12/10/18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈಗ
ಘೋರ ಅಂಧಕಾರ, ಭಯಾನಕ ರಾತ್ರಿಯು ಮುಕ್ತಾಯವಾಗುತ್ತಿದೆ, ನೀವು ಹಗಲಿಗೆ ಹೋಗಬೇಕಾಗಿದೆ, ಇದು
ಬ್ರಹ್ಮನ ಬೇಹದ್ದಿನ ದಿನ ಮತ್ತು ರಾತ್ರಿಯ ಕಥೆಯಾಗಿದೆ”
ಪ್ರಶ್ನೆ:
ಸೆಕೆಂಡಿನಲ್ಲಿ
ಜೀವನ್ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಹಾಗೂ ವಜ್ರ ಸಮಾನ ಜೀವನವನ್ನು ಮಾಡಿಕೊಳ್ಳುವ
ಆಧಾರವೇನಾಗಿದೆ?
ಉತ್ತರ:
ಸತ್ಯ ಗೀತೆ. ಇದು
ಶ್ರೀಮತ್ ಭಗವಾನುವಾಚವಾಗಿದೆ, ತಂದೆಯು ನಿಮಗೆ ಸಮ್ಮುಖದಲ್ಲಿ ಯಾವ ಆದೇಶವನ್ನು ನೀಡುತ್ತಿದ್ದಾರೆಯೋ
ಇದೇ ಸತ್ಯ ಗೀತೆಯಾಗಿದೆ, ಇದರಿಂದಲೇ ನಿಮಗೆ ಸೆಕೆಂಡಿನಲ್ಲಿ ಜೀವನ್ಮುಕ್ತಿ ಪದವಿಯ
ಪ್ರಾಪ್ತಿಯಾಗುತ್ತದೆ. ನೀವು ವಜ್ರ ಸಮಾನರಾಗುತ್ತೀರಿ. ಆ ಗೀತೆಯಿಂದಂತೂ ಭಾರತವು ಕವಡೆಯ
ಸಮಾನವಾಗಿದೆ. ಏಕೆಂದರೆ ತಂದೆಯನ್ನು ಮರೆತು ಗೀತೆಯನ್ನು ಖಂಡನೆ ಮಾಡಿ ಬಿಟ್ಟಿದ್ದಾರೆ.
ಗೀತೆ:
ರಾತ್ರಿಯ
ಪ್ರಯಾಣಿಕನೇ ಸುಸ್ತಾಗಬೇಡ..
ಓಂ ಶಾಂತಿ.
ಈ ಗೀತೆಯನ್ನು ನೀವು
ಮಕ್ಕಳು ರಚಿಸಿಲ್ಲ, ಇದನ್ನು ಚಲನ ಚಿತ್ರದವರು ಮಾಡಿದ್ದಾರೆ. ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ.
ಪ್ರತಿಯೊಂದು ಮಾತಿನ ಯಥಾರ್ಥ ಅರ್ಥವನ್ನು ತಿಳಿದುಕೊಳ್ಳದೇ ಇರುವುದರಿಂದ ಅದು ಅನರ್ಥವಾಗಿ
ಬಿಡುತ್ತದೆ. ಹಾಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳಿಗೆ ಶ್ರೀಮತವು
ಸಿಕ್ಕಿದೆ. ಯಾರದು? ಭಗವಂತನ ಶ್ರೀಮತವು ಸಿಕ್ಕಿದೆ. ಭಗವಂತನನ್ನೇ ಭಕ್ತರು
ತಿಳಿದುಕೊಂಡಿಲ್ಲವೆಂದಮೇಲೆ ಆ ಭಕ್ತರ ಸದ್ಗತಿಯಾಗಲು ಹೇಗೆ ಸಾಧ್ಯ. ಭಕ್ತರ ರಕ್ಷಕ
ಭಗವಂತನಾಗಿದ್ದಾರೆ. ರಕ್ಷಣೆಯನ್ನು ಭಗವಂತನೊಂದಿಗೆ ಕೇಳುತ್ತಾರೆಂದರೆ ಅವಶ್ಯವಾಗಿ ಯಾವುದೋ
ದುಃಖವಿದೆ. ನಮ್ಮ ರಕ್ಷಣೆ ಮಾಡಿ ಎಂದು ಅನೇಕರು ಹಾಡುತ್ತಾರೆ. ಆದರೆ ಭಗವಂತ ಯಾರು, ಯಾವುದರಿಂದ
ರಕ್ಷಿಸುತ್ತಾರೆ ಎಂದು ಸ್ವಲ್ಪವೂ ತಿಳಿದುಕೊಂಡಿಲ್ಲ. ಭಕ್ತರು ಅಥವಾ ಮಕ್ಕಳು ತನ್ನ ತಂದೆಯನ್ನು
ಅರಿತುಕೊಳ್ಳದಿರುವ ಕಾರಣ ಎಷ್ಟೊಂದು ದುಃಖಿಯಾಗಿದ್ದಾರೆ. ಈಗ ನೀವು ಮಕ್ಕಳು ಇದರ ಅರ್ಥವನ್ನು
ತಿಳಿದುಕೊಂಡಿದ್ದೀರಿ. ಈಗ ಘೋರ ಅಂಧಕಾರ ಭಯಾನಕ ರಾತ್ರಿಯಾಗಿದೆ, ಅರ್ಧಕಲ್ಪದ ರಾತ್ರಿಯಾಗಿದೆ.
ರಾತ್ರಿಯನ್ನು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು ಯಾವುದೇ ವಿದ್ವಾಂಸ, ಆಚಾರ್ಯ, ಪಂಡಿತರು
ತಿಳಿದುಕೊಂಡಿಲ್ಲ. ಹಾಗೆ ನೋಡಿದರೆ ರಾತ್ರಿಯಲ್ಲಿ ಮಲಗಬೇಕು, ದಿನದಲ್ಲಿ ಏಳಬೇಕೆಂಬುದನ್ನು
ಪ್ರಾಣಿಗಳೂ ಅರಿತುಕೊಂಡಿರುತ್ತವೆ. ಪಕ್ಷಿಗಳೂ ಸಹ ರಾತ್ರಿಯ ಸಮಯದಲ್ಲಿ ಮಲಗಿ ಬಿಡುತ್ತವೆ.
ಮುಂಜಾನೆಯಾಗುತ್ತಿದ್ದಂತೆಯೇ ಹಾರ ತೊಡಗುತ್ತವೆ. ಆ ದಿನ-ರಾತ್ರಿಯಂತೂ ಸರ್ವೇ ಸಾಮಾನ್ಯವಾಗಿದೆ.
ಆದರೆ ಇದು ಬ್ರಹ್ಮಾರವರ ಬೇಹದ್ದಿನ ರಾತ್ರಿ ಮತ್ತು ಬೇಹದ್ದಿನ ದಿನವಾಗಿದೆ. ಬೇಹದ್ದಿನ ದಿನವು
ಸತ್ಯಯುಗ, ತ್ರೇತಾ ಮತ್ತು ರಾತ್ರಿಯು ದ್ವಾಪರ-ಕಲಿಯುಗವಾಗಿದೆ. ಅರ್ಧ-ಅರ್ಧವಿರಬೇಕಲ್ಲವೆ. ದಿನದ
ಆಯಸ್ಸೂ ಸಹ 2500 ವರ್ಷಗಳಾಗಿವೆ, ಈ ದಿನ-ರಾತ್ರಿ ಕುರಿತು ಯಾರಿಗೂ ಗೊತ್ತಿಲ್ಲ. ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ರಾತ್ರಿಯು ಮುಕ್ತಾಯವಾಗುತ್ತದೆ ಅರ್ಥಾತ್ 84 ಜನ್ಮಗಳು ಪೂರ್ಣವಾಗುತ್ತವೆ
ಅಥವಾ ನಾಟಕದ ಚಕ್ರವು ಮುಕ್ತಾಯವಾಗುತ್ತದೆ ನಂತರ ದಿನವು ಪ್ರಾರಂಭವಾಗುತ್ತದೆ. ರಾತ್ರಿಯನ್ನು ದಿನ
ಮತ್ತು ದಿನವನ್ನು ರಾತ್ರಿಯನ್ನಾಗಿ ಮಾಡುವವರು ಯಾರೆಂಬುದನ್ನು ಯಾರೂ ತಿಳಿದುಕೊಂಡಿಲ್ಲ.
ಭಗವಂತನನ್ನೇ ತಿಳಿದುಕೊಂಡಿಲ್ಲವೆಂದಮೇಲೆ ಇವೆಲ್ಲಾ ಮಾತುಗಳನ್ನು ತಿಳಿದುಕೊಳ್ಳಲು ಹೇಗೆ ಸಾಧ್ಯ!
ಮನುಷ್ಯರು ಪೂಜೆ ಮಾಡುತ್ತಾರೆ ಆದರೆ ಇವರು ಯಾರು, ನಾವು ಯಾರ ಪೂಜೆಯನ್ನು ಮಾಡುತ್ತೇವೆ ಎಂದು
ತಿಳಿದುಕೊಂಡಿಲ್ಲ, ತಂದೆಯು ತಿಳಿಸುತ್ತಾರೆ. ಮೊಟ್ಟ ಮೊದಲ ಮುಖ್ಯ ಮಾತು ಗೀತೆಯನ್ನು ಖಂಡನೆ
ಮಾಡಿರುವುದಾಗಿದೆ. ಶ್ರೀಮತ್ಭಗವದ್ಗೀತೆಯೆಂದು ಹೇಳುತ್ತಾರೆ. ಗೀತೆಯ ಪತಿ ಭಗವಂತನಾಗಿದ್ದಾರೆಯೇ
ಹೊರತು ಯಾವುದೇ ಮನುಷ್ಯರಲ್ಲ. ಬ್ರಹ್ಮಾ-ವಿಷ್ಣು-ಶಂಕರನನ್ನು ದೇವತೆಗಳೆಂದು ಕರೆಯಲಾಗುತ್ತದೆ ಮತ್ತು
ಸತ್ಯಯುಗದ ಮನುಷ್ಯರನ್ನು ದೈವೀ ಗುಣವುಳ್ಳವರೆಂದು ಹೇಳಲಾಗುತ್ತದೆ. ದೈವೀ ಧರ್ಮದ
ಶ್ರೇಷ್ಠಾಚಾರಿಗಳಿಗೆ ದೈವೀ ಗುಣದವರೆಂದು ಹೇಳುತ್ತಾರೆ. ಭಾರತದ ಮನುಷ್ಯರು
ಶ್ರೇಷ್ಠಾಚಾರಿಗಳಾಗಿದ್ದರು, ಅವರೇ ನಂತರ ಅಸುರೀ ಗುಣವುಳ್ಳಂತಹವರಾಗಿ ಬಿಟ್ಟಿದ್ದಾರೆ. ನಾಲ್ಕು
ಮುಖ್ಯ ಧರ್ಮ ಶಾಸ್ತ್ರಗಳಿವೆ ಮತ್ತ್ಯಾವುದೂ ಧರ್ಮ ಶಾಸ್ತ್ರಗಳಿಲ್ಲ. ಒಂದುವೇಳೆ ಇದ್ದರೂ ಸಹ ಬಹಳ
ಚಿಕ್ಕ-ಚಿಕ್ಕ ಮಠಗಳನ್ನು ಸ್ಥಾಪನೆ ಮಾಡುತ್ತಾರೆ. ಹೇಗೆ ಸನ್ಯಾಸಿಗಳ ಮಠ ಹಾಗೂ ಬೌದ್ಧಿಯರ ಮಠವಿದೆ.
