08.11.2018 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ನಿಮ್ಮ
ಸತ್ಯ-ಸತ್ಯ ದೀಪಾವಳಿಯಂತೂ ಹೊಸ ಪ್ರಪಂಚಲ್ಲಾಗುತ್ತದೆ, ಆದ್ದರಿಂದ ನಿಮ್ಮದು ಈ ಹಳೆಯ ಪ್ರಪಂಚದ
ಅಸತ್ಯ ಉತ್ಸವ ಮುಂತಾದುವುಗಳನ್ನು ನೋಡುವ ಬಯಕೆಯಿರಬಾರದು.”
ಪ್ರಶ್ನೆ:
ನೀವು ಹೋಲಿ
ಹಂಸಗಳಾಗಿದ್ದೀರಿ ಅಂದಮೇಲೆ ನಿಮ್ಮ ಕರ್ತವ್ಯವೇನಾಗಿದೆ?
ಉತ್ತರ:
ನಮ್ಮ ಮುಖ್ಯ
ಕರ್ತವ್ಯವಾಗಿದೆ - ಒಬ್ಬ ತಂದೆಯ ನೆನಪಿನಲ್ಲಿರುವುದು ಮತ್ತು ಎಲ್ಲರ ಬುದ್ಧಿಯೋಗವನ್ನು ಒಬ್ಬ
ತಂದೆಯ ಜೊತೆ ಜೋಡಣೆ ಮಾಡುವುದು. ನಾವು ಪವಿತ್ರರಾಗಿ ಮತ್ತು ಎಲ್ಲರನ್ನು ಪವಿತ್ರರನ್ನಾಗಿ
ಮಾಡತ್ತೇವೆ. ನಾವು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವಂತಹ ಕರ್ತವ್ಯದಲ್ಲಿ ಸದಾ
ತತ್ಫರರಾಗಿರಬೇಕಾಗಿದೆ. ಎಲ್ಲರನ್ನು ದುಃಖದಿಂದ ಮುಕ್ತರನ್ನಾಗಿ ಮಾಡಿ, ಮಾರ್ಗದರ್ಶಕರಾಗಿ
ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸಬೇಕಾಗಿದೆ.
ಗೀತೆ:
ನಿಮ್ಮನ್ನು
ಪಡೆದ ನಾನು ಜಗತ್ತನ್ನೆ ಪಡೆದೆನು
ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ. ಮಕ್ಕಳು ಹೇಳುತ್ತಾರೆ - ನಾವು ಸ್ವರ್ಗದ ರಾಜ್ಯಭಾಗ್ಯದ
ಆಸ್ತಿಯನ್ನು ಪಡೆಯುತ್ತೇವೆ. ಅದನ್ನು ಎಂದಿಗೂ ಯಾರೂ ಸುಡುವುದಕ್ಕಾಗಲಿ, ಕಸಿಯುವುದಕ್ಕಾಗಲಿ, ಆ
ಆಸ್ತಿಯನ್ನು ನಮ್ಮಿಂದ ಯಾರೇ ವಶಪಡಿಸಿಕೊಳ್ಳುವುದಕ್ಕಾಗಲಿ ಸಾಧ್ಯವಿಲ್ಲ. ಆತ್ಮನಿಗೆ ತಂದೆಯಿಂದ
ಆಸ್ತಿಯು ಸಿಗುತ್ತದೆ ಅಂದಾಗ ಈ ತಂದೆಯನ್ನು ಅವಶ್ಯವಾಗಿ ಮಾತಾಪಿತ ಎಂದೂ ಹೇಳಲಾಗುತ್ತದೆ.
ಮಾತಾಪಿತರನ್ನು ಅರಿತುಕೊಳ್ಳುವವರೇ ಈ ಸಂಸ್ಥೆಗೆ ಬರುವುದಕ್ಕೆ ಸಾಧ್ಯ. ತಂದೆಯೂ ಸಹ ಹೇಳುತ್ತಾರೆ -
ನಾನು ಮಕ್ಕಳ ಸಮ್ಮುಖದಲ್ಲಿ ಪ್ರತ್ಯಕ್ಷವಾಗಿ ಓದಿಸುತ್ತೇನೆ, ರಾಜಯೋಗವನ್ನು ಕಲಿಸುತ್ತೇನೆ. ಮಕ್ಕಳು
ಬಂದು ಬೇಹದ್ದಿನ ತಂದೆಯನ್ನು ಜೀವಿಸಿದ್ದಂತೆಯೇ ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ. ಹೇಗೆ ದತ್ತು
ಮಕ್ಕಳನ್ನು ಜೀವಿಸಿದ್ದಂತೆಯೇ ದತ್ತು ಮಾಡಿಕೊಳ್ಳಲಾಗುತ್ತದೆ. ತಾವು ನಮ್ಮವರಾಗಿದ್ದೀರಿ ನಾವು
ನಿಮ್ಮವರಾಗಿದ್ದೇವೆ. ನೀವು ನನ್ನವರೇಕೆ ಆಗಿದ್ದೀರಿ? ಮತ್ತು ಹೇಳುತ್ತೀರಿ - ಬಾಬಾ, ತಮ್ಮಿಂದ
ಸ್ವರ್ಗದ ಆಸ್ತಿಯನ್ನು ಪಡೆಯಲು ನಾವು ನಿಮ್ಮವರಾಗಿದ್ದೇವೆ. ನಾನೂ (ತಂದೆ) ಸಹ ಹೇಳುತ್ತೇನೆ -
ಮಕ್ಕಳೇ, ಇಂತಹ ತಂದೆಗೆ ವಿಚ್ಛೇದನವನ್ನೆಂದೂ ಕೊಡಬಾರದು ಇಲ್ಲವೆಂದರೆ ಅದೃಷ್ಠವೇನಾಗುವುದು?
ಸ್ವರ್ಗದ ರಾಜಧಾನಿಯ ಪೂರ್ಣ ಆಸ್ತಿಯನ್ನು ನೀವು ಪಡೆಯಲು ಸಾಧ್ಯವಿಲ್ಲ. ಮಮ್ಮಾ-ಬಾಬಾ
ಮಹಾರಾಜ-ಮಹಾರಾಣಿಯಾಗುತ್ತಾರೆ ಅಂದಮೇಲೆ ಪುರುಷಾರ್ಥ ಮಾಡಿ ನೀವೂ ಸಹ ಆಸ್ತಿಯನ್ನು ಪಡೆಯಬೇಕು. ಆದರೆ
ಮಕ್ಕಳು ಪುರುಷಾರ್ಥ ಮಾಡುತ್ತಾ-ಮಾಡುತ್ತಾ ನಂತರ ವಿಚ್ಛೇದನವನ್ನು ಕೊಟ್ಟು ಬಿಡುತ್ತಾರೆ. ಹೋಗಿ
ವಿಕಾರಗಳಲ್ಲಿ ಸಿಕ್ಕಿಕೊಳ್ಳುತ್ತಾರೆ ಅಥವಾ ಕಂದಕದಲ್ಲಿ ಬೀಳುತ್ತಾರೆ. ಹೆಲ್ ಎಂದು ನರಕಕ್ಕೂ,
ಹೆವೆನ್ ಎಂದು ಸ್ವರ್ಗಕ್ಕೂ ಹೇಳಲಾಗುತ್ತದೆ. ನಾವು ಸದಾ ಸ್ವರ್ಗದ ಮಾಲೀಕರಾಗಲು ತಂದೆಯನ್ನು
ತಮ್ಮವರನ್ನಾಗಿ ಮಾಡಿಕೊಳ್ಳುತ್ತೇನೆ ಏಕೆಂದರೆ ಈಗ ನಾವು ನರಕದಲ್ಲಿದ್ದೇವೆಂದು ಮಕ್ಕಳು ಹೇಳುತ್ತಾರೆ.
ಹೆವೆನ್ಲೀ ಗಾಡ್ಫಾದರ್, ಯಾರು ಸ್ವರ್ಗದ ರಚಯಿತನಾಗಿದ್ದಾರೆ ಅವರು ಎಲ್ಲಿಯವರೆಗೆ ಬರುವುದಿಲ್ಲವೋ
ಅಲ್ಲಿಯವರೆಗೆ ಯಾರೂ ಸಹ ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ. ಅವರ ಹೆಸರೇ ಆಗಿದೆ - ಹೆವೆನ್ಲೀ ಗಾಡ್ಫಾದರ್.
ಇದನ್ನೂ ಸಹ ನೀವು ಈಗ ತಿಳಿದುಕೊಂಡಿದ್ದೀರಿ. ತಂದೆಯು ಹೇಳುತ್ತಿದ್ದಾರೆ - ಮಕ್ಕಳೇ, ನೀವು
ತಿಳಿಯುತ್ತೀರಿ, ಅವಶ್ಯವಾಗಿ ನಾವು ತಂದೆಯಿಂದ ಆಸ್ತಿಯನ್ನು ಪಡೆಯುವುದಕ್ಕೋಸ್ಕರ 5000 ವರ್ಷಗಳ
ಹಿಂದಿನ ತರಹ ಬಂದಿದ್ದೇವೆ ಎಂದು ತಿಳಿಯುತ್ತೀರಿ. ಆದರೂ ಸಹ ನಂತರ ನಡೆಯುತ್ತಾ-ನಡೆಯುತ್ತಾ ಮಾಯೆಯ
ಬಿರುಗಾಳಿಗಳು ಒಂದೇ ಸಲ ಹಾಳು ಮಾಡಿ ಬಿಡುತ್ತವೆ ನಂತರ ವಿದ್ಯೆಯನ್ನು ಬಿಟ್ಟು ಬಿಡುತ್ತಾರೆಂದರೆ
ಸತ್ತು ಹೋದರೆಂದರ್ಥ. ಈಶ್ವರನ ಮಕ್ಕಳಾಗಿ ನಂತರ ಒಂದುವೇಳೆ ಕೈ ಬಿಟ್ಟರೆಂದರೆ ಹೊಸ ಪ್ರಪಂಚದಿಂದ
ಸತ್ತು ಪುನಃ ಹಳೆಯ ಪ್ರಪಂಚದಲ್ಲಿ ಹೊರಟು ಹೋದರೆಂದರ್ಥ. ಸ್ವರ್ಗದ ರಚಯಿತ ತಂದೆಯೂ ನರಕದ ದುಃಖದಿಂದ
ಬಿಡುಗಡೆ ಮಾಡಿ ಮಾರ್ಗದರ್ಶಕರಾಗಿ ಎಲ್ಲಿಂದ ನಾವಾತ್ಮಗಳು ಬಂದಿದ್ದೇವೆಯೋ ಆ ಮಧುರ ಮನೆಗೆ
ಕರೆದುಕೊಂಡು ಹೋಗುತ್ತಾರೆ. ನಂತರ ಮಧುರ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ತಂದೆಯು ಎರಡು
ವಸ್ತುಗಳನ್ನು ಕೊಡಲು ಬರುತ್ತಾರೆ - ಗತಿ ಮತ್ತು ಸದ್ಗತಿ. ಸತ್ಯಯುಗವು ಸುಖಧಾಮವಾಗಿದೆ, ಕಲಿಯುಗವು
ದುಃಖಧಾಮವಾಗಿದೆ ಮತ್ತು ಎಲ್ಲಿಂದ ನಾವಾತ್ಮಗಳು ಬರುತ್ತೇವೆಯೋ ಅದು ಶಾಂತಿಧಾಮವಾಗಿದೆ. ಈ ತಂದೆಯು
ಶಾಂತಿದಾತ, ಭವಿಷ್ಯಕ್ಕೋಸ್ಕರ ಸುಖದಾತನಾಗಿದ್ದಾರೆ. ಈ ಅಶಾಂತ ದೇಶದಿಂದ ಮೊದಲು ಶಾಂತಿ ದೇಶಕ್ಕೆ
ಹೋಗುತ್ತೇವೆ. ಅದಕ್ಕೆ ಮಧುರ ಶಾಂತಿಯ ಮನೆ ಎಂದು ಹೇಳಲಾಗುತ್ತದೆ, ನಾವು ಅಲ್ಲಿರುವವರೇ ಆಗಿದ್ದೇವೆ.
