27/10/18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಧೈರ್ಯ
ತಂದುಕೊಳ್ಳಿ, ಈಗ ನಿಮ್ಮ ದುಃಖದ ದಿನಗಳು ಪೂರ್ಣವಾಗಿ ಸುಖದ ದಿನಗಳು ಬರುತ್ತಿವೆ. ನಿಶ್ಚಯಬುದ್ಧಿ
ಮಕ್ಕಳ ಸ್ಥಿತಿಯು ಧೈರ್ಯಯುತವಾಗಿರುತ್ತದೆ”
ಪ್ರಶ್ನೆ:
ಯಾವುದೇ
ಸಂದರ್ಭದಲ್ಲಿ ಬಾಡಿ ಹೋಗದೇ ಇರಲು ಸಹಜವಾದ ವಿಧಿ ಯಾವುದು?
ಉತ್ತರ:
ಬ್ರಹ್ಮಾ
ತಂದೆಯನ್ನು ಸದಾ ಉದಾಹರಣೆಗಾಗಿ ಮುಂದೆ ಇಟ್ಟುಕೊಳ್ಳಿ. ಇಷ್ಟೊಂದು ಮಕ್ಕಳ ತಂದೆಯಾಗಿದ್ದಾರೆ ಅಂದಾಗ
ಕೆಲವರು ಸುಪುತ್ರ ಮಕ್ಕಳಿದ್ದಾರೆ, ಕೆಲವರು ಕುಪುತ್ರರಿದ್ದಾರೆ. ಕೆಲವರು ಸರ್ವೀಸ್ ಮಾಡುತ್ತಾರೆ
ಇನ್ನೂ ಕೆಲವರು ಡಿಸ್ಸರ್ವೀಸ್ ಮಾಡುತ್ತಾರೆ. ಆದರೂ ಸಹ ಎಂದೂ ಬಾಡಿ ಹೋಗುವುದಿಲ್ಲ, ಗಾಬರಿಯೂ
ಆಗುವುದಿಲ್ಲ. ಆದರೆ ನೀವು ಮಕ್ಕಳು ಏಕೆ ಬಾಡಿ ಹೋಗುತ್ತೀರಿ. ನೀವಂತೂ ಯಾವುದೇ ಸಂದರ್ಭದಲ್ಲಿ ಬಾಡಿ
ಹೋಗಬಾರದು.
ಗೀತೆ:
ಧೈರ್ಯ ತಾಳು
ಮಾನವನೇ......
ಓಂ ಶಾಂತಿ.
ಧೈರ್ಯ ತಾಳು ಮಾನವನೆ, ಎಂದು ಮನುಷ್ಯನಿಗೆ ಹೇಳುವುದಿಲ್ಲ. ಮನಸ್ಸು-ಬುದ್ಧಿಯು ಆತ್ಮದಲ್ಲಿಯೇ ಇದೆ.
ಇದನ್ನು ಆತ್ಮನಿಗೆ ಹೇಳಲಾಗುತ್ತದೆ. ಧೈರ್ಯವನ್ನು ತಾಳು ಎಂದು ಆತ್ಮನಿಗೆ ಕೇವಲ ಪರಮಪಿತ ಪರಮಾತ್ಮನ
ವಿನಃ ಬೇರೆ ಯಾರೂ ಹೇಳಲು ಸಾಧ್ಯವಿಲ್ಲ. ಏಕೆಂದರೆ ಅಧೈರ್ಯವಂತರಿಗೆ ಧೈರ್ಯ ತುಂಬಲಾಗುತ್ತದೆ.
ಒಂದುವೇಳೆ ಈಶ್ವರನನ್ನು ಸರ್ವವ್ಯಾಪಿ ಎಂದರೆ ಅವರಿಗೆ ಅಧೈರ್ಯವಂತರು ಎಂದು ಹೇಳಲು ಸಾಧ್ಯವಿಲ್ಲ. ಈ
ಸಮಯದ ಮನುಷ್ಯರೆಲ್ಲರೂ ಅಧೈರ್ಯರು, ದುಃಖಿಗಳಾಗಿದ್ದಾರೆ. ಆದ್ದರಿಂದ ಧೈರ್ಯವನ್ನು ತುಂಬಲು,
ಸುಖವನ್ನು ಕೊಡಲು ತಂದೆಯು ಬಂದಿದ್ದಾರೆ. ಈಗ ಧೈರ್ಯವನ್ನು ತಾಳಿರಿ ಎಂದು ಹೇಳಲಾಗುತ್ತದೆ. ತಂದೆಯ
ಮಹಾವಾಕ್ಯ ಕೇವಲ ನಿಮಗೋಸ್ಕರವೇ ಅಲ್ಲ, ವಾಸ್ತವದಲ್ಲಿ ಇಡೀ ಪ್ರಪಂಚಕ್ಕಾಗಿ ಇದೆ. ಇಡೀ ಪ್ರಪಂಚ
ಕ್ರಮೇಣವಾಗಿ ಕೇಳುತ್ತಾ ಇರುತ್ತಾರೆ. ಯಾರು ಕೇಳುತ್ತಾರೆಯೋ ಅವರೇ ಬರುತ್ತಾರೆ. ಸರ್ವರ ಸದ್ಗತಿದಾತ,
ದುಃಖಹರ್ತ ಒಬ್ಬ ತಂದೆಯೇ ಆಗಿದ್ದಾರೆ. ಇದು ದುಃಖದ ಪ್ರಪಂಚವಾಗಿದೆ. ಮಕ್ಕಳು ತಿಳಿದಿದ್ದೀರಿ - ಈಗ
ನಮಗೋಸ್ಕರ ಮುಕ್ತಿ-ಜೀವನ್ಮುಕ್ತಿಯ ದಿನ ಅಥವಾ ಕಲಿಯುಗ, ಪತಿತ ಸೃಷ್ಟಿಯಿಂದ ಬಿಡುಗಡೆ ಹೊಂದುವ
ದಿನವಾಗಿದೆ. ಇದೆಲ್ಲಾ ನಿಮ್ಮ ಬುದ್ಧಿಯಲ್ಲಿದೆ, ಆದರೆ ನಂಬರ್ವಾರ್ ಪುರುಷಾರ್ಥದನುಸಾರವಿದೆ. ಈಗ
ಯಾರಿಗೂ ಧೈರ್ಯವಿಲ್ಲ, ಈಗ ನಾವು ಈ ದುಃಖದ ಜಗತ್ತಿನಿಂದ ಬಿಡುಗಡೆಯನ್ನು ಪಡೆದು ತಮ್ಮ ಸುಖಧಾಮಕ್ಕೆ
ಹೋಗುತ್ತೇವೆ. ಒಂದುವೇಳೆ ಶ್ರೀಮತದಂತೆ ನಡೆಯುತ್ತಿದ್ದಾಗ ನಮ್ಮ ಸುಖದ ದಿನಗಳು ಬರುತ್ತಲಿವೆ ಎಂದು
ನೀವು ಮಕ್ಕಳಿಗೆ ಇದರಲ್ಲಿ ಸ್ಥಿರವಾದಂತಹ ನಿಶ್ಚಯವಿರಬೇಕು. ಇದರಲ್ಲಿ ಆಶೀರ್ವಾದ ಅಥವಾ ಕೃಪೆಯ
ಮಾತಂತೂ ಇಲ್ಲ. ತಂದೆಯು ಕುಳಿತು ಓದಿಸುತ್ತಿದ್ದಾರೆ, ಸಹಜ ಸ್ವರಾಜ್ಯ ಯೋಗವನ್ನು ಕಲಿಸುತ್ತಾರೆ.
ವಿದ್ಯೆಗೆ ಜ್ಞಾನವೆಂದು ಹೇಳಲಾಗುತ್ತದೆ. ನೀವು ಮಕ್ಕಳಿಗೆ ಶ್ರೇಷ್ಠ ಜ್ಞಾನವನ್ನು ನೀಡುತ್ತಿದ್ದಾರೆ.
ಮೊಟ್ಟ ಮೊದಲನೆಯದಾಗಿ ಅಟಲ ನಿಶ್ಚಯ ಬೇಕು ಪುನಃ ಎಂದೂ ಅವರು ಏರುಪೇರಿನಲ್ಲಿ ಬರುವುದಿಲ್ಲ.
ಬ್ರಹ್ಮಾಂಡದಲ್ಲಿರುವಂತಹವರನ್ನು ಪಡೆಯುವ ಇಚ್ಛೆಯಿತ್ತು, ಅವರನ್ನು ಪಡೆದುಕೊಂಡಿದ್ದಾಯಿತು ಅಂದಮೇಲೆ
ಇನ್ನೇನು ಬೇಕು ಎಂದು ಹಾಡುತ್ತಾರೆ. ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುವುದೆಂಬ ಈ ನಿಶ್ಚಯವಂತೂ
ಇದೆ ಅಂದಮೇಲೆ ನಮಗೆ ಮೊದಲೇ ಸ್ಥಿರವಾದ ಧೈರ್ಯವು ದೊರೆಯುತ್ತದೆ. ಇದು ಅವಿನಾಶಿ ಧೈರ್ಯವಾಗಿದೆ.
ಖಚಿತವಾಗಿಯೂ ನಾವು ಯುದ್ಧ-ಜಗಳವಿಲ್ಲದೆ ಶ್ರೀಮತದಿಂದ ಶ್ರೇಷ್ಠಾತಿ ಶ್ರೇಷ್ಠ, ಶ್ರೇಷ್ಠಾಚಾರಿ
ರಾಜ್ಯಭಾಗ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ ಅಂದಾಗ ಬಾಡಿ ಹೋಗುವ ಅವಶ್ಯಕತೆಯಾದರೂ ಏನು? ಭಲೆ
ಮನೆಯಲ್ಲಿ 10-12 ಮಕ್ಕಳಿರುತ್ತಾರೆ, ತಂದೆ (ಬ್ರಹ್ಮಾ) ಗಂತೂ ನೋಡಿ, ಸಾವಿರಾರು ಲಕ್ಷಾಂತರ
ಮಕ್ಕಳಿರುತ್ತಾರೆ ಅಂದಾಗ ಕೆಲವು ಮಕ್ಕಳಂತೂ ದೊಂಬಿಯನ್ನೇ ಎಬ್ಬಿಸುತ್ತಾರೆ. ಕೆಲವರು ಸುಪುತ್ರ
ಮಕ್ಕಳಿರುತ್ತಾರೆ, ಕೆಲವರು ಕುಪುತ್ರರಿದ್ದಾರೆ. ಕೆಲವರು ಸರ್ವೀಸ್ ಮಾಡುತ್ತಾರೆ. ಇನ್ನೂ ಕೆಲವರು
ಡಿಸ್ಸರ್ವೀಸ್ ಮಾಡುತ್ತಾರೆ ಆದರೂ ಸಹ ಬ್ರಹ್ಮಾ ತಂದೆಯು ಗಾಬರಿಯಾಗುತ್ತಾರೇನು? ಅಂದಮೇಲೆ ಮಕ್ಕಳೂ
ಸಹ ಎಂದೂ ಗಾಬರಿಯಾಗಬಾರದು. ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕು. ಒಂದು ಕಡೆ ಹಠಯೋಗ ಕರ್ಮ
ಸನ್ಯಾಸವಿದೆ, ನಮ್ಮದು ಬೇಹದ್ದಿನ ಸನ್ಯಾಸವಾಗಿದೆ. ಇದು ರಾಜಯೋಗವಾಗಿದೆ. ನೀವು ಗೃಹಸ್ಥ
ವ್ಯವಹಾರದಲ್ಲಿದ್ದುಕೊಂಡು ತಂದೆಯಿಂದ ಆಸ್ತಿಯನ್ನು ಪಡೆಯಬೇಕು, ಇದು ಬಹಳ ಸಹಜವಾಗಿದೆ. ಈಗಂತೂ
ತಮ್ಮ ಸುಖಧಾಮದ ವೃಕ್ಷಗಳು ಕಂಡು ಬರುತ್ತಲಿವೆ. ಪರೋಕ್ಷ-ಅಪರೋಕ್ಷವಾಗಿ ಬುದ್ಧಿಯಿಂದ
ತಿಳಿದುಕೊಂಡಿದ್ದೀರಿ. ಸಾಕ್ಷಾತ್ಕಾರವಾಗಬಹುದು, ಆಗದೆಯೇ ಇರಬಹುದು. ಭವಿಷ್ಯದ ಸ್ವ-ರಾಜಧಾನಿಗಾಗಿ
