20/10/18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ನೆನಪಿನಲ್ಲಿರುವ ಅಂತಹ ಅಭ್ಯಾಸ ಮಾಡಿ, ಅದರಿಂದ ಅಂತ್ಯದಲ್ಲಿ ಒಬ್ಬ ತಂದೆಯ ವಿನಃ ಬೇರೆ ಯಾರೂ
ನೆನಪಿಗೆ ಬರಬಾರದು.”
ಪ್ರಶ್ನೆ:
ಯಾವ ಒಂದು
ಶ್ರೀಮತವನ್ನು ಪಾಲನೆ ಮಾಡುವುದರಿಂದ ನೀವು ಮಕ್ಕಳು ಅದೃಷ್ಟವಂತರಾಗಿ ಬಿಡುತ್ತೀರಿ?
ಉತ್ತರ:
ತಂದೆಯ ಶ್ರೀಮತವಾಗಿದೆ - ಮಕ್ಕಳೇ, ನಿದ್ರೆಯನ್ನು ಗೆಲ್ಲುವವರಾಗಿ, ಮುಂಜಾನೆಯ ಸಮಯವು ಬಹಳ
ಚೆನ್ನಾಗಿರುತ್ತದೆ. ಆ ಸಮಯದಲ್ಲಿ ಎದ್ದು ನನ್ನನ್ನು ನೆನಪು ಮಾಡಿದರೆ ನೀವು ಭಾಗ್ಯವಂತರಾಗಿ
ಬಿಡುತ್ತೀರಿ. ಒಂದುವೇಳೆ ಬೆಳಿಗ್ಗೆ-ಬೆಳಿಗ್ಗೆ ಏಳುವುದಿಲ್ಲವೋ ಯಾರು ಮಲಗುವರೋ ಅವರು
ಕಳೆದುಕೊಳ್ಳುವರು. ಕೇವಲ ಮಲಗುವುದು ಮತ್ತು ತಿನ್ನುವುದು ಇದು ಕಳೆದುಕೊಳ್ಳುವುದಾಗಿದೆ ಆದ್ದರಿಂದ
ಮುಂಜಾನೆ ಏಳುವ ಅಭ್ಯಾಸವನ್ನಿಟ್ಟುಕೊಳ್ಳಿ.
ಗೀತೆ:
ನೀನು
ರಾತ್ರಿಯನ್ನು ಮಲಗುತ್ತಾ ಕಳೆದೆ, ದಿನವನ್ನು ತಿನ್ನುತ್ತಾ ಕಳೆದೆ.....
ಓಂ ಶಾಂತಿ.
ಈ ಗೀತೆಯು ಮಕ್ಕಳ ಪ್ರತಿ ಇದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಿನ್ನುವುದು ಮತ್ತು ಮಲಗುವುದು,
ಇದು ಮಾತ್ರವೇ ನಿಮ್ಮ ಜೀವನವಲ್ಲ. ಯಾವಾಗ ನಿಮಗೆ ಈ ಅವಿನಾಶಿ ಜ್ಞಾನರತ್ನಗಳ ದಾನ ಸಿಗುತ್ತಿದೆಯೋ,
ಜೋಳಿಗೆಯನ್ನು ತುಂಬಿಸಿಕೊಳ್ಳುತ್ತಿದ್ದೀರಿ ಅಂದಮೇಲೆ ಮಲಗುವುದು ಮತ್ತು ತಿನ್ನುವುದಂತೂ
ಕಳೆದುಕೊಳ್ಳುವುದಾಗಿದೆ. ಭಕ್ತಿಮಾರ್ಗದಲ್ಲಿಯೂ ಮತ್ತು ಜ್ಞಾನ ಮಾರ್ಗದಲ್ಲಿಯೂ ಮುಂಜಾನೆ
ಏಳುವುದಕ್ಕೆ ಬಹಳ ಮಹಿಮೆಯಿದೆ, ಏಕೆಂದರೆ ಮುಂಜಾನೆಯ ಸಮಯದಲ್ಲಿ ಬಹಳ ಶಾಂತಿಯಿರುತ್ತದೆ.
ಆತ್ಮಗಳೆಲ್ಲರೂ ತಮ್ಮ ಸ್ವಧರ್ಮದಲ್ಲಿರುತ್ತಾರೆ, ಅಶರೀರಿಯಾಗಿ ವಿಶ್ರಾಂತಿಯನ್ನು
ಪಡೆಯುತ್ತಿರುತ್ತಾರೆ. ಆ ಸಮಯದಲ್ಲಿ ಬಹಳ ನೆನಪಿರುತ್ತದೆ. ದಿನದಲ್ಲಂತೂ ಮಾಯೆಯ ಪ್ರಭಾವವಿರುತ್ತದೆ,
ಆದ್ದರಿಂದ ಇದೊಂದೇ ಸಮಯವು ಚೆನ್ನಾಗಿದೆ. ಈಗ ನಾವು ಕವಡೆಯಿಂದ ವಜ್ರ ಸಮಾನರಾಗುತ್ತಿದ್ದೇವೆ.
ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನೀವು ನನ್ನ ಮಕ್ಕಳಾಗಿದ್ದೀರಿ, ನಾನು ನಿಮ್ಮ ಮಗುವಾಗಿದ್ದೇನೆ.
