20.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಪ್ರಶ್ನೆಗಳಲ್ಲಿ ತಬ್ಬಿಬ್ಬಾಗುವುದನ್ನು ಬಿಟ್ಟು ಮನ್ಮನಾಭವ ಆಗಿರಿ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ಪವಿತ್ರರಾಗಿ ಮತ್ತು ಅನ್ಯರನ್ನು ಪವಿತ್ರರನ್ನಾಗಿ ಮಾಡಿ.”

ಪ್ರಶ್ನೆ:
ಶಿವ ತಂದೆಯು ನೀವು ಮಕ್ಕಳಿಂದ ತಮ್ಮ ಪೂಜೆಯನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ - ಏಕೆ?

ಉತ್ತರ:
ತಂದೆಯು ಹೇಳುತ್ತಾರೆ - ನಾನು ನೀವು ಮಕ್ಕಳ ಅತಿ ವಿಧೇಯ ಸೇವಕನಾಗಿದ್ದೇನೆ. ನೀವು ಮಕ್ಕಳು ನನಗೆ ಮಾಲೀಕರಾಗಿದ್ದೀರಿ. ನಾನಂತೂ ನೀವು ಮಕ್ಕಳಿಗೆ ನಮಸ್ತೆ ಮಾಡುತ್ತೇನೆ. ತಂದೆಯು ನಿರಹಂಕಾರಿಯಾಗಿದ್ದಾರೆ. ಮಕ್ಕಳು ಸಹ ತಂದೆಯ ಸಮಾನರಾಗಬೇಕಾಗಿದೆ. ನಾನು ನೀವು ಮಕ್ಕಳಿಂದ ತನ್ನ ಪೂಜೆಯನ್ನು ಹೇಗೆ ಮಾಡಿಸಿಕೊಳ್ಳುತ್ತೇನೆ! ನೀವು ನನ್ನ ಕಾಲುಗಳನ್ನು ತೊಳೆಯಲು ನನಗೆ ಕಾಲುಗಳೂ ಸಹ ಇಲ್ಲ. ತಾವಂತೂ ಈಶ್ವರೀಯ ಸೇವಾಧಾರಿಗಳಾಗಿ ವಿಶ್ವದ ಸೇವೆಯನ್ನು ಮಾಡಬೇಕು.

ಗೀತೆ:
ನಿರ್ಬಲನೊಂದಿಗೆ ಬಲಶಾಲಿಯ ಯುದ್ಧ

ಓಂ ಶಾಂತಿ.

ನಿರಾಕಾರ ಶಿವ ಭಗವಾನುವಾಚ. ಶಿವ ತಂದೆಯು ನಿರಾಕಾರನಾಗಿದ್ದಾರೆ ಮತ್ತು ಆತ್ಮರು ಯಾರು ಶಿವ ತಂದೆ ಎಂದು ಹೇಳುತ್ತಾರೆಯೋ ಅವರೂ ಸಹ ಮೂಲತಃ ನಿರಾಕಾರಿಯಾಗಿದ್ದಾರೆ, ನಿರಾಕಾರಿ ಪ್ರಪಂಚದ ನಿವಾಸಿಗಳಾಗಿದ್ದಾರೆ. ಇಲ್ಲಿ ಪಾತ್ರವನ್ನು ಅಭಿನಯಿಸುವುದಕ್ಕಾಗಿ ಸಾಕಾರಿಯಾಗಿದ್ದಾರೆ. ಈಗ ನಮ್ಮೆಲ್ಲರಿಗಂತೂ ಕಾಲುಗಳಿವೆ, ಕೃಷ್ಣನಿಗೂ ಪಾದಗಳಿವೆ. ಪಾದ ಪೂಜೆ ಮಾಡುತ್ತಾರಲ್ಲವೆ. ಶಿವ ತಂದೆಯು ತಿಳಿಸುತ್ತಾರೆ - ನಾನಂತೂ ವಿಧೇಯನಾಗಿದ್ದೇನೆ, ನಿಮ್ಮಿಂದ ನನ್ನ ಪಾದಗಳನ್ನು ತೊಳೆಸಿಕೊಳ್ಳಲು ಅಥವಾ ಪೂಜೆ ಮಾಡಿಸಿಕೊಳ್ಳಲು ನನಗೆ ಪಾದಗಳೇ ಇಲ್ಲ. ಸನ್ಯಾಸಿಗಳು ತಮ್ಮ ಪಾದಗಳನ್ನು ತೊಳೆಸಿಕೊಳ್ಳುತ್ತಾರಲ್ಲವೆ. ಗೃಹಸ್ಥಿಗಳು ಹೋಗಿ ಅವರ ಪಾದವನ್ನು ತೊಳೆಯುತ್ತಾರೆ. ಪಾದಗಳಂತೂ ಮನುಷ್ಯರದ್ದಾಗಿದೆ, ಆದರೆ ಶಿವ ತಂದೆಗೆ ನೀವು ಪಾದ ಪೂಜೆಯನ್ನು ಮಾಡಲು ಅವರಿಗೆ ಕಾಲುಗಳೇ ಇಲ್ಲ. ಇವು ಪೂಜೆಯ ಸಾಮಗ್ರಿಗಳಾಗಿವೆ. ತಂದೆಯು ತಿಳಿಸುತ್ತಾರೆ - ನಾನಂತೂ ಜ್ಞಾನಸಾಗರನಾಗಿದ್ದೇನೆ. ನಾನು ನನ್ನ ಮಕ್ಕಳಿಂದ ನನ್ನ ಪಾದಗಳನ್ನು ಹೇಗೆ ತೊಳೆಸಿಕೊಳ್ಳಲಿ? ವಂದೇ ಮಾತರಂ ಎಂದು ತಂದೆಯು ಹೇಳುತ್ತಾರೆ. ಮತ್ತೆ ಮಾತೆಯರೇನು ಹೇಳುವುದು? ಹಾ! ಎದ್ದು ನಿಂತು ಶಿವಬಾಬಾ ನಮಸ್ತೆ ಎಂದು ಹೇಳುತ್ತೀರಿ. ಹೇಗೆ ಮಾಲೀಕನಿಗೆ ನಮಸ್ತೆ ಎಂದು ಹೇಳುತ್ತಾರಲ್ಲವೆ. ವಾಸ್ತವದಲ್ಲಿ ಮೊದಲು ಹೀಗೆ ತಂದೆ ನಮಸ್ತೆ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಐ ಯಾಮ್ ಮೊಸ್ಟ್ ಒಬಿಡಿಯಂಟ್ (ನಾನು ಅತೀ ವಿಧೇಯ ಸೇವಕನಾಗಿದ್ದೇನೆ) ಬೇಹದ್ದಿನ ಸೇವಕನಾಗಿದ್ದೇನೆ. ನಿರಾಕಾರಿ ಮತ್ತು ಎಷ್ಟು ನಿರಹಂಕಾರಿಯಾಗಿದ್ದೇನೆ, ಪೂಜೆಯ ಮಾತೇ ಇಲ್ಲ. ಯಾವ ಪ್ರಿಯಾತಿ ಪ್ರಿಯ ಮಕ್ಕಳು ನನ್ನ ಸಂಪತ್ತಿಗೆ ಮಾಲೀಕರಾಗುತ್ತಾರೆಯೋ ಅವರಿಂದ ನಾನು ಪೂಜೆಯನ್ನು ಹೇಗೆ ಮಾಡಿಸಿಕೊಳ್ಳಲಿ? ಹಾ! ಚಿಕ್ಕ ಮಕ್ಕಳು ತಂದೆಯ ಕಾಲಿಗೆ ಬೀಳುತ್ತಾರೆ. ಏಕೆಂದರೆ ತಂದೆಯು ದೊಡ್ಡವರಾಗಿದ್ದಾರೆ ಆದರೆ ವಾಸ್ತವದಲ್ಲಂತೂ ತಂದೆಯು ಮಕ್ಕಳಿಗೂ ಸೇವಕನಾಗಿದ್ದಾರೆ. ತಂದೆಗೆ ಗೊತ್ತಿದೆ - ಮಕ್ಕಳಿಗೆ ಮಾಯೆಯು ಬಹಳ ತೊಂದರೆಯನ್ನು ಕೊಡುತ್ತದೆ, ಬಹಳ ಕಠಿಣ ಪಾತ್ರವಾಗಿದೆ. ಬಹುಷಃ ಹೆಚ್ಚಿನ ದುಃಖವು ಬರುವುದಿದೆ. ಇದೆಲ್ಲವೂ ಬೇಹದ್ದಿನ ಮಾತಾಗಿದೆ ಆಗಲೇ ಬೇಹದ್ದಿನ ತಂದೆಯು ಬರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನೊಬ್ಬನೇ ದಾತನಾಗಿದ್ದೇನೆ, ಬೇರೆ ಯಾರಿಗೂ ದಾತನೆಂದು ಹೇಳಲು ಸಾಧ್ಯವಿಲ್ಲ. ತಂದೆಯಿಂದ ಎಲ್ಲರೂ ಬೇಡುತ್ತಾರೆ, ಸಾಧು ಮುಂತಾದವರೂ ಸಹ ಮುಕ್ತಿಯನ್ನು ಬಯಸುತ್ತಾರೆ. ಭಾರತದ ಗೃಹಸ್ಥಿಗಳು ಭಗವಂತನಿಂದ ಜೀವನ್ಮುಕ್ತಿಯನ್ನು ಕೇಳುತ್ತಾರೆ ಅಂದಾಗ ದಾತ ಒಬ್ಬರೇ ಆದರು. ಸರ್ವರ ಸದ್ಗತಿದಾತ ಒಬ್ಬರೇ ಆಗಿದ್ದಾರೆಂದು ಗಾಯನವೂ ಇದೆ. ಸಾಧುಗಳು ಯಾವಾಗ ತಾವೇ ಸಾಧನೆ ಮಾಡುತ್ತಾರೆಂದಮೇಲೆ ಅವರು ಅನ್ಯರಿಗೆ ಗತಿ-ಸದ್ಗತಿಯನ್ನು ಕೊಡಲು ಹೇಗೆ ಸಾಧ್ಯ. ಮುಕ್ತಿಧಾಮ ಮತ್ತು ಜೀವನ್ಮುಕ್ತಿಧಾಮ - ಎರಡರ ಮಾಲೀಕ ಒಬ್ಬ ತಂದೆಯೇ ಆಗಿದ್ದಾರೆ, ಅವರು ತಮ್ಮ ಸಮಯದಲ್ಲಿಯೇ ಒಂದೇ ಬಾರಿ ಬರುತ್ತಾರೆ, ಮತ್ತೆಲ್ಲರೂ ಜನನ-ಮರಣದಲ್ಲಿ ಬರುತ್ತಿರುತ್ತಾರೆ ಆದರೆ ಇವರು ಒಂದೇ ಬಾರಿ ಬರುತ್ತಾರೆ. ಯಾವಾಗ ರಾವಣ ರಾಜ್ಯವು ಸಮಾಪ್ತಿಯಾಗಬೇಕಾಗುತ್ತದೆ. ಅದಕ್ಕೆ ಮೊದಲು ಬರಲು ಸಾಧ್ಯವಿಲ್ಲ. ಹೀಗೆ ಬರಲು ನಾಟಕದಲ್ಲಿ ಪಾತ್ರವೇ ಇಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ನನ್ನ ಮೂಲಕವೇ ನನ್ನನ್ನು ಈಗ ಅರಿತುಕೊಂಡಿದ್ದೀರಿ, ಮನುಷ್ಯರು ಅರಿತುಕೊಂಡಿಲ್ಲ. ಅವರು ಸರ್ವವ್ಯಾಪಿ ಎಂದು ಹೇಳಿ ಬಿಟ್ಟಿದ್ದಾರೆ. ಈಗಂತೂ ರಾವಣ ರಾಜ್ಯವಾಗಿದೆ. ಭಾರತವಾಸಿಗಳೇ ರಾವಣನನ್ನು ಸುಡುತ್ತಿರುತ್ತಾರೆ. ಇದರಿಂದ ರಾವಣ ರಾಜ್ಯವು ಭಾರತದಲ್ಲಿಯೇ ಆಗುತ್ತದೆ ಎಂಬುದು ಸಿದ್ಧವಾಗುತ್ತದೆ. ರಾಮ ರಾಜ್ಯವೂ ಭಾರತದಲ್ಲಿಯೇ ಆಗುತ್ತದೆ. ಈಗ ರಾವಣ ರಾಜ್ಯವು ಹೇಗೆ ಎಂಬ ಮಾತುಗಳನ್ನು ರಾಮ ರಾಜ್ಯವನ್ನು ಸ್ಥಾಪನೆ ಮಾಡುವವರೇ ತಿಳಿಸುತ್ತಾರೆ. ಇದನ್ನು ಯಾರು ತಿಳಿಸುತ್ತಾರೆ? ನಿರಾಕಾರ ಶಿವ ಭಗವಾನುವಾಚ. ಆತ್ಮನಿಗೆ ಶಿವನೆಂದು ಹೇಳುವುದಿಲ್ಲ. ಆತ್ಮರೆಲ್ಲರೂ ಸಾಲಿಗ್ರಾಮಗಳಾಗಿದ್ದಾರೆ. ಒಬ್ಬರನ್ನೇ ಶಿವನೆಂದು ಹೇಳಲಾಗುತ್ತದೆ. ಸಾಲಿಗ್ರಾಮಗಳು ಬಹಳ ಇರುತ್ತವೆ, ಇದು ರುದ್ರ ಜ್ಞಾನ ಯಜ್ಞವಾಗಿದೆ. ಆ ಬ್ರಾಹ್ಮಣರು ಯಾವ ಯಜ್ಞವನ್ನು ರಚಿಸುತ್ತಾರೆಯೋ ಅದರಲ್ಲಿ ಒಂದು ದೊಡ್ಡ ಶಿವಲಿಂಗ ಮತ್ತು ಚಿಕ್ಕ-ಚಿಕ್ಕ ಸಾಲಿಗ್ರಾಮಗಳನ್ನು ಮಾಡಿ ಪೂಜಿಸುತ್ತಾರೆ. ದೇವಿಯರು ಮೊದಲಾದವರ ಪೂಜೆಯಂತೂ ವರ್ಷ-ವರ್ಷವೂ ಆಗುತ್ತದೆ. ಹೀಗೆ ಪ್ರತಿನಿತ್ಯ ಮಣ್ಣಿನಿಂದ ತಯಾರಿಸುತ್ತಾರೆ ಮತ್ತು ಪೂಜಿಸುತ್ತಾರೆ. ರುದ್ರನಿಗೆ ಬಹಳ ಮಾನ್ಯತೆಯಿದೆ. ಸಾಲಿಗ್ರಾಮಗಳು ಯಾರೆಂದು ಅವರು ತಿಳಿದುಕೊಂಡೇ ಇಲ್ಲ. ನೀವು ಶಿವಶಕ್ತಿ ಸೇನೆಯು ಪತಿತರನ್ನು ಪಾವನರನ್ನಾಗಿ ಮಾಡುತ್ತೀರಿ. ಶಿವನ ಪೂಜೆಯಂತೂ ಆಗುತ್ತದೆ. ಸಾಲಿಗ್ರಾಮಗಳು ಎಲ್ಲಿ ಹೋಗುವುದು ಆದ್ದರಿಂದ ಬಹಳ ಮನುಷ್ಯರು ರುದ್ರ ಯಜ್ಞವನ್ನು ರಚಿಸಿ, ಸಾಲಿಗ್ರಾಮಗಳ ಪೂಜೆ ಮಾಡುತ್ತಾರೆ. ಶಿವಬಾಬಾನ ಜೊತೆ ಮಕ್ಕಳೂ ಸಹ ಪರಿಶ್ರಮ ಪಡುತ್ತೀರಿ. ಶಿವಬಾಬಾನ ಸಹಯೋಗಿಗಳಾಗಿದ್ದೀರಿ. ಆದ್ದರಿಂದ ಈಶ್ವರೀಯ ಸೇವಾಧಾರಿಗಳೆಂದು ಹೇಳಲಾಗುತ್ತದೆ. ಸ್ವಯಂ ನಿರಾಕಾರ ತಂದೆಯೂ ಸಹ ಅವಶ್ಯವಾಗಿ ಯಾವುದಾದರೂ ಶರೀರದಲ್ಲಿ ಬರುತ್ತಾರಲ್ಲವೆ. ಸ್ವರ್ಗದಲ್ಲಂತೂ ಸೇವೆ ಮಾಡುವ ಅವಶ್ಯಕತೆಯಿರುವುದಿಲ್ಲ. ಶಿವಬಾಬಾ ತಿಳಿಸುತ್ತಾರೆ - ನೋಡಿ, ಇವರು ನನ್ನ ಸೇವಾಧಾರಿ ಮಕ್ಕಳಾಗಿದ್ದಾರೆ, ನಂಬರ್ವಾರಂತೂ ಇರುತ್ತಾರಲ್ಲವೆ. ಎಲ್ಲರ ಪೂಜೆಯನ್ನಂತೂ ಮಾಡಲು ಸಾಧ್ಯವಿಲ್ಲ. ಈ ಯಜ್ಞವು ಭಾರತದಲ್ಲಿಯೇ ಆಗುತ್ತದೆ. ಇದರ ರಹಸ್ಯವನ್ನು ತಂದೆಯೇ ತಿಳಿಸುತ್ತಾರೆ. ಆ ಬ್ರಾಹ್ಮಣರಾಗಲಿ ಅಥವಾ ಸೇಠ್ಗಳಾಗಲಿ ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಇದು ರುದ್ರ ಜ್ಞಾನ ಯಜ್ಞವಾಗಿದೆ. ಮಕ್ಕಳು ಪವಿತ್ರರಾಗಿ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ. ಇದು ದೊಡ್ಡ ಆಸ್ಪತ್ರೆಯಾಗಿದೆ. ಇಲ್ಲಿ ಯೋಗದ ಮೂಲಕ ನಾವು ಸದಾ ಆರೋಗ್ಯವಂತರಾಗುತ್ತೇವೆ. ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡಿ, ದೇಹದ ಅಹಂಕಾರವು ಮೊದಲಿನ ನಂಬರಿನ ವಿಕಾರವಾಗಿದೆ, ಯಾವುದು ಯೋಗವನ್ನು ಕತ್ತರಿಸುತ್ತದೆ. ದೇಹಾಭಿಮಾನಿಗಳಾಗುತ್ತೀರಿ, ತಂದೆಯನ್ನು ಮರೆಯುತ್ತೀರಿ ಆಗಲೇ ಮತ್ತೆಲ್ಲಾ ವಿಕಾರಗಳು ಬಂದು ಬಿಡುತ್ತವೆ. ನಿರಂತರವಾಗಿ ನೆನಪಿನಲ್ಲಿರುವುದೇ ಪರಿಶ್ರಮವಾಗಿದೆ. ಮನುಷ್ಯರು ಕೃಷ್ಣನನ್ನು ಭಗವಂತನೆಂದು ತಿಳಿದು ಅವರ ಪೂಜೆ ಮಾಡುತ್ತಾರೆ. ಆದರೆ ಅವರ ಪಾದ ಪೂಜೆ ಮಾಡಲು ಕೃಷ್ಣನು ಪತಿತ-ಪಾವನನಂತೂ ಅಲ್ಲ. ಶಿವ ತಂದೆಗೆ ಕಾಲುಗಳಿಲ್ಲ. ಅವರು ಬಂದು ಮಾತೆಯರ ಸೇವಕನಾಗುತ್ತಾರೆ ಹಾಗೂ ತಿಳಿಸುತ್ತಾರೆ - ತಂದೆ ಮತ್ತು ಸ್ವರ್ಗವನ್ನು ನೆನಪು ಮಾಡಿದರೆ ನೀವು 21 ಜನ್ಮಗಳ ಕಾಲ ರಾಜ್ಯ ಮಾಡುತ್ತೀರಿ. 21 ಪಿಳೀಗೆಗಳೆಂದು ಗಾಯನವಿದೆ. ಅನ್ಯ ಧರ್ಮಗಳಲ್ಲಿ ಹೀಗೆ ಗಾಯನವಿಲ್ಲ. ಯಾವುದೇ ಧರ್ಮದವರಿಗೆ 21 ಜನ್ಮಗಳ ಸ್ವರ್ಗದ ಬಾದಶಾಹಿಯು ಸಿಗುವುದಿಲ್ಲ. ಇದೂ ಸಹ ನಾಟಕ ಮಾಡಲ್ಪಟ್ಟಿದೆ. ದೇವತಾ ಧರ್ಮದವರು ಯಾರು ಅನ್ಯ ಧರ್ಮಗಳಲ್ಲಿ ಸೇರಿ ಹೋಗಿದ್ದಾರೆಯೋ ಅವರು ಪುನಃ ಬರುತ್ತಾರೆ. ಸ್ವರ್ಗದ ಸುಖವಂತೂ ಅಪರಮಪಾರವಾಗಿದೆ. ಹೊಸ ಪ್ರಪಂಚ, ಹೊಸ ಮನೆಯಲ್ಲಿ ಒಳ್ಳೆಯ ಸುಖವಿರುತ್ತದೆ, ಅದು ಸ್ವಲ್ಪ ಹಳೆಯದಾದಾಗ ಒಂದಲ್ಲ ಒಂದು ಕಲೆಯುಂಟಾಗಿ ಬಿಡುತ್ತದೆ. ಮತ್ತೆ ಅದನ್ನು ದುರಸ್ತಿ ಮಾಡಿಸಲಾಗುತ್ತದೆ. ಅಂದಾಗ ಹೇಗೆ ತಂದೆಯ ಮಹಿಮೆಯು ಅಪರಮಪಾರವಾಗಿದೆಯೋ ಹಾಗೆಯೇ ಸ್ವರ್ಗದ ಮಹಿಮೆಯೂ ಅಪರಮಪಾರವಾಗಿದೆ ಯಾವುದಕ್ಕೆ ಮಾಲೀಕರಾಗಲು ನೀವೀಗ ಪುರುಷಾರ್ಥ ಮಾಡುತ್ತಿದ್ದೀರಿ. ತಂದೆಯ ವಿನಃ ಮತ್ತ್ಯಾರೂ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಸಾಧ್ಯವಿಲ್ಲ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ವಿನಾಶದ ದೃಶ್ಯವು ಬಹಳ ಕರುಣಾ ಜನಕವಾಗಿರುತ್ತದೆ. ಆದ್ದರಿಂದ ಮೊದಲು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು. ಈಗ ನನ್ನವರಾಗಿ ಅರ್ಥಾತ್ ಈಶ್ವರನ ಮಡಿಲನ್ನು ಪಡೆಯಿರಿ ಎಂದು ತಂದೆಯು ತಿಳಿಸುತ್ತಾರೆ. ಶಿವಬಾಬಾ ಹಿರಿಯರಾಗಿದ್ದಾರಲ್ಲವೆ ಅಂದಾಗ ನಿಮಗೆ ಬಹಳ ಪ್ರಾಪ್ತಿಯಿದೆ. ಸ್ವರ್ಗದ ಸುಖವು ಅಪರಮಪಾರವಾಗಿದೆ. ಹೆಸರನ್ನು ಕೇಳುತ್ತಿದ್ದಂತೆಯೇ ಬಾಯಲ್ಲಿ ನೀರು ಬರುತ್ತದೆ. ಇಂತಹವರು ಸ್ವರ್ಗಕ್ಕೆ ಹೋದರೆಂದು ಹೇಳುತ್ತಾರೆ ಅಂದರೆ ಸ್ವರ್ಗವು ಎಲ್ಲರಿಗೆ ಪ್ರಿಯವೆನಿಸುತ್ತದೆಯಲ್ಲವೆ. ಇದಂತೂ ನರಕವಾಗಿದೆ, ಎಲ್ಲಿಯವರೆಗೆ ಸತ್ಯಯುಗವಾಗುವುದಿಲ್ಲವೋ ಅಲ್ಲಿಯವರೆಗೆ ಯಾರೂ ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಈ ಜಗದಂಬಾ ಹೋಗಿ ಸ್ವರ್ಗದ ಮಹಾರಾಣಿ ಲಕ್ಷ್ಮಿಯಾಗುತ್ತಾಳೆ ನಂತರ ಮಕ್ಕಳೂ ನಂಬರ್ವಾರ್ ಆಗುತ್ತಾರೆ. ಮಮ್ಮಾ-ಬಾಬಾ ಹೆಚ್ಚಿನ ಪುರುಷಾರ್ಥ ಮಾಡುತ್ತಾರೆ, ಅಲ್ಲಿ ಮಕ್ಕಳೂ ಸಹ ರಾಜ್ಯ ಮಾಡುತ್ತಾರೆ. ಕೇವಲ ಲಕ್ಷ್ಮೀ-ನಾರಾಯಣರಷ್ಟೇ ಮಾಡುವುದಿಲ್ಲ ಅಂದಾಗ ಈಗ ತಂದೆಯು ಬಂದು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ, ಓದಿಸುತ್ತಾರೆ. ಒಂದುವೇಳೆ ಕೃಷ್ಣನು ಹೀಗೆ ಮಾಡುತ್ತಾನೆ ಎನ್ನುವುದಾದರೆ ಕೃಷ್ಣನನ್ನು ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ದ್ವಾಪರದಲ್ಲಂತೂ ದೇವತೆಗಳಿರುವುದಿಲ್ಲ. ನಾವು ಸ್ವರ್ಗಕ್ಕೆ ಹೋಗುವುದಕ್ಕಾಗಿ ಮಾರ್ಗ ತಿಳಿಸುತ್ತೇವೆಂದು ಸನ್ಯಾಸಿಗಳು ಹೇಳಲು ಸಾಧ್ಯವಿಲ್ಲ. ಇದಕ್ಕೆ ಭಗವಂತನೇ ಬೇಕು. ಹೇಳುತ್ತಾರೆ - ಮುಕ್ತಿ-ಜೀವನ್ಮುಕ್ತಿಯ ದ್ವಾರಗಳು ಕಲಿಯುಗದ ಅಂತ್ಯದಲ್ಲಿಯೇ ತೆರೆಯುತ್ತವೆ. ಇದು ರುದ್ರ ಜ್ಞಾನ ಯಜ್ಞವಾಗಿದೆ, ನಾನು ಶಿವ, ರುದ್ರ ಮತ್ತು ಇವರು ಸಾಲಿಗ್ರಾಮಗಳಾಗಿದ್ದೀರಿ. ಇವರೆಲ್ಲರೂ ಶರೀರಧಾರಿಗಳಾಗಿದ್ದಾರೆ, ನಾನು ಶರೀರದ ಆಧಾರವನ್ನು ತೆಗೆದುಕೊಂಡಿದ್ದೇನೆ. ಇವರೆಲ್ಲರೂ ಬ್ರಾಹ್ಮಣರಾಗಿದ್ದಾರೆ. ಬ್ರಾಹ್ಮಣರ ಹೊರತು ಯಾರಲ್ಲಿಯೂ ಈ ಜ್ಞಾನವಿರುವುದಿಲ್ಲ, ಶೂದ್ರರಲ್ಲಿಯೂ ಇರುವುದಿಲ್ಲ. ಸತ್ಯಯುಗದಲ್ಲಿ ದೇವತೆಗಳು ಪಾರಸ ಬುದ್ಧಿಯವರಾಗಿದ್ದರು, ಆ ರೀತಿ ಈಗ ತಂದೆಯೇ ಮಾಡುತ್ತಾರೆ. ಸನ್ಯಾಸಿಗಳು ಯಾರನ್ನೂ ಪಾರಸ ಬುದ್ಧಿಯವರನ್ನಾಗಿ ಮಾಡಲು ಸಾಧ್ಯವಿಲ್ಲ. ಭಲೆ ಅವರು ಪವಿತ್ರರಾಗಿದ್ದಾರೆ ಆದರೂ ಸಹ ರೋಗಿಗಳಾಗಿ ಬಿಡುತ್ತಾರೆ. ಸ್ವರ್ಗದಲ್ಲಿ ಎಂದೂ ರೋಗಿಗಳಾಗುವುದಿಲ್ಲ, ಅಲ್ಲಂತೂ ಅಪಾರ ಸುಖವಿರುತ್ತದೆ. ಆದ್ದರಿಂದ ಪೂರ್ಣ ಪುರುಷಾರ್ಥ ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಹೇಗೆ ಸ್ಪರ್ಧೆ ಮಾಡುತ್ತಾರಲ್ಲವೆ. ಇದು ರುದ್ರಮಾಲೆಯಲ್ಲಿ ಪೊಣಿಸಲ್ಪಡುವ ಸ್ಪರ್ಧೆಯಾಗಿದೆ, ಅಂದಾಗ ಅಹಂ ಅಂದರೆ ನಾನಾತ್ಮನು ಯೋಗದ ಓಟವನ್ನು ಓಡಬೇಕು. ಎಷ್ಟು ಯೋಗ ಮಾಡುತ್ತೇವೆಯೋ ಅಷ್ಟು ಇವರು ತೀವ್ರವಾಗಿ ಓಡುತ್ತಿದ್ದಾರೆಂದು ತಿಳಿಯುತ್ತಾರೆ. ವಿಕರ್ಮಗಳೂ ಸಹ ವಿನಾಶವಾಗುತ್ತಾ ಹೋಗುತ್ತವೆ. ನೀವು ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಲೂ ಸಹ ಯಾತ್ರೆಯಲ್ಲಿದ್ದೀರಿ. ಇದು ಬುದ್ಧಿಯೋಗದ ಬಹಳ ಒಳ್ಳೆಯ ಯಾತ್ರೆಯಾಗಿದೆ. ಇಂತಹ ಸ್ವರ್ಗದ ಅಪರಮಪಾರ ಸುಖವನ್ನು ಪಡೆಯುವುದಕ್ಕಾಗಿ ನಾವೇಕೆ ಪವಿತ್ರರಾಗುವುದಿಲ್ಲ! ನಮ್ಮನ್ನು ಮಾಯೆಯು ಅಲುಗಾಡಿಸಲು ಸಾಧ್ಯವಿಲ್ಲವೆಂದು ನೀವು ಹೇಳುತ್ತೀರಿ. ಪ್ರತಿಜ್ಞೆ ಮಾಡಲಾಗುತ್ತದೆ, ಇದು ಅಂತಿಮ ಜನ್ಮವಾಗಿದೆ, ಸಾಯಲೇಬೇಕಾಗಿದೆ ಅಂದಮೇಲೆ ತಂದೆಯಿಂದ ಆಸ್ತಿಯನ್ನೇಕೆ ಪಡೆಯಬಾರದು. ಎಷ್ಟು ಮಂದಿ ತಂದೆಯ ಮಕ್ಕಳಿದ್ದಾರೆ, ಪ್ರಜಾಪಿತ ಅಂದಮೇಲೆ ಅವಶ್ಯವಾಗಿ ಹೊಸ ರಚನೆಯನ್ನು ರಚಿಸುತ್ತಾರೆ. ಬ್ರಾಹ್ಮಣರದೇ ಹೊಸ ರಚನೆಯಾಗುತ್ತದೆ. ಬ್ರಾಹ್ಮಣರು ಆತ್ಮೀಯ ಸಮಾಜ ಸೇವಕರಾಗಿದ್ದಾರೆ, ದೇವತೆಗಳಂತೂ ಪ್ರಾಲಬ್ಧವನ್ನು ಭೋಗಿಸುತ್ತಾರೆ. ನೀವು ಭಾರತದ ಸೇವೆ ಮಾಡುತ್ತೀರಿ. ಆದ್ದರಿಂದ ನೀವೇ ಸ್ವರ್ಗದ ಮಾಲೀಕರಾಗುತ್ತೀರಿ. ಭಾರತದ ಸೇವೆ ಮಾಡುವುದರಲ್ಲಿ ಎಲ್ಲರ ಸೇವೆಯಾಗಿ ಬಿಡುತ್ತದೆ ಅಂದಾಗ ಇದು ರುದ್ರ ಜ್ಞಾನ ಯಜ್ಞವಾಗಿದೆ. ಶಿವನಿಗೇ ರುದ್ರನೆಂದು ಹೇಳಲಾಗುತ್ತದೆ, ಕೃಷ್ಣನಿಗಲ್ಲ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ. ಅಲ್ಲಿ ಈ ಯಜ್ಞ ಮೊದಲಾದುವುಗಳಿರುವುದಿಲ್ಲ. ಈಗ ಇದು ರಾವಣ ರಾಜ್ಯವಾಗಿದೆ. ಇದು ಸಮಾಪ್ತಿಯಾಗಲಿದೆ, ಮತ್ತೆಂದೂ ರಾವಣನ ಪ್ರತಿಮೆಯನ್ನು ಮಾಡುವುದಿಲ್ಲ. ತಂದೆಯೇ ಬಂದು ಈ ಬಂಧನಗಳಿಂದ ಬಿಡಿಸುತ್ತಾರೆ. ಈ ಬ್ರಹ್ಮಾರವರನ್ನೂ ಸಹ ಬಿಡಿಸಿದೆನಲ್ಲವೆ. ಶಾಸ್ತ್ರಗಳನ್ನು ಓದುತ್ತಾ-ಓದುತ್ತಾ ಯಾವ ಸ್ಥಿತಿಯಾಗಿ ಬಿಟ್ಟಿದೆ! ಆದ್ದರಿಂದ ಈಗ ನನ್ನನ್ನು ನೆನಪು ಮಾಡಿ ಎಂದು ತಂದೆ ತಿಳಿಸುತ್ತಾರೆ. ತಂದೆಯನ್ನು ನೆನಪು ಮಾಡುವ ಧೈರ್ಯವಿಲ್ಲ, ಪವಿತ್ರವಾಗಿರುವುದಿಲ್ಲ, ವ್ಯರ್ಥವಾದ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಆದ್ದರಿಂದ ತಂದೆಯು ಹೇಳುತ್ತಾರೆ - ಮಕ್ಕಳೇ, ಮನ್ಮನಾಭವ. ಒಂದುವೇಳೆ ಯಾವುದೇ ಮಾತಿನಲ್ಲಿ ತಬ್ಬಿಬ್ಬಾಗುತ್ತೀರೆಂದರೆ ಅದನ್ನು ಬಿಟ್ಟು ಬಿಡಿ, ಮನ್ಮನಾಭವ ಆಗಿರಿ. ಪ್ರಶ್ನೆಗೆ ಪ್ರತ್ಯುತ್ತರ ಸಿಗಲಿಲ್ಲವೆಂದು ಹೇಳಿ, ವಿದ್ಯೆಯನ್ನೇ ಬಿಟ್ಟು ಬಿಡುವುದಲ್ಲ. ಭಗವಂತನಾಗಿದ್ದರೂ ಉತ್ತರವನ್ನೇಕೆ ಕೊಡುವುದಿಲ್ಲವೆಂದು ಹೇಳುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ನಿಮ್ಮ ಕೆಲಸವು ತಂದೆ ಮತ್ತು ಆಸ್ತಿಯೊಂದಿಗಿದೆ. ಚಕ್ರವನ್ನೂ ಸಹ ನೆನಪು ಮಾಡಬೇಕಾಗುತ್ತದೆ. ಅವರೂ ಸಹ ತ್ರಿಮೂರ್ತಿ ಮತ್ತು ಚಕ್ರವನ್ನು ತೋರಿಸುತ್ತಾರೆ – ಸತ್ಯ ಮೇವ ಜಯತೆ ಎಂದು ಬರೆಯುತ್ತಾರೆ. ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ, ನೀವು ತಿಳಿಸಬೇಕು – ಶಿವ ತಂದೆಯನ್ನು ನೆನಪು ಮಾಡಿದರೆ ಸೂಕ್ಷ್ಮವತನವಾಸಿ ಬ್ರಹ್ಮಾ-ವಿಷ್ಣು-ಶಂಕರರೂ ನೆನಪಿಗೆ ಬರುತ್ತಾರೆ ಮತ್ತು ಸ್ವದರ್ಶನ ಚಕ್ರವನ್ನು ನೆನಪು ಮಾಡಿದರೆ ವಿಜಯಿಗಳಾಗಿ ಬಿಡುತ್ತೀರಿ. ಜಯತೆ ಎಂದರೆ ಮಾಯೆಯ ಮೇಲೆ ವಿಜಯಿಗಳಿಸುತ್ತೀರಿ. ಎಷ್ಟು ತಿಳಿದುಕೊಳ್ಳುವ ಮಾತಾಗಿದೆ. ಇಲ್ಲಿ ನಿಯಮಗಳಿವೆ - ಹಂಸಗಳ ಸಭೆಯಲ್ಲಿ ಕೊಕ್ಕರೆಗಳು ಕುಳಿತುಕೊಳ್ಳಬಾರದು. ಬ್ರಹ್ಮಾಕುಮಾರ-ಕುಮಾರಿಯರು ಯಾರು ಸ್ವರ್ಗದ ದೇವತೆಗಳನ್ನಾಗಿ ಮಾಡುತ್ತಾರೆಯೋ ಅವರ ಮೇಲೆ ದೊಡ್ಡ ಜವಾಬ್ದಾರಿಯಿದೆ. ಮೊದಲು ಯಾರೇ ಬರುತ್ತಾರೆಂದರೆ ಯಾವಾಗಲೂ ಅವರನ್ನು ಕೇಳಿ - ಆತ್ಮದ ತಂದೆಯನ್ನು ತಿಳಿದುಕೊಂಡಿದ್ದೀರಾ? ಯಾರು ಪ್ರಶ್ನೆಯನ್ನು ಕೇಳುತ್ತಾರೆಯೋ ಅವರು ಅವಶ್ಯವಾಗಿ ತಂದೆಯನ್ನು ತಿಳಿದುಕೊಂಡಿರುತ್ತಾರೆ. ಸನ್ಯಾಸಿ ಮೊದಲಾದವರು ಈ ರೀತಿ ಎಂದೂ ಕೇಳುವುದಿಲ್ಲ. ಏಕೆಂದರೆ ಅವರು ತಿಳಿದುಕೊಂಡಿರುವುದಿಲ್ಲ. ನೀವಂತೂ ಪ್ರಶ್ನೆ ಕೇಳುತ್ತೀರಿ - ಬೇಹದ್ದಿನ ತಂದೆಯನ್ನು ತಿಳಿದುಕೊಂಡಿದ್ದೀರಾ? ಮೊದಲು ನಿಶ್ಚಿತಾರ್ಥ ಮಾಡಿ, ಬ್ರಾಹ್ಮಣರ ಕರ್ತವ್ಯವೇ ಇದಾಗಿದೆ. ತಂದೆಯು ತಿಳಿಸುತ್ತಾರೆ - ಹೇ ಆತ್ಮರೇ, ನನ್ನ ಜೊತೆ ಯೋಗವನ್ನಿಡಿ. ಏಕೆಂದರೆ ನೀವು ನನ್ನ ಬಳಿ ಬರಬೇಕಾಗಿದೆ. ಸತ್ಯಯುಗೀ ದೇವಿ-ದೇವತೆಗಳು ಬಹಳ ಕಾಲದಿಂದ ಅಗಲಿ ಹೋಗಿದ್ದಾರೆ ಅಂದಮೇಲೆ ಜ್ಞಾನವೂ ಸಹ ಮೊಟ್ಟ ಮೊದಲು ಅವರಿಗೆ ಸಿಗುವುದು. ಲಕ್ಷ್ಮೀ-ನಾರಾಯಣರು 84 ಜನ್ಮಗಳನ್ನು ಪೂರ್ಣ ಮಾಡಿದ್ದಾರೆಂದರೆ ಅವರಿಗೆ ಮೊದಲು ಜ್ಞಾನವು ಸಿಗಬೇಕು.

ಮನುಷ್ಯ ಸೃಷ್ಟಿಯ ಯಾವ ವೃಕ್ಷವಿದೆಯೋ ಅದಕ್ಕೆ ತಂದೆಯು ಬ್ರಹ್ಮನಾಗಿದ್ದಾರೆ ಮತ್ತು ಆತ್ಮದ ತಂದೆಯು ಶಿವನಾಗಿದ್ದಾರೆ ಅಂದಮೇಲೆ ತಂದೆ ಮತ್ತು ತಾತಾ ಆದರಲ್ಲವೆ. ನೀವು ಅವರ ಮೊಮ್ಮಕ್ಕಳಾಗಿದ್ದೀರಿ, ಅವರಿಂದ ನಿಮಗೆ ಜ್ಞಾನವು ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಯಾವಾಗ ನರಕದಲ್ಲಿ ಬರುತ್ತೇನೆ, ಆಗಲೇ ಸ್ವರ್ಗವನ್ನು ರಚಿಸುತ್ತೇನೆ. ಶಿವಭಗವಾನುವಾಚ - ಲಕ್ಷ್ಮೀ-ನಾರಾಯಣರು ತ್ರಿಕಾಲದರ್ಶಿಗಳಲ್ಲ. ಅವರಿಗೆ ಈ ರಚಯಿತ-ರಚನೆಯ ಜ್ಞಾನವಿಲ್ಲ ಅಂದಮೇಲೆ ಪರಂಪರೆಯಿಂದ ಇದು ಹೇಗೆ ನಡೆಯುತ್ತದೆ? ಇವರಂತೂ ಮೃತ್ಯುವು ಬಂದಿತೆಂದರೆ ಬಂದಿತು ಎಂದು ಕೇವಲ ಹೇಳುತ್ತಿರುತ್ತಾರೆ. ಆದರೆ ಏನೂ ಆಗುವುದಿಲ್ಲವೆಂದು ಕೆಲವರು ತಿಳಿಯುತ್ತಾರೆ. ಇದರ ಮೇಲೆ ಒಂದು ಉದಾಹರಣೆಯೂ ಇದೆ - ಹುಲಿ ಬಂದಿತು, ಹುಲಿ ಬಂದಿತು ಆದರೆ ಹುಲಿಯು ಬರಲೇ ಇಲ್ಲ. ಕೊನೆಗೆ ಒಂದು ದಿನ ಹುಲಿಯು ಬಂದೇ ಬಿಟ್ಟಿತು, ಮೇಕೆಗಳನ್ನೆಲ್ಲಾ ತಿಂದು ಬಿಟ್ಟಿತು. ಇವೆಲ್ಲಾ ಇಲ್ಲಿಯ ಮಾತುಗಳಾಗಿವೆ. ಒಂದು ದಿನ ಕಾಲವು ಎಲ್ಲರನ್ನು ಕಬಳಿಸಿ ಬಿಡುತ್ತದೆ. ಮತ್ತೇನು ಮಾಡುತ್ತೀರಿ? ಭಗವಂತನ ಎಷ್ಟು ದೊಡ್ಡ ಯಜ್ಞವಾಗಿದೆ. ಇಷ್ಟು ದೊಡ್ಡ ಯಜ್ಞವನ್ನು ಪರಮಾತ್ಮನ ವಿನಃ ಮತ್ತ್ಯಾರೂ ರಚಿಸಲು ಸಾಧ್ಯವಿಲ್ಲ. ಬ್ರಹ್ಮಾವಂಶಿ ಬ್ರಾಹ್ಮಣರೆಂದು ಕರೆಸಿಕೊಂಡು ಪವಿತ್ರವಾಗಿಲ್ಲವೆಂದರೆ ಅವರು ಸತ್ತಂತೆ. ಶಿವಬಾಬಾನೊಂದಿಗೆ ಪ್ರತಿಜ್ಞೆ ಮಾಡಲಾಗುತ್ತದೆ - ಮಧುರ ತಂದೆಯ ಸ್ವರ್ಗದ ಮಾಲೀಕರನ್ನಾಗಿ ಮಾಡುವ ತಂದೆಯೇ, ನಾನಂತೂ ತಮ್ಮವನಾಗಿದ್ದೇನೆ, ಅಂತ್ಯದವರೆಗೆ ತಮ್ಮವನಾಗಿಯೇ ಇರುತ್ತೇನೆ. ಇಂತಹ ತಂದೆ ಅಥವಾ ಪ್ರಿಯತಮನಿಗೆ ವಿಚ್ಛೇದನ ಕೊಟ್ಟರೆ ಮಹಾರಾಜ-ಮಹಾರಾಣಿಯಾಗಲು ಸಾಧ್ಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಸತ್ಯವಾದ ಈಶ್ವರೀಯ ಸೇವಾಧಾರಿಗಳಾಗಿ. ಭಾರತವನ್ನು ಸ್ವರ್ಗವನ್ನಾಗಿ ಮಾಡುವುದರಲ್ಲಿ ತಂದೆಗೆ ಪವಿತ್ರತೆಯ ಸಹಯೋಗ ಕೊಡಬೇಕಾಗಿದೆ, ಆತ್ಮೀಯ ಸಮಾಜ ಸೇವಕರಾಗಬೇಕಾಗಿದೆ.

2. ಯಾವುದೇ ಪ್ರಕಾರದ ಪ್ರಶ್ನೆಗಳಲ್ಲಿ ಗೊಂದಲಕ್ಕೊಳಗಾಗಿ ವಿದ್ಯೆಯನ್ನು ಬಿಡಬಾರದು. ಪ್ರಶ್ನೆಗಳನ್ನು ಬಿಟ್ಟು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ.

ವರದಾನ:
ಸ್ವ ಪರಿವರ್ತನೆ ಮತ್ತು ವಿಶ್ವ ಪರಿವರ್ತನೆಯ ಜವಾಬ್ದಾರಿಯ ಕಿರೀಟಧಾರಿಯಿಂದ ವಿಶ್ವರಾಜ್ಯದ ಸಿಂಹಾಸನಾಧಾರಿ ಭವ.

ಹೇಗೆ ತಂದೆಯ ಮೇಲೆ, ಪ್ರಾಪ್ತಿಯ ಮೆಲೆ ಪ್ರತಿಯೊಬ್ಬರೂ ತಮ್ಮ ಅಧಿಕಾರ ಎಂದು ತಿಳಿಯುವಿರಿ, ಹಾಗೆ ಸ್ವ ಪರಿವರ್ತನೆ ಮತ್ತು ವಿಶ್ವ ಪರಿವರ್ತನೆ ಎರಡರ ಜವಾಬ್ದಾರಿಯ ಕಿರೀಟಧಾರಿಗಳಾಗಿ ಆಗ ವಿಶ್ವ ರಾಜ್ಯದ ಸಿಂಹಾಸನ ಅಧಿಕಾರಿಗಳಾಗುವಿರಿ. ವರ್ತಮಾನವೇ ಭವಿಷ್ಯದ ಆಧಾರವಾಗಿದೆ. ಚೆಕ್ ಮಾಡಿ ಮತ್ತು ಜ್ಞಾನದ ದರ್ಪಣದಲ್ಲಿ ನೋಡಿ ಬ್ರಾಹ್ಮಣ ಜೀವನದಲ್ಲಿ ಪವಿತ್ರತೆಯ ವಿದ್ಯಾ ಮತ್ತು ಸೇವೆಯ ಡಬ್ಬಲ್ ಕಿರೀಟ ಇದೆಯೇ? ಒಂದುವೇಳೆ ಇದರಲ್ಲಿ ಯಾವುದೇ ಕಿರೀಟ ಅಪೂರ್ಣವಾಗಿದ್ದಲ್ಲಿ ಅಲ್ಲಿಯೂ ಸಹಾ ಸಣ್ಣ ಕಿರೀಟದ ಅಧಿಕಾರಿಗಳಾಗುವಿರಿ.

ಸ್ಲೋಗನ್:
ಸದಾ ಬಾಪ್ದಾದಾರವರ ಚತ್ರಛಾಯೆಯ ಒಳಗೆ ಇದ್ದಾಗ ವಿಘ್ನ-ವಿನಾಶಕರಾಗಿ ಬಿಡುವಿರಿ.