21.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಶುಭ ಕಾರ್ಯದಲ್ಲಿ ತಡ ಮಾಡಬಾರದು, ತಮ್ಮ ಸಹೋದರ-ಸಹೋದರಿಯರನ್ನು ಮೋಸ ಹೋಗುವುದರಿಂದ ರಕ್ಷಿಸಬೇಕು, ಜ್ಞಾನದ ಧ್ವನಿ ಮಾಡಿ ತಮ್ಮ ಸಮಾನರನ್ನಾಗಿ ಮಾಡಬೇಕಾಗಿದೆ”

ಪ್ರಶ್ನೆ:
ಯಾವ ಮಾತಿನ ಅನರ್ಥವಾಗುವುದರಿಂದ ಭಾರತವು ಕವಡೆಯ ಸಮಾನವಾಗಿ ಬಿಟ್ಟಿದೆ?

ಉತ್ತರ:
ಯಾರು ಗೀತೆಯ ಸ್ವಾಮಿ(ಭಗವಂತ)ಯನ್ನು ಮರೆತಿರುವುದೇ ಎಲ್ಲದಕ್ಕಿಂತ ದೊಡ್ಡ ಅನರ್ಥವಾಗಿದೆ – ಗೀತಾ ಜ್ಞಾನದಿಂದ ಜನ್ಮ ಪಡೆಯುವಂತಹ ಮಗನಿಗೆ(ಕೃಷ್ಣ) ಸ್ವಾಮಿ ಎಂದು ಹೇಳಲಾಗಿದೆ. ಈ ಒಂದು ಅನರ್ಥದ ಕಾರಣ ಎಲ್ಲರೂ ತಂದೆಯಿಂದ ವಿಮುಖರಾಗಿದ್ದಾರೆ. ಭಾರತವು ಕವಡೆಯ ಸಮಾನವಾಗಿ ಬಿಟ್ಟಿದೆ. ಈಗ ನೀವು ಮಕ್ಕಳು ತಂದೆಯ ಸಮ್ಮುಖದಲ್ಲಿ ಸತ್ಯ ಗೀತಾ ಜ್ಞಾನವನ್ನು ಕೇಳುತ್ತಿದ್ದೀರಿ. ಯಾವ ಗೀತಾ ಜ್ಞಾನದಿಂದಲೇ ದೇವಿ-ದೇವತಾ ಧರ್ಮವು ಸ್ಥಾಪನೆಯಾಗುತ್ತದೆ, ನೀವು ಶ್ರೀ ಕೃಷ್ಣನ ಸಮಾನರಾಗುತ್ತೀರಿ.

ಗೀತೆ:
ಯಾರು ಈ ಎಲ್ಲಾ ಆಟವನ್ನು ರಚಿಸಿದರು

ಓಂ ಶಾಂತಿ.
ನಮಗೆ ಸ್ವರ್ಗದಲ್ಲಿ ಬಹಳ ಅಪರಮಪಾರ ಸುಖವಿತ್ತು ಎಂದು ಬ್ರಾಹ್ಮಣ ಕುಲಭೂಷಣ ಮಕ್ಕಳು ತಿಳಿದುಕೊಂಡಿದ್ದೀರಿ. ನಾವು ಬಹಳ ಖುಷಿಯಿಂದ ಇದ್ದೆವು, ನಾವೂ ಜೀವಾತ್ಮರು ಸ್ವರ್ಗದಲ್ಲಿ ಬಹಳ ಮಸ್ತಿಯಲ್ಲಿ(ಸುಖದಲ್ಲಿ)ದ್ದೆವು ಮತ್ತೆ ಏನಾಯಿತು? ಬಣ್ಣ ರೂಪದ ಮಾಯೆಯು ಬಂದು ಹಾಳು ಮಾಡಿತು.ವಿಕಾರಗಳ ಕಾರಣದಿಂದಲೇ ಇದನ್ನು ನರಕವೆಂದು ಹೇಳಲಾಗುತ್ತದೆ. ಎಲ್ಲವೂ ನರಕವಾಗಿದೆ. ಈಗ ಯಾವ ಭ್ರಮರಿಯ ಉದಾಹರಣೆಯನ್ನು ಕೊಡಲಾಗುತ್ತದೆ, ಭ್ರಮರಿ ಹಾಗೂ ಬ್ರಾಹ್ಮಣ ಇಬ್ಬರ ಕೆಲಸವೂ ಒಂದೇ ಆಗಿದೆ. ಭ್ರಮರಿಯ ಉದಾಹರಣೆಯು ನಿಮ್ಮ ಮೇಲೆ ಇದೆ. ಭ್ರಮರಿಯು ಕೀಟಗಳನ್ನು ತೆಗೆದುಕೊಂಡು ಹೋಗುತ್ತದೆ, ಒಂದು ಮನೆಯನ್ನು ಮಾಡಿ ಅದರಲ್ಲಿ ಕೀಟವನ್ನು ಇಡುತ್ತದೆ. ಇದೂ ಸಹ ನರಕವಾಗಿದೆ. ಇಲ್ಲಿ ಎಲ್ಲರೂ ಕೀಟಗಳಾಗಿದ್ದಾರೆ ಆದರೆ ಎಲ್ಲಾ ಕೀಟಗಳು (ಆತ್ಮ) ದೇವಿ-ದೇವತಾ ಧರ್ಮದವರಲ್ಲ. ಯಾವುದೇ ಧರ್ಮದವರಾಗಲಿ ಎಲ್ಲರೂ ಸಹ ನರಕವಾಸಿ ಕೀಟಗಳಾಗಿದ್ದಾರೆ. ಈಗ ದೇವಿ-ದೇವತಾ ಧರ್ಮದ ಕೀಟಗಳು ಯಾರಾಗಿದ್ದಾರೆ, ಇದು ಹೇಗೆ ತಿಳಿಯಲು ಸಾಧ್ಯ ಇವರು ಬ್ರಹ್ಮಾವಂಶಿ ಬ್ರಾಹ್ಮಣರು ಯಾರು ಕುಳಿತು ಭೂಂ, ಭೂಂ (ಜ್ಞಾನ ಧ್ವನಿ) ಮಾಡುತ್ತಾರೆ. ಯಾರು ದೇವತಾ ಧರ್ಮದವರಿರುತ್ತಾರೆಯೋ ಅವರೇ ಉಳಿಯಲು ಸಾಧ್ಯ. ಯಾರು ಇಲ್ಲವೋ ಅವರು ಉಳಿಯಲು ಸಾಧ್ಯವಿಲ್ಲ. ಏಕೆಂದರೆ ಎಲ್ಲರೂ ನರಕ ವಾಸಿಗಳಾಗಿದ್ದಾರೆ. ಸನ್ಯಾಸಿಗಳೂ ಹೇಳುತ್ತಾರೆ - ನರಕದ ಸುಖ ಕಾಗವಿಷ್ಟ ಸಮಾನವಾದದ್ದಾಗಿದೆ. ಅವರಿಗೆ ಸ್ವರ್ಗದಲ್ಲಿ ಅಪಾರವಾದ ಸುಖವಿರುತ್ತದೆ ಎಂಬುದು ತಿಳಿದಿಲ್ಲ. ಇಲ್ಲಿಯಾದರೂ ಶೇ. 