21/10/18       Avyakt Bapdada      Kannada Murli      20.02.84      Om Shanti     Madhuban


“ ಒಂದು ಸರ್ವ ಶ್ರೇಷ್ಠ , ಮಹಾನ್ ಮತ್ತು ಸೌಭಾಗ್ಯದ ಗಳಿಗೆ ”

ಇಂದು ಭಾಗ್ಯವನ್ನು ರೂಪಿಸುವಂತಹ ತಂದೆಯು ಶ್ರೇಷ್ಠ ಭಾಗ್ಯಶಾಲಿಯಾದ ಸರ್ವ ಮಕ್ಕಳನ್ನು ನೋಡುತ್ತಾ ಹರ್ಷಿತವಾಗುತ್ತಿದ್ದಾರೆ. ಪ್ರತಿಯೊಂದು ಮಗುವು ಕಲ್ಪದ ಮೊದಲಿನಂತೆ ಅದೃಷ್ಟವನ್ನು ಬೆಳಗಿಸಿಕೊಂಡು ಹೇಗೆ ತಲುಪಿ ಬಿಟ್ಟಿದ್ದಾರೆ! ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೀರಿ. ಗುರುತಿಸುವುದು ಅರ್ಥಾತ್ ಅದೃಷ್ಟವು ಬೆಳಗುವುದು. ವಿಶೇಷವಾಗಿ ಡಬಲ್ ವಿದೇಶಿ ಮಕ್ಕಳ ಸಂಘಟನೆಯು ವರದಾನ ಭೂಮಿಯಲ್ಲಾಗುತ್ತಿದೆ. ಈ ಸಂಘಟನೆಯು ಅದೃಷ್ಟವಂತ ಮಕ್ಕಳ ಸಂಘಟನೆಯಾಗಿದೆ. ಎಲ್ಲದಕ್ಕಿಂತ ಮೊದಲು ಅದೃಷ್ಟವು ತೆರೆಯುವ ಶ್ರೇಷ್ಠ ಸಮಯ ಅಥವಾ ಶ್ರೇಷ್ಠ ಗಳಿಗೆಗಳು ಅದೇ ಆಗಿದೆ, ಯಾವಾಗ ಮಕ್ಕಳು ಗುರುತಿಸಿದರು, ಒಪ್ಪಿದರು ಮತ್ತು ನನ್ನ ಬಾಬಾ ಎಂದು ಹೇಳಿ ಬಿಟ್ಟರು. ಆ ಗಳಿಗೆಯಲ್ಲಿಯೇ ಇಡೀ ಕಲ್ಪದಲ್ಲಿರುವ ಶ್ರೇಷ್ಠ ಹಾಗೂ ಸೌಭಾಗ್ಯದ ಗಳಿಗೆಗಳಾಗಿವೆ. ಎಲ್ಲರಿಗೂ ಆ ಗಳಿಗೆಗಳ ಸ್ಮೃತಿಯು ಈಗಲೂ ಬರುತ್ತದೆಯಲ್ಲವೆ. ಆಗುವುದು, ಸಿಗುವುದು, ಅಧಿಕಾರವನ್ನು ಪಡೆಯುವುದು - ಇದಂತು ಇಡೀ ಸಂಗಮಯುಗವೇ ಅನುಭವ ಮಾಡುತ್ತಿರುತ್ತೀರಿ. ಆದರೆ ಆ ಯಾವ ಗಳಿಗೆಯಲ್ಲಿ ಅನಾಥರಿಂದ ಸನಾಥರಾದಿರಿ, ಎಂತಹವರಿಂದ ಎಂತಹವರಾದಿರಿ! ಅಗಲಿರುವವರು ಮತ್ತೆ ಮಿಲನವಾದಿರಿ. ಅಪ್ರಾಪ್ತ ಆತ್ಮವು ಪ್ರಾಪ್ತಿಯ ದಾತಾನವರಾದಿರಿ, ಆ ಪರಿವರ್ತನೆಯ ಮೊದಲ ಗಳಿಗೆ, ಅದೃಷ್ಟವು ಬೆಳಗುವ ಗಳಿಗೆಯು ಎಷ್ಟೊಂದು ಶ್ರೇಷ್ಠ ಮಹಾನ್ ಆಗಿದೆ! ಸ್ವರ್ಗದ ಜೀವನಕ್ಕಿಂತಲೂ ಆ ಮೊದಲ ಗಳಿಗೆಯು, ಯಾವಾಗ ತಂದೆಯವರಾಗಿ ಬಿಟ್ಟಿರಿ ಅದು ಮಹಾನ್ ಆಗಿದೆ. ಬಂಧನದಿಂದ ಸ್ವತಂತ್ರರಾಗಿ ಮೇಲೆ ಹಾರ ತೊಡಗಿದಿರಿ. ಕಲ್ಲಿನಿಂದ ವಜ್ರವಾಗಿ ಬಿಟ್ಟಿರಿ. ಅನೇಕ ಬಂಧನಗಳಿಂದ ಮುಕ್ತರಾಗಿ ಸ್ವದರ್ಶನ ಚಕ್ರಧಾರಿಯಾಗಿ ಬಿಟ್ಟಿರಿ. ಆ ಗಳಿಗೆಯು ನೆನಪಿದೆಯೇ? ಆ ಬೃಹಸ್ಪತಿ ದೆಶೆಯ ಗಳಿಗೆ, ಯಾವುದರಲ್ಲಿ ತನು-ಮನ-ಧನ-ಜನ ಸರ್ವ ಪ್ರಾಪ್ತಿಯ ಅದೃಷ್ಟವು ತುಂಬಿದೆ. ಇಂತಹ ದೆಶೆ, ಇಂತಹ ರೇಖೆಯಿರುವ ವೇಳೆಯಲ್ಲಿ ಶ್ರೇಷ್ಠ ಅದೃಷ್ಟವಂತರಾದಿರಿ. ಮೂರನೇ ನೇತ್ರವು ತೆರೆಯಿತು ಮತ್ತು ತಂದೆಯನ್ನು ನೋಡಿದಿರಿ. ಎಲ್ಲರೂ ಅನುಭವಿಯಾಗಿದ್ದೀರಲ್ಲವೆ. ಹೃದಯದ ಹಾಡನ್ನು ಹಾಡುತ್ತೀರಲ್ಲವೆ - ವಾಹ್! ಆ ಶ್ರೇಷ್ಠ ಗಳಿಗೆಯೇ ವಾಹ್! ಕಮಾಲಂತು ಆ ಗಳಿಗೆಯದಲ್ಲವೆ! ಬಾಪ್ದಾದಾರವರು ಇಂತಹ ಮಹಾನ್ ವೇಳೆಯಲ್ಲಿ, ಅದೃಷ್ಟವಂತ ವೇಳೆಯಲ್ಲಿ ಮಕ್ಕಳನ್ನು ನೋಡಿ-ನೋಡಿ ಖುಷಿಯಾಗುತ್ತಿದ್ದಾರೆ.

