04.11.18       Avyakt Bapdada      Kannada Murli      24.02.84      Om Shanti     Madhuban


" ಬ್ರಾಹ್ಮಣ ಜನ್ಮ - ಅವತರಿತ ಜನ್ಮ"


ಬಾಪ್ದಾದಾರವರು ಶಬ್ಧದಲ್ಲಿ ಬರುತ್ತಾ ಎಲ್ಲರನ್ನೂ ಶಬ್ಧದಿಂದ ದೂರದ ಸ್ಥಿತಿಯಲ್ಲಿ ಕರೆದುಕೊಂಡು ಹೋಗುವುದಕ್ಕಾಗಿ, ಅವ್ಯಕ್ತರನ್ನಾಗಿ ಮಾಡುವುದಕ್ಕಾಗಿ ವ್ಯಕ್ತ ದೇಶದಲ್ಲಿ ವ್ಯಕ್ತ ಶರೀರದಲ್ಲಿ ಪ್ರವೇಶವಾಗುತ್ತಾರೆ. ಸದಾ ತಮ್ಮನ್ನು ಅವ್ಯಕ್ತ ಸ್ಥಿತಿಯಿರುವ ಸೂಕ್ಷ್ಮ ಫರಿಸ್ಥೆಯೆಂದು ತಿಳಿದುಕೊಂಡು ವ್ಯಕ್ತ ದೇಹದಲ್ಲಿ ಅವತರಿತರಾಗುತ್ತೀರಾ? ಎಲ್ಲರೂ ಅವತರಿತವಾಗಿರುವ ಅವತಾರರಾಗಿದ್ದೀರಿ - ಸದಾ ಇದೇ ಸ್ಮೃತಿಯಲ್ಲಿದ್ದು, ಪ್ರತೀ ಕರ್ಮವನ್ನು ಮಾಡುತ್ತಾ, ಕರ್ಮದ ಬಂಧನಗಳಿಂದ ಮುಕ್ತವಾಗಿದ್ದು ಕರ್ಮಾತೀತ ಅವತಾರರಾಗಿದ್ದೀರಿ. ಅವತಾರ ಅರ್ಥಾತ್ ಶ್ರೇಷ್ಠ ಕರ್ಮಕ್ಕಾಗಿ ಮೇಲಿಂದ ಕೆಳಗೆ ಬರುವುದು. ತಾವೆಲ್ಲರೂ ಸಹ ಶ್ರೇಷ್ಠವಾದ ಸ್ಥಿತಿಯಿಂದ ಕೆಳಗೆ ಅರ್ಥಾತ್ ದೇಹದ ಆಧಾರವನ್ನು ತೆಗೆದುಕೊಂಡು, ಸೇವೆಯ ಪ್ರತಿ ಕರ್ಮವನ್ನು ಮಾಡುವುದಕ್ಕಾಗಿ ಹಳೆಯ ದೇಹದಲ್ಲಿ, ಹಳೆಯ ಜಗತಿನಲ್ಲಿ ಬರುತ್ತೀರಿ. ಆದರೆ ಸ್ಥಿತಿಯು ಶ್ರೇಷ್ಠವಾಗಿರುವುದೇ (ಮೇಲಿನದೇ) ಇರುತ್ತದೆ ಆದ್ದರಿಂದ ಅವತಾರರಾಗಿದ್ದೀರಿ. ಅವತಾರನು ಸದಾ ಪರಮಾತ್ಮನ ಸಂದೇಶವನ್ನು ತೆಗೆದುಕೊಂಡು ಬರುತ್ತಾನೆ. ತಾವೆಲ್ಲರೂ ಸಂಗಮಯುಗೀ ಶ್ರೇಷ್ಠಾತ್ಮರೂ ಸಹ ಪರಮಾತ್ಮನ ಸಂದೇಶವನ್ನು ಕೊಡುವುದಕ್ಕಾಗಿ, ಪರಮಾತ್ಮನ ಮಿಲನವನ್ನು ಮಾಡಿಸುವುದಕ್ಕಾಗಿ ಅವತರಣೆಯಾಗಿರುವವರಾಗಿದ್ದೀರಿ. ಈ ದೇಹವೀಗ ತಮ್ಮ ದೇಹವಾಗಿಲ್ಲ. ದೇಹವನ್ನೂ ತಂದೆಗೆ ಕೊಟ್ಟು ಬಿಟ್ಟಿರುವಿರಿ. ಎಲ್ಲವೂ ನಿನ್ನದೆಂದು ಹೇಳಿದಿರಿ ಅರ್ಥಾತ್ ನನ್ನದೇನೂ ಇಲ್ಲ. ಈ ದೇಹವನ್ನು ತಂದೆಯವರು ಸೇವಾರ್ಥವಾಗಿ ಲೋನ್ನಲ್ಲಿ ಕೊಟ್ಟಿದ್ದಾರೆ. ಲೋನ್ನಲ್ಲಿ ಸಿಕ್ಕಿರುವ ವಸ್ತುವಿನ ಮೇಲೆ ನನ್ನದೆನ್ನುವ ಅಧಿಕಾರವಾಗಲು ಸಾಧ್ಯವಿಲ್ಲ. ಯಾವಾಗ ನನ್ನ ದೇಹವಲ್ಲ ಅಂದಮೇಲೆ ದೇಹದ ಪರಿವೆಯಲ್ಲಿ ಬರುವುದಾದರೂ ಹೇಗೆ ಸಾಧ್ಯ! ಆತ್ಮವೇ ತಂದೆಯದಾಗಿ ಬಿಟ್ಟಿತು, ದೇಹವೂ ತಂದೆಯದಾಯಿತು ಮತ್ತು ನನ್ನದೆಲ್ಲಿಂದ ಬಂದಿತು! ನಾನು ಎಂದರೆ ಕೇವಲ ಒಂದು ಬೇಹದ್ದಿನಲ್ಲಿರುವವನು - "ನಾನು ತಂದೆಯವನಾಗಿದ್ದೇನೆ" ಅಷ್ಟೇ, ತಂದೆಯಂತೆ ನಾನು ಮಾಸ್ಟರ್ ಆಗಿರುವೆನು. ಅಂದಮೇಲೆ ಈ ಬೇಹದ್ದಿನ ನನ್ನದಿದೆ. ಅಲ್ಪಕಾಲದ ನನ್ನದೆನ್ನುವುದು ವಿಘ್ನಗಳಲ್ಲಿ ಕರೆ ತರುತ್ತದೆ, ಬೇಹದ್ದಿನ ನನ್ನದೆನ್ನುವುದು ನಿರ್ವಿಘ್ನ, ವಿಘ್ನ ವಿನಾಶಕನನ್ನಾಗಿ ಮಾಡುತ್ತದೆ. ಇದೇ ರೀತಿಯಲ್ಲಿ ಅಲ್ಪಕಾಲದ ನನ್ನದೆನ್ನುವುದು ನನ್ನದು-ನನ್ನದು ಎನ್ನುವ ತಿರುಗಾಟದಲ್ಲಿ ಕರೆ ತರುತ್ತದೆ ಮತ್ತು ಬೇಹದ್ದಿನ ನನ್ನದೆನ್ನುವುದು ಜನ್ಮಗಳ ತಿರುಗಾಟದಿಂದಲೇ ಮುಕ್ತಗೊಳಿಸುತ್ತದೆ.

ಬೇಹದ್ದಿನ ನನ್ನತನವಾಗಿದೆ - "ನನ್ನ ಬಾಬಾ". ಇದರಿಂದ ಅಲ್ಪಕಾಲದರಿಂದ ಮುಕ್ತರಾಗಿ ಬಿಟ್ಟಿರಲ್ಲವೆ. ಅವತಾರನಾಗಿ ದೇಹದ ಆಧಾರವನ್ನು ತೆಗೆದುಕೊಂಡು ಸೇವೆಯ ಕರ್ಮದಲ್ಲಿ ಬನ್ನಿರಿ. ತಂದೆಯವರು ಲೋನ್ ಅಂದರೆ ಕೊಡುಗೆಯಾಗಿ ಸೇವಾರ್ಥವಾಗಿ ಕೊಟ್ಟಿದ್ದಾರೆ. ಮತ್ತ್ಯಾವುದೇ ವ್ಯರ್ಥ ಕಾರ್ಯದಲ್ಲಿ ಉಪಯೋಗಿಸಲು ಸಾಧ್ಯವಿಲ್ಲ. ಇಲ್ಲವೆಂದರೆ ಉಡುಗೊರೆಯನ್ನು ನನ್ನದೆನ್ನುವುದು ಖಾತೆಯಾಗಿ ಬಿಡುತ್ತದೆ. ಅವತಾರನಾಗಿರುವವನು ವ್ಯರ್ಥದ ಖಾತೆಯನ್ನು ಮಾಡಿಕೊಳ್ಳುವುದಿಲ್ಲ. ಬಂದರು, ಸಂದೇಶವನ್ನು ಕೊಟ್ಟರು ಮತ್ತು ಹೊರಟರು. ತಾವೆಲ್ಲರೂ ಸಹ ಸೇವಾರ್ಥ, ಸಂದೇಶವನ್ನು ಕೊಡುವುದಕ್ಕಾಗಿ ಬ್ರಾಹ್ಮಣ ಜನ್ಮದಲ್ಲಿ ಬಂದಿದ್ದೀರಿ. ಬ್ರಾಹ್ಮಣ ಜನ್ಮವು ಅವತರಿತ ಜನ್ಮವಾಗಿದೆ, ಸಾಧಾರಣವಾದ ಜನ್ಮವಲ್ಲ. ಅಂದಮೇಲೆ ತಮ್ಮನ್ನು ಸದಾ ಅವತರಿತನಾಗಿರುವ ವಿಶ್ವ ಕಲ್ಯಾಣಕಾರಿ, ಸದಾ ಶ್ರೇಷ್ಠ ಅವತರಿತನಾಗಿರುವ ಆತ್ಮನಾಗಿದ್ದೇನೆ ಎನ್ನುವ ನಿಶ್ಚಯ ಮತ್ತು ನಶೆಯಲ್ಲಿರಿ. ಸ್ವಲ್ಪ ಸಮಯಕ್ಕಾಗಿ ಬಂದಿದ್ದೀರಿ ಮತ್ತು ಮತ್ತೆ ಹೋಗಲೂಬೇಕು. ಈಗ ಹೋಗಬೇಕು ಎನ್ನುವುದು ಸದಾ ನೆನಪಿರುತ್ತದೆಯೇ? ಅವತರಿತನಾಗಿದ್ದೇನೆ, ಬಂದಿದ್ದೇನೆ, ಈಗ ಹೋಗಬೇಕಾಗಿದೆ. ಇದೇ ಸ್ಮೃತಿಯು ಉಪರಾಂ ಮತ್ತು ಅಪರಮಪಾರ ಪ್ರಾಪ್ತಿಗಳ ಅನುಭೂತಿಯನ್ನು ಮಾಡಿಸುವಂತದ್ದಾಗಿದೆ. ಒಂದು ಕಡೆಯಲ್ಲಿ ಉಪರಾಂ, ಇನ್ನೊಂದು ಕಡೆ ಅಪರಮಪಾರ ಪ್ರಾಪ್ತಿ. ಎರಡೂ ಅನುಭವಗಳು ಒಟ್ಟೊಟ್ಟಿಗೆ ಇರುತ್ತದೆ. ಇಂತಹ ಅನುಭವಿ ಮೂರ್ತಿಯಾಗಿದ್ದೀರಲ್ಲವೆ. ಒಳ್ಳೆಯದು!

ಈಗ ಕೇಳಿರುವುದನ್ನು ಸ್ವರೂಪದಲ್ಲಿ ತರಬೇಕಾಗಿದೆ. ಕೇಳಿಸಿಕೊಳ್ಳುವುದು ಅರ್ಥಾತ್ ಅದೇ ರೀತಿ ಆಗುವುದು. ಇಂದು ವಿಶೇಷವಾಗಿ ಸಮಾನರೊಂದಿಗೆ ಮಿಲನ ಮಾಡಲು ಬಂದಿದ್ದೇವೆ. ಸಮಾನರಾಗಿ ಬಿಟ್ಟಿದ್ದೀರಲ್ಲವೆ. ಸತ್ಯ ಶಿಕ್ಷಕನು ನಿಮಿತ್ತ ಶಿಕ್ಷಕರೊಂದಿಗೆ ಮಿಲನವಾಗಲು ಬಂದಿದ್ದಾರೆ. ಸೇವೆಯ ಜೊತೆಗಾರರೊಂದಿಗೆ ಮಿಲನವಾಗಲು ಬಂದಿದ್ದಾರೆ. ಒಳ್ಳೆಯದು!

