18.11.18
Avyakt Bapdada Kannada Murli
04.04.84 Om Shanti
Madhuban
“ ಸಂಗಮಯುಗದ ಶ್ರೇಷ್ಠ
ವೇಳೆ , ಶ್ರೇಷ್ಠ ಅದೃಷ್ಠದ ಚಿತ್ರವನ್ನು ರೂಪಿಸಿಕೊಳ್ಳುವ ವೇಳೆ ”
ಇಂದು ಬಾಪ್ದಾದಾರವರು
ಪ್ರತಿಯೊಬ್ಬ ಬ್ರಾಹ್ಮಣ ಶ್ರೇಷ್ಠಾತ್ಮನ ಶ್ರೇಷ್ಠ ಜೀವನದ ಜನ್ಮದ ವೇಳೆ, ಅದೃಷ್ಟದ ರೇಖೆಯನ್ನು
ನೋಡುತ್ತಿದ್ದರು. ಜನ್ಮದ ವೇಳೆಯು ಎಲ್ಲಾ ಮಕ್ಕಳದೂ ಶ್ರೇಷ್ಠವಾಗಿದೆ. ಏಕೆಂದರೆ ಈಗ ಯುಗವೇ
ಪುರುಷೋತ್ತಮ ಶ್ರೇಷ್ಠವಾದುದಾಗಿದೆ. ಶ್ರೇಷ್ಠ ಸಂಗಮಯುಗದಲ್ಲಿ ಅರ್ಥಾತ್ ಶ್ರೇಷ್ಠ ವೇಳೆಯಲ್ಲಿ
ಎಲ್ಲರದು ಶ್ರೇಷ್ಠ ಬ್ರಾಹ್ಮಣ ಜನ್ಮವಾಯಿತು. ಎಲ್ಲರ ಜನ್ಮ, ವೇಳೆ ಶ್ರೇಷ್ಠವಾಗಿದೆ. ಅದೃಷ್ಠದ ರೇಖೆ,
ಅದೃಷ್ಠವೂ ಸಹ ಎಲ್ಲಾ ಬ್ರಾಹ್ಮಣರದು ಶ್ರೇಷ್ಠವಾಗಿದೆ. ಏಕೆಂದರೆ ಶ್ರೇಷ್ಠ ತಂದೆಯ ಶಿವವಂಶಿ
ಬ್ರಹ್ಮಾಕುಮಾರ ಅಥವ ಬ್ರಹ್ಮಾಕುಮಾರಿಯಾಗಿದ್ದಾರೆ. ಅಂದಮೇಲೆ ಶ್ರೇಷ್ಠ ತಂದೆ, ಶ್ರೇಷ್ಠ ಜನ್ಮ,
ಶ್ರೇಷ್ಠ ಆಸ್ತಿ, ಶ್ರೇಷ್ಠ ಪರಿವಾರ, ಶ್ರೇಷ್ಠ ಖಜಾನೆ - ಎಲ್ಲರದೂ ಈ ಅದೃಷ್ಠ ರೇಖೆಯು ಜನ್ಮದಿಂದಲೂ
ಶ್ರೇಷ್ಠವಾಗಿದೆ. ವೇಳೆಯೂ ಶ್ರೇಷ್ಠ ಮತ್ತು ಪ್ರಾಪ್ತಿಯ ಕಾರಣದಿಂದ ಅದೃಷ್ಠದ ರೇಖೆಯೂ
ಶ್ರೇಷ್ಠವಾಗಿದೆ. ಈ ಅದೃಷ್ಠವು ಎಲ್ಲಾ ಮಕ್ಕಳಿಗೂ ಒಬ್ಬ ತಂದೆಯ ಮೂಲಕ ಒಂದೇ ರೀತಿಯಲ್ಲಿ
ಪ್ರಾಪ್ತಿಯಾಗಿದೆ, ಇದರಲ್ಲಿ ಅಂತರವಿಲ್ಲ. ಆದರೂ ಒಂದೇ ರೀತಿಯಲ್ಲಿ ಅದೃಷ್ಠವು ಪ್ರಾಪ್ತಿಯಾಗಿದ್ದರೂ
ನಂಬರ್ವಾರ್ ಏಕೆ? ತಂದೆಯು ಒಬ್ಬರೇ, ಜನ್ಮವೂ ಒಂದೇ ರೀತಿ, ಆಸ್ತಿಯೂ ಒಂದೇ ಇದೆ, ಪರಿವಾರವೂ ಒಂದೇ
ಆಗಿದೆ, ವೇಳೆಯೂ ಸಹ ಒಂದು ಸಂಗಮಯುಗವಾಗಿದೆ, ಆದರೂ ನಂಬರ್ವಾರ್ ಏಕೆ? ಸರ್ವಪ್ರಾಪ್ತಿ ಅರ್ಥಾತ್
ಎಲ್ಲರಿಗೂ ಅದೃಷ್ಠವು ಸಿಕ್ಕಿದೆ. ಅಂತರವೇಕೆ ಆಯಿತು? ಬೇಹದ್ದಿನ ಅದೃಷ್ಠವನ್ನು ಜೀವನದ ಕರ್ಮದ
ಚಹರೆಯಲ್ಲಿ ತರುವುದು, ಇದರಲ್ಲಿ ಯಥಾ ಶಕ್ತಿಯಾಗುವ ಕಾರಣದಿಂದ ಅಂತರವಾಗಿ ಬಿಡುತ್ತದೆ. ಬ್ರಾಹ್ಮಣ
ಜೀವನ ಅರ್ಥಾತ್ ಅದೃಷ್ಠವನ್ನು ಚಿತ್ರ(ಮುಖ)ದಲ್ಲಿ ತರುವುದು, ಜೀವನದಲ್ಲಿ ತರುವುದಾಗಿದೆ. ಪ್ರತೀ
ಕರ್ಮದಲ್ಲಿ ತರುವುದು, ಪ್ರತೀ ಸಂಕಲ್ಪದಿಂದ, ಮಾತಿನಿಂದ, ಕರ್ಮದಿಂದ ಅದೃಷ್ಠವಂತನಿಗೆ ಅದೃಷ್ಠದ
ಅನುಭವವಾಗಲಿ ಅರ್ಥಾತ್ ಕಾಣಿಸಲಿ. ಬ್ರಾಹ್ಮಣ ಅರ್ಥಾತ್ ಅದೃಷ್ಠವಂತ ಆತ್ಮನ ನಯನ, ಮಸ್ತಕ, ಮುಖದ
ಮುಗುಳ್ನಗು, ಪ್ರತೀ ಹೆಜ್ಜೆಯಲ್ಲಿಯೂ ಎಲ್ಲರಿಗೂ ಶ್ರೇಷ್ಠ ಅದೃಷ್ಠದ ಅನುಭೂತಿ ಮಾಡಿಸಲಿ, ಇದಕ್ಕೆ
ಅದೃಷ್ಠವಂತನ ಚಿತ್ರವನ್ನು ಮಾಡಿಕೊಳ್ಳುವುದು ಎಂದು ಹೇಳಲಾಗುತ್ತದೆ. ಅದೃಷ್ಠವನ್ನು ಅನುಭವದ
ಲೇಖನಿಯಿಂದ, ಕರ್ಮದ ಕಾಗದದ ಚಿತ್ರದಲ್ಲಿ ತರಬೇಕು. ಅದೃಷ್ಠದ ಚಹರೆಯ ಚಿತ್ರ ರೇಖೆಯನ್ನಾಗಿ
ಮಾಡಬೇಕಾಗಿದೆ. ಆ ಚಹರೆಯನ್ನಂತು ಎಲ್ಲರೂ ರೂಪಿಸಿಕೊಳ್ಳುತ್ತಿದ್ದೀರಿ. ಆದರೆ ಕೆಲವರ ಚಹರೆಯು
ಸಂಪನ್ನವಾಗಿದೆ, ಮತ್ತು ಕೆಲವರ ಚಹರೆಯು ಯಾವುದಾದರೊಂದು ಮಾತಿನಲ್ಲಿ ಕೊರತೆಯಾಗಿ ಬಿಡುತ್ತಿದೆ.
