08.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಆತ್ಮ ಮತ್ತು ಪರಮಾತ್ಮರ ಮಿಲನವೇ ಸತ್ಯ-ಸತ್ಯ ಸಂಗಮ ಅಥವಾ ಕುಂಭ ಮೇಳವಾಗಿದೆ, ಈ ಮಿಲನದಿಂದಲೇ ನೀವು ಪಾವನರಾಗುವಿರಿ. ಇದರ ನೆನಪಾರ್ಥ, ಅಲ್ಲಿ ಮೇಳ ಆಚರಿಸುತ್ತಾರೆ.”

ಪ್ರಶ್ನೆ:
ನೀವು ಮಕ್ಕಳಲ್ಲಿ ಯಾವ ಮಾತಿನ ಬಗ್ಗೆ ಬಹಳ-ಬಹಳ ತಿಳಿವಳಿಕೆ ಇರಬೇಕಾಗಿದೆ ?

ಉತ್ತರ:
ಜ್ಞಾನದ ಕೆಲವು ಸೂಕ್ಷ್ಮ ಮಾತುಗಳಿವೆ, ಅವುಗಳನ್ನು ತಿಳಿಸುವುದರಲ್ಲಿ ಬಹಳ ತಿಳಿವಳಿಕೆ ಬೇಕಾಗಿದೆ. ಯುಕ್ತಿಯಿಂದ ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗವನ್ನು ಸಿದ್ಧ ಮಾಡಬೇಕಾಗಿದೆ. ಈ ರೀತಿ ತಿಳಿಸಬೇಕು ಹೇಗೆ ಇಲಿಯು ತಣ್ಣಗೆ ಊದುತ್ತದೆ ಮತ್ತು ಕಚ್ಚುತ್ತದೆ, ಹೀಗೆ ಸೇವೆಯ ಯುಕ್ತಿಯನ್ನು ರಚಿಸಬೇಕಾಗಿದೆ. ಕುಂಭ ಮೇಳಾದಲ್ಲಿ ಪ್ರದರ್ಶಿನಿ ಹಾಕಿ ಅನೇಕ ಆತ್ಮರ ಕಲ್ಯಾಣ ಮಾಡಬೇಕಾಗಿದೆ. ಪತಿತರಿಂದ ಪಾವನರಾಗುವ ಯುಕ್ತಿ ತಿಳಿಸಬೇಕು.

ಗೀತೆ:
ಈ ಪಾಪದ ಪ್ರಪಂಚದಿಂದ

ಓಂ ಶಾಂತಿ.
ತಂದೆ ಕುಳಿತು ಮಕ್ಕಳಿಗೆ ತಿಳಿಸುತ್ತಾರೆ, ಪಾಪದ ಪ್ರಪಂಚಕ್ಕೆ ಕಲಿಯುಗಿ, ಪತಿತ, ಭಷ್ಟಾಚಾರಿ ಪ್ರಪಂಚ ಎಂದು ಹೇಳಲಾಗುತ್ತದೆ ಮತ್ತು ನಂತರ ಪುಣ್ಯದ ಪ್ರಪಂಚಕ್ಕೆ ಸತ್ಯಯುಗಿ, ಪಾವನ, ಶ್ರೇಷ್ಠಾಚಾರಿ ಪ್ರಪಂಚ ಎಂದು ಹೇಳಲಾಗುತ್ತದೆ. ಪರಮ ಆತ್ಮನೇ ಬಂದು ಪುಣ್ಯಾತ್ಮ, ಪವಿತ್ರಾತ್ಮ ಅಥವಾ ಪುಣ್ಯದ ಪ್ರಪಂಚವನ್ನು ಮಾಡುತ್ತಾರೆ. ಮನುಷ್ಯರು ಕರೆಯುತ್ತಾರೆ - ಪತಿತ-ಪಾವನ ತಂದೆಯನ್ನು. ಏಕೆಂದರೆ ತಾವು ಪಾವನರಲ್ಲ. ಒಂದುವೇಳೆ ಪತಿತ-ಪಾವನಿ ಗಂಗೆ ಅಥವಾ ತ್ರಿವೇಣಿ ಆಗಿದ್ದರೆ ಏಕೆ ಕರೆಯುತ್ತಿದ್ದರು. ಹೇ! ಪತಿತ-ಪಾವನ ಬನ್ನಿ? ಎಂದು ಗಂಗಾ ಮತ್ತು ತ್ರಿವೇಣಿಯಂತು ಇದೆ, ಅದು ಇದ್ದೂ ಸಹ ಕರೆಯುತ್ತಿರುತ್ತಾರೆ. ಆದರೂ ಬುದ್ಧಿ ಪರಮಾತ್ಮನ ಕಡೆಯೇ ಹೋಗುತ್ತದೆ. ಪರಮಪಿತ ಪರಮಾತ್ಮ ಯಾರು