15.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಮ್ಮ ರಾಯಲ್ ಚಲನೆಯಿಂದ ಸೇವೆ ಮಾಡಬೇಕಾಗಿದೆ, ಶ್ರೀಮತದಂತೆ ಬುದ್ಧಿಯನ್ನು ಪರಿಶುದ್ಧ ಮಾಡಿಕೊಳ್ಳಬೇಕಾಗಿದೆ, ಮಾತೆಯರಿಗೆ ಗೌರವ ಕೊಡಬೇಕಾಗಿದೆ.”

ಪ್ರಶ್ನೆ:
ಯಾವ ಕರ್ತವ್ಯವು ಒಬ್ಬ ತಂದೆಯದೇ ಆಗಿದೆ, ಮನುಷ್ಯರದಲ್ಲ?

ಉತ್ತರ:
ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುವುದು ತಂದೆಯ ಕರ್ತವ್ಯವಾಗಿದೆ. ಮನುಷ್ಯರು ಭಲೆ ಎಷ್ಟೇ ಸಮ್ಮೇಳನ ಮುಂತಾದವುಗಳನ್ನು ಮಾಡುತ್ತಿರಲಿ, ಆದರೆ ಶಾಂತಿ ಸ್ಥಾಪನೆಯಾಗಲು ಸಾಧ್ಯವಿಲ್ಲ. ಶಾಂತಿಯ ಸಾಗರ ತಂದೆಯು ಯಾವಾಗ ಮಕ್ಕಳಿಂದ ಪವಿತ್ರತೆಯ ಪ್ರತಿಜ್ಞೆ ಮಾಡಿಸುತ್ತಾರೆಯೋ ಆಗ ಶಾಂತಿ ಸ್ಥಾಪನೆ ಆಗುತ್ತದೆ. ಪವಿತ್ರ ಪ್ರಪಂಚದಲ್ಲಿಯೇ ಶಾಂತಿಯಿರುತ್ತದೆ. ನೀವು ಮಕ್ಕಳು ಈ ಮಾತನ್ನು ಬಹಳ ಯುಕ್ತಿಯಿಂದ ಮತ್ತು ಸುಂದರವಾಗಿ ತಿಳಿಸಿ ಆಗ ತಂದೆಯ ಹೆಸರು ಪ್ರಸಿದ್ಧವಾಗುತ್ತದೆ.

ಗೀತೆ:
ನಾನು ಅತಿ ಪುಟ್ಟ ಮಗುವಾಗಿದ್ದೇನೆ

ಓಂ ಶಾಂತಿ.
ಈ ಗೀತೆಯಂತೂ ಭಕ್ತಿಮಾರ್ಗದ ಗಾಯನವಾಗಿದೆ, ಏಕೆಂದರೆ ಒಂದು ಕಡೆ ಭಕ್ತಿಯ ಪ್ರಭಾವ, ಇನ್ನೊಂದು ಕಡೆ ಜ್ಞಾನದ ಪ್ರಭಾವವಿದೆ. ಭಕ್ತಿ ಮತ್ತು ಜ್ಞಾನದಲ್ಲಿ ರಾತ್ರಿ-ಹಗಲಿನ ಅಂತರವಿದೆ. ಯಾವ ಅಂತರವಿದೆ? ಇದಂತೂ ಬಹಳ ಸಹಜವಾಗಿದೆ. ಭಕ್ತಿಯು ರಾತ್ರಿಯಾಗಿದೆ ಮತ್ತು ಜ್ಞಾನವು ದಿನವಾಗಿದೆ. ಭಕ್ತಿಯಲ್ಲಿ ದುಃಖವಿದೆ, ಯಾವಾಗ ಭಕ್ತರು ದುಃಖಿಯಾಗುತ್ತಾರೆಯೋ ಆಗ ಭಗವಂತನನ್ನು ಕರೆಯುತ್ತಾರೆ ಮತ್ತು ಭಗವಂತನು ದುಃಖಿಗಳ ದುಃಖವನ್ನು ದೂರ ಮಾಡಲು ಬರಬೇಕಾಗುತ್ತದೆ. ತಂದೆಯೊಂದಿಗೆ ಕೇಳಲಾಗುತ್ತದೆ - ನಾಟಕದಲ್ಲಿ ಏನಾದರೂ ತಪ್ಪಿದೆಯೇ? ಅದಕ್ಕೆ ತಂದೆಯು ತಿಳಿಸುತ್ತಾರೆ - ಹೌದು, ದೊಡ್ಡ ತಪ್ಪಿದೆ ಅದೇನೆಂದರೆ ನೀವು ನನ್ನನ್ನು ಮರೆತು ಹೋಗುತ್ತೀರಿ. ಯಾರು ಮರೆಸುತ್ತಾರೆ? ಮಾಯಾ ರಾವಣ. ತಂದೆಯೇ ತಿಳಿಸುತ್ತಾರೆ - ಮಕ್ಕಳೇ, ಈ ಆಟವು ಮಾಡಲ್ಪಟ್ಟಿದೆ. ಸ್ವರ್ಗ ಮತ್ತು ನರಕವು ಭಾರತದಲ್ಲಿಯೇ ಆಗುತ್ತದೆ. ಭಾರತದಲ್ಲಿಯೇ ಯಾರಾದರೂ ಸಾವನ್ನಪ್ಪಿದರೆ ವೈಕುಂಠವಾಸಿಯಾದರೆಂದು ಹೇಳುತ್ತಾರೆ. ಸ್ವರ್ಗ ಅಥವಾ ವೈಕುಂಠ ಯಾವಾಗ ಇರುತ್ತದೆಂದು ತಿಳಿದುಕೊಂಡಿಲ್ಲ. ಆದರೆ ಯಾವಾಗ ಸ್ವರ್ಗ ಇರುತ್ತದೆಯೋ ಆಗ ಮನುಷ್ಯರು ಪುನರ್ಜನ್ಮವನ್ನು ಸ್ವರ್ಗದಲ್ಲಿಯೇ ತೆಗೆದುಕೊಳ್ಳುತ್ತಾರೆ. ಈಗ ನರಕವಾಗಿದೆ ಆದ್ದರಿಂದ ಸ್ವರ್ಗ ಸ್ಥಾಪನೆಯಾಗುವವರೆಗೆ ಪುನರ್ಜನ್ಮವನ್ನೂ ಅವಶ್ಯವಾಗಿ ನರಕದಲ್ಲಿಯೇ ತೆಗೆದುಕೊಳ್ಳುತ್ತಾರೆ. ಮನುಷ್ಯರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಒಂದು ಈಶ್ವರೀಯ ಅಥವಾ ರಾಮ ಸಂಪ್ರದಾಯವಾಗಿದೆ, ಇನ್ನೊಂದು ರಾವಣ ಸಂಪ್ರದಾಯವಾಗಿದೆ. ಸತ್ಯಯುಗ-ತ್ರೇತಾದಲ್ಲಿ ರಾಮನ ಸಂಪ್ರದಾಯವಾಗಿರುತ್ತದೆ, ಅವರಿಗೆ ಯಾವುದೇ ದುಃಖವಿರುವುದಿಲ್ಲ, ಅಶೋಕವಾಟಿಕೆಯಲ್ಲಿರುತ್ತಾರೆ. ಮತ್ತೆ ಅರ್ಧ ಕಲ್ಪದ ನಂತರ ರಾವಣ ರಾಜ್ಯವು ಪ್ರಾರಂಭವಾಗುತ್ತದೆ. ಈಗ ಮತ್ತೆ ತಂದೆಯು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ಅದು ಎಲ್ಲದಕ್ಕಿಂತ ಸರ್ವೋತ್ತಮ ಧರ್ಮವಾಗಿದೆ. ಎಲ್ಲವೂ ಧರ್ಮಗಳಾಗಿವೆ, ಧರ್ಮಗಳ ಸಮ್ಮೇಳನವಾಗುತ್ತದೆ. ಭಾರತದಲ್ಲಿ ಅನೇಕ ಧರ್ಮದವರು ಬರುತ್ತಾರೆ, ಸಮ್ಮೇಳನಗಳನ್ನು ಮಾಡುತ್ತಾರೆ. ಈಗ ಯಾವ ಭಾರತವಾಸಿಗಳು ಧರ್ಮವನ್ನು ಒಪ್ಪುವುದೇ ಇಲ್ಲವೋ ಅವರು ಏನು ಸಮ್ಮೇಳನಗಳನ್ನು ಮಾಡುತ್ತಾರೆ? ವಾಸ್ತವದಲ್ಲಿ ಭಾರತದ ಪ್ರಾಚೀನ ಧರ್ಮವು ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ. ಹಿಂದೂ ಧರ್ಮವಂತೂ ಇಲ್ಲ. ಎಲ್ಲದಕ್ಕಿಂತ ಶ್ರೇಷ್ಠ ದೇವಿ-ದೇವತಾ ಧರ್ಮವಾಗಿದೆ. ಈಗ ಕಾಯಿದೆಯು ಹೇಳುತ್ತದೆ - ಎಲ್ಲದಕ್ಕಿಂತ ಶ್ರೇಷ್ಠಾತಿ ಶ್ರೇಷ್ಠ ಧರ್ಮದವರನ್ನು ಸಿಂಹಾಸನದ ಮೇಲೆ ಕುಳ್ಳರಿಸಬೇಕು. ಅಂದಮೇಲೆ ಎಲ್ಲರಿಗಿಂತ ಮುಂಚೆ ಯಾರನ್ನು ಕೂರಿಸುವುದು? ಇದರ ಮೇಲೂ ಸಹ ಕೆಲವೊಮ್ಮೆ ಅವರಲ್ಲಿ ಜಗಳವಾಗಿ ಬಿಡುತ್ತದೆ. ಹೇಗೆ ಒಂದು ಬಾರಿ ಕುಂಭ ಮೇಳದಲ್ಲಿ ಜಗಳವಾಗಿ ಬಿಟ್ಟಿತ್ತು. ಒಂದು ಕಡೆಯವರು ಮೊದಲು ನಮ್ಮ ಸವಾರಿಯು ನಡೆಯಬೇಕು, ಇನ್ನೊಂದು ಕಡೆಯವರು ಮೊದಲು ನಮ್ಮದು ನಡೆಯಬೇಕೆಂದು ಜಗಳವಾಡುತ್ತಿದ್ದರು. ಆದ್ದರಿಂದ ಈಗ ಈ ಸಮ್ಮೇಳನದಲ್ಲಿ ಮಕ್ಕಳು ತಿಳಿಸಬೇಕು – ಶ್ರೇಷ್ಠಾತಿ ಶ್ರೇಷ್ಠ ಧರ್ಮವು ಯಾವುದಾಗಿದೆ? ಅವರಂತೂ ಇದನ್ನು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ – ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ, ಅದು ಈಗ ಪ್ರಾಯಲೋಪವಾಗಿ ಬಿಟ್ಟಿದೆ ಮತ್ತು ಅವರೇ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಿದ್ದಾರೆ. ಈಗ ಚೀನಾದಲ್ಲಿರುವವರು ನಮ್ಮ ಧರ್ಮವು ಚೀನಾ ಎಂದು ಹೇಳುವುದಿಲ್ಲ, ಅವರು ಯಾರು ಪ್ರಸಿದ್ಧರೆನ್ನುವುದನ್ನು ನೋಡುತ್ತಾರೆ ಮತ್ತು ಅವರನ್ನು ಮುಖ್ಯಸ್ಥರನ್ನಾಗಿ ಮಾಡಿ ಕೂರಿಸುತ್ತಾರೆ. ನಿಯಮಬದ್ಧವಾಗಿ ಸಮ್ಮೇಳನದಲ್ಲಿ ಬಹಳಷ್ಟು ಜನರು ಬರುವುದಿಲ್ಲ. ಕೇವಲ ಧರ್ಮದ ಮುಖ್ಯಸ್ಥರಿಗೆ ನಿಮಂತ್ರಣ ಕೊಡಲಾಗುತ್ತದೆ. ಅನೇಕರು ಬಂದರೆ ಅವರಿಂದ ಬಹಳ ಮಾತುಕಥೆಯಾಗಿ ಬಿಡುತ್ತದೆ. ಈಗ ಅವರಿಗೆ ಸಲಹೆ ನೀಡುವವರಂತೂ ಯಾರೂ ಇಲ್ಲ. ನೀವು ಶ್ರೇಷ್ಠಾತಿ ಶ್ರೇಷ್ಠ ದೇವಿ-ದೇವತಾ ಧರ್ಮದವರಾಗಿದ್ದೀರಿ, ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದೀರಿ. ಈಗ ನೀವೇ ತಿಳಿಸಬಹುದು - ಭಾರತದ ಮುಖ್ಯ ಧರ್ಮವು ಯಾವುದಿದೆಯೋ ಅದು ಎಲ್ಲಾ ಧರ್ಮಗಳಿಗೆ ಮೂಲವಾಗಿದೆ. ಅಂದಮೇಲೆ ಅದರ ಮುಖ್ಯಸ್ಥರನ್ನು ಈ ಸಮ್ಮೇಳನದಲ್ಲಿ ಅಧ್ಯಕ್ಷರನ್ನಾಗಿ ಮಾಡಬೇಕು. ಅವರನ್ನೇ ಸಿಂಹಾಸನಾಧಿಕಾರಿಯನ್ನಾಗಿ ಮಾಡಬೇಕು. ಉಳಿದವರೆಲ್ಲರೂ ಅವರ ಕೆಳಗಿನವರಾಗಿರುತ್ತಾರೆ ಅಂದಾಗ ಯಾರು ಮುಖ್ಯವಾದ ಮಕ್ಕಳಿದ್ದಾರೆಯೋ ಅವರ ಬುದ್ಧಿಯು ಕೆಲಸ ಮಾಡಬೇಕು.

ಭಗವಂತನು ಅರ್ಜುನನಿಗೆ ತಿಳಿಸುತ್ತಾರೆ - ಇವರೇ ಸಂಜಯನಾಗಿದ್ದಾರೆ, ಅರ್ಜುನನು ರಥಿಯಾಗಿದ್ದಾರೆ, ಅದರಲ್ಲಿ ಸಾರಥಿಯು ತಂದೆಯಾಗಿದ್ದಾರೆ. ಇದನ್ನು ಅವರು ರೂಪ ಬದಲಾವಣೆ ಮಾಡಿ ಕೃಷ್ಣನ ತನುವಿನಲ್ಲಿ ಬಂದು ಜ್ಞಾನವನ್ನು ಕೊಟ್ಟಿದ್ದಾರೆಂದು ತಿಳಿಯುತ್ತಾರೆ. ಆದರೆ ಈ ರೀತಿಯೇನಿಲ್ಲ. ಈಗ ಪ್ರಜಾಪಿತ ಸಹ ಇದ್ದಾರೆ, ತ್ರಿಮೂರ್ತಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿಸಬಹುದಾಗಿದೆ. ತ್ರಿಮೂರ್ತಿಗಳ ಮೇಲೆ ಶಿವ ತಂದೆಯ ಚಿತ್ರವೂ ಅವಶ್ಯವಾಗಿ ಇರಬೇಕು. ತ್ರಿಮೂರ್ತಿಗಳು ಸೂಕ್ಷ್ಮವತನದ ರಚನೆಯಾಗಿದ್ದಾರೆ. ಮಕ್ಕಳು ತಿಳಿಯುತ್ತಾರೆ - ಈ ವಿಷ್ಣುವು ಪಾಲನಕರ್ತನಾಗಿದ್ದಾರೆ, ಪ್ರಜಾಪಿತ ಬ್ರಹ್ಮನು ಸ್ಥಾಪನಾಕರ್ತನಾಗಿದ್ದಾರೆ ಅಂದಾಗ ಅವರ ಚಿತ್ರವೂ ಇರಬೇಕು. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಬುದ್ಧಿಯಲ್ಲಿರುತ್ತದೆ - ಪ್ರಜಾಪಿತ ಬ್ರಹ್ಮಾ ಅವಶ್ಯವಾಗಿರುತ್ತಾರೆ ಅಂದಮೇಲೆ ವಿಷ್ಣುವೂ ಸಹ ಬೇಕು. ಯಾರಿಂದ ಸ್ಥಾಪನೆ ಮಾಡಿಸುತ್ತಾರೆಯೋ ಅವರಿಂದಲೇ ಪಾಲನೆಯನ್ನೂ ಮಾಡಿಸುತ್ತಾರೆ. ಸ್ಥಾಪನೆಯನ್ನು ಬ್ರಹ್ಮಾರವರಿಂದ ಮಾಡಿಸುತ್ತಾರೆ. ಬ್ರಹ್ಮಾರವರ ಜೊತೆ ಸರಸ್ವತಿ ಮೊದಲಾದ ಅನೇಕ ಮಕ್ಕಳಿದ್ದಾರೆ. ವಾಸ್ತವದಲ್ಲಿ ಇವರೂ ಸಹ ಪತಿತರಿಂದ ಪಾವನರಾಗುತ್ತಿದ್ದಾರೆ ಅಂದಾಗ ಸಮ್ಮೇಳನದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮದ ಮುಖ್ಯಸ್ಥರು