15/10/18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ –
ಬೇಹದ್ದಿನ ಸೇವೆಗಾಗಿ ನಿಮ್ಮ ಬುದ್ಧಿಯು ಕೆಲಸ ಮಾಡಬೇಕು. ಇಂತಹ ದೊಡ್ಡ ಗಡಿಯಾರವನ್ನು ಮಾಡಿಸಿ,
ಅದರ ಮುಳ್ಳುಗಳಲ್ಲಿ ರೇಡಿಯಂ ಹಾಕಿರಲಿ, ಅದು ದೂರದಿಂದಲೇ ಹೊಳೆಯುತ್ತಿರಲಿ.”
ಪ್ರಶ್ನೆ:
ಸರ್ವೀಸಿನ
ವೃದ್ಧಿಗೋಸ್ಕರ ಯಾವ ಯುಕ್ತಿಯನ್ನು ರಚಿಸಬೇಕು?
ಉತ್ತರ:
ಯಾರ್ಯಾರೂ
ಮಹಾರಥಿ, ಬುದ್ಧಿವಂತ ಮಕ್ಕಳಿದ್ದಾರೆಯೋ ಅವರನ್ನು ತಮ್ಮ ಬಳಿ ಕರೆಸಬೇಕು, ಮಹಾರಥಿ ಮಕ್ಕಳು
ಸರ್ವೀಸಿಗಾಗಿ ಸುತ್ತಾಡುತ್ತಿರಲಿ. ಆಗ ಸೇವೆಯು ವೃದ್ಧಿಯನ್ನು ಹೊಂದುತ್ತಿರುವುದು. ಇದರಲ್ಲಿ ನಮ್ಮ
ಗೌರವವು ಕಡಿಮೆಯಾಗಿ ಬಿಡುವುದೆಂದು ತಿಳಿಯಬಾರದು. ಮಕ್ಕಳು ಎಂದಿಗೂ ದೇಹಾಭಿಮಾನದಲ್ಲಿ ಬರಬಾರದು,
ಮಹಾರಥಿಗಳಿಗೆ ಬಹಳ ಬಹಳ ಗೌರವ ಕೊಡಬೇಕು.
ಗೀತೆ:
ಈ ಸಮಯವು
ಕಳೆಯುತ್ತಿದೆ.....
ಓಂ ಶಾಂತಿ.
ಗಡಿಯಾರದ ಹೆಸರನ್ನು ಕೇಳಿದ್ದರಿಂದ ಬೇಹದ್ದಿನ ಗಡಿಯಾರದ ನೆನಪು ಬಂದಿತು. ಇದು ಬೇಹದ್ದಿನ
ಗಡಿಯಾರವಾಗಿದೆ, ಇದರಲ್ಲಿ ಎಲ್ಲವೂ ಬುದ್ಧಿಯಿಂದ ತಿಳಿಯುವ ಮಾತಾಗಿದೆ. ಅದರಲ್ಲಿಯೂ ಸಹ ದೊಡ್ಡ
ಮುಳ್ಳು ಮತ್ತು ಚಿಕ್ಕ ಮುಳ್ಳು ಇರುತ್ತದೆ. ಸೆಕೆಂಡಿನ ದೊಡ್ಡ ಮುಳ್ಳು ನಡೆಯುತ್ತಿರುತ್ತದೆ. ಈಗ
ರಾತ್ರಿಯ 12 ಗಂಟೆಯ ಸಮಯವಾಗಿದೆ ಅಂದರೆ ರಾತ್ರಿಯು ಪೂರ್ಣವಾಗಿ ಮತ್ತೆ ದಿನವು ಪ್ರಾರಂಭವಾಗಲಿದೆ.
ಈ ಬೇಹದ್ದಿನ ಗಡಿಯಾರವು ಬಹಳ ದೊಡ್ಡದಾಗಿರಬೇಕು. ಇದರ ಮುಳ್ಳುಗಳಲ್ಲಿ ರೇಡಿಯಂ ಹಾಕಿರಬೇಕು, ಅದು
ದೂರದಿಂದಲೇ ಹೊಳೆಯುತ್ತಿರಬೇಕು. ಗಡಿಯಾರವಂತೂ ತನಗೆ ತಾನೆ ತಿಳಿಸುತ್ತದೆ. ಯಾರೇ ಹೊಸಬರು ಬಂದರೆ
ಗಡಿಯಾರವನ್ನು ನೋಡಲಿ, ಅವಶ್ಯವಾಗಿ ಈಗ ಮುಳ್ಳು ಬಂದು ಅಂತ್ಯದಲ್ಲಿ ತಲುಪಿದೆ ಎಂದು ಬುದ್ಧಿಯು
ಹೇಳುತ್ತದೆ. ವಿನಾಶವು ಅವಶ್ಯವಾಗಿ ಆಗುತ್ತಿದೆ ಎಂದು ಯಾರು ಬೇಕಾದರೂ ತಿಳಿದುಕೊಳ್ಳಬಹುದಾಗಿದೆ.
