26/10/18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಶ್ರೀಮತದಂತೆ ನಡೆಯಿರಿ ಆಗ ನಿಮ್ಮ ಎಲ್ಲಾ ಭಂಡಾರಗಳು ಬರ್ಪೂರ್ ಆಗಿ ಬಿಡುತ್ತವೆ, ನಿಮ್ಮ ಅದೃಷ್ಟವು ಶ್ರೇಷ್ಠವಾಗಿ ಬಿಡುವುದು.”

ಪ್ರಶ್ನೆ:
ಈ ಕಲಿಯುಗದಲ್ಲಿ ಯಾವ ವಸ್ತುವಿನ ದಿವಾಳಿಯಾಗಿದೆ, ದಿವಾಳಿಯಾಗಿರುವುದರಿಂದ ಇದರ ಗತಿಯು ಏನಾಗಿರುವುದು?

ಉತ್ತರ:
ಕಲಿಯುಗದಲ್ಲಿ ಪವಿತ್ರತೆ, ಸುಖ-ಶಾಂತಿಯ ದಿವಾಳಿಯಾಗಿ ಬಿಟ್ಟಿದೆ. ಆದ್ದರಿಂದ ಭಾರತವು ಸುಖಧಾಮದಿಂದ ದುಃಖಧಾಮ, ವಜ್ರದಿಂದ ಕವಡೆಯ ಸಮಾನವಾಗಿ ಬಿಟ್ಟಿದೆ. ಈ ಆಟವೆಲ್ಲವೂ ಭಾರತದ ಮೇಲಿದೆ. ನಾಟಕದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಈಗ ತಂದೆಯು ನಿಮಗೆ ತಿಳಿಸುತ್ತಿದ್ದಾರೆ, ಅದೃಷ್ಠವಂತ ಸೌಭಾಗ್ಯಶಾಲಿ ಮಕ್ಕಳೇ ಈ ಜ್ಞಾನವನ್ನು ಒಳ್ಳೆಯ ರೀತಿಯಲ್ಲಿ ತಿಳಿದುಕೊಳ್ಳುತ್ತಾರೆ.

ಗೀತೆ:

ಭೋಲಾನಾಥನಿಗಿಂತ ಭಿನ್ನ........

ಓಂ ಶಾಂತಿ.
ಭಗವಾನುವಾಚ. ಯಾವ ಭಗವಂತ? ಭೋಲಾನಾಥ ಶಿವ ಭಗವಾನುವಾಚ. ತಂದೆಯೂ ತಿಳಿಸುತ್ತಾರೆ, ಶಿಕ್ಷಕರ ಕೆಲಸವೂ ತಿಳಿಸುವುದಾಗಿದೆ, ಸದ್ಗುರುವಿನ ಕೆಲಸವೂ ತಿಳಿಸುವುದಾಗಿದೆ. ಶಿವ ತಂದೆಯನ್ನೇ ಸತ್ಯ ತಂದೆ, ಭೋಲಾನಾಥನೆಂದು ಹೇಳಲಾಗುತ್ತದೆ. ಶಂಕರನಿಗೆ ಭೋಲಾ ಅಥವಾ ಮುಗ್ಧನೆಂದು ಹೇಳುವುದಿಲ್ಲ, ಶಂಕರನು ಕಣ್ಣು ತೆರೆದನು. ಸೃಷ್ಠಿಯು ಭಸ್ಮವಾಯಿತು ಎಂದು ಹೇಳುತ್ತಾರೆ. ಆದರೆ ಭೋಲಾ ಭಂಡಾರಿ ಅರ್ಥಾತ್ ಭಂಡಾರವನ್ನು ಬರ್ಪೂರ್ ಮಾಡುವವರೆಂದು ಶಿವನಿಗೆ ಹೇಳಲಾಗುತ್ತದೆ ಅಂದಾಗ ಯಾವ ಭಂಡಾರ? ಹಣ-ಆಸ್ತಿ, ಸುಖ-ಶಾಂತಿಯ ಭಂಡಾರ. ತಂದೆಯು ಪವಿತ್ರತೆ, ಸುಖ-ಶಾಂತಿಯ ಭಂಡಾರವನ್ನು ಸಂಪನ್ನ ಮಾಡುವುದಕ್ಕೋಸ್ಕರವೇ ಬಂದಿದ್ದಾರೆ. ಕಲಿಯುಗದಲ್ಲಿ ಪವಿತ್ರತೆ, ಸುಖ-ಶಾಂತಿಯ ದಿವಾಳಿ ಯಾಗಿದೆ ಏಕೆಂದರೆ ರಾವಣನು ಶಾಪ ಕೊಟ್ಟಿದ್ದಾನೆ. ಎಲ್ಲರೂ ಶೋಕವಾಟಿಕೆಯಲ್ಲಿ ಅಳುತ್ತಾ, ಚೀರಾಡುತ್ತಿರುತ್ತಾರೆ. ಭೋಲಾನಾಥ ಶಿವ ತಂದೆಯು ಕುಳಿತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಅಂದರೆ ನೀವು ಮಕ್ಕಳನ್ನು ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಾರೆ. ನಾಟಕವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಮಾಯೆಯು ಸಂಪೂರ್ಣ ಬುದ್ಧಿಹೀನರನ್ನಾಗಿ ಮಾಡಿ ಬಿಟ್ಟಿದೆ. ಇದು ಭಾರತದ ಸೋಲು-ಗೆಲುವು, ಸುಖ-ದುಃಖದ ನಾಟಕವಾಗಿದೆ. ಭಾರತವು ವಜ್ರ ಸಮಾನ, ಸುಖಿಯಾಗಿತ್ತು. ಈಗ ಕವಡೆಯ ಸಮಾನ ದುಃಖಿಯಾಗಿದೆ. ಭಾರತವೇ ಸುಖಧಾಮವಾಗಿತ್ತು, ಈಗ ದುಃಖಧಾಮವಾಗಿದೆ. ಸ್ವರ್ಗವಾಗಿತ್ತು ಈಗ ನರಕವಾಗಿದೆ. ನರಕದಿಂದ ಮತ್ತೆ ಸ್ವರ್ಗವಾಗಿ ಹೇಗಾಗುತ್ತದೆ? ಅದರ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಜ್ಞಾನಸಾಗರನ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಇದೂ ಸಹ ಬುದ್ಧಿಯಲ್ಲಿ ನಿಶ್ಚಯವಿರಬೇಕು. ಯಾರ ಅದೃಷ್ಟವು ಆಗುವುದಿದೆಯೋ, ಯಾರು ಸೌಭಾಗ್ಯಶಾಲಿಗಳಾಗುವವರಿದ್ದಾರೆಯೋ ಅವರಿಗೆ ನಿಶ್ಚಯವಾಗುತ್ತದೆ. ಎಲ್ಲರೂ ದೌರ್ಭಾಗ್ಯಶಾಲಿಗಳಾಗಿದ್ದಾರೆ. ದೌರ್ಭಾಗ್ಯಶಾಲಿಗಳು ಎಂದರೆ ಅದೃಷ್ಟವು ಹಾಳಾಗಿದೆ, ಭ್ರಷ್ಟಾಚಾರಿಗಳಾಗಿದ್ದಾರೆ. ತಂದೆಯು ಬಂದು ಶ್ರೇಷ್ಠಾಚಾರಿಗಳನ್ನಾಗಿ ಮಾಡುತ್ತಾರೆ, ಆದರೆ ಅಂತಹ ತಂದೆಯನ್ನೂ ಸಹ ಕೆಲವರು ಪರಿಶ್ರಮದಿಂದ ಅರಿತುಕೊಳ್ಳುತ್ತಾರೆ ಏಕೆಂದರೆ ಅವರಿಗೆ ಶರೀರವಿಲ್ಲ. ಪರಮ ಆತ್ಮ ಮಾತನಾಡುತ್ತಾರೆ. ಪಾವನ ಆತ್ಮಗಳು ಸತ್ಯಯುಗದಲ್ಲಿ ಇರುತ್ತಾರೆ. ಪತಿತ ಆತ್ಮಗಳು ಕಲಿಯುಗದಲ್ಲಿ ಇರುತ್ತಾರೆ. ಅನೇಕ ಮನೋಕಾಮನೆಗಳನ್ನು ಇಟ್ಟುಕೊಂಡು ಜಗದಂಬಾನ ಬಳಿಗೆ ಹೋಗುತ್ತಾರೆ, ಆದರೆ ಏನೂ ತಿಳಿದುಕೊಂಡಿಲ್ಲ. ಆದರೂ ಸಹ ತಂದೆಯು ತಿಳಿಸುತ್ತಾರೆ - ಯಾರ್ಯಾರು, ಯಾವ-ಯಾವ ಭಾವನೆಯಿಂದ ಪೂಜೆ ಮಾಡುತ್ತಾರೆಯೋ ಅವರಿಗೆ ನಾನು ಅಲ್ಪಕಾಲದ ಕ್ಷಣ ಭಂಗುರ ಫಲವನ್ನಂತೂ ಕೊಡುತ್ತೇನೆ. ಜಡ ಮೂರ್ತಿಯು ಎಂದೂ ಸಹ ಫಲವನ್ನು ಕೊಡಲು ಸಾಧ್ಯವಿಲ್ಲ. ಫಲ ಕೊಡುವವರು, ಅಲ್ಪಕಾಲದ ಸುಖವನ್ನು ಕೊಡುವಂತಹವನು ನಾನೇ ಆಗಿದ್ದೇನೆ ಮತ್ತು ಬೇಹದ್ದಿನ ಸುಖದಾತನೂ ನಾನೇ ಆಗಿದ್ದೇನೆ. ನಾನು ದುಃಖದಾತನಲ್ಲ. ನಾನಂತೂ ದುಃಖಹರ್ತ ಸುಖಕರ್ತನಾಗಿದ್ದೇನೆ. ನೀವು ಸುಖಧಾಮದಲ್ಲಿ ಸ್ವರ್ಗದ ಆಸ್ತಿಯನ್ನು ಪಡೆಯಲು ಬಂದಿದ್ದೀರಿ. ಇದರಲ್ಲಿ ಅನೇಕ ಪಥ್ಯೆಗಳಿವೆ. ಆದಿಯಲ್ಲಿ ಸುಖವಿರುತ್ತದೆ, ನಂತರ ಮಧ್ಯದಲ್ಲಿ ಭಕ್ತಿಮಾರ್ಗವು ಪ್ರಾರಂಭವಾದಾಗ ಸುಖವು ಸಮಾಪ್ತಿಯಾಗಿ ದುಃಖವು ಪ್ರಾರಂಭವಾಗುತ್ತದೆ. ನಂತರ ದೇವಿ-ದೇವತೆಗಳು ವಾಮ ಮಾರ್ಗ, ವಿಕಾರಿ ಮಾರ್ಗಕ್ಕೆ ಇಳಿಯುತ್ತಾರೆ. ಅಲ್ಲಿಂದಲೇ ಭಕ್ತಿಯು ಪ್ರಾರಂಭವಾಗುತ್ತದೆ. ಅಂದಾಗ ಆದಿಯಲ್ಲಿ ಸುಖ, ಮಧ್ಯದಲ್ಲಿ ದುಃಖವು ಪ್ರಾರಂಭವಾಗುತ್ತದೆ. ಅಂತ್ಯದಲ್ಲಂತೂ ಮಹಾನ್ ದುಃಖವಿದೆ. ತಂದೆಯು ಹೇಳುತ್ತಾರೆ - ಈಗ ಸರ್ವರ ಶಾಂತಿ, ಸುಖದಾತ ನಾನೇ ಆಗಿದ್ದೇನೆ. ನಿಮ್ಮನ್ನು ಸುಖಧಾಮಕ್ಕೆ ಕರೆದುಕೊಂಡು ಹೋಗಲು ತಯಾರು ಮಾಡುತ್ತಿದ್ದೇನೆ. ಉಳಿದವರೆಲ್ಲರೂ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಂಡು ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಶಿಕ್ಷೆಗಳನ್ನಂತೂ ಬಹಳ ಅನುಭವಿಸುತ್ತಾರೆ. ನ್ಯಾಯ ಪೀಠ (ಟ್ರಿಬ್ಯುನಲ್) ಕುಳಿತುಕೊಳ್ಳುತ್ತದೆ. ತಂದೆಯು ತಿಳಿಸಿದ್ದಾರೆ - ಕಾಶಿಯಲ್ಲಿಯೂ ಸಹ ಬಲಿಯಾಗುತ್ತಿದ್ದರು, ಕಾಶಿ ಕಲ್ವಟ್ ಎಂದು ಹೇಳುತ್ತಾರಲ್ಲವೆ. ಈಗ ಕಾಶಿಯಲ್ಲಿ ಶಿವನ ಮಂದಿರವಿದೆ, ಅಲ್ಲಿ ಭಕ್ತಿಮಾರ್ಗದಲ್ಲಿ ಶಿವ ತಂದೆಯ ನೆನಪಿನಲ್ಲಿರುತ್ತಾರೆ. ನಾನು ಈಗ ನಿಮ್ಮ ಬಳಿ ಬಂದು ಬಿಡುವೆನೆಂದು ಹೇಳಿ ಜೋರಾಗಿ ಹೇಳುತ್ತಾ ಶಿವನಿಗೆ ಬಲಿಯಾಗುತ್ತಾರೆ. ಆದ್ದರಿಂದ ಅವರಿಗೆ ಅಲ್ಪಕಾಲದ ಕ್ಷಣಭಂಗುರ ಫಲವು ಸಿಗುತ್ತದೆ. ಆದರೆ ಇಲ್ಲಿ ನೀವು ಬಲಿಹಾರಿಯಾಗುತ್ತೀರಿ ಅಂದರೆ 21 ಜನ್ಮಗಳ ಆಸ್ತಿಯನ್ನು ಪಡೆಯಲು ಜೀವಿಸಿದ್ದಂತೆಯೇ ಶಿವ ತಂದೆಗೆ ಅರ್ಪಣೆಯಾಗುತ್ತೀರಿ. ಇಲ್ಲಿ ಜೀವಘಾತದ ಮಾತಿಲ್ಲ. ಬಾಬಾ, ಜೀವಿಸಿದ್ದಂತೆಯೇ ನಾನು ನಿಮ್ಮವನಾಗಿದ್ದೇನೆ ಎಂದು ಹೇಳುತ್ತೀರಿ. ಅವರಂತೂ ಶಿವನಿಗೆ ಬಲಿಹಾರಿಯಾಗುತ್ತಾರೆ, ಸಾವನ್ನಪ್ಪುತ್ತಾರೆ. ನಾವು ಶಿವ ತಂದೆಗೆ ಅರ್ಪಣೆಯಾಗುತ್ತೇವೆಂದು ತಿಳಿಯುತ್ತಾರೆ ಆದರೆ ಆಗುವುದಿಲ್ಲ. ಇಲ್ಲಂತೂ ಜೀವಿಸಿದ್ದಂತೆಯೇ ತಂದೆಯ ಮಕ್ಕಳಾಗುತ್ತೀರಿ, ಮಡಿಲಿಗೆ ಬರುತ್ತೀರೆಂದರೆ ತಂದೆಯ ಶ್ರೀಮತದಂತೆ ನಡೆಯಬೇಕಾಗುತ್ತದೆ. ಆಗಲೇ ಶ್ರೇಷ್ಠ ದೇವತೆಗಳಾಗುತ್ತೀರಿ. ನೀವು ಈಗ ಆಗುತ್ತಿದ್ದೀರಿ, ನೀವು ಕಲ್ಪ-ಕಲ್ಪವೂ ಈ ಪುರುಷಾರ್ಥವನ್ನು ಮಾಡುತ್ತಾ ಬಂದಿದ್ದೀರಿ. ಇದೇನು ಹೊಸ ಮಾತಲ್ಲ.