ಪುರುಷಾರ್ಥ ಮಾಡುತ್ತಿದ್ದೀರಿ. ಗುರಿ-ಉದ್ದೇಶವು ಮುಂದೆ ಇದೆ. ಲಕ್ಷ್ಮಿ-ನಾರಾಯಣರ ಚಿತ್ರವನ್ನು
ನೋಡುತ್ತಿದ್ದೀರಲ್ಲವೆ. ಮೊದಲು ನಮಗೆ ಸಾಕ್ಷಾತ್ಕಾರವಾಗಲಿ ಆಮೇಲೆ ಒಪ್ಪಿಕೊಳ್ಳುತ್ತೇವೆ. ಇದಂತೂ
ಬುದ್ಧಿಯಿಂದ ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಕಣ್ಣುಗಳಿಂದ ಚಿತ್ರವನ್ನಂತೂ
ನೋಡುತ್ತಿದ್ದೀರಲ್ಲವೆ. ರಾಜಯೋಗವಾಗಿದೆಯಲ್ಲವೆ. ವಿವೇಕವು ಹೇಳುತ್ತದೆ - ಚಿತ್ರವನ್ನು
ನೋಡುತ್ತಿದ್ದೇವೆ. ನಂತರ ಏನು ಸಾಕ್ಷಾತ್ಕಾರ ಮಾಡಿಸಬೇಕು? ಶ್ರೀಕೃಷ್ಣನು ಸತ್ಯಯುಗದ
ಮಾಲೀಕನಾಗಿದ್ದಾನಲ್ಲವೆ. ಶಿವ ಪರಮಧಾಮದಲ್ಲಿರುವಂತಹವರು, ನೀವು ಲಕ್ಷ್ಮಿ-ನಾರಾಯಣರಾಗಬಹುದು - ಇದೇ
ನಿಮ್ಮ ಗುರಿ-ಉದ್ದೇಶವಾಗಿದೆ. ನಿಮ್ಮ ದರ್ಪಣದಲ್ಲಿ ನೋಡಿಕೊಳ್ಳಿ - ನಮ್ಮಲ್ಲಿ ಆ ದೈವೀ ಗುಣಗಳು
ಎಲ್ಲಿಯ ತನಕ ಬಂದಿವೆ. ತಂದೆಯು ಧೈರ್ಯವನ್ನಂತೂ ಬಹಳ ಚೆನ್ನಾಗಿ ಕೊಡುತ್ತಾರೆ.
ಈಗ ರಾಜ್ಯಭಾಗ್ಯಕ್ಕಾಗಿ ಜ್ಞಾನಬೇಕು ಮತ್ತು ಓದಬೇಕು ಅದನ್ನು ತಂದೆಯು ನೀಡುತ್ತಿದ್ದಾರೆ. ನಾನು ಅತಿ
ದೊಡ್ಡ ಆಫೀಸರ್ ಆಗುತ್ತೇನೆಂದು ಐ.ಸಿ.ಎಸ್. ಓದುವಂತಹವರಿಗೆ ಹೆಚ್ಚಾಗಿ ನಶೆಯಿರುತ್ತದೆ. ಹಾಗೆ
ನೋಡಿದರೆ ಉದ್ಯೋಗ-ವ್ಯವಹಾರದಲ್ಲಿಯೂ ಕೋಟ್ಯಾಧಿಪತಿಯಾಗುತ್ತಾರೆ. ತಂದೆಯು ನಿಮಗೆ ಜ್ಞಾನ ರತ್ನಗಳ
ವ್ಯಾಪಾರವನ್ನು ಕಲಿಸುತ್ತಾರೆ. ನೀವು ತಂದೆಗೆ ಕವಡೆಯನ್ನು ಕೊಡುತ್ತೀರಿ. ಅದಕ್ಕೆ ಪ್ರತಿಯಾಗಿ
ತಂದೆಯು ನಿಮಗೆ 21 ಜನ್ಮಗಳವರೆಗೆ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಇದು ವ್ಯಾಪಾರವೂ ಆಗಿದೆ,
ಹಾಗೂ ವಿದ್ಯಾಭ್ಯಾಸವೂ ಆಗಿದೆ. ಕೇವಲ ವ್ಯಾಪಾರದೊಂದಿಗೆ ಪ್ರಯೋಜನವಿಲ್ಲ. ವಿಶ್ವದ ಚರಿತ್ರೆ,
ಭೂಗೋಳದ ಜ್ಞಾನವು ಬೇಕಲ್ಲವೆ. ಸ್ವದರ್ಶನ ಚಕ್ರಧಾರಿಯೂ ಆಗಬೇಕು. ಎಷ್ಟು ಓದುತ್ತೀರಿ ಅಷ್ಟು
ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಸ್ವರ್ಗದ ಮಾಲೀಕರಂತೂ ಪ್ರಜೆಗಳು, ನೌಕರರೂ ಆಗುತ್ತಾರೆ.
