23/10/18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಎಷ್ಟು
ನೆನಪಿನಲ್ಲಿ ಇರುತ್ತೀರಿ, ಪವಿತ್ರರಾಗುತ್ತೀರಿ ಅಷ್ಟೂ ಪಾರಲೌಕಿಕ ಮಾತಾಪಿತರ ಆಶೀರ್ವಾದವು
ಸಿಗುತ್ತದೆ, ಆಶೀರ್ವಾದವು ಸಿಗುವುದರಿಂದ ನೀವು ಸದಾ ಸುಖಿಗಳಾಗಿ ಬಿಡುತ್ತೀರಿ”
ಪ್ರಶ್ನೆ:
ತಂದೆಯು ಎಲ್ಲಾ
ಮಕ್ಕಳಿಗೆ ಎಂತಹ ಸಲಹೆ ಕೊಟ್ಟು ಕೆಟ್ಟ ಕರ್ಮಗಳಿಂದ ಬಿಡಿಸುತ್ತಾರೆ?
ಉತ್ತರ:
ತಂದೆಯ
ಸಲಹೆಯಾಗಿದೆ - ಮಕ್ಕಳೇ, ನಿಮ್ಮ ಬಳಿ ಏನೇ ಹಣ-ಆಸ್ತಿ ಮುಂತಾದವುಗಳಿದ್ದರೂ ಅವೆಲ್ಲವನ್ನೂ ನಿಮ್ಮ
ಬಳಿ ಇಟ್ಟುಕೊಳ್ಳಿ ಆದರೆ ನಿಮಿತ್ತರಾಗಿ ನಡೆಯಿರಿ. ಹೇ ಭಗವಂತ ಇದೆಲ್ಲವೂ ತಮ್ಮದಾಗಿದೆ ಎಂದು ನೀವು
ಹೇಳುತ್ತಾ ಬಂದಿದ್ದೀರಿ. ಭಗವಂತನೇ ಮಕ್ಕಳನ್ನು ಕೊಟ್ಟರು, ಹಣ-ಅಂತಸ್ತನ್ನು ಕೊಟ್ಟರು, ಈಗ ಭಗವಂತನೇ
ಹೇಳುತ್ತಾರೆ - ಇವೆಲ್ಲದರಿಂದ ಬುದ್ಧಿಯೋಗವನ್ನು ತೆಗೆದು ನೀವು ನಿಮಿತ್ತರಾಗಿರಿ, ಶ್ರೀಮತದಂತೆ
ನಡೆದಾಗ ಯಾವುದೇ ಕೆಟ್ಟ ಕರ್ಮಗಳಾಗುವುದಿಲ್ಲ. ನೀವು ಶ್ರೇಷ್ಠರಾಗಿ ಬಿಡುತ್ತೀರಿ.
ಗೀತೆ:
ಮಾತ-ಪಿತರ
ಆಶೀರ್ವಾದವನ್ನು ತೆಗೆದುಕೊಳ್ಳಿ...
ಓಂ ಶಾಂತಿ.
ಯಾವ ಮಕ್ಕಳು ನಮಗೆ ಬಾಯಿ ತಿರುಗುವುದಿಲ್ಲ, ಅನ್ಯರಿಗೆ ತಿಳಿಸಿ ಕೊಡಲಾಗುವುದಿಲ್ಲವೆಂದು ಹೇಳಿದರೆ
ಸೇವಾಕೇಂದ್ರದ ಬ್ರಾಹ್ಮಣಿಯರು ಅವರಿಗೆ ಹೇಗೆ ಕಲಿಸಬೇಕೆಂಬುದನ್ನು ಶಿವ ತಂದೆಯು ತಿಳಿಸುತ್ತಾರೆ.
ಚಿತ್ರಗಳಲ್ಲಿ ತಿಳಿಸುವುದು ಬಹಳ ಸಹಜವಾಗಿದೆ. ಹೇಗೆ ಚಿಕ್ಕ ಮಕ್ಕಳಿಗೂ ಸಹ ಚಿತ್ರಗಳನ್ನು ತೋರಿಸಿ
ತಿಳಿಸಬೇಕಾಗುತ್ತದೆಯಲ್ಲವೆ. ತರಗತಿಯಲ್ಲಿ ಎಲ್ಲರೂ ಬಂದು ಕುಳಿತುಕೊಂಡರು ಮತ್ತು ಮುರುಳಿ ಪ್ರಾರಂಭ
ಮಾಡಿ ಬಿಟ್ಟಿರಿ ಎಂದಲ್ಲ. ಮೊದಲು ಬಹಳ ಪ್ರೀತಿಯಿಂದ ಅವರಿಗೆ ತಿಳಿಸಬೇಕು. ಮಕ್ಕಳು ಗೀತೆಯನ್ನಂತೂ
ಕೇಳಿದಿರಿ, ಒಬ್ಬ ಮಾತಾಪಿತನಾಗಿದ್ದಾರೆ, ಯಾರನ್ನು ನೀವು ಮಾತಾಪಿತ ನಾನು ನಿಮ್ಮ ಬಾಲಕ...... ಎಂದು
ನೆನಪು ಮಾಡುತ್ತಿರುತ್ತಾರೆ. ಅವರೇ ಸೃಷ್ಟಿಯ ರಚೈತನಾಗಿದ್ದಾರೆ. ಮಾತಾಪಿತರು ಅವಶ್ಯವಾಗಿ
ಸ್ವರ್ಗವನ್ನೇ ರಚಿಸುತ್ತಾರೆ. ಸತ್ಯಯುಗದಲ್ಲಿ ಸ್ವರ್ಗವಾಸಿ ಮಕ್ಕಳಿರುತ್ತಾರೆ. ಆದರೆ ಇಲ್ಲಿಯ
ತಂದೆ-ತಾಯಿ, ಸ್ವಯಂ ತಾವೇ ನರಕವಾಸಿಗಳಾಗಿರುವುದರಿಂದ ನರಕವಾಸಿ ಮಕ್ಕಳಿಗೇ ಜನ್ಮ ನೀಡುತ್ತಾರೆ.
