10/10/18           Morning Murli       Om Shanti           BapDada Madhuban


“ಮಧುರ ಮಕ್ಕಳೇ – ಹೊಸ ಪ್ರಪಂಚಕ್ಕೋಸ್ಕರ ತಂದೆಯು ನಿಮಗೆ ಎಲ್ಲಾ ಹೊಸ ಮಾತುಗಳನ್ನು ತಿಳಿಸುತ್ತಾರೆ, ಹೊಸ ಮತವನ್ನು ಕೊಡುತ್ತಾರೆ, ಆದ್ದರಿಂದ ಅವರ ಗತಿ-ಮತವು ಭಿನ್ನವಾಗಿದೆ ಎಂದು ಗಾಯನ ಮಾಡಲಾಗುತ್ತದೆ.”


ಪ್ರಶ್ನೆ:
ದಯಾಹೃದಯಿ ತಂದೆಯು ಎಲ್ಲಾ ಮಕ್ಕಳಿಗೆ ಯಾವ ಮಾತಿನಲ್ಲಿ ಎಚ್ಚರಿಕೆ ನೀಡಿ ಶ್ರೇಷ್ಠ ಅದೃಷ್ಟವನ್ನು ರೂಪಿಸುತ್ತಾರೆ?

ಉತ್ತರ:
ಬಾಬಾ ಹೇಳುತ್ತಾರೆ - ಮಕ್ಕಳೇ, ಶ್ರೇಷ್ಠ ಅದೃಷ್ಟವನ್ನು ಮಾಡಿಕೊಳ್ಳಬೇಕೆಂದರೆ ಸರ್ವೀಸ್ ಮಾಡಿ. ಒಂದುವೇಳೆ ತಿಂದು ಮತ್ತು ಮಲಗಿ, ಸರ್ವೀಸ್ ಮಾಡಲಿಲ್ಲವೆಂದರೆ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಸೇವೆಯಿಲ್ಲದೇ ತಿನ್ನುವುದು ಹೊರೆಯಾಗುತ್ತದೆ. ಆದ್ದರಿಂದ ಬಾಬಾ ಎಚ್ಚರಿಕೆ ನೀಡುತ್ತಾರೆ – ಎಲ್ಲಾ ಆಧಾರವು ವಿದ್ಯೆಯ ಮೇಲಿದೆ. ನೀವು ಬ್ರಾಹ್ಮಣರು ಓದಬೇಕು ಮತ್ತು ಓದಿಸಬೇಕು, ಸತ್ಯ ಗೀತೆಯನ್ನು ತಿಳಿಸಬೇಕಾಗಿದೆ. ತಂದೆಗೆ ದಯೆ ಬರುವ ಕಾರಣ ಪ್ರತೀ ವಿಷಯದ ಮೇಲೆ ಬೆಳಕು ಹರಿಸುತ್ತಿರುತ್ತಾರೆ.

ಗೀತೆ:
ಯಾವ ದಿನದಿಂದ ಸೇರಿದೆವು ನಾವು ನೀವು............................

ಓಂ ಶಾಂತಿ.
ಆತ್ಮಿಕ ತಂದೆಯು ತಿಳಿಸುತ್ತಾರೆ. ಯಾವಾಗ ಮಕ್ಕಳಿಗೆ ಬೇಹದ್ದಿನ ತಂದೆಯು ಸಿಗುತ್ತಾರೆಯೋ ಆಗ ಪ್ರತಿಯೊಂದೂ ಹೊಸ ಮಾತುಗಳನ್ನು ತಿಳಿಸುತ್ತಾರೆ. ಏಕೆಂದರೆ ಈ ತಂದೆಯು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವವರಾಗಿದ್ದಾರೆ. ಮನುಷ್ಯರಂತೂ ಈ ಹೊಸ ಮಾತುಗಳನ್ನು ತಿಳಿಸಲು ಸಾಧ್ಯವಿಲ್ಲ. ತಂದೆಯು ಯಾರಿಗೆ ಸ್ವರ್ಗದ ರಚಯಿತನೆಂದು ಹೇಳಲಾಗುತ್ತದೆಯೋ ಆ ಬೇಹದ್ದಿನ ತಂದೆಯು ಸ್ವರ್ಗದ ಸ್ಥಾಪನೆ ಮಾಡುವವರಾಗಿದ್ದಾರೆ. ನರಕದ ಸ್ಥಾಪನೆ ಮಾಡುವವನು ರಾವಣನಾಗಿದ್ದಾನೆ – ಪಂಚ ವಿಕಾರಗಳು ಸ್ತ್ರೀಯಲ್ಲಿ, ಪಂಚ ವಿಕಾರಗಳು ಪುರುಷನಲ್ಲಿ. ಅವರಾಗಿರುವರು ರಾವಣ ಸಂಪ್ರದಾಯದವರು. ಅಂದರೆ ಇದು ಹೊಸ ಮಾತು ತಿಳಿಸಿದರಲ್ಲವೆ! ಸ್ವರ್ಗವನ್ನು ರಚಿಸುವವರು ಪರಮಪಿತ ಪರಮಾತ್ಮನಾಗಿದ್ದಾರೆ, ಯಾರಿಗೆ ರಾಮನೆಂದು ಹೇಳುತ್ತಾರೆ. ನರಕವನ್ನಾಗಿ ಮಾಡುವವನು ರಾವಣನಾಗಿದ್ದಾನೆ, ಯಾರ ಚಿತ್ರವನ್ನು ಮಾಡಿ ವರ್ಷ-ವರ್ಷವೂ ಸುಡುತ್ತಾರೆ. ಒಂದು ಬಾರಿ ಸುಟ್ಟು ಹೋದರೆ ಮತ್ತೆ ಅವರ ಪ್ರತಿಕೃತಿಯನ್ನು ನೋಡಲು ಕಂಡು ಬರುತ್ತದೆಯೇ! ಆ ಆತ್ಮವು ಹೋಗಿ ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತದೆ. ಮುಖ ಲಕ್ಷಣಗಳೆಲ್ಲವೂ ಬದಲಾಗುತ್ತವೆ. ಆದರೆ ಈ ರಾವಣನ ಅದೇ ಮುಖ ಲಕ್ಷಣಗಳನ್ನು ವರ್ಷ-ವರ್ಷವೂ ಮಾಡುತ್ತಾರೆ, ಸುಡುತ್ತಾರೆ. ವಾಸ್ತವದಲ್ಲಿ ಹೇಗೆ ನಿರಾಕಾರ ಶಿವ ತಂದೆಗೆ ಯಾವ ಮುಖ ಲಕ್ಷಣಗಳಿಲ್ಲ. ಹಾಗೆಯೇ ರಾವಣನಿಗೂ ಯಾವುದೇ ಮುಖ ಲಕ್ಷಣಗಳಿಲ್ಲ. ಈ ರಾವಣನಂತೂ ವಿಕಾರಗಳಾಗಿವೆ. ತಂದೆಯೇ ಇದನ್ನು ತಿಳಿಸುತ್ತಾರೆ. ಮನುಷ್ಯರು ಭಕ್ತಿಮಾರ್ಗದಲ್ಲಿ ಏನನ್ನು ಬಯಸುತ್ತಾರೆಯೋ, ಭಗವಂತನು ಭಕ್ತಿಯ ಫಲವನ್ನು ಕೊಡಲು ಅಥವಾ ರಕ್ಷಣೆ ಮಾಡುವುದಕ್ಕೋಸ್ಕರವೇ ಬರುತ್ತಾರೆ. ಏಕೆಂದರೆ ಭಕ್ತಿಯಲ್ಲಿ ಬಹಳ ದುಃಖವಿದೆ ಸುಖವು ಅಲ್ಪಕಾಲದ ಕ್ಷಣ ಭಂಗುರವಾಗಿದೆ. ಭಾರತವಾಸಿಗಳದು ಸಂಪೂರ್ಣ ದುಃಖಿ ಜೀವನವಾಗಿದೆ. ಯಾರ ಮಗುವಾದರೂ ಸತ್ತರೆ ಅಥವಾ ಯಾರಾದರೂ ದಿವಾಳಿಯಾದರೆ ಜೀವನವಂತೂ ದುಃಖಿಯಾಗಿರುತ್ತದೆಯಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಎಲ್ಲರ ಜೀವನವನ್ನು ಸುಖಿಯನ್ನಾಗಿ ಮಾಡಲು ಬರುತ್ತೇನೆ. ತಂದೆಯು ಬಂದು ಹೊಸ ಮಾತುಗಳನ್ನು ತಿಳಿಸುತ್ತಾರೆ, ನಾನು ಸ್ವರ್ಗದ ಸ್ಥಾಪನೆ ಮಾಡಲು ಬಂದಿದ್ದೇನೆ. ಅಲ್ಲಿ ನೀವು ವಿಕಾರದಲ್ಲಿ ಹೋಗುವುದಿಲ್ಲ, ಅದು ನಿರ್ವಿಕಾರಿ ರಾಜ್ಯ, ಇದು ವಿಕಾರಿ ರಾಜ್ಯವೆಂದು ತಿಳಿಸುತ್ತಾರೆ. ಒಂದುವೇಳೆ ನಿಮಗೆ ಸ್ವರ್ಗದ ರಾಜ್ಯವು ಬೇಕೆಂದರೆ ಅದನ್ನು ತಂದೆಯೇ ಸ್ಥಾಪನೆ ಮಾಡುತ್ತಾರೆ. ನರಕದ ರಾಜ್ಯವನ್ನು ರಾವಣನು ಸ್ಥಾಪನೆ ಮಾಡುತ್ತಾನೆ. ಅಂದಾಗ ನೀವು ಸ್ವರ್ಗದಲ್ಲಿ ಹೋಗುವಿರಾ? ವೈಕುಂಠದ ಮಹಾರಾಜ-ಮಹಾರಾಣಿ ವಿಶ್ವದ ಮಾಲೀಕರಾಗುತ್ತೀರಾ? ಎಂದು ತಂದೆಯು ಕೇಳುತ್ತಾರೆ. ಈ ಮಾತುಗಳು ಯಾವುದೇ ವೇದ ಶಾಸ್ತ್ರಗಳ ಮಾತುಗಳಲ್ಲ. ತಂದೆಯು ರಾಮ-ರಾಮ ಎಂದು ಹೇಳಿ ಅಥವಾ ಅಲ್ಲಿ-ಇಲ್ಲಿ ಹೋಗಿ ಅಲೆದಾಡಿ ಮೋಸ ಹೋಗಿ, ಮಂದಿರ-ತೀರ್ಥ ಸ್ಥಾನ ಮುಂತಾದುವುಗಳಿಗೆ ಹೋಗಿ ಗೀತಾ, ಭಾಗವತ ಇತ್ಯಾದಿಗಳನ್ನು ಓದಿ ಎಂದು ಹೇಳುವುದಿಲ್ಲ. ಸತ್ಯಯುಗದಲ್ಲಂತೂ ಶಾಸ್ತ್ರಗಳಿರುವುದಿಲ್ಲ. ನೀವು ಭಲೆ ಎಷ್ಟೇ ವೇದಶಾಸ್ತ್ರ ಇತ್ಯಾದಿಗಳನ್ನು ಓದಿ. ಯಜ್ಞ, ಜಪ-ತಪ, ದಾನ-ಪುಣ್ಯ ಇತ್ಯಾದಿಗಳನ್ನೇ ಮಾಡಿ, ಇದೆಲ್ಲವೂ ಮೋಸ ಹೋಗುವುದೇ ಆಗಿದೆ. ಇದರಿಂದೇನೂ ಪ್ರಾಪ್ತಿಯಿಲ್ಲ. ಭಕ್ತಿಮಾರ್ಗದಲ್ಲಿ ಯಾವುದೇ ಗುರಿ-ಉದ್ದೇಶವಿಲ್ಲ. ನಾನು ನಿಮಗೆ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ಈ ಸಮಯದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ. ಒಂದುವೇಳೆ ನೀವು