18.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ದೇವತೆಗಳಿಗಿಂತಲೂ ಉತ್ತಮ ಕಲ್ಯಾಣಕಾರಿ ಜನ್ಮವು ನೀವು ಬ್ರಾಹ್ಮಣರದ್ದಾಗಿದೆ, ಏಕೆಂದರೆ ನೀವು ಬ್ರಾಹ್ಮಣರೇ ತಂದೆಗೆ ಸಹಯೋಗಿಗಳಾಗಿದ್ದೀರಿ”

ಪ್ರಶ್ನೆ:
ಈಗ ನೀವು ಮಕ್ಕಳು ತಂದೆಗೆ ಯಾವ ಸಹಯೋಗ ಕೊಡುತ್ತೀರಿ? ಸಹಯೋಗಿ ಮಕ್ಕಳಿಗೆ ತಂದೆಯು ಯಾವ ಬಹುಮಾನವನ್ನು ಕೊಡುತ್ತಾರೆ?

ಉತ್ತರ:
ತಂದೆಯು ಪವಿತ್ರತೆ-ಶಾಂತಿಯ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದಾರೆ, ನಾವು ಅವರಿಗೆ ಪವಿತ್ರತೆಯ ಸಹಯೋಗ ಕೊಡುತ್ತೇವೆ. ತಂದೆಯು ಯಾವ ಯಜ್ಞವನ್ನು ರಚಿಸಿದ್ದಾರೆಯೋ ಅದನ್ನು ನಾವು ಸಂಭಾಲನೆ ಮಾಡುತ್ತೇವೆ. ಆದ್ದರಿಂದ ತಂದೆಯು ಅವಶ್ಯವಾಗಿ ನಮಗೆ ಬಹುಮಾನವನ್ನು ಕೊಡುವರು. ಸಂಗಮಯುಗದಲ್ಲಿಯೂ ಸಹ ನಮಗೆ ಬಹಳ ದೊಡ್ಡ ಬಹುಮಾನವು ಸಿಗುತ್ತದೆ, ನಾವು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುವ ತ್ರಿಕಾಲದರ್ಶಿಗಳಾಗಿ ಬಿಡುತ್ತೇವೆ ಮತ್ತು ಭವಿಷ್ಯದಲ್ಲಿಯೂ ಸಿಂಹಾಸನಾಧಿಕಾರಿ ಆಗಿ ಬಿಡುತ್ತೇವೆ. ಇದೇ ಬಹುಮಾನವಾಗಿದೆ.

ಗೀತೆ:
ಪಿತೃ ಮಾತಾ ಸಹಾಯಕ ಸ್ವಾಮಿ ಸಖ

ಓಂ ಶಾಂತಿ.
ಇದು ಯಾರ ಮಹಿಮೆಯಾಗಿದೆ? ಇದು ಪರಮಪಿತ ಪರಮಾತ್ಮ, ಯಾರ ಹೆಸರು ಶಿವ ಆಗಿದೆಯೋ ಅವರ ಮಹಿಮೆಯಾಗಿದೆ. ಅವರ ಹೆಸರೂ ಶ್ರೇಷ್ಠಾತಿ ಶ್ರೇಷ್ಠವಾಗಿದೆ ಮತ್ತು ಧಾಮವೂ ಶ್ರೇಷ್ಠವಾಗಿದೆ. ಪರಮಪಿತ ಪರಮಾತ್ಮ ಎನ್ನುವುದರ ಅರ್ಥವೇ ಆಗಿದೆ - ಎಲ್ಲರಿಗಿಂತ ಶ್ರೇಷ್ಠಾತಿ ಶ್ರೇಷ್ಠ ಆತ್ಮ ಮತ್ತ್ಯಾರಿಗೂ ಪರಮಪಿತ ಪರಮಾತ್ಮನೆಂದು ಹೇಳಲಾಗುವುದಿಲ್ಲ. ಅವರ ಮಹಿಮೆಯೇ ಅಪರಮಪಾರವಾಗಿದೆ. ಇಷ್ಟೊಂದು ಮಹಿಮೆಯಿದೆ, ಅಂದಮೇಲೆ ಅವರ ಅಂತ್ಯವನ್ನು ಪಡೆಯಲು ಸಾಧ್ಯವಿಲ್ಲವೆಂದು ಹೇಳುತ್ತಾರೆ. ಅವರ ಅಂತ್ಯವನ್ನು ಅರ್ಥಾತ್ ಅವರನ್ನು ಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅವರು ಬೇಹಂತ್ ಆಗಿದ್ದಾರೆಂದು ಋಷಿ ಮುನಿಗಳೂ ಸಹ ಹೇಳುತ್ತಿದ್ದರು. ಅವರೂ ನೇತಿ-ನೇತಿ ಎಂದು ಹೇಳುತ್ತಾ ಬಂದಿದ್ದಾರೆ. ಈಗ ಸ್ವಯಂ ತಂದೆಯೇ ಬಂದು ತನ್ನ ಪರಿಚಯವನ್ನು ಕೊಡುತ್ತಾರೆ. ಏಕೆ? ತಂದೆಯ ಪರಿಚಯವಂತೂ ನಮಗೆ ಆಗಬೇಕಲ್ಲವೆ, ಅಂದಮೇಲೆ ಮಕ್ಕಳಿಗೆ ಪರಿಚಯ ಸಿಗುವುದು, ಹೇಗೆ? ಎಲ್ಲಿಯವರೆಗೆ ಅವರು ಈ ಭೂಮಿಯ ಮೇಲೆ ಬರುವುದಿಲ್ಲವೋ ಮತ್ತ್ಯಾರೂ ಅವರ ಪರಿಚಯವನ್ನು ಕೊಡಲು ಸಾಧ್ಯವಿಲ್ಲ. ಯಾವಾಗ ತಂದೆಯು ಮಕ್ಕಳನ್ನು ಪ್ರತ್ಯಕ್ಷ ಮಾಡುತ್ತಾರೆಯೋ ಆಗ ಮಕ್ಕಳು ತಂದೆಯನ್ನು ಪ್ರತ್ಯಕ್ಷ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನ ಪಾತ್ರವೂ ನಿಗಧಿಯಾಗಿದೆ. ನಾನೇ ಬಂದು ಪತಿತರನ್ನು ಪಾವನ ಮಾಡಬೇಕಾಗಿದೆ. ಪತಿತ-ಪಾವನ ಸೀತಾರಾಮನೇ ಬನ್ನಿ ಎಂದು ಸಾಧು-ಸಂತರೂ ಸಹ ಹಾಡುತ್ತಿರುತ್ತಾರೆ. ಹೇಗೆ ಇದು ರಾವಣ ರಾಜ್ಯವಾಗಿದೆ, ರಾವಣನೇನು ಕಡಿಮೆಯಿಲ್ಲ. ಇಡೀ ಪ್ರಪಂಚವನ್ನು ತಮೋಪ್ರಧಾನ ಪತಿತವನ್ನಾಗಿ ಯಾರು ಮಾಡಿದರು? ರಾವಣ. ಮತ್ತೆ ಪಾವನರನ್ನಾಗಿ ಮಾಡುವಂತಹ ಸಮರ್ಥರು ರಾಮನಾಗಿದ್ದಾರಲ್ಲವೆ. ಅರ್ಧಕಲ್ಪ ರಾಮರಾಜ್ಯವಾಗಿರುತ್ತದೆ. ಅಂದಮೇಲೆ ಇನ್ನರ್ಧ ಕಲ್ಪ ರಾವಣ ರಾಜ್ಯವೂ ನಡೆಯುತ್ತದೆ. ರಾವಣ ಯಾರೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ವರ್ಷ-ವರ್ಷವೂ ಸುಡುತ್ತಿರುತ್ತಾರೆ ಆದರೂ ಸಹ ರಾವಣ ರಾಜ್ಯವೂ ನಡೆಯುತ್ತಲೇ ಇರುತ್ತದೆ, ರಾವಣನು ಸುಡುವುದೇ ಇಲ್ಲ. ಪರಮಾತ್ಮನು ಸಮರ್ಥನೆಂದು ಮನುಷ್ಯರು ಹೇಳುತ್ತಾರೆ ಅಂದಮೇಲೆ ರಾವಣನಿಗೆ ರಾಜ್ಯ ಮಾಡಲು ಏಕೆ ಕೊಡುತ್ತಾರೆ! ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ನಾಟಕವು ಸೋಲು ಮತ್ತು ಗೆಲುವು. ಸ್ವರ್ಗ ಮತ್ತು ನರಕದ್ದಾಗಿದೆ. ಭಾರತದಲ್ಲಿಯೇ ಎಲ್ಲಾ ಆಟವು ಮಾಡಲ್ಪಟ್ಟಿದೆ, ಇದೇ ಮಾಡಿ-ಮಾಡಿಲ್ಪಟ್ಟಂತಹ ನಾಟಕವಾಗಿದೆ. ಆದರೆ ಪರಮಪಿತನೂ ಸರ್ವಶಕ್ತಿವಂತ ಆಗಿರುವುದರಿಂದ ಆಟವು ಮುಕ್ತಾಯವಾಗುವ ಮುಂಚೆಯೇ ಬರುತ್ತಾರೆ ಇಲ್ಲವೆ ಅರ್ಧದಲ್ಲಿಯೇ ಆಟವನ್ನು ನಿಲ್ಲಿಸಿ ಬಿಡುತ್ತಾರೆಂದಲ್ಲ. ಯಾವಾಗ ಇಡೀ ಪ್ರಪಂಚವು ಪತಿತವಾಗಿ ಬಿಡುತ್ತದೆಯೋ ಆಗಲೇ ನಾನು ಬರುತ್ತೇನೆ. ಆದ್ದರಿಂದಲೇ ನಾನು ಬರುತ್ತೇನೆಂದು ತಂದೆಯು ತಿಳಿಸುತ್ತಾರೆ. ಆದ್ದರಿಂದ ಶಿವರಾತ್ರಿಯನ್ನು ಆಚರಿಸುತ್ತಾರೆ. ಶಿವಾಯ ನಮಃ ಎಂದು ಹೇಳುತ್ತಾರೆ, ಬ್ರಹ್ಮಾ-ವಿಷ್ಣು-ಶಂಕರನಿಗೆ ದೇವತಾಯ ನಮಃ ಎಂದು ಹೇಳುತ್ತಾರೆ. ಆದರೆ ಶಿವನಿಗೆ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ಅಂದಾಗ ಹೇಗೆ ಬಬುಲ್ನಾಥದಲ್ಲಿ, ಸೋಮನಾಥದ ಮಂದಿರದಲ್ಲಿ ಮೂರ್ತಿಯಿದೆಯೋ ಹಾಗೆಯೇ ಶಿವನಿದ್ದಾರೆಯೇ? ಪರಮಪಿತ ಪರಮಾತ್ಮನಿಗೆ ಇಷ್ಟು ದೊಡ್ಡ ರೂಪವಿದೆಯೇ? ಅಥವಾ ಆತ್ಮವು ಚಿಕ್ಕದು, ತಂದೆಯು ದೊಡ್ಡದ್ದಾಗಿದ್ದಾರೆಯೇ? ಪ್ರಶ್ನೆಯು ಬರುತ್ತದೆಯಲ್ಲವೆ. ಹೇಗೆ ಇಲ್ಲಿ ಚಿಕ್ಕವರಿಗೆ ಮಕ್ಕಳು, ದೊಡ್ಡವರಿಗೆ ತಂದೆಯೆಂದು ಹೇಳಲಾಗುತ್ತದೆ. ಹಾಗೆಯೇ ಪರಮಪಿತ ಪರಮಾತ್ಮನು ಅನ್ಯ ಆತ್ಮಗಳಿಗಿಂತ ದೊಡ್ಡವರಾಗಿದ್ದಾರೆ ಮತ್ತು ನಾವಾತ್ಮರು ಚಿಕ್ಕವರಾಗಿದ್ದೇವೆಯೇ? ಇಲ್ಲ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನನ್ನ ಮಹಿಮೆಯನ್ನು ಮಾಡುತ್ತೀರಿ, ಪರಮಾತ್ಮನ ಮಹಿಮೆಯು ಅಪರಮಪಾರವೆಂದು ಹೇಳುತ್ತೀರಿ. ಮನುಷ್ಯ ಸೃಷ್ಟಿಯ ಬೀಜವಾಗಿರುವುದರಿಂದ ಪರಮಪಿತನಿಗೆ ಬೀಜವೆಂದು ಹೇಳುತ್ತಾರಲ್ಲವೆ. ಅವರು ರಚೈತನಾಗಿದ್ದಾರೆ, ಉಳಿದಂತೆ ಯಾವ ಇಷ್ಟೆಲ್ಲಾ ವೇದ-ಉಪನಿಷತ್ತು, ಗೀತೆ, ಯಜ್ಞ, ಜಪ, ತಪ, ದಾನ, ಪುಣ್ಯ...... ಇವೆಲ್ಲವೂ ಭಕ್ತಿಯ ಸಾಮಗ್ರಿಗಳಾಗಿವೆ. ಇವಕ್ಕೂ ಸಹ ತಮ್ಮ ಸಮಯವಿದೆ. ಅರ್ಧ ಕಲ್ಪ ಭಕ್ತಿಯದು, ಅರ್ಧ ಕಲ್ಪ ಜ್ಞಾನದ್ದಾಗಿದೆ. ಭಕ್ತಿಯು ಬ್ರಹ್ಮನ ರಾತ್ರಿಯಾಗಿದೆ, ಜ್ಞಾನವು ಬ್ರಹ್ಮನ ದಿನವಾಗಿದೆ. ಇದನ್ನು ಶಿವ ತಂದೆಯು ನಿಮಗೆ ತಿಳಿಸುತ್ತಾರೆ. ಇವರಿಗೆ ತನ್ನದೇ ಆದಂತಹ ಶರೀರವಿಲ್ಲ. ಆ ತಂದೆಯು ನಿಮಗೆ ತಿಳಿಸುತ್ತಾರೆ. ಮಕ್ಕಳೇ, ನಾನು ನಿಮಗೆ ಪುನಃ ರಾಜ್ಯಭಾಗ್ಯವನ್ನು ಕೊಡಿಸುವುದಕ್ಕಾಗಿ ರಾಜಯೋಗವನ್ನು ಕಲಿಸುತ್ತೇನೆ. ಈಗ ಬ್ರಹ್ಮನ ರಾತ್ರಿಯು ಪೂರ್ಣವಾಗುತ್ತದೆ, ಅದೇ ಧರ್ಮ ಗ್ಲಾನಿಯ ಸಮಯವು ಬಂದು ಬಿಟ್ಟಿದೆ. ಎಲ್ಲರಿಗಿಂತ ಹೆಚ್ಚಿನ ನಿಂದನೆಯನ್ನು ಯಾರಿಗೆ ಮಾಡುತ್ತಾರೆ? ಪರಮಪಿತ ಪರಮಾತ್ಮ ಶಿವನಿಗೆ. ಯಧಾ ಯಧಾಹೀ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ ಎಂದು ಬರೆಯಲಾಗಿದೆಯಲ್ಲವೆ. ನಾನು ಕಲ್ಪದ ಹಿಂದೆ ಸಂಸ್ಕೃತದಲ್ಲಿ ಜ್ಞಾನವನ್ನು ಕೊಟ್ಟಿದ್ದೇನೆಂದಲ್ಲ. ಭಾಷೆಯಂತೂ ಇದೇ ಆಗಿದೆ ಆದರೆ ಯಾವಾಗ ಭಾರತದಲ್ಲಿ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುವವರ ನಿಂದನೆಯಾಗುತ್ತದೆಯೋ, ನನ್ನನ್ನು ಕಲ್ಲು, ಮುಳ್ಳಿನಲ್ಲಿ ಹಾಕುತ್ತಾರೆಯೋ ಆಗ ನಾನು ಬರುತ್ತೇನೆ. ನಾನು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇನೆ, ಪತಿತರನ್ನು ಪಾವನರನ್ನಾಗಿ ಮಾಡುತ್ತೇನೆ. ನನಗೆ ಎಷ್ಟೊಂದು ನಿಂದನೆ ಮಾಡಿದ್ದಾರೆ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಭಾರತವು ಎಲ್ಲದಕ್ಕಿಂತ ಪ್ರಾಚೀನ ಖಂಡವಾಗಿದೆ, ಯಾವುದು ಎಂದಿಗೂ ವಿನಾಶವಾಗುವುದಿಲ್ಲ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವೂ ಸಹ ಇಲ್ಲಿಯೇ ಆಗುತ್ತದೆ. ಈ ರಾಜ್ಯವನ್ನು ಸ್ವರ್ಗದ ರಚೈತನೇ ಕೊಟ್ಟಿದ್ದಾರೆ, ಈಗಂತೂ ಅದೇ ಭಾರತವು ಪತಿತವಾಗಿದೆ. ಆದ್ದರಿಂದ ನಾನು ಪುನಃ ಬರುತ್ತೇನೆ. ಆದ ಕಾರಣವೇ ಶಿವಾಯ ನಮಃ ಎಂದು ನನ್ನ ಮಹಿಮೆಯನ್ನು ಮಾಡುತ್ತಾರೆ. ಈ ಬೇಹದ್ದಿನ ನಾಟಕದಲ್ಲಿ ಪ್ರತಿಯೊಂದು ಆತ್ಮನ ಪಾತ್ರವು ನಿಗಧಿಯಾಗಿದೆ, ಅದು ಪುನರಾವರ್ತನೆಯಾಗುತ್ತಿದೆ. ಇದರಿಂದಲೇ ಕೆಲವು ತುಣುಕುಗಳನ್ನು ತೆಗೆದು ಹದ್ದಿನ ನಾಟಕವನ್ನಾಗಿ ಮಾಡುತ್ತಾರೆ. ಈಗ ನಾವು ಬ್ರಾಹ್ಮಣರಾಗಿದ್ದೇವೆ ನಂತರ ದೇವತೆಗಳಾಗುತ್ತೇವೆ. ಇದು ಈಶ್ವರೀಯ ವರ್ಣವಾಗಿದೆ. ಇದು ನಿಮ್ಮ 84ನೇ ಜನ್ಮದ ಅಂತ್ಯವೂ ಆಗಿದೆ. ಇದರಲ್ಲಿ ನಾಲ್ಕು ವರ್ಣಗಳ ಜ್ಞಾನವು ನಿಮಗಿದೆ. ಆದ್ದರಿಂದ ಬ್ರಾಹ್ಮಣ ವರ್ಣವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ಆದರೆ ಮಹಿಮೆ ಮತ್ತು ಪೂಜೆಯು ದೇವತೆಗಳದ್ದಾಗುತ್ತದೆ. ಬ್ರಹ್ಮನ ಮಂದಿರವೂ ಇದೆ ಆದರೆ ಇವರಲ್ಲಿ ಪರಮಾತ್ಮನು ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆಂದು ಯಾರಿಗೂ ಗೊತ್ತಿಲ್ಲ. ಸ್ಥಾಪನೆಯಾಗುತ್ತಾ ಇದೆ ಅಂದಮೇಲೆ ವಿನಾಶವೂ ಆಗಲೇಬೇಕು. ಆದ್ದರಿಂದಲೇ ರುದ್ರ ಜ್ಞಾನ ಯಜ್ಞದಿಂದ ವಿನಾಶದ ಜ್ವಾಲೆಯು ಪ್ರಜ್ವಲಿತವಾಯಿತೆಂದು ಹೇಳುತ್ತಾರೆ. ಈಗ ಅದೇ ತಂದೆಯು ಮಕ್ಕಳಿಗೆ ತಿಳಿಸುತ್ತಿದ್ದಾರೆ - ಮಧುರ ಮಕ್ಕಳೇ, ಈಗ ಇದು ನಿಮ್ಮ ಅಂತಿಮ ಜನ್ಮವಾಗಿದೆ, ನಾನು ನಿಮಗೆ ಪುನಃ ಸ್ವರ್ಗದ ಆಸ್ತಿಯನ್ನು ಕೊಡಲು ಬಂದಿದ್ದೇನೆ. ನಿಮಗೆ ಅಧಿಕಾರವಿದೆ ಆದರೆ ಯಾರು ನನ್ನ ಶ್ರೀಮತದಂತೆ ನಡೆಯುತ್ತಾರೆಯೋ ಅವರಿಗೆ ನಾನು ಸ್ವರ್ಗದ ಬಹುಮಾನವನ್ನು ಕೊಡುತ್ತೇನೆ. ಆ ಮನುಷ್ಯರಿಗೂ ಸಹ ಶಾಂತಿಯ ಪ್ರಶಸ್ತಿ ಮೊದಲಾದವು ಸಿಗುತ್ತದೆ ಆದರೆ ತಂದೆಯು ನಿಮ್ಮೆಲ್ಲರಿಗೆ ಸ್ವರ್ಗದ ಬಹುಮಾನವನ್ನು ಕೊಡುತ್ತಾರೆ. ನಾನು ನಿಮ್ಮಿಂದ ತೆಗೆದುಕೊಳ್ಳುವುದಿಲ್ಲ, ನಾನು ನಿಮ್ಮ ಮೂಲಕ ಸ್ಥಾಪನೆ ಮಾಡಿಸುತ್ತೇನೆ ಆದ್ದರಿಂದ ನಿಮಗೇ ಕೊಡುತ್ತೇನೆಂದು ತಂದೆಯು ಹೇಳುತ್ತಾರೆ. ನೀವು ಶಿವ ತಂದೆಯ ಮೊಮ್ಮಕ್ಕಳು, ಬ್ರಹ್ಮನ ಮಕ್ಕಳಾಗಿದ್ದೀರಿ. ಇಷ್ಟು ಮಂದಿ ಮಕ್ಕಳನ್ನು ಪ್ರಜಾಪಿತ ಬ್ರಹ್ಮಾರವರೇ ದತ್ತು ಮಾಡಿಕೊಳ್ಳುತ್ತಾರಲ್ಲವೆ. ಈ ನಿಮ್ಮ ಬ್ರಾಹ್ಮಣ ಜನ್ಮವು ಎಲ್ಲದಕ್ಕಿಂತ ಉತ್ತಮ ಕಲ್ಯಾಣಕಾರಿ ಜನ್ಮವಾಗಿದೆ ದೇವತೆಗಳ ಅಥವಾ ಶೂದ್ರರ ಜನ್ಮ ಕಲ್ಯಾಣಕಾರಿಯಲ್ಲ. ಈ ನಿಮ್ಮ ಜನ್ಮವು ಬಹಳ ಕಲ್ಯಾಣಕಾರಿಯಾಗಿದೆ. ಏಕೆಂದರೆ ತಂದೆಯ ಸಹಯೋಗಿಗಳಾಗಿ ಸೃಷ್ಟಿಯಲ್ಲಿ ಶಾಂತಿ-ಪವಿತ್ರತೆಯನ್ನು ಸ್ಥಾಪನೆ ಮಾಡುತ್ತೀರಿ. ಆ ಬಹುಮಾನವನ್ನು ಕೊಡುವವರು ಇದನ್ನು ತಿಳಿದಿರುವುದಿಲ್ಲ. ಅವರಂತೂ ಅಮೇರಿಕನ್ನರು ಅಥವಾ ಮೊದಲಾದವರಿಗೆ ಕೊಟ್ಟು ಬಿಡುತ್ತಾರೆ. ಇಲ್ಲಿ ತಂದೆಯೂ ಹೇಳುತ್ತಾರೆ, ಯಾರು ನನ್ನ ಸಹಯೋಗಿಗಳಾಗುತ್ತೀರೋ ಅವರಿಗೆ ನಾನು ಬಹುಮಾನವನ್ನು ಕೊಡುತ್ತೇನೆ. ಪವಿತ್ರತೆಯಿದ್ದರೆ ಸೃಷ್ಟಿಯಲ್ಲಿ ಶಾಂತಿ, ಸಂಪತ್ತು ಎಲ್ಲವೂ ಇರುತ್ತದೆ. ಆದರೆ ಈಗಂತೂ ಇದು ವೇಶ್ಯಾಲಯವಾಗಿದೆ, ಸತ್ಯಯುಗವು ಶಿವಾಲಯವಾಗಿರುತ್ತದೆ. ಶಿವತಂದೆಯೇ ಸ್ಥಾಪನೆ ಮಾಡಿದ್ದಾರೆ, ಸಾಧು-ಸನ್ಯಾಸಿಗಳು