10.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ -
ತಂದೆಯು ಪ್ರತೀ ಮಾತಿನಲ್ಲಿ ಕಲ್ಯಾಣಕಾರಿಯಾಗಿದ್ದಾರೆ, ಆದ್ದರಿಂದ ಅವರಿಂದ ಯಾವ ಸಲಹೆ ಸಿಗುತ್ತದೆಯೋ ಅದನ್ನು ಉದಾಸೀನ ಮಾಡದೆ ಸದಾ ಶ್ರೀಮತದಂತೆ ನಡೆಯುತ್ತಿರಿ”

ಪ್ರಶ್ನೆ:
ನೌದಾಭಕ್ತಿ ಮತ್ತು ನೌಧಾವಿದ್ಯೆ - ಈ ಎರಡರಿಂದ ಯಾವ ಪ್ರಾಪ್ತಿಗಳಾಗುತ್ತದೆಯೋ ಅದರಲ್ಲಿ ಅಂತರವೇನಾಗಿದೆ?

ಉತ್ತರ:
ನೌಧಾ ಭಕ್ತಿಯಿಂದ ಕೇವಲ ಸಾಕ್ಷಾತ್ಕಾರವಾಗುತ್ತದೆ, ಹೇಗೆ ಶ್ರೀಕೃಷ್ಣನ ಭಕ್ತರಾಗಿದ್ದರೆ ಅವರಿಗೆ ಶ್ರೀಕೃಷ್ಣನ ಸಾಕ್ಷಾತ್ಕಾರವಾಗುತ್ತದೆ. ರಾಸ್ (ನೃತ್ಯ) ಮುಂತಾದವುಗಳನ್ನು ಮಾಡುತ್ತಾರೆ ಆದರೆ ಅವರೇನು ವೈಕುಂಠಪುರಿ ಇಲ್ಲವೆ ಶ್ರೀಕೃಷ್ಣಪುರಿಯಲ್ಲಿ ಹೋಗುವುದಿಲ್ಲ. ನೀವು ಮಕ್ಕಳು ನೌಧಾ ವಿದ್ಯೆಯನ್ನು ಓದುತ್ತೀರಿ. ಯಾವುದರಿಂದ ನಿಮ್ಮ ಎಲ್ಲಾ ಮನೋಕಾಮನೆಗಳು ಪೂರ್ಣವಾಗುತ್ತದೆ. ಈ ವಿದ್ಯೆಯಿಂದ ನೀವು ವೈಕುಂಠ ಪುರಿಯಲ್ಲಿ ಹೋಗಿ ಬಿಡುತ್ತೀರಿ.

ಗೀತೆ:
ಇಂದಿಲ್ಲದಿದ್ದರೆ ನಾಳೆ ಮೋಡಗಳು ಅವಶ್ಯವಾಗಿ ಚದುರುತ್ತವೆ

ಓಂ ಶಾಂತಿ.
ಈ ರೀತಿ ಯಾರು ಹೇಳಿದರು? ಮನೆಗೆ ನಡೆಯಿರಿ. ಯಾರದ್ದಾದರೂ ಮಕ್ಕಳು ಮುನಿಸಿಕೊಂಡು ಹೋದಾಗ ಮಿತ್ರ-ಸಂಬಂಧಿ ಮುಂತಾದವರು ಅವರ ಹಿಂದೇ ಹೋಗುತ್ತಾರೆ, ಮುನಿಸಿಕೊಳ್ಳುವುದು ಏಕೆ ಎಂದು ಕೇಳುತ್ತಾರೆ. ಈಗ ಮನೆಗೆ ನಡೆಯಿರಿ, ಈ ರೀತಿ ಬೇಹದ್ದಿನ ತಂದೆಯೇ ಬಂದು ಎಲ್ಲಾ ಮಕ್ಕಳಿಗೂ ಹೇಳುತ್ತಾರೆ. ತಂದೆಯೂ ಇದ್ದಾರೆ, ಅಣ್ಣನೂ ಇದ್ದಾರೆ. ಶಾರೀರಿಕವಾಗಿ ಇದ್ದಾರೆ ಅಂದಾಗ ಆತ್ಮಿಕವಾಗಿಯೂ ಸಹ ಇದ್ದಾರೆ. ಹೇ ಮಕ್ಕಳೇ, ಈಗ ಮನೆಗೆ ನಡೆಯಿರಿ, ರಾತ್ರಿ ಪೂರ್ಣವಾಯಿತು, ಈಗ ದಿನವಾಗುತ್ತದೆ ಎಂದು ಹೇಳುತ್ತಾರೆ. ಇದು ಜ್ಞಾನದ ಮಾತಾಗಿದೆ. ಬ್ರಹ್ಮನ ರಾತ್ರಿ, ಬ್ರಹ್ಮನ ಹಗಲು. ಇದನ್ನು ಯಾರು ತಿಳಿಸಿದರು? ತಂದೆಯೇ ಕುಳಿತು ಬ್ರಹ್ಮಾ ಮತ್ತು ಬ್ರಹ್ಮಾಕುಮಾರಿಯರಿಗೆ ತಿಳಿಸುತ್ತಾರೆ. ಅರ್ಧಕಲ್ಪ ರಾತ್ರಿಯಾಗಿದೆ ಅಂದರೆ ಪತಿತ, ರಾವಣ ರಾಜ್ಯವಾಗಿದೆ ಅಥವಾ ಭ್ರಷ್ಟಾಚಾರಿ ರಾಜ್ಯವಾಗಿದೆ ಏಕೆಂದರೆ ಆಸುರೀ ಮತದಂತೆ ನಡೆಯುತ್ತಾರೆ. ಈಗ ನೀವು ಶ್ರೀಮತದಂತೆ ನಡೆಯುತ್ತಿದ್ದೀರಿ. ಶ್ರೀಮತವು ಅವಿನಾಶಿಯಾಗಿದೆ, ತಂದೆಯು ಸ್ವಯಂ ಬರುತ್ತಾರೆಂದು ನಮಗೆ ತಿಳಿದಿದೆ. ಅವರ ರೂಪವು ಬೇರೆಯಾಗಿದೆ, ರಾವಣನ ರೂಪವು ಬೇರೆಯಾಗಿದೆ. ಅವನಿಗೆ 5 ವಿಕಾರ ರೂಪಿ ರಾವಣನೆಂದು ಹೇಳಲಾಗುತ್ತದೆ. ಈಗ ರಾವಣನ ರಾಜ್ಯವು ಸಮಾಪ್ತಿಯಾಗಲಿದೆ ನಂತರ ಈಶ್ವರನ ರಾಜ್ಯವು ಬರುತ್ತದೆ ಅದನ್ನು ರಾಮರಾಜ್ಯವೆಂದು ಹೇಳುತ್ತಾರಲ್ಲವೇ. ಸೀತೆಯ ರಾಮನನ್ನು ಜಪ ಮಾಡುವುದಿಲ್ಲ, ಮಾಲೆಯಲ್ಲಿ ರಾಮ-ರಾಮ ಎಂದು ಜಪಿಸುತ್ತಾರಲ್ಲವೆ. ಅವರು ಪರಮಾತ್ಮನನ್ನು ನೆನಪು ಮಾಡುತ್ತಾರೆ. ಯಾರು ಸರ್ವರ ಸದ್ಗತಿದಾತನಾಗಿದ್ದಾರೆಯೋ ಅವರನ್ನೇ ಜಪಿಸುತ್ತಾರೆ. ರಾಮನೆಂದರೆ ಭಗವಂತನಾಗಿದ್ದಾರೆ. ಯಾವಾಗ ಮಾಲೆಯನ್ನು ಜಪಿಸುತ್ತಾರೆಯೋ ಆಗ ಎಂದೂ ಯಾವುದೇ ವ್ಯಕ್ತಿಯನ್ನು ನೆನಪು ಮಾಡುವುದಿಲ್ಲ. ಅವರ ಬುದ್ಧಿಯಲ್ಲಿ ಬೇರೆ ಯಾರೂ ಬರುವುದಿಲ್ಲ ಅಂದಾಗ ರಾತ್ರಿಯು ಪೂರ್ಣವಾಯಿತೆಂದು ಈಗ ತಂದೆಯು ತಿಳಿಸುತ್ತಾರೆ. ಇದು ಕರ್ಮಕ್ಷೇತ್ರದ ಮಂಟಪವಾಗಿದೆ, ಎಲ್ಲಿ ನಾವೆಲ್ಲಾ ಆತ್ಮರು ಶರೀರ ಧಾರಣೆ ಮಾಡಿಕೊಂಡು ಪಾತ್ರವನ್ನಭಿನಯಿಸುತ್ತಿದ್ದೇವೆ. 84 ಜನ್ಮಗಳ ಪಾತ್ರವನ್ನು ಮಾಡಬೇಕು ನಂತರ ಅದರಲ್ಲಿ ವರ್ಣವನ್ನು ತೋರಿಸುತ್ತಾರೆ ಏಕೆಂದರೆ 84 ಜನ್ಮಗಳ ಲೆಕ್ಕವೂ ಬೇಕಾಗಿದೆಯಲ್ಲವೆ. ಯಾವ-ಯಾವ ಜನ್ಮದಲ್ಲಿ, ಯಾವ ಕುಲದಲ್ಲಿ, ಯಾವ ವರ್ಣದಲ್ಲಿ ಬರುತ್ತಾರೆ? ಆದ್ದರಿಂದ ವಿರಾಟ ರೂಪವನ್ನು ತೋರಿಸುತ್ತಾರೆ. ಮೊಟ್ಟ ಮೊದಲು ಬ್ರಾಹ್ಮಣರಾಗಿದ್ದಾರೆ, ಕೇವಲ ಸತ್ಯಯುಗೀ ಸೂರ್ಯವಂಶದಲ್ಲಿ 84 ಜನ್ಮಗಳನ್ನು ಪಡೆಯಲು ಸಾಧ್ಯವಿಲ್ಲ. ಬ್ರಾಹ್ಮಣ ಕುಲದಲ್ಲಿ 84 ಜನ್ಮಗಳಿರುವುದಿಲ್ಲ. 84 ಜನ್ಮಗಳು ಭಿನ್ನ-ಭಿನ್ನ ರೂಪ, ದೇಶ, ಕಾಲದಲ್ಲಿ ಇರುತ್ತವೆ. ಸತ್ಯಯುಗ ಸತೋಪ್ರಧಾನದಿಂದ ನಂತರ ಕಲಿಯುಗ, ತಮೋಪ್ರಧಾನದಲ್ಲಿ ಅವಶ್ಯವಾಗಿ ಬರಬೇಕು. ಅದಕ್ಕಾಗಿ ಸಮಯವನ್ನು ಕೊಡಲಾಗುವುದು. ಮನುಷ್ಯರು 84 ಜನ್ಮಗಳನ್ನು ಹೇಗೆ ಪಡೆದುಕೊಳ್ಳುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವ ಮಾತುಗಳಾಗಿವೆ. ಮನುಷ್ಯರು ತಿಳಿದುಕೊಳ್ಳಲು ಸಾಧ್ಯವಿಲ್ಲ ಅಂದಾಗ ನೀವು ತಮ್ಮ ಜನ್ಮಗಳ ಬಗ್ಗೆ ತಿಳಿದುಕೊಂಡಿಲ್ಲ, ನಾನು ತಿಳಿಸಿಕೊಡುತ್ತೇನೆ ಎಂದು ತಂದೆಯು ಹೇಳುತ್ತಾರೆ. ತಂದೆಯು ತಿಳಿದುಕೊಳ್ಳುತ್ತಾರೆ, ನಾಟಕದನುಸಾರವಾಗಿ ಎಲ್ಲವನ್ನೂ ಅವಶ್ಯವಾಗಿ ಮರೆಯಬೇಕು.

