29.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಇಲ್ಲಿ ಧಾರಣೆ ಮಾಡಿ ಅನ್ಯರಿಗೂ ಸಹ ಅವಶ್ಯವಾಗಿ ಮಾಡಿಸಬೇಕಾಗಿದೆ, ಉತ್ತೀರ್ಣರಾಗುವುದಕ್ಕೆ ತಂದೆ-ತಾಯಿಯ ಸಮಾನರಾಗಬೇಕಾಗಿದೆ, ಏನು ಕೇಳುತ್ತೀರಿ ಅದನ್ನು ಹೇಳಲೂಬೇಕಾಗಿದೆ”

ಪ್ರಶ್ನೆ:
ಮಕ್ಕಳಲ್ಲಿ ಎಂತಹ ಶುಭ ಭಾವನೆಯು ಉತ್ಪನ್ನವಾಗುವುದೂ ಸಹ ಒಳ್ಳೆಯ ಪುರುಷಾರ್ಥದ ಚಿಹ್ನೆಯಾಗಿದೆ ?

ಉತ್ತರ:
ಒಂದು ವೇಳೆ ಮಕ್ಕಳಲ್ಲಿ ಈ ಶುಭಭಾವನೆ ಇರುತ್ತದೆಯೆಂದರೆ - ನಾವು ತಂದೆ-ತಾಯಿಯನ್ನು ಅನುಸರಣೆ ಮಾಡಿ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತೇವೆ ಅಂದಾಗ ಇದೂ ಸಹ ಬಹಳ ಒಳ್ಳೆಯ ಧೈರ್ಯವಾಗಿದೆ. ಅವರು ಬಾಬಾ ನಾವು ಪೂರ್ಣ ಪರೀಕ್ಷೆಯನ್ನು ಪಾಸ್ ಮಾಡುತ್ತೇವೆಂದು ಹೇಳುತ್ತಾರೆ, ಇದೂ ಸಹ ಶುಭವನ್ನೇ ಹೇಳುವುದಾಗಿದೆ, ಇದಕ್ಕಾಗಿ ಅವಶ್ಯವಾಗಿ ಅಷ್ಟು ತೀವ್ರ ಪುರುಷಾರ್ಥವನ್ನೂ ಮಾಡಬೇಕಾಗಿದೆ.

ಗೀತೆ:
ನಮ್ಮ ತೀರ್ಥಸ್ಥಾನವು ಭಿನ್ನವಾಗಿದೆ

ಓಂ ಶಾಂತಿ.
ಈಗ ಇಲ್ಲಿ ಪಾಪಾತ್ಮರಂತೂ ಎಲ್ಲರೂ ಆಗಿದ್ದಾರೆ, ಪುಣ್ಯಾತ್ಮರು ಸ್ವರ್ಗದಲ್ಲಿಯೇ ಇರುತ್ತಾರೆ, ಇದು ಪಾಪಾತ್ಮರ ಪ್ರಪಂಚವಾಗಿದೆ. ಇಲ್ಲಿ ಅಜಾಮಿಳರಂತಹ ಪಾಪಾತ್ಮರು ಇದ್ದಾರೆ ಮತ್ತು ಸ್ವರ್ಗವು ದೇವತೆಗಳ ಪುಣ್ಯಾತ್ಮರ ಪ್ರಪಂಚವಾಗಿದೆ. ಇಬ್ಬರ ಮಹಿಮೆಯೂ ಬೇರೆ-ಬೇರೆಯಾಗಿದೆ. ಬಹಳಷ್ಟು ಬ್ರಾಹ್ಮಣರಿದ್ದಾರೆ - ಬಾಬಾ, ನಾವು ಇಷ್ಟು ಪಾಪ ಮಾಡಿದ್ದೇವೆಂದು ತನ್ನ ಈ ಜನ್ಮದ ಜೀವನ ಕಥೆಯನ್ನು ಬರೆದು ಕಳುಹಿಸುತ್ತಾರೆ. ತಂದೆಯ ಬಳಿ ಎಲ್ಲರ ಜೀವನ ಕಥೆಯಿದೆ. ಮಕ್ಕಳಿಗೆ ಗೊತ್ತಿದೆ, ಇಲ್ಲಿ ಕೇಳಬೇಕು ಮತ್ತು ಅನ್ಯರಿಗೆ ಹೇಳಬೇಕಾಗಿದೆ ಅಂದಾಗ ಹೇಳುವವರು ಎಷ್ಟು ಮಂದಿ ಬೇಕಾಗುತ್ತದೆ. ಎಲ್ಲಿಯವರೆಗೆ ಹೇಳುವವರಾಗುವುದಿಲ್ಲ ಅಲ್ಲಿಯವರೆಗೆ ಪಾಸಾಗಲು ಸಾಧ್ಯವಿಲ್ಲ. ಅನ್ಯ ಸತ್ಸಂಗಗಳಲ್ಲಿ ಹೀಗೆ ಕೇಳಿ ಮತ್ತು ಹೇಳುವುದಕ್ಕಾಗಿ ಬಂದಿಸಲ್ಪಟ್ಟಿಲ್ಲ. ಆದರೆ ಇಲ್ಲಿ ಧಾರಣೆ ಮಾಡಿ ನಂತರ ಮಾಡಿಸಬೇಕಾಗಿದೆ, ಅನುಯಾಯಿಗಳನ್ನು ಮಾಡಿಕೊಳ್ಳಬೇಕಾಗಿದೆ. ಇಲ್ಲಿ ಒಬ್ಬರೇ ಪಂಡಿತರು ಕಥೆಯನ್ನು ತಿಳಿಸಬೇಕೆಂದಲ್ಲ. ಆದರೆ ಪ್ರತಿಯೊಬ್ಬರೂ ಸಹ ತಂದೆ-ತಾಯಿಯ ಸಮಾನರಾಗಬೇಕು. ಅನ್ಯರಿಗೆ ತಿಳಿಸಿದಾಗಲೇ ಉತ್ತೀರ್ಣರಾಗುತ್ತೀರಿ ಮತ್ತು ತಂದೆಯ ಹೃದಯವನ್ನೇರುತ್ತೀರಿ. ಜ್ಞಾನದ ಆಧಾರದ ಮೇಲೆಯೇ ತಿಳಿಸಲಾಗುತ್ತದೆ. ಅಲ್ಲಂತೂ ಎಲ್ಲರೂ ಕೃಷ್ಣ ಭಗವಾನುವಾಚವೆಂದು ಹೇಳುತ್ತಾರೆ. ಆದರೆ ಇಲ್ಲಿ ಜ್ಞಾನಸಾಗರ, ಪತಿತ-ಪಾವನ, ಗೀತಾ ಜ್ಞಾನದಾತ ಶಿವ ಭಗವಾನುವಾಚ ಎಂದು ಹೇಳುತ್ತಾರೆ. ರಾಧೆ-ಕೃಷ್ಣ ಅಥವಾ ಲಕ್ಷ್ಮೀ-ನಾರಾಯಣರಿಗೆ ಭಗವಾನ್-ಭಗವತಿ ಎಂದು ಹೇಳಲು ಸಾಧ್ಯ ಇಲ್ಲ, ನಿಯಮ ಇಲ್ಲ. ಭಗವಂತನೇ ಅವರಿಗೆ ಪದವಿಯನ್ನು ಕೊಟ್ಟಿದ್ದಾರೆ ಅಂದಮೇಲೆ ಅವಶ್ಯವಾಗಿ ಭಗವಾನ್-ಭಗವತಿಯರನ್ನಾಗಿಯೇ ಮಾಡುತ್ತಾರೆ. ಆದ್ದರಿಂದ ಈ ಹೆಸರು ಬಂದಿದೆ. ಈಗ ನೀವು ವಿಜಯಮಾಲೆಯಲ್ಲಿ ಪೋಣಿಸಲ್ಪಡುವ ಪುರುಷಾರ್ಥ ಮಾಡುತ್ತಿದ್ದೀರಿ. ಮಾಲೆಯು ತಯಾರಾಗುತ್ತದೆಯಲ್ಲವೆ. ಮೇಲೆ ರುದ್ರ ಅರ್ಥಾತ್ ಶಿವನಿದ್ದಾರೆ. ರುದ್ರಾಕ್ಷಿಯ ಮಾಲೆಯಿರುತ್ತದೆಯಲ್ಲವೆ. ಇಲ್ಲಿ ಈಶ್ವರನ ಮಾಲೆಯು ತಯಾರಾಗುತ್ತಿದೆ. ನಮ್ಮ ತೀರ್ಥ ಸ್ಥಾನವು ಭಿನ್ನವಾಗಿದೆ ಎಂದು ಹೇಳುತ್ತಾರೆ, ಅಲ್ಲಂತೂ ತೀರ್ಥ ಸ್ಥಾನಗಳಿಗೆ ಹೋಗಿ ಬಹಳ ಪೆಟ್ಟು ತಿನ್ನುತ್ತಾರೆ. ಆದರೆ ಇಲ್ಲಿ ನಿಮ್ಮ ಮಾತೇ ಭಿನ್ನವಾಗಿದೆ. ನಿಮ್ಮ ಬುದ್ಧಿಯೋಗವು ಶಿವ ತಂದೆಯ ಜೊತೆಯಿದೆ. ರುದ್ರನ ಕೊರಳಿನ ಹಾರವಾಗಬೇಕಾಗಿದೆ. ಮಾಲೆಯ ರಹಸ್ಯವನ್ನೂ ತಿಳಿದುಕೊಂಡಿಲ್ಲ. ಮೇಲೆ ಶಿವ ತಂದೆ (ಮಾಲೆಯ ಹೂ) ನಂತರ ಜಗದಂಬಾ, ಜಗತ್ಪಿತಾ ಹಾಗೂ ಅವರ 108 ವಂಶಾವಳಿ. ಬಾಬಾರವರು ನೋಡಿದ್ದಾರೆ, ಬಹಳ ದೊಡ್ದ ಮಾಲೆಯಿರುತ್ತದೆ, ಅದನ್ನು ಎಲ್ಲರೂ ಎಳೆಯುತ್ತಾರೆ. ರಾಮ-ರಾಮ ಎಂದು ಹೇಳುತ್ತಾರೆ ಆದರೆ ಲಕ್ಷ್ಯವೇನೂ ಇಲ್ಲ. ರುದ್ರ ಮಾಲೆಯನ್ನು ತಿರುಗಿಸುತ್ತಾರೆ, ರಾಮ-ರಾಮ ಎಂಬ ಧ್ವನಿಯನ್ನು ಮಾಡುತ್ತಿರುತ್ತಾರೆ. ಇದೆಲ್ಲವೂ ಭಕ್ತಿಮಾರ್ಗವಾಯಿತು. ಆದರೂ ಸಹ ಇದು ಅನ್ಯ ಮಾತುಗಳಿಗಿಂತ ಉತ್ತಮವಾಗಿದೆ. ಏಕೆಂದರೆ ಎಷ್ಟು ಸಮಯ ಗುಂಗಿನಲ್ಲಿರುತ್ತಾರೆಯೋ ಆಗ ಯಾವುದೇ ಪಾಪವಾಗುವುದಿಲ್ಲ. ಇವು ಪಾಪಗಳಿಂದ ಪಾರಾಗುವ ಯುಕ್ತಿಯಾಗಿದೆ. ಇಲ್ಲಿ ಮಾಲೆಯನ್ನು ತಿರುಗಿಸುವ ಮಾತಿಲ್ಲ. ಸ್ವಯಂ ಮಾಲೆಯ ಮಣಿಯಾಗಬೇಕಾಗಿದೆ ಅಂದಾಗ ನಮ್ಮ ತೀರ್ಥ ಸ್ಥಾನವು ಭಿನ್ನವಾಗಿದೆ. ನಾವು ನಮ್ಮ ಶಿವ ತಂದೆಯ ಮನೆಯ ಅವ್ಯಭಿಚಾರಿ ಯಾತ್ರಿಕರಾಗಿದ್ದೇವೆ. ಯೋಗದಿಂದ ನಮ್ಮ ಜನ್ಮ-ಜನ್ಮಾಂತರದ ವಿಕರ್ಮಗಳು ಭಸ್ಮವಾಗುತ್ತದೆ. ಕೃಷ್ಣನನ್ನು ಯಾರಾದರೂ ದಿನ-ರಾತ್ರಿ ನೆನಪು ಮಾಡಿದರೂ ಸಹ ವಿಕರ್ಮ ವಿನಾಶವಾಗಲು ಸಾಧ್ಯವಿಲ್ಲ. ರಾಮ-ರಾಮ ಎಂದು ಹೇಳುವ ಸಮಯದಲ್ಲಿ ಯಾವುದೇ ಪಾಪವಂತೂ ಆಗುವುದಿಲ್ಲ. ಆದರೆ ನಂತರ ಪಾಪ ಮಾಡಲು ತೊಡಗುತ್ತಾರೆ. ಇದರಿಂದ ಪಾಪಗಳು ಭಸ್ಮವಾಗುತ್ತದೆ ಅಥವಾ ಆಯಸ್ಸು ಹೆಚ್ಚಾಗುತ್ತದೆ ಎಂದಲ್ಲ. ಇಲ್ಲಿ ಯೋಗಬಲದಿಂದ ನೀವು ಮಕ್ಕಳ ಪಾಪಗಳು ಭಸ್ಮವಾಗುತ್ತವೆ ಮತ್ತು ಆಯಸ್ಸು ಹೆಚ್ಚುತ್ತದೆ. ಜನ್ಮ-ಜನ್ಮಾಂತರಕ್ಕಾಗಿ ನಿಮ್ಮ ಆಯಸ್ಸು ಅವಿನಾಶಿಯಾಗಿ ಬಿಡುತ್ತದೆ. ಮನುಷ್ಯರಿಂದ ದೇವತೆಗಳಾಗುವುದನ್ನೇ ಜೀವನವನ್ನು ರೂಪಿಸಿಕೊಳ್ಳುವುದು ಎಂದು ಹೇಳಲಾಗುವುದು. ದೇವತೆಗಳದು ಎಷ್ಟೊಂದು ಮಹಿಮೆಯಿದೆ. ನಾವು ನೀಚರು, ಪಾಪಿಗಳೆಂದು ಮನುಷ್ಯರು ತಮ್ಮನ್ನು ತಾವೇ ಹೇಳಿಕೊಳ್ಳುತ್ತಾರೆ ಅಂದಾಗ ಎಲ್ಲರೂ ಹೀಗೆಯೇ ಆಗಿರಬೇಕು. ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲ. ತಾವೇ ದಯೆ ತೋರಬೇಕೆಂದು ಹಾಡುತ್ತಾರೆ. ಹೀಗೆ ಪರಮಾತ್ಮನ ಮಹಿಮೆ ಮಾಡುತ್ತಾರೆ. ತಂದೆಯು ನಿಮ್ಮನ್ನು ಸರ್ವಗುಣ ಸಂಪನ್ನ, ಶ್ರೀ ಕೃಷ್ಣನ ಸಮಾನರನ್ನಾಗಿ ಮಾಡಿ ಬಿಡುತ್ತಾರೆ. ತಾವೀಗ ಆಗುತ್ತಿದ್ದೀರಿ, ನಿರ್ಗುಣ ಬಾಲಕ ಎಂಬ ಸಂಸ್ಥೆಯೂ ಇದೆ. ಆದರೆ ನಿರ್ಗುಣ ಎಂದು ಯಾವುದಕ್ಕೆ ಹೇಳುತ್ತಾರೆ ಎಂಬ ಅರ್ಥವನ್ನು ತಿಳಿದುಕೊಂಡಿಲ್ಲ. ಸರ್ವಗುಣ ಸಂಪನ್ನರೆಂದು ಶ್ರೀ ಕೃಷ್ಣ ಅಥವಾ ಲಕ್ಷ್ಮೀ -ನಾರಾಯಣರ ಗುಣಗಳ ಮಹಿಮೆಯನ್ನು ಹಾಡುತ್ತಾರೆ ಆದರೆ ನೀವು ಅಂತಹ ದೇವತೆಗಳಾಗುತ್ತಿದ್ದೀರಿ, ಅದು ನಿಮಗೆ ಗೊತ್ತಿದೆ. ನಾವು ಅವರ ಸಮಾನರಾಗುತ್ತಿದ್ದೇವೆಂದು ಹೇಳುವ ಮತ್ತ್ಯಾವುದೇ ಸತ್ಸಂಗವಿಲ್ಲ. ಇಲ್ಲಿ ನೀವು ಲಕ್ಷ್ಮೀ-ನಾರಾಯಣರನ್ನು ವರಿಸುತ್ತೀರೋ ಅಥವಾ ರಾಮ-ಸೀತೆಯರನ್ನೋ? ಎಂದು ತಂದೆಯು ಕೇಳುತ್ತಾರೆ ಅಂದಾಗ ಮಕ್ಕಳೂ ಸಹ ಬುದ್ಧಿಯಿಲ್ಲದವರೇನಲ್ಲ. ಬಾಬಾ, ನಾವು ಪರೀಕ್ಷೆಯನ್ನು ಪೂರ್ಣ ತೇರ್ಗಡೆ ಮಾಡುತ್ತೇವೆಂದು ತಕ್ಷಣ ಹೇಳುತ್ತಾರೆ ಅಂದರೆ ಶುಭವನ್ನೇ ಹೇಳುತ್ತಾರೆ ಆದರೆ ಎಲ್ಲರೂ ಒಂದೇ ಸಮಾನರಾಗಲು ಸಾಧ್ಯವಿಲ್ಲ. ಆದರೂ ಸಹ ಸಾಹಸವನ್ನು ತೋರಿಸುತ್ತಾರೆ. ಮಮ್ಮಾ-ಬಾಬಾರವರು ಶಿವ ತಂದೆಯ ಅನನ್ಯ ಮಕ್ಕಳಾಗಿದ್ದಾರೆ. ನಾವು ಅವರನ್ನು ಪೂರ್ಣ ಅನುಸರಣೆ ಮಾಡಿ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತೇವೆ, ಈ ಶುಭಕಾಮನೆ ಒಳ್ಳೆಯದಾಗಿದೆ ನಂತರ ಇಂತಹ ಪುರುಷಾರ್ಥ ಮಾಡಬೇಕು. ಈ ಸಮಯದ ಪುರುಷಾರ್ಥವು ಕಲ್ಪ-ಕಲ್ಪಕ್ಕೆ ಆಗಿ ಬಿಡುತ್ತದೆ, ಗ್ಯಾರೆಂಟಿಯಾಗಿ ಬಿಡುವುದು. ಈಗಿನ ಪುರುಷಾರ್ಥದಿಂದ ತಿಳಿಯುತ್ತದೆ ಕಲ್ಪದ ಮೊದಲೂ ಹೀಗೆ ಮಾಡಿದ್ದರೆಂದು, ಕಲ್ಪ-ಕಲ್ಪವೂ ಇಂಥಹ ಪುರುಷಾರ್ಥವೇ ನಡೆಯುತ್ತದೆ. ಯಾವಾಗ ಪರೀಕ್ಷೆಯ ಸಮಯವು ಬರುತ್ತದೆಯೋ ಆಗ ನಾವು ಎಲ್ಲಿಯವರೆಗೆ ಪಾಸಾಗುತ್ತೇವೆಂದು ಗೊತ್ತಾಗುತ್ತದೆ. ಶಿಕ್ಷಕರಿಗಂತೂ ತಕ್ಷಣ ಗೊತ್ತಾಗಿ ಬಿಡುತ್ತದೆ. ಇದು ನರನಿಂದ ನಾರಾಯಣರಾಗುವ ಗೀತಾ ಪಾಠ ಶಾಲೆಯಾಗಿದೆ. ಆದರೆ ಅನ್ಯ ಗೀತಾ ಪಾಠ ಶಾಲೆಗಳಲ್ಲಿ ನರನಿಂದ ನಾರಾಯಣರಾಗಲು ಬಂದಿದ್ದೇವೆಂದು ಹೇಳುವುದಿಲ್ಲ ಅಥವಾ ನಾನು ನರನಿಂದ ನಾರಾಯಣನನ್ನಾಗಿ ಮಾಡುತ್ತೇನೆಂದು ಶಿಕ್ಷಕರೂ ಹೇಳಲು ಸಾಧ್ಯವಿಲ್ಲ. ಮೊದಲು ನಾನೂ ನರನಿಂದ ನಾರಾಯಣನಾಗುತ್ತೇನೆಂದು ಮೊದಲು ಶಿಕ್ಷಕರಿಗೆ ನಶೆಯಿರಬೇಕು. ಗೀತಾ ಪ್ರವಚನ ಮಾಡುವವರಂತೂ ಅನೇಕರಿರುತ್ತಾರೆ ಆದರೆ ನಾವು ಶಿವ ತಂದೆಯ ಮೂಲಕ ಓದುತ್ತೇವೆಂದು ಎಲ್ಲಿಯೂ ಹೇಳುವುದಿಲ್ಲ. ಅವರಂತೂ ಮನುಷ್ಯರ ಮುಖಾಂತರ ಓದುತ್ತಾರೆ. ನಿಮಗಂತೂ ಗೊತ್ತಿದೆ, ಶ್ರೇಷ್ಠಾತಿ ಶ್ರೇಷ್ಠ ಪರಮಪಿತ ಪರಮಾತ್ಮ ಶಿವನಾಗಿದ್ದಾರೆ, ಅವರೇ ಸ್ವರ್ಗದ ರಚಯಿತ, ಜ್ಞಾನಪೂರ್ಣನಾಗಿದ್ದಾರೆ, ಅವರೇ ಬಂದು ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಗುರುನಾನಕರೂ ಸಹ ಅವರ ಮಹಿಮೆ ಹಾಡಿದ್ದಾರೆ - ಸಾಹೇಬ್ನನ್ನು ಜಪಿಸಿದರೆ ಸುಖ ಸಿಗುವುದು ಎಂದು. ಈಗ ನಿಮಗೆ ಗೊತ್ತಿದೆ, ಶ್ರೇಷ್ಠಾತಿ ಶ್ರೇಷ್ಠ ಸತ್ಯ ಸಾಹೇಬ್ ತಂದೆಯಾಗಿದ್ದಾರೆ, ಸ್ವತಃ ಹೇಳುತ್ತಾರೆ ತಂದೆಯಾದ ನನ್ನನ್ನು ನೆನಪು ಮಾಡಿ, ನಾನು ನಿಮಗೆ ಸತ್ಯ ಅಮರಕಥೆ, ಮೂರನೆಯ ನೇತ್ರದ ಕಥೆಯನ್ನು ತಿಳಿಸುತ್ತೇನೆಂದು ಹೇಳುತ್ತಾರೆ ಅಂದಾಗ ಈ ಜ್ಞಾನವು ಮೂರನೇ ನೇತ್ರವು ಸಿಗುವ ಅಥವಾ ನರನಿಂದ ನಾರಾಯಣರಾಗುವ ಜ್ಞಾನವಾಗಿದೆ. ಹೇ ಪಾರ್ವತಿಯರೇ, ಅಮರನಾಥನಾದ ನಾನು ನಿಮಗೆ ಅಮರ ಕಥೆಯನ್ನು ತಿಳಿಸುತ್ತಿದ್ದೇನೆ. ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆಯಾಗಿದ್ದಾರೆ, ನಂತರ ಬ್ರಹ್ಮಾ-ವಿಷ್ಣು-ಶಂಕರ, ನಂತರ ಸ್ವರ್ಗದಲ್ಲಿ ಲಕ್ಷ್ಮೀ-ನಾರಾಯಣ, ನಂತರ ಚಂದ್ರವಂಶಿ...... ನಂಬರ್ವಾರ್ ಬರುತ್ತಾರೆ. ಸಮಯವೂ ಸಹ ಸತೋ, ರಜೋ, ತಮೋ ಆಗುತ್ತದೆ. ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಬಹಳ ಗುಹ್ಯವಾದ ಮಾತುಗಳನ್ನು ತಿಳಿಸುತ್ತಿದ್ದಾರೆ. ಆತ್ಮದಲ್ಲಿ ಅವಿನಾಶಿ ಪಾತ್ರವಿದೆ, ಒಂದೊಂದು ಜನ್ಮದ ಪಾತ್ರವೂ ಸಹ ತುಂಬಲ್ಪಟ್ಟಿದೆ. ಅದೆಂದೂ ವಿನಾಶ ಹೊಂದುವುದಿಲ್ಲ. ತಂದೆಯೂ ಸಹ ತಿಳಿಸುತ್ತಾರೆ - ನನ್ನ ಪಾತ್ರವು ತುಂಬಲ್ಪಟ್ಟಿದೆ. ಯಾವಾಗ ನೀವು ಸುಖಧಾಮದಲ್ಲಿರುತ್ತೀರಿ, ಆಗ ನಾನು ಶಾಂತಿಧಾಮದಲ್ಲಿರುತ್ತೇನೆ. ಸುಖ ಮತ್ತು ದುಃಖವು ನಿಮ್ಮ ಪ್ರಾಲಬ್ದದಲ್ಲಿದೆ. ಸುಖ ಮತ್ತು ದುಃಖದಲ್ಲಿ ಎಷ್ಟೆಷ್ಟು ಜನ್ಮಗಳು ಸಿಗುತ್ತದೆ ಎಂಬುದನ್ನೂ ಸಹ ನಿಮಗೆ ತಿಳಿಸಲಾಗಿದೆ. ನಾನು ನಿಮ್ಮ ನಿಷ್ಕಾಮಿ ತಂದೆಯಾಗಿದ್ದೇನೆ, ನಿಮ್ಮೆಲ್ಲರನ್ನೂ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಒಂದುವೇಳೆ ನಾನೂ ಪತಿತನಾಗಿದ್ದೇ ಆದರೆ ನಿಮ್ಮನ್ನು ಪಾವನರನ್ನಾಗಿ ಮಾಡುವವರು ಯಾರು? ಎಲ್ಲರ ಕೂಗನ್ನು ಕೇಳುವವರು ಯಾರು? ಪತಿತ-ಪಾವನನೆಂದು ಯಾರಿಗೆ ಹೇಳುವುದು? ಇದನ್ನು ತಂದೆಯೇ ತಿಳಿಸುತ್ತಾರೆ. ಯಾವುದೇ ಗೀತಾಪಾಠಿಗಳು ಈ ರೀತಿ ತಿಳಿಸಲು ಸಾಧ್ಯವಿಲ್ಲ, ಅವರಂತೂ ತ್ರಿಲೋಕಿ ಎನ್ನುವುದರ ಅರ್ಥವನ್ನು ಭಿನ್ನ-ಭಿನ್ನ ಪ್ರಕಾರವಾಗಿ ತಿಳಿಸುತ್ತಾರೆ. ವೇದ-ಶಾಸ್ತ್ರಗಳಿಂದ ಭಗವಂತನೊಂದಿಗೆ ಮಿಲನ ಮಾಡುವ ಮಾರ್ಗವು ಸಿಗುತ್ತದೆಯೆಂದು ಮನುಷ್ಯರು ಹೇಳುತ್ತಾರೆ. ಆದರೆ ಇವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಿವೆ, ಜ್ಞಾನ ಮಾರ್ಗದವರಿಗೆ ಯಾವುದೇ ಶಾಸ್ತ್ರಗಳಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಜ್ಞಾನವನ್ನು ತಿಳಿಸುವ ಜ್ಞಾನಸಾಗರನೂ ನಾನಾಗಿದ್ದೇನೆ, ಉಳಿದೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ನಾನೇ ಬಂದು ಈ ಜ್ಞಾನದಿಂದ ಸರ್ವರಿಗೆ ಸದ್ಗತಿ ಕೊಡುತ್ತೇನೆ. ಅವರಂತೂ ನೀರಿನಿಂದ ಬಂದಂತಹ ನೀರಿನ ಗುಳ್ಳೆ ಮತ್ತೆ ಅದರಲ್ಲಿಯೇ ಸಮಾವೇಶವಾಗುತ್ತದೆ ಎಂದು ತಿಳಿಯುತ್ತಾರೆ. ಆದರೆ ಮಿಲನ ಮಾಡುವ ಮಾತೇ ಇಲ್ಲ. ಆತ್ಮವು ಅವಿನಾಶಿಯಾಗಿದೆ, ಅದೆಂದೂ ಸುಟ್ಟು ಹೋಗುವುದಿಲ್ಲ, ತುಂಡಾಗುವುದಿಲ್ಲ, ಅವನತಿಯಾಗುವುದಿಲ್ಲ, ತಂದೆ ಈ ಎಲ್ಲಾ ವಿಷಯಗಳ ತಿಳುವಳಿಕೆ ನೀಡುತ್ತಾರೆ. ನೀವು ಮಕ್ಕಳಿಗೆ ನಾವು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತಿದ್ದೇವೆ ಎಂದು ಕಾಲಿನಿಂದ ಜುಟ್ಟಿನವರೆಗೆ ಖುಷಿಯಿರಬೇಕು. ಆದರೆ ಈ ಖುಷಿಯೂ ಸಹ ನಂಬರ್ವಾರ್ ಇದೆ, ಏಕರಸವಾಗಿರಲು ಸಾಧ್ಯವಿಲ್ಲ. ಭಲೇ ಪರೀಕ್ಷೆಯು ಒಂದೇ ಆಗಿದೆ ಆದರೆ ಅದನ್ನು ತೇರ್ಗಡೆ ಮಾಡಬೇಕಲ್ಲವೆ. ರಾಜಧಾನಿಯು ಸ್ಥಾಪನೆಯಾಗುತ್ತಿದೆ, ತಂದೆಯು ಅದರ ಯೋಜನೆಯನ್ನು ತಿಳಿಸಿಕೊಡುತ್ತಾರೆ. ಸೂರ್ಯವಂಶದಲ್ಲಿ ಇಷ್ಟು ಗದ್ದುಗೆಗಳು, ಚಂದ್ರವಂಶದಲ್ಲಿ ಇಷ್ಟು ಗದ್ದುಗೆಗಳು ಮತ್ತು ಯಾರು ಅನುತ್ತೀರ್ಣರಾಗುತ್ತಾರೆಯೋ ಅವರು ದಾಸ ದಾಸಿಯರಾಗುವರು ದಾಸ ದಾಸಿಯರಿಂದ ನಂತರ ನಂಬರ್ವಾರ್ ರಾಜಾ ರಾಣಿಯಾಗುತ್ತಾರೆ. ಅವಿದ್ಯಾವಂತರು ಅಂತ್ಯದಲ್ಲಿ ಪದವಿಯನ್ನು ಪಡೆಯುತ್ತಾರೆ. ತಂದೆಯಂತೂ ಬಹಳಷ್ಟು ತಿಳಿಸಿಕೊಡುತ್ತಾರೆ. ಒಂದುವೇಳೆ ಏನೇ ಅರ್ಥವಾಗದಿದ್ದರೆ ಅದನ್ನು ಕೇಳಬಹುದು. ವಿವೇಕವೂ ಸಹ ಹೇಳುತ್ತದೆ - ಎಲ್ಲಿ ಹೋಗಿ ಜನ್ಮ ಪಡೆಯುತ್ತಾರೆಯೋ ಅಲ್ಲಿಯೂ ಸಹ ಕಡಿಮೆ ಸುಖವೇನೂ ಇರುವುದಿಲ್ಲ. ಬಹಳ ಮಾನ್ಯತೆಯಿರುತ್ತದೆ. ದೊಡ್ಡ-ದೊಡ್ಡ ಮಹಲುಗಳಲ್ಲಿರುತ್ತಾರೆ, ಸುಂದರವಾದ ಉದ್ಯಾನವನಗಳಿರುತ್ತವೆ, ಅಲ್ಲಿ 2-3 ಅಂತಸ್ತುಗಳ ಕಟ್ಟಡವನ್ನು ನಿರ್ಮಿಸುವ ಅವಶ್ಯಕತೆ ಇರುವುದಿಲ್ಲ. ಬಹಳ ಜಮೀನಿರುತ್ತದೆ, ಹಣದ ಕೊರತೆಯಿರುವುದಿಲ್ಲ, ಮಹಲು ಕಟ್ಟಲು ಸಂಪತ್ತು ಇರುತ್ತದೆ. ಹೊಸ ದೆಹಲಿಯನ್ನು ಮಾಡಿದರೆ ಇದೇ ನವ ಭಾರತವೆಂದು ತಿಳಿಯುತ್ತಾರೆ. ಆದರೆ ವಾಸ್ತವದಲ್ಲಿ ಸ್ವರ್ಗಕ್ಕೆ ನವ ಭಾರತವೆಂದು, ನರಕಕ್ಕೆ ಹಳೆಯ ಭಾರತವೆಂದು ಕರೆಯಲಾಗುತ್ತದೆ. ಇಲ್ಲಿ ಯಾರಿಗೆಷ್ಟು ಬೇಕೋ ಅಷ್ಟು ಇರುವುದು ಅಂದರೆ ಎಲ್ಲವೂ ಡ್ರಾಮಾನುಸಾರ ಇರುವುದು. ಕಲ್ಪದ ಹಿಂದೆ ಯಾವ ಮಹಲು ಮುಂತಾದವುಗಳನ್ನು ನಿರ್ಮಿಸಿದ್ದರೋ ಪುನಃ ಅದೇ ನಿರ್ಮಾಣವಾಗುತ್ತದೆ. ಈ ಜ್ಞಾನವನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಯಾರ ಅದೃಷ್ಟದಲ್ಲಿದೆಯೋ ಅವರ ಬುದ್ಧಿಯಲ್ಲಿಯೇ ಈ ಜ್ಞಾನವು ಕುಳಿತುಕೊಳ್ಳುತ್ತದೆ. ಮಕ್ಕಳು ಪುರುಷಾರ್ಥ ಮಾಡಬೇಕು. ಪೂರ್ಣ ಯೋಗದಲ್ಲಿರಬೇಕು. ಭಕ್ತಿ ಮಾರ್ಗದಲ್ಲಿ ಶ್ರೀ ಕೃಷ್ಣನ ಯೋಗದಲ್ಲಿಯೇ ಬಂದಿರಿ, ಸ್ವರ್ಗದ ಮಾಲೀಕರಂತೂ ಆಗಲಿಲ್ಲ. ಈಗ ಸ್ವರ್ಗವು ನಿಮ್ಮ ಸಮ್ಮುಖದಲ್ಲಿದೆ. ನೀವು ಪರಮಪಿತ ಪರಮಾತ್ಮನ ಚರಿತ್ರೆ, ಬ್ರಹ್ಮಾ-ವಿಷ್ಣು-ಶಂಕರನ ಚರಿತ್ರೆಯನ್ನು ತಿಳಿದುಕೊಂಡಿರಿ. ಬ್ರಹ್ಮಾರವರು ಎಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂಬುದೂ ಸಹ ಗೊತ್ತಿದೆ. ತಂದೆಯು ತಿಳಿಸುತ್ತಾರೆ - ಈ ಮಾತೆಯರು ಸ್ವರ್ಗದ ದ್ವಾರವನ್ನು ತೆರೆಯುವವರಾಗಿದ್ದಾರೆ. ಉಳಿದವರೆಲ್ಲರೂ ನರಕದಲ್ಲಿದ್ದಾರೆ ಅಂದಮೇಲೆ ಮಾತೆಯರೇ ಎಲ್ಲರ ಉದ್ಧಾರ ಮಾಡುತ್ತಾರೆ. ನಾವು ಪರಮಾತ್ಮನ ಮಹಿಮೆ ಮಾಡುತ್ತೇವೆ. ನೀವು ಯಥಾರ್ಥವಾಗಿ ತಿಳಿದುಕೊಂಡು ಹೇಳುತ್ತೀರಿ ಶಿವಬಾಬಾ ತಮಗೆ ನಮಸ್ತೆ, ತಾವು ಬಂದು ನಮ್ಮನ್ನು ವಾರಸುಧಾರರನ್ನಾಗಿ ಮಡುತ್ತೀರಿ. ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೀರಿ, ಇಂತಹ ಶಿವತಂದೆ ನಿಮಗೆ ನಮಸ್ತೆ. ತಂದೆಗಂತೂ ಮಕ್ಕಳು ನಮಸ್ತೆ ಅವಶ್ಯವಾಗಿ ಮಾಡುತ್ತಾರೆ. ನಂತರ ತಂದೆಯೂ ಸಹ ಹೇಳುತ್ತಾರೆ - ಮಕ್ಕಳೇ ನಮಸ್ತೆ. ನೀವೂ ಸಹ ನನ್ನನ್ನು ನಿಮ್ಮ ಅಲ್ಪ ಸ್ವಲ್ಪ ಹಣಕ್ಕೆ ವಾರಸುಧಾರರನ್ನಾಗಿ ಮಾಡಿಕೊಳ್ಳುತ್ತೀರಿ. ಕವಡೆಯಷ್ಟಕ್ಕೆ ವಾರಸುಧಾರರನ್ನಾಗಿ ಮಾಡಿಕೊಳ್ಳುತ್ತೀರಿ, ನಾನು ನಿಮ್ಮನ್ನು ವಜ್ರಕ್ಕೆ ವಾರಸುಧಾರರನ್ನಾಗಿ ಮಾಡಿಕೊಳ್ಳುತ್ತೇವೆ. ಶಿವ ಬಾಲಕನನ್ನು ವಾರಸುಧಾರರನ್ನಾಗಿ ಮಾಡಿಕೊಳ್ಳುತ್ತೀರಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

೧. ಶಿವ ತಂದೆಯ ಮನೆಯ ಅವ್ಯಭಿಚಾರಿ ಯಾತ್ರಿಕರಾಗಿ ಯೋಗ ಬಲದಿಂದ ವಿಕರ್ಮಗಳನ್ನು ಭಸ್ಮ ಮಾಡಿಕೊಳ್ಳಬೇಕು. ಜ್ಞಾನದ ಸ್ಮರಣೆ ಮಾಡಿ ಅಪಾರ ಖುಷಿಯಲ್ಲಿರಬೇಕು.

೨. ತಂದೆಯ ಸಮಾನ ಸಿಂಹಾಸನಾಧಿಕಾರಿಗಳಾಗುವ ಶುಭಕಾಮನೆಯನ್ನು ಇಟ್ಟುಕೊಂಡು ತಂದೆಯನ್ನು ಪೂರ್ಣ ಅನುಸರಿಸಬೇಕು.

ವರದಾನ:
ಸ್ಪಷ್ಠ ಬುದ್ಧಿಯ ಮೂಲಕ ಪ್ರತಿ ಮಾತನ್ನು ಪರಿಶೀಲನೆ ಮಾಡಿ ಯಥಾರ್ಥ ನಿರ್ಣಯ ಮಾಡುವಂತಹ ಸಫಲತಾ ಮೂರ್ತಿ ಭವ.
ಎಷ್ಟೆಷ್ಟು ಬುದ್ಧಿ ಸ್ಪಷ್ಠ ಇದೆ ಅಷ್ಟು ಪರಿಶೀಲಿಸುವ ಶಕ್ತಿ ಪ್ರಾಪ್ತಿಯಾಗುವುದು. ಹೆಚ್ಚು ಮಾತಿನ ಬಗ್ಗೆ ಯೋಚಿಸುವ ಬದಲು ಒಬ್ಬ ತಂದೆಯ ನೆನಪಿನಲ್ಲಿರಿ, ತಂದೆಯ ಜೊತೆ ಸ್ಪಷ್ಠವಾಗಿದ್ದಾಗ ಎಲ್ಲಾ ಮಾತುಗಳನ್ನು ಸಹಜವಾಗಿ ಪರಿಶೀಲಿಸಿ ಯಥಾರ್ಥ ನಿರ್ಣಯವನ್ನು ಮಾಡಲು ಸಾಧ್ಯ. ಯಾವ ಸಮಯದಲ್ಲಿ ಎಂತಹ ಪರಿಸ್ಥಿತಿ, ಎಂತಹ ಸಂಪರ್ಕ-ಸಂಬಂಧದವರ ಮೂಡ್, ಅದೇ ಸಮಯ ಅದೇ ಪ್ರಮಾಣ ನಡೆಯುವುದು, ಅದನ್ನು ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳುವುದು. ಇದೂ ಸಹ ಬಹಳ ದೊಡ್ಡ ಶಕ್ತಿಯಾಗಿದೆ. ಯಾವುದು ನಿಮ್ಮನ್ನು ಸಫಲತಾ ಮೂರ್ತಿಗಳನ್ನಾಗಿ ಮಾಡುವುದು.

