14/10/18      AV Kannada Murli    18.02.84   Om Shanti      Madhuban


                                   " ಬ್ರಾಹ್ಮಣ ಜೀವನ - ಅಮೂಲ್ಯ ಜೀವನ "

ಇಂದು ಸದಾ ಸ್ನೇಹದಲ್ಲಿ ಸಮಾವೇಶವಾಗಿರುವ ಸ್ನೇಹಿ ಮಕ್ಕಳೊಂದಿಗೆ ಸ್ನೇಹದ ಸಾಗರನ ಮಿಲನವನ್ನಾಚರಿಸಲು ಬಂದಿದ್ದಾರೆ. ಹೇಗೆ ಸ್ನೇಹದಿಂದ ತಂದೆಯನ್ನು ನೆನಪು ಮಾಡುತ್ತಾರೆ, ಹಾಗೆಯೇ ತಂದೆಯೂ ಸಹ ಸ್ನೇಹಿ ಮಕ್ಕಳಿಗೆ ರಿಟರ್ನ್ನಲ್ಲಿ ಪದಮ ಪಟ್ಟು ಕೊಡುವುದಕ್ಕಾಗಿ, ಸಾಕಾರಿ ಸೃಷ್ಟಿಯಲ್ಲಿ ಮಿಲನವಾಗಲು ಬಂದಿದ್ದಾರೆ. ತಂದೆಯು ಮಕ್ಕಳಿಗೆ ತನ್ನ ಸಮಾನ ಅಶರೀರಿ ನಿರಾಕಾರನನ್ನಾಗಿ ಮಾಡುತ್ತಾರೆ ಮತ್ತು ಮಕ್ಕಳು ಸ್ನೇಹದಿಂದ ನಿರಾಕಾರಿ ಮತ್ತು ಆಕಾರಿ ತಂದೆಯನ್ನು ತನ್ನ ಸಮಾನ ಸಾಕಾರಿಯನ್ನಾಗಿ ಮಾಡಿ ಬಿಡುತ್ತಾರೆ. ಇದು ಮಕ್ಕಳ ಸ್ನೇಹದ ಚಮತ್ಕಾರವಾಗಿದೆ. ಮಕ್ಕಳ ಇಂತಹ ಚಮತ್ಕಾರವನ್ನು ನೋಡುತ್ತಾ ಬಾಪ್ದಾದಾರವರು ಹರ್ಷಿತವಾಗುತ್ತಾರೆ. ಮಕ್ಕಳ ಗುಣ ಗಾಯನ ಮಾಡುತ್ತಾರೆ - ಸದಾ ತಂದೆಯ ಸಂಗದ ರಂಗಿನಲ್ಲಿ ತಂದೆಯ ಸಮಾನರು ಹೇಗಾಗುತ್ತಾ ಹೋಗುತ್ತಿದ್ದಾರೆ! ಬಾಪ್ದಾದಾರವರು ಹೀಗೆ ಫಾಲೋ ಫಾದರ್ ಮಾಡುವಂತಹ ಮಕ್ಕಳನ್ನು ಆಜ್ಞಾಕಾರಿ, ವಿಧೇಯ, ಆದೇಶ ಪಾಲಕ, ಸತ್ಯ-ಸತ್ಯವಾದ ಅಮೂಲ್ಯ ರತ್ನವೆಂದು ಹೇಳುತ್ತಾರೆ. ತಾವು ಮಕ್ಕಳ ಮುಂದೆ ಈ ಸ್ಥೂಲವಾದ ವಜ್ರ ರತ್ನಗಳೂ ಸಹ ಮಣ್ಣಿನ ಸಮಾನವಾಗಿದೆ. ಇಷ್ಟೂ ಅಮೂಲ್ಯವಾದ ರತ್ನಗಳಾಗಿದ್ದೀರಿ. ತಮ್ಮನ್ನು ಹೀಗೆ ಅನುಭವ ಮಾಡುತ್ತೀರಾ - ಬಾಪ್ದಾದಾರವರ ಕೊರಳಿನ ಮಾಲೆಯ ವಿಜಯಿ ರತ್ನವು ನಾನಾಗಿದ್ದೇನೆ. ಇಂತಹ ಸ್ವಮಾನವಿರುತ್ತದೆಯೇ?

ಡಬಲ್ ವಿದೇಶಿ ಮಕ್ಕಳಿಗೆ ನಶೆ ಮತ್ತು ಖುಷಿಯಿರುತ್ತದೆ - ನಾವು ಬಾಪ್ದಾದಾರವರಿಗೆ ಇಷ್ಟೂ ದೂರವಿದ್ದರೂ ಸಹ ದೂರ ದೇಶದಿಂದ ಆಯ್ಕೆ ಮಾಡಿ ನಮ್ಮನ್ನು ತನ್ನವರನ್ನಾಗಿ ಮಾಡಿಕೊಂಡು ಬಿಟ್ಟರು. ಪ್ರಪಂಚದವರು ತಂದೆಯನ್ನು ಹುಡುಕುತ್ತಾರೆ ಮತ್ತು ತಂದೆಯು ನಮ್ಮನ್ನು ಹುಡುಕಿದರು. ತಮ್ಮನ್ನು ಹೀಗೆಂದು ತಿಳಿಯುತ್ತೀರಾ? ಪ್ರಪಂಚದವರು ಕರೆಯುತ್ತಿದ್ದಾರೆ – ಬಂದು ಬಿಡಿ ಮತ್ತು ತಾವೆಲ್ಲರೂ ನಂಬರ್ವಾರ್ ಯಾವ ಹಾಡನ್ನು ಹಾಡುತ್ತೀರಿ? ನಿಮ್ಮೊಂದಿಗೇ ಕುಳಿತುಕೊಳ್ಳುವೆನು, ನಿಮ್ಮೊಂದಿಗೇ ತಿನ್ನುವೆನು, ನಿಮ್ಮೊಂದಿಗೇ ಸದಾ ಜೊತೆಯಿರುತ್ತೇನೆ. ಕರೆಯುವುದು ಎಲ್ಲಿದೆ ಮತ್ತು ತಂದೆಯ ಜೊತೆಯಿರುವುದು ಎಲ್ಲಿರುವುದಾಗಿದೆ! ಹಗಲು-ರಾತ್ರಿಯ ಅಂತರವಾಯಿತಲ್ಲವೆ. ಒಂದು ಸೆಕೆಂಡಿನ ಸತ್ಯ ಅವಿನಾಶಿ ಪ್ರಾಪ್ತಿಗೆ ಬಾಯಾರಿರುವವರೆಲ್ಲಿ ಮತ್ತು ತಾವೆಲ್ಲರೂ ಪ್ರಾಪ್ತಿ ಸ್ವರೂಪ ಆತ್ಮರೆಲ್ಲಿ! ಅವರು ಗಾಯನ ಮಾಡುವವರು ಮತ್ತು ತಾವೆಲ್ಲರೂ ತಂದೆಯ ಮಡಿಲಿನಲ್ಲಿ ಕುಳಿತಿರುವವರು. ಅವರು ಚೀರಾಡುವವರು ಮತ್ತು ತಾವು ಪ್ರತೀ ಹೆಜ್ಜೆಯಲ್ಲಿ ಅವರ ಮತದಂತೆ ನಡೆಯುವವರು. ಅವರು ದರ್ಶನದ ಬಾಯಾರಿಕೆಯಿರುವವರು ಮತ್ತು ತಾವು ತಂದೆಯ ಮೂಲಕ ಸ್ವಯಂ ದರ್ಶನೀಯ ಮೂರ್ತಿಯಾಗಿ ಬಿಟ್ಟಿರಿ. ಸ್ವಲ್ಪ ದುಃಖ-ನೋವಿನ ಅನುಭವವು ಇನ್ನೂ ಹೆಚ್ಚಾಗಲು ಬಿಡಿ, ನೋಡಿರಿ, ತಮ್ಮ ಸೆಕೆಂಡಿನ ದರ್ಶನ, ಸೆಕೆಂಡಿನ ದೃಷ್ಟಿಗಾಗಿ ಎಷ್ಟೊಂದು ಬಾಯಾರಿಕೆಯಾಗಿದ್ದು ತಮ್ಮ ಮುಂದೆ ಬರುತ್ತಾರೆ ಎಂದು.

