12.11.2018         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ -
ಜ್ಞಾನದ ಬುಲ್ ಬುಲ್ ಪಕ್ಷಿಗಳಾಗಿ ಇಡೀ ದಿನ ಜ್ಞಾನದ ಧ್ವನಿ (ಟಿಕಲೂ-ಟಿಕಲೂ) ಮಾಡುತ್ತಾ ಇರಿ, ಆಗ ಲೌಕಿಕ ಮತ್ತು ಪಾರಲೌಕಿಕ ಮಾತಾಪಿತರನ್ನು ಪ್ರತ್ಯಕ್ಷ ಮಾಡಬಲ್ಲಿರಿ.”

ಪ್ರಶ್ನೆ:
“ಜ್ಞಾನದ ಮನನ ಮಾಡಿದ್ದೇ ಆದರೆ ನಶೆಯೇರುತ್ತದೆ” ಎನ್ನುವ ಗಾದೆ ಮಾತಿನ ಭಾವಾರ್ಥವೇನಾಗಿದೆ?

ಉತ್ತರ:
ಮನನ ಮಾಡುವುದು ಎಂದರೆ ಬುದ್ಧಿಯೋಗವನ್ನು ಅಲ್ಲಿ-ಇಲ್ಲಿ ಅಲೆದಾಡಿಸದೆ ಒಬ್ಬ ತಂದೆಯನ್ನು ನೆನಪು ಮಾಡುವುದು, ಬುದ್ಧಿಯಲ್ಲಿ ಒಬ್ಬ ತಂದೆಯ ನೆನಪಿದ್ದಾಗ ನಶೆಯೇರುವುದು ಆದರೆ ಇದರಲ್ಲಿ ದೇಹಾಭಿಮಾನವು ಬಹಳ ವಿಘ್ನಗಳನ್ನು ಹಾಕುತ್ತದೆ. ಸ್ವಲ್ಪ ಖಾಯಿಲೆ ಬಂದರೂ ಸಹ ಬೇಸರವಾಗಿ ಬಿಡುತ್ತಾರೆ, ಮಿತ್ರ-ಸಂಬಂಧಿಗಳು ನೆನಪಿಗೆ ಬರುತ್ತಾರೆ ಆದ್ದರಿಂದ ನಶೆಯೇರುವುದಿಲ್ಲ. ಯೋಗದಲ್ಲಿದ್ದರೆ ನೋವೂ ಸಹ ಕಡಿಮೆಯಾಗಿ ಬಿಡುತ್ತದೆ.

ಗೀತೆ:
ನೀನು ರಾತ್ರಿ ನಿದ್ರೆಯಲ್ಲಿ ಕಳೆದೆ

ಓಂ ಶಾಂತಿ.
ಇವೆಲ್ಲಾ ಮಾತುಗಳು ಶಾಸ್ತ್ರಗಳಲ್ಲಿಯೂ ಬರೆಯಲ್ಪಟ್ಟಿದೆ. ಒಬ್ಬರು ಇನ್ನೊಬ್ಬರಿಗೆ ತಿಳಿಸಿಯೂ ಕೊಡುತ್ತಾರೆ. ಗುರುಗಳು ಅನೇಕ ಪ್ರಕಾರದ ಮತಗಳನ್ನು ಕೊಡುತ್ತಾರೆ. ಬಹಳ ಒಳ್ಳೊಳ್ಳೆಯ ಭಕ್ತರು ಕುಟೀರದಲ್ಲಿ ಕುಳಿತು ಗೋಮುಖ ವಸ್ತ್ರದಲ್ಲಿ (ಚೀಲ) ಕೈಯನ್ನು ಹಾಕಿ ಮಾಲೆಯನ್ನು ಜಪಿಸುತ್ತಾರೆ. ಇದೂ ಸಹ ಕಲಿಸಿರುವ ಒಂದು ರೀತಿಯಾಗಿ ಫ್ಯಾಷನ್ ಆಗಿದೆ. ಆದರೆ ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದೆಲ್ಲವನ್ನೂ ಬಿಡಿ, ಆತ್ಮವಂತೂ ತಂದೆಯ ಸ್ಮರಣೆ (ನೆನಪು) ಮಾಡಬೇಕಾಗಿದೆ. ಇದರಲ್ಲಿ ಮಾಲೆಯನ್ನು ಜಪಿಸುವ ಮಾತಿಲ್ಲ. ಶಿವಾಯ ನಮಃ ಗೀತೆಯು ಎಲ್ಲದಕ್ಕಿಂತ ಚೆನ್ನಾಗಿದೆ. ಇದರಲ್ಲಿಯೂ ತಿಳಿಸಲಾಗುತ್ತದೆ, ನೀವು ತಾಯಿ ತಂದೆ ಭಗವಂತನನ್ನು ರಚೈತ ತಂದೆ ಎಂದು ಹೇಳುತ್ತಾರೆ - ಈಗ ರಚೈತ ಎಂದು ಹೇಳುತ್ತಾರೆಂದರೆ ಅವರು ರಚನೆ ಮಾಡುತ್ತಾರೆಯೇ? ಅವಶ್ಯವಾಗಿ ಹೊಸ ಪ್ರಪಂಚವನ್ನೇ ರಚಿಸುತ್ತಾರೆ ಎಂಬ ಮಾತನ್ನಂತೂ ಎಲ್ಲರೂ ತಿಳಿದುಕೊಳ್ಳುತ್ತಾರೆ. ನೀವು ಮಾತಾಪಿತ ನಾನು ನಿಮ್ಮ ಬಾಲಕ, ಎಂದೂ ಹಾಡುತ್ತಾರೆ ಅಂದಮೇಲೆ ಮೊದಲನೆಯದಾಗಿ - ಈಶ್ವರನು ಎಲ್ಲರ ತಂದೆಯಾದರು. ತಂದೆಯಿರುವರೆಂದರೆ ತಾಯಿಯೂ ಅವಶ್ಯವಾಗಿ ಬೇಕು. ತಾಯಿಯಿಲ್ಲದೇ ರಚಿಸಲು ಸಾಧ್ಯವಿಲ್ಲ. ಹೇಗೆ ರಚನೆ ಮಾಡುತ್ತಾರೆ ಎಂಬ ಮಾತನ್ನು ಯಾರೂ ತಿಳಿದುಕೊಂಡಿಲ್ಲ. ಎರಡನೆಯದಾಗಿ - ಪರಸ್ಪರ ಎಲ್ಲರೂ ಸಹೋದರ-ಸಹೋದರಿಯರಾದಿರಿ ಅಂದಮೇಲೆ ಮತ್ತೆ ವಿಕಾರದ ದೃಷ್ಟಿಯಿರಲು ಸಾಧ್ಯವಿಲ್ಲ. ಏಕೆಂದರೆ ಒಬ್ಬರೆ ಮಾತಾಪಿತರಾಗಿದ್ದಾರಲ್ಲವೆ. ಅಂದಾಗ ಈ ಅಂಶಗಳು ತಿಳಿಯಲು ಮತ್ತು ತಿಳಿಸಿಕೊಡಲು ಬಹಳ ಚೆನ್ನಾಗಿವೆ. ಮೂರನೆಯದಾಗಿ - ಅವಶ್ಯವಾಗಿ ತಂದೆಯೇ ಸೃಷ್ಟಿಯನ್ನು ರಚಿಸಿರಬೇಕು. ನಾವು ಬಾಲಕರಾಗಿದ್ದೆವು, ಈಗ ಪುನಃ ಆಗಿದ್ದೇವೆ. 84 ಜನ್ಮಗಳು ಪೂರ್ಣವಾದ ನಂತರ ಮತ್ತೆ ಈಗ ಮಾತಾಪಿತರವರಾಗಿದ್ದೇವೆ. ಯಾವುದು ಭಕ್ತಿಮಾರ್ಗದಲ್ಲಿ ಗಾಯನ ನಡೆಯುತ್ತದೆ. ಮಾತಾಪಿತರು ಸೃಷ್ಟಿಯನ್ನು ರಚಿಸುತ್ತಾರೆ. ನಾವು ಅವರ ಬಾಲಕರಾಗುತ್ತೇವೆಂದರೆ ಅವಶ್ಯವಾಗಿ ಅಪಾರ ಸುಖವನ್ನು ನೀಡುತ್ತಾರೆ. ಪರಮಾತ್ಮನು ಮಾತಾಪಿತರೂ ಆಗುತ್ತಾರೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ ಎಂಬ ಮಾತನ್ನು ಯಾರೂ ತಿಳಿದುಕೊಂಡಿಲ್ಲ.

