06.12.18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ತಮ್ಮ ಸೌಭಾಗ್ಯ
ಮಾಡಿಕೊಳ್ಳಬೇಕೆಂದರೆ ಈಶ್ವರೀಯ ಸೇವೆಯಲ್ಲಿ ತೊಡಗಿ, ಮಾತೆಯರು-ಕನ್ಯೆಯರಿಗೆ ತಂದೆಯ ಮೇಲೆ
ಬಲಿಹಾರಿಯಾಗುವ ಉತ್ಸಾಹವಿರಬೇಕು, ಶಿವ ಶಕ್ತಿಯರೇ ತಂದೆಯ ಹೆಸರನ್ನು ಪ್ರಸಿದ್ಧ ಮಾಡಲು ಸಾಧ್ಯ”
ಪ್ರಶ್ನೆ:
ಎಲ್ಲಾ
ಕನ್ಯೆಯರಿಗೆ ತಂದೆಯ ಯಾವ ಶುಭ ಸಲಹೆಯನ್ನು ನೀಡುತ್ತಾರೆ?
ಉತ್ತರ:
ಹೇ ಕನ್ಯೆಯರೇ,
ನೀವೀಗ ಚಮತ್ಕಾರ ಮಾಡಿ ತೋರಿಸಿ. ನೀವು ಮಮ್ಮಾರವರ ಸಮಾನರಾಗಬೇಕು. ಈಗ ನೀವು ಲೋಕ ಮರ್ಯಾದೆಯನ್ನು
ಬಿಟ್ಟು ಬಿಡಿ, ನಷ್ಟಮೋಹಿಗಳಾಗಿ. ಒಂದುವೇಳೆ ಅಧರ್ ಕನ್ಯೆಯರಾಗುತ್ತೀರೆಂದರೂ ಸಹ ಕಲೆ ಬೀಳುತ್ತದೆ.
ನೀವು ರಂಗು-ರಂಗಿನ ಮಾಯೆಯಿಂದ ದೂರವಿರಬೇಕಾಗಿದೆ. ನೀವು ಈಶ್ವರೀಯ ಸೇವೆ ಮಾಡಿದರೆ ಸಾವಿರಾರು ಮಂದಿ
ಬಂದು ನಿಮ್ಮ ಚರಣಗಳಿಗೆ ಬೀಳುತ್ತಾರೆ.
ಓಂ ಶಾಂತಿ. ನೀವು
ಶಿವ ಶಕ್ತಿಯರು ಉತ್ಸಾಹದಲ್ಲಿರುವವರಾಗಿದ್ದೀರಿ. ತಂದೆಗೆ ಬಲಿಹಾರಿಯಾಗುವ ಉತ್ಸಾಹವು ಬರಬೇಕು.
ಇದಕ್ಕೆ ಮೌಲಾಯಿ ಮಸ್ತಿ (ಅಪಾರ ನಶೆ) ಎಂದು ಹೇಳಲಾಗುತ್ತದೆ. ಯಾರು ಯಾರು ಕುಳಿತಿದ್ದಾರೆ ಎಂದು
ತಂದೆಯು ನೋಡುತ್ತಾರೆ. ವಾಸ್ತವದಲ್ಲಿ ತರಗತಿಯಲ್ಲಿ ಹೀಗೆ ಕುಳಿತಿರಬೇಕು ಪ್ರತಿಯೊಬ್ಬರ ಕಡೆಯೂ
ಶಿಕ್ಷಕನ ದೃಷ್ಟಿಯು ಹೋಗುವಂತಿರಬೇಕು. ಇದು ಹೇಗೆ ಸತ್ಸಂಗವಾಗಿ ಬಿಡುತ್ತದೆ. ಆದರೆ ಏನು ಮಾಡುವುದು,
ನಾಟಕದ ಪೂರ್ವ ನಿಶ್ಚಿತವೇ ಹೀಗಿದೆ. ತರಗತಿಯಲ್ಲಿ ನಂಬರ್ವಾರ್ ಆಗಿ ಕುಳ್ಳರಿಸಲು ಸಾಧ್ಯವಿಲ್ಲ.
ಏಕೆಂದರೆ ಮಕ್ಕಳು ಮುಖ ನೋಡಲು ಬಾಯಾರಿರುತ್ತಾರಲ್ಲವೆ. ಹಾಗೆಯೇ ತಂದೆಯೂ ಸಹ ಮಕ್ಕಳ ಮುಖವನ್ನು
ನೋಡಲು ಬಯಸುತ್ತಾರೆ. ಹೇಗೆ ಮಕ್ಕಳಿಲ್ಲದಿದ್ದರೆ ಮನೆಯಲ್ಲಿ ಅಂಧಕಾರವೆಂದು ತಿಳಿಯುತ್ತಾರೆ. ನೀವು
ಮಕ್ಕಳು ಪ್ರಕಾಶಗೊಳಿಸುವವರಾಗಿದ್ದೀರಿ. ಭಾರತವನ್ನಷ್ಟೇ ಅಲ್ಲ, ಇಡೀ ಪ್ರಪಂಚದಲ್ಲಿ ಬೆಳಕನ್ನು
ತರುವವರಾಗಿದ್ದೀರಿ.
ಗೀತೆ:
ಮಾತಾ ಓ ಮಾತಾ
ನೀನೇ ಭಾಗ್ಯವಿದಾತಾ...........
ಓಂ ಶಾಂತಿ.