ಬುದ್ಧನು ಬೌದ್ಧ ಧರ್ಮವನ್ನು ಸ್ಥಾಪನೆ ಮಾಡಿದನು. ನಮ್ಮದು ಇಂತಹ ಧರ್ಮ ಶಾಸ್ತ್ರವೆಂದು ಅವರು
ಹೇಳುತ್ತಾರೆ. ಈಗ ಭಾರತವಾಸಿಗಳ ಧರ್ಮ ಶಾಸ್ತ್ರವು ಒಂದೇ ಆಗಿದೆ. ಸತ್ಯಯುಗೀ ದೇವಿ-ದೇವತಾ ಧರ್ಮ
ಶಾಸ್ತ್ರವು ಒಂದೇ ಆಗಿದೆ ಅದನ್ನು ಶ್ರೀಮತ್ಭಗವದ್ಗೀತೆಯೆಂದು ಹೇಳಲಾಗುತ್ತದೆ. ಗೀತಾ ಮಾತಾ, ಅದರ
ರಚಯಿತ ಪರಮಪಿತ ಪರಮಾತ್ಮನಾಗಿದ್ದಾರೆ. ಕೃಷ್ಣನ ಆತ್ಮವು ಯಾವಾಗ 84 ಜನ್ಮಗಳು ಪೂರ್ಣ ಮಾಡುತ್ತದೆಯೋ
ಆಗ ಗೀತೆಯ ಭಗವಂತ, ಜ್ಞಾನಸಾಗರ, ಪರಮಪಿತ ಪರಮಾತ್ಮನಿಂದ ಸಹಜ ರಾಜಯೋಗ ಮತ್ತು ಜ್ಞಾನವನ್ನು ಕಲಿತು
ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಇಂತಹ ಶ್ರೇಷ್ಠಾತಿ ಶ್ರೇಷ್ಠ ಧರ್ಮ ಶಾಸ್ತ್ರವನ್ನೇ ಖಂಡನೆ
ಮಾಡಿ ಬಿಟ್ಟಿದ್ದಾರೆ. ಈ ಕಾರಣದಿಂದಲೇ ಭಾರತವು ಕವಡೆಯ ಸಮಾನವಾಗಿದೆ. ಗೀತೆಯನ್ನು ಖಂಡನೆ
ಮಾಡಿರುವುದೂ ಸಹ ನಾಟಕದಲ್ಲಿ ಮೊಟ್ಟ ಮೊದಲನೇ ದೊಡ್ಡ ತಪ್ಪಾಗಿದೆ. ಈಗ ತಂದೆಯು ಯಾವ ಗೀತೆಯನ್ನು
ತಿಳಿಸುತ್ತಿದ್ದಾರೆಯೋ ಅದು ಹೊರ ಬರಬೇಕು. ಸತ್ಯ ಗೀತೆಯನ್ನು ಸರ್ಕಾರವು ಮುದ್ರಿಸಬೇಕು. ಇದು
ಶ್ರೀಮತ್ಭಗವಾನುವಾಚವಾಗಿದೆ. ಮಕ್ಕಳ ಪ್ರತಿ ತಂದೆಯು ಆದೇಶ ನೀಡುತ್ತಾರೆ – ಸಾರ ರೂಪದಲ್ಲಿ
ಚೆನ್ನಾಗಿ ಬರೆಯಬೇಕು. ನಿಮಗೆ ಗೊತ್ತಿದೆ – ಸತ್ಯ ಗೀತೆಯಿಂದ ಸೆಕೆಂಡಿನಲ್ಲಿ ಜೀವನ್ಮುಕ್ತಿಯು
ಸಿಗುತ್ತದೆ. ತಂದೆಯ ಮಕ್ಕಳಾಗಿ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಬೀಜ, ವೃಕ್ಷ ಮತ್ತು
ಡ್ರಾಮಾದ ಚಕ್ರವನ್ನು ತಿಳಿಸಬೇಕಾಗಿದೆ. ಸತ್ಯಯುಗದ ಆದಿಯು ಸತ್ಯವಾಗಿದೆ. ಇರುವುದೂ ಸತ್ಯ ಮತ್ತು
ಬರುವುದೂ ಸತ್ಯವಾಗಿದೆ ಎಂದು ಹೇಳುತ್ತಾರೆ. ವೃಕ್ಷವನ್ನು ಅರಿತುಕೊಳ್ಳುವುದೂ ಸಹ ಸಹಜವಾಗಿದೆ. ಇದರ
ಬೀಜ ಮೇಲಿದ್ದಾರೆ, ಇದು ವಿಭಿನ್ನ ಧರ್ಮಗಳ ವೃಕ್ಷವಾಗಿದೆ. ಇದರಲ್ಲಿ ಎಲ್ಲರೂ ಬಂದು ಬಿಟ್ಟರು ಬಾಕಿ
ಚಿಕ್ಕ-ಚಿಕ್ಕ ರೆಂಬೆ-ಕೊಂಬೆಗಳು ಬಹಳ ಇವೆ, ಅನೇಕ ಮಠ ಪಂಥಗಳಿವೆ. ಭಾರತದ ಆದಿ ಸನಾತನ ದೇವಿ-ದೇವತಾ
