14.11.2018 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ದೇಹಾಭಿಮಾನ ಅಳುವಂತೆ ಮಾಡುತ್ತದೆ, ದೇಹೀ ಅಭಿಮಾನಿಯಾದಾಗ ಪುರುಷಾರ್ಥ ಸರಿಯಾಗುತ್ತದೆ,
ಮನಸ್ಸಿನಲ್ಲಿ ಸತ್ಯತೆಯಿರುತ್ತದೆ, ತಂದೆಯನ್ನು ಪೂರ್ತಿ ಅನುಕರಣೆ ಮಾಡಲು ಸಾಧ್ಯವಾಗುತ್ತದೆ”
ಪ್ರಶ್ನೆ:
ಯಾವುದೇ
ಪರಿಸ್ಥಿತಿ ಅಥವಾ ಆಪತ್ತಿನಲ್ಲಿ ಸ್ಥಿತಿ ನಿರ್ಭಯ ಹಾಗೂ ಏಕರಸ ಸ್ಥಿತಿಯು ಯಾವಾಗ ಇರಲು ಸಾಧ್ಯ?
ಉತ್ತರ:
ಯಾವಾಗ ನಾಟಕದ
ಜ್ಞಾನದಲ್ಲಿ ಸಂಪೂರ್ಣ ನಿಶ್ಚಯವಿರುತ್ತದೆ, ಯಾವುದೆ ಆಪತ್ತು ನಿಮ್ಮ ಮುಂದೆ ಬಂದರೂ ಇದು
ನಾಟಕದಲ್ಲಿತ್ತು ಎಂದು ಹೇಳುತ್ತೀರಿ. ಕಲ್ಪದ ಹಿಂದೆಯೂ ಇದನ್ನು ಪಾರು ಮಾಡಿದ್ದೆವು, ಇಲ್ಲಿ ಭಯ
ಪಡುವ ಮಾತಿಲ್ಲ. ಆದರೆ ಮಕ್ಕಳು ಮಹಾವೀರರಾಗಬೇಕು. ಯಾವ ಮಕ್ಕಳು ತಂದೆಗೆ ಪೂರ್ತಿ ಸಹಯೋಗಿ,
ಸುಪುತ್ರರಾಗಿದ್ದಾರೆ, ತಂದೆಯ ಹೃದಯವನ್ನು ಗೆದ್ದಿದ್ದಾರೆ. ಇಂತಹ ಮಕ್ಕಳ ಸ್ಥಿತಿಯು
ಏಕಾಗ್ರವಾಗಿರುತ್ತದೆ ಹಾಗೂ ಏಕರಸವಾಗಿರುತ್ತದೆ.
ಗೀತೆ:
ಓ ದೂರದ
ಯಾತ್ರಿಕನೆ................
ಓಂ ಶಾಂತಿ.
ಯಾವಾಗ ವಿನಾಶದ ಸಮಯ ಬರುತ್ತದೆಯೋ ಆಗ ಅಲ್ಪ ಸ್ವಲ್ಪವಂತೂ ಉಳಿಯುತ್ತಾರೆ, ರಾಮನ ಸೈನ್ಯ ಹಾಗೂ
ರಾವಣನ ಸೈನ್ಯ ಎರಡೂ ಕಡೆ ಅವಶ್ಯವಾಗಿ ಅಲ್ಪ ಸ್ವಲ್ಪ ಉಳಿಯುತ್ತಾರೆ. ಆಗ ರಾವಣನ ಸೈನ್ಯವು ಅಳುತ್ತಾ
ಕೂಗಾಡುತ್ತದೆ. ಒಂದಂತೂ ನಾವು ಜೊತೆಯಲ್ಲಿ ಹೋಗಲಿಲ್ಲವೆಂದು ಮತ್ತು ಅಂತ್ಯದಲ್ಲಿ ಬಹಳ ಕಷ್ಟಗಳು
ಬರುತ್ತವೆ. ಏಕೆಂದರೆ ವಿನಾಶದ ನೋವು ನರಳಾಟ, ಚೀರಾಟ ಬಹಳ ಇರುತ್ತದೆ. ನೀವು ಮಕ್ಕಳಲ್ಲಿಯೂ ಯಾರು
ಅನನ್ಯವಾಗಿರುತ್ತಾರೆಯೋ ಅವರು ಮಾತ್ರ ವಿನಾಶವನ್ನು ನೋಡಲು ಯೋಗ್ಯರಾಗಿರುತ್ತಾರೆ, ಅವರೇ
ಧೈರ್ಯವುಳ್ಳವರಾಗಿರುತ್ತಾರೆ. ಹೇಗೆ ಅಂಗಧನಿಗೆ ಏಕಾಗ್ರವಾಗಿದ್ದನೆಂದು ಹೇಳುತ್ತಾರಲ್ಲವೆ. ನಿಮ್ಮ
