25/10/18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈ
ವಿದ್ಯೆಯು ಬಹಳ ಸುಲಭ ಮತ್ತು ಸಹಜವಾಗಿದೆ, ಪದವಿಯ ಆಧಾರವೂ ಬಡತನ ಅಥವಾ ಸಿರಿತನದ ಮೇಲೆ
ಆಧಾರಿತವಾಗಿಲ್ಲ, ವಿದ್ಯೆಯ ಮೇಲೆ ಆಧಾರಿತವಾಗಿದೆ. ಆದ್ದರಿಂದ ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಿ.”
ಪ್ರಶ್ನೆ:
ಜ್ಞಾನಿ ಆತ್ಮನ
ಮೊದಲ ಲಕ್ಷಣವೇನಾಗಿದೆ?
ಉತ್ತರ:
ಅವರು ಎಲ್ಲರ
ಜೊತೆ ಅತೀ ಮಧುರ ವ್ಯವಹಾರ ಮಾಡುತ್ತಾರೆ. ಕೆಲವರೊಂದಿಗೆ ಸ್ನೇಹ, ಇನ್ನೂ ಕೆಲವರೊಂದಿಗೆ
ಶತ್ರುತ್ವವನ್ನಿಟ್ಟುಕೊಳ್ಳುವುದು ಜ್ಞಾನಿ ಆತ್ಮನ ಲಕ್ಷಣವಲ್ಲ. ತಂದೆಯ ಶ್ರೀಮತವಾಗಿದೆ - ಮಕ್ಕಳೇ
ಅತೀ ಮಧುರರಾಗಿ, ಅಭ್ಯಾಸ ಮಾಡಿ - ನಾನಾತ್ಮ ಈ ಶರೀರವನ್ನು ನಡೆಸುತ್ತಿದ್ದೇನೆ, ಈಗ ನಾನು ಮನೆಗೆ
ಹೋಗಬೇಕಾಗಿದೆ.
ಗೀತೆ:
ನೀವು ಪ್ರೀತಿಯ
ಸಾಗರರಾಗಿದ್ದೀರಿ..
ಓಂ ಶಾಂತಿ.
ಮಕ್ಕಳು ಯಾರ ಮಹಿಮೆಯನ್ನು ಕೇಳಿದಿರಿ? ನಿರಾಕಾರ ಬೇಹದ್ದಿನ ತಂದೆಯ ಮಹಿಮೆ. ಅವರು ಜ್ಞಾನದ ಸಾಗರ
ಶ್ರೇಷ್ಠರಾಗಿದ್ದಾರೆ, ಅವರನ್ನೇ ಶ್ರೇಷ್ಠಾತಿ ಶ್ರೇಷ್ಠ ತಂದೆಯೆಂದು ಹೇಳಲಾಗುತ್ತದೆ. ಪರಮ ಶಿಕ್ಷಕ
ಅರ್ಥಾತ್ ಜ್ಞಾನಸಾಗರನೆಂದೂ ಕರೆಯಲಾಗುತ್ತದೆ. ಈಗ ನೀವು ತಿಳಿಯುತ್ತೀರಿ - ಈ ಮಹಿಮೆಯು ನಮ್ಮ
ತಂದೆಯದಾಗಿದೆ. ಯಾರ ಮುಖಾಂತರ ನಾವು ಮಕ್ಕಳ ಸ್ಥಿತಿಯು ಅದೇ ರೀತಿಯಾಗಬೇಕಾಗಿದೆ. ಅವರು
ದೊಡ್ಡವರಿಗಿಂತ ದೊಡ್ಡ ತಂದೆಯಾಗಿದ್ದಾರೆ, ಯಾವುದೇ ಸಾಧು-ಸನ್ಯಾಸಿಯಂತೂ ಅಲ್ಲ. ಇವರು ಬೇಹದ್ದಿನ
ತಂದೆ, ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ. ಇವರು ನಮ್ಮ ಬೇಹದ್ದಿನ ಮಾತ್ಪಿತಾ, ಪತಿ ಇತ್ಯಾದಿ
ಎಲ್ಲವೂ ಆಗಿದ್ದಾರೆಂದು ನೀವು ಮಕ್ಕಳ ಬುದ್ಧಿಯಲ್ಲಿದೆ. ಆದರೂ ಸಹ ಆ ನಶೆಯು ಸ್ಥಿರವಾಗಿರುವುದಿಲ್ಲ.
ಘಳಿಗೆ-ಘಳಿಗೆಯೂ ಮಕ್ಕಳಿಗೆ ಮರೆತು ಹೋಗುತ್ತದೆ. ಇವರು ಶ್ರೇಷ್ಠಾತಿ ಶ್ರೇಷ್ಠ, ಅತಿ ಮಧುರಾತಿ
ಮಧುರ ತಂದೆಯಾಗಿದ್ದಾರೆ. ಅವರನ್ನೇ ಎಲ್ಲರೂ ಅರ್ಧಕಲ್ಪ ನೆನಪು ಮಾಡುತ್ತಾರೆ.
ಲಕ್ಷ್ಮಿ-ನಾರಾಯಣರನ್ನು ಇಷ್ಟೊಂದು ನೆನಪು ಮಾಡುವುದಿಲ್ಲ. ಭಕ್ತರ ಭಗವಂತ ಒಬ್ಬರೇ
ನಿರಾಕಾರನಾಗಿದ್ದಾರೆ, ಅವರನ್ನೇ ಎಲ್ಲರೂ ನೆನಪು ಮಾಡುತ್ತಾರೆ. ಭಲೆ ಕೆಲವರು
ಲಕ್ಷ್ಮಿ-ನಾರಾಯಣರನ್ನು, ಇನ್ನೂ ಕೆಲವರು ಗಣೇಶ ಮುಂತಾದವರನ್ನು ಒಪ್ಪುವವರಿರಬಹುದು ಆದರೂ ಸಹ
ಬಾಯಿಂದ ‘ಹೇ ಭಗವಂತ’,‘ಹೇ ಪರಮಾತ್ಮ’ ಎಂಬ ಶಬ್ಧವೇ ಅವಶ್ಯವಾಗಿ ಎಲ್ಲರ ಬಾಯಿಂದ ಬರುವುದು. ಆತ್ಮವು
ಅವರನ್ನು ನೆನಪು ಮಾಡುತ್ತದೆ. ಶಾರೀರಿಕ ಭಕ್ತರು ಶಾರೀರಿಕ ವಸ್ತುವನ್ನೇ ನೆನಪು ಮಾಡುತ್ತಾರೆ. ಆದರೂ
ಸಹ ಆತ್ಮವು ಇಷ್ಟು ಪಿತಾವ್ರತವಾಗಿದೆ. ಅವಶ್ಯವಾಗಿ ತನ್ನ ತಂದೆಯನ್ನು ನೆನಪು ಮಾಡುತ್ತದೆ.
ದುಃಖದಲ್ಲಿ ತಕ್ಷಣ ಹೇ ಪರಮಾತ್ಮ ಎನ್ನುವ ಶಬ್ಧವು ಬರುತ್ತದೆ. ಆ ಪರಮಾತ್ಮ ನಿರಾಕಾರನಾಗಿದ್ದಾರೆ
ಎಂಬುದನ್ನು ಅವಶ್ಯವಾಗಿ ತಿಳಿಯುತ್ತಾರೆ ಆದರೆ ಅವರ ಮಹತ್ವವನ್ನು ತಿಳಿದುಕೊಂಡಿಲ್ಲ. ಈಗ ಅವರು
ನಮ್ಮ ಸಮ್ಮುಖದಲ್ಲಿ ಬಂದಿದ್ದಾರೆ, ಓದಿಸುತ್ತಿದ್ದಾರೆ, ಸ್ವರ್ಗದ ರಚೈತನಾಗಿದ್ದಾರೆಂದು ಅವರ
ಮಹತ್ವವನ್ನು ನೀವೀಗ ಅರಿತುಕೊಂಡಿದ್ದೀರಿ. ಇದೊಂದೇ ವಿದ್ಯೆಯಾಗಿದೆ, ಆ ಶಾರೀರಿಕ ವಿದ್ಯೆಗಳಂತೂ
ಭಿನ್ನ-ಭಿನ್ನ ಪ್ರಕಾರದ್ದಾಗಿರುತ್ತದೆ. ಕೆಲವರಿಗೆ ವಿದ್ಯೆಯಲ್ಲಿ ಆಸಕ್ತಿಯಿಲ್ಲವೆಂದರೆ ಅವರು
ವಿದ್ಯೆಯನ್ನು ಬಿಟ್ಟು ಬಿಡುತ್ತಾರೆ. ಇಲ್ಲಿ ಈ ವಿದ್ಯೆಯಲ್ಲಿ ಹಣ ಮುಂತಾದುವುಗಳ ಮಾತಿಲ್ಲ. ಹೇಗೆ
ಆ ಸರ್ಕಾರವೂ ಸಹ ಬಡವರಿಗೆ ಉಚಿತವಾಗಿ ಓದಿಸುತ್ತದೆ, ಇಲ್ಲಂತೂ ಇದು ಉಚಿತ ವಿದ್ಯೆಯಾಗಿದೆ ಯಾವುದೇ
ಶುಲ್ಕವಿಲ್ಲ. ತಂದೆಗೆ ಬಡವರ ಬಂಧು ಎಂದು ಹೇಳಲಾಗುತ್ತದೆ, ಬಡವರೇ ಓದುತ್ತಾರೆ. ಇದು ಬಹಳ ಸಹಜ
ಮತ್ತು ಸುಲಭ ವಿದ್ಯೆಯಾಗಿದೆ. ಮನುಷ್ಯರು ತಮ್ಮನ್ನು ಇನ್ಶ್ಯೂರ್ ಮಾಡಿಕೊಳ್ಳುತ್ತಾರೆ. ಇಲ್ಲಿಯೂ
ಸಹ ನೀವು ಇನ್ಶ್ಯೂರ್ ಮಾಡಿಕೊಳ್ಳುತ್ತೀರಿ. ಬಾಬಾ, ತಾವೇ 21 ಜನ್ಮಗಳ ಆಸ್ತಿಯನ್ನು ಇದರ ಪ್ರತಿಯಾಗಿ
ಕೊಡಿ ಎಂದು ಹೇಳುತ್ತೀರಿ. ಹೇ ಪರಮಪಿತ ಪರಮಾತ್ಮ ನಮಗೆ 21 ಜನ್ಮಗಳ ಆಸ್ತಿಯನ್ನು ಕೊಡಿ ಎಂದು
ಭಕ್ತಿಮಾರ್ಗದಲ್ಲಿ ಹೇಳುವುದಿಲ್ಲ. ನೀವೇ ಇದನ್ನು ತಿಳಿದುಕೊಂಡಿದ್ದೀರಿ, ಡೈರೆಕ್ಟ್ ತಮ್ಮನ್ನು
ಇನ್ಶ್ಯೂರ್ ಮಾಡಿಕೊಳ್ಳುತ್ತೀರಿ. ಫಲ ಕೊಡುವಂತಹವರು ತಂದೆಯಾಗಿದ್ದಾರೆ, ಎಲ್ಲರಿಗೆ ಈಶ್ವರನೇ
ಕೊಡುತ್ತಾರೆಂದಂತೂ ಯಾವಾಗಲೂ ಹೇಳುತ್ತಾರೆ. ಭಲೆ ಯಾವುದೇ ಸಾಧು-ಸಂತ ಅಥವಾ
ರಿದ್ಧಿ-ಸಿದ್ಧಿಯವರಿರಬಹುದು ಆದರೆ ಎಲ್ಲರಿಗೂ ಕೊಡುವವರಂತಹವರು ಈಶ್ವರನಾಗಿದ್ದಾರೆ. ಕೊಡುವವರು
ಈಶ್ವರನಾಗಿದ್ದಾರೆಂದು ಆತ್ಮವು ಹೇಳುತ್ತದೆ. ದಾನ-ಪುಣ್ಯ ಇತ್ಯಾದಿಗಳನ್ನು ಮಾಡಿದರೂ ಸಹ ಅದರ
ಫಲವನ್ನು ಕೊಡುವವರು ಈಶ್ವರನೇ ಆಗಿದ್ದಾರೆ.