ಈ ಗೀತೆಯು ನಿಮ್ಮ ಶಾಸ್ತ್ರವಾಗಿದೆ. ಸರ್ವ ಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ. ಮತ್ತೆಲ್ಲಾ
ಶಾಸ್ತ್ರ, ಮಹಾಭಾರತ, ರಾಮಾಯಣ, ಶಿವ ಪುರಾಣ, ವೇದ-ಉಪನಿಷತ್ತು ಮೊದಲಾದವೆಲ್ಲವೂ ಗೀತೆಯಿಂದಲೇ
ಬಂದಿವೆ. ವಿಚಿತ್ರವಾಗಿದೆಯಲ್ಲವೆ. ಇವರು ನಾಟಕದ ಹಾಡುಗಳನ್ನು ಹಾಕುತ್ತಾರೆ. ಇವರ ಬಳಿ ಯಾವುದೇ
ಶಾಸ್ತ್ರಗಳಿಲ್ಲವೆಂದು ಮನುಷ್ಯರು ಹೇಳುತ್ತಾರೆ. ಆದರೆ ಈ ಶಾಸ್ತ್ರಗಳಿಂದ ಯಾವ ಅರ್ಥವು ಬರುತ್ತದೆಯೋ
ಅದರಿಂದ ಎಲ್ಲಾ ವೇದ, ಗ್ರಂಥ ಮುಂತಾದುವುಗಳ ಸಾರವು ಬರುತ್ತದೆ ಎಂದು ನಾವು ಹೇಳುತ್ತೇವೆ. (ಗೀತೆಯನ್ನು
ಹಾಕಿದರು) ಇದು ಮಮ್ಮಾರವರ ಮಹಿಮೆಯಾಗಿದೆ. ಮಾತೆಯರಂತೂ ಅನೇಕರಿದ್ದಾರೆ ಆದರೆ ಈ ಜಗದಂಬೆಯು
ಮುಖ್ಯವಾಗಿದ್ದಾರೆ, ಸ್ವರ್ಗದ ಬಾಗಿಲನ್ನು ತೆರೆಯುತ್ತಾರೆ. ಮತ್ತೆ ಅವರೇ ಮೊದಲು ಜಗತ್ತಿನ
ಮಾಲೀಕರಾಗುತ್ತಾರೆ ಅಂದಾಗ ಅವಶ್ಯವಾಗಿ ಆ ತಾಯಿಯ ಜೊತೆ ನೀವು ಮಕ್ಕಳೂ ಇರುತ್ತೀರಿ. ನೀವು ಮಾತಾಪಿತಾ........
ಇದು ಅವರ ಮಹಿಮೆಯೇ ಆಗಿದೆ. ಶಿವ ತಂದೆಯನ್ನೇ ಮಾತಾಪಿತ ಎಂದು ಹೇಳಲಾಗುತ್ತದೆ. ಭಾರತದಲ್ಲಿ
ಜಗದಂಬೆಯೂ ಇದ್ದಾರೆ, ಜಗತ್ಪಿತನೂ ಇದ್ದಾರೆ. ಆದರೆ ಬ್ರಹ್ಮಾರವರಿಗೆ ಇಷ್ಟೊಂದು ಹೆಸರು, ಮಂದಿರಗಳು
ಮೊದಲಾದವುಗಳಿಲ್ಲ. ಕೇವಲ ಅಜ್ಮೀರ್ನಲ್ಲಿ ಮಾತ್ರ ಬ್ರಹ್ಮಾ ತಂದೆಯ ಮಂದಿರವು ಪ್ರಸಿದ್ಧವಾಗಿದೆ,
ಅಲ್ಲಿ ಬ್ರಾಹ್ಮಣರು ಇರುತ್ತಾರೆ. ಬ್ರಾಹ್ಮಣರಲ್ಲಿ ಎರಡು ಪ್ರಕಾರದವರಿರುತ್ತಾರೆ - ಸಾರಸಿದ್ಧರು
ಮತ್ತು ಪುಷ್ಕರಣಿಗಳು. ಪುಷ್ಕರ್ನಲ್ಲಿ ಇರುವವರಿಗೆ ಪುಷ್ಕರಣಿಗಳೆಂದು ಹೇಳಲಾಗುತ್ತದೆ. ಆದರೆ ಆ
ಬ್ರಾಹ್ಮಣರಿಗೆ ಇದು ಗೊತ್ತಿಲ್ಲ. ನಾವು ಬ್ರಹ್ಮಾ ಮುಖವಂಶಾವಳಿಗಳಾಗಿದ್ದೆವು ಎಂದು ಹೇಳುತ್ತಾರೆ.
ಜಗದಂಬಾನ ಹೆಸರಂತೂ ಬಹಳ ಪ್ರಸಿದ್ಧವಾಗಿದೆ. ಬ್ರಹ್ಮಾರವರನ್ನು ಇಷ್ಟೊಂದು ತಿಳಿದುಕೊಂಡಿಲ್ಲ.
ಯಾರಿಗಾದರೂ ತುಂಬಾ ಹಣವು ಸಿಕ್ಕಿದರೆ ಇದು ಸಾಧು-ಸಂತರ ಕೃಪೆಯೆಂದು ತಿಳಿಯುತ್ತಾರೆ, ಈಶ್ವರನ
ಕೃಪೆಯೆಂದು ತಿಳಿಯುವುದಿಲ್ಲ. ನನ್ನ ವಿನಃ ಮತ್ತ್ಯಾರೂ ಕೃಪೆ ತೋರಲು ಸಾಧ್ಯವಿಲ್ಲವೆಂದು ತಂದೆಯು
ತಿಳಿಸುತ್ತಾರೆ. ನಾವಂತೂ ಸನ್ಯಾಸಿಗಳ ಮಹಿಮೆಯನ್ನು ಮಾಡುತ್ತೇವೆ. ಒಂದುವೇಳೆ ಈ ಸನ್ಯಾಸಿಗಳು
ಪವಿತ್ರವಾಗಿರದಿದ್ದರೆ ಭಾರತವು ಸುಟ್ಟು ಹೋಗುತ್ತಿತ್ತು. ಆದರೆ ಸದ್ಗತಿದಾತನಂತೂ ಒಬ್ಬ ತಂದೆಯೇ
ಆಗಿದ್ದಾರೆ. ಮನುಷ್ಯರು ಮನುಷ್ಯರ ಸದ್ಗತಿ ಮಾಡಲು ಸಾಧ್ಯವಿಲ್ಲ.
