19.12.18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ದಾನವನ್ನು ಸದಾ ಯೋಗ್ಯರಿಗೆ ಕೊಡಬೇಕು ಸಮಯವನ್ನು ವ್ಯರ್ಥವಾಗಿ ಕಳೆಯಬಾರದು, ಕೇಳುವ ಸಮಯದಲ್ಲಿ ಅವರ
ವೃತ್ತಿಯು ಎಲ್ಲಿ ಹೋಗುತ್ತದೆ ಎಂದು ಪ್ರತಿಯೊಬ್ಬರ ನಾಡಿಯನ್ನು ನೋಡಬೇಕು.”
ಪ್ರಶ್ನೆ:
ಪಾವನ ಜಗತ್ತಿಗೆ
ಹೋಗಲು ತಾವು ಮಕ್ಕಳು ಬಹಳ ದೊಡ್ಡ ಪಥ್ಯೆಯನ್ನಿಡುತ್ತೀರಿ, ನಿಮ್ಮ ಪಥ್ಯೆ (ವ್ರತ) ಯಾವುದಾಗಿದೆ?
ಉತ್ತರ:
ಗೃಹಸ್ಥ
ವ್ಯವಹಾರದಲ್ಲಿ ಕಮಲಪುಷ್ಫ ಸಮಾನರಾಗಿರುವುದೇ ಎಲ್ಲದಕ್ಕಿಂತ ದೊಡ್ಡ ಪಥ್ಯೆವಾಗಿದೆ. ಪೂರ್ಣ ಹಳೆಯ
ಜಗತ್ತಿನ ತ್ಯಾಗ ನಮ್ಮದಾಗಿದೆ. ಒಂದು ನೇತ್ರದಲ್ಲಿ ಮಧುರ ಮನೆ, ಇನ್ನೊಂದು ನೇತ್ರದಲ್ಲಿ ಮಧುರ
ರಾಜ್ಯವಿದೆ - ಈ ಹಳೆಯ ಜಗತ್ತನ್ನು ನೋಡುತ್ತಿದ್ದರೂ ಸಹ ನೋಡದಂತಿರಬೇಕು - ಇದು ಬಹಳ ದೊಡ್ಡ
ಪಥ್ಯೆಯಾಗಿದೆ. ಈ ಪಥ್ಯೆಯಿಂದಲೇ ಪಾವನ ಜಗತ್ತಿಗೆ ಹೋಗುತ್ತೀರಿ.
ಗೀತೆ:
ಧೈರ್ಯ ತಾಳು
ಮಾನವನೇ
ಓಂ ಶಾಂತಿ.
ಗೀತೆಯನ್ನು ಕೇಳುತ್ತಿದ್ದಂತೆಯೇ ಮಕ್ಕಳಿಗೆ ಖುಷಿಯ ನಶೆಯೇರಬೇಕು. ಏಕೆಂದರೆ ಜಗತ್ತಿನಲ್ಲಿ
ದುಃಖವಿದ್ದೇ ಇದೆ, ಮನುಷ್ಯರೆಲ್ಲರೂ ನಾಸ್ತಿಕರು ಅರ್ಥಾತ್ ತಂದೆಯನ್ನು ತಿಳಿದುಕೊಂಡಿಲ್ಲ. ಈಗ ತಾವು
ನಾಸ್ತಿಕರಿಂದ ಆಸ್ತಿಕರಾಗುತ್ತಿದ್ದೀರಿ. ನಮ್ಮ ಸುಖದ ದಿನಗಳು ಬರುತ್ತಿವೆ ಎಂಬುದು ಈಗ ತಾವು
ಮಕ್ಕಳು ತಿಳಿದಿದ್ದೀರಿ. ಎಲ್ಲಿಗೆ ಹೋದರೂ ತಾವು ಮೊಟ್ಟ ಮೊದಲು ಬ್ರಹ್ಮಾಕುಮಾರ-ಕುಮಾರಿ ಎಂದು ಏಕೆ
ಹೇಳಲಾಗುತ್ತದೆ ಎಂಬ ತಮ್ಮ ಪರಿಚಯವನ್ನು ಕೊಡಿ. ಬ್ರಹ್ಮಾ ಪ್ರಜಾಪಿತನಾಗಿದ್ದಾರೆ, ಶಿವನ
ಮಗನಾಗಿದ್ದಾರೆ. ಸರ್ವ ಶ್ರೇಷ್ಠನೆಂದು ಆ ನಿರಾಕಾರನಿಗೆ ಹೇಳಲಾಗುತ್ತದೆ ಅಂದಾಗ
ಬ್ರಹ್ಮಾ-ವಿಷ್ಣು-ಶಂಕರರು ಅವರ ಮಕ್ಕಳಾಗಿದ್ದಾರೆ. ವಿಷ್ಣು ಹಾಗೂ ಶಂಕರನಿಗೆ ಎಂದಿಗೂ
ಪ್ರಜಾಪಿತನೆಂದು ಹೇಳುವುದಿಲ್ಲ. ಪ್ರಜಾಪಿತ ಬ್ರಹ್ಮಾ ಇಲ್ಲಿದ್ದಾರೆ ಎಂಬ ಮಾತನ್ನು ಚೆನ್ನಾಗಿ
ಧಾರಣೆ ಮಾಡಿ. ಲಕ್ಷ್ಮೀ-ನಾರಾಯಣ, ರಾಧಾ-ಕೃಷ್ಣರಿಗೆ ಪ್ರಜಾಪಿತನೆಂದು ಹೇಳುವುದಿಲ್ಲ. ಪ್ರಜಾಪಿತ
ಬ್ರಹ್ಮಾ ಎಂಬ ಹೆಸರು ಪ್ರಸಿದ್ಧವಾಗಿದೆ. ಇವರು ಪ್ರಜಾಪಿತ ಸಾಕಾರದಲ್ಲಿದ್ದಾರೆ. ಸ್ವರ್ಗದ
ರಚಯಿತನಂತೂ ಪರಮಪಿತ ಪರಮಾತ್ಮ ಶಿವನಾಗಿದ್ದಾರೆ. ಬ್ರಹ್ಮಾ ಸ್ವರ್ಗದ ರಚಯಿತನಲ್ಲ. ನಿರಾಕಾರ
ಪರಮಾತ್ಮನೇ ಬಂದು ಪ್ರಜಾಪಿತ ಬ್ರಹ್ಮಾರವರ ಮೂಲಕ ಸ್ವರ್ಗವನ್ನು ರಚಿಸುತ್ತಾರೆ. ನಾವು ಅವರ ಅನೇಕ
ಮಕ್ಕಳಿದ್ದೇವೆ. ಆತ್ಮರು ಪರಮಪಿತ ಶಿವನ ಸಂತಾನರಾಗಿದ್ದಾರೆ ಅಂದಾಗ ತಿಳಿಸಲು ಒಳ್ಳೆಯ ವಿಧಿಯಿರಬೇಕು.
