29.11.2018         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ -
ಜ್ಞಾನ ಬೆಣ್ಣೆಯಾಗಿದೆ, ಭಕ್ತಿಯು ಮಜ್ಜಿಗೆಯಾಗಿದೆ, ತಂದೆಯು ನಿಮಗೆ ಜ್ಞಾನವೆಂಬ ಬೆಣ್ಣೆಯನ್ನು ಕೊಟ್ಟು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಆದ್ದರಿಂದ ಕೃಷ್ಣನ ಬಾಯಲ್ಲಿ ಬೆಣ್ಣೆ ತೋರಿಸುತ್ತಾರೆ.”

ಪ್ರಶ್ನೆ:
ನಿಶ್ಚಯಬುದ್ಧಿ ಮಕ್ಕಳ ಗುರುತೇನಾಗಿದೆ? ನಿಶ್ಚಯದ ಆಧಾರದಿಂದ ಏನು ಪ್ರಾಪ್ತಿಯಾಗುತ್ತದೆ?

ಉತ್ತರ:
1. ನಿಶ್ಚಯಬುದ್ಧಿ ಮಕ್ಕಳು ಪರಂಜ್ಯೋತಿಗೆ ಬಲಿಹಾರಿಯಾಗುವ ಸತ್ಯ ಪತಂಗಗಳಾಗಿರುತ್ತಾರೆ, ಸುತ್ತಿ ಹಾಕುವ ಪತಂಗಗಳಾಗಿರುವುದಿಲ್ಲ. ಯಾರು ಪರಂಜ್ಯೋತಿಗೆ ಬಲಿಹಾರಿಯಾಗುತ್ತಾರೆಯೋ ಅವರೇ ರಾಜ್ಯದಲ್ಲಿ ಬರುತ್ತಾರೆ, ಯಾರು ಸುತ್ತು ಹಾಕುವವರಾಗಿದ್ದಾರೆ, ಅವರು ಪ್ರಜೆಗಳಲ್ಲಿ ಹೋಗುತ್ತಾರೆ.

2.  ಭೂಮಿ ಬಿರಿದರೂ ಧರ್ಮವನ್ನು ಬಿಡಲಾರೆ - ಈ ಪ್ರತಿಜ್ಞೆಯು ನಿಶ್ಚಯಬುದ್ದಿಯ ಮಕ್ಕಳದ್ದಾಗಿದೆ. ಅವರು ಸತ್ಯ ಪ್ರೀತಿ ಬುದ್ಧಿಯವರಾಗಿ ದೇಹ ಸಹಿತ ದೇಹದ ಎಲ್ಲಾ ಧರ್ಮಗಳನ್ನು ಮರೆತು ತಂದೆಯ ನೆನಪಿನಲ್ಲಿರುತ್ತಾರೆ.

ಗೀತೆ:

ಆಕಾಶ ಸಿಂಹಾಸನವನ್ನು ಬಿಟ್ಟು ಬಾ

ಓಂ ಶಾಂತಿ.
ಭಗವಾನುವಾಚ. ನಿರಾಕಾರ ಪರಮಪಿತನಿಗೆ ಭಗವಾನ್ ಎಂದು ಹೇಳಲಾಗುವುದು. ಭಗವಾನುವಾಚ ಎಂದು ಹೇಳಿದವರು ಯಾರು? ನಿರಾಕಾರ ಪರಮಪಿತ ಪರಮಾತ್ಮನೇ. ನಿರಾಕಾರ ತಂದೆಯು ನಿರಾಕಾರ ಆತ್ಮಗಳಿಗೆ ಕುಳಿತು ತಿಳಿಸುತ್ತಾರೆ. ನಿರಾಕಾರ ಆತ್ಮ ಈ ಶರೀರವೆಂಬ ಕರ್ಮೇಂದ್ರಿಯಗಳಿಂದ ಕೇಳುತ್ತದೆ. ಆತ್ಮನಿಗೆ ಸ್ತ್ರೀ-ಪುರುಷರೆಂದು ಹೇಳಲಾಗುವುದಿಲ್ಲ. ಅದಕ್ಕೆ ಆತ್ಮವೆಂದು ಹೇಳಲಾಗುತ್ತದೆ. ಆತ್ಮವು ಸ್ವಯಂ ಕರ್ಮೇಂದ್ರಿಯಗಳ ಮೂಲಕ ಹೇಳುತ್ತದೆ. ನಾನು ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ತೆಗೆದುಕೊಳ್ಳುತ್ತೇನೆ. ಮನುಷ್ಯ ಮಾತ್ರರೆಲ್ಲರೂ ಸಹೋದರರಾಗಿದ್ದಾರೆ. ಯಾವಾಗ ಪರಮಪಿತ ಪರಮಾತ್ಮನ ಸಂತಾನರಾಗುತ್ತಾರೆಯೋ ಆಗ ಎಲ್ಲರೂ ಪರಸ್ಪರ ಸಹೋದರ-ಸಹೋದರರಾಗಿರುತ್ತಾರೆ. ಯಾವಾಗ ಪ್ರಜಾಪಿತ ಬ್ರಹ್ಮನ ಸಂತಾನರಾಗುತ್ತಾರೆಯೋ ಆಗ ಸಹೋದರ-ಸಹೋದರಿಯರಾಗುತ್ತಾರೆ ಎಂದು ಸದಾ ಇದನ್ನು ಎಲ್ಲರಿಗೂ ತಿಳಿಸುತ್ತಿರಿ. ಭಗವಂತನು ರಕ್ಷಕನಾಗಿದ್ದಾರೆ. ಭಕ್ತರಿಗೆ ಭಕ್ತಿಯ ಫಲವನ್ನು ಕೊಡುವವರಾಗಿದ್ದಾರೆ.

ಸರ್ವರ ಸದ್ಗತಿದಾತ ನಾನು ಒಬ್ಬನೇ ಆಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ಸರ್ವರ ಶಿಕ್ಷಕನಾಗಿ ಶ್ರೀಮತವನ್ನು ಕೊಡುತ್ತೇನೆ ಹಾಗೂ ಸರ್ವರ ಸದ್ಗುರುವೂ ಆಗಿದ್ದೇನೆ. ಅವರಿಗೆ ಯಾರು ತಂದೆ, ಶಿಕ್ಷಕ, ಗುರುಗಳಿಲ್ಲ. ಆ ತಂದೆಯೇ ಪ್ರಾಚೀನ ಭಾರತದ ರಾಜಯೋಗವನ್ನು ಕಲಿಸುವವರಾಗಿದ್ದಾರೆಯೇ ಹೊರತು ಕೃಷ್ಣನಲ್ಲ. ಕೃಷ್ಣನಿಗೆ ತಂದೆಯೆಂದು ಹೇಳುವುದಿಲ್ಲ. ಅವನನ್ನು ದೈವೀ ಗುಣಧಾರಿ ಸ್ವರ್ಗದ ರಾಜಕುಮಾರನೆಂದು ಕರೆಯಲಾಗುವುದು. ಪತಿತ-ಪಾವನ, ಸದ್ಗತಿದಾತನೆಂದು ಒಬ್ಬರಿಗೇ ಕರೆಯಲಾಗುವುದು. ಈಗ ಎಲ್ಲರೂ ದುಃಖಿ, ಪಾಪಾತ್ಮ, ಭ್ರಷ್ಟಾಚಾರಿಗಳಾಗಿದ್ದಾರೆ. ಭಾರತವೇ ಸತ್ಯಯುಗದಲ್ಲಿ ದೈವೀ ಶ್ರೇಷ್ಠಾಚಾರಿಯಾಗಿತ್ತು. ನಂತರ ಅದೇ ಭಷ್ಠಾಚಾರಿ ಆಸುರೀ ರಾಜ್ಯವಾಗುತ್ತದೆ. ಆದ್ದರಿಂದ ಎಲ್ಲರೂ ಪತಿತ-ಪಾವನ ಬಾ, ಬಂದು ರಾಮರಾಜ್ಯವನ್ನು ಸ್ಥಾಪನೆ ಮಾಡು ಎಂದು ಹೇಳುತ್ತಾರೆ. ಹಾಗಾದರೆ ಈಗ ರಾವಣ ರಾಜ್ಯವಿದೆ. ರಾವಣನನ್ನು ಸುಡುತ್ತಾರೆ ಆದರೆ ರಾವಣನನ್ನು ಯಾವ ವಿದ್ವಾನರು, ಆಚಾರ್ಯರು, ಪಂಡಿತರ್ಯಾರೂ ತಿಳಿದುಕೊಂಡಿಲ್ಲ. ಸತ್ಯಯುಗದಿಂದ ತ್ರೇತಾದವರೆಗೆ ರಾಮರಾಜ್ಯ, ದ್ವಾಪರದಿಂದ ಕಲಿಯುಗದವರಿಗೆ ರಾವಣ ರಾಜ್ಯ. ಬ್ರಹ್ಮನ ದಿನ ಅಂದರೆ ಬ್ರಹ್ಮಾಕುಮಾರ-ಕುಮಾರಿಯರ ದಿನ. ಬ್ರಹ್ಮನ ರಾತ್ರಿಯೆಂದರೆ ಬ್ರಹ್ಮಾಕುಮಾರ-ಕುಮಾರಿಯರ ರಾತ್ರಿ ಎಂದು. ಈಗ ರಾತ್ರಿ ಮುಗಿದು ದಿನ ಬರಬೇಕಾಗಿದೆ. ವಿನಾಶಕಾಲೇ ವಿಪರೀತ ಬುದ್ಧಿಯೆಂದು ಗಾಯನ ಮಾಡುತ್ತಾರೆ. ಮೂರು ಸೈನ್ಯಗಳೂ ಸಹ ಇವೆ. ಪರಮಪಿತನಿಗೆ ಅತೀ ಪ್ರೀತಿಯ ಗಾಡ್ ಫಾದರ್, ಜ್ಞಾನ ಸಾಗರನೆಂದು ಕರೆಯಲಾಗುವುದು. ಹಾಗಾದರೆ ಅವಶ್ಯವಾಗಿ ಅವರು ಜ್ಞಾನ ಕೊಡುತ್ತಾರಲ್ಲವೆ. ಅವರು ಸೃಷ್ಟಿಯ ಚೈತನ್ಯ ಬೀಜರೂಪ ಆಗಿದ್ದಾರೆ. ಸುಪ್ರೀಂ ಸೋಲ್ ಅರ್ಥಾತ್ ಶ್ರೇಷ್ಠಾತಿ ಶ್ರೇಷ್ಠ ಆತ್ಮ ಭಗವಂತ ಆಗಿದ್ದಾರೆ. ಆದರೆ ಅವರನ್ನು ಸರ್ವವ್ಯಾಪಿ ಎಂದು ಹೇಳಲು ಆಗುವುದಿಲ್ಲ. ಸರ್ವವ್ಯಾಪಿ ಎಂದು ಹೇಳುವುದು ತಂದೆಗೆ ನಿಂದನೆ ಮಾಡಿದ ಹಾಗೆ. ತಂದೆಯು ಹೇಳುತ್ತಾರೆ, ನಿಂದನೆ ಮಾಡುತ್ತಾ-ಮಾಡುತ್ತಾ ಧರ್ಮ ಗ್ಲಾನಿಯಾಯಿತು, ಭಾರತ ಕಂಗಾಲಾಗಿ ಭ್ರಷ್ಟಾಚಾರಿಯಾಗಿ ಬಿಟ್ಟಿದೆ. ಇಂತಹ ಸಮಯದಲ್ಲಿ ನಾನು ಬರಬೇಕಾಗುತ್ತದೆ. ಭಾರತವೇ ನನ್ನ ಜನ್ಮ ಸ್ಥಾನವಾಗಿದೆ. ಭಾರತದಲ್ಲಿಯೇ ಸೋಮನಾಥ ಮಂದಿರ, ಶಿವನ ಮಂದಿರಗಳೂ ಇವೆ. ನಾನು ನನ್ನ ಜನ್ಮ ಸ್ಥಾನವನ್ನು ಸ್ವರ್ಗ ಮಾಡುತ್ತೇನೆ ನಂತರ ರಾವಣ ನರಕ ಮಾಡುತ್ತಾನೆ ಅಂದರೆ ನೀವು ರಾವಣನ ಮತದಂತೆ ನಡೆದು ನರಕವಾಸಿ ಅಸುರೀ ಸಂಪ್ರದಾಯದವರಾಗುತ್ತೀರಿ ಮತ್ತೆ ನಾನು ಅವರನ್ನು ಪರಿವರ್ತನೆ ಮಾಡಿ ದೈವೀ ಸಂಪ್ರದಾಯ ಶ್ರೇಷ್ಠಾಚಾರಿಗಳನ್ನಾಗಿ ಮಾಡುತ್ತೇನೆ. ಇದು ವಿಷಯ ಸಾಗರವಾಗಿದೆ, ಅದು ಕ್ಷೀರ ಸಾಗರವಾಗಿದೆ. ಅಲ್ಲಿ ತುಪ್ಪದ ನದಿಗಳು ಹರಿಯುತ್ತವೆ. ಸತ್ಯ-ತ್ರೇತಾಯುಗದಲ್ಲಿ ಭಾರತದಲ್ಲಿ ಸದಾ ಸುಖದ ಸಂಪತ್ತಿತ್ತು, ವಜ್ರ-ರತ್ನಗಳ ಮಹಲ್ಗಳಿತ್ತು. ಈಗಂತೂ ಭಾರತವು 100% ಬಡ ರಾಷ್ಟ್ರವಾಗಿದೆ. ನಾನೇ ಬಂದು 100% ಸಂಪದ್ಭರಿತ, ಶ್ರೇಷ್ಠಾಚಾರಿಯನ್ನಾಗಿ ಮಾಡುತ್ತೇನೆ. ಈಗಂತೂ ತಮ್ಮ ದೈವೀ ಧರ್ಮವನ್ನು ಮರೆಯುವಷ್ಟು ಭ್ರಷ್ಟಾಚಾರಿಗಳಾಗಿದ್ದಾರೆ.

