02.12.18       Avyakt Bapdada      Kannada Murli      05.03.84      Om Shanti     Madhuban


" ಶಾಂತಿಯ ಶಕ್ತಿಯ ಮಹತ್ವಿಕೆ"


ಶಾಂತಿಯ ಸಾಗರ ತಂದೆಯು ತನ್ನ ಶಾಂತಿಯ ಅವತಾರ ಮಕ್ಕಳೊಂದಿಗೆ ಮಿಲನವಾಗುವುದಕ್ಕಾಗಿ ಬಂದಿದ್ದಾರೆ. ಇಂದಿನ ಪ್ರಪಂಚದಲ್ಲಿ ಬಹಳ ಅವಶ್ಯಕವಾಗಿರುವ ವಸ್ತುವು ಶಾಂತಿ ಆಗಿದೆ. ಅದೇ ಶಾಂತಿಯ ದಾತರು ನೀವು ಮಕ್ಕಳಾಗಿದ್ದೀರಿ. ಯಾರ ಬಳಿ ಎಷ್ಟೇ ವಿನಾಶಿ ಧನ, ವಿನಾಶಿ ಸಾಧನಗಳ ಮೂಲಕ ಶಾಂತಿಯನ್ನು ತೆಗೆದುಕೊಳ್ಳಲು ಬಯಸುತ್ತಾರೆ, ಆದರೂ ಸತ್ಯ ಅವಿನಾಶಿ ಶಾಂತಿಯು ಸಿಗಲು ಸಾಧ್ಯವಿಲ್ಲ. ಇಂದಿನ ಪ್ರಪಂಚದಲ್ಲಿ ಧನವಂತರಾಗಿರುತ್ತಾರೆ, ಸುಖದ ಸಾಧನಗಳಿರುತ್ತದೆ, ಆದರೂ ಅವಿನಾಶಿ ಹಾಗೂ ಸದಾಕಾಲದ ಶಾಂತಿಯ ಭಿಕಾರಿಯಾಗಿದ್ದಾರೆ. ಹೀಗಿರುವ ಶಾಂತಿಯ ಭಿಕಾರಿ ಆತ್ಮರಿಗೆ ತಾವು ಮಾಸ್ಟರ್ ಶಾಂತಿದಾತ, ಶಾಂತಿಯ ಭಂಡಾರ, ಶಾಂತ ಸ್ವರೂಪ ಆತ್ಮರು ಹನಿಯಷ್ಟು ಕೊಟ್ಟು, ಸರ್ವರ ಶಾಂತಿಯ ಬಾಯಾರಿಕೆ, ಶಾಂತಿಯ ಇಚ್ಛೆಯನ್ನು ಪೂರ್ಣಗೊಳಿಸಿರಿ. ಬಾಪ್ದಾದಾರವರಿಗೆ ಅಶಾಂತ ಮಕ್ಕಳನ್ನು ನೋಡುತ್ತಾ ದಯೆ ಬರುತ್ತದೆ. ಇಷ್ಟೂ ಪ್ರಯತ್ನ ಪಟ್ಟು ವಿಜ್ಞಾನದ ಶಕ್ತಿಯಿಂದ ಎಲ್ಲೆಲ್ಲಿಗೆ ತಲುಪುತ್ತಿದ್ದಾರೆ, ಏನೇನು ಮಾಡುತ್ತಿದ್ದಾರೆ, ದಿನವನ್ನು ರಾತ್ರಿಯನ್ನಾಗಿಯೂ ಮಾಡಬಲ್ಲರು, ರಾತ್ರಿಯನ್ನು ಹಗಲನ್ನಾಗಿಯೂ ಮಾಡಬಲ್ಲರು ಆದರೆ ಸ್ವಯಂನ ಆತ್ಮನ ಸ್ವಧರ್ಮವು ಶಾಂತಿಯಾಗಿದೆ, ಅದನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಾಂತಿಯ ಹಿಂದೆ ಎಷ್ಟು ಓಡುತ್ತಾರೆಯೋ ಅಷ್ಟು ಅಲ್ಪಕಾಲದ ಶಾಂತಿಯ ನಂತರ ಪರಿಣಾಮದಲ್ಲಿ ಅಶಾಂತಿಯ ಸಿಗುತ್ತದೆ. ಅವಿನಾಶಿ ಶಾಂತಿಯು ಸರ್ವ ಆತ್ಮರ ಈಶ್ವರೀಯ ಜನ್ಮ ಸಿದ್ಧ ಅಧಿಕಾರವಾಗಿದೆ. ಆದರೆ ಜನ್ಮಸಿದ್ಧ ಅಧಿಕಾರದ ಹಿಂದೆ ಎಷ್ಟೊಂದು ಪರಿಶ್ರಮ ಪಡುತ್ತಾರೆ. ಸೆಕೆಂಡಿನ ಪ್ರಾಪ್ತಿಯಾಗಿದೆ, ಆದರೆ ಸೆಕೆಂಡಿನ ಪ್ರಾಪ್ತಿಗಾಗಿ ಸಂಪೂರ್ಣ ಪರಿಚಯವಿಲ್ಲದಿರುವ ಕಾರಣದಿಂದ ಎಷ್ಟೊಂದು ಕಷ್ಟವನ್ನನುಭವಿಸುತ್ತಾರೆ, ಕೂಗುತ್ತಾರೆ, ಚೀರಾಡುತ್ತಾರೆ, ಬೇಸರವಾಗುತ್ತಾರೆ. ಇಂತಹ ಶಾಂತಿಯಹಿಂದೆ ಅಲೆದಾಡುತ್ತಿರುವವರಿಗೆ, ತಮ್ಮ ಆತ್ಮಿಕರೂಪದ ಸಹೋದರರಿಗೆ, ಸಹೋದರ-ಸಹೋದರನ ದೃಷ್ಟಿಕೊಡಿ. ಇದೇ ದೃಷ್ಟಿಯಿಂದ ಅವರ ಸೃಷ್ಟಿಯು ಬದಲಾಗಿ ಬಿಡುತ್ತದೆ.

