13.11.2018 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ದಿನದಲ್ಲಿ ಶರೀರ ನಿರ್ವಹಣಾರ್ಥ ಕರ್ಮವನ್ನು ಮಾಡಿ, ರಾತ್ರಿ (ಅಮೃತವೇಳೆ) ಯಲ್ಲಿ ಕುಳಿತು ಜ್ಞಾನದ
ಸ್ಮರಣೆಯನ್ನು ಮಾಡಿ, ತಂದೆಯನ್ನು ನೆನಪು ಮಾಡಿ, ಬುದ್ಧಿಯಲ್ಲಿ ಸ್ವದರ್ಶನ ಚಕ್ರವನ್ನು
ತಿರುಗಿಸುತ್ತಿದ್ದರೆ ನಶೆಯೇರುತ್ತದೆ.”
ಪ್ರಶ್ನೆ:
ಮಾಯೆಯು ಎಂತಹ
ಮಕ್ಕಳನ್ನು ನೆನಪಿನಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ?
ಉತ್ತರ:
ಯಾರ ಬುದ್ಧಿಯು
ಒಂದಲ್ಲ ಒಂದು ಕಡೆ ಸಿಕ್ಕಿ ಹಾಕಿಕೊಂಡಿರುತ್ತದೆ, ಯಾರ ಬುದ್ಧಿಯ ಬೀಗ ಹಾಕಲ್ಪಟ್ಟಿರುತ್ತದೆ,
ವಿದ್ಯೆಯನ್ನು ಚೆನ್ನಾಗಿ ಓದುವುದಿಲ್ಲ ಅವರನ್ನು ಮಾಯೆಯು ನೆನಪಿನಲ್ಲಿ ಕುಳಿತುಕೊಳ್ಳಲು
ಬಿಡುವುದಿಲ್ಲ. ಅವರು ಮನ್ಮನಾಭವವಾಗಿರಲು ಸಾಧ್ಯವಿಲ್ಲ. ನಂತರ ಸೇವೆಗಾಗಿ ಅವರ ಬುದ್ಧಿಯಲ್ಲಿ
ವಿಚಾರ ನಡೆಯುವುದಿಲ್ಲ. ಶ್ರೀಮತದಂತೆ ನಡೆಯದ ಕಾರಣ ಹೆಸರನ್ನು ಕೆಡಿಸಿಕೊಳ್ಳುತ್ತಾರೆ, ಮೋಸ ಮಾಡುವ
ಕಾರಣ ಶಿಕ್ಷೆ ತಿನ್ನಬೇಕಾಗುತ್ತದೆ.
ಗೀತೆ:
ನಿಮ್ಮನ್ನು
ಕರೆಯಲು ಮನಸ್ಸು ಇಷ್ಟ ಪಡುತ್ತದೆ.......
ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ, ಈ ರೀತಿ ಪರಮಪಿತ ಪರಮಾತ್ಮನನ್ನು ಕರೆಯಲಾಗುತ್ತದೆ ವಿನ:
ಕೃಷ್ಣನನ್ನು ಕರೆಯುವುದಿಲ್ಲ. ತಂದೆಗೆ ಹೇಳಲಾಗುತ್ತದೆ - ಮತ್ತೆ ಕಂಸ ಪುರಿಯನ್ನು ಪರಿವರ್ತಿಸಿ
ಕೃಷ್ಣ ಪುರಿಯನ್ನು ಮಾಡಿ. ಹೀಗೆ ಕೃಷ್ಣನಿಗೆ ಕರೆಯುವುದಿಲ್ಲ. ಕೃಷ್ಣ ಪುರಿಗೆ ಸ್ವರ್ಗವೆಂದು
ಕರೆಯಲಾಗುವುದು. ಇದನ್ನು ಯಾರೂ ತಿಳಿದುಕೊಂಡಿಲ್ಲ ಏಕೆಂದರೆ ಕೃಷ್ಣನನ್ನು ದ್ವಾಪರದಲ್ಲಿ
ಕರೆದೊಯ್ದಿದ್ದಾರೆ. ಈ ಎಲ್ಲಾ ತಪ್ಪುಗಳು ಶಾಸ್ತ್ರಗಳಿಂದ ಆಗಿವೆ. ಈಗ ತಂದೆ ಯಥಾರ್ಥ ಮಾತುಗಳನ್ನು
ತಿಳಿಸುತ್ತಾರೆ. ವಾಸ್ತವಿಕವಾಗಿ ಇವರು ಇಡೀ ಪ್ರಪಂಚಕ್ಕೆ ಅತೀ ದೊಡ್ಡ ಪರಮಪಿತ ಪರಮಾತ್ಮನಾಗಿದ್ದಾರೆ.
ಎಲ್ಲರೂ ಆ ಒಬ್ಬ ಪರಮಾತ್ಮನನ್ನೇ ನೆನಪು ಮಾಡಬೇಕು. ಮನುಷ್ಯರು ಕ್ರೈಸ್ತ, ಬುದ್ಧ ಅಥವಾ ದೇವತಾ
ಮೊದಲಾದವರನ್ನು ನೆನಪು ಮಾಡುತ್ತಾರೆ. ಪ್ರತಿಯೊಂದು ಧರ್ಮದವರು ತಮ್ಮ ಧರ್ಮ ಸ್ಥಾಪಕರನ್ನು ನೆನಪು
ಮಾಡುತ್ತಾರೆ. ಈ ರೀತಿ ನೆನಪು ಮಾಡುವುದು ದ್ವಾಪರಯುಗದಿಂದ ಪ್ರಾರಂಭವಾಯಿತು. ದುಃಖದಲ್ಲಿ ಎಲ್ಲರೂ
ಸ್ಮರಣೆ ಮಾಡುತ್ತಾರೆ, ಸುಖದಲ್ಲಿ ಯಾರೂ ಮಾಡುವುದಿಲ್ಲ ಎಂಬ ಮಾತು ಭಾರತದಲ್ಲಿಯೇ ಹಾಡುತ್ತಾರೆ.
ಏಕೆಂದರೆ ದುಃಖವಿರುವ ಕಾರಣ, ನಂತರ ಮೊಟ್ಟ-ಮೊದಲು ಭಾರತೀಯರೇ ನೆನಪು ಮಾಡುವುದು ಪ್ರಾರಂಭಿಸುತ್ತಾರೆ.