ತಂದೆ-ತಾಯಿಯ ಆಶೀರ್ವಾದವನ್ನು ತೆಗೆದುಕೊಳ್ಳಿ..... ಎಂದು ಗೀತೆಯಲ್ಲಿ ಕೇಳಿದಿರಿ. ನಿಮಗೆ
ಗೊತ್ತಿದೆ, ಈ ಸಮಯದ ತಂದೆ-ತಾಯಿಯಂತೂ ಆಶೀರ್ವಾದಗಳನ್ನು ಕೊಡುವುದಿಲ್ಲ. ಆದರೆ ಈ ತಂದೆ-ತಾಯಿ
ಆಶೀರ್ವಾದ ಮಾಡುತ್ತಾರೆ, ಯಾವ ಆಶೀರ್ವಾದವು ಮತ್ತೆ ಅರ್ಧ ಕಲ್ಪದವರೆಗೆ ನಡೆಯುತ್ತದೆ, ಅರ್ಧ ಕಲ್ಪದ
ನಂತರ ಶಾಪಿತರಾಗಿ ಬಿಡುತ್ತಾರೆ. ತಾವೂ ಪತಿತರಾಗುವ ಕಾರಣ ಮಕ್ಕಳನ್ನು ಪತಿತರನ್ನಾಗಿ ಮಾಡುತ್ತಾರೆ,
ಅದಕ್ಕೆ ಆಶೀರ್ವಾದವೆಂದಂತೂ ಹೇಳುವುದಿಲ್ಲ. ಶಾಪವನ್ನು ಕೊಡುತ್ತಾ-ಕೊಡುತ್ತಾ ಭಾರತವಾಸಿಗಳು
ಶಾಪಿತರಾಗಿ ಬಿಟ್ಟರು, ಎಷ್ಟೊಂದು ದುಃಖವೇ ದುಃಖವಿದೆ. ಆದ್ದರಿಂದಲೇ ಮಾತಾಪಿತರನ್ನು ನೆನಪು
ಮಾಡುತ್ತಾರೆ. ಈಗ ಯಾರನ್ನು ಕರೆಯುತ್ತಿದ್ದಿರೋ ಆ ಮಾತಾಪಿತರು ಆಶೀರ್ವಾದ ಮಾಡುತ್ತಿದ್ದಾರೆ ಮತ್ತು
ಓದಿಸಿ ಪತಿತರಿಂದ ಪಾವನರನ್ನಾಗಿ ಮಾಡುತ್ತಿದ್ದಾರೆ. ಇಲ್ಲಿ ಅಸುರೀ ಸಂಪ್ರದಾಯ, ರಾವಣ ರಾಜ್ಯವಿದೆ.
ಅಲ್ಲಿ ದೈವೀ ಸಂಪ್ರದಾಯ ರಾಮ ರಾಜ್ಯವಿರುತ್ತದೆ. ರಾವಣನ ಜನ್ಮವೂ ಸಹ ಭಾರತದಲ್ಲಿಯೇ ಆಗಿದೆ. ಶಿವ
ತಂದೆ, ಯಾರನ್ನು ರಾಮನೆಂದು ಹೇಳುತ್ತೇವೆಯೋ ಅವರ ಜನ್ಮವೂ ಸಹ ಭಾರತದಲ್ಲಿಯೇ ಆಗಿದೆ. ಯಾವಾಗ ನೀವು
ವಾಮಮಾರ್ಗದಲ್ಲಿ ಹೊರಟು ಹೋಗುವಿರೋ ಆಗ ಭಾರತದಲ್ಲಿ ರಾವಣ ರಾಜ್ಯವು ಪ್ರಾರಂಭವಾಗುತ್ತದೆ.
ಆದ್ದರಿಂದ ಭಾರತವನ್ನೇ ರಾಮನಾದ ಪರಮಪಿತ ಪರಮಾತ್ಮನು ಬಂದು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ.
ರಾವಣನು ಬಂದಾಗ ಮನುಷ್ಯರು ಪತಿತರಾಗುತ್ತಾರೆ. ರಾಮನೂ ಹೋದ, ರಾವಣನೂ ಹೋದ. ರಾವಣನದು ಬಹಳ ದೊಡ್ಡ
ಪರಿವಾರವಿದೆ ಎಂದು ಹಾಡುತ್ತಾರೆ. ರಾಮನ ಪರಿವಾರವಂತೂ ಬಹಳ ಚಿಕ್ಕದಾಗಿದೆ ಮತ್ತೆಲ್ಲಾ ಧರ್ಮಗಳು
ಸಮಾಪ್ತಿಯಾಗಿ ಬಿಡುತ್ತವೆ, ಎಲ್ಲದರ ವಿನಾಶವಾಗಿ ಬಿಡುತ್ತವೆ. ಬಾಕಿ ನೀವು ದೇವಿ-ದೇವತೆಗಳೇ
ಇರುತ್ತೀರಿ. ನೀವೀಗ ಯಾರು ಬ್ರಾಹ್ಮಣರಿದ್ದೀರೋ ನೀವೇ ಸತ್ಯಯುಗಕ್ಕೆ ವರ್ಗಾವಣೆಯಾಗುತ್ತೀರಿ ಅಂದಾಗ
ಈಗ ನಿಮಗೆ ತಂದೆ-ತಾಯಿಯ ಆಶೀರ್ವಾದಗಳು ಸಿಗುತ್ತಿವೆ. ಆ ಮಾತಾಪಿತರು ನಿಮ್ಮನ್ನು ಸ್ವರ್ಗದ
ಮಾಲೀಕರನ್ನಾಗಿ ಮಾಡುತ್ತಾರೆ. ಅಲ್ಲಂತೂ ಸುಖವೇ ಸುಖವಿರುತ್ತದೆ. ಈ ಸಮಯದಲ್ಲಿ ಕಲಿಯುಗದಲ್ಲಿ
ದುಃಖವಿದೆ, ಎಲ್ಲಾ ಧರ್ಮದವರೂ ದುಃಖಿಯಾಗಿದ್ದಾರೆ. ಈಗ ಕಲಿಯುಗದ ನಂತರ ಸತ್ಯಯುಗವು ಬರಲಿದೆ,
ಕಲಿಯುಗದಲ್ಲಿ ಎಷ್ಟೊಂದು ಜನಸಂಖ್ಯೆಯಿದೆ ಆದರೆ ಸತ್ಯಯುಗದಲ್ಲಂತೂ ಇಷ್ಟೊಂದು
ಜನಸಂಖ್ಯೆಯಿರುವುದಿಲ್ಲ. ಎಷ್ಟು ಜನ ಬ್ರಾಹ್ಮಣರಿರುವರೋ ಅವರೇ ನಂತರ ಅಲ್ಲಿ ದೇವತೆಗಳಾಗುತ್ತಾರೆ.