ಹಠಯೋಗಿಗಳಾಗಿದ್ದಾರೆ, ಗೃಹಸ್ಥ ಧರ್ಮದವರಿಗೆ ರಾಜಯೋಗವನ್ನಂತೂ ಕಲಿಸಲು ಸಾಧ್ಯವಿಲ್ಲ. ಭಲೆ ಸಾವಿರ ಸಲ ಗೀತಾ ಮಹಾಭಾರತವನ್ನು ಓದಲಿ ಆದರೆ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಇವರಂತೂ ಎಲ್ಲರ ತಂದೆಯಾಗಿದ್ದಾರೆ, ಎಲ್ಲಾ ಧರ್ಮದವರಿಗೂ ತಿಳಿಸುತ್ತಾರೆ - ತಮ್ಮ ಬುದ್ಧಿಯೋಗವನ್ನು ನನ್ನೊಂದಿಗೆ ಜೋಡಿಸಿ, ನಾನೂ ಸಹ ಚಿಕ್ಕ ಬಿಂದುವಾಗಿದ್ದೇನೆ. ಇಷ್ಟು ದೊಡ್ಡದಾಗಿಲ್ಲ. ಆತ್ಮವು ಹೇಗಿದೆಯೋ ಪರಮಾತ್ಮನಾದ ನಾನೂ ಸಹ ಹಾಗೆಯೇ ಇದ್ದೇನೆ. ಕೇವಲ ನಾನು ಜನನ-ಮರಣ ರಹಿತ, ನಾನು ಸದಾ ಪಾವನನಾಗಿದ್ದೇನೆ ಮತ್ತು ಆತ್ಮರು ಜನನ-ಮರಣದಲ್ಲಿ ಬರುತ್ತಾರೆ. ಪಾವನರಿಂದ ಪತಿತ, ಪತಿತರಿಂದ ಪಾವನರಾಗುತ್ತಾರೆ. ಈಗ ಮತ್ತೆ ಪತಿತರನ್ನು ಪಾವನರನ್ನಾಗಿ ಮಾಡಲು ತಂದೆಯು ಈ ರುದ್ರ ಜ್ಞಾನ ಯಜ್ಞವನ್ನು ರಚಿಸಿದ್ದಾರೆ. ಇದರ ನಂತರ ಸತ್ಯಯುಗದಲ್ಲಿ ಯಾವುದೇ ಯಜ್ಞವಾಗುವುದಿಲ್ಲ. ನಂತರ ದ್ವಾಪರದಿಂದ ಅನೇಕ ಪ್ರಕಾರದ ಯಜ್ಞಗಳನ್ನು ರಚಿಸುತ್ತಿರುತ್ತಾರೆ. ಈ ರುದ್ರ ಜ್ಞಾನ ಯಜ್ಞವನ್ನು ಇಡೀ ಕಲ್ಪದಲ್ಲಿ ಒಂದೇ ಬಾರಿ ರಚಿಸಲಾಗುತ್ತದೆ. ಇದರಲ್ಲಿ ಎಲ್ಲರ ಆಹುತಿಯಾಗಿ ಬಿಡುತ್ತದೆ ನಂತರ ಯಾವುದೇ ಯಜ್ಞಗಳನ್ನು ರಚಿಸಲಾಗುವುದಿಲ್ಲ. ಯಾವಾಗ ಬರಗಾಲ ಅಥವಾ ಯಾವುದಾದರೂ ವಿಪತ್ತುಗಳು ಬಂದಾಗ ಯಜ್ಞಗಳನ್ನು ರಚಿಸುತ್ತಾರೆ. ಸತ್ಯಯುಗ-ತ್ರೇತಾದಲ್ಲಂತೂ ಯಾವುದೇ ಆಪತ್ತುಗಳು ಬರುವುದಿಲ್ಲ. ಈ ಸಮಯದಲ್ಲಿ ಅನೇಕ ಪ್ರಕಾರದ ಆಪತ್ತುಗಳು ಬರುತ್ತವೆ ಆದರೆ ಎಲ್ಲದಕ್ಕಿಂತ ದೊಡ್ಡ ಸೇಠ್ ಶಿವ ತಂದೆಯು ಜ್ಞಾನವನ್ನು ರಚನೆ ಮಾಡಿಸಿದ್ದಾರೆ. ಆದ್ದರಿಂದ ಮೊದಲಿನಿಂದಲೇ ಸಾಕ್ಷಾತ್ಕಾರ ಮಾಡಿಸುತ್ತಾರೆ. ಹೇಗೆ ಎಲ್ಲವೂ ಆಹುತಿಯಾಗಲಿದೆ, ಹೇಗೆ ವಿನಾಶವಾಗಲಿದೆ, ಹೇಗೆ ಈ ಹಳೆಯ ಪ್ರಪಂಚವು ಸ್ಮಶಾನವಾಗಲಿದೆ ಎಂಬುದನ್ನು ಸಾಕ್ಷಾತ್ಕಾರ ಮಾಡಿಸಿದ್ದಾರೆ ಅಂದಮೇಲೆ ಈ ಹಳೆಯ ಪ್ರಪಂಚದೊಂದಿಗೆ ಮನಸ್ಸನ್ನೇಕೆ ಇಡಬೇಕು? ಆದ್ದರಿಂದ ನೀವು ಮಕ್ಕಳು ಬೇಹದ್ದಿನ ಹಳೆಯ ಪ್ರಪಂಚದ ಸನ್ಯಾಸ ಮಾಡುತ್ತೀರಿ. ಆ ಸನ್ಯಾಸಿಗಳಂತೂ ಕೇವಲ ಗೃಹಸ್ಥದ ಸನ್ಯಾಸ ಮಾಡುತ್ತಾರೆ ಆದರೆ ನೀವು ಗೃಹಸ್ಥವನ್ನು ಬಿಡಬಾರದಾಗಿದೆ. ಇಲ್ಲಿ ಗೃಹಸ್ಥವನ್ನು ಸಂಭಾಲನೆ ಮಾಡುತ್ತಲೂ ಇದರಿಂದ ಮಮತ್ವವನ್ನು ತೆಗೆಯಬೇಕಾಗಿದೆ. ಇವರೆಲ್ಲರೂ ಸತ್ತು ಹೋಗಿದ್ದಾರೆ, ಇವರೊಂದಿಗೇನು ಮನಸ್ಸನ್ನಿಡುವುದು! ಇದಂತೂ ಶವಗಳ ಪ್ರಪಂಚವಾಗಿದೆ. ಆದ್ದರಿಂದ ತಿಳಿಸುತ್ತಾರೆ - ಮಕ್ಕಳೇ, ಫರಿಸ್ಥಾನವನ್ನು (ಸ್ವರ್ಗ) ನೆನಪು ಮಾಡಿ, ಈ ಸ್ಮಶಾನವನ್ನೇಕೆ ನೆನಪು ಮಾಡುತ್ತೀರಿ.

