19/10/18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯೊಂದಿಗೆ ಸರ್ವ ಸಂಬಂಧವನ್ನಿಟ್ಟುಕೊಂಡಾಗ ಬಂಧನವು ಸಮಾಪ್ತಿಯಾಗಿ ಬಿಡುತ್ತದೆ, ಮಾಯೆಯು ಬಂಧನದಲ್ಲಿ ಬಂಧಿಸುತ್ತದೆ ಮತ್ತು ತಂದೆಯು ಬಂಧನಗಳಿಂದ ಮುಕ್ತರನ್ನಾಗಿ ಮಾಡುತ್ತಾರೆ.”

ಪ್ರಶ್ನೆ:
ನಿರ್ಬಂಧನರೆಂದು ಯಾರಿಗೆ ಹೇಳಲಾಗುತ್ತದೆ? ನಿರ್ಬಂಧನರಾಗುವ ಉಪಾಯವು ಯಾವುದಾಗಿದೆ?

ಉತ್ತರ:
ನಿರ್ಬಂಧನ ಅರ್ಥಾತ್ ಅಶರೀರಿ. ದೇಹ ಸಹಿತವಾಗಿ ದೇಹದ ಯಾವುದೇ ಸಂಬಂಧವು ಬುದ್ಧಿಯನ್ನು ತನ್ನ ಕಡೆ ಸೆಳೆಯದಿರಲಿ. ದೇಹಾಭಿಮಾನದಲ್ಲಿಯೇ ಬಂಧನವಿದೆ, ದೇಹೀ ಅಭಿಮಾನಿಗಳಾಗಿ ಆಗ ಎಲ್ಲಾ ಬಂಧನಗಳು ಸಮಾಪ್ತಿಯಾಗಿ ಬಿಡುತ್ತದೆ. ಜೀವಿಸಿದ್ದಂತೆಯೇ ಸಾಯುವುದೇ ನಿರ್ಬಂಧನರಾಗುವುದಾಗಿದೆ. ಈಗ ಅಂತಿಮ ಸಮಯವಾಗಿದೆ, ನಾಟಕವು ಮುಕ್ತಾಯವಾಯಿತು. ನಾವು ತಂದೆಯ ಬಳಿ ಹೊರಟು ಹೋಗುತ್ತೇವೆಂದು ಬುದ್ಧಿಯಲ್ಲಿರಲಿ, ಆಗ ನಿರ್ಬಂಧನರಾಗಿ ಬಿಡುತ್ತೀರಿ.

ಗೀತೆ:
ಯಾರ ಜೊತೆಗಾರ ಸ್ವಯಂ ಭಗವಂತನಾಗಿದ್ದಾರೆ, ಅವರಿಗೆ..............

ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಈಗ ಇಷ್ಟು ಜನ ಮಕ್ಕಳಿದ್ದಾರೆಂದರೆ ಅವಶ್ಯವಾಗಿ ಬೇಹದ್ದಿನ ತಂದೆಯೂ ಇರುವರು. ತಂದೆಯು ತಿಳಿಸುತ್ತಾರೆ - ನಿರಾಕಾರ ಶಿವ ತಂದೆಯೆಂತಲೂ ಹೇಳುತ್ತಾರೆ. ಬ್ರಹ್ಮಾರವರನ್ನೂ ಸಹ ತಂದೆಯೆಂದು ಹೇಳುತ್ತಾರೆ, ವಿಷ್ಣುವಿಗಾಗಲಿ ಅಥವಾ ಶಂಕರನಿಗಾಗಲಿ ತಂದೆಯೆಂದು ಹೇಳುವುದಿಲ್ಲ. ಶಿವನಿಗೆ ಸದಾ ತಂದೆಯೆಂದು ಹೇಳುತ್ತಾರೆ. ಶಿವನ ಚಿತ್ರವೇ ಬೇರೆ, ಶಂಕರನ ಚಿತ್ರವೇ ಬೇರೆ. ಶಿವಾಯ ನಮಃ ಎಂದು ಗೀತೆಯೂ ಸಹ ಇದೆ ಮತ್ತೆ ನೀವು ಮಾತಾ, ಪಿತಾ.... ಎಂದೂ ಹೇಳುತ್ತಾರೆ. ಇದೂ ಸಹ ತಿಳಿಸಿಕೊಡಲು ಬಹಳ ಸಹಜವಾಗಿದೆ. ಏಕೆಂದರೆ ಅವಶ್ಯವಾಗಿ ನಿರಾಕಾರ ಶಿವನನ್ನೇ ತಂದೆಯೆಂದು ಹೇಳಲಾಗುತ್ತದೆ. ಅವರೇ ಸರ್ವ ಆತ್ಮಗಳ ತಂದೆಯಾಗಿದ್ದಾರೆ. ಶಂಕರ ಅಥವಾ ವಿಷ್ಣು ನಿರಾಕಾರರಂತೂ ಅಲ್ಲ. ಶಿವನಿಗೆ ನಿರಾಕಾರನೆಂದು ಹೇಳಲಾಗುತ್ತದೆ. ಮಂದಿರಗಳಲ್ಲಿ ಅವರೆಲ್ಲರ ಚಿತ್ರಗಳಿವೆ. ಭಕ್ತಿಮಾರ್ಗದಲ್ಲಿಯೂ ಎಷ್ಟೊಂದು ಚಿತ್ರಗಳಿವೆ. ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆಯ ಚಿತ್ರವನ್ನು ತೋರಿಸುತ್ತಾರೆ, ನಂತರ ಬ್ರಹ್ಮಾ, ವಿಷ್ಣು, ಶಂಕರರ ಚಿತ್ರವನ್ನು ತೋರಿಸುತ್ತಾರೆ. ಅವರ ರೂಪವೂ ಇದೆ. ಜಗದಂಬಾ-ಜಗತ್ಪಿತಾರವರ ರೂಪವೂ ಇದೆ ಮತ್ತು ಲಕ್ಷ್ಮಿ-ನಾರಾಯಣರಿಗೂ ಸಾಕಾರಿ ರೂಪವಿದೆ. ಆದರೆ ಒಬ್ಬರೇ ಭಗವಂತನು ನಿರಾಕಾರನಾಗಿದ್ದಾರೆ. ಅವರನ್ನು ಕೇವಲ ಭಗವಂತನೆಂದು ಹೇಳುವುದರಿಂದ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಭಗವಂತನಿಗೂ ನಿಮಗೂ ಸಂಬಂಧವೇನೆಂದು ಕೇಳಿದರೆ ಅವರು ತಂದೆಯಾಗಿದ್ದಾರೆಂದು ಹೇಳುತ್ತಾರೆ. ಆದ್ದರಿಂದ ಅವರು ಪರಮಪಿತ ಪರಮಾತ್ಮನಾಗಿದ್ದಾರೆಂದು ಸಿದ್ಧ ಮಾಡಿ ತಿಳಿಸಬೇಕು. ತಂದೆ ರಚಯಿತನಿದ್ದಾರೆಂದರೆ ತಾಯಿಯೂ ಬೇಕು. ತಾಯಿಯಿಲ್ಲದೇ ತಂದೆಯು ಸೃಷ್ಟಿಯನ್ನು ಹೇಗೆ ರಚಿಸುತ್ತಾರೆ! ಆ ತಂದೆಯು ಯಾವಾಗ ಬರುತ್ತಾರೆ? ಹೇ ಪತಿತರನ್ನು ಪಾವನ ಮಾಡುವ ತಂದೆಯೇ ಬನ್ನಿ ಎಂದು ಎಲ್ಲರೂ ಕರೆಯುತ್ತಾರೆ. ಈಗಂತೂ ಇಡೀ ಪ್ರಪಂಚವು ಪತಿತವಾಗಿದೆ. ಪತಿತರಾದಾಗಲೇ ಬಂದು ಪಾವನರನ್ನಾಗಿ ಮಾಡುತ್ತಾರಲ್ಲವೆ. ಇದರಿಂದ ತಂದೆಯು ಪತಿತ ಪ್ರಪಂಚದಲ್ಲಿ ಅವಶ್ಯವಾಗಿ ಬರಬೇಕಾಗಿದೆ ಎಂದು ಸಿದ್ಧವಾಗುತ್ತದೆ. ಆದರೆ ಡ್ರಾಮಾನುಸಾರ ಇದು ಯಾರಿಗೂ ಅರ್ಥವಾಗುವುದಿಲ್ಲ. ತಿಳಿಯದೇ ಇರುವ ಕಾರಣವೇ ತಂದೆಯು ಬಂದು ತಿಳಿಸುತ್ತಾರೆ. ತಂದೆಯು ಮಕ್ಕಳಿಗೆ ಕುಳಿತು ತಿಳಿಸಿ ಕೊಡುತ್ತಾರೆ. ಜ್ಞಾನ ಮತ್ತು ಭಕ್ತಿಯೆಂದು ಭಾರತದಲ್ಲಿಯೇ ಗಾಯನ ಮಾಡಲಾಗುತ್ತದೆ, ನಂತರ ಬ್ರಹ್ಮಾರವರ ದಿನ - ಬ್ರಹ್ಮಾರವರ ರಾತ್ರಿಯೆಂದು ಹೇಳುತ್ತಾರೆ. ರಾತ್ರಿಯಲ್ಲಿ ಘೋರ ಅಂಧಕಾರವಿರುತ್ತದೆ, ಜ್ಞಾನ ಅಂಜನವನ್ನು ಸದ್ಗುರು ಕೊಟ್ಟರು ಅಜ್ಞಾನ ಅಂಧಕಾರವು ವಿನಾಶವಾಯಿತೆಂಬ ಗಾಯನವೂ ಇದೆ. ಮನುಷ್ಯರಲ್ಲಿ ಇಷ್ಟೂ ಅಂಧಕಾರವಿದೆ ಅವರು ತಂದೆಯನ್ನೇ ಅರಿತುಕೊಂಡಿಲ್ಲ. ಇದರಂತಹ ಅಜ್ಞಾನ ಮತ್ತ್ಯಾವುದೇ ಇಲ್ಲ. ಪರಮಪಿತ, ಓ ಗಾಡ್ ಫಾದರ್ ಎಂದು ಹೇಳಿ ಒಂದುವೇಳೆ ಅವರನ್ನು ಅರಿತುಕೊಂಡೇ ಇಲ್ಲವೆಂದರೆ ಅವರಂತಹ ಅಜ್ಞಾನಿಗಳು ಯಾರೂ ಇಲ್ಲ. ಮಕ್ಕಳು ತಂದೆಯೆಂದು ಹೇಳಿ ನಂತರ ನಾವು ಅವರ ನಾಮ, ರೂಪ, ಕರ್ತವ್ಯವನ್ನು ಅರಿತುಕೊಂಡೇ ಇಲ್ಲವೆಂದು ಹೇಳಿದರೆ ಅವರಿಗೆ ತಿಳುವಳಿಕೆ ಇಲ್ಲದವರು ಎಂದು ಹೇಳಬೇಕಲ್ಲವೆ. ತಂದೆಯೆಂದು ಹೇಳುತ್ತಿದ್ದರೂ ಸಹ ಅವರನ್ನು ಅರಿತುಕೊಂಡಿಲ್ಲ. ಇದೇ ಭಾರತದ ತಪ್ಪಾಗಿದೆ. ಓ ಗಾಡ್ ಫಾದರ್, ಬಂದು ಪತಿತರನ್ನು ಪಾವನ ಮಾಡಿ, ದುಃಖದಿಂದ ಬಿಡಿಸಿ, ದುಃಖ ಹರಣ ಮಾಡಿ ಸುಖ ಕೊಡಿ ಎಂದು ಹಾಡುತ್ತಾರೆ. ತಂದೆಯು ಒಂದೇ ಬಾರಿ ಬರುತ್ತಾರೆ. ಇದನ್ನು ನೀವು ಮಕ್ಕಳು ನಂಬರ್ವಾರ್ ತಿಳಿದುಕೊಂಡಿದ್ದೀರಿ. ನಾವು ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯಬೇಕೆಂದು ಕೆಲವರು ತಿಳಿದುಕೊಳ್ಳುವುದೇ ಇಲ್ಲ.