ತ್ರೇತಾದವರೆಗೂ ವೃದ್ಧಿಯಾಗುತ್ತಿರುತ್ತಾರೆ. ಕ್ರಿಸ್ತನಿಗೆ 3000 ವರ್ಷಗಳ ಮೊದಲು
ಸತ್ಯಯುಗವಿತ್ತೆಂದು ಹೇಳುತ್ತಾರೆ. ಬಿಪೋರ್ ಕ್ರೈಸ್ಟ್ ಅಂಡ್ ಆಫ್ಟರ್ ಕ್ರೈಸ್ಟ್. ಸತ್ಯಯುಗದಲ್ಲಂತೂ
ಒಂದೇ ಧರ್ಮ, ಒಂದೇ ರಾಜ್ಯವಿರುತ್ತದೆ. ಅಲ್ಲಿ ಮನುಷ್ಯರೂ ಸಹ ಕಡಿಮೆಯಿರುತ್ತಾರೆ. ಕೇವಲ ಭಾರತವೇ
ಇರುತ್ತದೆ ಮತ್ತ್ಯಾವುದೇ ಧರ್ಮವಿರುವುದಿಲ್ಲ. ಕೇವಲ ಸೂರ್ಯವಂಶಿಯರೇ ಇರುತ್ತಾರೆ, ಚಂದ್ರವಂಶಿಯರೂ
ಇರುವುದಿಲ್ಲ. ಸೂರ್ಯವಂಶಿಯರಿಗೆ ಭಗವಾನ್-ಭಗವತಿಯೆಂದು ಹೇಳಬಹುದು ಏಕೆಂದರೆ ಅವರು
ಸಂಪೂರ್ಣರಾಗಿದ್ದಾರೆ.
ನೀವು ಮಕ್ಕಳಿಗೆ ಗೊತ್ತಿದೆ - ಪತಿತ-ಪಾವನನಂತೂ ಒಬ್ಬ ಪರಮಪಿತ ಪರಮಾತ್ಮನೇ ಆಗಿದ್ದಾರೆ. (ಚಕ್ರದ
ಚಿತ್ರದ ಕಡೆ ತೋರಿಸುತ್ತಾ) ನೋಡಿ, ತಂದೆಯು ಮೇಲೆ ಕುಳಿತಿದ್ದಾರೆ. ಈ ಬ್ರಹ್ಮಾರವರ ಮೂಲಕ ಸ್ಥಾಪನೆ
ಮಾಡಿಸುತ್ತಿದ್ದಾರೆ, ಈಗ ನೀವು ಓದುತ್ತಿದ್ದೀರಿ. ಯಾವಾಗ ಈ ದೇವತೆಗಳ ರಾಜ್ಯವಿರುತ್ತದೆಯೋ ಆಗ
ಮತ್ತ್ಯಾವುದೇ ಧರ್ಮವಿರುವುದಿಲ್ಲ ಮತ್ತೆ ಅರ್ಧಕಲ್ಪದ ನಂತರ ವೃದ್ಧಿ ಹೊಂದುತ್ತಾ ಹೋಗುತ್ತದೆ.