ಜ್ಞಾನ ಸಾಗರ ಆಗಿದ್ದಾರೆ, ಅವರು ಬರಬೇಕಾಗುತ್ತದೆ. ಕೇವಲ ಆತ್ಮ ಅಲ್ಲ ಆದರೆ ಪವಿತ್ರ ಜೀವಾತ್ಮ ಎಂದು ಹೇಳಲಾಗುತ್ತದೆ. ಈಗ ಪಾವನ ಜೀವಾತ್ಮರಂತೂ ಯಾರೂ ಇಲ್ಲ. ಪತಿತ-ಪಾವನ ತಂದೆ ಈ ಸಮಯದಲ್ಲೆ ಬರಬೇಕಾಗುವುದು. ಯಾವ ಸತ್ಯಯುಗಿ ಪಾವನ ಪ್ರಪಂಚದ ಸ್ಥಾಪನೆ ಮತ್ತು ಕಲಿಯುಗಿ ಪ್ರಪಂಚದ ವಿನಾಶ ಮಾಡಲು. ಖಂಡಿತ ಸಂಗಮಯುಗದಲ್ಲೇ ಬರುತ್ತಾರೆ. ಸಂಗಮಕ್ಕೆ ಕುಂಭ ಎಂದು ಹೇಳಲಾಗುತ್ತದೆ. ತ್ರಿವೇಣಿಯ ಸಂಗಮ ಆಗಿದೆ, ಅದಕ್ಕೆ ಹೆಸರನ್ನು ಇಟ್ಟಿದ್ದಾರೆ ಕುಂಭ ಎಂದು. ಹೇಳಲಾಗುತ್ತೆ ಮೂರೂ ನದಿಗಳು ಪರಸ್ಪರ ಸೇರುತ್ತವೆ. ವಾಸ್ತವದಲ್ಲಿ ಎರಡು ನದಿಗಳಿವೆ. ಮೂರನೇ ನದಿ ಗುಪ್ತವಾಗಿದೆ ಎಂದು ಹೇಳಿ ಬಿಡುತ್ತಾರೆ. ಹಾಗಿದ್ದಲ್ಲಿ ಏನು ಈ ಕುಂಭ ಮೇಳದಲ್ಲಿ ಪತಿತರಿಂದ ಪಾವನರಾಗುವರೇನು? ಪತಿತ-ಪಾವನನಂತೂ ಅವಶ್ಯವಾಗಿ ಬರಬೇಕಾಗುತ್ತದೆ. ಜ್ಞಾನಸಾಗರ ಅವರಾಗಿದ್ದಾರೆ. ಪತಿತ ಪ್ರಪಂಚವನ್ನು ಪಾವನ ಮಾಡುವುದು, ಕಲಿಯುಗವನ್ನು ಸತ್ಯಯುಗ ಮಾಡುವುದು - ಇದು ಪರಮಪಿತ ಪರಮಾತ್ಮನದೇ ಕರ್ತವ್ಯವಾಗಿದೆ, ಮನುಷ್ಯರದಲ್ಲ. ಇದೆಲ್ಲಾ ಅಂಧಶ್ರಧ್ಧೆಯಾಗಿದೆ. ಈಗ ಕುರುಡರಿಗೆ ಊರುಗೋಲಿನ ಅವಶ್ಯಕತೆ ಇದೆ. ಈಗ ನೀವು ಊರುಗೋಲಾಗಿರುವಿರಿ, ನಂಬರ್ವಾರ್ಪುರುಷಾರ್ಥನುಸಾರ. ಊರುಗೋಲುಗಳು ಭಿನ್ನ ಭಿನ್ನ ರೀತಿಯದಾಗಿರುತ್ತವೆ. ಕೆಲವು ಕೋಲುಗಳು 100/- ರೂಪಾಯಿ ಕೆಲವು 2/-ರೂಪಾಯಿಗಳಿಗೂ ಸಿಗುತ್ತವೆ. ಇದರಲ್ಲೂ ನಂಬರ್ವಾರ್ ಇರುತ್ತೆ. ಕೆಲವರು ಬಹಳ ಸೇವಾಧಾರಿಗಳಿದ್ದಾರೆ. ಯಾವಾಗ ಖಾಯಿಲೆಯಾಗುವಿರಿ ಆಗ ಸರ್ಜನ್ನನ್ನು ಕರೆಯಬೇಕಾಗುತ್ತದೆ. ಈಗ ಇದಾಗಿದೆ ಪತಿತ ಪ್ರಪಂಚ. ನೀವು ಪಾವನರಾಗುತ್ತಿರುವಿರಿ. ಹೇಳಲಾಗುತ್ತದೆ, ಆತ್ಮ-ಪರಮಾತ್ಮ ಬಹುಕಾಲ ಅಗಲಿ ಹೋಗಿದ್ದರು ನಂತರ ಯಾವಾಗ ಪರಮಪಿತ ಪರಮಾತ್ಮ ಅನೇಕ ಆತ್ಮಗಳ ಮಧ್ಯೆ ಬರುತ್ತಾರೆ ಅದಕ್ಕೆ ಹೇಳಲಾಗುತ್ತದೆ ಸಂಗಮದ ಕುಂಭ.

