25.12.18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಸಮಯ
ಪ್ರತಿ ಸಮಯ ಜ್ಞಾನ ಸಾಗರನ ಬಳಿ ಬನ್ನಿ, ಜ್ಞಾನ ರತ್ನಗಳ ಸಾಮಾನನ್ನು ತುಂಬಿಸಿಕೊಂಡು ನಂತರ ಹೊರಗಡೆ
ಹೋಗಿ ಹಂಚಿರಿ, ವಿಚಾರಸಾಗರ ಮಂಥನ ಮಾಡಿ ಸೇವೆಯಲ್ಲಿ ತತ್ಪರಾಗಿರಿ.”
ಪ್ರಶ್ನೆ:
ಎಲ್ಲದಕ್ಕಿಂತ
ಒಳ್ಳೆಯ ಪುರುಷಾರ್ಥ ಯಾವುದಾಗಿದೆ? ತಂದೆಗೆ ಯಾವ ಮಕ್ಕಳು ಪ್ರಿಯವಾಗುತ್ತಾರೆ?
ಉತ್ತರ:
ಅನ್ಯರ
ಜೀವನವನ್ನು ರೂಪಿಸುವುದು - ಇದು ಬಹಳ ಒಳ್ಳೆಯ ಪುರುಷಾರ್ಥವಾಗಿದೆ. ಮಕ್ಕಳು ಈ ಪುರುಷಾರ್ಥದಲ್ಲಿ
ತತ್ಪರರಾಗಿರಬೇಕು. ಒಂದು ವೇಳೆ ಯಾವುದೇ ತಪ್ಪುಗಳಾದರೆ ಅದರ ಬದಲು ತುಂಬಾ ಸರ್ವೀಸ್ ಮಾಡಿರಿ.
ಇಲ್ಲವೆಂದರೆ ಆ ತಪ್ಪುಗಳು ಮನಸ್ಸನ್ನು ತಿನ್ನುತ್ತಿರುತ್ತದೆ. ತಂದೆಗೆ ಜ್ಞಾನಿ ಮತ್ತು ಯೋಗಿ
ಮಕ್ಕಳು ತುಂಬಾ ಪ್ರಿಯವಾಗುತ್ತಾರೆ.
ಗೀತೆ:
ಯಾರು ಪ್ರಿಯತಮನ
ಜೊತೆಯಲ್ಲಿದ್ದಾರೆಯೋ ಅವರಿಗೆ ಜ್ಞಾನದ ಮಳೆ
ಓಂ ಶಾಂತಿ.
ಮಕ್ಕಳೂ ತಿಳಿದುಕೊಳ್ಳಬಹುದು – ಮುರುಳಿಯನ್ನು ಸಮ್ಮುಖದಲ್ಲಿ ಕೇಳುವುದು ಹಾಗೂ ಟೇಪ್ನಲ್ಲಿ
ಕೇಳುವುದು ಮತ್ತು ಕಾಗದದ ಮೂಲಕ ಓದುವುದರಲ್ಲಿ ಅಂತರವಿದೆ. ಹಾಡಿನಲ್ಲಿಯೂ ಹೇಳುತ್ತಾರೆ - ಯಾರು
ತಂದೆಯ ಜೊತೆಯಲ್ಲಿದ್ದಾರೆಯೋ ಮಳೆಯಂತೂ ಎಲ್ಲರಿಗೂ ಸುರಿಯುತ್ತದೆ. ಆದರೆ ಜೊತೆಯಲ್ಲಿದ್ದಾಗ ತಂದೆಯ
ಭಾವವನ್ನು ತಿಳಿದುಕೊಳ್ಳುವಂತಹ ಭಿನ್ನ-ಭಿನ್ನ ಸಲಹೆಗಳನ್ನು ತಿಳಿದುಕೊಳ್ಳುವಂತಹ ಲಾಭ ಸಿಗುತ್ತದೆ
ಆದರೆ ಇಲ್ಲಿಯೇ ಕುಳಿತುಕೊಳ್ಳಬೇಕಾಗಿಲ್ಲ. ಸಾಮಾನು ತುಂಬಿಸಿಕೊಂಡು ಹೋಗಿ ಸರ್ವೀಸ್ ಮಾಡಬೇಕು ನಂತರ
ಬಂದು ತುಂಬಿಸಿಕೊಳ್ಳಬೇಕು. ಮನುಷ್ಯರು ಸಾಮಾನು ಖರೀದಿಸುತ್ತಾರೆ ಹೋಗಿ ಮಾರಾಟ ಮಾಡಲು. ಮಾರಾಟ ಮಾಡಿ
ನಂತರ ತೆಗೆದುಕೊಂಡು ಹೋಗುತ್ತಾರೆ. ಇದೂ ಸಹ ಜ್ಞಾನ ರತ್ನಗಳ ಸಾಮಾನುಗಳಿವೆ. ಸಾಮಾನು
ತೆಗೆದುಕೊಳ್ಳುವಂತಹವರು ಬರುತ್ತಾರಲ್ಲವೆ. ಕೆಲವರು ಹಂಚುವುದಿಲ್ಲ, ಹಳೆಯ ಸಾಮಾನುಗಳೇ ಇರುತ್ತವೆ.
ಹೊಸದನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಇಂತಹ ತಿಳುವಳಿಕೆಹೀನರೂ ಇದ್ದಾರೆ. ಮನುಷ್ಯರು
ತೀರ್ಥಯಾತ್ರೆಗೆ ಹೋಗುತ್ತಾರೆ, ಆ ತೀರ್ಥಸ್ಥಾನವೇ ಇಲ್ಲಿಗೆ ಬರುವುದಿಲ್ಲವಲ್ಲವೇ? ಏಕೆಂದರೆ ಅದು
ಜಡ ಚಿತ್ರವಾಗಿದೆ. ಈ ಮಾತುಗಳನ್ನು ಮಕ್ಕಳೇ ತಿಳಿದುಕೊಳ್ಳುತ್ತಾರೆ. ಮನುಷ್ಯರು ಸ್ವಲ್ಪವೂ
ತಿಳಿದುಕೊಂಡಿಲ್ಲ. ಬಹಳ ದೊಡ್ಡ-ದೊಡ್ಡ ಗುರುಗಳು ಶ್ರೀ ಶ್ರೀ ಮಹಾಮಂಡಲೇಶ್ವರರು ಜಿಜ್ಞಾಸುಗಳನ್ನು
ತೀರ್ಥಯಾತ್ರೆಗೆ ಕರೆದುಕೊಂಡು ಹೋಗುತ್ತಾರೆ. ತ್ರಿವೇಣಯಲ್ಲಿ ಎಷ್ಟೊಂದು ಜನ ಹೋಗುತ್ತಾರೆ, ನದಿಯ
ಬಳಿ ಹೋಗಿ ದಾನ-ಪುಣ್ಯ ಮಾಡುವುದನ್ನು ಪುಣ್ಯವೆಂದು ತಿಳಿಯುತ್ತಾರೆ. ಇಲ್ಲಿ ಭಕ್ತಿಯ ಮಾತಂತೂ ಇಲ್ಲ.
ಇಲ್ಲಂತೂ ತಂದೆಯ ಬಳಿ ಬರಬೇಕಾಗುತ್ತದೆ ಅಂದಾಗ ಮಕ್ಕಳು ತಿಳಿದು ನಂತರ ತಿಳಿಸಬೇಕಾಗಿದೆ.
ಪ್ರದರ್ಶನಿಯಲ್ಲಿಯೂ ಸಹ ಮನುಷ್ಯರಿಗೆ ತಿಳಿಸಬೇಕಾಗಿದೆ. ಈ 84 ಜನ್ಮಗಳ ಚಕ್ರದಲ್ಲಿ ಸುತ್ತಿ
ಬರುವುದನ್ನು ಮಕ್ಕಳೇ ತಿಳಿದುಕೊಂಡಿದ್ದಾರೆ, ಎಲ್ಲರೂ ಬರುವುದಿಲ್ಲ. ಇದನ್ನು ತಿಳಿಸಿಕೊಡಲು ಬಹಳ
ಯುಕ್ತಿಗಳು ಬೇಕಾಗಿದೆ. ಈ ಚಕ್ರದಲ್ಲಿಯೇ ಮನುಷ್ಯರು ಗೊಂದಲಕ್ಕೊಳಗಾಗುತ್ತಾರೆ. ವೃಕ್ಷದ ಬಗ್ಗೆಯೂ
ಯಾರಿಗೂ ತಿಳಿದಿಲ್ಲ. ಶಾಸ್ತ್ರಗಳಲ್ಲಿಯೂ ಚಕ್ರವನ್ನು ತೋರಿಸುತ್ತಾರೆ. ಕಲ್ಪದ ಆಯಸ್ಸು ಚಕ್ರದಿಂದ
ತೆಗೆಯುತ್ತಾರೆ. ಚಕ್ರದಲ್ಲಿಯೇ ಕೋಲಾಹಲವಿದೆ. ನಾವಂತೂ ಪೂರ್ಣ ಚಕ್ರವನ್ನು ಸುತ್ತುತ್ತೇವೆ, 84
ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ, ಬಾಕಿ ಇಸ್ಲಾಮಿ, ಬೌದ್ಧಿ ಮುಂತಾದವರಂತೂ ನಂತರ ಬರುತ್ತಾರೆ.
ನಾವು ಹೇಗೆ ಆ ಚಕ್ರದಲ್ಲಿ ಸತೋ, ರಜೋ, ತಮೋದಲ್ಲಿ ಬರುತ್ತೇವೆ ಎನ್ನುವುದು ಚಕ್ರದಲ್ಲಿ
ತೋರಿಸಲಾಗಿದೆ. ಬಾಕಿ ಯಾರೆಲ್ಲಾ ಬರುತ್ತಾರೆ ಇಸ್ಲಾಮಿ, ಬೌದ್ಧಿ ಮುಂತಾದವರನ್ನು ಹೇಗೆ ತೋರಿಸುವುದು?
ಅವರೂ ಸಹ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ನಾವು ನಮ್ಮ ವಿರಾಟ ರೂಪವನ್ನೂ ಸಹ ತೋರಿಸುತ್ತೇವೆ -
ಸತ್ಯಯುಗದಿಂದ ಹಿಡಿದು ಕಲಿಯುಗದವರೆಗೆ ಪೂರ್ತಿ ರೌಂಡ್ನಲ್ಲಿ ತೆಗೆದುಕೊಂಡು ಬರುತ್ತಾರೆ.
ಬ್ರಾಹ್ಮಣರದ್ದು ಶಿಖೆಯಾಗಿದೆ, ನಂತರ ಮುಖವು ಸತ್ಯಯುಗದಲ್ಲಿ, ಬಾಹುಗಳಲ್ಲಿ ತ್ರೇತಾದಲ್ಲಿ,
ಹೊಟ್ಟೆಯು ದ್ವಾಪರದಲ್ಲಿ ನಂತರ ಕಾಲುಗಳು ಅಂತ್ಯದಲ್ಲಿ ನಿಲ್ಲಿಸಬೇಕು. ನಿಮ್ಮದು ವಿರಾಟ ರೂಪವನ್ನು
ತೋರಿಸಬಹುದು. ಬಾಕಿ ಅನ್ಯ ಧರ್ಮದವರು ಹೇಗೆ ತೋರಿಸುವುದು? ಅದನ್ನೂ ಪ್ರಾರಂಭ ಮಾಡಿದರಂತೂ ಮೊದಲು
ಸತೋಪ್ರಧಾನ, ನಂತರ ಸತೋ-ರಜೋ-ತಮೋ. ಇದರಿಂದ ಸಿದ್ಧವಾಗಿ ಬಿಡುತ್ತದೆ - ಎಂದೂ ಯಾರೂ ನಿರ್ವಾಣದಲ್ಲಿ
ಹೋಗಲಿಲ್ಲ. ಅವರಂತೂ ಈ ಚಕ್ರದಲ್ಲಿ ಬರಲೇಬೇಕಾಗುತ್ತದೆ. ಪ್ರತಿಯೊಬ್ಬರೂ ಸತೋ-ರಜೋ-ತಮೋದಲ್ಲಿ
ಬರಲೇಬೇಕಾಗಿದೆ. ಇಬ್ರಾಹಿಂ, ಬುದ್ಧ, ಕ್ರಿಸ್ತ ಮುಂತಾದವರೂ ಮನುಷ್ಯರಾಗಿದ್ದರು. ರಾತ್ರಿಯಲ್ಲಿ
ತಂದೆಗೆ (ಬ್ರಹ್ಮಾ) ಬಹಳ ವಿಚಾರ ಬರುತ್ತದೆ. ವಿಚಾರಗಳಲ್ಲಿ ನಿದ್ರೆಯ ನಶೆಯೇ ಹೊರಟು ಹೋಗುತ್ತದೆ.
ತಿಳಿಸಿಕೊಡಲು ಬಹಳ ಒಳ್ಳೆಯ ಯುಕ್ತಿ ಬೇಕಾಗಿದೆ. ಅವರದ್ದು ವಿರಾಟ ರೂಪವನ್ನು ಮಾಡಬೇಕಾಗಿದೆ.
ಅವರದ್ದು ಕಾಲುಗಳನ್ನು ಅಂತಿಮದಲ್ಲಿ ತೆಗೆದುಕೊಂಡು ಹೋಗಬೇಕು ನಂತರ ಬರವಣಿಗೆಯಲ್ಲಿ ತಿಳಿಸಬೇಕು.
ನೀವು ಮಕ್ಕಳು ತಿಳಿಸಿಕೊಡಬೇಕಾಗಿದೆ - ಕ್ರಿಸ್ತನು ಯಾವಾಗ ಬರುತ್ತಾರೆಯೋ ಅವರು ಸತೋ, ರಜೋ,
ತಮೋದಲ್ಲಿ ಬರಬೇಕಾಗುತ್ತದೆ. ಅವರು ಸತ್ಯಯುಗದಲ್ಲಿ ಬರುವುದಿಲ್ಲ, ಅವರ ನಂತರ ಬರುತ್ತಾರೆ.
ಕ್ರೈಸ್ತನು ಸ್ವರ್ಗದಲ್ಲಿ ಬರುವುದಿಲ್ಲ. ಇದು ಮಾಡಿ-ಮಾಡಲ್ಪಟ್ಟಂತಹ ಆಟವಾಗಿದೆ. ನೀವು
ತಿಳಿದುಕೊಂಡಿದ್ದೀರಿ, ಕ್ರಿಸ್ತನ ಮೊದಲೂ ಧರ್ಮವಿತ್ತು ನಂತರ ಅದೇ ಪುನರಾವರ್ತನೆಯಾಗುತ್ತದೆ.
ಡ್ರಾಮಾದ ರಹಸ್ಯವನ್ನು ತಿಳಿಸಿಕೊಡಬೇಕಾಗುತ್ತದೆ. ಮೊಟ್ಟ ಮೊದಲು ತಂದೆಯ ಪರಿಚಯವನ್ನು ಕೊಡಬೇಕು,
ತಂದೆಯಿಂದ ಆಸ್ತಿಯು ಹೇಗೆ ಸೆಕೆಂಡಿನಲ್ಲಿ ಸಿಗುತ್ತದೆ? ಗಾಯನವೂ ಇದೆ - ಸೆಕೆಂಡಿನಲ್ಲಿ
ಜೀವನ್ಮುಕ್ತಿ. ನೋಡಿ, ತಂದೆಗೆ ಎಷ್ಟೊಂದು ವಿಚಾರ ನಡೆಯುತ್ತಿದೆ. ವಿಚಾರ ಸಾಗರ ಮಂಥನ ಮಾಡುವುದೇ
ತಂದೆಯ ಪಾತ್ರವಾಗಿದೆ. ಗಾಡ್ ಫಾದರ್ಲೀ ಬರ್ತ್ರೈಟ್, ನೌ ಆರ್ ನೆವರ್ (ಈಗಿಲ್ಲದಿದ್ದರೆ ಇನ್ನೆಂದಿಗೂ
ಇಲ್ಲ) ಅಕ್ಷರ ಬರೆಯಲ್ಪಟ್ಟಿದೆ. ಜೀವನ್ಮುಕ್ತಿಯ ಅಕ್ಷರವನ್ನು ಬರೆಯಬೇಕಾಗಿದೆ. ಬರವಣಿಗೆ
ಸ್ಪಷ್ಟವಾಗಿದ್ದಾಗ ತಿಳಿಸಿಕೊಡಲು ಸಹಜವಾಗುತ್ತದೆ. ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆ.
