23.12.18
Avyakt Bapdada Kannada Murli
12.03.84 Om Shanti
Madhuban
" ಆತ್ಮೀಯತೆಯ ಸಹಜ ವಿಧಿ
- ಸಂತುಷ್ಠತೆ"
ಇಂದು ಬಾಪ್ದಾದಾರವರು
ನಾಲ್ಕೂ ಕಡೆಯಲ್ಲಿರುವವರು ದೂರವಿದ್ದರೂ ಸಮೀಪವಿರುವಂತಹ ಎಲ್ಲಾ ಮಕ್ಕಳ ಸಂತುಷ್ಠತೆ ಅಥವಾ ಆತ್ಮೀಯತೆ
ಹಾಗೂ ಪ್ರಸನ್ನತೆಯ ಮುಗುಳ್ನಗುವನ್ನು ನೋಡುತ್ತಿದ್ದಾರೆ. ಸಂತುಷ್ಠತೆ, ಆತ್ಮೀಯತೆಯ ಸಹಜ
ವಿಧಿಯಾಗಿದೆ, ಪ್ರಸನ್ನತೆಯು ಸಹಜ ಸಿದ್ಧಿಯಾಗಿದೆ. ಯಾರ ಬಳಿ ಸಂತುಷ್ಠತೆಯಿದೆಯೋ ಅವರು ಸದಾ
ಪ್ರಸನ್ನ ಸ್ವರೂಪರಂತು ಅವಶ್ಯವಾಗಿ ಕಾಣಿಸುತ್ತಾರೆ. ಸಂತುಷ್ಠತೆಯು ಸರ್ವ ಪ್ರಾಪ್ತಿ ಸ್ವರೂಪವಾಗಿದೆ.
ಸಂತುಷ್ಠತೆಯು ಸದಾ ಪ್ರತಿಯೊಂದು ವಿಶೇಷತೆಯನ್ನು ಧಾರಣೆ ಮಾಡಿಕೊಳ್ಳುವುದರಲ್ಲಿ ಸಹಜ ಸಾಧನವಾಗಿದೆ.
ಸಂತುಷ್ಠತೆಯ ಖಜಾನೆಯು ಸರ್ವ ಖಜಾನೆಗಳನ್ನು ಸ್ವತಹವಾಗಿಯೇ ತನ್ನ ಕಡೆಗೆ ಆಕರ್ಷಿಸುತ್ತದೆ.
ಸಂತುಷ್ಠತೆಯು ಜ್ಞಾನದ ವಿಷಯದ ಪ್ರತ್ಯಕ್ಷ ಪ್ರಮಾಣವಾಗಿದೆ. ಸಂತುಷ್ಠತೆಯು ನಿಶ್ಚಿಂತ
ಚಕ್ರವರ್ತಿಯನ್ನಾಗಿ ಮಾಡುತ್ತದೆ. ಸಂತುಷ್ಠತೆಯು ಸದಾ ಸ್ವಮಾನದ ಸೀಟ್ನಲ್ಲಿ ಸೆಟ್ ಆಗಿರುವ
ಸಾಧನವಾಗಿದೆ. ಸಂತುಷ್ಠತೆಯು ಮಹಾದಾನಿ, ವಿಶ್ವ ಕಲ್ಯಾಣ, ವರದಾನಿಯನ್ನಾಗಿ ಸಹಜ ಹಾಗೂ
ಸದಾಕಾಲಕ್ಕಾಗಿ ಮಾಡುತ್ತದೆ. ಸಂತುಷ್ಠತೆಯು ಅಲ್ಪಕಾಲದ ಈ ನನ್ನ-ನಿನ್ನದರ ಚಕ್ರದಿಂದ ಮುಕ್ತಗೊಳಿಸಿ,
ಸ್ವದರ್ಶನ ಚಕ್ರಧಾರಿಯನ್ನಾಗಿ ಮಾಡುತ್ತದೆ. ಸಂತುಷ್ಠತೆಯು ಸದಾ ನಿರ್ವಿಕಲ್ಪ, ಏಕರಸದ ವಿಜಯಿ ಆಸನದ
ಅಧಿಕಾರಿಯನ್ನಾಗಿ ಮಾಡುತ್ತದೆ. ಸದಾ ಬಾಪ್ದಾದಾರವರ ಹೃದಯ ಸಿಂಹಾಸನಾಧಿಕಾರಿ, ಸಹಜ ಸ್ಮೃತಿಯ
ತಿಲಕಧಾರಿ, ವಿಶ್ವ ಪರಿವರ್ತನೆಯ ಸೇವೆಯ ಕಿರೀಟಧಾರಿ, ಇದೇ ಅಧಿಕಾರದ ಸಂಪನ್ನ ಸ್ವರೂಪದಲ್ಲಿ
ಸ್ಥಿತರನ್ನಾಗಿ ಮಾಡುತ್ತದೆ. ಸಂತುಷ್ಠತೆಯು ಬ್ರಾಹ್ಮಣ ಜೀವನದ ಜೀವದಾನವಾಗಿದೆ. ಬ್ರಾಹ್ಮಣ ಜೀವನದ
ಉನ್ನತಿಯ ಸಹಜ ಸಾಧನವು ಆಗಿದೆ. ಸ್ವಯನಿಂದ ಸಂತುಷ್ಠ, ಪರಿವಾರದಿಂದ ಸಂತುಷ್ಠ ಮತ್ತು ಪರಿವಾರವು
ಅವರಿಂದ ಸಂತುಷ್ಠ. ಯಾವುದೇ ಪರಿಸ್ಥಿತಿಯಲ್ಲಿರುತ್ತಿದ್ದರೂ, ವಾಯುಮಂಡಲ, ಪ್ರಕಂಪನಗಳ
ಏರುಪೇರಿನಲ್ಲಿಯೂ ಸಂತುಷ್ಠರು. ಇಂತಹ ಸಂತುಷ್ಠ ಸ್ವರೂಪ, ಶ್ರೇಷ್ಠಾತ್ಮ ವಿಜಯಿ ರತ್ನದ
ಸರ್ಟಿಫಿಕೇಟ್ನ ಅಧಿಕಾರಿಯಾಗಿದ್ದಾರೆ. ಮೂರೂ ಸರ್ಟಿಫಿಕೇಟ್ನ್ನು ತೆಗೆದುಕೊಳ್ಳಬೇಕಾಗುತ್ತದೆ :-
1. ಸ್ವಯಂ ಸ್ವಯಂನಿಂದ ಸಂತುಷ್ಠತೆ
2. ತಂದೆಯ ಮೂಲಕ ಸದಾಕಾಲದ ಸಂತುಷ್ಠತೆ
3. ಬ್ರಾಹ್ಮಣ ಪರಿವಾರದ ಮೂಲಕ ಸಂತುಷ್ಠತೆ.