ಮೇಲಿನಿಂದ ಆತ್ಮಗಳು ಬರುತ್ತಾ ಹೋಗುತ್ತಾರೆ, ವರ್ಣಗಳು ಬದಲಾಗುತ್ತಿರುತ್ತಾ ಹೋಗುತ್ತವೆ,
ಜೀವಾತ್ಮಗಳು ಹೆಚ್ಚುತ್ತಾ ಹೋಗುತ್ತಾರೆ. ಸತ್ಯಯುಗದಲ್ಲಿ ಕೇವಲ 9 ಲಕ್ಷ ಜನಸಂಖ್ಯೆಯಿರುತ್ತದೆ
ನಂತರ ಕೋಟಿಯಾಗುತ್ತದೆ. ನಂತರ ವೃದ್ಧಿ ಹೊಂದುತ್ತಾ ಹೋಗುತ್ತದೆ. ಸತ್ಯಯುಗದಲ್ಲಿ ಭಾರತವು
ಶ್ರೇಷ್ಠಾಚಾರಿಯಾಗಿತ್ತು, ಈಗ ಭ್ರಷ್ಟಾಚಾರಿಯಾಗಿದೆ. ಎಲ್ಲಾ ಧರ್ಮದವರು ಶ್ರೇಷ್ಠಾಚಾರಿಗಳಾಗಿ
ಬಿಡುತ್ತಾರೆ ಎಂದಲ್ಲ. ಎಷ್ಟೊಂದು ಮನುಷ್ಯರಿದ್ದಾರೆ, ಇಲ್ಲಿಯೂ ಭಷ್ಟಾಚಾರಿಯಿಂದ
ಶ್ರೇಷ್ಠಾಚಾರಿಯಾಗುವುದರಲ್ಲಿ ಎಷ್ಟೊಂದು ಪರಿಶ್ರಮವಾಗುತ್ತದೆ. ಘಳಿಗೆ ಘಳಿಗೆಗೂ
ಶ್ರೇಷ್ಠಾಚಾರಿಗಳಾಗುತ್ತಾ ಆಗುತ್ತಾ ನಂತರ ವಿಕಾರದಲ್ಲಿ ಹೋಗಿ ಭ್ರಷ್ಠಾಚಾರಿಗಳಾಗಿ ಬಿಡುತ್ತಾರೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಕಪ್ಪಾಗಿದ್ದ ನಿಮ್ಮನ್ನು ಸುಂದರರನ್ನಾಗಿ ಮಾಡಲು
ಬಂದಿದ್ದೇನೆ. ನೀವು ಘಳಿಗೆ-ಘಳಿಗೆಯೂ ಬಿದ್ದು ಹೋಗುತ್ತೀರಿ. ಬೇಹದ್ದಿನ ತಂದೆಯಂತೂ ನೇರ ಮಾತನ್ನು
ತಿಳಿಸುತ್ತಾರೆ - ನೀವು ಕುಲಕಳಂಕಿತರಾಗುತ್ತೀರಾ, ಮುಖವನ್ನು ಕಪ್ಪು ಮಾಡಿಕೊಳ್ಳುತ್ತೀರಾ? ನೀವು
ಸುಂದರರಾಗುವುದಿಲ್ಲವೆ? ನೀವು ಅರ್ಧಕಲ್ಪ ಶ್ರೇಷ್ಠರಾಗಿದ್ದಿರಿ ನಂತರ ಕಲೆಗಳು ಕಡಿಮೆಯಾಗುತ್ತಾ
ಹೋಗುತ್ತವೆ. ಕಲಿಯುಗದ ಅಂತ್ಯದಲ್ಲಂತೂ ಪೂರ್ಣ ಕಲೆಗಳೆಲ್ಲವೂ ಸಮಾಪ್ತಿಯಾಗಿ ಬಿಡುತ್ತವೆ.
ಸತ್ಯಯುಗದಲ್ಲಿ ಕೇವಲ ಭಾರತವೊಂದೇ ಇತ್ತು ಆದರೆ ಈಗ ಎಲ್ಲಾ ಧರ್ಮಗಳಾಗಿವೆ. ತಂದೆಯು ಬಂದು ಪುನಃ
ಸತ್ಯಯುಗೀ ಶ್ರೇಷ್ಠ ಸೃಷ್ಟಿಯನ್ನು ಸ್ಥಾಪನೆ ಮಾಡುತ್ತಾರೆ. ನೀವೂ ಸಹ ಶ್ರೇಷ್ಠಾಚಾರಿಗಳಾಗಬೇಕು
ಅಂದಮೇಲೆ ಯಾರು ಬಂದು ಶ್ರೇಷ್ಠಾಚಾರಿಗಳನ್ನಾಗಿ ಮಾಡುತ್ತಾರೆ? ತಂದೆಯು ಬಡವರ ಬಂಧುವಾಗಿದ್ದಾರೆ.
ಹಣದ ಮಾತಿಲ್ಲ, ಇಂತಹ ಬೇಹದ್ದಿನ ತಂದೆಯ ಬಳಿ ಶ್ರೇಷ್ಠರಾಗಲು ಬರುತ್ತೀರೆಂದರೂ ಸಹ ನೀವು ಅಲ್ಲಿ ಏಕೆ
ಹೋಗುತ್ತೀರೆಂದು ಮನುಷ್ಯರು ಕೇಳುತ್ತಾರೆ. ಎಷ್ಟೊಂದು ವಿಘ್ನಗಳನ್ನು ಹಾಕುತ್ತಾರೆ. ಈ ರುದ್ರ
ಜ್ಞಾನ ಯಜ್ಞದಲ್ಲಿ ಅಸುರರ ವಿಘ್ನಗಳು ಬಹಳ ಬರುತ್ತವೆಯೆಂದು ನಿಮಗೆ ಗೊತ್ತಿದೆ. ಅಬಲೆಯರ ಮೇಲೆ
ಅತ್ಯಾಚಾರವಾಗುತ್ತದೆ. ಕೆಲವು ಸ್ತ್ರೀಯರೂ ಸಹ ಬಹಳ ತೊಂದರೆ ಕೊಡುತ್ತಾರೆ, ವಿಕಾರಕ್ಕೋಸ್ಕರ
ಮದುವೆಯಾಗುತ್ತಾರೆ. ಈಗ ತಂದೆಯು ಕಾಮ ಚಿತೆಯಿಂದ ಇಳಿಸಿ ಜ್ಞಾನ ಚಿತೆಯ ಮೇಲೆ ಕೂರಿಸುತ್ತಾರೆ. ಇದು
ಜನ್ಮ-ಜನ್ಮಾಂತರದ ಒಪ್ಪಂದವಾಗಿದೆ. ಈ ಸಮಯದಲ್ಲಿ ರಾವಣ ರಾಜ್ಯವಾಗಿದೆ. ಸರ್ಕಾರವೂ ಸಹ ಎಷ್ಟೊಂದು
ಖರ್ಚು ಮಾಡುತ್ತದೆ, ರಾವಣನನ್ನು ಸುಡುತ್ತಾರೆ, ಆಟವನ್ನು ನೋಡಲು ಹೋಗುತ್ತಾರೆ. ಈ ರಾವಣನು