ನಾವು ಬ್ರಹ್ಮನ ಸಂತಾನರೆಂದಮೇಲೆ ಪರಸ್ಪರ ಸಹೋದರ-ಸಹೋಯರಿರಾದೆವು. ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೇವೆ ಅವರನ್ನು ರಚಿಸುವವರು ಅವರಾಗಿದ್ದಾರೆ. ಅಪಾರ ಸುಖವನ್ನು ಪಡೆಯುವುದಕ್ಕೋಸ್ಕರ ಮಾತಾಪಿತರಿಂದ ರಾಜಯೋಗವನ್ನು ಕಲಿಯುತ್ತಿದ್ದೇವೆ. ಯಾವಾಗ ನಾವು ದುಃಖದಲ್ಲಿರುತ್ತೇವೆಯೋ ಆಗಲೇ ಅಪಾರ ಸುಖವು ಸಿಗುತ್ತದೆ. ಆದರೆ ಭವಿಷ್ಯದ ಸುಖದಲ್ಲಿ ಬಂದು ತಂದೆಯು ಶಿಕ್ಷಣ ನೀಡುತ್ತಾರೆಂದಲ್ಲ. ಯಾವಾಗ ನಾವು ದುಃಖದಲ್ಲಿರುತ್ತೇವೆಯೋ ಆಗಲೇ ಸುಖದಲ್ಲಿ ಹೋಗುವ ಶಿಕ್ಷಣ ಸಿಗುತ್ತದೆ. ಆ ಮಾತಾಪಿತರೇ ಬಂದು ಸುಖ ಕೊಡುತ್ತಾರೆ. ಆಡಂ ಮತ್ತು ಈವ್ ಪ್ರಸಿದ್ಧರಾಗಿದ್ದಾರೆ. ಅವರೂ ಸಹ ಅವಶ್ಯವಾಗಿ ಪರಮಾತ್ಮನ ಸಂತಾನರಾದರು ಅಂದಮೇಲೆ ಮತ್ತೆ ಪರಮಾತ್ಮ ಯಾರು?

ಮಕ್ಕಳು ಇದನ್ನಂತೂ ತಿಳಿದುಕೊಂಡಿದ್ದೀರಿ - ತಂದೆಯು ಯಾವ ಜ್ಞಾನವನ್ನು ತಿಳಿಸುತ್ತಾರೆಯೋ ಅದು ಎಲ್ಲಾ ಧರ್ಮದವರಿಗಾಗಿಯೂ ಇದೆ. ಇಡೀ ಪ್ರಪಂಚದವರ ಬುದ್ಧಿಯೋಗವು ಆ ತಂದೆಯಿಂದ ದೂರವಾಗಿದೆ. ಮಾಯಾ ಭೂತವು ಬುದ್ಧಿಯೋಗವನ್ನು ಜೋಡಿಸಲು ಬಿಡುವುದಿಲ್ಲ. ಅದಕ್ಕೆ ಬದಲಾಗಿ ಇನ್ನೂ ಬುದ್ಧಿಯೋಗವನ್ನು ಕತ್ತರಿಸಿ ಬಿಡುತ್ತದೆ. ಆದ್ದರಿಂದ ತಂದೆಯು ಬಂದು ಭೂತದ ಮೇಲೆ ವಿಜಯ ಪ್ರಾಪ್ತಿ ಮಾಡಿಸುತ್ತಾರೆ. ಇತ್ತೀಚಿನ ಪ್ರಪಂಚದಲ್ಲಿ ರಿದ್ಧಿ ಸಿದ್ಧಿಯವರೂ ಅನೇಕರಿದ್ದಾರೆ. ಇದು ಭೂತಗಳ ಪ್ರಪಂಚವಾಗಿದೆ. ಕಾಮ ವಿಕಾರ ರೂಪಿ ಭೂತವು ಒಬ್ಬರಲ್ಲ ಒಬ್ಬರಿಗೆ ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುತ್ತದೆ. ಒಬ್ಬರು ಇನ್ನೊಬ್ಬರಿಗೆ ದುಃಖ ಕೊಡುವುದು ಭೂತದ ಕೆಲಸವಾಗಿದೆ. ಆದರೆ ಸತ್ಯಯುಗದಲ್ಲಿ ಭೂತಗಳಿರುವುದಿಲ್ಲ. ಅದೇ ಈ ಭೂತದ ಹೆಸರು ಬೈಬಲ್ನಲ್ಲಿದೆ. ರಾವಣನೆಂದರೆ ಭೂತ, ಇದಂತೂ ಭೂತದ ರಾಜ್ಯವಾಗಿದೆ. ಸತ್ಯಯುಗ ರಾಮ ರಾಜ್ಯದಲ್ಲಿ ಭೂತವಿರುವುದಿಲ್ಲ, ಅಲ್ಲಿ ಅಪಾರ ಸುಖವಿರುತ್ತದೆ.