ಇದರಿಂದ ತಮ್ಮ ವರ್ತಮಾನ ಮತ್ತು ಭವಿಷ್ಯವನ್ನು ಶ್ರೇಷ್ಠ ಮಾಡಿಕೊಳ್ಳಬಹುದು. ಈಗಲೂ ಸರ್ಟಿಫಿಕೇಟ್
ತೆಗೆದುಕೊಳ್ಳುವ ಸಮಯವಾಗಿದೆ. ತೆಗೆದುಕೊಳ್ಳಬಹುದು ಆದರೆ ಹೆಚ್ಚು ಸಮಯವಿಲ್ಲ. ಈಗ ಲೇಟ್ ಆಗಿದೆ
ಆದರೆ ಟೂಲೇಟ್ ಆಗಿಲ್ಲ. ಈಗಲೂ ಸಂತುಷ್ಠತೆಯ ವಿಶೇಷತೆಯಿಂದ ಮುಂದುವರೆಯಬಹುದು. ಈಗ ಲಾಸ್ಟ್ ಸೋ
ಫಾಸ್ಟ್ ಆಗುವುದಕ್ಕೆ ಅವಕಾಶವಿದೆ. ನಂತರ ಲಾಸ್ಟ್ ಸೋ ಲಾಸ್ಟ್ ಆಗಿ ಬಿಡುತ್ತೀರಿ. ಅಂದಮೇಲೆ ಇಂದು
ಬಾಪ್ದಾದಾರವರು ಇದೇ ಸರ್ಟಿಫಿಕೇಟ್ನ್ನು ಪರಿಶೀಲನೆ ಮಾಡುತ್ತಿದ್ದರು. ಸ್ವಯಂ ಸಹ ಸ್ವಯನ್ನು
ಪರಿಶೀಲನೆ ಮಾಡಿಕೊಳ್ಳಬಹುದು. ಪ್ರಸನ್ನ ಚಿತ್ತರಾಗಿದ್ದೀರಾ ಅಥವಾ ಪ್ರಶ್ನಚಿತ್ತರೇ? ಡಬಲ್
ವೀದೆಶಿಗಳು ಪ್ರಸನ್ನ ಚಿತ್ತರೇ ಅಥವಾ ಸಂತುಷ್ಟರಾಗಿದ್ದೀರಾ? ಪ್ರಶ್ನೆಯು ಸಮಾಪ್ತಿಯಾಯಿತೆಂದರೆ
ಪ್ರಸನ್ನರಾಗಿಯೇ ಬಿಟ್ಟಿರಿ. ಸಂತುಷ್ಟತೆಯ ಸಮಯವೇ ಸಂಗಮ ಯುಗವಾಗಿದೆ. ಸಂತುಷ್ಠತೆಯ ತಿಳುವಳಿಕೆಯೂ
ಈಗ ಇದೆ. ಅಲ್ಲಿ ಈ ಸಂತುಷ್ಠ, ಅಸಂತುಷ್ಠದ ಜ್ಞಾನದಿಂದ ಆಚೆಯಿರುತ್ತೀರಿ. ಈಗ ಇದು ಸಂಗಮಯುಗದ
ಖಜಾನೆಯೇ ಆಗಿದೆ. ಎಲ್ಲಾ ಸಂತುಷ್ಠ ಆತ್ಮರು, ಸರ್ವರಿಗೂ ಸಂತುಷ್ಠತೆಯ ಖಜಾನೆಯನ್ನು
ಕೊಡುವವರಾಗಿದ್ದೀರಿ. ದಾತಾನ ಮಕ್ಕಳು ಮಾಸ್ಟರ್ ದಾತಾ ಆಗಿದ್ದೀರಿ. ಇಷ್ಟೂ ಜಮಾ ಮಾಡಿದ್ದೀರಲ್ಲವೆ!
ಸ್ಟಾಕ್ನ್ನು ಫುಲ್ ಮಾಡಿದ್ದೀರಾ ಅಥವಾ ಸ್ವಲ್ಪ ಕಡಿಮೆಯಿದೆಯೇ? ಒಂದು ವೇಳೆ ಸ್ಟಾಕ್
ಕಡಿಮೆಯಿದೆಯೆಂದರೆ ವಿಶ್ವ ಕಲ್ಯಾಣಕಾರಿಯಾಗಲು ಸಾಧ್ಯವಿಲ್ಲ. ಕೇವಲ ಕಲ್ಯಾಣಯಾಗಿ ಬಿಡುತ್ತೀರಿ.
ಆಗುವುದಂತು ತಂದೆಯ ಸಮಾನ ಅಲ್ಲವೆ! ಒಳ್ಳೆಯದು - ಎಲ್ಲರೂ ದೇಶ-ವಿದೇಶದವರು ಸರ್ವ ಖಜಾನೆಗಳಿಂದ
ಸಂಪನ್ನ ಮಾಸ್ಟರ್ ಸರ್ವಶಕ್ತಿವಂತರಾಗಿ ಹೋಗುತ್ತಿರುವಿರಲ್ಲವೆ! ಬಂದಿದ್ದೇವೆಂದಮೇಲೆ ಹೋಗಲೂಬೇಕು.
ತಂದೆಯೂ ಬರುತ್ತಾರೆ ಅಂದಮೇಲೆ ಹೋಗುತ್ತಾರೆ ಅಲ್ಲವೆ. ಮಕ್ಕಳೂ ಸಹ ಬರುತ್ತಾರೆ ಮತ್ತು ಸಂಪನ್ನರಾಗಿ
ಹೋಗುತ್ತಾರೆ. ತಂದೆಯ ಸಮಾನರಾಗುವುದಕ್ಕಾಗಿ ಹೋಗುತ್ತೀರಿ. ತಮ್ಮ ಬ್ರಾಹ್ಮಣ ಪರಿವಾರದ ವೃದ್ಧಿಗಾಗಿ
ಹೋಗುತ್ತೀರಿ. ಬಾಯಾರಿರುವ ಆತ್ಮರ ಬಾಯಾರಿಕೆಯನ್ನು ನೀಗಿಸಲು ಹೋಗುತ್ತೀರಿ, ಇದಕ್ಕಾಗಿಯೇ
ಹೋಗುತ್ತಿದ್ದೀರಲ್ಲವೆ! ತಮ್ಮ ಹೃದಯದಿಂದ ಹೋಗುತ್ತೀರಾ ಅಥವಾ ಬಂಧನದಿಂದಂತು ಹೋಗುತ್ತಿಲ್ಲ ಅಲ್ಲವೆ.