ಧರ್ಮವಾಗಿದೆ. ಅದನ್ನು ಯಾರು ಸ್ಥಾಪನೆ ಮಾಡಿದರು? ಭಗವಂತ. ಯಾವುದೇ ಮನುಷ್ಯರು ಮಾಡಿಲ್ಲ,
ಶ್ರೀಕೃಷ್ಣನು ದೈವೀ ಗುಣವನ್ನುಳ್ಳ ಮನುಷ್ಯನಾಗಿದ್ದನು. ಅವರು 84 ಜನ್ಮಗಳನ್ನು ಪೂರ್ಣ ಮಾಡಿ ಈಗ
ಅಂತಿಮ ಜನ್ಮದಲ್ಲಿದ್ದಾರೆ. ಸೂರ್ಯವಂಶಿ, ಚಂದ್ರವಂಶಿ, ವೈಶ್ಯವಂಶಿಯರಾಗುತ್ತಾ - ಆಗುತ್ತಾ ಕಲೆಗಳು
ಕಡಿಮೆಯಾಗುತ್ತಾ ಹೋಗುತ್ತವೆ. ಸೂರ್ಯವಂಶಿ ರಾಜಧಾನಿಯು ಯಾವುದು ಸತ್ಯಯುಗದಲ್ಲಿತ್ತು,
ಶ್ರೇಷ್ಠಾಚಾರಿಯಾಗಿತ್ತೋ ಅದೇ ಕಲಿಯುಗದಲ್ಲಿ ಈಗ ಭ್ರಷ್ಟಾಚಾರಿಯಾಗಿದೆ. ಈಗ ಪುನಃ
ಶ್ರೇಷ್ಠಾಚಾರಿಯಾಗುತ್ತಿದೆ. ಶ್ರೇಷ್ಠಾತಿ ಶ್ರೇಷ್ಠ ಪಾತ್ರವು ಯಾರದ್ದಾಗಿದೆ ಎಂದು ನಿಮ್ಮ
ಬುದ್ಧಿಯಲ್ಲಿದೆ. ಈಗ ನೀವು ತಿಳಿದುಕೊಂಡಿದ್ದೀರಿ. ಶಿವಾಯ ನಮಃ ಮುಖ್ಯವಾಗಿದೆ. ತಂದೆಯದು ಯಾವ
ಮಹಿಮೆಯಿದೆಯೋ ಅದನ್ನು ಬ್ರಹ್ಮಾ-ವಿಷ್ಣು-ಶಂಕರರಿಗೆ ಹೇಳಲು ಸಾಧ್ಯವಿಲ್ಲ. ರಾಷ್ಟ್ರಪತಿಯ
ಬಿರುದನ್ನು ಪ್ರಧಾನ ಮಂತ್ರಿಗೆ ಅಥವಾ ಮತ್ತ್ಯಾರಿಗಾದರೂ ಆ ಬಿರುದನ್ನು ಕೊಡಲಾಗುತ್ತದೆಯೇ? ಇಲ್ಲ.
ಬೇರೆ-ಬೇರೆ ಬಿರುದುಗಳಿವೆಯಲ್ಲವೇ. ಎಲ್ಲರೂ ಒಂದಾಗಲು ಸಾಧ್ಯವಿಲ್ಲ. ನೀವು ಮಕ್ಕಳಿಗೆ ಈಗ ಬುದ್ಧಿಯು
ಸಿಕ್ಕಿದೆ. ನಿಮಗೆ ಗೊತ್ತಿದೆ - ಕ್ರಿಸ್ತನಿಗೂ ಸಹ, ಕ್ರಿಶ್ಚಿಯನ್ ಧರ್ಮ ಸ್ಥಾಪನೆ ಮಾಡುವ ಪಾತ್ರವು
ಸಿಕ್ಕಿದೆ. ಆತ್ಮವಂತೂ ಬಿಂದುವಾಗಿದೆ, ಆ ಆತ್ಮನಲ್ಲಿ ಪಾತ್ರವು ತುಂಬಲ್ಪಟ್ಟಿದೆ. ಕ್ರಿಶ್ಚಿಯನ್
ಧರ್ಮದ ಸ್ಥಾಪನೆ ಮಾಡಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ, ಪಾಲನೆ ಮಾಡುತ್ತಾ
ಸತೋ-ರಜೋ-ತಮೋನಲ್ಲಿ ಬರಲೇಬೇಕಾಗಿದೆ. ಅಂತ್ಯದಲ್ಲಿ ಇಡೀ ವೃಕ್ಷವು ಜಡ ಜಡೀಭೂತವಾಗಲೇ ಬೇಕಾಗಿದೆ.
ಪ್ರತಿಯೊಬ್ಬರಿಗೆ ಅಷ್ಟಷ್ಟು ಸಮಯದ ಪಾತ್ರವು ಸಿಕ್ಕಿದೆ. ಬುದ್ಧನು ಎಷ್ಟು ಸಮಯ ಪಾಲನೆ
ಮಾಡಬೇಕಾಗಿದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಭಿನ್ನ-ಭಿನ್ನ ನಾಮ-ರೂಪಗಳಲ್ಲಿ ಜನ್ಮ
ತೆಗೆದುಕೊಳ್ಳುತ್ತಿರುತ್ತಾರೆ.
