17/10/18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ – ಗೃಹಸ್ಥ ವ್ಯವಹಾರದಲ್ಲಿರುತ್ತಾ ನೀವು ಎಲ್ಲರ ಜೊತೆ ಸಂಬಂಧವನ್ನು ನಿಭಾಯಿಸಬೇಕು ತಿರಸ್ಕರಿಸಬಾರದು, ಆದರೆ ಕಮಲ ಪುಷ್ಫ ಸಮಾನ ಪವಿತ್ರರಾಗಬೇಕು”

ಪ್ರಶ್ನೆ:
ನಿಮ್ಮ ವಿಜಯದ ಡಮರುಗ ಯಾವಾಗ ಬಾರಿಸುತ್ತದೆ? ವಾಹ್! ವಾಹ್! ಎನ್ನುವ ಕೂಗು ಹೇಗೆ ಹೊರಬರುತ್ತದೆ?

ಉತ್ತರ:
ಅಂತ್ಯದ ಸಮಯ ಯಾವಾಗ ನೀವು ಮಕ್ಕಳ ಮೇಲೆ ಮಾಯಾ ಗ್ರಹಚಾರವು ಸಮಾಪ್ತಿಯಾಗುತ್ತದೆಯೋ, ಸದಾ ಬುದ್ಧಿಯ ಸಂಬಂಧ ಸ್ವಚ್ಛವಾಗಿರುತ್ತದೆಯೋ ಆಗ ವಾಹ್! ವಾಹ್! ಎನ್ನುವ ಕೂಗು ಬರುತ್ತದೆ ಮತ್ತು ವಿಜಯದ ಡಮರುಗ ಬಾರಿಸಲ್ಪಡುತ್ತದೆ. ಈಗಂತೂ ಮಕ್ಕಳ ಮೇಲೆ ಗ್ರಹಚಾರ ಕುಳಿತುಕೊಳ್ಳುತ್ತದೆ, ವಿಘ್ನಗಳು ಬೀಳುತ್ತಿರುತ್ತವೆ. ಸೇವೆಗಾಗಿ ಮೂರು ಹೆಜ್ಜೆ ಭೂಮಿಯೂ ಸಹ ಕಷ್ಟದಿಂದ ಸಿಗುತ್ತದೆ. ಆದರೆ ನೀವು ಮಕ್ಕಳು ಇಡೀ ವಿಶ್ವಕ್ಕೆ ಮಾಲೀಕರಾಗುವ ಸಮಯವು ಬರುತ್ತದೆ.

ಗೀತೆ:
ಧೈರ್ಯ ತಾಳು ಮಾನವನೇ, ನಿನ್ನ ಸುಖದ ದಿನಗಳು ಬರುತ್ತಿವೆ

ಓಂ ಶಾಂತಿ.
ಈಗ ಹಳೆಯ ನಾಟಕ ಸಮಾಪ್ತಿಯಾಗುತ್ತಿದೆಯೆಂದು ಮಕ್ಕಳು ನಂಬರ್‍ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಬಾಕಿ ದುಃಖದ ದಿನಗಳು ತುಂಬಾ ಕಡಿಮೆ ಸಮಯವಿದೆ ನಂತರ ಸದಾ ಸುಖವೇ ಸುಖವಿರುತ್ತದೆ. ಯಾವಾಗ ನಿಮಗೆ ಸುಖವು ಗೊತ್ತಾಗುತ್ತದೆಯೋ ಆಗ ಇದು ದುಃಖಧಾಮವಾಗಿದೆ ಎಂದು ಬೇಹದ್ದಿನ ವ್ಯತ್ಯಾಸ ಗೊತ್ತಾಗುತ್ತದೆ. ಈಗ ಸುಖಕ್ಕಾಗಿ ನೀವು ಪುರುಷಾರ್ಥ ಮಾಡುತ್ತಿದ್ದೀರಿ. ಈ ದುಃಖದ ಹಳೆಯ ನಾಟಕವೆಂದು ನೀವು ತಿಳಿದಿದ್ದೀರಿ. ಸುಖಕ್ಕಾಗಿ ಈಗ ಬಾಪ್‍ದಾದಾರವರ ಶ್ರೀಮತದಂತೆ ನಡೆಯುತ್ತಿದ್ದೀರಿ. ಇದನ್ನು ಬೇರೆ ಯಾರಿಗಾದರೂ ತಿಳಿಸಿ ಕೊಡುವುದು ಬಹಳ ಸಹಜವಾಗಿದೆ. ಈಗ ನಾವು ತಂದೆಯ ಬಳಿಗೆ ಹಿಂತಿರುಗಬೇಕು. ತಂದೆಯು ನಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ಅದಕ್ಕಾಗಿ ಗೃಹಸ್ಥ ವ್ಯವಹಾರದಲ್ಲಿದ್ದು ಕಮಲಪುಷ್ಫ ಸಮಾನ ಪವಿತ್ರವಾಗಿರಬೇಕು. ಅವಶ್ಯವಾಗಿ ಅವರೊಂದಿಗೆ ಸಂಬಂಧವನ್ನೂ ನಿಭಾಯಿಸಬೇಕು. ಒಂದುವೇಳೆ ಸಂಬಂಧವನ್ನು ನಿಭಾಯಿಸದೇ ಇದ್ದರೆ ನೀವು ಸನ್ಯಾಸಿಗಳಂತೆ ಆಗಿ ಬಿಡುತ್ತೀರಿ. ಅವರು ಸಂಬಂಧವನ್ನು ನಿಭಾಯಿಸದ ಕಾರಣ ಅವರಿಗೆ ನಿವೃತ್ತಿ ಮಾರ್ಗದವರು, ಹಠಯೋಗಿಗಳೆಂದು ಕರೆಯಲಾಗುವುದು. ಸನ್ಯಾಸಿಗಳ ಮುಖಾಂತರ ಏನು ಕಲಿಸುತ್ತಾರೆಯೋ ಅದು ಹಠಯೋಗವಾಗಿದೆ. ಯಾವುದನ್ನು