ಜಗದಂಬೆಯಾಗಬೇಕು. ಏಕೆಂದರೆ ಮಾತೆಯರಿಗೆ ಬಹಳ ಮಾನ್ಯತೆಯಿದೆ. ಜಗದಂಬನ ಅತಿ ದೊಡ್ಡ ಮೇಳವಾಗುತ್ತದೆ, ಅವರು ಜಗತ್ಪಿತನ ಮಗಳಾಗಿದ್ದಾರೆ. ಈಗ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಾ ಇದೆ. ಗೀತಾ ಭಾಗವು ಪುನರಾವರ್ತನೆಯಾಗುತ್ತಿದೆ. ಇದು ಅದೇ ಮಹಾಭಾರತ ಯುದ್ಧವು ಈಗ ಸಮ್ಮುಖದಲ್ಲಿ ನಿಂತಿದೆ. ತಂದೆಯೂ ಸಹ ತಿಳಿಸುತ್ತಾರೆ - ನಾನು ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಭ್ರಷ್ಟಾಚಾರಿ ಪ್ರಪಂಚವನ್ನು ಶ್ರೇಷ್ಠಾಚಾರಿಯನ್ನಾಗಿ ಮಾಡಲು ಬರುತ್ತೇನೆ. ಜಗದಂಬೆಯು ವಿದ್ಯಾದೇವಿಯೆಂದು ಗಾಯನವಿದೆ, ಅವರ ಜೊತೆ ಜ್ಞಾನ ಗಂಗೆಯರೂ ಇದ್ದಾರೆ ಅಂದಮೇಲೆ ಅವರನ್ನು ಕೇಳಬಹುದು - ಅವರಿಗೆ ಈ ಜ್ಞಾನವು ಎಲ್ಲಿಂದ ಸಿಕ್ಕಿದೆ! ಜ್ಞಾನಪೂರ್ಣ ಪರಮಪಿತ ಒಬ್ಬರೇ ಆಗಿದ್ದಾರೆ, ಅವರು ಹೇಗೆ ಜ್ಞಾನವನ್ನು ಕೊಡುವರು? ಅವಶ್ಯವಾಗಿ ಅವರು ಶರೀರವನ್ನು ತೆಗೆದುಕೊಳ್ಳುವರು. ಬ್ರಹ್ಮಾ ಮುಖ ಕಮಲದಿಂದ ತಿಳಿಸುತ್ತಾರೆ. ಈ ಮಾತೆಯರು ಕುಳಿತು ತಿಳಿಸಿಕೊಡುತ್ತಾರೆ. ಸಮ್ಮೇಳನಗಳಲ್ಲಿ ಎಲ್ಲದಕ್ಕಿಂತ ದೊಡ್ಡ ಧರ್ಮ ಯಾವುದು ಎಂಬುದು ಅವರಿಗೆ ತಿಳಿಯಬೇಕಲ್ಲವೆ. ನಾವು ಆದಿ ಸನಾತನ ದೇವಿ-ದೇವತಾ ಧರ್ಮದವರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಈ ಧರ್ಮವು ಯಾವಾಗ ಪ್ರಾಯಲೋಪವಾಗುತ್ತದೆಯೋ ಆಗ ನಾನು ಬಂದು ಮತ್ತೆ ಸ್ಥಾಪನೆ ಮಾಡುತ್ತೇನೆ. ಈಗ ದೇವತಾ ಧರ್ಮವು ಇಲ್ಲವೇ ಇಲ್ಲ. ಬಾಕಿ ಮೂರು ಧರ್ಮಗಳು ವೃದ್ಧಿಯಾಗುತ್ತಾ ಹೋಗುತ್ತಿವೆ ಅಂದಾಗ ದೇವಿ-ದೇವತಾ ಧರ್ಮವನ್ನು ಮತ್ತೆ ಅವಶ್ಯವಾಗಿ ಸ್ಥಾಪನೆ ಮಾಡಬೇಕಾಗುತ್ತದೆ ನಂತರ ಇದ್ಯಾವುದೇ ಧರ್ಮಗಳು ಇರುವುದೇ ಇಲ್ಲ. ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಲು ತಂದೆಯು ಬರುತ್ತಾರೆ. ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ ಎಂಬುದನ್ನು ನೀವು ಮಕ್ಕಳು ಹೇಳಲು ಸಾಧ್ಯ. ಶಾಂತಿ ಸಾಗರ ಪರಮಪಿತ ಪರಮಾತ್ಮನಾಗಿದ್ದಾರೆ. ಶಾಂತಿಯನ್ನು ಅವಶ್ಯವಾಗಿ ಅವರೇ ಸ್ಥಾಪನೆ ಮಾಡುತ್ತಾರೆ. ಜ್ಞಾನ ಸಾಗರ, ಸುಖದ ಸಾಗರ ಅವರೇ ಆಗಿದ್ದಾರೆ. ಪತಿತ-ಪಾವನ ಬಾ, ಬಂದು ಭಾರತವನ್ನು ಪಾವನ ರಾಮ ರಾಜ್ಯವನ್ನಾಗಿ ಮಾಡು ಎಂದು ಹಾಡುತ್ತಾರೆ. ಶಾಂತಿಯನ್ನು ಅವರೇ ಸ್ಥಾಪಿಸುತ್ತಾರೆ. ಇದು ತಂದೆಯದೇ ಕರ್ತವ್ಯವಾಗಿದೆ. ನೀವು ಯಾರು ನನ್ನವರಾಗುತ್ತೀರೋ, ರಾಜಯೋಗವನ್ನು