ತಾವೆಲ್ಲರೂ ಶಾಂತಿಯ ಅವತಾರ ಆತ್ಮರು ಸದಾ ಶಾಂತ ಸ್ವರೂಪದ ಸ್ಥಿತಿಯಲ್ಲಿ ಇರುತ್ತೀರಲ್ಲವೇ? ಸದಾಕಾಲಕ್ಕಾಗಿ ಅಶಾಂತಿಗೆ ವಿದಾಯಿ ಕೊಟ್ಟಿದ್ದೀರಲ್ಲವೆ! ಅಶಾಂತಿಗೆ ಬೀಳ್ಕೊಡುಗೆ ಸಮಾರೋಹವನ್ನು ಮಾಡಿದ್ದೀರಾ ಅಥವಾ ಈಗ ಮಾಡಬೇಕಾಗಿದೆಯೇ? ಯಾರು ಈಗ ಅಶಾಂತಿಯ ಬೀಳ್ಕೊಡುಗೆ ಸಮಾರೋಹವನ್ನು ಮಾಡಿಲ್ಲವೋ ಅವರು ಈಗ ಮಾಡಬೇಕು, ಅವರು ಇಲ್ಲಿದ್ದೀರಾ? ಅದರ ದಿನಾಂಕವನ್ನು ನಿಗಧಿ ಪಡಿಸುವುದೇ? ಯಾರೀಗ ಸಮಾರೋಹವನ್ನು ಮಾಡಿಕೊಳ್ಳಬೇಕು ಅವರು ಕೈಯೆತ್ತಿರಿ. ಎಂದಿಗೂ ಸ್ವಪ್ನದಲ್ಲಿಯೂ ಅಶಾಂತಿಯು ಬರಬಾರದು. ಸ್ವಪ್ನವೂ ಸಹ ಶಾಂತಿಮಯವಾಗಿ ಬಿಟ್ಟಿದೆಯಲ್ಲವೆ! ಶಾಂತಿದಾತಾ ತಂದೆಯಾಗಿದ್ದಾರೆ, ಶಾಂತ ಸ್ವರೂಪರು ತಾವಾಗಿದ್ದೀರಿ. ಧರ್ಮವೂ ಶಾಂತ, ಕರ್ಮವೂ ಶಾಂತ, ಅಂದಮೇಲೆ ಅಶಾಂತಿಯೆಲ್ಲಿಂದ ಬರುತ್ತದೆ. ತಮ್ಮೆಲ್ಲರ ಕರ್ಮವೇನಾಗಿದೆ? ಶಾಂತಿಯನ್ನು ಕೊಡುವುದು. ಈಗಲೂ ಸಹ ತಮ್ಮೆಲ್ಲರ ಭಕ್ತ ಜನರು ಆರತಿ ಮಾಡುತ್ತಾರೆ, ಆಗ ಏನು ಹೇಳುತ್ತಾರೆ? ಶಾಂತಿದೇವ. ಅಂದಮೇಲೆ ಇವರು ಯಾರ ಆರತಿ ಮಾಡುತ್ತಾರೆ? ತಮ್ಮದೇ ಅಥವಾ ಕೇವಲ ತಂದೆಯದೇ? ಶಾಂತಿದೇವ ಮಕ್ಕಳು ಸದಾ ಶಾಂತಿಯ ಮಹಾದಾನಿ, ವರದಾನಿ ಆತ್ಮರಾಗಿದ್ದಾರೆ. ಮಾಸ್ಟರ್ ಜ್ಞಾನ ಸೂರ್ಯನಾಗಿದ್ದು ಶಾಂತಿಯ ಕಿರಣಗಳನ್ನು ವಿಶ್ವದಲ್ಲಿ ಹರಡಿಸುವವರಾಗಿದ್ದೀರಿ, ಇದೇ ನಶೆಯಿದೆಯಲ್ಲವೆ - ತಂದೆಯ ಜೊತೆ ಜೊತೆಗೆ ನಾವೂ ಸಹ ಮಾಸ್ಟರ್ ಜ್ಞಾನ ಸೂರ್ಯನಾಗಿದ್ದೇವೆ ಅಥವಾ ಶಾಂತಿಯ ಕಿರಣಗಳನ್ನು ಹರಡಿಸುವ ಮಾಸ್ಟರ್ ಸೂರ್ಯನಾಗಿದ್ದೇವೆ.

