28/10/18       Avyakt Bapdada      Kannada Murli      22.02.84      Om Shanti     Madhuban


“ ಸಂಗಮದಲ್ಲಿ ನಾಲ್ಕು ಕಂಬೈಂಡ್ ರೂ ಪಗಳ ಅನುಭವ ”


ಇಂದು ಬಾಪ್ದಾದಾರವರು ಎಲ್ಲಾ ಮಕ್ಕಳ ಕಂಬೈಂಡ್ ರೂಪವನ್ನು ನೋಡುತ್ತಿದ್ದಾರೆ. ಎಲ್ಲಾ ಮಕ್ಕಳೂ ಸಹ ತನ್ನ ಕಂಬೈಂಡ್ ರೂಪವನ್ನು ಬಹಳ ಚೆನ್ನಾಗಿ ತಿಳಿದಿದ್ದೀರಾ? ಒಂದು- ಶ್ರೇಷ್ಠಾತ್ಮರು, ಈ ಅಂತಿಮ ಹಳೆಯದು, ಆದರೆ ಅತ್ಯಮೂಲ್ಯವನ್ನಾಗಿ ಮಾಡುವಂತಹ ಶರೀರದ ಜೊತೆಗೆ ಕಂಬೈಂಡ್ ಆಗಿದ್ದೀರಿ. ಎಲ್ಲಾ ಶ್ರೇಷ್ಠಾತ್ಮರು ಈ ಶರೀರದ ಆಧಾರದಿಂದ ಶ್ರೇಷ್ಠ ಕಾರ್ಯ ಮತ್ತು ಬಾಪ್ದಾದಾರವರೊಂದಿಗೆ ಮಿಲನದ ಅನುಭವವನ್ನು ಮಾಡುತ್ತಿದ್ದೀರಿ. ಇರುವುದಂತು ಹಳೆಯ ಶರೀರವಿದೆ ಆದರೆ ಬಲಿಹಾರಿ ಈ ಅಂತಿಮ ಶರೀರದ್ದಾಗಿದೆ, ಅದು ಶ್ರೇಷ್ಠಾತ್ಮನು ಇದರ ಆಧಾರದಿಂದ ಅಲೌಕಿಕ ಅನುಭವವನ್ನು ಮಾಡುತ್ತದೆ. ಅಂದಮೇಲೆ ಆತ್ಮ ಮತ್ತು ಶರೀರವು ಕಂಬೈಂಡ್ ಆಗಿದೆ. ಹಳೆಯ ಶರೀರದ ಪರಿವೆಯಲ್ಲಿ ಬರಬಾರದು. ಆದರೆ ಮಾಲೀಕನಾಗಿದ್ದು ಇದರ ಮೂಲಕ ಕಾರ್ಯವನ್ನು ಮಾಡಿಸಬೇಕಾಗಿದೆ. ಆದ್ದರಿಂದ ಆತ್ಮಾಭಿಮಾನಿಯಾಗಿದ್ದು, ಕರ್ಮಯೋಗಿಯಾಗಿ ಕರ್ಮೇಂದ್ರಿಯಗಳಿಂದ ಕರ್ಮವನ್ನು ಮಾಡಿಸುತ್ತೀರಿ.

ಎರಡನೆಯದು - ಅಲೌಕಿಕ ವಿಚಿತ್ರ ಕಂಬೈಂಡ್ ರೂಪ. ಇದು ಇಡೀ ಕಲ್ಪದಲ್ಲಿ ಈ ಕಂಬೈಂಡ್ ರೂಪದ ಅನುಭವವನ್ನು ಕೇವಲ ಈಗ ಮಾಡಬಹುದು. ಅದಾಗಿದೆ - "ತಾವು ಮತ್ತು ತಂದೆ". ಇದು ಕಂಬೈಂಡ್ ರೂಪದ ಅನುಭವವಾಗಿದೆ. ಸದಾ ಮಾಸ್ಟರ್ ಸರ್ವಶಕ್ತಿವಂತನು ಸದಾ ವಿಜಯಿ, ಸದಾ ಸರ್ವರ ವಿಘ್ನ ವಿನಾಶಕರು. ಸದಾ ಶುಭ ಭಾವನೆ, ಶ್ರೇಷ್ಠ ಕಾಮನೆ, ಶ್ರೇಷ್ಠ ವಾಣಿ, ಶ್ರೇಷ್ಠ ದೃಷ್ಠಿ, ಶ್ರೇಷ್ಠ ಕರ್ಮದ ಮೂಲಕ ವಿಶ್ವ ಕಲ್ಯಾಣಕಾರಿ ಸ್ವರೂಪದ ಅನುಭವವನ್ನು ಮಾಡಿಸುತ್ತದೆ. ಸೆಕೆಂಡಿನಲ್ಲಿ ಸರ್ವ ಸಮಸ್ಯೆಗಳ ಸಮಾಧಾನ ಸ್ವರೂಪರನ್ನಾಗಿ ಮಾಡುತ್ತದೆ. ಸ್ವಯಂ ಬಗ್ಗೆ ಅಥವಾ ಸರ್ವರ ಬಗ್ಗೆ ದಾತಾ ಮತ್ತು ಮಾಸ್ಟರ್ ವರದಾತನನ್ನಾಗಿ ಮಾಡುತ್ತದೆ. ಕೇವಲ ಈ ಕಂಬೈಂಡ್ ರೂಪದಲ್ಲಿ ಸದಾ ಸ್ಥಿತರಾಗಿರುತ್ತೀರೆಂದರೆ, ಸಹಜವಾಗಿಯೇ ನೆನಪು ಮತ್ತು ಸೇವೆಯ ಸಿದ್ಧಿ ಸ್ವರೂಪರಾಗಿ ಬಿಡುವಿರಿ. ವಿಧಿಯು ನಿಮಿತ್ತ ಮಾತ್ರವಷ್ಟೆ ಮತ್ತು ಸಿದ್ಧಿಯು ಸದಾ ಜೊತೆಯಿರುತ್ತದೆ. ಈಗ ವಿಧಿಯಲ್ಲಿ ಹೆಚ್ಚಾಗಿ ಸಮಯ ಹಿಡಿಸುತ್ತದೆ. ಸಿದ್ಧಿ ಹಾಗೂ ಶಕ್ತಿಯ ಅನುಭವವಾಗುತ್ತದೆ ಆದರೆ ಎಷ್ಟು ಸದಾ ಈ ಅಲೌಕಿಕ ಶಕ್ತಿಶಾಲಿ ಕಂಬೈಂಡ್ ರೂಪದಲ್ಲಿರುತ್ತೀರಿ, ಈ ವಿಧಿಯಿಂದ ಹೆಚ್ಚಾಗಿ ಸಿದ್ಧಿಯ ಅನುಭವವಾಗುವುದು. ಪುರುಷಾರ್ಥಕ್ಕಿಂತಲೂ ಪ್ರಾಪ್ತಿಯ ಅನುಭವವು ಹೆಚ್ಚಿನದಾಗಿ ಆಗುತ್ತದೆ. ಸಿದ್ಧಿ ಸ್ವರೂಪದ ಅರ್ಥವೇ ಆಗಿದೆ – ಪ್ರತೀ ಕಾರ್ಯದಲ್ಲಿ ಸಿದ್ಧಿಯಿದ್ದೇ ಇದೆ. ಇದು ಪ್ರತ್ಯಕ್ಷದಲ್ಲಿ ಅನುಭವವಾಗುವುದು.