ಎಲ್ಲರೂ ಈಗಲೂ ಭಾರತವು ನಮ್ಮ ದೇಶವೆಂದು ಹೇಳುತ್ತಾರೆ. ರಾಜ ಮತ್ತು ಪ್ರಜೆಗಳಲ್ಲಿ ಬಹಳ
ಅಂತರವಿರುತ್ತದೆ. ತಂದೆಯು ಹೇಳುತ್ತಾರೆ - ಎಷ್ಟು ಸಾಧ್ಯವೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯಿರಿ
ಮತ್ತು ಮಾತಾಪಿತರ ಸಮಾನ ಆಗಿರಿ. ಎಲ್ಲರೂ ಸಿಂಹಾಸನದ ಮೇಲಂತೂ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು
ಹೇಳಲಾಗುತ್ತದೆ. ಆದರೂ ರೇಸ್ ಮಾಡಿಸಲೇಬೇಕಾಗುತ್ತದೆ. ನಂಬರ್ವಾರ್ ಪುರುಷಾರ್ಥದನುಸಾರವಾಗಿ
ರಾಜ್ಯಭಾಗ್ಯವನ್ನು ಪಡೆಯುತ್ತಾರೆ. ಕಲ್ಪದ ಮೊದಲು ಯಾರೆಷ್ಟು ಪುರುಷಾರ್ಥವನ್ನು ಮಾಡಿದ್ದಾರೆಯೋ
ಅವರು ಅದನ್ನು ಸಾಕ್ಷಿಯಾಗಿ ನೋಡುತ್ತಾರೆ. ನಂತರ ಯಾರಲ್ಲಾದರೂ ಮಂದಗತಿಯ ಪುರುಷಾರ್ಥವನ್ನು
ನೋಡಿದ್ದಲ್ಲಿ ತೀವ್ರ ಮಾಡಲಾಗುತ್ತದೆ. ನಿಮ್ಮಲ್ಲಿ ಬಹಳ ಮಂದಗತಿಯ ಪುರುಷಾರ್ಥವಂತೂ ಕಂಡು
ಬರುತ್ತಿದೆ. ನಿಮ್ಮಲ್ಲಿ ಮಮತ್ವವಿದೆ ಅಂದಾಗ ಟ್ರಸ್ಟಿಯಾದ ನಂತರ ಮಮತ್ವವೇಕೆ? ನೀವು ಶ್ರೀಮತದಂತೆ
ನಡೆಯಿರಿ. ಬಾಬಾ, ಮನೆ ಕಟ್ಟಿಸಲೇ ಎಂದು ಕೇಳುತ್ತಾರೆ. ಅದಕ್ಕೆ ತಂದೆಯು ಹಾ! ಏಕೆ ಮಾಡಬಾರದು. ಭಲೆ
ಆರಾಮವಾಗಿ ಕುಳಿತುಕೊಳ್ಳಿ ಬಾಕಿ ಸ್ವಲ್ಪ ದಿನಗಳು ಈ ಛೀ ಛೀ ಜಗತ್ತಿನಲ್ಲಿ ಭಲೆ ವಿಶ್ರಾಂತಿಯನ್ನು
ತೆಗೆದುಕೊಳ್ಳಿ. ಮಕ್ಕಳು ಮುಂತಾದವರ ವಿವಾಹವನ್ನಂತೂ ಮಾಡಿ. ತಂದೆಯು ಹಣವನ್ನಂತೂ
ತೆಗೆದುಕೊಳ್ಳುವುದಿಲ್ಲ ಅವರಂತೂ ದಾತ ಆಗಿದ್ದಾರೆ. ಶಿವ ತಂದೆಯು ಈ ಸಮಯದಲ್ಲಿ ಮಕ್ಕಳು
ಇರುವುದಕ್ಕಾಗಿ ಮನೆಗಳನ್ನು ಕಟ್ಟಿಸಿದ್ದಾರೆ. ತಾವಿರಲು ಈ ಶರೀರವನ್ನು ನಿಮಿತ್ತ ಮಾಡಿದ್ದಾರೆ,
ಜೀವಾತ್ಮಗಳಿಗಾಗಿ ಇರಲು ಮನೆಯಂತೂ ಬೇಕಲ್ಲವೆ ಅಂದಾಗ ನೀವು ಮಕ್ಕಳಿಗಾಗಿಯೇ ಮಾಡುತ್ತಿದ್ದಾರೆ.
ತಂದೆಯೂ ಈ ಮನೆಯಲ್ಲಿಯೇ ಕುಳಿತಿದ್ದಾರಲ್ಲವೆ. ಇದಂತೂ ನಿಮಗೆ ಗೊತ್ತಿದೆ - ಅವರು ಆತ್ಮಗಳ
ತಂದೆಯಾಗಿದ್ದಾರೆ, ಇವರು ಶರೀರದ ತಂದೆಯಾಗಿದ್ದಾರೆ. ನಿಮ್ಮನ್ನು ದತ್ತು ತೆಗೆದುಕೊಂಡಿದ್ದಾರೆ.
ನೀವು ನನ್ನ ಮಕ್ಕಳಾಗಿದ್ದೀರಿ, ಮಮ್ಮಾ-ಬಾಬಾ ಎಂದು ಕರೆಯುತ್ತೀರಲ್ಲವೆ ಅಂದಾಗ ಇದಕ್ಕೆ ದತ್ತು
ತೆಗೆದುಕೊಳ್ಳುವುದು ಎಂದು ಹೇಳಲಾಗುತ್ತದೆ. ಪ್ರಜಾಪಿತ ಬ್ರಹ್ಮಾರವರಿಗೆ ಇಷ್ಟೊಂದು ಮಕ್ಕಳಿದ್ದಾರೆ
ಅಂದಮೇಲೆ ಅವಶ್ಯವಾಗಿ ದತ್ತು ಮಕ್ಕಳೇ ಇರಬೇಕು. ನೀವು ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ.
ಸರಸ್ವತಿಯು ಮಗಳಾಗಿದ್ದಾರಲ್ಲವೆ. ಇದು ಬಹಳ ಗುಹ್ಯ ಮತ್ತು ತಿಳಿದುಕೊಳ್ಳುವ ಮಾತುಗಳಾಗಿವೆ. ಗೀತೆ,
ಭಾಗವತ ಇತ್ಯಾದಿಗಳನ್ನು ನೀವೂ ಓದಿದ್ದೀರಿ, ಈ ತಂದೆ (ಬ್ರಹ್ಮಾ) ಯೂ ಓದಿದ್ದಾರೆ ಆದರೆ ಈಗಂತೂ
ಡ್ರಾಮಾನುಸಾರವಾಗಿ ಶ್ರೀಮತವು ಸಿಗುತ್ತದೆ. ಏನೆಲ್ಲವನ್ನೂ ಹೇಳಿದ್ದೇನೆಯೋ ಅದೆಲ್ಲವೂ
ಡ್ರಾಮಾನುಸಾರವಾಗಿಯೇ ಆಗಿದೆ. ಅದರಲ್ಲಿ ಅವಶ್ಯವಾಗಿ ಕಲ್ಯಾಣವೇ ಅಡಗಿದೆ. ಒಂದುವೇಳೆ ನಷ್ಟವಾದರೆ
ಅದರಲ್ಲಿಯೂ ಕಲ್ಯಾಣವಿದೆ. ಪ್ರತೀ ಮಾತಿನಲ್ಲಿ ಕಲ್ಯಾಣವಿದೆ. ಶಿವ ತಂದೆಯಂತೂ
ಕಲ್ಯಾಣಕಾರಿಯಾಗಿದ್ದಾರೆ, ಅವರ ಮತ ಶ್ರೇಷ್ಠವಾಗಿದೆ. ಒಂದುವೇಳೆ ಅವರ ಬಗ್ಗೆ ಏನಾದರೂ
