11.11.18
Avyakt Bapdada Kannada Murli
26.02.84 Om Shanti
Madhuban
“ ಬಾಪ್ದಾದಾರವರ ಅದ್ಭುತ
ಚಿತ್ರ ಶಾಲೆ ”
ಬಾಪ್ದಾದಾರವರು ಇಂದು
ತನ್ನ ಚಿತ್ರ ಶಾಲೆಯನ್ನು ನೋಡುತ್ತಿದ್ದಾರೆ. ಬಾಪ್ದಾದಾರವರ ಬಳಿ ಯಾವ ಚಿತ್ರಶಾಲೆಯಿದೆ, ಅದು
ಗೊತ್ತಿದೆಯೇ? ಇಂದು ವತನದಲ್ಲಿ ಪ್ರತಿಯೊಂದು ಮಕ್ಕಳ ಚರಿತ್ರೆಯ ಚಿತ್ರವನ್ನು ನೋಡುತ್ತಿದ್ದರು.
ಪ್ರತಿಯೊಬ್ಬರದೂ ಆದಿಯಿಂದ ಈಗಿನವರೆಗಿನ ಚರಿತ್ರೆಯ ಚಿತ್ರವು ಹೇಗಿತ್ತು! ಇದನ್ನು ಯೋಚಿಸಿ,
ಚಿತ್ರಶಾಲೆಯು ಎಷ್ಟು ದೊಡ್ಡದಿರಬಹುದು! ಆ ಚಿತ್ರದಲ್ಲಿ ಪ್ರತಿಯೊಂದು ಮಕ್ಕಳಲ್ಲಿಯೂ ವಿಶೇಷವಾಗಿ
ಮೂರು ಮಾತುಗಳನ್ನು ನೋಡಿದರು! ಒಂದು- ಪವಿತ್ರತೆಯ ವ್ಯಕ್ತಿತ್ವ. ಎರಡನೆಯದು - ರಿಯಾಲಿಟಿಯ ರಾಯಲ್ಟಿ.
ಮೂರನೆಯದು - ಸಂಬಂಧಗಳ ಸಮೀಪತೆ - ಈ ಮೂರು ಮಾತುಗಳನ್ನು ಪ್ರತಿಯೊಬ್ಬರ ಚಿತ್ರದಲ್ಲಿ ನೋಡಿದರು.
ಪವಿತ್ರತೆಯ ವ್ಯಕ್ತಿತ್ವವು ಆಕಾರ ರೂಪದಲ್ಲಿ ಚಿತ್ರದ ನಾಲ್ಕೂ ಕಡೆಯಲ್ಲಿ ಹೊಳೆಯುತ್ತಿರುವ ಲೈಟ್
ಕಾಣಿಸುತ್ತಿತ್ತು. ರಿಯಾಲಿಟಿಯ ರಾಯಲ್ಟಿಯು ಚಹರೆಯಲ್ಲಿ ಹರ್ಷಿತಮುಖತೆ ಮತ್ತು ಸ್ವಚ್ಛತೆಯ
ಹೊಳಪಿತ್ತು ಮತ್ತು ಸಂಬಂಧಗಳ ಸಮೀಪತೆಯು ಮಸ್ತಕದ ಮಧ್ಯೆ ಹೊಳೆಯುತ್ತಿರುವ ನಕ್ಷತ್ರವು ಕೆಲವರಲ್ಲಿ
ಹೆಚ್ಚಾಗಿ ನಾಲ್ಕೂ ಕಡೆಯಲ್ಲಿ ಹರಡಿರುವ ಕಿರಣಗಳಿಂದ ಹೊಳೆಯುತ್ತಿತ್ತು, ಕೆಲವರಲ್ಲಿ ಸ್ವಲ್ಪವೇ
ಕಿರಣಗಳಿಂದ ಹೊಳೆಯುತ್ತಿತ್ತು. ಸಮೀಪದಲ್ಲಿರುವ ಆತ್ಮರು ತಂದೆಯ ಸಮಾನ ಬೇಹದ್ದ್ ಅರ್ಥಾತ್ ನಾಲ್ಕೂ
ಕಡೆಯಲ್ಲಿ ಹರಡಿರುವ ಕಿರಣಗಳಿರುವುದಿತ್ತು. ಲೈಟ್ ಮತ್ತು ಮೈಟ್ ಎರಡರಲ್ಲಿಯೂ ತಂದೆಯ ಸಮಾನವಾಗಿ
ಕಾಣಿಸುತ್ತಿತ್ತು. ಇದೇ ರೀತಿ ಮೂರೂ ವಿಶೇಷತೆಗಳಿಂದ ಪ್ರತಿಯೊಬ್ಬರ ಚರಿತ್ರೆಯ ಚಿತ್ರವನ್ನು
ನೋಡಿದೆವು. ಜೊತೆ ಜೊತೆಗೆ ಆದಿಯಿಂದ ಅಂತ್ಯ ಅರ್ಥಾತ್ ಈಗಿನವರೆಗೂ ಮೂರೂ ಮಾತುಗಳಲ್ಲಿ ಸದಾ
ಶ್ರೇಷ್ಠವಾಗಿದೆಯೇ ಅಥವಾ ಕೆಲವೊಮ್ಮೆ ಹೇಗೋ, ಕೆಲವೊಮ್ಮೆ ಹೇಗಿದ್ದರು, ಅದರ ಫಲಿತಾಂಶವನ್ನೂ ಸಹ
ಪ್ರತಿಯೊಬ್ಬರ ಚಿತ್ರದಲ್ಲಿ ನೋಡಿದೆವು. ಹೇಗೆ ಸ್ಥೂಲ ಶರೀರದಲ್ಲಿ ನಾಡಿಯಿಂದ ಪರಿಶೀಲಿಸುತ್ತಾರೆ -
ಸರಿಯಾದ ಗತಿಯಿಂದ ನಡೆಯುತ್ತಿದೆಯೇ ಅಥವಾ ಏರುಪೇರಾಗುತ್ತಿದೆಯೇ! ತೀವ್ರವಾಗಿದೆಯೇ ಅಥವಾ
ನಿಧಾನವಿದೆಯೇ, ಇದರಿಂದಲೇ ಆರೋಗ್ಯವು ಹೇಗಿದೆನ್ನುವುದು ತಿಳಿದು ಬರುತ್ತದೆ. ಅದೇ ರೀತಿಯಲ್ಲಿ
ಪ್ರತಿಯೊಂದು ಚಿತ್ರದ ಮಧ್ಯ ಹೃದಯದಲ್ಲಿ ಲೈಟ್, ಕೆಳಗಿಂದ ಮೇಲೆ ಹೋಗುತ್ತಿತ್ತು. ಅದರಲ್ಲಿ ಗತಿಯೂ
ಸಹ ಕಾಣಿಸುತ್ತಿತ್ತು - ಒಂದೇ ಗತಿಯಿಂದ ಆ ಲೈಟ್ ಕೆಳಗಿಂದ ಮೇಲಕ್ಕೆ ಹೋಗುತ್ತಿದೆಯೇ ಅಥವಾ ಸಮಯ
ಪ್ರತಿ ಸಮಯ ಗತಿಯಲ್ಲಿ ಅಂತರವಾಗುತ್ತಿದೆಯೇ! ಜೊತೆ ಜೊತೆಗೆ ಮಧ್ಯ-ಮಧ್ಯದಲ್ಲಿ ಲೈಟ್ನ ಬಣ್ಣವು
ಬದಲಾಗುತ್ತಿದೆಯೇ ಅಥವಾ ಒಂದೇ ರೀತಿ ಇದೆಯೇ! ಮೂರನೆಯದು - ನಡೆಯುತ್ತಾ-ನಡೆಯುತ್ತಾ ಲೈಟ್
ಕೆಲವೊಮ್ಮೆ ನಿಂತು ಬಿಡುತ್ತದೆಯೇ ಅಥವಾ ನಿರಂತರವಾಗಿ ನಡೆಯುತ್ತಿರುತ್ತದೆಯೇ. ಇದೇ ವಿಧಿಯ ಮೂಲಕ
ಪ್ರತಿಯೊಬ್ಬರ ಚರಿತ್ರೆಯ ಚಿತ್ರವನ್ನು ನೋಡಿದೆವು. ತಾವೂ ಸಹ ತಮ್ಮ ಚಿತ್ರವನ್ನು ನೋಡಬಹುದಲ್ಲವೆ.
