22.12.18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈ
ಪಾಠಶಾಲೆಗೆ ಬರುವುದರಿಂದ ನಿಮಗೆ ಪ್ರತ್ಯಕ್ಷ ಫಲದ ಪ್ರಾಪ್ತಿಯಾಗುತ್ತದೆ, ಒಂದೊಂದು ಜ್ಞಾನ ರತ್ನಗಳು
ಲಕ್ಷಾಂತರ ರೂಪಾಯಿಗಳ ಆಸ್ತಿಯಾಗಿದೆ, ಅದನ್ನು ತಂದೆಯೇ ಕೊಡುತ್ತಾರೆ.”
ಪ್ರಶ್ನೆ:
ತಂದೆಯು ಯಾವ
ನಶೆಯೇರಿಸುತ್ತಾರೆ, ಅದು ಏಕೆ ಹಗುರವಾಗುತ್ತದೆ? ಸದಾ ನಶೆಯೇರಿರಬೇಕು, ಅದಕ್ಕೆ ಯುಕ್ತಿಯೇನಾಗಿದೆ?
ಉತ್ತರ:
ಯಾವಾಗ ಹೊರಗಡೆ
ಹೋಗಿ ಕುಟುಂಬ ಪರಿವಾರದ ಮುಖಗಳನ್ನು ನೋಡುತ್ತೀರೋ ಆಗ ನಶೆಯು ಇಳಿದು ಬಿಡುತ್ತದೆ.
ನಷ್ಟಮೋಹಿಗಳಾಗಿಲ್ಲ, ತಂದೆಯ ಜೊತೆ ಆತ್ಮಿಕ ವಾರ್ತಾಲಾಪವನ್ನು ಮಾಡುವುದನ್ನು ಕಲಿಯಬೇಕು. ಆಗ ನಶೆಯು
ಸದಾ ಏರಿರುತ್ತದೆ. ಬಾಬಾ, ನಾವು ನಿಮ್ಮವರಾಗಿದ್ದೆವು, ತಾವು ನಮ್ಮನ್ನು ಸ್ವರ್ಗದಲ್ಲಿ
ಕಳುಹಿಸಿಕೊಟ್ಟಿರಿ. ನಾವು 21 ಜನ್ಮಗಳು ಸುಖವನ್ನು ಭೋಗಿಸಿ ಮತ್ತೆ ದುಃಖಿಯಾದೆವು. ನಾವು ಈಗ ಮತ್ತೆ
ಸುಖದ ಆಸ್ತಿಯನ್ನು ಪಡೆಯಲು ಬಂದಿದ್ದೇವೆ. ನಷ್ಟಮೋಹಿಗಳಾಗಿದ್ದೇ ಆದರೆ ನಶೆಯೇರುತ್ತದೆ.
ಗೀತೆ:
ಸತ್ತರೂ ನಿಮ್ಮ
ಮಡಿಲಿನಲ್ಲಿಯೇ
ಓಂ ಶಾಂತಿ.
ಇದು ಯಾರ ಮಾತನ್ನು ಕೇಳಿದಿರಿ? ಗೋಪ-ಗೋಪಿಯರದು. ಯಾರಿಗಾಗಿ ಹೇಳುತ್ತಾರೆ? ಪರಮಪಿತ ಪರಮಾತ್ಮ
ಶಿವನಿಗೆ. ಹೆಸರಂತೂ ಬೇಕಲ್ಲವೆ. ಬಾಬಾ, ತಮ್ಮ ಕೊರಳಿನ ಹಾರವಾಗಲು ಜೀವಿಸಿದ್ದಂತೆಯೇ ನಾವು
ತಮ್ಮವರಾಗುತ್ತೇವೆ ಎಂದೂ ಹೇಳುತ್ತೀರಿ. ನಿಮ್ಮನ್ನೇ ನೆನಪು ಮಾಡುವುದರಿಂದ ನಾವು ತಮ್ಮ ಕೊರಳಿನ
ಹಾರವಾಗುತ್ತೇವೆ. ರುದ್ರಮಾಲೆಯಂತೂ ಪ್ರಸಿದ್ಧವಾಗಿದೆ, ತಂದೆಯು ತಿಳಿಸುತ್ತಾರೆ - ಎಲ್ಲಾ ಆತ್ಮರು
ರುದ್ರನ ಮಾಲೆಯಾಗಿದ್ದಾರೆ. ಇದು ಆತ್ಮಿಕ ವೃಕ್ಷವಾಗಿದೆ. ಅದು ಮನುಷ್ಯರ ವಂಶವೃಕ್ಷವಾಗಿದೆ. ಇದು
ಆತ್ಮಗಳ ವೃಕ್ಷವಾಗಿದೆ. ವೃಕ್ಷದಲ್ಲಿ ವಿಭಾಗಗಳೂ ಸಹ ಇದೆ. ದೇವಿ-ದೇವತೆಗಳ ವಿಭಾಗ, ಇಸ್ಲಾಮಿಗಳ
ವಿಭಾಗ, ಬೌದ್ಧಿಗಳ ವಿಭಾಗ - ಈ ಮಾತುಗಳನ್ನು ಬೇರೆ ಯಾರೂ ತಿಳಿಸಲು ಸಾಧ್ಯವಿಲ್ಲ. ಗೀತೆಯ ಭಗವಂತನೇ
ತಿಳಿಸುತ್ತಾರೆ. ಅವರೇ ಜನನ-ಮರಣ ರಹಿತನಾಗಿದ್ದಾರೆ. ಅವರಿಗೆ ಅಜನ್ಮ ಎಂದು ಹೇಳಲು ಸಾಧ್ಯವಿಲ್ಲ.
