13.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಯಾವಾಗ ಬುದ್ಧಿಯೋಗವು ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳಿಂದ ದೂರವಾಗುತ್ತದೆಯೋ ಆಗಲೇ ನಿಮ್ಮ ಅವ್ಯಭಿಚಾರಿ ಪ್ರೀತಿಯು ಒಬ್ಬ ತಂದೆಯ ಜೊತೆ ಜೋಡಣೆಯಾಗುತ್ತದೆ”

ಪ್ರಶ್ನೆ:
ನೀವು ಮಕ್ಕಳ ರೇಸ್ (ಸ್ಪರ್ಧೆ) ಯಾವುದಾಗಿದೆ? ಆ ಸ್ಪರ್ಧೆಯಲ್ಲಿ ಮುಂದೆ ಹೋಗುವ ಆಧಾರ ಏನಾಗಿದೆ?

ಉತ್ತರ:
ಪಾಸ್-ವಿತ್-ಆನರ್ ಆಗುವುದು ನಿಮ್ಮ ಸ್ಪರ್ಧೆಯಾಗಿದೆ. ಈ ರೇಸ್ಗೆ ಆಧಾರವು ಬುದ್ಧಿಯೋಗವಾಗಿದೆ. ಎಷ್ಟು ತಂದೆಯ ಜೊತೆ ಬುದ್ಧಿಯೋಗವಿರುವುದೋ ಅಷ್ಟು ಪಾಪಗಳು ಭಸ್ಮವಾಗುತ್ತದೆ ಮತ್ತು ಅಟಲ, ಅಖಂಡ, ಸುಖ-ಶಾಂತಿಮಯ 21 ಜನ್ಮಗಳ ರಾಜ್ಯವು ಪ್ರಾಪ್ತಿಯಾಗುವುದು. ಇದಕ್ಕಾಗಿ ತಂದೆಯು ಸಲಹೆ ನೀಡುತ್ತಾರೆ - ಮಕ್ಕಳೇ, ನಿದ್ರೆಯನ್ನು ಗೆಲ್ಲುವವರಾಗಿ. ಒಂದು ಘಳಿಗೆ, ಅರ್ಧ ಘಳಿಗೆಯಾದರೂ ನೆನಪಿನಲ್ಲಿರುತ್ತಾ, ಅಭ್ಯಾಸವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿ, ನೆನಪಿನದೇ ರೆಕಾರ್ಡ್ (ಚಾರ್ಟ್) ನ್ನು ಇಡಿ.

ಗೀತೆ:
ಅವರು ನಮ್ಮನ್ನೆಂದೂ ಅಗಲುವುದಿಲ್

ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ. ಈಗ ನೀವು ಮಕ್ಕಳ ಪ್ರೀತಿಯು ಬೇಹದ್ದಿನ ತಂದೆಯಾದ ಶಿವನ ಜೊತೆ ಜೋಡಿಸಲ್ಪಟ್ಟಿದೆ. ನೀವು ಬ್ರಹ್ಮಾಕುಮಾರ-ಕುಮಾರಿಯರು ಇವರನ್ನು ತಾತನೆಂದು ಹೇಳುತ್ತೀರಿ. ಪ್ರಪಂಚದಲ್ಲಿ ಬಾಪ್ದಾದಾರವರ ಕರ್ತವ್ಯವನ್ನರಿತುಕೊಂಡಿರುವ ಮನುಷ್ಯರು ಯಾರೂ ಇಲ್ಲಿಲ್ಲ. ಇಂತಹ ಯಾವುದೇ ಸಂಸ್ಥೆಯೂ ಇಲ್ಲ. ನಾವು ಬ್ರಹ್ಮಾಕುಮಾರ-ಕುಮಾರಿಯೆಂದು ಹೇಳುವಂತಹ ಯಾವುದೇ ಸಂಸ್ಥೆಯಿಲ್ಲ. ಮಾತೆಯರಂತೂ ಕುಮಾರಿಯರಲ್ಲ. ಆದರೂ ಸಹ ಬ್ರಹ್ಮಾಕುಮಾರಿಯೆಂದು ಏಕೆ ಕರೆಸಿಕೊಳ್ಳುತ್ತಾರೆ. ಏಕೆಂದರೆ ಬ್ರಹ್ಮಾಮುಖವಂಶಾವಳಿ ಆಗಿದ್ದಾರೆ. ಒಬ್ಬ ತಂದೆಯ ಮಕ್ಕಳಾಗಿದ್ದೀರಿ. ಅಂದಮೇಲೆ ಬ್ರಹ್ಮಾರವರ ಕರ್ತವ್ಯವನ್ನು ತಿಳಿದುಕೊಳ್ಳಬೇಕು. ಬ್ರಹ್ಮಾ ಯಾರ ಮಗನಾಗಿದ್ದಾರೆ? ಶಿವನ ಮಗ. ಶಿವ ತಂದೆಗೆ ಮೂವರು ಮಕ್ಕಳು - ಬ್ರಹ್ಮಾ, ವಿಷ್ಣು, ಶಂಕರರು ಸೂಕ್ಷ್ಮವತನವಾಸಿಗಳಾಗಿದ್ದಾರೆ. ಈಗ ಪ್ರಜಾಪಿತ ಬ್ರಹ್ಮಾರವರಂತೂ ಸ್ಥೂಲವತನವಾಸಿಯಾಗಿರಬೇಕು. ನಾವು ಪ್ರಜಾಪಿತ ಬ್ರಹ್ಮಾರವರ ಮುಖವಂಶಾವಳಿ ಆಗಿದ್ದೇವೆಂದು ಎಲ್ಲರೂ ಹೇಳುತ್ತಾರೆ ಅಂದಮೇಲೆ ಕುಖವಂಶಾವಳಿಯಂತೂ ಆಗಿರಲು ಸಾಧ್ಯವಿಲ್ಲ. ಗರ್ಭದಿಂದ ಆದ ಜನ್ಮವಲ್ಲ. ಮತ್ತೆ ನಿಮ್ಮೊಂದಿಗೆ ಇವರೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರೆಂದು ಏಕೆ ಕರೆಸಿಕೊಳ್ಳುತ್ತಾರೆಂದು ಕೇಳುವುದೇ ಇಲ್ಲ. ಮಾತೆಯರೂ ಸಹ ಬ್ರಹ್ಮಾಕುಮಾರಿಯರಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಬ್ರಹ್ಮನ ಮಕ್ಕಳು ಬ್ರಹ್ಮನ ಮುಖವಂಶಾವಳಿಯಾದರು. ಇವರೆಲ್ಲರೂ ಈಶ್ವರನ ಸಂತಾನರಾಗಿದ್ದಾರೆ. ಈಶ್ವರ ಯಾರು? ಅವರು ಪರಮಪಿತ ಪರಮಾತ್ಮ, ರಚೈತನಾಗಿದ್ದಾರೆ. ಯಾವ ವಸ್ತುವಿನ ರಚನೆ ಮಾಡುತ್ತಾರೆ? ಸ್ವರ್ಗವನ್ನು ರಚಿಸುತ್ತಾರೆ ಅಂದಮೇಲೆ ಅವಶ್ಯವಾಗಿ ತಮ್ಮ ಮೊಮ್ಮಕ್ಕಳಿಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ರಾಜಯೋಗವನ್ನು ಕಲಿಸಲು ಅವರಿಗೆ ಶರೀರ ಬೇಕು. ಹಾಗೆಯೇ ಪೇಠವನ್ನು ತೊಡಿಸುತ್ತಾರೇನು? ಶಿವ ತಂದೆಯು ಕುಳಿತು ಬ್ರಹ್ಮಾಮುಖವಂಶಾವಳಿಗೆ ಪುನಃ ರಾಜಯೋಗವನ್ನು ಕಲಿಸುತ್ತಾರೆ. ಏಕೆಂದರೆ ಪುನಃ ಸ್ವರ್ಗ ಸ್ಥಾಪನೆ ಮಾಡುತ್ತಾರೆ. ಇಲ್ಲವೆಂದರೆ ಇಷ್ಟೆಲ್ಲಾ ಬ್ರಹ್ಮಾಕುಮಾರ-ಕುಮಾರಿಯರು ಎಲ್ಲಿಂದ ಬಂದರು? ಆಶ್ಚರ್ಯವಾಗಿದೆ, ಯಾರೂ ಧೈರ್ಯವಾಗಿ ಕೇಳುವುದಿಲ್ಲ! ಇಷ್ಟೊಂದು ಸೇವಾಕೇಂದ್ರಗಳಿವೆ! ತಾವು ಯಾರು, ತಮ್ಮ ಪರಿಚಯವನ್ನು ಕೊಡಿ ಎಂದು ಕೇಳಬೇಕಿತ್ತು. ಆದರೆ ಇದಂತೂ ಸ್ಪಷ್ಟವಾಗಿದೆ - ಪ್ರಜಾಪಿತ ಬ್ರಹ್ಮನಿಗೆ ಕುಮಾರ-ಕುಮಾರಿಯರು ಮತ್ತು ಶಿವನ ಮೊಮ್ಮಕ್ಕಳು ನಾವು ಅವರಿಗೆ ಮಕ್ಕಳಾಗಿದ್ದೇವೆ ಅವರೊಂದಿಗೆ ನಮ್ಮ ಪ್ರೀತಿಯಿದೆ. ಶಿವ ತಂದೆಯೂ ಸಹ ತಿಳಿಸುತ್ತಾರೆ. ಎಲ್ಲರಿಂದ ಪ್ರೀತಿ ಅಥವಾ ಬುದ್ಧಿಯೋಗವನ್ನು ತೆಗೆದು ನನ್ನೊಬ್ಬನ ಜೊತೆ ಬುದ್ಧಿಯೋಗವನ್ನಿಡಿ. ನಾನು ನಿಮಗೆ ಬ್ರಹ್ಮಾರವರ ಮೂಲಕ ರಾಜಯೋಗವನ್ನು ಕಲಿಸುತ್ತಿದ್ದೇನೆ ಮತ್ತು ನೀವು ಬ್ರಹ್ಮಾಕುಮಾರ-ಕುಮಾರಿಯರು ಕೇಳುತ್ತಿದ್ದೀರಲ್ಲವೆ. ಇಷ್ಟು ಸಹಜ, ನೇರ ಮಾತಾಗಿದೆ. ಕೇಳಬೇಕಲ್ಲವೇ ಅಂದಾಗ ಇದು ಗೋ ಶಾಲೆಯಾಯಿತು. ಶಾಸ್ತ್ರಗಳಲ್ಲಿ ಬ್ರಹ್ಮನ ಗೋ ಶಾಲೆಯೆಂದು ಗಾಯನವಿದೆ. ವಾಸ್ತವದಲ್ಲಿ ಇದು ಶಿವ ತಂದೆಯ ಗೋ ಶಾಲೆಯಾಗಿದೆ. ಶಿವ ತಂದೆಯು ಈ ನಂದೀಗಣದಲ್ಲಿ ಬರುವುದರಿಂದ ಗೋ ಶಾಲೆಯ ಶಬ್ಧದ ಕಾರಣ ಶಾಸ್ತ್ರಗಳಲ್ಲಿ ಇದನ್ನು ಅವರು ಗೋವು ಮೊದಲಾದವುಗಳನ್ನು ತೋರಿಸಿದ್ದಾರೆ. ಶಿವ ಜಯಂತಿಯಿದೆ ಅಂದರೆ ಅವಶ್ಯವಾಗಿ ಶಿವ ತಂದೆಯು ಬಂದಿರಬೇಕು, ಅವಶ್ಯವಾಗಿ ಯಾರ ಶರೀರದಲ್ಲಿಯೋ ಬಂದಿರಬೇಕು. ನಿಮಗೆ ಗೊತ್ತಿದೆ, ಇದು ಈಶ್ವರೀಯ ಶಾಲೆಯಾಗಿದೆ. ಶಿವಭಗವಾನುವಾಚ, ಜ್ಞಾನಸಾಗರ, ಪತಿತ-ಪಾವನ ಅವರಾಗಿದ್ದಾರೆ. ಕೃಷ್ಣನಂತೂ ಸ್ವಯಂ ಪಾವನನಾಗಿದ್ದಾನೆ ಅಂದಮೇಲೆ ಕೃಷ್ಣನು ಪತಿತ ಶರೀರದಲ್ಲಿ ಬರಲು ಅವರಿಗೇನಾಗಿದೆ. ದೂರ ದೇಶದಲ್ಲಿರುವವರು ಪರದೇಶದಲ್ಲಿ ಬಂದರೆಂಬ ಗಾಯನವೂ ಇದೆ. ಶರೀರವೂ ಸಹ ಪರರದಾಗಿದೆ ಅಂದಮೇಲೆ ಅವಶ್ಯವಾಗಿ ಶಿವ ತಂದೆಯು ಈ ಬ್ರಹ್ಮಾರವರನ್ನು ರಚಿಸಿರಬೇಕು. ಆಗ ತಾನೇ ಮನುಷ್ಯ

ಸೃಷ್ಟಿಯನ್ನು ರಚಿಸಲಾಗುವುದು. ಅಂದಮೇಲೆ ಇವರು ಬಾಪ್ದಾದಾ ಎಂಬುದೂ ಸಹ ಸಿದ್ಧವಾಯಿತು. ಪ್ರಜಾಪಿತ ಬ್ರಹ್ಮಾರವರು ಆದಿದೇವ, ಮಹಾವೀರನಾಗಿದ್ದಾರೆ. ಏಕೆಂದರೆ ಮಾಯೆಯ ಮೇಲೆ ಜಯ ಗಳಿಸುತ್ತಾರೆ. ಜಗದಂಬಾನ ಗಾಯನವೂ ಇದೆ. ಶ್ರೀ ಲಕ್ಷ್ಮಿಯ ಗಾಯನವೂ ಇದೆ. ಆದರೆ ಜಗದಂಬೆಯು ಬ್ರಹ್ಮನ ಮಗಳು ಸರಸ್ವತಿಯಾಗಿದ್ದಾರೆ ಎಂಬುದು ಪ್ರಪಂಚದವರಿಗೆ ಗೊತ್ತಿಲ್ಲ. ಅವರೂ ಸಹ ಬ್ರಹ್ಮಾಕುಮಾರಿಯಾಗಿದ್ದಾರೆ, ಇವರೂ ಬ್ರಹ್ಮಾಕುಮಾರಿಯರಾಗಿದ್ದಾರೆ. ಶಿವ ತಂದೆಯು ಬ್ರಹ್ಮಾರವರ ಮುಖದಿಂದ ಇವರನ್ನು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ. ಈಗ ಇವರೆಲ್ಲರ ಬುದ್ಧಿಯೋಗವು ತಂದೆಯ ಜೊತೆಯಿದೆ. ಬುದ್ಧಿಯೋಗವನ್ನು ಪರಮಾತ್ಮನ ಜೊತೆಯಿಡಿ ಮತ್ತೆಲ್ಲರೊಂದಿಗಿನ ಬುದ್ಧಿಯೋಗವನ್ನು ತೆಗೆದು ಒಬ್ಬರೊಂದಿಗೆ ಜೋಡಿಸಿ ಎಂದು ಹೇಳಲಾಗುತ್ತದೆ. ಅವರೊಬ್ಬರೆ ಭಗವಂತನಾಗಿದ್ದಾರೆ ಆದರೆ ಇದನ್ನು ತಿಳಿದುಕೊಂಡಿಲ್ಲ. ತಿಳಿದುಕೊಳ್ಳುವುದಾದರೂ ಹೇಗೆ? ಯಾವಾಗ ತಂದೆಯು ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆಯೋ ಆಗಲೇ ನಿಶ್ಚಯವಾಗುತ್ತದೆ. ಇತ್ತೀಚೆಗಂತೂ ಆತ್ಮವೇ ಪರಮಾತ್ಮನೆಂದು ಕಲಿಸಿ ಬಿಟ್ಟಿದ್ದಾರೆ. ಇದರಿಂದ ಸಂಬಂಧವು ಕತ್ತರಿಸಿ ಹೋಗಿದೆ. ಈಗ ನೀವು ಮಕ್ಕಳು ವಾಸ್ತವದಲ್ಲಿ ಸತ್ಯ-ಸತ್ಯ ಸತ್ಯ ನಾರಾಯಣನ ಕಥೆಯನ್ನು ಕೇಳುತ್ತೀರಿ. ಅವರು ಸುಖದೇವನಾಗಿದ್ದಾರೆ ಮತ್ತು ನೀವು ವ್ಯಾಸರಾಗಿದ್ದೀರಿ. ಗೀತೆಯಲ್ಲಿಯೂ ವ್ಯಾಸರ ಹೆಸರಿದೆಯಲ್ಲವೆ. ಅವರಂತೂ ಮನುಷ್ಯನಾದರು. ಆದರೆ ಸತ್ಯವಾದ ವ್ಯಾಸರು ತಾವಾಗಿದ್ದೀರಿ. ನೀವು ಯಾವ ಗೀತೆಯನ್ನು ರಚಿಸುತ್ತೀರೋ ಅದೂ ಸಹ ವಿನಾಶವಾಗಿ ಬಿಡುತ್ತದೆ. ಸತ್ಯ ಮತ್ತು ಅಸತ್ಯವಾದ ಗೀತೆಯು ಈಗಷ್ಟೇ ಇದೆ. ಸತ್ಯ ಖಂಡದಲ್ಲಿ ಅಸತ್ಯದ ಹೆಸರಿರುವುದಿಲ್ಲ. ನೀವು ತಾತನಿಂದ ಆಸ್ತಿಯನ್ನು ಪಡೆಯುತ್ತಿದ್ದೀರಿ. ಇದು ತಂದೆಯ (ಬ್ರಹ್ಮಾ) ಆಸ್ತಿಯಲ್ಲ. ಸ್ವರ್ಗದ ರಚಯಿತ ಶಿವ ತಂದೆಯಾಗಿದ್ದಾರೆಯೇ ಹೊರತು ಬ್ರಹ್ಮನಲ್ಲ. ಬ್ರಹ್ಮಾರವರು ಮನುಷ್ಯ ಸೃಷ್ಟಿಯ ರಚಯಿತನಾಗಿದ್ದಾರೆ. ಬ್ರಹ್ಮಾನ ಮುಖಕಮಲದಿಂದ ಬ್ರಾಹ್ಮಣ ವರ್ಣವು ರಚಿಸಲ್ಪಟ್ಟಿತು. ನೀವು ಶಿವನ ಮೊಮ್ಮಕ್ಕಳು ಅರ್ಥಾತ್ ಈಶ್ವರೀಯ ಸಂಪ್ರದಾಯದವರಾಗಿದ್ದೀರಿ. ಅವರನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದೀರಿ. ಗುರುವಿನ ಮೊಮ್ಮೊಕ್ಕಳೆಂದು ಕರೆಸಿಕೊಳ್ಳುತ್ತಾರಲ್ಲವೆ. ಈಗ ನೀವು ಸದ್ಗುರುವಿನ ಮೊಮ್ಮಕ್ಕಳಾಗಿದ್ದೀರಿ. ಅವರಂತೂ ಕೇವಲ ಮೊಮ್ಮಕ್ಕಳಾಗಿರುತ್ತಾರೆ ಅರ್ಥಾತ್ ಕೇವಲ ಪುರುಷರಷ್ಟೇ ಇರುತ್ತಾರೆ, ಸ್ತ್ರೀಯರಿರುವುದಿಲ್ಲ. ಸದ್ಗುರುವಂತೂ ಒಬ್ಬ ಶಿವ ತಂದೆಯಾಗಿದ್ದಾರೆ. ಸದ್ಗುರುವಿಲ್ಲದೆ ಘೋರ ಅಂಧಕಾರವೆಂಬ ಗಾಯನವೂ ಇದೆ. ನಿಮ್ಮ ಬ್ರಹ್ಮಾಕುಮಾರ-ಕುಮಾರಿಯೆಂಬ ಹೆಸರು ಬಹಳ ವಿಚಿತ್ರವಾಗಿದೆ. ತಂದೆಯು ಎಷ್ಟೊಂದು ತಿಳಿಸುತ್ತಾರೆ. ಆದರೆ ಕೆಲವು ಮಕ್ಕಳು ಇದನ್ನು ತಿಳಿಯುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ಬೇಹದ್ದಿನ ತಂದೆಯಾದ ನನ್ನನ್ನು ಅರಿತುಕೊಳ್ಳುವುದರಿಂದ ನೀವು ಮತ್ತೆಲ್ಲವನ್ನೂ ಅರಿತುಕೊಳ್ಳುತ್ತೀರಿ. ಸತ್ಯಯುಗ, ತ್ರೇತಾದಲ್ಲಿ ಸೂರ್ಯವಂಶಿ, ಚಂದ್ರವಂಶಿ ರಾಜ್ಯವಿತ್ತು ಮತ್ತೆ ರಾವಣ ರಾಜ್ಯದಲ್ಲಿ ಬ್ರಹ್ಮನ ರಾತ್ರಿಯು ಪ್ರಾರಂಭವಾಗುತ್ತದೆ. ಪ್ರತ್ಯಕ್ಷ ರೂಪದಲ್ಲಿ ಬ್ರಹ್ಮಾಕುಮಾರ-ಕುಮಾರಿಯರು ತಾವಾಗಿದ್ದೀರಿ. ಸತ್ಯಯುಗವನ್ನೇ ಸ್ವರ್ಗವೆಂದು