ಯಾರಿಗಾದರೂ ನರಕವಾಸಿಗಳಾಗಿದ್ದೀರಿ ಅಂದರೆ ಕೋಪಿಸಿಕೊಳ್ಳುತ್ತಾರೆ. ವಾಸ್ತವದಲ್ಲಿ ನಿಮಗೆ ಗೊತ್ತಿದೆ - ಕಲಿಯುಗಕ್ಕೆ ನರಕ ಮತ್ತು ಸತ್ಯಯುಗಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ತಂದೆಯು ವೈಕುಂಠದ ರಾಜ್ಯ ಭಾಗ್ಯವನ್ನು ತೆಗೆದುಕೊಂಡು ಬಂದಿದ್ದಾರೆ. ತಿಳಿಸುತ್ತಾರೆ - ಸ್ವರ್ಗದ ಮಾಲೀಕರಾಗಬೇಕೆಂದರೆ ಅವಶ್ಯವಾಗಿ ಪವಿತ್ರರಾಗಬೇಕಾಗುವುದು. ಮೂಲ ಮಾತೆಲ್ಲವೂ ಪವಿತ್ರತೆಯದಾಗಿದೆ. ನಾವು ಎಂದೂ ಪವಿತ್ರರಾಗಿರಲು ಸಾಧ್ಯವಿಲ್ಲವೆಂದು ಕೆಲವು ಮನುಷ್ಯರು ಹೇಳುತ್ತಾರೆ. ಅರೆ! ನಿಮ್ಮನ್ನು ಸ್ವರ್ಗಕ್ಕೆ ಹೋಗುವುದಕ್ಕೋಸ್ಕರ ಪಾವನರನ್ನಾಗಿ ಮಾಡುತ್ತೇನೆ. ಮೊದಲು ಶಾಂತಿಧಾಮಕ್ಕೆ ಹೋಗಿ ನಂತರ ಸ್ವರ್ಗಕ್ಕೆ ಬರಬೇಕಾಗಿದೆ. ಎಲ್ಲಾ ಧರ್ಮದವರಿಗೂ ಸಹ ತಂದೆಯು ತಿಳಿಸುತ್ತಾರೆ - ದೇಹವನ್ನು ಬಿಟ್ಟು ಅಶರೀರಿಯಾಗಿ ಹೋಗಬೇಕಾಗಿದೆ. ಆದ್ದರಿಂದ ದೇಹದ ಅಭಿಮಾನವನ್ನು ಬಿಡಿ. ನಾನು ಕ್ರಿಶ್ಚಿಯನ್ ಆಗಿದ್ದೇನೆ, ಬೌದ್ಧಿಯನಾಗಿದ್ದೇನೆ, ಇದೆಲ್ಲವೂ ದೇಹದ ಧರ್ಮಗಳಾಗಿವೆ. ಆತ್ಮವಂತೂ ಮಧುರ ಮನೆಯಲ್ಲಿರುತ್ತದೆ.

ಅಂದಾಗ ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಹಿಂತಿರುಗಿ ಮುಕ್ತಿಧಾಮಕ್ಕೆ ಹೋಗುವಿರಾ? ಅಲ್ಲಿ ನೀವು ಶಾಂತಿಯಲ್ಲಿರುತ್ತೀರಿ. ತಿಳಿಸಿ - ನೀವು ಹಿಂತಿರುಗಿ ಹೇಗೆ ಹೋಗಬಲ್ಲಿರಿ? ತಂದೆಯಾದ ನನ್ನನ್ನು ಮತ್ತು ತಮ್ಮ ಮಧುರ ಮನೆಯನ್ನು ನೆನಪು ಮಾಡಿ, ದೇಹದ ಎಲ್ಲಾ ಧರ್ಮಗಳನ್ನು ಬಿಡಿ. ಇವರು ಚಿಕ್ಕಪ್ಪ, ಇವರು ದೊಡ್ಡಪ್ಪ, ಇವರು ಮಾವ ಆಗಿದ್ದಾರೆ, ಇವೆಲ್ಲಾ ದೇಹದ ಸಂಬಂಧಗಳನ್ನು ಬಿಡಿ, ತಮ್ಮನ್ನು ದೇಹೀ ಎಂದು ತಿಳಿಯಿರಿ ನನ್ನನ್ನು ನೆನಪು ಮಾಡಿ. ಇಷ್ಟೇ ಸಾಕು ಆದರೆ ಇದು ಪರಿಶ್ರಮವಾಗಿದೆ, ನಾನು ಮತ್ತೇನೂ ತಿಳಿಸುವುದಿಲ್ಲ. ಶಾಸ್ತ್ರ ಇತ್ಯಾದಿ ಯಾವುದೆಲ್ಲವನ್ನೂ ಓದಿದ್ದೀರೋ ಅದೆಲ್ಲವನ್ನೂ ಬಿಡಿ, ನಾನು ಹೊಸ ಪ್ರಪಂಚಕ್ಕೋಸ್ಕರ ಹೊಸ ಮತವನ್ನು ಕೊಡುತ್ತೇನೆ. ಆದ್ದರಿಂದಲೇ ಈಶ್ವರನ ಗತಿ-ಮತವು ಭಿನ್ನವಾಗಿದೆ ಎಂದು ಹೇಳಲಾಗುತ್ತದೆಯಲ್ಲವೆ. ಗತಿಯೆಂದು ಮುಕ್ತಿಗೆ ಹೇಳಲಾಗುತ್ತದೆ. ತಂದೆಯು ಹೊಸ ಮಾತುಗಳನ್ನು ತಿಳಿಸುತ್ತಾರಲ್ಲವೆ. ಮನುಷ್ಯರೂ ಸಹ ಯಾವಾಗ ಕೇಳುತ್ತಾರೆಯೋ ಆಗ ಇಲ್ಲಂತೂ ಹೊಸ ಮಾತುಗಳಾಗಿವೆ, ಶಾಸ್ತ್ರಗಳ ಯಾವುದೇ ಮಾತುಗಳಿಲ್ಲವೆಂದು ಹೇಳುತ್ತಾರೆ. ಹಾಗೆ ನೋಡಿದರೆ ಇವು ಗೀತೆಯ ಮಾತುಗಳಾಗಿವೆ. ಆದರೆ ಮನುಷ್ಯರು ಗೀತೆಯನ್ನೂ ಖಂಡನೆ ಮಾಡಿದ್ದಾರೆ. ನಾನೇನೂ ಗೀತಾ ಪುಸ್ತಕವನ್ನು