ನಿಮಿತ್ತ ಶಿಕ್ಷಕಿಯರೊಂದಿಗೆ:- ಇದು ಸದಾ ಸೇವಾಧಾರಿ ಆತ್ಮರ ಸಂಘಟನೆಯಾಗಿದೆಯಲ್ಲವೆ. ಸದಾ ತಮ್ಮನ್ನು ಬೇಹದ್ದಿನ ವಿಶ್ವ ಸೇವಾಧಾರಿ ಎಂದು ತಿಳಿಯುತ್ತೀರಾ? ಅಲ್ಪಕಾಲದ ಸೇವಾಧಾರಿಯಂತು ಅಲ್ಲ ಅಲ್ಲವೆ. ಎಲ್ಲರೂ ಬೇಹದ್ದಿನವರಲ್ಲವೇ? ಯಾರನ್ನೇ ಯಾವುದೇ ಸ್ಥಾನದಲ್ಲಿ ಕಳುಹಿಸಿಕೊಟ್ಟರೂ ತಯಾರಿದ್ದೀರಾ? ಎಲ್ಲರೂ ಹಾರುವ ಪಕ್ಷಿಯಾಗಿದ್ದೀರಾ? ತಮ್ಮ ದೇಹದ ಪರಿವೆಯ ರೆಂಬೆಯಿಂದಲೂ ಹಾರುವ ಪಕ್ಷಿಯಾಗಿದ್ದೀರಾ? ಎಲ್ಲದಕ್ಕಿಂತಲೂ ಬಹಳಷ್ಟು ತನ್ನ ಕಡೆಗೆ ಆಕರ್ಷಣೆ ಮಾಡುವ ರೆಂಬೆಯಾಗಿದೆ - ದೇಹದ ಪರಿವೆ. ಸ್ವಲ್ಪವೇನಾದರೂ ಹಳೆಯ ಸಂಸ್ಕಾರವು ತನ್ನ ಕಡೆಗೆ ಆಕರ್ಷಣೆ ಮಾಡಿತೆಂದರೆ ದೇಹದ ಪರಿವೆಯಿದೆ. ನನ್ನ ಸ್ವಭಾವವು ಹೀಗಿದೆ, ನನ್ನ ಸಂಸ್ಕಾರವು ಹೀಗಿದೆ, ನನ್ನ ಚಲನೆ-ವಲನೆ ಇದಾಗಿದೆ, ನನ್ನ ಹವ್ಯಾಸವು ಇದಾಗಿದೆ, ಇದೆಲ್ಲವೂ ದೇಹದ ಪರಿವೆಯ ಚಿಹ್ನೆಗಳಾಗಿವೆ. ಅಂದಮೇಲೆ ಈ ರೆಂಬೆಗಳಿಂದಲೂ ಹಾರುವಂತಹ ಪಕ್ಷಿಯಾಗಿದ್ದೀರಾ? ಇದಕ್ಕೇ ಕರ್ಮಾತೀತ ಸ್ಥಿತಿಯೆಂದು ಹೇಳಲಾಗುತ್ತದೆ. ಯಾವುದೇ ಬಂಧನವಿಲ್ಲ. ಕರ್ಮಾತೀತದ ಅರ್ಥವೂ ಇದಲ್ಲ- ಕರ್ಮದಿಂದಲೇ ಅತೀತರಾಗುವುದು, ಆದರೆ ಕರ್ಮದ ಬಂಧನದಿಂದ ಭಿನ್ನರಾಗಬೇಕು. ಅಂದಮೇಲೆ ದೇಹದ ಕರ್ಮ - ಹೇಗೆ ಕೆಲವರಲ್ಲಿ ಆರಾಮದಿಂದ ಇರುವುದು, ಆರಾಮವಾಗಿದ್ದು ಸಮಯದಲ್ಲಿ ತಿನ್ನುವುದು, ನಡೆಯುವುದು, ಹೀಗೆ ಸಂಸ್ಕಾರವಿರುತ್ತದೆ. ಈ ಕರ್ಮದ ಬಂಧನವೂ ಸಹ ತನ್ನ ಕಡೆಗೆ ಸೆಳೆದು ಬಿಡುತ್ತದೆ. ಈ ಕರ್ಮದ ಬಂಧನ ಅರ್ಥಾತ್ ಹವ್ಯಾಸದಿಂದಲೂ ದೂರವಿರಬೇಕು ಏಕೆಂದರೆ ನಿಮಿತ್ತರಾಗಿದ್ದೀರಲ್ಲವೆ.

ಎಲ್ಲಿಯವರೆಗೆ ತಾವೆಲ್ಲಾ ನಿಮಿತ್ತ ಆತ್ಮರು ಕರ್ಮ ಬಂಧನಗಳಿಂದ, ದೇಹದ ಸಂಸ್ಕಾರ-ಸ್ವಭಾವದಿಂದ ಭಿನ್ನರಾಗುವುದಿಲ್ಲವೆಂದರೆ, ಅನ್ಯರನ್ನು ಹೇಗೆ ಮಾಡುವಿರಿ! ಹೇಗೆ ಶರೀರದ ರೋಗವು ಕರ್ಮದ ಪ್ರತಿಫಲವಾಗಿದೆ, ಇದೇ ರೀತಿಯಿಂದ ಒಂದುವೇಳೆ ಯಾವುದೇ ಕರ್ಮದ ಬಂಧನವು ತನ್ನ ಕಡೆಗೆ ಸೆಳೆಯುತ್ತದೆಯೆಂದರೆ, ಈ ಕರ್ಮದ ಪ್ರತಿಫಲವಾಗಿ ವಿಘ್ನವನ್ನು ಹಾಕುತ್ತದೆ. ಹೇಗೆ ಶರೀರದ ನೋವಿನ ಕರ್ಮ ಫಲವು ತನ್ನ ಕಡೆಗೆ ಮತ್ತೆ-ಮತ್ತೆ ಸೆಳೆಯುತ್ತದೆ, ನೋವಾಗುತ್ತದೆಯೆಂದರೆ ಎಳೆಯುತ್ತದೆಯಲ್ಲವೆ. ಆಗ ಹೇಳುತ್ತೀರಿ - ಏನು ಮಾಡಲಿ, ಹಾಗೆ ನೋಡಿದರೆ ಚೆನ್ನಾಗಿದ್ದೀರಿ ಆದರೆ ಕರ್ಮಭೋಗವು ಕಠಿಣವಾಗಿದೆ. ಇದೇ ರೀತಿಯಲ್ಲಿ ಯಾವುದೇ ವಿಶೇಷವಾದ ಹಳೆಯ ಸಂಸ್ಕಾರ ಅಥವಾ ಸ್ವಭಾವ ಅಥವಾ ಹವ್ಯಾಸವು ತನ್ನ ಕಡೆಗೆ ಸೆಳೆಯುತ್ತದೆಯೆಂದರೆ, ಅದೂ ಸಹ ಕರ್ಮಭೋಗವಾಯಿತು. ಯಾವುದೆ ಕರ್ಮಭೋಗವು ಕರ್ಮಯೋಗಿಯನ್ನಾಗಿ ಮಾಡಲು ಸಾಧ್ಯವಿಲ್ಲ. ಅಂದಮೇಲೆ ಇದರಿಂದ ದೂರವಾಗಿರಿ. ಏಕೆ? ಎಲ್ಲರೂ ನಂಬರ್ವನ್ನಲ್ಲಿ ಹೋಗುವಂತಹ ಆತ್ಮರಾಗಿದ್ದೀರಲ್ಲವೆ. ವನ್ ನಂಬರಿನ ಅರ್ಥವೇ ಆಗಿದೆ – ಪ್ರತೀ ಮಾತಿನಲ್ಲಿಯೂ ವಿನ್ ಮಾಡುವವರು. ಕೊರತೆಯೇನೂ ಇಲ್ಲ. ಟೀಚರ್ಸ್ ಎಂದರೆ ಅರ್ಥವೇ ಇದಾಗಿದೆ - ಸದಾ ತಮ್ಮ ಮೂರ್ತಿಯ ಮೂಲಕ ಕರ್ಮಾತೀತವಾದ ಬ್ರಹ್ಮಾ ತಂದೆ ಮತ್ತು ಭಿನ್ನ ಹಾಗೂ ಪ್ರಿಯವಾದ ಶಿವ ತಂದೆಯ ಅನುಭೂತಿಯ ಮಾಡಿಸುವವರು. ಅಂದಮೇಲೆ ಇದು ವಿಶೇಷತೆಯಿದೆಯಲ್ಲವೆ. ತಾವು ಮಿತ್ರರಲ್ಲವೆ! ಮಿತ್ರರಾಗುವುದು ಹೇಗಾಗುತ್ತಾರೆ? ಸಮಾನರಿಲ್ಲದೆ ಮಿತ್ರರಾಗಲು ಸಾಧ್ಯವಿಲ್ಲ. ಅಂದಮೇಲೆ ತಾವೆಲ್ಲರೂ ತಂದೆಯ ಮಿತ್ರರಾಗಿದ್ದೀರಿ, ಈಶ್ವರನ ಮಿತ್ರರಾಗಿದ್ದೀರಿ. ಸಮಾನರಾಗುವುದೇ ಮಿತ್ರತ್ವವಾಗಿದೆ. ತಂದೆಯ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುವವರು ಏಕೆಂದರೆ ಮಿತ್ರರೂ ಆಗಿದ್ದೀರಿ, ಮತ್ತೆ ಪ್ರಿಯತಮನ ಪ್ರಿಯತಮೆಯೂ ಆಗಿದ್ದೀರಿ. ಅಂದಾಗ ಪ್ರಿಯತಮೆಯು ಸದಾ ಪ್ರಿಯತಮನ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾರೆ. ಈ ಪದ್ಧತಿಯಿದೆಯಲ್ಲವೆ. ಯಾವಾಗ ವಿವಾಹವಾಗುತ್ತದೆ ಆಗ ಏನು ಮಾಡಿಸುತ್ತಾರೆ! ಇದನ್ನೇ ಮಾಡಿಸುತ್ತಾರಲ್ಲವೆ. ಅಂದಾಗ ಈ ಪದ್ಧತಿಯೂ ಸಹ ಎಲ್ಲಿಂದ ಆಯಿತು? ತಮ್ಮಿಂದಲೇ ಆಗಿದೆ. ತಮ್ಮದು ಬುದ್ಧಿಯೆಂಬ ಕಾಲಾಗಿದೆ ಮತ್ತು ಅವರು ಸ್ಥೂಲ ಕಾಲು ಎಂದು ತಿಳಿದುಕೊಂಡು ಬಿಟ್ಟರು. ಪ್ರತೀ ಸಂಬಂಧದೊಂದಿಗೆ ವಿಶೇಷತೆಯ ಸಂಬಂಧವನ್ನು ನಿಭಾಯಿಸುವಂತಹ ನಿಮಿತ್ತ ಆತ್ಮರಾಗಿದ್ದೀರಿ.