ಜೀವನ್ಮುಕ್ತಿಯಲ್ಲಿ ರಾಜ, ರಾಣಿ , ಪ್ರಜೆಗಳು ಎಲ್ಲರೂ ಇರುತ್ತಾರೆ. ಬರವಣಿಗೆಯನ್ನೂ ಸಹ
ಸರಿಪಡಿಸಬೇಕು. ಚಿತ್ರಗಳಿಲ್ಲದೆ ಇದ್ದರೂ ಸಹ ತಿಳಿಸಿಕೊಡಬಹುದು, ಕೇವಲ ಸನ್ನೆಯಲ್ಲಿಯೂ
ತಿಳಿಸಿಕೊಡಬಹುದು. ಇವರು ತಂದೆಯಿದ್ದಾರೆ, ಇದು ಆಸ್ತಿಯಾಗಿದೆ. ಯಾರು ಯೋಗಯುಕ್ತರಾಗಿರುತ್ತಾರೆ
ಅವರು ಚೆನ್ನಾಗಿ ತಿಳಿಸಿಕೊಡಲು ಸಾಧ್ಯ. ಎಲ್ಲವೂ ಯೋಗದ ಮೇಲೆ ಆಧಾರಿತವಾಗಿದೆ. ಯೋಗದಿಂದ ಬುದ್ಧಿಯು
ಪವಿತ್ರವಾಗುತ್ತದೆ ಆಗಲೇ ಧಾರಣೆಯಾಗಲು ಸಾಧ್ಯ. ಇದರಲ್ಲಿ ಆತ್ಮಾಭಿಮಾನಿ ಸ್ಥಿತಿಯಿರಬೇಕಾಗಿದೆ,
ಎಲ್ಲವನ್ನು ಮರೆಯಬೇಕು. ಶರೀರವನ್ನು ಮರೆಯಬೇಕು. ಈಗ ನಾವು ಮರಳಿ ಹೋಗಬೇಕು. ಈ ಪ್ರಪಂಚವು
ಸಮಾಪ್ತಿಯಾಗಲಿದೆ. ಇವರಿಗೆ (ಬ್ರಹ್ಮಾ) ಸಹಜವಾಗಿದೆ ಏಕೆಂದರೆ ಇವರ ವ್ಯವಹಾರವೇ ಇದಾಗಿದೆ. ಇಡೀ
ದಿನ ಬುದ್ಧಿಯು ಇದರಲ್ಲಿಯೇ ತತ್ಪರವಾಗಿದೆ. ಒಳ್ಳೆಯದು, ಯಾರು ಗೃಹಸ್ಥ ವ್ಯವಹಾರದಲ್ಲಿರುತ್ತಾರೆಯೋ
ಅವರು ಕರ್ಮವನ್ನಂತೂ ಮಾಡಬೇಕು. ಸ್ಥೂಲ ಕರ್ಮವನ್ನು ಮಾಡುವುದರಿಂದ ಆ ಮಾತುಗಳೆಲ್ಲವೂ ಮರೆತು
ಹೋಗುತ್ತದೆ. ತಂದೆಯ ನೆನಪೂ ಮರೆತು ಹೋಗುತ್ತದೆ. ತಂದೆಯು ಸ್ವಯಂ ತಮ್ಮ ಅನುಭವವನ್ನು ತಿಳಿಸುತ್ತಾರೆ
- ತಂದೆಯನ್ನು ನೆನಪು ಮಾಡುತ್ತೇನೆ, ತಂದೆಯು (ಬ್ರಹ್ಮಾ) ಈ ರಥಕ್ಕೆ ತಿನ್ನಿಸುತ್ತಾರೆ ನಂತರ ಮರೆತು
ಹೋಗುತ್ತೇನೆ ಆದ್ದರಿಂದ ತಂದೆಗೆ ವಿಚಾರ ನಡೆಯುತ್ತದೆ - ನಾನೇ ಮರೆಯುತ್ತೇನೆಂದಮೇಲೆ ಇವರಿಗೆ
ಎಷ್ಟೊಂದು ಪರಿಶ್ರಮವಾಗಬಹುದು! ಈ ಚಾರ್ಟನ್ನು ವೃದ್ಧಿ ಹೇಗೆ ಮಾಡಲು ಸಾಧ್ಯ? ಪ್ರವೃತ್ತಿ
ಮಾರ್ಗದವರಿಗೆ ಪರಿಶ್ರಮವಿದೆ. ಅವರು ನಂತರ ಪರಿಶ್ರಮ ಪಡಬೇಕು. ತಂದೆಯು ಎಲ್ಲರಿಗೂ ತಿಳಿಸುತ್ತಾರೆ
- ಯಾರು ಪುರುಷಾರ್ಥ ಮಾಡುತ್ತಿರುತ್ತಾರೆ ಅವರು ಫಲಿತಾಂಶ ಬರೆದು ಕಳುಹಿಸಬಹುದು. ತಂದೆಯು
ತಿಳಿದಿದ್ದಾರೆ - ಅವಶ್ಯವಾಗಿ ಶ್ರಮವಿದೆ. ತಂದೆಯು ಹೇಳುತ್ತಾರೆ - ಮಕ್ಕಳೇ, ರಾತ್ರಿಯಲ್ಲಿ
ಪರಿಶ್ರಮ ಪಡಬೇಕು. ನಿಮ್ಮ ಸುಸ್ತು ಪರಿಶ್ರಮವೆಲ್ಲವೂ ಬಿಟ್ಟು ಹೋಗುತ್ತದೆ, ಒಂದು ವೇಳೆ ನೀವು
ಯೋಗಯುಕ್ತರಾಗಿ, ವಿಚಾರ ಸಾಗರ ಮಂಥನ ಮಾಡುತ್ತೀರಿ ಅಂದಾಗ ನಿಮ್ಮ ಸುಸ್ತೆಲ್ಲವೂ ದೂರವಾಗುತ್ತದೆ.