ಅರ್ಥಾತ್ ಪ್ರತ್ಯಕ್ಷ ಜೀವನದಲ್ಲಿ ತರುವುದರಲ್ಲಿ ಕೆಲವರ ಮಸ್ತಕ ರೇಖೆ ಅರ್ಥಾತ್ ಮನಸ್ಸಾ, ನಯನ ರೇಖೆ
ಅಂದರೆ ಆತ್ಮಿಕ ದೃಷ್ಠಿ, ಮುಖದ ಮುಗುಳ್ನಗುವಿನ ರೇಖೆ ಎಂದರೆ ಸದಾ ಸರ್ವಪ್ರಾಪ್ತಿಸ್ವರೂಪ ಸಂತುಷ್ಟ
ಆತ್ಮನಾಗಿರುವುದು. ಸಂತುಷ್ಟತೆಯೇ ಮುಗುಳ್ನಗುವಿನ ರೇಖೆಯಾಗಿದೆ. ಕೈಗಳ ರೇಖೆ ಅರ್ಥಾತ್ ಶ್ರೇಷ್ಠ
ಕರ್ಮದ ರೇಖೆ. ಕಾಲಿನ ರೇಖೆ ಅರ್ಥಾತ್ ಪ್ರತೀ ಹೆಜ್ಜೆಯಲ್ಲಿ ಶ್ರೀ ಮತದನುಸಾರವಾಗಿ ನಡೆಯುವ ಶಕ್ತಿ.
ಇದೇ ರೀತಿ ಅದೃಷ್ಠದ ಚಹರೆಯನ್ನಾಗಿ ಮಾಡಿಕೊಳ್ಳುವುದರಲ್ಲಿ ಕೆಲವರದು ಕೆಲವೊಂದರಲ್ಲಿ, ಕೆಲವರದು
ಕೆಲವೊಂದರಲ್ಲಿ ಅಂತರವಾಗಿ ಬಿಡುತ್ತದೆ. ಹೇಗೆ ಸ್ಥೂಲ ಚಹರೆಯನ್ನೂ ಚಿತ್ರಿಸುತ್ತಾರೆ, ಅದರಲ್ಲಿ
ಕೆಲವರಿಗೆ ನಯನಗಳನ್ನು ಚಿತ್ರಿಸಲು ಬರುವುದಿಲ್ಲ, ಕೆಲವರಿಗೆ ಕಾಲನ್ನು ಚಿತ್ರಿಸಲು ಬರುವುದಿಲ್ಲ.
ಕೆಲವರಿಗೆ ಮುಗುಳ್ನಗು ಚಿತ್ರಿಸಲು ಸಾಧ್ಯವಾಗುವುದಿಲ್ಲ. ಅದರಿಂದ ಅಂತರವಾಗಿ ಬಿಡುತ್ತದೆಯಲ್ಲವೆ.
ಎಷ್ಟು ಸಂಪನ್ನವಾದ ಚಿತ್ರವಿರುತ್ತದೆಯೋ ಅಷ್ಟು ಅಮೂಲ್ಯವಾಗಿರುತ್ತದೆ. ಅದೊಂದೇ ಚಿತ್ರವು
ಲಕ್ಷಾಂತರ ರೂಪಗಳ ಮೌಲ್ಯವನ್ನು ಸಂಪಾದಿಸುತ್ತದೆ ಮತ್ತು ಕೆಲವು 100 ರೂಗಳನ್ನೂ ಸಂಪಾದಿಸುತ್ತದೆ.
ಅಂದಮೇಲೆ ಅಂತರವು ಯಾವ ಮಾತಿನಲ್ಲಾಯಿತು? ಸಂಪನ್ನತೆಯಲ್ಲಿ. ಅದೇ ರೀತಿಯಲ್ಲಿ ಬ್ರಾಹ್ಮಣ ಆತ್ಮರೂ
ಸಹ ಸರ್ವ ರೇಖೆಗಳಲ್ಲಿ ಸಂಪನ್ನರಾಗದಿರುವ ಕಾರಣದಿಂದ ಒಂದು ರೇಖೆ, ಎರಡು ರೇಖೆಗಳ ಸಂಪೂರ್ಣತೆಯಿರದ
ಕಾರಣದಿಂದ ನಂಬರ್ವಾರ್ ಆಗಿ ಬಿಡುತ್ತದೆ.
ಅಂದಮೇಲೆ ಇಂದು ಅದೃಷ್ಠವಂತ ಮಕ್ಕಳ ಚಹರೆಯನ್ನು ನೋಡುತ್ತಿದ್ದೆವು. ಹೇಗೆ ಸ್ಥೂಲ ಅದೃಷ್ಠದಲ್ಲಿಯೂ
ಭಿನ್ನ-ಭಿನ್ನ ಅದೃಷ್ಠವಿರುತ್ತದೆ. ಹೇಗೆ ಇಲ್ಲಿ ಅದೃಷ್ಠದ ಭಿನ್ನ-ಭಿನ್ನ ಚಹರೆಯನ್ನು(ಚಿತ್ರ)
ನೋಡಿದೆವು. ಪ್ರತಿಯೊಂದು ಚಹರೆಯಲ್ಲಿ ಮುಖ್ಯವಾಗಿ ಮಸ್ತಕ ಮತ್ತು ನಯನವು ಚಹರೆಯ ಮೌಲ್ಯವನ್ನು
ಹೆಚ್ಚಿಸುತ್ತದೆ. ಹೇಗೆ ಇಲ್ಲಿಯೂ ಮನಸಾ ವೃತ್ತಿಯ ಶಕ್ತಿ ಹಾಗೂ ನಯನ ಆತ್ಮಿಕ ದೃಷ್ಟಿಯ ಶಕ್ತಿ,
ಇದರದೇ ಮಹತ್ವಿಕೆಯಿರುತ್ತದೆ. ಚಹರೆಗೆ ಆಧಾರವೂ ಇದೇ ಆಗಿರುತ್ತದೆ. ಎಲ್ಲರೂ ತಮ್ಮ ಚಹರೆಯನ್ನು
ನೋಡಿಕೊಳ್ಳಿರಿ - ನಮ್ಮ ಚಹರೆಯು ಎಷ್ಟು ಸಂಪನ್ನವಾಗಿದೆ! ಇಂತಹ ಚಹರೆಯನ್ನಾಗಿ ಮಾಡಿರಿ, ಅದರಲ್ಲಿ
ತಮ್ಮ ಅದೃಷ್ಠವನ್ನು ರೂಪಿಸುವವರು ಕಾಣಿಸಲಿ. ಪ್ರತಿಯೊಂದು ರೇಖೆಯನ್ನು ಪರಿಶೀಲನೆ ಮಾಡಿರಿ. ಇದೇ
ಕಾರಣದಿಂದ ನಂಬರ್ ಆಗಿ ಬಿಡುತ್ತದೆ. ತಿಳಿಯಿತೆ.
ದಾತನು ಒಬ್ಬರಾಗಿದ್ದಾರೆ, ಕೊಡುವುದೂ ಸಹ ಒಂದೇ ರೀತಿಯಲ್ಲಿ ಕೊಡುತ್ತಾರೆ. ಆದರೆ ಆಗುವವರು,
ಆಗುವುದರಲ್ಲಿ ನಂಬರ್ವಾರ್ ಆಗಿ ಬಿಡುತ್ತಾರೆ. ಕೆಲವರು ಅಷ್ಟ ಮತ್ತು ಇಷ್ಟ ದೇವ ಆಗಿ ಬಿಡುತ್ತಾರೆ.
ಕೆಲವರು ದೇವತೆ ಆಗಿ ಬಿಡುತ್ತಾರೆ. ಕೆಲವರು ದೇವತೆಗಳನ್ನು ನೋಡುತ್ತಾ-ನೋಡುತ್ತಾ ಹರ್ಷಿತವಾಗಿ
ಬಿಡುತ್ತಾರೆ. ತನ್ನ ಚಿತ್ರವನ್ನು ನೋಡಿದಿರಲ್ಲವೆ. ಒಳ್ಳೆಯದು!
ಸಾಕಾರ ರೂಪದಲ್ಲಿ ಮಿಲನವಾಗುವುದರಲ್ಲಂತು ಸಮಯ ಹಾಗೂ ಸಂಖ್ಯೆಯನ್ನು ನೋಡಬೇಕಾಗುತ್ತದೆ ಮತ್ತು
ಅವ್ಯಕ್ತ ಮಿಲನದಲ್ಲಿ ಸಮಯ ಮತ್ತು ಸಂಖ್ಯೆಯ ಮಾತಿರುವುದಿಲ್ಲ. ಅವ್ಯಕ್ತ ಮಿಲನದ ಅನುಭವಿಯಾಗಿ
ಬಿಡುತ್ತೀರೆಂದರೆ, ಅವ್ಯಕ್ತ ಮಿಲನದ ವಿಚಿತ್ರ ಅನುಭವವನ್ನು ಸದಾ ಮಾಡುತ್ತಿರುತ್ತೀರಿ.
ಬಾಪ್ದಾದಾರ್ವರು ಸದಾ ಮಕ್ಕಳ ಆಜ್ಞಾಕಾರಿಯಾಗಿದ್ದಾರೆ. ಆದ್ದರಿಂದ ಅವ್ಯಕ್ತನಾಗಿದ್ದರೂ
ವ್ಯಕ್ತದಲ್ಲಿ ಬರಬೇಕಾಗುತ್ತದೆ. ಆದರೆ ಆಗುವುದೇನು? ಅವ್ಯಕ್ತನಾಗಬೇಕೇ ಅಥವಾ ವ್ಯಕ್ತದಲ್ಲಿ ಬರಬೇಕೆ?
ಅವ್ಯಕ್ತರಾಗಿರಿ. ಅವ್ಯಕ್ತನಾಗುವುದರಿಂದ ತಂದೆಯ ಜೊತೆ ನಿರಾಕಾರನಾಗಿದ್ದು ಮನೆಗೆ ನಡೆಯುತ್ತೀರಿ.
ಈಗ ವಯಾ ಆಗಿ ಹೋಗುವ ಸ್ಥಿತಿಯಲ್ಲಿಯೂ ತಲುಪಿಲ್ಲ. ಫರಿಶ್ತಾ ಸ್ವರೂಪದಿಂದ ನಿರಾಕಾರನಾಗಿ ಮನೆಗೆ
ಹೋಗಲು ಸಾಧ್ಯವಾಗುವುದು. ಅಂದಮೇಲೆ ಈಗ ಫರಿಶ್ತಾ ಸ್ವರೂಪರಾಗಿರಿ! ಅದೃಷ್ಠದ ಚಹರೆಯು
ಸಂಪನ್ನವನ್ನಾಗಿ ಮಾಡಿಕೊಂಡಿದ್ದೀರಾ? ಸಂಪನ್ನ ಚಹರೆಯೇ ಫರಿಶ್ತಾ ಆಗಿರುವುದಾಗಿದೆ. ಒಳ್ಳೆಯದು!
ಬಂದಿರುವಂತಹ ಎಲ್ಲರೂ ಭಿನ್ನ-ಭಿನ್ನ ಜೋನಿನ ಮಕ್ಕಳಿಗೆ, ಪ್ರತಿಯೊಂದು ಜೋನಿನ ವಿಶೇಷತೆಯ ಸಹಿತವಾಗಿ
ಬಾಪ್ದಾದಾರವರು ನೋಡುತ್ತಾ ಹರ್ಷಿತವಾಗುತ್ತಿದ್ದಾರೆ. ಕೆಲವರು ಭಲೆ ಭಾಷೆಯನ್ನು ತಿಳಿದಿಲ್ಲ. ಆದರೆ
ಪ್ರೇಮ ಮತ್ತು ಭಾವನೆಯ ಭಾಷೆಯನ್ನು ತಿಳಿಯುವುದರಲ್ಲಿ ಬುದ್ಧಿವಂತರಿದ್ದಾರೆ. ಮತ್ತೇನೂ ತಿಳಿದಿಲ್ಲ
ಆದರೆ ಮುರುಳಿಯ ಭಾಷೆಯು ಗೊತ್ತಿದೆ. ಏನೂ ತಿಳಿಯದಿರುವವರೂ ಸಹ ಪ್ರೇಮ ಮತ್ತು ಭಾವನೆಯಿಂದ ತಿಳಿದು
ಬಿಡುತ್ತಾರೆ. ಬಂಗಾಳ, ಬಿಹಾರದವರಂತು ಸದಾ ವಸಂತ ಋತುವಿನಲ್ಲಿರುತ್ತಾರೆ. ಸದಾ ವಸಂತ ಋತುವಿರುತ್ತದೆ.
ಪಂಜಾಬ್ ಇರುವುದೇ ಸದಾ ಎಲ್ಲರನ್ನೂ ಹಚ್ಚ ಹಸಿರನ್ನಾಗಿ ಮಾಡುವವರು. ಪಂಜಾಬ್ನಲ್ಲಿ ಹೊಲ
ಚೆನ್ನಾಗಿರುತ್ತದೆ. ಹರಿಯಾಣವಂತು ಇರುವುದೇ ಸದಾ ಹಚ್ಚ ಹಸಿರು. ಪಂಜಾಬ್, ಹರಿಯಾಣ ಸದಾ ಹಸಿರಿನಿಂದ
ಸಂಪನ್ನವಾಗಿರುತ್ತದೆ. ಎಲ್ಲಿ ಹಸಿರಿರುತ್ತದೆ ಆ ಸ್ಥಾನಕ್ಕೆ ಸದಾ ಕುಶಲ, ಶ್ರೇಷ್ಠ ಸ್ಥಾನವೆಂದು
ಹೇಳಲಾಗುತ್ತದೆ. ಪಂಜಾಬ್, ಹರಿಯಾಣವು ಸದಾ ಖುಷಿಯಲ್ಲಿ ಹಚ್ಚ ಹಸಿರಾಗಿದೆ. ಆದ್ದರಿಂದ
ಬಾಪ್ದಾದಾರವರೂ ಸಹ ನೋಡಿ ನೋಡಿ ಹರ್ಷಿತವಾಗುತ್ತಾರೆ. ರಾಜಾಸ್ಥಾನದ ವಿಶೇಷತೆಯೇನಾಗಿದೆ?