ತಂದೆಯು ಕುಳಿತು ತಿಳಿಸುತ್ತಾರೆ. ಭಕ್ತಿಮಾರ್ಗ ಮಜ್ಜಿಗೆ, ಜ್ಞಾನ ಮಾರ್ಗ ಬೆಣ್ಣೆಯಾಗಿದೆ. ಕೃಷ್ಣನ ಬಾಯಲ್ಲಿ ಬೆಣ್ಣೆಯನ್ನು ತೋರಿಸುತ್ತಾರೆ ಅಂದರೆ ವಿಶ್ವದ ರಾಜ್ಯಭಾಗ್ಯವಿತ್ತು. ಲಕ್ಷ್ಮಿ-ನಾರಾಯಣರು ವಿಶ್ವದ ಮಾಲಿಕರಾಗಿದ್ದರು. ತಂದೆಯೇ ಬಂದು ಬೇಹದ್ದಿನ ಆಸ್ತಿ ಕೊಡುತ್ತಾರೆ ಅರ್ಥಾತ್ ವಿಶ್ವದ ಮಾಲಿಕರನ್ನಾಗಿ ಮಾಡುತ್ತಾರೆ. ನಾನು ವಿಶ್ವದ ಮಾಲಿಕನಾಗುವುದಿಲ್ಲ, ಒಂದುವೇಳೆ ವಿಶ್ವದ ಮಾಲಿಕನಾಗಿ ಬಿಟ್ಟರೆ ಮತ್ತೆ ಮಾಯೆಯೊಂದಿಗೆ ಸೋಲಬೇಕಾಗುತ್ತದೆ ಎಂದು ತಂದೆಯು ಹೇಳುತ್ತಾರೆ. ನೀವು ಮಾಯೆಗೆ ಸೋಲುತ್ತೀರಿ, ಮತ್ತೆ ನೀವೇ ಗೆಲ್ಲಬೇಕು. ನೀವು ಈ ಪಂಚ ವಿಕಾರಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರಿ. ಈಗ ನಾನು ನಿಮ್ಮನ್ನು ಮಂದಿರಕ್ಕೆ ಯೋಗ್ಯ ಮಾಡುತ್ತೇನೆ. ಸತ್ಯಯುಗ ಅತೀ ದೊಡ್ಡ ಮಂದಿರವಾಗಿದೆ. ಅದನ್ನು ಶಿವನಿಂದ ಸ್ಥಾಪಿಸಲ್ಪಟ್ಟ ಶಿವಾಲಯವೆಂದು ಹೇಳಲಾಗುವುದು. ಕಲಿಯುಗದಲ್ಲಿ ಎಲ್ಲರೂ ವಿಕಾರಿಗಳಾಗಿರುವ ಕಾರಣ ವೇಶ್ಯಾಲಯವೆಂದು ಹೇಳಲಾಗುವುದು. ಆದ್ದರಿಂದ ಈಗ ತಂದೆಯು ಹೇಳುತ್ತಾರೆ - ದೇಹದ ಧರ್ಮವನ್ನು ಬಿಟ್ಟು ನಿಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. ಈಗ ನೀವು ಮಕ್ಕಳಿಗೆ ತಂದೆಯ ಜೊತೆ ಪ್ರೀತಿಯಿದೆ. ಈಗ ನೀವು ಬೇರೆ ಯಾರನ್ನೂ ನೆನಪು ಮಾಡುವುದಿಲ್ಲ. ನೀವು ವಿನಾಶಕಾಲೇ ಪ್ರೀತಿ ಬುದ್ಧಿಯವರಾದ್ದೀರಿ. ಶ್ರೀ ಶ್ರೀ 108 ಪರಮಪಿತ ಪರಮಾತ್ಮನಿಗೇ ಹೇಳಲಾಗುತ್ತದೆ ಎಂದು ನೀವು ತಿಳಿದುಕೊಂಡಿದ್ದೀರಿ. 108 ಮಾಲೆಯನ್ನು ಜಪ ಮಾಡುತ್ತಾರೆ. ಮಾಲೆಯ ಮೇಲೆ ಶಿವ ತಂದೆ ನಂತರ ತಾಯಿ-ತಂದೆಯಾದ ಬ್ರಹ್ಮಾ-ಸರಸ್ವತಿ, ಆಮೇಲೆ ನಿಮ್ಮಲ್ಲಿ ಭಾರತವನ್ನು ಪಾವನ ಮಾಡುವ ಮಕ್ಕಳಾಗಿದ್ದೀರಿ. ರುದ್ರಾಕ್ಷಿ ಮಾಲೆಯೆಂದು ಗಾಯನವಿದೆ, ಇದನ್ನು ರುದ್ರ ಯಜ್ಞವೆಂದೂ ಕರೆಯಲಾಗುವುದು. ಇದು ಎಷ್ಟೊಂದು ದೊಡ್ಡ ರಾಜಸ್ವ ಅಶ್ವಮೇಧ ಅವಿನಾಶಿ ರುದ್ರ ಜ್ಞಾನ ಯಜ್ಞವಾಗಿದೆ. ಎಷ್ಟೊಂದು ವರ್ಷಗಳಿಂದ ನಡೆಯುತ್ತಿದೆ. ಯಾರೆಲ್ಲಾ ಅನೇಕ ಧರ್ಮ, ಮೊದಲಾದವುಗಳಿವೆಯೋ ಅವುಗಳೆಲ್ಲವೂ ಈ ಯಜ್ಞದಲ್ಲಿ ಸ್ವಾಹಾ ಆದಾಗ ಈ ಯಜ್ಞವು ಅಂತ್ಯವಾಗುತ್ತದೆ. ಇದು ಅವಿನಾಶಿ ತಂದೆಯ ಅವಿನಾಶಿ ಯಜ್ಞವಾಗಿದೆ. ಇದರಲ್ಲಿ ಎಲ್ಲಾ ಸಾಮಗ್ರಿಗಳು ಸ್ವಾಹಾ ಆಗುತ್ತವೆ. ವಿನಾಶ ಯಾವಾಗ ಆಗುತ್ತದೆ? ಎಂದು ಕೇಳುತ್ತಾರೆ. ಅರೆ! ಯಾರು ಸ್ಥಾಪನೆ ಮಾಡುತ್ತಾರೆಯೋ ಅವರೇ ಮತ್ತೆ ಪಾಲನೆ ಮಾಡಬೇಕಾಗುತ್ತದೆ. ಇದು ಶಿವ ತಂದೆಯ ರಥವಾಗಿದೆ. ಇದರಲ್ಲಿ ಶಿವ ತಂದೆಯು ರಥಿಯಾಗಿದ್ದಾರೆ. ಬಾಕಿ ಯಾವುದೇ ಕುದುರೆ ಗಾಡಿಯೇನಲ್ಲ. ಅದು ಭಕ್ತಿಮಾರ್ಗದ ಸಾಮಗ್ರಿಯಲ್ಲಿ ಕುಳಿತು ಮಾಡಿದ್ದಾರೆ. ಆದ್ದರಿಂದ ನಾನು ಪ್ರಕೃತಿಯ ಆಧಾರವನ್ನು ತೆಗೆದುಕೊಳ್ಳುತ್ತೇನೆಂದು ತಂದೆಯು ಹೇಳುತ್ತಾರೆ.