ಭಾರತೀಯರನ್ನು ನೋಡಿ ಉಳಿದ ಧರ್ಮದವರು ತಮ್ಮ ಧರ್ಮ ಸ್ಥಾಪಕರನ್ನು ನೆನಪು ಮಾಡುವುದನ್ನು
ಅನುಸರಿಸುತ್ತಾರೆ. ತಂದೆಯು ಸಹ ಧರ್ಮ ಸ್ಥಾಪನೆ ಮಾಡುವವರಾಗಿದ್ದಾರೆ. ಆದರೆ ಮನುಷ್ಯರು ತಂದೆಯನ್ನು
ಮರೆತು ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಅವರಿಗೆ ಲಕ್ಷ್ಮೀ-ನಾರಾಯಣರ ಧರ್ಮ ಯಾವುದೆಂದು
ಗೊತ್ತಿಲ್ಲ. ಆದರೆ ಲಕ್ಷ್ಮೀ-ನಾರಾಯಣರನ್ನಾಗಲಿ, ಕೃಷ್ಣನನ್ನಾಗಲಿ ಈಗ ನೆನಪು ಮಾಡಬಾರದಾಗಿದೆ. ಆದಿ
ಸನಾತನ ದೇವೀ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತಿರುವಂತಹ ಒಬ್ಬ ತಂದೆಯನ್ನು ನೆನಪು
ಮಾಡಬೇಕಾಗಿದೆ. ನಂತರ ಇವರೇ ಭಕ್ತಿಮಾರ್ಗದಲ್ಲಿ ಶಿವನನ್ನು ಪೂಜೆ ಮಾಡಲು ಪ್ರಾರಂಭಿಸುತ್ತಾರೆ ಹಾಗೂ
ಗೀತೆಯ ಭಗವಂತನು ಕೃಷ್ಣನೆಂದು ತಿಳಿದುಕೊಳ್ಳುತ್ತಾರೆ. ಆಗ ಅವರನ್ನೇ ನೆನಪು ಮಾಡುತ್ತಾರೆ. ಅದನ್ನು
ನೋಡಿ ಉಳಿದ ಧರ್ಮದವರು ಅವರ ಧರ್ಮ ಸ್ಥಾಪಕನನ್ನು ನೆನಪು ಮಾಡುತ್ತಾರೆ. ಈ ದೇವಿ-ದೇವತಾ ಧರ್ಮವನ್ನು
ಭಗವಂತನೇ ಸ್ಥಾಪನೆ ಮಾಡಿದರೆಂದು ಮರೆತು ಹೋಗುತ್ತಾರೆ. ಗೀತಾ ಜ್ಞಾನದಾತ ಶ್ರೀಕೃಷ್ಣನಲ್ಲ ಶಿವ
ತಂದೆಯಾಗಿದ್ದಾರೆಂದು ನಾವು ಬರೆಯಬಹುದು. ಅವರು ನಿರಾಕಾರನಾಗಿದ್ದಾರೆ. ಇದು ಆಶ್ಚರ್ಯಕರವಾದ
ಮಾತುಗಳಾಗಿವೆ. ಯಾರ ಬಳಿಯೂ ಶಿವ ತಂದೆಯ ಪರಿಚಯವಿಲ್ಲ. ಅವರು ನಕ್ಷತ್ರ ಸಮಾನರಾಗಿದ್ದಾರೆ. ಆದರೆ
ಅನೇಕ ಸ್ಥಾನಗಳಲ್ಲಿ ಶಿವನ ಮಂದಿರಗಳಿರುವ ಕಾರಣ ಇಷ್ಟೊಂದು ದೊಡ್ಡ ಅಖಂಡ
ಜ್ಯೋತಿರ್ಲಿಂಗವಾಗಿದ್ದಾರೆಂದು ತಿಳಿದುಕೊಳ್ಳುತ್ತಾರೆ. ಆದರೆ ಅದು ಮಹಾತತ್ವದಲ್ಲಿರುತ್ತಾರೆ.
ಅಲ್ಲಿ ಆತ್ಮಗಳಿರುತ್ತಾರೆ. ಆತ್ಮನ ರೂಪವೂ ಸಹ ನಕ್ಷತ್ರದಂತೆಯೇ ಇದೆ. ಪರಮಪಿತ ಪರಮಾತ್ಮನೂ ಸಹ
ನಕ್ಷತ್ರವಾಗಿದ್ದಾರೆ. ಆದರೆ ಅವರು ಜ್ಞಾನಪೂರ್ಣರು, ಬೀಜ ರೂಪವಾಗಿರುವ ಕಾರಣ ಅವರಲ್ಲಿ ಶಕ್ತಿಯಿದೆ.
ಆತ್ಮಗಳ ತಂದೆ (ಬೀಜ) ಯೆಂದು ಪರಮಾತ್ಮನಿಗೆ ಹೇಳಲಾಗುತ್ತದೆ. ಅವರು ನಿರಾಕಾರನಾಗಿದ್ದಾರೆ.
ಮನುಷ್ಯರಿಗೆ ಜ್ಞಾನ ಸಾಗರ, ಪ್ರೀತಿಯ ಸಾಗರನೆಂದು ಹೇಳಲಾಗುವುದಿಲ್ಲ ಆದ್ದರಿಂದ ತಿಳಿಸಿ ಕೊಡುವ
ಮಕ್ಕಳಲ್ಲಿ ಶಕ್ತಿಯಿರಬೇಕು. ಅವರ ಬುದ್ಧಿಯು ವಿಶಾಲವಾಗಿರಬೇಕು. ನಿಮ್ಮಲ್ಲೆರಲ್ಲಿ ಮಮ್ಮಾ
ಮುಖ್ಯವಾಗಿದ್ದಾರೆ. ವಂದೇ ಮಾತರಂ ಎಂದು ಗಾಯನವಿದೆ. ಕನ್ಯೆಯರ ಮೂಲಕ ಜ್ಞಾನ ಬಾಣವನ್ನು ಬಿಡಲಾಯಿತು.