ಭಗವಂತನೇ ಕಲಿಸುತ್ತಿದ್ದಾರೆಯೋ ಆ ರಾಜಯೋಗವನ್ನು ನಾವು ಕಲಿಯುತ್ತಿದ್ದೇವೆ. ಭಾರತದ ಧರ್ಮ ಶಾಸ್ತ್ರವು ಗೀತೆಯಾಗಿದೆ. ಬೇರೆ ಧರ್ಮದವರ ಯಾವ ಧರ್ಮಶಾಸ್ತ್ರ ನಮಗೂ ಯಾವುದೇ ಸಂಬಂಧವಿಲ್ಲ. ಸನ್ಯಾಸಿಗಳಂತೂ ಪ್ರವೃತ್ತಿ ಮಾರ್ಗದವರಲ್ಲ, ಅವರದು ಹಠಯೋಗವಾಗಿದೆ. ಮನೆ-ಮಠವನ್ನು ಬಿಟ್ಟು ಕಾಡಿನಲ್ಲಿ ಕುಳಿತುಕೊಳ್ಳುವಂತಹ ಸನ್ಯಾಸವನ್ನು ಜನ್ಮ-ಜನ್ಮಕ್ಕೂ ಮಾಡಬೇಕಾಗುತ್ತದೆ. ನೀವು ಗೃಹಸ್ಥ ವ್ಯವಹಾರದಲ್ಲಿರುತ್ತಾ ಒಮ್ಮೆ ಸನ್ಯಾಸ ಮಾಡಿದರೆ ನಂತರ 21 ಜನ್ಮಗಳ ಪ್ರಾಲಬ್ಧವನ್ನು ಪಡೆಯುತ್ತೀರಿ. ಹದ್ದಿನ ಸನ್ಯಾಸ, ಹಠಯೋಗ ಅವರದ್ದಾಗಿದೆ, ನಿಮ್ಮದು ಬೇಹದ್ದಿನ ಸನ್ಯಾಸ, ರಾಜಯೋಗವಾಗಿದೆ. ಅವರು ಗೃಹಸ್ಥ ವ್ಯವಹಾರವನ್ನು ಬಿಟ್ಟು ಬಿಡುತ್ತಾರೆ. ಆದರೆ ರಾಜಯೋಗಕ್ಕೆ ಬಹಳ ಮಹಿಮೆಯಿದೆ. ಭಗವಂತನೇ ರಾಜಯೋಗವನ್ನು ಕಲಿಸಿರುವುದರಿಂದ ಭಗವಂತನಿಗೆ ಅವಶ್ಯವಾಗಿ ಶ್ರೇಷ್ಠಾತಿ ಶ್ರೇಷ್ಠರೆಂದು ಹೇಳಬಹುದು. ಶ್ರೀಕೃಷ್ಣನಂತೂ ಭಗವಂತನಲ್ಲ. ಬೇಹದ್ದಿನ ತಂದೆಯು ನಿರಾಕಾರಿಯಾಗಿದ್ದಾರೆ. ಬೇಹದ್ದಿನ ರಾಜ್ಯಭಾಗ್ಯವನ್ನು ಅವರೇ ಕೊಡುತ್ತಾರೆ. ಇಲ್ಲಿ ಗೃಹಸ್ಥ ವ್ಯವಹಾರದಲ್ಲಿರುತ್ತಾ ಅದನ್ನು ತಿರಸ್ಕರಿಸುವುದಲ್ಲ. ತಂದೆಯು ಹೇಳುತ್ತಾರೆ - ಈ ಅಂತಿಮ ಜನ್ಮದಲ್ಲಿ ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿರಿ. ಪತಿತ-ಪಾವನನೆಂದು ಯಾವ ಸನ್ಯಾಸಿಗೂ ಹೇಳುವುದಿಲ್ಲ. ಸ್ವಯಂ ಸನ್ಯಾಸಿಗಳೇ ಹೇ ಪತಿತ ಪಾವನ, ಎಂದು ನೆನಪು ಮಾಡುತ್ತಾರೆ ಅಂದಾಗ ಅವರೂ ಸಹ ಪಾವನ ಪ್ರಪಂಚವನ್ನು ಬಯಸುತ್ತಾರೆ. ಆದರೆ ಆ ಪ್ರಪಂಚವೇ ಬೇರೆಯಾಗಿದೆ ಎಂದು ಅವರಿಗೆ ಗೊತ್ತಿಲ್ಲ. ಏಕೆಂದರೆ ಅವರು ಗೃಹಸ್ಥ ವ್ಯವಹಾರದಲ್ಲಿಲ್ಲ ಆದ್ದರಿಂದ ದೇವತೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಅವರೆಂದಿಗೂ ರಾಜಯೊಗವನ್ನು ಕಲಿಸಲು ಸಾಧ್ಯವಿಲ್ಲ ಹಾಗೂ ತಂದೆಯು ಎಂದಿಗೂ ಹಠಯೋಗವನ್ನು ಕಲಿಸುವುದಕ್ಕೆ ಸಾಧ್ಯವಿಲ್ಲ, ಹಾಗೆಯೇ ಸನ್ಯಾಸಿಗಳು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಇದು ತಿಳಿದುಕೊಳ್ಳುವ ಮಾತಾಗಿದೆ.

ಈಗ ದೆಹಲಿಯಲ್ಲಿ ವಿಶ್ವ ಸಮ್ಮೇಳನ ಆಗುತ್ತದೆ. ಅವರಿಗೆ ತಿಳಿಸಿ ಕೊಡುತ್ತಾ ಎಲ್ಲರಿಗೂ ಬರವಣಿಗೆಯಲ್ಲಿಯೂ ಕೊಡಬೇಕು. ಅಲ್ಲಾದರೂ ಬಹಳ ಮತಭೇದವಾಗಿ ಬಿಡುತ್ತದೆ. ಆದುದರಿಂದ ಬರವಣಿಗೆಯಲ್ಲಿದ್ದರೆ ಎಲ್ಲರೂ ಇವರ ಉದ್ದೇಶವೇನಾಗಿದೆ ಎಂದು ತಿಳಿದುಕೊಳ್ಳುತ್ತಾರೆ.