ವಿನಃ ಬೇರೆ ಯಾರೂ ಸಹ ವಿನಾಶವನ್ನು ನೋಡಲಾಗುವುದಿಲ್ಲ. ಇಷ್ಟೊಂದು ನೋವು ಆಗುತ್ತಿರುತ್ತದೆ ಹೇಗೆ
ಆಪರೇಷನ್ ಆಗುವ ಸಮಯದಲ್ಲಿ ಕೆಲವರಿಗೆ ನಿಲ್ಲಲು ಆಗುವುದಿಲ್ಲ. ಇದನ್ನು ನೀವು ಪ್ರತ್ಯಕ್ಷದಲ್ಲಿ
ನೋಡುತ್ತಿರುತ್ತೀರಿ. ಹಾಹಾಕಾರವಿರುತ್ತದೆ. ಯಾರು ಒಳ್ಳೊಳ್ಳೆಯ ಅನನ್ಯ ಮಕ್ಕಳು ಯಾರು ತಂದೆಗೆ
ಸಹಯೋಗಿ, ಸುಪುತ್ರ ಮಕ್ಕಳಿದ್ದಾರೆಯೋ ಅವರೇ ತಂದೆಯ ಹೃದಯವನ್ನು ಗೆಲ್ಲುತ್ತಾರೆ. ಹನುಮಂತನು
ಒಬ್ಬರಾಗಿರುವುದಿಲ್ಲ, ಮಾಲೆಯೂ ಸಹ ಎಲ್ಲಾ ಹನುಮಂತ, ಮಹಾವೀರರದ್ದೇ ಆಗಿರುತ್ತದೆ. ರುದ್ರಾಕ್ಷಿ
ಮಾಲೆಯಿರುತ್ತದೆಯಲ್ಲವೆ. ರುದ್ರ ಭಗವಂತನ ಮಾಲೆಯೇ ರುದ್ರ ಮಾಲೆಯಾಗಿದೆ. ರುದ್ರಾಕ್ಷಿ ಒಂದು ಬಹಳ
ಬೆಲೆಯುಳ್ಳ ಬೀಜವಾಗಿದೆ. ಆ ರುದ್ರಾಕ್ಷಿಯಲ್ಲಿಯೂ ಕೆಲವು ನಕಲಿ ಹಾಗೂ ಅಸಲು ರುದ್ರಾಕ್ಷಿಯಿರುತ್ತದೆ.
ಅದೇ ಮಾಲೆ 100 ರೂ.ಗಳಿಗೂ ಸಿಗುತ್ತದೆ, 2 ರೂ.ಗಳಿಗೂ ಸಿಗುತ್ತದೆ. ಪ್ರತಿಯೊಂದು ವಸ್ತುವು ಇದೇ
ರೀತಿಯಿರುತ್ತದೆ. ಈಗ ತಂದೆಯು ವಜ್ರ ಸಮಾನ ಮಾಡುತ್ತಿದ್ದಾರೆ. ಅದರ ಹೋಲಿಕೆಯಲ್ಲಿ ಎಲ್ಲರೂ
ನಕಲಿಯಾಗಿದ್ದಾರೆ. ಸತ್ಯ ಪರಮಾತ್ಮನ ಮುಂದೆ ಎಲ್ಲರೂ ಅಸತ್ಯವಾಗಿದ್ದಾರೆ ನಯಾಪೈಸೆಗೂ ಬೆಲೆ
ಇಲ್ಲದವರು. ಒಂದು ಗಾದೆ ಮಾತು ಇದೆಯಲ್ಲವೆ. ಸೂರ್ಯನ ಮುಂದೆ ಎಂದಿಗೂ ಕತ್ತಲು
ಬಚ್ಚಿಟ್ಟುಕೊಳ್ಳಲಾಗುವುದಿಲ್ಲ. ಈಗ ಇವರು ಸೂರ್ಯನಾಗಿದ್ದಾರೆ, ಅವರ ಮುಂದೆ ಅಜ್ಞಾನವೆಂಬ ಕತ್ತಲು
ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ಈಗ ಸತ್ಯ ತಂದೆಯಿಂದ ಸತ್ಯವು ಸಿಗುತ್ತಿದೆ. ನಿಮಗೆ ತಿಳಿದಿದೆ
ಸತ್ಯ ಈಶ್ವರ ತಂದೆಯನ್ನು ಕುರಿತು ಇಂದು ಮನುಷ್ಯರು ಹೇಳುವರೋ ಸುಳ್ಳೆ ಹೇಳುವರು.
ಈಗ ನೀವು ತಿಳಿಸಿಕೊಡುತ್ತೀರಿ - ಗೀತೆಯ ಭಗವಂತ ಶಿವನೇ ವಿನಃ ದೈವೀ ಗುಣವುಳ್ಳ ಶ್ರೀ ಕೃಷ್ಣನಲ್ಲ.