ಈಗ ತಾವು ನಿಮಂತ್ರಣವನ್ನು ಕೊಡುತ್ತೀರಿ, ಕರೆಯುತ್ತೀರಿ. ನಂತರ ತಮ್ಮೊಂದಿಗೆ ಸೆಕೆಂಡಿನ ಮಿಲನಕ್ಕಾಗಿ ಬಹಳ ಪರಿಶ್ರಮ ಪಡುತ್ತಾರೆ - ನಾವು ಮಿಲನವಾಗಲು ಬಿಡಿ ಎಂದು. ತಮ್ಮೆಲ್ಲರದೂ ಈಗ ಇಂತಹ ಸಾಕ್ಷಾತ್ ಸಾಕ್ಷಾತ್ಕಾರ ಸ್ವರೂಪವಾಗುತ್ತದೆ. ಇಂತಹ ಸಮಯದಲ್ಲಿ ತಮ್ಮ ಶ್ರೇಷ್ಠ ಜೀವನ ಮತ್ತು ಶ್ರೇಷ್ಠ ಪ್ರಾಪ್ತಿಯ ಮಹತ್ವಿಕೆಯನ್ನು ತಾವೆಲ್ಲಾ ಮಕ್ಕಳಿಂದ ಆ ಸಮಯದಲ್ಲಿ ಹೆಚ್ಚಾಗಿ ಗುರುತಿಸುತ್ತಾರೆ. ಈಗ ಹುಡುಗಾಟಿಕೆ ಮತ್ತು ಸಾಧಾರಣತೆಯ ಕಾರಣದಿಂದ ತಮ್ಮ ಶ್ರೇಷ್ಠತೆ ಮತ್ತು ವಿಶೇಷತೆಯನ್ನೂ ಸಹ ಮರೆತು ಹೋಗುತ್ತೀರಿ. ಆದರೆ ಯಾವಾಗ ಅಪ್ರಾಪ್ತಿಯಿರುವ ಆತ್ಮರು ಪ್ರಾಪ್ತಿಯ ಬಾಯಾರಿಕೆಯಿಂದ ತಮ್ಮ ಮುಂದೆ ಬರುತ್ತಾರೆ, ಆಗ ಹೆಚ್ಚಾಗಿ ಅನುಭವ ಮಾಡುವರು - ನಾವು ಯಾರು ಮತ್ತು ಇವರು ಯಾರು! ಈಗ ಬಾಪ್ದಾದಾರವರ ಮೂಲಕ ಸಹಜ ಮತ್ತು ಬಹಳಷ್ಟು ಖಜಾನೆಗಳು ಸಿಗುವುದರಿಂದ ಕೆಲವೊಮ್ಮೆ ಸ್ವಯಂನ ಹಾಗೂ ಖಜಾನೆಗಳ ಮೌಲ್ಯವನ್ನು ಸಾಧಾರಣವೆಂದು ತಿಳಿದುಕೊಂಡು ಬಿಡುತ್ತೀರಿ - ಆದರೆ ಒಂದೊಂದು ಮಹಾವಾಕ್ಯ, ಒಂದೊಂದು ಸೆಕೆಂಡ್, ಒಬ್ಬೊಬ್ಬ ಬ್ರಾಹ್ಮಣ ಜೀವನದ ಶ್ವಾಸವು ಎಷ್ಟು ಶ್ರೇಷ್ಠವಾಗಿದೆ. ಅದನ್ನು ಮುಂದೆ ನಡೆದಂತೆ ಹೆಚ್ಚಾಗಿ ಅನುಭವ ಮಾಡುವಿರಿ. ಬ್ರಾಹ್ಮಣ ಜೀವನದ ಪ್ರತೀ ಸೆಕೆಂಡ್, ಒಂದು ಜನ್ಮವಲ್ಲ ಆದರೆ ಜನ್ಮ-ಜನ್ಮದ ಪ್ರಾಲಬ್ಧವನ್ನು ರೂಪಿಸಿಕೊಳ್ಳುವಂತದ್ದಾಗಿದೆ. ಸೆಕೆಂಡ್ ಹೋಯಿತು ಅರ್ಥಾತ್ ಅನೇಕ ಜನ್ಮಗಳ ಪ್ರಾಲಬ್ಧವು ಹೊರಟು ಹೋಯಿತು. ಇಂತಹ ಅಮೂಲ್ಯ ಜೀವನವಿರುವ ಶ್ರೇಷ್ಠ ಆತ್ಮರಾಗಿದ್ದೀರಿ. ಇಂತಹ ಶ್ರೇಷ್ಠ ಅದೃಷ್ಠವಂತ ವಿಶೇಷ ಆತ್ಮರಾಗಿದ್ದೀರಿ. ಯಾರಾಗಿದ್ದೀರಿ ಎಂದು ತಿಳಿಯಿತೇ? ಇಂತಹ ಶ್ರೇಷ್ಠ ಮಕ್ಕಳೊಂದಿಗೆ ತಂದೆಯು ಮಿಲನವಾಗಲು ಬಂದಿದ್ದಾರೆ. ಡಬಲ್ ವಿದೇಶಿ ಮಕ್ಕಳಿಗೆ ಇದು ಸದಾ ನೆನಪಿರುತ್ತದೆಯಲ್ಲವೆ! ಅಥವಾ ಕೆಲವೊಮ್ಮೆ ಮರೆತು ಹೋಗುತ್ತದೆ, ಕೆಲವೊಮ್ಮೆ ನೆನಪಿರುತ್ತದೆಯೇ? ನೆನಪಿನ ಸ್ವರೂಪರಾಗಿದ್ದೀರಲ್ಲವೆ! ಯಾರು ಸ್ವರೂಪರಾಗಿ ಹೋಗುವರು, ಅವರೆಂದಿಗೂ ಸಹ ಮರೆಯಲು ಸಾಧ್ಯವಿಲ್ಲ. ನೆನಪು ಮಾಡುವವರಲ್ಲ, ನೆನಪಿನ ಸ್ವರೂಪರಾಗಬೇಕು. ಒಳ್ಳೆಯದು.