ಅಧರ್ ಕನ್ಯೆ (ಮಾತೆ) ಕುಮಾರಿ ಕನ್ಯೆಯ ರಹಸ್ಯವಂತೂ ಎಲ್ಲಿಯೂ ಇಲ್ಲ. ಕೇವಲ ಮಂದಿರದಿಂದ ಮಾತ್ರ
ಸಿದ್ಧವಾಗುತ್ತದೆ. ಜಗದಂಬಾ ಸಹ ಇದ್ದಾರೆ. ಆದರೆ ಅವರ್ಯಾರು ಎಂದು ಅವರು ತಿಳಿದುಕೊಂಡಿಲ್ಲ.
ತಂದೆಯು ತಿಳಿಸುತ್ತಾರೆ - ನಾನು ಬ್ರಹ್ಮಾ ಮುಖ ಕಮಲದಿಂದ ರಚಯಿತ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯದ
ರಹಸ್ಯವನ್ನು ತಿಳಿಸುತ್ತೇನೆ. ಡ್ರಾಮದಲ್ಲಿ ಏನಿದೆ ಎನ್ನುವುದು ಈ ಮನುಷ್ಯರ ಬುದ್ಧಿಯಲ್ಲಿ
ಬರಬೇಕಾಗಿದೆ. ಇದು ಬೇಹದ್ದಿನ ನಾಟಕವಾಗಿದೆ. ಈ ನಾಟಕದ ಪಾತ್ರಧಾರಿಗಳು ನಾವಾಗಿದ್ದೇವೆ. ಆದ್ದರಿಂದ
ನಾಟಕದ ಆದಿ-ಮಧ್ಯ-ಅಂತ್ಯದ ರಹಸ್ಯ ನಮ್ಮ ಬುದ್ಧಿಯಲ್ಲಿರಬೇಕು. ಯಾರ ಬುದ್ಧಿಯಲ್ಲಿರುತ್ತದೆಯೋ
ಅವರಿಗೆ ಬಹಳ ನಶೆಯಿರುತ್ತದೆ. ಇಡೀ ದಿನ ಶರೀರ ನಿರ್ವಹಣೆಗಾಗಿ ಕರ್ಮ ಮಾಡಿದಿರಿ. ರಾತ್ರಿಯಲ್ಲಿ
ಕುಳಿತು ಈ ನಾಟಕದ ಚಕ್ರವು ಹೇಗೆ ಸುತ್ತುತ್ತದೆ ಎಂದು ನೆನಪಿಗೆ ತಂದುಕೊಳ್ಳಿ. ಇದೇ
ಮನ್ಮನಾಭವವಾಗಿದೆ. ಆದರೆ ರಾತ್ರಿ (ಅಮೃತವೇಳೆ) ಯಲ್ಲಿ ಮಾಯೆಯು ನೆನಪು ಮಾಡಲು ಬಿಟ್ಟು
ಕೊಡುವುದಿಲ್ಲ. ಪಾತ್ರಧಾರಿಗಳ ಬುದ್ಧಿಯಲ್ಲಿ ನಾಟಕದ ರಹಸ್ಯವಿರಬೇಕಾಗಿದೆಯಲ್ಲವೆ. ಆದರೆ ಇದು ಬಹಳ
ಪರಿಶ್ರಮವಾಗಿದೆ. ಎಲ್ಲಿಯಾದರೂ ಸಿಕ್ಕಿಹಾಕಿಕೊಂಡಿರುತ್ತಾರೆ. ಆದ್ದರಿಂದ ತಂದೆಯು ಅವರ ಬುದ್ಧಿಯ
ಬೀಗವನ್ನು ಮುಚ್ಚಿ ಬಿಡುತ್ತಾರೆ. ಇದು ಅತೀ ದೊಡ್ಡ ಗುರಿಯಾಗಿದೆ. ಚೆನ್ನಾಗಿ ಓದಿರುವಂಥಹವರು
ಒಳ್ಳೆಯ ಸಂಬಳವನ್ನು ತೆಗೆದುಕೊಳ್ಳುತ್ತಾರಲ್ಲವೆ. ಇದು ವಿದ್ಯೆಯಾಗಿದೆ ಆದರೆ ಹೊರಗೆ ಹೋದ ತಕ್ಷಣ
ಮರೆತು ಹೋಗುತ್ತಾರೆ ನಂತರ ತಮ್ಮ ಮತದಂತೆ ನಡೆಯುತ್ತಾರೆ. ಮಧುರ ಮಕ್ಕಳೇ, ಶ್ರೀಮತದಂತೆ
ನಡೆಯುವುದರಲ್ಲೇ ನಿಮ್ಮ ಕಲ್ಯಾಣವಿದೆ ಎಂದು ತಂದೆಯು ಹೇಳುತ್ತಾರೆ. ಇದು ಪತಿತ ಪ್ರಪಂಚವಾಗಿದೆ,
ವಿಕಾರಕ್ಕೆ ವಿಷವೆಂದು ಕರೆಯಲಾಗುವುದು. ಅದನ್ನೇ ಸನ್ಯಾಸಿಗಳು ಸನ್ಯಾಸ ಮಾಡುತ್ತಾರೆ. ಈ ರಾವಣ
ರಾಜ್ಯವು ದ್ವಾಪರ ಯುಗದಿಂದ ಪ್ರಾರಂಭವಾಗುತ್ತದೆ. ಈ ವೇದ-ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ
ಸಾಮಗ್ರಿಗಳಾಗಿವೆ. ಸೇವೆಗಾಗಿ ಮಕ್ಕಳ ಬುದ್ಧಿಯಲ್ಲಿ ವಿಚಾರ ಮಾಡುತ್ತಿರಬೇಕು. ಶ್ರೀಮತದಂತೆ
ನಡೆದಾಗ ಧಾರಣೆಯೂ ಆಗುತ್ತದೆ. ವಿನಾಶವು ಮುಂದೆ ನಿಂತಿದೆ ಎಂದು ಮಕ್ಕಳು ತಿಳಿದುಕೊಂಡಿದ್ದೀರಿ. ಹೇ
ಭಗವಂತ, ದಯೆ ತೋರು ಎಂದು ಎಲ್ಲರೂ ದುಃಖಿಗಳಾಗಿ ಜೋರಾಗಿ ಕೂಗುತ್ತಾರೆ. ಅಯ್ಯೊ, ಅಯ್ಯೊ ಎಂದು
ಕೂಗುತ್ತಾ ಆ ಸಮಯದಲ್ಲಿ ಭಗವಂತನನ್ನು ನೆನಪು ಮಾಡುತ್ತಾರೆ. ವಿಭಜನೆಯ ಸಮಯದಲ್ಲಿ ಹೀಗೆ ಎಷ್ಟೊಂದು
ನೆನಪು ಮಾಡಿದರು - ಹೇ ಭಗವಂತ, ರಕ್ಷಣೆ ಮಾಡು, ಕಾಪಾಡು ಎಂದು. ಈಗೇನು ರಕ್ಷಣೆ ಮಾಡುತ್ತಾರೆ?