ತಂದೆಯ ಪೂರ್ಣ ಪರಿಚಯವಿಲ್ಲದಿರುವುದರಿಂದಲೇ ಏನು ಮಾಡುವುದು ಬಂಧನವಿದೆಯೆಂದು ಎಂದು ಹೇಳುತ್ತಾರೆ. ಜೀವಿಸಿದ್ದಂತೆಯೇ ಸಾಯುವುದು ಬಂದು ಬಿಟ್ಟರೆ ನಿಮ್ಮ ಬಂಧನವು ಸಮಾಪ್ತಿಯಾಗಿ ಬಿಡುತ್ತದೆ. ಮನುಷ್ಯರು ಆಕಸ್ಮಿಕವಾಗಿ ಸಾವನ್ನಪ್ಪುತ್ತಾರೆಂದರೆ ಬಂಧನದಿಂದ ಬಿಡುಗಡೆಯಾಗುತ್ತಾರೆ. ಈಗಂತೂ ಎಲ್ಲರ ಬಂಧನವೂ ಬಿಡುಗಡೆಯಾಗುವುದು. ನೀವು ಜೀವಿಸಿದ್ದಂತೆಯೇ ನಿರ್ಬಂಧನರು ಅರ್ಥಾತ್ ಅಶರೀರಿಗಳಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಈ ಶರೀರದ ಬಂಧನಗಳನ್ನು ಮರೆತು ಹೋಗಿ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. ಆದರೆ ಯಾವಾಗ ನೀವು ದೇಹಾಭಿಮಾನಿಗಳಾಗುತ್ತೀರೋ ಆಗಲೇ ಬಂಧನವೆನಿಸುತ್ತದೆ ನಂತರ ಹೇಗೆ ಬಿಡುಗಡೆಯಾಗುವುದೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಭಲೆ ಗೃಹಸ್ಥ ವ್ಯವಹಾರದಲ್ಲಿರಿ. ಆದರೆ ನಾವು ಹಿಂತಿರುಗಿ ಹೋಗಬೇಕೆಂದು ಬುದ್ಧಿಯಲ್ಲಿರಲಿ. ಹೇಗೆ ನಾಟಕದ ಅಂತ್ಯವಾದಾಗ ಎಲ್ಲಾ ಪಾತ್ರಧಾರಿಗಳು ನಾಟಕದಿಂದ ಉಪರಾಂ ಆಗಿ ಬಿಡುತ್ತಾರೆ. ಪಾತ್ರವನ್ನಭಿನಯಿಸುತ್ತಾ - ಅಭಿನಯಿಸುತ್ತಾ ಇನ್ನು ಸ್ವಲ್ಪ ಸಮಯ ಮಾತ್ರ ಉಳಿದಿದೆ. ಈ ಪಾತ್ರವನ್ನಭಿನಯಿಸಿ ನಂತರ ಮನೆಗೆ ಹೋಗುತ್ತೇವೆಂದು ಬುದ್ಧಿಯಲ್ಲಿರುತ್ತದೆ. ಈಗ ನಿಮಗೂ ಸಹ ಬುದ್ಧಿಯಲ್ಲಿರಬೇಕು - ಈಗ ಅಂತ್ಯವಾಗಿದೆ, ನಾವು ದೈವೀ ಸಂಬಂಧದಲ್ಲಿ ಹೋಗುತ್ತೇವೆ, ಈ ಹಳೆಯ ಪ್ರಪಂಚದಲ್ಲಿದ್ದರೂ ಸಹ ನಾವು ತಂದೆಯ ಬಳಿ ಹೊರಟು ಹೋಗುತ್ತೇವೆಂದು ಬುದ್ಧಿಯಲ್ಲಿರಬೇಕು. ನಾವು ನಿಮ್ಮ ಮೇಲೆ ಬಲಿಹಾರಿಯಾಗುತ್ತೇವೆ. ಜೀವಿಸಿದ್ದಂತೆಯೇ ನಿಮ್ಮವರಾಗುತ್ತೇವೆ. ದೇಹ ಸಹಿತವಾಗಿ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ನಾವು ನಿಮ್ಮ ಜೊತೆ ಸಂಬಂಧವನ್ನಿಟ್ಟುಕೊಳ್ಳುತ್ತೇವೆ ಎಂದು ಮಕ್ಕಳು ಹೇಳುತ್ತಾರೆ. ಸಂಬಂಧವಿದ್ದರೆ ನೆನಪು ಮಾಡಿ, ಪ್ರೀತಿ ಮಾಡಿ. ಆದರೆ ತಂದೆಯೊಂದಿಗೆ ಅಥವಾ ಪ್ರಿಯತಮನೊಂದಿಗೆ ಬುದ್ಧಿಯೋಗವನ್ನಿಡಿ, ಆಗ ನಿಮ್ಮ ಆತ್ಮದಲ್ಲಿ ಯಾವ ತುಕ್ಕು ಹಿಡಿದಿದೆಯೋ ಅದು ಬಿಟ್ಟು ಹೋಗುತ್ತದೆ. ಯೋಗದ ಗಾಯನವಿದೆಯಲ್ಲವೆ. ಮತ್ತೆಲ್ಲರದೂ ಶಾರೀರಿಕ ಯೋಗವಾಗಿದೆ - ಚಿಕ್ಕಪ್ಪ, ದೊಡ್ಡಪ್ಪ, ಮಾವ, ಗುರು-ಗೋಸಾಯಿ ಮುಂತಾದವರೆಲ್ಲರೊಂದಿಗೆ ಯೋಗವನ್ನಿಟ್ಟುಕೊಳ್ಳುತ್ತಾರೆ. ಈಗ ತಂದೆಯು ತಿಳಿಸುತ್ತಾರೆ -ಇವರೆಲ್ಲರಿಂದ ಬುದ್ಧಿಯೋಗವನ್ನು ತೆಗೆದು ನನ್ನೊಬ್ಬನನ್ನೇ ನೆನಪು ಮಾಡಿ, ನನ್ನೊಬ್ಬನೊಂದಿಗೆ ಯೋಗವನ್ನಿಡಿ, ದೇಹಾಭಿಮಾನದಲ್ಲಿ ಬರಬೇಡಿ. ದೇಹದಿಂದ ಕರ್ಮ ಮಾಡುತ್ತಿದ್ದರೂ ಸಹ ಈ ನಿಶ್ಚಯ ಮಾಡಿಕೊಳ್ಳಿ - ನಾವು ಪಾತ್ರವನ್ನಭಿನಯಿಸುತ್ತಿದ್ದೇವೆ, ಈಗ ಈ ಹಳೆಯ ಪ್ರಪಂಚದ ಅಂತ್ಯವಾಗಿದೆ, ಈಗ ನಾವು ಹಿಂತಿರುಗಿ ಹೋಗಬೇಕಾಗಿದೆ. ದೇಹ ಸಹಿತವಾಗಿ ದೇಹದ ಎಲ್ಲಾ ಸಂಬಂಧಗಳಿಂದ ಉಪರಾಂ ಆಗಬೇಕಾಗಿದೆ. ಹೀಗೆ ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಬೇಕಾಗಿದೆ. ಈಗಂತೂ ತಂದೆಯ ಬಳಿ ಹೋಗಬೇಕಾಗಿದೆ. ಕೆಲವರಿಗೆ ಸ್ತ್ರೀಯ ಬಂಧನವಿದೆ, ಕೆಲವರಿಗೆ ಪತಿಯ ಬಂಧನವಿದೆ, ಇನ್ನೂ ಕೆಲವರಿಗೆ ಇನ್ನೂ ಕೆಲವರ ಬಂಧನವಿದೆ. ತಂದೆಯಂತೂ ಅನೇಕ ಯುಕ್ತಿಗಳನ್ನು ತಿಳಿಸುತ್ತಾರೆ - ಮಕ್ಕಳೇ, ಹೇಳಿ ಬಿಡಿ ನಾವು ಪವಿತ್ರರಾಗಿ ಭಾರತವನ್ನು ಅವಶ್ಯವಾಗಿ ಪವಿತ್ರವನ್ನಾಗಿ ಮಾಡುತ್ತೇವೆ, ನಾವು ಪವಿತ್ರರಾಗಿ ತನು-ಮನ-ಧನದಿಂದ ಸೇವೆ ಮಾಡುತ್ತೇವೆ, ಆದರೆ ಮೊದಲು ನಷ್ಟಮೋಹಿಗಳಾಗಬೇಕು. ಮೋಹ ನಷ್ಟವಾಗಿದ್ದರೆ ಸರ್ಕಾರಕ್ಕೆ ಪತ್ರ ಬರೆಯಿರಿ ಆಗ ಅವರೂ ಸಹ ನಿಮಗೆ ಸಹಯೋಗ ನೀಡುತ್ತಾರೆ. ಭಗವಾನುವಾಚ – ಕಾಮ ಮಹಾಶತ್ರುವಾಗಿದೆ, ನಾವು ಅದರ ಮೇಲೆ ಜಯ ಪಡೆದು ಪವಿತ್ರರಾಗಿರಲು ಇಚ್ಛಿಸುತ್ತೇವೆ. ಪವಿತ್ರರಾಗಿ ಆಗ ಸ್ವರ್ಗದ ಮಾಲೀಕರಾಗುವಿರಿ ಎಂಬುದು ತಂದೆಯ ಆಜ್ಞೆಯಾಗಿದೆ. ನಮಗೆ ವಿನಾಶ ಮತ್ತು ಸ್ಥಾಪನೆಯ ಸಾಕ್ಷಾತ್ಕಾರವಾಗಿದೆ, ಈಗ ಪವಿತ್ರರಾಗುವುದರಲ್ಲಿ ನಮಗೆ ಇವರು ವಿಘ್ನಗಳನ್ನು ಹಾಕುತ್ತಾರೆ, ಹೊಡೆಯುತ್ತಾರೆ, ನಾನಂತೂ ಭಾರತದ ಸತ್ಯ ಸೇವೆಯಲ್ಲಿದ್ದೇನೆ. ಈಗ ನನಗೆ ಆಶ್ರಯ ನೀಡಿ ಎಂದು ಪತ್ರ ಬರೆಯಬೇಕು. ಆದರೆ ಪಕ್ಕಾ ನಷ್ಟಮೋಹಿಗಳಾಗಿರಬೇಕು. ಸನ್ಯಾಸಿಗಳಂತೂ ಗೃಹಸ್ಥವನ್ನು ಬಿಟ್ಟು ಹೋಗುತ್ತಾರೆ ಆದರೆ ಇಲ್ಲಂತೂ ಜೊತೆಯಲ್ಲಿದ್ದೂ ನಷ್ಟಮೋಹಿಗಳಾಗಬೇಕು. ಸನ್ಯಾಸಿಗಳ ಮಾರ್ಗವು ಬೇರೆಯಾಗಿದೆ. ಮನುಷ್ಯರೂ ಸಹ ಈ ಮಾತನ್ನು ಹೇಳುತ್ತಾರೆ - ನಮಗೆ ಇಂತಹ ಜ್ಞಾನವನ್ನು ಕೊಡಿ, ಗೃಹಸ್ಥ ವ್ಯವಹಾರದಲ್ಲಿದ್ದರೂ ಸಹ ನಾವು ರಾಜ ಜನಕನ ರೀತಿ ಮುಕ್ತಿ-ಜೀವನ್ಮುಕ್ತಿಯನ್ನು ಪಡೆಯಬೇಕು. ಅದೇ ಜ್ಞಾನವು ನಿಮಗೆ ಈಗ ಸಿಗುತ್ತದೆಯಲ್ಲವೆ.

