25.11.18       Avyakt Bapdada      Kannada Murli      01.03.84      Om Shanti     Madhuban


" ಒಂದರ ಲೆಕ್ಕಾಚಾರ"


ಇಂದು ಸರ್ವ ಸಹಯೋಗಿ, ಸದಾ ಸಹಯೋಗಿ ಮಕ್ಕಳನ್ನು ನೋಡುತ್ತಾ ಹರ್ಷಿತವಾಗುತ್ತಿದ್ದಾರೆ. ಸರ್ವ ಕಡೆಗಳಿಂದ ಬಂದಿರುವಂತಹ ತಂದೆಯ ಮಕ್ಕಳು ಒಂದು ಬಲ ಒಂದು ಭರವಸೆ, ಏಕಮತ, ಏಕರಸ, ಒಬ್ಬರದೇ ಗುಣ ಗಾನ ಮಾಡುವಂತಹ, ಒಬ್ಬರದೇ ಜೊತೆಯಲ್ಲಿ ಸರ್ವ ಸಂಬಂಧವನ್ನು ನಿಭಾಯಿಸುವಂತಹ, ಒಬ್ಬರ ಜೊತೆ ಸದಾ ಇರುವಂತಹ, ಒಂದು ಪ್ರಭುವಿನ ಪರಿವಾರದಲ್ಲಿಯೇ ಒಂದು ಲಕ್ಷ್ಯ, ಒಂದೇ ಲಕ್ಷಣ, ಸರ್ವರನ್ನೂ ಒಂದೇ ಶುಭ ಮತ್ತು ಶ್ರೇಷ್ಠ ಭಾವನೆಯಿಂದ ನೋಡುವಂತಹ, ಸರ್ವರನ್ನು ಒಂದೇ ಶ್ರೇಷ್ಠ ಶುಭ ಕಾಮನೆಯಿಂದ ಸದಾ ಶ್ರೇಷ್ಠ ಮಟ್ಟಕ್ಕೆ ಹಾರಿಸುವಂತಹ, ಒಂದೇ ಸಂಸಾರ, ಒಂದೇ ಸಂಸಾರದಲ್ಲಿ ಸರ್ವ ಪ್ರಾಪ್ತಿಗಳ ಅನುಭವ ಮಾಡುವಂತಹ, ಕಣ್ಣು ತೆರೆಯುತ್ತಿದ್ದಂತೆಯೇ ಒಬ್ಬ ಬಾಬಾ! ಪ್ರತಿಯೊಂದು ಕಾರ್ಯವನ್ನು ಮಾಡುತ್ತಾ ಒಬ್ಬ ಜೊತೆಗಾರ ಬಾಬಾ, ದಿನ ಸಮಾಪ್ತಿ ಮಾಡುತ್ತಾ, ಕರ್ಮಯೋಗ ಹಾಗೂ ಸೇವೆಯ ಕಾರ್ಯವನ್ನು ಸಮಾಪ್ತಿ ಮಾಡುತ್ತಾ ಒಬ್ಬರ ಪ್ರೀತಿಯಲ್ಲಿ ಲೀನವಾಗಿ ಬಿಡುತ್ತಾರೆ, ಒಬ್ಬರ ಜೊತೆಯಲ್ಲಿ ಲವಲೀನರಾಗಿ ಬಿಡುತ್ತಾರೆ ಅರ್ಥಾತ್ ಒಬ್ಬರ ಸ್ನೇಹವೆಂಬ ಮಡಿಲಿನಲ್ಲಿ ಸಮಾವೇಶವಾಗಿ ಬಿಡುತ್ತಾರೆ. ಹಗಲು-ರಾತ್ರಿಯಲ್ಲಿ ಒಬ್ಬರದೇ ಜೊತೆಯಲ್ಲಿ ದಿನಚರಿಯನ್ನು ಕಳೆಯುತ್ತಾರೆ. ಸೇವೆಯ ಸಂಬಂಧದಲ್ಲಿ ಬರುತ್ತಾ, ಪರಿವಾರದ ಸಂಬಂಧದಲ್ಲಿ ಬರುತ್ತಾ ಇದ್ದರೂ ಸಹ ಅನೇಕರಲ್ಲಿ ಒಂದನ್ನು ನೋಡುತ್ತಾರೆ. ಒಬ್ಬ ತಂದೆಯ ಪರಿವಾರವಾಗಿದೆ, ಒಬ್ಬ ತಂದೆಯು ಸೇವೆಗಾಗಿ ನಿಮಿತ್ತರನ್ನಾಗಿ ಮಾಡಿದ್ದಾರೆ. ಇದೇ ವಿಧಿಯಿಂದ ಅನೇಕರ ಸಂಬಂಧ-ಸಂಪರ್ಕದಲ್ಲಿ ಬರುತ್ತಾ, ಅನೇಕದರಲ್ಲಿಯೂ ಒಂದನ್ನೇ ನೋಡುತ್ತಾರೆ. ಬ್ರಾಹ್ಮಣ ಜೀವನದಲ್ಲಿ, ಹೀರೋ ಪಾತ್ರಧಾರಿಯಾಗುವ ಜೀವನದಲ್ಲಿ, ಪಾಸ್-ವಿತ್-ಆನರ್ ಆಗುವ ಜೀವನದಲ್ಲಿ, ಕೇವಲ ಕಲಿಯಬೇಕಾಗಿರುವುದೇನು? ಒಂದರ ಲೆಕ್ಕಾಚಾರ. ಅಷ್ಟೇ ಒಂದನ್ನು ತಿಳಿದುಕೊಂಡಿರೆಂದರೆ ಎಲ್ಲವನ್ನೂ ತಿಳಿದಿರಿ. ಎಲ್ಲವನ್ನೂ ಪಡೆದುಕೊಂಡಿರಿ. ಒಂದನ್ನು ಕಲಿಯುವುದು, ಬರೆಯುವುದು, ನೆನಪಿಟ್ಟುಕೊಳ್ಳುವುದು ಬಹಳ ಸರಳ, ಸಹಜವಾಗಿದೆ.

ಹಾಗೆ ನೋಡಿದಾಗ ಭಾರತದಲ್ಲಿ ನಾಣ್ಣುಡಿಯಿದೆ – ಮೂರು, ಐದು ಮಾತುಗಳನ್ನು ಮಾತನಾಡದಿರಿ. ಒಂದೇ ಮಾತನ್ನು ಮಾತನಾಡಿರಿ. ಮೂರು-ಐದು ಮಾತುಗಳು ಕಷ್ಟವಾಗುತ್ತದೆ, ಒಂದು ನೆನಪಿಟ್ಟುಕೊಳ್ಳುವುದು, ಒಂದನ್ನು ತಿಳಿಯುವುದು ಅತಿ ಸಹಜವಿದೆ. ಅಂದಮೇಲೆ ಇಲ್ಲಿ ಕಲಿಯುವುದೇನು? ಒಂದೇ ಕಲಿಯುತ್ತೀರಲ್ಲವೆ. ಒಂದರಲ್ಲಿಯೇ ಪದಮಗಳು ಸಮಾವೇಶವಾಗಿದೆ. ಆದ್ದರಿಂದ ಬಾಪ್ದಾದಾರವರು ಸಹಜ ಮಾರ್ಗದಲ್ಲಿ ಒಂದರದೇ ತಿಳಿಸುತ್ತಾರೆ. ಒಂದರ ಮಹತ್ವಿಕೆಯನ್ನು ತಿಳಿಯಿರಿ ಮತ್ತು ಮಹಾನರಾಗಿರಿ. ಇಡೀ ವಿಸ್ತಾರವು ಒಂದರಲ್ಲಿಯೇ ಸಮಾವೇಶವಾಗಿದೆ. ಎಲ್ಲದರ ಜ್ಞಾನವು ಬಂದು ಬಿಟ್ಟಿತಲ್ಲವೆ. ಡಬಲ್ ವಿದೇಶಿಗಳಂತು ಒಬ್ಬರನ್ನು ಬಹಳ ಚೆನ್ನಾಗಿ ತಿಳಿದುಬಿಟ್ಟಿರಲ್ಲವೆ. ಒಳ್ಳೆಯದು - ಇಂದು ಕೇವಲ ಬಂದಿರುವ ಮಕ್ಕಳಿಗೆ ರಿಗಾರ್ಡ್ ಕೊಡುವುದಕ್ಕಾಗಿ, ಸ್ವಾಗತ ಮಾಡುವುದಕ್ಕಾಗಿ ಒಂದರ ಲೆಕ್ಕವನ್ನು ತಿಳಿಸಿದೆವು.

ಬಾಪ್ದಾದಾರವರು ಇಂದು ಕೇವಲ ಮಿಲನ ಮಾಡುವುದಕ್ಕಾಗಿ ಬಂದಿದ್ದಾರೆ. ಆದರೂ ಅಗಲಿ ಮರಳಿ ಸಿಕ್ಕಿರುವ ಮಕ್ಕಳು ಇಂದು ಅಥವಾ ನೆನ್ನೆಯ ದಿನ ಬಂದಿದ್ದಾರೆ, ಅವರಿಗಾಗಿ ಸ್ವಲ್ಪ ತಿಳಿಸಿದೆವು. ಬಾಪ್ದಾದಾರವರಿಗೆ ಗೊತ್ತಿದೆ - ಸ್ನೇಹದ ಕಾರಣದಿಂದ ಪರಿಶ್ರಮ ಪಟ್ಟು ಬರುವ ಸಾಧನವನ್ನು ಹೇಗೆ ಉಪಯೋಗಿಸುತ್ತಾರೆ! ಪರಿಶ್ರಮದ ಬಗ್ಗೆ ಬಾಬಾರವರ ಪ್ರೀತಿಯು ಪದಮಪಟ್ಟು ಮಕ್ಕಳೊಂದಿಗಿದೆ. ಆದ್ದರಿಂದ ತಂದೆಯೂ ಸ್ನೇಹ ಮತ್ತು ಗೋಲ್ಡನ್ ವರ್ಶನ್ಸ್ನಿಂದ ಎಲ್ಲಾ ಮಕ್ಕಳನ್ನು ಸ್ವಾಗತ ಮಾಡುತ್ತಿದ್ದಾರೆ. ಒಳ್ಳೆಯದು.

ಸರ್ವ ನಾಲ್ಕೂ ಕಡೆಯ ಸ್ನೇಹದಲ್ಲಿ ಲವಲೀನ ಮಕ್ಕಳಿಗೆ, ಸರ್ವ ಲಗನ್ನಿನಲ್ಲಿ ಮಗ್ನರಾಗಿರುವ ಮನಸ್ಸಿನ ಮಿತ್ರರಾದ ಮಕ್ಕಳಿಗೆ, ಸದಾ ಒಬ್ಬ ತಂದೆಯ ಗೀತೆಯನ್ನು ಹಾಡುವಂತಹ ಮಕ್ಕಳಿಗೆ, ಸದಾ ಪ್ರೀತಿಯ ರೀತಿಯನ್ನು ನಿಭಾಯಿಸುವಂತಹ ಜೊತೆಗಾರ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಡಬಲ್ ವಿ ದೇಶಿ ಮಕ್ಕಳೊಂದಿಗೆ ಬಾಪ್ದಾದಾರವರ ಆತ್ಮಿಕ ವಾರ್ತಾಲಾಪ - 03/03/84

ಡಬಲ್ ವಿದೇಶಿ ಅರ್ಥಾತ್ ಸದಾ ಸ್ವದೇಶ, ಮಧುರ ಮನೆಯ ಅನುಭವ ಮಾಡುವವರು. ಸದಾ ನಾನು ಸ್ವದೇಶಿ, ಮಧುರ ಮನೆಯಲ್ಲಿ ಇರುವವರು, ಪರದೇಶದಲ್ಲಿ, ಪರ-ರಾಜ್ಯದಲ್ಲಿ ಸ್ವರಾಜ್ಯ ಅರ್ಥಾತ್ ಆತ್ಮಿಕ ರಾಜ್ಯ ಮತ್ತು ಸುಖದ ರಾಜ್ಯವನ್ನು ಸ್ಥಾಪನೆ ಮಾಡುವ ಗುಪ್ತ ರೂಪದಿಂದ ಪ್ರಕೃತಿಯ ಆಧಾರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುವುದಕ್ಕಾಗಿ ಬಂದಿದ್ದೀರಿ. ಇರುವುದು ಸ್ವದೇಶಿ, ಪಾತ್ರವು ಪರದೇಶದಲ್ಲಿ ಅಭಿನಯಿಸುತ್ತಿದ್ದೀರಿ. ಇದು ಪ್ರಕೃತಿಯ ದೇಶವಾಗಿದೆ. ಸ್ವ-ದೇಶವು ಆತ್ಮದ ದೇಶವಾಗಿದೆ. ಈಗ ಪ್ರಕೃತಿಯು ಮಾಯೆಯ ವಶದಲ್ಲಿದೆ, ಮಾಯೆಯ ರಾಜ್ಯವಾಗಿದೆ ಆದ್ದರಿಂದ ಪರದೇಶವಾಗಿ ಬಿಟ್ಟಿದೆ. ಇದೇ ಪ್ರಕೃತಿಯು ತಾವು ಮಾಯಾಜೀತರಾಗುವುದರಿಂದ ತಮ್ಮ ಸುಖಮಯ ಸೇವಾಧಾರಿಯಾಗಿ ಬಿಡುತ್ತದೆ. ಮಾಯಾಜೀತ, ಪ್ರಕೃತಿಜೀತನಾಗುವುದರಿಂದ ತನ್ನ ಸುಖದ ರಾಜ್ಯ, ಸತೋಪ್ರಧಾನ ರಾಜ್ಯ, ಸ್ವರ್ಣೀಮ ಜಗತ್ತಾಗಿ ಬಿಡುತ್ತದೆ. ಇದರ ಸ್ಪಷ್ಟ ಸ್ಮೃತಿಯು ಬರುತ್ತಿದೆಯಲ್ಲವೆ? ಕೇವಲ ಸೆಕೆಂಡಿನಲ್ಲಿ ವಸ್ತ್ರವನ್ನು ಬದಲಾಯಿಸಬೇಕಾಗಿದೆ. ಹಳೆಯದನ್ನು ಬಿಟ್ಟು ಹೊಸ ವಸ್ತ್ರವನ್ನು ಧಾರಣೆ ಮಾಡಬೇಕಾಗಿದೆ. ಎಷ್ಟು ತಡವಾಗುತ್ತದೆ? ಫರಿಶ್ಥೆಯಿಂದ ದೇವತೆಯಾಗುವುದರಲ್ಲಿ ಕೇವಲ ವಸ್ತ್ರ ಬದಲಾಯಿಸುವುದರಲ್ಲಿ ತಡವಾಗುತ್ತದೆ. ದೇವತೆಯ ಶರೀರದ, ದೇವತೆಯ ಜೀವನದ, ದೇವತೆಗಳ ಪ್ರಪಂಚದ, ಸತೋಪ್ರಧಾನ ಪ್ರಕೃತಿಯ ಸಮಯದ ಸ್ಮೃತಿಯಿರುತ್ತದೆಯೇ? ಅನೇಕ ಬಾರಿ ರಾಜ್ಯಾಡಳಿತ ಮಾಡಿರುವ ಸಂಸ್ಕಾರ, ದೇವತಾ ಜೀವನದ ಸಂಸ್ಕಾರವು ಇಮರ್ಜ್ ಆಗುತ್ತದೆಯೇ? ಏಕೆಂದರೆ ಎಲ್ಲಿಯವರೆಗೆ ತಾವು ಮುಂದಾಗುವಂತಹ ದೇವತೆಯ ಸಂಸ್ಕಾರವು ಈಗ ಇಮರ್ಜ್ ಆಗಲಿಲ್ಲವೆಂದರೆ, ಸಾಕಾರ ರೂಪದಲ್ಲಿ ಸ್ವರ್ಣಿಮ ಜಗತ್ತಿನ ಇಮರ್ಜ್ ಹೇಗಾಗುತ್ತದೆ! ತಮಗೆ ಇಮರ್ಜ್ ಆಗಿರುವ ಸಂಕಲ್ಪದಿಂದ ದೇವತೆಯ ಸೃಷ್ಟಿಯು ಈ ಭೂಮಿಯಲ್ಲಿ ಪ್ರತ್ಯಕ್ಷವಾಗುತ್ತದೆ. ಸಂಕಲ್ಪವು ಸ್ವತಹವಾಗಿಯೇ ಇಮರ್ಜ್ ಆಗುತ್ತದೆಯೇ ಅಥವಾ ಈ ಬಹಳ ನಿಧಾನವಿದೆ ಎಂದು ತಿಳಿಯುತ್ತೀರಾ? ದೇವತಾ ಶರೀರವು ತಾವು ದೇವಾತ್ಮರ ಆಹ್ವಾನವನ್ನು ಮಾಡುತ್ತಿದೆ. ತಮ್ಮ ದೇವತಾ ಶರೀರವು ಕಾಣಿಸುತ್ತಿದೆಯೇ? ಯಾವಾಗ ಧಾರಣೆ ಮಾಡುವಿರಿ? ಹಳೆಯ ಶರೀರದೊಂದಿಗಂತು ಮನಸ್ಸಾಗಿಲ್ಲ ಅಲ್ಲವೆ? ಹಳೆಯ ಟೈಟ್ ಆಗಿರುವ ವಸ್ತ್ರವನ್ನಂತು ತೊಡುವುದಿಲ್ಲವೇ? ಹಳೆಯ ಶರೀರ, ಹಳೆಯ ವಸ್ತ್ರವು ಟೊಳ್ಳಾಗಿದೆ, ಅದು ಸಮಯದಲ್ಲಿ ಸೆಕೆಂಡಿನಲ್ಲಿ ಬಿಡಲು ಸಾಧ್ಯವಿಲ್ಲ. ನಿರ್ಬಂಧನ ಅರ್ಥಾತ್ ಸಡಿಲವಾದ ವಸ್ತ್ರವನ್ನು ಧರಿಸಿರಿ. ಅಂದಾಗ ಡಬಲ್ ವಿದೇಶಿಗಳಿಗೆ ಯಾವ ವಸ್ತ್ರವು ಇಷ್ಟವಾಗುತ್ತದೆ - ಸಡಿಲವಾದುದೇ? ಅಥವಾ ಟೈಟ್ ಆಗಿರುವುದೇ? ಟೈಟ್ ಆಗಿರುವುದಂತು ಇಷ್ಟವಿಲ್ಲ ಅಲ್ಲವೆ. ಬಂಧನವಂತು ಇಲ್ಲವೇ?

ತಾವು ತಮ್ಮಿಂದ ಎವರೆಡಿಯಾಗಿದ್ದೀರಾ! ಸಮಯವನ್ನು ಬಿಟ್ಟು ಬಿಡಿ, ಸಮಯವನ್ನು ಎಣಿಕೆ ಮಾಡಬೇಡಿ. ಈಗ ಇದಾಗುವುದಿದೆ, ಇದಾಗುವುದಿದೆ, ಅದು ಸಮಯಕ್ಕೆ ಗೊತ್ತು ಮತ್ತು ತಂದೆಗೆ ಗೊತ್ತು. ಸೇವೆಗೆ ಗೊತ್ತಿದೆ, ತಂದೆಗೆ ಗೊತ್ತಿದೆ. ಸ್ವಯಂನ ಸೇವೆಯಿಂದ ಸಂತುಷ್ಟವಾಗಿದ್ದೀರಾ? ವಿಶ್ವ ಸೇವೆಯನ್ನು ದೂರವಿಡಿ, ಸ್ವಯಂನ್ನು ನೋಡಿರಿ. ಸ್ವಯಂನ ಸ್ಥಿತಿಯಲ್ಲಿ, ಸ್ವಯಂನ ಸ್ವತಂತ್ರ ರಾಜ್ಯದಲ್ಲಿ, ಸ್ವಯಂನಿಂದ ಸಂತುಷ್ಟವಾಗಿದ್ದೀರಾ? ಸ್ವಯಂನ ರಾಜಧಾನಿಯನ್ನು ಸರಿಯಾಗಿ ನಡೆಸಲು ಸಾಧ್ಯವಾಗುತ್ತದೆಯೇ? ಇವೆಲ್ಲಾ ಕರ್ಮಚಾರಿ, ಮಂತ್ರಿ, ಮಹಾ ಮಂತ್ರಿಯೆಲ್ಲರೂ ತಮ್ಮ ಅಧಿಕಾರದಲ್ಲಿದ್ದಾರೆಯೇ? ಎಲ್ಲಿಯೂ ಅಧೀನತೆಯಂತು ಇಲ್ಲವೇ? ಕೆಲವೊಮ್ಮೆ ತಮ್ಮ ಮಂತ್ರಿ, ಮಹಾ ಮಂತ್ರಿಯೇ ಮೋಸಗೊಳಿಸುವುದಿಲ್ಲವೇ? ಕೆಲವೊಮ್ಮೆ ಒಳಗಿಂದೊಳಗೆ ಗುಪ್ತವಾಗಿ ತಮ್ಮದೇ ಕರ್ಮಾಚಾರಿಯು ಮಾಯೆಯ ಜೊತೆಗಾರನಂತು ಆಗಿಬಿಡುವುದಿಲ್ಲವೇ? ಸ್ವಯಂನ ರಾಜ್ಯದಲ್ಲಿ ತಾವು ರಾಜರುಗಳ ಆಡಳಿತಾಧಿಕಾರ, ನಿಯಂತ್ರಣಾ ಶಕ್ತಿಯು ಯಥಾರ್ಥ ರೂಪದಿಂದ ಕಾರ್ಯವನ್ನು ಮಾಡುತ್ತಿದೆಯೇ? ಹೀಗಂತು ಇಲ್ಲವೇ – ಶುಭ ಸಂಕಲ್ಪದಲ್ಲಿ ನಡೆಯಬೇಕು ಎಂದು ಆದೇಶ ಮಾಡಿದಿರಿ ಮತ್ತು ವ್ಯರ್ಥ ಸಂಕಲ್ಪವು ನಡೆಯಿತು. ಸಹನಶೀಲತೆಯ ಗುಣಕ್ಕೆ ಆದೇಶ ಮಾಡಿದಿರಿ ಮತ್ತು ಬಂದಿತು ಏರುಪೇರಿನ ಅವಗುಣ. ಎಲ್ಲಾ ಶಕ್ತಿಗಳು, ಎಲ್ಲಾ ಗುಣಗಳು, ಹೇ ಸ್ವ ರಾಜನೇ, ತಮ್ಮ ಆದೇಶದಲ್ಲಿದೆಯೇ? ಇವರೇ ತಮ್ಮ ರಾಜ್ಯದ ಜೊತೆಗಾರರಾಗಿದ್ದಾರೆ. ಅಂದಮೇಲೆ ಎಲ್ಲರೂ ಆದೇಶದಂತಿದ್ದಾರೆಯೇ? ಹೇಗೆ ರಾಜರುಗಳು ಆದೇಶ ಕೊಡುತ್ತಾರೆ ಮತ್ತು ಎಲ್ಲರೂ ಸೆಕೆಂಡಿನಲ್ಲಿ ಹಾಜಿರ್ ಆಗುತ್ತಾ ಸಲಾಮ್ ಮಾಡುತ್ತಾರೆ, ಇದೇ ರೀತಿಯಲ್ಲಿ ಕಂಟ್ರೋಲಿಂಗ್ ಮತ್ತು ರೂಲಿಂಗ್ ಪವರ್ ಇದೆಯೇ? ಇದರಲ್ಲಿ ಎವರೆಡಿಯಿದ್ದೀರಾ? ಸ್ವಯಂನ ಬಲಹೀನತೆ, ಸ್ವಯಂನ ಬಂಧನವು ಮೋಸಗೊಳಿಸುವುದಿಲ್ಲವೇ?

