01.12.2018 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಎಲ್ಲರಿಗೆ ಜೀವನ್ಮುಕ್ತಿಯ ಮಂತ್ರವನ್ನು ಕೊಡುವ ಸದ್ಗುರುವಿನ ಮಕ್ಕಳು ಗುರುಗಳಾಗಿದ್ದೀರಿ, ನೀವು
ಈಶ್ವರನ ಬಗ್ಗೆ ಎಂದೂ ಸುಳ್ಳು ಹೇಳಲು ಸಾಧ್ಯವಿಲ್ಲ”
ಪ್ರಶ್ನೆ:
ಸೆಕೆಂಡಿನಲ್ಲಿ
ಜೀವನ್ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ವಿಧಿ ಹಾಗೂ ಅದರ ಗಾಯನವೇನಾಗಿದೆ?
ಉತ್ತರ:
ಸೆಕೆಂಡಿನಲ್ಲಿ
ಜೀವನ್ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಪ್ರವೃತ್ತಿಯಲ್ಲಿರುತ್ತಾ ಕಮಲಪುಷ್ಫ ಸಮಾನ
ಪವಿತ್ರರಾಗಿ. ಕೇವಲ ಈ ಅಂತಿಮ ಜನ್ಮದಲ್ಲಿ ಪವಿತ್ರತೆಯ ಪ್ರತಿಜ್ಞೆ ಮಾಡಿ. ಆಗ ಜೀವನ್ಮುಕ್ತಿಯು
ಸಿಕ್ಕಿ ಬಿಡುವುದು. ಇದರ ಮೇಲೆಯೇ ಜನಕ ರಾಜನು ಗೃಹಸ್ಥ ವ್ಯವಹಾರದಲ್ಲಿರುತ್ತಾ ಒಂದು ಸೆಕೆಂಡಿನಲ್ಲಿ
ಪ್ರತಿಜ್ಞೆಯ ಆಧಾರದ ಮೇಲೆ ಜೀವನ್ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಂಡರು ಎಂಬ ಉದಾಹರಣೆಯ ಗಾಯನವಿದೆ.
ಗೀತೆ:
ಸಮಯವು ಕಳೆದು
ಹೋಗುತ್ತಿದೆ
ಓಂ ಶಾಂತಿ.
ತಂದೆಯು ಎಲ್ಲರಿಗೆ ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಕೊಡಲು ಬರುತ್ತಾರೆ. ಎಲ್ಲರ ಸದ್ಗತಿದಾತ,
ಜೀವನ್ಮುಕ್ತಿ ದಾತನು ಒಬ್ಬರೇ ಆಗಿದ್ದಾರೆ ಎಂಬ ಗಾಯನವಿದೆ. ಒಂದು ಸೆಕೆಂಡಿನಲ್ಲಿ
ಜೀವನ್ಮುಕ್ತಿಯೆಂದು ಏಕೆ ಹೇಳುತ್ತಾರೆ? ಹೇಗೆ ರಾಜಾ ಜನಕನ ಉದಾಹರಣೆಯಿದೆ. ಅವರ ಹೆಸರು
ಜನಕನಾಗಿತ್ತು, ಅವರೇ ಭವಿಷ್ಯದಲ್ಲಿ ಅನುಜನಕನಾಗುತ್ತಾರೆ. ಜನಕನಿಗೆ ಒಂದು ಸೆಕೆಂಡಿನಲ್ಲಿ
ಜೀವನ್ಮುಕ್ತಿ ಸಿಕ್ಕಿತೆಂದು ಹೇಳುತ್ತಾರೆ. ಆದರೆ ಜೀವನ್ಮುಕ್ತಿಯಂತೂ ಸತ್ಯ-ತ್ರೇತಾಯುಗದಲ್ಲಿ
ಇರುತ್ತದೆ ಎಂದು ಹೇಳಲಾಗುತ್ತದೆ. ಗುರು ಜನರು ಕಿವಿಯಲ್ಲಿ ಮಂತ್ರವನ್ನು ಹೇಳುತ್ತಾರೆ, ಅದನ್ನು
ವಶೀಕರಣ ಮಂತ್ರವೆಂದೂ ಹೇಳುತ್ತಾರೆ. ಅವರಂತೂ ಎಲ್ಲರೂ ಮಂತ್ರವನ್ನೇ ಕೊಡುತ್ತಾರೆ. ಆದರೆ ನಿಮಗೆ
ಮಹಾಮಂತ್ರ ಸಿಗುತ್ತದೆ, ಜೀವನ್ಮುಕ್ತಿಯ ಮಂತ್ರ - ಈ ಮಂತ್ರವನ್ನು ಯಾರು ಕೊಡುತ್ತಾರೆ?
ಬ್ರಹ್ಮಾಕುಮಾರ-ಕುಮಾರಿಯರು. ಅವರಿಗೆ ಈ ಮಂತ್ರವು ಎಲ್ಲಿಂದ ದೊರಕಿತು? ಆ ಸದ್ಗುರುವಿನಿಂದ.
ಸರ್ವೋತ್ತಮರಂತೂ ಒಬ್ಬರೇ ತಂದೆಯಾಗಿದ್ದಾರೆ. ಮತ್ತೆ ತಾವು ಮಕ್ಕಳು ಸರ್ವೋತ್ತಮರಾಗುತ್ತೀರಿ.
ಅವರಲ್ಲಿ ಸರ್ವೋತ್ತಮ ಗುರುಗಳಿರುತ್ತಾರೆ, ನೀವೂ ಸಹ ಸದ್ಗುರುವಿನ ಮಕ್ಕಳು ಗುರುಗಳಾಗಿದ್ದೀರಿ.