ಕೇವಲ ಜನನ-ಮರಣದಲ್ಲಿ ಬರುವುದಿಲ್ಲ. ಅವರದು ಸ್ಥೂಲ ಅಥವಾ ಸೂಕ್ಷ್ಮ ಶರೀರವಿಲ್ಲ. ಮಂದಿರಗಳಲ್ಲಿ
ಶಿವಲಿಂಗವನ್ನೇ ಪೂಜಿಸುತ್ತಾರೆ. ಅವರಿಗೆ ಪರಮಾತ್ಮನೆಂದು ಹೇಳುತ್ತಾರೆ. ದೇವತೆಗಳ ಮುಂದೆ ಹೋಗಿ
ಮಹಿಮೆಯನ್ನು ಹಾಡುತ್ತಾರೆ. ಬ್ರಹ್ಮಾ ಪರಮಾತ್ಮಾಯ ನಮಃ ಎಂಬುದನ್ನು ಎಂದೂ ಸಹ ಹೇಳುವುದಿಲ್ಲ.
ಶಿವನಿಗೆ ಯಾವಾಗಲೂ ಪರಮಾತ್ಮನೆಂದು ಹೇಳುತ್ತಾರೆ. ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ. ಅದು
ಮೂಲವತನ, ಸೂಕ್ಷ್ಮವತನ ಮತ್ತು ಇದು ಸ್ಥೂಲವತನವಾಗಿದೆ. ಈಗ ನೀವು ಮಕ್ಕಳಿಗೆ ತಿಳಿದಿದೆ, ಇಲ್ಲಿ
ಪರಮಾತ್ಮನು ಸರ್ವವ್ಯಾಪಿಯನ್ನುವ ಜ್ಞಾನವಿಲ್ಲ. ಒಂದು ವೇಳೆ ಇವರಲ್ಲಿಯೂ ಸಹ ಪರಮಾತ್ಮನು ಇದ್ದಿದ್ದೇ
ಆದರೆ ಇವರನ್ನು ಪರಮಾತ್ಮಾಯ ನಮಃ ಎಂದು ಹೇಳಬೇಕಾಗಿತ್ತು. ಶರೀರದಲ್ಲಿದ್ದಾಗ ಪರಮಾತ್ಮಾಯ ನಮಃ ಎಂದು
ಹೇಳುವುದಿಲ್ಲ. ವಾಸ್ತವದಲ್ಲಿ ಮಹಾನ್ ಆತ್ಮ, ಪುಣ್ಯಾತ್ಮ, ಪಾಪಾತ್ಮ ಎಂಬ ಅಕ್ಷರಗಳಿವೆ. ಮಹಾನ್
ಪರಮಾತ್ಮ ಎಂದು ಹೇಳುವುದಿಲ್ಲ ಪುಣ್ಯ ಪರಮಾತ್ಮ. ಪಾಪ ಪರಮಾತ್ಮ ಎಂಬ ಮಾತುಗಳೂ ಸಹ ಇಲ್ಲ. ಇದೆಲ್ಲಾ
ಅರ್ಥ ಮಾಡಿಕ್ಕೊಳ್ಳುವ ಮಾತುಗಳಾಗಿವೆಯಲ್ಲವೇ ನೀವು ಮಕ್ಕಳಿಗೆ ಮಾತ್ರ ತಿಳಿದಿದೆ. ಈ ವಿದ್ಯೆಯಿಂದ
ನಾವು ಭವಿಷ್ಯದಲ್ಲಿ ದೇವಿ-ದೇವತೆಗಳಾಗುತ್ತೇವೆ. ಈ ರೀತಿ ಯಾರೂ ಸಹ ಹೇಳಲು ಸಾಧ್ಯವಿಲ್ಲ.
ಮನುಷ್ಯರಿಂದ ದೇವತೆಗಳು ನೀವಾಗುತ್ತೀರಿ. ದೇವತೆಗಳಲ್ಲಿ ಲಕ್ಷ್ಮೀ-ನಾರಾಯಣರು ಪ್ರಸಿದ್ಧರಾಗಿದ್ದಾರೆ.
ಆದ್ದರಿಂದ ಸತ್ಯ ನಾರಾಯಣ ಕಥೆ ಎಂದು ಹೇಳುತ್ತಾರೆ. ನಾರಾಯಣನ ಜೊತೆಗೆ ಲಕ್ಷ್ಮೀಯೂ ಸಹ ಅವಶ್ಯವಾಗಿ
ಇರುತ್ತಾರೆ. ಸತ್ಯ ರಾಮನ ಕಥೆಯೆಂದು ಹೇಳುವುದಿಲ್ಲ, ಸತ್ಯ ನಾರಾಯಣನ ಕಥೆಯೆಂದು ಹೇಳುತ್ತಾರೆ.
ಇದರಿಂದ ಏನಾಗುತ್ತದೆ? ನರನಿಂದ ನಾರಾಯಣನಾಗುತ್ತಾರೆ. ಬ್ಯಾರಿಸ್ಟರ್ ಮೂಲಕ ಬ್ಯಾರಿಸ್ಟರ್ ನ
ಕಥೆಯನ್ನು ಕೇಳಿ ಬ್ಯಾರಿಸ್ಟರ್ ಆಗುತ್ತಾರೆ. ನೀವು ಭವಿಷ್ಯದ 21 ಜನ್ಮಗಳ ಪ್ರಾಪ್ತಿಗಾಗಿ ಇಲ್ಲಿ
ಬರುತ್ತೀರಿ. 21 ಜನ್ಮದ ಪ್ರಾಪ್ತಿಯೂ ಸಹ ಸಂಗಮಯುಗವಾದಾಗ ಪ್ರಾಪ್ತಿಯಾಗುತ್ತದೆ. ನಾವು ಬಂದಿರುವುದೇ
ತಂದೆಯಿಂದ ಸತ್ಯಯುಗದ ರಾಜಧಾನಿಯ ಆಸ್ತಿಯನ್ನು ಪಡೆಯಲು ಎಂದು ನೀವು ಮಕ್ಕಳಿಗೆ ತಿಳಿದಿದೆ. ಇದಕ್ಕೆ
ಮೊದಲು ಶಿವ ತಂದೆಯು ನಮ್ಮ ತಂದೆಯೇ ಆಗಿದ್ದಾರೆ ಎಂಬುದು ಮೊದಲು ನಿಶ್ಚಯವಿರಬೇಕು. ಈ
ಬ್ರಹ್ಮಾರವರಿಗೂ ಸಹ ಅವರು ತಂದೆಯಾಗಿದ್ದಾರೆ. ಬಿ.ಕೆ.ಗಳಿಗೆ ಅವರು ತಾತನಾದರು. ತಂದೆಯು
ತಿಳಿಸುತ್ತಾರೆ - ಇದು ನನ್ನ ಸ್ವತ್ತಲ್ಲ. ದಾದಾನ ಆಸ್ತಿಯು ನಿಮಗೆ ಸಿಗುತ್ತದೆ, ಶಿವ ತಂದೆಯ ಬಳಿ
ಜ್ಞಾನ ರತ್ನಗಳ ಸಂಪತ್ತಿದೆ. ಒಂದೊಂದು ರತ್ನ ಲಕ್ಷಾಂತರ ರೂಪಾಯಿ ಬೆಲೆಬಾಳುವಂತಹದ್ದಾಗಿದೆ. ಇದರ
ಬೆಲೆಯು ಎಷ್ಟೊಂದು ಭಾರಿಯಾಗಿದೆ, 21 ಜನ್ಮಗಳವರೆಗೆ ರಾಜ್ಯಭಾಗ್ಯ ಎಂಬುದು ಯಾರ ಸ್ವಪ್ನದಲ್ಲಿಯೂ
ಇರುವುದಿಲ್ಲ. ಲಕ್ಷ್ಮೀ-ನಾರಾಯಣರ ಪೂಜೆಯನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಇವರು ಪದವಿಯನ್ನು
ಹೇಗೆ ಪಡೆದರೆಂಬುದು ಯಾರಿಗೂ ಸಹ ತಿಳಿದಿಲ್ಲ. ಸತ್ಯಯುಗದ ಆಯಸ್ಸು ಲಕ್ಷಾಂತರ ವರ್ಷಗಳೆಂದು
ಹೇಳಿದ್ದಾರೆ. ಆದ್ದರಿಂದ ಏನನ್ನೂ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇವರು ರಾಜ್ಯಭಾರ ಮಾಡಿ
5000 ವರ್ಷಗಳಾಯಿತು ಎಂಬುದನ್ನು ಈಗ ನೀವು ತಿಳಿದುಕೊಂಡಿದ್ದೀರಿ ಮತ್ತೆ ಒಂದನೇ ಸಂವತ್ಸರದಿಂದ ಇವರ
ಕಥೆಯು ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ. ಒಂದಾನೊಂದು ಕಾಲದಲ್ಲಿ...... ಈ ಭಾರತದಲ್ಲಿಯೇ
ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಭಾರತಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ, ಇದು ಯಾರ
ಬುದ್ಧಿಯಲ್ಲಿಯೂ ಇಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಕಲ್ಪದ ಆಯಸ್ಸು 5000
ವರ್ಷಗಳಾಗಿದೆ. ಈ ಶಾಸ್ತ್ರಗಳಲ್ಲಿ ಏನೆಲ್ಲವೂ ಬರೆದಿದ್ದಾರೆ, ಇದೂ ಸಹ ಡ್ರಾಮಾದಲ್ಲಿ
ನೊಂದಾವಣೆಯಾಗಿದೆ. ಇದನ್ನು ಕೇಳುವುದರಿಂದ ಏನೂ ಪರಿಣಾಮ ಆಗುವುದಿಲ್ಲ. ಎಷ್ಟೆಲ್ಲಾ ಆಡಂಬರವನ್ನು
ಮಾಡುತ್ತಾರೆ. ಜಗದಂಬಾ ಒಬ್ಬರೇ ಆಗಿದ್ದಾರೆ ಆದರೆ ಅವರ ಮೂರ್ತಿಗಳನ್ನು ಎಷ್ಟೊಂದು ಮಾಡುತ್ತಾರೆ.