ಹೀಗೆ ಸದಾ ಮಿಲನವನ್ನಾಚರಿಸುವವರು, ಸದಾ ತಂದೆಯ ಸಂಗದ ರಂಗಿನಲ್ಲಿರುವವರು, ಸದಾ ಸ್ವಯಂನ ಸಮಯದ ಸರ್ವ ಪ್ರಾಪ್ತಿಯ ಮಹತ್ವಿಕೆಯನ್ನು ತಿಳಿದುಕೊಳ್ಳುವವರಿಗೆ, ಸದಾ ಪ್ರತೀ ಹೆಜ್ಜೆಯಲ್ಲಿ ಫಾಲೋ ಫಾದರ್ ಮಾಡುವವರಿಗೆ, ಇಂತಹ ಅಗಲಿ ಮರಳಿ ಸಿಕ್ಕಿರುವ ಸುಪುತ್ರ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಪೋಲ್ಯಾಂಡ್ ಹಾಗೂ ಅನ್ಯ ದೇಶಗಳಿಂದ ಬಂದಿರುವಂತಹ ಹೊಸ-ಹೊಸ ಮಕ್ಕಳೊಂದಿಗೆ:- ಎಲ್ಲರೂ ತಮ್ಮನ್ನು ಭಾಗ್ಯಶಾಲಿಯೆಂದು ತಿಳಿಯುತ್ತೀರಾ, ಯಾವ ಭಾಗ್ಯವಿದೆ? ಈ ಶ್ರೇಷ್ಠ ಭೂಮಿಯಲ್ಲಿ ಬರುವುದೇ ಎಲ್ಲದಕ್ಕಿಂತಲೂ ದೊಡ್ಡ ಭಾಗ್ಯವಾಗಿದೆ. ಈ ಭೂಮಿಯು ಮಹಾನ್ ತೀರ್ಥ ಸ್ಥಾನವಾಗಿದೆ. ಅಂದಮೇಲೆ ಇಲ್ಲಿ ತಲುಪಿರುವುದು ಭಾಗ್ಯವೇ ಆಗಿದೆ. ಆದರೆ ಈಗ ಮುಂದೇನು ಮಾಡುತ್ತೀರಿ? ನೆನಪಿನಲ್ಲಿರುವುದು, ನೆನಪಿನ ಅಭ್ಯಾಸವನ್ನು ಸದಾ ವೃದ್ಧಿ ಮಾಡುತ್ತಿರಬೇಕಾಗಿದೆ. ಯಾರೆಷ್ಟು ಕಲಿಯುತ್ತಾರೆ, ಅವರನ್ನು ಮುಂದುವರೆಸುತ್ತಿರಬೇಕು. ಒಂದುವೇಳೆ ಸದಾ ಸಂಬಂಧದಲ್ಲಿರುತ್ತಾರೆಂದರೆ, ಸಂಬಂಧದ ಮೂಲಕ ಬಹಳ ಪತಿಯನ್ನು ಮಾಡಿಕೊಳ್ಳುತ್ತಿರುತ್ತಾರೆ. ಏಕೆ? ಇಂದು ವಿಶ್ವದಲ್ಲಿ ಎಲ್ಲರಿಗೂ ಖುಷಿ ಹಾಗೂ ಶಾಂತಿಯೆರಡೂ ಬೇಕಾಗಿದೆ. ಅಂದಮೇಲೆ ಸದಾಕಾಲಕ್ಕಾಗಿ ಇವೆರಡನ್ನೂ ಈ ರಾಜಯೋಗದ ಅಭ್ಯಾಸದ ಮೂಲಕ ಪ್ರಾಪ್ತಿಯಾಗಿ ಬಿಡುತ್ತದೆ. ಈ ಪ್ರಾಪ್ತಿ ಮಾಡಿಕೊಳ್ಳಬಯಸುತ್ತೀರೆಂದರೆ ಸಹಜ ಸಾಧನವು ಇದಾಗಿದೆ, ಇದನ್ನು ಬಿಡಬಾರದು. ಜೊತೆಯಲ್ಲಿಟ್ಟುಕೊಳ್ಳಬೇಕು. ಬಹಳ ಖುಷಿಯು ಸಿಗುತ್ತದೆ. ಹೇಗೆ ಖುಷಿಯ ಗಣಿಯೇ ಸಿಕ್ಕಿಬಿಟ್ಟಂತೆ, ಇದರಿಂದ ಅನ್ಯರಿಗೂ ಸತ್ಯ ಖುಷಿಯನ್ನು ಹಂಚಬಹುದು. ಅನ್ಯರಿಗೂ ತಿಳಿಸಿರಿ, ಅನ್ಯರಿಗೂ ಈ ಮಾರ್ಗವನ್ನು ತಿಳಿಸಿರಿ. ವಿಶ್ವದಲ್ಲಿ ಇಷ್ಟೆಲ್ಲಾ ಆತ್ಮರಿದ್ದಾರೆ, ಆದರೆ ಆ ಆತ್ಮರೆಲ್ಲರಿಂದ ತಾವು ಸ್ವಲ್ಪ ಆತ್ಮರೇ ಇಲ್ಲಿ ತಲುಪಿದ್ದೀರಿ. ಇದೂ ಸಹ ಬಹಳ ಅದೃಷ್ಟದ ಸಂಕೇತವಾಗಿದೆ. ಶಾಂತಿ ಕುಂಡದಲ್ಲಿ ತಲುಪಿ ಬಿಟ್ಟಿದ್ದೀರಿ. ಶಾಂತಿಯಂತು ಎಲ್ಲರಿಗೂ ಅವಶ್ಯಕತೆಯಿದೆಯಲ್ಲವೆ. ಸ್ವಯಂ ಸಹ ಶಾಂತಿ ಹಾಗೂ ಸರ್ವರಿಗೂ ಶಾಂತಿಯನ್ನು ಕೊಡುತ್ತಿರಿ, ಮಾನವನ ವಿಶೇಷತೆಯು ಇದೇ ಆಗಿದೆ. ಒಂದುವೇಳೆ ಶಾಂತಿಯಿಲ್ಲವೆಂದರೆ ಮಾನವ ಜೀವನವೇನಾಯಿತು! ಆತ್ಮಿಕ, ಅವಿನಾಶಿ ಶಾಂತಿ ಇರಲಿ. ಸ್ವಯಂನ್ನು ಮತ್ತು ಅನೇಕರಿಗೂ ಸಹ ಸತ್ಯ ಶಾಂತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಮಾರ್ಗವನ್ನು ತಿಳಿಸಬಹುದು. ಪುಣ್ಯಾತ್ಮರಾಗಿ ಬಿಡುತ್ತೀರಿ. ಯಾರೇ ಅಶಾಂತವಾಗಿರುವ ಆತ್ಮರಿಗೆ ಶಾಂತಿಯನ್ನು ಕೊಡುತ್ತೀರೆಂದರೆ ಎಷ್ಟೊಂದು ದೊಡ್ಡ ಪುಣ್ಯವಾಯಿತು. ಸ್ವಯಂ ತಾವು ಮೊದಲು ಸಂಪನ್ನವಾಗಿರಿ. ನಂತರ ಅನ್ಯರ ಬಗ್ಗೆಯೂ ಪುಣ್ಯಾತ್ಮರಾಗಬಹುದು. ಇದರಂತಹ ಪುಣ್ಯವು ಮತ್ತ್ಯಾವುದೂ ಇಲ್ಲ. ದುಃಖಿ ಆತ್ಮರಿಗೆ ಸುಖ-ಶಾಂತಿಯ ಹೊಳಪನ್ನು ತೋರಿಸಬಹುದು. ಎಲ್ಲಿ ಲಗನ್ ಇದೆ ಅಲ್ಲಿ ಹೃದಯದ ಸಂಕಲ್ಪವು ಪೂರ್ಣವಾಗಿ ಬಿಡುತ್ತದೆ. ಈಗ ತಂದೆಯ ಮೂಲಕ ಯಾವ ಸಂದೇಶವು ಸಿಕ್ಕಿದೆ, ಆ ಸಂದೇಶವನ್ನು ತಿಳಿಸುವಂತಹ ಸಂದೇಶಿಯಾಗಿದ್ದು ನಡೆಯುತ್ತಿರಿ.