ಮನುಷ್ಯ ಕುಂಭದ ಮೇಳದಲ್ಲಿ ಬಹಳ ದಾನ ಮಾಡುತ್ತಾರೆ. ಸಾಧು-ಸಂತರಿಗೆ ಮತ್ತು ಸರ್ಕಾರಕ್ಕೆ ಅಲ್ಲಿ ಸಂಪಾದನೆಯಾಗುತ್ತದೆ. ಇಲ್ಲಿ ನೀವು ತನು-ಮನ-ಧನ ಸಹಿತ ಎಲ್ಲವನ್ನೂ ಪತಿತ-ಪಾವನ ತಂದೆಗೆ ದಾನ ಮಾಡಬೇಕಾಗುತ್ತದೆ. ನಂತರ ಅಲ್ಲಿ ನಿಮಗೆ ಭವಿಷ್ಯದಲ್ಲಿ ಸ್ವರ್ಗದ ಮಾಲಿಕರಾಗುವಿರಿ. ಅವರು ತ್ರಿವೇಣಿಯ ಹೆಸರಿನಿಂದ ಸಾಧು-ಸಂತರಿಗೆ ದಾನವನ್ನು ಮಾಡುತ್ತಾರೆ. ವಾಸ್ತವದಲ್ಲಿ ಎಲ್ಲಾ ನದಿಗಳು ಬಂದು ಸಾಗರದಲ್ಲಿ ಸೇರುವುದಕ್ಕೆ ಸಂಗಮವೆಂದು ಹೇಳಲಾಗುತ್ತದೆ. ಅಲ್ಲಿ ಸಾಗರವೇ ಇಲ್ಲ. ಇಲ್ಲಿ ನದಿಗಳು ಪರಸ್ಪರ ಮಿಲನ ಮಾಡುತ್ತವೆ. ನದಿಗಳು ಮತ್ತು ಸಾಗರನ ಮಿಲನವನ್ನೇ ಸತ್ಯ-ಸತ್ಯವಾದ ಮೇಳಾ ಎಂದು ಹೇಳಲಾಗುತ್ತದೆ. ಆದರೆ ಇದೂ ಸಹ ಡ್ರಾಮದಲ್ಲಿ ನಿಗಧಿಯಾಗಿದೆ. ಇದರಲ್ಲಿ ಸರ್ಕಾರಕ್ಕೂ ರೈಲು, ಮೋಟಾರು ಗಾಡಿ, ಜಮೀನು ಮುಂತಾದುವುಗಳಿಂದ ಬಹಳ ಸಂಪಾದನೆ ಆಗುತ್ತದೆ. ಆದರೆ ಇಲ್ಲಿ ಸಂಪಾದನೆಯ ಮೇಳಾ ಆಗುತ್ತದೆ. ಈ ಮಾತುಗಳನ್ನು ನೀವು ಮಕ್ಕಳು ತೀರ್ಮಾನಿಸಬಹುದು. ಏಕೆಂದರೆ ನೀವು ಈಶ್ವರೀಯ ಮತದ ಮೇಲಿರುವಿರಿ. ಅಂದರೆ ಕುಂಭ ಮೇಳದ ಅರ್ಥವನ್ನು ತೆಗೆಯಬೇಕಾಗಿದೆ. ಬಾಬಾ ಹೀಗೆ (ಪ್ರಬಂಧ) ಕೊಡುತ್ತಾರೆ. ಯಾರು ಬುದ್ಧಿವಂತ ಮಕ್ಕಳಿದ್ದಾರೆ ಅವರು ಇದರ ಬಗ್ಗೆ ಎತ್ತಬೇಕಾಗಿದೆ. ಎಲ್ಲರಿಗಿಂತ ನಂಬರ್ಒನ್ ಬುದ್ಧಿವಂತರು ಮಮ್ಮಾ ಆಗಿದ್ದಾರೆ. ನಂತರ ಎರಡನೆಯವರು ಸಂಜಯ. ಎಲ್ಲರಿಗೂ ಹಂಚಲು ಪಾಂಪ್ಲೇಟ್ಸ್ ಮಾಡಿಸಬೇಕಾಗಿದೆ. ಈ ತ್ರಿವೇಣಿ ಪತಿತ-ಪಾವನಿ ಅಲ್ಲ. ಪತಿತ-ಪಾವನನಂತೂ ಸರ್ವರ ಸದ್ಗತಿದಾತ ಶಿವಬಾಬಾ ಒಬ್ಬರೇ ಆಗಿದ್ದಾರೆ. ತ್ರಿವೇಣಿಯನ್ನಂತೂ ಸದ್ಗತಿದಾತಾ ಎಂದು ಹೇಳಲಾಗುವುದಿಲ್ಲ. ಇವು ನದಿಗಳಾಗಿವೆ. ಬರುವಂತಹ ಮಾತೇ ಇಲ್ಲ. ಪತಿತ ಪಾವನ ಬನ್ನಿ ಎಂದು ಹಾಡುತ್ತಾರೆ, ಬಂದು ಪಾವನ ಮಾಡಿ ಎಂದು ಈ ರೀತಿ ಪಾಂಪ್ಲೇಟ್ಸ್ ಹೊರಡಿಸಬೇಕು - ಸಹೋದರ-ಸಹೋದರಿಯರೇ ಪತಿತ-ಪಾವನ ಜ್ಞಾನಸಾಗರ ಪರಮಪಿತ ಪರಮಾತ್ಮನೋ ಅಥವಾ ಈ ನದಿಗಳೋ? ಇವುಗಳಂತು ಸದಾ ಕಾಲ ಇರುತ್ತವೆ. ಪರಮಾತ್ಮನನ್ನು ಬರಲು ಕರೆಯಬೇಕಾಗುತ್ತದೆ. ವಾಸ್ತವದಲ್ಲಿ ಪತಿತ-ಪಾವನ ಒಬ್ಬ ಪರಮಾತ್ಮನೇ ಆಗಿದ್ದಾನೆ, ಆತ್ಮಗಳು ಮತ್ತು ಪರಮಾತ್ಮ ಬಹಳ ಕಾಲ ಅಗಲಿ ಹೋಗಿದ್ದರು.......... ಅದೇ ಸದ್ಗುರು ಬಂದು ಎಲ್ಲರಿಗೂ ಸದ್ಗತಿಕ್ಕೊಟ್ಟು ವಾಪಸ್ಸು ಕರೆದುಕೊಂಡು ಹೋಗುತ್ತಾರೆ. ಜ್ಞಾನ ಸ್ನಾನವನ್ನು