ಆದರೆ ತಂದೆಯ ಡೈರೆಕ್ಷನ್ನಿಂದ ಸೇವೆಗಾಗಿ ಸ್ವಲ್ಪ ಸಮಯಕ್ಕಾಗಿ ಹೋಗುತ್ತಿದ್ದೀರಿ! ಹೀಗೆ
ತಿಳಿದುಕೊಂಡು ಹೋಗುತ್ತಿದ್ದೀರಲ್ಲವೆ? ಹೀಗಂತು ಅಲ್ಲ - ನಾವಂತು ಇರುವುದೇ ಅಮೇರಿಕಾದಲ್ಲಿ,
ಆಸ್ಟ್ರೇಲಿಯಾದಲ್ಲಿ.... ಇಲ್ಲ. ಸ್ವಲ್ಪ ಸಮಯಕ್ಕಾಗಿ ಬಾಪ್ದಾದಾರವರು ಸೇವೆಗಾಗಿ ನಿಮಿತ್ತರನ್ನಾಗಿ
ಮಾಡಿ ಕಳುಹಿಸುತ್ತಿದ್ದಾರೆ. ಬಾಪ್ದಾದಾರವರು ಕಳುಹಿಸುತ್ತಿದ್ದಾರೆ, ತಮ್ಮ ಇಚ್ಛೆಯಿಂದ
ಹೋಗುತ್ತಿಲ್ಲ. ನನ್ನ ಮನೆಯಾಗಿದೆ, ನನ್ನ ದೇಶವೆಂದು ಇಲ್ಲ. ತಂದೆಯು ಸೇವಾ ಸ್ಥಾನದಲ್ಲಿ
ಕಳುಹಿಸುತ್ತಿದ್ದಾರೆ. ಎಲ್ಲರೂ ಸದಾ ಭಿನ್ನ ಹಾಗೂ ತಂದೆಗೆ ಪ್ರೀಯರು! ಯಾವುದೇ ಬಂಧನವಿಲ್ಲ. ಸೇವೆಯ
ಬಂಧನವೂ ಇಲ್ಲ. ತಂದೆಯು ಕಳುಹಿಸಿದ್ದಾರೆ, ಅದು ತಂದೆಗೆ ಗೊತ್ತಿದೆ. ನಿಮಿತ್ತರಾಗಿದ್ದೀರಿ,
ಎಲ್ಲಿಯವರೆಗೆ ಮತ್ತು ಎಲ್ಲಿ ನಿಮಿತ್ತರನ್ನಾಗಿ ಮಾಡಿದ್ದಾರೆ ಅಲ್ಲಿಯವರೆಗೂ ನಿಮಿತ್ತರಾಗಿದ್ದೇವೆ.
ಹೀಗೆ ಡಬಲ್ ಲೈಟ್ ಆಗಿದ್ದೀರಲ್ಲವೆ! ಪಾಂಡವರೂ ಸಹ ಭಿನ್ನ ಹಾಗೂ ಪ್ರಿಯರಾಗಿದ್ದೀರಲ್ಲವೆ.
ಬಂಧನವಿರುವವರಂತು ಯಾರೂ ಇಲ್ಲ. ಭಿನ್ನರಾಗುವುದೇ ಪ್ರೀಯರಾಗುವುದು ಆಗಿದೆ. ಒಳ್ಳೆಯದು.
ಸದಾ ಸಂತುಷ್ಠತೆಯ ಆತ್ಮೀಯತೆಯಲ್ಲಿರುವವರು, ಪ್ರಸನ್ನ ಚಿತ್ತರಾಗಿರುವವರು ಸದಾ ಪ್ರತೀ ಸಂಕಲ್ಪ,
ಮಾತು, ಕರ್ಮದ ಮೂಲಕ ಸರ್ವರಲ್ಲಿ ಸಂತುಷ್ಠತೆಯ ಬಲವನ್ನು ಕೊಡುವಂತಹ, ಹೃದಯ ವಿಧೀರ್ಣ ಆತ್ಮರನ್ನು
ಖಜಾನೆಯಿಂದ ಶಕ್ತಿಶಾಲಿಯನ್ನಾಗಿ ಮಾಡುವಂತಹ, ಸದಾ ವಿಶ್ವ ಕಲ್ಯಾಣಕಾರಿ ಬೇಹದ್ದಿನ ನಿಶ್ಚಿಂತ
ಚಕ್ರವರ್ತಿಗಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಅವ್ಯಕ್ತ -
ಬಾಪ್ದಾದಾರವರೊಂದಿಗೆ ದಾದೀಜಿ ಹಾಗೂ ದಾದಿ ಜಾನಕಿಜೀಯವರ ವಾರ್ತಾಲಾಪ : -
ಹೋಲಿ ಹಂಸಗಳ ರೂಪ-ಭಸಂತರ ಜೋಡಿಯು ಚೆನ್ನಾಗಿದೆ. ಇವರು (ಜಾನಕಿ ದಾದಿ) ಶಾಂತಿಯಿಂದ ರೂಪ ಆಗಿದ್ದು
ಸೇವೆಯನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ ಮತ್ತು ಇವರು ಮಾತನಾಡಲೇಬೇಕಾಗುತ್ತದೆ. ಇವರು ಯಾವಾಗ
ಬೇಕಾದರೂ ಏಕಾಂತದಲ್ಲಿಯೂ ಹೊರಟು ಹೋಗುತ್ತಾರೆ. ಇವರಿಗೆ ರೂಪ್ನ ಸೇವೆಯು ಇಷ್ಟವಿದೆ, ಹಾಗೆ ನೋಡಿದರೆ
ಎಲ್ಲರೂ ಆಲ್ರೌಂಡ್ ಆಗಿದ್ದಾರೆ, ಆದರೂ ರೂಪ್-ಭಸಂತನ ಜೋಡಿಯಿದೆ. ಹಾಗೆಯೇ ಎರಡೂ ಸಂಸ್ಕಾರಗಳ
ಅವಶ್ಯಕತೆಯಿದೆ - ಎಲ್ಲಿ ವಾಣಿಯು ಕೆಲಸ ಮಾಡುವುದಿಲ್ಲ ಅಲ್ಲಿ ರೂಪ್ ಕೆಲಸ ಮಾಡುತ್ತಾರೆ ಮತ್ತು
ಎಲ್ಲಿ ರೂಪ್ ಕೆಲಸ ಮಾಡಲು ಸಾಧ್ಯವಿಲ್ಲ ಅಲ್ಲಿ ಭಸಂತ್ ಕೆಲಸ ಮಾಡುತ್ತಾರೆ. ಅಂದಮೇಲೆ ಜೋಡಿ
ಚೆನ್ನಾಗಿದೆ. ಯಾರು ಜೋಡಿಯಾಗುತ್ತಾರೆ, ಅವರೆಲ್ಲರೂ ಒಳ್ಳೆಯವರಿದ್ದಾರೆ. ಆ ಜೋಡಿಯೂ ಚೆನ್ನಾಗಿತ್ತು,
ಇದೂ ಸಹ ಚೆನ್ನಾಗಿದೆ. (ದೀದಿಗಾಗಿ) ಡ್ರಾಮಾದಲ್ಲಿ ಅವರು ಗುಪ್ತ ನದಿ ಆಗಿ ಬಿಟ್ಟರು. ಅವರೊಂದಿಗೆ
ಡಬಲ್ ವಿದೇಶಿಗಳಲ್ಲಿ ಬಹಳ ಪ್ರೀತಿಯಿದೆ. ಪರವಾಗಿಲ್ಲ, ದೀದಿಯವರ ಇನ್ನೊಂದು ರೂಪವನ್ನು ನೋಡಿ
ಬಿಟ್ಟರು. ಎಲ್ಲರೂ ನೋಡುತ್ತಾ ಎಷ್ಟೊಂದು ಖುಷಿಯಾಗುತ್ತಾರೆ. ಎಲ್ಲಾ ಮಹಾರಥಿಗಳು ಜೊತೆಯಿದ್ದಾರೆ.
ಬೃಜೇಂದ್ರ, ನಿರ್ಮಲಶಾಂತ ಎಲ್ಲರೂ ದೂರವಾಗಿದ್ದರೂ ಜೊತೆಗಾರರಾಗಿದ್ದಾರೆ! ಶಕ್ತಿಯರ ಒಳ್ಳೆಯ
ಸಹಯೋಗವಿದೆ. ಎಲ್ಲರೂ ಒಬ್ಬರಿನ್ನೊಬ್ಬರನ್ನು ಮುಂದಿಡುವ ಕಾರಣದಿಂದ ಮುಂದುವರೆಯುತ್ತಿದ್ದಾರೆ ಮತ್ತು
ನಿಮಿತ್ತವಾಗಿ ಶಕ್ತಿಯರನ್ನು ಮುಂದಿಟ್ಟಿರುವ ಕಾರಣದಿಂದ ಎಲ್ಲರೂ ಮುಂದೆ ಇದ್ದಾರೆ. ಸೇವೆಯು
ವೃದ್ಧಿಯಾಗಲು ಕಾರಣವೇ ಇದಾಗಿದೆ - ಒಬ್ಬರಿನ್ನೊಬ್ಬರನ್ನು ಮುಂದುವರೆಸುವುದು. ಪರಸ್ಪರದಲ್ಲಿ
ಪ್ರೀತಿಯಿದೆ, ಒಮ್ಮತವಿದೆ. ಸದಾ ಅನ್ಯರ ವಿಶೇಷತೆಯ ವರ್ಣನೆ ಮಾಡುವುದು - ಇದೇ ಸೇವೆಯಲ್ಲಿ ವೃದ್ಧಿ
ಮಾಡುವುದಾಗಿದೆ. ಇದೇ ವಿಧಿಯಿಂದ ಸದಾ ವೃದ್ಧಿಯಾಗಿದೆ ಮತ್ತು ಆಗುತ್ತಿರುತ್ತದೆ. ಸದಾ
ವಿಶೇಷತೆಯನ್ನು ನೋಡಿರಿ ಮತ್ತು ವಿಶೇಷತೆಯನ್ನು ನೋಡುತ್ತಾ ಅನ್ಯರಿಗೆ ಕಲಿಸಿಕೊಡುವುದು - ಇದೇ
ಸಂಘಟನೆಯ ಮಾಲೆಯಾಗಲು ಆಧಾರವಾಗಿದೆ. ಮಣಿಗಳನ್ನಂತು ದಾರದಲ್ಲಿ ಪೋಣಿಸುತ್ತಾರಲ್ಲವೆ. ಸಂಘಟನೆಯ
ದಾರವೇ ಇದಾಗಿದೆ. ವಿಶೇಷತೆಯಲ್ಲದೆ ಮತ್ತ್ಯಾವುದೇ ವರ್ಣನೆಯಿಲ್ಲ. ಏಕೆಂದರೆ ಮಧುಬನ ಮಹಾಭೂಮಿಯಾಗಿದೆ.
ಮಹಾಭಾಗ್ಯವೂ ಇದೆ, ಅಂದಾಗ ಮಹಾ ಪಾಪವೂ ಇದೆ, ಮಧುಬನದಿಂದ ಹೋದ ನಂತರವೇನಾದರೂ ವ್ಯರ್ಥ ಮಾತನ್ನು
ಮಾತನಾಡಿದರೆ ಬಹಳ ಪಾಪವಾಗಿ ಬಿಡುತ್ತದೆ. ಆದ್ದರಿಂದ ಸದಾ ವಿಶೇಷತೆಯನ್ನು ನೋಡುವ ಚಶ್ಮಾ
ಹಾಕಿಕೊಂಡಿರಬೇಕು. ವ್ಯರ್ಥವನ್ನು ನೋಡಲು ಸಾಧ್ಯವಿಲ್ಲ. ಹೇಗೆ ಕೆಂಪು ಚಶ್ಮಾದಿಂದ ಕೆಂಪು
ಬಣ್ಣವಲ್ಲದೆ ಮತ್ತೇನಾದರೂ ನೋಡಲಾಗುತ್ತದೆಯೇನು? ಅಂದಾಗ ಸದಾ ವಿಶೇಷತೆಯನ್ನು ನೋಡುವ ಚಶ್ಮಾವನ್ನೇ
ಹಾಕಿಕೊಂಡಿರಬೇಕು. ಯಾವಾಗಲಾದರೂ ಯಾವುದೇ ಮಾತನ್ನು ನೋಡಿದರೂ ಸಹ ಅದರ ವರ್ಣನೆಯನ್ನೆಂದಿಗೂ ಸಹ
ಮಾಡಬಾರದು. ವರ್ಣನೆ ಮಾಡಿದಿರಿ, ಭಾಗ್ಯವು ಹೋಯಿತು. ಸ್ವಲ್ಪವೇನಾದರೂ ಕೊರತೆ ಮುಂತಾದವಿದೆಯೆಂದರೆ
ಅದರ ಜವಾಬ್ದಾರನು ತಂದೆಯಾಗಿದ್ದಾರೆ, ನಿಮಿತ್ತರನ್ನಾಗಿ ಯಾರು ಮಾಡಿದರು! ತಂದೆಯವರು. ಅಂದಮೇಲೆ
ನಿಮಿತ್ತರಾಗಿರುವ ಕೊರತೆಯನ್ನು ವರ್ಣನೆ ಮಾಡುವುದು ಎಂದರೆ ತಂದೆಯ ಕೊರತೆಗಳ ವರ್ಣನೆ ಮಾಡುವುದಾಯಿತು,
ಆದ್ದರಿಂದ ಇವರ ಪ್ರತಿ ಶುಭ ಭಾವನೆಯಲ್ಲದೆ ಮತ್ತ್ಯಾವುದೇ ವರ್ಣನೆಯನ್ನು ಮಾಡಲು ಸಾಧ್ಯವಿಲ್ಲ.
ಬಾಪ್ದಾದಾರವರಂತು ತಾವು ರತ್ನಗಳನ್ನು ತನಗಿಂತಲೂ ಶ್ರೇಷ್ಠವೆಂದು ನೋಡುತ್ತಾರೆ. ತಂದೆಯ ಶೃಂಗಾರವೇ
ಇವರಲ್ಲವೆ. ಅಂದಮೇಲೆ ತಂದೆಯನ್ನು ಶೃಂಗಾರ ಮಾಡುವಂತಹ ಮಕ್ಕಳಂತು ಶ್ರೇಷ್ಠರಾದರಲ್ಲವೆ.
ಬಾಪ್ದಾದಾರವರಂತು ಮಕ್ಕಳ ಮಹಿಮೆಯನ್ನು ಮಾಡುತ್ತಾ ಖುಷಿಯಾಗುತ್ತಿರುತ್ತಾರೆ. ವಾಹ್ ನನ್ನ ಇಂತಹ
ರತ್ನವೇ, ವಾಹ್ ನನ್ನ ಇಂತಹ ರತ್ನವೇ! ಎಂದು ಹೀಗೆಯೇ ಮಹಿಮೆಯನ್ನು ಮಾಡುತ್ತಿರುತ್ತಾರೆ. ತಂದೆಯು
ಎಂದಿಗೂ ಯಾರದೇ ಬಲಹೀನತೆಯನ್ನು ನೋಡುವುದಿಲ್ಲ. ಸೂಚನೆಯನ್ನಂತು ಕೊಡುತ್ತಿದ್ದರೂ ಸಹ ವಿಶೇಷತೆಯಿಂದ
ಕೂಡಿರುವ ಗೌರವದ ಜೊತೆಗೆ ಸೂಚನೆಯನ್ನು ಕೊಡುತ್ತಾರೆ. ಇಲ್ಲವೆಂದರೆ ತಂದೆಗೆ ಅಥಾರಿಟಿಯಿದೆಯಲ್ಲವೆ,
ಆದರೆ ಸದಾ ಗೌರವ ಕೊಟ್ಟು ನಂತರ ಸೂಚನೆಯನ್ನು ಕೊಡುತ್ತಾರೆ. ಇದೇ ತಂದೆಯ ವಿಶೇಷತೆಯು ಸದಾ
ಮಕ್ಕಳಲ್ಲಿಯೂ ಇಮರ್ಜ್ ಆಗಿರಲಿ. ಫಾಲೋ ಫಾದರ್ ಮಾಡಬೇಕಲ್ಲವೆ. ಬಾಪ್ದಾದಾರವರ ಮುಂದೆ ಮುಖ್ಯವಾದ
ಎಲ್ಲಾ ಸಹೋದರಿಯರು (ದಾದಿಯರು) ಕುಳಿತಿದ್ದಾರೆ - ಜೀವನ್ಮುಕ್ತ ಜನಕ ತಮ್ಮ ಗಾಯನವಾಗಿದೆಯಲ್ಲವೆ.
