30.12.18       Avyakt Bapdada      Kannada Murli      02.04.84      Om Shanti     Madhuban


“ ಬಿಂದುವಿನ ಮಹತ್ವಿಕೆ ”


ಇಂದು ಭಾಗ್ಯವಿಧಾತನು ಸರ್ವ ಭಾಗ್ಯವಂತ ಮಕ್ಕಳೊಂದಿಗೆ ಮಿಲನವಾಗಲು ಬಂದಿದ್ದಾರೆ. ಭಾಗ್ಯವಿಧಾತಾ ತಂದೆಯು ಎಲ್ಲಾ ಮಕ್ಕಳ ಭಾಗ್ಯವನ್ನು ರೂಪಿಸುವುದಕ್ಕಾಗಿ ಅತೀ ಸಹಜವಾದ ವಿಧಿಯನ್ನು ತಿಳಿಸುತ್ತಿದ್ದಾರೆ. ಕೇವಲ ಬಿಂದುವಿನ ಲೆಕ್ಕವನ್ನು ತಿಳಿದುಕೊಳ್ಳಿರಿ. ಬಿಂದುವಿನ ಲೆಕ್ಕವು ಬಹಳ ಸಹಜವಾಗಿದೆ. ಬಿಂದುವಿನ ಮಹತ್ವವನ್ನು ತಿಳಿಯುವುದು ಮತ್ತು ಮಹಾನರಾಗುವುದು. ಎಲ್ಲದಕ್ಕಿಂತ ಸಹಜ ಮತ್ತು ಮಹತ್ವವಿರುವ ಬಿಂದುವಿನ ಲೆಕ್ಕವನ್ನು ಎಲ್ಲರೂ ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಲ್ಲವೆ. ಬಿಂದು ಎಂದು ಹೇಳುವುದು ಮತ್ತು ಬಿಂದುವಾಗುವುದು. ಬಿಂದುವಾಗಿ ಬಿಂದು ತಂದೆಯನ್ನು ನೆನಪು ಮಾಡುವುದಾಗಿದೆ. ಬಿಂದುವಾಗಿದ್ದೆವು ಮತ್ತು ಈಗ ಬಿಂದು ಸ್ಥಿತಿಯಲ್ಲಿ ಸ್ಥಿತರಾಗಿದ್ದು, ಬಿಂದು ತಂದೆಯ ಸಮಾನರಾಗಿ ಮಿಲನವನ್ನಾಚರಿಸಬೇಕು. ಇದಕ್ಕೆ ಮಿಲನವನ್ನಾಚರಿಸುವ ಯುಗ, ಹಾರುವ ಕಲೆಯ ಯುಗವೆಂದು ಹೇಳಲಾಗುತ್ತದೆ. ಬ್ರಾಹ್ಮಣ ಜೀವನವಿರುವುದೇ ಮಿಲನವಾಗಲು ಮತ್ತು ಆಚರಿಸುವುದಕ್ಕಾಗಿ ಇದೆ. ಇದೇ ವಿಧಿಯ ಮೂಲಕ ಸದಾ ಕರ್ಮವನ್ನು ಮಾಡುತ್ತಿದ್ದರೂ ಕರ್ಮದ ಬಂಧನಗಳಿಂದ ಮುಕ್ತ, ಕರ್ಮಾತೀತ ಸ್ಥಿತಿಯ ಅನುಭವವನ್ನು ಮಾಡುತ್ತೀರಿ. ಕರ್ಮದ ಬಂಧನಗಳಲ್ಲಿ ಬರುವುದಿಲ್ಲ. ಆದರೆ ಸದಾ ತಂದೆಯ ಸರ್ವ ಸಂಬಂಧಗಳಲ್ಲಿರುತ್ತೀರಿ. ಮಾಡಿಸುವಂತಹ ತಂದೆಯು ನಿಮಿತ್ತರನ್ನಾಗಿ ಮಾಡಿ ಮಾಡಿಸುತ್ತಿದ್ದಾರೆ. ಅಂದಮೇಲೆ ಸ್ವಯಂ ಸಾಕ್ಷಿಯಾಗಿ ಬಿಟ್ಟಿರಿ. ಆದ್ದರಿಂದ ಈ ಸಂಬಂಧದ ಸ್ಮೃತಿಯು ಬಂಧನ ಮುಕ್ತರನ್ನಾಗಿ ಮಾಡಿ ಬಿಡುತ್ತದೆ. ಎಲ್ಲಿ ಸಂಬಂಧದಿಂದ ಮಾಡುತ್ತೀರಿ, ಅಲ್ಲಿ ಬಂಧನವಾಗುವುದಿಲ್ಲ. ನಾನು ಮಾಡಿದೆನು - ಇದನ್ನು ಯೋಚಿಸಿದಿರೆಂದರೆ ಸಂಬಂಧವು ಮರೆತು ಹೋಯಿತು ಮತ್ತು ಬಂಧನವಾಯಿತು! ಸಂಗಮಯುಗವು ಬಂಧನಮುಕ್ತ, ಸರ್ವ ಸಂಬಂಧಯುಕ್ತ, ಜೀವನ್ಮುಕ್ತ ಸ್ಥಿತಿಯ ಅನುಭವದ ಯುಗವಾಗಿದೆ. ಅಂದಮೇಲೆ ಸಂಬಂಧಗಳಲ್ಲಿರುತ್ತೀರಾ ಅಥವಾ ಬಂಧನದಲ್ಲಿ ಬರುತ್ತೀರಾ? ಇದನ್ನು ಪರಿಶೀಲನೆ ಮಾಡಿಕೊಳ್ಳಿರಿ. ಸಂಬಂಧದಲ್ಲಿ ಸ್ನೇಹವಿರುವ ಕಾರಣದಿಂದ ಪ್ರಾಪ್ತಿಯಿದೆ, ಬಂಧನದಲ್ಲಿ ಸೆಳೆತಗಳು, ಒತ್ತಡದ ಕಾರಣದಿಂದ ದುಃಖ ಮತ್ತು ಅಶಾಂತಿಯ ಏರುಪೇರಿದೆ. ಆದ್ದರಿಂದ ಯಾವಾಗ ತಂದೆಯು ಬಿಂದುವಿನ ಸಹಜವಾದ ಲೆಕ್ಕವನ್ನು ಕಲಿಸಿಕೊಟ್ಟರು, ಅದರಿಂದ ದೇಹದ ಬಂಧನವೂ ಸಮಾಪ್ತಿಯಾಯಿತು. ದೇಹವು ತಮ್ಮದಲ್ಲ. ತಂದೆಗೆ ಕೊಟ್ಟಿರಿ ಅಂದಮೇಲೆ ತಂದೆಯವರದಾಯಿತು. ಈಗ ತಮ್ಮ ನಿಜ ಬಂಧನ, ನನ್ನ ಶರೀರ ಅಥವಾ ನನ್ನ ದೇಹ - ಈ ಬಂಧನವು ಸಮಾಪ್ತಿಯಾಯಿತು. ನನ್ನ ದೇಹ ಎಂದು ಹೇಳುತ್ತೀರೇನು, ತಮ್ಮ ಅಧಿಕಾರವಿದೆಯೇ? ಕೊಟ್ಟಿರುವ ವಸ್ತುವಿನ ಮೇಲೆ ತಮ್ಮ ಅಧಿಕಾರವು ಹೇಗಿರುತ್ತದೆ? ಕೊಟ್ಟಿದ್ದೀರಾ ಅಥವಾ ಇಟ್ಟುಕೊಂಡಿದ್ದೀರಾ? ನಿನ್ನದು ಎಂದು ಹೇಳುವುದು ಮತ್ತು ಒಪ್ಪುವುದು ನನ್ನದು ಎಂದು, ಹೀಗಂತು ಇಲ್ಲ ಅಲ್ಲವೆ! ಯಾವಾಗ ನಿನ್ನದು ಎಂದು ಹೇಳುತ್ತೀರೆಂದರೆ ನನ್ನದೆನ್ನುವ ಬಂಧನವು ಸಮಾಪ್ತಿಯಾಯಿತು. ಈ ಅಲ್ಪಕಾಲದ ನನ್ನದು ಎನ್ನುವುದೇ ಮೋಹದ ಎಳೆಯಾಗಿದೆ. ಎಳೆಯೆಂದಾದರೂ ಹೇಳಿರಿ, ಸರಪಳಿ ಎಂದಾದರೂ ಹೇಳಿರಿ, ಹಗ್ಗವೆಂದಾದರೂ ಹೇಳಿರಿ, ಇದು ಬಂಧನದಲ್ಲಿ ಬಂಧಿಸುತ್ತದೆ. ಯಾವಾಗ ಎಲ್ಲವೂ ತಮ್ಮದಾಗಿದೆ, ಈ ಸಂಬಂಧವನ್ನು ಜೋಡಿಸಿದಿರೆಂದರೆ ಬಂಧನವು ಸಮಾಪ್ತಿಯಾಗಿ, ಸಂಬಂಧವಾಗಿ ಬಿಡುತ್ತದೆ. ಯಾವುದೇ ಪ್ರಕಾರದ ಬಂಧನವು - ಭಲೇ ದೇಹದ, ಸ್ವಭಾವದ, ಸಂಸ್ಕಾರದ, ಮನಸ್ಸಿನ ಬಾಗುವಿಕೆಯ..... ಈ ಬಂಧನಗಳು ಸಿದ್ಧ ಮಾಡುತ್ತದೆ - ತಂದೆಯೊಂದಿಗೆ ಸರ್ವ ಸಂಬಂಧದ, ಸದಾಕಾಲದ ಸಂಬಂಧವು ಬಲಹೀನವಾಗಿದೆ. ಕೆಲವು ಮಕ್ಕಳು ಸದಾ ಮತ್ತು ಸರ್ವ ಸಂಬಂಧದಲ್ಲಿ ಬಂಧನ ಮುಕ್ತರಾಗಿರುತ್ತಾರೆ ಮತ್ತು ಕೆಲವು ಮಕ್ಕಳು ಸಮಯದನುಸಾರವಾಗಿ, ತೋರ್ಪಡಿಕೆಯ ಸಂಬಂಧವನ್ನು ಜೋಡಿಸುತ್ತಾರೆ. ಆದ್ದರಿಂದ ಬ್ರಾಹ್ಮಣ ಜೀವನದ ಅಲೌಕಿಕ ಆತ್ಮಿಕ ಮಜಾ ಪಡೆಯುವುದರಿಂದ ವಂಚಿತರಾಗಿ ಬಿಡುತ್ತಾರೆ. ಸ್ವಯಂ, ಸ್ವಯಂನೊಂದಿಗೂ ಸಂತುಷ್ಠರಿರುವುದಿಲ್ಲ ಮತ್ತು ಅನ್ಯರಿಂದಲೂ ಸಂತುಷ್ಠತೆಯ ಆಶೀರ್ವಾದವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಬ್ರಾಹ್ಮಣ ಜೀವನದ ಶ್ರೇಷ್ಠ ಸಂಬಂಧಗಳ ಜೀವನವೇ ಇದೆ - ತಂದೆ ಹಾಗೂ ಸರ್ವ ಬ್ರಾಹ್ಮಣ ಪರಿವಾರದ ಆಶೀರ್ವಾದವನ್ನು ತೆಗೆದುಕೊಳ್ಳುವ ಜೀವನ. ಆಶೀರ್ವಾದ ಅರ್ಥಾತ್ ಶುಭಭಾವನೆಗಳು, ಶುಭಕಾಮನೆಗಳು. ತಮ್ಮ ಬ್ರಾಹ್ಮಣ ಜನ್ಮವೇ ಬಾಪ್ದಾದಾರವರ ಆಶೀರ್ವಾದವೆಂದಾದರೂ ಹೇಳಿರಿ, ವರದಾನವೆಂದಾದರೂ ಹೇಳಿರಿ, ಇದೇ ಆಧಾರದಿಂದಾಯಿತು. ತಂದೆಯು ಹೇಳಿದರು - ತಾವು ಭಾಗ್ಯವಂತ ಶ್ರೇಷ್ಠ ವಿಶೇಷ ಆತ್ಮರಾಗಿದ್ದೀರಿ, ಇದೇ ಸ್ಮೃತಿಯೆಂಬ ಆಶೀರ್ವಾದ ಅಥವಾ ವರದಾನದಿಂದ ಶುಭಭಾವನೆ, ಶುಭಕಾಮನೆಯಿಂದ ತಾವು ಬ್ರಾಹ್ಮಣರ ಹೊಸ ಜೀವನ, ಹೊಸ ಜನ್ಮವಾಯಿತು. ಸದಾ ಆಶೀರ್ವಾದವನ್ನು ತೆಗೆದುಕೊಳ್ಳುತ್ತಿರಿ. ಇದೇ ಸಂಗಮಯುಗದ ವಿಶೇಷತೆಯಾಗಿದೆ! ಆದರೆ ಇದೆಲ್ಲದರ ಆಧಾರವು ಸರ್ವಶ್ರೇಷ್ಠ ಸಂಬಂಧವಿರುವುದಾಗಿದೆ. ಸಂಬಂಧದಲ್ಲಿ ನನ್ನದು-ನನ್ನದು ಎನ್ನುವ ಎಳೆಗಳನ್ನು, ಬಂಧನವನ್ನು ಸೆಕೆಂಡಿನಲ್ಲಿಯೇ ಸಮಾಪ್ತಿ ಮಾಡಿ ಬಿಡುತ್ತದೆ. ಮತ್ತು ಸಂಬಂಧದ ಮೊದಲ ಸ್ವರೂಪದ ಸಹಜ ಮಾತು ಅದೇ ಆಗಿದೆ - ತಂದೆಯೂ ಬಿಂದು, ನಾನೂ ಬಿಂದು ಮತ್ತು ಸರ್ವ ಆತ್ಮರೂ ಬಿಂದು. ಅಂದಮೇಲೆ ಬಿಂದುವಿನದೇ ಲೆಕ್ಕವಾಯಿತಲ್ಲವೆ. ಇದೇ ಬಿಂದುವಿನಲ್ಲಿ ಜ್ಞಾನದ ಸಿಂಧುವು ಸಮಾವೇಶವಾಗಿದೆ. ಪ್ರಪಂಚದ ಲೆಕ್ಕದಲ್ಲಿಯೂ ಬಿಂದು 10ನ್ನು 100ನ್ನಾಗಿ ಮಾಡಿ ಬಿಡುತ್ತದೆ ಮತ್ತು 100ನ್ನು 1000ವನ್ನಾಗಿ ಮಾಡಿ ಬಿಡುತ್ತದೆ. ಬಿಂದುವನ್ನಿಡುತ್ತಾ ಹೋಗಿ ಮತ್ತು ಸಂಖ್ಯೆಯು ಹೆಚ್ಚು ಮಾಡುತ್ತಾ ಸಾಗಿರಿ. ಅಂದಮೇಲೆ ಮಹತ್ವವು ಯಾವುದರದಾಯಿತು? ಬಿಂದುವಿನದಾಯಿತಲ್ಲವೆ. ಇಂತಹ ಬ್ರಾಹ್ಮಣ ಜೀವನದಲ್ಲಿ ಸರ್ವ ಪ್ರಾಪ್ತಿಗಳ ಆಧಾರವು ಬಿಂದುವಾಗಿದೆ. ಅವಿದ್ಯಾವಂತರೂ ಸಹ ಬಿಂದುವನ್ನು ಸಹಜವಾಗಿ ತಿಳಿದುಕೊಳ್ಳಬಹುದಲ್ಲವೆ! ಯಾರೆಷ್ಟೇ ಬ್ಯುಜಿಯಾಗಿರಬಹುದು, ರೋಗಿಯಾಗಿರಬಹುದು, ಬುದ್ಧಿಯ ಬಲಹೀನತೆಯಿರಬಹುದು ಆದರೆ ಬಿಂದುವಿನ ಲೆಕ್ಕವನ್ನು ಎಲ್ಲರೂ ತಿಳಿದುಕೊಳ್ಳಬಹುದು. ಮಾತೆಯರೂ ಸಹ ಲೆಕ್ಕದಲ್ಲಂತು ಬುದ್ಧಿವಂತರಾಗಿರುತ್ತಾರಲ್ಲವೆ. ಅಂದಮೇಲೆ ಸದಾ ಬಿಂದುವಿನ ಲೆಕ್ಕವು ನೆನಪಿರಲಿ. ಒಳ್ಳೆಯದು – ಸರ್ವ ಸ್ಥಾನಗಳಿಂದ ತಮ್ಮ ಮಧುರ ಮನೆಗೆ ತಲುಪಿ ಬಿಟ್ಟಿದ್ದೀರಿ. ಬಾಪ್ದಾದಾರವರೂ ಸಹ ಎಲ್ಲಾ ಮಕ್ಕಳಿಗೂ ತಮ್ಮ ಭಾಗ್ಯವನ್ನು ರೂಪಿಸಿಕೊಳ್ಳುವ ಶುಭಾಷಯಗಳನ್ನು ಕೊಡುತ್ತಾರೆ. ತಮ್ಮ ಮನೆಯಲ್ಲಿ ಬಂದಿದ್ದೀರಿ. ಇದೇ ತಮ್ಮ ಮನೆ ದಾತಾನ ಮನೆಯಾಗಿದೆ. ತಮ್ಮ ಮನೆ ಆತ್ಮ ಮತ್ತು ಶರೀರವೆರಡನ್ನೂ ವಿಶ್ರಾಂತಿ ಕೊಡುವ ಮನೆಯಾಗಿದೆ. ವಿಶ್ರಾಂತಿ ಸಿಗುತ್ತಿದೆಯಲ್ಲವೆ! ಡಬಲ್ ಪ್ರಾಪ್ತಿಯಿದೆ. ವಿಶ್ರಾಂತಿಯೂ ಸಿಗುತ್ತದೆ, ರಾಮನೂ ಸಿಗುತ್ತಾನೆ. ಅಂದಮೇಲೆ ಡಬಲ್ ಪ್ರಾಪ್ತಿಯಾಯಿತಲ್ಲವೆ! ತಂದೆಯ ಮನೆಯ ಶೃಂಗಾರವು ಮಕ್ಕಳಾಗಿದ್ದಾರೆ. ಬಾಪ್ದಾದಾರವರು ಮನೆಯ ಶೃಂಗಾರವಾಗಿರುವ ಮಕ್ಕಳನ್ನು ನೋಡುತ್ತಿದ್ದಾರೆ. ಒಳ್ಳೆಯದು.

ಸದಾ ಸರ್ವ ಸಂಬಂಧ ಮೂಲಕ ಬಂಧನಮುಕ್ತ , ಕರ್ಮಾತೀತ ಸ್ಥಿತಿಯನ್ನು ಅನುಭವ ಮಾಡುವಂತಹ , ಸದಾ ಬಿಂದುವಿನ ಮಹತ್ವವನ್ನು ತಿಳಿದುಕೊಂಡು ಮಹಾನರಾಗುವಂತಹ , ಸದಾ ಸರ್ವ ಆತ್ಮರ ಮೂಲಕ ಸಂತು ಷ್ಠ ತೆಯ ಶುಭಭಾವನೆ , ಶುಭಕಾಮನೆಯ ಆಶೀರ್ವಾದವನ್ನು ತೆಗೆದುಕೊಳ್ಳುವಂತಹ , ಸರ್ವರಿಗೂ ಹೀಗೆಯೇ ಆಶೀರ್ವಾದವನ್ನು ಕೊಡುವಂತಹ , ಸದಾ ಸ್ವಯಂನ್ನು ಸಾಕ್ಷಿಯೆಂದು ತಿಳಿದುಕೊಂಡು ನಿಮಿತ್ತ ಭಾವದಿಂದ ಕರ್ಮವನ್ನು ಮಾಡುವಂತಹ , ಸದಾ ಅಲೌಕಿಕ ಆತ್ಮಿಕ ಮೋಜನ್ನಾಚರಿಸುವಂತಹ , ಸದಾ ಮಜಾದ ಜೀನದಲ್ಲಿರುವಂತಹ , ಹೊರೆಯನ್ನು ಸಮಾಪ್ತಿ ಮಾಡುವಂತಹ , ಇಂತಹ ಸದಾ ಭಾಗ್ಯಶಾಲಿ ಆತ್ಮರಿಗೆ ಭಾಗ್ಯವಿದಾತಾ ತಂದೆಯ ನೆನಪು-ಪ್ರೀತಿ ಹಾಗೂ ನಮಸ್ತೆ.

