14.12.18         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಮ್ಮ ಸರ್ನೇಮ್ (ಕುಲದ ಹೆಸರು) ಸದಾ ನೆನಪಿಟ್ಟುಕೊಳ್ಳಿ, ನೀವು ಈಶ್ವರೀಯ ಸಂತಾನರಾಗಿದ್ದೀರಿ, ನಿಮ್ಮದು ಈಶ್ವರೀಯ ಕುಲವಾಗಿದೆ, ನೀವು ದೇವತೆಗಳಿಗಿಂತಲೂ ಶ್ರೇಷ್ಠರಾಗಿದ್ದೀರಿ, ನಿಮ್ಮ ನಡವಳಿಕೆಯು ಬಹಳ ಶ್ರೇಷ್ಠವಾಗಿರಬೇಕಾಗಿದೆ.”

ಪ್ರಶ್ನೆ:
ತಂದೆಯು ಮಕ್ಕಳನ್ನು ತಮ್ಮ ಸಮಾನ ಪ್ರೇಮ ಸಾಗರನನ್ನಾಗಿ ಮಾಡಿದ್ದಾರೆ, ಅದರ ಗುರುತೇನಾಗಿದೆ?

ಉತ್ತರ:

ತಾವು ಮಕ್ಕಳು ತಂದೆಯ ಸಮಾನ ಪ್ರಿಯವಾಗಿದ್ದೀರಿ, ಆದ್ದರಿಂದ ನಿಮ್ಮ ನೆನಪಾರ್ಥ ಚಿತ್ರಗಳನ್ನು ಎಲ್ಲರೂ ಇಷ್ಟ ಪಡುತ್ತಾರೆ, ಪ್ರೀತಿಯಿಂದ ನೋಡುತ್ತಿರುತ್ತಾರೆ. ಲಕ್ಷ್ಮೀ-ನಾರಾಯಣರು ಸದಾ ಹರ್ಷಿತಮುಖಿ, ರಮಣೀಕವಾಗಿದ್ದಾರೆ. ಈಗ ತಮಗೆ ಗೊತ್ತಿದೆ - ಬಾಬಾ, ನಮ್ಮನ್ನು ಜ್ಞಾನ-ಯೋಗದಿಂದ ಬಹಳ-ಬಹಳ ಮಧುರರನ್ನಾಗಿ ಮಾಡುತ್ತಿದ್ದಾರೆ. ತಾವು ಮುಖದಿಂದ ಸದಾ ಜ್ಞಾನ ರತ್ನಗಳನ್ನೇ ಹೇಳುತ್ತಿರಬೇಕು.

ಗೀತೆ:
ತಾವು ಪ್ರೀತಿಯ ಸಾಗರರಾಗಿದ್ದೀರಿ

ಓಂ ಶಾಂತಿ.
ತಾವು ಪ್ರೀತಿಯ ಸಾಗರರೆಂದು ಯಾರ ಮಹಿಮೆಯನ್ನು ಹಾಡುತ್ತಾರೆ? ಇದು ಯಾವುದೇ ಮನುಷ್ಯರ ಮಹಿಮೆಯಲ್ಲ. ತಾವು ಪ್ರೀತಿ, ಶಾಂತಿ ಹಾಗೂ ಪವಿತ್ರತೆಯ ಸಾಗರನೆಂದು ಹೇಳಲಾಗುತ್ತದೆ. ಈಗ ತಾವು ಪವಿತ್ರರಾಗುತ್ತೀರಿ. ಈ ರೀತಿ ಅನೇಕರಿದ್ದಾರೆ ಅವರು ವಿವಾಹ ಮಾಡಿಕೊಳ್ಳುವುದಿಲ್ಲ, ಸನ್ಯಾಸತ್ವವನ್ನು ಪಡೆಯದೇ ಅನೇಕರು ಪವಿತ್ರರಾಗಿರುತ್ತಾರೆ. ಗೃಹಸ್ಥ ವ್ಯವಹಾರದಲ್ಲಿ ಜನಕನ ರೀತಿ ಜ್ಞಾನವೆಂದು ಗಾಯನವೂ ಇದೆ, ಚರಿತ್ರೆಯೂ ಇದೆ. ಜನಕನು ಹೇಳಿದನು, ನಮಗೆ ಬ್ರಹ್ಮ್ ಜ್ಞಾನವನ್ನು ಹೇಳಿ ಎಂದು. ವಾಸ್ತವಿಕವಾಗಿ ಬ್ರಹ್ಮ ಜ್ಞಾನವೆಂದು ಹೇಳಬೇಕು. ಪರಮಪಿತ ಪರಮಾತ್ಮ ಬಂದು ಬ್ರಹ್ಮನ ಮುಖಾಂತರ ಬ್ರಹ್ಮಾಕುಮಾರ-ಕುಮಾರಿಯರಿಗೆ ಜ್ಞಾನವನ್ನು ಕೊಡುತ್ತಾರೆ.

ಈ ಸಮಯದಲ್ಲಿ ನಮ್ಮ ಅಡ್ಡ ಹೆಸರು ಬ್ರಹ್ಮಾಕುಮಾರ-ಕುಮಾರಿ, ನಾವು ಈಶ್ವರೀಯ ಸಂತಾನರಾಗಿದ್ದೇವೆ. ನಾವು ಈಶ್ವರನ ಸಂತಾನರೆಂದು ಎಲ್ಲರೂ ಹೇಳುತ್ತಾರೆ ಅಂದಮೇಲೆ ಸಹೋದರ-ಸಹೋದರರಾದರು, ಮತ್ತೆ ತಮ್ಮನ್ನು ತಂದೆಯೆಂದು ಹೇಳಲು ಸಾಧ್ಯವಿಲ್ಲ. ಪಿತೃತ್ವವೆಂದಲ್ಲ ಭ್ರಾತೃತ್ವವೆಂದು ಹೇಳಲಾಗುತ್ತದೆ. ಒಂದಂತೂ ತಾವು ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ, ಇನ್ನೊಂದು ತಾವು ಯಾರ ಕುಮಾರ-ಕುಮಾರಿಯರೋ ಅವರಿಗೆ ಮಮ್ಮಾ-ಬಾಬಾ ಎಂದು ಹೇಳುತ್ತೀರಿ. ಮಕ್ಕಳಿಗೆ ಗೊತ್ತಿದೆ, ನಾವು ಶಿವ ತಂದೆಯ ಮೊಮ್ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ಭಾರತದಲ್ಲಿ ಅನೇಕ ವೇದ, ಶಾಸ್ತ್ರ, ಪುರಾಣ ಮುಂತಾದವುಗಳನ್ನೆಲ್ಲವನ್ನೂ ಓದುತ್ತಾರೆ. ಸರ್ವ ಶಾಸ್ತ್ರಮಯಿ ಶಿರೋಮಣಿ ಶ್ರೀ ಮದ್ಭಗವದ್ಗೀತೆಯಾಗಿದೆ. ಗೀತೆಯಿಂದ ಸತ್ಯಯುಗದ ಸ್ಥಾಪನೆಯಾಗುತ್ತದೆ. ಗೀತೆಯ ಜ್ಞಾನವನ್ನು ಪರಮಪಿತ ಪರಮಾತ್ಮ ನೀಡಿದ್ದಾಗಿದೆ. ಇವೆಲ್ಲಾ ಜ್ಞಾನ ನದಿಗಳು ಜ್ಞಾನ ಸಾಗರನಿಂದ ಬಂದಿರುವಂತಹದ್ದಾಗಿದೆ. ನೀರಿನ ಗಂಗೆಯಿಂದ ಪಾವನರಾಗುವ ಜ್ಞಾನ ಸಿಗುತ್ತದೆಯೇನು? ಸದ್ಗತಿಯೆಂದರೆ ಪಾವನರಾಗುವುದು. ಇದಂತೂ ತಮೋಪ್ರಧಾನ, ಪತಿತ ಜಗತ್ತಾಗಿದೆ. ಒಂದುವೇಳೆ ಪಾವನರಾಗಿ ಬಿಟ್ಟರೆ ಎಲ್ಲಿ ಇರುವುದು, ಹಿಂತಿರುಗಿ ಹೋಗಲು ಸಾಧ್ಯವಿಲ್ಲ, ನಿಯಮವೂ ಇಲ್ಲ. ಎಲ್ಲರೂ ಪುನರ್ಜನ್ಮವನ್ನು ಪಡೆದು ತಮೋಪ್ರಧಾನರಾಗಲೇಬೇಕು. ತಂದೆಯು ಜ್ಞಾನ ಸಾಗರನಾಗಿದ್ದಾರೆ. ತಾವು ಪ್ರತ್ಯಕ್ಷವಾಗಿ ಕೇಳಿಸಿಕೊಳ್ಳುತ್ತಿದ್ದೀರಿ, ಇದನ್ನು ಯಾರೂ ಸಹ ಕಾಪಿ ಮಾಡಲು ಸಾಧ್ಯವಿಲ್ಲ. ನಾವೂ ಸಹ ಅದೇ ಜ್ಞಾನವನ್ನು ಕೊಡುತ್ತೇವೆಂದು ಭಲೆ ಕೆಲವರು ಹೇಳುತ್ತಾರೆ ಆದರೆ ಇಲ್ಲ. ಇಲ್ಲಿ ಯಾರಿಗೇ ಜ್ಞಾನ ಸಿಕ್ಕಿದರೂ ಅವರು ಬ್ರಹ್ಮಾಕುಮಾರ-ಕುಮಾರಿಯರೆಂದು ಹೇಳಿಸಿಕೊಳ್ಳುತ್ತಾರೆ. ಮತ್ತ್ಯಾವುದೇ ಸಂಸ್ಥೆಯಲ್ಲಿಯೂ ಬ್ರಹ್ಮಾಕುಮಾರ-ಕುಮಾರಿಯರೆಂದು ಹೇಳಿಸಿಕೊಳ್ಳುವುದಿಲ್ಲ. ಭಲೆ ಇದೇ ರೀತಿಯಾಗಿರುವ ವಸ್ತ್ರವನ್ನು ತೊಡಬಹುದು. ಆದರೆ ನಾವು ಬ್ರಹ್ಮನ ಮಕ್ಕಳೆಂದು ಹೇಗೆ ಹೇಳುತ್ತಾರೆ? ನಾನು ಇವರಿಗೆ ಬ್ರಹ್ಮನೆಂದು ಹೆಸರನ್ನಿಟ್ಟಿದ್ದೇನೆ, ಇವರಿಗೆ ತಿಳಿಸುತ್ತೇನೆ. ನಿಮಗೂ ಸಹ ಹೇಳುತ್ತೇನೆ, ನೀವು ಬ್ರಹ್ಮಾಕುಮಾರ-ಕುಮಾರಿಯರು ನಿಮ್ಮ ಜನ್ಮವನ್ನು ತಿಳಿದುಕೊಂಡಿಲ್ಲ ಆದರೆ ನನಗೆ ಗೊತ್ತಿದೆ. ಈಗ ಸಂಗಮಯುಗದಲ್ಲಿ ಪಾದ ಹಾಗೂ ಶಿಖೆಯಿದೆ. ಇದರಿಂದ ಹಳೆಯ ಪ್ರಪಂಚ ಪರಿವರ್ತನೆಯಾಗಿ ಹೊಸದಾಗುತ್ತದೆ. ಸತ್ಯಯುಗ, ತ್ರೇತಾ, ದ್ವಾಪರ, ಕಲಿಯುಗ....... ಸೃಷ್ಟಿಯು ವೃದ್ಧಿಯಾಗುತ್ತಾ ಇರುತ್ತದೆ. ಈಗ ಅಂತ್ಯವಾಗಿದೆ. ಪ್ರಪಂಚವು ಪರಿವರ್ತನೆಯಾಗಿ ಹೊಸದಾಗಬೇಕು. ತಂದೆಯು ಬಂದು ತ್ರಿಕಾಲದರ್ಶಿಯನ್ನಾಗಿ ಮಾಡುತ್ತಾರೆ. ಅವರು ಪ್ರೀತಿಯ ಸಾಗರರಾಗಿದ್ದಾರೆ ಅಂದಮೇಲೆ ಆ ರೀತಿ ಪ್ರಿಯರನ್ನಾಗಿ ಮಾಡುತ್ತಾರೆ. ಲಕ್ಷ್ಮೀ-ನಾರಾಯಣರನ್ನು ನೋಡಿ, ಎಷ್ಟೊಂದು ಆಕರ್ಷಣೆಯಿದೆ! ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ಎಷ್ಟು ರಮಣೀಕತೆ ಹರ್ಷಿತಮುಖತೆಯನ್ನು ನೋಡುತ್ತೀರೋ ಅಷ್ಟು ರಾಮ-ಸೀತೆಯರ ಚಿತ್ರದಲ್ಲಿಲ್ಲ. ಲಕ್ಷ್ಮೀ-ನಾರಾಯಣರ ಚಿತ್ರವನ್ನು ನೋಡುತ್ತಿದ್ದಂತೆಯೇ ಖುಷಿಯಾಗುತ್ತದೆ. ರಾಧೆ-ಕೃಷ್ಣರ ಮಂದಿರಕ್ಕೆ ಹೋಗುವುದರಿಂದ ಅಷ್ಟು ಖುಷಿಯಾಗುವುದಿಲ್ಲ. ಲಕ್ಷ್ಮೀ-ನಾರಾಯಣರಿಗೆ ರಾಜ್ಯ ಭಾಗ್ಯವಿತ್ತು. ಈ ಮಾತುಗಳನ್ನು ಜಗತ್ತು ತಿಳಿದುಕೊಂಡಿಲ್ಲ. ತಮಗೆ ಗೊತ್ತಿದೆ, ಬಾಬಾ ನಮ್ಮನ್ನು ಬಹಳ ಮಧುರರನ್ನಾಗಿ ಮಾಡುತ್ತಾರೆ. ಲಕ್ಷ್ಮೀ-ನಾರಾಯಣರಿಗೆ ಜ್ಞಾನ ಸಾಗರ ಎಂದು ಹೇಳುವುದಿಲ್ಲ. ಅವರು ಈ ಜ್ಞಾನ-ಯೋಗದಿಂದ ಈ ರೀತಿಯಾಗಿದ್ದು, ಈಗ ತಾವೂ ಸಹ ಅದೇ ರೀತಿ ಆಗುತ್ತಿದ್ದೀರಿ. ಒಂದು ಜಗತ್ತಾಗಲಿ, ಒಂದು ರಾಜ್ಯವಾಗಲಿ ಎಂದು ಮನುಷ್ಯರು ಬಯಸುತ್ತಾರೆ. ಹಿಂದೊಮ್ಮೆ ಖಂಡಿತ ಒಂದೇ ರಾಜ್ಯವಿತ್ತು ಎಂದು ನೆನಪಿಸುತ್ತಾರೆ. ಆದರೆ ಎಲ್ಲರೂ ಸೇರಿ ಒಂದಾಗುವುದಿಲ್ಲ. ಅಲ್ಲಿ ಬಹಳ ಕಡಿಮೆ ಮನುಷ್ಯರಿದ್ದರು. ತಮಗೆ ಗೊತ್ತಿದೆ - ನಾವು ಈಶ್ವರನ ಸಂತಾನರಾಗಿದ್ದೇವೆ. ಈಶ್ವರ ಎಲ್ಲಾ ಕಡೆಯಿದ್ದಾರೆಂದು ಹೇಳುತ್ತಾರೆ ಆದರೆ ಎಲ್ಲಾ ಕಡೆ ಆತ್ಮ ಇದೆ ಎಂದು ಹೇಳಬಹುದು. ಆತ್ಮ ಸರ್ವವ್ಯಾಪಿಯಾಗಿದೆ, ಎಲ್ಲರಲ್ಲಿ ಆತ್ಮವಿದೆ. ಎಲ್ಲರಲ್ಲಿ ಪರಮಾತ್ಮನಿದ್ದಾರೆ ಎಂದಲ್ಲ ಅಂದಮೇಲೆ ಪ್ರತಿಜ್ಞೆ ಮಾಡುವ ಮಾತೇನಿದೆ? ಒಂದುವೇಳೆ ನಮ್ಮಲ್ಲಿ ಪರಮಾತ್ಮನಿದ್ದರೆ ಯಾರ ಮೇಲೆ ಆಣೆ ಇಡುವುದು? ನಾವು ಒಂದುವೇಳೆ ಉಲ್ಟಾ ಕರ್ಮವನ್ನು ಮಾಡಿದರೆ ಪರಮಾತ್ಮ ಶಿಕ್ಷೆಯನ್ನು ಕೊಡುತ್ತಾರೆ. ಈಗ ತಾವು ಸಾಕಾರದಲ್ಲಿದ್ದೀರಿ, ಹೇಗೆ ಆತ್ಮವನ್ನು ಈ ನೇತ್ರಗಳಿಂದ ನೋಡಲಾಗುವುದಿಲ್ಲ ಅಂದಮೇಲೆ ಪರಮಾತ್ಮನನ್ನು ಹೇಗೆ ನೋಡುತ್ತೀರಿ? ನಮ್ಮಲ್ಲಿ ಆತ್ಮವಿದೆಯೆಂದು ಅನುಭವ ಮಾಡುತ್ತಾರೆ. ಪರಮಾತ್ಮನ ಸಾಕ್ಷಾತ್ಕಾರವಾಗಲೆಂದು ಹೇಳುತ್ತಾರೆ ಆದರೆ ಆತ್ಮನನ್ನೇ ನೋಡಲು ಸಾಧ್ಯವಿಲ್ಲವೆಂದಮೇಲೆ ಪರಮಾತ್ಮನನ್ನು ಹೇಗೆ ನೋಡುತ್ತೀರಿ? ಆತ್ಮವೇ ಪುಣ್ಯಾತ್ಮ, ಪಾಪಾತ್ಮವಾಗುತ್ತದೆ. ಈ ಸಮಯದಲ್ಲಿ ಪಾಪಾತ್ಮವಾಗಿದೆ. ತಾವು ಬಹಳ ಪುಣ್ಯ ಮಾಡಿದ್ದೀರಿ, ತಂದೆಗೆ ತಮ್ಮ ತನು-ಮನ-ಧನವನ್ನು ಅರ್ಪಣೆ ಮಾಡಿದ್ದೀರಿ, ಈಗ ಪಾಪಾತ್ಮ ರಿಂದ ಪುಣ್ಯಾತ್ಮರಾಗುತ್ತಿದ್ದೀರಿ. ಶಿವ ತಂದೆಗೆ ತನು-ಮನ-ಧನವನ್ನು ಅರ್ಪಣೆ ಮಾಡುತ್ತೀರಿ. ಇವರೂ ಸಹ ತಮ್ಮ ತನು-ಮನ-ಧನವನ್ನು ಅರ್ಪಣೆ ಮಾಡಿದರಲ್ಲವೆ. ತನುವನ್ನೂ ಸಹ ಸತ್ಯ ಸೇವೆಯಲ್ಲಿಯೇ ಕೊಟ್ಟರು. ಮಾತೆಯರಿಗೆ ಅರ್ಪಣೆ ಮಾಡಿ ಅವರನ್ನು ನಿಮಿತ್ತ ಮಾಡಿದರು. ಮಾತೆಯರನ್ನು ಮುಂದುವರೆಸಬೇಕು, ಮಾತೆಯರು ಬಂದು ಶರಣಾದರು ಅಂದಮೇಲೆ ಅವರ ಸಂಭಾಲನೆ ಹೇಗೆ ಆಗಬೇಕು? ಮಾತೆಯರ ಮೇಲೆ ಬಲಿಯಾಗಬೇಕಾಯಿತು. ತಂದೆಯು ಹೇಳುತ್ತಾರೆ – ವಂದೇ ಮಾತರಂ. ಸಮ್ಮುಖದಲ್ಲಿರುವ ರಹಸ್ಯವನ್ನು ತಿಳಿಸಿದರು ಆದರೆ ಆತ್ಮ ಓ ಗಾಡ್ಫಾದರ್ ಎಂದು ಕರೆಯುತ್ತದೆ. ಯಾವ ತಂದೆಯನ್ನು ಕರೆಯುತ್ತದೆ? ಇದನ್ನು ತಿಳಿದಿಲ್ಲ. ತಾವು ಲಕ್ಷ್ಮೀ-ನಾರಾಯಣರಾಗುತ್ತೀರಿ. ಮನುಷ್ಯರು ಎಷ್ಟೊಂದು ಪ್ರೀತಿ ಮಾಡುತ್ತಾರೆ. ಈಗ ನಾವು ಈಶ್ವರೀಯ ಕುಲದವರಾಗಿದ್ದೇವೆ. ಮೊದಲು ಆಸುರೀ ಕುಲದವರಾಗಿದ್ದೆವು