ರಾಜಾಸ್ಥಾನವು ಚಿತ್ರ ರೇಖೆಯಲ್ಲಿ ಪ್ರಸಿದ್ಧವಿದೆ. ರಾಜಾಸ್ಥಾನದ ಚಿತ್ರಗಳು ಬಹಳ ಮೌಲ್ಯವಿರುತ್ತದೆ.
ಏಕೆಂದರೆ ರಾಜರುಗಳು ಬಹಳ ಇದ್ದರಲ್ಲವೆ. ಅಂದಮೇಲೆ ರಾಜಾಸ್ಥಾನದ ಅದೃಷ್ಠದ ಚಿತ್ರಗಳು ಅತಿ ಹೆಚ್ಚು
ಮೌಲ್ಯವಂತನನ್ನಾಗಿ ಮಾಡುವಂತದ್ದಾಗಿದೆ. ಚಿತ್ರಗಳ ರೇಖೆಯಲ್ಲಿ ಸದಾ ಶ್ರೇಷ್ಠವಿದೆ. ಗುಜರಾತಿನ
ವಿಶೇಷತೆಯೇನಾಗಿದೆ? ಅಲ್ಲಿ ಗಾಜಿನ ಶೃಂಗಾರವು ಬಹಳ ಹೆಚ್ಚಾಗಿರುತ್ತದೆ. ಅಂದಮೇಲೆ ಗುಜರಾತ್
ದರ್ಪಣವಾಗಿದೆ. ದರ್ಪಣವೆಂದಾದರೂ ಹೇಳಿರಿ, ಕನ್ನಡಿಯೆಂದಾದರೂ ಹೇಳಿರಿ, ಅದರಲ್ಲಿ ತಂದೆಯ
ಮೂರ್ತಿಯನ್ನು ನೋಡಲಿ. ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುತ್ತಾರಲ್ಲವೆ. ಅಂದಮೇಲೆ ಗುಜರಾತಿನ
ದರ್ಪಣದ ಮೂಲಕ ತಂದೆಯ ಚಿತ್ರ, ಫರಿಶ್ತಾ ಸ್ವರೂಪದ ಚಿತ್ರವು ಎಲ್ಲರಿಗೂ ಕಾಣಿಸುವ ವಿಶೇಷತೆಯಾಗಿದೆ.
ಅಂದಮೇಲೆ ಗುಜರಾತಿನ ವಿಶೇಷತೆಯಾಗಿದೆ - ತಂದೆಯನ್ನು ಪ್ರತ್ಯಕ್ಷಗೊಳಿಸುವ ದರ್ಪಣ. ಬಾಕಿ ಚಿಕ್ಕದಾದ
ತಮಿಳುನಾಡು ಉಳಿದುಕೊಂಡಿತು. ಚಿಕ್ಕದು ಚಮತ್ಕಾರವನ್ನೇ ಮಾಡಿ ಬಿಡುತ್ತದೆ. ದೊಡ್ಡ ಕಾರ್ಯವನ್ನೇ
ಮಾಡಿ ತೋರಿಸುತ್ತದೆ. ತಮಿಳುನಾಡಿನವರು ಏನು ಮಾಡುವಿರಿ? ಅಲ್ಲಿ ಮಂದಿರಗಳು ಬಹಳಷ್ಟಿವೆ.
ಮಂದಿರಗಳಲ್ಲಿ ನಾದ ಸ್ವರವಾಗುತ್ತದೆ. ತಮಿಳುನಾಡಿನ ವಿಶೇಷತೆಯಾಗಿದೆ - ನಗಾರಿಯನ್ನು ಮೊಳಗಿಸುತ್ತಾ
ತಂದೆಯ ಪ್ರತ್ಯಕ್ಷತೆಯ ಧ್ವನಿ ಮೊಳಗಿಸುವುದು. ಒಳ್ಳೆಯ ವಿಶೇಷತೆಯಾಗಿದೆ. ಚಿಕ್ಕಂದಿನಲ್ಲಿಯೇ ನಾದ
ಸ್ವರ ಮಾಡುತ್ತಾರೆ. ಭಕ್ತರೂ ಸಹ ಬಹಳ ಪ್ರೀತಿಯಿಂದ ನಾದ ಸ್ವರ ಮಾಡುತ್ತಾರೆ ಮತ್ತು ಮಕ್ಕಳೂ ಸಹ
ಪ್ರೀತಿಯಿಂದ ನಾದ ಸ್ವರ ಮಾಡುತ್ತಾರೆ. ಈಗ ಪ್ರತಿಯೊಂದು ಸ್ಥಾನದ ತನ್ನ ವಿಶೇಷತೆಯನ್ನು ಪ್ರತ್ಯಕ್ಷ
ಸ್ವರೂಪದಲ್ಲಿ ತನ್ನಿರಿ. ಎಲ್ಲಾ ಜೋನಿನವರೊಂದಿಗೆ ಮಿಲನವಾದೆವಲ್ಲವೆ! ಕೊನೆಗೆ ಹೀಗೆಯೇ
ಮಿಲನವಾಗುವುದಾಗುತ್ತದೆ. ಹಳೆಯ ಮಕ್ಕಳು ಹೇಳುತ್ತಾರೆ - ನಮ್ಮನ್ನೇಕೆ ಕರೆಯುವುದಿಲ್ಲ.
ಪ್ರಜೆಗಳನ್ನೂ ಮಾಡುತ್ತೀರಿ, ವೃದ್ಧಿಯೂ ಆಗುತ್ತಿರುತ್ತಾರೆ. ಆದ್ದರಿಂದ ಹಳಬರು ಹೊಸ ಹೊಸ ಮಕ್ಕಳಿಗೆ
ಅವಕಾಶವನ್ನು ಕೊಡಬೇಕಾಗುತ್ತದೆ, ಇದಕ್ಕಾಗಿಯೇ ಸಂಖ್ಯೆಯನ್ನು ವೃದ್ಧಿ ಮಾಡಿದಿರಿ. ಹಳೆಬರೂ ಸಹ
ಹಳೆಯ ಚಲನೆಯಿಂದ ನಡೆಯುತ್ತಿರುತ್ತೀರೆಂದರೆ ಹೊಸಬರಿಗೇನಾಗುತ್ತದೆ. ಹಳಬರು ದಾತಾ
ಕೊಡುವವರಾಗಿದ್ದೀರಿ, ಹೊಸಬರು ತೆಗೆದುಕೊಳ್ಳುವವರಾಗಿದ್ದಾರೆ. ಅಂದಮೇಲೆ ಅವಕಾಶವನ್ನು ಕೊಡಬೇಕು,
ಇದರಲ್ಲಿ ದಾತಾ ಆಗಬೇಕಾಗುತ್ತದೆ. ಸಾಕಾರ ಮಿಲನದಲ್ಲಿ ಎಲ್ಲವೂ ಮಿತಿಯಲ್ಲಿ ಬಂದು ಬಿಡುತ್ತದೆ.
ಅವ್ಯಕ್ತ ಮಿಲನದಲ್ಲಿ ಯಾವುದೇ ಮಿತಿಯಿಲ್ಲ. ಕೆಲವರು ಹೇಳುತ್ತಾರೆ - ಸಂಖ್ಯೆಯು ವೃದ್ಧಿಯಾಗುತ್ತದೆ,
ಮತ್ತೇನಾಗುತ್ತದೆ! ಸಾಕಾರ ಮಿಲನದ ವಿಧಿಯಂತು ಬದಲಾಗುತ್ತದೆ. ಯಾವಾಗ ಸಂಖ್ಯೆಯು
ಹೆಚ್ಚಾಗುತ್ತದೆಯೆಂದರೆ ಸ್ವಲ್ಪ ದಾನ-ಪುಣ್ಯವನ್ನೂ ಮಾಡಬೇಕಾಗುತ್ತದೆ. ಒಳ್ಳೆಯದು.
