಖಾರೀ ಚಾನೆಲ್ನಿಂದ ಯಾರು ಹಡಗನ್ನು ಪಾರು ಮಾಡುತ್ತಾರೆಯೋ ಅವರಿಗೆ ಬಹುಮಾನವು ಸಿಗುತ್ತದೆ. ಅದೇ ರೀತಿ ಇಲ್ಲಿ ನರಕದಿಂದ ಸ್ವರ್ಗದೆಡೆಗೆ ವಿಷಯ ಸಾಗರವೆಂಬ ಖಾರೀ ಚಾನೆಲ್ನಲ್ಲಿ ಈ ದೊಡ್ಡ ಹಡಗಿನಲ್ಲಿ ಕುಳಿತಿದ್ದೀರಿ, ನೀವೀಗ ಹೊರಟಿದ್ದೀರಿ. ಲಂಗರು ಬಿಚ್ಚಲ್ಪಟ್ಟಿದೆ. ನೀವು ಇದರಿಂದ ದೂರ ಹೋಗಬೇಕಾಗಿದೆ. ಹಡಗು ಸಾಗುತ್ತಾ-ಸಾಗುತ್ತಾ ಬಂದರುಗಳು ಸಿಗುತ್ತವೆ. ಅಲ್ಲಿ ಕೆಲವರು ಇಳಿಯುತ್ತಾರೆ, ಇನ್ನೂ ಕೆಲವರು ಹತ್ತುತ್ತಾರೆ. ಇನ್ನೂ ಕೆಲವರು ಆಹಾರ ಪದಾರ್ಥಗಳ ಮುಂದೆ ಹೋಗುತ್ತಾರೆಂದರೆ ಅಲ್ಲಿಯೇ ಉಳಿದು ಬಿಡುತ್ತಾರೆ. ಇದರ ಮೇಲೆ ಒಂದು ಕಥೆಯೂ ಇದೆ - ಕೃಷ್ಣನಿಗೆ ಭಟುಕ ಮಹಾರಾಜನೆಂದು ಬರೆದು ಬಿಟ್ಟಿದ್ದಾರೆ. ಅವರು ಹಡಗಿನ ನಾಯಕನಾಗಿದ್ದಾರೆ ನಂತರ ಆ ಹಡಗಿನಿಂದ ಸಾಗುತ್ತಾ-ಸಾಗುತ್ತಾ ಕೆಲವರು ಇಳಿಯುತ್ತಾರೆಂದರೆ ಅಲ್ಲಿ ಮಾಯಾ ಮೊಸಳೆಯು ಕುಳಿತಿದೆ, ಮಹಾರಥಿಗಳನ್ನೂ ಸಹ ತಿಂದು ಬಿಡುತ್ತದೆ. ವಿದ್ಯೆಯನ್ನು ಬಿಡುತ್ತಾರೆ ಅಂದರೆ ನಿಶ್ಚಯಬುದ್ಧಿ ಇಲ್ಲವೆಂದರ್ಥ. ನಂತರ ಸಾಗರದ ಮಧ್ಯದಲ್ಲಿ ಬೀಳುತ್ತಾರೆ.

ನೀವು ನೋಡಿದ್ದೀರಿ - ಪಕ್ಷಿಗಳು ಸತ್ತಾಗ ಅಲ್ಲಿ ಇರುವೆಗಳ ಹಿಂಡು ಬಂದು ಅದನ್ನು ಮೇಲೆತ್ತುತ್ತದೆ ಅದೇ ರೀತಿ ಈ ಪಂಚ ವಿಕಾರಗಳ ರೂಪಿ ಭೂತವು ಒಂದೇ ಸಲ ಹಸಿಯಾಗಿ ತಿಂದು ಬಿಡುತ್ತದೆ. ಇದರ ಮೇಲೆ ಒಂದು ಕಥೆಯೂ ಬರೆಯಲ್ಪಟ್ಟಿದೆ. ತಿಳಿದುಕೊಳ್ಳಿ ಯಾರೋ ಹಡಗಿನಲ್ಲಿ ಕುಳಿತಿದ್ದಾರೆ - ಗ್ಯಾರಂಟಿಯನ್ನು ಬರೆದು ಕೊಡುತ್ತಾರೆ, ತಮ್ಮ ಭಾವ ಚಿತ್ರವನ್ನು ಕಳುಹಿಸಿ ಕೊಡುತ್ತಾರೆ. ನಂತರ ಒಂದುವೇಳೆ ಯಾರ ಸಂಗದಲ್ಲಿ ಬಂದು ಹಾಳಾದರೆ ವಿದ್ಯೆಯನ್ನೇ ಬಿಟ್ಟು ಬಿಡುತ್ತಾರೆಂದರೆ ಅವರ ಚಿತ್ರವನ್ನು ಪುನಃ ಅವರಿಗೆ ಹಿಂತಿರುಗಿ ಕಳುಹಿಸಲಾಗುತ್ತದೆ. ಈ ಸಮಯದಲ್ಲಿ ಮಾಯೆಯು ತಮೋಪ್ರಧಾನವಾಗಿದೆ. ಈಶ್ವರನ ಕೈಯನ್ನು ಬಿಟ್ಟರೆ ಅಸುರರು ಹಿಡಿದುಕೊಂಡು ಬಿಡುತ್ತಾರೆ. ಹೀಗೆ ಅನೇಕರು ನಡೆಯುತ್ತಾ-ನಡೆಯುತ್ತಾ ಕೈಯನ್ನು ಬಿಟ್ಟು ಇಳಿದು ಹೋಗುತ್ತಾರೆ. ಆಗ ಇವರಿಗೆ ಕ್ರೋಧದ ಭೂತ, ಮೋಹದ ಭೂತವು ಹಿಡಿದುಕೊಂಡಿದೆ ಎಂದು ಸಮಾಚಾರವು ಬರುತ್ತದೆ. ಆದ್ದರಿಂದ ಮೊದಲಂತೂ ನಷ್ಟಮೋಹಿಗಳಾಗಬೇಕಾಗಿದೆ. ಒಬ್ಬರೊಂದಿಗೆ ಮೋಹವನ್ನಿಟ್ಟುಕೊಳ್ಳಬೇಕು ಅದು ಪರಿಶ್ರಮವಾಗಿದೆ ಏಕೆಂದರೆ ಅನೇಕ ಮೋಹದ ಸರಪಳಿಗಳು ಬಂಧಿಸಿವೆ. ಈಗ ಒಬ್ಬರೊಂದಿಗೆ ಬುದ್ಧಿಯೋಗವನ್ನಿಡಬೇಕಾಗಿದೆ. ಹೇಗೆ ಮನುಷ್ಯರು ಕುಳಿತು ಭಕ್ತಿ ಮಾಡುತ್ತಾರೆಂದರೆ ಬುದ್ಧಿಯು ವ್ಯಾಪಾರದ ಕಡೆಯೋ, ಮನೆಯ ಕಡೆಯೋ ಹೋಗುತ್ತದೆ. ಹಾಗೆಯೇ ಇಲ್ಲಿ ನಿಮ್ಮದೂ ಇದೇ ರೀತಿಯಾಗುತ್ತದೆ. ಮಕ್ಕಳು ನಡೆಯುತ್ತಾ-ನಡೆಯುತ್ತಾ ನಿಮಗೆ ಮಕ್ಕಳು ನೆನಪಿಗೆ ಬಂದು ಬಿಡುತ್ತಾರೆ, ಇಲ್ಲವೆಂದರೆ ಪತಿ ನೆನಪಿಗೆ ಬಂದು ಬಿಡುತ್ತಾರೆ. ಆದ್ದರಿಂದ ಈ ಸರಪಳಿಗಳಿಂದ ಬುದ್ಧಿಯೋಗವನ್ನು ತೆಗೆದು ತಂದೆಯನ್ನು ನೆನಪು ಮಾಡಿ ಎಂದು ತಿಳಿಸುತ್ತಾರೆ. ಒಂದುವೇಳೆ ಅಂತ್ಯದ ಸಮಯದಲ್ಲಿ ಮತ್ತ್ಯಾರ ನೆನಪಾದರೂ ಬಂದರೆ ಹೇಗೆ ಅಂತ್ಯಕಾಲದಲ್ಲಿ ಯಾರು ಪತಿಯ ಸ್ಮರಣೆ ಮಾಡುತ್ತಾರೆ ಅವರನ್ನೇ ಸೇರಬೇಕಾಗುತ್ತದೆ...... ಈ ರೀತಿ ಆಗುತ್ತದೆ. ಆದ್ದರಿಂದ ಅಂತ್ಯದಲ್ಲಿ ಶಿವ ತಂದೆಯೊಬ್ಬರ ವಿನಃ ಮತ್ತ್ಯಾರೂ ನೆನಪಿಗೆ ಬರಬಾರದು, ಇಂತಹ ಅಭ್ಯಾಸವನ್ನಿಟ್ಟುಕೊಳ್ಳಬೇಕು. ಮುಂಜಾನೆಯೆದ್ದು ತಂದೆಯನ್ನು ನೆನಪು ಮಾಡಿ ಬಾಬಾ ನಾವು ತಮ್ಮ ಬಳಿ ಬಂದಿದ್ದೇವೆ. ನಾವು ಅವಶ್ಯವಾಗಿ ಸ್ವರ್ಗದ ಮಾಲೀಕರಾಗುತ್ತೇವೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ಅಲ್ಫ್ ಎಂದರೆ ಅಲ್ಲಾ, ಬೇ ಅಂದರೆ ಬಾದ್ಶಾಹ್. ಆತ್ಮವು ಬಿಂದುವಾಗಿದೆ, ಇಲ್ಲಿ ಮನುಷ್ಯರು ತಿಲಕವನ್ನಿಡುತ್ತಾರೆಂದರೆ ಕೆಲವರು ಬಿಂದುವನ್ನಿಡುತ್ತಾರೆ, ಕೆಲವರು ಉದ್ದನೆಯ ನಾಮವನ್ನಿಡುತ್ತಾರೆ, ಇನ್ನೂ ಕೆಲವರು ಕಿರೀಟದ ತರಹ ಇಡುತ್ತಾರೆ, ಮತ್ತೂ ಕೆಲವರು ನಕ್ಷತ್ರದ ತರಹ ಇಡುತ್ತಾರೆ, ಇನ್ನೂ ಕೆಲವರು ವಜ್ರದ ಹರಳಿನ ತರಹ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನೀವು ಆತ್ಮಗಳಾಗಿದ್ದೀರಿ, ಆತ್ಮವು ನಕ್ಷತ್ರ ಸಮಾನವಾಗಿದೆ. ಆ ನಕ್ಷತ್ರದಲ್ಲಿ ಇಡೀ ನಾಟಕದ ರೆಕಾರ್ಡ್ ತುಂಬಲ್ಪಟ್ಟಿದೆ. ಈಗ ತಂದೆಯು ಆದೇಶ ನೀಡುತ್ತಾರೆ - ನಿರಂತರ ನನ್ನನ್ನು ನೆನಪು ಮಾಡಿ ಮತ್ತು ಎಲ್ಲರಿಂದ ಬುದ್ಧಿಯೋಗವನ್ನು ತೆಗೆಯಿರಿ. ಈ ಲಕ್ಷ್ಯವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯೇ ಹೇಳುತ್ತಾರೆ - ನಿಮ್ಮ ತಲೆಯ ಮೇಲೆ ಜನ್ಮ-ಜನ್ಮಾಂತರದ ಪಾಪವಿದೆ. ಅದು ನೆನಪಿಲ್ಲದೆ ಭಸ್ಮವಾಗುವುದಿಲ್ಲ. ಸದಾ ಆರೋಗ್ಯವಂತರಾಗಲು ತಂದೆಯನ್ನು ನೆನಪು ಮಾಡಬೇಕಾಗಿದೆ. ಏಕೆಂದರ ಅವರಿಂದಲೇ ಸದಾ ಆರೋಗ್ಯವಂತರು ಮತ್ತು ಐಶ್ವರ್ಯವಂತರಾಗುವ ಆಸ್ತಿಯು ಸಿಗುವುದು. ಆರೋಗ್ಯ, ಐಶ್ವರ್ಯವಿದ್ದರೂ ಬಾಕಿ ಇನ್ನೇನು ಬೇಕು! ಆರೋಗ್ಯವಿದೆ, ಐಶ್ವರ್ಯವಿಲ್ಲವೆಂದರೂ ಸಹ ಮಜಾ ಇರುವುದಿಲ್ಲ ಮತ್ತು ಐಶ್ವರ್ಯವಿದ್ದು ಆರೋಗ್ಯವಿಲ್ಲವೆಂದರೂ ಸಹ ಮಜಾ ಇರುವುದಿಲ್ಲ. ಆತ್ಮವು ಮೊದಲು ತಂದೆಯನ್ನು ನೆನಪು ಮಾಡಬೇಕು ಆಗಲೇ ವಿಕರ್ಮಗಳು ವಿನಾಶವಾಗುತ್ತವೆ ಮತ್ತು 21 ಜನ್ಮಗಳಿಗಾಗಿ ಆರೋಗ್ಯವು ಸಿಗುವುದು ಹಾಗೂ ಸ್ವದರ್ಶನಚಕ್ರಧಾರಿಗಳಾಗುತ್ತೀರೆಂದರೆ 21 ಜನ್ಮಗಳಿಗಾಗಿ ಐಶ್ವರ್ಯವು ಸಿಗುವುದು. ಇದು ಎಷ್ಟು ಸಹಜ ಮಾತಾಗಿದೆ. ನಾವು 84 ಜನ್ಮಗಳಲ್ಲಿ ಈ ರೀತಿ ಸುತ್ತಿದ್ದೇವೆ, ಈಗ ಎಲ್ಲರೂ ಸಂಪೂರ್ಣ ಸುಟ್ಟು ಭಸ್ಮವಾಗುವವರಿದ್ದೇವೆ. ಅಂದಮೇಲೆ ಅಂತಹದ್ದರೊಂದಿಗೆ ಮನಸ್ಸನ್ನೇಕೆ ಇಡುವುದು? ಯಾರು ಹೊಸ ಪ್ರಪಂಚದ ರಾಜ್ಯಭಾಗ್ಯವನ್ನು ಕೊಡುತ್ತಾರೆಯೋ ಅವರೊಂದಿಗೆ ಮನಸ್ಸಿಡಬೇಕಾಗಿದೆ. ತಂದೆಯು ಆತ್ಮಗಳೊಂದಿಗೆ ಮಾತನಾಡುತ್ತಾರೆ - ಮಕ್ಕಳೇ, ಈಗ ಈ ಶರೀರವನ್ನು ಮರೆತು ತನ್ನನ್ನು ಅಶರೀರಿ ಎಂದು ತಿಳಿದು ನನ್ನನ್ನು ನೆನಪು ಮಾಡಿ. ಈ ಶರೀರವು ನಿಮಗೆ ಪಾತ್ರವನ್ನಭಿನಯಿಸಲು ಸಿಕ್ಕಿದೆ. ಆದ್ದರಿಂದ ಮುಂಜಾನೆಯೆದ್ದು ಈ ಸ್ಮರಣೆ ಮಾಡಬೇಕು - ಯಾವ ಪ್ರಿಯತಮನು ಈ ಸಾಗರದಿಂದ ದೂರ ಕರೆದುಕೊಂಡು ಹೋಗುತ್ತಾರೆಯೋ ಅವರನ್ನು ನೆನಪು ಮಾಡಬೇಕು. ಉಳಿದವರೆಲ್ಲರೂ ವಿಷಯ ಸಾಗರದಲ್ಲಿ ಮುಳುಗಿಸುವವರಾಗಿದ್ದಾರೆ. ಆದರೆ ತಂದೆಯು ಪಾರು ಮಾಡುವವರು, ಅವರನ್ನು ಅಂಬಿಗ, ತೋಟದ ಮಾಲಿಕ ಎಂದು ಹೇಳಲಾಗುತ್ತದೆ. ನಿಮ್ಮನ್ನು ಮುಳ್ಳುಗಳಿಂದ ಹೂಗಳನ್ನಾಗಿ ಮಾಡಿ ಸ್ವರ್ಗದಲ್ಲಿ ಕಳುಹಿಸುತ್ತಾರೆ. ನೀವು ಎಂದೂ ಸ್ವರ್ಗದಲ್ಲಿ ದುಃಖವನ್ನು