ಎಂದು ನೀವು ಹೇಳುತ್ತೀರಿ. ಬ್ರಾಹ್ಮಣರ ಅಡ್ಡ ಹೆಸರೇ ಆಗಿದೆ ಈಶ್ವರೀಯ ಸಂತಾನರು, ಬಾಪು-ಗಾಂಧೀಜಿಯವರೂ ಸಹ ರಾಮ ರಾಜ್ಯವಾಗಬೇಕೆಂದು ಬಯಸುತ್ತಿದ್ದರು, ಹೊಸ ಭಾರತದಲ್ಲಿ ಹೊಸ ರಾಜ್ಯವಿರಲಿ. ವಿಶ್ವದ ಸರ್ವಾಧಿಕಾರ ಸರ್ಕಾರವಾಗಲಿ ಎಂದು. ಅದನ್ನು ಬೇಹದ್ದಿನ ತಂದೆಯೇ ಮಾಡಲು ಸಾಧ್ಯ. ತಂದೆಯು ಹೇಳುತ್ತಾರೆ - ನಾನು ವಿಶ್ವದ ಸರ್ವ ಶಕ್ತಿವಂತನಾಗಿದ್ದೇನೆ. ಸರ್ವ ಶ್ರೇಷ್ಠ ನಿರಾಕಾರನಾಗಿದ್ದೇನೆ. ಬ್ರಹ್ಮ-ವಿಷ್ಣು-ಶಂಕರರು ನಮ್ಮ ರಚನೆಯಾಗಿದ್ದಾರೆ. ಭಾರತ ಶಿವಾಲಯ, ಸಂಪೂರ್ಣ ನಿರ್ವಿಕಾರಿಯಾಗಿತ್ತು. ಈಗ ಸಂಪೂರ್ಣ ವಿಕಾರಿಯಾಗಿದೆ. ಸಂಪೂರ್ಣ ನಿರ್ವಿಕಾರಿಗಳೂ ಸಹ ಇಲ್ಲಿಯೇ ಇರುತ್ತಾರೆಂಬುದನ್ನೂ ಸಹ ತಿಳಿದುಕೊಂಡಿಲ್ಲ. ಒಂದೇ ವಿಶ್ವವಾಗಲಿ, ಒಂದೇ ಸರ್ವಾಧಿಕಾರಿ ರಾಜ್ಯವಾಗಲಿ ಎಂದು ಬಯಸುತ್ತಾರೆ. ಪರಮಾತ್ಮ ವಿಶ್ವದ ಸರ್ವಶಕ್ತಿವಂತ ದೈವೀ ಲಕ್ಷ್ಮೀ-ನಾರಾಯಣರ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದಾರೆ. ಇನ್ನುಳಿದ ಎಲ್ಲವುದರ ವಿನಾಶವು ಸಮ್ಮುಖದಲ್ಲಿದೆ. ಇಷ್ಟೊಂದು ನಶೆಯಿರಬೇಕು! ಇಲ್ಲಿಂದ ಮನೆಗೆ ಹೋದರೆ ಮೂರ್ಛಿತರಾಗಿ ಬಿಡುತ್ತಾರೆ. ಸಂಜೀವಿನಿ ಮೂಲಿಕೆಯ ಕಥೆಯಿದೆಯಲ್ಲವೆ. ಆದರೆ ಇದು ಮನ್ಮಾನಭವದ ಜ್ಞಾನ ಮೂಲಿಕೆಯಾಗಿದೆ. ದೇಹಾಭಿಮಾನದಲ್ಲಿ ಬರುವುದರಿಂದ ಮಾಯೆಯ ಪೆಟ್ಟು ಬೀಳುತ್ತದೆ. ಆತ್ಮಾಭಿಮಾನಿ ಆಗುವುದರಿಂದ ಪೆಟ್ಟು ಬೀಳುವುದಿಲ್ಲ. ನಾವು ಶಿವ ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆ. ಇದು ಬ್ರಹ್ಮನ ಅಂತಿಮ ಜನ್ಮವಾಗಿದೆ, ಅವರೂ ಸಹ ಆಸ್ತಿಯನ್ನು ಪಡೆಯುತ್ತಾರೆ. ದೈವೀ ವಿಶ್ವದ ರಾಜ್ಯಭಾಗ್ಯ ಪರಮಪಿತ ಪರಮಾತ್ಮನ ಜನ್ಮಸಿದ್ಧ ಅಧಿಕಾರವಾಗಿದೆ. ತಾವು ಮಕ್ಕಳಲ್ಲಿ ದೈವೀ ನಡುವಳಿಕೆಯಿರಬೇಕು. ತಾವು ಬ್ರಾಹ್ಮಣರು ದೇವತೆಗಳಿಗಿಂತಲೂ ಶ್ರೇಷ್ಠರು, ತಾವು ಬಹಳ ಮಧುರವಾಗಿ ಮಾತನಾಡಬೇಕು. ಭಾಷಣ ಮುಂತಾದವುಗಳಲ್ಲಿ ಮಾತನಾಡಬೇಕಾಗುತ್ತದೆ ಬಾಕಿ ವ್ಯರ್ಥ ಮಾತುಗಳಲ್ಲಿ ಹೋಗಬಾರದು. ಮುಖದಿಂದ ಸದಾ ಜ್ಞಾನ ರತ್ನಗಳೇ ಹೊರಬರಲಿ. ಭಲೆ ಈ ನೇತ್ರಗಳಿವೆ ಆದರೆ ಸ್ವರ್ಗವನ್ನು ಮತ್ತು ಮೂಲವತನವನ್ನು ನೋಡಿ. ಜ್ಞಾನದ ನೇತ್ರ ಆತ್ಮಕ್ಕೆ ಪ್ರಾಪ್ತಿಯಾಗುತ್ತದೆ, ಆತ್ಮವು ಕರ್ಮೇಂದ್ರಿಯಗಳ ಮೂಲಕ ಓದುತ್ತದೆ. ಹೇಗೆ ಬುದ್ಧಿವಂತಿಕೆಯ ಹಲ್ಲು ಬರುತ್ತದೆಯೋ ಹಾಗೆಯೇ ತಮಗೆ ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ. ತಂದೆಯು ಆಸ್ತಿಯನ್ನು ಬ್ರಾಹ್ಮಣರಿಗೇ ಕೊಡುತ್ತಾರೆ, ಶೂದ್ರರಿಗೆ ಕೊಡುತ್ತಾರೇನು? ಮೂರನೆಯ ನೇತ್ರವು ಆತ್ಮಕ್ಕೆ ಸಿಗುತ್ತದೆ. ಜ್ಞಾನ ನೇತ್ರದ ವಿನಃ ಸರಿ-ತಪ್ಪನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ರಾವಣ ತಪ್ಪು ದಾರಿಯಲ್ಲಿಯೇ ನಡೆಸುತ್ತಾನೆ. ಶಿವ ತಂದೆಯು ಸರಿಯಾದ ಮಾರ್ಗದಲ್ಲಿ ನಡೆಸುತ್ತಾರೆ. ಸದಾ ಪರಸ್ಪರದಲ್ಲಿ ಗುಣಗಳನ್ನೇ ನೋಡಬೇಕು. ಗುಣಗಳಿಗೆ ಬದಲು ಅವಗುಣಗಳನ್ನು ನೋಡಬಾರದು.

ನೋಡಿ, ಡಾ||ನಿರ್ಮಲ ಬರುತ್ತಾರೆ, ಅವರ ಸ್ವಭಾವ ಬಹಳ ಮಧುರವಾಗಿದೆ. ಶಾಂತಚಿತ್ತ ಕಡಿಮೆ ಮಾತನಾಡುವುದನ್ನು ಅವರಿಂದ ಕಲಿಯಬೇಕು. ಬಹಳ ಬುದ್ಧಿವಂತಿಕೆ ಹಾಗೂ ಮಧುರ ಮಗು. ಶಾಂತಿಯಲ್ಲಿ ಕುಳಿತುಕೊಳ್ಳುವ ಘನತೆ ಇರಬೇಕು. ಹಾಗಲ್ಲ, ಸ್ವಲ್ಪ ಸಮಯ ನೆನಪು ಮಾಡಿದರೆ ಮತ್ತೆ ಇಡೀ ದಿನ ಹಾಗೆಯೇ ಕಳೆದುಹೋಯಿತು ಎಂದು. ಇದೂ ಸಹ ಅಭ್ಯಾಸ ಮಾಡಿಕೊಳ್ಳಬೇಕು. ತಂದೆಯನ್ನು ನೆನಪು ಮಾಡುವುದರಿಂದ ಶಕ್ತಿ ಬರುತ್ತದೆ. ಆಗ ತಂದೆಯೂ ಖುಷಿಯಾಗುತ್ತಾರೆ. ಅಂತಹ ಸ್ಥಿತಿಯನ್ನು ಯಾರಲ್ಲಿಯಾದರೂ ನೋಡಿದರೆ ಅವರನ್ನೂ ಸಹ ಅಶರೀರಿಯನ್ನಾಗಿ ಮಾಡುತ್ತಾರೆ, ಅಶರೀರಿಗಳಾಗುತ್ತಾರೆ, ಶಾಂತವಾಗುತ್ತಾರೆ. ಕೇವಲ ಶಾಂತಿಯಲ್ಲಿ ಕುಳಿತುಕೊಳ್ಳುವುದು ಯಾವುದೇ ಸುಖವಿಲ್ಲ, ಅದು ಅಲ್ಪಕಾಲದ ಸುಖವಾಗಿದೆ. ಶಾಂತವಾಗಿ ಕುಳಿತುಕೊಂಡರೆ ಕರ್ಮವನ್ನು ಹೇಗೆ ಮಾಡುತ್ತಾರೆ. ಯೋಗದಿಂದ ವಿಕರ್ಮ ವಿನಾಶವಾಗುತ್ತದೆ. ಸತ್ಯ, ಸುಖ, ಶಾಂತಿಯಂತೂ ಇಲ್ಲಿರಲು ಸಾಧ್ಯವಿಲ್ಲ. ಇಲ್ಲಿ ಪ್ರತಿಯೊಂದು ವಸ್ತುವೂ ಸಹ ಅಲ್ಪಕಾಲದ್ದಾಗಿದೆ, ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ರಾತ್ರಿಕ್ಲಾಸ್ :- 9-4-68

ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಶಾಂತಿಯು ಹೇಗೆ ನೆಲೆಸುತ್ತದೆ ಎಂಬ ಸಮ್ಮೇಳನಗಳನ್ನು ಮಾಡುತ್ತಿರುತ್ತಾರೆ. ಅವರಿಗೆ ಹೇಳಬೇಕು - ನೋಡಿ, ಸತ್ಯಯುಗದಲ್ಲಿ ಒಂದೇ ಧರ್ಮ, ಒಂದೇ ರಾಜ್ಯ, ಅದ್ವೈತ ಧರ್ಮವಿತ್ತು. ಜಗಳವಾಡಲು ಬೇರೆ ಯಾವುದೇ ಧರ್ಮವಿರಲಿಲ್ಲ, ರಾಮ ರಾಜ್ಯವಿತ್ತು ಆಗಲೇ ವಿಶ್ವದಲ್ಲಿ ಶಾಂತಿಯಿತ್ತು. ತಾವು ವಿಶ್ವದಲ್ಲಿ ಶಾಂತಿಯಾಗಲಿ ಎಂದು ಬಯಸುತ್ತೀರಿ. ಅದು ಸತ್ಯಯುಗದಲ್ಲಿತ್ತು, ನಂತರ ಅನೇಕ ಧರ್ಮಗಳು ಆಗಿದ್ದರಿಂದ ಅಶಾಂತಿಯಾಯಿತು ಆದರೆ ಅರ್ಥವಾಗುವವರೆಗೆ ಶ್ರಮ ಪಡಬೇಕು. ಮುಂದೆ ಹೋದಂತೆ ಪತ್ರಿಕೆಗಳಲ್ಲಿಯೂ ಸಹ ಬರುತ್ತದೆ. ನಂತರ ಈ ಸನ್ಯಾಸಿ ಮುಂತಾದವರ ಕಿವಿ ತೆರೆಯುತ್ತದೆ. ಇದಂತೂ ತಮಗೆ ಗೊತ್ತಿದೆ, ನಮ್ಮ ರಾಜಧಾನಿಯು ಸ್ಥಾಪನೆಯಾಗುತ್ತಾ ಇದೆ ಎನ್ನುವ ನಶೆಯೂ ಇದೆ. ಮ್ಯೂಸಿಯಂನ ಶೋ ಮಾಡಿರುವುದನ್ನು ನೋಡಿ ಬಹಳ ಮಂದಿ ಬರುತ್ತಾರೆ, ಒಳಗಡೆ ಬಂದು ಆಶ್ಚರ್ಯ ಪಡುತ್ತಾರೆ. ಹೊಸ-ಹೊಸ ಚಿತ್ರಗಳ ಬಗ್ಗೆ ಹೊಸ-ಹೊಸ ತಿಳುವಳಿಕೆಯನ್ನು ಹೇಳುತ್ತಾರೆ.

ಇದಂತೂ ಮಕ್ಕಳಿಗೆ ಗೊತ್ತಿದೆ, ಈ ಯೋಗವು ಮುಕ್ತಿ-ಜೀವನ್ಮುಕ್ತಿಗಾಗಿ ಇದೆ. ಇದನ್ನು ಮನುಷ್ಯರ್ಯಾರೂ ಕಲಿಸಲು ಸಾಧ್ಯವಿಲ್ಲ. ಇದನ್ನೂ ಸಹ ಬರೆಯಬೇಕು. ಪರಮಾತ್ಮನ ವಿನಃ ಯಾರೂ ಮುಕ್ತಿ-ಜೀವನ್ಮುಕ್ತಿಗಾಗಿ ಯೋಗವನ್ನು ಕಲಿಸಲು ಸಾಧ್ಯವಿಲ್ಲ. ಸರ್ವರ ಸದ್ಗತಿದಾತ ಒಬ್ಬರೇ ಆಗಿದ್ದಾರೆ, ಇದನ್ನು ಸ್ಪಷ್ಟಪಡಿಸಿ ಬರೆಯಬೇಕು, ಅದನ್ನು ಮನುಷ್ಯರು ಓದುವಂತಿರಬೇಕು. ಸನ್ಯಾಸಿಗಳು ಏನನ್ನು ಕಲಿಸಬಹುದು! ಯೋಗ-ಯೋಗ ಎನ್ನುತ್ತಿರುತ್ತಾರೆ, ವಾಸ್ತವದಲ್ಲಿ ಯೋಗವನ್ನು ಯಾರೂ ಕಲಿಸಲು ಸಾಧ್ಯವಿಲ್ಲ. ಒಬ್ಬ ತಂದೆಯದೇ ಮಹಿಮೆಯಾಗಿದೆ. ವಿಶ್ವದಲ್ಲಿ ಶಾಂತಿ ಸ್ಥಾಪಿಸುವುದು ಹಾಗೂ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುವುದು ತಂದೆಯ ಕರ್ತವ್ಯವೇ ಆಗಿದೆ. ಹೀಗೆ ವಿಚಾರ ಸಾಗರ ಮಂಥನ ಮಾಡಿ ವಿಚಾರಗಳನ್ನು ತಿಳಿಸಬೇಕು. ಈ ರೀತಿ ಬರೆಯಬೇಕು. ಮನುಷ್ಯರಿಗೆ ಆ ಮಾತುಗಳು ಸರಿಯೆನ್ನಿಸುವಂತಿರಬೇಕು. ಈ ಪ್ರಪಂಚವಂತೂ ಪರಿವರ್ತನೆಯಾಗಲೇಬೇಕು. ಇದು ಮೃತ್ಯುಲೋಕವಾಗಿದೆ, ಹೊಸ ಪ್ರಪಂಚಕ್ಕೆ ಅಮರಲೋಕವೆಂದು ಹೇಳಲಾಗುತ್ತದೆ. ಅಮರಲೋಕದಲ್ಲಿ ಮನುಷ್ಯರು ಹೇಗೆ ಅಮರರಾಗಿರುತ್ತಾರೆ ಎಂಬುದೂ ಸಹ ಆಶ್ಚರ್ಯವಲ್ಲವೆ. ಅಲ್ಲಿ ಧೀರ್ಘಾಯಸ್ಸು ಇರುತ್ತದೆ ಮತ್ತು ಸಮಯದಲ್ಲಿ ತಾವಾಗಿಯೇ ಶರೀರವನ್ನು, ವಸ್ತ್ರ ಬದಲಾಯಿಸುವ ಹಾಗೆ ಬದಲಾಯಿಸುತ್ತಾರೆ. ಇವೆಲ್ಲವೂ ತಿಳಿಸುವಂತಹ ಮಾತುಗಳಾಗಿವೆ. ಒಳ್ಳೆಯದು.

ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆ ಹಾಗೂ ದಾದಾರವರ ನೆನಪು-ಪ್ರೀತಿ ಮತ್ತು ಶುಭ ರಾತ್ರಿ ಹಾಗೂ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ತಮ್ಮ ಸ್ವಭಾವವನ್ನು ಬಹಳ ಮಧುರ ಮತ್ತು ಶಾಂತಚಿತ್ತ ಮಾಡಿಕೊಳ್ಳಬೇಕಾಗಿದೆ. ಬಹಳ ಕಡಿಮೆ ಮತ್ತು ಘನತೆಯಿಂದ ಮಾತನಾಡಬೇಕಾಗಿದೆ.

2. ತನು-ಮನ-ಧನದಿಂದ ಬ್ರಹ್ಮಾ ತಂದೆಯ ಸಮಾನ ನಿಮಿತ್ತರಾಗಿರಬೇಕು.


ವರದಾನ:
ತಮ್ಮ ಆದಿ ಅನಾದಿ ಸ್ವರೂಪದ ಸ್ಮತಿಯ ಮೂಲಕ ಸರ್ವ ಬಂಧನಗಳನ್ನು ಸಮಾಪ್ತಿ ಮಾಡುವಂತಹ ಬಂಧನ ಮುಕ್ತ ಸ್ವತಂತ್ರ ಭವ.

ಆತ್ಮನ ಆದಿ ಅನಾದಿ ಸ್ವರೂಪ ಸ್ವತಂತ್ರವಾಗಿದೆ, ಮಾಲೀಕನಾಗಿದೆ. ಇಲ್ಲಂತು ಹಿಂದೆ ಪರತಂತ್ರರಾಗಿದ್ದಿರಿ. ಆದ್ದರಿಂದ ತಮ್ಮ ಆದಿ ಮತ್ತು ಅನಾದಿ ಸ್ವರೂಪವನ್ನು ಸ್ಮತಿಯಲ್ಲಿಟ್ಟು ಬಂಧನ ಮುಕ್ತರಾಗಿ. ಮನಸ್ಸಿನ ಬಂಧನವೂ ಸಹಾ ಇರಬಾರದು. ಒಂದುವೇಳೆ ಮನಸ್ಸಿನ ಬಂಧನವಿದ್ದರೂ ಸಹ ಆ ಬಂಧನ ಬೇರೆ ಬಂಧನಗಳನ್ನು ತರುವುದು. ಬಂಧನ ಮುಕ್ತ ಅರ್ಥಾತ್ ರಾಜಾ, ಸ್ವರಾಜ್ಯ ಅಧಿಕಾರಿ. ಈ ರೀತಿಯ ಬಂಧನ ಮುಕ್ತ ಸ್ವತಂತ್ರ ಆತ್ಮರೇ ಪಾಸ್ ವಿತ್ ಆನರ್ ಆಗುವುದು ಅರ್ಥಾತ್ ಫಸ್ಟ್ ಡಿವಿಷನ್ ನಲ್ಲಿ ಬರುವರು.

ಸ್ಲೋಗನ್:
ಮಾಸ್ಟರ್ ದುಃಖಹರ್ತಾ ಆಗಿ ದುಃಖವನ್ನೂ ಸಹಾ ಆತ್ಮೀಯ ಸುಖದಲ್ಲಿ ಪರಿವರ್ತನೆ ಮಾಡುವುದೇ ಸತ್ಯವಾದ ಸೇವೆಯಾಗಿದೆ.