31/10/18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಆತ್ಮಗಳಿಗೆ ತಮ್ಮ-ತಮ್ಮ ರಥವಿದೆ, ನಾನು ನಿರಾಕಾರನಾಗಿದ್ದೇನೆ, ನನಗೆ ಕಲ್ಪದಲ್ಲಿ ಒಂದೇ ಬಾರಿ ರಥವು ಬೇಕಾಗುತ್ತದೆ. ಆದ್ದರಿಂದ ನಾನು ಬ್ರಹ್ಮನ ಅನುಭವೀ ವೃದ್ಧನ ರಥವನ್ನು ಆಧಾರವಾಗಿ ತೆಗೆದುಕೊಳ್ಳುತ್ತೇನೆ.”

ಪ್ರಶ್ನೆ:
ಯಾವ ನಿಶ್ಚಯದ ಆಧಾರದ ಮೇಲೆ ಶರೀರದ ಪರಿವೆ (ಭಾನ) ಯನ್ನು ಮರೆಯುವುದು ಅತೀ ಸಹಜವಾಗುತ್ತದೆ?

ಉತ್ತರ:
ಬಾಬಾ ನಾವು ನಿಮ್ಮವರಾಗಿ ಬಿಟ್ಟೆವೆಂದು ನೀವು ಮಕ್ಕಳು ನಿಶ್ಚಯದಿಂದ ಹೇಳಿ ಬಿಟ್ಟಿರಿ, ತಂದೆಯ ಮಕ್ಕಳಾಗುವುದೆಂದರೇನೇ ಶರೀರದ ಪರಿವೆಯನ್ನು ಮರೆಯುವುದಾಗಿದೆ. ಹೇಗೆ ಶಿವ ತಂದೆಯು ಈ ರಥದಲ್ಲಿ ಬರುತ್ತಾರೆ, ಹೊರಟು ಹೋಗುತ್ತಾರೆ. ಹಾಗೆಯೇ ನೀವು ಮಕ್ಕಳು ಈ ರಥದಲ್ಲಿ ಬರುವ-ಹೋಗುವ ಅಭ್ಯಾಸ ಮಾಡಿ, ಅಶರೀರಿಯಾಗುವ ಅಭ್ಯಾಸ ಮಾಡಿ. ಇದರಲ್ಲಿ ಕಷ್ಟದ ಅನುಭವವಾಗಬಾರದು, ತನ್ನನ್ನು ನಿರಾಕಾರಿ ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ.

ಗೀತೆ:
ಓಂ ನಮಃ ಶಿವಾಯ.....

ಓಂ ಶಾಂತಿ.
ಶಿವ ತಂದೆಯು ಮಕ್ಕಳಿಗೆ ಈ ಬ್ರಹ್ಮಾರವರ ರಥದ ಮೂಲಕ ತಿಳಿಸುತ್ತಾರೆ, ಏಕೆಂದರೆ ತಂದೆಯು ಮಕ್ಕಳೊಂದಿಗೆ ಕೇಳುತ್ತಾರೆ - ನನಗೆ ನನ್ನದೇ ಆದ ರಥವಂತೂ ಇಲ್ಲ ಅಂದಾಗ ನನಗೆ ರಥವಂತೂ ಅವಶ್ಯವಾಗಿ ಬೇಕು. ಹೇಗೆ ನೀವು ಪ್ರತಿಯೊಂದು ಆತ್ಮನಿಗೆ ತಮ್ಮ ತಮ್ಮದೇ ಆದ ರಥವಿದೆ. ಬ್ರಹ್ಮಾ-ವಿಷ್ಣು-ಶಂಕರನಿಗೂ ಸೂಕ್ಷ್ಮ ಶರೀರವಿದೆಯಲ್ಲವೆ. ಲಕ್ಷ್ಮಿ-ನಾರಾಯಣ ಮುಂತಾದ ಎಲ್ಲಾ ಆತ್ಮಗಳಿಗೆ ಶರೀರರೂಪಿ ರಥವು ಅವಶ್ಯವಾಗಿದೆ, ಯಾವುದಕ್ಕೆ ಅಶ್ವವೆಂದು ಹೇಳುತ್ತಾರೆ. ಮನುಷ್ಯರೇ ಆಗಿದ್ದಾರೆ, ಮನುಷ್ಯರ ಮಾತನ್ನೇ ತಿಳಿಸಲಾಗುತ್ತದೆ, ಪ್ರಾಣಿಗಳ ಮಾತು ಪ್ರಾಣಿಗಳಿಗೇ ಗೊತ್ತು. ಇಲ್ಲಂತೂ ಮನುಷ್ಯ ಸೃಷ್ಠಿಯಾಗಿದೆ ಅಂದಮೇಲೆ ತಂದೆಯೂ ಸಹ ಮನುಷ್ಯರಿಗೇ ತಿಳಿಸುತ್ತಾರೆ. ಮನುಷ್ಯರಲ್ಲಿಯೂ ಯಾರು ಆತ್ಮನಾಗಿದ್ದಾರೆಯೋ ಅವರಿಗೆ ತಿಳಿಸುತ್ತಾರೆ. ನೇರವಾಗಿ ಕೇಳುತ್ತಾರೆ - ನೀವು ಪ್ರತಿಯೊಬ್ಬರಿಗೂ ತಮ್ಮ-ತಮ್ಮ ಶರೀರವಿದೆಯಲ್ಲವೆ. ಪ್ರತಿಯೊಂದು ಆತ್ಮವು ಶರೀರವನ್ನು ತೆಗೆದುಕೊಳ್ಳುತ್ತದೆ ಮತ್ತು ಬಿಡುತ್ತದೆ. ಆತ್ಮವು 84 ಲಕ್ಷ ಜನ್ಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಮನುಷ್ಯರು ಹೇಳಿ ಬಿಡುತ್ತಾರೆ. ಇದು ತಪ್ಪಾಗಿದೆ, ಯಾವಾಗ ನೀವು 84 ಜನ್ಮಗಳನ್ನು ತೆಗೆದುಕೊಂಡೇ ಸುಸ್ತಾಗಿ ಬಿಟ್ಟಿದ್ದೀರಿ, ಎಷ್ಟೊಂದು ಬೇಸರವಾಗಿ ಬಿಟ್ಟಿದ್ದೀರಿ ಅಂದಮೇಲೆ 84 ಲಕ್ಷ ಜನ್ಮಗಳ ಮಾತೇ ಇಲ್ಲ. ಇದು ಮನುಷ್ಯರ ಸುಳ್ಳು ಮಾತುಗಳಾಗಿವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನೀವು ಆತ್ಮಗಳಿಗೂ ತಮ್ಮ-ತಮ್ಮ ರಥವಿದೆ. ನನಗೂ ರಥ ಬೇಕಲ್ಲವೆ. ನಾನು ನಿಮ್ಮ ಬೇಹದ್ದಿನ ತಂದೆಯಾಗಿದ್ದೇನೆ, ಜ್ಞಾನಸಾಗರ ಎಂದು ಹಾಡುತ್ತೀರಿ. ನೀವು ಮತ್ತ್ಯಾರಿಗೂ ಪತಿತ-ಪಾವನರೆಂದು ಹೇಳುವುದಿಲ್ಲ. ಲಕ್ಷ್ಮಿ-ನಾರಾಯಣ ಮುಂತಾದವರಿಗೂ ಹೇಳುವುದಿಲ್ಲ. ಪತಿತ ಸೃಷ್ಟಿಯನ್ನು ಪಾವನವನ್ನಾಗಿ ಮಾಡುವವರು ಅರ್ಥಾತ್ ಪಾವನ ಸೃಷ್ಠಿ, ಸ್ವರ್ಗದ ರಚಯಿತ, ಪರಮಪಿತ ಪರಮಾತ್ಮನ ವಿನಃ ಮತ್ತ್ಯಾರೂ ಆಗಲು ಸಾಧ್ಯವಿಲ್ಲ. ಪರಮ ಪಿತ ಅವರೇ ಆಗಿದ್ದಾರೆ. ತಂದೆಗೆ ಗೊತ್ತಿದೆ - ನೀವು ನಂಬರ್ವಾರ್ ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರಾಗುತ್ತಿದ್ದೀರಿ. ಹೊರಗಿನ ಮನುಷ್ಯರು ಇದನ್ನು ತಿಳಿದುಕೊಂಡಿಲ್ಲ. ಅಂದಾಗ ತಂದೆಯು ತಿಳಿಸುತ್ತಾರೆ - ನನಗೂ ಸಹ ಅವಶ್ಯವಾಗಿ ರಥವು ಬೇಕಲ್ಲವೆ. ಪತಿತ-ಪಾವನನಾದ ನಾನು ಈ ಪ್ರಪಂಚದಲ್ಲಿ ಅವಶ್ಯವಾಗಿ ಬರಬೇಕಾಗುತ್ತದೆ. ಹೇಗೆ ಪ್ಲೇಗ್ ರೋಗವಿದ್ದರೆ ವೈದ್ಯರು ಪ್ಲೇಗ್ ರೋಗಿಗಳ ಬಳಿ ಬರಬೇಕಾಗುತ್ತದೆ ಹಾಗೆಯೇ ತಂದೆಯು ತಿಳಿಸುತ್ತಾರೆ - ನಿಮ್ಮಲ್ಲಿ ಪಂಚ ವಿಕಾರಗಳ ಖಾಯಿಲೆಯು ಅರ್ಧ ಕಲ್ಪದ್ದಾಗಿದೆ. ಮನುಷ್ಯರಂತೂ ದುಃಖ ಕೊಡುವವರಾಗಿದ್ದಾರೆ. ಈ ಪಂಚ ವಿಕಾರಗಳಿಂದ ನೀವು ಸಂಪೂರ್ಣ ಪತಿತರಾಗಿ ಬಿಟ್ಟಿದ್ದೀರಿ. ಆದ್ದರಿಂದ ನಾನು ಪತಿತ ಪ್ರಪಂಚದಲ್ಲಿಯೇ ಬರಬೇಕಾಗುತ್ತದೆಯಲ್ಲವೆ ಎಂದು ತಂದೆಯು ತಿಳಿಸುತ್ತಾರೆ. ಪತಿತರನ್ನೇ ಭ್ರಷ್ಟಾಚಾರಿಗಳೆಂದು ಹೇಳಲಾಗುತ್ತದೆ, ಪಾವನರನ್ನು ಶ್ರೇಷ್ಠಾಚಾರಿಗಳೆಂದು ಹೇಳುತ್ತಾರೆ. ಅವಶ್ಯವಾಗಿ ನಿಮ್ಮ ಭಾರತವು ಪಾವನ ಶ್ರೇಷ್ಠಾಚಾರಿಯಾಗಿತ್ತು, ಲಕ್ಷ್ಮಿ-ನಾರಾಯಣರ ರಾಜ್ಯವಾಗಿತ್ತು, ಸರ್ವಗುಣ ಸಂಪನ್ನರು....... ಎಂದು ಅವರ ಮಹಿಮೆಯನ್ನೇ ಹಾಡುತ್ತೀರಿ. ಅಲ್ಲಿ ಎಲ್ಲರೂ ಸುಖಿಯಾಗಿದ್ದರು. ಇದಂತೂ ನೆನ್ನೆಯ ಮಾತಾಗಿದೆ ಅಂದಾಗ ತಂದೆಯು ತಿಳಿಸುತ್ತಾರೆ - ನಾನು ಬರಬೇಕೆಂದರೆ ಹೇಗೆ ಬರಲಿ, ಯಾರ ಶರೀರದಲ್ಲಿ ಬರಲಿ? ಮೊದಲಂತೂ ನನಗೆ ಪ್ರಜಾಪಿತನು ಬೇಕು. ಸೂಕ್ಷ್ಮವತನವಾಸಿಯನ್ನು ಇಲ್ಲಿ ಹೇಗೆ ಕರೆದುಕೊಂಡು ಬರಲು ಸಾಧ್ಯ. ಅವರಂತೂ ಫರಿಸ್ತೆಯಾಗಿದ್ದಾರಲ್ಲವೆ. ಅವರನ್ನು ಪತಿತ ಪ್ರಪಂಚದಲ್ಲಿ ಕರೆದುಕೊಂಡು ಬರುವುದು ದೋಷವಾಗಿ ಬಿಡುತ್ತದೆ. ನಾನೇನು ಅಪರಾಧ ಮಾಡಿದೆ ಎಂದು ಕೇಳುತ್ತಾರೆ? ತಂದೆಯು ಬಹಳ ರಮಣೀಕ ಮಾತುಗಳನ್ನು ತಿಳಿಸುತ್ತಾರೆ. ಈ ಮಾತುಗಳನ್ನು ಯಾರು ತಂದೆಯ ಮಕ್ಕಳಾಗಿರುವರೋ ಘಳಿಗೆ-ಘಳಿಗೆಯೂ ತಂದೆಯನ್ನು ನೆನಪು ಮಾಡುತ್ತಿರುವರೋ ಅವರೇ ಅರಿತುಕೊಳ್ಳುವರು.