ದಾದಿಯರೊಂದಿಗೆ :-

ಸಮಯವು ಬಹಳ ತೀವ್ರಗತಿಯಿಂದ ಸಾಗುತ್ತಿದೆ. ಹೇಗೆ ಸಮಯವು ತೀವ್ರಗತಿಯಿಂದ ಸಾಗುತ್ತಿದೆಯೋ ಹಾಗೆಯೇ ಸರ್ವ ಬ್ರಾಹ್ಮಣರೂ ತೀವ್ರಗತಿಯಿಂದ ಹಾರುತ್ತಾರೆ. ಇಷ್ಟು ಹಗುರ, ಡಬಲ್ಲೈಟ್ ಆಗಿದ್ದೀರಾ? ಈಗ ವಿಶೇಷವಾಗಿ ಹಾರಿಸುವ ಸೇವೆಯಿದೆ. ಹೀಗೆ ಹಾರಿಸುತ್ತೀರಾ? ಯಾವ ವಿಧಿಯಿಂದ ಎಲ್ಲರನ್ನೂ ಹಾರಿಸಬೇಕು? ಕ್ಲಾಸುಗಳನ್ನು ಕೇಳುತ್ತಾ -ಕೇಳುತ್ತಾ ಕ್ಲಾಸ್ ಮಾಡುವವರಾಗಿ ಬಿಟ್ಟಿರಿ. ತಾವು ಯಾವುದೇ ವಿಷಯದ ಬಗ್ಗೆ ಪ್ರಾರಂಭಿಸುತ್ತೀರಿ, ಅದಕ್ಕೆ ಮೊದಲು ಆ ವಿಷಯದ ಪಾಯಿಂಟುಗಳು ಎಲ್ಲರ ಬಳಿಯೂ ಇರುತ್ತದೆ. ಅಂದಮೇಲೆ ಯಾವ ವಿಧಿಯಿಂದ ಹಾರಿಸಬೇಕು - ಇದರ ಯೋಜನೆಯನ್ನು ಮಾಡಿದ್ದೀರಾ? ಈಗ ವಿಧಿಯನ್ನು ತಯಾರು ಮಾಡಬೇಕಾಗಿದೆ - ಹಗುರರನ್ನಾಗಿ ಮಾಡುವುದರ ಬಗ್ಗೆ. ಈ ಹೊರೆಯೇ ಕೆಳಗೆ ತರುತ್ತದೆ. ಕೆಲವರಿಗೆ ಕೆಲವು ಹೊರೆಯಿದೆ, ಕೆಲವರಿಗೆ ಕೆಲವು ಹೊರೆಯಿದೆ. ಭಲೇ ಸ್ವಯಂನ ಸಂಸ್ಕಾರಗಳ ಹೊರೆಯಿರಬಹುದು, ಭಲೇ ಸಂಘಟನೆಯದೇ ಇರಬಹುದು...... ಆದರೆ ಹೊರೆಯು ಹಾರುವುದಕ್ಕೆ ಬಿಡುವುದಿಲ್ಲ. ಈಗ ಯಾರೇ ಹಾರುತ್ತಿರಬಹುದು, ಅನ್ಯರ ಪ್ರೋತ್ಸಾಹದಿಂದ. ಹೇಗೆ ಆಟಿಕೆಯಿರುತ್ತದೆ, ಅದನ್ನು ಹಾರಿಸಲಾಗುತ್ತದೆ, ನಂತರ ಏನಾಗುತ್ತದೆ? ಹಾರಿಕೊಂಡು ಮತ್ತೆ ಕೆಳಗೆ ಬಂದು ಬಿಡುತ್ತದೆ. ಹಾರುವುದಂತು ಖಂಡಿತವಾಗಿಯೂ ಆದರೆ ಸದಾಕಾಲ ಹಾರುವುದಿಲ್ಲ. ಈಗ ಸರ್ವ ಬ್ರಾಹ್ಮಣ ಆತ್ಮರು ಯಾವಾಗ ಹಾರುವರು ಯಾವಾಗ ಆಗ ಅನ್ಯ ಆತ್ಮರನ್ನೂ ಹಾರಿಸಿಕೊಂಡು ಹೋಗಿ ತಂದೆಯ ಸಮೀಪದಲ್ಲಿ ತಲುಪಿಸಲು ಸಾಧ್ಯವಾಗುವುದು. ಈಗಂತು ಹಾರಿಸದಯೇ, ಹಾರದೆ ಮತ್ತ್ಯಾವುದೇ ವಿಧಿಯೇ ಇಲ್ಲ. ಹಾರುವ ಗತಿಯೇ ವಿಧಿಯಾಗಿದೆ. ಎಷ್ಟೊಂದು ಕಾರ್ಯವನ್ನು ಮಾಡಬೇಕು ಮತು ಸಮಯವೆಷ್ಟಿದೆ? ಈಗ ಕೊನೆ ಪಕ್ಷದಲ್ಲಿ 9 ಲಕ್ಷ ಬ್ರಾಹ್ಮಣರಂತು ಮೊಟ್ಟ ಮೊದಲು ಬೇಕಾಗಿದೆ. ಹಾಗೆ ನೋಡಿದಾಗ ಸಂಖ್ಯೆಯು ಹೆಚ್ಚಾಗಿರುತ್ತದೆ. ಆದರೆ ಇಡೀ ವಿಶ್ವದ ಮೇಲೆ ರಾಜ್ಯಾಡಳಿತವನ್ನು ಮಾಡುತ್ತೀರೆಂದರೆ ಕೊನೆ ಪಕ್ಷದಲ್ಲಿ 9 ಲಕ್ಷವಂತು ಇರಲಿ. ಸಮಯದನುಸಾರವಾಗಿ ಶ್ರೇಷ್ಠ ವಿಧಿಯೂ ಇರಬೇಕು. ಶ್ರೇಷ್ಟ ವಿಧಿಯೇ ಆಗಿದೆ - ಹಾರಿಸುವ ವಿಧಿ. ಅದರ ಬಗ್ಗೆ ಪ್ಲಾನ್ ಮಾಡಿರಿ. ಚಿಕ್ಕ-ಚಿಕ್ಕ ಸಂಘಟನೆಗಳನ್ನು