ನೀವೆಲ್ಲಾ ಸೀತೆಯರು ಶೋಕವಾಟಿಕೆಯಲ್ಲಿ ಇದ್ದೀರೆಂದು ತಂದೆಯು ಈಗಾಗಲೇ ತಿಳಿಸಿದ್ದಾರೆ. ದುಃಖದಲ್ಲಿ
ಶೋಕವಂತೂ ಆಗುತ್ತದೆಯಲ್ಲವೆ. ಖಾಯಿಲೆ ಮುಂತಾದವುಗಳು ಬಂದರೆ ದುಃಖವಾಗುವುದಿಲ್ಲವೇನು! ವಿಚಾರ
ಮೊದಲಾದವುಗಳಂತೂ ನಡೆಯುತ್ತದೆ. ನಾವು ಖಾಯಿಲೆಯಲ್ಲಿಯೇ ಇರಬೇಕೆಂದಂತೂ ಹೇಳುವುದಿಲ್ಲ.
ಗುಣಪಡಿಸಿಕೊಳ್ಳಲು ಪುರುಷಾರ್ಥ ಮಾಡುತ್ತಾರೆ. ಇಲ್ಲವೆಂದರೆ ಔಷಧಿ ಮುಂತಾದವುಗಳನ್ನು ಏಕೆ
ತೆಗೆದುಕೊಳ್ಳುತ್ತಾರೆ? ಈಗ ತಂದೆಯು ತಿಳಿಸುತ್ತಾರೆ - ನೀವು ಮಕ್ಕಳನ್ನು ಈ ದುಃಖ, ಖಾಯಿಲೆ
ಮುಂತಾದವುಗಳಿಂದ ಬಿಡಿಸಿ ಉನ್ನತಿ ಮಾಡುತ್ತೇನೆ. ಮಾಯಾರಾವಣನು ನಿಮಗೆ ದುಃಖ ಕೊಟ್ಟಿದ್ದಾನೆ.
ನನ್ನನ್ನು ಸೃಷ್ಟಿಯ ರಚಯಿತನೆಂದು ಹೇಳುತ್ತಾರೆ. ಭಗವಂತನು ದುಃಖ ಕೊಡುವುದಕ್ಕಾಗಿ ಸೃಷ್ಟಿ
ರಚಿಸುತ್ತಾರೇನು ಎಂದು ಎಲ್ಲರೂ ಹೇಳುತ್ತಾರೆ. ಸ್ವರ್ಗದಲ್ಲಿ ಹೀಗೆ ಹೇಳುತ್ತಾರೆಯೇ! ಇಲ್ಲಿ
ದುಃಖವಿದೆ. ಆದ್ದರಿಂದಲೇ ಮನುಷ್ಯರು ಭಗವಂತನಿಗೆ ಏನಾಗಿತ್ತು, ದುಃಖದ ಸೃಷ್ಟಿಯನ್ನು ಏಕೆ ರಚಿಸಿದರು,
ಅವರಿಗೆ ಮತ್ತ್ಯಾವುದೇ ಕೆಲಸವಿರಲಿಲ್ಲವೆ ಎನ್ನುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ಇದು
ಸುಖ-ದುಃಖ, ಸೋಲು-ಗೆಲುವಿನ ಆಟವು ಮಾಡಲ್ಪಟ್ಟಿದೆ. ರಾಮ ಮತ್ತು ರಾವಣನ ಆಟವು ಭಾರತದಲ್ಲಿಯೇ ಇದೆ.
ಭಾರತದ ರಾವಣನೊಂದಿಗೆ ಸೋಲುವುದೇ ಸೋಲು ಮತ್ತೆ ರಾವಣನ ಮೇಲೆ ಜಯ ಗಳಿಸಿ ರಾಮನಿಗೆ ಮಕ್ಕಳಾಗುತ್ತೀರಿ.
ರಾಮನೆಂದು ಶಿವ ತಂದೆಗೆ ಹೇಳಲಾಗುತ್ತದೆ. ತಿಳಿಸುವುದಕ್ಕಾಗಿ ರಾಮನ ಮತ್ತು ಶಿವನ ಹೆಸರನ್ನು
ತೆಗೆದುಕೊಳ್ಳಬೇಕಾಗುತ್ತದೆ. ಶಿವ ತಂದೆಯು ಮಕ್ಕಳ ಮಾಲೀಕ ಅಥವಾ ಒಡೆಯನಾಗಿದ್ದಾರೆ. ಅವರು
ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯ ಆಸ್ತಿಯು ಸ್ವರ್ಗದ ಪ್ರಾಪ್ತಿಯಾಗಿದೆ.
ಮತ್ತೆ ಅದರಲ್ಲಿ ಪದವಿಯೂ ಇದೆ. ಆ ಸ್ವರ್ಗದಲ್ಲಂತೂ ದೇವತೆಗಳೇ ಇರುತ್ತಾರೆ. ಅಂದಮೇಲೆ ಸ್ವರ್ಗವನ್ನು
ರಚಿಸುವವರ ಮಹಿಮೆಯನ್ನು ಕೇಳಿ.
(ಗೀತೆ) ಭಾರತದ ಸೌಭಾಗ್ಯ ವಿಧಾತೆಯು ಈ ಜಗದಂಬೆಯೇ ಆಗಿದ್ದಾರೆ, ಅವರನ್ನು ಯಾರೂ ತಿಳಿದುಕೊಂಡಿಲ್ಲ.