ಬ್ರಹ್ಮಾ ತಂದೆಯವರೂ ಸಹ ಹೇಳಿದರು - ವಾಹ್ ನನ್ನ ಆದಿ ದೇವನ ಆದಿ ಕಾಲದ ರಾಜ್ಯ ಭಾಗ್ಯದ ಅಧಿಕಾರಿ ಮಕ್ಕಳೇ! ಶಿವ ತಂದೆಯು ಹೇಳಿದರು - ವಾಹ್! ನನ್ನ ಅನಾದಿ ಕಾಲದ ಅನಾದಿ-ಅವಿನಾಶಿ ಆಧಿಕಾರವನ್ನು ಪಡೆಯುವಂತಹ ಮಕ್ಕಳೇ! ಬಾಪ್ ಮತ್ತು ದಾದಾ ಇಬ್ಬರ ಅಧಿಕಾರಿ, ಅಗಲಿ ಮರಳಿ ಸಿಕ್ಕಿರುವ, ಸ್ನೇಹಿ, ಜೊತೆಗಾರ ಮಕ್ಕಳಾಗಿದ್ದೀರಿ. ಬಾಪ್ದಾದಾರವರಿಗೆ ನಶೆಯಿದೆ- ವಿಶ್ವದಲ್ಲಿ ಎಲ್ಲಾ ಆತ್ಮರು ಜೀವನದ ಜೊತೆಗಾರರು, ಸತ್ಯ ಜೊತೆಗಾರರು, ಪ್ರೀತಿಯ ರೀತಿಯನ್ನು ನಿಭಾಯಿಸುವಂತಹ ಜೊತೆಗಾರರು, ಬಹಳ ಹುಡುಕಿದ ನಂತರ ಪಡೆಯುತ್ತಾರೆ, ಆದರೂ ಸಂತುಷ್ಟರಾಗುವುದಿಲ್ಲ. ಇಂತಹ ಜೊತೆಗಾರನು ಒಬ್ಬರೂ ಸಿಗುವುದಿಲ್ಲ ಮತ್ತು ಬಾಪ್ದಾದಾರವರಿಗೆ ಜೀವನದ ಜೊತೆಗಾರರು ಎಷ್ಟೊಂದು ಸಿಕ್ಕಿದ್ದಾರೆ! ಮತ್ತು ಒಬ್ಬೊಬ್ಬರು, ಒಬ್ಬರಿಗಿಂತ ಒಬ್ಬರು ಮಹಾನ್ ಆಗಿದ್ದಾರೆ. ಸತ್ಯ ಜೊತೆಗಾರರಾಗಿದ್ದೀರಿ ಅಲ್ಲವೆ! ಇಂತಹ ಸತ್ಯ ಜೊತೆಗಾರರಾಗಿದ್ದೀರಿ, ಪ್ರಾಣ ಹೋಗಲಿ ಆದರೆ ಪ್ರೀತಿಯ ರೀತಿಯು ಹೋಗಬಾರದು. ಇಂತಹ ಸತ್ಯ ಜೊತೆಗಾರರು ಜೀವನದ ಜೊತೆಗಾರರಾಗಿದ್ದೀರಿ.

ಬಾಪ್ದಾದಾರವರ ಜೀವನವೇನಾಗಿದೆ, ಗೊತ್ತಿದೆಯೇ? ವಿಶ್ವ ಸೇವೆಯೇ ಬಾಪ್ದಾದಾರವರ ಜೀವನವಾಗಿದೆ. ಇಂತಹ ಜೀವನದ ಜೊತೆಗಾರರು ತಾವೆಲ್ಲರೂ ಆಗಿದ್ದೀರಲ್ಲವೆ, ಆದ್ದರಿಂದ ಸತ್ಯ ಜೀವನದ ಜೊತೆಗಾರರು, ಜೊತೆಯನ್ನು ನಿಭಾಯಿಸುವವರು, ಬಾಪ್ದಾದಾರವರಿಗೆ ಎಷ್ಟೊಂದು ಮಕ್ಕಳಿದ್ದಾರೆ! ಹಗಲು-ರಾತ್ರಿ ಯಾವುದರಲ್ಲಿ ಬ್ಯುಸಿಯಿರುತ್ತೀರಿ? ಜೊತೆಯನ್ನು ನಿಭಾಯಿಸುವದರಲ್ಲಿ ಅಲ್ಲವೆ. ಎಲ್ಲರ ಜೀವನದ ಜೊತೆಗಾರ ಮಕ್ಕಳಲ್ಲಿ ಸದಾ ಯಾವ ಸಂಕಲ್ಪವಿರುತ್ತದೆ? ಸೇವೆಯ ನಗಾರಿಯನ್ನು ಮೊಳಗಿಸುವುದೇ. ಈಗಲೂ ಎಲ್ಲರೂ ಪ್ರೀತಿಯಲ್ಲಿ ಮಗ್ನರಾಗಿದ್ದೀರಿ. ಸೇವೆಯ ಜೊತೆಗಾರರಾಗಿ ಸೇವೆಯ ಪ್ರತ್ಯಕ್ಷ ಪ್ರಮಾಣವನ್ನು ತೆಗೆದುಕೊಂಡು ಬಂದಿದ್ದೀರಲ್ಲವೆ. ಲಕ್ಷ್ಯದನುಸಾರವಾಗಿ ಸಫಲತೆಯನ್ನು ಪಡೆದುಕೊಂಡು ಹೋಗುತ್ತಿದ್ದೀರಿ. ಎಷ್ಟು ಮಾಡಿದಿರಿ, ಅದು ಡ್ರಾಮಾನುಸಾರವಾಗಿ ಬಹಳ ಚೆನ್ನಾಗಿ ಮಾಡಿದಿರಿ, ಇನ್ನೂ ಮುಂದುವರೆಯಬೇಕಲ್ಲವೆ. ಈ ವರ್ಷದಲ್ಲಿ ಧ್ವನಿಯನ್ನು ಮೊಳಗಿಸಲಾಯಿತು, ಆದರೆ ಈಗ ಕೆಲ ಕೆಲವು ಕಡೆಯಿಂದ ಮೈಕ್ಆತ್ಮರನ್ನು ಕರೆ ತರಲಾಯಿತು. ನಾಲ್ಕೂ ಕಡೆಯಲ್ಲಿನ ಮೈಕ್ಆತ್ಮರು ಬಂದಿಲ್ಲ. ಆದ್ದರಿಂದ ನಿಮಿತ್ತವಾಗಿ ಧ್ವನಿಯಂತು ಹರಡಿತು. ಆದರೆ ನಾಲ್ಕೂ ಕಡೆಯಲ್ಲಿ ನಿಮಿತ್ತರಾಗಿರುವ ಧ್ವನಿಯನ್ನು ಮೊಳಗಿಸುವ ದೊಡ್ಡ ಮೈಕ್ ಎಂದಾದರೂ ಹೇಳಿರಿ ಅಥವಾ ಸೇವೆಗೆ ನಿಮಿತ್ತವಾಗಿರುವ ಆತ್ಮರೆಂದಾದರೂ ಹೇಳಿರಿ, ಅವರು ಇಲ್ಲಿಗೆ ಬಂದರು ಮತ್ತು ಪ್ರತಿಯೊಬ್ಬರೂ ತಮ್ಮನ್ನು ತಮ್ಮ ಕಡೆಯ ಸಂದೇಶ ವಾಹಕರೆಂದು ತಿಳಿದು ಹೋಗಲಿ. ಈಗ ಯಾವ ಕಡೆಯಿಂದ ಬಂದರು, ಆ ಕಡೆಯ ಸಂದೇಶವಾಹಕರಾಗಲಿ. ಆದರೆ ನಾಲ್ಕೂ ಕಡೆಯಲ್ಲಿನ ಮೈಕ್ ಬರಲಿ ಮತ್ತು ಸಂದೇಶವಾಹಕರಾಗಿ ಹೋಗಲಿ. ನಾಲ್ಕೂ ಕಡೆಯಲ್ಲಿನ ಪ್ರತಿಯೊಂದು ಮೂಲೆಯಲ್ಲಿಯೂ ಸರ್ವರಿಗೆ ಈ ಸಂದೇಶವು ಸಿಕ್ಕಿ ಬಿಡುತ್ತದೆಯೆಂದರೆ, ಒಂದೇ ಸಮಯದಲ್ಲಿ ನಾಲ್ಕೂ ಕಡೆಯಲ್ಲಿಯೂ ಧ್ವನಿಯು ಹೊರಡುತ್ತದೆ. ಇದಕ್ಕೆ ಹೇಳಲಾಗುತ್ತದೆ- ದೊಡ್ಡ ನಗಾರಿಯು ಮೊಳಗುವುದು. ನಾಲ್ಕೂ ಕಡೆಯಲ್ಲಿ ಒಂದು ನಗಾರಿಯು ಮೊಳಬೇಕು - ಒಂದೇ ಆಗಿದೆ, ಒಂದಾಗಿದೆ. ಆಗಲೇ ಪ್ರತ್ಯಕ್ಷತೆಯ ನಗಾರಿಯೆಂದು ಹೇಳಲಾಗುತ್ತದೆ.