ನಮಗೆ ಅವರು ರಾಜಯೋಗವನ್ನು ಕಲಿಸುತ್ತಾರೆ ಎಂದು ಹೇಳಿ. ಬ್ರಹ್ಮಾರವರ ಮೂಲಕ ಸೃಷ್ಟಿಯ
ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಆಗ ಮೊದಲು ಇದನ್ನು ಬ್ರಹ್ಮಾರವರು
ಕೇಳಿಸಿಕೊಳ್ಳುತ್ತಾರೆ. ಜಗದಂಬಾರವರೂ ಸಹ ಕೇಳಿಸಿಕೊಳ್ಳುತ್ತಾರೆ. ನಾವೆಲ್ಲರೂ ಬಿ.ಕೆ.ಗಳಾಗಿದ್ದೇವೆ.
ಕನ್ಯೆಯು 21 ಕುಲದ ಉದ್ಧಾರ ಮಾಡುತ್ತಾರೆ. 21 ಜನ್ಮ ಸುಖ ಕೊಡುತ್ತಾರೆ. ನಾವು ಪರಮಪಿತ
ಪರಮಾತ್ಮನಿಂದ 21 ಜನ್ಮ ಸತ್ಯ-ತ್ರೇತಾದಲ್ಲಿ ಸುಖ ಪಡೆಯಲು ಆಸ್ತಿ ಪಡೆಯುತ್ತೇವೆ. ಅವಶ್ಯವಾಗಿ
ಸತ್ಯ-ತ್ರೇತಾಯುಗದಲ್ಲಿ ಭಾರತವು ಸುಖಿಯಾಗಿತ್ತು, ಪವಿತ್ರವಾಗಿತ್ತು ಅಂದಮೇಲೆ ಅವರು (ಶಿವ ತಂದೆ)
ನಮ್ಮ ತಂದೆಯಾಗಿದ್ದಾರೆ, ಇವರು (ಬ್ರಹ್ಮಾ) ನಮ್ಮ ಅಣ್ಣನಾಗಿದ್ದಾರೆ. ಈಗ ಯಾರ ಬಳಿ ಇಷ್ಟೊಂದು
ಮಕ್ಕಳಿದ್ದಾರೆಯೋ ಅವರಿಗಂತೂ ಯಾವುದೇ ಚಿಂತೆಯಿಲ್ಲ, ಅವರಿಗೆ ಎಷ್ಟೊಂದು ಮಕ್ಕಳಿದ್ದಾರೆ! ನಮಗೆ
ಬ್ರಹ್ಮಾರವರ ಮೂಲಕ ಶಿವ ತಂದೆಯು ರಾಜಯೋಗವನ್ನು ಕಲಿಸುತ್ತಾರೆ. ಆ ಬೇಹದ್ದಿನ ತಂದೆಯಿಂದ ನಮಗೆ
ಬೇಹದ್ದಿನ ಆಸ್ತಿಯು ಸಿಗುತ್ತದೆ. ಪೂರ್ಣ ಜಗತ್ತು ಪತಿತವಾಗಿದೆ, ಅದನ್ನು ಒಬ್ಬ ತಂದೆಯೇ
ಪಾವನವನ್ನಾಗಿ ಮಾಡುತ್ತಾರೆ. ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡುವವರು ಸ್ವರ್ಗದ ರಚಯಿತ, ಆ
ಸದ್ಗುರು ಸರ್ವರ ಸದ್ಗತಿದಾತನಾಗಿದ್ದಾರೆ. ಹೊಸ ಪ್ರಪಂಚದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿರುತ್ತದೆ.