ನೋಡುವುದಿಲ್ಲ. ಆದ್ದರಿಂದ ಅವರಿಗೆ ದುಃಖಹರ್ತ ಸುಖಕರ್ತ ಎಂದು ಹೇಳುತ್ತಾರೆ. ಹರ ಹರ ಮಹಾದೇವನೆಂದು ಹೇಳುತ್ತಾರಲ್ಲವೆ. ಶಿವನಿಗೇ ಹೇಳುತ್ತಾರೆ. ಇವರು ಬ್ರಹ್ಮಾ-ವಿಷ್ಣು-ಶಂಕರನಿಗೂ ತಂದೆಯಾಗಿದ್ದಾರೆ. ಅದೇ ತಂದೆಯು 21 ಜನ್ಮಗಳ ಸುಖದ ಆಸ್ತಿಯನ್ನು ಕೊಡುತ್ತಾ ಬಂದರು ಅವರನ್ನು ನೆನಪು ಮಾಡಬೇಕಲ್ಲವೆ. ಇದರಲ್ಲಿ ಸಾಹಸ ಬೇಕು, ನೆನಪು ಮಾಡುತ್ತಾ-ಮಾಡುತ್ತಾ ಸುಸ್ತಾಗುತ್ತಾರೆಂದರೆ ನಡೆಯುವುದನ್ನೇ ನಿಲ್ಲಿಸಿ ಬಿಡುತ್ತಾರೆ. ತಂದೆಯನ್ನೇ ಬಿಟ್ಟು ಬಿಡುವಂತಹ ಸಂಗವು ಸಿಕ್ಕಿ ಬಿಡುತ್ತದೆ. ಆದ್ದರಿಂದಲೇ ಕೆಟ್ಟ ಸಂಗವು ಬೀಳಿಸುತ್ತದೆ, ಒಳ್ಳೆಯ ಸಂಗವು ಮೇಲೆತ್ತುತ್ತದೆ ಎಂದು ಹೇಳಲಾಗುತ್ತದೆ. ಹೊರಗಡೆ ಹೋದಾಗ ಕೆಟ್ಟ ಸಂಗವು ಸಿಗುತ್ತದೆ ಎಂದರೆ ನಶೆಯು ಹಾರಿ ಹೋಗುವುದು. ಕೆಲವರು ಹೇಳುತ್ತಾರೆ - ಬ್ರಹ್ಮಾಕುಮಾರಿಯರ ಬಳಿಯಂತೂ ಜಾದುವಿದೆ, ಅಲ್ಲಿ ಹೋದರೆ ಜಾದು ಮಾಡಿ ಬಿಡುತ್ತಾರೆ, ಆದ್ದರಿಂದ ಅವರ ಬಳಿ ಹೋಗಬೇಡಿ ಎಂದು ಹೇಳುತ್ತಾರೆ. ಪರೀಕ್ಷೆಗಳಂತೂ ಬರುತ್ತವೆ, ಕೆಲವರು ಹೀಗಿರುತ್ತಾರೆ - 10 ವರ್ಷಗಳಿಂದ ಇದ್ದವರು ಮತ್ತೆ ಸಂಗದೋಷದಲ್ಲಿ ಬಂದು ಬಿಡುತ್ತಾರೆ. ಹಡಗಿನಿಂದ ಕಾಲನ್ನು ಹೊರ ತೆಗೆದರೆ ಮಾಯೆಯು ಹಸಿಯಾಗಿಯೇ ತಿಂದು ಬಿಡುತ್ತದೆ. ತಂದೆಯಿಂದ ಸ್ವರ್ಗದ ಆಸ್ತಿಯು ಅವಶ್ಯವಾಗಿ ಸಿಗುತ್ತದೆ ಎಂಬುದನ್ನು ನಿಶ್ಚಯ ಮಾಡಿಕೊಳ್ಳುತ್ತಾರೆ. ಮಾಯೆಯ ದೊಡ್ಡ ಬಿರುಗಾಳಿಗಳು ಬರುತ್ತವೆ, ಇದು ಯುದ್ಧದ ಮೈದಾನವಾಗಿದೆ. ಅರ್ಧಕಲ್ಪ ಮಾಯೆಯ ರಾಜ್ಯವು ನಡೆದಿದೆ, ಈಗ ಇದರ ಮೇಲೆ ವಿಜಯ ಗಳಿಸಬೇಕಾಗಿದೆ. ರಾವಣನನ್ನು ಸುಡುತ್ತಾರೆ ನಂತರ ಒಂದು ದಿನ ಖುಷಿಯನ್ನು ಅನುಭವಿಸುತ್ತಾರೆ. ಇದೆಲ್ಲವೂ ನಕಲಿ ಸುಖವಾಗಿದೆ, ಅಸಲಿ ಸುಖವು