ಮೂರನೆಯ ಕಂಬೈಂಡ್ ರೂಪ - ಹಮ್ ಸೊ ಬ್ರಾಹ್ಮಣ ಸೊ ಫರಿಶ್ತಾ (ನಾವೇ ಬ್ರಾಹ್ಮಣರಿಂದ ಫರಿಶ್ತಾ). ಬ್ರಾಹ್ಮಣ ರೂಪ ಮತ್ತು ಅಂತಿಮ ಕರ್ಮಾತೀತ ಫರಿಶ್ತಾ ಸ್ವರೂಪ. ಈ ಕಂಬೈಂಡ್ ರೂಪದ ಅನುಭೂತಿಯು ವಿಶ್ವದ ಮುಂದೆ ಸಾಕ್ಷಾತ್ಕಾರ ಮೂರ್ತಿಯನ್ನಾಗಿ ಮಾಡುತ್ತದೆ. ಬ್ರಾಹ್ಮಣನಿಂದ ಫರಿಶ್ತಾ - ಈ ಸ್ಮೃತಿಯ ಮೂಲಕ ನಡೆಯುತ್ತ-ಸುತ್ತಾಡುತ್ತಾ, ತಮ್ಮನ್ನು ವ್ಯಕ್ತ ಶರೀರ ವ್ಯಕ್ತ ದೇಶದಲ್ಲಿ ಪಾತ್ರವನ್ನಭಿನಯಿಸುತ್ತಿದ್ದರೂ ಸಹ ಬ್ರಹ್ಮಾ ತಂದೆಯ ಜೊತೆಗಾರ, ಅವ್ಯಕ್ತವತನದ ಫರಿಶ್ತಾ, ವ್ಯಕ್ತ ದೇಶ ಮತ್ತು ದೇಹದಲ್ಲಿ ವಿಶ್ವದ ಸೇವೆಗಾಗಿ ಬಂದಿದ್ದೇವೆ. ಹೀಗೆ ವ್ಯಕ್ತ ಭಾವದಿಂದ ಭಿನ್ನವಾಗಿ ಅವ್ಯಕ್ತ ರೂಪವುಳ್ಳವನಂತೆ ಅನುಭವ ಮಾಡುವಿರಿ. ಈ ಅವ್ಯಕ್ತ ಭಾವ ಅರ್ಥಾತ್ ಫರಿಶ್ತಾ ಸ್ಥಿತಿಯ ಭಾವವು ಸ್ವತಹವಾಗಿಯೇ ಅವ್ಯಕ್ತ ಅರ್ಥಾತ್ ವ್ಯಕ್ತದ ಮಾತು-ಚಲನೆ, ವ್ಯಕ್ತಭಾವದ ಸ್ವಭಾವ, ವ್ಯಕ್ತಭಾವದ ಸಂಸ್ಕಾರವು ಸಹಜವಾಗಿಯೇ ಪರಿವರ್ತನೆ ಮಾಡಿಕೊಂಡು ಬಿಡುತ್ತೀರಿ. ಭಾವವು ಬದಲಾಗಿ ಬಿಡುತ್ತದೆಯೆಂದರೆ ಎಲ್ಲವೂ ಬದಲಾಗಿ ಬಿಡುತ್ತದೆ. ಇಂತಹ ಅವ್ಯಕ್ತ ಭಾವವು ಸದಾ ಸ್ವರೂಪದಲ್ಲಿ ತನ್ನಿರಿ. ಸ್ಮೃತಿಯಲ್ಲಿದೆ - ಬ್ರಾಹ್ಮಣನಿಂದ ಫರಿಶ್ತಾ. ಈಗ ಸ್ಮೃತಿಯನ್ನು ಸ್ವರೂಪದಲ್ಲಿ ತನ್ನಿರಿ. ಸ್ವರೂಪವು ನಿರಂತರ ಸ್ವತಹ ಮತ್ತು ಸಹಜವಾಗಿ ಆಗಿ ಬಿಡುತ್ತದೆ. ಸ್ವರೂಪದಲ್ಲಿ ತರುವುದು ಅರ್ಥಾತ್ ಸದಾ ಇರುವುದೇ ಅವ್ಯಕ್ತ ಫರಿಶ್ತೆಯಾಗಿ. ಕೆಲವೊಮ್ಮೆ ಮರೆಯುವುದು, ಕೆಲವೊಮ್ಮೆ ಸ್ಮೃತಿಯಲ್ಲಿ ಬರುವುದು – ಈ ಸ್ಮೃತಿಯಲ್ಲಿರುವುದು ಮೊದಲ ಸ್ಥಿತಿಯಾಗಿದೆ. ಸ್ವರೂಪರಾಗಿ ಬಿಡುವುದು ಶ್ರೇಷ್ಠವಾದ ಸ್ಥಿತಿಯಾಗಿದೆ.