ಈಗ ನೀವು ತಿಳಿದುಕೊಂಡಿದ್ದೀರಿ - ನಾವು ಬ್ರಾಹ್ಮಣ ಕುಲದವರಾಗಿದ್ದೇವೆ, ನಾವು ಶೂದ್ರ ಕುಲದ ಸದಸ್ಯರಾಗಲು ಹೇಗೆ ಸಾಧ್ಯ? ಹಾಗೂ ವಿಕಾರೀ ಕುಲದಲ್ಲಿ ನಮ್ಮನ್ನು ನಾವು ಹೇಗೆ ದಾಖಲಿಸಲ್ಪಡಲು ಸಾಧ್ಯ? ಆದ್ದರಿಂದ ಬೇಡ ಎಂದು ಹೇಳುತ್ತೇವೆ. ನಾವು ಆಸ್ತಿಕರು, ಅವರು ನಾಸ್ತಿಕರಾಗಿದ್ದಾರೆ. ಅವರು ಈಶ್ವರನನ್ನು ಒಪ್ಪಿಕೊಳ್ಳುವುದಿಲ್ಲ, ನಾವು ಈಶ್ವರನೊಂದಿಗೆ ಸಂಬಂಧವನ್ನಿಡುವವರಾಗಿದ್ದೇವೆ. ಆದ್ದರಿಂದ ಮತಭೇದವಾಗಿ ಬಿಡುತ್ತದೆ. ಆದರೂ ಸಹ ತಂದೆಯನ್ನು ಅರಿಯದವರನ್ನು ನಾಸ್ತಿಕರೆಂದು ತಿಳಿಸಲಾಗುತ್ತದೆ. ಅಂದಾಗ ತಂದೆಯೇ ಬಂದು ಆಸ್ತಿಕರನ್ನಾಗಿ ಮಾಡುತ್ತಾರೆ. ತಂದೆಯ ಮಕ್ಕಳಾದಾಗ ಆಸ್ತಿ ಸಿಗುತ್ತದೆ, ಇವು ಬಹಳ ಗುಹ್ಯ ಮಾತುಗಳಾಗಿವೆ. ಗೀತೆಯ ಭಗವಂತನು ಪರಮಪಿತ ಪರಮಾತ್ಮನಾಗಿದ್ದಾರೆಂದು ಮೊಟ್ಟ ಮೊದಲು ಬುದ್ಧಿಯಲ್ಲಿ ಧಾರಣೆ ಮಾಡಿಸಬೇಕು. ಅವರೇ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುವರು. ಭಾರತದಲ್ಲಿ ದೇವಿ-ದೇವತಾ ಧರ್ಮವೇ ಮುಖ್ಯವಾಗಿದೆ. ಭಾರತ ಖಂಡಕ್ಕೂ ಯಾವುದಾದರೂ ಧರ್ಮವಿರಬೇಕಲ್ಲವೆ. ಅವರು ತಮ್ಮ ಧರ್ಮವನ್ನು ಮರೆತು ಬಿಟ್ಟಿದ್ದಾರೆ, ನಾಟಕದನುಸಾರವಾಗಿ ಭಾರತೀಯರು ತಮ್ಮ ಧರ್ಮವನ್ನು ಮರೆತು ಹೋದಾಗ ತಂದೆಯು ಮತ್ತೆ ಸ್ಥಾಪನೆ ಮಾಡುವುದೂ ಸಹ ನಾಟಕದನುಸಾರವಾಗಿ ಇದೆ ಎಂದು ನೀವು ತಿಳಿದುಕೊಂಡಿದ್ದೀರಿ. ಇಲ್ಲವಾದರೆ ತಂದೆಯು ಹೇಗೆ ಬರುತ್ತಾರೆ? ಯಾವಾಗ ದೇವಿ-ದೇವತಾ ಧರ್ಮವು ಪ್ರಾಯಲೋಪವಾಗುತ್ತದೆಯೋ ಆಗ ನಾನು ಬರುತ್ತೇನೆಂದು ತಂದೆಯು ಹೇಳುತ್ತಾರೆ. ಅವಶ್ಯವಾಗಿ ಪ್ರಾಯಲೋಪವಾಗಲೇಬೇಕು. ಎತ್ತಿನ (ಬಸವ) ಒಂದು ಕಾಲು ಮುರಿದಿದೆ ಎಂದು ಹೇಳುತ್ತಾರಲ್ಲವೆ. ಬಾಕಿ ಮೂರು ಕಾಲುಗಳ ಮೇಲೆ ನಿಂತಿದೆ. ಅಂದರೆ ಮುಖ್ಯವಾಗಿ ನಾಲ್ಕು ಧರ್ಮಗಳಿವೆ, ಈಗ ದೇವಿ-ದೇವತಾ ಧರ್ಮದ ಕಾಲು ಮುರಿಯಲ್ಪಟ್ಟಿದೆ. ಅಂದರೆ ಆ ಧರ್ಮವು ಮಾಯವಾಗಿ ಬಿಟ್ಟಿದೆ. ಆದ್ದರಿಂದ ಇದನ್ನು ಆಲದ ಮರಕ್ಕೆ ಹೋಲಿಸಲಾಗುತ್ತದೆ. ಆಲದ ವೃಕ್ಷದ ಬುಡವು ಸಡಿಲವಾಗಿದ್ದು ರೆಂಬೆ-ಕೊಂಬೆಗಳ ಮೇಲೆ ನಿಂತಿದೆ. ಅದರಲ್ಲಿಯೂ ವೃಕ್ಷದ ಮೂಲವಾಗಿರುವಂತಹ ದೇವಿ-ದೇವತಾ ಧರ್ಮವು ಇಲ್ಲದಂತಾಗಿದೆ. ಉಳಿದ ಹಾಗೆ ಇಡೀ ಪ್ರಪಂಚದಲ್ಲಿ ಅನೇಕ ಮಠ-ಪಂಥಗಳಿವೆ. ಈಗ ನಿಮ್ಮ ಬುದ್ಧಿಯಲ್ಲಿ ಪೂರ್ಣ ಜ್ಞಾನದ ಬೆಳಕು ಬಂದಿದೆ. ನೀವು ಮಕ್ಕಳು ನಾಟಕವನ್ನು ತಿಳಿದುಕೊಂಡುಬಿಟ್ಟಿದ್ದೀರೆಂದು ತಂದೆಯು ತಿಳಿಸುತ್ತಾರೆ. ಈಗ ಇಡೀ ವೃಕ್ಷ ಹಳೆಯದಾಗಿ ಬಿಟ್ಟಿದೆ, ಕಲಿಯುಗದ ನಂತರ ಅವಶ್ಯವಾಗಿ ಸತ್ಯಯುಗವು ಬರಲೇಬೇಕು. ಈ ಚಕ್ರವು ಅವಶ್ಯವಾಗಿ ಸುತ್ತಲೇಬೇಕಾಗಿದೆ. ಇದನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕು - ಈಗ ನಾಟಕವು ಮುಕ್ತಾಯವಾಯಿತು, ನಾವು ಹೋಗುತ್ತಿದ್ದೇವೆ. ನಡೆಯುತ್ತಾ-ತಿರುಗಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಲೂ ಸಹ ನಾವು ಈಗ ಹಿಂತಿರುಗಿ ಹೋಗಬೇಕೆಂದು ನೆನಪಿರಲಿ. ಮನ್ಮನಾಭವ, ಮಧ್ಯಾಜೀಭವ ಅರ್ಥವೂ ಸಹ ಇದೇ ಆಗಿದೆ. ಯಾವುದೇ ದೊಡ್ಡ ಸಭೆಯಲ್ಲಿ ಭಾಷಣ ಮೊದಲಾದುವುಗಳನ್ನು ಮಾಡಬೇಕೆಂದರೂ ಸಹ ಇದನ್ನೇ ತಿಳಿಸಬೇಕು - ಪರಮಪಿತ ಪರಮಾತ್ಮನು ಪುನಃ ತಿಳಿಸುತ್ತಾರೆ, ಹೇ ಮಕ್ಕಳೇ, ದೇಹ ಸಹಿತ ದೇಹದ ಎಲ್ಲಾ ಧರ್ಮಗಳನ್ನು ತ್ಯಜಿಸಿ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದರಿಂದ ಪಾಪಗಳು ಸಮಾಪ್ತಿಯಾಗುತ್ತವೆ. ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನರಾಗಿ ನೀವು ನನ್ನನ್ನು ನೆನಪು ಮಾಡಿ, ಪವಿತ್ರರಾಗಿ ಇರಿ, ಜ್ಞಾನವನ್ನು ಧಾರಣೆ ಮಾಡಿ. ಈಗಂತೂ ಎಲ್ಲರೂ ದುರ್ಗತಿಯಲ್ಲಿದ್ದಾರೆ. ಸತ್ಯಯುಗದಲ್ಲಿ ದೇವತೆಗಳು ಸದ್ಗತಿಯಲ್ಲಿದ್ದರು. ತಂದೆಯೇ ಪುನಃ ಬಂದು ಸದ್ಗತಿ ಮಾಡುತ್ತಾರೆ. ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ....... ಇದು ಸದ್ಗತಿಯ ಲಕ್ಷಣವಾಗಿದೆ. ಇದನ್ನು ಕೊಡುವವರು ಯಾರು? ತಂದೆ. ಅವರ ಲಕ್ಷಣವೇನಾಗಿದೆ? ಅವರು ಜ್ಞಾನ ಸಾಗರ, ಆನಂದ ಸಾಗರರಾಗಿದ್ದಾರೆ, ಅವರ ಮಹಿಮೆಯೇ ಬೇರೆಯಾಗಿದೆ. ಎಲ್ಲರೂ ಒಂದೇ ಎಂದಲ್ಲ, ಒಬ್ಬ ತಂದೆಯ ಮಕ್ಕಳು ಎಲ್ಲರೂ ಆತ್ಮಗಳಾಗಿದ್ದಾರೆ. ಪ್ರಜಾಪಿತನಿಗೂ ಮಕ್ಕಳಾಗಿದ್ದಾರೆ. ಈಗ ಹೊಸ ರಚನೆಯನ್ನು ರಚಿಸಲಾಗುತ್ತದೆ. ಪ್ರಜಾಪಿತನ ಸಂತಾನರಂತೂ ಎಲ್ಲರೂ ಆಗಿದ್ದಾರೆ. ಆದರೆ ಈ ಮಾತುಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ. ಬ್ರಾಹ್ಮಣ ವರ್ಣವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ ಎಂದು ಯಾರಿಗೂ ಗೊತ್ತಿಲ್ಲ. ಬ್ರಾಹ್ಮಣ ವರ್ಣವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ಭಾರತದ ವರ್ಣಗಳದೇ ಗಾಯನವಾಗುತ್ತದೆ. 84 ಜನ್ಮಗಳನ್ನು ತೆಗೆದುಕೊಳ್ಳುವುದರಲ್ಲಿ ಈ ವರ್ಣಗಳನ್ನು ಪಾರು ಮಾಡಬೇಕಾಗುತ್ತದೆ. ಬ್ರಾಹ್ಮಣ ವರ್ಣವು ಸಂಗಮಯುಗದಲ್ಲಿರುತ್ತದೆ.