ಸಂಶಯವಿದ್ದಲ್ಲಿ ಶ್ರೀಮತದಂತೆ ನಡೆಯದೆ ಮನ್ಮತದಂತೆ ನಡೆದು ಮೋಸ ಹೋಗುತ್ತಾರೆ. ಹೆಜ್ಜೆ-ಹೆಜ್ಜೆಗೂ
ಸಲಹೆಯನ್ನು ಪಡೆಯಬೇಕಾಗಿದೆ. ಸುಪ್ರೀಂ ಮಾರ್ಗದರ್ಶಕನಂತೂ ಕುಳಿತಿದ್ದಾರಲ್ಲವೆ. ಬಹಳಷ್ಟು ಮಕ್ಕಳು
ಇದನ್ನು ಮರೆತೇ ಬಿಡುತ್ತಾರೆ ಏಕೆಂದರೆ ಅವರು ಯೋಗದಲ್ಲಿರುವುದಿಲ್ಲ. ಯೋಗ ಅಥವಾ ನೆನಪಿಗೆ ಯಾತ್ರೆ
ಎನ್ನಲಾಗುತ್ತದೆ. ನೆನಪು ಮಾಡುತ್ತಿಲ್ಲವೆಂದರೆ ತಿಳಿದುಕೊಳ್ಳಿ - ನಾವು ವಿಶ್ರಾಂತಿಯನ್ನು
ತೆಗೆದುಕೊಳ್ಳುತ್ತಿದ್ದೇವೆ ಎಂದು. ಯಾತ್ರೆಗೆ ಹೋಗುತ್ತಾ ಕೆಲವರು ವಿಶ್ರಾಂತಿ ಪಡೆಯುತ್ತಾರೆ! ನೀವೂ
ಒಂದುವೇಳೆ ವಿಶ್ರಾಂತಿ ಪಡೆಯುತ್ತೀರೆಂದರೆ ನೆನಪು ಮಾಡುವುದಿಲ್ಲ ಎಂದರೆ ವಿಕರ್ಮಗಳೂ
ವಿನಾಶವಾಗುವುದಿಲ್ಲ ಮತ್ತು ಉನ್ನತಿಯೂ ಆಗುವುದಿಲ್ಲ. ನೆನಪು ಮಾಡಲಿಲ್ಲವೆಂದರೆ ತಂದೆಯ ಸಮೀಪಕ್ಕೆ
ಬರಲು ಆಗುವುದಿಲ್ಲ. ಆತ್ಮವು ಸುಸ್ತಾಗಿ ಬಿಡುತ್ತದೆ, ತಂದೆಯನ್ನು ಮರೆತು ಬಿಡುತ್ತಾರೆ. ತಂದೆಯು
ಹೇಳುತ್ತಾರೆ - ನೀವು ಯಾತ್ರೆಯಲ್ಲಿ ನಡೆಯುತ್ತಿದ್ದೀರಿ. ರಾತ್ರಿಯಲ್ಲಂತೂ ನೀವು ವಿಶ್ರಾಂತಿಯನ್ನು
ತೆಗೆದುಕೊಳ್ಳುತ್ತೀರಿ ಎಂದಲ್ಲ ರಾತ್ರಿಯಲ್ಲಿ ನೀವು ನಿದ್ರೆ ಮಾಡುತ್ತೀರಿ ಎಂದರೆ ಯಾತ್ರೆ
ಮಾಡುತ್ತಿದ್ದೀರಿ ಎಂದಲ್ಲ ಅದಂತೂ ವಿಶ್ರಾಂತಿಯಾಗಿದೆ. ಯಾವಾಗ ನಿದ್ರೆಯಿಂದ ಜಾಗೃತರಾಗುತ್ತೀರಿ ಆಗ
ಯಾತ್ರೆಯಲ್ಲಿರುತ್ತೀರಿ. ನಿದ್ರೆಯಲ್ಲಂತೂ ಯಾವುದೇ ವಿಕರ್ಮವು ವಿನಾಶವಾಗುವುದಿಲ್ಲ. ಬಾಕಿ ಯಾವುದೇ
ವಿಕರ್ಮಗಳಾಗುವುದಿಲ್ಲ ಅಂದಾಗ ತಂದೆಯು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಆದರೆ ಯಾರಾದರೂ
ಕಾರ್ಯದಲ್ಲಿ ತಂದರೆ ಸರಿ. ಅನೇಕ ಅಂಶಗಳನ್ನು ತಿಳಿಸುತ್ತಿರುತ್ತಾರೆ. ಯಾವಾಗ ವಕೀಲ ವಿದ್ಯೆಯನ್ನು
ಓದುತ್ತಾರೆಯೋ ಆಗ ಕಾನೂನಿನ ಮಾತುಗಳು ಬುದ್ಧಿಯಲ್ಲಿ ಕುಳಿತುಕೊಳ್ಳುತ್ತವೆ. ವೈದ್ಯಕೀಯ ಅಥವಾ
ಇಂಜಿನಿಯರಿಂಗ್ ವಿದ್ಯೆಯನ್ನು ಓದುತ್ತಾರೆಂದರೆ ನಂತರ ಅವರು ವೈದ್ಯರು ಅಥವಾ ಇಂಜಿನಿಯರ್ ಆಗುತ್ತಾರೆ.
ಯಾರು ಯಾವ ಕೋರ್ಸ್ ತೆಗೆದುಕೊಳ್ಳುತ್ತಾರೆಯೋ ಹಾಗೆಯೇ ಆಗುವರು.
ಇಲ್ಲಿಯಂತೂ ಒಂದೇ ಕೋರ್ಸ್ ಇದೆ. ನಡೆಯುತ್ತಾ ಹೋಗಿ, ನಿಮ್ಮ ತಲೆಯ ಮೇಲೆ ಜನ್ಮ-ಜನ್ಮಾಂತರದ ಪಾಪದ
ಹೊರೆ ಬಹಳ ಇದೆ ಅದನ್ನು ವಿನಾಶ ಮಾಡಿಕೊಳ್ಳಲು ತಂದೆಯನ್ನು ನೆನಪು ಮಾಡುವುದೊಂದೇ ಉಪಾಯವಾಗಿದೆ.
ಇಲ್ಲವೆಂದರೆ ಪದ ಭ್ರಷ್ಠರಾಗಿ ಬಿಡುವಿರಿ. ಮಾಲೆಯು ಆಗಿದೆಯಲ್ಲವೆ, ನವರತ್ನಗಳ ಗಾಯನವೂ ಇದೆ. ಇವರು
ಎಲ್ಲಿಂದ ಬಂದರೆಂದು ಮನುಷ್ಯರು ಅರಿತಿಲ್ಲ. ಅಷ್ಟ ರತ್ನಗಳು ರುದ್ರನ ಮಾಲೆಯಾಗಿದ್ದಾರೆ. ಅಂದಮೇಲೆ
ಬಹಳ ಚೆನ್ನಾಗಿ ಪುರುಷಾರ್ಥ ಮಾಡಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದುತ್ತಾರೆಂದರೆ ರಿಜಿಸ್ಟರ್
ಮೂಲಕ ತಂದೆ-ತಾಯಿಗಳಿಗೂ ತಿಳಿದು ಬರುತ್ತದೆ. ಇಲ್ಲಿ ತಂದೆಯೇ ಶಿಕ್ಷಕರಾಗಿದ್ದಾರೆ ಎಂದಮೇಲೆ ಅವರಿಗೇ
ತಿಳಿದಿದೆ. ನೀವು ತಂದೆಯ ಮೂಲಕ ಓದಿದ್ದೀರಿ ಅಂದಾಗ ರಿಜಿಸ್ಟರ್ ಸಹ ಅವರಿಗೆ ತಿಳಿಯುವುದು.