ನಾಲ್ಕನೆಯದು - ಭವಿಷ್ಯ ಚತುರ್ಭುಜ ಸ್ವರೂಪ. ಲಕ್ಷ್ಮೀ ಮತ್ತು ನಾರಾಯಣನ ಕಂಬೈಂಡ್ ರೂಪ. ಏಕೆಂದರೆ ಈ ಸಮಯದಲ್ಲಿ ಆತ್ಮದಲ್ಲಿ ಲಕ್ಷ್ಮೀ ಮತ್ತು ನಾರಾಯಣ ಇಬ್ಬರೂ ಆಗುವ ಸಂಸ್ಕಾರವು ತುಂಬಿಕೊಂಡಿರುತ್ತದೆ. ಕೆಲವೊಮ್ಮೆ ಲಕ್ಷ್ಮಿಯಾಗುವಿರಿ, ಕೆಲವೊಮ್ಮೆ ನಾರಾಯಣ. ಭವಿಷ್ಯ ಪ್ರಾಲಬ್ಧದ ಈ ಕಂಬೈಂಡ್ ಸ್ವರೂಪವೂ ಸಹ ಇಷ್ಟೇ ಸ್ಪಷ್ಟವಾಗಿರಲಿ. ಇಂದು ಫರಿಶ್ತಾ, ನಾಳೆ ದೇವತಾ. ಈಗೀಗ ಫರಿಶ್ತಾ, ಈಗೀಗ ದೇವತಾ. ತಮ್ಮ ರಾಜ್ಯ, ತಮ್ಮ ರಾಜ್ಯ ಸ್ವರೂಪವು ಬಂದಿತೆಂದರೆ ಬಂದಿತು. ಆಯಿತೆಂದರೆ ಆಯಿತು. ಇಂತಹ ಸಂಕಲ್ಪವು ಸ್ಪಷ್ಟ ಮತ್ತು ಶಕ್ತಿಶಾಲಿಯಾಗಿರಲಿ. ಏಕೆಂದರೆ ತಮ್ಮ ಈ ಸ್ಪಷ್ಟ ಸಮರ್ಥ ಸಂಕಲ್ಪಗಳ ಇಮರ್ಜ್ ರೂಪದಿಂದ ತಮ್ಮ ರಾಜ್ಯವು ಸಮೀಪದಲ್ಲಿ ಬರುತ್ತದೆ. ತಮ್ಮ ಇಮರ್ಜ್ ಆಗಿರುವ ಸಂಕಲ್ಪವು ಹೊಸ ಸೃಷ್ಟಿಯನ್ನು ರಚಿಸುತ್ತದೆ ಅರ್ಥಾತ್ ಸೃಷ್ಠಿಯಲ್ಲಿ ತರುತ್ತದೆ. ತಮ್ಮ ಸಂಕಲ್ಪವು ಮರ್ಜ್ ಆಗಿದೆಯೆಂದರೆ ಹೊಸ ಸೃಷ್ಟಿಯೂ ಇಮರ್ಜ್ ಆಗಿರಲು ಸಾಧ್ಯವಿಲ್ಲ. ಬ್ರಹ್ಮಾರವರ ಜೊತೆಗೆ ಬ್ರಾಹ್ಮಣರ ಈ ಸಂಕಲ್ಪದ ಮೂಲಕ ಹೊಸ ಸೃಷ್ಟಿಯು, ಈ ಭೂಮಿಯ ಮೇಲೆ ಪ್ರತ್ಯಕ್ಷವಾಗುತ್ತದೆ. ಬ್ರಹ್ಮಾ ತಂದೆಯೂ ಸಹ ಹೊಸ ಸೃಷ್ಟಿಯಲ್ಲಿ ಹೊಸ ಪಾತ್ರವನ್ನಭಿನಯಿಸುವುದಕ್ಕಾಗಿ ಮೊದಲು ತಾವು ಬ್ರಾಹ್ಮಣ ಮಕ್ಕಳಿಗಾಗಿ, ಜೊತೆಯಲ್ಲಿ ನಡೆಯುತ್ತೇವೆ ಎನ್ನುವ ಪ್ರತಿಜ್ಞೆಯ ಕಾರಣದಿಂದ ನಿರೀಕ್ಷಣೆ ಮಾಡುತ್ತಿದ್ದಾರೆ. ಒಬ್ಬರು ಬ್ರಹ್ಮಾರವರೇ ಕೃಷ್ಣನಾಗಿ ಬಿಟ್ಟರು, ಅಂದಾಗ ಒಬ್ಬರೇನು ಮಾಡುತ್ತಾರೆ? ಜೊತೆಯಲ್ಲಿ ಓದುವವರು, ಆಡುವವರೂ ಸಹ ಇರಬೇಕಲ್ಲವೆ. ಆದ್ದರಿಂದ ಬ್ರಹ್ಮಾ ತಂದೆಯು ಬ್ರಾಹ್ಮಣರ ಪ್ರತಿ ಹೇಳಿದರು - ನಾನು ಅವ್ಯಕ್ತ ರೂಪವುಳ್ಳ ತಂದೆಯ ಸಮಾನ ಅವ್ಯಕ್ತ ರೂಪಧಾರಿ, ಅವ್ಯಕ್ತ ಸ್ಥಿತಿಯಿರುವವರು ಫರಿಶ್ತಾ ರೂಪದವರಾಗಿರಿ. ಫರಿಶ್ತೆಯಿಂದ ದೇವತೆಯಾಗುತ್ತೀರಿ. ತಿಳಿಯಿತೇ! ಇವೆಲ್ಲಾ ಕಂಬೈಂಡ್ ರೂಪದಲ್ಲಿ ಸ್ಥಿತಿಯಲ್ಲಿರುವುದರಿಂದಲೇ ಸಂಪನ್ನ ಮತ್ತು ಸಂಪೂರ್ಣರಾಗಿ ಬಿಡುತ್ತೀರಿ. ತಂದೆಯ ಸಮಾನರಾಗಿ ಸಹಜವಾಗಿಯೇ ಕರ್ಮದಲ್ಲಿ ಸಿದ್ಧಿಯ ಅನುಭವವನ್ನೂ ಮಾಡುವಿರಿ.