ಸೇವಾಧಾರಿಗಳೊಂದಿಗೆ:- ಸೇವೆಯ ಲಾಟರಿಯೂ ಸಹ ಸದಾಕಾಲಕ್ಕಾಗಿ ಸಂಪನ್ನರನ್ನಾಗಿ ಮಾಡಿ ಬಿಡುತ್ತದೆ. ಸೇವೆಯಿಂದ ಸದಾಕಾಲಕ್ಕಾಗಿ ಖಜಾನೆಯಿಂದ ಸಂಪನ್ನವಾಗಿ ಬಿಡುತ್ತೀರಿ. ಎಲ್ಲರೂ ನಂಬರ್ವನ್ ಸೇವೆ ಮಾಡಿದಿರಿ. ಎಲ್ಲರೂ ಮೊದಲ ಬಹುಮಾನವನ್ನು ತೆಗೆದುಕೊಳ್ಳುವವರಲ್ಲವೆ! ಮೊದಲ ಬಹುಮಾನವಾಗಿದೆ - ಸಂತುಷ್ಟವಾಗಿರುವುದು ಮತ್ತು ಸರ್ವರನ್ನೂ ಸಂತುಷ್ಟಗೊಳಿಸುವುದು. ಅಂದಾಗ ಏನೆಂದು ತಿಳಿಯುತ್ತೀರಿ, ಎಷ್ಟು ದಿನಗಳು ಸೇವೆ ಮಾಡಿದಿರಿ, ಅಷ್ಟೂ ದಿನಗಳು ಸ್ವಯಂ ಸಹ ಸಂತುಷ್ಟವಾಗಿದ್ದೆವು ಮತ್ತು ಅನ್ಯರನ್ನೂ ಸಂತುಷ್ಟ ಮಾಡಿದೆವು ಅಥವಾ ಯಾರಾದರೂ ಬೇಸರವಾದರೆ? ಸಂತುಷ್ಟವಾಗಿದ್ದಿರಿ ಮತ್ತು ಸಂತುಷ್ಟ ಪಡಿಸಿದಿರೆಂದರೆ ನಂಬರ್ವನ್ ಆಗಿ ಬಿಟ್ಟಿರಿ. ಪ್ರತೀ ಕಾರ್ಯದಲ್ಲಿಯೂ ವಿಜಯಿಯಾಗುವುದು ಅರ್ಥಾತ್ ನಂಬರ್ವನ್ ಆಗುವುದು. ಇದೇ ಸಫಲತೆಯಾಗಿದೆ. ಸ್ವಯಂ ಬೇಸರವಾಗಬಾರದು ಮತ್ತು ಅನ್ಯರನ್ನು ಮಾಡಬಾರದು - ಇದೇ ವಿಜಯವಾಗಿದೆ. ಅಂದಮೇಲೆ ಹೀಗೆ ಸದಾ ವಿಜಯಿ ರತ್ನಗಳು. ವಿಜಯವು ಸಂಗಮಯುಗದ ಅಧಿಕಾರವಾಗಿದೆ. ಏಕೆಂದರೆ ಮಾಸ್ಟರ್ ಸರ್ವಶಕ್ತಿವಂತರಾಗಿದ್ದೀರಲ್ಲವೆ!