ಈ ವಿದ್ಯೆಯಲ್ಲಿ ಯಾವುದೇ ಖರ್ಚಿಲ್ಲ. ತಂದೆಯು ತಿಳಿಸಿದ್ದಾರೆ - ಬಡವರದೂ ಸಹ ಇಷ್ಟೇ ಇನ್ಶ್ಯೂರ್
ಆಗುತ್ತದೆ. ಸಾಹುಕಾರರು ಲಕ್ಷಗಳಷ್ಟು ಮಾಡಿದರೆ ಅವರಿಗೆ ಅಷ್ಟೇ ಸಿಗುತ್ತದೆ. ಬಡವರು ಒಂದು ರೂಪಾಯಿ
ಮಾಡುತ್ತಾರೆ, ಸಾಹುಕಾರರು 5000ದಷ್ಟು ಮಾಡಿದರೂ ಸಹ ಪ್ರತಿಯಾಗಿ ಇಬ್ಬರಿಗೂ ಸರಿ ಸಮನಾಗಿಯೇ
ಸಿಗುತ್ತದೆ. ಬಡವರಿಗಾಗಿ ಬಹಳ ಸಹಜವಾಗಿದೆ. ಯಾವುದೇ ಶುಲ್ಕದ ಮಾತಿಲ್ಲ. ಬಡವರು ಅಥವಾ ಸಾಹುಕಾರರು
ಇಬ್ಬರು ತಂದೆಯಿಂದ ಆಸ್ತಿಯನ್ನು ಪಡೆಯಲು ಹಕ್ಕುದಾರರಾಗಿದ್ದಾರೆ. ಎಲ್ಲವೂ ವಿದ್ಯೆಯ ಮೇಲೆ
ಆಧಾರಿತವಾಗಿದೆ. ಬಡವರು ಚೆನ್ನಾಗಿ ಓದಿದರೆ ಅವರ ಪದವಿಯು ಸಾಹುಕಾರರಿಗಿಂತಲೂ ಶ್ರೇಷ್ಠವಾಗಿ
ಬಿಡುತ್ತದೆ. ವಿದ್ಯೆಯೇ ಸಂಪಾದನೆಯಾಗಿದೆ. ಇದು ಬಹಳ ಸುಲಭ ಮತ್ತು ಸಹಜವಾದ ವಿದ್ಯೆಯಾಗಿದೆ. ಕೇವಲ
ಈ ಮನುಷ್ಯ ಸೃಷ್ಠಿಚಕ್ರದ ಆದಿ-ಮಧ್ಯ-ಅಂತ್ಯವನ್ನು ತಿಳಿಯಬೇಕಾಗಿದೆ. ಇದನ್ನು ಯಾವುದೇ ಮನುಷ್ಯ
ಮಾತ್ರರು ತಿಳಿದುಕೊಂಡಿಲ್ಲ. ಯಾರೂ ತ್ರಿಕಾಲದರ್ಶಿಗಳಾಗಲು ಸಾಧ್ಯವಿಲ್ಲ. ಎಲ್ಲರೂ ಬೇಅಂತ್
ಆಗಿದೆಯೆಂದು ಹೇಳಿ ಬಿಡುತ್ತಾರೆ. ಮನುಷ್ಯ ಸೃಷ್ಟಿಯ ಬೀಜವು ಪರಮಾತ್ಮನಾಗಿದ್ದಾರೆ, ಇದು ಉಲ್ಟಾ
ವೃಕ್ಷವಾಗಿದೆ ಎಂದು ತಿಳಿಯುತ್ತಾರೆ ಆದರೂ ಸಹ ನಾವು ಯಥಾರ್ಥವಾಗಿ ತಿಳಿದುಕೊಂಡಿಲ್ಲವೆಂದು
ಹೇಳುತ್ತಾರೆ. ಅವಶ್ಯವಾಗಿ ಯಥಾರ್ಥ ವಿಷಯವನ್ನು ತಂದೆಯೇ ತಿಳಿಸುತ್ತಾರೆ, ಅವರೇ ಜ್ಞಾನ
ಸಾಗರನಾಗಿದ್ದಾರೆ. ನೀವು ಮಕ್ಕಳ ಎಲ್ಲದರ ಆಧಾರವು ವಿದ್ಯೆಯ ಮೇಲಿದೆ. ಈಗ ನೀವು ನಂಬರ್ವಾರ್
ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ನೀವು ಮಾಸ್ಟರ್ ಜ್ಞಾನಸಾಗರರಾಗಿದ್ದೀರಿ. ಎಲ್ಲರೂ ಒಂದೇ
ರೀತಿಯಾಗಿ ಇರುವುದಿಲ್ಲ. ಕೆಲವರು ದೊಡ್ಡ ನದಿ, ಕೆಲವರು ಚಿಕ್ಕ ನದಿಗಳಾಗಿದ್ದಾರೆ. ಎಲ್ಲರೂ
ತಮ್ಮ-ತಮ್ಮ ಪುರುಷಾರ್ಥದನುಸಾರವೂ ಇರುತ್ತಾರೆ. ನೀವು ಮಕ್ಕಳಿಗೆ ಗೊತ್ತಿದೆ-ಇವರು ನಮ್ಮ ಬೇಹದ್ದಿನ
ತಂದೆಯಾಗಿದ್ದಾರೆ, ಅವರ ಮಕ್ಕಳಾಗಿ ಶ್ರೀಮತದಂತೆ ನಡೆಯಬೇಕಾಗಿದೆ. ಕೆಲವರಿಗೆ ಪಾಪ ಇವರು
ಪರವಶರಾಗಿದ್ದಾರೆ, ಮಾಯೆಗೆ ವಶರಾಗಿ ಉಲ್ಟಾ ಮತವನ್ನು ನಡೆಸುತ್ತಾರೆಂದು ಹೇಳಲಾಗುತ್ತದೆ.
ಶ್ರೀಮದ್ಭಗವಾನುವಾಚ ಇದೆಯಲ್ಲವೆ. ಇದರಿಂದ ಶ್ರೇಷ್ಠಾತಿ ಶ್ರೇಷ್ಠ ದೇವಿ-ದೇವತೆಗಳಾಗಬೇಕಾಗಿದೆ.
ಯಾವಾಗ ಮೊದಲು ಈ ನಿಶ್ಚಯವಾಗಿ ಬಿಡುತ್ತದೆಯೋ ಆಗ ಶಿವ ತಂದೆಯೊಂದಿಗೆ ಮಿಲನ ಮಾಡಬೇಕಾಗುತ್ತದೆ.
