10.11.2018 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ನಿಮ್ಮ ಸತ್ಯ
ಮಾತಿನ ಬಾಣವು ಯಾವಾಗ ನಾಟುತ್ತದೆ ಎಂದರೆ ಯಾವಾಗ ನಿಮ್ಮ ಹೃದಯದಲ್ಲಿ ಸತ್ಯತೆ ಮತ್ತು
ಸ್ವಚ್ಛತೆಯಿರುತ್ತೆ, ಏಕೆಂದರೆ ನಿಮಗೆ ಸತ್ಯ ತಂದೆಯ ಸಂಗ ಸಿಕ್ಕಿದೆ ಆದ್ದರಿಂದ ಸತ್ಯವಂತರಾಗಿ.”
ಪ್ರಶ್ನೆ:
ನೀವೆಲ್ಲರೂ
ವಿದ್ಯಾರ್ಥಿಗಳಾಗಿದ್ದೀರಿ, ಆದುದರಿಂದ ನಿಮಗೆ ಯಾವ ಮಾತಿನ ಬಗ್ಗೆ ಚಿಂತನೆಯಿಟ್ಟುಕೊಳ್ಳುವ
ಅವಶ್ಯಕತೆಯಿದೆ?
ಉತ್ತರ:
ಎಂದಾದರೂ ಯಾವುದೇ
ತಪ್ಪಾದಾಗ ಸತ್ಯ ಹೇಳಬೇಕು. ಸತ್ಯವನ್ನೇ ಹೇಳುವುದರಿಂದ ಉನ್ನತಿಯಾಗುತ್ತದೆ. ನೀವು ನಿಮ್ಮ
ಸೇವೆಯನ್ನು ಅನ್ಯರಿಂದ ತೆಗೆದುಕೊಳ್ಳಬಾರದು. ಒಂದುವೇಳೆ ಇಲ್ಲಿ ಏನಾದರೂ ಸೇವೆ ತೆಗೆದುಕೊಂಡರೆ
ಅಲ್ಲಿ (ಸತ್ಯಯುಗ) ಸೇವೆ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಾದ ನೀವು ಚೆನ್ನಾಗಿ ಓದಿ ಅನ್ಯರಿಗೆ
ಓದಿಸಿದಾಗ ತಂದೆಗೂ ಖುಷಿಯಾಗುತ್ತದೆ. ತಂದೆಯು ಪ್ರೀತಿಯ ಸಾಗರರಾಗಿದ್ದಾರೆ. ಅವರು ನಿಮಗೆ ಓದಿಸಿ
ಶ್ರೇಷ್ಠ ಪದವಿಯನ್ನು ಕೊಡಿಸುವುದೇ ಅವರ ಪ್ರೀತಿಯಾಗಿದೆ.
ಗೀತೆ:
ಯಾರು ಈ ಆಟವನ್ನು
ಮಾಡಿದರು, ಆಟವನ್ನು ಮಾಡಿ ಸ್ವಯಂನ್ನು ಬಚ್ಚಿಟ್ಟುಕೊಂಡರು..
ಓಂ ಶಾಂತಿ.
ಈ ಸಮಯದಲ್ಲಿ ನಾವು ಗೀತಾ ಜಯಂತಿಯನ್ನು ಆಚರಿಸುತ್ತಿದ್ದೇವೆಂದು ಸಮಾಚಾರಗಳು ಬರುತ್ತಿರುತ್ತವೆ. ಈಗ
ಈ ಗೀತೆಗೆ ಜನ್ಮವನ್ನು ಯಾರು ಕೊಟ್ಟರು, ಇದೇ ಮುಖ್ಯವಾದಂತಹ ವಿಷಯವಾಗಿದೆ. ಜಯಂತಿಯೆಂದು ಹೇಳುವಾಗ
ಅವಶ್ಯವಾಗಿ ಜನ್ಮವಾಯಿತಲ್ಲವೆ. ಅದನ್ನು ಯಾವಾಗ ಶ್ರೀಮದ್ಭಗವದ್ಗೀತಾ ಜಯಂತಿಯೆಂದು ಹೇಳುತ್ತಾರೆಯೋ
ಆಗ ಅದಕ್ಕೆ ಜನ್ಮ ಕೊಡುವವರೂ ಬೇಕಾಗುತ್ತದೆಯಲ್ಲವೆ. ಎಲ್ಲರೂ ಶ್ರೀಕೃಷ್ಣ ಭಗವಾನುವಾಚ ಎಂದು
ಹೇಳುತ್ತಾರೆ. ಮೊದಲು ಶ್ರೀ ಕೃಷ್ಣ ಬರುತ್ತಾನೆ, ಆಗ ಗೀತೆಯು ಕೃಷ್ಣನ ನಂತರ ಉಳಿದು ಬಿಡುತ್ತದೆ.
ಹಾಗಾದರೆ ಈಗ ಗೀತೆಯ ರಚೈತನೂ ಅವಶ್ಯವಾಗಿ ಇರಬೇಕು. ಒಂದುವೇಳೆ ಕೃಷ್ಣನಿಗೆ ರಚೈತನೆಂದು ಹೇಳಿದರೆ
ಮೊದಲು ಶ್ರೀಕೃಷ್ಣ, ಅದರ ನಂತರ ಗೀತೆಯು ಬರಬೇಕಾಗುತ್ತದೆ. ಆದರೆ ಶ್ರೀ ಕೃಷ್ಣ ಚಿಕ್ಕ
ಮಗುವಾಗಿರುತ್ತಾನೆ. ಆದುದರಿಂದ ಶ್ರೀ ಕೃಷ್ಣನು ಚಿಕ್ಕ ಮಗುವಾಗಿರುತ್ತಾನೆ. ಆದ್ದರಿಂದ ಗೀತೆಯನ್ನು
ಹೇಳಲು ಆಗುವುದಿಲ್ಲ. ಮೊದಲು ಗೀತೆಗೆ ಜನ್ಮ ಕೊಡುವವರು ಯಾರೆಂದು ಸಿದ್ಧ ಮಾಡಬೇಕು, ಇದು ಗುಹ್ಯ
ಮಾತಾಗಿದೆ. ಕೃಷ್ಣನಂತೂ ತಾಯಿಯ ಗರ್ಭದಿಂದ ಜನ್ಮ ತೆಗೆದುಕೊಳ್ಳುತ್ತಾನೆ. ಅವನಂತೂ ಸತ್ಯಯುಗದ
ರಾಜಕುಮಾರನಾಗಿದ್ದಾನೆ. ಅವನು ಸ್ವಯಂ ಗೀತೆಯ ಮೂಲಕ ರಾಜಯೋಗವನ್ನು ಕಲಿತು ರಾಜಕುಮಾರನ ಪದವಿಯನ್ನು
ಪಡೆದಿದ್ದಾನೆ. ಹಾಗಾದರೆ ಗೀತೆಗೆ ಜನ್ಮ ಕೊಟ್ಟವರು ಯಾರು? ಪರಮಪಿತ ಪರಮಾತ್ಮ ಶಿವನೋ ಅಥವಾ ಶ್ರೀ
ಕೃಷ್ಣನೋ? ವಾಸ್ತವದಲ್ಲಿ ಶ್ರೀ ಕೃಷ್ಣನಿಗೆ ತ್ರಿಲೋಕಿನಾಥ, ತ್ರಿಕಾಲದರ್ಶಿ ಎಂದು ಹೇಳುವುದಿಲ್ಲ.
ತ್ರಿಲೋಕಿನಾಥ, ತ್ರಿಕಾಲದರ್ಶಿ ಎಂದು ಒಬ್ಬರಿಗೆ ಹೇಳಲಾಗುವುದು. ತ್ರಿಲೋಕಿನಾಥ ಎಂದರೆ ಮೂರೂ
ಲೋಕಗಳಲ್ಲಿ ರಾಜ್ಯ ಮಾಡುತ್ತಾರೆ. ಮೂಲ, ಸೂಕ್ಷ್ಮ, ಸ್ಥೂಲ ಈ ಮೂರೂ ಲೋಕಗಳಿಗೆ ತ್ರಿಲೋಕ ಎಂದು
ಹೇಳಲಾಗುತ್ತದೆ, ಇದನ್ನು ತಿಳಿಸಿ ಕೊಡುವವರು ತ್ರಿಲೋಕಿನಾಥ, ತ್ರಿಕಾಲದರ್ಶಿ ಪರಮಪಿತ ಪರಮಾತ್ಮ
ಶಿವನಾಗಿದ್ದಾರೆ, ಈ ಮಹಿಮೆಯು ಕೃಷ್ಣನ ಮಹಿಮೆಯಲ್ಲ, ಶಿವನ ಮಹಿಮೆಯಾಗಿದೆ. 16 ಕಲಾ ಸಂಪೂರ್ಣ,
ಸರ್ವಗುಣ ಸಂಪನ್ನ..... ಇದು ಕೃಷ್ಣನ ಮಹಿಮೆಯಾಗಿದೆ. ಕೃಷ್ಣನ ಹೋಲಿಕೆಯನ್ನು ಪೂರ್ಣ ಚಂದ್ರಮನಿಗೆ
ಹೋಲಿಸುತ್ತಾರೆ. ಪರಮಾತ್ಮನನ್ನು ಚಂದ್ರಮನೊಂದಿಗೆ ಹೋಲಿಸುವುದಿಲ್ಲ ಏಕೆಂದರೆ ಅವರ ಕರ್ತವ್ಯವೇ
ಬೇರೆಯಾಗಿದೆ. ಅವರು ಗೀತೆಗೆ ಜನ್ಮ ಕೊಡುವಂತಹ ರಚೈತನಾಗಿದ್ದಾರೆ. ಗೀತಾ ಜ್ಞಾನದಿಂದ ಮತ್ತು
ರಾಜಯೋಗದಿಂದಲೇ ದೇವತೆಗಳು ರಚನೆಯಾಗುತ್ತಾರೆ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಸಲುವಾಗಿ
ತಂದೆಯೇ ಬಂದು ಜ್ಞಾನವನ್ನು ಕೊಡಬೇಕಾಗುತ್ತದೆ. ಈಗ ಈ ತಿಳುವಳಿಕೆಯನ್ನು ಕೊಡಬೇಕೆಂದರೆ ಬಹಳ
ಬುದ್ಧಿವಂತ ಬ್ರಹ್ಮಾಕುಮಾರ-ಕುಮಾರಿಯರು ಬೇಕಾಗುತ್ತದೆ. ಎಲ್ಲರೂ ಒಂದೇ ರೀತಿಯಾಗಿ ತಿಳಿಸಿ
ಕೊಡುವುದಿಲ್ಲ. ತಿಳಿಸುವಂತಹ ಮಕ್ಕಳೂ ಸಹ ನಂಬರ್ವಾರ್ ಆಗಿದ್ದಾರೆ. ಶ್ರೀಮದ್ಭಗವದ್ಗೀತೆಗೆ ಜನ್ಮ
ಕೊಟ್ಟಂತವರು ಯಾರು? ಎಂದು ವಿಷಯವನ್ನು ಇಡಬೇಕು. ಇದರ ವ್ಯತ್ಯಾಸವನ್ನು ತಿಳಿಸಬೇಕು. ಭಗವಂತನಾದರೂ
ಒಬ್ಬ ಪರಮಪಿತ ಪರಮಾತ್ಮ ಶಿವನಾಗಿದ್ದಾರೆ. ಆ ಜ್ಞಾನಸಾಗರನಿಂದ ಜ್ಞಾನವನ್ನು ಕೇಳಿ ಕೃಷ್ಣನು ಈ
ಪದವಿಯನ್ನು ಪಡೆದನು. ಸಹಜ ರಾಜಯೋಗದಿಂದ ಈ ಪದವಿಯನ್ನು ಹೇಗೆ ಪಡೆದನು, ಈ ತಿಳುವಳಿಕೆಯನ್ನು
ಕೊಡಬೇಕಾಗುವುದು. ತಂದೆಯು ಬ್ರಹ್ಮನ ಮೂಲಕ ಬ್ರಾಹ್ಮಣರನ್ನು ರಚನೆ ಮಾಡುತ್ತಾರೆ ಹಾಗೂ ಸರ್ವ
ವೇದ-ಶಾಸ್ತ್ರಗಳ ಸಾರವನ್ನು ಹೇಳುತ್ತಾರೆ ಏಕೆಂದರೆ ಬ್ರಹ್ಮನ ಜೊತೆ ಬ್ರಹ್ಮಾಮುಖವಂಶಾವಳಿಯೂ
ಇರಬೇಕಾಗುತ್ತದೆ. ಬ್ರಹ್ಮನಿಗೆ ಮಾತ್ರ ತ್ರಿಕಾಲದರ್ಶಿತನದ ಜ್ಞಾನವು ಸಿಗುತ್ತದೆ. ತ್ರಿಕಾಲ ಅಂದರೆ
ಮೂರೂ ಕಾಲಗಳ ಜ್ಞಾನವು ಸಿಗುತ್ತದೆ. ಮೂರೂ ಕಾಲವೆಂದು ಆದಿ-ಮಧ್ಯ-ಅಂತ್ಯವನ್ನು ಸೇರಿಸಿ
ಹೇಳಲಾಗುತ್ತದೆ ಹಾಗೂ ಮೂಲ-ಸೂಕ್ಷ್ಮ-ಸ್ಥೂಲವತನ ಅರ್ಥಾತ್ ಮೂರೂ ಲೋಕಗಳಾಗಿವೆ ಎನ್ನುವ ಅಕ್ಷರವನ್ನು
ನೆನಪಿನಲ್ಲಿಟ್ಟುಕೊಳ್ಳಬೇಕು. ಆದರೆ ಬಹಳ ಮಕ್ಕಳು ಇದನ್ನು ಮರೆತು ಹೋಗುತ್ತಾರೆ. ದೇಹ ಅಹಂಕಾರವೆಂಬ
ಮಾಯೆಯು ಮರೆಸುತ್ತದೆ ಆದುದರಿಂದ ಗೀತೆಯ ರಚೈತ ಪರಮಪಿತ ಪರಮಾತ್ಮ ಶಿವನಾಗಿದ್ದಾರೆ ವಿನಃ ಶ್ರೀ