ನಮ್ಮಲ್ಲಿ ಎಷ್ಟು ಗುಣಗಳಿವೆ, ನಾವು ಅನ್ಯರನ್ನು ಎಲ್ಲಿಯ ತನಕ ತನ್ನ ಸಮಾನ ಮಾಡಿಕೊಳ್ಳುತ್ತೇವೆ?
ಇದನ್ನು ನೀವು ಸಹ ರಿಜಿಸ್ಟರ್ ಮೂಲಕ ತಿಳಿದುಕೊಳ್ಳಬಹುದು. ಯಾರು ನಿಮ್ಮ ಮುಂದೆ ಬರುವರೋ ಅವರು
ತಮ್ಮ ಶರೀರವನ್ನು ಮರೆತು ಬಿಡಬೇಕು. ಈ ರೀತಿ ನಿಮ್ಮಲ್ಲಿ ಇಷ್ಟು ಶಕ್ತಿಯಿದೆಯೇ. ಧೈರ್ಯ ಮಕ್ಕಳದು,
ಸಹಾಯ ತಂದೆಯದು ಎಂದು ಹೇಳಲಾಗುತ್ತದೆ. ತಂದೆಯು ಬಹಳ ಸಹಾಯ ಮಾಡುತ್ತಾರೆ. ನೀವು ತಂದೆಗೆ ಯೋಗದ
ಸಹಯೋಗ ಕೊಡುತ್ತೀರಿ. ತಂದೆಗೆ ಪವಿತ್ರತೆಯ ಸಹಾಯ ಬೇಕಾಗಿದೆ, ಯೋಗಬಲದಿಂದ ಇಡೀ ಪತಿತ ಸೃಷ್ಠಿಯನ್ನು
ಪಾವನ ಮಾಡಬೇಕಾಗಿದೆ. ಯಾರು ಎಷ್ಟೆಷ್ಟು ಯೋಗದ ಸಹಯೋಗವನ್ನು ಕೊಡುತ್ತಾರೆಯೋ ಅಷ್ಟೂ ತಂದೆಯೂ
ಖುಷಿಯಾಗುತ್ತಾರೆ. ಇದು ತಂದೆಗೋಸ್ಕರ ಸಹಾಯವಾಗಿದೆಯೋ ಅಥವಾ ನಮಗಾಗಿಯೋ? ನೀವೆಷ್ಟು ಓದುತ್ತೀರಿ
ಅಷ್ಟು ಉನ್ನತ ಪದವಿಯನ್ನು ಪಡೆಯುತ್ತೀರಿ. ನೀವೆಷ್ಟು ನೆನಪು ಮಾಡುವಿರಿ ಅಷ್ಟು ಪವಿತ್ರತೆಯ ಸಹಯೋಗ
ಕೊಡುತ್ತೀರಿ. ನಾನು ಬಂದಿರುವುದೇ ಪಾವನ ಪ್ರಪಂಚವನ್ನಾಗಿ ಮಾಡುವುದಕ್ಕಾಗಿ, ಪತಿತರನ್ನು ಪಾವನ
ಮಾಡುವುದಕ್ಕಾಗಿ. ಇಲ್ಲಿಯೇ ಪತಿತರು ಹಾಗೂ ಪಾವನರಾಗುತ್ತಾರೆ, ಅಲ್ಲಿಯಂತೂ ನಿರಾಕಾರಿ
ಪ್ರಪಂಚವಾಗಿದೆ. ಪತಿತ-ಪಾವನ ಬಾ ಎಂದು ಹಾಡುತ್ತಾರೆ, ಪತಿತ ಪ್ರಪಂಚವೆಂದು ಯಾವುದಕ್ಕೆ
ಹೇಳಲಾಗುತ್ತದೆಯೆಂದು ತಿಳಿದುಕೊಂಡಿಲ್ಲ. ಸೀತೆಯನ್ನು ರಾವಣನ ಜೈಲಿನಿಂದ, ದುಃಖದಿಂದ ಬಿಡಿಸಿದ
ನಂತರ ಸುಖ ಬೇಕು. ಅನ್ಯರಿಗೆ ಶಾಂತಿಯೂ ದೊರೆಯುತ್ತದೆ, ಸ್ವಲ್ಪ ಸುಖ ಸಿಗುವುದು. ನಿಮಗೆ ಸುಖವು
ಬಹಳ ಸಿಗುತ್ತದೆ ಅಂದಮೇಲೆ ದುಃಖವೂ ಬಹಳ ಸಿಗುವುದು. ಅಂತ್ಯದಲ್ಲಿ ಬರುವ ಆತ್ಮಗಳು ಸ್ವಲ್ಪ
ಪಾತ್ರವನ್ನಭಿನಯಿಸಿ ವಾಪಸ್ಸು ಹೋಗಿ ಬಿಡುವರು. ಒಂದೆರಡು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಆದರೆ
ಸ್ವಲ್ಪ ಸಮಯ ಬಂದು ಹೋಗಿ ಬಿಡುತ್ತಾರೆ. ತಮ್ಮದಂತೂ 84 ಜನ್ಮಗಳ ಮಾತಾಗಿದೆ, ಅವರದು ಒಂದೆರಡು
ಜನ್ಮಗಳ ಮಾತಾಗಿದೆ. ನೀವು 84 ಜನ್ಮಗಳನ್ನು ತಿಳಿದುಕೊಂಡಿದ್ದೀರಿ, ಚಕ್ರವನ್ನು
ತಿಳಿದುಕೊಳ್ಳುವುದರಿಂದ ಚಕ್ರವರ್ತಿ ರಾಜರಾಗುತ್ತೀರಿ. ಅವರಿಗೋಸ್ಕರ ಈ ಜ್ಞಾನವೂ ಇಲ್ಲ, ರಾಜರಾಗಲೂ
ಸಾಧ್ಯವಿಲ್ಲ. ಈ ಜ್ಞಾನವು ಕೇವಲ ನಿಮಗೋಸ್ಕರವಾಗಿದೆ, ನೀವೇ ಕಲ್ಪದ ಮೊದಲು ಜ್ಞಾನವನ್ನು
ತೆಗೆದುಕೊಂಡಿದ್ದಿರಿ. ಈಗ ನೀವು ಪುರುಷಾರ್ಥ ಮಾಡಬೇಕಾಗಿದೆ, ಪುರುಷಾರ್ಥ ಮಾಡುವ ಸಮಯವೇ ಇದಾಗಿದೆ
ಮತ್ತು ಪುರುಷಾರ್ಥದ ಮಾತೂ ಸಹ ನಿಮಗಾಗಿಯೇ ಇದೆ. ದೇವಿ-ದೇವತಾ ಧರ್ಮವು ಬಹಳ ಸುಖವನ್ನು
ಕೊಡುವುದಾಗಿದೆ. ಇಷ್ಟೊಂದು ಸುಖವನ್ನು ಬೇರೆ ಯಾರೂ ಕೊಡಲು ಸಾಧ್ಯವಿಲ್ಲ.