ರಕ್ಷಿಸುವವರನ್ನೇ ತಿಳಿದುಕೊಂಡಿಲ್ಲದ ಕಾರಣ ಹೇಗೆ ರಕ್ಷಿಸುತ್ತಾರೆ. ಈಗ ತಂದೆಯು ಬಂದಿದ್ದಾರೆ.
ಎಲ್ಲೋ ಕೆಲವರ ಬುದ್ಧಿಯಲ್ಲಿ ಕಷ್ಟದಿಂದ ಕುಳಿತುಕೊಳ್ಳುತ್ತದೆ. ಈ ರೀತಿಯಾಗಿ ಸೇವೆ ಮಾಡಿ ಎಂದು
ತಂದೆಯು ಹೇಳುತ್ತಾರೆ. ಈ ಶ್ರೀಮತವು ತಂದೆಯಿಂದ ಸಿಗುತ್ತದೆ. ಆಶ್ಚರ್ಯವೆಂದರೆ ಇಂತಹ ತಂದೆಯನ್ನೇ
ತಿಳಿದುಕೊಂಡಿಲ್ಲ. ಎಷ್ಟೊಂದು ತಿಳಿದುಕೊಳ್ಳುವ ಮಾತುಗಳಾಗಿವೆ. ಇಡೀ ದಿನ ಶಿವ ತಂದೆಯ ನೆನಪು
ಬುದ್ಧಿಯಲ್ಲಿರಲಿ. ಇವರೂ (ಬ್ರಹ್ಮ) ಸಹ ಅವರ (ಶಿವತಂದೆ) ರಥ ಜೊತೆಗಾರರಾಗಿರುತ್ತಾರಲ್ಲವೆ. ತಂದೆಯು
ನೋಡುತ್ತಾರೆ, ಮಕ್ಕಳು ಇಂದು ಒಳ್ಳೆಯ ನಿಶ್ಚಯ ಬುದ್ಧಿಯುಳ್ಳವರಾಗಿರುತ್ತಾರೆ. ನಾಳೆ ಸಂಶಯ
ಬುದ್ಧಿಯವರಾಗಿ ಬಿಡುತ್ತಾರೆ. ಮಾಯೆಯ ಬಿರುಗಾಳಿ ಬರುವುದರಿಂದ ಸ್ಥಿತಿಯು ಕನಿಷ್ಟವಾಗುತ್ತದೆ.
ಇದಕ್ಕೆ ತಂದೆಯು ಏನು ಮಾಡಲು ಸಾಧ್ಯ. ನೀವು ಜ್ಞಾನದಲ್ಲಿ ಬಂದು ಸಮರ್ಪಣೆಯಾಗಿ ನಿಮಿತ್ತರಾದ ನಂತರ
ನೀವೇಕೆ ಚಿಂತೆ ಮಾಡುತ್ತೀರಿ? ಸಮರ್ಪಣೆ ಮಾಡಿ ಮತ್ತೆ ಸೇವೆಯೂ ಮಾಡಿದಾಗ ಅದಕ್ಕೆ ಪ್ರತಿಫಲವು
ಸಿಗಲೇಬೇಕು. ಒಂದುವೇಳೆ ಸಮರ್ಪಣೆಯಾಗಿ ಸೇವೆ ಮಾಡದೇ ಇದ್ದರೂ ಅವರ ಪಾಲನೆಯನ್ನು
ಮಾಡಬೇಕಾಗುತ್ತದೆಯಲ್ಲವೆ. ಅವರು ಮಾಡಿದ ಸೇವೆಯಲ್ಲಿಯೇ ತಿನ್ನುತ್ತಾ ತಮ್ಮ ಫಲವನ್ನು ಸಮಾಪ್ತಿ
ಮಾಡಿಕೊಳ್ಳುತ್ತಾರೆ. ಏಕೆಂದರೆ ಸೇವೆ ಮಾಡುತ್ತಿರುವುದಿಲ್ಲ. ಆದ್ದರಿಂದ ನೀವು ಮನುಷ್ಯರನ್ನು ವಜ್ರ
ಸಮಾನರಾಗುವಂತಹ ಸೇವೆಯನ್ನು ಮಾಡಬೇಕಾಗಿದೆ. ಯಾವುದರಿಂದ ಮನುಷ್ಯನು ಶ್ರೇಷ್ಠನಾಗುತ್ತಾನೆಯೋ ಅಂತಹ
ಆತ್ಮಿಕ ಸೇವೆಯನ್ನು ಮುಖ್ಯವಾಗಿ ತಂದೆಗೆ ಮಾಡಿ ತೋರಿಸಬೇಕು. ಇಲ್ಲವೆಂದರೆ ಸೇವೆ ಮಾಡದೇ ಇದ್ದಾಗ
ಹೋಗಿ ದಾಸ-ದಾಸಿಯರಾಗುತ್ತೀರಿ. ಯಾರು ಚೆನ್ನಾಗಿ ಓದುತ್ತಾರೆಯೋ ಅವರ ಗೌರವವೂ ಶ್ರೇಷ್ಠವಾಗಿರುತ್ತದೆ.
ಯಾರು ಅನುತ್ತೀರ್ಣರಾಗುತ್ತಾರೆಯೋ ಅವರು ಹೋಗಿ ದಾಸ-ದಾಸಿಯರಾಗುತ್ತಾರೆ.
ಅದಕ್ಕಾಗಿ ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ, ಆಸ್ತಿಯನ್ನು ತೆಗೆದುಕೊಳ್ಳಿ.