ದೇಶ-ವಿದೇಶದ ನಾಲ್ಕೂ ಕಡೆಯಲ್ಲಿನ ಎಲ್ಲಾ ಸ್ನೇಹಿ ಮಕ್ಕಳ ಸ್ನೇಹದ ಹೃದಯದ ಧ್ವನಿ, ಖುಷಿಯ ಗೀತೆ
ಮತ್ತು ಹೃದಯದ ಸಮಾಚಾರದ ಪತ್ರಗಳ ಪ್ರತ್ಯುತ್ತರದಲ್ಲಿ, ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ಪದಮದಷ್ಟು
ನೆನಪು-ಪ್ರೀತಿಯ ಜೊತೆಗೆ ಪ್ರತ್ಯುತ್ತರವನ್ನು ಕೊಡುತ್ತಿದ್ದೇವೆ - ಸದಾ ನೆನಪಿನಿಂದ ಅಮರಭವದ
ವರದಾನಿಯಾಗಿ ಮುಂದುವರೆಯುತ್ತಿರಿ ಮತ್ತು ಮುಂದುವರೆಸುತ್ತಾ ಸಾಗಿರಿ. ಎಲ್ಲರೂ
ಉಮ್ಮಂಗ-ಉತ್ಸಾಹದಲ್ಲಿ ಇರುವಂತಹ ಮಕ್ಕಳಿಗೆ, ಬಾಪ್ದಾದಾರವರು ಸ್ವ-ಉನ್ನತಿ ಮತ್ತು ಸೇವೆಯ
ಉನ್ನತಿಗಾಗಿ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಶುಭಾಷಯಗಳು, ಸದಾ ಜೊತೆಯಿರಲಿ. ಸದಾ ಸಂಪನ್ನ
ಮತ್ತು ಸಂಪೂರ್ಣರಾಗಿರಿ, ಇಂತಹ ಸರ್ವ ವರದಾನಿ ಮಕ್ಕಳಿಗೆ ಬಾಪ್ದಾದಾರವರು ಪುನಃ
ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ನೆನಪು-ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ:-
ಸದಾ ಸ್ವಯಂನ್ನು ತಂದೆಯ ಸಮಾನ ಸಂಪನ್ನ ಆತ್ಮನೆಂದು ತಿಳಿಯುತ್ತೀರಾ! ಯಾರು ಸಂಪನ್ನವಾಗಿದ್ದಾರೆ
ಅವರು ಸದಾ ಮುಂದುವರೆಯುತ್ತಿರುತ್ತಾರೆ.
ಸಂಪನ್ನತೆಯಿಲ್ಲವೆಂದರೆ ಮುಂದುವರೆಯಲು ಸಾಧ್ಯವಿಲ್ಲ. ಅಂದಮೇಲೆ ತಂದೆಯು ಹೇಗಿದ್ದಾರೆಯೋ ಹಾಗೆಯೇ
ಮಕ್ಕಳು. ತಂದೆಯು ಸಾಗರನಿದ್ದಾರೆ. ಮಕ್ಕಳು ಮಾಸ್ಟರ್ ಸಾಗರರಿದ್ದಾರೆ. ಪ್ರತಿಯೊಂದು ಗುಣವನ್ನು
ಪರಿಶೀಲಿಸಿರಿ - ಹೇಗೆ ತಂದೆಯು ಜ್ಞಾನದ ಸಾಗರನಾಗಿದ್ದಾರೆ, ಅಂದಮೇಲೆ ನಾನು ಮಾಸ್ಟರ್ ಜ್ಞಾನ
ಸಾಗರನಾಗಿದ್ದೇನೆ. ತಂದೆಯು ಪ್ರೇಮದ ಸಾಗರನಾಗಿದ್ದಾರೆ ಅಂದಮೇಲೆ ನಾನು ಮಾಸ್ಟರ್ ಪ್ರೇಮದ
ಸಾಗರನಾಗಿದ್ದೇನೆಯೇ! ಹೀಗೆ ಸಮಾನತೆಯನ್ನು ಪರಿಶೀಲನೆ ಮಾಡಿರಿ, ಆಗಲೇ ತಂದೆಯ ಸಮಾನ
ಸಂಪನ್ನರಾಗಿದ್ದು ಸದಾ ಮುಂದುವರೆಯುತ್ತಿರುತ್ತೀರಿ. ತಿಳಿಯಿತೆ - ಸದಾ ಹೀಗೆ ಪರಿಶೀಲನೆ ಮಾಡುತ್ತಾ
ಸಾಗಿರಿ. ಸದಾ ಇದೇ ಖುಷಿಯಲ್ಲಿರಿ - ಯಾರನ್ನು ವಿಶ್ವವು ಹುಡುಕುತ್ತಿದೆ, ಅವರನ್ನು ನಾವು
ನಮ್ಮವರನ್ನಾಗಿ ಮಾಡಿಕೊಂಡಿದ್ದೇವೆ. ಒಳ್ಳೆಯದು.
ಅವ್ಯಕ್ತ
ಮಹಾವಾಕ್ಯ – ವಿಶ್ವ ಕಲ್ಯಾಣಿಯಾಗಿರಿ
ಬಾಪ್ದಾದಾರವರು ತಾವು ಮಕ್ಕಳನ್ನು ವಿಶ್ವಕ್ಕಾಗಿ ನಿಮಿತ್ತರನ್ನಾಗಿ ಮಾಡಿದ್ದಾರೆ. ವಿಶ್ವದ ಮುಂದೆ
ತಂದೆಯನ್ನು ಪ್ರತ್ಯಕ್ಷಗೊಳಿಸುವವರು ತಾವು ಮಕ್ಕಳಾಗಿದ್ದೀರಿ. ಮಕ್ಕಳ ಮೂಲಕವೇ ತಂದೆಯು
ಕಾಣಿಸಿಕೊಳ್ಳುತ್ತಾರೆ. ಬೆನ್ನೆಲುಬಂತು ತಂದೆಯೇ ಇರುತ್ತಾರೆ. ಒಂದುವೇಳೆ ತಂದೆಯು ಬೆನ್ನೆಲುಬಾಗಿ
ಆಗದಿದ್ದಾರೆ, ತಾವೊಬ್ಬರು ಸುಸ್ತಾಗಿ ಬಿಡುತ್ತೀರಿ. ಆದ್ದರಿಂದ ತಂದೆಯನ್ನು ಬೆನ್ನೆಲುಬು ಎಂದು
ತಿಳಿದುಕೊಂಡು ವಿಶ್ವ ಕಲ್ಯಾಣದ ಸೇವೆಯಲ್ಲಿ ತನು-ಮನ-ಧನ, ಮನಸ್ಸಾ-ವಾಚಾ-ಕರ್ಮಣಾದಿಂದ ಬ್ಯುಸಿಯಾಗಿ
ಇರುತ್ತೀರೆಂದರೆ, ಸಹಜವಾಗಿಯೇ ಮಾಯಾಜೀತರಾಗಿ ಬಿಡುತ್ತೀರಿ.