ತೆಗೆದುಕೊಂಡಿಲ್ಲ. ಅವೆಲ್ಲವೂ ನಂತರದಲ್ಲಿ ರಚಿಸಲ್ಪಡುತ್ತದೆ. ನಾನು ನಿಮಗೆ ಸತ್ಯ ಜ್ಞಾನವನ್ನು ತಿಳಿಸುತ್ತೇನೆ, ನೀವು ನನ್ನನ್ನು ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳೆಂದು ಯಾರೂ ಹೇಳುವುದಿಲ್ಲ. ಇದನ್ನು ನಿರಾಕಾರ ತಂದೆಯೇ ಹೇಳುತ್ತಾರೆ. ನಿರಾಕಾರ ಆತ್ಮಗಳೊಂದಿಗೆ ಮಾತನಾಡುತ್ತಾರೆ. ಆತ್ಮವು ಕೇಳುತ್ತದೆ, ಈ ಶರೀರವು ಕರ್ಮೇಂದ್ರಿಯವಾಗಿದೆ. ಈ ಮಾತನ್ನೆಂದೂ ಯಾರೂ ತಿಳಿದುಕೊಳ್ಳುವುದಿಲ್ಲ. ಆ ಮನುಷ್ಯರು ಮನುಷ್ಯರಿಗೆ ತಿಳಿಸುತ್ತಾರೆ ಆದರೆ ಪರಮಾತ್ಮನು ಕುಳಿತು ಆತ್ಮಗಳಿಗೆ ತಿಳಿಸುತ್ತಾರೆ. ನಾವಾತ್ಮಗಳು ಈ ಕಿವಿಗಳ ಮೂಲಕ ಕೇಳುತ್ತೇವೆ. ಪರಮಪಿತ ಪರಮಾತ್ಮನೇ ಕುಳಿತು ತಿಳಿಸುತ್ತಾರೆಂಬುದು ನೀವು ಮಕ್ಕಳಿಗೆ ಗೊತ್ತಿದೆ. ಆದರೆ ಭಗವಂತನು ಹೇಗೆ ತಿಳಿಸುವರೆಂದು ಮನುಷ್ಯರು ಆಶ್ಚರ್ಯಚಕಿತರಾಗುತ್ತಾರೆ. ಅವರಂತೂ ಕೃಷ್ಣ ಭಗವಾನುವಾಚವೆಂದು ತಿಳಿಯುತ್ತಾರೆ. ಅರೆ! ಕೃಷ್ಣನಂತೂ ದೇಹಧಾರಿಯಾಗಿದ್ದ, ನಾನಂತೂ ದೇಹಧಾರಿಯಲ್ಲ, ನಾನು ವಿದೇಹಿಯಾಗಿದ್ದೇನೆ ಮತ್ತು ವಿದೇಹಿ ಆತ್ಮಗಳಿಗೆ ತಿಳಿಸುತ್ತೇನೆ. ಆದ್ದರಿಂದ ಈ ಹೊಸ ಮಾತುಗಳನ್ನು ಕೇಳಿದರೂ ಮನುಷ್ಯರು ಚಕಿತರಾಗಿ ಬಿಡುತ್ತಾರೆ. ಯಾವ ಮಕ್ಕಳು ಕಲ್ಪದ ಹಿಂದೆ ಕೇಳಿ ಹೋಗಿದ್ದಾರೆಯೋ ಅವರಿಗಂತೂ ಇಷ್ಟವಾಗುತ್ತದೆ, ಓದುತ್ತಾರೆ, ಮಮ್ಮಾ-ಬಾಬಾ ಎಂದು ಹೇಳುತ್ತಾರೆ. ಇದರಲ್ಲಿ ಯಾವುದೇ ಅಂಧಶ್ರದ್ಧೆಯ ಮಾತಿಲ್ಲ. ಲೌಕಿಕ ರೀತಿಯಲ್ಲಿಯೂ ಮಕ್ಕಳು ತಂದೆ-ತಾಯಿಗೆ ತಂದೆ-ತಾಯಿ ಎಂದು ಹೇಳುತ್ತಾರೆ. ಈಗ ನೀವು ಆ ಲೌಕಿಕ ತಂದೆ-ತಾಯಿಯನ್ನು ಬಿಟ್ಟು ಪಾರಲೌಕಿಕ ತಂದೆ-ತಾಯಿಯನ್ನು ನೆನಪು ಮಾಡಿ. ಈ ಪಾರಲೌಕಿಕ ತಂದೆ-ತಾಯಿಯು ನಿಮಗೆ ಅಮೃತ ಕೊಡುವ ಮತ್ತು ತೆಗೆದುಕೊಳ್ಳುವುದನ್ನು ಕಲಿಸುವವರಾಗಿದ್ದಾರೆ. ಅವರು ತಿಳಿಸುತ್ತಾರೆ - ಹೇ ಮಕ್ಕಳೇ, ಈಗ ವಿಷದ ವ್ಯವಹಾರವನ್ನು ಬಿಡಿ. ನಾನು ನಿಮಗೆ ಯಾವ ಶಿಕ್ಷಣವನ್ನು ಕೊಡುತ್ತೇನೆಯೋ ಅದನ್ನು ಒಬ್ಬರು ಇನ್ನೊಬ್ಬರಿಗೆ ಕೊಡುತ್ತೀರೆಂದರೆ ನೀವು ಸ್ವರ್ಗದ ಮಾಲೀಕರಾಗಿ ಬಿಡುತ್ತೀರಿ. ಸ್ವಲ್ಪ ಕೇಳಿದರೂ ಸಹ ಸ್ವರ್ಗದಲ್ಲಿ ಬಂದು ಬಿಡುತ್ತಾರೆ. ಆದರೆ ಅನ್ಯರನ್ನೂ ತಮ್ಮ ಸಮಾನರನ್ನಾಗಿ ಮಾಡಲಿಲ್ಲವೆಂದರೆ ಹೋಗಿ ದಾಸ-ದಾಸಿಯರಾಗುತ್ತಾರೆ. ದಾಸ-ದಾಸಿಯರಲ್ಲಿಯೂ ನಂಬರ್ವಾರ್ ಇರುತ್ತಾರೆ. ಮಕ್ಕಳನ್ನು ಸಂಭಾಲನೆ ಮಾಡುವ ದಾಸ-ದಾಸಿಯರು ಅವಶ್ಯವಾಗಿ ಅಲ್ಲಿ ಒಳ್ಳೆಯ ಪದವಿಯವರೇ ಆಗಿರುತ್ತಾರೆ. ಇಲ್ಲಿದ್ದರೂ ಸಹ ಒಂದುವೇಳೆ ಓದಲಿಲ್ಲವೆಂದರೆ ದಾಸ-ದಾಸಿಯರಾಗಿ ಬಿಡುತ್ತಾರೆ. ಪ್ರಜೆಗಳಲ್ಲಿಯೂ ನಂಬರ್ವಾರ್ ಇರುತ್ತಾರೆ. ಯಾರು ಒಳ್ಳೆಯ ರೀತಿಯಲ್ಲಿ ಓದುತ್ತಾರೆಯೋ ಅವರು ಒಳ್ಳೆಯ ಪದವಿಯನ್ನು ಪಡೆಯುತ್ತಾರೆ. ಪ್ರಜೆಗಳಲ್ಲಿ ಸಾಹುಕಾರ ಪ್ರಜೆಗಳಿಗೂ ದಾಸ-ದಾಸಿಯರಿರುತ್ತಾರೆ ಅಂದಮೇಲೆ ನಾವು ಏನಾಗಲು ಯೋಗ್ಯರಾಗಿದ್ದೇವೆ ಎಂಬುದನ್ನು ತಮ್ಮ ಚಹರೆಯನ್ನು ನೋಡಿಕೊಳ್ಳಬೇಕು. ಒಂದುವೇಳೆ ಯಾರಾದರೂ ತಂದೆಯನ್ನು ಕೇಳಿದರೆ ತಂದೆಯು ತಕ್ಷಣ ತಿಳಿಸಿ ಬಿಡುತ್ತಾರೆ. ಏಕೆಂದರೆ ತಂದೆಯಂತೂ ಎಲ್ಲವನ್ನೂ ತಿಳಿದುಕೊಂಡಿದ್ದಾರೆ ಮತ್ತು ನೀವು ಈ ಕಾರಣ ಇಂತಹ ಪದವಿಯನ್ನು ಪಡೆಯುತ್ತೀರಿ ಎಂದು ತಂದೆಯು ಸಿದ್ಧ ಮಾಡಿ ತಿಳಿಸಬಲ್ಲರು. ಭಲೆ ಸಮರ್ಪಣೆ ಮಾಡಿದ್ದೀರಿ ಅದರ ಲೆಕ್ಕವೂ ಇದೆ. ಸಮರ್ಪಣೆ ಮಾಡಿದ್ದೀರಿ ಆದರೆ ಏನೂ ಸರ್ವೀಸ್ ಮಾಡಲಿಲ್ಲ. ಕೇವಲ ತಿನ್ನುತ್ತಾ-ಕುಡಿಯುತ್ತಾ ಇದ್ದರೆ ಏನು ಕೊಟ್ಟಿರೋ ಅದನ್ನು ತಿಂದು ಸಮಾಪ್ತಿ ಮಾಡಿದಿರಿ. ಕೊಟ್ಟಿದ್ದೀರಿ ನಂತರ ತಿಂದಿರಿ. ಯಾವುದೇ ಸರ್ವೀಸ್ ಮಾಡಲಿಲ್ಲ. ಆದ್ದರಿಂದ ಮೂರನೆಯ ದರ್ಜೆಯ ದಾಸ-ದಾಸಿಯರಾಗುತ್ತೀರಿ. ಭಲೆ ಸರ್ವೀಸ್ ಮಾಡಿ ತಿಂದರೆ ಅದು ಸರಿ ಆದರೆ ಏನೂ ವ್ಯಾಪಾರ-ವ್ಯವಹಾರ ಮಾಡಲಿಲ್ಲ. ಸುಮ್ಮನೆ ತಿಂದು-ತಿಂದು ಸಮಾಪ್ತಿ ಮಾಡಿ ಬಿಡುತ್ತಾರೆಂದರೆ ಇನ್ನೂ ಹೆಚ್ಚಿನ ಹೊರೆಯು ಏರುತ್ತದೆ. ಇಲ್ಲಿದ್ದರೂ ಸಹ ಏನನ್ನು ಕೊಟ್ಟಿದ್ದೀರೋ ಅದನ್ನು ತಿಂದಿರಿ. ಇನ್ನೂ ಕೆಲವರು ಭಲೆ ಏನೂ ಕೊಡುವುದಿಲ್ಲ ಆದರೆ ತುಂಬಾ ಸರ್ವೀಸ್ ಮಾಡುತ್ತಾರೆಂದರೆ ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಮಮ್ಮಾ ಧನವೇನೂ ಕೊಡಲಿಲ್ಲ, ಆದರೆ ಉತ್ತಮ ಪದವಿಯನ್ನು ಪಡೆಯುತ್ತಾರೆ. ಏಕೆಂದರೆ ತಂದೆಯ ಅತ್ಮಿಕ ಸೇವೆಯನ್ನು ಮಾಡುತ್ತಾರೆ. ಅದರ ಲೆಕ್ಕವಂತೂ ಇದೆಯಲ್ಲವೆ. ನಾವಂತೂ ಎಲ್ಲವನ್ನೂ ಕೊಟ್ಟಿದ್ದೇವೆ, ಸಮರ್ಪಿತರಾಗಿದ್ದೇವೆ ಎಂಬ ನಶೆಯು ಕೆಲವರಿಗೆ ಇರುತ್ತದೆ. ಆದರೆ ತಿನ್ನುವುದಂತೂ ತಿನ್ನುತ್ತಾರಲ್ಲವೆ. ತಂದೆಯು ಎಲ್ಲಾ ಉದಾಹರಣೆಗಳನ್ನು ತಿಳಿಸುತ್ತಾರೆ. ಸೇವೆ ಮಾಡಲಿಲ್ಲ ಸುಮ್ಮನೆ ತಿಂದಿರಿ ಮತ್ತು ಸಮಾಪ್ತಿ ಮಾಡಿದಿರಿ. ಆದರೆ ಯಾರು ಮಲಗುವರೋ ಅವರು ಕಳೆದುಕೊಂಡರು ಎಂದು ಹೇಳುತ್ತಾರಲ್ಲವೆ. 