ಸೆಕೆಂಡಿನಲ್ಲಿ ಸ್ವಧರ್ಮದ ಪರಿಚಯವನ್ನು ಕೊಟ್ಟು, ಸ್ವ-ಸ್ವರೂಪದಲ್ಲಿ ಸ್ಥಿತರನ್ನಾಗಿ ಮಾಡಲು ಸಾಧ್ಯವಿದೆಯಲ್ಲವೆ? ತಮ್ಮ ವೃತ್ತಿಯ ಮೂಲಕ, ಯಾವ ವೃತ್ತಿ? ಈ ಆತ್ಮನಿಗೂ ಅರ್ಥಾತ್ ನಮ್ಮ ಈ ಸಹೋದರನಿಗೂ ತಂದೆಯ ಪರಿಚಯ ಸಿಕ್ಕಿ ಬಿಡಲಿ. ಈ ಶುಭ ವೃತ್ತಿ ಅಥವಾ ಈ ಶುಭಭಾವನೆಯಿಂದ ಅನೇಕ ಆತ್ಮರಿಗೆ ಅನುಭವ ಮಾಡಿಸಬಹುದು, ಏಕೆ? ಭಾವನೆಯ ಫಲವು ಅವಶ್ಯವಾಗಿ ಸಿಗುತ್ತದೆ. ತಮ್ಮೆಲ್ಲರಿಗೂ ಶ್ರೇಷ್ಠ ಭಾವನೆಯಿದೆ, ಸ್ವಾರ್ಥ ರಹಿತ ಭಾವನೆಯಿದೆ, ದಯಾ ಭಾವನೆಯಿದೆ, ಕಲ್ಯಾಣದ ಭಾವನೆಯಿದೆ. ಇಂತಹ ಭಾವನೆಯ ಫಲ ಸಿಗಲಿಲ್ಲ - ಹೀಗಾಗಲು ಸಾಧ್ಯವಿಲ್ಲ. ಯಾವಾಗ ಬೀಜವು ಶಕ್ತಿಶಾಲಿಯಾಗಿದೆ ಅಂದಮೇಲೆ ಫಲವು ಅವಶ್ಯವಾಗಿ ಸಿಗುತ್ತದೆ. ಕೇವಲ ಈ ಶ್ರೇಷ್ಠ ಭಾವನೆಯ ಬೀಜಕ್ಕೆ ಯಾವಾಗಲೂ ಸ್ಮೃತಿಯ ನೀರನ್ನು ಕೊಡುತ್ತಿರುತ್ತೀರೆಂದರೆ, ಸಮರ್ಥ ಫಲ, ಪ್ರತ್ಯಕ್ಷ ಫಲದ ರೂಪದಲ್ಲಿ ಅವಶ್ಯವಾಗಿ ಪ್ರಾಪಿಯಾಗಲೇಬೇಕು. ಆಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆಯಿಲ್ಲ. ಸದಾ ಸಮರ್ಥ ಸ್ಮೃತಿಯ ನೀರಿದೆ ಅರ್ಥಾತ್ ಸರ್ವ ಆತ್ಮರ ಪ್ರತಿ ಶುಭಭಾವನೆ ಇದೆಯೆಂದರೆ ವಿಶ್ವ ಶಾಂತಿಯ ಪ್ರತ್ಯಕ್ಷ ಫಲವು ಸಿಗಲೇಬೇಕು. ಸರ್ವ ಆತ್ಮರ ಜನ್ಮ-ಜನ್ಮಾಂತರ ಆಶೆಯನ್ನು ತಂದೆಯ ಜೊತೆ ಜೊತೆಗೆ ಮಕ್ಕಳೂ ಸಹ ಪೂರ್ಣಗೊಳಿಸುತ್ತಿದ್ದೀರಿ ಮತ್ತು ಸರ್ವರದಾಗಿ ಬಿಡುತ್ತದೆ.

ಹೇಗೆ ಈಗ ಅಶಾಂತಿಯ ಧ್ವನಿಯು ನಾಲ್ಕೂ ಕಡೆಯಲ್ಲಿ ಮೊಳಗುತ್ತಿದೆ. ತನು-ಮನ-ಧನ-ಜನ ಎಲ್ಲಾ ಕಡೆಗಳಿಂದ ಅಶಾಂತಿಯ ಅನುಭವ ಮಾಡುತ್ತಿದ್ದಾರೆ. ಭಯವು ಸರ್ವ ಪ್ರಾಪ್ತಿಗಳ ಸಾಧನಗಳನ್ನೂ ಶಾಂತಿಗೆ ಬದಲಾಗಿ ಅಶಾಂತಿಯ ಅನುಭವವನ್ನು ಮಾಡಿಸುತ್ತಿದೆ. ಇಂದಿನ ಅತ್ಮರು ಯಾವುದಾದರೊಂದು ಭಯಕ್ಕೆ ವಶವಾಗಿ ಬಿಟ್ಟಿದ್ದಾರೆ. ಸೇವಿಸುತ್ತಿರುತ್ತಾರೆ, ನಡೆಯುತ್ತಿರುತ್ತಾರೆ, ಸಂಪಾದಿಸುತ್ತಾರೆ, ಅಲ್ಪಕಾಲದ ಮೋಜನ್ನೂ ಆಚರಿಸುತ್ತಿದ್ದಾರೆ ಆದರೆ ಭಯದೊಂದಿಗೆ. ನಾಳೆಯೇನಾಗುತ್ತದೆಯೋ ಗೊತ್ತಿಲ್ಲ ಎನ್ನುವ ಭಯವಿದೆ. ಅಂದಮೇಲೆ ಎಲ್ಲಿಯ ಭಯದ ಸಿಂಹಾಸನವಿದೆ, ಯಾವಾಗ ಗಣ್ಯರೇ ಭಯ ಕುರ್ಚಿಯದ ಮೇಲೆ ಕುಳಿತಿರುತ್ತಾರೆಂದರೆ ಪ್ರಜೆಗಳದೇನಾಗುತ್ತದೆ! ಎಷ್ಟೇ ದೊಡ್ಡ ಗಣ್ಯರಿರುತ್ತಾರೆ, ಅಷ್ಟೇ ಅಂಗರಕ್ಷಕರಿರುತ್ತಾರೆ. ಏಕೆ? ಭಯವಿದೆಯಲ್ಲವೆ. ಅಂದಮೇಲೆ ಭಯದ ಸಿಂಹಾಸನದ ಮೇಲೆ ಅಲ್ಪಕಾಲದ ಮೋಜು ಏನಾಗಿರುತ್ತದೆ? ಶಾಂತಿಯಿರುವುದೇ ಅಥವಾ ಅಶಾಂತಿಯಿರುವುದೇ? ಬಾಪ್ದಾದಾರವರು ಇಂತಹ ಭಯಕ್ಕೊಳಗಾಗಿರುವ ಮಕ್ಕಳಿಗೆ ಸದಾಕಾಲದ ಸುಖಮಯ, ಶಾಂತಿಯಿರುವ ಜೀವನವನ್ನು ಕೊಡುವುದಕ್ಕಾಗಿ, ತಾವೆಲ್ಲಾ ಮಕ್ಕಳನ್ನು ಶಾಂತಿಯ ಅವತಾರ ರೂಪದಲ್ಲಿ ನಿಮಿತ್ತರನ್ನಾಗಿ ಮಾಡಿದ್ದಾರೆ. ಶಾಂತಿಯ ಶಕ್ತಿಯಿಂದ ಖರ್ಚಿಲ್ಲದೆಯೇ ಎಲ್ಲಿಂದ ಎಲ್ಲಿಗೆ ತಲುಪಲು ಸಾಧ್ಯವಿದೆ? ಈ ಲೋಕದಿಂದಲೂ ಆಚೆ. ತಮ್ಮ ಮಧುರ ಮನೆಯಲ್ಲಿ ಎಷ್ಟು ಸಹಜವಾಗಿ ತಲುಪುತ್ತೀರಿ! ಪರಿಶ್ರಮವೆನಿಸುತ್ತದೆಯೇ? ಎಷ್ಟು ಸಹಜವಾಗಿ ಶಾಂತಿಯ ಶಕ್ತಿಯಿಂದ ಪ್ರಕೃತಿಜೀತ, ಮಾಯಾಜೀತರು ಆಗುತ್ತೀರಿ? ಯಾರ ಮೂಲಕ? ಆತ್ಮಿಕ ಶಕ್ತಿಯ ಮೂಲಕ. ಯಾವಾಗ ಅಟೊಮಿಕ್ ಹಾಗೂ ಆತ್ಮಿಕ ಶಕ್ತಿಯೆರಡೂ ಒಂದಾಗಿ ಬಿಡುತ್ತದೆ, ಆತ್ಮಿಕ ಶಕ್ತಿಯಿಂದ ಅಟೊಮಿಕ್ ಶಕ್ತಿಯೂ ಸಹ ಸತೋಪ್ರಧಾನ ಬುದ್ಧಿಯ ಮೂಲಕ ಸುಖದ ಕಾರ್ಯದಲ್ಲಿ ತೊಡಗಿ ಬಿಡುತ್ತದೆ, ಆಗ ಎರಡೂಶಕ್ತಿಗಳು ಒಂದಾಗುವುದರ ಮೂಲಕ ಶಾಂತಿಮಯ ಪ್ರಪಂಚವು ಈ ಭೂಮಿಯ ಮೇಲೆ ಪ್ರತ್ಯಕ್ಷವಾಗುತ್ತದೆ. ಏಕೆಂದರೆ ಶಾಂತಿ, ಸುಖಮಯ ಸ್ವರ್ಗದ ರಾಜ್ಯದಲ್ಲಿ ಎರಡು ಶಕ್ತಿಗಳಿವೆ. ಸತೋಪ್ರಧಾನ ಬುದ್ಧಿ ಎಂದರೆ ಸದಾ ಶ್ರೇಷ್ಠ, ಸತ್ಯ ಕರ್ಮವನ್ನು ಮಾಡುವಂತಹ ಬುದ್ಧಿ. ಸತ್ಯ ಅರ್ಥಾತ್ ಅವಿನಾಶಿಯೂ ಆಗಿದೆ. ಪ್ರತೀ ಕರ್ಮವು ಅವಿನಾಶಿ ತಂದೆ, ಅವಿನಾಶಿ ಆತ್ಮ- ಈ ಸ್ಮೃತಿಯಿಂದ ಅವಿನಾಶಿ ಪ್ರಾಪ್ತಿ ಮಾಡಿಕೊಳ್ಳುವವರಾಗಿರುತ್ತಾರೆ. ಆದ್ದರಿಂದ ಹೇಳಲಾಗುತ್ತದೆ – ಸತ್ಯ ಕರ್ಮ. ಅಂದಮೇಲೆ ಹೀಗೆ ಸದಾಕಾಲಕ್ಕಾಗಿ ಶಾಂತಿಯನ್ನು ಕೊಡುವಂತಹ, ಶಾಂತಿಯ ಅವತಾರ ಆಗಿರಿ. ತಿಳಿಯಿತೆ! ಒಳ್ಳೆಯದು. ಹೀಗೆ ಸದಾ ಸತೋಪ್ರಧಾನ ಸ್ಥಿತಿಯ ಮೂಲಕ, ಸತ್ಯ ಕರ್ಮವನ್ನು ಮಾಡುವಂತಹ ಆತ್ಮರಿಗೆ, ಸದಾ ತಮ್ಮ ಶಕ್ತಿಶಾಲಿ ಭಾವನೆಯ ಮೂಲಕ ಅನೇಕ ಆತ್ಮರಿಗೆ ಶಾಂತಿಯ ಫಲವನ್ನು ಕೊಡುವವರು, ಸದಾ ಮಾಸ್ಟರ್ ದಾತಾ ಆಗಿದ್ದು ಶಾಂತಿ ದೇವನಾಗಿದ್ದು ಶಾಂತಿಯ ಕಿರಣಗಳನ್ನು ಇಡೀ ವಿಶ್ವದಲ್ಲಿ ಹರಡಿಸುವವರಿಗೆ, ತಂದೆಗೆ ಇಂತಹ ವಿಶೇಷ ಕಾರ್ಯದ ಸಹಯೋಗಿ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಲಂಡನ್ನಿನ ನೋಬಲ್ ವಿಜೇತನಾದ ವಿಜ್ಞಾನಿ ಜೋನ್ಸ್ನವರು ಬಾಪ್ದಾದಾರವರೊಂದಿಗೆ ಮಿಲನವಾಗುತ್ತಿದ್ದಾರೆ:-