ಪ್ರಪಂಚವು ಹಳೆಯದಾಗುತ್ತದೆ ನಂತರ ಅವಶ್ಯವಾಗಿ ಹೊಸದಾಗಬೇಕಲ್ಲವೆ. ಭಾರತವು ಹೊಸ ಸುಖಧಾಮವಾಗಿತ್ತು, ಈಗ ಹಳೆಯ ದುಃಖಧಾಮವಾಗಿದೆ. ಮನುಷ್ಯರು ಇಷ್ಟು ಕಲ್ಲು ಬುದ್ಧಿಯವರಾಗಿದ್ದಾರೆ ಸೃಷ್ಟಿಯು ಒಂದೇ ಆಗಿದೆ, ಇದು ಕೇವಲ ಹೊಸದು ಮತ್ತು ಹಳೆಯದಾಗುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ಮಾಯೆಯು ಬುದ್ಧಿಗೆ ಬೀಗವನ್ನು ಹಾಕಿ ಖಂಡಿತವಾಗಿಯೂ ತುಚ್ಛ ಬುದ್ಧಿಯವರನ್ನಾಗಿ ಮಾಡಿ ಬಿಟ್ಟಿದೆ, ಆದ್ದರಿಂದ ದೇವತೆಗಳ ಕರ್ತವ್ಯವನ್ನು ಅರಿತುಕೊಳ್ಳದೇ ಪೂಜೆ ಮಾಡುತ್ತಾರೆ, ಇದನ್ನು ಅಂಧಶ್ರದ್ಧೆ ಎಂದು ಹೇಳಲಾಗುತ್ತದೆ. ದೇವಿಯರ ಪೂಜೆಗೆ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ವಿಗ್ರಹಗಳಿಗೆ ಪೂಜೆ ಮಾಡಿ ತಿನ್ನಿಸಿ, ನೈವೇಧ್ಯ ಮಾಡಿ ಮತ್ತೆ ಸಮುದ್ರದಲ್ಲಿ ಮುಳುಗಿಸಿ ಬಿಡುತ್ತಾರೆಂದರೆ ಇದು ಗೊಂಬೆಗಳ ಪೂಜೆಯಾಯಿತಲ್ಲವೆ. ಇದರಿಂದೇನು ಪ್ರಯೋಜನ? ಎಷ್ಟು ಆಡಂಭರದಿಂದ ಆಚರಿಸುತ್ತಾರೆ, ಖರ್ಚು ಮಾಡುತ್ತಾರೆ, ವಾರದನಂತರ ಸ್ಮಶಾನದಲ್ಲಿ ಹೆಣವನ್ನು ಹೂಳುವ ಹಾಗೆ ಸಮುದ್ರದಲ್ಲಿ ಮುಳುಗಿಸಿ ಬಿಡುತ್ತಾರೆ. ಭಗವಾನುವಾಚ:- ಇದು ಅಸುರೀ ಸಂಪ್ರದಾಯದ ರಾಜ್ಯವಾಗಿದೆ, ನಾನು ನಿಮ್ಮನ್ನು ದೈವೀ ಸಂಪ್ರದಾಯದವರನ್ನಾಗಿ ಮಾಡುತ್ತೇನೆ. ಸಾಕಾರದಲ್ಲಿ ನೋಡದೇ ಇರುವುದರಿಂದ ಯಾರಿಗೇ ಆಗಲಿ ನಿಶ್ಚಯ ಕುಳಿತುಕ್ಕೊಳ್ಳುವುದು ಬಹಳ ಕಷ್ಟ. ಆಗಾಖಾನ್ ಎನ್ನುವವರು ಸಾಕಾರದಲ್ಲಿ ಇದ್ದರು, ಆದುದರಿಂದ ಅವರಿಗೆ ಎಷ್ಟೊಂದು ಅನುಯಾಯಿಗಳು ಇದ್ದರು, ಅವರನ್ನು ಚಿನ್ನ,ವಜ್ರಗಳಿಂದ ತುಲಾಭಾರ ಮಾಡುತ್ತಿದ್ದರು. ಇಷ್ಟೊಂದು ಮಹಿಮೆ ಯಾವುದೇ ಮಹಾರಾಜರಿಗೂ ಸಹ ಆಗುವುದಿಲ್ಲ. ಮಾಡುವುದಂತೂ ಏನೂ ಇಲ್ಲ. ಆದ್ದರಿಂದಲೇ ಇದಕ್ಕೆ ಅಂಧಶ್ರದ್ಧೆಯೆಂದು ಹೇಳಲಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಏಕೆಂದರೆ ಈ ಸಮಯದಲ್ಲಿ ಶಾಶ್ವತ ಸುಖವಂತೂ ಯಾರಿಗೂ ಇಲ್ಲ. ಬಹಳ ಕೊಳಕರೂ ಇರುತ್ತಾರೆ ದೊಡ್ಡ-ದೊಡ್ಡ ವ್ಯಕ್ತಿಗಳಿಂದಲೂ ದೊಡ್ಡ ಪಾಪಗಳಾಗುತ್ತವೆ. ತಂದೆಯು ಹೇಳುತ್ತಾರೆ - ನಾನು ಬಡವರ ಬಂಧುವಾಗಿದ್ದೇನೆ, ಬಡವರಿಂದ ಇಷ್ಟೊಂದು ಪಾಪಗಳಾಗುವುದಿಲ್ಲ. ಈ ಸಮಯದಲ್ಲಿ ಎಲ್ಲರೂ ಪಾಪಾತ್ಮರಾಗಿದ್ದಾರೆ. ಈಗ ನಿಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ. ಆದರೂ ಸಹ ಅವರನ್ನು ಘಳಿಗೆ-ಘಳಿಗೆಯೂ ಮರೆತು ಹೋಗುತ್ತೀರಿ. ಅರೆ! ನೀವು ಆತ್ಮಗಳಾಗಿದ್ದೀರಲ್ಲವೆ! ಆತ್ಮವನ್ನು ಎಂದೂ ಯಾರೂ ನೋಡಿಲ್ಲ. ಆತ್ಮವು ನಕ್ಷತ್ರದಂತೆ ಭೃಕುಟಿಯ ಮಧ್ಯದಲ್ಲಿರುತ್ತದೆ ಎಂದು ತಿಳಿಯುತ್ತಾರೆ. ಯಾವಾಗ ಆತ್ಮವು