ವರ್ತಮಾನ ಸಮಯದಲ್ಲಿ ಇಡೀವಿಶ್ವದಲ್ಲಿ ಅಲ್ಪಕಾಲದ ಪ್ರಾಪ್ತಿಯೆಂಬ ಹೂವು-ಹಣ್ಣು ಒಣಗಿ ಹೋಗಿದೆ.
ಎಲ್ಲರೂ ಮನಸ್ಸಿನಿಂದ, ಮುಖದಿಂದ ಚೀರಾಡುತ್ತಿದ್ದಾರೆ ಮತ್ತು ಹೇಗಾದರೂ ವಿವಶತೆಯಿಂದ ಜೀವನವನ್ನು,
ದೇಶವನ್ನು ನಡೆಸುತ್ತಿದ್ದಾರೆ. ಖುಷಿ-ಖುಷಿಯಿಂದ ನಡೆಯುವುದು ಸಮಾಪ್ತಿಯಾಗಿ ಬಿಟ್ಟಿದೆ. ಅಂದಮೇಲೆ
ಹೀಗೆ ವಿವಶತೆಯಿಂದ ನಡೆಯುವವರಿಗೆ ಪ್ರಾಪ್ತಿಯ ರೆಕ್ಕೆಗಳನ್ನು ಕೊಟ್ಟು ಹಾರಿಸಿ ಬಿಡಿ. ಆದರೆ
ಹಾರಿಸಲು ಆಗ ಸಾಧ್ಯವಾಗುತ್ತದೆ, ಯಾವಾಗ ಸ್ವಯಂ ತಾವು ಹಾರುವ ಕಲೆಯಲ್ಲಿರುತ್ತೀರಿ. ಇದಕ್ಕಾಗಿ
ತಂದೆಯ ಸಮಾನ ವಿಶ್ವ ಕಲ್ಯಾಣಕಾರಿಯ ಬೇಹದ್ದಿನ ಸ್ಥಿತಿಯಲ್ಲಿ ಸ್ಥಿತರಾಗಿದ್ದು, ವಿಶ್ವದ ಸರ್ವ
ಆತ್ಮರಿಗೆ ಸಕಾಶವನ್ನು ಕೊಡಿರಿ, ವಿಶ್ವದ ಪರಿಕ್ರಮಣವನ್ನು ಮಾಡಿರಿ. ಹೇಗೆ ಚಿತ್ರಗಳಲ್ಲಿ
ತೋರಿಸಲಾಗುತ್ತದೆ - ಗ್ಲೋಬಿನ ಮೇಲೆ ಶ್ರೀಕೃಷ್ಣನು ಕುಳಿತುಕೊಂಡಿರುವುದು, ಹೀಗೆ ವಿಶ್ವದ ಗ್ಲೋಬಿನ
ಮೇಲೆ ಕುಳಿತುಕೊಂಡು ನಾಲ್ಕೂ ಕಡೆಗಳಲ್ಲಿ ದೃಷ್ಟಿಯನ್ನು ಕೊಡುತ್ತೀರೆಂದರೆ, ಸ್ವತಹವಾಗಿಯೇ ವಿಶ್ವದ
ಪರಿಕ್ರಮಣವಾಗಿ ಬಿಡುತ್ತದೆ. ಹಾಗೆ ನೋಡಿದರೆ ಯಾವಾಗ ಬಹಳ ಶ್ರೇಷ್ಠ ಸ್ಥಾನದಲ್ಲಿ ಹೋಗುತ್ತೀರೆಂದರೆ,
ಪರಿಕ್ರಮಣವನ್ನು ಹಾಕಬೇಕಾಗಿರುವುದಿಲ್ಲ. ಆದರೆ ಒಂದು ಸ್ಥಾನದಲ್ಲಿದ್ದರೂ ಎಲ್ಲವೂ ಕಾಣಿಸುತ್ತದೆ.
ಯಾರು ಯಾವಾಗ ತನ್ನ ಶ್ರೇಷ್ಠ ಸ್ಥಿತಿಯಲ್ಲಿ, ಬೀಜರೂಪ ಸ್ಥಿತಿಯಲ್ಲಿ, ವಿಶ್ವ ಕಲ್ಯಾಣಕಾರಿ
ಸ್ಥಿತಿಯಲ್ಲಿ ಸ್ಥಿತರಾಗಿರುತ್ತಾರೆಂದರೆ, ಇಡೀ ವಿಶ್ವವೇ ಹೀಗೆ ಕಾಣಿಸುತ್ತದೆ - ಹೇಗೆಂದರೆ, ಒಂದು
ಚಿಕ್ಕದಾದ ಕೂದಲಿನಂತೆ. ಹಾಗಾದರೆ ಸೆಕೆಂಡಿನಲ್ಲಿ ಪರಿಕ್ರಮಣ ಹಾಕಿಕೊಂಡು ಬರುತ್ತೀರಿ.
ತಾವು ಸರ್ವ ಆತ್ಮರ ಪಿತನ ಮಕ್ಕಳಾಗಿದ್ದೀರಿ, ಸರ್ವ ಆತ್ಮರು ತಮ್ಮ ಸಹೋದರರಾಗಿದ್ದಾರೆ. ಅಂದಮೇಲೆ
ತಮ್ಮ ಸಹೋದರರ ಕಡೆಗೆ ಸಂಕಲ್ಪದ ದೃಷ್ಟಿಯನ್ನು ಹರಿಸಿರಿ. ವಿಶಾಲ ಬುದ್ಧಿ, ದೂರಾಂದೇಶಿಯಾಗಿರಿ.
ಚಿಕ್ಕ-ಚಿಕ್ಕ ಮಾತುಗಳಲ್ಲಿ ತಮ್ಮ ಸಮಯವನ್ನು ಕಳೆಯಬಾರದು. ಈಗ ಶ್ರೇಷ್ಠ ಸ್ಥಿತಿಯಲ್ಲಿ
ಸ್ಥಿತರಾಗಿದ್ದು ವಿಶಾಲ ಕಾರ್ಯಕ್ಕೆ ನಿಮಿತ್ತರಾಗಿರಿ. ಹೇ ವಿಶ್ವ ಕಲ್ಯಾಣಕಾರಿ ಆತ್ಮರೇ- ಸದಾ
ವಿಶಾಲ ಕಾರ್ಯದ ಯೋಜನೆಯನ್ನು ಇಮರ್ಜ್ ಮಾಡಿಟ್ಟುಕೊಳ್ಳಿರಿ. ಸರ್ವ ವಿಶೇಷತೆಗಳ ಮೂಲಕವೇ ವಿಶ್ವ
ಕಲ್ಯಾಣದ ಬೇಹದ್ದಿನ ಕಾರ್ಯವು ಸಂಪನ್ನವಾಗುವುದು. ಹೇಗೆ ಯಾವುದೇ ಸ್ಥೂಲ ವಸ್ತುವನ್ನೇ
ಮಾಡಲಾಗುತ್ತದೆ, ಆಗ ಅದರಲ್ಲೇನಾದರೂ ಎಲ್ಲಾ ವಸ್ತುಗಳು ಹಾಕಲಿಲ್ಲ, ಸಾಧಾರಣ ಸಿಹಿ ಅಥವಾ ಉಪ್ಪು
ಇರಲಿಲ್ಲವೆಂದರೂ ಸಹ, ಅದೆಷ್ಟೇ ಚೆನ್ನಾಗಿರುವ ವಸ್ತುವನ್ನೇ ಮಾಡಿರಿ. ಆದರೆ ಅದು ತಿನ್ನಲು
ಯೋಗ್ಯವಾಗಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ವಿಶ್ವದ ಇಷ್ಟೂ ಶ್ರೇಷ್ಠ ಕಾರ್ಯಕ್ಕಾಗಿ ಪ್ರತಿಯೊಂದು
ರತ್ನಗಳ ಅವಶ್ಯಕತೆಯಿದೆ. ಎಲ್ಲರೂ ಬೆರಳು(ಸಹಯೋಗದ ಬೆರಳು) ಇರಬೇಕಾಗಿದೆ. ಪ್ರತಿಯೊಬ್ಬರ
ಬೆರಳಿನಿಂದಲೇ ವಿಶ್ವ ಪರಿವರ್ತನೆಯ ಕಾರ್ಯವು ಸಂಪನ್ನವಾಗುವುದು.
ಬಾಪ್ದಾದಾರವರ ಬಯಕೆಯಿದೆ - ವಿಶ್ವದಲ್ಲಿ ಸದಾಕಾಲಕ್ಕಾಗಿ ಸುಖ ಮತ್ತು ಶಾಂತಿಯ ಧ್ವಜವು ಹಾರಲಿ. ಸದಾ
ಶಾಂತಿಯ ಕೊಳಲುನಾದವಾಗಲಿ. ಈ ಲಕ್ಷ್ಯವನ್ನು ತೆಗೆದುಕೊಂಡು, ಸರ್ವರ ಸಹಯೋಗದ ಬೆರಳಿನಿಂದ ವಿಶಾಲ
ಕಾರ್ಯವನ್ನು ಸಂಪನ್ನಗೊಳಿಸಿರಿ. ಈಗ ತಾವು ಬ್ರಾಹ್ಮಣ ಮಕ್ಕಳ ವಿಶೇಷ ಕಾರ್ಯವು ಇದಾಗಿದೆ - ಮಾಸ್ಟರ್
ಜ್ಞಾನಸೂರ್ಯನಾಗಿದ್ದು, ಇಡೀ ವಿಶ್ವಕ್ಕೆ ಸರ್ವಶಕ್ತಿಗಳ ಕಿರಣಗಳನ್ನು ಕೊಡುವುದು. ಅಂದಾಗ ಎಲ್ಲರೂ
ವಿಶ್ವ ಕಲ್ಯಾಣಕಾರಿಯಾಗಿ ವಿಶ್ವಕ್ಕೆ ಸರ್ವ ಶಕ್ತಿಗಳ ಕಿರಣಗಳನ್ನು ಕೊಡಿರಿ. ಹೇಗೆ ಸೂರ್ಯನು ತನ್ನ
ಕಿರಣಗಳ ಮೂಲಕ ವಿಶ್ವಕ್ಕೆ ಬೆಳಕನ್ನು ಕೊಡುತ್ತಾನೆ. ಹಾಗೆಯೇ ತಾವು ಮಾಸ್ಟರ್ ಜ್ಞಾನಸೂರ್ಯನಾಗಿದ್ದು,
ಸರ್ವಶಕ್ತಿಗಳ ಕಿರಣಗಳನ್ನು ವಿಶ್ವದಲ್ಲಿ ಹರಡಿಸಿದಾಗಲೇ ಸರ್ವ ಆತ್ಮರಿಗೂ ತಮ್ಮ ಸಕಾಶವು ಸಿಗಲು
ಸಾಧ್ಯವಾಗುವುದು.
ತಾವು ವಿಶ್ವದ ದೀಪಕರು, ಅವಿನಾಶಿ ದೀಪಕರಾಗಿದ್ದೀರಿ, ಅದರ ನೆನಪಾರ್ಥವಾಗಿ ದೀಪಾವಳಿಯನ್ನು
ಆಚರಿಸಲಾಗುತ್ತದೆ. ಈಗಿನವರೆಗೂ ತಮ್ಮ ಮಾಲೆಯ ಸ್ಮರಣೆ ಮಾಡುತ್ತಾರೆ. ಏಕೆಂದರೆ ಅಂಧಕಾರವನ್ನು
ಪ್ರಕಾಶತೆಗೊಳಿಸುವವರಾಗಿದ್ದೀರಿ. ಅಂದಾಗ ಸ್ವಯಂನ್ನು ಹೀಗೆ ಸದಾ ಜಾಗೃತವಾಗಿರುವ ದೀಪವೆಂದು ಅನುಭವ
ಮಾಡಿರಿ. ಎಷ್ಟಾದರೂ ಬಿರುಗಾಳಿಗಳು ಬರಲಿ ಆದರೆ ಸದಾ ಏಕರಸ, ಅಖಂಡ ಜ್ಯೋತಿಯ ಸಮಾನವಾಗಿ
ಬೆಳಗುತ್ತಿರುವ ದೀಪ. ಇಂತಹ ದೀಪಗಳಿಗೆ ವಿಶ್ವವೂ ನಮಸ್ಕಾರವನ್ನು ಮಾಡುತ್ತದೆ ಮತ್ತು ತಂದೆಯವರೂ ಸಹ
ಇಂತಹ ದೀಪಗಳ ಜೊತೆಯಿರುತ್ತಾರೆ. ಹೇಗೆ ತಂದೆಯು ಸದಾ ಜಾಗೃತ ಜ್ಯೋತಿಯಾಗಿದ್ದಾರೆ, ಅಖಂಡ ಜ್ಯೋತಿ
ಆಗಿದ್ದಾರೆ, ಅಮರ ಜ್ಯೋತಿ ಆಗಿದ್ದಾರೆ, ಹಾಗೆಯೇ ತಾವು ಮಕ್ಕಳೂ ಸಹ ಸದಾ ಅಮರ ಜ್ಯೋತಿಯಾಗಿದ್ದು
ವಿಶ್ವವನ್ನು ಅಂಧಕಾರದಿಂದ ಹೊರ ತೆಗೆಯುವ ಸೇವೆಯನ್ನು ಮಾಡಿರಿ. ವಿಶ್ವದ ಆತ್ಮರು ತಾವೆಲ್ಲಾ
ಬೆಳಗುತ್ತಿರುವ ದೀಪಗಳ ಕಡೆಗೆ ಬಹಳ ಸ್ನೇಹದಿಂದ ನೋಡುತ್ತಿದ್ದಾರೆ. ತಾವು ರಾತ್ರಿಯಿಂದ ದಿನವನ್ನಾಗಿ
ಮಾಡುವಂತಹ ಚೈತನ್ಯ ದೀಪಗಳಾಗಿದ್ದೀರಿ. ಎಷ್ಟೊಂದು ಆತ್ಮರು ಅಂಧಕಾರದಲ್ಲಿ ಅಲೆದಾಡುತ್ತಾ,
ಬೆಳಕಿಗಾಗಿ ಚಡಪಡಿಸುತ್ತಿದ್ದಾರೆ. ಒಂದುವೇಳೆ ತಾವು ದೀಪಗಳ ಬೆಳಕು ಟಿಮ್ಟಿಮಾ ಎನ್ನುತ್ತಿರುತ್ತದೆ,
ಈಗೀಗ ಬೆಳಗಿತು, ಈಗೀಗ ನಂದಿ ಹೋಯಿತೆಂದರೆ ಅಲೆಯುತ್ತಿರುವ ಆತ್ಮರ ಗತಿಯೇನಾಗುತ್ತದೆ! ನಂದಿ
ಹೋಗುತ್ತಾ-ಬೆಳಗುತ್ತಾ ಇರುವ ಲೈಟ್ನ್ನು ಇಷ್ಟ ಪಡುವುದಿಲ್ಲ. ಆದ್ದರಿಂದ ಜಾಗೃತ ಜ್ಯೋತಿಯಾಗಿ
ಅಂಧಕಾರವನ್ನು ಸಮಾಪ್ತಿ ಮಾಡುವ ಜವಾಬ್ದಾರ ಆತ್ಮನೆಂದು ತಿಳಿದುಕೊಂಡು ನಡೆದಾಗಲೇ ಹೇಳಲಾಗುತ್ತದೆ –
ವಿಶ್ವ ಕಲ್ಯಾಣಕಾರಿ.