ಇದರ ನಂತರ ಸತ್ಯಯುಗದ ಆದಿಯಾಗಿದೆ. ಸತ್ಯಯುಗದಲ್ಲಿ ಬಹಳ ಕಡಿಮೆ ಆತ್ಮಗಳಿರುತ್ತಾರೆ ಅಂದಾಗ
ಇಷ್ಟೆಲ್ಲಾ ಆತ್ಮಗಳು ಅವಶ್ಯವಾಗಿ ಹಿಂತಿರುಗಿ ಹೋಗುತ್ತಾರೆ. ಚಿತ್ರಗಳ ಮೂಲಕ ತಿಳಿದುಕೊಳ್ಳುವುದು
ಬಹಳ ಸಹಜವಾಗಿದೆ. ಯಾರಾದರೂ ಇಂತಹ ಗಡಿಯಾರಗಳನ್ನು ತಯಾರಿಸಿದರೆ ಬಹಳಷ್ಟು ಖರೀದಿ ಮಾಡಿ
ಮನೆಯಲ್ಲಿಟ್ಟುಕೊಳ್ಳಬೇಕು. ಇದರ ಮೇಲೆ ತಿಳಿಸಬೇಕು - ಇದು ಕಲಿಯುಗೀ ಭ್ರಷ್ಟಾಚಾರಿ ಪ್ರಪಂಚವಾಗಿದೆ,
ಅನೇಕ ಧರ್ಮಗಳೂ ಇವೆ, ವಿನಾಶವೂ ಸಮ್ಮುಖದಲ್ಲಿ ನಿಂತಿದೆ, ಪ್ರಾಕೃತಿಕ ಆಪತ್ತುಗಳೂ ಆಗಲಿವೆ. ಈಗ ಈ
ಲಕ್ಷ್ಮಿ-ನಾರಾಯಣ ಮುಂತಾದವರಿಗೂ ಸಹ ಸತ್ಯಯುಗದ ರಾಜ್ಯಭಾಗ್ಯವು ಹೇಗೆ ಸಿಕ್ಕಿತು? ಅವಶ್ಯವಾಗಿ
ತಂದೆಯ ಮುಖಾಂತರವೇ ಸಿಕ್ಕಿರಬೇಕು. ಪತಿತ-ಪಾವನ ತಂದೆಯು ಪತಿತ ಪ್ರಪಂಚದಲ್ಲಿ, ಸಂಗಮದಲ್ಲಿಯೇ
ಬರುತ್ತಾರೆ. ಪಾವನ ಪ್ರಪಂಚದಲ್ಲಂತೂ ತಂದೆಯು ಬರುವುದಿಲ್ಲ. ಈ ಗೋಲದ ಚಿತ್ರದ ಮೂಲಕ ತಿಳಿಸಿ
ಕೊಡುವುದು ಬಹಳ ಸುಂದರವಾದ ಮಾತಾಗಿದೆ ಮತ್ತು ಇದರ ಮೂಲಕ ತಿಳಿಸುವುದೂ ಬಹಳ ಸಹಜವೂ ಆಗಿದೆ. ಯಾರ ಬಳಿ
ತುಂಬಾ ಹಣವಿದೆಯೋ ಅವರು ಕಲಾಕಾರರನ್ನು ಕರೆಸಿ ಅವರಿಗೆ ಆರ್ಡರ್ ಕೊಡಿ, ಚಿತ್ರಗಳು ಬೇಗ ತಯಾರಾಗಲಿ.
ಸರ್ಕಾರದ ಕೆಲಸವಂತೂ ಬೇಗ ಮುಗಿಯುತ್ತದೆ ಆದರೆ ಇಲ್ಲಿ ಕೆಲವರೇ ಪರಿಶ್ರಮದಿಂದ ಕೆಲಸ ಮಾಡುತ್ತಾರೆ.
ಯಾರಾದರೂ ಒಳ್ಳೆಯ ಕಲಾಕಾರನು ಚಿತ್ರಗಳನ್ನು ರಚಿಸುತ್ತಾರೆಂದರೆ ಅದು ಶೋಭಿಸುತ್ತದೆ. ಇತ್ತೀಚೆಗೆ
ಕಲೆಗೆ ಬಹಳ ಮಾನ್ಯತೆಯಿದೆ. ನೃತ್ಯ ಕಲೆಯನ್ನು ಎಷ್ಟೊಂದು ತೋರಿಸುತ್ತಾರೆ, ಮೊದಲು ಇಂತಹ
ನೃತ್ಯಗಳಿದ್ದವು ಎಂದು ತಿಳಿಯುತ್ತಾರೆ ಆದರೆ ಇಂತಹವರ್ಯಾರೂ ಇಲ್ಲ. ಆದ್ದರಿಂದ ಈ ಬೇಹದ್ದಿನ
ಗಡಿಯಾರವನ್ನು ಶೀಘ್ರವಾಗಿ ತಯಾರು ಮಾಡಿಸಬೇಕು, ಅದನ್ನು ಮನುಷ್ಯರು ಒಳ್ಳೆಯ ರೀತಿಯಲ್ಲಿ
ಅರಿತುಕೊಳ್ಳುವಂತಿರಬೇಕು. ಅದರ ಬಣ್ಣವೂ ಸಹ ಚೆನ್ನಾಗಿ ಹೊಳೆಯುವಂತಿರಲಿ. ಪತಿತ ಪಾವನರಂತೂ ಯಾವುದೇ
ಮನುಷ್ಯರಾಗಿರಲು ಸಾಧ್ಯವಿಲ್ಲ. ಮನುಷ್ಯರು ಪತಿತರಾಗಿದ್ದಾರೆ. ಆದ್ದರಿಂದಲೇ ತಂದೆಯನ್ನು
ಕರೆಯುತ್ತಾರೆ. ಪಾವನ ಪ್ರಪಂಚವು ಸ್ವರ್ಗವಾಗಿದೆ. ಕೃಷ್ಣನೇ ಶ್ಯಾಮ ಮತ್ತು ಕೃಷ್ಣನೇ
ಸುಂದರನಾಗುತ್ತಾನೆ. ಆದ್ದರಿಂದಲೇ ಶ್ಯಾಮಸುಂದರನೆಂದು ಹೆಸರು ಬಂದಿದೆ ಎಂದು ಮನುಷ್ಯರು
ತಿಳಿದುಕೊಂಡಿಲ್ಲ. ನಾವೂ ಸಹ ಮೊದಲು ತಿಳಿದುಕೊಂಡಿರಲಿಲ್ಲ, ಈಗ ಬುದ್ಧಿಯಲ್ಲಿದೆ - ಅವಶ್ಯವಾಗಿ
ಕಾಮ ಚಿತೆಯ ಮೇಲೆ ಕುಳಿತುಕೊಂಡಿರುವುದರಿಂದ ಕಪ್ಪಾಗುತ್ತೇವೆ. ಆತ್ಮವು ಪತಿತವಾಗಿ ಬಿಡುತ್ತದೆ.
ಇದನ್ನೂ ಸ್ಪಷ್ಟ ಮಾಡಿ ಬರೆಯಬೇಕು. ಪರಮಪಿತ ಪರಮಾತ್ಮನು ಆಸ್ತಿಯನ್ನು ನೀಡುತ್ತಾರೆ. ಆದರೆ ರಾವಣನು
ಶಾಪವನ್ನು ಕೊಡುತ್ತಾನೆ. ಮನುಷ್ಯರ ಬುದ್ಧಿಯು ರಘುಪತಿ ರಾಘವ ರಾಜಾರಾಮನ ಕಡೆ ಹೋಗುತ್ತದೆ.