ಸತ್ಯ ಸೇವಾಧಾರಿಗಳು, ಯಾರು ಸದಾ ಆತ್ಮಿಕ ದೃಷ್ಟಿಯಿಂದ, ಆತ್ಮಿಕ ವೃತ್ತಿಯಿಂದ ಆತ್ಮಿಕ ಗುಲಾಬಿಯಾಗಿದ್ದು, ಆತ್ಮರನ್ನು ಖುಷಿ ಪಡಿಸುವವರಾಗಿರುತ್ತಾರೆ. ಅಂದಮೇಲೆ ಎಷ್ಟೇ ಸಮಯವಾದರೂ ಸೇವೆ ಮಾಡಿದಿರಿ, ಅಷ್ಟೂ ಸಮಯದಲ್ಲಿ ಆತ್ಮಿಕ ಗುಲಾಬಿಯಾಗಿ ಸೇವೆ ಮಾಡಿದಿರಾ? ಯಾರಾದರೂ ಮಧ್ಯದಲ್ಲಿ ಮುಳ್ಳಂತು ಬರಲಿಲ್ಲವೇ. ಸದಾಕಾಲವೂ ಆತ್ಮಿಕ ಸ್ಮೃತಿಯಲ್ಲಿರಿ ಅರ್ಥಾತ್ ಆತ್ಮಿಕ ಗುಲಾಬಿ ಸ್ಥಿತಿಯಲ್ಲಿರಿ. ಹೇಗೆ ಇಲ್ಲಿ ಈ ಅಭ್ಯಾಸವನ್ನು ಮಾಡಿದಿರಿ, ಹಾಗೆಯೇ ತಮ್ಮ-ತಮ್ಮ ಸ್ಥಾನಗಳಲ್ಲಿಯೂ ಇಂತಹದೇ ಶ್ರೇಷ್ಠ ಸ್ಥಿತಿಯಲ್ಲಿರಿ. ಕೆಳಗೆ ಬರಬಾರದು. ಏನೇ ಆಗಲಿ, ಎಂತಹ ವಾಯು ಮಂಡಲವೇ ಇರಲಿ ಆದರೆ ಹೇಗೆ ಗುಲಾಬಿಯ ಹೂವು, ಮುಳ್ಳಗಳ ಮಧ್ಯದಲ್ಲಿದ್ದರೂ ಸ್ವಯಂ ಸದಾ ಸುಗಂಧವನ್ನು ಕೊಡುತ್ತದೆ, ಮುಳ್ಳಿನ ಜೊತೆಗೆ ಸ್ವಯಂ ಮುಳ್ಳಾಗುವುದಿಲ್ಲ. ಇದೇ ರೀತಿ ಆತ್ಮಿಕ ಗುಲಾಬಿಯು ಸದಾ ವಾತಾವರಣದ ಪ್ರಭಾವದಿಂದ ಭಿನ್ನ ಹಾಗೂ ಪ್ರಿಯ. ಅಲ್ಲಿ ಹೋಗಿ ಇದನ್ನು ಬರೆಯಬಾರದು - ಮಾಯೆಯು ಬಂದು ಬಿಟ್ಟಿತು ಏನು ಮಾಡಲಿ. ಸದಾ ಮಾಯಾಜೀತರಾಗಿ ಹೋಗುತ್ತಿದ್ದೀರಲ್ಲವೆ. ಮಾಯೆಯು ಬರಲು ಅನುಮತಿ ಕೊಡಬೇಡಿ. ಬಾಗಿಲು ಸದಾಕಾಲಕ್ಕಾಗಿ ಬಂದ್ ಮಾಡಿ ಬಿಡಿ. ಡಬಲ್ ಲಾಕ್ ಆಗಿದೆ - ನೆನಪು ಮತ್ತು ಸೇವೆ, ಎಲ್ಲಿ ಡಬಲ್ ಲಾಕ್ ಇದೆ ಅಲ್ಲಿ ಮಾಯೆಯು ಬರಲು ಸಾಧ್ಯವಿಲ್ಲ.

ದಾದೀಜಿ ಹಾಗೂ ಅನ್ಯ ಹಿರಿಯ ಸಹೋದರಿಯರೊಂದಿಗೆ:- ಹೇಗೆ ತಂದೆಯು ಸದಾ ಮಕ್ಕಳ ಉಮ್ಮಂಗ-ಉತ್ಸಾಹವನ್ನು ಹೆಚ್ಚಿಸುತ್ತಿರುತ್ತಾರೆ, ಹಾಗೆಯೇ ಫಾಲೋ ಫಾದರ್ ಮಾಡುವ ಮಕ್ಕಳಿದ್ದಾರೆ. ವಿಶೇಷವಾಗಿ ಯಾರೆಲ್ಲರೂ ದೇಶ-ವಿದೇಶದಿಂದ ಟೀಚರ್ಸ್ ಬಂದಿದ್ದಾರೆ, ಎಲ್ಲರಿಗೂ ಬಾಪ್ದಾದಾರವರು ಸೇವೆಯ ಶುಭಾಷಯಗಳನ್ನು ಕೊಡುತ್ತಾರೆ. ಪ್ರತಿಯೊಬ್ಬರೂ ತಮ್ಮನ್ನು ಹೆಸರಿನ ಸಹಿತವಾಗಿ ತಂದೆಯ ನೆನಪು ಮತ್ತು ಪ್ರೀತಿಯ ಅಧಿಕಾರಿಯೆಂದು ತಿಳಿದುಕೊಂಡು, ತಮ್ಮನ್ನು ತಾವೇ ಪ್ರೀತಿ ಮಾಡಿಕೊಂಡು ಬಿಡಬೇಕು. ಒಬ್ಬೊಬ್ಬರ ಗುಣ ಗಾಯನ ಮಾಡುತ್ತೀರೆಂದರೆ ಎಷ್ಟು ಮಂದಿಯ ಗುಣ ಗಾನ ಮಾಡುವುದು! ಎಲ್ಲರೂ ಬಹಳ ಪರಿಶ್ರಮ ಪಟ್ಟಿದ್ದಾರೆ. ಹಿಂದಿನ ವರ್ಷದಿಂದ ಈಗ ಉನ್ನತಿಯನ್ನು ಪ್ರಾಪ್ತಿ ಮಾಡಿಕೊಂಡಿದ್ದೀರಿ, ಇನ್ನು ಮುಂದೆಯೂ ಸಹ ಇದಕ್ಕಿಂತಲೂ ಹೆಚ್ಚಾಗಿ ಸ್ವಯಂ ಮತ್ತು ಸೇವೆಯಿಂದ ಉನ್ನತಿಯನ್ನು ಪಡೆಯುತ್ತಿರುತ್ತೀರಿ. ತಿಳಿಯಿತೆ - ನಮಗಂತು ಬಾಪ್ದಾದಾರವರು ಹೇಳಲಿಲ್ಲವೆಂದು ತಿಳಿಯಬಾರದು, ಎಲ್ಲರಿಗೂ ಹೇಳುತ್ತಿದ್ದಾರೆ. ಭಕ್ತರು ತಂದೆಯ ಹೆಸರನ್ನು ತೆಗೆದುಕೊಳ್ಳುವುದಕ್ಕಾಗಿ ಪ್ರಯತ್ನ ಪಡುತ್ತಿದ್ದಾರೆ, ಯೋಚಿಸುತ್ತಾರೆ - ತಂದೆಯ ಹೆಸರು ಮುಖದಲ್ಲಿರಲಿ ಆದರೆ ತಂದೆಯ ಮುಖದಲ್ಲಿ ಯಾರ ಹೆಸರಿರುತ್ತದೆ? ತಾವು ಮಕ್ಕಳ ಹೆಸರು ತಂದೆಯ ಮುಖದಲ್ಲಿದೆ. ತಿಳಿಯಿತೆ.

ಡಬಲ್ ವಿದೇಶಿ ಸಹೋದರ-ಸಹೋದರಿಯರ ಪ್ರಶ್ನೆ- ಬಾಪ್ದಾದಾರವರ ಉತ್ತರ

ಪ್ರಶ್ನೆ:-
ಈ ವರ್ಷದ ಸೇವೆಗಾಗಿ ಹೊಸ ಯೋಜನೆಯೇನಾಗಿದೆ?