ಜೀವನ್ಮುಕ್ತ ಮತ್ತು ವಿದೇಹಿ ಎರಡು ಟೈಟಲ್ಗಳಿವೆ. (ದಾದಿಯವರಿಗಾಗಿ) ಇವರಂತು ಇರುವುದೇ ಮಣಿ.
ಸಂತುಷ್ಠ ಮಣಿ, ಮಸ್ತಕ ಮಣಿ, ಸಫಲತೆಯ ಮಣಿ, ಎಷ್ಟೊಂದು ಮಣಿಗಳಿದ್ದಾರೆ. ಎಲ್ಲರೂ ಮಣಿಗಳೇ
ಮಣಿಗಳಿದ್ದಾರೆ. ಮಣಿಗಳನ್ನು ಎಷ್ಟೇ ಬಚ್ಚಿಡಬಹುದು ಆದರೆ ಮಣಿಯ ಹೊಳಪನ್ನೆಂದಿಗೂ ಬಚ್ಚಿಡಲು
ಸಾಧ್ಯವಿಲ್ಲ. ಮಣ್ಣಿನಲ್ಲಿಯೂ ಹೊಳೆಯುತ್ತದೆ, ಲೈಟ್ನ ಕೆಲಸವನ್ನು ಮಾಡುತ್ತದೆ. ಆದ್ದರಿಂದ ಹೆಸರೂ
ಸಹ ಅದೇ ಇದೆ, ಕಾರ್ಯವೂ ಅದೇ ಆಗಿದೆ. ಇವರ (ದಾದಿ ಜಾನಕಿಯವರನ್ನು) ಗುಣವೂ ಅದೇ ಆಗಿದೆ, ದೇಹ
ಮುಕ್ತ, ಜೀವನ್ಮುಕ್ತ. ಸದಾ ಜೀವನದ ಖುಷಿಯ ಅನುಭವದ ಆಳದಲ್ಲಿ ಇರುತ್ತಾರೆ. ಇದಕ್ಕೆ ಹೇಳಲಾಗುತ್ತದೆ
- ಜೀವನ್ಮುಕ್ತ. ಒಳ್ಳೆಯದು.
" ಅವ್ಯಕ್ತ ಮಹಾ
ವಾಕ್ಯಗಳು : - ನಿರಹಂಕಾರಿಯಾಗಿದ್ದು ವಿಶ್ವ ನವ ನಿರ್ಮಾಣವನ್ನು ಮಾಡಿರಿ"
ಸೇವೆಯಲ್ಲಿ ಸಹಜ ಮತ್ತು ಸದಾಕಾಲದ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳಲು ಆಧಾರವಾಗಿದೆ -
ನಿರಹಂಕಾರಿ ಆಗಿರುವುದು. ನಿರ್ಮಾಣ ಎಂದರೇ ಸ್ವಮಾನವಾಗಿದೆ ಮತ್ತು ಸರ್ವರ ಮೂಲಕ ಮಾನ್ಯತೆಯನ್ನು
ಪ್ರಾಪ್ತಿ ಮಾಡಿಕೊಳ್ಳುವ ಸಹಜ ಸಾಧನವಾಗಿದೆ. ನಿರಹಂಕಾರಿಯಾಗಬೇಕು, ಬಾಗಬಾರದು ಆದರೆ ಸರ್ವರಿಗೂ
ತಮ್ಮ ವಿಶೇಷತೆ ಮತ್ತು ಪ್ರೀತಿಯಲ್ಲಿ ಬಾಗಿಸಬೇಕು. ಮಹಾನತೆಯ ಚಿಹ್ನೆಯಾಗಿದೆ - ನಿರಹಂಕಾರಿ ಗುಣ.
ಎಷ್ಟು ನಿರಹಂಕಾರಿಯೋ ಅಷ್ಟು ಎಲ್ಲರ ಹೃದಯದಲ್ಲಿ ಸ್ವತಹವಾಗಿಯೇ ಮಹಾನರಾಗುತ್ತೀರಿ. ನಿರ್ಮಾಣತೆಯು
ಸಹಜವಾಗಿಯೇ ನಿರಹಂಕಾರಿಯನ್ನಾಗಿ ಮಾಡಿ ಬಿಡುತ್ತದೆ. ನಿರ್ಮಾಣತೆಯ ಬೀಜವು ಮಹಾನತೆಯ ಫಲವನ್ನು
ಸ್ವತಹವಾಗಿಯೇ ಪ್ರಾಪ್ತಿ ಮಾಡಿಸುತ್ತದೆ. ನಿರ್ಮಾಣತೆಯು ಎಲ್ಲರ ಹೃದಯದ ಆಶೀರ್ವಾದಗಳನ್ನು ಪ್ರಾಪ್ತಿ
ಮಾಡಿಸಲು ಸಹಜ ಸಾಧನವಾಗಿದೆ. ನಿರಹಂಕಾರಿಯಾಗುವ ವಿಶೇಷ ಚಿಹ್ನೆಯಾಗಿದೆ - ನಿರ್ಮಾಣತೆ. ವೃತ್ತಿ,
ದೃಷ್ಟಿ, ವಾಣಿ, ಸಂಬಂಧ - ಸಂಪರ್ಕ ಎಲ್ಲದರಲ್ಲಿಯೂ ನಿರ್ಮಾಣತೆಯ ಗುಣವನ್ನು ಧಾರಣೆ
ಮಾಡಿಕೊಳ್ಳುತ್ತೀರೆಂದರೆ ಮಹಾನರಾಗಿ ಬಿಡುತ್ತೀರಿ. ಹೇಗೆ ವೃಕ್ಷವು ಬಾಗುವುದು ಸೇವೆ ಮಾಡುತ್ತದೆ,
ಹಾಗೆಯೇ ನಿರಹಂಕಾರಿಯಾಗುವುದು ಅರ್ಥಾತ್ ಬಾಗುವುದೇ ಸೇವಾಧಾರಿ ಆಗುವುದಾಗಿದೆ, ಆದ್ದರಿಂದ ಒಂದು
ಕಡೆಯಲ್ಲಿ ಮಹಾನತೆಯಿರಲಿ, ಆಗಲೇ ಇನ್ನೊಂದು ಕಡೆ ನಿರಹಂಕಾರಿ ಗುಣವಿರಲಿ. ಯಾರು ನಿರಹಂಕಾರಿ
ಆಗಿರುತ್ತಾರೆ ಅವರು ಸರ್ವರ ಮೂಲಕ ಮಾನ್ಯತೆಯನ್ನು ಪಡೆಯುತ್ತಾರೆ. ಸ್ವಯಂ ನಿರಹಂಕಾರಿ
ಆಗಿರುತ್ತಾರೆಂದರೆ ಅನ್ಯರು ಮಾನ್ಯತೆಯನ್ನು ಕೊಡುತ್ತಾರೆ. ಯಾರು ಅಭಿಮಾನದಲ್ಲಿರುತ್ತಾರೆಯೋ ಅವರಿಗೆ
ಯಾರೂ ಸಹ ಮಾನ್ಯತೆಯನ್ನು ಕೊಡುವುದಿಲ್ಲ, ಅವರಿಂದ ದೂರ ಓಡಿ ಹೋಗುತ್ತಾರೆ. ಯಾರು
ನಿರಹಂಕಾರಿಯಾಗಿರುತ್ತಾರೆ ಅವರು ಎಲ್ಲರಿಗೂ ಸುಖವನ್ನು ಕೊಡುತ್ತಾರೆ. ಎಲ್ಲಿಯೇ ಹೋಗುತ್ತಾರೆ, ಏನೇ