ಆತ್ಮವೇ ಹೇಳುತ್ತದೆ - ನನ್ನ ಮಧುರ ಮನೆಯು ಅದಾಗಿದೆ ಮತ್ತು ನಾವು ಈ ಸಮಯದಲ್ಲಿ ಯಾವ ಜ್ಞಾನವನ್ನು
ಓದುತ್ತೇವೆ ಅದರಿಂದ ನಮಗೆ ಸ್ವರ್ಗದ ರಾಜಧಾನಿಯು ಸಿಗುವುದು. ತಂದೆಯ ಹೆಸರೇ ಆಗಿದೆ - ಸ್ವರ್ಗದ
ರಚಯಿತ, ಮುಕ್ತಿದಾತ, ಮಾರ್ಗದರ್ಶಕ, ಜ್ಞಾನಪೂರ್ಣ, ಆನಂದ ಸಾಗರ, ಜ್ಞಾನ ಸಾಗರ. ದಯಾ ಸಾಗರನೂ
ಆಗಿದ್ದಾರೆ. ಎಲ್ಲರ ಮೇಲೆ ದಯೆ ತೋರಿಸುತ್ತಾರೆ, ತತ್ವಗಳ ಮೇಲೂ ಸಹ ದಯೆ ತೋರಿಸುತ್ತಾರೆ. ಎಲ್ಲರೂ
ದುಃಖದಿಂದ ಮುಕ್ತರಾಗುತ್ತಾರೆ. ದುಃಖವಂತೂ ಪ್ರಾಣಿ ಮುಂತಾದುವುಗಳೆಲ್ಲವುಗಳಿಗೂ ಇರುತ್ತದೆಯಲ್ಲವೆ.
ಯಾರಿಗಾದರೂ ಹೊಡೆದರೆ ಅವರಿಗೆ ದುಃಖವಾಗುವುದಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು
ಮನುಷ್ಯ ಮಾತ್ರರನ್ನಷ್ಟೇ ಅಲ್ಲ, ಎಲ್ಲವನ್ನು ದುಃಖದಿಂದ ಬಿಡುಗಡೆ ಮಾಡುತ್ತೇನೆ, ಆದರೆ
ಪ್ರಾಣಿಗಳನ್ನಂತೂ ಕರೆದುಕೊಂಡು ಹೋಗುವುದಿಲ್ಲ. ಇದು ಮನುಷ್ಯರ ಮಾತಾಗಿದೆ. ಇಂತಹ ಬೇಹದ್ದಿನ ತಂದೆಯು
ಒಬ್ಬರೆ ಆಗಿದ್ದಾರೆ ಉಳಿದವರೆಲ್ಲರೂ ದುರ್ಗತಿಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಬೇಹದ್ದಿನ
ತಂದೆಯು ಸ್ವರ್ಗದ ಹಾಗೂ ಮುಕ್ತಿಧಾಮದ ಉಡುಗೊರೆಯನ್ನು ಕೊಡುವವರಾಗಿದ್ದಾರೆ ಎಂದು ಮಕ್ಕಳಿಗೆ
ಗೊತ್ತಿದೆ. ಏಕೆಂದರೆ ತಂದೆಯು ಆಸ್ತಿಯನ್ನು ಕೊಡುತ್ತಾರಲ್ಲವೆ. ಅವರೇ ಶ್ರೇಷ್ಠಾತಿ
ಶ್ರೇಷ್ಠರಾಗಿದ್ದಾರೆ, ಎಲ್ಲಾ ಭಕ್ತರೂ ಸಹ ಆ ಭಗವಂತ ತಂದೆಯನ್ನು ನೆನಪು ಮಾಡುತ್ತಾರೆ.
ಕ್ರಿಶ್ಚಿಯನ್ನರೂ ಸಹ ಗಾಡ್ನ ನೆನಪು ಮಾಡುತ್ತಾರೆ. ಆ ಹೆವೆನ್ಲೀ ಗಾಡ್ಫಾದರ್ ಶಿವನೇ ಆಗಿದ್ದಾರೆ.
ಅವರೇ ಜ್ಞಾನಸಾಗರ, ಆನಂದ ಸಾಗರನಾಗಿದ್ದಾರೆ. ಇದರ ಅರ್ಥವನ್ನೂ ಸಹ ನೀವು ಮಕ್ಕಳೇ
ತಿಳಿದುಕೊಂಡಿದ್ದೀರಿ, ನಿಮ್ಮಲ್ಲಿಯೂ ನಂಬರ್ವಾರ್ ಇದ್ದೀರಿ. ಕೆಲವರಂತೂ ಇಂತಹವರಿದ್ದಾರೆ ಎಷ್ಟೇ
ಜ್ಞಾನದ ಶೃಂಗಾರವನ್ನು ಮಾಡಿದರೂ ಸಹ ಪುನಃ ವಿಕಾರದಲ್ಲಿಯೇ ಬೀಳುತ್ತಾರೆ, ಕೊಳಕು ಪ್ರಪಂಚವನ್ನೇ
ನೋಡುತ್ತಾರೆ.
