28.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಹಳೆಯ ಪ್ರಪಂಚದಿಂದ ಮಮತ್ವವನ್ನು ಬಿಟ್ಟು ಸರ್ವೀಸ್ ಮಾಡುವ ಉತ್ಸಾಹವನ್ನಿಟ್ಟುಕೊಳ್ಳಿ, ಉಲ್ಲಾಸದಲ್ಲಿರಿ, ಸರ್ವೀಸಿನಲ್ಲಿ ಎಂದೂ ಸುಸ್ತಾಗಬಾರದು”

ಪ್ರಶ್ನೆ:
ಯಾವ ಮಕ್ಕಳಿಗೆ ಜ್ಞಾನದ ನಶೆಯೇರಿರುವುದೋ ಅವರ ಲಕ್ಷಣಗಳೇನು?

ಉತ್ತರ:
ಅವರಿಗೆ ಬಹಳಷ್ಟು ಸರ್ವೀಸಿನ ಆಸಕ್ತಿಯಿರುತ್ತದೆ. ಅವರು ಸದಾ ಮನಸ್ಸಾ ಮತ್ತು ವಾಚಾ ಸೇವೆಯಲ್ಲಿ ತತ್ಪರರಾಗಿರುತ್ತಾರೆ. ಎಲ್ಲರಿಗೆ ತಂದೆಯ ಪರಿಚಯವನ್ನು ಕೊಟ್ಟು ಪ್ರತ್ಯಕ್ಷ ಪ್ರಮಾಣವನ್ನು ನೀಡುತ್ತಾರೆ. ರಾಜಧಾನಿಯನ್ನು ಸ್ಥಾಪನೆ ಮಾಡುವ ನಿಮಿತ್ತ ಸಹನೆಯನ್ನೂ ಮಾಡಬೇಕಾಗುತ್ತದೆ ಅಂದಾಗ ಸಹನೆಯನ್ನೂ ಸಹ ಮಾಡುತ್ತಾರೆ. ತಂದೆಗೆ ಪೂರ್ಣ ಸಹಯೋಗಿಗಳಾಗಿ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆ ಮಾಡುತ್ತಾರೆ.

ಗೀತೆ:
ಮಾತಾ ಓ ಮಾತಾ ನೀ ಎಲ್ಲರ ಭಾಗ್ಯವಿದಾತಾ

ಓಂ ಶಾಂತಿ.
ಈಗ ನಂಬರ್ ವಾರ್ ಪುರುಷಾರ್ಥದನುಸಾರ ಮಕ್ಕಳು ತಾಯಿಯನ್ನು ಅರಿತುಕೊಂಡಿದ್ದಾರೆ. ತಾಯಿಯನ್ನು ತಿಳಿದಿದ್ದಾರೆಂದರೆ ಅವಶ್ಯವಾಗಿ ತಂದೆಯನ್ನೂ ತಿಳಿದುಕೊಳ್ಳುತ್ತಾರೆ. ಈ ತಂದೆ-ತಾಯಿಯು ಸೌಭಾಗ್ಯವಿಧಾತ ಮತ್ತು ಭಾಗ್ಯವಿಧಾತರಾಗಿದ್ದಾರೆ. ಯಾರು ಪುರುಷಾರ್ಥ ಮಾಡಿ ತಮ್ಮ ಪೂರ್ಣ ಸೌಭಾಗ್ಯವನ್ನು ರೂಪಿಸಿಕೊಳ್ಳುತ್ತಾರೆಯೋ, ಸೂರ್ಯವಂಶಿ-ಚಂದ್ರವಂಶಿ ಮನೆತನದಲ್ಲಿ ಆಸ್ತಿಯನ್ನು ಪಡೆಯುತ್ತಾರೆಯೋ ಅವರಿಗೇ ಸೌಭಾಗ್ಯವಿಧಾತರೆಂದು ಹೇಳಲಾಗುವುದು. ಅದರಲ್ಲಿಯೂ ನಂಬರ್ ವಾರ್ ಇದ್ದಾರೆ. ಅನೇಕರು ಈ ರೀತಿಯೂ ಇದ್ದಾರೆ, ಬೇಡರ ಹಾಗೆ. ಬಹಳ ಸಾಧಾರಣ ಪ್ರಜೆಗಳಲ್ಲಿ ಹೋಗಿ ಜನ್ಮ ಪಡೆಯುತ್ತಾರೆ. ಅವರು ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ತಂದೆಯಂತು ಅವಶ್ಯವಾಗಿ ತಿಳಿಸುತ್ತಾರೆ - ಮಕ್ಕಳೇ, ಈ ಹಳೆಯ ಪ್ರಪಂಚದೊಂದಿಗೆ ಮಮತ್ವವನ್ನಿಟ್ಟುಕೊಳ್ಳಬೇಡಿ. ಪಾಪ! ಪ್ರಪಂಚದವರಂತೂ ಚೀರಾಡುತ್ತಿರುತ್ತಾರೆ. ಮಕ್ಕಳಲ್ಲಿ ಸರ್ವೀಸ್ ಮಾಡುವ ಆಸಕ್ತಿ ಹಾಗೂ ಉತ್ಸಾಹವಿರಬೇಕು. ಕೆಲವರಿಗೆ ಉತ್ಸಾಹವಂತೂ ಬರುತ್ತದೆ ಆದರೆ ಸೇವೆ ಮಾಡುವ ರೀತಿ ತಿಳಿದಿರುವುದಿಲ್ಲ. ಮಕ್ಕಳಿಗೆ ಅನೇಕ ಸಲಹೆಗಳಂತೂ ಸಿಗುತ್ತವೆ, ಬರವಣಿಗೆಯೂ ಸಹ ಬಹಳ ಸ್ಪಷ್ಟವಾಗಿರಬೇಕು. ತ್ರಿಮೂರ್ತಿ ಮತ್ತು ವೃಕ್ಷದ ಚಿತ್ರವು 30 ಅಥವಾ 40 ಅಡಿಯಿರಬೇಕು. ಇವು ಬಹಳ ಉಪಯುಕ್ತವಾಗಿರುವಂತಹ ಚಿತ್ರಗಳಾಗಿವೆ ಆದರೆ ಮಕ್ಕಳಿಗೆ ಇವುಗಳ ಬಗ್ಗೆ ಆಸಕ್ತಿ ಕಡಿಮೆಯಿದೆ. ಭಲೇ ಸಂಜಯನ ಬಹಳ ಮಾನ್ಯತೆಯಿದೆ ಆದರೆ ಆ ಗಾಯನವೂ ಸಹ ಅಂತ್ಯದ್ದಾಗಿದೆ. ಹೇಗೆ ಅತೀಂದ್ರಿಯ ಸುಖವನ್ನು ಕೇಳಬೇಕೆಂದರೆ ಗೋಪ-ಗೋಪಿಯರನ್ನು ಕೇಳಿ ಎಂದು ಹೇಳುತ್ತಾರೆಯೋ ಹಾಗೆಯೇ ಅದೂ ಸಹ ಅಂತ್ಯದ ಸ್ಥಿತಿಯ ಗಾಯನವಾಗಿದೆ. ಈಗ ಆ ಸುಖವು ಯಾರಿಗೂ ಇಲ್ಲ. ಈಗಂತೂ ಅಳುತ್ತಿರುತ್ತಾರೆ, ಬೀಳುತ್ತಿರುತ್ತಾರೆ. ಮಾಯೆಯು ಪೆಟ್ಟನ್ನು ಕೊಡುತ್ತದೆ, ಭಲೇ ಪ್ರತಿನಿತ್ಯವೂ ಬರುತ್ತಾರೆ ಆದರೆ ಆ ನಶೆಯಲ್ಲಿರುವುದಿಲ್ಲ. ನಿಮಗೆ ಸರ್ವೀಸಿನ ಬಹಳ ಅವಕಾಶವು ಸಿಗುತ್ತದೆ. ಈಗ ಒಂದೇ ಧರ್ಮವಾಗಲೆಂದು ಹೇಳುತ್ತಿರುತ್ತಾರೆ. ಆ ಒಂದು ಸರ್ಕಾರವು ಭಾರತದಲ್ಲಿತ್ತು, ಅದನ್ನೆ ಸ್ವರ್ಗವೆಂದು ಹೇಳಲಾಗುತ್ತಿತ್ತು ಆದರೆ ಯಾರಿಗೂ ತಿಳಿದಿಲ್ಲ. ಇದು 5000 ವರ್ಷಗಳ ಹಿಂದಿನದಾಗಿದೆ. ಯಾವಾಗ ಒಂದೇ ಸರ್ಕಾರವಿತ್ತು, 2500 ವರ್ಷಗಳೆಂದೂ ಹೇಳಬಹುದು ಏಕೆಂದರೆ ರಾಮರಾಜ್ಯ (ತ್ರೇತಾಯುಗ) ದಲ್ಲಿಯೂ ಸಹ ಒಂದೇ ಸರ್ಕಾರವಿತ್ತು. 2500 ವರ್ಷಗಳ ಮೊದಲು ಸತ್ಯಯುಗ, ತ್ರೇತಾದಲ್ಲಿ ಒಂದು ಸರ್ಕಾರವಿತ್ತು. ಯಾವುದರಿಂದ ಚಪ್ಪಾಳೆ (ಜಗಳ) ಹೊಡೆಯಲು ಎರಡು ಧರ್ಮಗಳಿರಲೇ ಇಲ್ಲ. ಹಾಗೆಯೇ ಇಲ್ಲಿಯೂ ಸಹ ಹಿಂದೂ-ಚೀನಿ ಭಾಯಿ-ಭಾಯಿ ಅರ್ಥಾತ್ ಸಹೋದರರೆಂದು ಹೇಳುತ್ತಿರುತ್ತಾರೆ. ಮತ್ತೆ ನೋಡಿ, ಏನೇನೋ ಮಾಡುತ್ತಿರುತ್ತಾರೆ! ಸಿಡಿ ಮದ್ದುಗಳನ್ನು ಹಾಕುತ್ತಿರುತ್ತಾರೆ. ಈ ಪ್ರಪಂಚವೇ ಹೀಗಿದೆ, ಸ್ತ್ರೀ-ಪುರುಷರೂ ಸಹ ಪರಸ್ಪರ ಹೊಡೆದಾಡುತ್ತಿರುತ್ತಾರೆ. ಸ್ತ್ರಿಯು ಪತಿಯನ್ನೂ ಸಹ ಹೊಡೆಯಲು ಹಿಂಜರಿಯುವುದಿಲ್ಲ. ಮನೆ-ಮನೆಯಲ್ಲಿಯೂ ಬಹಳ ಜಗಳವಿರುತ್ತದೆ. ಭಾರತದಲ್ಲಿಯೂ ಸಹ 2500 ವರ್ಷಗಳ ಹಿಂದೆ ಒಂದೇ ಸರ್ಕಾರವಿತ್ತು ಎಂಬುದನ್ನು ಮರೆತು ಬಿಟ್ಟಿದ್ದಾರೆ. ಈಗಂತೂ ಅನೇಕ ಸರ್ಕಾರ, ಧರ್ಮಗಳಾಗಿವೆ, ಆದ ಕಾರಣ ಅವಶ್ಯವಾಗಿ ಹೊಡೆದಾಟಗಳು ಇರುತ್ತವೆ. ಭಾರತದಲ್ಲಿ ಒಂದು ಸರ್ಕಾರವಿತ್ತು, ಅದಕ್ಕೆ ಭಗವಾನ್-ಭಗವತಿಯ ಸರ್ಕಾರವೆಂದು ಹೇಳಲಾಗುತ್ತದೆ ಎಂಬುದನ್ನು ನೀವು ತಿಳಿಸುತ್ತೀರಿ. ಭಕ್ತಿಮಾರ್ಗವು ಪ್ರಾರಂಭವಾಗುವುದೇ ನಂತರದಲ್ಲಿ. ಸತ್ಯಯುಗ-ತ್ರೇತಾದಲ್ಲಿ ಭಕ್ತಿಯಿರುವುದಿಲ್ಲ. ಮನುಷ್ಯರು ತಮ್ಮ ಅಹಂಕಾರವನ್ನು ಬಹಳ ತೋರಿಸಿಕೊಳ್ಳುತ್ತಾರೆ ಆದರೆ ಅವರಲ್ಲಿ ಕವಡೆಯಷ್ಟೂ ಜ್ಞಾನವಿಲ್ಲ. ಹಾಗೆ ನೋಡಿದರೆ ಅನೇಕ ಜ್ಞಾನಗಳಿವೆ.... ವೈದ್ಯಕೀಯ ಜ್ಞಾನ, ಬ್ಯಾರಿಸ್ಟರಿ ಜ್ಞಾನ.... ತಂದೆಯು ತಿಳಿಸುತ್ತಾರೆ - ಯಾರು ತತ್ವಶಾಸ್ತ್ರಜ್ಞರೆಂದು ಕರೆಸಿಕೊಳ್ಳುತ್ತಾರೆಯೋ ಅವರ ಬಳಿ ಈ ಜ್ಞಾನ ಸ್ವಲ್ಪವೂ ಇಲ್ಲ. ಫಿಲಾಸಫಿ ಎಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನೂ ಸಹ ತಿಳಿದುಕೊಂಡಿಲ್ಲ ಅಂದಾಗ ನೀವು ಮಕ್ಕಳು ಸರ್ವೀಸಿನಲ್ಲಿ ಆಸಕ್ತಿಯನ್ನಿಟ್ಟುಕೊಳ್ಳಬೇಕು, ಸ್ಥಾಪನೆಯಲ್ಲಿ ಸಹಯೋಗಿಗಳಾಗಬೇಕು. ಒಳ್ಳೆಯ ವಸ್ತು (ಚಿತ್ರ) ಮಾಡಿಕೊಡಬೇಕಾಗಿದೆ. ಎಂತಹ ಮನುಷ್ಯರೋ ಅಂಥಹ ನಿಮಂತ್ರಣವನ್ನು ಕೊಡಲಾಗುತ್ತದೆ. ಹೇಗೆ ಸರ್ಕಾರದಲ್ಲಿ ಅನೇಕರು ಅಧಿಕಾರಿಗಳಿರುತ್ತಾರೆ. ಶಿಕ್ಷಣ ಮಂತ್ರಿ, ಮುಖ್ಯಮಂತ್ರಿಗಳಿರುತ್ತಾರೆ ಹಾಗೆಯೇ ಇಲ್ಲಿಯೂ ಸಹ ಕಛೇರಿಯಿರಬೇಕು. ತಂದೆಯಿಂದ ಸಲಹೆ ಸಿಕ್ಕಿದ ತಕ್ಷಣ ಅದನ್ನು ಕಾರ್ಯದಲ್ಲಿ ತರಬೇಕು. ಈಗ ನೋಡಿ, ಘೋರಕ್ಪುರದಲ್ಲಿ ಗೀತಾ ಪುಸ್ತಕಗಳನ್ನು ಬಿಡುಗಡೆ ಮಾಡುತ್ತಾರೆ. ಅವನ್ನು ಎಲ್ಲವನ್ನೂ ಉಚಿತವಾಗಿ ಕೊಡಲು ತಯಾರಿರುತ್ತಾರೆ. ಯಾವುದೆಲ್ಲಾ ಸಂಸ್ಥೆಗಳಿವೆಯೋ ಅವುಗಳಲ್ಲಿ ಧನವೂ ಬಹಳಯಿರುತ್ತದೆ. ಯಾವಾಗ ಕಾಶ್ಮೀರದ ಮಹಾರಾಜನು ಮರಣ ಹೊಂದಿದರೋ ಆಗ ಎಲ್ಲಾ ಸಂಪತ್ತು ಆರ್ಯ ಸಮಾಜಿಗಳಿಗೆ ಸಿಕ್ಕಿತು ಏಕೆಂದರೆ ಅವರು ಆರ್ಯ ಸಮಾಜದವರಾಗಿದ್ದರು. ಸನ್ಯಾಸಿ ಮುಂತಾದವರ ಬಳಿಯೂ ಬಹಳ ಹಣವಿರುತ್ತದೆ. ನಿಮ್ಮ ಬಳಿಯೂ ಸಹ ಯಾವ ಹಣ ಮುಂತಾದವುಗಳಿವೆಯೋ ಅದನ್ನು ಭಾರತವು ಸ್ವರ್ಗವಾಗಲೆಂದು ಈ ಸೇವೆಯಲ್ಲಿ ತೊಡಗಿಸಬೇಕು. ನೀವು ಸ್ವರ್ಗವನ್ನಾಗಿ ಮಾಡುವುದರಲ್ಲಿ ಸಹಯೋಗ ನೀಡುತ್ತೀರಿ. ರಾತ್ರಿ-ಹಗಲಿನ ಅಂತರವಿದೆ. ಅವರು ದಿನ-ಪ್ರತಿದಿನ ನರಕವಾಸಿಗಳಾಗುತ್ತಲೇ ಹೋಗುತ್ತಾರೆ. ನಿಮ್ಮನ್ನು ಈಗ ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಹಾಗೆ ನೋಡಿದರೆ ಎಲ್ಲರೂ ಬಡವರೆ. ನಾವು ಹಣವನ್ನು ಒಟ್ಟುಗೂಡಿಸುತ್ತೇವೆಂದಲ್ಲ. ನೀವಂತೂ ಹೇಳುತ್ತೀರಿ - ಬಾಬಾ, ಈ ಸ್ವಲ್ಪ ಹಣವನ್ನು ಯಜ್ಞದಲ್ಲಿ, ಸೇವೆಯಲ್ಲಿ ತೊಡಗಿಸಿ. ಈ ಸಮಯದಲ್ಲಂತೂ ಎಲ್ಲರೂ ಪರಸ್ಪರ ಹೊಡೆದಾಡುತ್ತಿರುತ್ತಾರೆ. ಒಂದು ರಾಜ್ಯವಾಗಲು ಸಾಧ್ಯವಿಲ್ಲ ಆದ್ದರಿಂದ ಸರ್ಕಾರಕ್ಕೆ ತಿಳಿಸಬೇಕು - ಸೂರ್ಯವಂಶಿ, ಚಂದ್ರವಂಶಿಯರಿದ್ದಾಗ ಒಂದೇ ರಾಜ್ಯಾಡಳಿತವಿತ್ತು. ನೀವೂ ಸಹ ಅದನ್ನು ಬಯಸುತ್ತೀರೆಂದರೆ ಅದು ಅವಶ್ಯವಾಗಿ ಆಗುತ್ತದೆ. ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ ಅವರು ಅವಶ್ಯವಾಗಿ ಸ್ವರ್ಗದ ರಚೈತನಾಗಿದ್ದಾರೆ. ನಾವು ಒಂದು ದೈವೀ ಸರ್ಕಾರವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಅಲ್ಲಿ ಆಸುರೀ ಸರ್ಕಾರವಿರುವುದಿಲ್ಲ. ಅದೆಲ್ಲದರ ವಿನಾಶವಾಗಿ ಬಿಡುತ್ತದೆ. ನಿಮ್ಮ ಬಳಿ ಬಹಳ ಒಳ್ಳೆಯ ಜ್ಞಾನವಿದೆ, ಅದರಿಂದ ಬಹಳ ಕೆಲಸವಾಗಬಹುದಾಗಿದೆ. ದೆಹಲಿಯು ಪ್ರಧಾನ ಕೇಂದ್ರವಾಗಿದೆ, ಅಲ್ಲಿ ಬಹಳ ಸೇವೆ ಮಾಡಬಹುದು. ಅಲ್ಲಿ ಒಳ್ಳೊಳ್ಳೆಯ ಮಕ್ಕಳು ಇದ್ದಾರೆ, ಜಗದೀಶ್-ಸಂಜಯನೂ ಇದ್ದಾರೆ ಆದರೆ ಎಲ್ಲರೂ ಸಂಜಯರಾಗಿದ್ದೀರಲ್ಲವೆ. ಕೇವಲ ಒಬ್ಬರಲ್ಲ ನೀವು ಪ್ರತಿಯೊಬ್ಬರೂ ಸಂಜಯರಾಗಿದ್ದೀರಿ. ಎಲ್ಲರಿಗೆ ಮಾರ್ಗ ತಿಳಿಸುವುದೇ ನಿಮ್ಮ ಕೆಲಸವಾಗಿದೆ. ತಂದೆಯಂತೂ ಚೆನ್ನಾಗಿ ತಿಳಿಸುತ್ತಿರುತ್ತಾರೆ. ಆದರೆ ಮಕ್ಕಳು ತನ್ನದೇ ವ್ಯವಹಾರದಲ್ಲಿ ಮಕ್ಕಳು ಮುಂತಾದವರ ಸಂಭಾಲನೆಯಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ತಂದೆಯ ಸಹಯೋಗಿಗಳಾಗಬೇಕು ಆದರೆ ಅದಿಲ್ಲ. ಇಲ್ಲಂತೂ ಸರ್ವೀಸ್ ಮಾಡಿ ತೋರಿಸಬೇಕಾಗಿದೆ. ಒಂದು ಸರ್ಕಾರವು ಹೇಗೆ ಸ್ಥಾಪನೆಯಾಗುತ್ತಾ ಇದೆ. ಈ ಚಕ್ರ, ಡ್ರಾಮಾವನ್ನು ನೋಡಿ ಸಮಯವನ್ನು ತೋರಿಸುತ್ತಿದೆ. ಹೇಗೆ ರಾವಣನ ಚಿತ್ರವನ್ನು ಮಾಡಿಸಿದ್ದಾರೆಯೋ ಹಾಗೆಯೇ ದೊಡ್ಡ ಚಿತ್ರವನ್ನು ಮಾಡಿ ಅದರಲ್ಲಿ ಈಗ ಅದರ ಮುಳ್ಳು ತಲುಪಿದೆ ಇದರ ನಂತರ ಒಂದು ಸರ್ಕಾರವು ಬರಲಿದೆ ಎಂದು ಬರೆಯಬೇಕು. ತಂದೆಯು ಸಲಹೆ ನೀಡುತ್ತಾರೆ - ಶಿವಬಾಬಾ ಅಂತೂ ಗಲ್ಲಿಗಳಲ್ಲಿ ಹೋಗಿ ತಿರುಗಾಡಲು ಸಾಧ್ಯವಿಲ್ಲ. ಒಂದು ವೇಳೆ ಇವರು (ಬ್ರಹ್ಮಾ) ಹೋದರೂ ಸಹ ಶಿವಬಾಬಾ ಅಲ್ಲಿ-ಇಲ್ಲಿ ಅಲೆಯಬೇಕಾಗುತ್ತದೆ. ಮಕ್ಕಳು ಗೌರವವನ್ನಿಡಬೇಕು. ಈ ಸರ್ವೀಸ್ ಮಾಡುವುದು ಮಕ್ಕಳ ಕೆಲಸವಾಗಿದೆ. ಒಂದು ಸರ್ಕಾರವು ಯಾವುದು ಭಾರತದಲ್ಲಿತ್ತು ಅದು ಪುನಃ ಸ್ಥಾಪನೆಯಾಗುತ್ತಾ ಇದೆ. ಎಂದು ಬರೆಯಬೇಕು ಎಷ್ಟು ವರ್ಷಗಳಿಂದ ಈ ಯಜ್ಞವು ರಚಿಸಲ್ಪಟ್ಟಿದೆ. ಇಡೀ ಪ್ರಪಂಚದ ಕೊಳಕೆಲ್ಲವೂ ಇದರಲ್ಲಿ ಸಮಾಪ್ತಿಯಾಗುತ್ತದೆ, ಇದು ಬಹಳ ಸಹಜವಾಗಿದೆ ಆದರೆ ಎಲ್ಲರಿಗೂ ತಿಳಿಸುವುದರಲ್ಲಿ ಸಮಯ ಬೇಕು. ರಾಜರಂತೂ ಯಾರೂ ಇಲ್ಲ. ಒಬ್ಬರನ್ನು ಯಾರೂ ದೊಡ್ಡವರೆಂದು ಒಪ್ಪುವುದಿಲ್ಲ. ಮೊದಲಂತೂ ಏನಾದರೂ ಹೊಸ ಅನ್ವೇಷಣೆ ಮಾಡಿದಾಗ ಅದನ್ನು ಮೊದಲು ರಾಜರ ಮುಖಾಂತರ ವಿಸ್ತಾರ ಮಾಡಿಸುತ್ತಿದ್ದರು. ಏಕೆಂದರೆ ರಾಜರಲ್ಲಿ ಶಕ್ತಿಯಿರುತ್ತಿತ್ತು. ರಾಜಯೋಗದಿಂದ, ಇಲ್ಲವೆ ಬಹಳ ಧನ ದಾನ ಮಾಡುವುದರಿಂದ ರಾಜರಾಗುತ್ತಾರೆ. ಇಲ್ಲಂತೂ ಪ್ರಜೆಗಳ ರಾಜ್ಯವಾಗಿದೆ. ಒಂದು ಸರ್ಕಾರವಿಲ್ಲ. ಒಬ್ಬ ಬಡ ಸಿಪಾಯಿಯದೂ ಸಹ ಸರ್ಕಾರವಾಗಿದೆ, ಅವರ ಸ್ಥಾನದಿಂದ ಇಳಿಸಲೂ ಸಹ ನಿಧಾನಿಸುವುದಿಲ್ಲ. ಇಂತಹ ಬಹಳ ಕೆಲಸಗಳು ನಡೆಯುತ್ತಿರುತ್ತವೆ. ಎರಡು ಪೈಸೆಯನ್ನು ಕೊಟ್ಟರೂ ಸಹ ದೊಡ್ಡ ಮಂತ್ರಿಯನ್ನೇ ಸಾಯಿಸಲೂ ಹಿಂಜರಿಯುವುದಿಲ್ಲ. ಅಂದಾಗ ನೀವು ಮಕ್ಕಳು ಸೇವೆಯ ಅವಕಾಶವನ್ನು ತೆಗೆದುಕೊಳ್ಳಬೇಕು, ನಿದ್ರೆ ಮಾಡಬಾರದು. ಹೇಗೆ ಸತ್ಸಂಗದಲ್ಲಿ ಕಥೆಯನ್ನು ಕೇಳಿ ಮತ್ತೆ ಮನೆಗೆ ಹೋಗಿ ಪುನಃ ಹಾಗೆಯೇ ಆಗಿ ಬಿಡುತ್ತಾರೆ. ಯಾವುದೇ ಉಲ್ಲಾಸವಿರುವುದಿಲ್ಲ. ಹಾಗೆಯೇ ಮಕ್ಕಳಲ್ಲಿಯೂ ಸಹ ಉಲ್ಲಾಸವು ಕಡಿಮೆಯಿದೆ. ಸರ್ಕಾರದ ಹೂದೋಟದಲ್ಲಿ ಬಹಳ ಒಳ್ಳೆಯ ಸುಂದರವಾದ ಹೂಗಳಿರುತ್ತವೆ, ಅವರ ವಿಭಾಗವೇ ಬೇರೆಯಾಗಿರುತ್ತದೆ. ಯಾರೇ ಹೋಗುತ್ತಾರೆಂದರೆ ಮೊದಲು ಅವರಿಗೆ ಒಳ್ಳೆಯ ಹೂಗಳನ್ನು ತಂದು ಕೊಡುತ್ತಾರೆ. ಹಾಗೆಯೇ ಇಲ್ಲಿ ತಂದೆಯದೂ ಸಹ ಹೂದೋಟವಾಗಿದೆ. ಯಾರೇ ಬರುತ್ತಾರೆಂದರೆ ನಾವು ಅವರನ್ನು ತಿರುಗಾಡಿಸುತ್ತೇವೆಯೇ? ಇಂತಹವರು ಒಳ್ಳೊಳ್ಳೆಯ ಹೂಗಳೆಂದು ಹೆಸರನ್ನು ತಿಳಿಸುತ್ತೇವೆ. ಇಲ್ಲಿ ಕಣಿಗಿಲೆ, ಎಕ್ಕದ ಹೂಗಳೂ ಸಹ ಕುಳಿತಿದ್ದಾರೆ. ಅವರಲ್ಲಿ ಹೊಳಪು ಎನ್ನುವುದೇ ಇಲ್ಲ, ಸೇವೆ ಮಾಡುವುದಿಲ್ಲ. ಪ್ರತಿ ದಿನ ಒಬ್ಬರಲ್ಲ ಒಬ್ಬರಿಗೆ ತಂದೆಯ ಪರಿಚಯವನ್ನು ಅವಶ್ಯವಾಗಿ ಕೊಡಬೇಕು. ನೀವಂತೂ ಗುಪ್ತವಾಗಿದ್ದೀರಿ, ಎಷ್ಟೊಂದು ವಿಘ್ನಗಳು ಬರುತ್ತವೆ. ಸರ್ವೀಸಿಗೆ ಯೋಗ್ಯರಾಗಿಲ್ಲ. ತಂದೆಯಂತೂ ಮಂದಿರಗಳಿಗೆ ಹೋಗಿ, ಸ್ಮಶಾನದಲ್ಲಿ ಹೋಗಿ ಭಾಷಣ ಮಾಡಬೇಕೆಂದು ಪದೇ-ಪದೇ ತಿಳಿಸುತ್ತಾರೆ ಅಂದಾಗ ಮಕ್ಕಳು ಸರ್ವೀಸಿನ ಪ್ರತ್ಯಕ್ಷ ಪ್ರಮಾಣವನ್ನು ತೋರಿಸಬೇಕು. ಆದರೆ ಶೇಕಡಾವಾರು ಕೆಲವರಷ್ಟೇ ಇದ್ದಾರೆ. ಮಿತ್ರ-ಸಂಬಂಧಿಗಳು ಮುಂತಾದವರಿಗೂ ಸಹ ತಿಳಿಸಬೇಕು. ಇಲ್ಲಿ ಬರಲು ಭಯ ಪಡುತ್ತಾರೆಂದರೆ ಮನೆಗೆ ಹೋಗಿ ತಿಳಿಸಬಹುದು. ತಂದೆಯ ಪರಿಚಯ ಸಿಗುವುದರಿಂದ ಬಹಳ ಖುಷಿಯಾಗಿ ಬಿಡುತ್ತಾರೆ. ತಂದೆಯು ಹೇಳುತ್ತಾರೆ - ಸರ್ವೀಸಿನಲ್ಲೆಂದೂ ಸುಸ್ತಾಗಬಾರದು. 100ರಲ್ಲಿ ಒಬ್ಬರು ಬರುತ್ತಾರೆ. ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ಅವಶ್ಯವಾಗಿ ಸಹನೆ ಮಾಡಬೇಕಾಗುತ್ತದೆ. ಎಲ್ಲಿಯವರೆಗೆ ನಿಂದನೆಯನ್ನು ಕೇಳುವುದಿಲ್ಲವೋ ಅಲ್ಲಿಯವರೆಗೆ ಕಳಂಗೀಧರರಾಗುವುದಿಲ್ಲ. ಜ್ಞಾನದ ನಶೆಯು ಏರಿದೆ ಆದರೆ ಫಲಿತಾಂಶವೆಲ್ಲಿ! ಒಳ್ಳೆಯದು, 10-20 ಜನರಿಗೆ ಜ್ಞಾನ ಕೊಟ್ಟಿದ್ದೀರಿ, ಅದರಲ್ಲಿ ಒಬ್ಬರೋ ಅಥವಾ ಇಬ್ಬರೋ ಜಾಗೃತರಾದರೆಂದರೆ ಅದನ್ನಾದರೂ ತಿಳಿಸಬೇಕಲ್ಲವೆ. ಸೇವೆಯ ಆಸಕ್ತಿ ಇರಬೇಕು, ಆಗ ತಂದೆಯು ಬಹುಮಾನ ಕೊಡುತ್ತಾರೆ. ತಂದೆಯ ಪರಿಚಯ ಕೊಡಿ - ನಿಮ್ಮ ತಂದೆ ಯಾರು? ಆಗಲೇ ಆಸ್ತಿಯ ನಶೆಯೇರುತ್ತದೆ. ನೀವು ಭಾಷಣ ಮಾಡಿ - ವಿಶ್ವದಲ್ಲಿ ಬ್ರಹ್ಮಾಕುಮಾರ-ಕುಮಾರಿಯರ ವಿನಃ ವಿಶ್ವದ ಇತಿಹಾಸ-ಭೂಗೋಳವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಚಾಲೆಂಜ್ ಮಾಡಿ. ತಂದೆಯು ಸ್ಮಶಾನದ ಮಾತನ್ನು ತಿಳಿಸುತ್ತಾರೆಂದಾಗ ನೀವು ಸ್ಮಶಾನದಲ್ಲಿ ಹೋಗಿ ಸರ್ವೀಸ್ ಮಾಡಬೇಕು. 6-8 ಗಂಟೆಗಳಂತೂ ವ್ಯವಹಾರ-ಉದ್ಯೋಗವನ್ನು ಮಾಡುತ್ತೀರಿ, ಉಳಿದ ಸಮಯವು ಎಲ್ಲಿ ಹೋಗುತ್ತದೆ? ಸರ್ವೀಸ್ ಮಾಡದಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ - ಮಕ್ಕಳೇ, ನೀವು ನಾರಾಯಣನನ್ನು ಅಥವಾ ಲಕ್ಷ್ಮೀಯನ್ನು ವರಿಸಲು ಬಂದಿದ್ದೀರಿ ಆದರೆ ತಮ್ಮ ಮುಖವನ್ನು ನೋಡಿಕೊಳ್ಳಿ. ತಂದೆಯು ತಿಳಿಸುವುದಂತೂ ಸರಿಯಲ್ಲವೆ. ಒಂದೇ ವಿಷಯವನ್ನು ತೆಗೆದುಕೊಳ್ಳಿ. ವಿಶ್ವದ ಇತಿಹಾಸ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನು ಬಂದು ತಿಳಿದುಕ್ಕೊಳ್ಳಿ, ಪತ್ರಿಕೆಗಳಲ್ಲಿ ಹಾಕಿಸಿ. ಹಾಲ್ ಅನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡಿರಿ. ನಿಮಗೆ ಮೂರು ಹೆಜ್ಜೆಗಳಷ್ಟು ಪೃಥ್ವಿಯು ಸಿಗುವುದಿಲ್ಲ. ಮನುಷ್ಯರು ಅರಿತುಕೊಂಡಿಲ್ಲ. ನೀವು ಪರಮಧಾಮದ ವಿದೇಶಿಯಾಗಿದ್ದೀರಿ. ಪರಮಧಾಮದ ವಿದೇಶಿಯರು ಮತ್ತ್ಯಾರೂ ಇರುವುದಿಲ್ಲ. ತಂದೆ ಮತ್ತು ನೀವು ಮಕ್ಕಳು ವಿದೇಶಿಯರಾಗಿದ್ದೀರಿ. ನಿಮ್ಮ ಭಾಷೆಯನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಇಲ್ಲಿ ಸಾಕಾರದಲ್ಲಿ ಕಾಲಿಗೆ ನಮಸ್ಕರಿಸಿ, ಇದನ್ನು ಮಾಡಿ, ಅದನ್ನು ಮಾಡಿ ಎಂದು ಹೇಳುವುದಿಲ್ಲ. ಹೇಗೆ ಸಾಧು ಮಹಾತ್ಮರ ಕಾಲನ್ನು ತೊಳೆದು ಕುಡಿಯುತ್ತಾರೆ, ಅದಕ್ಕೆ ತತ್ವ ಪೂಜೆಯೆಂದು ಹೇಳಲಾಗುತ್ತದೆ. ಏಕೆಂದರೆ ಶರೀರವು ಪಂಚ ತತ್ವಗಳಿಂದ ಆಗಿದೆಯಲ್ಲವೆ. ಭಾರತದ ಸ್ಥಿತಿ ಏನಾಗಿ ಬಿಟ್ಟಿದೆ? ಅಂದಾಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸರ್ವೀಸಿನ ಸಾಕ್ಷಿಯನ್ನು ತೋರಿಸಿ, ಎಲ್ಲರಿಗೆ ಸುಖ ಕೊಡಿ. ಇಲ್ಲಂತೂ ಇದೇ ಗುಂಗಿರಬೇಕು, ಇದೇ ಚಿಂತೆಯಿರಬೇಕು. ಬುದ್ಧಿಯೋಗವು ತಂದೆಯ ಜೊತೆಯಿರಲಿ.

ಗೀತೆ :
ಮಾತಾ ಓ ಮಾತಾ ನೀನು ಎಲ್ಲರ ಭಾಗ್ಯವಿದಾತಾ.........

ಮಾತಾ ಜಗದಂಬಾ ಭಾಗ್ಯವಿದಾತೆಯಾಗಿದ್ದಾರೆ. ತಾಯಿಯೇ ಪದವಿಯನ್ನು ಪಡೆಯುತ್ತಾರೆ. ಅವರೂ ಸಹ ಹೇಳುತ್ತಾರೆ – ಶಿವ ತಂದೆಯನ್ನು ನೆನಪು ಮಾಡಿ, ಅವರು ಹೇಳಿದ್ದನ್ನು ನೆನಪು ಮಾಡಿ ಅನ್ಯರಿಗೆ ಧಾರಣೆ ಮಾಡಿಸುತ್ತೇನೆ, ಸೌಭಾಗ್ಯವನ್ನು ಮಾಡಿಸುತ್ತೇನೆ. ನೀವು ಭಾರತದ ಸೌಭಾಗ್ಯ ವಿಧಾತೆಯಾಗಿದ್ದೀರಿ. ಅಂದಮೇಲೆ ಎಷ್ಟೊಂದು ನಶೆಯಿರಬೇಕು. ಯಾವುದು ಮಮ್ಮಾರವರ ಮಹಿಮೆಯೋ ಅದೇ ತಂದೆಯ ಮಹಿಮೆಯಾಗಿದೆ, ಹಾಗೇ ತಾತನ ಮಹಿಮೆಯೂ ಹೌದು. ನೀವು ಮಕ್ಕಳು ಯಜ್ಞದ ಸ್ಥೂಲ ಸೇವೆಯನ್ನೂ ಮಾಡಬೇಕು, ಆತ್ಮಿಕ ಸೇವೆಯನ್ನೂ ಅವಶ್ಯವಾಗಿ ಮಾಡಬೇಕು. ಮನ್ಮನಾಭವದ ಮಂತ್ರವನ್ನು ಎಲ್ಲರಿಗೆ ತಿಳಿಸಬೇಕು. ಮನ್ಮನಾಭವದ ಮಂತ್ರವು ಮನಸ್ಸಾ ಸೇವೆ ಆಗಿದೆ, ಮಧ್ಯಾಜೀಭವದ ಮಂತ್ರವು ವಾಚಾ ಆಗಿದೆ. ಇದರಲ್ಲಿ ಕರ್ಮಣ ಸೇವೆಯೂ ಬಂದು ಬಿಟ್ಟಿತು. ಕನ್ಯೆಯರು ಸೇವೆಯಲ್ಲಿ ತೊಡಗಬೇಕು. ಹಳ್ಳಿಗಳಲ್ಲಿ ಚೆನ್ನಾಗಿ ಸೇವೆಯಾಗುತ್ತದೆ. ದೊಡ್ಡ-ದೊಡ್ಡ ನಗರಗಳಲ್ಲಿ ಬಹಳ ಫ್ಯಾಷನ್ ಇದೆ. ಟೆಂಪ್ಟೇಷನ್ ಬಹಳ ಇದೆ ಅಂದಾಗ ಏನು ಮಾಡುವುದು? ದೊಡ್ಡ ನಗರಗಳನ್ನು ಬಿಟ್ಟು ಬಿಡುವುದೇ? ಈ ರೀತಿಯೂ ಅಲ್ಲ ಏಕೆಂದರೆ ದೊಡ್ಡ ನಗರಗಳಿಂದ, ಸಾಹುಕಾರರಿಂದ ತಂದೆಯ ಪ್ರತ್ಯಕ್ಷತೆಯ ಶಬ್ಧವು ಕೇಳಿ ಬರುವುದು. ಬಾಕಿ ಈ ಮನ್ಮನಾಭವದ ಛೂ-ಮಂತ್ರದಿಂದ ಪ್ರಪಂಚವನ್ನು ಸ್ವರ್ಗವನ್ನಾಗಿ ಮಾಡಬೇಕಾಗಿದೆ. ತಂದೆಯು ಕುಳಿತು ತಿಳಿಸುತ್ತಾರೆ - ಈ ಜಗದಂಬಾ ಯಾರು, ಇವರು ಭಾರತದ ಸೌಭಾಗ್ಯವಿಧಾತೆ ಆಗಿದ್ದಾರೆ, ಇವರ ಶಿವಶಕ್ತಿ ಸೇನೆಯು ಪ್ರಸಿದ್ಧವಾಗಿದೆ. ಜಗದಂಬಾ ಪ್ರಮುಖರಾಗಿದ್ದಾರೆ ಅರ್ಥಾತ್ ಭಾರತದಲ್ಲಿ ಒಂದು ದೈವೀ ಸರ್ಕಾರವನ್ನು ಸ್ಥಾಪನೆ ಮಾಡುವಂತಹ ಮುಖ್ಯಸ್ಥರಾಗಿದ್ದಾರೆ. ಭಾರತ ಮಾತಾ ಶಕ್ತಿ ಅವತಾರವು ಭಾರತದಲ್ಲಿ ಶ್ರೀಮತದ ಆಧಾರದ ಮೇಲೆ ಒಂದು ಸರ್ಕಾರವನ್ನು ಸ್ಥಾಪನೆ ಮಾಡಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

೧. ಬುದ್ಧಿಯೋಗವನ್ನು ಒಬ್ಬ ತಂದೆಯೊಂದಿಗೆ ಜೋಡಿಸಬೇಕು, ಮನ್ಮನಾಭವದ ಛೂ-ಮಂತ್ರದಿಂದ ಈ ಪ್ರಪಂಚವನ್ನು ಸ್ವರ್ಗವನ್ನಾಗಿ ಮಾಡಬೇಕಾಗಿದೆ.

೨. ಸರ್ವೀಸಿನಲ್ಲೆಂದೂ ಸುಸ್ತಾಗಬಾರದು. ಸ್ಥೂಲ ಸೇವೆಯ ಜೊತೆ ಜೊತೆಗೆ ಆತ್ಮಿಕ ಸೇವೆಯನ್ನೂ ಮಾಡಬೇಕಾಗಿದೆ. ಎಲ್ಲರಿಗೆ ಮನ್ಮನಾಭವದ ಮಂತ್ರದ ನೆನಪು ತರಿಸಬೇಕಾಗಿದೆ.

ವರದಾನ:
ಪರಿಶೀಲಿಸುವ ಹಾಗೂ ನಿರ್ಣಯ ಮಾಡುವಂತಹ ಶಕ್ತಿಯ ಮೂಲಕ ಸೇವೆಯಲ್ಲಿ ಸಫಲತೆ ಪ್ರಾಪ್ತಿ ಮಾಡಿಕೊಳ್ಳುವಂತಹ ಸಫಲತಾ ಮೂರ್ತಿ ಭವ.

ಯಾರು ಪರಿಶೀಲಿಸುವ ಶಕ್ತಿಯ ಮೂಲಕ ತಂದೆಯನ್ನು, ತಮ್ಮನ್ನು, ಸಮಯವನ್ನು, ಬ್ರಾಹ್ಮಣ ಪರಿವಾರವನ್ನು ಮತ್ತು ತಮ್ಮ ಶ್ರೇಷ್ಠ ಕರ್ತವ್ಯವನ್ನು ಗುರುತಿಸಿ ನಂತರ ನಿರ್ಣಯ ಮಾಡುತ್ತಾರೆ. ಏನು ಆಗಬೇಕು ಮತ್ತು ಏನು ಮಾಡಬೇಕು, ಅವರೇ ಸೇವೆ ಮಾಡುತ್ತಾರೆ, ಕರ್ಮ ಅಥವಾ ಸಂಬಂಧ ಸಂಪರ್ಕದಲ್ಲಿ ಬರುತ್ತಾ ಸದಾ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಮನಸ್ಸಾ-ವಾಚಾ-ಕರ್ಮಣ ಎಲ್ಲಾ ಪ್ರಕಾರದ ಸೇವೆಯಲ್ಲಿ ಸಫಲತಾ ಮೂರ್ತಿಗಳಾಗಲು ಆಧಾರವಾಗಿದೆ, ಪರಿಶೀಲಿಸುವ ಮತ್ತು ನಿರ್ಣಯ ಮಾಡುವಂತಹ ಶಕ್ತಿ.

ಸ್ಲೋಗನ್:
ಜ್ಞಾನಯೋಗದ ಲೈಟ್ ಮೈಟ್ ನಿಂದ ಸಂಪನ್ನರಾಗಿ, ಆಗ ಯಾವುದೇ ಪ್ರಕಾರದ ಪರಿಸ್ಥಿತಿಯನ್ನು ಸೆಕೆಂಡ್ ನಲ್ಲಿ ಪಾರು ಮಾಡುವಿರಿ.