5ರಷ್ಟು ಸುಖ ಮತ್ತು ಶೇ.95ರಷ್ಟು ದುಃಖವಿರುತ್ತದೆ. ಇದನ್ನು ಯಾರೂ ಸ್ವರ್ಗವೆಂದು ಹೇಳಲು ಸಾಧ್ಯವಿಲ್ಲ. ಸ್ವರ್ಗದಲ್ಲಂತೂ ದುಃಖದ ಹೆಸರೇ ಇರುವುದಿಲ್ಲ. ಇಲ್ಲಿ ಅನೇಕ ಶಾಸ್ತ್ರಗಳು, ಅನೇಕ ಧರ್ಮ ಅಥವಾ ಅನೇಕ ಮತಗಳಾಗಿ ಬಿಟ್ಟಿವೆ. ಸ್ವರ್ಗದಲ್ಲಂತೂ ಒಂದೇ ಅದ್ವೈತ ದೇವತಾ ಮತವಿರುತ್ತದೆ. ಒಂದೇ ಧರ್ಮವಿರುತ್ತದೆ. ನೀವು ಬ್ರಾಹ್ಮಣರು ಭೂಂ, ಭೂಂ (ಜ್ಞಾನದ ಧ್ವನಿ) ಮಾಡುತ್ತೀರಿ, ಈ ಧರ್ಮದವರಾಗಿದ್ದರೆ ಅವರು ನಿಂತು ಬಿಡುತ್ತಾರೆ. ಅನೇಕ ಪ್ರಕಾರದವರಿದ್ದಾರೆ, ಕೆಲವರು ಪ್ರಕೃತಿಯನ್ನು ಒಪ್ಪುತ್ತಾರೆ, ಕೆಲವರು ವಿಜ್ಞಾನವನ್ನು, ಕೆಲವರು ಈ ಸೃಷ್ಟಿಯು ಕಲ್ಪನೆ ಮಾತ್ರವಾಗಿದೆ ಎಂದು ಹೇಳುತ್ತಾರೆ. ಈ ರೀತಿಯ ಮಾತುಗಳು ಇಲ್ಲಿಯೇ ನಡೆಯುತ್ತವೆ, ಸತ್ಯಯುಗದಲ್ಲಿ ನಡೆಯುವುದಿಲ್ಲ. ಬೇಹದ್ದಿನ ತಂದೆಯು ಪ್ರಜಾಪಿತ ಬ್ರಹ್ಮಾರವರ ಮುಖ ಕಮಲದಿಂದ ತನ್ನ ಮಕ್ಕಳಿಗೆ ಕುಳಿತು ತಿಳಿಸಿಕೊಡುತ್ತಾರೆ - ನೀವು ನನ್ನ ಬಳಿ ಇದ್ದಿರಿ. ಈಗ ನನ್ನ ಬಳಿ ಬರಬೇಕಾಗಿದೆ. ಇದರಲ್ಲಿ ಶಾಸ್ತ್ರಗಳ ಮಾತುಗಳು ಬರುವುದಿಲ್ಲ. ಕ್ರೈಸ್ತ ಮತ್ತು ಬುದ್ಧ ಬರುತ್ತಾರೆ, ಅವರೂ ಸಹ ಬಂದು ತಿಳಿಸುತ್ತಾರೆ. ಆ ಸಮಯದಲ್ಲಿ ಶಾಸ್ತ್ರಗಳ ಪ್ರಶ್ನೆಯು ಬರಲು ಸಾಧ್ಯವಿಲ್ಲ. ಕ್ರಿಸ್ತನು ಬೈಬಲನ್ನು ಓದುತ್ತಿದ್ದನೇನು? ಬೈಬಲ್ ಪ್ರಶ್ನೆಯೇ ಬರುವುದಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ತಮ್ಮ ಸ್ಥಿತಿಯನ್ನು ನೋಡಿಕೊಳ್ಳಿ. ಮಾಯಾ ರಾವಣನು ನಿಮಗೆ ಎಂತಹ ಪರಿಸ್ಥಿತಿಯನ್ನು ತಂದಿದ್ದಾನೆ. ನಾವು ಆಸುರೀ ರಾವಣನ ಸಂಪ್ರದಾಯದವರು ಎಂದೂ ಸಹ ತಿಳಿಯುತ್ತಾರೆ. ರಾವಣನನ್ನು ಸುಡುತ್ತಾರೆ ಆದರೆ ಅವನು ಸುಟ್ಟು ಹೋಗುವುದೇ ಇಲ್ಲ. ರಾವಣನನ್ನು ಸುಡುವುದು ಯಾವಾಗ ಕೊನೆಯಾಗುತ್ತದೆ? ಇದು ಮನುಷ್ಯರಿಗೆ ತಿಳಿದಿಲ್ಲ. ನೀವು ಈಶ್ವರೀಯ ದೈವೀ ಸಂಪ್ರದಾಯದವರಾಗಿದ್ದೀರಿ. ನೀವು ನನ್ನ ಮಕ್ಕಳಾಗಿದ್ದೀರಿ. ನೀವು ಮಕ್ಕಳಿಗೆ ಮತ್ತೆ ರಾಜಯೋಗವನ್ನು ಕಲಿಸಿಕೊಡಲು ನಾನು ಬಂದಿದ್ದೇನೆ. ಅನೇಕ ಧರ್ಮಗಳಿವೆ, ಅದರಿಂದ ತೆಗೆಯುವುದರಲ್ಲಿ ಎಷ್ಟೊಂದು ಪರಿಶ್ರಮವಾಗುತ್ತದೆ. ಗೀತೆಯೂ ಸಹ ಎಲ್ಲಿಂದ ಬಂದಿತು? ಆದಿ ಸನಾತನ ಧರ್ಮದ ಲಕ್ಷಣಗಳು ಎಲ್ಲಿ ಹುಟ್ಟಿಕೊಂಡವು? ಯಾವುದನ್ನು ಋಷಿ ಮುನಿಗಳು ಕುಳಿತು ಮಾಡಿದರು, ಅದನ್ನು ಇದುವರೆವಿಗೂ ಕೇಳುತ್ತಾ ಬಂದಿದ್ದಾರೆ. ವೇದಗಳನ್ನು ಯಾರು ನುಡಿಸಿದರು? ವೇದಗಳ ತಂದೆ ಯಾರು? ಗೀತೆಯ ಭಗವಂತ ನಾನಾಗಿದ್ದೇನೆ ಎಂದು ತಂದೆಯು ತಿಳಿಸುತ್ತಾರೆ. ಗೀತಾ ಮಾತೆಯನ್ನು ಶಿವ ತಂದೆಯು ರಚಿಸಿದರು. ಅದರಿಂದ ಕೃಷ್ಣನ ಜನ್ಮವಾಯಿತು. ಅವನ ಜೊತೆ ರಾಧೆ ಮುಂತಾದವರು ಬರುತ್ತಾರೆ. ಎಲ್ಲರಿಗೂ ಮೊದಲು ಬ್ರಾಹ್ಮಣರು ಬರುತ್ತಾರೆ. ನಮಗೆ ಅತಿ ಪ್ರೀತಿ ಪಾತ್ರರಾದವರು ತಂದೆಯಾಗಿದ್ದಾರೆ ಎಂದು ನಿಶ್ಚಯವಿದೆ - ಅವರಿಗೆ ಎಲ್ಲರೂ ಓ ಪರಮಪಿತ ಪರಮಾತ್ಮನೆ ದಯೆ ತೋರಿಸಿ ಎಂದು ಹೇಳುತ್ತಾರೆ. ಭಕ್ತರು ಹೇಗೆ ದುಃಖದಿಂದ ಬಿಡಿಸಿಕೊಳ್ಳುವುದು ಎಂದು ಕೂಗುತ್ತಾರೆ. ಒಂದುವೇಳೆ ಭಗವಂತನು ಸರ್ವವ್ಯಾಪಿಯಾಗಿದ್ದರೆ ಮತ್ತೆ ಕರೆಯುವ ಮಾತಿರುವುದಿಲ್ಲ. ಗೀತೆಯ ಮಾತು ಮುಖ್ಯವಾದದ್ದಾಗಿದೆ. ಎಷ್ಟೊಂದು ಯಜ್ಞಗಳನ್ನು ರಚಿಸುತ್ತಾರೆ. ಈಗ ನೀವು ಇಂತಹ ಪಾಂಪ್ಲೇಟ್ಗಳನ್ನು ಮುದ್ರಣ ಮಾಡಿಸಿ - ಈಗ ಎಷ್ಟೊಂದು ಅನರ್ಥವಾಗಿದೆ. ಎಲ್ಲೆಲ್ಲಿ ನೋಡಿದರೂ ಗೀತೆಯನ್ನು ಬರೆಯುತ್ತಾರೆ. ಗೀತೆಯನ್ನು ಯಾರು ರಚಿಸಿದರು? ಯಾರು ಉಚ್ಛರಿಸಿದರು? ಯಾವಾಗ ನುಡಿಸಿದರು? ಯಾರು ಮಾಡಿದರು? ಇದೇನೂ ಸಹ ತಿಳಿದಿಲ್ಲ. ಶ್ರೀಕೃಷ್ಣನದೂ ಸಹ ಯಥಾರ್ಥ ಪರಿಚಯವಿಲ್ಲ ಅಷ್ಟೇ. ಎಲ್ಲಿ ನೋಡಿದರೂ ಕೃಷ್ಣನೇ ಕೃಷ್ಣನಿದ್ದಾನೆ ಎಂದು ಹೇಳುತ್ತಾರೆ. ರಾಧೆಯ ಭಕ್ತರು ಎಲ್ಲಿ ನೋಡಿದರಲ್ಲಿ ರಾಧೆಯೇ ರಾಧೆಯಿದ್ದಾಳೆಂದು ಹೇಳುತ್ತಾರೆ. ಒಬ್ಬ ನಿರಾಕಾರ ಪರಮಾತ್ಮನಿದ್ದಾರೆಂದು ಹೇಳುವುದಂತೂ ಸರಿಯಾಗಿದೆ. ಎಲ್ಲರಿಗೂ ಏಕೆ ಸರ್ವವ್ಯಾಪಿಯನ್ನಾಗಿ ಮಾಡಿದ್ದಾರೆ. ಗಣೇಶನಿಗೂ ಸಹ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಒಂದೇ ಮಥುರಾ ನಗರದಲ್ಲಿ ಕೆಲವರು ಶ್ರೀಕೃಷ್ಣ ಸರ್ವವ್ಯಾಪಿಯೆಂದು, ಕೆಲವರು ರಾಧೆಯು ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಎಷ್ಟೊಂದು ಗೊಂದಲವಾಗಿದೆ ಒಂದು ಮತವು ಇನ್ನೊಂದರ ಜೊತೆ ಹೋಲುವುದಿಲ್ಲ. ಒಂದೇ ಮನೆಯಲ್ಲಿ ತಂದೆಯ ಗುರು ಬೇರೆಯಿರುತ್ತಾರೆ, ಮಗನ ಗುರು ಬೇರೆಯಿರುತ್ತಾರೆ, ವಾಸ್ತವದಲ್ಲಿ ವಾನಪ್ರಸ್ಥ ಸ್ಥಿತಿಯಲ್ಲಿದ್ದಾಗ ಗುರುಗಳನ್ನು ಮಾಡಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಇವರ ವಾನಪ್ರಸ್ತ ಸ್ಥಿತಿಯಲ್ಲಿ ನಾನು ಬರುತ್ತೇನೆ. ಪ್ರಪಂಚದಲ್ಲಿ ಯಾರು ಎಲ್ಲರಿಗಿಂತ ದೊಡ್ಡ ಗುರುವಾಗಿರುತ್ತಾರೆಯೋ ಅವರಿಗೆ ಹೆಚ್ಚು ನಶೆಯಿರುತ್ತದೆ. ಆದಿ ದೇವನಿಗೆ ಮಹಾವೀರನೆಂದೂ ಹೆಸರನ್ನು ಕೊಡಲಾಗಿದೆ. ಹನುಮಂತನಿಗೂ ಮಹಾವೀರನೆಂದು ಹೇಳುತ್ತಾರೆ. ಆದರೆ ಮಹಾವೀರರು ನೀವು ಶಕ್ತಿಯರಾಗಿದ್ದೀರಿ. ದಿಲ್ವಾಡಾ ಮಂದಿರದಲ್ಲಿ ಶಕ್ತಿಯರಿಗೆ ಸಿಂಹದ ಮೇಲೆ ಸವಾರಿಯನ್ನು ಮಾಡುವ ರೀತಿ ತೋರಿಸಲಾಗಿದೆ ಮತ್ತು ಪಾಂಡವರನ್ನು ಆನೆಯ ಮೇಲೆ ತೋರಿಸುತ್ತಾರೆ. ಮಂದಿರವು ಬಹಳ ಯುಕ್ತಿಯಿಂದ ಮಾಡಲ್ಪಟ್ಟಿದೆ. ನಿಮ್ಮದೇ ನೆನಪಾರ್ಥವಾಗಿದೆ. ನಿಮ್ಮ ಚಿತ್ರವನ್ನು ಕೊಡಲು ನೀವು ಆ ಸಮಯದಲ್ಲಿ ಇರುವುದೇ ಇಲ್ಲ. ಮಂದಿರಗಳು ದ್ವಾಪರದಿಂದ ಕಟ್ಟಲ್ಪಡಲಾಗಿದೆ. ಆಗ ನಿಮ್ಮ ಚಿತ್ರಗಳು ಎಲ್ಲಿಂದ ಬರುತ್ತವೆ. ಸರ್ವೀಸನ್ನು ನೀವು ಈಗ ಮಾಡುತ್ತಿದ್ದೀರಿ. ಮಾತೆಲ್ಲವೂ ಈಗಿನದಾಗಿದೆ ಅವರು ನಂತರ ಶಾಸ್ತ್ರಗಳನ್ನು ಮಾಡಿದರು. ಒಂದು ವೇಳೆ ನಾವು ಗೀತೆಯ ಹೆಸರನ್ನು ತೆಗೆದುಕ್ಕೊಳ್ಳಲಿಲ್ಲವೆಂದರೆ ಇದು ಯಾವುದೋ ಹೊಸ ಧರ್ಮವಾಗಿದೆ ಎಂದು ಮನುಷ್ಯರು ತಿಳಿಯುತ್ತಾರೆ ಎಷ್ಟೊಂದು ಪರಿಶ್ರಮವಿದೆ. ಅವರು ಈ ಪ್ರಪಂಚದಲ್ಲಿ ಪ್ರಪಂಚದಲ್ಲಿ ಕೇವಲ ಧರ್ಮದ ಸ್ಥಾಪನೆಯನ್ನು ಮಾಡುತ್ತಾರೆ. ನಿಮಗೆ ಹೊಸ ಪ್ರಪಂಚವನ್ನು ತಂದೆಯು ತಯಾರು ಮಾಡುತ್ತಾರೆ. ನನ್ನ ಹಾಗೆ ಕಾರ್ಯವನ್ನು ಬೇರೆ ಯಾರೂ ಸಹ ಮಾಡಲು ಸಾಧ್ಯವಿಲ್ಲವೆಂದು ತಂದೆಯು ಹೇಳುತ್ತಾರೆ. ಎಲ್ಲ ಪತಿತರನ್ನು ಪಾವನರನ್ನಾಗಿ ಮಾಡಬೇಕಾಗುತ್ತದೆ. ಈಗ ನೀವು ಮಕ್ಕಳಿಗೆ ಎಚ್ಚರಿಕೆಯನ್ನು ಕೊಡಬೇಕಾಗಿದೆ. ಭಾರತದಲ್ಲಿ ಎಷ್ಟೊಂದು ಅನರ್ಥವಾಗಿ ಬಿಟ್ಟಿದೆ, ಆ ಕಾರಣದಿಂದಲೇ ಕವಡೆಯ ಸಮಾನವಾಗಿ ಬಿಟ್ಟಿದೆ. ತಂದೆಯು ಗೀತಾ ಮಾತೆಯ ಮೂಲಕ ಕೃಷ್ಣನಿಗೆ ಜನ್ಮವನ್ನು ಕೊಟ್ಟರು ಅವರು ಮತ್ತೆ ಕೃಷ್ಣನನ್ನೇ ಗೀತೆಯ ಸ್ವಾಮಿಯನ್ನಾಗಿ ಮಾಡಿ ಬಿಟ್ಟಿದ್ದಾರೆ. ಗೀತೆಯ ಸ್ವಾಮಿಯಂತೂ ಶಿವನಾಗಿದ್ದಾರೆ, ಅವರು ಗೀತೆಯಿಂದ ಕೃಷ್ಣನಿಗೆ ಜನ್ಮವನ್ನು ಕೊಟ್ಟರು. ನೀವು ಎಲ್ಲರೂ ಸಂಜಯರಾಗಿದ್ದೀರಿ, ತಿಳಿಸುವವರು ಒಬ್ಬ ಶಿವತಂದೆಯಾಗಿದ್ದಾರೆ. ಪ್ರಾಚೀನ ದೇವಿ-ದೇವತಾ ಧರ್ಮವನ್ನು ರಚನೆ ಮಾಡುವವರು ಯಾರು? ಇದೆಲ್ಲವನ್ನು ಬರೆಯುವುದರಲ್ಲಿ ಬುದ್ಧಿವಂತಿಕೆ ಬೇಕಾಗಿದೆ. ಗೀತೆಯಿಂದ ನಾವು ಜನ್ಮವನ್ನು ಪಡೆಯುತ್ತಿದ್ದೇವೆ. ಮಮ್ಮಾ, ರಾಧೆ ಮತ್ತು ಇವರು (ಬ್ರಹ್ಮ) ಶ್ರೀಕೃಷ್ಣನಾಗುತ್ತಾರೆ ಅಂದಾಗ ಇದು ಗುಪ್ತ ಮಾತಾಯಿತಲ್ಲವೆ. ಬ್ರಾಹ್ಮಣರ ಜನ್ಮವನ್ನು ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಕೃಷ್ಣ ಮತ್ತು ಪರಮಾತ್ಮನ ಮಾತಾಗಿದೆ. ಬ್ರಹ್ಮಾ, ಕೃಷ್ಣ ಮತ್ತು ಶಿವ ತಂದೆ - ಇವೆಲ್ಲಾ ಮಾತುಗಳು ಗುಹ್ಯವಾಗಿದೆ. ಇವೆಲ್ಲಾ ಮಾತುಗಳನ್ನು ತಿಳಿದುಕೊಳ್ಳುವಾರು ಬಹಳ ಬುದ್ಧಿವಂತರಾಗಿರಬೇಕು. ಯಾರ ಯೋಗವು ಪೂರ್ಣ ಜೋಡಿಸಲ್ಪಟ್ಟಿರುತ್ತದೆಯೋ ಅವರ ಬುದ್ಧಿಯು ಶ್ರೇಷ್ಠವಾಗುತ್ತಾ ಹೋಗುತ್ತದೆ. ಅಲೆಯುವಂತಹವರ ಬುದ್ಧಿಯಲ್ಲಿ ಇದು ಉಳಿಯುವುದಕ್ಕೆ ಸಾಧ್ಯವಿಲ್ಲ. ತಂದೆಯು ನೀವು ಮಕ್ಕಳಿಗೆ ಎಷ್ಟೊಂದು ಶ್ರೇಷ್ಠ ಜ್ಞಾನವನ್ನು ಕೊಡುತ್ತಿದ್ದಾರೆ, ವಿದ್ಯಾರ್ಥಿಗಳು ತಮ್ಮ ಬುದ್ಧಿಯನ್ನೂ ನಡೆಸುತ್ತಾರಲ್ಲವೆ ಅಂದಾಗ ನೀವು ಕುಳಿತು ಬರೆಯಬೇಕು - ಶುಭ ಕಾರ್ಯದಲ್ಲಿ ತಡ ಮಾಡಬಾರದು. ನಾವು ಸಾಗರನ ಮಕ್ಕಳು ತಮ್ಮ ಸಹೋದರ-ಸಹೋದರಿಯರನ್ನು ಉಳಿಸಬೇಕು ಬಡಪಾಯಿಗಳು ಪೆಟ್ಟು ತಿನ್ನುತ್ತಿರುತ್ತಾರೆ, ಬಿ.ಕೆ.ಗಳು ಇಷ್ಟೊಂದು ಹೇಳುತ್ತಿದ್ದಾರೆಂದಾಗ ಇದರಲ್ಲಿ ಏನೋ ಇದೆಯೆಂದು ಅನ್ಯರು ಹೇಳುತ್ತಾರೆ. ಲಕ್ಷಾಂತರ ಪಾಂಪ್ಲೇಟ್ಗಳನ್ನು ಮುದ್ರಣ ಮಾಡಿಸಿ ಗೀತಾ ಪಾಠ ಶಾಲೆಗಳಲ್ಲಿ ಹಂಚಿರಿ. ಭಾರತವು ಅವಿನಾಶಿ ಖಂಡ ಮತ್ತು ಸರ್ವೋತ್ತಮ ತೀರ್ಥವಾಗಿದೆ, ಯಾವ ತಂದೆಯು ಎಲ್ಲರಿಗೂ ಸದ್ಗತಿಯನ್ನು ಕೊಡುತ್ತಾರೆಯೋ ಅವರ ತೀರ್ಥ ಸ್ಥಾನವನ್ನು ಕಾಣದಂತೆ ಮಾಡಿದ್ದಾರೆ, ಅಂದಾಗ ಅವರ ಹೆಸರನ್ನು ಪ್ರಸಿದ್ಧ ಮಾಡಬೇಕಾಗಿದೆ. ಹೂವುಗಳನ್ನು ಹಾಕಿಸಿಕೊಳ್ಳಲು ಯೋಗ್ಯರಾದವರು ಒಬ್ಬರೇ ಶಿವ ತಂದೆಯಾಗಿದ್ದಾರೆ. ಬಾಕಿ ಎಲ್ಲವೂ ವ್ಯರ್ಥವಾಗಿದೆ. ಗೀತಾ ಪಾಠ ಶಾಲೆಗಳಂತೂ ಬಹಳಷ್ಟಿವೆ. ನೀವು ವೇಷವನ್ನು ಬದಲಾಯಿಸಿಕೊಂಡು ಅಲ್ಲಿಗೆ ಹೋಗಿ ನಂತರ ಭಲೆ ಇವರು ಬಿ.ಕೆ.ಗಳೆಂದು ತಿಳಿದುಕೊಳ್ಳಲಿ. ಇಂತಹ ಪ್ರಶ್ನೆಗಳನ್ನು ಬೇರೆ ಯಾರೂ ಕೇಳಲು ಸಾಧ್ಯವಿಲ್ಲ. ಒಳ್ಳೆಯದು. ಶಿವ ತಂದೆಯು ಬ್ರಹ್ಮಾರವರ ತನುವಿನಲ್ಲಿ ಕುಳಿತು ಇವೆಲ್ಲಾ ಮಾತುಗಳನ್ನು ಹೇಳುತ್ತಾರೆಂದು ನೀವು ತಿಳಿದುಕೊಂಡಿದ್ದೀರಿ. ಯಾವ ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ, ಅವರು ಈಗ ಬಂದಿದ್ದಾರೆ. ಎಲ್ಲಿಯವರೆಗೂ ಬ್ರಾಹ್ಮಣರಾಗುವುದಿಲ್ಲವೋ ಅಲ್ಲಿಯವರೆಗೆ ದೇವತೆಗಳಾಗಲು ಸಾಧ್ಯವಿಲ್ಲ. ಬ್ರಾಹ್ಮಣ ಕುಲವು ದೇವತೆಗಳಿಗಿಂತಲೂ ಶ್ರೇಷ್ಠವಾಗಿದೆ. ಎಲ್ಲರ ಆತ್ಮವು ಪಾವನವಾಗುತ್ತಾ ಇದೆ. ನೀವು ಮತ್ತೆ ಹೊಸ ಪ್ರಪಂಚದಲ್ಲಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತೀರಿ. ಒಳ್ಳೆಯದು.