ಗೀತೆಯನ್ನು ಹೇಳುವವರಿಗೂ ಸಹ ಗುರುಗಳೆಂದು ಕರೆಯಲಾಗುತ್ತದೆ. ನಂಬರ್ವಾರಂತೂ ಇರುತ್ತಾರೆ. ನೀವೂ ಸಹ
ಸತ್ಯವನ್ನು ಹೇಳುವಂತಹ ಗುರುಗಳಾಗಿದ್ದೀರಿ, ನೀವು ಎಂದೂ ಈಶ್ವರನ ಬಗ್ಗೆ ಅಸತ್ಯವನ್ನು
ಹೇಳುವುದಿಲ್ಲ. ಮೊಟ್ಟ ಮೊದಲು ನೀವು ಪವಿತ್ರತೆಯ ಬಗ್ಗೆ ತಿಳಿಸಿ ಕೊಡುತ್ತೀರಿ. ನಾವು ಎಂದೂ ಸಹ
ವಿಕಾರದಲ್ಲಿ ಹೋಗುವುದಿಲ್ಲವೆಂದು ತಂದೆಯೊಂದಿಗೆ ಪ್ರತಿಜ್ಞೆ ಮಾಡಿ ಎಂದು ಹೇಳುತ್ತೀರಿ. ಸುಳ್ಳು
ಹೇಳದೇ ಇರುವುದಂತೂ ಸಾಧಾರಣವಾದ ಮಾತಾಗಿದೆ. ಸುಳ್ಳಂತೂ ಅನೇಕರು ಹೇಳುತ್ತಿರುತ್ತಾರೆ. ಆದರೆ ಇಲ್ಲಿ
ಅಂತಹ ಮಾತಿಲ್ಲ. ಇಲ್ಲಿ ಪವಿತ್ರತೆಯ ಮಾತಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ನಾವು ಕಮಲಪುಷ್ಫ
ಸಮಾನ ಪವಿತ್ರರಾಗಿರುತ್ತೇವೆಂದು ಈ ಅಂತಿಮ ಜನ್ಮದಲ್ಲಿ ನಾವು ತಂದೆಯೊಂದಿಗೆ ಪ್ರತಿಜ್ಞೆ
ಮಾಡುತ್ತೇವೆ. ಆದುದರಿಂದ ಇಲ್ಲಿ ಪವಿತ್ರತೆಯ ಮಾತಾಗಿದೆ. ಇದು ಬಹಳ ದೊಡ್ಡ ಗುರಿಯಾಗಿದೆ, ಇದಂತೂ
ಸಾಧ್ಯವೇ ಇಲ್ಲವೆಂದು ಅವರು ಹೇಳುತ್ತಾರೆ. ಏಕೆ ಸಾಧ್ಯವಿಲ್ಲವೆಂದು ನೀವು ಹೇಳುತ್ತೀರಿ. ಇಲ್ಲಂತೂ
ಕಮಲಪುಷ್ಫ ಸಮಾನವೆಂದು ಗಾಯನ ಮಾಡಲ್ಪಟ್ಟಿದೆ....... ಈ ದೃಷ್ಟಾಂತವನ್ನು ಶಾಸ್ತ್ರಗಳಲ್ಲಿ
ಬರೆಯಲ್ಪಟ್ಟಿದೆ. ಅವಶ್ಯವಾಗಿ ತಂದೆಯೇ ಇಂತಹ ಶಿಕ್ಷಣವನ್ನು ಕೊಟ್ಟಿದ್ದಾರೆ. ಇದು ಭಗವಾನುವಾಚ ಅಥವಾ
ಬ್ರಾಹ್ಮಣ ಉವಾಚವಾಗಿದೆ. ಭಗವಂತನು ಎಲ್ಲರಿಗೂ ಹೇಳುವುದಿಲ್ಲ, ಬ್ರಾಹ್ಮಣ ಮಕ್ಕಳಿಗೇ ಕೇಳುತ್ತಾರೆ.
ಈ ಮಾತನ್ನು ನೀವು ಎಲ್ಲರಿಗೂ ತಿಳಿಸಿ ಕೊಡಬೇಕು. ಮೂಲ ಮಾತು ಪವಿತ್ರತೆಯದ್ದಾಗಿದೆ. ಜನಕನ
ರೀತಿಯಲ್ಲಿ ಕಮಲಪುಷ್ಫ ಸಮಾನ ಪವಿತ್ರರಾಗಬೇಕು. ಅದೇ ಜನಕ ಮತ್ತೆ ಅನುಜನಕನಾಗುತ್ತಾನೆ. ಹೇಗೆ ರಾಧೆ
ಅನುರಾಧೆಯಾಗುತ್ತಾಳೆ. ಇಲ್ಲಿ ಯಾರಾದರೂ ನಾರಾಯಣನೆಂದು ಹೆಸರಿಟ್ಟುಕೊಂಡಿದ್ದೇ ಆದರೆ ಭವಿಷ್ಯದಲ್ಲಿ
ಅನುನಾರಾಯಣನಾಗುತ್ತಾರೆ. ಇದು ಸರಿಯಾದ ಮಾತಾಗಿದೆ. ನಿಮ್ಮ ಬಳಿ ಯಾರೇ ಬರುತ್ತಾರೆಂದರೆ
ತಿಳಿಸಿಕೊಡಬೇಕು. ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಕೇಳಿದ್ದೇವೆ. ಗೃಹಸ್ಥ
ವ್ಯವಹಾರದಲ್ಲಿರುತ್ತಾ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯತೆಯಿದೆ. ನಾವು ಅನುಭವದಿಂದ
ಹೇಳುತ್ತೇವೆ, ಕಟ್ಟು ಕಥೆ ಹೇಳುತ್ತಿಲ್ಲ. ಭಗವಾನುವಾಚ – ಮುಖ್ಯ ಮಾತನ್ನು ತಿಳಿಸಿ ಕೊಡಬೇಕು -
ಭಗವಂತನು ಎಲ್ಲರಿಗೂ ತಂದೆಯಾಗಿದ್ದಾರೆ. ಅವಶ್ಯವಾಗಿ ಜೀವನ್ಮುಕ್ತಿದಾತನೂ ಅವರೇ ಆಗಿದ್ದಾರೆ. ಇದು
ಪ್ರವೃತ್ತಿ ಮಾರ್ಗವಾಗಿದೆ. ಸನ್ಯಾಸಿಗಳದಂತೂ ನಿವೃತ್ತಿ ಮಾರ್ಗವಾಗಿದೆ. ಅವರು ಎಂದೂ ಸಹ
ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಅವರಂತೂ ಮನೆ-ಮಠವನ್ನು ಬಿಟ್ಟು ಓಡಿ ಹೋಗುವವರಾಗಿದ್ದಾರೆ.
ಅವರು ಈ ಜ್ಞಾನವನ್ನು ನೀಡಲು ಸಾಧ್ಯವಿಲ್ಲ. ಇದು ರಾಜಯೋಗವಾಗಿದೆ, ಗೃಹಸ್ಥ ವ್ಯವಹಾರದಲ್ಲಿರುತ್ತಾ
ಕಮಲಪುಷ್ಫ ಸಮಾನ ಪವಿತ್ರರಾಗಿರಬೇಕು. ಸತ್ಯಯುಗದಲ್ಲಿ ಭಾರತವು ಪವಿತ್ರ ಪ್ರವೃತ್ತಿ ಮಾರ್ಗವಾಗಿತ್ತು,
ನಿರ್ವಿಕಾರಿ ಪ್ರಪಂಚವಾಗಿತ್ತು. ರಾಜಧಾನಿಯಲ್ಲಿ ಸ್ತ್ರೀ-ಪುರುಷ ಇಬ್ಬರೂ ಬೇಕು. ಗೃಹಸ್ಥ
ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರವಾಗಿರಲು ಸಾಧ್ಯವಿದೆ. ನಾವು ಅನುಭವಿಗಳಾಗಿದ್ದೇವೆ
- ಈ ರೀತಿ ತಿಳಿಸಿ ಕೊಡಬೇಕಾಗುತ್ತದೆ. ಪವಿತ್ರರಾಗಿ ತಂದೆಯ ಮೂಲಕ ಪವಿತ್ರ ಪ್ರಪಂಚದ
ಮಾಲೀಕರಾಗುತ್ತೇವೆ ಎಂಬುದನ್ನು ನಾವು ತಿಳಿದಿದ್ದೇವೆ. ಮೊದಲು ಪವಿತ್ರ ಪ್ರವೃತ್ತಿ ಮಾರ್ಗವಿತ್ತು,
ಈಗಂತೂ ಅಪವಿತ್ರ ಪ್ರವೃತ್ತಿ ಮಾರ್ಗವಾಗಿದೆ. ಇದು ಭ್ರಷ್ಟಾಚಾರಿ ಪ್ರಪಂಚವಾಗಿದೆ, ಅದು
ಶ್ರೇಷ್ಠಾಚಾರಿ ಪ್ರಪಂಚವಾಗಿತ್ತು. ರಾವಣನು ಭ್ರಷ್ಟಾಚಾರಿಯನ್ನಾಗಿ ಮಾಡುತ್ತಾನೆ, ರಾಮನು
ಶ್ರೇಷ್ಠಾಚಾರಿಯನ್ನಾಗಿ ಮಾಡುತ್ತಾರೆ. ಅರ್ಧಕಲ್ಪ ರಾವಣ ರಾಜ್ಯ ನಡೆಯುತ್ತದೆ, ಭ್ರಷ್ಟಾಚಾರಿ
ಪ್ರಪಂಚದಲ್ಲಿ ಭಕ್ತಿಮಾರ್ಗವಿದೆ. ಭ್ರಷ್ಟಾಚಾರವಿರುವ ಕಾರಣ ದಾನ-ಪುಣ್ಯವನ್ನು ಮಾಡುತ್ತಾರೆ.