ಡಬಲ್ ವಿದೇಶಿ ಮಕ್ಕಳಿಗೆ ಬಾಪ್ದಾದಾರವರೊಂದಿಗೆ ಆತ್ಮಿಕ ವಾರ್ತಾಲಾಪ ಮಾಡುವ ಅಥವಾ ಮಿಲನವನ್ನಾಚರಿಸುವ ತೀವ್ರ ಇಚ್ಛೆಯಿದೆ. ಎಲ್ಲರೂ ತಿಳಿಯುತ್ತಾರೆ - ನಾವು ಇಂದಿನ ದಿನವೇ ಮಿಲನವಾಗಿ ಬಿಡೋಣ. ಆದರೆ ಈ ಸಾಕಾರ ಪ್ರಪಂಚದಲ್ಲಿ ಎಲ್ಲವನ್ನೂ ನೋಡಬೇಕಾಗುತ್ತದೆ. ಸೂರ್ಯ-ಚಂದ್ರನ ಒಳಗೆ ಪ್ರಪಂಚವಿದೆಯಲ್ಲವೆ. ಅದಕ್ಕಿಂತಲೂ ದೂರವಿರುವ ಪ್ರಪಂಚದಲ್ಲಿ ಬಂದು ಬಿಡುತ್ತೀರೆಂದರೆ, ಪೂರ್ಣ ಸಮಯವೇ ಕುಳಿತು ಬಿಡಿ. ಬಾಪ್ದಾದಾರವರಿಗೂ ಸಹ ಪ್ರತಿಯೊಂದು ಮಕ್ಕಳ ತಮ್ಮ-ತಮ್ಮ ವಿಶೇಷತೆಗಳಿಂದ ಪ್ರಿಯವಾಗಿದ್ದೀರಿ. ಕೆಲವರು ತಿಳಿಯುತ್ತಾರೆ - ಇವರು ಪ್ರಿಯವಾಗಿದ್ದಾರೆ, ನಾವು ಕಡಿಮೆ. ಇಂತಹ ಮಾತೇನೂ ಇಲ್ಲ. ಮಹಾರಥಿಯು ತನ್ನ ವಿಶೇಷತೆಯಿಂದ ಪ್ರಿಯವಾಗಿದ್ದಾರೆ ಮತ್ತು ತಂದೆಯ ಮುಂದೆ ತಮ್ಮ-ತಮ್ಮ ರೂಪದಿಂದ ಎಲ್ಲರೂ ಮಹಾರಥಿಯಾಗಿದ್ದಾರೆ. ಮಹಾನ್ ಆತ್ಮರಾಗಿದ್ದಾರೆ, ಆದ್ದರಿಂದ ಮಹಾರಥಿಗಳು. ಹೀಗಂತು ಕಾರ್ಯವನ್ನು ನಡೆಸುವುದಕ್ಕಾಗಿ, ಯಾರನ್ನಾದರೂ ಸ್ನೇಹದಿಂದ ನಿಮಿತ್ತರನ್ನಾಗಿ ಮಾಡಬೇಕಾಗುತ್ತದೆ. ಇಲ್ಲವೆಂದರೆ ಕಾರ್ಯದ ನಿಮಿತ್ತರಿಗೆ ತನ್ನ-ತನ್ನ ಸ್ಥಾನವು ಸಿಕ್ಕಿದೆ. ಒಂದುವೇಳೆ ಎಲ್ಲರೂ ದಾದಿಯರಾಗಿ ಬಿಟ್ಟರೆ ಕೆಲಸವು ನಡೆಯುತ್ತದೆಯೇ? ನಿಮಿತ್ತರಂತು ಆಗಬೇಕಾಗುತ್ತದೆ ಅಲ್ಲವೆ. ಹಾಗೆ ನೋಡಿದರೆ ತಮ್ಮ ರೀತಿಯಿಂದ ಎಲ್ಲರೂ ದಾದಿಯರಾಗಿದ್ದೀರಿ. ಎಲ್ಲರಿಗೂ ದಾದಿ ಅಥವಾ ದೀದಿ ಎಂದು ಹೇಳುತ್ತೀರಲ್ಲವೆ. ಆದರೂ ತಾವೆಲ್ಲರೂ ಸೇರಿ ಒಬ್ಬರನ್ನಂತು ನಿಮಿತ್ತ ಮಾಡಬೇಕಲ್ಲವೆ. ಎಲ್ಲರೂ ಮಾಡಿದಿರಾ ಅಥವಾ ಕೇವಲ ತಂದೆಯು ಮಾಡಿದರೆ. ಕೇವಲ ನಿಮಿತ್ತವಾಗಿ ವ್ಯವಹಾರಕ್ಕಾಗಿ ತಮ್ಮ-ತಮ್ಮ ಕಾರ್ಯದನುಸಾರವಾಗಿ ನಿಮಿತ್ತರನ್ನಾಗಿ ಮಾಡಲೇಬೇಕಾಗುತ್ತದೆ. ಇದರ ಅರ್ಥವು ಇದಲ್ಲ - ತಾವು ಮಹಾರಥಿಯಲ್ಲ. ತಾವೂ ಸಹ ಮಹಾರಥಿಯಾಗಿದ್ದೀರಿ. ಮಹಾವೀರರಾಗಿದ್ದೀರಿ. ಮಾಯೆಗೆ ಚಾಲೆಂಜ್ ಕೊಡುವ ಮಹಾರಥಿಯಾಗಿಲ್ಲವೆಂದರೆ ಏನಾಯಿತು!

