22/10/18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಬುದ್ಧಿಯನ್ನು ಅಲ್ಲಿ-ಇಲ್ಲಿ ಅಲೆದಾಡಿಸುವ ಬದಲು ಮನೆಯಲ್ಲಿ ತಂದೆಯನ್ನು ನೆನಪು ಮಾಡಿ,
ದೂರ-ದೂರದವರೆಗೆ ಬುದ್ಧಿಯನ್ನು ತೆಗೆದುಕೊಂಡು ಹೋಗಿ - ಇದನ್ನೇ ಬುದ್ಧಿಯ ಯಾತ್ರೆಯೆಂದು
ಹೇಳಲಾಗುವುದು.”
ಪ್ರಶ್ನೆ:
ಯಾವ ಮಕ್ಕಳು
ಸತ್ಯ ಹೃದಯದಿಂದ ತಂದೆಯನ್ನು ನೆನಪು ಮಾಡುತ್ತಾರೆಯೋ ಅವರ ಲಕ್ಷಣಗಳು ಏನಾಗಿರುವುದು?
ಉತ್ತರ:
1. ಸತ್ಯ
ಹೃದಯದಿಂದ ನೆನಪು ಮಾಡುವ ಮಕ್ಕಳಿಂದ ಎಂದೂ ಯಾವುದೇ ವಿಕರ್ಮವಾಗುವುದಿಲ್ಲ. ತಂದೆಯ
ನಿಂಧನೆಯಾಗುವಂತಹ ಕರ್ಮವು ಅವರಿಂದಾಗುವುದಿಲ್ಲ. ಅವರ ನಡವಳಿಕೆಯು ಬಹಳ ಚೆನ್ನಾಗಿರುತ್ತದೆ.
2. ಅವರು ಭೋಜನದ ಸಮಯದಲ್ಲಿಯೂ ನೆನಪಿನಲ್ಲಿರುತ್ತಾರೆ. ಸಮಯಕ್ಕೆ ಸರಿಯಾಗಿ ನಿದ್ರೆಯಿಂದ
ಸ್ವತಃವಾಗಿಯೇ ಜಾಗೃತರಾಗುವರು. ಅವರು ಬಹಳ ಸಹನಶೀಲರು, ಬಹಳ ಮಧುರರಾಗಿರುತ್ತಾರೆ. ತಂದೆಯೊಂದಿಗೆ
ಯಾವುದೇ ಮಾತನ್ನು ಮುಚ್ಚಿಡುವುದಿಲ್ಲ.
ಗೀತೆ:
ನಮ್ಮ ತೀರ್ಥ
ಸ್ಥಾನವು ಭಿನ್ನವಾಗಿದೆ.........
ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ, ಕೆಲವರು ನಿರಾಕಾರ ತಂದೆಯೆಂದು ತಿಳಿದುಕೊಳ್ಳುವರು,
ಕೆಲವರು ಸಾಕಾರ ತಂದೆಯೆಂದು ತಿಳಿದುಕೊಳ್ಳುವರು, ಇನ್ನೂ ಕೆಲವರು ಮಾತಾಪಿತರೆಂದು ತಿಳಿದುಕೊಳ್ಳುವರು.
ಈ ಮಾತಾಪಿತ ತಿಳಿಸುತ್ತಾರೆಂದರೂ ಸಹ ತಾಯಿಯೇ ಬೇರೆ ಮತ್ತು ತಂದೆಯೇ ಬೇರೆಯಾಗಿ ಬಿಟ್ಟರು. ಒಂದುವೇಳೆ
ನಿರಾಕಾರ ತಂದೆಯು ತಿಳಿಸುತ್ತಾರೆಂದರೆ ನಿರಾಕಾರನೇ ಬೇರೆ, ಸಾಕಾರಿ ತಂದೆಯೇ ಬೇರೆಯಾಗಿ ಬಿಡುತ್ತಾರೆ.
ಆದರೆ ಇದನ್ನು ತಿಳಿಸುವವರು ತಂದೆಯಾಗಿದ್ದಾರೆ. ನೀವು ಮಕ್ಕಳೇ ಇದನ್ನು ತಿಳಿದುಕೊಂಡಿದ್ದೀರಿ -
ಶಾರೀರಿಕ ತೀರ್ಥ ಯಾತ್ರೆ ಮತ್ತು ಆತ್ಮಿಕ ತೀರ್ಥ ಯಾತ್ರೆಗಳಿವೆ. ಆ ಶಾರೀರಿಕ ತೀರ್ಥ ಯಾತ್ರೆಗಳು
ಅರ್ಧಕಲ್ಪದ್ದಾಗಿದೆ. ಒಂದುವೇಳೆ ಇವು ಜನ್ಮ-ಜನ್ಮಾಂತರದಿಂದ ನಡೆಯುತ್ತಾ ಬಂದಿವೆಯೆಂದರೂ ಸಹ
ಪ್ರಾರಂಭದಿಂದ ಹಿಡಿದು ಇವು ನಡೆಯುತ್ತವೆ, ಅನಾದಿಯಾಗಿದೆ ಎಂದರ್ಥ. ಆದರೆ ಈ ರೀತಿಯಂತೂ ಇಲ್ಲ,
ಆದ್ದರಿಂದ ಅರ್ಧ ಕಲ್ಪದಿಂದ ಎಂದು ಹೇಳಲಾಗುತ್ತದೆ. ಈಗ ತಂದೆಯು ಬಂದು ಈ ತೀರ್ಥ ಯಾತ್ರೆಗಳ
ರಹಸ್ಯವನ್ನು ತಿಳಿಸಿದ್ದಾರೆ - ಮನ್ಮನಾಭವ ಎಂದರೆ ಆತ್ಮಿಕ ಯಾತ್ರೆ. ಅವಶ್ಯವಾಗಿ ಆತ್ಮಗಳಿಗೆ
ತಿಳಿಸುತ್ತಾರೆ ಹಾಗೂ ತಿಳಿಸಿ ಕೊಡುವವರು ಪರಮಪಿತನಾಗಿದ್ದಾರೆ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ.