ರಾಮನೆಂದರೆ ಪರಮಪಿತ ಪರಮಾತ್ಮನಾಗಿದ್ದಾರೆ. ಇವೆಲ್ಲದರ ಕಡೆ ಬುದ್ಧಿ ಓಡಿಸಿ ಚಿತ್ರಗಳನ್ನು
ಮಾಡಿಸಬೇಕು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮನ್ನು ಭಗವಂತನೆಂದು
ಹೇಳಿಕೊಳ್ಳುತ್ತಿರುತ್ತಾರೆ. ಆದರೆ ನಿಮಗೆ ಗೊತ್ತಿದೆ - ತಂದೆಯಂತೂ ಒಬ್ಬರೇ ಆಗಿದ್ದಾರೆ ಬಾಕಿ
ನಾವೆಲ್ಲಾ ಆತ್ಮಗಳು ಪರಮಧಾಮದಲ್ಲಿ ತಂದೆಯ ಜೊತೆ ಹೋಗಿ ಇರುತ್ತೇವೆ. ಆ ಸಮಯದಲ್ಲಿ ತಂದೆಯೂ
ಬ್ರಹ್ಮಾಂಡದ ಮಾಲೀಕರು, ನಾವೂ ಬ್ರಹ್ಮಾಂಡದ ಮಾಲೀಕರಾಗಿರುತ್ತೇವೆ. ಅಂದಾಗ ತಂದೆಯು ತಿಳಿಸುತ್ತಾರೆ
- ಮಕ್ಕಳೇ, ನಾನು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ. ಭಲೆ ಯಾರು ಎಷ್ಟೇ ದೊಡ್ಡ
ರಾಜರಿರಬಹುದು ಆದರೆ ನಾವು ವಿಶ್ವದ ಮಾಲೀಕರೆಂದು ಹೇಳುವುದಿಲ್ಲ. ತಂದೆಯೂ ವಿಶ್ವದ ಮಾಲೀಕರನ್ನಾಗಿ
ಮಾಡುತ್ತಿದ್ದಾರೆ ಅಂದಮೇಲೆ ಇಂತಹ ಮಾತಾಪಿತರಿಗೆ ಎಷ್ಟೊಂದು ಬಲಿಹಾರಿಯಾಗಬೇಕು. ಅವರ ಶ್ರೀಮತವು
ಪ್ರಸಿದ್ಧವಾಗಿದೆ. ಅದರಂತೆ ನಡೆಯುತ್ತಾ-ನಡೆಯುತ್ತಾ ಅಂತ್ಯದಲ್ಲಿ ಬಂದು ಪೂರ್ಣ ಶ್ರೀಮತದ
ಪಾಲನೆಯನ್ನು ಮಾಡುತ್ತಾರೆ. ಈಗ ಒಂದುವೇಳೆ ಶ್ರೀಮತದಂತೆ ಪೂರ್ಣ ನಡೆದಿದ್ದೇ ಆದರೆ ಶ್ರೇಷ್ಠರಾಗಿ
ಬಿಡುತ್ತೀರಿ. ಆದರೆ ಈಗಂತೂ ಇಷ್ಟೊಂದು ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಎಲ್ಲಿಯವರೆಗೆ ಯಜ್ಞವು
ನಡೆಯುತ್ತದೆಯೋ ಅಲ್ಲಿಯವರೆಗೆ ಪುರುಷಾರ್ಥವು ನಡೆಯುತ್ತಾ ಇರುವುದು.
ಇದು ರುದ್ರ ಜ್ಞಾನ ಯಜ್ಞವು ಆ ಮನುಷ್ಯರೂ ಸಹ ಶಾಂತಿಗಾಗಿ ರುದ್ರ ಯಜ್ಞವನ್ನು ರಚಿಸುತ್ತಾರೆ.
ಅದರಿಂದಂತೂ ಶಾಂತಿಯು ನೆಲೆಸಲು ಸಾಧ್ಯವಿಲ್ಲ. ತಂದೆಯದು ಒಂದೇ ಯಜ್ಞವಾಗಿದೆ, ಇದರಲ್ಲಿ ಎಲ್ಲಾ
ಸಾಮಗ್ರಿಗಳು ಸ್ವಾಹಾ ಆಗಿ ಬಿಡುತ್ತವೆ ಮತ್ತು ಸೆಕೆಂಡಿನಲ್ಲಿ ಜೀವನ್ಮುಕ್ತಿಯು ಸಿಗುತ್ತದೆ.
ಮನುಷ್ಯರು ಎಷ್ಟೇ ಯಜ್ಞಗಳು ರಚಿಸಲಿ, ಅದರಿಂದೇನೂ ಪ್ರಯೋಜನವಿಲ್ಲ. ನೀವು ಮಕ್ಕಳು
ಅಹಿಂಸಕರಾಗಿದ್ದೀರಿ, ಪವಿತ್ರತೆಯಿಲ್ಲದೇ ಯಾರೂ ಸಹ ಸ್ವರ್ಗದಲ್ಲಿ ಹೋಗಲು ಸಾಧ್ಯವಿಲ್ಲ. ಇದು
ಅಂತಿಮ ಸಮಯವಾಗಿದೆ. ಪತಿತ ಪ್ರಪಂಚ, ಭ್ರಷ್ಟಾಚಾರಿ ರಾವಣನ ಪ್ರಪಂಚ, 100% ಅಪವಿತ್ರತೆ, ಅಶಾಂತಿ,
ದುಃಖಿ, ರೋಗಿ..... ಇವೆಲ್ಲವನ್ನೂ ಚಿತ್ರದಲ್ಲಿ ಬರೆಯಬೇಕು ಮತ್ತೆ ಸ್ವರ್ಗದಲ್ಲಿ ಶ್ರೇಷ್ಠಾಚಾರಿ
100% ಪವಿತ್ರತೆ, ಸುಖ, ಶಾಂತಿ, ನಿರೋಗಿ. ಅದು ರಾವಣನ ಶಾಪವಾಗಿದೆ, ಇದು ಶಿವ ತಂದೆಯ ಆಸ್ತಿಯಾಗಿದೆ
ಎಂದು ಸ್ಪಷ್ಟ ಬರವಣಿಗೆಯಿರಬೇಕು. ಭಾರತವು ಈ ಸಮಯದಿಂದ ಈ ಸಮಯದವರೆಗೆ ಶ್ರೇಷ್ಠಾಚಾರಿಯಾಗಿತ್ತು, ಈ
ಸಮಯದಿಂದ ಭ್ರಷ್ಟಾಚಾರಿಯಾಗಿದೆ. ಬರವಣಿಗೆಯು ನೋಡುತ್ತಿದ್ದಂತೆಯೇ ಅರ್ಥ ಮಾಡಿಕೊಳ್ಳುವಂತಿರಬೇಕು.