ತಂದೆಯೂ ಸಹ ದಲ್ಲಾಳಿಯಾಗಿ ನಿಮ್ಮ ಬುದ್ಧಿಯ ಯೋಗವನ್ನು ತನ್ನ ಜೊತೆ ಜೋಡಣೆ ಮಾಡುತ್ತಾರೆ. ಕಲಿಯುಗೀ ಗುರುಗಳನ್ನು ಪತಿತ-ಪಾವನರೆಂದು ಹೇಳಲು ಸಾಧ್ಯವಿಲ್ಲ. ಅವರು ಸದ್ಗತಿಯನ್ನಂತೂ ಮಾಡುವುದಿಲ್ಲ. ಹಾ! ಅವರು ಶಾಸ್ತ್ರಗಳನ್ನು ತಿಳಿಸುತ್ತಾರೆ, ಕ್ರಿಯಾಕರ್ಮಗಳನ್ನು ಮಾಡಿಸುತ್ತಾರೆ. ಶಿವ ತಂದೆಗೆ ಯಾವುದೇ ಶಿಕ್ಷಕ, ಗುರುಗಳಿಲ್ಲ. ತಂದೆಯಂತೂ ತಿಳಿಸುತ್ತಾರೆ - ನಾನು ನಿಮಗೆ ಸ್ವರ್ಗದ ಆಸ್ತಿಯನ್ನು ಕೊಡಲು ಬಂದಿದ್ದೇನೆ ಅಂದಮೇಲೆ ಅದರಲ್ಲಿ ಸೂರ್ಯವಂಶಿಗಳಾದರೂ ಆಗಿ, ಚಂದ್ರವಂಶಿಗಳಾದರೂ ಆಗಿ. ಹೇಗೆ ಆಗುತ್ತಾರೆ?, ಯುದ್ಧದಿಂದ ಆಗುತ್ತಾರೆಯೇ? ಇಲ್ಲ. ಲಕ್ಷ್ಮೀ-ನಾರಾಯಣರಾಗಲಿ, ರಾಮ-ಸೀತೆಯಾಗಲಿ ಯುದ್ಧದಿಂದ ರಾಜ್ಯವನ್ನು ಪಡೆಯಲಿಲ್ಲ. ಇವರು ಈ ಸಮಯದಲ್ಲಿ ಮಾಯೆಯೊಂದಿಗೆ ಯುದ್ಧ ಮಾಡಿದ್ದಾರೆ. ನೀವು ಗುಪ್ತ ಯೋಧರಾಗಿದ್ದೀರಿ. ಆದ್ದರಿಂದ ನೀವು ಶಕ್ತಿ ಸೇನೆಯರನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಯೋಗಬಲದಿಂದ ಇಡೀ ವಿಶ್ವದ ಮಾಲೀಕರಾಗುತ್ತೀರಿ. ನೀವೇ ವಿಶ್ವದ ರಾಜ್ಯವನ್ನು ಕಳೆದುಕೊಂಡಿದ್ದೀರಿ, ಮತ್ತೆ ನೀವೇ ಅದನ್ನು ಪಡೆಯುತ್ತಿದ್ದೀರಿ. ನಿಮಗೆ ಬಹುಮಾನವನ್ನು ಕೊಡುವವರು ತಂದೆಯಾಗಿದ್ದಾರೆ. ಈಗ ಯಾರು ತಂದೆಗೆ ಸಹಯೋಗಿಗಳಾಗುತ್ತಾರೆಯೋ ಅವರಿಗೇ ಅರ್ಧ ಕಲ್ಪಕ್ಕಾಗಿ ಸುಖ-ಶಾಂತಿಯ ಬಹುಮಾನವು ಸಿಗುತ್ತದೆ. ಯಾರು ಅಶರೀರಿಯಾಗಿ ತಂದೆಯನ್ನು ನೆನಪು ಮಾಡುತ್ತಾರೆ, ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾರೆ, ಶಾಂತಿಧಾಮ, ಮಧುರ ಮನೆ ಮತ್ತು ಮಧುರ ರಾಜಧಾನಿಯನ್ನು ನೆನಪು ಮಾಡಿ ಪವಿತ್ರರಾಗುತ್ತಾರೆಯೋ ಅವರನ್ನೇ ತಂದೆಯು ಸಹಯೋಗಿಗಳೆಂದು ಹೇಳುತ್ತಾರೆ. ಎಷ್ಟೊಂದು ಸಹಜವಾಗಿದೆ. ನಾವು ಆತ್ಮರೂ ಸಹ ಬಿಂದುಗಳಾಗಿದ್ದೇವೆ, ನಮ್ಮ ತಂದೆಯಾದ ಪರಮಾತ್ಮನೂ ಸಹ ಬಿಂದುವಾಗಿದ್ದಾರೆ. ಅದು ದೊಡ್ಡ ರೂಪದಲ್ಲೇನೂ ಇಲ್ಲ. ಆದರೆ ಇಷ್ಟು ಚಿಕ್ಕ ಬಿಂದುವನ್ನು ಪೂಜೆ ಮಾಡುವುದು ಹೇಗೆ! ಆದ್ದರಿಂದ ಪೂಜೆಗಾಗಿ ಇಷ್ಟು ದೊಡ್ಡದನ್ನಾಗಿ ಮಾಡಿ ಬಿಟ್ಟಿದ್ದಾರೆ. ಮೊಟ್ಟ ಮೊದಲು ಪೂಜೆಯು ತಂದೆಯದೇ ಆಗುತ್ತದೆ ನಂತರ ಬೇರೆಯವರದಾಗುತ್ತದೆ. ಲಕ್ಷ್ಮೀ-ನಾರಾಯಣರಿಗೆ ಎಷ್ಟೊಂದು ಪೂಜೆಯಾಗುತ್ತದೆ. ಆದರೆ ಅವರನ್ನು ಹೀಗೆ ಮಾಡುವವರು ಯಾರು? ಎಲ್ಲರ ಸದ್ಗತಿದಾತನಾದ ತಂದೆ. ಬಲಿಹಾರಿಯು ಅವರೊಬ್ಬರದೇ ಆಗಿದೆಯಲ್ಲವೆ. ಅವರ ಜಯಂತಿಯು ವಜ್ರ ಸಮಾನವಾಗಿದೆ. ಬಾಕಿ ಎಲ್ಲರ ಜಯಂತಿಯು ಕವಡೆಯ ಸಮಾನವಾಗಿದೆ. ಶಿವಾಯ ನಮಃ - ಇದು