ಭಾರತದಲ್ಲಿ ಯಾವ ದೇವಿ-ದೇವತೆಗಳ ರಾಜ್ಯವಿತ್ತೋ ಆ ದೇವತೆಗಳೇ 84 ಜನ್ಮಗಳನ್ನು ಪಡೆಯುತ್ತಾರೆ ಮತ್ತೆ
ವರ್ಣಗಳನ್ನೂ ಸಹ ಹೇಳಬೇಕು. ಮೊದಲೇ ಸಮಯವನ್ನು ತೆಗೆದುಕೊಳ್ಳಬೇಕು. ಈ ಮಾತುಗಳನ್ನು ಮನಸ್ಸಿಟ್ಟು
ಚೆನ್ನಾಗಿ ಕೇಳಬೇಕೆಂದು ಹೇಳಬೇಕು. ಬುದ್ಧಿಯನ್ನು ಅಲೆದಾಡಿಸಬೇಡಿ. ಸಹೋದರಿ ಅಥವಾ ಸಹೋದರರೇ
ತಾವೆಲ್ಲರೂ ವಾಸ್ತವದಲ್ಲಿ ಶಿವನ ಸಂತಾನರಾಗಿದ್ದೀರಿ. ಪ್ರಜಾಪಿತ ಬ್ರಹ್ಮಾರವರು ಪೂರ್ಣ ವಂಶದ
ಮುಖ್ಯಸ್ಥರಾಗಿದ್ದಾರೆ. ನಾವು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರು ಅವರಿಂದ ಆಸ್ತಿಯನ್ನು
ಪಡೆಯುತ್ತಿದ್ದೇವೆ. ಯೋಗಬಲದಿಂದ ವಿಶ್ವದ ರಾಜ್ಯವನ್ನು ಪಡೆಯುತ್ತೇವೆ, ಬಾಹು ಬಲದಿಂದಲ್ಲ. ನಾವು
ಮನೆ-ಮಠವನ್ನು ಬಿಡುವುದಿಲ್ಲ, ನಾವು ನಮ್ಮ ಮನೆಯಲ್ಲಿ ಇರುತ್ತೇವೆ, ಇದು ಮನುಷ್ಯರಿಂದ
ದೇವತೆಗಳಾಗುವಂತಹ ಶಾಲೆಯಾಗಿದೆ. ಯಾವುದೇ ಮನುಷ್ಯರು ದೇವತೆಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಈ
ಪ್ರಪಂಚವೇ ಪತಿತವಾಗಿದೆ. ನೀರಿನ ಗಂಗೆಯಂತೂ ಪತಿತ-ಪಾವನಿಯಲ್ಲ. ಪದೇ-ಪದೇ ಅದರಲ್ಲಿ ಸ್ನಾನ ಮಾಡಲು
ಹೋಗುತ್ತಾರೆ ಆದರೂ ಪಾವನರಾಗುವುದೇ ಇಲ್ಲ. ಹಾಗೆಯೇ ರಾವಣನ ಉದಾಹರಣೆಯೂ ಇದೆ - ರಾವಣನನ್ನು ಪದೇ-ಪದೇ
ಸುಡುತ್ತಿರುತ್ತಾರೆ ಆದರೆ ಅವನು ಸಾಯುವುದೇ ಇಲ್ಲ. ಈ ರಾವಣನಿರುವಂತಹ ಚಿತ್ರವನ್ನೂ ಸಹ ದೊಡ್ಡ
ಸ್ಥಳಗಳಿಗೆ ತೆಗೆದುಕೊಂಡು ಹೋಗಿ ಮತ್ತು ಆಲ್ಬಂ ತೆಗೆದುಕೊಂಡು ಹೋಗಿ ಹೇಳಿ - ನೋಡಿ, ಇವರೆಲ್ಲರೂ
ಮಕ್ಕಳು ಪವಿತ್ರವಾಗಿರುವಂತಹ ಪ್ರತಿಜ್ಞೆಯನ್ನು ಮಾಡಿದ್ದಾರೆ, ವಾಸ್ತವದಲ್ಲಿ ಎಲ್ಲರೂ ಬ್ರಹ್ಮನ
ಮಕ್ಕಳು, ಪ್ರಜಾಪಿತ ಬ್ರಹ್ಮಾರವರು ವಂಶಾವಳಿಯ ಹಿರಿಯರಾಗಿದ್ದಾರೆ. ಈ ಸಮಯದಲ್ಲಿ ಪ್ರತ್ಯಕ್ಷವಾಗಿ
ನಾವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ, ನೀವೂ ಸಹ ಆಗಿದ್ದೀರಿ ಆದರೆ ತಾವು ಗುರುತಿಸಿಲ್ಲ. ಈಗ
ಪ್ರಪಂಚದಲ್ಲಿ ಯಾರೂ ಸಹ ಸತ್ಯ ಬ್ರಾಹ್ಮಣರಿಲ್ಲ. ನಾವು ಸತ್ಯ ಬ್ರಾಹ್ಮಣರಾಗಿದ್ದೇವೆ. ನಾವೇ
ರಾಜ್ಯವನ್ನೂ ಸಹ ಪಡೆಯುತ್ತೇವೆ. ಇದು ಬ್ರಾಹ್ಮಣರ ವಂಶವಾಗಿದೆ, ಬ್ರಾಹ್ಮಣರೇ ಶಿಖೆಯಾಗಿದ್ದಾರೆ.
ಕೃಷ್ಣ ಭಗವಂತನಲ್ಲ ಎಂಬುದನ್ನು ಮಕ್ಕಳಿಗೆ ತಿಳಿಸಲಾಗಿದೆ. ಕೃಷ್ಣನು ಪೂರ್ಣ 84 ಜನ್ಮಗಳನ್ನು
ಪಡೆಯುತ್ತಾನೆ. 84 ಜನ್ಮಗಳು ಪೂರ್ಣವಾಗುತ್ತಿದ್ದಂತೆಯೇ ಮತ್ತೆ ದೇವತೆಯಾಗಬೇಕು ಅಂದಾಗ ಯಾರು
ಮಾಡುತ್ತಾರೆ? ತಂದೆಯೇ ಮಾಡುತ್ತಾರೆ. ನಾವು ಅವರಿಂದ ರಾಜಯೋಗವನ್ನು ಕಲಿಯುತ್ತಿದ್ದೇವೆ. ಏಕ್
ಓಂಕಾರ್ ಎನ್ನುವುದು ಅವರ ಮಹಿಮೆಯಾಗಿದೆ. ಅವರು ನಿರಾಕಾರ, ನಿರಹಂಕಾರಿಯಾಗಿದ್ದಾರೆ. ಅವರೇ ಬಂದು
ಸರ್ವೀಸ್ ಮಾಡಬೇಕಾಗುತ್ತದೆ. ಪತಿತ ಪ್ರಪಂಚ, ಪತಿತ ಶರೀರದಲ್ಲಿ ಬರುತ್ತಾರೆ. ಈಗ ಅದೇ ಗೀತಾ
ಧಾರಾವಾಹಿಯು ಪುನರಾವರ್ತನೆಯಾಗುತ್ತಿದೆ. ಮಹಾಭಾರತ ಯುದ್ಧವಾಗಿತ್ತು, ಎಲ್ಲರೂ
ಸೊಳ್ಳೆಗಳೋಪಾದಿಯಲ್ಲಿ ಹೋಗಿದ್ದರು, ಈಗ ಅದೇ ಸಮಯವಾಗಿದೆ. ಪರಮಪಿತ ಪರಮಾತ್ಮ ಶಿವ
ಭಗವಾನುವಾಚವಾಗಿದೆ. ಅವರು ರಚೈತನಾಗಿದ್ದಾರೆ, ಸ್ವರ್ಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು.