ತಯಾರು ಮಾಡಿರಿ. ಎಷ್ಟೊಂದು ವರ್ಷಗಳ ಅವ್ಯಕ್ತ ಪಾತ್ರವೂ ಆಗಿ ಬಿಟ್ಟಿತು! ಸಾಕಾರ ಪಾಲನೆ, ಅವ್ಯಕ್ತ ಪಾಲನೆಯ ಸಮಯವೂ ಎಷ್ಟೊಂದು ಕಳೆಯಿತು. ಈಗ ಯಾವುದಾದರೂ ನವೀನತೆಯನ್ನು ಮಾಡಬೇಕಲ್ಲವೆ, ಪ್ಲಾನ್ ಮಾಡಿರಿ. ಈಗ ಹಾರುವ ಮತ್ತು ಕೆಳಗೆ ಬರುವ ಚಕ್ರವಂತು ಪೂರ್ಣವಾಗಲಿ. 84 ಜನ್ಮಗಳಿದೆ, 84 ಜನ್ಮಗಳ ಚಕ್ರದ ಗಾಯನವಿದೆ. ಅಂದಮೇಲೆ 84ರಲ್ಲಿ ಯಾವಾಗ ಈ ಚಕ್ರವು ಪೂರ್ಣವಾಗುತ್ತದೆಯೋ ಆಗಲೇ ಸ್ವದರ್ಶನ ಚಕ್ರವು ಸ್ವತಹವಾಗಿಯೇ ಆತ್ಮರನ್ನು ಸಮೀಪದಲ್ಲಿ ಕರೆತರುತ್ತದೆ. ನೆನಪಾರ್ಥದಲ್ಲಿ ಏನು ತೋರಿಸುವಿರಿ? ಒಂದು ಸ್ಥಾನದಲ್ಲಿ ಕುಳಿತುಕೊಂಡು ಚಕ್ರವನ್ನು ಕಳುಹಿಸುವುದು ಮತ್ತು ಆ ಸ್ವದರ್ಶನ ಚಕ್ರವು ಸ್ವಯಂ ತಾನೇ ಆತ್ಮರನ್ನು ಸಮೀಪದಲ್ಲಿ ಕರೆ ತಂದಿತು. ಸ್ವಯಂ ತಾವೇ ಹೋಗುವುದಿಲ್ಲ, ಚಕ್ರವು ನಡೆಸುತ್ತದೆ. ಅಂದಮೇಲೆ ಮೊದಲು ಚಕ್ರವು ಪೂರ್ಣವಾಗಲಿ ಆಗಲೇ ಸ್ವದರ್ಶನ ಚಕ್ರವು ಚಾಲು ಆಗುತ್ತದೆ. ಅಂದಮೇಲೆ ಈಗ 84ರಲ್ಲಿ ಈ ವಿಧಿಯನ್ನು ತಮ್ಮದಾಗಿಸಿಕೊಳ್ಳಿರಿ, ಅದರಿಂದ ಎಲ್ಲಾ ಅಲ್ಪಕಾಲದ ಚಕ್ರ(ಬಂಧನ)ವು ಸಮಾಪ್ತಿಯಾಗಲಿ, ಇದೇ ರೀತಿ ಯೋಚಿಸಿದ್ದೀರಲ್ಲವೆ. ಒಳ್ಳೆಯದು!

ನಿಮಿತ್ತ ಶಿಕ್ಷಕಿಯರೊಂದಿಗೆ :-

ಟೀಚರ್ಸ್ ಇರುವುದೇ ಹಾರುವ ಕಲೆಯವರು! ನಿಮಿತ್ತರಾಗುವುದು - ಇದೇ ಹಾರುವ ಕಲೆಯ ಸಾಧನವಾಗಿದೆ. ಅಂದಮೇಲೆ ನಿಮಿತ್ತರಾಗಿದ್ದೀರಿ ಅರ್ಥಾತ್ ಡ್ರಾಮಾನುಸಾರವಾಗಿ ಹಾರುವ ಕಲೆಯ ಸಾಧನವು ಸಿಕ್ಕಿರುತ್ತದೆ. ಇದೇ ವಿಧಿಯ ಮೂಲಕ ಸದಾ ಕಾಲವೂ ಸಿದ್ಧಿಯನ್ನು ಪಡೆಯುವಂತಹ ಶ್ರೇಷ್ಠಾತ್ಮರಾಗಿದ್ದೀರಿ. ನಿಮಿತ್ತರಾಗುವುದೇ ಲಿಫ್ಟ್ ಆಗಿದೆ. ಅಂದಮೇಲೆ ಲಿಫ್ಟ್ ನ ಮೂಲಕ ಸೆಕೆಂಡಿನಲ್ಲಿ ತಲುಪುವವರು ಹಾರುವ ಕಲೆಯವರಾದರು. ಏರುವ ಕಲೆಯವರಲ್ಲ, ಅಲುಗಾಡುವವರಲ್ಲ, ಆದರೆ ಅಲುಗಾಡುವುದರಿಂದ ಪಾರು ಮಾಡುವವರು. ಬೆಂಕಿ ಕಿಡಿಯಲ್ಲಿ ಬರುವವರಲ್ಲ ಆದರೆ ಬೆಂಕಿಯನ್ನು ಶಮನ ಮಾಡುವವರು. ಅಂದಮೇಲೆ ನಿಮಿತ್ತವಾದ ವಿಧಿಯಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಿರಿ. ಟೀಚರ್ಸ್ನ ಅರ್ಥವೇ ಆಗಿದೆ - ನಿಮಿತ್ತ ಭಾವ. ಈ ನಿಮಿತ್ತ ಭಾವವೇ ಸರ್ವ ಫಲಗಳ ಪ್ರಾಪ್ತಿಯನ್ನು ಸ್ವತಃ ತಾನೇ ಮಾಡಿಸುತ್ತದೆ. ಒಳ್ಳೆಯದು.