ತಂದೆಯು ತನ್ನ ಅನುಭವಗಳನ್ನು ತಿಳಿಸುತ್ತಾರೆ - ಯಾವಾಗ ಅನ್ಯ ಮಾತುಗಳ ಕಡೆ ಬುದ್ಧಿಯು ಹೋಗುತ್ತದೆಯೋ
ಆಗ ತಲೆಯು ಬಿಸಿಯಾಗುತ್ತದೆ. ನಂತರ ಆ ಬಿರುಗಾಳಿಗಳಿಂದ ಬುದ್ಧಿಯನ್ನು ತೆಗೆದು ವಿಚಾರ ಸಾಗರ
ಮಂಥನದಲ್ಲಿ ತೊಡಗುತ್ತೇನೆ ಅಂದಾಗ ಬುದ್ಧಿಯು ಹಗುರವಾಗಿ ಬಿಡುತ್ತದೆ. ಮಾಯೆಯ ಬಿರುಗಾಳಿಯಂತೂ ಅನೇಕ
ಪ್ರಕಾರದಲ್ಲಿ ಬರುತ್ತವೆ. ಈ ರೀತಿ ಬುದ್ಧಿಯನ್ನು ತೊಡಗಿಸುವುದರಿಂದ ಆ ಪರಿಶ್ರಮವು ಪೂರ್ಣ ಬಿಟ್ಟು
ಹೋಗುತ್ತದೆ, ಬುದ್ಧಿಯು ರಿಫ್ರೆಷ್ ಆಗಿ ಬಿಡುತ್ತದೆ. ತಂದೆಯ ಸರ್ವೀಸ್ನಲ್ಲಿ ತೊಡಗಿರುತ್ತೀರಿ
ಅಂದಾಗ ಯೋಗ ಮತ್ತು ಜ್ಞಾನದ ಬೆಣ್ಣೆಯು ಸಿಗುತ್ತದೆ. ತಂದೆಯು (ಬ್ರಹ್ಮಾ) ಅನುಭವವನ್ನು
ಹೇಳುತ್ತಿದ್ದಾರೆ. ತಂದೆಯಂತೂ ಮಕ್ಕಳಿಗೆ ತಿಳಿಸುತ್ತಾರಲ್ಲವೇ - ಇಂತಿಂತದ್ದು ಆಗುತ್ತದೆ, ಮಾಯೆಯ
ವಿಕಲ್ಪ ಬರುತ್ತದೆ. ಬುದ್ಧಿಯನ್ನು ನಂತರ ಆ ಕಡೆ ತೆಗೆದುಕೊಂಡು ಹೋಗಬೇಕಾಗಿದೆ. ಚಿತ್ರಗಳನ್ನು
ತೆಗೆದುಕೊಂಡು ಅದರ ಬಗ್ಗೆ ವಿಚಾರ ಮಾಡಬೇಕಾಗಿದೆ. ಆಗ ಮಾಯೆಯ ಬಿರುಗಾಳಿ ಹಾರಿ ಹೋಗುತ್ತದೆ. ತಂದೆಯು
ತಿಳಿದುಕೊಂಡಿದ್ದಾರೆ - ಮಾಯೆಯು ಯೋಗವನ್ನು ಮಾಡಲು ಬಿಡುವುದಿಲ್ಲ. ಕೆಲವರೇ ಪೂರ್ಣ
ಯೋಗದಲ್ಲಿರುತ್ತಾರೆ. ದೊಡ್ಡ-ದೊಡ್ಡ ಮಾತನ್ನಂತೂ ಆಡುತ್ತಿರುತ್ತಾರೆ. ಒಂದು ವೇಳೆ ತಂದೆಯ
ನೆನಪಿನಲ್ಲಿದ್ದರೆ ಬುದ್ಧಿಯು ಸ್ಪಷ್ಟವಾಗಿರುತ್ತದೆ. ನೆನಪು ಮಾಡುವುದು ಅಂದರೆ ಬೆಣ್ಣೆ ಇದ್ದ ಹಾಗೆ
ಅದರಂತೆ ಬೇರೆ ಯಾವುದೂ ಇಲ್ಲ. ಆದರೆ ಸ್ಥೂಲ ಹೊರೆಯು ಹೆಚ್ಚಾಗಿರುವುದರಿಂದ ನೆನಪು ಕಡಿಮೆಯಾಗಿ
ಬಿಡುತ್ತದೆ. ನೋಡಿ, ಬಾಂಬೆಯಲ್ಲಿ ಪೋಪ್ ಬಂದರು ಎಷ್ಟೊಂದು ಮಹಿಮೆಯಾಯಿತು. ಹೇಗೆ ಎಲ್ಲರ ಭಗವಂತ
ಬಂದಿದ್ದರೋ ಎನ್ನುವ ಹಾಗೆ, ಶಕ್ತಿಶಾಲಿಗಳಲ್ಲವೇ. ಭಾರತವಾಸಿಗಳಿಗೆ ತಮ್ಮ ಧರ್ಮದ ಬಗ್ಗೆ
ತಿಳಿದಿಲ್ಲ. ತನ್ನ ಧರ್ಮ ಹಿಂದೂ ಎಂದು ಹೇಳುತ್ತಾರೆ. ಹಿಂದೂ ಎನ್ನುವುದು ಯಾವುದೇ ಧರ್ಮವಲ್ಲ. ಇದು
ಎಲ್ಲಿಂದ ಬಂದಿದೆ, ಯಾವಾಗ ಸ್ಥಾಪನೆಯಾಯಿತೆಂದು ಯಾರಿಗೂ ಗೊತ್ತಿಲ್ಲ. ನಿಮ್ಮಲ್ಲಿ ಜ್ಞಾನದ ಉತ್ಸಾಹ
ಬರಬೇಕಾಗಿದೆ. ಶಿವಶಕ್ತಿಯರಿಗೆ ಜ್ಞಾನದಲ್ಲಿ ಆಸಕ್ತಿ ಬರಬೇಕಾಗಿದೆ. ಅವರು ಶಕ್ತಿಯರನ್ನು ಸಿಂಹದ
ಮೇಲೆ ತೋರಿಸಿದ್ದಾರೆ. ಇದು ಜ್ಞಾನದ ಮಾತಾಗಿದೆ. ಅಂತಿಮದಲ್ಲಿ ಯಾವಾಗ ನಿಮ್ಮಲ್ಲಿ ಶಕ್ತಿಯು
ಬರುತ್ತದೆಯೋ ಆಗ ಸಾಧು-ಸಂತರಿಗೂ ತಿಳಿಸುತ್ತೀರಿ. ಇಷ್ಟೊಂದು ಜ್ಞಾನವು ಬುದ್ಧಿಯಲ್ಲಿದ್ದಾಗ
ಉತ್ಸಾಹವು ಬರುತ್ತದೆ. ಹೇಗೆ ಚಕ್ರಾತ ಹಳ್ಳಿಯಲ್ಲಿ ಹೊಲದ ಕೆಲಸ ಮಾಡುವವರಿಗೆ ಶಿಕ್ಷಕರು ಓದಿಸಿದರೆ
ಅವರು ಓದುವುದಿಲ್ಲ. ಅವರಿಗೆ ಹೊಲ ಗದ್ದೆಗಳೇ ಪ್ರಿಯವಾಗುತ್ತದೆ, ಅದೇ ರೀತಿ ಮನುಷ್ಯರಿಗೆ ಈ
ಜ್ಞಾನವನ್ನು ತಿಳಿಸಲು ಹೋದರೆ ಹೇಳುತ್ತಾರೆ, ಇದು ನಮಗೆ ಪ್ರಿಯವಾಗುವುದಿಲ್ಲ, ನಾವು
ಶಾಸ್ತ್ರಗಳನ್ನೇ ಓದುತ್ತೇವೆ. ಆದರೆ ಭಗವಂತ ಸ್ಪಷ್ಟವಾಗಿ ಹೇಳುತ್ತಾರೆ - ಜಪ, ತಪ, ದಾನ, ಪುಣ್ಯ
ಮುಂತಾದಗಳಿಂದ ಅಥವಾ ಶಾಸ್ತ್ರಗಳನ್ನು ಓದುವುದರಿಂದ ನನ್ನನ್ನು ಯಾರೂ ಪಡೆದಿಲ್ಲ. ಡ್ರಾಮಾವನ್ನು
ತಿಳಿದುಕೊಂಡಿಲ್ಲ. ಅವರು ನಾಟಕದಲ್ಲಿ ಪಾತ್ರಧಾರಿಗಳು, ಪಾತ್ರವನ್ನು ಮಾಡಲು ವಸ್ತ್ರವನ್ನು
ತೆಗೆದುಕೊಂಡಿದ್ದೇನೆಂದು ಗೊತ್ತಿಲ್ಲ. ಇದು ಮುಳ್ಳುಗಳ ಅರಣ್ಯವಾಗಿದೆ. ಒಬ್ಬರು ಇನ್ನೊಬ್ಬರಿಗೆ
ಮುಳ್ಳು ಚುಚ್ಚುತ್ತಾರೆ, ಲೂಟಿ ಮಾಡುತ್ತಾರೆ. ಮುಖ ಮಾತ್ರ ಮನುಷ್ಯರ ರೀತಿಯಲ್ಲಿದೆ ಆದರೆ ಬುದ್ಧಿಯು
ಮಂಗನ ಸಮಾನವಾಗಿದೆ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಈ ಮಾತುಗಳನ್ನು ಹೊಸಬರು ಕೇಳಿದರೆ
ಬಿಸಿಯಾಗಿ ಬಿಡುತ್ತಾರೆ. ನೀವು ಮಕ್ಕಳು ಸ್ವಲ್ಪವೂ ಬಿಸಿಯಾಗುವುದಿಲ್ಲ. ತಂದೆಯು ಹೇಳುತ್ತಾರೆ -
ನಾನು ಮಕ್ಕಳಿಗೇ ತಿಳಿಸುತ್ತೇನೆ. ಮಕ್ಕಳಿಗಂತೂ ತಂದೆ-ತಾಯಿಗಳು ಏನು ಬೇಕಾದರೂ ಹೇಳಲು ಸಾಧ್ಯ.
ಮಕ್ಕಳಿಗೆ ತಂದೆಯು ಪೆಟ್ಟು ಕೊಟ್ಟರೂ ಅನ್ಯರು ಏನೂ ಮಾಡಲು ಸಾಧ್ಯವಿಲ್ಲ. ತಂದೆ-ತಾಯಿಗಳ
ಕರ್ತವ್ಯವಾಗಿದೆ ಮಕ್ಕಳನ್ನು ಸುಧಾರಣೆ ಮಾಡುವುದು. ಆದರೆ ಇಲ್ಲಿ ಕಾಯಿದೆಯಿಲ್ಲ. ಹೇಗೆ ಯಾವ
ಕರ್ಮವನ್ನು ನಾನು ಮಾಡುತ್ತೇನೆಯೋ ನನ್ನನ್ನು ನೋಡಿ ಅನ್ಯರೂ ಮಾಡುತ್ತಾರೆ. ಅಂದಾಗ ತಂದೆಯು ಯಾವ
ವಿಚಾರ ಸಾಗರ ಮಂಥನ ಮಾಡಿದ್ದರು ಅದನ್ನು ಸಹ ತಿಳಿಸಿದರು. ಇವರು ಮೊದಲ ನಂಬರಿನಲ್ಲಿದ್ದಾರೆ, ಇವರು
84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಅಂದಾಗ ಅನ್ಯ ಯಾರು ಧರ್ಮ ಸ್ಥಾಪಕರಿರುತ್ತಾರೆ. ಅವರು
ನಂತರ ನಿರ್ವಾಣಕ್ಕೆ ಹೇಗೆ ಹೋಗಲು ಸಾಧ್ಯ. ಅವರು ಸತೋ, ರಜೋ, ತಮೋದಲ್ಲಿ ಅವಶ್ಯವಾಗಿ
ಬರಬೇಕಾಗುತ್ತದೆ. ಮೊದಲ ನಂಬರಿನಲ್ಲಿ ಲಕ್ಷ್ಮೀ-ನಾರಾಯಣರಿದ್ದಾರೆ, ಅವರು ವಿಶ್ವದ
ಮಾಲೀಕರಾಗಿದ್ದಾರೆ. ಅವರೂ ಸಹ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮನುಷ್ಯ ಸೃಷ್ಟಿಯಲ್ಲಿ
ಯಾರು ನ್ಯೂ ಮ್ಯಾನ್ ಇದ್ದಾರೆ ಅಂದಾಗ ಅವರ ಜೊತೆ ನ್ಯೂ ವುಮೆನ್ (ಹೊಸ ಸ್ತ್ರೀ) ಸಹ ಇರಬೇಕಾಗುತ್ತದೆ.