ತಂದೆಯು ಮಗುವಾಗುತ್ತಾರೆ - ಇದೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ತಂದೆಯು ಮಕ್ಕಳಿಗೆ
ಆಸ್ತಿಯನ್ನು ಕೊಡುತ್ತಾರೆ, ಹಾಗೆ ನೋಡಿದರೆ ನಾನಂತೂ ವ್ಯಾಪಾರಿಯಾಗಿದ್ದೇನೆ. ನಿಮ್ಮ ಕವಡೆಯ
ಸಮಾನವಾದ ತನು-ಮನವೆಲ್ಲವೂ ಕಾಸಿಗೂ ಬೆಲೆಯಿಲ್ಲದ್ದಾಗಿದೆ. ಅಂತಹುದೆಲ್ಲವನ್ನೂ ತೆಗೆದುಕೊಂಡು ನಂತರ
ನಿಮಗೇ ಕೊಟ್ಟು ಬಿಡುತ್ತೇನೆ - ಮಕ್ಕಳೇ, ನಿಮಿತ್ತರಾಗಿ ಸಂಭಾಲನೆ ಮಾಡಿ. ನಾನು ನಿಮಗೆ
ಬಲಿಹಾರಿಯಾಗುತ್ತೇನೆ, ಅರ್ಪಣೆಯಾಗುತ್ತೇನೆ. ನನ್ನವರಂತೂ ಒಬ್ಬರ ವಿನಃ ಮತ್ತ್ಯಾರೂ ಇಲ್ಲವೆಂದು
ಹಾಡುತ್ತಾ ಬಂದಿದ್ದೀರಿ. ಏಕೆಂದರೆ ಎಲ್ಲರೂ ಪ್ರಿಯತಮೆಯರಾಗಿದ್ದೀರಿ. ಆದ್ದರಿಂದ ಒಬ್ಬರೇ
ಪ್ರಿಯತಮನನ್ನು ನೆನಪು ಮಾಡುತ್ತೀರಿ. ದೇಹ ಸಹಿತ ಎಲ್ಲಾ ಸಂಬಂಧಗಳನ್ನು ಮರೆಯುತ್ತಾ, ಮರೆಯುತ್ತಾ
ಒಬ್ಬರ ನೆನಪೇ ಇರಲಿ - ಅಂತ್ಯದಲ್ಲಿ ಈ ಶರೀರವಾಗಲಿ, ಅನ್ಯರ್ಯಾರೂ ಸಹ ನೆನಪಿಗೆ ಬರಬಾರದು.
ಇಷ್ಟೊಂದು ಅಭ್ಯಾಸ ಮಾಡಬೇಕಾಗಿದೆ. ಮುಂಜಾನೆಯ ಸಮಯವು ಬಹಳ ಚೆನ್ನಾಗಿದೆ. ನಿಮ್ಮದು ಇದು
ಸತ್ಯ-ಸತ್ಯವಾದ ಯಾತ್ರೆಯಾಗಿದೆ. ಅಲ್ಲಂತೂ ಜನ್ಮ-ಜನ್ಮಾಂತರಗಳಿಂದ ಯಾತ್ರೆಗಳನ್ನು ಮಾಡುತ್ತಾ
ಬಂದಿರಿ. ಆದರೆ ಮುಕ್ತಿಯನ್ನಂತೂ ಪಡೆಯಲಿಲ್ಲ ಅಂದಮೇಲೆ ಅದು ಸುಳ್ಳು ಯಾತ್ರೆಯಾಯಿತಲ್ಲವೆ. ಇದು
ಆತ್ಮಿಕ ಮತ್ತು ಸತ್ಯ ಮುಕ್ತಿ-ಜೀವನ್ಮುಕ್ತಿಯ ಯಾತ್ರೆಯಾಗಿದೆ. ಮನುಷ್ಯರು ತೀರ್ಥ ಯಾತ್ರೆಗೆ
ಹೋಗುತ್ತಾರೆಂದರೆ ಅಮರನಾಥ, ಬದರೀನಾಥ ನೆನಪಿರುತ್ತದೆಯಲ್ಲವೆ. ವಿಶೇಷವಾಗಿ ನಾಲ್ಕು ಧಾಮಗಳೆಂದು
ಹೇಳುತ್ತಾರೆ. ನೀವು ಎಷ್ಟು ಧಾಮಗಳನ್ನು ಸುತ್ತಿರಬಹುದು. ಎಷ್ಟು ಭಕ್ತಿಯನ್ನು ಮಾಡಿರಬಹುದು!
ಅರ್ಧಕಲ್ಪ ಮಾಡುತ್ತಾ ಬಂದಿದ್ದೀರಿ. ಈಗ ಈ ಮಾತುಗಳನ್ನು ಯಾರೂ ತಿಳಿದುಕೊಂಡೇ ಇಲ್ಲ. ತಂದೆಯೇ ಬಂದು
ಬಿಡುಗಡೆ ಮಾಡಿ ನಂತರ ಮಾರ್ಗದರ್ಶಕನಾಗಿ ಜೊತೆ ಕರೆದುಕೊಂಡು ಹೋಗುತ್ತಾರೆ. ಇವರು ಎಷ್ಟು
ವಿಚಿತ್ರವಾದ ಮಾರ್ಗದರ್ಶಕನಾಗಿದ್ದಾರೆ, ಮಕ್ಕಳನ್ನು ಮುಕ್ತಿ-ಜೀವನ್ಮುಕ್ತಿಧಾಮಕ್ಕೆ ಕರೆದುಕೊಂಡು
ಹೋಗುತ್ತಾರೆ. ಇಂತಹ ಮಾರ್ಗದರ್ಶಕರು ಯಾರೂ ಇರುವುದಿಲ್ಲ. ಸನ್ಯಾಸಿಗಳು ಕೇವಲ ಮುಕ್ತಿಧಾಮವೆಂದು
ಹೇಳುತ್ತಾರೆ, ಜೀವನ್ಮುಕ್ತಿಯ ಶಬ್ಧವು ಅವರ ಬಾಯಿಂದ ಬರುವುದೇ ಇಲ್ಲ. ಅದನ್ನು ಅವರು ಕಾಗವಿಷ್ಟ
ಸಮಾನ ಅಲ್ಪಕಾಲದ ಸುಖವೆಂದು ತಿಳಿಯುತ್ತಾರೆ. ನೀವು ಮಕ್ಕಳಿಗೆ ಗೊತ್ತಿದೆ, ತಂದೆಯೇ
ದುಃಖಹರ್ತ-ಸುಖಕರ್ತನಾಗಿದ್ದಾರೆ. ಹೇ ಮಾತಾಪಿತಾ, ಯಾವಾಗ ನಾವು ನಿಮ್ಮ ಬಾಲಕರಾಗುತ್ತೇವೆಯೋ ಆಗ
ನಮ್ಮ ಎಲ್ಲ ದುಃಖವು ದೂರವಾಗಿ ಬಿಡುತ್ತದೆ. ಅರ್ಧಕಲ್ಪ ನಾವು ಸುಖಿಯಾಗಿ ಬಿಡುತ್ತೇವೆಂದು
ಬುದ್ಧಿಯಲ್ಲಿರುತ್ತದೆಯಲ್ಲವೆ. ಆದರೆ ವ್ಯಾಪಾರ ವ್ಯವಹಾರಗಳಲ್ಲಿ ಹೋದಾಗ ಮರೆತು ಬಿಡುತ್ತೀರಿ.