ಈಗ ತಂದೆಯು ಹೇಳುತ್ತಾರೆ - ಇವರು ನನ್ನ ಪತ್ನಿಯಾಗಿದ್ದಾರೆ, ಇವರ ಮುಖದಿಂದ ನಾನು ಪ್ರಜೆಗಳನ್ನು ರಚಿಸುತ್ತೇನೆ. ಪ್ರಜಾಪಿತ ಬ್ರಹ್ಮಾರವರ ಮುಖದ ಮುಖಾಂತರವೇ ಹೇಳುತ್ತೇನೆ. ನೀವು ನನ್ನ ಮೊಮ್ಮಕ್ಕಳಾಗಿದ್ದೀರಿ ಎಂದೂ ಶಿವ ತಂದೆಯು ಹೇಳುತ್ತಾರೆ. ನೀವೂ ನನ್ನ ಮಕ್ಕಳಾಗಿ ಶಿವ ತಂದೆಯ ಮೊಮ್ಮಕ್ಕಳಾಗುತ್ತೀರಿ, ಆಸ್ತಿಯು ಅವರಿಂದ ಸಿಗುತ್ತದೆ ಎಂದು ಇವರೂ (ಬ್ರಹ್ಮಾ) ಸಹ ಹೇಳುತ್ತಾರೆ. ಸ್ವರ್ಗದ ಆಸ್ತಿಯನ್ನು ಯಾವುದೇ ಮನುಷ್ಯರು ಕೊಡಲು ಸಾಧ್ಯವಿಲ್ಲ. ನಿರಾಕಾರ ತಂದೆಯೇ ಕೊಡುತ್ತಾರೆ. ಭಕ್ತಿಯೇ ಬೇರೆಯಾಗಿದೆ ಮತ್ತು ಜ್ಞಾನವೇ ಬೇರೆಯಾಗಿದೆ. ಭಕ್ತಿಯಲ್ಲಂತೂ ವೇದ-ಶಾಸ್ತ್ರಗಳನ್ನು ಓದುತ್ತಾ, ಯಜ್ಞ-ತಪ, ದಾನ-ಪುಣ್ಯಗಳನ್ನು ಮಾಡುತ್ತಾ ಬಹಳ ಖರ್ಚಾಗುತ್ತದೆ, ಇದೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಗಳಾಗಿವೆ. ಭಕ್ತಿಯು ದ್ವಾಪರದಿಂದ ಪ್ರಾರಂಭವಾಗುತ್ತದೆ, ಯಾವಾಗ ದೇವತೆಗಳು ವಾಮಮಾರ್ಗದಲ್ಲಿ ಬಂದು ಪತಿತರಾಗುತ್ತಾರೆಯೋ ಆಗ ದೇವಿ-ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ದೇವತೆಗಳಂತೂ ಸಂಪೂರ್ಣ ನಿರ್ವಿಕಾರಿಗಳಾಗಿದ್ದರು. ವಾಮಮಾರ್ಗದಲ್ಲಿ ಹೋಗುವುದರಿಂದ ವಿಕಾರಿಗಳಾಗಿ ಬಿಡುತ್ತಾರೆ. ಆದ್ದರಿಂದಲೇ ದೇವತಾ ಧರ್ಮದವರು ವಾಮಮಾರ್ಗದಲ್ಲಿ ಬಂದು ಪತಿತರಾಗಿದ್ದಾರೆಂದು ಹೇಳುತ್ತಾರೆ. ಪತಿತರಿಗೆ ದೇವತೆಗಳೆಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದಲೇ ಹಿಂದೂಗಳೆಂದು ಹೆಸರನ್ನಿಟ್ಟಿದ್ದಾರೆ. ವೇದ-ಶಾಸ್ತ್ರಗಳಲ್ಲಿ ಆರ್ಯರೆಂಬ ಹೆಸರನ್ನಿಟ್ಟಿದ್ದಾರೆ. ಆರ್ಯ ಎನ್ನುವ ಹೆಸರು ಈ ಭರತ ಖಂಡಕ್ಕೋಸ್ಕರವೇ ಇದೆ. ಈಗ ಈ ಶಬ್ಧವು ಎಲ್ಲಿಂದ ಬಂದಿತು? ಸತ್ಯಯುಗದಲ್ಲಂತೂ ಆರ್ಯರೆನ್ನುವ ಹೆಸರಿರುವುದಿಲ್ಲ. ಕ್ರಿಸ್ತನಿಗೂ 3000 ವರ್ಷಗಳ ಹಿಂದೆ ಭಾರತದಲ್ಲಿ ದೇವಿ-ದೇವತೆಗಳು ಬಹಳ ಬುದ್ಧಿವಂತರಾಗಿದ್ದರು. ನಂತರ ಅದೇ ದೇವತೆಗಳು ಯಾವಾಗ ದ್ವಾಪರದಲ್ಲಿ ಬಂದು ವಿಕಾರಿಗಳಾಗುತ್ತಾರೆಯೋ ಆಗ ಅವರನ್ನು ಅನಾರ್ಯರೆಂದು ಹೇಳಲಾಗುತ್ತದೆ. ಒಬ್ಬರು ಆರ್ಯರೆಂದು ಹೇಳಿದರೆಂದರೆ ಸಾಕು ಅದೇ ಹೆಸರು ನಡೆದುಬರುತ್ತದೆ. ಹೇಗೆ ಯಾರೋ ಒಬ್ಬರು ಕೃಷ್ಣ ಭಗವಾನುವಾಚ ಹೇಳಿದರು ಅಥವಾ ಬರೆದರು ಎಲ್ಲರೂ ಅದನ್ನು ಒಪ್ಪುತ್ತಾ ಬರುತ್ತಾರೆ. ಶಿವಾಯ ನಮಃ ಎಂದು ಹಾಡುತ್ತಾರೆ, ನೀವೇ ಮಾತಾ-ಪಿತಾ ಎಂದು ಹೇಳುತ್ತಾರೆ. ಆದರೆ ಅವರು ಹೇಗೆ ಮಾತಾಪಿತರಾಗುತ್ತಾರೆ, ರಚನೆಯನ್ನು ಯಾವಾಗ ರಚಿಸಿದರೆಂದು ತಿಳಿದುಕೊಂಡಿಲ್ಲ. ಅವಶ್ಯವಾಗಿ ಸೃಷ್ಟಿಯ ಆದಿಯಲ್ಲಿಯೇ ರಚಿಸಿರುತ್ತಾರೆ. ಈಗ ಮನುಷ್ಯ ಸೃಷ್ಟಿಯ ಆದಿಯೆಂದು ಯಾವುದಕ್ಕೆ ಹೇಳಲಾಗುತ್ತದೆ? ಸತ್ಯಯುಗಕ್ಕೋ ಅಥವಾ ಸಂಗಮಯುಗಕ್ಕೋ? ಸತ್ಯಯುಗದಲ್ಲಂತೂ ತಂದೆಯು ಬರುವುದೇ ಇಲ್ಲ. ಸತ್ಯಯುಗದ ಆದಿಯಲ್ಲಿ ಲಕ್ಷ್ಮೀ-ನಾರಾಯಣರು ಬರುತ್ತಾರೆ, ಅವರನ್ನು ಸತ್ಯಯುಗದ ಮಾಲೀಕರನ್ನಾಗಿ ಯಾರು ಮಾಡಿದರು? ಕಲಿಯುಗದಲ್ಲಿಯೂ ಬರುವುದಿಲ್ಲ. ಇದು ಕಲ್ಪದ ಸಂಗಮಯುಗವಾಗಿದೆ, ನಾನು ಪ್ರತೀ ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ಯಾವಾಗ ಎಲ್ಲಾ ಆತ್ಮಗಳು ಪತಿತರಾಗಿ ಬಿಡುತ್ತಾರೆ ಅಥವಾ ಸೃಷ್ಟಿಯು ಹಳೆಯದಾಗಿ ಬಿಡುತ್ತದೆಯೋ ಆಗ ತಂದೆಯು ಬರುತ್ತೇನೆಂದು ಹೇಳುತ್ತಾರೆ. ನಾಟಕದ ಚಕ್ರವು ಪೂರ್ಣವಾದಾಗಲೇ ತಂದೆಯು ಬರುತ್ತಾರಲ್ಲವೆ. ನೀವು ಮಕ್ಕಳಲ್ಲಿ ಬಹಳ ಬುದ್ಧಿವಂತಿಕೆ ಬೇಕು, ಧಾರಣೆಯೂ ಬೇಕು. ಈಗ ಸಮ್ಮೇಳನಗಳನ್ನು ಮಾಡುತ್ತಾರೆ. ವೇದಗಳನ್ನು ಓದುವುದರಿಂದ ಏನು ಪ್ರಯೋಜನವಿದೆ? ಎಂದು ವೇದವನ್ನು ಓದಬೇಕೆಂದರೆ ಏಕೆ ಓದಬೇಕು? ಅವರಿಗೆ ಸಮ್ಮೇಳನದಲ್ಲಿ ಇದರ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮತ್ತೆ ಅದೇ ಸಮ್ಮೇಳನವನ್ನು ನಂತರದ ವರ್ಷದಲ್ಲಿಯೂ ಮಾಡುತ್ತಾರೆ. ತೀರ್ಮಾನ ಮಾಡಲು ಕುಳಿತುಕೊಳ್ಳುತ್ತಾರೆ. ಆದರೆ ಏನೂ ಆಗುವುದಿಲ್ಲ, ವಿನಾಶದ ತಯಾರಿಗಳೂ ಆಗುತ್ತಿರುತ್ತವೆ. ಬಾಂಬುಗಳನ್ನು ತಯಾರಿಸುತ್ತಿರುತ್ತಾರೆ, ಈಗ ಇದು ಕಲಿಯುಗವಾಗಿದೆ. ಈ ಮಾತುಗಳನ್ನು ನೀವು ಮಕ್ಕಳೇ ತಿಳಿದುಕ್ಕೊಳ್ಳುತ್ತೀರಿ. ನಿಮ್ಮ ಮಾತುಗಳೇ ಭಿನ್ನವಾಗಿವೆ. ನಿಮಗೆ ಗೊತ್ತಿದೆ, ಮನುಷ್ಯರು ಮನುಷ್ಯರಿಗೆ ಗತಿ-ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ. ಪತಿತ-ಪಾವನರೆಂದು ಹಾಡುತ್ತಾರೆ. ಆದರೆ ತಮ್ಮನ್ನು ಪತಿತರೆಂದು ಏಕೆ ತಿಳಿದುಕೊಳ್ಳುವುದಿಲ್ಲ? ಇದು ಪತಿತ ಪ್ರಪಂಚವಾಗಿದೆ, ವಿಷಯ ಸಾಗರವಾಗಿದೆ ಎಲ್ಲರೂ ಅಂಬಿಗನಾಗಲು ಸಾಧ್ಯವೆ!