ಮನುಷ್ಯನು ಎಷ್ಟು ಭಕ್ತಿ, ದಾನ-ಪುಣ್ಯವನ್ನು ಮಾಡುತ್ತಾನೆಯೋ ಅದರಿಂದ ಭಗವಂತ ಸಿಗುತ್ತಾರೆಂದು
ತಿಳಿದಿದ್ದಾರೆ. ಭಗವಂತನ ಭಕ್ತಿಯನ್ನು ಮಾಡುತ್ತಾರೆ, ನಮ್ಮನ್ನು ಶ್ರೇಷ್ಠರನ್ನಾಗಿ ಮಾಡಿ ಎಂದು
ಕೇಳಿಕೊಳ್ಳುತ್ತಾರೆ. ಭಾರತ ಶ್ರೇಷ್ಠಾಚಾರಿಯಾಗಿತ್ತು, ಈಗಿಲ್ಲ.
ಭ್ರಷ್ಟಾಚಾರಿಗಳೇ ಶ್ರೇಷ್ಠಾಚಾರಿಯಾಗುತ್ತಾರೆ. ಭಾರತದ ಹೊಸ ರಚನೆಯ ಕಥೆಯನ್ನು ಯಾರೂ ತಿಳಿದೇ ಇಲ್ಲ.
ಚಿತ್ರಗಳ ಮೂಲಕ ಚೆನ್ನಾಗಿ ತಿಳಿಸಿ ಕೊಡಲು ಸಾಧ್ಯವಿದೆ. ಅಂತಹ ಚಿತ್ರಗಳನ್ನು ಮಾಡಬೇಕಾಗಿದೆ.
ಪ್ರತಿಯೊಂದು ಸೇವಾಕೇಂದ್ರದಲ್ಲಿ ಪ್ರದರ್ಶನಿಯ ಚಿತ್ರಗಳು ಇರಬೇಕು. ತಂದೆಯು ಸಲಹೆಯನ್ನು
ಕೊಡುತ್ತಾರೆ. ಒಂದುವೇಳೆ ನಮ್ಮ ಬಳಿ ಪ್ರದರ್ಶನಿ ಚಿತ್ರಗಳು ಇಲ್ಲವೆಂದು ಪತ್ರವನ್ನು ಬರೆದರೆ
ತಂದೆಯು ಅದನ್ನು ಮಾಡಿಸಿ ಕಳುಹಿಸಿಕೊಡಬೇಕೆಂದು ಸಲಹೆಯನ್ನು ಕೊಡುತ್ತೇವೆ. ಈ ಚಿತ್ರಗಳು ಬಹಳ ಅರ್ಥ
ಸಹಿತವಾಗಿವೆ. ನಾವು ತಂದೆಯ ಮಕ್ಕಳಾಗಿದ್ದೇವೆ ಎಂಬುದು ಮೊಟ್ಟ ಮೊದಲು ಬುದ್ಧಿಯಲ್ಲಿರಬೇಕು.
ಭಗವಂತನು ಸ್ವರ್ಗದ ರಚಯಿತನಾಗಿದ್ದಾರೆ. ನರಕವನ್ನು ರಾವಣನು ರಚಿಸುತ್ತಾನೆ. ಗೋಲದ ಮೇಲೆ 10
ತಲೆಯುಳ್ಳಂತಹ ರಾವಣನನ್ನು ಮಾಡಿಸಿ. ಸ್ವರ್ಗದ ಗೋಲದ ಮೇಲೆ ಚತುರ್ಭುಜನನ್ನು ತೋರಿಸಿ. ಇದು
ರಾಮರಾಜ್ಯ, ಇದು ರಾವಣ ರಾಜ್ಯ ಎಂತಲೂ ಬರೆಯಬಹುದು. ಈ ಸಮಯದಲ್ಲಿ ರಾವಣನು ಸರ್ವವ್ಯಾಪಿಯಾಗಿದ್ದಾನೆ,
ಅಲ್ಲಿ ರಾಮನು ಸರ್ವವ್ಯಾಪಿಯಾಗಿದ್ದಾನೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಗಾಯನ ಮಾಡಲಾಗುತ್ತದೆ,
ಆತ್ಮ-ಪರಮಾತ್ಮರು ಬಹಳ ಕಾಲ ಅಗಲಿದ್ದರು, ಯಾವಾಗ ಸದ್ಗುರು ದಲ್ಲಾಳಿಯಾಗಿ ಸಿಕ್ಕಿದರೋ ಆಗ ಸುಂದರ
ಮಿಲನವಾಯಿತು. ಅಂದಾಗ ಅವರು ಅವಶ್ಯವಾಗಿ ಬರುತ್ತಾರಲ್ಲವೆ. ಈ ಲೆಕ್ಕವನ್ನು ಯಾರೂ ತಿಳಿದುಕೊಂಡಿಲ್ಲ.
ಮೊಟ್ಟ ಮೊದಲು ದೇವಿ-ದೇವತೆಗಳೇ ಅಗಲಿ ಹೋಗುತ್ತಾರೆ. ಇದು ಜ್ಞಾನವಾಗಿದೆ, ಇದನ್ನು ಯಾರಿಗೆ ಬೇಕಾದರೂ
ತಿಳಿಸಬಹುದು. ಆತ್ಮಗಳ ತಂದೆಯಾಗಿದ್ದಾರಲ್ಲವೆ. ಹೇ ಆತ್ಮ ತಮ್ಮ ಪರಮಪಿತ ಪರಮಾತ್ಮನ ಕರ್ತವ್ಯವನ್ನು
ತಿಳಿಸಿ, ತಿಳಿದುಕೊಂಡಿಲ್ಲವೇ, ತನ್ನ ತಂದೆಯ ಕರ್ತವ್ಯವನ್ನು ತಿಳಿಯದೇ ಇರುವ ಮಕ್ಕಳು ಯಾರೂ
ಇರುವುದಿಲ್ಲ ತಂದೆ ಕುಳಿತು ತಿಳಿಸುತ್ತಾರೆ. ನೀವು ನಿಮ್ಮ ಜನ್ಮವನ್ನು ತಿಳಿದುಕೊಂಡಿಲ್ಲ, ನಾನು
ತಿಳಿಸಿಕೊಡುತ್ತೇನೆಂದು ತಂದೆಯು ಹೇಳುತ್ತಾರೆ. ಮೊಟ್ಟ ಮೊದಲು ದೇವಿ-ದೇವತಾ ಧರ್ಮದವರು ಇಷ್ಟು
ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಅನ್ಯ ಧರ್ಮದವರು ಎಷ್ಟು ಜನ್ಮಗಳನ್ನು ತೆಗೆದುಕೊಳ್ಳಬಹುದು
ಎಂಬುದನ್ನು ಲೆಕ್ಕ ಹಾಕಿ. ಕೊನೆ ಪಕ್ಷ ಇಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ಸಿದ್ಧ ಮಾಡಿ
ಹೇಳಬೇಕು. ವೃಕ್ಷವು ವೃದ್ಧಿಯಾಗುತ್ತಾ ಹೋಗುತ್ತದೆ. ಮೊಟ್ಟ ಮೊದಲು ದೇವಿ-ದೇವತಾ ಧರ್ಮವಿತ್ತು.
ಅವರದೇ 84 ಜನ್ಮಗಳೆಂದು ಹೇಳಲಾಗುತ್ತದೆ. ಭಾರತದ ಜ್ಞಾನವಲ್ಲವೆ. ಪ್ರಾಚೀನ ಭಾರತದ ಜ್ಞಾನವನ್ನು
ಯಾರು ಕೊಟ್ಟರು? ಕೃಷ್ಣನನ್ನು ಎಲ್ಲರೂ ಒಪ್ಪುವುದಿಲ್ಲ. ಈ ಜ್ಞಾನವನ್ನು ಭಗವಂತನೇ ತಿಳಿಸುತ್ತಾರೆ,
ಅವರು ಜ್ಞಾನಪೂರ್ಣ, ಪರಮಪಿತ ಪರಮಾತ್ಮನಾಗಿದ್ದಾರಲ್ಲವೆ. ಬ್ರಹ್ಮನಿಗೂ ಸಹ ಜ್ಞಾನಪೂರ್ಣನೆಂದು
ಹೇಳುವುದಿಲ್ಲ, ಕೃಷ್ಣನಿಗೂ ಸಹ ಹೇಳುವುದಿಲ್ಲ. ಕೃಷ್ಣನ ಮಹಿಮೆಯೇ ಬೇರೆಯಾಗಿದೆ. ಇದನ್ನು
ತಿಳಿಸಿಕೊಡಲು ಬಹಳ ಸ್ಪಷ್ಟವಾದ ಜ್ಞಾನವಾಗಿದೆ. ಭಗವಂತನಂತೂ ಎಲ್ಲರಿಗೂ ಒಬ್ಬರೇ ನಿರಾಕಾರ ಪರಮಪಿತ
ಪರಮಾತ್ಮನಾಗಿದ್ದಾರೆ. ಅವರು ರಚೈತನೂ ಆಗಿದ್ದಾರೆ, ಕೃಷ್ಣನಂತೂ ರಚನೆಯಾಗಿದ್ದಾರೆ. ಶ್ರೇಷ್ಠಾತಿ
ಶ್ರೇಷ್ಠ ಭಗವಂತ ಒಬ್ಬರಲ್ಲವೆ. ಅವರನ್ನು ಸರ್ವವ್ಯಾಪಿಯೆಂದು ಹೇಳಲು ಸಾಧ್ಯವಿಲ್ಲ. ಭಾರತದಲ್ಲಿ
ಎಲ್ಲರಿಗಿಂತ ದೊಡ್ಡವರು ರಾಷ್ಟ್ರಪತಿ ಮತ್ತೆ ನಂಬರ್ವಾರ್ ಇರುತ್ತಾರೆ. ಎಲ್ಲರ ಕರ್ತವ್ಯವೂ ಒಂದೇ
ಆಗಿದೆ ಎಂದಲ್ಲ. ಪ್ರತಿಯೊಬ್ಬ ಆತ್ಮನಿಗೆ ಅವಿನಾಶಿ ಪಾತ್ರವು ಸಿಕ್ಕಿದೆ- ಇದನ್ನು ಸಿದ್ಧ ಮಾಡಬೇಕು.
ಪರಸ್ಪರದಲ್ಲಿ ಸಲಹೆಯನ್ನು ತೆಗೆದುಕೊಂಡು ಸೇವೆಯ ಯೋಜನೆಯನ್ನು ಮಾಡಬೇಕು. ಆದರೆ ಬುದ್ಧಿಯ ಲೈನ್
ಕ್ಲಿಯರ್ ಇಲ್ಲವೆಂದರೆ, ಯಾವುದೇ ವಿಕಾರವಿತ್ತೆಂದರೆ ಅಥವಾ ನಾಮ-ರೂಪದಲ್ಲಿ ಸಿಲುಕಿ ಹಾಕಿಕೊಂಡರೆ
ಸೇವೆಯನ್ನು ಮಾಡಲು ಸಾಧ್ಯವಿಲ್ಲ. ಇದರಲ್ಲಿ ಬುದ್ಧಿಯ ಲೈನ್ ಬಹಳ ಸ್ಪಷ್ಟವಾಗಿರಬೇಕು. ಫಲಿತಾಂಶವಂತೂ
ಅಂತ್ಯದಲ್ಲೇ ಹೊರ ಬೀಳುತ್ತದೆ. ಈಗಂತೂ ಎಲ್ಲರೂ ನಂಬರ್ವಾರ್ ಆಗಿದ್ದಾರೆ. ಮನುಷ್ಯರು ವ್ಯಾಸ ಭಗವಂತ
ಶಾಸ್ತ್ರವನ್ನು ರಚಿಸಿದರೆಂದು ಹೇಳುತ್ತಾರೆ. ವ್ಯಾಸನಂತೂ ಭಗವಂತನಾಗಲು ಸಾಧ್ಯವಿಲ್ಲ. ಧರ್ಮ
ಶಾಸ್ತ್ರಗಳು ನಾಲ್ಕು ಇವೆ. ಭಾರತದ ಧರ್ಮ ಶಾಸ್ತ್ರವು ಒಂದೇ ಗೀತಾ ಮಾತೆಯಾಗಿದೆ. ಆಸ್ತಿಯಂತೂ
ಅವರಿಂದಲೇ ಸಿಗುತ್ತದೆ. ತಾಯಿಯ ಮೂಲಕ ತಂದೆಯ ಆಸ್ತಿಯು ಸಿಗುತ್ತದೆ. ಗೀತಾ ಮಾತೆಯ ರಚಯಿತ
ತಂದೆಯಾಗಿದ್ದಾರೆ. ಗೀತೆಯ ಮೂಲಕವೇ ಪ್ರಾಚೀನ ಸಹಜ ರಾಜಯೋಗದ ಜ್ಞಾನವನ್ನು ಕೊಡಲಾಗುತ್ತದೆ.