ಇಂದು ಬಾಪ್ದಾದಾರವರು ಸ್ವರಾಜ್ಯ ಅಧಿಕಾರಿಗಳೊಂದಿಗೆ ಸ್ವಯಂನ ರಾಜ್ಯದ ಕ್ಷೇಮ ಸಮಾಚಾರವನ್ನು ಕೇಳುತ್ತಿದ್ದಾರೆ! ರಾಜರುಗಳು ಕುಳಿತಿದ್ದೀರಲ್ಲವೆ? ಪ್ರಜೆಗಳಂತು ಇಲ್ಲ ಅಲ್ಲವೇ? ಯಾರಿಗೇ ಅಧೀನ ಅರ್ಥಾತ್ ಪ್ರಜೆ, ಅಧಿಕಾರಿ ಅರ್ಥಾತ್ ರಾಜಾ. ಅಂದಮೇಲೆ ಎಲ್ಲರೂ ಯಾರಾಗಿದ್ದೀರಿ? ರಾಜರು. ರಾಜಯೋಗಿ ಅಥವಾ ಪ್ರಜಾಯೋಗಿಯೇ? ರಾಜರುಗಳದೇ ದರ್ಬಾರ್ ಆಗಿದೆಯಲ್ಲವೆ? ಸತ್ಯಯುಗದ ರಾಜ್ಯ ಸಭೆಯಲ್ಲಂತು ಮರೆತು ಬಿಡುತ್ತೀರಿ, ಒಬ್ಬರಿನ್ನೊಬ್ಬರನ್ನು ಗುರುತಿಸುವುದಿಲ್ಲ - ನಾವು ಅದೇ ಸಂಗಮಯುಗಿಯಾಗಿದ್ದೇವೆ. ಈಗ ತ್ರಿಕಾಲದರ್ಶಿಯಾಗಿದ್ದು, ಒಬ್ಬರಿನ್ನೊಬ್ಬರನ್ನು ತಿಳಿದುಕೊಂಡಿದ್ದೀರಿ, ನೋಡುತ್ತೀರಿ. ಈಗಿನ ಈ ರಾಜ್ಯ ದರ್ಬಾರು ಸತ್ಯಯುಗಕ್ಕಿಂತಲೂ ಶ್ರೇಷ್ಠವಾಗಿದೆ. ಇಂತಹ ರಾಜ್ಯ ದರ್ಬಾರು ಕೇವಲ ಸಂಗಮಯುಗದಲ್ಲಿಯೇ ಆಗುತ್ತದೆ. ಅಂದಮೇಲೆ ಎಲ್ಲರ ರಾಜ್ಯದ ಕ್ಷೇಮ ಸಮಾಚಾರವು ಚೆನ್ನಾಗಿದೆಯಲ್ಲವೇ? ಚೆನ್ನಾಗಿದ್ದೇವೆ ಎನ್ನುವುದನ್ನು ದೊಡ್ಡ ಧ್ವನಿಯಿಂದ ಹೇಳಲಿಲ್ಲ!

ಬಾಪ್ದಾದಾರವರಿಗೂ ಸಹ ಈ ರಾಜ್ಯ ಸಭೆಯು ಪ್ರಿಯವೆನಿಸುತ್ತದೆ. ಆದರೂ ಪ್ರತಿನಿತ್ಯವೂ ಪರಿಶೀಲನೆ ಮಾಡಿರಿ, ತಮ್ಮ ರಾಜ್ಯ ದರ್ಬಾರನ್ನು ಪ್ರತಿನಿತ್ಯವೂ ಹಾಕುತ್ತಾ ನೋಡಿಕೊಳ್ಳಿರಿ - ಒಂದುವೇಳೆ ಯಾವುದೇ ಕರ್ಮಚಾರಿಯು ಸ್ವಲ್ಪವೇನಾದರೂ ಹುಡುಗಾಟಿಕೆಯಲ್ಲಿ ಬಂದಿತೆಂದರೆ ಏನು ಮಾಡುವಿರಿ? ಅದನ್ನು ಬಿಟ್ಟು ಬಿಡುವಿರೇ? ತಾವೆಲ್ಲರೂ ಪ್ರಾರಂಭದ ಚರಿತ್ರೆಯನ್ನು ಕೇಳಿದ್ದೀರಲ್ಲವೆ! ಒಂದುವೇಳೆ ಯಾರೇ ಚಿಕ್ಕ ಮಕ್ಕಳು ಚಂಚಲತೆ ಮಾಡುತ್ತಿದ್ದರೆಂದರೆ ಅವರಿಗೇನು ಶಿಕ್ಷೆಯನ್ನು ಕೊಡುತ್ತಿದ್ದರು? ಅವರ ಊಟ ಬಂಧ್ ಮಾಡಿ ಬಿಡುವುದು ಅಥವಾ ಹಗ್ಗದಿಂದ ಕಟ್ಟಿ ಹಾಕುವುದು- ಇದಂತು ಸಾಮಾನ್ಯವಾದ ಮಾತಾಗಿದೆ. ಆದರೆ ಅವರನ್ನು ಏಕಾಂತದಲ್ಲಿ ಕುಳಿತುಕೊಳ್ಳುವ, ಹೆಚ್ಚು ಗಂಟೆಗಳು ಕುಳಿತುಕೊಳ್ಳುವ ಶಿಕ್ಷೆಯನ್ನು ಕೊಡುತ್ತಿದ್ದರು. ಮಕ್ಕಳಲ್ಲವೆ, ಮಕ್ಕಳಂತು ಕುಳಿತುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಒಂದೇ ಸ್ಥಾನದಲ್ಲಿ ಹಲ್ಚಲ್ ಇಲ್ಲದೆಯೇ 4-5 ಗಂಟೆಗಳು ಕುಳಿತುಕೊಳ್ಳುವುದು ಎಷ್ಟೊಂದು ದೊಡ್ಡ ಶಿಕ್ಷೆಯಾಗಿದೆ. ಅಂದಾಗ ಇಂತಹ ರಾಯಲ್ ಶಿಕ್ಷೆಯನ್ನು ಕೊಡುತ್ತಿದ್ದರು. ಅಂದಾಗ ಇಲ್ಲಿಯೂ ಸಹ ಯಾವುದೇ ಕರ್ಮೇಂದ್ರಿಯವು ಹಾಗೀಗೆ ಮಾಡಿದರೆ ಅಂತರ್ಮುಖತೆಯ ಭಟ್ಟಿಯಲ್ಲಿ ಕೂರಿಸಿಬಿಡಿ. ಬಾಹರ್ಮುಖತೆಯಲ್ಲಿ ಬರಲೇಬಾರದು, ಇದೇ ಶಿಕ್ಷೆಯನ್ನು ಅದಕ್ಕೆ ಕೊಡಿ. ಬಂದಿತು ಮತ್ತೆ ಒಳಗೆ ಕಳುಹಿಸಿಬಿಡಿ. ಮಕ್ಕಳೂ ಹೀಗೆ ಮಾಡುತ್ತಾರಲ್ಲವೆ. ಮಕ್ಕಳನ್ನು ಕೂರಿಸಿರಿ ಮತ್ತೆ ಹಾಗೆಯೇ ಮಾಡುತ್ತದೆ, ಮತ್ತೆ ಕೂರಿಸಿ ಬಿಡಲಾಗುತ್ತದೆ. ಅಂದಾಗ ಇದೇ ರೀತಿಯಲ್ಲಿ ಬಾಹರ್ಮುಖತೆಯಿಂದ ಅಂತರ್ಮುಖತೆಯ ಹವ್ಯಾಸವಾಗಿ ಬಿಡುತ್ತದೆ. ಹೇಗೆ ಚಿಕ್ಕ ಮಕ್ಕಳಲ್ಲಿ ಹವ್ಯಾಸವನ್ನು ಹಾಕುತ್ತಾರಲ್ಲವೆ - ಕುಳಿತುಕೊಳ್ಳಿ, ನೆನಪು ಮಾಡಿರಿ. ಅದು ಆಸನವನ್ನು ಹಾಕುವುದುಇಲ್ಲ, ಮತ್ತೆ-ಮತ್ತೆ ತಾವು ಆಸನದಲ್ಲಿ ಕೂರಿಸುತ್ತೀರಿ. ಅದು ಎಷ್ಟೇ ಕಾಲನ್ನು ಅಲುಗಾಡಿಸಲಿ, ಅದಕ್ಕೆ ಇಲ್ಲಿ, ಹೀಗೆ ಕುಳಿತುಕೊ ಎಂದು ಹೇಳುವಿರಿ. ಹಾಗೆಯೇ ಅಂತರ್ಮುಖತೆಯ ಅಭ್ಯಾಸದ ಭಟ್ಟಿಯಲ್ಲಿ ಬಹಳ ಚೆನ್ನಾಗಿ, ದೃಡತೆಯ ಸಂಕಲ್ಪದಿಂದ ಬಂಧಿಸಿಟ್ಟು ಕೂರಿಸಿ ಬಿಡಿ. ಮತ್ತು ಹಗ್ಗವನ್ನು ಕಟ್ಟಬಾರದು ಆದರೆ ಧೃಡ ಸಂಕಲ್ಪದ ಹಗ್ಗ, ಅಂತರ್ಮುಖತೆಯ ಅಭ್ಯಾಸದ ಭಟ್ಟಿಯಲ್ಲಿ ಕೂರಿಸಿ ಬಿಡಿ. ತಾವೇ ತಮಗೆ ಶಿಕ್ಷೆಯನ್ನು ಕೊಡಿ. ಅನ್ಯರು ಕೊಟ್ಟರು ಮತ್ತೇನಾಗುತ್ತದೆ? ಅನ್ಯರೇನಾದರೂ ತಮಗೆ ಹೇಳುತ್ತಾರೆ - ಈ ತಮ್ಮ ಕರ್ಮಚಾರಿಯು ಸರಿಯಿಲ್ಲ, ಇದಕ್ಕೆ ಶಿಕ್ಷೆ ಕೊಡಿ. ಆಗ ಏನು ಮಾಡುವಿರಿ? ಸ್ವಲ್ಪವಾದರೂ ಬರುತ್ತದೆಯಲ್ಲವೆ, ಇದನ್ನೇಕೆ ಹೇಳುವುದು! ಆದರೆ ತಾವೇ ತಮಗೆ ಕೊಡುತ್ತೀರೆಂದರೆ ಸದಾಕಾಲವಿರುತ್ತದೆ. ಅನ್ಯರು ಹೇಳುವುದರಿಂದ ಸದಾಕಾಲದ್ದಾಗುವುದಿಲ್ಲ. ಅನ್ಯರ ಸೂಚನೆಯನ್ನೂ ಸಹ ಎಲ್ಲಿಯವರೆಗೆ ತಮ್ಮದನ್ನಾಗಿ ಮಾಡಿಕೊಳ್ಳುವುದಿಲ್ಲ, ಅಲ್ಲಿಯವರೆಗೆ ಸದಾಕಾಲದ್ದಾಗುವುದಿಲ್ಲ. ತಿಳಿಯಿತೆ!