ವ್ಯಕ್ತಿತ್ವ, ರಾಯಲ್ಟಿ ಮತ್ತು ಸಮೀಪತೆ - ಈ ಮೂರೂ ವಿಶೇಷತೆಗಳಿಂದ ಪರಿಶೀಲನೆ ಮಾಡಿರಿ - ನನ್ನ
ಚಿತ್ರವು ಹೇಗಿದೆ? ನನ್ನ ಲೈಟ್ನ ಗತಿಯು ಹೇಗಿದೆ? ನಂಬರ್ವಾರಂತು ಇದ್ದೇ ಇರುತ್ತದೆ. ಆದರೆ ಮೂರೂ
ವಿಶೇಷತೆಗಳು ಮತ್ತು ಮೂರೂ ಪ್ರಕಾರದ ಲೈಟ್ನ ಗತಿಯು, ಆದಿಯಿಂದ ಅಂತ್ಯದವರೆಗೂ ಸದಾ ಇದ್ದೇ ಇರುತ್ತದೆ
- ಇಂತಹ ಚಿತ್ರವು ಮೆಜಾರಿಟಿ ಇಲ್ಲ ಆದರೆ ಮೈನಾರಿಟಿಯಲ್ಲಿತ್ತು. ಮೂರೂ ಲೈಟ್ನ ಗತಿ ಮತ್ತು ಮೂರೂ
ವಿಶೇಷತೆಗಳು ಆರು ಮಾತಾಯಿತಲ್ಲವೆ. ಆರು ಮಾತುಗಳಲ್ಲಿಂದ ಮೆಜಾರಿಟಿಯಲ್ಲಿ ನಾಲ್ಕು-ಐದರವರೆಗೆ,
ಮತ್ತೆ ಕೆಲವು ಮೂರವರೆಗೇ ಇದ್ದವು. ಪವಿತ್ರತೆಯ ವ್ಯಕ್ತಿತ್ವದ ಲೈಟ್ನ ಆಕಾರವು ಕೆಲವರಲ್ಲಿ ಕೇವಲ
ಕಿರೀಟದ ಸಮಾನವಿರುವ ಮುಖವು ಸುತ್ತಲೂ ಇತ್ತು ಮತ್ತು ಕೆಲವರದು ಅರ್ಧ ಶರೀರದವರೆಗೆ ಮತ್ತು ಕೆಲವರದು
ಇಡೀ ಶರೀರದ ಸುತ್ತಲೂ ಕಾಣಿಸುತ್ತಿತ್ತು. ಹೇಗೆ ಭಾವಚಿತ್ರವನ್ನು ತೆಗೆಯುತ್ತೀರಲ್ಲವೆ! ಯಾರು
ಮನಸ್ಸಾ-ವಾಚಾ-ಕರ್ಮಣಾ ಮೂರರಲ್ಲಿಯೂ ಆದಿಯಿಂದ ಅಂತ್ಯದವರೆಗೂ ಪವಿತ್ರವಾಗಿದ್ದು, ಮನಸ್ಸಿನಲ್ಲಿಯೂ
ಸ್ವಯಂ ಪ್ರತಿ ಅಥವಾ ಅನ್ಯರ ಪ್ರತಿ ವ್ಯರ್ಥವೆಂಬ ಅಪವಿತ್ರ ಸಂಕಲ್ಪವೂ ನಡೆಯಲಿಲ್ಲ. ಯಾವುದೇ
ಬಲಹೀನತೆ ಅಥವಾ ಅವಗುಣವೆಂಬ ಅಪವಿತ್ರತೆಯ ಸಂಕಲ್ಪವೂ ಧಾರಣೆ ಮಾಡಿಕೊಳ್ಳಲಿಲ್ಲ, ಸಂಕಲ್ಪದಲ್ಲಿ
ಜನ್ಮದಿಂದಲೂ ವೈಷ್ಣವ, ಸಂಕಲ್ಪವು ಬುದ್ಧಿಯ ಭೋಜನವಾಗಿದೆ. ಜನ್ಮದಿಂದ ವೈಷ್ಣವ ಅಂದರೆ ಅಶುದ್ಧಿ
ಅಥವಾ ಅವಗುಣ, ವ್ಯರ್ಥ ಸಂಕಲ್ಪವನ್ನು ಬುದ್ಧಿಯ ಮೂಲಕ, ಮನಸ್ಸಿನ ಮೂಲಕ ಗ್ರಹಿಸದಿರಬಹುದು, ಇವರನ್ನೇ
ಸತ್ಯ ವೈಷ್ಣವ ಅಥವಾ ಬಾಲ ಬ್ರಹ್ಮಚಾರಿಯೆಂದು ಕರೆಯಲಾಗುತ್ತದೆ. ಅಂದಾಗ ಪ್ರತಿಯೊಬ್ಬರ ಚಿತ್ರದಲ್ಲಿ
ಇಂತಹ ಪವಿತ್ರತೆಯ ವ್ಯಕ್ತಿತ್ವವಿರುವ ರೇಖೆಗಳನ್ನು ಲೈಟ್ನ ಆಕಾರದ ಮೂಲಕ ನೋಡಿದೆವು. ಯಾರು
ಮನಸ್ಸಾ-ವಾಚಾ-ಕರ್ಮಣಾ ಮೂರರಲ್ಲಿಯೂ ಪವಿತ್ರವಾಗಿದ್ದಾರೆ! (ಕರ್ಮಣಾದಲ್ಲಿ ಸಂಬಂಧ, ಸಂಪರ್ಕ ಎಲ್ಲವೂ
ಬಂದು ಬಿಡುತ್ತದೆ?) ಅವರ ಮಸ್ತಕದಿಂದ ಪಾದದವರೆಗೂ ಲೈಟ್ನ ಆಕಾರದಲ್ಲಿ ಹೊಳೆಯುತ್ತಿರುವ
ಚಿತ್ರವಿತ್ತು. ತಿಳಿಯಿತೆ! ಜ್ಞಾನದ ದರ್ಪಣದಲ್ಲಿ ತಮ್ಮ ಚಿತ್ರವನ್ನು ನೋಡುತ್ತಿದ್ದೀರಾ? ಬಹಳ
ಚೆನ್ನಾಗಿ ನೋಡಿಕೊಳ್ಳಿ ರಿ- ನನ್ನ ಚಿತ್ರವು ಹೇಗಿದೆ, ಅದನ್ನು ಬಾಪ್ದಾದಾರವರು ನೋಡಿದರು.