ಗೀತೆಯಂತೂ ಭರತ ಖಂಡದ ಶಾಸ್ತ್ರವಾಗಿದೆ. ಇದರ ನಂತರ ಇಸ್ಲಾಂ ಧರ್ಮ ಶಾಸ್ತ್ರ, ಬೌದ್ಧ ಧರ್ಮ,
ಕ್ರಿಶ್ಚಿಯನ್ ಧರ್ಮದ್ದು ಎಲ್ಲರದೂ ಅವರವರದ್ದೇ ಆಗಿದೆ. ಇದನ್ನು ಯಾರು ಹೇಳಿದರು ಎಂಬುದೂ ಸಹ
ತಿಳಿಯಬೇಕಲ್ಲವೆ - ಗೀತೆಯಂತೂ ಎಲ್ಲಾ ಧರ್ಮದ ತಂದೆ-ತಾಯಿಯಾಗಿದೆ, ಮತ್ತೆಲ್ಲವೂ ಅದರ ಮಕ್ಕಳಾಗಿವೆ.
ಗೀತೆಯಂತೂ ನಂತರ ರಚಿಸಲ್ಪಟ್ಟಿದೆ. ಇಷ್ಟೆಲ್ಲಾ ವೇದ-ಉಪನಿಷತ್ತ್ ಯಾವ ಧರ್ಮದ್ದಾಗಿದೆ? ಇದನ್ನು
ಯಾರು ನುಡಿಸಿದರೆಂದು ತಿಳಿಯಬೇಕಲ್ಲವೆ. ಇದರಿಂದ ಯಾವ ಧರ್ಮವು ಹುಟ್ಟಿಕೊಂಡಿತು, ಯಾವುದೇ
ಧರ್ಮವಿಲ್ಲ. ಗೀತೆಯು ಖಂಡನೆ ಮಾಡಲ್ಪಟ್ಟಿದೆ ಎಂಬುದನ್ನು ಮೊಟ್ಟ ಮೊದಲು ಸಿದ್ಧ ಮಾಡಬೇಕು. ತಂದೆಯ
ಬದಲಾಗಿ ಮಗನ ಹೆಸರನ್ನು ಹಾಕಲಾಗಿದೆ. ಪ್ರತಿಯೊಬ್ಬರ ಜೀವನ ಚರಿತ್ರೆ ಬೇರೆ-ಬೇರೆಯಾಗಿದೆ. ಎಲ್ಲಾ
ಧರ್ಮವನ್ನು ಮರೆತು ನೀನು ನನ್ನೊಬ್ಬನನ್ನೇ ನೆನಪು ಮಾಡು ಎಂದು ತಂದೆಯು ತಿಳಿಸುತ್ತಾರೆ. ಪರಮಾತ್ಮ
ಆತ್ಮರಿಗೆ ಹೇಳುತ್ತಾರೆ ನೀವು ಅಶರೀರಿಯಾಗಿ ನನ್ನನ್ನು ನೆನಪು ಮಾಡಿ, ಅಶರೀರಿ ತಂದೆಯೇ ಹೇಳಲು
ಸಾಧ್ಯ ಸನ್ಯಾಸಿಗಳಂತೂ ಈ ರೀತಿ ಹೇಳಲು ಸಾಧ್ಯವಿಲ್ಲ. ಇದು ಗೀತೆಯ ಅಕ್ಷರವಾಗಿದೆ. ಎಲ್ಲಾ
ಧರ್ಮದವರಿಗೆ ಅಶರೀರಿಗಳಾಗಿ ಎಂದು ಹೇಳುತ್ತಾರೆ. ಈಗ ನಾಟಕ ಪೂರ್ಣವಾಗಲಿದೆ. ದೇಹ ಸಹಿತವಾಗಿ ದೇಹದ
ಎಲ್ಲಾ ಸಂಬಂಧವನ್ನು ತ್ಯಾಗ ಮಾಡಿ ನನ್ನೊಬ್ಬನನ್ನೇ ನೆನಪು ಮಾಡಿ ಆಗ ನೀವು ನನ್ನ ಬಳಿ ಬರುತ್ತೀರಿ
ಎಂಬ ಮಂತ್ರವು ಎಲ್ಲರಿಗೂ ಸಿಕ್ಕಿದೆ. ಮುಕ್ತಿಯ ನಂತರ ಜೀವನ್ಮುಕ್ತಿಯು ಇದ್ದೇ ಇದೆ. ಮುಕ್ತಿಯ
ಮೂಲಕವೇ ಜೀವನ್ಮುಕ್ತಿಯ ಪದವಿಯಾಗಿದೆ. ಯಾರೆಲ್ಲಾ ಮನುಷ್ಯರು ಬರುತ್ತಾರೆ, ಅವರು ಮೊದಲು ಸತೋ, ರಜೋ,
ತಮೋದಲ್ಲಿ ಹೋಗುತ್ತಾರೆ. ಈ ತಿಳುವಳಿಕೆಯು ಎಷ್ಟೊಂದು ಚೆನ್ನಾಗಿದೆ. ಆದರೆ ಮಕ್ಕಳು ಒಂದು
ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ತೆಗೆದುಹಾಕಿ ಬಿಡುತ್ತಾರೆ. ಇದಂತೂ ಬಹಳ ಸಹಜವಾಗಿದೆ.
ನೀವು ಪ್ರತಿಯೊಂದು ಸ್ಥಳದಲ್ಲಿ ಪ್ರದರ್ಶನಿಯನ್ನು ಮಾಡಿ, ಒಂದು ದಿನ ಪತ್ರಿಕೆಯಲ್ಲಿಯೂ ಹಾಕಿಸಬಹುದು,
ಇದಕ್ಕಾಗಿ ಖರ್ಚು ಮಾಡಬಹುದು. ಎಲ್ಲರೂ ತಿಳಿದುಕೊಳ್ಳಲಿ, ದಿನ ಪತ್ರಿಕೆಯಲ್ಲಿ ಅವಶ್ಯವಾಗಿ
ಹಾಕಿಸಬೇಕು. ಮಕ್ಕಳಿಗೆ ಬಹಳಷ್ಟು ನಶೆಯಿರಬೇಕು. ಬಾಕಿ ಸಮಯ ಬಹಳ ಸ್ವಲ್ಪವೇ ಉಳಿದಿದೆ. ಅತೀಂದ್ರಿಯ
ಸುಖವನ್ನು ಗೋಪ-ಗೋಪಿಯರೊಂದಿಗೆ ಕೇಳಿ ಎಂಬ ಗಾಯನವಿದೆ. ಗೋಪಿವಲ್ಲಭನ ಗೋಪ-ಗೋಪಿಯರಾಗಿದ್ದಾರೆ.
ಗೋಪ-ಗೋಪಿಯರು ಸತ್ಯಯುಗದಲ್ಲಿಯೇ ಆಗಲಿ, ಕಲಿಯುಗದಲ್ಲಿಯೇ ಆಗಲಿ ಇರುವುದಿಲ್ಲ. ಅಲ್ಲಿ ಲಕ್ಷ್ಮಿ
ದೇವಿ ಮತ್ತು ರಾಧೆ ದೇವಿಯಿರುತ್ತಾರೆ. ಗೋಪ-ಗೋಪಿಯರು ಈಗ ಇದ್ದಾರೆ. ಗೋಪಿ ವಲ್ಲಭನ ಮಕ್ಕಳು
ಮೊಮ್ಮಕ್ಕಳಾಗಿದ್ದಾರೆ ಅಂದಾಗ ತಾತನೂ ಸಹ ಇದ್ದಾರೆ. ತಾತ, ತಂದೆ ಮತ್ತು ತಾಯಿ - ಈ ಹೊಸ ರಚನೆಯು
ಸಂಗಮದಲ್ಲಿಯೇ ಆಗುತ್ತದೆ. ತಂದೆ ಹೇಳುತ್ತಾರೆ, ನಾನು ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಹೊಸ
ಪ್ರಪಂಚವನ್ನಾಗಿ ಮಾಡಲು ಬರುತ್ತೇನೆ. ಆಸುರೀ ಸಂತಾನರಿಂದ ನೀವು ಈಶ್ವರೀಯ ಸಂತಾನರಾಗಿದ್ದೀರಿ.