ಮುಂಜಾನೆ ಎದ್ದೇಳುವುದಿಲ್ಲ. ಯಾರು ಮಲಗುವರೋ ಅವರು ಕಳೆದುಕೊಳ್ಳುವರು.
ನೀವು ತಿಳಿದಿದ್ದೀರಿ - ನಮಗೆ ಸರಿಯಾದ ವಜ್ರ ಸಮಾನವಾದ ಜೀವನವು ಸಿಕ್ಕಿದೆ. ಒಂದುವೇಳೆ ಈಗಲೂ ಸಹ
ಮುಂಜಾನೆ ನಿದ್ರೆಯಿಂದ ಎದ್ದೇಳುವುದಿಲ್ಲವೆಂದರೆ ಅವರು ಅದೃಷ್ಟವಂತರಲ್ಲವೆಂದು ತಿಳಿಯಲಾಗುತ್ತದೆ.
ಬೆಳಗ್ಗೆ ಎದ್ದು ಅತೀ ಪ್ರಿಯ ತಂದೆಯನ್ನು, ಪ್ರಿಯತಮನನ್ನು ನೆನಪು ಮಾಡುವುದಿಲ್ಲ. ಅರ್ಧ ಕಲ್ಪದಿಂದ
ಪ್ರಿಯತಮನು ಅಗಲಿ ಹೋಗಿದ್ದಾರೆ ಮತ್ತು ತಂದೆಯನ್ನು ನೀವು ಇಡೀ ಕಲ್ಪ ಮರೆತು ಹೋಗುತ್ತೀರಿ. ನಂತರ
ಭಕ್ತಿಮಾರ್ಗದಲ್ಲಿ ನೀವು ಪ್ರಿಯತಮನ ರೂಪದಲ್ಲಿ, ಹಾಗೂ ತಂದೆಯ ರೂಪದಲ್ಲಿ ನೆನಪು ಮಾಡುತ್ತೀರಿ.
ಪ್ರಿಯತಮೆಯು ಪ್ರಿಯತಮನನ್ನು ನೆನಪು ಮಾಡುತ್ತಾಳೆ ಮತ್ತು ಅವರನ್ನು ತಂದೆಯೆಂತಲೂ ಹೇಳಲಾಗುತ್ತದೆ.
ಈಗ ತಂದೆಯು ಸಮ್ಮುಖದಲ್ಲಿದ್ದಾರೆಂದಮೇಲೆ ಅವರ ಶ್ರೀಮತದಂತೆ ನಡೆಯಬೇಕು. ಒಂದುವೇಳೆ ಶ್ರೀಮತದಂತೆ
ನಡೆಯದಿದ್ದರೆ ಅವರು ಬೀಳುತ್ತಾರೆ. ಶ್ರೀಮತವೆಂದರೆ ಶಿವ ತಂದೆಯ ಮತವಾಗಿದೆ. ಯಾರ ಮತವು
ಸಿಗುತ್ತಿದೆಯೋ ನಮಗೇನು ಗೊತ್ತಿದೆ ಎಂದು ತಿಳಿಯಬಾರದು. ತಿಳಿದುಕೊಳ್ಳಿ, ಒಂದುವೇಳೆ ಇವರ (ಬ್ರಹ್ಮಾ)
ಮತವಾದರೂ ಸಹ ಶಿವ ತಂದೆಯು ಜವಾಬ್ಧಾರರಾಗಿದ್ದಾರೆ. ಹೇಗೆ ಲೌಕಿಕ ರೀತಿಯಲ್ಲಿಯೂ ಮಕ್ಕಳಿಗೆ ತಂದೆಯು
ಜವಾಬ್ಧಾರರಾಗಿರುತ್ತಾರೆ, ಮಕ್ಕಳು ತಂದೆಯನ್ನು ಪ್ರತ್ಯಕ್ಷ ಮಾಡುತ್ತಾರೆಯೋ ಹಾಗೆಯೇ ಈ
ಬ್ರಹ್ಮಾರವರ ಶರೀರವೂ ಸಹ ತಂದೆಯನ್ನು ಪ್ರತ್ಯಕ್ಷ ಮಾಡುತ್ತದೆ, ಇವರು ಅನನ್ಯ ಮಗುವಾಗಿದ್ದಾರೆ.
ಒಳ್ಳೊಳ್ಳೆಯ ಮಕ್ಕಳಿದ್ದಾರೆ, ಅವರು ನಾವು ಯಾರ ಮತದಂತೆ ನಡೆಯುತ್ತಿದ್ದೇವೆ, ನಮಗೆ ಯಾರು ಸಲಹೆ
ನೀಡುತ್ತಾರೆಂದು ತಿಳಿದುಕೊಳ್ಳುವುದೇ ಇಲ್ಲ. ತಂದೆಯನ್ನು ನೆನಪು ಮಾಡುವುದೂ ಇಲ್ಲ. ಮುಂಜಾನೆ
ಎದ್ದೇಳುವುದಿಲ್ಲ, ನೆನಪು ಮಾಡಲಿಲ್ಲವೆಂದರೆ ವಿಕರ್ಮಗಳು ವಿನಾಶವಾಗುವುದಿಲ್ಲ. ತಂದೆಯು
ತಿಳಿಸುತ್ತಾರೆ - ಇಷ್ಟು ಪರಿಶ್ರಮ ಪಡುತ್ತೇನೆ ಆದರೂ ಸಹ ಕರ್ಮ ಭೋಗವು ನಡೆಯುತ್ತಿರುತ್ತದೆ.