ಹೇಳಲಾಗುತ್ತದೆ, ಎಲ್ಲಿ ಹಾಲು-ತುಪ್ಪದ ನದಿಗಳು ಹರಿಯುತ್ತವೆ. ಇಲ್ಲಂತೂ ತುಪ್ಪವೂ ಸಹ ಸಿಗುವುದಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಹಳೆಯ ಪ್ರಪಂಚವು ಈಗ ವಿನಾಶವಾಗಲಿದೆ. ಒಂದು ದಿನ ಈ ಬಿದುರಿನ ಕಾಡಿಗೆ ಬೆಂಕಿ ಬೀಳುವುದಿದೆ. ಎಲ್ಲರೂ ಸಮಾಪ್ತಿಯಾಗಿ ಬಿಡುತ್ತಾರೆ. ನಂತರ ನನ್ನಿಂದ ಆಸ್ತಿಯನ್ನಂತೂ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ನಾನು ಬರುತ್ತೇನೆಂದರೆ ಅವಶ್ಯವಾಗಿ ಶರೀರದ ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಮನೆಯಂತೂ ಬೇಕಲ್ಲವೆ. ತಂದೆಯು ಎಷ್ಟೊಂದು ಚೆನ್ನಾಗಿ ರಮಣೀಕತೆಯಿಂದ ತಿಳಿಸುತ್ತಾರೆ - ಈಗ ನೀವು ನನ್ನ ಮೂಲಕ ಎಲ್ಲವನ್ನೂ ತಿಳಿದುಕೊಂಡಿದ್ದೀರಿ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. 84 ಜನ್ಮಗಳನ್ನು ಯಾರು ತೆಗೆದುಕೊಳ್ಳುತ್ತಾರೆ. ಎಲ್ಲರೂ ತೆಗೆದುಕೊಳ್ಳುವುದಿಲ್ಲ ಅಂದಮೇಲೆ ಅವಶ್ಯವಾಗಿ ಮೊಟ್ಟ ಮೊದಲು ಬರುವಂತಹ ದೇವಿ-ದೇವತೆಗಳೇ 84 ಜನ್ಮಗಳನ್ನು ಪಡೆಯುತ್ತಾರೆ. ಈಗ ಅವರಿಗೆ ಪುನಃ ನಾನು ರಾಜಯೋಗವನ್ನು ಕಲಿಸುತ್ತೇನೆ. ಭಾರತವನ್ನು ಪುನಃ ನರಕದಿಂದ ಸ್ವರ್ಗವನ್ನಾಗಿ ಮಾಡಲು ನಾನು ಬರುತ್ತೇನೆ. ನಾನು ಇದನ್ನು ಬಿಡುಗಡೆ ಮಾಡುತ್ತೇನೆ. ಮತ್ತೆ ಮಾರ್ಗದರ್ಶಕನಾಗಿ ಹಿಂತಿರುಗಿ ಕರೆದುಕೊಂಡು ಹೋಗುತ್ತೇನೆ. ನನಗೆ ಜ್ಯೋತಿ ಸ್ವರೂಪನೆಂದು ಹೇಳುತ್ತಾರೆ. ಜ್ಯೋತಿ ಸ್ವರೂಪವೇ ಬರಬೇಕಾಗುತ್ತದೆ. ಈ ನಾನು ನಿಮ್ಮ ತಂದೆಯಾಗಿದ್ದೇನೆ. ನನ್ನ ಜ್ಯೋತಿಯು ಎಂದೂ ಕಡಿಮೆಯಾಗುವುದಿಲ್ಲ ಎಂದು ಸ್ವಯಂ ತಂದೆಯೇ ಹೇಳುತ್ತಾರೆ. ನಕ್ಷತ್ರ ಸಮಾನವಾಗಿದ್ದಾರೆ, ಯಾವುದು ಭೃಕುಟಿಯ ಮಧ್ಯದಲ್ಲಿರುತ್ತಾರೆ. ಉಳಿದೆಲ್ಲಾ ಆತ್ಮಗಳು ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತಾರೆ ಅಂದರೆ ಆತ್ಮರೂಪಿ ನಕ್ಷತ್ರದಲ್ಲಿ 84 ಜನ್ಮಗಳ ಅವಿನಾಶಿ ಪಾತ್ರವು ನೊಂದಾವಣೆಯಾಗಿದೆ. 84 ಜನ್ಮಗಳನ್ನು ಪೂರ್ಣಗೊಳಿಸಿ ಪುನಃ ಮೊದಲ ನಂಬರಿನಿಂದ ಪ್ರಾರಂಭಿಸುತ್ತಾರೆ. ಯಥಾ ರಾಜಾ-ರಾಣಿ ತಥಾ ಪ್ರಜಾ ಇಲ್ಲವೆಂದರೆ ಆತ್ಮದಲ್ಲಿ ಇಷ್ಟೊಂದು ಪಾತ್ರವು ಎಲ್ಲಿಂದ ತುಂಬಲ್ಪಡುತ್ತಿತ್ತು! ಇದಕ್ಕೆ ಬಹಳ ಗುಹ್ಯವಾದ ವಿಚಿತ್ರ ಮಾತುಗಳೆಂದು ಹೇಳಲಾಗುವುದು. ಇಡೀ ಮನುಷ್ಯ ಸೃಷ್ಟಿಯ ಆತ್ಮಗಳೆಲ್ಲರ ಪಾತ್ರವು ನೊಂದಾಯಿಸಲ್ಪಟ್ಟಿದೆ. ನನ್ನಲ್ಲಿ ಈ ಪಾತ್ರವಿದೆ ಅದೂ ಅವಿನಾಶಿ ಎಂದು ಹೇಳುತ್ತಾರೆ. ಅದರಲ್ಲಿ ಯಾವುದೂ ಅದಲು ಬದಲಾಗುವುದಿಲ್ಲ. ನನ್ನ ಪಾತ್ರವನ್ನು ಬ್ರಹ್ಮಾಕುಮಾರ-ಕುಮಾರಿಯರೇ ತಿಳಿದುಕೊಂಡಿದ್ದಾರೆ. ಪಾತ್ರಕ್ಕೆ ಚರಿತ್ರೆಯೆಂದು ಹೇಳಲಾಗುತ್ತದೆ. ಪ್ರಜಾಪಿತ ಬ್ರಹ್ಮನು ಇರುವರೆಂದರೆ ಅವಶ್ಯವಾಗಿ ಜಗದಂಬೆಯೂ ಇರುವರು. ಅವರೂ ಸಹ ಶೂದ್ರರಿಂದ ಬ್ರಾಹ್ಮಣರಾಗಿದ್ದಾರೆ ಅಂದಾಗ ನೀವು ಮಕ್ಕಳಿಗೆ ಗೊತ್ತಿದೆ - ನಮ್ಮ ಬುದ್ಧಿಯೋಗವು ತಂದೆಯ ಜೊತೆಯಿದೆ ಮತ್ತು ಒಬ್ಬರ ಜೊತೆಯೇ ಪ್ರೀತಿಯಿದೆ. ಅವ್ಯಭಿಚಾರಿ ಪ್ರೀತಿಯಾಗುವುದರಲ್ಲಿ ನಿಧಾನವಾಗುವುದಿಲ್ಲ. ಆದರೆ ಮಾಯಾ ಬೆಕ್ಕು ಕಡಿಮೆಯೇನಿಲ್ಲ. ಕೆಲವರು ಸ್ತ್ರೀಯರು ಈ ರೀತಿಯಿರುತ್ತಾರೆ ಅವರಿಗೆ ಪರಸ್ಪರ ಈರ್ಷ್ಯೆ ಉಂಟಾಗಿ ಬಿಡುತ್ತದೆ. ಹಾಗೆಯೇ ನಾವೂ ಸಹ ಶಿವ ತಂದೆಯೊಂದಿಗೆ ಪ್ರೀತಿಯನ್ನಿಡುತ್ತೇವೆಂದರೆ ಮಾಯೆಗೆ ಈರ್ಷೆಯುಂಟಾಗಿ ಬಿರುಗಾಳಿಯನ್ನು ತರುತ್ತದೆ. ಪಗಡೆಯಾಟದಲ್ಲಿ ಮುಂದೆ ಹೋಗಬೇಕೆಂದು ನೀವು ಬಯಸುತ್ತೀರಿ ಆದರೆ ಮಾಯಾ ಬೆಕ್ಕು ಮೂರು ದಾಳ ಹಾಕಿ ಬಿಡುತ್ತದೆ. ನೀವು ಗೃಹಸ್ಥ ವ್ಯವಹಾರದಲ್ಲಿರುತ್ತೀರಿ ಅಂದಮೇಲೆ ಕೇವಲ ನಿಮ್ಮ ಬುದ್ಧಿಯೋಗವನ್ನು ದೇಹ ಸಹಿತ ದೇಹದ ಎಲ್ಲಾ ಸಂಬಂಧದಿಂದ ತೆಗೆದು ನನ್ನನ್ನು ನೆನಪು ಮಾಡಿ. ನಾನು ನಿಮ್ಮ ಪ್ರಿಯಾತಿ ಪ್ರಿಯ ತಂದೆಯಾಗಿದ್ದೇನೆ. ನೀವು ನನ್ನ ಶ್ರೀಮತದಂತೆ ನಡೆದಿದ್ದೇ ಆದರೆ ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಬ್ರಹ್ಮಾರವರ ಮತವು ಪ್ರಸಿದ್ಧವಾಗಿದೆ. ಬ್ರಹ್ಮನ ಮಕ್ಕಳದೂ ಪ್ರಸಿದ್ದಿಯಾಗಿರುತ್ತದೆ, ಅಂದರೆ ಅವರೂ ಸಹ ಇಂತಹ ಒಳ್ಳೆಯ ಮತ ಅರ್ಥಾತ್ ಸಲಹೆಯನ್ನೇ ಕೊಡುತ್ತಾರೆ. ಸೃಷ್ಟಿಚಕ್ರದ ಸಮಾಚಾರವನ್ನು ತಂದೆಯೇ ತಿಳಿಸುತ್ತಾರೆ. ಭಲೆ ಮಕ್ಕಳು ಮುಂತಾದವರನ್ನು ಸಂಭಾಲನೆ ಮಾಡಿ, ಆದರೆ ಬುದ್ಧಿಯೋಗವು ತಂದೆಯ ಜೊತೆಯಿರಲಿ. ಇದು ಸ್ಮಶಾನವಾಗಿದೆ, ನಾವೀಗ ಸ್ವರ್ಗಕ್ಕೆ ಹೋಗುತ್ತೇವೆಂದು ತಿಳಿಯಿರಿ. ಇದೆಷ್ಟು ಸಹಜ ಮಾತಾಗಿದೆ.