8 ಗಂಟೆಗಳು ಸರ್ವೀಸ್ ಮಾಡದೇ ತಿನ್ನುವುದು ಹೊರೆಯಾಗಿದೆ. ತಿನ್ನುತ್ತಾ ಹೋದರೆ ಜಮಾ ಏನೂ ಆಗುವುದಿಲ್ಲ. ಮತ್ತೆ ಸೇವೆ ಮಾಡಬೇಕಾಗುವುದು. ತಂದೆಯಂತೂ ಎಲ್ಲವನ್ನೂ ತಿಳಿಸಬೇಕಾಗುತ್ತದೆಯಲ್ಲವೆ. ಆದರೆ ನಮಗೇಕೆ ತಿಳಿಸಲಿಲ್ಲವೆಂದು ಯಾರೂ ಹೇಳಬಾರದು ಆದ್ದರಿಂದ ತಿಳಿಸುತ್ತಾರೆ. ಈ ಬಾಬಾರವರು ತಮ್ಮ ಸರ್ವಸ್ವವನ್ನೂ ಕೊಟ್ಟರು ನಂತರ ಸೇವೆಯನ್ನೂ ಮಾಡುತ್ತಿರುತ್ತಾರೆ ಆದ್ದರಿಂದ ಪದವಿಯೂ ಶ್ರೇಷ್ಠವಾಗಿದೆ. ಸಮರ್ಪಿತರಾದರು ಮತ್ತು ಸುಮ್ಮನೆ ಕುಳಿತು ತಿಂದರು, ಸೇವೆ ಮಾಡಲಿಲ್ಲವೆಂದರೆ ಏನಾಗುವರು? ಶ್ರೀಮತದಂತೆ ನಡೆಯುವುದಿಲ್ಲ. ಬಾಬಾ ವಿಶೇಷವಾಗಿ ತಿಳಿಸುತ್ತಾರೆ ಅಂತ್ಯದಲ್ಲಿ ನಮ್ಮ ಪದವಿಯು ಹೀಗೇಕಾಯಿತು? ಎಂದು ಕೇಳುವುದಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಸೇವೆ ಮಾಡದೇ ಇರುವುದು, ಹಾಗೆಯೇ ತಿನ್ನುವುದು ಎಂದರೆ ಅಂತಹವರ ಅದೃಷ್ಟವು ಕಲ್ಪ-ಕಲ್ಪಾಂತರವು ಇದೇ ಆಗಿ ಬಿಡುವುದು. ಆದ್ದರಿಂದ ಬಾಬಾ ಎಚ್ಚರಿಕೆ ನೀಡುತ್ತಾರೆ. ಕಲ್ಪ-ಕಲ್ಪಾಂತರಕ್ಕೋಸ್ಕರ ನಮ್ಮ ಪದವಿಯು ಭ್ರಷ್ಟವಾಗಿ ಬಿಡುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ತಂದೆಗಂತೂ ದಯೆ ಬರುತ್ತದೆ, ಆದ್ದರಿಂದ ಪ್ರತಿಯೊಂದು ಮಾತಿನ ಬಗ್ಗೆ ಗಮನ ಸೆಳೆಯುತ್ತಾರೆ. ಸೇವೆ ಮಾಡಲಿಲ್ಲವೆಂದರೆ ಶ್ರೇಷ್ಠ ಪದವಿಯನ್ನೂ ಪಡೆಯುವುದಿಲ್ಲ. ಯಾರು ಗೃಹಸ್ಥದಲ್ಲಿರುತ್ತಾ ಸೇವೆ ಮಾಡುವರೋ ಅವರ ಪದವಿಯು ಬಹಳ ಶ್ರೇಷ್ಠವಾಗಿರುವುದು.

ಎಲ್ಲದರ ಆಧಾರವು ಓದುವುದು ಮತ್ತು ಓದಿಸುವುದರ ಮೇಲಿದೆ. ನೀವು ಬ್ರಾಹ್ಮಣರಾಗಿದ್ದೀರಿ ಅಂದಮೇಲೆ ಸತ್ಯ ಜ್ಞಾನವನ್ನು ತಿಳಿಸಬೇಕಾಗಿದೆ. ಅವರಂತೂ ಬಗಲಿನಲ್ಲಿ ಪುಸ್ತಕವನ್ನಿಟ್ಟುಕೊಂಡಿರುತ್ತಾರೆ. ಆದರೆ ನಿಮ್ಮ ಬಳಿ ಏನೂ ಇಲ್ಲ. ನೀವು ಸತ್ಯ ಬ್ರಾಹ್ಮಣರಾಗಿದ್ದೀರಿ. ಆದ್ದರಿಂದ ಸತ್ಯವನ್ನು ತಿಳಿಸಬೇಕು, ಸತ್ಯ ಪ್ರಾಪ್ತಿಯನ್ನು ಮಾಡಿಸಬೇಕಾಗಿದೆ. ಮತ್ತೆಲ್ಲರೂ ಮೋಸ ಮಾಡಿದರು ಆದರೆ ಅದೆಲ್ಲವೂ ಸುಳ್ಳೆಂದು ಬರೆಯಲಾಗುತ್ತದೆ. ತಂದೆಯು ಸತ್ಯವನ್ನು ತಿಳಿಸಿ ಸತ್ಯಖಂಡದ ಸ್ಥಾಪನೆ ಮಾಡುತ್ತಾರೆ. ಇವಂತೂ ತಿಳಿದುಕೊಳ್ಳುವ ಮಾತುಗಳಾಗಿವೆ. ವಿಶ್ವದ ಮಾಲೀಕರಾಗುವುದು ಕಡಿಮೆ ಮಾತೇನು! ಯಾರು ಬುದ್ಧಿವಂತ ಮಕ್ಕಳಿರುತ್ತಾರೆಯೋ ಅವರು ನಾವು ಚಿನ್ನದ ಇಟ್ಟಿಗೆಗಳಿಂದ ಇಂತಿಂತಹ ಮನೆಗಳನ್ನು ಕಟ್ಟುತ್ತೇವೆ, ಇಂತಹುದನ್ನು ಮಾಡುತ್ತೇವೆಂದು ಯೋಜನೆಗಳನ್ನು ಮಾಡುತ್ತಾರೆ. ಹೇಗೆ ಸಾಹುಕಾರರ ಮಕ್ಕಳು ದೊಡ್ಡವರಾಗುತ್ತಾ ಹೋದರೆ ನಾವು ಹೀಗೆ ಮಾಡುತ್ತೇವೆ, ನಾವು ಇಂತಹುದನ್ನು ಮಾಡುತ್ತೇವೆಂದು ಆಲೋಚಿಸಲು ತೊಡಗುತ್ತಾರೆ. ಹಾಗೆಯೇ ನೀವೂ ಸಹ ಭವಿಷ್ಯದಲ್ಲಿ ರಾಜಕುಮಾರರಾಗುತ್ತೀರೆಂದರೆ ನಾವು ಇಂತಿಂತಹ ಮಹಲುಗಳನ್ನು ಮಾಡುತ್ತೇವೆಂದು ಆಸಕ್ತಿಯಿರುತ್ತದೆಯಲ್ಲವೆ. ಆ ಆಸಕ್ತಿಯು ಮತ್ತ್ಯಾರಿಗೂ ಇರುವುದಿಲ್ಲ. ಯಾರು ಚೆನ್ನಾಗಿ ಓದಿ ಓದಿಸುತ್ತಾರೆಯೋ ಅವರಿಗೆ ಈ ವಿಚಾರಗಳು ನಡೆಯುತ್ತವೆ. ರಾಜ್ಯ ಪದವಿಯಂತೂ ಇರುತ್ತದೆಯಲ್ಲವೆ ಅಂದಾಗ ಬುದ್ಧಿಯಲ್ಲಿ ನಾವು ಎಷ್ಟು ಅಂಕಗಳಿಂದ ಉತ್ತೀರ್ಣರಾಗುತ್ತೇವೆಂದು ವಿಚಾರ ನಡೆಯಬೇಕು. ಇದು ಬಹಳ ದೊಡ್ಡ ಶಾಲೆಯಾಗಿದೆ. ಇದರಲ್ಲಿ ಕೋಟ್ಯಾಂತರ ಆತ್ಮಗಳು ಬರುತ್ತಾರೆ, ಅನೇಕರು ಬಂದು ಓದುತ್ತಾರೆ. ಇವೆಲ್ಲಾ ಮಾತುಗಳನ್ನು ಭಗವಂತನೇ ತಿಳಿಸುತ್ತಾರೆ. ಭಗವಂತನು ಒಬ್ಬರೇ ಆಗಿದ್ದಾರೆ, ಅವರನ್ನೇ ಮಾತಾಪಿತ ಎಂದು ಕರೆಯುತ್ತಾರೆ - ಅವರೇ ಬಂದು ದತ್ತು ಮಾಡಿಕೊಳುತ್ತಾರೆ. ಇವು ಎಷ್ಟೊಂದು ಗುಹ್ಯ ಮಾತುಗಳಾಗಿವೆ ಅಂದರೆ ಇದು ಹೊಸ ಶಾಲೆಯಾಗಿದೆ, ಓದಿಸುವಂತಹವರು ಹೊಸಬರಾಗಿದ್ದಾರೆ. ಎಷ್ಟೊಂದು ಚೆನ್ನಾಗಿ ತಿಳಿಸುತ್ತಾರೆ ಆದರೆ ಯಾರು ಯೋಗ್ಯರಾಗುತ್ತಾರೆ, ತಂದೆ-ತಾಯಿಯನ್ನು ಯಾರು ನೆನಪು ಮಾಡುತ್ತಾರೆಯೋ ಅವರ ಜೋಳಿಗೆಯೇ ತುಂಬುತ್ತದೆ. ತಂದೆ-ತಾಯಿಯನ್ನೆಂದು ಯಾರೂ ಮರೆಯುವುದಿಲ್ಲ ಅಂದಮೇಲೆ ಸಂಗಮಯುಗಿ ಮಕ್ಕಳು ತಂದೆಯನ್ನು ಹೇಗೆ ಮರೆಯುತ್ತೀರಿ. ಒಳ್ಳೆಯದು.

ಪ್ರಪಂಚವು ಕೋಲಾಹಲದಲ್ಲಿದೆ ಮತ್ತು ನೀವು ಮಕ್ಕಳು ಮೌನವಾಗಿದ್ದೀರಿ. ಮೌನದಲ್ಲಿ ಶಾಂತಿಯಿದೆ, ಶಾಂತಿಯಲ್ಲಿ ಸುಖವಿದೆ. ನಿಮಗೆ ಗೊತ್ತಿದೆ - ಮುಕ್ತಿಯ ನಂತರ ಮತ್ತೆ ಜೀವನ್ಮುಕ್ತಿಯಾಗಿದೆ. ನೀವು ಮಕ್ಕಳಿಗೆ ಕೇವಲ ಎರಡು ಅಕ್ಷರಗಳು ನೆನಪಿದೆ - ಅಲ್ಫ್ ಅಲ್ಲಾ ಮತ್ತು ಬೇ ಬಾದ್ಶಾಹಿ ಕೇವಲ ಒಬ್ಬ ಅಲ್ಫ್ ನನ್ನು ನೆನಪು ಮಾಡುವುದರಿಂದ ಬಾದಶಾಹಿಯು ಸಿಕ್ಕಿ ಬಿಟ್ಟಿತು. ಬಾಕಿ ಮತ್ತೇನು ಉಳಿಯಿತು? ಉಳಿದದ್ದು ಮಜ್ಜಿಗೆ. ಅಲ್ಫ್ ಸಿಕ್ಕಿದರೆಂದರೆ ಬೆಣ್ಣೆಯು ಸಿಕ್ಕಿತು ಎಂದರ್ಥ ಅಂದರೆ ಉಳಿದದ್ದು ಮಜ್ಜಿಗೆಯಾಗಿದೆಯಲ್ಲವೆ? ನಾವು ಮೌನವಾಗಿರುತ್ತೇವೆ. ನಮಗೆ ಗೊತ್ತಿದೆ - ನಾವು ಮೌನವಾಗಿದ್ದು ಶ್ರೀಮತದಂತೆ ನಡೆಯುತ್ತೇವೆ. ಆದರೆ ಆಶ್ಚರ್ಯವೇನೆಂದರೆ ಮಕ್ಕಳು ತಂದೆಯನ್ನೂ ಸಹ ಪೂರ್ಣ ನೆನಪು ಮಾಡುವುದಿಲ್ಲ. ಮರೆತು ಹೋಗುತ್ತಾರೆ, ಮಾಯೆಯು ಬಿರುಗಾಳಿಯನ್ನು ತರುತ್ತದೆ. ಮನ್ಮನಾಭವ, ಮಧ್ಯಾಜೀಭವ ಎಂದು ತಂದೆಯು ಹೇಳುತ್ತಾರೆ. ಗೀತೆಯಲ್ಲಿಯೂ ಈ ಅಕ್ಷರವಿದೆ - ನೀವು ಗೀತಾಪಾಠಿಗಳನ್ನೂ ಸಹ ಮನ್ಮಾನಭವ, ಮಧ್ಯಾಜೀಭವದ ಅರ್ಥವೇನೆಂದು ಕೇಳಬೇಕು. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮಗೆ ರಾಜ್ಯಭಾಗ್ಯವು ಸಿಗುವುದು. ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ದೇಹೀ ಆಗಿ ಬಿಡಿ ಮತ್ತು ತಂದೆಯನ್ನು ನೆನಪು ಮಾಡಿ ಆಗ ರಾಜ್ಯಭಾಗ್ಯವು ಸಿಗುವುದು. ಗ್ರಂಥದಲ್ಲಿಯೂ ಸಹ ಭಗವಂತನನ್ನು ಜಪಿಸಿದರೆ ರಾಜ್ಯವು ಸಿಗುವುದು, ಸತ್ಯ ಖಂಡದ ರಾಜಧಾನಿಯು ಸಿಗುತ್ತದೆ ಎಂದು ಹೇಳುತ್ತಾರೆ. ನಾವು ಪ್ರಪಂಚದಿಂದ ಸಂಪೂರ್ಣ ಭಿನ್ನರಾಗಿದ್ದೇವೆ, ಮತ್ತ್ಯಾರೂ ಹೀಗೆ ಹೇಳಲು ಸಾಧ್ಯವಿಲ್ಲ. ತಂದೆಯು ನಿಮಗೆ ಹೊಸ ಮಾತುಗಳನ್ನು ತಿಳಿಸುತ್ತಾರೆ, ಉಳಿದವರೆಲ್ಲರೂ ಹಳೆಯ ಮಾತುಗಳನ್ನೇ ತಿಳಿಸುತ್ತಾರೆ. ಮಾತುಗಳು ಬಹಳ ಸಹಜವಾಗಿದೆ. ತಂದೆಯ ಮಗುವಾದರೆ ರಾಜ್ಯಭಾಗ್ಯವು ಸಿಗುವುದು ಆದರೂ ಸಹ ಪುರುಷಾರ್ಥವಂತೂ ಮಾಡಬೇಕಾಗುತ್ತದೆ. ಎಷ್ಟು ತಮ್ಮ ಸಮಾನರನ್ನಾಗಿ ಮಾಡುವ ಸೇವೆ ಮಾಡುತ್ತೀರೋ ಅಷ್ಟು ಫಲ ಸಿಗುವುದು. ಮನುಷ್ಯರು ತಂದೆಯನ್ನಾಗಲಿ, ಅವರಿಂದ ಸಿಗುವ ಆಸ್ತಿಯನ್ನಾಗಲಿ ತಿಳಿದುಕೊಂಡಿಲ್ಲ. ಬೇ ಎಂದರೆ ಬಾದಶಾಹಿಯ ಬೆಣ್ಣೆ. ಕೃಷ್ಣನ ಬಾಯಲ್ಲೂ ಸಹ ಬೆಣ್ಣೆಯನ್ನು ತೋರಿಸುತ್ತಾರಲ್ಲವೆ. ಅಂದಮೇಲೆ ಅವಶ್ಯವಾಗಿ ಸ್ವರ್ಗವನ್ನು ಸ್ಥಾಪನೆ ಮಾಡುವ ತಂದೆಯೇ ರಾಜ್ಯಭಾಗ್ಯವನ್ನು ಕೊಟ್ಟಿರಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಹಿಂತಿರುಗಿ ಮಧುರ ಮನೆಗೆ ಹೋಗಬೇಕಾಗಿದೆ, ಆದ್ದರಿಂದ ದೇಹದ ಧರ್ಮಗಳನ್ನು, ಸಂಬಂಧಗಳನ್ನು ಮರೆತು ಸ್ವಯಂ ಅನ್ನು ದೇಹೀ ಎಂದು ತಿಳಿಯಬೇಕಾಗಿದೆ. ಇದೇ ಅಭ್ಯಾಸದಲ್ಲಿರಬೇಕಾಗಿದೆ.

2. ತಂದೆಯಿಂದ ಯಾವ ಶಿಕ್ಷಣವು ಸಿಕ್ಕಿದೆ, ಅದನ್ನು ಅನ್ಯರಿಗೂ ಕೊಡಬೇಕು, ತಮ್ಮ ಸಮಾನರನ್ನಾಗಿ ಮಾಡಬೇಕಾಗಿದೆ. ಅವಶ್ಯವಾಗಿ 8 ಗಂಟೆಗಳು ಸೇವೆ ಮಾಡಬೇಕಾಗಿದೆ.

ವರದಾನ:
ದೃಷ್ಠಿಯ ಮುಖಾಂತರ ಶಕ್ತಿ ಪಡೆಯುವಂತಹ ಮತ್ತು ಶಕ್ತಿ ಕೊಡುವಂತಹ ಮಹಾದಾನಿ, ಿ ಮೂರ್ತಿ ಭವ.

ಮುಂದೆ ಹೋದಂತೆ ಯಾವಾಗ ವಾಣಿಯ ಮೂಲಕ ಸೇವೆ ಮಾಡುವ ಸಮಯ ಅಥವಾ ಸಂದರ್ಭ ಇರುವುದಿಲ್ಲ. ಆಗ ವರದಾನಿ, ಮಹಾದಾನಿ ದೃಷ್ಠಿಯ ಮುಖಾಂತರವೇ ಶಾಂತಿಯ ಶಕ್ತಿ, ಪ್ರೇಮ, ಸುಖ ಹಾಗೂ ಆನಂದದ ಶಕ್ತಿಯ ಅನುಭವ ಮಾಡಲು ಸಾಧ್ಯ. ಹೇಗೆ ಜಡ ಮೂರ್ತಿಗಳ ಮುಂದೆ ಹೋದಾಗ ಮುಖದ ಮುಖಾಂತರ ವೈಭ್ರೇಷನ್ ಸಿಗುವುದು, ಕಣ್ಣುಗಳಿಂದ ದಿವ್ಯತೆಯ ಅನುಭೂತಿಯಾಗುವುದು. ಆದ್ದರಿಂದ ನೀವು ಯಾವಾಗ ಚೈತನ್ಯದಲ್ಲಿ ಈ ಸೇವೆ ಮಾಡಿದ್ದರಿಂದ ಜಡ ಮೂರ್ತಿಗಳಾದಿರಿ. ಆದ್ದರಿಂದ ದೃಷ್ಠಿಯ ಮುಖಾಂತರ ಶಕ್ತಿ ಪಡೆಯುವಂತಹ ಮತ್ತು ಕೊಡುವಂತಹ ಅಭ್ಯಾಸ ಮಾಡಿ ಆಗ ಮಹಾದಾನಿ, ವರದಾನಿ ಮೂರ್ತಿಗಳಾಗುವಿರಿ.

ಸ್ಲೋಗನ್:
ಮುಖ ಲಕ್ಷಣದಲ್ಲಿ ಸುಖ-ಶಾಂತಿ ಮತ್ತು ಖುಶಿಯ ಹೊಳಪು ಇದ್ದಲ್ಲಿ ಅನೇಕ ಆತ್ಮಗಳ ಭವಿಷ್ಯ ಶ್ರೇಷ್ಠವನ್ನಾಗಿ ಮಾಡಲು ಸಾಧ್ಯ.