ಏಕೆಂದರೆ ಇದು ಒಂದು ಜನ್ಮದ ಮಾತಂತೂ ಅಲ್ಲ, ಅನೇಕ ಜನ್ಮಗಳ ಲೆಕ್ಕಾಚಾರವಾಗಿದೆ. ತಂದೆಯಿಂದ ಆದೇಶವು
ಸಿಕ್ಕಿದೆ - ಈ ಜನ್ಮದ ಪಾಪವನ್ನು ಸತ್ಯವಾಗಿ ತಿಳಿಸಿದರೂ ಸಹ ಅರ್ಧ ಪಾಪವು ವಿನಾಶವಾಗುತ್ತದೆ.
ಇದಂತೂ ತಂದೆಯು ತಿಳಿಸುತ್ತಾರೆ. ನಾನೂ ತಿಳಿದುಕೊಂಡಿದ್ದೇನೆ ಮತ್ತು ಧರ್ಮರಾಜನೂ
ತಿಳಿದುಕೊಂಡಿದ್ದಾರೆ. ಬಹಳ ಪಾಪವನ್ನು ಮಾಡಿದ್ದಾರೆ, ಧರ್ಮರಾಜನು ಗರ್ಭ ಜೈಲಿನಲ್ಲಿ ಶಿಕ್ಷೆಯನ್ನು
ಕೊಡುತ್ತಾ ಬಂದಿದ್ದಾರೆ. ಈಗಂತೂ ನೀವು ಪುರುಷಾರ್ಥ ಮಾಡಿ, ವಿಕರ್ಮ ವಿನಾಶ ಮಾಡಿಕೊಳ್ಳುತ್ತೀರಿ.
ಆದ್ದರಿಂದ ನಂತರ ಗರ್ಭ ಮಹಲ್ ಸಿಗುತ್ತದೆ. ಸತ್ಯಯುಗದಲ್ಲಂತೂ ಮನುಷ್ಯರಿಂದ ಪಾಪ ಮಾಡಿಸುವ,
ಶಿಕ್ಷೆಯನ್ನನುಭವಿಸಬೇಕಾಗುವ ಮಾಯೆಯು ಇರುವುದಿಲ್ಲ. ಅರ್ಧಕಲ್ಪ ಈಶ್ವರೀಯ ರಾಜ್ಯವಾಗಿದೆ,
ಅರ್ಧಕಲ್ಪ ರಾವಣ ರಾಜ್ಯವಾಗಿದೆ. ಸರ್ಪದ ಉದಾಹರಣೆಯೂ ಇಲ್ಲಿಯದೇ ಆಗಿದೆ. ಇದನ್ನೇ ಸನ್ಯಾಸಿಗಳು ನಕಲು
(ಕಾಪಿ) ಮಾಡಿದ್ದಾರೆ. ಹೇಗೆ ಭ್ರಮರಿಯ ಉದಾಹರಣೆಯನ್ನು ತಂದೆಯು ತಿಳಿಸುತ್ತಾರೆ - ಭ್ರಮರಿಯು
ಕೀಟವನ್ನು ತನ್ನ ಗೂಡಿಗೆ ತರುತ್ತದೆ. ನೀವೂ ಸಹ ಪತಿತರನ್ನು ಕರೆತರುತ್ತೀರಿ, ನಂತರ ಅವರನ್ನು
ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತೀರಿ. ನಿಮ್ಮ ಹೆಸರು ಬ್ರಾಹ್ಮಿಣಿಯಾಗಿದೆ. ಈ ಭ್ರಮರಿಯ
ಉದಾಹರಣೆಯು ಬಹಳ ಚೆನ್ನಾಗಿದೆ. ಬರುವುದಂತೂ ಅನೇಕರು ಬರುತ್ತಾರೆ ಆದರೆ ಕೆಲವರು ಕಚ್ಚಾ ಆಗಿಯೇ
ಉಳಿದು ಬಿಡುತ್ತಾರೆ, ಇನ್ನೂ ಕೆಲವರು ಸಮಾಪ್ತಿಯಾಗಿ ಬಿಡುತ್ತಾರೆ. ಮಾಯೆಯು ಬಹಳ ಬಿರುಗಾಳಿಗಳನ್ನು
ತರುತ್ತದೆ. ನೀವು ಪ್ರತಿಯೊಬ್ಬರೂ ವಾಸ್ತವದಲ್ಲಿ ಹನುಮಂತನಾಗಿದ್ದೀರಿ. ಮಾಯೆಯು ಎಷ್ಟೇ
ಬಿರುಗಾಳಿಗಳನ್ನು ತರಲಿ ನಾವು ತಂದೆಯನ್ನು ಮತ್ತು ಸ್ವರ್ಗವನ್ನೆಂದೂ ಮರೆಯುವುದಿಲ್ಲ. ತಂದೆಯು
ಪದೇ-ಪದೇ ತಿಳಿಸುತ್ತಾರೆ - ಮಕ್ಕಳೇ ಎಚ್ಚರಿಕೆ! ಮನುಷ್ಯರಂತೂ ತೀರ್ಥ ಸ್ಥಾನಗಳಿಗೆ ಹೋಗಿ ಕಷ್ಟ
ಪಡುತ್ತಾರೆ. ನೀವಂತೂ ಎಲ್ಲಿಗೂ ಹೋಗುವುದಿಲ್ಲ, ಒಬ್ಬರೇ ತಂದೆ ಮತ್ತು ಸುಖಧಾಮವನ್ನು ನೆನಪು
ಮಾಡುತ್ತಿರಬೇಕಾಗಿದೆ. ನೀವಂತೂ ಅವಶ್ಯವಾಗಿ ವಿಜಯವನ್ನೇ ಪಡೆಯುವವರಾಗಿದ್ದೀರಿ. ಇದಕ್ಕೆ
ಬುದ್ಧಿಯೋಗ ಬಲ, ಜ್ಞಾನ ಬಲವೆಂದು ಹೇಳಲಾಗುತ್ತದೆ. ನೆನಪು ಮಾಡುವುದರಿಂದ ಬಲವು ಸಿಗುತ್ತದೆ,
ಬುದ್ಧಿಯ ಬೀಗವು ತೆರೆಯುತ್ತದೆ. ಒಂದುವೇಳೆ ಯಾರಾದರೂ ನಿಯಮ ಪೂರ್ವಕ ನಡುವಳಿಕೆಯನ್ನು ನಡೆಯದಿದ್ದರೆ
ಅವರ ಬುದ್ಧಿಗೆ ಬೀಗ ಬೀಳುತ್ತದೆ. ತಂದೆಯು ತಿಳಿಸುತ್ತಾರೆ - ಒಂದುವೇಳೆ ನೀವು ಈ ರೀತಿ
ಮಾಡುತ್ತೀರೆಂದರೆ ಡ್ರಾಮಾನುಸಾರ ಬುದ್ಧಿಗೆ ಬೀಗ ಬೀಳುತ್ತದೆ ನಂತರ ನೀವು ವಿಕಾರದಲ್ಲಿ ಹೋಗಬೇಡಿ
ಎಂದು ಹೇಳಲು ಸಾಧ್ಯವಾಗುವುದಿಲ್ಲ. ನಾವು ಇಂತಹ ಪಾಪ ಮಾಡಿದ್ದೇವೆಂದು ಮನಸ್ಸು ತಿನ್ನುತ್ತಿರುತ್ತದೆ.
ಅಜ್ಞಾನ ಕಾಲದಲ್ಲಿಯೂ ಸಹ ಮನಸ್ಸು ತಿನ್ನುತ್ತದೆ. ಶರೀರ ಬಿಡುವ ಸಮಯದಲ್ಲಿ ಇನ್ನು ಪಾಪ ಕರ್ಮಗಳನ್ನು
ಮಾಡುವುದಿಲ್ಲವೆನ್ನುತ್ತಾರೆ. ಅಂತ್ಯದಲ್ಲಿ ಎಲ್ಲಾ ಪಾಪಗಳು ಮುಂದೆ ಬಂದು ಬಿಡುತ್ತವೆ. ಗರ್ಭ
ಜೈಲಿನಲ್ಲಿ ಹೋದಾಗ ತಕ್ಷಣ ಶಿಕ್ಷೆಗಳು ಪ್ರಾರಂಭವಾಗಿ ಬಿಡುತ್ತವೆ. ಅಂತ್ಯದಲ್ಲಿ ನೆನಪು ಅವಶ್ಯವಾಗಿ
ಬರುತ್ತವೆ. ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ನೀವಂತೂ ಅಯ್ಯೊ! ಅಯ್ಯೊ! ಎನ್ನಬಾರದು
ಆದ್ದರಿಂದ ಪಾಪಗಳನ್ನು ಮಾಡಬೇಡಿ. ಹೇಗೆ ಜೈಲು ಪಕ್ಷಿಗಳಿರುತ್ತವೆಯಲ್ಲವೆ. ನೀವೂ ಸಹ ಜೈಲು
ಪಕ್ಷಿಯಾಗಿದ್ದಿರಿ ಈಗ ತಂದೆಯು ಗರ್ಭ ಜೈಲಿನ ಶಿಕ್ಷೆಯಿಂದ ಬಿಡಿಸುತ್ತಾರೆ. ತಿಳಿಸುತ್ತಾರೆ -
ನನ್ನನ್ನು ನೆನಪು ಮಾಡಿ ಆಗ ಪಾಪಗಳ ಶಿಕ್ಷೆಗಳಿಂದ ಬಿಡುಗಡೆಯಾಗುತ್ತೀರಿ. ನೀವು ಪಾವನರಾಗಿ
ಬಿಡುತ್ತೀರಿ. ಒಂದುವೇಳೆ ಪುನಃ ಬೀಳುತ್ತೀರೆಂದರೆ ಬಹಳ ಪೆಟ್ಟು ಬೀಳುತ್ತದೆ. ಮೊದಲನೆಯದು ಅಶುದ್ಧ
ಅಹಂಕಾರವಾಗಿದೆ ನಂತರ ಕಾಮ, ಕ್ರೋಧವಾಗಿದೆ. ಕಾಮ ಮಹಾಶತ್ರುವಾಗಿದೆ. ಇದು ನಿಮಗೆ ಆದಿ-ಮಧ್ಯ-ಅಂತ್ಯ
ದುಃಖವನ್ನು ಕೊಡುತ್ತಾ ಬಂದಿದೆ. ನೀವು ಆದಿ-ಮಧ್ಯ-ಅಂತ್ಯ ಸುಖಕ್ಕೋಸ್ಕರ ಪುರುಷಾರ್ಥ ಮಾಡುತ್ತೀರಿ
ಅಂದಮೇಲೆ ಪೂರ್ಣ ಪುರುಷಾರ್ಥ ಮಾಡಬೇಕು. ಅಮೃತವೇಳೆ ಕೆಲವರು ಎದ್ದೇಳುವುದಕ್ಕಾಗುವುದಿಲ್ಲವೆಂದು
ಹೇಳುತ್ತಾರೆ. ಅಂತಹವರು ಪದವಿಯನ್ನೂ ಪಡೆಯಲು ಸಾಧ್ಯವಿಲ್ಲ. ದಾಸ-ದಾಸಿಯರಾಗಬೇಕಾಗುತ್ತದೆ. ಅಲ್ಲಿ
ಯಾವುದೇ ಗೊಬ್ಬರ ಇತ್ಯಾದಿಗಳನ್ನು ಎತ್ತಬೇಕಾಗುವುದಿಲ್ಲ, ಕೂಲಿಕಾರರಿರುವುದಿಲ್ಲ. ಈಗಲೂ ಸಹ
ವಿದೇಶದಲ್ಲಿ ನೌಕರರನ್ನು ಇಟ್ಟುಕೊಳ್ಳುವುದಿಲ್ಲ, ತಾನಾಗಿಯೇ ಸ್ವಚ್ಛವಾಗಿ ಬಿಡುತ್ತದೆ. ಅಲ್ಲಂತೂ
ಕೊಳಕಿರುವುದಿಲ್ಲ. ಆದರೆ ಚಂಡಾಲರು, ದಾಸ-ದಾಸಿಯರು ಮುಂತಾದವರಿರುತ್ತಾರೆ.
