13/10/18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಮ್ಮ ಹೃದಯದಲ್ಲಿ ಖುಷಿಯ ನಗಾರಿಯು ಮೊಳಗಬೇಕು, ಏಕೆಂದರೆ ಬೇಹದ್ದಿನ ತಂದೆಯು ನಿಮಗೆ ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ”

ಪ್ರಶ್ನೆ:
ಮಾಯೆಯು ಮನುಷ್ಯರನ್ನು ಯಾವ ಭ್ರಮೆಯಲ್ಲಿ ಭ್ರಮಿತರನ್ನಾಗಿಸಿದೆ, ಆ ಕಾರಣದಿಂದಲೇ ಸ್ವರ್ಗದಲ್ಲಿ ಹೋಗುವ ಪುರುಷಾರ್ಥವನ್ನು ಮಾಡಲಾಗುತ್ತಿಲ್ಲ?

ಉತ್ತರ:
ಮಾಯೆಯು ಯಾವ ಅಂತ್ಯದ ಆಡಂಬರವಿದೆ, 100 ವರ್ಷಗಳಲ್ಲಿ ವಿಮಾನ, ವಿದ್ಯುತ್ ಮುಂತಾದವು ಏನೆನೆಲ್ಲವೂ ಹೊರ ಬಂದಿವೆ...... ಈ ಆಡಂಬರವನ್ನು ನೋಡುತ್ತಾ ಸ್ವರ್ಗವಂತೂ ಇಲ್ಲಿಯೇ ಇದೆಯೆಂದು ಮನುಷ್ಯರು ತಿಳಿಯುತ್ತಾರೆ. ಹಣವಿದೆ, ಮಹಲುಗಳಿವೆ, ವಾಹನಗಳಿವೆ.... ನಮಗೋಸ್ಕರ ಇಲ್ಲಿಯೇ ಸ್ವರ್ಗವಿದೆ ಎಂದು ತಿಳಿಯುತ್ತಾರೆ. ಈ ಮಾಯೆಯ ಸುಖವು ಮನುಷ್ಯರನ್ನು ಭ್ರಮಿತರನ್ನಾಗಿಸಿ ಬಿಟ್ಟಿದೆ. ಇದರ ಕಾರಣವೇ ಮನುಷ್ಯರು ಸ್ವರ್ಗಕ್ಕೆ ಹೋಗುವ ಪುರುಷಾರ್ಥ ಮಾಡುವುದಿಲ್ಲ.

ಗೀತೆ:
ಮಾತಾ ಓ ಮಾತಾ..

ಓಂ ಶಾಂತಿ.
ಇದನ್ನಂತೂ ಮಕ್ಕಳಿಗೆ ಈಗಾಗಲೇ ತಿಳಿಸಲಾಗಿದೆ - ಯಾರು ಬಂದು ಹೋಗುತ್ತಾರೆಯೋ ಅವರ ಮಹಿಮೆಯನ್ನು ಹಾಡಲಾಗುತ್ತದೆ. ಭಾರತವಾಸಿಗಳಂತೂ ತಿಳಿದುಕೊಂಡಿಲ್ಲ, ವಿದ್ವಾಂಸ,ಪಂಡಿತರೂ ತಿಳಿದುಕೊಂಡಿಲ್ಲ. ಜಗದಂಬೆ ಎಂದರೆ ಜಗತ್ತಿನ ಮನುಷ್ಯರನ್ನು ರಚಿಸುವವರು. ನಿಮಗೆ ಗೊತ್ತಿದೆ - ಯಾರನ್ನು ಜಗದಂಬಾ ಎಂದು ಹೇಳುತ್ತಾರೆಯೋ ಅವರೀಗ ಮಕ್ಕಳ ಸಮ್ಮುಖದಲ್ಲಿ ಕುಳಿತಿದ್ದಾರೆ. ಭಕ್ತಿಮಾರ್ಗದಲ್ಲಂತೂ ಸುಮ್ಮನೆ ಹಾಡುತ್ತಾ ಬಂದಿದ್ದಾರೆ. ಆದರೆ ನೀವು ಮಕ್ಕಳಿಗೆ ಈಗ ಜ್ಞಾನವು ಸಿಕ್ಕಿದೆ ಎಂದರೆ ಜಗದಂಬೆಯ ಪರಿಚಯವು ಸಿಕ್ಕಿದೆ. ಜಗದಂಬೆಯ ಹೆಸರಿನಿಂದಲೇ ಭಿನ್ನ-ಭಿನ್ನವಾದ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ವಾಸ್ತವದಲ್ಲಂತೂ ಒಬ್ಬರೇ ಜಗದಂಬೆಯಾಗಿದ್ದಾರೆ ಅವರನ್ನು ಕಾಳಿ, ಸರಸ್ವತಿಯೆಂದಾದರೂ ಹೇಳಿ, ದುರ್ಗೆಯೆಂದಾದರೂ ಹೇಳಿ. ಹೀಗೆ ಅನೇಕ ಹೆಸರುಗಳನ್ನಿಟ್ಟಿರುವ ಕಾರಣ ಮನುಷ್ಯರು ಗೊಂದಲಕ್ಕೊಳಗಾಗಿದ್ದಾರೆ. ಕಾಳಿ ಕಲ್ಕತ್ತೆವಾಲಿ ಎಂದು ಹೇಳುತ್ತಾರೆ ಆದರೆ ಇಂತಹ ಚಿತ್ರವಂತೂ ಇರುವುದಿಲ್ಲ, ತಂದೆಯು ತಿಳಿಸುತ್ತಾರೆ - ಇವೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿವೆ. ಯಾವಾಗಿನಿಂದ ಭಕ್ತಿಮಾರ್ಗವು ಪ್ರಾರಂಭವಾಗುತ್ತದೆಯೋ ಆಗಿನಿಂದ ರಾವಣ ರಾಜ್ಯವು ಪ್ರಾರಂಭವಾಗುತ್ತದೆ. ಆದರೆ ರಾವಣ ಯಾರು, ರಾಮ ಯಾರು, ಇದು ಬೇಹದ್ದಿನ ನಾಟಕವಾಗಿದೆಯೆಂದು ಮನುಷ್ಯರು ತಿಳಿದುಕೊಂಡಿಲ್ಲ. ರಾವಣ ರಾಜ್ಯವು ಪೂರ್ಣವಾಗಿ ಮತ್ತೆ ರಾಮ ರಾಜ್ಯವು ಪ್ರಾರಂಭವಾಗುತ್ತದೆ ಎಂದು ಮಕ್ಕಳು ತಿಳಿದುಕೊಂಡಿದ್ದೀರಿ. ರಾಮನು ಅವಶ್ಯವಾಗಿ ಸುಖ ಕೊಡುವವರಾಗಿರುವರು, ರಾವಣನು ದುಃಖ ಕೊಡುವವನಾಗಿರುವನು. ಭಾರತದಲ್ಲಿ ರಾವಣ ರಾಜ್ಯವಿದ್ದಾಗ ಅದನ್ನು ಶೋಕವಾಟಿಕೆಯೆಂದು ಕರೆಯಲಾಗುವುದು. ನೀವೆಲ್ಲರೂ ಈ ಸಮಯದಲ್ಲಿ ರಾವಣ ರಾಜ್ಯದಲ್ಲಿದ್ದೀರೆಂದು ತಂದೆಯು ತಿಳಿಸುತ್ತಾರೆ. ಮುಖ್ಯವಾಗಿ ಇದು ಭಾರತದ ಮಾತೇ ಆಗಿದೆ. ರಾವಣ ರಾಜ್ಯದಲ್ಲಿ ನೀವು ಭ್ರಷ್ಟಾಚಾರಿಗಳಾಗಿ ಬಿಟ್ಟಿದ್ದೀರಿ. ರಾಮ ಅರ್ಥಾತ್ ಬೇಹದ್ದಿನ ತಂದೆ ಸುಖ ಕೊಡುವವರಾಗಿದ್ದಾರೆ. ಈ ಸಮಯದಲ್ಲಿ ಎಲ್ಲಾ ಮನುಷ್ಯರು ಅಸುರೀ ಮತದಲ್ಲಿದ್ದಾರೆ. ಆದರೆ ರಾವಣನೆಂದರೆ ಯಾವುದೇ 10 ತಲೆಯುಳ್ಳವನಲ್ಲ. ಇದು ಪಂಚ ವಿಕಾರಗಳ ಮತವಾಗಿದೆ, ರಾವಣನ ಮತವೆಂದು ಕರೆಯಲಾಗುತ್ತದೆ. ಶಿವ ತಂದೆಯ ಮತವು ಶ್ರೀಮತವಾಗಿದೆ. ಈಗ ಅಸುರೀ ಸಂಪ್ರದಾಯವಾಗಿದೆಯಲ್ಲವೆ. ಇದು ಬೇಹದ್ದಿನ ಮಾತಾಗಿದೆ. ಶ್ರೀಮತದಿಂದ 21 ಜನ್ಮಗಳ ಸುಖವನ್ನು ಪಡೆಯುತ್ತೀರಿ. ಅಸುರೀ ಮತದಿಂದ 63 ಜನ್ಮಗಳು ನೀವು ದುಃಖವನ್ನೇ ಪಡೆದಿದ್ದೀರಿ.

ಈ ರಾವಣನು ಅತಿ ದೊಡ್ಡ ಶತ್ರುವಾಗಿದ್ದಾನೆ, ಅವನನ್ನು ಸುಡುತ್ತಿರುತ್ತಾರೆಂದು ನಿಮಗೆ ಗೊತ್ತಿದೆ. ಕೊನೆಗೂ ರಾವಣನನ್ನು ಸುಡುವುದು ಯಾವಾಗ ಸಮಾಪ್ತಿ ಮಾಡುತ್ತೇವೆ? ಎಂದು ಮನುಷ್ಯರಿಗೆ ಗೊತ್ತಿಲ್ಲ. ಈ ರಾವಣನನ್ನು ಸುಡುವುದು ಪರಂಪರೆಯಿಂದ ನಡೆಯುತ್ತಾ ಬಂದಿದೆ ಎಂದು ಹೇಳುತ್ತಾರೆ. ಪ್ರತಿಕೃತಿ ಮಾಡಿ ಸುಡುತ್ತಿರುತ್ತಾರೆ ಅವಶ್ಯವಾಗಿ ಈ ರಾವಣನು ಎಲ್ಲರಿಗೂ ಅಂದಾಗ ವಿಶೇಷವಾಗಿ ಭಾರತದಲ್ಲಿ ದುಃಖವನ್ನು ಕೊಟ್ಟಿದ್ದಾನೆ. ಅಂದಾಗ ರಾವಣನು ಮುಖ್ಯವಾದ ಶತ್ರುವಾಗಿದ್ದಾನಲ್ಲವೆ. ಆದರೆ ಈ ಬೇಹದ್ದಿನ ಶತ್ರುವಿನ ಬಗ್ಗೆ ಯಾರಿಗೂ ಗೊತ್ತಿಲ್ಲ. ಬೇಹದ್ದಿನ ತಂದೆಯು ಬಂದು ಬೇಹದ್ದಿನ ಸುಖವನ್ನು ಕೊಡುತ್ತಾರೆ. ಇಂತಹ ಸಹಜವಾದ ಮಾತುಗಳನ್ನೂ ಸಹ ಯಾವುದೇ ವಿದ್ವಾಂಸ-ಪಂಡಿತ ಮುಂತಾದವರು ಯಾರು ತಿಳಿದುಕೊಂಡಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಬೇಹದ್ದಿನ ತಂದೆಯಿಂದ ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಆದರೆ ನೀವು ಮಕ್ಕಳು ಘಳಿಗೆ-ಘಳಿಗೆಯೂ ತಂದೆಯನ್ನು ಮರೆಯುತ್ತಿರುತ್ತೀರಿ. ಭಕ್ತಿಮಾರ್ಗದಲ್ಲಿ ಹೇ ತಂದೆಯೇ, ದಯೆ ತೋರು, ಮರ್ಸಿ ಆನ್ ಮಿ ಎಂದು ನೀವು ಕೂಗುತ್ತಾ ಬಂದಿರಿ. ಆದರೆ ದಯೆಯಂತೂ ತೋರುತ್ತಾ ಇರುತ್ತೇನೆ. ಯಾವ-ಯಾವ ಭಾವನೆಯಿಂದ ದೇವತೆಗಳನ್ನು ಪೂಜಿಸುತ್ತಾರೆಯೋ ಅವರಿಗೆ ಅಲ್ಪಕಾಲದ ಸುಖವಂತೂ ಅವಶ್ಯವಾಗಿ ಕೊಡುತ್ತೇನೆ ಮತ್ಯಾರೂ ಸುಖವನ್ನು ಕೊಡಲು ಸಾಧ್ಯವಿಲ್ಲ. ನಾನೇ ಸುಖದಾತನಾಗಿದ್ದೇನೆ, ಭಕ್ತಿಮಾರ್ಗದಲ್ಲಿಯೂ ಕೊಡುವವನು ನಾನೇ ಆಗಿದ್ದೇನೆ. ಭಗವಂತನೇ ನಮಗೆ ಕೊಟ್ಟರೆಂದು ಹೇಳುತ್ತಾರೆ. ಭಗವಂತನಿಗಾಗಿಯೇ ಹೇಳುತ್ತಿರುತ್ತಾರೆ ನಂತರ ಈ ಧನವನ್ನು ಇಂತಹ ಸಾಧುಗಳು ಕೊಟ್ಟರೆಂದು ಏಕೆ ಹೇಳುತ್ತೀರಿ! ಸುಖವನ್ನು ಕೊಡುವವರು ಒಬ್ಬ ತಂದೆಯೇ ಆಗಿದ್ದಾರೆ. ಅವರನ್ನು ಹೇ ಭಗವಂತ, ನಮ್ಮ ದುಃಖವನ್ನು ದೂರ ಮಾಡು ಎಂದು ಹಾಡುತ್ತಿರುತ್ತಾರೆ. ನಂತರ ಇಂತಹ ಸಾಧುಗಳು ನಮ್ಮ ದುಃಖವನ್ನು ದೂರ ಮಾಡಿದರು, ಮಕ್ಕಳನ್ನು ಕೊಟ್ಟರೆಂದು ಏಕೆ ಹೇಳುತ್ತೀರಿ. ಅವರ ಕೃಪೆಯಿಂದ ಸುಖ ಸಿಕ್ಕಿತೆಂದು ತಿಳಿಯುತ್ತಾರೆ. ವ್ಯಾಪಾರದಲ್ಲಿ ಲಾಭವಾದರೆ ಇದು ಗುರು ಕೃಪೆಯಾಯಿತೆಂದು ತಿಳಿಯುತ್ತಾರೆ, ನಷ್ಟವಾದರೆ ಇದು ಗುರುವಿನ ಅಕೃಪೆಯೆಂದು ಹೇಳುವುದಿಲ್ಲ. ಪಾಪ! ಭಕ್ತರು ತಿಳಿಯದೇ ಇರುವ ಕಾರಣ ಏನು ಬರುತ್ತದೆಯೋ ಅದನ್ನು ಹೇಳುತ್ತಿರುತ್ತಾರೆ. ಏನು ಕೇಳಿದರೆ ಅದರಂತೆ ಅನುಸರಿಸುತ್ತಿರುತ್ತಾರೆ. ಇದೂ ಸಹ ನಾಟಕವಾಗಿದೆ.

ಈಗ ತಂದೆಯು ಬಂದು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ. ತಂದೆಯೊಂದಿಗೆ ಪ್ರೀತಿಯನ್ನಿಟ್ಟುಕೊಳ್ಳುವುದರಲ್ಲಿಯೂ ಸಹ ಮಾಯೆಯು ಬಹಳ ವಿಘ್ನಗಳನ್ನು ಹಾಕುತ್ತದೆ. ಒಂದೇ ಸಲ ಮುಖವನ್ನು ತಿರುಗಿಸಿ ಬಿಡುತ್ತದೆ. 21 ಜನ್ಮಗಳ ಸುಖವನ್ನು ಕೊಡುವಂತಹ ತಂದೆಗೆ ವಿಚ್ಛೇದನವನ್ನು ಕೊಡಿಸಿ ಬಿಡುತ್ತದೆ. ಭಕ್ತಿ ಮಾರ್ಗ ಮತ್ತು ಜ್ಞಾನ ಮಾರ್ಗದಲ್ಲಿ ರಾತ್ರಿ-ಹಗಲಿನ ಅಂತರವಿದೆ ಎಂದು ತಂದೆಯು ತಿಳಿಸುತ್ತಾರೆ. ಭಕ್ತಿ ಮಾಡುತ್ತಾ-ಮಾಡುತ್ತಾ ಭಕ್ತರು ಯಾವಾಗ ಕಂಗಾಲಾಗಿ ಬಿಡುತ್ತಾರೆಯೋ ಆಗ ಪುನಃ ತಂದೆಯು ಬಂದು ಜ್ಞಾನವನ್ನು