ಅಂಬಾಜಿಗಂತೂ ಬಹಳ ಮಂದಿ ಹೋಗುತ್ತಾರೆ. ಈ ಬಾಬಾರವರೂ ಸಹ ಅನೇಕ ಬಾರಿ ಹೋಗಿದ್ದಾರೆ. ಬಬ್ಬೂರ್ನಾಥನ
ಮಂದಿರ, ಲಕ್ಷ್ಮೀ-ನಾರಾಯಣನ ಮಂದಿರಗಳಿಗೆ ಅನೇಕ ಬಾರಿ ಹೋಗಿರುತ್ತಾರೆ, ಆದರೆ ಆಗ ಏನೂ
ಗೊತ್ತಿರಲಿಲ್ಲ. ಎಷ್ಟೊಂದು ಬುದ್ಧಿಹೀನರಾಗಿದ್ದರು. ಈಗ ನಾನು ಇವರನ್ನು (ಬ್ರಹ್ಮಾ) ಎಷ್ಟೊಂದು
ಬುದ್ಧಿವಂತರನ್ನಾಗಿ ಮಾಡಿದ್ದೇನೆ. ಜಗದಂಬಾನ ಬಿರುದು ಭಾರತದ ಸೌಭಾಗ್ಯವಿಧಾತೆ ಎಂದು ಎಷ್ಟು
ದೊಡ್ಡದಾಗಿದೆ. ನೀವೀಗ ಅಂಬಾಜಿ ಮಂದಿರಕ್ಕೂ ಹೋಗಿ ಸರ್ವೀಸ್ ಮಾಡಬೇಕು. ಜಗದಂಬಾರವರ 84 ಜನ್ಮಗಳ
ಜೀವನ ಕಥೆಯನ್ನೂ ತಿಳಿಸಬೇಕು ಬೇಕಾದಷ್ಟು ಮಂದಿರಗಳಿವೆ. ಮಮ್ಮಾರವರ ಈ ಚಿತ್ರವನ್ನು ಅವರು
ಒಪ್ಪುವುದಿಲ್ಲ. ಆ ಅಂಬಾ ಮೂರ್ತಿಯ ಬಗ್ಗೆಯೂ ತಿಳಿಸಿ. ಈ ಗೀತೆಯನ್ನು ತೆಗೆದುಕೊಂಡು ಹೋಗಿ ಈ
ಗೀತೆಯೇ ನಿಮ್ಮ ಸತ್ಯ ಗೀತೆಯಾಗಿದೆ. ತಾವು ಮಾಡಬೇಕಾಗಿರುವ ಸೇವೆಯಂತೂ ಬಹಳ ಇದೆ. ಆದರೆ ಸೇವೆ
ಮಾಡುವ ಮಕ್ಕಳಲ್ಲಿಯೂ ಸತ್ಯತೆಯಿರಬೇಕು. ನೀವು ಈ ಗೀತೆಯನ್ನು ಜಗದಂಬೆಯ ಮಂದಿರಕ್ಕೆ ತೆಗೆದುಕೊಂಡು
ಹೋಗಿ ತಿಳಿಸಿಕೊಡಿ. ಜಗದಂಬೆಯು ಕನ್ಯೆಯಾಗಿದ್ದಾರೆ, ಬ್ರಾಹ್ಮಿಣಿಯಾಗಿದ್ದಾರೆ. ಜಗದಂಬೆಗೆ
ಇಷ್ಟೊಂದು ಭುಜಗಳನ್ನು ಏಕೆ ತೋರಿಸಿದ್ದಾರೆ? ಏಕೆ ಅವರಿಗೆ ಅನೇಕರು ಸಹಯೋಗಿ ಮಕ್ಕಳಿದ್ದಾರೆ. ಶಕ್ತಿ
ಸೈನ್ಯವಿದೆಯಲ್ಲವೆ. ಆದ್ದರಿಂದ ಚಿತ್ರಗಳಲ್ಲಿಯೂ ಅನೇಕ ಬಾಹುಗಳನ್ನು ತೋರಿಸಿದ್ದಾರೆ. ಶರೀರವನ್ನು
ಹೇಗೆ ತೋರಿಸುತ್ತಾರೆ? ಆದ್ದರಿಂದ ಈ ಬಾಹುಗಳ ಸಂಕೇತವು ಸಹಜವಾಗಿದೆ ಹಾಗೂ ಶೋಭಿಸುತ್ತದೆ. ಅನೇಕ
ಕಾಲುಗಳನ್ನು ತೋರಿಸಿದರೆ ನೋಡಲು ಚೆನ್ನಾಗಿ ಕಾಣುವುದಿಲ್ಲ. ಬ್ರಹ್ಮಾರವರಿಗೂ ಸಹ ಭುಜಗಳನ್ನು
ತೋರಿಸುತ್ತಾರೆ. ತಾವೆಲ್ಲರೂ ಅವರ ಮಕ್ಕಳಾಗಿದ್ದೀರಿ, ಆದರೆ ಇಷ್ಟೊಂದು ಬಾಹುಗಳನ್ನು ಅವರಿಗೆ
ತೋರಿಸಲು ಸಾಧ್ಯವಾಗುವುದಿಲ್ಲ. ಅಂದಾಗ ನೀವು ಕನ್ಯೆಯರು, ಮಾತೆಯರು ಸರ್ವೀಸಿನಲ್ಲಿ ತೊಡಗಬೇಕು.
ತಮ್ಮ ಸೌಭಾಗ್ಯವನ್ನು ರೂಪಿಸಿಕೊಳ್ಳಬೇಕು. ನೀವು ಈ ಗೀತೆಯನ್ನು ಜಗದಂಬಾನ ಮಂದಿರದಲ್ಲಿ
ತೆಗೆದುಕೊಂಡು ಹೋಗಿ ಮಹಿಮೆ ಮಾಡಿದರೆ ಅನೇಕರು ಬಂದು ಬಿಡುತ್ತಾರೆ. ನೀವು ಹೆಸರನ್ನು ಇಷ್ಟೊಂದು
ಪ್ರಸಿದ್ಧಗೊಳಿಸಬಹುದು. ಯಾವುದು ಹಳೆಯ ಬ್ರಹ್ಮಾಕುಮಾರಿ ಸಹೋದರಿಯರಿಗೂ ಸಹ ಸಾಧ್ಯವಾಗುವುದಿಲ್ಲ.
ಚಿಕ್ಕ-ಚಿಕ್ಕ ಕನ್ಯೆಯರು ಚಮತ್ಕಾರ ಮಾಡಿ ತೋರಿಸಬಹುದು. ತಂದೆಯು ಕೇವಲ ಒಬ್ಬರಿಗೆ ಹೇಳುತ್ತಿಲ್ಲ.