ರಾಜರುಗಳು ಹೇಗಿದ್ದೀರಿ? ರಾಜ್ಯ ದರ್ಬಾರು ಚೆನ್ನಾಗಿದೆಯೆನಿಸುತ್ತಿದೆಯಲ್ಲವೆ! ಎಲ್ಲರೂ ದೊಡ್ಡ ರಾಜರಾಗಿದ್ದೀರಲ್ಲವೆ! ಚಿಕ್ಕ ರಾಜರಂತು ಅಲ್ಲ, ದೊಡ್ಡ ರಾಜರು. ಒಳ್ಳೆಯದು - ಇಂದು ಬ್ರಹ್ಮಾ ತಂದೆಯು ವಿಶೇಷವಾಗಿ ಡಬಲ್ ವಿದೇಶಿಗಳನ್ನು ನೋಡುತ್ತಾ ವಾರ್ತಾಲಾಪ ಮಾಡುತ್ತಿದ್ದರು. ಅದನ್ನು ಮತ್ತೆ ತಿಳಿಸುತ್ತೇವೆ. ಒಳ್ಳೆಯದು - ಸದಾ ಮಾಯಾಜೀತ, ಪ್ರಕೃತಿಜೀತ, ರಾಜ್ಯಾಧಿಕಾರಿ ಆತ್ಮರಿಗೆ, ಗುಣಗಳು ಹಾಗೂ ಸರ್ವ ಶಕ್ತಿಗಳ ಖಜಾನೆಗಳನ್ನು ತಮ್ಮ ಅಧಿಕಾರದಿಂದ ಕಾರ್ಯದಲ್ಲಿ ಉಪಯೋಗಿಸುವಂತಹ, ಸದಾ ಸ್ವರಾಜ್ಯದ ಮೂಲಕ ಸರ್ವ ಕರ್ಮಚಾರಿಗಳನ್ನು ಸದಾಕಾಲದ ಸ್ನೇಹಿ-ಜೊತೆಗಾರರನ್ನಾಗಿ ಮಾಡಿಕೊಳ್ಳುವಂತಹ, ಸದಾ ನಿರ್ಬಂಧನ, ಎವರೆಡಿಯಾಗಿರುವ, ಸಂತುಷ್ಟ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಆಸ್ಟ್ರೇಲಿಯಾ ಗ್ರೂಪ್ನೊಂದಿಗೆ:- ಸದಾ ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಇಡುವವರಿಗೆ ಬಾಪ್ದಾದಾ ಹಾಗೂ ಸರ್ವ ಆತ್ಮರ ಮೂಲಕ ಬ್ಲೆಸ್ಸಿಂಗ್ ತೆಗೆದುಕೊಳ್ಳುವ ಆತ್ಮರಲ್ಲವೆ! ಇದೇ ಬ್ರಾಹ್ಮಣ ಜೀವನದ ವಿಶೇಷತೆಯಾಗಿದೆ. ಅದರಿಂದ ಸದಾ ಪುರುಷಾರ್ಥದ ಜೊತೆ ಜೊತೆಗೆ ಬ್ಲೆಸ್ಸಿಂಗ್ ತೆಗೆದುಕೊಳ್ಳುತ್ತಾ ಮುಂದುವರೆಯುತ್ತಿರಿ. ಬ್ರಾಹ್ಮಣ ಜೀವನದಲ್ಲಿ ಈ ಬ್ಲೆಸ್ಸಿಂಗ್ ಒಂದು ಲಿಫ್ಟ್ ಕೆಲಸವನ್ನು ಮಾಡುತ್ತದೆ. ಇದರ ಮೂಲಕ ಹಾರುವ ಕಲೆಯ ಅನುಭವವನ್ನು ಮಾಡುತ್ತಿರುತ್ತೀರಿ.

ಆಸ್ಟ್ರೇಲಿಯಾ ನಿವಾಸಿಗಳೊಂದಿಗೆ ಬಾಪ್ದಾದಾರವರ ವಿಶೇಷ ಸ್ನೇಹವಿದೆ. ಏಕೆ? ಏಕೆಂದರೆ ಸದಾ ಒಬ್ಬರು ಅನೇಕರನ್ನು ಕರೆ ತರುವ ಸಾಹಸ ಮತ್ತು ಉಮ್ಮಂಗದಲ್ಲಿರುತ್ತಾರೆ. ಈ ವಿಶೇಷತೆಯು ತಂದೆಯವರಿಗೂ ಪ್ರಿಯವಾಗಿದೆ. ಏಕೆಂದರೆ ತಂದೆಯ ಕಾರ್ಯವೇ ಆಗಿದೆ - ಬಹಳ ಆತ್ಮರನ್ನು ಆಸ್ತಿಗೆ ಅಧಿಕಾರಿಯನ್ನಾಗಿ ಮಾಡುವುದು. ಅಂದಮೇಲೆ ಫಾಲೋಫಾದರ್ ಮಾಡುವಂತಹ ಮಕ್ಕಳು ವಿಶೇಷವಾಗಿ ಪ್ರಿಯವಾಗುತ್ತಾರಲ್ಲವೆ. ಬಂದ ಕೂಡಲೇ ಉಮ್ಮಂಗವು ಚೆನ್ನಾಗಿರುತ್ತದೆ. ಇದೊಂದು ಆಸ್ಟ್ರೇಲಿಯಾದ ಧರಣಿಗೆ ವರದಾನವೇ ಸಿಕ್ಕಿದಂತಾಗಿದೆ. ಒಬ್ಬರು ಅನೇಕರಿಗೆ ನಿಮಿತ್ತರಾಗಿ ಬಿಡುತ್ತಾರೆ. ಬಾಪ್ದಾದಾರವರಂತು ಪ್ರತೀ ಮಕ್ಕಳ ಗುಣಗಳ ಮಾಲೆಯನ್ನು ಸ್ಮರಿಸುತ್ತಿರುತ್ತಾರೆ. ಆಸ್ಟ್ರೇಲಿಯಾದ ವಿಶೇಷತೆಯೂ ಬಹಳಷ್ಟಿದೆ. ಆದರೆ ಆಸ್ಟ್ರೇಲಿಯಾದವರು ಮಾಯೆಗೂ ಸಹ ಬಹಳ ಪ್ರಿಯರಾಗಿದ್ದಾರೆ. ಯಾರು ತಂದೆಗೆ ಪ್ರಿಯರಾಗುವರು, ಅವರು