ತಿಳಿಸುವುದರಿಂದಲೂ ಬುದ್ಧಿಯಲ್ಲಿ ನಶೆಯೇರುವುದು. ಈ ವ್ಯವಹಾರದಲ್ಲಿರುವುದರಿಂದ ಅಭ್ಯಾಸವೂ ಆಗಿ
ಬಿಡುವುದು. ಹೇಗೆ ಆ ಸೇವೆಯನ್ನು 8 ಗಂಟೆಗಳ ಕಾಲ ಮಾಡುತ್ತೀರಿ ಅಂದಮೇಲೆ ಇದನ್ನೂ 8 ಗಂಟೆಗಳ ಸಮಯ
ಮಾಡಬೇಕು. ಸೇವಾಕೇಂದ್ರದಲ್ಲಿರುವ ಮಕ್ಕಳಲ್ಲಿಯೂ ನಂಬರ್ವಾರ್ ಇದ್ದಾರೆ. ಕೆಲವರಿಗೆ ಸರ್ವೀಸಿನ
ಆಸಕ್ತಿಯಿರುತ್ತದೆ. ಅಲ್ಲಿ-ಇಲ್ಲಿ ಓಡುತ್ತಿರುತ್ತಾರೆ. ಇನ್ನೂ ಕೆಲವರು ಒಂದೇ ಸ್ಥಾನದಲ್ಲಿ ಕುಳಿತು
ಬಿಡುತ್ತಾರೆ, ಅವರನ್ನು ಆಲ್ರೌಂಡರ್ ಎಂದು ಹೇಳುವುದಿಲ್ಲ. ಮಹಾರಥಿಗಳಂತೂ ಏನನ್ನೂ
ತಿಳಿದುಕೊಂಡಿಲ್ಲವೆಂದರೆ ಸೇವೆಯು ನಿಧಾನವಾಗಿ ಬಿಡುತ್ತದೆ, ಅನೇಕರಿಗೆ ತಮ್ಮ ಅಹಂಕಾರವಿರುತ್ತದೆ.
ನಮಗೆ ಗೌರವ ಸಿಗಲಿ, ಅನ್ಯರು ಬಂದರೆ ನಮ್ಮ ಗೌರವವು ಕಡಿಮೆಯಾಗಿ ಬಿಡುವುದು ಎಂದು
ತಿಳಿದುಕೊಳ್ಳುತ್ತಾರೆ. ಆದರೆ ಮಹಾರಥಿಗಳಂತೂ ನಮಗೆ ಸಹಯೋಗವೇ ನೀಡುತ್ತಾರೆಂಬುದನ್ನು
ತಿಳಿದುಕೊಳ್ಳುವುದಿಲ್ಲ. ತಮ್ಮ ಅಹಂಕಾರವಿರುತ್ತದೆ. ತಂದೆಯು ತಿಳಿಸುತ್ತಾರೆ – ಸತ್ಯ ಹೃದಯದವರಿಗೆ
ಪ್ರಭು ಪ್ರಸನ್ನರಾಗುತ್ತಾರೆ. ತಂದೆಯ ಬಳಿ ಸಮಾಚಾರವಂತೂ ಬರುತ್ತಿರುತ್ತದೆ. ತಂದೆಯು ಪ್ರತಿಯೊಬ್ಬರ
ನಾಡಿಯನ್ನು ತಿಳಿದುಕೊಳ್ಳುತ್ತಾರೆ. ಈ ಬ್ರಹ್ಮಾಬಾಬಾರವರೂ ಸಹ ಅನುಭವಿಯಾಗಿದ್ದಾರೆ.
ಈ ಗೋಲದ ಚಿತ್ರದ ವಿವರಣೆಯು ಬಹಳ ಚೆನ್ನಾಗಿದೆ. ಈ ವಿವರಣೆಯು ಚೆನ್ನಾಗಿದ್ದರೆ ನಿಮ್ಮ ಸೇವೆಯು ಬಹಳ
ಒಳ್ಳೆಯ ವಿಹಂಗ ಮಾರ್ಗದ್ದಾಗಿ ಬಿಡುವುದು. ಈಗಂತೂ ಇರುವೆ ಸಮಾನದ ಸರ್ವೀಸ್ ಆಗಿದೆ. ತಮ್ಮದೇ ಆದ
ದೇಹಾಭಿಮಾನದಲ್ಲಿರುತ್ತಾರೆ ಆದ್ದರಿಂದ ಬುದ್ಧಿಯು ಕೆಲಸ ಮಾಡುವುದಿಲ್ಲ. ಈಗ ಇದು ವಿಹಂಗ ಮಾರ್ಗದ
ಸೇವೆಯಾಗಬೇಕು. ಏನೇನನ್ನು ಮಾಡಿಸಬೇಕೆಂದು ಬುದ್ಧಿವಂತ ಮಕ್ಕಳ ಬುದ್ಧಿಯು ಓಡುತ್ತಿರುವುದು.
ಚಿತ್ರಗಳ ಮೂಲಕ ತಿಳಿಸುವುದು ಬಹಳ ಚೆನ್ನಾಗಿದೆ. ಈಗ ಕಲಿಯುಗವಿದೆ, ಸತ್ಯಯುಗವು ಸ್ಥಾಪನೆಯಾಗುತ್ತದೆ.
ತಂದೆಯೇ ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಸುಖವಿರುತ್ತದೆ, ಇಲ್ಲಿ
ದುಃಖವಿರುತ್ತದೆ. ಎಲ್ಲರೂ ಪತಿತರಾಗಿದ್ದಾರೆ. ಪತಿತ ಮನುಷ್ಯರು ಯಾರಿಗೂ
ಮುಕ್ತಿ-ಜೀವನ್ಮುಕ್ತಿಯನ್ನು ಕೊಡಲು ಸಾಧ್ಯವಿಲ್ಲ. ಇವರೆಲ್ಲರೂ ಭಕ್ತಿಮಾರ್ಗದ ಕಾರೋಬಾರ್
ನಡೆಸುವುದನ್ನು ಕಲಿಸುವವರಾಗಿದ್ದಾರೆ, ಗುರುಗಳೆಲ್ಲರೂ ಭಕ್ತಿ ಮಾರ್ಗದವರಾಗಿದ್ದಾರೆ. ಜ್ಞಾನ
ಮಾರ್ಗದ ಗುರುಗಳು ಯಾರೂ ಇಲ್ಲ. ತುಂಬಾ ಪರಿಶ್ರಮ ಪಡಬೇಕಾಗುತ್ತದೆ. ಭಾರತವನ್ನು ಸ್ವರ್ಗವನ್ನಾಗಿ
ಮಾಡುವುದರಲ್ಲಿ ಚಮತ್ಕಾರದ ಆಟವಾಗಿದೆಯಲ್ಲವೆ. ಆದುದರಿಂದ ತಂದೆಯನ್ನು ಜಾದೂಗಾರನೆಂದು ಹೇಳುತ್ತಾರೆ.
ಕೃಷ್ಣನ್ನನೆಂದೂ ಜಾದುಗಾರನೆಂದು ಹೇಳುವುದಿಲ್ಲ. ಕೃಷ್ಣನನ್ನೂ ಸದಾ ಶ್ಯಾಮನಿಂದ ಸುಂದರನನ್ನಾಗಿ
ಮಾಡುವವರು ತಂದೆಯಾಗಿದ್ದಾರೆ. ತಿಳಿಸಿಕೊಡಲು ಬಹಳ ನಶೆಯಿರಬೇಕು. ಹೊರಗೆ ಹೋಗಬೇಕು, ಬಡವರೆ
ಜ್ಞಾನವನ್ನು ಚೆನ್ನಾಗಿ ತೆಗೆದುಕೊಳ್ಳುತ್ತಾರೆ. ಸಾಹುಕಾರರಲ್ಲಿ ಭರವಸೆಯು ಕಡಿಮೆಯಿರುತ್ತದೆ. 100
ಜನ ಬಡವರಿದ್ದರೆ ಒಬ್ಬರು ಅಥವಾ ಇಬ್ಬರೊ ಸಾಹುಕಾರರು, 5 ಅಥವಾ 7 ಜನ ಸಾಧಾರಣ ವ್ಯಕ್ತಿಗಳು
ಬರುತ್ತಾರೆ. ಹೀಗೆಯೇ ಕೆಲಸ ನಡೆಯುತ್ತದೆ. ಹಣದ ಅಷ್ಟೊಂದು ಅವಶ್ಯಕತೆಯೇನು ಇರುವುದಿಲ್ಲ.
ಸರ್ಕಾರದವರು ನೋಡಿ, ಎಷ್ಟೊಂದು ಸಿಡಿ ಮದ್ದುಗಳನ್ನು ತಯಾರಿಸಿದ್ದಾರೆ. ವಿನಾಶವಾಗಿ ಬಿಡುವುದು,
ನಾವು ವಿನಾಶ ಹೊಂದುತ್ತೇವೆ ಎಂದು ಇಬ್ಬರೂ ತಿಳಿಯುತ್ತಾರೆ, ಆಗ ಬೆಕ್ಕಿಗೆ ಚೆಲ್ಲಾಟ
ಯಾರಿಗಾಗುತ್ತದೆ? ಕಥೆಯಿದೆಯಲ್ಲವೆ - ಎರಡು ಬೆಕ್ಕುಗಳು ಬೆಣ್ಣೆಗಾಗಿ ಕಚ್ಚಾಡುತ್ತಿದ್ದವು,
ಮಧ್ಯದಲ್ಲಿ ಅದು ಮಂಗನಿಗೆ ಸಿಕ್ಕಿ ಬಿಟ್ಟಿತು. ಕೃಷ್ಣನ ಬಾಯಲ್ಲಿ ಬೆಣ್ಣೆಯನ್ನು ತೋರಿಸುತ್ತಾರೆ,
ಇದು ಸ್ವರ್ಗರೂಪಿ ಬೆಣ್ಣೆಯಾಗಿದೆ. ಕೆಲವರೇ ವಿರಳವಾಗಿ ತಿಳಿದುಕೊಳ್ಳುತ್ತಾರೆ. ಇಲ್ಲಿ 20-25
ವರ್ಷ ಇರುವವರೂ ಸಹ ಏನನ್ನೂ ತಿಳಿದುಕೊಳ್ಳುವುದಿಲ್ಲ. ಪ್ರಾರಂಭದಲ್ಲಿ ಭಟ್ಟಿಯಿತ್ತು, ಆದರೆ
ಅದರಲ್ಲಿ ಅನೇಕರು ಹೊರಟು ಹೋದರು. ಕೆಲವರಷ್ಟೆ ನಿಂತರು. ನಾಟಕದಲ್ಲಿ ಕಲ್ಪದ ಹಿಂದೆಯೂ ಆಗಿತ್ತು,
ಈಗಲೂ ಆಗುತ್ತಿದೆ. ಚಿತ್ರಗಳು ಎಷ್ಟು ದೊಡ್ಡದಾಗಿರುವವೋ ಅಷ್ಟೂ ಅನ್ಯರಿಗೆ ತಿಳಿಸಲು ಸಹಜವಾಗುವುದು.
ಲಕ್ಷ್ಮಿ-ನಾರಾಯಣ ಚಿತ್ರವೂ ಅವಶ್ಯವಾಗಿದೆ. ವೃಕ್ಷದ ಚಿತ್ರದಲ್ಲಿಯೂ ಭಕ್ತಿಯು ಯಾವಾಗಿನಿಂದ
ಪ್ರಾರಂಭವಾಗುತ್ತದೆ, ಬ್ರಹ್ಮನ ರಾತ್ರಿ 2 ಯುಗ ಮತ್ತು ಬ್ರಹ್ಮನ ರಾತ್ರಿ 2 ಯುಗಗಳಾಗಿದೆ ಎಂದು
ತಿಳಿಯುತ್ತದೆ. ಮನುಷ್ಯರಂತೂ ತಿಳಿದುಕೊಂಡಿಲ್ಲ. ಮತ್ತೆ ಬ್ರಹ್ಮಾ ಸೂಕ್ಷ್ಮವತದಲ್ಲಿದ್ದಾರೆಂದು
ಹೇಳುತ್ತಾರೆ ಆದರೆ ಪ್ರಜಾಪಿತನಂತೂ ಅವಶ್ಯವಾಗಿ ಇಲ್ಲಿಯೇ ಇರಬೇಕು. ಇವು ಎಷ್ಟೊಂದು ಗುಹ್ಯ
ರಹಸ್ಯಗಳಾಗಿವೆ. ಇವು ಶಾಸ್ತ್ರಗಳಲ್ಲಿರಲು ಸಾಧ್ಯವಿಲ್ಲ. ಮನುಷ್ಯರು ಎಲ್ಲಾ ಉಲ್ಟಾ ಚಿತ್ರಗಳನ್ನು
ಮಾಡಿದ್ದಾರೆ, ಉಲ್ಟಾ ಜ್ಞಾನವನ್ನು ಕೇಳಿದ್ದಾರೆ. ಬ್ರಹ್ಮನಿಗೂ ಬಹಳಷ್ಟು ಭುಜಗಳನ್ನು
ತೋರಿಸಿದ್ದಾರೆ. ಯಾವುದೆಲ್ಲಾ ಶಾಸ್ತ್ರ ಮೊದಲಾದುವುಗಳಿವೆಯೋ ಇವೆಲ್ಲವೂ ಭಕ್ತಿಮಾರ್ಗದ
ಸಾಮಗ್ರಿಯಾಗಿದೆ. ಇದು ಯಾವಾಗಿನಿಂದ ಪ್ರಾರಂಭವಾಗುತ್ತದೆ ಎಂದು ಪ್ರಪಂಚದವರು ತಿಳಿದುಕೊಂಡಿಲ್ಲ.