ಅವ್ಯಕ್ತ ಮಹಾವಾಕ್ಯ – ಕರ್ಮ ಬಂಧನಮುಕ್ತ ಕರ್ಮಾತೀತ , ವಿದೇಹಿಯಾಗಿರಿ

ವಿದೇಹಿ ಅಥವಾ ಕರ್ಮಾತೀತ ಸ್ಥಿತಿಯ ಅನುಭವವನ್ನು ಮಾಡುವುದಕ್ಕಾಗಿ ಅಲ್ಪಕಾಲದ ನನ್ನದು-ನನ್ನದೆನ್ನುವ ದೇಹ-ಅಭಿಮಾನದಿಂದ ಮುಕ್ತರಾಗಿರಿ. ಲೌಕಿಕ ಹಾಗೂ ಅಲೌಕಿಕ, ಕರ್ಮ ಮತ್ತು ಸಂಬಂಧ ಎರಡರಲ್ಲಿಯೂ ಸ್ವಾರ್ಥ ಭಾವದಿಂದ ಮುಕ್ತರಾಗಿರಿ. ಹಿಂದಿನ ಜನ್ಮಗಳ ಕರ್ಮಗಳ ಲೆಕ್ಕಾಚಾರ ಅಥವಾ ವರ್ತಮಾನದ ಪುರುಷಾರ್ಥದ ಬಲಹೀನತೆಯ ಕಾರಣದಿಂದ, ಯಾವುದೇ ವ್ಯರ್ಥ ಸ್ವಭಾವ-ಸಂಸ್ಕಾರಗಳಿವೆ ವಶರಾಗುವುದರಿಂದ ಮುಕ್ತರಾಗಿರಿ. ಒಂದು ವೇಳೆ ಯಾವುದೇ ಸೇವೆಯನ್ನು ಮಾಡಿದಿರಿ, ಸಂಘಟನೆಯ, ಪ್ರಕೃತಿಯ ಪರಿಸ್ಥಿತಿಯು ಸ್ವಸ್ಥಿತಿಯನ್ನು ಅಥವಾ ಶ್ರೇಷ್ಠ ಸ್ಥಿತಿಯನ್ನು ಏರುಪೇರು ಮಾಡುತ್ತದೆಯೆಂದರೆ - ಇದೂ ಸಹ ಬಂಧನಮುಕ್ತ ಸ್ಥಿತಿಯಲ್ಲ, ಈ ಬಂಧನದಿಂದಲೂ ಮುಕ್ತರಾಗಿರಿ. ಹಳೆಯ ಪ್ರಪಂಚದಲ್ಲಿ ಹಳೆಯ ಅಂತಿಮ ಶರೀರದಲ್ಲಿ ಯಾವುದೇ ಪ್ರಕಾರದ ವ್ಯಾಧಿಯಿರಬಹುದು, ಅದು ತಮ್ಮ ಸ್ಥಿತಿಯನ್ನು ಏರುಪೇರಿನಲ್ಲಿ ತರಬಾರದು, ಇದರಿಂದಲೂ ಮುಕ್ತರಾಗಿರಿ. ವ್ಯಾಧಿಯು ಬರುವುದು, ಇದು ಪೂರ್ವ ನಿಶ್ಚಿತವಾಗಿದೆ. ಆದರೆ ಸ್ಥಿತಿಯು ಅಲುಗಾಡುವುದು ಬಂಧನಯುಕ್ತದ ಚಿಹ್ನೆಯಾಗಿದೆ. ಸ್ವಚಿಂತನೆ, ಜ್ಞಾನ ಚಿಂತನೆ, ಶುಭ ಚಿಂತಕರಾಗುವ ಚಿಂತನೆಗೆ ಬದಲಾಗಿ, ಶರೀರದ ವ್ಯಾಧಿಯ ಚಿಂತನೆಯು ನಡೆಯುವುದರಿಂದಲೂ ಮುಕ್ತರಾಗಿರಿ - ಇದಕ್ಕೇ ಕರ್ಮಾತೀತ ಸ್ಥಿತಿಯೆಂದು ಹೇಳಲಾಗುತ್ತದೆ. ಕರ್ಮಯೋಗಿಯಾಗಿದ್ದು ಕರ್ಮದ ಬಂಧನಗಳಿಂದ ಸದಾ ಭಿನ್ನ ಹಾಗೂ ಸದಾ ತಂದೆಗೆ ಪ್ರಿಯರಾಗಿರಿ - ಕರ್ಮಾತೀತ, ವಿದೇಹಿ ಸ್ಥಿತಿಯೆಂದರೆ ಇದೇ ಆಗಿದೆ. ಕರ್ಮಾತೀತದ ಅರ್ಥವು ಇದಲ್ಲ - ಕರ್ಮದಿಂದಲೇ ಅತೀತರಾಗಿ ಬಿಡುವುದು. ಕರ್ಮದಿಂದ ಭಿನ್ನರಲ್ಲ, ಕರ್ಮದ ಬಂಧನದಲ್ಲಿ ಸಿಕ್ಕಿಕೊಳ್ಳುವುದರಿಂದ ಭಿನ್ನರಾಗಿರಿ. ಯಾವುದೇ ಕಾರ್ಯವು ಎಷ್ಟೇ ದೊಡ್ಡದಾಗಿರಬಹುದು. ಆದರೆ ಅದು ಹೀಗೆನಿಸಲಿ - ಹೇಗೆಂದರೆ, ನಾವು ಕಾರ್ಯವನ್ನು ಮಾಡುತ್ತಿಲ್ಲ ಆದರೆ ಆಟವಾಡುತ್ತಿದ್ದೇವೆ. ಭಲೇ ಯಾವುದೇ ಪರಿಸ್ಥಿತಿಯೇ ಬಂದು ಬಿಡಲಿ, ಯಾವುದೇ ಆತ್ಮವು ಲೆಕ್ಕಾಚಾರವನ್ನು ಚುಕ್ತ ಮಾಡಿಕೊಳ್ಳಲು ತಮ್ಮೆದುರು ನಿಲ್ಲುತ್ತಿರಲಿ, ಭಲೇ ಶರೀರದ ಕರ್ಮಭೋಗವು ಎದುರಿಸುವುದಕ್ಕೆ ಬರುತ್ತಿರಲಿ. ಆದರೆ ಅಲ್ಪಕಾಲದ ಕಾಮನೆಗಳಿಂದ ಮುಕ್ತರಾಗಿರುವುದೇ ವಿದೇಹಿ ಸ್ಥಿತಿಯಾಗಿದೆ. ಎಲ್ಲಿಯವರೆಗೆ ಈ ದೇಹವಿದೆ, ಕರ್ಮೇಂದ್ರಿಯಗಳ ಜೊತೆ ಈ ಕರ್ಮ ಕ್ಷೇತ್ರದಲ್ಲಿ ಪಾತ್ರವನ್ನಭಿನಯಿಸುತ್ತಿರುತ್ತೀರಿ, ಅಲ್ಲಿಯವರೆಗೆ ಕರ್ಮ ಮಾಡದೆಯೇ ಸೆಕೆಂಡಿಗೂ ಸಹ ಇರಲು ಸಾಧ್ಯವಿಲ್ಲ. ಆದರೆ ಕರ್ಮವನ್ನು ಮಾಡುತ್ತಿದ್ದರೂ ಸಹ ಕರ್ಮದ ಬಂಧನಗಳಿಂದ ಆಚೆಯಿರುವುದೇ ಕರ್ಮಾತೀತ ವಿದೇಹಿ ಸ್ಥಿತಿಯಾಗಿದೆ. ಅಂದಾಗ ಕರ್ಮೇಂದ್ರಿಯಗಳ ಮೂಲಕ ಕರ್ಮದ ಸಂಬಂಧದಲ್ಲಿ ಬರಬೇಕಾಗಿದೆ, ಕರ್ಮದ ಬಂಧನಗಳಲ್ಲಿ ಬಂಧಿತರಾಗಬಾರದು. ಕರ್ಮದ ವಿನಾಶಿ ಫಲದ ಇಚ್ಛೆಗೆ ವಶರಾಗಬಾರದು. ಕರ್ಮಾತೀತ ಅರ್ಥಾತ್ ಕರ್ಮಕ್ಕೆ ವಶರಾಗುವವರಲ್ಲ. ಆದರೆ ಮಾಲೀಕನಾಗಿರುತ್ತಾ, ಅಥಾರಿಟಿಯಾಗಿರುತ್ತಾ ಕರ್ಮದ ಸಂಬಂಧದಲ್ಲಿ ಬರುವುದು, ವಿನಾಶಿ ಕಾಮನೆಯಿಂದ ಭಿನ್ನವಾಗಿದ್ದು ಕರ್ಮೇಂದ್ರಿಯಗಳ ಮೂಲಕ ಕರ್ಮವನ್ನು ಮಾಡಿಸುವುದು. ಆತ್ಮ ಮಾಲೀಕನನ್ನು ಕರ್ಮವು ತನ್ನ ಅಧೀನವನ್ನಾಗಿ ಮಾಡಿಕೊಳ್ಳಬಾರದು. ಆದರೆ ಅಧಿಕಾರಿಯಾಗಿದ್ದು ಕರ್ಮವನ್ನು ಮಾಡಿಸುತ್ತಿರಬೇಕು. ಮಾಡಿಸುವವರಾಗಿ ಕರ್ಮವನ್ನು ಮಾಡಿಸಬೇಕು - ಇದಕ್ಕೆ ಕರ್ಮ ಸಂಬಂಧದಲ್ಲಿ ಬರುವುದು ಎಂದು ಹೇಳಲಾಗುತ್ತದೆ. ಕರ್ಮಾತೀತ ಆತ್ಮವು ಸಂಬಂಧದಲ್ಲಿ ಬರುತ್ತದೆ, ಬಂಧನದಲ್ಲ. ಕರ್ಮಾತೀತ ಅರ್ಥಾತ್ ದೇಹ, ದೇಹದ ಸಂಬಂಧ, ಪದಾರ್ಥ, ಲೌಕಿಕ ಅಥವಾ ಅಲೌಕಿಕ ಎರಡೂ ಸಂಬಂಧದಿಂದ, ಬಂಧನದಿಂದ ಅತೀತ ಅರ್ಥಾತ್ ಭಿನ್ನ. ಭಲೇ ಸಂಬಂಧವೆನ್ನುವ ಶಬ್ಧವು ಹೇಳುವುದರಲ್ಲಿ ಬರುತ್ತದೆ - ದೇಹದ ಸಂಬಂಧದ, ದೇಹದ ಸಂಬಂಧಿಗಳ ಸಂಬಂಧ, ಆದರೆ ದೇಹದಲ್ಲಿ ಅಥವಾ ಸಂಬಂಧದಲ್ಲೇನಾದರೂ ಅಧೀನತೆಯಿದೆಯೆಂದರೆ, ಸಂಬಂಧವೂ ಬಂಧನವಾಗಿ ಬಿಡುತ್ತದೆ. ಕರ್ಮಾತೀತ ಸ್ಥಿತಿಯಲ್ಲಿ ಕರ್ಮ ಸಂಬಂಧ, ಮತ್ತು ಕರ್ಮ ಬಂಧನದ ರಹಸ್ಯವನ್ನು ತಿಳಿದುಕೊಳ್ಳುವ ಕಾರಣದಿಂದ ಪ್ರತಿಯೊಂದು ಮಾತಿನಲ್ಲಿ ಸದಾ ಖುಷಿಯಾಗಿರುತ್ತಾರೆ. ಎಂದಿಗೂ ಬೇಸರವಾಗುವುದಿಲ್ಲ. ಅವರು ತನ್ನ ಹಿಂದಿನ ಕರ್ಮಗಳ ಲೆಕ್ಕಾಚಾರದ ಬಂಧನದಿಂದಲೂ ಮುಕ್ತರಾಗಿರುತ್ತಾರೆ. ಭಲೇ ಹಿಂದಿನ ಕರ್ಮಗಳ ಲೆಕ್ಕಾಚಾರದ ಫಲ ಸ್ವರೂಪವಾಗಿ ತನುವಿನ ರೋಗವಿರಬಹುದು, ಮನಸ್ಸಿನ ಸಂಸ್ಕಾರಗಳು ಅನ್ಯ ಆತ್ಮರ ಸಂಸ್ಕಾರಗಳೊಂದಿಗೆ ಘರ್ಷಣೆಯನ್ನೂ ಅನುಭವಿಸುತ್ತಿರಬಹುದು. ಆದರೆ ಕರ್ಮಾತೀತರು, ಕರ್ಮಭೋಗಕ್ಕೆ ವಶರಾಗದೆಯೇ ಮಾಲೀಕನಾಗಿದ್ದು ಚುಕ್ತ ಮಾಡುತ್ತಾರೆ. ಕರ್ಮಯೋಗಿಯಾಗಿದ್ದು ಕರ್ಮ ಭೋಗವನ್ನು ಚುಕ್ತ ಮಾಡುವುದು - ಇದು ಕರ್ಮಾತೀತರಾಗುವ ಚಿಹ್ನೆಯಾಗಿದೆ. ಯೋಗದಿಂದ ಕರ್ಮ ಭೋಗವನ್ನು ನಗು ನಗುತ್ತಾ ಶೂಲದಿಂದ ಮುಳ್ಳಿನ ಸಮಾನ ಮಾಡಿ, ಭಸ್ಮ ಮಾಡುವುದು ಅರ್ಥಾತ್ ಕರ್ಮ ಭೋಗವನ್ನು ಸಮಾಪ್ತಿ ಮಾಡುವುದು. ಕರ್ಮಯೋಗದ ಸ್ಥಿತಿಯಿಂದ ಕರ್ಮ ಭೋಗವನ್ನು ಪರಿವರ್ತನೆ ಮಾಡಿ ಬಿಡುವುದು - ಇದೇ ಕರ್ಮಾತೀತ ಸ್ಥಿತಿಯಾಗಿದೆ. ವ್ಯರ್ಥ ಸಂಕಲ್ಪವೇ ಕರ್ಮ ಬಂಧನದ ಸೂಕ್ಷ್ಮ ಎಳೆಗಳಾಗಿವೆ. ಕರ್ಮಾತೀತ ಆತ್ಮನು ಕೆಟ್ಟದರಲ್ಲಿಯೂ ಒಳ್ಳೆಯದರ ಅನುಭವವನ್ನು ಮಾಡುತ್ತಾನೆ. ಅವರು ಹೇಳುತ್ತಾರೆ - ಏನಾಗುತ್ತದೆಯೋ ಅದು ಒಳ್ಳೆಯದು, ನಾನೂ ಒಳ್ಳೆಯವನು, ತಂದೆಯೂ ಒಳ್ಳೆಯವರು, ಡ್ರಾಮಾ ಸಹ ಒಳ್ಳೆಯದೇ ಇದೆ. ಈ ಸಂಕಲ್ಪವು ಬಂಧನವನ್ನು ಕತ್ತರಿಸುವ ಕತ್ತರಿಯ ಕೆಲಸವನ್ನು ಮಾಡುತ್ತದೆ. ಬಂಧನವು ಸಮಾಪ್ತಿಯಾಯಿತೆಂದರೆ ಕರ್ಮಾತೀತರಾಗಿ ಬಿಡುತ್ತೀರಿ. ವಿದೇಹಿ ಸ್ಥಿತಿಯ ಅನುಭವವನ್ನು ಮಾಡುವುದಕ್ಕಾಗಿ ಇಚ್ಛಾ ಮಾತ್ರಂ ಅವಿದ್ಯಾ ಆಗಿರಿ. ಇಂತಹ ಅಲ್ಪಕಾಲದ ಇಚ್ಛೆಯಿಂದ ಮುಕ್ತರಾಗಿರುವ ಆತ್ಮವು, ಸರ್ವ ಇಚ್ಛೆಗಳನ್ನು ಪೂರ್ಣಗೊಳಿಸುವಂತಹ ತಂದೆಯ ಸಮಾನ `ಕಾಮಧೇನು' ಆಗಿರುತ್ತಾರೆ. ಹೇಗೆ ತಂದೆಯು ಸರ್ವ ಭಂಡಾರಗಳ, ಸರ್ವ ಖಜಾನೆಗಳಲ್ಲಿ ಸದಾ ಸಂಪನ್ನವಾಗಿರುತ್ತಾರೆ, ಅಪ್ರಾಪ್ತಿಯ ಹೆಸರು - ಚಿಹ್ನೆಯೇ ಇಲ್ಲ. ಹೀಗೆ ತಂದೆಯ ಸಮಾನ ಸದಾ ಹಾಗೂ ಸರ್ವ ಖಜಾನೆಗಳಿಂದ ಸಂಪನ್ನವಾಗಿರಿ. ಸೃಷ್ಟಿ ಚಕ್ರದಲ್ಲಿ ಪಾತ್ರವನ್ನಭಿನಯಿಸುತ್ತಿದ್ದರೂ ಅನೇಕ ದುಃಖಗಳ ಬಂಧನಗಳಿಂದ ಮುಕ್ತರಾಗುವುದೇ ಜೀವನ್ಮುಕ್ತ ಸ್ಥಿತಿಯಾಗಿದೆ. ಇಂತಹ ಸ್ಥಿತಿಯನ್ನು ಅನುಭವ ಮಾಡುವುದಕ್ಕಾಗಿ ಅಧಿಕಾರಿಯಾಗಿದ್ದು, ಮಾಲೀಕನಾಗಿದ್ದು, ಸರ್ವ ಕರ್ಮೇಂದ್ರಿಯಗಳಿಂದ ಕರ್ಮವನ್ನು ಮಾಡಿಸುವವರಾಗಿರಿ. ಕರ್ಮಗಳಲ್ಲಿ ಬನ್ನಿರಿ ನಂತರ ಕರ್ಮವು ಪೂರ್ಣವಾಗುತ್ತಿದ್ದಂತೆಯೇ ಭಿನ್ನರಾಗಿ ಬಿಡಿ - ಇದೇ ವಿದೇಹಿ ಸ್ಥಿತಿಯ ಅಭ್ಯಾಸವಾಗಿದೆ.

ವರದಾನ:
ನನ್ನದನ್ನು ನಿನ್ನದೆನ್ನುವುದರಲ್ಲಿ ಪರಿವರ್ತನೆ ಮಾಡಿ ಹಾರುವ ಕಲೆಯ ಅನುಭವ ಮಾಡುವಂತಹ ಡಬಲ್ಲೈಟ್ ಭವ.

ಈ ವಿನಾಶಿ ತನು ಮತ್ತು ಧನ, ಹಳೆಯ ಮನಸ್ಸು ನನ್ನದಲ್ಲ, ತಂದೆಗೆ ಕೊಟ್ಟು ಬಿಟ್ಟೆವು. ಮೊದಲ ಸಂಕಲ್ಪವೇ ಇದನ್ನು ಮಾಡಲಾಯಿತು - ಎಲ್ಲವೂ ನಿನ್ನದು...... ಇದರಲ್ಲಿ ತಂದೆಗೆ ಲಾಭವಿಲ್ಲ, ತಮಗೆ ಲಾಭವಿದೆ. ಏಕೆಂದರೆ ನನ್ನದೆಂದು ಹೇಳುವುದರಿಂದ ಸಿಕ್ಕಿಕೊಳ್ಳುತ್ತೀರಿ ಮತ್ತು ನಿನ್ನದು ಎಂದು ಹೇಳುವುದರಿಂದ ಭಿನ್ನವಾಗಿ ಬಿಡುತ್ತೀರಿ. ನನ್ನದೆಂದು ಹೇಳುವುದರಿಂದ ಹೊರೆಯಿರುವವರಾಗಿ ಬಿಡುತ್ತೀರಿ ಮತ್ತು ನಿನ್ನದೆಂದು ಹೇಳುವುದರಿಂದ ಡಬಲ್ಲೈಟ್, ನಿಮಿತ್ತರಾಗಿ ಬಿಡುತ್ತೀರಿ. ಯಾರೇ ಎಲ್ಲಿಯವರೆಗೆ ಹಗುರವಾಗುವುದಿಲ್ಲ, ಅಲ್ಲಿಯವರೆಗೆ ಶ್ರೇಷ್ಠ ಸ್ಥಿತಿಯವರೆಗೆ ತಲುಪಲು ಸಾಧ್ಯವಾಗುವುದಿಲ್ಲ. ಹಗುರವಾಗುವವರೇ ಹಾರುವ ಕಲೆಯ ಮೂಲಕ ಆನಂದದ ಅನುಭೂತಿಯನ್ನು ಮಾಡುವರು. ಹಗುರರಾಗುವುದರಲ್ಲಿಯೇ ಮಜಾ ಇದೆ.

ಸ್ಲೋಗನ್:
ಯಾರ ಮೇಲೆ ಯಾವುದೇ ವ್ಯಕ್ತಿ ಅಥವಾ ಪ್ರಕೃತಿಯು ತನ್ನ ಪ್ರಭಾವವನ್ನು ಬೀರಲು ಸಾಧ್ಯವಿಲ್ಲವೋ, ಅವರೇ ಶಕ್ತಿಶಾಲಿ ಆತ್ಮನಾಗಿದ್ದಾರೆ.