ತಂದೆಯು ನೀವು ಮಕ್ಕಳಿಗೆ ಎಲ್ಲ ರಹಸ್ಯವನ್ನು ತಿಳಿಸುತ್ತಾರೆ. ನಿಮ್ಮ ಬುದ್ಧಿಯಲ್ಲಿ ಪೂರ್ಣ
ರಾಜಧಾನಿಯಿದೆ. ನೀವು ನಾಟಕವನ್ನು ತಿಳಿದುಕೊಂಡಿದ್ದೀರಿ. ಮೊಟ್ಟ ಮೊದಲು ಈ ಚಕ್ರದ ಬಗ್ಗೆ
ತಿಳಿಸಬೇಕು. ಈಗ ಉದ್ಘಾಟನೆಗಾಗಿ ರಾಜ್ಯಪಾಲರು ಮುಂತಾದವರನ್ನು ಕರೆಸುತ್ತಾರೆ ಅಂದಾಗ ಮಕ್ಕಳು
ಅವರಿಂದ ಉದ್ಘಾಟನೆ ಮಾಡಿಸುವುದಕ್ಕೆ ಮೊದಲು ಅವರಿಗೆ ಏನನ್ನಾದರೂ ತಿಳಿಸುವ ಸೂಚನೆ ಸಿಗುತ್ತದೆ, ಆಗ
ತಿಳಿಸಿ - ಭಾರತವು ಶ್ರೇಷ್ಠಾಚಾರಿಯಾಗಿತ್ತು, ಈಗ ಅದೇ ಭಾರತವು ಭ್ರಷ್ಠಾಚಾರಿಯಾಗಿದೆ. ಭಾರತದ
ಪೂಜ್ಯ ದೇವಿ-ದೇವತೆಗಳೇ ಈಗ ಪೂಜಾರಿ ಮನುಷ್ಯರಾಗಿದ್ದಾರೆ. ಇದನ್ನು ಅವಶ್ಯವಾಗಿ ತಿಳಿಸಬೇಕು. ಅವರು
ತಾವಾಗಿಯೇ ಹೇಳಲಿ, ಇವರು ನಮಗೆ ಸೃಷ್ಟಿಚಕ್ರದ ರಹಸ್ಯವನ್ನು ತಿಳಿಸುತ್ತಾರೆ. ಇದನ್ನು ಯಾರು
ತಿಳಿದುಕೊಂಡಿದ್ದಾರೆಯೋ ಅವರಿಗೆ ತ್ರಿಕಾಲದರ್ಶಿಗಳೆಂದು ಹೇಳಲಾಗುತ್ತದೆ. ಒಂದುವೇಳೆ ಮನುಷ್ಯರಾಗಿಯೂ
ನಾಟಕವನ್ನು ಅರಿತುಕೊಂಡಿಲ್ಲವೆಂದರೆ ಏನು ಕೆಲಸಕ್ಕೆ ಬರುತ್ತಾರೆ! ಹೀಗೆ ಅನೇಕರು ಹೇಳುತ್ತಾರೆ -ಬ್ರಹ್ಮಾಕುಮಾರ-ಕುಮಾರಿಯರ
ಪವಿತ್ರತೆಯು ತುಂಬಾ ಒಳ್ಳೆಯದಾಗಿದೆ. ಪವಿತ್ರತೆಯಂತೂ ಎಲ್ಲರಿಗೂ ಇಷ್ಟವಾಗುತ್ತದೆ. ಸನ್ಯಾಸಿಗಳು
ಪವಿತ್ರರಾಗಿರುತ್ತಾರೆ, ದೇವತೆಗಳು ಪವಿತ್ರರಾಗಿದ್ದಾರೆ. ಆದ್ದರಿಂದಲೇ ಅವರ ಮುಂದೆ ತಲೆ
ಬಾಗಿಸುತ್ತಾರಲ್ಲವೆ ಆದರೆ ಇದು ಬೇರೆ ಮಾತಾಗಿದೆ. ಪತಿತ-ಪಾವನ ಒಬ್ಬ ಪರಮಾತ್ಮನೇ ಆಗಿರಲು ಸಾಧ್ಯ.
ಯಾವುದೇ ಮನುಷ್ಯರು ಪತಿತ-ಪಾವನರಾಗಲು ಸಾಧ್ಯವಿಲ್ಲ. ಇದನ್ನು ತಿಳಿಸಬೇಕು – ದಯ ಮಾಡಿ ಈ ಮಾತನ್ನು
ತಾವು ತಿಳಿದುಕೊಳ್ಳಿ. ಆಗ ನಿಮ್ಮ ಪದವಿಯು ಬಹಳ ಶ್ರೇಷ್ಠವಾಗಿ ಬಿಡುವುದು. ಪೂಜ್ಯ ಭಾರತವು ಹೇಗೆ
ಪೂಜಾರಿಯಾಗಿದೆ, ಭಾರತವಾಸಿ ದೇವಿ-ದೇವತೆಗಳು 84 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತಾರೆಂದು
ತಿಳಿಸಿ. ಈ ಮಾತನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ಕ್ರಿಸ್ತನಿಗೂ 3000 ವರ್ಷಗಳ ಮೊದಲು ಭಾರತವಾಸಿ
ದೇವಿ-ದೇವತೆಗಳೇ ಇದ್ದರು ಅದಕ್ಕೆ ಸುಖಧಾಮ, ಸ್ವರ್ಗವೆಂದು ಹೇಳಲಾಗುವುದು. ಸ್ವರ್ಗವೇ ಈಗ ನರಕವಾಗಿ
ಬಿಟ್ಟಿದೆ. ಇದನ್ನು ನೀವು ಕುಳಿತು ತಿಳಿಸುತ್ತೀರೆಂದರೆ ನಿಮ್ಮದು ಬಹಳ ಮಹಿಮೆಯಾಗಿದೆ. ಪತ್ರಿಕಾ
ಸಂಪಾದಕರಿಗೂ ಪಾರ್ಟಿ ಕೊಡಬೇಕಾಗಿದೆ. ನಂತರ ಅವರು ಬೆಂಕಿಯಾದರೂ ಹಚ್ಚಲಿ ಅಥವಾ ನೀರಾದರೂ ಹಾಕಲಿ
ಎಲ್ಲವೂ ಅವರ ಮೇಲೆ ಆಧಾರಿತವಾಗಿದೆ. ಇದಂತೂ ನೀವು ಮಕ್ಕಳು ತಿಳಿದುಕೊಂಡಿದ್ದೀರಿ.