ಸಿಗುತ್ತದೆ. ಆದರೆ ನರಕದ ಸುಖವು ಕಾಗವಿಷ್ಟ ಸಮಾನವಾಗಿದೆ. ಸ್ವರ್ಗದಲ್ಲಂತೂ ಸುಖವೇ ಸುಖವಿರುತ್ತದೆ. ನೀವು ಆ ಸುಖಧಾಮಕ್ಕೋಸ್ಕರ ಪುರುಷಾರ್ಥ ಮಾಡುತ್ತಿದ್ದೀರಿ. ಮಲ್ಲ ಯುದ್ಧದಲ್ಲಿ ಕೆಲವೊಮ್ಮೆ ಮಾಯೆಗೆ ಜಯ, ಇನ್ನೂ ಕೆಲವೊಮ್ಮೆ ಮಕ್ಕಳಿಗೆ ಜಯ ಸಿಗುತ್ತದೆ. ಈ ಯುದ್ಧವು ದಿನ-ರಾತ್ರಿ ನಡೆಯುತ್ತದೆ. ಆದ್ದರಿಂದ ಶಕ್ತಿಶಾಲಿ ಉಸ್ತಾದ್ ಕೈಯನ್ನು ಪೂರ್ಣ ಹಿಡಿದುಕೊಳ್ಳಬೇಕಾಗಿದೆ. ಉಸ್ತಾದ್ ಸರ್ವಶಕ್ತಿವಂತ, ಸಮರ್ಥನಾಗಿದ್ದಾರೆ. ಅಂತಹವರ ಕೈಯನ್ನು ಬಿಡುತ್ತೀರೆಂದರೆ ಸರ್ವಶಕ್ತಿವಂತನೂ ಸಹ ಏನು ಮಾಡುವುದು? ಕೈಯನ್ನು ಬಿಟ್ಟರೆ ಅವರು ಹೋದರೆಂದರ್ಥ. ಈ ದೋಣಿಯ ಮಾತು ಶಾಸ್ತ್ರಗಳಲ್ಲಿಯೂ ಇದೆ, ಈಗ ದೋಣಿಯು ಸಾಗುತ್ತಿದೆ. ಇನ್ನೂ ಸ್ವಲ್ಪ ದಿನಗಳೇ ಉಳಿದಿವೆ. ವೈಕುಂಠವಂತೂ ಸಮ್ಮುಖದಲ್ಲಿ ಕಂಡುಬರುತ್ತದೆ. ಅಂತ್ಯದ ಸಮಯದಲ್ಲಂತೂ ಘಳಿಗೆ-ಘಳಿಗೆಯೂ ವೈಕುಂಠದ ದೃಶ್ಯವನ್ನು ನೋಡುತ್ತಿರುತ್ತೀರಿ. ಹೇಗೆ ಪ್ರಾರಂಭದಲ್ಲಿಯೂ ನೀವು ನೋಡುತ್ತಿದ್ದೀರಿ ಹಾಗೆಯೇ ಅಂತ್ಯದಲ್ಲಿಯೂ ನಿಮಗೆ ಬಹಳ ಸಾಕ್ಷಾತ್ಕಾರವಾಗುವುದು. ಯಾರು ಇಲ್ಲಿರುತ್ತಾರೆ ಸಾಹಸವಾಗಿ ಕೈ ಹಿಡಿದುಕೊಂಡಿರುತ್ತಾರೆ ಅವರೆ ಅಂತ್ಯದ ಸಮಯದಲ್ಲಿ ಇವೆಲ್ಲವನ್ನೂ ಮಾಡುತ್ತಾರೆ. ಮಕ್ಕಳೂ ಸಹ ಇದನ್ನು ತಿಳಿಸಬಲ್ಲರು - ಬಾಬಾ, ಇವರು ದಾಸಿಯಾಗುವರು, ಇವರು ಈ ರೀತಿಯಾಗುವವರಾಗಿದ್ದಾರೆ. ನಾವು ದಾಸಿಯಾಗಿ ಬಿಟ್ಟೆವೆಂದು ಬಹಳ ದುಃಖ ಪಡುತ್ತಾರೆ. ಪರಿಶ್ರಮ ಪಡಲಿಲ್ಲವೆಂದರೆ ಮತ್ತೇನಾಗುವುದು? ನಂತರ ಬಹಳ ಪಶ್ಚಾತ್ತಾಪವಾಗುವುದು. ಪ್ರಾರಂಭದಲ್ಲಿ ನೀವು ಬಹಳಷ್ಟು ಆಟ ಪಾಠಗಳನ್ನು ನೋಡಿದ್ದೀರಿ. ಯಾವುದನ್ನು ನಾವು ನೋಡಿದೆವು.... ಈ ಗೀತೆಯಿದೆಯಲ್ಲವೆ. ಹೇಗೆ ಸಮಯವು ಸಮೀಪ ಬರುತ್ತಾ ಹೋಗುವುದೋ ಎಲ್ಲರೂ ತಿಳಿಸುತ್ತಿರುತ್ತಾರೆ ನಂತರ ವಿದ್ಯೆಯನ್ನು ಓದಲು ಸಾಧ್ಯವಿಲ್ಲ. ಆಗ ತಂದೆಯೂ ಸಹ ಹೇಳುತ್ತಾರೆ - ನಾನು ನಿಮಗೆ ಎಷ್ಟೊಂದು ತಿಳಿಸಿದ್ದೆನು. ಆದರೆ ನೀವು ಶ್ರೀಮತದಂತೆ ನಡೆಯಲಿಲ್ಲ, ಆದ್ದರಿಂದಲೇ ಈ ಸ್ಥಿತಿಯಾಯಿತು. ಈಗ ಕಲ್ಪ-ಕಲ್ಪವೂ ಈ ಪದವಿಯೇ ಸಿಗುತ್ತಾ ಇರುವುದು. ಆದ್ದರಿಂದಲೇ ಈಗ ಪದೇ-ಪದೇ ತಮ್ಮ ಪುರುಷಾರ್ಥ ಮಾಡುತ್ತಾ ಇರಿ, ಮಾತಾಪಿತರನ್ನು ಅನುಕರಣೆ ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಕೆಲವರು ಕುಪುತ್ರರೂ ಇರುತ್ತಾರಲ್ಲವೆ. ಮಾಯೆಗೆ ವಶರಾಗಿ ತೊಂದರೆ ಕೊಡುತ್ತಾರೆಂದರೆ ನಂತರ ಬಹಳ ಶಿಕ್ಷೆಗಳಿಗೆ ಗುರಿಯಾಗುತ್ತಾರೆ, ನಂತರ ಪದವಿಯು ಭ್ರಷ್ಟವಾಗಿ ಬಿಡುತ್ತದೆ. ಈ ರೀತಿಯ ಸಾಕ್ಷಾತ್ಕಾರಗಳನ್ನು ಮಕ್ಕಳು ನೋಡಿದ್ದೀರಿ. ಪ್ರಪಂಚದಲ್ಲಿ ಅಸುರೀ ಸಂಗವಿದೆ ಮತ್ತು ಇಲ್ಲಿ ಈಶ್ವರೀಯ ಸಂಗವಾಗಿದೆ. ತಂದೆಯು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ ಏಕೆಂದರೆ ನಮಗೇನು ಗೊತ್ತು ಎಂದು ಯಾರೂ ಹೇಳಬಾರದು. ವಿನಾಶದ ಸಮಯದಲ್ಲಿ ಮನುಷ್ಯರು ಬಹಳ ತ್ರಾಹೀ ತ್ರಾಹೀ ಎನ್ನತೊಡಗುತ್ತಾರೆ. ನೀವು ಬಹಳ ಸಾಕ್ಷಾತ್ಕಾರಗಳನ್ನು ನೋಡುತ್ತಿರುತ್ತೀರಿ. ಹೇಗೆ ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ..... ಇದೇ ಪ್ರಕಾರವಾಗಿ ನೀವು ನೃತ್ಯ ಮಾಡುತ್ತಿರುತ್ತೀರಿ. ವಿನಾಶದ ನಂತರ ನಮ್ಮ ಮಹಲುಗಳು ಹೇಗಾಗುತ್ತವೆ ಎಂಬುದನ್ನು ನೋಡುತ್ತಿರುತ್ತೀರಿ. ಯಾರು ಜೀವಿಸಿರುತ್ತಾರೆಯೋ ಅವರು ಎಲ್ಲವನ್ನೂ ನೋಡುತ್ತಿರುತ್ತಾರೆ. ತಂದೆಯ ಮಕ್ಕಳಾಗಿ ನಂತರ ತಂದೆಗೆ ವಿಚ್ಛೇದನವನ್ನು ಕೊಟ್ಟು ಬಿಟ್ಟರೆ ನೋಡಲು ಸಾಧ್ಯವೆ! ಒಳ್ಳೆಯದು.