ತಂದೆಯು ತಿಳಿಸುತ್ತಾರೆ - ಮೊದಲು ಅವ್ಯಭಿಚಾರಿ ಭಕ್ತಿಯಿತ್ತು, ನಂತರ ಕಲಿಯುಗದ ಅಂತ್ಯದಲ್ಲಿ ಪೂರ್ಣ ವ್ಯಭಿಚಾರಿ ಭಕ್ತಿಯಾಗಿ ಬಿಟ್ಟಿತು. ಆಗ ತಂದೆಯು ಬಂದು ಭಾರತಕ್ಕೆ ಬೆಣ್ಣೆ ಕೊಡುತ್ತಾರೆ. ನೀವು ವಿಶ್ವದ ಮಾಲೀಕರಾಗಲು ಓದುತ್ತಿದ್ದೀರಿ. ತಂದೆಯು ಬಂದು ಬೆಣ್ಣೆಯನ್ನು ತಿನ್ನಿಸುತ್ತಾರೆ. ರಾವಣ ರಾಜ್ಯದಲ್ಲಿ ಮಜ್ಜಿಗೆ ಪ್ರಾರಂಭವಾಗುತ್ತದೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಹೊಸ ಮಕ್ಕಳು ಈ ಮಾತುಗಳನ್ನು ತಿಳಿದುಕೊಳ್ಳುವುದಕ್ಕೆ ಆಗುವುದಿಲ್ಲ. ಪರಮಪಿತ ಪರಮಾತ್ಮನಿಗೆ ಜ್ಞಾನ ಸಾಗರನೆಂದು ಹೇಳಲಾಗುವುದು. ತಂದೆಯು ಹೇಳುತ್ತಾರೆ ಭಕ್ತಿಮಾರ್ಗದಲ್ಲಿ ನಾನು ಯಾರಿಗೂ ಸಿಗುವುದಿಲ್ಲ, ಯಾವಾಗ ನಾನು ಬರುತ್ತೇನೆಯೋ ಆಗ ಭಕ್ತರಿಗೆ ಭಕ್ತಿಯ ಫಲವನ್ನು ಕೊಡುತ್ತೇನೆ, ನಾನು ಮುಕ್ತಿದಾತನಾಗಿ ದುಃಖದಿಂದ ಬಿಡುಗಡೆ ಮಾಡಿ ರಾಜರನ್ನಾಗಿ ಮಾಡುತ್ತೇನೆ ಯಾವಾಗ ನೀವು ಚೆನ್ನಾಗಿ ಓದುವಿರಿ. ನಿಶ್ಚಯ ಬುದ್ಧಿ ವಿಜಯಂತಿ, ಸಂಶಯ ಬುದ್ಧಿ ವಿನಶ್ಯಂತಿ.