ಒಳ್ಳೆಯದು.
ಮಿಲನವಾಗುವವರ ಪಟ್ಟಿಯು ಉದ್ದವಾಗಿದೆ. ಅವ್ಯಕ್ತ ವತನದಲ್ಲಂತು ಅಂಕಗಳೂ ಸಿಗುವುದಿಲ್ಲ ಮತ್ತು ಸಮಯದ
ಮಾತೇ ಇಲ್ಲ. ಯಾವಾಗಬೇಕು, ಎಷ್ಟು ಸಮಯ ಬೇಕು ಮತ್ತು ಎಷ್ಟು ಮಂದಿ ಮಿಲನವಾಗಬೇಕು ಮಿಲನವಾಗಬಹುದು.
ಏಕೆಂದರೆ ಅದು ಹದ್ದಿನ ಜಗತ್ತಿನಿಂದ ಆಚೆಯಿದೆ. ಈ ಸಾಕಾರ ಜಗತ್ತಿನಲ್ಲಿ ಇದೆಲ್ಲದರ ಬಂಧನವಿದೆ.
ಆದ್ದರಿಂದ ನಿರ್ಬಂಧನರನ್ನೂ ಬಂಧನದಲ್ಲಿ ಬಂಧಿಸಬೇಕಾಗುತ್ತದೆ. ಒಳ್ಳೆಯದು.
ಟೀಚರ್ಸ್ ಸಂತುಷ್ಟವಾಗಿ ಬಿಟ್ಟಿರಲ್ಲವೆ. ಎಲ್ಲರಿಗೂ ತಮ್ಮ ಸಂಪೂರ್ಣವಾದ ಲೆಕ್ಕ ಸಿಕ್ಕಿದೆಯಲ್ಲವೆ.
ನಿಮಿತ್ತರಾಗಿರುವವರು ವಿಶೇಷ ಆತ್ಮರಾಗಿದ್ದಾರೆ. ಬಾಪ್ದಾದಾರವರೂ ಸಹ ವಿಶೇಷ ಆತ್ಮರಿಗೆ ವಿಶೇಷ
ಗೌರವವನ್ನಿಡುತ್ತಾರೆ. ಆದರೂ ಸೇವೆಯ ಜೊತೆಗಾರರಲ್ಲವೆ. ಹಾಗೆ ನೋಡಿದರೆ ಎಲ್ಲರೂ
ಜೊತೆಗಾರರಾಗಿದ್ದಾರೆ, ಆದರೂ ನಿಮಿತ್ತರನ್ನು ನಿಮಿತ್ತರೆಂದು ತಿಳಿಯುವುದರಲ್ಲಿಯೇ ಸೇವೆಯ
ಸಫಲತೆಯಾಗುತ್ತದೆ. ಹಾಗೆಯೇ ಸರ್ವೀಸಿನಲ್ಲಿಯೂ ಕೆಲವು ಮಕ್ಕಳು ಬಹಳ ತೀವ್ರಗತಿಯ
ಉಮ್ಮಂಗ-ಉತ್ಸಾಹದಲ್ಲಿ ಮುಂದುವರೆಯುತ್ತಿರುತ್ತಾರೆ, ಆದರೂ ನಿಮಿತ್ತರಾಗಿರುವ ವಿಶೇಷ ಆತ್ಮರಿಗೆ
ಗೌರವ ಕೊಡಬೇಕು ಅರ್ಥಾತ್ ತಂದೆಗೆ ಗೌರವ ಕೊಡಬೇಕಾಗಿದೆ ಮತ್ತು ತಂದೆಯ ಗೌರವದ ರಿಟರ್ನ್ನಲ್ಲಿ,
ಹೃದಯದ ಸ್ನೇಹವನ್ನು ತೆಗೆದುಕೊಳ್ಳಬೇಕು. ತಿಳಿಯಿತೆ! ಟೀಚರ್ಸ್ಗೆ ಗೌರವವನ್ನು ಕೊಡುವುದಿಲ್ಲ. ಆದರೆ
ತಂದೆಯೊಂದಿಗೆ ಹೃದಯದ ಸ್ನೇಹದ ರಿಟರ್ನ್ನ್ನು ತೆಗೆದುಕೊಳ್ಳುತ್ತೀರಿ. ಒಳ್ಳೆಯದು.
ಈ ರೀತಿ ಸದಾ ಹೃದಯರಾಮ ತಂದೆಯ ಮೂಲಕ ಹೃದಯದ ಸ್ನೇಹವನ್ನು ತೆಗೆದುಕೊಳ್ಳಲು ಪಾತ್ರರು ಅರ್ಥಾತ್
ಸುಪುತ್ರ ಮಕ್ಕಳಿಗೆ, ಸದಾ ಸ್ವಯಂನ್ನು ಪವಿತ್ರತೆಯ ವ್ಯಕ್ತಿತ್ವದ ರಾಯಲ್ಟಿಯ ರಿಯಾಲಿಟಿಯಲ್ಲಿ
ಅನುಭವ ಮಾಡುವಂತಹ ಸಮೀಪ ಮತ್ತು ಸಮಾನ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಯು.ಕೆ.
ಗ್ರೂಪ್ನೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ:-
ಎಲ್ಲರೂ ಸರ್ವ ರಹಸ್ಯಗಳಿಂದ ಸಂಪನ್ನವಾಗಿರುವ ರಹಸ್ಯಯುಕ್ತ, ಯೋಗಯುಕ್ತ ಆತ್ಮರಾಗಿದ್ದೀರಲ್ಲವೆ!