ಮಧುರಾತಿ ಮಧುರ 5000 ವರ್ಷಗಳ ನಂತರ ಪುನಃ ಬಂದು ಸೇರಿರುವ ಮಕ್ಕಳ ಪ್ರತಿ ನಂಬರ್ವಾರ್ ಪುರುಷಾರ್ಥದನುಸಾರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಸಮರ್ಥ ತಂದೆಯ ಕೈಯನ್ನು ಹಿಡಿದುಕೊಂಡಿರಬೇಕು, ತಂದೆಯೊಂದಿಗೆ ಮನಸ್ಸನ್ನಿಡಬೇಕು, ಬೆಳಗ್ಗೆ ಎದ್ದು ನೆನಪಿನಲ್ಲಿ ಕುಳಿತುಕೊಳ್ಳಬೇಕು.

2. ಸಂಗದೋಷದಿಂದ ತಮ್ಮನ್ನು ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಕೆಟ್ಟ ಸಂಗದಲ್ಲಿ ಬಂದು ವಿದ್ಯೆಯನ್ನೆಂದೂ ಬಿಡಬಾರದಾಗಿದೆ.


ವರದಾನ:
ಸೇವೆಯಲ್ಲಿ ಸದಾ ಸಹಯೋಗಿಯಾಗಿ ಸಹಜ ಯೋಗದ ವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ವಿಶೇಷತಾ ಸಂಪನ್ನ ಭವ.

ಬ್ರಾಹ್ಮಣ ಜೀವನ ವಿಶೇಷತಾ ಸಂಪನ್ನ ಜೀವನವಾಗಿದೆ, ಬ್ರಾಹ್ಮಣರಾಗುವುದು ಅರ್ಥಾತ್ ಸಹಜಯೋಗಿ ಭವದ ವರದಾನ ಪ್ರಾಪ್ತಿ ಮಾಡಿಕೊಳ್ಳುವುದು. ಇದೇ ಎಲ್ಲಕ್ಕಿಂತಲೂ ಮೊದಲ ಜನ್ಮದ ವರದಾನವಾಗಿದೆ. ಈ ವರದಾನವನ್ನು ಬುದ್ಧಿಯಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳಿ - ಇದಾಗಿದೆ ವರದಾನವನ್ನು ಜೀವನದಲ್ಲಿ ತರುವುದು. ವರದಾನವನ್ನು ಖಾಯಂ ಆಗಿಡುವಂತಹ ಸಹಜ ವಿಧಿಯಾಗಿದೆ - ಸರ್ವ ಆತ್ಮಗಳ ಪ್ರತಿ ವರದಾನವನ್ನು ಸೇವೆಯಲ್ಲಿ ತೊಡಗಿಸಿ. ಸೇವೆಯಲ್ಲಿ ಸಹಯೋಗಿಗಳಾಗುವುದೇ ಸಹಜಯೋಗಿ ಆಗುವುದಾಗಿದೆ. ಆದ್ದರಿಂದ ಈ ವರದಾನವನ್ನು ಸ್ಮತಿಯಲ್ಲಿಟ್ಟುಕೊಂಡು ವಿಶೇಷತಾ ಸಂಪನ್ನರಾಗಿ.

ಸ್ಲೋಗನ್:
ತಮ್ಮ ಮಸ್ತಕದ ಮಣಿಯ ಮೂಲಕ ಸ್ವಯಂನ ಸ್ವರೂಪ ಮತ್ತು ಶ್ರೇಷ್ಠ ಗುರಿಯ ಸಾಕ್ಷಾತ್ಕಾರ ಮಾಡಿಸುವುದೇ ಲೈಟ್ಹೌಸ್ ಆಗುವುದಾಗಿದೆ.