ಕೃಷ್ಣನಲ್ಲ. ಪರಮಪಿತ ಪರಮಾತ್ಮನೇ ತ್ರಿಕಾಲದರ್ಶಿ ಹಾಗೂ ತ್ರಿಲೋಕಿನಾಥರಾಗಿದ್ದಾರೆ. ಕೃಷ್ಣನಲ್ಲಿ
ಅಥವಾ ಲಕ್ಷ್ಮಿ-ನಾರಾಯಣರಲ್ಲಿ ಈ ಜ್ಞಾನವಿರುವುದಿಲ್ಲ. ಆದರೆ ಯಾರು ಈ ಜ್ಞಾನವನ್ನು ತಂದೆಯಿಂದ
ಪಡೆದುಕೊಳ್ಳುತ್ತಾರೆಯೋ ಅವರು ವಿಶ್ವದ ಮಾಲೀಕರಾಗಿ ಬಿಡುತ್ತಾರೆ. ಯಾವಾಗ ಸದ್ಗತಿ ಸಿಗುವುದೋ ಆಗ ಈ
ಜ್ಞಾನವು ಬುದ್ಧಿಯಲ್ಲಿ ಮರೆತು ಹೋಗುತ್ತದೆ. ಸರ್ವರ ಸದ್ಗತಿದಾತ ಅವರೊಬ್ಬರೇ ಆಗಿದ್ದಾರೆ, ಅವರು
ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ಸತ್ಯಯುಗದ ಆದಿಯಿಂದ ಪುನರ್ಜನ್ಮವು ಆರಂಭವಾಯಿತು.
ಕಲಿಯುಗದ ಅಂತ್ಯದವರೆಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲರೂ 84 ಜನ್ಮಗಳನ್ನು
ತೆಗೆದುಕೊಳ್ಳುವುದಿಲ್ಲವೆಂಬ ತಿಳುವಳಿಕೆಯನ್ನು ಕೊಡಬೇಕಾಗುತ್ತದೆ. ಯಾರು ಈ ಗೀತೆಯನ್ನು ಬರೆದವರೋ
ಅವರಿಗೆ ತ್ರಿಕಾಲದರ್ಶಿ ಎಂದು ಹೇಳುವುದಿಲ್ಲ. ಶ್ರೀಕೃಷ್ಣ ಭಗವಾನುವಾಚ ಎಂದು ಮೊದಲೇ
ಬರೆಯಲ್ಪಟ್ಟಿದೆ. ಇದು ಸಂಪೂರ್ಣ ತಪ್ಪಾಗಿ ಬಿಟ್ಟಿದೆ. ಅವಶ್ಯವಾಗಿ ತಪ್ಪು ಆಗಬೇಕಾಗುತ್ತದೆ.
ಯಾವಾಗ ಎಲ್ಲಾ ಶಾಸ್ತ್ರಗಳು ತಪ್ಪಾಗುತ್ತದೆಯೋ ಆಗ ತಂದೆಯು ಬಂದು ಸರಿಯಾದದ್ದನ್ನು ಹೇಳಬೇಕಾಗುವುದು.
ಹಾಗೆಯೇ ಬ್ರಹ್ಮನ ಮೂಲಕ ವೇದ ಶಾಸ್ತ್ರಗಳ ಸತ್ಯ ಸಾರವನ್ನು ಹೇಳುತ್ತಾರೆ, ಆದುದರಿಂದ ಅವರಿಗೆ
“ಸತ್” (ಸತ್ಯ) ಎಂದು ಕರೆಯಲಾಗುತ್ತದೆ. ಈಗ ನಿಮ್ಮ ಸಂಬಂಧವು ಸತ್ಯ ತಂದೆಯೊಂದಿಗೆ ಇದೆ. ಅವರು
ನಿಮ್ಮನ್ನು ಸತ್ಯವಂತರನ್ನಾಗಿ ಮಾಡುತ್ತಾರೆ.
ಪ್ರಜಾಪಿತ ಬ್ರಹ್ಮಾ ಹಾಗೂ ಅವರ ಮುಖವಂಶಾವಳಿ ಈ ಜಗದಂಬಾ ಸರಸ್ವತಿಯಾಗಿದ್ದಾರೆ. ಎಲ್ಲರೂ ಪ್ರಜಾಪಿತ
ಬ್ರಹ್ಮನ ಮಕ್ಕಳು ಪರಸ್ಪರ ಸಹೋದರ-ಸಹೋದರಿಯಾಗುವರು. ಎಲ್ಲಿಯಾದರೂ ಮಂದಿರಗಳಲ್ಲಿ ಹೋಗಿ ಭಾಷಣ
ಮಾಡಬೇಕು. ಮಂದಿರಗಳಿಗೆ ತಿರುಗಾಡಲು ತುಂಬಾ ಜನ ಬರುತ್ತಾರೆ. ಒಬ್ಬರಿಗೆ ತಿಳಿಸಿಕೊಡಲು ಹೋದರೆ
ಸತ್ಸಂಗವೇ ಆರಂಭವಾಗಿ ಬಿಡುವುದು. ಸ್ಮಶಾನದಲ್ಲಿಯೂ ಹೋಗಬೇಕು. ಅಲ್ಲಿ ಮನುಷ್ಯರಿಗೆ
ವೈರಾಗ್ಯವಿರುತ್ತದೆ. ಆದರೆ ನನ್ನ ಭಕ್ತರಿಗೆ ತಿಳಿಸಿ ಕೊಡುವುದರಿಂದ ತಕ್ಷಣ ತಿಳಿದುಕೊಳ್ಳುತ್ತಾರೆ
ಎಂದು ತಂದೆಯು ಹೇಳುತ್ತಾರೆ, ಆದ್ದರಿಂದ ಶಿವನ ಮಂದಿರ, ಲಕ್ಷ್ಮಿ-ನಾರಾಯಣನ ಮಂದಿರದಲ್ಲಿ
ಹೋಗಬೇಕಾಗುವುದು. ಲಕ್ಷ್ಮಿ-ನಾರಾಯಣರನ್ನು ತಾಯಿ-ತಂದೆಯೆಂದು ಹೇಳುವುದಿಲ್ಲ. ಶಿವನನ್ನು ತಂದೆಯೆಂದು
ಹೇಳುತ್ತಾರೆ ಆಗ ಅವಶ್ಯವಾಗಿ ತಾಯಿಯೂ ಇರುತ್ತಾರೆ. ಆದರೆ ಅವರು ಗುಪ್ತವಾಗಿದ್ದಾರೆ. ರಚೈತನಾದ ಶಿವ