ಈಗ ನಿಮ್ಮ ಬುದ್ಧಿಯನ್ನು ತಂದೆಯು ಎಷ್ಟು ವಿಶಾಲ ಬುದ್ಧಿಯನ್ನಾಗಿ ಮಾಡುತ್ತಾರೆ. ಆದರೆ ಕೆಲವರಂತೂ
ಶಿವ ತಂದೆಯನ್ನು ನೆನಪೇ ಮಾಡುವುದಿಲ್ಲ. ಬೇಹದ್ದಿನ ತಂದೆಯು ಬೇಹದ್ದಿನ ಸ್ವರ್ಗದ ಆಸ್ತಿಯನ್ನು
ಕೊಡುತ್ತಾರೆ. ಇದನ್ನೂ ಸಹ ನೀವು ತಿಳಿಸುವುದಿಲ್ಲ. ತಂದೆಯು ಬಹಳ ಬಾರಿ ತಿಳಿಸಿದ್ದಾರೆ, ಆತ್ಮದಲ್ಲಿ
ಅವಿನಾಶಿ ಪಾತ್ರವು ನೊಂದಾಯಿಸಲ್ಪಟ್ಟಿದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದು
ತೆಗೆದುಕೊಳ್ಳಬೇಕಾಗಿದೆ. ಇವು ತಿಳಿದುಕೊಳ್ಳುವ ಎಷ್ಟೊಂದು ಗುಹ್ಯ ಮಾತುಗಳಾಗಿವೆ. ಯಾರು ಶಾಲೆಯಲ್ಲಿ
ಪ್ರತಿನಿತ್ಯ ಓದುತ್ತಾರೆಯೋ ಅವರೇ ಅರಿತುಕೊಳ್ಳುತ್ತಾರೆ. ಕೆಲವರಂತೂ ನಡೆಯುತ್ತಾ-ನಡೆಯುತ್ತಾ
ಸುಸ್ತಾಗಿ ಬಿಡುತ್ತಾರೆ. ನೀವು ಮಾತಾಪಿತ ನಾನು ನಿಮ್ಮ ಬಾಲಕ..... ಎಂದು ಹಾಡುತ್ತಾರೆ. ತಂದೆಯು
ತಿಳಿಸುತ್ತಾರೆ - ನಾನು ನಿಮಗೆ ಸ್ವರ್ಗದ ಅಪಾರ ಸುಖವನ್ನು ಕೊಡುವ ಪುರುಷಾರ್ಥ ಮಾಡಿಸುತ್ತಿದ್ದೇನೆ
ನೀವು ಸುಸ್ತಾಗಬಾರದು. ಇಷ್ಟು ಶ್ರೇಷ್ಠಾತಿ ಶ್ರೇಷ್ಠ ವಿದ್ಯೆಯನ್ನು ಓದುವುದನ್ನೇ ನೀವು ಬಿಟ್ಟು
ಬಿಡುತ್ತೀರಿ. ಕೆಲವರಂತೂ ವಿದ್ಯೆಯನ್ನು ಬಿಟ್ಟು ವಿಕಾರದಲ್ಲಿ ಹೊರಟು ಹೋಗುತ್ತಾರೆ. ಹೇಗಿದ್ದರೋ
ಹಾಗೆಯೇ ಆಗಿ ಬಿಡುತ್ತಾರೆ. ನಡೆಯುತ್ತಾ-ನಡೆಯುತ್ತಾ ಬೀಳುತ್ತಾರೆಂದರೆ ಮತ್ತೇನಾಗುವುದು! ಭಲೆ
ಅಲ್ಲಿ ಸುಖದಲ್ಲಿರುತ್ತಾರೆ. ಆದರೆ ಪದವಿಯಲ್ಲಂತೂ ಅಂತರವಿರುತ್ತದೆಯಲ್ಲವೆ. ಇಲ್ಲಿ ಎಲ್ಲರೂ
ದುಃಖಿಯಾಗಿದ್ದಾರೆ, ಅಲ್ಲಿ ರಾಜ, ಪ್ರಜೆ ಎಲ್ಲರಿಗೂ ಸುಖವಿರುತ್ತದೆ. ಆದರೂ ಸಹ ಶ್ರೇಷ್ಠ
ಪದವಿಯನ್ನೇ ಪಡೆಯಬೇಕಲ್ಲವೆ. ವಿದ್ಯೆಯನ್ನು ಬಿಟ್ಟರೆ ನೀವು ಯೋಗ್ಯರಲ್ಲವೆಂದು ಮಾತ್ಪಿತಾರವರು
ಹೇಳುತ್ತಾರೆ. ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಲವು
ಮಕ್ಕಳು ಸುಸ್ತಾಗಿ ಬಿಡುತ್ತಾರೆ. ನಡೆಯುತ್ತಾ-ನಡೆಯುತ್ತಾ ಮಾಯೆಯು ಆಕ್ರಮಣ ಮಾಡುತ್ತದೆಯೆಂದರೆ
ಪುನಃ ಹಿಂತಿರುಗಿ ಹೋಗುತ್ತಾರೆ. ಏನನ್ನು ಜಮಾ ಮಾಡಿಕೊಂಡರೋ ಅದೂ ಸಹ ಇಲ್ಲದಂತಾಗುತ್ತದೆ ಅಂದಮೇಲೆ
ಅವರೇನಾಗಬಹುದು. ಸ್ವರ್ಗದಲ್ಲಿ ಭಲೆ ಹೋಗುತ್ತಾರೆ ಆದರೆ ತುಂಬಾ ಸಾಧಾರಣ ಪ್ರಜೆಗಳಾಗುತ್ತಾರೆ.