ಓಂ ನಮಃ ಶಿವಾಯ ಗೀತೆಯು ಬಹಳ ಚೆನ್ನಾಗಿದೆ. ಶಿವನು ಮಾತಾಪಿತನಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನಿಗೆ ಮಾತಾಪಿತರೆಂದು ಹೇಳುವುದಿಲ್ಲ. ಶಿವನಿಗೇ ತಂದೆಯೆಂದು ಹೇಳುತ್ತಾರೆ. ಆಡಂ ಈವ್ ಅರ್ಥಾತ್ ಬ್ರಹ್ಮಾ ಸರಸ್ವತಿ ಇಲ್ಲಿಯೇ ಆಗಿದ್ದಾರೆ. ಅಲ್ಲಿ ಕ್ರಿಶ್ಚಿಯನ್ನರು ಪರಮಪಿತ ಪರಮಾತ್ಮನೊಂದಿಗೆ ಪ್ರಾರ್ಥನೆ ಮಾಡುತ್ತಾರೆ. ಈ ಭಾರತವು ಮಾತಾಪಿತರ ಹಳ್ಳಿಯಾಗಿದೆ. ಅವರ ಜನ್ಮವೂ ಇಲ್ಲಿಯೇ ಆಗಿದೆ. ಆದ್ದರಿಂದ ತಿಳಿಸಬೇಕು - ನೀವು ಮಾತಾಪಿತ ಎಂದು ಹಾಡುತ್ತೀರೆಂದರೆ ಪರಸ್ಪರ ಸಹೋದರ-ಸಹೋದರಿಯರಾದಿರಲ್ಲವೆ. ಪ್ರಜಾಪಿತ ಬ್ರಹ್ಮನ ಮೂಲಕ ರಚನೆಯನ್ನು ರಚಿಸುತ್ತಾರೆ. ದತ್ತು ಮಾಡಿಕೊಳ್ಳುತ್ತಾರೆ, ಸರಸ್ವತಿಯೂ ಸಹ ದತ್ತು ಮಗು ಆಗಿದ್ದಾರೆ. ಪ್ರಜಾಪಿತ ಬ್ರಹ್ಮ ದತ್ತು ಮಾಡಿಕೊಂಡಿದ್ದಾರೆ, ಆದ್ದರಿಂದಲೇ ಇಷ್ಟೆಲ್ಲಾ ಬ್ರಹ್ಮಾಕುಮಾರ-ಬ್ರಹ್ಮಕುಮಾರಿಯರಾಗಿದ್ದೀರಲ್ಲವೆ. ಶಿವ ತಂದೆಯು ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾ ಹೋಗುತ್ತಾರೆ. ಹೊಸ ಸೃಷ್ಟಿಯು ಬ್ರಹ್ಮಾರವರ ಮೂಲಕವೇ ರಚಿಸಲ್ಪಡುತ್ತದೆ. ಅನ್ಯರಿಗೆ ತಿಳಿಸಿಕೊಡಲು ಅನೇಕ ಯುಕ್ತಿಗಳಿವೆ ಆದರೆ ಯಥಾರ್ಥವಾಗಿ ತಿಳಿಸುವುದೇ ಇಲ್ಲ. ಈ ಶಿವಾಯ ನಮಃ ಗೀತೆಯನ್ನು ಅಲ್ಲಿ ಇಲ್ಲಿ ಎಲ್ಲಾ ಕಡೆ ಹಾಕಿ ಎಂದು ತಂದೆಯು ಅನೇಕ ಬಾರಿ ತಿಳಿಸಿದ್ದಾರೆ. ಮಾತಾಪಿತರಿಗೆ ನಾವು ಬಾಲಕರು ಹೇಗೆ ಎಂಬುದನ್ನು ನಾವು ತಿಳಿಸುತ್ತೇವೆ. ಬ್ರಹ್ಮಾರವರ ಮೂಲಕ ಹೊಸ ಸೃಷ್ಟಿಯ ಸ್ಥಾಪನೆ ಮಾಡಿದ್ದರು, ಈಗ ಕಲಿಯುಗದ ಅಂತ್ಯವಾಗಿದೆ. ಈಗ ಸತ್ಯಯುಗದ ಸ್ಥಾಪನೆ ಮಾಡುತ್ತಿದ್ದಾರೆ, ಇದನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕು. ಈ ಜ್ಞಾನವು ಬಹಳ ಸಹಜವಾಗಿದೆ. ಆದರೆ ಮಾಯೆಯ ಬಿರುಗಾಳಿಗಳು ಜ್ಞಾನ-ಯೋಗದಲ್ಲಿ ನಿಲ್ಲಲು ಬಿಡುವುದಿಲ್ಲ. ಬುದ್ಧಿಯು ಚಂಚಲವಾಗಿ ಬಿಡುತ್ತದೆ. ಯಾವಾಗಲೂ ಇದನ್ನು ತಿಳಿಸಬೇಕು - ಭಗವಂತ ರಚೈತನಂತೂ ಎಲ್ಲರಿಗೂ ಒಬ್ಬರೇ ಆಗಿದ್ದಾರೆ. ಅವರನ್ನು ಎಲ್ಲರೂ ತಂದೆಯೆಂದು ಹೇಳುತ್ತಾರೆಂದರಲ್ಲವೆ. ಆ ನಿರಾಕಾರನು ಜನನ-ಮರಣ ರಹಿತನಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನಿಗೂ ಸಹ ಸೂಕ್ಷ್ಮ ಶರೀರಗಳಿವೆ. ಮನುಷ್ಯರು 84 ಜನ್ಮಗಳನ್ನು ಇಲ್ಲಿಯೇ ತೆಗೆದುಕೊಳ್ಳುತ್ತಾರೆ, ಸೂಕ್ಷ್ಮವತನದಲ್ಲಲ್ಲ. ನಿಮಗೆ ಗೊತ್ತಿದೆ - ನಾವು ಮಾತಾಪಿತರ ಬಾಲಕರಾಗಿದ್ದೇವೆ. ನಾವು ಹೊಸ ಮಕ್ಕಳಾಗಿದ್ದೇವೆ, ತಂದೆಯು ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ. ಯಾವಾಗ ಪ್ರಜಾಪಿತ ಬ್ರಹ್ಮಾ ಇರುವರೆಂದಮೇಲೆ ಎಷ್ಟು ಪ್ರಜೆಗಳಿರಬಹುದು? ಅವಶ್ಯವಾಗಿ ಇಷ್ಟೊಂದು ಮಕ್ಕಳಿದ್ದಾರೆಂದರೆ ಇವರೆಲ್ಲರನ್ನೂ ದತ್ತು ಮಾಡಿಕೊಂಡಿರಬೇಕು. ಬ್ರಹ್ಮನಿಗೆ ಅನೇಕ ಭುಜಗಳನ್ನು ತೋರಿಸುತ್ತಾರೆ ಆದರೆ ಇದರ ಅರ್ಥವನ್ನೇನೂ ತಿಳಿದುಕೊಂಡಿಲ್ಲ. ಯಾವುದೆಲ್ಲವೂ ಚಿತ್ರಗಳು ಹೊರಬಂದಿವೆಯೋ ಅಥವಾ ಶಾಸ್ತ್ರಗಳು ರಚಿಸಲ್ಪಟ್ಟಿವೆಯೋ ಇವೆಲ್ಲವೂ ಡ್ರಾಮಾದ ಮೇಲೆ ಆಧಾರವನ್ನು ಇಟ್ಟುಕೊಳ್ಳಬೇಕಾಗುತ್ತದೆ. ಬ್ರಹ್ಮನ ದಿನವಿತ್ತು ನಂತರ ಭಕ್ತಿಮಾರ್ಗವು ಪ್ರಾರಂಭವಾಗಿದೆ, ಅದೇ ನಡೆದು ಬರುತ್ತಿದೆ. ಈ ರಾಜಯೋಗವನ್ನು ತಂದೆಯೇ ಬಂದು ಕಲಿಸುತ್ತಾರೆ. ಇದು ಸ್ಮೃತಿಯಲ್ಲಿರಬೇಕು.