ಎಲ್ಲಿಂದ ಬಂದನು? ರಾವಣನ ಜನ್ಮವಾಗಿ 2500 ವರ್ಷಗಳಾಗಿವೆ. ರಾವಣನು ಎಲ್ಲರನ್ನು ಶೋಕವಾಟಿಕೆಯಲ್ಲಿ
ಕೂರಿಸಿದ್ದಾನೆ, ಎಲ್ಲರೂ ದುಃಖಿಯೇ ದುಃಖಿಯಾಗಿದ್ದಾರೆ, ರಾಮ ರಾಜ್ಯದಲ್ಲಿ ಎಲ್ಲರೂ ಸುಖಿಯೇ
ಸುಖಿಯಾಗಿರುತ್ತಾರೆ. ಈಗ ಕಲಿಯುಗದ ಅಂತ್ಯವಾಗಿದೆ. ವಿನಾಶವು ಸಮ್ಮುಖದಲ್ಲಿ ನಿಂತಿದೆ, ಇಷ್ಟು
ಕೋಟ್ಯಾಂತರ ಮನುಷ್ಯರು ಸಾಯುತ್ತಾರೆಂದರೆ ಅವಶ್ಯವಾಗಿ ಯುದ್ಧವು ನಡೆಯುವುದಲ್ಲವೆ. ಸಾಸಿವೆಯ ಸಮಾನ
ಎಲ್ಲರೂ ಪುಡಿ-ಪುಡಿಯಾಗುತ್ತಾರೆ. ಈಗ ಅದರ ತಯಾರಿಗಳಾಗುತ್ತಿರುವುದನ್ನು ನೋಡುತ್ತಿರುವಿರಿ. ತಂದೆಯು
ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ, ಈ ಜ್ಞಾನವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಇದನ್ನು
ತಂದೆಯೇ ಬಂದು ಕೊಡುತ್ತಾರೆ ಮತ್ತು ಪತಿತರನ್ನು ಪಾವನ ಮಾಡುತ್ತಾರೆ. ಸದ್ಗತಿ ಮಾಡುವವರು ಒಬ್ಬರೇ
ತಂದೆಯಾಗಿದ್ದಾರೆ. ಸತ್ಯಯುಗದಲ್ಲಂತೂ ಸದ್ಗತಿಯು ಇದ್ದೇ ಇರುತ್ತದೆ, ಅಲ್ಲಿ ಗುರುಗಳ
ಅವಶ್ಯಕತೆಯಿರುವುದಿಲ್ಲ. ಈಗ ನೀವು ಈ ಜ್ಞಾನದಿಂದ ತ್ರಿಕಾಲದರ್ಶಿಗಳಾಗುತ್ತೀರಿ, ಸತ್ಯಯುಗದಲ್ಲಿ
ಲಕ್ಷ್ಮೀ-ನಾರಾಯಣರಲ್ಲಿ ಈ ಜ್ಞಾನವೇನೂ ಇರುವುದಿಲ್ಲ. ಅಂದಮೇಲೆ ಈ ಜ್ಞಾನವು ಪರಂಪರೆಯಿಂದ ಹೇಗೆ
ಬಂದಿತು? ಈಗ ಕಲಿಯುಗದ ಅಂತ್ಯವಾಗಿದೆ, ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ನೆನಪು ಮಾಡಿ,
ಸ್ವರ್ಗದ ರಾಜಧಾನಿ ಸ್ಥಾಪನೆ ಮಾಡುವ ತಂದೆಯನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ, ಅವಶ್ಯವಾಗಿ
ಪವಿತ್ರರಾಗಿರಬೇಕಾಗುತ್ತದೆ. ಅದು ಪಾವನ ಪ್ರಪಂಚವಾಗಿದೆ, ಇದು ಪತಿತ ಪ್ರಪಂಚವಾಗಿದೆ. ಪಾವನ
ಪ್ರಪಂಚದಲ್ಲಿ ಕಂಸ, ಜರಾಸಂಧ, ಹಿರಣ್ಯ ಕಷ್ಯಪು ಮುಂತಾದವರಿರುವುದಿಲ್ಲ. ಕಲಿಯುಗದ ಮಾತುಗಳನ್ನು
ಸತ್ಯಯುಗದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಶಿವ ತಂದೆಯು ಕಲಿಯುಗದ ಅಂತ್ಯದಲ್ಲಿ ಬಂದಿದ್ದಾರೆ.
ಇಂದು ಶಿವ ತಂದೆಯು ಬಂದಿದ್ದಾರೆ, ನಾಳೆ ಕೃಷ್ಣನು ಬರುವನು. ಆದ್ದರಿಂದ ಶಿವ ತಂದೆ ಮತ್ತು
ಶ್ರೀಕೃಷ್ಣನ ಪಾತ್ರವನ್ನು ಸೇರಿಸಿ ಬಿಟ್ಟಿದ್ದಾರೆ. ಶಿವಭಗವಾನುವಾಚ - ಇವರ ಮೂಲಕ ಓದಿ ಕೃಷ್ಣನ
ಆತ್ಮವು ಈ ಪದವಿಯನ್ನು ಪಡೆಯುತ್ತದೆ, ಅದನ್ನು ಅವರು ಗೀತೆಯಲ್ಲಿ ತಪ್ಪಾಗಿ ಕೃಷ್ಣನ ಹೆಸರನ್ನು ಹಾಕಿ
ಬಿಟ್ಟಿದ್ದಾರೆ. ಇದೇ ತಪ್ಪು ಕಲ್ಪದ ನಂತರವೂ ಆಗುವುದು. ಮನುಷ್ಯರು ಭ್ರಷ್ಠಾಚಾರಿಗಳಾಗುವರು, ಆಗಲೇ
ತಂದೆಯು ಬಂದು ಶ್ರೇಷ್ಠಾಚಾರಿಗಳನ್ನಾಗಿ ಮಾಡುವರಲ್ಲವೆ. ಶ್ರೇಷ್ಠಾಚಾರಿಗಳು 84 ಜನ್ಮಗಳನ್ನು
ಪೂರ್ಣ ಮಾಡಿ ಭ್ರಷ್ಠಾಚಾರಿಗಳಾಗುತ್ತಾರೆ. ಈ ಚಕ್ರದ ಬಗ್ಗೆ ತಿಳಿಸುವುದಂತೂ ಬಹಳ ಸಹಜವಾಗಿದೆ.