ಜಗದಂಬಾ ಸರಸ್ವತಿಯು ಬ್ರಹ್ಮಾರವರ ಮಗಳಾಗಿದ್ದಾರೆ. ಬಾಕಿ 8-10 ಭುಜಗಳಂತೂ ಇಲ್ಲ. ತಂದೆಯು
ತಿಳಿಸುತ್ತಾರೆ - ಇದು ಭಕ್ತಿಮಾರ್ಗದ ದೊಡ್ಡ ಸಾಮಗ್ರಿಯಾಗಿದೆ. ಜ್ಞಾನದಲ್ಲಿ ಇದೇನೂ ಇರುವುದಿಲ್ಲ,
ಸುಮ್ಮನಿರಬೇಕಾಗಿದೆ. ತಂದೆಯ ನೆನಪು ಮಾಡಬೇಕು. ಕೆಲವು ಮಕ್ಕಳನ್ನು ಎಂದೂ ಸಹ ನೋಡಿಯೇ ಇಲ್ಲ. ಅಂತಹ
ಮಕ್ಕಳು ಬಹಳಷ್ಟಿದ್ದಾರೊ ಬರೆಯುತ್ತಾರೆ ಬಾಬಾ ನೀವು ನಮ್ಮನ್ನು ತಿಳಿದಿಲ್ಲ ಆದರೆ ನಾನು ಬಹಳ
ಚೆನ್ನಾಗಿ ತಿಳಿದುಕೊಂಡಿದ್ದೇನೆ, ನೀವು ಅದೇ ಬಾಬಾ ಆಗಿದ್ದೀರಿ. ಬಾಬಾ, ತಮ್ಮಿಂದ ನಾವು
ಆಸ್ತಿಯನ್ನು ತೆಗೆದುಕೊಳ್ಳದೇ ಬಿಡುವುದಿಲ್ಲ. ಮನೆಯಲ್ಲಿ ಕುಳಿತಿದ್ದಂತೆಯೇ ಅನೇಕರಿಗೆ
ಸಾಕ್ಷಾತ್ಕಾರವಾಗುತ್ತದೆ. ಭಲೇ ಸಾಕ್ಷಾತ್ಕಾರವಾಗದಿದ್ದರೂ ಸಹ ಬರೆಯುತ್ತಿರುತ್ತಾರೆ. ನೆನಪಿನಲ್ಲಿ
ಸಂಪೂರ್ಣವಾಗಿ ಲವಲೀನರಾಗಿ ಬಿಡುತ್ತಾರೆ. ತಂದೆಯು ಸದ್ಗತಿದಾತಾ ಆಗಿದ್ದಾರೆ. ಮಕ್ಕಳು ತಂದೆ ತಾಯಿಗೆ
ಅಂಟಿಕ್ಕೊಂಡು ಬಿಡುತ್ತಾರೆ. ಏಕೆಂದರೆ ತಂದೆ-ತಾಯಿ ಮಕ್ಕಳಿಗೆ ಸುಖವನ್ನು ಕೊಡುತ್ತಾರೆ. ಆದರೆ
ಈಗಿನ ಮಾತಾಪಿತರು ಯಾವುದೇ ಸುಖವನ್ನು ಕೊಡುವುದಿಲ್ಲ, ಇನ್ನೂ ವಿಕಾರದಲ್ಲಿ ಮುಳುಗಿಸಿ ಬಿಡುತ್ತಾರೆ.
ತಂದೆಯು ಹೇಳುತ್ತಾರೆ, ಕಳೆದದ್ದು ಕಳೆದುಹೋಯಿತು, ಈಗ ನಿಮಗೆ ಶಿಕ್ಷಣವು ಸಿಕ್ಕಿದೆ - ಮಕ್ಕಳೇ,
ಕಾಮ ವಿಕಾರದ ಮಾತನ್ನು ಬಿಟ್ಟು ಪವಿತ್ರರಾಗಿ ಏಕೆಂದರೆ ನೀವೀಗ ಕೃಷ್ಣ ಪುರಿಯಲ್ಲಿ ಹೋಗಬೇಕಾಗಿದೆ.
ಕೃಷ್ಣನ ರಾಜ್ಯವು ಸತ್ಯಯುಗದಲ್ಲಿಯೇ ಇರುತ್ತದೆ. ಮನುಷ್ಯರು ಕೃಷ್ಣನನ್ನು ದ್ವಾಪರದಲ್ಲಿ
ತೋರಿಸಿದ್ದಾರೆ. ಸತ್ಯಯುಗದ ರಾಜಕುಮಾರ ದ್ವಾಪರದಲ್ಲಿ ಹೋಗಿ ಗೀತೆಯನ್ನು ನುಡಿಸುತ್ತಾನೆಯೇ? ಅವನಂತೂ
ನಾರಾಯಣನಾಗಿ ಸತ್ಯಯುಗದಲ್ಲಿ ರಾಜ್ಯವನ್ನು ಮಾಡುತ್ತಾನೆ. ಭಗವಾನುವಾಚ - ಈ ಸಮಯದಲ್ಲಿ ಮನುಷ್ಯ
ಮಾತ್ರರೆಲ್ಲರೂ ಆಸುರೀ ಸ್ವಭಾವದಲ್ಲಿದ್ದಾರೆ. ಇವರನ್ನು ದೈವೀ ಸ್ವಭಾವವುಳ್ಳವರನ್ನಾಗಿ ಮಾಡಲು
ಗೀತೆಯ ಭಗವಂತ ಬರುತ್ತಾರೆ. ಆ ತಂದೆಗೆ ಬದಲಾಗಿ ಮಗನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಈ ಮಗನನ್ನು
ಮತ್ತೆ ದ್ವಾಪರದಲ್ಲಿ ತೆಗೆದುಕೊಂಡು ಬಂದಿದ್ದಾರೆ. ಇದೂ ಸಹ ದೊಡ್ಡ ತಪ್ಪೇ ಆಗಿದೆ. ಮತ್ತೆ ಯಾದವರು,
ಪಾಂಡವರು ಇದ್ದರೆ ಸಿದ್ಧವಾಗುವುದಿಲ್ಲ. ತಂದೆಯೇ ಹೇಳುತ್ತಾರೆ - ಮಕ್ಕಳೇ, ನೀವು ಶ್ರೇಷ್ಠ ದೈವೀ
ಕುಲದವರಾಗಿದ್ದಿರಿ ಮತ್ತೆ ಇಂತಹ ಸ್ಥಿತಿ ಹೇಗಾಯಿತು? ಈಗ ನಾನು ಮತ್ತೆ ನಿಮ್ಮನ್ನು ದೇವತೆಗಳನ್ನಾಗಿ