ಪ್ರತಿಯೊಬ್ಬರೂ ತಮ್ಮ-ತಮ್ಮ ಧರ್ಮ ಸ್ಥಾಪಕರ ತೀರ್ಥ ಸ್ಥಾನಗಳಿಗೆ ಹೋಗುತ್ತಾರೆ. ಇದೂ ಸಹ ಅರ್ಧ
ಕಲ್ಪದ ಸಂಪ್ರದಾಯವಾಗಿದೆ. ಎಲ್ಲಾ ತೀರ್ಥ ಯಾತ್ರೆ ಮಾಡುತ್ತಾರೆ ಆದರೆ ಅವು ಯಾರಿಗೂ ಸದ್ಗತಿ ಕೊಡಲು
ಸಾಧ್ಯವಿಲ್ಲ. ತಾವೇ ಪದೇ-ಪದೇ ತೀರ್ಥ ಯಾತ್ರೆಗಳಿಗೆ ಹೋಗುತ್ತಾರೆ. ಅಮರನಾಥ, ಬದರೀನಾಥದ ಕಡೆ
ವರ್ಷ-ವರ್ಷ ತೀರ್ಥ ಯಾತ್ರೆ ಮಾಡಲು ಹೊರಡುತ್ತಾರೆ. ನಾಲ್ಕೂ ಧಾಮಗಳನ್ನು ಸುತ್ತುತ್ತಾರೆ, ಆದರೆ ಈಗ
ಈ ಆತ್ಮಿಕ ಯಾತ್ರೆಯನ್ನು ನೀವಷ್ಟೇ ತಿಳಿದುಕೊಂಡಿದ್ದೀರಿ. ಆತ್ಮಿಕ ತಂದೆಯು ತಿಳಿಸಿದ್ದಾರೆ -
ಮಕ್ಕಳೇ, ಮನ್ಮನಾಭವ ಮತ್ತೆಲ್ಲಾ ಸ್ಥೂಲ ಯಾತ್ರೆ ಇತ್ಯಾದಿಗಳೆಲ್ಲವನ್ನೂ ಬಿಡಿ, ನನ್ನನ್ನು ನೆನಪು
ಮಾಡಿ ಆಗ ಸತ್ಯ-ಸತ್ಯವಾದ ಸ್ವರ್ಗದಲ್ಲಿ ಹೋಗಿ ಬಿಡುತ್ತೀರಿ. ಯಾತ್ರೆಯೆಂದರೆ ಹೋಗುವುದು ಮತ್ತು
ಬರುವುದು. ಅದಂತೂ ಈಗಲೇ ಆಗುತ್ತದೆ ಸತ್ಯಯುಗದಲ್ಲಿ ಈ ಯಾತ್ರೆಯಿರುವುದಿಲ್ಲ. ಸದಾಕಾಲಕ್ಕೋಸ್ಕರ
ಸ್ವರ್ಗ, ಆಶ್ರಮದಲ್ಲಿ ಕುಳಿತುಕೊಳ್ಳುತ್ತೀರಿ. ಇಲ್ಲಂತೂ ಕೇವಲ ಹೆಸರುಗಳನ್ನಿಡುತ್ತಾರೆ.
ವಾಸ್ತವದಲ್ಲಿ ಸ್ವರ್ಗಾಶ್ರಮವು ಇಲ್ಲಿರಲು ಸಾಧ್ಯವಿಲ್ಲ. ಸ್ವರ್ಗಾಶ್ರಮವೆಂದು ಸತ್ಯಯುಗಕ್ಕೆ
ಹೇಳಲಾಗುತ್ತದೆ. ನರಕಕ್ಕೆ ಈ ಹೆಸರನ್ನು ಕೊಡಲು ಸಾಧ್ಯವಿಲ್ಲ. ನರಕವಾಸಿಗಳು ನರಕದಲ್ಲಿಯೇ
ಇರುತ್ತಾರೆ, ಸ್ವರ್ಗವಾಸಿಗಳು ಸ್ವರ್ಗದಲ್ಲಿಯೇ ಇರುತ್ತಾರೆ. ಇಲ್ಲಂತೂ ಸ್ಥೂಲ ಆಶ್ರಮಗಳಿಗೆ ಹೋಗಿ
ಮತ್ತೆ ಹಿಂತಿರುಗುತ್ತಾರೆ. ವಾಸ್ತವದಲ್ಲಿ ಸತ್ಯ-ಸತ್ಯವಾದ ಬೇಹದ್ದಿನ ಗುರು, ಒಬ್ಬರೇ
ಆಗಿದ್ದಾರೆಂದು ಆ ಬೇಹದ್ದಿನ ತಂದೆಯೇ ತಿಳಿಸುತ್ತಾರೆ. ಇವರು ಆಗಾಖಾನ್ ಗುರುಗಳೆಂದು ಹೇಳುತ್ತಾರೆ
ಆದರೆ ಅವರು ಗುರುಗಳಲ್ಲ. ಏಕೆಂದರೆ ಅವರು ಸದ್ಗತಿದಾತನಂತೂ ಅಲ್ಲ. ಒಂದುವೇಳೆ ಸದ್ಗತಿದಾತನಾಗಿದ್ದರೆ
ತಾವೂ ಗತಿ-ಸದ್ಗತಿಯಲ್ಲಿ ಹೋಗುತ್ತಿದ್ದರು. ಆದ್ದರಿಂದ ಅವರಿಗೆ ಗುರು ಎಂದು ಹೇಳುವುದಿಲ್ಲ. ಕೇವಲ
ಈ ಹೆಸರುಗಳನ್ನಿಟ್ಟು ಬಿಟ್ಟಿದ್ದಾರೆ. ಸದ್ಗುರು ಅಕಾಲ್ ಎಂದು ಸಿಖ್ಖರು ಹೇಳುತ್ತಾರೆ ವಾಸ್ತವದಲ್ಲಿ
ಸತ್ಶ್ರೀ ಅಕಾಲ್ ಒಬ್ಬ ಪರಮಾತ್ಮನೇ ಆಗಿದ್ದಾರೆ, ಅವರನ್ನೇ ಸದ್ಗುರುವೆಂದು ಹೇಳುತ್ತಾರೆ, ಅವರೇ
ಸದ್ಗತಿ ಮಾಡುವವರಾಗಿದ್ದಾರೆ. ಇಸ್ಲಾಮಿ, ಬೌದ್ದಿ ಅಥವಾ ಬ್ರಹ್ಮಾ ಮುಂತಾದವರು ಸದ್ಗತಿ ಮಾಡಲು
ಸಾಧ್ಯವಿಲ್ಲ. ಭಲೆ ಗುರು ಬ್ರಹ್ಮಾ, ಗುರು ವಿಷ್ಣು ಎಂದು ಹೇಳುತ್ತಾರೆ. ಈಗ ಗುರುವೆಂದು ಭಲೆ
ಬ್ರಹ್ಮನಿಗೆ ಹೇಳಬಹುದು ಆದರೆ ಗುರು ವಿಷ್ಣು, ಗುರು ಶಂಕರನಂತೂ ಆಗಲು ಸಾಧ್ಯವಿಲ್ಲ. ಗುರು
ಬ್ರಹ್ಮಾನ ಹೆಸರು ಅವಶ್ಯವಾಗಿದೆ. ಆದರೆ ಬ್ರಹ್ಮಾ ಗುರುವಿಗೂ ಸಹ ಗುರುವಿರಬೇಕಲ್ಲವೆ. ಸತ್ಶ್ರೀ
ಅಕಾಲ್ ಅಂದರೆ ಸದ್ಗುರುವಿಗಂತೂ ಯಾರೂ ಗುರುಗಳಿಲ್ಲ. ಅವರೊಬ್ಬರೇ ಸದ್ಗುರುಗಳಾಗಿದ್ದಾರೆ. ಉಳಿದ