ನಿಮಿತ್ತ ಶಿಕ್ಷಕರಿಗೆ ಅನ್ಯರಿಗಿಂತಲೂ ಬಹಳ ಸಹಜ ಸಾಧನವಿದೆ. ಅನ್ಯರಿಗಂತು ಸಂಬಂಧದಲ್ಲಂತು ಇರಬೇಕಾಗುತ್ತದೆ ಮತ್ತು ತಮ್ಮ ಸಂಬಂಧವಂತು ಸದಾ ಸೇವೆ ಹಾಗೂ ಸೇವೆಯೊಂದಿಗೆ ಇದೆ. ಭಲೆ ಲೌಕಿಕ ಕಾರ್ಯವನ್ನು ಮಾಡುತ್ತಿದ್ದರೂ ಸಹ ಸದಾ ಇದೇ ನೆನಪಿರುತ್ತದೆ - ಆ ಸಮಯವಾಗಿ ಬಿಡಲಿ ಮತ್ತು ಸೇವೆಯಲ್ಲಿ ಹೋಗೋಣ. ಮತ್ತು ಲೌಕಿಕ ಕಾರ್ಯವನ್ನು ಯಾರಿಗಾಗಿ ಮಾಡುತ್ತಿದ್ದೀರಿ, ಅವರ ಸ್ಮೃತಿಯು ಸ್ವತಹವಾಗಿ ಬರುತ್ತದೆ. ಹೇಗೆ ಲೌಕಿಕದಲ್ಲಿ ತಂದೆ-ತಾಯಿಯು ದುಡಿಯುತ್ತಾರೆ ಮಕ್ಕಳಿಗಾಗಿ. ಅವರಿಗೆ ಸ್ವತಹವಾಗಿಯೇ ಅದು ನೆನಪಿಗೆ ಬರುತ್ತದೆ. ಹಾಗಾದರೆ ತಾವೂ ಸಹ ಯಾವ ಸಮಯದಲ್ಲಿ ಲೌಕಿಕ ಕಾರ್ಯವನ್ನು ಮಾಡುತ್ತೀರಿ, ಆಗ ಯಾರಿಗಾಗಿ ಮಾಡುತ್ತೀರಿ? ಸೇವೆಗಾಗಿ ಮಾಡುತ್ತೀರಿ ಅಥವಾ ತಮಗಾಗಿಯೇ? ಏಕೆಂದರೆ ಸೇವೆಯಲ್ಲಿ ಎಷ್ಟು ಉಪಯೋಗಿಸುತ್ತೀರಿ, ಅಷ್ಟೂ ಖುಷಿಯಾಗುತ್ತದೆ. ಎಂದಿಗೂ ಸಹ ಲೌಕಿಕ ಸೇವೆಯೆಂದು ತಿಳಿದು ಮಾಡದಿರಿ. ಇದೂ ಸಹ ಸೇವೆಯ ಒಂದು ವಿಧಿಯಾಗಿದೆ, ರೂಪವು ಭಿನ್ನವಾಗಿದೆ ಆದರೆ ಸೇವೆಗಾಗಿ ಇದೆ. ಇಲ್ಲವೆಂದರೆ ನೋಡಿ - ಒಂದುವೇಳೆ ಲೌಕಿಕ ಸೇವೆಯನ್ನು ಮಾಡುತ್ತಾ, ಸೇವೆಯ ಸಾಧನವಿಲ್ಲವೆಂದರೆ ಸಂಕಲ್ಪದಲ್ಲಿ ಇದೇ ನಡೆಯುತ್ತದೆ, ಎಲ್ಲಿಂದ ಬರುವುದು! ಹೇಗೆ ಬರಲಿ! ನಡೆಯಲಾಗುವುದಿಲ್ಲ. ಯಾವಾಗುತ್ತದೆಯೋ ಗೊತ್ತಿಲ್ಲ! ಈ ಸಂಕಲ್ಪವು ವ್ಯರ್ಥವಾಗಿ ಕಳೆಯುವುದಿಲ್ಲವೇ? ಆದ್ದರಿಂದ ಎಂದಿಗೂ ಸಹ ಲೌಕಿಕ ಜಾಬ್(ವ್ಯವಹಾರ) ಮಾಡುತ್ತೇವೆ ಎನ್ನುವ ಶಬ್ಧವನ್ನು ಹೇಳಬೇಡಿ. ಇದು ಅಲೌಕಿಕ ಜಾಬ್ ಆಗಿದೆ. ಸೇವೆಗೆ ನಿಮಿತ್ತರಾಗಿದ್ದೀರಿ. ಅದರಿಂದ ಎಂದಿಗೂ ಹೊರೆಯೆನಿಸುವುದಿಲ್ಲ. ಇಲ್ಲವೆಂದರೆ ಕೆಲವೊಮ್ಮೆ ಹೀಗೆ ಎಲ್ಲಿಯವರೆಗೆ ಹೀಗಾಗುತ್ತದೆ, ಏನಾಗುತ್ತದೆಯೋ! ಎಂದು ಹೊರೆಯಾಗಿ ಬಿಡುತ್ತದೆ. ಇದಂತು ತಾವುಗಳಿಗಾಗಿ ಬಹಳ ಸಹಜವಾಗಿ ಪ್ರಾಲಬ್ಧವನ್ನು ಮಾಡಿಕೊಳ್ಳುವ ಸಾಧನವಾಗಿದೆ.