ಮನುಷ್ಯರು ಎಷ್ಟೊಂದು ಭಕ್ತಿ ಮಾಡುತ್ತಾರೆ. ಭಕ್ತಿಯಿಲ್ಲದೆ ಭಗವಂತನು ಸಿಗಲು ಸಾಧ್ಯವಿಲ್ಲ. ಆದರೆ
ಯಾವಾಗ ಪೂರ್ಣ ದುರ್ಗತಿಯಾಗುವುದೋ ಆಗಲೇ ಸದ್ಗತಿಗಾಗಿ ಭಗವಂತನು ಸಿಗುವರು. ಇದರ ಲೆಕ್ಕವನ್ನು
ತಿಳಿದುಕೊಂಡಿದ್ದೀರಿ. ಅರ್ಧ ಕಲ್ಪದಿಂದ ಭಕ್ತಿಯು ಪ್ರಾರಂಭವಾಗುತ್ತದೆ - ಈ ವೇದ-ಉಪನಿಷತ್ತು,
ಯಜ್ಞ-ತಪ ಮೊದಲಾದುವುಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಇವೆಲ್ಲವೂ ಸಮಾಪ್ತಿಯಾಗಲಿವೆ. ಎಲ್ಲರೂ
ಕಪ್ಪಾಗಲೇಬೇಕು ಮತ್ತು ಸುಂದರರನ್ನಾಗಿ ಮಾಡಲು ತಂದೆಯು ಬರಬೇಕಾಗುತ್ತದೆ. ನಾನು ಪ್ರತೀ ಕಲ್ಪದ
ಸಂಗಮದ ಯುಗ-ಯುಗದಲ್ಲಿ ಬರುತ್ತೇನೆ, ಯುಗ-ಯುಗಗಳಲ್ಲಲ್ಲ. ಮೀನು-ಮೊಸಳೆಯ ಅವತಾರ, ಪರಶುರಾಮನ
ಅವತಾರವೆಂದು ತೋರಿಸುತ್ತಾರೆ, ಇವು ಭಗವಂತನ ಅವತಾರಗಳಾಗಿವೆ ಎಂದು ತೋರಿಸುತ್ತಾರೆ. ಅಂದಮೇಲೆ ಮತ್ತೆ
ಕಲ್ಲು ಮುಳ್ಳುಗಳಲ್ಲಿ ಭಗವಂತನಿರಲು ಹೇಗೆ ಸಾಧ್ಯ. ಮನುಷ್ಯರು ಬುದ್ಧಿಹೀನರಾಗಿ ಬಿಟ್ಟಿದ್ದಾರೆ.
ತಂದೆಯು ಬಂದು ಎಷ್ಟೊಂದು ಬುದ್ಧಿವಂತರನ್ನಾಗಿ ಮಾಡಿದ್ದಾರೆ. ಪರಮಪಿತ ಪರಮಾತ್ಮನು ಜ್ಞಾನಸಾಗರ,
ಪವಿತ್ರತೆಯ ಸಾಗರನಾಗಿದ್ದಾರೆಂದು ಮಹಿಮೆಯನ್ನು ಮಾಡಬೇಕಾಗುತ್ತದೆ. ಕೃಷ್ಣನಿಗೆ ಈ ಮಹಿಮೆಯಿರಲು
ಸಾಧ್ಯವಿಲ್ಲ. ಕೃಷ್ಣನ ಭಕ್ತರು ಕೃಷ್ಣನಿಗಾಗಿ ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ, ಕೃಷ್ಣನನ್ನೇ
ಹಿಡಿದುಕೊಳ್ಳುತ್ತಾರೆ. ಅವರಿಂದ ಬಿಡಿಸಿ ತಂದೆಯು ತಮ್ಮ ಪರಿಚಯವನ್ನು ಕೊಡುತ್ತಾರೆ. ಎಲ್ಲಾ
ಆತ್ಮಗಳು ಸಹೋದರ-ಸಹೋದರರಾಗಿದ್ದಾರೆ, ಎಲ್ಲರೂ ತಂದೆಯಾಗಲು ಸಾಧ್ಯವಿಲ್ಲ. ಎಲ್ಲರೂ ತಂದೆಯರಾದರೆ
ಯಾರನ್ನು ನೆನಪು ಮಾಡುತ್ತೀರಿ. ಪರಮಪಿತ ಪರಮಾತ್ಮನನ್ನು ಮಕ್ಕಳು ನೆನಪು ಮಾಡುತ್ತಾರೆ, ತಿಳಿಸಿ
ಕೊಡುವವರೂ ಸಹ ಬೇಹದ್ದಿನ ಬುದ್ಧಿಯವರಾಗಬೇಕು. ಮಕ್ಕಳ ಬುದ್ಧಿಯು ಹದ್ದಿನಲ್ಲಿ ಸಿಕ್ಕಿಕೊಳ್ಳುತ್ತದೆ.