ಉತ್ತರ:-
ಸಮಯವನ್ನು ಸಮೀಪಕ್ಕೆ ತರುವುದಕ್ಕಾಗಿ ಒಂದು - ವೃತ್ತಿಯಿಂದ ವಾಯುಮಂಡಲವನ್ನು ಶಕ್ತಿಶಾಲಿಯನ್ನಾಗಿ ಮಾಡುವ ಸೇವೆಯನ್ನು ಮಾಡಬೇಕಾಗಿದೆ. ಇದಕ್ಕಾಗಿ ಸ್ವಯಂನ ವೃತ್ತಿಯ ಮೇಲೆ ವಿಶೇಷವಾಗಿ ಗಮನವನ್ನು ಕೊಡಬೇಕಾಗಿದೆ ಮತ್ತು ಇನ್ನೊಂದು - ಅನ್ಯರ ಸೇವೆಯನ್ನು ಮಾಡುವುದಕ್ಕಾಗಿ ವಿಶೇಷವಾಗಿ ಇಂತಹ ಆತ್ಮರು ಬರಲಿ, ಅವರು ತಿಳಿಯಲಿ - ಸತ್ಯವಾಗಿಯೂ ಶಾಂತಿಯು ವಿಧಿಯು ಇಲ್ಲಿಂದಲೇ ಸಿಗಲು ಸಾಧ್ಯವಿದೆ. ಈ ಧ್ವನಿಯು ಈ ವರ್ಷದಲ್ಲಾಗಲಿ - ಒಂದುವೇಳೆ ಶಾಂತಿಯಾಗುತ್ತದೆಯೆಂದರೆ ಇದೇ ವಿಧಿಯಿಂದ ಆಗುತ್ತದೆ. ಇದೊಂದೇ ವಿಧಿಯಿದೆ, ಇದರ ಅವಶ್ಯಕತೆಯು ವಿಶ್ವಕ್ಕಿದೆ, ಅದು ಈ ವಿಧಿಯಿಲ್ಲದೆ ಆಗುವುದಿಲ್ಲ. ಈ ವಾತಾವರಣವು ನಾಲ್ಕೂ ಕಡೆಯಲ್ಲಿ ಒಟ್ಟಿಗೆ ಆಗಬೇಕಾಗಿದೆ. ಭಾರತದಲ್ಲಿ ಭಲೆ ವಿದೇಶದಲ್ಲಿ, ಶಾಂತಿಯ ಹೊಳಪು ಪ್ರಸಿದ್ಧ ರೂಪದಲ್ಲಾಗಬೇಕು. ನಾಲ್ಕೂ ಕಡೆಯಿಂದ ಎಲ್ಲರಿಗೂ ಇದು ಅರ್ಥವಾಗಲಿ, ಆಕರ್ಷಣೆಯಾಗಲಿ- ಯಥಾರ್ಥವಾದ ಸ್ಥಾನವಿದೆಯೆಂದರೆ ಇದೇ ಆಗಿದೆ. ಹೇಗೆ ಸರ್ಕಾರದ ಕಡೆಯಿಂದ ಯು.ಎನ್.ಓ., ಆಗಿದೆ, ಅಂದಾಗ ಏನೆಲ್ಲವೂ ಆಗುತ್ತದೆ, ಅದರಿಂದ ಎಲ್ಲರ ಗಮನವು ಅದೇ ಕಡೆಗೆ ಹೋಗುತ್ತದೆ. ಹೀಗೆ ಯಾವಾಗ ಯಾವುದೇ ಅಶಾಂತಿಯ ವಾತಾವರಣವಾಗುತ್ತದೆಯೆಂದರೆ, ಎಲ್ಲರ ಗಮನವು ಶಾಂತಿಯ ಸಂದೇಶವನ್ನು ಕೊಡುವವರು ಈ ಆತ್ಮರಾಗಿದ್ದಾರೆ ಎಂದು ಇದರ ಕಡೆಗೆ ಹೋಗಲಿ. ಅನುಭವ ಮಾಡಲಿ - ಅಶಾಂತಿಯಿಂದ ಪಾರಾಗಲು ಇದೊಂದೇ ಸ್ಥಾನವಿದೆ, ಇಲ್ಲಿಂದ ಪಡೆಯಬಹುದು. ಈ ವರ್ಷದಲ್ಲಿ ಇಂತಹ ವಾಯುಮಂಡಲವಾಗಬೇಕು. ಜ್ಞಾನವು ಚೆನ್ನಾಗಿದೆ, ಜೀವನ ಚೆನ್ನಾಗಿದೆ, ರಾಜಯೋಗವು ಚೆನ್ನಾಗಿದೆ, ಇದನ್ನಂತು ಎಲ್ಲರೂ ಹೇಳುತ್ತಾರೆ ಆದರೆ ಸತ್ಯವಾದ ಪ್ರಾಪ್ತಿಯು ಇಲ್ಲಿಂದಲೇ ಆಗುತ್ತದೆ, ವಿಶ್ವ ಕಲ್ಯಾಣದ ಕಾರ್ಯವು ಇದೇ ಸ್ಥಾನ ಹಾಗೂ ವಿಧಿಯಿಂದ ಆಗುತ್ತದೆ ಎನ್ನುವ ಈ ಧ್ವನಿಯು ಮೊಳಗಲಿ. ತಿಳಿಯಿತೆ - ಇದಕ್ಕಾಗಿ ವಿಶೇಷವಾಗಿ ಶಾಂತಿಯ ಜಾಹಿರಾತನ್ನು ಕೊಡಿ, ಯಾರಿಗೇ ಶಾಂತಿ ಬೇಕೆಂದರೆ ಇಲ್ಲಿಂದ ವಿಧಿಯು ಸಿಗಲು ಸಾಧ್ಯವಿದೆ. ಶಾಂತಿ ಸಪ್ತಾಹವನ್ನಿಡಿ, ಶಾಂತಿಯ ಸಮಾಗಮವನ್ನಿಡಿ, ಶಾಂತಿಯ ಅನುಭೂತಿಯ ಶಿಬಿರವನ್ನಿಡಿ, ಹೀಗೆ ಶಾಂತಿಯ ಪ್ರಕಂಪನಗಳನ್ನು ಹರಡಿಸಿರಿ.