ಮತ್ತ್ಯಾವುದೇ ಗುರುಗಳು, ಶಾಸ್ತ್ರಜ್ಞರು ಇಲ್ಲವೆ ಆಧ್ಯಾತ್ಮಿಕ ಜ್ಞಾನವನ್ನು ಕೊಡುವವರು
ಸದ್ಗುರುವಲ್ಲ. ಬುದ್ಧ ಮುಂತಾದವರಂತೂ ತಮ್ಮ ಹಿಂದೆ ಎಲ್ಲರನ್ನೂ ಕರೆದುಕೊಂಡು ಬರುತ್ತಾರೆ. ಅವರು
ರಜೋ, ತಮೋನಲ್ಲಿ ಬರಲೇಬೇಕಾಗಿದೆ. ಅವರು ಸದ್ಗತಿಗಾಗಿಯೇನೂ ಬರುವುದಿಲ್ಲ. ಸದ್ಗತಿದಾತನೆಂದು ಒಬ್ಬರ
ಹೆಸರೇ ಪ್ರಸಿದ್ಧವಾಗಿದೆ, ಅವರನ್ನೇ ಮತ್ತೆ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಮತ್ತೆ
ಗುರುಗಳನ್ನು ಮಾಡಿಕೊಳ್ಳುವ ಅವಶ್ಯಕತೆಯೇನು! ನಾನೂ ಗುರು, ನೀವೂ ಗುರು, ನಾನೂ ಶಿವ, ನೀವೂ ಶಿವ–ಎಂದು
ಹೇಳುವುದರಿಂದಂತೂ ಯಾರ ಹೊಟ್ಟೆಯೂ ತುಂಬುವುದಿಲ್ಲ. ಬಾಕಿ ಅವರು ಪವಿತ್ರರಾಗಿರುವ ಕಾರಣ ಅವರಿಗೆ
ಮಾನ್ಯತೆಯಿರುತ್ತದೆಯೇ ಹೊರತು ಸದ್ಗತಿ ನೀಡಲು ಸಾಧ್ಯವಿಲ್ಲ. ಅವರಂತೂ ಒಬ್ಬರೇ ಅಗಿದ್ದಾರೆ,
ಅವರನ್ನೇ ಸತ್ಯ-ಸತ್ಯ ಗುರುವೆಂದು ಹೇಳಲಾಗುತ್ತದೆ. ಗುರುಗಳಂತೂ ಅನೇಕ ಪ್ರಕಾರದವರಿರುತ್ತಾರೆ.
ಕಲಿಸುವಂತಹ ಉಸ್ತಾದನಿಗೆ ಗುರುವೆಂದು ಹೇಳುತ್ತಾರೆ. ತಂದೆಯೂ ಸಹ ಉಸ್ತಾದ್ಅಗಿದ್ದಾರೆ,
ಮಾಯೆಯೊಂದಿಗೆ ಯುದ್ಧ ಮಾಡುವುದನ್ನು ಕಲಿಸುತ್ತಾರೆ. ನೀವು ಮಕ್ಕಳಿಗೆ ತ್ರಿಕಾಲದರ್ಶಿತನದ
ಜ್ಞಾನವಿದೆ, ಇದರಿಂದ ನೀವು ಚಕ್ರವರ್ತಿಯಾಗುತ್ತೀರಿ. ಸೃಷ್ಟಿಚಕ್ರವನ್ನು ಅರಿತುಕೊಳ್ಳುವವರೇ
ಚಕ್ರವರ್ತಿ ರಾಜರಾಗುತ್ತಾರೆ. ಡ್ರಾಮಾದ ಚಕ್ರವನ್ನು ಹಾಗೂ ಕಲ್ಪವೃಕ್ಷದ ಆದಿ-ಮಧ್ಯ-ಅಂತ್ಯವನ್ನು
ಅರಿತುಕೊಳ್ಳುವುದು ಅಂದರೆ ಒಂದೇ ಮಾತಾಗಿದೆ. ಚಕ್ರದ ಗುರುತನ್ನೂ ಸಹ ಬಹಳ ಶಾಸ್ತ್ರಗಳಲ್ಲಿ
ಬರೆಯಲಾಗಿದೆ. ತತ್ವಶಾಸ್ತ್ರದ ಪುಸ್ತಕ ಬೇರೆ ಇತಿಹಾಸದ ಗ್ರಂಥಗಳಂತೂ ಅನೇಕ ಪ್ರಕಾರವಾಗಿರುತ್ತವೆ,
ಇಲ್ಲಿ ನಿಮಗೆ ಯಾವುದೇ ಗ್ರಂಥದ ಅವಶ್ಯಕತೆಯಿಲ್ಲ. ತಂದೆಯು ಏನನ್ನು ಕಲಿಸುತ್ತಾರೆಯೋ ನೀವು ಅದನ್ನೇ
ತಿಳಿಯಬೇಕಾಗಿದೆ. ತಂದೆಯ ಆಸ್ತಿ ಮೇಲಂತೂ ಎಲ್ಲಾ ಮಕ್ಕಳಿಗೂ ಅಧಿಕಾರವಿರುತ್ತದೆ ಆದರೆ ಸ್ವರ್ಗದಲ್ಲಿ
ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಆಸ್ತಿಯಿರುವುದಿಲ್ಲ. ಯಾರು ತಂದೆಯ ಮಕ್ಕಳಾಗುತ್ತಾರೆಯೋ ಅವರದು
ರಾಜ್ಯಭಾಗ್ಯವಿರುತ್ತದೆ. ಬಾಬಾ ಎಂದು ಹೇಳಿ, ಸ್ವಲ್ಪ ಜ್ಞಾನ ಕೇಳಿದರೂ ಸಹ ಅವರು ಹಕ್ಕುದಾರರಾಗಿ
ಬಿಡುತ್ತಾರೆ. ಆದರೆ ನಂಬರ್ವಾರ್ ವಿಶ್ವದ ಮಹಾರಾಜನೆಲ್ಲಿ, ಪ್ರಜೆಗಳು, ದಾಸ-ದಾಸಿಯರೆಲ್ಲಿ! ಇಡೀ
ರಾಜಧಾನಿಯು ಸ್ಥಾಪನೆಯಾಗುತ್ತಿದೆ, ತಂದೆಯ ಮಕ್ಕಳಾಗುವುದರಿಂದ ಸ್ವರ್ಗದ ಆಸ್ತಿಯಂತೂ ಸಿಗುತ್ತದೆ,
ಆಸ್ತಿಯು ತಂದೆಯಿಂದ ಸಿಗುತ್ತದೆ. ಇವು ಹೊಸ ಮಾತುಗಳಾಗಿರುವ ಕಾರಣ ಮನುಷ್ಯರು
ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ಸತ್ಯಯುಗದಲ್ಲಿ ವಿಕಾರವಿರುವುದಿಲ್ಲ. ಮಾಯೆಯೇ
ಇಲ್ಲವೆಂದರೆ ವಿಕಾರವೆಲ್ಲಿಂದ ಬರುತ್ತದೆ. ಮಾಯಾ ರಾಜ್ಯವು ದ್ವಾಪರದಿಂದ ಪ್ರಾರಂಭವಾಗುತ್ತದೆ. ಇವು