ಆದ್ದರಿಂದ ತಂದೆಯು ತಿಳಿಸುತ್ತಾರೆ - ನನ್ನವರಾಗಿಯೂ ಒಂದುವೇಳೆ ಸುಸ್ತಾಗಿ ಕುಳಿತುಕೊಳ್ಳುತ್ತೀರಿ
ಅಥವಾ ದ್ರೋಹಿಗಳಾಗುವಿರೆಂದರೆ ಹೋಗಿ ಪ್ರಜೆಗಳಲ್ಲಿಯೂ ಚಂಡಾಲರಾಗುತ್ತೀರಿ. ಎಲ್ಲರೂ ಬೇಕಲ್ಲವೆ.
ಸ್ವರ್ಗದ ಮಾಲೀಕರಾಗುತ್ತಾ-ಆಗುತ್ತಾ ಒಂದುವೇಳೆ ವಿದ್ಯೆಯನ್ನು ಬಿಟ್ಟು ಬಿಟ್ಟರೆ ಅವರಂತಹ ಮಹಾನ್
ಮೂರ್ಖರು ಪ್ರಪಂಚದಲ್ಲಿ ಮತ್ತ್ಯಾರೂ ಇಲ್ಲ. ನೀವು ಮಾತಾಪಿತ ನಾನು ನಿಮ್ಮ ಬಾಲಕ.... ನಿಮ್ಮ
ಕೃಪೆಯಿಂದ ಅಪಾರ ಸುಖವು ಸಿಗುತ್ತದೆ ಅಂದಾಗ ಕೃಪೆ ತೋರಿ ಎಂದು ಬರೆಯುತ್ತಾರೆ. ಇದಕ್ಕೆ ತಂದೆಯು
ತಿಳಿಸುತ್ತಾರೆ - ಇದರಲ್ಲಿ ಕೃಪೆಯ ಮಾತೇನಿಲ್ಲ, ನಾನು ಶಿಕ್ಷಕನಾಗಿದ್ದೇನೆ ಅಂದಮೇಲೆ ನಾನಂತೂ
ಓದಿಸುವೆನು, ನೀವು ಒಳ್ಳೆಯ ಅಂಕಗಳಿಂದ ಉತ್ತೀರ್ಣರಾಗುವ ಪುರುಷಾರ್ಥ ಮಾಡಿ. ಬಾಕಿ ನಾನು ಕುಳಿತು
ಎಲ್ಲರ ಮೇಲೆ ಆಶೀರ್ವಾದ ಮಾಡುತ್ತೇನೆಯೇ! ನೀವು ಯೋಗದಲ್ಲಿದ್ದಾಗ ಶಕ್ತಿ ಸಿಗುತ್ತಿರುವುದು. ಎಲ್ಲರೂ
ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಿಲ್ಲ ಅಂದರೆ ಒಬ್ಬರು ಇನ್ನೊಬ್ಬರ ತಲೆಯ ಮೇಲೆ
ಕುಳಿತುಕೊಳ್ಳುವರೆ! ಅಂದಾಗ ಮುಖ್ಯವಾಗಿ ನಾಲ್ಕು ಧರ್ಮಗಳಿವೆ, ಶಾಸ್ತ್ರಗಳೂ ನಾಲ್ಕು ಇವೆ, ಅದರಲ್ಲಿ
ಮುಖ್ಯವಾಗಿ ಗೀತೆಯಾಗಿದೆ ಉಳಿದೆಲ್ಲವೂ ಗೀತೆಯ ಮಕ್ಕಳಾಗಿವೆ. ಆಸ್ತಿಯಂತೂ ಮಾತಾಪಿತರಿಂದಲೇ
ಸಿಗುತ್ತದೆ. ಈಗ ತಂದೆಯು ಸಮ್ಮುಖದಲ್ಲಿ ತಿಳಿಸುತ್ತಿದ್ದಾರೆ - ಕೇವಲ ಗೀತೆಯನ್ನು ಓದಿದರೆ ರಾಜರಿಗೂ
ರಾಜರಾಗಿ ಬಿಡುತ್ತೀರೇನು? ಈ ಬ್ರಹ್ಮಾರವರಂತೂ ಆ ಗೀತೆಯನ್ನು ಓದಿದ್ದಾರೆ. ಆದರೆ ಅದರಿಂದೇನೂ
ಆಗುವುದಿಲ್ಲ. ಏಕೆಂದರೆ ಇವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ, ಆದ್ದರಿಂದ ನೀವು ಪುರುಷಾರ್ಥ
ಮಾಡಿ 16 ಕಲಾ ಸಂಪೂರ್ಣರಾಗಬೇಕಾಗಿದೆ. ಈಗಂತೂ ನಿಮ್ಮಲ್ಲಿ ಯಾವುದೇ ಕಲೆಗಳಾಗಲಿ, ಗುಣಗಳಾಗಲಿ
ಉಳಿದಿಲ್ಲ. ಆದ್ದರಿಂದಲೇ ನಾನು ನಿರ್ಗುಣನಲ್ಲಿ ಯಾವುದೇ ಗುಣಗಳಿಲ್ಲ. ತಾವೇ ದಯೆ ತೋರಿಸಿ...