ಸೃಷ್ಟಿಯನ್ನು ಸತೋಪ್ರಧಾನವನ್ನಾಗಿ ಮಾಡುವುದು ತಂದೆಯದೇ ಕರ್ತವ್ಯವಾಗಿದೆ. ನಾವು ಅವರನ್ನು
ಬಾಬಾ-ಬಾಬಾ ಎನ್ನುತ್ತೇವೆ. ಅವರು ಅವಶ್ಯವಾಗಿ ಬರುತ್ತಾರೆ, ಶಿವರಾತ್ರಿಯು ಸಹ ಇದೆ. ಇದರ
ಅರ್ಥವನ್ನೂ ಸಹ ಹೇಳಬೇಕಾಗಿದೆ. ಜ್ಞಾನ ಬಿಂದುಗಳನ್ನು ಬರೆದುಕೊಂಡು ಮತ್ತೆ ಧಾರಣೆ ಮಾಡಬೇಕು,
ಬುದ್ಧಿಯಲ್ಲಿಯೂ ಇರಬೇಕು. ಕನ್ಯೆಯರ ಬುದ್ಧಿಯು ಚೆನ್ನಾಗಿರುತ್ತದೆ, ಕುಮಾರಿಯರ ಕಾಲನ್ನು
ತೊಳೆಯುತ್ತಾರೆ. ಹಾಗೇ ನೋಡುವುದಾದರೆ ಕುಮಾರ-ಕುಮಾರಿಯರಿಬ್ಬರೂ ಪವಿತ್ರರಾಗಿರುತ್ತಾರೆ. ಆದರೂ
ಕುಮಾರಿಯರ ಹೆಸರು ಏಕೆ ಗಾಯನವಾಗುತ್ತದೆ? ಏಕೆಂದರೆ ಈಗ ನಿಮ್ಮ ಯಾವ ಹೆಸರಿದೆ - ಕನ್ಯೆಯು 21 ಕುಲದ
ಉದ್ಧಾರ ಮಾಡುತ್ತಾರೆ ಎಂದು. ಆ ನಿಮ್ಮ ಮಾನ್ಯತೆಯೇ ನಡೆದು ಬಂದಿದೆ. ನಾವು ಭಾರತದ ಆತ್ಮಿಕ
ಸೇವೆಯನ್ನು ಮಾಡುತ್ತೇವೆ. ನಮ್ಮ ಗುರು, ಸಹಯೋಗಿ, ಪರಮಪಿತ ಪರಮಾತ್ಮ ಶಿವನಾಗಿದ್ದಾರೆ. ಅವರಿಂದ
ನಾವು ಯೋಗಬಲದಿಂದ ಶಕ್ತಿಯನ್ನು ಪಡೆಯುತ್ತೇವೆ. ಇದರಿಂದ ನಾವು 21 ಜನ್ಮಗಳು ಸದಾ
ಆರೋಗ್ಯವಂತರಾಗಿರುತ್ತೇವೆ, ಇದು ಗ್ಯಾರಂಟಿಯಾಗಿದೆ. ಕಲಿಯುಗದಲ್ಲಿ ಎಲ್ಲರೂ ರೋಗಿಗಳೇ, ಆಯಸ್ಸೂ ಸಹ
ಕಡಿಮೆಯಿದೆ. ಸತ್ಯಯುಗದಲ್ಲಿ ಅಷ್ಟೊಂದು ಧೀರ್ಘಾಯಸ್ಸು ಇರುವಂತಹವರು ಎಲ್ಲಿಂದ ಬಂದರು? ಈ
ರಾಜಯೋಗದಿಂದ ಅಷ್ಟು ಧೀರ್ಘಾಯಸ್ಸು ಇರುವಂತಹವರಾಗುತ್ತಾರೆ. ಅಲ್ಲಿ ಅಕಾಲಮೃತ್ಯು ಆಗುವುದಿಲ್ಲ.
ಒಂದು ಶರೀರವನ್ನು ಬಿಟ್ಟು ಇನ್ನೊಂದು ಪಡೆಯಲಾಗುತ್ತದೆ. ಇದು ಹಳೆಯ ಪೊರೆಯಾಗಿದೆ, ಶಿವ ತಂದೆಯ
ನೆನಪಿನಲ್ಲಿದ್ದು ಈ ದೇಹ ಸಹಿತ ದೇಹದ ಸರ್ವ ಸಂಬಂಧಗಳನ್ನು ಮರೆಯಬೇಕು. ಬುದ್ಧಿಯಿಂದ ನಾವು
ಬೇಹದ್ದಿನ ತ್ಯಾಗ ಮಾಡುತ್ತೇವೆ. ನಮ್ಮದು ಬುದ್ಧಿಯೋಗದ ಆತ್ಮಿಕ ಯಾತ್ರೆಯಾಗಿದೆ. ಆ ಶಾರೀರಿಕ
ಯಾತ್ರೆಯನ್ನು ಮನುಷ್ಯರು ಕಲಿಸುತ್ತಾರೆ. ಬುದ್ಧಿಯ ಯಾತ್ರೆಯನ್ನು ತಂದೆಯ ವಿನಃ ಮತ್ತ್ಯಾರೂ
ಕಲಿಸುವವರಿಲ್ಲ. ಈ ರಾಜಯೋಗವನ್ನು ಕಲಿಯುವವರೇ ಸ್ವರ್ಗದಲ್ಲಿ ಬರುತ್ತಾರೆ. ಈಗ ಮತ್ತೆ ಸಸಿಯನ್ನು
ನಾಟಿ ಮಾಡಲಾಗುತ್ತಿದೆ. ನಾವೆಲ್ಲರೂ ಆ ತಂದೆಗೆ ಮಕ್ಕಳಾಗಿದ್ದೇವೆ. ನಾವು ಮಕ್ಕಳಿಗೆ ಶಿವ
ತಂದೆಯಿಂದ ಆಸ್ತಿ ಸಿಗುತ್ತದೆ. ಈ ದಾದಾರವರೂ ಸಹ ಶಿವ ತಂದೆಯಿಂದ ಆಸ್ತಿಯನ್ನು ಪಡೆಯುತ್ತಾರೆ. ತಾವೂ
ಸಹ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಿರಿ. ಇದು ಬಹಳ ದೊಡ್ಡ ಆಸ್ಪತ್ರೆಯಾಗಿದೆ, ನಾವು 21
ಜನ್ಮಗಳು ಇನ್ನೆಂದೂ ರೋಗಿಗಳಾಗುವುದಿಲ್ಲ. ನಾವು ಭಾರತದ ಸತ್ಯ ಸೇವೆಯನ್ನು ಮಾಡುತ್ತೇವೆ.
ಆದ್ದರಿಂದ ಶಿವ ಶಕ್ತಿಸೇನೆ ಎಂದು ಗಾಯನವಿದೆ.
ಈಗ ತಂದೆಯು ಹೇಳುತ್ತಾರೆ - ನೆನಪಿನಿಂದ ತಮ್ಮ ವಿಕರ್ಮವನ್ನು ವಿನಾಶ ಮಾಡಿಕೊಂಡರೆ ಆತ್ಮವು
ಶುದ್ಧವಾಗುತ್ತದೆ ಹಾಗೂ ಜ್ಞಾನವನ್ನು ಧಾರಣೆ ಮಾಡುವುದರಿಂದ ತಾವು ಚಕ್ರವರ್ತಿ ರಾಜರಾಗುತ್ತೀರಿ.
ನಾವು ಪವಿತ್ರರಾದರೆ ಲಕ್ಷ್ಮಿಯನ್ನು ಅಥವಾ ನಾರಾಯಣನನ್ನು ವರಿಸಲು ಸಾಧ್ಯ. ಸರ್ವಗುಣ ಸಂಪನ್ನ,
ಸಂಪೂರ್ಣ ನಿರ್ವಿಕಾರಿಗಳು ಇಲ್ಲಿಯೇ ಆಗದಿದ್ದರೆ ಲಕ್ಷ್ಮಿಯನ್ನು ಹೇಗೆ ವರಿಸಲು ಸಾಧ್ಯ? ಆದ್ದರಿಂದ
ಹೇಳಲಾಗುತ್ತದೆ - ಕನ್ನಡಿಯಲ್ಲಿ ತಮ್ಮನ್ನು ನೋಡಿಕೊಳ್ಳಿ, ಲಕ್ಷ್ಮಿ-ನಾರಾಯಣರನ್ನು ವರಿಸಲು
ಯೋಗ್ಯರಾಗಿದ್ದೇವೆಯೇ? ಪೂರ್ಣ ನಷ್ಟಮೋಹಿಗಳಾಗಲಿಲ್ಲ ಎಂದರೆ ಲಕ್ಷ್ಮಿಯನ್ನು ವರಿಸಲು ಆಗುವುದಿಲ್ಲ.
ಮತ್ತೆ ಪ್ರಜೆಗಳಲ್ಲಿ ಹೋಗುತ್ತೀರಿ. ಶಿವ ತಂದೆಯೂ ಸಹ ಪರಮಧಾಮದಿಂದ ಬರಬೇಕಾಗುತ್ತದೆ. ಅವಶ್ಯವಾಗಿ
ಪತಿತ ಪ್ರಪಂಚದಲ್ಲಿ ಬಂದು ಪಾವನ ಮಾಡಿ ಕರೆದುಕೊಂಡು ಹೋಗುತ್ತಾರೆ. ಇಲ್ಲಿ ನಾವು ಬಹಳ
ಪಥ್ಯೆಯನ್ನಿಡುತ್ತೇವೆ. ನಮ್ಮ ಒಂದು ಕಣ್ಣಿನಲ್ಲಿ ಮಧುರ ಮನೆ ಹಾಗೂ ಇನ್ನೊಂದರಲ್ಲಿ ಮಧುರ
ರಾಜ್ಯವಿದೆ. ನಮ್ಮದು ಪೂರ್ಣ ಪ್ರಪಂಚದ ತ್ಯಾಗವಾಗಿದೆ. ಮನೆ, ಗೃಹಸ್ಥದಲ್ಲಿರುತ್ತಾ ಕಮಲಪುಷ್ಫ
ಸಮಾನ ಪವಿತ್ರರಾಗಿರುತ್ತೇವೆ. ವೃದ್ಧರು ನಮ್ಮದು ವಾನಪ್ರಸ್ಥ ಸ್ಥಿತಿಯಾಗಿದೆ. ಆದುದರಿಂದ
ಮುಕ್ತಿಧಾಮಕ್ಕಾಗಿ ಪುರುಷಾರ್ಥ ಮಾಡೋಣ. ಈ ಸಮಯದಲ್ಲಿ ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ.
ತಂದೆಯಿಂದ ಆಸ್ತಿಯನ್ನು ಪಡೆಯಲು ಪ್ರತಿಯೊಬ್ಬರಿಗೂ ಅಧಿಕಾರವಿದೆ. ದುಃಖಧಾಮವನ್ನು ಮರೆಯಬೇಕಾಗಿದೆ.