ನಂತರ ದೈವೀ ಸಂತಾನರಾಗುತ್ತೀರಿ. ನಂತರ ಕ್ಷತ್ರಿಯ, ವೈಶ್ಯ, ಶೂದ್ರ ಸಂತಾನರಾಗುತ್ತೀರಿ 84
ಜನ್ಮಗಳಲ್ಲಿ. ನಂತರ ಜೊತೆ ಜೊತೆಗೆ ವೃದ್ಧಿಯೂ ಆಗುತ್ತದೆ ವೃಕ್ಷವೂ ಪೂರ್ಣವಾಗಬೇಕು. ಪ್ರಳಯವೂ
ಆಗುವುದಿಲ್ಲ ಭಾರತವು ಅವಿನಾಶಿ ಖಂಡವಾಗಿದೆ, ಭಾರತದ ಬಹಳ ಮಹಿಮೆ ಮಾಡಬೇಕು. ಭಾರತ ಎಲ್ಲಾ
ಖಂಡಗಳಿಗಿಂತ ಶ್ರೇಷ್ಠವಾಗಿದೆ. ಇದು ವಿನಾಶವೆಂದೂ ಸಹ ಆಗುವುದಿಲ್ಲ. ಒಳ್ಳೆಯದು.
ರಾತ್ರಿ ಕ್ಲಾಸ್
:- ( 16.04.68)
ಸಂಗಮಯುಗವು ಯಾವಾಗ ಬರುತ್ತದೆಯೆಂದು ನೀವು ಬ್ರಾಹ್ಮಣ ಮಕ್ಕಳ ವಿನಃ ಬೇರೆ ಯಾರಿಗೂ ತಿಳಿದಿಲ್ಲ. ಈ
ಕಲ್ಪದ ಸಂಗಮಯುಗಕ್ಕೆ ಬಹಳ ಮಹಿಮೆಯಿದೆ. ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ.
ಸತ್ಯಯುಗಕ್ಕಾಗಿ ಅವಶ್ಯವಾಗಿ ಸಂಗಮಯುಗವು ಬಂದೇ ಬರುತ್ತದೆ. ಎಲ್ಲರೂ ಮನುಷ್ಯರೇ ಆದರೆ ಅವರಲ್ಲಿ
ಕೆಲವರು ಕನಿಷ್ಠರು, ಕೆಲವರು ಉತ್ತಮರಿರುತ್ತಾರೆ. ಆದ್ದರಿಂದ ದೇವತೆಗಳ ಮುಂದೆ ಹೋಗಿ ತಾವು
ಪುರುಷೋತ್ತಮರಾಗಿದ್ದೀರಿ, ನಾವು ಕನಿಷ್ಟರಾಗಿದ್ದೇವೆ ಎಂದು ಮಹಿಮೆ ಮಾಡುತ್ತಾರೆ. ನಾನು
ಹೀಗಿದ್ದೇನೆ, ಹಾಗಿದ್ದೇನೆಂದು ತಾವೇ ತಿಳಿಸುತ್ತಾರೆ.
ಈಗ ಈ ಪುರುಷೋತ್ತಮ ಸಂಗಮಯುಗವನ್ನು ನೀವು ಬ್ರಾಹ್ಮಣರ ವಿನಃ ಯಾರೂ ತಿಳಿದುಕೊಂಡಿಲ್ಲ. ಇದು
ಮನುಷ್ಯರಿಗೆ ತಿಳಿಯಬೇಕಾದರೆ ಇದರ ಜಾಹೀರಾತನ್ನು ಹೇಗೆ ಮಾಡುವುದು! ಸಂಗಮಯುಗದಲ್ಲಿ ಸ್ವಯಂ ಭಗವಂತನೇ
ಬಂದು ರಾಜಯೋಗವನ್ನು ಕಲಿಸುತ್ತಾರೆ. ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆಂದು ಮಕ್ಕಳಿಗೆ
ಗೊತ್ತಿದೆ. ಈಗ ಎಲ್ಲಾ ಮನುಷ್ಯರಿಗೆ ತಿಳಿಯುವಂತಹ ಯುಕ್ತಿಗಳನ್ನು ರಚಿಸಬೇಕು. ಆದರೆ ಇದು
ನಿಧಾನವಾಗಿ ಆಗುತ್ತದೆ. ಈಗ ಬಹಳಷ್ಟು ಸಮಯವು ಕಳೆದು ಹೋಯಿತು. ಸ್ವಲ್ಪವಷ್ಟೇ ಉಳಿದಿದೆ. ನಾವು
ಇದನ್ನು ಹೇಳಿದರೆ ಮನುಷ್ಯರು ಬೇಗ-ಬೇಗ ಪುರುಷಾರ್ಥ ಮಾಡುತ್ತಾರೆ. ಇಲ್ಲವೆಂದರೆ ಜ್ಞಾನವು
ಸೆಕೆಂಡಿನಲ್ಲಿ ಸಿಗುತ್ತದೆ ಯಾವುದರಿಂದ ನೀವು ಅದೇ ಸಮಯದಲ್ಲಿ ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು
ಪಡೆಯಬಲ್ಲಿರಿ. ಆದರೆ ನಿಮ್ಮ ತಲೆಯ ಮೇಲೆ ಅರ್ಧ ಕಲ್ಪದ ಪಾಪದ ಹೊರೆಯಿದೆ. ಅದು ಒಂದು ಸೆಕೆಂಡಿನಲ್ಲಿ
ಭಸ್ಮವಾಗುತ್ತದೆಯೇ! ಇಲ್ಲ. ಇದರಲ್ಲಂತೂ ಸಮಯ ಹಿಡಿಸುತ್ತದೆ. ಇನ್ನೂ ಬಹಳಷ್ಟು ಸಮಯವಿದೆ, ಈಗಲೇ
ನಾವು ಬ್ರಹ್ಮಾಕುಮಾರಿಯರ ಬಳಿ ಏಕೆ ಹೋಗಬೇಕೆಂದು ಮನುಷ್ಯರು ತಿಳಿಯುತ್ತಾರೆ. ಕೇವಲ ಪುಸ್ತಕಗಳಿಂದ
ವಿರುದ್ಧವಾಗಿಯೇ ತೆಗೆದುಕೊಳ್ಳುತ್ತಾರೆ. ಅವರ ಅದೃಷ್ಟದಲ್ಲಿಲ್ಲವೆಂದರೆ ಅವರು ವಿರುದ್ಧವಾಗಿಯೇ
ತೆಗೆದುಕೊಳ್ಳುತ್ತಾರೆ. ನಿಮಗೆ ತಿಳಿದಿದೆ - ಇದು ಪುರುಷೋತ್ತಮರಾಗುವ ಯುಗವಾಗಿದೆ. ವಜ್ರ ಸಮಾನ
ಯುಗವೆಂದು ಗಾಯನವಿದೆ, ನಂತರ ಇದು ಕಡಿಮೆಯಾಗಿ ಬಿಡುತ್ತದೆ. ಸ್ವರ್ಣೀಮ ಯುಗ, ಬೆಳ್ಳಿ ಸಮಾನ ಯುಗ,
ಈ ಸಂಗಮಯುಗವು ವಜ್ರ ಸಮಾನ ಯುಗವಾಗಿದೆ. ಸತ್ಯಯುಗವು ಸ್ವರ್ಣಿಮ ಯುಗವಾಗಿದೆ. ಇದಂತೂ ನಿಮಗೆ
ಗೊತ್ತಿದೆ - ಈ ಸಂಗಮಯುಗವು ಸ್ವರ್ಗಕ್ಕಿಂತಲೂ ಶ್ರೇಷ್ಠವಾಗಿದೆ, ವಜ್ರ ಸಮಾನ ಜನ್ಮವಾಗಿದೆ.