ಮಾಡುತ್ತೇನೆ. ಮನುಷ್ಯ ಮನುಷ್ಯನನ್ನು ಸ್ವರ್ಗದ ರಾಜನನ್ನಾಗಿ ಮಾಡಲು ಸಾಧ್ಯವಿಲ್ಲ. ಮನುಷ್ಯರು
ಸ್ವರ್ಗದ ಸ್ಥಾಪನೆ ಮಾಡಲು ಸಾಧ್ಯವೇನು? ಆತ್ಮನನ್ನು ಪರಮಾತ್ಮನೆಂದು ಕರೆಯುವುದು ಎಷ್ಟು ದೊಡ್ಡ
ತಪ್ಪಾಗಿದೆ. ಸನ್ಯಾಸಿಗಳಂತೂ ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಇದಂತೂ ತಂದೆಯ
ಕೆಲಸವೇ ಆಗಿದೆ. ಆರ್ಯ ಸಮಾಜದವರು ಆರ್ಯ ಸಮಾಜಿಗಳನ್ನಾಗಿ ಮಾಡುತ್ತಾರೆ. ಕ್ರಿಶ್ಚಿಯನ್ನರು
ಕ್ರಿಶ್ಚಿಯನ್ನರನ್ನಾಗಿ ಮಾಡುತ್ತಾರೆ. ಹಾಗೆಯೇ ತಾವು ಯಾರ ಬಳಿ ಹೋಗುತ್ತೀರೋ ಅವರು ಅವರಂತೆಯೇ
ಮಾಡುತ್ತಾರೆ. ದೇವತಾ ಧರ್ಮವು ಸತ್ಯಯುಗದಲ್ಲಿರುತ್ತದೆ ಅಂದಮೇಲೆ ತಂದೆಯು ಸಂಗಮಯುಗದಲ್ಲಿ
ಬರಬೇಕಾಗುತ್ತದೆ. ಇದು ಮಹಾಭಾರತ ಯುದ್ಧವಾಗಿದೆ, ಈ ಯುದ್ಧದ ಮೂಲಕವೇ ನಿಮ್ಮ ವಿಜಯವಾಗುತ್ತದೆ,
ವಿನಾಶದ ನಂತರ ಜಯ ಜಯಕಾರವಾಗುತ್ತದೆ. ತಮಗೆ ಗೊತ್ತಿದೆ, ಅವಶ್ಯವಾಗಿ ವಿನಾಶವಾಗುತ್ತದೆ. ಇಂದು
ಯಾರಾದರೂ ಸಿಂಹಾಸನದ ಮೇಲೆ ಕುಳಿತಿದ್ದರೆ ಅವರನ್ನು ಇಳಿಸುವುದರಲ್ಲಿ ತಡ ಮಾಡುವುದಿಲ್ಲ. ಇದಕ್ಕೆ
ಸ್ವರ್ಗವೆಂದು ಹೇಳೋಣವೇ? ಇದಂತೂ ಪೂರ್ಣ ನರಕವಾಗಿದೆ. ಇದಕ್ಕೆ ಸ್ವರ್ಗವೆನ್ನುವುದು ತಪ್ಪಾಗಿದೆ.
ಮನುಷ್ಯರು ಎಷ್ಟೊಂದು ದುಃಖಿಗಳಾಗಿದ್ದಾರೆ. ಇಂದು ಯಾರಾದರೂ ಜನ್ಮ ಪಡೆದರೆ ಖುಷಿ, ಸುಖ ಮತ್ತೆ ಮರಣ
ಹೊಂದಿದರೆ ದುಃಖವಾಗುತ್ತದೆ. ಇಲ್ಲಂತೂ ಎಲ್ಲದರಿಂದ ನಷ್ಟಮೋಹಿಗಳಾಗಬೇಕು. ಇಲ್ಲವೆಂದರೆ ಬಾಬಾ
ಸರ್ವೀಸ್ ಮಾಡಲು ಹೋಗಿ ಎಂದು ಎಂದೂ ಸಹ ಹೇಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನಂತೂ
ನಷ್ಟಮೋಹಿಯಾಗಿದ್ದೇನೆ, ಯಾವುದೇ ವಸ್ತುವಿನೊಂದಿಗೆ ಏಕೆ ಮೋಹವನ್ನಿಟ್ಟುಕೊಳ್ಳಲಿ? ನಾನೇನು
ಗೃಹಸ್ಥಿಯೇ! ತಾವು ಮಕ್ಕಳಿಗೆ ಗೊತ್ತಿದೆ, ಖಂಡಿತ ಈ ಬಿದುರಿನ ಕಾಡಿಗೆ ಬೆಂಕಿ ಬೀಳಬೇಕು,
ವಿನಾಶದಲ್ಲಿ ತಡವಾಗುವುದಿಲ್ಲ. ತಾವು ಎಲ್ಲಿಯೇ ಭಾಷಣ ಮಾಡಿದರೆ ಆಗ ತಿಳಿಸುತ್ತೀರಿ, ಬೇಹದ್ದಿನ
ತಂದೆಯ ಬಳಿ ಬಂದು ಆಸ್ತಿಯನ್ನು ಪಡೆಯಿರಿ. ಹದ್ದಿನ ತಂದೆಯಿಂದ ಹದ್ದಿನ ಆಸ್ತಿಯು ಸಿಗುತ್ತದೆ. ತಾವು
63 ಜನ್ಮಗಳನ್ನು ಈ ನರಕದಲ್ಲಿ ಪಡೆದಿದ್ದೀರಿ. ನಾನು 21 ಜನ್ಮಗಳಿಗಾಗಿ ನಿಮಗೆ ಸ್ವರ್ಗದ
ಆಸ್ತಿಯನ್ನು ಕೊಡಲು ಬಂದಿದ್ದೇನೆ. ಈಗ ರಾವಣನ ಆಸ್ತಿಯು ಚೆನ್ನಾಗಿದೆಯೇ ಅಥವಾ ರಾಮನ ಆಸ್ತಿಯು
ಚೆನ್ನಾಗಿದೆಯೇ? ಒಂದು ವೇಳೆ ರಾವಣನದು ಚೆನ್ನಾಗಿದ್ದರೆ ರಾವಣನನ್ನು ಏಕೆ ಸುಡುತ್ತೀರಿ?