ತಾವು ಮಕ್ಕಳು ಈಗ ಮಧುರ ಶಾಂತಿಯಲ್ಲಿರುತ್ತೀರಿ, ಈ ಶಾಂತಿಯು ಎಲ್ಲದಕ್ಕಿಂತ ಒಳ್ಳೆಯದಾಗಿದೆ. ವಾಸ್ತವದಲ್ಲಿ ಶಾಂತಿಯ ಹಾರವಂತೂ ಕೊರಳಲ್ಲಿ ಬಿದ್ದಿದೆ. ಶಾಂತಿಧಾಮಕ್ಕೆ ಹೋಗಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಈ ಮಾರ್ಗವನ್ನು ತಿಳಿಸುವವರು ಯಾರು? ಶಾಂತಿಯ ಸಾಗರ ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಅವರ ಬಿರುದುಗಳನ್ನು ಬಹಳ ಚೆನ್ನಾಗಿ ಕೊಟ್ಟಿದ್ದಾರೆ, ಶಾಂತಿಯ ಸಾಗರ, ಜ್ಞಾನ ಸಾಗರ ಎಂದು. ಶ್ರೀಕೃಷ್ಣನಂತೂ ಸ್ವರ್ಗದ ಮಾಲೀಕನಾಗಿದ್ದಾನೆ. ಆದರೆ ತಂದೆಯು ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ. ಇವರಿಬ್ಬರಲ್ಲಿ ರಾತ್ರಿ-ಹಗಲಿನ ಅಂತರವಿದೆ. ಕೃಷ್ಣನನ್ನು ಸೃಷ್ಟಿಯ ಬೀಜರೂಪನೆಂದು ಹೇಳಲು ಸಾಧ್ಯವಿಲ್ಲ. ಸರ್ವವ್ಯಾಪಿಯ ಜ್ಞಾನವಂತೂ ನಿಲ್ಲುವುದಕ್ಕೆ ಸಾಧ್ಯವಿಲ್ಲ. ತಂದೆಯ ಮಹಿಮೆಯೇ ಬೇರೆಯಾಗಿದೆ, ಅವರು ಸದಾ ಪೂಜ್ಯನಾಗಿದ್ದಾರೆ, ಎಂದೂ ಪೂಜಾರಿಯಾಗುವುದಿಲ್ಲ. ಮೊಟ್ಟ ಮೊದಲು ಯಾರು ಮೇಲಿಂದ ಬರುತ್ತಾರೆಯೋ ಅವರೇ ಪೂಜ್ಯರಿಂದ ಪೂಜಾರಿಗಳಾಗುತ್ತಾರೆ. ಮಕ್ಕಳಿಗೆ ಅನೇಕ ವಿಷಯಗಳನ್ನು ತಿಳಿಸಲಾಗುತ್ತದೆ. ಪ್ರದರ್ಶನಿಯಲ್ಲಿಯೂ ಸಹ ಅನೇಕರು ಬರುತ್ತಾರೆ. ಆದರೆ ಕೋಟಿಯಲ್ಲಿ ಕೆಲವರೆ ಯರ್ಥಾಥವಾಗಿ ತಿಳಿದುಕೊಳ್ಳುತ್ತಾರೆ, ಏಕೆಂದರೆ ಗುರಿಯು ಬಹಳ ಉನ್ನತವಾಗಿದೆ. ಪ್ರಜೆಗಳಂತೂ ಅನೇಕರು ಆಗುತ್ತಾ ಇರುವರು. ಮಾಲೆಯಲ್ಲಿ ಬರುವಂತಹ ಮಣಿಗಳು ಕೋಟಿಯಲ್ಲಿ ಕೆಲವರೇ ಬರುತ್ತಾರೆ. ಇದಕ್ಕೆ ನಾರದನ ಉದಾಹರಣೆಯೂ ಇದೆ - ತಮ್ಮ ಮುಖವನ್ನು ನೋಡಿಕೋ, ಲಕ್ಷ್ಮಿಯನ್ನು ವರಿಸಲು ಯೋಗ್ಯನಾಗಿದ್ದೀಯಾ ಎಂದು ನಾರದನನ್ನು ಕೇಳಿದರು. ಅಂದರೆ ಪ್ರಜೆಗಳಂತೂ ಅನೇಕರು ಆಗುತ್ತಾರೆ, ರಾಜರಂತೂ ರಾಜರೇ ಆಗಿದ್ದಾರೆ. ಒಬ್ಬೊಬ್ಬ ರಾಜನಿಗೂ ಸಹ ಲಕ್ಷಾಂತರ ಮಂದಿ ಪ್ರಜೆಗಳಿರುತ್ತಾರೆ ಅಂದಮೇಲೆ ಉತ್ತಮ ಪುರುಷಾರ್ಥವನ್ನೂ ಮಾಡಬೇಕು. ರಾಜರಲ್ಲಿಯೂ ಸಹ ಕೆಲವರು ದೊಡ್ಡ ರಾಜರು, ಇನ್ನೂ ಕೆಲವರು ಚಿಕ್ಕ ರಾಜರಿರುತ್ತಾರೆ. ಭಾರತದಲ್ಲಿ ಇಷ್ಟೂ ರಾಜರುಗಳಿದ್ದರು! ಸತ್ಯಯುಗದಲ್ಲಿಯೂ ಸಹ ಅನೇಕ ಮಹಾರಾಜರುಗಳಿರುತ್ತಾರೆ. ಇದು ಸತ್ಯಯುಗದಿಂದ ನಡೆದು ಬಂದಿದೆ. ಮಹಾರಾಜರಿಗೆ ಬಹಳ ಧನ-ಸಂಪತ್ತಿರುತ್ತದೆ, ಆದರೆ ರಾಜರಿಗೆ ಕಡಿಮೆ. ಇದು ಶ್ರೀ ಲಕ್ಷ್ಮಿ-ನಾರಾಯಣರಾಗುವ ಜ್ಞಾನವಾಗಿದೆ. ಅದಕ್ಕೋಸ್ಕರವೇ ಪುರುಷಾರ್ಥವು ನಡೆಯುತ್ತಿದೆ. ಅಂದಮೇಲೆ ಲಕ್ಷ್ಮಿ-ನಾರಾಯಣ ಪದವಿಯನ್ನು ಪಡೆಯುತ್ತೀರೋ ಅಥವಾ ರಾಮ-ಸೀತೆಯ ಪದವಿಯೋ? ಎಂದು ತಂದೆಯು ಕೇಳಿದರೆ ನಾವಂತೂ ಲಕ್ಷ್ಮಿ-ನಾರಾಯಣರ ಪದವಿಯನ್ನೇ ಪಡೆಯುತ್ತೇವೆ. ತಂದೆ-ತಾಯಿಯಿಂದ ಪೂರ್ಣ ಆಸ್ತಿಯನ್ನು ಪಡೆಯುತ್ತೇವೆಂದು ಹೇಳುತ್ತಾರೆ. ಇವಂತೂ ವಿಚಿತ್ರವಾದ ಮಾತುಗಳಾಗಿವೆ. ಬೇರೆ ಯಾವ ಸ್ಥಾನಗಳಲ್ಲಿ ಈ ಮಾತುಗಳಿರುವುದಿಲ್ಲ. ಈಗ ನಿಮ್ಮ ಬುದ್ಧಿಯ ಬೀಗ ತೆರೆದು ಬಿಟ್ಟಿದೆ. ತಂದೆಯು ತಿಳಿಸುತ್ತಾರೆ - ನಡೆಯುತ್ತಾ, ತಿರುಗಾಡುತ್ತಾ ನಾವು ಪಾತ್ರಧಾರಿಗಳಾಗಿದ್ದೇವೆ, ಈಗ ನಾವು ಮನೆಗೆ ಹಿಂತಿರುಗಬೇಕಾಗಿದೆ ಎಂದು ತಿಳಿದುಕೊಳ್ಳಿ. ಈ ನೆನಪಿಗೆ ಮನ್ಮನಾಭವ, ಮಧ್ಯಾಜೀಭವ ಎಂದು ಹೇಳಲಾಗುತ್ತದೆ. ತಂದೆಯು ಪದೇ-ಪದೇ ನೆನಪು ತರಿಸುತ್ತಾರೆ, ನಾನು ನಿಮ್ಮನ್ನು ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದೇನೆ. ಇದು ಆತ್ಮಿಕ ಯಾತ್ರೆಯಾಗಿದೆ, ಇದನ್ನು ತಂದೆಯ ವಿನಃ ಬೇರೆ ಯಾರೂ ಮಾಡಿಸಲು ಸಾಧ್ಯವಿಲ್ಲ. ಭಾರತದ ಮಹಿಮೆಯನ್ನು ಚೆನ್ನಾಗಿ ಮಾಡಬೇಕು. ಈ ಭಾರತ ಪರಮ ಪವಿತ್ರ ಭೂಮಿಯಾಗಿತ್ತು. ಸರ್ವರ ದುಃಖಹರ್ತ ಸುಖಕರ್ತ, ಸರ್ವರ ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ. ಭಾರತವು ಅವರ ಜನ್ಮ ಸ್ಥಾನವಾಗಿದೆ. ಆ ತಂದೆಯು ಸರ್ವರ ಮುಕ್ತಿದಾತನಾಗಿದ್ದಾರೆ. ಅವರ ಅತೀ ದೊಡ್ಡ ತೀರ್ಥ ಸ್ಥಾನ ಇಲ್ಲಿದೆ. ಭಾರತೀಯರು ಶಿವನ ಮಂದಿರಕ್ಕೆ ಹೋಗುತ್ತಾರೆ ಆದರೆ ಅವರು ತಿಳಿದುಕೊಂಡಿಲ್ಲ. ಹೇಗೆ ಗಾಂಧಿಜೀಯವರನ್ನು ತಿಳಿದುಕೊಂಡಿದ್ದಾರೆ - ಗಾಂಧೀಜಿಯು ಒಳ್ಳೆಯ ವ್ಯಕ್ತಿಯಾಗಿದ್ದಾರೆ ಆದುದರಿಂದ ಪುಷ್ಫ ಮುಂತಾದುವುಗಳನ್ನು ಅರ್ಪಣೆ ಮಾಡುತ್ತಾರೆ, ಅವರಿಗೆ ಲಕ್ಷಾಂತರ ರೂಗಳನ್ನು ಖರ್ಚು ಮಾಡುತ್ತಾರೆ. ಈ ಸಮಯದಲ್ಲಿ ಅವರದೇ ರಾಜ್ಯವಿದೆ. ಏನು ಬೇಕೋ ಅದನ್ನು ಮಾಡುತ್ತಾರೆ. ಈಗಂತೂ ತಂದೆಯು ಗುಪ್ತವಾಗಿ ಧರ್ಮ ಸ್ಥಾಪನೆ ಮಾಡುತ್ತಿದ್ದಾರೆ, ಈ ರಾಜ್ಯವೇ ಬೇರೆಯಾಗಿದೆ. ಭಾರತದಲ್ಲಿ ಮೊಟ್ಟ ಮೊದಲು ದೇವಿ-ದೇವತೆಗಳ ರಾಜ್ಯವಿತ್ತು. ಆದುದರಿಂದ ಇಲ್ಲಿ ದೇವತೆಗಳಿಗೂ ಅಸುರರಿಗೂ ಯುದ್ಧವಾಯಿತೆಂದು ತೋರಿಸುತ್ತಾರೆ, ಆದರೆ ಅಂತಹ ಯುದ್ಧವೇನೂ ನಡೆದಿಲ್ಲ. ಈ ಯುದ್ಧದ ಮೈದಾನದಲ್ಲಿ ಮಾಯೆಯ ಮೇಲೆ ವಿಜಯಿಗಳಾಗಬೇಕಾಗಿದೆ. ಅವಶ್ಯವಾಗಿ ಸರ್ವಶಕ್ತಿವಂತನೇ ಮಾಯೆಯ ಮೇಲೆ ವಿಜಯಿಗಳನ್ನಾಗಿ ಮಾಡಿಸುತ್ತಾರೆ. ಕೃಷ್ಣನಿಗೆ ಸರ್ವಶಕ್ತಿವಂತನೆಂದು ಹೇಳುವುದಿಲ್ಲ. ತಂದೆಯೇ ರಾವಣ ರಾಜ್ಯದಿಂದ ಬಿಡಿಸಿ ರಾಮರಾಜ್ಯದ ಸ್ಥಾಪನೆಯನ್ನು ಮಾಡಿಸುತ್ತಿದ್ದಾರೆ. ಆದರೆ ರಾಮ ರಾಜ್ಯದಲ್ಲಿ ಯುದ್ಧ ಮೊದಲಾದುವುಗಳ ಮಾತಿರುವುದಿಲ್ಲ. ಹಾಗೆ ನೋಡಿದರೆ ಈ ಸೃಷ್ಟಿಯಲ್ಲಿ ಈಗ ಸರ್ವಶಕ್ತಿವಾನ್ ಕ್ರಿಶ್ಚಿಯನ್ನರಾಗಿದ್ದಾರೆ. ಅವರು ಬೇಕಾದರೆ ಇಡೀ ಜಗತ್ತನ್ನೇ ಗೆಲ್ಲುತ್ತಾರೆ. ಆದರೆ ಅವರು ವಿಶ್ವದ ಮಾಲೀಕರಾಗುವ ನಿಯಮವಿಲ್ಲ. ಈ ರಹಸ್ಯವನ್ನು ನೀವು ಮಾತ್ರ ತಿಳಿದುಕೊಂಡಿದ್ದೀರಿ. ಈ ಸಮಯವು ಸರ್ವಶಕ್ತಿವಾನ್ ರಾಜಧಾನಿಯು ಕ್ರಿಶ್ಚಿಯನ್ನರದ್ದಾಗಿದೆ. ಇಲ್ಲವಾದಲ್ಲಿ ಅವರ ಜನಸಂಖ್ಯೆ ಕಡಿಮೆಯಿರಬೇಕಾಗಿತ್ತು, ಏಕೆಂದರೆ ಆ ಧರ್ಮವು ಉಳಿದ ಧರ್ಮಗಳಿಗಿಂತ ಕೊನೆಯಲ್ಲಿ ಬಂದಂತಹ ಧರ್ಮವಾಗಿದೆ. ಆದರೆ ಉಳಿದ ಮೂರು ಧರ್ಮಗಳಿಗಿಂತಲೂ ಮುಂದುವರೆದಿದೆ. ಎಲ್ಲರನ್ನೂ ತನ್ನ ವಶದಲ್ಲಿಟ್ಟುಕೊಂಡು ಕುಳಿತಿದೆ. ಈ ರೀತಿಯಾಗಿ ನಾಟಕವು ಮಾಡಲ್ಪಟ್ಟಿದೆ. ಇವರ ಮುಖಾಂತರವೇ ನಮಗೆ ಮತ್ತೆ ರಾಜಧಾನಿಯು ಸಿಗುತ್ತದೆ. ಎರಡು ಬೆಕ್ಕುಗಳು ಜಗಳ ಮಾಡಿ ಮಧ್ಯದಲ್ಲಿ ಮೂರನೇ ಬೆಕ್ಕಿಗೆ ಬೆಣ್ಣೆ ಸಿಕ್ಕಿತೆಂಬ ಕಥೆಯೂ ಇದೆ. ಅಂದರೆ ಅವರು ಪರಸ್ಪರ ಯುದ್ಧ ಮಾಡುತ್ತಾರೆ, ಮಧ್ಯದಲ್ಲಿ ಭಾರತವಾಸಿಗಳಿಗೆ ಬೆಣ್ಣೆ ಸಿಗಬೇಕು. ಆ ಕಥೆಯಂತೂ ನಯಾ ಪೈಸೆಯ ಕಥೆಯಾಗಿದೆ. ಆದರೆ ಅದರ ಅರ್ಥವಂತೂ ಎಷ್ಟೊಂದು ವಿಶಾಲವಾಗಿದೆ. ಆದರೂ ಸಹ ಮನುಷ್ಯರು ಎಷ್ಟೊಂದು ಬುದ್ಧಿಹೀನರಾಗಿದ್ದಾರೆ. ಪಾತ್ರಧಾರಿಗಳಾಗಿದ್ದೂ ಸಹ ನಾಟಕವನ್ನು ತಿಳಿದುಕೊಂಡಿಲ್ಲವಾದುದರಿಂದ ಬುದ್ಧಿಹೀನರಾಗಿದ್ದಾರೆ. ಬಡವರೇ ಇದನ್ನು ತಿಳಿದುಕೊಳ್ಳುತ್ತಾರೆ. ಶ್ರೀಮಂತರು ಸ್ವಲ್ಪವೂ ತಿಳಿದುಕೊಳ್ಳುವುದಿಲ್ಲ. ಬಡವರ ಬಂಧು ಪತಿತ-ಪಾವನರಾಗಿದ್ದಾರೆಂದು ಹೇಳುತ್ತಾರೆ. ಈಗ ಅವರು ಪ್ರತ್ಯಕ್ಷವಾಗಿ ತಮ್ಮ ಪಾತ್ರವನ್ನು ಮಾಡುತ್ತಿದ್ದಾರೆ. ದೊಡ್ಡ-ದೊಡ್ಡ ಸಭೆಗಳಿಗೆ ಹೋಗಿ ನೀವು ತಿಳಿಸಿಕೊಡಬೇಕು. ನಿಮ್ಮ ವಿವೇಕವೂ ಹೇಳುತ್ತದೆ - ನಿಧಾನವಾಗಿ ವಾಹ್! ವಾಹ್! ಎನ್ನುವ ಕೂಗು ಹೊರ ಬರುತ್ತದೆ. ಅಂತಿಮ ಘಳಿಗೆಯಲ್ಲಿ ನಿಮ್ಮ ಡಮರುಗ ಬಾರಿಸುತ್ತದೆ. ಈಗಂತೂ ಮಕ್ಕಳ ಮೇಲೆ ಗ್ರಹಚಾರವು ಕುಳಿತಿದೆ. ಆದುದರಿಂದ ನಿಮ್ಮ ಬುದ್ಧಿಯ ಲೈನ್ ಸರಿಯಾಗಿಲ್ಲ, ವಿಘ್ನಗಳು ಬರುತ್ತಿರುತ್ತವೆ. ವಿಘ್ನಗಳೂ ಸಹ ನಾಟಕದನುಸಾರವಾಗಿ ಬರುತ್ತಿರುತ್ತವೆ. ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಪಾಂಡವರಿಗೆ ಮೂರು ಹೆಜ್ಜೆ ಭೂಮಿಯೂ ಸಿಗುತ್ತಿರಲಿಲ್ಲ. ಇದು ಈಗಿನ ಮಹಿಮೆಯಾಗಿದೆ. ಆದರೆ ಅವರೇ ಪ್ರತ್ಯಕ್ಷದಲ್ಲಿ ವಿಶ್ವದ ಮಾಲೀಕರಾಗುತ್ತಿದ್ದಾರೆಂದು ಯಾರಿಗೂ ಗೊತ್ತಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಇದರಲ್ಲಿ ನೀವು ದುಃಖಿಯಾಗುವ ಅವಶ್ಯಕತೆಯಿಲ್ಲ, ಕಲ್ಪದ ಹಿಂದೆಯೂ ಹೀಗೆ ಆಗಿತ್ತು. ನಾಟಕವೆಂಬ ಪಟ್ಟಿಯ ಮೇಲೆ ನಿಂತಿರಬೇಕು, ಅಲುಗಾಡಬಾರದು. ಈಗ ನಾಟಕವು ಮುಗಿಯುತ್ತದೆ. ನೀವು ಸುಖಧಾಮಕ್ಕೆ ಹೋಗುತ್ತೀರಿ. ಆದರೆ ಶ್ರೇಷ್ಠ ಪದವಿಯನ್ನು ಪಡೆಯುವಂತೆ ವಿದ್ಯೆಯನ್ನು ಓದಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ನಡೆಯುತ್ತಾ-ತಿರುಗಾಡುತ್ತಾ ನಿಮ್ಮನ್ನು ಪಾತ್ರಧಾರಿ ಎಂದು ತಿಳಿದುಕೊಳ್ಳಬೇಕು. ನಾಟಕದ ಪಟ್ಟಿಯ ಮೇಲೆ ಅಚಲರಾಗಿರಬೇಕು. ನಾವು ಯಾತ್ರೆಯಲ್ಲಿದ್ದೇವೆ ಮನೆಗೆ ಹಿಂತಿರುಗಿ ಹೋಗುತ್ತಿದ್ದೇವೆಂದು ಬುದ್ಧಿಯಲ್ಲಿರಬೇಕು.

2. ಸದ್ಗತಿಯ ಸರ್ವ ಲಕ್ಷಣಗಳನ್ನು ಸ್ವಯಂನಲ್ಲಿ ಧಾರಣೆ ಮಾಡಬೇಕು. ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣರು ಆಗಬೇಕು.


ವರದಾನ:
ಸಹಯೋಗದ ಶುಭ ಭಾವನೆಯ ಮುಖಾಂತರ ಆತ್ಮೀಯ ವಾಯುಮಂಡಲ ಮಾಡುವಂತಹ ಮಾಸ್ಟರ್ ದಾತಾ ಭವ.

ಹೇಗೆ ಪ್ರಕೃತಿ ತನ್ನ ವಾಯುಮಂಡಲದ ಪ್ರಭಾವದ ಅನುಭವ ಮಾಡಿಸುವುದು, ಕೆಲವೊಮ್ಮೆ ಸೆಖೆ, ಕೆಲವೊಮ್ಮೆ ಚಳಿ, ಈ ರೀತಿ ನೀವು ಪ್ರಕೃತಿಜೀತ್ ಸದಾ ಸಹಯೋಗಿ, ಸಹಜಯೋಗಿ ಆತ್ಮಗಳು ತಮ್ಮ ಶುಭ ಭಾವನೆಗಳ ಮುಖಾಂತರ ಆತ್ಮೀಯ ವಾಯುಮಂಡಲ ಮಾಡುವುದರಲ್ಲಿ ಸಹಯೋಗಿಗಳಾಗಿ. ಇವರು ಹೀಗಿದ್ದಾರೆ ಅಥವಾ ಇವರು ಹೀಗೆ ಮಾಡುತ್ತಾರೆ, ಹೀಗೆ ಯೋಚಿಸಬೇಡಿ. ಎಂತಹದೇ ವಾಯುಮಂಡಲವಿರಲಿ, ವ್ಯಕ್ತಿಯಿರಲಿ, ನನಗೆ ಸಹಯೋಗ ಕೊಡಲೇಬೇಕು. ದಾತಾನ ಮಕ್ಕಳು ಸದಾ ಕೊಡುತ್ತಾ ಇರುತ್ತಾರೆ. ಆದ್ದರಿಂದ ಮನಸ್ಸಿನಿಂದ ಸಹಯೋಗಿಗಳಾಗಿ, ಇಲ್ಲಾ ವಾಚಾಯಿಂದ, ಇಲ್ಲಾ ಸಂಬಂಧ-ಸಂಪರ್ಕದ ಮುಖಾಂತರ. ಆದರೆ ಲಕ್ಷ್ಯಯಿರಲಿ ಸಹಯೋಗಿ ಖಂಡಿತ ಆಗಬೇಕು.

ಸ್ಲೋಗನ್:
ಇಚ್ಛಾ ಮಾತ್ರಂ ಅವಿದ್ಯೆಯ ಸ್ಥಿತಿಯ ಮುಖಾಂತರ ಸರ್ವರ ಇಚ್ಛೆಗಳನ್ನು ಪೂರ್ಣ ಮಾಡುವುದೇ ಕಾಮಧೇನು ಆಗುವುದಾಗಿದೆ.