ಯುದ್ಧವಾಗಲೇಬೇಕಾಗಿದೆ, ಭಾರತದಲ್ಲಿ ರಕ್ತದ ನದಿಗಳು ಹರಿಯುವುದು. ಯಾವಾಗಲೂ ಇಲ್ಲಿಂದಲೇ ರಕ್ತದ
ನದಿಯು ಹರಿಯುತ್ತಾ ಬಂದಿದೆ, ಹಿಂದೂ ಮುಸಲ್ಮಾನರಿಗೆ ಮಾರಾಮಾರಿ ಆಗುತ್ತದೆ ಈಗಲೂ ವಿಭಜನೆಯಾದಾಗ
ಅನೇಕ ಮನುಷ್ಯರು ಮನೆ-ಮಠ ಕಳೆದುಕೊಂಡರು, ಬೇರೆ-ಬೇರೆ ರಾಜಧಾನಿಯಾಗಿ ಬಿಟ್ಟಿತು. ಇದೂ ಸಹ
ನಾಟಕದಲ್ಲಿ ನಿಗಧಿಯಾಗಿದೆ. ಪರಸ್ಪರ ಹೊಡೆದಾಡುತ್ತಾ ಅನೇಕ ವಿಭಾಗಗಳನ್ನಾಗಿ ಮಾಡಿ ಬಿಡುತ್ತಾರೆ.
ಮೊದಲು ಹಿಂದೂಸ್ಥಾನ ಮತ್ತು ಪಾಕಿಸ್ತಾನ ಬೇರೆ-ಬೇರೆ ಇರಲಿಲ್ಲ. ಭಾರತದಲ್ಲಿಯೇ ರಕ್ತದ ನದಿಗಳು
ಹರಿಯಲಿದೆ, ಇದರಿಂದ ನಂತರ ತುಪ್ಪದ ನದಿಗಳು ಹರಿಯುವುದು ಅಂದಮೇಲೆ ಇದರ ಪ್ರತಿಫಲ ಏನಾಗುತ್ತದೆ?
ಕೆಲವರೇ ಉಳಿಯುತ್ತಾರೆ. ನೀವು ಪಾಂಡವರು ಗುಪ್ತ ವೇಷದಲ್ಲಿದ್ದೀರಿ.
ಈಗ ರಾಜ್ಯಪಾಲರಿಗೆ ಮೊದಲು ಪರಿಚಯ ಕೊಡಬೇಕು. ಯಾರ ಬಳಿಯಾದರೂ ಹೋದಾಗ ಮೊದಲು ಅವರ ಮಹಿಮೆ
ಮಾಡಲಾಗುತ್ತದೆ ಆದರೆ ಅವರಿಗೋಸ್ಕರ ಏನನ್ನು ಬರೆಯಲಾಗಿದೆ ಎಂಬ ರಹಸ್ಯವು ನಿಮಗೆ ಗೊತ್ತಿದೆ. ಇದು
ಮೃಗತೃಷ್ಣ ಸಮಾನ ರಾಜ್ಯವಾಗಿದೆ ಎಂದು ಅವರಿಗೇನೂ ಗೊತ್ತಿಲ್ಲ. ನಾಟಕದನುಸಾರ ತಮ್ಮದೇ ಆದ
ಯೋಜನೆಗಳಿರುತ್ತವೆ. ಪ್ರಳಯವಾಯಿತೆಂದು ಮಹಾ ಭಾರತದಲ್ಲಿ ತೋರಿಸುತ್ತಾರೆ. ಈಗ ಮಹಾ ಪ್ರಳಯವಂತೂ
ಆಗುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಸೃಷ್ಠಿಚಕ್ರದ ಜ್ಞಾನವು ಪ್ರತಿ ಸಮಯದಲ್ಲಿ ತಿರುಗಬೇಕು.
ಮೊದಲಂತೂ ಇವರಿಗೆ ಶಿಕ್ಷಣ ಕೊಡುವವರು ಯಾರೆಂದು ಅವರಿಗೆ ತಿಳಿಯಲಿ ಆಗ ಅವಶ್ಯವಾಗಿ ನಾವೂ ಆ ಶಿವನ
ಮಕ್ಕಳು, ಪ್ರಜಾಪಿತ ಬ್ರಹ್ಮಾರವರಿಗೂ ಮಕ್ಕಳೆಂದು ತಿಳಿಯುತ್ತಾರೆ. ಇದು ವಂಶಾವಳಿಯಾಗಿದೆ.
ಪ್ರಜಾಪಿತ ಬ್ರಹ್ಮಾ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ (ಪಿತಾಮಹ) ಆಗಿದ್ದಾರೆ. ಮನುಷ್ಯ ಸೃಷ್ಟಿಗೆ
ಹಿರಿಯರಂತೂ ಬ್ರಹ್ಮಾರವರಾದರಲ್ಲವೆ. ಶಿವನಿಗೆ ಈ ರೀತಿ ಹೇಳುವುದಿಲ್ಲ. ಅವರಿಗೆ ಕೇವಲ ತಂದೆಯೆಂದು
ಹೇಳುತ್ತಾರೆ. ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂಬ ಬಿರುದು ಪ್ರಜಾಪಿತ ಬ್ರಹ್ಮಾರವರದಾಗಿದೆ.