ಕೊಟ್ಟು 21 ಜನ್ಮಗಳಿಗೋಸ್ಕರ ನಿಮ್ಮನ್ನು ಸಂಪನ್ನರನ್ನಾಗಿ ಮಾಡಿ ಬಿಡುತ್ತಾರೆ. ಆ ಭಕ್ತಿಯಂತೂ ನೀವು ಪ್ರತೀ ಜನ್ಮದಲ್ಲಿ ಮಾಡುತ್ತಾ ಇದ್ದಿರಿ, ಅದರಿಂದ ಅಲ್ಪಕಾಲದ ಸುಖವು ಸಿಗುತ್ತದೆ, ದುಃಖವಂತೂ ಬಹಳ ಇದೆಯಲ್ಲವೆ. ನೀವು ಕಳೆದುಕೊಂಡಿರುವ ರಾಜ್ಯವನ್ನು ಕೊಡಲು ನಾನು ಬಂದಿದ್ದೇನೆ ಎಂದು ತಂದೆಯು ತಿಳಿಸುತ್ತಾರೆ. ಇದು ಬೇಹದ್ದಿನ ಮಾತಾಯಿತಲ್ಲವೆ. ಬಾಕಿ ಮತ್ತ್ಯಾವುದೇ ಮಾತಿಲ್ಲ. ಈ ಲಕ್ಷ್ಮಿ-ನಾರಾಯಣ ಮುಂತಾದವರು ನಿರ್ವಿಕಾರಿ ದೇವತೆಗಳಾಗಿದ್ದರು. ಅವರ ಮಹಲುಗಳಲ್ಲಿ ಇಷ್ಟು ವಜ್ರ ರತ್ನಗಳಿರುತ್ತವೆ! ನೀವು ಮುಂದೆ ಹೋದಂತೆ ಬಹಳಷ್ಟು ನೋಡುತ್ತೀರಿ. ಎಷ್ಟು ಸಮಯವು ಹತ್ತಿರ ಬರುತ್ತಾ ಹೋಗುತ್ತದೆಯೋ, ನೀವೆಷ್ಟು ಸಮೀಪ ಬರುತ್ತಾ ಹೋಗುತ್ತೀರೋ ಅಷ್ಟು ಸ್ವರ್ಗದ ದೃಶ್ಯಗಳನ್ನು ನೋಡುತ್ತಾ ಹೋಗುತ್ತೀರಿ. ಅಷ್ಟು ದೊಡ್ಡ-ದೊಡ್ಡ ದರ್ಬಾರ್ ಇರುವುದು. ಕಿಟಕಿಗಳ ಮುಂದೆ ಚಿನ್ನ, ವಜ್ರ ರತ್ನಗಳಿಂದ ಎಷ್ಟು ಚೆನ್ನಾಗಿ ಶೃಂಗಾರ ಮಾಡಲ್ಪಟ್ಟಿರುವುದು. ಈಗೀಗ ರಾತ್ರಿಯು ಪೂರ್ಣವಾಗಿ ದಿನವು ಪ್ರಾರಂಭವಾಗುವುದು. ಯಾವ ವೈಕುಂಠವನ್ನು ನೀವು ದಿವ್ಯ ದೃಷ್ಟಿಯಿಂದ ನೋಡುತ್ತೀರೋ ಅದನ್ನು ಪ್ರತ್ಯಕ್ಷವಾಗಿ ನೋಡುತ್ತೀರಿ. ಯಾವ ವಿನಾಶವನ್ನು ದಿವ್ಯ ದೃಷ್ಟಿಯಿಂದ ನೋಡಿದ್ದಿರಿ ಅದನ್ನು ಮತ್ತೆ ಪ್ರತ್ಯಕ್ಷದಲ್ಲಿ ನೋಡುತ್ತೀರಿ. ನಿಮ್ಮಲ್ಲಿ ಈಗ ಖುಷಿಯ ನಗಾರಿಯು ಮೊಳಗಬೇಕು. ನೀವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯುತ್ತಿದ್ದೇವೆ. ಈ ಚಿತ್ರಗಳ್ಯಾವುದೂ ನಿಖರವಾಗಿಲ್ಲ. ಅದೆಲ್ಲವನ್ನೂ ನೀವು ದಿವ್ಯ ದೃಷ್ಟಿಯಿಂದ ನೋಡುತ್ತೀರಿ. ಅಲ್ಲಿ ಹೋಗಿ ನೃತ್ಯ ಇತ್ಯಾದಿಗಳನ್ನು ಮಾಡುತ್ತೀರಿ. ಎಷ್ಟೊಂದು ಚಿತ್ರ ಇತ್ಯಾದಿಗಳನ್ನು ಮಾಡುತ್ತಿದ್ದರು, ಏನೆಲ್ಲವನ್ನೂ ದಿವ್ಯ ದೃಷ್ಟಿಯಿಂದ ತಂದೆ ತೋರಿಸಿದ್ದರೋ ಅದೆಲ್ಲವೂ ಮತ್ತೆ ಪ್ರತ್ಯಕ್ಷ ರೂಪದಲ್ಲಿ ಆಗುವುದು. ನಿಮಗೆ ಗೊತ್ತಿದೆ, ಈ ಛೀ ಛೀ ಪ್ರಪಂಚವು ಸಮಾಪ್ತಿಯಾಗಿ ಬಿಡುವುದು. ನೀವಿಲ್ಲಿ ಶ್ರೀಮತದನುಸಾರ ತಮ್ಮ ಸ್ವರಾಜ್ಯವನ್ನು ಪಡೆಯುವ ಪುರುಷಾರ್ಥದಲ್ಲಿ ಕುಳಿತಿದ್ದೀರಿ. ಆ ಭಕ್ತಿಮಾರ್ಗವೆಲ್ಲಿ, ಈ ಜ್ಞಾನಮಾರ್ಗವೆಲ್ಲಿ! ಇಲ್ಲಿ ಭಾರತದ ಪರಿಸ್ಥಿತಿ ನೋಡಿ ಏನಾಗಿದೆ - ತಿನ್ನಲು ಆಹಾರವಿಲ್ಲ, ದೊಡ್ಡ-ದೊಡ್ಡ ಯೋಜನೆಗಳನ್ನು ಹಾಕುತ್ತಿದ್ದಾರೆ ಆದರೆ ಸಮಯವಂತೂ ಇನ್ನು ಸ್ವಲ್ಪವೇ ಇದೆ. ಅವರ ಯೋಜನೆ ಮತ್ತು ನಿಮ್ಮ ಯೋಜನೆಯನ್ನು ನೋಡಿ ಹೇಗಿದೆ! ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ರಾಮಾಯಣ ಮುಂತಾದುವುಗಳಲ್ಲಿ ಎಷ್ಟೊಂದು ಕಥೆಗಳನ್ನು ಬರೆದು ಬಿಟ್ಟಿದ್ದಾರೆ. ಆದರೆ ಈ ರೀತಿಯಂತೂ ಇಲ್ಲ - ರಾವಣನನ್ನು ವರ್ಷ-ವರ್ಷವೂ ಏಕೆ ಸುಡುತ್ತಾರೆ? ರಾವಣನನ್ನು ಸುಟ್ಟರೆ ಅವನ ಸಮಾಪ್ತಿಯಾಗಿ ಬಿಡಬೇಕಲ್ಲವೆ. ಭಕ್ತಿಮಾರ್ಗದ ಸಂಪಾದನೆ ಹೇಗಿದೆ ಮತ್ತು ಜ್ಞಾನಮಾರ್ಗದ ಸಂಪಾದನೆ ಹೇಗಿದೆ! ತಂದೆಯು ಒಂದೇ ಸಲ ಭಂಡಾರವನ್ನು ತುಂಬಿ ಬಿಡುತ್ತಾರೆ ಆದರೆ ಇದಕ್ಕೋಸ್ಕರ ಪರಿಶ್ರಮವಿದೆ. ಅವಶ್ಯವಾಗಿ ಪವಿತ್ರರಾಗಬೇಕಾಗುತ್ತದೆ. ಅಮೃತವನ್ನು ಬಿಟ್ಟು ವಿಷವನ್ನು ಏಕೆ ಕುಡಿಯಬೇಕೆಂದು ಹಾಡುತ್ತಾರೆ. ಅಮೃತದ ಹೆಸರಿನಿಂದ ಅಮೃತ ಸರದಲ್ಲಿ ಒಂದು ಕೊಳವನ್ನು ಮಾಡಿ ಬಿಟ್ಟಿದ್ದಾರೆ. ಆ ಕೊಳದಲ್ಲಿ ಮುಳುಗಿ ಏಳುತ್ತಾರೆ. ಮಾನಸ ಸರೋವರದ ಹೆಸರಿನ ಒಂದು ಕೊಳವನ್ನೂ ಮಾಡಿದ್ದಾರೆ ಆದರೆ ಮಾನಸ ಸರೋವರದ ಅರ್ಥವನ್ನೂ ತಿಳಿದುಕೊಂಡಿಲ್ಲ. ಮಾನಸ ಸರೋವರ ಎಂದರೆ ನಿರಾಕಾರ ಪರಮಪಿತ ಪರಮಾತ್ಮ ಜ್ಞಾನಸಾಗರನು ಮನುಷ್ಯನ ತನುವಿನಲ್ಲಿ ಬಂದು ಈ ಜ್ಞಾನವನ್ನು ತಿಳಿಸುತ್ತಾರೆ. ಮನುಷ್ಯರು ಎಷ್ಟೊಂದು ಕಥೆ ಇತ್ಯಾದಿಗಳನ್ನು ಕುಳಿತು ರಚಿಸಿದ್ದಾರೆ. ಸರ್ವ ಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ. ಇದರಲ್ಲಿ ಕೃಷ್ಣವಾಚವೆಂದು ಬರೆದು ಬಿಟ್ಟಿದ್ದಾರೆ. ಕೃಷ್ಣನ ಬಗ್ಗೆ ಇನ್ನೂ ಎಷ್ಟೊಂದು ಮಾತುಗಳನ್ನು ಬರೆದು ಬಿಟ್ಟಿದ್ದಾರೆ. ಕೃಷ್ಣನಿಗೆ ಸರ್ಪವು ಕಚ್ಚಿತು, ಕೃಷ್ಣನು ಸ್ತ್ರೀಯರನ್ನು ಓಡಿಸಿಕೊಂಡು ಹೋದನು......... ಎಂದು ಹೇಳಿ ಎಷ್ಟೊಂದು ಸುಳ್ಳು-ಕಳಂಕಗಳನ್ನು ಹೋರಿಸಿದ್ದಾರೆ. ಈಗ ನೀವು ಮಕ್ಕಳು ಅದರ ಬಗ್ಗೆ ತಿಳಿಸಬಹುದು. ಇದರಲ್ಲಿ ಕೃಷ್ಣನ ಮಾತೇ ಇಲ್ಲ. ಇದಂತೂ ಬ್ರಹ್ಮಾರವರ ಮೂಲಕ ಪರಮಪಿತ ಪರಮಾತ್ಮನು ಎಲ್ಲಾ ವೇದಶಾಸ್ತ್ರ, ಗ್ರಂಥಗಳ ಸಾರವನ್ನು ತಿಳಿಸುತ್ತಾರೆ. ಶ್ರೀಮತ್ಭಗವದ್ಗೀತೆಯೂ ನಂಬರ್ವನ್ ಆಗಿದೆ. ಭಾರತವಾಸಿಗಳ ಧರ್ಮ ಶಾಸ್ತ್ರವೂ ಒಂದೇ ಆಗಿದೆ, ಅದನ್ನೇ ಖಂಡನೆ ಮಾಡಿರುವ ಕಾರಣ ಬಾಕಿ ಅದರ ಯಾವ ಮಕ್ಕಳು-ಮರಿ ಎಂದರೆ ವೇದ ಶಾಸ್ತ್ರಗಳಿವೆ ಎಲ್ಲವೂ ಖಂಡನೆಯಾಗಿ ಬಿಟ್ಟಿವೆ.

ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ ಆದರೂ ಸಹ ನಡೆಯುತ್ತಾ-ನಡೆಯುತ್ತಾ ಮಕ್ಕಳು ಮಾಯೆಯ ಪೆಟ್ಟನ್ನು ತಿನ್ನುತ್ತಿರುತ್ತಾರೆ, ಧಾರಣೆ ಮಾಡುವುದಿಲ್ಲ. ಇದು ಯುದ್ಧ ಸ್ಥಾನವಾಗಿದೆ. ನೀವು ಮಕ್ಕಳಾಗಿದ್ದೀರಿ, ಯಾರು ಬ್ರಾಹ್ಮಣರಾಗಿದ್ದೀರಿ. ಗೀತೆ ಮುಂತಾದುವುಗಳಲ್ಲಂತೂ ಇಂತಹ ಯಾವುದೇ ಮಾತುಗಳನ್ನು ಬರೆದಿಲ್ಲ. ಇದು ಬ್ರಹ್ಮಾರವರ ಮುಖವಂಶಾವಳಿಯಾಗಿದೆ, ಬ್ರಹ್ಮಾರವರ ಮೂಲಕ ಯಜ್ಞವು ರಚಿಸಲ್ಪಟ್ಟಿತು. ರುದ್ರ ಜ್ಞಾನ ಯಜ್ಞವಂತೂ ಅವಶ್ಯವಾಗಿದೆ ಮತ್ತೆ ಯುದ್ಧದ ಮೈದಾನವೆಲ್ಲಿಂದ ಬಂದಿತು? ರಾಜಸ್ವ ಅಶ್ವಮೇಧ ಯಜ್ಞವೆಂದು ಗಾಯನವಿದೆ. ಈ ರಥವನ್ನು ನಾವು ಬಲಿಹಾರಿ ಮಾಡುತ್ತೇವೆ. ಇದನ್ನು ಅವರು ದಕ್ಷಾ ಪ್ರಜಾಪತಿಯ ಯಜ್ಞವನ್ನು ರಚಿಸಿ ಕುದುರೆಯನ್ನು ಸ್ವಾಹಾ ಮಾಡುತ್ತಾರೆ. ಏನೆನೆಲ್ಲವನ್ನೂ ಬರೆದು ಬಿಟ್ಟಿದ್ದಾರೆ. ಇದು ನಿಮಗೆ ಗೊತ್ತಿದೆ - ಭಾರತದಲ್ಲಿ ಸ್ವರ್ಗವಿದ್ದಾಗ ಅವಶ್ಯವಾಗಿ ಕೆಲವರೇ ಇರುತ್ತಾರೆ. ದೇವಿ-ದೇವತೆಗಳು ಜಮುನಾ ನದಿಯ ತೀರದಲ್ಲಿ ಅವಶ್ಯವಾಗಿ ರಾಜ್ಯವಿರುವುದು. ಕೇವಲ ದೇವಿ-ದೇವತೆಗಳು ರಾಜ್ಯ ಮಾಡುತ್ತಾರೆ. ಅಲ್ಲಂತೂ ತಂಪಾದ ಗಾಳಿಗಾಗಿ ಕಾಶ್ಮೀರ, ಶಿಮ್ಲಾ ಮುಂತಾದ ಕಡೆ ಹೋಗಬೇಕಾಗುವಂತಹ ತಾಪವೇನೂ ಇರುವುದಿಲ್ಲ. ತತ್ವಗಳೂ ಸಹ ಸಂಪೂರ್ಣ ಸತೋಪ್ರಧಾನವಾಗಿ ಬಿಡುತ್ತವೆ. ಇದನ್ನೂ ಸಹ ತಿಳಿದುಕೊಳ್ಳುವವರೇ ತಿಳಿಯುತ್ತಾರೆ. ಸತ್ಯಯುಗಕ್ಕೆ ಸ್ವರ್ಗವೆಂತಲೂ, ಕಲಿಯುಗಕ್ಕೆ ನರಕವೆಂತಲೂ ಹೇಳುತ್ತಾರೆ. ದ್ವಾಪರಯುಗಕ್ಕೆ ಇಷ್ಟೊಂದು ನರಕವೆಂದು ಹೇಳುವುದಿಲ್ಲ. ತ್ರೇತಾಯುಗದಲ್ಲಿಯೂ ಸಹ ಎರಡು ಕಲೆಗಳು ಕಡಿಮೆಯಾಗಿ ಬಿಡುತ್ತವೆ. ಎಲ್ಲದಕ್ಕಿಂತ ಹೆಚ್ಚಿನ ಸುಖವು ಸ್ವರ್ಗದಲ್ಲಿರುತ್ತದೆ ಆದ ಕಾರಣ ಇಂತಹವರು ಸ್ವರ್ಗಕ್ಕೆ ಹೋದರೆಂದು ಹೇಳುತ್ತಾರೆ. ಆದರೆ ಸ್ವರ್ಗದ ಅರ್ಥವನ್ನೇ ತಿಳಿದುಕೊಂಡಿಲ್ಲ. ಸ್ವರ್ಗವಾಸಿಯಾದರೆಂದು ಹೇಳುತ್ತಾರೆಂದರೆ ಇಲ್ಲಿಯವರೆಗೆ ಅವಶ್ಯವಾಗಿ ನರಕದಲ್ಲಿದ್ದರಲ್ಲವೆ. ಪ್ರತಿಯೊಬ್ಬ ಮನುಷ್ಯರು ನರಕದಲ್ಲಿದ್ದಾರೆ. ಈಗ ತಂದೆಯು ನಿಮಗೆ ಬೇಹದ್ದಿನ ರಾಜ್ಯವನ್ನು ಕೊಡುತ್ತಾರೆ. ಅಲ್ಲಂತೂ ಎಲ್ಲವೂ ನಿಮ್ಮದಾಗಿರುವುದು. ಇಲ್ಲಿ ಪೃಥ್ವಿ ನಿಮ್ಮದು, ಆಕಾಶ ನಿಮ್ಮದು.... ನೀವು ಅಟಲ, ಅಖಂಡ, ಶಾಂತಿಮಯ ರಾಜ್ಯವನ್ನಾಳುತ್ತೀರಿ. ಅಲ್ಲಿ ದುಃಖದ ಹೆಸರೇ ಇರುವುದಿಲ್ಲ ಅಂದಮೇಲೆ ಅದಕ್ಕೋಸ್ಕರ ಎಷ್ಟೊಂದು ಪುರುಷಾರ್ಥ ಮಾಡಬೇಕು. ಮಕ್ಕಳ ಸ್ಥಿತಿ ಹೇಗಿದೆ! ಮಮ್ಮಾ-ಬಾಬಾ ಎಷ್ಟು ಒಳ್ಳೆಯ ಪುರುಷಾರ್ಥ ಮಾಡುತ್ತಾರೆ ಎಂಬುದನ್ನೂ ತಿಳಿದುಕೊಂಡಿದ್ದಾರೆ. ಅಂದಮೇಲೆ ನಾವೂ ಸಹ ಪುರುಷಾರ್ಥ ಮಾಡಿ ಆಸ್ತಿಯನ್ನೇಕೆ ತೆಗೆದುಕೊಳ್ಳಬಾರದು!

ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸುಸ್ತಾಗಬೇಡಿ ಶ್ರೀಮತದಂತೆ ನಡೆಯುತ್ತಾ ಇರಿ. ಶ್ರೀಮತವನ್ನೆಂದೂ ಮರೆಯಬಾರದು, ಇದರಲ್ಲಿ ಬಹಳ ಎಚ್ಚರಿಕೆ ಇರಬೇಕು. ಏನೇ ಮಾಡುತ್ತೀರೆಂದರೆ ಬಾಬಾ ನಾವು ಇದರಲ್ಲಿ ತಬ್ಬಿಬ್ಬಾಗುತ್ತೇವೆ, ಇದನ್ನು ಮಾಡುವುದರಲ್ಲಿ ನಮ್ಮ ಮೇಲೆ ಯಾವುದೇ ಪಾಪವಂತೂ ಆಗುವುದಿಲ್ಲವೆ ಎಂದು ಕೇಳಿ. ತಂದೆಯು ಎಂದೂ ಯಾರಿಂದಲೂ ತೆಗೆದುಕೊಳ್ಳುವುದಿಲ್ಲ. ಭಕ್ತಿಮಾರ್ಗದಲ್ಲಿಯೂ ಈಶ್ವರಾರ್ಥವಾಗಿ ದಾನ ಮಾಡುತ್ತಾರೆಂದರೆ ಅದಕ್ಕೆ ಪ್ರತಿಯಾಗಿ ನಂತರ ಪಡೆಯುತ್ತಾರೆ. ಶಿವ ತಂದೆಯು ತೆಗೆದುಕೊಂಡು ಏನು ಮಾಡುವರು, ಅವರು ಯಾವುದೇ ಮಹಲುಗಳಂತೂ ಮಾಡಬೇಕಾಗಿಲ್ಲ. ಎಲ್ಲವನ್ನೂ ಮಕ್ಕಳಿಗಾಗಿಯೇ ಮಾಡುತ್ತಾರೆ. ಮನೆಗಳನ್ನು ಕಟ್ಟಿಸಿದರೂ ಸಹ ಅಂತ್ಯದಲ್ಲಿ ನೀವು ಮಕ್ಕಳಿರುವುದಕ್ಕೋಸ್ಕರವೇ. ನಿಮ್ಮ ನೆನಪಾರ್ಥ ಮಂದಿರವಂತೂ ಇದೆ. ನೀವೂ ಇಲ್ಲಿ ಕುಳಿತಿದ್ದೀರಿ, ಯಾರು ಸೇವಾಧಾರಿ ಮಕ್ಕಳಿದ್ದಾರೆಯೋ ಅವರು ಮುಂದೆ ಹೋದಂತೆ ಬಹಳಷ್ಟು ಒಳ್ಳೆಯ ದೃಶ್ಯಗಳನ್ನು ನೋಡುತ್ತಾರೆ. ಇಲ್ಲಿ ಕುಳಿತು-ಕುಳಿತಿದ್ದಂತೆಯೇ ಸ್ವರ್ಗದಲ್ಲಿ ಪರ್ಯಟನೆ ಮಾಡುತ್ತಿರುತ್ತಾರೆ. ನಂತರ ಅಲ್ಲಿ ಹೋಗಿ ಮಹಲುಗಳನ್ನು ಮಾಡುತ್ತಾರೆ. ಮನೆಗಳನ್ನು ಕಟ್ಟುವುದರಲ್ಲಿಯೂ ಸ್ಪರ್ಧೆಯಾಗಿ ಬಿಟ್ಟಿದೆ. ಈ 100 ವರ್ಷಗಳಲ್ಲಿ ಎಷ್ಟೊಂದು ಮನೆಗಳನ್ನು ಕಟ್ಟಿದ್ದಾರೆ. ಭಾರತವನ್ನೇ ಸ್ವರ್ಗವನ್ನಾಗಿ ಮಾಡಿ ಬಿಟ್ಟಿದ್ದಾರೆ. ಅಂದಮೇಲೆ ಸತ್ಯಯುಗದಲ್ಲಿ 100 ವರ್ಷಗಳಲ್ಲಿ ಏನು ತಾನೇ ಆಗುವುದಿಲ್ಲ. ಈ ವಿಜ್ಞಾನವೆಲ್ಲವೂ ಅಲ್ಲಿ ನಿಮ್ಮ ಕೆಲಸಕ್ಕೆ ಬರುತ್ತದೆ. ವಿಜ್ಞಾನದ ಸುಖವೇ ಅಲ್ಲಿರುತ್ತದೆ. ಇಲ್ಲಂತೂ ದುಃಖವಿದೆ. ವಿಜ್ಞಾನಕ್ಕಾಗಿ ಎಷ್ಟೊಂದು ಪರಿಶ್ರಮ ಪಡುತ್ತಾರೆ. ನೀವು ಮಕ್ಕಳಿಗೆ ಗೊತ್ತಿದೆ - ಇವರು ಇಲ್ಲಿ ಕೇವಲ ತಮ್ಮ ದೊಡ್ಡಸ್ತಿಕೆಯನ್ನು ತೋರಿಸಿಕೊಳ್ಳುತ್ತಿದ್ದಾರೆ. ತಮ್ಮ ಅಲ್ಪಕಾಲದ ಕ್ಷಣ ಭಂಗುರ ಸುಖವಿದೆ. ಇದು ಮಾಯೆಯ ಅಂತ್ಯದ ಆಡಂಬರವಾಗಿದೆ. ಇಲ್ಲಿ ವಿಮಾನ, ರಾಕೆಟ್ ಇತ್ಯಾದಿಗಳಲ್ಲಿ ಈಗಷ್ಟೇ ಹೋಗುತ್ತಾರೆ. ಹಿಂದೆ ಇವೆಲ್ಲಾ ಸಾಧನಗಳಿರಲಿಲ್ಲ. ವಿದ್ಯುತ್ ಮುಂತಾದವುಗಳಿರಲಿಲ್ಲ. ಇದೆಲ್ಲವೂ ಮಾಯೆಯ ಸುಖವಾಗಿದೆ, ಮನುಷ್ಯರನ್ನು ಭ್ರಮೆಯಲ್ಲಿ ಮುಳುಗಿಸುತ್ತದೆ. ಮನುಷ್ಯರು ನಮಗೆ ಇದೇ ಸುಖವಾಗಿದೆ, ವಿಮಾನ ಮುಂತಾದವು ಸ್ವರ್ಗದಲ್ಲಿಯೂ ಇತ್ತು ಈಗಲೂ ಸ್ವರ್ಗವಾಗಿದೆ ಎಂದು