ನಮ್ಮನ್ನು 16 ಕಲಾ ಸಂಪೂರ್ಣರನ್ನಾಗಿ ಮಾಡಿ, ನಾವು ಏನಾಗಿದ್ದೇವೋ ಪುನಃ ಹಾಗೆಯೇ ಮಾಡಿ ಎಂದು
ಹಾಡುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಮಗೆ ತಂದೆಯು ಸಮ್ಮುಖದಲ್ಲಿ ಬಂದು
ತಿಳಿಸುತ್ತಿದ್ದಾರೆ. ಒಂದು ನಿರ್ಗುಣ ಸಂಸ್ಥೆಯನ್ನೂ ಮಾಡಿದ್ದಾರೆ ಆದರೆ ನಿರ್ಗುಣ, ನಿರಾಕಾರನ
ಅರ್ಥವನ್ನೂ ತಿಳಿದುಕೊಂಡಿಲ್ಲ. ಶಿವನಿಗೂ ಆಕಾರವಿದೆ. ಹೆಸರಿದೆಯೆಂದರೆ ಅವಶ್ಯವಾಗಿ
ವಸ್ತುವಿರುತ್ತದೆಯಲ್ಲವೆ. ಆತ್ಮವು ಇಷ್ಟೂ ಸೂಕ್ಷ್ಮವಾಗಿದೆ, ಅದಕ್ಕೆ ಹೆಸರೂ ಇದೆ.
ಬ್ರಹ್ಮ್ಮಹಾತತ್ವ, ಎಲ್ಲಿ ಆತ್ಮಗಳು ನಿವಾಸ ಮಾಡುತ್ತವೆ ಅದೂ ಹೆಸರಿದೆಯಲ್ಲವೆ. ನಾಮ, ರೂಪದಿಂದ
ಭಿನ್ನವಾಗಿ ಯಾವುದೇ ವಸ್ತುವಿರುವುದಿಲ್ಲ. ಭಗವಂತನು ನಾಮ, ರೂಪದಿಂದ ಭಿನ್ನ ಮತ್ತು ಸರ್ವವ್ಯಾಪಿ
ಎಂದು ಹೇಳಿ ಬಿಡುತ್ತಾರೆ. ಇದು ಎಷ್ಟು ದೊಡ್ಡ ತಪ್ಪಾಗಿದೆ. ಮನುಷ್ಯರು ಯಾವಾಗ ಈ ಮಾತುಗಳನ್ನು
ತಿಳಿದುಕೊಳ್ಳುತ್ತಾರೆಯೋ ಆಗಲೇ ನಿಶ್ಚಯ ಮಾಡಿಕೊಳ್ಳುತ್ತಾರೆ. ಬಾಬಾ ನಾವು ತಮ್ಮನ್ನು ಅರಿತೆವು,
ಕಲ್ಪ-ಕಲ್ಪವೂ ತಮ್ಮಿಂದ ರಾಜ್ಯಭಾಗ್ಯವನ್ನು ಪಡೆಯುತ್ತಾ ಬಂದಿದ್ದೇವೆ - ಈ ನಿಶ್ಚಯವಿದ್ದಾಗಲೇ ಓದಲು
ಸಾಧ್ಯ. ಇಲ್ಲಿಂದ ಹೊರಗಡೆ ಹೋಗುತ್ತಾರೆಂದರೆ ಮರೆತು ಹೋಗುತ್ತಾರೆ ಆದ್ದರಿಂದ ಮೊಟ್ಟ ಮೊದಲು
ಅವಶ್ಯವಾಗಿ ಶಿವ ತಂದೆಯು ರಾಜಯೋಗವನ್ನು ಕಲಿಸಲು ಬಂದಿದ್ದಾರೆಂಬುದನ್ನು ಬರೆಸಿಕೊಳ್ಳಬೇಕು. ಬರೆದೂ
ಕೊಡುತ್ತಾರೆ, ಆದರೆ ಓದುವುದಿಲ್ಲ. ರಕ್ತದಿಂದಲೂ ಬರೆದು ಕೊಡುತ್ತಾರೆ ಅವರೇ ಇಂದು ಇಲ್ಲ, ಮಾಯೆಯು
ಎಷ್ಟು ತೀಕ್ಷ್ಣವಾಗಿದೆ. ತಂದೆಯು ಕುಳಿತು ಎಷ್ಟೊಂದು ತಿಳಿಸಿ ಕೊಡುತ್ತಾರೆ. ಯಾವಾಗ ಇಂತಿಂತಹ
ಪತ್ರಗಳನ್ನು ಬರೆಯುತ್ತೀರೋ ಆಗಲೇ ನಿಮ್ಮದು ವಿಹಂಗ ಮಾರ್ಗದ ಸೇವೆಯಾಗುವುದು. ನಿಮ್ಮ ಶಕ್ತಿ
ಸೇನೆಯಲ್ಲಿಯೂ ನಂಬರ್ವಾರ್ ಇದ್ದಾರೆ. ಕೆಲವರು ಸೇನಾಪತಿಯಾಗಿದ್ದಾರೆ, ಕೆಲವರು ಮುಖ್ಯ ಸೇನಾಧಿಕಾರಿ,
ಕೆಲವರು ಸೇನಾಪತಿಯಾಗಿದ್ದಾರೆ, ಇನ್ನೂ ಕೆಲವರು ದಳಪತಿಯಾಗಿದ್ದಾರೆ, ಕೆಲವರು ಸಿಪಾಯಿಗಳ ಜೊತೆ
ಹೊರೆಯನ್ನು ಹೊರುವವರೂ ಆಗಿದ್ದಾರೆ. ಇಡೀ ಸೈನ್ಯವಿದೆ, ತಂದೆಯಂತೂ ಪುರುಷಾರ್ಥ ಮಾಡಿಸುತ್ತಾರಲ್ಲವೆ.