ನೀವು ನಿಶ್ಚಯ ಬುದ್ಧಿ ಮಕ್ಕಳು ಪರಂಜ್ಯೋತಿಗೆ (ತಂದೆ) ಬಲಿಹಾರಿಯಾಗುವ ಪತಂಗಗಳಾಗಿದ್ದೀರಿ. ಕೆಲವು ಪತಂಗಗಳೂ ಒಮ್ಮೆಯೇ ಬಲಿಹಾರಿಯಾಗಿ ಬಿಡುತ್ತವೆ. ಕೆಲವು ಪತಂಗಗಳು ಸುತ್ತು ಹಾಕಿಕೊಂಡು ಹೊರಟು ಹೋಗುತ್ತವೆ. ಏನೂ ತಿಳಿದುಕೊಳ್ಳುವುದಿಲ್ಲ. ಬಲಿಹಾರಿಯಾಗುವ ಮಕ್ಕಳು ತಿಳಿದುಕೊಳ್ಳುತ್ತಾರೆ - ಬೇಹದ್ದಿನ ತಂದೆಯಿಂದ ನಮಗೆ ಬೇಹದ್ದಿನ ಆಸ್ತಿಯು ಸಿಗುತ್ತದೆ. ಯಾರು ಕೇವಲ ಸುತ್ತಿ ಹಾಕಿಕೊಂಡು ಹೋಗುತ್ತಾರೆ. ಅವರು ಪ್ರಜೆಯಲ್ಲಿಯೂ ನಂಬರ್ವಾರ್ ಬರುತ್ತಾರೆ. ಯಾರು ಬಲಿಹಾರಿಯಾಗುತ್ತಾರೆಯೋ ಅವರು ನಂಬರ್ವಾರ್ ಪುರುಷಾರ್ಥದನುಸಾರವಾಗಿ ಬಲಿಹಾರಿಯಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಪುರುಷಾರ್ಥದಿಂದಲೇ ಪ್ರಾಲಬ್ಧ ಸಿಗುತ್ತದೆ. ಜ್ಞಾನ ಸಾಗರ ತಂದೆಯು ಒಬ್ಬರೇ ಆಗಿದ್ದಾರೆ, ಮತ್ತೆ ಈ ಜ್ಞಾನವು ಪ್ರಾಯಲೋಪವಾಗಿ ಬಿಡುತ್ತದೆ. ನೀವು ಸದ್ಗತಿಯನ್ನು ಪಡೆದುಕೊಂಡು ಬಿಡುತ್ತೀರಿ. ಸತ್ಯ-ತ್ರೇತಾದಲ್ಲಿ ಯಾವುದೇ ಗುರು-ಗೋಸಾಯಿಗಳಿರುವುದಿಲ್ಲ. ಈಗ ಎಲ್ಲರೂ ತಂದೆಯನ್ನು ನೆನಪು ಮಾಡುತ್ತಾರೆ ಏಕೆಂದರೆ ಅವರು ಜ್ಞಾನ ಸಾಗರನಾಗಿದ್ದಾರೆ, ಎಲ್ಲರ ಸದ್ಗತಿಯನ್ನು ಮಾಡುತ್ತಾರೆ. ಹಾಹಾಕಾರ ಮುಗಿದ ನಂತರ ಜಯ-ಜಯಕಾರ ಪ್ರಾರಂಭವಾಗುತ್ತದೆ. ನೀವು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಈಗ ನೀವು ತ್ರಿಕಾಲದರ್ಶಿ, ತ್ರಿನೇತ್ರಿಯಾಗಿದ್ದೀರಿ. ನಿಮಗೆ ರಚೈತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಪೂರ್ಣ ಜ್ಞಾನ ನಿಮಗೆ ಸಿಗುತ್ತಿದೆ. ಇದು ಯಾವುದೇ ದಂತ ಕಥೆಯಲ್ಲ. ಗೀತೆಯು ಭಗವಂತನಿಂದ ಉಚ್ಚರಿಸಲ್ಪಟ್ಟಿರುವಂತಹ ಗೀತೆಯಾಗಿದೆ. ಆದರೆ ಕೃಷ್ಣನ ಹೆಸರನ್ನು ಹಾಕಿ ಖಂಡನೆ ಮಾಡಿ ಬಿಟ್ಟಿದ್ದಾರೆ. ಈಗ ನೀವು ಮಕ್ಕಳು ಸರ್ವರ ಕಲ್ಯಾಣ ಮಾಡಬೇಕು. ನೀವು ಶಿವಶಕ್ತಿ ಸೇನೆಯಾಗಿದ್ದೀರಿ. ವಂದೇ ಮಾತರಂ ಎಂದು ಹೇಳಲಾಗಿದೆ. ಪವಿತ್ರರಾಗಿರುವವರಿಗೆ ವಂದನೆ ಮಾಡಲಾಗುತ್ತದೆ. ಕನ್ಯೆಯು ಪವಿತ್ರಳಾಗಿದ್ದಾಗ ಎಲ್ಲರೂ ನಮಸ್ಕಾರ ಮಾಡುತ್ತಾರೆ. ಅತ್ತೆಯ ಮನೆಗೆ ಹೋಗಿ ವಿಕಾರಿಯಾದಾಗ ಎಲ್ಲರಿಗೂ ಅವಳು ತಲೆ ಬಾಗುತ್ತಾಳೆ. ಎಲ್ಲವೂ ಪವಿತ್ರತೆಯ ಮೇಲೆ ಆಧಾರಿತವಾಗಿದೆ. ಭಾರತವು ಪವಿತ್ರ ಗೃಹಸ್ಥ ಧರ್ಮವಾಗಿತ್ತು, ಈಗ ಅಪವಿತ್ರ ಗೃಹಸ್ಥ ಧರ್ಮದಲ್ಲಿದೆ, ದುಃಖವೇ ದುಃಖವಿದೆ. ನಿಮಗೆ ಸತ್ಯಯುಗದಲ್ಲಿ ಈ ರೀತಿಯಿರುವುದಿಲ್ಲ. ತಂದೆಯು ಮಕ್ಕಳಿಗಾಗಿ ಅಂಗೈಯಲ್ಲಿ ಸ್ವರ್ಗವನ್ನು ತಂದಿದ್ದಾರೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ತಂದೆಯಿಂದ ಜೀವನ್ಮುಕ್ತಿಯ ಆಸ್ತಿಯನ್ನು ತೆಗೆದುಕೊಳ್ಳಬಹುದು. ನೀವು ಮನೆ-ಮಠ ಬಿಡುವ ಮಾತೇ ಇಲ್ಲ. ಸನ್ಯಾಸಿಗಳ ನಿವೃತ್ತಿ ಮಾರ್ಗವು ಬೇರೆಯಾಗಿದೆ. ಈಗ ನೀವು ತಂದೆಯ ಜೊತೆ ಪ್ರತಿಜ್ಞೆ ಮಾಡಿ - ಬಾಬಾ ನಾವು ಪವಿತ್ರರಾಗಿ, ಅವಶ್ಯವಾಗಿ ಪವಿತ್ರ ಪ್ರಪಂಚದ ಮಾಲೀಕರಾಗುತ್ತೇವೆ. ನಂತರ ಭೂಮಿ ಬಿರಿದರೂ ಧರ್ಮವನ್ನು ಬಿಡುವುದಿಲ್ಲ. ಈ ಪಂಚ ವಿಕಾರಗಳನ್ನು ದಾನ ಕೊಟ್ಟ ನಂತರ ಮಾಯೆಯ ಗ್ರಹಣ ಬಿಡುಗಡೆಯಾಗುತ್ತದೆ. ಆಗ ನೀವು 16 ಕಲಾ ಸಂಪೂರ್ಣರಾಗುತ್ತೀರಿ. ಸತ್ಯಯುಗದಲ್ಲಿ 16 ಕಲಾ ಸಂಪೂರ್ಣ, ಸಂಪೂರ್ಣ ನಿರ್ವಿಕಾರಿ....., ಈಗ ಶ್ರೀಮತದಂತೆ ನಡೆದು ಪುನಃ ಅದೇ ರೀತಿ ಆಗಬೇಕು.