ಕೆಲವು ಮಕ್ಕಳು ದೀಪಾವಳಿಯನ್ನು ನೋಡಲು ಹೋಗುತ್ತಾರೆ. ವಾಸ್ತವದಲ್ಲಿ ನನ್ನ ಮಕ್ಕಳು ಈ ಅಸತ್ಯ
ದೀಪಾವಳಿಯನ್ನು ನೋಡಬಾರದು. ಆದರೆ ಪೂರ್ಣ ಜ್ಞಾನವಿಲ್ಲದಿದ್ದರೆ ನೋಡಲು ಮನಸ್ಸಾಗುವುದು. ನಿಮ್ಮ
ದೀಪಾವಳಿಯಂತೂ ಸತ್ಯಯುಗದಲ್ಲಿರುತ್ತದೆ ಯಾವಾಗ ನೀವು ಪವಿತ್ರರಾಗಿ ಬಿಡುತ್ತೀರಿ. ನೀವು ಮಕ್ಕಳು
ತಿಳಿಸಬೇಕು - ತಂದೆಯು ಮಧುರ ಮನೆ ಹಾಗೂ ಮಧುರ ಸ್ವರ್ಗದಲ್ಲಿ ಕರೆದುಕೊಂಡು ಹೋಗುವುದಕ್ಕೋಸ್ಕರವೇ
ಬರುತ್ತಾರೆ. ಯಾರು ಚೆನ್ನಾಗಿ ಓದುತ್ತಾರೆ, ಧಾರಣೆ ಮಾಡುತ್ತಾರೆ ಅವರೇ ಸ್ವರ್ಗದ ರಾಜಧಾನಿಯಲ್ಲಿ
ಬರುತ್ತಾರೆ ಆದರೆ ಅದೃಷ್ಟವು ಬೇಕಲ್ಲವೆ. ಶ್ರೀಮತದಂತೆ ನಡೆಯದಿದ್ದರೆ ಶ್ರೇಷ್ಠವಾಗುವುದಿಲ್ಲ. ಇದು
ಶ್ರೀ ಶಿವ ಭಗವಾನುವಾಚವಾಗಿದೆ. ಎಲ್ಲಿಯವರೆಗೆ ಮನುಷ್ಯರಿಗೆ ತಂದೆಯ ಪರಿಚಯವಿರುವುದಿಲ್ಲವೋ
ಅಲ್ಲಿಯವರೆಗೆ ಭಕ್ತಿ ಮಾಡುತ್ತಿರುತ್ತಾರೆ. ಯಾವಾಗ ನಿಶ್ಚಯವು ಪಕ್ಕಾ ಆಗಿ ಬಿಡುವುದೋ ಆಗ
ಭಕ್ತಿಯನ್ನು ತಾವಾಗಿಯೇ ಬಿಡುತ್ತಾರೆ. ನೀವು ಪವಿತ್ರರಾಗಿದ್ದೀರಿ, ಪರಮಾತ್ಮನ ಆದೇಶದನುಸಾರ
ಎಲ್ಲರನ್ನು ಪವಿತ್ರರನ್ನಾಗಿ ಮಾಡುತ್ತೀರಿ. ಅವರಂತೂ ಕೇವಲ ಹಿಂದೂಗಳನ್ನು, ಮುಸಲ್ಮಾನರನ್ನು
ಕ್ರಿಶ್ಚಿಯನ್ನರನ್ನಾಗಿ ಮಾಡಿಕೊಳ್ಳುತ್ತಾರೆ. ಆದರೆ ನೀವು ಅಸುರೀ ಮನುಷ್ಯರನ್ನು ಪವಿತ್ರರನ್ನಾಗಿ
ಮಾಡುತ್ತೀರಿ. ಎಲ್ಲಿಯವರೆಗೆ ಪವಿತ್ರರಾಗುವುದಿಲ್ಲವೋ ಅಲ್ಲಿಯವರೆಗೆ ಮಧುರ ಮನೆಗೆ ಹೋಗಲು
ಸಾಧ್ಯವಿಲ್ಲ. ನನ್ ಬಟ್ ಒನ್ (ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ), ನೀವು ಒಬ್ಬ ತಂದೆಯ ವಿನಃ
ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲ. ಒಬ್ಬ ತಂದೆಯಿಂದಲೇ ಆಸ್ತಿಯು ಸಿಗಬೇಕಾಗಿದೆ, ಆದ್ದರಿಂದ
ಅವಶ್ಯವಾಗಿ ಆ ತಂದೆಯೊಬ್ಬರನ್ನೇ ನೆನಪು ಮಾಡುತ್ತೀರಿ. ನೀವು ಪವಿತ್ರರಾಗಿ ಅನ್ಯರನ್ನೂ
ಪವಿತ್ರರನ್ನಾಗಿ ಮಾಡುವ ಸಹಯೋಗ ಕೊಡುತ್ತೀರಿ. ಆ ನನ್ಸ್ ಯಾರನ್ನೂ ಪವಿತ್ರರನ್ನಾಗಿ ಮಾಡುವುದಿಲ್ಲ
ಅಥವಾ ತನ್ನ ಸಮಾನ ನನ್ಸ್ನ್ನಾಗಿ ಮಾಡುವುದಿಲ್ಲ. ಕೇವಲ ಹಿಂದೂಗಳಿಂದ ಕ್ರಿಶ್ಚಿಯನ್ನರನ್ನಾಗಿ
ಮಾಡುತ್ತಾರೆ. ನೀವು ಪವಿತ್ರ ನನ್ಸ್ ಪವಿತ್ರರನ್ನಾಗಿ ಮಾಡುತ್ತೀರಿ ಮತ್ತು ಎಲ್ಲಾ ಆತ್ಮಗಳ
ಬುದ್ಧಿಯೋಗವನ್ನು ಒಬ್ಬ ತಂದೆಯೊಂದಿಗೆ ಜೋಡಿಸುತ್ತೀರಿ. ಗೀತೆಯಲ್ಲಿಯೂ ಇದೆಯಲ್ಲವೆ – ದೇಹ ಸಹಿತ
ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ.
ಜ್ಞಾನವನ್ನು ಧಾರಣೆ ಮಾಡುವುದರಿಂದಲೇ ರಾಜ್ಯಭಾಗ್ಯವು ಸಿಗುವುದು. ತಂದೆಯ ನೆನಪಿನಿಂದಲೇ ಸದಾ
ಆರೋಗ್ಯವಂತರಾಗುತ್ತೀರಿ ಮತ್ತು ಜ್ಞಾನದಿಂದ ಸದಾ ಐಶ್ವರ್ಯವಂತರಾಗುತ್ತೀರಿ. ತಂದೆಯಂತೂ
ಜ್ಞಾನಸಾಗರನಾಗಿದ್ದಾರೆ, ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಬ್ರಹ್ಮನ ಕೈಯಲ್ಲಿ
ಶಾಸ್ತ್ರಗಳನ್ನು ತೋರಿಸುತ್ತಾರಲ್ಲವೆ ಅಂದಾಗ ಇವರು ಬ್ರಹ್ಮನಾಗಿದ್ದಾರೆ. ಶಿವ ತಂದೆಯು ಇವರ ಮೂಲಕ
ಎಲ್ಲಾ ವೇದ ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಶಿವ ತಂದೆಯು ಜ್ಞಾನ ಸಾಗರನಾಗಿದ್ದಾರೆ ಇವರ
ಮೂಲಕ ನಿಮಗೆ ಜ್ಞಾನವು ಸಿಗುತ್ತಿರುತ್ತದೆ, ನಿಮ್ಮ ಮೂಲಕ ಮತ್ತೆ ಅನ್ಯರಿಗೆ ಸಿಗುತ್ತಿರುತ್ತದೆ.
ಬಾಬಾ ನಾವು ಈ ಆತ್ಮಿಕ ಆಸ್ಪತ್ರೆಯನ್ನು ತೆರೆಯುತ್ತೇವೆ ಎಂದು ಕೆಲವು ಮಕ್ಕಳು ಹೇಳುತ್ತಾರೆ, ಇಲ್ಲಿ
ರೋಗಿ ಮನುಷ್ಯರು ಬಂದು ನಿರೋಗಿಗಳಾಗುತ್ತಾರೆ ಮತ್ತು ಸ್ವರ್ಗದ ಆಸ್ತಿಯನ್ನು ಪಡೆಯುತ್ತಾರೆ, ತನ್ನ
ಜೀವನವನ್ನು ಸಫಲ ಮಾಡುತ್ತಾರೆ, ಬಹಳ ಸುಖವನ್ನು ಪಡೆಯುತ್ತಾರೆ ಅಂದಮೇಲೆ ಇವರೆಲ್ಲರ ಆಶೀರ್ವಾದವು
ಅವಶ್ಯವಾಗಿ ಅವರಿಗೇ ಸಿಗುವುದು. ತಂದೆಯು ಆ ದಿನವೂ ತಿಳಿಸಿದ್ದರು - ಗೀತಾ, ಭಾಗವತ, ವೇದ,
ಉಪನಿಷತ್ತು ಇತ್ಯಾದಿಗಳು. ಯಾವುದೆಲ್ಲವೂ ಭಾರತದ ಶಾಸ್ತ್ರಗಳಾಗಿವೆ, ಈ ಶಾಸ್ತ್ರಗಳನ್ನು ಅಧ್ಯಯನ
ಮಾಡುವುದು, ಯಜ್ಞ, ತಪ, ವ್ರತ, ನಿಯಮ, ತೀರ್ಥಯಾತ್ರೆ ಇತ್ಯಾದಿಗಳನ್ನು ಮಾಡುವುದು ಇವೆಲ್ಲವೂ
ಭಕ್ತಿಮಾರ್ಗದ ಸಾಮಗ್ರಿರೂಪಿ ಮಜ್ಜಿಗೆಯಾಗಿದೆ. ಒಬ್ಬರೆ ಶ್ರೀಮತ ಅಥವಾ ಭಗವದ್ಗೀತೆಯ ಭಗವಂತನಿಂದಲೇ
ಭಾರತಕ್ಕೆ ಬೆಣ್ಣೆಯು ಸಿಗುತ್ತದೆ. ಶ್ರೀಮತ್ಭಗವದ್ಗೀತೆಯನ್ನೂ ಸಹ ಖಂಡನೆ ಮಾಡಿ ಬಿಟ್ಟಿದ್ದಾರೆ
ಜ್ಞಾನ ಸಾಗರ, ಪತಿತ ಪಾವನ, ನಿರಾಕಾರ ಭಗವಂತನ ಬದಲಾಗಿ ಶ್ರೀಕೃಷ್ಣನ ಹೆಸರನ್ನು ಹಾಕಿ ಬೆಣ್ಣೆಯನ್ನೂ
ಸಹ ಮಜ್ಜಿಗೆಯನ್ನಾಗಿ ಮಾಡಿ ಬಿಟ್ಟಿದ್ದಾರೆ. ಇದೊಂದೇ ಎಷ್ಟು ದೊಡ್ಡ ತಪ್ಪಾಗಿದೆ. ಈಗ ನೀವು
ಮಕ್ಕಳಿಗೆ ಜ್ಞಾನಸಾಗರ ತಂದೆಯು ನೇರವಾಗಿ ಜ್ಞಾನವನ್ನು ಕೊಡುತ್ತಿದ್ದಾರೆ. ಈಗ ನಿಮಗೆ ಗೊತ್ತಿದೆ -
ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಈ ಸೃಷ್ಟಿರೂಪಿ ವೃಕ್ಷದ ವೃದ್ಧಿಯು ಹೇಗಾಗುತ್ತದೆ? ನೀವು
ಬ್ರಾಹ್ಮಣರು ಶಿಖೆಯಾಗಿದ್ದೀರಿ, ಶಿವ ತಂದೆಯು ಬ್ರಾಹ್ಮಣರ ತಂದೆಯಾಗಿದ್ದಾರೆ ನಂತರ ಬ್ರಾಹ್ಮಣರಿಂದ
ದೇವತೆಗಳು ಅನಂತರ ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ಇದು ಬಾಜೋಲಿ (ಪಲ್ಟಿ ಹೊಡೆಯುವ ಆಟ)
ಆಟವಾಯಿತು ಇದಕ್ಕೆ 84 ಜನ್ಮಗಳ ಚಕ್ರವೆಂದು ಹೇಳಲಾಗುತ್ತದೆ. ವೇದ ಸಮ್ಮೇಳನ ಮಾಡುವವರಿಗೂ ಸಹ ನೀವು
ತಿಳಿಸಬಹುದು - ಭಕ್ತಿಯು ಮಜ್ಜಿಗೆಯಾಗಿದೆ, ಜ್ಞಾನವು ಬೆಣ್ಣೆಯಾಗಿದೆ. ಜ್ಞಾನದಿಂದ
ಮುಕ್ತಿ-ಜೀವನ್ಮುಕ್ತಿಯು ಸಿಗುತ್ತದೆ. ನೀವು ಒಂದುವೇಳೆ ವಿಸ್ತಾರವಾಗಿ ಜ್ಞಾನವನ್ನು
ತಿಳಿಯಬೇಕೆಂದರೆ ತಾಳ್ಮೆಯಿಂದ ಕೇಳಿ. ಬ್ರಹ್ಮಾಕುಮಾರಿಯರು ನಿಮಗೆ ತಿಳಿಸಿ ಕೊಡುತ್ತಾರೆ. ಭೀಷ್ಮ
ಪಿತಾಮಹ, ಅಶ್ವತ್ತಾಮ ಇಂತಹವರಿಗೂ ಸಹ ಅಂತ್ಯದಲ್ಲಿ ಈ ಮಕ್ಕಳು ಜ್ಞಾನವನ್ನು ಕೊಟ್ಟರೆಂದು
ಶಾಸ್ತ್ರಗಳಲ್ಲಿಯೂ ಬರೆಯಲ್ಪಟ್ಟಿದೆ. ಇವರಂತೂ ಸರಿಯಾದ ಮಾತನ್ನೆ ಹೇಳುತ್ತಾರೆಂದು ಅಂತ್ಯದಲ್ಲಿ
ಎಲ್ಲರೂ ಅರಿತುಕೊಳ್ಳುತ್ತಾರೆ, ಅಂತ್ಯದಲ್ಲಿ ಅವಶ್ಯವಾಗಿ ಬರುತ್ತಾರೆ. ನೀವು ಪ್ರದರ್ಶನಿ
ಮಾಡುತ್ತೀರಿ ಎಷ್ಟೊಂದು ಸಾವಿರಾರು ಮನುಷ್ಯರು ಬರುತ್ತಾರೆ. ಆದರೆ ಎಲ್ಲರೂ
ನಿಶ್ಚಯಬುದ್ಧಿಯವರಾಗುವುದಿಲ್ಲ. ಕೋಟಿಯಲ್ಲಿ ಕೆಲವರೇ ಬರುತ್ತಾರೆ ಅವರು ಚೆನ್ನಾಗಿ ಅರಿತುಕೊಂಡು
ನಿಶ್ಚಯ ಮಾಡಿಕೊಳ್ಳುತ್ತಾರೆ.
ಮಾತೇಶ್ವರಿಜಿಯವರ
ಮಹಾವಾಕ್ಯ: 21.1.57
1. “ಈ ಈಶ್ವರೀಯ
ಸತ್ಸಂಗ ಸಾಮಾನ್ಯ ಸತ್ಸಂಗ ಅಲ್ಲ”
ನಮ್ಮ ಈ ಈಶ್ವರೀಯ ಸತ್ಸಂಗ ಸಾಮಾನ್ಯವಾದ ಸತ್ಸಂಗವಲ್ಲ. ಇದಾಗಿದೆ ಈಶ್ವರೀಯ ಪಾಠಶಾಲೆ, ವಿಶ್ವ
ವಿದ್ಯಾಲಯ. ಈ ವಿಶ್ವ ವಿದ್ಯಾಲಯದಲ್ಲಿ ನೀವು ನಿಯಮಿತವಾಗಿ ಓದಬೇಕಾಗಿದೆ, ಬೇರೆ ಎಲ್ಲಾ ಕಡೆ ಕೇವಲ
ಸತ್ಸಂಗ ಮಾಡುವುದು, ಸ್ವಲ್ಪ ಸಮಯಕ್ಕಾಗಿ ಕೇಳುವುದು ನಂತರ ಹೇಗಿದ್ದರೋ ಹಾಗೆ ಇದ್ದು ಬಿಡುತ್ತಾರೆ.
ಏಕೆಂದರೆ ಅಲ್ಲಿ ನಿಯಮಿತವಾಗಿ ವಿದ್ಯೆಯನ್ನು ಕಲಿಸುವುದಿಲ್ಲ, ಯಾವುದರಿಂದ
ಪ್ರಾಲಬ್ದರೂಪುಗೊಳ್ಳುತ್ತದೆ. ಆದ್ದರಿಂದ ನಮ್ಮ ಸತ್ಸಂಗ ಯಾವುದೇ ಸಾಮಾನ್ಯ ಸತ್ಸಂಗಗಳಂತೆ ಅಲ್ಲ.
ನಮ್ಮದು ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ, ಇಲ್ಲಿ ಪರಮಾತ್ಮ ಕುಳಿತು ನಮಗೆ ಓದಿಸುತ್ತಾರೆ ಮತ್ತು
ನಾವು ಆ ವಿದ್ಯೆಯನ್ನು ಪೂರ್ಣ ರೀತಿ ಓದಿ ಧಾರಣೆ ಮಾಡಿ ಶ್ರೇಷ್ಠ ಪದವಿಯನ್ನು ಪ್ರಾಪ್ತಿ
ಮಾಡಿಕೊಳ್ಳುತ್ತೇವೆ. ಹೇಗೆ ಬೇರೆ ಪಾಠಶಾಲೆಯಲ್ಲಿ ಶಿಕ್ಷಕರು ಓದಿಸಿದ ನಂತರ ಪದವಿಯನ್ನು
ಕೊಡುತ್ತಾರೆ ಅದೇ ರೀತಿ ಇಲ್ಲೂ ಸಹ ಸ್ವಯಂ ಪರಮಾತ್ಮ ಗುರು, ತಂದೆ, ಟೀಚರ್ ರೂಪದಲ್ಲಿ ನಮಗೆ ಓದಿಸಿ
ಸರ್ವೊತ್ತಮ ದೇವೀ ದೇವತಾ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ. ಆದ್ದರಿಂದ ಈ ಪಾಠಶಾಲೆಗೆ
ಸೇರಿಕೊಳ್ಳುವುದು ಅವಶ್ಯಕವಾಗಿದೆ. ಇಲ್ಲಿ ಬರುವವರು ಈ ಜ್ಞಾನವನ್ನು ಖಂಡಿತವಾಗಿ ತಿಳಿದುಕೊಳ್ಳಬೇಕು,
ಇಲ್ಲಿ ಯಾವ ಶಿಕ್ಷಣ ಸಿಗುವುದು? ಈ ಶಿಕ್ಷಣವನ್ನು ಪಡೆಯುವುದರಿಂದ ನಮಗೆ ಏನು ಪ್ರಾಪ್ತಿಯಾಗುತ್ತದೆ!
ಎಂದು ನಾವಂತೂ ತಿಳಿದುಕೊಂಡಿದ್ದೇವೆ. ನಮಗೆ ಸ್ವಯಂ ಪರಮಾತ್ಮನೇ ಬಂದು ಡಿಗ್ರಿಯನ್ನು ಕೊಡುತ್ತಾರೆ
ಮತ್ತು ಒಂದೇ ಜನ್ಮದಲ್ಲಿ ಇಡೀ ವಿದ್ಯೆಯನ್ನು ಪೂರ್ಣ ಮಾಡಬೇಕು. ಹಾಗೆ ಯಾರು ಪ್ರಾರಂಭದಿಂದ ಹಿಡಿದು
ಅಂತ್ಯದವರೆಗೆ ಈ ಜ್ಞಾನದ ಓದನ್ನು ಪೂರ್ಣ ರೀತಿಯಲ್ಲಿ ಓದುತ್ತಾರೆ. ಅವರು ಪೂರ್ತಿ ಪಾಸ್ ಆಗುತ್ತಾರೆ,
ಉಳಿದವರು ಯಾರು ಈ ವಿದ್ಯೆಯ ಮಧ್ಯದಲ್ಲಿ ಬಂದು ಸೇರುತ್ತಾರೆ ಅವರು ಈ ಜ್ಞಾನವನ್ನು ಅಷ್ಟು ಹೆಚ್ಚು
ಪಡೆಯಲು ಸಾಧ್ಯವಿಲ್ಲ, ಮೊದಲಿನಿಂದ ವಿದ್ಯೆಯಲ್ಲಿ ಏನು ನಡೆಯಿತು? ಎಂದು ಅವರಿಗೆ
ಗೊತ್ತಿರುವುದಿಲ್ಲ. ಆದ್ದರಿಂದ ಈ ವಿದ್ಯೆಯನ್ನು ನಿಯಮಿತವಾಗಿ ಓದಬೇಕಾಗಿದೆ. ಈ ಜ್ಞಾನವನ್ನು
ತಿಳಿಯುವುದರಿಂದಲೇ ಮುಂದುವರೆಯುವಿರಿ. ಆದ್ದರಿಂದ ನಿಯಮಿತವಾಗಿ ಓದಬೇಕು.
2. “ಪರಮಾತ್ಮನ
ಸತ್ಯ ಮಕ್ಕಳಾದಮೇಲೆ ಯಾವುದೇ ಸಂಶಯದಲ್ಲಿ ಬರಬಾರದಾಗಿದೆ”
ಪರಮಾತ್ಮನೇ ಸ್ವಯಂ ಈ ಸೃಷ್ಠಿಯ ಮೇಲೆ ಇಳಿದು ಬಂದಿದ್ದಾರೆ, ಆ ಪರಮಾತ್ಮನಿಗೆ ನಾವು ನಮ್ಮ ಪಕ್ಕಾ
ಕೈ ಕೊಡಬೇಕಾಗಿದೆ. ಆದರೆ ಪಕ್ಕಾ ಸತ್ಯ ಮಕ್ಕಳೇ ಬಾಬಾರವರಿಗೆ ತಮ್ಮ ಕೈ ಕೊಡಲು ಸಾಧ್ಯ. ಈ ತಂದೆಯ
ಕೈಯನ್ನು ಎಂದೂ ಬಿಡಬಾರದು, ಒಂದುವೇಳೆ ಬಿಟ್ಟಿದ್ದೇ ಆದರೆ ಅನಾಥರಾಗಿ ಎಲ್ಲಿ ಹೋಗುವಿರಿ! ಯಾವಾಗ
ಪರಮಾತ್ಮನ ಕೈ ಹಿಡಿದಿರಿ ನಂತರ ಎಂದೂ ಸೂಕ್ಷ್ಮದಲ್ಲೂ ನಾನು ಪರಮಾತ್ಮನ ಕೈ ಬಿಡಬೇಕು ಎನ್ನುವ
ಸಂಕಲ್ಪ ಬರಬಾರದು ಮತ್ತು ನಾವು ಪಾರು ಮಾಡುತ್ತೇವೆಯೋ ಇಲ್ಲವೋ ಎನ್ನುವ ಸಂಶಯದಲ್ಲಿ ಎಂದೂ ಬರಬಾರದು.
ಕೆಲವು ಇಂತಹ ಮಕ್ಕಳೂ ಇರುತ್ತಾರೆ ಯಾರು ತಂದೆಯನ್ನು ಗುರುತಿಸದ ಕಾರಣ ತಂದೆಗೆ ಎದುರು ನಿಂತು ಹೀಗೂ
ಹೇಳುತ್ತಾರೆ ನಮಗೆ ಯಾರದೂ ಚಿಂತೆಯಿಲ್ಲ ಎಂದು. ಒಂದುವೇಳೆ ಇಂತಹ ಯೋಚನೆ ಬಂದರೆ ಇಂತಹ ಅಯೋಗ್ಯ
ಮಕ್ಕಳ ಸಂಭಾಲನೆಯನ್ನು ತಂದೆ ಹೇಗೆ ಮಾಡುತ್ತಾರೆ ಅಂದಮೇಲೆ ತಿಳಿಯಿರಿ ಇಂತಹವರು ಕೆಳಗೆ ಬಿದ್ದರು
ಎಂದರೆ ಬಿದ್ದರು ಏಕೆಂದರೆ ಮಾಯೆಯು ಬೀಳಿಸಲು ಬಹಳ ಪ್ರಯತ್ನ ಮಾಡುತ್ತದೆ ಏಕೆಂದರೆ ಪರೀಕ್ಷೆಯಂತು
ಅವಶ್ಯವಾಗಿ ತೆಗೆದುಕೊಳ್ಳುತ್ತದೆ ಯೋಧ ಎಲ್ಲಿಯವರೆಗೆ ರುಸ್ತುಂ ಪಹೆಲ್ವಾನ್ (ಬಲಶಾಲಿ) ಆಗಿದ್ದಾನೆ!
