06.11.2018         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯ ಕೊರಳಿನ ಹಾರವಾಗಲು ಜ್ಞಾನ, ಯೋಗದ ಸ್ಪರ್ಧೆ ಮಾಡಿ, ಇಡೀ ಪ್ರಪಂಚಕ್ಕೆ ತಂದೆಯ ಪರಿಚಯ ನೀಡುವುದೇ ನಿಮ್ಮ ಕರ್ತವ್ಯವಾಗಿದೆ.”

ಪ್ರಶ್ನೆ:
ಸದಾ ಯಾವ ನಶೆಯಲ್ಲಿದ್ದಾಗ ಖಾಯಿಲೆಯೂ ಸಹ ನಿವಾರಣೆಯಾಗುತ್ತದೆ?

ಉತ್ತರ:
ಜ್ಞಾನ ಮತ್ತು ಯೋಗದ ನಶೆಯಲ್ಲಿರಿ, ಈ ಹಳೆಯ ಶರೀರದ ಚಿಂತನೆ ಮಾಡಬೇಡಿ, ಶರೀರದ ಕಡೆ ಬುದ್ಧಿಯು ಎಷ್ಟು ಹೋಗುವುದೋ ಮತ್ತು ಲೋಭವನ್ನಿಟ್ಟುಕೊಳ್ಳುತ್ತೀರೋ ಅಷ್ಟೇ ಖಾಯಿಲೆಯೂ ಬರುವುದು. ಈ ಶರೀರವನ್ನು ಶೃಂಗಾರ ಮಾಡುತ್ತಾ, ಪೌಡರ್, ಕ್ರೀಂ ಮೊದಲಾದುವುಗಳನ್ನು ಉಪಯೋಗಿಸುವುದೆಲ್ಲವೂ ವ್ಯರ್ಥ ಶೃಂಗಾರವಾಗಿದೆ. ನೀವು ನಿಮ್ಮನ್ನು ಜ್ಞಾನ, ಯೋಗದಿಂದ ಶೃಂಗಾರ ಮಾಡಿಕೊಳ್ಳಬೇಕು ಅದೇ ನಿಮ್ಮ ಸತ್ಯ-ಸತ್ಯ ಶೃಂಗಾರವಾಗಿದೆ.

ಗೀತೆ:
ಯಾರು ಪ್ರಿಯತಮನ ಜೊತೆಯಿದ್ದಾರೆಯೋ ಅವರಿಗಾಗಿ ಜ್ಞಾನದ ಮಳೆ..........

ಓಂ ಶಾಂತಿ.
ಯಾರು ತಂದೆಯ ಜೊತೆಯಿದ್ದಾರೆ.... ಈಗ ಪ್ರಪಂಚದಲ್ಲಿ ಬಹಳ ತಂದೆಯರಿದ್ದಾರೆ, ಆದರೆ ಆ ಎಲ್ಲಾ ತಂದೆಯರ ರಚಯಿತ ಒಬ್ಬರೇ ಆಗಿದ್ದಾರೆ. ಅವರೇ ಜ್ಞಾನಸಾಗರನಾಗಿದ್ದಾರೆ. ಪರಮಪಿತ ಪರಮಾತ್ಮ ಜ್ಞಾನಸಾಗರನಾಗಿದ್ದಾರೆ, ಜ್ಞಾನದಿಂದಲೇ ಸದ್ಗತಿಯಾಗುವುದೆಂದು ಅವಶ್ಯವಾಗಿ ತಿಳಿಸಿಕೊಡಬೇಕು. ಸತ್ಯಯುಗದ ಸ್ಥಾಪನೆಯಾದಾಗ ಮನುಷ್ಯರಿಗೆ ಸದ್ಗತಿ ಸಿಗುತ್ತದೆ. ತಂದೆಗೆ ಸದ್ಗತಿದಾತನೆಂದು ಕರೆಯಲಾಗುವುದು. ಯಾವಾಗ ಸಂಗಮದ ಸಮಯವಾಗುವುದೋ ಆಗ ಜ್ಞಾನಸಾಗರ ತಂದೆಯು ಬಂದು ದುರ್ಗತಿಯಿಂದ ಸದ್ಗತಿಗೆ ಕರೆದೊಯ್ಯುತ್ತಾರೆ. ಭಾರತವು ಎಲ್ಲದಕ್ಕಿಂತಲೂ ಪ್ರಾಚೀನವಾಗಿದೆ. ಭಾರತವಾಸಿಗಳ ಹೆಸರಿನ ಮೇಲೆ 84 ಜನ್ಮಗಳ ಗಾಯನವಿದೆ. ಅವಶ್ಯವಾಗಿ ಮೊಟ್ಟ ಮೊದಲು ಯಾವ ಮನುಷ್ಯರು ಬರುತ್ತಾರೆಯೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ದೇವತೆಗಳಿಗೆ 84 ಜನ್ಮಗಳೆಂದು ಹೇಳುವಿರಿ ಅಂದಾಗ ಬ್ರಾಹ್ಮಣರದೂ 84 ಜನ್ಮಗಳಾಗಿವೆ. ಮುಖ್ಯವಾಗಿರುವವರನ್ನು ತೆಗೆದುಕೊಳ್ಳಲಾಗುತ್ತದೆ. ಈ ಮಾತುಗಳು ಯಾರಿಗೂ ಗೊತ್ತಿಲ್ಲ. ಅವಶ್ಯವಾಗಿ ಬ್ರಹ್ಮನ ಮೂಲಕವೇ ಸೃಷ್ಟಿಯನ್ನು ರಚಿಸುತ್ತಾರೆ. ಮೊಟ್ಟ ಮೊದಲು ಸೂಕ್ಷ್ಮಲೋಕವನ್ನು ರಚಿಸಿ ನಂತರ ಸ್ಥೂಲ ಲೋಕವನ್ನು ರಚಿಸಬೇಕು. ಸೂಕ್ಷ್ಮಲೋಕ ಎಲ್ಲಿದೆ? ಸ್ತೂಲ ಲೋಕ ಎಲ್ಲಿದೆ? ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಮೂಲವತನ-ಸೂಕ್ಷ್ಮವತನ-ಸ್ತೂಲವತನ - ಇದನ್ನೇ ತ್ರಿಲೋಕವೆಂದು ಕರೆಯಲಾಗುವುದು. ಯಾವಾಗ ತ್ರಿಲೋಕಿನಾಥನೆಂದು ಕರೆಯುತ್ತೀರಿ ಅದಕ್ಕೆ ಅರ್ಥವೂ ಸಹ ಇರಬೇಕಲ್ಲವೆ. ಯಾವುದಾದರೂ ತ್ರಿಲೋಕವಿರಬೇಕಲ್ಲವೆ. ವಾಸ್ತವದಲ್ಲಿ ತ್ರಿಲೋಕಿನಾಥನೆಂದು ಒಬ್ಬ ತಂದೆಗೆ ಹೇಳಲಾಗುತ್ತದೆ ಹಾಗೂ ಅವರ ಮಕ್ಕಳಿಗೂ ಹೇಳಲಾಗುವುದು. ಇಲ್ಲಂತೂ ಕೆಲವು ಮನುಷ್ಯರ ಹೆಸರನ್ನು ತ್ರಿಲೋಕಿನಾಥ, ಶಿವ, ಬ್ರಹ್ಮಾ, ವಿಷ್ಣು, ಶಂಕರ ಇತ್ಯಾದಿ....... ಈ ಎಲ್ಲಾ ಹೆಸರುಗಳನ್ನು ಭಾರತವಾಸಿಗಳು ತಮಗೆ ಇಟ್ಟುಕೊಂಡಿದ್ದಾರೆ. ಅಲ್ಲದೆ ಹೀಗೆ ಎರಡೆರಡು ಹೆಸರುಗಳನ್ನೂ ಇಟ್ಟುಕೊಂಡಿದ್ದಾರೆ - ರಾಧಾಕೃಷ್ಣ, ಲಕ್ಷ್ಮಿ ನಾರಾಯಣ. ಈಗಂತೂ ರಾಧಾ ಮತ್ತು ಕೃಷ್ಣ ಬೇರೆ-ಬೇರೆಯಾಗಿದ್ದರೆಂದು ಯಾರಿಗೂ ಗೊತ್ತಿಲ್ಲ. ಇಬ್ಬರೂ ಸಹ ಬೇರೆ-ಬೇರೆ ರಾಜ್ಯದ ರಾಜಕುಮಾರ-ರಾಜಕುಮಾರಿಯಾಗಿದ್ದರು. ಈಗ ಇದನ್ನು ನೀವು ತಿಳಿದುಕೊಂಡಿದ್ದೀರಿ. ಯಾರು ಒಳ್ಳೊಳ್ಳೆಯ ಮಕ್ಕಳಿದ್ದಾರೆಯೋ ಅವರ ಬುದ್ಧಿಯಲ್ಲಿ ಈ ಒಳ್ಳೊಳ್ಳೆಯ ಅಂಶಗಳನ್ನು ಧಾರಣೆ ಮಾಡುತ್ತಾರೆ. ಹೇಗೆ ಒಳ್ಳೆಯ ಬುದ್ಧಿವಂತ ವೈದ್ಯನ ಬಳಿ ಬಹಳಷ್ಟು ಔಷಧಿಗಳ ಹೆಸರು ನೆನಪಿರುತ್ತದೆ. ಇಲ್ಲಿಯೂ ಸಹ ಹೊಸ-ಹೊಸ ಜ್ಞಾನದ ಅಂಶಗಳು ಬರುತ್ತಿರುತ್ತದೆ. ದಿನ-ಪ್ರತಿದಿನ ಹೊಸ-ಹೊಸ ಅನ್ವೇಷಣೆಯಾಗುತ್ತಿರುತ್ತದೆ. ಯಾರಿಗೆ ಚೆನ್ನಾಗಿ ಅಭ್ಯಾಸವಿರುತ್ತದೆಯೋ ಅವರು ಹೊಸ-ಹೊಸ ಅಂಶಗಳನ್ನು ಧಾರಣೆ ಮಾಡುತ್ತಿರುತ್ತಾರೆ. ಧಾರಣೆ ಮಾಡದಿದ್ದರೆ ಮಹಾರಥಿಗಳ ಸಾಲಿನಲ್ಲಿ ಬರುವುದಕ್ಕೆ ಆಗುವುದಿಲ್ಲ. ಎಲ್ಲವೂ ಬುದ್ಧಿಯ ಮೇಲೆ ಆಧಾರಿತವಾಗಿದೆ ಹಾಗೂ ಅದೃಷ್ಟದ ಮಾತಾಗಿದೆ. ಇದೂ ಸಹ ನಾಟಕವಲ್ಲವೆ. ನಾಟಕವನ್ನೇ ಯಾರೂ ತಿಳಿದುಕೊಂಡಿಲ್ಲ. ನಾವು ಕರ್ಮ ಕ್ಷೇತ್ರದಲ್ಲಿ ಪಾತ್ರ ಮಾಡುತ್ತಿದ್ದೇವೆಂದು ತಿಳಿಯುತ್ತಾರೆ. ಆದರೆ ನಾಟಕದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳದಿರುವ ಕಾರಣ ಏನೂ ತಿಳಿದುಕೊಂಡಿಲ್ಲವೆಂದರ್ಥ. ನೀವಂತೂ ಎಲ್ಲವನ್ನೂ ತಿಳಿದುಕೊಳ್ಳಬೇಕು.

