30/10/18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಜ್ಞಾನದ ಸುಖವು 21 ಪೀಳಿಗೆಗಳು ನಡೆಯುತ್ತವೆ, ಅದು ಸ್ವರ್ಗದ ಸುಖವಾಗಿದೆ, ಭಕ್ತಿಯಲ್ಲಿ ತೀವ್ರ ಭಕ್ತಿಯಿಂದ ಅಲ್ಪಕಾಲದ ಕ್ಷಣ ಭಂಗುರ ಸುಖವು ಸಿಗುತ್ತದೆ.”

ಪ್ರಶ್ನೆ:
ಯಾವ ಶ್ರೀಮತದಂತೆ ನಡೆದು ನೀವು ಮಕ್ಕಳು ಸದ್ಗತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯ?

ಉತ್ತರ:
ನಿಮಗೆ ತಂದೆಯ ಶ್ರೀಮತವಾಗಿದೆ - ಈ ಹಳೆಯ ಪ್ರಪಂಚವನ್ನು ಮರೆತು ನನ್ನೊಬ್ಬನನ್ನೇ ನೆನಪು ಮಾಡಿ. ಇದಕ್ಕೇ ಬಲಿಹಾರಿಯಾಗುವುದು ಅಥವಾ ಜೀವಿಸಿದ್ದಂತೆಯೇ ಸಾಯುವುದೆಂದು ಹೇಳಲಾಗುತ್ತದೆ. ಇದೇ ಶ್ರೀಮತದಿಂದ ನೀವು ಶ್ರೇಷ್ಠಾತಿ ಶ್ರೇಷ್ಠರಾಗುತ್ತೀರಿ, ನಿಮ್ಮ ಸದ್ಗತಿಯಾಗಿ ಬಿಡುತ್ತದೆ. ಸಾಕಾರಿ ಮನುಷ್ಯರು ಮನುಷ್ಯರ ಸದ್ಗತಿ ಮಾಡಲು ಸಾಧ್ಯವಿಲ್ಲ. ತಂದೆಯೇ ಎಲ್ಲರ ಸದ್ಗತಿದಾತನಾಗಿದ್ದಾರೆ.

ಗೀತೆ:
ಓಂ ನಮಃ ಶಿವಾಯ.......

ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ. ಶ್ರೇಷ್ಠಾತಿ ಶ್ರೇಷ್ಠ ಭಗವಂತನೆಂದು ಗಾಯನ ಮಾಡಲಾಗುತ್ತದೆ. ಭಗವಂತನ ಹೆಸರನ್ನಂತೂ ಮನುಷ್ಯ ಮಾತ್ರರು ತಿಳಿದುಕೊಂಡಿಲ್ಲ. ಎಲ್ಲಿಯವರೆಗೆ ಭಗವಂತನು ಬಂದು ಭಕ್ತರಿಗೆ ತಮ್ಮ ಪರಿಚಯವನ್ನು ಕೊಡುವುದಿಲ್ಲವೋ ಅಲ್ಲಿಯವರೆಗೆ ಭಕ್ತರು ಭಗವಂತನನ್ನು ಅರಿತುಕೊಳ್ಳುವುದಿಲ್ಲ. ಇದಂತೂ ತಿಳಿಸಲಾಗಿದೆ-ಜ್ಞಾನ ಮತ್ತು ಭಕ್ತಿ, ಸತ್ಯಯುಗ-ತ್ರೇತಾಯುಗವು ಜ್ಞಾನದ ಪ್ರಾಲಬ್ಧವಾಗಿದೆ. ಈಗ ನೀವು ಜ್ಞಾನ ಸಾಗರನಿಂದ ಜ್ಞಾನವನ್ನು ಪಡೆದು ಪುರುಷಾರ್ಥದಿಂದ ತಮ್ಮ ಸದಾ ಸುಖದ ಪ್ರಾಲಬ್ಧವನ್ನು ರೂಪಿಸಿಕೊಳ್ಳುತ್ತಿದ್ದೀರಿ. ನಂತರ ದ್ವಾಪರ-ಕಲಿಯುಗದಲ್ಲಿ ಭಕ್ತಿಯಿರುತ್ತದೆ. ಜ್ಞಾನದ ಪ್ರಾಲಬ್ಧವು ಸತ್ಯಯುಗ ತ್ರೇತಾದವರೆಗೆ ನಡೆಯುತ್ತದೆ. ಜ್ಞಾನದ ಸುಖವಂತೂ 21 ಪೀಳಿಗೆ ನಡೆಯುತ್ತದೆ, ಅದು ಸ್ವರ್ಗದ ಸದಾ ಸುಖವಾಗಿದೆ. ನರಕದ ಸುಖವು ಅಲ್ಪಕಾಲದ ಕ್ಷಣ ಭಂಗುರ ಸುಖವಾಗಿದೆ. ಮಕ್ಕಳಿಗೆ ತಿಳಿಸಲಾಗುತ್ತದೆ - ಸತ್ಯಯುಗ, ತ್ರೇತಾಯುಗದಲ್ಲಿ ಜ್ಞಾನ ಮಾರ್ಗವಿತ್ತು, ಹೊಸ ಪ್ರಪಂಚ ಹೊಸ ಭಾರತವಾಗಿತ್ತು ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ-ಈಗ ತಮೋಪ್ರಧಾನ ಭಾರತವು