ತಂದೆಯು ತಿಳಿದುಕೊಂಡು ಬಿಡುತ್ತಾರೆ - ಇವರಿಗೆ ಯಥಾರ್ಥ ನಿಶ್ಚಯವಿಲ್ಲ. ಆತ್ಮಗಳಿಗೆ ತಂದೆಯು
ಒಬ್ಬರೇ ಆಗಿದ್ದಾರೆ. ಇದನ್ನಂತೂ ತಿಳಿಯುತ್ತಾರೆ ಆದರೆ ಅವರು ಇವರಲ್ಲಿ (ಬ್ರಹ್ಮಾ) ಬಂದು
ಆಸ್ತಿಯನ್ನು ಕೊಡುತ್ತಿದ್ದಾರೆಂದು ನಿಶ್ಚಯವು ಕುಳಿತುಕೊಳ್ಳುವುದು ಬಹಳ ಪರಿಶ್ರಮವಿದೆ. ಯಾವಾಗ ಇದು
ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ ಮತ್ತು ಬರೆದು ಕೊಡುತ್ತಾರೆ. ಆಗ ಆ ಬರವಣಿಗೆಯನ್ನು ತಂದೆಯ ಬಳಿ
ತೆಗೆದುಕೊಂಡು ಬರಬೇಕು. ಅವಶ್ಯವಾಗಿ ಇದು ಸತ್ಯವಾಗಿದೆ, ಇಷ್ಟೂ ಸಮಯ ಏನನ್ನು ತಿಳಿಯುತ್ತಾ ಬಂದೆವೋ
ಅದು ತಪ್ಪಾಗಿದೆ, ಈಶ್ವರನು ಸರ್ವವ್ಯಾಪಿಯಲ್ಲ ಅವರಂತೂ ಬೇಹದ್ದಿನ ತಂದೆಯಾಗಿದ್ದಾರೆಂದು ಅವಶ್ಯವಾಗಿ
ತಿಳಿಯುತ್ತಾರೆ. ಭಾರತಕ್ಕೆ ಕಲ್ಪ-ಕಲ್ಪವೂ ಸಂಗಮಯುಗದಲ್ಲಿ ಬೇಹದ್ದಿನ ತಂದೆಯ ಮೂಲಕ ಆಸ್ತಿಯು
ಸಿಗುತ್ತದೆ. ಸಂಗಮಯುಗದಲ್ಲಿ ಮತ್ತು ಇದೇ ಸಮಯದಲ್ಲಿ ಸಿಕ್ಕಿತ್ತು, ಈಗ ಪುನಃ ಸಿಗುತ್ತಿದೆ-ಇದನ್ನು
ಬರೆಸಬೇಕಾಗಿದೆ. ಅವಶ್ಯವಾಗಿ ತಂದೆಯು ಸಂಗಮದಲ್ಲಿಯೇ ಬರುತ್ತಾರೆ, ಬಂದು
ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರ ಮೂಲಕ ಸ್ವರ್ಗದ ರಚನೆ ಮಾಡುತ್ತಾರೆ. ಯಾವಾಗ ಬರೆದು
ಕೊಡುತ್ತಾರೆಯೋ ಆಗ ಅದರ ಮೇಲೆ ನೀವು ಯಾರ ಬಳಿ ಬಂದಿದ್ದೀರಿ, ಏನನ್ನು ಪಡೆಯಲು ಬಂದಿದ್ದೀರಿ ಎಂದು
ತಿಳಿಸಬಹುದು.
ಈಶ್ವರನ ರೂಪವಂತೂ ನಿರಾಕಾರವಾಗಿದೆ, ಈಶ್ವರನ ರೂಪವನ್ನು ಅರಿತುಕೊಳ್ಳದೇ ಇರುವ ಕಾರಣ ಬ್ರಹ್ಮ್
ತತ್ವವೆಂದು ಹೇಳಿ ಬಿಡುತ್ತಾರೆ. ಅವರಂತೂ ಬಿಂದುವಾಗಿದ್ದಾರೆಂದು ಮಕ್ಕಳಿಗೆ ತಿಳಿಸಲಾಗಿದೆ.
ಪರಮಾತ್ಮನು ಒಂದು ಬಿಂದುವಾಗಿದ್ದಾರೆನ್ನುವ ಮಾತು ಮತ್ತ್ಯಾರ ಬುದ್ಧಿಯಲ್ಲಿಯೂ
ಕುಳಿತುಕೊಳ್ಳುವುದಿಲ್ಲ. ಆತ್ಮನಿಗಾಗಿ ಆತ್ಮವು ಭೃಕುಟಿಯ ಮಧ್ಯೆ ಹೊಳೆಯುತ್ತಿರುವ ನಕ್ಷತ್ರ, ಅತಿ
ಚಿಕ್ಕ ವಸ್ತುವಾಗಿದೆಯೆಂದು ಹೇಳುತ್ತಾರೆ ಅಂದಾಗ ವಿಚಾರ ಮಾಡಬೇಕು - ಪಾತ್ರಧಾರಿ ಯಾರು? ಇಷ್ಟು
ಚಿಕ್ಕ ಆತ್ಮನಲ್ಲಿ ಎಷ್ಟು ಅವಿನಾಶಿ ಪಾತ್ರವು ದಾಖಲಿಸಲ್ಪಟ್ಟಿದೆ! ಈ ಮಾತುಗಳಲ್ಲಿ ಯಾರು ಆಳವಾಗಿ
ಹೋಗುತ್ತಾರೆಯೋ ಅವರಿಗೆ ತಿಳಿಸಬೇಕಾಗಿದೆ - ನಾವು 84 ಜನ್ಮ ಪಡೆದಿದ್ದೇವೆಂದು ನಿಮ್ಮ ಆತ್ಮವೇ
ಹೇಳುತ್ತದೆ. ಅದೆಲ್ಲಾ ಪಾತ್ರವು ಅತಿ ಚಿಕ್ಕ ಬಿಂದು ರೂಪ ಆತ್ಮನಲ್ಲಿ ಮರ್ಜ್ ಆಗಿದೆ ಅದು ಪುನಃ
ಇಮರ್ಜ್ ಆಗುತ್ತದೆ. ಈ ಮಾತಿನಿಂದ ಮನುಷ್ಯರು ಆಶ್ಚರ್ಯ ಚಕಿತರಾಗುತ್ತಾರೆ. ಈ ಮಾತನ್ನಂತೂ ಯಾರೂ
ತಿಳಿದುಕೊಂಡಿಲ್ಲ. ನಮ್ಮದು 84 ಜನ್ಮಗಳು ಪುನರಾವರ್ತನೆಯಾಗುತ್ತದೆ. ಇದು