ಬಾಪ್ದಾದಾರವರಿಗಾಗಿ ಸಪ್ತಾಹದ ಕೋರ್ಸ್ ಮಾಡುವಂತಹ ಮಗುವೂ ಸಹ ಮಹಾರಥಿಯಾಗಿದ್ದಾರೆ. ಏಕೆಂದರೆ ಸಪ್ತಾಹದ ಕೋರ್ಸ್ನ್ನೂ ಸಹ ಆಗ ಮಾಡುತ್ತಾರೆ, ಯಾವಾಗ ತಿಳಿಯುತ್ತಾರೆ - ಈ ಶ್ರೇಷ್ಠ ಜೀವನವನ್ನು ರೂಪಿಸಿಕೊಳ್ಳಬೇಕಾಗಿದೆ. ಚಾಲೆಂಜ್ ಮಾಡಿದರೆಂದರೆ ಮಹಾರಥಿ, ಮಹಾವೀರರಾದರು. ಬಾಪ್ದಾದಾರವರು ಸದಾ ಒಂದು ಸ್ಲೋಗನ್ನ್ನು ಮಕ್ಕಳು ಕಾರ್ಯದಲ್ಲಿ ತರುವುದಕ್ಕಾಗಿ ಸದಾ ನೆನಪು ತರಿಸುತ್ತಿರುತ್ತಾರೆ. ಒಂದು - ತಮ್ಮ ಸ್ವ ಸ್ಥಿತಿಯಲ್ಲಿರುವುದು, ಇನ್ನೊಂದು - ವ್ಯವಹಾರದಲ್ಲಿ ಬರುವುದು. ಸ್ವ ಸ್ಥಿತಿಯಲ್ಲಂತು ಎಲ್ಲರೂ ದೊಡ್ಡವರಾಗಿದ್ದೀರಿ, ಯಾರೂ ಚಿಕ್ಕವರಲ್ಲ. ವ್ಯವಹಾರದಲ್ಲಿ ನಿಮಿತ್ತವಾಗಲೇಬೇಕಾಗುತ್ತದೆ ಆದ್ದರಿಂದ ವ್ಯವಹಾರದಲ್ಲಿ ಸದಾ ಸಫಲರಾಗುವ ಸ್ಲೋಗನ್ ಆಗಿದೆ - ಗೌರವ ಕೊಡುವುದು, ಗೌರವವನ್ನು ತೆಗೆದುಕೊಳ್ಳುವುದು. ಅನ್ಯರಿಗೆ ಗೌರವವನ್ನು ಕೊಡುವುದೇ ಗೌರವವನ್ನು ತೆಗೆದುಕೊಳ್ಳುವುದಾಗಿದೆ. ಕೊಡುವುದರಲ್ಲಿ ತೆಗೆದುಕೊಳ್ಳುವುದಿರುತ್ತದೆ. ಗೌರವವನ್ನು ಕೊಡುತ್ತೀರೆಂದರೆ ಗೌರವವು ಸಿಗುತ್ತದೆ. ಗೌರವವನ್ನು ತೆಗೆದುಕೊಳ್ಳುವ ಸಾಧನವೇ ಆಗಿದೆ - ಕೊಡುವುದು. ತಾವು ಗೌರವ ಕೊಡಿ ಮತ್ತು ತಮ್ಮ ಸಿಗಲಿಲ್ಲ ಎನ್ನುವುದಾಗಲು ಸಾಧ್ಯವೇ ಇಲ್ಲ. ಆದರೆ ಮನಃಪೂರ್ವಕವಾಗಿ ಕೊಡಿ, ಕೊಡಬೇಕೆಂದು ಅಲ್ಲ. ಯಾರು ಮನಃಪೂರ್ವಕವಾಗಿ ಕೊಡುತ್ತಾರೆ, ಅವರಿಗೆ ಮನಃಪೂರ್ವಕವಾಗಿ ಸಿಗುತ್ತದೆ. ಕೊಡಬೇಕೆಂದು ಗೌರವವನ್ನು ಕೊಡುತ್ತೀರೆಂದರೆ ಸಿಗುವುದೂ ಸಹ ಅದೇ ಸಿಗುತ್ತದೆ. ಸದಾ ಹೃದಯದಿಂದ ಕೊಡಿ ಮತ್ತು ಹೃದಯದಿಂದ ತೆಗೆದುಕೊಳ್ಳಿರಿ. ಈ ಸ್ಲೋಗನ್ ಮೂಲಕ ಸದಾಕಾಲವೂ ನಿರ್ವಿಘ್ನ, ನಿಸ್ಸಂಕಲ್ಪ, ನಿಶ್ಚಿಂತವಾಗಿರುತ್ತೀರಿ. ನನ್ನದೇನಾಗುತ್ತದೆ ಎನ್ನುವ ಚಿಂತೆಯಿರುವುದಿಲ್ಲ. ನನ್ನದು ಇದ್ದೇ ಇದೆ, ಆಗಿಯೇ ಇದೆ, ನಿಶ್ಚಿಂತವಾಗಿರುತ್ತೀರಿ. ಮತ್ತು ಇಂತಹ ಶ್ರೇಷ್ಠಾತ್ಮನ ಶ್ರೇಷ್ಠ ಪ್ರಾಲಬ್ಧವು ವರ್ತಮಾನ ಮತ್ತು ಭವಿಷ್ಯವು ನಿಶ್ಚಿಂತವಾಗಿ ಇದ್ದೇ ಇದೆ. ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಯಾರು ಯಾರ ಸ್ಥಾನವನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ, ನಿಶ್ಚಿತವಿದೆ. ನಿಶ್ಚಿತವಾಗಿದೆ ಆದ್ದರಿಂದ ನಿಶ್ಚಿಂತವಿದ್ದೇವೆ, ಇವರಿಗೆ ಹೇಳಲಾಗುತ್ತದೆ – ತಂದೆಯ ಸಮಾನ ಫಾಲೋಫಾದರ್ ಮಾಡುವವರು. ತಿಳಿಯಿತೆ.