ಪ್ರಾರಂಭದಿಂದಲೂ ಬಾಪ್ದಾದಾರವರ ಹೆಸರನ್ನು ನಾಲ್ಕೂ ಕಡೆಯಲ್ಲಿ ಪ್ರತ್ಯಕ್ಷಗೊಳಿಸಲು
ನಿಮಿತ್ತರಾಗಿರುವ ಆತ್ಮರಾಗಿದ್ದೀರಿ. ಬಾಪ್ದಾದಾರವರು ಇಂತಹ ಆದಿ ರತ್ನಗಳನ್ನು, ಸೇವೆಯ
ಜೊತೆಗಾರರನ್ನು ನೋಡುತ್ತಾ ಸದಾ ಖುಷಿಯಾಗುತ್ತಾರೆ. ಎಲ್ಲರೂ ಬಾಪ್ದಾದಾರವರ ಬಲಭುಜ ಗ್ರೂಪ್
ಆಗಿದ್ದೀರಿ. ಬಹಳ ಒಳ್ಳೊಳ್ಳೆಯ ರತ್ನಗಳಿವೆ. ಎಲ್ಲರೂ ರತ್ನಗಳಾಗಿದ್ದಾರೆ ಏಕೆಂದರೆ ಸ್ವಯಂ
ಅನುಭವಿಯಾಗಿದ್ದು, ಅನ್ಯರನ್ನೂ ಅನುಭವಿಯನ್ನಾಗಿ ಮಾಡುವುದಕ್ಕಾಗಿ ನಿಮಿತ್ತರಾಗಿರುವ
ಆತ್ಮರಾಗಿದ್ದೀರಿ. ಬಾಪ್ದಾದಾರವರಿಗೆ ಗೊತ್ತಿದೆ - ಎಲ್ಲರೂ ಸದಾ ಎಷ್ಟೊಂದು ಉಮ್ಮಂಗ-ಉತ್ಸಾಹದಿಂದ
ನೆನಪು ಮತ್ತು ಸೇವೆಯಲ್ಲಿಯೂ ಮಗ್ನರಾಗಿರುವ ಆತ್ಮರಾಗಿದ್ದಾರೆ. ನೆನಪು ಮತ್ತು ಸೇವೆಯನ್ನು ಬಿಟ್ಟು,
ಮತ್ತೆಲ್ಲಾ ಕಡೆಯಿಂದ ಸಮಾಪ್ತಿಯಾಗಿ ಬಿಟ್ಟರು. ಇಷ್ಟೇ ಒಂದೇ ಆಗಿದ್ದೇವೆ, ಒಬ್ಬರವರಾಗಿದ್ದೇವೆ,
ಏಕರಸ ಸ್ಥಿತಿಯಿರುವವರಾಗಿದ್ದೇವೆ, ಇದೇ ಎಲ್ಲರೂ ಕೂಗು ಇದೆ. ಇದೇ ವಾಸ್ತವಿಕ ಶ್ರೇಷ್ಠ ಜೀವನವಾಗಿದೆ.
ಇಂತಹ ಶ್ರೇಷ್ಠ ಜೀವನವಿರುವವರು ಸದಾಕಾಲವೂ ಬಾಪ್ದಾದಾರವರ ಸಮೀಪವಿದ್ದಾರೆ. ನಿಶ್ಚಯಬುದ್ಧಿಯ
ಪ್ರತ್ಯಕ್ಷ ಪ್ರಮಾಣವನ್ನು ಕೊಡುವವರಾಗಿದ್ದಾರೆ. ಸದಾ ವಾಹ್ ನನ್ನಬಾಬಾ ಮತ್ತು ವಾಹ್ ನನ್ನ
ಶ್ರೇಷ್ಠ ಭಾಗ್ಯವೇ - ಇದೇ ನೆನಪಿರುತ್ತದೆಯಲ್ಲವೆ! ಬಾಪ್ದಾದಾರವರು ಇಂತಹ ಸ್ಮೃತಿ ಸ್ವರೂಪ
ಮಕ್ಕಳನ್ನು ನೋಡುತ್ತಾ ಸದಾ ಹರ್ಷಿತವಾಗುತ್ತಾರೆ - ವಾಹ್ ನನ್ನ ಶ್ರೇಷ್ಠ ಮಕ್ಕಳೇ! ಬಾಪ್ದಾದಾರವರು
ಮಕ್ಕಳ ಇಂತಹ ಗೀತೆಯನ್ನು ಹಾಡುತ್ತಾರೆ. ಲಂಡನ್ ವಿದೇಶದ ಸೇವೆಗೆ ಬುನಾದಿಯಾಗಿದೆ. ತಾವೆಲ್ಲರೂ
ಸೇವೆಯ ಬುನಾದಿಗೆ ಫೌಂಡೇಶನ್ ಸ್ಟೋನ್ ಆಗಿದ್ದೀರಿ. ತಾವೆಲ್ಲರೂ ಪಕ್ಕಾ ಇರುವ ಪ್ರಭಾವದಿಂದ
ಸೇವೆಯಲ್ಲಿ ವೃದ್ಧಿಯಾಗುತ್ತಿದೆ. ಭಲೆ ಬುನಾದಿಯು ವೃಕ್ಷದ ವಿಸ್ತಾರದಲ್ಲಿ ಬಚ್ಚಿಟ್ಟುಕೊಳ್ಳುತ್ತದೆ.
ಆದರೆ ಇರುವುದಂತು ಬುನಾದಿಯಲ್ಲಿ ಅಲ್ಲವೆ. ವೃಕ್ಷದ ವಿಸ್ತಾರವು ಸುಂದರವಾಗಿರುವುದನ್ನು ನೋಡುತ್ತಾ,
ಆ ಕಡೆಗೆ ಹೆಚ್ಚಾಗಿ ಕಣ್ಣು ಹೋಗುತ್ತದೆ. ಬುನಾದಿಯು ಗುಪ್ತವಾಗಿ ಬಿಡುತ್ತದೆ. ಅದೇ ರೀತಿಯಲ್ಲಿ
ತಾವೂ ಸ್ವಲ್ಪವೇ ನಿಮಿತ್ತರಾಗಿರುವವರು, ಅನ್ಯರಿಗೆ ಅವಕಾಶವನ್ನು ಕೊಡುವವರಾಗಿ ಬಿಟ್ಟಿರಿ. ಆದರೆ
ಅದರೂ ಆದಿಯಲ್ಲಿರುವವರು, ಆದಿಯಲ್ಲಿರುವವರೇ ಆಗಿದ್ದಾರೆ. ಅನ್ಯರಿಗೆ ಅವಕಾಶವನ್ನು ಕೊಟ್ಟು
ಮುಂದುವರೆಯುವುದರಲ್ಲಿ ತಮಗೆ ಖುಷಿಯಾಗುತ್ತದೆಯಲ್ಲವೆ. ಹೀಗಂತು ತಿಳಿಯುವುದಿಲ್ಲ ತಾನೆ - ಈ ಡಬಲ್
ವಿದೇಶಿಗಳು ಬಂದಿದ್ದಾರೆ. ಆದ್ದರಿಂದ ನಾವು ಗುಪ್ತವಾಗಿ ಬಿಟ್ಟೆವು? ಆದರೂ ನಿಮಿತ್ತರು
ತಾವಾಗಿದ್ದೀರಿ. ಅವರಿಗೆ ಉಮ್ಮಂಗ-ಉತ್ಸಾಹವನ್ನು ಕೊಡಲು ನಿಮಿತ್ತರಾಗಿದ್ದೀರಿ. ಯಾರು ಅನ್ಯರನ್ನು
ಮುಂದಿಡುತ್ತಾರೆಯೋ ಅವರು ಸ್ವಯಂ ಮುಂದೆ ಇದ್ದೇ ಇರುತ್ತಾರೆ. ಹೇಗೆ ಚಿಕ್ಕ ಮಕ್ಕಳಿಗೆ ಸದಾ
ಹೇಳುತ್ತೀರಿ – ಮುಂದೆ ನಡೆಯಿರಿ, ಹಿರಿಯರು ಹಿಂದಿರುತ್ತಾರೆ. ಚಿಕ್ಕವರನ್ನು ಮುಂದುವರೆಸುವುದೇ
ಹಿರಿಯರು ಮುಂದುವರೆಯುವುದಾಗಿದೆ. ಅದರ ಪ್ರತ್ಯಕ್ಷ ಫಲವೂ ಸಿಗುತ್ತಲೇ ಇರುತ್ತದೆ. ಒಂದುವೇಳೆ ತಾವು
ಸಹಯೋಗಿಯಾಗಿಲ್ಲದಿದ್ದರೆ, ಲಂಡನ್ನಲ್ಲಿ ಇಷ್ಟೊಂದು ಸೇವಾಕೇಂದ್ರಗಳು ತೆರೆಯಲಾಗುತ್ತಿರಲಿಲ್ಲ.