ಭಗವಂತ ಬಡವರ ಬಂಧುವಾಗಿದ್ದಾರೆ. ಶ್ರೀಮಂತರು ಈ ಜ್ಞಾನವನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ನಮಗೆ ಹಣ-ಅಂತಸ್ತು ಇದೆ, ನಾವು ಸ್ವರ್ಗದಲ್ಲಿಯೇ ಕುಳಿತಿದ್ದೇವೆಂದು ತಿಳಿದುಕೊಳ್ಳುತ್ತಾರೆ ಆದ್ದರಿಂದ ಅಬಲೆಯರು, ಅಹಲ್ಯೆಯರೇ ಈ ಜ್ಞಾನವನ್ನು ಪಡೆಯುತ್ತಾರೆ. ಭಾರತವಂತೂ ಬಡ ರಾಷ್ಟ್ರವಾಗಿದೆ. ಅದರಲ್ಲಿಯೂ ಯಾರು ಸಾಧಾರಣ ಬಡವರಿದ್ದಾರೆಯೋ ಅವರನ್ನು ತಂದೆಯು ಮಕ್ಕಳನ್ನಾಗಿ ಮಾಡಿಕೊಳ್ಳುತ್ತಾರೆ. ಅವರ ಅದೃಷ್ಟದಲ್ಲಿಯೇ ಇರುತ್ತದೆ. ಸುಧಾಮನ ಉದಾಹರಣೆಯ ಗಾಯನ ಇದೆಯಲ್ಲವೆ. ಶ್ರೀಮಂತರು ನಮಗೆ ಸಮಯವೇ ಇಲ್ಲವೆಂದು ತಿಳಿದುಕೊಳ್ಳುತ್ತಾರೆ. ರಾಜೇಂದ್ರ ಪ್ರಸಾದ್ (ಭಾರತದ ಪ್ರಥಮ ರಾಷ್ಟ್ರಪತಿ) ರವರ ಬಳಿ ಮಕ್ಕಳು ಹೋಗುತ್ತಿದ್ದರು. ಅವರಿಗೆ ಬೇಹದ್ದಿನ ತಂದೆಯನ್ನು ತಿಳಿದುಕೊಂಡರೆ ನೀವು ವಜ್ರ ಸಮಾನರಾಗುತ್ತೀರಿ ಎಂದು ಹೇಳುತ್ತಿದ್ದರು. ಅದಕ್ಕಾಗಿ 7 ದಿನದ ಕೋರ್ಸ್ ಕೇಳಿ. ಆಗ ಅವರು ಹೌದು! ಇದು ತುಂಬಾ ಒಳ್ಳೆಯ ಮಾತಾಗಿದೆ. ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಕೋರ್ಸ್ ತೆಗೆದುಕೊಳ್ಳುತ್ತೇನೆಂದು ಹೇಳಿದರು ಆದರೆ ರಿಟೈರ್ಡ್ ಆದ ನಂತರ ನನಗೆ ಆರೋಗ್ಯ ಸರಿಯಾಗಿಲ್ಲ ಎಂದು ಹೇಳಿ ಬಿಟ್ಟರು. ಹೀಗೆ ದೊಡ್ಡ-ದೊಡ್ಡ ಮನುಷ್ಯರಿಗೆ ಸಮಯವಿರುವುದಿಲ್ಲ. ಯಾವಾಗ 7 ದಿನದ ಕೋರ್ಸ್ ಪೂರ್ಣವಾಗುತ್ತದೆಯೋ ಆಗ ನಾರಾಯಣಿ ನಶೆಯೇರುತ್ತದೆಯೇ ವಿನಃ ಹಾಗೆಯೇ ನಶೆಯೇರುವುದಿಲ್ಲ. 7 ದಿನದ ನಂತರ ಇವರು ಯೋಗ್ಯರಾಗಿದ್ದಾರೆಯೇ ಅಥವಾ ಇಲ್ಲವೆ ಎಂದು ತಿಳಿಯುತ್ತದೆ. ಯೋಗ್ಯರಾಗಿದ್ದರೆ ಮತ್ತೆ ಓದುವ ಪುರುಷಾರ್ಥದಲ್ಲಿ ತೊಡಗಿ ಬಿಡುತ್ತಾರೆ. ಎಲ್ಲಿಯವರೆಗೆ ಭಟ್ಟಿಯಲ್ಲಿ ಪಕ್ಕ ಬಣ್ಣವನ್ನು ಹಾಕಿಕೊಳ್ಳುವುದಿಲ್ಲ. ಅಲ್ಲಿಯವರೆಗೆ ಹೊರ ಪ್ರಪಂಚದಲ್ಲಿ ಹೋಗುವುದರಿಂದ ಹೊರಟು ಹೋಗುತ್ತದೆ. ಆದ್ದರಿಂದ ಮೊದಲೇ ಪಕ್ಕಾ ಬಣ್ಣವನ್ನು ಹಾಕಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಶಿವ ಶಕ್ತಿಯಾಗಿ ವಿಶ್ವ ಕಲ್ಯಾಣವನ್ನು ಮಾಡಬೇಕು. ಪವಿತ್ರತೆಯ ಅಧಾರದ ಮೇಲೆ ಕವಡೆ ಸಮಾನ ಮನುಷ್ಯರನ್ನು ವಜ್ರ ಸಮಾನ ಮಾಡಬೇಕು.