ಈ ಮನ್ಮನಾಭವದ ಅಕ್ಷರವೇ ಸರಿಯಾಗಿದೆ. ಜ್ಞಾನ ಸಾಗರನೆಂದು ಹೇಳುತ್ತಾರೆ. ನೀವು ನನ್ನನ್ನು ನೆನಪು
ಮಾಡಿದಾಗ ನಿಮ್ಮ ವಿಕರ್ಮ ವಿನಾಶವಾಗುತ್ತದೆ. ಈ ರೀತಿ ಕೃಷ್ಣನು ಮಾಡಿ ಎಂದು. ಇದು
ರಾಜಯೋಗವಾಗಿದೆಯಲ್ಲವೆ. ಇದರಿಂದ ಪ್ರವೃತ್ತಿ ಮಾರ್ಗವು ಸಿದ್ಧವಾಗುತ್ತದೆ. ನೀವೇ ಇದನ್ನು ತಿಳಿಸಿ
ಕೊಡಬಹುದು. ನಿಮ್ಮಲ್ಲಿಯೂ ಯಾರು ಬುದ್ಧಿವಂತ ಸೇವಾಧಾರಿಗಳಿದ್ದಾರೆಯೋ ಅವರನ್ನು ಕರೆಯಲಾಗುತ್ತದೆ.
ಇವರು ಬುದ್ಧಿವಂತ ಸೇವಾಧಾರಿ ಎಂದು ತಿಳಿಯಲಾಗುತ್ತದೆ. ಮಕ್ಕಳು ಯೋಗ ಯುಕ್ತರಾಗಬೇಕಾಗುತ್ತದೆ.
ಒಂದುವೇಳೆ ಶ್ರೀಮತದಂತೆ ನಡೆಯದಿದ್ದರೆ ಹೆಸರನ್ನು ಕೆಡಿಸುತ್ತಾರೆ. ಮೋಸ ಮಾಡುವುದರಿಂದ ಮತ್ತೆ
ಶಿಕ್ಷೆಯನ್ನನುಭವಿಸಬೇಕಾಗುತ್ತದೆ. ಟ್ರಿಬ್ಯುನಲ್ ಸಹ ಕುಳಿತುಕ್ಕೊಳ್ಳುತ್ತದೆಯಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ರಾತ್ರಿ ಕ್ಲಾಸ್
:
ಮಕ್ಕಳಿಗೆ ಪ್ರಪ್ರಥಮವಾಗಿ ತಂದೆಯ ಬಗ್ಗೆ ತಿಳವಳಿಕೆ ಕೊಡಬೇಕಾಗಿದೆ. ಬೇಹದ್ದಿನ ತಂದೆ ನಮಗೆ
ಓದಿಸುತ್ತಿದ್ದಾರೆ, ಗೀತೆಯನ್ನು ಓದುವಂತಹ ಕೃಷ್ಣನನ್ನು ಭಗವಂತನೆಂದು ಹೇಳುತ್ತಾರೆ. ಅವರಿಗೆ
ತಿಳಿಸಬೇಕು ಭಗವಂತನೆಂದು ನಿರಾಕಾರನಿಗೆ ಹೇಳಲಾಗುತ್ತದೆ. ದೇಹಧಾರಿಗಳಂತೂ ಬಹಳಯಿದ್ದಾರೆ.
ಶರೀರವಿಲ್ಲದೇ ಇರುವವರು ಕೇವಲ ಒಬ್ಬರೆ. ಅವರಾಗಿದ್ದಾರೆ ಶ್ರೇಷ್ಠಾತಿ ಶ್ರೇಷ್ಠ ಶಿವಬಾಬಾ. ಇದನ್ನು
ಒಳ್ಳೆ ರೀತಿ ಅವರ ಬುದ್ಧಿಯಲ್ಲಿ ಕೂರಿಸಿ. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿ ಸಿಗುತ್ತದೆ,
ಅವರೇ ಶ್ರೇಷ್ಠಾತಿ ಶ್ರೇಷ್ಠ ನಿರಾಕಾರ ಪರಮಪಿತ ಪರಮಾತ್ಮ ಆಗಿದ್ದಾರೆ. ಅವರಾಗಿದ್ದಾರೆ ಬೇಹದ್ದಿನ
ತಂದೆ ಮತ್ತು ಇವರಾಗಿದ್ದಾರೆ ಹದ್ದಿನ ತಂದೆ. ಬೇರೆ ಯಾರೂ 21 ಜನ್ಮಕ್ಕೆ ಆಸ್ತಿ ಕೊಡುವುದಿಲ್ಲ.
ಇಂತಹ ತಂದೆಯೂ ಯಾರೂ ಇಲ್ಲ, ಯಾರಿಂದ ಅಮರ ಪದವಿ ಸಿಗುತ್ತೆ. ಅಮರ ಲೋಕವಾಗಿದೆ ಸತ್ಯಯುಗ. ಇದಾಗಿದೆ
ಮೃತ್ಯು ಲೋಕ. ಹೀಗೆ ತಂದೆಯ ಪರಿಚಯ ಕೊಡುವುದರಿಂದ ತಿಳಿಯುತ್ತಾರೆ, ತಂದೆಯಿಂದ ಏನು ಆಸ್ತಿ
ಸಿಗುತ್ತದೆ ಅದಕ್ಕೆ ದೈವೀ ಸ್ವರಾಜ್ಯವೆಂದು ಹೇಳಲಾಗುತ್ತದೆ. ಅದನ್ನು ತಂದೆಯೇ ಕೊಡುತ್ತಾರೆ.
ಅವರನ್ನೇ ಪತಿತ ಪಾವನ ಎಂದು ಹೇಳಲಾಗುತ್ತದೆ. ಅವರು ಹೇಳುತ್ತಾರೆ ತಮ್ಮನ್ನು ಆತ್ಮ ಎಂದು ತಿಳಿದು
ತಂದೆಯಾದ ನನ್ನನ್ನು ನೆನಪು ಮಾಡಿ ಅದರಿಂದ ನಿಮ್ಮ ಪಾಪ ಕಟ್ ಆಗುತ್ತದೆ. ಪತಿತರಿಂದ ಪಾವನರಾಗಿ
ಪಾವನ ಪ್ರಪಂಚಕ್ಕೆ ಹೋಗಲು ಯೋಗ್ಯರಾಗುವಿರಿ. ಕಲ್ಪ-ಕಲ್ಪ ತಂದೆ ಹೇಳುತ್ತಾರೆ ಮಾಮೇಕಮ್ ಯಾದ್ ಕರೊ.