ಕೆಲವರು ಕೆಲವೊಂದೆಡೆ ನಿಮಿತ್ತರಾಗಿ ಬಿಟ್ಟಿರಿ, ಕೆಲವರು ಕೆಲವೊಂದೆಡೆ ನಿಮಿತ್ತರಾಗಿ ಬಿಟ್ಟಿರಿ.
ಒಳ್ಳೆಯದು.
ಮಲೇಷಿಯಾ ,
ಸಿಂಗಪುರ್ನವರೊಂದಿಗೆ:-
ಎಲ್ಲರೂ ತಮ್ಮನ್ನು ತಂದೆಗೆ ಸ್ನೇಹಿ ಆತ್ಮರೆಂದು ಅನುಭವ ಮಾಡುತ್ತೀರಾ! ಸದಾ ಒಬ್ಬ ತಂದೆಯ ಹೊರತು
ಮತ್ತ್ಯಾರೂ ಇಲ್ಲ, ಇದೇ ಸ್ಥಿತಿಯಲ್ಲಿ ಸ್ಥಿತರಾಗಿರುತ್ತೀರಾ? ಇದೇ ಸ್ಥಿತಿಯನ್ನೇ ಏಕರಸ
ಸ್ಥಿತಿಯೆಂದು ಹೇಳಲಾಗುತ್ತದೆ. ಏಕೆಂದರೆ ಎಲ್ಲಿ ಒಗ್ಗಟ್ಟಿದೆ ಅಲ್ಲಿ ಏಕರಸ ಇದೆ.
ಅನೇಕತೆಯಿದೆಯೆಂದರೆ ಸ್ಥಿತಿಯೂ ಏರುಪೇರಾಗುತ್ತದೆ. ತಂದೆಯು ಸಹಜವಾದ ಮಾರ್ಗವನ್ನು ತಿಳಿಸಿದರು,
ಅದೇನೆಂದರೆ ಒಬ್ಬರಲ್ಲಿ ಎಲ್ಲವನ್ನೂ ನೋಡಿರಿ. ಅನೇಕರನ್ನು ನೆನಪು ಮಾಡುವುದರಲ್ಲಿ, ಅನೇಕ ಕಡೆಗಳ
ಅಲೆದಾಟದಿಂದ ಮುಕ್ತರಾಗಿ ಬಿಟ್ಟಿರಿ. ಒಂದಾಗಿದ್ದೇವೆ, ಒಬ್ಬರವರಾಗಿದ್ದೇವೆ, ಇದೇ ಏಕರಸ ಸ್ಥಿತಿಯ
ಮೂಲಕ ತಮ್ಮನ್ನು ಸದಾ ಮುಂದುವರೆಸಬಹುದು.
ಸಿಂಗಾಪುರ್ ಹಾಗೂ ಹಾಂಗ್ಕಾಂಗ್ನವರೀಗ ಚೈನಾದಲ್ಲಿಯೂ ಸೇವಾಕೇಂದ್ರ ತೆರೆಯಬೇಕೆನ್ನುವ ಸಂಕಲ್ಪವನ್ನು
ಮಾಡಬೇಕು. ಇಡೀ ಚೈನಾದಲ್ಲೀಗ ಯಾವುದೇ ಸೇವಾಕೇಂದ್ರವು ಇಲ್ಲ. ಅವರನ್ನು ಸಂಪರ್ಕದಲ್ಲಿ ತರುತ್ತಾ
ಅನುಭವವನ್ನು ಮಾಡಿಸಿರಿ. ಸಾಹಸದಲ್ಲಿದ್ದು ಸಂಕಲ್ಪವನ್ನು ಮಾಡುತ್ತೀರೆಂದರೆ ಆಗಿ ಬಿಡುತ್ತದೆ.
ರಾಜಯೋಗದಿಂದ ಪ್ರಭು ಪ್ರೇಮ, ಶಾಂತಿ, ಶಕ್ತಿಯ ಅನುಭವವನ್ನು ಮಾಡಿಸಿರಿ, ಆಗಲೇ ಆತ್ಮರು
ಸ್ವತಹವಾಗಿಯೇ ಪರಿವರ್ತನೆಯಾಗಿ ಬಿಡುತ್ತಾರೆ. ರಾಜಯೋಗಿಯನ್ನಾಗಿ ಮಾಡಿರಿ, ದೇವತೆಯನ್ನಾಗಿ ಅಲ್ಲ,
ರಾಜಯೋಗಿಯು ಸ್ವತಹವಾಗಿಯೇ ದೇವತೆಯಾಗಿ ಬಿಡುತ್ತಾರೆ. ಒಳ್ಳೆಯದು.