ಈಗ ಸಂಗಮಯುಗವಿದೆ ನಂತರ ಅವಶ್ಯವಾಗಿ ಸತ್ಯಯುಗವಾಗುತ್ತದೆ. ಶ್ರೀ ಕೃಷ್ಣನ ಆತ್ಮ ಈಗ ಜ್ಞಾನವನ್ನು
ತೆಗೆದುಕೊಳ್ಳುತ್ತಿದ್ದಾನೆ. ಆದರೆ ಮನುಷ್ಯರು ಜ್ಞಾನವನ್ನು ಕೊಡುತ್ತಿದ್ದಾರೆಂದು
ತಿಳಿದುಕೊಳ್ಳುತ್ತಾರೆ. ಆಗ ಎಷ್ಟೊಂದು ಅಂತರವಾಗಿ ಬಿಡುತ್ತದೆಯಲ್ಲವೆ. ಅವರು ತಂದೆ, ಇವರು ಮಗ
ಆಗಿದ್ದಾರೆ. ತಂದೆಯನ್ನು ಒಮ್ಮೆಲೆ ಬಚ್ಚಿಟ್ಟು ಮಗನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಮುಂದೆ
ಬರುತ್ತಾ ಕೊನೆಗೆ ಸತ್ಯವು ಗೊತ್ತಾಗುತ್ತದೆ. ಮುಖ್ಯ ಮಾತು ಇದಾಗಿದೆ. ಸರ್ವವ್ಯಾಪಿ ಎಂದೂ ಏಕೆ
ತಿಳಿದುಕೊಂಡಿದ್ದಾರೆಂದರೆ ಗೀತೆಯಲ್ಲಿ ಶ್ರೀ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಈ ಮಾತನ್ನು
ನೀವು ಮಾತ್ರ ತಿಳಿದುಕೊಂಡಿದ್ದೀರಿ. ಶ್ರೀ ಕೃಷ್ಣ ಅಥವಾ ದೇವಿ-ದೇವತಾ ಧರ್ಮದ ಅತ್ಮಗಳೇ ಪೂರ್ಣ 84
ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಆತ್ಮ-ಪರಮಾತ್ಮರು ಬಹಳ ಕಾಲ ಅಗಲಿ ಹೋಗಿದ್ದರೆಂದು ಗಾಯನ
ಮಾಡುತ್ತಾರೆ. ಎಲ್ಲರಿಗಿಂತ ನಾವೇ ಮೊದಲು ಅಗಲಿ ಹೋದವರಾಗಿದ್ದೇವೆ. ಬಾಕಿ ಉಳಿದ ಆತ್ಮಗಳೆಲ್ಲರೂ
ತಂದೆಯ ಜೊತೆ ಅಲ್ಲಿಯೇ ಉಳಿಯುತ್ತಾರೆ. ಇದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ
ಯಾರೋ ಕೆಲವರು ಮಾತ್ರ ಯಥಾರ್ಥವಾಗಿ ತಿಳಿಸಿ ಕೊಡುತ್ತಾರೆ. ದೇಹಾಭಿಮಾನವು ತುಂಬಾ ದುಃಖಿಯನ್ನಾಗಿ
ಮಾಡುತ್ತದೆ, ದೇಹೀ ಅಭಿಮಾನಿಗಳೇ ಸರಿಯಾಗಿ ಪುರುಷಾರ್ಥ ಮಾಡುತ್ತಾರೆ. ಆದುದರಿಂದ ಚೆನ್ನಾಗಿ
ಧಾರಣೆಯೂ ಆಗುತ್ತದೆ. ಆದುದರಿಂದ ಫಾಲೋ ಫಾದರ್ ಎಂದು ಹೇಳಲಾಗುತ್ತದೆ. ಕರ್ಮದಲ್ಲೂ ತಂದೆ ಬರುತ್ತಾರೆ,
ಇಬ್ಬರು ತಂದೆಯರಾಗುತ್ತಾರೆ. ಇದನ್ನು ಯಾವ ತಂದೆಯು ಹೇಳುತ್ತಿದ್ದಾರೆ, ನಿಮಗೇನಾದರೂ
ಗೊತ್ತಾಗುತ್ತದೆಯೇ! ಬಾಪ್ದಾದಾ ಇಬ್ಬರೂ ಈ ಶರೀರದಲ್ಲಿದ್ದಾರೆ. ಯಾರು ಕರ್ಮದಲ್ಲಿ ಬರುತ್ತಾರೆಯೋ
ಅವರನ್ನು ಫಾಲೋ ಮಾಡಲಾಗುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ದೇಹೀ ಅಭಿಮಾನಿಯಾಗಿ. ಬಹಳ
ಒಳ್ಳೊಳ್ಳೆಯ ಮಕ್ಕಳೂ ಸಹ ದೇಹಾಭಿಮಾನದಲ್ಲಿದ್ದಾರೆ. ಏಕೆಂದರೆ ತಂದೆಯನ್ನು ನೆನಪು ಮಾಡುವುದಿಲ್ಲ.
ಯೋಗಿಗಳಲ್ಲದವರು ಧಾರಣೆಯೂ ಮಾಡುವುದಿಲ್ಲ. ಇಲ್ಲಿ ಸತ್ಯತೆಯು ಬೇಕಾಗಿದೆ. ಪೂರ್ಣ ಫಾಲೋ
ಮಾಡಬೇಕಾಗಿದೆ. ಏನು ಕೇಳುತ್ತೀರೊ ಅದನ್ನು ಧಾರಣೆ ಮಾಡಿ ತಿಳಿಸುತ್ತಾ ಇರಿ, ನಿರ್ಭಯರಾಗಿರಿ.
ನಾಟಕದ ಮೇಲೆ ನಿಶ್ಚಯವಿರಲಿ. ಯಾವುದೇ ಆಪತ್ತು ಮೊದಲಾದವು ಬಂದಾಗ ಇದು ನಾಟಕದಲ್ಲಿ ನಿಗಧಿ
ಆಗಿತ್ತೆಂದು ತಿಳಿಯುತ್ತೀರಿ. ಅನೇಕ ಕಷ್ಟಗಳನ್ನಂತೂ ಪಾರು ಮಾಡಿದ್ದೀರಲ್ಲವೆ. ನೀವೆಲ್ಲರೂ
ಮಹಾವೀರರಲ್ಲವೆ. ನಿಮ್ಮ ಹೆಸರು ಬಹಳ ಪ್ರಸಿದ್ಧವಾಗಿದೆ. ಅಷ್ಟ ರತ್ನಗಳು ಒಳ್ಳೆಯ
ಮಹಾವೀರರಾಗಿದ್ದಾರೆ, 108 ಅವರಿಗಿಂತಲೂ ಕಡಿಮೆ, 16,000 ಅದಕ್ಕಿಂತಲೂ ಕಡಿಮೆ ಅವಶ್ಯವಾಗಿ ಆಗಬೇಕು.
ಈ ರಾಜ್ಯ ಭಾಗ್ಯವು ಕಲ್ಪದ ಹಿಂದೆಯೂ ಸ್ಥಾಪನೆಯಾಗಿತ್ತು ಮತ್ತೆ ಆಗಲೇಬೇಕು. ಬಹಳಷ್ಟು ಆತ್ಮಗಳು
ಸಂಶಯದಲ್ಲಿ ಬಂದು ಬಿಟ್ಟು ಬಿಡುತ್ತಾರೆ. ಒಂದುವೇಳೆ ನಿಶ್ಚಯವಿದ್ದರೆ ಇಂತಹ ತಂದೆಗೆ ಯಾರಾದರೂ
ವಿಚ್ಛೇದನ ಕೊಡುತ್ತಾರೆಯೇ? ಅವರಿಗೆ ಬಲವಂತವಾಗಿ ಜ್ಞಾನಾಮೃತವನ್ನು ಕುಡಿಸಲಾಗುತ್ತದೆ ಆದರೂ
ಕುಡಿಯುವುದಿಲ್ಲ, ಚಿಕ್ಕ ಮಕ್ಕಳಂತೆ ಇರುತ್ತಾರೆ. ತಂದೆಯು ಜ್ಞಾನದ ಹಾಲನ್ನು ಕುಡಿಸುತ್ತಾರೆ ಆದರೂ
ಕುಡಿಯುವುದಿಲ್ಲ. ಮುಖ ತಿರುಗಿಸಿಕೊಂಡು ಬಿಡುತ್ತಾರೆ. ಇನ್ನೂ ಕೆಟ್ಟವರಾಗಿಯೇ ಉಳಿದು ಬಿಡುತ್ತಾರೆ.
ನಮಗೆ ತಾಯಿ-ತಂದೆಯಿಂದ ಏನೂ ಬೇಕಾಗಿಲ್ಲ, ಶ್ರೀಮತದಂತೆ ನಡೆಯಲು ಆಗುವುದಿಲ್ಲ ಎಂದು ಹೇಳಿ
ಬಿಡುತ್ತಾರೆ. ಹಾಗಾದರೆ ಶ್ರೇಷ್ಠರು ಹೇಗೆ ಆಗುತ್ತೀರಿ. ಇದು ಭಗವಂತನ ಶ್ರೀಮತವಾಗಿದೆ. ಈ ಒಂದು
ಸ್ಲೋಗನ್ ಬರೆಯಬೇಕಾಗಿದೆ - ನಿರಾಕಾರ ಜ್ಞಾನಸಾಗರ, ಪತಿತ-ಪಾವನ, ಭಗವಾನ್ ಶಿವಾಚಾರ್ಯ ವಾಚ - ಮಾತೆ
ಸ್ವರ್ಗಕ್ಕೆ ದ್ವಾರ, ತಿಳಿಸಿಕೊಡಲು ಬುದ್ಧಿಯಲ್ಲಿ ಇಂತಿಂತಹ ಪಾಯಿಂಟ್ಸ್ ಬರಬೇಕು.
ವಿದ್ಯಾರ್ಥಿಗಳಲ್ಲಿಯೂ ಸಹ ನಂಬರ್ವಾರ್ ಆಗಿ ಇರುತ್ತಾರೆ. ನಾಟಕದಲ್ಲಿ ಅವರವರ ಪಾತ್ರವನ್ನು
ಅಭಿನಯಿಸುತ್ತಿದ್ದಾರೆ. ದುಃಖದಲ್ಲಿ ನಾವು ಅವರನ್ನು ನೆನಪು ಮಾಡುತ್ತೇವೆ. ದೂರದೇಶದಲ್ಲಿ
ತಂದೆಯಿರುತ್ತಾರೆ. ಅವರನ್ನು ನಾವಾತ್ಮಗಳು ನೆನಪು ಮಾಡುತ್ತೇವೆ. ದುಃಖದಲ್ಲಿ ಎಲ್ಲರೂ ಸ್ಮರಣೆ
ಮಾಡುತ್ತಾರೆ, ಸುಖದಲ್ಲಿ ಒಬ್ಬರೂ ಸ್ಮರಣೆ ಮಾಡುವುದಿಲ್ಲ. ಇದಂತೂ ದುಃಖದ ಪ್ರಪಂಚವಾಗಿದೆಯಲ್ಲವೆ.
ಹೀಗೆ ತಿಳಿಸಿ ಕೊಡುವುದು ಬಹಳ ಸಹಜವಾಗಿದೆ. ಮೊಟ್ಟ ಮೊದಲಿಗೆ ಇದನ್ನು ತಿಳಿಸಿ ಕೊಡಬೇಕು - ತಂದೆಯು
ಸ್ವರ್ಗ ಸ್ಥಾಪನೆ ಮಾಡುವವರಾಗಿದ್ದಾರೆ, ನಮಗೆ ಏಕೆ ಸ್ವರ್ಗದ ರಾಜ್ಯಭಾಗ್ಯ ಸಿಗುವುದಿಲ್ಲ. ಎಲ್ಲರೂ
ಆಸ್ತಿಯನ್ನು ತೆಗೆದುಕೊಳ್ಳುವುದಿಲ್ಲವೆಂದೂ ಗೊತ್ತಿದೆ. ಎಲ್ಲರೂ ಸ್ವರ್ಗದಲ್ಲಿ ಬಂದು ಬಿಟ್ಟರೆ
ನಂತರ ನರಕವೇ ಇರುವುದಿಲ್ಲ, ಆಗ ವೃದ್ಧಿ ಹೇಗೆ ಆಗುತ್ತದೆ.
ಇದಂತೂ ಗಾಯನವಿದೆ - ಭಾರತ ಅವಿನಾಶಿ ಖಂಡ ಅರ್ಥಾತ್ ಅವಿನಾಶಿ ತಂದೆಯ ಜನ್ಮ ಸ್ಥಾನವಾಗಿದೆ. ಭಾರತವೇ
ಸ್ವರ್ಗವಾಗಿತ್ತು, ನಾವು ಇದನ್ನು ಖುಷಿಯಿಂದ ಹೇಳುತ್ತೇವೆ 5000 ವರ್ಷಗಳ ಹಿಂದೆ ಸ್ವರ್ಗವಿತ್ತು.
ಹಾಗೆಯೇ ಅದಕ್ಕೆ ತಕ್ಕಂತೆ ಸ್ವರ್ಗದ ಮಾಲೀಕರ ಚಿತ್ರವೂ ಇದೆಯಲ್ಲವೆ. ಹಾಗೂ ಕ್ರಿಸ್ತನಿಗಿಂತ 3000
ವರ್ಷಗಳ ಹಿಂದೆ ಭಾರತವು ಸ್ವರ್ಗವಾಗಿತ್ತೆಂದು ಹೇಳುತ್ತಾರೆ. ಅವಶ್ಯವಾಗಿ ಭಾರತದಲ್ಲಿ ಸೂರ್ಯವಂಶಿ,
ಚಂದ್ರವಂಶಿಯರಿದ್ದರು, ಅವರ ಚಿತ್ರಗಳೂ ಇವೆ. ಎಷ್ಟು ಸಹಜವಾಗಿದೆ. ಬುದ್ಧಿಯಲ್ಲಿ ಈ ಜ್ಞಾನವು
ಸುತ್ತುತ್ತಿರುತ್ತದೆ. ಬಾಬಾನ ಆತ್ಮದಲ್ಲಿ ಈ ಜ್ಞಾನವಿತ್ತು ಆದುದರಿಂದ ನಾವು ಆತ್ಮಗಳಿಗೂ ಧಾರಣೆ
ಮಾಡಿಸಿದರು. ಅವರು ಜ್ಞಾನ ಪೂರ್ಣರಾಗಿದ್ದಾರೆ. ಈ ಪ್ರಜಾಪಿತ ಬ್ರಹ್ಮನ ಮೂಲಕ ರಾಜಯೋಗವನ್ನು
ಕಲಿಸುತ್ತಿದ್ದೇನೆ, ಅವರು ರಾಜರಿಗೂ ರಾಜರಾಗುತ್ತಾರೆಂದು ಹೇಳುತ್ತಲೂ ಇದ್ದಾರೆ. ಆಮೇಲೆ ಈ ಜ್ಞಾನವು
ಪ್ರಾಯಲೋಪವಾಗಿ ಬಿಡುತ್ತದೆ. ಈಗ ಜ್ಞಾನ ಮತ್ತೆ ನಿಮಗೆ ಸಿಗುತ್ತಿದೆ. ಅಂದಾಗ ಈಗ ನೀವು ಮಕ್ಕಳು
ಚಾಲೆಂಜ್ ಮಾಡಬೇಕು. ಅದಕ್ಕಾಗಿ ಬಹಳ ಒಳ್ಳೆಯ ಫಸ್ಟ್ ಕ್ಲಾಸ್ ಬುದ್ಧಿಯು ಬೇಕು.
ಬಾಬಾ ತನ್ನ ಬಳಿ ಎಂದೂ ಬೆಲೆಯುಳ್ಳ ವಸ್ತುಗಳನ್ನು ಇಟ್ಟುಕೊಳ್ಳುವುದಿಲ್ಲ. ಈ ಮನೆ
ಮೊದಲಾದುವುಗಳನ್ನು ಮಾಡಿರುವುದು ಮಕ್ಕಳ ಸಲುವಾಗಿ ಎಂದು ಹೇಳುತ್ತಾರೆ. ಇಲ್ಲವೆಂದರೆ ಮಕ್ಕಳು ಬಂದರೆ
ಎಲ್ಲಿರುತ್ತಾರೆ. ಒಂದು ದಿನ ಎಲ್ಲಾ ಮನೆಗಳು ನಿಮ್ಮ ಕೈಗೆ ಬಂದು ಬಿಡುತ್ತವೆ. ಭಗವಂತನ ಮನೆಯಲ್ಲಿ
ಭಕ್ತರ ಸಮೂಹವಂತೂ ಸೇರಲೇಬೇಕು. ಅವರಂತೂ ಬಹಳಷ್ಟು ಭಗವಂತರನ್ನು ಮಾಡಿ ಬಿಟ್ಟಿದ್ದಾರೆ.