ತಂದೆಯನ್ನು ತಾಯಿ-ತಂದೆಯೆಂದು ಹೇಗೆ ಹೇಳುತ್ತಾರೆ, ಈ ಗುಪ್ತ ಮಾತನ್ನು ಯಾರೂ ತಿಳಿದುಕೊಳ್ಳಲು
ಆಗುವುದಿಲ್ಲ. ಲಕ್ಷ್ಮಿ-ನಾರಾಯಣರಿಗೆ ಒಂದೇ ಗಂಡು ಮಗು ಇರುತ್ತದೆ. ಉಳಿದಂತೆ ಪ್ರಜಾಪಿತ ಬ್ರಹ್ಮಾ
ಎಂಬುದು ಇವರ ಹೆಸರಾಗಿದೆ. ವಿಷ್ಣು ಹಾಗೂ ಶಂಕರನನ್ನು ಶ್ರೇಷ್ಠ ಸ್ಥಾನದಲ್ಲಿ ಇಟ್ಟಿಲ್ಲ. ಶ್ರೇಷ್ಠ
ಸ್ಥಾನದಲ್ಲಿ ತ್ರಿಮೂರ್ತಿ ಬ್ರಹ್ಮನನ್ನು ಇಡುತ್ತಾರೆ. ಹೇಗೆ ರಚೈತನೆಂದು ಶಿವ ಪರಮಾತ್ಮನಿಗೆ
ಹೇಳುತ್ತಾರೆಯೋ ಅದೇ ರೀತಿ ಬ್ರಹ್ಮನಿಗೂ ರಚೈತನೆಂದು ಹೇಳಲಾಗುವುದು. ಅವರಂತೂ ಅವಿನಾಶಿಯಾಗಿದ್ದಾರೆ.
ರಚೈತನೆಂದು ಹೇಳಿದಾಗ ಹೇಗೆ ರಚಿಸದರೆಂದು ಕೇಳುತ್ತಾರೆ. ಅವರಂತೂ ರಚೈತನಾಗಿದ್ದಾರೆ. ಬಾಕಿ ಅವರು
ಬ್ರಹ್ಮನ ಮೂಲಕ ರಚನೆ ಮಾಡುತ್ತಾರೆ. ಈಗ ಅವರು ಬ್ರಹ್ಮನ ಮೂಲಕ ಸರ್ವ ಆತ್ಮಗಳಿಗೆ ಸೃಷ್ಟಿಯ
ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ. ವೇದ ಶಾಸ್ತ್ರ ಮೊದಲಾದುವುಗಳೆಲ್ಲವೂ ಭಕ್ತಿಮಾರ್ಗದ
ಸಾಮಗ್ರಿಯಾಗಿದೆ. ಅರ್ಧಕಲ್ಪ ಭಕ್ತಿಮಾರ್ಗ ನಡೆಯುತ್ತದೆ, ಇದು ಜ್ಞಾನಕಾಂಡವಾಗಿದೆ. ಯಾವಾಗ
ಭಕ್ತಿಮಾರ್ಗ ಮುಗಿದು ಎಲ್ಲವೂ ತಮೋಪ್ರಧಾನ, ಪತಿತವಾಗಿ ಬಿಡುತ್ತದೆಯೋ ಆಗ ನಾನು ತಂದೆಯು ಬರುತ್ತೇನೆ.
ಮೊದಲು ಸತೋಪ್ರಧಾನತೆಯಿಂದ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಮೇಲಿನಿಂದ ಯಾರು ಪವಿತ್ರ ಆತ್ಮಗಳು
ಬರುತ್ತಾರೆಯೋ ಅವರು ದುಃಖವನ್ನು ಭೋಗಿಸುವಂತಹ ಯಾವುದೇ ಕರ್ಮ ಮಾಡಿರುವುದಿಲ್ಲ. ಕ್ರೈಸ್ತನಿಗೆ
ಶಿಲುಬೆಗೇರಿಸಿದರೆಂದು ಹೇಳುತ್ತಾರೆ. ಆದರೆ ಈ ರೀತಿಯಾಗಲು ಸಾಧ್ಯವಿಲ್ಲ. ಹೊಸ ಆತ್ಮಗಳು ಧರ್ಮ
ಸ್ಥಾಪನಾರ್ಥವಾಗಿ ಬರುತ್ತಾರೆ. ಅವರು ದುಃಖವನ್ನು ಭೋಗಿಸುವುದಿಲ್ಲ ಏಕೆಂದರೆ ಅವರು ಕರ್ಮಾತೀತ
ಸ್ಥಿತಿಯುಳ್ಳ ಸಂದೇಶವಾಹಕರು ಧರ್ಮ ಸ್ಥಾಪನೆ ಮಾಡಲು ಬರುವರು. ಹಾಗೆಯೇ ಯುದ್ಧದಲ್ಲಿಯೂ ಯಾವಾಗ
ಯಾವುದೇ ಸಂದೇಶಿಯು ಬರುವಾಗ ಬಿಳಿ ಬಾವುಟವನ್ನಿಡಿದು ಬರುತ್ತಾರೆ. ಅದರಿಂದ ಯುದ್ಧ ಮಾಡುವವರು ಇವರು
ಯಾವುದೋ ಸಂದೇಶವನ್ನು ತೆಗೆದುಕೊಂಡು ಬಂದಿದ್ದಾರೆಂದು ತಿಳಿದುಕೊಳ್ಳುತ್ತಾರೆ. ಆಗ ಅವರಿಗೆ ಯಾವುದೇ
ತೊಂದರೆಯನ್ನು ಮಾಡುವುದಿಲ್ಲ. ಆದುದರಿಂದ ಯಾರೆಲ್ಲಾ ಸಂದೇಶವಾಹಕರು ಧರ್ಮ ಸ್ಥಾಪನೆಗಾಗಿ
ಬರುತ್ತಾರೆಯೋ ಅವರನ್ನು ಯಾವುದೇ ಶಿಲುಬೆಗೇರಿಸಲು ಸಾಧ್ಯವಿಲ್ಲ. ಆತ್ಮವೇ ದುಃಖವನ್ನು ಭೋಗಿಸುತ್ತದೆ
ಆದರೆ ಆತ್ಮವು ನಿರ್ಲೇಪವಲ್ಲವೆಂದು ಬರೆಯಬೇಕು. ಆತ್ಮವನ್ನು ನಿರ್ಲೇಪವೆಂದು ಹೇಳುವುದು ತಪ್ಪಾಗಿದೆ.