ಇಲ್ಲವೆಂದರೆ ವುಮೆನ್ (ಸ್ತ್ರೀ) ವಿನಃ ಜನ್ಮ ಕೊಡಲು ಹೇಗೆ ಸಾಧ್ಯ? ಸತ್ಯಯುಗದಲ್ಲಿ ನ್ಯೂ ಮ್ಯಾನ್
ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಅವರೇ ಓಲ್ಡ್ (ಹಳೆಯದು) ನಿಂದ ನ್ಯೂ ಆಗುತ್ತಾರೆ ಇವರಂತೂ ಆಲ್
ರೌಂಡ್ ಪಾತ್ರಧಾರಿಗಳಾಗಿದ್ದಾರೆ, ಉಳಿದವರೆಲ್ಲರೂ ಸಹ ಸತೋದಿಂದ ತಮೋದಲ್ಲಿ ಬರುತ್ತಾರೆ ಹಳಬರಿಂದ
ಹೊಸಬರಾಗುತ್ತಾರೆ. ಹೇಗೆ ಕ್ರಿಸ್ತ ಮೊದಲು ಹೊಸದಾಗಿ ಬಂದರು ನಂತರ ಹಳಬರಾಗಿ ಹೋದರು ನಂತರ ಹೊಸದಾಗಿ
ತಮ್ಮ ಸಮಯದಲ್ಲಿ ಬರುತ್ತಾರೆ. ಇದು ಬಹಳ ತಿಳಿದುಕೊಳ್ಳುವಂತಹ ಮಾತುಗಳಾಗಿವೆ. ಇದರಲ್ಲಿ ಬಹಳ ಯೋಗವೂ
ಇರಬೇಕಾಗಿದೆ. ಪೂರ್ಣ ಸಮರ್ಪಣೆಯಾಗಬೇಕು ಆಗ ಆಸ್ತಿಗೆ ಹಕ್ಕುದಾರರಾಗಬಹುದು. ಸಮರ್ಪಿತರಾದವರಿಗೆ ಈ
ರೀತಿಯಾಗಿ ಮಾಡಿ ಎಂದು ತಂದೆಯು ಸಲಹೆ ಕೊಡುತ್ತಾರೆ. ಕೆಲವರು ಸಮರ್ಪಣೆಯಾಗಿದ್ದಾರೆ, ನಂತರ
ಹೇಳುತ್ತೇನೆ - ವ್ಯವಹಾರದಲ್ಲಿಯೂ ಇರಿ ಆಗ ಬುದ್ಧಿ ಹೇಗಿದೆ ಎಂದು ತಿಳಿಯುತ್ತದೆ.
ವ್ಯವಹಾರದಲ್ಲಿರುತ್ತಾ ಜ್ಞಾನವನ್ನು ತಿಳಿದುಕೊಳ್ಳಿ, ಉತ್ತೀರ್ಣರಾಗಿ ತೋರಿಸಿ. ಗೃಹಸ್ಥದಲ್ಲಿ
ಹೋಗಬಾರದು, ಬ್ರಹ್ಮಚಾರಿಯಾಗಿರುವುದು ಒಳ್ಳೆಯದು. ಬಾಬಾ ಪ್ರತಿಯೊಬ್ಬರ ಲೆಕ್ಕವನ್ನೂ ಕೇಳುತ್ತಾರೆ.
ಮಮ್ಮಾ-ಬಾಬಾರವರ ಪಾಲನೆ ತೆಗೆದುಕೊಂಡಮೇಲೆ ಇದರ ಋಣವನ್ನೂ ತೀರಿಸಬೇಕಾಗಿದೆ ಆಗ ಶಕ್ತಿ ಸಿಗುತ್ತದೆ.
ಇಲ್ಲವೆಂದರೆ ತಂದೆಯು ಹೇಳುತ್ತಾರೆ - ನಾನು ಇಷ್ಟೂ ಪರಿಶ್ರಮ ಪಟ್ಟು ಪಾಲನೆ ಮಾಡಿದ್ದೇನೆ ಮತ್ತು
ನೀವು ನನ್ನ ಕೈಯನ್ನು ಬಿಟ್ಟಿದಿರಿ. ಪ್ರತಿಯೊಬ್ಬರ ನಾಡಿ ನೋಡಿ ಸಲಹೆ ಕೊಡಲಾಗುತ್ತದೆ.
ತಿಳಿದುಕೊಳ್ಳಿ ಇದರಿಂದ ಒಂದುವೇಳೆ ತಪ್ಪುಗಳಾದರೆ ತಂದೆಯು ತಪ್ಪಿಲ್ಲದ ಹಾಗೆ ಸರಿ ಪಡಿಸುತ್ತಾರೆ.
ಇವರೂ (ಬ್ರಹ್ಮಾ) ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದನುಸಾರ ನಡೆಯುತ್ತಾರೆ. ಕೆಲವೊಮ್ಮೆ ಹಾನಿಯಾದಾಗ
ಇದು ಡ್ರಾಮಾದಲ್ಲಿತ್ತೆಂದು ತಿಳಿಯಬೇಕು. ನಂತರ ಅದೇ ತಪ್ಪುಗಳು ಆಗಬಾರದು. ತಪ್ಪುಗಳು ತಮ್ಮ
ಮನಸ್ಸನ್ನು ತಿನ್ನುತ್ತಿರುತ್ತದೆ. ತಪ್ಪುಗಳಾದಾಗ ಅದರ ಪ್ರತ್ಯುತ್ತರವಾಗಿ ಹೆಚ್ಚು ಸರ್ವೀಸಿನಲ್ಲಿ
ತತ್ಪರರಾಗಬೇಕು, ಬಹಳ ಪುರುಷಾರ್ಥ ಮಾಡಬೇಕು. ಅನ್ಯರ ಜೀವನ ರೂಪಿಸುವುದು ಇದಾಗಿದೆ ಪುರುಷಾರ್ಥ.
ಜ್ಞಾನಿ ಮತ್ತು ಯೋಗಿಗಳು ಎಲ್ಲರಿಗಿಂತ ಪ್ರಿಯರಾಗಿದ್ದಾರೆ ಎಂದು ತಂದೆಯು ಹೇಳುತ್ತಾರೆ.