ರಾವಣನ 5 ಸರಪಳಿಗಳಾಗಿವೆ, ಇವು ಅಲ್ಲಿರುವುದಿಲ್ಲ. ಹೆಚ್ಚಿನ ವಾದ ಮಾಡಬಾರದು, ಅದಂತೂ ಸಂಪೂರ್ಣ
ನಿರ್ವಿಕಾರಿ ಪ್ರಪಂಚವಾಗಿದೆ ಬಾಕಿ ಮಕ್ಕಳು ಜನ್ಮ ಪಡೆಯುವ, ಸಿಂಹಾಸನದ ಮೇಲೆ ಕುಳಿತುಕೊಳ್ಳುವ,
ಮಹಲು ಇತ್ಯಾದಿಗಳನ್ನು ಕಟ್ಟಿಸುವ ಯಾವ ಸಂಪ್ರದಾಯ, ರೀತಿ-ಪದ್ಧತಿಗಳಿರುವೆಯೋ ಅವು ಅವಶ್ಯವಾಗಿ
ಒಳ್ಳೆಯದೇ ಆಗಿರುತ್ತದೆ ಏಕೆಂದರೆ ಅದು ಸ್ವರ್ಗವಾಗಿದೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಆತ್ಮಿಕ ಯಾತ್ರೆಯಲ್ಲಿ ನೀವು ನಿರಂತರವಾಗಿ ಬುದ್ಧಿಯೋಗವನ್ನು
ಜೋಡಿಸಬೇಕಾಗಿದೆ. ಇದು ಬಹಳ ಸಹಜವಾಗಿದೆ. ಹೇಗೆ ಭಕ್ತಿಮಾರ್ಗದಲ್ಲಿಯೂ ಮುಂಜಾನೆಯೇ ಏಳುತ್ತಾರೆ
ಹಾಗೆಯೇ ಜ್ಞಾನ ಮಾರ್ಗದಲ್ಲಿಯೂ ಸಹ ಮುಂಜಾನೆ ಎಂದರೆ ಅಮೃತವೇಳೆ ಎದ್ದು ತಂದೆಯನ್ನು ನೆನಪು
ಮಾಡಬೇಕಾಗಿದೆ, ಮತ್ತ್ಯಾವುದೇ ಗ್ರಂಥ ಇತ್ಯಾದಿಗಳನ್ನು ಓದುವ ಅವಶ್ಯಕತೆಯಿಲ್ಲ. ಕೇವಲ ನನ್ನನ್ನು
ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ, ಏಕೆಂದರೆ ಈಗ ಎಲ್ಲಾ ಕಿರಿಯರ, ಹಿರಿಯರ ಮೃತ್ಯುವು
ಸಮ್ಮುಖದಲ್ಲಿ ನಿಂತಿದೆ. ಸಾವನ್ನಪ್ಪುವ ಸಮಯದಲ್ಲಿ ಭಗವಂತನನ್ನು ಸ್ಮರಿಸಿ ಎಂದು ಹೇಳುತ್ತಾರೆ.
ಅಂತ್ಯಕಾಲದಲ್ಲಿ ಒಂದುವೇಳೆ ಭಗವಂತನನ್ನು ಸ್ಮರಿಸಲಿಲ್ಲವೆಂದರೆ ಸ್ವರ್ಗದಲ್ಲಿ ಹೋಗಲು
ಸಾಧ್ಯವಿಲ್ಲವೆಂದೂ ಹೇಳುತ್ತಾರೆ. ಇದಕ್ಕೆ ತಂದೆಯೂ ತಿಳಿಸುತ್ತಾರೆ - ಮನ್ಮನಾಭವ, ಈ ದೇಹವನ್ನೂ ಸಹ
ನೆನಪು ಮಾಡಬಾರದು. ನಾವು ಆತ್ಮಗಳು ಪಾತ್ರಧಾರಿಗಳಾಗಿದ್ದೇವೆ, ಶಿವ ತಂದೆಯ ಸಂತಾನರಾಗಿದ್ದೇವೆ.
ಹೆಚ್ಚಿನದಾಗಿ ನೆನಪಿನಲ್ಲಿರಬೇಕಾಗಿದೆ. ಹಾಗೆ ನೋಡಿದರೆ ಭಗವಂತನನ್ನು ನೆನಪು ಮಾಡಿ ಎಂದು ಚಿಕ್ಕ
ಮಕ್ಕಳಿಗಂತೂ ಹೇಳುವುದಿಲ್ಲ. ಆದರೆ ಇಲ್ಲಿ ಎಲ್ಲರಿಗೂ ಹೇಳಬೇಕಾಗುತ್ತದೆ, ಏಕೆಂದರೆ ಎಲ್ಲರೂ ತಂದೆಯ
ಬಳಿ ಹೋಗಬೇಕಾಗಿದೆ, ತಂದೆಯೊಂದಿಗೆ ಬುದ್ಧಿಯೋಗವನ್ನು ಜೋಡಿಸಬೇಕಾಗಿದೆ. ಯಾವುದೇ ಜಗಳ-ಕಲಹಗಳನ್ನು
ಮಾಡಬಾರದು ಏಕೆಂದರೆ ಇದು ಬಹಳ ನಷ್ಟದಾಯಕವಾಗಿದೆ. ಯಾರೇ ಏನೇ ಅಂದರೂ ಸಹ ಕೇಳಿಯೂ ಕೇಳದಂತೆ ಇರಬೇಕು,
ಜಗಳವಾಡುವಂತೆ ಅವರನ್ನು ಎದುರು ಹಾಕಿಕೊಳ್ಳಬಾರದು. ಪ್ರತಿಯೊಂದು ಮಾತಿನಲ್ಲಿ ಸಹನಶೀಲರೂ ಆಗಬೇಕು
ಮತ್ತು ಅನ್ಯರಿಗೂ ತಿಳಿಸಬೇಕು - ನಮ್ಮ ತಂದೆಯು ತಂದೆಯೂ ಆಗಿದ್ದಾರೆ, ಧರ್ಮರಾಜನೂ ಆಗಿದ್ದಾರೆ. ಏನೇ
ಮಾತು ನಡೆದರೆ ಅದನ್ನು ನೀವು ತಂದೆಗೆ ತಿಳಿಸಿ ನಂತರ ಧರ್ಮರಾಜನ ಬಳಿ ತಲುಪಿಯೇ ಬಿಡುವುದು ಮತ್ತು
ಶಿಕ್ಷೆಗೆ ಬಾಗಿಗಳಾಗುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ಸುಖವನ್ನೇ ಕೊಡುತ್ತೇನೆ, ದುಃಖ
ಅರ್ಥಾತ್ ಶಿಕ್ಷೆಗಳನ್ನು ಧರ್ಮರಾಜನು ಕೊಡುತ್ತಾನೆ. ನನಗೆ ಶಿಕ್ಷೆಯನ್ನು ಕೊಡುವ ಅಧಿಕಾರವಿಲ್ಲ.