ಅವರ ಯಜ್ಞವಾಗಿದೆ, ನೀವು ಬ್ರಾಹ್ಮಣರಿಂದ ರಚನೆ ಮಾಡಿಸಿದ್ದಾರೆ ಮತ್ತು ತಿಳಿಸುತ್ತಾರೆ - ಯಾರು ನನಗೆ ಶಾಂತಿ-ಸುಖ-ಪವಿತ್ರತೆಯನ್ನು ಸ್ಥಾಪನೆ ಮಾಡುವುದರಲ್ಲಿ ಸಹಯೋಗ ಕೊಡುತ್ತಾರೆಯೋ ಅವರಿಗೆ ಇಷ್ಟೊಂದು ಫಲವನ್ನು ಕೊಡುತ್ತೇನೆ. ಬ್ರಾಹ್ಮಣರಿಂದ ಯಜ್ಞವನ್ನು ರಚನೆ ಮಾಡಿಸಿದ್ದೇನೆಂದರೆ ದಕ್ಷಿಣೆಯನ್ನಂತೂ ಕೊಡುತ್ತೇನೆ ಅಲ್ಲವೆ. ಇಷ್ಟು ದೊಡ್ಡ ಯಜ್ಞವನ್ನು ರಚಿಸಿದ್ದಾರೆ, ಮತ್ತ್ಯಾವುದೇ ಯಜ್ಞವು ಇಷ್ಟು ಸಮಯ ನಡೆಯುವುದಿಲ್ಲ. ತಂದೆಯು ತಿಳಿಸುತ್ತಾರೆ - ಯಾರು ಎಷ್ಟು ನನಗೆ ಸಹಯೋಗ ಕೊಡುತ್ತಾರೆಯೋ ಅಷ್ಟು ಬಹುಮಾನವನ್ನು ಕೊಡುತ್ತೇನೆ. ಎಲ್ಲರಿಗೆ ಬಹುಮಾನವನ್ನು ಕೊಡುವವನು ನಾನೇ ಆಗಿದ್ದೇನೆ. ನಾನು ಏನನ್ನೂ ತೆಗೆದುಕೊಳ್ಳುವುದಿಲ್ಲ, ಎಲ್ಲವನ್ನೂ ನಿಮಗೆ ಕೊಡುತ್ತೇನೆ. ಈಗ ಯಾರು ಮಾಡುವರೋ ಅವರು ಪಡೆಯುವರು ಕಡಿಮೆ ಮಾಡುವವರು ಪ್ರಜೆಗಳಲ್ಲಿ ಹೋಗುವರು. ಗಾಂಧೀಜಿಯವರಿಗೂ ಸಹ ಯಾರು ಸಹಯೋಗವನ್ನು ಕೊಟ್ಟರೋ ಅವರು ರಾಷ್ಟ್ರಪತಿ, ಮಂತ್ರಿ ಮುಂತಾದವರಾದರಲ್ಲವೆ. ಇದಂತೂ ಅಲ್ಪಕಾಲದ ಸುಖವಾಗಿದೆ. ತಂದೆಯಂತೂ ನಿಮಗೆ ಇಡೀ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಟ್ಟು ತಮ್ಮ ಸಮಾನ ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಾರೆ ಮತ್ತು ತಿಳಿಸುತ್ತಾರೆ - ನನ್ನ ಚರಿತ್ರೆಯನ್ನು ತಿಳಿಯುವುದರಿಂದ ನೀವು ಎಲ್ಲವನ್ನೂ ತಿಳಿದುಕೊಂಡು ಬಿಡುತ್ತೀರಿ. ಸನ್ಯಾಸಿಗಳೂ ಈ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಅವರಿಂದ ಆಸ್ತಿಯೇನು ಸಿಗುವುದು? ಅವರು ಸಿಂಹಾಸನವನ್ನು ಒಬ್ಬರಿಗೆ ಕೊಡುತ್ತಾರೆ, ಉಳಿದವರಿಗೇನು ಸಿಗುತ್ತದೆ? ತಂದೆಯಂತೂ ನಿಮ್ಮೆಲ್ಲರಿಗೆ ಸಿಂಹಾಸನವನ್ನು ಕೊಡುತ್ತಾರೆ, ಎಷ್ಟೊಂದು ನಿಷ್ಕಾಮ ಸೇವೆಯನ್ನು ಮಾಡುತ್ತಾರೆ. ಆದರೆ ನೀವು ನನ್ನನ್ನು ಕಲ್ಲು, ಮುಳ್ಳಿನಲ್ಲಿ ಹಾಕಿ ಎಷ್ಟೊಂದು ನಿಂದನೆ ಮಾಡಿದ್ದೀರಿ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ಯಾವಾಗ ಕವಡೆಯ ಸಮಾನರಾಗಿ ಬಿಡುತ್ತೀರೋ ಆಗ ನಿಮ್ಮನ್ನು ವಜ್ರ ಸಮಾನರನ್ನಾಗಿ ಮಾಡುತ್ತೇನೆ, ನಾನಂತೂ ಲೆಕ್ಕವಿಲ್ಲದಷ್ಟು ಬಾರಿ ಭಾರತವನ್ನು ಸ್ವರ್ಗವನ್ನಾಗಿ ಮಾಡಿದ್ದೇನೆ. ಆದರೆ ಮಾಯೆಯು ನರಕವನ್ನಾಗಿ ಮಾಡಿದೆ ಎಂದು ತಂದೆಯು ತಿಳಿಸುತ್ತಾರೆ. ಈಗ ಒಂದುವೇಳೆ ಪ್ರಾಪ್ತಿ ಮಾಡಿಕೊಳ್ಳಬೇಕೆಂದರೆ ತಂದೆಗೆ ಸಹಯೋಗಿಗಳಾಗಿ ಸತ್ಯವಾದ ಬಹುಮಾನವನ್ನು ಪಡೆಯಿರಿ. ಇದರಲ್ಲಿ ಪವಿತ್ರತೆಯು ಮೊದಲನೆಯದಾಗಿದೆ.