ಕಲಿಯುತ್ತಾರೆಯೋ ಮತ್ತು ಪವಿತ್ರತೆಯ ಪ್ರತಿಜ್ಞೆಯನ್ನು ಮಾಡುತ್ತಾರೆ- ಬಾಬಾ, ನಾವು ಪವಿತ್ರರಾಗಿ 21 ಜನ್ಮಗಳ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎನ್ನುವವರೇ ಮಾಲೀಕರಾಗುತ್ತಾರೆ. ಪತಿತರಿಂದ ಪಾವನರಾಗುತ್ತಾರೆ. ಪಾವನ ಲಕ್ಷ್ಮೀ-ನಾರಾಯಣರು ಎಲ್ಲರಿಗಿಂತ ಶ್ರೇಷ್ಠರಾಗಿದ್ದಾರೆ, ಈಗ ಮತ್ತೆ ಪಾವನ ಪ್ರಪಂಚದ ಸ್ಥಾಪನೆಯಾಗುತ್ತಾ ಇದೆ. ನೀವು ಶಾಂತಿಗಾಗಿ ಸಮ್ಮೇಳನಗಳನ್ನು ಮಾಡುತ್ತೀರಿ ಆದರೆ ಮನುಷ್ಯರು ಶಾಂತಗೊಳಿಸುತ್ತಾರೆಯೇ! ಇದು ಶಾಂತಿಯ ಸಾಗರ ತಂದೆಯ ಕಾರ್ಯವಾಗಿದೆ. ಸಮ್ಮೇಳನದಲ್ಲಿ ದೊಡ್ಡ ವ್ಯಕ್ತಿ ಬರುತ್ತಾರೆ, ಬಹಳ ಸದಸ್ಯರೂ ಆಗುತ್ತಾರೆಂದರೆ ಅವರಿಗೆ ಸಲಹೆಯನ್ನು ಕೊಡಬೇಕಾಗುತ್ತದೆ. ತಂದೆ ಮಕ್ಕಳ ಪ್ರತ್ಯಕ್ಷತೆ ಮಾಡುತ್ತಾರೆ, ಶಿವ ಬಾಬಾನ ಮೊಮ್ಮಕ್ಕಳು, ಬ್ರಹ್ಮಾರವರ ಮಕ್ಕಳು, ವಿದ್ಯಾ ದೇವತೆಗಳಾಗುತ್ತಾರೆ. ಅವರಿಗೆ ಪರಮಾತ್ಮನೇ ಜ್ಞಾನವನ್ನು ಕೊಟ್ಟಿದ್ದಾರೆ. ಮನುಷ್ಯರಂತೂ ಶಾಸ್ತ್ರಗಳ ಜ್ಞಾನವನ್ನು ಓದುತ್ತಾರೆ. ಈ ರೀತಿ ಚೆನ್ನಾಗಿ ತಿಳಿಸಿದ್ದೇ ಆದರೆ ಬಹಳ ಮಜವಾಗಿರುತ್ತದೆ. ಯುಕ್ತಿಯನ್ನು ಅವಶ್ಯವಾಗಿ ರಚಿಸಬೇಕಾಗುತ್ತದೆ. ಒಂದು ಕಡೆ ಅವರದು ಸಮ್ಮೇಳನವಿದ್ದರೆ ಮತ್ತೊಂದು ಕಡೆ ನಿಮ್ಮದೂ ಸಹ ಸಮ್ಮೇಳನವು ಆಕರ್ಷಣೆಯಿಂದ ಕೂಡಿರಲಿ. ಚಿತ್ರಗಳೂ ಸಹ ಸ್ಪಷ್ಟವಾಗಿರಲಿ, ಇದರಿಂದ ತಕ್ಷಣ ತಿಳಿದುಕೊಳ್ಳುತ್ತಾರೆ. ಇವರದು ಕರ್ತವ್ಯವೇ ಬೇರೆ, ಅವರದೇ ಬೇರೆಯಾಗಿದೆ. ಎಲ್ಲರದೂ ಒಂದೇ ಆಗಿರಲು ಸಾಧ್ಯವಿದೆಯೇ? ಇಲ್ಲ. ಪ್ರತಿಯೊಂದು ಧರ್ಮದ ಪಾತ್ರವು ಬೇರೆ-ಬೇರೆಯಿದೆ. ಶಾಂತಿಗಾಗಿ ಒಟ್ಟಿಗೆ ಸೇರಿ ಕಾರ್ಯವನ್ನು ಮಾಡುತ್ತಾರೆ ಮತ್ತು ಧರ್ಮದಲ್ಲಿ ಶಕ್ತಿ ಇದೆ ಎಂದು ಹೇಳುತ್ತಾರೆ. ಆದರೆ ಎಲ್ಲರಿಗಿಂತ ಶಕ್ತಿಶಾಲಿಯಾರು ಅವರೇ ಬಂದು ಮೊದಲನೇ ನಂಬರಿನ ದೇವಿ ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ ಇದನ್ನು ನೀವು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ. ದಿನ-ಪ್ರತಿದಿನ ನೀವು ಮಕ್ಕಳಿಗೆ ಯುಕ್ತಿಗಳು ಸಿಗುತ್ತಾ ಇರುತ್ತದೆ. ತಿಳಿದುಕೊಳ್ಳುವಂತಹ ಶಕ್ತಿಯೂ ಸಹ ಇದೆ. ಯೋಗಿಯ ಶಕ್ತಿಯು ಚೆನ್ನಾಗಿರುತ್ತದೆ. ತಂದೆ ಹೇಳುತ್ತಾರೆ ಜ್ಞಾನಿ ಆತ್ಮರೇ ನನಗೆ ಪ್ರಿಯರಾಗುತ್ತಾರೆ. ಯೋಗಿಗಳು ಪ್ರಿಯರೆಂದೇನಲ್ಲ, ಯಾರು ಜ್ಞಾನಿಗಳಾಗಿರುತ್ತಾರೆ ಅವರೇ ಅವಶ್ಯವಾಗಿ ಯೋಗಿಗಳೂ ಆಗಿರುತ್ತಾರೆ. ಯೋಗವನ್ನು ಪರಮಪಿತ ಪರಮಾತ್ಮನ ಜೊತೆ ಇಡಲಾಗುತ್ತದೆ. ಯೋಗವಿಲ್ಲದೆ ಧಾರಣೆಯಾಗುವುದಿಲ್ಲ. ಯೋಗವಿಲ್ಲವೆಂದರೆ ಧಾರಣೆಯೂ ಇಲ್ಲ. ಏಕೆಂದರೆ ದೇಹಾಭಿಮಾನ ಬಹಳ ಇರುತ್ತದೆ. ತಂದೆಯು ತಿಳಿಸುತ್ತಾರೆ - ಆಸುರೀ ಬುದ್ಧಿಯವರನ್ನು ದೈವೀ ಬುದ್ಧಿಯುಳ್ಳವರನ್ನಾಗಿ ಮಾಡಬೇಕು. ಕಲ್ಲು ಬುದ್ಧಿಯವರನ್ನು ಪಾರಸ ಬುದ್ಧಿಯವರನ್ನಾಗಿ ಮಾಡುವವರು ಈಶ್ವರ ತಂದೆಯಾಗಿದ್ದಾರೆ. ರಾವಣನು ಬಂದು ಕಲ್ಲು ಬುದ್ಧಿಯವರನ್ನಾಗಿ ಮಾಡುತ್ತಾನೆ. ಅವರ ಹೆಸರೇ ಆಸುರೀ ಸಂಪ್ರದಾಯದವರೆಂದು ಆಗಿದೆ. ದೇವತೆಗಳ ಮುಂದೆ ಹೋಗಿ ನಮ್ಮಲ್ಲಿ ಯಾವುದೇ ಗುಣವಿಲ್ಲ, ನಾವು ಕಾಮಿ-ಕಪಟಿಯಾಗಿದ್ದೇವೆ ಎಂದು ಹೇಳುತ್ತಾರೆ. ನೀವು ಮಾತೆಯರು ಚೆನ್ನಾಗಿ ತಿಳಿಸಿಕೊಡಲು ಸಾಧ್ಯವಿದೆ. ಮುರುಳಿ ನುಡಿಸಲು ಇಷ್ಟೊಂದು ಉತ್ಸಾಹವಿರಬೇಕು. ದೊಡ್ಡ-ದೊಡ್ಡ ಸಭೆಗಳಲ್ಲಿ ಇಂತಹ ಮಾತುಗಳನ್ನಾಡಬೇಕು. ಮಮ್ಮಾರವರು ವಿದ್ಯಾ ದೇವತೆಯಾಗಿದ್ದಾರೆ. ಬ್ರಹ್ಮಾರವರಿಗೆ ಎಂದೂ ಸಹ ವಿದ್ಯಾ ದೇವನೆಂದು ಕರೆಯುವುದಿಲ್ಲ, ಸರಸ್ವತಿಯ ಹೆಸರು ಗಾಯನ ಮಾಡಲ್ಪಟ್ಟಿದೆ. ಕೆಲವರು ತಮ್ಮ ಹೆಸರನ್ನೇ ಹಾಗೆ ಇಟ್ಟುಕೊಳ್ಳುತ್ತಾರೆ. ಮಾತೆಯರ ಹೆಸರನ್ನು ಪ್ರಸಿದ್ಧಗೊಳಿಸಬೇಕಾಗಿದೆ. ಕೆಲವರು ಅಣ್ಣಂದಿರಿಗೆ ದೇಹಾಭಿಮಾನವಿರುತ್ತದೆ. ನಾವು ಬ್ರಹ್ಮಾಕುಮಾರರು ವಿದ್ಯಾ ದೇವತೆ ಅಲ್ಲವೆ! ಅರೆ! ಬ್ರಹ್ಮಾರವರೇ ತನ್ನನ್ನು ವಿದ್ಯಾ ದೇವನೆಂದು ಹೇಳುವುದಿಲ್ಲ, ಮಾತೆಯರ ಬಗ್ಗೆ ಬಹಳ ಗೌರವವನ್ನಿಡಬೇಕು. ಈ ಮಾತೆಯರೇ ಜೀವನವನ್ನು ಪರಿವರ್ತಿಸುವವರಾಗಿದ್ದಾರೆ. ಮನುಷ್ಯರಿಂದ ದೇವತೆಯನ್ನಾಗಿ ಮಾಡುವವರಾಗಿದ್ದಾರೆ. ಮಾತೆಯರೂ ಸಹ ಇದ್ದಾರೆ, ಕನ್ಯೆಯರೂ ಸಹ ಇದ್ದಾರೆ. ಅಧರ್ ಕುಮಾರಿಯರ ರಹಸ್ಯವನ್ನಂತೂ ಯಾರೂ ತಿಳಿದುಕೊಂಡಿಲ್ಲ. ಭಲೆ ವಿವಾಹ ಮಾಡಿಕೊಂಡಿದ್ದರೂ ಸಹ ಅವರು ಬ್ರಹ್ಮಾಕುಮಾರಿಯಾಗಿದ್ದಾರೆ. ಇದು ಬಹಳ ವಿಚಿತ್ರವಾದ ಮಾತಾಗಿದೆ. ಯಾರು ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆಯೋ ಅವರು ತಿಳಿದುಕೊಳ್ಳುತ್ತಾರೆ. ಆದರೆ ಯಾರ ಅದೃಷ್ಟದಲ್ಲಿಲ್ಲವೆಂದರೆ ಅವರು ಹೇಗೆ ತಾನೆ ತಿಳಿಯಲು ಸಾಧ್ಯ! ನಂಬರ್ವಾರ್ ಪದವಿಯಿರುತ್ತದೆಯಲ್ಲವೆ. ಅಲ್ಲಿಯೂ ಸಹ ದಾಸ-ದಾಸಿಯಾಗುತ್ತಾರೆ. ಪ್ರಜೆಗಳಾಗುತ್ತಾರೆ. ಪ್ರಜೆಗಳೂ ಬೇಕು, ಮನುಷ್ಯ ಸೃಷ್ಟಿಯು ವೃದ್ಧಿಯನ್ನು ಹೊಂದುತ್ತಾ ಇರುತ್ತದೆ. ಪ್ರಜೆಗಳೂ ಸಹ ವೃದ್ಧಿಯನ್ನು ಹೊಂದುತ್ತಾ ಇರುತ್ತಾರೆ. ಈ ರೀತಿ ಸಮ್ಮೇಳನಗಳಾದರೆ ಅದಕ್ಕಾಗಿ ಯಾರು ಮುಖ್ಯರೆಂದು ತಿಳಿದಿದ್ದೀರಿ, ಅವರುಗಳು ಸಿದ್ಧರಾಗಬೇಕು. ಯಾರಲ್ಲಿ ಜ್ಞಾನವಿಲ್ಲವೋ ಅವರು ಚಿಕ್ಕವರಾಗುತ್ತಾರೆ. ಇಷ್ಟೊಂದು ಬುದ್ಧಿಯಿಲ್ಲ, ನೋಡಲು ಭಲೆ ದೊಡ್ಡವರು ಆದರೆ ಬುದ್ಧಿಯಿಲ್ಲ. ಅವರು ಚಿಕ್ಕ ಮಕ್ಕಳ ರೀತಿ ಇರುತ್ತಾರೆ. ಕೆಲವು ಮಕ್ಕಳ ಬುದ್ಧಿಯು ಬಹಳ ಚೆನ್ನಾಗಿರುತ್ತದೆ. ಎಲ್ಲವೂ ಬುದ್ಧಿಯ ಮೇಲೆ ಆಧಾರಿತವಾಗಿದೆ. ಚಿಕ್ಕ-ಚಿಕ್ಕವರೂ ಸಹ ಬಹಳ ಮುಂದೆ ಹೋಗುತ್ತಾರೆ. ಕೆಲವರು ತಿಳಿಸಿಕೊಡುವುದರಲ್ಲಿ ಬಹಳ ಮಧುರತೆಯಿರುತ್ತದೆ, ಬಹಳ ಘನತೆಯಿಂದ ಮಾತನಾಡುತ್ತಾರೆ. ಆಗ ಇವರು ತುಂಬಾ ಪರಿಶುದ್ಧ ಮಕ್ಕಳೆಂದು ತಿಳಿದುಕೊಳ್ಳಲಾಗುತ್ತದೆ. ನಡವಳಿಕೆಯಿಂದಲೂ ಪ್ರತ್ಯಕ್ಷತೆಯಾಗುತ್ತದೆಯಲ್ಲವೆ. ಮಕ್ಕಳ ನಡವಳಿಕೆ ಬಹಳ ಘನತೆಯಿಂದ ಕೂಡಿರಬೇಕು. ಯಾವುದೇ ಅಗೌರವವನ್ನು ತರುವ ಕೆಲಸವನ್ನು ಮಾಡಬಾರದು. ಯಾರು ಹೆಸರಿಗೆ ಕಳಂಕವನ್ನು ತರುತ್ತಾರೆಯೋ ಅವರು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಶಿವ ತಂದೆಯ ಹೆಸರಿಗೆ ಕಳಂಕವನ್ನು ತರುತ್ತೀರೆಂದರೆ ತಿಳುವಳಿಕೆ ಕೊಡಲು ತಂದೆಗೂ ಅಧಿಕಾರವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ರಾತ್ರಿ ಕ್ಲಾಸ್ :-

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಜೀವಾತ್ಮರು ಪರಮಪಿತ ಪರಮಾತ್ಮನ ಸನ್ಮುಖದಲ್ಲಿ ಕುಳಿತುಕೊಂಡಿದ್ದೇವೆ. ಇದಕ್ಕೆ ಮಂಗಳ ಮಿಲನವೆಂದು ಕರೆಯಲಾಗುತ್ತದೆ. ಮಂಗಳಂ ಭಗವಾನ್ ವಿಷ್ಣು ಎಂದು ಗಾಯನ ಮಾಡಲಾಗುತ್ತದೆ. ಈಗ ಮಿಲನದ ಮಂಗಳವಲ್ಲವೆ. ಭಗವಂತನು ವಿಷ್ಣು ಕುಲದ ಆಸ್ತಿಯನ್ನು ಕೊಡುತ್ತಾರೆ. ಆದ್ದರಿಂದ ಅವರಿಗೆ ಮಂಗಳಂ ಭಗವಾನ್ ವಿಷ್ಣು ಎಂದು ಹೇಳಲಾಗುತ್ತದೆ. ಯಾವಾಗ ತಂದೆಯು ಜೀವಾತ್ಮರನ್ನು ಮಿಲನ ಮಾಡುತ್ತಾರೆಯೋ ಅದು ಬಹಳ ಸುಂದರ ಮಿಲನವಾಗಿದೆ. ನಾವು ಈಗ ಈಶ್ವರನ ಮಕ್ಕಳಾಗಿದ್ದೇವೆ ಎಂದು ನೀವೂ ಸಹ ತಿಳಿದುಕೊಂಡಿದ್ದೀರಿ. ಈಶ್ವರನ ಆಸ್ತಿಯ ನಂತರ ದೈವೀ ಆಸ್ತಿಯು ಸಿಗುತ್ತದೆ ಅರ್ಥಾತ್ ಸ್ವರ್ಗದಲ್ಲಿ ಪುನರ್ಜನ್ಮ ಸಿಗುತ್ತದೆ ಎಂಬುದು ಮಕ್ಕಳಿಗೆ ತಿಳಿದಿದೆ. ಅಂದಾಗ ನೀವು ಮಕ್ಕಳು ಖುಷಿಯ ಅಮಲನ್ನು ಏರಿಸಿಕೊಳ್ಳಬೇಕಾಗಿದೆ. ನಿಮ್ಮಂತಹ ಖುಷಿಯ ಅದೃಷ್ಟವಂತರು, ಸೌಭಾಗ್ಯಶಾಲಿಗಳು ಯಾರೂ ಇಲ್ಲ. ಪ್ರಪಂಚದಲ್ಲಿ ಬ್ರಾಹ್ಮಣ ಕುಲದ ವಿನಃ ಮತ್ತ್ಯಾರೂ ಭಾಗ್ಯಶಾಲಿಗಳಾಗಲು ಸಾಧ್ಯವಿಲ್ಲ. ವಿಷ್ಣು ಕುಲವು