ಮನನ ಮಾಡಿದರೆ ನಶೆಯಿರುತ್ತದೆ ಎಂದು ಹೇಳುತ್ತಾರಲ್ಲವೆ, ಆದರೆ ಬುದ್ಧಿಯೋಗವು ತಂದೆಯ ಜೊತೆಯಿರಬೇಕು, ಇಲ್ಲಂತೂ ಅನೇಕ ಮಕ್ಕಳ ಬುದ್ಧಿಯೋಗವು ಅಲೆದಾಡುತ್ತಿರುತ್ತದೆ. ಹಳೆಯ ಪ್ರಪಂಚದ, ಮಿತ್ರ-ಸಂಬಂಧಿಗಳು ಮುಂತಾದವರ ಕಡೆ ಇಲ್ಲವೆ ದೇಹಾಭಿಮಾನದಲ್ಲಿ ಸಿಕ್ಕಿಕೊಂಡಿರುತ್ತಾರೆ. ಸ್ವಲ್ಪ ಖಾಯಿಲೆಯಾದರೂ ಸಹ ಬೇಸರವಾಗಿ ಬಿಡುತ್ತಾರೆ. ಯೋಗದಲ್ಲಿದ್ದರೆ ನೋವೂ ಸಹ ಕಡಿಮೆಯಾಗುವುದು. ಯೋಗ ಮಾಡದಿದ್ದರೆ ಖಾಯಿಲೆ ಮೊದಲಾದವುಗಳಿಂದ ಹೇಗೆ ಬಿಡುಗಡೆಯಾಗುತ್ತೀರಿ? ವಿಚಾರ ಮಾಡಬೇಕು - ಮಾತಾಪಿತಾ ಯಾರು ನಂಬರ್ವನ್ ಪಾವನರಾಗುತ್ತಾರೆಯೋ ಅವರೇ ಮೊದಲು ಎಲ್ಲರಿಗಿಂತ ಹೆಚ್ಚಾಗಿ ಕೆಳಗಿಳಿಯುತ್ತಾರೆ. ಅವರಂತೂ ಹೆಚ್ಚಿನ ಕರ್ಮ ಭೋಗವನ್ನು ಭೋಗಿಸಬೇಕಾಗುತ್ತದೆ. ಆದರೆ ಯೋಗದಲ್ಲಿರುವ ಕಾರಣ ಖಾಯಿಲೆಯೂ ದೂರವಾಗುತ್ತಾ ಹೋಗುತ್ತದೆ. ಇಲ್ಲವೆಂದರೆ ಇವರು ಎಲ್ಲರಿಗಿಂತ ಹೆಚ್ಚಿನ ನೋವನ್ನುನುಭವಿಸಬೇಕಾಗುತ್ತಿತ್ತು. ಆದರೆ ಯೋಗಬಲದಿಂದ ದುಃಖವು ದೂರವಾಗುತ್ತದೆ ಮತ್ತು ತಂದೆಯಿಂದ ಸ್ವರ್ಗದ ಅಪಾರ ಸುಖವನ್ನು ಪಡೆಯುತ್ತೇವೆನ್ನುವ ಆಪಾರ ಖುಷಿಯಲ್ಲಿ ಇರುತ್ತಾರೆ. ಅನೇಕ ಮಕ್ಕಳು ತಮ್ಮನ್ನು ಆತ್ಮನೆಂದು ತಿಳಿಯುವುದೇ ಇಲ್ಲ. ಇಡೀ ದಿನ ದೇಹದ ಕಡೆಗೆ ಗಮನವಿರುತ್ತದೆ.