ವಾಸ್ತವದಲ್ಲಿ ಪರಮಪಿತ ಪರಮಾತ್ಮನಿಂದ ಮಾಡಬೇಕಾಗಿದೆ. ಪಾವನ ಪ್ರಪಂಚದ ಸ್ಥಾಪನೆಯನ್ನು ಪರಮಪಿತ ಪರಮಾತ್ಮ ಮಾಡಿಸುತ್ತಾರೆ. ನೀವು ಅವರನ್ನು ತಿಳಿದುಕೊಂಡಿಲ್ಲ. ಭಾರತ ಯಾವಾಗ ಶ್ರೇಷ್ಠಾಚಾರಿಯಾಗಿತ್ತು ಆಗ ಅದರಲ್ಲಿ ದೇಹಿ ಅಭಿಮಾನಿ ದೇವತೆಗಳು ಇರುತ್ತಿದ್ದರು. ಅದನ್ನು ಶಿವಾಲಯವೆಂದು ಹೇಳಲಾಗುತ್ತದೆ. ಈಗ ಕುಂಭಮೇಳದಲ್ಲಿ ತಿಳಿಸಲು ಮಕ್ಕಳು ಹೋಗಿ ಪ್ರದರ್ಶನಿಯನ್ನು ಹಾಕಬೇಕು. ತಿಳಿಸಬೇಕು ಪತಿತ-ಪಾವನ ಒಬ್ಬ ತಂದೆಯಾಗಿದ್ದಾರೆ, ಅವರು ತಿಳಿಸುತ್ತಾರೆ ನಾನು ಇಂತಹ ಸಮಯದಲ್ಲಿ ಬರುತ್ತೇನೆ ಯಾರನ್ನು ಪತಿತರಿಂದ ಪಾವನ ಮಾಡಬೇಕಾಗುವುದು. ಆದ್ದರಿಂದ ಪ್ರತಿಜ್ಞೆ ಮಾಡಬೇಕಾಗುತ್ತದೆ. ರಕ್ಷಾಬಂಧನದ ಸಂಭಂದ ಭಗವಂತನ ಜೊತೆ ತೋರಿಸುತ್ತಾರೆಯೇ ವಿನಃ ಸಾಧು ಸಂತರ ಜೊತೆ ಅಲ್ಲ. ಪ್ರತಿಜ್ಞೆ ಪರಮಪಿತ ಪರಮಾತ್ಮನ ಜೊತೆ ಮಾಡಲಾಗುತ್ತದೆಯೇ ವಿನಃ ತ್ರಿವೇಣಿ ಸಂಗಮದ ಜೊತೆ ಅಲ್ಲ. ಹೇ ಬಾಬಾ, ನಾವು ತಮ್ಮ ಶ್ರೀಮತದಂತೆ ಪಾವನರಾಗುವ ಪ್ರತಿಜ್ಞೆ ಮಾಡುತ್ತೇವೆ. ತಂದೆಯೂ ಹೇಳುತ್ತಾರೆ ನಾನು ನಿಮ್ಮನ್ನು ಪಾವನ ಪ್ರಪಂಚದ ಮಾಲಿಕರನ್ನಾಗಿ ಮಾಡುತ್ತೇನೆ. ಇದು ಬಾಬಾರವರ ಸೂಚನೆಯಾಗಿದೆ. ಇದರಲ್ಲಿ ಸೇವೆ ಮಾಡುವವರು ಬಹಳ ತೀಕ್ಷ್ಣವಾಗಿರಬೇಕು. ಚಿತ್ರಗಳನ್ನು ಬೇರೆ ಮಾಡಿಸಬೇಕು. ಇದಕ್ಕಾಗಿ ದೊಡ್ಡ ಮಂಟಪಗಳನ್ನು ತೆಗೆದುಕ್ಕೊಳ್ಳಬೇಕಾಗುತ್ತದೆ. ನಿಮ್ಮ ಶತ್ರುಗಳೂ ಬಹಳಷ್ಟು ಜನ ಬರುತ್ತಾರೆ, ಕೆಲವೊಮ್ಮೆ ಬೆಂಕಿ ಹಚ್ಚುವಲ್ಲೂ ಹಿಂದೆ ನೋಡುವುದಿಲ್ಲ. ಯಾರಿಗಾದರೂ ಜಗಳ ಆಡಬೇಕೆನಿಸಿದರೆ ಬೈಗುಳ ಹಾಕಲು ತೊಡಗುತ್ತಾರೆ. ನೀವಂತೂ ನಿರಹಂಕಾರಿಗಳಾಗಿ ಶಾಂತಿಯಿಂದ ಇರಬೇಕಾಗಿದೆ. ಬ್ರಹ್ಮಾಕುಮಾರಿಯರಂತು ಪ್ರಸಿದ್ಧಿಯಾಗಿರುವಿರಿ. ಪಾಂಪ್ಲೇಟ್ಸ್ ಗಳನ್ನು ಅವಶ್ಯವಾಗಿ ಹಂಚಬೇಕು. ಕುಂಭಮೇಳ ಬಹಳ ಮಹತ್ವಿಕೆಯನ್ನು ಪಡೆದಿದೆ. ವಾಸ್ತವದಲ್ಲಿ ಮಹತ್ವ ಈಗಿನ ಸಮಯದ್ದಾಗಿದೆ, ಇದೂ ಸಹ ಡ್ರಾಮದ ಆಟವಾಗಿದೆ. ಅಲ್ಲಿಂದಲೂ ಸಹ ಯಾರದಾದರೂ ಕಲ್ಯಾಣ ಆಗಬಹುದು. ಆದರೆ ಪರಿಶ್ರಮ ಎನಿಸುತ್ತದೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವಲ್ಲಿ ಪರಿಶ್ರಮವಿದೆ. ಕುಂಭಮೇಳದಲ್ಲಿ ಪ್ರದರ್ಶನಿ ಮಾಡಲೂ ಸಹ ಸಾಹಸ ಬೇಕಾಗಿದೆ, ಯಾರಾದರೂ ಪರಿಚಯದವರಿದ್ದರೆ ಯಾವುದೇ ವಿಘ್ನ ಎದುರಾಗುವುದಿಲ್ಲ. ಪತಿತ-ಪಾವನ ಯಾರು? ಎನ್ನುವುದನ್ನು ಸಿದ್ಧ ಮಾಡಬೇಕಾಗಿದೆ. ಮನುಷ್ಯ ಪಾವನ ಪ್ರಪಂಚ ಸ್ವರ್ಗದ ನೆನಪನ್ನೂ ಮಾಡುತ್ತಾರೆ. ಯಾರಾದರೂ ಸತ್ತರೆ ಹೇಳುತ್ತಾರೆ, ಇಂತಹವರು ಸ್ವರ್ಗವಾಸಿಗಳಾದರು ಎಂದು. ಅಲ್ಲಿ ಬಹಳ ರುಚಿಕರವಾದ ಆಹಾರವಿರುತ್ತದೆ, ಅಲ್ಲಿಂದ ಮತ್ತೆ ಇಲ್ಲಿ ಕರೆದು ಏಕೆ ತಿನ್ನಿಸುವಿರಿ? ನೀವು ಶ್ರೀನಾಥನ ಮಂದಿರದಲ್ಲಿ ನೋಡಿದರೆ - ಎಷ್ಟು ಉತ್ತಮ ಆಹಾರ ತಯಾರಿಸುತ್ತಾರೆ. ಈಗ ಶ್ರೀನಾಥ ಪುರಿ ಮತ್ತು ಜಗನ್ನಾಥ್ ಪುರಿ, ವಾಸ್ತವದಲ್ಲಿ ಒಂದೇ ಮಾತಾಗಿದೆ. ಆದರೆ ಅಲ್ಲಿ ಶ್ರೀನಾಥ ದ್ವಾರೆಯಲ್ಲಿ ನೋಡಿದರೆ ಬಹಳ ವೈಭವ ಆಚರಿಸುತ್ತಾರೆ ಮತ್ತು ಜಗನ್ನಾಥ್ ಪುರಿಯಲ್ಲಿ ಕೇವಲ ಸಪ್ಪೆ ಅನ್ನದ ಭೋಗ ಇಡಲಾಗುತ್ತದೆ. ತುಪ್ಪ ಮುಂತಾದುವುಗಳು ಏನೂ ಇರುವುದಿಲ್ಲ. ಈ ವ್ಯತ್ಯಾಸ ತೋರಿಸುತ್ತದೆ - ಸುಂದರವಾಗಿದ್ದರೆ ರುಚಿಕರವಾದ ಅನ್ನ ಮತ್ತು ಕಪ್ಪಾಗಿದ್ದರೆ ಒಣ ಸಪ್ಪೆ ಅನ್ನ. ರಹಸ್ಯ ಬಹಳ ಚೆನ್ನಾಗಿದೆ. ಇದನ್ನು ತಂದೆ ಕುಳಿತು ತಿಳಿಸುತ್ತಾರೆ. ಶ್ರೀನಾಥ ದ್ವಾರದಲ್ಲಿ ಇಷ್ಟೊಂದು ಭೋಗ ಇಡುತ್ತಾರೆ. ಅದನ್ನು ನಂತರ ಅಲ್ಲಿನ ಪೂಜಾರಿಗಳು ಅಂಗಡಿಗಳಿಗೆ ಕೂಡ ಮಾರುತ್ತಾರೆ. ಅವರ ಸಂಪಾದನೆಗೆ ಮೂಲ ಆದಾರ ಕೂಡ ಇದಾಗಿದೆ. ಅಲ್ಲಿಂದ ಉಚಿತವಾಗಿ ಸಿಗುತ್ತೆ ಆದರೆ ಅದರಿಂದ ಸಂಪಾದನೆ ಮಾಡಿಕೊಳ್ಳುತ್ತಾರೆ. ಅಂದರೆ ನೋಡಿ ಎಷ್ಟು ಅಂಧಶ್ರಧ್ಧೆಯ ಮಾತಾಗಿದೆ. ಇದಾಗಿದೆ ಭಕ್ತಿ ಮಾರ್ಗ. ಜ್ಞಾನ ಮಾರ್ಗ ಸದ್ಗತಿಯ ಮಾರ್ಗವಾಗಿದೆ, ಗಂಗಾ ಸ್ನಾನದಿಂದ ಸದ್ಗತಿಯಂತು ಸಿಗುವುದಿಲ್ಲ. ಬಹಳ ಯುಕ್ತಿಯಿಂದ ತಿಳಿಸಬೇಕಿದೆ. ಯಾವ ರೀತಿ ಇಲಿ ತಣ್ಣಗೆ ಊದಿ ನಂತರ ಕಚ್ಚುತ್ತದೆ ಹಾಗೆ. ತಿಳಿಯಲು ಮತ್ತು ನಂತರ ತಿಳಿಸಲು ಬಹಳ ತಿಳಿವಳಿಕೆ ಇರಬೇಕಾಗಿದೆ. ಎಷ್ಟು ನಾಜೂಕಾದ ಮಾತಾಗಿದೆ. ಮನುಷ್ಯರು ಹೇಳುತ್ತಾರೆ ಹೇ ಪರಮಪಿತ ಪರಮಾತ್ಮ ನಿಮ್ಮ ಗತಿ-ಮತಿ ನೀವೇ ತಿಳಿದಿರುವಿರಿ. ಇದರ ಅರ್ಥ ಇದೇ ಆಗಿದೆ ನಮಗೆ ಏನೂ ತಿಳಿದಿಲ್ಲ ಎಂದು. ನಿಮ್ಮ ಶ್ರೀಮತದಿಂದ ಏನು ಸದ್ಗತಿ ದೊರಕುತ್ತದೆ ಅದನ್ನು ನೀವೆ ಮಾಡಲು ಸಾಧ್ಯವೇ ವಿನಃ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಸರ್ವರ ಸದ್ಗತಿದಾತಾ ಒಬ್ಬರೇ ಆಗಿದ್ದಾರೆ. ಸರ್ವ ಎನ್ನುವ ಅಕ್ಷರ ಖಂಡಿತ ಹಾಕಬೇಕು. ಬಹಳಷ್ಟು ತಿಳಿಸಲಾಗುತ್ತದೆ. ಆದರೆ ತಿಳಿದುಕ್ಕೊಳ್ಳುವಂತಹವರು ಬಹಳ ಕಡಿಮೆ ಜನ ಇದ್ದಾರೆ. ಪ್ರಜೆಗಳಂತು ಬಹಳಷ್ಟು ತಯಾರಾಗುತ್ತಿರುತ್ತಾರೆ.