ಈ ಅನಾದಿ ನಾಟಕವು ಮಾಡಲ್ಪಟ್ಟಿದೆ. ಎಲ್ಲರಿಗೂ ನಾಯಕ-ನಾಯಕಿಯ ಪಾತ್ರವು ಸಿಗಲು ಸಾಧ್ಯವಿಲ್ಲ.
ಭಿನ್ನ-ಭಿನ್ನ ಪ್ರಕಾರದ ಮನುಷ್ಯರಿದ್ದಾರೆ, ಅವರಲ್ಲಿಯೂ ಒಳ್ಳೆಯವರು, ಕೆಟ್ಟವರು ಅನೇಕ
ಪ್ರಕಾರದವರಿದ್ದಾರೆ. ಶ್ರೇಷ್ಠಾತಿ ಶ್ರೇಷ್ಠ ದೇವಿ-ದೇವತೆಗಳಾಗಿದ್ದಾರೆ, ಅವರು ಸತ್ಯಯುಗದಲ್ಲಿ
ಮಾತ್ರವೇ ಇರುತ್ತಾರೆ, ಅವರನ್ನು ಶ್ರೇಷ್ಠರೆಂದು ಹೇಳಲಾಗುವುದು. ಅವರ ಚಿತ್ರಗಳೂ ಇವೆ, ಆದರೆ ಅವರು
ಹೇಗೆ ಆದರೆಂದು ಯಾರಿಗೂ ಗೊತ್ತಿಲ್ಲ. ಎಲ್ಲಿ ನೋಡಿದರೂ ಕೃಷ್ಣನೇ ಕೃಷ್ಣನಿದ್ದಾನೆ ಎಂದು ಕೆಲವರು
ಹೇಳುತ್ತಾರೆ. ಅದೇ ರೀತಿ ಎಲ್ಲಿ ನೋಡಿದರೂ ಭಗವಂತನೇ ಇದ್ದಾರೆ ಎಂದು ಹೇಳುತ್ತಾರೆ. ಈ ಎಲ್ಲಾ
ಮಾತುಗಳನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಈ ಗುರಿ-ಉದ್ದೇಶವು ತಿಳಿದುಕೊಳ್ಳಲು ಬಹಳ
ಚೆನ್ನಾಗಿದೆ. ಎಲ್ಲರಿಗೂ ನಿಮಂತ್ರಣವನ್ನು ಅವಶ್ಯವಾಗಿ ಕೊಡಬೇಕಾಗಿದೆ. ಪತ್ರಿಕೆಯ ಮೂಲಕ ನಿಮಂತ್ರಣ
ಸಿಗುತ್ತದೆ. ಈಗ ಬಾಕಿ ಸ್ವಲ್ಪವೇ ಸಮಯವಿದೆ. ಇಲ್ಲಿಯವರೆಗೂ ಮಕ್ಕಳು ಯಾತ್ರೆಯನ್ನು
ಮಾಡುತ್ತಾ-ಮಾಡುತ್ತಾ ಸುಸ್ತಾಗಿ ಬಿಟ್ಟಿದ್ದಾರೆ, ಮಾಯೆಯ ಬಿರುಗಾಳಿಗಳನ್ನು ಬಹಳ ಸಹನೆ
ಮಾಡಬೇಕಾಗುತ್ತದೆ. ಏಕೆಂದರೆ ಯುದ್ಧದ ಮೈದಾನದಲ್ಲಿ ಮಾಯೆಯಂತೂ ಅವಶ್ಯವಾಗಿ ಹಿಡಿದುಕೊಂಡು
ಬಿಡುತ್ತದೆ. ಶಕ್ತಿಶಾಲಿಗಳ ಜೊತೆ ಮಾಯೆಯೂ ಶಕ್ತಿಶಾಲಿಯಾಗಿಯೇ ಯುದ್ಧ ಮಾಡುತ್ತದೆ, ಜೋರಾಗಿ
ಬಿರುಗಾಳಿಯನ್ನು ತರುತ್ತದೆ. ನಂತರ ಮಕ್ಕಳು ಹೇಳುತ್ತಾರೆ - ಯಾವಾಗ ಜ್ಞಾನದಲ್ಲಿ ಬಂದೆನೋ
ಅಂದಿನಿಂದ ಬಹಳ ವಿಘ್ನಗಳು ಬರುತ್ತಿವೆ, ವ್ಯವಹಾರದಲ್ಲಿಯೂ ಬಹಳ ನಷ್ಟವಾಗುತ್ತಿದೆ. ಅದಕ್ಕೆ ತಂದೆಯು
ಜ್ಞಾನದಲ್ಲಿ ಬಂದ ನಂತರ ವಿಘ್ನಗಳು ಬೀಳುತ್ತವೆ ಎಂದು ತಿಳಿದುಕೊಳ್ಳಬೇಡಿ, ಇದಂತೂ ಪ್ರಪಂಚದಲ್ಲಿ
ಆಗುತ್ತಲೇ ಇರುತ್ತದೆ ಅದಕ್ಕಾಗಿ ಹೆದರಬೇಡಿ ಎಂದು ತಂದೆಯು ತಿಳಿಸುತ್ತಾರೆ. ಕೆಲವೊಮ್ಮೆ ಶುಕ್ರ
ದೆಶೆ, ಕೆಲವೊಮ್ಮೆ ರಾಹುವಿನ, ಕೆಲವೊಮ್ಮೆ ಇನ್ನ್ಯಾವುದಾದರೂ ದೆಶೆ ಕುಳಿತುಕೊಳ್ಳುವುದು. ರಾಹುವಿನ
ದೆಶೆಯು ಬಹಳ ಕಠಿಣವಾಗಿದೆ. ಕೆಲವು ಮಕ್ಕಳು ನಡೆಯುತ್ತಾ-ನಡೆಯುತ್ತಾ ಕರಗಿಯೇ ಹೋಗಿ ಬಿಡುತ್ತಾರೆ.