ಯಾವಾಗ ಧರಣಿಯ ಮೇಲೆ ಪಾಪವು ಹೆಚ್ಚಾಗುತ್ತದೆಯೋ ಆಗಲೇ ನಾನು ಬರುತ್ತೇನೆ. ಕಲಿಯುಗದಲ್ಲಿ ಮನುಷ್ಯರು ಎಷ್ಟೊಂದು ಪಾಪ ಮಾಡುತ್ತಾರೆ. ಆದ್ದರಿಂದ ತಂದೆಯಾದ ನಾನು ಕೇಳುತ್ತೇನೆ - ಮಕ್ಕಳೇ, ತಿಳಿಸಿ - ನಾನು ಬರಬೇಕೆಂದರೆ ಯಾರ ತನುವಿನಲ್ಲಿ ಬರಲಿ? ನನಗೆ ಅವಶ್ಯವಾಗಿ ವೃದ್ಧನ ಅನುಭವೀ ರಥವೇ ಬೇಕು. ನಾನು ಯಾರ ರಥವನ್ನು ತೆಗೆದುಕೊಂಡಿದ್ದೇನೆ ಇವರು ಅವಶ್ಯವಾಗಿ ಬಹಳ ಗುರುಗಳನ್ನು ಮಾಡಿಕೊಂಡಿದ್ದಾರೆ. ಶಾಸ್ತ್ರ ಇತ್ಯಾದಿಗಳನ್ನು ಓದಿದ್ದಾರೆ. ಬಹಳ ಓದಿದ್ದರೆಂದೂ ಬರೆಯಲಾಗಿದೆಯಲ್ಲವೆ. ಅರ್ಜುನನ ಮಾತಲ್ಲ, ನನಗೆ ಯಾವುದೇ ಅರ್ಜುನ ಅಥವಾ ಕೃಷ್ಣನ ರಥವು ಬೇಕಿಲ್ಲ. ನನಗಂತೂ ಬ್ರಹ್ಮನ ರಥವು ಬೇಕು, ಅವರನ್ನೇ ಪ್ರಜಾಪಿತನೆಂದು ಹೇಳುತ್ತಾರೆ. ಕೃಷ್ಣನಿಗೆ ಪ್ರಜಾಪಿತನೆಂದು ಹೇಳುವುದಿಲ್ಲ. ಬ್ರಾಹ್ಮಣ ಪ್ರಜೆಗಳನ್ನು ರಚಿಸಲು ತಂದೆಗೆ ಬ್ರಹ್ಮಾರವರ ರಥವೇ ಬೇಕು. ಬ್ರಾಹ್ಮಣರದು ಸರ್ವೋತ್ತಮ ಕುಲವಾಗಿದೆ. ವಿರಾಟ ರೂಪವನ್ನೂ ತೋರಿಸುತ್ತಾರಲ್ಲವೆ. ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರ, ಬಾಕಿ ಬ್ರಾಹ್ಮಣರು ಎಲ್ಲಿಗೆ ಹೋದರು? ಇದು ಯಾರಿಗೂ ಗೊತ್ತಿಲ್ಲ. ಬ್ರಾಹ್ಮಣರ ಶಿಖೆಯು ಉತ್ತಮವಾಗಿದೆ, ಅಲ್ಲಿ ಶಿಖೆಯನ್ನು ತೋರಿಸಿದ್ದಾರೆ. ಆದ್ದರಿಂದಲೇ ಇವರು ಬ್ರಾಹ್ಮಣರೆಂದು ತಿಳಿಯಲಾಗುತ್ತದೆ. ಸತ್ಯ-ಸತ್ಯವಾದಂತಹ ಶಿಖೆಯಂತೂ ನಿಮ್ಮದಾಗಿದೆ. ನೀವು ರಾಜ ಋಷಿಗಳು, ದೊಡ್ಡ ಶಿಖೆ (ಜುಟ್ಟು) ಯವರಾಗಿದ್ದೀರಿ. ಯಾರು ಪವಿತ್ರರಾಗಿರುತ್ತಾರೆಯೋ ಅವರಿಗೆ ಋಷಿಗಳೆಂದು ಕರೆಯಲಾಗುತ್ತದೆ. ನೀವು ರಾಜಯೋಗಿಗಳು, ರಾಜಋಷಿಗಳಾಗಿದ್ದೀರಿ. ರಾಜ್ಯ ಪದವಿಗಾಗಿ ತಪಸ್ಸು ಮಾಡುತ್ತಿದ್ದೀರಿ, ಅವರು ಮುಕ್ತಿಗಾಗಿ ಹಠಯೋಗದ ತಪಸ್ಸು ಮಾಡುತ್ತಿದ್ದಾರೆ. ಆದರೆ ನೀವು ಜೀವನ್ಮುಕ್ತಿ ರಾಜ್ಯ ಪದವಿಗಾಗಿ ರಾಜಯೋಗದ ತಪಸ್ಸು ಮಾಡುತ್ತಿದ್ದೀರಿ. ನಿಮ್ಮ ಹೆಸರೇ ಆಗಿದೆ - ಶಿವಶಕ್ತಿ ಸೇನೆ. ಶಿವ ತಂದೆಯು ನಿಮ್ಮನ್ನು ಪುನರ್ ಸ್ಥಾಪನೆ ಮಾಡುತ್ತಾರೆ. ಆದ್ದರಿಂದ ನೀವು ಪುನಃ ಭಾರತದಲ್ಲಿ ಜನ್ಮ ಪಡೆಯುತ್ತೀರಿ, ಜನ್ಮ ಪಡೆಯುತ್ತೀರಲ್ಲವೆ. ಕೆಲಕೆಲವರು ಭಲೆ ಜನ್ಮವನ್ನು ಪಡೆದಿದ್ದಾರೆ ಆದರೆ ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ. ಅವರ ಬಳಿ ಜನ್ಮ ಪಡೆದಿದ್ದೇವೆಂದು ತಿಳಿದುಕೊಳ್ಳುವುದಿಲ್ಲ. ಒಂದುವೇಳೆ ಈ ರೀತಿ ತಿಳಿದಿದ್ದೇ ಆದರೆ ಶರೀರದ ಪರಿವೆಯು ಸಂಪೂರ್ಣ ಹೊರಟು ಹೋಗಬೇಕು. ಹೇಗೆ ಶಿವ ತಂದೆ ನಿರಾಕಾರನು ಈ ರಥದಲ್ಲಿದ್ದಾರೆ, ನೀವೂ ಸಹ ತಮ್ಮನ್ನು ನಿರಾಕಾರ ಆತ್ಮನೆಂದು ತಿಳಿಯಿರಿ. ಮಕ್ಕಳೇ, ನನ್ನನ್ನು ನೆನಪು ಮಾಡಿ, ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ನೀವಂತೂ ಮೊದಲು ಅಶರೀರಿಯಾಗಿದ್ದಿರಿ. ನಂತರ ದೇವಿ-ದೇವತಾ ಶರೀರವನ್ನು ಪಡೆದಿರಿ. ಅನಂತರ ಕ್ಷತ್ರಿಯ ಶರೀರ, ವೈಶ್ಯ ಶರೀರ, ಶೂದ್ರ ಶರೀರವನ್ನು ಪಡೆದಿರಿ. ಈಗ ಮತ್ತೆ ನೀವು ಅಶರೀರಿಯಾಗಬೇಕಾಗಿದೆ. ನೀವು ನಾನು ನಿರಾಕಾರನಿಗೆ ಹೇಳುತ್ತೀರಿ - ಬಾಬಾ, ನಾವು ಈಗ ನಿಮ್ಮವರಾಗಿದ್ದೇವೆ, ನಾವು ಹಿಂತಿರುಗಿ ಹೋಗಬೇಕಾಗಿದೆ. ದೇಹವನ್ನಂತೂ ತೆಗೆದುಕೊಂಡು ಹೋಗುವುದಿಲ್ಲ. ಹೇ ಆತ್ಮಗಳೇ ಈಗ ತಂದೆಯಾದ ನನ್ನನ್ನು ಮತ್ತು ಮಧುರ ಮನೆಯನ್ನು ನೆನಪು ಮಾಡಿ. ಮನುಷ್ಯರು ವಿದೇಶದಿಂದ ಮರಳಿ ಬರುತ್ತಾರೆಂದರೆ ನಡೆಯಿರಿ ನಮ್ಮ ಮಧುರ ಮನೆ ಭಾರತಕ್ಕೆ ಹೋಗೋಣವೆಂದು ಹೇಳುತ್ತಾರೆ. ಎಲ್ಲಿ ಜನ್ಮ ತೆಗೆದುಕೊಂಡಿದ್ದೇವೋ ಅಲ್ಲಿಗೆ ಮರಳಿ ಹೋಗೋಣವೆಂದು ಹೇಳುತ್ತಾರೆ. ಮನುಷ್ಯರು ಸಾವನ್ನಪ್ಪುತ್ತಾರೆಂದರೆ ಎಲ್ಲಿ ಜನ್ಮ ಪಡೆದಿದ್ದರೋ ಅಲ್ಲಿಗೆ ಅವರನ್ನು ತೆಗೆದುಕೊಂಡು ಹೋಗುತ್ತಾರೆ. ಭಾರತದ ಮಣ್ಣಿನಿಂದ ಮಾಡಲ್ಪಟ್ಟಿದ್ದೇವೆ. ಆದ್ದರಿಂದ ಆ ಮಣ್ಣನ್ನು ಭಾರತದಲ್ಲಿಯೇ ಬಿಡೋಣವೆಂದು ತಿಳಿಯುತ್ತಾರೆ.

ನನ್ನ ಜನ್ಮವೂ ಸಹ ಭಾರತದಲ್ಲಿಯೇ ಆಗಿದೆ. ಶಿವ ಜಯಂತಿಯನ್ನೂ ಆಚರಿಸುತ್ತೀರಿ. ನನ್ನ ಅನೇಕ ಹೆಸರುಗಳನ್ನು ಇಟ್ಟು ಬಿಟ್ಟಿದ್ದಾರೆ. ಹರಹರ ಮಹಾದೇವ ಎಂದು ಹೇಳುತ್ತಾರೆ, ಎಲ್ಲರ ದುಃಖವನ್ನು ನಿವಾರಿಸುವವನು ನಾನೇ ಆಗಿದ್ದೇನೆ, ಶಂಕರನಲ್ಲ ಎಂದು ತಂದೆಯು ತಿಳಿಸುತ್ತಾರೆ. ಬ್ರಹ್ಮಾರವರು ಸೇವೆಯಲ್ಲಿ ಹಾಜರಾಗಿದ್ದಾರೆ. ಯಾರು ಸ್ಥಾಪನೆ ಮಾಡುತ್ತಾರೆಯೋ ಅವರೇ ವಿಷ್ಣುವಿನ ಎರಡೂ ರೂಪದಲ್ಲಿ ಪಾಲನೆ ಮಾಡುತ್ತಾರೆ. ನನಗೆ ಅವಶ್ಯವಾಗಿ ಪ್ರಜಾಪಿತ ಬ್ರಹ್ಮನು ಬೇಕು. ಆದಿ ದೇವನ ಮಂದಿರವೂ ಇದೆ, ಅಂದಮೇಲೆ ಆ ಆದಿದೇವ ಯಾರ ಮಗನಾಗಿದ್ದಾನೆ ಎಂದು ತಿಳಿಸಲಿ. ಈ ದಿಲ್ವಾಡಾ ಮಂದಿರದ ಯಾರು ಟ್ರಸ್ಟಿಗಳಿದ್ದಾರೆ, ಅವರೂ ಸಹ ಈ ಆದಿದೇವ ಯಾರು, ಅವರ ತಂದೆ ಯಾರಾಗಿದ್ದರು