ಹೊರಟು ಹೋಗುತ್ತದೆಯೋ ಆಗ ಶರೀರವು ಸಮಾಪ್ತಿಯಾಗಿ ಬಿಡುತ್ತದೆ. ಆತ್ಮವು ನಕ್ಷತ್ರದ ಸಮಾನವಾಗಿದೆ ಎಂದರೆ ಅವಶ್ಯವಾಗಿ ನಾನಾತ್ಮನ ತಂದೆಯೂ ನಮ್ಮ ಹಾಗೆಯೇ ಇರುವರು. ಆದರೆ ಅವರು ಸುಖದ ಸಾಗರ, ಶಾಂತಿಯ ಸಾಗರನಾಗಿದ್ದಾರೆ. ನಿರಾಕಾರನು ಆಸ್ತಿಯನ್ನು ಹೇಗೆ ಕೊಡುವರು. ಅವಶ್ಯವಾಗಿ ಬಂದು ಭೃಕುಟಿಯ ಮಧ್ಯ ಭಾಗದಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಆತ್ಮವು ಈಗ ಜ್ಞಾನ ಧಾರಣೆ ಮಾಡಿ ದುರ್ಗತಿಯಿಂದ ಸದ್ಗತಿಯಲ್ಲಿ ಹೋಗುತ್ತದೆ. ಈಗ ಯಾರು ಮಾಡುವರೋ ಅವರು ಪಡೆಯುವರು. ತಂದೆಯನ್ನು ನೆನಪು ಮಾಡಲಿಲ್ಲವೆಂದರೆ ಆಸ್ತಿಯನ್ನೂ ಪಡೆಯುವುದಿಲ್ಲ. ಯಾರನ್ನೂ ತಮ್ಮ ಸಮಾನ ಆಸ್ತಿಯನ್ನು ಪಡೆಯಲು ಯೋಗ್ಯರನ್ನಾಗಿ ಮಾಡಲಿಲ್ಲವೆಂದರೆ ಇವರು ನಯಾಪೈಸೆಯ ಪದವಿಯನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ಶ್ರೇಷ್ಠಾಚಾರಿ ಮತ್ತು ಭ್ರಷ್ಠಾಚಾರಿ ಎಂದು ಯಾರಿಗೆ ಹೇಳಲಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಭಾರತದಲ್ಲಿಯೇ ಶ್ರೇಷ್ಠಾಚಾರಿ ದೇವತೆಗಳು ಇದ್ದು ಹೋಗಿದ್ದರು. ಹೆವೆನ್ಲೀ ಗಾಡ್ಫಾದರ್...... ಎಂದು ಗಾಯನ ಮಾಡುತ್ತಾರೆ. ಆದರೆ ಆ ಸ್ವರ್ಗದ ರಚಯಿತ ತಂದೆಯು ಯಾವಾಗ ಬಂದು ಸೃಷ್ಠಿಯನ್ನು ಸ್ವರ್ಗವನ್ನಾಗಿ ಮಾಡುತ್ತಾರೆಂದು ತಿಳಿದುಕೊಂಡಿಲ್ಲ. ನಿಮಗೆ ಗೊತ್ತಿದೆ, ಪುರುಷಾರ್ಥವನ್ನು ಕೇವಲ ನೀವು ಪೂರ್ಣ ಮಾಡುವುದಿಲ್ಲ. ಆದರೆ ಅದು ಡ್ರಾಮಾನುಸಾರ ಆಗಲೇಬೇಕಾಗಿದೆ. ಯಾರ ಅದೃಷ್ಟದಲ್ಲಿ ಎಷ್ಟಿರುತ್ತದೆಯೋ ಅಷ್ಟೇ ಪಡೆಯುತ್ತೀರಿ. ಒಂದುವೇಳೆ ತಂದೆಯೊಂದಿಗೆ ಯಾರಾದರೂ ಕೇಳಿದರೆ ತಂದೆಯು ಈ ಚಲನೆಯಲ್ಲಿ ನಿಮ್ಮ ಶರೀರವು ಬಿಟ್ಟು ಹೋದರೆ ನೀವು ಇಂತಹ ಪದವಿಯನ್ನು ಪಡೆಯುತ್ತೀರಿ ಎಂದು ತಿಳಿಸಬಲ್ಲರು. ಆದರೆ ಕೇಳುವ ಸಾಹಸವನ್ನೂ ಯಾರೂ ಮಾಡುವುದಿಲ್ಲ. ಯಾರು ಒಳ್ಳೆಯ ಪುರುಷಾರ್ಥ ಮಾಡುತ್ತಾರೆಯೋ ಅವರು ನಾವು ಎಷ್ಟು ಜನ ಅಂಧರ ಊರುಗೋಲಾಗುತ್ತೇವೆ ಎಂಬುದನ್ನು ತಿಳಿದುಕೊಳ್ಳಬಲ್ಲರು. ತಂದೆಯೂ ಸಹ ಇವರು ಒಳ್ಳೆಯ ಪದವಿಯನ್ನು ಪಡೆಯುತ್ತಾರೆ ಎಂದು ತಿಳಿಯುತ್ತಾರೆ. ಈ ಮಗು ಏನೂ ಸರ್ವೀಸ್ ಮಾಡುವುದಿಲ್ಲವೆಂದರೆ ಅಲ್ಲಿಯೂ ಸಹ ಹೋಗಿ ದಾಸ-ದಾಸಿಯರಾಗುತ್ತಾರೆ ಎಂದುಕೊಳ್ಳುತ್ತಾರೆ. ಕಸ ಗುಡಿಸುವವರು, ಕೃಷ್ಣನ ಪಾಲನೆ ಮಾಡುವವರು, ಮಹಾರಾಣಿಯ ಶೃಂಗಾರ ಮಾಡುವ ದಾಸ-ದಾಸಿಯರೂ ಇರುತ್ತಾರಲ್ಲವೆ. ಅವರು ಪಾವನ ರಾಜರಾಗಿದ್ದಾರೆ, ಇವರು ಪತಿತ ರಾಜರಾಗುತ್ತಾರೆ. ಪತಿತ ರಾಜರು ಪಾವನ ರಾಜರ ಮಂದಿರವನ್ನು ಮಾಡಿ ಅವರ ಪೂಜೆ ಮಾಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ.