ಈಗ ನೀವು ಮಕ್ಕಳಲ್ಲಿ ಪೂರ್ಣ ತಿಳಿಸುವಷ್ಟು ಶಕ್ತಿಯು ಬಂದಿಲ್ಲ. ನೀವಿನ್ನೂ ಅಷ್ಟು ಬುದ್ಧಿವಂತರಾಗಿಲ್ಲ, ಅಷ್ಟು ಯೋಗವೂ ಇಲ್ಲ. ಇಲ್ಲಿಯವರೆಗೂ ಚಿಕ್ಕ ಮಕ್ಕಳ ರೀತಿ ಅಳುತ್ತಿರುತ್ತೀರಿ. ಮಾಯೆಯ ಬಿರುಗಾಳಿಗಳಲ್ಲಿ ನಿಲ್ಲಲು ಆಗುವುದಿಲ್ಲ. ದೇಹಾಭಿಮಾನವು ಬಹಳ ಇದೆ, ಆತ್ಮಾಭಿಮಾನಿಗಳಾಗುವುದಿಲ್ಲ. ತಂದೆಯು ಪದೇ-ಪದೇ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ. ಈಗ ನಾವು ಹಿಂತಿರುಗಿ ಹೋಗಬೇಕು. ಎಲ್ಲಾ ಪಾತ್ರಧಾರಿಗಳು ತಮ್ಮ-ತಮ್ಮ ಪಾತ್ರವನ್ನಭಿನಯಿಸುತ್ತಾರೆ, ಎಲ್ಲರೂ ಶರೀರವನ್ನು ಬಿಟ್ಟು ಹಿಂತಿರುಗಿ ಮನೆಗೆ ಹೋಗುತ್ತಾರೆ. ನೀವು ಸಾಕ್ಷಿಯಾಗಿ ನೋಡಿ. ದೇಹಾಧಾರಿ ಸಂಬಂಧಗಳಲ್ಲಿ, ದೇಹದಲ್ಲಿ ಮೋಹವನ್ನೇಕೆ ಇಟ್ಟುಕೊಳ್ಳುತ್ತೀರಿ? ವಿದೇಹಿಗಳಾಗುವುದಿಲ್ಲ ನಂತರ ವಿಕರ್ಮ ವಿನಾಶವಾಗುವುದೂ ಇಲ್ಲ. ತಂದೆಯನ್ನು ನೆನಪು ಮಾಡುತ್ತಿದ್ದರೆ ಖುಷಿಯ ನಶೆಯೇರುತ್ತದೆ. ನಮಗೆ ಶಿವ ತಂದೆಯು ಓದಿಸುತ್ತಾರೆ ನಂತರ ನಾವೇ ದೇವಿ-ದೇವತೆಗಳಾಗುತ್ತೇವೆ ಅಂದಮೇಲೆ ಅಪಾರ ಖುಷಿಯಿರಬೇಕಲ್ಲವೆ.

ನಿಮಗೆ ಗೊತ್ತಿದೆ - ಭಾರತವಾಸಿಗಳು ಯಾವಾಗ ಸುಖದಲ್ಲಿದ್ದರೋ ಆಗ ಉಳಿದೆಲ್ಲಾ ಮನುಷ್ಯರು ನಿರ್ವಾಣಧಾಮ, ಶಾಂತಿಧಾಮದಲ್ಲಿದ್ದರು. ಈಗಂತೂ ಎಷ್ಟು ಕೋಟಿ ಮನುಷ್ಯರಿದ್ದಾರೆ. ಈಗ ನೀವು ಜೀವನ್ಮುಕ್ತಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತಿದ್ದೀರಿ. ಉಳಿದವರೆಲ್ಲರೂ ಹಿಂತಿರುಗಿ ಹೊರಟು ಹೋಗುತ್ತಾರೆ. ಹಳೆಯ ಪ್ರಪಂಚವು ಬದಲಾಗಿ ಹೊಸ ಪ್ರಪಂಚವಾಗಲಿದೆ. ಹೊಸದನ್ನಂತೂ ತಂದೆಯೇ ಮಾಡುತ್ತಾರಲ್ಲವೆ. ಸಸಿಯು ನಾಟಿಯಾಗುತ್ತಿದೆ, ಇದು ದೈವೀ ಹೂಗಳ ನಾಟಿಯಾಗಿದೆ. ನೀವು ಮುಳ್ಳುಗಳಿಂದ ಹೂಗಳಾಗುತ್ತೀರಿ. ಯಾವಾಗ ಹೂದೋಟವು ಪೂರ್ಣ ತಯಾರಾಗಿ ಬಿಡುವುದು, ಆಗ ಈ ಮುಳ್ಳುಗಳ ಕಾಡು ಸಮಾಪ್ತಿಯಾಗಿ ಬಿಡುವುದು, ಇದಕ್ಕೆ ಬೆಂಕಿ ಬೀಳುತ್ತದೆ. ನಂತರ ನಾವು ಹೂದೋಟದಲ್ಲಿ ಹೊರಟು ಹೋಗುತ್ತೇವೆ. ಅಂದಮೇಲೆ ಮಮ್ಮಾ-ಬಾಬಾರವರನ್ನು ಏಕೆ ಅನುಕರಣೆ ಮಾಡಬಾರದು! ತಂದೆ-ತಾಯಿಯನ್ನು ಅನುಸರಿಸಿ ಎಂದು ಗಾಯನವಿದೆ. ಈ ಮಮ್ಮಾ-ಬಾಬಾರವರು ಈ ಲಕ್ಷ್ಮಿ-ನಾರಾಯಣರಾಗುತ್ತಾರೆಂಬುದೂ ಗೊತ್ತಿದೆ. ಇವರೇ 84 ಜನ್ಮಗಳನ್ನು ಕಳೆದಿದ್ದಾರೆ. ನಿಮ್ಮದೂ ಸಹ ಹೀಗೆಯೇ. ಇವರದು ಮುಖ್ಯ ಪಾತ್ರವಾಗಿದೆ. ಬರೆಯಲ್ಪಟ್ಟಿದೆ - ತಂದೆಯು ಬಂದು