ತಿಳಿಯುತ್ತಾರೆ. ಆದರೆ ಈಗ ಸ್ವರ್ಗಕ್ಕೋಸ್ಕರ ಈಗ ತಯಾರಿಯಾಗುತ್ತಿದೆ ಎಂಬುದನ್ನು ತಿಳಿಯುವುದಿಲ್ಲ. ನಮಗೋಸ್ಕರ ಹಣವಿದೆ, ಮಹಲುಗಳಿವೆ, ಸಾಕು ನಮಗೆ ಇಲ್ಲಿಯೇ ಸ್ವರ್ಗವಿದೆ ಎಂದು ಮನುಷ್ಯರು ತಿಳಿಯುತ್ತಾರೆ. ಇದಕ್ಕೆ ತಂದೆಯು ಹೇಳುತ್ತಾರೆ - ಒಳ್ಳೆಯದು ನಿಮ್ಮ ಅದೃಷ್ಟದಲ್ಲಿ ಇದೇ ಸ್ವರ್ಗವಾಗಿದೆ. ಪರಿಶ್ರಮ ಪಟ್ಟು ನಾವು ಸತ್ಯ-ಸತ್ಯ ಸ್ವರ್ಗದಲ್ಲಿ ಹೋಗಬೇಕಾಗಿದೆ, ಇದಕ್ಕೋಸ್ಕರ ನೀವು ಪುರುಷಾರ್ಥ ಮಾಡುತ್ತೀರಿ ಅಂದಮೇಲೆ ಪುರುಷಾರ್ಥದಲ್ಲಿ ಸಡಿಲವಾಗಬಾರದು. ಗೃಹಸ್ಥ ವ್ಯವಹಾರದಲ್ಲಿದ್ದು ಪುರುಷಾರ್ಥ ಮಾಡಬೇಕಾಗಿದೆ. ಸರ್ವೀಸ್ ಮಾಡಬೇಕಾಗಿದೆ. ತಾವೂ ಪವಿತ್ರರಾಗಿ ತಮ್ಮ ಮಿತ್ರ ಸಂಬಂಧಿ ಮುಂತಾದವರನ್ನು ಯೋಗ್ಯರನ್ನಾಗಿ ಮಾಡಿ, ಮಧುರ-ಮಧುರ ಮಾತುಗಳನ್ನು ಹೇಳಿ. ತಂದೆಯು ಇಬ್ಬರು ತಂದೆಯರ ವಿಷಯವನ್ನು ಬಹಳ ಚೆನ್ನಾಗಿ ತಿಳಿಸಿದ್ದಾರೆ. ತಂದೆಯಿಂದ ಆಸ್ತಿಯು ಸಿಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಪುರುಷಾರ್ಥದಲ್ಲೆಂದೂ ಸುಸ್ತಾಗಬಾರದು. ಬಹಳ ಎಚ್ಚರಿಕೆಯಿಂದ ಶ್ರೀಮತದಂತೆ ನಡೆಯುತ್ತಿರಬೇಕಾಗಿದೆ, ತಬ್ಬಿಬ್ಬಾಗಬಾರದಾಗಿದೆ.

2. ಯಾವುದೇ ಪಾಪ ಕರ್ಮವನ್ನು ಮಾಡಬಾರದು, ಸತ್ಯ-ಸತ್ಯವಾದ ಸ್ವರ್ಗದಲ್ಲಿ ಹೋಗುವುದಕ್ಕೋಸ್ಕರ ಪವಿತ್ರರಾಗಿ ಮತ್ತು ಪವಿತ್ರರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.

ವರದಾನ:
ಅನಾಸಕ್ತರಾಗಿ ಲೌಕಿಕದವರನ್ನು ಸಂತುಷ್ಠ ಮಾಡುತ್ತಿದ್ದರೂ ಈಶ್ವರೀಯ ಸಂಪಾದನೆ ಜಮಾ ಮಾಡಿಕೊಳ್ಳುವಂತಹ ರಹಸ್ಯಯುಕ್ತ ಭವ.

ಕೆಲವು ಮಕ್ಕಳು ಲೌಕಿಕ ಕಾರ್ಯ, ಲೌಕಿಕ ಪ್ರವೃತ್ತಿ, ಲೌಕಿಕ ಸಂಬಂಧ-ಸಂಪರ್ಕ ನಿಭಾಯಿಸುತ್ತಾ ತಮ್ಮ ವಿಶಾಲ ಬುದ್ಧಿಯಿಂದ ಎಲ್ಲರನ್ನೂ ಸಂತುಷ್ಠ ಸಹ ಮಾಡುತ್ತಾರೆ ಮತ್ತು ಈಶ್ವರೀಯ ಸಂಪಾದನೆಯ ರಹಸ್ಯವನ್ನು ತಿಳಿಯುತ್ತಾ ವಿಶೇಷ ಮುಡಿಪನ್ನೂ(ಭಾಗವನ್ನು) ಸಹ ತೆಗೆದಿಡುತ್ತಾರೆ. ಈ ರೀತಿ ಎಕಾನಮಿ ಮತ್ತು ಏಕ್ನಾಮಿಯವರು ಅನಾಸಕ್ತ ಮಕ್ಕಳಾಗಿದ್ದಾರೆ ಯಾರು ಸರ್ವ ಖಜಾನೆ, ಸಮಯ, ಶಕ್ತಿಗಳು ಮತ್ತು ಸ್ಥೂಲ ಧನವನ್ನು ಲೌಕಿಕದಿಂದ ಎಕಾನಮಿ ಮಾಡಿ ಅಲೌಕಿಕ ಕಾರ್ಯದಲ್ಲಿ ವಿಶಾಲ ಹೃದಯದಿಂದ ತೊಡಗಿಸುತ್ತ್ತಾರೆ. ಈ ರೀತಿ ಯುಕ್ತಿಯುಕ್ತ, ರಹಸ್ಯಯುಕ್ತ ಮಕ್ಕಳು ಮಹಿಮಾ ಯೋಗ್ಯರಾಗಿದ್ದಾರೆ.

ಸ್ಲೋಗನ್:
ಸ್ಮೃತಿ ಸ್ವರೂಪರಾಗಿ ಪ್ರತಿ ಕರ್ಮ ಮಾಡುವಂತಹವರೇ ಪ್ರಕಾಶ ಸ್ಥಂಭ(ಲೈಟ್ ಹೌಸ್) ಆಗುತ್ತಾರೆ.