ಮಾಡಿ-ಮಾಡಲ್ಪಟ್ಟಿರುವಂತಹ ನಾಟಕವಾಗಿದೆ. ಆತ್ಮದಲ್ಲಿ ಪಾತ್ರವು ಹೇಗೆ ದಾಖಲೆಯಾಗಿದೆ ಎಂದು ಕೇಳಿ,
ಆಶ್ಚರ್ಯ ಚಕಿತರಾಗುತ್ತಾರೆ. ಅವಶ್ಯವಾಗಿ ನಾನು ಆತ್ಮ ಹೇಳುತ್ತೇನೆ, ನಾನು ಆತ್ಮ ಒಂದು ಶರೀರವನ್ನು
ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತೇನೆ, ಈ ನನ್ನ ಪಾತ್ರವು ನಿಗಧಿಯಾಗಿದೆ, ಅದು
ಡ್ರಾಮಾನುಸಾರ ಪುನರಾವರ್ತನೆಯಾಗುತ್ತದೆ. ಈ ಮಾತುಗಳನ್ನು ಬಲಹೀನ ಬುದ್ಧಿಯವರೆಂದೂ ಧಾರಣೆ ಮಾಡಲು
ಸಾಧ್ಯವಿಲ್ಲ. ಈ ಸ್ಮರಣೆ ಮಾಡಬೇಕು - ನಾವು 84 ಜನ್ಮಗಳನ್ನು ತೆಗೆದುಕೊಂಡು
ಪಾತ್ರವನ್ನಭಿನಯಿಸುತ್ತೇವೆ, ಶರೀರ ಧಾರಣೆ ಮಾಡುತ್ತೇವೆ. ಯಾವಾಗ ಈ ಸ್ಮರಣೆ ನಡೆಯುತ್ತಿರುತ್ತದೆಯೋ
ಆಗ ಇವರು ಪೂರ್ಣ ತ್ರಿಕಾಲದರ್ಶಿಗಳಾಗಿದ್ದಾರೆ ಮತ್ತು ಅನ್ಯರನ್ನೂ ತ್ರಿಕಾಲದರ್ಶಿಗಳನ್ನಾಗಿ ಮಾಡುವ
ಪುರುಷಾರ್ಥವನ್ನು ಮಾಡುತ್ತಿದ್ದಾರೆಂದು ಹೇಳಬಹುದು. ತಿಳಿಸುವ ಸಾಹಸವೂ ಸಹ ಮಕ್ಕಳಲ್ಲಿ ಬೇಕಾಗಿದೆ.
ಅಂಧರ ಊರುಗೋಲಾಗಿ ನಿದ್ರೆಯಿಂದ ಜಾಗೃತ ಮಾಡಬೇಕಾಗಿದೆ.
ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ, ಈಗ ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ, ಹಳೆಯ ಪ್ರಪಂಚದ
ವಿನಾಶವಾಗುತ್ತಾ ಇದೆ. ನೀವು ತ್ರಿಮೂರ್ತಿ ಬ್ರಹ್ಮಾ, ವಿಷ್ಣು, ಶಂಕರನ ಹೆಸರನ್ನು ಕೇಳಿದ್ದೀರಾ?
ಬ್ರಹ್ಮಾರವರ ಮುಖಾಂತರ ಸ್ಥಾಪನೆಯಾಗುತ್ತದೆ, ಇವರೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರೆ.
ಕೇವಲ ಬ್ರಹ್ಮಾರವರೊಬ್ಬರೇ ಮಾಡುವುದಿಲ್ಲ, ಪ್ರಜಾಪಿತನ ಜೊತೆ ಅವಶ್ಯವಾಗಿ
ಬ್ರಹ್ಮಾಕುಮಾರ-ಕುಮಾರಿಯರೂ ಇರುವರು. ಇವರಿಗೆ ಕಲಿಸುವ ತಂದೆಯೂ ಇರುವರು. ಈ ಬ್ರಹ್ಮಾರವರಿಗೆ
ಜ್ಞಾನಸಾಗರನೆಂದು ಕರೆಯುವುದಿಲ್ಲ. ಬ್ರಹ್ಮಾನ ಕೈಯಲ್ಲಿ ಶಾಸ್ತ್ರಗಳನ್ನು ತೋರಿಸುತ್ತಾರೆ. ಆದರೆ
ಪರಮಪಿತ ಪರಮಾತ್ಮನು ಇವರಲ್ಲಿ ಬಂದು ಇವರ ಮೂಲಕ ವೇದ-ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ.
ಬ್ರಹ್ಮಾರವರು ಶಾಸ್ತ್ರಗಳ ಸಾರವನ್ನು ತಿಳಿಸುವುದಿಲ್ಲ, ಅವರು ಎಲ್ಲಿಂದ ಕಲಿತರು? ಅವರಿಗೂ ಸಹ
ಯಾರಾದರೂ ತಂದೆ ಅಥವಾ ಗುರು ಇರಬೇಕಲ್ಲವೆ. ಪ್ರಜಾಪಿತನಂತೂ ಅವಶ್ಯವಾಗಿ ಮನುಷ್ಯನೇ ಆಗಿರುವರು ಮತ್ತು
ಇಲ್ಲಿಯೇ ಇರುವರು. ಅವರು ಪ್ರಜೆಗಳನ್ನು ರಚಿಸುವವರಾದರು. ಅವರಿಗೆ ರಚೈತ, ಜ್ಞಾನಸಾಗರ,
ಜ್ಞಾನಪೂರ್ಣರೆಂದು ಹೇಳಲು ಸಾಧ್ಯವಿಲ್ಲ. ಜ್ಞಾನಸಾಗರ ಪರಮಪಿತ ಪರಮಾತ್ಮನೇ ಆಗಿದ್ದಾರೆ. ಅವರು ಬಂದು