ಸೂರ್ಯವಂಶಿ, ಚಂದ್ರವಂಶಿ ಸ್ವರಾಜ್ಯವನ್ನು ಪುನಃ ಸ್ಥಾಪನೆ ಮಾಡುತ್ತಿದ್ದಾರೆ. ಇಷ್ಟು ತಿಳಿಸಿದರೂ ಸಹ ದೇಹಾಭಿಮಾನವು ಬಿಟ್ಟು ಹೋಗುವುದೇ ಇಲ್ಲ. ನನ್ನ ಪತಿ, ನನ್ನ ಮಗು..... ಅರೆ! ಇದಂತೂ ಹಳೆಯ ಪ್ರಪಂಚದ ಹಳೆಯ ಸಂಬಂಧವಾಗಿದೆಯಲ್ಲವೆ. ನನ್ನವರಂತೂ ಒಬ್ಬ ಶಿವ ತಂದೆಯ ವಿನಃ ಬೇರೆ ಯಾರೂ ಇಲ್ಲ. ಎಲ್ಲಾ ದೇಹಧಾರಿಗಳಿಂದ ಮಮತ್ವವನ್ನು ತೆಗೆದು ಹಾಕುವುದು ಬಹಳ ಪರಿಶ್ರಮವಿದೆ. ಇವರ ಮಮತ್ವವನ್ನು ಕಳೆಯುವುದು ಬಹಳ ಪರಿಶ್ರಮವೆಂದು ಕಾಣುತ್ತದೆ. ಇವರ ಮುಖವೇ ಹಾಗೆ ಕಂಡು ಬರುತ್ತದೆ ಎಂದು ತಂದೆಯು ತಿಳಿಯುತ್ತಾರೆ. ಕುಮಾರಿಯರು ಒಳ್ಳೆಯ ಸಹಯೋಗಿಗಳಾಗುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ದೇಹ ಸಹಿತವಾಗಿ ಎಲ್ಲರಿಂದ ಮೋಹವನ್ನು ತೆಗೆದು ವಿದೇಹಿಯಾಗುವ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಪ್ರತಿಯೊಬ್ಬ ಪಾತ್ರಧಾರಿಯ ಪಾತ್ರವನ್ನು ಸಾಕ್ಷಿಯಾಗಿ ನೋಡಬೇಕಾಗಿದೆ. ಬಂಧನ ಮುಕ್ತರಾಗಬೇಕಾಗಿದೆ.

2. ಈ ಹಳೆಯ ಪ್ರಪಂಚದಿಂದ ಉಪರಾಂ (ಭಿನ್ನ) ಆಗಬೇಕಾಗಿದೆ, ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳಬೇಕು - ನಾವಂತೂ ಈಗ ಹಿಂತಿರುಗಿ ಹೋಗಬೇಕು. ಈಗ ಹಳೆಯ ಪ್ರಪಂಚದ ಅಂತಿಮ ಸಮಯವಾಗಿದೆ, ನಮ್ಮ ಪಾತ್ರವು ಪೂರ್ಣವಾಯಿತು.

ವರದಾನ:
ಡಬಲ್ ಲೈಟ್ ಸ್ಥಿತಿಯ ಮುಖಾಂತರ ಹಾರುವ ಕಲೆಯ ಅನುಭವ ಮಾಡುವಂತಹ ಸರ್ವ ಬಂದನಮುಕ್ತ ಭವ.

ನಡೆಯುತ್ತಾ ತಿರುಗಾಡುತ್ತಾ ಇದೇ ಸ್ಮತಿಯಿರಲಿ ನಾನು ಡಬ್ಬಲ್ ಲೈಟ್ ಸ್ಥಿತಿಯಲ್ಲಿರವಂತಹ ಫರಿಶ್ಥಾ ಆಗಿರುವೆನು. ಫರಿಶ್ಥಾ ಅರ್ಥಾತ್ ಹಾರುವಂತಹವರು, ಹಗುರವಾಗಿರುವ ವಸ್ತು ಸದಾ ಮೇಲೆ ಹೋಗುತ್ತೆ, ಕೆಳಗೆ ಬರುವುದಿಲ್ಲ. ಅರ್ಧ ಕಲ್ಪವಂತು ಕೆಳಗೆ ಇದ್ದಿರಿ, ಈಗ ಹಾರುವ ಸಮಯವಾಗಿದೆ. ಆದ್ದರಿಂದ ಚೆಕ್ ಮಾಡಿಕೊಳ್ಳಿ ಯಾವುದೇ ಹೊರೆ ಅಥವಾ ಬಂಧನ ಯಾವುದೂ ಇಲ್ಲ ತಾನೆ? ತಮ್ಮ ಬಲಹೀನ ಸಂಸ್ಕಾರದ, ವ್ಯರ್ಥ ಸಂಕಲ್ಪದ, ದೇಹಭಾನದ ಬಂಧನ ಅಥವಾ ಹೊರೆ ಬಹಳ ಕಾಲ ನಡೆಯುತ್ತಿದ್ದರೆ ಅಂತ್ಯದಲ್ಲಿ ಕೆಳಗೆ ತಂದು ಬಿಡುವುದು, ಅದರಿಂದ ಬಂಧನಮುಕ್ತ ಆಗಿ ಡಬ್ಬಲ್ ಲೈಟ್ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ.

ಸ್ಲೋಗನ್:
ಮನಸಾ ಸೇವೆಯನ್ನು ಯಾರು ಮಾಡಲು ಸಾಧ್ಯವೆಂದರೆ ಯಾರ ಬಳಿ ಶುದ್ಧ ಸಂಕಲ್ಪಗಳ ಶಕ್ತಿ ಜಮಾ ಇರುತ್ತೆ ಅವರು.