ಈಗ ಇದು ಸಂಗಮಯುಗವಾಗಿದೆ, ಕಲಿಯುಗವು ಈಗ ಚಿಕ್ಕ ಮಗುವಾಗಿದೆ ಎಂದು ಪ್ರಪಂಚದವರು ಹೇಳುತ್ತಾರೆ. ಇದಕ್ಕೆ ಅಜ್ಞಾನ, ಘೋರ ಅಂಧಕಾರವೆಂದು ಹೇಳಲಾಗುತ್ತದೆ. ಹೇಗೆ ನಾಟಕದ ಪಾತ್ರಧಾರಿಗಳಿಗೆ ಈಗ ನಾಟಕವು ಪೂರ್ಣವಾಗುವುದರಲ್ಲಿ 10 ನಿಮಿಷವಿದೆ ಎಂದು ಗೊತ್ತಾಗುತ್ತದೆ. ಇದೂ ಸಹ ಚೈತನ್ಯ ನಾಟಕವಾಗಿದೆ. ಇದು ಯಾವಾಗ ಪೂರ್ಣವಾಗುತ್ತದೆ ಎಂದು ಮನುಷ್ಯರಿಗೆ ತಿಳಿದಿಲ್ಲ. ಮನುಷ್ಯರು ಘೋರ ಅಂಧಕಾರದಲ್ಲಿದ್ದಾರೆ. ತಂದೆಯು ಹೇಳುತ್ತಾರೆ - ಗುರು-ಗೋಸಾಯಿ, ವೇದ-ಶಾಸ್ತ್ರ, ಜಪ-ತಪ ಮುಂತಾದವುಗಳಿಂದ ನಾನು ಸಿಗುವುದಿಲ್ಲ. ಇವು ಭಕ್ತಿಮಾರ್ಗದ ಸಾಮಗ್ರಿಗಳಾಗಿವೆ. ನಾನು ನನ್ನ ಸಮಯದಲ್ಲಿಯೇ ಬರುತ್ತೇನೆ. ಯಾವಾಗ ರಾತ್ರಿಯನ್ನು ಹಗಲನ್ನಾಗಿ ಮಾಡಬೇಕಾಗಿದೆ ಅಥವಾ ಅನೇಕ ಧರ್ಮಗಳ ವಿನಾಶ ಒಂದು ಧರ್ಮದ ಸ್ಥಾಪನೆಯನ್ನು ಮಾಡಬೇಕು, ಯಾವಾಗ ಸೃಷ್ಟಿಚಕ್ರದ ಆಯಸ್ಸು ಪೂರ್ಣವಾಗುತ್ತದೆಯೋ ಆಗ ನಾನು ಸ್ವರ್ಗದ ಸ್ಥಾಪನೆಯನ್ನು ಮಾಡುತ್ತೇನೆ. ತಕ್ಷಣ ರಾಜ್ಯ ಪದವಿಯು ಪ್ರಾರಂಭವಾಗುತ್ತದೆ. ನಿಮಗೆ ತಿಳಿದಿದೆ, ನಾವು ಪುನಃ ಯಾವುದಾದರೂ ರಾಜರ ಬಳಿ ಜನ್ಮವನ್ನು ತೆಗೆದುಕೊಳ್ಳುತ್ತೇವೆ. ನಂತರ ನಿಧಾನ ನಿಧಾನವಾಗಿ ಹೊಸ ಪ್ರಪಂಚವಾಗುತ್ತದೆ. ಎಲ್ಲವನ್ನೂ ಹೊಸದನ್ನಾಗಿ ಮಾಡಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ - ಆತ್ಮದಲ್ಲಿ ವಿದ್ಯೆಯ ಸಂಸ್ಕಾರ ಹಾಗೂ ಕರ್ಮ ಮಾಡುವಂತಹ ಸಂಸ್ಕಾರವಿರುತ್ತದೆ, ಈಗ ನೀವು ಮಕ್ಕಳು ಆತ್ಮಾಭಿಮಾನಿಗಳಾಗಬೇಕು. ಮನುಷ್ಯರೆಲ್ಲರೂ ದೇಹಾಭಿಮಾನಿಗಳಾಗಿದ್ದಾರೆ. ಯಾವಾಗ ಆತ್ಮಾಭಿಮಾನಿಗಳಾಗುತ್ತಾರೆ ಆಗ ಪರಮಾತ್ಮನನ್ನು ನೆನಪು ಮಾಡಲು ಸಾಧ್ಯ. ಮೊಟ್ಟ ಮೊದಲು ಆತ್ಮಾಭಿಮಾನಿಯಾಗುವ ಮಾತಾಗಿದೆ. ನಾವು ಜೀವಾತ್ಮರಾಗಿದ್ದೇವೆಂದು ಎಲ್ಲರೂ ಹೇಳುತ್ತಾರೆ. ಆತ್ಮವು ಅವಿನಾಶಿಯಾಗಿದೆ, ಶರೀರವು ವಿನಾಶಿಯಾಗಿದೆ ಎಂದು ಹೇಳುತ್ತಾರೆ. ಆತ್ಮವು ಒಂದು ಶರೀರವನ್ನು ಬಿಟ್ಟು ಮತ್ತೊಂದನ್ನು ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಾರೆ. ಆದರೆ ಅದರಂತೆ ನಡೆಯುವುದಿಲ್ಲ. ಆತ್ಮವು ನಿರಾಕಾರಿ ಪ್ರಪಂಚದಿಂದ ಬರುತ್ತದೆ, ಅದರಲ್ಲಿ ಅವಿನಾಶಿ ಪಾತ್ರವಿದೆ ಎಂದು ಈಗ ನಿಮಗೆ ತಿಳಿದಿದೆ. ಇದನ್ನು ತಂದೆಯೇ ಕುಳಿತು