ಎಲ್ಲಾ ಕನ್ಯೆಯರಿಗೂ ಹೇಳುತ್ತಿದ್ದಾರೆ. ಸಾವಿರಾರು ಮಂದಿ ಬಂದು ನಿಮ್ಮ ಚರಣಗಳಿಗೆ ಬೀಳುತ್ತಾರೆ.
ನಿಮಗೆ ಬೀಳುವಷ್ಟು ಜನ ಅವರಿಗೆ ಬೀಳುವುದಿಲ್ಲ. ಹ್ಞಾಂ ಇದರಲ್ಲಿ ಲೋಕ ಮರ್ಯಾದೆ ಬಿಡಬೇಕು. ನಿಮ್ಮ
ಮುಂದೆ ತಲೆಬಾಗುವಷ್ಟು ಸಂಪೂರ್ಣ ನಷ್ಟಮೋಹಿಗಳಾಗಬೇಕು. ಕೆಲವು ಮಕ್ಕಳು ನಾನು ವಿವಾಹವಾಗುವುದಿಲ್ಲ,
ಪವಿತ್ರವಾಗಿದ್ದು ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆ ಮಾಡುತ್ತೇನೆಂದು ಹೇಳುತ್ತಾರೆ.
ಅಧರ್ಕುಮಾರಿ ಆಗಿದ್ದರೂ ಸಹ ಸ್ವಲ್ಪ ಕಲೆಯು ಬಿದ್ದೇ ಬೀಳುತ್ತದೆ. ಕುಮಾರಿಯು ವಿವಾಹವಾದಳೆಂದರೆ ಕಲೆ
ಬೀಳಲು ಪ್ರಾರಂಭವಾಗಿ ಬಿಡುತ್ತದೆ. ರಂಗುರಂಗಿನ ಮಾಯೆಯು ಬರತೊಡಗುತ್ತದೆ. ಈ ಜನ್ಮದಲ್ಲಿ ಮನುಷ್ಯರು
ಹೇಗಿದ್ದವರು ಏನು ಬೇಕಾದರೂ ಆಗಬಹುದು. ಮಮ್ಮಾರವರೂ ಸಹ ಈ ಜನ್ಮದಲ್ಲಿಯೇ ಅಷ್ಟು ಪ್ರಾಪ್ತಿ
ಮಾಡಿಕೊಂಡಿದ್ದಾರೆ. ಮನುಷ್ಯರಿಗೆ ಅಲ್ಪಕಾಲಕ್ಕಾಗಿ ಪದವಿ ಸಿಗುತ್ತದೆ. ಆದರೆ ಮಮ್ಮಾರವರಿಗೆ 21
ಜನ್ಮಗಳಿಗಾಗಿ ಪದವಿಯು ಸಿಗುತ್ತದೆ. ನೀವೂ ಸಹ ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿ
ಆಗುತ್ತಿದ್ದೀರಿ. ಸಂಪೂರ್ಣ ತೇರ್ಗಡೆಯಾಗಿ ಬಿಟ್ಟರೆ ನಂತರ ದೈವೀ ಜನ್ಮವು ಸಿಗುವುದು. ಅವರಿಗಂತೂ
ಅಲ್ಪಕಾಲದ ಸುಖವು ಸಿಗುತ್ತದೆ, ಅದರಲ್ಲಿಯೂ ಬಹಳಷ್ಟು ಚಿಂತೆಯಿರುತ್ತದೆ ಆದರೆ ನಾವಂತೂ
ಗುಪ್ತವಾಗಿದ್ದೇವೆ. ನಾವು ಹೊರಗೆ ಏನೂ ಶೋ ಮಾಡಬೇಕಾಗಿಲ್ಲ. ಜಗತ್ತಿನವರು ಶೋ ಮಾಡುತ್ತಾರೆ. ಈ
ರಾಜ್ಯವಂತೂ ಮೃಗತೃಷ್ಣ ಸಮಾನವಾಗಿದೆ. ಶಾಸ್ತ್ರಗಳಲ್ಲಿಯೂ ಸಹ ಅಂಧರ ಮಕ್ಕಳು ಅಂಧರೆಂದು ದ್ರೌಪದಿಯು
ಹೇಳಿದಳು ಅಂದರೆ ಯಾವುದನ್ನು ನೀವು ರಾಜ್ಯವೆಂದು ತಿಳಿಯುತ್ತೀರೋ ಇದು ಈಗ ಸಮಾಪ್ತಿಯಾಯಿತೆಂದರೆ
ಆಯಿತು. ರಕ್ತದ ನದಿಗಳು ಹರಿಯುವುದು. ಯಾವಾಗ ಭಾರತ ಪಾಕಿಸ್ತಾನದ ವಿಭಜನೆಯಾಯಿತೋ ಆಗ ಮನೆ-ಮನೆಯಲ್ಲಿ
ಎಷ್ಟೊಂದು ಹೊಡೆದಾಟಗಳು ಆಯಿತು. ಈಗಂತೂ ನಡೆಯುತ್ತಾ-ತಿರುಗಾಡುತ್ತಲೇ, ರಸ್ತೆಗಳಲ್ಲಿಯೇ
ಜಗಳಗಳಾಗುವುದು. ಎಷ್ಟು ರಕ್ತವು ಹರಿಯುತ್ತದೆ ಅಂದಮೇಲೆ ಇದಕ್ಕೆ ಸ್ವರ್ಗವೆಂದು ಹೇಳುತ್ತಾರೆಯೇ?
ಏನು, ಇದೇ ಹೊಸ ದೆಹಲಿ, ಹೊಸ ಭಾರತವೇ? ಹೊಸ ಭಾರತವಂತೂ ಸ್ವರ್ಗವಾಗಿತ್ತು, ಈಗ ವಿಕಾರಗಳ
ಪ್ರವೇಶತೆಯಾಗಿರುವ ಕಾರಣ ಎಲ್ಲರೂ ಶತ್ರುಗಳಾಗಿದ್ದಾರೆ. ರಾಮ-ರಾವಣ ಜನ್ಮವನ್ನು ಭಾರತದಲ್ಲಿಯೇ
ತೋರಿಸುತ್ತಾರೆ. ಶಿವ ಜಯಂತಿಯನ್ನು ವಿದೇಶಗಳಲ್ಲಿ ಆಚರಿಸುವುದಿಲ್ಲ, ಇಲ್ಲಿಯೇ ಆಚರಿಸುತ್ತಾರೆ.