ತಂದೆಯು ಸನ್ಯಾಸಿಗಳ ಮಹಿಮೆಯನ್ನೂ ಮಾಡುತ್ತಾರೆ - ಸನ್ಯಾಸಿಗಳೂ ಸಹ ಎಷ್ಟೊಂದು ಒಳ್ಳೆಯವರಾಗಿರುತ್ತಾರೆ, ಅವರೂ ಸಹ ಪವಿತ್ರರಾಗಿರುತ್ತಾರೆ. ಇವರೂ ಸಹ ಭಾರತವನ್ನು ಬೀಳುವುದರಿಂದ ರಕ್ಷಿಸುತ್ತಾರೆ, ಇಲ್ಲದಿದ್ದರೆ ಏನಾಗಿ ಬಿಡುತ್ತಿತ್ತೋ! ಆದರೆ ಈಗಂತೂ ಭಾರತವನ್ನು ಸ್ವರ್ಗವನ್ನಾಗಿ ಮಾಡಬೇಕೆಂದರೆ ಅವಶ್ಯವಾಗಿ ಗೃಹಸ್ಥದಲ್ಲಿರುತ್ತಾ ಪವಿತ್ರರಾಗಬೇಕಾಗಿದೆ. ತಂದೆ (ಬಾಪ್) – ದಾದಾ (ಅಣ್ಣ) ಇಬ್ಬರೂ ಮಕ್ಕಳಿಗೆ ತಿಳಿಸುತ್ತಾರೆ. ಶಿವ ತಂದೆಯೂ ಸಹ ಈ ಹಳೆಯ ಪಾದರಕ್ಷೆಯ ಮುಖಾಂತರ ಮಕ್ಕಳಿಗೆ ಸಲಹೆ ನೀಡುತ್ತಾರೆ, ಹೊಸದನ್ನು ತೆಗೆದುಕೊಳ್ಳುವುದಿಲ್ಲ, ತಾಯಿಯ ಗರ್ಭದಲ್ಲಂತೂ ಬರುವುದಿಲ್ಲ. ಹಳೆಯ ಪ್ರಪಂಚ, ಹಳೆಯ ಶರೀರದಲ್ಲಿಯೇ ಬರುತ್ತಾರೆ. ಈ ಕಲಿಯುಗದಲ್ಲಿ ಘೋರ ಅಂಧಕಾರವಿದೆ, ಘೋರ ಅಂಧಕಾರವನ್ನು ಪ್ರಕಾಶವನ್ನಾಗಿ ಮಾಡಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಈ ಬೇಹದ್ದಿನ ಪ್ರಪಂಚವನ್ನು ಮನಃಪೂರ್ವಕವಾಗಿ ಸನ್ಯಾಸ ಮಾಡಿ, ತಮ್ಮ ಮಮತ್ವವನ್ನು ಕಳೆಯಬೇಕಾಗಿದೆ. ಇದರೊಂದಿಗೆ ಮನಸ್ಸನ್ನಿಡಬಾರದು.

2. ತಂದೆಗೆ ಸಹಯೋಗಿಗಳಾಗಿ ಬಹುಮಾನವನ್ನು ಪಡೆಯುವುದಕ್ಕಾಗಿ - 1. ಅಶರೀರಿಯಾಗಬೇಕು 2. ಪವಿತ್ರರಾಗಿರಬೇಕು. 3. ಸ್ವದರ್ಶನ ಚಕ್ರವನ್ನು ತಿರುಗಿಸಬೇಕು. 4. ಮಧುರ ಮನೆ ಮತ್ತು ಮಧುರ ರಾಜಧಾನಿಯನ್ನು ನೆನಪು ಮಾಡಬೇಕು.

ವರದಾನ:
ಜೀವನದಲ್ಲಿ ದಿವ್ಯ ಗುಣಗಳ ಹೂವಿನ ಹೂ ತೋಟದ ಮೂಲಕ ಸುಖಿ, ಸಂಪನ್ನತೆ ಅನುಭವ ಮಾಡುವಂತಹ ಎವರ್ ಹ್ಯಾಪಿ ಭವ.

ಸದಾ ಸುಖಿ ಅರ್ಥಾತ್ ಭರ್ಪೂರ್, ಸಂಪನ್ನ, ಮೊದಲು ಮುಳ್ಳಿನ ಕಾಡಿನಲ್ಲಿ ಜೀವನವಿತ್ತು ಈಗ ಹೂವಿನ ಸುಖೀ ಜೀವನದಲ್ಲಿ ಬಂದಿರಿ. ಸದಾ ಜೀವನದಲ್ಲಿ ದಿವ್ಯ ಗುಣಗಳ ಹೂವಿನ ಉಧ್ಯಾನವನವೇ ಆಗಿದೆ, ಆದ್ದರಿಂದ ಯಾರೇ ನಿಮ್ಮ ಸಂಪರ್ಕದಲ್ಲಿ ಬರುತ್ತಾರೆ ಅವರಿಗೆ ದಿವ್ಯ ಗುಣಗಳ ಹೂವಿನ ಸುಗಂಧ ಬರುತ್ತಿರುವುದು ಮತ್ತು ಸುಖಿ ಸಂಪನ್ನತೆ ನೋಡಿ ಖುಶಿಯಾಗುತ್ತಾರೆ, ಶಕ್ತಿಯ ಅನುಭವ ಮಾಡುವರು. ಸುಖೀ ಜೀವನ ಬೇರೆಯವರನ್ನೂ ಶಕ್ತಿಶಾಲಿಗಳನ್ನಾಗಿ ಮಾಡುವುದು ಮತ್ತು ಖುಶಿಯಲ್ಲಿ ತರುವುದು. ಆದ್ದರಿಂದ ನೀವು ಹೇಳುವಿರಿ ನಾವು ಎವರ್ ಹ್ಯಾಪಿಯಾಗಿರುವೆವು ಎಂದು.

ಸ್ಲೋಗನ್:
ಮಾಸ್ಟರ್ ಸರ್ವ ಶಕ್ತಿವಾನ್ ಅವರೇ ಆಗಿದ್ದಾರೆ, ಯಾರು ಮಾಯೆಯ ಕೆಸರಿನಿಂದ ಭಯ ಪಡುವ ಬದಲು ಅದರಿಂದ ಆಟವಾಡುವಂತಹವರು.