ಎಂದು ಈಗ ಇದೂ ಅವಶ್ಯವಾಗಿದೆ, ಎಷ್ಟೆಷ್ಟು ನಾವು ಪ್ರಭುವಿನ ಜೊತೆ ರುಸ್ತುಂ (ಬಲಶಾಲಿ) ಆಗುತ್ತಾ
ಹೋಗುವಿರಿ ಅಷ್ಟೂ ಮಾಯೆ ಕೂಡ ರುಸ್ತುಂ ಆಗಿ ನಮ್ಮನ್ನು ಬೀಳಿಸಲು ಪ್ರಯತ್ನ ಮಾಡುತ್ತದೆ. ಜೊತೆ
ಸರಿಯಾಗಿರುತ್ತದೆ ಎಷ್ಟು ಪ್ರಭು ಬಲವಾನ್ (ಶಕ್ತಿವಂತ) ಆಗಿದ್ದಾರೆ ಮಾಯೆಯೂ ಅಷ್ಟೇ ಬಲವಾನೀ (ಶಕ್ತಿಯನ್ನು)
ತೋರಿಸುತ್ತದೆ, ಆದರೆ ನಮಗಂತೂ ಪೂರ್ತಿ ನಿಶ್ಚಯವಿದೆ ಕೊನೆಯಲ್ಲಿ ಪರಮಾತ್ಮನೇ ಮಹಾನ್ ಬಲಶಾಲಿ
ಆಗಿದ್ದಾನೆ ಎಂದು, ಕೊನೆಗೆ ಅವರದೇ ಜಯವಾಗುವುದೆಂದು. ಶ್ವಾಸ-ಶ್ವಾಸದಲ್ಲಿ ಇದೇ ವಿಶ್ವಾಸದಲ್ಲಿ
ಸ್ಥಿತರಾಗಿರಬೇಕಾಗಿದೆ. ಮಾಯೆಗೆ ತಮ್ಮ ಬಲವಾನಿ (ಶಕ್ತಿಯನ್ನು) ತೋರಿಸಬೇಕಿದೆ, ಅದು ಪ್ರಭುವಿನ
ಮುಂದೆ ತನ್ನ ಬಲಹೀನತೆಯನ್ನು ತೋರಿಸುವುದಿಲ್ಲ, ಕೇವಲ ಒಂದೇ ಒಂದು ಬಾರಿ ಬಲಹೀನರಾದರೂ ಎಲ್ಲಾ
ಸಮಾಪ್ತಿಯಾಗಿ ಬಿಡುತ್ತದೆ. ಆದ್ದರಿಂದ ಮಾಯೆ ಎಷ್ಟೇ ಶಕ್ತಿ ತೋರಿಸಲಿ, ಆದರೆ ತಾವು ಎಂದೂ
ಮಾಯಾಪತಿಯ ಕೈಯನ್ನು ಬಿಡಬಾರದು, ಆ ಕೈ ಪೂರ್ತಿ ಹಿಡಿದರೆ ತಿಳಿಯಿರಿ ಅವರ ವಿಜಯವಾಗುತ್ತದೆ, ಯಾವಾಗ
ಪರಮಾತ್ಮ ನಮ್ಮ ಮಾಲಿಕನಾಗಿದ್ದಾರೆ ಅವರ ಕೈ ಬಿಡುವ ಸಂಕಲ್ಪ ಎಂದೂ ಬರಬಾರದು. ಪರಮಾತ್ಮ ಹೇಳುತ್ತಾರೆ,
ಮಕ್ಕಳೇ, ಯಾವಾಗ ನಾನು ಸ್ವಯಂ ಸಮರ್ಥನಾಗಿದ್ದೇನೆ, ಅಂದಮೇಲೆ ನನ್ನ ಜೊತೆಯಿರುವ ನೀವೂ ಸಹ
ಅವಶ್ಯವಾಗಿ ಸಮರ್ಥರಾಗುವಿರಿ. ತಿಳಿದಿರಾ ಮಕ್ಕಳೇ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿದ ಭಾಗ್ಯಶಾಲಿ ಜ್ಞಾನ ನಕ್ಷತ್ರಗಳ ಪ್ರತಿ ಮಾತ್ಪಿತಾ ಬಾಪ್ದಾದಾರವರ
ನಂಬರ್ವಾರ್ ಪುರುಷಾರ್ಥದನುಸಾರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ತಂದೆಯ
ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಪವಿತ್ರರಾಗಿ
ತಮ್ಮ ಸಮಾನ ಅನ್ಯರನ್ನೂ ಪವಿತ್ರರನ್ನಾಗಿ ಮಾಡಬೇಕಾಗಿದೆ. ಒಬ್ಬ ತಂದೆಯ ವಿನಃ ಮತ್ತ್ಯಾರನ್ನೂ ನೆನಪು
ಮಾಡಬಾರದಾಗಿದೆ.
2. ಅನೇಕ ಆತ್ಮಗಳ ಆಶೀರ್ವಾದವನ್ನು ಪಡೆಯುವುದಕ್ಕೋಸ್ಕರ ಆತ್ಮಿಕ ಆಸ್ಪತ್ರೆಯನ್ನು ತೆರೆಯಬೇಕಾಗಿದೆ.
ಎಲ್ಲರಿಗೂ ಗತಿ-ಸದ್ಗತಿಯ ಮಾರ್ಗವನ್ನು ತಿಳಿಸಬೇಕಾಗಿದೆ.
ವರದಾನ:
ನಿಶ್ಚಯ
ಬುದ್ಧಿಯವರಾಗಿ ಲೌಕಿಕದಲ್ಲಿ ಅಲೌಕಿಕ ಭಾವನೆ ಇಡುವಂತಹ ಡಬ್ಬಲ್ ಸೇವಾಧಾರಿ ಟ್ರಸ್ಟಿ ಭವ.
ಕೆಲವು ಮಕ್ಕಳು
ಸೇವೆ ಮಾಡುತ್ತಾ-ಮಾಡುತ್ತಾ ಸುಸ್ತಾಗಿ ಬಿಡುತ್ತಾರೆ, ಯೋಚಿಸುತ್ತಾರೆ ಇವರಂತೂ ಎಂದೂ ಬದಲಾವಣೆ
ಅಗುವುದೆ ಇಲ್ಲ. ಈ ರೀತಿ ನಿರಾಶರಾಗಬೇಡಿ. ನಿಶ್ಚಯಬುದ್ಧಿಯವರಾಗಿ, ನನ್ನತನದ ಸಂಬಂಧದಿಂದ ನ್ಯಾರಾ
ಆಗಿ ನಡೆಯುತ್ತಾ ಹೋಗಿ. ಕೆಲವು ಆತ್ಮಗಳ ಭಕ್ತಿಯ ಲೆಕ್ಕಾಚಾರ ಚುಕ್ತ ಆಗುವಲ್ಲಿ ಸ್ವಲ್ಪ ಸಮಯ
ತೆಗೆದುಕೊಳ್ಳುತ್ತೆ. ಆದ್ದರಿಂದ ತಾಳ್ಮೆ ವಹಿಸಿ, ಸಾಕ್ಷಿತನದ ಸ್ಥಿತಿಯಲ್ಲಿ ಸ್ಥಿತರಾಗಿರಿ, ಶಾಂತಿ
ಮತ್ತು ಸಹಯೋಗ ಆತ್ಮಗಳಿಗೆ ಕೊಡುತ್ತಾಯಿರಿ. ಲೌಕಿಕದಲ್ಲಿ ಅಲೌಕಿಕ ಭಾವನೆಯಿಡಿ. ಡಬ್ಬಲ್ ಸೇವಾಧಾರಿ,
ಟ್ರಸ್ಟಿಗಳಾಗಿ.
ಸ್ಲೋಗನ್:
ತಮ್ಮ ಶ್ರೇಷ್ಠ
ವೃತ್ತಿಯಿಂದ ವಾಯಮಂಡಲವನ್ನು ಶ್ರೇಷ್ಠ ಮಾಡುವುದು ಇದೇ ಸತ್ಯ ಸೇವೆಯಾಗಿದೆ.