ವೃಕ್ಷದ ಚಿತ್ರದಲ್ಲಿಯೂ ತೋರಿಸಲಾಗಿದೆ - ಕೆಳಗೆ ನೀವು ರಾಜಯೋಗದಿಂದ ತಪಸ್ಸು ಮಾಡುತ್ತಿದ್ದೀರಿ,
ಮೇಲೆ ಲಕ್ಷ್ಮೀ-ನಾರಾಯಣರ ರಾಜ್ಯ ನಿಂತಿದೆ. ಈಗ ನೀವು ಬುಡದಲ್ಲಿ ಕುಳಿತಿದ್ದೀರಿ, ಅಡಿಪಾಯವನ್ನು
ಹಾಕಲಾಗುತ್ತಿದೆ. ನಿಮಗೆ ಗೊತ್ತಿದೆ - ಸೂರ್ಯವಂಶಿ ಕುಲದವರು ವೈಕುಂಠದಲ್ಲಿ ಹೋಗುತ್ತಾರೆ, ರಾಮ
ರಾಜ್ಯಕ್ಕೆ ವೈಕುಂಠವೆಂದು ಹೇಳಲಾಗುವುದಿಲ್ಲ. ವೈಕುಂಠವೆಂದು ಕೃಷ್ಣನ ರಾಜ್ಯಕ್ಕೆ ಹೇಳಲಾಗುತ್ತದೆ.
ಈಗಂತೂ ನಿಮ್ಮ ಬಳಿ ಅನೇಕರು ಬರುತ್ತಾರೆ, ಪ್ರದರ್ಶನಿ ಮುಂತಾದುವುಗಳಲ್ಲಿ ನಿಮ್ಮ ಹೆಸರು
ಪ್ರಸಿದ್ಧವಾಗುವುದು. ಒಬ್ಬರು ಇನ್ನೊಬ್ಬರನ್ನು ನೋಡಿ ವೃದ್ಧಿ ಪಡೆಯುತ್ತಾರೆ. ತಂದೆಯು ಬಂದು ಈ
ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಚಿತ್ರಗಳ ಮೇಲೆ ಯಾರಿಗಾದರೂ ತಿಳಿಸುವುದು ಬಹಳ ಸಹಜವಾಗಿದೆ.
ಸತ್ಯಯುಗದ ಸ್ಥಾಪನೆಯನ್ನು ಭಗವಂತನೇ ಬಂದು ಮಾಡುತ್ತಾರೆ ಮತ್ತು ಪತಿತ ಪ್ರಪಂಚದಲ್ಲಿಯೇ ಬರುತ್ತಾರೆ.
ಕಪ್ಪಾಗಿದ್ದವರನ್ನು ಸುಂದರರನ್ನಾಗಿ ಮಾಡುತ್ತಾರೆ. ನೀವು ಕೃಷ್ಣನ ರಾಜಧಾನಿಯ ವಂಶಾವಳಿಗಳೂ
ಆಗಿದ್ದೀರಿ, ಪ್ರಜೆಗಳೂ ಆಗಿದ್ದೀರಿ. ತಂದೆಯು ಒಳ್ಳೆಯ ರೀತಿಯಲ್ಲಿ ತಿಳಿಸುತ್ತಾರೆ. ನಿರಾಕಾರ ಶಿವ
ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ - ತಾವು ನನ್ನನ್ನು ನೆನಪು ಮಾಡಿ, ಇದು ಆತ್ಮಿಕ ಯಾತ್ರೆಯಾಗಿದೆ.
ಹೇ ಆತ್ಮಗಳೇ, ನೀವು ತಮ್ಮ ಶಾಂತಿಧಾಮ, ನಿರ್ವಾಣಧಾಮವನ್ನು ನೆನಪು ಮಾಡಿದಾಗ ಸ್ವರ್ಗದ ಆಸ್ತಿಯು
ಸಿಗುವುದು. ಈಗ ನೀವು ಸಂಗಮದಲ್ಲಿ ಕುಳಿತಿದ್ದೀರಿ. ನನ್ನನ್ನು ಮತ್ತು ಆಸ್ತಿಯನ್ನು ನೆನಪು
ಮಾಡುತ್ತೀರೆಂದರೆ ನೀವು ಸ್ವರ್ಗದಲ್ಲಿ ಬರುತ್ತೀರಿ. ಯಾರೆಷ್ಟು ನೆನಪು ಮಾಡುತ್ತೀರಿ ಮತ್ತು
ಪವಿತ್ರರಾಗುವಿರೋ ಅಷ್ಟು ಶ್ರೇಷ್ಠ ಪದವಿಯು ಸಿಗುವುದು. ಧನವಾನ್ ಭವ, ಪುತ್ರವಾನ್ ಭವ, ಆಯುಷ್ಯವಾನ್
ಭವ - ನಿಮಗೆ ಎಷ್ಟೊಂದು ಆಶೀರ್ವಾದಗಳು ಸಿಗುತ್ತಿವೆ, ದೇವತೆಗಳ ಆಯಸ್ಸು ಬಹಳ ದೀರ್ಘವಾಗಿರುತ್ತವೆ,
ಈಗ ಈ ಶರೀರವನ್ನು ಬಿಟ್ಟು ಹೋಗಿ ನಾನು ಚಿಕ್ಕ ಮಗುವಾಗಬೇಕೆಂದು ಸಾಕ್ಷಾತ್ಕಾರವಾಗುತ್ತದೆ ಅಂದಾಗ
ಇದು ಆಂತರ್ಯದಲ್ಲಿ ಬರಬೇಕು - ನಾನಾತ್ಮ ಈ ಹಳೆಯ ಶರೀರವನ್ನು ಬಿಟ್ಟು ಹೋಗಿ ಗರ್ಭದಲ್ಲಿ ನಿವಾಸ