ಎಂಬುದನ್ನು ತಿಳಿದುಕೊಂಡಿಲ್ಲ. ಆದಿದೇವ ಪ್ರಜಾಪಿತ ಬ್ರಹ್ಮಾರವರಾಗಿದ್ದಾರೆ. ಅವರ ತಂದೆ ಶಿವನಾಗಿದ್ದಾರೆ. ಯಾರ ಮಂದಿರವಾಗಿದೆಯೋ ಅವರ ಕರ್ತವ್ಯವನ್ನೇ ತಿಳಿದುಕೊಂಡಿಲ್ಲ ಆದರೆ ಟ್ರಸ್ಟಿಗಳಾಗಿದ್ದಾರೆ. ಇದು ಜಗತ್ಪಿತ, ಜಗದಂಬಾನ ನೆನಪಾರ್ಥ ಮಂದಿರವಾಗಿದೆ. ಈ ಆದಿದೇವ ಬ್ರಹ್ಮಾನ ರಥದಲ್ಲಿ ತಂದೆಯು ಕುಳಿತು ಜ್ಞಾನವನ್ನು ತಿಳಿಸಿದ್ದಾರೆ. ಕುಟೀರದಲ್ಲಿ ಎಲ್ಲಾ ಮಕ್ಕಳು ಕುಳಿತಿದ್ದಾರೆ, ಎಲ್ಲರ ಮಂದಿರಗಳನ್ನಂತೂ ಮಾಡುವುದಿಲ್ಲ. ಮುಖ್ಯವಾಗಿ 108ರ ಮಾಲೆಯಾಗಿದೆ. ಆದ್ದರಿಂದ 108 ಕೋಣೆಗಳನ್ನು ಮಾಡಿದ್ದಾರೆ. 108ರದೇ ಪೂಜೆಯಾಗುತ್ತದೆ. ಮುಖ್ಯವಾಗಿ ಶಿವ ತಂದೆಯಾಗಿದ್ದಾರೆ ನಂತರ ಬ್ರಹ್ಮಾ-ಸರಸ್ವತಿಯಾಗಿದ್ದಾರೆ. ಶಿವ ತಂದೆಯು ಮಾಲೆಯ ಹೂವಾಗಿದ್ದಾರೆ, ಅವರಿಗೆ ತಮ್ಮ ಶರೀರವಿಲ್ಲ. ಬ್ರಹ್ಮಾ-ಸರಸ್ವತಿಗೆ ತಮ್ಮ ಶರೀರವಿದೆ. ಶರೀರಧಾರಿಗಳ ಮಾಲೆಯು ಮಾಡಲ್ಪಟ್ಟಿದೆ, ಎಲ್ಲರೂ ಮಾಲೆಯನ್ನು ಪೂಜಿಸುತ್ತಾರೆ. ಪೂಜೆಯನ್ನು ಮಾಡಿ ಪೂರ್ಣ ಮಾಡಿದ ನಂತರ ಶಿವ ತಂದೆಗೆ ನಮಸ್ಕಾರ ಮಾಡುತ್ತಾರೆ, ತಲೆ ಬಾಗುತ್ತಾರೆ, ಅವರು ಇವರೆಲ್ಲರನ್ನೂ ಪತಿತರಿಂದ ಪಾವನರನ್ನಾಗಿ ಮಾಡಿದ್ದಾರೆ ಆದ್ದರಿಂದ ಪೂಜಿಸಲಾಗುತ್ತದೆ. ಮಾಲೆಯನ್ನು ಕೈಯಲ್ಲಿ ಹಿಡಿದು ರಾಮ-ರಾಮ ಎಂದು ಜಪಿಸುತ್ತಾರೆ. ಪರಮಪಿತ ಪರಮಾತ್ಮನ ಹೆಸರು ಯಾರಿಗೂ ಗೊತ್ತಿಲ್ಲ. ಶಿವ ತಂದೆಯು ಮುಖ್ಯವಾಗಿದ್ದಾರೆ ನಂತರ ಪ್ರಜಾಪಿತ ಬ್ರಹ್ಮಾ ಮತ್ತು ಸರಸ್ವತಿಯು ಮುಖ್ಯವಾಗಿದ್ದಾರೆ. ಬಾಕಿ ಬ್ರಹ್ಮಾಕುಮಾರ-ಕುಮಾರಿಯರು ಯಾರ್ಯಾರು ಪುರುಷಾರ್ಥ ಮಾಡುತ್ತಿರುತ್ತಾರೆಯೋ ಅಂತಹವರ ಹೆಸರಿರುತ್ತದೆ. ಮುಂದೆ ಹೋದಂತೆ ನೀವು ಎಲ್ಲವನ್ನೂ ನೋಡುತ್ತಿರುತ್ತೀರಿ. ಯಾವಾಗ ಅಂತ್ಯವಾಗುವುದೋ ಆಗ ನೀವಿಲ್ಲಿ ಬಂದು ಇರುತ್ತೀರಿ. ಯಾರು ಪಕ್ಕಾ ಯೋಗಿಗಳಿರುವರೋ ಅವರೇ ಇರಲು ಸಾಧ್ಯವಾಗುತ್ತದೆ. ಭೋಗಿಗಳಂತೂ ಸ್ವಲ್ಪ ಶಬ್ಧ ಕೇಳಿದರೆ ಸಾಕು ಸಮಾಪ್ತಿಯಾಗಿ ಬಿಡುತ್ತಾರೆ. ಕೆಲವರ ಆಪರೇಷನ್ ನೋಡುವುದರಿಂದಲೂ ಮನುಷ್ಯರು ಮೂರ್ಛಿತರಾಗಿ ಬಿಡುತ್ತಾರೆ. ಭಾರತದ ವಿಭಜನೆಯಾದಾಗ ಎಷ್ಟೊಂದು ಮನುಷ್ಯರು ಸತ್ತರು. ನಾವು ಯಾವುದೇ ಯುದ್ಧವಿಲ್ಲದೇ ರಾಜ್ಯ ಪಡೆದೆವೆಂದು ಸುಳ್ಳು ಹೇಳುತ್ತಿರುತ್ತಾರೆ. ಆದರೆ ಎಷ್ಟೊಂದು ಜನ ಸತ್ತರು ಅದರ ಮಾತೇ ಕೇಳಬೇಡಿ. ಇದು