ಡಬಲ್ ವಿದೇಶಿ ಮಕ್ಕಳ ಮೇಲಂತು ವಿಶೇಷ ಸ್ನೇಹವಿದೆ. ಹೃದಯದ ಸ್ನೇಹವಿದೆ. ಬಾಪ್ದಾದಾರವರಂತು ತಿಳಿಸಿದ್ದೇವೆ - ಒಂದು ಹಳೆಯ ಹಾಡಿದೆ - ಊಂಚಿ-ಊಂಚಿ ದಿವಾರೆ....... ಇದು ಡಬಲ್ ವಿದೇಶಿಗಳ ಹಾಡಾಗಿದೆ. ಸಮುದ್ರವನ್ನು ಪಾರು ಮಾಡುತ್ತಾ, ಧರ್ಮ, ದೇಶ, ಭಾಷೆ, ಎಲ್ಲಾ ದೊಡ್ಡ ಗೋಡೆಗಳನ್ನೇ ಪಾರು ಮಾಡುತಾ ತಂದೆಯವರಾಗಿ ಬಿಟ್ಟಿರಿ, ಆದ್ದರಿಂದ ತಂದೆಗೆ ಪ್ರಿಯರಾಗಿದ್ದೀರಿ. ಭಾರತವಾಸಿಗಳಂತು ಇದ್ದೇ ಇರುವುದು ದೇವತೆಗಳ ಪೂಜಾರಿಗಳು. ಅವರಿಗೆ ದೊಡ್ಡ ಗೋಡೆಗಳನ್ನು ಪಾರು ಮಾಡಲಿಲ್ಲ. ಆದರೆ ತಾವು ಡಬಲ್ ವಿದೇಶಿಗಳು ಈ ದೊಡ್ಡ-ದೊಡ್ಡ ಗೋಡೆಗಳನ್ನು ಬಹಳ ಸಹಜವಾಗಿಯೇ ಪಾರು ಮಾಡಿದಿರಿ. ಆದ್ದರಿಂದ ಬಾಪ್ದಾದಾರವರು ಹೃದಯದಿಂದ ಈ ವಿಶೇಷತೆಯ ಹಾಡನ್ನು ಮಕ್ಕಳಿಗಾಗಿ ಹಾಡುತ್ತಾರೆ. ತಿಳಿಯಿತೆ - ಕೇವಲ ಖುಷಿ ಪಡಿಸುವುದಕ್ಕಾಗಿ ಹೇಳುತ್ತಿಲ್ಲ. ಕೆಲವು ಮಕ್ಕಳು ರಮಣೀಕತೆಯಲ್ಲಿ ಹೇಳುತ್ತಾರೆ- ಬಾಪ್ದಾದಾರವರಂತು ಎಲ್ಲರನ್ನೂ ಖುಷಿ ಪಡಿಸಿ ಬಿಡುತ್ತಾರೆ. ಆದರೆ ಖುಷಿ ಪಡಿಸುತ್ತಾರೆ ಅರ್ಥ ಸಹಿತವಾಗಿ. ತಾವು ತಮ್ಮೊಂದಿಗೆ ಕೇಳಿಕೊಳ್ಳಿರಿ- ಬಾಪ್ದಾದಾರವರು ಹಾಗೆಯೇ ಹೇಳುತ್ತಾರೆಯೇ ಅಥವಾ ಇದು ಪ್ರತ್ಯಕ್ಷವಾಗಿದೆಯೇ! ದೊಡ್ಡ-ದೊಡ್ಡ ಗೋಡೆಗಳನ್ನು ಪಾರು ಮಾಡಿಕೊಂಡು ಬಂದು ಬಿಟ್ಟಿರಲ್ಲವೆ! ಎಷ್ಟೊಂದು ಪರಿಶ್ರಮದಿಂದ ಟಿಕೇಟ್ನ್ನು ತೆಗೆಯುತ್ತೀರಿ. ಇಲ್ಲಿಂದ ಹೋಗುತ್ತಿದ್ದಂತೆಯೇ ಹಣವನ್ನು ಸೇರಿಸುತ್ತೀರಲ್ಲವೆ. ಬಾಪ್ದಾದಾರವರು ಯಾವಾಗ ಮಕ್ಕಳ ಸ್ನೇಹವನ್ನು ನೋಡುತ್ತಾರೆ, ಸ್ನೇಹದಿಂದ ತಲುಪುವುದಕ್ಕಾಗಿ ಎಷ್ಟೊಂದು ಸಾಧನಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ, ಯಾವ ವಿಧಿಯಿಂದ ತಲುಪುತ್ತಾರೆ, ಸ್ನೇಹಿ ಆತ್ಮರ ಸ್ನೇಹದ ಸಾಧನವನ್ನು ಬಾಪ್ದಾದಾರವರು ನೋಡಿ, ಆ ಲಗನ್ನ್ನು ನೋಡುತ್ತಾ ಖುಷಿಯಾಗುತ್ತಾರೆ. ಹೇಗೆ ಬರುತ್ತಾರೆಂದು ದೂರವಿರುವವರೊಂದಿಗೆ ಕೇಳಿರಿ? ಪರಿಶ್ರಮ ಪಟ್ಟ ನಂತರವೂ ಸಹ ತಲುಪಿ ಬಿಡುತ್ತೀರಲ್ಲವೆ. ಒಳ್ಳೆಯದು.

ಸದಾ ಕಂಬೈಂಡ್ ರೂಪದಲ್ಲಿ ಸ್ಥಿತರಾಗಿರುವ, ಸದಾ ತಂದೆಯ ಸಮಾನ ಅವ್ಯಕ್ತ ಭಾವದಲ್ಲಿ ಸ್ಥಿತರಾಗಿರುವ, ಸದಾ ಸಿದ್ಧಿ ಸ್ವರೂಪದ ಅನುಭವವನ್ನು ಮಾಡುವ, ತಮ್ಮ ಸಮರ್ಥ ಸಮಾನ ಸ್ವರೂಪದ ಮೂಲಕ ಸಾಕ್ಷಾತ್ಕಾರವನ್ನು ಮಾಡಿಸುವಂತಹ, ಇಂತಹ ಸದಾ ನಿಶ್ಚಿಂತ, ಸದಾ ನಿಶ್ಚಿತ ವಿಜಯಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಸ್ಯಾನ್ಫ್ರಾನ್ಸಿಸ್ಕೊ ಗ್ರೂಪ್ನೊಂದಿಗೆ:- ಎಲ್ಲರೂ ಸ್ವಯಂನ್ನು ಇಡೀ ವಿಶ್ವದಲ್ಲಿ ವಿಶೇಷ ಆತ್ಮರಾಗಿದ್ದೇವೆಂದು ಅನುಭವ ಮಾಡುತ್ತೀರಾ? ಏಕೆಂದರೆ ಇಡೀ ವಿಶ್ವದ ಅನೇಕ ಆತ್ಮರೆಲ್ಲರಿಂದ ತಂದೆಯನ್ನು ಗುರುತಿಸುವ ಭಾಗ್ಯವು, ತಾವು ವಿಶೇಷ ಆತ್ಮರಿಗೆ ಸಿಕ್ಕಿದೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ಗುರುತಿಸುವುದು ಎಷ್ಟೊಂದು ದೊಡ್ಡ ಭಾಗ್ಯವಾಗಿದೆ! ಗುರುತಿಸಿದಿರಿ, ಸಂಬಂಧವನ್ನು ಜೋಡಿಸಿದಿರಿ ಮತ್ತು ಪ್ರಾಪ್ತಿಯಾಯಿತು. ಈಗ ತಮ್ಮನ್ನು ತಂದೆಯ ಸರ್ವ ಖಜಾನೆಗಳ ಮಾಲೀಕರೆಂದು ಅನುಭವ ಮಾಡುತ್ತೀರಾ? ಯಾವಾಗ ಸದಾ ಮಕ್ಕಳಾಗಿರುತ್ತೀರಿ, ಮಕ್ಕಳೆಂದರೇ ಅಧಿಕಾರಿ. ಇದೇ ಸ್ಮೃತಿಯಿಂದ ಮತ್ತೆ-ಮತ್ತೆ ರಿವೈಜ್ ಮಾಡಿರಿ. ನಾನು ಯಾರು! ಯಾರ ಮಗುವಾಗಿದ್ದೇನೆ! ಅಮೃತವೇಳೆಯಲ್ಲಿ ಶಕ್ತಿಶಾಲಿ ಸ್ಮೃತಿ ಸ್ವರೂಪದ ಅನುಭವವನ್ನು ಮಾಡುವವರೇ ಶಕ್ತಿಶಾಲಿಯಾಗಿರುತ್ತಾರೆ. ಅಮೃತವೇಳೆಯು ಶಕ್ತಿಶಾಲಿಯಾಗಿರಲಿಲ್ಲವೆಂದರೆ, ಇಡೀ ದಿನದಲ್ಲಿಯೂ ವಿಘ್ನಗಳು ಬರುತ್ತವೆ. ಆದ್ದರಿಂದ ಅಮೃತವೇಳೆಯು ಸದಾ ಶಕ್ತಿಶಾಲಿಯಾಗಿರಲಿ. ಅಮೃತವೇಳೆಯಲ್ಲಿ ಸ್ವಯಂ ತಂದೆಯು ಮಕ್ಕಳಿಗೆ ವಿಶೇಷವಾಗಿ ವರದಾನವನ್ನು ಕೊಡಲು ಬರುತ್ತಾರೆ. ಆ ಸಮಯದಲ್ಲಿ ಯಾರು ವರದಾನವನ್ನು ತೆಗೆದುಕೊಳ್ಳುತ್ತಾರೆಯೋ, ಅವರು ಇಡೀ ದಿನದಲ್ಲಿ ಸಹಜಯೋಗಿಯ ಸ್ಥಿತಿಯಲ್ಲಿರುತ್ತಾರೆ. ಅಂದಮೇಲೆ ವಿದ್ಯೆ ಮತ್ತು ಅಮೃತವೇಳೆಯ ಮಿಲನವೆರಡೂ ವಿಶೇಷ ಶಕ್ತಿಶಾಲಿಯಾಗಿರಲಿ. ಅದರಿಂದ ಸದಾಕಾಲವೂ ಸುರಕ್ಷಿತವಾಗಿರುತ್ತೀರಿ.