ಎರಡನೆಯ ದರ್ಜೆಯದ್ದಾಗಿ ಬಿಡುತ್ತದೆ. ಅದು ದೈವೀ ಮಡಿಲಿನದ್ದಾಗಿ ಬಿಡುತ್ತದೆ. ಈಗ ಈಶ್ವರೀಯ ಮಡಿಲಿದೆ. ಇದಂತೂ ಶ್ರೇಷ್ಠವಾಗಿ ಬಿಟ್ಟಿತಲ್ಲವೆ. ದಿಲ್ವಾಡಾ ಮಂದಿರವು ಈಶ್ವರೀಯ ಮಡಿಲಿನ ಮಂದಿರವಾಗಿದೆ. ಹೇಗೆ ಅಂಬಾರವರದೂ ಸಹ ಮಂದಿರವಿದೆ, ಅದು ಇಷ್ಟೂಂದು ಸಂಗಮಯುಗದ ಸಾಕ್ಷಾತ್ಕಾರವನ್ನು ಮಾಡುವುದಿಲ್ಲ, ಈ ದಿಲ್ವಾಡಾ ಮಂದಿರವು ಸಂಗಮಯುಗದ ಸಾಕ್ಷಾತ್ಕಾರವನ್ನು ಮಾಡಿಸುತ್ತದೆ. ಮಕ್ಕಳಿಗೆ ಇರುವಷ್ಟು ತಿಳವಳೀಕೆ ಬೇರೆ ಯಾವುದೇ ಮನುಷ್ಯ ಮಾತ್ರರಿಗೂ ಇಲ್ಲ. ನೀವು ಬ್ರಾಹ್ಮಣರಿಗೆ ಇರುವಷ್ಟು ತಿಳವಳಿಕೆ ದೇವತೆಗಳಿಗೂ ಇರುವುದಿಲ್ಲ. ನೀವು ಸಂಗಮಯುಗೀ ಬ್ರಾಹ್ಮಣರಾಗಿದ್ದೀರಿ. ಅವರು ಸಂಗಮಯುಗೀ ಬ್ರಾಹ್ಮಣರ ಮಹಿಮೆ ಮಾಡುತ್ತಾರೆ. ಬ್ರಾಹ್ಮಣ ಸೋ ದೇವತೆಗಳಾಗುತ್ತಾರೆಂದು ಹೇಳುತ್ತಾರೆ. ಇಂತಹ ಬ್ರಾಹ್ಮಣರಿಗೆ ನಮಃ. ಬ್ರಾಹ್ಮಣರೇ ನರಕವನ್ನು ಸ್ವರ್ಗವನ್ನಾಗಿ ಮಾಡುವ ಸರ್ವೀಸ್ ಮಾಡುತ್ತಾರೆ, ಇಂತಹ ಮಕ್ಕಳಿಗೆ (ಬ್ರಾಹ್ಮಣರು) ನಮಸ್ತೆ ಮಾಡುತ್ತಾರೆ. ಒಳ್ಳೆಯದು. ಶುಭ ರಾತ್ರಿ.

ಧಾರಣೆಗಾಗಿ ಮುಖ್ಯಸಾರ:

1. ತಂದೆಗೆ ಪ್ರಿಯರಾಗುವುದಕ್ಕೆ ಜ್ಞಾನಿ ಮತ್ತು ಯೋಗಿಗಳಾಗಬೇಕಾಗಿದೆ. ದೇಹಾಭಿಮಾನದಲ್ಲಿ ಬರಬಾರದಾಗಿದೆ.

2. ಮುರುಳಿಯನ್ನು ನುಡಿಸುವಂತಹ ಆಸಕ್ತಿಯಿರಬೇಕಾಗಿದೆ. ತಮ್ಮ ಚಲನೆಯಿಂದ ತಂದೆಯನ್ನು ಶೋ ಮಾಡಬೇಕಾಗಿದೆ. ಮಾತುಗಳನ್ನು ಬಹಳ ಮಧುರವಾಗಿ ಮಾತನಾಡಬೇಕಾಗಿದೆ.

ವರದಾನ:
ಮನಸಾ ಮತ್ತು ವಾಚಾದ ಶಕ್ತಿಯನ್ನು ಯಥಾರ್ಥ ಮತ್ತು ಸಮರ್ಥ ರೂಪದಲ್ಲಿ ಕಾರ್ಯದಲ್ಲಿ ತೊಡಗಿಸುವ ತೀವ್ರ ಪುರುಷಾರ್ಥಿ ಭವ.

ತೀವ್ರ ಪುರುಷಾರ್ಥಿ ಅರ್ಥಾತ್ ಫಸ್ಟ್ ಡಿವಿಷನ್ ನಲ್ಲಿ ಬರುವಂತಹ ಮಕ್ಕಳು ಸಂಕಲ್ಪ ಶಕ್ತಿ ಮತ್ತು ವಾಣಿಯ ಶಕ್ತಿಯನ್ನು ಯಥಾರ್ಥ ಮತ್ತು ಸಮರ್ಥ ರೀತಿಯಿಂದ ಕಾರ್ಯದಲ್ಲಿ ತೊಡಗಿಸುವರು. ಅವರಿಗೆ ಈ ಸ್ಲೋಗನ್ ಸದಾ ನೆನಪಿನಲ್ಲಿರುವುದು ಕಡಿಮೆ ಮಾತನಾಡಿ, ನಿಧಾನವಾಗಿ ಮಾತನಾಡಿ ಮತ್ತು ಮಧುರವಾಗಿ ಮಾತನಾಡಿ. ಅವರ ಪ್ರತಿ ಮಾತು ಯೋಗಯುಕ್ತ, ಯುಕ್ತಿಯುಕ್ತವಾಗಿರುತ್ತದೆ. ಅವರು ಅವಶ್ಯಕವಾದದ್ದನ್ನೇ ಮಾತನಾಡುತ್ತಾರೆ. ವ್ಯರ್ಥ ಮಾತು, ವಿಸ್ತಾರದ ಮಾತನ್ನು ಆಡಿ ತಮ್ಮ ಶಕ್ತಿಯನ್ನು ಸಮಾಪ್ತಿ ಮಾಡಿಕೊಳ್ಳುವುದಿಲ್ಲ. ಅವರು ಸದಾ ಏಕಾಂತಪ್ರಿಯರಾಗಿರುತ್ತಾರೆ.

ಸ್ಲೋಗನ್:
ಸಂಪೂರ್ಣ ನಷ್ಠಾಮೋಹ ಅವರೇ ಆಗಿದ್ದಾರೆ ಯಾರು ನ್ನತನದ ಅಧಿಕಾರವನ್ನೂ ಸಹಾ ತ್ಯಾಗ ಮಾಡಿರುತ್ತಾರೆ.