ನನಗೆ ತಿಳಿಸಿ ಶಿಕ್ಷೆಯನ್ನು ಧರ್ಮರಾಜನು ಕೊಡುತ್ತಾನೆ. ತಂದೆಗೆ ತಿಳಿಸುವುದರಿಂದ ಹಗುರರಾಗಿ
ಬಿಡುತ್ತೀರಿ ಏಕೆಂದರೆ ಇವರು ಬಲ ಭುಜವಾಗಿದ್ದಾರಲ್ಲವೆ. ಸದ್ಗುರುವಿನ ನಿಂದಕರು ಪದವಿಯನ್ನು
ಪಡೆಯುವುದಿಲ್ಲ. ಯಾರದು ದೋಷವೆಂದು ಧರ್ಮರಾಜನೇ ನಿರ್ಣಯ ಮಾಡುತ್ತಾನೆ ಅವರೊಂದಿಗೆ ಏನನ್ನೂ
ಮುಚ್ಚಿಡಲು ಸಾಧ್ಯವಿಲ್ಲ. ಏನೇ ಆದರೂ ತಂದೆಗೆ ತಿಳಿಸಿದಾಗ ಡ್ರಾಮಾನುಸಾರ ತಪ್ಪು ಮಾಡಿದಿರಿ,
ಕಲ್ಪದ ಹಿಂದೆಯೂ ಆಗಿತ್ತು ಎಂದು ತಂದೆಯು ಹೇಳುತ್ತಾರೆ. ಆದರೆ ಅದೇ ತಪ್ಪನ್ನು ಮಾಡುತ್ತಲೇ ಇರಬೇಕು
ಎಂದು ಅರ್ಥವಲ್ಲ. ಒಂದುವೇಳೆ ಇದೇ ಮತ್ತೆ-ಮತ್ತೆ ತಪ್ಪು ಮಾಡುತ್ತಿದ್ದರೆ ಯಾವಾಗ
ಸುಧಾರಣೆಯಾಗುತ್ತದೆ. ತಪ್ಪಾದರೆ ಕ್ಷಮೆಯಾಚಿಸಬೇಕಾಗುತ್ತದೆ. ಬಂಗಾಳದಲ್ಲಿ ಯಾರಿಗಾದರೂ ಕಾಲು
ತಗುಲಿದರೆ ತಕ್ಷಣ ಕ್ಷಮೆ ಕೇಳುತ್ತಾರೆ. ಆದರೆ ಇಲ್ಲಂತೂ ಒಬ್ಬರು ಇನ್ನೊಬ್ಬರಿಗೆ ನಿಂಧನೆ
ಮಾಡತೊಡಗುತ್ತಾರೆ. ಆದ್ದರಿಂದ ನಡವಳಿಕೆಯು ಬಹಳ ಚೆನ್ನಾಗಿರಬೇಕು. ತಂದೆಯಂತೂ ಬಹಳ ಕಲಿಸುತ್ತಾರೆ
ಆದರೆ ತಿಳಿದುಕೊಳ್ಳುವುದೇ ಇಲ್ಲವೆಂದರೆ ಇವರ ದಾಖಲೆಯು ಹಾಳಾಗಿದೆ ಎಂದು ತಿಳಿದುಕೊಳ್ಳಲಾಗುತ್ತದೆ.
ನಿಂಧನೆ ಮಾಡಿಸುತ್ತಿರುತ್ತಾರೆಂದರೆ ಪದವಿ ಭ್ರಷ್ಠರಾಗಿ ಬಿಡುತ್ತಾರೆ. ಜನ್ಮ-ಜನ್ಮಾಂತರಗಳ
ವಿಕರ್ಮಗಳ ಹೊರೆಯಂತೂ ಇದ್ದೇ ಇದೆ. ಆ ಶಿಕ್ಷೆಯನ್ನಂತೂ ಭೋಗಿಸಲೇಬೇಕಾಗಿದೆ. ಒಂದುವೇಳೆ ಮತ್ತೆ
ಇಲ್ಲಿದ್ದೂ ಸಹ ವಿಕರ್ಮ ಮಾಡುತ್ತಾರೆಂದರೂ ಸಹ ಅದಕ್ಕೆ ಪ್ರತಿಯಾಗಿ ನೂರರಷ್ಟು ಶಿಕ್ಷೆಯನ್ನಂತೂ
ಭೋಗಿಸಲೇಬೇಕಾಗಿದೆ. ಹೇಗೆ ತಂದೆಯು ಕಾಶಿಯಲ್ಲಿ ಬಲಿಯಾಗುವ ಬಗ್ಗೆ ತಿಳಿಸುತ್ತಾರೆ. ಅದು
ಭಕ್ತಿಮಾರ್ಗದ್ದಾಗಿದೆ ಆದರೆ ಇದು ಜ್ಞಾನಮಾರ್ಗದ ಮಾತಾಗಿದೆ. ಮೊದಲನೆಯದಾಗಿ ಹಿಂದಿನ ವಿಕರ್ಮಗಳಿವೆ,
ಎರಡನೆಯದಾಗಿ ಈ ಸಮಯದಲ್ಲಿ ಏನು ಮಾಡುತ್ತೀರೋ ಅದಕ್ಕೆ ಪ್ರತಿಯಾಗಿ ನೂರರಷ್ಟು ಶಿಕ್ಷೆಯು ಸಿಕ್ಕಿ
ಬಿಡುತ್ತದೆ. ಬಹಳ ಶಿಕ್ಷೆಯನ್ನನುಭವಿಸಬೇಕಾಗುತ್ತದೆ. ತಂದೆಯಂತೂ ಬಹಳ ವಿಷಯಗಳನ್ನು ತಿಳಿಸುತ್ತಾರೆ
- ಯಾವುದೇ ಪಾಪಗಳನ್ನು ಮಾಡಬೇಡಿ, ನಷ್ಟಮೋಹಿಗಳಾಗಿ. ಎಷ್ಟೊಂದು ಪರಿಶ್ರಮವಿದೆ! ಈ
ಮಮ್ಮಾ-ಬಾಬಾರವನ್ನೂ ನೆನಪು ಮಾಡಬಾರದು. ಇವರನ್ನು ನೆನಪು ಮಾಡಿದರೆ ಜಮಾ ಆಗುವುದಿಲ್ಲ. ಇವರಲ್ಲಿ
ಶಿವ ತಂದೆಯು ಬರುತ್ತಾರೆ ಅಂದಮೇಲೆ ನೆನಪು ಶಿವ ತಂದೆಯನ್ನು ಮಾಡಬೇಕಾಗಿದೆ. ಆದರೆ ಇವರಲ್ಲಿ ಶಿವ
ತಂದೆಯಿರುವ ಕಾರಣ ಇವರ ನೆನಪಿದ್ದರೂ ಪರವಾಗಿಲ್ಲವೆಂದಲ್ಲ. ಶಿವ ತಂದೆಯನ್ನು ಪರಮಧಾಮದಲ್ಲಿ ನೆನಪು
ಮಾಡಬೇಕಾಗಿದೆ. ಶಿವ ತಂದೆ ಹಾಗೂ ಮಧುರ ಮನೆಯನ್ನು ನೆನಪು ಮಾಡಬೇಕಾಗಿದೆ. ಜಿನ್ನ್ ನ ತರಹ
ಬುದ್ಧಿಯಲ್ಲಿ ನೆನಪಿಡಬೇಕಾಗಿದೆ – ಶಿವ ತಂದೆಯು ಪರಮಧಾಮದಲ್ಲಿರುತ್ತಾರೆ, ಶಿವ ತಂದೆಯು ಇಲ್ಲಿಗೆ
ಬಂದು ತಿಳಿಸುತ್ತಾರೆ. ಆದರೆ ನಾವು ಅಲ್ಲಿ ನೆನಪು ಮಾಡಬೇಕೇ ಹೊರತು ಇಲ್ಲಿ ಅಲ್ಲ. ಬುದ್ಧಿಯು ದೂರ
ಹೋಗಿ ಬಿಡಬೇಕು. ಇಲ್ಲಿಯೇ ಇರುವುದಲ್ಲ. ಈ ಶಿವ ತಂದೆಯಂತೂ ಹೋಗಿ ಬಿಡುವರು, ಇವರೊಬ್ಬರಲ್ಲಿಯೇ
ಬರುತ್ತಾರೆ, ಮಮ್ಮಾರವರಲ್ಲಿ ತಂದೆಯನ್ನು ನೋಡಲು ಸಾಧ್ಯವಿಲ್ಲ. ನಿಮಗೆ ಗೊತ್ತಿದೆ - ಇದು (ಬ್ರಹ್ಮಾ)
ತಂದೆಯ ರಥವಾಗಿದೆ. ಆದರೆ ಇವರ ಚಹರೆಯನ್ನು ನೋಡಬಾರದು. ಬುದ್ಧಿಯು ಅಲ್ಲೆ ತೂಗು ಹಾಕಿಕೊಂಡಿರಬೇಕು.
ಬುದ್ಧಿಯು ಇಲ್ಲಿದ್ದರೂ ಅಷ್ಟು ಮಜಾ ಇರುವುದಿಲ್ಲ, ಇದು ಯಾತ್ರೆಯಾಗುವುದಿಲ್ಲ. ನಿಮ್ಮ ಯಾತ್ರೆಯ
ಪರಿಮಿತಿಯು ಅಲ್ಲಿದೆ. ಶಿವ ತಂದೆಯಿರುವ ಕಾರಣ ಇವರನ್ನೇ ನೋಡುತ್ತಾ ಇರಿ ಎಂದಲ್ಲ. ಈ ರೀತಿ
ಮಾಡಿದ್ದೇ ಆದರೆ ಮೇಲೆ ಹಾರುವ ಅಭ್ಯಾಸವು ನಿಂತು ಹೋಗುತ್ತದೆ. ತಂದೆಯು ತಿಳಿಸುತ್ತಾರೆ - ನನ್ನನ್ನು
ಅಲ್ಲಿ ನೆನಪು ಮಾಡಿ, ಬುದ್ಧಿಯೋಗವನ್ನು ಅಲ್ಲಿ ಜೋಡಿಸಿ. ಕೆಲವರು ಮಂದ ಬುದ್ಧಿಯವರು ಕುಳಿತು
ಇವರನ್ನೇ ನೋಡುತ್ತಿರಬೇಕೆಂದು ತಿಳಿಯುತ್ತಾರೆ. ಆದರೆ ಬುದ್ಧಿಯನ್ನು ಮಧುರ ಮನೆಯಲ್ಲಿಡಬೇಕು. ಶಿವ
ತಂದೆಯಂತೂ ಸದಾ ಈ ರಥದಲ್ಲಿರಲು ಸಾಧ್ಯವಿಲ್ಲ. ಇಲ್ಲಿಗೆ ಬಂದು ಕೇವಲ ಸೇವೆ ಮಾಡುತ್ತಾರೆ.
ಸವಾರಿಯಾಗಿ ಸೇವೆ ಮಾಡಿ ನಂತರ ಇಳಿದು ಬಿಡುತ್ತಾರೆ. ಎತ್ತಿನ ಮೇಲೆ ಸದಾ ಸವಾರಿ ಮಾಡಲು
ಸಾಧ್ಯವಿಲ್ಲ. ಆದ್ದರಿಂದ ಬುದ್ಧಿಯನ್ನು ಸದಾ ಪರಮಧಾಮದಲ್ಲಿಡಬೇಕು. ತಂದೆಯು ಬರುತ್ತಾರೆ,
ಮುರುಳಿಯನ್ನು ನುಡಿಸಿ ಹೋಗುತ್ತಾರೆ. ಈ ಬ್ರಹ್ಮಾರವರ ಬುದ್ಧಿಯೂ ಸಹ ಅಲ್ಲಿರುತ್ತದೆ ಆದ್ದರಿಂದ
ಸರಿಯಾದ ದಾರಿ ಹಿಡಿಯಬೇಕು ಇಲ್ಲವೆಂದರೆ ಘಳಿಗೆ-ಘಳಿಗೆಯೂ ಪಟ್ರಿ (ರೈಲು ಹಳಿ) ಯಿಂದ ಬೀಳುತ್ತೀರಿ.
ಈಗಂತೂ ಸ್ವಲ್ಪವೇ ಸಮಯವಿದೆ, ಇವರಲ್ಲಿ ಶಿವ ತಂದೆಯು ಇಲ್ಲವೆಂದರೆ ನೆನಪೇಕೆ ಮಾಡುತ್ತೀರಿ?
ಮುರುಳಿಯನ್ನಂತೂ ಇವರೂ ಸಹ ತಿಳಿಸಬಹುದಾಗಿದೆ, ಇವರಲ್ಲಿ ಕೆಲವೊಮ್ಮೆ ಇರುತ್ತಾರೆ, ಇನ್ನೂ
ಕೆಲವೊಮ್ಮೆ ತಂದೆಯು ಇರುವುದಿಲ್ಲ. ಕೆಲವೊಮ್ಮೆ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ ಆದ್ದರಿಂದ
ಪರಮಧಾಮದಲ್ಲಿ ನೆನಪು ಮಾಡಿ.