ಶಿವಬಾಬಾರವರನ್ನು ಎಂದಾದರೂ ಸುಡುವಿರೇನು? ಕೃಷ್ಣನನ್ನು ಸುಡುತ್ತಾರೇನು? ಇದಂತೂ ರಾವಣನ
ಸಂಪ್ರದಾಯವಾಗಿದೆ, ವಿಕಾರದಿಂದ ಜನ್ಮ ಪಡೆಯುತ್ತಾರೆ, ಇದು ವೇಶ್ಯಾಲಯ, ವಿಷಯ ಸಾಗರವಾಗಿದೆ. ಅದು
ನಿರ್ವಿಕಾರಿ, ಶಿವಾಲಯ, ಅಮೃತ ಸಾಗರವಾಗಿದೆ. ಕ್ಷೀರ ಸಾಗರದಲ್ಲಿ ವಿಷ್ಣುವನ್ನು ತೋರಿಸುತ್ತಾರಲ್ಲವೆ.
ಈಗ ಕ್ಷೀರ ಸಾಗರ ಇರುತ್ತದೆಯೇ. ಹಾಲಂತೂ ಹಸುವಿನಿಂದ ಬರುತ್ತದೆ, ಈಗ ನೋಡಿ - ಈಶ್ವರ ಸರ್ವವ್ಯಾಪಿ
ಎಂದು ಹೇಳುತ್ತಾರೆ ಮತ್ತೆ ಸ್ವಯಂನ್ನು ಶಿವೋಹಂ ಎನ್ನುತ್ತಾರೆ ಏಕೆಂದರೆ ಪವಿತ್ರವಾಗಿರುತ್ತಾರೆ.
ನಿಮ್ಮಲ್ಲಿ ಈಶ್ವರನಿದ್ದಾನೆ ಎಂದು ಹೇಳುತ್ತಾರೇನು? ನಿಮ್ಮಲ್ಲಿ ಇಲ್ಲ, ಏಕೆಂದರೆ ತಾವು
ಪತಿತರಾಗಿದ್ದೀರಿ. ಆತ್ಮವು ಹೇಳುತ್ತದೆ - ನಾನು ಈಗ ಪರಮಪಿತ ಪರಮಾತ್ಮನ ಮೂಲಕ
ಪಾವನನಾಗುತ್ತಿದ್ದೇನೆ, ಮತ್ತೆ ಪಾವನವಾಗಿ ರಾಜ್ಯ ಮಾಡುತ್ತೇನೆ. ತಾವು ಅನೇಕ ಬಾರಿ ಆಸ್ತಿಯನ್ನು
ಪಡೆದಿದ್ದೀರಿ ಮತ್ತೆ ಕಳೆದುಕೊಂಡಿದ್ದೀರಿ. ಈ ಡ್ರಾಮಾದ ಚಕ್ರವು ಬುದ್ಧಿಯಲ್ಲಿ ಕುಳಿತುಕೊಂಡಿದೆ.
ತಂದೆಯು ತಿಳಿಸುತ್ತಾರೆ - ತಾವೆಲ್ಲಾ ಪಾರ್ವತಿಯರಾಗಿದ್ದೀರಿ, ನಾನು ಶಿವನಾಗಿದ್ದೇನೆ. ಕಥೆ
ಮುಂತಾದವುಗಳೆಲ್ಲವೂ ಇಲ್ಲಿಯ ಮಾತಾಗಿದೆ, ಸೂಕ್ಷ್ಮವತನದಲ್ಲಂತೂ ಕಥೆ ಮುಂತಾದ ಮಾತಿಲ್ಲ. ತಮ್ಮನ್ನು
ಅಮರ ಪುರಿಯ ಮಾಲೀಕರನ್ನಾಗಿ ಮಾಡಲು ತಮಗೆ ಅಮರ ಕಥೆಯನ್ನು ಹೇಳುತ್ತಾರೆ. ಅದು ಅಮರಲೋಕ, ಅಲ್ಲಿ
ಸುಖವೇ ಸುಖವಿದೆ. ಮೃತ್ಯು ಲೋಕದಲ್ಲಿ ಆದಿ-ಮಧ್ಯ-ಅಂತ್ಯ ದುಃಖವಿದೆ ಎಷ್ಟು ಚೆನ್ನಾಗಿ
ತಿಳಿಸುತ್ತಾರೆ. ಯಾರು ಕಲ್ಪದ ಮೊದಲು ತಂದೆಯಿಂದ ಆಸ್ತಿಯನ್ನು ಪಡೆದಿದ್ದರೋ ಅವರದೇ ಈಗ
ಪುರುಷಾರ್ಥವು ನಡೆಯುತ್ತದೆ. ಇಲ್ಲಿಯವರೆಗೆ ಸಂಸ್ಥೆ (ಮಿಶಿನರಿ) ಏನು ನಡೆಯುತ್ತಿದೆಯೋ, ಮೊದಲು
ಇಷ್ಟೇ ನಡೆದಿತ್ತು, ಭಲೆ ಬಾಬಾ ಹೇಳುತ್ತಾರೆ - ತಾವು ಸರ್ವೀಸನ್ನು ಚೆನ್ನಾಗಿ ಮಾಡುತ್ತಿಲ್ಲ.
ತಣ್ಣಗಿದೆ ಎಂದು ಹೇಳುತ್ತಾರೆ. ಆದರೆ ಇದನ್ನೂ ಸಹ ತಿಳಿಸುತ್ತಾರೆ - ಕಲ್ಪದ ಮೊದಲು ತಾವು ಯಾವ
ಸರ್ವೀಸನ್ನು ಮಾಡಿದ್ದೀರೋ ಅದನ್ನೇ ಮಾಡುತ್ತೀರಿ. ಆದರೂ ಪುರುಷಾರ್ಥವನ್ನು ಮಾಡುತ್ತಲೇ ಇರಬೇಕು.