ಮಾಡುತ್ತಾರೆ ಅದು ಸುಖ ಕೊಡುವಂತದ್ದಾಗಿರುತ್ತದೆ. ಅವರ ಸಂಬಂಧ-ಸಂಪರ್ಕದಲ್ಲಿ ಯಾರೇ ಬರುತ್ತಾರೆಂದರೆ,
ಅವರು ಸುಖದ ಅನುಭೂತಿಯನ್ನು ಮಾಡುತ್ತಾರೆ. ಸೇವಾಧಾರಿಯ ವಿಶೇಷತೆಯಾಗಿದೆ - ಒಂದು ಕಡೆ ಅತೀ
ನಿರಹಂಕಾರಿಯಾಗಿರುವುದು, ಇನ್ನೊಂದು ಕಡೆ ಜ್ಞಾನದ ಅಥಾರಿಟಿ. ಎಷ್ಟು ನಿರಹಂಕಾರಿಯೋ ಅಷ್ಟೇ
ನಿಶ್ಚಿಂತ ಚಕ್ರವರ್ತಿಯಾಗಿರುವುದು. ನಿರಹಂಕಾರಿ ಮತ್ತು ಅಥಾರಿಟಿ ಎರಡರ ಬ್ಯಾಲೆನ್ಸ್.
ನಿರಹಂಕಾರಿ-ಭಾವ, ನಿಮಿತ್ತ-ಭಾವ, ಬೇಹದ್ದಿನ ಭಾವ - ಇದೇ ಸೇವೆಯ ಸಫಲತೆಗೆ ವಿಶೇಷ ಆಧಾರವಾಗಿದೆ.
ಎಷ್ಟು ಸ್ವಮಾನದಲ್ಲಿರುತ್ತೀರಿ ಅಷ್ಟೇ ನಿರಹಂಕಾರಿ. ಸ್ವಮಾನದ ಅಭಿಮಾನವಿರಬಾರದು. ಹೀಗಲ್ಲಾ -
ನಾವಂತು ಶ್ರೇಷ್ಠರಾಗಿ ಬಿಟ್ಟೆವು, ಅನ್ಯರು ಚಿಕ್ಕವರಿದ್ದಾರೆ ಅಥವಾ ಅವರ ಪ್ರತಿ ತಿರಸ್ಕಾರ
ಭಾವವಿರುತ್ತದೆ - ಹೀಗಾಗಬಾರದು. ಎಂತಹ ಆತ್ಮರೇ ಆಗಿರಲಿ ಆದರೆ ದಯಾ ದೃಷ್ಟಿಯಿಂದ ನೋಡಿರಿ,
ಅಭಿಮಾನದ ದೃಷ್ಟಿಯಿಂದಲ್ಲ. ಅಭಿಮಾನವೂ ಇಲ್ಲ, ಅಪಮಾನವೂ ಇಲ್ಲ. ಈಗ ಇದು ಬ್ರಾಹ್ಮಣ ಜೀವನದ
ಚಲನೆಯಲ್ಲ. ಒಂದು ವೇಳೆ ಅಭಿಮಾನವಿಲ್ಲದಿದ್ದರೆ ಅಪಮಾನ, ಅದು ಅಪಮಾನವೆನಿಸಬಾರದು. ಅವರು ಸದಾ
ನಿರಹಂಕಾರಿ ಮತ್ತು ನಿರ್ಮಾಣದ ಕಾರ್ಯದಲ್ಲಿ ಬ್ಯುಜಿಯಾಗಿರುತ್ತಾರೆ. ಯಾರು
ನಿರಹಂಕಾರಿಯಾಗಿರುತ್ತಾರೆಯೋ ಅವರೇ ನವ ನಿರ್ಮಾಣವನ್ನು ಮಾಡಲು ಸಾಧ್ಯ. ಶುಭ ಭಾವನೆ ಅಥವಾ ಶುಭ
ಕಾಮನೆಯ ಬೀಜವೇ ಆಗಿದೆ - ನಿಮಿತ್ತ ಭಾವ ಮತ್ತು ನಿರಹಂಕಾರಿತನ. ಅಲ್ಪಕಾಲದ ಮಾನ್ಯತೆಯಲ್ಲ ಆದರೆ
ನಿರಹಂಕಾರಿ. ಅಸಭ್ಯತೆಯ ಚಿಹ್ನೆಯಾಗಿದೆ - ಜಿದ್ದು ಮಾಡುವುದು ಮತ್ತು ಸಭ್ಯತೆಯ ಚಿಹ್ನೆಯಾಗಿದೆ -
ನಿರಹಂಕಾರಿಯಾಗಿರುವುದು. ನಿರಹಂಕಾರಿಯಾಗಿದ್ದು ಸಭ್ಯತಾ ಪೂರ್ವಕವಾಗಿ ವ್ಯವಹಾರವನ್ನು ಮಾಡುವುದೇ
ಸಭ್ಯತೆಯ ಸತ್ಯತೆಯಾಗಿದೆ. ಸಫಲತಾ ನಕ್ಷತ್ರವು ಆಗುತ್ತೀರಿ, ಯಾವಾಗ ಸ್ವಯಂನ ಸಫಲತೆಯ
ಅಭಿಮಾನವಿರುವುದಿಲ್ಲ, ವರ್ಣನೆಯನ್ನೂ ಮಾಡಬಾರದು. ತಮ್ಮ ಗೀತೆಯನ್ನು ಹಾಡಬಾರದು ಆದರೆ ಎಷ್ಟು
ಸಫಲತೆಯಾಗುತ್ತದೆಯೋ ಅಷ್ಟೇ ನಮ್ರಚಿತ್ತ, ನಿರ್ಮಾಣ, ನಿರ್ಮಲ ಸ್ವಭಾವವಿರಲಿ. ಅನ್ಯರು ಅವರ
ಗೀತೆಯನ್ನು ಹಾಡಲಿ ಆದರೆ ಅವರು ಸ್ವಯಂ ಸದಾ ತಂದೆಯ ಗುಣಗಾನ ಮಾಡಬೇಕು. ಇಂತಹ ನಿರ್ಮಾಣತೆ,
ನಿರ್ಮಾಣದ ಕಾರ್ಯವನ್ನು ಸಹಜವನ್ನಾಗಿ ಮಾಡುತ್ತದೆ. ಎಲ್ಲಿಯವರೆಗೆ ನಿರಹಂಕಾರಿ ಆಗುವುದಿಲ್ಲವೋ
ಅಲ್ಲಿಯವರೆಗೆ ನಿರ್ಮಾಣವನ್ನು ಮಾಡಲು ಸಾಧ್ಯವಾಗುವುದಿಲ್ಲ. ನಮ್ರಚಿತ್ತ, ನಿರಹಂಕಾರಿ ಹಾಗೂ ಹಾಜಿ
ಪಾಠವನ್ನು ಕಲಿತಿರುವ ಆತ್ಮರ ಬಗ್ಗೆ ಎಂದಿಗೂ ಸಹ ತಪ್ಪಾಗಿ ತಿಳಿದುಕೊಂಡಿರುವುದರಿಂದ ಅನ್ಯರಿಗೆ
ಸೋಲಿನ ರೂಪವಾಗಿ ಕಾಣಿಸುತ್ತದೆ, ಆದರೆ ವಾಸ್ತವದಲ್ಲಿ ಅವರ ವಿಜಯವಾಗಿದೆ. ಕೇವಲ ಆ ಸಮಯದಲ್ಲಿ
ಅನ್ಯರ ಹೇಳಿಕೆ ಅಥವಾ ವಾಯುಮಂಡಲದಲ್ಲಿ ಸ್ವಯಂ ನಿಶ್ಚಯ ಬುದ್ಧಿಗೆ ಬದಲಾಗಿ ಗ್ಲಾನಿಯ ರೂಪವಾಗಬಾರದು.