ಪ್ರಜಾಪಿತ ಬ್ರಹ್ಮಾರವರ ಮೂಲಕ ಓದಿಸುತ್ತಾರೆ ಇದಕ್ಕೆ ಜ್ಞಾನ ಕಳಶ ಎಂದು ಹೇಳಲಾಗುತ್ತದೆ ಎಲ್ಲದರ
ಆಧಾರವು ಧಾರಣೆಯ ಮೇಲಿದೆ. ಇನ್ಶ್ಯೂರ್ ವಿಮೆ ಮಾಡಿಸಿ ಅಥವಾ ಮಾಡಿಸದಿರಿ. ಇದು ನಿಮ್ಮ ಮೇಲೆ
ಆಧಾರವಾಗಿದೆ. ತಂದೆಯಂತೂ ಬಹಳ ಚೆನ್ನಾಗಿ ಇನ್ಶ್ಯೂರ್ ಮಾಡುತ್ತಾರೆ, ಇನ್ಶ್ಯೂರೆನ್ಸ್ ಮ್ಯಾಗ್ನೆಟ್
ಆಗಿದ್ದಾರೆ - ಭಕ್ತಿಮಾರ್ಗದಲ್ಲಿಯೂ ಹಾಗೂ ಜ್ಞಾನಮಾರ್ಗದಲ್ಲಿಯೂ. ಓ ತಂದೆಯೇ ಬಂದು ನಮ್ಮನ್ನು
ದುಃಖದಿಂದ ಬಿಡಿಸಿ ಎಂದು ಎಲ್ಲಾ ಆತ್ಮಗಳು ಭಕ್ತಿಮಾರ್ಗದಲ್ಲಿ ನೆನಪು ಮಾಡುತ್ತಾರೆ. ತಂದೆಯು
ಆಸ್ತಿಯನ್ನು ಕೊಡುತ್ತಾರೆ. ಶಾಂತಿಧಾಮ ಇಲ್ಲವೆ ಸುಖಧಾಮಕ್ಕೆ ಕಳುಹಿಸುತ್ತಾರೆ. ಯಾರಿಗೆ ಶಾಂತಿಯ
ಆಸ್ತಿಯು ಸಿಗಬೇಕಾಗಿದೆಯೋ ಅವರೇ ಕಲ್ಪ-ಕಲ್ಪವೂ ಶಾಂತಿಯ ಆಸ್ತಿಯನ್ನು ಪಡೆಯುತ್ತಾರೆ. ನೀವೀಗ ಸುಖದ
ಆಸ್ತಿಯನ್ನು ಪಡೆಯಲು ಪುರುಷಾರ್ಥ ಮಾಡುತ್ತಿದ್ದೀರಿ. ಇದರಲ್ಲಿ ಓದಬೇಕು ನಂತರ ಓದಿಸಬೇಕು. ಹೇಗೆ
ತಂದೆಯು ಮಧುರಾತಿ ಮಧುರರಾಗಿದ್ದಾರೆಯೋ ಹಾಗೆಯೇ ಅವರ ರಚನೆಯೂ ಮಧುರಕ್ಕಿಂತ ಮಧುರವಾಗಿದೆ. ಸ್ವರ್ಗವು
ಎಷ್ಟು ಮಧುರವಾಗಿದೆ. ಸ್ವರ್ಗದ ಹೆಸರನ್ನಂತೂ ಎಲ್ಲರೂ ಹೇಳುತ್ತಿರುತ್ತಾರೆ. ಯಾರೇ ಶರೀರ ಬಿಟ್ಟರೆ
ಸ್ವರ್ಗವಾಸಿಯಾದರೆಂದು ಹೇಳುತ್ತಾರೆ ಅಂದಮೇಲೆ ಅವರು ಅವಶ್ಯವಾಗಿ ಇಲ್ಲಿಯವರೆಗೆ ನರಕದಲ್ಲಿದ್ದರು,
ಈಗ ಸ್ವರ್ಗದಲ್ಲಿ ಹೋದರೆಂದರ್ಥ. ಹೋಗುವುದೇನೂ ಇಲ್ಲ ಆದರೂ ಸಹ ಹೇಳುತ್ತಾರೆ. ನೀವು ಅವಶ್ಯವಾಗಿ
ಬರೆಯಬೇಕು - ಅವರು ನರಕದಲ್ಲಿದ್ದರಲ್ಲವೆ, ಇದು ನರಕವಾಗಿದೆ ಅಂದಮೇಲೆ ಅವರನ್ನು ಪುನಃ ಇಲ್ಲಿಗೆ
ಕರೆಸುವ ಅಥವಾ ತಿನ್ನಿಸುವ ಪ್ರಯತ್ನವನ್ನೇಕೆ ಮಾಡುತ್ತೀರಿ! ಪಿತೃಗಳನ್ನು ಕರೆಸುತ್ತಾರೆ,
ಆತ್ಮವನ್ನು ಕರೆಸುವುದೇ ಪಿತೃಗಳನ್ನು ಕರೆಸುವುದಾಗಿದೆ. ನೀವು ಎಲ್ಲಾ ಪಿತೃಗಳ ತಂದೆಯನ್ನು
ಕರೆಸುತ್ತೀರಿ, ಎಲ್ಲಾ ಆತ್ಮಗಳ ತಂದೆಯು ಕುಳಿತು ನಿಮಗೆ ಓದಿಸುತ್ತಾರೆ. ನೀವು ಎಷ್ಟು ಗುಪ್ತಸೇನೆ,
ಶಿವಶಕ್ತಿಯರಾಗಿದ್ದೀರಿ, ಶಿವನಂತೂ ನಿರಾಕಾರನಾಗಿದ್ದಾರಲ್ಲವೆ. ನೀವು ಶಕ್ತಿಯರು ಅವರ
ಮಕ್ಕಳಾಗಿದ್ದೀರಿ. ಶಕ್ತಿಯು ಆತ್ಮದಲ್ಲಿ ಬರುತ್ತದೆ. ಮನುಷ್ಯರು ಶಾರೀರಿಕ ಶಕ್ತಿಯನ್ನು
ತೋರಿಸುತ್ತಾರೆ, ನೀವು ಆತ್ಮಿಕ ಶಕ್ತಿಯನ್ನು ತೋರಿಸುತ್ತೀರಿ. ನಿಮ್ಮದು ಯೋಗಬಲವಾಗಿದೆ. ಯೋಗ
ಮಾಡುವುದರಿಂದ ನಿಮ್ಮ ಆತ್ಮವು ಪವಿತ್ರವಾಗುತ್ತದೆ, ಆತ್ಮದಲ್ಲಿ ಹೊಳಪು ತುಂಬುತ್ತದೆ. ನಿಮ್ಮಲ್ಲಿ
ಮಮ್ಮಾರವರ ಜ್ಞಾನದ ಆಯುಧವು ಎಲ್ಲದಕ್ಕಿಂತ ತೀಕ್ಷ್ಣವಾಗಿದೆ. ಇದು ಸ್ಥೂಲ ಕಠಾರಿ ಅಥವಾ ಆಯುಧದ
ಮಾತಲ್ಲ.