ಸ್ಲೋಗನ್:
ಜ್ಞಾನ ಸೂರ್ಯ ತಂದೆಯ ಜೊತೆ ಅಧೃಷ್ಠ ನಕ್ಷತ್ರಗಳು ಅವರೇ ಆಗಿದ್ದಾರೆ ಯಾರು ಜಗತ್ತಿನ ಅಂಧಕಾರವನ್ನು ದೂರ ಮಾಡುವವರಾಗಿದ್ದಾರೆ, ಅಂಧಕಾರದಲ್ಲಿ ಬರುವವರಲ್ಲ.


ಮಾತೇಶ್ವರಿ ಜಿ ಯವರ ಮಧುರ ಮಹಾವಾಕ್ಯ

“ ನಯನಹೀನ ಅರ್ಥಾತ್ ಜ್ಞಾನ ನೇತ್ರ ಹೀನರಿಗೆ ಮಾರ್ಗ ತೋರಿಸುವಂತಹವರು ಪರಮಾತ್ಮ ”

ನಯನಹೀನರಿಗೆ ಮಾರ್ಗ ತೋರಿಸಿ ಪ್ರಭು.... ಈಗ ಎನು ಮನುಷ್ಯರು ಈ ಗೀತೆ ಹಾಡುತ್ತಾರೆ, ನಯನಹೀನರಿಗೆ ಮಾರ್ಗ ತೋರಿಸಿ, ಅಂದರೆ ಮಾರ್ಗ ತೋರಿಸುವಮತಹವರು ಒಬ್ಬರೇ ಪರಮಾತ್ಮ ಆಗಿದ್ದಾರೆ, ಆ ಕಾರಣದಿಂದಲೇ ಕರೆಯುತ್ತಾರೆ ಮತ್ತು ಯಾವ ಸಮಯದಲ್ಲಿ ಹೇಳುತ್ತಾರೆ ಪ್ರಭು ಮಾರ್ಗ ತೋರಿಸು ಅಂದಾಗ ಖಂಡಿತವಾಗಿಯೂ ಮನಷ್ಯರಿಗೆ ಮಾರ್ಗ ತೋರಿಸುವುದಕ್ಕೋಸ್ಕರವೇ ಪರಮಾತ್ಮ ಖುದ್ದಾಗಿ ನಿರಾಕಾರ ರೂಪದಿಂದ ಸಾಕಾರರೂಪದಲ್ಲಿ ಅವಶ್ಯವಾಗಿ ಬರಬೇಕಾಗುತ್ತದೆ, ಆಗಲೇ ಸ್ಥೂಲವಾಗಿ ಮಾರ್ಗವನ್ನು ತೋರಿಸುತ್ತಾರೆ, ಅವರು ಬರದ ಹೊರತು ಮಾರ್ಗವನ್ನು ತೋರಿಸಲು ಸಾಧ್ಯವಿಲ್ಲ. ಈಗ ಏನು ಮನುಷ್ಯರು ತಬಿಬ್ಬಾಗಿದ್ದಾರೆ, ಈ ತಬ್ಬಿಬ್ಬಾಗಿರುವವರಿಗೆ ಮಾರ್ಗ ಬೇಕಾಗಿದೆ. ಆದ್ದರಿಂದ ಪರಮಾತ್ಮನಿಗೆ ಹೇಳುತ್ತಾರೆ, ನಯನಹೀನರಿಗೆ ಮಾರ್ಗ ತೋರಿಸು ಪ್ರಭು..... ಇವರನ್ನೇ ಮತ್ತೆ ಅಂಬಿಗ ಎಂದೂ ಸಹ ಕರೆಯುತ್ತಾರೆ, ಅವರು ಆ ದಡ ಅಥವಾ ಐದು ತತ್ವಗಳಿಂದ ಆಗಿರುವ ಈ ಸೃಷ್ಠಿ ಏನಿದೆ ಈ ದಡದಿಂದ ಪಾರು ಮಾಡಿ ಅದರಮೇಲೆ ಅರ್ಥಾತ್ ಐದು ತತ್ವಗಳಿಂದ ಪಾರು ಮಾಡಿ ಆರನೇ ಅಖಂಡ ಜ್ಯೋತಿ ಮಹಾತತ್ವವಿದೆ ಅದರಲ್ಲಿ ಕರೆದುಕೊಂಡು ಹೋಗುತ್ತಾರೆ. ಪರಮಾತ್ಮ ಸಹ ಆ ದಡದಿಂದ ಈ ದಡಕ್ಕೆ ಬರುತ್ತಾರೆ ,ಆಗಲೆ ಕರೆದುಕೊಂಡು ಹೋಗುತ್ತಾರೆ. ಅಂದಾಗ ಪರಮಾತ್ಮನಿಗೂ ಸಹ ತನ್ನ ಧಾಮದಿಂದ ಬರಬೇಕಾಗುತ್ತದೆ, ಆದ್ದರಿಂದ ಪರಮಾತ್ಮನಿಗೆ ಅಂಬಿಗ ಎಂದೂ ಸಹ ಕರೆಯುತ್ತಾರೆ. ಅವರೇ ನಮ್ಮ ನಾವೆ (ಆತ್ಮರೂಪಿ ನಾವೆ) ಆ ದಡಕ್ಕೆ ಕರೆದೊಯ್ಯುತ್ತಾರೆ. ಈಗ ಯಾರು ಪರಮಾತ್ಮನ ಜೊತೆ ಯೋಗವಿಡುತ್ತಾರೆ ಅವರನ್ನು ಜೊತೆಯಲ್ಲಿ ಕರೆದೊಯ್ಯುತ್ತಾರೆ. ಬಾಕಿ ಯಾರೆಲ್ಲಾ ಉಳಿಯುತ್ತಾರೆ ಅವರು ಧರ್ಮರಾಜನ ಸಜೆ ತಿಂದು ನಂತರ ಮುಕ್ತರಾಗುತ್ತಾರೆ. ಒಳ್ಳೆಯದು. ಓಂ ಶಾಂತಿ.