ತಂದೆಯು ಬಂದು ಜ್ಞಾನ ಧ್ವನಿ ಮುದ್ದು ಮುದ್ದಾಗಿ ಹೇಳುವುದನ್ನು ಕಲಿಸುತ್ತಾರೆ ಅಂದಮೇಲೆ ನೀವು ಜ್ಞಾನದ ಪಕ್ಷಿಗಳಾಗಬೇಕು. ಹೊರಗೆ ಅನೇಕ ಒಳ್ಳೆಯ ಚಿಕ್ಕ-ಚಿಕ್ಕ ಮಕ್ಕಳಿದ್ದಾರೆ, ಅವರು ಬಹಳ ಚೆನ್ನಾಗಿ ಜ್ಞಾನ ಧ್ವನಿ ಮಾಡುತ್ತಾರೆ. ಭೀಷ್ಮ ಪಿತಾಮಹ ಮುಂತಾದವರಿಗೂ ಸಹ ಕುಮಾರಿಯರ ಮೂಲಕವೇ ಜ್ಞಾನವು ಸಿಕ್ಕಿದೆ. ಅಂದಮೇಲೆ ಚಿಕ್ಕ ಚಿಕ್ಕ ಮಕ್ಕಳು ಎದ್ದು ನಿಲ್ಲಬೇಕು. ಚಿಕ್ಕ ಮಕ್ಕಳು ಲೌಕಿಕ-ಪಾರಲೌಕಿಕ ಮಾತಾಪಿತರ ಪ್ರತ್ಯಕ್ಷತೆಯನ್ನು ಮಾಡುತ್ತಾರೆ. ಲೋಕ-ಪರಲೋಕವೂ ಮಂಗಳವಾಗುತ್ತದೆಯಲ್ಲವೇ. ಆದುದರಿಂದ ಲೌಕಿಕ ತಂದೆ-ತಾಯಿಯನ್ನೂ ಸಹ ಜ್ಞಾನದಲ್ಲಿ ಕರೆ ತರಬೇಕು. ಮುಂದೆ ಹೋದಂತೆ ಚಿಕ್ಕ ಚಿಕ್ಕ ಮಕ್ಕಳೂ ಸಹ ತಂದೆ-ತಾಯಿಯನ್ನು ಜ್ಞಾನದಲ್ಲಿ ಕರೆ ತರುವುದನ್ನು ನೀವು ನೋಡುತ್ತೀರಿ. ಕುಮಾರಿಯರಿಗೆ ಬಹಳ ಮಾನ್ಯತೆಯಿರುತ್ತದೆ, ಎಲ್ಲರೂ ನಮಸ್ತೆ ಮಾಡುತ್ತಾರೆ. ಶಿವ ಶಕ್ತಿ ಸೇನೆಯಲ್ಲಿ ಎಲ್ಲರೂ ಕುಮಾರಿಯರಿದ್ದಾರೆ. ಭಲೆ ಮಾತೆಯರಿದ್ದಾರೆ ಅವರೂ ಸಹ ಕುಮಾರಿಯರೆಂದು ಕರೆಸಿಕೊಳ್ಳುತ್ತಾರಲ್ಲವೆ. ಬಹಳ ಒಳ್ಳೊಳ್ಳೆಯ ಕುಮಾರಿಯರು ತಯಾರಾಗುವರು. ಚಿಕ್ಕ-ಚಿಕ್ಕ ಕುಮಾರಿಯರೆ ಬಹಳ ಪ್ರತ್ಯಕ್ಷತೆ ಮಾಡುತ್ತಾರೆ. ಕೆಲಕೆಲವು ಚಿಕ್ಕ ಮಕ್ಕಳು ಬಹಳ ಒಳ್ಳೆಯವರಾಗಿದ್ದಾರೆ, ಆದರೆ ಕೆಲವರಲ್ಲಿ ಮೋಹವೂ ಬಹಳವಿದೆ. ಈ ಮೋಹವು ಬಹಳ ಕೆಟ್ಟದ್ದಾಗಿದೆ. ಇದೂ ಸಹ ಒಂದು ಭೂತವಾಗಿದೆ, ತಂದೆಯಿಂದ ವಿಮುಖರನ್ನಾಗಿ ಮಾಡಿ ಬಿಡುತ್ತದೆ. ಮಾಯಾ ಭೂತದ ಕೆಲಸವೇ ಪರಮಪಿತ ಪರಮಾತ್ಮನಿಂದ ವಿಮುಖರನ್ನಾಗಿ ಮಾಡುವುದಾಗಿದೆ.