ನೆನಪಿನ ಯಾತ್ರೆಯಿಂದಲೇ ಪವಿತ್ರರಾಗಬೇಕಾಗಿದೆ. ಈಗ ಪಾವನ ಜಗತ್ತು ಬರುತ್ತಿದೆ. ಪತಿತ ಜಗತ್ತು
ವಿನಾಶವಾಗುವುದಿದೆ. ಪ್ರಪ್ರಥಮವಾಗಿ ತಂದೆಯ ಪರಿಚಯ ಕೊಟ್ಟು ಪಕ್ಕಾ ಮಾಡಬೇಕಾಗಿದೆ. ಯಾವಾಗ ಪಕ್ಕಾ
ತಂದೆಯನ್ನು ತಿಳಿಯುತ್ತಾರೆ ಆಗ ತಂದೆಯಿಂದ ಆಸ್ತಿ ಸಿಗುತ್ತದೆ. ಇದರಲ್ಲಿ ಮಾಯೆ ಬಹಳ
ಮರೆಸುತ್ತಿರುತ್ತದೆ. ನೀವು ತಂದೆಯನ್ನು ನೆನಪು ಮಾಡಲು ಪ್ರಯತ್ನ ಪಡುವಿರಿ ಮತ್ತೆ ಮರೆತು ಬಿಡುವಿರಿ.
ಶಿವಬಾಬಾರವರನ್ನು ನೆನಪು ಮಾಡುವುದರಿಂದಲೇ ನಿಮ್ಮ ಪಾಪ ಕಟ್ ಆಗುತ್ತದೆ. ಆ ಬಾಬಾ ಇವರ ಮೂಲಕ
ತಿಳಿಸುತ್ತಾರೆ ಮಕ್ಕಳೇ ನನ್ನನ್ನು ನೆನಪು ಮಾಡಿ ಎಂದು. ಆದರೂ ವ್ಯಾಪಾರ-ವ್ಯವಹಾರದಲ್ಲಿ ಮರೆತು
ಹೋಗುವಿರಿ. ಈ ರೀತಿ ಮರೆಯಬಾರದಾಗಿದೆ. ಇದು ಪರಿಶ್ರಮದ ಮಾತಾಗಿದೆ. ತಂದೆಯನ್ನು ನೆನಪು ಮಾಡುತ್ತಾ
ಮಾಡುತ್ತಾ ಕರ್ಮಾತೀತ ಅವಸ್ಥೆಯವರೆಗೆ ತಲುಪಬೇಕಾಗುತ್ತದೆ. ಕರ್ಮಾತೀತ ಅವಸ್ಥೆಯವರಿಗೆ ಹೇಳಲಾಗುತ್ತೆ
ಫರಿಷ್ತಾ. ಈಗ ಪಕ್ಕಾ ನೆನಪು ಮಾಡಿ ಹೇಗೆ ಯಾರಿಗೆ ತಿಳಿಸುವುದು ಎಂದು. ಪಕ್ಕಾ ನಿಶ್ಚಯವೂ
ಇರಬೇಕಾಗಿದೆ ನಾವು ಸಹೋದರರಿಗೆ (ಆತ್ಮರಿಗೆ) ತಿಳಿಸುತ್ತಿದ್ದೇನೆ. ಎಲ್ಲರಿಗೂ ತಂದೆಯ ಸಂದೇಶವನ್ನು
ಕೊಡಿ. ಕೆಲವರು ಹೇಳುತ್ತಾರೆ ಬಾಬಾನ ಬಳಿ ಹೋಗೋಣ, ಸಾಕ್ಷಾತ್ಕಾರ ಮಾಡೋಣ ಎಂದು. ಆದರೆ ಇದರಲ್ಲಿ
ಯಾವುದೇ ಸಾಕ್ಷಾತ್ಕಾರದ ಮಾತೇ ಇಲ್ಲ. ಭಗವಂತ ಬಂದು ಕಲಿಸುತ್ತಾರೆ ಮತ್ತು ಮುಖದಿಂದ ಹೇಳುತ್ತಾರೆ
ನೀವು, ನಾನು ನಿರಾಕಾರ ತಂದೆಯನ್ನು ನೆನಪು ಮಾಡಿ ಎಂದು. ನೆನಪು ಮಾಡುವುದರಿಂದ ಎಲ್ಲಾ ಪಾಪಗಳು ಕಟ್
ಆಗುತ್ತದೆ. ಎಲ್ಲೇ ವ್ಯಾಪಾರ ವ್ಯವಹಾರದಲ್ಲಿ ಕುಳಿತಿದ್ದರೂ ಗಳಿಗೆ-ಗಳಿಗೆ ತಂದೆಯ ನೆನಪು ಮಾಡಿ.
ತಂದೆ ಆಜ್ಞೆ ಮಾಡುತ್ತಾರೆ ನನ್ನನ್ನು ನೆನಪು ಮಾಡಿ. ನಿರಂತರ ನೆನಪು ಮಾಡುವವರೇ ಗೆಲುವು ಪಡೆಯುವರು.
ನೆನಪು ಮಾಡದೇ ಹೋದರೆ ಮಾಕ್ರ್ಸ ಕಡಿಮೆಯಾಗಿ ಬಿಡುತ್ತದೆ. ಈ ವಿದ್ಯೆ ಮನುಷ್ಯರಿಂದ ದೇವತೆಗಳನ್ನಾಗಿ
ಮಾಡುವುದಾಗಿದೆ, ಯಾವುದನ್ನು ಒಬ್ಬ ತಂದೆಯೇ ಓದಿಸುತ್ತಾರೆ. ನೀವು ಚಕ್ರವರ್ತಿ ರಾಜ ಆಗಬೇಕಾಗಿದೆ.