ಬಿರ್ಲಾ ಮಂದಿರವು ಎಷ್ಟು ದೊಡ್ಡದಾಗಿದೆ. ಎಷ್ಟೊಂದು ಲಕ್ಷ್ಮೀ-ನಾರಾಯಣರ ಮಂದಿರಗಳನ್ನು ಮಾಡಿಸುತ್ತಾರೆ. ಆದರೆ ಲಕ್ಷ್ಮೀ-ನಾರಾಯಣರು ಯಾರೆಂಬುದನ್ನು ತಿಳಿದುಕೊಂಡಿಲ್ಲ? ನಂತರ ಅವರಿಗೆ ಎಷ್ಟು ಲಾಭವು ಸಿಗುಬಹುದು? ಅಲ್ಪಕಾಲದ ಸುಖ. ಜಗದಂಬಾನ ಬಳಿ ಹೋಗುತ್ತಾರೆ ಆದರೆ ಈ ಜಗದಂಬಾರವರೇ ಲಕ್ಷ್ಮಿಯಾಗುತ್ತಾರೆಂಬುದನ್ನು ತಿಳಿದುಕೊಂಡಿಲ್ಲ. ಈ ಸಮಯದಲ್ಲಿ ನೀವು ಜಗದಂಬೆಯಿಂದ ವಿಶ್ವದ ಎಲ್ಲಾ ಮನೋಕಾಮನೆಗಳನ್ನು ಪೂರ್ಣ ಮಾಡುತ್ತಿದ್ದೀರಿ. ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೀರಿ. ಜಗದಂಬಾರವರು ನಿಮಗೆ ಓದಿಸುತ್ತಿದ್ದಾರೆ, ಅವರೇ ನಂತರ ಲಕ್ಷ್ಮಿಯಾಗುತ್ತಾರೆ. ಅವರಿಂದಲೇ ಮನುಷ್ಯರು ವರ್ಷ-ವರ್ಷವೂ ಬೇಡುತ್ತಿರುತ್ತಾರೆ. ಎಷ್ಟೊಂದು ಅಂತರವಿದೆ! ಲಕ್ಷ್ಮಿಯಿಂದ ಪ್ರತೀ ವರ್ಷವು ಹಣದ ಭಿಕ್ಷೆಯನ್ನು ಬೇಡುತ್ತಾರೆ, ನಮಗೆ ಮಕ್ಕಳು ಬೇಕು ಅಥವಾ ಖಾಯಿಲೆಯನ್ನು ದೂರ ಮಾಡು ಎಂದು ಲಕ್ಷ್ಮಿಗೆ ಕೇಳುವುದಿಲ್ಲ. ಕೇವಲ ಲಕ್ಷ್ಮಿಯ ಬಳಿ ಹಣವನ್ನು ಕೇಳುತ್ತಾರೆ. ಹೆಸರೇ ಆಗಿದೆ - ಲಕ್ಷ್ಮಿ ಪೂಜೆ. ಜಗದಂಬಾನಿಂದಂತೂ ಬಹಳ ಬೇಡುತ್ತಾರೆ ಏಕೆಂದರೆ ಅವರು ಎಲ್ಲಾ ಮನೋಕಾಮನೆಗಳನ್ನು ಪೂರ್ಣ ಮಾಡುವವರಾಗಿದ್ದಾರೆ. ಈಗ ನಿಮಗೆ ಜಗದಂಬಾನಿಂದ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆ. ಲಕ್ಷ್ಮಿಯಿಂದ ಪ್ರತೀ ವರ್ಷವು ಅಲ್ಪ ಸ್ವಲ್ಪ ಧನವು ಸಿಗುತ್ತದೆ. ಆದ್ದರಿಂದಲೇ ಪ್ರತೀ ವರ್ಷವೂ ಪೂಜಿಸುತ್ತಾರೆ. ಹಣ ನೀಡುವವರೆಂದು ಹೇಳುತ್ತಾರೆ. ಹಣದಿಂದ ಮತ್ತೆ ಪಾಪಗಳನ್ನು ಮಾಡುತ್ತಿರುತ್ತಾರೆ, ಹಣ ಸಂಪಾದನೆ ಮಾಡುವುದಕ್ಕೋಸ್ಕರವೂ ಪಾಪ ಮಾಡುತ್ತಾರೆ.