ಶಾಂತಿಯ ಶಕ್ತಿಯ ಅನುಭವವನ್ನೂ ಮಾಡುತ್ತೀರಾ? ಏಕೆಂದರೆ ಶಾಂತಿಯ ಶಕ್ತಿಯು ಇಡೀ ವಿಶ್ವವನ್ನು ಶಾಂತಿಮಯವನ್ನಾಗಿ ಮಾಡುವಂತದ್ದಾಗಿದೆ. ತಾವೂ ಸಹ ಶಾಂತಿ ಪ್ರಿಯ ಆತ್ಮರಾಗಿದ್ದೀರಲ್ಲವೆ! ಶಾಂತಿಯ ಶಕ್ತಿಯ ಮೂಲಕ ವಿಜ್ಞಾನದ ಶಕ್ತಿಯನ್ನೂ ಯಥಾರ್ಥ ರೂಪದಿಂದ ಕಾರ್ಯದಲ್ಲಿ ಉಪಯೋಗಿಸುವುದರಿಂದ, ವಿಶ್ವ ಕಲ್ಯಾಣವನ್ನು ಮಾಡಲು ನಿಮಿತ್ತರಾಗಬಲ್ಲಿರಿ. ವಿಜ್ಞಾನದ ಶಕ್ತಿಯೂ ಸಹ ಅವಶ್ಯಕವಾಗಿದೆ ಆದರೆ ಕೇವಲ ಸತೋಪ್ರಧಾನ ಬುದ್ಧಿಯವರಾಗುವುದರಿಂದ, ಇದನ್ನು ಯಥಾರ್ಥ ರೂಪದಿಂದ ಪ್ರಯೋಗ ಮಾಡಬಹುದು. ಇಂದು ಕೇವಲ ಇದೇ ಜ್ಞಾನದ ಕೊರತೆಯಿದೆ – ಯಥಾರ್ಥ ರೀತಿಯಿಂದ ಇದನ್ನು ಕಾರ್ಯದಲ್ಲಿ ಹೇಗೆ ಉಪಯೋಗಿಸಬೇಕು! ಇದೇ ವಿಜ್ಞಾನವು ಈ ಜ್ಞಾನದ ಆಧಾರದಿಂದ ಹೊಸ ಸೃಷ್ಟಿಯ ಸ್ಥಾಪನೆಗೆ ನಿಮಿತ್ತವಾಗುತ್ತದೆ. ಆದರೆ ಇಂದು ಆ ಜ್ಞಾನವಿರದಿರುವ ಕಾರಣದಿಂದ ವಿನಾಶದ ಕಡೆಗೆ ಸಾಗುತ್ತಿದೆ. ಅಂದಮೇಲೆ ಈಗ ಇದೇ ವಿಜ್ಞಾನದ ಶಕ್ತಿಯನ್ನು ಶಾಂತಿಯ ಶಕ್ತಿಯ ಆಧಾರದಿಂದ, ಬಹಳಷ್ಟೂ ಒಳ್ಳೆಯ ಕಾರ್ಯದಲ್ಲಿ ಉಪಯೋಗಿಸಲು ನಿಮಿತ್ತರಾಗಿರಿ. ಇದರಲ್ಲಿಯೂ ನೋಬಲ್ ಬಹುಮಾನವನ್ನು ತೆಗೆದುಕೊಂಡಿದ್ದೀರಲ್ಲವೆ! ಏಕೆಂದರೆ ಇದೇ ಕಾರ್ಯಕ್ಕಾಗಿ ಅವಶ್ಯಕತೆಯಿದೆ. ಅಂದಮೇಲೆ ಯಾವಾಗ ಯಾವ ಕಾರ್ಯದ ಅವಶ್ಯಕತೆಯಿದೆ, ಅದರಲ್ಲಿ ನಿಮಿತ್ತರಾಗುವವರನ್ನು ಎಲ್ಲರೂ ಶ್ರೇಷ್ಠಾತ್ಮನ ದೃಷ್ಟಿಯಿಂದ ನೋಡುವರು. ಅಂದಮೇಲೆ ಏನು ಮಾಡಬೇಕು ಎಂದು ತಿಳಿಯಿತೆ! ಈಗ ವಿಜ್ಞಾನ ಮತ್ತು ಶಾಂತಿಯ ಸಂಬಂಧವು ಹೇಗಿದೆ ಮತ್ತು ಎರಡರ ಸಂಬಂಧದಿಂದ ಎಷ್ಟು ಸಫಲತೆಯಾಗಬಹುದು, ಇದರ ಅನ್ವೇಷಣೆ ಮಾಡಿರಿ. ಅನ್ವೇಷಣೆಯ ಆಸಕ್ತಿಯಿದೆಯಲ್ಲವೆ! ಈಗ ಇದನ್ನು ಮಾಡಬೇಕು, ಇಷ್ಟು ದೊಡ್ಡ ಕಾರ್ಯವನ್ನು ಮಾಡಬೇಕಾಗಿದೆ. ಇಂತಹ ಪ್ರಪಂಚವನ್ನು ಮಾಡುತ್ತೀರಲ್ಲವೆ. ಒಳ್ಳೆಯದು.

ಯು.ಕೆ.ಗ್ರೂಪ್:-
ಅಗಲಿ ಮರಳಿ ಸಿಕ್ಕಿರುವ ಮಕ್ಕಳು ಸದಾಕಾಲವೂ ತಂದೆಯೊಂದಿಗೆ ಮಿಲನವಾಗಿರುತ್ತಾರೆ. ಸದಾ ತಂದೆಯ ಜೊತೆಯಿದ್ದೇವೆ - ಇದರ ಅನುಭವವು ಸದಾ ಇರುತ್ತದೆಯಲ್ಲವೆ? ಒಂದುವೇಳೆ ತಂದೆಯ ಜೊತೆಯಿಂದ ಸ್ವಲ್ಪವೇನಾದರೂ ದೂರವಾಗಿ ಬಿಟ್ಟಿರಿ ಎಂದರೆ ಮಾಯೆಯ ಕಣ್ಣು ಸಹ ತೀಕ್ಷವಾಗಿರುತ್ತದೆ. ಅದು ನೋಡಿ ಬಿಡುತ್ತದೆ - ಇವರು ಸ್ವಲ್ಪ ದೂರವಾಗಿದ್ದಾರೆ. ಆದ್ದರಿಂದ ನನ್ನವರನ್ನಾಗಿ ಮಾಡಿಕೊಂಡು ಬಿಡುತ್ತೇನೆ. ಆದ್ದರಿಂದಲೇ ಎಂದಿಗೂ ಸಹ ದೂರವಾಗಬಾರದು. ಸದಾ ತಂದೆಯ ಜೊತೆಯಿರಬೇಕು. ಯಾವಾಗ ಬಾಪ್ದಾದಾರವರು ಸ್ವಯಂ ಸದಾಕಾಲವೂ ಜೊತೆಯಿರುವ ಆಫರ್ ಮಾಡುತ್ತಿದ್ದಾರೆ, ಅಂದಮೇಲೆ ಜೊತೆ ತೆಗೆದುಕೊಳ್ಳಬೇಕಲ್ಲವೆ. ಇಂತಹ ಜೊತೆಯು ಇಡೀ ಕಲ್ಪದಲ್ಲಿಯೂ ಎಂದಿಗೂ ಸಿಗುವುದಿಲ್ಲ, ತಂದೆಯೇ ಬಂದು ಹೇಳುತ್ತಾರೆ - ನನ್ನ ಜೊತೆಯಿರಿ. ಇಂತಹ ಭಾವವು ಸತ್ಯಯುಗದಲ್ಲಿಯೂ ಆಗುವುದಿಲ್ಲ. ಸತ್ಯಯುಗದಲ್ಲಿಯೂ ಸಹ ಆತ್ಮರ ಸಂಗದಲ್ಲಿರುತ್ತೀರಿ. ಇಡೀ ಕಲ್ಪದಲ್ಲಿ ತಂದೆಯ ಜೊತೆಯಲ್ಲಿ, ಎಷ್ಟು ಸಮಯ ಸಿಗುತ್ತದೆ? ಬಹಳ ಸ್ವಲ್ಪವೇ ಸಮಯವಲ್ಲವೆ. ಅಂದಮೇಲೆ ಸ್ವಲ್ಪ ಸಮಯದಲ್ಲಿ ಇಷ್ಟು ದೊಡ್ಡ ಭಾಗ್ಯವು ಸಿಗುತ್ತದೆಯೆಂದರೆ ಸದಾ ಇರಬೇಕಲ್ಲವೆ! ಬಾಪ್ದಾದಾರವರು ಸದಾ ಪರಿಪಕ್ವ ಸ್ಥಿತಿಯಲ್ಲಿ ಸ್ಥಿತರಾಗಿರುವ ಮಕ್ಕಳನ್ನು ನೋಡುತ್ತಿದ್ದಾರೆ. ಎಷ್ಟೊಂದು ಪ್ರಿಯವಾದ ಮಕ್ಕಳು ಬಾಪ್ದಾದಾರವರ ಸನ್ಮುಖದಲ್ಲಿದ್ದಾರೆ! ಒಂದೊಂದು ಮಗುವೂ ಬಹಳ ಲವ್ಲಿಯಾಗಿದೆ. ಬಾಪ್ದಾದಾರವರು ಇಷ್ಟೂ ಪ್ರೀತಿಯಿಂದ ಎಲ್ಲರನ್ನೂ ಎಲ್ಲೆಲ್ಲಿಂದ ಆಯ್ಕೆ ಮಾಡಿ ಒಟ್ಟಿಗೆ ಸೇರಿಸಿದ್ದಾರೆ! ಹೀಗೆ ಆಯ್ಕೆಯಾಗಿರುವ ಮಕ್ಕಳು ಸದಾಕಾಲವೂ ಪರಿಪಕ್ವವಾಗಿರುತ್ತಾರೆ, ಕಚ್ಚಾ ಆಗಿರಲು ಸಾಧ್ಯವಿಲ್ಲ. ಒಳ್ಳೆಯದು.

ವ್ಯಕ್ತಿಗತ ವಾರ್ತಾಲಾಪ:- ವಿಶೇಷ ಪಾತ್ರಧಾರಿ ಅರ್ಥಾತ್ ಪ್ರತೀ ಹೆಜ್ಜೆ, ಪ್ರತೀ ಸೆಕೆಂಡಿನಲ್ಲಿ ಸದಾ ಅಲರ್ಟ್, ಹುಡುಗಾಟಿಕೆಯಿರುವುದಿಲ್ಲ. ಸದಾ ತಮ್ಮನ್ನು ನಡೆಯುತ್ತಾ-ಸುತ್ತಾಡುತ್ತಾ, ತಿನ್ನುತ್ತಾ-ಕುಡಿಯುತ್ತಾ ಬೇಹದ್ದಿನ ವಿಶ್ವ ನಾಟಕದ ರಂಗ ಮಂಚದ ಮೇಲೆ ವಿಶೇಷ ಪಾತ್ರಧಾರಿ ಆತ್ಮನಾಗಿದ್ದೇನೆಂದು ಅನುಭವ ಮಾಡುತ್ತೀರಾ? ಯಾರು ವಿಶೇಷ ಪಾತ್ರಧಾರಿಯಾಗಿರುತ್ತಾರೆ, ಅವರಿಗೆ ಸದಾ ಪ್ರತೀ ಸಮಯದಲ್ಲಿಯೂ ತನ್ನ ಕರ್ಮ ಅರ್ಥಾತ್ ಪಾತ್ರದ ಮೇಲೆ ಗಮನವಿರುತ್ತದೆ. ಏಕೆಂದರೆ ಇಡೀ ಡ್ರಾಮಾದ ಆಧಾರವು ಹೀರೊ ಪಾತ್ರಧಾರಿಯದಾಗಿರುತ್ತದೆ. ಅಂದಮೇಲೆ ಈ ಇಡೀ ಡ್ರಾಮಾದಾ ಆಧಾರವು ತಾವಾಗಿದ್ದೀರಲ್ಲವೆ. ಅಂದಾಗ ವಿಶೇಷ ಆತ್ಮರಿಗೆ ಅಥವಾ ವಿಶೇಷ ಪಾತ್ರಧಾರಿಗಳಿಗೆ ಇಷ್ಟೇ ಗಮನವಿರುತ್ತದೆಯೇ? ವಿಶೇಷ ಪಾತ್ರಧಾರಿಯೆಂದಿಗೂ ಹುಡುಗಾಟಿಕೆಯಲ್ಲಿರುವುದಿಲ್ಲ, ಅಲರ್ಟ್ ಆಗಿರುತ್ತಾರೆ. ಅಂದಮೇಲೆ ಎಂದಿಗೂ ಹುಡುಗಾಟಿಕೆಯು ಬರುವುದಿಲ್ಲವೇ? ಮಾಡುತ್ತಿದ್ದೇವೆ, ತಲುಪಿ ಬಿಡುತ್ತೇವೆ..... ಈ ರೀತಿಯಂತು ಯೋಚಿಸುವುದಿಲ್ಲವೇ? ಮಾಡುತ್ತಿದ್ದೀರಿ. ಆದರೆ ಯಾವ ಗತಿಯಿಂದ ಮಾಡುತ್ತಿದ್ದೀರಿ? ನಡೆಯುತ್ತಿದ್ದೀರಿ. ಆದರೆ ಯಾವ ಗತಿಯಲ್ಲಿ ನಡೆಯುತ್ತಿದ್ದೀರಿ? ಗತಿಯಲ್ಲಂತು ಅಂತರವಾಗುತ್ತದೆಯಲ್ಲವೆ. ಹೆಜ್ಜೆಯನ್ನಿಟ್ಟು ನಡೆಯುವವರೆಲ್ಲಿ! ಮತ್ತು