ಮನುಷ್ಯ ತನ್ನ ಹೆಸರಿನಲ್ಲಿ ಅನೇಕ ದಾನ-ಪುಣ್ಯ ಮಾಡುತ್ತಾನೆ ಅದು ಒಂದು ಜನ್ಮಕ್ಕಾಗಿ ಫಲ ಸಿಕ್ಕಿ ಬಿಡುತ್ತದೆ. ಇಲ್ಲಿ ನಿಮಗೆ 21 ಜನ್ಮಗಳಿಗೆ ಸಿಗುತ್ತದೆ. ಈಶ್ವರಾರ್ಥವಾಗಿ ದಾನ ಮಾಡುವುದರಿಂದ ಶಕ್ತಿ ಸಿಗುತ್ತದೆ. ಇಲ್ಲಿ ಈಶ್ವರನನ್ನೇ ತಿಳಿಯದೆಯಿರುವುದರಿಂದ ಶಕ್ತಿಯೇ ಇಲ್ಲವಾಗಿದೆ. ಹಿಂದೂಗಳ ಗುರು-ಗೋಸಾಯಿಗಳು ಬಹಳಷ್ಟಿದ್ದಾರೆ. ಕ್ರಿಶ್ಚಿಯನ್ನರಿಗೆ ನೋಡಿದರೆ ಒಬ್ಬರಿದ್ದಾರೆ. ಒಬ್ಬರಿಗೆ ಎಷ್ಟು ಮಾನ್ಯತೆಯಿದೆ. ಧರ್ಮವು ಒಂದು ಶಕ್ತಿಯಾಗಿದೆ ಎಂದು ಹೇಳುತ್ತಾರೆ. ಈಗ ನೀವು ಈ ಧರ್ಮವನ್ನು ತಿಳಿದುಕೊಳ್ಳುವುದರಿಂದ ಎಷ್ಟು ಶಕ್ತಿ ಸಿಗುತ್ತದೆ. ಬಾಬಾ ಹೇಳುತ್ತಾರೆ-ಮಕ್ಕಳೇ, ಎಲ್ಲರಿಗೂ ಇದೇ ವಶೀಕರಣ ಮಂತ್ರವನ್ನು ನೀಡಿ. ಮಕ್ಕಳಿಗೆ ತಂದೆ ಹೇಳುತ್ತಾರೆ - ನೀವು ಎಲ್ಲಿಂದ ಬಂದಿರಿ ಅದನ್ನು ನೆನಪು ಮಾಡುವುದರಿಂದ ಅಂತಮತಿ ಸೋ ಗತಿಯಾಗಿ ಬಿಡುತ್ತದೆ. ತಂದೆಯನ್ನು ನೆನಪು ಮಾಡುವುದರಿಂದಲೇ ಪಾವನರಾಗಬಲ್ಲಿರಿ. ಪಾಪ ಭಸ್ಮವಾಗುವುದು. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕು. ಯಾವುದರಿಂದ ಇಡೀ ಚಕ್ರ ಬುದ್ಧಿಯಲ್ಲಿ ಬಂದು ಬಿಡುತ್ತದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ದೇಹದ ಸರ್ವ ಸಂಬಂಧಗಳಿಂದ ಬುದ್ಧಿಯನ್ನು ತೆಗೆದು ತಂದೆಯ ಜೊತೆ ಜೋಡಿಸುವ ಪುರುಷಾರ್ಥ ಮಾಡಬೇಕಾಗಿದೆ. ಅದರಿಂದ ನಂತರ ಅಂತಿಮ ಸಮಯದಲ್ಲೂ ಅದೇ ನೆನಪಿಗೆ ಬರುತ್ತದೆ. ಮತ್ತು ಬೇರೆ ಏನೇ ನೆನಪಿಗೆ ಬಂದರೂ ಸಜೆ ತಿನ್ನಬೇಕಾಗುತ್ತದೆ ಮತ್ತು ಪದವಿಯು ಕಡಿಮೆಯಾಗುತ್ತದೆ. ಆದ್ದರಿಂದ ವಾಸ್ತವದಲ್ಲಿ ಕುಂಭ ಕಲ್ಪ ಸಂಗಮಕ್ಕೆ ಹೇಳಲಾಗುತ್ತದೆ, ಯಾವಾಗ ಆತ್ಮಗಳು ಮತ್ತು ಪರಮಾತ್ಮ ಸೇರುತ್ತಾರೆ ಆಗ. ಪರಮಾತ್ಮನೇ ಬಂದು ರಾಜಯೋಗ ಕಲಿಸುತ್ತಾರೆ. ಅವರು ಪುನರ್ಜನ್ಮರಹಿತ ಆಗಿದ್ದಾರೆ. ಆದರೆ ಮಕ್ಕಳು ತಿಳಿಯುವುದಿಲ್ಲ. ಶ್ರೀಮತದ ಮೇಲೆ ನಡೆಯದೇ ಹೋದರೆ ನೌಕೆ ಹೇಗೆ ಪಾರಾಗುತ್ತದೆ? ನೌಕೆ ಪಾರಾಗುವುದು ಎಂದರೆ ರಾಜ್ಯಭಾಗ್ಯ ಪದವಿಯನ್ನು ಪಡೆಯುವುದು. ಶ್ರೀಮತದಿಂದಲೇ ರಾಜ್ಯಭಾಗ್ಯ ಸಿಗುತ್ತದೆ. ಶ್ರೀಮತದಂತೆ ನಡೆಯದೇ ಹೋದರೆ ಕೊನೆಯಲ್ಲಿ ಎಲ್ಲ ಮುಗಿದು ಹೋಗಿ ಬಿಡುತ್ತೆ. ಯಾರ ಆತ್ಮ ದೀಪ ಬೆಳಗುತ್ತಿರುತ್ತದೆ ಅಂತಹ ಸಜನಿಯರೇ ಜೊತೆಯಲ್ಲಿ ಹೋಗಲು ಸಾಧ್ಯ. ಯಾರ ದೀಪ ಆರಿ ಹೋಗಿರುತ್ತೆ ಅವರು ಜೊತೆಯಲ್ಲಿ ಹೋಗಲು ಸಾಧ್ಯವಿಲ್ಲ. ಅನನ್ಯ ಮಕ್ಕಳೇ ಹೋಗುತ್ತಾರೆ. ಬಾಕಿ ಎಲ್ಲರೂ ನಂಬರ್ವಾರ್ ಹಿಂದೆ ಬರುತ್ತಾರೆ. ಆದರೆ ಪವಿತ್ರರಂತು ಎಲ್ಲರೂ ಆಗುತ್ತಾರೆ. ಎಲ್ಲಾ ಆತ್ಮರೂ ಒಂದೇ ತರಹ ಶಕ್ತಿಶಾಲಿಯಾಗಿರಲು ಸಾಧ್ಯವಿಲ್ಲ. ಪ್ರತಿಯೊಂದು ಆತ್ಮದ ಪಾತ್ರ ತನ್ನ-ತನ್ನದೇ ಆಗಿದೆ. ಒಂದೇ ರೀತಿಯ ಪದವಿಯು ಸಿಗುವುದಿಲ್ಲ. ಅಂತ್ಯದಲ್ಲಿ ಎಲ್ಲರ ಪಾತ್ರ ಸ್ಪಷ್ಠವಾಗಿ ಬಿಡುತ್ತೆ. ವೃಕ್ಷ ಎಷ್ಟು ದೊಡ್ಡದಾಗಿದೆ, ಎಷ್ಟು ಮನುಷ್ಯರಿದ್ದಾರೆ! ಮುಖ್ಯವಾಗಿ ದೊಡ್ಡ ದೊಡ್ಡ ರೆಂಬೆ-ಕೊಂಬೆಗಳು ಮಾತ್ರ ಕಂಡು ಬರುತ್ತವೆ. ಅಡಿಪಾಯ ಮುಖ್ಯವಾಗಿದೆ. ಉಳಿದಂತೆ ಎಲ್ಲಾ ಆಮೇಲೆ ಬರುತ್ತಾರೆ, ಅವರಲ್ಲಿ ಶಕ್ತಿ ಕಡಿಮೆ ಇರುತ್ತದೆ. ಸ್ವರ್ಗದಲ್ಲಿ ಎಲ್ಲರೂ ಬರಲು ಸಾಧ್ಯವಿಲ್ಲ. ಭಾರತವೇ ಸ್ವರ್ಗವಾಗಿತ್ತು. ಹೀಗಲ್ಲಾ ಭಾರತದ ಬದಲು ಜಪಾನ್ ಖಂಡ ಸ್ವರ್ಗವಾಗಿ ಬಿಡುವುದು ಎಂದು. ಈ ರೀತಿ ಆಗಲು ಸಾಧ್ಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಬಾಪ್ದಾದಾ ಮತ್ತು ಮಾತಾ-ಪಿತರ ಮುದ್ದಿನ ಅಗಲಿ ಹೋಗಿ ಸಿಕ್ಕಿರುವ ಜ್ಞಾನ ನಕ್ಷತ್ರ ಮಕ್ಕಳಿಗೆ ನೆನಪು ಪ್ರೀತಿ ಮತ್ತು ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ರಾತ್ರಿ ಕ್ಲಾಸ್ : - 24-04-68

ಮಕ್ಕಳಿಗೆ ತಿಳಿಸಲಾಗಿದೆ ಮತ್ತು ಧರ್ಮ ಸ್ಥಾಪಕರು ಯಾರದೇ ಕಲ್ಯಾಣ ಮಾಡಲು ಸಾಧ್ಯವಿಲ್ಲ. ಅವರು ಬರುತ್ತಾರೆ ಮತ್ತು ಎಲ್ಲರನ್ನೂ ಕರೆದು ತರುತ್ತಾರೆ. ಯಾರು ಮುಕ್ತಿ ನೀಡಿ ಮಾರ್ಗದರ್ಶನ ಮಾಡುತ್ತಾರೆ ಅವರ ಗಾಯನವಿದೆ. ಅವರು ಭಾರತದಲ್ಲೇ ಬರುತ್ತಾರೆ. ಅಂದಾಗ ಭಾರತವೇ ಎಲ್ಲದಕ್ಕಿಂತ ಶ್ರೇಷ್ಠ ದೇಶವಾಗಿದೆ. ಭಾರತವನ್ನು ಬಹಳ ಮಹಿಮೆ ಮಾಡಬೇಕಾಗಿದೆ. ತಂದೆಯೇ ಬಂದು ಸರ್ವರ ಸದ್ಗತಿ ಮಾಡುತ್ತಾರೆ, ಆಗಲೇ ಶಾಂತಿ ನೆಲೆಸುತ್ತದೆ. ವಿಶ್ವದಲ್ಲಿ ಶಾಂತಿ ಇತ್ತು ಸೃಷ್ಠಿಯ ಆದಿಯಲ್ಲಿ, ಸ್ವರ್ಗದಲ್ಲಿ ಒಂದೇ ಧರ್ಮವಿತ್ತು. ಈಗ ಅನೇಕ ಧರ್ಮವಿದೆ. ತಂದೆಯೇ ಬಂದು ಶಾಂತಿ ಸ್ಥಾಪನೆ ಮಾಡುತ್ತಾರೆ. ಕಲ್ಪದ ಹಿಂದಿನಂತೆ ಮಾಡುತ್ತಾರೆ. ನೀವು ಮಕ್ಕಳಿಗೆ ಜ್ಞಾನ ಸಿಕ್ಕಿದೆ ಅದರಿಂದ ವಿಚಾರ ಸಾಗರ ಮಂಥನ ನಡೆಯುತ್ತದೆ. ಬೇರೆ ಯಾರದೂ ನಡೆಯುವುದಿಲ್ಲ. ಇದನ್ನೂ ನೀವು ತಿಳಿದಿರುವಿರಿ. ದೇಹ-ಅಭಿಮಾನದ ಕಾರಣ ದೇಹವನ್ನೇ ಪೂಜಿಸುತ್ತಾರೆ. ಆತ್ಮ ಪುನರ್ಜನ್ಮವಂತು ಅವಶ್ಯವಾಗಿ ಇಲ್ಲೇ ಪಡೆಯುತ್ತಾರೆ ತಾನೆ. ಈಗ ನೀವು ತಿಳಿದಿರುವಿರಿ - ಪಾವನರಂತು ಒಬ್ಬರೇ ಇದ್ದಾರೆ. ತಂದೆಯೇ ಗುಪ್ತ ಜ್ಞಾನವನ್ನು ನೀಡುತ್ತಾರೆ. ಅದರಿಂದ ಎಲ್ಲರ ಸದ್ಗತಿಯಾಗಿ ಬಿಡುತ್ತದೆ. ಉಳಿದಂತೆ ಹನುಮಾನ್, ಗಣೇಶ ಮುಂತಾದಂತೆ ಯಾರೂ ಇರುವುದಿಲ್ಲ. ಇವರಿಗೆಲ್ಲಾ ಪೂಜಾರಿಗಳೆಂದು ಹೇಳಲಾಗುತ್ತದೆ. ಒಳ್ಳೆಯದು.