ಇದನ್ನು ಹೇಳಿದವರು ಯಾರು? ಶಿವಭಗವಾನುವಾಚ. ಈ ಮಾತನ್ನು ನೀವು ಬರೆದಿಟ್ಟುಕೊಳ್ಳಬೇಕು. ಇದನ್ನು
ಬರೆಯಲು ವಿಶಾಲ ಬುದ್ಧಿ ಬೇಕಾಗುವುದು. ಒಂದುವೇಳೆ ಪ್ರದರ್ಶಿನಿಯಲ್ಲಿ ಕ್ರಿಶ್ಚಿಯನ್ ಧರ್ಮದವರು
ಬಂದಾಗ ಅವರಿಗೆ ನೀವು ಕ್ರೈಸ್ತನ ಆತ್ಮನನ್ನು ಶಿಲುಬೆಗೆ ಏರಿಸಲಾಗುವುದಿಲ್ಲವೆಂದು ತಿಳಿಸಿ
ಕೊಡಬಹುದು. ಬಾಕಿ ಯಾರಲ್ಲಿ ಕ್ರೈಸ್ತನ ಆತ್ಮ ಪ್ರವೇಶ ಮಾಡಿತು, ಆ ಆತ್ಮನಿಗೆ ದುಃಖವಾಗಿರುತ್ತದೆ.
ಅವರು ಇಂತಹ ಮಾತುಗಳನ್ನು ಕೇಳಿ ಆಶ್ಚರ್ಯ ಪಡುತ್ತಾರೆ. ಪರಮಪಿತ ಪರಮಾತ್ಮನ ಆದೇಶದನುಸಾರವಾಗಿ ಆ
ಪವಿತ್ರ ಆತ್ಮನೇ ಬಂದು ಧರ್ಮ ಸ್ಥಾಪನೆ ಮಾಡಿದರು. ಇದೂ ಸಹ ನಾಟಕವಾಗಿದೆ. ನಾಟಕವನ್ನೂ ಸಹ ಕೆಲವರು
ತಿಳಿದುಕೊಳ್ಳುತ್ತಾರೆ ಆದರೆ ಅದರ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ. ಇಂತಿಂತಹ
ಮಾತುಗಳನ್ನು ಕೇಳಿ ಅವರೂ ಸಹ ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳುವುದಕ್ಕಾದರೂ ಪ್ರಯತ್ನಿಸುತ್ತಾರೆ.
ಕೃಷ್ಣನಿಗೂ ಯಾರೂ ಸಹ ನಿಂದನೆ ಮಾಡುವುದಿಲ್ಲ. ನಿಜವಾಗಿಯೂ ನಿಂದನೆಯು ಈಗ ಸಿಗುತ್ತಿದೆ, ಯಾರಿಗೆ?
ಶಿವ ತಂದೆಗಲ್ಲ ಆದರೆ ಈ ಸಾಕಾರ (ಬ್ರಹ್ಮಾ) ನಿಗೆ. ಶಿಕ್ಷಕರಂತೂ ಪವಿತ್ರ ಆತ್ಮ ತಂದೆಯಾಗಿದ್ದಾರೆ,
ಇವರು ಅಪವಿತ್ರರಾಗಿದ್ದಾರೆ. ಇವರೂ ಸಹ ಪವಿತ್ರರಾಗುತ್ತಿದ್ದಾರೆ. ಯಾರು ತಿಳಿದುಕೊಂಡಿದ್ದಾರೆಯೋ
ಅವರು ತೊದಲುವುದಿಲ್ಲ. ಇಲ್ಲವಾದರೆ ಇವರಿಗೆ ಕಲಿಸಿದ್ದಾರೆಂದು ತಿಳಿಯುತ್ತಾರೆ. ಆಗ ಈ ಮಾತು ಯಾರಿಗೂ
ಅರ್ಥವಾಗಿರುವುದಿಲ್ಲ, ಬಾಣವು ನಾಟುವುದಿಲ್ಲ. ಬಹಳ ಸತ್ಯತೆ-ಸ್ವಚ್ಛತೆ ಬೇಕಾಗಿದೆ. ಯಾರು ಸ್ವಯಂ
ವಿಕಾರಿಯಾಗಿದ್ದಾರೆಯೋ ಅವರು ಅನ್ಯರಿಗೆ ಕಾಮ ಮಹಾಶತ್ರುವೆಂಬ ಮಾತು ಹೇಳಲು ಆಗುವುದಿಲ್ಲ. ಅವರು
ಪಂಡಿತನಂತೆ ರಾಮ-ರಾಮ ಎಂದು ಹೇಳುತ್ತಾ ಸಾಗರವನ್ನು ಪಾರು ಮಾಡುತ್ತಾರೆ. ಅದು ಇಲ್ಲಿಯ ಮಾತಾಗಿದೆ.