ಈಗ ಪ್ರತಿಯೊಂದು ದೇಶದ ಬ್ಯಾಂಡ್ ಮೊಳಗಿದೆ. ನಗಾರಿಯು ಈಗ ಮೊಳಗಬೇಕಾಗಿದೆ. ಬ್ಯಾಂಡ್ನ್ನಂತು ಚೆನ್ನಾಗಿ ಮೊಳಗಿಸಿದಿರಿ. ಆದ್ದರಿಂದ ಬಾಪ್ದಾದಾರವರು ಭಿನ್ನ-ಭಿನ್ನ ದೇಶದಲ್ಲಿ ನಿಮಿತ್ತರಾಗಿರುವ ಆತ್ಮರ ಮೂಲಕ ಅನೇಕ ಪ್ರಕಾರ ಬ್ಯಾಂಡುಗಳನ್ನು ಕೇಳಿ ಮತ್ತು ನೋಡುತ್ತಾ ಖುಷಿಯಾಗುತ್ತಿದ್ದಾರೆ. ಭಾರತದ ಬ್ಯಾಂಡನ್ನೂ ಕೇಳಲಾಯಿತು. ಬ್ಯಾಂಡ್ನ ಧ್ವನಿ ಮತ್ತು ನಗಾರಿಯ ಧ್ವನಿಯಲ್ಲಿಯೂ ವ್ಯತ್ಯಾಸವಿದೆ. ಮಂದಿರಗಳಲ್ಲಿ ಬ್ಯಾಂಡ್ಗೆ ಬದಲಾಗಿ ನಗಾರಿಯನ್ನು ಮೊಳಗಿಸುತ್ತಾರೆ. ಈಗ ತಿಳಿಯಿತೆ - ಮುಂದೇನು ಮಾಡಬೇಕಾಗಿದೆ? ಸಂಘಟನೆಯ ರೂಪದಲ್ಲಿ ಧ್ವನಿ, ಮೊಳಗುವ ಧ್ವನಿಯಾಗುತ್ತದೆ. ಈಗಲೂ ಕೇವಲ ಒಂದು ಹಾಂಜಿ ಎಂದು ಹೇಳುವುದು ಮತ್ತು ಎಲ್ಲರೂ ಸೇರಿಕೊಂಡು ಹಾಂಜಿ ಎಂದು ಹೇಳುತ್ತಾರೆಂದರೆ ವ್ಯತ್ಯಾಸವಾಯಿತಲ್ಲವೆ. ಒಂದು ಆಗಿದೆ, ಒಂದೇ ಆಗಿದೆ, ಇದೊಂದೇ ಆಗಿದೆ - ಈ ಸ್ಪಷ್ಟವಾದ ಧ್ವನಿಯು ನಾಲ್ಕೂ ಕಡೆಯಿಂದಲೂ ಒಂದೇ ಸಮಯದಲ್ಲಿ ಧ್ವನಿಯು ಬರಲಿ. ಟಿ.ವಿ.,ಯಲ್ಲಿ ನೋಡಿದರೂ, ರೇಡಿಯೋದಲ್ಲಿ ನೋಡಿದರೂ, ವಾರ್ತಾ ಪತ್ರಿಕೆಯಲ್ಲಿ ನೋಡಿದರೂ, ಮುಖದಲ್ಲಿ ನೋಡಿದರೂ ಇದೇ ಒಂದು ಧ್ವನಿಯು ಮೊಳಗಲಿ. ಅಂತರರಾಷ್ಟ್ರೀಯ ಧ್ವನಿಯಾಗಲಿ. ಇದಕ್ಕಾಗಿಯೇ ಬಾಪ್ದಾದಾರವರಿಗೆ ಜೀವನದ ಜೊತೆಗಾರರನ್ನು ನೋಡುತ್ತಾ ಖುಷಿಯಾಗುತ್ತಿದೆ. ಎಷ್ಟೊಂದು ಮಂದಿ ಜೀವನದ ಜೊತೆಗಾರರು ಮತ್ತು ಒಬ್ಬೊಬ್ಬರೂ ಮಹಾನ್, ಅಂದಾಗ ಸರ್ವ ಕಾರ್ಯಗಳು ಆಗಿಯೇ ಇದೆ. ಕೇವಲ ತಂದೆಯು ನಿಮಿತ್ತರಾಗಿದ್ದು ಶ್ರೇಷ್ಠ ಕರ್ಮದ ಪ್ರಾಲಬ್ಧವನ್ನು ರೂಪಿಸುತ್ತಿದ್ದಾರೆ. ಒಳ್ಳೆಯದು.