ತಿಳಿಸಿಕೊಡುತ್ತಾರೆ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತದೆ. ನಾಟಕವು ಪುನಃ ಪುನರಾವರ್ತನೆಯಾಗುತ್ತದೆ ನಂತರ ಕ್ರೈಸ್ತ ಮುಂತಾದವರೆಲ್ಲರೂ ಬರಬೇಕು. ತಮ್ಮ-ತಮ್ಮ ಸಮಯದಲ್ಲಿ ಬಂದು ಧರ್ಮ ಸ್ಥಾಪನೆಯನ್ನು ಮಾಡುತ್ತಾರೆ. ಈಗ ಇದು ಸಂಗಮಯುಗೀ ಬ್ರಾಹ್ಮಣರ ಧರ್ಮವಾಗಿದೆ. ಅವರು ಪೂಜಾರಿ ಬ್ರಾಹ್ಮಣರಾಗಿದ್ದಾರೆ, ನೀವು ಪೂಜ್ಯರಾಗಿದ್ದೀರಿ. ನೀವೆಂದೂ ಪೂಜೆಯನ್ನು ಮಾಡುವುದಿಲ್ಲ ಮನುಷ್ಯರು ಪೂಜೆಯನ್ನು ಮಾಡುತ್ತಾರೆ ಅಂದಾಗ ತಂದೆಯು ತಿಳಿಸುತ್ತಾರೆ - ಇದು ಎಷ್ಟೊಂದು ದೊಡ್ಡ ವಿದ್ಯೆಯಾಗಿದೆ. ಎಷ್ಟೊಂದು ಧಾರಣೆ ಮಾಡಿಕೊಳ್ಳಬೇಕಾಗಿದೆ. ವಿಸ್ತಾರದಲ್ಲಿ ಧಾರಣೆ ಮಾಡಿಕೊಳ್ಳುವುದರಲ್ಲಿ ನಂಬರ್ವಾರ್ ಇದ್ದಾರೆ. ಸಾರ ರೂಪದಲ್ಲಿ ತಂದೆ ರಚಯಿತ ಮತ್ತು ಇವರು (ಬ್ರಹ್ಮಾ) ರಚನೆಯಾಗಿದ್ದಾರೆಂದು ತಿಳಿಸುತ್ತಾರೆ. ಒಳ್ಳೆಯದು - ಇವರು ತಂದೆಯಾಗಿದ್ದಾರೆಂದು ತಿಳಿದುಕೊಳುತ್ತೀರಲ್ಲವೆ. ತಂದೆಯನ್ನು ಎಲ್ಲಾ ಭಕ್ತರು ನೆನಪು ಮಾಡುತ್ತಾರೆ. ಭಕ್ತರೂ ಇದ್ದಾರೆ, ಮಕ್ಕಳೂ ಇದ್ದಾರೆ. ಭಕ್ತರು ತಂದೆಯೆಂದು ಕರೆಯುತ್ತಾರೆ. ಒಂದುವೇಳೆ ಭಕ್ತರೇ ಭಗವಂತನಾಗಿ ಬಿಟ್ಟರೆ ತಂದೆಯೆಂದು ಯಾರನ್ನು ಕರೆಯುತ್ತಾರೆ! ಇದನ್ನೂ ತಿಳಿದುಕೊಂಡಿಲ್ಲ. ತಮ್ಮನ್ನು ತಾವೇ ಭಗವಂತನೆಂದು ತಿಳಿದುಕೊಳುತ್ತಾರೆ. ನಾಟಕದನುಸಾರ ಆ ರೀತಿ ಸ್ಥಿತಿ ಆದಾಗ, ಭಾರತವು ಪೂರ್ತಿ ಅಂತಿಮ ಸ್ಥಿತಿಯಲ್ಲಿ ಹೋದಾಗ ತಂದೆಯು ಬರುತ್ತಾರೆ ಎಂದು ತಂದೆಯು ಹೇಳುತ್ತಾರೆ. ಭಾರತವು ಯಾವಾಗ ಹಳೆಯದಾಗುತ್ತದೆಯೋ ಆಗ ಪುನಃ ಹೊಸದಾಗುತ್ತದೆ. ಹೊಸ ಭಾರತವು ಯಾವಾಗ ಇತ್ತೋ ಆಗ ಯಾವುದೇ ಧರ್ಮವಿರುವುದಿಲ್ಲ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಈಗ ಹಳೆಯ ಭಾರತವಾಗಿದೆ, ಇದಕ್ಕೆ ನರಕವೆಂದು ಹೇಳಲಾಗುತ್ತದೆ. ಅಲ್ಲಿ ಪೂಜ್ಯರಿದ್ದರು, ಈಗ ಪೂಜಾರಿಗಳಾಗಿದ್ದಾರೆ. ಪೂಜ್ಯ ಮತ್ತು ಪೂಜಾರಿಯ ಅಂತರವನ್ನು ತಿಳಿಸಲಾಗಿದೆ. ನಾವು ಆತ್ಮರೇ ಪೂಜ್ಯರು ಮತ್ತು ನಾವು ಆತ್ಮರೇ ಪೂಜಾರಿಗಳಾಗುತ್ತೇವೆ, ನಾವೇ ಜ್ಞಾನಿ ಆತ್ಮರು, ನಾವು ಆತ್ಮರೇ ಪೂಜಾರಿಗಳಾಗುತ್ತೇವೆ. ತಾವೇ ಪೂಜ್ಯರು ತಾವೇ ಪೂಜಾರಿ ಎಂದು ಭಗವಂತನಿಗೆ ಹೇಳುವುದಿಲ್ಲ, ಲಕ್ಷ್ಮೀ-ನಾರಾಯಣರಿಗೆ ಹೇಳುತ್ತಾರೆ ಅಂದಾಗ ಹೇಗೆ ಪೂಜ್ಯರು ನಂತರ ಪೂಜಾರಿಗಳಾಗುತ್ತಾರೆ ಎನ್ನುವುದು ಬುದ್ಧಿಯಲ್ಲಿ ಬರಬೇಕು.

ತಂದೆಯು ಹೇಳುತ್ತಾರೆ - ಕಲ್ಪದ ಮೊದಲೂ ನಾನು ಇದೇ ಜ್ಞಾನವನ್ನು ಕೊಟ್ಟಿದ್ದೆನು, ಕಲ್ಪ-ಕಲ್ಪದಲ್ಲಿಯೂ ಕೊಡುತ್ತೇನೆ. ನಾನು ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ನನ್ನ ಹೆಸರೇ ಪತಿತ-ಪಾವನ ಆಗಿದೆ. ಯಾವಾಗ ಇಡೀ ಪ್ರಪಂಚವು ಪತಿತವಾಗುತ್ತದೆಯೋ ಆಗ ನಾನು ಬರುತ್ತೇನೆ. ನೋಡಿ ಇದು ವೃಕ್ಷವಾಗಿದೆ, ಇದರಲ್ಲಿ ಬ್ರಹ್ಮಾರವರು ಮೇಲೆ ನಿಂತಿದ್ದಾರೆ. ಮೊದಲು ಆದಿಯಲ್ಲಿ ತೋರಿಸುತ್ತಾರೆ. ಈಗ ಎಲ್ಲರೂ ಅಂತಿಮದಲ್ಲಿದ್ದಾರೆ. ಹೇಗೆ ಬ್ರಹ್ಮ ಅಂತಿಮದಲ್ಲಿ ಪ್ರತ್ಯಕ್ಷವಾಗುತ್ತಾರೆಯೋ ಹಾಗೆಯೇ ಎಲ್ಲರೂ ಅಂತಿಮದಲ್ಲಿಯೇ ಬರುತ್ತಾರೆ. ಹೇಗೆ ಕ್ರಿಸ್ತನು ಇದ್ದನು ನಂತರ ಅವನು ಅಂತಿಮದಲ್ಲಿ ಬರುತ್ತಾರೆ ಆದರೆ ನಾವು, ಅಂತಿಮ ಅಂದರೆ ರೆಂಬೆಯ ಅಂತಿಮದಲ್ಲಿ ಅವರ ಚಿತ್ರವಿರುವುದಿಲ್ಲ. ಆದರೆ ತಿಳಿಸಬಹುದಾಗಿದೆ ಹೇಗೆ ಈ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುವವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ. ಈಗ ವೃಕ್ಷದ ಅಂತಿಮದಲ್ಲಿ ನಿಂತಿದ್ದಾರೆ. ಕ್ರಿಸ್ತನು ಬಂದು ಕ್ರಿಶ್ಚಿಯನ್ ಧರ್ಮದ ಪ್ರಜಾಪಿತನಾಗಿದ್ದಾರೆ. ಹೇಗೆ ಈ ಪ್ರಜಾಪಿತ ಬ್ರಹ್ಮಾರವರು ಇದ್ದಾರೆಯೋ ಹಾಗೆಯೇ ಪ್ರಜಾಪಿತ ಕ್ರೈಸ್ತ, ಪ್ರಜಾಪಿತ ಬುದ್ಧ, ಇವರೆಲ್ಲರೂ ಧರ್ಮದ ಸ್ಥಾಪನೆ ಮಾಡುವವರಾಗಿದ್ದಾರೆ. ಸನ್ಯಾಸಿಗಳಿಗೆ ಶಂಕರಾಚಾರ್ಯರನ್ನು ತಂದೆಯೆಂದು ಹೇಳಲಾಗುತ್ತದೆ. ಅವರು ಗುರುವೆಂದು ಹೇಳುತ್ತಾರೆ. ನಮ್ಮ ಗುರು ಶಂಕರಾಚಾರ್ಯರಾಗಿದ್ದರು ಎಂದು ಹೇಳುತ್ತಾರೆ ಅಂದಾಗ ಯಾರು ವೃಕ್ಷದ ಆದಿಯಲ್ಲಿ ನಿಂತಿದ್ದಾರೆಯೋ ಅವರೇ ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಅಂತಿಮದಲ್ಲಿ ಬರುತ್ತಾರೆ. ಈಗ ಎಲ್ಲರೂ ತಮೋಪ್ರಧಾನ ಸ್ಥಿತಿಯಲ್ಲಿದ್ದಾರೆ. ಇವರೂ ಬಂದು ತಿಳಿದುಕೊಳ್ಳುತ್ತಾರೆ. ಅಂತಿಮದಲ್ಲಿ ಅವಶ್ಯವಾಗಿ ನಮಸ್ತೆ ಮಾಡಲು ಬರುತ್ತಾರೆ. ಅವರಿಗೂ ಬೇಹದ್ದಿನ ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತೇವೆ. ಬೇಹದ್ದಿನ ತಂದೆಯು ಎಲ್ಲರಿಗಾಗಿ ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಡಿ ಎಂದು ಹೇಳುತ್ತಾರೆ. ಈ ಜ್ಞಾನವು ಪ್ರತಿಯೊಂದು ಧರ್ಮದವರಿಗಾಗಿಯೇ ಇದೆ. ಈ ಎಲ್ಲಾ ದೇಹದ ಧರ್ಮಗಳನ್ನು ಬಿಟ್ಟು ತಮ್ಮನ್ನು ಅಶರೀರಿ ಎಂದು ತಿಳಿದು ತಂದೆಯನ್ನು ನೆನಪು ಮಾಡಿ. ಎಷ್ಟು ನೆನಪು ಮಾಡುತ್ತೀರೋ, ಜ್ಞಾನದ ಧಾರಣೆ ಮಾಡಿಕೊಳ್ಳುತ್ತೀರೋ ಅಷ್ಟೂ ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುತ್ತೀರಿ. ಕಲ್ಪದ ಮೊದಲೂ ಯಾರೂ ಎಷ್ಟು ಜ್ಞಾನವನ್ನು ತೆಗೆದುಕೊಂಡಿದ್ದರೋ ಅಷ್ಟೇ ಅವಶ್ಯವಾಗಿ ಬಂದು ಪಡೆಯುತ್ತಾರೆ.