ರಾವಣನು ಯಾವಾಗ ಬರುತ್ತಾನೆಂದು ನಿಮಗೆ ಗೊತ್ತಿದೆ. ಯಾವಾಗ ದಿನವು ಮುಕ್ತಾಯವಾಗಿ ರಾತ್ರಿಯು
ಪ್ರಾರಂಭವಾಯಿತೋ ಆಗ ರಾವಣನು ಬಂದು ಬಿಟ್ಟನು, ಯಾವುದಕ್ಕೆ ವಾಮ ಮಾರ್ಗವೆಂದು ಹೇಳಲಾಗುತ್ತದೆ.
ಆದ್ದರಿಂದಲೇ ವಾಮ ಮಾರ್ಗದಲ್ಲಿ ಹೋಗುವುದರಿಂದ ದೇವತೆಗಳ ಸ್ಥಿತಿಯು ಏನಾಗಿ ಬಿಡುತ್ತದೆ ಎಂದು
ತೋರಿಸುತ್ತಾರೆ.
ಮಕ್ಕಳು ಸರ್ವೀಸ್ ಮಾಡಬೇಕು. ಯಾರು ಸ್ವಯಂ ಜಾಗೃತರಾಗಿರುವರೋ ಅವರೇ ಅನ್ಯರನ್ನು
ಜಾಗೃತಗೊಳಿಸುತ್ತಾರೆ. ತಂದೆಯಂತೂ ಶುಭ ಚಿಂತಕರಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಇವರಿಗೆ
ಎಲ್ಲಿಯೂ ಮಾಯೆಯ ಏಟು ಬೀಳದಿರಲಿ, ಖಾಯಿಲೆಯಾದರೆ ಸೇವೆ ಮಾಡಲು ಸಾಧ್ಯವಾಗುವುದಿಲ್ಲ. ಜಗದಂಬಾನಿಗೆ
ಜ್ಞಾನದ ಕಳಸವು ಸಿಗುತ್ತದೆ, ಲಕ್ಷ್ಮಿಗೆ ಅಲ್ಲ. ಲಕ್ಷ್ಮಿಗೆ ಧನ ಕೊಟ್ಟರು ಯಾವುದರಿಂದ ಲಕ್ಷ್ಮಿಯು
ದಾನ ಮಾಡುತ್ತಾರೆ. ಆದರೆ ಸತ್ಯಯುಗದಲ್ಲಿ ದಾನ ಮೊದಲಾದವುಗಳನ್ನು ಮಾಡುವುದಿಲ್ಲ. ಯಾವಾಗಲೂ
ದಾನವನ್ನು ಬಡವರಿಗೆ ಕೊಡಲಾಗುತ್ತದೆ ಅಂದಾಗ ಕನ್ಯೆಯರು ಮಂದಿರಗಳಿಗೆ ಹೋಗಿ ಹೀಗೆ ಸರ್ವೀಸ್ ಮಾಡಿದರೆ
ಅನೇಕರು ಬರುತ್ತಾರೆ, ಶಭಾಷ್ ಎನ್ನುತ್ತಾರೆ, ಕಾಲುಗಳಿಗೆ ಬಾಗುತ್ತಾರೆ. ಮಾತೆಯರಿಗೆ ಮಾನ್ಯತೆಯಿದೆ
ಆದ್ದರಿಂದ ಮಾತೆಯರು ಕೇಳಿದರೆ ಪ್ರಫುಲ್ಲಿತರಾಗಿ ಬಿಡುತ್ತಾರೆ. ಪುರುಷರಿಗಂತೂ ತಮ್ಮದೇ ನಶೆ
ಇರುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಈ ಸಾಕಾರಿ ತಂದೆಯು ಬಾಹರ್ಯಾಮಿ ಆಗಿದ್ದಾರೆ.
ಇವರಲ್ಲಿ ಯಾವ ಲಾರ್ಡ್ (ಪರಮಾತ್ಮ) ಇರುವರೋ ಅವರು ದೇವನ ದೇವನಾಗಿದ್ದಾರೆ. ಕೃಷ್ಣನಿಗೆ ಲಾರ್ಡ್
ಕೃಷ್ಣ ಎಂದು ಹೇಳುತ್ತಾರೆ. ಆದರೆ ನಾವು ಹೇಳುತ್ತೇವೆ, ಕೃಷ್ಣನಿಗೂ ದೇವನ ದೇವ ಪರಮಾತ್ಮನಾಗಿದ್ದಾರೆ.
ಅವರಿ ಈ ಮನೆಯನ್ನು (ಬ್ರಹ್ಮಾರವರ ಶರೀರ) ಕೊಡಲಾಗಿದೆ. ಆದ್ದರಿಂದ ಇವರು (ಬ್ರಹ್ಮಾ) ಯಜಮಾನ ಮತ್ತು
ಯಜಮಾನಿ ಇಬ್ಬರೂ ಆಗಿದ್ದಾರೆ. ಇವರು ಪುರುಷನೂ ಆಗಿದ್ದರೆ, ಸ್ತ್ರೀಯೂ ಆಗಿದ್ದಾರೆ ಆಶ್ಚರ್ಯವಲ್ಲವೆ.