ಈಗಂತು ಮಿಲನದ ಸೀಜನ್ ಆಗಿದೆ. ಎಲ್ಲರಿಗಿಂತಲೂ ಚಿಕ್ಕವರು ಮತ್ತು ಅಗಲಿ ಮರಳಿ ಸಿಕ್ಕಿರುವ ಪೋಲ್ಯಾಂಡ್ನ ಮಕ್ಕಳಾಗಿದ್ದೀರಿ. ಚಿಕ್ಕ ಮಕ್ಕಳು ಸದಾ ಪ್ರಿಯವಾಗುತ್ತಾರೆ. ಪೋಲ್ಯಾಂಡ್ನವರಿಗೆ ಈ ನಶೆಯಿದೆಯಲ್ಲವೆ - ನಾವು ಎಲ್ಲರಿಗಿಂತಲೂ ಬಹಳ ಅಗಲಿ ಮರಳಿ ಸಿಕ್ಕಿರುವವರಾಗಿದ್ದೇವೆ. ಸರ್ವ ಸಮಸ್ಯೆಗಳನ್ನು ಪಾರು ಮಾಡುತ್ತಿದ್ದರೂ ಸಹ ಇಲ್ಲಿಗೆ ತಲುಪಿ ಬಿಟ್ಟಿರಲ್ಲವೆ! ಇದಕ್ಕೆ ಲಗನ್ ಎಂದು ಹೇಳಲಾಗುತ್ತದೆ. ಲಗನ್ ವಿಘ್ನವನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಬಾಪ್ದಾದಾರವರಿಗೂ ಮತ್ತು ಪರಿವಾರದವರಿಗೂ ಸಹ ಪ್ರಿಯರಾಗಿದ್ದೀರಿ. ಪೋಲ್ಯಾಂಡ್ ಮತ್ತು ಪೋರ್ಚುಗೀಸ್ ಎರಡೂ ದೇಶದವರು ಲಗನ್ ಇರುವವರಾಗಿದ್ದಾರೆ. ಭಾಷೆಯನ್ನೂ ನೋಡಲಿಲ್ಲ, ಪೈಸೆಯನ್ನೂ ನೋಡಲಿಲ್ಲ ಆದರೆ ಲಗನ್ ಹಾರಿಸಿ ಬಿಟ್ಟಿತು. ಎಲ್ಲಿ ಸ್ನೇಹವಿದೆ ಅಲ್ಲಿ ಸಹಯೋಗವು ಅವಶ್ಯವಾಗಿ ಪ್ರಾಪ್ತಿಯಾಗುತ್ತದೆ. ಅಸಂಭವದಿಂದ ಸಂಭವವಾಗಿ ಬಿಡುತ್ತದೆ. ಅಂದಮೇಲೆ ಬಾಪ್ದಾದಾರವರು ಇಂತಹ ಮಧುರ ಮಕ್ಕಳ ಸ್ನೇಹವನ್ನು ನೋಡುತ್ತಾ ಹರ್ಷಿತವಾಗುತ್ತಾರೆ ಮತ್ತು ಲಗನ್ನಿನಿಂದ ಸೇವೆಯನ್ನು ಮಾಡುವವರು ನಿಮಿತ್ತರಾಗಿ, ಮಕ್ಕಳಿಗೂ ಅವಕಾಶವನ್ನು ಕೊಡುತ್ತಾರೆ. ಬಹಳ ಚೆನ್ನಾಗಿ ಪ್ರೀತಿಯಿಂದ ಪರಿಶ್ರಮ ಪಡುತ್ತಾರೆ.