ಚಿಕ್ಕ-ಚಿಕ್ಕ ದೀಪಗಳನ್ನು ಬಿರುಗಾಳಿಯು ಅಲುಗಾಡಿಸಿ ಬಿಡುತ್ತದೆ. ಎಲ್ಲರ ಅಂಬಿಗ ಒಬ್ಬ
ತಂದೆಯಾಗಿದ್ದಾರೆ. ಹೇಳಿಕೆಯಿದೆ - ಅಂಬಿಗ ನನ್ನ ದೋಣಿಯನ್ನು ಪಾರು ಮಾಡು.... ಡ್ರಾಮಾದ ಲೀಲೆಯೇ ಈ
ರೀತಿಯಾಗಿದೆ, ಎಲ್ಲರೂ ಆ ಹಳೆಯ ಜಗತ್ತಿನ ಕಡೆ ಹೋಗುತ್ತಿದ್ದಾರೆ, ಇಲ್ಲಿ ಕಡಿಮೆಯಿದ್ದಾರೆ. ನೀವು
ಎಷ್ಟೊಂದು ಕಡಿಮೆ ಇದ್ದೀರಿ. ಭಲೇ ಅಂತಿಮದಲ್ಲಿ ಬಹಳಷ್ಟು ಆಗುತ್ತೀರಿ ಆದರೂ ಹಗಲು-ರಾತ್ರಿಯ
ವ್ಯತ್ಯಾಸವಿದೆ. ಅವರೆಲ್ಲರೂ ರಾವಣ ಸಂಪ್ರದಾಯದವರು. ತಂದೆಯು ಬಹಳ ನಶೆಯನ್ನು ಏರಿಸುತ್ತಾರೆ, ನಂತರ
ಹೊರಗಡೆ ಕುಟುಂಬ ಪರಿವಾರದವರ ಮುಖ ನೋಡಿದರೆ ನಶೆಯೇ ಹಗುರವಾಗಿ ಬಿಡುತ್ತದೆ. ಈ ರೀತಿ ಆಗಬಾರದು.
ಆತ್ಮಗಳಿಗೆ ನೀವು ತಂದೆಯ ಜೊತೆ ವಾರ್ತಾಲಾಪ ಮಾಡಿ ಎಂದು ಹೇಳಲಾಗುತ್ತದೆ - ಬಾಬಾ, ನಾವು
ನಿಮ್ಮವರಾಗಿದ್ದೆವು, ನೀವು ಸ್ವರ್ಗಕ್ಕೆ ಕಳುಹಿಸಿ ಕೊಟ್ಟಿದ್ದಿರಿ. 21 ಜನ್ಮಗಳು ರಾಜ್ಯ ಮಾಡಿದೆವು
ಮತ್ತೆ 63 ಜನ್ಮಗಳು ದುಃಖವನ್ನು ಪಡೆದೆವು. ಈಗ ನಿಮ್ಮಿಂದ ಆಸ್ತಿಯನ್ನು ಪಡೆದೇ ಪಡೆಯುತ್ತೇವೆ.
ಬಾಬಾ, ತಾವು ಎಷ್ಟೊಂದು ಒಳ್ಳೆಯವರು, ನಾವು ನಿಮ್ಮನ್ನು ಅರ್ಧಕಲ್ಪ ಮರೆತಿದ್ದೆವು. ಬಾಬಾ
ಹೇಳುತ್ತಾರೆ - ಇದಂತೂ ಅನಾದಿ ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ, ಇದೂ ಸಹ ನನ್ನ ಕೆಲಸವಾಗಿದೆ.
ನಾನು ಕಲ್ಪ-ಕಲ್ಪ ಬಂದು ತಾವು ಮಕ್ಕಳನ್ನು ಮಾಯೆಯಿ೦ದ ಬಿಡಿಸಿ, ಬ್ರಾಹ್ಮಣರನ್ನಾಗಿ ಮಾಡಿ,
ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ಹೇಳುತ್ತೇನೆ. ಯಾವಾಗ ಸ್ವರ್ಗ ಮಾಡಬೇಕಾಗುತ್ತದೆಯೋ ಆಗಲೇ
ನಾನು ಬರುತ್ತೇನೆ. ತಾವೀಗ ಫರಿಸ್ಥೆಗಳಾಗುತ್ತಿದ್ದೀರಿ. ಪವಿತ್ರತೆಯ ಸಾಕ್ಷಾತ್ಕಾರವನ್ನು
ಮಾಡಿಸುತ್ತಾರೆ. ತಾವು ನಷ್ಟೋಮೋಹಿಗಳೂ ಸಹ ಆಗಬೇಕು. ಬಾಬಾನಿಗೆ ಒಂದು ವೇಳೆ ಯಾರಾದರೂ ಬಾಬಾ, ನಾವು
ಸರ್ವೀಸಿಗೆ ಹೋಗುವುದೇ ಎಂದು ಕೇಳುತ್ತಾರೆ. ಆಗ ಬಾಬಾ ಹೇಳುತ್ತಾರೆ - ಒಂದು ವೇಳೆ ನೀವು
ನಷ್ಟಮೋಹಿಯಾಗಿ ಮಾಲೀಕರಾಗಿದ್ದರೆ ಎಲ್ಲಿ ಬೇಕಾದರೂ ಹೋಗಿ. ಮಾಲೀಕನಾಗಿದ್ದರೆ ಕುರುಡರಿಗೆ
ಮಾರ್ಗವನ್ನು ತೋರಿಸಬೇಕು. ನಷ್ಟಮೋಹಿಗಳಾಗಿಲ್ಲ ಆದುದರಿಂದ ಕೇಳುತ್ತಾರೆ. ನಷ್ಟಮೋಹಿಗಳಾಗಿದ್ದರೆ