ತನು-ಮನ-ಧನ ಮೂರು ವಸ್ತುಗಳಿದೆಯಲ್ಲವೆ! ಒಂದುವೇಳೆ ಮೂರೂ ವಸ್ತುಗಳನ್ನು ಸೇವೆಯಲ್ಲಿ ಉಪಯೋಗಿಸುತ್ತೀರೆಂದರೆ, ಮೂರರ ಫಲವು ಯಾರಿಗೆ ಸಿಗುತ್ತದೆ? ತಮಗೆ ಸಿಗುತ್ತದೆಯೇ ಅಥವಾ ತಂದೆಯವರಿಗೇ! ಮೂರೂ ರೀತಿಯಿಂದ ತಮ್ಮ ಪ್ರಾಲಬ್ಧವನ್ನು ರೂಪಿಸಿಕೊಳ್ಳಿರಿ, ಅಂದಮೇಲೆ ಇದು ಅನ್ಯದರೊಂದಿಗೆ ಸೇರ್ಪಡೆಯಾಗಿರುವ ಪ್ರಾಲಬ್ಧವಾಯಿತು. ಆದ್ದರಿಂದ ಎಂದಿಗೂ ಸಹ ಇದರಲ್ಲಿ ಹೊರೆಯೆನ್ನುವುದಾಗಬಾರದು. ಕೇವಲ ಭಾವವನ್ನು ಪರಿವರ್ತನೆ ಮಾಡಿಕೊಳ್ಳಿರಿ. ಲೌಕಿಕವಲ್ಲ, ಅಲೌಕಿಕ ಸೇವೆಗಾಗಿಯೇ ಇದ್ದೇನೆ. ಇದೇ ಭಾವವನ್ನು ಪರಿವರ್ತನೆ ಮಾಡಿಕೊಳ್ಳಿರಿ. ತಿಳಿಯಿತೆ - ಇದಂತು ಇನ್ನೂ ಡಬಲ್ ಸಮರ್ಪಣೆಯಾಯಿತು. ಧನದಿಂದಲೂ ಸಮರ್ಪಣೆಯಾಗಿ ಬಿಟ್ಟಿರಿ, ಎಲ್ಲವೂ ತಂದೆಗಾಗಿ ಆಯಿತು. ಸಮರ್ಪಣೆಯ ಅರ್ಥವೇನಾಗಿದೆ? ಏನೆಲ್ಲವೂ ಇದೆ ತಂದೆಯವರಿಗಾಗಿ ಇದೆ ಅರ್ಥಾತ್ ಸೇವೆಗಾಗಿ ಇರುವುದಾಗಿದೆ. ಇದನ್ನೇ ಸಮರ್ಪಣೆಯೆಂದು ಹೇಳಲಾಗುತ್ತದೆ. ನಾವು ಸಮರ್ಪಿತರಲ್ಲವೆಂದು ಯಾರು ತಿಳಿಯುತ್ತೀರಿ, ಅವರು ಕೈಯೆತ್ತಿರಿ! ಅವರ ಸಮರ್ಪಣಾ ಸಮಾರೋಹವನ್ನು ಆಚರಿಸಿ ಬಿಡುತ್ತೇವೆ! ಮರಿ ಮಕ್ಕಳೂ ಸಹ ಹುಟ್ಟಿದ್ದಾರೆ ಮತ್ತು ಹೇಳುತ್ತೀರಿ - ಸಮರ್ಪಣೆಯಾಗಿಲ್ಲ. ತಮ್ಮ ಮ್ಯಾರೇಜ್ ಡೇಯನ್ನು ಭಲೆ ಆಚರಿಸಿಕೊಳ್ಳಿರಿ, ಆದರೆ ಮ್ಯಾರೇಜ್ ಆಗಿಲ್ಲ - ಇದನ್ನಂತು ಹೇಳಬಾರದು. ಏನು ತಿಳಿಯುತ್ತೀರಿ, ಇಡೀ ಗ್ರೂಪ್ ಸಮರ್ಪಣೆಯಾಗಿರುವ ಗ್ರೂಪ್ ಆಗಿದೆಯಲ್ಲವೆ!

ಬಾಪ್ದಾದಾರವರಂತು ಡಬಲ್ ವಿದೇಶಿ ಅಥವಾ ಡಬಲ್ ವಿದೇಶದ ಸ್ಥಾನದಲ್ಲಿ ನಿಮಿತ್ತರಾಗಿರುವ ಟೀಚರ್ಸ್ನ ಮಹಿಮೆಯನ್ನು ಮಾಡುತ್ತಾರೆ. ಮಹಿಮೆ ಮಾಡುತ್ತಾರೆ ಎನ್ನುವಂತಲ್ಲ ಆದರೆ ಪ್ರೀತಿಯಿಂದ ವಿಶೇಷವಾಗಿ ಪರಿಶ್ರಮ ಪಡುತ್ತೀರಿ. ಪರಿಶ್ರಮವಂತು ಬಹಳ ಪಡಬೇಕಾಗುತ್ತದೆ ಆದರೆ ಪ್ರೀತಿಯಿಂದ ಪರಿಶ್ರಮದ ಅನುಭೂತಿಯಾಗುವುದಿಲ್ಲ. ನೋಡಿ - ಎಷ್ಟು ದೂರ ದೂರದಿಂದ ಗ್ರೂಪ್ನ್ನು ತಯಾರು ಮಾಡಿ ಕರೆ ತರುತ್ತೀರಿ, ಅಂದಾಗ ಬಾಪ್ದಾದಾರವರು ಮಕ್ಕಳ ಪರಿಶ್ರಮದಲ್ಲಿ ಬಲಿಹಾರಿಯಾಗಿ ಬಿಡುತ್ತದೆ. ಒಂದು ವಿಶೇಷತೆಯು ಡಬಲ್ ವಿದೇಶದಲ್ಲಿ ನಿಮಿತ್ತರಾಗಿರುವ ಸೇವಾಧಾರಿಗಳಲ್ಲಿ ಬಹಳ ಚೆನ್ನಾಗಿದೆ. ಯಾವ ವಿಶೇಷತೆಯಾಗಿದೆ ಎನ್ನುವುದು ಗೊತ್ತಿದೆಯೇ? (ಅನೇಕ ವಿಶೇಷತೆಗಳನ್ನು ತೆಗೆದರು) ಯಾವುದೇ ಮಾತನ್ನು ತೆಗೆದಿದ್ದೀರಿ, ಅದನ್ನು ಸ್ವಯಂನಲ್ಲಿ ಪರಿಶೀಲನೆ ಮಾಡಿಕೊಂಡು ಕಡಿಮೆಯಿದ್ದರೆ, ಅದನ್ನು ತುಂಬಿಕೊಳ್ಳಿರಿ ಏಕೆಂದರೆ ಮಾತಂತು ಬಹಳ ಒಳ್ಳೊಳ್ಳೆಯದಾಗಿರುವುದನ್ನೇ ತೆಗೆದಿದ್ದೀರಿ. ಬಾಪ್ದಾದಾರವರು ತಿಳಿಸುತ್ತಿದ್ದಾರೆ - ಒಂದುವೇಳೆ ವಿಶೇಷತೆಯನ್ನು ಡಬಲ್ ವಿದೇಶಿ ಸೇವಾಧಾರಿಗಳಲ್ಲಿ ನೋಡಿದರು - ಅದೇನೆಂದರೆ ಬಾಪ್ದಾದಾರವರು ಏನೇ ಡೈರೆಕ್ಷನ್ನ್ನು ಕೊಡುತ್ತಾರೆ, ಇದನ್ನು ಮಾಡಿಕೊಂಡು ತನ್ನಿರಿ ಎಂದು ಹೇಳುತ್ತಾರೆ, ಅದನ್ನು ಪ್ರತ್ಯಕ್ಷದಲ್ಲಿ ತರುವುದಕ್ಕಾಗಿ ಎಷ್ಟೊಂದು ಪ್ರಯತ್ನ ಪಡುತ್ತಾರೆ. ಆದರೆ ಪ್ರತ್ಯಕ್ಷದಲ್ಲಿ ತರಲೇಬೇಕು ಎನ್ನುವ ಲಕ್ಷ್ಯವು ಪ್ರಾಕ್ಟಿಕಲ್ನಲ್ಲಿ ಚೆನ್ನಾಗಿರುತ್ತದೆ. ಹೇಗೆ ಬಾಪ್ದಾದಾರವರು ಹೇಳಿದರು - ಗ್ರೂಪ್ನ್ನು ತರಬೇಕೆಂದು, ಗ್ರೂಪ್ನ್ನೂ ಕರೆತರುತ್ತಿದ್ದಾರೆ.

ಬಾಪ್ದಾದಾರವರು ಹೇಳಿದರು - ವಿ.ಐ.ಪಿ.ಗಳ ಸೇವೆಯನ್ನು ಮಾಡಬೇಕಾಗಿದೆ, ಮೊದಲು ಎಷ್ಟೊಂದು ಕಷ್ಟವೆಂದು ಹೇಳುತ್ತಿದ್ದರು, ಬಹಳ ಕಷ್ಟವಿದೆ ಆದರೆ ಮಾಡಲೇಬೇಕು ಎಂದು ಸಾಹಸವನ್ನಿಟ್ಟಿರಿ, ಈಗ ನೋಡಿ – ಎರಡು ವರ್ಷಗಳಿಂದ ಗ್ರೂಪ್ ಬರುತ್ತಿದೆಯಲ್ಲವೆ. ಹೇಳುತ್ತಿದ್ದಿರಿ- ಲಂಡನ್ನಿಂದ ವಿ.ಐ.ಪಿ.ಗಳು ಬರುವುದು ಬಹಳ ಕಷ್ಟವಿದೆ. ಆದರೆ ಈಗ ನೋಡಿ – ಪ್ರತ್ಯಕ್ಷ ಪ್ರಮಾಣವನ್ನು ತೋರಿಸಿದಿರಲ್ಲವೆ. ಈ ಸಾರಿಯಂತು ಭಾರತದವರೂ ಸಹ ರಾಷ್ಟ್ರಪತಿಯವರನ್ನು ಕರೆದುಕೊಂಡು ಬಂದು ತೋರಿಸಿದರು. ಆದರೆ ಆದರೂ ಡಬಲ್ ವಿದೇಶಿಗಳಿಗೆ ಈ ಉಮ್ಮಂಗದ ಡೈರೆಕ್ಷನ್ ಸಿಕ್ಕಿತು ಮತ್ತು ಮಾಡಲೇಬೇಕು ಎನ್ನುವ ಲಗನ್ ಚೆನ್ನಾಗಿದೆ. ಪ್ರತ್ಯಕ್ಷ ಪ್ರಮಾಣವನ್ನು ನೋಡಿ ಬಾಪ್ದಾದಾರವರು ವಿಶೇಷತೆಯ ಗಾಯನವನ್ನು ಮಾಡುತ್ತಾರೆ. ಸೇವಾಕೇಂದ್ರವನ್ನು ತೆರೆಯುತ್ತೀರಿ, ಅದಂತು ಹಳೆಯ ಮಾತಾಯಿತು. ಸೇವಾಕೇಂದ್ರವನ್ನಂತು ತೆರೆಯುತ್ತಲೇ ಇರುತ್ತೀರಿ. ಏಕೆಂದರೆ ಅಲ್ಲಿ ಸಾಧನಗಳು ಬಹಳ ಸಹಜವಿದೆ. ಇಲ್ಲಿಂದ ಅಲ್ಲಿಗೆ ಹೋಗಿ ತೆರೆಯಬಹುದು, ಈ ಸಾಧನವು ಭಾರತದಲ್ಲಿಲ್ಲ. ಆದ್ದರಿಂದ ಸೇವಾಕೇಂದ್ರವನ್ನು ತೆರೆಯುವುದೇನೂ ದೊಡ್ಡ ಮಾತಲ್ಲ. ಆದರೆ ಅಂತಹ ಒಳ್ಳೊಳ್ಳೆಯ ವಾರಸುಧಾರ ಕ್ವಾಲಿಟಿಯನ್ನು ತಯಾರು ಮಾಡಿರಿ. ಒಂದು ವಾರಸುಧಾರ ಕ್ವಾಲಿಟಿಯನ್ನು ತಯಾರು ಮಾಡುವುದು ಮತ್ತು ಇನ್ನೊಂದು – ಧ್ವನಿ ಮೊಳಗಿಸುವವರನ್ನು ತಯಾರು ಮಾಡುವುದು. ಎರಡೂ ಅವಶ್ಯಕತೆಯಿದೆ, ವಾರಸುಧಾರ ಕ್ವಾಲಿಟಿ- ಹೇಗೆ ತಾವು ಸೇವೆಯ ಉಮ್ಮಂಗ-ಉತ್ಸಾಹದಲ್ಲಿ ತನು-ಮನ-ಧನ ಸಹಿತವಾಗಿ ಇರುತ್ತಿದ್ದರೂ ಸಮರ್ಪಣಾ ಬುದ್ಧಿಯಿದೆ, ಇದಕ್ಕೆ ಹೇಳಲಾಗುತ್ತದೆ - ವಾರಸುಧಾರ ಕ್ವಾಲಿಟಿ. ಅಂದಮೇಲೆ ವಾರೀಸ್ ಕ್ವಾಲಿಟಿಯನ್ನೂ ತೆಗೆಯಬೇಕಾಗಿದೆ. ಇದರ ಬಗ್ಗೆಯೂ ಸಹ ವಿಶೇಷ ಗಮನವಿರಲಿ. ಪ್ರತಿಯೊಂದು ಸೇವಾಕೇಂದ್ರದಲ್ಲಿ ಇಂತಹ ವಾರೀಸ್ ಕ್ವಾಲಿಟಿಯವರಿದ್ದರೆ, ಸೇವಾಕೇಂದ್ರವು ಎಲ್ಲದಕ್ಕಿಂತಲೂ ನಂಬರ್ವನ್ನಲ್ಲಿ ಹೋಗುತ್ತದೆ.

ಒಂದು ರೀತಿಯಲ್ಲಿ - ಸೇವೆಯಲ್ಲಿ ಸಹಯೋಗಿಯಾಗುವುದು, ಇನ್ನೊಂದು - ಸಂಪೂರ್ಣವಾಗಿ ಸಮರ್ಪಣೆಯಾಗುವುದು. ಇಂತಹ ವಾರೀಸ್ ಎಷ್ಟಿದ್ದಾರೆ? ಪ್ರತಿಯೊಂದು ಸೇವಾಕೇಂದ್ರದಲ್ಲಿ ಇಂತಹ ವಾರೀಸ್ ಇದ್ದಾರೆಯೇ? ಈಶ್ವರೀಯ ವಿದ್ಯಾರ್ಥಿಯನ್ನಾಗಿ ಮಾಡುವುದು, ಸೇವೆಯಲ್ಲಿ ಸಹಯೋಗಿಯಾಗುವುದು - ಆ ಪಟ್ಟಿಯಂತು ಉದ್ದವಾಗಿರುತ್ತದೆ. ಆದರೆ ವಾರೀಸ್ ಕೆಲಕೆಲವರಿರುತ್ತಾರೆ. ಯಾರಿಗೆ ಯಾವ ಸಮಯದಲ್ಲಿಯೇ, ಯಾವುದೇ ಡೈರೆಕ್ಷನ್ ಸಿಗುತ್ತದೆ, ಯಾವ ಶ್ರೀಮತವು ಸಿಗುತ್ತದೆ, ಅದರನುಸಾರವಾಗಿಯೇ ನಡೆಯುತ್ತಿರಬೇಕು. ಅಂದಮೇಲೆ ಎರಡೂ ಲಕ್ಷ್ಯವನ್ನೂ ಇಡಿ, ಇದನ್ನೂ ಮಾಡಬೇಕು ಮತ್ತು ಅದನ್ನೂ ಮಾಡಬೇಕು. ಇಂತಹ ವಾರೀಸ್ ಕ್ವಾಲಿಟಿಯಿರುವವರು ಒಬ್ಬರಿದ್ದರೂ ಅನೇಕ ಸೇವಾಕೇಂದ್ರಗಳನ್ನು ತೆರೆಯಲು ನಿಮಿತ್ತರಾಗಿ ಬಿಡಬೇಕು. ಇದೂ ಸಹ ಲಕ್ಷ್ಯದಿಂದಲೇ ಪ್ರತ್ಯಕ್ಷವಾಗುತ್ತಿರುತ್ತದೆ. ತಮ್ಮ ವಿಶೇಷತೆಯಂತು ತಿಳಿದಿದ್ದೀರಲ್ಲವೆ. ಒಳ್ಳೆಯದು.