ನಾವು ವಿಶ್ವದ ರಚಯಿತ ತಂದೆಗೆ ಮಕ್ಕಳಾಗಿದ್ದೇವೆ, ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ರಾಜಯೋಗವನ್ನು ಕಲಿಸುತ್ತಿದ್ದಾರೆ ಎಂದು ನೀವು ಮಕ್ಕಳಿಗೆ ಎಷ್ಟೊಂದು ನಶೆಯಿರಬೇಕು. ಎಷ್ಟು ಸಹಜವಾದ ಮಾತಾಗಿದೆ ಆದರೆ ನಡೆಯುತ್ತಾ-ನಡೆಯುತ್ತಾ ಕೆಲವು ಮಾತುಗಳಲ್ಲಿ ಸಂಶಯ ಬರುತ್ತದೆ, ಅದಕ್ಕೆ ಮಾಯೆಯ ಬಿರುಗಾಳಿ ಅಥವಾ ಪರೀಕ್ಷೆ ಎಂದು ಹೇಳಲಾಗುತ್ತದೆ. ಭಲೆ ಗೃಹಸ್ಥ ವ್ಯವಹಾರದಲ್ಲಿರಿ ಎಂದು ತಂದೆಯು ಹೇಳುತ್ತಾರೆ. ಎಲ್ಲರನ್ನು ಮನೆ ಬಿಡಿಸಿದರೆ ಎಲ್ಲರೂ ಇಲ್ಲಿಗೆ ಬಂದು ಕುಳಿತುಕೊಳ್ಳಬೇಕಾಗುತ್ತದೆ, ವ್ಯವಹಾರವನ್ನೂ ಸಹ ಮಾಡುತ್ತಿರಬೇಕು. ನಂತರ ಸಮಯದಲ್ಲಿ ಸವೀಸ್ ಮಾಡಲು ತೊಡಗಬೇಕು. ಯಾರು ಕೆಲಸ ಮುಂತಾದವನ್ನು ಬಿಡುತ್ತಾರೆಯೋ ಅವರನ್ನು ಸರ್ವೀಸ್ನಲ್ಲಿ ತೊಡಗಿಸಲಾಗುತ್ತದೆ. ಕೆಲವರು ಚರ್ಚೆ ಮಾಡುತ್ತಾರೆ, ಇನ್ನೂ ಕೆಲವರು ಶ್ರೀಮತದಲ್ಲಿ ಕಲ್ಯಾಣವಿದೆ ಎಂದು ತಿಳಿದುಕೊಳ್ಳುತ್ತಾರೆ. ಅವಶ್ಯವಾಗಿ ಶ್ರೀಮತದಂತೆ ನಡೆಯಲೇಬೇಕು. ಶ್ರೀಮತ ಸಿಗುತ್ತದೆ ಆದರೆ ಅದರಲ್ಲಿ ಉದಾಸೀನ ಮಾಡಬಾರದು. ತಂದೆಯ ಪ್ರತಿಯೊಂದು ಮಾತಿನಲ್ಲಿಯೂ ಕಲ್ಯಾಣಕಾರಿಯಾಗಿದ್ದಾರೆ, ಆದರೆ ಮಾಯೆಯು ಬಹಳ ಚಂಚಲ ಮಾಡುತ್ತದೆ. ಕೆಲವರು ಈ ರೀತಿಯಿರುವುದರಿಂದ ತಿಳಿದುಕೊಳ್ಳುತ್ತಾರೆ - ಕೆಲಸ ಮಾಡಲೇ ಅಥವಾ ವಿವಾಹವಾಗಲೇ? ಬುದ್ಧಿಯಲ್ಲಿ ಚಕ್ರವಂತೂ ತಿರುಗುತ್ತಿರುತ್ತದೆ ನಂತರ ವಿದ್ಯೆಯನ್ನು ಬಿಟ್ಟು ಬಿಡುತ್ತಾರೆ. ಕೆಲವರು ತಂದೆಯ ಜೊತೆ ನಾವು ಶ್ರೀಮತದಂತೆ ಅವಶ್ಯವಾಗಿ ನಡೆಯುತ್ತೇವೆಂದು ಪ್ರತಿಜ್ಞೆ ಮಾಡುತ್ತಾರೆ. ಅದು ಅಸುರೀ ಮತವಾಗಿದೆ, ಇದು ಈಶ್ವರೀಯ ಮತವಾಗಿದೆ. ಆಸುರೀ ಮತದಂತೆ ನಡೆಯುವುದರಿಂದ ಬಹಳ ಕಠಿಣ ಶಿಕ್ಷೆಯನ್ನು ಭೋಗಿಸಬೇಕಾಗುತ್ತದೆ. ಆದರೆ ಪ್ರಪಂಚದವರು ಗರುಡ ಪುರಾಣದಲ್ಲಿ ಹೆದರಿಸುವಂತಹ ರೋಚಕ ಮಾತುಗಳನ್ನು ಬರೆದಿದ್ದಾರೆ. ಏಕೆಂದರೆ ಹೆಚ್ಚು ಪಾಪವನ್ನು ಮಾಡಬಾರದು ಎಂದು ಬರೆದಿದ್ದಾರೆ. ಆದರೂ ಸಹ ಸುಧಾರಣೆಯಾಗುವುದಿಲ್ಲ. ಇವೆಲ್ಲಾ ವಿಚಾರಗಳನ್ನು ತಂದೆಯೇ ತಿಳಿಸುತ್ತಾರೆ. ಜ್ಞಾನಸಾಗರನಂತೂ ಯಾವುದೇ ಮನುಷ್ಯನಾಗಲು ಸಾಧ್ಯವಿಲ್ಲ. ಜ್ಞಾನಸಾಗರ, ಜ್ಞಾನಪೂರ್ಣ ತಂದೆಯೇ ತಿಳಿಸುತ್ತಾರೆ. ಯಾರು ತಿಳಿದುಕೊಳ್ಳುತ್ತಾರೆಯೋ ಅವರೇ ನಂತರ ಅನ್ಯರಿಗೆ ತಿಳಿಸುತ್ತಾರೆ. ಇದು ಸರಿಯಾದ ಮಾತುಗಳಾಗಿವೆ ಆದರೂ ನಾವು ಪುನಃ ಬರುತ್ತೇವೆಂದು ಹೇಳುತ್ತಾರೆ. ನಂತರ ಪ್ರದರ್ಶನಿಯಿಂದ ಹೊರಗೆ ಹೋದರೆ ಅಲ್ಲಿಯೇ ಹೊರಟು ಹೋಗುತ್ತಾರೆ. ಹೌದು 2-3 ಜನರು ಬಂದರೂ ಸಹ ಒಳ್ಳೆಯದು. ಏಕೆಂದರೆ ಪ್ರಜೆಗಳಂತೂ ಬಹಳಷ್ಟು ಆಗುತ್ತಿರುತ್ತಾರೆ. ಆಸ್ತಿಯನ್ನು ಪಡೆಯುವ ಯೋಗ್ಯರು ಎಲ್ಲೋ ಕೆಲವರು ಬರುತ್ತಾರೆ. ರಾಜ-ರಾಣಿಗೆ 1-2 ಮಕ್ಕಳಿರುತ್ತಾರೆ. ಅವರಿಗೆ ರಾಜ ಕುಲದವರೆಂದು ಹೇಳುತ್ತಾರೆ. ಪ್ರಜೆಗಳಂತೂ ಬಹಳಷ್ಟಿರುತ್ತಾರೆ. ತಕ್ಷಣ ಪ್ರಜೆಗಳಾಗುತ್ತಾರೆ, ರಾಜರಾಗುವುದಿಲ್ಲ. 16,108 ತ್ರೇತಾಯುಗದ ಅಂತಿಮದಲ್ಲಾಗುತ್ತಾರೆ. ಪ್ರಜೆಗಳು ಅಂದಾಜು ಕೋಟ್ಯಾಂತರ ಮಂದಿಯಿರುತ್ತಾರೆ. ಇದನ್ನು ತಿಳಿದುಕೊಳ್ಳಲು ಬಹಳ ವಿಶಾಲಬುದ್ಧಿ ಬೇಕು. ನಾವು ಪಾರಲೌಕಿಕ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ನನ್ನೊಬ್ಬನನ್ನೇ ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು ತಂದೆಯ ಆದೇಶವಾಗಿದೆ. ಮನ್ಮನಾಭವ ಮತ್ತು ಮಧ್ಯಾಜೀಭವ. ಸ್ವರ್ಗವು ವಿಷ್ಣು ಪುರಿಯಾಗಿದೆ, ಇದು ರಾವಣ ಪುರಿಯಾಗಿದೆ. ಶಾಂತಿಧಾಮ, ಸುಖಧಾಮ ಮತ್ತು ದುಃಖಧಾಮ ಇದೆಲ್ಲವನ್ನೂ ತಂದೆಯೇ ತಿಳಿಸುತ್ತಾರೆ. ತಂದೆಯನ್ನು ನೆನಪು ಮಾಡುವುದರಿಂದ ಅಂತಮತಿ ಸೋ ಗತಿ ಯಾಗುತ್ತದೆ. ಭಕ್ತಿಮಾರ್ಗದಲ್ಲಿ ಕೃಷ್ಣನನ್ನು ನೆನಪು ಮಾಡುತ್ತಾರೆ ಆದರೆ ಕೃಷ್ಣಪುರಿಗೆ ಹೋಗಲು ಸಾಧ್ಯವಿಲ್ಲ. ಆದರೆ ಧ್ಯಾನದಲ್ಲಿ ಕೃಷ್ಣ ಪುರಿಗೆ ಹೋಗಿ ರಾಸಲೀಲೆ ಮುಂತಾದವನ್ನು ಮಾಡಿಕೊಂದು ಹಿಂತಿರುಗಬಹುದು. ಅದು ನೌಧಾಭಕ್ತಿಯ ಪ್ರಭಾವವಾಗಿದೆ, ಅದರಿಂದ ಅವರಿಗೆ ಸಾಕ್ಷಾತ್ಕಾರವಾಗುತ್ತದೆ, ಮನೋಕಾಮನೆಯು ಪೂರ್ಣವಾಗುತ್ತದೆ. ಬಾಕಿ ಸತ್ಯಯುಗವಂತೂ ಸತ್ಯಯುಗವೇ ಆಗಿದೆ ಆದರೆ ಅಲ್ಲಿಗೆ ಹೋಗಲು ನೌಧಾ ವಿದ್ಯೆಯು ಬೇಕಾಗಿದೆ. ನೌಧಾ ಭಕ್ತಿಯಲ್ಲ. ವಿದ್ಯೆಯನ್ನು ಓದುತ್ತಿರಬೇಕು, ಮುರುಳಿಯನ್ನು ಅವಶ್ಯವಾಗಿ ಓದುತ್ತಿರಬೇಕು, ಸೇವಾಕೇಂದ್ರಕ್ಕೆ ಅವಶ್ಯವಾಗಿ ಹೋಗಬೇಕು ಇಲ್ಲದಿದ್ದರೆ ಮುರುಳಿಯನ್ನು ತೆಗೆದುಕೊಂಡು ಮನೆಯಲ್ಲಿ ಓದಬೇಕು. ಕೆಲವರಿಗೆ ಸೇವಾಕೇಂದ್ರಗಳಿಗೆ ಹೋಗಿ ಮುರುಳಿಯನ್ನು ಕೇಳಿ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿರುತ್ತದೆ ಎಲ್ಲರಿಗೂ ಒಂದೇ ಮಾತನ್ನು ಹೇಳಲು ಸಾಧ್ಯವಿಲ್ಲ. ದೃಷ್ಟಿಯನ್ನು ಕೊಟ್ಟು ತಿನ್ನಿ ಎಂದು ಎಲ್ಲರಿಗೂ ತಂದೆಯು ಹೇಳುವುದಿಲ್ಲ. ಆದರೆ ತಂದೆಯು ಹೇಳುತ್ತಾರೆ - ಬಹಳ ಕಷ್ಟದ ಸಮಯದಲ್ಲಿ, ಏನೂ ಮಾಡಲು ಸಾಧ್ಯವಿಲ್ಲದಿದ್ದಾಗ ದೃಷ್ಟಿಯನ್ನು ಕೊಟ್ಟು ಊಟ ಮಾಡಿ ಬಾಕಿ ಎಲ್ಲರಿಗೂ ಆ ರೀತಿ ಹೇಳಲಾಗುವುದಿಲ್ಲ. ಹೇಗೆ ತಂದೆಯು ಕೆಲವರಿಗೆ ಬಯಸ್ಕೋಪ್ಗೆ ಹೋಗಿ ಎಂದು ಹೇಳುತ್ತಾರೆ, ಆದರೆ ಈ ರೀತಿ ಎಲ್ಲರಿಗೂ ಹೇಳುವುದಿಲ್ಲ. ಯಾರ ಜೊತೆಯಲ್ಲಿಯಾದರೂ ಹೋಗುವಾಗ ಅವರಿಗೆ ಜ್ಞಾನವನ್ನು ಕೊಡಬೇಕು. ಇದು ಅಲ್ಪಕಾಲದ ನಾಟಕವಾಗಿದೆ. ಇದು ಬೇಹದ್ದಿನ ನಾಟಕವಗಿದೆ. ಅಂದಾಗ ಸರ್ವೀಸ್ ಮಾಡಬೇಕಾಗಿದೆ. ಕೇವಲ ನೋಡುವುದಕ್ಕಾಗಿ ಹೋಗುವುದಲ್ಲ. ಸ್ಮಶಾನದಲ್ಲಿಯೂ ಸಹ ಹೋಗಿ ಸರ್ವೀಸ್ ಮಾಡಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ತಂದೆಯ ಪ್ರತಿಯೊಂದು ಮಾತಿನಲ್ಲಿ ಕಲ್ಯಾಣವಿದೆ ಎಂಬುದನ್ನು ತಿಳಿದು ನಿಶ್ಚಯಬುದ್ಧಿಯವರಾಗಿ ನಡೆಯಬೇಕು, ಎಂದೂ ಸಹ ಸಂಶಯದಲ್ಲಿ ಬರಬಾರದು. ಶ್ರೀಮತವನ್ನು ಯಥಾರ್ಥ ರೀತಿಯಲ್ಲಿ ತಿಳಿಯಬೇಕಾಗಿದೆ.

2. ಆತ್ಮಾಭಿಮಾನಿಗಳಾಗಿರುವ ಅಭ್ಯಾಸ ಮಾಡಬೇಕಾಗಿದೆ. ನಾಟಕದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯ ಅನಾದಿ ಪಾತ್ರವಿದೆ. ಆದ್ದರಿಂದ ಸಾಕ್ಷಿಯಾಗಿ ನೋಡುವಂತಹ ಅಭ್ಯಾಸ ಮಾಡಬೇಕಾಗಿದೆ.

ವರದಾನ:
ಪ್ರತಿಯೊಬ್ಬರ ವಿಶೇಷತೆಗಳನ್ನು ನೋಡುತ್ತಾ ಅವರನ್ನು ಸೇವೆಯಲ್ಲಿ ತೊಡಗಿಸುವಂತಹ ಆಶೀರ್ವಾದಕ್ಕೆ ಪಾತ್ರ ಭವ.

ಯಾವ ರೀತಿ ಬಾಪ್ದಾದಾರವರಿಗೆ ಪ್ರತಿಯೊಂದು ಮಗುವಿನ ವಿಶೇಷತೆಯ ಮೇಲೆ ಪ್ರೀತಿಯಿದೆ ಮತ್ತು ಪ್ರತಿಯೊಬ್ಬರಲ್ಲಿ ಯಾವುದಾದರೂ ಒಂದು ವಿಶೇಷತೆಯಿದೆ. ಆದ್ದರಿಂದ ಎಲ್ಲರೊಂದಿಗೆ ಪ್ರೀತಿಯಿದೆ. ಅದೇ ರೀತಿ ನೀವೂ ಸಹಾ ಪ್ರತಿಯೊಬ್ಬರಲ್ಲಿ ವಿಶೇಷತೆಗಳನ್ನೇ ನೋಡಿ. ಹೇಗೆ ಹಂಸ ರತ್ನಗಳನ್ನೇ ಆರಿಸುತ್ತದೆ, ಕಲ್ಲುಗಳನ್ನು ಬಿಡುತ್ತದೆ ಅದೇ ರೀತಿ ನೀವು ಹೋಲಿ ಹಂಸಗಳಾಗಿರುವಿರಿ, ನಿಮ್ಮ ಕೆಲಸವೇ ಆಗಿದೆ ಪ್ರತಿಯೊಬ್ಬರಲ್ಲಿ ವಿಶೇಷತೆಯನ್ನು ನೋಡುವುದು ಮತ್ತು ಅವರ ವಿಶೇಷತೆಗಳನ್ನು ಸೇವೆಯಲ್ಲಿ ತೊಡಗಿಸುವುದು. ಅವರನ್ನು ವಿಶೇಷತೆಗಳ ಉಮ್ಮಂಗದಲ್ಲಿ ತಂದು, ಅವರ ಮೂಲಕ ಅವರ ವಿಶೇಷತೆಯನ್ನು ಸೇವೆಯಲ್ಲಿ ತೊಡಗಿಸಿದರೆ ಅವರಿಂದ ಆಶೀರ್ವಾದ ನಿಮಗೆ ಸಿಗುವುದು. ಮತ್ತು ಅವರು ಏನು ಸೇವೆ ಮಾಡುತ್ತಾರೆ ಅದರ ಒಂದು ಭಾಗ ಸಹಾ ನಿಮಗೆ ಸಿಗುವುದು.

ಸ್ಲೋಗನ್:
ಬಾಪ್ದಾದಾರವರ ಜೊತೆ ಈ ರೀತಿ ಕಂಭೈಂಡ್ ಆಗಿರಿ ಹೇಗೆ ನಿಮ್ಮ ಮೂಲಕ ಅನ್ಯರಿಗೆ ತಂದೆಯ ನೆನಪು ಬರಬೇಕು.