ಸುಳ್ಳು ಮಾಯೆ, ಸುಳ್ಳು ಶರೀರವಾಗಿದೆ...... ಈಗ ಸತ್ಯ ತಂದೆಯು ಕುಳಿತು ನಿಮಗೆ ಸತ್ಯವನ್ನು ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ-ನನಗೆ ರಥವಂತೂ ಅವಶ್ಯವಾಗಿ ಬೇಕು. ನಾನು ದೊಡ್ಡ ಪ್ರಿಯತಮನಾಗಿದ್ದೇನೆಂದರೆ ದೊಡ್ಡ ಪ್ರಿಯತಮೆಯು ಬೇಕು. ಸರಸ್ವತಿಯು ಬ್ರಹ್ಮಾ ಮುಖವಂಶಾವಳಿಯಾಗಿದ್ದಾರೆ, ಅವರು ಬ್ರಹ್ಮನ ಪತ್ನಿಯಲ್ಲ, ಬ್ರಹ್ಮನ ಮಗಳಾಗಿದ್ದಾರೆ. ಅವರನ್ನು ಜಗದಂಬಾ ಎಂದು ಏಕೆ ಹೇಳುತ್ತಾರೆ. ಏಕೆಂದರೆ ಈ ಬ್ರಹ್ಮಾರವರು ಪುರುಷರಾಗಿರುವ ಕಾರಣ ಮಾತೆಯರ ಸಂಭಾಲನೆಗಾಗಿ ಅವರವರನ್ನು ನಿಮಿತ್ತರನ್ನಾಗಿ ಇಟ್ಟಿದ್ದಾರೆ. ಬ್ರಹ್ಮಾ ಮುಖವಂಶಾವಳಿ ಸರಸ್ವತಿಯಂತೂ ಬ್ರಹ್ಮಾನ ಮಗಳಾದರು. ಮಮ್ಮಾರವರು ಯುವತಿಯಾಗಿದ್ದಾರೆ, ಬ್ರಹ್ಮಾರವರಂತೂ ವೃದ್ಧನಾಗಿದ್ದಾರೆ. ಯುವತಿಯಾದ ಸರಸ್ವತಿಯು ಬ್ರಹ್ಮಾರವರ ಸ್ತ್ರೀಯಾಗುವುದು ಶೋಭಿಸುವುದೂ ಇಲ್ಲ, ಅರ್ಧಾಂಗಿ ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನನಗೆ ಈ ಬ್ರಹ್ಮಾರವರ ಶರೀರವನ್ನು ಬಾಡಿಗೆಯಾಗಿ ಪಡೆಯಬೇಕಾಗುತ್ತದೆ. ಅನೇಕರು ಬಾಡಿಗೆಯಾಗಿ ತೆಗೆದುಕೊಳ್ಳುತ್ತಾರೆ. ಬ್ರಾಹ್ಮಣರಿಗೆ ತಿನ್ನಿಸುತ್ತಾರೆಂದರೆ ಆ ಆತ್ಮವು ಬಂದು ಬ್ರಾಹ್ಮಣ ಶರೀರವನ್ನು ಆಧಾರವಾಗಿ ಪಡೆಯುತ್ತದೆ. ಆತ್ಮವು ಆ ಶರೀರವನ್ನು ಬಿಟ್ಟು ಬರುತ್ತದೆಯೇ? ಇಲ್ಲ. ಇದಂತೂ ಮಕ್ಕಳಿಗೆ ತಿಳಿಸಲಾಗಿದೆ - ಡ್ರಾಮಾದಲ್ಲಿ ಸಾಕ್ಷಾತ್ಕಾರದ ಸಂಪ್ರದಾಯವು ಮೊದಲಿನಿಂದಲೂ ನಿಗಧಿಯಾಗಿದೆ. ಇಲ್ಲಿಯೂ ಸಹ ಕರೆಸುತ್ತಾರೆ ಆದರೆ ಆತ್ಮವು ಶರೀರವನ್ನು ಬಿಟ್ಟು ಬರುವುದೇನೂ ಇಲ್ಲ. ಇದು ನಾಟಕದಲ್ಲಿ ನಿಗಧಿಯಾಗಿದೆ. ತಂದೆಗೋಸ್ಕರ ಈ ರಥವು ನಂದೀ ಗಣವಾಗಿದೆ. ಇಲ್ಲವೆಂದರೆ ಶಿವನ ಮಂದಿರದಲ್ಲಿ ಬಸವನನ್ನು ಏಕೆ ತೋರಿಸುತ್ತಾರೆ? ಸೂಕ್ಷ್ಮವತನದಲ್ಲಿ ಶಂಕರನ ಬಳಿ ಎತ್ತು ಎಲ್ಲಿಂದ ಬಂದಿತು? ಅಲ್ಲಂತೂ ಬ್ರಹ್ಮಾ-ವಿಷ್ಣು-ಶಂಕರರಿದ್ದಾರೆ ಮತ್ತು ಅಲ್ಲಿ ದಂಪತಿಗಳನ್ನು ತೋರಿಸುತ್ತಾರೆ ಅಂದರೆ ಪ್ರವೃತ್ತಿ ಮಾರ್ಗವನ್ನು ತೋರಿಸುತ್ತಾರೆ. ಅಂದಮೇಲೆ ಅಲ್ಲಿ ಪ್ರಾಣಿಯೆಲ್ಲಿಂದ ಬಂದಿತು? ಮನುಷ್ಯರ ಬುದ್ಧಿಯು ಏನೂ ಕೆಲಸ ಮಾಡುವುದಿಲ್ಲ. ಏನು ಬಂದರೆ ಅದನ್ನು ಹೇಳುತ್ತಿರುತ್ತಾರೆ. ಇದರಿಂದ ಸಮಯವೂ ವ್ಯರ್ಥ, ಶಕ್ತಿಯೂ ವ್ಯರ್ಥವಾಗುತ್ತದೆ.