ಒಂದು ಸ್ಥಾನದಲ್ಲಿಯೇ ಕುಳಿತು ಬಿಡುತ್ತಾರೆ. ಯಾರು ವ್ಯಾಪಾರಿಗಳಿರುತ್ತಾರೆಯೋ ಅವರು ದೊಡ್ಡ-ದೊಡ್ಡ
ಕಛೇರಿಗಳನ್ನು ತೆರೆಯುತ್ತಾರೆ. ಯಾರೆಷ್ಟು ಕಛೇರಿಗಳನ್ನು ತೆರೆಯುವರೋ ಅವರು ಒಳ್ಳೆಯ ಮ್ಯಾನೇಜರ್
ಆಗಿರುತ್ತಾರೆ. ನಂತರ ಆ ಕಛೇರಿಯ ಮೇಲೂ ಆಧಾರಿತವಾಗಿರುತ್ತದೆ ಆದರೆ ಇದು ಅವಿನಾಶಿ ಜ್ಞಾನ ರತ್ನಗಳ
ಅಂಗಡಿಯಾಗಿದೆ. ಯಾರ ಅಂಗಡಿ? ಜ್ಞಾನ ಸಾಗರನದು. ಕೃಷ್ಣನಲ್ಲಂತೂ ಈ ಜ್ಞಾನವಿರಲಿಲ್ಲ, ಆ ಸಮಯದಲ್ಲಿ
ಯುದ್ಧವೂ ನಡೆಯಲಿಲ್ಲ. ಅಂಶಗಳಂತೂ ಬಹಳ ಇವೆ, ಅವನ್ನು ಧಾರಣೆ ಮಾಡಿ ತಿಳಿಸಬೇಕಾಗಿದೆ. ಸಭೆಯಲ್ಲಿ
ಚಿತ್ರಗಳನ್ನಿಟ್ಟಿರಬೇಕು, ಅವನ್ನು ಎಲ್ಲರೂ ನೋಡುವಂತಿರಬೇಕು. ಈ ಗಡಿಯಾರದ ಚಿತ್ರವು (ಸೃಷ್ಟಿಚಕ್ರ)
ಬಹಳ ಚೆನ್ನಾಗಿದೆ. ಈ ಚಕ್ರವನ್ನು ತಿಳಿದುಕೊಳ್ಳುವುದರಿಂದ ಚಕ್ರವರ್ತಿಗಳಾಗುತ್ತೀರಿ. ಸ್ವದರ್ಶನ
ಚಕ್ರಧಾರಿಗಳಾಗಬೇಕಾಗಿದೆ. ಗಡಿಯಾರದ ಚಿತ್ರದ ಮೂಲಕ ತಿಳಿಸುವುದು ಬಹಳ ಸಹಜವಾಗಿದೆ. ಎಷ್ಟೊಂದು
ಹಳೆಯ ಮಕ್ಕಳೂ ಸಹ ಯೋಗ್ಯರಾಗುವುದೇ ಇಲ್ಲ. ತಾವೇ ಸರಿಯೆಂದು ತಿಳಿದು ಕುಳಿತುಕೊಳ್ಳುತ್ತಾರೆ,
ಅರ್ಥವಿಲ್ಲದೆ ಖುಷಿ ಪಡುತ್ತಾರೆ. ಸರ್ವೀಸನ್ನೇ ಮಾಡದಿದ್ದರೆ ಇವರು ದಾನಿಯಾಗಿದ್ದಾರೆಂದು ಯಾರು
ತಿಳಿಯುತ್ತಾರೆ! ದಾನವನ್ನೂ ಸಹ ಅತ್ಯಮೂಲ್ಯವಾದ ನಾಣ್ಯಗಳನ್ನು ಮಾಡಬೇಕೋ ಅಥವಾ ನಯಾಪೈಸೆಯದ್ದನ್ನು
ಮಾಡಬೇಕೋ? ಈ ಚಿತ್ರಗಳು ಕುರುಡರ ಮುಂದೆ ಕನ್ನಡಿಯಾಗಿದೆ. ಕನ್ನಡಿಯಲ್ಲಿ ತಮ್ಮ ಮುಖವನ್ನು
ನೋಡಿಕೊಳ್ಳುತ್ತಾರೆ. ಮೊದಲು ಮಂಗನ ಮುಖವಾಗಿತ್ತು, ಈಗ ಮಂದಿರಕ್ಕೆ ಯೋಗ್ಯ ಮುಖವಾಗುತ್ತಿದೆ.
ಮಂದಿರದಲ್ಲಿರಲು ಯೋಗ್ಯರಾಗುವಂತಹ ಪುರುಷಾರ್ಥ ಮಾಡಬೇಕು. ಇದು ಪತಿತ ಪ್ರಪಂಚವಾಗಿದೆ, ಅದು ಪಾವನ
ಪ್ರಪಂಚವಾಗಿದೆ, ಅದನ್ನು ಶಿವ ತಂದೆಯು ಸ್ಥಾಪನೆ ಮಾಡುತ್ತಿದ್ದಾರೆ. ಯಾರು ಶ್ರೀಮತದಂತೆ
ನಡೆಯುವುದಿಲ್ಲವೋ ಅವರ ಬುದ್ಧಿಯಲ್ಲೆಂದೂ ಧಾರಣೆಯಾಗಲು ಸಾಧ್ಯವಿಲ್ಲ. ದಿನ-ಪ್ರತಿದಿನ ನಿಮಗೆ
ಗುಹ್ಯ ರಹಸ್ಯಗಳನ್ನು ತಿಳಿಸುತ್ತೇನೆ. ಅದರಿಂದ ಅವಶ್ಯವಾಗಿ ಜ್ಞಾನದ ವೃದ್ಧಿಯಾಗುತ್ತಾ
ಹೋಗುವುದೆಂದು ತಂದೆಯು ತಿಳಿಸುತ್ತಾರೆ.
ಕೆಲ ಕೆಲವರಿಗೆ ಪ್ರಶ್ನೆ ಉದ್ಭವಿಸುತ್ತದೆ - 8 ಸಿಂಹಾಸನಗಳು ಹೇಗೆ ನಡೆಯುತ್ತವೆ? ಈ ಲೆಕ್ಕದಿಂದ
ಎಷ್ಟು ಸಿಂಹಾಸನಗಳಿರಬೇಕು. ತಂದೆಯು ತಿಳಿಸುತ್ತಾರೆ - ನೀವು ಈ ಮಾತುಗಳಲ್ಲಿ ಏಕೆ ಹೋಗುತ್ತೀರಿ.
ಮೊದಲು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ಅಲ್ಲಿಯ ಯಾವ ಸಂಪ್ರದಾಯವಿರುವುದೋ ಅದೇ ನಡೆಯುವುದು.
ಮಕ್ಕಳು ಹೇಗೆ ಜನ್ಮ ಪಡೆಯಬೇಕಾಗಿದೆಯೋ ಅದೇ ರೀತಿ ಪಡೆಯುತ್ತಾರೆ, ಇದರಲ್ಲಿ ನೀವೇಕೆ ಹೋಗುತ್ತೀರಿ.