ಮಾಡುತ್ತೇನೆ. ಅಂತಮತಿ ಸೋ ಗತಿ, ವೃದ್ಧನಾಗಿರುವುದಕ್ಕಿಂತ ನಾನೇಕೆ ಹೋಗಿ ಮಗುವಾಗಬಾರದು? ಆತ್ಮವು
ಈ ಶರೀರದ ಜೊತೆಯಿದ್ದಾಗ ಕಷ್ಟದ ಅನುಭವವಾಗುತ್ತದೆ. ಆತ್ಮವು ಶರೀರದಿಂದ ಬೇರೆಯಾದಾಗ ಆತ್ಮಕ್ಕೆ
ಯಾವುದೇ ಕಷ್ಟದ ಅನುಭವವಾಗುವುದಿಲ್ಲ. ಶರೀರದಿಂದ ಬೇರೆಯಾಯಿತೆಂದರೆ ಮುಗಿಯಿತು. ನಾವು ಈಗ
ಹೋಗಬೇಕಾಗಿದೆ, ಮೂಲವತನದಿಂದ ನಮ್ಮನ್ನು ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ಇದು
ದುಃಖಧಾಮವಾಗಿದೆ. ಈಗ ನಾವು ಮುಕ್ತಿಧಾಮಕ್ಕೆ ಹೋಗುತ್ತೇವೆ, ಎಲ್ಲರನ್ನು ಮುಕ್ತಿಧಾಮಕ್ಕೆ
ಕರೆದುಕೊಂಡು ಹೋಗುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಯಾವುದೆಲ್ಲಾ ಧರ್ಮದವರಿದ್ದಾರೆಯೋ
ಎಲ್ಲರು ಮುಕ್ತಿಧಾಮಕ್ಕೆ ಹೋಗಬೇಕಾಗಿದೆ. ಅವರು ಪುರುಷಾರ್ಥವನ್ನೂ ಮುಕ್ತಿಧಾಮಕ್ಕೆ
ಹೋಗುವುದಕ್ಕೋಸ್ಕರವೇ ಮಾಡುತ್ತಾರೆ.
ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನನ್ನ ಬಳಿ ಬಂದು ಬಿಡುತ್ತೀರಿ. ತಂದೆಯನ್ನು
ನೆನಪು ಮಾಡುತ್ತಾ ಭೋಜನವನ್ನು ಸ್ವೀಕರಿಸುತ್ತೀರೆಂದರೆ ನಿಮಗೆ ಶಕ್ತಿ ಬರುವುದು. ಅಶರೀರಿಯಾಗಿ ನೀವು
ಅಬು ರೋಡ್ನವರೆಗೂ ನಡೆದುಕೊಂಡು ಹೋದರೂ ಸಹ ನಿಮಗೆಂದೂ ಸ್ವಲ್ಪವೂ ಸುಸ್ತಾಗುವುದಿಲ್ಲ. ಬಾಬಾರವರು
ಪ್ರಾರಂಭದಲ್ಲಿ ಈ ಅಭ್ಯಾಸ ಮಾಡಿಸುತ್ತಿದ್ದರು. ನಾವು ಆತ್ಮಗಳಾಗಿದ್ದೇವೆಂದು ತಿಳಿಯುತ್ತಿದ್ದರು.
ಬಹಳ ಹಗುರವಾಗಿ ನಡೆದುಕೊಂಡೇ ಹೋಗಿ ಬಿಡುತ್ತಿದ್ದರು, ಸ್ವಲ್ಪವೂ ಸುಸ್ತಾಗುತ್ತಿರಲಿಲ್ಲ.
ಶರೀರವಿಲ್ಲದೇ ನೀವಾತ್ಮಗಳಂತೂ ಸೆಕೆಂಡಿನಲ್ಲಿ ತಂದೆಯ ಬಳಿ ತಲುಪಿ ಬಿಡುತ್ತೀರಿ. ಇಲ್ಲಿ ಒಂದು
ಶರೀರವನ್ನು ಬಿಟ್ಟರೆ ಒಂದು ಸೆಕೆಂಡಿನಲ್ಲಿ ಹೋಗಿ ಲಂಡನ್ನಿನಲ್ಲಿ ಜನ್ಮ ತೆಗೆದುಕೊಳ್ಳುತ್ತಾರೆ.
ಆತ್ಮದಷ್ಟು ತೀಕ್ಷ್ಣವಾದ ವಸ್ತು ಮತ್ಯಾವುದೂ ಇರುವುದಿಲ್ಲ ಅಂದಾಗ ಈಗ ತಂದೆಯು ಹೇಳುತ್ತಾರೆ -
ಮಕ್ಕಳೇ, ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ. ಈಗ ತಂದೆಯಾದ ನನ್ನನ್ನು ನೆನಪು
ಮಾಡಿ, ಈಗ ನೀಮಗೆ ಪ್ರತ್ಯಕ್ಷದಲ್ಲಿ ಬೇಹದ್ದಿನ ಪಾರಲೌಕಿಕ ತಂದೆಯ ಆಶೀರ್ವಾದಗಳು ಸಿಗುತ್ತಿವೆ.