ಮಾಯೆಗೂ ಪ್ರಿಯವಾಗಿ ಬಿಡುತ್ತಾರೆ. ಎಷ್ಟೊಂದು ಒಳ್ಳೊಳ್ಳೆಯವರು ಸ್ವಲ್ಪ ಸಮಯಕ್ಕಾಗಿಯೇ ಸರಿ, ಆದರೆ ಮಾಯೆಯವರಾಗಿ ಬಿಟ್ಟರಲ್ಲವೆ. ತಾವೆಲ್ಲರೂ ಆ ರೀತಿ ಕಚ್ಚಾ ಅಲ್ಲ ಅಲ್ಲವೆ! ಯಾವುದೇ ಬಂಧನದಲ್ಲಂತು ಬರುವವರಲ್ಲ ಅಲ್ಲವೆ? ಬಾಪ್ದಾದಾರವರಿಗೆ ಈಗಲೂ ಆ ಮಕ್ಕಳ ನೆನಪಿದೆ. ಕೇವಲ ಏನಾಗುತ್ತದೆ - ಯಾವುದೇ ಮಾತನ್ನು ಸಂಪೂರ್ಣವಾಗಿ ತಿಳಿಯದೇ ಇರುವ ಕಾರಣದಿಂದ ಏಕೆ ಮತ್ತು ಏನು ಎನ್ನುವುದರಲ್ಲಿ ಬಂದು ಬಿಡುತ್ತಾರೆ, ಅದರಿಂದ ಮಾಯೆಯು ಬರಲು ಬಾಗಿಲು ತೆರೆದು ಬಿಡುತ್ತದೆ. ತಾವಂತು ಮಾಯೆಯ ಬಾಗಿಲನ್ನು ತಿಳಿದಿದ್ದೀರಲ್ಲವೆ. ಅಂದಮೇಲೆ ಏಕೆ, ಏನು ಎನ್ನುವುದರಲ್ಲಿ ಹೋಗದಿರಿ ಮತ್ತು ಮಾಯೆಯು ಬರಲು ಅವಕಾಶವೇ ಸಿಗದಿರಲಿ. ಸದಾ ಡಬಲ್ ಲಾಕ್ ಹಾಕಿರಿ. ನೆನಪು ಮತ್ತು ಸೇವೆಯೇ ಡಬಲ್ ಲಾಕ್ ಆಗಿದೆ. ಕೇವಲ ಸೇವೆ ಸಿಂಗಲ್ ಲಾಕ್ ಆಗಿದೆ. ಕೇವಲ ನೆನಪು, ಸೇವೆಯಿಲ್ಲದಿದ್ದರೂ ಸಿಂಗಲ್ ಲಾಕ್ ಆಯಿತು. ಎರಡರ ಬ್ಯಾಲೆನ್ಸ್ - ಇದಾಗಿದೆ ಡಬಲ್ ಲಾಕ್. ಬಾಪ್ದಾದಾರವರ ಟಿ.ವಿ.ಯಲ್ಲಿ ತಮ್ಮ ಪೋಟೊ ತೆಗೆಯುತ್ತಿದ್ದಾರೆ, ಮತ್ತೆ ಬಾಪ್ದಾದಾರವರು ನೋಡುವರು - ಈ ಪೋಟೋದಲ್ಲಿ ತಾವಿದ್ದೀರಿ ನೋಡಿರಿ. ಒಳ್ಳೆಯದು - ಆದರೂ ಸಂಖ್ಯೆಯಲ್ಲಿ ಸಾಹಸದಿಂದ, ನಿಶ್ಚಯದಿಂದ ಒಳ್ಳೆಯ ನಂಬರ್ ಇದೆ. ತಂದೆಗೆ ಹೆಚ್ಚು ಪ್ರಿಯರೆನಿಸುತ್ತೀರಿ ಆದ್ದರಿಂದ ಮಾಯೆಯಿಂದ ಪಾರಾಗುವ ಯುಕ್ತಿಯನ್ನು ತಿಳಿಸಿದರು. ಒಳ್ಳೆಯದು.

ವರದಾನ:
ಸಂಕ್ಷಿಪ್ತಗೊಳಿಸುವ ಶಕ್ತಿಯ ಮೂಲಕ ಸೆಕೆಂಡಿನಲ್ಲಿ ಪೂರ್ಣ ವಿರಾಮವನ್ನಿಡುವಂತಹ ನಷ್ಟ ಮೋಹ ಸ್ಮೃತಿ ಸ್ವರೂಪ ಭವ.

ಅಂತ್ಯದಲ್ಲಿ ಅಂತಿಮ ಪರೀಕ್ಷೆಯ ಪ್ರಶ್ನೆಯಿರುತ್ತದೆ - ಸೆಕೆಂಡಿನಲ್ಲಿ ಪೂರ್ಣ ವಿರಾಮವನ್ನಿಡುವುದು. ಮತ್ತೇನೂ ನೆನಪಿಗೆ ಬರಬಾರದು. ತಂದೆ ಮತ್ತು ನಾನು ಅಷ್ಟೇ, ಮೂರನೆಯೇ ಮಾತೇ ಇಲ್ಲ.... ಸೆಕೆಂಡಿನಲ್ಲಿ ನನ್ನ ಬಾಬಾನ ಹೊರತು ಮತ್ತ್ಯಾರೂ ಇಲ್ಲ..... ಇದನ್ನು ಯೋಚಿಸುವುದರಲ್ಲಿಯೂ ಸಮಯವು ಹಿಡಿಸುತ್ತದೆ. ಆದರೆ ಟಿಕ್ ಆಯಿತು, ಅಲುಗಾಡಬಾರದು. ಏಕೆ, ಏನು..... ಇದ್ಯಾವುದೇ ಪ್ರಶ್ನೆಯೂ ಉತ್ಪನ್ನವಾಗಬಾರದು. ಆಗಲೇ ನಷ್ಟ ಮೋಹ ಸ್ಮೃತಿ ಸ್ವರೂಪರಾಗುವಿರಿ. ಆದ್ದರಿಂದ ಅಭ್ಯಾಸ ಮಾಡಿರಿ - ಯಾವಾಗ ಬೇಕು ವಿಸ್ತಾರದಲ್ಲಿ ಬನ್ನಿರಿ ಮತ್ತು ಯಾವಾಗ ಬೇಕು ಆಗ ಸಂಕ್ಷಿಪ್ತವಾಗಿ ಬಿಡಿ. ಬ್ರೇಕ್ ಶಕ್ತಿಶಾಲಿಯಾಗಿರಲಿ.

ಸ್ಲೋಗನ್:
ಯಾರಲ್ಲಿ ಸ್ವಮಾನ ಅಭಿಮಾನವಿಲ್ಲ, ಅವರೇ ಸದಾ ನಿರ್ಮಾಣರಾಗಿದ್ದಾರೆ.