ಯೋಗದಲ್ಲಿದ್ದು ಭೋಜನವನ್ನು ತಯಾರು ಮಾಡಿ, ಸ್ವೀಕಾರ ಮಾಡಿಸಿದಾಗ ಬಹಳ ಉನ್ನತಿಯನ್ನು ಹೊಂದಲು
ಸಾಧ್ಯ. ಇದು ಶಿವ ತಂದೆಯ ಭಂಡಾರವಾಗಿದೆ ಅಂದಾಗ ಶಿವ ತಂದೆಯ ಮಕ್ಕಳು ಅವಶ್ಯವಾಗಿ ಈ ರೀತಿ
ಯೋಗಯುಕ್ತರಾಗಿರುತ್ತಾರೆ. ನಿಧಾನವಾಗಿ ಸ್ಥಿತಿಯು ಶ್ರೇಷ್ಠವಾಗುತ್ತದೆ. ಸಮಯವಂತೂ ಅವಶ್ಯವಾಗಿ
ಹಿಡಿಸುತ್ತದೆ. ಪ್ರತಿಯೊಬ್ಬರ ಕರ್ಮ ಬಂಧನವು ತಮ್ಮ ತಮ್ಮದೇ ಆಗಿದೆ. ಕನ್ಯೆಯರಿಗೆ ಯಾವುದೇ
ಹೊರೆಯಿಲ್ಲ. ಹಾ! ಮಕ್ಕಳಿಗಿದೆ. ದೊಡ್ಡ ಮಕ್ಕಳಾದ ಮೇಲೆ ತಂದೆ-ತಾಯಿಗೆ ಹೊರೆ ಬೀಳುತ್ತದೆ. ತಂದೆಯು
ಇಷ್ಟು ತಿಳಿಸುತ್ತಾರೆ, ಇಷ್ಟು ಸಮಯ ಪಾಲನೆ ಮಾಡಿದ್ದಾರೆ ಅಂದಾಗ ಅವರನ್ನು ಪಾಲನೆ ಮಾಡಬೇಕಾಗಿದೆ,
ಲೆಕ್ಕವನ್ನು ಸಮಾಪ್ತಿ ಮಾಡಬೇಕಾಗಿದೆ. ಆಗ ಅವರ ಮನಸ್ಸಿಗೆ ಖುಷಿಯಾಗುತ್ತದೆ. ಯಾರು ಸುಪುತ್ರ
ಮಕ್ಕಳಿರುತ್ತಾರೆಯೋ ಅವರು ಯಾತ್ರೆಯಿಂದ ಹಿಂತಿರುಗಿ ಬಂದ ಮೇಲೆ ಎಲ್ಲವನ್ನು ತಂದೆಯು
ಮುಂದಿಡುತ್ತಾರೆ. ಸಾಲ ತೀರಿಸಬೇಕಲ್ಲವೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಉನ್ನತ
ಪದವಿಯನ್ನು ಪಡೆಯುವವರಿಗೆ ಸಿಂಹದ ಸಮಾನ ಉತ್ಸಾಹ ಉಕ್ಕಿ ಬರುತ್ತಿರುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
೧.
ಯೋಗದಲ್ಲಿದ್ದು ಭೋಜನವನ್ನು ತಯಾರಿಸಬೇಕಾಗಿದೆ. ಯೋಗದಲ್ಲಿ ಭೋಜನವನ್ನು ಸ್ವೀಕಾರ ಮಾಡಬೇಕು ಮತ್ತು
ಅನ್ಯರಿಗೆ ಸ್ವೀಕಾರ ಮಾಡಿಸಬೇಕಾಗಿದೆ.
೨. ತಂದೆಯು ಏನು ತಿಳಿಸುತ್ತಾರೆಯೋ ಅದನ್ನು ಚೆನ್ನಾಗಿ ವಿಚಾರ ಸಾಗರ ಮಂಥನ ಮಾಡಿ ಯೋಗ ಯುಕ್ತರಾಗಿ
ಅನ್ಯರಿಗೂ ತಿಳಿಸಬೇಕಾಗಿದೆ.
ವರದಾನ:
ತಂದೆಯ ಸಮಾನ
ಪ್ರತಿ ಆತ್ಮನ ಮೇಲೆ ಕೃಪೆ ಅಥವಾ ದಯೆ ತೋರುವಂತಹ ಮಾಸ್ಟರ್ ದಯಾಹೃದಯಿ ಭವ.
ಹೇಗೆ ತಂದೆ
ದಯಾಹೃದಯಿಯಾಗಿದ್ದಾರೆ, ಹಾಗೆ ನೀವು ಮಕ್ಕಳೂ ಸಹಾ ಎಲ್ಲರ ಮೇಲೆ ಕೃಪೆ ಅಥವಾ ದಯೆ ತೋರುವಿರಿ
ಏಕೆಂದರೆ ತಂದೆ ಸಮಾನ ನಿಮಿತ್ತರಾಗಿರುವಿರಿ. ಬ್ರಾಹ್ಮಣ ಆತ್ಮಗಳಿಗೆ ಎಂದೂ ಯಾವುದೇ ಆತ್ಮನ ಪ್ರತಿ
ತಿರಸ್ಕಾರ ಬರುವ ಹಾಗಿಲ್ಲ. ಇಲ್ಲ ಅವರು ಕಂಸನೇ ಆಗಿರಬಹುದು, ಜರಾಸಂಧನೇ ಆಗಿರಬಹುದು ಅಥವಾ ರಾವಣನೇ
ಆಗಿರಬಹುದು - ಯಾರೇ ಆಗಿರಲಿ ಆದರೂ ಅವರೂ ಸಹಾ ದಯಾಹೃದಯಿ ತಂದೆಯ ಮಕ್ಕಳು ಎಂದೂ ತಿರಸ್ಕಾರ ಮಾಡುವ
ಹಾಗಿಲ್ಲ. ಪರಿವರ್ತನೆಯ ಭಾವನೆ, ಕಲ್ಯಾಣದ ಭಾವನೆಯಿಡಿ. ಏಕೆಂದರೆ ಅವರು ತಮ್ಮ ಪರಿವಾರದವರೇ
ಆಗಿದ್ದಾರೆ, ಪರವಶವಾಗಿದ್ದಾರೆ, ಪರವಶರಾಗಿರುವವರ ಮೇಲೆ ತಿರಸ್ಕಾರ ಬರುವುದಿಲ್ಲ.
ಸ್ಲೋಗನ್:
ಮಾಸ್ಟರ್ ಜ್ಞಾನ
ಸೂರ್ಯರಾಗಿ ಶಕ್ತಿಗಳ ರೂಪಿ ಕಿರಣಗಳಿಂದ ಬಲಹೀನ ರೂಪಿ ಕೊಳಕನ್ನು ಭಸ್ಮ ಮಾಡಿ ಬಿಡಿ.