ಹಾಗೆ ನೋಡಿದರೆ ಈ ವರ್ಷದಲ್ಲಿ ಎಲ್ಲರೂ ಒಳ್ಳೆಯ ಗ್ರೂಪ್ನ್ನು ಕರೆ ತಂದಿದ್ದಾರೆ. ಆದರೆ ಈ ದೇಶಗಳದೂ ವಿಶೇಷತೆಯಿದೆ, ಆದ್ದರಿಂದ ಬಾಪ್ದಾದಾರವರು ವಿಶೇಷತೆಯನ್ನು ನೋಡುತ್ತಿದ್ದಾರೆ. ಎಲ್ಲರೂ ತಮ್ಮ ತಮ್ಮ ಸ್ಥಾನಗಳಲ್ಲಿ ಬಹಳ ಒಳ್ಳೆಯ ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ಆದ್ದರಿಂದ ಸ್ಥಾನಗಳ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಪ್ರತೀ ಸ್ಥಾನದ ವಿಶೇಷತೆಯು ತನ್ನ-ತನ್ನದಾಗಿದೆ. ಮಧುಬನದವರೆಗೂ ತಲುಪುವುದು, ಇದೇ ಸೇವೆಯ ವಿಶೇಷತೆಯಾಗಿದೆ. ನಾಲ್ಕೂ ಕಡೆಯಲ್ಲಿ ಯಾರೆಲ್ಲರೂ ನಿಮಿತ್ತ ಮಕ್ಕಳಿದ್ದಾರೆ, ಅವರಿಗೆ ಬಾಪ್ದಾದಾರವರು ವಿಶೇಷ ಸ್ನೇಹದ ಪುಷ್ಪವನ್ನು ಕೊಡುತ್ತಿದ್ದಾರೆ. ನಾಲ್ಕೂ ಕಡೆಯಲ್ಲಿ ಎಕಾನಮಿಯಲ್ಲಿ ಹೆಚ್ಚು ಕಡಿಮೆಯಾಗುತ್ತಿದ್ದರೂ ಇಷ್ಟೂ ಆತ್ಮರನ್ನು ಹಾರಿಸಿಕೊಂಡು ಕರೆದುಕೊಂಡು ಬಂದಿದ್ದಾರೆ. ಇದೇ ಪ್ರೀತಿಯ ಜೊತೆಗೆ ಪರಿಶ್ರಮ ಪಟ್ಟಿರುವ ಚಿಹ್ನೆಯಾಗಿದೆ. ಇದು ಸಫಲತೆಯ ಚಿಹ್ನೆಯಾಗಿದೆ ಆದ್ದರಿಂದ ಪ್ರತಿಯೊಬ್ಬರ ಹೆಸರಿನ ಸಹಿತವಾಗಿ ಸ್ನೇಹದ ಪುಷ್ಪಗಳನ್ನು ಸ್ವೀಕಾರ ಮಾಡಿರಿ. ಯಾರೆಲ್ಲಾ ಬಂದಿಲ್ಲ ಅವರುಗಳ ನೆನಪಿನ ಪತ್ರಗಳೂ ಸಹ ಬಹಳಷ್ಟು ಮಾಲೆಗಳನ್ನು ತಂದಿದ್ದಾರೆ. ಅಂದಮೇಲೆ ಬಾಪ್ದಾದಾರವರು ಆಕಾರ ರೂಪದಿಂದ ತಲುಪದೇ ಇರುವಂತಹ ಮಕ್ಕಳಿಗೂ ಸಹ ಸ್ನೇಹ ತುಂಬಿರುವ ನೆನಪು-ಪ್ರೀತಿಗಳನ್ನು ಕೊಡುತ್ತಿದ್ದಾರೆ. ನಾಲ್ಕೂ ಕಡೆಯಿಂದ ಬಂದಿರುವಂತಹ ಮಕ್ಕಳ ನೆನಪಿನ ಪ್ರತ್ಯುತ್ತರವನ್ನು ಕೊಡುತ್ತಿದ್ದಾರೆ. ಎಲ್ಲರೂ ಸ್ನೇಹಿಯಾಗಿದ್ದೀರಿ. ಬಾಪ್ದಾದಾರ್ವರ ಜೀವನದ ಜೊತೆಗಾರರಾಗಿದ್ದೀರಿ, ಸದಾ ಜೊತೆಯನ್ನು ನಿಭಾಯಿಸುವಂತಹ ಸಮೀಪ ರತ್ನವಾಗಿದ್ದೀರಿ, ಆದ್ದರಿಂದ ಎಲ್ಲರ ನೆನಪಿನ ಪತ್ರಗಳಿಗಿಂತ ಮೊದಲು, ಸಂದೇಶಕ್ಕೂ ಮೊದಲು ಬಾಪ್ದಾದಾರವರ ಬಳಿಗೆ ತಲುಪಿ ಬಿಟ್ಟಿರಿ ಮತ್ತು ತಲುಪುತ್ತಿರುತ್ತೀರಿ. ಎಲ್ಲಾ ಮಕ್ಕಳು ಈಗ ಇದೇ ಸೇವೆಯನ್ನು ಮಾಡಿರಿ. ಬಾಬಾರವರ ಮೂಲಕ ಸಿಕ್ಕಿರುವ ಶಾಂತಿ ಮತ್ತು ಖುಷಿಯ ಖಜಾನೆಯನ್ನು ಸರ್ವ ಆತ್ಮರಿಗೂ ಚೆನ್ನಾಗಿ ಹಂಚಿರಿ. ಸರ್ವ ಆತ್ಮರಿಗೂ ಇದೇ ಅವಶ್ಯಕತೆಯಿದೆ. ಸತ್ಯ ಖುಷಿ ಮತ್ತು ಸತ್ಯ ಶಾಂತಿಯ ಅವಶ್ಯಕತೆಯಿದೆ. ಖುಷಿಗಾಗಿ ಎಷ್ಟೊಂದು ಸಮಯ, ಧನ ಮತ್ತು ಶಾರೀರಿಕ ಶಕ್ತಿಯನ್ನೂ ಸಮಾಪ್ತಿ ಮಾಡಿ ಬಿಡುತ್ತದೆ. ಕಳೆದುಕೊಂಡು ಬಿಡುತ್ತಾರೆ. ಅವರನ್ನೀಗ ಹ್ಯಾಪಿಯನ್ನಾಗಿ ಮಾಡಿರಿ. ಸರ್ವರ ಅವಶ್ಯಕತೆಗಳನ್ನು ಪೂರ್ಣಗೊಳಿಸುವವರು ಅನ್ನಪೂರ್ಣೆಯ ಭಂಡಾರವಾಗಿರಿ. ಇದೇ ಸಂದೇಶವನ್ನು ವಿದೇಶದ ಸರ್ವ ಮಕ್ಕಳಿಗೂ ಕಳುಹಿಸಿ ಕೊಡಿ. ಎಲ್ಲಾ ಮಕ್ಕಳಿಗೂ ಸಂದೇಶವನ್ನು ಕೊಡುತ್ತಿದ್ದೇವೆ. ಕೆಲವು ಇಂತಹ ಮಕ್ಕಳೂ ಇದ್ದಾರೆ, ಅವರು ನಡೆಯುತ್ತಾ-ನಡೆಯುತ್ತಾ ಸ್ವಲ್ಪ ಹುಡುಗಾಟಿಕೆಯ ಕಾರಣದಿಂದ ತೀವ್ರ ಪುರುಷಾರ್ಥಿಯಿಂದ ಡೀಲಾ ಪುರುಷಾರ್ಥಿಯಾಗಿ ಬಿಡುತ್ತಾರೆ. ಮತ್ತು ಕೆಲವರು ಮಾಯೆಯ ಸ್ವಲ್ಪ ಸಮಯದ ಬಂಧನದಲ್ಲಿಯೂ ಬಂದು ಬಿಡುತ್ತಾರೆ. ಮತ್ತೆ ಯಾವಾಗ ಸಿಕ್ಕಿಕೊಂಡು ಬಿಡುತ್ತಾರೆ ಆಗ ಪಶ್ಚಾತ್ತಾಪದಲ್ಲಿ ಬರುತ್ತಾರೆ. ಮೊದಲು ಮಾಯೆಯ ಆಕರ್ಷಣೆಯ ಕಾರಣದಿಂದ ಬಂಧನವೆನಿಸುವುದಿಲ್ಲ ಆದರೆ ಆರಾಮವೆನಿಸುತ್ತದೆ. ನಂತರ ಯಾವಾಗ ಬಂಧನದಲ್ಲಿ ಸಿಕ್ಕಿಕೊಳ್ಳುತ್ತಾರೆ ಆಗ ಜಾಗರೂಕತೆಯಲ್ಲಿ ಬರುತ್ತಾರೆ ಮತ್ತು ಯಾವಾಗ ಜಾಗೃತರಾಗುತ್ತಾರೆ ಆಗ ಹೇಳುತ್ತಾರೆ - ಬಾಬಾ, ಬಾಬಾ ಏನು ಮಾಡಲಿ. ಹೀಗೆ ಬಂಧನದಲ್ಲಿ ವಶರಾಗುವಂತಹ ಮಕ್ಕಳ ಪತ್ರಗಳೂ ಸಹ ಬಹಳಷ್ಟು ಬರುತ್ತವೆ. ಇಂತಹ ಮಕ್ಕಳಿಗೂ ಸಹ ಬಾಪ್ದಾದಾರವರು ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ ಮತ್ತು ಮತ್ತೆ ಇದೇ ನೆನಪನ್ನು ತರಿಸುತ್ತಿದ್ದಾರೆ. ಹೇಗೆ ಭಾರತದಲ್ಲಿ ನಾಣ್ನುಡಿಯಿದೆ - ರಾತ್ರಿಯಲ್ಲಿ ಮರೆಯಬಹುದು, ಒಂದುವೇಳೆ ಹಗಲಿನಲ್ಲಿ ಮನೆಗೆ ಬಂದು ಬಿಡುತ್ತಾರೆಂದರೆ ಮರೆತೆವೆಂದು ಹೇಳಲಾಗುವುದಿಲ್ಲ. ಹೀಗೆ ಮತ್ತೆ ಜಾಗೃತಿಯು ಬಂದು ಬಿಟ್ಟಿತೆಂದರೆ, ಕಳೆದದ್ದು ಕಳೆದು ಹೋಯಿತು. ಮತ್ತೆ ಹೊಸ ಉಮ್ಮಂಗ, ಹೊಸ ಉತ್ಸಾಹ ಹೊಸ ಜೀವನದ ಅನುಭವ ಮಾಡುತ್ತಾ ಮುಂದುವರೆಯಬಹುದು.