ಪೋ ಲ್ಯಾಂಡ್
ಗ್ರೂಪ್ನೊಂದಿಗೆ:-
ಬಾಪ್ದಾದಾರವರಿಗೆ
ಖುಷಿಯಿದೆ – ಎಲ್ಲಾ ಮಕ್ಕಳು ತಮ್ಮ ಮಧುರಮನೆಗೆ ಬಂದು ತಲುಪಿ ಬಿಟ್ಟರು. ತಾವೆಲ್ಲರಿಗೂ ಸಹ ಈ
ಖುಷಿಯಿದೆಯಲ್ಲವೆ - ನಾವು ಇಂತಹ ಮಹಾನ್ ತೀರ್ಥ ಸ್ಥಾನದಲ್ಲಿ ತಲುಪಿ ಬಿಟ್ಟೆವು. ಶ್ರೇಷ್ಠ
ಜೀವನವಂತು ಅಭ್ಯಾಸ ಮಾಡುತ್ತಾ-ಮಾಡುತ್ತಾ ಆಗಿ ಬಿಡುತ್ತದೆ ಆದರೆ ಇಂತಹ ಶ್ರೇಷ್ಠ ಭಾಗ್ಯವನ್ನು
ಪಡೆದುಕೊಂಡರು, ಅವರು ಈ ಸ್ಥಾನದಲ್ಲಿ ತಮ್ಮ ಸತ್ಯವಾದ ಈಶ್ವರನೊಂದಿಗೆ ಸ್ನೇಹವಿರುವ ಪರಿವಾರದಲ್ಲಿ
ತಲುಪಿ ಬಿಟ್ಟರು. ಇಷ್ಟೂ ಖರ್ಚನ್ನು ಮಾಡಿಕೊಂಡು ಬಂದಿದ್ದೀರಿ, ಇಷ್ಟೂ ಪರಿಶ್ರಮ ಪಟ್ಟು
ಬಂದಿದ್ದೀರಿ, ಈಗ ತಿಳಿಯುತ್ತೀರಿ- ಖರ್ಚು ಮತ್ತು ಪರಿಶ್ರಮವು ಸಫಲವಾಯಿತು. ಹೀಗಂತು
ತಿಳಿಯುವುದಿಲ್ಲವೇ - ಗೊತ್ತಿಲ್ಲ, ಎಲ್ಲಿ ತಲುಪಿ ಬಿಟ್ಟೆವು! ಪರಿವಾರದ ಮತ್ತು ತಂದೆಗೆ ಇಷ್ಟೊಂದು
ಪ್ರಿಯರಾಗಿದ್ದೀರಿ. ಬಾಪ್ದಾದಾರವರು ಸದಾ ಮಕ್ಕಳ ವಿಶೇಷತೆಯನ್ನು ನೋಡುತ್ತಾರೆ. ತಾವುಗಳು ತಮ್ಮ
ವಿಶೇಷತೆಯನ್ನು ತಿಳಿದಿದ್ದೀರಾ? ಈ ವಿಶೇಷತೆಯಂತು ಇದೆ - ಲಗನ್ ಏನಿದೆ, ಅದರಿಂದ ಇಷ್ಟೂ ದೂರದಿಂದಲೂ
ಇಲ್ಲಿಗೆ ತಲುಪಿದ್ದೀರಿ. ಈಗ ಸದಾ ತಮ್ಮ ಈಶ್ವರೀಯ ಪರಿವಾರವನ್ನು ಹಾಗೂ ಈ ಈಶ್ವರೀಯ ವಿಧಿ
ರಾಜಯೋಗವನ್ನು ಜೊತೆಯಲ್ಲಿಟ್ಟುಕೊಂಡಿರಿ. ಈಗ ಅಲ್ಲಿ ಹೋಗಿ ರಾಜಯೋಗ ಕೇಂದ್ರವನ್ನು ಬಹಳ ಚೆನ್ನಾಗಿ
ಉನ್ನತಿಗೊಳಿಸಬೇಕಾಗಿದೆ. ಏಕೆಂದರೆ ಕೆಲವರು ಇಂತಹ ಆತ್ಮರಿದ್ದಾರೆ, ಅವರು ಸತ್ಯ ಶಾಂತಿ, ಸತ್ಯ
ಪ್ರೇಮ ಮತ್ತು ಸತ್ಯ ಸುಖದ ಬಾಯಾರಿಕೆಯಿದೆ. ಅವರಿಗೆ ಮಾರ್ಗವನ್ನಂತು ತಿಳಿಸುತ್ತೀರಲ್ಲವೆ. ಹಾಗೆಯೇ
ಯಾರಿಗೇ ನೀರಿನ ಬಾಯಾರಿಕೆಯಿದೆಯೆಂದರೆ, ಅವರಿಗೆ ಸಮಯದಲ್ಲಿ ನೀರನ್ನು ಕುಡಿಸುತ್ತೀರೆಂದರೆ, ಇಡೀ
ಜೀವನದಲ್ಲಿಯೂ ಅವರ ಗುಣಗಾನ ಮಾಡುತ್ತಿರುತ್ತಾರೆ. ಅಂದಮೇಲೆ ತಾವು ಜನ್ಮ-ಜನ್ಮಾಂತರಕ್ಕಾಗಿ ಆತ್ಮರ
ಸುಖ-ಶಾಂತಿಯ ಬಾಯಾರಿಕೆಯನ್ನು ನೀಗಿಸುವುದು, ಇದರಿಂದ ಪುಣ್ಯಾತ್ಮರಾಗಿ ಬಿಡುತ್ತೀರಿ. ತಮ್ಮ
ಖುಷಿಯನ್ನು ನೋಡುತ್ತಾ ಎಲ್ಲರೂ ಖುಷಿಯಾಗಿ ಬಿಡುತ್ತಾರೆ. ಖುಷಿಯೇ ಸೇವೆಯ ಸಾಧನವಾಗಿದೆ. ಈ ಮಹಾನ್
ತೀರ್ಥ ಸ್ಥಾನದಲ್ಲಿ ತಲುಪುವುದರಿಂದ, ಇದರಲ್ಲಿ ಎಲ್ಲಾ ತೀರ್ಥ ಸ್ಥಾನಗಳು ಸಮಾವೇಶವಾಗಿದೆ. ಈ ಮಹಾನ್
ತೀರ್ಥ ಸ್ಥಾನದಲ್ಲಿ ಜ್ಞಾನ ಸ್ನಾನ ಮಾಡಿರಿ ಮತ್ತು ಏನೆಲ್ಲಾ ಬಲಹೀನತೆಗಳಿವೆಯೋ ಅದನ್ನು ದಾನ
ಮಾಡಿರಿ. ತೀರ್ಥ ಯಾತ್ರೆಯಲ್ಲಿ ಏನಾದರೂ ಬಿಡುವುದೂ ಇರುತ್ತದೆ. ಏನು ಬಿಡುವಿರಿ? ಯಾವ ಮಾತಿನಲ್ಲಿ
ತಾವು ಬೇಸರವಾಗುತ್ತೀರಿ ಅದನ್ನೇ ಬಿಡಬೇಕು. ಅಷ್ಟೇ. ಆಗಲೇ ಮಹಾನ್ ತೀರ್ಥ ಯಾತ್ರೆಯು ಸಫಲವಾಗಿ
ಬಿಡುತ್ತದೆ. ಇದೇ ದಾನವನ್ನು ಮಾಡಿರಿ ಮತ್ತು ಇದೇ ದಾನದಿಂದ ಪುಣ್ಯಾತ್ಮರಾಗಿ ಬಿಡುತ್ತೀರಿ.