ಜರ್ಮನಿ ಗ್ರೂಪ್ನೊಂದಿಗೆ:- ಸದಾ ತಮ್ಮನ್ನು ವಿಶ್ವ ಕಲ್ಯಾಣಕಾರಿ ತಂದೆಯ ಮಕ್ಕಳು ವಿಶ್ವ ಕಲ್ಯಾಣಕಾರಿ ಆತ್ಮರೆಂದು ತಿಳಿಯುತ್ತೀರಾ? ಅರ್ಥಾತ್ ಸರ್ವ ಖಜಾನೆಗಳಿಂದ ಸಂಪನ್ನರು. ಯಾವಾಗ ತಮ್ಮ ಬಳಿ ಖಜಾನೆಯು ಸಂಪನ್ನವಾಗಿರುತ್ತದೆ. ಆಗಲೇ ಅನ್ಯರಿಗೂ ಕೊಡುತ್ತೀರಲ್ಲವೆ! ಅಂದಾಗ ಸದಾ ಸರ್ವ ಖಜಾನೆಗಳಿಂದ ಸಂಪನ್ನ ಆತ್ಮರು, ಬಾಲಕರಿಂದ ಮಾಲೀಕರಾಗಿದ್ದೇವೆ! ಇಂತಹ ಅನುಭವವನ್ನು ಮಾಡುತ್ತೀರಾ? ಬಾಬಾ ಎಂದು ಹೇಳಿದಿರಿ ಅಂದರೆ ಬಾಲಕನಿಂದ ಮಾಲೀಕನಾಗಿ ಬಿಟ್ಟಿರಿ. ಇದೇ ಸ್ಮೃತಿಯು ವಿಶ್ವ ಕಲ್ಯಾಣಕಾರಿಯನ್ನಾಗಿ ಸ್ವತಹವಾಗಿಯೇ ಮಾಡಿ ಬಿಡುತ್ತದೆ. ಮತ್ತು ಇದೇ ಸ್ಮೃತಿಯು ಸದಾ ಖುಷಿಯಲ್ಲಿ ಹಾರಿಸುತ್ತದೆ. ಇದೇ ಬ್ರಾಹ್ಮಣ ಜೀವನವಾಗಿದೆ. ಸಂಪನ್ನವಾಗಿರುವುದು, ಖುಷಿಯಲ್ಲಿ ಹಾರುವುದು ಮತ್ತು ಸದಾ ತಂದೆಯ ಖಜಾನೆಗಳ ಅಧಿಕಾರದ ನಶೆಯಲ್ಲಿರುವುದು. ಇಂತಹ ಶ್ರೇಷ್ಠ ಬ್ರಾಹ್ಮಣ ಆತ್ಮರಾಗಿದ್ದೀರಿ. ಒಳ್ಳೆಯದು.

ವರದಾನ:

ತಮ್ಮ ಪ್ರತೀ ಕರ್ಮ ಮತ್ತು ಮಾತಿನ ಮೂಲಕ ನಡೆಯುತ್ತಾ-ಸುತ್ತಾಡುತ್ತಾ, ಪ್ರತಿಯೊಂದು ಆತ್ಮನಿಗೆ ಶಿಕ್ಷಣವನ್ನು ಕೊಡುವಂತಹ ಮಾಸ್ಟರ್ ಶಿಕ್ಷಕ ಭವ.

ಹೇಗೆ ಇತ್ತೀಚೆಗೆ ನಡೆಯುತ್ತಾ-ಸುತ್ತಾಡುತ್ತಿರುವ ಲೈಬ್ರರಿಯಾಗುತ್ತದೆ, ಹಾಗೆಯೇ ತಾವೂ ಸಹ ನಡೆಯುತ್ತಾ-ಸುತ್ತಾಡುತ್ತಾ ಮಾಸ್ಟರ್ ಶಿಕ್ಷಕನಾಗಿರಿ. ಸದಾ ತಮ್ಮ ಮುಂದೆ ವಿದ್ಯಾರ್ಥಿಯನ್ನು ನೋಡಿರಿ, ಒಂಟಿಯಲ್ಲ, ಸದಾ ವಿದ್ಯಾರ್ಥಿಯು ಮುಂದಿರಲಿ. ಸದಾ ಓದುತ್ತಿದ್ದೀರಿ ಮತ್ತು ಮಾಡಿಸುತ್ತಲೂ ಇದ್ದೀರಿ. ಯೋಗ್ಯ ಶಿಕ್ಷಕನೆಂದಿಗೂ ಸಹ ವಿದ್ಯಾರ್ಥಿಯ ಮುಂದೆ ಹುಡುಗಾಟಿಕೆಯಿಂದಿರುವುದಿಲ್ಲ, ಗಮನವನ್ನಿಡುತ್ತಾರೆ. ತಾವು ಮಲಗುತ್ತೀರಿ, ಏಳುತ್ತೀರಿ, ನಡೆಯುತ್ತೀರಿ, ತಿನ್ನುತ್ತೀರಿ, ಪ್ರತೀ ಸಮಯದಲ್ಲಿ ತಿಳಿಯಿರಿ - ನಾವು ದೊಡ್ಡ ಕಾಲೇಜಿನಲ್ಲಿ ಕುಳಿತಿದ್ದೇವೆ, ವಿದ್ಯಾರ್ಥಿಗಳು ನೋಡುತ್ತಿದ್ದಾರೆ.

ಸ್ಲೋಗನ್:

ಆತ್ಮ ನಿಶ್ಚಯದಿಂದ ತಮ್ಮ ಸಂಸ್ಕಾರಗಳನ್ನು ಸಂಪೂರ್ಣ ಪಾವನವನ್ನಾಗಿ ಮಾಡುವುದೇ ಶ್ರೇಷ್ಠ ಯೋಗವಾಗಿದೆ.