ನರಕವಾಗಿ ಬಿಟ್ಟಿದೆ. ಅನೇಕ ಪ್ರಕಾರದ ದುಃಖವಿದೆ. ಸ್ವರ್ಗದಲ್ಲಿ ದುಃಖದ ಹೆಸರು, ಗುರುತೂ ಇರುವುದಿಲ್ಲ. ಗುರುಗಳನ್ನು ಮಾಡಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ಭಕ್ತರ ಉದ್ಧಾರವನ್ನು ಭಗವಂತನೇ ಮಾಡಬೇಕಾಗಿದೆ. ಈಗ ಕಲಿಯುಗದ ಅಂತ್ಯವಾಗಿದೆ, ವಿನಾಶವು ಸಮ್ಮುಖದಲ್ಲಿ ನಿಂತಿದೆ. ತಂದೆಯು ಬಂದು ಬ್ರಹ್ಮಾರವರ ಮೂಲಕ ಜ್ಞಾನವನ್ನು ಕೊಟ್ಟು ಸ್ವರ್ಗದ ಸ್ಥಾಪನೆ ಮಾಡುತ್ತಾರೆ ಮತ್ತು ಶಂಕರನ ಮೂಲಕ ವಿನಾಶ, ವಿಷ್ಣುವಿನ ಮುಖಾಂತರ ಪಾಲನೆ ಮಾಡಿಸುತ್ತಾರೆ. ಪರಮಾತ್ಮನ ಕರ್ತವ್ಯವನ್ನು ಯಾರೂ ತಿಳಿದುಕೊಂಡಿಲ್ಲ. ಮನುಷ್ಯರನ್ನು ಪಾಪಾತ್ಮ ಪುಣ್ಯಾತ್ಮರೆಂದು ಹೇಳಲಾಗುತ್ತದೆ ಆದರೆ ಪಾಪ ಪರಮಾತ್ಮ, ಪುಣ್ಯ ಪರಮಾತ್ಮನೆಂದು ಹೇಳುವುದಿಲ್ಲ. ಮಹಾತ್ಮರನ್ನೂ ಸಹ ಮಹಾನ್ ಆತ್ಮರೆಂದು ಹೇಳುತ್ತಾರೆಯೇ ಹೊರತು ಮಹಾನ್ ಪರಮಾತ್ಮನೆಂದು ಹೇಳುವುದಿಲ್ಲ. ಆತ್ಮವು ಪವಿತ್ರವಾಗುತ್ತದೆ. ತಂದೆಯು ತಿಳಿಸಿದ್ದಾರೆ – ಮೊಟ್ಟ ಮೊದಲು ಮುಖ್ಯವಾದುದು ದೇವಿ-ದೇವತಾ ಧರ್ಮವಾಗಿದೆ, ಆ ಸಮಯದಲ್ಲಿ ಸೂರ್ಯವಂಶಿಯರೇ ರಾಜ್ಯ ಮಾಡುತ್ತಿದ್ದರು ಚಂದ್ರವಂಶಿಯರಿರಲಿಲ್ಲ. ಒಂದು ಧರ್ಮವಿತ್ತು. ಭಾರತದಲ್ಲಿ ಚಿನ್ನ, ಬೆಳ್ಳಿಯ ಮಹಲುಗಳಿದ್ದವು, ವಜ್ರ-ವೈಡೂರ್ಯಗಳಿಂದ ಅದರ ಛಾವಣಿ, ಗೋಡೆಗಳು ಎಲ್ಲಾ ಕಡೆಯೂ ಶೃಂಗರಿಸಲ್ಪಟ್ಟಿರುತ್ತಿತ್ತು. ಭಾರತವು ವಜ್ರ ಸಮಾನವಾಗಿತ್ತು, ಅದೇ ಭಾರತವು ಈಗ ಕವಡೆಯ ಸಮಾನವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪದ ಅಂತ್ಯದಲ್ಲಿ, ಸತ್ಯಯುಗದ ಆದಿಯ ಸಂಗಮದಲ್ಲಿ ಬರುತ್ತೇನೆ. ಭಾರತವನ್ನು ಮಾತೆಯರ ಮುಖಾಂತರ ಪುನಃ ಸ್ವರ್ಗವನ್ನಾಗಿ ಮಾಡುತ್ತೇನೆ. ಇದು ಶಿವಶಕ್ತಿ ಪಾಂಡವ ಸೇನೆಯಾಗಿದೆ. ಪಾಂಡವರ ಪ್ರೀತಿಯು ಒಬ್ಬ ತಂದೆಯೊಂದಿಗಿದೆ ಅವರಿಗೆ ತಂದೆಯೇ ಓದಿಸುತ್ತಾರೆ. ಶಾಸ್ತ್ರ ಮುಂತಾದುವುಗಳೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ಈಗ ತಂದೆಯು ಬಂದು ಎಲ್ಲರಿಗೆ ಭಕ್ತಿಯ ಫಲವಾದ ಜ್ಞಾನವನ್ನು ಕೊಡುತ್ತಾರೆ ಅದರಿಂದ ನೀವು ಸದ್ಗತಿಯಲ್ಲಿ ಹೋಗುತ್ತೀರಿ. ಎಲ್ಲರ ಸದ್ಗತಿದಾತ ತಂದೆಯು ಒಬ್ಬರೇ ಆಗಿದ್ದಾರೆ. ತಂದೆಯನ್ನೇ ಜ್ಞಾನಸಾಗರನೆಂದು ಕರೆಯಲಾಗುತ್ತದೆ ಬಾಕಿ ಮನುಷ್ಯರು