ಇದು ಬುದ್ಧಿಯಿಂದ ಮಾಡುವ ತ್ಯಾಗವಾಗಿದೆ. ನಾವು ಹಳೆಯ ಪ್ರಪಂಚವನ್ನು ಬುದ್ಧಿಯಿಂದ ಮರೆತು ಹೊಸ
ಪ್ರಪಂಚವನ್ನು ನೆನಪು ಮಾಡುತ್ತೇವೆ. ನಂತರ ಅಂತ್ಯಮತಿ ಸೋ ಗತಿಯಾಗುತ್ತದೆ. ಇದು ಎಲ್ಲದಕ್ಕಿಂತ
ದೊಡ್ಡ ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ಭಗವಾನುವಾಚ - ನಾನು ರಾಜಯೋಗವನ್ನು ಕಲಿಸಿ
ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೇನೆ. ಈ ರೀತಿ ತಿಳಿಸಬೇಕು. ನಾವೇನು ಹೇಳುತ್ತೇವೆಯೋ ಅದನ್ನು
ನೀವೂ ಕೇಳಿ, ಮಧ್ಯದಲ್ಲಿ ಪ್ರಶ್ನೆಯನ್ನು ಕೇಳುವುದರಿಂದ ಆ ಪ್ರಭಾವವು ತುಂಡಾಗುತ್ತದೆ. ನಾವು ನಿಮಗೆ
ಪೂರ್ಣ ಸೃಷ್ಟಿಚಕ್ರದ ರಹಸ್ಯವನ್ನು ಹೇಳುತ್ತೇವೆ, ನಾಟಕದಲ್ಲಿ ಶಿವ ತಂದೆಯ ಪಾತ್ರವೇನು,
ಲಕ್ಷ್ಮೀ-ನಾರಾಯಣ ಯಾರು, ನಾವು ಅವರ ಜೀವನ ಕಥೆಯನ್ನು ಹೇಳುತ್ತೇವೆ ಎಂದು ಹೇಳಿ. ಪ್ರತಿಯೊಬ್ಬರ
ನಾಡಿಯನ್ನು ನೋಡಬೇಕು. ಸರಿಯಾಗಿ ಕೇಳುತ್ತಿದ್ದಾರೆಯೇ ಎಂದು ಆ ಸಮಯದಲ್ಲಿ ಅವರ ವೃತ್ತಿಯನ್ನು
ನೋಡಬೇಕು, ಕಾದ ಕಾವಲಿಯಂತೆ ಕುಳಿತಿಲ್ಲ ತಾನೆ. ಅಲ್ಲಿ-ಇಲ್ಲಿ ನೋಡುವುದಿಲ್ಲವೆ ಎಂದು
ನೋಡುತ್ತಿರಬೇಕು. ಇಲ್ಲಿ ತಂದೆಯೂ ಸಹ ಯಾರು ತಲೆದೂಗುತ್ತಾರೆಂದು ನೋಡುತ್ತಾರೆ, ಇದು ಜ್ಞಾನದ
ನರ್ತನವಾಗಿದೆ. ಆ ಶಾಲೆಯಂತೂ ಚಿಕ್ಕದಾಗಿರುತ್ತದೆ. ಅಲ್ಲಿ ಶಿಕ್ಷಕರು ಚೆನ್ನಾಗಿ ನೋಡಿ ನಂಬರ್ವಾರ್
ಕುಳ್ಳರಿಸಬಹುದು. ಇಲ್ಲಿ ಅನೇಕರಿದ್ದಾರೆ ಆದ್ದರಿಂದ ನಂಬರ್ವಾರ್ ಆಗಿ ಕೂರಿಸಲು ಸಾಧ್ಯವಿಲ್ಲ
ಅಂದಾಗ ನೋಡಬೇಕು - ಯಾರ ಬುದ್ಧಿಯು ಎಲ್ಲಿಯೂ ಹೋಗುತ್ತಿಲ್ಲ ತಾನೆ? ಮುಗುಳ್ನಗುತ್ತಿದ್ದಾರೆಯೇ?
ಖುಷಿಯ ನಶೆಯೇರುತ್ತದೆಯೇ? ಗಮನಕೊಟ್ಟು ಕೇಳುತ್ತಾರೆಯೇ? ದಾನವನ್ನು ಸದಾ ಪಾತ್ರರಿಗೆ ಕೊಡಬೇಕು.
ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ನಾಡಿಯನ್ನು ನೋಡುವುದಕ್ಕೂ ಸಹ ಬುದ್ಧಿವಂತಿಕೆಬೇಕು.
ಮನುಷ್ಯರು ಭಯ ಪಡುತ್ತಾರೆ - ಅದರಲ್ಲಿಯೂ ಸಿಂಧಿಗಳು ಈ ಬಿ.ಕೆ.ಗಳ ಜಾದು ತಗುಲಬಾರದು ಎಂದು
ತಿಳಿದುಕೊಳ್ಳುತ್ತಾರೆ. ಆದ್ದರಿಂದ ಸಮ್ಮಖದಲ್ಲಿ ನೋಡುವುದೇ ಇಲ್ಲ. ಶಿವ ತಂದೆಯು ತಿಳಿಸುತ್ತಾರೆ -