ಸೋಲಾಗಿದೆಯೋ ಅಥವಾ ವಿಜಯವಾಗಿದೆಯೋ ಗೊತ್ತಿಲ್ಲ, ಈ ಅನುಮಾನವನ್ನಿಟ್ಟುಕೊಳ್ಳದೆ ತಮ್ಮ ನಿಶ್ಚಯದಲ್ಲಿ
ಪರಿಪಕ್ವವಾಗಿ ಇರಿ. ಅಂದಮೇಲೆ ಯಾವುದನ್ನು ಇಂದು ಬೇರೆಯವರು ಸೋಲು ಎಂದು ಹೇಳುತ್ತಾರೆ, ನಾಳೆ ವಾಹ್
-ವಾಹ್ನ ಪುಷ್ಪವನ್ನು ಹಾಕುತ್ತಾರೆ. ಸಂಸ್ಕಾರಗಳಲ್ಲಿ ನಿರಹಂಕಾರಿ ಮತ್ತು ನಿರ್ಮಾಣರಾಗಿರುವ ಎರಡೂ
ವಿಶೇಷತೆಗಳ ಮಾಲೀಕನ ಚಿಹ್ನೆಯಾಗಿದೆ. ಜೊತೆ ಜೊತೆಗೆ ಸರ್ವ ಆತ್ಮರ ಸಂಪರ್ಕದಲ್ಲಿ ಬರುವುದು,
ಸ್ನೇಹಿಯಾಗುವುದು, ಸರ್ವರ ಹೃದಯದ ಸ್ನೇಹದ ಆಶೀರ್ವಾದ ಅರ್ಥಾತ್ ಎಲ್ಲರ ಹೃದಯದಿಂದ ಆ ಆತ್ಮನ ಬಗ್ಗೆ
ಶುಭ ಭಾವನೆಯು ಬರಲಿ. ಭಲೇ ಪರಿಚಯವಿರಲಿ ಅಥವಾ ಇಲ್ಲದಿರಲಿ, ದೂರದ ಸಂಬಂಧ-ಸಂಪರ್ಕದವರಾಗಿರಲಿ ಆದರೆ
ಯಾರೇ ನೋಡುತ್ತಾರೆಂದರೆ ಸ್ನೇಹದ ಕಾರಣದಿಂದ ಹೀಗೆಯೇ ಅನುಭವ ಮಾಡಲಿ - ಇವರು ನಮ್ಮವರಾಗಿದ್ದಾರೆ.
ಗುಣಗಳ ಧಾರಣೆಯಿಂದ ಸಂಪನ್ನರು, ಗುಣಗಳೆಂಬ ಫಲ ಸ್ವರೂಪರು ಎಷ್ಟಾಗಿರುತ್ತೀರೋ ಅಷ್ಟೇ
ನಿರಹಂಕಾರಿಯಾಗಿರಿ. ನಿರಹಂಕಾರಿ ಸ್ಥಿತಿಯ ಮೂಲಕ ಪ್ರತಿಯೊಂದು ಗುಣವನ್ನೂ ಪ್ರತ್ಯಕ್ಷಗೊಳಿಸಿರಿ,
ಆಗಲೇ ಹೇಳುತ್ತಾರೆ - ಧರ್ಮ ಶಕ್ತಿಯಿರುವ ಮಹಾನ್ ಆತ್ಮರು. ಸೇವಾಧಾರಿ ಅರ್ಥಾತ್ ನಿರ್ಮಾಣ ಮಾಡುವವರು
ಮತ್ತು ನಿರಹಂಕಾರಿ ಆಗಿರುವವರು. ನಿರ್ಮಾಣತೆಯೇ ಸೇವೆಯ ಸಫಲತೆಗೆ ಸಾಧನವಾಗಿದೆ.
ನಿರ್ಮಾಣರಾಗುವುದರಿಂದ ಸದಾ ಸೇವೆಯಲ್ಲಿ ಹಗುರವಾಗಿರುತ್ತೀರಿ. ನಿರಹಂಕಾರಿಯಲ್ಲ, ಮಾನ್ಯತೆಯ
ಇಚ್ಛೆಯಿದೆಯೆಂದರೆ ಹೊರೆಯಾಗಿ ಬಿಡುತ್ತದೆ. ಹೊರೆಯಿರುವವರು ಸದಾ ನಿಂತುಕೊಳ್ಳುತ್ತಾರೆ. ತೀವ್ರವಾಗಿ
ನಡೆಯಲು ಸಾಧ್ಯವಾಗುವುದಿಲ್ಲ, ಆದ್ದರಿಂದಲೇ ಒಂದು ವೇಳೆ ಹೊರೆಯ ಅನುಭವವಾಗುತ್ತದೆಯೆಂದರೆ
ತಿಳಿದುಕೊಳ್ಳಿರಿ - ನಿರಹಂಕಾರಿ ಅಲ್ಲ. ಎಲ್ಲಿ ನಿರ್ಮಾಣತೆಯಿದೆ ಅಲ್ಲಿ ಆವೇಶವಿರುವುದಿಲ್ಲ,
ಆತ್ಮೀಯತೆಯಿರುತ್ತದೆ. ಹೇಗೆ ತಂದೆಯು ಎಷ್ಟು ನಮ್ರಚಿತ್ತವಾಗಿ ಬರುತ್ತಾರೆ, ಅದೇ ರೀತಿಯಲ್ಲಿ ಫಾಲೋ
ಫಾದರ್ ಮಾಡಿರಿ. ಒಂದು ವೇಳೆ ಸ್ವಲ್ಪವೇನಾದರೂ ಸೇವೆಯಲ್ಲಿ ಆವೇಶವು ಬಂದಿತೆಂದರೆ ಆ ಸೇವೆಯು
ಸಮಾಪ್ತಿಯಾಗಿ ಬಿಡುತ್ತದೆ. ಬ್ರಹ್ಮಾ ತಂದೆಯು ತನ್ನನ್ನು ಎಷ್ಟೊಂದು ಕೆಳಗಿಟ್ಟರು, ಇಷ್ಟೂ
ನಿರಹಂಕಾರಿಯಾಗಿದ್ದು ಸೇವಾಧಾರಿಯಾದರು, ಮಕ್ಕಳ ಕಾಲನ್ನು ಒತ್ತುವುದಕ್ಕೂ ತಯಾರಿದ್ದರು. ಮಕ್ಕಳು
ನನಗಿಂತಲೂ ಮುಂದಿದ್ದಾರೆ, ಮಕ್ಕಳು ನನಗಿಂತಲೂ ಚೆನ್ನಾಗಿ ಭಾಷಣ ಮಾಡಬಲ್ಲರು.`ಮೊದಲು ನಾನು' ಎಂದು
ಎಂದಿಗೂ ಹೇಳಲಿಲ್ಲ. ಮುಂದೆ ಮಕ್ಕಳು, ಮೊದಲು ಮಕ್ಕಳು, ದೊಡ್ಡವರು ಮಕ್ಕಳು - ಎಂದು ಹೇಳಿದರು.