ಈ ಓಂ ನಮಃ ಶಿವಾಯ ಎನ್ನುವ ಗೀತೆಯು ಎಲ್ಲದಕ್ಕಿಂತ ಒಳ್ಳೆಯದಾಗಿದೆ. ಇದರಲ್ಲಿಯೇ ನೀವು ಮಾತಾಪಿತ ಎನ್ನುವ ಶಬ್ಧಗಳು ಸಿಗುತ್ತವೆ. ರಾಧಾ ಕೃಷ್ಣನ ಮಂದಿರದಲ್ಲಿಯೂ ಸಹ ಜೋಡಿಯನ್ನು ತೋರಿಸುತ್ತಾರೆ. ಆದರೆ ಗೀತೆಯಲ್ಲಿ ಕೃಷ್ಣನ ಜೊತೆಯಲ್ಲಿ ರಾಧೆಯ ಹೆಸರು ಇಲ್ಲವೆ ಇಲ್ಲ. ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ.. ಇದು ಕೃಷ್ಣನ ಮಹಿಮೆಯಾಗಿದೆ. ಅಂದರೆ ಕೃಷ್ಣನ ಮಹಿಮೆಯೇ ಬೇರೆ, ಶಿವನ ಮಹಿಮೆಯೇ ಬೇರೆಯಾಗಿದೆ. ಶಿವನ ಆರತಿಯಲ್ಲಿ ಎಷ್ಟೊಂದು ಮಹಿಮೆ ಮಾಡುತ್ತಾರೆ, ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಪೂಜೆ ಮಾಡುತ್ತಾ-ಮಾಡುತ್ತಾ ಸುಸ್ತಾಗಿ ಬಿಟ್ಟಿದ್ದಾರೆ. ನಿಮಗೆ ಗೊತ್ತಿದೆ - ಮಮ್ಮಾ, ಬಾಬಾ ಮತ್ತು ನಾವು ಬ್ರಾಹ್ಮಣರೇ ಎಲ್ಲರಿಗಿಂತ ಹೆಚ್ಚಿನ ಪೂಜಾರಿಗಳಾಗಿದ್ದೆವು. ಈಗ ಮತ್ತೆ ಬಂದು ಬ್ರಾಹ್ಮಣರಾಗಿದ್ದೇವೆ. ಅವರಲ್ಲಿಯೂ ನಂಬರ್ವಾರ್ ಇದೆ. ಕರ್ಮಭೋಗವೂ ಇರುತ್ತದೆ, ಅದನ್ನು ಯೋಗದಿಂದ ಕಳೆಯಬೇಕಾಗಿದೆ. ದೇಹಾಭಿಮಾನವನ್ನು ಬಿಡಬೇಕಾಗಿದೆ, ತಂದೆಯನ್ನು ನೆನಪು ಮಾಡಿ ಬಹಳ ಖುಷಿಯಲ್ಲಿರಬೇಕಾಗಿದೆ. ಮಾತಾಪಿತರಿಂದ ನಮಗೆ ಅಪಾರ ಸುಖವು ಸಿಗುತ್ತದೆ. ಈ ಬ್ರಹ್ಮಾರವರೂ ಹೇಳುತ್ತಾರಲ್ಲವೆ - ತಂದೆಯಿಂದ ನಮಗೆ ಆಸ್ತಿಯು ಸಿಗುತ್ತದೆ. ತಂದೆಯು ನನ್ನ (ಬ್ರಹ್ಮಾ) ರಥವನ್ನು ಆಧಾರವಾಗಿ ಪಡೆದಿದ್ದಾರೆ. ಅಂದಾಗ ತಂದೆಯು ಈ ರಥದ ಖಾತರಿ ಅರ್ಥಾತ್ ಸಂಭಾಲನೆ ಮಾಡುತ್ತಾರೆ. ಆದರೆ ಮೊದಲು ನಾನಾತ್ಮನು ಈ ರಥಕ್ಕೆ ತಿನ್ನಿಸುತ್ತೇನೆ ಎಂದು ತಿಳಿಯುತ್ತಿದ್ದರು. ಆದರೆ ಈ ರಥಕ್ಕೆ ತಿನ್ನಿಸುವವರು ಆ ತಂದೆಯೇ ಆಗಿದ್ದಾರೆ, ಅವರೇ ಈ ರಥದ ಸಂಭಾಲನೆ ಮಾಡಬೇಕೆಂದು ಹೇಳುತ್ತಾರೆ. ಸಾಹೇಬರು ಕುದುರೆಯ ಮೇಲೇರುತ್ತಾರೆಂದರೆ ಕುದುರೆಗೆ ತಮ್ಮ ಕೈಯಿಂದ ತಿನ್ನಿಸುತ್ತಾರೆ, ಕೆಲವೊಮ್ಮೆ ಬೆನ್ನಿನ ಮೇಲೆ ಕೈಯಿಂದ ನೇವರಿಸುತ್ತಾರೆ. ಬಹಳ ಉಪಚಾರ ಮಾಡುತ್ತಾರೆ ಏಕೆಂದರೆ ಅದರ ಮೇಲೆ ಸವಾರಿ ಮಾಡುತ್ತಾರಲ್ಲವೆ. ಅಂದಮೇಲೆ ಇವರ (ಬ್ರಹ್ಮಾ) ಸವಾರಿ ಮಾಡುತ್ತಾರೆಂದರೆ ಆ ತಂದೆಯು ಇವರ ಉಪಚಾರ ಮಾಡುವುದಿಲ್ಲವೇನು! ಬ್ರಹ್ಮಾ ತಂದೆಯು ಸ್ನಾನ ಮಾಡುವ ಸಮಯದಲ್ಲಿ ನಾನೂ ಸ್ನಾನ ಮಾಡುತ್ತೇನೆ, ತಂದೆಯೂ ಸಹ ಮಾಡಿಸುತ್ತಾರೆಂದು ತಿಳಿಯುತ್ತಾರೆ. ಏಕೆಂದರೆ ಅವರೂ ಸಹ ಈ ರಥದ ಆಧಾರವನ್ನು ಪಡೆದಿದ್ದಾರಲ್ಲವೆ. ಶಿವ ತಂದೆಯು ತಿಳಿಸುತ್ತಾರೆ - ನಾನೂ ಸಹ ನಿಮ್ಮ ಶರೀರಕ್ಕೆ ಸ್ನಾನ ಮಾಡಿಸುತ್ತೇನೆ, ತಿನ್ನಿಸುತ್ತೇನೆ. ನಾನಂತೂ ತಿನ್ನುವುದಿಲ್ಲ, ಈ ಶರೀರಕ್ಕೆ ತಿನ್ನಿಸುತ್ತೇನೆ. ಶಿವ ತಂದೆಯು ತಿನ್ನಿಸುತ್ತಾರೆಯೇ ಹೊರತು ತಿನ್ನುವುದಿಲ್ಲ. ಸ್ನಾನದ ಸಮಯ, ತಿರುಗಾಡುವ ಸಮಯದಲ್ಲಿ ಇವೆಲ್ಲಾ ಭಿನ್ನ-ಭಿನ್ನ ಪ್ರಕಾರದ ವಿಚಾರಗಳು ನಡೆಯುತ್ತವೆ, ಇದಂತೂ ಅನುಭವದ ಮಾತಾಗಿದೆಯಲ್ಲವೆ. ಸ್ವತಃ ತಂದೆಯೇ ಹೇಳುತ್ತಾರೆ - ನಾನು ಅನೇಕ ಜನ್ಮಗಳ ಅಂತ್ಯದ ಜನ್ಮದಲ್ಲಿ ಪ್ರವೇಶ ಮಾಡುತ್ತೇನೆ, ಇವರು ತನ್ನ ಜನ್ಮಗಳನ್ನು ಅರಿತುಕೊಂಡಿಲ್ಲ. ನಾನು ತಿಳಿದಿದ್ದೇನೆ, ತಂದೆಯು ಪುನಃ ನಮಗೆ ಜ್ಞಾನ ಕೊಡುತ್ತಿದ್ದಾರೆಂದು ನೀವು ಹೇಳುತ್ತೀರಿ. ಸ್ವರ್ಗದ ಆಸ್ತಿಯನ್ನು ಪಡೆಯಬೇಕು. ಸತ್ಯಯುಗದಲ್ಲಂತೂ ರಾಜ, ಪ್ರಜಾ, ಮುಂತಾದವರೆಲ್ಲರೂ ಇರುತ್ತಾರೆ. ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕು. ಈಗ ಪಡೆಯುವುದಿಲ್ಲವೆಂದಮೇಲೆ ಕಲ್ಪ ಕಲ್ಪವೂ ಹೀಗೆಯೇ ಆಗುತ್ತದೆ. ಶ್ರೇಷ್ಠ ಪದವಿಯನ್ನೂ ಪಡೆಯಲು ಸಾಧ್ಯವಾಗುವುದಿಲ್ಲ. ಇದು ಜನ್ಮ-ಜನ್ಮಾಂತರದ ಸ್ಪರ್ಧೆಯಾಗಿದೆ ಎಂದಮೇಲೆ ಶ್ರೀಮತದಂತೆ ನಡೆಯಬೇಕಲ್ಲವೆ! ಕಲ್ಪ-ಕಲ್ಪವೂ ನಿಮಿತ್ತರಾಗುತ್ತೀರಿ, ಕಲ್ಪ-ಕಲ್ಪವೂ ಆಸ್ತಿಯನ್ನು ಪಡೆಯುತ್ತಾ ಬಂದಿದ್ದೇವೆ. ಈ ವಿದ್ಯೆಯು ಕಲ್ಪ-ಕಲ್ಪಕ್ಕೋಸ್ಕರವಾಗಿಯೇ ಇದೆ, ಇದರಲ್ಲಿ ಬಹಳ ಗಮನವನ್ನಿಡಬೇಕಾಗುತ್ತದೆ. 7 ದಿನಗಳ ಕಾಲ ತಿಳಿದುಕೊಂಡು ಗುರಿಯನ್ನು ಇಟ್ಟುಕೊಂಡ ನಂತರ ಮುರುಳಿಯನ್ನು ಮನೆಯಲ್ಲಿಯೂ ಓದಬಹುದು. ತಂದೆಯು ಬಹಳ ಸಹಜ ಮಾಡಿಕೊಡುತ್ತಾರೆ. ಅಂದಾಗ ನಾಟಕವು ಬುದ್ಧಿಯಲ್ಲಿರಬೇಕಲ್ಲವೆ.