ಸಂತುಷ್ಟತೆಯಂತು ಇದ್ದೇ ಇದೆ, ಅಥವಾ ಕೇಳಬೇಕಾಗುತ್ತದೆಯೇ! ಇಲ್ಲಿರುವವರೇ ಸಂತುಷ್ಟ ಪಡಿಸುವವರು. ಅಂದಮೇಲೆ ಯಾರು ಸಂತುಷ್ಟ ಪಡಿಸುತ್ತಾರೆಯೋ ಅವರು ಸ್ವಯಂತು ಆಗಿರುತ್ತಾರಲ್ಲವೆ. ಕೆಲವೊಮ್ಮೆ ಸರ್ವೀಸ್ ಕಡಿಮೆಯಿರುವುದನ್ನು ನೋಡುತ್ತಾ, ಏರುಪೇರಿನಲ್ಲಂತು ಬರುವುದಿಲ್ಲವೇ? ಸೇವಾಕೇಂದ್ರದಲ್ಲಿ ಯಾವಾಗ ಯಾವುದೇ ವಿಘ್ನವು ಬರುತ್ತದೆಯೆಂದರೆ, ಅದನ್ನು ನೋಡುತ್ತಾ ಗಾಬರಿಯಾಗುತ್ತೀರಾ? ಉದಾಹರಣೆಗೆ ತಿಳಿಯಿರಿ, ಅತಿ ದೊಡ್ಡ ವಿಘ್ನವು ಬಂದು ಬಿಟ್ಟಿತು- ಯಾರೇ ಒಳ್ಳೆಯ ಅನನ್ಯ ಮಗು ವಿರೋಧಿಯಾಗಿ ಬಿಟ್ಟರು ಮತ್ತು ತಮ್ಮ ಸೇವೆಯಲ್ಲಿ ತೊಂದರೆ ಮಾಡುತ್ತಾರೆ, ಆಗ ಏನು ಮಾಡುವಿರಿ? ಗಾಬರಿಯಾಗುತ್ತೀರಾ? ಒಂದು – ಅವರ ಪ್ರತಿ ಕಲ್ಯಾಣದ ಭಾವದಿಂದ ದಯೆ ತೋರಿಸುವುದಂತು ಬೇರೆ ಮಾತಾಗಿದೆ. ಆದರೆ ಸ್ವಯಂನ ಸ್ಥಿತಿಯು ಏರುಪೇರಾಗುವುದು ಅಥವಾ ವ್ಯರ್ಥ ಸಂಕಲ್ಪವು ನಡೆಯುತ್ತದೆ, ಇದಕ್ಕೆ ಏರುಪೇರಿನಲ್ಲಿ ಬರುವುದೆಂದು ಹೇಳಲಾಗುತ್ತದೆ. ಅಂದಮೇಲೆ ಸಂಕಲ್ಪದ ಸೃಷ್ಟಿಯನ್ನೂ ಸಹ ರಚಿಸಬಾರದು. ಇದು ಸಂಕಲ್ಪವನ್ನೂ ಅಲುಗಾಡಿಸಲು ಸಾಧ್ಯವಾಗಬಾರದು! ಇದಕ್ಕೆ ಹೇಳಲಾಗುತ್ತದೆ - ಅಚಲ-ಅಡೋಲ ಸ್ಥಿತಿ. ಹೀಗೂ ಅಲ್ಲ – ಅದರ ಬಗ್ಗೆ ಹೊಸದೇನಲ್ಲ ಎನ್ನುವಂತೆ ನಿರ್ಲಕ್ಷ್ಯ(ಕೇರ್ಲೆಸ್)ವೂ ಆಗಬಾರದು. ಸೇವೆಯನ್ನೂ ಮಾಡಬೇಕು, ಅವರ ಪ್ರತಿ ದಯಾಹೃದಯಿಯೂ ಆಗಬೇಕು. ಆದರೆ ಏರುಪೇರಿನಲ್ಲಿ ಬರಬಾರದು. ಅಂದಮೇಲೆ ತಾವು ಏರುಪೇರಿನಲ್ಲಿ, ಫೀಲಿಂಗ್ನಲ್ಲಿ ಬರದಿರುವವರು. ಸದಾಕಾಲವೂ ಯಾವುದೇ ವಾತಾವರಣದಲ್ಲಿ, ವಾಯುಮಂಡಲವೇ ಇರಲಿ ಆದರೆ ಅಚಲ-ಅಡೋಲವಾಗಿರಿ. ನಿಮಿತ್ತರಾಗಿರುವವರು ಎಂದೇನಾದರೂ ಸಲಹೆಯನ್ನು ಕೊಡುತ್ತಾರೆ, ಅದರಲ್ಲಿ ತಬ್ಬಿಬ್ಬಾಗಬಾರದು. ಹೀಗೂ ಯೋಚಿಸಬಾರದು - ಇವರೇಕೆ ಹೇಳುತ್ತಾರೆ ಅಥವಾ ಇದು ಹೇಗಾಗುತ್ತದೆ! ಏಕೆಂದರೆ ಯಾರು ನಿಮಿತ್ತರಾಗಿರುತ್ತಾರೆಯೋ ಅವರು ಅನುಭವಿಯಾಗಿ ಬಿಟ್ಟಿದ್ದಾರೆ ಮತ್ತು ಯಾರು ಪ್ರಾಕ್ಟಿಕಲ್ನಲ್ಲಿ ನಡೆಯುವವರಿದ್ದಾರೆ, ಕೆಲವರು ಹೊಸಬರಿದ್ದಾರೆ ಕೆಲವರು ಹಳಬರೂ ಇದ್ದಾರೆ. ಆದರೆ ಅವರ ಮುಂದೆ ಯಾವ ಸಮಯದಲ್ಲಿ ಯಾವ ಮಾತು ಬರುತ್ತದೆ, ಆ ಮಾತಿನ ಕಾರಣದಿಂದ ಅಷ್ಟೂ ಆದಿ-ಮಧ್ಯ-ಅಂತ್ಯವನ್ನು ಸ್ಪಷ್ಟ ಬುದ್ಧಿಯಿಂದ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಕೇವಲ ವರ್ತಮಾನವನ್ನಷ್ಟೇ ತಿಳಿಯಬಹುದು. ಆದ್ದರಿಂದ ಕೇವಲ ವರ್ತಮಾನವನ್ನಷ್ಟೇ ನೋಡುತ್ತಾ, ಆದಿ-ಮಧ್ಯ-ಅಂತ್ಯವು ಸ್ಪಷ್ಟವಾಗುವುದಿಲ್ಲ, ಆದ್ದರಿಂದ ತಬ್ಬಿಬ್ಬಾಗಿ ಬಿಡುತ್ತಾರೆ. ಎಂದೇನಾದರೂ ಡೈರೆಕ್ಷನ್ ಸ್ಪಷ್ಟವಾಗಿಲ್ಲವೆಂದರೂ ತಬ್ಬಿಬ್ಬಾಗಬಾರದು. ಧೈರ್ಯದಿಂದ ಹೇಳಿರಿ, ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಅವರಿಗೂ ಸ್ವಲ್ಪ ಸಮಯವನ್ನು ಕೊಡಿ. ಅದೇ ಸಮಯದಲ್ಲಿ ಗೊಂದಲಕ್ಕೊಳಗಾಗಿ ಇದಲ್ಲ, ಅದಲ್ಲ, ಹೀಗೆ ಮಾಡಬಾರದು ಎನ್ನುವುದಾಗಬಾರದು. ಏಕೆಂದರೆ ಡಬಲ್ ವಿದೇಶಿಗಳಲ್ಲಿ ಫ್ರೀ ಮೈಂಡ್ ಹೆಚ್ಚಾಗಿದೆ. ಆದ್ದರಿಂದ ಹಾಗಿಲ್ಲದಿದ್ದರೂ ಫ್ರೀ ಮೈಂಡ್ನಿಂದ ಹೇಳಿ ಬಿಡುತ್ತಾರೆ. ಆದ್ದರಿಂದ ಯಾವುದೇ ಮಾತು ಸ್ವಲ್ಪವೇ ಸಿಗುತ್ತದೆ, ಅದನ್ನು ಗಂಭೀರತೆಯಿಂದ ಮೊದಲು ಯೋಚಿಸಿರಿ, ಅದರಲ್ಲಿ ಅವಶ್ಯವಾಗಿ ಏನಾದರೂ ರಹಸ್ಯವು ಅಡಗಿರುತ್ತದೆ. ಅವರೊಂದಿಗೆ ಕೇಳಬಹುದು - ಇದರ ರಹಸ್ಯವೇನಾಗಿದೇ? ಇದರಿಂದ ಲಾಭವೇನಾಗುತ್ತದೆ? ನಮಗೆ ಇನ್ನೂ ಸ್ಪಷ್ಟವಾಗಿ ತಿಳಿಸಿರಿ. ಇದನ್ನು ಹೇಳಬಹುದು. ಆದರೆ ಎಂದೇ ಯಾವುದೇ ಡೈರೆಕ್ಷನ್ನ್ನು ರೆಫ್ಯೂಸ್ ಮಾಡಬೇಡಿ. ಹಾಗೆ ಮಾಡುತ್ತೀರಿ ಆದ್ದರಿಂದ ಕನ್ಫ್ಯೂಸ್ ಆಗಿ ಬಿಡುತ್ತೀರಿ. ಅದರಲ್ಲಿ ಸ್ವಲ್ಪ ವಿಶೇಷವಾದ ಗಮನವನ್ನು ಡಬಲ್ ವಿದೇಶಿ ಮಕ್ಕಳಿಗೆ ಕೊಡುತ್ತೇವೆ. ಇಲ್ಲವೆಂದರೆ ಏನಾಗುತ್ತದೆ, ಹೇಗೆ ತಾವು ನಿಮಿತ್ತರಾಗಿದ್ದೀರಿ, ಹಿರಿಯರ ಡೈರೆಕ್ಷನ್ನ್ನು ತಿಳಿಯುವ ಪ್ರಯತ್ನ ಪಡುವುದಿಲ್ಲ ಮತ್ತು ಏರುಪೇರಿನಲ್ಲಿ ಬಂದು ಬಿಡುತ್ತೀರೆಂದರೆ, ತಮ್ಮನ್ನು ನೋಡುತ್ತಾ ಯಾರಿಗೆ ನಿಮಿತ್ತರಾಗಿದ್ದೀರಿ. ಅವರಲ್ಲಿಯೂ ಅದೇ ಸಂಸ್ಕಾರವು ತುಂಬಿ ಬಿಡುತ್ತದೆ. ಮತ್ತೆ ಕೆಲವರು ಕೆಲವೊಮೆ ಮುನಿಸಿಕೊಳುತ್ತಾರೆ, ಕೆಲವೊಮ್ಮೆ ಕೆಲವರು ಮುನಿಸಿಕೊಳ್ಳುತ್ತಾರೆ. ಮತ್ತೆ ಸೇವಾಕೇಂದ್ರದಲ್ಲಿ ಇದೇ ಆಟವು ನಡೆಯುತ್ತದೆ. ತಿಳಿಯಿತೇ! ಒಳ್ಳೆಯದು.