ಏಕೆಂದರೆ ಕೆಟ್ಟದ್ದನ್ನು ಬಿಡುವುದು ಅರ್ಥಾತ್ ಒಳ್ಳೆಯದನ್ನು ಧಾರಣೆ ಮಾಡಿಕೊಳ್ಳುವುದು. ಯಾವಾಗ
ಅವಗುಣಗಳನ್ನು ಬಿಡುತ್ತೀರಿ, ಗುಣಗಳ ಧಾರಣೆ ಮಾಡಿಕೊಳ್ಳುವಿರಿ ಆಗಲೇ ಪುಣ್ಯಾತ್ಮರಾಗಿ ಬಿಡುತ್ತೀರಿ.
ಇದೇ ಮಹಾನ್ ತೀರ್ಥಯಾತ್ರೆಯ ಸಫಲತೆಯೂ ಆಗಿದೆ. ಮಹಾನ್ ತೀರ್ಥ ಸ್ಥಾನದಲ್ಲಿ ಬರುವುದಂತು ಬಹಳ
ಒಳ್ಳೆಯದಾಗಿದೆ - ಬರುವುದು ಅರ್ಥಾತ್ ಭಾಗ್ಯವಂತನ ಪಟ್ಟಿಯಲ್ಲಿ ಇರುವುದು, ಈ ಮಹಾನ್ ತೀರ್ಥ
ಸ್ಥಾನಕ್ಕೆ ಇಷ್ಟೂ ಶಕ್ತಿಯಿದೆ. ಆದರೆ ಮುಂದೇನು ಮಾಡಬೇಕು? ಒಂದು- ಭಾಗ್ಯವಂತರಾಗುವುದು, ಇನ್ನೊಂದು
- ಸೌಭಾಗ್ಯವಂತರಾಗುವುದು ಮತ್ತು ಅದರ ಮುಂದೆ ಪದಮಾಪದಮ ಭಾಗ್ಯವಂತರಾಗುವುದು. ಸಂಗವನ್ನು ಎಷ್ಟು
ಮಾಡುತ್ತಿರುತ್ತೀರಿ, ಗುಣಗಳ ಧಾರಣೆ ಮಾಡುತ್ತಿರುತ್ತೀರಿ, ಅಷ್ಟೂ ಪದಮಾಪದಮ ಭಾಗ್ಯಶಾಲಿ ಆಗಿ
ಬಿಡುತ್ತೀರಿ. ಒಳ್ಳೆಯದು.
ಡಬಲ್ ವಿ ದೇಶಿ
ಟೀಚರ್ಸ್ ಜೊತೆ:-
ಈಗ ಎಂದಾದರೂ ತಮ್ಮನ್ನು - ನಾವೀಗ ಅನ್ಯ ಧರ್ಮದಲ್ಲಿ ಬಂದಿದ್ದೇವೆ ಎನ್ನುವುದು ಟೀಚರ್ಸ್ನಲ್ಲಿ
ಸಂಕಲ್ಪವೂ ಇರಬಾರದು. ಇದು ಹೊಸ ಮಾತಾಗಿದೆ. ತಾವಂತು ಹಳೆಬರಿದ್ದೀರಿ, ಆದ್ದರಿಂದ ನಿಮಿತ್ತರೂ
ಆಗಿದ್ದೀರಿ. ನಾವು ಅನ್ಯ ಧರ್ಮದವರು ಈ ಧರ್ಮದಲ್ಲಿ ಬಂದಿದ್ದೇವೆ, ಅಲ್ಲ. ಇದೇ ಧರ್ಮದವರಿದ್ದೆವು
ಮತ್ತು ಇದೇ ಧರ್ಮದಲ್ಲಿ ಬಂದಿದ್ದೇವೆ. ನಾವು ಮತ್ತು ಇದು ಬೇರೆ ಎನ್ನುವುದು ಸಂಕಲ್ಪ
ಸ್ವಪ್ನದಲ್ಲಿಯೂ ಇರಬಾರದು. ಭಾರತ ಬೇರೆ, ವಿದೇಶವು ಬೇರೆ ಅಲ್ಲ. ಈ ಸಂಕಲ್ಪವು ಏಕಮತವನ್ನು ಎರಡು
ಮತವನ್ನಾಗಿ ಮಾಡಿ ಬಿಡುತ್ತದೆ. ನಂತರ ನಾವು ಮತ್ತು ನೀವು ಎನ್ನುವುದಾಗಿ ಬಿಡುತ್ತದೆಯಲ್ಲವೆ. ಎಲ್ಲಿ
ನಾವು ಮತ್ತು ನೀವು ಎನ್ನುವುದಾಗಿ ಬಿಡುತ್ತದೆ, ಅಲ್ಲಿ ಏನಾಗುತ್ತದೆ? ಕಿರಿಕಿರಿಯಾಗುತ್ತದೆಯಲ್ಲವೆ
ಆದ್ದರಿಂದ ಒಂದೇ ಆಗಿದ್ದೇವೆ. ಡಬಲ್ ವಿದೇಶಿ ಎಂದು ಬಾಪ್ದಾದಾರವರು ಸಂಕೇತವಾಗಿ ಹೇಳುತ್ತಾರೆ, ಬಾಕಿ
ಬೇರೆಯೆಂದಲ್ಲ. ನಾವು ಡಬಲ್ ವಿದೇಶಿಗಳು ಬೇರೆ, ದೇಶದವರು ಬೇರೆ ಎನ್ನುವಂತಿಲ್ಲ. ಯಾವಾಗ ಬ್ರಾಹ್ಮಣ
ಜನ್ಮವಾಯಿತು, ಬ್ರಾಹ್ಮಣ ಜನ್ಮವಾದಾಗಿನಿಂದ ಯಾರಾದಿರಿ? ಬ್ರಾಹ್ಮಣ ಒಂದು ಧರ್ಮದವರಾಗಿದ್ದಾರೆ,
ವಿದೇಶಿ-ದೇಶಿ ಅದಲ್ಲಿರುವುದಿಲ್ಲ. ನಾವೆಲ್ಲರೂ ಒಂದು ಬ್ರಾಹ್ಮಣ ಧರ್ಮದವರು, ಬ್ರಾಹ್ಮಣ ಜೀವನದವರು
ಮತ್ತು ಒಂದೇ ತಂದೆಯ ಸೇವೆಗೆ ನಿಮಿತ್ತರಾಗಿದ್ದೀರಿ. ಎಂದಿಗೂ ಸಹ ಈ ಭಾಷೆಯನ್ನು ಉಪಯೋಗಿಸಬಾರದು -
ನಮ್ಮ ವಿಚಾರವು ಹೀಗಿದೆ, ತಾವು ಭಾರತದವರದು ಹೀಗಿದೆ, ಈ ಭಾಷೆಯು ತಪ್ಪಾಗಿದೆ. ಮರೆತೂ ಸಹ ಇಂತಹ
ಶಬ್ಧಗಳನ್ನು ಮಾತನಾಡಬಾರದು. ವಿಚಾರಗಳಲ್ಲಿ ಭಿನ್ನ-ಭಿನ್ನವಾಗಬಹುದು, ಇದು ಬೇರೆ ಮಾತಾಗಿದೆ. ಬಾಕಿ
ಭಾರತ ಮತ್ತು ವಿದೇಶ, ಈ ವ್ಯತ್ಯಾಸವನ್ನೆಂದಿಗೂ ಮಾಡಬಾರದು. ನಾವು ವಿದೇಶಿಗಳು ಹೀಗೆಯೇ
ನಡೆಯುತ್ತೇವೆ ಎನ್ನುವುದಿರಬಾರದು. ನಮ್ಮ ಸ್ವಭಾವವು ಹೀಗಿದೆ, ನಮ್ಮ ನೇಚರ್ ಹೀಗಿದೆ,
ಎನ್ನುವುದಿರಬಾರದು. ಹೀಗೆಂದಿಗೂ ಸಹ ಯೋಚಿಸಬಾರದು. ತಂದೆಯು ಒಬ್ಬರಾಗಿದ್ದಾರೆ ಮತ್ತು ಎಲ್ಲರೂ
ಒಬ್ಬರವರೇ ಆಗಿದ್ದಾರೆ. ನಿಮಿತ್ತ ಟೀಚರ್ಸ್ ಹೇಗೆ ಮಾತನಾಡುತ್ತಾರೆಯೋ ಹಾಗೆಯೇ ಅನ್ಯರೂ ಮಾತನಾಡುವರು.