ತಂದೆಯು ಬಂದಿರುವುದು ಮಕ್ಕಳಿಗೆ ಗೊತ್ತಾದಾಗ ಅನ್ಯರಿಗೆ ತಂದೆಯ ಪರಿಚಯ ಕೊಡುವುದು ಮಕ್ಕಳ ಕರ್ತವ್ಯವಾಗಿದೆ. ಇಡೀ ಪ್ರಪಂಚಕ್ಕೆ ತಿಳಿಸುವುದೂ ಸಹ ಕರ್ತವ್ಯವೇ ಆಗಿದೆ. ಮತ್ತೆ ಯಾರೂ ಸಹ ನಮಗೆ ಗೊತ್ತೇ ಇಲ್ಲವೆಂದು ಹೇಳಬಾರದು. ನಿಮ್ಮ ಬಳಿಗೆ ಅನೇಕರು ಬರುತ್ತಾರೆ. ಬಹಳಷ್ಟು ಪುಸ್ತಕಗಳನ್ನು ಮೊದಲಾದುವುಗಳನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳಿಗೆ ಪ್ರಾರಂಭದಲ್ಲಿ ಬಹಳ ಸಾಕ್ಷಾತ್ಕಾರಗಳಾಗಿವೆ. ಈ ಕ್ರೈಸ್ತ, ಇಬ್ರಾಹಿಂ ಭಾರತದಲ್ಲಿ ಬರುತ್ತಾರೆ. ನಿಜವಾಗಿಯೂ ಭಾರತವು ಎಲ್ಲರನ್ನೂ ಆಕರ್ಷಣೆ ಮಾಡುತ್ತದೆ. ಮೂಲತಃ ಭಾರತವು ಬೇಹದ್ದಿನ ತಂದೆಯ ಜನ್ಮ ಸ್ಥಾನವಾಗಿದೆಯಲ್ಲವೆ. ಆದರೆ ಆ ಜನರು ಭಾರತವು ಭಗವಂತನ ಜನ್ಮ ಸ್ಥಾನವೆಂದು ಸ್ವಲ್ಪವೂ ತಿಳಿದುಕೊಂಡಿಲ್ಲ. ಭಲೇ ಶಿವ ಪರಮಾತ್ಮನೆಂದು ಹೇಳುತ್ತಾರೆ ಆದರೆ ಎಲ್ಲರನ್ನೂ ಪರಮಾತ್ಮನೆಂದು ಹೇಳಿರುವ ಕಾರಣ ಬೇಹದ್ದಿನ ತಂದೆಯ ಮಹತ್ವಿಕೆಯು ಇಲ್ಲದಂತೆ ಮಾಡಿದ್ದಾರೆ. ಈಗ ನೀವು ಮಕ್ಕಳು ತಿಳಿಸಿಕೊಡುತ್ತೀರಿ – ಭಾರತ ಖಂಡವು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ. ಬಾಕಿ ಯಾರೆಲ್ಲಾ ಸಂದೇಶವಾಹಕರು ಮೊದಲಾದವರು ಬರುತ್ತಾರೆ, ಅವರು ಬರುವುದೇ ತಮ್ಮ-ತಮ್ಮ ಧರ್ಮ ಸ್ಥಾಪನೆಯನ್ನು ಮಾಡಲು. ಅವರ ಹಿಂದೆ ಎಲ್ಲಾ ಧರ್ಮದವರು ಬರುತ್ತಾ ಹೋಗುತ್ತಿರುತ್ತಾರೆ. ಈಗ ಅಂತಿಮ ಸಮಯವಾಗಿದೆ, ಹಿಂತಿರುಗಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ನಿಮ್ಮನ್ನು ಇಲ್ಲಿಗೆ ಕರೆದು ತಂದವರು ಯಾರು? ಕ್ರೈಸ್ತನು ಬಂದು ಕ್ರಿಶ್ಚಿಯನ್ ಧರ್ಮವನ್ನು ಸ್ಥಾಪನೆ ಮಾಡಿದರು. ಅವರೇ ನಿಮ್ಮನ್ನು ಆಕರ್ಷಣೆ ಮಾಡಿ ಇಲ್ಲಿಗೆ ಕರೆತಂದರು. ಈಗ ಎಲ್ಲರೂ ಮನೆಗೆ ಹಿಂತಿರುಗಲು ಕಷ್ಟ ಪಡುತ್ತಿದ್ದಾರೆ. ಇದನ್ನು ನೀವು ತಿಳಿಸಿಕೊಡಬೇಕು. ಎಲ್ಲರೂ ತಮ್ಮ ತಮ್ಮ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಪಾತ್ರ ಮಾಡುತ್ತಾ-ಮಾಡುತ್ತಾ ದುಃಖದಲ್ಲಿ ಬರಲೇಬೇಕು. ಆಮೇಲೆ ಆ ದುಃಖದಿಂದ ಬಿಡಿಸಿ ಸುಖದಲ್ಲಿ ಕರೆದುಕೊಂಡು ಹೋಗುವುದು ತಂದೆಯ ಕರ್ತವ್ಯವಾಗಿದೆ. ಭಾರತವು ತಂದೆಯ ಜನ್ಮಸ್ಥಾನವಾಗಿದೆ. ಇದರ ಮಹತ್ವಿಕೆಯನ್ನು ಮಕ್ಕಳಲ್ಲಿಯೂ ಎಲ್ಲರೂ ತಿಳಿದುಕೊಂಡಿಲ್ಲ. ಕೆಲವರು ಮಾತ್ರ ತಿಳಿದುಕೊಂಡಿರುವವರಾಗಿದ್ದು ನಶೆಯಿದೆ. ಕಲ್ಪ-ಕಲ್ಪವೂ ತಂದೆಯು ಭಾರತದಲ್ಲಿಯೇ ಬರುತ್ತಾರೆಂದು ನೀವು ಎಲ್ಲರಿಗೂ ತಿಳಿಸಬೇಕು. ನಿಮಂತ್ರಣವನ್ನೂ ಕೊಡುವಂತಹ ಸೇವೆಯನ್ನು ಮೊದಲು ಮಾಡಬೇಕು. ಅದಕ್ಕಾಗಿ ಸಾಹಿತ್ಯವನ್ನು ತಯಾರು ಮಾಡಬೇಕು. ಏಕೆಂದರೆ ಎಲ್ಲರಿಗೂ ಆಮಂತ್ರಣವನ್ನು ಕೊಡಬೇಕಲ್ಲವೆ. ರಚಯಿತ ಹಾಗೂ ರಚನೆಯ ಜ್ಞಾನವನ್ನು ಯಾರೂ ತಿಳಿದುಕೊಂಡಿಲ್ಲ. ಸೇವಾಧಾರಿಗಳಾಗಿ ತಮ್ಮ ಹೆಸರನ್ನು ಪ್ರಸಿದ್ಧಿ ಮಾಡಬೇಕು. ಯಾವ ಮಕ್ಕಳು ಬಹಳ ಮುಂದೆ ಇದ್ದಾರೆ, ಯಾರ ಬುದ್ಧಿಯಲ್ಲಿ ಜ್ಞಾನದ ಬಹಳ ಅಂಶಗಳು ಇವೆಯೋ ಅವರ ಸಹಾಯವನ್ನು ಎಲ್ಲರೂ ಬಯಸುತ್ತಾರೆ ಅವರ ಹೆಸರನ್ನು ಜಪಿಸುತ್ತಾರೆ. ಮೊದಲು ಶಿವತಂದೆಯ ಹೆಸರನ್ನು ಜಪಿಸುತ್ತಾರೆ ನಂತರ ಬ್ರಹ್ಮಾ ತಂದೆಯನ್ನು ನಂತರ ನಂಬರ್ವಾರ್ ಮಕ್ಕಳನ್ನು. ಭಕ್ತಿಮಾರ್ಗದಲ್ಲಿ ಕೈಯಲ್ಲಿಟ್ಟುಕೊಂಡು ಮಾಲೆಯನ್ನು ತಿರುಗಿಸುತ್ತಾರೆ. ಈಗ ಇಂತಹವರು ಉತ್ತಮ ಸೇವಾಧಾರಿಗಳಾಗಿದ್ದಾರೆ, ನಿರಹಂಕಾರಿಯಾಗಿದ್ದಾರೆ, ಬಹಳ ಮಧುರರಾಗಿದ್ದಾರೆ, ಅವರಿಗೆ ದೇಹಾಭಿಮಾನವಿಲ್ಲವೆಂದು ನೀವು ಮುಖದಿಂದ ಹೆಸರನ್ನು ಜಪ ಮಾಡುತ್ತಾರೆ. ಅವರು ಮಧುರರಾಗಿದ್ದರೆ ಎಲ್ಲರೂ ಮಧುರವಾದ ವ್ಯವಹಾರವನ್ನು ಮಾಡುತ್ತಾರೆಂದು ಹೇಳುತ್ತಾರಲ್ಲವೆ. ತಂದೆಯು ಹೇಳುತ್ತಾರೆ - ನೀವು ದುಃಖಿಗಳಾಗಿದ್ದೀರಿ ಆದಕಾರಣ ನೀವು ನನ್ನನ್ನು ನೆನಪು ಮಾಡಿದರೆ ನಾನು ನಿಮಗೆ ಸಹಯೋಗ ಕೊಡುತ್ತೇನೆ. ನೀವೀಗ ತಿರಸ್ಕಾರ ಮಾಡಿದರೆ ನಾನೇನು ಮಾಡಲಿ ಅಂದರೆ ನಿಮ್ಮ ಮೇಲೆ ನೀವೇ ತಿರಸ್ಕಾರ ಮಾಡಿಕೊಳ್ಳುತ್ತೀರೆಂದರ್ಥ. ಇದರಿಂದ ಪದವಿಯೂ ಸಹ ಸಿಗುವುದಿಲ್ಲ. ಎಷ್ಟೊಂದು ಅಪಾರವಾದ ಧನ ಸಿಗುತ್ತದೆ. ಯಾರಿಗಾದರೂ ಲಾಟರಿ ಸಿಕ್ಕಿದರೆ ಎಷ್ಟೊಂದು ಖುಷಿಯಾಗುತ್ತಾರೆ, ಅದರಲ್ಲಿಯೂ ಎಷ್ಟೊಂದು ಬಹುಮಾನಗಳು ಸಿಗುತ್ತವೆ. ಫಸ್ಟ್.... ಸೆಕೆಂಡ್.... ತರ್ಡ್.. ಬಹುಮಾನವಿರುತ್ತದೆ. ಹಾಗೆಯೇ ಇದು ಸಹ ಈಶ್ವರೀಯ ರೇಸ್ ಆಗಿದೆ. ಇದು ಜ್ಞಾನ, ಯೋಗಬಲದ ರೇಸ್ ಆಗಿದೆ. ಯಾರು ಈ ರೇಸ್ನಲ್ಲಿ ಮುಂದೆಯಿದ್ದಾರೆಯೋ ಅವರೇ ಕೊರಳಿನ ಹಾರವಾಗುತ್ತಾರೆ ಹಾಗೂ ಸಿಂಹಾಸನದಲ್ಲಿ ಸಮೀಪದಲ್ಲಿ ಕುಳಿತುಕೊಳ್ಳುತ್ತಾರೆ. ಬಹಳ ಸಹಜವಾದ ತಿಳುವಳಿಕೆಯನ್ನೇನೋ ಕೊಡುತ್ತಾರೆ. ನೀವು ನಿಮ್ಮ ಮನೆಯನ್ನೂ ಸಂಭಾಲನೆ ಮಾಡಿ ಏಕೆಂದರೆ ನೀವು ಕರ್ಮಯೋಗಿಗಳಾಗಿದ್ದೀರಿ. ಮುರುಳಿಯ ಕ್ಲಾಸಿನಲ್ಲಿ ಒಂದು ಗಂಟೆ ಓದಿ ನಂತರ ಮನೆಗೆ ಹೋಗಿ ಅದರ ವಿಚಾರ ಮಾಡಬೇಕು. ಶಾಲೆಯಲ್ಲಿಯೂ ಸಹ ಇದೇ ರೀತಿ ಮಾಡುತ್ತಾರಲ್ಲವೆ. ಓದಿ ನಂತರ ಮನೆಗೆ ಹೋಗಿ ಹೋಂವರ್ಕ್ (ಮನೆಗೆಲಸ) ಮಾಡುತ್ತಾರೆ. ತಂದೆಯು ಹೇಳುತ್ತಾರೆ - ಒಂದು ಘಳಿಗೆ, ಅರ್ಧ ಘಳಿಗೆ, ದಿನದಲ್ಲಿ 8 ಘಳಿಗೆಗಳು ಇರುತ್ತವೆ. ಅದರಲ್ಲಿ ತಂದೆಯು ಹೇಳುತ್ತಾರೆ - ಒಂದು ಘಳಿಗೆ, ಒಳ್ಳೆಯದು ಅರ್ಧ ಘಳಿಗೆ ಅಂದರೆ 15-20 ನಿಮಿಷಗಳಾದರೂ ಹಾಜರಾಗಿ, ಧಾರಣೆ ಮಾಡಿ ನಂತರ ತಮ್ಮ ವ್ಯಾಪಾರ-ವ್ಯವಹಾರದಲ್ಲಿ ತೊಡಗಿ. ಮೊದಲು ತಂದೆಯು ನಿಮ್ಮನ್ನು ನೆನಪಿನಲ್ಲಿ ಕುಳ್ಳರಿಸಿ, ಸ್ವದರ್ಶನ ಚಕ್ರವನ್ನು ತಿರುಗಿಸುವಂತೆ ಹೇಳುತ್ತಿದ್ದರು. ನೆನಪಿನ ಹೆಸರಂತೂ ಇತ್ತಲ್ಲವೆ. ತಂದೆ ಹಾಗೂ ಆಸ್ತಿಯನ್ನು ನೆನಪು ಮಾಡುತ್ತಾ-ಮಾಡುತ್ತಾ, ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ-ತಿರುಗಿಸುತ್ತಾ ನಿದ್ರೆ ಬಂದರೆ ನಿದ್ರೆ ಮಾಡಿ. ನಂತರ ಅಂತಮತಿ ಸೋಗತಿ ಆಗುತ್ತದೆ. ಆಗ ಬೆಳಗ್ಗೆ ಎದ್ದಾಗ ಅದೇ ಜ್ಞಾನ ಅಂಶಗಳು ನೆನಪಿಗೆ ಬರುತ್ತಿರುತ್ತವೆ. ಹೀಗೆ ಅಭ್ಯಾಸ ಮಾಡುತ್ತಾ-ಮಾಡುತ್ತಾ ನೀವು ನಿದ್ರೆಯನ್ನು ಗೆಲ್ಲುವವರಾಗಿ ಬಿಡುತ್ತೀರಿ.