ಅಮರಲೋಕದ ಗಾಯನವಿದೆಯಲ್ಲವೆ. ನಂತರ ಇದು ಕಡಿಮೆಯಾಗುತ್ತಾ ಹೋಗುತ್ತದೆ ಅಂದಾಗ ನೀವು ಇದನ್ನೂ ಸಹ
ಬರೆಯಬಹುದು - ಪುರುಷೋತ್ತಮ ಸಂಗಮಯುಗವು ವಜ್ರ ಸಮಾನವಾಗಿದೆ, ಸತ್ಯಯುಗವು ಚಿನ್ನದ ಸಮಾನವಾಗಿದೆ,
ತ್ರೇತಾಯುಗವು ಬೆಳ್ಳಿಯ ಸಮಾನವಾಗಿದೆ ಮತ್ತು ಇದನ್ನೂ ಸಹ ತಿಳಿಸಬಹುದು - ಸಂಗಮಯುಗದಲ್ಲಿಯೇ ನಾವು
ಮನುಷ್ಯರಿಂದ ದೇವತೆಗಳಾಗುತ್ತೇವೆ. ಅಷ್ಟ ರತ್ನಗಳನ್ನು ಮಾಡುವಾಗ ಅದರಲ್ಲಿ ವಜ್ರವನ್ನು
ಮಧ್ಯದಲ್ಲಿಡಲಾಗುತ್ತದೆ. ಸಂಗಮದ ಶೋ ಇರುತ್ತದೆ ಏಕೆಂದರೆ ಸಂಗಮಯುಗವೇ ವಜ್ರ ಸಮಾನವಾಗಿದೆ.
ವಜ್ರಕ್ಕೆ ಸಂಗಮಯುಗದಲ್ಲಿಯೇ ಮಾನ್ಯತೆಯಿರುತ್ತದೆ. ಯೋಗ ಮೊದಲಾದವುಗಳನ್ನು ಕಲಿಸುತ್ತೇವೆ.
ಯಾವುದಕ್ಕೆ ಆಧ್ಯಾತ್ಮಿಕ ಯೋಗವೆಂದು ಹೇಳುತ್ತಾರೆ ಆದರೆ ಆಧ್ಯಾತ್ಮಿಕವಂತೂ ತಂದೆಯದೇ ಆಗಿದೆ,
ಆತ್ಮಿಕ ತಂದೆ ಮತ್ತು ಆತ್ಮಿಕ ಜ್ಞಾನವು ಸಂಗಮಯುಗದಲ್ಲಿಯೇ ಸಿಗುತ್ತದೆ. ಮನುಷ್ಯರಲ್ಲಿ ದೇಹ
ಅಹಂಕಾರವಿರುವ ಕಾರಣ ಅವರು ಇದನ್ನು ಇಷ್ಟು ಬೇಗ ಒಪ್ಪುವುದಿಲ್ಲ. ಇದನ್ನು ಬಡವರಿಗೆ ತಿಳಿಸಬೇಕು
ಅಂದಮೇಲೆ ಇದನ್ನೂ ಬರೆಯಬೇಕು - ಸಂಗಮಯುಗವು ವಜ್ರ ಸಮಾನವಾಗಿದೆ (ಸಂಗಮಯುಗ್ ಈಸ್ ಡೈಮಂಡ್) ಅದರ
ಆಯಸ್ಸು ಇಷ್ಟಾಗಿದೆ, ಸತ್ಯಯುಗವು ಚಿನ್ನದ ಸಮಾನವಾಗಿದೆ ಅಂದಾಗ ಅದರ ಆಯಸ್ಸೂ ಸಹ ಇಷ್ಟಾಗಿದೆ.
ಶಾಸ್ತ್ರಗಳಲ್ಲಿಯೂ ಸಹ ಸ್ವಸ್ತಿಕ್ ಚಿತ್ರವನ್ನು ರಚಿಸುತ್ತಾರೆ. ಅಂದಾಗ ನೀವು ಮಕ್ಕಳಿಗೂ ಸಹ ಇದರ
ನೆನಪಿದೆಯೆಂದರೆ ಇಷ್ಟೊಂದು ಖುಷಿಯಿರಬೇಕು. ವಿದ್ಯಾರ್ಥಿಗಳಿಗೆ ಖುಷಿಯಿರುತ್ತದೆಯಲ್ಲವೆ.
ಸ್ಟೂಡೆಂಟ್ ಲೈಫ್ ಈಸ್ ದಿ ಬೆಸ್ಟ್ ಲೈಫ್. ಈ ವಿದ್ಯೆಯಂತೂ ಸಂಪಾದನೆಗೆ ಮೂಲವಾಗಿದೆ. ಇದು
ಮನುಷ್ಯರಿಂದ ದೇವತೆಗಳಾಗುವ ಪಾಠಶಾಲೆಯಾಗಿದೆ. ದೇವತೆಗಳಂತೂ ವಿಶ್ವದ ಮಾಲೀಕರಾಗಿದ್ದರು. ಇದೂ ಸಹ
ಗೊತ್ತಿದೆ, ಅಂದಾಗ ಅಪಾರ ಖುಷಿಯಿರಬೇಕು. ಆದ್ದರಿಂದಲೇ ಅತೀಂದ್ರಿಯ ಸುಖವನ್ನು ಗೋಪಿವಲ್ಲಭನ
ಗೋಪ-ಗೋಪಿಯರಿಂದಲೇ ಕೇಳಿ ಎಂಬ ಗಾಯನವಿದೆ. ಶಿಕ್ಷಕರಂತೂ ಅಂತ್ಯದವರೆಗೆ ಓದಿಸುತ್ತಾರೆ ಅಂದಮೇಲೆ
ಅವರನ್ನು ಅಂತ್ಯದವರೆವಿಗೂ ನೆನಪು ಮಾಡಬೇಕು. ನಮಗೆ ಭಗವಂತನೇ ಓದಿಸುತ್ತಾರೆ ಮತ್ತು ಭಗವಂತನೇ
ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಹೇ ಮುಕ್ತಿದಾತ, ನಮ್ಮನ್ನು ದುಃಖದಿಂದ ಬಿಡಿಸಿ ಎಂದು
ಕರೆಯುತ್ತಾರೆ. ಸತ್ಯಯುಗದಲ್ಲಿ ದುಃಖವಿರುವುದೇ ಇಲ್ಲ. ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದು
ಹೇಳುತ್ತಾರೆ ಅಂದಮೇಲೆ ಶಾಂತಿಯು ಹಿಂದೆ ಎಂದಾದರೂ ಇತ್ತೆ? ಅದು ಯಾವ ಯುಗವಾಗಿತ್ತು? ಎಂದು ಕೇಳಿ
ಏಕೆಂದರೆ ಇದು ಯಾರಿಗೂ ಗೊತ್ತಿಲ್ಲ. ರಾಮ ರಾಜ್ಯವು ಸತ್ಯಯುಗ, ರಾವಣ ರಾಜ್ಯವು ಕಲಿಯುಗವಾಗಿದೆ.