ಆದ್ದರಿಂದ ಬಹಳ ಯುಕ್ತಿಯುಕ್ತ ಶಬ್ಧಗಳಿಂದ ಮಾತನಾಡಿರಿ. ಯೋಗಯುಕ್ತ ಮತ್ತು ಯುಕ್ತಿಯುಕ್ತ ಎರಡೂ
ಒಟ್ಟೊಟ್ಟಿಗೆ ನಡೆಯಲಿ. ಕೆಲವರು ಯೋಗದಲ್ಲಿ ಮುಂದುವರೆಯಬೇಕೆಂದು ಮಾಡುತ್ತಾರೆ. ಆದರೆ ಕರ್ಮದಲ್ಲಿ
ಯುಕ್ತಿಯುಕ್ತವಾಗಿರುವುದಿಲ್ಲ. ಎರಡೂ ಸಮತೋಲನವಿರಲಿ. ಯೋಗಯುಕ್ತವಾಗಿರುವ ಚಿಹ್ನೆಯಾಗಿದೆ -
ಯುಕ್ತಿಯುಕ್ತವಾಗಿರುವುದು.
ಸೇವಾಧಾರಿಗಳೊಂದಿಗೆ:-
ಯಜ್ಞ ಸೇವೆಯ ಭಾಗ್ಯವು ಸಿಗುವುದು, ಇದೂ ಸಹ ಬಹಳ ಶ್ರೇಷ್ಠ ಭಾಗ್ಯದ ಸಂಕೇತವಾಗಿದೆ. ಭಲೆ ಭಾಷಣೆ
ಮಾಡದಿರಿ, ಕೋರ್ಸ್ ಮಾಡದಿರಬಹುದು. ಆದರೆ ಸೇವೆಯ ಅಂಕಗಳಂತು ಸಿಕ್ಕಿ ಬಿಡುತ್ತದೆಯಲ್ಲವೆ.
ಇದರಲ್ಲಿಯೂ ಉತ್ತೀರ್ಣರಾಗಿ ಬಿಡುತ್ತೀರಿ. ಪ್ರತೀ ವಿಷಯಕ್ಕೂ ತನ್ನ-ತನ್ನ ಅಂಕಗಳಿವೆ. ನಾವು ಭಾಷಣ
ಮಾಡಲು ಸಾಧ್ಯವಿಲ್ಲವೆಂದರೆ ಹಿಂದಿರುತ್ತೇವೆ ಎಂದು ತಿಳಿಯಬೇಡಿ. ಸೇವಾಧಾರಿಯು ಸದಾಕಾಲ ವರ್ತಮಾನ
ಮತ್ತು ಭವಿಷ್ಯ ಫಲದ ಅಧಿಕಾರಿಯಾಗಿರುತ್ತಾರೆ. ಖುಷಿಯಾಗುತ್ತದೆಯಲ್ಲವೆ! ಮಾತೆಯರಿಗೆ ಮನಸ್ಸಿನ
ನೃತ್ಯವು ಬರುತ್ತದೆ, ಇನ್ನೇನೂ ಮಾಡಬೇಡಿ ಕೇವಲ ಖುಷಿಯಲ್ಲಿ ಮನಸ್ಸಿನಿಂದ ನರ್ತಿಸುತ್ತೀರೆಂದರೂ
ಬಹಳಷ್ಟು ಸೇವೆಯಾಗಿ ಬಿಡುತ್ತದೆ.
ವರದಾನ: ವರದಾನ:-
ಸಮಾನತೆಯ
ಭಾವನೆಯಿದ್ದರೂ ಸಹ ಪ್ರತೀ ಹೆಜ್ಜೆಯಲ್ಲಿ ವಿಶೇಷತೆಯ ಅನುಭವ ಮಾಡಿಸುವಂತಹ ವಿಶೇಷ ಆತ್ಮ ಭವ.
ಪ್ರತಿಯೊಂದು
ಮಕ್ಕಳಲ್ಲಿ ತಮ್ಮ ತಮ್ಮ ವಿಶೇಷತೆಯಿದೆ. ವಿಶೇಷ ಆತ್ಮರ ಕರ್ಮವು ಸಾಧಾರಣ ಆತ್ಮರಿಗಿಂತಲೂ
ಭಿನ್ನವಾಗಿದೆ. ಪ್ರತಿಯೊಬ್ಬರಲ್ಲಿ ಭಾವನೆಯಂತು ಸಮಾನತೆಯದಿಡಬೇಕು. ಆದರೆ ಇವರು ವಿಶೇಷ ಆತ್ಮರೆಂದು
ಕಾಣಿಸಲಿ. ವಿಶೇಷ ಆತ್ಮರು ಅರ್ಥಾತ್ ವಿಶೇಷವಾಗಿ ಮಾಡುವವರು, ಕೇವಲ ಹೇಳುವವರಲ್ಲ. ಅವರಿಂದ
ಎಲ್ಲರಿಗೂ ಅನುಭವ ಆಗುತ್ತದೆ - ಇವರು ಸ್ನೇಹದ ಭಂಡಾರವಾಗಿದ್ದಾರೆ, ಪ್ರತೀ ಹೆಜ್ಜೆಯಲ್ಲಿ, ಪ್ರತೀ
ದೃಷ್ಟಿಯಲ್ಲಿ ಸ್ನೇಹದ ಅನುಭವವಾಗಲಿ - ಇದೇ ವಿಶೇಷತೆಯೂ ಆಗಿದೆ.
ಸ್ಲೋಗನ್:
ಸೃಷ್ಟಿಯ
ಅಂತ್ಯಕ್ಕೆ ಮೊದಲು ತಮ್ಮ ಕೊರತೆಗಳು ಹಾಗೂ ಬಲಹೀನತೆಗಳ ಅಂತ್ಯಗೊಳಿಸಿರಿ.