ಅಂದಾಗ ಮಾಯೆಯು ಅವರನ್ನು ತಿಂದು ಬಿಡುತ್ತದೆ ನಂತರ ಅವರು ಕಪ್ಪಾಗಿದ್ದವರು ಕಪ್ಪಾಗಿಯೇ ಉಳಿದು
ಬಿಡುತ್ತಾರೆ. ಮಾಯೆಯು ಪೆಟ್ಟನ್ನು ಕೊಟ್ಟು ಒಂದೇ ಸಾರಿ ಕಪ್ಪು ಮುಖವನ್ನಾಗಿ ಮಾಡಿ ಬಿಡುತ್ತದೆ.
ಕೆಲವೊಮ್ಮೆ ಮಾಯೆಯು ಗೆದ್ದು ಬಿಡುತ್ತದೆ. ಕೇವಲ ಮಕ್ಕಳಿಗೇ ವಿಜಯ ಸಿಗುತ್ತಿದ್ದರೆ ತಕ್ಷಣವೇ
ರಾಜಧಾನಿಯು ಸ್ಥಾಪನೆಯಾಗಿ ಬಿಡುವುದು. ಉಸ್ತಾದನನ್ನು ಮರೆತು ಬಿಡುತ್ತಾರೆ ಆಗಲೇ ಮಾಯೆಯು
ಪೆಟ್ಟನ್ನು ಕೊಡುವುದು. ಇಂತಹ ಆತ್ಮೀಯ ಪ್ರಿಯತಮನನ್ನು ಪ್ರಿಯತಮೆಯರು ಮರೆತು ಬಿಡುತ್ತಾರೆ. ಇದು
ಆಶ್ಚರ್ಯಕರವಾಗಿದೆಯಲ್ಲವೆ! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಯೋಗಬಲದಿಂದ
ಪತಿತ ಸೃಷ್ಠಿಯನ್ನು ಪಾವನ ಮಾಡುವುದರಲ್ಲಿ ತಂದೆಗೆ ಸಹಯೋಗ ಕೊಡಬೇಕಾಗಿದೆ. ನೆನಪಿನ ಯಾತ್ರೆಯಲ್ಲಿ
ವಿಶ್ರಾಂತಿಯನ್ನು ಪಡೆಯಬಾರದು. ಯಾರೇ ಎದುರಿನಲ್ಲಿ ಬಂದರೂ ಬಂದವರು ತಮ್ಮ ಶರೀರವನ್ನೂ ಮರೆತು
ಬಿಡಬೇಕು ಇಷ್ಟೊಂದು ನೆನಪಿರಬೇಕು.
2. ಶ್ರೀಮತದಲ್ಲಿ ಎಂದೂ ಸಂಶಯ ಬಂದು ತನ್ನ ಮನ ಮತವನ್ನು ನಡೆಸಬಾರದು. ಪ್ರತೀ ಮಾತಿನಲ್ಲಿ ಸಲಹೆ
ತೆಗೆದುಕೊಂಡು ಅದರಲ್ಲಿ ತನ್ನ ಕಲ್ಯಾಣವಿದೆ ಎಂದು ತಿಳಿದುಕೊಂಡು ನಡೆಯಬೇಕಾಗಿದೆ.
ವರದಾನ:
ತಮ್ಮ ಸೂಕ್ಷ್ಮ
ಶಕ್ತಿಗಳನ್ನು ಸ್ಥಾಪನೆಯ ಕಾರ್ಯದಲ್ಲಿ ತೊಡಗಿಸುವಂತಹ ಮಾಸ್ಟರ್ ರಚಯಿತ ಭವ.
ಹೇಗೆ ನಿಮ್ಮ
ರಚನೆ ಸೈನ್ಸ್ನವರು ವಿಸ್ತಾರವನ್ನು ಸಾರದಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಅತೀ ಸೂಕ್ಷ್ಮ ಮತ್ತು
ಶಕ್ತಿಶಾಲಿ ವಿನಾಶಕ್ಕೆ ಸಾಧನಗಳು ತಯಾರು ಮಾಡುತ್ತಿದ್ದಾರೆ. ಅದೇ ರೀತಿ ನೀವು ಮಾಸ್ಟರ್ ರಚಯಿತ ಆಗಿ
ನಿಮ್ಮ ಸೂಕ್ಷ್ಮ ಶಕ್ತಿಗಳನ್ನು ಸ್ಥಾಪನೆಯ ಕಾರ್ಯದಲ್ಲಿ ತೊಡಗಿಸಿ. ನಿಮ್ಮ ಬಳಿ ಎಲ್ಲಕ್ಕಿಂತಲೂ
ಮಹಾನ್ ಶಕ್ತಿ ಇದೆ - ಶ್ರೇಷ್ಠ ಸಂಕಲ್ಪದ ಶಕ್ತಿ, ಶುಭ ವೃತ್ತಿಯ ಶಕ್ತಿ, ಸ್ನೇಹ ಮತ್ತು ಸಹಯೋಗದ
ದೃಷ್ಠಿ. ಅಂದರೆ ಈ ಸೂಕ್ಷ್ಮ ಶಕ್ತಿಗಳ ಮುಖಾಂತರ ತಮ್ಮ ವಂಶಾವಳಿಯ ಆಸೆಗಳ ದೀಪವನ್ನು ಬೆಳಗಿಸಿ
ಅವರನ್ನು ಯರ್ಥಾಥವಾದ ಗುರಿಯನ್ನು ಮುಟ್ಟಿಸಿ.
ಸ್ಲೋಗನ್:
ಎಲ್ಲಿ ಸ್ವಚ್ಚತೆ
ಮತ್ತು ಮಧುರತೆಯಿದೆ ಅಲ್ಲಿ ಸೇವೆಯಲ್ಲಿ ಸಫಲತೆಯಿದೆ.