ರಾತ್ರಿ ಕ್ಲಾಸ್:- 12.1.69

ನೀವು ಮಕ್ಕಳು ಒಬ್ಬ ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ ಒಬ್ಬರ ನೆನಪಿನಲ್ಲಿರುವುದಕ್ಕೆ ಅವ್ಯಭಿಚಾರಿ ನೆನಪೆಂದು ಹೇಳಲಾಗುತ್ತದೆ. ಒಂದು ವೇಳೆ ಇಲ್ಲಿ ಕುಳಿತಿದ್ದರೂ ಸಹ ಅನ್ಯರ ನೆನಪು ಬರುತ್ತದೆಯೆಂದರೆ ವ್ಯಭಿಚಾರಿ ನೆನಪೆಂದು ಹೇಳಲಾಗುತ್ತದೆ. ತಿನ್ನುವುದು, ಕುಡಿಯುವುದು, ಇರುವುದು ಒಂದು ಮನೆಯಲ್ಲಿ, ನೆನಪು ಮಾಡುವುದು ಬೇರೆಯವರನ್ನು ಅಂದಾಗ ಇದು ಮೋಸ ಮಾಡಿದಂತಾಯಿತಲ್ಲವೆ! ಎಲ್ಲಿಯವರೆಗೆ ಭಕ್ತಿಯನ್ನೂ ಸಹ ಒಬ್ಬ ಶಿವ ತಂದೆಗೇ ಮಾಡುತ್ತಾರೆ ಅಲ್ಲಿಯವರೆಗೆ ಅವ್ಯಭಿಚಾರಿ ಭಕ್ತಿಯಾಗಿತ್ತು ಮತ್ತೆ ಅನ್ಯರನ್ನು ನೆನಪು ಮಾಡುವುದರಿಂದ ಭಕ್ತಿಯು ವ್ಯಭಿಚಾರಿಯಾಗುತ್ತದೆ. ಈಗ ನೀವು ಮಕ್ಕಳಿಗೆ ಜ್ಞಾನ ಸಿಕ್ಕಿದೆ, ಒಬ್ಬ ತಂದೆಯು ಎಷ್ಟೊಂದು ಅದ್ಭುತವಾದ ಕಾರ್ಯವನ್ನು ಮಾಡುತ್ತಾರೆ. ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಾಗ ಅವರೊಬ್ಬರನ್ನೇ ನೆನಪು ಮಾಡಬೇಕು. ನನ್ನವರೆಂದರೆ ಒಬ್ಬರೇ. ಶಿವ ತಂದೆಯ ನೆನಪು ಮರೆತು ಹೋಗುತ್ತದೆ ಎಂದು ಮಕ್ಕಳು ಹೇಳುತ್ತಾರೆ! ವಾಹ್ ಎಂದು ತಂದೆಯು ಹೇಳುತ್ತಾರೆ. ಭಕ್ತಿ ಮಾರ್ಗದಲ್ಲಿಯೂ ನಾವು ಒಬ್ಬರನ್ನೇ ಭಕ್ತಿ ಮಾಡುತ್ತೇವೆ ಎಂದು ಹೇಳುತ್ತೀರಿ. ಅವರೇ ಪತಿತ-ಪಾವನ, ಬೇರೆ ಯಾರನ್ನೂ ಸಹ ಪತಿತ-ಪಾವನನೆಂದು ಹೇಳಲು ಸಾಧ್ಯವಿಲ್ಲ. ಒಬ್ಬರಿಗೆ ಹೇಳಲಾಗುತ್ತದೆ ಅಂದಾಗ ಅವರೇ ಶ್ರೇಷ್ಠಾತಿ ಶ್ರೇಷ್ಠ ಆಗಿದ್ದಾರೆ. ಈಗ ಭಕ್ತಿಯ ಮಾತಿಲ್ಲ. ಮಕ್ಕಳಿಗೆ ಜ್ಞಾನವಿದೆ. ಜ್ಞಾನ ಸಾಗರನನ್ನು ನೆನಪು ಮಾಡಬೇಕು. ಭಕ್ತಿ ಮಾರ್ಗದಲ್ಲಿ ಹೇಳುತ್ತಾರೆ - ತಾವು ಬಂದರೆ ನಾವು ನಿಮ್ಮನ್ನೇ ನೆನಪು ಮಾಡುತ್ತೇವೆ ಅಂದಾಗ ಈ ಮಾತನ್ನು ನೆನಪು ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮನ್ನು ತಾವೇ ಕೇಳಿಕೊಳ್ಳಿ - ನಾವು ಒಬ್ಬ ತಂದೆಯನ್ನು ನೆನಪು ಮಾಡುತ್ತೇವೆಯೇ ಅಥವಾ ಅನೇಕ ಮಿತ್ರ ಸಂಬಂಧಿಗಳನ್ನು ನೆನಪು ಮಾಡುತ್ತೇನೆಯೇ? ಒಬ್ಬ ತಂದೆಯೊಂದಿಗೆ ಮನಸ್ಸನ್ನಿಡಬೇಕು. ಒಂದು ವೇಳೆ ಮನಸ್ಸೇನಾದರೂ ಬೇರೆ ಕಡೆಗೆ ಹೋಯಿತೆಂದರೆ ನೆನಪು ವ್ಯಭಿಚಾರಿಯಾಗಿ ಬಿಡುತ್ತದೆ. ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ನಂತರ ನಿಮಗೆ ಅಲ್ಲಿ ದೈವೀ ಸಂಬಂಧವು ಸಿಗುತ್ತದೆ. ಹೊಸ ಪ್ರಪಂಚದಲ್ಲಿ ಎಲ್ಲವೂ ಹೊಸದೇ ಸಿಗುತ್ತದೆ. ನಿಮ್ಮನ್ನು ನೀವು ನೋಡಿಕೊಳ್ಳಿ - ನಾನು ಯಾರನ್ನು ನೆನಪು ಮಾಡುತ್ತೇನೆ? ತಂದೆಯು ಹೇಳುತ್ತಾರೆ - ನೀವು ಪಾರಲೌಕಿಕ ತಂದೆಯಾದ ನನ್ನನ್ನು ನೆನಪು ಮಾಡಿ. ನಾನೇ ಪತಿತ -ಪಾವನನಾಗಿದ್ದೇನೆ. ಪ್ರಯತ್ನ ಪಟ್ಟು ಬೇರೆ ಕಡೆಯಿಂದ ಬುದ್ಧಿಯೋಗವನ್ನು ದೂರ ಮಾಡಿ ತಂದೆಯನ್ನು ನೆನಪು ಮಾಡಿ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪಾಪವು ಭಸ್ಮವಾಗುತ್ತದೆ. ನಾವು ಎಷ್ಟು ನೆನಪು ಮಾಡುತ್ತೇವೆಯೋ ಅಷ್ಟು ತಂದೆಯೂ ನೆನಪು ಮಾಡುತ್ತಾರೆಂದಲ್ಲ. ತಂದೆಯೇನು ತನ್ನಲ್ಲಿರುವಂತಹ ಪಾಪವನ್ನು ತೊರೆದು ಹಾಕಬೇಕಾಗಿಲ್ಲ. ನೀವು ಪಾವನರಾಗಲು ಇಲ್ಲಿ ಕುಳಿತಿದ್ದೀರಿ. ಶಿವ ತಂದೆಯೂ ಸಹ ಇಲ್ಲಿದ್ದಾರೆ ಅವರಿಗೆ ತನ್ನದೇ ಆದ ಶರೀರವಿಲ್ಲ. ತಂದೆಯು ಶರೀರವನ್ನು ಲೋನ್ ತೆಗೆದುಕೊಂಡಿದ್ದಾರೆ. ನೀವು ತಂದೆಯ ಜೊತೆ ಪ್ರತಿಜ್ಞೆ ಮಾಡಿದ್ದಿರಿ – ತಂದೆಯೇ, ತಾವು ಬಂದಿದ್ದೆ ಆದರೆ ನಾವು ತಮ್ಮವರಾಗಿ ಹೊಸ ಪ್ರಪಂಚದ ಮಾಲೀಕರಾಗುತ್ತೇವೆ ಅಂದಾಗ ನೀವು ಮನಸ್ಸಿನಲ್ಲಿ ಕೇಳಿಕೊಳ್ಳುತ್ತಿರಿ. ಬುದ್ಧಿಯೋಗದ ಜೋಡಣೆಯು ಘಳಿಗೆ-ಘಳಿಗೆಗೆ ತಂದೆಯಿಂದ ಕತ್ತರಿಸುತ್ತದೆ ಎಂಬುದಂತೂ ನಿಮಗೆ ತಿಳಿದಿದೆ.ತಂದೆಗೂ ತಿಳಿದಿದೆ- ಬುದ್ಧಿಯೋಗವನ್ನು ಜೋಡಿಸಿ ನೆನಪು ಮಾಡುತ್ತಾರೆ,ಮತ್ತೆ ಬುದ್ಧಿಯೋಗದ ಜೋಡಣೆಯು ಕತ್ತರಿಸುತ್ತದೆ. ಮಕ್ಕಳು ನಂಬರ್ ವಾರ್ ಪುರುಷಾರ್ಥವನ್ನಂತೂ ಮಾಡುತ್ತಾರೆ, ಚೆನ್ನಾಗಿ ನೆನಪಿನಲ್ಲಿದ್ದಿದ್ದೇ ಆದರೆ ರಾಜವಂಶದಲ್ಲಿ ಬರುತ್ತೀರಿ. ತನ್ನನ್ನು ತಾನು ಪರಿಶೀಲನೆ ಮಾಡಿಕೊಳ್ಳುತ್ತಾ ಇರಿ, ಡೈರಿ ಇಡಿ - ಇಡೀ ದಿನದಲ್ಲಿ ತನ್ನ ಬುದ್ಧಿಯು ಎಲ್ಲೆಲ್ಲಿಗೆ ಹೋಗಿತ್ತು? ನಂತರ ತಂದೆಯು ತಿಳಿಸಿಕೊಡುತ್ತಾರೆ - ಆತ್ಮದಲ್ಲಿ ಮನಸ್ಸು, ಬುದ್ಧಿ ಇದೆ ಅದು ಓಡುತ್ತಿರುತ್ತದೆ. ಈ ರೀತಿ ಓಡುವುದರಿಂದ ನಷ್ಟವಾಗುತ್ತದೆ ಎಂದು ತಂದೆಯು ಹೇಳುತ್ತಾರೆ. ನನ್ನನ್ನು ನೆನಪು ಮಾಡುವುದರಿಂದ ಬಹಳ ಲಾಭವಿದೆ. ಬಾಕಿ ಎಲ್ಲವೂ ನಷ್ಟವೇ ನಷ್ಟವಾಗಿದೆ. ಮುಖ್ಯವಾಗಿ ಒಬ್ಬರನ್ನೇ ನೆನಪು ಮಾಡಬೇಕು. ತನ್ನ ಮೇಲೆ ಎಚ್ಚರ ವಹಿಸಬೇಕು. ಹೆಜ್ಜೆ-ಹೆಜ್ಜೆಯಲ್ಲಿಯೂ ಲಾಭವಿದೆ, ನಷ್ಟವೂ ಇದೆ. 84 ಜನ್ಮಗಳು ದೇಹಧಾರಿಯನ್ನು ನೆನಪು ಮಾಡಿ ನಷ್ಟವನ್ನು ಹೊಂದಿದ್ದಾಗಿದೆ. ಒಂದೊಂದು ದಿನ ಕಳೆದು 5000 ವರ್ಷಗಳು ಕಳೆದು ಹೋಯಿತು ಅಂದಾಗ ನಷ್ಟವೇ ಆಯಿತು. ಈಗ ತಂದೆಯ ನೆನಪಿನಲ್ಲಿದ್ದು ಲಾಭವನ್ನು ಪಡೆಯಬೇಕಾಗಿದೆ. ಈ ರೀತಿ ವಿಚಾರ ಸಾಗರ ಮಂಥನ ಮಾಡಿ ಜ್ಞಾನ ರತ್ನಗಳನ್ನು ತೆಗೆಯಬೇಕು. ತಂದೆಯ ನೆನಪಿನಲ್ಲಿ ಏಕಾಗ್ರ ಚಿತ್ತರಾಗಿರಬೇಕು. ಕೆಲವು ಮಕ್ಕಳಿಗೆ ಕವಡೆಯನ್ನು ಸಂಪಾದಿಸುವುದೇ ಚಿಂತೆಯಿರುತ್ತದೆ. ಮಾಯೆಯು ವ್ಯಾಪಾರದ ವಿಚಾರಗಳನ್ನು ತೆಗೆದುಕೊಂಡು ಬರುತ್ತದೆ. ಶ್ರೀಮಂತರಿಗೆ ಹಲವಾರು ವಿಚಾರಗಳು ಬರುತ್ತವೆ - ಬಾಬಾ, ಏನು ಮಾಡುವರು. ತಂದೆಯದು ಎಷ್ಟೊಂದು ಒಳ್ಳೆಯ ವ್ಯಾಪಾರವಿತ್ತು, ಮೋಸ ಹೋಗುವುದರ ಅವಶ್ಯಕತೆಯೇ ಇರಲಿಲ್ಲ. ಯಾರು ವ್ಯಾಪಾರಿಗಳು ಬರುತ್ತಿದ್ದರು, ಅವರನ್ನು ನೀವು ವ್ಯಾಪಾರಿಯೋ ಅಥವಾ ಏಜೆಂಟ್ ಆಗಿದ್ದೀರೋ ಎಂದು ಕೇಳುತ್ತಿದ್ದೆನು (ಇತಿಹಾಸ). ವ್ಯಾಪಾರವನ್ನು ಮಾಡುತ್ತಿದ್ದರೂ ಬುದ್ಧಿಯೋಗವನ್ನು ತಂದೆಯ ಜೊತೆ ಜೋಡಿಸಬೇಕಾಗಿದೆ. ಈಗ ಕಲಿಯುಗ ಪೂರ್ಣವಾಗಿ ಸತ್ಯಯುಗ ಬರುತ್ತಿದೆ. ಪತಿತರಂತೂ ಸತ್ಯಯುಗದಲ್ಲಿ ಹೋಗುವುದೇ ಇಲ್ಲ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪವಿತ್ರರಾಗುತ್ತೀರಿ. ಪವಿತ್ರತೆಯಿಂದ ಧಾರಣೆಯು ಚೆನ್ನಾಗಿ ಆಗುತ್ತದೆ. ಪತಿತರಂತೂ ನೆನಪು ಮಾಡಲು ಸಾಧ್ಯವಿಲ್ಲ, ಧಾರಣೆಯೂ ಸಹ ಆಗುವುದಿಲ್ಲ. ಕೆಲವರಿಗೆ ಅದೃಷ್ಟದನುಸಾರ ಸಮಯವು ಸಿಗುತ್ತದೆ, ಪುರುಷಾರ್ಥವನ್ನು ಮಾಡುತ್ತಾರೆ. ಕೆಲವರಿಗಂತೂ ಸಮಯವೇ ಸಿಗುವುದಿಲ್ಲ, ನೆನಪೂ ಸಹ ಮಾಡುವುದಿಲ್ಲ. ಕಲ್ಪದ ಹಿಂದೆ ಎಷ್ಟು ಪ್ರಯತ್ನ ಪಟ್ಟಿದ್ದರೂ ಅಷ್ಟೇ ಈಗಲೂ ಪ್ರಯತ್ನ ಪಡುತ್ತಾರೆ. ಪ್ರತಿಯೊಬ್ಬರೂ ತನ್ನೊಂದಿಗೆ ಪ್ರಯತ್ನ ಪಡಬೇಕಾಗಿದೆ. ಮೊದಲು ವ್ಯವಹಾರದಲ್ಲಿ ನಷ್ಟವಾದರೆ ಈಶ್ವರನ ಇಚ್ಛೆಯಾಗಿದೆ ಎಂದು ಹೇಳುತ್ತಿದ್ದರು. ಈಗ ಡ್ರಾಮಾ ಎಂದು ಹೇಳುತ್ತಾರೆ. ಕಲ್ಪದ ಹಿಂದೆ ಏನಾಗಿತ್ತೋ ಅದೇ ಆಗುತ್ತದೆ. ಈಗ 4 ಘಂಟೆಗಳು ನೆನಪು ಮಾಡಿದರೆ ಮುಂದಿನ ಕಲ್ಪದಲ್ಲಿ ಹೆಚ್ಚು ಮಾಡುತ್ತೇನೆ ಎಂದಲ್ಲ. ಶಿಕ್ಷಣ ಕೊಡಲಾಗುತ್ತದೆ ಈಗ ಪುರುಷಾರ್ಥ ಮಾಡಿದರೆ ಕಲ್ಪ-ಕಲ್ಪವೂ ಒಳ್ಳೆಯ ಪುರುಷಾರ್ಥವಿರುತ್ತದೆ ಅಂದಾಗ ತನ್ನನ್ನು ತಾನು ನೋಡಿಕೊಳ್ಳಿ - ನನ್ನ ಬುದ್ಧಿ ಎಲ್ಲೆಲ್ಲಿ ಹೋಗುತ್ತಿದೆ. ಮಲ್ಲ ಯುದ್ಧದಲ್ಲಿ ಬಹಳ ಎಚ್ಚರ ವಹಿಸುತ್ತಾರೆ. ಒಳ್ಳೆಯದು.

ಆತ್ಮೀಯ ಮಕ್ಕಳಿಗೆ ಆತ್ಮೀಯ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಶುಭರಾತ್ರಿ.

ಧಾರಣೆಗಾಗಿ ಮುಖ್ಯಸಾರ:

1. ಬುದ್ಧಿವಂತರಾಗಲು ನೆನಪಿನಿಂದ ತಮ್ಮ ಬುದ್ಧಿಯನ್ನು ಪಾರಸವನ್ನಾಗಿ ಮಾಡಿಕೊಳ್ಳಬೇಕು. ಬುದ್ಧಿಯನ್ನು ಅಲ್ಲಿ-ಇಲ್ಲಿ ಅಲೆದಾಡಿಸಬಾರದು. ತಂದೆಯು ಏನನ್ನು ಹೇಳುತ್ತಾರೆಯೋ ಅದರ ಬಗ್ಗೆಯೇ ವಿಚಾರ ಮಾಡಬೇಕಾಗಿದೆ.

2. ಭ್ರಮರಿಯಾಗಿ ಜ್ಞಾನ ಧ್ವನಿ ಮಾಡಿ ನರಕವಾಸಿ ಕೀಟಗಳನ್ನು ದೇವಿ-ದೇವತೆಯನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಶುಭ ಕಾರ್ಯದಲ್ಲಿ ತಡ ಮಾಡಬಾರದು. ತಮ್ಮ ಸಹೋದರ-ಸಹೋದರಿಯರನ್ನು ಉಳಿಸಬೇಕು.

ವರದಾನ:
ಅವಿನಾಶಿ ಸೌಭಾಗ್ಯ ಮತ್ತು ಭಾಗ್ಯದ ತಿಲಕಧಾರಿಯಿಂದ ಭವಿಷ್ಯದ ರಾಜ್ಯ ತಿಲಕಧಾರಿ ಭವ.

ಸಂಗಮಯುಗದಲ್ಲಿ ದೇವರ ದೇವನ ಸೌಭಾಗ್ಯ ಮತ್ತು ಪರಮಾತ್ಮ ಅಥವಾ ಈಶ್ವರೀಯ ಸಂತಾನದ ಭಾಗ್ಯದ ತಿಲಕ ಪ್ರಾಪ್ತಿಯಾಗುವುದು. ಒಂದು ವೇಳೆ ಈ ಸೌಭಾಗ್ಯ ಮತ್ತು ಭಾಗ್ಯದ ತಿಲಕ ಅವಿನಾಶಿಯಾಗಿದ್ದಲ್ಲಿ, ಮಾಯೆ ಈ ತಿಲಕವನ್ನು ಅಳಿಸುವುದಿಲ್ಲ. ಆದ್ದರಿಂದ ಇಲ್ಲಿನ ಸೌಭಾಗ್ಯ ಮತ್ತು ಭಾಗ್ಯದ ತಿಲಕಧಾರಿಯಿಂದ ಭವಿಷ್ಯದ ರಾಜ್ಯ ತಿಲಕಧಾರಿಗಳಾಗುವರು. ಪ್ರತಿ ಜನ್ಮದಲ್ಲಿ ರಾಜ್ಯ ತಿಲಕದ ಉತ್ಸವವಾಗುವುದು. ರಾಜನ ಜೊತೆ ರಾಜ ಮನೆತನವೂ ಸಹಾ ತಿಲಕದ ದಿವಸ ಆಚರಿಸಲಾಗುವುದು.

ಸ್ಲೋಗನ್: -
ಸದಾ ಒಬ್ಬರ ಸ್ನೇಹದಲ್ಲಿ ಸಮಾವೇಶವಾಗಿದ್ದಾಗ ಈ ಪ್ರೀತಿ ಪರಿಶ್ರಮವನ್ನು ಸಮಾಪ್ತಿ ಮಾಡುವುದು.