ಅವಶ್ಯವಾಗಿ ಗ್ರಾಂಡ್ ಮದರ್, ಮೊಮ್ಮಕ್ಕಳೂ ಸಹ ಇರುವರು. ನೀವು ಮಕ್ಕಳು ಇದೆಲ್ಲವನ್ನೂ ತಿಳಿಸಬೇಕು.
ಶಿವನು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ, ಬ್ರಹ್ಮಾರವರ ಮೂಲಕ ಸೃಷ್ಟಿಯನ್ನು ರಚಿಸುತ್ತಾರೆ. ನಿಮಗೆ
ಗೊತ್ತಿದೆ - ಮುಂದೆ ನಮ್ಮ ಎಷ್ಟೊಂದು ರೆಂಬೆ-ಕೊಂಬೆಗಳು ಬೆಳೆಯುತ್ತವೆ. ರಾಜ್ಯಪಾಲರಿಗೆ ತಿಳಿಸಬೇಕು
- ಇಂತಹ ಪ್ರದರ್ಶನಿಯನ್ನು ಮೂಲೆ-ಮೂಲೆಯಲ್ಲೂ ಮಾಡಿಸಬೇಕು, ತಾವು ಪ್ರಬಂಧವನ್ನು ಮಾಡಿ ಕೊಡಿ.
ನಮಗಂತೂ ನೋಡಿ, ಮೂರು ಹೆಜ್ಜೆಗಳಷ್ಟು ಜಾಗವೂ ಸಿಗುವುದಿಲ್ಲ. ಆದರೆ ನಾವೇ ಮತ್ತೆ ವಿಶ್ವದ
ಮಾಲೀಕರಾಗಿ ಬಿಡುತ್ತೇವೆ. ನೀವು ಪ್ರಬಂಧ ಮಾಡಿ ಕೊಡಿ ಆಗ ನಾವು ಭಾರತವನ್ನು ಸ್ವರ್ಗವನ್ನಾಗಿ
ಮಾಡುವ ಸೇವೆಯನ್ನು ಮಾಡುತ್ತೇವೆ. ಅವರು ನಿಮಗೆ ಸ್ವಲ್ಪ ಸಹಯೋಗ ಕೊಟ್ಟರೂ ಸಹ ಅವರನ್ನು ರಾಜ್ಯಪಾಲರೂ
ಸಹ ಬ್ರಹ್ಮಾಕುಮಾರರಾದರೆಂದು ಹೇಳತೊಡಗುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಕವಡೆಯ
ಸಮಾನವಾದ ತನು-ಮನ-ಧನ ಏನೆಲ್ಲವೂ ಇದೆಯೋ ಅದನ್ನು ತಂದೆಗೆ ಬಲಿಹಾರಿ ಮಾಡಿ ನಂತರ ಟ್ರಸ್ಟಿಯಾಗಿ
ಸಂಭಾಲನೆ ಮಾಡಬೇಕಾಗಿದೆ. ಮಮತ್ವವನ್ನು ತೆಗೆಯಬೇಕಾಗಿದೆ.
2. ಬೆಳಗ್ಗೆ-ಬೆಳಗ್ಗೆ ತಂದೆಯನ್ನು ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಜ್ಞಾನ ಬಲ ಮತ್ತು
ಬುದ್ಧಿಯೋಗ ಬಲದಿಂದ ಮಾಯೆಯ ಮೇಲೆ ಜಯ ಗಳಿಸಬೇಕಾಗಿದೆ.
ವರದಾನ:
ಸದಾ
ಉಮಂಗ-ಉತ್ಸಾಹದ ರೆಕ್ಕೆಗಳ ಮುಖಾಂತರ ಹಾರುವ ಕಲೆಯಲ್ಲಿ ಹಾರುವಂತಹ ಶ್ರೇಷ್ಠ ಆತ್ಮ ಭವ.
ಜ್ಞಾನ-ಯೋಗದ
ಜೊತೆ-ಜೊತೆ ಪ್ರತಿ ಸಮಯ, ಪ್ರತಿ ಕರ್ಮದಲ್ಲಿ ಪ್ರತಿ ದಿನ ಹೊಸ ಉಮಂಗ-ಉತ್ಸಾಹ ಆಗುತ್ತಿರಲಿ, ಇದೇ
ಹಾರುವ ಕಲೆಗೆ ಆಧಾರವಾಗಿದೆ. ಎಂತಹದೇ ಕಾರ್ಯ ಆಗಿರಲಿ, ಇಲ್ಲಾ ಶುಚಿಗೊಳಿಸುವುದಿರಲಿ, ಪಾತ್ರೆ
ತೊಳೆಯುವುದಿರಲಿ, ಸಾಧಾರಣ ಕರ್ಮವಾಗಿರಲಿ, ಅದರಲ್ಲಿಯೂ ಸಹ ಉಮಂಗ-ಉತ್ಸಾಹ ನಿರಂತರ
ಸ್ವಾಭಾವಿಕವಾಗಿರಲಿ. ಹಾರುವ ಕಲೆಯ ಶ್ರೇಷ್ಠ ಆತ್ಮ ಉಮಂಗ-ಉತ್ಸಾಹದ ರೆಕ್ಕೆಗಳಿಂದ ಸದಾ
ಹಾರುತ್ತಿರುವುದು, ಅವರು ಎಂದೂ ಗೊಂದಲದಲ್ಲಿ ಬರಲ್ಲ, ಸಣ್ಣ-ಪುಟ್ಟ ಮಾತುಗಳಲ್ಲಿ ಸುಸ್ತಾಗಿ ನಿಂತು
ಬಿಡುವುದಿಲ್ಲ.
ಸ್ಲೋಗನ್:
ಯಾರು
ನಿರ್ಮಾಣಚಿತ್ತ, ಅವಿಶ್ರಾಂತ ಮತ್ತು ಸದಾ ಜಾಗೃತ ಜ್ಯೋತಿಯಾಗಿದ್ದಾರೆ-ಅವರೆ ವಿಶ್ವ
ಕಲ್ಯಾಣಕಾರಿಗಳಾಗಿದ್ದಾರೆ.