ಕೆಲ ಕೆಲವೊಮ್ಮೆ ತಂದೆಯು ವಿಚಾರ ಮಾಡುತ್ತಾರೆ - ಡ್ರಾಮಾನುಸಾರ ಕಲ್ಪದ ಹಿಂದೆ ಇಂದಿನ ದಿನ ಯಾವ
ಮುರುಳಿಯನ್ನು ನುಡಿಸಿದ್ದೆನು, ಅದನ್ನೇ ಈಗ ಹೋಗಿ ನುಡಿಸುತ್ತೇನೆ. ಕಲ್ಪದ ಹಿಂದೆ ತಂದೆಯಿಂದ ಎಷ್ಟು
ಆಸ್ತಿಯನ್ನು ಪಡೆದಿದ್ದೆವೋ ಅಷ್ಟನ್ನು ಪಡೆಯುತ್ತೇವೆಂದು ನೀವು ಹೇಳುತ್ತೀರಿ. ಶಿವ ತಂದೆಯ
ಹೆಸರನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕಾಗುತ್ತದೆ ಆದರೆ ಈ ರೀತಿ ಯಾರಿಗೂ ಬರುವುದಿಲ್ಲ. ತಂದೆಯು
ಅವಶ್ಯವಾಗಿ ನೆನಪಿಗೆ ಬರುವರು. ತಂದೆಯದೇ ಪರಿಚಯವನ್ನು ಕೊಡಬೇಕು, ಕೇವಲ ಕುಳಿತು ಇವರನ್ನು
ನೋಡುವುದಲ್ಲ, ತಂದೆಯು ತಿಳಿಸಿದ್ದಾರೆ – ಶಿವ ತಂದೆಯನ್ನು ನೆನಪು ಮಾಡಿ ಇಲ್ಲವೆಂದರೆ ಪಾಪವಾಗಿ
ಬಿಡುವುದು. ನಿರಂತರ ತಂದೆಯನ್ನು ನೆನಪು ಮಾಡಬೇಕು ಇಲ್ಲದಿದ್ದರೆ ವಿಕರ್ಮ ವಿನಾಶವಾಗುವುದಿಲ್ಲ.
ಬಹಳ ಉನ್ನತ ಗುರಿಯಾಗಿದೆ, ಇದು ಚಿಕ್ಕಮ್ಮನ ಮನೆಯಂತಲ್ಲ. ಭೋಜನದಲ್ಲಿ ಮೊದಲು ನೆನಪು ಮಾಡಿದೆವು
ಮತ್ತೆ ಮರೆತು ಹಾಗೆಯೇ ಭೋಜನ ಮಾಡಿ ಬಿಟ್ಟೆವು ಎಂದಲ್ಲ. ಭೋಜನದ ಪೂರ್ಣ ಸಮಯ ನೆನಪು
ಮಾಡಬೇಕಾಗುತ್ತದೆ, ಪರಿಶ್ರಮವಿದೆ. ಸುಮ್ಮನೆ ಶ್ರೇಷ್ಠ ಪದವಿ ಸಿಗಲು ಸಾಧ್ಯವಿಲ್ಲ. ಆದ್ದರಿಂದಲೇ
ನೋಡಿ - ಕೋಟ್ಯಾಂತರ ಆತ್ಮಗಳಲ್ಲಿ ಎಂಟು ಆತ್ಮಗಳಷ್ಟೇ ಪಾಸಾಗುತ್ತಾರೆ. ಗುರಿಯು ಬಹಳ ಉನ್ನತವಾಗಿದೆ.
ವಿಶ್ವದ ಮಾಲೀಕರಾಗಬೇಕೆಂಬುದು ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಮೊದಲು ಇವರ ಬುದ್ಧಿಯಲ್ಲಿಯೂ
ಇರಲಿಲ್ಲ, 84 ಜನ್ಮಗಳು ಯಾರಿಗೆ ಸಿಗುತ್ತದೆಯೆಂದು ಈಗ ವಿಚಾರ ಮಾಡಲಾಗುತ್ತದೆ. ಅವಶ್ಯವಾಗಿ ಯಾರು
ಮೊದಲು ಬರುತ್ತಾರೆಯೋ ಅವರು ಲಕ್ಷ್ಮಿ-ನಾರಾಯಣರಾಗಿದ್ದಾರೆ. ಇವೆಲ್ಲಾ ಮಾತುಗಳು ವಿಚಾರಸಾಗರ ಮಂಥನ
ಮಾಡುವಂತಹದ್ದಾಗಿದೆ. ತಂದೆಯು ತಿಳಿಸುತ್ತಾರೆ - ಕೈ ಕೆಲಸ ಮಾಡುತ್ತಿರಲಿ, ಮನಸ್ಸು ನೆನಪು
ಮಾಡುತ್ತಿರಲಿ. ಭಲೆ ವ್ಯಾಪಾರ, ವ್ಯವಹಾರಗಳಲ್ಲಿ ಇರಿ ಆದರೆ ನಿರಂತರ ತಂದೆಯನ್ನು ನೆನಪು ಮಾಡುತ್ತಾ
ಇರಿ. ಇದು ಯಾತ್ರೆಯೂ ಆಗಿದೆ, ತೀರ್ಥ ಯಾತ್ರೆಗೆ ಹೋಗಿ ನಂತರ ಹಿಂತಿರುಗಬಾರದು. ತೀರ್ಥ
ಯಾತ್ರೆಯನ್ನಂತೂ ಅನೇಕ ಮನುಷ್ಯರು ಮಾಡುತ್ತಾರೆ. ಈಗಂತೂ ತೀರ್ಥ ಸ್ಥಳಗಳಲ್ಲಿಯೂ ಕೊಳಕಾಗಿ ಬಿಟ್ಟಿದೆ
ಇಲ್ಲದಿದ್ದರೆ ತೀರ್ಥ ಸ್ಥಾನಗಳೆಂದೂ ವೇಶ್ಯಾಲಯವಾಗುವುದಿಲ್ಲ. ಈಗಂತೂ ಎಷ್ಟೊಂದು ಭ್ರಷ್ಟಾಚಾರವಿದೆ.
ಮಾಲಿಕರು ಯಾರೂ ಇಲ್ಲ. ತಕ್ಷಣ ಅವರ ನಿಂದನೆ ಮಾಡ ತೊಡಗುತ್ತಾರೆ. ಇಂದು ಮುಖ್ಯ ಮಂತ್ರಿಯಾಗಿದ್ದರೆ
ನಾಳೆ ಅವರನ್ನೂ ಇಳಿಸಿ ಬಿಡುತ್ತಾರೆ, ಮಾಯೆಗೆ ಶಿಷ್ಯರಾಗಿ ಬಿಡುತ್ತಾರೆ, ಹಣವನ್ನು ಒಟ್ಟು
ಗೂಡಿಸುತ್ತಾರೆ, ಮನೆಗಳನ್ನು ಮಾಡಿಸುತ್ತಾರೆ, ಹಣಕ್ಕಾಗಿ ಕಳ್ಳತನ ಮಾಡಲು ಪ್ರಾರಂಭಿಸುತ್ತಾರೆ.