ತಂದೆಯು ಮಕ್ಕಳಿಗೆ ಶ್ರೇಷ್ಠಾತಿ ಶ್ರೇಷ್ಠ ಮತವನ್ನು ಕೊಡುತ್ತಿದ್ದಾರೆ. ಹಣ, ಆಸ್ತಿ-ಅಂತಸ್ತು,
ಅಧಿಕಾರ ಎಲ್ಲವನ್ನೂ ನೀವು ತಮ್ಮ ಬಳಿಯೇ ಇಟ್ಟುಕೊಳ್ಳಿ. ಕೇವಲ ನಿಮಿತ್ತರಾಗಿ ನಡೆಯಿರಿ. ಹೇ ಭಗವಂತ
ಇದೆಲ್ಲವೂ ತಮ್ಮದೇ, ಭಗವಂತನೇ ಮಕ್ಕಳನ್ನು ಕೊಟ್ಟರು, ಭಗವಂತನೇ ಹಣ-ಅಂತಸ್ತನ್ನು ಕೊಟ್ಟರೆಂದು ನೀವು
ಹೇಳುತ್ತಲೇ ಬಂದಿರಿ ಅಂದಮೇಲೆ ಭಗವಂತನು ಬಂದು ತಿಳಿಸುತ್ತಾರೆ - ಮಕ್ಕಳೇ, ಈಗ ಇದೆಲ್ಲವುದರಿಂದ
ಬುದ್ಧಿಯೋಗವನ್ನು ತೆಗೆದು ನೀವು ಟ್ರಸ್ಟಿಯಾಗಿ ನಡೆಯಿರಿ, ಶ್ರೀಮತದಂತೆ ನಡೆಯಿರಿ ಆಗ ತಂದೆಗೆ
ತಿಳಿಯುತ್ತದೆ - ನೀವು ಯಾವುದೇ ಕೆಟ್ಟ ಕರ್ಮವನ್ನಂತೂ ಮಾಡುವುದಿಲ್ಲ, ಶ್ರೀಮತದಂತೆ
ನಡೆಯುವುದರಿಂದಲೇ ನೀವು ಶ್ರೇಷ್ಠರಾಗುತ್ತೀರಿ. ಅಸುರೀ ಮತದಂತೆ ನಡೆಯುವುದರಿಂದ ನೀವು
ಭ್ರಷ್ಠರಾಗಿದ್ದೀರಿ. ಭ್ರಷ್ಠರಾಗುವುದರಲ್ಲಿ ನಿಮಗೆ ಅರ್ಧಕಲ್ಪ ಹಿಡಿಸಿದೆ. 16 ಕಲೆಯಿಂದ ನಂತರ 14
ಕಲೆಯುಳ್ಳವರಾಗುತ್ತೀರಿ ಅಂದಮೇಲೆ ಇದರಲ್ಲಿ ಸಮಯವಂತೂ ಹಿಡಿಸುತ್ತದೆಯಲ್ಲವೆ. ಒಳ್ಳೆಯದು.
ಧಾರಣೆಗಾಗಿ
ಮುಖ್ಯಸಾರ:
1.
ನಡೆಯುತ್ತಾ-ತಿರುಗಾಡುತ್ತಾ ಅಶರೀರಿಗಳಾಗಬೇಕಾಗಿದೆ. ಒಬ್ಬ ತಂದೆಯ ನೆನಪಿನಲ್ಲಿದ್ದು ಭೋಜನವನ್ನು
ಸ್ವೀಕರಿಸಬೇಕಾಗಿದೆ.
2. ಮಾತಾಪಿತರ ಆಶೀರ್ವಾದಗಳನ್ನು ತೆಗೆದುಕೊಳ್ಳಬೇಕಾಗಿದೆ. ನಿಮಿತ್ತರಾಗಿರಬೇಕಾಗಿದೆ, ಯಾವುದೇ
ಕೆಟ್ಟ ಕರ್ಮ ಮಾಡಬಾರದಾಗಿದೆ.
ವರದಾನ:
ಜ್ಞಾನ
ಸ್ವರೂಪರಾಗಿ ಕರ್ಮ ಸಿದ್ದಾಂತವನ್ನು ಅರಿತು ನಡೆಯುವಂತಹ ಕರ್ಮ ಬಂಧನ ಮುಕ್ತ ಭವ.
ಕೆಲವು ಮಕ್ಕಳು
ಆವೇಶದಲ್ಲಿ ಬಂದು ಎಲ್ಲವನ್ನೂ ಬಿಟ್ಟು ದೂರ ಹೋಗಿ ತನುವಿನಿಂದ ಬೇರೆಯಾಗಿ ಬಿಡುವರು. ಆದರೆ
ಮನಸ್ಸಿನ ಲೆಕ್ಕಾಚಾರ ವಿರುವ ಕಾರಣ ಸೆಳೆಯುತ್ತಿರುವುದು. ಬುದ್ಧಿ ಹೋಗುತ್ತಿರುವುದು, ಇದೂ ಸಹಾ
ಒಂದು ವಿಘ್ನವಾಗಿಬಿಡುವುದು. ಆದ್ದರಿಂದ ಯಾರಿಂದಲಾದರೂ ದೂರ ಸರಿಯ ಬೇಕಾದರೂ ಸಹ ಮೊದಲು ನಿಮಿತ್ತ
ಆತ್ಮರಿಂದ ಪರಿಶೀಲಿಸಿಕೊಳ್ಳಿ. ಏಕೆಂದರೆ ಇದು ಕರ್ಮದ ಸಿದ್ಧಾತವಾಗಿದೆ. ಬಲವಂತವಾಗಿ
ಮುರಿಯುವುದರಿಂದ ಮನಸ್ಸು ಪದೇ-ಪದೇ ಅಲ್ಲೇ ಹೋಗುವುದು. ಆದ್ದರಿಂದ ಜ್ಞಾನ ಸ್ವರೂಪರಾಗಿ ಕರ್ಮ
ಸಿದ್ದಾಂತವನ್ನು ಗುರುತಿಸಿ ಮತ್ತು ಪರಿಶೀಲಿಸಿಕೊಳ್ಳಿ ಆಗ ಸಹಜವಾಗಿ ಕರ್ಮ ಬಂಧನದಿಂದ ಮುಕ್ತರಾಗಿ
ಬಿಡುವಿರಿ.
ಸ್ಲೋಗನ್:
ತಮ್ಮ ಸ್ವಮಾನದ
ಸೀಟ್ ಮೇಲೆ ಸೆಟ್ ಆಗಿರಿ ಆಗ ಮಾಯೆ ನಿಮ್ಮ ಮುಂದೆ ಬಲಿಹಾರಿಯಾಗಿ ಬಿಡುವುದು.