ನನ್ನನ್ನು ನೆನಪು ಮಾಡುವುದರಿಂದ ಈ ವಿಷಯ ಸಾಗರದಿಂದ ನೀವು ಪಾರಾಗುತ್ತೀರೆಂದು ಶಿವ ತಂದೆಯು
ತಿಳಿಸುತ್ತಾರೆ. ಯಾವ ಸಾಗರ? ಆದರೆ ಅದು ಪಂಡಿತನಿಗೆ ಗೊತ್ತಿಲ್ಲ. ಅದು ವೇಶ್ಯಾಲಯದಿಂದ ಪಾರಾಗಿ
ಶಿವಾಲಯಕ್ಕೆ ಹೋಗುವುದಾಗಿದೆ. ಅದಕ್ಕಾಗಿ ಬಹಳ ಚೆನ್ನಾಗಿ ಶ್ರೀಮತದಂತೆ ನಡೆಯಬೇಕು. ಬಾಬಾ, ನೀವು
ಪ್ರೀತಿಯಾದರೂ ಮಾಡಿ ಅಥವಾ ದೂರವಾದರೂ ಮಾಡಿ.... ಎಂದು ಹೇಳುತ್ತಾರಲ್ಲವೆ. ಇಲ್ಲಿಯಂತೂ ಕೇವಲ
ತಿಳುವಳಿಕೆಯನ್ನು ನೀಡಲಾಗುವುದು ಆದರೂ ಕೆಲವರು ಶವದಂತೆ ಆಗಿ ಬಿಡುತ್ತಾರೆ. ಮಕ್ಕಳಂತೂ ಬರೆದು
ಓದಬೇಕು. ತಂದೆಯು ಪ್ರೀತಿಯ ಸಾಗರರಾಗಿದ್ದಾರೆ ಅರ್ಥಾತ್ ಓದಿಸಿ ಶ್ರೇಷ್ಠ ಪದವಿಯನ್ನು
ಕೊಡಿಸುತ್ತಾರೆ - ಇದೇ ಅವರ ಪ್ರೀತಿಯಾಗಿದೆ. ಯಾವಾಗ ತಂದೆಯು ಓದಿಸುತ್ತಾರೆಯೋ ಆಗ ಓದಿ, ಅನ್ಯರಿಗೂ
ಓದಿಸಬೇಕು, ತಂದೆಗೂ ಖುಷಿ ಪಡಿಸಬೇಕು. ತಂದೆಯ ಸೇವೆಯಲ್ಲಿ ತತ್ಪರರಾಗಿರಬೇಕು. ತಂದೆಯ (ಬ್ರಹ್ಮಾ)
ಸೇವೆಯೂ ಸಹ ಇದೇ ಆಗಿದೆ ಹಾಗೂ ತಾವೂ ತನು, ಮನ, ಧನದಿಂದ ಸಹ ಭಾರತದ ಸತ್ಯ ಸೇವೆಯನ್ನು ಮಾಡಿ. ನೀವು
ಗಂಟಾಘೋಷವಾಗಿ ತಿಳಿಸಿ ಕೊಡಬೇಕು. ಎಲ್ಲರೂ ನಂಬರ್ವಾರ್ ಆಗಿದ್ದಾರೆ. ರಾಜಧಾನಿಯಲ್ಲಿಯೂ ನಂಬರ್ವಾರ್
ಇರುತ್ತಾರೆ. ಶಿಕ್ಷಕನೂ ಸಹ ಇವರು ದೈವೀ ರಾಜಧಾನಿಯಲ್ಲಿ ಎಂತಹ ಸ್ಥಾನವನ್ನು ಪಡೆಯುತ್ತಾರೆಂದು
ತಿಳಿದುಕೊಳ್ಳುತ್ತಾರೆ. ಸೇವೆಯಲ್ಲಿ ಮೊದಲು ಯಾರ್ಯಾರೂ ಮುಖ್ಯವಾಗಿದ್ದಾರೆಂದು ಅವರು ಮಾಡುವ
ಸೇವೆಯಿಂದ ತಿಳಿದುಕೊಳ್ಳಬಹುದು. ಸ್ವಯಂ ಸಹ ಮಮ್ಮಾ-ಬಾಬನಂತೆ ಸೇವೆ ಮಾಡದೇ ಇದ್ದಾಗ
ದಾಸ-ದಾಸಿಯಾಗಬೇಕಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಮುಂದೆ ಸಮಯ ಕಳೆದಂತೆ ಎಲ್ಲರಿಗೂ ಎಲ್ಲವೂ
ಗೊತ್ತಾಗುತ್ತದೆ. ನಾವು ಶ್ರೀಮತದಂತೆ ನಡೆಯಲಿಲ್ಲ ಎಂಬುದೂ ಸಹ ಸ್ಪಷ್ಟವಾಗುತ್ತದೆ. ಈ ಸಮಯದಲ್ಲಿ
ತಮ್ಮ ದಾಸಿಯರನ್ನಾಗಿ ಮಾಡಿಕೊಂಡರೆ ಸ್ವತಃ ನೀವೇ ದಾಸಿಯರಾಗಬೇಕಾಗುತ್ತದೆ, ಇಲ್ಲಿ
ಮಹಾರಾಣಿಯಾಗಿರುವುದು ದೇಹಾಭಿಮಾನವಾಗಿದೆ. ಬಾಬಾ ಇಂಥಹ ತಪ್ಪಾಯಿತೆಂದು ಸತ್ಯ ಹೇಳಬೇಕು. ಈಗ ಇನ್ನೂ
ಯಾರೂ ಸಂಪೂರ್ಣರಾಗಿಲ್ಲ. ಯಾವಾಗ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲವೋ ಅವರು ನಾಚಿಕೆ
ಪಡುತ್ತಾರೆ. ರಾತ್ರಿಯಲ್ಲಿ ಬಾಬಾಗೆ ಈ ವಿಚಾರ ಬಂದಿತು - ಮನುಷ್ಯರು 21 ಜನ್ಮವೆಂದು ಹೇಳುತ್ತಾರೆ,
ಗಾಯನವೂ ಮಾಡುತ್ತಾರೆ. ಈಗ ಈ ಈಶ್ವರೀಯ ಜನ್ಮ ಒಂದು ಬೇರೆಯಾಗಿದೆ. 8 ಜನ್ಮ ಸತ್ಯಯುಗದಲ್ಲಿ, 12
ಜನ್ಮ ತ್ರೇತಾಯುಗದಲ್ಲಿ, 21 ಜನ್ಮ ದ್ವಾಪರಯುಗದಲ್ಲಿ, 42 ಜನ್ಮ ಕಲಿಯುಗದಲ್ಲಿ. ಇದು ನಿಮ್ಮ
ಈಶ್ವರೀಯ ಜನ್ಮವು ಎಲ್ಲದಕ್ಕಿಂತಲೂ ಶ್ರೇಷ್ಠ ಜನ್ಮವಾಗಿದೆ. ಇದು ದತ್ತು ಜನ್ಮವೂ ಆಗಿದೆ. ನೀವು
ಬ್ರಾಹ್ಮಣರಿಗೆ ಮಾತ್ರ ಇದು ಸೌಭಾಗ್ಯಶಾಲಿ ಜನ್ಮವಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಪ್ರೀತಿಯ
ಸಾಗರ ತಂದೆಯ ಪ್ರೀತಿಗೆ ಮರುಪಾವತಿ ಮಾಡಬೇಕಾಗಿದೆ. ಚೆನ್ನಾಗಿ ಓದಿ ಮತ್ತು ಅನ್ಯರಿಗೆ ಓದಿಸಬೇಕು.
ಶ್ರೀಮತದಂತೆ ನಡೆಯಬೇಕಾಗಿದೆ.
2. ಸತ್ಯತೆ, ಸ್ವಚ್ಛತೆಯಿಂದ ಮೊದಲು ಸ್ವಯಂನಲ್ಲಿ ಧಾರಣೆ ಮಾಡಿ ನಂತರ ಅನ್ಯರಿಗೆ ಧಾರಣೆ ಮಾಡಿಸಬೇಕು.
ಒಬ್ಬ ತಂದೆಯ ಸಂಗದಲ್ಲಿರಬೇಕು.
ವರದಾನ:
ಎಲ್ಲಾ
ಮಿತಿಗಳಿಂದ ದೂರವಿರುತ್ತಾ ಎಲ್ಲರನ್ನೂ ನನ್ನತನದ ಭಾವನೆ ಅನುಭೂತಿ ಮಾಡಿಸುವಂತಹ ಅನುಭವಿ ಮೂರ್ತಿ
ಭವ.
ಹೇಗೆ
ಪ್ರತಿಯೊಬ್ಬರ ಮನಸ್ಸಿನಿಂದ ಬರುತ್ತೆ ನನ್ನ ಬಾಬಾ. ಹಾಗೇ ಎಲ್ಲರ ಮನಸ್ಸಿನಲ್ಲಿ ಬರಲಿ ಇವರು
ನನ್ನವರಾಗಿದ್ದಾರೆ. ಬೇಹದ್ದಿನ ಸಹೋದರ ಇಲ್ಲಾ ಸಹೋದರಿ ಆಗಿದ್ದಾರೆ. ದೀದಿ ಆಗಿದ್ದಾರೆ, ದಾದಿ
ಆಗಿದ್ದಾರೆ. ಎಲ್ಲೇ ಇರಲಿ ಆದರೆ ಬೇಹದ್ದಿನ ಸೇವೆಗೆ ನಿಮಿತ್ತನಾಗಿರುವೆ. ಮಿತಿಗಳಿಂದ
ಪಾರಾಗಿರುತ್ತಾ ಬೇಹದ್ಧಿನ ಭಾವನೆ, ಬೇಹದ್ಧಿನ ಶ್ರೇಷ್ಠ ಕಾಮನೆ ಇಡಬೇಕು - ಇದೇ ಆಗಿದೆ ಫಾಲೋ ಫಾದರ್
ಮಾಡುವುದು. ಈಗ ಇದರ ಪ್ರಾಕ್ಟಿಕಲ್ ಅನುಭವ ಮಾಡಿ ಮತ್ತು ಮಾಡಿಸಿ. ಹಾಗೆಯೇ ಅನುಭವಿ ವಯಸ್ಕರಿಗೆ
ಪಿತಾಜೀ, ಕಾಕಾಜೀ ಎಂದು ಕರೆಯುತ್ತಾರೆ, ಈ ರೀತಿಯ ಬೇಹದ್ದಿನ ಅನುಭವೀ ಅರ್ಥಾತ್ ಎಲ್ಲರಿಗೂ
ನನ್ನತನದ ಅನುಭವವಾಗಬೇಕು.
ಸ್ಲೋಗನ್:
ಉಪರಾಮ್
ಸ್ಥಿತಿಯ ಮೂಲಕ ಹಾರುವ ಕಲೆಯಲ್ಲಿ ಹಾರುತ್ತಿದ್ದಲ್ಲಿ ಕರ್ಮರೂಪಿ ಕೊಂಬೆಯ ಬಂಧನದಲ್ಲಿ ಸಿಕ್ಕಿ
ಹಾಕಿಕೊಳ್ಳುವುದಿಲ್ಲ.
ಮಾತೇಶ್ವರಿಜಿಯವರ ಮಧುರ
ಮಹಾ ವಾಕ್ಯ : -
“ ಮನುಷ್ಯರದು
84 ಜನ್ಮ , 84 ಲಕ್ಷ ಯೋನಿಯಲ್ಲ ”
ಈಗ ನಾವು ಏನು ಹೇಳುತ್ತೇವೆ, ಪ್ರಭು ನಾವು ಮಕ್ಕಳನ್ನು ಆ ದಡಕ್ಕೆ ಕರೆದುಕೊಂಡು ಹೋಗಿ, ಆ ದಡ ಎನ್ನು
ಅರ್ಥ ಏನು? ಜನರು ತಿಳಿಯುತ್ತಾರೆ ಆ ದಡದ ಅರ್ಥ ಈ ಜನನ ಮರಣದ ಚಕ್ರದಲ್ಲಿ ಬರದೇ ಇರುವುದು ಅರ್ಥಾತ್
ಮುಕ್ತರಾಗಿ ಬಿಡುವುದು. ಇದಾಯಿತು ಮನುಷ್ಯರು ಹೇಳುವುದು. ಆದರೆ ಅವರು ಹೇಳುತ್ತಾರೆ, ಮಕ್ಕಳೇ,
ಸತ್ಯವಾಗಿ ಎಲ್ಲಿ ಸುಖ ಶಾಂತಿಯಿದೆ, ದುಃಖ ಅಶಾಂತಿಯಿಂದ ದೂರವಿದೆ ಅದಕ್ಕೆ ಬೇರೆ ಪ್ರಪಂಚವೆಂದು
ಹೇಳುವುದಿಲ್ಲ. ಯಾವಾಗ ಮನುಷ್ಯರು ಸುಖವನ್ನು ಬಯಸುತ್ತಾರೆ ಅಂದರೆ ಅವರೂ ಸಹಾ ಈ ಜೀವನದಲ್ಲಿ ಇರಬೇಕು,
ಈಗ ಅವರಂತೂ ಸತ್ಯಯುಗಿ ವೈಕುಂಠ ದೇವತೆಗಳ ಪ್ರಪಂಚವಾಗಿತ್ತು ಎಲ್ಲಿ ಸದಾ ಸುಖೀ ಜೀವನವಿತ್ತು, ಆ
ದೇವತೆಗಳಿಗೆ ಅಮರರೆಂದು ಹೇಳುತ್ತಿದ್ದರು. ಈಗ ಅಮರತೆಗೆ ಸಹಾ ಏನೂ ಅರ್ಥವಿಲ್ಲ, ಹೀಗಂತೂ ಅಲ್ಲ
ದೇವತೆಗಳ ಆಯಸ್ಸು ಇಷ್ಟು ದೀರ್ಘವಾಗಿತ್ತು ಅವರು ಎಂದೂ ಸಾಯುತ್ತಿರಲಿಲ್ಲವೆಂದಲ್ಲ, ಈಗ ಅವರಿಗೆ
ಹೀಗೆ ಹೇಳುವುದು ತಪ್ಪಾಗುವುದು ಏಕೆಂದರೆ ಹಾಗೆ ಇರುವುದಿಲ್ಲ. ಅವರ ಆಯಸ್ಸು
ಸತ್ಯ-ತ್ರೇತಾಯುಗದವರೆಗೆ ನಡೆಯುವುದಿಲ್ಲ, ಆದರೆ ದೇವಿ ದೇವತೆಗಳ ಜನ್ಮ ಸತ್ಯಯುಗ, ತ್ರೇತಾಯುಗದಲ್ಲಿ
ಬಹಳ ಇರುತ್ತೆ, 21 ಜನ್ಮವಂತೂ ಅವರು ಒಳ್ಳೆಯ ರಾಜ್ಯ ಮಾಡಿದರು. ನಂತರ 63 ಜನ್ಮ ದ್ವಾಪರದಿಂದ