ತಾವು ಬ್ರಾಹ್ಮಣರೇ ತ್ರಿಕಾಲದರ್ಶಿಗಳಾಗುತ್ತೀರಿ. ಮತ್ತೆ ವರ್ಣಗಳ ರಹಸ್ಯವನ್ನೂ ಸಹ
ತಿಳಿದುಕೊಳ್ಳುವುದಾಗಿದೆ. ನಾವೇ ಅವರು ಎಂಬುದರ ಅರ್ಥವನ್ನೂ ಸಹ ತಿಳಿಸಬೇಕು. ನಾನಾತ್ಮನೇ
ಪರಮಾತ್ಮನೆಂದು ಹೇಳುವುದು ತಪ್ಪಾಗಿದೆ. ಕೆಲವರು ಬ್ರಹ್ಮ್ತತ್ವವನ್ನು ಒಪ್ಪುತ್ತಾರೆ. ಅಹಂ
ಬ್ರಹ್ಮಾಸ್ಮಿ ಎಂದು ಹೇಳುತ್ತಾರೆ. ಮಾಯೆಯು ಪಂಚ ವಿಕಾರವಾಗಿದೆ. ನಾವು ಬ್ರಹ್ಮ್ತತ್ವವನ್ನು
ಒಪ್ಪುತ್ತೇವೆ ಎಂದು ಹೇಳುತ್ತಾರೆ. ಅದು ನಮ್ಮೆಲ್ಲರ ನಿವಾಸ ಸ್ಥಾನವಾಗಿದೆ. ಹೇಗೆ ಹಿಂದೂ
ಸ್ಥಾನದಲ್ಲಿರುವವರ ನಮ್ಮ ಧರ್ಮ ಹಿಂದೂ ಎಂದು ಹೇಳುತ್ತಾರೆ. ಹಾಗೆಯೇ ಅವರೂ ಸಹ ಬ್ರಹ್ಮ್ತತ್ವವನ್ನು
ನಾವೇ ಬ್ರಹ್ಮ್ (ಬ್ರಹ್ಮಾಸ್ಮಿ) ಎಂದು ಹೇಳುತ್ತಾರೆ. ತಂದೆಯ ಮಹಿಮೆಯೇ ಬೇರೆಯಾಗಿದೆ. ಸರ್ವ ಗುಣ
ಸಂಪನ್ನ, 16 ಕಲಾ ಸಂಪೂರ್ಣ..... ಈ ಮಹಿಮೆಯು ದೇವತೆಗಳದ್ದಾಗಿದೆ. ಆತ್ಮವು ಯಾವಾಗ
ಶರೀರದಲ್ಲಿರುತ್ತದೆ ಆಗ ಅದರ ಮಹಿಮೆಯಾಗುತ್ತದೆ. ಆತ್ಮವೇ ಪತಿತ ಅಥವಾ ಪಾವನವಾಗುತ್ತದೆ. ಆತ್ಮಕ್ಕೆ
ನಿರ್ಲೇಪವೆಂದು ಹೇಳಲು ಸಾಧ್ಯವಿಲ್ಲ. ಇಷ್ಟು ಚಿಕ್ಕ ಆತ್ಮದಲ್ಲಿ 84 ಜನ್ಮಗಳ ಪಾತ್ರವಿದೆ. ಅದನ್ನು
ಮತ್ತೆ ನಿರ್ಲೇಪವೆಂದು ಹೇಗೆ ಹೇಳುವುದು?
ಈಗ ತಂದೆಯು ಶಾಂತಿ ಸ್ಥಾಪನೆ ಮಾಡುತ್ತಾರೆಂದರೆ ತಾವು ತಂದೆಗೆ ಯಾವ ಬಹುಮಾನವನ್ನು ಕೊಡುತ್ತೀರಿ?
ಅವರು ನಿಮಗೆ 21 ಜನ್ಮಗಳ ಸ್ವರ್ಗದ ರಾಜಧಾನಿಯ ಬಹುಮಾನವನ್ನು ಕೊಡುತ್ತಾರೆ ಅಂದಾಗ ತಂದೆಗೆ ನೀವೇನು
ಕೊಡುತ್ತೀರಿ? ಯಾರೆಷ್ಟು ತಂದೆಗೆ ಬಹುಮಾನವನ್ನು ಕೊಡುತ್ತೀರೋ ಅಷ್ಟೇ ಮತ್ತೆ ತಂದೆಯಿಂದ
ಪಡೆಯುತ್ತೀರಿ. ಮೊಟ್ಟ ಮೊದಲು ಇವರು (ಬ್ರಹ್ಮಾ) ಮೊದಲು ಬಹುಮಾನವನ್ನು ಕೊಟ್ಟರು. ಶಿವ ತಂದೆಯಂತೂ
ದಾತನಾಗಿದ್ದಾರೆ. ರಾಜರು ಎಂದೂ ಸಹ ತಮ್ಮ ಕೈಯಿಂದ ಏನನ್ನೂ ತೆಗೆದುಕೊಳ್ಳುವುದಿಲ್ಲ. ಅವರಿಗೆ
ಅನ್ನದಾತನೆಂದು ಹೇಳಲಾಗುತ್ತದೆ. ಮನುಷ್ಯರಿಗೆ ದಾತನೆಂದು ಹೇಳಲು ಸಾಧ್ಯವಿಲ್ಲ. ಭಲೆ ತಾವು
ಸನ್ಯಾಸಿಗಳಿಗೆ ಕೊಡುತ್ತೀರಿ ಆದರೆ ಅದಕ್ಕೆ ಪ್ರತಿಯಾಗಿ ದಾತ ಶಿವ ತಂದೆಯೇ ಕೊಡುತ್ತಾರೆ.