ಈಗ 84 ಜನ್ಮಗಳನ್ನೂ (ಚಕ್ರವನ್ನು) ಸಹ ನೆನಪು ಮಾಡಬೇಕಾಗಿದೆ. ಕರ್ಮಾತೀತ ಅವಸ್ಥೆಯವರೆಗೆ ತಲುಪಲು
ಪರಿಶ್ರಮ ಪಡಬೇಕಾಗಿದೆ. ಅದು ಅಂತ್ಯದಲ್ಲಿ ಆಗುತ್ತದೆ. ಅಂತ್ಯ ಯಾವುದೇ ಸಮಯದಲ್ಲಿ ಬರಬಹುದು,
ಆದ್ದರಿಂದ ಪುರುಷಾರ್ಥ ನಿರಂತರವಾಗಿ ಮಾಡುತ್ತಿರಬೇಕು. ನಿತ್ಯ ನಿಮ್ಮ ಪುರುಷಾರ್ಥ ನಡೆಯುತ್ತಿರಬೇಕು.
ಲೌಕಿಕ ತಂದೆ ನಿಮಗೆ ಹೀಗೆ ಹೇಳಲ್ಲ, ದೇಹದ ಎಲ್ಲಾ ಸಂಬಂಧವನ್ನು ಬಿಟ್ಟು ನಿಮ್ಮನ್ನು ಆತ್ಮ ಎಂದು
ತಿಳಿಯಿರಿ ಎಂದು. ಶರೀರದ ಅಭಿಮಾನ ಬಿಟ್ಟು ನನ್ನನ್ನು ನೆನಪು ಮಾಡಿ ಆಗ ಪಾಪ ಕಟ್ ಆಗುತ್ತೆ. ಇವರಂತೂ
ಬೇಹದ್ದಿನ ತಂದೆಯೇ ಹೇಳುತ್ತಾರೆ. ಮಕ್ಕಳೇ ನನ್ನೊಬ್ಬನ ನೆನಪಲ್ಲೇ ಇದ್ದರೆ ಎಲ್ಲಾ ಪಾಪ ಕಟ್
ಆಗುತ್ತದೆ. ನೀವು ಸತೋಪ್ರಧಾನರಾಗಿ ಬಿಡುವಿರಿ. ಈ ವ್ಯವಹಾರವನ್ನು ಖುಶಿಯಿಂದ ಮಾಡಬೇಕಾಗಿದೆಯಲ್ಲವೇ.
ಭೋಜನ ಮಾಡುವ ಸಮಯದಲ್ಲೂ ಸಹ ತಂದೆಯನ್ನು ನೆನಪು ಮಾಡಬೇಕು. ನೆನಪಿನಲ್ಲಿರುವಂತಹ ಗುಪ್ತ ಅಭ್ಯಾಸ
ನೀವು ಮಕ್ಕಳದು ನಡೆಯುತ್ತಿದ್ದರೆ ಒಳ್ಳೆಯದು. ನಿಮ್ಮದೇ ಕಲ್ಯಾಣವಾಗಿದೆ. ನಿಮ್ಮನ್ನು ನೀವು
ನೋಡಿಕೊಳ್ಳಿ, ಬಾಬಾನನ್ನು ಎಷ್ಟು ಸಮಯ ನೆನಪು ಮಾಡುತ್ತೇನೆ? ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು, ಪ್ರೀತಿ ಹಾಗೂ ಶುಭ ರಾತ್ರಿ. ಓಂ ಶಾಂತಿ.
ಧಾರಣೆಗಾಗಿ
ಮುಖ್ಯಸಾರ:
1. ಮನುಷ್ಯರನ್ನು
ವಜ್ರ ಸಮಾನ ಮಾಡುವಂತಹ ಆತ್ಮಿಕ ಸೇವೆಯನ್ನು ಮಾಡಬೇಕಾಗಿದೆ. ಎಂದಿಗೂ ಸಂಶಯ ಬುದ್ಧಿಯವರಾಗಿ
ವಿದ್ಯೆಯನ್ನು ಬಿಡಬಾರದು, ಟ್ರಸ್ಟಿಯಾಗಿರಬೇಕು.
2. ಶರೀರ ನಿರ್ವಹಣಾರ್ಥವಾಗಿ ಕರ್ಮ ಮಾಡುತ್ತಾ ತಂದೆಯನ್ನು ನೆನಪು ಮಾಡಬೇಕಾಗಿದೆ. ಶ್ರೀ ಮತದಲ್ಲಿ
ತಮ್ಮ ಕಲ್ಯಾಣವಿದೆ ಎಂದು ತಿಳಿದು ನಡೆಯಬೇಕಾಗಿದೆ. ತಮ್ಮ ಮತವನ್ನು ನಡೆಸಬಾರದು.
ವರದಾನ:
ಸರ್ವರ ಪ್ರತಿ
ಶುಭ ಕಲ್ಯಾಣದ ಭಾವನೆ ಇಟ್ಟು ಪರಿವರ್ತನೆ ಮಾಡುವಂತಹ ಬೇಹದ್ದಿನ ಸೇವಾಧಾರಿ ಭವ.
ಬಹಳಷ್ಟು ಮಕ್ಕಳು
ಬಾಪ್ದಾದಾರವರ ಮುಂದೆ ತಮ್ಮ ಇದೇ ಆಸೆ ಇಡುತ್ತಾರೆ ನಮ್ಮ ಇಂತಹ ಸಂಬಂಧಿ ಬದಲಾವಣೆ ಆಗಿ ಬಿಡಲಿ.
ಮನೆಯವರು ನನ್ನ ಜೊತೆಗಾರರಾಗಿ ಬಿಡಲಿ ಎಂದು. ಆದರೆ ಕೇವಲ ಆ ಆತ್ಮಗಳನ್ನು ನಮ್ಮವರು ಎಂದು ತಿಳಿದು
ಆಸೆ ಇಟ್ಟಿದ್ದೇ ಆದಲ್ಲಿ ಮಿತವಾದ ಗೋಡೆಯ ಕಾರಣ ನಿಮ್ಮ ಶುಭ ಕಲ್ಯಾಣದ ಭಾವನೆ ಆ ಆತ್ಮಗಳವರೆಗೂ
ತಲುಪುವುದಿಲ್ಲ. ಬೇಹದ್ಧಿನ ಸೇವಾಧಾರಿ ಸರ್ವರ ಪ್ರತಿ ಆತ್ಮಿಕ ಭಾವ ಅಥವಾ ಬೇಹದ್ಧಿನ ಆತ್ಮಿಕ
ದೃಷ್ಠಿ, ಸಹೋದರ-ಸಹೋದರನ ಸಂಬಂಧದ ವೃತ್ತಿಯಿಂದ ಶುಭ ಭಾವನೆ ಇಟ್ಟಿದ್ದೇ ಆದರೆ ಅದರ ಫಲ ಅವಶ್ಯವಾಗಿ
ಪ್ರಾಪ್ತಿಯಾಗುವುದು. ಇದೇ ಮನಸಾ ಸೇವೆಯ ಯರ್ಥಾಥ ವಿಧಿಯಾಗಿದೆ.