ಪ್ರತಿಯೊಬ್ಬರ ಪುರುಷಾರ್ಥದಿಂದ ತಿಳಿಯುತ್ತದೆ - ರಾಜ-ರಾಣಿಯಾಗುತ್ತಾರೆ ಅಥವಾ ಒಳ್ಳೆಯ ಸಾಹುಕಾರ
ಪ್ರಜೆಗಳಲ್ಲಿ ಹೋಗುತ್ತಾರೆ, ಇವರು ದಾಸ-ದಾಸಿಯರಾಗುತ್ತಾರೆ. ಇದಂತೂ ಅರ್ಥ ಮಾಡಿಕ್ಕೊಳ್ಳಲು
ಸಹಜವಿದೆ ಅಂದಾಗ ಮೊದಲ ಮುಖ್ಯ ಮಾತನ್ನು ತೆಗೆದುಕೊಳ್ಳಬೇಕು. ತಂದೆಯು ಮಹಾರಥಿಗಳನ್ನು ಇಷ್ಟೊಂದು
ಘರ್ಜನೆ ಮಾಡಲು ಪ್ರೋತ್ಸಾಹಿಸುತ್ತಾರೆ ಅಂದಮೇಲೆ ವಿಹಂಗ ಮಾರ್ಗದ ಸೇವೆಗಾಗಿ ವಿಚಾರ ನಡೆಯಬೇಕು.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ವಿದ್ಯೆಯಲ್ಲೆಂದೂ ಸುಸ್ತಾಗಬಾರದು, ಶ್ರೇಷ್ಠಾತಿ ಶ್ರೇಷ್ಠ ವಿದ್ಯೆಯನ್ನು ಪ್ರತಿನಿತ್ಯ ಓದಬೇಕು
ಮತ್ತು ಓದಿಸಬೇಕು.
2. ವಿಹಂಗ ಮಾರ್ಗದ ಸೇವೆ ಮಾಡುವ ಯುಕ್ತಿಗಳನ್ನು ತೆಗೆಯಬೇಕು. ಯೋಗದಲ್ಲಿದ್ದು ತಂದೆಯಿಂದ
ಶಕ್ತಿಯನ್ನು ತೆಗೆದುಕೊಳ್ಳಬೇಕು. ಕೃಪೆ, ಆಶೀರ್ವಾದವನ್ನು ಬೇಡಬಾರದು.
ವರದಾನ:
ಬ್ರಾಹ್ಮಣ
ಜೀವನದಲ್ಲಿ ಖುಶಿಯ ವನ್ನು ಸದಾ ಖಾಯಂ ಆಗಿಟ್ಟುಕೊಳ್ಳುವಂತಹವರೇ ಮಹಾನ್ ಆತ್ಮ ಭವ.
ಬ್ರಾಹ್ಮಣ
ಜೀವನದಲ್ಲಿ ಖುಶಿಯು ಜನ್ಮ ಸಿದ್ಧ ಅಧಿಕಾರವಾಗಿದೆ, ಸದಾ ಖುಶಿಯಲ್ಲಿರುವುದೆ ಮಹಾನತೆಯಾಗಿದೆ. ಯಾರು
ಈ ಖುಶಿಯ ವರದಾನವನ್ನು ಖಾಯಂ ಆಗಿಟ್ಟುಕೊಳ್ಳುತ್ತಾರೆ ಅವರೇ ಮಹಾನ್ ಆಗಿದ್ದಾರೆ. ಆದ್ದರಿಂದ ಎಂದೂ
ಖುಶಿಯನ್ನು ಕಳೆದುಕೊಳ್ಳಬೇಡಿ. ಸಮಸ್ಯೆಯಂತು ಬರುವುದು ಮತ್ತು ಹೋಗುವುದು. ಆದರೆ ಖುಶಿ ಮಾತ್ರ
ಹೋಗದಿರಲಿ. ಏಕೆಂದರೆ ಸಮಸ್ಯೆ, ಪರ-ಸ್ಥಿತಿಯಾಗಿದೆ, ಬೇರೆ ಕಡೆಯಿಂದ ಬಂದಿರುವುದು, ಅದಂತು
ಬರುವುದು-ಹೋಗುವುದು. ಖುಶಿಯಂತು ನನ್ನ ವಸ್ತು ಆಗಿದೆ, ತಮ್ಮ ವಸ್ತುವನ್ನು ಸದಾ
ಜೊತೆಯಲ್ಲಿಟ್ಟುಕೊಳ್ಳುತ್ತಾರೆ. ಆದ್ದರಿಂದ ಒಂದುವೇಳೆ ಶರೀರ ಹೋಗಲಿ ಆದರೆ ಖುಶಿ ಹೋಗದಿರಲಿ.
ಖುಶಿಯಿಂದ ಶರೀರ ಸಹಾ ಹೋದರೂ ಹೊಸದು ಮತ್ತು ಚೆನ್ನಾಗಿರುವುದು ಸಿಗುವುದು.
ಸ್ಲೋಗನ್:
ಬಾಪ್ದಾದಾರವರ
ಹೃದಯಪೂರ್ವಕ ಶುಭಾಷಯ ಪಡೆಯಬೇಕಾದರೆ ಅನೇಕ ಮಾತುಗಳನ್ನು ನೋಡದೆ ಅವಿಶ್ರಾಂತರಾಗಿ ಸೇವೆಯಲ್ಲಿ
ಉಪಸ್ಥಿತರಾಗಿರಿ.