ಇದನ್ನಂತೂ ತಿಳಿದುಕೊಂಡಿದ್ದೀರಲ್ಲವೆ. ಮಕ್ಕಳು ಅನುಭವವನ್ನು ತಿಳಿಸಬೇಕು. ಬೇಹದ್ದಿನ ತಂದೆಯು
ಬೇಹದ್ದಿನ ರಾಜ್ಯಭಾಗ್ಯವನ್ನು ಕೊಡುವವರು ಸಿಕ್ಕಿದರು ಅಂದಮೇಲೆ ಮತ್ತ್ಯಾವ ಅನುಭವವನ್ನು ಹೇಳಲಿ!
ಮತ್ತ್ಯಾವುದೇ ಮಾತಿಲ್ಲ. ಇಂತಹ ಖುಷಿಯು ಮತ್ತ್ಯಾವುದೂ ಇಲ್ಲ. ಯಾವಾಗಲಾದರೂ ಯಾರೊಂದಿಗೇ
ಮುನಿಸಿಕೊಂಡರೆ ಹೋಗಿ ವಾಸ್ತವದಲ್ಲಿ ಮನೆಯಲ್ಲಿ ಕುಳಿತು ಬಿಡಬಾರದು. ಹೀಗೆ ಕುಳಿತುಕೊಳ್ಳುವುದೆಂದರೆ
ತಮ್ಮ ಅದೃಷ್ಟದೊಂದಿಗೆ ಮುನಿಸಿಕೊಳ್ಳುವುದಾಗಿದೆ. ವಿದ್ಯೆಯೊಂದಿಗೆ ಮುನಿಸಿಕೊಂಡರೆ ಏನು
ಕಲಿಯುತ್ತೀರಿ! ತಂದೆಯು ಓದಿಸುವುದೇ ಬ್ರಹ್ಮಾರವರ ಮುಖಾಂತರ ಅಂದಾಗ ಒಬ್ಬರು ಇನ್ನೊಬ್ಬರೊಂದಿಗೆ
ಮುನಿಸಿಕೊಳ್ಳಬಾರದು. ಇದು ಮಾಯೆಯಾಗಿದೆ. ಆ ಯಜ್ಞದಲ್ಲಿ ಅಸುರರ ವಿಘ್ನಗಳಂತೂ ಬಂದೇ
ಬರುತ್ತವೆಯಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆ ಮತ್ತು ದಾದಾರವರ ನೆನಪು, ಪ್ರೀತಿ ಹಾಗೂ ಶುಭ
ರಾತ್ರಿ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ತಂದೆಯು
ಏನನ್ನು ತಿಳಿಸುತ್ತಾರೆಯೋ ಅದನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟು ಬಿಡಬಾರದು.
ಜ್ಞಾನದ ನಶೆಯಲ್ಲಿದ್ದು ಅತೀಂದ್ರಿಯ ಸುಖದ ಅನುಭವ ಮಾಡಬೇಕು.
2. ಎಲ್ಲರಿಗೆ ಸೆಕೆಂಡಿನಲ್ಲಿ ಮುಕ್ತಿ-ಜೀವನ್ಮುಕ್ತಿಯ ಅಧಿಕಾರವನ್ನು ಕೊಡುವುದಕ್ಕಾಗಿ ಇದೇ ಮಹಾ
ಮಂತ್ರವನ್ನು ತಿಳಿಸಬೇಕು – ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳ ತ್ಯಾಗ ಮಾಡಿ ತಂದೆಯನ್ನು ನೆನಪು
ಮಾಡಿ.
ವರದಾನ:
ಬ್ರಹ್ಮಾ
ತಂದೆಯನ್ನು ಫಾಲೋ ಮಾಡಿ ಮೊದಲನೇ ಗ್ರೇಡ್ ನಲ್ಲಿ ಬರುವಂತಹ ಸಮಾನ ಭವ.
ಎಲ್ಲಾ ಮಕ್ಕಳಿಗೂ
ಬ್ರಹ್ಮಾ ತಂದೆಯ ಜೊತೆ ಬಹಳ ಪ್ರೀತಿಯಿದೆ, ಪ್ರೀತಿಯ ನಿಶಾನಿ ಆಗಿದೆ ಸಮಾನರಾಗುವುದು. ಇದರಲ್ಲಿ ಸದಾ
ಲಕ್ಷ್ಯ ಇಡಿ ಮೊದಲು ನಾನು, ಈಷ್ರ್ಯೆಗೆ ವಶರಾಗಿ ಮೊದಲು ನಾನು ಅಲ್ಲ, ಅದು ನಷ್ಟ ಉಂಟು
ಮಾಡುವುದಾಗಿದೆ. ಆದರೆ ಫಾಲೋ ಫಾದರ್ ಮಾಡುವುದರಲ್ಲಿ ಮೊದಲು ನಾನು ಎಂದಿರಿ ಮತ್ತು ಮಾಡಿದಿರಿ. ಆಗ
ಮೊದಲಿನ ಜೊತೆ ನಾನು ಮೊದಲು ಎನ್ನುವುದರಲ್ಲಿಯೂ ಮೊದಲಿಗರಾಗಿ ಬಿಡುವಿರಿ. ಹೇಗೆ ಬ್ರಹ್ಮಾ ತಂದೆ
ನಂಬರ್ ಒನ್ ಆದರು. ಆ ರೀತಿ ಫಾಲೋ ಮಾಡುವವರೂ ಸಹಾ ನಂಬರ್ ಒನ್ ನ ಲಕ್ಷ್ಯ ಇಟ್ಟುಕೊಳ್ಳಿ. ಯಾರು
ಒಪ್ಪಿಕೊಳ್ಳುತ್ತಾರೆ ಅವರು ಮೊದಲನೇ ಅರ್ಜುನ ಆಗುತ್ತಾರೆ, ಎಲ್ಲರಿಗೂ ಮೊದಲಲ್ಲಿ ಬರುವ ಚಾನ್ಸ್ ಇದೆ.
ಮೊದಲನೇ ಗ್ರೇಡ್ ಬೇಹದ್ದಿನಲ್ಲಿದೆ ಕಡಿಮೆಯಲ್ಲ.
ಸ್ಲೋಗನ್:
ಸಫಲತಾ
ಮೂರ್ತಿಗಳಾಗಬೇಕಾದರೆ ಸ್ವ ಸೇವಾ ಮತ್ತು ಬೇರೆಯವರ ಸೇವೆ ಜೊತೆ-ಜೊತೆ ಮಾಡಿ.