ಅಂದಮೇಲೆ ಸ್ವಯಂನ್ನು ಕೆಳಗಿಡುವುದು ಕೆಳಗಿಡುವುದಾಗಲಿಲ್ಲ, ಶ್ರೇಷ್ಠದಲ್ಲಿ ಹೋಗುವುದಾಗಿದೆ.
ಅಂದಮೇಲೆ ಇದಕ್ಕೆ ಹೇಳಲಾಗುತ್ತದೆ - ಸತ್ಯವಾದ ನಂಬರ್ ವನ್ ಯೋಗ್ಯ ಸೇವಾಧಾರಿ. ಅನ್ಯರಿಗೆ ಮಾನ್ಯತೆ
ಕೊಟ್ಟು ಸ್ವಯಂನ್ನು ನಿರಹಂಕಾರಿ ಮಾಡಿಕೊಳ್ಳುವುದೇ ಪರೋಪಕಾರವಾಗಿದೆ. ಇದನ್ನು ಕೊಡುವುದೇ
ಸದಾಕಾಲಕ್ಕಾಗಿ ತೆಗೆದುಕೊಳ್ಳುವುದಾಗಿದೆ. ಅಲ್ಪಕಾಲದ ವಿನಾಶಿ ಮಾನ್ಯತೆಯ ತ್ಯಾಗವನ್ನು ಮಾಡುತ್ತಾ,
ಸ್ವಮಾನದಲ್ಲಿ ಸ್ಥಿತರಾಗಿರಿ, ನಿರಹಂಕಾರಿಯಾಗಿತ್ತು ಗೌರವವನ್ನು ಕೊಡುತ್ತಾ ಸಾಗಿರಿ. ಹೀಗೆ
ಕೊಡುವುದೇ ತೆಗೆದುಕೊಳ್ಳುವುದಾಗಿ ಬಿಡುತ್ತದೆ. ಗೌರವ ಕೊಡುವುದು ಅರ್ಥಾತ್ ಆ ಆತ್ಮನನ್ನು
ಉಮ್ಮಂಗ-ಉತ್ಸಾಹದಲ್ಲಿ ಕರೆ ತಂದು ಮುಂದುವರೆಯುವುದಾಗಿದೆ. ಸದಾಕಾಲಕ್ಕಾಗಿ ಈ ಉಮ್ಮಂಗ-ಉತ್ಸಾಹ
ಅರ್ಥಾತ್ ಖುಷಿಯ ಅಥವಾ ಸ್ವಯಂನ ಸಹಯೋಗದ ಖಜಾನೆಯು ಆತ್ಮನನ್ನು ಸದಾಕಾಲಕ್ಕಾಗಿ ಪುಣ್ಯಾತ್ಮನನ್ನಾಗಿ
ಮಾಡಿ ಬಿಡುತ್ತದೆ.
ವರದಾನ:
ವ್ಯರ್ಥ
ಸಂಕಲ್ಪಗಳನ್ನು ಸಮರ್ಥದಲ್ಲಿ ಪರಿವರ್ತನೆ ಮಾಡುತ್ತಾ ಸಹಯೋಗಿಯಾಗುವಂತಹ ಸಮರ್ಥ ಆತ್ಮ ಭವ.
ಕೆಲವು ಮಕ್ಕಳು
ಯೋಚಿಸುತ್ತಾರೆ - ನನ್ನ ಪಾತ್ರವಂತು ಅಷ್ಟು ಕಾಣಿಸುತ್ತಿಲ್ಲ, ಯೋಗದ ಜೋಡಣೆಯಾಗುತ್ತಿಲ್ಲ, ಅಶರೀರಿ
ಆಗುತ್ತಿಲ್ಲ - ಇದು ವ್ಯರ್ಥ ಸಂಕಲ್ಪ ಆಗಿದೆ. ಈ ಸಂಕಲ್ಪಗಳನ್ನು ಪರಿವರ್ತನೆ ಮಾಡಿಕೊಂಡು ಸಮರ್ಥ
ಸಂಕಲ್ಪಗಳನ್ನು ಮಾಡಿರಿ - ಹೇಗೆಂದರೆ, ನೆನಪಂತು ನನ್ನ ಸ್ವಧರ್ಮವಾಗಿದೆ, ನಾನೇ ಕಲ್ಪ-ಕಲ್ಪದ
ಸಹಜಯೋಗಿಯಾಗಿದ್ದೇನೆ. ನಾನು ಯೋಗಿಯಾಗಲಿಲ್ಲವೆಂದರೆ ಯಾರಾಗುವರು! ಹೀಗೆ ಎಂದಿಗೂ ಯೋಚಿಸಬಾರದು -
ನಾನೇನು ಮಾಡಲಿ ನನ್ನ ಶರೀರವಂತು ನಡೆಸಲು ಸಾಧ್ಯವಿಲ್ಲ, ಈ ಹಳೆಯ ಶರೀರವಂತು ವೇಸ್ಟ್.
ಹೀಗೆನ್ನಬಾರದು. ವಾಹ್-ವಾಹ್ನ ಸಂಕಲ್ಪವನ್ನು ಮಾಡಿರಿ, ಈ ಅಂತಿಮ ಶರೀರದ ಚಮತ್ಕಾರದ ಗುಣಗಾನ ಮಾಡಿರಿ
ಆಗ ಸಮರ್ಥತೆಯು ಬಂದು ಬಿಡುತ್ತದೆ.
ಸ್ಲೋಗನ್:
ಶುಭ ಭಾವನೆಗಳ
ಶಕ್ತಿಯು ಅನ್ಯರ ವ್ಯರ್ಥ ಭಾವನೆಗಳನ್ನು ಪರಿವರ್ತನೆ ಮಾಡಬಹುದು.