ಆತ್ಮಕ್ಕೆ ತಿಳುವಳಿಕೆಯಿದೆ, ನನ್ನಲ್ಲಿ ಜ್ಞಾನದ ಶಂಖ ಧ್ವನಿ ಮಾಡುವ ಒಳ್ಳೆಯ ಶಕ್ತಿಯಿದೆ. ನಾನು
ಶಂಖ ಧ್ವನಿ ಮಾಡಬಲ್ಲೆನು. ನಾನು ಶಂಖ ಧ್ವನಿ ಮಾಡಲು ಆಗುವುದಿಲ್ಲ ಎಂದೂ ಇನ್ನೂ ಕೆಲವರು
ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಜ್ಞಾನದ ಶಂಖ ಧ್ವನಿ ಮಾಡುವವರೇ ನನಗೆ ಅತೀ
ಪ್ರಿಯರಾಗಿದ್ದಾರೆ. ನನ್ನ ಪರಿಚಯವನ್ನು ಜ್ಞಾನದಿಂದ ಕೊಡುತ್ತಾರಲ್ಲವೆ. ಬೇಹದ್ದಿನ ತಂದೆಯನ್ನು
ನೆನಪು ಮಾಡಿ ಎಂದು ಈ ಜ್ಞಾನವನ್ನು ಕೊಟ್ಟರಲ್ಲವೆ. ತಂದೆಯನ್ನು ನೆನಪು ಮಾಡಬೇಕಾಗಿದೆ, ಇದರಲ್ಲಿ
ಬಾಯಿಂದ ಏನನ್ನೂ ಹೇಳುವ ಅವಶ್ಯಕತೆಯಿಲ್ಲ. ತಂದೆಯು ನಮಗೆ ಜ್ಞಾನವನ್ನು ಕೊಡುತ್ತಿದ್ದಾರೆಂದ ಮೇಲೆ
ಆಂತರ್ಯದಲ್ಲಿ ತಿಳಿಯಬೇಕಾಗಿದೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಹಿಂತಿರುಗಿ
ಹೋಗಬೇಕಾಗಿದೆ ಆದ್ದರಿಂದ ನನ್ನನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಭಗವಾನುವಾಚ
- ಮನ್ಮನಾಭವ ಅಂದಮೇಲೆ ಅವಶ್ಯವಾಗಿ ಅವರು ನಿರಾಕಾರನಾಗಿರುವವರಲ್ಲವೆ. ನನ್ನನ್ನು ನೆನಪು ಮಾಡಿ ಎಂದು
ಸಾಕಾರಿಯು ಹೇಗೆ ಹೇಳುತ್ತಾರೆ? ಹೇ ಆತ್ಮಗಳೇ, ನನ್ನನ್ನು ನೆನಪು ಮಾಡಿ, ನಾನು ನಿಮ್ಮ
ತಂದೆಯಾಗಿದ್ದೇನೆ, ನನ್ನನ್ನು ನೆನಪು ಮಾಡಿದರೆ ಅಂತ್ಮತಿ ಸೋ ಗತಿಯಾಗುವುದೆಂದು ತಂದೆಯೇ
ಹೇಳುತ್ತಾರೆ. ಕೃಷ್ಣನಂತೂ ಹೇಳಲು ಸಾಧ್ಯವಿಲ್ಲ ಆತನು ಮನುಷ್ಯನಾಗಿದ್ದಾನಲ್ಲವೇ ಹೇ ಜೀವಾತ್ಮಗಳೇ
ತಮ್ಮ ತಂದೆಯನ್ನು ನೆನಪು ಮಾಡಿ ಎಂದು ನೀವಾತ್ಮಗಳು ಈ ಶರೀರದ ಮೂಲಕ ಹೇಳುತ್ತೀರಿ. ತಂದೆಯೂ ಸಹ
ಆತ್ಮಗಳಿಗೆ ಹೇಳುತ್ತಾರೆ -ಮನ್ಮನಾಭವ, ನೀವಾತ್ಮಗಳು ನನ್ನ ಬಳಿಯೇ ಬರಬೇಕಾಗಿದೆ, ದೇಹೀ
ಅಭಿಮಾನಿಗಳಾಗಬೇಕಾಗಿದೆ. ಆದ್ದರಿಂದ ಈಗ ಒಳ್ಳೆಯ ರೀತಿಯಲ್ಲಿ ಅಭ್ಯಾಸ ಮಾಡಬೇಕು - ನಾನು ಆತ್ಮ, ಈ
ಶರೀರವನ್ನು ನಡೆಸುವವನಾಗಿದ್ದೇನೆ. ಈಗ ನಾನು ಹಿಂತಿರುಗಿ ತಂದೆಯ ಬಳಿಗೆ ಹೋಗಬೇಕಾಗಿದೆ. ತಂದೆಯು
ಹೇಳುತ್ತಾರೆ - ನಡೆದಾಡುತ್ತಾ-ತಿರುಗಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ನನ್ನನ್ನು ನೆನಪು
ಮಾಡಿ. ಯಾರು ಅಶಾಂತಿಯನ್ನು ಹರಡಿಸುತ್ತಾರೆಯೋ ಅವರು ತಮ್ಮ ಪದವಿಯನ್ನು ಭ್ರಷ್ಠ ಮಾಡಿಕೊಳ್ಳುತ್ತಾರೆ.
ಇದರಲ್ಲಿ ಬಹಳ-ಬಹಳ ಮಧುರರಾಗಬೇಕಾಗಿದೆ. ಆದ್ದರಿಂದ ಎಷ್ಟೊಂದು ಮಧುರ ಶಿವ ಭೋಲಾ ಭಗವಂತನೆಂದು
ಗೀತೆಯೂ ಇದೆಯಲ್ಲವೆ. ನೀವೂ ಸಹ ಅವರ ಮಕ್ಕಳು ಭೋಲಾ ಮಕ್ಕಳಾಗಿದ್ದೀರಿ. ತಂದೆಯನ್ನು ನೆನಪು ಮಾಡಿದರೆ
ಸ್ವರ್ಗದ ಮಾಲೀಕರಾಗುವಿರಿ ಎಂದು ಅನ್ಯರಿಗೆ ಬಹಳ ಒಳ್ಳೆಯ ಮಾರ್ಗವನ್ನು ತಿಳಿಸುತ್ತೀರಿ. ಇಂತಹ
ವ್ಯಾಪಾರವನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ ಅಂದಾಗ ತಂದೆಯನ್ನು ಬಹಳ ನೆನಪು ಮಾಡಬೇಕು.