ಸರ್ವೀಸಿನಲ್ಲಿ ಹೇಗೆ ವಿದ್ಯಾರ್ಥಿಯನ್ನು ತಯಾರು ಮಾಡುತ್ತೀರಿ, ಅದಂತು ಬಹಳ ಚೆನ್ನಾಗಿದೆ, ಅದಂತು ಖಂಡಿತವಾಗಿಯೂ ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಲೇಬೇಕು. ಆದರೆ ಈಗ ಪ್ರತಿಯೊಂದು ಪ್ರಕಾರದ ಜನರು ಹೇಗೆಂದರೆ ಕಪ್ಪು-ಬಿಳುಪು, ಭಿನ್ನ-ಭಿನ್ನ ಧರ್ಮದ ಆತ್ಮರಿದ್ದಾರೆಯೋ ಹಾಗೆಯೇ ಭಿನ್ನ-ಭಿನ್ನ ಕರ್ತವ್ಯವಿರುವವರು ಪ್ರತಿಯೊಂದು ಸ್ಥಾನದಲ್ಲಿ ಇರಬೇಕು. ಯಾರೆಲ್ಲಿಗಾದರೂ ಹೋಗುತ್ತಾರೆಂದರೆ ಪ್ರತಿಯೊಂದು ಕರ್ತವ್ಯವಿರುವವರು, ತಮ್ಮ ರೀತಿಯಿಂದ ಅವರಿಗೆ ಅನುಭವವನ್ನು ತಿಳಿಸಲಿ. ಹೇಗೆ ಇಲ್ಲಿ ವರ್ಕ್ಶಾಪ್ನ್ನು ಇಡಲಾಗುತ್ತದೆ - ಕೆಲವೊಮ್ಮೆ ಡಾಕ್ಟರುಗಳ, ಕೆಲವೊಮ್ಮೆ ವಕೀಲರದು, ಭಿನ್ನ-ಭಿನ್ನ ಕರ್ತವ್ಯವಿರುವವರು ಒಂದೇ ಶಾಂತಿಯ ಮಾತನ್ನು, ತಮ್ಮ ಕರ್ತವ್ಯದ ಆಧಾರದಿಂದ ಮಾತಾನಾಡುತ್ತಾರೆಂದರೆ ಇಷ್ಟವಾಗುತ್ತದೆ. ಹೀಗೆ ಯಾರೇ ಸೇವಾಕೇಂದ್ರದಲ್ಲಿ ಬರುತ್ತಾರೆಂದರೆ, ಪ್ರತಿಯೊಂದು ಕರ್ತವ್ಯವಿರುವವರು ತಮ್ಮ ಶಾಂತಿಯ ಅನುಭವವನ್ನು ತಿಳಿಸಲಿ, ಆಗ ಇದರ ಪ್ರಭಾವ ಬೀರುತ್ತದೆ. ಎಲ್ಲಾ ಕರ್ತವ್ಯವಿರುವವರಿಗಾಗಿ ಇದು ಸಹಜ ವಿಧಿಯಾಗಿದೆ, ಇದು ಅನುಭವವಾಗಲಿ. ಹೇಗೆ ಸ್ವಲ್ಪ ಸಮಯದಲ್ಲಿ ಈ ಜಾಹೀರಾತಾಗಿ ಬಿಟ್ಟಿತು – ಎಲ್ಲಾ ಧರ್ಮದವರಿಗಾಗಿ ಇದೊಂದೇ ವಿಧಿಯಾಗಿದೆ, ಇದು ಪ್ರಸಿದ್ಧವಾಗಲಿ. ಇದೇ ರೀತಿಯಿಂದ ಈಗ ಧ್ವನಿಯನ್ನು ಹರಡಿಸಿರಿ. ಯಾರು ಸಂಪರ್ಕದಲ್ಲಿ ಬರುತ್ತಾರೆ ಅಥವಾ ವಿದ್ಯಾರ್ಥಿಯಿದ್ದಾರೆ, ಅವರವರಿಗಂತು ಈ ಧ್ವನಿ ಮೊಳಗುತ್ತದೆ ಆದರೆ ಈಗ ಇನ್ನೂ ಸ್ವಲ್ಪ ನಾಲ್ಕೂ ಕಡೆಯಲ್ಲಿ ಹರಡಲಿ - ಇದಕ್ಕಾಗಿ ಈಗ ಇನ್ನೂ ಗಮನವಿರಲಿ. ಬ್ರಾಹ್ಮಣರೂ ಸಹ ಈಗ ಅಲ್ಪ ಸ್ವಲ್ಪ ಆಗಿದ್ದಾರೆ. ನಂಬರ್ವಾರ್ ಬ್ರಾಹ್ಮಣರಾಗುವ ಗತಿಯೇನಿದೆ, ಅದನ್ನು ಫಾಸ್ಟ್ ಎಂದು ಹೇಳುವುದಿಲ್ಲ ಅಲ್ಲವೆ. ಈಗಂತು ಕೊನೆ ಪಕ್ಷದಲ್ಲಿ 9 ಲಕ್ಷವಂತು ಆಗಬೇಕು. ಕೊನೆ ಪಕ್ಷ ಸತ್ಯಯುಗದಲ್ಲಿ ಆದಿಯಲ್ಲಿ 9 ಲಕ್ಷದವರ ಮೇಲಂತು ರಾಜ್ಯಾಡಳಿತ ಮಾಡುತ್ತೀರಲ್ಲವೆ! ಅದರಲ್ಲಿ ಪ್ರಜೆಗಳೂ ಇರುವರು ಆದರೆ ಸಂಪರ್ಕದಲ್ಲಿ ಒಳ್ಳೆಯವರೇ ಬರುತ್ತಾರೆಂದರೆ ಪ್ರಜೆಗಳಾಗುವರು. ಅಂದಾಗ ಈ ಲೆಕ್ಕದಿಂದ ಗತಿಯು ಹೇಗಾಗಬೇಕು! ಈಗಂತು ಸಂಖ್ಯೆಯು ಬಹಳ ಕಡಿಮೆಯಿದೆ. ಈಗ ಒಟ್ಟು ವಿದೇಶದ ಸಂಖ್ಯೆಯು ಎಷ್ಟಾಗಬೇಕು? ಕೊನೆ ಪಕ್ಷದಲ್ಲಿ ವಿದೇಶದ ಸಂಖ್ಯೆಯು 2-3 ಲಕ್ಷವಂತು ಆಗಬೇಕು. ಗತಿಯು ವೇಗವಾಗುತ್ತದೆ - ಜನರಲ್ ವಾತಾವರಣದಿಂದ. ಒಳ್ಳೆಯದು.

ಪ್ರಶ್ನೆ:-
ಇಂತಹ ಶಕ್ತಿಶಾಲಿ ವಾತಾವರಣವನ್ನಾಗಿ ಮಾಡುವ ಯುಕ್ತಿಯೇನಾಗಿದೆ?