ಬಾಪ್ದಾದಾರವರೂ ಸಹ ಮೂರು ಬಾರಿ ಕ್ಷಮಿಸುತ್ತಾರೆ. ಮೂರು ಬಾರಿಯಾದ ನಂತರವೂ ಚಾನ್ಸ್ ಕೊಡುತ್ತಾರೆ. ಆದ್ದರಿಂದ ಯಾವುದೇ ಸಂಕೋಚ ಪಡಬೇಡಿ. ಸಂಕೋಚವನ್ನು ಬಿಟ್ಟು ಸ್ನೇಹದಲ್ಲಿ ಬಂದು ಬಿಡುತ್ತೀರೆಂದರೆ, ಪುನಃ ತಮ್ಮ ಉನ್ನತಿಯನ್ನು ಮಾಡಿಕೊಳ್ಳಬಹುದು. ಇಂತಹ ಮಕ್ಕಳಿಗೂ ಸಹ ವಿಶೇಷವಾದ ಸಂದೇಶವನ್ನು ಕೊಡಿ. ಕೆಲ ಕೆಲವರು ಸಂದರ್ಭಗಳ ಕಾರಣದಿಂದ ಬರಲು ಸಾಧ್ಯವಾಗಲಿಲ್ಲ ಮತ್ತು ಅವರು ಬಹಳ ಚಡಪಡಿಸುತ್ತಾ ನೆನಪು ಮಾಡುತ್ತಿದ್ದಾರೆ. ಬಾಪ್ದಾದಾರವರು ಎಲ್ಲಾ ಮಕ್ಕಳ ಸತ್ಯ ಹೃದಯವನ್ನು ತಿಳಿದುಕೊಂಡಿದ್ದಾರೆ. ಎಲ್ಲಿ ಸತ್ಯ ಸ್ನೇಹವಿದೆ ಅಲ್ಲಿ ಇಂದಿಲ್ಲವೆಂದರೂ ನಾಳೆಯ ದಿನ ಫಲವು ಬಂದೇ ಬರುತ್ತದೆ. ಒಳ್ಳೆಯದು.

ಸನ್ಮುಖದಲ್ಲಿ ಡಬಲ್ ವಿದೇಶಿಯಿದ್ದಾರೆ. ಅವರ ಸೀಜನ್ ಆಗಿದೆಯಲ್ಲವೆ. ಸೀಜನ್ನಲ್ಲಿರುವವರಿಗೆ ಮೊದಲು ತಿನ್ನಿಸಲಾಗುತ್ತದೆ. ಎಲ್ಲಾ ದೇಶದವರು ಅರ್ಥಾತ್ ಭಾಗ್ಯವಂತ ಆತ್ಮರಿಗೆ, ದೇಶದವರು ಇದೂ ಸಹ ಸೇರ್ಪಡೆಯಾಗಿ ನಶೆಯಿದೆ - ನಾವು ತಂದೆಯ ಅವತರಣಾ ಭೂಮಿಯಲ್ಲಿರುವವರಾಗಿದ್ದೇವೆ. ಇಂತಹ ಸೇವೆಯು ಭಾರತ ಭೂಮಿ, ತಂದೆಯ ಅವತರಣಾ ಭೂಮಿ ಮತ್ತು ಭವಿಷ್ಯದ ರಾಜ್ಯ ಭೂಮಿಯವರು, ಎಲ್ಲಾ ಮಕ್ಕಳಿಗೂ ಬಾಪ್ದಾದಾರವರು ವಿಶೇಷವಾಗಿ ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ಏಕೆಂದರೆ ಎಲ್ಲರೂ ತಮ್ಮ-ತಮ್ಮ ಲಗನ್, ಉಮ್ಮಂಗ-ಉತ್ಸಾಹದನುಸಾರವಾಗಿ ಸೇವೆಯ ಮತ್ತು ಸೇವೆಯ ಮೂಲಕ ಅನೇಕ ಆತ್ಮರನ್ನು ತಂದೆಯ ಸಮೀಪಕ್ಕೆ ತಂದಿದೆ. ಆದ್ದರಿಂದ ಸೇವೆಯ ರಿಟರ್ನ್ನಲ್ಲಿ ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ಸ್ನೇಹದ ಪುಷ್ಪಗಳ ಹೂ ಗುಚ್ಛವನ್ನು ಕೊಡುತ್ತಿದ್ದಾರೆ. ಸ್ವಾಗತವನ್ನು ಮಾಡುತ್ತಿದ್ದಾರೆ. ತಾವು ಸಹ ಎಲ್ಲರಿಗೂ ಸಹ ಹೂ ಗುಚ್ಛವನ್ನು ಕೊಟ್ಟು ಸ್ವಾಗತವನ್ನು ಮಾಡುತ್ತಿದ್ದೀರಲ್ಲವೆ. ಅಂದಮೇಲೆ ಎಲ್ಲಾ ಮಕ್ಕಳಿಗೆ ಹೂ ಗುಚ್ಛವನ್ನೂ ಕೊಡುತ್ತಿದ್ದಾರೆ ಮತ್ತು ಸಫಲತೆಯ ಬ್ಯಾಡ್ಜ್ ಹಾಕುತ್ತಿದ್ದಾರೆ. ಪ್ರತಿಯೊಂದು ಮಕ್ಕಳು ತಮ್ಮ-ತಮ್ಮ ಹೆಸರಿನಿಂದ ಬಾಪ್ದಾದಾರವರ ಮೂಲಕ ಸಿಕ್ಕಿರುವಂತಹ ಬ್ಯಾಡ್ಜ್ ಮತ್ತು ಹೂ ಗುಚ್ಛವನ್ನು ಸ್ವೀಕಾರ ಮಾಡಿರಿ. ಒಳ್ಳೆಯದು.