ವಿಮಾನದಲ್ಲಿ ಸಾಗುವವರೆಲ್ಲಿ! ಹೇಳುವುದರಲ್ಲಂತು ಇದೇ ಬರುತ್ತದೆ - ಹೆಜ್ಜೆಯಿಡುತ್ತಿರುವವರೂ ನಡೆಯುತ್ತಿದ್ದಾರೆ ಮತ್ತು ವಿಮಾನಯಾನ ಮಾಡುತ್ತಿರುವವರೂ ಸಾಗುತ್ತಿದ್ದಾರೆ. ಆದರೆ ಅಂತರವೆಷ್ಟಿದೆ!? ಅಂದಮೇಲೆ ಕೇವಲ ನಡೆಯುತ್ತಿದ್ದಾರೆ, ಬ್ರಹ್ಮಾಕುಮಾರನಾಗಿ ಬಿಟ್ಟರು ಎಂದರೆ ನಡೆಯುತ್ತಿದ್ದಾರೆ. ಆದರೆ ಯಾವ ಗತಿಯಿಂದ? ತೀವ್ರಗತಿಯಿರುವವರೇ ಸಮಯದಲ್ಲಿ ಗುರಿಯಲ್ಲಿ ತಲುಪುತ್ತಾರೆ, ಇಲ್ಲವೆಂದರೆ ಹಿಂದೆ ಉಳಿದುಕೊಂಡು ಬಿಡುತ್ತಾರೆ. ಇಲ್ಲಿಯೇ ಪ್ರಾಪ್ತಿಯಂತು ಆಗುತ್ತದೆ ಆದರೆ ಸೂರ್ಯವಂಶಿಯದಾಗುತ್ತದೆ ಅಥವಾ ಚಂದ್ರವಂಶಿಯದಾಗುತ್ತದೆ, ಅಂತರವಂತು ಆಯಿತಲ್ಲವೆ. ಅಂದಾಗ ಸೂರ್ಯವಂಶಿಯಲ್ಲಿ ಬರುವುದಕ್ಕಾಗಿ ಪ್ರತೀ ಸಂಕಲ್ಪ, ಪ್ರತೀ ಮಾತಿನಿಂದ ಸಾಧಾರಣತೆಯು ಸಮಾಪ್ತಿಯಾಗಲಿ. ಒಂದುವೇಳೆ ಯಾರೇ ಹೀರೊ ಪಾತ್ರಧಾರಿಯು ಸಾಧಾರಣ ಪಾತ್ರವನ್ನು ಮಾಡಿದರೆ, ಎಲ್ಲರೂ ನಗುತ್ತಾರಲ್ಲವೆ. ಆದ್ದರಿಂದ ಸದಾ ಇದು ಸ್ಮೃತಿಯಲ್ಲಿರಲಿ - ನಾನು ವಿಶೇಷ ಪಾತ್ರಧಾರಿ ಆಗಿದ್ದೇನೆ, ಇದಕ್ಕಾಗಿ ಪ್ರತೀ ಕರ್ಮವು ವಿಶೇಷವಾದುದು ಇರಲಿ, ಪ್ರತೀ ಹೆಜ್ಜೆಯು ವಿಶೇಷವಾಗಿರಲಿ, ಪ್ರತೀ ಸೆಕೆಂಡ್, ಪ್ರತೀ ಸಮಯ, ಪ್ರತೀ ಸಂಕಲ್ಪವು ಶ್ರೇಷ್ಠವಾಗಿರಲಿ. ಹೀಗಾಗಬಾರದು - ಇದಂತು 5 ನಿಮಿಷಕ್ಕಾಗಿ ಸಾಧಾರಣವಾಯಿತು. ಐದು ನಿಮಿಷವು ಐದು ನಿಮಿಷವಲ್ಲ. ಆದರೆ ಸಂಗಮಯುಗದ ಐದು ನಿಮಿಷವೂ ಬಹಳ ಮಹತ್ವವಿರುವುದಾಗಿದೆ, ಐದು ನಿಮಿಷವು ಐದು ವರ್ಷಗಳಿಗಿಂತಲೂ ಹೆಚ್ಚು, ಆದ್ದರಿಂದ ಇಷ್ಟೂ ಗಮನವಿರಲಿ. ಇದಕ್ಕೆ ಹೇಳಲಾಗುತ್ತದೆ - ತೀವ್ರಪುರುಷಾರ್ಥಿ. ತೀವ್ರ ಪುರುಷಾರ್ಥಿಗಳ ಸ್ಲೋಗನ್ ಯಾವುದಾಗಿದೆ? "ಈಗಿಲ್ಲದಿದ್ದರೆ ಎಂದಿಗೂ ಇಲ್ಲ" ಅಂದಮೇಲೆ ಇದು ಸದಾ ನೆನಪಿರುತ್ತದೆಯೇ? ಏಕೆಂದರೆ ಸದಾಕಾಲದ ರಾಜ್ಯಭಾಗ್ಯದ ಪ್ರಾಪ್ತಿ ಮಾಡಿಕೊಳ್ಳಬೇಕೆಂದರೆ ಸದಾ ಗಮನವಿರಲಿ. ಈಗ ಸ್ವಲ್ಪ ಸಮಯ, ಸದಾಕಾಲದ ಗಮನವು ಬಹಳಕಾಲ, ಸದಾಕಾಲದ ಪ್ರಾಪ್ತಿ ಮಾಡಿಸುವಂತದ್ದಾಗಿದೆ. ಅಂದಮೇಲೆ ಪ್ರತೀ ಸಮಯದಲ್ಲಿ ಈ ಸ್ಮೃತಿಯಿರಲಿ ಮತ್ತು ಪರಿಶೀಲನೆ ಇರಲಿ - ನಡೆಯುತ್ತಾ-ನಡೆಯುತ್ತಾ ಕೆಲವೊಮ್ಮೆ ಸಾಧಾರಣತೆಯಲ್ಲಿ ಬಂದು ಬಿಡುವುದಿಲ್ಲವೇ? ಹೇಗೆ ತಂದೆಗೆ ಪರಮ ಆತ್ಮನೆಂದು ಹೇಳಲಾಗುತ್ತದೆ, ಅಂದಮೇಲೆ ಪರಮ ಆಗಿದ್ದಾರಲ್ಲವೆ. ಹಾಗಾದರೆ ತಂದೆಯಂತೆ ಮಕ್ಕಳೂ ಸಹ ಪ್ರತೀ ಮಾತಿನಲ್ಲಿ ಪರಮ ಅಂದರೆ ಶ್ರೇಷ್ಟವಾಗಿರಬೇಕು.