ಕಲಿಯುಗದ ಅಂತ್ಯದವರೆಗೆ ಒಟ್ಟು ಅವರ ಜನ್ಮ ಏರುವ ಕಲೆಯದು 21 ಆಯಿತು ಮತ್ತು ಇಳಿಯುವ ಕಲೆಯದು 63
ಆಯಿತು, ಒಟ್ಟು ಮನುಷ್ಯ 84 ಜನ್ಮ ಪಡೆಯುತ್ತಾರೆ. ಬಾಕಿ ಏನು ಮನುಷ್ಯರು ತಿಳಿಯುತ್ತಾರೆ ಮನುಷ್ಯ
84 ಲಕ್ಷ ಯೋನಿಗಳಲ್ಲಿ ಭೋಗಿಸುತ್ತಾರೆ, ಇದು ಹೇಳುವುದು ತಪ್ಪಾಗಿದೆ. ಒಂದು ವೇಳೆ ಮನುಷ್ಯ ತಮ್ಮ
ಯೋನಿಯಲ್ಲಿಯೇ ಸುಖ ದುಃಖ ಎರಡೂ ಪಾತ್ರಗಳನ್ನು ಭೋಗಿಸಲಾಗುತ್ತೆ ಎಂದಮೇಲೆ ನಂತರ ಪಶು ಯೋನಿಯಲ್ಲಿ
ಭೋಗಿಸುವ ಅವಶ್ಯಕತೆ ಏನಿದೆ?. ಈಗ ಮನುಷ್ಯರಿಗೆ ಈ ಜ್ಞಾನವೇ ಇಲ್ಲ, ಮನುಷ್ಯರಂತೂ 84 ಜನ್ಮ
ಪಡೆಯುತ್ತಾರೆ, ಉಳಿದಂತೆ ಒಟ್ಟು ಸೃಷ್ಠಿಯ ಮೇಲೆ ಪಶು, ಪಕ್ಷಿ, ಪ್ರಾಣಿ ಇತ್ಯಾದಿ ಒಟ್ಟು 84 ಲಕ್ಷ
ಯೋನಿಗಳು ಅವಶ್ಯವಾಗಿದೆ. ಅನೇಕ ಬಗೆಯ ಜೀವ ಜಂತುಗಳಿವೆ, ಅದರಲ್ಲಿಯೂ ಮನುಷ್ಯ, ಮನುಷ್ಯ
ಯೋನಿಯಲ್ಲಿಯೇ ತನ್ನ ಪಾಪ-ಪುಣ್ಯ ಭೋಗಿಸುತ್ತಿದ್ದಾನೆ ಮತ್ತು ಪಶು ಪ್ರಾಣಿಗಳು ತಮ್ಮ ತಮ್ಮ
ಯೋನಿಗಳಲ್ಲಿ(ಜನ್ಮದಲ್ಲಿ) ಭೋಗಿಸುವುದನ್ನು ಭೋಗಿಸಬೇಕಾಗುತ್ತದೆ. ಅಂದಮೇಲೆ ದುಃಖ ಸುಖದ
ಅನುಭೂತಿಯಾಗುವುದು. ಹಾಗೆಯೇ ಪ್ರಾಣಿಗಳೂ ಸಹಾ ತಮ್ಮ ಯೋನಿಯಲ್ಲಿ ಸುಖ ದುಃಖವನ್ನು
ಭೋಗಿಸಬೇಕಾಗುವುದು. ಆದರೆ ಅವುಗಳಲ್ಲಿ ಈ ಬುದ್ಧಿಯಿಲ್ಲ ಹೀಗೆ ಭೋಗಿಸುತ್ತಿರುವುದು ಯಾವ ಕರ್ಮದಿಂದ
ಆಗಿದೆ? ಅವುಗಳು ಭೋಗಿಸುವುದನ್ನೂ ಸಹಾ ಮನುಷ್ಯನು ಅನುಭವ ಮಾಡುತ್ತಾನೆ. ಏಕೆಂದರೆ ಮನುಷ್ಯನು
ಬುದ್ಧಿಯುಳವನಾಗಿದ್ದಾನೆ, ಬಾಕಿ ಹೀಗಲ್ಲಾ ಮನುಷ್ಯ 84 ಲಕ್ಷ ಯೋನಿಯಲ್ಲಿ ಭೋಗಿಸುತ್ತಾನೆ ಎಂದು.
ಜಡ ವೃಕ್ಷವೂ ಸಹಾ ಯೋನಿ ಪಡೆಯುತ್ತದೆ, ಇದಂತೂ ಸಹಜ ಮತ್ತು ವಿವೇಕದ ಮಾತಾಗಿದೆ. ಜಡ ಗಿಡಗಳು ಏನು
ಕರ್ಮ ಅಕರ್ಮ ಮಾಡಿದೆ ಯಾವುದರಿಂದ ಅದರ ಲೆಕ್ಕಾಚಾರವಾಗುವುದು, ಹೇಗೆ ನೋಡಿ ಗುರುನಾನಕ್ ಸಾಹೇಬರು
ಇಂತಹ ಮಹಾವಾಕ್ಯ ಉಚ್ಚಾರಣೆ ಮಾಡಿದ್ದಾರೆ – ಅಂತ್ಯ ಕಾಲದಲ್ಲಿ ಯಾರು ಪುತ್ರನನ್ನು ಸ್ಮರಣೆ, ಇಂತಹ
ಚಿಂತೆಯಲ್ಲಿ ಯಾರು ಸಾಯುತ್ತಾರೆ ಅವರು ಹಂದಿಯ ಯೋನಿಯಲ್ಲಿ ವಲ ವಲವಾಗಿ ಇಳಿಯುತ್ತಾರೆ.... ಆದರೆ ಈ
ಹೇಳಿಕೆಗೆ ಅರ್ಥ ಇದೇ ಆಗಿದೆ ಮನುಷ್ಯರ ಕಾರ್ಯ ಸಹಾ ಈ ರೀತಿಯಾಗುವುದು ಹೇಗೆ ಪ್ರಾಣಿಗಳ
ಕಾರ್ಯವಿರುತ್ತದೆ ಹಾಗೆ. ಬಾಕಿ ಹೀಗಲ್ಲಾ ಮನುಷ್ಯರು ಏನು ಪ್ರಾಣಿಗಳಾಗುತ್ತಾರೆ. ಹೀಗೆ ಇದಂತೂ
ಮನುಷ್ಯರಿಗೆ ಭಯ ಹುಟ್ಟಿಸಲು ಶಿಕ್ಷಣ ಕೊಡುತ್ತಾರೆ. ಆದ್ದರಿಂದ ನೀವು ಈ ಸಂಗಮ ಸಮಯದಲ್ಲಿ ತಮ್ಮ
ಜೀವನವನ್ನು ಬದಲಾಯಿಸಿ ಪಾಪಾತ್ಮರಿಂದ ಪುಣ್ಯಾತ್ಮ ಆಗ ಬೇಕಿದೆ. ಒಳ್ಳೆಯದು.