ವಾಸ್ತವದಲ್ಲಿ ಭಗವಂತ ಇವರೊಬ್ಬರೆ (ಶಿವ ತಂದೆ) ಆಗಿದ್ದಾರೆ. ನಿಮಗೆ ಗೊತ್ತಿದೆ ಅಂತ್ಯದಲ್ಲಿ
ಎಷ್ಟೊಂದು ಜನ ಜಂಗುಳಿಯಿರುತ್ತದೆ. ಆದರೆ ಪ್ರಪಂಚದಲ್ಲಿ ಎಷ್ಟೊಂದು ಅಂಧಶ್ರದ್ಧೆಯಿದೆ. ಜಾತ್ರೆ
ಮೊದಲಾದುವುಗಳು ಆದಾಗ ಎಷ್ಟೊಂದು ಜನ ಸೇರುತ್ತಾರೆ. ಒಮ್ಮೊಮ್ಮೆ ಪರಸ್ಪರ ಜಗಳವೂ ಮಾಡಿ ಬಿಡುತ್ತಾರೆ.
ಆ ಜನಸಂದಣಿಯಲ್ಲಿ ಎಷ್ಟೊಂದು ಜನ ಸತ್ತು ಹೋಗುತ್ತಾರೆ, ಬಹಳ ನಷ್ಟವಾಗಿ ಬಿಡುತ್ತದೆ. ಈ ಸ್ವದರ್ಶನ
ಚಕ್ರವಂತೂ ಬಹಳ ಚೆನ್ನಾಗಿದೆ. ಸ್ಲೋಗನ್ ಸಹ ಅವಶ್ಯವಾಗಿ ಬರೆಯಬೇಕಾಗಿದೆ. ಅಂತ್ಯದಲ್ಲಿ ಮಾತೆಯರ
ಮುಂದೆ ಎಲ್ಲರೂ ತಲೆ ಬಾಗಬೇಕಾಗುತ್ತದೆ. ಶಕ್ತಿಯರ ಅಂತಹ ಚಿತ್ರ ಮಾಡುತ್ತಾರೆ. ತಂದೆಯು ಮಕ್ಕಳಿಗಾಗಿ
ಜ್ಞಾನದ ಮದ್ದು ಗುಂಡನ್ನು ಮಾಡಿಸುತ್ತಾರೆ. ಸಿದ್ಧ ಮಾಡಿ ಎಂದು ಹೇಳುತ್ತಾರೆ, ಅದಂತೂ ಸಹಜವಾಗಿದೆ.
ಭಗವಂತನ್ನು ಭಕ್ತರು ನೆನಪು ಮಾಡುತ್ತಾರೆ, ಸಾಧು-ಸಂತರು ಸಾಧನೆ ಮಾಡುತ್ತಾರೆ ಭಗವಂತನೊಂದಿಗೆ ಮಿಲನ
ಮಾಡಲು. ಗಾಡ್ ಅನ್ನು ತಂದೆ ಎಂದು ಹೇಳುತ್ತಾರೆ, ಖಂಡಿತವಾಗಿಯೂ ನಾವು ಅವರ ಮಕ್ಕಳಾಗಿದ್ದೇವೆ.
ವಿಶ್ವ ಭ್ರಾತೃತ್ವವೆಂದು ಹೇಳುತ್ತಾರಲ್ಲವೆ. ಹಿಂದೂ-ಚೀನಿ ಭಾಯಿ-ಭಾಯಿ ಆಗಿದ್ದಾರೆ. ಅಂದರೆ ತಂದೆ
ಒಬ್ಬರೇ ಆಗಿದ್ದಾರಲ್ಲವೇ. ಶಾರೀರಿಕ ಸಂಬಂಧದಲ್ಲಿ ಸಹೋದರ-ಸಹೋದರಿಯಾಗುತ್ತಾರೆ. ಆದ್ದರಿಂದ ವಿಕಾರಿ
ದೃಷ್ಟಿಯಿರುವುದಿಲ್ಲ. ಇದು ಪವಿತ್ರವಾಗಿರಲು ಯುಕ್ತಿಯಾಗಿದೆ. ತಂದೆಯು ಹೇಳುತ್ತಾರೆ, ಕಾಮ
ಮಹಾಶತ್ರುವಾಗಿದೆ ಎಂದು. ಆದರೆ ಇದನ್ನು ಯಾರಾದರೂ ತಿಳಿದುಕೊಳ್ಳಬೇಕಲ್ಲವೆ. ಇಲ್ಲಿ ಮುಖ್ಯ ಮಾತು
ಭಗವಂತ ಸರ್ವರಿಗೂ ತಂದೆಯಾಗಿದ್ದಾರೆ ಎಂಬುದಾಗಿದೆ. ತಂದೆಯು ಸ್ವರ್ಗ ಸ್ಥಾಪನೆ ಮಾಡುವುದರಿಂದ
ಅವಶ್ಯವಾಗಿ ತಂದೆಯಿಂದ ಆಸ್ತಿ ಸಿಗಲೇಬೇಕು. ಆಸ್ತಿಯಿತ್ತು ಆದರೆ ಈಗ ಕಳೆದುಕೊಂಡಿದ್ದೇವೆ. ಇದು
ಸುಖ-ದುಃಖದ ಆಟವಾಗಿದೆ. ಇದನ್ನು ಚೆನ್ನಾಗಿ ತಿಳಿದುಕೊಂಡು ತಿಳಿಸಿಕೊಡಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಸತ್ಯತೆಯನ್ನು
ಧಾರಣೆ ಮಾಡಿ ತಂದೆಯ ಪ್ರತೀ ಕರ್ಮವನ್ನು ಫಾಲೋ ಮಾಡಬೇಕು. ಜ್ಞಾನಾಮೃತವನ್ನು ಕುಡಿಯಬೇಕು
ಬೇರೆಯವರಿಗೂ ಕುಡಿಸಬೇಕು, ನಿರ್ಭಯರಾಗಬೇಕು.
2. ನಾವು ಭಗವಂತನ ಮಕ್ಕಳು ಪರಸ್ಪರ ಸಹೋದರ-ಸಹೋದರರಾಗಿದ್ದೇವೆ ಎಂಬ ಸ್ಮೃತಿಯಿಂದ ತಮ್ಮ
ದೃಷ್ಟಿ-ವೃತ್ತಿಯನ್ನು ಪವಿತ್ರ ಮಾಡಿಕೊಳ್ಳಬೇಕು.
ವರದಾನ:
ವಿಶೇಷತೆಗಳನ್ನು
ಮುಂದೆ ಇಟ್ಟುಕೊಂಡು ಸದಾ ಖುಶಿ-ಖುಶಿಯಿಂದ ಮುಂದುವರೆಯುವಂತಹ ನಿಶ್ಚಯ ಬುದ್ದಿ ವಿಜಯೀ ರತ್ನ ಭವ.
ತಮ್ಮಲ್ಲಿ ಏನೇ
ವಿಶೇಷತೆಗಳು ಇದ್ದರೂ ಸಹಾ, ಅವುಗಳನ್ನು ಎದರಿನಲ್ಲಿಟ್ಟುಕೊಳ್ಳಿ, ಬಲಹೀನತೆಗಳನ್ನಲ್ಲ. ಆಗ
ನಿಮ್ಮಲ್ಲಿ ವಿಶ್ವಾಸ ಮೂಡುವುದು. ಬಲಹೀನತೆಯ ಮಾತನ್ನು ಹೆಚ್ಚು ಯೋಚಿಸದಿದ್ದಾಗ ನಂತರ ಖುಶಿ
ಹೆಚ್ಚುತ್ತಾ ಹೋಗುವುದು. ತಂದೆ ಸರ್ವ ಶಕ್ತಿವಾನ್ ಆಗಿದ್ದಾರೆ ಎಂಬ ನಿಶ್ಚಯ ಇಟ್ಟುಕೊಳ್ಳಿ. ಆಗ
ಅವರ ಕೈ ಹಿಡಿದವರು ದಡ ಸೇರಿದರು ಎಂದರೆ ಸೇರಿ ಬಿಡುತ್ತಾರೆ. ಹೀಗೆ ಸದಾ ನಿಶ್ಚಯ ಬುದ್ಧಿ ವಿಜಯಿ
ರತ್ನ ಆಗುವಿರಿ. ನಿಮಗೆ ನಿಮ್ಮಲ್ಲಿ ನಿಶ್ಚಯ, ತಂದೆಯಲ್ಲಿ ನಿಶ್ಚಯ ಮತ್ತು ಡ್ರಾಮಾದ ಪ್ರತಿ
ದೃಶ್ಯವನ್ನು ನೋಡುತ್ತಾ ಅದರಲ್ಲಿಯೂ ಸಹ ಪೂರ್ತಿ ನಿಶ್ಚಯವಿದ್ದಾಗ ವಿಜಯಿಯಾಗುವಿರಿ.
ಸ್ಲೋಗನ್:
ಪವಿತ್ರತೆಯ
ಘನತೆಯಲ್ಲಿ ಸದಾ ಇದ್ದಲ್ಲಿ ಮಿತವಾದ ಆಕರ್ಷಣೆಗಳಿಂದ ನ್ಯಾರಾ ಆಗಿ ಬಿಡುವಿರಿ.