ಅಂದಮೇಲೆ ಈಗ ಸ್ವಯಂನ ಪುರುಷಾರ್ಥವೂ ಸಹ ತೀವ್ರವಾಗಲಿ ಮತ್ತು ಸೇವೆಯಲ್ಲಿಯೂ ಕಡಿಮೆ ಸಮಯ, ಕಡಿಮೆ ಪರಿಶ್ರಮವಾಗಲಿ ಹಾಗೂ ಸಫಲತೆಯು ಹೆಚ್ಚಾಗಿ ಆಗಲಿ. ಒಬ್ಬರು ಅನೇಕರಷ್ಟು ಕಾರ್ಯವನ್ನು ಮಾಡುವವರಾಗಲಿ. ಇಂತಹ ಯೋಜನೆಯನ್ನು ಮಾಡಿರಿ. ಪಂಜಾಬ್ ಬಹಳ ಹಳೆಯದು, ಸೇವೆಯ ಆದಿಯಿಂದಲೂ ಇದೆಯೆಂದಾಗ ಆದಿ ಸ್ಥಾನದವರು ಆದಿ ರತ್ನಗಳನ್ನು ಹೊರ ತೆಗೆಯಿರಿ. ಹಾಗೆಯೇ ಪಂಜಾಬನ್ನು ಸಿಂಹವೆಂದು ಹೇಳುತ್ತಾರಲ್ಲವೆ. ಅಂದಮೇಲೆ ಸಿಂಹವು ಘರ್ಜನೆಯನ್ನು ಮಾಡುತ್ತದೆ. ಘರ್ಜನೆ ಅಂದರೆ ಬಹಳ ಹೆಚ್ಚು ಪ್ರಸಿದ್ಧಗೊಳಿಸುವವರು. ಈಗ ಏನು ಮಾಡುತ್ತಾರೆ ಮತ್ತು ಯಾರು ಮಾಡುತ್ತಾರೆ? ಇದನ್ನು ನೋಡುತ್ತೇವೆ.

ವರದಾನ:
ಅಮೃತವೇಳೆಯಿಂದ ರಾತ್ರಿಯವರೆಗೆ ನೆನಪಿನಲ್ಲಿ ವಿಧಿಪೂರ್ವಕವಾಗಿ ಪ್ರತೀ ಕರ್ಮವನ್ನು ಮಾಡುವಂತಹ ಸಿದ್ಧಿ ಸ್ವರೂಪ ಭವ.

ಅಮೃತವೇಳೆಯಿಂದ ರಾತ್ರಿಯವರೆಗೂ ಏನೆಲ್ಲವೂ ಕರ್ಮವನ್ನೇ ಮಾಡಿರಿ, ನೆನಪಿನಲ್ಲಿ ವಿಧಿಪೂರ್ವಕವಾಗಿ ಕರ್ಮವನ್ನು ಮಾಡುತ್ತೀರೆಂದರೆ ಪ್ರತೀ ಕರ್ಮದ ಸಿದ್ಧಿಯು ಸಿಗುವುದು. ಎಲ್ಲದಕ್ಕಿಂತಲೂ ಅತಿ ದೊಡ್ಡ ಸಿದ್ಧಿಯು ಇದಾಗಿದೆ – ಪ್ರತ್ಯಕ್ಷ ಫಲದ ರೂಪದಲ್ಲಿ ಅತೀಂದ್ರಿಯ ಸುಖದ ಅನುಭೂತಿಯಾಗುವುದು. ಸದಾ ಸುಖದ ಅಲೆಗಳಲ್ಲಿ, ಖುಷಿಯ ಅಲೆಗಳಲ್ಲಿ ತೇಲಾಡುತ್ತಿರುತ್ತೀರಿ. ಅಂದಮೇಲೆ ಈ ಪ್ರತ್ಯಕ್ಷ ಫಲವೂ ಸಿಗುತ್ತದೆ ಹಾಗೂ ಭವಿಷ್ಯ ಫಲವೂ ಸಿಗುತ್ತದೆ. ಈ ಸಮಯದ ಪ್ರತ್ಯಕ್ಷ ಫಲವು ಭವಿಷ್ಯದ ಅನೇಕ ಜನ್ಮಗಳ ಫಲಕ್ಕಿಂತಲೂ ಶ್ರೇಷ್ಠವಿದೆ. ಈಗೀಗ ಮಾಡಲಾಯಿತು, ಈಗೀಗ ಸಿಕ್ಕಿತು - ಇದಕ್ಕೇ ಪ್ರತ್ಯಕ್ಷ ಫಲ ಎಂದು ಹೇಳಲಾಗುತ್ತದೆ.

ಸ್ಲೋಗನ್:
ಸ್ವಯಂನ್ನು ನಿಮಿತ್ತನೆಂದು ತಿಳಿದುಕೊಂಡು ಪ್ರತೀ ಕರ್ಮವನ್ನೂ ಮಾಡಿರಿ, ಆಗ ಭಿನ್ನ ಹಾಗೂ ಪ್ರಿಯರಾಗಿರುತ್ತೀರಿ, ನಾನೆನ್ನುವುದು ಬರಲು ಸಾಧ್ಯವಿಲ್ಲ.