2. ಶ್ರೀಮತದಂತೆ ವಿಕಾರಗಳನ್ನು ದಾನ ಮಾಡಿ ಸಂಪೂರ್ಣ ನಿರ್ವಿಕಾರಿ, 16 ಕಲಾ ಸಂಪೂರ್ಣರಾಗಬೇಕು. ಪರಂಜ್ಯೋತಿಗೆ ಬಲಿಹಾರಿಯಾಗುವ ಪತಂಗವಾಗಬೇಕು.

ವರದಾನ:
ಸದಾ ತಮ್ಮನ್ನು ಸಾರಥಿ ಮತ್ತು ಸಾಕ್ಷಿ ಎಂದು ತಿಳಿದು ದೇಹ-ಭಾನದಿಂದ ನ್ಯಾರಾ ಆಗಿರುವಂತಹ ಯೋಗಯುಕ್ತ ಭವ.

ಯೋಗಯುಕ್ತರಾಗಿರಲು ಸಹಜ ವಿಧಿಯಾಗಿದೆ - ಸದಾ ತಮ್ಮನ್ನು ಸಾರಥಿ ಮತ್ತು ಸಾಕ್ಷಿ ಎಂದು ತಿಳಿದು ನಡೆಯಿರಿ. ಈ ರಥವನ್ನು ನಡೆಸುವಂತಹವನು ನಾನು ಆತ್ಮ ಸಾರಥಿಯಾಗಿದ್ದೇನೆ, ಈ ಸ್ಮತಿ ಸ್ವತಃ ಈ ರಥ ಅಥವಾ ದೇಹದಿಂದ ಅಥವಾ ಯಾವುದೇ ಪ್ರಕಾರದ ದೇಹ-ಭಾನದಿಂದ ನ್ಯಾರಾ(ಸಾಕ್ಷಿ) ಮಾಡಿ ಬಿಡುವುದು. ದೇಹ-ಭಾನ ಇಲ್ಲದೇ ಹೋದರೆ ಸಹಜವಾಗಿ ಯೋಗಯುಕ್ತ ಆಗಿ ಬಿಡುವುದು ಮತ್ತು ಕರ್ಮ ಸಹಾ ಯೋಗಯುಕ್ತವಾಗಿರುವುದು. ಸ್ವಯಂ ಅನ್ನು ಸಾರಥಿ ಎಂದು ತಿಳಿಯುವುದರಿಂದ ಸರ್ವ ಕರ್ಮೇಂದ್ರಿಯ ತನ್ನ ನಿಯಂತ್ರಣದಲ್ಲಿ ಬರುವುದು. ಅವರು ಯಾವುದೇ ಕರ್ಮೇಂದ್ರಿಯಕ್ಕೆ ವಶ ಆಗಲು ಸಾಧ್ಯವಿಲ್ಲ.

ಸ್ಲೋಗನ್:
ವಿಜಯಿ ಆತ್ಮ ಆಗಬೇಕಾದರೆ ಗಮನ (ಅಟೆನ್ಷನ್) ಮತ್ತು ಅಭ್ಯಾಸ - ಇದನ್ನು ಮೂಲ ಸಂಸ್ಕಾರ ಮಾಡಿಕೊಂಡು ಬಿಡಿ.