ವರದಾನ:
ಜ್ಞಾನ ಮತ್ತು ಯೋಗದ ಶಕ್ತಿಯಿಂದ ಪ್ರತಿಯೊಂದು ಪರಿಸ್ಥಿತಿಯನ್ನು ಸೆಕೆಂಡಿನಲ್ಲಿ ಪಾಸ್ ಮಾಡುವಂತಹ ಮಹಾವೀರ ಭವ.

ಮಹಾವೀರ ಅರ್ಥಾತ್ ಸದಾ ಲೈಟ್ ಮತ್ತು ಮೈಟ್ಹೌಸ್. ಜ್ಞಾನವಾಗಿದೆ - ಲೈಟ್ ಮತ್ತು ಯೋಗವಾಗಿದೆ - ಮೈಟ್. ಯಾರು ಇವೆರಡೂ ಶಕ್ತಿಗಳಿಂದ ಸಂಪನ್ನರಾಗಿರುತ್ತರೆ, ಅವರು ಪ್ರತೀ ಪರಿಸ್ಥಿತಿಯನ್ನೂ ಸೆಕೆಂಡಿನಲ್ಲಿ ಪಾಸ್ ಮಾಡಿ ಬಿಡುತ್ತಾರೆ. ಒಂದುವೇಳೆ ಸಮಯದಲ್ಲಿ ಪಾಸ್ ಆಗದಿರುವ ಸಂಸ್ಕಾರವಾಗಿ ಬಿಡುತ್ತದೆಯೆಂದರೆ, ಅಂತ್ಯದಲ್ಲಿಯೂ ಆ ಸಂಸ್ಕಾರವು ಫುಲ್ಪಾಸ್ ಆಗಲು ಬಿಡುವುದಿಲ್ಲ. ಯಾರು ಸಮಯದಲ್ಲಿ ಫುಲ್ಪಾಸ್ ಆಗುತ್ತಾರೆಯೋ ಅವರಿಗೆ ಹೇಳಲಾಗುತ್ತದೆ- ಪಾಸ್-ವಿತ್-ಆನರ್. ಧರ್ಮರಾಜನೂ ಸಹ ಅವರಿಗೆ ಆನರ್ (ಗೌರವ) ಕೊಡುತ್ತಾರೆ.

ಸ್ಲೋಗನ್: -
ಯೋಗ ಅಗ್ನಿಯಿಂದ ವಿಕಾರಗಳ ಬೀಜನವನ್ನು ಭಸ್ಮಗೊಳಿಸಿ ಬಿಡುತ್ತೀರೆಂದರೆ, ಸಮಯದಲ್ಲಿ ಮೋಸವುಂಟಾಗಲು ಸಾಧ್ಯವಿಲ್ಲ.