ಅವರು ಸರ್ವೀಸಿಗೆ ಓಡುತ್ತಿರುತ್ತಾರೆ, ಒಂದು ಕಡೆ ಇರುವುದಿಲ್ಲ. ಗುರಿ ಬಹಳ ದೊಡ್ಡದಾಗಿದೆ, ತಂದೆಯು
ಸೇವಾಧಾರಿ ಮಕ್ಕಳ ಮೇಲೆ ಬಲಿಹಾರಿಯಾಗುತ್ತಾರೆ. ಈ ಬಾಬಾ ಮೊದಲ ನಂಬರಿನಲ್ಲಿದ್ದರಲ್ಲವೆ. ಎಲ್ಲರೂ
ತ್ಯಾಗ ಮಾಡುತ್ತಾರೆ ಆದರೆ ಇವರದು ಮೊದಲ ನಂಬರ್ ಆಗಿದೆ. ಬಾಬಾ ಹೇಳುತ್ತಾರೆ - ಆತ್ಮಾಭಿಮಾನಿಗಳಾಗಿ
ಅಂದರೆ ತಮ್ಮನ್ನು ಅಶರೀರಿಯೆಂದು ತಿಳಿಯಿರಿ. ಬೇಹದ್ದಿನ ತಂದೆಯು ತಮಗೆ 21 ಜನ್ಮಗಳ ಆಸ್ತಿಯನ್ನು
ಕೊಡುತ್ತಾರೆ. ಒಳ್ಳೆಯದು - ಅವರು ಹೇಗೆ ಬರುತ್ತಾರೆ? ಬರೆಯಲಾಗಿದೆ - ಬ್ರಹ್ಮನ ಮುಖದಿಂದ ರಚನೆಯು
ರಚಿಸುತ್ತಾರೆ ಅಂದಾಗ ಖಂಡಿತ ಬ್ರಹ್ಮಾರವರಲ್ಲಿಯೇ ಬರುತ್ತಾರೆ. ಬ್ರಹ್ಮನಿಗೇ ಪ್ರಜಾಪಿತನೆಂದು
ಹೇಳಲಾಗುತ್ತದೆ ಅಂದಾಗ ಆ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಿರಿ. ಈ ಮಾತುಗಳನ್ನು
ತಿಳಿಸುವುದರಲ್ಲಿ ನಾಚಿಕೆಯ ಯಾವುದೇ ಮಾತಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಬ್ರಹ್ಮಾ
ತಂದೆಯ ಸಮಾನ ತ್ಯಾಗದಲ್ಲಿ ಮೊದಲನೇ ನಂಬರ್ ನಲ್ಲಿ ಹೋಗಬೇಕು, ರುದ್ರನ ಕೊರಳಿನ ಹಾರವಾಗಲು
ಬದುಕಿದ್ದಂತೆಯೇ ಬಲಿಹಾರಿಗಳಾಗಬೇಕು.
2. ಸೇವಾಧಾರಿಗಳಾಗಲು ನಷ್ಟಮೋಹಿಗಳಾಗಬೇಕು, ಕುರುಡರಿಗೆ ಮಾರ್ಗವನ್ನು ಹೇಳಬೇಕು.
ವರದಾನ:
ಆಶೀರ್ವಾದ ಮತ್ತು
ಔಷಧಿಯ ಮೂಲಕ ಶರೀರ ಮತ್ತು ಮನಸ್ಸಿನ ಕಾಯಿಲೆಯಿಂದ ಮುಕ್ತರಾಗಿರುವಂತಹ ಸದಾ ಸಂತುಷ್ಠ ಆತ್ಮ ಭವ.
ಕೆಲವೊಮ್ಮೆ
ಶರೀರದ ಕಾಯಿಲೆಯೂ ಸಹ ಶರೀರದ ಕಾಯಿಲೆಯಿಂದ ಮನಸ್ಸು ತೊಂದರೆಗೊಳಗಾಗಬಾರದು. ಸದಾ ಖುಷಿಯಲ್ಲಿ
ನಾಟ್ಯವಾಡುತ್ತಿರಿ, ಆಗ ಶರೀರವೂ ಸಹಾ ಸರಿಯಾಗಿ ಬಿಡುವುದು. ಮನಸ್ಸಿನ ಖುಷಿಯಿಂದ ಶರೀರವನ್ನು ನಡೆಸಿ
ಆಗ ಎರಡಕ್ಕೂ ವ್ಯಾಯಾಮವಾಗಿ ಬಿಡುವುದು. ಖುಷಿಯಾಗಿದೆ ಆಶೀರ್ವಾದ ಮತ್ತು ವ್ಯಾಯಾಮವಾಗಿದೆ ಔಷಧಿ.
ಆದ್ದರಿಂದ ಆಶೀರ್ವಾದ ಮತ್ತು ಔಷಧಿ ಎರಡರಿಂದಲೂ ಶರೀರ, ಮನಸ್ಸಿನ ಖಾಯಿಲೆಯಿಂದ ಮುಕ್ತರಾಗಿ
ಬಿಡುವಿರಿ. ಖುಷಿಯಿಂದ ನೋವು ಸಹ ಮರೆತು ಹೋಗಿ ಬಿಡುವುದು. ಸದಾ ತನು-ಮನದಿಂದ
ಸಂತುಷ್ಠರಾಗಿರಬೇಕೆಂದರೆ ಹೆಚ್ಚು ಯೋಚಿಸಬೇಡಿ. ಅಧಿಕವಾಗಿ ಯೋಚಿಸುವುದರಿಂದ ಸಮಯ ವ್ಯರ್ಥವಾಗುವುದು
ಮತ್ತು ಖುಷಿ ಕಳೆದು ಹೋಗುವುದು.
ಸ್ಲೋಗನ್:
ವಿಸ್ತಾರದಲ್ಲಿಯೂ
ಸಾರವನ್ನು ನೋಡುವ ಅಭ್ಯಾಸ ಮಾಡಿ ಆಗ ಸ್ಥಿತಿ ಸದಾ ಏಕರಸವಾಗಿರುವುದು.