ಯಾರಿಂದ ಇಷ್ಟೊಂದು ಸುಖ ಸಿಗುತ್ತದೆಯೋ ಅವರನ್ನೇ ಪತಿತ ಪಾವನ ಬನ್ನಿ ಎಂದು ನೆನಪು ಮಾಡುತ್ತಾರೆ.
ಆತ್ಮಗಳು ಪತಿತರಾಗಿದ್ದಾರೆ, ಆತ್ಮಗಳ ಜೊತೆ ಶರೀರವೂ ಪತಿತವಾಗಿದೆ. ಆತ್ಮ ಮತ್ತು ಶರೀರ ಎರಡೂ
ಪತಿತವಾಗಿದೆ, ಆತ್ಮವು ನಿರ್ಲೇಪವಾಗಿದೆ, ಪತಿತವಾಗಲು ಸಾಧ್ಯವಿಲ್ಲವೆಂದು ಅವರು ಹೇಳುತ್ತಾರೆ ಆದರೆ
ಈ ರೀತಿಯಿರಲು ಸಾಧ್ಯವಿಲ್ಲ. ಒಬ್ಬ ಪರಮಪಿತ ಪರಮಾತ್ಮನಲ್ಲಷ್ಟೇ ಎಂದೂ ಸಹ ತುಕ್ಕು ಬೀಳುವುದಿಲ್ಲ,
ಉಳಿದವರೆಲ್ಲರಲ್ಲಿಯೂ ತುಕ್ಕು ಬೀಳಲೇಬೇಕಾಗಿದೆ. ಪ್ರತಿಯೊಬ್ಬರೂ ಸತೋ, ರಜೋ, ತಮೋದಲ್ಲಿ
ಬರಲೇಬೇಕಾಗಿದೆ. ಈ ಎಲ್ಲಾ ವಿಷಯಗಳನ್ನು ಧಾರಣೆ ಮಾಡಿ ಬಹಳ ಮಧುರರಾಗಬೇಕಾಗಿದೆ. ಕೆಲವರೊಂದಿಗೆ
ಶತ್ರುತ್ವ, ಕೆಲವರೊಂದಿಗೆ ಸ್ನೇಹವನ್ನಿಟ್ಟುಕೊಳ್ಳುವುದಲ್ಲ. ದೇಹಾಭಿಮಾನದಲ್ಲಿ ಬಂದು ಇಲ್ಲಿಯೇ
ಕುಳಿತು ಅನ್ಯರಿಂದ ಸೇವೆ ತೆಗೆದುಕೊಳ್ಳುವುದು ಬಹಳ ತಪ್ಪಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಜ್ಞಾನದ
ಸ್ಮರಣೆ ಮಾಡಿ ತ್ರಿಕಾಲದರ್ಶಿಗಳಾಗಬೇಕು ಮತ್ತು ಅನ್ಯರನ್ನು ಮಾಡಬೇಕಾಗಿದೆ. ಅಂಧರಿಗೆ ಊರುಗೋಲಾಗಿ
ಅವರನ್ನು ಅಜ್ಞಾನದ ನಿದ್ರೆಯಿಂದ ಎಬ್ಬಿಸಬೇಕಾಗಿದೆ.
2. 21 ಜನ್ಮಗಳಿಗೋಸ್ಕರ ತಮ್ಮದೆಲ್ಲವನ್ನೂ ಇನ್ಶ್ಯೂರ್ ಮಾಡಬೇಕಾಗಿದೆ. ಜೊತೆ ಜೊತೆಗೆ ಜ್ಞಾನದ ಶಂಖ
ಧ್ವನಿಯನ್ನು ಮಾಡಬೇಕಾಗಿದೆ.
ವರದಾನ:
ಅಸಮದಾನವಾಗುವ
ಬದಲು ಲೆಕ್ಕಾಚಾರವನ್ನು ಖುಶಿ-ಖುಶಿಯಿಂದ ಚುಕ್ತ ಮಾಡುವಂತಹ ನಿಶ್ಚಿಂತ ಆತ್ಮ ಭವ.
ಒಂದುವೇಳೆ
ಯಾವಾಗಾದರೂ ಯಾರಾದರೂ ಏನಾದರೂ ಮಾತು ಹೇಳಿದರೆ ಅದರಿಂದ ತಕ್ಷಣ ಅಸಮಧಾನರಾಗಬೇಡಿ, ಮೊದಲು ಸ್ಪಷ್ಟ
ಮಾಡಿಕೊಳ್ಳಿ ಅಥವಾ ಪರಿಶೀಲನೆ ಮಾಡಿಕೊಳ್ಳಿ ಅವರು ಯಾವ ಭಾವದಿಂದ ಹೇಳಿದರು, ಒಂದುವೇಳೆ ನಿಮ್ಮ
ತಪ್ಪು ಇಲ್ಲದೇ ಹೋದರೆ ನಿಶ್ಚಿಂತರಾಗಿ ಬಿಡಿ. ಈ ಮಾತು ಸ್ಮತಿಯಲ್ಲಿರಲಿ ಬ್ರಾಹ್ಮಣ ಆತ್ಮರ
ಮುಖಾಂತರ ಇಲ್ಲೇ ಎಲ್ಲಾ ಲೆಕ್ಕಾಚಾರ ಚುಕ್ತು ಆಗಬೇಕಿದೆ. ಧರ್ಮರಾಜ ಪುರಿಯಿಂದ ತಪ್ಪಿಸಿಕೊಳ್ಳಲು
ಬ್ರಾಹ್ಮಣ ಎಲ್ಲಾದರೂ ಒಂದು ಕಡೆ ನಿಮಿತ್ತರಾಗಿ ಬಿಡುತ್ತಾರೆ. ಆದ್ದರಿಂದ ಗಾಬರಿಯಾಗಬೇಡಿ, ಖುಶಿ
ಖುಶಿಯಿಂದ ಚುಕ್ತ ಮಾಡಿ. ಇದರಿಂದ ಉನ್ನತಿಯೇ ಆಗುವುದಿದೆ.
ಸ್ಲೋಗನ್:
“ತಂದೆಯೇ
ಸಂಸಾರವಾಗಿದ್ದಾರೆ” ಸದಾ ಈ ಸ್ಮತಿಯಲ್ಲಿರಬೇಕು - ಇದೇ ಸಹಜಯೋಗವಾಗಿದೆ.