ಯಾರು ಮಾಡುತ್ತಾರೆಯೋ ಅವರು ಪಡೆದುಕೊಳ್ಳುತ್ತಾರೆ. ಮಾಡುವಂತಹವರನ್ನು ನೋಡಿ ತಿಳಿದುಕೊಳ್ಳಬಹುದು. ಅವರ ಚಲನೆಯಿಂದ ಪ್ರತ್ಯಕ್ಷವಾಗುತ್ತದೆ. ಮಾಡದೇ ಇರುವಂತಹವರ ಚಲನೆಯೇ ಬೇರೆಯಾಗಿರುತ್ತದೆ. ಈ ಮಗು ವಿಚಾರ ಸಾಗರ ಮಂಥನ ಮಾಡುತ್ತಾ ಧಾರಣೆ ಮಾಡುತ್ತಾರೆ, ಇವರಲ್ಲಿ ಯಾವುದೇ ಲೋಭ ಮೊದಲಾದುವುಗಳು ಯಾವುದೂ ಇಲ್ಲವೇ ಎಂದು ನೋಡಲಾಗುತ್ತದೆ. ಇದಂತೂ ಹಳೆಯ ಶರೀರವಾಗಿದೆ. ಈ ಶರೀರವೂ ಸಹ ಜ್ಞಾನ, ಯೋಗದ, ಧಾರಣೆಯ ಮೇಲೆ ಚೆನ್ನಾಗಿರುತ್ತದೆ. ಧಾರಣೆಯಾಗದೇ ಇದ್ದರೆ ಈ ಶರೀರವು ಇನ್ನೂ ಶಕ್ತಿಹೀನವಾಗುತ್ತದೆ. ಹೊಸ ಶರೀರವಂತೂ ಭವಿಷ್ಯದಲ್ಲಿ ಸಿಗುವುದಾಗಿದೆ. ಆತ್ಮವನ್ನು ಪವಿತ್ರ ಮಾಡಿಕ್ಕೊಳ್ಳಬೇಕು. ಇದಂತೂ ಹಳೆಯ ಶರೀರವಾಗಿದೆ, ಇದಕ್ಕೆ ಎಷ್ಟೇ ಪೌಡರ್, ಲಿಫ್ಸ್ಟಿಕ್ ಮೊದಲಾದುವುಗಳನ್ನು ಹಾಕಿ ಶೃಂಗಾರ ಮಾಡಿದರೂ ಸಹ ನಯಾಪೈಸೆಗೂ ಬೆಲೆ ಬಾಳುವುದಿಲ್ಲ. ಈ ಶೃಂಗಾರವೆಲ್ಲವೂ ವ್ಯರ್ಥವಾಗಿದೆ.

ಈಗ ನಿಮ್ಮೆಲ್ಲರ ನಿಶ್ಚಿತಾರ್ಥವು ಶಿವ ತಂದೆಯ ಜೊತೆಗೆ ಆಗಿದೆ. ಯಾವಾಗ ವಿವಾಹವಾಗುತ್ತದೆಯೋ ಆ ದಿನ ಹಳೆಯ ವಸ್ತ್ರಗಳನ್ನು ಧರಿಸುತ್ತಾರೆ. ಈಗ ಈ ಶರೀರಕ್ಕೆ ಶೃಂಗಾರ ಮಾಡಬಾರದು. ಜ್ಞಾನ-ಯೋಗದಿಂದ ನಿಮ್ಮನ್ನು ಶೃಂಗರಿಸಿಕೊಂಡರೆ ನಂತರ ಭವಿಷ್ಯದಲ್ಲಿ ರಾಜಕುಮಾರ-ರಾಜಕುಮಾರಿಯಾಗುತ್ತೀರಿ. ಇದು ಜ್ಞಾನ ಮಾನಸ ಸರೋವರವಾಗಿದೆ. ಈ ಜ್ಞಾನ ಸರೋವರದಲ್ಲಿ ಮುಳುಗಿದರೆ ನೀವು ಸ್ವರ್ಗದ ದೇವತೆಗಳಾಗುತ್ತೀರಿ. ಪ್ರಜೆಗಳಿಗೆ ದೇವತೆಗಳೆಂದು ಹೇಳುವುದಿಲ್ಲ. ಕೃಷ್ಣನ ಹಿಂದೆ ಗೋಪಿಕೆಯರು ಓಡುತ್ತಿದ್ದರು, ಅವರನ್ನು ಮಹಾರಾಣಿ, ಪಟ್ಟದ ರಾಣಿಯರನ್ನಾಗಿ ಮಾಡಿದನೆಂದು ಹೇಳುತ್ತಾರೆ. ಆದರೆ ಅವರನ್ನು ಪ್ರಜೆ, ಚಂಡಾಲರನ್ನಾಗಿ ಮಾಡಿದರೆಂದು ಹೇಳುವುದಿಲ್ಲ. ಮಹಾರಾಜ-ಮಹಾರಾಣಿಯಾಗಿ ಮಾಡಲು ಓಡಿಸಿಕೊಂಡು ಹೋಗಿರಬೇಕು. ನೀವೂ ಸಹ ಪುರುಷಾರ್ಥ ಮಾಡಬೇಕು. ಯಾವ ಪದವಿ ಸಿಕ್ಕಿದರೂ ಅದೇ ಸಾಕೆಂದು ತಿಳಿಯಬಾರದು. ಇಲ್ಲಿ ವಿದ್ಯೆ ಮುಖ್ಯವಾಗಿದೆ. ಇದು ಪಾಠಶಾಲೆಯಾಗಿದೆಯಲ್ಲವೆ. ತುಂಬಾ ಗೀತಾ ಪಾಠಶಾಲೆಗಳನ್ನು ತೆರೆಯುತ್ತಾರೆ, ಅಲ್ಲಿ ಕೇವಲ ಗೀತೆಯನ್ನು ಹೇಳುತ್ತಾರೆ, ಕಂಠಪಾಠ ಮಾಡಿಸುತ್ತಾರೆ. ಯಾವುದಾದರೂ ಒಂದು ಶ್ಲೋಕವನ್ನು ತೆಗೆದುಕೊಂಡು ಅದನ್ನು ಅರ್ಧ ಮುಕ್ಕಾಲು ಗಂಟೆ ಹೇಳುತ್ತಾರೆ. ಆದರೆ ಇದರಿಂದ ಯಾವುದೇ ಲಾಭ ಸಿಗುವುದಿಲ್ಲ. ಇಲ್ಲಿಯಾದರೂ ತಂದೆಯೇ ಕುಳಿತು ತಿಳಿಸುತ್ತಾರೆ. ಗುರಿ-ಉದ್ದೇಶವೂ ಸ್ಪಷ್ಟವಾಗಿದೆ. ಆದರೆ ಯಾವುದೇ ವೇದ-ಶಾಸ್ತ್ರ ಮುಂತಾದುವುಗಳನ್ನು ಮಾಡುವುದರಲ್ಲಿ ಯಾವುದೆ ಗುರಿ-ಉದ್ದೇಶವಿಲ್ಲ. ಆದರೆ ಸುಮ್ಮನೆ ಕುಳಿತು ಮಾಡುತ್ತಾರೆ. ಅದರಿಂದ ಏನೂ ಸಿಗುವುದಿಲ್ಲ. ಯಾವಾಗ ತುಂಬಾ ಭಕ್ತಿ ಮಾಡುತ್ತಾರೆಯೋ ಆಗ ಭಗವಂತ ಸಿಗುತ್ತಾರೆ. ರಾತ್ರಿಯ ನಂತರ ಅವಶ್ಯವಾಗಿ ಹಗಲು ಬರುತ್ತದೆ. ಎಲ್ಲವೂ ಸಮಯಕ್ಕನುಗುಣವಾಗಿ ಆಗುತ್ತದೆಯಲ್ಲವೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಾರೆ. ಒಂದುವೇಳೆ ಅವರಿಗೆ ಇದು ಸರಿಯಿಲ್ಲವೆಂದು ಹೇಳಿದರೆ ಶಾಸ್ತ್ರಗಳು ಹೇಗೆ ಸುಳ್ಳಾಗುತ್ತವೆ ಎಂದು ಹೇಳುತ್ತಾರೆ. ಭಗವಂತನು ಸುಳ್ಳು ಹೇಳುತ್ತಾರೇನು? ಆದರೆ ತಿಳಿಸಿಕೊಡಲು ಶಕ್ತಿ ಬೇಕಾಗಿದೆ. ನೀವು ಮಕ್ಕಳಲ್ಲಿ ಯೋಗಬಲ ಬೇಕಾಗಿದೆ, ಯೋಗಬಲದಿಂದ ಎಲ್ಲಾ ಕಾರ್ಯಗಳು ಸಹಜವಾಗಿ ಬಿಡುತ್ತದೆ. ಯಾವುದಾದರೂ ಕಾರ್ಯವನ್ನು ಮಾಡಲು ಸಾಧ್ಯವಿಲ್ಲವೆಂದರೆ ಶಕ್ತಿ ಕಡಿಮೆಯಿದೆ, ಯೋಗವಿರುವುದಿಲ್ಲ. ಒಮ್ಮೊಮ್ಮೆ ತಂದೆಯು ಸಹಯೋಗ ಕೊಡುತ್ತಾರೆ. ನಾಟಕದಲ್ಲಿ ಏನಿದೆಯೋ ಅದು ಪುನರಾವರ್ತನೆಯಾಗುತ್ತದೆ. ಇದನ್ನು ನಾವು ಮಾತ್ರ ತಿಳಿದುಕೊಂಡಿದ್ದೇವೆ, ಈ ನಾಟಕವನ್ನು ಬೇರೆ ಯಾರೂ ತಿಳಿದುಕೊಂಡಿಲ್ಲ. ನಂತರದ ಒಂದು ಘಳಿಗೆ ಏನು ಕಳೆಯುತ್ತದೆಯೋ ಅದು ಟಿಕ್ ಟಿಕ್ ಎಂದು ಮುಂದುವರೆಯುತ್ತಿರುತ್ತದೆ. ನಾವು ಶ್ರೀಮತದಂತೆ ಕರ್ಮದಲ್ಲಿ ಬರುತ್ತೇವೆ. ಶ್ರೀ ಮತದಂತೆ ನಡೆಯದೇ ಇದ್ದಾಗ ಹೇಗೆ ಶ್ರೇಷ್ಠರಾಗುತ್ತೀರಿ. ಎಲ್ಲರೂ ಒಂದೇ ರೀತಿಯಾಗಿ ಇರಲು ಸಾಧ್ಯವಿಲ್ಲ. ಪ್ರಪಂಚದವರು ನಾವೆಲ್ಲ ಒಂದಾಗಬೇಕೆಂದು ತಿಳಿದುಕೊಳ್ಳುತ್ತಾರೆ. ಆ ಏಕತೆಯ ಅರ್ಥವನ್ನು ತಿಳಿದುಕೊಂಡಿಲ್ಲ. ಯಾವುದು ಒಂದಾಗಬೇಕಾಗಿದೆ? ಎಲ್ಲರೂ ಒಬ್ಬ ತಂದೆಯಾಗಬೇಕಾಗಿದೆಯೋ ಅಥವಾ ಎಲ್ಲರೂ ಸಹೋದರರಾಗಬೇಕಾಗಿದೆಯೋ? ಸಹೋದರರೆಂದು ಹೇಳುವುದು ಸರಿಯಿದೆ. ಶ್ರೀ ಮತದಂತೆ ನಾವು ಒಂದಾಗಬಹುದು. ನೀವೆಲ್ಲರೂ ಒಂದೇ ಮತದಂತೆ ನಡೆಯುತ್ತೀರಿ. ನಿಮ್ಮ ತಂದೆ, ಶಿಕ್ಷಕ, ಗುರು ಒಬ್ಬರೇ ಆಗಿದ್ದಾರೆ. ಯಾರು ಪೂರ್ತಿ ಶ್ರೀ ಮತದಂತೆ ನಡೆಯುವುದಿಲ್ಲವೋ ಅವರು ಶ್ರೇಷ್ಠರಾಗುವುದಿಲ್ಲ. ಸ್ವಲ್ಪವೂ ಸಹ ಶ್ರೀಮತದಂತೆ ನಡೆಯದೇ ಇರುವವರು