ನೀವು ಹೇಳುತ್ತೀರಿ - ನಾವೇ ಪಾವನ ದೇವಿ-ದೇವತೆಗಳಾಗಿದ್ದೆವು ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನಾವು ಪತಿತ, ಪೂಜಾರಿಗಳಾಗಿದ್ದೇವೆ. ತಾವೇ ಪೂಜ್ಯ ತಾವೇ ಪೂಜಾರಿ. ಪೂಜ್ಯ ಮತ್ತು ಪೂಜಾರಿಗಳು ಭಗವಂತನಾಗುವುದಿಲ್ಲ. ಅವರು 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುವುದಿಲ್ಲ. ಮಾಯೆಯು ಮನುಷ್ಯರನ್ನು ಸಂಪೂರ್ಣ ಕಲ್ಲು ಬುದ್ಧಿಯವರನ್ನಾಗಿ ಮಾಡಿ ಬಿಡುತ್ತದೆ. ನಾನು ಆತ್ಮನೇ ಪರಮಾತ್ಮ ಎಂಬುದು ಹಮ್ ಸೋ, ಸೋ ಹಮ್ನ ಅರ್ಥವಲ್ಲ. ಆದರೆ ನಾವು ಬ್ರಾಹ್ಮಣರೇ ದೇವತೆಗಳಾಗುತ್ತೇವೆ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಬರುತ್ತೇವೆ. ಇದು ಎಷ್ಟು ಒಳ್ಳೆಯ ತಿಳುವಳಿಕೆಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಯಾರಲ್ಲಿ ಪ್ರವೇಶ ಮಾಡಿದ್ದೇನೆ, ಇವರು ಅನೇಕ ಗುರುಗಳನ್ನು ಮಾಡಿಕೊಂಡಿದ್ದರು, ಶಾಸ್ತ್ರಗಳನ್ನು ಓದಿದ್ದಾರೆ, ಇವರ 84 ಜನ್ಮಗಳೂ ಪೂರ್ಣವಾಗಿದೆ. ಇದನ್ನು ಇವರು ತಿಳಿದುಕೊಂಡಿರಲಿಲ್ಲ, ನಾನು ನಿಮಗೆ ಇದೆಲ್ಲವನ್ನೂ ತಿಳಿಸುತ್ತೇನೆ. ಈ ಬ್ರಹ್ಮಾರವರಿಗೂ ತಿಳಿಸುತ್ತೇನೆ. ನಾನು ಇವರಲ್ಲಿ ಸದಾ ಸವಾರಿ ಮಾಡುವುದಿಲ್ಲ. ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಿಗೆ ತಿಳಿಸುತ್ತೇನೆ. ನನಗೆ ರಥವೂ ಬೇಕಲ್ಲವೆ. ನೀವು ಮಕ್ಕಳು ನೆನಪು ಮಾಡುತ್ತೀರಿ, ನಾನು ಬಂದು ಬಿಡುತ್ತೇನೆ. ನಾನಂತೂ ಸೇವೆ ಮಾಡಬೇಕಾಗಿದೆ ಅಂದಾಗ ಶ್ರೀ ಶ್ರೀ ಶಿವನ ಮತದಿಂದಲೇ ಭಾರತವು ಪಾವನವಾಗುತ್ತದೆ. ನರಕವಾಸಿಗಳಿಗೆ ಶ್ರೀ ಶ್ರೀ ಎನ್ನುವ ಬಿರುದನ್ನು ಕೊಡುವುದು ತಪ್ಪಾಗಿದೆ. ಮೊದಲು ಈ ಶ್ರೀ ಎನ್ನುವ ಹೆಸರಿರಲಿಲ್ಲ ಆದರೆ ಈಗ ಎಲ್ಲರಿಗೂ ಶ್ರೀ ಅರ್ಥಾತ್ ಶ್ರೇಷ್ಠ ಎಂದು ಹೇಳಿ ಬಿಡುತ್ತಾರೆ. ಶ್ರೀ ಶ್ರೀ ಅಂತೂ ಶಿವ ತಂದೆಯಾಗಿದ್ದಾರೆ ನಂತರ ಸೂಕ್ಷ್ಮವತನವಾಸಿ ಬ್ರಹ್ಮಾ-ವಿಷ್ಣು-ಶಂಕರ ಮತ್ತೆ ಶ್ರೀ ಲಕ್ಷ್ಮಿ-ನಾರಾಯಣ ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಜ್ಞಾನವು ಬಹಳ ಮಜವಾಗಿದೆ. ಆದರೆ ಕೆಲಕೆಲವರು ಓದುತ್ತಾ ಓದುತ್ತಾ ಹೊರಟೇ ಹೋಗುತ್ತಾರೆ. ಮಾಯೆಯು ತಂದೆಯ ಕೈಯನ್ನು ಬಿಡಿಸುತ್ತದೆ. ಅಂಗಡಿ (ಸೇವಾಕೇಂದ್ರ) ಗಳು ಸಹ ನಂಬರ್ವಾರ್ ಆಗಿವೆ. ದೊಡ್ಡ ಅಂಗಡಿಗಳಲ್ಲಿ ಅವಶ್ಯವಾಗಿ ಒಳ್ಳೆಯ ವ್ಯಾಪಾರಿಗಳೇ ಇರುತ್ತಾರೆ. ಚಿಕ್ಕ-ಚಿಕ್ಕ ಅಂಗಡಿಗಳಲ್ಲಿ ಚಿಕ್ಕವರೇ ಇರುತ್ತಾರೆ. ಆದ್ದರಿಂದ ಎಲ್ಲಿ ಮಹಾರಥಿಗಳಿದ್ದಾರೆಯೋ ಅಂತಹ ಅಂಗಡಿಗೆ ಹೋಗಬೇಕು. ಮಾತೆಯರಿಗಂತೂ ಬಹಳ ಸಮಯವಿರುತ್ತದೆ. ಪುರುಷರು ವ್ಯಾಪಾರ-ವ್ಯವಹಾರಗಳಲ್ಲಿ ತತ್ಫರರಾಗಿರುತ್ತಾರೆ ಆದರೆ ಮಾತೆಯರು ಬಿಡುವಾಗಿರುತ್ತಾರೆ. ಅಡಿಗೆ ಮಾಡಿದರೆ ಕೆಲಸ ಮುಗಿದು ಹೋಗುವುದು. ಆದರೆ ಅವರು ನಿಮಗೆ ಬಂಧನ ಹಾಕುತ್ತಾರೆ. ಬ್ರಹ್ಮಾಕುಮಾರಿಯರ ಬಳಿ ಹೋದರೆ ವಿಕಾರಗಳನ್ನು ನಿಲ್ಲಿಸಬೇಕಾಗುವುದೆಂಬ ಕಾರಣ ನಿಮ್ಮನ್ನು ತಡೆಯುತ್ತಾರೆ.

ಶಿವ ತಂದೆಯು ಇಂತಹ ಜಾರುವ ವಸ್ತುವಾಗಿದ್ದಾರೆ, ಘಳಿಗೆ-ಘಳಿಗೆಯೂ ಅವರ ನೆನಪು ಮರೆತು ಹೋಗುತ್ತದೆ. ತಂದೆಯು ಬಹಳ ಸಹಜ ಮಾರ್ಗವನ್ನು ತಿಳಿಸುತ್ತಾರೆ - ಮಕ್ಕಳೇ, ನನ್ನ ನೆನಪು ಮಾಡಿದರೆ ನಿಮ್ಮ ಪಾಪವು ಕಳೆಯುತ್ತದೆ ಮತ್ತು ನನ್ನ ಬಳಿಯೂ ಬಂದು ಬಿಡುತ್ತೀರಿ. ನೆನಪು ಮಾಡದಿದ್ದರೆ ಪಾಪವೂ ಕಳೆಯುವುದಿಲ್ಲ, ನನ್ನ ಜೊತೆಯೂ ಕರೆದುಕೊಂಡು ಹೋಗುವುದಿಲ್ಲ ಶಿಕ್ಷೆಯನ್ನನುಭವಿಸಬೇಕಾಗುತ್ತದೆ. ಭಕ್ತಿಮಾರ್ಗದಲ್ಲಂತೂ ಮಜ್ಜಿಗೆಯನ್ನು ಕುಡಿಯುತ್ತಾ ಬಂದಿರಿ. ಬೆಣ್ಣೆಯನ್ನಂತೂ ನೀವು ಸತ್ಯ-ತ್ರೇತಾದಲ್ಲಿಯೇ ತಿಂದು ಮುಗಿಸಿದಿರಿ. ನಂತರ ಅಂತ್ಯದಲ್ಲಿ ಕೇವಲ ಮಜ್ಜಿಗೆಯಷ್ಟೇ ಉಳಿಯುತ್ತದೆ. ಆ ಮಜ್ಜಿಗೆಯೂ ಸಹ ಮೊದಲು ಒಳ್ಳೆಯದೇ ಸಿಗುತ್ತದೆ. ನಂತರ ನೀರು ಬೆರೆಕೆಯಾಗಿರುವ ಮಜ್ಜಿಗೆಯು ಸಿಗುತ್ತದೆ. ಸತ್ಯಯುಗ ತ್ರೇತಾಯುಗದಲ್ಲಿ ಹಾಲು-ತುಪ್ಪದ ನದಿಗಳು ಹರಿಯುತ್ತವೆ ಈಗಂತೂ ತುಪ್ಪಕ್ಕೆ ಎಷ್ಟೊಂದು ಬೆಲೆಯಾಗಿ ಬಿಟ್ಟಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ರಾಜ ಋಷಿಗಳಾಗಿ ತಪಸ್ಸು ಮಾಡಬೇಕು. ಪೂಜ್ಯನೀಯ ಮಾಲೆಯಲ್ಲಿ ಬರುವುದಕ್ಕೋಸ್ಕರ ತಂದೆಯ ಸಮಾನ ಸರ್ವೀಸ್ ಮಾಡಬೇಕು, ಪಕ್ಕಾ ಯೋಗಿಗಳಾಗಬೇಕಾಗಿದೆ.

2. ಇದು ಬಹಳ ಮಜವಾದ ಜ್ಞಾನವಾಗಿದೆ ಆದ್ದರಿಂದ ಇದನ್ನು ಬಹಳ ರಮಣೀಕತೆಯಿಂದ ಓದಬೇಕು, ತಬ್ಬಿಬ್ಬಾಗಬಾರದು.

ವರದಾನ:
ಗಳ ದಿವ್ಯ ಪಾಲನೆಯ ಮುಖಾಂತರ ಸಹಜ ಮತ್ತು ಶ್ರೇಷ್ಠ ಜೀವನದ ಅನುಭವ ಮಾಡುವಂತಹ ಸದಾ ಅಧೃಷ್ಠಶಾಲಿ ಭವ.

ಬಾಪ್ದಾದಾರವರು ಸಂಗಮಯುಗದಲ್ಲಿ ಎಲ್ಲಾ ಮಕ್ಕಳನ್ನು ಮೂರು ಸಂಬಂಧಗಳಿಂದ ಪಾಲನೆ ಮಾಡುತ್ತಾರೆ. ತಂದೆಯ ಸಂಬಂಧದಿಂದ ಆಸ್ತಿಯ, ಸ್ಮತಿ ಮೂಲಕ ಪಾಲನೆ, ಶಿಕ್ಷಕನ ಸಂಬಂಧದಿಂದ ವಿದ್ಯೆಯ ಪಾಲನೆ ಮತ್ತು ಸದ್ಗುರುವಿನ ಸಂಬಂಧದಿಂದ ವರದಾನಗಳ ಅನುಭೂತಿಯ ಪಾಲನೆ...... ಒಂದೇ ಸಮಯದಲ್ಲಿ ಎಲ್ಲರಿಗೂ ಸಿಗುತ್ತಿದೆ, ಇದೇ ದಿವ್ಯ ಪಾಲನೆಯ ಮೂಲಕ ಸಹಜ ಮತ್ತು ಶ್ರೇಷ್ಠ ಜೀವನದ ಅನುಭವ ಮಾಡುತ್ತಾ ಇರಿ. ಪರಿಶ್ರಮ ಅಥವಾ ಕಷ್ಟ ಎನ್ನುವ ಶಬ್ಧ ಸಹ ಸಮಾಪ್ತಿ ಆಗಿ ಬಿಡಲಿ. ಆಗ ಹೇಳಲಾಗುವುದು ಅಧೃಷ್ಠಶಾಲಿ ಎಂದು.

ಸ್ಲೋಗನ್:
ತಂದೆಯ ಜೊತೆ-ಜೊತೆ ಸರ್ವ ಆತ್ಮರ ಸ್ನೇಹಿ ಆಗುವುದೇ, ಸತ್ಯವಾದ ಸಧ್ಭಾವನೆ ಆಗಿದೆ.