ನೀವೀಗ ಸ್ವರ್ಗದಲ್ಲಿ ಹೋಗುವ ತಯಾರಿ ಮಾಡಿಕೊಳ್ಳುತ್ತಿದ್ದೀರಿ. ಅದೇ ನೆನಪಿರಬೇಕು, ಧಾರಣೆಯೂ
ಆಗಬೇಕು. ಮುರುಳಿಯನ್ನು ಬರೆದು ಮತ್ತೆ ಮನನ ಮಾಡಬೇಕು. ಬಿಡುವಂತೂ ಬಹಳ ಇರುತ್ತದೆ, ರಾತ್ರಿಯ
ಸಮಯದಲ್ಲಂತೂ ಬಹಳ ಬಿಡುವಿರುತ್ತದೆ. ರಾತ್ರಿಯಲ್ಲಿ (ಅಮೃತವೇಳೆ) ಏಳುವುದರಿಂದ ಅದೇ ಅಭ್ಯಾಸವಾಗಿ
ಬಿಡುವುದು. ಯಾರು ಸತ್ಯ-ಸತ್ಯವಾಗಿ ತಂದೆಯನ್ನು ನೆನಪು ಮಾಡುವವರಿವರೋ ಅವರ ಕಣ್ಣು ನಿದ್ರೆಯಿಂದ
ತಾನೇ ತೆರೆದು ಬಿಡುವುದು. ಹೇಗೆ ಅಮೃತವೇಳೆಯಲ್ಲಿ ಕಣ್ಣು ತಾನೇ ತೆರೆದು ಬಿಡುವುದೆಂದು ಬಾಬಾರವರು
ತಮ್ಮ ಅನುಭವವನ್ನು ತಿಳಿಸುತ್ತಾರೆ. ಈಗಂತೂ ನಿದ್ರೆಗಾಗಿ ಪುರುಷಾರ್ಥವಂತೂ ಇನ್ನೂ ಹೆಚ್ಚಾಗಿ
ಮಾಡುತ್ತಾರೆ. ಈ ಬಾಬಾರವರ ರಥವನ್ನು ನೋಡಿ ಎಷ್ಟು ಹಳೆಯದಾಗಿದೆ. ವಿಚಾರ ಮಾಡಿ, ತಂದೆಯು ಪತಿತ
ಪ್ರಪಂಚದಲ್ಲಿ ಬಂದು ಎಷ್ಟೊಂದು ಪರಿಶ್ರಮ ಪಡುತ್ತಾರೆ. ಭಕ್ತಿಮಾರ್ಗದಲ್ಲಿಯೂ ಪರಿಶ್ರಮ
ಪಡುತ್ತಿದ್ದರು, ಈಗಲೂ ಪರಿಶ್ರಮ ಪಡುತ್ತಾರೆ. ಶರೀರವೂ ಪತಿತವಾಗಿದೆ. ಆದ್ದರಿಂದ ಪ್ರಪಂಚವೂ
ಪತಿತವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಅರ್ಧಕಲ್ಪವಂತೂ ಬಹಳ ವಿಶ್ರಾಂತಿಯಲ್ಲಿರುತ್ತೇನೆ,
ಯಾವುದೇ ವಿಚಾರ ಮಾಡುವ ಅವಶ್ಯಕತೆಯಿಲ್ಲ. ಭಕ್ತಿಮಾರ್ಗದಲ್ಲಿ ಬಹಳ ವಿಚಾರ ಮಾಡಬೇಕಾಗುತ್ತದೆ.
ಆದ್ದರಿಂದಲೇ ತಂದೆಯನ್ನು ದಯಾ ಸಾಗರನೆಂದು ಗಾಯನ ಮಾಡಲಾಗಿದೆ. ಜ್ಞಾನ ಸಾಗರನಾಗಿದ್ದಾರೆ, ಸಾಗರವಂತೂ
ಒಂದೇ ಆಗಿರುತ್ತದೆ ಅದರಿಂದ ವಿಂಗಡನೆಯಾಗಿ ಬಿಡುತ್ತವೆ. ಆ ಜ್ಞಾನಸಾಗರ ತಂದೆಯೇ ಓದಿಸುತ್ತಾರೆ
ಮತ್ತ್ಯಾರೂ ಓದಿಸಲು ಸಾಧ್ಯವಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಯಾರನ್ನೂ
ವಿರೋಧಿಸಬಾರದು, ಯಾರು ಏನೇ ಹೇಳಿದರೂ ಕೇಳಿಯೂ ಕೇಳದಂತಿರಬೇಕಾಗಿದೆ. ಸಹನಾಶೀಲರಾಗಬೇಕಾಗಿದೆ.
ಸದ್ಗುರುವಿನ ನಿಂದನೆ ಮಾಡಿಸಬಾರದಾಗಿದೆ.
2. ತಮ್ಮ ದಾಖಲೆಯು ಹಾಳಾಗಲು ಬಿಡಬಾರದು. ಒಂದುವೇಳೆ ತಪ್ಪಾದರೆ ತಂದೆಗೆ ತಿಳಿಸಿ
ಕ್ಷಮೆಯಾಚಿಸಬೇಕಾಗಿದೆ. ಅಲ್ಲಿ (ಪರಮಧಾಮ) ನೆನಪು ಮಾಡುವ ಅಭ್ಯಾಸವನ್ನಿಟ್ಟುಕೊಳ್ಳಬೇಕಾಗಿದೆ.
ವರದಾನ:
ದೂರ ಹೋಗುವ ಬದಲು
ಸ್ವಯಂ ಅಡ್ಜೆಸ್ಟ್ ಆಗುವಂತಹ ಸಹನಶೀಲತೆಯ ಅವತಾರ ಭವ.
ಕೆಲವು
ಮಕ್ಕಳಲ್ಲಿ ಸಹನ ಶಕ್ತಿಯ ಕೊರತೆ ಇರುವುದು, ಆದ್ದರಿಂದ ಏನೇ ಸಣ್ಣ ಮಾತು ಬಂದರೂ ಸಹಾ ಮುಖ ಲಕ್ಷಣ
ಬಹಳ ಬೇಗ ಬದಲಾವಣೆಯಾಗಿ ಬಿಡುವುದು, ನಂತರ ಗಾಬರಿಯಾಗಿ ಸ್ಥಾನ ಬದಲಾಯಿಸಲು ಯೋಚಿಸುತ್ತಾರೆ, ಇಲ್ಲಾ
ಯಾವುದರಿಂದ ತೊಂದರೆ ಆಯಿತು ಅದನ್ನೇ ಬದಲಾಯಿಸಿ ಬಿಡುತ್ತಾರೆ, ಆದರೆ ತಾವು ಬದಲಾಗಲ್ಲ. ಆದರೆ
ಬೇರೆಯವರನ್ನು ದೂರ ಮಾಡುತ್ತಾರೆ. ಆದ್ದರಿಂದ ಸ್ಥಾನ ಅಥವಾ ಬೇರೆಯವರನ್ನು ಬದಲಿಸುವ ಬದಲು ಸ್ವಯಂ
ಅನ್ನು ಬದಲಿಸಿಕೊಳ್ಳಿ, ಸಹನಶೀಲತೆಯ ಅವತಾರ ಆಗಿರಿ. ಎಲ್ಲರ ಜೊತೆ ಸ್ವಯಂ ಅಡ್ಜೆಸ್ಟ್
ಮಾಡಿಕೊಳ್ಳುವುದನ್ನು ಕಲಿಯಿರಿ.
ಸ್ಲೋಗನ್:
ಪಾರಮಾರ್ಥದ
ಆಧಾರದಿಂದ ವ್ಯವಹಾರವನ್ನು ಸಿದ್ಧ ಮಾಡುವುದು - ಇದೇ ಯೋಗಿಯ ಲಕ್ಷಣವಾಗಿದೆ.