ತಂದೆಯು ತಿಳಿಸುತ್ತಾರೆ - ಯಾವುದೇ ಸಾಕಾರಿ ಅಥವಾ ಆಕಾರಿ ದೇವತೆಗಳೊಂದಿಗೆ ಬುದ್ಧಿಯೋಗವನ್ನಿಡಬೇಡಿ. ತಂದೆಯು ದಲ್ಲಾಳಿಯಾಗಿ ಹೇಳುತ್ತಾರೆ, ಗಾಯನವಿದೆಯಲ್ಲವೆ - ಆತ್ಮಗಳು ಪರಮಾತ್ಮನಿಂದ ಬಹಳ ಕಾಲ ಅಗಲಿದ್ದರು.... ಈಗ ಬಹಳ ಕಾಲದಿಂದ ದೇವಿ-ದೇವತೆಗಳೇ ಅಗಲಿದ್ದರು, ದೇವಿ-ದೇವತೆಗಳೇ ಮೊಟ್ಟ ಮೊದಲು ಪಾತ್ರವನ್ನಭಿನಯಿಸಲು ಬರುತ್ತಾರೆ. ಅಂತಿಮದಲ್ಲಿ ಯಾವ ಸದ್ಗುರು ದಲ್ಲಾಳಿಯು ಯಾವಾಗ ಸಿಗುತ್ತಾರೆಯೋ ಆಗ ಸುಂದರ ಮೇಳವಾಗುತ್ತದೆ. ದಲ್ಲಾಳಿಯ ರೂಪದಲ್ಲಿ ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ ಮತ್ತು ನಾವು ಕಾಮ ಚಿತೆಯಿಂದ ಇಳಿದು ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳುತ್ತೇವೆಂದು ಪ್ರತಿಜ್ಞೆ ಮಾಡಿ. ನೀವು ಪುನಃ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ನಾವು ಇಷ್ಟು ಸಮಯ ಇಂತಹ ಪ್ರಿಯಾತಿ ಪ್ರಿಯ ತಂದೆಯನ್ನು ನೆನಪು ಮಾಡುತ್ತೇವೆಂದು ಚಾರ್ಟ್ ಇಟ್ಟುಕೊಳ್ಳಿ. ಹೇಗೆ ಕನ್ಯೆಯು ತನ್ನ ಪತಿಯನ್ನು ದಿನ-ರಾತ್ರಿಯೂ ನೆನಪು ಮಾಡುತ್ತಾಳಲ್ಲವೆ ಹಾಗೆಯೇ ತಂದೆಯು ತಿಳಿಸುತ್ತಾರೆ - ಹೇ ನಿದ್ರಾಜೀತ ಮಕ್ಕಳೇ, ಈಗ ಪುರುಷಾರ್ಥ ಮಾಡಿ. ಒಂದು ಘಳಿಗೆ, ಅರ್ಧ ಘಳಿಗೆ.... ಹೀಗೆ ಪ್ರಾರಂಭಿಸಿ. ನಂತರ ನಿಧಾನ-ನಿಧಾನವಾಗಿ ಹೆಚ್ಚಿಸಿಕೊಳ್ಳುತ್ತಾ ಹೋಗಿ. ನನ್ನೊಂದಿಗೆ ಬುದ್ಧಿಯೋಗವನ್ನಿಡುತ್ತೀರೆಂದರೆ ಪಾಸ್-ವಿತ್-ಆನರ್ ಆಗಿ ಬಿಡುತ್ತೀರಿ. ಇದು ಬುದ್ಧಿಯ ರೇಸ್ ಆಗಿದೆ. ಇದರಲ್ಲಿ ಸಮಯ ಹಿಡಿಸುತ್ತದೆ. ಬುದ್ಧಿಯೋಗದಿಂದಲೇ ಪಾಪಗಳು ಕತ್ತರಿಸಿ ಹೋಗುತ್ತವೆ. ಮತ್ತೆ ನೀವು ಅಟಲ, ಅಖಂಡ ಸುಖ-ಶಾಂತಿಮಯ 21 ಜನ್ಮ ರಾಜ್ಯ ಮಾಡುತ್ತೀರಿ. ಕಲ್ಪದ ಹಿಂದೆಯೂ ಮಾಡಿದ್ದಿರಿ, ಈಗ ಪುನಃ ರಾಜ್ಯಭಾಗ್ಯವನ್ನು ಪಡೆಯಿರಿ. ಕಲ್ಪ-ಕಲ್ಪವೂ ನಾವೇ ಸ್ವರ್ಗವನ್ನಾಗಿ ಮಾಡುತ್ತೇನೆ, ರಾಜ್ಯ ಮಾಡುತ್ತೇವೆ. ಮತ್ತೆ ನಮ್ಮನ್ನೇ ಮಾಯೆಯು ನರಕವಾಸಿಗಳನ್ನಾಗಿ ಮಾಡುತ್ತದೆ. ಈಗ ನಾವು ರಾಮ ಸಂಪ್ರದಾಯದವರಾಗಿದ್ದೇವೆ. ತಂದೆಯು ನಮಗೆ ತಮ್ಮ ಪರಿಚಯವನ್ನು ಕೊಟ್ಟಿದ್ದಾರೆ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ನಾವು ಅವರ ಮಕ್ಕಳಾಗಿದ್ದೇವೆ ಅಂದಮೇಲೆ ನಾವೇಕೆ ನರಕದಲ್ಲಿದ್ದೇವೆ? ಅವಶ್ಯವಾಗಿ ಯಾವಾಗಲೋ ಸ್ವರ್ಗದಲ್ಲಿದ್ದೆವು. ತಂದೆಯಂತೂ ಸ್ವರ್ಗವನ್ನು ರಚಿಸಿದ್ದಾರೆ. ಬ್ರಹ್ಮಾಕುಮಾರ-ಕುಮಾರಿಯರು ಎಲ್ಲರಿಗೂ ಪ್ರಾಣ ದಾನವನ್ನು ಕೊಡುವವರಾಗಿದ್ದಾರೆ. ಅವರ ಪ್ರಾಣಗಳನ್ನು ಎಂದೂ ಕಾಲವು ಅಕಾಲ ಮೃತ್ಯುವಿನಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಅಲ್ಲಿ ಅಕಾಲ ಮೃತ್ಯುವಾಗುವುದು ಅಸಂಭವ ಮತ್ತು ಅಲ್ಲಿ ಯಾರೂ ದುಃಖಿಯಾಗಿಸುವುದೂ ಸಹ ಇಲ್ಲ. ನೀವು ಸಾಕ್ಷಾತ್ಕಾರದಲ್ಲಿಯೂ ನೋಡಿದ್ದೀರಿ - ಶ್ರೀಕೃಷ್ಣನು ಹೇಗೆ ಜನ್ಮ ತೆಗೆದುಕೊಳ್ಳುತ್ತಾನೆ, ಆ ಸಮಯದಲ್ಲಿ ಒಂದೇ ಸಲ ಎಲ್ಲವೂ ಪ್ರಕಾಶತೆಯಿಂದ ಕಂಗೊಳಿ ಬಿಡುತ್ತದೆ. ಏಕೆಂದರೆ ಶ್ರೀಕೃಷ್ಣನು ಸತ್ಯಯುಗದ ಮೊದಲ ರಾಜಕುಮಾರನಾಗಿದ್ದಾನೆ ಅಲ್ಲವೆ. ಕೃಷ್ಣನು ನಂಬರ್ವನ್ ಸತೋಪ್ರಧಾನನಾಗಿದ್ದಾನೆ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾನೆ. ಯಾವಾಗ ಜಡಜಡೀಭೂತ ತಮೋ ಶರೀರವಾಗುತ್ತದೆಯೋ ಆಗ ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತಾನೆ. ಈ ಅಭ್ಯಾಸವು ಇಲ್ಲಿಯೇ ಮಾಡಲಾಗುತ್ತದೆ. ಬಾಬಾ ನಾವು ಈಗ ತಮ್ಮ ಬಳಿ ಬರುತ್ತೇವೆ ನಂತರ ಅಲ್ಲಿಂದ ನಾವು ಸ್ವರ್ಗದಲ್ಲಿ ಹೋಗಿ ಹೊಸ ಶರೀರವನ್ನು ಪಡೆಯುತ್ತೇವೆ. ಈಗಂತೂ ಹಿಂತಿರುಗಿ ತಂದೆಯ ಬಳಿಗೆ ಹೋಗಬೇಕಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಅಕಾಲ ಮೃತ್ಯುವಿನಿಂದ ಪಾರಾಗಲು ಎಲ್ಲರಿಗೆ ಪ್ರಾಣ ದಾನ ನೀಡುವ ಸೇವೆ ಮಾಡಬೇಕಾಗಿದೆ. ರಾವಣನ ಸಂಪ್ರದಾಯವನ್ನು ರಾಮನ ಸಂಪ್ರದಾಯವನ್ನಾಗಿ ಮಾಡಬೇಕಾಗಿದೆ.

2. ಹೃದಯದ ಪ್ರೀತಿ ಒಬ್ಬ ತಂದೆಯೊಂದಿಗೆ ಇಟ್ಟುಕೊಳ್ಳಬೇಕಾಗಿದೆ. ಬುದ್ಧಿಯೋಗವನ್ನು ಅಲೆದಾಡಿಸಬಾರದು. ನಿದ್ರೆಯನ್ನು ಗೆದ್ದು ನೆನಪನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕಾಗಿದೆ.

ವರದಾನ:
ಸಮಯ ಪ್ರಮಾಣ ರೂಪ-ಬಸಂತ ಅರ್ಥಾತ್ ಜ್ಞಾನಿ ಹಾಗೂ ಯೋಗಿ ಆತ್ಮರಾಗುವಂತಹ ಸ್ವ ಶಾಸಕ ಭವ.

ಯಾರು ಸ್ವ-ಶಾಸಕರಾಗಿದ್ದಾರೆ, ಅವರು ಯಾವ ಸಮಯದಲ್ಲಿ ಬೇಕೊ ಅಲ್ಲಿ ರೂಪ ಆಗುತ್ತಾರೆ ಮತ್ತು ಯಾವ ಸಮಯ ಬೇಕೊ ಅಲ್ಲಿ ಬಸಂತರಾಗಿ ಬಿಡುತ್ತಾರೆ. ಎರಡೂ ಸ್ಥಿತಿ ಸೆಕೆಂಡ್ ನಲ್ಲಿ ಆಗಿ ಬಿಡುವರು. ಹೀಗಲ್ಲ ಆಗಲು ಇಚ್ಛಿಸುವಿರಿ ರೂಪ ಮತ್ತು ನೆನಪಿಗೆ ಬರುತ್ತಿರುತ್ತೆ ಜ್ಞಾನದ ಮಾತುಗಳು. ಸೆಕೆಂಡ್ಗಿಂತಲೂ ಕಡಿಮೆ ಸಮಯದಲ್ಲಿ ಫುಲ್ ಸ್ಟಾಪ್ ಬಿದ್ದು ಬಿಡಬೇಕು. ಶಕ್ತಿಶಾಲಿ ಬ್ರೇಕ್ ನ ಕೆಲಸವಾಗಿದೆ ಎಲ್ಲಿ ಬಯಸುವಿರೊ ಅಲ್ಲಿ ಬೀಳಬೇಕು, ಇದಕ್ಕಾಗಿ ಅಭ್ಯಾಸ ಮಾಡಿ ಯಾವ ಸಮಯದಲ್ಲಿ ಯಾವ ವಿಧಿಯಿಂದ ಎಲ್ಲಿ ಮನಸ್ಸು-ಬುದ್ಧಿಯನ್ನು ಇಡಲು ಇಚ್ಛಿಸುವಿರೊ ಅಲ್ಲಿ ಇಡಬೇಕು. ಈ ರೀತಿಯ ಕನ್ಟ್ರೋಲಿಂಗ್ ಹಾಗೂ ರೂಲಿಂಗ್ ಪವರ್ ಇರಬೇಕು.

ಸ್ಲೋಗನ್:
ಶಾಂತಿದೂತ ಅವರೇ ಆಗಿದ್ದಾರೆ ಯಾರು ಬಿರುಗಾಳಿ ಎಬ್ಬಿಸುವವರಿಗೂ ಸಹಾ ಶಾಂತಿಯ ಉಡುಗೊರೆ ಕೊಡುವವರು.