ಭೋಗವನ್ನು ಇಡಲಾಗುತ್ತಿದೆ ಅಂದಮೇಲೆ ತಂದೆಗೆ ಎಲ್ಲರ ನೆನಪು-ಪ್ರೀತಿಯನ್ನು ಕೊಡುವುದು. ಮಾಲೀಕ
ತಂದೆಗೆ ಖುಷಿಯಿಂದ ಅಭಿನಂದನೆಗಳನ್ನು ಕಳುಹಿಸೋಣ. ಇದು ಒಂದು ಸಂಪ್ರದಾಯವಾಗಿದೆ. ಹೇಗೆ
ಪ್ರಾರಂಭದಲ್ಲಿ ಸಾಕ್ಷಾತ್ಕಾರವಾಗುತ್ತಿತ್ತೋ ಹಾಗೆಯೇ ಅಂತ್ಯದಲ್ಲಿಯೂ ತಂದೆಯು ಬಹಳ ಖುಷಿ
ಪಡಿಸುತ್ತಾರೆ. ಈ ಅಬುಪರ್ವತಕ್ಕೆ ಮಕ್ಕಳು ಅನೇಕರು ಬರುತ್ತಾರೆ. ಇಲ್ಲಿ ಯಾರು ಇರುತ್ತಾರೆಯೋ ಅವರೇ
ಸಾಕ್ಷಾತ್ಕಾರವನ್ನೂ ಮಾಡುತ್ತಾರೆ. ಒಳ್ಳೆಯದು.
ರಾತ್ರಿ ಕ್ಲಾಸ್
:- 08.04.68
ಈ ಈಶ್ವರೀಯ ಮಿಷನ್ ನಡೆಯುತ್ತಿದೆ. ಯಾರು ನಮ್ಮ ದೇವಿ-ದೇವತಾ ಧರ್ಮದವರಿರುವರೋ ಅವರೇ ಬರುತ್ತಾರೆ.
ಹೇಗೆ ಅವರದು (ಕ್ರಿಶ್ಚಿಯನ್ನರು) ಕ್ರಿಶ್ಚಿಯನ್ನರಾಗಿ ಮಾಡುವ ಮಿಷನ್ ಆಗಿದೆ. ಯಾರು
ಕ್ರಿಶ್ಚಿಯನ್ನರಾಗುತ್ತಾರೆಯೋ ಅವರಿಗೆ ಕ್ರಿಶ್ಚಿಯನ್ ವಂಶದಲ್ಲಿ ಸುಖ ಸಿಗುತ್ತದೆ. ಒಳ್ಳೆಯ ವೇತನ
ಸಿಗುತ್ತದೆ. ಆದ್ದರಿಂದ ಅನೇಕರು ಕ್ರಿಶ್ಚಿಯನ್ನರಾಗಿ ಬಿಟ್ಟಿದ್ದಾರೆ. ಭಾರತವಾಸಿಗಳು ಇಷ್ಟೊಂದು
ವೇತನವನ್ನು ಕೊಡಲು ಸಾಧ್ಯವಿಲ್ಲ. ಇಲ್ಲಿ ಭ್ರಷ್ಟಾಚಾರವು ಬಹಳ ಇದೆ. ಮಧ್ಯದಲ್ಲಿ ಲಂಚವನ್ನು
ತೆಗೆದುಕೊಳ್ಳದಿದ್ದರೆ ನೌಕರಿಯಿಂದಲೂ ತೆಗೆದು ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಏನು
ಮಾಡುವುದೆಂದು ಮಕ್ಕಳು ಕೇಳುತ್ತಾರೆ. ಆಗ ಯುಕ್ತಿಯಿಂದ ಕೆಲಸ ಮಾಡಿ ಅಂತಹದ್ದನ್ನು ಶುಭ ಕಾರ್ಯದಲ್ಲಿ
ತೊಡಗಿಸಿ ಎಂದು ತಂದೆಯು ತಿಳಿಸುತ್ತಾರೆ.
ಇಲ್ಲಿ ಎಲ್ಲರೂ ಓ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿ, ಬಿಡುಗಡೆ ಮಾಡಿ ಮನೆಗೆ
ಕರೆದುಕೊಂಡು ಹೋಗಿ ಎಂದು ತಂದೆಯನ್ನು ಕರೆಯುತ್ತಾರೆ. ಅಂದಮೇಲೆ ಅವಶ್ಯವಾಗಿ ಮನೆಗೆ ಕರೆದುಕೊಂಡು
ಹೋಗುವರಲ್ಲವೆ. ಮನೆಗೆ ಹೋಗುವುದಕ್ಕಾಗಿಯೇ ಇಷ್ಟೊಂದು ಭಕ್ತಿ ಮೊದಲಾದವುಗಳನ್ನು ಮಾಡುತ್ತಾರೆ. ಆದರೆ
ತಂದೆಯು ಯಾವಾಗ ಬರುತ್ತಾರೆಯೋ ಆಗಲೇ ಕರೆದುಕೊಂಡು ಹೋಗುತ್ತಾರೆ. ಭಗವಂತನು ಒಬ್ಬರೇ ಆಗಿದ್ದಾರೆ,
ಎಲ್ಲರಲ್ಲಿಯೂ ಭಗವಂತನು ಬಂದು ಮಾತನಾಡುವುದಿಲ್ಲ. ಅವರು ಬರುವುದೇ ಸಂಗಮದಲ್ಲಿ. ಈಗ ನೀವು ಇಂತಹ
ಮಾತುಗಳನ್ನು ಒಪ್ಪುವುದಿಲ್ಲ. ಮೊದಲು ಒಪ್ಪುತ್ತಿದ್ದಿರಿ ಆದರೆ ಈಗ ಭಕ್ತಿ ಮಾಡುವುದಿಲ್ಲ. ಈಗ ನೀವು
ಹೇಳುತ್ತೀರಿ - ನಾವು ಮೊದಲು ಪೂಜೆ ಮಾಡುತ್ತಿದ್ದೆವು, ಈಗ ತಂದೆಯು ನಮ್ಮನ್ನು ಪೂಜ್ಯ
ದೇವತೆಗಳನ್ನಾಗಿ ಮಾಡಲು ಬಂದಿದ್ದಾರೆ. ಸಿಖ್ಖರಿಗೂ ಸಹ ತಿಳಿಸಿ. ಮನುಷ್ಯರನ್ನು ದೇವತೆಗಳನ್ನಾಗಿ
ಮಾಡಿದರೆನ್ನುವ ಗಾಯನವಿದೆಯಲ್ಲವೆ, ದೇವತೆಗಳ ಮಹಿಮೆಯೂ ಇದೆ ಅಂದಾಗ ದೇವತೆಗಳು ಸತ್ಯಯುಗದಲ್ಲಿಯೇ
ಇರುತ್ತಾರೆ. ಇದು ಕಲಿಯುಗವಾಗಿದೆ, ತಂದೆಯೂ ಸಹ ಸಂಗಮಯುಗದಲ್ಲಿಯೇ ಪುರುಷೋತ್ತಮರಾಗುವ ಶಿಕ್ಷಣವನ್ನು
ಕೊಡುತ್ತಾರೆ. ದೇವತೆಗಳು ಎಲ್ಲರಿಗಿಂತ ಉತ್ತಮರಾಗುತ್ತಾರೆ. ಆದ್ದರಿಂದಲೇ ಅವರನ್ನು ಇಷ್ಟೊಂದು
ಪೂಜಿಸುತ್ತಾರೆ. ಯಾರ ಪೂಜೆಯನ್ನು ಮಾಡುತ್ತಾರೆಯೋ ಅವರು ಅವಶ್ಯವಾಗಿ ಯಾವಾಗಲೋ ಇದ್ದರು, ಈಗಿಲ್ಲ.
ಈ ರಾಜಧಾನಿಯು ಇತ್ತು, ಅದು ಕಳೆದುಹೋಯಿತೆಂದು ತಿಳಿಯುತ್ತಾರೆ. ಈಗ ನೀವು ಗುಪ್ತವಾಗಿದ್ದೀರಿ. ನೀವು
ವಿಶ್ವದ ಮಾಲೀಕರಾಗುತ್ತೀರೆಂದು ಯಾರಿಗಾದರೂ ತಿಳಿದಿದೆಯೆ, ನಿಮಗೆ ತಿಳಿದಿದೆ ಓದಿ ನಾವು ಈ
ರೀತಿಯಾಗುತ್ತೇವೆ, ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಬೇಕು. ತಂದೆಯನ್ನು ಪ್ರೀತಿಯಿಂದ ನೆನಪು
ಮಾಡಬೇಕಾಗಿದೆ. ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಂದರೆ ನೆನಪನ್ನೇಕೆ
ಮಾಡಬಾರದು! ನಂತರ ದೈವೀ ಗುಣಗಳು ಇರಬೇಕು. ಒಳ್ಳೆಯದು.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆ ಹಾಗೂ ದಾದಾರವರ ನೆನಪು-ಪ್ರೀತಿ ಹಾಗೂ ಶುಭರಾತ್ರಿ ಹಾಗೂ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಈ
ಪ್ರಪಂಚದಲ್ಲಿ ತಮ್ಮ ಹೊರಗಿನ ಶೋ ಮಾಡಬಾರದು. ಸಂಪೂರ್ಣ ಉತ್ತೀರ್ಣರಾಗಲು ಗುಪ್ತ ಪುರುಷಾರ್ಥ
ಮಾಡುತ್ತಿರಬೇಕಾಗಿದೆ.
2. ಈ ರಂಗು ರಂಗಿನ ಪ್ರಪಂಚದಲ್ಲಿ ಸಿಕ್ಕಿ ಹಾಕಿಕೊಳ್ಳಬಾರದು. ನಷ್ಟಮೋಹಿಗಳಾಗಿ ತಂದೆಯ ಹೆಸರನ್ನು
ಪ್ರಸಿದ್ಧಗೊಳಿಸುವ ಸೇವೆ ಮಾಡಬೇಕು. ಎಲ್ಲರ ಸೌಭಾಗ್ಯವನ್ನು ಬೆಳಗಿಸಬೇಕಾಗಿದೆ.
ವರದಾನ:
ಸದಾ ಖುಶಿಯ
ಟಾನಿಕ್ ಅನ್ನು ತಿನ್ನಿಸುವಂತಹ ಖುಶಿಯಾಗಿರುವಂತಹ, ಅಧೃಷ್ಠಶಾಲಿ ಭವ.
ನೀವು ಮಕ್ಕಳ ಬಳಿ
ಸತ್ಯವಾದ ಅವಿನಾಶಿ ಧನವಿದೆ. ಆದ್ದರಿಂದ ಎಲ್ಲರಿಗಿಂತಲೂ ಸಾಹುಕಾರರು ನೀವಾಗಿರುವಿರಿ. ಒಣ ರೊಟ್ಟಿ
ಇದ್ದರೂ ಸಹಾ ತಿನ್ನುವಿರಿ ಆದರೆ ಖುಶಿಯ ಟಾನಿಕ್ ಆ ಒಣ ರೊಟ್ಟಿಯಲ್ಲಿ ತುಂಬಿದೆ, ಅದರ ಮುಂದೆ ಬೇರೆ
ಯಾವುದೂ ಟಾನಿಕ್ಇಲ್ಲ. ಎಲ್ಲಕ್ಕಿಂತಲೂ ಒಳ್ಳೆಯ ಟಾನಿಕ್ ತಿನ್ನುವಂತಹ, ಸುಖದ ರೋಟಿ ತಿನ್ನುವಂತಹವರು
ನೀವಾಗಿರುವಿರಿ. ಆದ್ದರಿಂದ ಸದಾ ಖುಶಿಯಿಂದಿರುವಿರಿ. ಆದ್ದರಿಂದ ಈ ರೀತಿ ಖುಶಿಯಿಂದಿರಿ ಅದನ್ನು
ಬೇರೆಯವರು ನೋಡಿ ಖುಶಿಯಾಗಿ ಬಿಡಬೇಕು. ಆಗ ಹೇಳಲಾಗುವುದು ಅಧೃಷ್ಠಶಾಲಿ ಆತ್ಮಗಳು.
ಸ್ಲೋಗನ್:
ಜ್ಞಾನ ಪೂರ್ಣರು
ಅವರೆ ಆಗಿದ್ದಾರೆ ಯಾರ ಒಂದು ಸಂಕಲ್ಪ ಅಥವಾ ಮಾತು ವ್ಯರ್ಥವಾಗಿ ಹೋಗುವುದಿಲ್ಲ.