ಮನುಷ್ಯರಿಗೆ ಮುಕ್ತಿ-ಜೀವನ್ಮುಕ್ತಿಯನ್ನು ಕೊಡಲು ಸಾಧ್ಯವಿಲ್ಲ. ಈ ಜ್ಞಾನವು ಯಾವುದೇ ಶಾಸ್ತ್ರಗಳಿಲ್ಲಿ ಇಲ್ಲ. ಜ್ಞಾನಸಾಗರನೆಂದು ಒಬ್ಬ ತಂದೆಗೆ ಹೇಳಲಾಗುತ್ತದೆ, ಅವರಿಂದ ನೀವು ಆಸ್ತಿಯನ್ನು ಪಡೆಯುತ್ತೀರಿ. ನಂತರ ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗಿ ಬಿಡುತ್ತೀರಿ. ಇದು ದೇವತೆಗಳ ಮಹಿಮೆಯಾಗಿದೆ. ಲಕ್ಷ್ಮಿ- ನಾರಾಯಣರು 16 ಕಲಾ ಸಂಪೂರ್ಣರಾಗಿದ್ದಾರೆ. ರಾಮ-ಸೀತೆಯರು 14 ಕಲೆಗಳಲ್ಲಿ ಸಂಪೂರ್ಣರಾಗಿದ್ದಾರೆ. ಇದು ವಿದ್ಯೆಯಾಗಿದೆ ಇದು ಯಾವುದೇ ಸಾಮಾನ್ಯವಾದ ಸತ್ಸಂಗವಲ್ಲ. ಸತ್ಯವು ಒಬ್ಬ ತಂದೆಯಾಗಿದ್ದಾರೆ ಅವರೇ ಬಂದು ಸತ್ಯವನ್ನು ತಿಳಿಸುತ್ತಾರೆ. ಇದಂತೂ ಪತಿತ ಪ್ರಪಂಚವಾಗಿದೆ, ಪಾವನ ಪ್ರಪಂಚದಲ್ಲಿ ಪತಿತರಿರುವುದೇ ಇಲ್ಲ, ಈಗ ಈ ಪತಿತ ಪ್ರಪಂಚದಲ್ಲಿ ಪಾವನರಿಲ್ಲ. ಪಾವನರನ್ನಾಗಿ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ. ಶಿವಾಯ ನಮಃ ಎಂದು ಆತ್ಮವು ಹೇಳುತ್ತದೆ. ಆತ್ಮವು ತನ್ನ ತಂದೆಗೆ ನಮಸ್ತೆ ಎಂದು ಹೇಳುತ್ತದೆ ಒಂದುವೇಳೆ ಶಿವನು ನನ್ನಲ್ಲಿದ್ದಾರೆ ಎಂದು ಯಾರಾದರೂ ಹೇಳುವುದಾದರೆ ನಂತರ ನಮಸ್ಕಾರವನ್ನು ಯಾರಿಗೆ ಹೇಳುತ್ತಾರೆ. ಮನುಷ್ಯರಲ್ಲಿ ಅಜ್ಞಾನವು ಹರಡಿದೆ. ಈಗ ನೀವು ಮಕ್ಕಳನ್ನು ತಂದೆಯು ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಾರೆ. ಈಗ ನೀವು ಮಕ್ಕಳಿಗೆ ಗೊತ್ತಿದೆ-ಎಲ್ಲಾ ಆತ್ಮಗಳು ಯಾವ ಮನೆಯಲ್ಲಿರುತ್ತಾರೆಯೋ ಅದು ನಿರ್ವಾಣಧಾಮ, ಮಧುರ ಮನೆಯಾಗಿದೆ. ಮುಕ್ತಿಯನ್ನಂತೂ ಎಲ್ಲರೂ ನೆನಪು ಮಾಡುತ್ತಾರೆ, ಅಲ್ಲಿ ನಾವು ತಂದೆಯ ಜೊತೆಯಿರುತ್ತೇವೆ. ಈಗ ನೀವು ತಂದೆಯನ್ನು ನೆನಪು ಮಾಡುತ್ತೀರಿ, ಸುಖಧಾಮದಲ್ಲಿ ಹೋಗುತ್ತೀರೆಂದರೆ ಅಲ್ಲಿ ತಂದೆಯನ್ನು ನೆನಪು ಮಾಡುವುದಿಲ್ಲ. ಈಗ ಇದು ದುಃಖಧಾಮವಾಗಿದೆ ಎಲ್ಲರೂ ದುರ್ಗತಿಯಲ್ಲಿದ್ದಾರೆ. ಹೊಸ ಪ್ರಪಂಚದಲ್ಲಿ ಭಾರತವು ಹೊಸದಾಗಿತ್ತು, ಸುಖಧಾಮವಾಗಿತ್ತು, ಸೂರ್ಯವಂಶಿ ಚಂದ್ರವಂಶಿ ರಾಜ್ಯವಿತ್ತು. ಲಕ್ಷ್ಮಿ-ನಾರಾಯಣರು ಮತ್ತು ರಾಧೆ-ಕೃಷ್ಣರ ನಡುವೆ ಇರುವ ಸಂಬಂಧವೇನೆಂದು ಮನುಷ್ಯರಿಗೆ ಗೊತ್ತಿಲ್ಲ. ಆ (ಕೃಷ್ಣ) ರಾಜಕುಮಾರ ಆ (ರಾಧೆ) ರಾಜಕುಮಾರಿಯು ಬೇರೆ-ಬೇರೆ ರಾಜ್ಯದವರಾಗಿದ್ದಾರೆ. ಇಬ್ಬರೂ ಪರಸ್ಪರ ಸಹೋದರ-ಸಹೋದರಿಯರೆಂದಲ್ಲ. ರಾಧೆಯು ತನ್ನ ರಾಜಧಾನಿಯಲ್ಲಿದ್ದಳು. ಕೃಷ್ಣನು ತನ್ನ ರಾಜಧಾನಿಯ ರಾಜಕುಮಾರನಾಗಿದ್ದನು. ಅವರ ಸ್ವಯಂವರವಾದಾಗ ಲಕ್ಷ್ಮಿ-ನಾರಾಯಣರಾಗುತ್ತಾರೆ. ಸತ್ಯಯುಗದಲ್ಲಿ ಪ್ರತಿಯೊಂದು ವಸ್ತು ಸುಖ ಕೊಡುವಂತಹದ್ದಾಗಿರುತ್ತದೆ. ಕಲಿಯುಗದಲ್ಲಿ ಪ್ರತಿಯೊಂದು ವಸ್ತುವು ದುಃಖ ಕೊಡುವುದಾಗಿದೆ. ಸತ್ಯಯುಗದಲ್ಲಿ ಯಾರಿಗೂ ಅಕಾಲಮೃತ್ಯುವಾಗುವುದಿಲ್ಲ. ಈಗ ನಾವು ನರನಿಂದ ನಾರಾಯಣ ನಾರಿಯಿಂದ ಶ್ರೀಲಕ್ಷ್ಮಿಯಾಗುವುದಕ್ಕೋಸ್ಕರ ನಮ್ಮ ಪರಮಪಿತ ಪರಮಾತ್ಮನಿಂದ ರಾಜಯೋಗವನ್ನು ಕಲಿಯುತ್ತಿದ್ದೇವೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಇದು ಶಾಲೆಯಾಗಿದೆ. ಆ ಸತ್ಸಂಗಗಳಲ್ಲಂತೂ ಯಾವುದೇ ಗುರಿ-ಉದ್ದೇಶವಿರುವುದಿಲ್ಲ. ವೇದ-ಶಾಸ್ತ್ರ ಮುಂತಾದುವುಗಳನ್ನು ತಿಳಿಸುತ್ತಾ ಇರುತ್ತಾರೆ. ತಂದೆಯ ಮೂಲಕ ನೀವು ಈ ಮನುಷ್ಯ ಸೃಷ್ಟಿಚಕ್ರವನ್ನು ಈಗ ತಿಳಿದುಕೊಂಡಿದ್ದೀರಿ. ತಂದೆಯನ್ನೇ ಜ್ಞಾನಸಾಗರ, ಆನಂದಸಾಗರ, ದಯಾಸಾಗರನೆಂದು ಹೇಳಲಾಗುತ್ತದೆ. ಓ ತಂದೆಯೇ, ಬಂದು ದಯೆ ತೋರಿ ಎಂದು ಹಾಡುತ್ತಾರೆ. ಸ್ವರ್ಗದ ರಚಯಿತ ತಂದೆಯೇ ಬಂದು ಸಂಗಮಯುಗದಲ್ಲಿ ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ಸ್ವರ್ಗದಲ್ಲಿ ಬಹಳ ಕಡಿಮೆ ಮನುಷ್ಯರಿರುತ್ತಾರೆ, ಬಾಕಿ ಉಳಿದ ಇಷ್ಟೊಂದು ಜನ ಎಲ್ಲಿ ಹೋಗುತ್ತಾರೆ? ತಂದೆಯು ಎಲ್ಲರನ್ನು ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ಸ್ವರ್ಗದಲ್ಲಿ ಕೇವಲ ಭಾರತವೇ ಇತ್ತು, ಅಂತ್ಯದಲ್ಲಿಯೂ ಭಾರತವೇ ಇರುವುದು. ಭಾರತವು ಸತ್ಯಖಂಡವೆಂದು ಗಾಯನವಿದೆ ಆದರೆ ಈಗಂತೂ ಭಾರತವು ಕಂಗಾಲಾಗಿ ಬಿಟ್ಟಿದೆ. ಪೈಸೆ-ಪೈಸೆಗಾಗಿ ಭಿಕ್ಷೆ ಬೇಡುತ್ತಿರುತ್ತಾರೆ. ಭಾರತವು ವಜ್ರ ಸಮಾನವಾಗಿತ್ತು, ಈಗ ಕವಡೆಯ ಸಮಾನವಾಗಿದೆ. ಈ ನಾಟಕದ ರಹಸ್ಯವನ್ನು ತಿಳಿಯಬೇಕಾಗಿದೆ. ನೀವು ರಚಯಿತ ತಂದೆಯನ್ನು ಮತ್ತು ಅವರ ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ವಂದೇ ಮಾತರಂ ಎಂದು ಕಾಂಗ್ರೆಸ್ಸಿನವರು ಹೇಳುತ್ತಾರೆ. ಆದರೆ ಪವಿತ್ರತೆಗೆ ವಂದನೆ ಮಾಡಲಾಗುತ್ತದೆ. ಪರಮಾತ್ಮನೇ ಬಂದು ವಂದೇ ಮಾತರಂ ಎಂದು ಹೇಳುವುದನ್ನು ಪ್ರಾರಂಭಿಸುತ್ತಾರೆ. ಶಿವ ತಂದೆಯೇ ಬಂದು ತಿಳಿಸಿದ್ದಾರೆ-ನಾರಿ ಸ್ವರ್ಗದ ದ್ವಾರವಾಗಿದ್ದಾಳೆ. ಶಕ್ತಿ ಸೈನ್ಯವಾಗಿದೆಯಲ್ಲವೆ. ಇವರು ಸ್ವರ್ಗದ ರಾಜ್ಯವನ್ನು ಕೊಡಿಸುವವರಾಗಿದ್ದಾರೆ. ಇದನ್ನೇ ವಿಶ್ವದ ಸರ್ವಶಕ್ತಿಯುತ ಚಕ್ರಾಧಿಪತ್ಯ ರಾಜ್ಯವೆಂದು ಹೇಳಲಾಗುತ್ತದೆ. ನೀವು ಶಕ್ತಿಯರೇ ಸ್ವರಾಜ್ಯದ ಸ್ಥಾಪನೆ ಮಾಡಿದ್ದಿರಿ, ಈಗ ಪುನಃ ಸ್ಥಾಪನೆಯಾಗುತ್ತಿದೆ. ಸತ್ಯಯುಗಕ್ಕೆ ರಾಮ ರಾಜ್ಯವೆಂದು ಹೇಳಲಾಗುತ್ತದೆ. ರಾಮ ರಾಜ್ಯವು ಬರಲೆಂದು ಈಗಲೂ ಹೇಳುತ್ತಾರೆ. ಆದರೆ ಆ ರಾಮರಾಜ್ಯವನ್ನು ಯಾವುದೇ ಮನುಷ್ಯರು ಸ್ಥಾಪಿಸಲು ಸಾಧ್ಯವಿಲ್ಲ. ನಿರಾಕಾರ ತಂದೆಯೇ ಬಂದು ಓದಿಸುತ್ತಾರೆ ಅವರಿಗೆ ಅವಶ್ಯವಾಗಿ ಶರೀರವು ಬೇಕು ಅಂದಮೇಲೆ ಅವಶ್ಯವಾಗಿ ಬ್ರಹ್ಮಾರವರ ಶರೀರದಲ್ಲಿಯೇ ಬರಬೇಕಾಗುತ್ತದೆ. ಶಿವ ತಂದೆಯು ನೀವೆಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಪ್ರಜಾಪಿತನೆಂದು ಗಾಯನವಿದೆ. ಪಿತನೆಂದರೆ ತಂದೆಯಾದರಲ್ಲವೆ. ಬ್ರಹ್ಮಾರವರಿಗೆ ಗ್ರೇಟ್ ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ ಎಂದು ಹೇಳಲಾಗುವುದು. ಆದಿ ದೇವ ಮತ್ತು ಆದಿ ದೇವಿ ಇಬ್ಬರೂ ಕುಳಿತಿದ್ದಾರೆ, ತಪಸ್ಸು ಮಾಡುತ್ತಿದ್ದಾರೆ ನೀವೂ ಸಹ ತಪಸ್ಸು ಮಾಡುತ್ತಿದ್ದೀರಿ. ಇದು ರಾಜಯೋಗವಾಗಿದೆ ಸನ್ಯಾಸಿಗಳದು ಹಠಯೋಗವಾಗಿದೆ. ಅವರು ಎಂದೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಗೀತೆ ಇನ್ನು ಮುಂತಾದ ಶಾಸ್ತ್ರಗಳು ಏನೆಲ್ಲವೂ ಇವೆಯೋ ಅವು ಭಕ್ತಿಮಾರ್ಗದ ಸಾಮಗ್ರಿಯಾಗಿವೆ. ಅವನ್ನು ಓದುತ್ತಲೇ ಬರುತ್ತಾರೆ, ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಇದು ಅದೇ ಮಹಾಭಾರತ ಯುದ್ಧವಾಗಿದೆ. ಇದರಿಂದ ವಿನಾಶವಾಗಲಿದೆ. ವಿಜ್ಞಾನವು ಯಾವುದೇ ವೇದಗಳಲ್ಲಿ ಇಲ್ಲ, ಅದರಲ್ಲಂತೂ ಜ್ಞಾನದ ಮಾತುಗಳಿವೆ. ಈ ವಿಜ್ಞಾನವು ಬುದ್ಧಿಯ ಚಮತ್ಕಾರವಾಗಿದೆ. ಅದರಿಂದ ಅನ್ವೇಷಣೆಗಳನ್ನು ಮಾಡುತ್ತಾ ಇರುತ್ತಾರೆ. ವಿಮಾನ ಮುಂತಾದುವುಗಳನ್ನು ಸುಖಕ್ಕೋಸ್ಕರ ತಯಾರಿಸುತ್ತಾರೆ. ನಂತರ ಅಂತ್ಯದಲ್ಲಿ ಇವುಗಳ ಮೂಲಕವೇ ವಿನಾಶವಾಗುತ್ತವೆ. ಈ ಸುಖದ ಕಲೆಯ ನೈಪುಣ್ಯತೆ ಭಾರತದಲ್ಲಿ ಉಳಿದು ಬಿಡುವುದು. ದುಃಖ ಕೊಡುವ ಕಲೆ, ಸಾಯಿಸುವ ಕಲೆ, ಇವೆಲ್ಲವೂ ಸಮಾಪ್ತಿಯಾಗಿ ಬಿಡುವುದು. ವಿಜ್ಞಾನದ ಬುದ್ಧಿವಂತಿಕೆಯು ನಡೆದು ಬರುತ್ತದೆ. ಈ ಬಾಂಬ್ ಮುಂತಾದವು ಕಲ್ಪದ ಹಿಂದೆಯೂ ಆಗಿದ್ದವು. ಪತಿತ ಪ್ರಪಂಚದ ವಿನಾಶ ನಂತರ ಹೊಸ ಪ್ರಪಂಚದ ಸ್ಥಾಪನೆಯಾಗಲಿದೆ. ಈಗ ತಂದೆಯು ತಿಳಿಸುತ್ತಾರೆ - ಈಗ 84 ಜನ್ಮಗಳನ್ನು ಪೂರ್ಣ ಮಾಡಿದ್ದೀರಿ, ಈಗ ಈ ದೇಹದ ಅಹಂಕಾರವನ್ನು ಬಿಟ್ಟು ತಂದೆಯಾದ ನನ್ನನ್ನು ನೆನಪು ಮಾಡಿ ಆಗ ಈ ನೆನಪಿನ ಯೋಗಾಗ್ನಿಯಿಂದ ವಿಕರ್ಮವು ವಿನಾಶವಾಗಿ ಬಿಡುತ್ತದೆ. ರಾವಣನು ನಿಮ್ಮಿಂದ ಬಹಳ ವಿಕರ್ಮಗಳನ್ನು ಮಾಡಿಸಿದ್ದಾನೆ. ಪಾವನವಾಗುವುದಕ್ಕೆ ಒಂದೇ ಉಪಾಯವಿದೆ. ನೀವಂತೂ ಆತ್ಮಗಳಾಗಿಯೇ ಇದ್ದೀರಿ, ನಾನು ಆತ್ಮನಾಗಿದ್ದೇನೆ ಎಂದು ಹೇಳುತ್ತೀರಿ ಆದರೆ ನಾನು ಪರಮಾತ್ಮನಾಗಿದ್ದೇನೆ ಎಂದು ಹೇಳುವುದಿಲ್ಲ. ನಾನು ಆತ್ಮನಿಗೆ ಬೇಜಾರು ಮಾಡಿಸಬೇಡಿ ಎಂದು ಹೇಳುತ್ತಾರೆ. ಆತ್ಮವೇ ಪರಮಾತ್ಮನೆಂದು ಹೇಳುವುದಂತೂ ಅತಿ ದೊಡ್ಡ ತಪ್ಪಾಗಿದೆ. ಈಗಂತೂ ತಮೋಪ್ರಧಾನ ವ್ಯಭಿಚಾರಿ ಭಕ್ತಿಯಾಗಿದೆ. ಯಾರು ಬಂದರೆ ಅವರನ್ನು ಪೂಜಿಸುತ್ತಾರೆ, ಕೇವಲ ಒಬ್ಬರ ನೆನಪಿಗೆ ಅವ್ಯಭಿಚಾರಿ ನೆನಪೆಂದು ಹೇಳಲಾಗುತ್ತದೆ. ಈಗ ಈ ವ್ಯಭಿಚಾರಿ ಭಕ್ತಿಯ ಅಂತ್ಯವಾಗಲಿದೆ. ತಂದೆಯು ಬಂದು ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಎಲ್ಲರಿಗೆ ಸುಖ ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ, ಇನ್ನ್ಯಾರೂ ಇಲ್ಲ. ತಂದೆಯು ತಿಳಿಸುತ್ತಾರೆ-ನನ್ನೊಬ್ಬನೊಂದಿಗೆ ಬುದ್ಧಿಯೋಗವನ್ನು ಜೋಡಿಸುವುದರಿಂದಲೇ ಅಂತ್ಮತಿ ಸೋ ಗತಿಯಾಗುವುದು. ನಾನಂತೂ ಸ್ವರ್ಗದ ರಚಯಿತನಾಗಿದ್ದೇನೆ, ಇದು ಮುಳ್ಳುಗಳ ಪ್ರಪಂಚವಾಗಿದೆ. ಒಬ್ಬರು ಇನ್ನೊಬ್ಬರು ಜಗಳವಾಡುತ್ತಾ-ಹೊಡೆದಾಡುತ್ತಿರುತ್ತಾರೆ. ಈಗ ಈ ಹಳೆಯ ಪ್ರಪಂಚವು ಬದಲಾಗುತ್ತಿದೆ. ಜ್ಞಾನಾಮೃತದ ಕಳಸವನ್ನು ಮಾತೆಯರ ಮೇಲಿಡುತ್ತಾರೆ. ಇದು ಜ್ಞಾನವಾಗಿದೆ ಆದರೆ ವಿಷದ ಹೋಲಿಕೆಯಲ್ಲಿ ನೋಡಿದಾಗ ಇದನ್ನು ಅಮೃತವೆಂದು ಹೇಳಲಾಗುತ್ತದೆ. ಅಮೃತವನ್ನು ಬಿಟ್ಟು ವಿಷವನ್ನೇಕೆ ಕುಡಿಯುತ್ತೀರಿ ಎಂಬ ಹೇಳಿಕೆಯಿದೆ. ಶ್ರೀಮತದಿಂದಲೇ ಶ್ರೇಷ್ಠರಾಗುತ್ತೀರಿ. ಪರಮಪಿತ ಪರಮಾತ್ಮನು ಬಂದು ಶ್ರೀಮತವನ್ನು ಕೊಡುತ್ತಾರೆ. ಕೃಷ್ಣನೂ ಸಹ ಶ್ರೀಮತದಿಂದಲೇ ಈ ರೀತಿ ಆಗಿದ್ದಾರೆ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಇಡೀ ಹಳೆಯ ಪ್ರಪಂಚವನ್ನು ಮರೆತು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಈಗ ಬಲಿಹಾರಿಯೂ ಆಗಬೇಕಾಗುತ್ತದೆ. ಇದನ್ನೇ ಜೀವಿಸಿದ್ದಂತೆಯೇ ಸಾಯುವುದೆಂದು ಹೇಳಲಾಗುತ್ತದೆ. ಭಕ್ತಿಮಾರ್ಗದ ಮಾತುಗಳೇ ಬೇರೆಯಾಗಿದೆ, ಅದು ಭಕ್ತಿಯ ಪಂಥವಾಗಿದೆ. ಭಕ್ತಿಯಲ್ಲಂತೂ ಅನೇಕರು ಗುರುಗಳಿರುತ್ತಾರೆ ಆದರೆ ಸದ್ಗತಿದಾತ ಒಬ್ಬರೇ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ. ಸಾಕಾರಿ ಮನುಷ್ಯರು ಮನುಷ್ಯರ ಸದ್ಗತಿಯನ್ನು ಮಾಡಲು ಸಾಧ್ಯವಿಲ್ಲ. ಸದಾ ಕಾಲಕ್ಕೋಸ್ಕರ ಸುಖವನ್ನು ಕೊಡಲು ಸಾಧ್ಯವಿಲ್ಲ. ಸದಾ ಸುಖವನ್ನು ಕೊಡುವವರು ಒಬ್ಬ ತಂದೆಯಾಗಿದ್ದಾರೆ. ಇದು ಪಾಠಶಾಲೆಯಾಗಿದೆ. ತಂದೆಯು ಗುರಿ-ಉದ್ದೇಶವನ್ನು ತಿಳಿಸುತ್ತಾರೆ - ನಿಮಗೆ ಸ್ವರ್ಗದ ಸುಖದ ಆಸ್ತಿಯು ಸಿಗುವುದು ಉಳಿದವರೆಲ್ಲರೂ ಮುಕ್ತಿಧಾಮಕ್ಕೆ ಹೋಗುತ್ತಾರೆ. ಶಾಂತಿಧಾಮ, ಸುಖಧಾಮ ಮತ್ತು ಇದು ದುಃಖಧಾಮವಾಗಿದೆ. ಈ ಚಕ್ರವು ಸುತ್ತುತ್ತಿರುತ್ತದೆ. ಇದಕ್ಕೆ ಸ್ವದರ್ಶನ ಚಕ್ರವೆಂದು ಹೇಳಲಾಗುತ್ತದೆ. ಈ ಡ್ರಾಮಾದ ಚಕ್ರದಿಂದ ಯಾರೂ ಬಿಡುಗಡೆಯಾಗಲು ಸಾಧ್ಯವಿಲ್ಲ. ಇದು ಪ್ರತಿಯೊಬ್ಬರ ಮಾಡಿ-ಮಾಡಲ್ಪಟ್ಟಿರುವ ಅವಿನಾಶಿ ಪಾತ್ರವಾಗಿದೆ. ತಂದೆಯು ನಿಮಗೆ ಓದಿಸಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಿದ್ದಾರೆ. ಯಾರೆಷ್ಟು ಓದುತ್ತಾರೆಯೋ ಅಷ್ಟು ಪಡೆಯುತ್ತಾರೆ ಅಂದರೆ ಕೆಲವರು ರಾಜರಾಗುತ್ತಾರೆ, ಇನ್ನೂ ಕೆಲವರು ಪ್ರಜೆಗಳಾಗುತ್ತಾರೆ, ಸೂರ್ಯವಂಶಿ ರಾಜ ಮನೆತನವಾಗಿದೆ. ಸತ್ಯಯುಗದಲ್ಲಿ ಸೂರ್ಯವಂಶಿಯರಿದ್ದಾಗ ಮತ್ತ್ಯಾರೂ ಇರಲಿಲ್ಲ. ಭಾರತ ಖಂಡವೇ ಶ್ರೇಷ್ಠಾತಿ ಶ್ರೇಷ್ಠ ಸತ್ಯ ಖಂಡವಾಗಿತ್ತು, ಈಗ ಅಸತ್ಯಖಂಡವಾಗಿದೆ. ಇದಕ್ಕೆ ರೌರವ ನರಕವೆಂದು ಕರೆಯಲಾಗುತ್ತದೆ. ಹಣಕ್ಕೋಸ್ಕರ ಎಷ್ಟೊಂದು ಹೊಡೆದಾಡುತ್ತಾರೆ. ಸತ್ಯಯುಗದಲ್ಲಂತೂ ಅದನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕೋಸ್ಕರ ಪಾಪ ಮಾಡುವಂತಹ ಯಾವುದೇ ಅಪ್ರಾಪ್ತ ವಸ್ತುವಿರುವುದಿಲ್ಲ. ತಂದೆಯೇ ಮಾತೆಯರ ಮುಖಾಂತರ ಈ ಭಷ್ಠಾಚಾರಿ ಪ್ರಪಂಚವನ್ನು ಶ್ರೇಷ್ಠಾಚಾರಿಯನ್ನಾಗಿ ಮಾಡುತ್ತಿದ್ದಾರೆ. ಇವರಿಗೆ ವಂದೇ ಮಾತರಂ ಎಂದು ತಂದೆಯು ಹೇಳುತ್ತಾರೆ. ವಂದೇ ಮಾತರಂ ಎಂದು ಸನ್ಯಾಸಿಗಳು ಹೇಳುವುದಿಲ್ಲ. ಅವರದು ಹದ್ದಿನ ಸನ್ಯಾಸವಾಗಿದೆ, ಇದು ಬೇಹದ್ದಿನ ಸನ್ಯಾಸವಾಗಿದೆ. ಇಡೀ ಪ್ರಪಂಚವನ್ನು ಬುದ್ಧಿಯಿಂದ ಸನ್ಯಾಸ ಮಾಡಬೇಕಾಗಿದೆ. ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡಬೇಕಾಗಿದೆ, ದುಃಖಧಾಮವನ್ನು ಮರೆಯಬೇಕಾಗಿದೆ. ಇದು ತಂದೆಯ ಆಜ್ಞೆಯಾಗಿದೆ. ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ, ನೀವು ಈ ಕಿವಿಗಳಿಂದ ಕೇಳುತ್ತೀರಿ. ಶಿವ ತಂದೆಯು ಈ ಕರ್ಮೇಂದ್ರಿಯಗಳ ಮೂಲಕ ನಿಮಗೆ ತಿಳಿಸುತ್ತಾರೆ. ಅವರು ಜ್ಞಾನ ಸಾಗರನಾಗಿದ್ದಾರೆ, ಇವರು ಯಾವುದೇ ಸಾಧು-ಸಂತ ಮಹಾತ್ಮರಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ತಂದೆಗೆ ಪೂರ್ಣ ಬಲಿಹಾರಿಯಾಗಬೇಕಾಗಿದೆ. ದೇಹದ ಅಹಂಕಾರವನ್ನು ಬಿಟ್ಟು ಯೋಗಾಗ್ನಿಯಿಂದ ವಿಕರ್ಮಗಳನ್ನು ವಿನಾಶ ಮಾಡಿಕೊಳ್ಳಬೇಕಾಗಿದೆ.

2. ಗುರಿ-ಉದ್ದೇಶವನ್ನು ಬುದ್ಧಿಯಲ್ಲಿಟ್ಟುಕೊಂಡು ವಿಧ್ಯಾಭ್ಯಾಸ ಮಾಡಬೇಕಾಗಿದೆ. ಮಾಡಿ-ಮಾಡಲ್ಪಟ್ಟಿರುವಂತಹ ನಾಟಕವನ್ನು ಬುದ್ಧಿಯಲ್ಲಿಟ್ಟುಕೊಂಡು ಸ್ವದರ್ಶನ ಚಕ್ರಧಾರಿಗಳಾಗಬೇಕಾಗಿದೆ.

ವರದಾನ:
ಸಂತುಷ್ಠತೆಯ ಸರ್ಟಿಫಿಕೆಟ್ ಮೂಲಕ ಭವಿಷ್ಯ ರಾಜ್ಯ-ಭಾಗ್ಯದ ಸಿಂಹಾಸನ ಪ್ರಾಪ್ತಿ ಮಾಡಿಕೊಳ್ಳುವಂತಹ ಸಂತುಷ್ಠ ಮೂರ್ತಿ ಭವ.

ಸಂತುಷ್ಠರಾಗಿರಬೇಕು ಮತ್ತು ಸರ್ವರನ್ನು ಸಂತುಷ್ಠ ಮಾಡಬೇಕು - ಈ ಸ್ಲೋಗನ್ ಸದಾ ನಿಮ್ಮ ಮಸ್ತಕರೂಪಿ ಬೋರ್ಡ್ ಮೇಲೆ ಬರೆದಿರಬೇಕು. ಏಕೆಂದರೆ ಇದೇ ಸರ್ಟಿಫಿಕೆಟ್ ಉಳ್ಳವರು ಭವಿಷ್ಯದಲ್ಲಿ ರಾಜ್ಯ-ಭಾಗ್ಯದ ಸರ್ಟಿಫಿಕೆಟ್ ತೆಗೆದುಕೊಳ್ಳುವಿರಿ. ಆದ್ದರಿಂದ ಪ್ರತಿದಿನ ಅಮೃತವೇಳೆ ಈ ಸ್ಲೋಗನನ್ನು ಸ್ಮತಿಯಲ್ಲಿ ತಂದುಕೊಳ್ಳಿ. ಹೇಗೆ ಬೋರ್ಡ ಮೇಲೆ ಸ್ಲೋಗನ್ ಬರೆಯುವಿರಿ. ಅದೇ ರೀತಿ ಸದಾ ನಿಮ್ಮ ಮಸ್ತಕದ ಬೋರ್ಡ್ ಮೇಲೆ ಈ ಸ್ಲೋಗನ್ ಬರೆದುಕೊಳ್ಳಿ. ಆಗ ಎಲ್ಲರೂ ಸಂತುಷ್ಠತಾ ಮೂರ್ತಿಗಳಾಗಿ ಬಿಡುವಿರಿ. ಯಾರು ಸಂತುಷ್ಠರಾಗಿರುತ್ತಾರೆ ಅವರು ಸದಾ ಪ್ರಸನ್ನರಾಗಿರುತ್ತಾರೆ.

ಸ್ಲೋಗನ್:
ಪರಸ್ಪರರಲ್ಲಿ ಸ್ನೇಹ ಮತ್ತು ಸಂತುಷ್ಠತೆ ಸಂಪನ್ನ ವ್ಯವಹಾರ ಮಾಡುವಂತಹವರೇ ಸಫಲತಾ ಮೂರ್ತಿಗಳಾಗುತ್ತಾರೆ.