ಎಲ್ಲವನ್ನೂ ಈಶ್ವರನೇ ಕೊಟ್ಟಿದ್ದಾಗಿದೆ ಎಂದು ಹೇಳುತ್ತಾರೆ. ಈಶ್ವರನೇ ಪಡೆಯುತ್ತಾರೆ. ಮತ್ತೆ
ಯಾರಾದರೂ ಶರೀರ ಬಿಟ್ಟರೆ ಏಕೆ ಅಳುತ್ತೀರಿ! ಆದರೆ ಅವರು ಕೊಡುವುದೂ ಇಲ್ಲ, ತೆಗೆದುಕೊಳ್ಳುವುದೂ
ಇಲ್ಲ. ಲೌಕಿಕ ಮಾತಾಪಿತರೂ ಜನ್ಮ ಕೊಡುತ್ತಾರೆ ಮತ್ತೆ ಯಾರಾದರೂ ಶರೀರ ಬಿಟ್ಟರೆ ಅವರಿಗೆ
ದುಃಖವಾಗುತ್ತದೆ. ಒಂದುವೇಳೆ ಈಶ್ವರನೇ ಕೊಟ್ಟಿದ್ದಾರೆಂದರೆ ಅವರೇ ತೆಗೆದುಕೊಂಡಾಗ ಏಕೆ
ದುಃಖವಾಗಬೇಕು. ತಂದೆಯು ಹೇಳುತ್ತಾರೆ - ನಾನಂತೂ ಸುಖ-ದುಃಖದಿಂದ ಭಿನ್ನವಾಗಿದ್ದೇನೆ. ಈ ದಾದಾರವರೂ
ಸಹ ಎಲ್ಲವನ್ನೂ ಕೊಟ್ಟರು. ಆದ್ದರಿಂದ ಪೂರ್ಣ ಬಹುಮಾನವನ್ನು ಪಡೆಯುತ್ತಿದ್ದಾರೆ. ಕನ್ಯೆಯರ ಬಳಿಯಂತೂ
ಏನೂ ಇಲ್ಲ. ಒಂದುವೇಳೆ ಅವರಿಗೆ ತಂದೆ-ತಾಯಿ ಕೊಟ್ಟರೆ ಅದನ್ನು ಶಿವ ತಂದೆಗೆ ಕೊಡಬಹುದು. ಹೇಗೆ
ಮಮ್ಮಾರವರು ಬಡವರಾಗಿದ್ದರು ಮತ್ತೆ ನೋಡಿ, ಎಷ್ಟು ತೀವ್ರವಾಗಿ ಮುಂದೆ ಹೋದರು. ತನು-ಮನ-ಧನದಿಂದ
ಸೇವೆ ಮಾಡುತ್ತಿದ್ದಾರೆ. ತಮಗೆ ಗೊತ್ತಿದೆ - ನಾವು ಶಾಂತಿಧಾಮದ ಮಾರ್ಗವಾಗಿ ಸುಖಧಾಮಕ್ಕೆ
ಹೋಗುತ್ತೇವೆ. ಎಲ್ಲಿಯ ತನಕ ತಾವು ತಂದೆಯ ಬಳಿ ಹೋಗುವುದಿಲ್ಲವೋ ಅತ್ತೆ ಮನೆಗೆ ಹೇಗೆ ಬರುತ್ತೇವೆ?
ತಂದೆಯ ಮನೆಯಲ್ಲಂತೂ ಕುಳಿತಿದ್ದೇವೆ. ಮೊದಲು ತಂದೆಯ ಮನೆಗೆ ಹೋಗುತ್ತೇವೆ ನಂತರ ಅತ್ತೆಯ ಮನೆಗೆ
ಬರುತ್ತೇವೆ. ಇದು ಶೋಕವಾಟಿಕೆಯಾಗಿದೆ, ಸತ್ಯಯುಗವು ಅಶೋಕವಾಟಿಕೆ ಆಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಈ ವಾನಪ್ರಸ್ಥ ಸ್ಥಿತಿಯಲ್ಲಿ ಮಧುರ ಮನೆ ಹಾಗೂ ಮಧುರ ರಾಜಧಾನಿಯನ್ನು ನೆನಪು ಮಾಡುವುದರ ವಿನಃ
ಮತ್ತೆಲ್ಲವನ್ನೂ ಬುದ್ಧಿಯಿಂದ ಮರೆಯಬೇಕಾಗಿದೆ. ಪೂರ್ಣ ನಷ್ಟಮೋಹಿಗಳಾಗಬೇಕು.
2. ಬುದ್ಧಿಯೋಗದಿಂದ ಬೇಹದ್ದಿನ ತ್ಯಾಗ ಮಾಡಿ ಆತ್ಮೀಯ ಯಾತ್ರೆ ಮಾಡಬೇಕು. ಶ್ರೀಮತದಂತೆ ಪವಿತ್ರರಾಗಿ
ಭಾರತದ ಸತ್ಯ ಸೇವೆಯನ್ನು ಮಾಡಬೇಕಾಗಿದೆ.
ವರದಾನ:
ಮನಸ್ಸಿನ ಖುಶಿಯ
ಮೂಲಕ ಖಾಯಿಲೆಗಳನ್ನೂ ದೂರ ಓಡಿಸುವಂತಹ ಎವರ್ ಹೆಲ್ದಿ (ಸದಾ ಆರೋಗ್ಯಶಾಲಿ) ಭವ.
ಮನಸ್ಸು
ಖುಶಿಯಾಗಿದ್ದರೆ ಜಗತ್ತೇ ಖುಶಿಯಾಗಿರುವುದು ಎಂಬ ಗಾಧೆ ಮಾತಿದೆ. ಮನಸ್ಸಿನ ಖಾಯಿಲೆಯಿಂದ ಶರೀರ ಸಹಾ
ಹಳದಿಯಾಗಿ ಬಿಡುವುದು. ಮನಸ್ಸು ಸರಿಯಾಗಿದ್ದಲ್ಲಿ ಶರೀರದ ರೋಗ ಅನುಭವವಾಗುವುದಿಲ್ಲ. ಶರೀರ ಖಾಯಿಲೆ
ಇದ್ದರೂ ಸಹಾ ನಿಮ್ಮ ಮನಸ್ಸು ಆರೋಗ್ಯವಾಗಿದೆ. ಏಕೆಂದರೆ ನಿಮ್ಮ ಬಳಿ ಬಹಳ ಒಳ್ಳೆಯ ಖುಶಿಯ ಔಷಧಿಯಿದೆ.
ಈ ಔಷಧಿ ಖಾಯಿಲೆಯನ್ನು ಓಡಿಸಿ ಬಿಡುವುದು, ಮರೆಸಿ ಬಿಡುವುದು. ಆದ್ದರಿಂದ ಮನಸ್ಸು ಖುಶಿಯಿದ್ದಲ್ಲಿ
ಜಗತ್ತೇ ಖುಷ್, ಜೀವನವೇ ಖುಶ್, ಅದರಿಂದ ಎವರ್ ಹೆಲ್ದಿ (ಸದಾ ಆರೋಗ್ಯ) ಆಗಿ ಬಿಡುವಿರಿ.
ಸ್ಲೋಗನ್:
ಸಮಯದ
ಮಹತ್ವಿಕೆಯನ್ನು ತಿಳಿದಿರಾದರೆ ಸರ್ವ ಖಜಾನೆಗಳಿಂದ ಸಂಪನ್ನರಾಗಿ ಬಿಡುವಿರಿ.