ವಿಕಾರದ ಮಾತನ್ನು ಬಾಯಲ್ಲೇಕೆ ತರುತ್ತೀರಿ? ಈ ಚಿತ್ರಗಳನ್ನು ಅನ್ಯರಿಗೆ ಉಡುಗೊರೆಯಾಗಿ ಕೊಡಲು ಬಹಳ
ಚೆನ್ನಾಗಿದೆ. ಇದು ಈಶ್ವರೀಯ ಉಡುಗೊರೆಯಾಗಿದೆ. ಇಂತಹ ಈಶ್ವರೀಯ ಉಡುಗೊರೆಯನ್ನು ಯಾರು ತೆಗೆದುಕೊಂಡು
ಹೋಗುವುದಿಲ್ಲ ಕ್ರಿಶ್ಚಿಯನ್ನರು ಮತ್ತ್ಯಾರ ಪುಸ್ತಕಗಳನ್ನು ತೆಗೆದುಕೊಳ್ಳುವುದಿಲ್ಲ, ಅವರಿಗೆ
ತಮ್ಮ ಧರ್ಮದ ನಶೆಯಿರುತ್ತದೆ. ತಂದೆಯಂತೂ ತಿಳಿಸುತ್ತಾರೆ – ದೇವತಾ ಧರ್ಮವು ಎಲ್ಲದಕ್ಕಿಂತ
ಶ್ರೇಷ್ಠವಾಗಿದೆ. ಮನುಷ್ಯರಂತೂ ನಮಗೆ ಕ್ರಿಶ್ಚಿಯನ್ನರಿಂದ ಬಹಳ ಹಣವು ಸಿಗುತ್ತದೆ ಎಂದು
ತಿಳಿಯುತ್ತಾರೆ. ಆದರೆ ಇದಂತೂ ಜ್ಞಾನದ ಮಾತುಗಳಾಗಿವೆ. ಯಾರು ಜ್ಞಾನವನ್ನು ತಿಳಿಯುತ್ತಾರೆಯೋ ಅವರೇ
ತಂದೆಯಿಂದ ಆಸ್ತಿಯನ್ನು ಪಡೆಯುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ
ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ವಿಶ್ವದ
ಮಾಲೀಕರನ್ನಾಗಿ ಮಾಡುವಂತಹ ಮಾತಾಪಿತರಿಗೆ ಹೃದಯ ಪೂರ್ವಕವಾಗಿ ಬಲಿಹಾರಿಯಾಗಬೇಕಾಗಿದೆ. ಅವರ
ಶ್ರೀಮತದಂತೆ ಒಳ್ಳೆಯ ರೀತಿಯಿಂದ ನಡೆದು ಶ್ರೇಷ್ಠರಾಗಬೇಕಾಗಿದೆ.
2. ತಮ್ಮ ಹೃದಯವನ್ನು ಸದಾ ಸತ್ಯವನ್ನಾಗಿಟ್ಟುಕೊಳ್ಳಬೇಕಾಗಿದೆ. ಅಹಂಕಾರದಲ್ಲಿ ಬರಬಾರದಾಗಿದೆ.
ಅಮೂಲ್ಯ ಜ್ಞಾನದ ನಾಣ್ಯಗಳ ದಾನ ಮಾಡಬೇಕಾಗಿದೆ. ಜ್ಞಾನ ದಾನ ಮಾಡುವುದರಲ್ಲಿ ಮಹಾರಥಿಯಾಗಬೇಕಾಗಿದೆ.
ಅವಶ್ಯವಾಗಿ 8 ಗಂಟೆಗಳ ಸಮಯ ಈಶ್ವರೀಯ ಸೇವೆಯನ್ನು ಮಾಡಬೇಕಾಗಿದೆ.
ವರದಾನ:
ತಮ್ಮ
ಜವಾಬ್ದಾರಿಗಳ ಎಲ್ಲಾ ಹೊರೆಯನ್ನು ತಂದೆಗೆ ಕೊಟ್ಟು ಸದಾ ನಿಶ್ಚಿಂತರಾಗಿರುವಂತಹ ಸಫಲತಾ ಸಂಪನ್ನ
ಸೇವಾಧಾರಿ ಭವ.
ಯಾವ ಮಕ್ಕಳು
ಸ್ವಯಂ ಎಷ್ಟು ಹಗುರರಾಗಿರುತ್ತಾರೆ, ಅಷ್ಟೇ ಸೇವೆ ಮತ್ತು ಸ್ವಯಂ ಸದಾ ಮೇಲೆ ಏರುತ್ತಿರುತ್ತಾರೆ
ಅರ್ಥಾತ್ ಉನ್ನತಿಯನ್ನು ಹೊಂದುತ್ತಿರುತ್ತಾರೆ. ಆದ್ದರಿಂದ ಎಲ್ಲಾ ಜವಾಬ್ದಾರಿಗಳ ಹೊರೆಯನ್ನು
ತಂದೆಗೆ ಕೊಟ್ಟು ಸ್ವಯಂ ನಿಶ್ಚಿಂತರಾಗಿರಿ. ಯಾವುದೇ ಪ್ರಕಾರದ ನನ್ನತನದ ಹೊರೆ ಇರಬಾರದು. ಕೇವಲ
ನೆನಪಿನ ನಶೆಯಲ್ಲಿರಿ. ತಂದೆಯ ಜೊತೆ ಕಂಬೈಂಡ್ ಆಗಿರಿ ಆಗ ಎಲ್ಲಿ ತಂದೆ ಇದ್ದಾರೆ ಅಲ್ಲಿ ಸೇವೆ
ಸ್ವತಃ ಆಗೇ ಇರುವುದು. ಮಾಡಿಸುವಂತಹವರು ಮಾಡಿಸುತ್ತಿದ್ದಾರೆ ಆದ್ದರಿಂದ ಹಗುರವಾಗಿಯೂ ಇರುವಿರಿ
ಮತ್ತು ಸಫಲತಾ ಸಂಪನ್ನ ಸಹಾ ಆಗಿ ಬಿಡುವಿರಿ.
ಸ್ಲೋಗನ್:
ಬೇಹದ್ದಿನ
ಡ್ರಾಮದ ಪ್ರತಿ ದೃಶ್ಯವನ್ನು ನಿಶ್ಚಿತ ಎಂದು ತಿಳಿದು ಸದಾ ನಿಶ್ಚಿಂತರಾಗಿರಿ.