ಸ್ಲೋಗನ್:
ಜ್ಞಾನರೂಪಿ
ಬಾಣವನ್ನು ಬುದ್ಧಿ ರೂಪಿ ಬತ್ತಳಿಕೆಯಲ್ಲಿ ತುಂಬಿಕೊಂಡು ಮಾಯೆಗೆ ಸವಾಲು ಹಾಕುವಂತಹವರೇ ಮಹಾವೀರ
ಯೋಧ ಆಗಿದ್ದಾರೆ.
ಮಾತೇಶ್ವರೀಜಿ ಯವರ ಮಧುರ
ಮಹಾವಾಕ್ಯ :
“ ಮನಸ್ಸಿನ
ಅಶಾಂತಿಯ ಕಾರಣವಾಗಿದೆ ಕರ್ಮ ಬಂಧನ ಮತ್ತು ಶಾಂತಿಯ ಆಧಾರವಾಗಿದೆ ಕರ್ಮಾತೀತ ”
ವಾಸ್ತವದಲ್ಲಿ ಪ್ರತಿಯೊಬ್ಬ ಮನುಷ್ಯರ ಈ ಇಚ್ಛೆ ಅವಶ್ಯವಾಗಿರುವುದು ನಮಗೆ ಮನಸ್ಸಿನ ಶಾಂತಿ
ಪ್ರಾಪ್ತಿಯಾಗಿ ಬಿಡಲಿ ಇದಕ್ಕಾಗಿ ಅನೇಕ ಪ್ರಯತ್ನ ಮಾಡುತ್ತಾ ಬಂದಿದ್ದಾನೆ. ಆದರೆ ಮನಸ್ಸಿಗೆ ಶಾಂತಿ
ಇಲ್ಲಿಯವರೆಗೆ ಪ್ರಾಪ್ತಿಯಾಗಿಲ್ಲ, ಇದರ ಯಥಾರ್ಥ ಕಾರಣ ಏನು? ಈಗ ಮೊದಲಂತು ಈ ಯೋಚನೆ ನಡೆಯುವುದು
ಅವಶ್ಯಕವಾಗಿದೆ ಮನಸ್ಸಿನ ಅಶಾಂತಿಗೆ ಮೊದಲ ಬುಡ ಏನಾಗಿದೆ? ಮನಸ್ಸಿನ ಅಶಾಂತಿಯ ಮುಖ್ಯ ಕಾರಣವಾಗಿದೆ
– ಕರ್ಮ ಬಂಧನದಲ್ಲಿ ಸಿಕ್ಕಿ ಹಾಕಿಕೊಳ್ಳುವುದು. ಎಲ್ಲಿಯವರೆಗೆ ಮನುಷ್ಯ ಈ ಐದು ವಿಕಾರಗಳ ಕರ್ಮ
ಬಂಧನದಿಂದ ಬಿಡಿಸಿಕೊಳ್ಳುವುದಿಲ್ಲ. ಅಲ್ಲಿಯವರೆಗೆ ಮನುಷ್ಯ ಅಶಾಂತಿಯಿಂದ
ಬಿಡಿಸಿಕೊಳ್ಳಲಾಗುವುದಿಲ್ಲ. ಯಾವಾಗ ಕರ್ಮ ಬಂಧನ ಕತ್ತರಿಸಿ ಹೋಗುತ್ತೆ ಆಗ ಮನಸ್ಸಿನ ಶಾಂತಿ
ಅರ್ಥಾತ್ ಜೀವನ್ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯ. ಈಗ ಯೋಚಿಸಬೇಕು - ಈ ಕರ್ಮ ಬಂಧನ
ಹೇಗೆ ಕತ್ತರಿಸಿ ಹಾಕುವುದು? ಮತ್ತು ಅದರಿಂದ ಬಿಡಿಸುವವರು ಯಾರು? ಇದನ್ನಂತು ನಾವು ತಿಳಿದಿದ್ದೇವೆ
ಯಾವುದೇ ಮನುಷ್ಯ ಅಶಾಂತಿಯಿಂದ ಬಿಡಿಸಿಕೊಳ್ಳಲಾಗುವುದಿಲ್ಲ. ಈ ಕರ್ಮ ಬಂಧನದ ಲೆಕ್ಕಾಚಾರ
ಬಿಡಿಸುವಂತಹವರು ಕೇವಲ ಒಬ್ಬ ಪರಮಾತ್ಮ ಆಗಿದ್ದಾರೆ, ಅವರೇ ಬಂದು ಈ ಜ್ಞಾನ ಯೋಗಬಲದಿಂದ ಕರ್ಮ
ಬಂಧನದಿಂದ ಬಿಡಿಸುತ್ತಾರೆ. ಅದಕ್ಕಾಗಿ ಪರಮಾತ್ಮನನ್ನು ಸುಖದಾತಾ ಎಂದು ಹೇಳಲಾಗುವುದು.
ಎಲ್ಲಿಯವರೆಗೆ ಮೊದಲು ಈ ಜ್ಞಾನವಿಲ್ಲ ನಾನು ಆತ್ಮನಾಗಿದ್ದೇನೆ, ಮೂಲ ನಾನು ಯಾರ ಸಂತಾನನಾಗಿದ್ದೇನೆ,
ನನ್ನ ನಿಜವಾದ ಗುಣ ಏನು? ಯಾವಾಗ ಇದು ಬುದ್ಧಿಯಲ್ಲಿ ಬಂದಾಗಲೇ ಕರ್ಮ ಬಂಧನ ಮುರಿಯುತ್ತದೆ. ಈಗ ಈ
ಜ್ಞಾನ ನಮಗೆ ಪರಮಾತ್ಮನ ಮುಖಾಂತರವೇ ಕರ್ಮ ಬಂಧನ ಮುರಿಯುತ್ತದೆ. ಒಳ್ಳೆಯದು. ಓಂ ಶಾಂತಿ.