ಆತ್ಮೀಯ ಮಕ್ಕಳ ಪ್ರತಿ ಆತ್ಮೀಯ ತಂದೆ ಅಥವಾ ದಾದಾರವರ ನೆನಪು ಪ್ರೀತಿ ಶುಭ ರಾತ್ರಿ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಸಜೆಯಿಂದ ತಪ್ಪಿಸಿಕ್ಕೊಳ್ಳಲು ದೇಹದ ಸರ್ವ ಸಂಬಂಧಗಳಿಂದ ಬುದ್ಧಿಯೋಗ ತೆಗೆದು ಒಬ್ಬ ತಂದೆಯ ಜೊತೆ ಬುದ್ಧಿಯನ್ನು ಜೋಡಿಸಬೇಕಾಗಿದೆ. ಅಂತಿಮ ಸಮಯದಲ್ಲಿ ಒಬ್ಬ ತಂದೆಯ ವಿನಹ ಬೇರೆ ಯಾರದೇ ನೆನಪು ಬರಬಾರದು.

2. ನಿರಹಂಕಾರಿಗಳಾಗಿ ಶಾಂತಿಯಲ್ಲಿರುತ್ತಾ ಮುಳ್ಳುಗಳನ್ನು ಹೂ ಗಳನ್ನಾಗಿ ಮಾಡುವ ಪರಿಶ್ರಮ ಪಡಬೇಕಾಗಿದೆ. ಶ್ರೀಮತದಂತೆ ಅಂಧರಿಗೆ ಊರುಗೋಲಾಗಬೇಕು. ಪಾವನರಾಗಿ ಪಾವನ ಮಾಡಬೇಕಾಗಿದೆ.

ವರದಾನ:
ವಾಚಾ ಜೊತೆಯಲ್ಲಿ ಮನಸ್ಸಿನ ಮೂಲಕ ಶಕ್ತಿಶಾಲಿ ಸೇವೆ ಮಾಡುವಂತಹ ಸಹಜ ಸಫಲತಾ ಮೂರ್ತಿ ಭವ.

ಹೇಗೆ ವಾಚಾನ ಸೇವೆಯಿಂದ ಸದಾ ಬಿಜಿಯಾಗಿರುವಲ್ಲಿ ಅನುಭವಿಯಾಗಿರುವಿರಿ, ಅದೇ ರೀತಿ ಎಲ್ಲಾ ಸಮಯದಲ್ಲಿಯೂ ವಾಣಿಯ ಜೊತೆ-ಜೊತೆ ಮನಸಾ ಸೇವೆ ಸ್ವತಃವಾಗಿ ಆಗಬೇಕು. ಮನಸಾ ಸೇವೆ ಅರ್ಥಾತ್ ಪ್ರತಿ ಸಮಯ ಸರ್ವ ಆತ್ಮರ ಪ್ರತಿ ಸ್ವತಃ ಶುಭ ಭಾವನೆ ಮತ್ತು ಶುಭ ಕಾಮನೆಯ ಶುದ್ಧ ವೈಬ್ರೇಷನ್ ನಿಮಗೆ ಹಾಗೂ ಅನ್ಯರಿಗೆ ಅನುಭವವಾಗಲಿ, ಮನಸ್ಸಿನಿಂದ ಪ್ರತಿ ಸಮಯ ಸರ್ವ ಆತ್ಮರ ಪ್ರತಿ ಆಶೀರ್ವಾದಗಳು ಹೊರ ಬರುತ್ತಿರಲಿ. ಹಾಗೆ ಮನಸಾ ಸೇವೆ ಮಾಡುವುದರಿಂದ ವಾಣಿಯ ಶಕ್ತಿ ಜಮಾ ಆಗುವುದು ಮತ್ತು ಈ ಮನಸ್ಸಿನ ಶಕ್ತಿಶಾಲಿ ಸೇವೆ ಸಹಜವಾಗಿ ಸಫಲತಾ ಮೂರ್ತಿಗಳನ್ನಾಗಿ ಮಾಡುವುದು.

ಸ್ಲೋಗನ್:
ನಿಮ್ಮ ಪ್ರತಿ ಚಲನೆಯಿಂದ ತಂದೆಯ ಹೆಸರನ್ನು ಪ್ರಸಿದ್ದ ಮಾಡುವಂತಹವರೇ ಸತ್ಯ-ಸತ್ಯ ಈಶ್ವರೀಯ ಸೇವಾಧಾರಿಗಳಾಗಿದ್ದಾರೆ.