ಈಗ ನೀವು ಮಕ್ಕಳಿಗೆ ಅವಿನಾಶಿ ಜ್ಞಾನ ರತ್ನಗಳು ಸಿಗುತ್ತವೆ, ಅದರಿಂದ ನೀವು ಸಂಪನ್ನರಾಗುತ್ತೀರಿ. ಜಗದಂಬೆಯಿಂದ ಸ್ವರ್ಗದ ರಾಜ್ಯಭಾಗ್ಯವು ಸಿಗುವುದು. ಅಲ್ಲಿ ಪಾಪವಾಗುವುದಿಲ್ಲ. ಎಷ್ಟು ತಿಳುವಳಿಕೆಯ ಮಾತುಗಳಾಗಿವೆ. ಕೆಲವರಂತೂ ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ಇನ್ನೂ ಕೆಲವರು ಏನನ್ನೂ ತಿಳಿದುಕೊಳ್ಳುವುದಿಲ್ಲ. ಏಕೆಂದರೆ ಅದೃಷ್ಟದಲ್ಲಿರುವುದಿಲ್ಲ. ಶ್ರೀಮತದಂತೆ ನಡೆಯುವುದಿಲ್ಲವೆಂದರೆ ಶ್ರೇಷ್ಠರಾಗುವುದಿಲ್ಲ ಮತ್ತೆ ಪದವಿಯೂ ಭ್ರಷ್ಠವಾಗಿ ಬಿಡುತ್ತದೆ. ಇಡೀ ರಾಜಧಾನಿಯು ಸ್ಥಾಪನೆಯಾಗುತ್ತಾ ಇದೆ ಎಂದು ತಿಳಿದುಕೊಳ್ಳಬೇಕಾಗಿದೆ. ಸ್ವರ್ಗದ ರಚೈತ ತಂದೆಯು ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ ಮತ್ತೆ ಈ ಭಾರತವು ಸ್ವರ್ಗವಾಗಿ ಬಿಡುತ್ತದೆ. ಇದಕ್ಕೆ ಕಲ್ಯಾಣಕಾರಿ ಯುಗವೆಂದು ಕರೆಯಲಾಗುತ್ತದೆ. ಇದು ಸುಮಾರು 100 ವರ್ಷಗಳ ಯುಗವಾಗಿದೆ. ಮತ್ತೆಲ್ಲಾ ಯುಗಗಳು 1250 ವರ್ಷಗಳದ್ದಾಗಿದೆ. ಅಜ್ಮೀರಿನಲ್ಲಿ ವೈಕುಂಠದ ಮಾದರಿ ಇದೆ. ಸ್ವರ್ಗವು ಹೇಗಿರುತ್ತದೆ ಎಂಬುದನ್ನು ತೋರಿಸುತ್ತಾರೆ. ಸ್ವರ್ಗವಂತೂ ಅವಶ್ಯವಾಗಿ ಇಲ್ಲಿಯೇ ಆಗುವುದಲ್ಲವೆ. ಸ್ವಲ್ಪ ಕೇಳಿ ಹೋದರೂ ಸಹ ಸ್ವರ್ಗದಲ್ಲಿ ಬರುತ್ತಾರೆ. ಆದರೆ ಓದದೇ ಇದ್ದರೆ ಕಾಡು ಜನರಿದ್ದ ಹಾಗೆ. ಪ್ರಜೆಗಳೂ ಸಹ ನಂಬರ್ವಾರ್ ಇರುತ್ತಾರಲ್ಲವೆ. ಆದರೆ ಅಲ್ಲಿ ಬಡವರು, ಸಾಹುಕಾರರು ಎಲ್ಲರಿಗೂ ಸುಖವಿರುತ್ತದೆ. ಇಲ್ಲಂತೂ ದುಃಖವೇ ದುಃಖವಿದೆ. ಭಾರತವು ಸತ್ಯಯುಗದಲ್ಲಿ ಸುಖಧಾಮವಾಗಿತ್ತು, ಕಲಿಯುಗದಲ್ಲಿ ದುಃಖಧಾಮವಾಗಿದೆ. ಈ ವಿಶ್ವದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗಲಿದೆ. ಭಗವಂತ ಒಬ್ಬರೇ ಆಗಿದ್ದಾರೆ, ವಿಶ್ವವೂ ಒಂದೇ ಆಗಿದೆ. ಹೊಸ ವಿಶ್ವದಲ್ಲಿ ಮೊದಲು ಭಾರತವೇ ಇರುತ್ತದೆ. ಈಗ ಭಾರತವು ಹಳೆಯದಾಗಿದೆ. ಯಾವುದು ಮತ್ತೆ ಹೊಸದಾಗಲಿದೆ. ಈ ವಿಶ್ವದ ಇತಿಹಾಸ-ಭೂಗೋಳವು ಹೀಗೆ ಪುನರಾವರ್ತನೆಯಾಗುತ್ತಾ ಇರುತ್ತದೆ, ಮತ್ತ್ಯಾರೂ ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಎಲ್ಲರೂ ಒಂದೇ ರೀತಿಯಿರುವುದಿಲ್ಲ. ಪದವಿಗಳು ಅಲ್ಲಿಯೂ ಇರುತ್ತವೆ, ಅಲ್ಲಿ ಸಿಪಾಯಿಗಳಿರುವುದಿಲ್ಲ ಏಕೆಂದರೆ ಅಲ್ಲಿ ಹೆದರಿಕೆಯಿರುವುದಿಲ್ಲ. ಇಲ್ಲಂತೂ ಭಯವಿರುವ ಕಾರಣ ಸಿಪಾಯಿ ಮುಂತಾದವರನ್ನಿಡುತ್ತಾರೆ. ಭಾರತದಲ್ಲಿ ಭೂಮಿಯನ್ನು ವಿಭಾಗಗಳನ್ನಾಗಿ ಮಾಡಿ ಬಿಟ್ಟಿದ್ದಾರೆ. ಸತ್ಯಯುಗದಲ್ಲಿ ಹೀಗೆ ವಿಭಜನೆ ಇರುವುದಿಲ್ಲ. ಲಕ್ಷ್ಮಿ-ನಾರಾಯಣರ ಒಂದೇ ರಾಜ್ಯವು ನಡೆಯುತ್ತದೆ. ಅಲ್ಲಿ ಯಾವುದೇ ಪಾಪವಾಗುವುದಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನ ಮತದಂತೆ ನಡೆದು ನನ್ನಿಂದ ಸದಾ ಸುಖದ ಆಸ್ತಿಯನ್ನು ಪಡೆಯಿರಿ. ಸದ್ಗತಿಯ ಮಾರ್ಗವನ್ನು ತಂದೆಯೊಬ್ಬರೇ ತೋರಿಸುತ್ತಾರೆ. ಇದು ಶಿವಶಕ್ತಿ ಸೇನೆಯಾಗಿದೆ, ಯಾರು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಇವರು ತನು-ಮನ-ಧನ ಎಲ್ಲವನ್ನು ಈ ಸೇವೆಯಲ್ಲಿ ತೊಡಗಿಸುತ್ತಾರೆ. ಹೇಗೆ ಆ ಬಾಪೂಜಿ ಕ್ರಿಶ್ಚಿಯನ್ನರನ್ನು ಓಡಿಸಿದರು, ಇದೂ ಸಹ ಡ್ರಾಮಾದಲ್ಲಿತ್ತು. ಆದರೆ ಅದರಿಂದ ಯಾವುದೇ ಸುಖವಾಗಲಿಲ್ಲ, ಇನ್ನೂ ದುಃಖವಾಗಿದೆ. ಆಹಾರವಿಲ್ಲ ಆದರೆ ಮುಂದೆ ಇದು ಸಿಗುವುದು, ಅದು ಸಿಗುವುದು ಈ ರೀತಿಯಾಗುವುದೆಂದು ಸುಳ್ಳು ಹೇಳುತ್ತಿರುತ್ತಾರೆ. ಕೇವಲ ತಂದೆಯಿಂದಲೇ ಸಿಗಬೇಕಾಗಿದೆ. ಉಳಿದ ಇದೆಲ್ಲವೂ ಸಮಾಪ್ತಿಯಾಗಿ ಬಿಡುವುದು. ಸಂತಾನ ನಿಯಂತ್ರಣವನ್ನು ಮಾಡಿ ಎಂದು ಹೇಳುತ್ತಾರೆ, ಅದಕ್ಕೋಸ್ಕರ ತಲೆ ಕೆಡಿಸಿಕೊಳ್ಳುತ್ತಾ ಇರುತ್ತಾರೆ. ಆದರೆ ಆಗುವುದಂತೂ ಏನೂ ಇಲ್ಲ. ಈಗ ಸ್ವಲ್ಪ ಯುದ್ಧವು ಪ್ರಾರಂಭವಾಗಿ ಬಿಟ್ಟರೆ ಬರಗಾಲ ಬಂದು ಬಿಡುವುದು. ಪರಸ್ಪರರಲ್ಲಿ ಹೊಡೆದಾಟ ಪ್ರಾರಂಭವಾಗಿ ಬಿಡುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಜೀವಿಸಿದ್ದಂತೆಯೇ ಬಲಿಹಾರಿಯಾಗಬೇಕಾಗಿದೆ ಅರ್ಥಾತ್ ತಂದೆಯ ಮಕ್ಕಳಾಗಿ ತಂದೆಯ ಶ್ರೀಮತದಂತೆಯೇ ನಡೆಯಬೇಕಾಗಿದೆ. ಅನ್ಯರನ್ನು ತಮ್ಮ ಸಮಾನರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.

2. ಅವಿನಾಶಿ ಜ್ಞಾನ ರತ್ನಗಳನ್ನು ದಾನ ಮಾಡಿ ಜಗದಂಬೆಯ ಸಮಾನ ಸರ್ವರ ಮನೋಕಾಮನೆಗಳನ್ನು ಪೂರ್ಣ ಮಾಡುವವರಾಗಬೇಕು.

ವರದಾನ:
ಪ್ರತಿ ಮಾತಿನಲ್ಲಿ ಕಲ್ಯಾಣ ಎಂದು ತಿಳಿದು ಅಚಲ, ಅಡೋಲ ಮಹಾವೀರರಾಗುವಂತಹ ತ್ರಿಕಾಲದರ್ಶಿ ಭವ.

ಯಾವುದೇ ಮಾತು ಒಂದೇ ಕಾಲದ ದೃಷ್ಠಿಯಿಂದ ನೋಡಬೇಡಿ, ತ್ರಿಕಾಲದರ್ಶಿಯಾಗಿ ನೋಡಿ. ಏಕೆ, ಏನು ಎನ್ನುವುದರ ಬದಲಾಗಿ ಸದಾ ಇದೇ ಸಂಕಲ್ಪ ಇರಲಿ, ಏನು ಆಗುತ್ತಿದೆ ಅದರಲ್ಲಿ ಕಲ್ಯಾಣವಿದೆ. ಬಾಬಾ ಏನು ಹೇಳುತ್ತಾರೆ ಅದನ್ನು ಮಾಡುತ್ತಾ ಹೋಗಿ, ನಂತರ ಬಾಬಾನಿಗೆ ಗೊತ್ತು ಬಾಬಾನ ಕೆಲಸಕ್ಕೆ ಗೊತ್ತು. ಬಾಬಾ ಹೇಗೆ ನಡೆಸುತ್ತಾರೆ ಹಾಗೆ ನಡೆಯಿರಿ ಆಗ ಅದರಲ್ಲಿ ಕಲ್ಯಾಣ ತುಂಬಿದೆ. ಈ ನಿಶ್ಚಯದಿಂದ ಎಂದೂ ಅಲುಗಾಡುವುದಿಲ್ಲ. ಸಂಕಲ್ಪ ಮತ್ತು ಸ್ವಪ್ನದಲ್ಲಿಯೂ ಸಹ ವ್ಯರ್ಥ ಸಂಕಲ್ಪ ಬರಬಾರದು ಆಗ ಹೇಳಲಾಗವುದು ಅಚಲ, ಅಡೋಲ ಮಹಾವೀರ.

ಸ್ಲೋಗನ್:
ತಪಸ್ವಿ ಅವರೇ ಆಗಿದ್ದಾರೆ ಯಾರು ಶ್ರೀಮತದ ಸೂಚನೆ ಪ್ರಮಾಣ ಸೆಕೆಂಡ್ನಲ್ಲಿ ನ್ಯಾರಾ ಮತ್ತು ಪ್ಯಾರಾ ಆಗಿ ಬಿಡುವರು.