ಮಾತೇಶ್ವರೀಜಿ ಯವರ ಮಧುರ ಮಹಾವಾಕ್ಯ :

“ ಕೇವಲ ಆತ್ಮನ ಶಬ್ಧದ ಉಚ್ಚರಣೆಯಿಂದ ಯಾವುದೇ ಲಾಭವಿಲ್ಲ ”

ಓಂ ರಟೋ ಅಂದರೆ ಓಂ ಜಪಿಸಿ ಎಂದು, ಯಾವ ಸಮಯದಲ್ಲಿ ನಾವು ಓಂ ಶಬ್ಧ ಹೇಳುತ್ತೇವೆ ಆಗ ಓಂ ಹೇಳುವ ಅರ್ಥ ಇದಲ್ಲ ಓಂ ಶಬ್ಧದ ಉಚ್ಚರಣೆ ಮಾಡುವುದು, ಕೇವಲ ಓಂ ಎಂದು ಹೇಳುವುದರಿಂದ ಜೀವನದಲ್ಲಿ ಯಾವುದೂ ಲಾಭವಿಲ್ಲ. ಆದರೆ ಓಂನ ಅರ್ಥ ಸ್ವರೂಪದಲ್ಲಿ ಸ್ಥಿತರಾಗುವುದು, ಆ ಓಂ ನ ಅರ್ಥವನ್ನು ತಿಳಿಯುವುದರಿಂದ ಮನುಷ್ಯರಿಗೆ ಆ ಶಾಂತಿ ಪ್ರಾಪ್ತಿಯಾಗುವುದು. ಈಗ ಮನುಷ್ಯರು ಅವಶ್ಯವಾಗಿ ಇಚ್ಚಿಸುತ್ತಾರೆ, ನಮಗೆ ಶಾಂತಿ ಪ್ರಾಪ್ತಿಯಾಗಲಿ ಎಂದು. ಆ ಶಾಂತಿಯ ಸ್ಥಾಪನೆಗಾಗಿ ಬಹಳ ಸಮ್ಮೇಳನ ಮಾಡುತ್ತಾರೆ ಆದರೆ ರಿಸಲ್ಟ್ ಹೀಗೆಯೇ ಕಂಡು ಬರುತ್ತಿದೆ ಯಾವುದು ಇನ್ನೂ ಅಶಾಂತಿ ದುಃಖದ ಕಾರಣವಾಗತ್ತಾ ಹೋಗುವುದು. ಏಕೆಂದರೆ ಮುಖ್ಯ ಕಾರಣವಾಗಿದೆ. ಮನುಷ್ಯಾತ್ಮ ಎಲ್ಲಿಯವರೆಗೆ 5 ವಿಕಾರಗಳನ್ನು ನಷ್ಟ ಮಾಡಿಲ್ಲ. ಅಲ್ಲಿಯವರೆಗೆ ವಿಶ್ವದಲ್ಲಿ ಖಂಡಿತವಾಗಿಯೂ ಶಾಂತಿ ಇರಲು ಸಾಧ್ಯವಿಲ್ಲ. ಆದ್ದರಿಂದ ಮೊದಲು ಪ್ರತಿಯೊಬ್ಬ ಮನುಷ್ಯನು ತಾನು 5 ವಿಕಾರಗಳನ್ನು ತನ್ನ ವಶದಲ್ಲಿಟ್ಟುಕೊಳ್ಳಬೇಕು ಮತ್ತು ತನ್ನ ಆತ್ಮನ ಎಳೆಯನ್ನು ಪರಮಾತ್ಮನ ಜೊತೆ ಜೋಡಿಸ ಬೇಕು ಆಗ ಮಾತ್ರ ಶಾಂತಿಯ ಸ್ಥಾಪನೆಯಾಗುವುದು. ಆದ್ದರಿಂದ ಮನುಷ್ಯ ತಮಗೆ ತಾವು ಕೇಳಿಕೊಳ್ಳಲಿ ನಾನು ನನ್ನ 5 ವಿಕಾರಗಳನ್ನು ನಷ್ಟ ಮಾಡಿರುವೆನಾ ? ಅವುಗಳನ್ನು ಗೆಲ್ಲಲು ಪ್ರಯತ್ನ ಮಾಡಿರುವೆನಾ? ಒಂದುವೇಳೆ ಯಾರಾದರೂ ನಮ್ಮ 5 ವಿಕಾರಗಳನ್ನು ಹೇಗೆ ವಶ ಮಾಡಿಕೊಳ್ಳುವುದು ಎಂದು ಕೇಳಿದರೆ, ಆಗ ಅವರಿಗೆ ಇದೇ ವಿಧಾನವನ್ನು ತಿಳಿಸಿಕೊಡಲಾಗುವುದು ಮೊದಲು ಅವರಿಗೆ ಜ್ಞಾನ ಮತ್ತು ಯೋಗದ ವಾಸ ಧೂಪ ಹಾಕಿಕೊಳ್ಳಿ ಮತ್ತು ಜೊತೆಯಲ್ಲಿ ಪರಮಪಿತ ಪರಮಾತ್ಮನ ಮಹಾವಾಕ್ಯವಿದೆ - ನನ್ನ ಜೊತೆ ಬುದ್ಧಿಯೋಗ ಜೋಡಿಸಿ ನನ್ನ ಬಲ ತೆಗೆದುಕೊಂಡು ಸರ್ವ ಶಕ್ತಿವಾನ್ ಆದ ನಾನು ಪ್ರಭುವನ್ನು ನೆನಪು ಮಾಡುವುದರಿಂದ ವಿಕಾರ ದೂರಾಗುತ್ತಾ ಹೋಗುವುದು. ಈಗ ಇಷ್ಟು ಸಾಧನೆಯ ಅವಶ್ಯಕತೆಯಿದೆ, ಯಾವುದನ್ನು ಖುದ್ದು ಪರಮಾತ್ಮನೇ ಬಂದು ನಮಗೆ ಕಲಿಸುತ್ತಿದ್ದಾರೆ. ಒಳ್ಳೆಯದು. ಓಂ ಶಾಂತಿ.