ಜೋನಿನ ದಾದಿಯರಂತು ಚೇರ್ಮೆನ್ ಆಗಿಯೇ ಇದ್ದೀರಿ. ಚೇರ್ಮೆನ್ ಅರ್ಥಾತ್ ಸದಾ ಸೀಟ್ನಲ್ಲಿ ಸೆಟ್ ಆಗಿರುವವರು, ಯಾರು ಸದಾ ಸೀಟ್ನಲ್ಲಿ ಸೆಟ್ ಆಗಿರುತ್ತಾರೆ, ಅವರಿಗೇ ಚೇರ್ಮೆನ್ ಎಂದು ಹೇಳಲಾಗುತ್ತದೆ. ಸದಾ ಚೇರ್ನ ಜೊತೆ ನಿಯರ್ ಸಹ ಇದ್ದಾರೆ. ಆದ್ದರಿಂದ ಸದಾ ತಂದೆಯ ಆದಿಯಿಂದ ಅಂತ್ಯದವರೆಗೂ ಸದಾ ಪ್ರತೀ ಹೆಜ್ಜೆಯಲ್ಲಿ ಜೊತೆಗಾರರಾಗಿದ್ದಾರೆ. ತಂದೆಯ ಹೆಜ್ಜೆ ಮತ್ತು ಅವರ ಹೆಜ್ಜೆ ಸದಾ ಒಂದಾಗಿದೆ. ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುವವರಾಗಿದ್ದಾರೆ, ಆದ್ದರಿಂದ ಸದಾ ಪ್ರತೀ ಹೆಜ್ಜೆಯಲ್ಲಿ ಸದಾ ಜೊತೆಗಾರರಿಗೆ ಪದಮ, ಪದಮ, ಪದಮ ಪಟ್ಟು ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ ಮತ್ತು ಬಹಳ ಸುಂದರವಾದ ವಜ್ರಗಳ ಪದಮ ಪುಷ್ಪವನ್ನು ತಂದೆಯ ಮೂಲಕ ಸ್ವೀಕಾರ ಮಾಡಿರಿ. ಮಹಾರಥಿಗಳಲ್ಲಿ ಸಹೋದರರೂ ಬಂದು ಬಿಟ್ಟಿದ್ದಾರೆ. ಪಾಂಡವರು ಸದಾ ಶಕ್ತಿಯರ ಜೊತೆಗಾರರಾಗಿದ್ದಾರೆ. ಪಾಂಡವರಿಗೆ ಈ ಖುಷಿಯಿದೆ – ಶಕ್ತಿ ಸೇನೆ ಮತ್ತು ಪಾಂಡವರಿಬ್ಬರೂ ಸಹ ಸೇರಿಕೊಂಡು ತಂದೆಯ ಕಾರ್ಯವೇನಿದೆ, ಅದರಲ್ಲಿ ನಿಮಿತ್ತರಾಗಿದ್ದು ಸಫಲ ಮಾಡುವಂತಹ ಸಫಲತಾಮೂರ್ತಿ ಆಗಿದ್ದಾರೆ. ಆದ್ದರಿಂದ ಪಾಂಡವರೇನೂ ಕಡಿಮೆಯಿಲ್ಲ, ಪಾಂಡವರು ಮಹಾನ್ ಆಗಿದ್ದಾರೆ. ಪ್ರತಿಯೊಬ್ಬ ಪಾಂಡವರ ವಿಶೇಷತೆಯು ತಮ್ಮ-ತಮ್ಮದಾಗಿದೆ, ವಿಶೇಷ ಸೇವೆಯನ್ನು ಮಾಡುತ್ತಿದ್ದೀರಿ. ಮತ್ತು ಅದೇ ವಿಶೇಷತೆಯ ಆಧಾರದ ಮೇಲೆ ತಂದೆ ಹಾಗೂ ಪರಿವಾರದ ಮುಂದೆ ವಿಶೇಷ ಆತ್ಮರಾಗಿದ್ದೀರಿ. ಆದ್ದರಿಂದ ಇಂತಹ ಸೇವೆಗೆ ನಿಮಿತ್ತರಾಗಿರುವ ಆತ್ಮರಿಗೆ ವಿಶೇಷ ರೂಪದಿಂದ, ಬಾಪ್ದಾದಾರವರು ವಿಜಯದ ತಿಲಕದಿಂದ ಸ್ವಾಗತವನ್ನು ಮಾಡುತ್ತಿದ್ದಾರೆ. ತಿಳಿಯಿತೆ- ಒಳ್ಳೆಯದು.

ತಮ್ಮೆಲ್ಲರಿಗಂತು ಎಲ್ಲವೂ ಸಿಕ್ಕಿ ಬಿಟ್ಟಿತಲ್ಲವೆ. ಕಮಲ, ತಿಲಕ, ಹೂ ಗುಚ್ಛ, ಬ್ಯಾಡ್ಜ್ ಎಲ್ಲವೂ ಸಿಕ್ಕಿತಲ್ಲವೆ. ಡಬಲ್ ವಿದೇಶಿಗಳ ಸ್ವಾಗತವು ಎಷ್ಟೊಂದು ಪ್ರಕಾರದಿಂದಾಯಿತು. ನೆನಪು-ಪ್ರೀತಿಯಂತು ಎಲ್ಲರಿಗೂ ಸಿಕ್ಕಿ ಬಿಟ್ಟಿತು. ಆದರೂ ಡಬಲ್ ವಿದೇಶಿ ಮತ್ತು ಸ್ವ ದೇಶಿ, ಎಲ್ಲಾ ಮಕ್ಕಳು ಸದಾ ಉನ್ನತಿಯನ್ನು ಪಡೆಯುತ್ತಿರಿ, ವಿಶ್ವವನ್ನು ಪರಿವರ್ತನೆ ಮಾಡುತ್ತಾ, ಸದಾಕಾಲಕ್ಕಾಗಿ ಸುಖಗಳ ಉಯ್ಯಾಲೆಯಲ್ಲಿ ತೂಗುತ್ತಿರಿ. ಇಂತಹ ವಿಶೇಷ ಸೇವಾಧಾರಿ ಮಕ್ಕಳಿಗೆ ಬಾಪ್ದಾದಾರವರು ನೆನಪು-ಪ್ರೀತಿ ಹಾಗೂ ನಮಸ್ತೆ.

ಟ್ರಿನಿಡಾಡ್ ಪಾರ್ಟಿಯೊಂದಿಗೆ:- ಸದಾ ತಮ್ಮನ್ನು ಸಂಗಮಯುಗೀ ಶ್ರೇಷ್ಠ ಬ್ರಾಹ್ಮಣ ಆತ್ಮರಾಗಿದ್ದೇವೆ, ಹೀಗೆ ತಿಳಿಯುತ್ತೀರಾ? ಬ್ರಾಹ್ಮಣರಿಗೆ ಸದಾ ಮೇಲೆ ಶಿಖೆಯ ಸಂಕೇತವನ್ನು ತೋರಿಸುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ತಂದೆ ಮತ್ತು ಶ್ರೇಷ್ಠಾತಿ ಶ್ರೇಷ್ಠ ಸಮಯ, ಅಂದಾಗ ಸ್ವಯಂ ಸಹ ಶ್ರೇಷ್ಠವಾದಿರಿ. ಯಾರು ಸದಾ ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿರುತ್ತಾರೆಯೋ ಅವರು ಸ್ವಯಂನ್ನು ಸದಾಕಾಲವೂ ಡಬಲ್ಲೈಟ್ನ ಅನುಭವವನ್ನು ಮಾಡುವರು. ಯಾವುದೇ ಪ್ರಕಾರದಿಂದಲೂ ಹೊರೆಯಿಲ್ಲ. ಸಂಬಂಧದ ಹೊರೆಯೂ ಇಲ್ಲ, ತಮ್ಮ ಯಾವುದೇ ಹಳೆಯ ಸ್ವಭಾವ-ಸಂಸ್ಕಾರಗಳ ಹೊರೆಯೂ ಇಲ್ಲ, ಇದಕ್ಕೆ ಹೇಳಲಾಗುತ್ತದೆ – ಸರ್ವ ಬಂಧನಗಳಿಂದ ಮುಕ್ತರು. ಹೀಗೆ ಫ್ರೀಯಾಗಿರುವವರು. ಇಡೀ ಗ್ರೂಪ್ ನಿರ್ಬಂಧನ ಗ್ರೂಪ್ ಆಗಿದೆ. ಆತ್ಮದಿಂದ ಮತ್ತು ಶರೀರ ಸಂಬಂಧದಿಂದಲೂ ಫ್ರೀ. ನಿರ್ಬಂಧನ ಆತ್ಮರು ಏನು ಮಾಡುವರು? ಸೇವಾಕೇಂದ್ರವನ್ನು ಸಂಭಾಲನೆ ಮಾಡುವರಲ್ಲವೆ. ಅಂದಮೇಲೆ ಎಷ್ಟು ಸೇವಾಕೇಂದ್ರಗಳನ್ನು ತೆರೆಯಬೇಕಾಗಿದೆ. ಸಮಯವೂ ಇದೆ ಮತ್ತು ಡಬಲ್ಲೈಟ್ ಸಹ ಆಗಿದ್ದೀರಿ ಅಂದಮೇಲೆ ತಮ್ಮ ಸಮಾನರನ್ನಾಗಿ ಮಾಡುವಿರಲ್ಲವೆ. ಏನು ಸಿಕ್ಕಿದೆಯೋ ಅದನ್ನು ಅನ್ಯರಿಗೆ ಕೊಡಬೇಕಾಗಿದೆ. ಇಂದು ವಿಶ್ವದ ಆತ್ಮರಿಗೆ ಇದೇ ಅನುಭವದ ಅವಶ್ಯಕತೆಯು ಎಷ್ಟೊಂದಿದೆ ಎಂದು ತಿಳಿಯುತ್ತೀರಲ್ಲವೆ. ಇಂತಹ ಸಮಯದಲ್ಲಿ ಪ್ರಾಪ್ತಿ ಸ್ವರೂಪ ಆತ್ಮರು, ತಮ್ಮ ಕಾರ್ಯವೇನಾಗಿದೆ! ಅಂದಮೇಲೆ ಈಗ ಸೇವೆಯನ್ನು ಇನ್ನೂ ವೃದ್ಧಿಯನ್ನು ಪ್ರಾಪ್ತಿ ಮಾಡಿಸಿರಿ. ಟ್ರಿನಿಡಾಡ್ ಸಂಪನ್ನ ದೇಶವಾಗಿದೆ, ಅಂದಮೇಲೆ ಎಲ್ಲರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಟ್ರಿನಿಡಾಡ್ ಸೇವಾಕೇಂದ್ರದ್ದಾಗಬೇಕು. ಅಕ್ಕ ಪಕ್ಕದಲ್ಲಿಯೂ ಸಹ ಬಹಳ ಪ್ರಾಂತ್ಯಗಳಿವೆ, ದಯೆ ಬರುವುದಿಲ್ಲವೇ? ಸೇವಾಕೇಂದ್ರವನ್ನೂ ತೆರೆಯಿರಿ ಮತ್ತು ದೊಡ್ಡ-ದೊಡ್ಡ ಮೈಕ್ಆತ್ಮರನ್ನೂ ಕರೆ ತನ್ನಿರಿ. ಇಷ್ಟೂ ಸಾಹಸವಿರುವ ಆತ್ಮರು, ಏನನ್ನು ಬಯಸುತ್ತೀರಿ ಅದನ್ನು ಮಾಡಬಹುದು. ಯಾರು ಶ್ರೇಷ್ಠ ಆತ್ಮರಾಗಿದ್ದಾರೆ, ಅವರ ಮೂಲಕ ಶ್ರೇಷ್ಠ ಸೇವೆಯು ಸಮಾವೇಶವಾಗಿರುತ್ತದೆ. ಒಳ್ಳೆಯದು.

ವರದಾನ:-
ವಿಭಿನ್ನ ಅನುಭೂತಿಗಳ ಮೂಲಕ ಸದಾ ಉಮ್ಮಂಗ-ಉತ್ಸಾಹದಿಂದ ಸಂಪನ್ನರಾಗಿರುವ ವಿಘ್ನಜೀತ್ ಭವ.

ಪ್ರತಿನಿತ್ಯವೂ ಅಮೃತವೇಳೆಯಲ್ಲಿ ಇಡೀ ದಿನಕ್ಕಾಗಿ ವಿಭಿನ್ನ ಉಮ್ಮಂಗ-ಉತ್ಸಾಹದ ಪಾಯಿಂಟ್ಸ್ನ್ನು ಬುದ್ಧಿಯಲ್ಲಿ ಇಮರ್ಜ್ ಮಾಡಿಟ್ಟುಕೊಳ್ಳಿರಿ. ಪ್ರತೀ ದಿನ ಮುರುಳಿಯಿಂದ ಉಮ್ಮಂಗ-ಉತ್ಸಾಹದ ಪಾಯಿಂಟ್ಸ್ನ್ನು ನೋಟ್ ಮಾಡಿಕೊಳ್ಳಿರಿ, ಆ ವಿಭಿನ್ನ ಪಾಯಿಂಟುಗಳು ಉಮ್ಮಂಗ-ಉತ್ಸಾಹವನ್ನು ಹೆಚ್ಚಿಸುತ್ತದೆ. ಮನುಷ್ಯಾತ್ಮರ ಸ್ವಭಾವವಾಗಿದೆ - ವಿಭಿನ್ನವಾಗಿರುವುದು ಇಷ್ಟವಾಗುತ್ತದೆ. ಆದ್ದರಿಂದ ಭಲೆ ಜ್ಞಾನದ ಪಾಯಿಂಟ್ನ್ನಾದರೂ ಮನನ ಮಾಡಿರಿ ಅಥವಾ ಆತ್ಮೀಯತೆಯ ಪಾಯಿಂಟ್ ಮನನ ಮಾಡಿರಿ, ವಿಭಿನ್ನ ರೂಪದಿಂದ ಜೀರೋ ಆಗಿದ್ದು, ತಮ್ಮ ಹೀರೊ ಪಾತ್ರದ ಸ್ಮೃತಿಯಲ್ಲಿರಿ, ಆಗ ಉಮ್ಮಂಗ-ಉತ್ಸಾಹದಿಂದ ಸಂಪನ್ನರಾಗಿರುತ್ತೀರಿ ಮತ್ತು ಎಲ್ಲಾ ವಿಘ್ನಗಳು ಸಹಜವಾಗಿ ಸಮಾಪ್ತಿಯಾಗಿ ಬಿಡುತ್ತವೆ.

ಸ್ಲೋಗನ್:
 ತಮ್ಮ ಸ್ಥಿತಿಯನ್ನು ಹೀಗೆ ಶಾಂತ ಚಿತ್ತವನ್ನಾಗಿ ಮಾಡಿಕೊಳ್ಳಿರಿ, ಅದರಿಂದ ಕ್ರೋಧದ ಭೂತವು ದೂರದಿಂದಲೇ ಓಡಿ ಹೋಗಲಿ.