ಉತ್ತರ:-
ಸ್ವಯಂ ಶಕ್ತಿಶಾಲಿಯಾಗಿರಿ. ಅದಕ್ಕಾಗಿ ಅಮೃತವೇಳೆಯಿಂದಲೂ ಪ್ರತೀ ಕರ್ಮದಲ್ಲಿಯೂ ತಮ್ಮ ಸ್ಥಿತಿಯು ಶಕ್ತಿಶಾಲಿಯಾಗಿ ಇದೆಯೇ ಅಥವಾ ಇಲ್ಲವೆ, ಅದರ ಪರಿಶೀಲನೆಯ ಆಧಾರದ ಬಗ್ಗೆ ಇನ್ನೂ ಸ್ವಲ್ಪ ಹೆಚ್ಚಿನ ಗಮನವನ್ನು ಕೊಡಿರಿ. ಅನ್ಯರ ಸೇವೆಯಲ್ಲಿ ಅಥವಾ ಸೇವೆಯ ಯೋಜನೆಗಳಲ್ಲಿ ಬ್ಯುಸಿಯಾಗಿರುವುದರಿಂದ, ತಮ್ಮ ಸ್ಥಿತಿಯಲ್ಲಿ ಕೆಲವೊಂದು ಕಡೆ ಹಗುರತೆ ಬಂದು ಬಿಡುತ್ತದೆ. ಆದ್ದರಿಂದ ಈ ವಾತಾವರಣವು ಶಕ್ತಿಶಾಲಿಯಾಗುವುದಿಲ್ಲ. ಸೇವೆಯಾಗುವುದು ಆದರೆ ವಾತಾವರಣವು ಶಕ್ತಿಶಾಲಿಯಾಗುವುದಿಲ್ಲ. ಇದಕ್ಕಾಗಿ ತಮ್ಮ ಮೇಲೆ ವಿಶೇಷವಾಗಿ ಗಮನವನ್ನಿಡಬೇಕಾಗುತ್ತದೆ. ಕರ್ಮ ಮತ್ತು ಯೋಗ, ಕರ್ಮದ ಜೊತೆಗೆ ಶಕ್ತಿಶಾಲಿ ಸ್ಥಿತಿ, ಇದರ ಬ್ಯಾಲೆನ್ಸ್ ಸ್ವಲ್ಪ ಕಡಿಮೆಯಿದೆ. ಕೇವಲ ಸೇವೆಯಲ್ಲಿಯೇ ಬ್ಯುಸಿಯಾಗಿರುವ ಕಾರಣದಿಂದ, ಸ್ವಸ್ಥಿತಿಯು ಶಕ್ತಿಶಾಲಿಯಾಗಿರುವುದಿಲ್ಲ. ಎಷ್ಟು ಸಮಯವನ್ನು ಸೇವೆಯಲ್ಲಿ ಕೊಡುತ್ತೀರಿ, ಎಷ್ಟು ತಮ್ಮ ತನು-ಮನ-ಧನವನ್ನು ಸೇವೆಯಲ್ಲಿ ತೊಡಗಿಸುತ್ತೀರಿ, ಅದರದನುಸಾರವಾಗಿ ಒಂದಕ್ಕೆ ಲಕ್ಷ ಪಟ್ಟು ಸಿಗಬೇಕಾಗಿರುವುದು ಸಿಗುವುದಿಲ್ಲ. ಇದಕ್ಕೆ ಕಾರಣವಾಗಿದೆ - ಕರ್ಮ ಮತ್ತು ಯೋಗದ ಬ್ಯಾಲೆನ್ಸ್ ಇಲ್ಲದಿರುವುದು. ಹೇಗೆ ಸೇವೆಯ ಯೋಜನೆಗಳನ್ನು ಮಾಡುತ್ತೀರಿ, ಪತ್ರಿಕೆಗಳನ್ನು ಮುದ್ರಣ ಮಾಡಿಸುತ್ತೀರಿ, ಟಿ.ವಿ., ರೇಡಿಯೋಗಳಲ್ಲಿ ಮಾಡಬೇಕಾಗಿದೆ. ಹೇಗೆ ಆ ಹೊರಗಿನ ಸಾಧನಗಳನ್ನು ತಯಾರು ಮಾಡುತ್ತೀರಿ, ಹಾಗೆಯೇ ಮೊದಲು ತಮ್ಮ ಮನಸ್ಸಾ ಶಕ್ತಿಶಾಲಿಯನ್ನಾಗಿ ಮಾಡುವ ಸಾಧನವು ವಿಶೇಷವಾಗಿರಬೇಕಾಗಿದೆ. ಇದರ ಗಮನವು ಕಡಿಮೆಯಿದೆ. ಮತ್ತೆ ಹೇಳಿ ಬಿಡುತ್ತೀರಿ – ಬ್ಯುಸಿಯಾಗಿದ್ದೆವು. ಆದ್ದರಿಂದ ಸ್ವಲ್ಪ ಮಿಸ್ ಆಗಿಬಿಟ್ಟಿತು. ನಂತರ ಡಬಲ್ ಲಾಭವಾಗಲು ಸಾಧ್ಯವಿಲ್ಲ. ಒಳ್ಳೆಯದು.

ವರದಾನ:
ಸೇವೆಯ ಮೂಲಕ ಪ್ರಾಪ್ತಿಯಾದ ಮಾನ್ಯತೆ-ಪದವಿಯ ತ್ಯಾಗವನ್ನು ಮಾಡಿ ಅವಿನಾಶಿ ಭಾಗ್ಯವನ್ನು ರೂಪಿಸಿಕೊಳ್ಳುವಂತಹ ಮಹಾತ್ಯಾಗಿ ಭವ.

ತಾವು ಮಕ್ಕಳು ಶ್ರೇಷ್ಠ ಕರ್ಮವನ್ನೇನು ಮಾಡುತ್ತೀರಿ, ಈ ಶ್ರೇಷ್ಠ ಕರ್ಮ ಅಥವಾ ಸೇವೆಯ ಪ್ರತ್ಯಕ್ಷ ಫಲವಾಗಿದೆ - ಸರ್ವರ ಮೂಲಕ ಮಹಿಮೆಯಾಗುವುದು. ಸೇವಾಧಾರಿಗೆ ಶ್ರೇಷ್ಠ ಗಾಯನದ ಸ್ಥಾನವು ಸಿಗುತ್ತದೆ. ಮಾನ್ಯತೆ, ಪದವಿಯ ಸ್ಥಾನವು ಸಿಗುತ್ತದೆ, ಈ ಸ್ಥಿತಿಯಂತು ಅವಶ್ಯವಾಗಿ ಪ್ರಾಪ್ತಿಯಾಗುತ್ತದೆ. ಆದರೆ ಆ ಸಿದ್ಧಿಗಳು ಮಾರ್ಗದಲ್ಲಿನ ಸ್ಥಳಗಳಾಗಿವೆ, ಇದೇನು ಅಂತಿಮ ಗುರಿಯಲ್ಲ. ಆದ್ದರಿಂದ ಇದರ ತ್ಯಾಗಿಗಳು, ಭಾಗ್ಯವಂತರಾಗಿರಿ. ಇವರಿಗೇ ಮಹಾತ್ಯಾಗಿಯಾಗುವುದು ಎಂದು ಹೇಳಲಾಗುತ್ತದೆ. ಗುಪ್ತ ಮಹಾದಾನಿಯ ವಿಶೇಷತೆಯೇ ತ್ಯಾಗದಲ್ಲಿಯೂ ತ್ಯಾಗಿಯಾಗುವುದು.

ಸ್ಲೋಗನ್:
ಫರಿಶ್ತೆಯಾಗಬೇಕೆಂದರೆ ಸಾಕ್ಷಿಯಾಗಿದ್ದು ಪ್ರತಿಯೊಂದು ಆತ್ಮನ ಪಾತ್ರವನ್ನು ನೋಡಿರಿ ಮತ್ತು ಸಕಾಶವನ್ನು ಕೊಡಿ.