ಇದಕ್ಕೆ ಪ್ರಪಂಚದ ವಿಶ್ವ ವಿದ್ಯಾಲಯವೆಂದು ಹೇಳಲಾಗುತ್ತದೆ. ಅಂದಾಗ ಎಲ್ಲಿಯಾದರೂ ಅಮೇರಿಕಾ ಮುಂತಾದ ಕಡೆ ಹೋದರೂ ಸಹ ತಂದೆಯಿಂದ ಆಸ್ತಿಯನ್ನು ಪಡೆಯಬಹುದು. ಆದರೆ ಕೇವಲ ಒಂದು ವಾರ ಧಾರಣೆ ಮಾಡಿ ಹೋಗಿ. ಭಗವಂತನ ಮಕ್ಕಳಾಗಿದ್ದೀರೆಂದಮೇಲೆ ಸಹೋದರ-ಸಹೋದರಿಯರಾದಿರಲ್ಲವೆ. ಪ್ರಜಾಪಿತ ಬ್ರಹ್ಮಾನ ಮಕ್ಕಳು ಎಲ್ಲರೂ ಸಹ ಪರಸ್ಪರ ಸಹೋದರ-ಸಹೋದರಿಯರಾದಿರಿ. ಅವಶ್ಯವಾಗಿ ಗೃಹಸ್ಥ ವ್ಯವಹಾರದಲ್ಲಿರುತ್ತಾ ಪರಸ್ಪರ ಸಹೋದರ-ಸಹೋದರಿಯರಾಗಿರುತ್ತೀರೆಂದರೆ ಪವಿತ್ರವಾಗಿರಲು ಸಾಧ್ಯವಾಗುತ್ತದೆ, ಬಹಳ ಸಹಜವೂ ಆಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಸ್ವಯಂನ್ನು ಮಾಯಾ ಭೂತದಿಂದ ರಕ್ಷಿಸಿಕೊಳ್ಳಲು ಜ್ಞಾನ, ಯೋಗದಲ್ಲಿ ತತ್ಪರರಾಗಿರಬೇಕು. ಮೋಹರೂಪಿ ಭೂತದ ತ್ಯಾಗ ಮಾಡಿ ತಂದೆಯ ಪ್ರತ್ಯಕ್ಷತೆಯನ್ನು ಮಾಡಬೇಕು. ಜ್ಞಾನದ ಧ್ವನಿ ಮಾಡಬೇಕಾಗಿದೆ.

2. ವಿದ್ಯೆಯ ಮೇಲೆ ಪೂರ್ಣ ಗಮನ ನೀಡಿ ತಂದೆಯಿಂದ ಆಸ್ತಿಯನ್ನು ಪಡೆಯಬೇಕು. ಕಲ್ಪ-ಕಲ್ಪದ ಈ ಸ್ಪರ್ಧೆಯನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಕಳೆದುಕೊಳ್ಳಬಾರದು.

ವರದಾನ:
ಕರ್ಮ ಯೋಗದ ಸ್ಟೇಜ್ ಮುಖಾಂತರ ಕರ್ಮಭೋಗದ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಳ್ಳುವಂತಹ ವಿಜಯಿ ರತ್ನ ಭವ.