ತಾವು ಪೂರ್ವಜ ಆತ್ಮರಾಗಿದ್ದೀರಿ, ತಮ್ಮ ವೃತ್ತಿಯು ವಿಶ್ವದ ವಾತಾವರಣವನ್ನು ಪರಿವರ್ತನೆ
ಮಾಡುವಂತದ್ದಾಗಿರಲಿ. ತಾವು ಪೂರ್ವಜರ ದೃಷ್ಟಿಯು ಸರ್ವ ವಂಶಾವಳಿಗೂ ಸಹೋದರತ್ವದ ಸ್ಮೃತಿಯನ್ನು
ತರಿಸುವಂತದ್ದಾಗಿರಲಿ. ತಾವು ಪೂರ್ವಜರು ತಂದೆಯ ಸ್ಮೃತಿಯಲ್ಲಿದ್ದು, ಸರ್ವ ವಂಶಾವಳಿಗೇ ಸ್ಮೃತಿ
ತರಿಸಿರಿ - ಎಲ್ಲರ ತಂದೆಯು ಬಂದು ಬಿಟ್ಟಿದ್ದಾರೆ. ತಾವು ಪೂರ್ವಜರ ಶ್ರೇಷ್ಠ ಕರ್ಮವು
ವಂಶಾವಳಿಯನ್ನು ಶ್ರೇಷ್ಠ ಚರಿತ್ರೆ ಅರ್ಥಾತ್ ಚಾರಿತ್ರ್ಯನಿರ್ಮಾಣದ ಶುಭ ಆಶೆಯನ್ನು ಉತ್ಪನ್ನ ಮಾಡಿ
ಬಿಡಲಿ. ಎಲ್ಲರ ದೃಷ್ಟಿಯು ತಾವು ಪೂರ್ವಜರನ್ನು ಹುಡುಕುತ್ತಿದೆ, ಅಂದಾಗ ಈಗ ಬೇಹದ್ದಿನ ಸ್ಮೃತಿ
ಸ್ವರೂಪರಾಗಿರಿ. ಹೇಗೆ ತಂದೆಯ ಮಹಿಮೆಯಲ್ಲಿ ಗಾಯನ ಮಾಡುತ್ತಾರೆ - ``ನಿರ್ಬಲರಿಗೆ ಬಲವನ್ನು
ಕೊಡುವವರು''. ಅದೇ ರೀತಿ ತಾವೆಲ್ಲರೂ ಸಹ ಭಲೆ ಬ್ರಾಹ್ಮಣ ಪರಿವಾರದಲ್ಲಿ, ಭಲೆ ವಿಶ್ವದ ಆತ್ಮರಲ್ಲಿ,
ಪ್ರತಿಯೊಂದು ಆತ್ಮನಲ್ಲಿ, ನಿರ್ಬಲರಿಗೆ ಬಲವನ್ನು ಕೊಡುವಂತಹ ಮಹಾಬಲಶಾಲಿಯಾಗಿರಿ. ಹೇಗೆ ಅವರುಗಳು
ಮೊಳಗಿಸುತ್ತಾರೆ - ಬಡತನ ದೂರಗೊಳಿಸಿರಿ, ಹಾಗೆಯೇ ತಾವು ನಿರ್ಬಲತೆಯನ್ನು ದೂರಗೊಳಿಸಿರಿ. ಇಂತಹ
ನಿಮಿತ್ತರಾಗಿ ವಿಶ್ವದ ಪ್ರತಿಯೊಂದು ಆತ್ಮನಿಗೆ ತಂದೆಯಿಂದ ಸಾಹಸ ಮತ್ತು ಸಹಯೋಗವನ್ನು ಕೊಡಿಸಿರಿ.
ಒಳ್ಳೆಯದು.
ವರದಾನ: ವರದಾನ:-
ಲಗನ್ನಿನ
ಅಗ್ನಿಯಲ್ಲಿ ಎಲ್ಲಾ ಚಿಂತೆಗಳನ್ನು ಸಮಾಪ್ತಿಗೊಳಿಸುವಂತಹ ನಿಶ್ಚಯಬುದ್ಧಿ ನಿಶ್ಚಿಂತ ಭವ.
ಯಾವ ಮಕ್ಕಳು
ನಿಶ್ಚಯ ಬುದ್ಧಿಯವರಾಗಿದ್ದಾರೆ, ಅವರು ಎಲ್ಲಾ ಮಾತುಗಳಲ್ಲಿ ನಿಶ್ಚಿಂತರಾಗಿರುತ್ತಾರೆ.
ಚಿಂತೆಗಳಲ್ಲವೂ ಸಮಾಪ್ತಿಯಾಯಿತು. ತಂದೆಯ ಚಿಂತೆಗಳ ಚಿತೆಯಿಂದ ಮೇಲೆತ್ತಿ ಹೃದಯ ಸಿಂಹಾಸನದಲ್ಲಿ
ಕೂರಿಸಿಕೊಂಡು ಬಿಟ್ಟರು. ತಂದೆಯೊಂದಿಗೆ ಲಗನ್ ಉಂಟಾಯಿತು ಮತ್ತು ಲಗನ್ನಿನ ಆಧಾರದಿಂದ, ಲಗನ್ನಿನ
ಅಗ್ನಿಯಲ್ಲಿ ಎಲ್ಲಾ ಚಿಂತೆಗಳು ಸಮಾಪ್ತಿಯಾಯಿತು, ಹೇಗೆಂದರೆ ಅದಿಲ್ಲವೇ ಇಲ್ಲ. ತನುವಿನ ಚಿಂತೆಯೂ
ಇಲ್ಲ, ಮನಸ್ಸಿನಲ್ಲಿ ಯಾವುದೇ ವ್ಯರ್ಥ ಚಿಂತೆಯೂ ಇಲ್ಲ ಮತ್ತು ಧನದ ಚಿಂತೆಯೂ ಇಲ್ಲ. ಏನಾಗುತ್ತದೆಯೋ......
ಎನ್ನುವುದೂ ಇಲ್ಲ. ಜ್ಞಾನದ ಶಕ್ತಿಯಿಂದ ಎಲ್ಲವನ್ನೂ ತಿಳಿದು ಬಿಟ್ಟರು. ಆದ್ದರಿಂದ ಎಲ್ಲಾ
ಚಿಂತೆಗಳಿಂದ ದೂರವಾಗಿ ನಿಶ್ಚಿಂತ ಜೀವನವಾಯಿತು.
ಸ್ಲೋಗನ್:
ಹೀಗೆ
ಅಚಲ-ಅಡೋಲರಾಗಿರಿ, ಅದರಿಂದ ಯಾವುದೇ ಪ್ರಕಾರದ ಸಮಸ್ಯೆಯು ಬುದ್ಧಿಯೆಂಬ ಕಾಲನ್ನೂ ಅಲುಗಾಡಿಸಲು
ಸಾಧ್ಯವಾಗುವುದಿಲ್ಲ.