ಮಾತೇಶ್ವರೀಜಿ ಯವರ ಮಧುರ
ಮಹಾವಾಕ್ಯ
“ ತಮೋ ಗುಣಿ
ಮಾಯೆಯ ವಿಸ್ತಾರ ”
ಸತೋ ಗುಣಿ, ರಜೋ ಗುಣಿ, ತಮೋ ಗುಣಿ ಈ ಮೂರು ಶಬ್ಧ ಹೇಳುತ್ತಾರೆ, ಇದನ್ನು ಯಥಾರ್ಥವಾಗಿ ತಿಳಿಯುವುದು
ಅವಶ್ಯವಾಗಿದೆ. ಮನುಷ್ಯರು ತಿಳಿಯುತ್ತಾರೆ, ಈ ಮೂರೂ ಗುಣ ಒಟ್ಟಿಗೆ ನಡೆಯುತ್ತಿರುತ್ತದೆ ಎಂದು,
ಆದರೆ ವಿವೇಕ ಏನು ಹೇಳುವುದು - ಏನು ಈ ಮೂರೂ ಗುಣ ಒಟ್ಟಿಗೆ ನಡೆದು ಬರುವುದಾ ಅಥವಾ ಮೂರೂ ಗುಣಗಳ
ಪಾತ್ರ ಬೇರೆ-ಬೇರೆ ಯುಗಗಳಲ್ಲಿ ಇರುವುದಾ? ವಿವೇಕವಂತೂ ಹೀಗೇ ಹೇಳುವುದು ಈ ಮೂರೂ ಗುಣ ಒಟ್ಟಿಗೆ
ನಡೆಯುವುದಿಲ್ಲ. ಯಾವಾಗ ಸತ್ಯಯುಗವಿದ್ದಾಗ ಸತೋ ಗುಣ ಇರುವುದು, ದ್ವಾಪರ ಯುಗದಲ್ಲಿ ರಜೋ ಗುಣ
ಇರುವುದು ಮತ್ತು ಕಲಿಯುಗದಲ್ಲಿ ತಮೋ ಗುಣ ಇರುವುದು. ಯಾವಾಗ ಸತೊ ಇರುವುದು ಆಗ ರಜೊ, ತಮೋ
ಇರುವುದಿಲ್ಲ, ಯಾವಾಗ ರಜೋ ಇರುವುದು ಆಗ ಸತೋ ಗುಣ ಇರುವುದಿಲ್ಲ. ಈ ಮನುಷ್ಯರಂತು ಹೀಗೆಯೆ ತಿಳಿದು
ಕುಳಿತಿದ್ದಾರೆ. ಈ ಮೂರೂ ಗುಣ ಒಟ್ಟೊಟ್ಟಿಗೆ ನಡೆಯುತ್ತಾ ಬರುವುದು ಎಂದು. ಈ ಮಾತು ಹೇಳುವುದು ಸೀದಾ
ಸೀದಾ ತಪ್ಪಾಗಿದೆ, ಅವರು ತಿಳಿಯುತ್ತಾರೆ ಯಾವಾಗ ಮನುಷ್ಯರು ಸತ್ಯ ಹೇಳುತ್ತಾರೆ, ಪಾಪ ಕರ್ಮ
ಮಾಡುವುದಿಲ್ಲ. ಆಗ ಅವರು ಸತೋ ಗುಣಿಯಾಗಿರುತ್ತಾರೆ ಆದರೆ ವಿವೇಕ ಹೇಳುತ್ತದೆ ಯಾವಾಗ ನಾವು
ಹೇಳುತ್ತೇವೆ ಸತೋಗುಣ, ಅಂದರೆ ಈ ಸತೋ ಗುಣದ ಅರ್ಥವಾಗಿದೆ ಸಂಪೂರ್ಣ ಸುಖ ಅಂದರೆ ಇಡೀ ಸೃಷ್ಠಿ
ಸತೋಗುಣಿಯಾಗಿದೆ. ಬಾಕಿ ಹೀಗೆ ಹೇಳಲಾಗಲ್ಲಾ ಯಾರು ಸತ್ಯ ಹೇಳುತ್ತಾರೆ ಅವರು ಸತೋಗುಣಿಯಾಗಿದ್ದಾರೆ
ಮತ್ತು ಯಾರು ಸುಳ್ಳು ಹೇಳುತ್ತಾರೆ ಅವರು ಕಲಿಯುಗಿ ತಮೋ ಗುಣಿಯಾಗಿದ್ದಾರೆ, ಹೀಗೆ ಪ್ರಪಂಚ
ನಡೆಯುತ್ತಿರುತ್ತದೆ. ಈಗ ನಾವು ಯಾವಾಗ ಸತ್ಯಯುಗ ಎಂದು ಹೇಳುತ್ತೇವೆ. ಆಗ ಅದರ ಅರ್ಥವಾಗಿದೆ ಇಡೀ
ಸೃಷ್ಠಿಯ ಮೇಲೆ ಸತೋಗುಣ ಸತೋಪ್ರಧಾನರಿರಬೇಕು. ಹಾಂ, ಯಾವುದೋ ಸಮಯದಲ್ಲಿ ಇಂತಹ ಸತ್ಯಯುಗ ಇತ್ತು
ಎಲ್ಲಿ ಇಡೀ ಸಂಸಾರ ಸತೋಗುಣಿಯಾಗಿತ್ತು. ಈಗ ಆ ಸತ್ಯಯುಗ ಇಲ್ಲ, ಈಗ ಇದೆ. ಕಲಿಯುಗಿ ಪ್ರಪಂಚ
ತಿಳಿಯಿರಿ ಇಡೀ ಸೃಷ್ಠಿಯ ಮೇಲೆ ತಮೋಪ್ರಧಾನತೆಯ ರಾಜ್ಯವಿದೆ. ಈ ತಮೋಗುಣಿ ಸಮಯದಲ್ಲಿ ಮತ್ತೆ
ಸತೋಗುಣಿ ಎಲ್ಲಿಂದ ಬಂತು! ಈಗ ಇದೇ ಘೋರ ಅಂಧಕಾರ ಯಾವುದಕ್ಕೆ ಬ್ರಹ್ಮನ ರಾತ್ರಿ ಎಂದು ಹೇಳುತ್ತಾರೆ.
ಬ್ರಹ್ಮನ ದಿನವಾಗಿದೆ ಸತ್ಯಯುಗ ಮತ್ತು ಬ್ರಹ್ಮನ ರಾತ್ರಿಯಾಗಿದೆ ಕಲಿಯುಗ, ಅಂದರೆ ನಾವು ಎರಡನ್ನೂ
ಸೇರಿಸಲು ಸಾಧ್ಯವಿಲ್ಲ. ಒಳ್ಳೆಯದು. ಓಂ ಶಾಂತಿ.