ಕರ್ಮ ಯೋಗಿಯಾಗುವುದರಿಂದ ಶರೀರದ ಯಾವುದೇ ಕರ್ಮ ಭೋಗ ಭೋಗಿಸುವ ಅನುಭವ ಮಾಡಿಸುವುದಿಲ್ಲ. ಮನಸ್ಸಿನಲ್ಲಿ ಯಾವುದಾದರೂ ರೋಗವಿದ್ದಲ್ಲಿ ರೋಗಿ ಎಂದು ಹೇಳಲಾಗುವುದು, ಒಂದುವೇಳೆ ಮನಸ್ಸು ನಿರೋಗಿಯಾಗಿದ್ದಲ್ಲಿ ಸದಾ ಆರೋಗ್ಯವಾಗಿರುವಿರಿ. ಕೇವಲ ಶೇಷ ಶಯ್ಯೆಯ ಮೇಲೆ ವಿಷ್ಣುವಿನ ಸಮಾನ ಜ್ಞಾನದ ಸ್ಮರಣೆ ಮಾಡುತ್ತಾ ಹರ್ಷಿತರಾಗಿರುತ್ತಾರೆ, ಮನನ ಶಕ್ತಿಯ ಮೂಲಕ ಇನ್ನೂ ಸಾಗರನ ತಳದಲ್ಲಿ ಹೋಗುವ ಚಾನ್ಸ್ ಸಿಗುವುದು. ಈ ರೀತಿಯ ಕರ್ಮ ಯೋಗಿಯೇ ಕರ್ಮ ಭೋಗದ ಮೇಲೆ ವಿಜಯ ಪ್ರಾಪ್ತಿ ಮಾಡಿ ವಿಜಯೀ ರತ್ನ ಆಗುತ್ತಾರೆ.

ಸ್ಲೋಗನ್:
ಸಾಹಸವನ್ನು ಜೊತೆ ಮಾಡಿಕೊಂಡಲ್ಲಿ ಎಲ್ಲಾ ಕರ್ಮದಲ್ಲಿಯೂ ಸಫಲತೆ ಸಿಗುತ್ತಿರುವುದು.


ಮಾತೇಶ್ವರಿಜಿಯವರ ಮಹಾವಾಕ್ಯ

“ ಮನುಷ್ಯಾತ್ಮರು ಪರಮಾತ್ಮನಿಂದ ಬೇಡುವುದು ಮತ್ತು ಪ್ರಾಪ್ತಿ ”

ನೀನೇ ತಾಯಿ-ತಂದೆ ನಾವು ನಿಮ್ಮ ಬಾಲಕರು ನಿಮ್ಮ ಕೃಪೆಯಿಂದ ಸುಖ ಅಪಾರ....... ಈಗ ಈ ಮಹಿಮೆ ಯಾರಿಗಾಗಿ ಗಾಯನ ಮಾಡಲಾಗಿದೆ? ಅವಶ್ಯವಾಗಿ ಪರಮಾತ್ಮನಿಗಾಗಿ ಗಾಯನವಾಗಿದೆ. ಏಕೆಂದರೆ ಪರಮಾತ್ಮ ಖುದ್ದು ಮಾತಾ ಪಿತರ ರೂಪದಲ್ಲಿ ಬಂದು ಈ ಸೃಷ್ಠಿಗೆ ಅಪಾರವಾದ ಸುಖವನ್ನು ಕೊಡುತ್ತಾರೆ. ಖಂಡಿತವಾಗಿಯೂ ಪರಮಾತ್ಮನು ಯಾವಾಗ ಸುಖದ ಸೃಷ್ಠಿ ಮಾಡಿದರು ಆಗಿನಿಂದಲೇ ಅವರಿಗೆ ಮಾತಾ ಪಿತಾ ಎಂದು ಕರೆಯುತ್ತಾರೆ. ಆದರೆ ಮನುಷ್ಯರಿಗೆ ಇದು ಗೊತ್ತೇ ಇಲ್ಲ ಸುಖ ಎಂದರೆ ಅದು ಏನಾಗಿದೆ ಎಂದು? ಯಾವಾಗ ಈ ಸೃಷ್ಠಿಯ ಮೇಲೆ ಅಪಾರ ಸುಖ ಇತ್ತು. ಆಗ ಶಾಂತಿ ಇತ್ತು, ಆದರೆ ಈಗ ಆ ಸುಖವಿಲ್ಲ. ಈಗ ಮನುಷ್ಯನಿಗೆ ಈ ಇಚ್ಛೆ ಅವಶ್ಯವಾಗಿ ಹುಟ್ಟುವುದು. ಆ ಸುಖ ನಮಗೆ ಬೇಕು, ನಂತರ ಕೆಲವರು ಧನ, ಪದಾರ್ಥ ಬೇಡುತ್ತಾರೆ, ಕೆಲವರು ಮಗುವನ್ನು ಬೇಡುತ್ತಾರೆ, ಕೆಲವರು ನಂತರ ಹೀಗೂ ಕೇಳುತ್ತಾರೆ ನಾನು ಪತೀವ್ರತಾ ನಾರಿಯಾಗಿರಬೇಕೆಂದು, ಸದಾ ಸುಹಾಗಿನಿಯಾಗಿರಬೇಕೆಂದು, ಇಚ್ಛೆಗಳಂತೂ ಸುಖ ಪಡೆಯುವುದೇ ಆಗಿರುವುದಲ್ಲವೇ. ಆದ್ದರಿಂದ ಪರಮಾತ್ಮ ಸಹಾ ಸ್ವಲ್ಪ ಸಮಯಕ್ಕಾಗಿ ಅವರ ಆಸೆಯನ್ನು ಅವಶ್ಯವಾಗಿ ಪೂರ್ಣ ಮಾಡುತ್ತಾರೆ. ಆದ್ದರಿಂದ ಸತ್ಯಯುಗದ ಸಮಯದಲ್ಲಿ ಯಾವಾಗ ಸೃಷ್ಠಿಯ ಮೇಲೆ ಸ್ವರ್ಗವಿರುತ್ತೆ ಆಗ ಅಲ್ಲಿ ಸದಾ ಸುಖವಿರುವುದು, ಎಲ್ಲಿ ಸ್ತ್ರೀ ಎಂದೂ ವಿಧವೆಯಾಗುವುದಿಲ್ಲ, ಆಗ ಅವರ ಆಸೆ ಸತ್ಯಯುಗದಲ್ಲಿ ಪೂರ್ಣವಾಗುವುದು ಎಲ್ಲಿ ಅಪಾರ ಸುಖವಿರುವುದು. ಬಾಕಿಯಂತೂ ಈ ಸಮಯ ಕಲಿಯುಗವಾಗಿದೆ. ಈ ಸಮಯದಲ್ಲಿ ಮನುಷ್ಯನಿಗೆ ದುಃಖವೇ ದುಃಖವನ್ನು ಭೋಗಿಸುತ್ತಾನೆ. ಒಳ್ಳೆಯದು.