ಸಮಾಪ್ತಿಯಾಗಿ ಬಿಡುತ್ತಾರೆ. ಸ್ಪರ್ಧೆಯಲ್ಲಿ ಯೋಗ್ಯರಾಗಿರುವವರು ಮಾತ್ರ ಭಾಗವಹಿಸುತ್ತಾರೆ. ಯಾವುದಾದರೂ ಸ್ಪರ್ಧೆಯಾದಾಗ ಉತ್ತಮ, ಫಸ್ಟ್ ಕ್ಲಾಸ್ ಒಳ್ಳೊಳ್ಳೆಯ ಕುದುರೆಗಳನ್ನು ಬಿಡುತ್ತಾರೆ. ಅದಕ್ಕೆ ದೊಡ್ಡ ಬಹುಮಾನವನ್ನೂ ಇಡುತ್ತಾರೆ. ಇದೂ ಸಹ ಕುದುರೆಯ ರೇಸ್ ಆಗಿದೆ. ಹುಸೇನ್ನ ಕುದುರೆ ಎಂದು ಹೇಳುತ್ತಾರಲ್ಲವೆ. ಅವರು ಹುಸೇನ್ನ ಕುದುರೆಯನ್ನು ಯುದ್ಧದಲ್ಲಿ ತೋರಿಸಿದ್ದಾರೆ. ಈಗ ನೀವು ಮಕ್ಕಳು ಡಬಲ್ ಅಹಿಂಸಕರಾಗಿದ್ದೀರಿ. ಕಾಮವು ನಂಬರ್ವನ್ ಹಿಂಸೆಯಾಗಿದೆ. ಈ ಹಿಂಸೆಯನ್ನು ಯಾರೂ ತಿಳಿದುಕೊಂಡಿಲ್ಲ, ಸನ್ಯಾಸಿಗಳೂ ಸಹ ತಿಳಿದುಕೊಂಡಿಲ್ಲ ಕೇವಲ ಇದು ವಿಕಾರವೆಂದು ಹೇಳಿ ಬಿಡುತ್ತಾರೆ. ತಂದೆಯು ಹೇಳುತ್ತಾರೆ – ಕಾಮ ಮಹಾಶತ್ರುವಾಗಿದೆ, ಇದೇ ನಿಮಗೆ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ನಿಮ್ಮದು ಹಠಯೋಗವಾಗಿದೆ, ನಮ್ಮದು ಪ್ರವೃತ್ತಿ ಮಾರ್ಗದ ರಾಜಯೋಗವಾಗಿದೆ ಎಂದು ಸಿದ್ಧ ಮಾಡಿ ತೋರಿಸಬೇಕು. ನೀವು ಶಂಕರಾಚಾರ್ಯರಿಂದ ಹಠಯೋಗವನ್ನು ಕಲಿಯುತ್ತೀರಿ, ನಾವು ಶಿವಾಚಾರ್ಯನಿಂದ ರಾಜಯೋಗವನ್ನು ಕಲಿಯುತ್ತೇವೆ. ಇಂತಹ ಮಾತುಗಳನ್ನು ಸಮಯದಲ್ಲಿ ಹೇಳಬೇಕಾಗಿದೆ. ಕೆಲವರು ನಿಮ್ಮನ್ನು ಈ ರೀತಿ ಕೇಳುತ್ತಾರೆ - ದೇವತೆಗಳಿಗೆ 84 ಜನ್ಮಗಳಾದರೆ ಕ್ರಿಶ್ಚಿಯನ್ ಮೊದಲಾದವರಿಗೆ ಎಷ್ಟು ಜನ್ಮಗಳಿವೆ? ಆಗ ನೀವೇ ಲೆಕ್ಕ ಮಾಡಿ ಎಂದು ಹೇಳಿ. 5000 ವರ್ಷಗಳಲ್ಲಿ 84 ಜನ್ಮಗಳಾಗುತ್ತವೆ. ಕ್ರೈಸ್ತನಿಗೆ 2000 ವರ್ಷಗಳಾಯಿತು. ಸರಾಸರಿ ಎಷ್ಟು ಜನ್ಮಗಳಿವೆಯೆಂದು ನೀವೇ ಲೆಕ್ಕ ಮಾಡಿ. 30-32 ಜನ್ಮಗಳಿರಬೇಕು. ಇದಂತೂ ಸ್ಪಷ್ಟವಾಗಿದೆ. ಯಾರು ತುಂಬಾ ಸುಖವನ್ನು ನೋಡುತ್ತಾರೆಯೋ ಅವರೇ ತುಂಬಾ ದುಃಖವನ್ನೂ ನೋಡುತ್ತಾರೆ. ಅವರಿಗೆ ಸುಖವೂ ಕಡಿಮೆ, ದುಃಖವೂ ಕಡಿಮೆ ಸಿಗುತ್ತದೆ. ಸರಾಸರಿ ಲೆಕ್ಕವನ್ನು ತೆಗೆಯಬೇಕು. ಕೊನೆಯಲ್ಲಿ ಬರುವವರು ಸ್ವಲ್ಪ-ಸ್ವಲ್ಪ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಬುದ್ಧ, ಇಬ್ರಾಹಿಂ ಲೆಕ್ಕವನ್ನೂ ತೆಗೆಯಬಹುದು. ಹೆಚ್ಚು ಕಡಿಮೆ 1-2 ಜನ್ಮಗಳ ವ್ಯತ್ಯಾಸವಿರುತ್ತದೆ. ಈ ಎಲ್ಲಾ ಮಾತುಗಳನ್ನು ವಿಚಾರಸಾಗರ ಮಂಥನ ಮಾಡಬೇಕು. ಯಾರಾದರೂ ಕೇಳಿದರೆ ಏನು ತಿಳಿಸಬೇಕು? ಮೊದಲು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ ಎಂದು ಹೇಳಿ. ನೀವು ತಂದೆಯನ್ನು ನೆನಪು ಮಾಡಿ. ಎಷ್ಟು ಜನ್ಮಗಳು ತೆಗೆದುಕೊಳ್ಳಬೇಕಾಗಿದೆಯೋ ಅಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ತಂದೆಯಿಂದ ಮೊದಲು ಆಸ್ತಿಯನ್ನು ತೆಗೆದುಕೊಳ್ಳಿ. ಹೀಗೆ ಚೆನ್ನಾಗಿ ತಿಳಿಸಿಕೊಡಬೇಕು. ಇದು ಪರಿಶ್ರಮದ ಕಾರ್ಯವಾಗಿದೆ. ಪರಿಶ್ರಮದಿಂದಲೇ ಪೂರ್ಣ ಸಫಲತೆಯನ್ನು ಪಡೆಯುತ್ತೀರಿ. ಇದಕ್ಕೆ ಪೂರ್ಣ ವಿಶಾಲಬುದ್ಧಿ ಬೇಕಾಗಿದೆ. ತಂದೆಯೊಂದಿಗೆ ಹಾಗೂ ತಂದೆಯ ಜ್ಞಾನ ಧನದೊಂದಿಗೆ ಬಹಳ ಪ್ರೀತಿಯಿರಬೇಕು. ಕೆಲವರಂತೂ ಜ್ಞಾನ ಧನವಂತೂ ತೆಗೆದುಕೊಳ್ಳುವುದೇ ಇಲ್ಲ. ಅರೆ! ಜ್ಞಾನ ರತ್ನಗಳನ್ನು ಧಾರಣೆ ಮಾಡಿ. ಆದರೆ ನಾವೇನು ಮಾಡಲಿ? ನಮಗೆ ತಿಳಿಯುತ್ತಿಲ್ಲ. ನಿಮಗೆ ತಿಳಿಯುತ್ತಿಲ್ಲವೆಂದರೆ ನಿಮ್ಮ ಪಾತ್ರವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಯಾರೊಂದಿಗೂ ತಿರಸ್ಕಾರ ಮಾಡಬಾರದು. ಎಲ್ಲರೊಂದಿಗೆ ಮಧುರ ವ್ಯವಹಾರವನ್ನು ಮಾಡಬೇಕು, ಜ್ಞಾನ-ಯೋಗದಲ್ಲಿ ರೇಸ್ ಮಾಡಿ, ತಂದೆಯ ಕೊರಳಿನ ಹಾರವಾಗಬೇಕು.

2. ನಿದ್ರೆಯನ್ನು ಗೆಲ್ಲುವವರಾಗಿ. ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡಬೇಕು. ಸ್ವದರ್ಶನ ಚಕ್ರವನ್ನು ತಿರುಗಿಸಬೇಕಾಗಿದೆ. ಏನು ಹೇಳುತ್ತಾರೋ ಅದರ ಕುರಿತು ವಿಚಾರಸಾಗರ ಮಂಥನ ಮಾಡುವ ಅಭ್ಯಾಸ ಮಾಡಬೇಕಾಗಿದೆ.

ವರದಾನ:
ಸದಾ ಸುರಕ್ಷತೆಯ ಗೆರೆಯ ಒಳಗೆ ಪರಮಾತ್ಮನ ಛತ್ರಛಾಯೆಯ ಅನುಭವ ಮಾಡುವಂತಹ ಮಾಯಾಜೀತ್ ಭವ.

“ತಂದೆ ಮತ್ತು ನಾವು” ಇದೇ ಸುರಕ್ಷತೆಯ ಗೆರೆಯಾಗಿದೆ. ಈ ಗೆರೆಯೇ ಪರಮಾತ್ಮನ ಛತ್ರಛಾಯೆಯಾಗಿದೆ. ಯಾರು ಈ ಛತ್ರಛಾಯೆಯ ಗೆರೆಯ ಒಳಗೆ ಇದ್ದಾರೆ ಅವರ ಬಳಿ ಮಾಯೆ ಬರುವ ಸಾಹಸ ಸಹಾ ಮಾಡಲು ಸಾಧ್ಯವಿಲ್ಲ. ನಂತರ ಪರಿಶ್ರಮ ಏನಾಗುವುದು, ಎಲ್ಲಿ ತಡೆಯಾಗುವುದು, ವಿಘ್ನ ಏನಾಗಿದೆ - ಈ ಎಲ್ಲಾ ಶಭ್ಧಗಳಿಂದ ಅವಿಧ್ಯ ಆಗಿ ಬಿಡುವಿರಿ. ಸದಾ ಸುರಕ್ಷಿತವಾಗಿರುವಿರಿ, ತಂದೆಯನ್ನು ಹೃದಯದಲ್ಲಿ ಸಮಾವೇಶವಾಗಿರುತ್ತಾರೆ - ಇದೇ ಎಲ್ಲಕ್ಕಿಂತಲೂ ಸಹಜ ಮತ್ತು ತೀವ್ರ ಗತಿಯಲ್ಲಿ ಹೋಗಲು ಅಥವಾ ಮಾಯಾಜೀತ್ ಆಗುವ ಪುರುಷಾರ್ಥವಾಗಿದೆ.

ಸ್ಲೋಗನ್:
ದಿವ್ಯ ಗುಣಗಳ ಸರ್ವ ಅಲಂಕಾರಗಳಿಂದ ಅಲಂಕೃತರಾಗಿದ್ದಾಗ ಅಹಂಕಾರ ಬರಲು ಸಾಧ್ಯವಿಲ್ಲ.